ಗೌರವದ ಗದ್ದಲದಲ್ಲಿ ನಿಶ್ಯಬ್ದವಾದ ನೈತಿಕತೆ!
ಸ್ಥಳೀಯ ಸಮುದಾಯವು ಯಾರನ್ನಾದರೂ ಗೌರವಿಸುವಾಗ, ಅವರ ಆ ಕ್ಷಣದ ಸತ್ಯವನ್ನು ಆಧರಿಸಿಕೊಳ್ಳಬೇಕು. ಅದು ಮಠ, ಗುತ್ತು, ಮನೆಯ ಪರಂಪರೆಗಿಂತ ದೊಡ್ಡದು, ಆರ್ಥಿಕ ಪ್ರಭಾವಕ್ಕಿಂತ ಗಂಭೀರ. ಏಕೆಂದರೆ ಸಮಾಜವು ತನ್ನ ವೇದಿಕೆಗೆ ಯಾರನ್ನು ಏರಿಸುತ್ತದೆ ಎನ್ನುವುದು, ಅದರ ಆತ್ಮದ ಗುಣಮಟ್ಟವನ್ನು ತೋರಿಸುತ್ತದೆ. ಕೆಲವು ಘಟನೆಗಳು ಹೊರಗೆ ನಡೆದರೂ, ಅವು ನಮ್ಮೊಳಗಿನ ಮೌಲ್ಯಗಳ ಮೇಲೆ ನೇರವಾಗಿ ಪ್ರಶ್ನೆಗಳನ್ನು ಎತ್ತುತ್ತವೆ. ಇತ್ತೀಚೆಗೆ ನನ್ನ ಗೆಳೆಯರೊಬ್ಬರ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆ ಕೂಡ ಅಂಥದ್ದೇ. ಒಂದು ಸಮಾಜವನ್ನು ಪ್ರತಿನಿಧಿಸುವ ಕೆಲ ವ್ಯಕ್ತಿಗಳು ಆರ್ಥಿಕ ಸಹಾಯಕ್ಕಾಗಿ ಅವರ ಮನೆಗೆ ಬಂದಿದ್ದರು. ಕೊಡಬೇಕಾದ ಮೊತ್ತದ ಬಗ್ಗೆ ಮಾತೇ ಆಗಿರಲಿಲ್ಲ, ಆದರೆ ಅವರು ತಮ್ಮದೇ ನಿರ್ಧಾರದಲ್ಲಿ ದೊಡ್ಡ ಮೊತ್ತವನ್ನು ರಶೀದಿಯಲ್ಲಿ ಬರೆದು ಮುಂದೆ ಇಟ್ಟರು. ಸಹಾಯ ಎನ್ನುವುದು ಒತ್ತಾಯವಾದರೆ ಅಲ್ಲಿ ದಾನವು ದಬ್ಬಾಳಿಕೆಯಾಗುತ್ತದೆ. ಎಷ್ಟೇ ಸಜ್ಜನರಾಗಿದ್ದರೂ ಆ ಕ್ಷಣಕ್ಕೆ ನನ್ನ ಗೆಳೆಯರಿಗೂ ಸಿಟ್ಟು ಬಂತು. ‘‘ನಿಮ್ಮ ಮಠದ ಸ್ವಾಮೀಜಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ, ಅಂಥವರ ಹೆಸರಿನಲ್ಲಿ ಹಣ ಕೇಳುವ ನಿಮಗೆ ನೈತಿಕತೆ ಇರಬೇಕಲ್ಲವಾ’’ ಎಂದರು. ಇಲ್ಲಿ ಅಡಿಕೆ ಕೃಷಿ ನಲುಗಿದೆ, ರೈತರ ಬದುಕು ಸಂಕಷ್ಟದಲ್ಲಿದೆ. ನಾನು ನಿಮ್ಮ ಸಮಾಜದವನೇ ಅಲ್ಲ. ನಮ್ಮ ಮುಂದೆ ನಮ್ಮದೇ ಜವಾಬ್ದಾರಿಗಳಿವೆ. ನಿಮಗೆ ಬೇಕಾದಂತೆ ಮೊತ್ತವನ್ನು ಬರೆದು ಕೊಡುವುದು ಸರಿಯಲ್ಲ, ಎಂದೆಲ್ಲ ಸ್ಪಷ್ಟವಾಗಿ ಹೇಳಿದರು. ಮಾತು ಕಠಿಣವಾಯಿತು. ಬರೆದ ರಶೀದಿಯನ್ನು ಇವರ ಸಮ್ಮುಖದಲ್ಲೇ ಹರಿದು, ಮಠದ ಶಾಪ ನಿಮಗೆ ತಟ್ಟಲಿ ಎಂದು ಬಂದವರು ಕಠೋರವಾಗಿ ಹೇಳಿ ಹೊರಟರು. ಮನೆ ಮೆಟ್ಟಿಲಲ್ಲಿ ನಿಂತು ಹೇಳಿದ ಆ ಶಬ್ದ, ಬರೀ ಶಾಪದಂತೆ ಅಲ್ಲ, ಇವರಿಗೆ ಒಂದು ಎಚ್ಚರಿಕೆಯಂತೆ ಕೇಳಿಸಿತು. ಎಂದಿಗೂ ಯಾರೊಬ್ಬನನ್ನು ಬರೀ ಕೈಯಲ್ಲಿ ವಾಪಸ್ ಕಳಿಸದ, ನೋಯಿಸದ ಆ ಸಜ್ಜನ ವ್ಯಕ್ತಿ ಮಾನಸಿಕವಾಗಿ ನೊಂದು ತಾನು ಮಾಡಿದ ಅನ್ಯಾಯವಾದರೂ ಏನು? ಇಷ್ಟರವರೆಗೆ ಬಂದವರಿಗೆಲ್ಲ ಕೈಲಾದಷ್ಟು ಕೊಡುತ್ತಾ ಬಂದೆ, ತನ್ನ ಮಿತ ದಾನದ ಪ್ರವೃತ್ತಿ ತಪ್ಪೇ? ಮುಂದೆ ಹೀಗೆ ಬಂದವರ ಬೇಡಿಕೆಗೆ ನೂರು ಸಲ ಯೋಚಿಸಬೇಕು ಎಂದು ನೊಂದುಕೊಂಡು ಹೇಳಿದಾಗ ಅವರ ನೋವಿನ ಪಾಲು ನನ್ನದೂ ಆಯಿತು. ಈ ಸಣ್ಣ ಘಟನೆಯಲ್ಲೇ ಒಂದು ದೊಡ್ಡ ಪ್ರಶ್ನೆ ಮರೆತು ಕುಳಿತಿದೆ. ಇಂದು ನಾವು ಗೌರವಿಸಬೇಕಾದ ಮಠಮಾನ್ಯ, ಧಾರ್ಮಿಕ ಕೇಂದ್ರ, ಧಾರ್ಮಿಕ -ಸಾಮಾಜಿಕ ನಾಯಕರು, ಸಚಿವರು, ರಾಜಕಾರಣಿಗಳು ಸಂಘಟನೆಗಳ ನಾಯಕರು... ಹೀಗೆ ಸಮಾಜಕ್ಕೆ ದಿಕ್ಕು ತೋರಿಸಬೇಕಾದ ವ್ಯಕ್ತಿಗಳು ಎಲ್ಲರೂ ಅಲ್ಲದಿದ್ದರೂ, ಕೆಲವರು ಲಂಚ-ಭ್ರಷ್ಟಾಚಾರದಲ್ಲಿ, ಭೂಮಿ - ಲೈಂಗಿಕ ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಹೊಸ ವಿಷಯವಲ್ಲ. ಆ ಆರೋಪಗಳು ಸಾಬೀತಾಗುತ್ತವೆ ಎನ್ನುವುದಕ್ಕಿಂತ ಮುಂಚೆಯೇ ನಾವು ಅವರನ್ನು ಹೇಗೆ ನೋಡುವೆವು ಎಂಬುದು ಮುಖ್ಯ. ನಾವು ಸಂಶಯವನ್ನು ಮೌನಗೊಳಿಸಿ, ಬರೀ ಗೌರವವನ್ನು ಮುಂದಿಟ್ಟರೆ, ಅದು ಸತ್ಯದ ಮೇಲೆ ಕರಿನೆರಳನ್ನು ಚೆಲ್ಲುತ್ತದೆ. ಕೆಲವು ದೃಶ್ಯಗಳು ನಮ್ಮ ಕಣ್ಣು ಮುಂದೆ ನಡೆದರೂ, ಅವು ಮನಸ್ಸಿನ ಒಳಗೆ ನಿಧಾನವಾಗಿ ಒಂದು ಪ್ರಶ್ನೆಯಾಗಿ ಉಳಿಯುತ್ತವೆ. ಇತ್ತೀಚೆಗೆ ನಾನು ನೋಡಿದ ಒಂದು ಜಾತ್ರೆಯೋ, ಧಾರ್ಮಿಕ ಸಂಭ್ರಮವೂ ಅಂಥದ್ದೇ. ದೇವರ ಹೆಸರಿನಲ್ಲಿ ಅಲ್ಲಿ ರಾಶಿ ಜನ ಸೇರಿದ್ದರು, ಮಂಗಳವಾದ್ಯಗಳ ಮಧ್ಯೆ ವೇದಿಕೆ ತುಂಬಿಕೊಂಡಿತ್ತು. ಆದರೆ ಆ ವೇದಿಕೆಯಲ್ಲಿ ಕುಳಿತಿದ್ದ ಕೆಲವು ಮುಖಗಳು ನನಗೆ ಹೊಸದಲ್ಲ. ಅವರ ಬಗ್ಗೆ ನಿನ್ನೆವರೆಗೂ ನಾವು ಓದಿದ್ದ ವರದಿಗಳು ಇನ್ನೂ ಮನಸ್ಸಿನಲ್ಲಿ ತಾಜಾವಾಗಿವೆ. ಆರೋಪಗಳು ಸಾಬೀತಾಗಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ನ್ಯಾಯಾಲಯದ ಕೆಲಸ. ಆದರೆ ಸಾಮಾಜಿಕವಾಗಿ ಆ ಕ್ಷಣಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಹೊಣೆ. ಆ ಕ್ಷಣದಲ್ಲಿ ಕಂಡದ್ದು ಅಚ್ಚರಿಯಲ್ಲ, ಆದರೆ ಆತಂಕಕರ. ನಿನ್ನೆವರೆಗೂ ಪ್ರಶ್ನೆ ಮಾಡಿದವರು ಇವತ್ತು ಆ ಕಳಂಕಿತ ನಾಯಕರಿಗೆ ಹಾರ ಹಾಕುತ್ತಿದ್ದರು. ಸಂಶಯದಿಂದ ನೋಡಿದವರು ಇಂದು ಇಂದ್ರ ಚಂದ್ರ ಎಂದು ಬಹುಪರಾಕ್ ಹೇಳುತ್ತಿದ್ದರು. ಫೋಟೊ ತೆಗೆಸಿಕೊಳ್ಳಲು ಸಾಲಿನಲ್ಲಿ ನಿಂತವರು, ಅದೇ ವ್ಯಕ್ತಿಯ ಬಗ್ಗೆ ಕೆಲ ದಿನಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ್ದವರೇ. ಇದು ಮರೆತಿರುವುದು ಅಲ್ಲ, ಮರೆತುಬಿಡಲು ನಾವು ತೀರ್ಮಾನಿಸಿರುವುದು. ಈ ನಿರ್ಧಾರದಲ್ಲಿ ಒಂದು ಅಪಾಯದ ಬೀಜ ಮರೆತು ಕುಳಿತಿದೆ. ಯಾರ ಮೇಲಾದರೂ ಗಂಭೀರ ಆರೋಪಗಳಿರುವಾಗ, ಸತ್ಯ ಸ್ಪಷ್ಟವಾಗುವವರೆಗೆ, ಅದರ ನಿಜ ಲೋಕಕ್ಕೆ ಗೊತ್ತಾಗುವವರೆಗೆ ಒಂದು ಅಂತರವನ್ನು ಕಾಪಾಡಿಕೊಳ್ಳುವುದು ಈ ಸಮಾಜದ ಜವಾಬ್ದಾರಿ. ಆ ಅಂತರವೇ ಮೌಲ್ಯಗಳ ರೇಖೆ. ಆದರೆ ನಾವು ಅದನ್ನು ಅಳಿಸಿ, ವೇದಿಕೆಯ ಮೇಲೆ ಕೂರಿಸಿ, ಗೌರವದ ಹೊದಿಕೆಯನ್ನು ಹೊದಿಸಿದಾಗ, ಅದು ಕೇವಲ ವ್ಯಕ್ತಿಗೆ ನೀಡುವ ಸನ್ಮಾನವಾಗುವುದಿಲ್ಲ; ಅದು ಒಂದು ಕೆಟ್ಟ ಸಂದೇಶವಾಗುತ್ತದೆ. ಏನೇ ಆಗಲಿ, ಜನರ ಮುಂದೆ ಬಂದರೆ ಸಾಕು, ಗೌರವ ದೊರೆಯುತ್ತದೆ ಎಂಬ ಸಂದೇಶ. ಇದೇ ಸಂದೇಶ ತಪ್ಪು ಮಾಡುವವರಿಗೆ ಧೈರ್ಯ ನೀಡುತ್ತದೆ. ಮತ್ತೆ ಮತ್ತೆ ತಪ್ಪು ಮಾಡಲು ಅವಕಾಶ ಕಲ್ಪಿಸುತ್ತದೆ. ರಾಜಕೀಯದಲ್ಲಿ ಇಂಥ ವಿರೋಧಾಭಾಸಗಳು ಹೊಸದಲ್ಲ. ಆದರೆ ಧಾರ್ಮಿಕ ವೇದಿಕೆಗಳೂ ಇದೇ ದಾರಿಯಲ್ಲಿ ನಡೆಯಲು ಆರಂಭಿಸಿದಾಗ ಪ್ರಶ್ನೆ ಗಂಭೀರವಾಗುತ್ತದೆ. ಮೌಲ್ಯಗಳನ್ನು ಬೋಧಿಸುವವರು, ಸಮಾಜಕ್ಕೆ ದಿಕ್ಕು ತೋರಿಸುವವರು ಕೂಡ ಇದೇ ಗೊಂದಲಕ್ಕೆ ಒಳಗಾದರೆ, ನಾವು ಮುಂದೆ ಸಾಗಬೇಕಾದ ದಿಕ್ಕು ಎಲ್ಲಿದೆ? ಹಿಂದೊಮ್ಮೆ ಸ್ವಾಮೀಜಿಗಳ ಧಾರ್ಮಿಕ ನಾಯಕರ ಅಸ್ತಿತ್ವ ಮೌಲ್ಯಗಳ ನೆಲೆಯ ಮೇಲೆಯೇ ನಿಂತಿತ್ತು. ಇಂದು ಕೆಲವೆಡೆ ಅದು ಪ್ರಭಾವದ ಮೇಲೆ ನಿಂತಂತಿದೆ. ಮೌಲ್ಯಗಳು ನಿಧಾನವಾಗಿ ಹಿಂಬದಿಗೆ ಸರಿಯುತ್ತಿರುವುದನ್ನು ಕಾಣಬಹುದು. ಪಲ್ಲಕ್ಕಿಯಲ್ಲಿ ಹೊರುವ ಕೈಗಳು ಒಂದು ಕ್ಷಣ ನಿಂತು ಯೋಚಿಸಬೇಕು. ನಾವು ಹೊರುತ್ತಿರುವುದು ವ್ಯಕ್ತಿಯನ್ನಾ ಅಥವಾ ಆ ವ್ಯಕ್ತಿಯ ಮೂಲಕ ಪ್ರತಿನಿಧಿಸಲಾಗುತ್ತಿರುವ ಮೌಲ್ಯವನ್ನಾ? ಏಕೆಂದರೆ ಪ್ರತಿಯೊಂದು ಗೌರವವೂ ಒಂದು ಮಾನದಂಡವನ್ನು ನಿರ್ಮಿಸುತ್ತದೆ. ನಾವು ಯಾರನ್ನು ಎತ್ತಿ ಹಿಡಿಯುತ್ತೇವೋ, ನಾಳೆಯ ಸಮಾಜ ಅದನ್ನೇ ಮಾದರಿಯನ್ನಾಗಿ ತೆಗೆದುಕೊಳ್ಳುತ್ತದೆ. ಈ ಪ್ರಶ್ನೆ ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ. ಇದು ನಮ್ಮ ಬಗ್ಗೆ. ನಮ್ಮ ಮೌನ, ನಮ್ಮ ಹಾರ, ಶಾಲು, ಚಪ್ಪಾಳೆ, ನಮ್ಮ ಒಪ್ಪಿಗೆ ಇವೆಲ್ಲ ಸೇರಿ ಒಂದು ವಾತಾವರಣವನ್ನು ನಿರ್ಮಿಸುತ್ತವೆ. ಆ ವಾತಾವರಣದಲ್ಲಿ ತಪ್ಪುಗಳು ಸಾಮಾನ್ಯವಾಗುತ್ತವೆ, ಸಂಶಯಗಳು ಮೌನವಾಗುತ್ತವೆ, ಮೌಲ್ಯಗಳು ಬದಲಾಗುತ್ತವೆ. ಆದ್ದರಿಂದ ನಾವು ಯಾವಾಗಲಾದರೂ ನಿಂತು ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಗೌರವಿಸುತ್ತಿರುವುದು ವ್ಯಕ್ತಿಯನ್ನಾ, ಅಥವಾ ಮೌಲ್ಯಗಳನ್ನಾ? ಆ ಉತ್ತರವೇ ನಮ್ಮ ಸಮಾಜದ ಮುಂದಿನ ದಿಕ್ಕನ್ನು ನಿರ್ಧರಿಸುತ್ತದೆ. ಸಮಾಜದ ವಿಚಿತ್ರಗಳೆಂದರೆ ನಾವು ದೇವರನ್ನೇ ನಿರ್ಮಿಸುತ್ತೇವೆ ಮತ್ತೆ ನಿಧಾನವಾಗಿ ಅವನ ಕಣ್ಣಿಗೆ ಬಟ್ಟೆ ಕಟ್ಟುತ್ತೇವೆ. ಮುಲ್ಲಾ, ಪಾದ್ರಿ, ಸ್ವಾಮೀಜಿ, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ, ಕುಲಪತಿ, ಸಂಸದ, ಸಚಿವ ರಾಜಕಾರಣಿ....ಇವರಲ್ಲಿ ಯಾರಾದರೂ ತಪ್ಪಿತಸ್ಥರಾಗಿ ನ್ಯಾಯಾಲಯದ ಬಾಗಿಲಿಗೆ ತಲುಪಿದಾಗ, ಕಾನೂನು ತನ್ನ ಕೆಲಸವನ್ನು ನಿಧಾನವಾಗಿ, ಸಾಕ್ಷಿಗಳ ಬೆಳಕಿನಲ್ಲಿ ಮಾಡುತ್ತಿರುತ್ತದೆ. ಆದರೆ ಅದಕ್ಕೂ ಮುನ್ನವೇ, ಅವರನ್ನು ಭುಜದ ಮೇಲೆ ಹೊತ್ತಿದ್ದ ಸಮುದಾಯವೇ ತನ್ನ ತೀರ್ಪನ್ನು ಕೊಟ್ಟಿರಬೇಕು. ಅಷ್ಟೇ ಅಲ್ಲ, ಅವಶ್ಯಕವಾಗಿದ್ದರೆ ದೂರ ನಿಲ್ಲಬೇಕು, ಪ್ರಶ್ನಿಸಬೇಕು, ಮೌನದಿಂದಲೂ ವಿರೋಧ ವ್ಯಕ್ತಪಡಿಸಬೇಕು. ಆದರೆ ನಮ್ಮಲ್ಲಿ ನಡೆಯುವುದು ಬೇರೆಯೇ. ನ್ಯಾಯಾಲಯದ ಮೆಟ್ಟಿಲು ಏರಿದ ವ್ಯಕ್ತಿಯೇ ವೇದಿಕೆಯ ಮೇಲೂ ಏರುತ್ತಾನೆ. ಕೇಸು ಎದುರಿಸುತ್ತಿರುವವನ ಮಾತುಗಳು ‘ಆಶೀರ್ವಾದ’ಗಳಾಗಿ ಕೇಳಿಸುತ್ತವೆ. ದೇಣಿಗೆಯ ಮೊತ್ತ ಹೆಚ್ಚಿದಂತೆ ಭಕ್ತಿಯ ಗಾತ್ರವೂ ದೊಡ್ಡದಾಗುತ್ತದೆ. ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವ ಜನರ ಕೈಗಳು, ಅವನ ತಪ್ಪಿನ ಭಾರವನ್ನು ಮರೆಯುತ್ತವೆ. ಇದು ಭಕ್ತಿ ಅಲ್ಲ, ನಿಜವಾಗಿಯೂ ಇದು ಬದಲಾಗುತ್ತಿರುವ ನಮ್ಮ ಸಮಾಜದ ಸ್ಮತಿ ಕ್ಷೀಣತೆ. ನ್ಯಾಯಾಲಯವು ತಪ್ಪು ಸಾಬೀತುಪಡಿಸುವ ತನಕ ನಿರಪರಾಧಿ ಎಂಬುದು ಕಾನೂನಿನ ಸಿದ್ಧಾಂತ. ಆದರೆ ಸಮಾಜದ ಹೊಣೆ ಅದಕ್ಕಿಂತ ದೊಡ್ಡದು. ನಾವು ಯಾರನ್ನಾದರೂ ಎತ್ತರಕ್ಕೆ ಎತ್ತುವ ಮೊದಲು, ಅವರ ಒಳಗಿನ ನಿಶ್ಯಬ್ದವನ್ನು ಕೇಳುವ ಜವಾಬ್ದಾರಿ ನಮ್ಮದು. ನಾವು ನಿರ್ಮಿಸುವ ಪ್ರತಿಮೆಗಳಲ್ಲಿ ಭಗ್ನತೆಗಳು ಕಾಣಿಸಿಕೊಳ್ಳುವಾಗ, ಅವನ್ನು ಪುನಃ ಕಟ್ಟುವುದು ನಿರ್ಮಿಸುವುದು ಅಥವಾ ಮರೆಮಾಡುವುದು ಸುಲಭ. ಆದರೆ ಅವನ್ನು ಇಡಿಯಾಗಿ ಪರಿಪೂರ್ಣ ಎಂದು ಒಪ್ಪಿಕೊಳ್ಳುವುದು ಮಾತ್ರ ಸಮಾಜದ ಪ್ರೌಢತೆಯಲ್ಲ . ಇವತ್ತು ನಮ್ಮ ಕಾರ್ಯಕ್ರಮಗಳಲ್ಲಿ, ಮಠ-ಮಂದಿರಗಳ ಗದ್ದುಗೆಗಳಲ್ಲಿ, ಗೌರವದ ಕುರ್ಚಿಗಳಲ್ಲಿ ಕುಳಿತುಕೊಳ್ಳುವವರ ಆಯ್ಕೆ ಅವರ ಚಾರಿತ್ರ್ಯದಿಂದ ಅಲ್ಲ, ಅವರ ಸುತ್ತಲಿನ ಜನಸಮೂಹದ ಗದ್ದಲದಿಂದ ನಿರ್ಧಾರವಾಗುತ್ತಿದೆ. ಸತ್ಯಕ್ಕೆ ಬೆಂಬಲಿಗರೇ ಇಲ್ಲದ ಕಾಲದಲ್ಲಿ, ಸದ್ದು ಮಾಡುವವರೇ ‘ಸತ್ಪುರುಷ’ರಾಗುತ್ತಿದ್ದಾರೆ. ನಿಶ್ಯಬ್ದದಲ್ಲಿ ಬದುಕುವ ಪ್ರಾಮಾಣಿಕತೆ ಜನರಿಗೆ ಆಕರ್ಷಕವಾಗುವುದಿಲ್ಲ; ಅದಕ್ಕೆ ಪಲ್ಲಕ್ಕಿ ಸಿಗುವುದಿಲ್ಲ. ಹೀಗಾಗಿ, ಎತ್ತರದ ಸ್ಥಾನದಲ್ಲಿ ಇರುವವನು ಜನರ ಪ್ರೀತಿಯನ್ನು ಉಳಿಸಿಕೊಳ್ಳಲು ತನ್ನ ಒಳಗಿನ ಶುದ್ಧತೆಯನ್ನು ಕಳೆದುಕೊಳ್ಳುವ ಅಪಾಯಕ್ಕೆ ತುತ್ತಾಗುತ್ತಾನೆ. ಜನರ ಮೆಚ್ಚುಗೆಯನ್ನೇ ಗುರಿಯಾಗಿ ಮಾಡಿಕೊಂಡಾಗ, ಆತನಿಗೆ ಸತ್ಯಕ್ಕಿಂತ ನಾಟಕವೇ ಉಪಯುಕ್ತವಾಗುತ್ತದೆ. ಇದು ವ್ಯಕ್ತಿಯ ದೌರ್ಬಲ್ಯ ಮಾತ್ರವಲ್ಲ, ಇದು ಸಮಾಜದ ಒಪ್ಪಿಗೆ. ಅಂತಿಮವಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ ಅದಕ್ಕಿಂತ ಮುನ್ನವೇ ಅವನಿಗೆ ಸಮಾಜವೇ ಮಾನ್ಯತೆ ಕೊಡುತ್ತದೆ! ನಾವು ಯಾರ ಕೈತಟ್ಟುತ್ತೇವೆ, ಯಾರನ್ನು ಮೌನದಿಂದ ದೂರ ಇಡುತ್ತೇವೆ ಅದರಲ್ಲೇ ನಮ್ಮ ಸಂಸ್ಕೃತಿಯ ನಿಜವಾದ ಮುಖ ಕಾಣಿಸುತ್ತದೆ. ಕರಾವಳಿಯ ಬಹು ಮುಖ್ಯ ಕಾದಂಬರಿಕಾರರಾಗಿದ್ದ ದಿವಂಗತ ವಿಶುಕುಮಾರ್ ಅವರ ‘ಭಗವಂತನ ಆತ್ಮಕಥೆ’ ಇಲ್ಲಿ ಕೇವಲ ಒಂದು ಕಾದಂಬರಿ ಅಲ್ಲ, ಅದು ನಮ್ಮ ನಂಬಿಕೆಗಳ ಕನ್ನಡಿ. ಗರ್ಭಗುಡಿಯೊಳಗಿಂದ ಹೊರಬಂದು ‘ನನಗೆ ಇಲ್ಲಿ ಉಸಿರುಗಟ್ಟುತ್ತಿದೆ’ ಎಂದು ಹೇಳುವ ಭಗವಂತ ಕಾದಂಬರಿಕಾರರ ಕೈಗೆ ತನ್ನ ಆತ್ಮಕತೆಯನ್ನು ಇಟ್ಟು ಅವಸರದಿಂದಲೇ ದೇವಾಲಯದಿಂದ ನಿರ್ಗಮಿಸುತ್ತಾನೆ . ಕೃತಿಕಾರ ವಿಶುಕುಮಾರ್, ದೇವರು ತನ್ನ ಕೈಗೆ ಕೊಟ್ಟ ಆ ಡೈರಿಯ ಒಂದೊಂದೇ ಪುಟವನ್ನು ತೆರೆಯುತ್ತಾರೆ. ಆವಾಗ ಆ ದೈವಿಕ ಆವರಣದ ಒಳಗಡೆ ನಡೆಯುವ ಒಂದೊಂದೇ ಕುಟಿಲತೆಯ ಪರಿಚಯವಾಗುತ್ತದೆ ಕಣ್ಣಿದ್ದೂ ಇಲ್ಲದ ಭಗವಂತ ಅವೆಲ್ಲವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ದೇವರ ಕಥೆ ಬೆಚ್ಚಿ ಬೀಳಿಸುತ್ತದೆ.ಇದು ಬರೀ ಸಾಹಿತ್ಯದ ಕಲ್ಪನೆ ಮಾತ್ರವಲ್ಲ; ನಾವೇ ಕಟ್ಟಿದ ಆಚಾರ-ವಿಚಾರಗಳ ಗೂಡಿನೊಳಗೆ ಸಿಕ್ಕಿಹಾಕಿಕೊಂಡಿರುವ ಸತ್ಯದ ಪ್ರತಿಧ್ವನಿಯೂ ಹೌದು. ನಾವು ದೇವರನ್ನು ಅಂಧಕಾರದೊಳಗೆ ಕೂರಿಸಿ, ಬೆಳಕನ್ನು ಹೊರಗಡೆ ಆಚರಿಸುತ್ತಿದ್ದೇವೆ. ಕಣ್ಣು ಕಾಣದ, ಬಾಯಿ ಮಾತಾಡದ ಆ ಮೂರ್ತಿಯ ಮೌನವನ್ನು ನಾವು ನಮ್ಮ ಸೌಕರ್ಯಕ್ಕೆ ತಕ್ಕಂತೆ ಭಾಷಾಂತರಿಸುತ್ತಿದ್ದೇವೆ. ಆ ಮೌನದ ಮೇಲೆ ನಾವು ಕಟ್ಟುತ್ತಿರುವ ಕಾರ್ಯಕ್ರಮಗಳು, ಶುದ್ಧೀಕರಣಗಳ ಹೆಸರಿನಲ್ಲಿ ನಡೆಯುವ ಗದ್ದಲ ಅವೆಲ್ಲವೂ ಬರೀ ಭಕ್ತಿಯ ಶಬ್ದಗಳೇ ಅಲ್ಲ, ಕೆಲವೊಮ್ಮೆ ಆತ್ಮವಂಚನೆಯ ಘೋಷಣೆಗಳೂ ಆಗುತ್ತವೆ. ಭಗವಂತ ತನ್ನ ಡೈರಿಯನ್ನು ಒಪ್ಪಿಸಿ ಹೊರಟುಹೋಗುವ ಆ ದೃಶ್ಯ ಅದು ನಂಬಿಕೆಯ ಒಂದು ಅಂತಿಮ ಎಚ್ಚರಿಕೆ. ಪ್ರತಿಯೊಂದು ಪುಟವೂ ತೆರೆಯುವಾಗ ಕಾಣಿಸಿಕೊಳ್ಳುವ ಸಂಕಟಗಳು, ನಮ್ಮ ಧಾರ್ಮಿಕ ಕೇಂದ್ರ, ಮಠ ವಾತಾವರಣದೊಳಗಿನ ಉಸಿರುಗಟ್ಟುವಿಕೆಯನ್ನು ಮಾತ್ರ ಹೇಳುವುದಿಲ್ಲ; ಅದು ನಮ್ಮ ಮನಸ್ಸಿನಲ್ಲೇ ಹುಟ್ಟಿಕೊಂಡಿರುವ ಅಸಹಜತೆಯನ್ನು ಬಯಲಿಗೆಳೆಯುತ್ತದೆ. ಇದು ಎಲ್ಲೆಡೆ ಸತ್ಯ ಎಂದು ಹೇಳಲು ಸಾಧ್ಯವಿಲ್ಲ.ಆದರೆ ಸುಳ್ಳು ಎಂದು ತಳ್ಳಿಹಾಕಲು ನಮಗೆ ಸಾಕ್ಷಿ ಇಲ್ಲದಷ್ಟರ ಮಟ್ಟಿಗೆ ನಮ್ಮ ಧಾರ್ಮಿಕ ಸಂವೇದನೆ ಕುಂದುತ್ತಿರುವುದೂ ಸತ್ಯ. ಅಪರಾಧಿಯ ಕೈಗೆ ನಂಬರ್ ಬರೆದ ಪ್ಲೇಟ್ಕೊಟ್ಟು ಫೋಟೊ ತೆಗೆಸಿ ಪತ್ರಿಕೆಯಲ್ಲಿ ಪದೇ ಪದೇ ಅದು ಪ್ರಕಟವಾದಾಗ ಅದೊಂದು ಕೀಳರಿಮೆಯಾಗಿ ಕಾಣದೆ ಅದೇ ಅವನಿಗೆ ಪರವಾನಿಗೆಯಾಗಿ ಕಾಣಿಸುವ ಸಾಧ್ಯತೆಗಳಿವೆ. ಮತ್ತೆ ಮತ್ತೆ ಅವನನ್ನೇ ವೇದಿಕೆಗೆ ಏರಿಸಿದಾಗ, ಬಹುಪರಾಕ್ ಎಂದಾಗ ಎಲ್ಲೋ ಒಂದು ಕಡೆ ಆತ ಅದನ್ನೇ ಬಹುಮಾನ ಎಂದು ಪರಿಗಣಿಸುವ ಸಾಧ್ಯತೆಗಳೇ ಹೆಚ್ಚು. ಇಂದಿನ ನಮ್ಮ ಸಮಾರಂಭಗಳಲ್ಲಿ, ಯಾರು ಮುಖ್ಯ ಅತಿಥಿ ಎಂಬುದನ್ನು ನಿರ್ಧರಿಸುವ ಮಾನದಂಡಗಳು ಬದಲಾಗಿವೆ. ಆ ವ್ಯಕ್ತಿಯ ಒಳಗಿನ ಪ್ರಾಮಾಣಿಕತೆಗಿಂತ, ಅವನ ಹೊರಗಿನ ಪ್ರಭಾವವೇ ಮುಖ್ಯವಾಗುತ್ತಿದೆ.ಯಾರು ಯಾವ ಪೀಠದಲ್ಲಿ ಕುಳಿತಿದ್ದಾನೆ, ಎಷ್ಟು ಜನರನ್ನು ತನ್ನ ಸುತ್ತ ಇಟ್ಟುಕೊಂಡಿದ್ದಾನೆ ಇವುಗಳೇ ಅವನಿಗೆ ಸ್ಥಾನ ನೀಡುತ್ತಿವೆ. ಆದರೆ ಈ ಕ್ಷಣದ ಸತ್ಯವೇನು? ಅವನ ಮನಸ್ಸು ಎಷ್ಟು ಶುಚಿ? ಅವನ ನಡೆ ಎಷ್ಟು ನೇರ? ಈ ಪ್ರಶ್ನೆಗಳು ಕೇಳದೇ ಉಳಿಯುತ್ತಿವೆ. ಸ್ಥಳೀಯ ಸಮುದಾಯವು ಯಾರನ್ನಾದರೂ ಗೌರವಿಸುವಾಗ, ಅವರ ಆ ಕ್ಷಣದ ಸತ್ಯವನ್ನು ಆಧರಿಸಿಕೊಳ್ಳಬೇಕು. ಅದು ಮಠ, ಗುತ್ತು, ಮನೆಯ ಪರಂಪರೆಗಿಂತ ದೊಡ್ಡದು, ಆರ್ಥಿಕ ಪ್ರಭಾವಕ್ಕಿಂತ ಗಂಭೀರ. ಏಕೆಂದರೆ ಸಮಾಜವು ತನ್ನ ವೇದಿಕೆಗೆ ಯಾರನ್ನು ಏರಿಸುತ್ತದೆ ಎನ್ನುವುದು, ಅದರ ಆತ್ಮದ ಗುಣಮಟ್ಟವನ್ನು ತೋರಿಸುತ್ತದೆ. ಕೊನೆಗೆ, ಭಗವಂತನು ಹೊರಟುಹೋದ ಆ ಗರ್ಭಗುಡಿ ಖಾಲಿಯಾಗುವುದಿಲ್ಲ.ಅಲ್ಲಿ ನಾವು ನಮ್ಮ ನಂಬಿಕೆಗಳನ್ನು ತುಂಬುತ್ತೇವೆ. ಆದರೆ ಆ ನಂಬಿಕೆಗಳಿಗೆ ಉಸಿರಾಡಲು ಜಾಗವಿದೆಯೇ? ಅಥವಾ ನಾವು ಕಟ್ಟಿದ ಸಂಪ್ರದಾಯಗಳ ಗೋಡೆಗಳ ಮಧ್ಯೆ ಅವುಗಳೂ ಉಸಿರುಗಟ್ಟುತ್ತಿವೆಯೇ? ಈ ಪ್ರಶ್ನೆಯನ್ನು ಕೇಳುವ ಧೈರ್ಯವೇ ನಮ್ಮ ಶುದ್ಧೀಕರಣದ ಮೊದಲ ಹೆಜ್ಜೆ.
