SENSEX
NIFTY
GOLD
USD/INR

Weather

34    C
...

ಕಲಬುರಗಿ| ವಿದ್ಯಾರ್ಥಿಗಳಿಂದ ‘ಹತ್ತು ಸಾವಿರ ಹೆಜ್ಜೆಗಳ ನಡಿಗೆ’ ಅಭಿಯಾನಕ್ಕೆ ಚಾಲನೆ

ಕಮಲಾಪುರ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪುರದಲ್ಲಿ ವಿದ್ಯಾರ್ಥಿಗಳಿಂದ ‘ಆರೋಗ್ಯಕ್ಕಾಗಿ ಹತ್ತು ಸಾವಿರ ಹೆಜ್ಜೆಗಳ ನಡಿಗೆ’ ಅಭಿಯಾನವನ್ನು ಶನಿವಾರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಬೆಂಗಳೂರು ಆಯುಕ್ತರ ಸೂಚನೆ ಹಾಗೂ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಆದೇಶದ ಮೇರೆಗೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಅವಿನಾಶ ಕಂಠಿಕರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳಾದ ಡಾ. ಗೌಸಿಯಾ ಬೇಗಂ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಣ ಬೋಸ್ಲೆ ಚಾಲನೆ ನೀಡಿದರು. ಬಳಿಕ ಕಾಲೇಜು ಆವರಣದಿಂದ ಕಮಲಾಪುರ ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ಮತ್ತೆ ಕಾಲೇಜಿಗೆ ವಾಪಸ್ಸಾಗುವಂತೆ ‘ಯೂತ್ ಫಾರ್ ವಾಕ್’ ನಡಿಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ಜಗದೇವಪ್ಪ ಧರಣಿ, ಡಾ. ಶಾಮರಾವ್ ಶಿಡ್ಲೆ, ಡಾ. ಶ್ರವಣಕುಮಾರಿ, ಡಾ. ಭುವನೇಶ್ವರಿ, ಡಾ. ಸುಹಾಸಿನಿ, ಡಾ. ಸತ್ಯೇಶ್ವರ್ ಚೌದರಿ, ಡಾ. ಮಾಣಿಕ್ ಹಾಗೂ ಡಾ. ಲಕ್ಷ್ಮಣ ಬೋಧಕ್ಕೆ ಸೇರಿದಂತೆ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು. ಜೊತೆಗೆ ಸಿಬ್ಬಂದಿಗಳಾದ ಮಾಯದೇವಿ, ಶ್ರವಣ ಕುಮಾರ್, ಪೌಲ್ ರಾಜ್, ಜಗದೇವಿ, ಸುಧಾಕರ್, ಲಕ್ಷ್ಮಿ, ಕಮಲಬಾಯಿ, ಅಪೂರ್ವ ಮತ್ತು ಅತಿಥಿ ಉಪನ್ಯಾಸಕರಾದ ಡಾ. ಜಗಪ್ಪ ತಳವಾರ್, ಡಾ. ಧನರಾಜ್ ತುಡಮೆ, ಡಾ. ಇಕ್ಬಾಲ್, ಡಾ. ಶಶಿಕಾಂತ್, ಡಾ. ಎಸ್. ವರಲಕ್ಷ್ಮಿ, ಸಾನಿಯಾ, ಡಾ. ಭದ್ರೇಶ, ಡಾ. ರೈಸುದ್ದೀನ್ ಸೇರಿದಂತೆ ಸುಮಾರು 25 ಮಂದಿ ಸಿಬ್ಬಂದಿ ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ನಡಿಗೆ ವೇಳೆ ಆರೋಗ್ಯದ ಮಹತ್ವವನ್ನು ಸಾರುವ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು, ನಿಯಮಿತ ನಡಿಗೆ ಮತ್ತು ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ಸಂದೇಶವನ್ನು ಜನರಿಗೆ ರವಾನಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ವಾರ್ತಾ ಭಾರತಿ 11 Apr 2026 6:20 pm

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ದೊಡ್ಡಪ್ಪಗೌಡ ಪಾಟೀಲ್

ಜೇವರ್ಗಿ: ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ದತ್ತು ಗ್ರಾಮವಾದ ಗಂವಾರದಲ್ಲಿ ಐದು ದಿನಗಳ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ತ್ರಿವಿಕ್ರಮಾನಂದ ಸರಸ್ವತಿ ಮಹಾಸ್ವಾಮಿಗಳ ಮಠದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಆರಂಭಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳ, “ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ರಾಷ್ಟ್ರ ನಿರ್ಮಾಣದ ಭಾವೈಕ್ಯತೆಯ ಸಂಕೇತವಾಗಿದೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಮೂಲ. ದತ್ತು ಗ್ರಾಮವಾದ ಗಂವಾರದಲ್ಲಿ ನೈರ್ಮಲೀಕರಣ, ಪರಿಸರ ಸಂರಕ್ಷಣೆ, ಸಸಿ ನೆಡುವುದು, ಕಾನೂನು ಜಾಗೃತಿ, ಬಾಲ್ಯ ವಿವಾಹ ಹಾಗೂ ವರದಕ್ಷಿಣೆ ವಿರೋಧಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು” ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯ ಭಾರತೀ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶ್ರೀಪಾದ್ ಜೋಶಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವರಾಧ್ಯ ಬಡಿಗೇರ್, ದೇವು ಜನಿವಾರ, ಜೆಡಿಎಸ್ ಮುಖಂಡ ರಾಕೇಶ್ ಹರಸೂರ್, ಐಟಿಐ ಉಪನ್ಯಾಸಕ ಶಿವಶರಣಪ್ಪ ಹಳಿಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯ ಈಶ್ವರ ಹಿಪ್ಪರಗಿ, ಪ್ರಾಚಾರ್ಯ ಡಾ. ಧರ್ಮಣ್ಣ ಕೆ. ಬಡಿಗೇರ್, ಸಿದ್ದಲಿಂಗ ಎಸ್. ವಸ್ತಾರಿ, ಅಧ್ಯಕ್ಷೆ ಮಂಜುಳಾ ಡಿ.ಬಡಿಗೇರ್, ಉಪನ್ಯಾಸಕಿಯರಾದ ರೂಪಾ ಆರ್. ಕಲ್ಲೂರ್, ಸಾವಿತ್ರಿ ಮನಗೂಳಿ, ಶಾರದಾ ಬಿ.ತಳವಾರ್, ಚಂದ್ರಕಲಾ ಹಿಪ್ಪರಗಿ ಹಾಗೂ ಉಪನ್ಯಾಸಕ ಶರಣು ಕುಮ್ಮನಸಿರಸಗಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸಹ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಕು.ಶೃತಿ ಎಂ. ಹಾಗೂ ಸ್ವಾಗತ ಗೀತೆಯನ್ನು ಅಕ್ಷತಾ ಪ್ರಸ್ತುತಪಡಿಸಿದರು. ದಿನಪೂರ್ತಿ ನಡೆದ ಕಾರ್ಯಕ್ರಮಗಳನ್ನು ಕುವೆಂಪು ತಂಡದವರು ಅಚ್ಚುಕಟ್ಟಾಗಿ ನಿರ್ವಹಿಸಿದರು.ರು̤

ವಾರ್ತಾ ಭಾರತಿ 11 Apr 2026 6:15 pm

2nd PUC Result-2026: ಅಬೂಬಕ್ಕರ್ ನುಹೈದ್‌ಗೆ ವಿಜ್ಞಾನ ವಿಭಾಗದಲ್ಲಿ 600ಕ್ಕೆ 554 ಅಂಕ

ಮಡಿಕೇರಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಡಿಕೇರಿಯ ಸೇಂಟ್ ಮೈಕೆಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಬೂಬಕ್ಕರ್ ನುಹೈದ್ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 554 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಸನಾವುಲ್ಲಾ ಹಾಗೂ ಉಲ್ಫಾ ದಂಪತಿಯ ಪುತ್ರ.

ವಾರ್ತಾ ಭಾರತಿ 11 Apr 2026 6:13 pm

School Property: ಸರ್ಕಾರಿ ಶಾಲೆ 12 ವರ್ಷಗಳಿಂದ ಒಂದೇ ಭೂಮಿಯಲ್ಲಿದ್ದರೆ ಅದು ರಾಜ್ಯ ಸರ್ಕಾರದ ಆಸ್ತಿ: ಏನಿದು ಹೊಸ ಕಾನೂನು?

ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಸರಿಯಾದ ದಾಖಲೆಗಳಿಲ್ಲದೆ ಅತಿಕ್ರಮಣದ ಭೀತಿ ಎದುರಿಸುತ್ತಿದ್ದ ಸರ್ಕಾರಿ ಶಾಲಾ-ಕಾಲೇಜುಗಳ ಭೂಮಿಯನ್ನು ಸಂರಕ್ಷಿಸಲು ಸರ್ಕಾರವು 'ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026' ಅನ್ನು ಜಾರಿಗೆ ತಂದಿದೆ. ಏಪ್ರಿಲ್ 8ರಂದು ರಾಜ್ಯಪಾಲರ ಅಂಕಿತ ಪಡೆದ ಈ ವಿಧೇಯಕವು, ಏಪ್ರಿಲ್ 9ರಂದು ಅಧಿಕೃತವಾಗಿ ಅಧಿಸೂಚನೆಗೊಳ್ಳುವ ಮೂಲಕ ಕಾನೂನಿನ ರೂಪ ಪಡೆದಿದೆ.

ಒನ್ ಇ೦ಡಿಯ 11 Apr 2026 6:10 pm

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಅಕ್ರಮ ನೇಮಕಾತಿ ಆರೋಪ; ತನಿಖೆಗೆ ಸಿಎಸ್ ಶಾಲಿನಿ ರಜನೀಶ್ ಒತ್ತಾಯ

ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಆಪ್ತನನ್ನೇ ನೇಮಕ?

ವಾರ್ತಾ ಭಾರತಿ 11 Apr 2026 6:07 pm

ರೋಹಿತ್ ಶರ್ಮಾ 15 ವರ್ಷಗಳ MI ಪ್ರಯಾಣ: ಅಭಿಮಾನಿಗಳ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ ಮಾತು

Hardik Pandya Praises Rohit Sharma- ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು, ಮುಂಬೈ ಇಂಡಿಯನ್ಸ್ ತಂಡದಲ್ಲಿ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ನಿಟ್ಟಿನಲ್ಲಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. 2011ರಲ್ಲಿ ತಂಡಕ್ಕೆ ಸೇರ್ಪಡೆಯಾದ ರೋಹಿತ್, ತಮ್ಮ ನಾಯಕತ್ವದಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಬುಮ್ರಾ ಹಾಗೂ ಪಾಂಡ್ಯರಂತಹ ಹಲವು ಯುವ ಆಟಗಾರರನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಂಬೈ ಪರ 230 ಪಂದ್ಯಗಳಿಂದ ಸುಮಾರು 5,994 ರನ್ ಗಳಿಸಿರುವ ರೋಹಿತ್, ತಂಡದ ಯಶಸ್ಸಿನ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ.

ವಿಜಯ ಕರ್ನಾಟಕ 11 Apr 2026 5:54 pm

ದಾವಣಗೆರೆ ಉಪಚುನಾವಣೆಯ ಬೆಳವಣಿಗೆಗಳನ್ನು ಉಲ್ಲೇಖಿಸಿ ರಾಜೀನಾಮೆ ಪತ್ರದಲ್ಲಿ ಅಸಮಾಧಾನ ಹೊರಹಾಕಿದ ಜಬ್ಬಾರ್; ಪತ್ರದಲ್ಲಿ ಏನಿದೆ?

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ

ವಾರ್ತಾ ಭಾರತಿ 11 Apr 2026 5:47 pm

ದ್ವಿತೀಯ ಪಿಯುಸಿ ಫಲಿತಾಂಶ: ಮೊಹಮ್ಮದ್‌ ಶಕೀರ್‌ಗೆ ವಾಣಿಜ್ಯ ವಿಭಾಗದಲ್ಲಿ 566 ಅಂಕ

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮೊಹಮ್ಮದ್‌ ಶಕೀರ್‌ ವಾಣಿಜ್ಯ ವಿಭಾಗದಲ್ಲಿ 566 (94.33%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.  ಇವರು ಉಪ್ಪಿನಂಗಡಿ ನಿವಾಸಿ ಸುಲೈಮಾನ್‌ ಮತ್ತು ಅಸ್ಮಾ ದಂಪತಿಯ ಪುತ್ರ.

ವಾರ್ತಾ ಭಾರತಿ 11 Apr 2026 5:33 pm

ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ:ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ!

ರಾಜ್ಯ ಕಾಂಗ್ರೆಸ್‌ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ಶುಕ್ರವಾರವಷ್ಟೇ ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕರು ಪತ್ರಿಕಾಗೋಷ್ಠಿಯನ್ನು ನಡೆಸಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅಬ್ದುಲ್ ಜಬ್ಬಾರ್ ಅವರ ಕುರಿತಾಗಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಜಯ ಕರ್ನಾಟಕ 11 Apr 2026 5:30 pm

Vaibhav Suryavanshi: ನನ್ನ ಕನಸು ಕೊನೆಗೂ ನನಸಾಯಿತು; ವಿರಾಟ್‌ ಕೊಹ್ಲಿಗೆ ವಿಶೇಷ ಧನ್ಯವಾದ ಹೇಳಿದ ವೈಭವ್ ಸೂರ್ಯವಂಶಿ

Virat Kohli: ಗುವಾಹಟಿಯಲ್ಲಿ ಶುಕ್ರವಾರ (ಏಪ್ರಿಲ್ 10) ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಆರ್‌ಆರ್ ಗೆಲುವಿಗೆ ಪ್ರಮುಖ ಕಾರಣನಾದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ವಿರಾಟ್‌ ಕೊಹ್ಲಿ ಅವರು ತಮ್ಮ ಟೋಪಿ ಮೆಲೆ ಸಹಿ ಹಾಕಿದ ಬಗ್ಗೆ ಮಹತ್ವದ ಹೇಳಿಕೆ

ಒನ್ ಇ೦ಡಿಯ 11 Apr 2026 5:24 pm

ಗಂಡ-ಹೆಂಡತಿ ಜಗಳ ಇಡೀ ದಿನ‌ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ

ಪತ್ರಕರ್ತರು ಕೇವಲ ಮಾಹಿತಿ ನೀಡುವವರಾಗದೆ, ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗೆ ಒತ್ತು ನೀಡುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೀದರ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಊಹಾ ಪತ್ರಿಕೋದ್ಯಮ ಅಪಾಯಕಾರಿ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ

ಒನ್ ಇ೦ಡಿಯ 11 Apr 2026 5:09 pm

ದಾವಣಗೆರೆ : ’ಮುಸ್ಲಿಂ ವೋಟ್ ಬಿಜೆಪಿಗೆ ಶಿಫ್ಟ್ ಆಗಿರಬಹುದು, ಡ್ಯಾಮೇಜ್ ಆಗಿದೆ’ - ಏನಿದು ಜಾರಕಿಹೊಳಿ ಮಾತಿನ ಮರ್ಮ?

Davanagere South By Election : ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಚುನಾವಣೆ ನಡೆಸಬೇಕಾಗುತ್ತದೆ. ಯಾಕೆಂದರೆ, ಆಯಾಯ ಕ್ಷೇತ್ರದಲ್ಲಿ ಜಾತಿ ಸಮೀಕರಣ, ಅಭಿವೃದ್ದಿ ವಿಚಾರ ಬೇರೆ ಬೇರೆ ಇರುತ್ತದೆ. ದಾವಣಗೆರೆಯಲ್ಲಿ ಮುಸ್ಲಿಮರು ಮತಬ್ಯಾಂಕ್ ನಮಗೆ ನಷ್ಟವಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವಿಜಯ ಕರ್ನಾಟಕ 11 Apr 2026 4:51 pm

ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral

ಹೊಟ್ಟೆಪಾಡಿಗೆ ದೈನಂದಿನ ಜೀನವದಲ್ಲಿ ಒಂದಿಲ್ಲ ಒಂದು ಕೆಲಸ ಮಾಡುವ ಮನುಷ್ಯರಿಗೆ ಒಂದಿಲ್ಲೊಂದು ಅಪಾಯಗಳು ಎದುರಾಗುತ್ತವೆ. ಅದರಲ್ಲಿ ಕೆಲವು ಜೀವಕ್ಕೆ ಕಂಟಕಪ್ರಾಯವಾದವುಗಳು ಇರುತ್ತವೆ. ಕೊಂಚ ನಿರ್ಲಕ್ಷ್ಯ ವಹಿಸಿದರೂ ಸಾಕು ಪ್ರಾಣ ಪಕ್ಷಿ ಹಾರಿ ಹೋಗಿ ಬಿಡುತ್ತದೆ. ಅಂಥದ್ದೆ ಒಂದು ಘಟನೆ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದ್ದು, ಅನೇಕ ಮೂಟೆಗಳು ಮೈ ಮೇಲೆ ಬಿದ್ದರೂ ಸಹಿತ ಕಾರ್ಮಿಕ ಮಹಿಳೆ ಕ್ಷಣಾರ್ಧದಲ್ಲಿ ಪ್ರಾಣಾಪಾರದಿಂದ

ಒನ್ ಇ೦ಡಿಯ 11 Apr 2026 4:30 pm

ದಾವಣಗೆರೆ ಎಫೆಕ್ಟ್ : ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ

ಬೆಂಗಳೂರು : ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ನಿರಾಕರಣೆ ವಿವಾದದ ಬೆನ್ನಿಗೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ .ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿರುವ ಕೆ.ಅಬ್ದುಲ್ ಜಬ್ಬಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ನನಗೆ ದೊರೆತ ಗೌರವ ಎಂದು ಹೇಳಿದ್ದಾರೆ. 2023ರ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ಅಗತ್ಯವಿದ್ದಾಗಲೆಲ್ಲಾ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ನಾನು ಇಡೀ ಕರ್ನಾಟಕ ರಾಜ್ಯವನ್ನು ಪ್ರವಾಸ ಮಾಡಿ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿದ್ದೇನೆ. ಅಲ್ಪಸಂಖ್ಯಾತ ಮತದಾರರು ಮತ್ತು ಪದಾಧಿಕಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದಾರೆ ಎಂದು ಜಬ್ಬಾರ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 11 Apr 2026 4:28 pm

ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಒಲಿದ ಮೂರು ಮರೆಯಲಾಗದ ಗೌರವಗಳು; ಕಿಂಗ್ ಕೊಹ್ಲಿ ಸಂದೇಶ ಭಾರೀ ವೈರಲ್‌

Vaibhav Suryavanshi: ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ 15 ವರ್ಷದ ವೈಭವ್ ಅವರು ಐಪಿಎಲ್ 2026ರ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈವೋಲ್ಟೇಜ್‌ ಪಂದ್ಯದಲ್ಲಿ ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಇದೇ ವೇಳೆ ಅವರು ಮೂರು ದೊಡ್ಡ

ಒನ್ ಇ೦ಡಿಯ 11 Apr 2026 4:15 pm

ಹಾರ್ಮುಜ್‌ ಜಲಸಂಧಿಯಲ್ಲಿ ಹುದುಗಿಸಿಟ್ಟ ಸ್ಪೋಟಕಗಳ ಟ್ರ್ಯಾಕಿಂಗ್‌ ಮರೆತ ಇರಾನ್;‌ ಪರಿಹಾರ ಏನು?

ಇದೆಂತಾ ವಿಪರ್ಯಾಸ ನೋಡಿ. ಅಮೆರಿಕ ಮತ್ತು ಇರಾನ್‌ ನಡುವೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ. ಆದರೆ ಇರಾನ್‌ ಮಾತ್ರ ಇದುವರೆಗೂ ಹಾರ್ಮುಜ್‌ ಜಲಸಂಧಿಯನ್ನು ತೈಲ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಅಮೆರಿಕದ ತೀವ್ರ ಒತ್ತಡದ ನಡುವೆಯೂ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ತೆರೆಯದಿರಲು ಕಾರಣ ತಿಳಿದುಬಂದಿದೆ. ಅಸಲಿಗೆ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಿದ್ದ ವೇಳೆ ಅಲ್ಲಿ ಹುದುಗಿಸಿಟ್ಟಿದ್ದ ಸ್ಪೋಟಕಗಳ ಟ್ರ್ಯಾಂಕಿಂಗ್‌ನ್ನು ಮರೆತಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 11 Apr 2026 4:07 pm

Shivamogga | ʼವರ್ಕ್ ಫ್ರಮ್ ಹೋಮ್ʼ ಜಾಹೀರಾತು ನಂಬಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿನಿ

ಶಿವಮೊಗ್ಗ: ಮನೆಯಲ್ಲೇ ಕುಳಿತು ಕೆಲಸ ಮಾಡುವ ಕುರಿತು ವಂಚನೆಗೆ ಒಳಗಾದ ನಗರದ ವಿದ್ಯಾರ್ಥಿನಿಯೊಬ್ಬರು ರೂ.2,12,340 ಹಣ ಕಳೆದುಕೊಂಡ ಘಟನೆ ನಡೆದಿದೆ. ವಿದ್ಯಾರ್ಥಿನಿಯು ಇನ್‌ಸ್ಟಾಗ್ರಾಮ್‌ನಲ್ಲಿ ವರ್ಕ್ ಫ್ರಮ್ ಹೋಮ್ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದರು. ನಂತರ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ವಂಚಕರು, ಹೋಟೆಲ್ ಮತ್ತು ಆಪ್‌ಗಳಿಗೆ ರಿವ್ಯೂ ನೀಡುವ ಟಾಸ್ಕ್ ನೀಡಿದ್ದರು. ಆರಂಭದಲ್ಲಿ ಸಣ್ಣ ಮೊತ್ತದ ಹಣವನ್ನು ಕಟ್ಟಿಸಿಕಂಡು ಟಾಸ್ಕ್ ನೀಡಿ ಬಳಿಕ ವಿದ್ಯಾರ್ಥಿನಿ ಕಟ್ಟಿದ್ದ ಹಣಕ್ಕಿಂತಲು ಹೆಚ್ಚಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು. ಇದನ್ನು ನಂಬಿದ ವಿದ್ಯಾರ್ಥಿನಿ ಹೆಚ್ಚಿನ ಲಾಭಾಂಶದ ಆಸೆಗಾಗಿ ಹಂತ ಹಂತವಾಗಿ ಹೆಚ್ಚುವರಿ ಹಣ ಹೂಡಿಕೆ ಮಾಡಿದ್ದಾರೆ. ಹೆಚ್ಚಿನ ಲಾಭದ ಆಮಿಷವೊಡ್ಡಿ ಆರೋಪಿಗಳು ವಿದ್ಯಾರ್ಥಿನಿಯಿಂದ ಒಟ್ಟು ರೂ.2,12,340 ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ನಂತರ ಹಣ ವಾಪಸ್ ನೀಡದೆ ಸತಾಯಿಸಿದಾಗ ತಾನು ವಂಚನೆಗೊಳಗಾಗಿರುವುದು ವಿದ್ಯಾರ್ಥಿನಿಗೆ ತಿಳಿದುಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Apr 2026 4:00 pm

ಕಾಂಗ್ರೆಸ್ ಪಂಚ ಗ್ಯಾರಂಟಿ: ಯುವನಿಧಿ ಯೋಜನೆ ಅಡಿಯಲ್ಲಿ 3 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ!

ರಾಜ್ಯದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಯಿಂದ ವಿವಿಧ ವರ್ಗಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲ ಉಂಟಾಗಿದೆ. ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಯುವನಿಧಿ ಯೋಜನೆ ಅಡಿಯಲ್ಲಿ 3 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾಹಿತಿ ನೀಡಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 4,11,177 ಅಭ್ಯರ್ಥಿಗಳು ನೊಂದಾಯಿಸಿ ಕೊಂಡಿದ್ದಾರೆ. ನೊಂದಾಯಿಸಿಕೊಂಡ ಅಭ್ಯರ್ಥಿಗಳ ಪೈಕಿ 3,08,267 ಮಂದಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ. ಮತ್ತಷ್ಟು ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 11 Apr 2026 3:48 pm

ಎಸ್‌ಐಆರ್ ಬಳಿಕ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಸಂಖ್ಯೆ 6 ಕೋಟಿ.ಗೂ.ಅಧಿಕ ಇಳಿಕೆ: ವರದಿ

ಹೊಸದಿಲ್ಲಿ,ಎ.11: 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಶುಕ್ರವಾರ ಪೂರ್ಣಗೊಂಡಿದ್ದು, ಒಟ್ಟು ಮತದಾರರ ಸಂಖ್ಯೆ ಸುಮಾರು 6.8 ಕೋಟಿ.ಗಳಷ್ಟು ಕುಗ್ಗಿದೆ. ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿಯು ಶುಕ್ರವಾರ ಬಿಡುಗಡೆಗೊಳ್ಳುವುದರೊಂದಿಗೆ ಎರಡನೇ ಹಂತದ ಎಸ್‌ಐಆರ್ ಪೂರ್ಣಗೊಂಡಿದೆ. ಉ.ಪ್ರದೇಶ, ಪ.ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸ್‌ಗಡ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗುಜರಾತ್, ಮಧ್ಯಪ್ರದೇಶ ಮತ್ತು ಗೋವಾಗಳ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಗಳ ಪ್ರಕಾರ, ಕಳೆದ ವರ್ಷದ ಅ.27ರಂದು ಎಸ್‌ಐಆರ್ ಪ್ರಕ್ರಿಯೆಯನ್ನು ಘೋಷಿಸಿದಾಗ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ಸುಮಾರು 51 ಕೋಟಿ ಮತದಾರರನ್ನು ಹೊಂದಿದ್ದವು. ಎಸ್‌ಐಆರ್ ಬಳಿಕ ಸುಮಾರು 44.92 ಮತದಾರರಿದ್ದು, 6.8 ಕೋಟಿಯಷ್ಟು ಇಳಿಕೆಯಾಗಿದೆ. ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿತ್ತು. ಈ ತಿಂಗಳು ಐದು ವಿಧಾನಸಭಾ ಚುನಾವಣೆಗಳ ಬಳಿಕ ಉಳಿದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿದ್ದು, ಇವು ಒಟ್ಟು 40 ಕೋಟಿ ಮತದಾರರನ್ನು ಹೊಂದಿವೆ. ಅಸ್ಸಾಂನಲ್ಲಿ ಎಸ್‌ಐಆರ್ ಬದಲಿಗೆ ‘ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ’ ಫೆ.10ರಂದು ಪೂರ್ಣಗೊಂಡಿದೆ.

ವಾರ್ತಾ ಭಾರತಿ 11 Apr 2026 3:41 pm

Bantwal | ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಯುವಕ ಮೃತ್ಯು

ಬಂಟ್ವಾಳ : ಯುವ ನಿರೂಪಕನೋರ್ವ ಮೆಹಂದಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತನನ್ನು ಫರಂಗಿಪೇಟೆ ಸಮೀಪದ ಅಬ್ಬೆಟ್ಟು ನಿವಾಸಿ ಅಶ್ವಥ್ (32) ಎಂದು ಹೆಸರಿಸಲಾಗಿದೆ. ಈತ ನಾಯಿಲದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಮದರಂಗಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Apr 2026 3:14 pm

Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್

Smriti Mandhana: ಇತ್ತೀಚೆಗಷ್ಟೇ ಮುಂಬೈನ ರೆಸ್ಟೋರೆಂಟ್‌ವೊಂದರ ಹೊರಗೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಪಲಾಶ್ ಮುಚ್ಚಲ್ ಅವರ ಸಹೋದರಿ ಪಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಶರ್ಮಾ ಅವರನ್ನು ಭೇಟಿಯಾದ ವಿಡಿಯೋ ವೈರಲ್ ಆಗಿದೆ. 2025ರಲ್ಲಿ ಮದುವೆ ಮುರಿದುಬಿದ್ದ ನಂತರ ಇದೀಗ ಈ ಕುಟುಂಬಗಳ ಭೇಟಿಯು, ಸ್ಮೃತಿ ಮತ್ತು ಪಲಾಶ್ ಮತ್ತೆ

ಒನ್ ಇ೦ಡಿಯ 11 Apr 2026 3:13 pm

ಇಸ್ಲಾಮಾಬಾದ್‌ಗೆ ಬಂದಿಳಿದ ಜೆಡಿ ವ್ಯಾನ್ಸ್;‌ ಈ ನಗು ನೋಡಿದರೆ ಮೊಹ್ಸಿನ್‌ ನಖ್ವಿಗೆ ಟ್ರೋಫಿ ಕಳ್ಳ ಎಂದು ಹೀಯಾಳಿಸಿದಂತಿದೆ ದೃಶ್ಯ

ಕೊನೆಗೂ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್‌ ನಡುವೆ ಶಾಂತಿ ಮಾತುಕತೆ ನಡೆಯುವುದು ಪಕ್ಕಾ ಆಗಿದೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇಂದು (ಏ.12-ಶನಿವಾರ) ಇಸ್ಲಾಮಾಬಾದ್‌ಗೆ ಬಂದಿಳಿದಿದ್ದು, ಪಾಕಿಸ್ತಾನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಫ್‌) ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌, ಆಂತರಿಕ ಸಚಿವ ಮೊಹ್ಸಿನ್‌ ನಖ್ವಿ ಸೇರಿದಂತೆ ಹಲವರು ಆತ್ಮೀಯ ಸ್ವಾಗತ ನೀಡಿದ್ದಾರೆ. ಇರಾನ್‌ ನಿಯೋಗ ಈಗಾಗಲೇ ಇಸ್ಲಾಮಾಬಾದ್‌ನಲ್ಲಿದ್ದು, ಮಾತುಕತೆಗಳು ಇನ್ನೇನು ಆರಂಭವಾಗಲಿವೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Apr 2026 2:57 pm

Kalaburagi | ಭೀಮಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಅಫಜಲಪುರ: ಪಟ್ಟಣದ ಸೀಮಾಂತರದಲ್ಲಿರುವ ಭೀಮಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಎಪ್ರಿಲ್ 8ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ನದಿಯಲ್ಲಿ ತೇಲಿಕೊಂಡು ಬಂದ ಮೃತದೇಹವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಫಜಲಪೂರ ಪೊಲೀಸರು ಪರಿಶೀಲನೆ ನಡೆಸಿ, ಮೃತನು ಸುಮಾರು 30ರಿಂದ 35 ವರ್ಷ ವಯಸ್ಸಿನವನಾಗಿರುವುದಾಗಿ ಅಂದಾಜಿಸಿದ್ದಾರೆ. ಮೃತದೇಹದ ಬಳಿ ಎರಡು ಲಾಕರ್ ಕೀಗಳು ಪತ್ತೆಯಾಗಿವೆ. ಮೃತದೇಹದ ಮುಖಭಾಗವನ್ನು ಜಲಚರ ಪ್ರಾಣಿಗಳು ಹಾನಿಗೊಳಪಡಿಸಿರುವುದು ಕಂಡುಬಂದಿದ್ದು, ಹೊಟ್ಟೆ ಉಬ್ಬಿದ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಗುರುತಿನ ಪತ್ತೆಗಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಶವಗಾರದಲ್ಲಿ ಇರಿಸಲಾಗಿದೆ. ಈ ವಯಸ್ಸಿನ ಯಾವುದೇ ವ್ಯಕ್ತಿ ಕಾಣೆಯಾದ ಬಗ್ಗೆ ಮಾಹಿತಿ ಇರುವವರು ಅಫಜಲಪೂರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ವಾರ್ತಾ ಭಾರತಿ 11 Apr 2026 2:56 pm

ರಾಜ್ಯದಲ್ಲಿ ಏರುತ್ತಿದೆ ಬೇಸಿಗೆಯ ಎಫೆಕ್ಟ್: ಅರಣ್ಯದಲ್ಲಿ ಬೆಂಕಿಯ ಆತಂಕ, 3 ತಿಂಗಳಲ್ಲಿ 6987 ಪ್ರಕರಣ

ರಾಜ್ಯದಲ್ಲಿ ಬೇಸಿಗೆಯ ಧಗೆ ಏರುತ್ತಿದೆ. ಈ ಸಂದರ್ಭದಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ತರಬೇತಿಯನ್ನು ಏರ್ಪಡಿಸಲಾಗುತ್ತಿದೆ. ಕಾಡ್ಗಿಚ್ಚು ನಿಯಂತ್ರಣಕ್ಕಾಗಿ ಸಂಬಂಧಿಸಿದ ಇಲಾಖೆಗಳು, ಗ್ರಾಮ ಅರಣ್ಯ ಸಮಿತಿಗಳು , ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಇತರರ ಸಹಯೋಗ ಪಡೆದುಕೊಳ್ಳಲು ಕಾರ್ಯಕ್ರಮ ಹಾಗೂ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ.

