Monsoon Rain 2026: ದುರ್ಬಲ ಮುಂಗಾರು ಮಳೆಯಿಂದ ರಾಜ್ಯದಲ್ಲಿ ಬರಗಾಲ, ನೀರಿನ ಬಿಕ್ಕಟ್ಟು ಸಂಭವ: ಐಎಂಡಿ
ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತಕ ವರ್ಷ 2026 ಮುಂಗಾರು ಮಳೆ (South West Monsoon 2026) ನಿರೀಕ್ಷೆಗಿಂತ ಕಡಿಮೆ ಬರಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಿನ ಬೇಸಿಗೆಯಲ್ಲಿ ನಿರಂತರವಾಗಿ ವಾರಗಳ ಕಾಲ ಅಧಿಕ ತಾಪಮಾನ ನಿರ್ಮಾಣವಾಗಲಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಲಾಶಯಗಳ ನೀರು ವೇಗವಾಗಿ ಖಾಲಿಯಾಗುತ್ತದೆ. ಈ ವರ್ಷ ಕಡಿಮೆ ಮಳೆ, ನೀರಿನ ಅಲಭ್ಯತೆ
ಜಿಬಿಐಟಿ: ಅಂತಿಮ ಅಧಿಸೂಚನೆಗೆ ಇವತ್ತೇ ಅನುಮೋದನೆ ಸಿಗುವ ನಿರೀಕ್ಷೆ
ಏಪ್ರಿಲ್ 16 ರ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಅಧಿಕೃತ ಮುದ್ರೆ ಬೀಳಲಿದೆ. ಈ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ 'ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ' ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಗೆ ಅನುಮೋದನೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಮೆತ್ತಿದ ದುಷ್ಕರ್ಮಿಗಳು: ವೀರಾಪುರದಲ್ಲಿ ಉದ್ವಿಗ್ನತೆ, ಕಠಿಣ ಕ್ರಮಕ್ಕೆ ಆಗ್ರಹ
ಕುಕನೂರು: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ವಿವಿಧ ಮಹನೀಯರ ಭಾವಚಿತ್ರಗಳಿಗೆ ಕಿಡಿಗೇಡಿಗಳು ಸೆಗಣಿ ಮೆತ್ತಿ ಅವಮಾನಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ದೇಶದ ಅಸ್ಮಿತೆ ಹಾಗೂ ಸಾಮಾಜಿಕ ನ್ಯಾಯದ ಸಂಕೇತವಾಗಿರುವ ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಭಾವಚಿತ್ರಗಳಿಗೆ ವಿಕೃತಿ ಮೆರೆದಿರುವುದು ಬೆಳಗಿನ ಜಾವ ಸಾರ್ವಜನಿಕರ ಗಮನಕ್ಕೆ ಬಂದಿದೆ. ವೃತ್ತದ ಸುತ್ತಲೂ ಅಂಬೇಡ್ಕರ್, ರಾಮಜಿ, ಬಸವೇಶ್ವರ, ಬುದ್ಧ, ಪೆರಿಯಾರ್, ಬಾಬು ಜಗಜೀವನ ರಾಂ, ಸಾವಿತ್ರಿಬಾಯಿ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವರ ಭಾವಚಿತ್ರಗಳು ಅಳವಡಿಸಲ್ಪಟ್ಟಿದ್ದು, ಅವುಗಳಿಗೆ ಸೆಗಣಿ ಮೆತ್ತಲಾಗಿದೆ. ಅಂಬೇಡ್ಕರ್ ಪುತ್ಥಳಿ ಹಾಗೂ ವೃತ್ತದ ಸುತ್ತಮುತ್ತ ಇರುವ ಭಾವಚಿತ್ರಗಳಿಗೆ ಅವಮಾನ ಮಾಡಿರುವುದು ಖಂಡನೀಯ ಎಂದು ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಹನೀಯರು ಯಾವೊಂದು ಜಾತಿಗೆ ಸೀಮಿತರಾದವರಲ್ಲ; ಇಡೀ ದೇಶದ ಆಸ್ತಿ. ಅವರ ಭಾವಚಿತ್ರಕ್ಕೆ ಅವಮಾನ ಮಾಡುವುದೇ ಸಂವಿಧಾನಕ್ಕೆ ಹಾಗೂ ದೇಶಕ್ಕೆ ಅವಮಾನ ಮಾಡಿದಂತಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿಕೃತ ಮನಸ್ಸಿನ ಕಿಡಿಗೇಡಿಗಳು ಇಂಥ ಹೀನ ಕೃತ್ಯಕ್ಕೆ ಇಳಿದಿದ್ದು, ಇದು ಮಾನವ ಸಮಾಜ ತಲೆ ತಗ್ಗಿಸುವಂತಹ ಘಟನೆ ಎಂದು ಸ್ಥಳೀಯ ಮುಖಂಡರು ಖಂಡಿಸಿದರು. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ ರಾಂ ಅವರ ಭಾವಚಿತ್ರಗಳಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಘಟನೆ ಬೆಳಗಿನ ಜಾವ ಗಮನಕ್ಕೆ ಬಂದಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ದುಷ್ಕೃತ್ಯವನ್ನು ತಡರಾತ್ರಿ ದುರುದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಶಾಂತಿ ಹಾಗೂ ಸೌಹಾರ್ದತೆಯಿಂದ ಇರುವ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶವೇ ಇದರ ಹಿಂದೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದೇ ವೇಳೆ, ನಾಲ್ಕು ದಿನಗಳ ಹಿಂದೆ ಸವರ್ಣ ಹಾಗೂ ದಲಿತ ಸಮುದಾಯಗಳ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಘರ್ಷಣೆ ಈ ಘಟನೆಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ವೀರಾಪುರ ಗ್ರಾಮದಲ್ಲಿ ಒಟ್ಟು 2000ಕ್ಕೂ ಅಧಿಕ ಜನಸಂಖ್ಯೆ ಇದ್ದು, ಸುಮಾರು 300–400 ಮನೆಗಳಿವೆ. ಅದರಲ್ಲಿ ಬಹುತೇಕ ಪಂಚಮಸಾಲಿ ಹಾಗೂ ಮಾದಿಗ ಸಮುದಾಯದವರು ವಾಸಿಸುತ್ತಿದ್ದು, ಈ ಸಮುದಾಯಗಳ ಸುಮಾರು 120ಕ್ಕೂ ಹೆಚ್ಚು ಮನೆಗಳು ಗ್ರಾಮದಲ್ಲಿವೆ. ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ದಲಿತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ದುಷ್ಕೃತ್ಯ ಎಸಗಿದವರನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗಾಳೆಪ್ಪ ಎಂ.ಡಿ., ಪ್ರಕಾಶ್ ದೊಡ್ಡಮನಿ, ದೇವಪ್ಪ ಶಹಾಪುರ, ಬಸವರಾಜ್ ನಡುವಲಮನಿ, ಯಲ್ಲಪ್ಪ ಹಳೆಮನಿ, ಕೆಂಚಪ್ಪ ಕುಕನಪಳ್ಳಿ, ಮರಿಯಪ್ಪ ದೊಡ್ಡಮನಿ, ನಿಂಗಪ್ಪ ಬೆಣಕಲ್ ಸೇರಿದಂತೆ ಗ್ರಾಮದ ಅನೇಕ ದಲಿತ ಮುಖಂಡರು ಹಾಗೂ ಯುವಕರು ಭಾಗವಹಿಸಿದರು. ಪೊಲೀಸ್ ಬಂದೋಬಸ್ತ್: ಘಟನಾ ಸ್ಥಳಕ್ಕೆ ಕುಕನೂರು ಪಿಎಸ್ಐ ಎಸ್.ಪಿ. ನಾಯ್ಕ್ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಯಲಬುರ್ಗಾ ಸಿಪಿಐ ಮೌನೇಶ್ವರ ಪಾಟೀಲ್, ಬೇವೂರು ಠಾಣೆಯ ಪಿಎಸ್ಐ ಗುರುರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್ಪಿ ಎಂ.ಪಿ. ಸವರಗೋಳ, ಕುಕನೂರು ತಹಸೀಲ್ದಾರ್ ಬಸವರಾಜ್ ಬೆಣ್ಣೆಶಿರೂರ, ತಾ.ಪಂ. ಸಂತೋಷ ಪಾಟೀಲ್ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಂಧಾನ ಸಭೆ ಘಟನೆಯ ಹಿನ್ನೆಲೆ ದಲಿತ ಮುಖಂಡರನ್ನು ಕರೆಸಿ ಪೊಲೀಸರು, ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಿದರು. ಬಳಿಕ ಪುತ್ಥಳಿಗೆ ಎರಚಿದ ಸೆಗಣಿಯನ್ನು ತೆರವುಗೊಳಿಸಿ ನೀರಿನಿಂದ ಸ್ವಚ್ಛಗೊಳಿಸಲಾಯಿತು.
ನಾನಿನ್ನೂ ಸಂಪೂರ್ಣ ಫಿಟ್ ಆಗಿಲ್ಲ, ಆದರೂ ತಂಡಕ್ಕೆ ಮೋಸ ಮಾಡಿಲ್ಲ; ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ
RCB Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 16) ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವು ಎಲ್ಎಸ್ಜಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ನಂತರ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಗಾಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಗೆಲುವಿನ
ಸದ್ಗುರುವಿಗೆ ರಾಹುಲ್ ಗಾಂಧಿ ಯಾರೆಂಬ ಪಾಠ ಡಿಕೆಶಿ ಮಾಡಿದ್ದಾರೆ! ಮಾಗಡಿ ಬಾಲಕೃಷ್ಣ ಸಮರ್ಥನೆ
ಕೇಂದ್ರ ಸಚಿವ ಅಮಿತ್ ಶಾ ಭಾಗವಹಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಕ್ರಮ ಏಕೆ ಆಗಿಲ್ಲ ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಸದ್ಗುರು ಅವರಿಗೆ ರಾಹುಲ್ ಗಾಂಧಿ ಯಾರು ಎಂಬ ಪಾಠವನ್ನು ಡಿಕೆಶಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಲ್ಲಿ ಅಸಮಾಧಾನಿತ ಕಾಂಗ್ರೆಸ್ ನಾಯಕರಿಗೆ ಆಹ್ವಾನಕೊಟ್ಟ ಕುಮಾರಸ್ವಾಮಿಯವರ ಹೇಳಿಕೆಗೆ ಜೆಡಿಎಸ್ ಕುರಿತು ವ್ಯಂಗ್ಯ ಮಾಡಿದ್ದು, ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
ಸುರತ್ಕಲ್ ವಿಷನ್ ಸೆಂಟರ್ ಉದ್ಘಾಟನೆ
ಸುರತ್ಕಲ್: ಇಲ್ಲಿನ ಗೌಸಿಯ ಕಾಂಪ್ಲೆಕ್ಸ್ನಲ್ಲಿ ಸುರತ್ಕಲ್ ವಿಷನ್ ಕಮಿಟಿ (SVC) ಅಧೀನದಲ್ಲಿ ಆರಂಭಿಸಲಾದ ಸುರತ್ಕಲ್ ವಿಷನ್ ಸೆಂಟರ್ ಅನ್ನು ಏ.14ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುರತ್ಕಲ್ ವಿಷನ್ ಕಮಿಟಿಯ ಅಧ್ಯಕ್ಷ ಅನ್ಸಾಫ್ ಅಲಿ ಅವರು, SVC ವತಿಯಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳು, ಪ್ರಸ್ತುತ ಮತ್ತು ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಂಕಜಾಲ್, ಮೊಹಿಯುದ್ದೀನ್ ಜುಮ್ಮಾ ಮಸೀದಿ ಸುರತ್ಕಲ್ ಅಧ್ಯಕ್ಷ ಮುಸ್ತಫಾ ಸುರತ್ಕಲ್, ಸ್ಥಳೀಯ ಖತೀಬ್ ಹನೀಫ್ ಸಖಾಫಿ ಕಿನ್ಯ, KSAHC ಚೇರ್ಮನ್ ಡಾ. ಇಫ್ತಿಕಾರ್ ಅಲಿ ಸೇರಿದಂತೆ ಸುರತ್ಕಲ್ ಜಮಾಅತಿನ ಮಸೀದಿ ಮತ್ತು ಮದ್ರಸಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉಲಮಾಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ನಕೀಬ್ ಪೇಟೆ ಸ್ವಾಗತಿಸಿದರು. ಹರ್ಷದ್ ಇಡ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ರಫೀಕ್ ಇಡ್ಯಾ ವಂದಿಸಿದರು. ಸುರತ್ಕಲ್ ಪರಿಸರದ ನಾಗರಿಕರಿಗೆ ಉಪಯುಕ್ತವಾಗುವ ಉದ್ದೇಶದಿಂದ ಈ ಸೆಂಟರ್ ಆರಂಭಿಸಲಾಗಿದೆ. ಮಾಹಿತಿ ಕೇಂದ್ರ, ಸಮುದಾಯ ಕೇಂದ್ರ, ಗಲ್ಫ್ ಉದ್ಯೋಗಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸಹಾಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿರುವ ಈ ಕಚೇರಿ, ಸರ್ಕಾರ ನಿಗದಿತ ಶುಲ್ಕ ಹೊರತುಪಡಿಸಿ ಉಳಿದ ಸೇವೆಗಳನ್ನು ಉಚಿತವಾಗಿ ನೀಡಲಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Parliament Special Session| ಸಂವಿಧಾನವು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮತಿಸುವುದಿಲ್ಲ: ಅಮಿತ್ ಶಾ
ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿದ ಸಮಾಜವಾದಿ ಪಕ್ಷಕ್ಕೆ ಕೇಂದ್ರ ಗೃಹ ಸಚಿವರ ಪ್ರತಿಕ್ರಿಯೆ
ಸಾಗರ: ಹಾವು ಕಡಿದು ಎರಡುವರೆ ವರ್ಷದ ಮಗು ಮೃತ್ಯು
ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಎಸ್.ಎನ್. ನಗರದಲ್ಲಿ ಬುಧವಾರ ನಡೆದಿದೆ. ಅಕ್ಷತಾ ಹಾಗೂ ಗಣೇಶ್ ಅವರ ಪುತ್ರ ಭವಿನ್ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಅಕ್ಷತಾ ಅವರು ಮಗುವಿನೊಂದಿಗೆ ಎಸ್.ಎನ್. ನಗರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಬುಧವಾರ ಮನೆಯ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ನಾಗರಹಾವು ಬಂದು ಮಗುವಿನ ಕೈಗೆ ಕಡಿದಿದೆ ಎನ್ನಲಾಗಿದೆ. ಮಗು ಜೋರಾಗಿ ಅಳುತ್ತಿದ್ದನ್ನು ಕೇಳಿ ಮನೆಯವರು ಹೊರಗೆ ಬಂದು ನೋಡಿದಾಗ ಹಾವು ಅಲ್ಲಿಂದ ಸರಿದು ಹೋಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಬುಧವಾರ ರಾತ್ರಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.