Pawan Kalyan: ಆಸ್ಪತ್ರೆಗೆ ದಾಖಲಾದ ನಟ ಪವನ್ ಕಲ್ಯಾಣ್: ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಬೆನ್ನುನೋವು ಮತ್ತು ಸೈನಸೈಟಿಸ್ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ, ಶುಕ್ರವಾರ ಅಧಿಕೃತ ಸಭೆಯಲ್ಲಿದ್ದಾಗ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಎಂಆರ್ಐ (MRI) ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. 10 ದಿನಗಳ ವಿಶ್ರಾಂತಿಗೆ ಸೂಚನೆ ಶಸ್ತ್ರಚಿಕಿತ್ಸೆಯ ನಂತರ
ಚಿರತೆಯಿಂದ ಅತ್ತೆ ರಕ್ಷಿಸಿದ ಸೊಸೆಗೆ ಸಿಗಲಿದೆ 'ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ': ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಡೆದ ಘಟನೆ ಕೇವಲ ಆಕಸ್ಮಿಕವಷ್ಟೇ ಅಲ್ಲ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಶಿಸಿದ್ದಾರೆ. ಜೊತೆಗೆ ಕಷ್ಟದ ಸಂದರ್ಭದಲ್ಲಿ ಧೈರ್ಯ, ಸಾಹಸ ಮೆರೆದ ಸೊಸೆಗೆ ಪ್ರಶಸ್ತಿ ನೀಡುವ ಕುರಿತು ಮಾತನಾಡಿದ್ದಾರೆ. ಮೈಸೂರಿನ ಸಿದ್ಧಾರ್ಥ
Tumakuru | ಮನೆಗೆ ಬೆಂಕಿ ಹಚ್ಚಿ ಚಿನ್ನ ಕಳ್ಳತನ: 24 ಗಂಟೆಯಲ್ಲಿ ಆರೋಪಿಯ ಬಂಧನ
ತಿಪಟೂರು: ನಗರದ ಬಂಡಿಹಳ್ಳಿಯಲ್ಲಿ ಮನೆಗೆ ಬೆಂಕಿ ಹಚ್ಚಿ ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ನಗರ ಠಾಣೆ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಹಾಸನದ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯ ಬಸವೇಶ್ವರ ನಗರ (ಹೊಸಟ್ಟಿ) ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ. ಘಟನೆ ವಿವರ: ಬಂಡಿಹಳ್ಳಿಯ ಪ್ರಶಾಂತ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೂಲತಃ ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಉಪ್ಪಾರ ಹೊಸಹಳ್ಳಿಯವರಾದ ಲಕ್ಷ್ಮಿ ಅವರ ಮನೆಗೆ ಎಪ್ರಿಲ್ 17ರಂದು ಸಂಜೆ ಸುಮಾರು 7.15ರ ವೇಳೆಗೆ ಬಂದ ಆರೋಪಿ ಜಗದೀಶ್, ಲಕ್ಷ್ಮಿ ಅವರ ತಂಗಿ ಆಶಾ ಅವರನ್ನು ಕೇಳಿದ್ದಾನೆ. ಆಶಾ ಅವರ ಪರಿಚಯದ ಜಗದೀಶ್, ಈ ಹಿಂದೆ ಹಲವು ಬಾರಿ ಲಕ್ಷ್ಮಿ ಅವರ ಮನೆಗೆ ಬಂದಿದ್ದ ಎನ್ನಲಾಗಿದೆ. ಆಕೆ ಇಲ್ಲ ಎಂದು ಹೇಳುತ್ತಿದ್ದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಲಕ್ಷ್ಮಿ ಅವರು ಮನೆಗೆ ಬೀಗ ಹಾಕಿ ಹತ್ತಿರದ ಗಂಗಾಮಣಿ ಅವರ ಮನೆಗೆ ತೆರಳಿದ್ದಾರೆ. ಅಲ್ಲಿಗೂ ಬಂದ ಜಗದೀಶ್ ಬೆದರಿಕೆ ಮುಂದುವರಿಸಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಗಂಗಾಮಣಿ ಹಾಗೂ ಅವರ ತಮ್ಮ ಅರುಣ್ ಅವರು ಲಕ್ಷ್ಮಿ ಅವರ ಮನೆ ಕಡೆ ತೆರಳಿ ನೋಡುವಾಗ, ಮನೆಯ ಮೇಲ್ಛಾವಣಿಯಿಂದ ಜಗದೀಶ್ ಇಳಿದು ಬರುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಮನೆಯ ಕಿಟಕಿಯಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಲಕ್ಷ್ಮಿ ಅವರು ಮನೆಗೆ ಹೋದಾಗ, ಬಾಗಿಲು ಜಖಂ ಆಗಿದ್ದು, ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ಆರಿಸಿದೆ. ಬೆಂಕಿಯಿಂದ ಮನೆಯಲ್ಲಿದ್ದ ಕಬ್ಬಿಣದ ಬೀರು, ಅದರೊಳಗಿನ ಬಟ್ಟೆಗಳು ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಟಿವಿ, ಹಾಸಿಗೆ ಸೇರಿದಂತೆ ಅನೇಕ ವಸ್ತುಗಳು ಹಾನಿಗೊಳಗಾಗಿದ್ದು, ಸುಮಾರು 60,000 ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ತನಿಖೆ ವೇಳೆ ಆರೋಪಿ ಜಗದೀಶ್ ಮನೆಗೆ ಬೆಂಕಿ ಹಚ್ಚುವ ಮೊದಲು ಮನೆಯಲ್ಲಿದ್ದ ಚಿನ್ನವನ್ನು ಕದ್ದಿರುವುದು ಬಹಿರಂಗವಾಗಿದೆ. ತಂಗಿ ಆಶಾ ಬಗ್ಗೆ ಮಾಹಿತಿ ನೀಡದ ಕಾರಣ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಮೊ.ನಂ. 60/2026ರಲ್ಲಿ ಬಿಎನ್ಎಸ್ ಕಲಂ 326(ಜಿ), 324(5), 351(2), 331 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳಿಂದ ಮತ್ತೆ ನಿರ್ಣಯ ಮಂಡನೆ ಸಾಧ್ಯತೆ
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಸಂಸತ್ತಿನಲ್ಲಿ ಮತ್ತೊಮ್ಮೆ ನಿರ್ಣಯ ಮಂಡಿಸಲು ವಿಪಕ್ಷಗಳು ಸಿದ್ಧತೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 2011ರ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಲು ಉದ್ದೇಶಿಸಿದ್ದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ವಿಪಕ್ಷಗಳು ಪರಾಭವಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ಸುಮಾರು 63 ರಾಜ್ಯಸಭಾ ಸದಸ್ಯರು ಹಾಗೂ 130 ಲೋಕಸಭಾ ಸದಸ್ಯರು ಮಾರ್ಚ್ 12ರಂದು ನಿರ್ಣಯ ಮಂಡಿಸಿದ್ದರು. ಆದರೆ, ಎಪ್ರಿಲ್ 6ರಂದು ಎರಡೂ ಸದನಗಳ ಮುಖ್ಯಸ್ಥರಿಂದ ಈ ನಿರ್ಣಯ ತಿರಸ್ಕೃತಗೊಂಡಿತ್ತು. ಜ್ಞಾನೇಶ್ ಕುಮಾರ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಿ, ವಿಪಕ್ಷಗಳು ಹೊಸ ನಿರ್ಣಯದ ಕರಡನ್ನು ತಯಾರಿಸಲಿವೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯಲ್ಲಿ ಸಾಂವಿಧಾನಿಕ ಮಸೂದೆಯ ಮೇಲೆ ತಮಗೆ ದೊರೆತ ಗೆಲುವಿನಿಂದ ಬೀಗುತ್ತಿರುವ ವಿಪಕ್ಷಗಳು, ಈ ಬಾರಿ ತಮ್ಮ ನಿರ್ಣಯದ ಪರ ಸಹಿ ಹಾಕುವವರ ಒಟ್ಟು ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿವೆ. ಮುಂದಿನ ವಾರ ಈ ಹೊಸ ನೋಟಿಸ್ ಅನ್ನು ಮಂಡಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಾರ್ಚ್ 12ರಂದು ಮಂಡಿಸಿದ್ದ ನೋಟಿಸ್ ಅನ್ನು ತಿರಸ್ಕರಿಸಿದ್ದ ರಾಜ್ಯಸಭಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂವಿಧಾನದಡಿ ಜ್ಞಾನೇಶ್ ಕುಮಾರ್ ವಿರುದ್ಧದ ದುರ್ನಡತೆ ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಲ್ಲಿ ವಿಪಕ್ಷಗಳು ವಿಫಲಗೊಂಡಿವೆ ಎಂದು ಹೇಳಿದ್ದರು.
ಏಪ್ರಿಲ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 19) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
Kohli Vs Chahal: ಆಗ ಅವನೀತ್ ಕೌರ್, ಈಗ ಲಿಜ್ಲಾಜ್; 'ಅಲ್ಗಾರಿದಮ್' ಕಮೆಂಟ್ ಮೂಲಕ ಕೊಹ್ಲಿ ಕಾಲೆಳೆದ ಚಹಾಲ್
Kohli Vs Chahal: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಅವರು ತಮ್ಮ ಬ್ಯಾಟಿಂಗ್ನಿಂದಲ್ಲ, ಬದಲಾಗಿ ಇನ್ಸ್ಟಾಗ್ರಾಮ್ನಲ್ಲಿ ನೀಡಿದ ಒಂದು 'ಲೈಕ್' ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಜೊತೆಗೆ ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಾಲ್ ಅವರ 'ಅಲ್ಗಾರಿದಮ್' ಟ್ರೋಲ್ ಸಖತ್ ವೈರಲ್ ಆಗಿದೆ.
ಬಿಜೆಪಿ ಹಿರಿಯ ನಾಯಕ, ಮಾಜಿ ಸಂಸದ ಬಲ್ಬೀರ್ ಪುಂಜ್ ನಿಧನ: ಪ್ರಧಾನಿ ಮೋದಿ ಸಂತಾಪ
ಹೊಸ ದಿಲ್ಲಿ: ಲೇಖಕ, ಪತ್ರಕರ್ತ, ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಬಲ್ಬೀರ್ ಪುಂಜ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ದಿ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದಲ್ಲಿ ಪತ್ರಕರ್ತರಾಗಿದ್ದ ಬಲ್ಬೀರ್ ಪುಂಜ್, ಸಾಮಾಜಿಕ ವಿದ್ಯಮಾನಗಳ ವಿಶ್ಲೇಷಕರೂ ಆಗಿದ್ದರು. ಅವರು ‘Tryst with Ayodhya: Decolonisation of India’ ಹಾಗೂ ‘Narrative ka Mayajaal’ ಕೃತಿಗಳನ್ನೂ ರಚಿಸಿದ್ದರು. ಬಲ್ಬೀರ್ ಪುಂಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬ ಚಿಂತಕರು, ಲೇಖಕರು ಹಾಗೂ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರು ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಸೇವೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದರು ಎಂದು ಶ್ಲಾಘಿಸಿದ್ದಾರೆ. ಬಲ್ಬೀರ್ ಪುಂಜ್ ಬಿಜೆಪಿಯ ಬೌದ್ಧಿಕ ಮತ್ತು ನೀತಿ ನಿರೂಪಣೆ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಸದನದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳ ಕುರಿತ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದರು. ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಅವರು 1971ರಲ್ಲಿ ‘The Motherland’ ಎಂಬ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
ಧರ್ಮದಿಂದ ರಾಷ್ಟ್ರೀಯತೆ ಅಳೆಯುವುದು ಸಮಾಜಕ್ಕೆ ಮಾರಕ : ಮರೆಪ್ಪ ಹಳ್ಳಿ
ಬಸವ ಜಯಂತಿ ಉತ್ಸವಕ್ಕೆ ಚಾಲನೆ
ನಮ್ಮ ಸಮಾಜವನ್ನು ನಾಶಪಡಿಸುತ್ತಿದ್ದಾರೆ: ನೆತನ್ಯಾಹು ವಿರುದ್ಧ ಇಸ್ರೇಲ್ನಲ್ಲಿ ಭಾರೀ ಪ್ರತಿಭಟನೆ
ಟೆಲ್ ಅವೀವ್, ಎ. 19: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರದ ವಿರುದ್ಧ ಶನಿವಾರ ರಾತ್ರಿ ಟೆಲ್ ಅವೀವ್ ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಫೇಲ್ ಪ್ನೀನಾ ಅವರು, ನೆತನ್ಯಾಹು ನಮ್ಮ ಸಮಾಜವನ್ನು ಒಳಗಿನಿಂದಲೇ ನಾಶಪಡಿಸುತ್ತಿದ್ದಾರೆ. ಯುರೋಪಿಯನ್ ರಾಷ್ಟ್ರಗಳು ಹಾಗೂ ಅಮೆರಿಕದೊಂದಿಗೆ ಇಸ್ರೇಲ್ ನ ಸಂಬಂಧಗಳನ್ನು ಅವರು ದುರ್ಬಲಗೊಳಿಸುತ್ತಿದ್ದಾರೆ. ಈ ಕಾರಣದಿಂದಲೇ ತಾವು ಪ್ರತೀ ವಾರ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. “ಅಕ್ಟೋಬರ್ 7ರಂದು ನಡೆದ ಘಟನೆಗಳು ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಈ ಸರಕಾರವು, ಮುಂದಿನ ಸರಕಾರವೂ ಸಮಗ್ರ ತನಿಖೆ ನಡೆಸಬೇಕು. ನಮಗೆ ಉತ್ತರ ಸಿಗಬೇಕು” ಎಂದು ಅವರು ಹೇಳಿದರು. ಸಾಮಾಜಿಕ ಕಾರ್ಯಕರ್ತೆ ಲೀ ಹಾಫ್ಮನ್-ಅಗೀವ್ ಅವರು, “ಅಕ್ಟೋಬರ್ 7ರಂದು ಮತ್ತು ಅದರ ನಂತರ ನಡೆದ ಯುದ್ಧದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಬೆಂಬಲ ಸೂಚಿಸಲು ನಾನು ಇಲ್ಲಿ ಬಂದಿದ್ದೇನೆ,” ಎಂದು ಹೇಳಿದರು. ಇನ್ನೊಬ್ಬ ಪ್ರತಿಭಟನಾಕಾರ ಚೈಮ್ ಟ್ರಿವಾಕ್ಸ್ ಅವರು, ಲೆಬನಾನ್ ಹಾಗೂ ಇರಾನ್ ವಿರುದ್ಧ ಯುದ್ಧ ಆರಂಭಿಸುವಲ್ಲಿ ಇಸ್ರೇಲ್ ತಪ್ಪುಗಳನ್ನು ಮಾಡಿದೆ ಎಂದು ಟೀಕಿಸಿದರು. ನೆತನ್ಯಾಹು ದೇಶದ ಹಿತಕ್ಕಿಂತ ತಮ್ಮ ವೈಯಕ್ತಿಕ ಕಾರಣಗಳಿಗಾಗಿ, ವಿಶೇಷವಾಗಿ “ಜೈಲಿನಿಂದ ತಪ್ಪಿಸಿಕೊಳ್ಳಲು” ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಫೆ. 18ರಿಂದ 28ರವರೆಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ
ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು 2027ರ ಫೆ. 18ರಿಂದ ಫೆ. 28ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಅಧಾನಿ ಗ್ರೂಪ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಅಳ್ವ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿಯ ಮುಖ್ಯಸ್ಥರುಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ. ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಷ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.
ಜೈಲಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿಗೆ ಕೈದಿ ಸಂಖ್ಯೆ 16,110; ಶೀಘ್ರವೇ ಕೆಲಸ ಹಂಚಿಕೆ, ಕೂಲಿ ನಿಗದಿ
ಬೆಂಗಳೂರು: ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊಲೆಗಾರನಾಗಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲ 17ಆರೋಪಿಗಳು ಜೈಲು ಸೇರಿದ್ದಾರೆ. ಈ ವಿಚಾರವಾಗಿ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಂಥಹ ಮಹತ್ವದ ಕೋರ್ಟ್ ತೀರ್ಪಿನಿಂದ ಪೊಲೀಸರು, ರಾಜಕಾರಣಿಗಳಿಗೆ, ಹಣವಂತರಿಗೆ ಬುದ್ಧಿ ಬರಲಿದೆ. ಇದೊಂದು ಎಚ್ಚರಿಕೆ ಗಂಟೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಜೈಲು ಸೇರಿದ ವಿನಯ್ ಕಣ್ಣೀರಿಟ್ಟಿದ್ದಾರೆ. ಜೈಲಾಧಿಕಾರಿಗಳು
ಹೊಸಪೇಟೆಯಲ್ಲಿ ಸರಣಿ ಅಪಘಾತ: ಇಬ್ಬರು ಮೃತ್ಯು; ಹಲವರಿಗೆ ಗಂಭೀರ ಗಾಯ
ವಿಜಯನಗರ: ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹೊಸಪೇಟೆಯ ಹೊರವಲಯದಲ್ಲಿರುವ ಟನಲ್ ಪ್ರದೇಶದಿಂದ ಡಾಣಾಪುರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸಿದ ಲಾರಿಯೊಂದು ರಸ್ತೆ ಮಧ್ಯೆ ಕಾರು, ಬೈಕ್ ಮತ್ತು ಬಸ್ ಗಳಿಗೆ ಢಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿಬಿದ್ದಿದೆ. ಅಪಘಾತದ ತೀವ್ರತೆಗೆ ಕಾರೊಂದು ಸಂಪೂರ್ಣ ಅಪ್ಪಚ್ಚಿಯಾಗಿದ್ದರೆ, ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಾಹ್ನವಿ ಎಸ್. ಹಾಗೂ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Belagavi | ಸುತ್ತಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ: ಆರೋಪಿಯ ಬಂಧನ
ಬೆಳಗಾವಿ, ಎ.19: ನಗರದ ದರ್ಬಾರ್ ಗಲ್ಲಿಯಲ್ಲಿ ಎರಡು ದಿನಗಳ ಹಿಂದೆ ಮಾರಣಾಂತಿಕ ದಾಳಿಗೊಳಗಾದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀರಭದ್ರ ನಗರ ನಿವಾಸಿ ಫಝಲ್ ದಫೇದಾರ್ (56) ಕೊಲೆಯಾದವರು. ಅಯಾನ್ ನಾಯಕವಾಡಿ (26) ಕೊಲೆ ಆರೋಪಿಯಾಗಿದ್ದಾನೆ. ಎರಡು ದಿನಗಳ ಹಿಂದೆ ಫಝಲ್ ದಫೇದಾರ್ ಅಂಗಡಿಗೆ ತೆರಳಿದ್ದ ವೇಳೆ ಹಿಂಬಾಲಿಸಿಕೊಂಡು ಬಂದ ಆರೋಪಿ ಅಯಾನ್ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕವಾಗಿಯೇ ಫಝಲ್ ತಲೆಗೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದನೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಫಝಲ್ ರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿ ಅಯಾನ್ ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
Hubballi | ಚಿನ್ನಾಭರಣ ಮಳಿಗೆಯಿಂದ ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ದುರ್ಗದಬೈಲ್ ಎಂಬಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಚಿನ್ನದ ಸರ ಕಳವುಗೈದ ಘಟನೆ ವರದಿಯಾಗಿದೆ. ದುರ್ಗದ ಬೈಲ್ ನಲ್ಲಿರುವ ಭೂಸದ ಬಿಲ್ಡಿಂಗ್ ನಲ್ಲಿರುವ ಚಿನ್ನಾಭರಣ ಮಳಿಗೆಯಲ್ಲಿ ಈ ಕಳವು ನಡೆದಿದೆ. ಗುರುತು ಪತ್ತೆಯಾಗದಿರಲು ಬುರ್ಖಾ ಧರಿಸಿ ಅಂಗಡಿಯೊಳಗೆ ನುಗ್ಗಿದ ಕಳ್ಳ, ಚಿನ್ನದ ಸರ ಕಳವುಗೈದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಕಛೇರಿ ಉದ್ಘಾಟನೆ
ಕಾರ್ಕಳ: 2007 ಫೆಬ್ರವರಿ ಯಲ್ಲಿ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಹೆಗ್ಡೆ ಯವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಅದಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾರ್ಕಳ ಡಿ ವೈ ಎಸ್ ಪಿ ವಿಜಯ ಪ್ರಸಾದ್, ಜಗದೀಶ್ ಅಧಿಕಾರಿ, ಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಮಸ್ತಕಾಭಿಷೇಕ ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.
Gold Price: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರ ಗಮನಕ್ಕೆ: ಇಂದಿನ ಬಂಗಾರ, ಬೆಳ್ಳಿ ದರಪಟ್ಟಿ ಇಲ್ಲಿದೆ
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಬೆಂಗಳೂರಿನಲ್ಲಿ ಇಂದು ಚಿನ್ನ ಖರೀದಿಸಲು ಅತ್ಯಂತ ಶುಭ ಮುಹೂರ್ತವಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹೂಡಿಕೆಯ ದೃಷ್ಟಿಯಿಂದಲೂ ಈ ದಿನ ಚಿನ್ನದ ಮೇಲೆ ಹಣ ಹೂಡುವುದು ಉತ್ತಮ ಎಂದು
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮೊದಲ ಹಂತದ ಮತದಾನಕ್ಕೂ ಮುನ್ನ 7 ಲಕ್ಷ ಹೊಸ ಮತದಾರರ ಸೇರ್ಪಡೆ
ಹೊಸದಿಲ್ಲಿ, ಎ.19: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ ಮತದಾರರ ಪಟ್ಟಿಗೆ ಸುಮಾರು 7 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಆದರೆ, ಈ ಸಂಬಂಧದ ವಿವರವಾದ ಮಾಹಿತಿ ಇನ್ನೂ ಬಿಡುಗಡೆ ಆಗಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಸುಮಾರು 3.22 ಲಕ್ಷ ಮಂದಿ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ 3.88 ಲಕ್ಷ ಮಂದಿ ಎರಡನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಹೊಸ ಸೇರ್ಪಡೆಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ವರ್ಷ ತುಂಬಿದ ಯುವಕರ ಸಂಖ್ಯೆ ಎಷ್ಟು ಎಂಬುದನ್ನು ಆಯೋಗ ಸ್ಪಷ್ಟಪಡಿಸಿಲ್ಲ. ಲಿಂಗವಾರು ವಿವರಗಳನ್ನೂ ನೀಡಿಲ್ಲ. ಮತದಾರರ ಪಟ್ಟಿಗೆ ಸೇರಲು ಸಲ್ಲಿಸಿದ ಫಾರ್ಮ್–6 ಅರ್ಜಿಗಳ ವಿವರಗಳು ಹಾಗೂ ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನೂ ಬಹಿರಂಗಪಡಿಸಲಾಗಿಲ್ಲ. ಇದುವರೆಗೆ ಒಟ್ಟು ಸಂಖ್ಯೆಗಳಷ್ಟೇ ಪ್ರಕಟವಾಗಿದ್ದು, ವಿವರವಾದ ಅಂಕಿಅಂಶಗಳನ್ನು ನಂತರ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚಿನ ಪರಿಷ್ಕರಣೆ ನಂತರ ರಾಜ್ಯದ ಒಟ್ಟು ಮತದಾರರ ಸಂಖ್ಯೆ 6,82,51,008ಕ್ಕೆ ಏರಿಕೆಯಾಗಿದೆ. ನ್ಯಾಯಮಂಡಳಿಗಳ ಆದೇಶಗಳ ಆಧಾರದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಇದರ ನಡುವೆ, ಕಳೆದ ವಾರದ ವಿಶೇಷ ತೀವ್ರ ಪರಿಷ್ಕರಣೆ (SIR) ವರದಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 10.9 ಶೇಕಡಾ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಕೈಬಿಡಲಾಗಿದೆ ಎಂದು ವರದಿ ಹೇಳಿದೆ.
MS Dhoni: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿಯೊಂದು ಪಂದ್ಯದ ವೇಳೆಯೂ ಅಭಿಮಾನಿಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆಯೆಂದರೆ ಅದು ಎಂ.ಎಸ್ ಧೋನಿ ಆಡುತ್ತಾರಾ? ಎಂಬುದು. ಸದ್ಯ ಧೋನಿ ಅವರ ಲಭ್ಯತೆಯ ಸುತ್ತಲಿನ ಚರ್ಚೆಗಳು ದಿನದಿಂದ ದಿನಕ್ಕೆ ಕಾವೇರುತ್ತಲಿವೆ. ಈ ನಡುವೆಯೇ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸನ್ರೈಸರ್ಸ್
ವಿಜಯನಗರ : ಲಾರಿ ಚಾಲಕನ ಬೇಜವಾಬ್ದಾರಿ ಚಾಲನೆಗೆ ಸರಣಿ ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ
ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಚಾಲಕನ ಅತಿವೇಗ ಹಾಗೂ ಬೇಜವಾಬ್ದಾರಿತನದಿಂದ ಭೀಕರ ಸರಣಿ ಅಪಘಾತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಪೇಟೆ ಹೊರವಲಯದ ಟನಲ್ನಿಂದ ಡಣಾಪುರದವರೆಗೆ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿದ ಚಾಲಕ, ದಾರಿಯುದ್ದಕ್ಕೂ ಸಿಕ್ಕ ಸಿಕ್ಕ ಬೈಕ್, ಕಾರು ಹಾಗೂ ಬಸ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
KSRTC Mantralaya Bus: ಕರಾವಳಿ ಜನರಿಗೆ ಗುಡ್ನ್ಯೂಸ್, ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ಬಸ್ಗಳ ಸಂಚಾರ, ವೇಳಾಪಟ್ಟಿ
ಮಂಗಳೂರು: ರಾಜ್ಯಾದ್ಯಂತ ತನ್ನ ಸಾರಿಗೆ ಸೇವೆ, ಹೊಸ ಉಪ್ರಕಮಗಳಿಂದಲೇ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕರಾವಳಿ ಭಾಗದ ಜನರಿಗೆ ಗುಡ್ನ್ಯೂಸ್ ನೀಡಿದೆ. ಕರಾವಳಿಯ ಮಂಗಳೂರು, ಉಡುಪಿ, ಮಲೆನಾಡು ಮಾರ್ಗವಾಗಿ ರಾಯಚೂರು ಹತ್ತಿರದ ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಯಲ್ಲಿರುವ ಶ್ರೀ ಮಂತ್ರಾಲಯಕ್ಕೆ ವಿಶೇಷ ನಾನ್ ಎಸಿ ಪಲ್ಲಕ್ಕಿ ಬಸ್ಗಳನ್ನು ಕಾರ್ಯಾಚರಣೆ ಆರಂಭಿಸಿದೆ. ಕರಾವಳಿ ಸೇರಿ
ರಾಹುಲ್ ಗಾಂಧಿ ವಿರುದ್ಧದ ‘ದ್ವಿಪೌರತ್ವ’ ಅರ್ಜಿ: ಎಫ್ಐಆರ್ ಆದೇಶ ಹಿಂಪಡೆದ ಅಲಹಾಬಾದ್ ಹೈಕೋರ್ಟ್
ಲಕ್ನೋ, ಎ.18: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧದ ದ್ವಿಪೌರತ್ವ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ನೀಡಿದ್ದ ತನ್ನದೇ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠ ಹಿಂಪಡೆದು, ವಿಚಾರಣೆಗೆ ಅವಕಾಶ ನೀಡಿದೆ. ಎಪ್ರಿಲ್ 17ರಂದು ನಡೆದ ವಿಚಾರಣೆಯಲ್ಲಿ, ರಾಹುಲ್ ಗಾಂಧಿಗೆ ನೋಟಿಸ್ ನೀಡಬೇಕೇ ಎಂಬ ವಿಷಯವನ್ನು ನ್ಯಾಯಾಲಯವು ಅರ್ಜಿದಾರರು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಕೀಲರಿಂದ ವಿಚಾರಿಸಿತು. ನೋಟಿಸ್ ಅಗತ್ಯವಿಲ್ಲ ಎಂದು ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಎಫ್ಐಆರ್ ದಾಖಲಿಸಲು ಸೂಚಿಸಿತ್ತು. ಆದರೆ, ಆದೇಶ ಹೊರಬರುವ ಮೊದಲು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಪ್ರಕರಣವನ್ನು ಮರುಪರಿಶೀಲಿಸಿದರು. ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ ಅವರು, ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡುವುದು ಕಡ್ಡಾಯ ಎಂದು ಪರಿಗಣಿಸಿದರು. ಹೀಗಾಗಿ, ನೋಟಿಸ್ ನೀಡದೆ ಎಫ್ಐಆರ್ ಆದೇಶ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ, ಹಿಂದಿನ ಎಫ್ಐಆರ್ ಆದೇಶವನ್ನು ಹಿಂಪಡೆದು, ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ. ಮುಂದಿನ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆ. ಈ ಪ್ರಕರಣವನ್ನು ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿದ್ದು, ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. Foreigners Act (1946) ಮತ್ತು ಪಾಸ್ಪೋರ್ಟ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಶುಕ್ರವಾರ ಇದೇ ಪೀಠವು ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸೂಚಿಸಿತ್ತು. ಇದಕ್ಕೂ ಮೊದಲು, ಜನವರಿ 28, 2026ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಕೇಂದ್ರ ಗೃಹ ಸಚಿವಾಲಯದ ವಿದೇಶಿ ನಾಗರಿಕರ ವಿಭಾಗಕ್ಕೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಸಚಿವಾಲಯವು ಅವುಗಳನ್ನು ಸಲ್ಲಿಸಿದೆ. ಅರ್ಜಿದಾರರ ಪ್ರಕಾರ, ರಾಹುಲ್ ಗಾಂಧಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ ಹಾಗೂ ಅಲ್ಲಿ ನಡೆದ ಚುನಾವಣೆಯಲ್ಲಿ ಪಾಲ್ಗೊಂಡಿರುವ ದಾಖಲೆಗಳಿವೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಮೊದಲು ರಾಯ್ಬರೇಲಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿ, ಡಿಸೆಂಬರ್ 17, 2025ರಂದು ಹೈಕೋರ್ಟ್ ಲಕ್ನೋ ಪೀಠಕ್ಕೆ ವರ್ಗಾಯಿಸಲಾಯಿತು. ಜನವರಿಯಲ್ಲಿ ಅರ್ಜಿ ವಜಾಗೊಂಡ ನಂತರ ಅರ್ಜಿದಾರರು ಹೈಕೋರ್ಟ್ಗೆ ಮೊರೆ ಹೋಗಿದ್ದರು. ಹೈಕೋರ್ಟ್ ಮೊದಲು ಎಫ್ಐಆರ್ಗೆ ಆದೇಶಿಸಿ, ಇದೀಗ ಅದನ್ನು ಹಿಂಪಡೆದಿದೆ. 2019ರಲ್ಲಿ ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು, ಕಂಪೆನಿಯ ದಾಖಲೆಗಳಲ್ಲಿ ಯಾರನ್ನಾದರೂ ‘ಬ್ರಿಟಿಷ್ ಪ್ರಜೆ’ ಎಂದು ಉಲ್ಲೇಖಿಸಿದ್ದ ಮಾತ್ರಕ್ಕೆ ಅವರು ವಿದೇಶಿ ಪೌರತ್ವ ಹೊಂದಿದ್ದಾರೆ ಎಂದು ಸಾಬೀತಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
Dharmasthala | ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ, ಎ.19: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಆರೋಪಿಗಳು ಪುಸಲಾಯಿಸಿ ಎ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಬಗ್ಗೆ ಸಂತ್ರಸ್ತೆ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ಎ.17ರಂದು ದೂರು ನೀಡಿದ್ದಾರೆ. ದೂರಿನನ್ವಯ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶನಿವಾರ ಸಂಜೆ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳ ಪೈಕಿ ಸುಮಂತ್ ಗೆ ಮೇ 10ರಂದು ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.
ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುವ ಹಬ್ಬಗಳಲ್ಲಿ ಅಕ್ಷಯ ತೃತೀಯ ಕೂಡ ಒಂದು. ಆಧ್ಯಾತ್ಮಿಕ ಶಕ್ತಿ, ಯಶಸ್ಸು ಮತ್ತು ಸಮೃದ್ಧಿಯ ಸಂಕೇತವಾಗಿರುವ ಈ ದಿನವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಸಂಸ್ಕೃತದಲ್ಲಿ 'ಅಕ್ಷಯ' ಎಂದರೆ ಎಂದಿಗೂ ಮುಗಿಯದ ಎಂದರ್ಥ. ಈ ದಿನದಂದು ಮಾಡಿದ ಒಳ್ಳೆಯ ಕೆಲಸಗಳು ಮತ್ತು ಹೂಡಿಕೆಗಳು ಶಾಶ್ವತವಾದ ಸಮೃದ್ಧಿಯನ್ನು ನೀಡುತ್ತವೆ
Shivamogga | ಕುವೆಂಪು ವಿವಿ ಸ್ಮಾರ್ಟ್ ಕ್ಲಾಸ್ ಕಾಮಗಾರಿ ಹಗರಣದ ತನಿಖೆಗೆ ರಾಜ್ಯಪಾಲ ಆದೇಶ
ನಿವೃತ್ತ ನ್ಯಾಯಾಧೀಶ ನೇತೃತ್ವದ ಸತ್ಯ ಶೋಧನಾ ಸಮಿತಿ ನೇಮಕ : ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ
ಬಿಲಿಯನ್ ಡಾಲರ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಅಗ್ಗದ ಆಯುಧ
ಅಮೆರಿಕದ ಪಾಲಿಗೆ ಎದುರಾಗಿದ್ದ ಇನ್ನೊಂದು ಆತಂಕವೂ ಈಗ ಹಿನ್ನೆಲೆಯಲ್ಲಿ ಮೌನವಾಗಿ ಕುಳಿತಿದೆ. ವರದಿಗಳ ಪ್ರಕಾರ, ಇರಾನ್ ಚೀನಾದ ಸಿಎಂ-302 ಕ್ಷಿಪಣಿಗಳನ್ನು ಖರೀದಿಸಲು ಸಿದ್ಧವಾಗಿತ್ತು. ಈ ಕ್ಷಿಪಣಿಗಳು ಅತ್ಯಂತ ವೇಗವಾದ, ಕೆಳ ಹಂತದಲ್ಲಿ ಹಾರಾಟ ನಡೆಸುವ ಆಯುಧಗಳಾಗಿದ್ದು, 290 ಕಿಲೋಮೀಟರ್ ದೂರದಿಂದ ಹಡಗುಗಳ ಮೇಲೆ ದಾಳಿ ನಡೆಸಬಲ್ಲದು. ಒಂದು ವೇಳೆ ಆ ಒಪ್ಪಂದ ಏನಾದರೂ ಯಶಸ್ವಿಯಾಗಿದ್ದರೆ, ಈ ಪ್ರದೇಶದಲ್ಲಿರುವ ಅಮೆರಿಕನ್ ಯುದ್ಧ ನೌಕೆಗಳೂ ಆತಂಕದಲ್ಲೇ ಇರಬೇಕಾಗುತ್ತಿತ್ತು. ‘‘ಅಮೆರಿಕ ಒಂದು ಅತ್ಯಂತ ಶಕ್ತಿಶಾಲಿ ರಾಷ್ಟ್ರ. ಅದನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ!’’ ಎನ್ನುವಂತಹ ಮಾತುಗಳನ್ನು ಜನರು ಆಡುವುದನ್ನು ನೀವು ಕೇಳಿರಬಹುದು. ಆದರೆ, ಈಗ ಇರಾನ್-ಅಮೆರಿಕ ಯುದ್ಧದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮೌನವಾಗಿಯೇ ಈ ನಂಬಿಕೆಯನ್ನು ಬದಲಾಯಿಸುತ್ತಿವೆ. ಈ ಹಾನಿಯನ್ನು ಉಂಟು ಮಾಡುತ್ತಿರುವ ಆಯುಧಗಳು ಅಷ್ಟು ಬೃಹತ್ತಾದವೇ ಎಂದರೆ, ಇಲ್ಲ. ಅವು ಮಾನವರ ಭುಜದ ಮೇಲೆ ಹಿಡಿಸುವಷ್ಟು ಸಣ್ಣ ಗಾತ್ರದವು! ಈ ಆಯುಧವನ್ನು ಮ್ಯಾನ್ಪ್ಯಾಡ್ ಅಥವಾ ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಸರಳವಾಗಿ ವಿವರಿಸುವುದಾದರೆ, ಇದು ಓರ್ವ ಯೋಧ ಸುಲಭವಾಗಿ ತನ್ನ ಹೆಗಲ ಮೇಲೆ ಹೊತ್ತುಕೊಂಡು, ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿರುವ ಯುದ್ಧ ವಿಮಾನಕ್ಕೆ ಗುರಿಯಿಟ್ಟು, ದಾಳಿ ನಡೆಸುವಂತಹ ಒಂದು ರಾಕೆಟ್ ಲಾಂಚರ್ ಆಗಿದೆ. ಇದು ಗಾತ್ರದಲ್ಲಿ ಸಣ್ಣದೂ, ಬೆಲೆಯಲ್ಲಿ ಅಗ್ಗವೂ ಆಗಿದ್ದು, ಇದನ್ನು ಬಚ್ಚಿಡುವುದೂ ಬಹಳ ಸುಲಭವಾಗುತ್ತದೆ. ಆದರೆ, ಇದು ಯುದ್ಧದಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಲ್ಲ ಆಯುಧವಾಗಿದೆ. ಹೇಗೆ ಒಂದು ನಾಯಿ ನಮ್ಮ ವಾಸನೆಯನ್ನು ಅನುಸರಿಸಿ ಹಿಂಬಾಲಿಸಿ ಹುಡುಕುತ್ತದೋ, ಹಾಗೇ ಈ ಆಯುಧ ರಾಕೆಟ್ನ ಇಂಜಿನ್ನಿಂದ ಬರುವ ಉಷ್ಣವನ್ನು ಅನುಸರಿಸಿ ಸಾಗಿ ಬರುತ್ತದೆ. ಒಂದು ಬಾರಿ ಇದು ಹಿಂಬಾಲಿಸಲು ಆರಂಭಿಸಿದರೆ, ಅದು ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಈ ಕ್ಷಿಪಣಿಗಳು ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಸಾಗಬಲ್ಲವಾಗಿದ್ದು, ಆಕಾಶದಲ್ಲಿ 5 ಕಿಲೋಮೀಟರ್ ತನಕ ಎತ್ತರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುತ್ತವೆ. ಈಗ ಇಲ್ಲೊಂದು ಆಘಾತಕಾರಿ ಅಂಶವಿದೆ. ನೈಜ ಯುದ್ಧದಲ್ಲಿ ಅಮೆರಿಕ ಒಂದಲ್ಲ, ಹಲವಾರು ಏರ್ಕ್ರಾಫ್ಟ್ ಗಳನ್ನು ಕಳೆದುಕೊಂಡಿದೆ. ಇಂತಹ ವಿದ್ಯಮಾನ ಕಳೆದ 20 ವರ್ಷಗಳ ಅವಧಿಯಲ್ಲಿ ಎಂದೂ ನಡೆದಿರಲಿಲ್ಲ. ಎಪ್ರಿಲ್ 3ರಂದು ಇರಾನ್ ಅಮೆರಿಕದ ಒಂದು ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನ ಮತ್ತು ಒಂದು ಎ-10 ವಾರ್ಥಾಗ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು. ಇದಾದ ಕೇವಲ ಒಂದು ದಿನದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಮುಂದೆ ಮಾತನಾಡುತ್ತಾ, ಇರಾನ್ ಬಳಿ ಯಾವುದೇ ವಿಮಾನ ನಿರೋಧಕ ಆಯುಧ ವ್ಯವಸ್ಥೆಗಳಿಲ್ಲ ಎಂದು ಘೋಷಿಸಿದ್ದರು! ಅಮೆರಿಕನ್ ಯುದ್ಧ ವಿಮಾನಗಳು ಯಾವ ಅಪಾಯವೂ ಇಲ್ಲದೆ ಇರಾನ್ನಲ್ಲಿ ಮುಕ್ತವಾಗಿ ಹಾರಾಟ ನಡೆಸುತ್ತಿವೆ ಎಂದೂ ಟ್ರಂಪ್ ಹೇಳಿದ್ದರು. ಆದರೆ ಟ್ರಂಪ್ ಹೇಳಿಕೆ ಬಹಳ ಬೇಗನೇ ಸುಳ್ಳಾಗಿತ್ತು. ಇರಾನ್ ದಾಳಿ ಕೇವಲ ಇಷ್ಟಕ್ಕೇ ನಿಲ್ಲಲಿಲ್ಲ! ಇರಾನ್ ಐದು ಕೆಸಿ-135 ಸ್ಟ್ರಾಟೋಟ್ಯಾಂಕರ್ಗಳನ್ನು ಹಾನಿಗೊಳಿಸಿತು. ಈ ಸ್ಟ್ರಾಟೋಟ್ಯಾಂಕರ್ಗಳು ಬೃಹತ್ತಾದ, ಹಾರಾಡುವ ಪೆಟ್ರೋಲ್ ಪಂಪುಗಳಂತಿದ್ದು, ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿ, ಆಕಾಶದಲ್ಲಿ ಹಾರಾಟ ನಡೆಸುವ ಯುದ್ಧ ವಿಮಾನಗಳಿಗೆ ಗಾಳಿಯಲ್ಲೇ ಇಂಧನ ತುಂಬಿಸುತ್ತವೆ. ಇನ್ನೊಂದು ಯುದ್ಧ ವಿಮಾನವನ್ನು ಸೌದಿ ಅರೇಬಿಯದೊಳಗೆ ನಾಶಪಡಿಸಲಾಯಿತು. ಇರಾನ್ ಇದರೊಡನೆ ಒಂದು ಇ-3 ಸೆಂಟ್ರಿ ಎಡಬ್ಲ್ಯುಎಸಿಎಸ್ ವಿಮಾನವನ್ನೂ ಹೊಡೆದುರುಳಿಸಿದೆ. ಇದನ್ನು ಒಂದು ಹಾರಾಡುವ ರೇಡಾರ್ ನಿಯಂತ್ರಣ ಕೊಠಡಿ ಎಂದುಕೊಳ್ಳಿ. ಬಿಲಿಯನ್ಗಟ್ಟಲೆ ಡಾಲರ್ ಬೆಲೆಬಾಳುವ ಈ ವಿಮಾನ, ಸಂಪೂರ್ಣ ವಾಯು ಕಾರ್ಯಾಚರಣೆಯ ಮೆದುಳಿನಂತಿರುತ್ತದೆ. ಇದಾದ ಬಳಿಕ, ಜಗತ್ತಿನ ಅತ್ಯಂತ ಆಧುನಿಕ ಸ್ಟೆಲ್ತ್ ಯುದ್ಧ ವಿಮಾನಗಳಲ್ಲಿ ಒಂದಾದ ಎಫ್-35 ಲೈಟ್ನಿಂಗ್ ವಿಮಾನವನ್ನೂ ಇರಾನ್ನ ನೆಲದಿಂದ ಹೊಡೆದುರುಳಿಸಲಾಯಿತು. ‘ಅಗೋಚರ ಯುದ್ಧ ವಿಮಾನ’ ಎಂದೇ ಖ್ಯಾತಿ ಪಡೆದ ಈ ಅತ್ಯಾಧುನಿಕ ಯುದ್ಧ ವಿಮಾನವೂ ಸಂಪೂರ್ಣ ಸುರಕ್ಷಿತವಲ್ಲ ಎಂದು ಸಾಬೀತಾಯಿತು! ಇನ್ನೂ ಮೂರು ಎಫ್-15ಇ ಯುದ್ಧ ವಿಮಾನಗಳು ಕುವೈತ್ನಲ್ಲಿ ಫ್ರೆಂಡ್ಲಿ ಫಯರ್ಗೆ ಬಲಿಯಾದವು. ಅಂದರೆ, ಅಮೆರಿಕದ ಸ್ವಂತ ಆಯುಧಗಳೇ ಆಕಸ್ಮಿಕವಾಗಿ ತಮ್ಮದೇ ವಿಮಾನಗಳನ್ನು ಹೊಡೆದು ಹಾಕಿದವು. ಈಗ ಅಮೆರಿಕಕ್ಕೆ ಶತ್ರುಗಳ ದಾಳಿಯಿಂದಲೂ, ತನ್ನದೇ ತಪ್ಪಿನಿಂದಲೂ ನಿರಂತರವಾಗಿ ಹಾನಿಯಂತೂ ಉಂಟಾಗುತ್ತಲೇ ಇದೆ. ಈಗ ಎಲ್ಲರೂ ನಿರ್ದಿಷ್ಟವಾಗಿ ಮ್ಯಾನ್ಪ್ಯಾಡ್ಗಳ ಕುರಿತು ಹೆಚ್ಚಿನ ಆತಂಕ ಹೊಂದಿರುವುದು ಯಾಕೆಂದರೆ, ಈ ಮ್ಯಾನ್ಪ್ಯಾಡ್ಗಳು ಅತ್ಯುತ್ತಮ ಗೆರಿಲ್ಲಾ ಆಯುಧಗಳಾಗಿವೆ. ಅವುಗಳು ರೇಡಾರ್ ಬಳಸುವುದಿಲ್ಲವಾದ್ದರಿಂದ, ಅವುಗಳನ್ನು ಸುಲಭವಾಗಿ ಗುರುತಿಸಲು ಅಥವಾ ತಡೆಗಟ್ಟಲು ಸಾಧ್ಯವಿಲ್ಲ. ಮ್ಯಾನ್ಪ್ಯಾಡ್ಗಳನ್ನು ಗುರಿಯಾಗಿಸಿ ಸುಲಭವಾಗಿ ದಾಳಿ ನಡೆಸೋಣ ಎಂದರೆ ಅವುಗಳು ದೊಡ್ಡ ಕ್ಷಿಪಣಿ ನೆಲೆಗಳ ರೀತಿಯಲ್ಲಿ ಒಂದು ದೊಡ್ಡ ಗಾತ್ರದ ಕ್ಷಿಪಣಿ ನೆಲೆಯಲ್ಲ. ಇರಾನ್ನ ಭೂ ಪ್ರದೇಶವೂ ಪರ್ವತಗಳು, ಕಣಿವೆಗಳು ಮತ್ತು ಕಠಿಣವಾದ ನೆಲವನ್ನು ಹೊಂದಿದ್ದು, ಇಂತಹ ಆಯುಧಗಳನ್ನು ಹೊಂದಿರುವ ಯೋಧರು ನೂರಾರು ಸ್ಥಳಗಳಲ್ಲಿ ಬಚ್ಚಿಟ್ಟು ಕೊಂಡು ದಾಳಿ ನಡೆಸಲು ಅತ್ಯಂತ ಸೂಕ್ತವಾಗಿದೆ. ಅಮೆರಿಕದ ಈಗಿನ ವಾಯು ದಾಳಿಗಳು ಬಹುತೇಕ ಅತ್ಯಂತ ಎತ್ತರದಿಂದ ಮತ್ತು ಬಹಳ ದೂರದಿಂದ ನಡೆಯುತ್ತಿದ್ದು, ಇವುಗಳನ್ನು ಸ್ಟ್ಯಾಂಡಾಫ್ ಸ್ಟ್ರೈಕ್ ಎಂದು ಕರೆಯಲಾಗುತ್ತದೆ. ಇಂತಹ ದಾಳಿಗಳಿಗೆ ಈಗ ಮ್ಯಾನ್ಪ್ಯಾಡ್ಗಳು ಹೇಳಿಕೊಳ್ಳುವಂತಹ ತೊಂದರೆ ಉಂಟುಮಾಡಲಾರವು. ಆದರೆ, ಅಮೆರಿಕ ಏನಾದರೂ ಭೂ ಸೇನೆಯನ್ನು ಇರಾನ್ನ ಒಳಗೆ ಕಳುಹಿಸಿದರೆ, ಆಗ ಅದು ನೈಜ ಅಪಾಯಕ್ಕೆ ತುತ್ತಾಗಲಿದೆ. ಯಾವಾಗ ಯೋಧರು ಭೂಮಿಗಿಳಿದು ಹೋರಾಟ ನಡೆಸುತ್ತಾರೋ, ಆಗ ಯುದ್ಧ ವಿಮಾನಗಳೂ ಅವರಿಗೆ ಬೆಂಬಲ ನೀಡುವ ಸಲುವಾಗಿ ಕೆಳಹಂತದಲ್ಲಿ ಹಾರಾಟ ನಡೆಸುತ್ತಾ ನಿಖರ ದಾಳಿಗಳನ್ನು ನಡೆಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಮೆರಿಕದ ಯುದ್ಧ ವಿಮಾನಗಳು ಭುಜದ ಮೇಲಿಟ್ಟುಕೊಂಡು ದಾಳಿ ನಡೆಸುವ ಆಯುಧಗಳಿಗೆ ಸುಲಭ ತುತ್ತಾಗಲಿವೆ. ಅಮೆರಿಕದ ಗುಪ್ತಚರ ವಲಯವೂ ಇರಾನ್ ಸದ್ಯದಲ್ಲೇ ಚೀನಾದಿಂದ ಇನ್ನೂ 1,000ಕ್ಕೂ ಹೆಚ್ಚು ಮ್ಯಾನ್ಪ್ಯಾಡ್ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಚೀನಾ ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದೆ ಎಂದು ಕಾಣುವುದನ್ನು ತಪ್ಪಿಸುವ ಸಲುವಾಗಿ ಈ ಆಯುಧಗಳನ್ನು ಮಧ್ಯ ಏಶ್ಯದ ರಾಷ್ಟ್ರಗಳ ಮೂಲಕ ಕಳ್ಳಸಾಗಣೆ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಚೀನಾದ ವಿದೇಶಾಂಗ ಸಚಿವಾಲಯ ಈ ವರದಿಗಳನ್ನು ತಳ್ಳಿಹಾಕಿದ್ದು, ಇವೆಲ್ಲ ಆಧಾರರಹಿತ, ಅತಿರಂಜಿತ ವರದಿಗಳು ಎಂದಿದೆ. ವಿಚಾರಗಳು ಆಸಕ್ತಿಕರವಾಗುತ್ತಾ ಹೋಗುವುದು ಇಲ್ಲಿಂದ. ಎಫ್-15ಇ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ, ಸ್ವತಃ ಇರಾನ್ ತಾನು ಈಗ ಚೀನಾದ ನೆರವಿನಿಂದ ಅಭಿವೃದ್ಧಿ ಪಡಿಸಿರುವ ನೂತನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿರುವುದಾಗಿ ಹೇಳಿಕೊಂಡಿತು. ಇರಾನ್ 2024ರಲ್ಲಿ ಪಡೆದುಕೊಂಡಿರುವ ಚೀನಾದ ಗುಪ್ತಚರ ಉಪಗ್ರಹವಾದ ಟಿಇಇ-01ಬಿ ಅನ್ನು ಬಳಸಿಕೊಂಡು, ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರುತಿಸಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಉಪಗ್ರಹವನ್ನು ಆಗಸದಲ್ಲಿರುವ ಒಂದು ಹೈಟೆಕ್ ಕಣ್ಣು ಎಂದುಕೊಳ್ಳಬಹುದು. ಇದು ಇರಾನ್ಗೆ ಶತ್ರುಗಳು ಎಲ್ಲಿ ಹೆಚ್ಚಾಗಿ ಸೇರಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ನೋಡಿ, ಅಲ್ಲಿಗೆ ಅತ್ಯಂತ ನಿಖರವಾಗಿ ದಾಳಿ ನಡೆಸಲು ಅನುಕೂಲ ಮಾಡಿಕೊಡಲಿದೆ. ಇದರೊಡನೆ, ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಲು ಇರಾನ್ ಒಂದು ಚೀನೀ ಮೂಲದಿಂದಲೂ ಕಾರ್ಯತಂತ್ರದ ಮಾರ್ಗದರ್ಶನ ಪಡೆದುಕೊಂಡಿದೆ ಎನ್ನಲಾಗಿದೆ. ಎಪ್ರಿಲ್ 15ರಂದು ಮಾತನಾಡಿದ ಡೊನಾಲ್ಡ್ ಟ್ರಂಪ್, ತಾನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ವೈಯಕ್ತಿಕವಾಗಿ ಪತ್ರ ಬರೆದು, ಇರಾನ್ಗೆ ಆಯುಧ ಮಾರಾಟ ನಡೆಸದಂತೆ ಸೂಚಿಸಿದ್ದು, ಅದಕ್ಕೆ ಕ್ಸಿ ತಾವು ಇರಾನ್ಗೆ ಆಯುಧ ಒದಗಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ. ಇರಾನ್ಗೆ ಆಯುಧ ಮಾರಾಟ ನಡೆಸುವ ಯಾವುದೇ ದೇಶದ ಮೇಲೂ ಅಮೆರಿಕ 50ಶೇ. ವ್ಯಾಪಾರ ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಮಾತುಗಳೇನೋ ಶಕ್ತಿಯುತವಾಗಿವೆ. ಆದರೆ, ನೆಲದಲ್ಲಿ ನಡೆಯುವ ಕಥೆಗಳು ಸಂಪೂರ್ಣ ಭಿನ್ನವಾಗಿವೆ. ಅಮೆರಿಕದ ಪಾಲಿಗೆ ಎದುರಾಗಿದ್ದ ಇನ್ನೊಂದು ಆತಂಕವೂ ಈಗ ಹಿನ್ನೆಲೆಯಲ್ಲಿ ಮೌನವಾಗಿ ಕುಳಿತಿದೆ. ವರದಿಗಳ ಪ್ರಕಾರ, ಇರಾನ್ ಚೀನಾದ ಸಿಎಂ-302 ಕ್ಷಿಪಣಿಗಳನ್ನು ಖರೀದಿಸಲು ಸಿದ್ಧವಾಗಿತ್ತು. ಈ ಕ್ಷಿಪಣಿಗಳು ಅತ್ಯಂತ ವೇಗವಾದ, ಕೆಳ ಹಂತದಲ್ಲಿ ಹಾರಾಟ ನಡೆಸುವ ಆಯುಧಗಳಾಗಿದ್ದು, 290 ಕಿಲೋಮೀಟರ್ ದೂರದಿಂದ ಹಡಗುಗಳ ಮೇಲೆ ದಾಳಿ ನಡೆಸಬಲ್ಲದು. ಒಂದು ವೇಳೆ ಆ ಒಪ್ಪಂದ ಏನಾದರೂ ಯಶಸ್ವಿಯಾಗಿದ್ದರೆ, ಈ ಪ್ರದೇಶದಲ್ಲಿರುವ ಅಮೆರಿಕನ್ ಯುದ್ಧ ನೌಕೆಗಳೂ ಆತಂಕದಲ್ಲೇ ಇರಬೇಕಾಗುತ್ತಿತ್ತು. ಆಗಸಗಳು ಇನ್ನು ಮೊದಲಿನಂತೆ ಮುಕ್ತವಾಗಿರಲು ಸಾಧ್ಯವಿಲ್ಲ. ಹೆಗಲ ಮೇಲೆ ಹೊತ್ತು ದಾಳಿ ನಡೆಸುವ ರಾಕೆಟ್ಗಳು ಇದರಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತಿವೆ.
ಸನಾ,ಎ.19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿಗೆ ಅಡ್ಡಿಯಾಗುವ ಕ್ರಮಗಳನ್ನು ಮುಂದುವರಿಸಿದರೆ, ಯೆಮೆನ್ ನ ಹೌತಿ ಬಂಡುಕೋರರು ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ಮುಚ್ಚುವ ಎಚ್ಚರಿಕೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ. ಯೆಮೆನ್ ಕರಾವಳಿಯಲ್ಲಿರುವ ಈ ಪ್ರಮುಖ ಸಮುದ್ರ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಸನಾದಲ್ಲಿರುವ ಹೌತಿ ಸರಕಾರದ ಉಪ ವಿದೇಶಾಂಗ ಸಚಿವ ಹುಸೇನ್ ಅಲ್-ಎಝ್ಝಿ ಹೇಳಿದ್ದಾರೆ. “ಯೆಮನ್, ಬಾಬ್ ಅಲ್-ಮಂಡೇಬ್ ಅನ್ನು ಮುಚ್ಚಲು ನಿರ್ಧರಿಸಿದರೆ, ಅದನ್ನು ಮತ್ತೆ ತೆರೆಯಲು ಮಾನವಕುಲಕ್ಕೂ ಜಿನ್ ಗಳಿಗೂ ಸಾಧ್ಯವಾಗುವುದಿಲ್ಲ,” ಎಂದು ಅವರು Xನಲ್ಲಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಟ್ರಂಪ್ ಹಾಗೂ ಅಮೆರಿಕ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳು ಶಾಂತಿಗೆ ಅಡ್ಡಿಯಾಗುವ ನೀತಿಗಳನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಜನರು ಮತ್ತು ದೇಶದ ಹಕ್ಕುಗಳಿಗೆ ಗೌರವ ನೀಡಬೇಕು,” ಎಂದು ಅವರು ಹೇಳಿದ್ದಾರೆ. ಬಾಬ್ ಅಲ್-ಮಂಡೇಬ್ ಜಲಸಂಧಿ ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗವಾಗಿದೆ. ಸೂಯೆಜ್ ಕಾಲುವೆ ಕಡೆಗೆ ಹೋಗುವ ಹಡಗುಗಳು ಇದೇ ದಾರಿಯನ್ನು ಬಳಸುತ್ತವೆ. ಜಲಸಂಧಿಯ ಅತಿ ಕಿರಿದಾದ ಭಾಗವು ಸುಮಾರು 29 ಕಿಮೀ ಅಗಲವಿದ್ದು, ಹಡಗು ಸಂಚಾರವು ಎರಡು ಪ್ರತ್ಯೇಕ ಮಾರ್ಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಜಲಸಂಧಿ ಜಾಗತಿಕ ವ್ಯಾಪಾರಕ್ಕೆ ಬಹಳ ಮುಖ್ಯ. ತೈಲ ಮತ್ತು ಇಂಧನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಹಡಗುಗಳು ಇದೇ ದಾರಿಯನ್ನು ಬಳಸುತ್ತವೆ. ರಷ್ಯಾ ಸೇರಿದಂತೆ ಹಲವು ದೇಶಗಳ ಸರಕು ಸಾಗಣೆಯೂ ಇದೇ ಮಾರ್ಗದ ಮೂಲಕ ನಡೆಯುತ್ತದೆ.
ಜಿಬಿಎ ಅಂತಿಮ ಮತದಾರರ ಪಟ್ಟಿ ಪ್ರಕಟ: ಮತದಾರರ ಸಂಖ್ಯೆ 88,95,361ಕ್ಕೆ ಏರಿಕೆ, ಯಾವ್ಯಾವ ಪಾಲಿಕೆಗಳಲ್ಲಿ ಎಷ್ಟು?
ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರದ ಪಾಲಿಕೆಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ(ಏ.18) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದು, ಈ ಪೈಕಿ ಪುರುಷ ಮತದಾರರ ಸಂಖ್ಯೆ 45,71,169, ಮಹಿಳಾ ಮತದಾರರ ಸಂಖ್ಯೆ 43,22,557 ಹಾಗೂ ಇತರೆ ಮತದಾರರ ಸಂಖ್ಯೆ 1635 ಆಗಿದೆ. ಇನ್ನು, ನಗರದಲ್ಲಿ ಒಟ್ಟು 8023 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಹಾಗಾದ್ರೆ ಯಾವ್ಯಾವ ಪಾಲಿಕೆಯಲ್ಲಿ ಎಷ್ಟು ಮತದಾರರಿದ್ದಾರೆ. ಈ ಕುರಿತ ವಿವರ ಇಲ್ಲಿದೆ..
ಮುಸ್ಲಿಮ್ ರಾಜಕೀಯ ನಾಯಕತ್ವ ಬಿಕ್ಕಟ್ಟು ಮತ್ತು ಚಮಚಾ ಯುಗ
ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆ, ಅದಕ್ಕೆ ಮುಸ್ಲಿಮ್ ಸಮುದಾಯ ಯಾವುದೇ strategy ಇಲ್ಲದೆ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ರೀತಿ, ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ಚುನಾವಣೆಯಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಮುಸ್ಲಿಮ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಂತರ ಕೆಲವರು ವಾಪಸ್ ತಗೆದುಕೊಂಡಿದ್ದು, ಚುನಾವಣೆಯ ನಂತರ ಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಮುಖಂಡರ ಮೇಲೆ ಕ್ರಮ ಕೈಗೊಂಡಿದ್ದು, ಅದನ್ನು ಸಮರ್ಥಿಸಲು ಇತರ ಮುಸ್ಲಿಮ್ ಮುಖಂಡರಿಂದಲೇ ಸುದ್ದಿಗೋಷ್ಠಿ ಮಾಡಿಸಿದ್ದು, ಇವೆಲ್ಲ ಬೆಳವಣಿಗೆಗಳು ನೋಡಿದಾಗ ಮಾನ್ಯ ಕಾನ್ಷೀರಾಮ್ ಅವರು ನೆನಪಾದರು. ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸವು ಮೇಲ್ನೋಟಕ್ಕೆ ಪ್ರಜಾಪ್ರಭುತ್ವದ ವಿಕಾಸದಂತೆ ಕಂಡರೂ, ಅದರ ಒಳಪದರಗಳಲ್ಲಿ ದಮನಿತರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ಅಡಗಿದೆ. ಈ ಸಂಚಿನ ಕೇಂದ್ರಬಿಂದುವೇ ‘ಚಮಚಾ ಯುಗ’. ಇದು ಕೇವಲ ಪ್ರಾತಿನಿಧ್ಯದ ಕೊರತೆಯಲ್ಲ, ಬದಲಿಗೆ ಅಸ್ಪಶ್ಯರನ್ನು, ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದವರನ್ನು ರಾಜಕೀಯವಾಗಿ ಬಂಜೆತನಕ್ಕೆ ತಳ್ಳುವ ಒಂದು ಯೋಜಿತ ತಂತ್ರ. ಕಾನ್ಷೀರಾಮ್ ಅವರು ಮಂಡಿಸಿದ ಈ ಸಿದ್ಧಾಂತವು ಇಂದಿನ ರಾಜಕಾರಣದ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ನಮಗಿರುವ ಅತ್ಯಂತ ತೀಕ್ಷ್ಣವಾದ ವಿಶ್ಲೇಷಣಾತ್ಮಕ ಅಸ್ತ್ರವಾಗಿದೆ. ಪುಣೆ ಒಪ್ಪಂದ ಮತ್ತು ರಾಜಕೀಯ ಗುಲಾಮಗಿರಿಯ ಉದಯ ಆಧುನಿಕ ಭಾರತದ ಇತಿಹಾಸದಲ್ಲಿ ಆಗಸ್ಟ್ 16, 1932 ರಂದು ಬ್ರಿಟಿಷರು ಘೋಷಿಸಿದ ‘ಕೋಮುವಾರು ಪ್ರಶಸ್ತಿ’ (Communal Award) ದಲಿತರ ಪಾಲಿಗೆ ಸ್ವಾತಂತ್ರ್ಯದ ಮೊದಲ ಕಿರಣವಾಗಿತ್ತು. ಇದು ಅಸ್ಪೃಶ್ಯರನ್ನು ಹಿಂದೂಗಳಿಗಿಂತ ಭಿನ್ನವಾದ ಸ್ವತಂತ್ರ ರಾಜಕೀಯ ಸಮೂಹವೆಂದು ಗುರುತಿಸಿ, ಅವರಿಗೆ ‘ಪ್ರತ್ಯೇಕ ಮತದಾರರ ಕ್ಷೇತ್ರ’ದ (Separate Electorates) ಹಕ್ಕನ್ನು ನೀಡಿತು. ಅಂದು ದಲಿತರಿಗೆ ತಮ್ಮ ನೈಜ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ಪರಮಾಧಿಕಾರವಿತ್ತು. ಆದರೆ, ಈ ಐತಿಹಾಸಿಕ ವಿಜಯವನ್ನು ಸಹಿಸದ ಗಾಂಧಿಯವರು ಯೆರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಕೂರುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೇಲೆ ನೈತಿಕ ಮತ್ತು ಭಾವನಾತ್ಮಕ ಒತ್ತಡ ಹೇರಿದರು. ಇದರ ಪರಿಣಾಮವೇ ಸೆಪ್ಟಂಬರ್ 24, 1932 ರ ಪುಣೆ ಒಪ್ಪಂದ (Poona Pact). ಈ ಒಪ್ಪಂದವು ದಲಿತರ ಸ್ವತಂತ್ರ ರಾಜಕೀಯ ಅಸ್ತಿತ್ವದ ಕುತ್ತಿಗೆ ಹಿಸುಕಿತು. ಪ್ರತ್ಯೇಕ ಮತಕ್ಷೇತ್ರಗಳನ್ನು ಕಿತ್ತುಕೊಂಡು ‘ಜಂಟಿ ಮತದಾರರ ಕ್ಷೇತ್ರ’ಗಳನ್ನು (Joint Electorates) ಹೇರುವ ಮೂಲಕ ದಲಿತ ನಾಯಕರನ್ನು ಪ್ರಬಲ ಜಾತಿಗಳ ಹಿತಾಸಕ್ತಿ ಕಾಯುವ ‘ಸೇವಕ’ರನ್ನಾಗಿ ಅಥವಾ ‘ಕೈಗೊಂಬೆ’ಗಳನ್ನಾಗಿ ಪರಿವರ್ತಿಸಲಾಯಿತು. ಕಾನ್ಷೀರಾಮ್ ಅವರ ವಿಶ್ಲೇಷಣೆಯ ಪ್ರಕಾರ, ಈ ದಿನವೇ ದಲಿತರು ನೈಜ ಪ್ರತಿನಿಧಿತ್ವವನ್ನು ಕಳೆದುಕೊಂಡು ‘ಚಮಚಾ ಯುಗ’ದ ಗುಲಾಮಗಿರಿಗೆ ತಳ್ಳಲ್ಪಟ್ಟರು. ಇಲ್ಲಿ ನಾಯಕರು ಆಯ್ಕೆಯಾಗುವುದು ದಲಿತರ ಇಚ್ಛೆಯ ಮೇಲಲ್ಲ, ಬದಲಿಗೆ ಮೇಲ್ವರ್ಗದ ‘ಬಾಸ್’ಗಳ ಹಿತಾಸಕ್ತಿಯ ಆಧಾರದ ಮೇಲೆ. 1982 ರಲ್ಲಿ ಕಾನ್ಷೀರಾಮ್ ಅವರು ಹೊರತಂದ ‘ದ ಚಮಚಾ ಏಜ್’ (The Chamcha Age) ಕೃತಿಯಲ್ಲಿ ಪ್ರಧಾನ ರಾಜಕೀಯ ಪಕ್ಷಗಳು ದಲಿತರ ನೈಜ ನಾಯಕತ್ವವನ್ನು ಹತ್ತಿಕ್ಕಲು ಮತ್ತು ಸಮುದಾಯವನ್ನು ಹಾದಿ ತಪ್ಪಿಸಲು ಹೇಗೆ ವಿವಿಧ ಹಂತದ ‘ಕೈ ಗೊಂಬೆ’ಗಳನ್ನು (Stooges) ಬಳಸಿಕೊಳ್ಳುತ್ತವೆ ಎಂಬುದನ್ನು ಅವರು ಇಲ್ಲಿ ಬಯಲು ಮಾಡಿದ್ದಾರೆ. ‘ಚಮಚಾ’ ಎನ್ನುವುದು ಕೇವಲ ಒಂದು ಪದವಲ್ಲ, ಅದು ಆಳುವ ವರ್ಗದ ಹಿತಾಸಕ್ತಿಗಾಗಿ ಸ್ವಂತ ಸಮುದಾಯದ ನೈಜ ಹಿತಾಸಕ್ತಿಗಳನ್ನು ಬಲಿಗೊಡುವ ‘ಏಜೆಂಟ್’ ಸಂಸ್ಕೃತಿಯ ಪ್ರತೀಕ. ಕಾನ್ಷೀರಾಮ್ ಅವರು ಚಮಚಾಗಳನ್ನು ನಾಲ್ಕು ಕಟು ವರ್ಗಗಳಾಗಿ ವಿಂಗಡಿಸಿದ್ದಾರೆ: 1.ಅನಪೇಕ್ಷಿತ ಚಮಚಾಗಳು (Reluctant Chamchas): ವ್ಯವಸ್ಥೆಯ ಅನಿವಾರ್ಯತೆ ಮತ್ತು ಒತ್ತಡಕ್ಕೆ ಸಿಲುಕಿ ಚಮಚಾಗಳಾಗಿ ಬದಲಾದ ಪರಿಶಿಷ್ಟ ಜಾತಿಯ ನಾಯಕರು. 2.ಪ್ರಾರಂಭಿಕ ಚಮಚಾಗಳು (Initiated Chamchas): ರಾಜಕೀಯ ಪ್ರಕ್ರಿಯೆಗೆ ಹೊಸದಾಗಿ ಸೇರ್ಪಡೆಗೊಂಡು, ಮೇಲ್ವರ್ಗದ ಶಕ್ತಿಗಳಿಂದ ತರಬೇತಿ ಪಡೆದ ಪರಿಶಿಷ್ಟ ಪಂಗಡದ ನಾಯಕರು. 3.ಅಭಿಲಾಷಿ ಚಮಚಾಗಳು (Aspiring Chamchas): ಕೇವಲ ಅಧಿಕಾರ ಮತ್ತು ಆಮಿಷಗಳಿಗಾಗಿ ತಮ್ಮ ಸಮುದಾಯದ ಹಿತಾಸಕ್ತಿಯನ್ನು ಬಲಿಗೊಡುವ ಇತರ ಹಿಂದುಳಿದ ವರ್ಗಗಳ (OBC) ನಾಯಕರು. 4.ಅಸಹಾಯಕ ಚಮಚಾಗಳು (Helpless Chamchas): ರಕ್ಷಣೆ ಮತ್ತು ಅಸ್ತಿತ್ವಕ್ಕಾಗಿ ಪ್ರಧಾನ ಪಕ್ಷಗಳನ್ನು ಅವಲಂಬಿಸಿರುವ ಅಲ್ಪಸಂಖ್ಯಾತರು. ಈ ವರ್ಗೀಕರಣದ ಹಿಂದಿರುವ ಗಹನವಾದ ಅರ್ಥವೆಂದರೆ, ಜಂಟಿ ಮತಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಯು ಗೆಲ್ಲಲು ಮೇಲ್ವರ್ಗದ ಮತಗಳ ಮೇಲೆ ಅವಲಂಬಿತನಾಗಬೇಕಾಗುತ್ತದೆ. ಇದರಿಂದಾಗಿ ಅವನು ಅಂಬೇಡ್ಕರ್ ಹೇಳಿದಂತೆ ಕಿವುಡ ಮತ್ತು ಮೂಗ ಪ್ರತಿನಿಧಿಯಾಗಿ ಉಳಿಯುತ್ತಾನೆ. ಪ್ರಬಲ ಪಕ್ಷಗಳು ಜಾಣ್ಮೆಯಿಂದ ದಲಿತರ ನೈಜ ನಾಯಕರನ್ನು ಸೋಲಿಸಲು ಈ ‘ದಲ್ಲಾಳಿ’ಗಳನ್ನು ಬಳಸಿಕೊಳ್ಳುತ್ತವೆ. ಇದು ಶೋಷಕರು ಮತ್ತು ಶೋಷಿತರ ನಡುವಿನ ‘ದ್ವಿ-ರಾಷ್ಟ್ರ ಸಿದ್ಧಾಂತ’ವನ್ನು (Two-Nation Theory) ಹತ್ತಿಕ್ಕುವ ತಂತ್ರವಾಗಿದೆ. ಕಾನ್ಷೀರಾಮ್ ಅವರ ಈ ಸಿದ್ಧಾಂತವು ಇಂದು ಭಾರತೀಯ ಮತ್ತು ನಮ್ಮ ರಾಜ್ಯದ ಮುಸ್ಲಿಮ್ ನಾಯಕತ್ವಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಯಾವುದೇ ಚುನಾವಣೆ ಗೆಲ್ಲುವ ಸಾಮರ್ಥ್ಯ ಇಲ್ಲದ ಒಬ್ಬ ಮುಸ್ಲಿಮ್ ಒಐಅ ಪಕ್ಷ ಮುಸ್ಲಿಮರಿಗೆ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರೆ, ಮುಸ್ಲಿಮ್ ಸಮುದಾಯದ ಮತಗಳಿಂದಲೇ ಗೆದ್ದು ಬರುವ ಇನ್ನೊಬ್ಬ ಶಾಸಕ, ಬಿಜೆಪಿಯ ಭಯದಿಂದ ಕಾಂಗ್ರೆಸ್ ಪಕ್ಷ ಹೆಸರು ಹೇಳಲು ಬಯಸದೇ ಟಿಪ್ಪು ಮತ್ತು ಫೆಲೆಸ್ತಿನ್ನ ಅಮಾಯಕ ಮಕ್ಕಳ ಹೆಸರಲ್ಲಿ ವೋಟ್ ಕೇಳ್ತಾನೆ ಮತ್ತು ತನ್ನ ಹಿಂದೆ ಇರುವ 4-5 ಚಮಚಾಗಳನ್ನು ತೋರಿಸಿ ಸಮುದಾಯಕ್ಕೆ ಇನ್ನೆಷ್ಟು ಚಮಚಾಗಳು ಬೇಕೆಂದು ಪ್ರಶ್ನಿಸುತ್ತಾನೆ. ಇವರು ಸಮುದಾಯದ ನೈಜ ಬಿಕ್ಕಟ್ಟುಗಳಿಗಿಂತ ಹೆಚ್ಚಾಗಿ ಆಳುವ ವರ್ಗವು ನೀಡುವ ಸಣ್ಣಪುಟ್ಟ ಸವಲತ್ತುಗಳಿಗೆ ತೃಪ್ತರಾಗಿದ್ದಾರೆ. ಇಂತಹ ನಾಯಕರು ಸಮುದಾಯವನ್ನು ಭಯದ ನೆರಳಿನಲ್ಲಿಟ್ಟು, ವೋಟ್ ಬ್ಯಾಂಕ್ ರಾಜಕಾರಣದ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಮುದಾಯದೊಳಗೆ ನಾಯಕತ್ವದ ತೀವ್ರ ಶೂನ್ಯತೆಯನ್ನು ಸೃಷ್ಟಿಸಿದೆ. ಒಂದೆಡೆ ದೇಶದೆಲ್ಲೆಡೆ ಭಯದ ವಾತಾವರಣ ಇನ್ನೊಂದೆಡೆ ಆರ್ಥಿಕ ಮತ್ತು ಸಾಮಾಜಿಕ ಅಧೋಗತಿಯಿಂದಾಗಿ ಮುಸ್ಲಿಮ್ ನಾಯಕರು ಹೋರಾಟದ ಬದಲು ಶರಣಾಗತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಗುಲಾಮಗಿರಿಯ ಅರಿವೇ ಕಾನ್ಷೀರಾಮ್ ಅವರನ್ನು ಬಿಡುಗಡೆಯ ಹಾದಿಯತ್ತ ನಡೆಸಿತು. ಈ ರಾಜಕೀಯ ಜಿಗುಪ್ಸೆಯಿಂದ ಹೊರಬರಲು ಕಾನ್ಷೀರಾಮ್ ಅವರು ‘ಬಹುಜನ ಏಕತೆ’ಯ ಮಂತ್ರವನ್ನು ನೀಡಿದ್ದರು. ದಲಿತರು, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರು ಒಂದೇ ದೋಣಿಯ ಪ್ರಯಾಣಿಕರು. ಜಿಸ್ಕಿ ಜಿತ್ನಿ ಸಂಖ್ಯ ಭಾರಿ, ಉತ್ನಿ ಉಸ್ಕಿ ಹಿಸ್ಸೆದಾರಿ (ಯಾರ ಸಂಖ್ಯೆ ಎಷ್ಟಿದೆಯೋ, ಅವರಿಗೆ ಅಷ್ಟೇ ಪಾಲುದಾರಿಕೆ) ಎಂಬ ತತ್ವವು ಅಧಿಕಾರ ಹಂಚಿಕೆಯ ನೈಜ ಸೂತ್ರವಾಗಿದೆ. ಶೋಷಿತ ವರ್ಗಗಳು ಕೇವಲ ಬೇಡಿಕೆಗಳನ್ನು ಸಲ್ಲಿಸುವ ‘ಬೇಡುವ ವರ್ಗ’ದಿಂದ ಅಧಿಕಾರವನ್ನು ಹಂಚುವ ‘ನೀಡುವ ವರ್ಗ’ವಾಗಿ (Beggars to Givers) ಬದಲಾಗಬೇಕು. ಈ ಹಾದಿಯಲ್ಲಿ ದಲಿತ-ಹಿಂದುಳಿದವರ ಮತ್ತು ಮುಸ್ಲಿಮರ ಏಕತೆಯು ಅತ್ಯಂತ ಅನಿವಾರ್ಯ. ಈ ಒಕ್ಕೂಟವೊಂದೇ ಹಿಂದುತ್ವದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ತಡೆದು, ಅದನ್ನು ಮಟ್ಟಹಾಕಬಲ್ಲದು (Forge the Hindutva wolf out). ಪ್ರಸ್ತುತವಿರುವ ಜಾತಿ ವ್ಯವಸ್ಥೆಯ ‘ಉದ್ದ ಪಿರಮಿಡ್’ (Vertical Pyramid) ಮಾದರಿಯನ್ನು ಕೆಡವಿ, ಸಮಾನತೆಯ ‘ಅಡ್ಡ ಸಾಲು’ (Horizontal Line)ನಿರ್ಮಿಸುವುದು ಕಾನ್ಷೀರಾಮ್ ಅವರ ಅಂತಿಮ ಗುರಿಯಾಗಿತ್ತು. ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಧಿಕಾರವು ಕೇವಲ ಆಡಳಿತದ ಸಾಧನವಲ್ಲ, ಅದು ಸಾಮಾಜಿಕ ವಿಮೋಚನೆಯ ದಿಕ್ಸೂಚಿಯೂ ಹೌದು. ಕಾನ್ಷೀರಾಮ್ ಅವರ ರಾಜಕೀಯ ದರ್ಶನದ ಕೇಂದ್ರಬಿಂದು ‘ಅಧಿಕಾರ’. ಅವರ ಪ್ರಕಾರ, ರಾಜಕೀಯ ಅಧಿಕಾರವು ಸಮಾಜದ ಎಲ್ಲಾ ಮುಚ್ಚಿದ ಬಾಗಿಲುಗಳನ್ನು ತೆರೆಯಬಲ್ಲ ಒಂದು ‘ಮಾಸ್ಟರ್ ಕೀ’ (Master Key). ಈ ಅಧಿಕಾರವನ್ನು ಪಡೆಯಲು ಅವರು ರೂಪಿಸಿದ ಕಾರ್ಯತಂತ್ರವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳ ನೈಜ ಪ್ರಯೋಗವಾಗಿತ್ತು. ಅಂಬೇಡ್ಕರ್ ಅವರು ಪುಸ್ತಕಗಳನ್ನು ಸಂಗ್ರಹಿಸಿದರು, ಆದರೆ ನಾನು ಜನರನ್ನು ಸಂಘಟಿಸಿದೆ (Ambedkar collected books, I gathered people) ಎಂಬ ಕಾನ್ಷೀರಾಮ್ ಅವರ ಮಾತುಗಳು ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿ. ಭಾರತೀಯ ಮುಸ್ಲಿಮ್ ಸಮುದಾಯವು ಇಂದು ಎದುರಿಸುತ್ತಿರುವ ರಾಜಕೀಯ ನಾಯಕತ್ವದ ಬಿಕ್ಕಟ್ಟು ಮತ್ತು ಚಮಚಾ ರಾಜಕಾರಣವು ಸಮುದಾಯದ ಆತ್ಮಗೌರವವನ್ನು ಹರಾಜು ಹಾಕುತ್ತಿದೆ. ಸಮುದಾಯವು ಈ ‘ಸಾಂಸ್ಥಿಕ ಗುಲಾಮಗಿರಿ’ಯಿಂದ ಹೊರಬರಬೇಕಾದರೆ, ಕೃತಕ ನಾಯಕರನ್ನು ತಿರಸ್ಕರಿಸಿ ಸ್ವತಂತ್ರ ಮತ್ತು ಸಶಕ್ತ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು.ಬಹುಜನ ಪ್ರಜ್ಞೆಯನ್ನು ಮೈಗೂಡಿಸಿಕೊಂಡು, ಇತರ ಶೋಷಿತ ವರ್ಗಗಳೊಂದಿಗೆ ಅಧಿಕಾರದ ಸಮಾನ ಪಾಲುದಾರರಾದಾಗ ಮಾತ್ರ ಭಾರತೀಯ ಪ್ರಜಾಪ್ರಭುತ್ವವು ಅರ್ಥಪೂರ್ಣವಾಗುತ್ತದೆ. ಚಮಚಾ ಯುಗವನ್ನು ಅಂತ್ಯಗೊಳಿಸಿ, ನೈಜ ಬಹುಜನ ಅಧಿಕಾರದ ಯುಗವನ್ನು ಪ್ರಾರಂಭಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.
ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ತಮ್ಮದೇ ದೇಶದ ಮೇಲೆ ನಡೆಸಿದ ದಾಳಿಗಳ ಪಟ್ಟಿ ಸಮಗ್ರವಾಗಿಲ್ಲ, ವಿವರಣಾತ್ಮಕವಾಗಿದೆ. ಆದರೂ ಅವರು ತಾವು ಪ್ರೀತಿಸುವುದಾಗಿ ಹೇಳಿಕೊಳ್ಳುವ ಮತ್ತು ಮತ್ತೆ ಶ್ರೇಷ್ಠಗೊಳಿಸುವ ಭರವಸೆ ನೀಡಿದ ಭೂಮಿಗೆ ವೈಯಕ್ತಿಕವಾಗಿ ಎಷ್ಟು ಹಾನಿ ಮಾಡಿದ್ದಾರೆ ಎಂಬುದರ ಸೂಚನೆಯನ್ನು ಅವು ನೀಡಬೇಕು. ಒಟ್ಟಾರೆಯಾಗಿ, ಅವರು ಅಮೆರಿಕವನ್ನು ದುರ್ಬಲಗೊಳಿಸಿದ್ದಾರೆ ಮತ್ತು ನಮ್ಮ ನೆನಪಿನಲ್ಲಿ ಯಾವುದೇ ಸಮಯದಲ್ಲಿ ಇಲ್ಲದಷ್ಟು ಕಡಿಮೆ ಗೌರವವನ್ನು ಹೊಂದಿದ್ದಾರೆ. ವೃತ್ತಿಪರ ಇತಿಹಾಸಕಾರರು ಮನುಕುಲದ ಭವಿಷ್ಯವನ್ನು ರೂಪಿಸುವಲ್ಲಿ ವ್ಯಕ್ತಿಗಳ ಪಾತ್ರವನ್ನು ಕಡಿಮೆ ಅಂದಾಜು ಮಾಡಿದ್ದಾರೆ. 1961ರ ತಮ್ಮ What is History? ಪುಸ್ತಕದಲ್ಲಿ ಇ.ಎಚ್. ಕಾರ್ ಅವರು ಇತಿಹಾಸ ಬರವಣಿಗೆಯ ‘ಬ್ಯಾಡ್ ಕಿಂಗ್ ಜಾನ್ ಮತ್ತು ಗುಡ್ ಕ್ವೀನ್ ಬೆಸ್’ ಬಗೆಯನ್ನು ಅಣಕಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ಒಮ್ಮೆ ಹೇಳಿದಂತೆ, ವ್ಯಕ್ತಿಗಳು ಇತಿಹಾಸವನ್ನು ರಚಿಸುವುದು ಅವರ ಆಯ್ಕೆಯ ಸಂದರ್ಭಗಳಲ್ಲಿ ಅಲ್ಲ ಎಂಬುದು ಈಗ ಸತ್ಯ. ಅವರು ತಮ್ಮ ಕೆಲಸಗಳಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳಿಂದ ಮತ್ತು ನಿರ್ದಿಷ್ಟವಾಗಿ (ಮಾರ್ಕ್ಸ್ ವಾದಿಸಿದ ಹಾಗೆ) ತಂತ್ರಜ್ಞಾನ ಮತ್ತು ವರ್ಗ ಸಂಬಂಧಗಳಿಂದ ನಿರ್ಬಂಧಿತರಾಗಿದ್ದಾರೆ. ಅದೇನೇ ಇದ್ದರೂ, ಕೆಲವೊಮ್ಮೆ ವ್ಯಕ್ತಿಗಳು ಒಳ್ಳೆಯದಕ್ಕಾಗಿ ಮತ್ತು ವಿಶೇಷವಾಗಿ ಕೆಟ್ಟದ್ದಕ್ಕಾಗಿ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಲೆನಿನ್ ಇಲ್ಲದೆ ಸೋವಿಯತ್ ರಾಜ್ಯ ಇರುತ್ತಿರಲಿಲ್ಲ; ಹಿಟ್ಲರ್ ಇಲ್ಲದೆ ಖಂಡಿತವಾಗಿಯೂ ನಾಝಿ ರಾಜ್ಯ ಇರುತ್ತಿರಲಿಲ್ಲ. ನಾವು ಈಗ ವಾಸಿಸುವ ಜಗತ್ತಿನಲ್ಲಿ, ಇತಿಹಾಸವನ್ನು ರೂಪಿಸುವ ವ್ಯಕ್ತಿಗಳು ದೊಡ್ಡವರಾಗಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರಂತೆ ಯಾರೂ ಇಲ್ಲ. ಅವರು ಅಧಿಕಾರಕ್ಕೆ ಬಂದದ್ದನ್ನು ವಿಶಾಲವಾದ ಆರ್ಥಿಕ ಮತ್ತು ತಾಂತ್ರಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ. ಜಾಗತೀಕರಣದಿಂದಾಗಿ ಬಿಳಿ ಕಾರ್ಮಿಕ ವರ್ಗದ ಭ್ರಮನಿರಸನವಿಲ್ಲದೆ ಮತ್ತು ತನ್ನ ಇಮೇಜ್ ಮತ್ತು ತನ್ನ ಸುಳ್ಳುಗಳನ್ನು ವರ್ಧಿಸಲು ಹೊಸ ಮಾಧ್ಯಮ ರೂಪಗಳನ್ನು ಬಳಸದೆ, ಟ್ರಂಪ್ ಎಂದಿಗೂ ಅಮೆರಿಕದ ಅಧ್ಯಕ್ಷರಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ, ಅವರು ಅಧಿಕಾರ ವಹಿಸಿಕೊಂಡ ನಂತರ, ಅವರು ತಮ್ಮನ್ನು ಹೊರತುಪಡಿಸಿ ಲಕ್ಷಾಂತರ ವ್ಯಕ್ತಿಗಳ ಜೀವನ ಮತ್ತು ಅದೃಷ್ಟವನ್ನು ಸಕ್ರಿಯವಾಗಿ ಮರುರೂಪಿಸಿದ್ದಾರೆ. ಉದಾಹರಣೆಗೆ, 2026ರಲ್ಲಿ ಬೇರೆ ಯಾರಾದರೂ ಅಮೆರಿಕದ ಅಧ್ಯಕ್ಷರಾಗಿದ್ದರೆ, ಇಸ್ರೇಲ್ನ ಪ್ರಚೋದನೆಯ ಮೇಲೆ ಇರಾನ್ ವಿರುದ್ಧದ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ. ಪಶ್ಚಿಮ ಏಶ್ಯದ ದೇಶಗಳನ್ನು ಸಾವು ಮತ್ತು ವಿನಾಶದಿಂದ ಮತ್ತು ಪ್ರದೇಶದ ಹೊರಗಿನ ದೇಶಗಳನ್ನು ಹೆಚ್ಚಿನ ತೈಲ, ಅನಿಲ ಮತ್ತು ರಸಗೊಬ್ಬರ ಬೆಲೆಗಳಿಂದ ರಕ್ಷಿಸಬಹುದಿತ್ತು. ಈ ಅಂಕಣದಲ್ಲಿ, ಟ್ರಂಪ್ರ ಇರಾನ್ ಯುದ್ಧದಿಂದ ಜಗತ್ತಿಗೆ ಆಗಿರುವ ಹಾನಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಅವರು ಅಧ್ಯಕ್ಷರಾಗಿ ಎರಡನೇ ಅವಧಿಗೆ ಗೆದ್ದ ಒಂದು ವರ್ಷ ಮತ್ತು ಮೂರು ತಿಂಗಳಲ್ಲಿ ಅವರು ತಮ್ಮ ಸ್ವಂತ ದೇಶಕ್ಕೆ ಮಾಡಿರುವ ಹಾನಿಯ ಮೇಲೆ ಕೇಂದ್ರೀಕರಿಸಲು ನಾನು ಬಯಸುತ್ತೇನೆ. ಈ ಸಮಯದಲ್ಲಿ, ಟ್ರಂಪ್ ಅವರು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ಭರವಸೆ ನೀಡಿದ ದೇಶವನ್ನು ಕನಿಷ್ಠ ಏಳು ರೀತಿಯಲ್ಲಿ ದುರ್ಬಲಗೊಳಿಸಿದ್ದಾರೆ. ಟ್ರಂಪ್ ತಮ್ಮ ದೇಶದ ಮೇಲೆ ಮಾಡಿದ ದಾಳಿಗಳಲ್ಲಿ ಮೊದಲನೆಯದು ಸರಕಾರದೊಳಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ವೆಸ್ಟ್ಮಿನಿಸ್ಟರ್ ವ್ಯವಸ್ಥೆಯಡಿಯಲ್ಲಿ ಅಮೆರಿಕದ ಅಧ್ಯಕ್ಷರು ತಾಂತ್ರಿಕವಾಗಿ ಪ್ರಧಾನಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೂ, ಅವರು ಇತರರೊಂದಿಗೆ ಸಕ್ರಿಯವಾಗಿ ಸಮಾಲೋಚಿಸಲು ಬದ್ಧರಾಗಿರುತ್ತಾರೆ. ಆದರೂ, ಟ್ರಂಪ್ ಕಾಂಗ್ರೆಸ್ ಮತ್ತು ಆಗಾಗ ತಮ್ಮ ಸ್ವಂತ ಸಚಿವ ಸಂಪುಟವನ್ನು ಸಹ ಬೈಪಾಸ್ ಮಾಡಿ ಏಕಪಕ್ಷೀಯವಾಗಿ ವರ್ತಿಸಲು ಆದ್ಯತೆ ನೀಡಿದ್ದಾರೆ. ವೆನೆಝುವೆಲಾ ಮತ್ತು ಇರಾನ್ ಮೇಲಿನ ಯುದ್ಧ ಘೋಷಣೆ ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆಗಳಾಗಿವೆ. ಅಧ್ಯಕ್ಷರಾಗಿ ತಮ್ಮ ಎರಡನೇ ಅವಧಿಯ ಮೊದಲ ವರ್ಷದಲ್ಲಿ, ಟ್ರಂಪ್ ಇನ್ನೂರ ಇಪ್ಪತ್ತೈದು ಕಾರ್ಯನಿರ್ವಾಹಕ ಆದೇಶಗಳನ್ನು ಅಂಗೀಕರಿಸಿದರು ಎಂಬುದನ್ನು ಪರಿಗಣಿಸಿ. ಈ ಆದೇಶಗಳಲ್ಲಿ ಕೆಲವು ಪ್ರಮುಖ ಸರಕಾರಿ ಇಲಾಖೆಗಳನ್ನು ಮುಚ್ಚುವುದು ಮತ್ತು ಸುಂಕ ದರಗಳನ್ನು ಅನಿಯಂತ್ರಿತವಾಗಿ ಬದಲಾಯಿಸುವಂತಹ ವಿನಾಶಕಾರಿ ಪರಿಣಾಮಗಳನ್ನು ಹೊಂದಿವೆ. ಇನ್ನು ಕೆಲವು ಕೇವಲ ಹಾಸ್ಯಾಸ್ಪದವಾಗಿವೆ. ಉದಾಹರಣೆಗೆ ಒಂದು, ‘ಫೆಡರಲ್ ಸರಕಾರದಲ್ಲಿ ವೋಕ್ AI ಅನ್ನು ತಡೆಯುವುದು’ ಮತ್ತು ಇನ್ನೊಂದು, ‘ಅಮೆರಿಕದ ಟ್ರಕ್ ಚಾಲಕರಿಗೆ ರಸ್ತೆಯ ಸಾಮಾನ್ಯ ನಿಯಮಗಳನ್ನು ಜಾರಿಗೊಳಿಸುವುದು’. ಅಮೆರಿಕದ ಮೇಲೆ ಟ್ರಂಪ್ ಅವರ ದಾಳಿಗಳಲ್ಲಿ ಎರಡನೆಯದು ನಿಷ್ಪಕ್ಷ ಕಾರ್ಯನಿರ್ವಾಹಕನ ಕಲ್ಪನೆಯ ಮೇಲಿನದಾಗಿದೆ. ನ್ಯಾಯ ಇಲಾಖೆಯನ್ನು ಅವರು ಅಸ್ತ್ರವಾಗಿ ಬಳಸಿಕೊಂಡಿರುವುದು ಮತ್ತು ಅದನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಹಾಗೂ ಕಾನೂನು ಮತ್ತು ಅವರ ಸ್ವಂತ ಆತ್ಮಸಾಕ್ಷಿಯ ಪ್ರಕಾರ ವರ್ತಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಕಿರುಕುಳ ನೀಡಲು ಪ್ರಯತ್ನಿಸುವುದರಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಈ ನಡುವೆ, ಅವರು ಡೆಮಾಕ್ರಾಟ್ಗಳು ನಡೆಸುವ ರಾಜ್ಯಗಳಿಗೆ ICE ಏಜೆಂಟ್ಗಳನ್ನು ಕಳುಹಿಸಿದ್ದಾರೆ. ಅವರ ನೀತಿಗಳನ್ನು ಒಪ್ಪದ ನಾಗರಿಕರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ನ್ಯಾಯ ಮತ್ತು ನ್ಯಾಯಕ್ಕಿಂತ ಸೇಡು ಮತ್ತು ಸೇಡಿನ ಮನೋಭಾವವು ಇಲ್ಲಿ ಪ್ರೇರಕ ಶಕ್ತಿಗಳಾಗಿ ಕಂಡುಬರುತ್ತದೆ. ಟ್ರಂಪ್ ಅವರ ಮೂರನೇ ದಾಳಿಯು ಅಮೆರಿಕನ್ ಮಿಲಿಟರಿಯ ಮೇಲಿನದಾಗಿದೆ. ಕಾನೂನಿನಂತೆ ಅಧ್ಯಕ್ಷರಿಂದ ಆದೇಶಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದರೂ, ಸೈನಿಕರು ಮತ್ತು ಮಹಿಳಾ ಸೈನಿಕರು ಯಾವುದೇ ನಿರ್ದಿಷ್ಟ ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು. ನಿರ್ದಿಷ್ಟ ರಾಜಕಾರಣಿಯೊಂದಿಗೆ ಗುರುತಿಸಿಕೊಳ್ಳುವುದಂತೂ ಸತ್ಯ. ಕಳೆದ ವರ್ಷ ಟ್ರಂಪ್ ತಮ್ಮ ಹುಟ್ಟುಹಬ್ಬದಂದು ರಾಷ್ಟ್ರದ ರಾಜಧಾನಿಯಲ್ಲಿ ಮಿಲಿಟರಿ ಮೆರವಣಿಗೆಯನ್ನು ಆಯೋಜಿಸುವ ಮೂಲಕ ಈ ಸಮಾವೇಶವನ್ನು ಉಲ್ಲಂಘಿಸಿದ್ದಾರೆ. ಇತ್ತೀಚೆಗೆ, ಇರಾನ್ ವಿರುದ್ಧದ ಯುದ್ಧದ ಸಮಯದಲ್ಲಿ, ಅವರು ತಮ್ಮ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅತ್ಯಂತ ಗೌರವಾನ್ವಿತ ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲು ಅವಕಾಶ ಮಾಡಿಕೊಟ್ಟರು. ಏಕೆಂದರೆ ಆ ಅಧಿಕಾರಿ ಲಿಂಗ ಅಥವಾ ಜನಾಂಗೀಯ ಪಕ್ಷಪಾತವಿಲ್ಲದೆ ಭಡ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ತಾಂತ್ರಿಕ ಅತ್ಯಾಧುನಿಕತೆಯ ವಿಷಯದಲ್ಲಿ, ಅಮೆರಿಕನ್ ಮಿಲಿಟರಿ ವಿಶ್ವದಲ್ಲೇ ಅತ್ಯಂತ ಮುಂದುವರಿದಿದೆ. ಆದರೂ ಅದರ ಕಾರ್ಯಚಟುವಟಿಕೆಯನ್ನು ರಾಜಕೀಯಗೊಳಿಸುವ ಈ ಪ್ರಯತ್ನಗಳಿಂದ ಅದರ ಸಾಂಸ್ಥಿಕ ಸಾಮರ್ಥ್ಯಗಳು ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಬೀರಿವೆ. ಟ್ರಂಪ್ ಅವರ ನಾಲ್ಕನೆಯ ದಾಳಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನದು. ಅವರು ಕೆಲವು ಮಾಧ್ಯಮ ಮಾಲಕರನ್ನು (ಅತ್ಯಂತ ಕುಖ್ಯಾತ ರೀತಿಯಲ್ಲಿ, ವಾಶಿಂಗ್ಟನ್ ಪೋಸ್ಟ್ನ ಜೆಫ್ ಬೆಜೋಸ್) ಬೆದರಿಸಿದ್ದಾರೆ. ಅವರ ಮಾಧ್ಯಮಗಳು ತಮ್ಮ ಆಡಳಿತ ಮತ್ತು ತನ್ನ ಕಡೆಗೆ ಹೆಚ್ಚು ಅನುಕೂಲಕರ ನಿಲುವು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇತರ ಸಂದರ್ಭಗಳಲ್ಲಿ, ಅವರು ಮಾಧ್ಯಮ ಸಂಸ್ಥೆಗಳನ್ನು (ಉದಾಹರಣೆಗೆ, ಸಿಬಿಎಸ್) ವೈಯಕ್ತಿಕವಾಗಿ ಅವರಿಗೆ ಹತ್ತಿರವಿರುವ ಬಿಲಿಯನೇರ್ಗಳು ಸ್ವಾಧೀನಪಡಿಸಿಕೊಳ್ಳಲು ಸಕ್ರಿಯವಾಗಿ ಸಹಾಯ ಮಾಡಿದ್ದಾರೆ ಮತ್ತು ಆದ್ದರಿಂದ ಅವರ ಕ್ರಮಗಳ ವಿಮರ್ಶಾತ್ಮಕ ವರದಿಯನ್ನು ನಿಗ್ರಹಿಸುವ ಸಾಧ್ಯತೆಯಿದೆ. ಟ್ರಂಪ್ ಅವರ ಐದನೇ ದಾಳಿ ಅವರ ದೇಶದ ಹೆಚ್ಚು ಮೆಚ್ಚುಗೆ ಪಡೆದ ವಿಶ್ವವಿದ್ಯಾನಿಲಯಗಳ ಮೇಲಿನದಾಗಿದೆ. ಇಲ್ಲಿ ಆರಂಭಿಕ ಪ್ರಚೋದನೆಯೆಂದರೆ ಗಾಝಾದಲ್ಲಿ ಇಸ್ರೇಲ್ನ ಜನಾಂಗೀಯ ಹತ್ಯೆಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪ್ರತಿಭಟನೆಗಳು, ಶಾಂತಿಯುತ ಪ್ರತಿಭಟನೆಗಳು ಅಧ್ಯಕ್ಷರಲ್ಲಿ ಎಷ್ಟು ಘೋರ ಕೋಪವನ್ನು ಕೆರಳಿಸಿದವೆಂದರೆ ಅವರು ಫೆಡರಲ್ ನಿಧಿಯನ್ನು ಕಡಿತಗೊಳಿಸುವುದಾಗಿ ಮತ್ತು ವಿಶ್ವವಿದ್ಯಾನಿಲಯದ ದತ್ತಿಗಳ ಮೇಲೆ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದರು. ಟ್ರಂಪ್ ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ತಮ್ಮ ರಾಜಕೀಯ ಮತ್ತು ಅವರ ಪೂರ್ವಾಗ್ರಹಗಳಿಗೆ ಅನುಗುಣವಾಗಿ ತರಲು ಬಯಸುತ್ತಾರೆ. ಆದರೆ ಈ ವಿಶ್ವವಿದ್ಯಾನಿಲಯಗಳು ಸ್ವತಃ ಗಳಿಸಿರುವ ಉನ್ನತ ಖ್ಯಾತಿಗೆ ಕಾರಣವಾದ ಸ್ವತಂತ್ರ ಬೌದ್ಧಿಕ ವಿವೇಚನೆಯ ಬದ್ಧತೆಯನ್ನು ತ್ಯಜಿಸಬೇಕಾಗುತ್ತದೆ. (ವಿಶ್ವವಿದ್ಯಾನಿಲಯಗಳ ಮೇಲಿನ ಟ್ರಂಪ್ ಅವರ ದಾಳಿಗಳು ವಿಜ್ಞಾನದ ಮೇಲಿನ ಅವರ ದಾಳಿಯೊಂದಿಗೆ ಹೆಚ್ಚು ಸಾಮ್ಯತೆ ಹೊಂದಿವೆ. ತಮ್ಮ ಮೊದಲ ಅವಧಿಯಲ್ಲಿ ಅವರು ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆಯ ನಿರ್ದೇಶಕ ಆಂಥೋನಿ ಫೌಸಿ ಅವರ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ನಿರಂತರವಾಗಿ ದುರ್ಬಲಗೊಳಿಸಿದರು. ಎರಡನೇ ಅವಧಿಯಲ್ಲಿ ಅವರು ತಮ್ಮ ಆರೋಗ್ಯ ಕಾರ್ಯದರ್ಶಿಯಾಗಿ ವ್ಯಾಕ್ಸಿನೇಷನ್ ವಿರೋಧಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ನೇಮಿಸಿದ್ದಾರೆ) ಟ್ರಂಪ್ ಅವರ ಆರನೇ ದಾಳಿಯು ಅವರ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ದೃಢ ಮಿತ್ರರಾಷ್ಟ್ರಗಳ ಮೇಲೆ ಆಗಿದೆ. ಅಮೆರಿಕ ಯಾವಾಗಲೂ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದ ನೆರೆಯ ಕೆನಡಾ, ವ್ಯಾಪಾರ ಯುದ್ಧಗಳು, ಸ್ವಾಧೀನದ ಬೆದರಿಕೆಗಳಿಗೆ ಗುರಿಯಾಗಿದೆ ಮತ್ತು ಅವರ ಪ್ರಧಾನಿಯನ್ನು ಯುನೈಟೆಡ್ ಸ್ಟೇಟ್ಸ್ನ 51ನೇ ಗವರ್ನರ್ ಆಗಿ ಮರುನಾಮಕರಣ ಮಾಡಲಾಗಿದೆ. ಕೆನಡಾದ ಬಗ್ಗೆ ಟ್ರಂಪ್ ಅವರ ಅಪಹಾಸ್ಯ ಈಗ ತಾತ್ಕಾಲಿಕವಾಗಿ ನಿಂತಿದೆ, ಆದರೆ ಇತರ NATO ರಾಷ್ಟ್ರಗಳ ಬಗ್ಗೆ ಅವರ ಅಪಹಾಸ್ಯ ಮುಂದುವರಿದಿದೆ. 1949ರಲ್ಲಿ ಆರಂಭವಾದಾಗಿನಿಂದ NATO ಒಂದು ಒಗ್ಗಟ್ಟಿನ ಮತ್ತು ಹೆಚ್ಚಾಗಿ ಘರ್ಷಣೆ ಮುಕ್ತ ಮೈತ್ರಿಯಾಗಿತ್ತು. ಕಳೆದ ವರ್ಷ ಟ್ರಂಪ್ ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅಥವಾ ಖರೀದಿಸುವ ಬೆದರಿಕೆ ಹಾಕಿದ ನಂತರ ಮತ್ತು ಇತ್ತೀಚೆಗೆ ಯುರೋಪಿಯನ್ ಮಿತ್ರರಾಷ್ಟ್ರಗಳು ಇಸ್ರೇಲ್ ಮೇಲಿನ ಯುದ್ಧಕ್ಕೆ ಸೇರದಿರುವ ಬಗ್ಗೆ ಅವರ ಕೋಪದ ನಂತರ ಇದು ಗಂಭೀರ ಒತ್ತಡಕ್ಕೆ ಒಳಗಾಯಿತು. ಅವರ ದ್ವೇಷವು ವೈಯಕ್ತಿಕ ರೂಪವನ್ನು ಪಡೆದುಕೊಂಡಿದ್ದು, ಬ್ರಿಟನ್ ಪ್ರಧಾನಿ ಮತ್ತು ಸ್ಪೇನ್ ಪ್ರಧಾನಿಯ ವಿರುದ್ಧ ಅನಪೇಕ್ಷಿತವಾಗಿ ಅವಮಾನಕರ ಹೇಳಿಕೆಗಳನ್ನು ನೀಡಿದ್ಧಾರೆ. ಕೊನೆಯದಾಗಿ, ಟ್ರಂಪ್ ಉದ್ದೇಶಪೂರ್ವಕವಾಗಿ ಅಧ್ಯಕ್ಷೀಯ ಅಧಿಕಾರವನ್ನೇ ದುರ್ಬಲಗೊಳಿಸಿದ್ದನ್ನು ಪಟ್ಟಿ ಮಾಡಬೇಕು. ಇದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ನಿಂದನೀಯ ಭಾಷೆಯಲ್ಲಿ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರನ್ನು ಶ್ರೀಮಂತಗೊಳಿಸಲು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಸಿದ್ಧರಿರುವಲ್ಲಿ ವ್ಯಕ್ತವಾಗುತ್ತದೆ. ಒಪ್ಪಿಕೊಳ್ಳಲೇಬೇಕಾದ ಸಂಗತಿಯೆಂದರೆ, ಹಿಂದಿನ ಕೆಲವು ಅಧ್ಯಕ್ಷರು (ಲಿಂಡನ್ ಜಾನ್ಸನ್ ಮತ್ತು ರಿಚರ್ಡ್ ನಿಕ್ಸನ್ ನೆನಪಿಗೆ ಬರುತ್ತಾರೆ) ಖಾಸಗಿಯಾಗಿಯೂ ಅಸಭ್ಯ ಭಾಷೆಯನ್ನು ಬಳಸುತ್ತಿದ್ದರು, ಆದರೆ ಇತರ ಅಧ್ಯಕ್ಷರು ತಮ್ಮ ಹುದ್ದೆಯನ್ನು ತೊರೆದ ನಂತರ ಲಾಭದಾಯಕ ಭಾಷಣ ಮತ್ತು ಬುಕ್ ಡೀಲ್ಗಳನ್ನು ಪಡೆಯಲು ತಮ್ಮ ಸ್ಥಾನವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ತಮ್ಮ ಕ್ರೂರತೆ ಮತ್ತು ಭ್ರಷ್ಟಾಚಾರದಲ್ಲಿ ಟ್ರಂಪ್ ಅವೆಲ್ಲವನ್ನೂ ಮೀರಿಸಿದ್ದಾರೆ. ಅವರು ತಮ್ಮ ಹುದ್ದೆಯನ್ನು ಜೀವಂತವಾಗಿರುವ ಇತರ ಯಾವುದೇ ಅಧ್ಯಕ್ಷರಿಗಿಂತ ಹೆಚ್ಚು ಅವಮಾನಿಸಿದ್ದಾರೆ. ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ತಮ್ಮದೇ ದೇಶದ ಮೇಲೆ ನಡೆಸಿದ ದಾಳಿಗಳ ಪಟ್ಟಿ ಸಮಗ್ರವಾಗಿಲ್ಲ, ವಿವರಣಾತ್ಮಕವಾಗಿದೆ. ಆದರೂ ಅವರು ತಾವು ಪ್ರೀತಿಸುವುದಾಗಿ ಹೇಳಿಕೊಳ್ಳುವ ಮತ್ತು ಮತ್ತೆ ಶ್ರೇಷ್ಠಗೊಳಿಸುವ ಭರವಸೆ ನೀಡಿದ ಭೂಮಿಗೆ ವೈಯಕ್ತಿಕವಾಗಿ ಎಷ್ಟು ಹಾನಿ ಮಾಡಿದ್ದಾರೆ ಎಂಬುದರ ಸೂಚನೆಯನ್ನು ಅವು ನೀಡಬೇಕು. ಒಟ್ಟಾರೆಯಾಗಿ, ಅವರು ಅಮೆರಿಕವನ್ನು ದುರ್ಬಲಗೊಳಿಸಿದ್ದಾರೆ ಮತ್ತು ನಮ್ಮ ನೆನಪಿನಲ್ಲಿ ಯಾವುದೇ ಸಮಯದಲ್ಲಿ ಇಲ್ಲದಷ್ಟು ಕಡಿಮೆ ಗೌರವವನ್ನು ಹೊಂದಿದ್ದಾರೆ. ಕೊನೆಯದಾಗಿ ಒಂದು ವಿಷಯ ಹೇಳುತ್ತೇನೆ. ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಯಲ್ಲಿ, ಡೊನಾಲ್ಡ್ ಟ್ರಂಪ್ ಆಗಾಗ ಹಠಮಾರಿ ಮತ್ತು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದರು. ಅವರ ಎರಡನೇ ಅವಧಿಯಲ್ಲಿ, ಅವರ ಕ್ರಿಯೆಗಳನ್ನು ಹೆಚ್ಚು ನಿಖರವಾಗಿ ಅಪಾಯಕಾರಿ ಮತ್ತು ದುರುದ್ದೇಶಪೂರಿತ ಎಂದು ನಿರೂಪಿಸಬಹುದು. ವ್ಯತ್ಯಾಸವೆಂದರೆ ಅವರು ಮತ್ತು ಅವರ ಸಲಹೆಗಾರರು ಈ ಹಿಂದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇತರ ನಿರಂಕುಶಾಧಿಕಾರಿಗಳ ವಿಧಾನಗಳನ್ನು ನಿಕಟವಾಗಿ ಅಧ್ಯಯನ ಮಾಡಿದ್ದಾರೆ ಮತ್ತು ಹೆಚ್ಚು ನೇರವಾಗಿ ಅನುಕರಿಸಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ ಹಂಗೇರಿಯಲ್ಲಿ ವಿಕ್ಟರ್ ಒರ್ಬಾನ್, ತುರ್ಕಿಯದಲ್ಲಿ ರಿಸೆಪ್ ಎರ್ದೋಗಾನ್, ಇಸ್ರೇಲ್ನಲ್ಲಿ ಬೆಂಜಮಿನ್ ನೆತನ್ಯಾಹು ಮತ್ತು ಭಾರತದಲ್ಲಿ ನರೇಂದ್ರ ಮೋದಿ, ಟ್ರಂಪ್ಗಿಂತ ಮೊದಲು ಪತ್ರಿಕಾ ಮಾಧ್ಯಮಗಳನ್ನು ಬೆದರಿಸಲು, ನ್ಯಾಯ ವ್ಯವಸ್ಥೆಯನ್ನು ಅಸ್ತ್ರವಾಗಿಸಲು, ಮಿಲಿಟರಿಯನ್ನು ರಾಜಕೀಯಗೊಳಿಸಲು, ವಿಶ್ವವಿದ್ಯಾಲಯಗಳನ್ನು ವಶಪಡಿಸಿಕೊಳ್ಳಲು ಶ್ರದ್ಧೆಯಿಂದ ಕೆಲಸ ಮಾಡಿದರು. ಈ ಎಲ್ಲಾ ವ್ಯಕ್ತಿಗಳು ತಮ್ಮ ದೇಶದ ಪ್ರಜಾಪ್ರಭುತ್ವ ಸ್ವಯಂ ನವೀಕರಣದ ಸಾಮರ್ಥ್ಯವನ್ನು ದುರ್ಬಲಗೊಳಿಸಿದ್ದಾರೆ ಮತ್ತು ಜಗತ್ತಿನಲ್ಲಿ ತಮ್ಮ ದೇಶದ ಸ್ಥಾನಮಾನವನ್ನು ಕಡಿಮೆ ಮಾಡಿದ್ದಾರೆ. ಆದರೆ ಭೂಮಿಯ ಮೇಲಿನ ಅತ್ಯಂತ ಶ್ರೀಮಂತ, ಅತ್ಯಂತ ಶಕ್ತಿಶಾಲಿ, ವೈಜ್ಞಾನಿಕವಾಗಿ ಮುಂದುವರಿದ ಮತ್ತು ಅತ್ಯಂತ ಪ್ರಭಾವಶಾಲಿ ದೇಶವಾಗಿ ಅಮೆರಿಕವು ಮೊದಲ ಸ್ಥಾನದಲ್ಲಿ ಕಳೆದುಕೊಳ್ಳಲು ಇನ್ನೂ ಹೆಚ್ಚಿನದನ್ನು ಹೊಂದಿತ್ತು ಎಂಬ ಕಾರಣದಿಂದಾಗಿ, ಟ್ರಂಪ್ ಅವರನ್ನು ಎಲ್ಲಕ್ಕಿಂತ ದೊಡ್ಡ ಹಾನಿ ಮಾಡಿದ್ದಾರೆಂದು ಇತಿಹಾಸವು ನಿರ್ಣಯಿಸಬಹುದು.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಡೀ ವಿಶ್ವದ ಆರ್ಥಿಕತೆಯೇ ತಲ್ಲಣಗೊಳ್ಳುತ್ತಿರುವ ಹೊತ್ತಿನಲ್ಲಿ ಚೀನಾದ ಆರ್ಥೀಕತೆ ಮಾತ್ರ ವೇಗಗತಿಯಲ್ಲಿ ಬೆಳೆಯುತ್ತಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆಯು ಶೇ.5 ಬೆಳವಣಿಗೆ ಸಾಧಿಸಿದೆ. ಇದು ಕಳೆದ ವರ್ಷದ 4ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.0.5 ರಷ್ಟು ಹೆಚ್ಚಳವಾಗಿದೆ. ಇತ್ತ ಚಿನ್ನದ ಉತ್ಪಾದನೆಯಲ್ಲೂ ಅಗ್ರಗಣ್ಯ ಸ್ಥಾನ ಪಡೆದಿರುವ ಚೀನಾ, 2024ರಲ್ಲಿ ಚಿನ್ನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಅಗ್ರಗಣ್ಯ ದೇಶಗಳನ್ನು ಪಟ್ಟಿಯಲ್ಲಿ ನಂಬರ್ 1 ಎನಿಸಿಕೊಂಡಿದೆ. ಈ ಕುರಿತ ವರದಿ ಇಲ್ಲಿದೆ..
ಸರ್ಕಾರಿ ಅಧಿಕಾರಿಯೊಬ್ಬರ ವಿಳಂಬ ಧೋರಣೆಗೆ ಛತ್ತೀಸ್ಗಢದ ವ್ಯಕ್ತಿಯೊಬ್ಬರು ನೀಡಿದ ವಿಶಿಷ್ಟ ಪ್ರತಿಕ್ರಿಯೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಛತ್ತೀಸ್ಗಢದ ರಾಯ್ಪುರದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಜಿನ ಮೇಲೆ ಬಾದಾಮಿ ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸತತವಾಗಿ ಕಚೇರಿಗೆ ಅಲೆದರೂ ತಮ್ಮ ಆಸ್ತಿ ದಾಖಲೆಗಳ ಫೈಲ್ ಸಿಗದಿದ್ದಕ್ಕೆ ಬೇಸತ್ತ ಇವರು, ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಲಿ ಎಂಬ
ಸಿಎಂ ಕಚೇರಿಗೆ ಸುಳ್ಳು ಮಾಹಿತಿ ಕೊಟ್ಟ ಬಿಸಿಎಂ ಅಧಿಕಾರಿ!
‘ವಾರ್ತಾ ಭಾರತಿ ಫ್ಯಾಕ್ಟ್ ಚೆಕ್’ನಿಂದ ಬಣ್ಣ ಬಯಲು
ಜನಗಣತಿ ಕಾರ್ಯಕ್ಕೆ ಗಣತಿದಾರರ ನಿರ್ಲಕ್ಷ್ಯ: ನೋಟಿಸ್ಗೂ ಉತ್ತರಿಸದ 53 ಮಂದಿ, ಪಾಲಿಕೆಯಿಂದ ಕಾನೂನು ಕ್ರಮದ ಎಚ್ಚರಿಕೆ!