ವಿಜಯ ಕರ್ನಾಟಕ 11 Apr 2026 2:15 pm

UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ

ಬೆಂಗಳೂರು: ರಾಜ್ಯದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಾಮಾನ್ಯ ಪ್ರವೇಶ ಪರೀಕ್ಷೆ (CET Exam 2026 ) ನಡೆಸಲಿದೆ. ಇಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಲ್ಲವು ಪೂರ್ಣಗೊಂಡಿದೆ. ಇದೇ ತಿಂಗಳು ಬಹುನಿರೀಕ್ಷೆಯ ಸಿಇಟಿ ಪರೀಕ್ಷೆಗಳು ಜರುಗಲಿವೆ. ಈ ಸಂಬಂಧ ಪ್ರಾಧಿಕಾರ ಅಧಿಕೃತ ಪ್ರವೇಶ ಪತ್ರ (CET Admit Card)

ಒನ್ ಇ೦ಡಿಯ 11 Apr 2026 2:13 pm

ಮತ್ತೆ ಏರು ಹಾದಿಯಲ್ಲಿರುವ ಚಿನ್ನದ ದರ; ಸ್ಥಿರವಾಗಿರುವ ಬೆಳ್ಳಿ

ಅಮೆರಿಕ-ಇರಾನ್ ನಡುವೆ ಯುದ್ಧದ ಕದನ ವಿರಾಮ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಸ್ಥಿರವಾಗಿವೆ. ಪ್ರಮುಖ ಹಬ್ಬ ಮತ್ತು ಮದುವೆ ಋತುಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನದ ದರಗಳು ಸ್ವಲ್ಪ ಏರಿಕೆಯಾಗಿವೆ. ಈ ನಡುವೆ ಅಮೆರಿಕ- ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಹೂಡಿರುವ ಯುದ್ಧದ ಆರಂಭದಿಂದಲೂ ತೀವ್ರ ಕುಸಿತ ಕಂಡ ನಂತರ ಅಮೂಲ್ಯ ಲೋಹಗಳು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿವೆ. ಕದನ ವಿರಾಮ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಸ್ಥಿರವಾಗಿವೆ. ಆದರೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಜನವರಿಯಲ್ಲಿ ಕಂಡಿದ್ದ ಗರಿಷ್ಠ ಮಟ್ಟಕ್ಕಿಂತ ಕೆಳಗಿವೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 11ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 49 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,52,840 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 45 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,40,100 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 37 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,14,630 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 11ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,284 (+49) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,010 (+45) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,463 (+37) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಸ್ಥಿರತೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದ ನಂತರ ಈ ವಾರದ ಆರಂಭದಲ್ಲಿ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಬೆಳ್ಳಿಯ ಬೆಲೆ, ಬುಧವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿ ಪ್ರತಿ ಕೆಜಿಗೆ 2,60,000 ರೂ.ಗೆ ಆಗಿದೆ. ಗುರುವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ನಷ್ಟು ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ. ಇದೀಗ ಶುಕ್ರವಾರ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಮತ್ತೆ ಪ್ರತಿ ಕೆಜಿಗೆ 2,60,000 ರೂ.ಗೆ ಆಗಿದೆ. ಶನಿವಾರ ಇದೇ ದರಕ್ಕೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,299 (+49) ರೂ., 22 ಕ್ಯಾರೆಟ್ ಚಿನ್ನದ ದರ 14,025 (+45) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,284 (+49) ರೂ., 22 ಕ್ಯಾರೆಟ್ ಚಿನ್ನದ ದರ 14,010 (+45) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,289 (+49) ರೂ., 22 ಕ್ಯಾರೆಟ್ ಚಿನ್ನದ ದರ 14,015 (+45) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,382 (-27) ರೂ., 22 ಕ್ಯಾರೆಟ್ ಚಿನ್ನದ ದರ 14,100 (-25) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,284 (+49) ರೂ., 22 ಕ್ಯಾರೆಟ್ ಚಿನ್ನದ ದರ 14,010 (+45) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,284 (+49) ರೂ., 22 ಕ್ಯಾರೆಟ್ ಚಿನ್ನದ ದರ 14,010 (+45) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,299 (+49) ರೂ., 22 ಕ್ಯಾರೆಟ್ ಚಿನ್ನದ ದರ 14,025 (+45) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,299 (+49) ರೂ., 22 ಕ್ಯಾರೆಟ್ ಚಿನ್ನದ ದರ 14,025 (+45) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,299 (+49) ರೂ., 22 ಕ್ಯಾರೆಟ್ ಚಿನ್ನದ ದರ 14,025 (+45) ರೂ.

ವಾರ್ತಾ ಭಾರತಿ 11 Apr 2026 2:04 pm

ʼಇವ ನಮ್ಮವ ಇವ ನಮ್ಮವʼ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಇವಿಎಂ ಬದಲು ಮತಪತ್ರ ಬಳಕೆ ಮಸೂದೆ ಬಾಕಿ

ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ  ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿರುವುದಾಗಿ ವರದಿಯಾಗಿದೆ. ಚುನಾವಣೆಗಳಲ್ಲಿ ಮತಪತ್ರ ಬಳಸುವುದಕ್ಕೆ ಸಂಬಂಧಿಸಿದ ‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್‌ (ತಿದ್ದುಪಡಿ) ಮಸೂದೆ 2026’ ರಾಜ್ಯಪಾಲರ ಪರಿಶೀಲನೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಮರ್ಯಾದೆಗೇಡು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಿದ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ, ಕರ್ನಾಟಕ ಧನ ವಿನಿಯೋಗ ಮಸೂದೆ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ಮಸೂದೆ, ಕರ್ನಾಟಕ ಪೊಲೀಸ್ ಮಸೂದೆ, ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಮಸೂದೆ,  ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ, ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿ (ರಕ್ಷಣೆ ಮತ್ತು ಸಕ್ರಮಾತಿ) ಮಸೂದೆಗಳು ಒಪ್ಪಿಗೆ ಪಡೆದಿದೆ.  

ವಾರ್ತಾ ಭಾರತಿ 11 Apr 2026 1:44 pm

ಬಿಹಾರ ಸಿಎಂ ಕುರ್ಚಿ ಕಗ್ಗಂಟು: ಬಿಜೆಪಿ ಕೋರ್ ಕಮಿಟಿ ಸಭೆ ದಿಢೀರ್ ರದ್ದು - ಯಾರು ನಿತೀಶ್ ಉತ್ತರಾಧಿಕಾರಿ?

Who Is Next CM of Bihar : ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಆಯ್ಕೆಯಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ, ಬಿಜೆಪಿಯ ಕೋರ್ ಕಮಿಟಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ಪಾಟ್ನಾದಲ್ಲಿ ಮುಂದಿನ ವಾರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಾಮ್ರಾಟ್ ಚೌಧರಿ ಆಯ್ಕೆಗೆ ಕೆಲವರು ಅಪಸ್ವರ ಎತ್ತುತ್ತಿರುವ ಹಿನ್ನಲೆಯಲ್ಲಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ.

ವಿಜಯ ಕರ್ನಾಟಕ 11 Apr 2026 1:41 pm

ಮಹಾರಾಷ್ಟ್ರ| ಹಿಂಗೋಲಿ ಜಿಲ್ಲೆಯಲ್ಲಿ 4.7 ತೀವ್ರತೆಯ ಭೂಕಂಪನ

ಮುಂಬೈ: ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಹಿಂಗೋಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿದೆ. ನೆರೆಯ ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಈ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.  ಭೂಕಂಪನದಿಂದ ಪಾಂಗ್ರ ಶಿಂಧೆ ಗ್ರಾಮದ ಕೆಲವು ಮನೆಗಳು ಹಾಗೂ ಸಮುದಾಯ ಭವನಗಳಲ್ಲಿ ಬಿರುಕು ಕಾಣಿಸಿಕೊಂಡಿವೆ ಎಂದು ಹಿಂಗೋಲಿ ಜಿಲ್ಲಾಧಿಕಾರಿ ರಾಹುಲ್ ಗುಪ್ತ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 8.45ರ ವೇಳೆ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದಲ್ಲಿ 4.7 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ನಾಂದೇಡ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನ ಕೇಂದ್ರವು ಹಿಂಗೋಲಿ ಜಿಲ್ಲೆಯ ವಸ್ಮತ್ ತಾಲೂಕಿನ ಶಿರ್ಲಿ ಗ್ರಾಮದ 10 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಹೇಳಿದ್ದಾರೆ. ನೆರೆಯ ನಾಂದೇಡ್ ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಅರ್ಧಾಪುರ್, ಹದ್ಗಾಂವ್, ಹಿಮಾಯತ್ ನಗರ್ ಹಾಗೂ ಪರ್ಭಾನಿ ಜಿಲ್ಲೆಯ ಕೆಲ ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪಕ್ಕೀಡಾಗಿರುವ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. ಆದರೆ, ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ವಾರ್ತಾ ಭಾರತಿ 11 Apr 2026 1:39 pm

ಧ್ರುವಗಳ ಮುಖಾಮುಖಿ; ಸಂಸತ್ತಿನ ಆವರಣದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಚುಟುಕು ಸಂಭಾಷಣೆ

ಸದ್ಭಾವನೆ, ಸಹಬಾಳ್ವೆ ಮತ್ತು ಸಹೋದರತ್ವ ಭಾರತದ ಪ್ರಜಾಪ್ರಭುತ್ವದ ತಿರುಳು. ಇಲ್ಲೇನಿದ್ದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಜಾಗವಿದೆಯೇ ಹೊರತು, ರಾಜಕೀಯ ವೈಷಮ್ಯಕ್ಕೆ ಅಲ್ಲ. ಭಾರತದ ಪ್ರಜಾಪ್ರಭುತ್ವದ ಮೂಲ ಆಶಯ ಆಗ್ಗಿದ್ದಾಂಗೆ ಗೋಚರವಾಗುತ್ತಲೇ ಇರುತ್ತದೆ. ಅದರಂತೆ ಇಂದು (ಏ.11-ಶನಿವಾರ) ಸಂಸತ್ತಿನ ಆವರಣದಲ್ಲಿ ಮಹಾತ್ಮ ಜ್ಯೋತಿಬಾ ಪುಲೆ ಅವರ 200ನೇ ಜನ್ಮ ದಿನಾಚರಣೆ ಆಚರಿಸಲಾಗಿದ್ದು, ಭಾರತದ ರಾಜಕಾರಣದ ವಿರುದ್ಧ ಧ್ರುವಗಳಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಆತ್ಮೀಯವಾಗಿ ಮಾತನಾಡಿದ್ದಾರೆ.

ವಿಜಯ ಕರ್ನಾಟಕ 11 Apr 2026 1:26 pm

Gold Price Icreased: ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಗ್ರಾಹಕರಿಗೆ ಶಾಕ್! ಬೆಳ್ಳಿ ದರ ಎಷ್ಟಿದೆ?

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದ್ದು, ಇಂದು (ಏಪ್ರಿಲ್ 11) ಶನಿವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ. ಸತತ ಎರಡನೇ ದಿನವು ಚಿನ್ನಾಭರಣ ಗಗನದತ್ತ ಮುಖ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಕೊಲ್ಲಿ ರಾಷ್ಟ್ರಗಳ ಯುದ್ಧ, ಜಾಗತಿಕ ಮತ್ತು ರಾಜತಾಂತ್ರಿಕ ಬೆಳವಣಿಗೆ ಹಾಗೂ ಅಮೆರಿಕಾ ಆರ್ಥಿಕ ಪ್ರಭಾವವು ಚಿನ್ನ-ಬೆಳ್ಳಿ ಲೋಹಗಳ ದರ ಬದಲಾವಣೆಗೆ ಪ್ರಮುಖ

ಒನ್ ಇ೦ಡಿಯ 11 Apr 2026 1:11 pm

ಹುಸಿ ಬಾಂಬ್ ಕರೆಗೆ ಪೊಲೀಸ್ ಇಲಾಖೆ ಸುಸ್ತು! ರಾಜ್ಯದಲ್ಲಿ ದಾಖಲಾಗಿದೆ 468 ಪ್ರಕರಣ

ರಾಜ್ಯದಲ್ಲಿ ಪದೇ ಪದೇ ಹುಸಿ ಬಾಂಬ್ ಕರೆ ಪ್ರಕರಣಗಳು ವರದಿಯಾಗುತ್ತಿವೆ. 2020 ರಿಂದ ಈವರೆಗೂ ಸುಮಾರು 468 ಪ್ರಕರಣಗಳು ದಾಖಲಾಗಿವೆ. ಕಿಡಿಗೇಡಿಗಳು ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕಡೆಗಳಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇನ್ನು ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳನ್ನು ಕೆಲವು ಪ್ರಕರಣಗಳಲ್ಲಿ ಪತ್ತೆ ಹಚ್ಚಲಾಗಿದೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 11 Apr 2026 1:10 pm

ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಕರ್ನಾಟಕದ ಇತ್ತೀಚಿನ ಬಜೆಟ್ ಅಧಿವೇಶನದಲ್ಲಿ ಮಂಡನೆಯಾದ ಪ್ರಮುಖ ಮಸೂದೆಗಳಲ್ಲಿ ಒಂದಾದ 'ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026' ಕ್ಕೆ ರಾಜ್ಯಪಾಲರು ತಡೆ ನೀಡಿದ್ದಾರೆ. ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಾಗಿ ಬ್ಯಾಲೆಟ್ ಪೇಪರ್ ಅಥವಾ ಮತ ಪತ್ರಗಳನ್ನು ಬಳಸಲು ಈ ಮಸೂದೆ ಅವಕಾಶ ಕಲ್ಪಿಸುತ್ತಿತ್ತು. ಸರ್ಕಾರ ಅಧಿವೇಶನದಲ್ಲಿ ಮಂಡಿಸಿದ್ದ ಒಟ್ಟು 11 ಮಸೂದೆಗಳ ಪೈಕಿ ಈ ಒಂದನ್ನು ಹೊರತುಪಡಿಸಿ, ಉಳಿದ 10 ಪ್ರಮುಖ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ವಿಜಯ ಕರ್ನಾಟಕ 11 Apr 2026 1:09 pm

ಸಂಪಾದಕೀಯ | ರಾಜ್ಯ ಪಿಯುಸಿ ಫಲಿತಾಂಶ: ಎಲ್ಲಾ ಬಣ್ಣ ಮಸಿ ನುಂಗಿತು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 11 Apr 2026 1:08 pm

ರೊಸಾರಿಯೋ ಪ್ರೀಮಿಯರ್ ಲೀಗ್ (RPL) ಆಟಗಾರರ ಹರಾಜು ಮತ್ತು ಜೆರ್ಸಿ ಬಿಡುಗಡೆ

ಬೆಂಗಳೂರು : ಐಸಿವೈಎಂ ರೊಸಾರಿಯೋ ಆಯೋಜಿಸಿರುವ ರೊಸಾರಿಯೋ ಪ್ರೀಮಿಯರ್ ಲೀಗ್ (RPL) ನ ಆಟಗಾರರ ಹರಾಜು ಮತ್ತು ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ರೊಸಾರಿಯೋ ಕ್ಯಾಥೆಡ್ರಲ್‌ನಲ್ಲಿ ನಡೆಯಿತು. ಮಂಗಳೂರಿನ ಬಿಷಪ್ ಡಾ.ಪೀಟರ್ ಪಾಲ್ ಸಲ್ದಾನಾ ತಂಡದ ಜೆರ್ಸಿಗಳನ್ನು ಬಿಡುಗಡೆ ಮಾಡಿದರು. ಆಲ್ವಿನ್ ಡಿ'ಸೋಜಾ ಆಟಗಾರರ ಹರಾಜನ್ನು ನಡೆಸಿದರು. ತಂಡದ ಮಾಲೀಕರು, ತಮ್ಮ ಐಕಾನ್ ಆಟಗಾರರೊಂದಿಗೆ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ.ವಲೇರಿಯನ್ ಡಿಸೋಜಾ, ಫಾ.ಜೈಸನ್ ಲೋಬೊ, ರೊಸಾರಿಯೊ ಕ್ಯಾಥೆಡ್ರಲ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಿರಿಲ್ ರೊಸಾರಿಯೊ, ಕಾರ್ಯದರ್ಶಿ ಐಡಾ ಫುರ್ಟಾಡೊಮತ್ತು ಐಸಿವೈಎಂ ರೊಸಾರಿಯೋ ಅಧ್ಯಕ್ಷೆ ಲಕ್ಷ್ಯ ನೊರೊನ್ಹಾ ಉಪಸ್ಥಿತರಿದ್ದರು. RPL ತಂಡಗಳು : ► ಗ್ಲೋರಿ ಹಂಟರ್ಸ್ ರೊಸಾರಿಯೊ ಮಾಲೀಕರು: ನೆಲ್ಸನ್ ಡಿಸೋಜಾ ಐಕಾನ್ ಆಟಗಾರ: ವಿನ್ಸೆಂಟ್ ಡಿಸೋಜಾ ► ರೊಸಾರಿಯೊ ಟೈಟನ್ಸ್‌ ಮಾಲೀಕರು: ಆಲ್ಡ್ರಿನ್ ವಾಜ್ ಐಕಾನ್ ಆಟಗಾರ: ಲಕ್ಷ್ಯ ನೊರೊನ್ಹಾ ► ರೊಸಾರಿಯೊ ಸೂಪರ್ ಕಿಂಗ್ಸ್ ಮಾಲೀಕರು: ಆಸ್ಟನ್ ಫೆರ್ನಾಂಡಿಸ್ ಐಕಾನ್ ಆಟಗಾರ: ವಿಜಯ್ ಫೆರ್ನಾಂಡಿಸ್ ► ಸ್ಟ್ರೈಕ್ ಫೋರ್ಸ್ ರೊಸಾರಿಯೊ ಮಾಲೀಕರು: ರಾಯಲ್ ಡಿಸಿಲ್ವಾ ಐಕಾನ್ ಆಟಗಾರ: ವಾಲ್‌ಸ್ಟನ್ ► ರಾಯಲ್ ಚಾಲೆಂಜರ್ಸ್ ರೊಸಾರಿಯೊ ಮಾಲೀಕರು: ಹೀವನ್ ಡಿ'ಸೋಜಾ ಐಕಾನ್ ಆಟಗಾರ: ವಿವೇಕ್ ಫೆರ್ನಾಂಡಿಸ್ Delete Edit

ವಾರ್ತಾ ಭಾರತಿ 11 Apr 2026 1:03 pm

ಪ್ರಧಾನಿ ಮೋದಿ–ರಾಹುಲ್ ಗಾಂಧಿ ಮುಖಾಮುಖಿ ಮಾತುಕತೆ: ಜ್ಯೋತಿಬಾ ಫುಲೆ ಜಯಂತಿಯಲ್ಲಿ ಅಪರೂಪದ ಕ್ಷಣ

ಹೊಸದಿಲ್ಲಿ: ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನಾಚರಣೆಯ ಅಂಗವಾಗಿ ಶನಿವಾರ ಸಂಸತ್‌ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರಸ್ಪರ ಶುಭ ವಿನಿಮಯ ಮಾಡಿಕೊಂಡು ಮಾತುಕತೆ ನಡೆಸಿದ ಅಪರೂಪದ ಕ್ಷಣ ಕಂಡುಬಂದಿತು. ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆ ಜೊತೆಗೆ ಪ್ರೇರಣಾ ಸ್ಥಳಕ್ಕೆ ಆಗಮಿಸಿದಾಗ, ರಾಹುಲ್ ಗಾಂಧಿಯವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ, ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಇತರ ಕೇಂದ್ರ ಸಚಿವರೊಂದಿಗೆ ಉಪಸ್ಥಿತರಿದ್ದರು. ಮೋದಿ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡು ಕೆಲಕಾಲ ಸಂಭಾಷಣೆ ನಡೆಸಿದರು. “ನಮಸ್ತೆ ರಾಹುಲ್ ಜೀ,” ಎಂದು ಪ್ರಧಾನಿ ಮೋದಿ ಮಾತು ಆರಂಭಿಸಿದರೆ, “ನಮಸ್ತೆ ಪ್ರಧಾನಮಂತ್ರಿ ಜೀ,” ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು. ಬಳಿಕ ಇಬ್ಬರೂ ಫುಲೆ ಅವರ ವಿಚಾರಗಳನ್ನು ಉಲ್ಲೇಖಿಸುತ್ತಾ ಸಂಕ್ಷಿಪ್ತವಾಗಿ ಚರ್ಚೆ ನಡೆಸಿದರೆಂದು ಸ್ಥಳದಲ್ಲಿದ್ದ ಮೂಲಗಳು ತಿಳಿಸಿವೆ. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಹಾತ್ಮ ಫುಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಮಹಾತ್ಮ ಫುಲೆ ಅವರು ತಮ್ಮ ಜೀವನವನ್ನು ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಮುಡಿಪಾಗಿಟ್ಟಿದ್ದರು. ತಾರತಮ್ಯ ಮತ್ತು ಅಸಮಾನತೆಗೆ ಅವರ ಪ್ರತಿರೋಧ ದೇಶಕ್ಕೆ ನ್ಯಾಯ ಮತ್ತು ಸಮಾನತೆಯ ದಾರಿಯನ್ನು ತೋರಿಸಿತು. ಅವರ ಆದರ್ಶಗಳು ಸಾಮಾಜಿಕ ನ್ಯಾಯದ ಪ್ರಯತ್ನಗಳಿಗೆ ಮಾರ್ಗದರ್ಶಕವಾಗಿವೆ,” ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಫುಲೆ ಅವರಿಗೆ ಗೌರವ ಸಲ್ಲಿಸಿ, “ಮಹಾನ್ ಸಾಮಾಜಿಕ ಸುಧಾರಕ ಮಹಾತ್ಮ ಫುಲೆ ಅವರ ಜೀವನವು ನೈತಿಕ ಧೈರ್ಯ, ಆತ್ಮಾವಲೋಕನ ಮತ್ತು ಸಮಾಜದ ಕಲ್ಯಾಣಕ್ಕಾಗಿ ಅಚಲ ಸಮರ್ಪಣೆಯ ಸ್ಪೂರ್ತಿದಾಯಕ ಉದಾಹರಣೆ,” ಎಂದು ತಮ್ಮ ಬ್ಲಾಗ್‌ ನಲ್ಲಿ ಬರೆದಿದ್ದಾರೆ. #WATCH | Delhi: Prime Minister Narendra Modi arrives at Prerna Sthal on the Parliament premises to pay a floral tribute to Mahatma Jyotiba Phule on his 200th birth anniversary today. Lok Sabha Speaker Om Birla, Lok Sabha LoP Rahul Gandhi, Union Minister Arjun Ram Meghwal, former… pic.twitter.com/QexqUVky1Z — ANI (@ANI) April 11, 2026

ವಾರ್ತಾ ಭಾರತಿ 11 Apr 2026 12:52 pm

10 ದಿನಗಳ ಕಾಲ ಮಹಿಳಾ ಜಾಗೃತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವಂತಾಗಲಿದೆ ಎಂದು ಆಶಿಸಿದರು.  ಮಹಿಳಾ ಮೀಸಲಾತಿ ಎಂಬುದು ಬಹಳ ವರ್ಷಗಳಿಂದ ಒಂದು ಕೂಗು, ಅಪೇಕ್ಷೆ, ಬೇಡಿಕೆಯಾಗಿತ್ತು. ಅದು ಈಡೇರುವ ವಿಚಾರದಲ್ಲಿ ಸಂಶಯವಿತ್ತು. ಸುಮಾರು 15 ವರ್ಷಗಳ ಹಿಂದೆ ಇದು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಕೆಲವು ರಾಜಕೀಯ ಪಕ್ಷದವರು ಮಸೂದೆಯ ಹಾಳೆಯನ್ನು ಹರಿದು ಹಾಕಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು ಎಂದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿರೋಧಿ ಮಾನಸಿಕತೆ ಮತ್ತು ದಾಷ್ಟ್ರ್ಯ ಇವೆರಡನ್ನೂ ತೋರಿಸಲಾಗಿತ್ತು ಎಂದು ನುಡಿದರು. ಬಳಿಕ ಈ ಮಸೂದೆ ನೆನೆಗುದಿಗೆ ಬಿದ್ದಿತ್ತು. ಯುಪಿಎ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಇದನ್ನು ಮುಂದಕ್ಕೆ ತರಲಾಗಲಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ಅವರು ಹೇಳಿದರು.  ಸಂಸತ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಜನಪ್ರತಿನಿಧಿ ಆಗಿರುವವರಿಗೆ ಎಲ್ಲ ಪಕ್ಷಗಳು ಆದ್ಯತೆ ಕೊಡಲಿವೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಈಗಿನಿಂದಲೇ ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು. ಕಾಂಗ್ರೆಸ್ ಹಳದಿ ಗ್ಲಾಸ್ ಹಾಕಿಕೊಂಡಿದೆ. ಅದರಿಂದ ಯಾವುದನ್ನು ನೋಡಿದರೂ ಹಳದಿ, ಚುನಾವಣೆಯೇ ಅವರಿಗೆ ಗೋಚರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವುದೆಂದು ನನಗೆ ಅನಿಸುತ್ತಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಈ ಮಸೂದೆಗೆ ವಿರೋಧ ಇದ್ದಾರಾ ಅಥವಾ ಈಗ ಚರ್ಚೆ ಮಾಡುವುದಕ್ಕೆ ವಿರೋಧ ಇದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ- ಸಿ.ಮಂಜುಳಾ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ.ಮಂಜುಳಾ ಅವರು ಮಾತನಾಡಿ, ನಾರಿ ಶಕ್ತಿ ವಂದನ್ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು ಎಂದು ಹೇಳಿದರು. ಸಹಿ ಸಂಗ್ರಹವೂ ನಡೆಯಲಿದೆ. ನಾಳೆ ಕೆ.ಆರ್.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್ ಕಾಲ್ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ ಎಂದು ವಿವರಿಸಿದರು. ಯುವ ಮೋರ್ಚಾದಿಂದ ಬೈಕ್, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಳವಿಕ ಅವಿನಾಶ್, ರೂಪಾಲಿ ನಾಯಕ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ.ಮಂಜುಳಾ, ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ ಭಾಗವಹಿಸಿದ್ದರು.

ವಾರ್ತಾ ಭಾರತಿ 11 Apr 2026 12:51 pm

ದ್ವಿತೀಯ ಪಿಯು ಪರೀಕ್ಷೆ: ಶ್ಯಾರನ್ ಸಲೋನಿಗೆ 97.66 ಶೇ. ಅಂಕ

ಮಂಗಳೂರು: ದ್ವಿತೀಯ ಪಿಯು 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ಯಾರನ್ ಸಲೋನಿ ಮಾಬೆನ್ 586 (97.66 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರಿನ ಜೆಪ್ಪು ಬಪ್ಪಲ್ ನಿವಾಸಿ ಶೈಲೇಶ್ ಮಾಬೆನ್ ಮತ್ತು ಸರಿತಾ ಮಾಬೆನ್ ದಂಪತಿಯ ಪುತ್ರಿ.

ವಾರ್ತಾ ಭಾರತಿ 11 Apr 2026 12:41 pm

ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 11) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಒನ್ ಇ೦ಡಿಯ 11 Apr 2026 12:32 pm

ಕದನ ವಿರಾಮ ಮಾತುಕತೆ| ಪಾಕಿಸ್ತಾನಕ್ಕೆ ಬಂದಿಳಿದ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ

ಇಸ್ಲಮಾಬಾದ್: ಇಸ್ಲಮಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಸರಕಾರಿ ವಿಮಾನದಲ್ಲಿ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಬಂದಿಳಿದಿದೆ. ಈ ನಿಯೋಗದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಸಲಹೆಗಾರ ಜೇರೆಡ್ ಕುಶ್ನರ್ ಇದ್ದು, ಕದನ ವಿರಾಮ ಮಾತುಕತೆಯ ನೇತೃತ್ವವನ್ನು ವಹಿಸಲಿದ್ದಾರೆ.   ಇರಾನ್ ನಿಯೋಗ ಇಸ್ಲಾಮಾಬಾದ್ ತಲುಪಿದ ಬೆನ್ನಲ್ಲೆ ಶನಿವಾರ ಮುಂಜಾನೆ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ. ಇರಾನ್‌ ಸಂಸತ್ ಸ್ಪೀಕರ್ ಮುಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದಲ್ಲಿ ಆಗಮಿಸಿರುವ ಇರಾನ್ ನಿಯೋಗ, ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಕದನ ವಿರಾಮದ ಕುರಿತ ಮಹತ್ವದ ಮಾತುಕತೆಯನ್ನು ನಡೆಸಲಿದೆ. 

ವಾರ್ತಾ ಭಾರತಿ 11 Apr 2026 12:21 pm

ದೆಹಲಿಯಲ್ಲಿ 2028ರ ವೇಳೆಗೆ ಪೆಟ್ರೋಲ್‌ ದ್ವಿಚಕ್ರ ವಾಹನಗಳ ನೋಂದಣಿ ಬಂದ್; ಒಂದು ಸುಂದರ ಕರಡು ಇವಿ ನೀತಿ Explained

ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಸರ್ಕಾರ ತನ್ನ 2026-30 ಸಾಲಿನ ಇವಿ ವಾಹನ ನೀತಿ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಕುತೂಹಲಕಾರಿ ಪ್ರಸ್ತಾವನೆಗಳನ್ನು ಸೇರಿಸಿದೆ. ಈ ಪೈಕಿ ಅತ್ಯಂತ ಪ್ರಮುಖವಾಗಿ 2028ರ ವೇಳೆಗೆ ದೆಹಲಿಯಲ್ಲಿ ಪೆಟ್ರೋಲ್‌ ದ್ವಿಚಕ್ರ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾವನೆ ಎಲ್ಲರ ಗಮನ ಸೆಳೆದಿದೆ. ಇನ್ನುಳಿಂದಂತೆ ವಿದ್ಯುತ್‌ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲು ಈ ಕರಡು ಪ್ರತಿಯಲ್ಲಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Apr 2026 12:19 pm

ಕಾಂಗ್ರೆಸ್‌ನಲ್ಲಿ ನಾಯಕತ್ವದ ಅವಕಾಶಕ್ಕಾಗಿ ಮುಸ್ಲಿಂ ಸಮುದಾಯದಲ್ಲಿ ತೆರೆಮರೆ ಪೈಪೋಟಿ! ಯಾರೆಲ್ಲಾ ಮುಂಚೂಣಿಯಲ್ಲಿ

ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವಕ್ಕಾಗಿ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಮಟ್ಟದಲ್ಲಿ ಮುಸ್ಲಿಮರಿಗೆ ರಾಜಕೀಯ ನಾಯಕತ್ವ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ಮುಸ್ಲಿಂ ಶಾಸಕರ ಮತ್ತೊಂದು ಗುಂಪಿನ ವಿರೋಧ ಇದೆ. ದಾವಣಗೆರೆ ಉಪ ಚುನಾವಣೆಯಲ್ಲಿ ಇದು ಬಹಿರಂಗಗೊಂಡಿದೆ. ಸಮರ್ಥ್ ಪರವಾಗಿ ಪ್ರಚಾರ ನಡೆಸಿದ ಮುಸ್ಲಿಂ ಶಾಸಕರನ್ನು ಸಮುದಾಯ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಇದ್ದಾರೆ ಎಂಬ ಆರೋಪವೂ ಇದೆ.

ವಿಜಯ ಕರ್ನಾಟಕ 11 Apr 2026 12:18 pm

PBKS VS SRH: ಪಂಜಾಬ್ ಕಿಂಗ್ಸ್‌-ಎಸ್‌ಆರ್‌ಎಚ್‌ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಹೇಳೋದೇನು?

PBKS VS SRH IPL 2026: ಮುಲ್ಲನ್‌ಪುರ್‌ನಲ್ಲಿ ಇಂದು (ಏಪ್ರಿಲ್‌ 11) ಮಧ್ಯಾಹದನ ನಡೆಯಲಿರುವ ಐಪಿಎಲ್‌ 2026ರ 17ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ನಡುವೆಯೇ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹಾಗಾದ್ರೆ, ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಚಂಡೀಗಢದ ಮುಲ್ಲನ್‌ಪುರ್‌ನಲ್ಲಿರುವ ಮಹಾರಾಜ ಯಾದವೀಂದ್ರ

ಒನ್ ಇ೦ಡಿಯ 11 Apr 2026 12:08 pm

ಜಗತ್ತಿನಲ್ಲಿ ಯುದ್ಧ ತೊಲಗಿ, ಶಾಂತಿ ನೆಲೆಸುವಂತೆ ಆಗ್ರಹಿಸಿ ಉಡುಪಿಯ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಏಕಾಂಗಿ ಧರಣಿ

ಉಡುಪಿ: ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲಸಲಿ ಎಂದು ಆಗ್ರಹಿಸಿ ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ’ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ ಉಪನ್ಯಾಸಕ ರಾಮಾಂಜಿ ಶನಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಮುಂದಿನ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸಿದ್ದಾರೆ. ‘ಯುದ್ಧ ತೊಲಗಲಿ, ಶಾಂತಿ ನೆಲೆಸಲಿ’, ‘ಯುದ್ಧ ನಿಲ್ಲಿಸಿ ಪರಿಸರ ಉಳಿಸಿ’ ಎಂಬ ಫಲಕಗಳನ್ನು ಕೈಯಲ್ಲಿ ಹಿಡಿದು, ಗಾಂಧಿ ಪುಸ್ತಕದೊಂದಿಗೆ ರಾಮಾಂಜಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಂಕೇತಿಕ ಧರಣಿ ನಡೆಸಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಸಂಬಂಧಿ ಘಟನೆಗಳನ್ನು ನೋಡಿ ಮನನೊಂದು ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆಗಳಿಗೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ನೈತಿಕ ಪ್ರತಿಭಟನೆಯಾಗಿ ಗಾಂಧಿ ಮಾದರಿಯಲ್ಲಿ ಮೌನ ಧರಣಿ ನಡೆಸುತ್ತಿದ್ದೇನೆ ಎಂದು ರಾಮಾಂಜಿ ತಿಳಿಸಿದರು. ‘ನನ್ನ ಈ ಧರಣಿಯನ್ನು ಜನಜಾಗೃತಿಯ ಉದ್ದೇಶದಿಂದ ಮಾಡುತ್ತಿದ್ದೇನೆ. ಇದನ್ನು ಬಹಳಷ್ಟು ಮಂದಿ ಬೆಂಬಲಿಸಿದ್ದು, ಮುಂದೆ ರಾಜ್ಯ ಮಟ್ಟದವರೆಗೂ ಈ ಅಭಿಯಾನವನ್ನು ವಿಸ್ತರಿಸಲಾಗುವುದು’ ಎಂದು ರಾಮಾಂಜಿ ತಿಳಿಸಿದರು.