ಕಲಬುರಗಿ | ಇಂದಿನಿಂದ ಬಸವ ಜಯಂತಿ; ಆರ್.ಕೆ. ಹುಡಗಿಗೆ ‘ಬಸವ ಶ್ರೀ’ ಪ್ರಶಸ್ತಿ: ಬಿ.ಆರ್. ಪಾಟೀಲ್
ಕಲಬುರಗಿ: ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿಯಿಂದ ಏ.16ರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, 893ನೇ ಬಸವ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಯಂತ್ಯೋತ್ಸವ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ್ ಹೇಳಿದರು. ನಗರದ ಶ್ರೀ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಿಂದ 18ರವರೆಗೆ ಸಂಜೆ 6ಕ್ಕೆ ನಗರದ ಜಗತ್ ವೃತ್ತದ ಬಸವೇಶ್ವರ ಮೂರ್ತಿಯ ಸಮೀಪದ ಬೇಡಿಕೆಯಲ್ಲಿ ವಿಶೇಷ ಉಪನ್ಯಾಸಗಳು ನಡೆಯಲಿವೆ. ಏ.19ರಂದು ಸಂಜೆ 5ಕ್ಕೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ‘ಬಸವಾಭಿಮಾನಿಗಳ ಬೃಹತ್ ಸಮಾವೇಶ’ ನಡೆಯಲಿದೆ ಎಂದು ಹೇಳಿದರು. ಬೃಹತ್ ಸಮಾವೇಶದಂದು ಬೆಳಗಾವಿಯ ಹಂದಿಗುಂದದ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಉದ್ಘಾಟಿಸಲಿದ್ದಾರೆ. ಚಿಂತಕ ಶಂಕರ ದೇವನೂರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಚಿವ ಈಶ್ವರ ಖಂಡ್ರೆ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ಇದಕ್ಕೂ ಮುನ್ನ ಅದೇ ದಿನ ಬೆಳಗ್ಗೆ 9ಕ್ಕೆ ಕಾರ್ ರ್ಯಾಲಿ ಹಾಗೂ ಸಂಜೆ ಮಹಿಳಾ ಬೈಕ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು. ಏ.20ರಂದು ಬೆಳಗ್ಗೆ 8ಕ್ಕೆ ಜಿಲ್ಲಾಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಷಟಸ್ಥಳ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5ಕ್ಕೆ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ವಿಶ್ವಗುರು ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಪೂಜ್ಯ ದೊಡ್ಡಪ್ಪ ಅಪ್ಪ, ಜಯಂತಿ ಸಮಿತಿ ಕಾರ್ಯಾಧ್ಯಕ್ಷ ಎಂಎಲ್ಸಿ ಬಿ.ಜಿ. ಪಾಟೀಲ್, ಶಾಸಕ ಎಂ.ವೈ. ಪಾಟೀಲ್, ಎಂಎಲ್ಸಿ ಶಶೀಲ್ ನಮೋಶಿ, ಡಾ. ಭೀಮಾಶಂಕರ ಬಿಲಗುಂದಿ, ಆರ್.ಜಿ. ಶೆಟಗಾರ, ದೊಡ್ಡಪ್ಪಗೌಡ ಪಾಟೀಲ್, ರಾಜು ಭೀಮಳ್ಳಿ, ಅರುಣಕುಮಾರ ಕೊಡಲಹಂಗರಗಾ, ಚಂದು ಪಾಟೀಲ್, ಡಾ. ಕಿರಣ ದೇಶಮುಖ, ರವೀಂದ್ರ ಶಾಬಾದಿ, ಅಶೋಕ ಗೂಳಿ, ಶಂಭುಲಿಂಗ ಬಳಬಟ್ಟಿ, ಸೋಮಶೇಖರ ಹಿರೇಮಠ, ಸಂತೋಷ್ ಲಂಗರ, ಸೋಮಶೇಖರ್ ಗೋನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆರ್.ಕೆ. ಹುಡಗಿಗೆ ‘ಬಸವ ಶ್ರೀ’ ಪ್ರಶಸ್ತಿ: ಬಸವಾಭಿಮಾನಿಗಳ ಸಮಾವೇಶದಲ್ಲಿ ಪ್ರೊ. ಆರ್.ಕೆ. ಹುಡಗಿ ಅವರಿಗೆ ‘ಬಸವ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಒಂದು ಲಕ್ಷ ರೂ. ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಸಮಾಜ ಸೇವಕ ಉಮೇಶ ಶೆಟ್ಟಿ ಹಾಗೂ ಸಿದ್ದರಾಮ ಧುಲಂಗೆ ಅವರಿಗೆ ‘ಸೇವಾ ಪ್ರಶಸ್ತಿ’ ನೀಡಲಾಗುವುದು. ಅಲ್ಲದೆ, ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಸೃಷ್ಟಿ ಪಾಟೀಲ್ ಅವರನ್ನು ಸನ್ಮಾನಿಸಿ 1 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ರಾಜ್ಯಕ್ಕೆ 12ನೇ ರ್ಯಾಂಕ್ ಪಡೆದ ವಿದ್ಯಾರ್ಥಿ ಬಸವರಾಜ ಗಂಗಾಧರ ಅವರನ್ನು ಸನ್ಮಾನಿಸಲಾಗುವುದು ಎಂದು ಬಿ.ಆರ್. ಪಾಟೀಲ್ ತಿಳಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಲಿಂಗ, ಜಾತಿ ಹಾಗೂ ವರ್ಗ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿದರು. ಈಗ ಎಲ್ಲರೂ ಸೇರಿಕೊಂಡು ಬಸವ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. – ಡಾ. ದಾಕ್ಷಾಯಿಣಿ ಎಸ್. ಅಪ್ಪ, ಅಧ್ಯಕ್ಷರು, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ.
ಬೆಂಗಳೂರಿನಲ್ಲಿ ಹೆತ್ತ ತಾಯಿಯನ್ನೇ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ: ಪಾರ್ಶ್ವವಾಯು ಪೀಡಿತೆ ಎಂಬ ಕಾರಣಕ್ಕೆ ಕೃತ್ಯ!
ತನ್ನ 75ವರ್ಷದ ಪಾರ್ಶ್ವವಾಯು ಪಿಡೀತ ವೃದ್ದ ತಾಯಿಯನ್ನು ನೋಡಿಕೊಳ್ಳಲಾಗದೆ ಮಗನೇ ಆಕೆಯನ್ನು 3ನೇ ಮಹಡಿಯಿಂದ ಕೆಳಕ್ಕೆ ಎಸೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ವಿಚಾರಣೆಯಲ್ಲಿ ಆತ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವುದರಿಂದ ಬೇಸತ್ತಿದ್ದು, ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತ ಮಾಹಿತಿ ಇಲ್ಲಿದೆ..
ಬಿಜೆಪಿ ಗೆಲುವು ನಿಶ್ಚಿತ ಎಂದ್ರು ಕೈನಾಯಕ ಜೈರಾಂ ರಮೇಶ್ : Slip of Tongue ಅಥವಾ ಒಳಮನಸ್ಸಿನ ಮಾತೇ?
Tamil Nadu and West Bengal Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಕೈ ನಾಯಕರ ಈ ಮಾತು ಬಾಯ್ತಪ್ಪಿ ಬಂದಿದ್ದಾ ಅಥವಾ ಒಳಮನಸ್ಸಿನ ಮಾತೇ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಲಾಗುತ್ತಿದೆ.
RCB Vs CSK: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು ನಡೆದ ಐಪಿಎಲ್ ಪದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಭಾರೀ ವಿಚಾದಕ್ಕೆ ಕಾರಣವಾಗಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಿಸಿಸಿಐವರೆಗೂ ಈ
ಹೊಸದಿಲ್ಲಿ: ಲೋಕಸಭೆಯಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಸೇರಿದಂತೆ ಮೂರು ಪ್ರಮುಖ ಮಸೂದೆಗಳ ಮಂಡನೆ ಬೆನ್ನಲ್ಲೆ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಮತ್ತು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು ಮಸೂದೆಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. “ಸರಕಾರ ಸಂಪೂರ್ಣವಾಗಿ ಸಂವಿಧಾನವನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ” ಎಂದು ಕೆ.ಸಿ ವೇಣುಗೋಪಾಲ್ ಆರೋಪಿಸಿದ್ದಾರೆ. ಇದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಮಸೂದೆಗಳನ್ನು ಪರಿಚಯಿಸಲಾಗಿದೆ ಮತ್ತು ಅವುಗಳ ಕುರಿತು ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.
ಕಲಬುರಗಿಯಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲು
ಪ್ರಖರ ಬಿಸಿಲಿಗೆ ಸೂರ್ಯನಗರಿಯ ಜನ ತತ್ತರ!
ಹೆಚ್ಡಿ ದೇವೇಗೌಡ ರಾಗಿಮುದ್ದೆ ರಾಯಭಾರಿ; ದೊಡ್ಡ ಗೌಡರ ರಟ್ಟೆಯ ಶಕ್ತಿಗೆ ನರೇಂದ್ರ ಮೋದಿ ಫಿದಾ ಕಣ್ರೀ
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ರಾಗಿಮುದ್ದೆ ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ರಾಗಿಮುದ್ದೆ ಅವರ ದಿನನಿತ್ಯದ ಭೋಜನದ ಅವಿಭಾಜ್ಯ ಅಂಗ. 92ರ ಇಳಿವಯುಸ್ಸಿನಲ್ಲಿ ಯುವಕರನ್ನೂ ನಾಚಿಸುವಂತೆ ಆರೋಗ್ಯವನ್ನು ಕಾಪಾಡಿಕೊಂಡಿರುವ ದೊಡ್ಡ ಗೌಡರು, ಒಂದಿಡೀ ಪೀಳಿಗೆಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅದರಂತೆ ನಿನ್ನೆ (ಏ.15-ಬುಧವಾರ) ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಹೆಚ್ಡಿ ದೇವೇಗೌಡ ಅವರ ಆರೋಗ್ಯ ಕಾಳಜಿಯನ್ನು ಕೊಂಡಾಡಿದರು.
Belthangady| ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತ್ಯು
ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ಮೃತರನ್ನು ನಾವರ ಗ್ರಾಮದ ಹಾರಡ್ಡೆ ನಿವಾಸಿ, ಆಟೋ ಚಾಲಕ ದೇವಪ್ಪ(37) ಮೃತಪಟ್ಟವರು. ಅವರಿಂದು ಬೆಳಗ್ಗೆ ಅಳದಂಗಡಿ ಸತ್ಯದೇವತೆ ದೇವಸ್ಥಾನದ ಬಳಿ ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದ ಪರಿಣಾಮ ಆಟೋ ರಿಕ್ಷಾ ಉರುಳಿಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ದೇವಪ್ಪ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮುಂದಿನ ಎರಡು ದಿನ 41 - 42 ಡಿಗ್ರಿ ತಾಪಮಾನ ; ಗಾಳಿಯ ವೇಗದಲ್ಲಿ ಕುಸಿತ, ಸುಡು ಬಿಸಿಲಿಗೆ ಜನ ಸುಸ್ತೊ ಸುಸ್ತು!
ಮಧ್ಯ ಕರ್ನಾಟಕದ ಬಯಲು ಸೀಮೆಯಲ್ಲಿ ಈ ಬಾರಿ ಏಪ್ರಿಲ್ ತಿಂಗಳಲ್ಲೇ ಸೂರ್ಯನ ಪ್ರಖರತೆ ವಿಪರೀತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ತಾಪಮಾನ 39 ಡಿಗ್ರಿ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿಕೆಯಾಗುವ ಮುನ್ಸೂಚನೆ ಇದೆ. ಗಾಳಿಯ ವೇಗ ಮತ್ತು ತೇವಾಂಶದ ಇಳಿಕೆಯಿಂದಾಗಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯು ಎಲ್ಲ ಆಸ್ಪತ್ರೆಗಳಿಗೆ ಸನ್ನದ್ಧರಾಗಿರಲು ಸೂಚನೆ ನೀಡಿದೆ.