ರಾಷ್ಟ್ರೀಯ ಜನಗಣತಿ-2027ರ ಕಾರ್ಯದಲ್ಲಿ ಬೆಂಗಳೂರಿನ ಕೆಲ ಪಾಲಿಕೆಗಳ ಗಣತಿದಾರರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ಇವರ ವಿರುದ್ದ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಆದಾಗ್ಯೂ, ಸುಮಾರು 53 ಮಂದಿ ಈ ನೋಟಿಸ್ ಗೆ ಯಾವುದೇ ಉತ್ತರ ನೀಡದೆ ನಿರ್ಲಕ್ಷ್ಯತೆ ತೋರಿದ್ದಾರೆ. ಈ ಹಿನ್ನಲೆಯಲ್ಲಿ ಇವರ ವಿರುದ್ದ ಅನಧಿಕೃತ ಗೈರು ಹಾಜರಿ ಎಂದು ಕ್ರಮಕ್ಕೆ ಮುಂದಾಗಿದ್ದು, ಇದು ಮುಂದುವರೆದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಭಾರತ ತಂಡಕ್ಕೆ ಮತ್ತೆ ಭುವನೇಶ್ವರ್ ಕುಮಾರ್ ಸೇರ್ಪಡೆ; ಮೊಹ್ಮದ್ ಕೈಫ್ ಭವಿಷ್ಯ
ಹೊಸದಿಲ್ಲಿ: ಹಿರಿಯ ವೇಗದ ಬೌಲರ್ ಭುವನೇಶ್ವರ ಕುಮಾರ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಮಾಜಿ ಕ್ರಿಕೆಟಿಗ ಮೊಹ್ಮದ್ ಕೈಫ್, ಈ ವೇಗಿ ಭಾರತ ಕ್ರಿಕೆಟ್ ತಂಡಕ್ಕೆ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲೇ ಎದುರಾಳಿಗಳನ್ನು ಸಿಂಹಸ್ವಪ್ನವಾಗಿ ಕಾಡಿದ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್ 176 ರನ್ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭ ಪವರ್ಪ್ಲೇನಲ್ಲಿ ಒಂದು ಹಂತದಲ್ಲಿ 18 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 26 ರನ್ ನೀಡಿ ಕುಮಾರ್ 3 ವಿಕೆಟ್ ಕಿತ್ತರು. ಪ್ರಸಕ್ತ ಸೀಸನ್ನ ಮೊದಲ ಆರು ಪಂದ್ಯಗಳಲ್ಲಿ 10 ವಿಕೆಟ್ ಕಿತ್ತಿರುವ ವೇಗದ ಬೌಲರ್, ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಸ್ವಿಂಗ್ ಮೂಲಕ ಕಂಗೆಡಿಸುವ ಸಾಮರ್ಥ್ಯ ತಮ್ಮಲ್ಲಿ ಇನ್ನೂ ಉಳಿದಿದೆ ಎಂದು ತೋರಿಸಿಕೊಟ್ಟಿದ್ದಾರೆ. ಕುಮಾರ್ ಸಾಮರ್ಥ್ಯದ ಬಗ್ಗೆ ಎಕ್ಸ್ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೈಫ್, ಭುವನೇಶ್ವರ್ ಕುಮಾರ್ ಅವರ ಪಯಣ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಯನ್ನು ನಿಚ್ಚಳಗೊಳಿಸಿದೆ ಎಂದು ಹೇಳಿದ್ದಾರೆ. ಕೆಲವೊಮ್ಮೆ ಭಾವನಾತ್ಮಕ ಕ್ಷಣಗಳು ಎದುರಾಗುತ್ತವೆ. ಭುವಿ ಅದ್ಭುತವಾಗಿ ಇಂದು ಬೌಲಿಂಗ್ ಮಾಡುತ್ತಿರುವುದನ್ನು ನೋಡಿದರೆ, ಆತ 17ನೇ ವಯಸ್ಸಿನಲ್ಲಿ ಬೌಲಿಂಗ್ ಮಾಡುತ್ತಿದ್ದ ಸಮಯ ನೆನಪಿಗೆ ಬರುತ್ತದೆ. ನಾನು ಉತ್ತರ ಪ್ರದೇಶದ ನಾಯಕನಾಗಿದ್ದಾಗ ಅವರ ನಿಯಂತ್ರಣ ಮತ್ತು ಸ್ವಿಂಗ್ಗೆ ಚಕಿತನಾಗಿದ್ದೆ. ಆದರೆ ಆಯ್ಕೆದಾರರು ಆತ ತೀರಾ ಯುವ ಆಟಗಾರ ಎಂದರು. ನಾನು ಪಟ್ಟು ಹಿಡಿದೆ. ಭುವಿ ರಣಜಿಗೆ ಪದಾರ್ಪಣೆ ಮಾಡಿದರು. ಫೈನಲ್ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಈಗ ಭುವಿಗೆ 36 ವರ್ಷ. ಈಗಲೂ ಸ್ವಿಂಗ್ ಮೂಲಕ ಬ್ಯಾಟ್ಸ್ಮನ್ಗಳನ್ನು ಕಾಡುತ್ತಾರೆ. ಭುವಿಯಲ್ಲಿ ಇನ್ನೂ ಸಾಮರ್ಥ್ಯ ಉಳಿದಿದೆ ಎಂದು ಬಣ್ಣಿಸಿದ್ದಾರೆ.
Karnataka Weather: ಕರ್ನಾಟಕದ ಮಲೆನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಐದು ದಿನ ಗುಡುಗು ಸಹಿತ ಮಳೆ ಸಾಧ್ಯತೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಮುನ್ಸೂಚನೆ ಇದೆ. ನಿನ್ನೆ ಹಲವೆಡೆ ಸಾಧಾರಣ ಮಳೆಯಾಗಿದ್ದು, ಉಳಿದ ಭಾಗಗಳಲ್ಲಿ ಮೋಡಕವಿದ ವಾತಾವರಣವಿತ್ತು. ಆದರೆ, ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಯಾವುದೇ ಮಳೆಯಾಗದೆ ಸಂಪೂರ್ಣವಾಗಿ ಒಣ ಹವೆ ಮುಂದುವರಿದಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನವು ಕಲಬುರಗಿಯಲ್ಲಿ ದಾಖಲಾಗಿದ್ದು, ಇಲ್ಲಿ ಗರಿಷ್ಠ ಉಷ್ಣಾಂಶವು 42.2 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ದುರಾಸೆ, ಆಮಿಷಗಳಿಗೆ ಬಲಿಯಾದ ನ್ಯಾಯಾಧೀಶರನ್ನು ವ್ಯವಸ್ಥೆಯಿಂದ ಹೊರದಬ್ಬಬೇಕು: ನ್ಯಾ. ಬಿ.ವಿ. ನಾಗರತ್ನ
ಬೆಂಗಳೂರು, ಎ. 19: ತಮ್ಮ ಆದಾಯದ ಮೂಲಗಳಲ್ಲಿ ಬದುಕಲು ಸಾಧ್ಯವಾಗದೆ ದುರಾಸೆ ಹಾಗೂ ಆಮಿಷಗಳಿಗೆ ಬಲಿಯಾಗುವ ನ್ಯಾಯಾಧೀಶರನ್ನು ನ್ಯಾಯಾಂಗ ವ್ಯವಸ್ಥೆಯಿಂದ ಹೊರದಬ್ಬಬೇಕು ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ನಡೆದ ‘ಎಐ ಯುಗದಲ್ಲಿ ನ್ಯಾಯಾಂಗ ವ್ಯವಸ್ಥೆ’ ವಿಷಯಾಧಾರಿತವಾಗಿ ನಡೆದ 22ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ಸಂಬಳ ಮತ್ತು ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ 2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿರುವುದಾಗಿ ತಿಳಿಸಿದರು. “ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶರ ಸಂಬಳ ಹಾಗೂ ಭತ್ಯೆಗಳು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ನ್ಯಾಯಾಧೀಶರು ತಮ್ಮ ಆದಾಯದ ಮಿತಿಯೊಳಗೆ ಬದುಕಲು ಸಾಧ್ಯವಾಗದಿದ್ದರೆ ಮತ್ತು ದುರಾಸೆಗೆ ಒಳಗಾದರೆ, ಅವರನ್ನು ವ್ಯವಸ್ಥೆಯಿಂದ ದೂರ ಮಾಡುವುದು ಅನಿವಾರ್ಯ,” ಎಂದು ಅವರು ಹೇಳಿದರು. ನ್ಯಾಯಾಧೀಶರು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯಬಾರದು ಎಂದು ಎಚ್ಚರಿಸಿದ ಅವರು, ಈ ಒತ್ತಡವು ಸಹೋದ್ಯೋಗಿಗಳಿಂದಲೂ ಬರಬಹುದು ಎಂದು ಸೂಚಿಸಿದರು. “ನ್ಯಾಯಾಧೀಶರು ಬಾಹ್ಯ ಒತ್ತಡಗಳಿಂದ ಹಾಗೂ ಸಹೋದ್ಯೋಗಿಗಳ ಪ್ರಭಾವದಿಂದ ಸಂಪೂರ್ಣ ಮುಕ್ತರಾಗಿರಬೇಕು. ಧೈರ್ಯ ಮತ್ತು ಸ್ವಾತಂತ್ರ್ಯದಿಂದ ತೀರ್ಮಾನ ಕೈಗೊಳ್ಳಬೇಕು. ತೀರ್ಪು ನೀಡುವ ವೇಳೆ ಯಾವುದೇ ‘ಸಮನ್ವಯ’ ಇರಬಾರದು. ಅದು ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ. ಜನರಿಗೂ ದೇಶಕ್ಕೂ ನ್ಯಾಯ ನೀಡುವುದು ನಮ್ಮ ಕರ್ತವ್ಯ ಎಂಬ ಅರಿವು ನ್ಯಾಯಾಧೀಶರಲ್ಲಿ ಇರಬೇಕು,” ಎಂದು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಹೇಳಿದರು. “ಜಿಲ್ಲಾ ನ್ಯಾಯಾಧೀಶರಿಗೆ ರಕ್ಷಣೆ, ಬೆಂಬಲ ನೀಡುವುದು ಹೈಕೋರ್ಟ್ಗಳ ಹೊಣೆ. ಬಡ್ತಿ, ಹುದ್ದೆ ಮತ್ತು ವರ್ಗಾವಣೆಗಳಲ್ಲಿ 235ನೇ ವಿಧಿ ನ್ಯಾಯಯುತವಾಗಿ ಅನ್ವಯವಾಗಬೇಕು. ಜಿಲ್ಲಾ ನ್ಯಾಯಾಧೀಶರ ಸ್ವಾತಂತ್ರ್ಯ ಕಾಪಾಡಲು ಹೈಕೋರ್ಟ್ಗಳ ಪಾರದರ್ಶಕ ಆಡಳಿತ ಅಗತ್ಯ. ರಿಜಿಸ್ಟ್ರಿಯೂ ಸ್ಪಂದನಶೀಲವಾಗಿರಬೇಕು. ನ್ಯಾಯಾಂಗ ಅಧಿಕಾರಿಗಳು ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಭಾವನೆ ಬರಬಾರದು ಎಂದು ಅವರು ಉಲ್ಲೇಖಿಸಿದರು. “ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸುರಕ್ಷತೆ ಮತ್ತು ಗೌರವಯುತ ಕೆಲಸದ ವಾತಾವರಣ ಅಗತ್ಯ. ಇದು ಮೂಲಸೌಕರ್ಯಕ್ಕಷ್ಟೇ ಸೀಮಿತವಲ್ಲ; ಕಿರುಕುಳದಿಂದ ರಕ್ಷಣೆಯನ್ನೂ ಒಳಗೊಂಡಿದೆ,” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಆಗ್ರಹಿಸಿದರು. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಸಿಎಂ ಸಿದ್ದರಾಮಯ್ಯ, ನ್ಯಾಯಮೂರ್ತಿ ಅರವಿಂದ್ ಕುಮಾರ್, ನ್ಯಾಯಮೂರ್ತಿ ವಿಭು ಭಕ್ರು ಉಪಸ್ಥಿತರಿದ್ದರು. ಸೌಜನ್ಯ: livelaw.in
ಕೆಆರ್ಎಸ್ ಜಲಾಶಯ ಕಳೆದ ಬಾರಿ ಬೇಗ ತುಂಬಿ, ಈ ಬಾರಿ ಬೇಗನೇ ಖಾಲಿಯಾಗುತ್ತಿದೆ. ಆರಂಭದಲ್ಲಿ ಉತ್ತಮವಾಗಿ ಮಳೆಯಾಗದೇ ಹೋದರೆ, ನೀರಿನ ಹಾಹಾಕಾರ ಶುರುವಾಗಲಿದೆ. ನೀರಿನ ಮಟ್ಟ 100 ಅಡಿಗೆ ಕುಸಿದಿದ್ದರೂ, ಸದ್ಯಕ್ಕೆ ಕುಡಿಯುವ ನೀರು ಹಾಗೂ ಬೆಳೆದು ನಿಂತ ಪೈರುಗಳಿಗೆ ನೀರು ಸಿಗುತ್ತಾ ಎಂಬ ಚಿಂತೆಯಲ್ಲಿದ್ದರೆ ಇಲ್ಲಿದೆ ನೋಡಿ ಉತ್ತರ..
ಭಾರತದ GEOX AI ಜಾಗತಿಕ Geolocation Intelligence ವೇದಿಕೆಗಳ ನಡುವೆ ತನ್ನ ಸ್ಥಾನ ನಿರ್ಮಿಸಿಕೊಳ್ಳುತ್ತಿದೆ
ಚಿತ್ರಗಳು ಮತ್ತು ವೀಡಿಯೊಗಳಿಂದ ನೈಜ ಸ್ಥಳವನ್ನು ಗುರುತಿಸುವ AI ವೇದಿಕೆ GEOX AI ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ
ಲೆಬನಾನ್| ಗುಂಡಿನ ದಾಳಿಯಲ್ಲಿ ಫ್ರಾನ್ಸ್ ಸೈನಿಕ ಮೃತ್ಯು
ಬೈರೂತ್, ಎ.18: ದಕ್ಷಿಣ ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ(ಯುಎನ್ಐಎಫ್ಐಎಲ್)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫ್ರಾನ್ಸ್ನ ಸೈನಿಕ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, ಮೂವರು ಯೋಧರು ಗಾಯಗೊಂಡಿರುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಶನಿವಾರ ಹೇಳಿದ್ದು, ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಲೆಬನಾನ್-ಇಸ್ರೇಲ್ ಕದನ ವಿರಾಮದ ಬಳಿಕ ದಕ್ಷಿಣ ಲೆಬನಾನ್ನಲ್ಲಿ ಸ್ಫೋಟಕಗಳನ್ನು ತೆರವುಗೊಳಿಸುತ್ತಿದ್ದ ಯುಎನ್ಐಎಫ್ಐಎಲ್ ತಂಡದ ಮೇಲೆ ದಾಳಿ ನಡೆಸಲಾಗಿದೆ ಎಂದವರು ಹೇಳಿದ್ದು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಲೆಬನಾನ್ ಸರಕಾರವನ್ನು ಆಗ್ರಹಿಸಿದ್ದಾರೆ.
IPL-2026| ಹಸಿರು ಜರ್ಸಿ ಧರಿಸಿ ಆಡಿದ ಆರ್ಸಿಬಿ
ಬೆಂಗಳೂರು, ಎ. 18: ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಹಸಿರು ಜರ್ಸಿಯನ್ನು ಧರಿಸಿ ಆಡಿದೆ. ತಂಡವು ತನ್ನ ‘ಹಸಿರು ಉಪಕ್ರಮ’ದ ಭಾಗವಾಗಿ ಪ್ರತಿ ಋತುವಿನಲ್ಲಿ ಹೀಗೆ ಮಾಡುತ್ತಿದೆ. ಮರುಬಳಕೆ ವಸ್ತುಗಳಿಂದ ತಯಾರಿಸಲಾಗಿರುವ ಈ ಜರ್ಸಿಯು, ಸಮತೂಲಿತ ಪರಿಸರಕ್ಕೆ ತಂಡವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ. ತಾನು ಮಾತ್ರ ಜಗತ್ತಿನ ಏಕೈಕ ಇಂಗಾಲ-ಮುಕ್ತ ಟಿ20 ತಂಡ ಎಂಬುದಾಗಿ ಆರ್ಸಿಬಿ ಹೇಳಿಕೊಳ್ಳುತ್ತಿದೆ. 2011ರಲ್ಲಿ ಈ ಉಪಕ್ರಮವನ್ನು ಆರಂಭಿಸಿರುವ ಆರ್ಸಿಬಿ, ಪರಿಸರ ಸಮತೋಲನ ತತ್ವವನ್ನು ಎನ್ನ ಎಲ್ಲಾ ಕಾರ್ಯಗಳಲ್ಲಿ ಅಳವಡಿಸಿಕೊಂಡು ಬರಲಾಗುತ್ತಿದೆ ಎಂದು ಹೇಳುತ್ತಿದೆ.
ಶರ್ವಾಣಿಕಾ ಫಿಡೆ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚೆಸ್ ಚಾಂಪಿಯನ್
ಚೆನ್ನೈ, ಎ. 18: ಸರ್ಬಿಯದ ವ್ರನ್ಯಾಕ ಬಾನ್ಯದಲ್ಲಿ ನಡೆಯುತ್ತಿರುವ ಫಿಡೆ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಶುಕ್ರವಾರ ಭಾರತದ ಎ.ಎಸ್. ಶರ್ವಾಣಿಕಾ ಗೆದ್ದಿದ್ದಾರೆ. ಈಗಾಗಲೇ ವಿಶ್ವ ಅಂಡರ್-10 ಕ್ಯಾಡೆಟ್ ಚಾಂಪಿಯನ್ ಆಗಿರುವ ಶರ್ವಾಣಿಕಾ ಎರಡು ಸುತ್ತಿನ ಪಂದ್ಯಗಳು ಬಾಕಿಯಿರುವಂತೆಯೇ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚಾಂಪಿಯನ್ ಆಗಿ ಹೊರಹೊಮ್ಮಿದರು. 11 ಸುತ್ತುಗಳ ಸ್ಪರ್ಧೆಯಲ್ಲಿ, 11 ವರ್ಷದ ಮಹಿಳಾ ಕ್ಯಾಂಡಿಡೇಟ್ ಮಾಸ್ಟರ್ ಶರ್ವಾಣಿಕಾ 10 ಜಯ ಮತ್ತು ಉಕ್ರೇನ್ನ ಡರಿಯಾ ಕ್ರಾವ್ಚುಕ್ ವಿರುದ್ಧ ಒಂದು ಡ್ರಾವನ್ನು ಸಂಪಾದಿಸಿದರು. 9ನೇ ಸುತ್ತಿನಲ್ಲಿ ತನಗಿಂತ ಹೆಚ್ಚಿನ ರ್ಯಾಂಕಿಂಗ್ನ ಸ್ಲೊವೇನಿಯದ ಎಮಾ ಜಾಕ್ಸರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಖಾತರಿಪಡಿಸಿದರು. ಶರ್ವಾಣಿಕಾ ಒಟ್ಟು 10.5 ಅಂಕಗಳನ್ನು ಗಳಿಸಿ ಪ್ರಶಸ್ತಿ ಜಯಿಸಿದರು. ಇದು ಅವರ ಎರಡನೇ ವಿಶ್ವ ರ್ಯಾಪಿಡ್ ಪ್ರಶಸ್ತಿಯಾಗಿದೆ. ಇದಕ್ಕಿಂತ ಮೊದಲು, ಅವರು ತನ್ನ 9 ವರ್ಷ ಪ್ರಾಯದಲ್ಲಿ ಅಂಡರ್-10 ವಿಭಾಗದಲ್ಲಿ ಚಿನ್ನ ಗೆದಿದ್ದರು. ಹಾಗೂ 2024ರಲ್ಲಿ ಆಲ್ಬೇನಿಯದಲ್ಲಿ ನಡೆದ ಫಿಡೆ ವಿಶ್ವ ರ್ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
2-2ರ ಸಮಬಲದೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡದ ಅರ್ಜೆಂಟೀನ ಪ್ರವಾಸ ಮುಕ್ತಾಯ
ಚೆನ್ನೈ, ಎ. 18: ಭಾರತೀಯ ಮಹಿಳಾ ಹಾಕಿ ತಂಡವು ತನ್ನ ನಾಲ್ಕು ಪಂದ್ಯಗಳ ಅರ್ಜೆಂಟೀನ ಪ್ರವಾಸವನ್ನು ಶುಕ್ರವಾರ 2-2ರ ಸಮಬಲದೊಂದಿಗೆ ಮುಕ್ತಾಯಗೊಳಿಸಿದೆ. ಭಾರತೀಯ ತಂಡದ ಆರಂಭ ಕಠಿಣವಾಗಿತ್ತಾದರೂ, ಬಳಿಕ ಅದು ಪ್ರತಿಹೋರಾಟ ನೀಡಿ ಕೊನೆಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಎಪ್ರಿಲ್ 13ರಂದು ನಡೆದ ಮೊದಲ ಪಂದ್ಯದಲ್ಲಿ, ಭಾರತದ ನವನೀತ್ ಕೌರ್ 22ನೇ ನಿಮಿಷದಲ್ಲಿ ಮತ್ತು ಅನು 29ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಆದರೆ, ಅಂತಿಮವಾಗಿ ಅರ್ಜೆಂಟೀನವು ಪಂದ್ಯವನ್ನು 4-2 ಗೋಲುಗಳಿಂದ ಗೆದ್ದಿತು. ಎಪ್ರಿಲ್ 14ರಂದು ನಡೆದ ಎರಡನೇ ಪಂದ್ಯದಲ್ಲಿ, ಭಾರತದ ಇಶಿಕಾ 22ನೇ ನಿಮಿಷದಲ್ಲಿ ಗೋಲು ಬಾರಿಸಿದರಾದರೂ, ಆತಿಥೇಯರು ಅಂತಿಮವಾಗಿ 2-1ರಿಂದ ಪಂದ್ಯ ಗೆದ್ದರು. ಎಪ್ರಿಲ್ 16ರಂದು ನಡೆದ ಮೂರನೇ ಪಂದ್ಯದಲ್ಲಿ ಭಾರತವು ತನ್ನ ಲಯವನ್ನು ಕಂಡುಕೊಂಡಿತು. ಆ ಪಂದ್ಯದಲ್ಲಿ ಅದು ಅರ್ಜೆಂಟೀನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು. ಭಾರತದ ಪರವಾಗಿ ನವನೀತ್ 26ನೇ ನಿಮಿಷದಲ್ಲಿ ಮತ್ತು ನೇಹಾ 37ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಆ ಪಂದ್ಯದ ಹೆಚ್ಚಿನ ಭಾಗ ಭಾರತವು 2-0 ಅಂತರದ ಮುನ್ನಡೆಯನ್ನು ಹೊಂದಿತ್ತು. 52ನೇ ನಿಮಿಷದಲ್ಲಿ ಅರ್ಜೆಂಟೀನ ಪರವಾಗಿ ಗೋರ್ಝಲನಿ ಗೋಲು ಬಾರಿಸಿದರೂ ಭಾರತ ವಿಜಯ ಗಳಿಸಿತು. ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ, ಭಾರತವು ಎದುರಾಳಿಯನ್ನು ಶೂಟೌಟ್ನಲ್ಲಿ 3-2 ಗೋಲುಗಳ ಅಂತರದಿಂದ ಸೋಲಿಸಿ ಸರಣಿಯನ್ನು 2-2ರಿಂದ ಡ್ರಾಗೊಳಿಸಿತು. ನಿಯಮಿತ ಅವಧಿಯಲ್ಲಿ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗದೆ ಪಂದ್ಯವು 0-0ಯಲ್ಲಿ ಮುಕ್ತಾಯಗೊಂಡಿತು. ಉಭಯ ತಂಡಗಳಿಗೂ ಗೋಲು ಗಳಿಸುವ ಅವಕಾಶಗಳಿದ್ದರೂ, ಅವುಗಳನ್ನು ಕೈಚೆಲ್ಲಿದವು.
ಹೊಸದಿಲ್ಲಿ, ಎ.18: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಕಾಂಗ್ರೆಸ್ ತೀವ್ರ ಟೀಕೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಯವರ ಭಾಷಣದಲ್ಲಿ ಮಹಿಳೆಯರ ವಿಚಾರಕ್ಕಿಂತ ಕಾಂಗ್ರೆಸ್ ವಿರುದ್ಧದ ಟೀಕೆಗಳೇ ಹೆಚ್ಚು ಪ್ರಾಮುಖ್ಯ ಪಡೆದಿವೆ ಎಂದು ಆರೋಪಿಸಿದರು. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಸೋಲಿನ ಬಳಿಕ ಪ್ರಧಾನಿ ಮಾಡಿದ ಭಾಷಣ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಮನೀಶ್ ತಿವಾರಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರ ಭಾಷಣವನ್ನು ಟೀಕಿಸಿದ ಖರ್ಗೆ, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹೆಸರನ್ನು 59 ಬಾರಿ ಉಲ್ಲೇಖಿಸಿದ್ದಾರೆ. ಆದರೆ ಮಹಿಳೆಯರ ವಿಚಾರಕ್ಕೆ ಅಷ್ಟಾಗಿ ಒತ್ತು ನೀಡಿಲ್ಲ ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ವೈಫಲ್ಯದ ಬಗ್ಗೆ ಸ್ಪಷ್ಟನೆ ನೀಡುವ ಬದಲು, ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುವುದರಲ್ಲೇ ಪ್ರಧಾನಿಯವರ ಭಾಷಣ ಹೆಚ್ಚು ಕೇಂದ್ರೀಕೃತವಾಗಿತ್ತು ಎಂದು ಅವರು ಆರೋಪಿಸಿದರು. ಕಳೆದ 12 ವರ್ಷಗಳಲ್ಲಿ ಸಾಧನೆಗಳನ್ನು ವಿವರಿಸುವ ಬದಲು, ರಾಷ್ಟ್ರವನ್ನುದ್ದೇಶಿಸಿ ಮಾಡಿದ ಅಧಿಕೃತ ಭಾಷಣವನ್ನು ರಾಜಕೀಯ ಪ್ರಚಾರದ ವೇದಿಕೆಯಾಗಿಸಿದ್ದಾರೆ ಎಂದು ಖರ್ಗೆ ಟೀಕಿಸಿದರು.
Kalaburagi | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಿನಾಚರಣೆ: ಧ್ವಜಾರೋಹಣ
ಕಲಬುರಗಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ಶನಿವಾರ ನಗರದ ಕೆಬಿಎನ್ ದರ್ಗಾ ರಸ್ತೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಖುರೇಷಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 2011ರ ಏಪ್ರಿಲ್ 18ರಂದು ನವದೆಹಲಿಯಲ್ಲಿ ಸ್ಥಾಪನೆಯಾಗಿ, ಕಲ್ಯಾಣ ರಾಜ್ಯದ ನಿರ್ಮಾಣ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರೋತ್ಸಾಹಿಸುವುದೇ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾ ಅಧ್ಯಕ್ಷ ಸಲೀಂ ಚಿತ್ತಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಅಬ್ದುಲ್ ಖಾದಿರ್, ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಸಗ್ರಿ, ಅಫ್ಜಲ್ ಖಾನ್, ನಸೀರುದ್ದೀನ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ AI ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಬಾರದು: ಸಿಜೆಐ ಸೂರ್ಯಕಾಂತ್
ಬೆಂಗಳೂರು: ನ್ಯಾಯಾಧೀಶರ ಗ್ರಹಿಕೆ, ವಿಶ್ಲೇಷಣೆ, ತರ್ಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶಗಳ ಅವಲೋಕನವು ನ್ಯಾಯ ನಿರ್ಣಯದ ಬೆನ್ನೆಲುಬಾಗಿರಬೇಕು. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ(ಎಐ) ತಂತ್ರಜ್ಞಾನವು ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಿರಬಾರದು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಜಿಕೆವಿಕೆಯ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು(ಕೆಜೆಒಎ) ಆಯೋಜಿಸಿದ್ದ 22ನೇ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯ ನಿರ್ಣಯದಲ್ಲಿ ಸಹಾನುಭೂತಿ, ಮೌಲ್ಯ ಪ್ರಜ್ಞೆ, ಸಾಂವಿಧಾನಿಕ ಆಶಯಗಳು ಪ್ರಧಾನ ಅಂಶಗಳಾಗಿವೆ. ಇವುಗಳ ಜಾಗವನ್ನು ಯಾವುದೇ ತಾಂತ್ರಿಕತೆಯು ತುಂಬಲಾರದು ಎಂದರು. ಎಐ ಸೇರಿ ಯಾವುದೇ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯು ಹೊರತಾಗಿರಲು ಸಾಧ್ಯವಿಲ್ಲ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಉಲ್ಲೇಖಿತ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ. ಎಐ ಮೂಲಕ ಲಭ್ಯವಾಗುವ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಾಗುತ್ತಿದ್ದು, ನ್ಯಾಯನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಅವರು ತಿಳಿಸಿದರು. ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ತೀವ್ರ ಚರ್ಚಿತ ವಿಷಯವಾಗಿದೆ. ಈ ವ್ಯವಸ್ಥೆಯಲ್ಲಿ ಎಐ ಅನ್ನು ದತ್ತಾಂಶ ಪರಿಶೀಲನೆ, ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿ, ಪುನರಾವರ್ತಿತ ಕೆಲಸಗಳ ನಿರ್ವಹಣೆ ಸೇರಿದಂತೆ ದೈನಂದಿನ ಕಾರ್ಯಗಳಿಗೆ ಬಳಸಿಕೊಂಡು ನ್ಯಾಯ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಮುಖ್ಯ ಗುರಿಯಾಗಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ನಮ್ಮ ಸಮಾಜದಲ್ಲಿ ಜನಸಾಮಾನ್ಯರು ವಿಚಾರಣಾ ನ್ಯಾಯಲಯಗಳ ಮೂಲಕವೇ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಅನೇಕರು ನಂತರದ ಹಂತದ ಕೋರ್ಟ್ಗಳೊಂದಿಗೆ ಸಂಪರ್ಕಕ್ಕೆ ಬರುವುದೇ ಇಲ್ಲ. ಹೀಗಾಗಿ, ಜನರಿಗೆ ಸಂವಿಧಾನದ ಆಶಯಗಳ ರಕ್ಷಣೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ಹಂತದಲ್ಲೇ ವಿಶ್ವಾಸ ಮೂಡಬೇಕು. ವ್ಯವಸ್ಥೆ ಬಗೆಗಿನ ನಂಬಿಕೆಯು ಬಲಗೊಳ್ಳುವುದು ಅಥವಾ ಶಿಥಿಲವಾಗುವುದು ವಿಚಾರಣಾ ನ್ಯಾಯಲಯಗಳ ಹಂತವನ್ನೇ ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆಯಾಗಿ ಉಳಿದಿಲ್ಲ. ಯಾವ ರೀತಿಯಲ್ಲಿ ಎಐ ಅನ್ನು ಅಳವಡಿಸಬೇಕು ಎಂಬುದಷ್ಟೇ ಈಗಿನ ಪ್ರಶ್ನೆಯಾಗಿದೆ. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಾಖಲೆಗಳ ಡಿಜಿಟಲೀಕರಣ, ಇ-ಫೈಲಿಂಗ್ ಹಾಗೂ ಕಾಗದರಹಿತ ವ್ಯವಸ್ಥೆ ನಿರ್ಮಿಸುವ ದಿಸೆಯಲ್ಲಿ ಉಪಕ್ರಮಗಳು ಆರಂಭಗೊಂಡಿದ್ದು, ಇದು ವೇಗ ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಾ.ನಾಗರತ್ನ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ಎಐ ಅಳವಡಿಸುವಾಗ ಹೆಚ್ಚಿನ ಜವಾಬ್ದಾರಿಯೂ ಅತ್ಯಗತ್ಯ. ಎಐನಿಂದಾಗಿ, ಸುಪ್ರೀಂ ಕೋರ್ಟ್ನಲ್ಲೂ ನಕಲಿ ಪ್ರಕರಣಗಳ ಉಲ್ಲೇಖಗಳು ಕಂಡುಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ವಕೀಲರ ಪಾತ್ರ ಮುಖ್ಯವಾಗುತ್ತದೆ. ಹಾಗೆಯೇ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ ಮತ್ತು ದತ್ತಾಂಶಗಳ ರಕ್ಷಣೆಯೂ ಪ್ರಮುಖವಾಗುತ್ತದೆ ಎಂದರು. ‘ಬೆಂಗಳೂರಿನ ನ್ಯಾಯಾಲಯಗಳಲ್ಲಿ ಕಡತಗಳ ಸಂಗ್ರಹ ಹಾಗೂ ಲಭ್ಯತೆಯೇ ದೊಡ್ಡ ತೊಡಕಾಗಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ, ಆನೇಕಲ್ನಲ್ಲಿ 1.40 ಲಕ್ಷ ಚದುರು ಅಡಿಗಳಷ್ಟು ವಿಸ್ತೀರ್ಣದಲ್ಲಿ ದಾಖಲೆಗಳ ಸ್ಕ್ಯಾನಿಂಗ್, ಸಂಗ್ರಹ ಹಾಗೂ ಕಡತಗಳ ನಿರ್ವಹಣೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಕಾರ್ಯದಕ್ಷತೆ ಹೆಚ್ಚಲಿದೆ’ -ವಿಭು ಬಖ್ರು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
‘ಡಿಜಿಟಲ್ ಅರೆಸ್ಟ್’ ಭೇದಿಸಿದ ಸಿಬಿಐ: ಮಾಜಿ ಬ್ಯಾಂಕ್ ಅಧಿಕಾರಿ ಸಹಿತ ನಾಲ್ವರ ಬಂಧನ
ಹೊಸದಿಲ್ಲಿ/ಹೈದರಾಬಾದ್: ಹಿರಿಯ ನಾಗರಿಕರೊಬ್ಬರನ್ನು ಡಿಜಿಟಲ್ ಬಂಧನದಲ್ಲಿರಿಸಿ 1.6 ಕೋಟಿ ರೂ. ಸುಲಿಗೆ ಮಾಡಿದ, ಸೈಬರ್ ವಂಚನೆಯ ಹಗರಣವನ್ನು ಸಿಬಿಐ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಮಾಜಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರನ್ನು ಬಂಧಿಸಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಬಂಧಿತ ಆರೋಪಿಗಳನ್ನು ಇಂಡಸ್ಲ್ಯಾಂಡ್ ಬ್ಯಾಂಕ್ ಮಾಜಿ ಸಹಾಯಕ ಮ್ಯಾನೇಜರ್ ಡುಬ್ಬಕ್ಕ ಮಹೇಶ್ ಹಾಗೂ ರಾಜೇಶ್ ಕನ್ನಾ ಹಾಗೂ ವಾಯಲ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಕಾಲ್ಪನಿಕ ‘ಡಿಜಿಟಲ್ ಬಂಧನದ ’ ಮೂಲಕ ಹಿರಿಯ ನಾಗರಿಕನನ್ನು ಬೆದರಿಸಿ, ಸುಲಿಗೆ ಮಾಡಿದ ಹಣವನ್ನು ನಕಲಿ ಕಂಪೆನಿಯೊಂದರ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣದ ಮೂಲವನ್ನು ಬಚ್ಚಿಡಲು ವಿವಿಧ ವಾಹಿನಿಗಳ ಮೂಲಕ ಈ ಹಣವು ಖಾತೆಗೆ ಹೋಗುವಂತೆ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಕ್ರಮವಾಗಿ ಬ್ಯಾಂಕ್ ಖಾತೆಯನ್ನು ತೆರೆಯವುದಕ್ಕೆ ಮಹೇಶ್ ನೆರವಾಗಿದ್ದರೆ, ಇನ್ನಿಬ್ಬರು ಅಕ್ರಮ ಹಣದ ವರ್ಗಾವಣೆಯನ್ನು ವ್ಯವಸ್ಥೆಗೊಳಿಸಿದ್ದರೆಂದು ಸಿಬಿಐ ಆಪಾದಿಸಿದೆ. ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯ ವೇಳೆ ಹಲವಾರು ಅಕ್ರಮ ದಾಖಲೆಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ, ಇದರಿಂದ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಸುಳಿವು ದೊರೆಯಬಹುದೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಸ್ವಾವಲಂಬನೆ ಕ್ಷೀಣ: ಡಾ.ಮೋಹನ ಆಳ್ವ
ಮೂಡುಬಿದಿರೆ: ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಎಸ್ಕೆಡಿಆರ್ಡಿಪಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ `ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ' ಕುರಿತ ವಿಚಾರ ಸಂಕಿರಣವು ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ರಾಸಾಯನಿಕ ಪದಾರ್ಥಗಳನ್ನು ಅತಿಯಾಗಿ ಬಳಕೆ ಮಾಡುತ್ತಿದ್ದು ಇದರಿಂದ ರೈತರನ್ನು ಸ್ವಾವಲಂಬನೆಯಿಂದ ದೂರ ಮಾಡಿ ಪರಾವಲಂಬಿತೆಯತ್ತ ಕೊಂಡೊಯ್ಯು ತ್ತಿದ್ದು, ಇದರಿಂದ ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಹಾನಿ ಉಂಟಾಗುತ್ತಿದೆ ಕೃಷಿ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಾಲಚಂದ್ರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ತೆಂಗು ಮತ್ತು ಅಡಿಕೆ ಮರಗಳ ಗರಿಗಳಿಂದ ತಯಾರಿಸುವ ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಇದರಿಂದ ಮಣ್ಣಿನ ಪೋಷಕಾಂಶ ಹೆಚ್ಚುವುದರ ಜೊತೆಗೆ ಪರಿಸರ ಮಾಲಿನ್ಯವೂ ಕಡಿಮೆ ಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ತಗ್ಗಿಸಲು ಇದು ಪರಿಣಾಮಕಾರಿ ಮಾರ್ಗ ಎಂದರು. ಆಳ್ವಾಸ್ ಕಾಲೇಜಿನ ವ್ಯವಸ್ಥಾಪನ ಟ್ರಸ್ಟಿ ವಿವೇಕ್ ಆಳ್ವ, ಎಸ್ಕೆಡಿಆರ್ಡಿಪಿ ಬಿಸಿ ಟ್ರಸ್ಟ್ನ ಸಿಇಒ ಅನಿಲ್ ಕುಮಾರ್ ಎಸ್.ಎಸ್., ಮಂಗಳೂರು ಕೃಷಿ ಉತ್ಪಾದಕರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಸೋನ್ಸ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರವೀಣ್ ಕುಮಾರ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತ ಮುಖಂಡ ಲಿಯೋ ವಾಲ್ಟರ್ ನಝರತ್ ಮತ್ತಿತರರಿದ್ದರು. ಆಳ್ವಾಸ್ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಎಸ್. ಎನ್. ವಾಸುದೇವ ಸ್ವಾಗತಿಸಿದರು.