ವಾರ್ತಾ ಭಾರತಿ 11 Apr 2026 12:06 pm

ಸಿ.ಎಂ.ಮುನಿಯಪ್ಪ, ಮಂಗ್ಳೂರು ವಿಜಯ, ಶೋಭ ಗಸ್ತಿ ಸಹಿತ ಐವರಿಗೆ ʼಡಾ.ಬಿ.ಆರ್.ಅಂಬೇಡ್ಕರ್‌ ಪ್ರಶಸ್ತಿʼ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2026ನೇ ಸಾಲಿನ ʼಡಾ.ಬಿ.ಆರ್.ಅಂಬೇಡ್ಕರ್‌ ಪ್ರಶಸ್ತಿʼಗೆ 5 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್‌ 27ರಂದು ಜರುಗಿದ ಆಯ್ಕೆ ಸಮಿತಿ ಸಭೆಯಲ್ಲಿ 5 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಎ.14 ರಂದು ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರು: ಮಂಗ್ಳೂರು ವಿಜಯ(ಹೋರಾಟ/ಸಾಹಿತ್ಯ) ಸಿ.ಎಂ. ಮುನಿಯಪ್ಪ(ಹೋರಾಟ/ಪತ್ರಿಕೋದ್ಯಮ) ಎಚ್‌.ಎನ್‌ ಅಣ್ಣಯ್ಯ(ಹೋರಾಟ) ಹನುಮಂತ ರಾವ್‌ ದೊಡ್ಡಮನಿ(ಸಾಹಿತ್ಯ/ಸಂಘಟನೆ) ಶೋಭ ಗಸ್ತಿ (ದೇವದಾಸಿ ವಿಮುಕ್ತಿ)

ವಾರ್ತಾ ಭಾರತಿ 11 Apr 2026 12:05 pm

ಉಪಚುನಾವಣೆಯ ಫಲಿತಾಂಶ ಏನೇ ಬರಲಿ, ನಿಟ್ಟುಸಿರು ಬಿಟ್ಟ ಬಿಜೆಪಿಯ ವರಿಷ್ಠರು : ಕಾರಣವೇನು?

BJP High Command relaxed: ರಾಜ್ಯ ಬಿಜೆಪಿಯಲ್ಲಿನ ಗೊಂದಲದ ಬಗ್ಗೆ ಹೈಕಮಾಂಡ್ ಕೂಡಾ ಚಿಂತಾಕೃತರಾಗಿದ್ದರು. ಆದರೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟನ್ನು ಪ್ರದರ್ಶಿಸಿದ್ದರಿಂದ, ವರಿಷ್ಠರು ನಿಟ್ಟುಸಿರು ಬಿಟ್ಟರು. ಯಾವುದೇ ಬಣ ರಾಜಕೀಯದ ಸುದ್ದಿಯೇ ಇಲ್ಲದಂತೆ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದರು.

ವಿಜಯ ಕರ್ನಾಟಕ 11 Apr 2026 11:50 am

ಸದುದ್ದೇಶ ಇದೆ, ಆದರೆ ಅಮೆರಿಕ ಮೇಲೆ ನಮಗೆ ವಿಶ್ವಾಸವಿಲ್ಲ : ಇರಾನ್

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಅಮೆರಿಕದ ಮೇಲಿನ ಅಪನಂಬಿಕೆಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ಒತ್ತಿ ಹೇಳಿದ್ದಾರೆ ಎಂದು ಇರಾನ್‌ ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ, ಮಾತುಕತೆಗಳ ಮಧ್ಯದಲ್ಲೇ, ಇರಾನ್ ನಂಬಿಕೆಯಿಟ್ಟಿದ್ದರೂ ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿದೆ. ಇದರಿಂದ ಅನೇಕ ಯುದ್ಧ ಅಪರಾಧಗಳು ನಡೆದಿವೆ” ಎಂದು ಘಾಲಿಬಾಫ್ ಆರೋಪಿಸಿದರು. “ನಮಗೆ ಸದುದ್ದೇಶ ಇದೆ. ನಾವು ಸಂವಾದಕ್ಕೆ ಬದ್ಧರಾಗಿದ್ದೇವೆ. ಆದರೆ ಅಮೆರಿಕನ್ನರ ಮೇಲೆ ನಮಗೆ ವಿಶ್ವಾಸವಿಲ್ಲ,” ಎಂದು ಅವರು ಪುನರುಚ್ಚರಿಸಿದರು.

ವಾರ್ತಾ ಭಾರತಿ 11 Apr 2026 11:43 am

ದಾವಣಗೆರೆ ದಕ್ಷಿಣ ಉಪ ಚುನಾವಣೆ : ಈ ಬಾರಿ 11 ಸಾವಿರ ಹೆಚ್ಚು ಮತದಾನ, ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಶುರು

ಕಳೆದ ಹತ್ತು ದಿನ ದಾವಣಗೆರೆ ನಗರದಲ್ಲಿ ಕುಂಭದ್ರೋಣ ಮಳೆಯಂತೆ ಚುನಾವಣೆ ಪ್ರಚಾರ ನಡೆದಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರಿಂದಿಡಿದು ಮುಖಂಡರು, ನಾಯಕರು, ರಾಜ್ಯ ನಾಯಕರು ದಾವಣಗೆರೆಯಲ್ಲಿ ಬೀಡುಬಿಟ್ಟು ಪ್ರಚಾರದ ಮಳೆ ಸುರಿಸಿದ್ದರು. ಬಂದ ಎಲ್ಲನಾಯಕರಿಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಕಾಂಗ್ರೆಸ್‌ ಅಭ್ಯರ್ಥಿ ಸಮಥ್‌ರ್‍ ಶಾಮನೂರು ಸಾಥ್‌ ನೀಡಿ ಸುಸ್ತಾಗಿದ್ದರು. ಈಗ ಚುನಾವಣೆ ಮಳೆ ನಿಂತು ಅಭ್ಯರ್ಥಿಗಳು, ಮುಖಂಡರು, ನಾಯಕರು ಎಲ್ಲ ರಿಲ್ಸಾಕ್ಸ್‌ ಮೂಡ್‌ಗೆ ಜಾರಿದ್ದರು. ಮಳೆ ನಿಂತರು ಮರದ ಹನಿ ನಿಲ್ಲಲಿಲ್ಲ ಎಂಬಂತೆ ಇಡೀ ದಿನ ಸೋಲು, ಗೆಲುವು ಪ್ರಚಾರದ ಚರ್ಚೆ ನಡೆಸಿದರು.

ವಿಜಯ ಕರ್ನಾಟಕ 11 Apr 2026 11:32 am

Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ?

ಬೆಂಗಳೂರು: ವಿವಿಧ ರೈಲುಗಳು ಕರ್ನಾಟಕದ ದಕ್ಷಿಣ ಭಾಗದಿಂದ ಮುಂಬೈಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ ಇತ್ತೀಚೆಗೆ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Sleepr Vande Bharat Express Train) ಸಂಚಾರ ಮಾಡುವಂತೆ ಭಾರತೀಯ ರೈಲ್ವೆ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬಂದಿತ್ತು. ಈ ಸಂಬಂಧ ರಾಜ್ಯ ಸಂಸದರು, ಸಚಿವರು ಮನವಿ ಮಾಡಿದ್ದರು. ಇದೀಗ

ಒನ್ ಇ೦ಡಿಯ 11 Apr 2026 11:31 am

ಕಾರ್ಗಿಲ್ ವೀರ, ಕರ್ನಲ್ ಸೋನಂ ವಾಂಗ್ಚುಕ್ ನಿಧನ: ಸೇನೆಯಿಂದ ಗೌರವ ನಮನ

ಹೊಸ ದಿಲ್ಲಿ:1999ರ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮಹಾ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ಮಾಜಿ ಸೇನಾಧಿಕಾರಿ ಕರ್ನಲ್ ಸೋನಂ ವಾಂಗ್ಚುಕ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅವರು ಲಡಾಖ್ ನ ಹೆಮ್ಮೆಯ ಪುತ್ರರಾಗಿದ್ದು, ಆಪರೇಷನ್ ವಿಜಯ್ ಸಂದರ್ಭದಲ್ಲಿ ಅವರು ತೋರಿದ ಸಾಹಸ ಅತಿ ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆ ನಡಸುತ್ತಿದ್ದ ಸೇನಾ ಸಿಬ್ಬಂದಿಗಳಿಗೆ ಸ್ಫೂರ್ತಿ ನೀಡಿತ್ತು ಎಂದು ಶ್ಲಾಘಿಸಿದ್ದಾರೆ. ಸೋನಂ ವಾಂಗ್ಚುಕ್ ಅವರ ನಿಧನಕ್ಕೆ ಭಾರತೀಯ ಸೇನೆ ಸಂತಾಪ ವ್ಯಕ್ತಪಡಿಸಿದ್ದು, ಈ ದುಃಖದ ಸಮಯದಲ್ಲಿ ನಾವು ಮೃತ ಕುಟುಂಬದ ಜೊತೆಗಿದ್ದೇವೆ ಎಂದು ಹೇಳಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಸೋನಂ ವಾಂಗ್ಚುಕ್ ಸೇನೆಯ ಅತ್ಯಂತ ಹೆಚ್ಚು ಬಿರುದಾಂಕಿತ ಅಧಿಕಾರಿಯಾಗಿದ್ದು, ಅವರು ತಮ್ಮ ಶೌರ್ಯ, ಅಪ್ರತಿಮ ನಾಯಕತ್ವ ಹಾಗೂ ಕರ್ತವ್ಯದಲ್ಲಿನ ರಾಜಿರಹಿತ ಬದ್ಧತೆಗೆ ಹೆಸರಾಗಿದ್ದರು” ಎಂದು ಪ್ರಶಂಸಿಸಿದ್ದಾರೆ. ಸೋನಂ ವಾಂಗ್ಚುಕ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಭಾರತೀಯ ಸೇನೆ, “ಅವರು ಧೀರ ಯೋಧ, ಬದ್ಧತೆಯುಳ್ಳ ನಾಯಕ ಹಾಗೂ ಲಡಾಖ್‌ನ ಪುತ್ರರಾಗಿದ್ದರು. ಅವರ ಜೀವನವು ಧೈರ್ಯ, ಸೇವೆ ಮತ್ತು ಐಕ್ಯತೆಯಿಂದ ಕೂಡಿತ್ತು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ವಾರ್ತಾ ಭಾರತಿ 11 Apr 2026 11:30 am

ಧಾರವಾಡದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹತ್ಯೆ

ಧಾರವಾಡ : ನಗರದ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಹಾಶ್ಮಿ ನಗರದ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿಲಾಗಿದೆ. ಶುಕ್ರವಾರ ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ನಾಲ್ಕು ಜನ ದುಷ್ಕರ್ಮಿಗಳ ತಂಡ ಹತ್ಯೆಗೈದ ಪರಾರಿಯಾಗಿದ್ದು, ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಆಗಮಿಸಿ ಆರೋಪಿಗಳ‌ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.. ರಾಜಕೀಯ ಪ್ರೇರಿತವಾದ ಹತ್ಯೆ ಎಂದು ಫೈರೋಜ್ ಮನೆಯವರು ಆರೋಪಿಸಿದ್ದು, ಮೃತ ಫೈರೋಜ್ ರಾಜಕೀಯವಾಗಿ ಸಾಕಷ್ಟು ಜನಪ್ರಿಯತೆ ಹೊಂದಿದ್ದರು, ಇದೇ ತಿಂಗಳು 24 ರಂದು ಮದುವೆ ಸಹ ನಿಶ್ಚಯವಾಗಿತ್ತು ಎಂಬ ಮಾಹಿತಿ ಕೂಡಾ ದೊರೆತಿದೆ. ಘಟನೆ ನಡೆದ ಸ್ಥಳದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನುವ ಮಾಹಿತಿ ದೊರೆತಿದ್ದು, ಇದನ್ನು ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಹು-ಧಾ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಕುರಿತು ಹು-ಧಾ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್​ ಮಾತನಾಡಿದ್ದು, 'ಫೈರೋಜ್ ಪಠಾಣ್ ಅವರು ಮನೆಯಲ್ಲಿದ್ದ ಸಂದರ್ಭದಲ್ಲಿ ಮೂರರಿಂದ ನಾಲ್ಕು ಜನರ ತಂಡ ಹಲ್ಲೆ ಮಾಡಿದ್ದಾರೆ. ಫೈರೋಜ್ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕೊಲೆಯನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ಹಾಗೂ ಅವರ ಕುಟುಂಬ ಸದಸ್ಯರ ಮಾಹಿತಿ ಪಡೆಯುತ್ತಿದ್ದು, ಆರೋಪಿಗಳು ಯಾರು ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆ ನಮ್ಮ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ.  ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಮಾಡುತ್ತೇವೆ ಎಂದು ತಿಳಿಸಿದರು.

ವಾರ್ತಾ ಭಾರತಿ 11 Apr 2026 11:17 am

Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್

ಬೆಂಗಳೂರು: ಜಾಗತಿಕವಾಗಿ ಕರ್ನಾಟಕ ಇಂದಿನ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಸಂಬಂಧ 2026-27 ನೇ ಸಾಲಿನಲ್ಲಿ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ನೀತಿ ಆರಂಭಿಸಲಾಗುತ್ತದೆ. ಎಲ್ಲ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲಾ ಶಿಕ್ಷಕರು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿ ನಡೆಸಲಿದ್ದಾರೆ. ಇತ್ತೀಚೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ

ಒನ್ ಇ೦ಡಿಯ 11 Apr 2026 11:07 am

ಶಾಂತಿ ಮಾತುಕತೆ| ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಮೃತ ಶಾಲಾ ಮಕ್ಕಳ ಪೋಟೊ, ಬ್ಯಾಗ್‌ ಇಸ್ಲಾಮಾಬಾದ್‌ಗೆ ಕೊಂಡೊಯ್ದ ಇರಾನ್ ನಿಯೋಗ

ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮಾತುಕತೆ; ಇರಾನ್ ಪಟ್ಟು

ವಾರ್ತಾ ಭಾರತಿ 11 Apr 2026 10:58 am

ಇದ್ಯಾವ ಸೀಮೆ ಬೌಲಿಂಗ್? ಉಸ್ಮಾನ್‌ ತಾರಿಕ್‌ ಎಸೆತಕ್ಕೆ ನೋ ಎಂದ ಡೇರಿಲ್‌ ಮಿಚೆಲ್;‌ ಪಿಎಸ್‌ಎಲ್‌ ಹೈಡ್ರಾಮಾ!

ಪಾಕಿಸ್ತಾನದ ಸ್ಪಿನ್ನರ್‌ ಉಸ್ಮಾನ್‌ ತಾರಿಕ್‌ ಚೆಂಡು ಎಸೆಯುವಾಗ ತೆಗೆದುಕೊಳ್ಳುವಷ್ಟು ಸಮಯದಲ್ಲಿ ಆರ್ಟೆಮಿಸ್-2 ಗಗನಯಾತ್ರಿಗಳು ಚಂದ್ರನಿಂದ ಭೂಮಿಗೆ ಮರಳಿದ್ದಾರೆ. ನಿಂತು ಬೌಲ್‌ ಮಾಡುವ ಅವರ ವಿಧಾನ ಅನೇಕ ಬಾರಿ ವಿವಾದಕ್ಕೆ ಗುರಿಯಾಗಿದೆ. ಆದರೆ ತಮ್ಮ ಬೌಲಿಂಗ್‌ ಶೈಲಿಯಲ್ಲಿ ಉಸ್ಮಾನ್‌ ಕೊಂಚವೂ ಸುಧಾರಣೆ ತಂದಿಲ್ಲ. ಇದರ ಪರಿಣಾಮ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌)ನಲ್ಲಿ ಕಂಡುಬಂದಿದ್ದು, ಡೇರಿಲ್‌ ಮಿಚೆಲ್‌ ಅವರು ಉಸ್ಮಾನ್‌ ಅವರ ಬೌಲಿಂಗ್‌ ಎದುರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Apr 2026 10:41 am

ಸರಕಾರ ವಿತರಿಸಿದ ವಾಹನಗಳ ಮೇಲೆ ಕಾಂಗ್ರೆಸ್ ಶಾಸಕನ ಫೋಟೊ!

ಹೈಕೋರ್ಟ್ ಆದೇಶ ಉಲ್ಲಂಘಿಸಿ ವೈಯಕ್ತಿಕ ಪ್ರಚಾರ

ವಾರ್ತಾ ಭಾರತಿ 11 Apr 2026 10:36 am

ತಮಿಳುನಾಡು ಚುನಾವಣೆ| ವಿಜಯ್‌ರನ್ನು ಎಂಜಿಆರ್‌ರೊಂದಿಗೆ ಹೋಲಿಕೆ ಮಾಡಬೇಡಿ: ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ

ತಿರುವಳ್ಳೂರ್ (ತಮಿಳುನಾಡು): ನಟ, ರಾಜಕಾರಣಿ ವಿಜಯ್ ರನ್ನು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಎಐಎಡಿಎಂಕೆ ಮುಖ್ಯಸ್ಥ ಕೆ.ಪಳನಿಸ್ವಾಮಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ತಮ್ಮ ಜೀವನದುದ್ದಕ್ಕೂ ಜನರ ಸೇವೆ ಮಾಡಿದ್ದರು ಹಾಗೂ ತಮ್ಮ ಆಸ್ತಿಯನ್ನು ಕಿವುಡ ಮತ್ತು ಮೂಗ ಆಶ್ರಯ ಧಾಮಕ್ಕೆ ದಾನ ಮಾಡಿದ್ದರು. ಹೀಗಾಗಿ, ಅವರು ವಿಜಯ್ ಗಿಂತ ಶ್ರೇಷ್ಠ ಎಂದು ಕೆ.ಪಳನಿಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಪಳನಿಸ್ವಾಮಿ, “ಇತರರನ್ನು ಟೀಕಿಸುವಾಗ ಘನತೆ ಮತ್ತು ಶಿಸ್ತು ಇರಬೇಕು” ಎಂದು ಹೇಳಿದ್ದಾರೆ. ನಾನು ಎಂ.ಜಿ.ರಾಮಚಂದ್ರನ್ ಹಾಗೂ ಜೆ.ಜಯಲಲಿತಾರಿಂದ ರಾಜಕೀಯ ಕಲಿತಿದ್ದೇನೆ ಎಂದು ಹೇಳಿದ್ದಾರೆ.   ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೆ.ಪಳನಿಸ್ವಾಮಿ, ಎಂ.ಜಿ.ರಾಮಚಂದ್ರನ್ ದೇವರಾಗಿದ್ದು, ಹೀಗಾಗಿ ಅವರನ್ನು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್‌ರೊಂದಿಗೆ ಹೋಲಿಕೆ ಮಾಡಬಾರದು ಎಂದು ಮನವಿ ಮಾಡಿದರು. “ಆತನನ್ನು ನಮಗೆ ದೇವರಾಗಿರುವ ಎಂಜಿಆರ್ ರೊಂದಿಗೆ ಹೋಲಿಕೆ ಮಾಡಬೇಡಿ. ಎಂಜಿಆರ್ ಅವರು ತಾವು ಚಲನಚಿತ್ರಗಳಲ್ಲಿ ನಟಿಸಿ ಸಂಪಾದಿಸಿದ ಹಣವನ್ನು ಜನರ ಸೇವೆಗೆ ಬಳಸಿದರು ಹಾಗೂ ತಮ್ಮ ಜೀವನದುದ್ದಕ್ಕೂ ಜನರ ಒಳಿತಿಗಾಗಿ ಹೋರಾಟ ನಡೆಸಿದರು. ಅವರು ಮೃತಪಟ್ಟ ಬಳಿಕ, ತಮ್ಮ ಆಸ್ತಿಪಾಸ್ತಿಯನ್ನು ಕಿವುಡ ಮತ್ತು ಮೂಗ ಆಶ್ರಯ ಧಾಮಕ್ಕೆ ದಾನ ನೀಡಿದ್ದರು. ಅಂತಹ ಅದ್ಭುತ ವ್ಯಕ್ತಿ ನಮ್ಮ ನಾಯಕ” ಎಂದು ಕೆ.ಪಳನಿಸ್ವಾಮಿ ಹೇಳಿದ್ದಾರೆ.

ವಾರ್ತಾ ಭಾರತಿ 11 Apr 2026 10:34 am

ದುಬೈ: ಗೆಳೆಯರ ಬಳಗದಿಂದ ದಿವಂಗತ ಸಮೀರ್ ಅನುಸ್ಮರಣೆ; ಕಂಬನಿ ಮಿಡಿದ ಗಣ್ಯರು, ಸ್ನೇಹಿತರು

ದುಬೈ: ಜಾತಿ, ಧರ್ಮದ ಎಲ್ಲೆ ಮೀರಿ ತನ್ನನ್ನು ಸದಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಇತರರ ಕಷ್ಟಕ್ಕೆ ನೆರವಾಗುತ್ತಿದ್ದ ಮಾನವತಾವಾದಿ ಸಮೀರ್ ಅವರ ಅಗಲಿಕೆ ನಮಗೆಲ್ಲರಿಗೂ ಅತೀವ ನೋವು ತಂದಿದೆ ಎಂದು ಕರ್ನಾಟಕ NRI ಫೋರಂ ಅಧ್ಯಕ್ಷ, ಹೋಟೆಲ್ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ದುಬೈನ ಅಲ್ ಖಿಸ್ಸೆಸ್ ನ ಫಾರ್ಚ್ಯೂನ್ ಪ್ಲಾಝ ಹೋಟೆಲಿನಲ್ಲಿ ಶುಕ್ರವಾರ ಸಂಜೆ ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಸಮೀರ್ ಉದ್ಯಾವರ ಅವರ ಅನುಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿ ಅವರು ಮಾತನಾಡುತ್ತಿದ್ದರು. ಸಮೀರ್ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸ್ನೇಹಭಾವದಿಂದ ಬೆರೆತು, ಸಹಾಯ ಬೇಕಾದವರಿಗೆ ಯಾವಾಗಲೂ ಮುಂಚೂಣಿಯಲ್ಲಿ ನಿಂತು ನೆರವಾಗುತ್ತಿದ್ದವರು. ಇಂತಹ ಮಾನವೀಯ ಗುಣಗಳನ್ನು ಹೊಂದಿದ್ದ ವ್ಯಕ್ತಿಯ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಅವರ ಸೇವಾ ಮನೋಭಾವ, ಸರಳತೆ ಎಲ್ಲರಿಗೂ ಪ್ರೇರಣೆಯಾಗಿದ್ದು, ಅವರ ನೆನಪು ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತದೆ ಎಂದರು. ಯುಎಇಯಲ್ಲಿರುವ ಕನ್ನಡಿಗರ ಕಷ್ಟ, ನೋವುಗಳಿಗೆ ಹಗಲು ರಾತ್ರಿ ಎನ್ನದೆ, ಜಾತಿ-ಧರ್ಮವನ್ನು ನೋಡದೆ ಸ್ಪಂದಿಸುವ ಜೊತೆಗೆ ಸೌಹಾರ್ದತೆಯ ಕೊಂಡಿಯಾಗಿದ್ದ ಸಮೀರ್ ಅವರ ಅಗಲಿಕೆ ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಅತೀವ ನೋವು ತಂದಿದೆ ಎಂದು ಬಾವುಕರಾದರು. ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾತನಾಡಿ, ಪ್ರತಿ ವರ್ಷ ನಡೆಯುವ ಸಂಘದ ಕರ್ನಾಟಕ ರಾಜ್ಯೋತ್ಸವದ ವೇಳೆ ಸಮೀರ್ ಅವರ ಸವಿನೆನಪಿಗಾಗಿ 'ಸಮೀರ್ ಸೇವಾ ರತ್ನ' ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದರು. ಸಮೀರ್ ಅವರ ನಿಸ್ವಾರ್ಥ ಸೇವೆ ನಮಗೆಲ್ಲ ಮಾದರಿಯಾಗಲಿ, ಅವರ ಸೇವಾ ಮನೋಭಾವ, ಸರಳತೆ, ಕಷ್ಟಕ್ಕೆ ಸ್ಪಂದಿಸುವ ಗುಣ ನಾವು ನಮ್ಮ ಜೀನವದುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ಸಮೀರ್ ಅವರನ್ನು ಜೀವಂತವಾಗಿರಿಸೋಣ ಎಂದು ಹೇಳಿದರು. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ, ಕಾರ್ಯಕ್ರಮದ ಸಂಯೋಜಕ ಹಿದಾಯತ್ ಅಡ್ಡೂರು ಮಾತನಾಡಿ, ನಾವೆಲ್ಲಾ ಒಬ್ಬ ಒಳ್ಳೆಯ ಗೆಳೆಯ, ಸದಾ ಬೇರೆಯವರ ಬಗ್ಗೆಯೇ ಯೋಚಿಸುವಂಥ, ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವಂಥ ಮಾನವೀಯತೆಯನ್ನೇ ಉಸಿರಾಡಿಕೊಂಡಿದ್ದ ವ್ಯಕ್ತಿಯನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದರು. ಅವರು ಮಾಡಿದ ಸೇವೆ, ಅವರ ಮಾನವೀಯತೆ ಮತ್ತು ತ್ಯಾಗವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರ ಸ್ಥಾನವನ್ನು ಯಾರೂ ಭರ್ತಿ ಮಾಡಲಾಗದು, ಅವರ ನೆನಪುಗಳು ಮಾತ್ರ ಸದಾ ನಮ್ಮೊಂದಿಗೆ ಇರುತ್ತವೆ. ಸಮೀರ್ ಅವರ ಸ್ಮರಣಾರ್ಥ ನಾವು ದುಬೈ ಕನ್ನಡ ಸಂಘದವರ ಜೊತೆ ಸೇರಿ ಎಪ್ರಿಲ್ 19ರಂದು ದುಬೈನ ಅಲ್ ಜದ್ದಾಫ್ ನಲ್ಲಿ ರಕ್ತದಾನ ಶಿಬರವನ್ನು ಹಮ್ಮಿಕೊಂಡಿದ್ದೇವೆ. ಈ ರಕ್ತದಾನ ಶಿಬಿರವನ್ನು ನಾವೆಲ್ಲಾ ಜೊತೆ ಸೇರಿ ರಕ್ತದಾನ ಮಾಡುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದರು. ಸಮೀರ್ ಅವರು ಮಾಡುತ್ತಿದ್ದ ಸಮಾಜ ಸೇವೆ ಇತರರಿಗೆ ಮಾದರಿಯಂತಿತ್ತು. ಕನ್ನಡಪರ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ಕನ್ನಡ ಸೇವೆಗಾಗಿ ಸಮೀರ್ ಮುಂದಿರುತ್ತಿದ್ದರು. ಅವರ ಅಗಲಿಕೆ ನಮಗೆ ಅತೀವ ನೋವು ತಂದಿದೆ ಎಂದು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ತಮ್ಮ ನೋವನ್ನು ತೋಡಿಕೊಂಡರು. ಸಮೀರ್ ಉದ್ಯಾವರ ಅವರ ಗೆಳೆಯರ ಬಳಗ, ಹಿತೈಷಿಗಳು, ಅಭಿಮಾನಿಗಳು ಆಯೋಜಿಸಿದ್ದ ಈ ಅನುಸ್ಮರಣೆ ಕಾರ್ಯಕ್ರಮದಲ್ಲಿ ಕನ್ನಡಪರ ಹಾಗು ಇತರ ಸಂಘಟನೆಗಳ ಮುಖಂಡರಾದ ಶ್ವೇತಾ, ಮೊಹಮ್ಮದ್ ಶಫೀಕ್, ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು, ಹಿದಾಯ ಫೌಂಡೇಶನ್ ನ ಖಾಸಿಂ, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್, ಕೃಷ್ಣರಾಜ್, ನಸ್ರೀನ್ ಬಾವಾ, ಕಿರಣ್ ಗೌಡ, ದೀಪಕ್ ಪೂಜಾರಿ, ಅಬ್ದುಲ್ ಖಾಲಿಕ್, ಮಲ್ಲಿಕಾರ್ಜುನ ಗೌಡ, ಮಝರ್ ಗುಜರಾತ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಕದ್ರಿ, ಉದ್ಯಮಿ ಸಲೀಂ ಮೂಡಬಿದ್ರೆ, ಜೇಮ್ಸ್ ಮೆಂಡೋನ್ಸಾ, ನಾಗರಾಜ್, ಫೈಝಲ್ ಕಾಪು, ಸನಾನ್ ಅವರು ಸಮೀರ್ ಅವರಿಗೆ ಕಂಬನಿ ಮಿಡಿದರು. ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಕನ್ನಡಪರ ಹಾಗು ಇತರ ಸಂಘಟನೆಗಳ ನೂರಾರು ಮಂದಿ ಮುಖಂಡರು, ಸಮೀರ್ ಅವರ ಆಪ್ತ ಮಿತ್ರರು, ಪರಿಚಯಸ್ಥರು, ಹಿತೈಷಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮೊದಲು ಜನಾಝಾ ನಮಾಝ್ ಹಾಗು ದುವಾ ನೆರವೇರಿಸಲಾಯಿತು. ಕಾರ್ಯಕ್ರಮದ ಮಧ್ಯೆ ಸಮೀರ್ ಅವರ ಕುರಿತ ವೀಡಿಯೋ ಪ್ರದರ್ಶನ ಮಾಡಲಾಯಿತು. ಎರ್ರೋಲ್ ಗೋನ್ಸಾಲ್ವೆಸ್ ಕಾರ್ಯಕ್ರಮ ನಿರೂಪಿಸಿ, ಸಮದ್ ಬಿರಾಲಿ ವಂದಿಸಿದರು.          

ವಾರ್ತಾ ಭಾರತಿ 11 Apr 2026 10:22 am

ಗುಂಡ್ಲುಪೇಟೆ | ಮುಳ್ಳುಹಂದಿ ಬೇಟೆಯಾಡಲು ಹೋಗಿ ಮೃತಪಟ್ಟ ಚಿರತೆ?

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಮೀನು ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಶಂಕರಪ್ಪ ರವರ ಜಮೀನಿನ ಬಳಿ ಮುಳ್ಳುಹಂದಿ ಬೇಟೆಯಾಡಲು ಹೋದ ಚಿರತೆಗೆ ಮುಳ್ಳುಗಳು ಚುಚ್ಚಿ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಬೊಮ್ಮನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಕರಿಕಲ್ಲು ಕ್ವಾರಿ ಸಮೀಪದ ಜಮೀನು ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

ವಾರ್ತಾ ಭಾರತಿ 11 Apr 2026 10:05 am

ಮೌಲ್ಯಮಾಪನಕ್ಕೆ ನಿಯೋಜಿತರಾದ ಶಿಕ್ಷಕರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ

ರಾಷ್ಟ್ರೀಯ ಜನಗಣತಿ-2027ರ ಕಾರ್ಯಕ್ಕಾಗಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಪರೀಕ್ಷಾ ಮೌಲ್ಯಮಾಪನ ಮತ್ತು ಮಂಡಳಿಯ ಕೆಲಸಗಳ ಹಿತದೃಷ್ಟಿಯಿಂದ ಶಿಕ್ಷಕರು, ಉಪನ್ಯಾಸಕರು ಹಾಗೂ ಮೌಲ್ಯನಿರ್ಣಯ ಮಂಡಳಿಯ ನೌಕರರಿಗೆ ಈ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ.

ವಿಜಯ ಕರ್ನಾಟಕ 11 Apr 2026 9:35 am

ಹೈಕಮಾಂಡ್ ಅಂಗಣಕ್ಕೆ ದಾವಣಗೆರೆ ಕೈ ಫೈಟ್ : ಆಖಾಡಕ್ಕೆ ಖುದ್ದು ಸುರ್ಜೇವಾಲಾ, ರೇಡಾರ್’ನಲ್ಲಿ ಮೂವರು - ಯಾರೆಲ್ಲಾ?

Karnataka By Election Fight in Congress : ರಾಜ್ಯದ ಕೆಲವು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ, ಆ ನಾಯಕರು, ಈ ಎಚ್ಚರಿಕೆಗೆ ಸೊಪ್ಪು ಹಾಕದ ಹಿನ್ನಲೆಯಲ್ಲಿ, ಮೂವರು ಅಲ್ಪಸಂಖ್ಯಾತ ಸಮುದಾಯದ ನಾಯಕರ ವಿರುದ್ದ ಖುದ್ದು ಸುರ್ಜೇವಾಲಾ, ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ದಾವಣಗೆರೆ ಉಪಚುನಾವಣೆಯಲ್ಲಿ ನಡೆದಂತಹ ವಿದ್ಯಮಾನ ಇದಾಗಿದೆ.

ವಿಜಯ ಕರ್ನಾಟಕ 11 Apr 2026 9:23 am

Kalaburagi | ಐಪಿಎಲ್ ಬೆಟ್ಟಿಂಗ್‌ನಲ್ಲಿ ನಷ್ಟ: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಲಬುರಗಿ: ಐಪಿಎಲ್ ಬೆಟ್ಟಿಂಗ್ ನಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೋರ್ವ ಕಮಲಾಪುರ ತಾಲೂಕಿನ ನಾಗೂರ ಬಳಿಯ ಸೇತುವೆ ಮೇಲಿಂದ ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ನಿವಾಸಿ ಚಂದ್ರಕಾಂತ ಮಾಧವರಾವ ದೇಸಾಯಿ (40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡಿ ಸಾಕಷ್ಟು ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಬೆಳಿಗ್ಗೆ ಮನೆಯಿಂದ ಹೊರ ಬಂದಿದ್ದು, ನಾಗೂರ ಸೇತುವೆ ಬಳಿ ಬೈಕ್ ನಿಲ್ಲಿಸಿ, ಮೊಬೈಲ್‌ ಬಿಟ್ಟು ನೀರಿಗೆ ಜಿಗಿದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಶೋಧ ಕಾರ್ಯ ನಡೆಸಿದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಾಗಾಂವ ಪೊಲೀಸ ಠಾಣೆ ಪಿಎಸ್‌ಐ ಬಸವರಾಜ ಚಿತ್ತಕೋಟೆ, ಸಿಬ್ಬಂದಿ ಹಣಮಂತ ರೆಡ್ಡಿ ಮತ್ತಿತ್ತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 11 Apr 2026 9:22 am

ಬೆಳಗಾವಿ : ಮಾದಕ ವಸ್ತು ಜಾಲದಲ್ಲಿ ‘ಝೆನ್‌ ಜೀ’ ; ಸಂಪೂರ್ಣ ಕಡಿವಾಣ ಪೊಲೀಸರಿಗೂ ಸವಾಲು

ಬೆಳಗಾವಿ ಮಹಾನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ನಿರಂತರ ದಾಳಿ ಮತ್ತು ಬಂಧನದಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ವ್ಯಸನಿಗಳ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಈ ದಂಧೆಯನ್ನು ಬೇರುಸಹಿತ ಕಿತ್ತುಹಾಕಲು ಇಲಾಖೆಯು ಶ್ರಮಿಸುತ್ತಿದ್ದರೂ ಸಹ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ವಿಜಯ ಕರ್ನಾಟಕ 11 Apr 2026 9:03 am

ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟ ವಿ.ಸೋಮಣ್ಣ

ಮೈಸೂರು: ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಮೈಸೂರು ಮತ್ತು ತುಮಕೂರು ಮುಂತಾದ ಇನ್ನಿತರ ನಗರಗಳನ್ನು ಬೆಂಗಳೂರಿಗೆ ಪರ್ಯಾಯ ಬೆಳವಣಿಗೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಜೊತೆಗೆ ಪ್ರಾದೇಶಿಕ ರೈಲುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಂಗಳೂರು-ಮೈಸೂರು ಮಹಾನಗರಗಳ ರೈಲು ಪ್ರಯಾಣಿಕರಿಗೆ

ಒನ್ ಇ೦ಡಿಯ 11 Apr 2026 9:00 am

ಕ್ಯಾಲೆಂಡರ್ ಅಲ್ಲ ಇದು ‘ಡೇಟ್’ ಸಮಸ್ಯೆ!

ಚಿತ್ರ: ಕ್ಯಾಲೆಂಡರ್ ನಿರ್ದೇಶನ: ನವೀನ್ ಶಕ್ತಿ ನಿರ್ಮಾಣ: ಆದರ್ಶ್ ಗುಂಡುರಾಜ್ ತಾರಾಗಣ: ಆದರ್ಶ್ ಗುಂಡುರಾಜ್, ಸುಶ್ಮಿತಾ ನಾಯಕ್, ರಮೇಶ್ ಇಂದಿರಾ, ಮಾಲಾಶ್ರೀ ಮೊದಲಾದವರು. ಕ್ಯಾಲೆಂಡರ್ ಎನ್ನುವ ಹೆಸರು ಚಿತ್ರಕ್ಕೆ ತೀರ ಸಪ್ಪೆಯಾಗಿ ಕಾಣಬಹುದು. ಆದರೆ ಒಂದು ಕ್ಯಾಲೆಂಡರ್ ಒಳಗಿನ ದಿನಾಂಕಗಳು ಪ್ರತೀ ವ್ಯಕ್ತಿಯ ಬದುಕಿನಲ್ಲಿಯೂ ಎಷ್ಟೆಲ್ಲ ವಿಶೇಷಗಳನ್ನು ಅಡಗಿಸಿರುತ್ತವೆ ಎಂದು ಯೋಚಿಸಿದಾಗ ಅಲ್ಲೊಂದು ಸ್ವಾರಸ್ಯ ಕಾಣಿಸಬಹುದು. ಈ ಚಿತ್ರದ ಕಥೆ ಕೂಡ ಅಷ್ಟೇ. ‘ಬ್ರಹ್ಮ’ ಬಾರ್‌ನಲ್ಲಿ ಪಾನಮತ್ತನಾಗಿ ಕುಳಿತ ಕಥಾನಾಯಕನಿಂದ ಚಿತ್ರ ಶುರು. ಬಳಿಕ ಆತ ರಸ್ತೆ ಮಧ್ಯದಲ್ಲಿ ಮದ್ಯದ ಬಾಟಲಿಯೊಂದಿಗೆ ಆಕಾಶ ನೋಡುತ್ತಾ ಕಾಣಿಸುತ್ತಾನೆ. ಆತನ ಹೆಸರು ಆಕಾಶ್. ಅಲ್ಲೇ ಆತನಿಗೆ ನಕ್ಷತ್ರ ಕಾಣಿಸಿದಂತಾಗುತ್ತಾಳೆ. ಅದೊಂದು ಭಗ್ನ ಪ್ರೇಮದ ಕಥೆ ಎನ್ನುವುದು ಆನಂತರದ ಹಾಡಿನ ಮೂಲಕ ಅರಿವಾಗುತ್ತದೆ. ಆಕಾಶ್ ಮತ್ತು ನಕ್ಷತ್ರ ನಡುವಿನ ಸಂಬಂಧ ಮುರಿದು ಹೋಗಿದ್ದೇಕೆ ಎಂದು ತೋರಿಸುವ ಮೊದಲು, ಆಕಾಶ್ ಮತ್ತು ಮಾಳವಿಕಾ ಎನ್ನುವ ವಿವಾಹಿತ ಮಹಿಳೆಯೊಂದಿಗಿನ ಆಪ್ತ ಸ್ನೇಹವನ್ನು ತೋರಿಸಲಾಗುತ್ತದೆ. ನಕ್ಷತ್ರಾ ಮತ್ತು ಮಾಳವಿಕಾ ಇಬ್ಬರು ಕೂಡ ಆಕಾಶ್ ಆತ್ಮೀಯತೆಗೆ ಒಳಗಾದ ಬಳಿಕ ಅಪಾಯವನ್ನು ಕಾಣುತ್ತಾರೆ. ನಿಜಕ್ಕೂ ಇದಕ್ಕೆಲ್ಲ ಆಕಾಶ್ ಕಾರಣವೇ? ಅಥವಾ ಇದರ ಹಿಂದೆ ಬೇರೇನಾದರೂ ರಹಸ್ಯ ಅಡಗಿದೆಯೇ ಎನ್ನುವುದೇ ಚಿತ್ರದ ಕಥಾ ವಸ್ತು. ಕ್ಯಾಲೆಂಡರ್ ಎನ್ನುವ ಹೆಸರಿಗೆ ಸಂಬಂಧವೇ ಇರದಂತೆ ಸಾಗುವ ಚಿತ್ರದ ಕೊನೆಯಲ್ಲಿ ಮಹಿಳೆಯರ ಋತುಚಕ್ರದ ‘ದಿನಾಂಕ’ಕ್ಕೆ ಸಂಬಂಧಿಸಿದ ಸಂದೇಶವಿದೆ. ಋತುಮತಿಯಾಗುವ ದಿನಗಳಲ್ಲಿ ಆ ಮಹಿಳೆಯರೊಂದಿಗೆ ಸಹನೆಯಿಂದ ವರ್ತಿಸುವಂತೆ ಸೂಚನೆ ಇದೆ. ಆದರೆ ಅದಕ್ಕೂ ಮೊದಲು ಇಂಥದೊಂದು ಚಿತ್ರ ವೀಕ್ಷಿಸಬಲ್ಲ ಸಹನೆ ಇರುವ ಪ್ರೇಕ್ಷಕರನ್ನು ಪತ್ತೆ ಮಾಡಬೇಕಿದೆ. ಸಪ್ಪೆಯಾಗಿ ಶುರುವಾಗುವ ಚಿತ್ರಕ್ಕೆ ಮೊದಲ ಕಳೆ ಬರುವುದೇ ಸುಚೇಂದ್ರ ಪ್ರಸಾದ್ ಅವರ ವಕೀಲನ ಪಾತ್ರದ ಪ್ರವೇಶವಾದಾಗ. ಆದರೆ ಅದು ಪೊಲೀಸ್ ತನಿಖಾಧಿಕಾರಿ ಯುವರಾಜ್ ಒಂಟಿಮನಿ ಎನ್ನುವ ಪಾತ್ರವನ್ನು ಪರಿಚಯಿಸುವುದಕ್ಕಷ್ಟೇ ಸೀಮಿತಗೊಳ್ಳುತ್ತದೆ. ಆದರೆ ಹಾಗೆ ಪರಿಚಯವಾದ ಒಂಟಿಮನಿ ಕ್ಯಾರೆಕ್ಟರ್‌ಗೆ ಜೀವ ತುಂಬುವ ರಮೇಶ್ ಇಂದಿರಾ ಕಡೆತನಕ ಈ ಚಿತ್ರವನ್ನು ತಮ್ಮ ಹೆಗಲಲ್ಲೇ ಹೊತ್ತು ಮುನ್ನಡೆಸಿದ್ದಾರೆ. ಕಥಾ ನಾಯಕ ಆಕಾಶ್ ಪಾತ್ರದಲ್ಲಿ ಆದರ್ಶ್ ಗುಂಡುರಾಜ್ ಅವರಿಗೆ ಕುಡುಕ, ಪ್ರೇಮಿ ಮತ್ತು ವೈದ್ಯನಾಗಿ ವಿವಿಧ ಆಯಾಮದಲ್ಲಿ ಕಾಣಿಸುವ ಅವಕಾಶವಿದೆ. ಆದರೆ ಬಹುತೇಕ ದೃಶ್ಯಗಳಲ್ಲಿ ಆದರ್ಶ್ ಬೆದರು ಬೊಂಬೆಯಂತೆ ಮಾತ್ರ ಗೋಚರಿಸುತ್ತಾರೆ. ಆಕಾಶ್ ಸ್ನೇಹಿತೆ ಮಾಳವಿಕಾಳಾಗಿ ನಿಶ್ವಿಕಾ ಪಾಟೀಲ್ ನಟಿಸಿದ್ದಾರೆ. ಪ್ರೇಯಸಿ ನಕ್ಷತ್ರಾ ಪಾತ್ರವನ್ನು ಸುಶ್ಮಿತಾ ನಾಯಕ್ ಚೆನ್ನಾಗಿ ನಿಭಾಯಿಸಿದ್ದಾರೆ. ಕಥೆಯ ಆರಂಭದಿಂದಲೇ ಬಹು ನಿರೀಕ್ಷಿತವೆನಿಸುವಂತೆ ಕಾಯ್ದಿರಿಸಲಾದ ಫ್ಲ್ಯಾಶ್ ಬ್ಯಾಕ್ ಪ್ರೇಮದ ದೃಶ್ಯಗಳು ಹಾಸ್ಯದ ಹೆಸರಲ್ಲಿ ಅಪಹಾಸ್ಯಕ್ಕೊಳಗಾಗಿವೆ. ಒಂದೆರಡು ದೃಶ್ಯಗಳಲ್ಲಿ ಆಕಾಶ್ ಮತ್ತು ನಕ್ಷತ್ರ ಕಾರಣವಿಲ್ಲದೆ ಪರಸ್ಪರ ಬಹುವಚನ, ಏಕವಚನಗಳನ್ನು ಬದಲಾಯಿಸಿ ಬಳಸುತ್ತಿರುತ್ತಾರೆ. ಹಾಗಾದರೆ ಸಂಭಾಷಣೆಕಾರರಿಗೆ ಅಷ್ಟು ಕೂಡ ಸ್ಪಷ್ಟತೆ ಇಲ್ಲವೇ ಎನ್ನುವ ಸಂದೇಹ ಮೂಡುವುದು ಸಹಜ. ಆಕಾಶ್ ಸ್ನೇಹಿತ ಸೂರ್ಯನಾಗಿ ಗುರುನಂದನ್, ಪ್ರಮೋದ್ ಶೆಟ್ಟಿ ಮೊದಲಾದವರ ಪಾತ್ರಗಳು ಕಥೆಗೆ ಕುತೂಹಲ ಸೃಷ್ಟಿಸಲು ಪೂರಕವಾಗಿವೆ. ಧನ್ವೀರ್ ಸಿಂಗ್ ಪಾತ್ರಧಾರಿ ಶಿವ ಪ್ರದೀಪ್, ಬಾರ್ ಕ್ಯಾಶಿಯರ್ ಚಂದ್ರುವಾಗಿ ಕಾಣಿಸಿರುವ ನಟ, ನಿರ್ದೇಶಕ ರಾಜು ದೇವಸಂದ್ರ ಮೊದಲಾದವರ ಪಾತ್ರಗಳನ್ನು ಕೂಡ ಇದೇ ಪಟ್ಟಿಯಲ್ಲಿ ಸೇರಿಸಬಹುದು. ಯುವ ರಾಜಕಾರಣಿ ರಾಕೇಶನಾಗಿ ಪ್ರಮೋದ್ ಶೆಟ್ಟಿಯವರಿಗೆ ಅಬ್ಬರದ ಹಾಗೂ ಆಕರ್ಷಕ ಪ್ರವೇಶವಿದೆ. ಪ್ರಮೋದ್ ತಂದೆಯಾಗಿ ನಟ ಭಯಂಕರ ವಜ್ರಮುನಿ ಫೋಟೊವನ್ನು ಭಿತ್ತಿಮೇಲೆ ತೂಗು ಹಾಕಿರುವುದು ಪರಿಣಾಮಕಾರಿಯಾಗಿದೆ. ಆದರೆ ಅಷ್ಟೊಂದು ಬಲಿಷ್ಠವೆನಿಸುವ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ಕೂಡ ಒಂದೊಳ್ಳೆಯ ಅಂತ್ಯ ನೀಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಪ್ರಕಾಶ್ ತೂಮಿನಾಡು ಗುಂಡು ಹಾಕಲು ಕಲಿಸುವ ದೃಶ್ಯಕ್ಕೆ ಸೀಮಿತವಾಗಿದ್ದಾರೆ. ರಿಯಾಲಿಟಿ ಶೋ ಖ್ಯಾತಿಯ ಚಂದ್ರಪ್ರಭ ಕುಡುಕ ಸ್ನೇಹಿತನಾಗಿ ಮರೆಯಾದ ನಟ ಎನ್.ಎಸ್ ರಾವ್ ಅವರನ್ನು ನೆನಪಿಸುತ್ತಾರೆ. ಸುನಾದ್ ಗೌತಮ್ ಸಂಗೀತದಲ್ಲಿ ಹಾಡುಗಳು ಆಲಿಸುವಂತಿವೆ. ಇಳಿಸಂಜೆಯಲ್ಲಿ ಚಿತ್ರೀಕರಿಸಿದಂತಿರುವ ಕೆಲವೊಂದು ದೃಶ್ಯಗಳು ಗುಣಮಟ್ಟ ಕಳೆದುಕೊಂಡಂತೆ ಮಸುಕಾಗಿವೆ. ಪ್ರೇಮಕಥೆ, ಸಸ್ಪೆನ್ಸ್ ಥ್ರಿಲ್ಲರ್ ಎನ್ನುವಂತೆ ಸಾಗುವ ಕಥೆ ಕೊನೆಯಲ್ಲಿ ಒಂದು ಕೌಟುಂಬಿಕ ಸಂದೇಶದೊಂದಿಗೆ ಸಮಾಪ್ತಿಗೊಳ್ಳುತ್ತದೆ! ಪ್ರತೀ ಋತುಮತಿಯ ಹಿಂದಿನ ನೋವನ್ನು ಕಮರ್ಷಿಯಲ್ ಕಥೆಯ ಮಾದರಿಯಲ್ಲಿ ಕಟ್ಟಿಕೊಟ್ಟಿರುವ ಕಥೆಗಾರನ ಬುದ್ಧಿಮತ್ತೆ ಮೆಚ್ಚುವಂಥದ್ದು. ಆದರೆ ಅಂತ್ಯದ ವಿಚಾರ ಬಂದಾಗ ಸಂದೇಶ ಸಾರಿದ ರೀತಿ ಸಾಕ್ಷ್ಯಚಿತ್ರದಂತಾಗಿದೆ. ಅತಿಥಿಯಂತೆ ಆಗಮಿಸುವ ಮಾಲಾಶ್ರೀ ಪಾತ್ರ ಕೂಡ ಅಷ್ಟರಲ್ಲೇ ಕಳೆದು ಹೋಗುತ್ತದೆ.

ವಾರ್ತಾ ಭಾರತಿ 11 Apr 2026 9:00 am

ಶೋಷಿತರ ಅರಿವಿನ ಬೆಳಕು ಮಹಾತ್ಮ ಜ್ಯೋತಿಬಾ ಫುಲೆ

ಜ್ಯೋತಿ ಬಾ ಫುಲೆಯವರು ‘ಸತ್ಯ ಶೋಧಕ ಸಮಾಜ’ ಎಂಬ ಸಂಘಟನೆ ಮೂಲಕ ಸಮಾಜದಲ್ಲಿ ಸೋದರತೆ, ಮೈತ್ರಿ, ಜಾತಿ ರಹಿತ ಸಮಾಜ ಸೃಷ್ಟಿಸುವುದು, ಶೋಷಿತರಿಗೆ ಶಾಲೆ ಸ್ಥಾಪಿಸುವುದು, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವುದು, ಬ್ರಾಹ್ಮಣ ಪುರೋಹಿತರಿಲ್ಲದೆ ಮದುವೆ-ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸತಿಸಹಗಮನ ಪದ್ಧತಿ ಮತ್ತು ವಿಧವಾ ಪದ್ಧತಿ ವಿರೋಧಿಸಿ, ವಿಧವೆಯರಿಗೆ ಮರು ಮದುವೆ ಮಾಡಿಸುವುದು... ಹೀಗೆ ವೈಚಾರಿಕ ಹಾದಿಯಲ್ಲಿ ತೊಡಗಿಸಿಕೊಂಡು ಜನಜಾಗೃತಿ ಮೂಡಿಸಿದರು. ಜಾತಿ, ಅಸ್ಪಶ್ಯತೆ, ಲಿಂಗತಾರತಮ್ಯ ಎಂಬ ಪಿಡುಗುಗಳು ಈ ದೇಶದಲ್ಲಿ ಸಮ ಸಮಾಜ ಸ್ಥಾಪನೆಗೆ ಪೆಟ್ಟು ನೀಡಿವೆ. ವೈದಿಕ ಸಂಸ್ಕೃತಿಯಿಂದ ಒಡಮೂಡಿದ ಅಸಮಾನತೆ ಎಂಬ ಶ್ರೇಣೀಕೃತ ಸಮಾಜ ನೀತಿ ದೇಶವನ್ನು ಕತ್ತಲೆಯಲ್ಲಿ ಇಟ್ಟಿದ್ದವು. ಇಂತಹ ತಾರತಮ್ಯಗಳ ವಿರುದ್ಧ ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ನಾರಾಯಣಗುರು, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದ ಮಹನೀಯರು ದೇಶದಲ್ಲಿ ಸಮಾನತೆ ಸ್ಥಾಪಿಸಲು ಅವಿರತ ಹೋರಾಟ ನಡೆಸಿದ್ದಾರೆ. ಶತಶತಮಾನಗಳಿಂದ ಶ್ರೇಣೀಕೃತ ಸಮಾಜ ವ್ಯವಸ್ಥೆ ಈ ದೇಶದಲ್ಲಿ ಅಸಮಾನತೆ ಸೃಷ್ಟಿಸಿವೆ. ಇಂತಹ ಹೊತ್ತಲ್ಲಿ ಜಾತಿ ತಾರತಮ್ಯದ ವಿರುದ್ಧ, ಅಕ್ಷರ ವಂಚಿತ ಸ್ರೀ ಸ್ವಾತಂತ್ರ್ಯದ ಪರ ಮತ್ತು ಶೋಷಿತ ಸಮುದಾಯಗಳನ್ನು ಜಾಗೃತಿಯೆಡೆಗೆ ಕೊಂಡೊಯ್ಯಲು ಜ್ಯೋತಿಬಾ ಫುಲೆ ಶ್ರಮಿಸಿದ್ದಾರೆ. ಮಹಾತ್ಮ ಜ್ಯೋತಿಬಾ ಫುಲೆ ಭಾರತ ಕಂಡ ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು. ಹೂ ಮಾರುವ ಸಮುದಾಯಕ್ಕೆ ಸೇರಿದ ಇವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಟಗುಣ ಎಂಬ ಗ್ರಾಮದ ಗೋವಿಂದರಾವ್ ಮತ್ತು ಚಿಮುಣಾಬಾಯಿ ಮಗನಾಗಿ ಎಪ್ರಿಲ್ 11, 1827ರಂದು ಜನಿಸಿದವರು. ಮಹಾರಾಷ್ಟ್ರದಲ್ಲಿ ಹುಟ್ಟಿದ ಶೋಷಿತರ ಮಹಾಚೇತನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ತಂದೆ ರಾಮ್‌ಜಿ ಸಕ್ಪಾಲ್ ವಂಶ ಸಂತ ಕಬೀರರ ಭಕ್ತಿ ಅಭಂಗಗಳನ್ನು ಹಾಡುತ್ತಿದ್ದರು. ಜ್ಯೋತಿಬಾ ಫುಲೆ ತಂದೆ ಗೋವಿಂದರಾವ್ ವಂಶವೂ ಸವತಿಮಾಳಿ ಸಂತ ನಾಮದೇವನ ಭಕ್ತಿ ಪರಂಪರೆಯ ಮನೆತನಕ್ಕೆೆ ಸೇರಿದವರು. ಮಹಾರಾಷ್ಟ್ರದಲ್ಲಿ ಸಂತ ಚೋಖಾಮೇಳ ಮುಂತಾದ ಅನೇಕ ಸುಧಾರಕರು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಮಹಾಸಂತರಾಗಿದ್ದರು. ಹೀಗಾಗಿ ಅನೇಕ ಸಮಾಜ ಸುಧಾರಕರು ಮಹಾರಾಷ್ಟ್ರದಲ್ಲಿ ಭಕ್ತಿ ಪಂಥದ ಮೂಲದವರು. ಆದರೆ ಜ್ಯೋತಿಬಾ ಫುಲೆ ಮತ್ತು ಡಾ. ಬಿ.ಅರ್. ಅಂಬೇಡ್ಕರ್ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಕ್ರಾಂತಿಕಾರಕ ಬದಲಾವಣೆಗಳನ್ನು ಸಮಾಜದಲ್ಲಿ ಮೂಡಿಸಿದರು. ಇದರ ಮೂಲ ಸೆಲೆ ಮಹಾರಾಷ್ಟ್ರವಾದರೂ ಇಡೀ ದೇಶದ ಶೋಷಿತರನ್ನು ವಿಮೋಚನೆಗೊಳಿಸಲು ಮಹಾರಾಷ್ಟ್ರದ ನೆಲೆ ಕಾರಣವಾಯಿತು. ಇದೊಂದು 18 ಮತ್ತು 19ನೇ ಶತಮಾನದ ಹೊಸ ಕ್ರಾಂತಿಯೆಂದರೆ ತಪ್ಪಾಗದು. ಅಂದಿನ ಕಾಲದಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಶಿಕ್ಷಣದ ಹೆಬ್ಬಾಗಿಲುಗಳು ತೆರೆದಿದ್ದವು. ಶೂದ್ರರು ಮತ್ತು ಸ್ರೀ ಕುಲಕ್ಕೆ ಶಿಕ್ಷಣದ ಬಾಗಿಲು ಸಂಪೂರ್ಣ ಮುಚ್ಚಿದ್ದವು. ಕಲಿಯುವವರು ಜಾತಿಯಲ್ಲಿ ಬ್ರಾಹಣರು ಮತ್ತು ರಾಜ್ಯವಾಳುವ ಅರಸರ ಮಕ್ಕಳು. ಕಲಿಸುವ ಶಿಕ್ಷಕರು ಸಹ ಬ್ರಾಹ್ಮಣರಾಗಿದ್ದರು. ಶೇ.90ರಷ್ಟು ಹಿಂದುಳಿದ, ದಮನಿತ ನಿಮ್ನವರ್ಗಗಳು ಶಿಕ್ಷಣ ವಂಚಿತರಾಗಿದ್ದರು. ಜಾತಿ ಮತ್ತು ಅಸ್ಪಶ್ಯತೆಯನ್ನು ಸವರ್ಣೀಯ ಬಲಾಢ್ಯ ಜಾತಿಗಳು ಸಂಪ್ರದಾಯದಂತೆ ಪಾಲಿಸುತ್ತಾ, ಶೋಷಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದವು. ಶೋಷಿತರು ಸಾರ್ವಜನಿಕವಾಗಿ ಉಪಯೋಗಿಸುವ ಕೆರೆ, ಬಾವಿ, ದೇವಸ್ಥಾನ ಪ್ರವೇಶ ಮಾಡುವಂತಿರಲಿಲ್ಲ. ಇಂತಹ ಅಲಿಖಿತ ನಿಯಮಗಳನ್ನು ಸವರ್ಣೀಯ ಜಾತಿ ಸನಾತನ ಹಿಂದೂಗಳು ಬಲವಂತವಾಗಿ ಕೆಳಜಾತಿಗಳ ಮೇಲೆ ಹೇರಿದ್ದರು. ಕ್ರಮೇಣ ಬ್ರಿಟಿಷರ ಯುಗ ಪ್ರಾರಂಭವಾದಾಗ, 1824ರಲ್ಲಿ ಕ್ರೈಸ್ತ ಮಿಶನರಿಗಳು ಭಾರತಾದ್ಯಂತ ಎಲ್ಲ ಸಮಾಜದವರಿಗೂ ಶಿಕ್ಷಣ ನೀಡಲು ಶಾಲೆ ಪ್ರಾರಂಭಿಸಿದರು. ಲಾರ್ಡ್ ಮೆಕಾಲೆ ಫೆಬ್ರವರಿ 2-1835ರಲ್ಲಿ ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದು ಭಾರತೀಯರಿಗೆ ಶಿಕ್ಷಣ ನೀಡಲು ಶಿಫಾರಸು ಮಾಡುತ್ತಾರೆ. ಮಾರ್ಚ್ 1835ರಲ್ಲಿ ಲಾರ್ಡ್ ಬೆಂಟಿಂಗ್ ಇದನ್ನು ಅನುಮೋದಿಸುತ್ತಾರೆ. ಬ್ರಿಟಿಷ್ ಸರಕಾರ 1840ರಲ್ಲಿ ಶಿಕ್ಷಣ ಮಂಡಳಿ ಸ್ಥಾಪಿಸುತ್ತದೆ. ಆಗ ಭಾರತೀಯ ಶೋಷಿತರು ಸೇರಿ ಎಲ್ಲ ವರ್ಗದ ಜನರಿಗೂ ಶಿಕ್ಷಣ ದೊರೆಯುತ್ತದೆ. ಜ್ಯೋತಿಬಾ ಫುಲೆಯವರನ್ನು ಅವರ ತಂದೆ ಬ್ರಿಟಿಷರು ನಡೆಸುತ್ತಿದ್ದ ಮರಾಠಿ ಶಾಲೆಗೆ ಸೇರಿಸುತ್ತಾರೆ. ಜ್ಯೋತಿಬಾ ಫುಲೆಯವರಿಗೆ 13 ವರ್ಷ ಇರುವಾಗಲೇ ಪುಣೆಯ ಕಾವಡಿ ಹಳ್ಳಿಯ ನೆವಶೆ ಪಾಟೀಲ ಎಂಬವರ ಮಗಳಾದ ಸಾವಿತ್ರಿಯವರನ್ನು ಮದುವೆ ಮಾಡುತ್ತಾರೆ. ಮದುವೆ ಆದ ನಂತರ 1841ರಲ್ಲಿ ಫುಲೆ ಮಿಶನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ಓದು, ವೈವಾಹಿಕ ಜೀವನದ ನಡುವೆ ಶಿವಾಜಿ ಮಹಾರಾಜ್ ಆಡಳಿತ, ಬೂಕರ್ ಟಿ. ಜಾರ್ಜ್ ವಾಶಿಂಗ್ಟನ್ ಶಿಕ್ಷಣ ನೀತಿ, ಥಾಮಸ್ ಪೇರವರ ಮಾನವ ಹಕ್ಕು ಪ್ರತಿಪಾದನೆ ವಿಚಾರಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಥಾಮಸ್ ಪೇರವರ ಮಾನವ ಹಕ್ಕುಗಳು ಕೃತಿ ಜ್ಯೋತಿಬಾ ಫುಲೆಯವರಲ್ಲಿ ಹೋರಾಟ ಮನೋಭಾವನೆ ಮತ್ತು ವೈಚಾರಿಕತೆಯ ಕಿಚ್ಚನ್ನು ಮೂಡಿಸಿತು. ಫುಲೆಯವರು ಹಿಂದೂ ಧರ್ಮದ ಅಸಮಾನತೆ ಮತ್ತು ಅಮಾನವೀಯ ನೀತಿಗಳಿಂದ ಬೇಸರಗೊಂಡಿದ್ದರು. ಶಿಕ್ಷಣದಿಂದ ಮಾತ್ರ ಶೋಷಿತರ ಅಭಿವೃದ್ಧಿ ಸಾಧ್ಯ, ಶಿಕ್ಷಣ ಉತ್ತಮ ನಡವಳಿಕೆ, ಮಾನವೀಯ ಮೌಲ್ಯ, ವೈಚಾರಿಕ ಚಿಂತನೆಗಳನ್ನು ಬೆಳೆಸುತ್ತದೆ ಎಂದು ನಂಬಿದ್ದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಣೆ ಪಡೆದಿದ್ದ ಅವರು, ಸೋದರತೆ, ಸಮಾನತೆ ಮತ್ತು ಸ್ವಾತಂತ್ರ್ಯ ವನುಷ್ಯನಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶಾಂತಿಯನ್ನು ನೀಡುತ್ತದೆ ಎಂದು ನಂಬಿದ್ದರು. ಜ್ಯೋತಿಬಾ ಫುಲೆ ಶೋಷಿತರ ಜ್ವಲಂತ ಸಮಸ್ಯೆ ಬಗೆಹರಿಸಲು ‘ಲೋಕಹಿತವಾದಿ’ ಎಂಬ ಯುವಕರ ಸಂಘ ಸ್ಥಾಪಿಸಿ ಸಾಮಾಜಿಕವಾಗಿ ಹೋರಾಡುತ್ತಾರೆ. ಅಂದಿನ ಅನೇಕರು ಈ ಸಂಘದಲ್ಲಿದ್ದರು, ಡಾ. ಅಂಬೇಡ್ಕರ್ ಸಹ ಜ್ಯೋತಿಬಾ ಫುಲೆ ಕಾಲವಾದ ನಂತರ ಈ ಯುವ ಪಡೆಯಲ್ಲಿದ್ದರು. ಮಹಿಳೆಯರು ಶಿಕ್ಷಣ ಪಡೆಯುವುದನ್ನು ಹಿಂದೂ ಸಮಾಜ ನಿಷೇಧಿಸಿದ್ದ ಕಾಲದಲ್ಲಿ 1848ರಲ್ಲಿ ಪುಣೆಯ ಬುಧವಾರ ಪೇಟೆಯಲ್ಲಿ ತನ್ನ ಮಿತ್ರ ಉಸ್ಮಾನ್ ಶೇಕ್ ಮನೆಯಲ್ಲಿ ಶೂದ್ರ ಹೆಣ್ಣು ಮಕ್ಕಳಿಗಾಗಿ ಶಾಲೆ ಪ್ರಾರಂಭಿಸುತ್ತಾರೆ. ಶಾಲೆಗೆ ಬ್ರಾಹ್ಮಣ ಶಿಕ್ಷಕರು ಬರದೆ ಇದ್ದಾಗ, ತನ್ನ ಹೆಂಡತಿ ಸಾವಿತ್ರಿ ಬಾ ಫುಲೆ ಮತ್ತು ಉಸ್ಮಾನ್ ಶೇಕ್‌ರ ಸಹೋದರಿ ಫಾತಿಮಾ ಶೇಕ್‌ರನ್ನು ಶಿಕ್ಷಕಿಯರಾಗಿ ನೇಮಿಸುತ್ತಾರೆ. ಪತಿಯ ಶಿಕ್ಷಣ ಸುಧಾರಣೆಗೆ ಸಾವಿತ್ರಿ ಬಾ ಫುಲೆ ಬೆಂಬಲವಾಗಿ ನಿಲ್ಲುತ್ತಾರೆ. ಅಪಮಾನ ಎದುರಿಸಿ ಸಾವಿತ್ರಿ ಬಾ ಫುಲೆ ಶೋಷಿತ ಹೆಣ್ಣು ಮಕ್ಕಳಿಗೆ ಅಕ್ಷರ ಉಣಬಡಿಸುತ್ತಾರೆ. ಮುಂದೆ ಜುಲೈ 3-1851ರಲ್ಲಿ ಫುಲೆ ದಂಪತಿ ಅಣ್ಣಾಸಾಹೇಬ ಚಿಪುಳಣ್ಕರ್ ಎಂಬ ಸ್ನೇಹಿತನ ಮನೆಯಲ್ಲಿ, 1851ರ ಸೆಪ್ಟಂಬರ್ 17 ಪುಣೆಯ ರಸ್ತಾಪೇಟೆ, 1852ರ ಮಾರ್ಚ್-15 ವಿಠಾಳ ಪೇಟೆಯಲ್ಲಿ ಶಾಲೆ ತೆರೆಯುತ್ತಾರೆ. ಇದನ್ನು ಸಹಿಸದ ಬ್ರಾಹ್ಮಣರು ಸಾವಿತ್ರಿ ಫುಲೆ ಶಾಲೆಗೆ ಹೋಗುವಾಗ ಕೆಸರನ್ನು ಎರಚಿ ಅವಮಾನ ಮಾಡುತ್ತಾರೆ. ಇದಕ್ಕೆ ಹೆದರದೆ ಸಾವಿತ್ರಿ ಫುಲೆ ಶಾಲೆಗೆ ಹೋಗುವಾಗ ಎರಡು ಸೀರೆ ತೆಗೆದುಕೊಂಡು ಹೋಗಿ, ಶಾಲೆಯಲ್ಲಿ ಕೆಸರು, ಕೊಳೆ ಸೀರೆ ಬಿಚ್ಚಿ ಬದಲಿ ಸೀರೆ ಉಟ್ಟು ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಜ್ಯೋತಿ ಬಾ ಫುಲೆಯವರು ಸೆಪ್ಟಂಬರ್ 24-1873ರಲ್ಲಿ ಶೋಷಿತರ ಅಭ್ಯುದಯಕ್ಕಾಗಿ, ಶೋಷಿತರನ್ನು ಜಾತಿ, ಅಸ್ಪಶ್ಯತೆಯಿಂದ ಬಿಡುಗಡೆಗೊಳಿಸಲು ‘ಸತ್ಯ ಶೋಧಕ ಸಮಾಜ’ ಎಂಬ ಸಂಘಟನೆ ಪ್ರಾರಂಭಿಸುತ್ತಾರೆ. ಈ ಮೂಲಕ ಸಮಾಜದಲ್ಲಿ ಸೋದರತೆ, ಮೈತ್ರಿ, ಜಾತಿ ರಹಿತ ಸಮಾಜ ಸೃಷ್ಟಿಸುವುದು, ಶೋಷಿತರಿಗೆ ಶಾಲೆ ಸ್ಥಾಪಿಸುವುದು, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವುದು, ಬ್ರಾಹ್ಮಣ ಪುರೋಹಿತರಿಲ್ಲದೆ ಮದುವೆ-ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸತಿಸಹಗಮನ ಪದ್ಧತಿ ಮತ್ತು ವಿಧವಾ ಪದ್ಧತಿ ವಿರೋಧಿಸಿ, ವಿಧವೆಯರಿಗೆ ಮರು ಮದುವೆ ಮಾಡಿಸುವುದು... ಹೀಗೆ ವೈಚಾರಿಕ ಹಾದಿಯಲ್ಲಿ ತೊಡಗಿಸಿಕೊಂಡು ಜನಜಾಗೃತಿ ಮೂಡಿಸುತ್ತಾರೆ. ಫುಲೆಯವರ ಸತ್ಯ ಶೋಧಕ ಸಮಾಜ ಶೋಷಿತ ಹಿಂದುಳಿದ ಜನರ ಮೊದಲ ಸಾಮಾಜಿಕ ಸಂಘಟನೆಯಾಗಿತ್ತು. ಈ ಸಂಘಟನೆಯ ಮೂಲಕ ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕುವುದಲ್ಲದೆ, ಸಮ ಸಮಾಜ ಸೃಷ್ಟಿಗೆ ಕ್ರಾಂತಿಕಾರಿ ಬದಲಾವಣೆಗಳನ್ನು ಸಮಾಜದಲ್ಲಿ ಮೂಡಿಸುತ್ತಾರೆ. ಜ್ಯೋತಿ ಬಾ ಫುಲೆಯವರು 1873ರಲ್ಲಿ ಗುಲಾಮಗಿರಿ ಕುರಿತು ಪುಸ್ತಕ ಬರೆಯುತ್ತಾರೆ. ಜಾತಿ, ಅಸ್ಪಶ್ಯತೆಯ ಕರಿ ನೆರಳಿನಿಂದ ಈ ದೇಶದಲ್ಲಿ ಶೋಷಿತ ಸಮುದಾಯಗಳು ಹೇಗೆ ನರಳುತ್ತಿವೆ ಎಂಬುದನ್ನು ಅವರು ತೀಕ್ಷ್ಣವಾಗಿ ವಿವರಿಸಿದ್ದಾರೆ. ಹಾಗೆಯೇ ‘ಶೇತ್ಕರ್ಯಾಚ ಅಸೂಡ್’ (ರೈತನ ಚಾಟು) ಇವರ ಪ್ರಮುಖ ಕೃತಿ. ಜ್ಯೋತಿಬಾ ಫುಲೆ ಆಧುನಿಕ ಭಾರತದ ನಿರ್ಮಾತೃ ಡಾ. ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟದ ದಾರಿದೀಪವಾಗಿದ್ದರು. ಸ್ವತಃ ಅಂಬೇಡ್ಕರ್ ಜ್ಯೋತಿಬಾ ಫುಲೆಯವರನ್ನು ಮಹಾತ್ಮ ಎಂದು ಕರೆಯುತ್ತಿದ್ದರು. ಸಮಾಜ ಸುಧಾರಕರಾದ ಜ್ಯೋತಿ ಬಾ ಫುಲೆಯವರು 1890ರಲ್ಲಿ ಮರಣ ಹೊಂದಿದರು. ಜ್ಯೋತಿ ಬಾ ಫುಲೆ ಮರಣದ ನಂತರ ಅವರ ಸಮಾಜಿಕ ಅಸಮಾನತೆ ವಿರುದ್ಧದ ಹೋರಾಟವನ್ನು ಮುಂದುವರಿಸಲು 1891ರಲ್ಲಿ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಹುಟ್ಟಿ ಬರುತ್ತಾರೆ. ಫುಲೆ ಅವರ ವಿಚಾರಧಾರೆಯನ್ನು ಅವರು ಮುಂದುವರಿಸಿ ಭಾರತಕ್ಕೆ ಉತ್ತಮ ಸಂವಿಧಾನ ರಚಿಸುವ ಮೂಲಕ ಭಾರತದ ಶೋಷಿತರನ್ನು ದಾಸ್ಯದಿಂದ ವಿಮೋಚನೆಗೊಳಿಸಿ ಶಿಕ್ಷಿತರನ್ನಾಗಿ ಮಾಡುತ್ತಾರೆ. ಅಂಬೇಡ್ಕರ್‌ಗೆ ಮಹಾತ್ಮ ಜ್ಯೋತಿ ಬಾ ಫುಲೆಯವರ ಚಿಂತನೆ ಮತ್ತು ಸಿದ್ಧಾಂತಗಳು ಪ್ರೇರಣೆಯಾಗಿದ್ದವು.

ವಾರ್ತಾ ಭಾರತಿ 11 Apr 2026 8:55 am

ಆರ್‌ಸಿಬಿ ಜಯದ ಕನಸಿಗೆ ತಣ್ಣೀರೆರಚಿದ ವೈಭವ್ ಸೂರ್ಯವಂಶಿ; ಆರ್‌ಆರ್ ಪಾಲಿಗೆ ಹೀರೋ ಆದ 15 ವರ್ಷದ ಬಾಲಕ

RCB Vs RR IPL 2026: ಗುವಾಹಟಿಯಲ್ಲಿ ಶುಕ್ರವಾರ ನಡೆದ ಐಪಿಎಲ್ 2026ರ 16ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಆರ್‌ ಭರ್ಜರಿ ಗೆಲುವು ದಾಖಲಿಸಿತು. ಆರ್‌ಸಿಬಿ ನೀಡಿದ

ಒನ್ ಇ೦ಡಿಯ 11 Apr 2026 8:51 am

ಬಿಜೆಪಿಗೆ ವಿಜಯೇಂದ್ರ-ಯತ್ನಾಳ್ ಭಾರ

ಕೇಂದ್ರ ಬಿಜೆಪಿ ನಾಯಕರು ಸಂತೋಷ್ ಕಾರಣಕ್ಕೆ ಯತ್ನಾಳ್ ಮತ್ತು ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಕೊಡಲು ಸದ್ಯಕ್ಕಂತೂ ತಯಾರಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ತಂತ್ರ ಅನುಸರಿಸುತ್ತಾರೆ. ಆದರೆ ಒಡೆದ ಮನೆಯಾಗಿರುವ ಕರ್ನಾಟಕ ಬಿಜೆಪಿಗೆ ಯತ್ನಾಳ್-ವಿಜಯೇಂದ್ರ ಭಾರವಾಗಿದ್ದು ಪ್ರತೀ ಹಂತದಲ್ಲೂ ಎದ್ದು ಕಾಣುತ್ತದೆ. ಕನಿಷ್ಠ ಪಕ್ಷ ಬಿಜೆಪಿ ರಾಜ್ಯದಲ್ಲಿ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವಲ್ಲಿಯೂ ವಿಫಲವಾಗಿದೆ. ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕಕ್ಕೆ ಯಡಿಯೂರಪ್ಪ ಪ್ರೀತಿಯ ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಖಾಯಂ ಬಂಡುಕೋರ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಭಾರದ ವಸ್ತುಗಳಾಗಿ ಪರಿಣಮಿಸಿದ್ದಾರೆ. ಕರ್ನಾಟಕದ ಬಿಜೆಪಿ ಎಂಬ ಮುಳುಗುವ ಹಡಗನ್ನು ಸಂಪೂರ್ಣ ಮುಳುಗಿಸಿಯೇ ವಿರಮಿಸುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ.ವೈ. ವಿಜಯೇಂದ್ರ-ಇಬ್ಬರಲ್ಲಿ ಕೆಲವು ಸಾಮ್ಯ ಗುಣಗಳಿವೆ. ಇಬ್ಬರೂ ಪರಮ ಸ್ವಾರ್ಥಿಗಳು. ಇಬ್ಬರಿಗೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿದೆ. ಯತ್ನಾಳ್ ಅತಿ ವಾಚಾಳಿ, ವಿಜಯೇಂದ್ರ ಗುಮ್ಮನಗುಸುಕ. ಇಬ್ಬರಿಗೂ ಪಕ್ಷದಲ್ಲಿನ ಇನ್ನಿತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಗುಣಗಳಿಲ್ಲ. ಎಲ್ಲಕ್ಕೂ ಮೀರಿ ಇಬ್ಬರಿಗೂ ಸ್ವಂತ ಬುದ್ಧಿಯಿಲ್ಲ. ಯತ್ನಾಳ್ ಸೂತ್ರದ ಬೊಂಬೆ ಇದ್ದಂತೆ. ಆಡಿಸುವಾತನ ಕೈಚಳಕ ಯತ್ನಾಳ್ ನಡೆ ನುಡಿಯನ್ನು ನಿರ್ಧರಿಸುತ್ತದೆ. ಯತ್ನಾಳ್ ಅವರನ್ನು ಮನಸೋ ಇಚ್ಛೆ ಆಡಿಸುವಾತ ಯಾರು ಎಂಬುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕ ರಾಜ್ಯದ ಸರ್ವಾಗೀಣ ಅಭಿವೃದ್ಧಿಯ ಕನಸುಗಳಿಲ್ಲ. ಅಷ್ಟೇ ಯಾಕೆ ಬಿಜಾಪುರ ಜಿಲ್ಲೆಯ ಕುರಿತು ಕನಿಷ್ಠ ಜ್ಞಾನ ಇಲ್ಲ. ಅವರು ಇಲ್ಲಿಯವರೆಗೂ ಒಮ್ಮೆಯಾದರೂ ಕರ್ನಾಟಕದ ನೀರಾವರಿ, ಕೃಷಿ, ಕೈಗಾರಿಕೆ, ನಿರುದ್ಯೋಗ, ಶಾಲಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಮಸ್ಯೆಗಳ ಕುರಿತು ಪ್ರಬುದ್ಧವಾಗಿ ಮಾತನಾಡಿದ ನಿದರ್ಶನ ದೊರೆಯುವುದಿಲ್ಲ. ಸಿದ್ದರಾಮಯ್ಯ ಅವರು ಮಂಡಿಸುವ ಆಯವ್ಯಯದ ಮೇಲೆ ಬಸನಗೌಡ ಯತ್ನಾಳ್ ಅರ್ಥಪೂರ್ಣವಾಗಿ ಮತ್ತು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೆ ಒಮ್ಮೆಯಾದರೂ ಮಾತನಾಡಿದ್ದಾರೆಯೇ. ಸಿದ್ದರಾಮಯ್ಯ ಅವರು ಎಲ್ಲವನ್ನೂ ಅಂಕಿ ಸಂಖ್ಯೆ ಜೊತೆಗೆ ಸಮರ್ಥಿಸಿಕೊಳ್ಳುತ್ತಾರೆ. ಅವರ ವಾದಕ್ಕೆ ಸಮರ್ಪಕ ಉತ್ತರ ಕೊಡುವ ಸಾಮರ್ಥ್ಯ ಯತ್ನಾಳ್ ಮತ್ತು ವಿಜಯೇಂದ್ರ ಇಲ್ಲಿಯವರೆಗೂ ರೂಢಿಸಿಕೊಂಡಿಲ್ಲ. ವಿಜಯೇಂದ್ರ ಅತ್ಯುತ್ತಮ ಪುಸ್ತಕಗಳನ್ನು ಓದುವುದು ಒತ್ತಟ್ಟಿಗಿರಲಿ ದಿನಪತ್ರಿಕೆಗಳನ್ನು ಅತ್ಯಂತ ಶ್ರದ್ಧೆಯಿಂದ ಓದಿ ತಿಳಿದುಕೊಳ್ಳುತ್ತಾರೆಂದು ಅನಿಸುವುದಿಲ್ಲ. ವಿಜಯೇಂದ್ರ ಅವರಿಗೆ ತಂದೆಯ ಮಾರ್ಗದರ್ಶನ ಬಿಟ್ಟು ಬೇರೆ ತರಬೇತಿಯೇ ಇಲ್ಲ. ಅಪ್ಪ ಯಡಿಯೂರಪ್ಪ ನಡೆದುಬಂದ ದಾರಿಯನ್ನು ಅನುಸರಿಸಿದರೂ ವಿಜಯೇಂದ್ರ ಯಶಸ್ವಿ ರಾಜಕಾರಣಿಯಾಗುತ್ತಿದ್ದರು. ವಿಜಯೇಂದ್ರ ಯಡಿಯೂರಪ್ಪ ಅವರ ಹೆಸರು ಮತ್ತು ಕೆಲವು ಸಲಹೆಗಳನ್ನು ಮಾತ್ರ ಬಳಸಿಕೊಳ್ಳುತ್ತಿರುವುದರಿಂದ ಜನನಾಯಕನಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ತನ್ನಷ್ಟಕ್ಕೆ ಮಾಸ್ ಲೀಡರ್ ಎಂಬ ಭ್ರಮೆಯಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ಯತ್ನಾಳ್ ಸಭೆಗಳಿಗೆ ಮಾತ್ರ ಹೆಚ್ಚು ಜನ ಸೇರುತ್ತಿದ್ದರು. ಆದರೆ ಅವರು ಸಭೆ ನಡೆಸಿದ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ. ಬಸನಗೌಡ ಯತ್ನಾಳ್ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿ ಇದೆಯೇ ಹೊರತು ಮತ ಸೆಳೆಯುವ ವಿಶ್ವಾಸಾರ್ಹ ವ್ಯಕ್ತಿತ್ವ ಇಲ್ಲ. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಾಕರ್ಷಣೆ ಇದೆ. ಜೊತೆಗೆ ಮತಗಳನ್ನು ಸೆಳೆಯುವ ಸಾಮರ್ಥ್ಯ ಇದೆ. ಆ ಕಾರಣಕ್ಕೆ ಅವರು ಪಕ್ಷಗಳಿಗೆ ಅನಿವಾರ್ಯ ಆಗುತ್ತಾರೆ. ಇನ್ನು ವಿಜಯೇಂದ್ರ ಅವರಿಗೆ ಯುವಕರು ಸೇರಿದಂತೆ ಯಾರನ್ನೂ ಆಕರ್ಷಿಸುವ ಚಾರ್ಮ್ ಇಲ್ಲ. ಮತಗಳನ್ನು ಸೆಳೆಯುವುದು ದೂರದ ಮಾತು. ಅದಕ್ಕೆ ಕಾರಣ ವಿಜಯೇಂದ್ರ ಜೊತೆಗೆ ಇರುವ ಹಿಂಬಾಲಕರು. ದುಷ್ಟ ಹಿಂಬಾಲಕರನ್ನು ಇಟ್ಟುಕೊಂಡರೆ ಪಕ್ಷದ ನಾಯಕರು ಮತ್ತು ಸಾಮಾನ್ಯ ಕಾರ್ಯಕರ್ತ ಕೂಡಾ ಹತ್ತಿರ ಸುಳಿಯುವುದಿಲ್ಲ. ನೀವು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆಗೆ ಮಾತನಾಡಿ ವಿಜಯೇಂದ್ರ ಹೇಗೆ ಎಂದು ವಿಚಾರಿಸಿದರೆ ‘‘ತಂಮೇಶ ಗೌಡನಂಥವರು ಅಲ್ಲಿರುವಾಗ ನಾವು ಹೋಗಾಕೆ ಆಗ್ತದೆಯೇ?’’ ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ. ವಿಜಯೇಂದ್ರ ಜೊತೆಗೆ ಬಿಜೆಪಿಯ ಹಿರಿಯ ಲಿಂಗಾಯತ ನಾಯಕರು ಯಾರೂ ಇಲ್ಲ. ರುದ್ರೇಶ್‌ರಂಥವರೇ ಸುತ್ತುವರಿದಿರುತ್ತಾರೆ. ಕರ್ನಾಟಕದ ಸಮಸ್ತ ಲಿಂಗಾಯತ ಸಮುದಾಯ ವಿಜಯೇಂದ್ರರನ್ನು ಇವ ನಮ್ಮವ ಎಂದು ಭಾವನಾತ್ಮಕವಾಗಿ ಅಪ್ಪಿಕೊಂಡಿಯೇ ಇಲ್ಲ. ವೀರಶೈವ ಲಿಂಗಾಯತ ಸಂಘಟನೆಯ ಮುಖಂಡರು ಪಕ್ಷಾತೀತವಾಗಿ ಸಂಸದ ಬಿ.ವೈ. ರಾಘವೇಂದ್ರರನ್ನು ಇವ ನಮ್ಮವ ಎಂದು ಅಭಿಮಾನದಿಂದ ಒಪ್ಪಿಕೊಳ್ಳುತ್ತಾರೆ. ಆದರೆ ವಿಜಯೇಂದ್ರ ಹೆಸರು ಹೇಳಿದರೆ ಮೂಗು ಮುರಿಯುತ್ತಾರೆ. ಒಬ್ಬ ಪ್ರಬಲ ಜನನಾಯಕ ಏಕಕಾಲಕ್ಕೆ ತನ್ನ ಸಮುದಾಯದ ಬೇಷರತ್ತು ಬೆಂಬಲ ಗಟ್ಟಿಯಾಗಿ ಹಿಡಿದಿಟ್ಟುಕೊಂಡೇ ಉಳಿದೆಲ್ಲ ಸಮುದಾಯಗಳಲ್ಲಿ ಜನಾನುರಾಗಿ ವ್ಯಕ್ತಿತ್ವ ಬೆಳೆಸಿಕೊಂಡಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಸಾಮಾನ್ಯ ಕುರುಬರು ಆಗಾಧವಾಗಿ ಇಷ್ಟ ಪಡುತ್ತಾರೆ. ಜೊತೆಗೆ ಉಳಿದೆಲ್ಲ ಸಮುದಾಯಗಳು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಯಡಿಯೂರಪ್ಪ, ದೇವೇಗೌಡರ ವಿಷಯದಲ್ಲೂ ಹೀಗೆಯೇ ಆಗಿದೆ. ಯತ್ನಾಳ್ ಅವರನ್ನು ಸಾಮಾನ್ಯ ಲಿಂಗಾಯತ ಯುವಕರು ಇಷ್ಟ ಪಡುವುದಿಲ್ಲ. ಯುವಕರು ಮಾತ್ರವಲ್ಲ ಒಟ್ಟು ಲಿಂಗಾಯತ ಸಮುದಾಯದ ಜೊತೆಗೆ ಆತ ಕನೆಕ್ಟ್ ಆಗಿಲ್ಲ. ಉಗ್ರ ಹಿಂದುತ್ವದ ನಶೆ ತಲೆಗೇರಿಸಿಕೊಂಡ ಸಾವಜಿ ಸಮುದಾಯದ ಯುವಕರು ಯತ್ನಾಳ್‌ರ ಬೆನ್ನು ಹತ್ತಿದ್ದಾರೆ. ಆತ ಹೋದಲೆಲ್ಲ ಶಿಳ್ಳೆ, ಕ್ಯಾಕಿ, ಚಿರಾಟದಿಂದ ಹುಮ್ಮಸ್ಸು ತುಂಬುತ್ತಾರೆ. ವಿಜಯಪುರ ನಗರದಲ್ಲಿಯಂತೂ ಬಾಡಿಗೆ ಅಭಿಮಾನಿಗಳು ಹೆಚ್ಚಾಗಿರುತ್ತಾರೆ. ಹಾಗಾಗಿಯೇ ಬಸನಗೌಡ ಹೋದಲ್ಲೆಲ್ಲ ಜನ ಸೇರಿದ್ದಾರೆ ಎನಿಸುತ್ತದೆ. ಆದರೆ ಚುನಾವಣೆ ಫಲಿತಾಂಶ ಮಾತ್ರ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯತ್ನಾಳ್ ಎಲ್ಲೆಲ್ಲಿ ಸಭೆ, ಸಮಾರಂಭ ನಡೆಸಿದ್ದಾರೋ ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋತಿದ್ದಾರೆ. ಬೆಳಗಾವಿ ಲೋಕಸಭಾ ಚುನಾವಣಾ ಕಣದಲ್ಲಿ ಯಡಿಯೂರಪ್ಪ ಟಿಕೆಟ್ ಕೊಡಿಸಿದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇದ್ದರು. ಅವರ ವಿರುದ್ಧ ಪಂಚಮಸಾಲಿ ಸಮುದಾಯದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಳ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಹೆಬ್ಬಾಳ್ಕರ್ ಪುತ್ರನಿಗೆ ಪಂಚಮಸಾಲಿ ಕಾರಣಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಯತ್ನಾಳ್ ಹಗಲು ರಾತ್ರಿ ಶ್ರಮಿಸಿದ್ದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆಯವರನ್ನು ಗೆಲ್ಲಿಸಲು. ಜೊಲ್ಲೆ ದಂಪತಿ ಬಿ.ಎಲ್. ಸಂತೋಷ್ ಅವರ ಅಪ್ಪಟ ಅನುಯಾಯಿಗಳು. ಅಣ್ಣಾಸಾಬ್ ಜೊಲ್ಲೆಯವರನ್ನು ಗೆಲ್ಲಿಸಲು ಯತ್ನಾಳ್ ತಿಪ್ಪರಲಾಗ ಹಾಕಿದರೂ ಸಾಧ್ಯವಾಗಲಿಲ್ಲ. ಸಾಮಾನ್ಯ ಮತದಾರರು ಯತ್ನಾಳ್ ಜೊತೆಗೆ ಇಲ್ಲವೇ ಇಲ್ಲ. ಆ ಮಾತು ಬಿಡಿ. ಯತ್ನಾಳ್ ಜೊತೆಗೆ ಚುನಾವಣಾ ಸಭೆ ಸಮಾರಂಭಗಳಲ್ಲಿ ಉಗ್ರ ಭಾಷಣ ಬಿಗಿದ ರಮೇಶ್ ಜಾರಕಿಹೊಳಿಯೇ ಅಣ್ಣಾಸಾಬ್ ಜೊಲ್ಲೆಯವರನ್ನು ಮನಸಾಪೂರ್ವಕವಾಗಿ ಬೆಂಬಲಿಸಲಿಲ್ಲ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರ ಗೆಲುವಿಗಾಗಿಯೇ ರಮೇಶ್ ಮನಸ್ಸು ಹಂಬಲಿಸುತ್ತಿತ್ತು. ಅಣ್ಣಾಸಾಬ್ ಜೊಲ್ಲೆ ಹೀನಾಯವಾಗಿ ಸೋತರು. ಬಸನಗೌಡ ಪಾಟೀಲ್ ಯತ್ನಾಳ್ ಹೋದಲೆಲ್ಲಾ ಸೋಲು ಕಟ್ಟಿಟ್ಟ ಬುತ್ತಿ ಎಂಬ ಕಟು ಸತ್ಯ ಗೊತ್ತಿರುವುದರಿಂದಲೇ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಆತನನ್ನು ಪ್ರಚಾರಕ್ಕೆ ಕರೆಯಲೇ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿದ್ದು ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಮತಕ್ಷೇತ್ರಗಳಲ್ಲಿ. ಯತ್ನಾಳ್ ಕಲಬುರಗಿಗೆ ಹೋಗದೆ ಇದ್ದರೆ, ಉಮೇಶ್ ಜಾದವ್ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು. ಅಷ್ಟಕ್ಕೂ ಉಮೇಶ್ ಜಾದವ್ ಸೋತಿದ್ದು ಕೇವಲ ಮೂವತ್ತು ಸಾವಿರ ಮತಗಳ ಅಂತರದಿಂದ. ಕಲಬುರಗಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಯತ್ನಾಳ್ ಮಾತು ಆರಂಭವಾಗುತ್ತಿದ್ದುದ್ದೇ ಯಡಿಯೂರಪ್ಪ ಅವರ ನಿಂದನೆಯೊಂದಿಗೆ. ಕಲಬುರಗಿ ಜಿಲ್ಲೆಯಲ್ಲಿ ಯಡಿಯೂರಪ್ಪ ಪರ ಒಲವಿರುವ ಮತದಾರರ ಸಂಖ್ಯೆ ಹೆಚ್ಚಾಗಿದೆ. ಯತ್ನಾಳ್ ಅವರ ಯಡಿಯೂರಪ್ಪ ವಿರೋಧಿ ಭಾಷಣದಿಂದ ಬಹುಪಾಲು ಲಿಂಗಾಯತ ಮತಗಳು ಕೈ ತಪ್ಪಿದವು. ಕಲಬುರಗಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಮ್ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಆಂದೋಲ ಸ್ವಾಮೀಜಿಯ ಮುಸ್ಲಿಮ್ ನಿಂದನೆಯ ಭಾಷಣಗಳು ಸಹಜವಾಗಿಯೇ ಆ ಸಮುದಾಯದ ಮತದಾರರನ್ನು ಕೆರಳಿಸಿದ್ದವು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಮುಸ್ಲಿಮ್ ಮತದಾರರು ಖಮರುಲ್ ಇಸ್ಲಾಂ ಅವರಿಗೆ ಕಾಂಗ್ರೆಸ್ ಪಕ್ಷ ಮಂತ್ರಿ ಪದವಿಯಿಂದ ಕೈ ಬಿಟ್ಟಿದ್ದಕ್ಕೆ ನಿರಾಸಕ್ತಿ ತೋರಿದ್ದರು. ಹಾಗಾಗಿಯೇ ಉಮೇಶ್ ಜಾದವ್ ಒಂದು ಲಕ್ಷ ಅಂತರದಿಂದ ಮಲ್ಲಿಕಾರ್ಜುನ ಖರ್ಗೆಯಂಥ ಹಿರಿಯ ಕಾಂಗ್ರೆಸ್ ಮುಖಂಡರನ್ನು ಸೋಲಿಸಲು ಸಾಧ್ಯವಾಗಿತ್ತು. ಅಷ್ಟಕ್ಕೂ ಉಮೇಶ್ ಜಾದವ್ ಮುಸ್ಲಿಮ್ ಸಮುದಾಯದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಸ್ಲಿಮ್ ವಿರೋಧಿ ಮತ್ತು ಯಡಿಯೂರಪ್ಪ ವಿರೋಧಿ ಭಾಷಣಗಳೇ ಜಾದವ್ ಅವರಿಗೆ ಮುಳುವಾದವು. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಸಭೆಗಳನ್ನು ನಡೆಸಿದರು. ಅಲ್ಲಿ ಭಗವಂತ ಖೂಬಾ ವಿರೋಧಿ ಅಲೆ ಜೋರಾಗಿತ್ತು. ಬಿಜೆಪಿ ನಾಯಕರೇ ಖೂಬಾ ವಿರುದ್ಧ ಕೆಲಸ ಮಾಡುತ್ತಿದ್ದರು. ಯತ್ನಾಳ್ ದ್ವೇಷದ ಭಾಷಣದಿಂದ ಮುಸ್ಲಿಮ್ ಸಮುದಾಯ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಿತು. ಯಡಿಯೂರಪ್ಪ ವೋಟ್ ಬ್ಯಾಂಕ್ ಕೈ ಕೊಟ್ಟಿತು. ಯತ್ನಾಳ್ ಆಯ್ದುಕೊಂಡ ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲೂ ಇದೇ ಮಾದರಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೋಮುವಾದಿ ರಾಜಕಾರಣದ ಅಸ್ತ್ರ ನಡೆಯುವುದಿಲ್ಲ. ಆ ಭಾಗದ ಬಿಜೆಪಿ ಮುಖಂಡರು ತಕ್ಕ ಮಟ್ಟಿಗೆ ಜಾತ್ಯತೀತ ಮನಸ್ಥಿತಿ ಹೊಂದಿರುವುದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿರುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಷ್ಟು ಸ್ಥಾನಗಳು ಬಂದಿದ್ದು ಒಂದು ಯಡಿಯೂರಪ್ಪ, ಎರಡು ಮೋದಿ, ಮೂರು ಜೆಡಿಎಸ್ ಜೊತೆಗಿನ ಮೈತ್ರಿ ಫ್ಯಾಕ್ಟರ್ ಕಾರಣ. ಬಸನಗೌಡ ಯತ್ನಾಳ್ ಚುನಾವಣಾ ಪ್ರಚಾರಕ್ಕೆ ಹೋಗದೆ ಇದ್ದಿದ್ದರೆ ಬಿಜೆಪಿಗೆ ಇನ್ನೂ ನಾಲ್ಕು ಸೀಟುಗಳು ಜಾಸ್ತಿ ಬರುತ್ತಿದ್ದವು. ಆ ಚುನಾವಣೆಯಲ್ಲಿ ಚುನಾವಣೆಯ ತಂತ್ರಗಾರಿಕೆಯಿಂದ ಹಿಡಿದು ಎಲ್ಲದರಲ್ಲೂ ಯಡಿಯೂರಪ್ಪ ಮುಖ್ಯ ಪಾತ್ರ ವಹಿಸಿದ್ದರು. ವಿಜಯೇಂದ್ರ ಪಾತ್ರ ಏನೇನೂ ಇರಲಿಲ್ಲ. ಒಂದೇ ಒಂದು ಸಭೆಯಲ್ಲೂ ಜನರಿಗೆ ಮನಮುಟ್ಟುವ ಹಾಗೆ ಮಾತನಾಡಲು ವಿಜಯೇಂದ್ರ ಅವರಿಗೆ ಸಾಧ್ಯವಾಗಲೇ ಇಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ವಿರುದ್ಧ ಕುತಂತ್ರ ಮಾಡಲು ಸಾಧ್ಯವಾಯಿತೇ ಹೊರತು ಮತದಾರರ ಮೇಲೆ ಪ್ರಭಾವ ಬೀರಲು ಆಗಲಿಲ್ಲ. ಬಿಜೆಪಿಯಲ್ಲಿ ಕುತಂತ್ರ ಮಾಡುವವರ ಸಂಖ್ಯೆ ಜಾಸ್ತಿ ಇದೆ, ಮತಗಳನ್ನು ಸೆಳೆಯುವವರು ಇಲ್ಲ. ವಿಜಯೇಂದ್ರ -ಯತ್ನಾಳ್ ಮುಳುಗಿಸುವ ಕಲೆ ಕರಗತ ಮಾಡಿಕೊಂಡವರು. ಶಿಗ್ಗಾವಿ ಉಪ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ. ಯಡಿಯೂರಪ್ಪ ನಾಲ್ಕು ದಿನ ಪ್ರಯತ್ನ ಮಾಡಿದ್ದರೆ ಸರಳವಾಗಿ ಗೆಲ್ಲಿಸಿಕೊಂಡು ಬರುತ್ತಿದ್ದರು. ಆ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರ ಸಂಖ್ಯೆ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಬೊಮ್ಮಾಯಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಚಾರಕ್ಕೆ ಕರೆಸಿಕೊಂಡರು. ಶಿಗ್ಗಾವಿಯಲ್ಲಿ ಮುಸ್ಲಿಮ್ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ. ಸಾಕಷ್ಟು ಮತದಾರರು ಹಿಂದಿನ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರಿಗೇ ಬೆಂಬಲಿಸಿದ್ದರು. ಆ ಮತ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕ. ಕುಂದಗೋಳದ ಶಿವಳ್ಳಿ ಮತ್ತು ಬಸವರಾಜ ಬೊಮ್ಮಾಯಿಯ ಮ್ಯಾಚ್ ಫಿಕ್ಸಿಂಗ್ ರಾಜಕಾರಣದಿಂದ ಕುರುಬ ಸಮುದಾಯದ ಮತಗಳು ಬೊಮ್ಮಾಯಿ ಪಡೆದುಕೊಳ್ಳುತ್ತಿದ್ದರು. ಶಿಗ್ಗಾವಿ ಉಪಚುನಾವಣೆಯ ಪ್ರಚಾರ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕಾಲಿಡುತ್ತಿದ್ದಂತೆ ಭರತ್ ಬೊಮ್ಮಾಯಿಯ ದುರ್ದೆಸೆ ಆರಂಭವಾಯಿತು. ಮುಸ್ಲಿಮ್ 2ಬಿ ಮೀಸಲಾತಿ ಕಿತ್ತುಕೊಂಡಿದ್ದಕ್ಕೆ ಆ ಸಮುದಾಯ ಬಸವರಾಜ ಬೊಮ್ಮಾಯಿ ಮೇಲೆ ಮೊದಲೇ ಆಕ್ರೋಶಗೊಂಡಿತ್ತು. ಯತ್ನಾಳ್‌ರ ಮುಸ್ಲಿಮ್ ವಿರೋಧಿ ಭಾಷಣಗಳು ಉರಿಯೋದರ ಮೇಲೆ ಉಪ್ಪು ಸುರಿದವು. ಯತ್ನಾಳ್‌ರ ಮುಖ ನೋಡಿ ಪಂಚಮಸಾಲಿ ಮತದಾರರು ಭರತ್ ಬೊಮ್ಮಾಯಿಗೆ ಮತ ಹಾಕಲಿಲ್ಲ. ಯಾಕೆಂದರೆ ಮೂರು ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಆ ಕ್ಷೇತ್ರವನ್ನು ಕಿತ್ತುಕೊಂಡಿದ್ದರು. ಭರತ್ ಬೊಮ್ಮಾಯಿಯನ್ನು ಸೋಲಿಸುವ ಪಣ ತೊಟ್ಟಿದ್ದ ಪಂಚಮಸಾಲಿ ಸಮುದಾಯವನ್ನು ಓಲೈಸುವಲ್ಲಿ ಯತ್ನಾಳ್ ಸಂಪೂರ್ಣ ವಿಫಲರಾದರು. ಅಷ್ಟಕ್ಕೂ ಯತ್ನಾಳ್ ಪಂಚಮಸಾಲಿ ಸಮುದಾಯ ಮಾತ್ರವಲ್ಲ ಒಟ್ಟಾರೆ ಲಿಂಗಾಯತ ಸಮುದಾಯದ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿಲ್ಲ. ಭಾವನಾತ್ಮಕ ನೆಲೆಯಲ್ಲಿ ಸಮುದಾಯದ ಜೊತೆಗೆ ಕನೆಕ್ಟ್ ಆಗಿಲ್ಲ. ಒಂದು ಸಮುದಾಯದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೂ ಸಮುದಾಯದ ನಾಯಕನಾಗಿ ಹೊರ ಹೊಮ್ಮಲು ಸಾಧ್ಯವಾಗುವುದಿಲ್ಲ. ವಿಶ್ವನಾಥ್, ರೇವಣ್ಣ, ಕೆ.ಎಸ್. ಈಶ್ವರಪ್ಪ, ಬಂಡೆಪ್ಪ ಕಾಶೇಂಪುರ್, ವಿಜಯಶಂಕರ್ ಕುರುಬ ಸಮುದಾಯದಲ್ಲಿ ಹುಟ್ಟಿದರೂ ಆ ಸಮುದಾಯದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಸಮಾಜವಾದಿ ಸಿದ್ದರಾಮಯ್ಯ ಕುರುಬ ಸಮುದಾಯದ ಪ್ರೀತಿ ವಿಶ್ವಾಸವನ್ನು ಖಾಯಂ ಜೊತೆಗೆ ಇಟ್ಟುಕೊಂಡಿದ್ದಾರೆ. ಯತ್ನಾಳ್ ಮತ್ತು ವಿಜಯೇಂದ್ರ ಅವರಿಗೆ ಸಮುದಾಯಗಳ ಸಾಮಾಜಿಕ ಮನಸ್ಥಿತಿಯೇ ಅರ್ಥವಾಗಿಲ್ಲ ಎನಿಸುತ್ತದೆ. ಬಿಜೆಪಿಯವರು ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಾಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳಿದ್ದಾರೆ. ಆದರೆ ಆ ಎರಡು ಉಪ ಚುನಾವಣೆಗಳನ್ನು ಗೆಲ್ಲುವ ಸಮರ್ಪಕ ತಂತ್ರಗಾರಿಕೆಯನ್ನೇ ರೂಪಿಸಿರಲಿಲ್ಲ ಎಂಬುದು ಕಣ್ಣಿಗೆ ರಾಚುತ್ತಿತ್ತು. ಈ ಉಪಚುನಾವಣೆಯಲ್ಲೂ ಬಿಜೆಪಿಯೊಳಗಿನ ವೈರುಧ್ಯ ಮತ್ತು ಅಂತಃಕಲಹವೇ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಬಹುದು. ದಾವಣಗೆರೆ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ಗೆಲುವು ಸಾಧಿಸುವ ಇರಾದೆಯೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರಿಗೆ ಇಲ್ಲ ಎಂಬುದು ಬಿಜೆಪಿ ಅಭ್ಯರ್ಥಿ ಹೆಸರು ನೋಡಿದರೆ ಅರ್ಥವಾಗುತ್ತದೆ. ಜಿ.ಎಂ. ಸಿದ್ದೇಶ್ ಅಥವಾ ರವೀಂದ್ರನಾಥ ಕುಟುಂಬದ ಯಾರೇ ಅಭ್ಯರ್ಥಿಯಾಗಿದ್ದರೂ ಮತ ವಿಭಜನೆ ಸಾಧ್ಯವಾಗುತ್ತಿತ್ತು. ಶಾಮನೂರು ಸಮರ್ಥ್ ಗೆಲುವು ಕಷ್ಟವಾಗುತ್ತಿತ್ತು. ಬಿಜೆಪಿಯಿಂದ ವಾಲ್ಮೀಕಿ ಸಮುದಾಯದ ದಾಸ ಕರಿಯಪ್ಪ ಅವರನ್ನು ಕಣಕ್ಕಿಳಿಸಿದ್ದಾರೆ. ಶಾಮನೂರು ಕುಟುಂಬದ ವಿರುದ್ಧ ಆ ಮತಕ್ಷೇತ್ರದ ಮುಸ್ಲಿಮ್ ಸಮುದಾಯ ಆಕ್ರೋಶಗೊಂಡಿರುವುದು ನಿಜ. ಹಾಗಂತ ಮುಸ್ಲಿಮ್ ಸಮುದಾಯ ಬಿಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಲಾಗದು. ಕೊನೆಗೆ ರಾಜಿ ಪಂಚಾಯಿತಿ ಆಗಿ ಮುಸ್ಲಿಮ್ ಸಮುದಾಯದ ಮತಗಳು ಹೋಗುವುದು ಸಮರ್ಥ್‌ನಿಗೇ. ಲಿಂಗಾಯತ ಮತಗಳು ಬಿಜೆಪಿಗೆ ಹೋಗಲು ಸಾಕಾರಣ ಇಲ್ಲ. ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳುವುದೇ ಬಸನಗೌಡ ಪಾಟೀಲ್ ಯತ್ನಾಳ್ ಪ್ರವೇಶದಿಂದ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಜನಪ್ರಿಯ ನಾಯಕರೇನೂ ಅಲ್ಲ. ಸರ್ವಾಧಿಕಾರಿ ವ್ಯಕ್ತಿತ್ವದ ಚರಂತಿಮಠ ಅವರಿಗೆ ಅವರ ಸಹೋದರ ಸಂಬಂಧಿಗಳೇ ಇಷ್ಟಪಡುವುದಿಲ್ಲ. ಮೊದಲಿಂದಲೂ ಯಡಿಯೂರಪ್ಪ ಮತ್ತು ಚರಂತಿ ಮಠ ಸಂಬಂಧ ಎಣ್ಣೆ ಸೀಗೆಕಾಯಿ ತರಹದ್ದು. ಚರಂತಿಮಠ ಅನಂತಕುಮಾರ್ ಮತ್ತು ಯತ್ನಾಳ್‌ಗೆ ಆತ್ಮೀಯ. ಅದರಲ್ಲೂ ಈ ಚುನಾವಣೆಯಲ್ಲಿ ಯತ್ನಾಳ್ ಕಾರುಬಾರು ವಹಿಸಿಕೊಂಡಿದ್ದರಿಂದ ಯಡಿಯೂರಪ್ಪ ಗೆಲ್ಲಿಸುವ ಸೋಲಿಸುವ ಗೋಜಿಗೆ ಹೋಗುವುದಿಲ್ಲ. ಯಡಿಯೂರಪ್ಪ ತಟಸ್ಥ ನಿಲುವು ತಳೆದರೂ ವೀರಣ್ಣ ಚರಂತಿಮಠ ಗೆಲ್ಲಲು ಸಾಧ್ಯವಿಲ್ಲ. ಅಷ್ಟಕ್ಕೂ ಈ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಪ್ರತಿಷ್ಠೆಯದು. ಯಡಿಯೂರಪ್ಪ ನೆರವು ಪಡೆದಾದರೂ ಸೈ ಗೆಲುವು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ. ಸ್ಥಳೀಯ ಪಿ.ಎಚ್. ಪೂಜಾರ್ ಕೂಡಾ ಚರಂತಿಮಠ ಸೋಲಲೆಂದೇ ಹರಕೆ ಹೊತ್ತಿರುತ್ತಾರೆ. ವಿಜಯೇಂದ್ರಗೆ ಸೋಲು ಗೆಲುವಿನಲ್ಲೂ ಪಾತ್ರ ಇಲ್ಲ. ಕೇಂದ್ರ ಬಿಜೆಪಿ ನಾಯಕರು ಸಂತೋಷ್ ಕಾರಣಕ್ಕೆ ಯತ್ನಾಳ್ ಮತ್ತು ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರ ಅವರನ್ನು ಬಿಟ್ಟು ಕೊಡಲು ಸದ್ಯಕ್ಕಂತೂ ತಯಾರಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ತಂತ್ರ ಅನುಸರಿಸುತ್ತಾರೆ. ಆದರೆ ಒಡೆದ ಮನೆಯಾಗಿರುವ ಕರ್ನಾಟಕ ಬಿಜೆಪಿಗೆ ಯತ್ನಾಳ್-ವಿಜಯೇಂದ್ರ ಭಾರವಾಗಿದ್ದು ಪ್ರತೀ ಹಂತದಲ್ಲೂ ಎದ್ದು ಕಾಣುತ್ತದೆ. ಕನಿಷ್ಠ ಪಕ್ಷ ಬಿಜೆಪಿ ರಾಜ್ಯದಲ್ಲಿ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವಲ್ಲಿಯೂ ವಿಫಲವಾಗಿದೆ.