Parliament Special Session | ಲೋಕಸಭೆಯಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳ ಮಂಡನೆ
ಕಾಂಗ್ರೆಸ್ ವಿರೋಧ
IMD Heatwave Alert: ದೇಶದ ಈ ಭಾಗಗಳಲ್ಲಿ ಏ.30 ರವರೆಗೂ ಸುಡುಬಿಸಿಲು, ಶಾಖದ ಅಲೆ ಎಚ್ಚರಿಕೆ
India Heatwave Forecast: ಸಮುದ್ರ ಮೇಲ್ಮೈಮೇಲೆ ಮಾತ್ರವಲ್ಲದೇ ಭೂಮಿ ಮೇಲ್ಮೈನಲ್ಲೂ ಆಗುತ್ತಿರುವ ನಿರಂತರ ಬದಲಾವಣೆ, ವಾಯು ಚಂಡಮಾರುತ ಪ್ರಸರಣದ ಕಾರಣದಿಂದ ದೆಹಲಿ, ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಶಾಖದ ಅಲೆ ಮೇಲುಗೈ ಸಾಧಿಸುತ್ತಿದೆ. ವಿವಿಧ ರಾಜ್ಯಗಳಿಗೆ 7 ದಿನ ಉಷ್ಣಅಲೆ (India Heatwave alert) ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ
ಮತ್ತೆ ಅಲ್ಪ ಮಟ್ಟಿಗೆ ಏರಿದ ಚಿನ್ನದ ದರ, ಸ್ಥಿರವಾದ ಬೆಳ್ಳಿ
ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಇದೀಗ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿವೆ. ಆದರೆ ಕಳೆದೊಂದು ತಿಂಗಳಿಂದ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ನಡುವೆ ಉಳಿದಿವೆ. ಆಭರಣ ಚಿನ್ನದ ಬೆಲೆ 13 ಸಾವಿರದಿಂದ 14 ಸಾವಿರ ರೂ. ನಡುವೆ ನಿಂತಿದೆ. ಸಂಭಾವ್ಯ ರಾಜತಾಂತ್ರಿಕ ಒಪ್ಪಂದದ ಸೂಚನೆಗಳು ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನಕ್ಕೆ ಸಂಬಂಧಿಸಿದ ಪೂರೈಕೆ ಅಡಚಣೆ ಭಯ ಕಡಿಮೆ ಮಾಡಿರುವುದೂ ಕಚ್ಚಾ ತೈಲದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಡಾಲರ್ ಒಂದು ತಿಂಗಳಷ್ಟು ಕಡಿಮೆ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ. ಹೀಗಾಗಿ ಅಮೂಲ್ಯ ಲೋಹಗಳು ಸೇರಿದಂತೆ ಡಾಲರ್ ಮೌಲ್ಯದಲ್ಲಿ ವಹಿವಾಟು ಮಾಡುವ ವಸ್ತುಗಳ ಮೌಲ್ಯ ಚೇತರಿಸಿಕೊಂಡಿದೆ. ಬುಧವಾರ ಅಮೆರಿಕ-ಇರಾನ್ ಮಾತುಕತೆ ಪುನರಾರಂಭಿಸುವ ನಿರೀಕ್ಷೆಗಳಿಂದಾಗಿ ತೈಲ ಬೆಲೆಗಳು ಕುಸಿದು ಹಣದುಬ್ಬರದ ಕಳವಳ ಕಡಿಮೆಯಾಗಿ ಚಿನ್ನದ ಬೆಲೆಗಳು ಬಲಪಡೆದುಕೊಂಡಿದ್ದವು. ಇದೀಗ ಗುರುವಾರವೂ ಚಿನ್ನದ ಬೆಲೆಗಳು ಅಲ್ಪಮಟ್ಟಿಗೆ ಏರಿವೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 16ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 22 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,55,570 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,42,600 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 17 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,16,680 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 16ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,557 (+22) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,260 (+20) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,668 (+17) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಸ್ಥಿರತೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಎಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಸೋಮವಾರ ಪ್ರತಿ ಗ್ರಾಂಗೆ 5 ರೂ. ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ. ಮಂಗಳವಾರವೂ ಇದೇ ದರದಲ್ಲಿ ಮುಂದುವರಿಯಿತು. ಬುಧವಾರ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 15 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,70,000 ಗೆ ಬಂದು ತಲುಪಿದ್ದು, ಗುರುವಾರವೂ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,572 (+22) ರೂ., 22 ಕ್ಯಾರೆಟ್ ಚಿನ್ನದ ದರ 14,275 (+20) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,557 (+22) ರೂ., 22 ಕ್ಯಾರೆಟ್ ಚಿನ್ನದ ದರ 14,260 (+20) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,562 (+22) ರೂ., 22 ಕ್ಯಾರೆಟ್ ಚಿನ್ನದ ದರ 14,265 (+20) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 5,666 (+44) ರೂ., 22 ಕ್ಯಾರೆಟ್ ಚಿನ್ನದ ದರ 14,360 (+40) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,557 (+22) ರೂ., 22 ಕ್ಯಾರೆಟ್ ಚಿನ್ನದ ದರ 14,260 (+20) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,557 (+22) ರೂ., 22 ಕ್ಯಾರೆಟ್ ಚಿನ್ನದ ದರ 14,260 (+20) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,572 (+22) ರೂ., 22 ಕ್ಯಾರೆಟ್ ಚಿನ್ನದ ದರ 14,275 (+20) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,572 (+22) ರೂ., 22 ಕ್ಯಾರೆಟ್ ಚಿನ್ನದ ದರ 14,275 (+20) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,572 (+22) ರೂ., 22 ಕ್ಯಾರೆಟ್ ಚಿನ್ನದ ದರ 14,275 (+20) ರೂ.
ಅಂಬೇಡ್ಕರ್ ಜಯಂತೋತ್ಸವಕ್ಕೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವಕ್ಕೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಏ.14 ರಂದು ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತೋತ್ಸವ ಸಮಾರಂಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ರಾಜಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ವೀರನಾಥ ಕನಕ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ್ ಮಾನಕಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಗೈರಾಗಿದ್ದು, ಇದು ರಾಷ್ಟ್ರ ನಾಯಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆಯೂ, ದಲಿತರು ಹಾಗೂ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿರುವುದಾಗಿ ಅವರು ಹೇಳಿದರು. ಸರ್ಕಾರದ ವತಿಯಿಂದ ಆಚರಿಸಲ್ಪಡುವ ಕಾರ್ಯಕ್ರಮಗಳಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಆದರೆ, ಸದರಿ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಬಾಬಾಸಾಹೇಬರ ಬಗ್ಗೆ ನಿರ್ಲಕ್ಷ್ಯತೆ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಆದ್ದರಿಂದ, ಸದರಿ ಅಧಿಕಾರಿಗಳು ಹಾಗೂ ಈ ಜಯಂತಿಯಲ್ಲಿ ಪಾಲ್ಗೊಳ್ಳದೇ ಇರುವ ಇತರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದಲಿತ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಮುಡುಬೂಳಕರ್, ಜಗನ್ನಾಥ ಮುಡುಬೂಳಕರ್, ಸೂರಜ್ ಕಲ್ಲಕ್, ಶಿವಕುಮಾರ ಆರಬೋಳ, ಸಾಬಣ್ಣ ಹಲಗಿ, ಶಿವಕುಮಾರ ಯಾದಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಬೀಡಾಗಿರುವ ಭಾರತದಲ್ಲಿ ವಾಸಿಸಬೇಕೆಂದು ಹಲವು ವಿದೇಶಿಗರ ಮಹದಾಸೆ. ಅಂತೆಯೇ ಇಲ್ಲೊಬ್ಬ ವಿದೇಶಿ ಮಹಿಳೆ ಭಾರತದಲ್ಲಿ ವಾಸಿಸುತ್ತಿದ್ದು, ಇಲ್ಲಿ ನೆಲೆಸುವುದರಿಂದಾಗಿ ತಮ್ಮ ಜೀವನಶೈಲಿಯಲ್ಲಿ ಅದರಲ್ಲೂ ಪ್ರಮುಖವಾಗಿ ತಮ್ಮ 4 ಮಕ್ಕಳು ಗಳಿಸಿಕೊಂಡಿರುವ ಉತ್ತಮ ವಿಚಾರಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವಿದೇಶಿ ಮಹಿಳೆ ಹಂಚಿಕೊಂಡಿರುವ ಅಂಶಗಳೇನು ಎಂಬ ಮಾಹಿತಿ ಇಲ್ಲಿದೆ.
Explained: ಯುದ್ಧವೋ, ವ್ಯಾಪಾರವೋ? ಇರಾನ್ ಯುದ್ಧದಿಂದ ಹಣದ ಹೊಳೆ; ಆ ಇನ್ಸೈಡರ್ ಟ್ರೇಡರ್ ಸಿಕ್ಕಿಬಿದ್ದರೆ..!
ರಣಭೂಮಿಯಲ್ಲಿ ಮೊಳಗುವ ಮದ್ದುಗುಂಡುಗಳ ಮೊರೆತ, ಬಹುತೇಕರಲ್ಲಿ ಒಂದು ವಿಚಿತ್ರ ರೀತಿಯ ಯುದ್ಧೋನ್ಮಾದವನ್ನು ಹುಟ್ಟಿಸುತ್ತದೆ. ಯುದ್ಧದ ಕ್ರೇಜ್ ಇಟ್ಟುಕೊಳ್ಳುವುದು ಯಾವುದೇ ಮನುಷ್ಯನ ಅಸಹಜ ಗುಣ ಎಂದೇ ಹೇಳಬಹುದು. ಆದಾಗ್ಯೂ, ವಿನಾಶದ ಮನವರಿಕೆಯ ಹೊರತಾಗಿಯೂ ಜಗತ್ತಿನ ಕೆಲವು ದೇಶಗಳು ಯುದ್ಧ ಎಂದರೆ ಎಲ್ಲಿಲ್ಲದ ಹುರುಪು ತೋರುತ್ತವೆ. ಇದಕ್ಕೇನು ಕಾರಣ? ಯುದ್ಧದಲ್ಲಿ ಬಿತ್ತುವ ದ್ವೇಷದ ಹಿಂದೆ ಅಡಗಿರುವ ಲಾಭಕೋರತನ ಏಕೆ ನಾಗರಿಕ ಸಮಾಜದ ಕಣ್ಣಿಗೆ ಕಾಣುವುದಿಲ್ಲ? ಸದ್ಯದ ಅಮೆರಿಕ-ಇರಾನ್ ಯುದ್ಧದ ಹಿಂದಿರುವ ಲಾಭದ ಲೆಕ್ಕಾಚಾರವೇನು? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
Gold-Silver Price: ಸತತ 3ನೇ ದಿನವು ಚಿನ್ನದ ದರದಲ್ಲಿ ಏರಿಕೆ, ಅಕ್ಷಯ ತೃತೀಯದ ಮುನ್ಸೂಚನೆ ಹೀಗಿದೆ
Gold Rate Updates: ಚಿನ್ನ-ಬೆಳ್ಳಿಗಳ ಮೇಲಿನ ಹೂಡಿಕೆ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಕಾರಣ ಕೊಲ್ಲಿ ಯುದ್ಧ ಮತ್ತು ಜಾಗತಿಕ ಒಂದಷ್ಟು ಬದಲಾವಣೆಗಳ ನಂತರ ಈ ಎರಡು ಲೋಹಗಳ ದರ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿವೆ. ಕೆಲವು ವಾರಗಳ ಬಳಿಕ ಷೇರುಪೇಟೆ ಜೊತೆಗೆ ಚಿನ್ನಾಭರಣ ಮಾರುಕಟ್ಟೆಗೆ ಚೈತನ್ಯ ಬಂದಂತಾಗಿದೆ. ಮೂರು ದಿನಗಳಿಂದ ದರದಲ್ಲಿ ಏರಿಕೆ ಆಗುತ್ತಿದ್ದು, ಇಂದು ಗುರುವಾರ (ಏಪ್ರಿಲ್
ಟ್ರಂಪ್ ಕಣ್ಣಿಗೆ ಷರೀಫ್ ಶೂನ್ಯ, ಆಸಿಮ್ ಮುನೀರ್ ಮಾತ್ರ ಮಾನ್ಯ: ಪಾಕ್ ಹೈಬ್ರಿಡ್ ಮಾಡೆಲ್ ಅಂದ್ರೆ ಹೀಗೇನಾ?
Military involvement in Pakistan : ಪಾಕಿಸ್ತಾನದಲ್ಲಿ ಚುನಾಯಿತ ಶೆಹಬಾಜ್ ಷರೀಫ್ ಸರ್ಕಾರ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹಿಡಿತ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಮಾಜಿ ಸಚಿವರೊಬ್ಬರ ಪ್ರಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ಗೆ ಪ್ರಧಾನಿ ಷರೀಫ್ ಲೆಕ್ಕಕ್ಕೇ ಇಲ್ಲ. ಪಾಕಿಸ್ತಾನದಲ್ಲಿ ಹಲವು ಬಾರಿ ಮಿಲಿಟರಿ ಸರ್ಕಾರ ಅಧಿಕಾರ ಬಂದ ಉದಾಹರಣೆಗಳಿವೆ. ಆಸಿಮ್ ಮುನೀರ್, ಅದೇ ದಾರಿಯಲ್ಲಿ ಸಾಗುತ್ತಿದ್ದಾರಾ ಎನ್ನುವುದು ಪ್ರಶ್ನೆಯಾಗಿದೆ.
‘ಬಂಗಾಳಿ ಅಸ್ಮಿತೆ’ ಟಿಎಂಸಿ ಟ್ರಂಪ್ ಕಾರ್ಡ್
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ
ಚೆನ್ನೈ: ತಮಿಳುನಾಡಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿದ್ದು, ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಸರಕಾರ ಗುರುವಾರದಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಅಧಿವೇಶನದಲ್ಲಿ ಮೂರು ಪ್ರಮುಖ ಮಸೂದೆ ಮಂಡಿಸಲು ಯೋಜಿಸಲಾಗಿದೆ. ಇದರಿಂದ ಸಂಸತ್ನಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡನೆ ಮಸೂದೆಯನ್ನು ʼಕರಾಳ ಕಾನೂನುʼ ಎಂದು ಕರೆದ ಸಿಎಂ ಸ್ಟಾಲಿನ್, ಕಪ್ಪು ಉಡುಪು ಧರಿಸಿ ಕಪ್ಪು ಧ್ವಜವನ್ನು ಪ್ರದರ್ಶಿಸಿದರು. ಮಸೂದೆಯ ಪ್ರತಿಯನ್ನು ಸುಟ್ಟುಹಾಕಿದರು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ತಮಿಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆಗೆ ಕರೆ ನೀಡಿದ್ದಾರೆ. ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಯಲಿ, ಫ್ಯಾಸಿಸ್ಟ್ ಬಿಜೆಪಿಯ ದುರಹಂಕಾರ ಕುಸಿಯಲಿ ಎಂದು ಹೇಳಿದ್ದಾರೆ.