ಸಿದ್ದರಾಮಯ್ಯ ನನ್ನ ರಾಜಕೀಯ ಹೀರೋ, ಹೀರೊಯಿನ್ ಇಂದಿರಾ ಗಾಂಧಿ: ಡಾ.ಜಯಮಾಲ
ಬೆಂಗಳೂರು: ಬಡತನದಿಂದ ಬಂದ ನನಗೆ ಅನ್ನದ ಬೆಲೆ ಚೆನ್ನಾಗಿ ತಿಳಿದಿದ್ದು, ಅನ್ನಭಾಗ್ಯ ನೀಡಿದ ಸಿಎಂ ಸಿದ್ದರಾಮಯ್ಯನವರು ನನ್ನ ರಾಜಕೀಯ ರಂಗದ ಹೀರೋ. ಅಂತೆಯೇ, ರಾಜಕೀಯ ರಂಗದ ಹೀರೊಯಿನ್ ಇಂದಿರಾ ಗಾಂಧಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ, ನಟಿ ಡಾ. ಜಯಮಾಲ ತಿಳಿಸಿದ್ದಾರೆ. ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಿತ್ರರಂಗದಲ್ಲಿ ರಾಜ್ಕುಮಾರ್ ಹಾಗೂ ರಾಜಕೀಯದಲ್ಲಿ ಸಿದ್ದರಾಮಯ್ಯ ಸಾಹೇಬರು ನನಗೆ ದೇವತಾ ಸ್ವರೂಪವಾಗಿದ್ದಾರೆ ಎಂದರು. ಪಣಂಬೂರಲ್ಲಿ ಬಂದರು ನಿರ್ಮಾಣಕ್ಕಾಗಿ ತಮ್ಮ ಕುಟುಂಬವನ್ನು ಕಾಟಿಪಳ್ಳ ಎನ್ನುವ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನನಗೆ ಸುಮಾರು ಮೂರೂವರೆ ವರ್ಷವಿದ್ದಾಗ ನಮ್ಮ ತಂದೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರು. ಕಡು ಬಡತನದಲ್ಲಿ ಬೆಳೆದ ನಾವು ಒಟ್ಟಾರೆ 7 ಮಂದಿ ಮಕ್ಕಳು. ಹಾಗಾಗಿ, ನಾವು ಹಾಲು ಮತ್ತು ಉಪ್ಪಿಟ್ಟು ಸಿಗುತ್ತದೆಂದು ಶಾಲೆಗೆ ಹೋಗುತ್ತಿದ್ದೆವು. ಇಲ್ಲದಿದ್ದರೆ ಶಾಲೆಗೆ ಹೋಗುತ್ತಿರಲಿಲ್ಲವೆನಿಸುತ್ತದೆ ಎಂದು ಎಂದು ಜಯಮಾಲ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ನಾಯಕ ನಟರಿಗೆ ಹೋಲಿಸಿದರೆ, ನಟಿಯರಿಗೆ ಸಿನಿಮಾ ಕ್ಷೇತ್ರದಲ್ಲಿ ಆಯಸ್ಸು ಕಡಿಮೆ. ಅಂದಿನ ಕಾಲದಲ್ಲಿ ಮದುವೆಯಾದರೆ ಜನರೇ ನಿರಾಕರಿಸುತ್ತಿದ್ದರು. ಅನೇಕರು ತಮ್ಮ ಮದುವೆಯನ್ನು ಮುಚ್ಚಿಟ್ಟು ನಾನಾ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಿದ್ದರು, ಅವಕಾಶ ವಂಚಿತರಾಗುತ್ತಿದ್ದರು. ಆದರೆ, ಈಗ ಅಂತಹ ಸ್ಥಿತಿ ಬದಲಾಗಿರುವುದು ಸಂತಸದ ಸಂಗತಿ ಎಂದು ಜಯಮಾಲ ತಿಳಿಸಿದರು. ಚಿತ್ರರಂಗದಲ್ಲಿ ಮೇರು ಪರ್ವತವಾಗಿದ್ದ ರಾಜ್ಕುಮಾರ್ ಅವರು ಬದುಕಿನ ಒಂದೊಂದು ಹೆಜ್ಜೆಯನ್ನೂ ಹೇಳಿಕೊಟ್ಟರು. ಯಾರಿಗೂ ನೇರವಾಗಿ ಏನನ್ನೂ ಹೇಳದ ಅವರು, ತಮ್ಮ ನಡವಳಿಕೆ ಮುಖಾಂತರವೇ ಸಂದೇಶ ನೀಡುತ್ತಿದ್ದರು. ಅಲ್ಲದೆ, ನನಗೆ ಸಿಗುವ ಆಹಾರ ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಕೆಲಸಗಾರರ ಜತೆಯೇ ಊಟ ಮಾಡುತ್ತಿದ್ದರು. ಅಂತಹ ಶ್ರೇಷ್ಠ ನಟರ ಬೆಂಬಲದ ಹೊರತು ನನಗೆ ನಟನೆ ಸಾಧ್ಯವಾಗುತ್ತಿರಲಿಲ್ಲ ಎಂದು ಜಯಮಾಲ ಹೇಳಿದರು. ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ಪಾತ್ರ ಜೀವನದ ದೊಡ್ಡ ಕನಸು: ‘ರಾಣಿ ಅಬ್ಬಕ್ಕನ ಪಾತ್ರ ನಿರ್ವಹಿಸುವುದು ನನ್ನ ಜೀವನದ ದೊಡ್ಡ ಕನಸು. ನಾನು ಹೋಗುವ ಮುನ್ನ ರಾಣಿ ಅಬ್ಬಕ್ಕ ಸಿನಿಮಾವನ್ನು ಮಾಡುತ್ತೇನೆ. ವಾಣಿಜ್ಯ ಮಂಡಳಿಯ ಈ ಅವಧಿ ಮುಗಿದ ನಂತರ ಅಬ್ಬಕ್ಕನ ಕುರಿತ ಸಿನಿಮಾ ಮಾಡಬೇಕೆಂಬ ಆಸೆಯಿದೆ’ ಎಂದು ಜಯಮಾಲ ತಿಳಿಸಿದರು. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 93 ವರ್ಷಕ್ಕೆ ಕಾಲಿಟ್ಟಿದೆ. ಆದರೆ, ಇಂದಿಗೂ ಮಂಡಳಿಯ ಕಾರ್ಮಿಕರಿಗೆ, ತಂತ್ರಜ್ಞರಿಗೆ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡ ನಿರ್ದೇಶಕರು ಸೇರಿದಂತೆ ಎಲ್ಲ ವಿಭಾಗದವರಿಗೂ ಸ್ವಂತ ಮನೆಯಿಲ್ಲ. ಈ ಕುರಿತು ಸರಕಾರದ ಮುಂದೆ ಬೇಟಿಕೆಯಿಟ್ಟಿದ್ದು, ಸರಕಾರ ಸೂರು ನೀಡುವ ಭರವಸೆಯಿದೆ’ -ಡಾ.ಜಯಮಾಲಾ, ಅಧ್ಯಕ್ಷೆ, ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ.
Bengaluru | ಔಷಧಿ ಸರಬರಾಜು ಮಾಡಲು ಟೆಂಡರ್ ಕೊಡಿಸುವುದಾಗಿ ವಂಚನೆ ಪ್ರಕರಣ: ನಕಲಿ ಐಎಎಸ್ ಅಧಿಕಾರಿಯ ಬಂಧನ
ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರದಿಂದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಮೆಡಿಕಲ್ ಶಾಪ್ ಮಾಲಕನಿಂದ 41 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪದಡಿ ನಕಲಿ ಐಎಎಸ್ ಅಧಿಕಾರಿಯನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಥುನ್(28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ನಿವಾಸಿಯಾಗಿರುವ ದೂರುದಾರ ಸತೀಶ್ ಎಂಬವರಿಗೆ 41 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ಈತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕಡೂರು ಮೂಲದವನಾಗಿದ್ದು, ಈ ಹಿಂದೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ. ಇದೇ ಅಧಾರದ ಮೇರೆಗೆ ಸ್ನೇಹಿತರ ಬಳಿ ತಾನು ಐಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದು, ಪ್ರೊಬೆಷನರಿ ತರಬೇತಿಯಲ್ಲಿದ್ದೇನೆ ಎಂದು ನಂಬಿಸಿದ್ದ. ಅಲ್ಲದೆ, ನಗರದ ಆರೋಗ್ಯಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಅವರನ್ನು ಪರಿಚಯಿಸಿಕೊಂಡು ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆರೋಗ್ಯ ಇಲಾಖೆಯ ಚಿಕ್ಕಮಗಳೂರಿನ ಉಸ್ತುವಾರಿಯಾಗಿದ್ದೇನೆ ಎಂದು ಹೇಳಿದ್ದ ಸುಳ್ಳನ್ನೇ ನಂಬಿದ್ದ ಡಾ.ಚಂದ್ರಶೇಖರ್, ಮೂರು ತಿಂಗಳ ಹಿಂದೆ ದೂರುದಾರ ಸತೀಶ್ ಅವರಿಗೆ ಈತನನ್ನು ಪರಿಚಯಿಸಿದ್ದರು. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಸತೀಶ್ ಬಳಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರಿ ಆದೇಶ ಕೊಡಿಸುವ ಬಗ್ಗೆ ತಿಳಿಸಿದ್ದರು. ಇದನ್ನು ನಂಬಿದ ಸತೀಶ್, ಆರೋಪಿಯನ್ನು ಸಂಪರ್ಕಿಸಿದಾಗ 1.8 ಕೋಟಿ ರೂ.ವರೆಗೂ ಔಷಧಿ ಸರಬರಾಜು ಮಾಡಲು ಆದೇಶ ಕೊಡಿಸುತ್ತೇನೆ. ಇದಕ್ಕೆ ಪ್ರತಿಯಾಗಿ ಶೇ.20ರಷ್ಟು ಮುಂಗಡವಾಗಿ ಕಮಿಷನ್ ನೀಡಬೇಕೆಂದು ಹೇಳಿದ್ದ. ಇದರಂತೆ ಜಕ್ಕೂರು ಬಳಿ 36 ಲಕ್ಷ ರೂ. ಹಣ ವಸೂಲಿ ಮಾಡಿದ್ದ. ಎರಡು ವಾರಗಳ ಬಳಿಕ ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡುವಂತೆ ಕೇಳಿ ಪಡೆದಿದ್ದ. ಅಲ್ಲದೆ, ಆದೇಶ ಕೊಡಿಸಲು 2 ತಿಂಗಳು ಆಗಲಿದೆ ಎಂದು ಸುಳ್ಳು ಹೇಳಿದ್ದ. ಈ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಮಿಥುನ್ ಹೆಸರಿನಲ್ಲಿ ಐಎಎಸ್ ಅಧಿಕಾರಿ ಇಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ದೂರುದಾರನಿಗೆ ಆರೋಪಿಯನ್ನು ಪರಿಚಯಿಸಿದ್ದ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ.ಚಂದ್ರಶೇಖರ್ ಅವರಿಗೆ ವಂಚನೆ ಕೃತ್ಯದಲ್ಲಿನ ಪಾತ್ರದ ಬಗ್ಗೆ ಅರಿಯಲು ವಿಚಾರಣೆಯ ಅಗತ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
IPL 2026 | CSK ವಿರುದ್ಧ ಹೈದರಾಬಾದ್ಗೆ 10 ರನ್ ಗಳ ಜಯ
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ SRH ತಂಡವು 10 ರನ್ ಗಳಿಂದ ಜಯ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ನೀಡಿದ 195 ರನ್ ಗಳ ಗುರಿ ಪಡೆದ CSK ತಂಡವು 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ ಸಂಖ್ಯೆ 16 ಒಗಟಿನ ಅರ್ಥವೇನು?
ಹೊಸ ದಿಲ್ಲಿ: ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮೂರು ಮಸೂದೆಗಳ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಒಂದು ಒಗಟಿನೊಂದಿಗೆ ತಮ್ಮ ಭಾಷಣ ಮುಕ್ತಾಯಗೊಳಿಸಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರಕಾರ ಆಯ್ದುಕೊಂಡಿರುವ ಸಮಯವನ್ನು ಉಲ್ಲೇಖಿಸಿದ್ದ ಅವರು, “ಈ ಎಲ್ಲ ಒಗಟಿಗೂ ಸಂಖ್ಯೆ 16ರಲ್ಲಿ ಉತ್ತರವಿದೆ. ಎಲ್ಲವೂ ಸಂಖ್ಯೆ 16ರಲ್ಲಿ ಅಡಗಿದೆ” ಎಂದು ಸೂಚ್ಯವಾಗಿ ಹೇಳಿದ್ದರು. ರಾಹುಲ್ ಗಾಂಧಿ ಉಲ್ಲೇಖಿಸಿದ್ದ 16ರ ಒಗಟು ಹಲವರ ಪಾಲಿಗೆ ಉತ್ತರವಾಗಿರಲಿಲ್ಲ. ವಾಸ್ತವವಾಗಿ ಇದು ನಿಗೂಢವಾಗಿತ್ತು ಹಾಗೂ ಜನರು ಈ ಒಗಟಿನ ಬೆನ್ನತ್ತುವಂತೆ ಮಾಡಿತ್ತು. ಈ ಊಹೆಗಳು ಟಿಡಿಪಿಯ 16 ಸಂಸದರಿಂದ ಹಿಡಿದು ಶ್ರೀಮಂತರು ಹಾಗೂ ಬಲಿಷ್ಠರು ಸಂಪರ್ಕ ಹೊಂದಿರುವ ಅಂತಾರಾಷ್ಟ್ರೀಯ ಹಗರಣವನ್ನು ಬಯಲು ಮಾಡುವ 16 ನಿಮಿಷಗಳ ವಿಡಿಯೊವರೆಗೂ ಹಬ್ಬಿವೆ. ಯಾರಿಗೆಲ್ಲ ಈ ನಿಗೂಢತೆ ಅರ್ಥವಾಗಿದೆ ಅವರು ಅದನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಬಹುದು ಎಂದು ಹೇಳುವ ಮೂಲಕ, ಸ್ವಯಂ ರಾಹುಲ್ ಗಾಂಧಿ ಕೂಡಾ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. “ನಾನು ಪ್ರಧಾನಿಯ ಭಾಷಣವನ್ನು ವೀಕ್ಷಿಸುತ್ತಿದ್ದೆ. ನಿಶ್ಯಕ್ತಿ, ಕಳೆಗುಂದಿದ ಧ್ವನಿ. ಮತ್ತೇನಲ್ಲ. ಬೇರೇನೂ ಹೊರಡುತ್ತಿರಲಿಲ್ಲ” ಎಂದು ಶುಕ್ರವಾರ ರಾಹುಲ್ ಗಾಂಧಿ ಹೇಳಿದರು. ಆಗ ನಾನು ಇದು ಎಪ್ರಿಲ್ 16 ಎಂಬುದನ್ನು ಗಮನಿಸಿದೆ ಎಂದು ಅವರು ಹೇಳಿದರು. “ಈ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸುವುದು ತಪ್ಪು ಎಂಬುದು ಸ್ಪಷ್ಟವಾಗಿ ತಿಳಿದಿದ್ದರಿಂದ, ಅವರಿಗೆ ಚರ್ಚೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ಅದಕ್ಕೆ ಯಾರಿಂದಲೂ ಭಯದ ಪ್ರತಿಕ್ರಿಯೆ ದೊರೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು” ಎಂದು ಅವರು ಹೇಳಿದರು. ಆಗ ತಮಗಾದ ಸಾಕ್ಷಾತ್ಕಾರವನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದರು. “ಹೀಗಾಗಿ ನಾನು ಅವರನ್ನು ನೋಡುತ್ತಿದ್ದೆ. ನಾನು ನನ್ನ ಫೋನ್ ನಲ್ಲಿ ಎಪ್ರಿಲ್ 16 ಅನ್ನು ಗಮನಿಸಿದೆ. “ಓ ದೇವರೆ! ಎಂಥ ಹುಚ್ಚುತನ, ಅದೇ ಸಂಖ್ಯೆ – ಹದಿನಾರು! ಈ ಹದಿನಾರರ ಸಂಖ್ಯೆ, ಇದೇ ಸಂಖ್ಯೆ. ಈ ಒಗಟಿನ ಸಂಪೂರ್ಣ ಉತ್ತರ ಹದಿನಾರರಲ್ಲಿ ಅಡಗಿದೆ. ಹದಿನಾರರ ಸಂಖ್ಯೆಯಲ್ಲಿ ಎಲ್ಲವೂ ಅಡಗಿದೆ” ಎಂದು ಅವರು ಹೇಳಿದರು. “ಈಗ ನಾನು ಏನು ಹೇಳುತ್ತಿದ್ದೇನೆ ಎಂದು ಯಾರಿಗಾದರೂ ಅರ್ಥವಾಗಿದ್ದರೆ, ನನಗೆ ದಯವಿಟ್ಟು ಸಂದೇಶ ರವಾನಿಸಿ. ಟ್ವಿಟರ್ ನಲ್ಲಿ ನೀವು ಅದೇನೆಂದು ಹೇಳಬಹುದು. ಆದರೆ, ನಿಮ್ಮ ಸಮಸ್ಯೆಗಳಿಗೆ ಉತ್ತರ ಹಾಗೂ ನೀವು ಶೀಘ್ರದಲ್ಲೇ ಕಂಡುಕೊಳ್ಳಲಿರುವ ಉತ್ತರ ಹದಿನಾರನೆ ಸಂಖ್ಯೆಯಲ್ಲಿದೆ” ಎಂದು ಅವರು ಹೇಳಿದರು. ಎಪ್ರಿಲ್ 16ರ ಅರ್ಥವೇನು ಎಂದು ಜನರೂ ಕೂಡಾ ತಲೆ ಕೆರೆದುಕೊಳ್ಳುತ್ತಿರುವ ಹೊತ್ತಿನಲ್ಲೇ, “ಹದಿನಾರು(Sixteen) ಎಪ್ಸ್ಟೀನ್(Epstein)ನಂತೆ ಕೇಳಿಸುತ್ತಿಲ್ಲವೆ?” ಎಂದು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸುಳಿವೊಂದನ್ನು ನೀಡಿದೆ.
ದಾವಣಗೆರೆ: ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಜಾಕ್ಕೆ ಖಂಡನೆ
ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಘನಿ ತಾಹಿರ್, ದಾವಣಗೆರೆ ಉಪ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಡೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಅವಕಾಶ ನೀಡುವ ಭರವಸೆ ಇದ್ದರೂ, ಕುಟುಂಬ ರಾಜಕಾರಣ, ಜಾತಿ ಮತ್ತು ಹಣದ ಪ್ರಭಾವಕ್ಕೆ ಮಣಿದಿರುವುದು ಜಾತ್ಯತೀತ ಶಕ್ತಿಗಳ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಅವಕಾಶವಾದಿ ರಾಜಕಾರಣದಿಂದ ಅಲ್ಪಸಂಖ್ಯಾತರು ಮತ್ತು ಪ್ರಗತಿಪರ ಶಕ್ತಿಗಳಲ್ಲಿ ಬೇಸರ ಉಂಟಾಗಿದೆ. ಫಲಿತಾಂಶ ಏನೇ ಬಂದರೂ ಕಾಂಗ್ರೆಸ್ ನೈತಿಕವಾಗಿ ಸೋತಿದೆ ಎಂಬ ಭಾವನೆ ಮೂಡಿದೆ. ಪರಿಣಾಮವಾಗಿ ಕೆಲವರು ಕಾಂಗ್ರೆಸ್ಗೆ ಮತ ಹಾಕಿದರೂ, ಕೆಲವರು ವಿರೋಧವಾಗಿ ಮತ ಹಾಕಿದ್ದು ಅಥವಾ ಮತದಾನದಿಂದ ದೂರ ಉಳಿದಿದ್ದು, ಸಮುದಾಯದೊಳಗೆ ಗೊಂದಲ ಸ್ಪಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಂಝೀಂ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕ್ರುದ್ದೀನ್ ಮಾತನಾಡಿ, ದಾವಣಗೆರೆಯ ರಾಜಕೀಯ ಗೊಂದಲಗಳ ಪರಿಹರಿಸುವ ಹೊಣೆಗಾರಿಕೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಚುನಾವಣೆ ನಂತರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೊಂದಲ ಉಂಟು ಮಾಡಿದ ನಾಯಕರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು. ಆತ್ಮಾವಲೋಕನ ಮಾಡುವ ಬದಲು ಪಕ್ಷ ಅಲ್ಪಸಂಖ್ಯಾತ ನಾಯಕರ ನಡುವೆ ಭಿನ್ನತೆ ಉಂಟು ಮಾಡಲು ಪ್ರಯತ್ನಿಸುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಈ ಬೆಳವಣಿಗೆಗಳು ೨೦೨೮ರ ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆಯಾಗಿವೆ. ಅಲ್ಪಸಂಖ್ಯಾತರು, ದಲಿತರು ಮತ್ತು ಜಾತ್ಯತೀತ ಶಕ್ತಿಗಳನ್ನು ನಿರ್ಲಕ್ಷ್ಯ ಮಾಡಿದರೆ ಅವರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ. ಈಗಲಾದರೂ ನಾಯಕತ್ವ ತಪ್ಪು ತಿದ್ದಿಕೊಂಡು ನಂಬಿಕೆ ಗಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಫಕ್ರುದ್ದೀನ್ ಕಿವಿಮಾತು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಟಿಜೆ ನಗರ ಮಸೀದಿಯ ಸಮೀರ್, ವಿನೋಬನಗರ ಮಸೀದಿಯ ಖಾಸಿಂ ಸಾಬ್, ಖುಬ್ರಾ ಮಸೀದಿಯ ಉಲ್ಮಾ ನಿ ರೆಹಮಾನ್, ಎಸ್ಜೆಎಂ ನಗರದ ನೂರುಲ್ಲಾ ಮಸೀದಿಯ ಖಲೀಮುಲ್ಲಾ, ಭಗತ್ ಸಿಂಗ್ ನಗರದ ಮಸೀದಿಯ ಇ.ಎ.ಜಬ್ಬಾರ್, ಪಾದ್ರಿ ರಾಜಶೇಖರ್ ಸೇರಿದಂತೆ ಬಾಷಾ ನಗರ, ಎಸ್.ಎಸ್.ಎಂ. ನಗರ, ಶಿವಾನಗರ, ಬಾರ್ಲೈನ್ ರೋಡ್, ದೇವರಾಜ್ ಅರಸ್ ಲೇ ಔಟ್, ಸಂತೆಬೆನ್ನೂರು, ಹಿಮಾಮನಗರ, ನರಸರಾಜಪೇಟೆ, ಚೌಕಿಪೇಟೆ, ಬಿಎನ್ ಲೇಔಟ್, ಆಝಾದ್ ನಗರ, ಅಹ್ಮದ್ ನಗರ, ಮುಸ್ತಫ ನಗರ, ರಿಂಗ್ ರಸ್ತೆ, ಮಂಡಕ್ಕಿ ಭಟ್ಟಿ ಲೇಔಟ್, ದೇವರಾಜ್ ನಗರ ಸೇರಿದಂತೆ ಹಲವು ಮಸೀದಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಮೃತ್ಯು
ಶಿವಮೊಗ್ಗ: ಹುಟ್ಟುಹಬ್ಬದ ಔತಣಕೂಟವೊಂದರಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಆಹಾರ ಸಿಲುಕಿ ಕೊಂಡ ಪರಿಣಾಮವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ವರದಿಯಾಗಿದೆ. ಸಚಿನ್ (21) ಮೃತ ಯುವಕ ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಬ್ಬರು ಜನ್ಮ ದಿನದ ಹಿನ್ನೆಲೆ ಗ್ರಾಮದ ಹೊರಗಡೆ ಕಟ್ಟಿಸುತ್ತಿದ್ದ ಮನೆಯ ಬಳಿ ಔತಣಕೂಟ ಏರ್ಪಡಿಸಿದ್ದರು. ಇದೇ ವೇಳೆ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದಾರೆ. ಊರಿನವರೆಲ್ಲರೂ ಊಟ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಮನೆ ಕಾಮಗಾರಿ ಮಾಡಲು ಹೋದ ಕೆಲಸಗಾರರು ನೋಡಿದಾಗ ಸಚಿನ್ ಮೃತಪಟ್ಟಿರುವುದು ಕಂಡುಬಂದಿದೆ. ವಿಷಯ ತಿಳಿದ ಸಚಿನ್ ಕುಟುಂಬಸ್ಥರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಕುಂಸಿ ಠಾಣೆಗೆ ವಿಷಯ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಸಚಿನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಯುವಕನ ಹತ್ಯೆ ರಹಸ್ಯ ಭೇದಿಸಿದ ಉತ್ತರ ಕನ್ನಡ ಪೊಲೀಸರು: ಮೂವರು ಆರೋಪಿಗಳ ಬಂಧನ
ಕಾರವಾರ, ಎ.18: ರಸ್ತೆ ಅಪಘಾತದಂತೆ ಬಿಂಬಿಸಿ ಬೆಳಗಾವಿಯ ಯುವಕನನ್ನು ಕಾರು ಸಮೇತ ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಭೀಕರ ಕೊಲೆ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇದೊಂದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಪೂರ್ವ ಯೋಜಿತ ಕೃತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ, ಎಪ್ರಿಲ್ 8ರಂದು ಮುಂಜಾನೆ ಯಲ್ಲಾಪುರದ ತಾಳೆಕುಂಬ್ರಿ ಬಸ್ ನಿಲ್ದಾಣದ ಸಮೀಪದ ರಸ್ತೆಯ ತಗ್ಗಿನಲ್ಲಿ ಕಾರೊಂದು (ಕೆಎ-04/ಎಂಜೆ-8996) ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನೊಳಗೆ ಕೇವಲ ಮಾನವ ಅವಶೇಷ ಮಾತ್ರ ಉಳಿದಿದ್ದರಿಂದ, ಮೇಲ್ನೋಟಕ್ಕೆ ಇದು ಅತಿವೇಗದ ಚಾಲನೆಯಿಂದ ಸಂಭವಿಸಿದ ಅಪಘಾತ ಎಂದು ಭಾವಿಸಲಾಗಿತ್ತು. ಮೃತ ನಿತೀಶ್ ಧಾಪಲೆಯ ತಂದೆ ಜಗನ್ನಾಥ ಧಾಪಳೆ ಅವರು ನೀಡಿದ ಆರಂಭಿಕ ದೂರಿನಂತೆ ಯಲ್ಲಾಪುರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ತನ್ನ ಮಗನ ಸಾವು ಆಕಸ್ಮಿಕವಲ್ಲ. ಇದರಲ್ಲಿ ಯಾರೋ ಸಂಚು ರೂಪಿಸಿದ್ದಾರೆ ಎಂದು ತಂದೆ ಸಂಶಯ ವ್ಯಕ್ತಪಡಿಸಿದ ನಂತರ ತನಿಖೆಯ ದಿಕ್ಕು ಬದಲಾಯಿತು ಎಂದು ವಿವರಿಸಿದರು. ಪ್ರಕರಣದ ಗಂಭೀರತೆಯನ್ನು ಅರಿತು ಯಲ್ಲಾಪುರ ಇನ್ಸ್ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದೊಂದು ವ್ಯವಸ್ಥಿತವಾಗಿ ನಡೆದ ಹತ್ಯೆ ಎಂಬ ಆಘಾತಕಾರಿ ಸತ್ಯ ಬಯಲಾಯಿತು. ಹಳೇ ಹುಬ್ಬಳ್ಳಿಯ ಚಿಕನ್ ವ್ಯಾಪಾರಿಗಳಾದ ಅಬ್ದುಲ್ ರಹೀಮ್ ಬಶೀರ್ ಅಹ್ಮದ್ ಮುಜಾವರ್ (32), ಮೌಲಾಸಾಬ್ ಬಾವಾಹಾನ್ ವಾಡ (36) ಮತ್ತು ದಾದಾಪೀರ್ ಅಲಿಯಾಸ್ ಅಫ್ತಾಬ್ ಮೆಹಬೂಬ್ ಸಾಬ್ ಬಾಳಸಂಗಿ (22) ಎಂಬವರೇ ಈ ಕೃತ್ಯದ ರೂವಾರಿಗಳೆಂದು ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಾರು ಹಾಗೂ ಎರಡು ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಿತೀಶ್ ಥಾಪಲೆಯನ್ನು ಕೊಲೆ ಮಾಡಿದ ಆರೋಪಿಗಳು, ಅದನ್ನು ಅಪಘಾತವೆಂದು ಬಿಂಬಿಸಲು ಮೃತದೇಹದ ಸಮೇತ ಕಾರಿಗೆ ಬೆಂಕಿ ಹಚ್ಚಿರುವುದು ಸಾಬೀತಾಗಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ಹತ್ಯೆ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಇನ್ಸ್ಪ್ಪೆಕ್ಟರ್ ರಮೇಶ್ ಹನಾಪುರ, ಪಿಎಸ್ಸೈಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಇಡೀ ತಂಡದ ಕಾರ್ಯಕ್ಷಮತೆ ಶ್ಲಾಘನೀಯ ಎಂದು ಎಸ್ಪಿ ಹೇಳಿದರು.
ಅಮೆರಿಕ| ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 61%ಕ್ಕೆ ಏರಿಕೆ
ವಾಶಿಂಗ್ಟನ್, ಎ.18: ನೀತಿ ನಿರ್ಬಂಧಗಳು ಮತ್ತು ಕಟ್ಟುನಿಟ್ಟಾದ ಪರಿಶೀಲನೆ ಪ್ರಕ್ರಿಯೆಯ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 61%ಕ್ಕೆ ಏರಿಕೆಯಾಗಿದ್ದು ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಧಿಕ ಮಟ್ಟವಾಗಿದೆ. ಅಮೆರಿಕದಲ್ಲಿ ವಿದೇಶಿ ದಾಖಲಾತಿಗಳಲ್ಲಿ ಭಾರತೀಯರ ಪ್ರಾತಿನಿಧ್ಯ 30% ಇದೆ. ಆದರೆ ಭಾರತೀಯ ವಿದ್ಯಾರ್ಥಿಗಳ ನಿರಾಕರಣೆ ಪ್ರಮಾಣವು 2024ರಲ್ಲಿ 53% ಇದ್ದರೆ, 2025ರಲ್ಲಿ 61%ಕ್ಕೆ ಏರಿಕೆಯಾಗಿದೆ ಎಂದು `ಶೋರ್ಲೈಟ್ಸ್' ವರದಿ ಹೇಳಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ಮಟ್ಟದಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ನೇಪಾಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 2024ರಲ್ಲಿ 59% ಇದ್ದರೆ 2025ರಲ್ಲಿ 81%ಕ್ಕೆ ಹೆಚ್ಚಿದೆ. ಆದರೆ ಇದೇ ಅವಧಿಯಲ್ಲಿ ಯುರೋಪಿಯನ್ ವಿದ್ಯಾರ್ಥಿಗಳ ವೀಸಾ ನಿರಾಕರಣೆ 9% ಆಗಿತ್ತು. ವೀಸಾ ನಿರಾಕರಣೆ ಹೆಚ್ಚಾಗಿರುವುದು ಮಾತ್ರವಲ್ಲದೆ ಅವು ನಿರ್ದಿಷ್ಟ ಪ್ರದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಾದ್ಯಂತ ರಚನಾತ್ಮಕವಾಗಿ ಕೇಂದ್ರೀಕೃತವಾಗಿದೆ. ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ 60%ಕ್ಕೆ ಹೆಚ್ಚಿರುವುದರಿಂದ ನಾವು ವಿದ್ಯಾರ್ಥಿಗಳನ್ನು ನಿರಾಕರಿಸುತ್ತಿಲ್ಲ. ಅಮೆರಿಕದ ವಿಶ್ವವಿದ್ಯಾಲಯಗಳು, ಉದ್ಯೋಗದಾತರು ಮತ್ತು ಆರ್ಥಿಕತೆಗೆ ನಿರ್ಣಾಯಕ ಪ್ರತಿಭೆಯ ಪೈಪ್ಲೈನ್ ಅನ್ನು ಕಡಿತಗೊಳಿಸುತ್ತಿದ್ದೇವೆ' ಎಂದು ವರದಿ ಹೇಳಿದೆ. ವೀಸಾ ನಿರ್ಬಂಧ ವಿಸ್ತರಿಸಿದ ಅಮೆರಿಕ ವಿರೋಧಿ ದೇಶಗಳಿಗೆ ಸಹಾಯ ಮಾಡುವ ಆರೋಪ ಎದುರಿಸುವ ವ್ಯಕ್ತಿಗಳನ್ನು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರನ್ನೂ ಗುರಿಯಾಗಿಸಿ ವೀಸಾ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ. ಈ ಕ್ರಮವು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಮತ್ತು ವಿದೇಶಿ ಪ್ರಭಾವವನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಜನರಿಗೆ ಈ ನೀತಿಯು ಅನ್ವಯಿಸುತ್ತದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧದ ಚಟುವಟಿಕೆಗಳನ್ನು ನಿರ್ದೇಶಿಸುವ, ಬೆಂಬಲಿಸುವ ಅಥವಾ ಆರ್ಥಿಕ ನೆರವು ಒದಗಿಸುವವರನ್ನು ಒಳಗೊಳ್ಳುತ್ತದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.
RCB IPL 2026: ತವರಿನಲ್ಲಿ ಡೆಲ್ಲಿ ವಿರುದ್ಧ ಆರ್ಸಿಬಿ ಸೋಲಿಗೆ ಕಾರಣಗಳು
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. ಹಾಗಾದ್ರೆ, ಆರ್ಸಿಬಿ ಸೋಲಿಗೆ ಪ್ರಮುಖ ಕಾರಣಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್
ಶಾಲಾ ವಿದ್ಯಾರ್ಥಿಗಳಿಗೆ ಮರು ನಾಮಕರಣ ಅಭಿಯಾನ ಹಿಂಪಡೆದ ರಾಜಸ್ಥಾನ ಸರಕಾರ
ಜೈಪುರ, ಎ. 18: ಪೋಷಕರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ‘‘ಹೆಚ್ಚು ಅರ್ಥಪೂರ್ಣ’’ ಹೆಸರುಗಳನ್ನು ನೀಡುವ ಅಭಿಯಾನವನ್ನು ರಾಜಸ್ಥಾನ ಸರಕಾರ ಶುಕ್ರವಾರ ಹಿಂದೆಗೆದುಕೊಂಡಿದೆ. ‘‘ಸಾರ್ಥಕ್ ನಾಮ್ ಅಭಿಯಾನ್’’ ಎಂಬ ಶೀರ್ಷಿಕೆಯ ಈ ಅಭಿಯಾನವನ್ನು ರಾಜ್ಯ ಶಿಕ್ಷಣ ಇಲಾಖೆ ಎಪ್ರಿಲ್ 13ರಂದು ಆರಂಭಿಸಿತ್ತು. ಇದು ಮುಜುಗುರ ಅಥವಾ ಅವಹೇಳನಕಾರಿ ಅರ್ಥಗಳನ್ನು ಹೊಂದಿರುವ ಹೆಸರಿಗೆ ಬದಲಾಗಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಹೆಸರುಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು. ಇಂತಹ ಹೆಸರುಗಳು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಅದು ವಿದ್ಯಾರ್ಥಿಗಳ ಪೋಷಕರೊಂದಿಗೆ ಹಂಚಿಕೊಳ್ಳಲು ಗಂಡು ಹಾಗೂ ಹೆಣ್ಣು ಮಕ್ಕಳ 2,950 ಪರ್ಯಾಯ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಪಟ್ಟಿಯ ಹಲವು ಹೆಸರುಗಳು ಪುನರಾವರ್ತಿತ ಹಾಗೂ ತಪ್ಪಾಗಿದ್ದವು. ಅದರಲ್ಲಿ ಭಿಕ್ಷಾ (ಭಿಕ್ಷೆ), ಭಯಂಕರ (ಭಯಾನಕ), ಕಲಿಯುಗಿ (ಕತ್ತಲೆಯ ಯುಗ), ಲಜ್ಜಾ (ನಾಚಿಕೆ) ಮತ್ತು ಮಕ್ಕಿ (ನೊಣ) ಮುಂತಾದ ಹೆಸರುಗಳಿದ್ದುವು. ಈ ಕ್ರಮ ವಿವಾದಕ್ಕೆ ಕಾರಣವಾಯಿತು. ಇದು ವೈಯುಕ್ತಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಪೋಷಕರು, ಶಿಕ್ಷಕರು ಹಾಗೂ ತಜ್ಞರು ಬಣ್ಣಿಸಿದ್ದರು. ಈ ಅಭಿಯಾನವು ವಿದ್ಯಾರ್ಥಿಗಳನ್ನು ಶಸಕ್ತಗೊಳಿಸುವ ಬದಲು ಅವರನ್ನು ಅವಮಾನಿಸಬಹುದು ಎಂದು ಟೀಕಾಕಾರರು ಗಮನ ಸೆಳೆದಿದ್ದರು. ಈ ಪಟ್ಟಿಯ ಅಸಂಗತತೆ, ಲಿಂಗದ ಕುರಿತು ಗೊಂದಲ, ತಪ್ಪಾದ ವರ್ಗೀಕರಣ ಮತ್ತು ಸಣ್ಣ ಬದಲಾವಣೆಯೊಂದಿಗೆ ಹೆಸರುಗಳ ಪುನರಾವರ್ತನೆಗಳನ್ನು ಗಮನಿಸಿದ ತಜ್ಞರು, ಈ ಆದೇಶ ದಲಿತ, ಬುಡಕಟ್ಟು ಹಾಗೂ ಇತರ ಹಿಂದುಳಿದ ಸಮುದಾಯಗಳ ಮೇಲೆ ‘‘ಸಾಂಸ್ಕೃತಿಕ ಚೌಕಟ್ಟನ್ನು ಹೇರುವ’’ ಪ್ರಯತ್ನ ಎಂದು ಟೀಕಿಸಿದ್ದರು.