ವಾರ್ತಾ ಭಾರತಿ 11 Apr 2026 8:47 am

ಇಸ್ಲಾಮಾಬಾದ್‌ ನಲ್ಲಿ ಅಮೆರಿಕ–ಇರಾನ್ ಮಾತುಕತೆ; ಒಪ್ಪಂದ ಸಾಧಿಸುವತ್ತ ಪಾಕಿಸ್ತಾನದ ಪ್ರಯತ್ನ

ಎರಡೂ ರಾಷ್ಟ್ರಗಳು ಜೊತೆಗೇ ಇದ್ದರೂ ನೇರ ಮಾತುಕತೆಯಿಲ್ಲ!

ವಾರ್ತಾ ಭಾರತಿ 11 Apr 2026 8:39 am

ರಾಜ್ಯ ಪಿಯುಸಿ ಫಲಿತಾಂಶ: ಎಲ್ಲಾ ಬಣ್ಣ ಮಸಿ ನುಂಗಿತು!

ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಹಲವು ಕಾರಣಗಳಿಗಾಗಿ ಈ ಬಾರಿಯ ಫಲಿತಾಂಶವ ಬಗ್ಗೆ ಜನರು ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈಯನ್ನು ಸಾಧಿಸಿದ್ದಾರೆ. ಸಾಧಾರಣವಾಗಿ ಶಿಕ್ಷಣ ವ್ಯವಸ್ಥೆ ನಗರ ಪ್ರದೇಶದ ಜನರ ಮೂಗಿನ ನೇರಕ್ಕಿರುತ್ತವೆ. ಪರೀಕ್ಷೆಯನ್ನು ಎದುರಿಸುವ ತಯಾರಿ ಸಂದರ್ಭದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ನಡುವೆ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿರುವುದು ಗ್ರಾಮೀಣ ಪ್ರದೇಶದಲ್ಲಿ. ಎಸೆಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಪಿಯುಸಿಯಲ್ಲಿ ಏಕಾಏಕಿ ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯಬೇಕಾದ ಅನಿವಾರ್ಯತೆಗೆ ಸಿಲುಕಿಸಿದ ನೂರಾರು ವಿದ್ಯಾರ್ಥಿಗಳಿದ್ದಾರೆ. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಗ್ರಾಮೀಣ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರೂ ಫಲಿತಾಂಶದಲ್ಲಿ ಸಾಧನೆಯನ್ನು ಮೆರೆದಿದ್ದಾರೆ. ಈ ಬಾರಿ ಶೇ. 81.58ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಫಲಿತಾಂಶದಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ವರ್ಷ 73.45 ಶೇ. ಫಲಿತಾಂಶ ಹೊರ ಬಿದ್ದಿತ್ತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವುದರಲ್ಲಿ ವಿಶೇಷವೇನೂ ಇಲ್ಲ. ಶೈಕ್ಷಣಿಕವಾಗಿ ಈ ಎರಡು ಜಿಲ್ಲೆಗಳು ಸಾಕಷ್ಟು ಮುಂದಿವೆ. ಹತ್ತು ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಈ ಜಿಲ್ಲೆಗಳೇ ಆಶ್ರಯದಾಣವಾಗಿವೆ. ಶಿಕ್ಷಣದ ಕುರಿತಂತೆ ಪೋಷಕರಲ್ಲೂ ಜಾಗೃತಿ ಹೆಚ್ಚಿದೆ. ಪರಿಣಾಮವಾಗಿ ಎಸೆಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಈ ಜಿಲ್ಲೆಗಳು ಸದಾ ಮುಂಚೂಣಿಯಲ್ಲಿರುತ್ತವೆ. ಸಮಾಜ ಕಲ್ಯಾಣ ಇಲಾಖೆಯು ಪಿಯುಸಿ ಫಲಿತಾಂಶವನ್ನು ಬೇರೊಂದು ರೀತಿಯಲ್ಲಿ ಸಂಭ್ರಮಿಸಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಕಾಲೇಜುಗಳಲ್ಲಿ ಫಲಿತಾಂಶ ಶೇ. 97.22ಕ್ಕೆ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ 72 ಕಾಲೇಜುಗಳ 5,103 ವಿದ್ಯಾರ್ಥಿಗಳು ಪರೀಕ್ಷೆಗೇ ಹಾಜರಾಗಿದ್ದರು. ಕಳೆದ ವರ್ಷದ ಫಲಿತಾಂಶ ಶೇ. 91.64 ಇದ್ದರೆ ಈ ಬಾರಿ ಫಲಿತಾಂಶದಲ್ಲಿ ಶೇ. 5.58ರಷ್ಟು ಏರಿಕೆಯಾಗಿದೆ. 2,321 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎನ್ನುವುದು ಸಮಾಜ ಕಲ್ಯಾಣ ಇಲಾಖೆಯ ಸಾಧನೆಯೆಂದೇ ಹೇಳಬೇಕು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಕಲಿಯುತ್ತಿರುವ ಅಂಕಿತ್ ಭೀಮಪ್ಪ ಅವರು ಒಟ್ಟು 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಈಗಾಗಲೇ ರಾಜ್ಯ ಸಚಿವರು ಈ ವಿದ್ಯಾರ್ಥಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಸರಕಾರಿ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿ ಎಂದು ಇವರು ಗುರುತಿಸಲ್ಪಡುತ್ತಿದ್ದಾರೆ. 72 ವಸತಿ ಕಾಲೇಜುಗಳ ಪೈಕಿ 34 ವಸತಿ ಕಾಲೇಜುಗಳು ಶೇ. 100ರಷ್ಟು ಫಲಿತಾಂಶವನ್ನು ಪಡೆದಿವೆ.ಸಾಧಾರಣವಾಗಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳು ವೈಫಲ್ಯಗಳ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿರುತ್ತವೆ. ಕಳಪೆ ಆಹಾರ, ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷಕರ ಬೇಜವಾಬ್ದಾರಿ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಇತ್ಯಾದಿಗಳನ್ನು ಮುಂದಿಟ್ಟು ಮಾಧ್ಯಮಗಳು ಚರ್ಚೆ ನಡೆಸುವುದೇ ಹೆಚ್ಚು. ಇದೀಗ ಪಿಯುಸಿ ಫಲಿತಾಂಶದಲ್ಲಿ ವಸತಿ ಶಾಲೆಗಳು ಸಾಧಿಸಿದ ಸಾಧನೆಗಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಅಭಿನಂದಿಸಬೇಕಾಗಿದೆ. ಈ ವಸತಿ ಶಾಲೆಗಳು ಈ ನಾಡಿನ ನೂರಾರು ಬಡ ವರ್ಗದ, ಶೋಷಿತ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪೊರೆಯುತ್ತಿವೆೆ. ಸರಕಾರದ ನೆರವಿನಿಂದ ನಡೆಯುವ ವಸತಿ ಶಾಲೆಗಳು ಎಂದಾಗ ಜನರಲ್ಲಿ ಒಂದು ಕೀಳರಿಮೆಯಿದೆ. ಆ ಕೀಳರಿಮೆಯನ್ನು ಕಿತ್ತೊಗೆಯುವ ರೀತಿಯಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಪೋಷಕರು ಅತ್ಯುತ್ಸಾಹವನ್ನು ತೋರಬಹುದು. ಈ ಫಲಿತಾಂಶ ಶೋಷಿತ ಸಮುದಾಯದ ಮಕ್ಕಳ ಬದುಕಿನಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಲಿದೆ. ರಾಜ್ಯದ ವಿದ್ಯಾರ್ಥಿಗಳೇನೋ ಫಲಿತಾಂಶದಲ್ಲಿ ಸಾಧನೆಯನ್ನು ಮೆರೆದಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತೆ ಫೇಲಾಗಿದೆ. ಎಲ್ಲ ಬಣ್ಣ ಮಸಿ ನುಂಗಿತು ಎನ್ನುವಂತೆ, ಫಲಿತಾಂಶ ಹೊರ ಬಿದ್ದ ಬೆನ್ನಿಗೇ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಬೆಂಗಳೂರಿನ ಮನೋರಾಯನ ಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷೆಯ ಉತ್ತೀರ್ಣ-ಅನುತ್ತೀರ್ಣ ಶಿಕ್ಷಣದ ಒಂದು ಸಣ್ಣ ಭಾಗ ಮಾತ್ರ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಕಲಿಸಿ, ಅಂಕಗಳ ಜೊತೆ ಜೊತೆಗೇ ಅವರೊಳಗಿರುವ ಇತರ ಪ್ರತಿಭೆಗಳನ್ನು ಪೋಷಿಸಿ ಆತ್ಮವಿಶ್ವಾಸ ತುಂಬುವ ಕಾರ್ಯದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತೆ ವಿಫಲವಾಗಿದೆ ಎನ್ನುವುದನ್ನು ಈ ಆತ್ಮಹತ್ಯೆ ಎತ್ತಿ ತೋರಿಸಿದೆ. ವಿದ್ಯಾಸಂಸ್ಥೆಗಳು, ಪೋಷಕರು, ಸಮಾಜ ಜಂಟಿಯಾಗಿ ವಿದ್ಯಾರ್ಥಿಗಳಲ್ಲಿ ಅನಗತ್ಯ ಒತ್ತಡಗಳನ್ನು ಸೃಷ್ಟಿಸಿ ಅವರನ್ನು ಆತ್ಮಹತ್ಯೆಗೆ ತಳ್ಳುತ್ತವೆ. ಇಂದು ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್ಯಾಗಿಂಗ್, ಜಾತಿ ಭೇದ ಇತ್ಯಾದಿಗಳಿಂದ ಸಂಭವಿಸುವ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ತಡೆಯಲು ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆಯ ಕಡೆಗೆ ಜಾರುತ್ತಿರುವುದನ್ನು ತಡೆಯಲು ಯಾವುದೇ ಕ್ರಮಗಳೂ ಇಲ್ಲ. ಇಂದು ದೇಶದಲ್ಲಿ ಸರಾಸರಿ ಪ್ರತೀ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿಯಂತೆ 2023ರಲ್ಲಿ ಸುಮಾರು 13,892 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಶೇ. 65ರಷ್ಟು ಏರಿಕೆಯನ್ನು ಕಂಡಿದೆ. ಅತ್ಯುನ್ನತ ಶಿಕ್ಷಣ ವಲಯದಲ್ಲಿ ಸಂಭವಿಸುವ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತವೆ. ಸಣ್ಣ ಪುಟ್ಟ ಚರ್ಚೆಗಳನ್ನಾದರೂ ಹುಟ್ಟಿಸಿ ಹಾಕುತ್ತವೆೆ. ಆದರೆ ಈ ಪಿಯುಸಿ, ಎಸೆಸೆಲ್ಸಿ ಪರೀಕ್ಷೆಯ ಒತ್ತಡಗಳಿಂದ ಆತ್ಮಹತ್ಯೆಗೆ, ಖಿನ್ನತೆಗೆ ತಳ್ಳಲ್ಪಡುತ್ತಿರುವ ವಿದ್ಯಾರ್ಥಿಗಳ ಸಂಕಟಗಳನ್ನು ಕೇಳುವವರೇ ಇಲ್ಲ. ಇಂತಹ ಆತ್ಮಹತ್ಯೆಗಳು ಶಿಕ್ಷಣ ವ್ಯವಸ್ಥೆಯ ಮುಖಕ್ಕೆ ಮಸಿ ಬಳಿಯುತ್ತವೆ. ನಮ್ಮ ಶಿಕ್ಷಣವನ್ನು, ಅದರ ಹೆಸರಿನಲ್ಲಿ ನಡೆಸುವ ಪರೀಕ್ಷೆಗಳನ್ನು ಹೆಚ್ಚು ಸೃಜನಶೀಲವಾಗಿಸುವ ನಿಟ್ಟಿನಲ್ಲಿ ಸರಕಾರ ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅಂಕಗಳೇ ಎಲ್ಲವೂ ಅಲ್ಲ. ವಿಜ್ಞಾನ, ಸಾಹಿತ್ಯ, ತಂತ್ರಜ್ಞಾನದಲ್ಲಿ ಭಾರೀ ಸಾಧನೆಗಳನ್ನು ಮಾಡಿದವರೆಲ್ಲರೂ ರ್ಯಾಂಕ್ ವಿಜೇತರಲ್ಲ. ವಿದ್ಯಾರ್ಥಿಗಳ ಒಳಗಿರುವ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ವ್ಯವಸ್ಥೆ ಮಾಡಬೇಕು. ಅವುಗಳನ್ನು ಪೋಷಿಸುವುದು ಶಿಕ್ಷಣವ್ಯವಸ್ಥೆಯ ಮುಖ್ಯ ಗುರಿಯಾಗಬೇಕು. ಅರಳಬೇಕಾದ ವಿದ್ಯಾರ್ಥಿಗಳ ಬದುಕನ್ನು ಮುರುಟಿ ಹಾಕುವ ಕೃತ್ಯ ಯಾವತ್ತೂ ಶಿಕ್ಷಣದಿಂದ ನಡೆಯಬಾರದು.

ವಾರ್ತಾ ಭಾರತಿ 11 Apr 2026 8:27 am

ಶಾಂತಿ ಮಾತುಕತೆ: ಪಾಕಿಸ್ತಾನಕ್ಕೆ ಆಗಮಿಸಿದ ಇರಾನ್ ನಿಯೋಗ

ಇಸ್ಲಾಮಾಬಾದ್: ಇರಾನ್ ಸಂಸತ್ತಿನ ಸ್ಪೀಕರ್ ಮೊಹ್ಮದ್ ಬಕರ್ ಕಲಿಬಾಫ್ ನೇತೃತ್ವದ ಇರಾನ್ ತಂಡ ಅಮೆರಿಕ ಜತೆ ಶಾಂತಿ ಮಾತುಕತೆಗಾಗಿ ಇಸ್ಲಾಮಾಬಾದ್‌ ಗೆ ಶುಕ್ರವಾರ ರಾತ್ರಿ ಬಂದಿಳಿಯಿತು. ಶನಿವಾರ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಆರಂಭವಾಗಲಿದೆ. ಉಪಾಧ್ಯಕ್ಷ ಜೆ.ಡಿ. ವಾನ್ಸ್ ನೇತೃತ್ವದ ಅಮೆರಿಕ ನಿಯೋಗ ಸಂಧಾನ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಆಗಮಿಸಿದೆ. ಇದನ್ನು ಐತಿಹಾಸಿಕ ಇಸ್ಲಾಮಾಬಾದ್ ಮಾತುಕತೆ ಎಂದು ಕರೆಯಲಾಗಿದೆ. ಆರು ವಾರಗಳ ಭೀಕರ ಕದನದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ಸಂಬಂಧ ಸುಸ್ಥಿರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಇರಾನ್ ನಿಯೋಗದಲ್ಲಿ ಇಸ್ಲಾಮಿಕ್ ರಿಪಬ್ಲಿಕ್‌ ನ ಹಲವು ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದು, ಸ್ಪೀಕರ್ ಕಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚ ಪ್ರಮುಖರು. ಇರಾನ್‌ ನ ರಕ್ಷಣಾ ಮಂಡಳಿ ಕಾರ್ಯದರ್ಶಿ ಅಲಿ ಅಕ್ಬರ್ ಅಹ್ಮದೀನ್, ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥ ಅಬ್ದುಲ್‌ ನಸರ್ ಕೂಡ ನಿಯೋಗದಲ್ಲಿದ್ದಾರೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ. ಹಲವು ರಾಜಕೀಯ, ಮಿಲಿಟರಿ ಹಾಗೂ ಆರ್ಥಿಕ ಕ್ಷೇತ್ರದ ನಾಯಕರು ನಿಯೋಗದ ಭಾಗವಾಗಿದ್ದಾರೆ. ಉಪಾಧ್ಯಕ್ಷ ಜೆ.ಡಿ. ವಾನ್ಸ್ ನೇತೃತ್ವದ ಅಮೆರಿಕ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದು, ಟ್ರಂಪ್ ಪ್ರತಿನಿಧಿ ಸ್ಟೀವ್ ವಿಕ್ಟಾಫ್ ಹಾಗೂ ಹಿರಿಯ ಸಲಹೆಗಾರ ಮತ್ತು ಟ್ರಂಪ್ ಅಳಿಯ ಜರೇದ್ ಕುಷ್ನರ್ ನಿಯೋಗದಲ್ಲಿದ್ದಾರೆ.