Gold Rate Rise: ಅಕ್ಷಯ ತೃತೀಯದ ಹಿನ್ನೆಲೆ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಬೆಲೆ ತಟಸ್ಥ
ಇಷ್ಟು ದಿನ ಯುದ್ಧದ ಹಿನ್ನೆಲೆ ಏರಿಳಿತ ಕಾಣುತ್ತಿದ್ದ ಚಿನ್ನ ಬೆಳ್ಳಿ ದರದಲ್ಲಿ, ಇದೀಗ ಅಕ್ಷಯ ತೃತೀಯದ ಬೇಡಿಕೆ ಹೆಚ್ಚಾದ ಪ್ರಭಾವವೂ ಬಿದ್ದಿದೆ.
ನಿರ್ಮಾಣ ನಿರ್ನಾಮಗಳ ನಡುವೆ ಉಳಿವೆಲ್ಲಿ?
ದೇಶದ ಸಮಕಾಲೀನ ಸಂಕಟಗಳು ಬದುಕಿನ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿವೆ. ಪಾಲನೆಯೆಂಬುದು ಆರತಿ ಎತ್ತಿ, ಗಂಟೆ ಬಡಿದು, ದೀಪವನ್ನು ಆರಿಸಿ ನಡೆಸುವ ಕೆಲಸವಲ್ಲ. ಕಡುಬಡತನವನ್ನು ಕೆಲ ಶ್ರೀಮಂತರ ಆದಾಯದೊಂದಿಗೆ ಸರಾಸರಿ ಲೆಕ್ಕಾಚಾರ ಹಾಕಿ ದೇಶದ ಶ್ರೀಮಂತಿಕೆಯನ್ನು ನಿರ್ಧರಿಸುವಲ್ಲಿ, ದೇಶದ ಸಂಸದರ ಸಂಖ್ಯೆಯನ್ನು ಐನೂರು ಚಿಲ್ಲರೆಯಿಂದ ಎಂಟುನೂರು ಚಿಲ್ಲರೆಗೆ ಏರಿಸುವುದೇ ಸಾಧನೆಯೆಂದು ಬಿಂಬಿಸುವಲ್ಲಿ, ಅನಧಿಕೃತ ಜನಪ್ರತಿನಿಧಿಗಳೆಂದು ಯಾವನೋ ಎಂದೋ ಹೇಳಿದ ವಾಕ್ಯವನ್ನು ಸ್ವಹಿತಕ್ಕಾಗಿ ಬಳಸುವ ಸಾಹಿತಿಗಳೂ, ಚಿಂತಕರೂ, ಪ್ರಗತಿಪರರೂ ತಮ್ಮ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳ ಈಡೇರಿಕೆಗಳಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಲ್ಲಿ ಕಲುಷಿತ ಸ್ಥಿತಿ ಮುಂದುವರಿಯುವುದು ಅನಿವಾರ್ಯ. ಗೆಳೆಯರೊಬ್ಬರು ನನಗೆ ‘‘ನೀವು ರಾಜಕೀಯದ ಇಲ್ಲವೇ ಭ್ರಷ್ಟ ಅಧಿಕಾರಶಾಹಿಯ (ಅರ್ಥಾತ್ ಶಾಸಕಾಂಗ ಮತ್ತು ಕಾರ್ಯಾಂಗಗಳ ಅಧಿಕಾರ ರಾಜಕಾರಣದ) ಬಗ್ಗೆ ಬರೆಯುತ್ತೀರಿ; ನಿಮ್ಮ ವೃತ್ತಿಯ ಕ್ಷೇತ್ರವಾದ ನ್ಯಾಯಾಂಗದ ಇಲ್ಲವೇ ನಿಮ್ಮ ಪ್ರವೃತ್ತಿ ಕ್ಷೇತ್ರವಾದ ಸಾಹಿತ್ಯದ ಕುರಿತೇ ಬರೆಯಿರಿ’’ ಎಂದು ಸಲಹೆ ನೀಡಿದರು. ‘‘ಹೀಗೇ ಬರೆಯಿರಿ ಎಂದು ಹೇಳುವುದಕ್ಕೆ ನೀವು ಯಾರು?’’ ಎಂಬ ಒಂದೇ ಪ್ರಶ್ನೆಯಲ್ಲಿ ಅವರನ್ನು ಬದಿಗೆ ಸರಿಸಬಹುದಾದರೂ ಅದು ನಮ್ಮ ಸಾಮಾಜಿಕ ಮಾಧ್ಯಮಗಳ ಪ್ರಶ್ನೋತ್ತರ ಅಥವಾ ವಾಗ್ವಾದವಾಗುತ್ತದೆಯೇ ಹೊರತು ಅರ್ಥಪೂರ್ಣ ವಿನಿಮಯವಾಗುವುದಿಲ್ಲ. ಅವರು ಹೇಳಿದ ಮಾತು ಈ ಹಿನ್ನೆಲೆಯಲ್ಲಿ ನನ್ನನ್ನು ಜಿಜ್ಞಾಸೆಗೊಡ್ಡಿದೆ. ಕಳೆದ ಸುಮಾರು 11 ವರ್ಷಗಳಿಂದ (2016 ಜನವರಿಯಿಂದ) ಈ ಅಂಕಣದಲ್ಲಿ ತತ್ಪರನಾಗಿದ್ದೇನೆ. ಅದಕ್ಕೆ ಮೊದಲು ಇತರ ಪತ್ರಿಕೆಗಳಲ್ಲಿ (ಕನ್ನಡ ಪ್ರಭ, ವಿಜಯ ಕರ್ನಾಟಕ ಇತ್ಯಾದಿ) 90ರ ಮತ್ತು ಈ ಸಹಸ್ರಮಾನದ ಮೊದಲ ದಶಕಾರ್ಧದಲ್ಲಿ ಪುಸ್ತಕ ವಿಮರ್ಶೆ ಮತ್ತು ಸಾಹಿತ್ಯ, ಸಾಮಾಜಿಕ, ಕಾನೂನು ಹಾಗೂ ರಾಜಕಾರಣದ ಕುರಿತು ಅಂಕಣ ಲೇಖನಗಳನ್ನು ಬರೆಯುತ್ತಿದ್ದೆ. ಪತ್ರಿಕೆಯ ಒಲವು ನಿಲುವುಗಳನ್ನು ನಿರ್ಣಯಿಸುವವರು ಬದಲಾದಾಗ ಬರೆಹಗಾರರೂ ನಿವೃತ್ತಿಯಾಗಬೇಕಾಗುತ್ತದೆ. ಅದು ವಿರಸದಿಂದಲ್ಲ. ಈಗ ಸದ್ಯ ನನ್ನ ವ್ಯಾಪ್ತಿಗೆ ವೃತ್ತಿ, ಪ್ರವೃತ್ತಿ ಹಾಗೂ ಸಮಕಾಲೀನ ಸಂಕಟಗಳ ಕುರಿತು ಬರೆಯುವ ಸ್ವಾತಂತ್ರ್ಯವಿದೆ. ಅವರು ಹೇಳಿದ್ದು ಒಂದರ್ಥದಲ್ಲಿ ಹೌದಾದರೂ ಅವರು ಇಚ್ಛಿಸಿದ ಮತ್ತು ಪರೋಕ್ಷವಾಗಿ ಅಪೇಕ್ಷಿಸಿದ ಕ್ಷೇತ್ರಗಳು ರಾಜಕಾರಣಕ್ಕಿಂತ ಕಡಿಮೆ ಕಲುಷಿತವೇನಲ್ಲ. ಅವೆರಡನ್ನೂ ನಾನು ಸಮೀಪದಿಂದ ಬಲ್ಲೆ. ಗೋಮುಖವ್ಯಾಘ್ರಕ್ಕಿಂತ ವ್ಯಾಘ್ರಮುಖವ್ಯಾಘ್ರವನ್ನೇ ಹೆಚ್ಚು ನಂಬಬಹುದು. ಕಳ್ಳನ ಧಿರುಸಿನಲ್ಲಿ ಬಂದ ಕಳ್ಳನನ್ನು ಗುರುತಿಸಬಹುದು; ಅಲ್ಲಿ ನಾವು ಹೆಚ್ಚು ಎಚ್ಚರದಿಂದಿರಬಹುದು. ಪೊಲೀಸ್ ಧಿರುಸಿನಲ್ಲಿ ಬಂದ ಕಳ್ಳನನ್ನು ನಾವು ಗುರುತಿಸುವುದು ಕಷ್ಟ. ಸಾಹಿತ್ಯ ಮತ್ತು ನ್ಯಾಯಾಂಗ ನಮಗೆ ಇಂಥದ್ದೊಂದು ಸಮಸ್ಯೆಯನ್ನು ಒಡ್ಡುತ್ತದೆ. ಒಳ್ಳೆಯ ಕೃತಿಗಳು ಸಂತೋಷ ಕೊಡುತ್ತವೆ; ಆದರೆ ಇದು ಸಹಜವಾಗಿಯೇ ಪ್ರಚಾರಯುಗ; ಜಾಹೀರಾತಿನ ಯುಗ. ಆದ್ದರಿಂದ ಬರೆಹಗಾರರೂ, ಪ್ರಕಾಶಕರೂ ಕೃತಿಯನ್ನು ಹೇಗೆ ಓದುಗನಿಗೆ ದಾಟಿಸಿ ನಗದಾಗಿ ಪರಿವರ್ತಿಸುವುದೆಂಬ ತದೇಕ ಧ್ಯಾನದಲ್ಲಿರುತ್ತಾರೆ. ಸಾಹಿತ್ಯದ ವರ್ತುಲದಲ್ಲಿ ತನ್ನ ಗುಣಮಟ್ಟದಿಂದಲೇ ಪ್ರಚಾರ, ಪ್ರಸಿದ್ಧಿಗಳನ್ನು ಪಡೆಯುವ ಕೃತಿಗಳು ಕಡಿಮೆಯಾಗುತ್ತಲೇ ಇವೆ. ಪಟ್ಟಭದ್ರ ಹಿತಾಸಕ್ತಿಗಳು ಮಾರುಕಟ್ಟೆಯ ನಿಯಮಗಳು ಸಾಹಿತ್ಯವೆಂಬ ನವಿರು ರೇಷ್ಮೆಯನ್ನು ಸೆಣಬಿನ ನಾರಾಗಿ, ಸರಕಾಗಿ ಪರಿವರ್ತಿಸಿವೆ. ‘ಓದಲೇಬೇಕಾದ’ ಮತ್ತು ‘ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದ’ ಕೃತಿಗಳ ಪಟ್ಟಿಯನ್ನು ಮಾಧ್ಯಮಗಳಲ್ಲಿ ನೋಡಿ, ಓದಿ, ಸಾಕಾಗುತ್ತದೆ. ತನ್ನ ಕಾವ್ಯಕೆ ತಾಂ ಮಣಿಯುವ ಮಹಾಕವಿಗಳು ಹೆಚ್ಚಾಗಿದ್ದಾರೆ. ಈಗ ನಾನು ಮಾಧ್ಯಮದಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಗಮನಿಸಿದ ಮೇಲೆ ಯಾವ ಕೃತಿಯನ್ನಾದರೂ ತುಸು ಸಂಶಯದಿಂದಲೇ ಗಮನಿಸುತ್ತೇನೆ. ವಿಮರ್ಶೆಯ ಹೆಸರಿನಲ್ಲಿ ಪ್ರಕಟವಾಗುವ ಬಹುತೇಕ ಬರೆಹಗಳು ಏಕಮುಖವಾಗಿ ಜಾಹೀರಾತಿನಂತೆ, ಅಭಿನಂದನಾಗ್ರಂಥಗಳ ಬರೆಹಗಳಂತೆೆ, ಇಷ್ಟಕಾಣಿಕೆಗಳಂತೆ ಕಾಣುವುದರಿಂದ ಅವುಗಳಿಗಿಂತ ಸಾಕಷ್ಟು ದೂರವಿರುವುದು ಕ್ಷೇಮವೆನಿಸುತ್ತದೆ. ಹಾಗೆಂದು ಬಹಳ ದೂರವಿದ್ದರೆ ಹೊಸ ಕೃತಿಗಳ ಪರಿಚಯವೇ ಆಗುವುದಿಲ್ಲ. ಅತೀವ ಬಿಸಿ ತಾಗದಷ್ಟು ಮತ್ತು ಚಳಿಯಾಗದಷ್ಟು ಅಂತರವನ್ನು ಕಾಪಾಡಿಕೊಳ್ಳುವುದು ಒಳ್ಳೆಯದೆನ್ನಿಸುತ್ತದೆ. ಸಮಸ್ಯೆಯಿರುವುದು ನಾವು ಬರೆದರೂ ಇದೇ ಪರಿಣಾಮ, ಫಲಿತಾಂಶ ಎಂದಾದಾಗ. ಯಾವುದಾದರೊಂದು ಕೃತಿಯನ್ನು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲವೆಂದು ಅಭಿವ್ಯಕ್ತಿಸಿದರೆ ಅದರ ಹಿಂದೆ ನಾನೀಗಾಗಲೇ ಗುರುತಿಸಿದ ಪೂರ್ವಾಗ್ರಹದೋಷವನ್ನು ಇತರರು ಆರೋಪಿಸಿದರೆ ಅದರಿಂದ ಹೊರಬರುವುದಾದರೂ ಹೇಗೆ? ಮುಂದಿನ ತಲೆಮಾರು ಬಿಡಿ, ತತ್ಕಾಲೀನ ಭವಿಷ್ಯದಲ್ಲಿ ತಮ್ಮ ಕೃತಿಗಳಿಗೆ ಯಾವ ಮನ್ನಣೆ ಸಿಗುತ್ತದೆಂಬ ಬಗ್ಗೆ ಯೋಚಿಸಿದಂತಿಲ್ಲ. ಬದಲಾಗಿ ಇಂದು, ಕೊನೆಗೆ ಇಂದಿನ ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ, ಪ್ರಸಿದ್ಧಿ ಮತ್ತು ಅವಕಾಶವಾದರೆ ಪ್ರಶಸ್ತಿ ಸಿಗಬೇಕೆಂಬುದೇ ಉದ್ದೇಶವಾಗಿ ಆ ದಿಕ್ಕಿನಲ್ಲಿ ಎಲ್ಲ ಮಾರ್ಗಗಳ ಸರ್ವ ಪ್ರಯತ್ನ ನಡೆಯುತ್ತದೆ. ಹೊಗಳಿಕೆಯೇ ವಿಮರ್ಶೆಯೆಂದಾಗಿದೆ. ವಿಮರ್ಶಕರೆಂಬ ಮೈಡಾಸ್ ರಾಜನ ಜಗತ್ತಿನಲ್ಲಿ ನಾಳಿನ ತಲೆಮಾರಿನೆದುರು ನಾವೆಷ್ಟು ಹಗುರಾಗುತ್ತೇವೆಂಬ ಬಗ್ಗೆ ಪರಿವೆಯೇ ಇಲ್ಲ. ನಾವು ಗೌರವಿಸುವ ಅನೇಕ ಸಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆತ್ಮಖ್ಯಾತಿಯ ಸಲಕರಣೆಗಳೊಂದಿಗೆ ನಾರ್ಸಿಸಸ್ನಂತೆ ವರ್ತಿಸುತ್ತಾರೆ. ಈಗ ಗೂಗಲ್ ಮಾತ್ರವಲ್ಲ ‘ಎಐ’ಯ ಸಹಾಯದಿಂದ ಏನನ್ನೂ ಸೃಷ್ಟಿಸಬಹುದಾದ್ದರಿಂದ ಅಸಲು-ನಕಲು ಯಾವುದೆಂಬುದೇ ಅರಿಯದಾಗಿದೆ. ಅಂದರೆ ಪಾಲನೆ ಯಾರಿಗೂ ಬೇಡ. ಆರಂಭ ಮತ್ತು ಅಂತ್ಯ ಇಷ್ಟೇ: ಪುಸ್ತಕಗಳಂತೆ ಬದುಕಿನಲ್ಲೂ ಮುಖಪುಟದ ಅಧಾರದಂತೆ ಅಳತೆ ನಡೆಯುತ್ತಿದೆ. ಒಳಗಿನ ಪುಟಗಳು ಅಳುತ್ತವೆ. ಇದು ಸಕ್ರಿಯ ರಾಜಕಾರಣಕ್ಕಿಂತ ಬೇರೆಯಲ್ಲ ಅನ್ನಿಸಿದ್ದರಿಂದ ಓದಬೇಕು, ಆದರೆ ಬರೆಯುವುದನ್ನು ಕಡಿಮೆಮಾಡಬೇಕೆಂದು ನನಗೆ ನಾನೇ ಸದ್ಯಕ್ಕೆ ಅಂದುಕೊಂಡಿದ್ದೇನೆ. ಇದೇನೂ ಹಿಂಪಡೆಯದ ಅಥವಾ ಹಿಂಪಡೆಯಲಾಗದ ನಿರ್ಧಾರವೇನಲ್ಲ; ನಾನೂ ಬರೆಯಬಹುದು. ಆಗ ಎದುರಾಗುವ ಸಂಕಟ-ಸಂಘರ್ಷಗಳನ್ನು ಎದುರಿಸೋಣ. ಸಂವಿಧಾನದ ಮತ್ತು ಪ್ರಗತಿಪರತೆಯ, ಹೆಸರಿನಲ್ಲಿ ಅನೇಕರು ತಮ್ಮ ಬೇಳೆ ಬೇಯಿಸತೊಡಗಿದ್ದಾರೆ. ಸಂವಿಧಾನದಡಿ ಕಾನೂನಿನ ವ್ಯಾಪ್ತಿಯ ಕುರಿತು ಬಹುತೇಕರಿಗೆ ಪರಿಜ್ಞಾನವೇ ಇಲ್ಲ. ಸರಿ-ತಪ್ಪುಗಳು ನಮಗೆ ಮತ್ತು ನಾವು ಅಂಟಿಕೊಂಡ ರಾಜಕೀಯ ಬೇಕುಬೇಡಗಳಿಗೆ, ಸೌಕರ್ಯ-ಅನುಕೂಲಗಳಿಗೆ ಶರಣಾಗಿದೆ. ನ್ಯಾಯಾಂಗದ ಕುರಿತು ಎಲ್ಲರೂ ಬರೆಯುವವರೇ; ಮಾತನಾಡುವವರೇ. ಇಂದು ಒಬ್ಬ ನ್ಯಾಯಾಧೀಶ/ನ್ಯಾಯಮೂರ್ತಿ ನೀಡಿದ ತೀರ್ಪು ಸರಿಯೆಂದು ಅನ್ನಿಸಿದರೆ ನಾಳೆ ಅದೇ ನ್ಯಾಯಾಧೀಶ/ನ್ಯಾಯಮೂರ್ತಿ ನೀಡಿದ ತೀರ್ಪು ತಪ್ಪೆಂದು ಅನ್ನಿಸುತ್ತದೆ. ಯಾವ ಪ್ರಕರಣದಲ್ಲಿ ನಾವು ಯಾವ ಬದಿಯಲ್ಲಿದ್ದೇವೆಂಬುದು ಈ ನಿರ್ಣಯಗಳನ್ನು ನಿರ್ಧರಿಸುತ್ತದೆ. ಇದಕ್ಕೆ ಸರಿಯಾಗಿ ಅಧೀನ ನ್ಯಾಯಾಂಗದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ತೀರ್ಪುಗಳು ಬದಲಾಗುತ್ತಲೇ ಇರುತ್ತವೆ. ಇವುಗಳ ಟೀಕೆ ಮತ್ತು ಹೊಗಳಿಕೆಗಳಿಗೆ ತರ್ಕವೇ ಇಲ್ಲದಾಗಿದೆ. ಇದಕ್ಕೆ ನ್ಯಾಯಾಲಯ ನಿಂದನೆಯ ಕಾನೂನಿನ ಭಯ ಕಾರಣವಲ್ಲ. ಎದುರಿಸಿ ಅಗ್ನಿದಿವ್ಯವನ್ನು ದಾಟಿದವರಿದ್ದಾರೆ. ಕಾನೂನಿನಡಿ ನೀಡಿದ ಎಲ್ಲ ತೀರ್ಪುಗಳು ಕಾನೂನಿನನ್ವಯ ಸರಿಯಾಗಿವೆಯಷ್ಟೇ ಹೊರತು ನ್ಯಾಯಬದ್ಧವೆಂದೇನಲ್ಲ. ನ್ಯಾಯಕ್ಕೂ ಕಾನೂನಿಗೂ ಭಾರೀ ಕಂದರವಿದೆ; ಆದರೆ ಇದು ಅನಿವಾರ್ಯ. ಸಂವಿಧಾನದ ಹೆಸರಿನಲ್ಲಿ ಎಲ್ಲವನ್ನೂ ಅಗ್ಗವಾಗಿಸಲಾಗಿದೆ. ಅಂಬೇಡ್ಕರ್ ಅವರ ಅವಿಶ್ರಾಂತ ಶ್ರಮ ಮಾತೇ ಮಾಣಿಕ್ಯದ ಬೃಹನ್ನಳೆಯ, ಸೋಮಾರಿಗಳ ಕೈಯ ಆಟಿಕೆಯಾಗುತ್ತಿದೆ. ಈಗೀಗ ಪ್ರಕಟವಾಗುತ್ತಿರುವ ಪ್ರತಿಕ್ರಿಯೆಗಳು ಈ ಚಂಚಲ ತೀರ್ಪುಗಳಿಗಿಂತಲೂ ಆಘಾತಕಾರಿಯಾಗಿವೆ. ರಾಜಕಾರಣಿಗಳು ತಮ್ಮ ಪರವಾಗಿ ಬಂದ ತೀರ್ಪಿಗೆ ಸ್ವಾಗತ ಕೋರುವುದು ಸಹಜ; ಸತ್ಯದ ಅನಾವರಣವಾಗಿದೆ; ನ್ಯಾಯದೇವತೆ ಸೂಕ್ತ ತೀರ್ಪನ್ನು ನೀಡಿದ್ದಾಳೆ ಎಂದೆಲ್ಲ ಬೊಗಳೆ ಬಿಡುತ್ತಾರೆ. ಈಚೆಗೆ ಅರವಿಂದ ಕೇಜ್ರಿವಾಲ್ ಮತ್ತಿತರರ ವಿರುದ್ಧ ಇದ್ದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವೊಂದು ಅವರನ್ನು ವಿಚಾರಣಾಪೂರ್ವವಾಗಿ ಬೇಷರತ್ತಾಗಿ ಬಿಡುಗಡೆ ಮಾಡಿದಾಗ ಅದು ಭಾರೀ ಗೆಲುವೆಂಬಂತೆ ಅವರ ಬೆಂಬಲಿಗರು ಆಡಿಕೊಂಡರು. ಅದೀಗ ಉಚ್ಚನ್ಯಾಯಮೂರ್ತಿಯವರ ಮುಂದೆ ಬಂದಾಗ ಆ ನ್ಯಾಯಮೂರ್ತಿಯವರ ಹಿನ್ನೆಲೆಯ ನೆಪವೊಡ್ಡಿ ಅವರು ಈ ಪ್ರಕರಣವನ್ನು ಆಲಿಸಿ ತೀರ್ಮಾನಿಸದಂತೆ ಸ್ವತಃ ಕೇಜ್ರಿವಾಲ್ ಅವರೇ ವಾದಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವ ವಕೀಲರೂ ಇಲ್ಲ; ಕೇಜ್ರಿವಾಲ್ ವರ್ಸಸ್ ಮೋದಿಯವರ ಖಾಸಾ ಬೆಂಬಲಿಗರಾದ ಸೊಲಿಸಿಟರ್ಜನರಲ್ ತುಷಾರ್ ಮೆಹ್ತಾ. ಪ್ರಾಯಃ ವಕೀಲರೊಬ್ಬರು ಕೇಜ್ರಿವಾಲ್ ಅವರ ಪರವಾಗಿದ್ದಿದ್ದರೆ ನ್ಯಾಯಮೂರ್ತಿಯವರ ಹಿನ್ನೆಲೆಯನ್ನು ಕಡೆಗಣಿಸಿ ಪ್ರಕರಣದ ಕುರಿತೇ ವಾದಿಸುತ್ತಿದ್ದರೇನೋ? ವ್ಯಕ್ತಿ ಮತ್ತು ವಸ್ತು ನಿಷ್ಠೆಗಳ ನಡುವಣ ವ್ಯತ್ಯಾಸವು ಇದೇ. ಪಕ್ಷರಾಜಕೀಯವನ್ನನುಸರಿಸಿ ವಿದ್ವಾಂಸರು, ನಿವೃತ್ತ ಅಧಿಕಾರಿಗಳು ಸಾಮೂಹಿಕ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಇವು ಬಹುತೇಕ ರಾಜಕೀಯ ಕುಮ್ಮಕ್ಕಿನಿಂದಲೇ ನಡೆಯುತ್ತವೆಯೆಂಬುದು ಸ್ಪಷ್ಟ. ಈ ಅಂಶವನ್ನು ನಮ್ಮ ಮಾಧ್ಯಮಗಳು ಚರ್ಚಿಸುವುದೇ ಇಲ್ಲ. ಬದಲಾಗಿ ‘ನೂರಕ್ಕೂ ಮಿಕ್ಕಿ’ ಅಥವಾ ಯಾವುದಾದರೊಂದು ಸಂಖ್ಯೆಯ ವಿದ್ವಾಂಸರು ಮತ್ತು ಹಿರಿಯ ಅಧಿಕಾರಿಗಳು ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದೋ, ಜಂಟಿ ಹೇಳಿಕೆ ನೀಡಿದ್ದಾರೆಂದೋ ವರದಿ ಮಾಡುತ್ತಾರೆ. ಸಂವಿಧಾನದ ನಾಲ್ಕನೇ ಅಂಗವೆಂಬ ಹೆಗ್ಗಳಿಕೆಯ ಮಾಧ್ಯಮವು ತನ್ನ ಕೆಲಸವನ್ನು ಮಾಡುವುದೇ ಇಲ್ಲ. ಪ್ರತೀ ಬಾರಿಯೂ ಮಧ್ಯಮ ಸಮಾವೇಶದಲ್ಲಿ ಮಾತನಾಡಿದವರೆಲ್ಲ ಮಾಧ್ಯಮಗಳು ಹೋಗುತ್ತಿರುವ, ಸಾಗುತ್ತಿರುವ ದಾರಿಯ ದೋಷಗಳನ್ನು ಹೇಳಿದರೂ ಅವು ಸರಿಯಾಗುತ್ತವೆಂಬ ಭರವಸೆಯಿಲ್ಲ. ಹಣ ಕೂಡಿಟ್ಟಲ್ಲಿ ಪ್ರಶಸ್ತಿಗಳು ಅನಿವಾರ್ಯ. ಅದನ್ನು ನೀಡುತ್ತವೆ; ಪಡೆಯುತ್ತಾರೆ. ಅಂದರೆ ಸಾಹಿತ್ಯದಲ್ಲಿ ಹೇಗೆ ವಿಮರ್ಶೆಯ ವಿವೇಕವು ಅಳಿಸಿಹೋಗುತ್ತಿದೆಯೋ ಹಾಗೆಯೇ ಕಾನೂನು ಅಥವಾ ನ್ಯಾಯದ ಪಾಲನೆಯಲ್ಲೂ. ಇನ್ನು ಅಧಿಕಾರಶಾಹಿಯ ಕುರಿತು ಬರೆಯುವಂತೆಯೇ ಇಲ್ಲ; ಏಕೆಂದರೆ ಅಲ್ಲಿ ತಾಂಡವವಾಡುವ ಭ್ರಷ್ಟತೆಯು ಯಾರ ನಿಯಂತ್ರಣದಲ್ಲೂ ಇಲ್ಲ. ಭಾರತೀಯ ಆಡಳಿತ ಸೇವೆಯ, ಪೊಲೀಸ್ ಸೇವೆಯ ಅಧಿಕಾರಿಗಳನ್ನು ಜಿಲ್ಲಾಮಟ್ಟದ ಮತ್ತು ಅದಕ್ಕೆ ಮೇಲಿನ ಅಧಿಕಾರಿಯರನ್ನಾಗಿ ನೇಮಿಸುತ್ತಾರೆ. ಅವರು ಸೇವೆಗೆ ಸೇರುವಾಗ ದೇಶದ ಆಡಳಿತವನ್ನು ಹಸನುಮಾಡುವ ಪೌರುಷವನ್ನು ಹೇಳುತ್ತಾರೆಯೇ ಹೊರತು ಆನಂತರ ಅದಕ್ಕೆ ದೀರ್ಘ ತಿಲಾಂಜಲಿಯನ್ನು ಬಿಡುತ್ತಾರೆ. ಒಂದು ಜಿಲ್ಲೆಯಲ್ಲಿ ತನ್ನ ಕೈಕೆಳಗೆ ಭ್ರಷ್ಟತೆ, ಕುರುಡು ಕಾಂಚಾಣ ಕುಣಿಯುತ್ತಿರುವಾಗ ನಿಷ್ಠಾವಂತನಾದ, ಪ್ರಾಮಾಣಿಕನಾದ, ದಕ್ಷನಾದ ಒಬ್ಬ ಅಧಿಕಾರಿ ಏನು ಮಾಡಬಹುದೋ ಅದನ್ನು ಮಾಡಿದ್ದರೆ ದೇಶ ಈ ಸ್ಥಿತಿಗೆ ಇಳಿಯುತ್ತಿರಲಿಲ್ಲ. ಈ ತರ್ಕದಂತೆ ಪ್ರಾಯಃ ಎಲ್ಲ ಇಂತಹ ಸೇವಾಕರ್ತರೂ ಭ್ರಷ್ಟರೇ ಆಗಿರುವುದರಿಂದ ಅವರಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನಮಾಡುವುದು ಹೋಗಲಿ, ನಿಯಂತ್ರಿಸಲೂ ಸಾಧ್ಯವಾಗುತ್ತಿಲ್ಲ. ಸೂಕ್ಷ್ಮವಾಗಿ ಒಂದು ಉದಾಹರಣೆಯೊಂದಿಗೆ ಇಂದಿನ ಸ್ಥಿತಿಯನ್ನು ಹೇಳಬಯಸುತ್ತೇನೆ: ಸರಕಾರಕ್ಕೆ ಸೇರಿದ ನರ್ಸರಿ ತೋಟವೊಂದರಲ್ಲಿ ಮೂವರು ಕಾರ್ಮಿಕರನ್ನು ನೇಮಿಸಲಾಗಿತ್ತು. ಒಬ್ಬನಿಗೆ ಗುಂಡಿ ತೋಡುವುದು ಕೆಲಸವಾದರೆ ಎರಡನೆಯವನಿಗೆ ಅಲ್ಲಿ ಗಿಡವನ್ನು ನೆಡುವ ಕೆಲಸ ಹಾಗೂ ಮೂರನೆ ಯವನಿಗೆ ಗುಂಡಿಯನ್ನು ಮುಚ್ಚುವ ಕೆಲಸ. ಒಂದು ದಿನ ಅಲ್ಲಿ ಪರಿಶೀಲನೆಗೆ ಮೇಲಧಿಕಾರಿಗಳು ಬಂದಾಗ ಅಲ್ಲಿ ಇಬ್ಬರಿದ್ದರು: ಒಬ್ಬ ಗುಂಡಿ ತೋಡುತ್ತಿದ್ದ, ಇನ್ನೊಬ್ಬ ಮುಚ್ಚುತ್ತಿದ್ದ. ‘‘ಹೀಗೆ ಯಾಕೆ ಮಾಡ್ತೀರಿ’’ ಎಂದು ಪ್ರಶ್ನಿಸಿದಾಗ ಅವರು ‘‘ಸರ್, ಇವತ್ತು ಗಿಡ ನೆಡುವವನು ಬಂದಿಲ್ಲ..’’ ಎಂದರು. ಇದು ಸರಕಾರದ ಯೋಜನೆ, ಯೋಚನೆಗೆ ಹಿಡಿದ ಕೈಗನ್ನಡಿ. ಇದು ಗಿಡ ನೆಡುವುದಕ್ಕೆ ಮಾತ್ರವಲ್ಲ, ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಬಹುತೇಕ ನಿಜ. ಸಾಮಾಜಿಕ ಉಪಯುಕ್ತತೆಯ ಕುರಿತು ಯಾರಿಗೂ ಚಿಂತೆಯಿಲ್ಲ. ಹಿಂದೂ ಪುರಾಣಗಳಲ್ಲಿ ಈ ಕೆಲಸದ ಹಂಚಿಕೆಯ ಕುರಿತು ಪ್ರಸ್ತಾವವಿದೆ. ಸೃಷ್ಟಿ-ಸ್ಥಿತಿ-ಲಯವೆಂದರೆ ತ್ರಿಮೂರ್ತಿಗಳ ಕೆಲಸ. ಬ್ರಹ್ಮನಿಗೆ ಸೃಷ್ಟಿಯದೇ ಹೊಣೆ; ವಿಷ್ಣುವಿಗೆ ಪಾಲನೆ; ಶಿವನಿಗೆ ಲಯದ ಕರ್ತವ್ಯ. ಒಮ್ಮೆ ಸೃಷ್ಟಿಯಾದ ಬಳಿಕ ಅದು ಲೋಕಾರ್ಪಣೆಗೊಂಡ ಕೃತಿಯಂತೆ. ಈಗ ಕೃತಿಯ ಮಾರಾಟದಲ್ಲಿ ಸೃಷ್ಟಿಕಾರನ ಪ್ರಯತ್ನ ಪ್ರಚಲಿತವಿದೆ. ಆದರೆ ಬ್ರಹ್ಮ ಅದರ ಗೊಡವೆಗೆ ಹೋಗಿರಲಿಲ್ಲ. ಅದನ್ನು ಉಳಿಸಿ ಬೆಳೆಸುವ ಗೊಡವೆ ವಿಷ್ಣುವಿಗೆ. ನಿರ್ನಾಮಕ್ಕೆ ಕಾದು ಕುಳಿತವ ಶಿವ. ಇಂದಿನ ಜಗತ್ತಿನಲ್ಲಿ ಈ ಮೂವರಲ್ಲಿ ಬ್ರಹ್ಮ ಮತ್ತು ಈಶ್ವರರ ಅಬ್ಬರ ಜಾಸ್ತಿಯಿದೆ. ಪಾಲಿಸಬೇಕಾದ ವಿಷ್ಣು ಎಲ್ಲಿ ಅಡಗಿದ್ದಾನೋ ಗೊತ್ತಿಲ್ಲ. ಅದರಲ್ಲೂ ಬ್ರಹ್ಮ ಭಾರೀ ಪರಿಶ್ರಮ ಹಾಕಿ ತಯಾರಿಸಿದ್ದನ್ನು, ನಿರ್ಮಿಸಿದ್ದನ್ನು ಶಿವ ನಿರ್ದಾಕ್ಷಿಣ್ಯವಾಗಿ ತರಿದು ಹಾಕಬಲ್ಲ. ಮಕ್ಕಳು ಬೇಕೆಂದು ವರಬೇಡಿದವರ್ಯಾರೂ ಶಿವನಲ್ಲಿ ಈ ಮಕ್ಕಳನ್ನು ಅಳಿಸು ಎಂದು ಬೇಡುವುದಿಲ್ಲ. ಬದಲಾಗಿ ಉಳಿಸು ಎಂದೇ ಬೇಡುತ್ತಾರೆ. ಅದಕ್ಕಾಗಿಯೇ ‘ಓಂ ತ್ರಯಂಬಕಂ ಯಜಾಮಹೇ..’ ಎಂಬ ಮಂತ್ರ ಸೃಷ್ಟಿಯಾದದ್ದು. ಕಟ್ಟುವುದು ಕಷ್ಟ; ಕುಟ್ಟಿ ಮುರಿಯುವುದು ಸುಲಭ. ಕುಂಬಾರ ಮತ್ತು ಮಡಿಕೆಯ ಗಾದೆ ಎಲ್ಲ ಕಾಲಕ್ಕೂ ಸತ್ಯ. ಒಟ್ಟಾರೆ ದೇಶದ ಸಮಕಾಲೀನ ಸಂಕಟಗಳು ಬದುಕಿನ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿವೆ. ಪಾಲನೆಯೆಂಬುದು ಆರತಿ ಎತ್ತಿ, ಗಂಟೆ ಬಡಿದು, ದೀಪವನ್ನು ಆರಿಸಿ ನಡೆಸುವ ಕೆಲಸವಲ್ಲ. ಕಡುಬಡತನವನ್ನು ಕೆಲ ಶ್ರೀಮಂತರ ಆದಾಯದೊಂದಿಗೆ ಸರಾಸರಿ ಲೆಕ್ಕಾಚಾರ ಹಾಕಿ ದೇಶದ ಶ್ರೀಮಂತಿಕೆಯನ್ನು ನಿರ್ಧರಿಸುವಲ್ಲಿ, ದೇಶದ ಸಂಸದರ ಸಂಖ್ಯೆಯನ್ನು ಐನೂರು ಚಿಲ್ಲರೆಯಿಂದ ಎಂಟುನೂರು ಚಿಲ್ಲರೆಗೆ ಏರಿಸುವುದೇ ಸಾಧನೆಯೆಂದು ಬಿಂಬಿಸುವಲ್ಲಿ, ಅನಧಿಕೃತ ಜನಪ್ರತಿನಿಧಿಗಳೆಂದು ಯಾವನೋ ಎಂದೋ ಹೇಳಿದ ವಾಕ್ಯವನ್ನು ಸ್ವಹಿತಕ್ಕಾಗಿ ಬಳಸುವ ಸಾಹಿತಿಗಳೂ, ಚಿಂತಕರೂ, ಪ್ರಗತಿಪರರೂ ತಮ್ಮ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳ ಈಡೇರಿಕೆಗಳಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಲ್ಲಿ ಕಲುಷಿತ ಸ್ಥಿತಿ ಮುಂದುವರಿಯುವುದು ಅನಿವಾರ್ಯ. ಪಾಲಿಸುವ ಪಿತನೂ ಇಲ್ಲ; ಬದುಕಿರುವಾಗ ತಲುಪುವ ಸ್ವರ್ಗವೂ ಇಲ್ಲ. ಹುಟ್ಟು ಸಾವುಗಳ ನಡುವಣ ಬದುಕೇ ಯಾರಿಗೂ ಬೇಕಾಗಿಲ್ಲ. ನಿರ್ಮಾಣ-ನಿರ್ನಾಮಗಳ ನಡುವೆ ಇರುವ ಪಾಲನೆಗೆ ಯಾರಿಗೂ ಆಸಕ್ತಿಯಿಲ್ಲ. ಆದರೂ ನೆನಪಿಡಬೇಕಾದ್ದು: ವ್ಯವಸ್ಥೆಯ ಅವ್ಯವಸ್ಥೆಯನ್ನು ಟೀಕಿಸುವವರದ್ದು ಅರಣ್ಯ ರೋದನವೇ ಆಗಿದ್ದರೂ ಬೇರೆ ದಾರಿಯಿಲ್ಲ!
ತಮಿಳುನಾಡು ವಿಧಾನಸಭಾ ಚುನಾವಣೆ : ದಕ್ಷಿಣದಲ್ಲಿ ಸ್ಥಾನ ವೃದ್ಧಿಗೆ ಬಿಜೆಪಿ ಸ್ಕೆಚ್
ತಮಿಳುನಾಡಿನ ದ್ರಾವಿಡ ರಾಜಕಾರಣದ ಭದ್ರಕೋಟೆಯ ನಡುವೆಯೂ ಕನ್ಯಾಕುಮಾರಿ ಜಿಲ್ಲೆಯು ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ ರಾಜಕೀಯ ಪ್ರಯೋಗಶಾಲೆಯಾಗಿ ಹೊರಹೊಮ್ಮಿದೆ. ಆರ್ಎಸ್ಎಸ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದು ಇದೇ ಜಿಲ್ಲೆಯಲ್ಲಿ ಎಂಬುದು ವಿಶೇಷ. ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿ ಪರವಾಗಿ ಶಾಸಕರು ಮತ್ತು ಸಂಸದರು ಇಬ್ಬರನ್ನೂ ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಯೂ ಕುಮರಿ ನಾಡಿಗಿದೆ.
‘ಮಹಿಳಾ ಮೀಸಲು ಮೂಲಕ ಚರಿತ್ರೆ ಬರೆಯಲು ಸಂಸತ್ ಸಜ್ಜು’; ಇಂದಿನಿಂದ ವಿಶೇಷ ಅಧಿವೇಶನ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ಆಯೋಜಿಸಿದೆ. ಈ ಐತಿಹಾಸಿಕ ಬದಲಾವಣೆಗಾಗಿ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 850 ಕ್ಕೆ ಏರಿಸುವ ಮತ್ತು 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಯೋಜಿಸಿದೆ.
ಮಂತ್ರಾಲಯಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 8 ಮಂದಿ ಸಾವು, 13 ಮಂದಿಗೆ ಗಾಯ: ಭೀಕರ ರಸ್ತೆ ಅಪಘಾತ
5 ವರ್ಷದ ಬಾಲಕಿ ಬೆಳ್ಳಿ ಸೇರಿ ಚಿಕ್ಕಮಗಳೂರಿನ ಮಂತ್ರಾಲಯಕ್ಕೆ ಹೊರಟಿದ್ದ 8 ಮಂದಿ ದುರ್ಮರಕ್ಕೀಡಾಗಿದ್ದಾರೆ.