`ಇದು ಹತಾಷ ಪ್ರಧಾನಿಯ ಸುಳ್ಳುಗಳಿಂದ ತುಂಬಿದ ರಾಜಕೀಯ ಭಾಷಣ'; ಮಲ್ಲಿಕಾರ್ಜುನ ಖರ್ಗೆ ಕಿಡಿ
Mallikarjun Kharge On Modi Speech- ಪ್ರಧಾನಿ ಮೋದಿಯವರ ಭಾಷಣವನ್ನು ಸುಳ್ಳುಗಳ ಕಂತೆ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮಹಿಳಾ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದು, ಈಗಿನ ಸೀಮಾ ನಿರ್ಣಯ ಮಸೂದೆಯು ವಿಭಜಕ ನೀತಿಯಾಗಿದೆ ಎಂದು ದೂರಿದ್ದಾರೆ. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆಯು ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ದ್ರೋಹವಾಗಿದ್ದು, ಉತ್ತರ ಭಾರತದ ಪ್ರಾಬಲ್ಯ ಸಾಧಿಸುವ ಬಿಜೆಪಿಯ ಗುಪ್ತ ಅಜೆಂಡಾ ಇದರಲ್ಲಿದೆ ಎಂದು ಕೆಪಿಸಿಸಿ ವಕ್ತಾರ ನಟರಾಜ್ ಗೌಡ ಕಿಡಿಕಾರಿದ್ದಾರೆ.
ಕಣ್ಣೂರು ಬಾಂಬ್ ದಾಳಿ ಪ್ರಕರಣ : 10 ಮಂದಿ ಸಿಪಿಎಂ ಕಾರ್ಯಕರ್ತರಿಗೆ 25 ವರ್ಷ ಜೈಲು ಶಿಕ್ಷೆ
ಕಣ್ಣೂರು , ಎ. 18: ತಿಮಿರಿ ಬಾಂಬ್ ದಾಳಿ ಪ್ರಕರಣದಲ್ಲಿ ಕೇರಳದ ಕಣ್ಣೂರಿನ ತಳಿಪರಂಬ ನ್ಯಾಯಾಲಯ ಶನಿವಾರ 10 ಮಂದಿ ಸಿಪಿಎಂ ಕಾರ್ಯಕರ್ತರಿಗೆ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲಕೋಡೆ ಸಮೀಪದ ತಿಮಿರಿಯಲ್ಲಿ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲೆ 2011ರಲ್ಲಿ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಎನ್. ಪ್ರಶಾಂತ್ ಈ ತೀರ್ಪು ನೀಡಿದ್ದಾರೆ. ಎರಡನೇ ದೋಷಿ ‘‘ಉಡುಂಬು ಬಿನು’’ ಎಂದು ಕರೆಯಲಾಗುವ ಟಿ.ವಿ. ಬಿನು ಸೇರಿದಂತೆ ಎಲ್ಲಾ 10 ಮಂದಿ ದೋಷಿಗಳಿಗೆ 25 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಆದರೆ 9 ಮಂದಿ ದೋಷಿಗಳಿಗೆ ಏಕಕಾಲದಲ್ಲಿ ಶಿಕ್ಷೆ ಅನುಭವಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಅವರ ಜೈಲು ಶಿಕ್ಷೆಯ ಅವಧಿ 10 ವರ್ಷಕ್ಕೆ ಇಳಿಕೆಯಾಗಿದೆ. ಪಿ.ವಿ. ಬಾಬುರಾಜ್, ಎಂ.ಕೆ. ಪ್ರದೀಪ್ ಕುಮಾರ್, ಪಿ.ಪಿ. ಸತ್ಯನ್, ಇ.ವಿ. ವಿನೋದ್ ಕುಮಾರ್, ಪಲೇರಿ ವಿಜಯನ್, ಕೆ.ಪಿ. ಸುರೇಶ್, ಟೋಬಿ, ಜನಾರ್ದನ ಹಾಗೂ ಶಿವಪ್ರಕಾಶ್ ಶಿಕ್ಷೆಗೆ ಒಳಗಾದವರಾಗಿದ್ದಾರೆ.
ಉಕ್ರೇನ್| ಬಂದೂಕುಧಾರಿಯಿಂದ ನಾಗರಿಕರ ಮೇಲೆ ಗುಂಡಿನ ದಾಳಿ: ಐವರು ಮೃತ್ಯು
ಕ್ವೀವ್: ಶನಿವಾರ ಉಕ್ರೇನ್ ನ ರಾಜಧಾನಿ ಕ್ವೀವ್ ನಲ್ಲಿ ಬಂಧೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿದ್ದಾನೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ, ಜನರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ ಬಂಧೂಕುಧಾರಿಯನ್ನು ಸೂಪರ್ ಮಾರ್ಕೆಟ್ ಒಂದರ ಒಳಗೆ ಹತ್ಯೆಗೈಯ್ಯಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ. ಬಂಧೂಕುಧಾರಿಯನ್ನು ಬಂಧಿಸುವ ಪ್ರಯತ್ನದಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವ ಐಹೋರ್ ಕ್ಲಿಮೆಂಕೊ ಕೂಡಾ ದೃಢಪಡಿಸಿದ್ದಾರೆ. ಈ ಚಕಮಕಿಯ ವೇಳೆ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಶಂಕಿತ ಆರೋಪಿಯು ಪೊಲೀಸರತ್ತ ಗುಂಡು ಹಾರಿಸಿದ ಎಂದು ಅವರು ತಿಳಿಸಿದ್ದಾರೆ. ಕ್ವೀವ್ ನ ಹೋಲೊಸಿಲ್ವ್ಸ್ಕಿ ಜಿಲ್ಲೆಯಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಘಟನೆ ಬೆನ್ನಿಗೆ ಮಾಹಿತಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದಾಳಿಕೋರನನ್ನು ಹತ್ಯೆಗೈಯ್ಯಲಾಗಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಈ ಚಕಮಕಿಯ ವೇಳೆ ಐವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಮೃತರ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿರುವ ಝೆಲೆನ್ಸ್ಕಿ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. “ಕ್ವೀವ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರನನ್ನು ಹತ್ಯೆಗೈಯ್ಯಲಾಗಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವ ಐಹೋರ್ ಕ್ಲಿಮೆಂಕೊ ತಿಳಿಸಿದ್ದಾರೆ. ಎಲ್ಲಾ ಸನ್ನಿವೇಶಗಳನ್ನೂ ಪರಿಶೀಲಿಸಲಾಗುತ್ತಿದೆ. ಸದ್ಯ ಈ ಗುಂಡಿನ ಚಕಮಕಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ. ಮೃತರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಉಕ್ರೇನ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ವಿಜಯನಗರ | ಹಿರಿಯ ಪತ್ರಕರ್ತ ಅಮನ್ ಕೊಡಗಲಿ ನಿಧನ
ವಿಜಯನಗರ /(ಇಳಕಲ್/ಬಾಗಲಕೋಟೆ): ಹಿರಿಯ ಪತ್ರಕರ್ತ ಅಮನ್ ಕೊಡಗಲಿ (48) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎ.17ರಂದು ಬೆಳಗಿನ ಜಾವ ಸುಮಾರು 8 ಗಂಟೆಗೆ ಇಳಕಲ್ನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಮನ್ ಕೊಡಗಲಿ ಅವರು ಪತ್ರಿಕಾ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಧೈರ್ಯಶಾಲಿ ವರದಿಗಾರಿಕೆಯಿಂದ ಗುರುತಿಸಿಕೊಂಡಿದ್ದರು. ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಸಂಕಷ್ಟದಲ್ಲಿದ್ದವರಿಗೆ ನೆರವಾದ ವ್ಯಕ್ತಿಯಾಗಿ ಸಹೋದ್ಯೋಗಿಗಳು ಅವರನ್ನು ಸ್ಮರಿಸಿದ್ದಾರೆ. ಅವರ ಅಗಲಿಕೆಯಿಂದ ಪತ್ರಿಕಾ ವಲಯಕ್ಕೆ ಅಪಾರ ನಷ್ಟ ಉಂಟಾಗಿದ್ದು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ದುಃಖ ವ್ಯಕ್ತಪಡಿಸಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ತಂತ್ರಜ್ಞಾನದಿಂದ ನರ್ಸ್ಗಳ ಮಾನವೀಯ ಸ್ಪರ್ಶ ಬದಲಿಸಲಾಗದು: ಡಾ. ಆಶಾ ಶೆಟ್ಟಿ
ಫಾದರ್ ಮುಲ್ಲರ್ ನರ್ಸಿಂಗ್- ಸ್ಪೀಚ್ ಮತ್ತು ಹಿಯರಿಂಗ್ ಕಾಲೇಜು ಪದವಿ ಪ್ರದಾನ ಸಮಾರಂಭ
Harapanahalli | ಉಚ್ಚಂಗಿದುರ್ಗ ಅರಣ್ಯದಲ್ಲಿ 54 ಎಕರೆ ಅತಿಕ್ರಮಣ ತೆರವು
ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಹಾಗೂ ಕಂಚಿಕೆರೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಅತಿಕ್ರಮಣವಾಗಿ ಸಾಗುವಳಿ ಮಾಡುತ್ತಿದ್ದ ಒಟ್ಟು 54 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ತೆರವುಗೊಳಿಸಿ ಮರಳಿ ವಶಕ್ಕೆ ಪಡೆದುಕೊಂಡಿತು. ಉಚ್ಚಂಗಿದುರ್ಗ ಸರ್ವೇ ನಂ.1(A) ನಲ್ಲಿ ಕಳೆದ ಎರಡು ದಶಕಗಳಿಂದ 12 ಜನರು ಸುಮಾರು 35 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು. ಇದೇ ರೀತಿ ಕಂಚಿಕೆರೆ ಕಾಯ್ದಿಟ್ಟ ಅರಣ್ಯದಲ್ಲಿ ಇತರೆ ರೈತರು ಸುಮಾರು 19 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಅರಣ್ಯ ಅತಿಕ್ರಮಣ ತೆರವುಗೊಳಿಸಲು ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ರೈತರೊಂದಿಗೆ ಸಂಘರ್ಷವೂ ಉಂಟಾಗಿತ್ತು. 2013ರಲ್ಲಿ ರೈತರು ಇಬ್ಬರು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣವೂ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ನ್ಯಾಯಾಲಯವು ಅತಿಕ್ರಮಣ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಪೊಲೀಸ್ ಸಹಕಾರದೊಂದಿಗೆ ಅತಿಕ್ರಮಣ ತೆರವುಗೊಳಿಸಲಾಗಿದೆ. ಮುಂದಿನ ಮಳೆಗಾಲದಲ್ಲಿ ಸಸಿ ನೆಟ್ಟು ಅರಣ್ಯವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಜು ಗೊಂದೇಕರ್ ತಿಳಿಸಿದ್ದಾರೆ. ಬಿಸಿಲಿನ ನಡುವೆ ಕಾರ್ಯಾಚರಣೆ : ತಾಲೂಕಿನಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ನಡುವೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ 50ಕ್ಕೂ ಹೆಚ್ಚು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಬಿಸಿಲಿನ ತೀವ್ರತೆಗೆ ಬಳಲಿದ ಸಿಬ್ಬಂದಿ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂತು. ಕಾರ್ಯಾಚರಣೆಯಲ್ಲಿ ಸಿಪಿಐ ಮಹಾಂತೇಶ್ ಸಜ್ಜನ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Ballari | ಪ್ಯಾರಚೂಟ್ ತರಬೇತಿಯಲ್ಲಿ ಅಪಘಾತ: 50 ಅಡಿ ಎತ್ತರದಿಂದ ಬಿದ್ದು ಯೋಧನಿಗೆ ಗಂಭೀರ ಗಾಯ
ಬಳ್ಳಾರಿ : ಪ್ಯಾರಚೂಟ್ ತರಬೇತಿ ವೇಳೆ ಆಯತಪ್ಪಿ ಸುಮಾರು 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ನಡೆದಿದೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಸುಮಾರು 417 ಸೈನಿಕರ ತಂಡ ಪ್ಯಾರಚೂಟ್ ಜಿಗಿತದ ತರಬೇತಿಯಲ್ಲಿ ನಿರತರಾಗಿದ್ದ ವೇಳೆ, ಚಿನ್ನರಾಜ್ ಅವರು ಜಿಗಿಯುವಾಗ ತಾಂತ್ರಿಕ ತೊಂದರೆ ಅಥವಾ ನಿಯಂತ್ರಣ ತಪ್ಪಿದ ಪರಿಣಾಮ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಅಪಘಾತದ ಪರಿಣಾಮವಾಗಿ ಅವರ ಕಾಲಿನ ಮೂಳೆ ಮುರಿದು, ತೀವ್ರ ರಕ್ತಸ್ರಾವ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಯೋಧನನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಗಾಯ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನನ್ನು ಏರ್ಲಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸ್ಥಳೀಯ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಭಾರತಕ್ಕೆ ಬರುತ್ತಿದ್ದ 14 ಹಡಗುಗಳನ್ನು ಹಾರ್ಮುಝ್ನಲ್ಲಿ ತಡೆಗಟ್ಟಿದ ಇರಾನ್: ವರದಿ
ಹೊಸದಿಲ್ಲಿ,ಎ.18: ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸಿದ ಭಾರತಕ್ಕೆ ಬರುತ್ತಿದ್ದ 14 ಹಡಗುಗಳ ಸಮೂಹವನ್ನು ಇರಾನ್ನ ಐಆರ್ಜಿಸಿ ಯೋಧರು ತಡೆದು ನಿಲ್ಲಿಸಿರುವುದಾಗಿ ವರದಿಯಾಗಿದೆ. ಈ ಪೈಕಿ ಒಂದು ಜಲಸಂಧಿಯನ್ನು ದಾಟುವಲ್ಲಿ ಸಫಲವಾಗಿದೆಯೆಂದು ತಿಳಿದುಬಂದಿದೆ. ಈ ಹಡಗುಗಳ ಗುಂಪಿನಲ್ಲಿ ಗುಂಡಿನ ದಾಳಿಗೊಳಗಾದ ಎರಡು ನೌಕೆಗಳೂ ಇದ್ದವೆಂದು ತಿಳಿದುಬಂದಿದೆ. ಆದಾಗ್ಯೂ ಎಚ್ಪಿಸಿಎಲ್ಗಾಗಿ ಕಚ್ಚಾ ತೈಲವನ್ನು ಒಯ್ಯುತ್ತಿದ್ದ ಇನ್ನೊಂದು ತೈಲ ಹಡಗು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಭಾರತದೆಡೆಗೆ ಸಾಗುತ್ತಿದೆಯೆಂದು ಮೂಲಗಳು ತಿಳಿಸಿವೆ. ಗುಂಡೆಸೆತಕ್ಕೊಳಗಾದ ಎರಡು ಹಡಗುಗಳು ಸೇರಿದಂತೆ ಭಾರತಕ್ಕೆ ಬರುತ್ತಿದ್ದ ಒಟ್ಟು 13 ಹಡಗುಗಳು ಪರ್ಷಿಯನ್ ಕೊಲ್ಲಿಯ ವಿವಿಧ ಪ್ರದೇಶಗಳಿಗೆ ವಾಪಾಸ್ಸಾಗಿದೆಯೆಂದು ಬಲ್ಲ ಮೂಲಗಳು ತಿಳಿಸಿವೆ.
Ballari | ಎಮ್ಮಿಗನೂರಿನಲ್ಲಿ ಉಚಿತ ಕರಾಟೆ ಸಮವಸ್ತ್ರ ವಿತರಣೆ
ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಡಾ. ಅಬ್ದುಲ್ ಕಲಾಂ ಎಸ್ಪಿ ಚಾರಿಟಬಲ್ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ಕರಾಟೆ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫೌಂಡೇಶನ್ ಕಾರ್ಯದರ್ಶಿ ಎಚ್. ಪೀರಾವಲಿ ಮಾತನಾಡಿ, ಅನಾಥ ಹೆಣ್ಣುಮಕ್ಕಳು ಹಾಗೂ ವಿಶೇಷಚೇತನ ಕುಟುಂಬಗಳ ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುವುದರ ಜೊತೆಗೆ ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು. ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸ್ವಯಂರಕ್ಷಣೆ ಕೌಶಲ್ಯ ಬೆಳೆಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. ರೈತ ಮುಖಂಡ ಜಿ. ನಾಗರೇಡ್ಡಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಯುವಕ-ಯುವತಿಯರು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಅತ್ಯಾವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ವಡ್ಡರ ವೀರೇಶ್, ರಾಜಪ್ಪ ಜಡೇಶ್ವರಡ್ಡಿ, ನಾರಾಯಣ, ಬಿ. ರಾಜ, ಎಸ್. ರಾಮಪ್ಪ, ಸಾಧಿಕ್ ಅಲಿ ಸಾಬ್, ಪರಶುರಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸರಕಾರಿ ಆರೋಗ್ಯ ವ್ಯವಸ್ಥೆಯ ಖಾಸಗೀಕರಣ ಖಂಡಿಸಿ ಪ್ರತಿಭಟನೆ
ಮಂಗಳೂರು: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸ್ ವಾದಿ ಲೆನಿನ್ ವಾದಿ) ಲಿಬರೇಶನ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರಕಾರದ ನಿರ್ಧಾರ ಜನರ ಹಕ್ಕುಗಳ ಮೇಲೆ ದಾಳಿ ಯಾಗಿದೆ ಎಂದು ಆರೋಪಿಸಿದರು. ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೊಡಗು ಮಾತನಾಡಿ ಸರಕಾರಿ ಆಸ್ಪತ್ರೆಗಳು ಜನರ ಹಕ್ಕು ಅದು ಸಂವಿಧಾನಿಕ ಹಕ್ಕು. ಆದರೆ, ಆ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರಕಾದ ವ್ಯವಸ್ಥಿತ ವಾಗಿ ಮಾಡುತ್ತಿದೆ ಎಂದು ಆರೋಪಿಸಿದರು. ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರಾದ ಅಡ್ವಕೇಟ್ ತುಳಸೀದಾಸ್.ಆರ್ ಮಾತನಾಡಿ ಸರಕಾರಿ ಆಸ್ಪತ್ರೆಗಳಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕಾದ ಸರಕಾರ ಖಾಸಗಿಯವರ ಲಾಬಿಗೆ ಮಣಿದಿದ್ದು ಇದನ್ನು ವಿರೋಧಿಸಬೇಕಾದ ವಿರೋಧ ಪಕ್ಷಗಳು ಕೂಡಾ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಕಾರ್ಮಿಕ ಮುಖಂಡರಾದ ಮಹಮ್ಮದ್ ಅನ್ಸಾರ್ ಬಜಾಲ್ ಮಾತನಾಡಿ , ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡರಾದ ಸುಧಾ ರಾವ್ ಬೆಳ್ತಂಗಡಿ, ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೆ.ಇ ಪ್ರಾಸ್ತವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಮುಖಂಡರುಗಳಾದ ಸಂಜೀವ ಬೆಳ್ತಂಗಡಿ, ವಿದ್ಯಾರ್ಥಿ ಮುಖಂಡರಾದ ಪ್ರಜ್ವಲ್ , ರವಿ ಕೊಡಗು, ವಿಲ್ಲಿ ವಿಲ್ಸನ್, ಸರಸ್ವತಿ ಕಡೇಶಿವಾಲಯ, ಜಿಲಾನಿ ಮಂಗಳೂರು, ದೀಕ್ಷಾ ಬಜಾಲ್,ಸುಹೈಲ್, ಶೇಖರ ಪುತ್ತೂರು, ಸುಧಾ.ಜಿ.ರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ ಅಚ್ಯುತ ಕಟ್ಟೆ, ಬದ್ರುದ್ದೀನ್, ಅಝೀಂ, ಇಬ್ರಾಹಿಂ, ಹರೀಶ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಂಗಳೂರು: ಉತ್ತರ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ನಡೆದ ಅಮಾನುಷ ದಾಳಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಉತ್ತರಪ್ರದೇಶದಲ್ಲಿ 500ಕ್ಕೂ ಮಿಕ್ಕಿದ ಅಮಾಯಕ ಕಾರ್ಮಿಕರನ್ನು ಜೈಲಿಗಟ್ಟಿದ ಸರಕಾರದ ಅಮಾನುಷ ದಾಳಿಯನ್ನು ಖಂಡಿಸಿ ಮಂಗಳೂರು ನಗರದಲ್ಲಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ಕಾರರು,ಕಾರ್ಮಿಕರ ಹೋರಾಟಕ್ಕೆ ದ.ಕ.ಜಿಲ್ಲೆಯ ಕಾರ್ಮಿಕ ವರ್ಗದ ಪರವಾಗಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಬಿ ಎಂ ಭಟ್ ಅವರು ಅಚ್ಛೇದಿನ್ ತರುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ 12 ವರ್ಷಗಳಲ್ಲಿ ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಮೇಲೆ ತೀವ್ರವಾದ ಪ್ರಹಾರವನ್ನು ನಡೆಸುತ್ತಾ ಬಂದಿದೆ ಎಂದರು. ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿದ ಕೇಂದ್ರ ಸರಕಾರ ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ನೀಡದೆ ಸತಾಯಿಸುತ್ತಿದೆ ಎಂದು ಹೇಳಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಖಜಾಂಚಿಗಳಾದ ಯೋಗೀಶ್ ಜಪ್ಪಿನಮೊಗರು ಅವರು ಉತ್ತರಭಾರತದಲ್ಲಿ ಕನಿಷ್ಠ ಕೂಲಿಗಾಗಿ ಭುಗಿಲೆದ್ದ ಕಾರ್ಮಿಕರ ಆಕ್ರೋಶ ದೇಶದ ಕಾರ್ಮಿಕ ಚಳುವಳಿಗೆ ಸ್ಪೂರ್ತಿ ನೀಡಿದ್ದು, ದುಡಿಯುವ ವರ್ಗದ ಚಳುವಳಿ ಮಾತ್ರವೇ ದೇಶದ ಅಭಿವೃದ್ಧಿಗೆ ಪೂರಕವಾಗಿ ದೇಶವನ್ನು ಮುನ್ನಡೆಸಬಲ್ಲದು ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, ರವಿಚಂದ್ರ ಕೊಂಚಾಡಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ನೋಣಯ್ಯ ಗೌಡ, ಜಯಂತಿ ಶೆಟ್ಟಿ, ಜಯಲಕ್ಷ್ಮೀ , ಅಶೋಕ್ ಶ್ರೀಯಾನ್,ಅಶೋಕ್ ಸಾಲ್ಯಾನ್,ದಿನೇಶ್ ಶೆಟ್ಟಿ, ಲೋಕೇಶ್ ಎಂ,ಮೋಹನ್ ಜಲ್ಲಿಗುಡ್ಡೆ, ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪಕೊಂಚಾಡಿ,ರೈತ ನಾಯಕ ಸದಾಶಿವದಾಸ್,ದಲಿತ ಸಂಘಟನೆಯ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಯುವಜನ ನಾಯಕರಾದ ನವೀನ್ ಕೊಂಚಾಡಿ,ಮಿಥುನ್,ಮಹಿಳಾ ಮುಖಂಡ ಅಸುಂತ ಡಿ ಸೋಜ ಮುಂತಾದವರು ಉಪಸ್ಥಿತರಿದ್ದರು.
Ballari | ಕಂಪ್ಲಿಯಲ್ಲಿ ಜೆಸ್ಕಾಂ ಉಪವಿಭಾಗ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ
ಬಳ್ಳಾರಿ / ಕಂಪ್ಲಿ: ಸ್ಥಳೀಯ ಜೆಸ್ಕಾಂ ಕಚೇರಿ ಆವರಣದಲ್ಲಿ 2025-26ನೇ ಸಾಲಿನ ಯೋಜನೆಯಡಿ ಸುಮಾರು 150 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಜೆಸ್ಕಾಂ ಕಾರ್ಯ ಮತ್ತು ಪಾಲನ ಉಪವಿಭಾಗದ ನೂತನ ಕಚೇರಿ ಕಟ್ಟಡಕ್ಕೆ ಶಾಸಕ ಜೆ.ಎನ್.ಗಣೇಶ್ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ಉಪವಿಭಾಗ ಕಚೇರಿ ಸ್ಥಾಪನೆಯಿಂದ ಸಾರ್ವಜನಿಕರಿಗೆ ಜೆಸ್ಕಾಂ ಸೇವೆಗಳು ತ್ವರಿತವಾಗಿ ಲಭ್ಯವಾಗಲಿವೆ. ವಿದ್ಯುತ್ ಪೂರೈಕೆ, ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ. ಕಂಪ್ಲಿ ತಾಲೂಕು ಕೇಂದ್ರದಲ್ಲಿ ಇಂತಹ ಕಚೇರಿ ಅತ್ಯಾವಶ್ಯಕವಾಗಿದ್ದು, ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಈ ಕಚೇರಿ ಮೂಲಕ ಪಟ್ಟಣ ಹಾಗೂ ತಾಲೂಕಿನ ಗ್ರಾಹಕರು ಮತ್ತು ರೈತರಿಗೆ ವಿದ್ಯುತ್ ಸಂಬಂಧಿತ ಸೇವೆಗಳು ಸ್ಥಳೀಯವಾಗಿ ದೊರೆಯಲಿದ್ದು, ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಮೇಲ್ವಿಚಾರಣೆಯೂ ಸುಲಭವಾಗಲಿದೆ ಎಂದು ತಿಳಿಸಿದರು. ಬಳ್ಳಾರಿ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಹುಸೇನ್ ಸಾಬ್ ಮಾತನಾಡಿ, ಇದುವರೆಗೆ ಹಳೆಯ ಕಟ್ಟಡದಲ್ಲೇ ಉಪವಿಭಾಗ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸರ್ಕಾರದ ಅನುದಾನದೊಂದಿಗೆ ಕಂಪ್ಲಿ ಹಾಗೂ ಕುರುಗೋಡಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಸಿಂಧನೂರಿನಲ್ಲಿ ಅಳವಡಿಸಿರುವ ಸ್ಪನ್ ಪೋಲ್ ಮಾದರಿಯನ್ನು ಕಂಪ್ಲಿ ಕ್ಷೇತ್ರದಲ್ಲೂ ಜಾರಿಗೆ ತರಲು ಅಂದಾಜು 10 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ವಿದ್ಯುತ್ ಕಂಬಗಳು ಮತ್ತು ತಂತಿಗಳಿಂದ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಎಬಿ ಕೇಬಲ್ ಮತ್ತು ಕವರ್ಡ್ ಕಂಡಕ್ಟರ್ಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸುರಕ್ಷತೆ ಹೆಚ್ಚಿಸಲು ಯೋಜಿಸಲಾಗಿದೆ. ಜೆಸ್ಕಾಂ ನೌಕರರ ಶಿಥಿಲಗೊಂಡಿರುವ ವಸತಿ ಗೃಹಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಕಂಪ್ಲಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಬಳ್ಳಾರಿಯ ಕಾರ್ಯನಿರ್ವಾಹಕ ಅಭಿಯಂತರ ಮೈನುದ್ಧೀನ್, ಸಹಾಯಕ ಕಾರ್ಯನಿರ್ವಾಹಕರಾರ ಶ್ರೀನಿವಾಸ ಪ್ರಸಾದ್, ಶೇಖ್ ಜಾಫರ್ ಮುಹಮ್ಮದ್, ಎಇ ವಿನೋದ್ ಕುಮಾರ, ಭೀಮೇಶ, ಜೆಇ ಟಿ.ಮಹಾಂತೇಶ, ಮುಹಮ್ಮದ್ ಶಮಿವುಲ್ಲಾ, ಮುಖಂಡರಾದ ಕೆ.ಸುಧಾಕರ, ಜಾಫರ್, ಅಕ್ಕಿ ಜಿಲಾನ್, ರಾಕೇಶ, ಹೊನ್ನಳ್ಳಿ ಶ್ರೀದೇವಿ, ಜೆಸ್ಕಾಂ ಲೈನ್ ಮ್ಯಾನ್ ಗಳಾದ ಬಿ.ಶ್ರೀನಿವಾಸ, ವೆಂಕಟಚಲಂ, ಸಿ.ರಾಜ, ಎನ್.ಉಮೇಶ, ವಿದ್ಯುತ್ ಗುತ್ತಿಗೆದಾರ ಸಿ.ಡಿ.ರಾಜಶೇಖರ ಸೇರಿದಂತೆ ಅನೇಕರಿದ್ದರು.
Ballari | ಕಾರ್ಮಿಕರ ಮೇಲಿನ ದಮನ ಖಂಡಿಸಿ ದೋಣಿಮಲೈನಲ್ಲಿ ಎಐಯುಟಿಯುಸಿ ವತಿಯಿಂದ ಪ್ರತಿಭಟನೆ
ಸಂಡೂರು/ಬಳ್ಳಾರಿ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ವತಿಯಿಂದ ತಾಲೂಕಿನ ದೋಣಿಮಲೈನಲ್ಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR)ದಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದಮನ ಹಾಗೂ ದೌರ್ಜನ್ಯವನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಲಾಯಿತು. ಏಪ್ರಿಲ್ 16ರಂದು ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಸಂಘಟಿಸಲಾಯಿತು. ನೋಯ್ಡಾ ಹಾಗೂ ಇತರ ಕೈಗಾರಿಕಾ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ. ದೇವದಾಸ್ ಅವರು, ಏಪ್ರಿಲ್ 9ರಂದು ನೋಯ್ಡಾ ಫೇಸ್-2 ಪ್ರದೇಶದಲ್ಲಿ ಸುಮಾರು 50,000ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದು, ಈ ಚಳವಳಿ ಹರಿಯಾಣ, ರಾಜಸ್ಥಾನ, ಗುಜರಾತ್, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ವ್ಯಾಪಿಸಿದೆ ಎಂದು ಹೇಳಿದರು. ಕಾರ್ಮಿಕರು ವೇತನ ಹೆಚ್ಚಳ, ದುಬಾರಿ ಜೀವನಕ್ಕೆ ಹೊಂದುವ ಭತ್ಯೆ, ಕೆಲಸದ ಗಂಟೆಗಳ ನಿಯಂತ್ರಣ, ಕಾನೂನುಬದ್ಧ ಓವರ್ಟೈಮ್, ವಾರದ ವಿಶ್ರಾಂತಿ, ಇಎಸ್ಐ, ಪಿಎಫ್, ಬೋನಸ್, ಉದ್ಯೋಗ ಭದ್ರತೆ, ಸುರಕ್ಷತಾ ಸೌಲಭ್ಯಗಳು ಹಾಗೂ ಗುತ್ತಿಗೆ ಕಾರ್ಮಿಕರ ಖಾಯಂ ನಿಯೋಜನೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಬದಲು ರಾಜ್ಯ ಸರ್ಕಾರಗಳು ದಮನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು. ಕಾರ್ಮಿಕರನ್ನು ಹಲ್ಲೆ ಮಾಡುವುದು, ಬಂಧಿಸುವುದು ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿಸುವುದು ಸರ್ಕಾರದ ಕ್ರೂರತೆಯ ಉದಾಹರಣೆಗಳಾಗಿವೆ ಎಂದು ಆರೋಪಿಸಿದರು. ಈ ವೇಳೆ ಎಐಯುಟಿಯುಸಿ ಮುಖಂಡರಾದ ಸುರೇಶ್, ಕಿರಣ್ ಕುಮಾರ್, ಅಂಬರೀಷ್, ಬಾಬು, ಕೃಷ್ಣಪ್ಪ, ಬಸವರಾಜ್, ತಿಮ್ಮಣ್ಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸಿ, ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಮುಖಂಡರು ಕರೆ ನೀಡಿದರು.
ಗುರುಪುರ: ಮರ್ಹೂಮ ಸಾರಮ್ಮ ಇಬ್ರಾಹಿಂ ಗೋಳಿಪಡ್ಪು ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ
ಗುರುಪುರ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಮರ್ಹೂಮ ಸಾರಮ್ಮ ಇಬ್ರಾಹಿಂ ಗೋಳಿಪಡ್ಪು ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಅಡ್ಡೂರು ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಹಾಜಿ ಇಬ್ರಾಹಿಂ ಗೋಳಿಪಡ್ಪು ಅವರು ಎಸ್ಡಿಪಿಐ ಗುರುಪುರ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ ಎಸ್.ಬಿ. ಅಬ್ದುಲ್ ಸತ್ತಾರ್ ರವರಿಗೆ ಆಂಬ್ಯುಲೆನ್ಸ್ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ವಹಿಸಿದ್ದರು. ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷ ಅಶ್ರಫ್ ಅಡ್ಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮುಖ್ಯ ಭಾಷಣಗೈದರು. 2025-26ನೇ ಶೇಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವೃಷಾ, ಹಾಜಿರಾ, ಹಲೀಮ, ಅಫ್ರಾ, ನಿಝಾ, ಫಾತಿಮಾ ಹಾಗೂ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫರ ನಾಸೀರ್, ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು, ಹಾಜಿ ಇಬ್ರಾಹಿಂ ಗೋಳಿಪಡ್ಪು, ಎ.ಕೆ.ಮುಸ್ತಾಪ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ಅಧ್ಯಕ್ಷ ಹಾಜಿ ಎಮ್.ಎಚ್. ಮುಹಿಯುದ್ದೀನ್, ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬಾವ ಅಂಗಡಿ ಮನೆ, ಕಾಂಜಿಲಕೋಡಿ ಜುಮ್ಮಾ ಮಸೀದಿ ಅಧ್ಯಕ್ಷ ಝಕರಿಯ ಕೋಡಿಬೆಟ್ಟು, ಅಡ್ಡೂರು ಆಯಿಶಾ ಮಸೀದಿ ಅಧ್ಯಕ್ಷ ಶೌಕತ್ ಅಲಿ, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್ ಗರಡಿ, ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ಶಾಹೀಕ್ ಪಾಂಡೇಲ್, ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ, ಉಪಾಧ್ಯಕ್ಷ ಎ.ಕೆ.ರಿಯಾಝ್, ಗುರುಪುರು ಬ್ಲಾಕ್ ಸಮಿತಿ ಅಧ್ಯಕ್ಷ ಶರೀಫ್ ಅಡ್ಡೂರು, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ನಂದ್ಯ, ಬ್ಯಾರಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಇ.ಕೆ ಸಿದ್ದೀಕ್, ಎಸ್ಡಿಪಿಐ ಗುರುಪುರು ಗ್ರಾ.ಪಂ. ಸಮಿತಿ ಉಪಾಧ್ಯಕ್ಷ ಎ.ಕೆ. ಮುಸ್ತಫ, ಗುರುಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಫಾರ ನಾಸೀರ್, ಅಡ್ಡೂರು ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಶೈನಾಝ್ ಪಿ.ಸಿ. ಅಡ್ಡೂರು ಫೈವ್ ಸ್ಟಾರ್ ಅಧ್ಯಕ್ಷ ಇಲ್ಯಾಸ್ ಹೊಳೆ ಬದಿ, ಕಳಸಗುರಿ ರೋಝ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್, ಎಫ್ ಸಿ ಕೆ ಕೆಳಗಿನ ಕೆರೆ ಅಧ್ಯಕ್ಷ ಆರಿಸ್ ಕೆಳಗಿನಕೆರೆ, ಹೆಲ್ಪಿಂಗ್ ಹ್ಯಾಂಡ್ ಮಂಜೊಟ್ಟಿ ಅಧ್ಯಕ್ಷ ಮನ್ಸೂರ್ ಮಣ್ಣಗುಡ್ಡೆ , ಕಾಂಜಿಲಕೋಡಿ 120ಗೈಸ್ ಅಧ್ಯಕ್ಷ ಕಮಲ್ ಕೋಡಿಬೆಟ್ಟು, ಕಳಸಗುರಿ ಗುರಿ ನವಜ್ಯೋತಿ ಫ್ರೆಂಡ್ಸ್ ಅಧ್ಯಕ್ಷ ಭೋಜ ಮೂಲ್ಯ, ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್, ಮನ್ಸೂರ್, ಶಾಹಿಕ್ ರಿಯಾಝ್, ಬುಶ್ರಾ, ದಿಲ್ಶಾದ್ ಅಝ್ಮೀನ, ರೆಹಾನ ಮೊದಲಾದವರು ಉಪಸ್ಥಿತರಿದ್ದರು. ಅಸ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎ.ಕೆ. ರಿಯಾಝ್ ವಂದಿಸಿದರು.
Ballari | ಹಳೇ ವಡ್ಡಿನಕಟ್ಟೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ
ಸಂಡೂರು / ಬಳ್ಳಾರಿ : ತಾಲೂಕಿನ ಚೋರನೂರು ಹೋಬಳಿಯ ಹಳೇ ವಡ್ಡಿನಕಟ್ಟೆ ಗ್ರಾಮದಲ್ಲಿ ನೂತನ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಗೋಪುರದ ಕಳಸ ಉದ್ಘಾಟನಾ ಸಮಾರಂಭ ಭಕ್ತಿ ಭಾವಪೂರ್ಣ ವಾತಾವರಣದಲ್ಲಿ ಭವ್ಯವಾಗಿ ನೆರವೇರಿತು. ವಿವಿಧ ಹೋಮಗಳು, ಪೂಜಾ ವಿಧಿವಿಧಾನಗಳು ಹಾಗೂ 101 ಕುಂಭಗಳ ಮೆರವಣಿಗೆ ವಿವಿಧ ವಾದ್ಯಗಳ ನಾದದೊಂದಿಗೆ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮಕ್ಕೆ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿಯ ಡಾ.ಪ್ರಸನ್ನಾನಂದ ಮಹಾಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ದೇವಸ್ಥಾನ ಉದ್ಘಾಟಿಸಿದರು. ಕೊಟ್ಟೂರು ಕಟ್ಟೆಮನೆ ಹಿರೇಮಠದ ಪರಮಪೂಜ್ಯ ಶ್ರೀ ಯೋಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಹ ಭಾಗವಹಿಸಿ ಆಶೀರ್ವಚನ ನೀಡಿದರು. ಉದ್ಘಾಟನೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಯೋಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, “ಗಣಿಧಣಿಗಳು ಕೇವಲ ಗಣಿಗಾರಿಕೆಗೆ ಸೀಮಿತರಾಗಿದ್ದರೆ, ಜಗತ್ತಿಗೆ ಅನ್ನ ನೀಡುವ ರೈತರು ನಿಜವಾದ ಧಣಿಗಳು” ಎಂದು ರೈತರ ಮಹತ್ವವನ್ನು ಪ್ರತಿಪಾದಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿರುವುದನ್ನು ಸ್ಮರಿಸಿದ ಅವರು, ಗ್ರಾಮೀಣ ಸಮಾಜದ ಸೌಹಾರ್ದತೆಯನ್ನು ಉಲ್ಲೇಖಿಸಿ, “ಹಳ್ಳಿಗಳಲ್ಲಿ ವಿವಿಧ ಜಾತಿಯ ಜನರು ಒಗ್ಗಟ್ಟಿನಿಂದ ಬದುಕುತ್ತಿರುವುದು ವಿಶೇಷ. ನಗರ ಜೀವನದ ಪ್ರಭಾವಕ್ಕೆ ಒಳಗಾಗಬಾರದು” ಎಂದು ಸಲಹೆ ನೀಡಿದರು. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ರಾಜನಹಳ್ಳಿ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಶಾಂತಿ ಮಂತ್ರ ಪಠಿಸಿ, ಎಲ್ಲರೂ ಜಪಿಸುವಂತೆ ಹೇಳಿದರು. ರತ್ನಾಕರನು ಮಹರ್ಷಿ ವಾಲ್ಮೀಕಿಯಾಗಿ ರೂಪಾಂತರಗೊಂಡು ರಾಮಾಯಣ ರಚಿಸಿದ ಉದಾಹರಣೆಯನ್ನು ನೀಡುತ್ತಾ, ಜೀವನದಲ್ಲಿ ಪರಿವರ್ತನೆ ಸಾಧ್ಯವೆಂದು ತಿಳಿಸಿದರು. “ಪ್ರತಿ ಹಳ್ಳಿಯಲ್ಲೂ ಆಂಜನೇಯಸ್ವಾಮಿ ದೇವಸ್ಥಾನ ಭಕ್ತಿ, ಶಕ್ತಿ ಮತ್ತು ಏಕತೆಯ ಸಂಕೇತವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಈ ಸಮಾರಂಭ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸಾಹ ಮೂಡಿಸಿತು.