ವಾರ್ತಾ ಭಾರತಿ 11 Apr 2026 8:10 am

10 ದಿನಗಳ ಚಂದ್ರಯಾನ ಬಳಿಕ ಭೂಮಿಗೆ ಮರಳಿದ ಆರ್ಟೆಮಿಸ್-2 ಗಗನಯಾತ್ರಿಗಳು

ಐತಿಹಾಸಿಕ 10 ದಿನಗಳ ಚಂದ್ರಯಾನ ಮುಗಿಸಿದ ಆರ್ಟೆಮಿಸ್-2 ಗಗನಯಾತ್ರಿಗಳು ಶನಿವಾರ ನಸುಕಿನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳನ್ನು ಹೊತ್ತಿದ್ದ ಗಗನನೌಕೆ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಕೆಳಕ್ಕಿಳಿಯಿತು. ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಬಳಿಕ ನಾಸಾ ಆರ್ಟೆಮಿಸ್-2 ಸಿಬ್ಬಂದಿಯೊಂದಿಗೆ ಮರು ಸಂಪರ್ಕ ಸಾಧಿಸಲು ಯಶಸ್ವಿಯಾದರು. ಅಮೆರಿಕದ ಸೇನಾ ಹಡಗಿನಲ್ಲಿ ಆಗಮಿಸಿದ ಪುನಶ್ಚೇತನ ತಂಡ ಎಲ್ಲ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತೆಗೆಯಿತು. ಸಂಪರ್ಕ ಮರುಸಾಧಿಸಿದ ಬಳಿಕ ಮಾತನಾಡಿದ ಮಿಷನ್ ಕಮಾಂಡರ್ ರೀಡ್ ವೈಸ್‌ಮನ್, “ನಿಮ್ಮ ಧ್ವನಿ ದೊಡ್ಡದಾಗಿ ಸ್ಪಷ್ಟವಾಗಿ ಕೇಳಿಸುತ್ತಿದೆ” ಎಂದು ಹೇಳಿದರು. “ಅದ್ಭುತ ಪ್ರಯಾಣ; ನಾವೆಲ್ಲ ಸ್ಥಿರವಾಗಿದ್ದೇವೆ” ಎಂದು ಬಣ್ಣಿಸಿದರು. VIDEO | Artemis II astronauts - Commander Reid Wiseman, pilot Victor Glover, Christina Koch and Canada's Jeremy Hansen - return to Earth with splashdown in Pacific, exit capsule. #ArtemisII #NASA #MoonMission (Source: Third Party) (Full video available on PTI Videos -… pic.twitter.com/0FWOYAvZvz — Press Trust of India (@PTI_News) April 11, 2026

ವಾರ್ತಾ ಭಾರತಿ 11 Apr 2026 8:07 am

IPL 2026 | ಪ್ರಸಕ್ತ ಋತುವಿನ ಪಂದ್ಯದಲ್ಲಿ ಗರಿಷ್ಠ ಪವರ್‌ ಪ್ಲೇ ರನ್ ದಾಖಲೆ ಸೃಷ್ಟಿಸಿದ RR

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಗುವಾಹಟಿಯಲ್ಲಿ ಶುಕ್ರವಾರ ನಡೆದ RCB ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. 202 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಆರ್‌ ಗೆ ಸಿಡಿಲಬ್ಬರದ ಆರಂಭ ಒದಗಿಸಿದ ಯುವ ಬ್ಯಾಟರ್, ತಮ್ಮ ತಂಡಕ್ಕೆ ಪ್ರಸಕ್ತ ಋತುವಿನಲ್ಲಿ ಮೊದಲ ಆರು ಓವರ್‌ನಲ್ಲಿ ಗರಿಷ್ಠ ರನ್ ಗಳಿಸಿದ ತಂಡ ಎಂಬ ಕೀರ್ತಿ ತಂದುಕೊಟ್ಟರು. ಪವರ್‌ಪ್ಲೇಯಲ್ಲಿ ರಾಜಸ್ಥಾನ ರಾಯಲ್ಸ್ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತು. ಕೇವಲ 26 ಎಸೆತಗಳಲ್ಲಿ 78 ರನ್ ಗಳಿಸಿದ ಸೂರ್ಯವಂಶಿ ಔಟ್ ಆಗುವ ಮುನ್ನ ಪವರ್‌ ಪ್ಲೇನಲ್ಲಿ 18 ಎಸೆತಗಳಲ್ಲಿ ಮಿಂಚಿನ 57 ರನ್ ಸಿಡಿಸಿದರು. ಧ್ರುವ್ ಜುರೇಲ್ 10 ಎಸೆತಗಳಲ್ಲಿ 27 ರನ್ ಚಚ್ಚಿದರು. ಆರನೇ ಓವರ್‌ ನಲ್ಲೇ ಈ ಜೋಡಿ 24 ರನ್‌ ಗಳನ್ನು ಕೊಳ್ಳೆಹೊಡೆಯಿತು. ಐಪಿಎಲ್ ಇತಿಹಾಸದಲ್ಲೇ ಪವರ್‌ ಪ್ಲೇನಲ್ಲಿ ಗರಿಷ್ಠ ರನ್ ಗಳಿಸಿದ ತಂಡಗಳ ಸಾಲಿಗೆ ಆರ್‌ಆರ್ ಸೇರಿದ್ದು, ಸನ್‌ ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿದರೆ ಮೂರನೇ ಸ್ಥಾನದಲ್ಲಿದೆ. ಐಪಿಎಲ್ 2024ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಸ್‌ಆರ್‌ಎಚ್ ಗಳಿಸಿದ 125 ರನ್ ಇದುವರೆಗಿನ ಗರಿಷ್ಠ ಪವರ್‌ಪ್ಲೇ ಸ್ಕೋರ್ ಆಗಿದೆ. ಅದೇ ವರ್ಷ ಇದೇ ತಂಡ ಎಲ್‌ಎಸ್‌ಜಿ ವಿರುದ್ಧ ವಿಕೆಟ್ ನಷ್ಟವಿಲ್ಲದೇ 107 ರನ್ ಗಳಿಸಿತ್ತು. ಕೊಲ್ಕತ್ತಾ ತಂಡ 2017ರಲ್ಲಿ ಆರ್‌ಸಿಬಿ ವಿರುದ್ಧ ವಿಕೆಟ್ ನಷ್ಟವಿಲ್ಲದೇ 105 ರನ್ ಗಳಿಸಿತ್ತು. ಸಿಎಸ್‌ಕೆ ತಂಡ ಪಿಬಿಕೆಎಸ್ ವಿರುದ್ಧ 2014ರಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತ್ತು. ಶುಕ್ರವಾರದ ಪಂದ್ಯದಲ್ಲಿ ಈ ಸ್ಫೋಟಕ ಬ್ಯಾಟಿಂಗ್ ಆರ್‌ಸಿಬಿ ಬೌಲರ್‌ ಗಳ ಮೇಲೆ ಭಾರಿ ಒತ್ತಡ ಹೇರಿತು. ಇದಕ್ಕೂ ಮುನ್ನ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 201 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ರಜತ್ ಪಾಟೀದಾರ್ 40 ಎಸೆತಗಳಲ್ಲಿ 63 ರನ್ ಸಿಡಿಸುವ ಮುನ್ನ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಆರ್‌ಆರ್ ಪರ ಜೋಫ್ರಾ ಆರ್ಚರ್ ಮತ್ತು ರವಿ ಬಿಷ್ಣೋಯಿ ನೇತೃತ್ವದ ಬೌಲರ್‌ ಗಳು ಆರ್‌ಸಿಬಿಯನ್ನು ಕಾಡಿದರು. ಒಂದು ಹಂತದಲ್ಲಿ ಆರ್‌ಸಿಬಿ 94 ರನ್‌ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

ವಾರ್ತಾ ಭಾರತಿ 11 Apr 2026 8:00 am

ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ: 919 ಅಂಕ ಜಿಗಿತ ಕಂಡ ಸೆನ್ಸೆಕ್ಸ್

ಮುಂಬೈ: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಪಾತಾಳಕ್ಕೆ ಇಳಿದಿದ್ದ ಷೇರು ಸೂಚ್ಯಂಕ, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಬಳಿಕ ಭಾರಿ ಚೇತರಿಕೆ ಕಂಡಿದೆ. ಯುದ್ಧ ಕೊನೆಗೊಳ್ಳುವ ಆಶಾವಾದದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಹೂಡಿಕೆದಾರರು ಮತ್ತೆ ಷೇರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಭಾರತ ಸೇರಿದಂತೆ ಜಾಗತಿಕವಾಗಿ ಬಹುತೇಕ ಮಾರುಕಟ್ಟೆಗಳು ಏರುಗತಿಯನ್ನು ಕಂಡಿವೆ. ಆದರ, ಆರಂಭಿಕ ಪ್ರವೃತ್ತಿಯಂತೆ ಅಮೆರಿಕ ಮಾರುಕಟ್ಟೆ ಮಾತ್ರ ಅಲ್ಪಮಟ್ಟಿಗೆ ಕುಸಿದಿದೆ. ಶುಕ್ರವಾರ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ ಗೆ 100 ಡಾಲರ್‌ಗಳ ಆಸುಪಾಸಿನಲ್ಲಿ ಇದ್ದು, ಸೆನ್ಸೆಕ್ಸ್ 919 ಅಂಕಗಳ ಜಿಗಿತ ಕಂಡು 77,500ರ ಗಡುವಿನ ಬಳಿ ನಿಂತಿದೆ. HDFC ಬ್ಯಾಂಕ್, ICICI ಬ್ಯಾಂಕ್ ಹಾಗೂ RAL ಷೇರುಗಳು ಏರಿಕೆ ಕಂಡಿವೆ. ಫೆಬ್ರುವರಿ 28ರಂದು ಅಮೆರಿಕ–ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಆರಂಭವಾದ ಬಳಿಕ ಸಾಪ್ತಾಹಿಕವಾಗಿ ಷೇರು ಮಾರುಕಟ್ಟೆ ಚೇತರಿಸಿಕೊಂಡಿರುವುದು ಇದೇ ಮೊದಲು. ಷೇರುಗಳಿಗೆ ಶುಕ್ರವಾರ 672 ಕೋಟಿ ರೂಪಾಯಿ ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಿರುವುದು ಧನಾತ್ಮಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಯುದ್ಧ ಆರಂಭದ ಬಳಿಕ ಮೊದಲ ಬಾರಿಗೆ ವಿದೇಶಿ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಮಾರ್ಚ್ 2ರಿಂದ ಎಪ್ರಿಲ್ 9ರ ನಡುವೆ ವಿದೇಶಿ ಹೂಡಿಕೆದಾರರು ಸುಮಾರು 1.4 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. AI ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ TCS, ಇನ್ಫೋಸಿಸ್ ಹಾಗೂ ತಂತ್ರಜ್ಞಾನ ಕಂಪನಿಗಳ ಷೇರುಗಳು ಭಾರಿ ಪ್ರಮಾಣದಲ್ಲಿ ಮಾರಾಟವಾದವು. TCS ಶೇಕಡಾ 2.5, ಇನ್ಫೋಸಿಸ್ ಶೇಕಡಾ 3 ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶೇಕಡಾ 1.4ರಷ್ಟು ಕುಸಿತ ಕಂಡಿವೆ.

ವಾರ್ತಾ ಭಾರತಿ 11 Apr 2026 7:57 am

ಕೇರಳದಲ್ಲಿ ಹೆಚ್ಚಿದ ಉಷ್ಣತೆ: 12 ಜಿಲ್ಲೆಗಳಲ್ಲಿ ಅಲರ್ಟ್‌, ಸಾರ್ವಜನಿಕರಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ

ಕೇರಳದ ಇಡುಕ್ಕಿ ಮತ್ತು ವಯನಾಡು ಹೊರತುಪಡಿಸಿ ಉಳಿದ 12 ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಪ್ರಸ್ತುತ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣತೆ ದಾಖಲಾಗುತ್ತಿದ್ದು, ಪಾಲಕ್ಕಾಡ್‌ನಲ್ಲಿ 39 ಡಿಗ್ರಿ ಹಾಗೂ ಕೊಲ್ಲಂನಲ್ಲಿ 38 ಡಿಗ್ರಿ ತಾಪಮಾನ ಕಂಡುಬಂದಿದೆ. ಈ ನಡುವೆ ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ವಿಜಯ ಕರ್ನಾಟಕ 11 Apr 2026 7:50 am

ಅರೆ ಬಚ್ಚಾ! ವೈಭವ್‌ ಸೂರ್ಯವಂಶಿ ಹೇಜಲ್‌ವುಡ್‌ಗೆ ಬಾರಿಸಿದ ಸಿಕ್ಸ್‌ ನೋಡಿ ದಂಗಾದ ವಿರಾಟ್‌ ಕೊಹ್ಲಿ

ನಿನ್ನೆ (ಏ.10-ಶುಕ್ರವಾರ) ಗುವಹಾಟಿಯಲ್ಲಿ ನಡೆದ ಆರ್‌ಸಿಬಿ vs ಆರ್‌ಆರ್‌ ಐಪಿಎಲ್‌ ಪಂದ್ಯ ಆ್ಯಬ್ಸುಲ್ಯೂಟ್‌ ಸಿನಿಮಾ ಆಗಿತ್ತು. ಈ ಪಂದ್ಯದಲ್ಲಿ ಆರ್‌ಆರ್‌ನ ಛೋಟಾ ಬಚ್ಚಾ ವೈಭವ್‌ ಸೂರ್ಯವಂಶಿ ಆರ್ಭಟಿಸಿದ ಪರಿಗೆ ಆರ್‌ಸಿಬಿ ಬ್ಯಾಕ್‌ಬೋನ್‌ ವಿರಾಟ್‌ ಕೊಹ್ಲಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಜಾಶ್‌ ಹೇಜಲ್‌ವುಡ್‌ ಎಸೆತದಲ್ಲಿ ವೈಭವ್‌ ಸಿಕ್ಸ್‌ ಬಾರಿಸಿದ ಪರಿ ಎಲ್ಲರನ್ನೂ ದಂಗು ಬಡಿಸಿದೆ. ಪಂದ್ಯದ ಬಳಿಕವೂ ವಿರಾಟ್‌ ಕೊಹ್ಲಿ ಅವರು ವೈಭವ್‌ ಸೂರ್ಯವಂಶಿ ಅವರಿಗೆ ಹಸ್ತಲಾಘವ ನೀಡಿದರು. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Apr 2026 7:50 am

Vande Bharat Express: ದೇಶದಲ್ಲಿ ವಂದೇ ಭಾರತ್ ರೈಲಿನ ಹವಾ: ಪ್ರಯಾಣಿಕರ ಸಂಖ್ಯೆ ಶೇ.34ರಷ್ಟು ಏರಿಕೆ

ನವದೆಹಲಿ: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿ ಸೃಷ್ಟಿಸಿದ ವಂದೇ ಭಾರತ್ ರೈಲುಗಳಿಗೆ (Vande Bharat Express Train) ಬೇಡಿಕೆ ಹೆಚ್ಚಾಗಿದೆ. ರೈಲ್ವೆ ಇಲಾಖೆ ಈಗಾಗಲೇ ಹೊಸ ಮಾರ್ಗ, ರೈಲು ಹಳಿ ಡಬ್ಲಿಂಗ್, ಬೋಗಿಗಳ ಹೆಚ್ಚಳ ಸೇರಿ ಇನ್ನಿತರ ಮೂಲಸೌಕರ್ಯ ಸುಧಾರಿಸುತ್ತಿದೆ. ಇದರ ನಡುವೆ ವೇಗದ ಹಾಗೂ ಐಶಾರಾಮಿ ಮತ್ತು ಆರಾಮದಾಯಕ ಅನುಭವ ನೀಡುವ ವಂದೇ ಭಾರತ್ ಮೆಲಿನ

ಒನ್ ಇ೦ಡಿಯ 11 Apr 2026 7:43 am

ಡೂನ್ ಲಿಟ್ ಫೆಸ್ಟ್ 2026: ಸಾಹಿತಿ -ಚಿಂತಕರ ಸಮಾಗಮ; ಸಾಹಿತ್ಯ, ಸಿನಿಮಾ, ಇತಿಹಾಸ, AI ಚರ್ಚೆಗಳಿಗೆ ಸಾಕ್ಷಿ

ಉತ್ತರಾಖಂಡನಲ್ಲಿ ಶಿಕ್ಷಣ ಸಚಿವಾಲಯದ ಅಧಿನದ ಭಾರತದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ 'ಡೂನ್ ಪುಸ್ತಕ ಉತ್ಸವ 2026' ಆಯೋಜಿಸಿತ್ತು. ಇದು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಜೊತೆಗೆ ವೈವಿಧ್ಯಮಯ ವಿಷಯಗಳ ಕುರಿತು ವಿಚಾರ ವಿನಿಮಯಕ್ಕೆ ಬಹುಮುಖ್ಯ ವೇದಿಕೆ ಆಯಿತು. ಕ್ರಿಯಾತ್ಮಕ ಡೂನ್ ಲಿಟ್ ಫೆಸ್ಟ್ ಸಹ ನಡೆದಿದ್ದು, ಸಾಹಿತ್ಯಾಸಕ್ತರು, ಓದುಗರು, ಚಿಂತಕರು ಮತ್ತು ಕಥೆಗಾರರನ್ನು ಒಟ್ಟುಗೂಡಿಸಿದೆ. ಸಾಹಿತ್ಯ, ಸಿನಿಮಾ,

ಒನ್ ಇ೦ಡಿಯ 11 Apr 2026 6:50 am

Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು: ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ವಾಯು ಸುಳಿಗಾಳಿ ಮತ್ತು ಟ್ರಫ್ ತೀವ್ರತೆಯ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನ ಕೆಲವೆಡೆ ಶುಕ್ರವಾರ ಸಂಜೆಯಿಂದ ಮಳೆ ಆಗಿದೆ. ಈ ಮಳೆ ಶನಿವಾರವು (ಏಪ್ರಿಲ್ 11) ಮುಂದುವರಿಯಲಿದೆ. ಈಗಾಗಲೇ ರಾಜ್ಯದ ಹಲವೆಡೆ ಆಗಾಗ ಪೂರ್ವ ಮುಂಗಾರು ಮಳೆ ಆಗುತ್ತಿದ್ದು, ಒಣಹವೆಗೆ ಕಾವೇರಿದ್ದ ಇಳೆಗೆ ಮಳೆಯ ಸಿಂಚನದಿಂದ ತಂಪಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ

ಒನ್ ಇ೦ಡಿಯ 11 Apr 2026 6:18 am

ಆನೇಕಲ್‌ ಬಳಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪರ್ಯಾಯ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕೃತ ಚಾಲನೆ ನೀಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಆ ಕ್ರೀಡಾಂಗಣದ ಮೇಲಿನ ಒತ್ತಡ ತಗ್ಗಿಸಲು ಮತ್ತು ನಗರದ ಹೊರವಲಯದಲ್ಲಿ ಕ್ರೀಡಾ ಮೂಲಸೌಕರ್ಯ ವಿಸ್ತರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ವಿಜಯ ಕರ್ನಾಟಕ 11 Apr 2026 5:55 am

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ; ಎ.16ರವರೆಗೆ ಅನುಷ್ಠಾನಗೊಳಿಸದಂತೆ ಹೈಕೋರ್ಟ್‌ ನಿರ್ದೇಶನ ‌

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಎಪ್ರಿಲ್ 16ರವರೆಗೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಹೈಕೋರ್ಟ್‌ ಮಧ್ಯಂತರ ನಿರ್ದೇಶನ ‌ನೀಡಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರ ಪರ ವಕೀಲರು ಹಾಜರಾಗಿ, ಅರ್ಜಿ ವಿಚಾರಣೆಯನ್ನು ಏಪ್ರಿಲ್ 24 ಅಥವಾ 27ಕ್ಕೆ ಮುಂದೂಡಬೇಕು. ಅಲ್ಲಿಯವರೆಗೆ ಗಡಿಪಾರು ಆದೇಶ ಜಾರಿಗೆ ತಾತ್ಕಾಲಿಕ ತಡೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದೆ. ಅರ್ಜಿದಾರರನ್ನು ಗಡಿಪಾರು ಮಾಡಿ ಮೂರನೇ ಬಾರಿಗೆ ಆದೇಶ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಅವಕಾಶವಿದೆ. ಅರ್ಜಿದಾರರು ರೌಡಿ ಶೀಟರ್‌ ಆಗಿದ್ದು, ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗಡಿಪಾರು ವಿಚಾರವಾಗಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ಮಾಡಿದೆ ಎಂದು ತಿಳಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಗಡಿಪಾರು ಆದೇಶ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿ ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶವನ್ನು ಸುಖಾಸುಮ್ಮನೆ ಮುಂದುವರಿಸಲಾಗದು. ಅನಗತ್ಯವಾಗಿ ವಿಚಾರಣೆ ಮುಂದೂಡಿಕೆಗೆ ಕೋರಬಾರದು. ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಬೇಕಾದರೆ, ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗುವುದು ಎಂದು ಕಟುವಾಗಿಯೇ ನುಡಿಯಿತು. ಆಗ ಅರ್ಜಿದಾರರ ಪರ ವಕೀಲರು, ಅರ್ಜಿ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿ ವಿಚಾರಣೆಯ್ನು ಏಪ್ರಿಲ್ 16ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸದಂತೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ಜತೆಗೆ, ಏಪ್ರಿಲ್ 16ರಂದು ವಾದ ಮಂಡಿಸಲು ಸಂಪೂರ್ಣವಾಗಿ ಸಿದ್ಧವಾಗಿ ಬರುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.

ವಾರ್ತಾ ಭಾರತಿ 11 Apr 2026 1:17 am

ಅರಣ್ಯ ಭೂಮಿ ಒತ್ತುವರಿ ವಿಚಾರ | ರಮೇಶ್ ಕುಮಾರ್‌ಗೆ ಹಿನ್ನಡೆ; 63 ಎಕರೆ ಜಮೀನು ತೆರವುಗೊಳಿಸಲು ಆದೇಶ

ಕೋಲಾರ : ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ಗೆ ತೀವ್ರ ಹಿನ್ನಡೆ ಉಂಟಾಗಿದೆ. 20 ವರ್ಷಗಳಿಂದ ನಡೆಸಿದ ಸುದೀರ್ಘ ಹೋರಾಟಕ್ಕೆ ಹಿನ್ನಡೆಯಾಗಿದೆ. ಇಂದು ಅರಣ್ಯ ಇಲಾಖೆ ಸಿ.ಸಿ.ಎಫ್ ಅವರು ಮಹತ್ವದ ಆದೇಶ ನೀಡಿದ್ದು ಅರಣ್ಯ ಇಲಾಖೆಗೆ ಸೇರಿದ 63 ಎಕರೆ ಜಮೀನನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಅರಣ್ಯ ಕಾಯ್ದೆ, 1963 ರ ಸೆಕ್ಷನ್ 64-ಂ(3) ರ ಅಡಿಯಲ್ಲಿ ಸಿಸಿಎಫ್ ಮೇಲ್ಮನವಿ ನ್ಯಾಯವ್ಯಾಪ್ತಿ ಮತ್ತು ಅಧಿಕಾರಗಳನ್ನು ಚಲಾಯಿಸಿ, ಹೊಸಹುಡ್ಯ ಬಳಿ ಒತ್ತುವರಿಯಾಗಿರುವ 63 ಎಕರೆ ಜಮೀನು ತೆರವಿಗೆ ಆದೇಶ ಹೊರಡಿಸಲಾಗಿದೆ. ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2011 ರಂದು ಹೊರಡಿಸಿದ ತೆರವು ಆದೇಶದ ಅನ್ವಯ ಹೊಸಹುಡ್ಯ ಗ್ರಾಮದ ಸ ನಂ. 1 ರಲ್ಲಿ 6 ಎಕರೆ ಮತ್ತು ಸ. ನಂ. 2 ರಲ್ಲಿ 54 ಎಕರೆ 23 ಗುಂಟೆ ಒತ್ತುವರಿ ತೆರವಿಗೆ ಆದೇಶ ಮಾಡಲಾಗಿತ್ತು, ಆದರೆ, ಈ ಸಂಬಂಧ ಕೆ.ಆರ್. ರಮೇಶ್‌ ಕುಮಾರ್ ಸಲ್ಲಿಸಿದ ಮೇಲ್ಮನವಿ ಅರ್ಹತೆ ಇಲ್ಲದ ಕಾರಣ ವಜಾ ಮಾಡಲಾಗಿದೆ. 15 ಹಾಗೂ 16 ಜನವರಿ 2025 ರಂದು ನಡೆಸಿದ ಜಂಟಿ ಸಮೀಕ್ಷೆಯಿಂದ ನಿರ್ಣಾಯಕವಾಗಿದ್ದು, ಈ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 (ಮೂವತ್ತು) ದಿನಗಳ ಒಳಗೆ ಮೇಲ್ಮನವಿದಾರರು ಅತಿಕ್ರಮಣ ಮಾಡಲಾದ ಭೂಮಿಯನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಶಾಂತಿಯುತವಾಗಿ ಹಸ್ತಾಂತರಿಸಬೇಕೆಂದು ನಿರ್ದೇಶಿಸಲಾಗಿದೆ. ನಿಗದಿತ ಅವಧಿಯೊಳಗೆ ಪಾಲಿಸಲು ವಿಫಲವಾದರೆ, ಕೋಲಾರದ ಅರಣ್ಯ ಸಂರಕ್ಷಣಾಧಿಕಾರಿಗಳು ಅತಿಕ್ರಮಣವನ್ನು ತೆರವುಗೊಳಿಸಲು. ಸದರಿ ಅರಣ್ಯದ ಸ್ವಾಧೀನವನ್ನು ಪಡೆದುಕೊಳ್ಳುವಂತೆ ಆದೇಶ ಮಾಡಲಾಗಿದೆ.

ವಾರ್ತಾ ಭಾರತಿ 11 Apr 2026 12:36 am

ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ ನಿಧನ

ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ, ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ (88) ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ನಗರದ ಚಾಮರಾಜಪೇಟೆ ಕೆಂಪೇಗೌಡನಗರದ ಪರಿಷತ್ತಿನ ಕೇಶವಶಿಲ್ಪಾದಲ್ಲಿ ಬೆಳಗ್ಗೆ 10.30 ರಿಂದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ, ಲೇಖಕ ಬಾಬು ಕೃಷ್ಣಮೂರ್ತಿ, ಚಿಂತಕರಾದ ಜಿ.ಬಿ.ಹರೀಶ, ಸೂರ್ಯಪ್ರಕಾಶ ಪಂಡಿತ್, ವಿ.ಬಿ.ಆರತಿ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್, ಪರಿಷತ್ ಸದಸ್ಯ ಸಿ.ಟಿ.ರವಿ, ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಅನಂತರ, ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು. ’ ಆರು ದಶಕಗಳ ಕಾಲ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಡಾ.ಎಸ್.ಆರ್. ರಾಮಸ್ವಾಮಿ ಅವರು 1966ರಿಂದ ರಾಷ್ಟ್ರೋತ್ಥಾನ ಪರಿಷತ್ ನ ಜೊತೆಗೆ ನಿಕಟ ಸಂಪರ್ಕ ಹೊಂದಿದವರು. ಕಳೆದ 47 ವರ್ಷಗಳಿಂದ (1979) ಉತ್ಥಾನ ಮಾಸಪತ್ರಿಕೆಯ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ. 1972-1979ರ ಅವಧಿಯಲ್ಲಿ ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 11 Apr 2026 12:24 am

ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್ ಸೂರ್ಯವಂಶಿ! ಹಾಲಿ ಚಾಂಪಿಯನ್ RCB `ಜೋಶ್' ಗೇ ಪೆಟ್ಟು ಕೊಟ್ಟ 15ರ ಬಾಲಕ

ವಿಶ್ವದ ಅತ್ಯಂತ ಕರಾರುವಾಕ್ ಬೌಲರ್ ಗಳಲ್ಲಿ ಒಬ್ಬರಾಗಿರುವ ಜೋಶ್ ಹೇಜಲ್ವುಡ್ ಅವರು ಗಾಯದಿಂದ ಚೇತರಿಸಿ ಯಾವಾಗ ಆಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು ಕ್ರಿಕೆಟ್ ಪ್ರೇಮಿಗಳು. ಬೀಡುಬೀಸು ಬ್ಯಾಟಿಂಗ್ ಗೆ ಹೆಸರಾಗಿರುವ ಬಾಲಕ ವೈಭವ್ ಸೂರ್ಯವಂಶಿ ಮಾತ್ರ ಒಂದೇ ಓವರ್ ನಲ್ಲಿ 19 ರನ್ ಬಾಚುವ ಮೂಲಕ ಅವರನ್ನೂ ಲೆಕ್ಕಕ್ಕಿಲ್ಲದಂತೆ ಮಾಡಿಬಿಟ್ಟ! 15ರ ಹರೆಯದ ಪೋರನ ಬ್ಯಾಟಿಂಗ್ ವೈಭವದ ಮುಂದೆ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಪರಾಭವಗೊಂಡಿತು. ಈ ಮೂಲಕ ಸೀಸನ್ ನಲ್ಲಿ ನಿರಂತರ ನಾಲ್ಕನೇ ಜಯ ಸಂಪಾದಿಸಿದ ರಾಜಸ್ಥಾನ ರಾಯಲ್ಸ್ 8 ಅಂಕಗಳೊಂದಿಗೆ ಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಸೋಲನುಭವಿಸಿದರೂ ಆರ್ ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲೇ ಮುಂದುವರಿದಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಏಪ್ರಿಲ್ 10ರ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 201 ರನ್ ಕಲೆ ಹಾಕಿದರು. ಉತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 12 ಎಸೆತಗಳು ಬಾಕಿ ಉಳಿದಿದ್ದಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()ರಾಜಸ್ಥಾನ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(8 ಎಸೆತದಲ್ಲಿ 13 ರನ್) ಅವರ ವಿಕೆಟ್ ಅನ್ನು ಜೋಶ್ ಹೇಜಲ್ವುಡ್ ಅವರು ಪಡೆದಾಗ ಆರ್ ಸಿಬಿ ಪಾಳಯದಲ್ಲಿ ಸಡಗರ, ಸಂಭ್ರಮವಿತ್ತು. ಆದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಕಿತ್ತುಕೊಂಡದ್ದು ವೈಭವ್ ಸೂರ್ಯವಂಶಿ. ಸೀಸನ್ ನಲ್ಲಿ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಔಟಾಗುವ ಮುಂಚೆ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಗಳನ್ನು ಒಳಗೊಂಡ 71 ರನ್ ಬಾರಿಸಿದರು. ಹೇಜಲ್ವುಡ್ ವಿರುದ್ಧ ಆಕ್ರಮಣಕಾರಿ ಆಟ ವಿಶೇಷವೆಂದರೆ ಈ ಹಿಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಸವಾರಿ ನಡೆಸಿದ್ದ ವೈಭವ್ ಈ ಬಾರಿ ಆರ್ ಸಿಬಿಯ ಪ್ರಧಾನ ವೇಗಿ ಜೋಶ್ ಹೇಜಲ್ವುಡ್ ಅವರ ಮೇಲೆ ಏರಿ ಹೋದರು. ಮೊದಲ ಬಾರಿ ಆಸ್ಟ್ರೇಲಿಯಾದ ವೇಗಿಯನ್ನು ಎದುರಿಸಿದ ಅವರು ಒಂದೇ ಓವರ್ ನಲ್ಲಿ 19 ರನ್ ಬಾರಿಸಿದರು. 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಅಲ್ಲಿಗೆ ಆರ್ ಸಿಬಿಯ ಜಂಘಾಬಲವೇ ಉಡುಗಿಹೋಯಿತು. ಪಂದ್ಯ ಸಂಪೂರ್ಣವಾಗಿ ಆರ್ ಸಿಬಿ ಕೈತಪ್ಪಿ ಹೋಯಿತು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಗಳು ತರಗೆಲೆಯಂತೆ ಬೀಳುತ್ತಿದ್ದ ಸಂದರ್ಭದಲ್ಲಿ ಆಸರೆಯಾದವರು ನಾಯಕ . ಕೇವಲ 40 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಗಳನ್ನು ಒಳಗೊಂಡ 63 ರನ್ ಗಳಿಸಿ ಔಟಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವರು 15 ಎಸತೆದಲ್ಲಿ 29 ರನ್ ಬಾರಿಸಿದರು. ಅವರು ಕೊನೇ ಓವರ್ ನಲ್ಲಿ 21 ರನ್ ಬಾಚಿದ್ದರಿಂದ ತಂಡದ ಮೊತ್ತ 200 ದಾಟಿತು. ಸಂಕ್ಷಿಪ್ತ ಸ್ಕೋರ್ ಆರ್ ಸಿಬಿ 20 ಓವರ್ ಗಳಲ್ಲಿ 201/8, ಪಾಟೀದಾರ್ 63(40), ಕೊಹ್ಲಿ 32(16), ವೆಂಕಟೇಶ್ ಅಯ್ಯರ್ 29(15), ಶೆಫರ್ಡ್ 22(11), ಆರ್ಚರ್ 33ಕ್ಕೆ 2, ಬಿಷ್ಣೋಯಿ 32ಕ್ಕೆ 2, ಬ್ರಿಜೇಶ್ 37ಕ್ಕೆ 2. ರಾಜಸ್ಥಾನ ರಾಯಲ್ಸ್ 18 ಓವರ್ ಗಳಲ್ಲಿ 202/4, ಧ್ರುವ್ ಜ್ಯುರೆಲ್ ಅಜೇಯ 81(43), ವೈಭವ್ ಸೂರ್ಯವಂಶಿ 81(43), ರವೀಂದ್ರ ಜಡೇಜಾ 24(25), ಜೋಶ್ ಹೇಜಲ್ವುಡ್ 44ಕ್ಕೆ 2, ಕೃನಾಲ್ ಪಾಂಡ್ಯ 30ಕ್ಕೆ 2