ರಾಯಚೂರು : ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ; 3 ವರ್ಷದ ಮಗು ಸೇರಿ 8 ಮಂದಿ ಮೃತ್ಯು
ರಾಯಚೂರು: ರಾಯಚೂರು ಗಡಿಭಾಗದ ಮಂತ್ರಾಲಯದ ಬಳಿ ಬೊಲೆರೋ ವಾಹನ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ವರ್ಷದ ಮಗು ಸೇರಿ 8 ಜನರು ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ನಡೆದಿದೆ. ಮೃತರನ್ನು ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಮತ್ತು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಮೀಪದ ಚಿಲಕನಡೋಣ ಹತ್ತಿರ ಈ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರಿನಿಂದ ರಾಘವೇಂದ್ರ ಸ್ವಾಮಿ ಮಠಕ್ಕೆ ರಾಯರ ದರ್ಶನಕ್ಕೆ ತೆರಳುತ್ತಿದ್ದ ಬೊಲೆರೋ ವಾಹನಕ್ಕೆ ಬೀದರ್ನಿಂದ ತುಮಕೂರಿಗೆ ತೆರಳುತ್ತಿದ್ದ ಫ್ಲೈಆಶ್ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Bengaluru Pune Expressway: ಬೆಂಗಳೂರು–ಪುಣೆ ಎಕ್ಸ್ಪ್ರೆಸ್ ವೇ: 7 ಗಂಟೆಯಲ್ಲಿ ಪ್ರಯಾಣ ಸಾಧ್ಯ
Bengaluru Pune Expressway: ಬೆಂಗಳೂರು ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ವೇ ಯೋಜನೆ ಅಂತಿಮ ಅನುಮೋದನೆ ಹಂತಕ್ಕೆ ತಲುಪಿದೆ. ದೇಶದ ಪ್ರಮುಖ ಹೆದ್ದಾರಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಯೋಜನೆಗೆ ರಾಷ್ಟ್ರಿಯ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಕೇಂದ್ರ ಸರ್ಕಾರವು ಈ ಯೋಜನೆಯ ಬಗ್ಗೆ
ಜಸ್ಟ್ 10 ದಿನದ ಹಿಂದೆ ಅಟ್ಟಕ್ಕೇರಿಸಿದ್ದ ಹೈಕಮಾಂಡ್ : ಜಮೀರ್ ಅಹ್ಮದ್ ಭವಿಷ್ಯ ತೂಗೊಯ್ಯಾಲೆಯಲ್ಲಿ?
Is Zameer Ahmed in trouble : ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ, ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಈ ವಿದ್ಯಮಾನ, ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ದೊಡ್ಡ ಕಂದಕವನ್ನು ಹುಟ್ಟಿಹಾಕಿದೆ. ಕಾಂಗ್ರೆಸ್ ಮುಸ್ಲಿಂ ನಾಯಕರು ನೇರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ತಿರುಗಿಬಿದ್ದಿದ್ದಾರೆ. ಈಗಾಗಲೇ ಇಬ್ಬರು ನಾಯಕರ ತಲೆದಂಡವಾಗಿದೆ. ಜಮೀರ್ ಅಹ್ಮದ್ ಕೂಡಾ ಟ್ರಬಲ್’ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೇವರ ಹುಂಡಿಗೆ ಕನ್ನ ; ಸಿ-ದರ್ಜೆ ದೇವಸ್ಥಾನಗಳ ಮೇಲೆ ಇಡಬೇಕಿದೆ ಹದ್ದಿನ ಕಣ್ಣು
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿವೆ. ಭಕ್ತರು ಶ್ರದ್ಧೆಯಿಂದ ಬರುವ ಪವಿತ್ರ ಸ್ಥಳಗಳಲ್ಲಿಯೇ ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ.
ಹೊಸದಿಲ್ಲಿ, ಎ.16: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ವಾದಿಸುತ್ತಿರುವ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊಗಳನ್ನು ತಕ್ಷಣ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ಸೂಚಿಸಿದೆ ಎಂದು barandbench ವರದಿ ಮಾಡಿದೆ. ಎ. 13ರಂದು ಹೈಕೋರ್ಟ್ ನಲ್ಲಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ನಿರಾಕರಣೆ ಅರ್ಜಿಯ ವಿಚಾರಣೆ ನಡೆದಿತ್ತು. ಈ ವೇಳೆ ಅವರು ಸ್ವತಃ ಹಾಜರಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದರು. ವಿಚಾರಣೆಯ ನಂತರ ಅವರ ವಾದಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನ್ಯಾಯಾಲಯದ ಗಮನಕ್ಕೂ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್ ನ ಅಧಿಕಾರಿಯೊಬ್ಬರು, ನ್ಯಾಯಾಲಯದ ಪ್ರಕ್ರಿಯೆಗಳ ಅನಧಿಕೃತ ಚಿತ್ರೀಕರಣ ಮತ್ತು ಪ್ರಸಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆನ್ ಲೈನ್ ವಿಚಾರಣೆಗಳಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ, ನ್ಯಾಯಾಲಯದ ವೀಡಿಯೊಗಳನ್ನು ರೆಕಾರ್ಡ್ ಮಾಡುವುದು ಅಥವಾ ಪ್ರಕಟಿಸುವುದು ಅನುಮತಿಸಲಾಗುವುದಿಲ್ಲ ಎಂದೂ ಅವರು ಹೇಳಿದರು. ಅಂತಹ ವೀಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. “ಈ ರೀತಿಯ ಪ್ರಕರಣಗಳು ನಮ್ಮ ಗಮನಕ್ಕೆ ಬಂದಾಗಲೆಲ್ಲಾ, ಕಾನೂನು ಜಾರಿ ಸಂಸ್ಥೆಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇವೆ. ಕೇಜ್ರಿವಾಲ್ ಅವರ ವೀಡಿಯೊವೂ ಅಂತಹ ಪ್ರಕರಣಗಳಲ್ಲಿ ಒಂದಾಗಿದೆ,” ಎಂದು ಅಧಿಕಾರಿ ಹೇಳಿದ್ದಾರೆ. ವಿಚಾರಣೆಯ ವೇಳೆ ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಶರ್ಮಾ ಅವರು ಈ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಾದಿಸಿದ್ದರು. ಬಳಿಕ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಜ್ರಿವಾಲ್ ಅವರ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಈ ಪ್ರಕರಣವು 2021-22ರ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದೆ. ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯ ಮತ್ತು ಕಾರ್ಟೆ ಲೈಸೇಶನ್ ಗೆ ಅವಕಾಶ ಕಲ್ಪಿಸುವಂತೆ ನೀತಿಯನ್ನು ರೂಪಿಸಲಾಗಿದೆ ಎಂಬ ಆರೋಪದ ಮೇರೆಗೆ 2022ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಅಂದಿನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ನೀತಿಯ ದುರುಪಯೋಗದ ಮೂಲಕ ಆಮ್ ಆದ್ಮಿ ಪಕ್ಷ ಹಾಗೂ ಅದರ ನಾಯಕರು ಮದ್ಯ ತಯಾರಕರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಬಳಿಕ ಜಾರಿ ನಿರ್ದೇಶನಾಲಯವೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಆದರೆ ಫೆಬ್ರವರಿ 27ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಸೇರಿದಂತೆ 22 ಮಂದಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಿದ್ದು, ಯಾವುದೇ ಆರೋಪಗಳಿಗೆ ಸಾಕ್ಷ್ಯಗಳಿಲ್ಲವೆಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿತು. ಈ ಆದೇಶವನ್ನು ಸಿಬಿಐ ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಪ್ರಸ್ತುತ ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಮಾರ್ಚ್ 9ರಂದು ಅವರು ನೋಟಿಸ್ ಜಾರಿಗೊಳಿಸಿ, ತನಿಖೆ ನಡೆಸಿದ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ತಾತ್ಕಾಲಿಕವಾಗಿ ತಡೆಹಿಡಿದರು. ವಿಚಾರಣಾ ನ್ಯಾಯಾಲಯದ ಕೆಲವು ಅವಲೋಕನಗಳು ಪ್ರಾಥಮಿಕವಾಗಿ ತಪ್ಪಾಗಿವೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು. ಈ ನಡುವೆ, ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ದುರ್ಗೇಶ್ ಪಾಠಕ್, ವಿಜಯ್ ನಾಯರ್, ಅರುಣ್ ಪಿಳ್ಳೈ ಹಾಗೂ ಚಾನ್ಪ್ರೀತ್ ಸಿಂಗ್ ರಾಯತ್ ಅವರು ನ್ಯಾಯಮೂರ್ತಿ ಶರ್ಮಾ ಅವರ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಹಿಂದಿನ ಆದೇಶಗಳು ಹಾಗೂ ವಿಚಾರಣೆಯ ವಿಧಾನವು ಪಕ್ಷಪಾತದ ಸೂಚನೆ ನೀಡುತ್ತದೆ ಎಂದು ಅವರು ವಾದಿಸಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾನೂನು ವಿಭಾಗವಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶರ್ಮಾ ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಸಿಬಿಐ ಈ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಸೈದ್ಧಾಂತಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸುವುದರಿಂದ ಪಕ್ಷಪಾತ ಸಾಬೀತಾಗುವುದಿಲ್ಲ ಎಂದು ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ. ಜೊತೆಗೆ, ಇದೇ ಪ್ರಕರಣದಲ್ಲಿ ಕೆಲವು ಆರೋಪಿಗಳಿಗೆ ನ್ಯಾಯಮೂರ್ತಿ ಶರ್ಮಾ ಅನುಕೂಲಕರ ಆದೇಶಗಳನ್ನು ನೀಡಿರುವುದನ್ನೂ ಉಲ್ಲೇಖಿಸಿದೆ.
ಗಾಝಾದಲ್ಲಿ ಮುಂದುವರಿದ ಆಕ್ರಮಣ | ಇಸ್ರೇಲ್ ಗೆ ಬುಲ್ಡೋಝರ್ ಮಾರಾಟ ವಿರೋಧಕ್ಕೆ ಅಮೆರಿಕದಲ್ಲಿ ಹೆಚ್ಚಿದ ಬೆಂಬಲ
ವಾಷಿಂಗ್ಟನ್, ಎ.16: ಫೆಲೆಸ್ತೀನ್ ನ ಗಾಝಾ, ವೆಸ್ಟ್ ಬ್ಯಾಂಕ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್ ಗೆ ಕ್ಯಾಟರ್ಪಿಲ್ಲರ್ ಡಿ–9 ಬುಲ್ಡೋಝರ್ ಗಳ ಮಾರಾಟವನ್ನು ತಡೆಯಲು ಅಮೆರಿಕದ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ 40 ಮಂದಿ ಸೆನೆಟರ್ಗಳು ಬೆಂಬಲ ಸೂಚಿಸಿದ್ದಾರೆ. ಈ ನಡೆಯನ್ನು ‘ಐತಿಹಾಸಿಕ’ ಬೆಳವಣಿಗೆ ಎಂದು ಶ್ಲಾಘಿಸಲಾಗಿದೆ. ತಹ್ರೀರ್ ಇನ್ಸ್ಟಿಟ್ಯೂಟ್ ಫಾರ್ ಮಿಡಲ್ ಈಸ್ಟ್ ಪಾಲಿಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮೈ ಎಲ್-ಸದನಿ ಅವರು, ಈ ಮತದಾನವು ಅಮೆರಿಕದ ರಾಜಕೀಯ ವಾತಾವರಣದಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡುತ್ತದೆ ಎಂದು ಹೇಳಿದ್ದಾರೆ. “ಗಾಝಾ, ವೆಸ್ಟ್ ಬ್ಯಾಂಕ್ ಮತ್ತು ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್ ಗೆ ಕ್ಯಾಟರ್ಪಿಲ್ಲರ್ ಡಿ–9 ಬುಲ್ಡೋಝರ್ ಗಳ ಮಾರಾಟವನ್ನು ತಡೆಯಲು 40 ಮಂದಿ ಸೆನೆಟರ್ ಗಳು ಮತ ಚಲಾಯಿಸಿರುವುದು ಸಂಪೂರ್ಣವಾಗಿ ಐತಿಹಾಸಿಕ,” ಎಂದು ಅವರು ಹೇಳಿದರು. ಈ ನಿರ್ಣಯವು ನಿರೀಕ್ಷಿತ ರೀತಿಯಲ್ಲಿ ಸೋತಿದ್ದರೂ, ಅಮೆರಿಕದ ರಾಜಕೀಯದಲ್ಲಿ ಬದಲಾವಣೆಯ ಅಲೆ ಮೂಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. “ಕಳೆದ ವರ್ಷ ಇದೇ ವಿಷಯದಲ್ಲಿ ಕೇವಲ 27 ಮಂದಿ ಮಾತ್ರ ಬೆಂಬಲಿಸಿದ್ದರು. ಈಗ ಆ ಸಂಖ್ಯೆ 40ಕ್ಕೆ ಏರಿಕೆಯಾಗಿದೆ,” ಎಂದು ಅವರು ವಿವರಿಸಿದರು. ಇದೇ ವೇಳೆ, ಇಸ್ರೇಲ್ ಗೆ 1,000 ಪೌಂಡ್ ತೂಕದ ಬಾಂಬ್ ಗಳ ಮಾರಾಟವನ್ನು ತಡೆಯಲು 36 ಮಂದಿ ಸೆನೆಟರ್ ಗಳು ಬೆಂಬಲ ಸೂಚಿಸಿರುವುದೂ ಗಮನಾರ್ಹ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. “ಈ ಸಂಖ್ಯೆಗಳು ಕ್ರಾಂತಿಕಾರಿಯಾಗಿದ್ದು, ಈ ವಿಷಯಗಳ ಕುರಿತು ಅಮೆರಿಕದ ಮತದಾರರು ಹಾಗೂ ಅವರ ಪ್ರತಿನಿಧಿಗಳ ಮನೋಭಾವದಲ್ಲಿ ಉಂಟಾಗುತ್ತಿರುವ ಮಹತ್ತರ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ,” ಎಂದು ಅವರು ಹೇಳಿದರು. ವಾಷಿಂಗ್ಟನ್ ಮೂಲದ ಈ ಸಂಸ್ಥೆಯು ಈ ಮತದಾನಕ್ಕೆ ಮುನ್ನ ಸೆನೆಟರ್ಗಳನ್ನು ಬೆಂಬಲಿಸಲು ಒತ್ತಾಯಿಸಿತ್ತು ಎಂಬುದೂ ತಿಳಿದುಬಂದಿದೆ ಎಂದು Aljazeera ವರದಿ ಮಾಡಿದೆ.