ನರೇಂದ್ರ ಮೋದಿ ಭಾಷಣದ 5 ಪ್ರಮುಖ ಅಂಶಗಳು; ವಿಪಕ್ಷಗಳ ವಿರುದ್ಧ ಪ್ರಧಾನಿ ಬತ್ತಳಿಕೆಯಿಂದ ಸಿಡಿದವು ಗುಂಡುಗಳು!
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಏ.18-ಶನಿವಾರ) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ನಿನ್ನೆ (ಏ.17-ಶುಕ್ರವಾರ) ಲೋಕಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ವಿಪಕ್ಷಗಳಮನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್ಪಿ ಪಕ್ಷಗಳ ವಿರುದ್ಧ ಕೆಂಡಕಾರಿದ ಪ್ರಧಾನಿ ಮೋದಿ, ಮಹಿಳಾ ಸಮಬಲೀಕರಣದ ವಿರೋಧಿಗಳನ್ನು ಈ ದೇಶದ ಮಹಿಳೆಯರು ಎಂದಿಗೂ ಸಹಿಸುವುದಿಲ್ಲ ಎಂದು ಗುಡುಗಿದರು. ಪ್ರಧಾನಿ ಮೋದಿ ಅವರ ಸುದೀರ್ಘ ಭಾಷಣದ ಪ್ರಮುಖ 5 ಅಂಶಗಳು ಇಲ್ಲಿವೆ.
ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು “ಸೆವನ್ ಸೀಸ್ ಮರಿನರ್” ಆಗಮನ
ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು ಸೆವನ್ ಸೀಸ್ ಮರಿನರ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಬಹಾಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿಯಿಂದ ಆಗಮಿಸಿ, ಬೆರ್ಥ್ ನಂ. 4ರಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಮತ್ತು 460 ಸಿಬ್ಬಂದಿ ಸದಸ್ಯರು ಇದ್ದರು. ಈ ಹಡಗು ಮರ್ಮುಗೋವ್ ಕಡೆಗೆ ಮುಂದಿನ ಪ್ರಯಾಣವನ್ನು ಮುಂದುವರಿಸುತ್ತಿದೆ. ಹಡಗು ಮತ್ತು ಪ್ರಯಾಣಿಕರ ನಿರ್ವಹಣೆಯನ್ನು ಸುಗಮವಾಗಿ ನಡೆಸಲು NMPA, ಕಸ್ಟಮ್ಸ್, ಇಮಿಗ್ರೇಶನ್, CISF ಹಾಗೂ ಇತರೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿತು. ಭೇಟಿ ನೀಡಿದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದ್ರಿ, ಪಿಲಿಕುಳ ಹಾಗೂ ಮಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ವಿ ಕಾರ್ಯಾಚರಣೆ ನವ ಮಂಗಳೂರು ಬಂದರನ್ನು ಅಂತರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವಲ್ಲಿ ಮತ್ತಷ್ಟು ಬಲ ತುಂಬಿದ್ದು, ಉತ್ತಮ ಮಟ್ಟದ ಸೇವೆಗಳನ್ನು ಒದಗಿಸುವಲ್ಲಿ NMPAಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಕದನ ವಿರಾಮ ವಿಸ್ತರಣೆ ಯೋಜನೆ ತಿರಸ್ಕರಿಸಿದ ಇರಾನ್: ವರದಿ
ಟೆಹರಾನ್, ಎ.18: ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸುವ ಯೋಜನೆಯನ್ನು ಇರಾನ್ ತಿರಸ್ಕರಿಸಿದ್ದು, ನಡೆಯುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಮಗ್ರ ಮತ್ತು ಶಾಶ್ವತವಾದ ಪರಿಹಾರಕ್ಕೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಸಂಘರ್ಷಕ್ಕೆ ಕಿರು ಅವಧಿಯ, ತಾತ್ಕಾಲಿಕ ವಿರಾಮಕ್ಕೆ ಇರಾನ್ ಒಪ್ಪುವುದಿಲ್ಲ. ಸಂಘರ್ಷದ ಚಕ್ರವು ಶಾಶ್ವತವಾಗಿ ಸ್ಥಗಿತಗೊಳ್ಳಬೇಕು. ಯಾವುದೇ ಒಪ್ಪಂದವು ಪ್ರದೇಶದಾದ್ಯಂತ `ಲೆಬನಾನ್ನಿಂದ ಕೆಂಪು ಸಮುದ್ರ'ದವರೆಗೆ ವಿಸ್ತರಿಸಬೇಕು. ಪರಮಾಣು ಕಾರ್ಯಕ್ರಮದ ಜೊತೆಗೆ, ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನ ಭದ್ರತೆ, ನಿರ್ಬಂಧ ತೆರವುಗೊಳಿಸುವ ವಿಷಯ ಸೇರಿದಂತೆ ವ್ಯಾಪಕ ಚರ್ಚೆ ನಡೆಯಬೇಕು ಎಂದು ಇರಾನ್ ಆಗ್ರಹಿಸಿದೆ. ಈ ಮಧ್ಯೆ, ಎರಡನೇ ಸುತ್ತಿನ ಮಾತುಕತೆಗೂ ಮುನ್ನ ತನ್ನ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಇರಾನ್ಗೆ ಅಮೆರಿಕ ನೆರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಒಂದು ವೇಳೆ ಪಾಕಿಸ್ತಾನದಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆ ವಿಫಲಗೊಂಡರೆ, ಕದನ ವಿರಾಮ ಕೊನೆಗೊಳ್ಳಲಿದ್ದು ಇರಾನ್ ಮೇಲಿನ ಬಾಂಬ್ ದಾಳಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದೆ.
ಲೆಬನಾನ್ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್, ಎ.18: ಲೆಬನಾನ್ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು. ಐಡಿಎಫ್(ಇಸ್ರೇಲ್ ಭದ್ರತಾ ಪಡೆ) ಲೆಬನಾನ್ನಲ್ಲಿ ಕಟ್ಟಡಗಳನ್ನು ಸ್ಫೋಟಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗುರುವಾರ ಘೋಷಿಸಲಾದ ಇಸ್ರೇಲ್-ಲೆಬನಾನ್ ಕದನ ವಿರಾಮದ ಅಂಶಗಳಿಗೆ ಇಸ್ರೇಲ್ನ ಕ್ರಮಗಳು ಹೊಂದಿಕೆಯಾಗಬೇಕು. ಇರಾನ್ನೊಂದಿಗಿನ ಸಂಭಾವ್ಯ ಒಪ್ಪಂದವು ಇಸ್ರೇಲ್ನ ದೀರ್ಘಾವಧಿ ಭದ್ರತೆಗೆ ಪ್ರಯೋಜನಕಾರಿಯಾಗಿದೆ. ರಾಜತಾಂತ್ರಿಕ ನಿರ್ಣಯವು ಅಂತಿಮವಾಗಿ ಇಸ್ರೇಲಿ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅವರು(ಇಸ್ರೇಲ್) ಅರ್ಥ ಮಾಡಿಕೊಳ್ಳಬೇಕು' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಎ.20ರಂದು ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್ ಮಾತುಕತೆ: ವರದಿ
ಟೆಹರಾನ್, ಎ.18: ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಇರಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್-ಅಮೆರಿಕ ಮಾತುಕತೆಗೆ ದಿನಾಂಕ ನಿಗದಿಯಾಗಿಲ್ಲ; ಇರಾನ್ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ನಡೆಯಲಿರುವ ಮುಂದಿನ ಸುತ್ತಿನ ಮಾತುಕತೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದು ಇರಾನ್ನ ಸಹಾಯಕ ವಿದೇಶಾಂಗ ಸಚಿವರು ಶನಿವಾರ ಹೇಳಿದ್ದಾರೆ. ನಾವು ಈಗ ಎರಡು ಕಡೆಯ ನಡುವಿನ ತಿಳುವಳಿಕೆಯ ಚೌಕಟ್ಟನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದ್ದೇವೆ. ಚೌಕಟ್ಟನ್ನು ಒಪ್ಪಿಕೊಳ್ಳುವವರೆಗೆ ದಿನಾಂಕವನ್ನು ನಿಗದಿಗೊಳಿಸಲು ಸಾಧ್ಯವಿಲ್ಲ. ಫಲಪ್ರದವಾಗುವ ನಿರೀಕ್ಷೆ ಇಲ್ಲದ ಮಾತುಕತೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥ ಇಲ್ಲ ಎಂದು ಇರಾನ್ನ ಸಹಾಯಕ ವಿದೇಶಾಂಗ ಸಚಿವ ಸಯೀದ್ ಖತೀಬ್ಜಾದೆ ಶನಿವಾರ ಹೇಳಿದ್ದಾರೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. `ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ವಶ: ಆರೋಪಿಯ ಬಂಧನ
ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಪ್ರಯಾಣಿಕನೊಬ್ಬನ ಲಗೇಜ್ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎ.18ರಂದು ಬ್ಯಾಂಕಾಕ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ತಪಾಸಣೆ ಘಟಕದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಗೇಜ್ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಸದ್ಯ, ಆರೋಪಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿಯಿಂದ ಪತಿಯ ಚಿನ್ನಾಭರಣ ಕಳವು ಆರೋಪ:ಪ್ರಕರಣ ದಾಖಲು
ಉಡುಪಿ, ಎ.18: ತನ್ನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಪತ್ನಿಯೇ ಕಳವು ಮಾಡಿಕೊಂಡು ಹೋಗಿರುವುದಾಗಿ ಪತಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಉಚ್ಚಿಲದ ಕಿರಣ್ ಕುಮಾರ್ ಪಡುಬಿದ್ರಿಯ ಕಂಪೆನಿಯೊಂದರಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇವರು ವನಿತಾ ಎಂಬುವರೊಂದಿಗೆ 2016ರಲ್ಲಿ ಮದುವೆಯಾಗಿದ್ದರು. ಬಳಿಕ ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಿರಣ್ ಕುಮಾರ್ ತನಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಬ್ಯಾಂಕ್ ಲಾಕರ್ ಕೀ ಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿದ್ದರು. ಎ.10ರಂದು ಕಿರಣ್ ಕುಮಾರ್ ಕೆಲಸಕ್ಕೆ ಹೋಗಿದ್ದಾಗ ವನಿತಾ ಅಲ್ಮಾರವನ್ನು ಕೀ ಮೇಕರ್ ಸಹಾಯದಿಂದ ಒಡೆದು ಅದರೊಳಗಿದ್ದ ಬ್ಯಾಂಕ್ ಲಾಕರ್ ಕೀ ಯನ್ನು ಕಳವು ಮಾಡಿಕೊಂಡಿದ್ದರು. ಬಳಿಕ ಲಾಕರ್ ಕೀಯನ್ನು ಬಳಸಿ ಕಿರಣ್ ಕುಮಾರ್ಗೆ ಸಂಬಂಧಪಟ್ಟ 23,67,690ರೂ. ಮೌಲ್ಯದ 169 ಗ್ರಾಂ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಮಕ್ಕಳು ಬರೆದ ತಂದೆ - ತಾಯಿಯ ನೆನಪುಗಳ ಅತ್ಯುತ್ತಮ ಸಾಹಿತ್ಯ ಕೃತಿ: ಪ್ರೊ. ಬಿ.ಎ.ವಿವೇಕ ರೈ
‘ಕಾರಂತರ ಸುಳಿಯಲ್ಲಿ’ ಅನುವಾದಿತ ಕೃತಿ ಲೋಕಾರ್ಪಣೆ
ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ: ಶಾಸಕ ಎನ್.ಎ. ಹಾರಿಸ್
ಬೆಂಗಳೂರು: ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಟಿಕೆಟ್ ಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಆದರೆ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಬೇಡ ಎಂದು ತೀರ್ಮಾನ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ತಿಳಿಸಿದರು. ಶನಿವಾರ ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದು ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರನ್ನು ಬಿಡುಗಡೆ ಮಾಡಿರುವ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಉಲಮಾಗಳು ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಏನೇ ಸಮಸ್ಯೆಗಳಿದ್ದರೂ ಅದನ್ನು ನಾಲ್ಕು ಗೋಡೆಗಳ ನಡುವೆ ಕೂತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯ ಉಸ್ತುವಾರಿ ಜೊತೆ ಮಾತುಕತೆ ನಡೆಸುವುದಾದರೆ ಅದಕ್ಕೆ ನಾವೆ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಹಿರಿಯ ನಾಯಕರ ಪೈಕಿ ಅಬ್ದುಲ್ ಜಬ್ಬಾರ್ ಕೂಡ ಒಬ್ಬರು. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಟಿಕೆಟ್ ಕೇಳಿದ್ದರು. ಆದರೆ, ಈಗಾಗಲೆ ಅವರು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಆದರೆ, ಟಿಕೆಟ್ ಬೇರೆಯವರಿಗೆ ಘೋಷಣೆಯಾದ ನಂತರ ಏನೆಲ್ಲ ಬೆಳವಣಿಗೆ ಆಯಿತು ಎಂದು ಗಮನಿಸಬೇಕು ಎಂದು ಹಾರಿಸ್ ಹೇಳಿದರು. ಮುಸ್ಲಿಮರಿಗೆ ಈ ಬಾರಿ ಟಿಕೆಟ್ ಕೊಡುವಂತೆ ನಾವು ಕೇಳಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿ ಹೋಗಬೇಕು. ಅಬ್ದುಲ್ ಜಬ್ಬಾರ್ ವಿರುದ್ಧ ಕೈಗೊಂಡ ಕ್ರಮ ಇಡೀ ಸಮುದಾಯದ ವಿರುದ್ಧದ ಕ್ರಮ ಅಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾರಾ? ಇಲ್ಲವಲ್ಲ ಎಂದು ಅವರು ತಿಳಿಸಿದರು. ನಸೀರ್ ಅಹ್ಮದ್ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಯಾವ ಕಾರಣಕ್ಕಾಗಿ ನಸೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ಗೊತ್ತಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಅಝಾನ್, ಹಲಾಲ್, ಹಿಜಾಬ್, ಶಾಲೆ, ಕಾಲೇಜು, ಮದ್ರಸಾದ ವಿಚಾರಗಳಲ್ಲಿ ಏನೆಲ್ಲ ಬೆಳವಣಿಗೆ ಆಯಿತು ಎಂಬುದನ್ನು ನಾವು ಮರೆಯಬಾರದು ಎಂದು ಹಾರಿಸ್ ಹೇಳಿದರು. ನಮ್ಮ ಮೀಸಲಾತಿಯನ್ನೇ ಕಸಿದು ಬೇರೆ ಸಮುದಾಯಗಳಿಗೆ ಹಂಚಿದ್ದರು. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ, ನಮ್ಮ ಮೀಸಲಾತಿ ನಮಗೆ ಸಿಗುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ನಾವೆಲ್ಲ ಸೇರಿ ಒತ್ತಡ ಹಾಕುತ್ತಿದ್ದೇವೆ ಎಂದು ಹಾರಿಸ್ ತಿಳಿಸಿದರು.
ಸಿಂಗಾಪುರದ ಕಂಪೆನಿಯಿಂದ ಮಣಿಪಾಲದ ಕಂಪೆನಿಗೆ 33 ಕೋಟಿ ರೂ. ವಂಚನೆ: ಪ್ರಕರಣ ದಾಖಲು
ಮಣಿಪಾಲ, ಎ.18: ಸಿಂಗಾಪುರದ ಕಂಪೆನಿಯೊಂದು ಮಣಿಪಾಲ ಕಂಪೆನಿಗೆ 33 ಕೋಟಿ ರೂ. ಹಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಲಿಪ್ ಆರ್.ಅಡಿಗ (35) ಎಂಬವರು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಎಮ್.ಎನ್.ಶೆಟ್ಟಿ ಟೆಕ್ನಾಲಜಿ ಪ್ರವೈಟ್ ಲಿಮಿಟೆಡ್ ಕಂಪೆನಿಯನ್ನು ನಡೆಸಿಕೊಂಡಿದ್ದರು. ಸಿಂಗಾಪುರ ಕಂಪೆನಿಯೊಂದರ ಸಿಇಓ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಪ್ರೋಡೆಕ್ಟ್ನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು. ದೀಲಿಪ್ ಹೇಳಿದ ವ್ಯಾಲ್ಯೂಶೆನ್ ಪಟ್ಟಿಯನ್ನು ಇಮೇಲ್ ಮುಖಾಂತರ ನೋಡಿ 2019ರ ಜೂನ್ನಲ್ಲಿ 35ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದನು. ಈ ಶೇರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಶೇರ್ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದ್ದನು. 2020ರ ಎಪ್ರಿಲ್ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಕಳುಹಿಸಿ ಕೊಟ್ಟಿದ್ದು ಅಗ್ರಿಮೆಂಟ್ನಂತೆ ಇವರು ವ್ಯವಹಾರ ಮಾಡಿಕೊಂಡಿದ್ದರು. ಈ ಅಗ್ರಿಮೆಂಟಿನಲ್ಲಿ ವ್ಯವಹಾರ ಆಗುವಾಗ ಸಿಂಗಾಪುರದ ಕಂಪನಿಯಲ್ಲಿ 35 ಮಿಲಿಯನ್ ಶೇರ್ ಇತ್ತು ಎಂಬುವುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಲಾಗಿತ್ತು. ಈ ಅಗ್ರಿಮೆಂಟ್ಗೆ ದೀಲಿಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಅಗ್ರಿಮೆಂಟ್ ಆದ ಬಳಿಕ ಕಂಪನಿಯವರು ಹೇಳಿದಂತೆ ದೀಲಿಪ್ ಪ್ರೋಡೆಕ್ಟನ್ನು ಅವರಿಗೆ ಕಳುಹಿಸಿದ್ದರು. 2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ಮಾಡಿಕೊಂಡ ಒಪ್ಪಂದವು 3 ವರ್ಷಕ್ಕೆ ಮುಗಿದಿದ್ದು. ಅದರ ಪ್ರಕಾರ ವ್ಯಾಲ್ಯೂಷನ್ ವರದಿಯನ್ನು ನೀಡುವಂತೆ ಇ-ಮೇಲ್ ಮೂಲಕ ಕೋರಿಕೊಂಡಿದ್ದರು. ಆನಂದ ರಾವ್ ಕಂಪನಿಯ ಶೇರ್ ಪಾಲುದಾರರಾದ ಶ್ಯಾಮ್ದೀಪ್ ಎಂಬವರಿಗೆ 2024ರ ಅ.6ರಂದು ಇ-ಮೇಲ್ ಮುಖಾಂತರ ಒಂದು ಮಾಹಿತಿಯನ್ನು ಕಳುಹಿಸಿದ್ದು ಆ ಮಾಹಿತಿಯಲ್ಲಿ ಒಪ್ಪಂದದ ಬಗ್ಗೆ ಧೃಡಪಡಿಸಿದ್ದರು. ಅಲ್ಲದೇ ಪೋನ್ ಮೂಲಕ ಶ್ಯಾಮ್ದೀಪ್ಗೆ ವೀರಪ್ಪನ್ ಸುಬ್ರಹ್ಮಣ್ಯ ಅವರಿಂದ ಆನಂದ್ ರಾವ್ ಪೋನ್ ಮಾಡಿಸಿ 6.9 ಕೋಟಿ ನಗದು ಮತ್ತು 20 ಲಕ್ಷ ಶೇರ್ನ್ನು ನೀಡುವುದಾಗಿ ತಿಳಿಸಿದ್ದರು. ಆನಂದರಾವ್, ಕಂಪನಿಯ ಚೇರ್ಮೆನ್ ಪೀಟರ್ ಜಪ್ರೀ ಜರ್ಮೈನ್ ಹಾಗೂ ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು ಮತ್ತು ಕಂಪನಿ ಬೋರ್ಡ್ ಸದಸ್ಯರಾದ ಅಸುತೋಷ್ ಶ್ರೀವತ್ಸವ ಸೇರಿಕೊಂಡು ದೀಲಿಪ್ ಕಂಪನಿಯಲ್ಲಿ ವ್ಯವಹಾರ ಮಾಡುವಂತೆ ನಂಬಿಸಿ ಕಂಪನಿಯಿಂದ ಬರಬೇಕಾದ 33 ಕೋಟಿ ರೂ. ಹಣವನ್ನು ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾಂಗ್ರೆಸ್ ಪಕ್ಷದಂತೆ ಡಿಎಂಕೆ ಇತಿಹಾಸ ದೊಡ್ಡದಿದೆ: ಡಿ.ಕೆ.ಶಿವಕುಮಾರ್
‘ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಲು ಗ್ಯಾರಂಟಿ ಯೋಜನೆ’
ಮಹಿಳಾ ಮೀಸಲಾತಿ ತಡೆದ ವಿಪಕ್ಷಗಳ ಕೃತ್ಯ 'ಭ್ರೂಣಹತ್ಯೆ'ಗೆ ಸಮಾನ: ಕಾಂಗ್ರೆಸ್, ಟಿಎಂಸಿ, ಡಿಎಂಕೆ ವಿರುದ್ಧ ಮೋದಿ ಗುಡುಗು
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಪ್ರತಿಪಕ್ಷಗಳು ಕೈಗೊಂಡಿರುವ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷಗಳ ಈ ನಡೆಯನ್ನು 'ಹೆಣ್ಣು ಭ್ರೂಣಹತ್ಯೆ'ಗೆ ಹೋಲಿಸಿರುವ ಅವರು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (TMC), ಮತ್ತು ಡಿಎಂಕೆ ಪಕ್ಷಗಳೇ ಇದಕ್ಕೆ ನೇರ ಹೊಣೆ ಹಾಗೂ ಅಪರಾಧಿಗಳು ಎಂದು ಗುಡುಗಿದ್ದಾರೆ. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾರಿ ಶಕ್ತಿಯ
Belur | ಕೊನೆಗೂ ಒಂಟಿ ಕೋರೆ ಕಾಡಾನೆ ಸೆರೆ; ಮೂರು ದಿನಗಳ ಕಾರ್ಯಾಚರಣೆ ಯಶಸ್ವಿ
ಬೇಲೂರು: ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಕೋರೆ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮೂರನೇ ದಿನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಮೂಡಿಸಿದ್ದ ಈ ದೈತ್ಯಾಕಾರದ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆಯು ವಿಶೇಷ ತಂಡವನ್ನು ರಚಿಸಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ತಂಡವು ಬೇಲೂರು ತಾಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತು. ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಹಾಗೂ ಅನುಭವಿಗಳಾದ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸುತ್ತುವರಿದು ನಿಯಂತ್ರಣಕ್ಕೆ ತರಲು ಕಾರ್ಯಚರಣೆ ಆರಂಭಿಸಲಾಯಿತು. ಕಾರ್ಯಾಚರಣೆಯಲ್ಲಿ ಪ್ರಮುಖ ಘಟ್ಟವಾಗಿ, ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆಯೇ, ಒಂಟಿ ಕೋರೆ ಕಾಡಾನೆ ಹಾಗೂ ಅದರ ಜೊತೆಯಲ್ಲಿದ್ದ ‘ಕ್ಯಾಪ್ಟನ್’ ಕಾಡಾನೆ ಏಕಾಏಕಿ ಓಡಲು ಆರಂಭಿಸಿತು. ಇದರಿಂದ ಕೆಲಕಾಲ ಗೊಂದಲ ಉಂಟಾದರೂ, ಕಾರ್ಯಾಚರಣಾ ತಂಡವು ಸಮರ್ಥವಾಗಿ ಎರಡೂ ಕಾಡಾನೆಗಳನ್ನು ಬೇರ್ಪಡಿಸಲು ಯಶಸ್ವಿಯಾಯಿತು. ಸ್ವಲ್ಪ ದೂರ ಓಡಿದ ಬಳಿಕ ಅರವಳಿಕೆಯ ಪರಿಣಾಮದಿಂದ ಒಂಟಿ ಕೋರೆ ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದು ಭದ್ರತೆ ಒದಗಿಸಿತು. ನಂತರ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ನಡೆಸಿ, ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟುವ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದರು. ಈ ಯಶಸ್ವಿ ಕಾರ್ಯಾಚರಣೆಯಿಂದ ಹಲವು ದಿನಗಳಿಂದ ಆತಂಕದಲ್ಲಿದ್ದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಧೈರ್ಯಶಾಲಿ ಕ್ರಮ ಹಾಗೂ ಸಮನ್ವಯದಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಸ್ಥಳಾಂತರದ ನಂತರ ಕಾಡಾನೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ಕ್ರಮ ಗಳನ್ನು ಇಲಾಖೆಯು ಕೈಗೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು RCB ಕಳೆದುಕೊಂಡದ್ದು ಹೇಗೆ? ಇಲ್ಲಿದೆ 6 ಕಾರಣ
RCB Vs DC Match Highlights- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಆಘಾತಕಾರಿ ಸೋಲು ಅನುಭವಿಸಿತು. ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಆರ್ಸಿಬಿ 175 ರನ್ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರ ಚಾಣಾಕ್ಷ ಬೌಲಿಂಗ್ ಆರ್ಸಿಬಿಯನ್ನು ಕಟ್ಟಿಹಾಕಿತು. ಡೆಲ್ಲಿ ತಂಡ ಆರಂಭಿಕ ಕುಸಿತ ಕಂಡರೂ, ಕೆಎಲ್ ರಾಹುಲ್ (57) ಮತ್ತು ಸ್ಟಬ್ಸ್ (60*) ಅವರ ಸಮಯೋಚಿತ ಜೊತೆಯಾಟ ಹಾಗೂ ಅಂತಿಮ ಓವರ್ನಲ್ಲಿ ಡೇವಿಡ್ ಮಿಲ್ಲರ್ ಸಿಡಿಸಿದ ಸಿಕ್ಸರ್ಗಳು ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟವು.
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾ ರುದ್ರಯಾಗ
ಉಡುಪಿ, ಎ.18: ಕೊಡವೂರಿನಲ್ಲಿರುವ ಮಹೋತಭಾರ ಶ್ರೀಶಂಕರ ನಾರಾಯಣ ದೇವಸ್ಥಾನದಲ್ಲಿ ಅಪರೂಪದಲ್ಲಿ ಅಪರೂಪದ್ದಾದ ಮಹಾ ರುದ್ರಯಾಗ ಮೇ ತಿಂಗಳ 14ರಿಂದ 19ರವರೆಗೆ ನಡೆಯಲಿದೆ ಎಂದು ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ತಿಳಿಸಿದ್ದಾರೆ. ಕೊಡವೂರು ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಆರು ದಿನಗಳ ಕಾಲ ನಡೆಯುವ ರುದ್ರಯಾಗದ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳವನ್ನೂ ಹಮ್ಮಿಕೊಳ್ಳಲಾಗುವುದು ಎಂದವರು ತಿಳಿಸಿದರು. ಇದಕ್ಕೆ ಪೂರ್ವಭಾವಿಯಾಗಿ ಮೇ 10ರಿಂದ 20ರವರೆಗೆ ಎಲ್ಲಾ ವಯೋಮಾನದವರ ಮನೋರಂಜನೆಗಾಗಿ ಬೃಹತ್ ವಸ್ತು ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಲಾಗುತ್ತದೆ. ಮೇ 14ರಂದು ಮಲ್ಪೆ ಯಿಂದ ಕೊಡವೂರು ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಯನ್ನು ಸಹ ಆಯೋಜಿಸಲಾಗುತ್ತದೆ ಎಂದು ಕಾಂಚನ್ ತಿಳಿಸಿದರು. ಮೇ15ರಿಂದ ಮಹಾ ರುದ್ರಯಾಗ, ಗಣಯಾಗದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳುತ್ತವೆ.ಪ್ರತಿದಿನ ಸಂಜೆ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಮೇ 16ರಂದು ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ ನಡೆಯಲಿದೆ ಎಂದರು. ಮೇ 17ರಂದು ಮಲ್ಪೆ ಕಡಲತೀರದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೋತ್ಸವ ನಡೆಯಲಿವೆ. ಅಲ್ಲದೆ ಅಂದು ಸಂಜೆ ಮಲ್ಪೆ ಕಡಲತೀರದಲ್ಲಿ ವಾರಣಸಿಯ ಪುರೋಹಿತರಿಂದ ಗಂಗಾರತಿಯನ್ನು ಆಯೋಜಿಸಲಿದ್ದು, ಇದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವರು. 18ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಸೇರಿ 50ಕ್ಕೂ ಅಧಿಕ ಕಂಪೆನಿಗಳು ನೊಂದಣಿಗೊಂಡಿದ್ದು, ಒಟ್ಟಾರೆ 100 ಕಂಪೆನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರಯಾಗ ಸಂಕಲ್ಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸ ಲಾಗುವುದು. ಮೇ 19ರಂದು ಮಹಾ ರುದ್ರಯಾಗದ ಪೂರ್ಣಾಹುತಿ ನಡೆಯಲಿದೆ. ಪ್ರತಿದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5ರಿಂದ ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು, ವಾದಿರಾಜ ತಂತ್ರಿ ಪುತ್ತೂರು, ತಾರನಾಥ ಪೂಜಾರಿ, ರಮೇಶ್ ತಿಂಗಳಾಯ, ಬಾಲಕೃಷ್ಣ ಕೊಡವೂರು, ಧನಂಜಯ ಮಲ್ಪೆ, ನಂದಕಿಶೋರ್, ವಾದಿರಾಜ ಮುಂತಾದವರು ಉಪಸ್ಥಿತರಿದ್ದರು.
ಎ.20ರಂದು ಉಡುಪಿ ಜಿಲ್ಲಾ ಬಾಸ್ಕೆಟ್ಬಾಲ್ ಸಂಘ ಉದ್ಘಾಟನೆ
ಉಡುಪಿ, ಎ.18: ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಉಡುಪಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ಗೆ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಅಸೋಸಿಯೇಷನ್ನಿಂದ ಅಧಿಕೃತ ಮಾನ್ಯತೆ ಲಭಿಸಿದ್ದು, ಸಂಘದ ಉದ್ಘಾಟನೆ ಎ.20ರಂದು ಸೋಮವಾರ ಮಣಿಪಾಲದ ಮಾಧವಕೃಪಾ ಶಾಲೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಉದ್ಘಾಟನೆಯೊಂದಿಗೆ 16, 17 ಹಾಗೂ 19 ವರ್ಷದೊಳಗಿನ ವಯೋಮಿತಿಯ ಬಾಲಕ-ಬಾಲಕಿಯರಿಗಾಗಿ ಮೊದಲ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಟೂರ್ನಿಯೂ ನಡೆಯಲಿದೆ ಎಂದರು. ಬಾಸ್ಕೆಟ್ಬಾಲ್ ಸಂಘಟನೆ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡು 25 ವರ್ಷಗಳಾದರೂ, ರಾಜ್ಯ ಸಂಘದ ಮಾನ್ಯತೆ ಪಡೆದ ಅಧಿಕೃತ ಸಂಘವೊಂದು ಇದುವರೆಗೆ ಇದ್ದಿರಲಿಲ್ಲ. ಈ ಕೊರತೆಯನ್ನು ಇದೀಗ ನೀಗಿಸಲಾಗಿದ್ದು, ಇದರಿಂದ ರಾಜ್ಯ ಮಟ್ಟದ ಬಾಸ್ಕೆಟ್ಬಾಲ್ ಟೂರ್ನಿಗಳಲ್ಲಿ ಜಿಲ್ಲಾ ತಂಡ ವೊಂದು ಭಾಗವಹಿಸಲು ಸಾಧ್ಯವಾಗಲಿದೆ ಎಂದರು. ಸಂಘದ ಮನವಿಗೆ ಪೂರಕವಾಗಿ ಸ್ಪಂಧಿಸಿರುವ ರಾಜ್ಯ ಸಂಸ್ಥೆ ಇದೀಗ ತನ್ನ ನೇತೃತ್ವದ ಸಂಘಕ್ಕೆ ಅಧಿಕೃತ ಮಾನ್ಯತೆ ನೀಡಿದೆ. ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್ಗಾಗಿ ಸಿಂಥೆಟಿಕ್ ಕೋರ್ಟ್ ಒಂದರ ನಿರ್ಮಾಣ ನಡೆಯಲಿದೆ. ಬಳಿಕ ಇಲ್ಲಿ ವಿವಿಧ ಟೂರ್ನಿಗಳನ್ನು ನಡೆಸಲು ಸಾಧ್ಯವಾಗಲಿದೆ ಎಂದು ಪ್ರಸಾದ್ರಾಜ್ ಕಾಂಚನ್ ತಿಳಿಸಿದರು. ಜಿಲ್ಲಾ ಬಾಸ್ಕೆಟ್ಬಾಲ್ ಸಂಘವನ್ನು ಎ.20ರಂದು ಬೆಳಗ್ಗೆ 9:30ಕ್ಕೆ ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ ಜುಗನ್ ಎಸ್.ಧ್ಯಾನೇಶ್ವರನ್, ಮಾಧವ ಕೃಪಾ ಶಾಲೆಯ ಪ್ರಿನ್ಸಿಪಾಲ್ ಸ್ವಾತಿ ಕುಲಕರ್ಣಿ ಹಾಗೂ ಕರೆಸ್ಪಾಡೆಂಟ್ ಚಂದ್ರಶೇಖರ ಪ್ರಭು ಭಾಗವಹಿಸಲಿದ್ದಾರೆ. ಜಿಲ್ಲಾ ಬಾಸ್ಕೆಟ್ಬಾಲ್ ಟೂರ್ನಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 5:30ಕ್ಕೆ ನಡೆಯಲಿದ್ದು, ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್ಕುಮಾರ್ ಶೆಟ್ಟಿ, ಸಂಘದ ಉಪಾದ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಡಾ.ಕೆ.ಶ್ರೀಧರ್ ರಂಗನಾಥ ಪೈ, ಸ್ವಾತಿ ಕುಲಕರ್ಣಿ ಉಪಸ್ಥಿತರಿರುವರು ಎಂದರು. ಉದ್ಘಾಟನಾ ಸಮಾರಂಭದ ಬಳಿಕ ಜಿಲ್ಲಾ ಮಟ್ಟದ ವಿವಿಧ ವಯೋಮಾನ ಬಾಸ್ಕೆಟ್ಬಾಲ್ ಪಂದ್ಯಾಟ ನಡೆಯಲಿದೆ. ಪ್ರತಿ ವಿಭಾಗದಲಿಲ ತಲಾ ಆರು ತಂಡಗಳು ಭಾಗವಹಿಸಲಿವೆ. ಮುಂದೆ ವಿವಿಧ ವಿದ್ಯಾಸಂಸ್ಥೆ ಗಳಲ್ಲಿರುವ ಬಾಸ್ಕೆಟ್ಬಾಲ್ ಕೋರ್ಟ್ಗಳನ್ನು ಬಳಸಿಕೊಂಡು ಜಿಲ್ಲೆಯ ಬಾಸ್ಕೆಟ್ಬಾಲ್ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಪ್ರಸಾದ್ರಾಜ್ ಕಾಂಚನ್ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎ.ಕೆ.ಹುಸೇನ್, ಖಜಾಂಚಿ ವಿನಯಕ್, ಕಾರ್ಯಕಾರಿ ಸಮಿತಿ ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು.
ಹೊಸದಿಲ್ಲಿ,ಎ.18: ಹಾರ್ಮುಝ್ ಜಲಸಂಧಿಯಲ್ಲಿ ಶನಿವಾರ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಾರತವು ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಮೂಲಗಳ ಪ್ರಕಾರ, ನಾಗರಿಕ ಸಾಗಣೆಯಲ್ಲಿ ತೊಡಗಿದ್ದ ಹಡಗುಗಳ ಮೇಲೆ ಇರಾನ್ ಪಡೆಗಳು ಗುಂಡು ಹಾರಿಸಿದ ಘಟನೆಗಳ ಕುರಿತು ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ “ಗಂಭೀರ ಕಳವಳ ಮತ್ತು ಅಸಮಾಧಾನ”ವನ್ನು ವ್ಯಕ್ತಪಡಿಸಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲಿನ ದಾಳಿಯ ಘಟನೆ ಬಳಿಕ ವಿದೇಶಾಂಗ ಸಚಿವಾಲಯವು ತಕ್ಷಣ ಕ್ರಮ ಕೈಗೊಂಡು ಇರಾನ್ ರಾಯಭಾರಿಯನ್ನು ಕರೆಸಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಘಟನೆಯ ಕುರಿತು ಟೆಹ್ರಾನ್ನಿಂದ ಸ್ಪಷ್ಟೀಕರಣ ಪಡೆಯುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗಗಳಲ್ಲಿ ಒಂದಾದ ಈ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ವಿರುದ್ಧ ಇರಾನ್ ಪಡೆಗಳು ಯಾವ ಅಧಿಕಾರದಡಿ ದಾಳಿ ನಡೆಸಿವೆ ಎಂಬ ಪ್ರಶ್ನೆಯನ್ನು ಭಾರತ ಮುಂದಿಟ್ಟಿದೆ.

33 C