ವಿಜಯ ಕರ್ನಾಟಕ 11 Apr 2026 12:10 am

ಗ್ಯಾಸ್ ಇಲ್ವಾ?....ಇಂಡಕ್ಷನ್ ಪ್ಲೇಟ್ ತಗೊಂಡ್‌ಬಿಡಿ

ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್‌ಗೆ ಅಂದಾಜು 1,800-2,000 ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಆಪತ್ತಿನ ಕಾಲದಲ್ಲಿ ಒಂದು ಸರಕಾರ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದು, ಆ ಸರಕಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಥವಾ ಆ ನಾಯಕತ್ವಕ್ಕೆ ಸಲಹೆ ನೀಡುವ ಥಿಂಕ್ ಟ್ಯಾಂಕ್‌ನ ಬುದ್ಧಿ ಸಾಮರ್ಥ್ಯ, ದೂರದೃಷ್ಟಿ, ಸನ್ನಿವೇಶದ ಸಮಗ್ರ ಗೃಹಿಕೆ... ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಯಲ್ಲಿ ‘‘ಗ್ಯಾಲರಿಯಲ್ಲಿ ಕುಳಿತವರ ಬೇಡಿಕೆಗಳನ್ನು ಮನ್ನಿಸಿ ಸಿಕ್ಸರ್ ಹೊಡೆಯುವ’’ ಆಟಕ್ಕೆ ಜಾಗವೇ ಇಲ್ಲ; ಇರಬಾರದು. ಈ ಗ್ಯಾಲರಿ ಖುಷಿಪಡಿಸುವ ಆಟ ಪುನರಾವರ್ತಿಸತೊಡಗಿದರೆ, ಆಗಿರುವ ಲೋಪಗಳಿಂದ ಕಲ್ಲಿಯುವುದಕ್ಕೇನೂ ಉಳಿದಿಲ್ಲ ಎಂಬ ಮನೋಸ್ಥಿತಿ ಬಂದೊದಗಿದರೆ, ಅದು ಆತಂಕದ ಸ್ಥಿತಿ. ಆಗ, ಅಲ್ಲಿ ಗ್ಯಾಲರಿಯಲ್ಲಿ ಕುಳಿತಿರುವವರು ಯಾರು? ಎಂದು ಗುರುತಿಸಿಕೊಳ್ಳುವುದು ಅಗತ್ಯ. ಪಶ್ಚಿಮ ಏಶ್ಯ ಯುದ್ಧ ಸನ್ನಿವೇಶದ ಅಡ್ಡ ಪರಿಣಾಮಗಳನ್ನು ತಗ್ಗಿಸಿಕೊಳ್ಳುವುದಕ್ಕೋಸ್ಕರ ಭಾರತ ಸರಕಾರವು ದೇಶದ ಅಡುಗೆಮನೆಗಳಲ್ಲಿ ವಿದ್ಯುತ್ ಚಾಲಿತ ಅಡುಗೆಗೆ (ಇಂಡಕ್ಷನ್ ಪ್ಲೇಟ್) ಪ್ರೋತ್ಸಾಹ ನೀಡಲು ತೀರ್ಮಾನಿಸಿದೆ ಮತ್ತು ಅದಕ್ಕಾಗಿ, ಬಡವರು ಮತ್ತು ದುರ್ಬಲರಿಗೆ ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತಿನ ಮೇಲೆ ಇಂಡಕ್ಷನ್ ಪ್ಲೇಟ್‌ಗಳನ್ನು ಒದಗಿಸುವ ಯೋಚನೆ ಆರಂಭಗೊಂಡಿದೆಯಂತೆ; ಅದಕ್ಕಾಗಿ ಸರಕಾರ ಈಗಾಗಲೇ ವಿಶ್ವ ಬ್ಯಾಂಕ್, ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳ ಜೊತೆ ಮಾತುಕತೆಗಳನ್ನು ಆರಂಭಿಸಿದೆಯಂತೆ. ಬಲ್ಲ ಮೂಲಗಳನ್ನು ಉಲ್ಲೇಖಿಸಿ, ‘ದಿ ಮಿಂಟ್’ ಪತ್ರಿಕೆ ಈ ಬಗ್ಗೆ ವರದಿ (ಎಪ್ರಿಲ್ 07) ಮಾಡಿತ್ತು. ದೇಶದಲ್ಲಿ ತಿಂಗಳಿಗೆ 1,000-2,000 ಯೂನಿಟ್‌ಗಳಷ್ಟೇ ಮಾರಾಟ ಇದ್ದ ಇಂಡಕ್ಷನ್ ಪ್ಲೇಟ್‌ಗಳು ಈಗ ಏಕಾಏಕಿ, ದಿನಕ್ಕೆ ಎರಡು ಲಕ್ಷಕ್ಕೂ ಮಿಕ್ಕಿ ಯೂನಿಟ್‌ಗಳಷ್ಟು ಪ್ರಮಾಣದಲ್ಲಿ ಮಾರಾಟ ಆಗತೊಡಗಿವೆಯಂತೆ. ಬೇಸಿಕ್ ಮಾಡೆಲ್‌ಗೆ ಅಂದಾಜು 1,800-2,000ರೂ.ಗಳ ಬೆಲೆ ಇದ್ದದ್ದು, ಈಗ ಕಾಳಸಂತೆಯಲ್ಲಿ ಹಲವು ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಗಮನಾರ್ಹ ಸಂಗತಿ ಎಂದರೆ, ಈ ಇಂಡಕ್ಷನ್ ಪ್ಲೇಟ್‌ಗಳು ಬಹುತೇಕ ಚೀನಾದಲ್ಲೇ ತಯಾರಾಗಿ ಬರುವಂತಹವು ಅಥವಾ ಬಹುತೇಕ ಶೇ. 60ರಷ್ಟು ಬಿಡಿಭಾಗಗಳು ಚೀನಾದಿಂದ ಆಮದಾಗಿ, ಇಲ್ಲಿ ಅಸೆಂಬ್ಲಿ ಮಾಡಿಸಿಕೊಂಡು, ಸ್ಥಳೀಯ ಬ್ರ್ಯಾಂಡ್ ಸೀಲು ಒತ್ತಿಸಿಕೊಂಡು ಮಾರಾಟವಾಗುವಂತಹವು. ಭಾರತ ಸರಕಾರವು ದೇಶದ ಒಳಗೆ ಇಂಧನ ಕ್ಷಮತೆಗೆ ಸಂಬಂಧಿಸಿ, ದಿಕ್ಕುದಿಸೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಈ ಬೆಳವಣಿಗೆ ಜೀವಂತ ಉದಾಹರಣೆ. 2023 ನವೆಂಬರ್ 2ರಂದು ವಿದ್ಯುತ್ ಮತ್ತು ನವೀಕರಿಸಬಲ್ಲ ಇಂಧನ ಇಲಾಖೆಯ ಸಚಿವರಾಗಿದ್ದ ಆರ್.ಕೆ. ಸಿಂಗ್ ಅವರು, ತಮ್ಮ ಇಲಾಖೆ ಹಾಗೂ ಸರಕಾರಿ ಸ್ವಾಮ್ಯದ ಎನರ್ಜಿ ಎಫೀಷಿಯನ್ಸಿ ಸರ್ವೀಸಸ್ ಲಿಮಿಟೆಡ್ (EESL) ವತಿಯಿಂದ ದೇಶದ ಬಡ ಕುಟುಂಬಗಳಿಗೆ 20 ಲಕ್ಷ ಇಂಡಕ್ಷನ್ ಪ್ಲೇಟ್‌ಗಳನ್ನು ವಿತರಿಸುವ ಉದ್ದೇಶವುಳ್ಳ ದಿ ನ್ಯಾಷನಲ್ ಎಫೀಷಿಯಂಟ್ ಕುಕಿಂಗ್ ಪ್ರಾಜೆಕ್ಟ್ (NECP)ಗೆ ಚಾಲನೆ ನೀಡಿದ್ದರು. (ಆಧಾರ: PIB Release ID: 1974191). ಸಾರ್ವಜನಿಕರಿಂದ ಬೇಡಿಕೆ ಇಲ್ಲದೆ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ ಈಗ, ಏಕಾಏಕಿ ಬೇಡಿಕೆ ಏರಿರುವ ಹಿನ್ನೆಲೆಯಲ್ಲಿ, ಸರಕಾರವು ಈ ಯೋಜನೆಗೆ ಮರುಜೀವ ನೀಡುವ ಚಿಂತನೆ ಆರಂಭಿಸಿರುವಂತಿದೆ. ಭಾರತ ತನ್ನ ಮನೆವಾರ್ತೆಯ ಇಂಧನಕ್ಕೆ ಸಂಬಂಧಿಸಿದಂತೆ ವಾರ್ಷಿಕ ಎಲ್‌ಪಿಜಿ ಬೇಡಿಕೆಯ ಶೇ. 65ರಷ್ಟಕ್ಕೆ ಆಮದನ್ನು ಅವಲಂಬಿಸಿದೆ. ಆ ಆಮದಿನ ಶೇ. 90 ಭಾಗ ಈಗ ಕದನ ಕೋಲಾಹಲ ನಡೆಯುತ್ತಿರುವ ಪಶ್ಚಿಮ ಏಶ್ಯದಿಂದಲೇ ಬರಬೇಕಿದೆ. ಯುದ್ಧದ ವಾತಾವರಣ ಮುಂದುವರಿದರೆ, ಭಾರತಕ್ಕೆ ಪರ್ಯಾಯ ಅಡುಗೆ ಇಂಧನ ಮೂಲಗಳನ್ನು ಗುರುತಿಸಿಟ್ಟುಕೊಳ್ಳುವುದು ಅನಿವಾರ್ಯ ಆಗಲಿದೆ. ಅದಕ್ಕಾಗಿಯೇ ಏಕಾಏಕಿ LNG ಬಳಕೆಗೆ ಒತ್ತಾಯ, ಸೀಮೆ ಎಣ್ಣೆಗೆ ಮರುಜೀವ, ಕಟ್ಟಿಗೆ ಬಳಕೆಗೂ ಅವಕಾಶ, ಇಂಡಕ್ಷನ್ ಪ್ಲೇಟ್‌ಗಳತ್ತ ದೃಷ್ಟಿ... ಮೊದಲಾದ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದಿವೆ. ಕೋವಿಡ್ ಕಾಲದ ನೆನಪುಗಳು ಕೋವಿಡ್ ಜಗನ್ಮಾರಿಯ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯೊಂದು ಸದ್ದು ಮಾಡಿತ್ತು. ಮೇ 12, 2020ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು ದೇಶವು ಹೇಗೆ ಆಪತ್ತನ್ನು ಅವಕಾಶವಾಗಿ ಬದಲಿಸಿಕೊಂಡಿತು (ಆಪದಾ ಕೋ ಅವಸರ್ ಮೇ ಬದಲಾ) ಎಂದು ವಿವರಿಸಿದ್ದರು. ಕೋವಿಡ್ ಬರುವ ಮುನ್ನ ದೇಶದಲ್ಲಿ ಒಂದೇ ಒಂದು PPE ಕಿಟ್ ಅಥವಾ ಎನ್‌95 ಮಾಸ್ಕ್ ತಯಾರಾಗುತ್ತಿರಲಿಲ್ಲ, ಆದರೆ ಈಗ ಪ್ರತಿದಿನ ಎರಡು ಲಕ್ಷದಷ್ಟು ತಯಾರಾಗುತ್ತಿವೆ ಎಂದು ಭಾರತದ ಆತ್ಮನಿರ್ಭರತೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ಹಿಂದಿರುಗಿ ನೋಡಿದರೆ, ಅಂದಿನ ಆ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತೀರ್ಮಾನಗಳು ಆ ಬಳಿಕ ಎತ್ತ ತಲುಪಿದವು ಎಂಬುದನ್ನು ಯಾರೂ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಅಂತಹ ಕೆಲವು ಐಟಂಗಳನ್ನು ಒಂದೊಂದಾಗಿ ಗಮನಿಸಿದರೆ, ಹೆಚ್ಚಿನಂಶ ಈಗ ಈ ಚೀನಾ ಮಾಲು ಇಂಡಕ್ಷನ್ ಪ್ಲೇಟುಗಳು, ಅಂತಿಮವಾಗಿ ನಮ್ಮ ಉದ್ಯಮಗಳನ್ನು ಈ ಬೀಸುವ ಕತ್ತಿ ತಪ್ಪಿಸಿಕೊಳ್ಳುವ ತಂತ್ರದ ಹಾದಿಯಲ್ಲಿ ಎಲ್ಲಿಗೆ ತಲುಪಿಸಲಿವೆ ಎಂಬ ಚಿತ್ರಣ ಸಿಕ್ಕೀತು. ಎಥನಾಲ್ ಕೋವಿಡ್ ಕಾಲದಲ್ಲಿ ಸ್ಯಾನಿಟೈಸರ್ ಆಗಿ ಪರಿಚಿತವಾಗಿದ್ದ ಎಥನಾಲ್ 2019ಕ್ಕಿಂತ ಮೊದಲು ಭಾರತದಲ್ಲಿ ಉತ್ಪಾದನೆ ಆಗುತ್ತಿದ್ದುದು, ವರ್ಷಕ್ಕೆ ಕೇವಲ 10 ಲಕ್ಷ ಲೀಟರ್. ಕೋವಿಡ್ ಕಾಲದಲ್ಲಿ ಅದು ದಿನಕ್ಕೆ 30 ಲಕ್ಷ ಲೀಟರ್‌ಗಳಿಗೆ ಏರಿತು. ಇದ್ದಬದ್ದ ಸಕ್ಕರೆ ಕಾರ್ಖಾನೆಗಳೆಲ್ಲ ಎಥನಾಲ್ ಉತ್ಪಾದನೆಗೆ ತೊಡಗಿಕೊಂಡವು. ಕಡೆಗೆ ಸ್ಯಾನಿಟೈಸರ್ ಬೇಡಿಕೆ ಕಡಿಮೆ ಆದಾಗ, ಉತ್ಪಾದನೆ ಹೆಚ್ಚಾಗಿರುವ ಎಥನಾಲ್ ಸಂಗ್ರಹವನ್ನು ಖರ್ಚು ಮಾಡಲು, ಅದನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಯೋಜನೆ ಚುರುಕು ಪಡೆಯಿತು. ಇದು ಇನ್ನೊಂದು ವಿಕೋಪಕ್ಕೆ ಹೋಗಿ, ಫುಡ್ ಕಾರ್ಪೊರೇಷನ್ (FCI) ಬಳಿ ಇರುವ ಅಕ್ಕಿ ದಾಸ್ತಾನನ್ನೂ ಈ ಎಥನಾಲ್ ಉತ್ಪಾದನೆಗೆ ಬಳಸಲಾರಂಭಿಸಲಾಯಿತು. (ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2848, ದಿನಾಂಕ 18-08-2025). ಅತಿಯಾಗಿ ನೀರು ಬಳಸಿ ಬೆಳೆಯುವ ಅಕ್ಕಿ, ಈಗ ಮನುಷ್ಯರ ಆಹಾರ ಆಗುವ ಬದಲಿಗೆ, ವಾಹನಗಳ ಪೆಟ್ರೋಲಿಗೆ ಮಿಶ್ರಣ ಆಗಿ ಬದಲಾಗಿದೆ. ಹೀಗೆ, ಒಂದು ಸಮಸ್ಯೆ ಪರಿಹರಿಸಲು ಹೊರಟ ಸರಕಾರ, ನೂರು ಸಮಸ್ಯೆಗಳನ್ನೀಗ ತಲೆಯ ಮೇಲೆ ಎಳೆದುಕೊಂಡಿದೆ. ಎನ್‌95 ಮಾಸ್ಕ್ ಭಾರತದಲ್ಲಿ 2020 ಮಾರ್ಚ್ ಹೊತ್ತಿಗೆ ಉತ್ಪಾದನೆ ಆಗುತ್ತಿದ್ದುದು, ಇಲ್ಲಿನ ಬೇಡಿಕೆ ಪೂರೈಸಲು ಅಗತ್ಯವಿರುವಷ್ಟೇ, ಅಂದರೆ ತಿಂಗಳಿಗೆ ಅಂದಾಜು 20 ಲಕ್ಷ ಮಾಸ್ಕ್‌ಗಳು. ಕೋವಿಡ್ ಕಾಲದಲ್ಲಿ ದೇಶದಾದ್ಯಂತ 241 ಹೊಸ, ಆತ್ಮನಿರ್ಭರ ಮಾಸ್ಕ್ ಕಾರ್ಖಾನೆಗಳು 2021 ಮೇ ಹೊತ್ತಿಗೆ ತಿಂಗಳಿಗೆ ಮೂರು ಕೋಟಿ ಎನ್‌95 ಮಾಸ್ಕ್ ಉತ್ಪಾದನೆ ಮಾಡತೊಡಗಿದ್ದವು. ಈಗ ಕೋವಿಡ್ ಇಲ್ಲ. ಆರೋಗ್ಯ ವ್ಯವಸ್ಥೆಯ ಹೊರಗೆ ಮಾಸ್ಕ್ ಬಳಸುವವರಿಲ್ಲ. ರಫ್ತು ಮಾಡೋಣವೆಂದರೆ ಯಾರಿಗೂ ಬೇಡ. ಹಾಗಾಗಿ ಮಾಸ್ಕ್ ಕಾರ್ಖಾನೆ ಎಂದು ಹಣ ಹೂಡಿದವರ ಸ್ಥಿತಿ ಉಗುಳುವಂತಿಲ್ಲ-ನುಂಗುವಂತಿಲ್ಲ ಆಗಿದೆ. 2022ರ ಹೊತ್ತಿಗಾಗಲೇ ಅರ್ಧಕ್ಕರ್ಧ ಮಾಸ್ಕ್ ಕೈಗಾರಿಕೆಗಳು ನಷ್ಟದಲ್ಲಿ ಬಾಗಿಲು ಹಾಕಿಕೊಂಡಿವೆ. PPE ಕಿಟ್ 2020 ಜನವರಿ ಹೊತ್ತಿಗೆ ಭಾರತದಲ್ಲಿ, ಆಮದು ಮಾಡಿಕೊಂಡಿದ್ದ 2.75 ಲಕ್ಷ PPE ಕಿಟ್‌ಗಳು ಮಾತ್ರ ಲಭ್ಯವಿದ್ದವು. ಇಲ್ಲಿ ಉತ್ಪಾದನೆ ಇರಲಿಲ್ಲ. 2020 ಜುಲೈ ಹೊತ್ತಿಗೆ ಭಾರತದಲ್ಲಿ 109 PPE ಕಿಟ್ ತಯಾರಕ ಕಂಪೆನಿಗಳು ದಿನಕ್ಕೆ 4.5 ಲಕ್ಷ PPE ಕಿಟ್ ಉತ್ಪಾದಿಸತೊಡಗಿದ್ದವು. ಕೋವಿಡ್ ಮುಗಿದ ಬಳಿಕ, PPE ಕಿಟ್ ದೊಡ್ಡ ಪ್ರಮಾಣದ ಉತ್ಪಾದಕರು ಬೆರಳೆಣಿಕೆಯಲ್ಲಿ ಉಳಿದುಕೊಂಡಿದ್ದಾರೆ. ಬಹುತೇಕ ಎಲ್ಲ ಸಣ್ಣ ಕಾರ್ಖಾನೆಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿಕೊಂಡಿವೆ. ತಮಾಷೆ ಎಂದರೆ, ಇವು ಮತ್ತು ಇಂತಹ ಹಲವು ಕೋವಿಡ್ ಕಾಲದ ಆಣಬೆ ಉತ್ಪಾದನೆಗಳಲ್ಲಿ ಭರಪೂರ ಲಾಭ ಮಾಡಿಕೊಂಡಿರುವುದು, ಇವಕ್ಕೆಲ್ಲ ಕಚ್ಚಾವಸ್ತುಗಳನ್ನು ಸರಬರಾಜು ಮಾಡುತ್ತಿರುವ ಚೀನಾ! ಇಂತಹ ಸಾಲುಸಾಲು ಕೋವಿಡ್ ಕಾಲದ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಇವೆಲ್ಲ ಕೋವಿಡ್ ಆತಂಕದ ಹೊತ್ತಿನಲ್ಲಿ ಅಗತ್ಯವಿದ್ದ ಸಂಗತಿಗಳಲ್ಲವೆ? ಇವು ಇಲ್ಲದಿದ್ದರೆ ದೇಶ ಇನ್ನಷ್ಟು ಕಂಗೆಡಬೇಕಿತ್ತಲ್ಲವೆ? ಎಂಬ ಪ್ರಶ್ನೆಗಳು ಏಳಬೇಕಾದುದು ಸಹಜ. ಆದರೆ ಒಂದು ಸರಕಾರ ತನ್ನ ಮಟ್ಟದಲ್ಲಿ ಯೋಚಿಸುವಾಗ-ಯೋಜಿಸುವಾಗ, ನಾವು ಸಾಮಾನ್ಯ ಮನುಷ್ಯರಂತೆ ನಮ್ಮ ಅಳವಿನ ವ್ಯಾಪ್ತಿಯೊಳಗೆ ಕಾರ್ಯಾಚರಿಸುವುದಿಲ್ಲ. ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕನುಗುಣವಾಗಿ ವರ್ತಿಸುವುದು ಮತ್ತು ಆ ತೀರ್ಮಾನಗಳಲ್ಲಿ ಏನಾದರೂ ಲೋಪಗಳಿದ್ದರೆ, ಅವಕ್ಕೂ ಪರಿಹಾರದ ಹಾದಿ ತೆರೆದಿರಿಸುವುದು - ಒಂದು ಸರಕಾರದಿಂದ ಅದರ ಪ್ರಜೆಗಳು ನಿರೀಕ್ಷಿಸುವ ಕನಿಷ್ಠ ಜವಾಬ್ದಾರಿ. ಸರಕಾರ ಇಂತಹ ವಿಚಾರಗಳಲ್ಲಿ ಕರ್ತವ್ಯಲೋಪ ತೋರಿಸಿದಾಗ ಅಥವಾ ಇಂತಹ ಸನ್ನಿವೇಶಗಳಲ್ಲೂ ಖಾಸಗಿ ಲಾಭಬಡುಕತನಕ್ಕೆ ಅವಕಾಶ ತೆರೆದುಕೊಟ್ಟು, ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದಾಗ, ಅದು ಬೇಜವಾಬ್ದಾರಿ ಅನ್ನಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಸರಕಾರದ ಮುಖಕ್ಕೆ ಕನ್ನಡಿ ಹಿಡಿಯಬೇಕಾಗಿದ್ದ ಮಾಧ್ಯಮಗಳೂ ಈಗ ನಿಷ್ಕ್ರಿಯ. ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕರ ಗಮನ ಸೆಳೆಯದಂತೆ ಮುಚ್ಚಿಹಾಕಿರುವ ಕಾರಣದಿಂದಾಗಿ, ಯಾರೂ ಈ ಘಟನೆಗಳಿಂದ ಪಾಠ ಕಲಿಯುತ್ತಿಲ್ಲ. ಹಾಗಾಗಿಯೇ ಈಗ ಅಮೆರಿಕ-ಇಸ್ರೇಲ್-ಇರಾನ್ ಕದನದ ಹೊತ್ತಿನಲ್ಲಿ ಇಂಡಕ್ಷನ್ ಪ್ಲೇಟ್ ಉತ್ಪಾದನೆಯ ಸಾಧ್ಯತೆಗಳು ಭುಗಿಲೇಳತೊಡಗಿವೆ. ದೇಶದಲ್ಲಿ ನೆಟ್ ಝೀರೊ ಸಾಧಿಸಲು ನವೀಕರಿಸಬಲ್ಲ ಇಂಧನ ಮೂಲಗಳು ಬೇಕು ಎನ್ನುತ್ತಲೇ, ಉಷ್ಣವಿದ್ಯುತ್ ಸ್ಥಾವರಗಳನ್ನು ಹೆಚ್ಚಿಸುತ್ತಿರುವುದು, ಯಾರದ್ದೋ ಡೇಟಾ ದಾಸ್ತಾನಿಗೆಂದು ಇಲ್ಲಿ ಇನ್ನೂ ಇಲ್ಲದ ವಿದ್ಯುತ್ತನ್ನು ನಂಬಿ ಡೇಟಾ ಸೆಂಟರುಗಳಿಗೆ ಅಬ್ಬರತಾಳ ಹಾಕುತ್ತಿರುವುದು, ಪರಮಾಣು ವಿದ್ಯುತ್ ಹೆಸರಿನಲ್ಲಿ ಮುಂಗೈಗೆ ಬೆಲ್ಲ ಹಚ್ಚಿ, ಅಪರೂಪದ ಖನಿಜಗಳ ಗಣಿಗಾರಿಕೆಗೆ ಹಾದಿ ತೆರೆಯುತ್ತಿರುವುದು, ಇದೆಲ್ಲದಕ್ಕೆ ತುರಾಯಿಯ ರೂಪದಲ್ಲಿ ವಿದ್ಯುತ್ ವಲಯದ ಖಾಸಗೀಕರಣ.... ಈ ಎಲ್ಲ ಗೊಂದಲದ ಸಿಗ್ನಲ್‌ಗಳು ತೋರಿಸುತ್ತಿರುವುದು ಗ್ಯಾಲರಿಯತ್ತಲೇ - ಗ್ಯಾಲರಿಯಲ್ಲಿ ಕುಳಿತಿರುವವರು ಅಂತಿಮವಾಗಿ ಮ್ಯಾಚು ಗೆಲ್ಲಲಿರುವ ಲಾಭಬಡುಕ ಕಾರ್ಪೊರೇಟ್‌ಗಳು.

ವಾರ್ತಾ ಭಾರತಿ 11 Apr 2026 12:10 am

ಸೂರ್ಯ, ಧ್ರುವ ಅಬ್ಬರ; ರಾಜಸ್ಥಾನಕ್ಕೆ ಸತತ ನಾಲ್ಕನೇ ಜಯ

ರಜತ್ ಪಾಟಿದಾರ್ ಹೋರಾಟ ವ್ಯರ್ಥ

ವಾರ್ತಾ ಭಾರತಿ 11 Apr 2026 12:10 am

ಹೇಮಂತ್ ಕರ್ಕರೆ ಸಾವು ‘ಕರ್ಮಫಲ’: ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿಗೆ ಶೆಫಾಲಿ ವೈದ್ಯ ಸಮರ್ಥನೆ

ಹೊಸದಿಲ್ಲಿ, ಎ.10: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವನ್ನು “ಕರ್ಮಫಲ” ಎಂದು ಹೇಳಿರುವ ಅಂಕಣಕಾರ್ತಿ ಶೆಫಾಲಿ ವೈದ್ಯ, ಕರ್ನಲ್ ಶ್ರೀಕಾಂತ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಿರುವುದನ್ನು ಸಮರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ವೈದ್ಯ, “ಬ್ರಿಗೇಡಿಯರ್ ಆಗಿ ಕರ್ನಲ್ ಪುರೋಹಿತ್ ನೇಮಕ ಮಾಡಲಾಗುತ್ತಿದೆ. ತಪ್ಪಾಗಿ ಆರೋಪಿಸಲ್ಪಟ್ಟು, ಸುಳ್ಳು ಪ್ರಕರಣಗಳಲ್ಲಿ ಸಿಲುಕಿ, ಊಹಿಸಲಾಗದ ಮಟ್ಟದ ಕಿರುಕುಳ ಅನುಭವಿಸಿ, ತಮ್ಮ ಜೀವನದ ಹಲವು ವರ್ಷಗಳನ್ನು ಕಳೆದುಕೊಂಡ ಅಧಿಕಾರಿಯೊಬ್ಬರ ಘನತೆಯನ್ನು ಮರುಸ್ಥಾಪಿಸಲು ಭಾರತೀಯ ಸೇನೆ ಕೈಗೊಂಡಿರುವುದು ಮಹತ್ವದ ಹೆಜ್ಜೆ. ದೇಶವಿರೋಧಿ ಕಾಂಗ್ರೆಸ್‌ ಗೆ ಧನ್ಯವಾದ” ಎಂದು ಹೇಳಿದ್ದಾರೆ. “ಕಸಬ್ ಕೈಯಲ್ಲಿ ಕರ್ಕರೆ ಮೃತಪಟ್ಟದ್ದು ಬಹುತೇಕ ಕರ್ಮಫಲ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಇತರರನ್ನು ಸುಳ್ಳು ಭಯೋತ್ಪಾದನೆ ಪ್ರಕರಣಗಳಲ್ಲಿ ಕಿರುಕುಳ ನೀಡಿದ ಪರಿಣಾಮ ಇದಾಗಿದೆ. ಇದೇ ಮಾತು ಪರಂಬೀರ್ ಸಿಂಗ್‌ ಗೂ ಅನ್ವಯಿಸುತ್ತದೆ” ಎಂದು ಅವರು ಹೇಳಿದ್ದಾರೆ. 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಳೆದ ವರ್ಷ ಖುಲಾಸೆಯಾಗಿದ್ದ ಕರ್ನಲ್ ಪುರೋಹಿತ್ ಗೆ ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ನೀಡಲು ಅನುಮೋದನೆ ದೊರೆತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ‘The Indian Express’ ವರದಿ ಪ್ರಕಾರ, Armed Forces Tribunal (AFT) ಅವರ ನಿವೃತ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಕೆಲವೇ ಅವಧಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರದಿಯ ಪ್ರಕಾರ, ಪುರೋಹಿತ್ ಕನಿಷ್ಠ ಇನ್ನೂ ಎರಡು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಕರ್ನಲ್ ಹುದ್ದೆಯ ನಿವೃತ್ತಿ ವಯಸ್ಸು 54 ವರ್ಷವಾಗಿದ್ದರೆ, ಬ್ರಿಗೇಡಿಯರ್ ಹುದ್ದೆಯಲ್ಲಿ 56 ವರ್ಷ ವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ. 17 ವರ್ಷಗಳ ಸುದೀರ್ಘ ವಿಚಾರಣೆಯಿಂದ ತನ್ನ ವೃತ್ತಿ ಜೀವನದ ಪ್ರಗತಿಗೆ ತೊಂದರೆ ಉಂಟಾಗಿದೆ ಎಂದು ಪುರೋಹಿತ್ ಸಶಸ್ತ್ರ ಪಡೆಗಳ ನ್ಯಾಯಾಧಿಕರಣದ ಮೊರೆ ಹೋಗಿದ್ದರು. 2017ರಲ್ಲಿ ಅವರಿಗೆ ಜಾಮೀನು ಮಂಜೂರಾದರೂ, ಶಿಸ್ತು ಮತ್ತು ನಿಯಂತ್ರಣದ ಅಡಿಯಲ್ಲಿ ಇರಿಸಲಾಗಿತ್ತು. ಜುಲೈ 2020ರಲ್ಲಿ ಈ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ, 2021ರಲ್ಲಿ ಭಡ್ತಿ ಪ್ರಕ್ರಿಯೆ ಮುಂದುವರಿಯಿತು. ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆಗಳು ಹೊಸದಲ್ಲ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಹುತಾತ್ಮ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದನ್ನು ಯೂಟ್ಯೂಬರ್ ಧ್ರುವ್ ರಾಠಿ ಗಮನಕ್ಕೆ ತಂದಿದ್ದರು. 1982ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ, ಮುಂಬೈ ಎಟಿಎಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆಗೆ ನೇತೃತ್ವ ವಹಿಸಿದ್ದರು. 2008ರ ನವೆಂಬರ್ 26ರಂದು ನಡೆದ ಮುಂಬೈ ಉಗ್ರ ದಾಳಿಯ ವೇಳೆ ಕಾಮಾ ಆಸ್ಪತ್ರೆ ಬಳಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಅವರು ಹುತಾತ್ಮರಾದರು. ಅವರಿಗೆ 2009ರಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಲಾಗಿದೆ. ಮುಂಬೈ ಪೊಲೀಸರ ಆರೋಪಪಟ್ಟಿಯ ಪ್ರಕಾರ, ಅಜ್ಮಲ್ ಅಮೀರ್ ಕಸಬ್ ಹಾಗೂ ಅಬು ಇಸ್ಮಾಯಿಲ್ ಖಾನ್ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ಕರೆ ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಹಾಗೂ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ಮೃತಪಟ್ಟಿದ್ದರು. ಕಾಮಾ ಆಸ್ಪತ್ರೆಗೆ ತೆರಳುವಾಗ ರಂಗ್ ಭವನ್ ಲೇನ್ ಬಳಿ ಹೊಂಚು ಹಾಕಿ ದಾಳಿ ನಡೆಸಲಾಗಿತ್ತು. ಇದೇ ವಿಚಾರದಲ್ಲಿ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಈ ಹಿಂದೆ “ಶಾಪದ ಪರಿಣಾಮ” ಎಂದು ಹೇಳಿಕೆ ನೀಡಿದ್ದರೆ, ಮಹಾರಾಷ್ಟ್ರ ವಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್ ಅವರು “RSS ಸಂಪರ್ಕ ಹೊಂದಿದ್ದ ಪೊಲೀಸ್ ಅಧಿಕಾರಿ ಕರ್ಕರೆ ಸಾವಿಗೆ ಕಾರಣ” ಎಂದು ಆರೋಪಿಸಿದ್ದರು.

ವಾರ್ತಾ ಭಾರತಿ 11 Apr 2026 12:03 am

ದ್ವಿತೀಯ ಪಿಯುಸಿ ಫಲಿತಾಂಶ| ವಿಜ್ಞಾನ ವಿಭಾಗದಲ್ಲಿ ಕೀರ್ತಿ ರಮೇಶ ಸುಲೇಕರ್‌ ಗೆ 96.18% ಅಂಕ

ಅಫಜಲಪುರ: ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ರಮೇಶ ಸುಲೇಕರ್ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 96.18% ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಧಾರವಾಡದ ವಿದ್ಯಾ ಪಿ. ಹಂಚಿನಾಳ ಕಾಲೇಜಿನ ವಿದ್ಯಾರ್ಥಿನಿಯಾದ ಕೀರ್ತಿ ಅವರು, ತಮ್ಮ ಪರಿಶ್ರಮ, ನಿಯಮಿತ ಅಭ್ಯಾಸ ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ಈ ಯಶಸ್ಸನ್ನು ಸಾಧಿಸಿದ್ದಾರೆ. ಇವರ ಈ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಜನಸೇವೆ ಮಾಡುವುದು ತನ್ನ ಮುಖ್ಯ ಗುರಿಯಾಗಿದೆ ಎಂದು ಕೀರ್ತಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Apr 2026 11:50 pm

LPG: ಎಲ್‌ಪಿಜಿ ಹೆಚ್ಚಿನ ದರಕ್ಕೆ ಮಾರಿದರೆ ಕಂಪನಿಗಳಿಗೆ ಬೀಗ: ಸಚಿವ ಕೆ.ಎಚ್.ಮುನಿಯಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಎಚ್ಚರಿಸಿದ್ದಾರೆ. ಶುಕ್ರವಾರ ವಿವಿಧ ತೈಲ ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಅಡುಗೆ ಅನಿಲ ವಿತರಣಾ ವ್ಯವಸ್ಥೆಯ ಕುರಿತು ಸಮಗ್ರ

ಒನ್ ಇ೦ಡಿಯ 10 Apr 2026 11:44 pm