Karnataka Weather Alert: ರಾಜ್ಯದಲ್ಲಿ ಬಿಸಿಲಿನ ಶಾಖ ಏರಿಕೆ, 12 ಜಿಲ್ಲೆಗೆ ಉಷ್ಣಅಲೆ, ಮಳೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಜನರು ಸೆಕೆ, ತೀವ್ರ ತಾಪಮಾನದ ಝಳಕ್ಕೆ ಪರದಾಡುತ್ತಿದ್ದಾರೆ. ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 1.6 ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಾಗಿದೆ. ಮುಂದಿನ 5 ದಿನ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಲಿವೆ ಎಂಬ ಮುನ್ಸೂಚನೆ ನೀಡಲಾಗಿದೆ. 12ಜಿಲ್ಲೆಗಳಿಗೆ ಉಷ್ಣ ಅಲೆ ಕಂಡು ಬರಲಿದ್ದು 'ಯೆಲ್ಲೋ
ಗಡೀಪಾರು ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನೀರವ್ ಮೋದಿ
ಲಂಡನ್: ಬಹುಕೋಟಿ ವಂಚನೆ ಆರೋಪಿ ನೀರವ್ ಮೋದಿಯ ಗಡೀಪಾರು ಪ್ರಕ್ರಿಯೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್ ಗೆ ಆಗಮಿಸಿದ ಬೆನ್ನಲ್ಲೇ, ಲಂಡನ್ ನಿಂದ ತೆರವುಗೊಳಿಸುವ ಕ್ರಮದ ವಿರುದ್ಧ ನೀರವ್ ಮೋದಿ ಫ್ರಾನ್ಸ್ ನಲ್ಲಿರುವ ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನೀರವ್ ಮೋದಿ ಗಡೀಪಾರು ಕಾಲ ಸನ್ನಿಹಿತವಾಗಿದೆ. ಆದರೆ ಆತ 39ನೇ ನಿಯಮದಡಿ ಲಂಡನ್ ನಿಂದ ತೆರವುಗೊಳಿಸುವ ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ ನಾವು ಆ ಪ್ರಕರಣದಲ್ಲಿ ಸೇರಿಲ್ಲ ಎಂದು ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸ್ ವಕ್ತಾರರು ಪ್ರಕಟಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 100 ಕೋಟಿ ಡಾಲರ್ಗೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 55 ವರ್ಷದ ವಜ್ರದ ವ್ಯಾಪಾರಿಯ ಗಡೀಪಾರು ಆದೇಶವನ್ನು ಪ್ರಶ್ನಿಸಿ ಲಂಡನ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಮಾರ್ಚ್ 25ರಂದು ವಜಾಗೊಂಡಿತ್ತು. ಗಡೀಪಾರು ವಿರುದ್ಧ ತಾವು ಸಲ್ಲಿಸಿದ್ದ ಮೂಲ ಅರ್ಜಿಯ ಮರು ವಿಚಾರಣೆ ನಡೆಸುವಂತೆ ನೀರವ್ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 15ರಿಂದ 28 ದಿನಗಳ ಒಳಗಾಗಿ ಸಿಬಿಐಗೆ ಆರೋಪಿಯನ್ನು ವಶಕ್ಕೆ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ 39ನೇ ನಿಯಮದ ಅಡಿ ಸಲ್ಲಿಸಿದ ಅರ್ಜಿ ಪರಿಗಣನೆ ಹಂತದಲ್ಲಿರುವುದರಿಂದ ಆರೋಪಿಯನ್ನು ಕರೆದೊಯ್ಯಲು ಸಾಧ್ಯವಿಲ್ಲ. ನೀರವ್ ಮೋದಿಗೆ ಗಡೀಪಾರು ವಿರುದ್ಧ ಇದ್ದ ಏಕೈಕ ಅವಕಾಶ ಇದಾಗಿತ್ತು. ಈ ಅರ್ಜಿಯ ವಿಚಾರಣೆ ಇರುವುದಿಲ್ಲ. ಎಲ್ಲವೂ ಲಿಖಿತವಾಗಿ ನಡೆಯುತ್ತದೆ. ಮಾನವಹಕ್ಕು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದ ತಕ್ಷಣ ಸಾಮಾನ್ಯವಾಗಿ 48 ಗಂಟೆಗಳ ಒಳಗಾಗಿ ನಿರ್ಧಾರ ಬರುತ್ತದೆ ಎಂದು ಗಡೀಪಾರು ಬ್ಯಾರಿಸ್ಟರ್ ಬೆನ್ ಕೀತ್ ಸ್ಪಷ್ಟಪಡಿಸಿದ್ದಾರೆ.
CBSE 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಗೆ ಏಪ್ರಿಲ್ 20ರೊಳಗೆ ಅರ್ಜಿ ಸಲ್ಲಿಸಲು ಮಂಡಳಿ ಸೂಚನೆ
ನವದೆಹಲಿ: 2026ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಬುಧವಾರ ಯಶಸ್ವಿಯಾಗಿ ಪ್ರಕಟಗೊಂಡಿವೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿದ್ದರೆ, ಇನ್ನೊಂದೆಡೆ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸದ ಅಥವಾ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಭರ್ಜರಿ ಸಿಹಿಸುದ್ದಿ ನೀಡಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಹಾಗೂ
Uttar Pradesh: ಲಕ್ನೋ ಕೊಳಗೇರಿಯಲ್ಲಿ ಬೆಂಕಿ ಅವಘಡ; 280 ಗುಡಿಸಲುಗಳು ಸುಟ್ಟು ಭಸ್ಮ
► 50 ಕ್ಕೂ ಹೆಚ್ಚು ಎಲ್ಪಿಜಿ ಸಿಲಿಂಡರ್ಗಳು ಬೆಂಕಿಗಾಹುತಿ ► 1,000 ಕ್ಕೂ ಹೆಚ್ಚು ಜನರು ನಿರಾಶ್ರಿತರು
ಹೋಟೆಲ್ ಬಂದ್, ದರ ಕುಸಿತ ; ಈರುಳ್ಳಿಗೂ ತಟ್ಟಿದ ಯುದ್ಧದ ಬಿಸಿ
ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದ ಜಾಗತಿಕ ಬಿಕ್ಕಟ್ಟು ಈಗ ಈರುಳ್ಳಿ ಬೆಳೆಗಾರರ ಮೇಲೆ ನೇರ ಪರಿಣಾಮ ಬೀರಿದೆ. ಗ್ಯಾಸ್ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಹೋಟೆಲ್ಗಳು ಮತ್ತು ಉಪಹಾರ ಮಂದಿರಗಳು ಅನಿವಾರ್ಯವಾಗಿ ಬಾಗಿಲು ಮುಚ್ಚಿವೆ. ಹೋಟೆಲ್ ಉದ್ಯಮವು ಈರುಳ್ಳಿಯ ಅತಿದೊಡ್ಡ ಗ್ರಾಹಕನಾಗಿತ್ತು. ಹೋಟೆಲ್ಗಳು ಸ್ಥಗಿತಗೊಂಡಿರುವುದರಿಂದ ಈರುಳ್ಳಿಗೆ ಇದ್ದ ಬೇಡಿಕೆ ದಿಢೀರನೆ ಕುಸಿದಿದೆ. ಬೇಡಿಕೆ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಇಳಿಕೆಯಾಗಿದೆ.
ಕರ್ನಾಟಕ ಸರ್ಕಾರ: ಕಲೆ, ಸಾಹಿತ್ಯ ಗಣ್ಯರಿಗೆ ಗೌರವ, ಸಾಂಸ್ಕೃತಿಕ ಪ್ರಶಸ್ತಿಗಳ ಆಯ್ಕೆ ಪಟ್ಟಿ ಪ್ರಕಟ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2025 26 ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. 'ಪಂಪ ಪ್ರಶಸ್ತಿ, ಡಾ ಗುಬ್ಬಿ ವೀರಣ್ಣ ಪ್ರಶಸ್ತಿ, ಬಿ ವಿ ಕಾರಂತ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿಗಳು' ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಾಡಿನ ಸಾಧಕರನ್ನು ಪುರಸ್ಕರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ರಾಜ್ಯ ಪಠ್ಯದ ಫಲಿತಾಂಶದಂತೆಯೇ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲೂ ಕರಾವಳಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾಂಗ್ರೆಸ್ನಿಂದ ಅಬ್ದುಲ್ ಜಬ್ಬಾರ್ ಅಮಾನತು ವಿರೋಧಿಸಿ ಪ್ರತಿಭಟನೆ
ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಅಭಿಮಾನಿಗಳು, ಅಲ್ಪಸಂಖ್ಯಾತ ಸಮಾಜ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಅಖ್ತರ್ ರಝಾ ಸರ್ಕಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಬ್ದುಲ್ ಜಬ್ಬಾರ್ ಅವರ ಭಾವಚಿತ್ರ ಹಿಡಿದುಕೊಂಡು ಪಕ್ಷ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು. ಅಬ್ದುಲ್ ಜಬ್ಬಾರ್ ಅವರು ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ಹಗಲು-ಇರಳು ದುಡಿದಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದೇ ತಪ್ಪಾಯಿತಾ? ಶಾಮನೂರು ಶಿವಶಂಕರಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದಾಗ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿರುವುದಕ್ಕೆ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಪಕ್ಷಕ್ಕಾಗಿ ಹಗಲು-ಇರಳು ಅಲ್ಪಸಂಖ್ಯಾತ ನಾಯಕರು ಶ್ರಮಿಸಿದ್ದಾರೆ. ದಾವಣಗೆರೆ ದಕ್ಷಿನ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದರು ಎಂಬ ಒಂದೇ ಕಾರಣಕ್ಕೆ ಮುಸ್ಲಿಮ್ ಸಮಾಜದ ನಾಯಕರಾದ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತು, ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ. ಕೂಡಲೇ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿದು ಪುನಃ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಮುಹಮ್ಮದ್ ಸಿರಾಜ್, ಘನಿ ತಾಹೀರ್, ಎಸ್.ಕೆ.ಅಮ್ಜದ್ ವುಲ್ಲಾ, ಹುಲಿಮನಿ ರಹಮತುಲ್ಲಾ, ಎ.ಜಬ್ಬಾರ್, ಖಾದರ್ ಬಾಷಾ, ವಾಸೀಮ್ ಹಾಗೂ ಮುಸ್ಲಿಮ್ ಮುಖಂಡರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆ : ಕೆ.ಎನ್.ರಾಜಣ್ಣ
ತುಮಕೂರು : ʼಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆʼ ಎಂದು ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಮಧುಗಿರಿಯಲ್ಲಿ ನಡೆದ ಉದ್ಯೋಗ ಮೇಳದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈ ಹಿಂದೆ ಸದ್ಗುರು ಅವರು ಯಾರು ರಾಹುಲ್ಗಾಂಧಿ ಕೇಳಿದ್ದರು, ಆದರೆ ಕೆಲವರು ಅವರ ಜೊತೆಯಲ್ಲಿ ವೇದಿಕೆಯ ಮೇಲೆ ಕುಳಿತ ಕಾರ್ಯಕ್ರಮ ನಡೆಸಿದರು. ಇದು ಶಿಸ್ತು ಮೀರುವುದಿಲ್ಲವೇ ? ಎಂದು ಪ್ರಶ್ನಿಸಿದರು. ಮಹಿಳಾ ಮೀಸಲಾತಿ ಜಾರಿಗಾಗಿ ವಿಶೇಷ ಅಧಿವೇಶನ ಕರೆದಿರುವುದನ್ನು ನಾನು ಸ್ವಾಗತಿಸುತ್ತೇನೆ. 20 ವರ್ಷಗಳ ಹಿಂದೆಯೇ ಪ್ರಧಾನಿ ಮನಮೋಹನ್ಸಿಂಗ್ ಕಾಲದಲ್ಲಿಯೇ ಮಸೂದೆ ಮಂಡನೆಗೆ ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಆಗ ಜೆಡಿಯು ಮುಖಂಡರಾಗಿದ್ದ ಶರದ ಯಾದವ್, ಬಿಲ್ ಮಂಡನೆಯಾದರೆ ಗಂಡಸರೆಲ್ಲಾ ವಿಷ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೋರಾಟ ಮಾಡಿದ್ದರು ಎಂದು ತಿಳಿಸಿದ್ದಾರೆ. ಲೋಕಸಭೆ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡನೆಯಲ್ಲಿ 2 ಲಕ್ಷ ಮತದಾರರಿಗೆ ಒಂದು ವಿಧಾನಸಭೆ, ಹಾಗೆಯೇ 10 ಲಕ್ಷ ಮತದಾರರಿಗೆ ಒಂದು ಲೋಕಸಭಾ ಕ್ಷೇತ್ರದ ರೀತಿ ವಿಂಗಡನೆಗೆ ಮುಂದಾಗಿದ್ದಾರೆ. ಅಲ್ಲದೆ , ಮಹಿಳಾ ಮೀಸಲಾತಿಯೂ ಚರ್ಚೆಗೆ ಬರಲಿದೆ. ಇದರಿಂದ ಎಸ್ಸಿ, ಎಸ್ಟಿ, ಓಬಿಸಿ ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರಿಗೂ ಅನುಕೂಲವಾಗಲಿದೆ.ಹಾಗಾಗಿ ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಕೆ.ಎನ್.ರಾಜಣ್ಣ ನುಡಿದರು.
ನಾವು ಯಾಮಾರಿದರೆ ದೇಶ ಇಪ್ಪತ್ತನೇ ಶತಮಾನಕ್ಕೆ ಹೋಗುತ್ತೆ : ಪ್ರೊ.ಶಿವರಾಮಯ್ಯ
ಬೆಂಗಳೂರು : ನಾವು ಯಾಮಾರಿದರೆ ಇಡೀ ದೇಶ 20ನೇ ಶತಮಾನಕ್ಕೆ ಹೋಗುತ್ತದೆ. 100 ವರ್ಷದಿಂದ ಕಟ್ಟಿರುವ ಸಂಘ ಪರಿವಾರ ಒಂದೇ ಸಲ ಮನು ಧರ್ಮಶಾಸ್ತ್ರವನ್ನು ಜಾರಿಗೆ ತರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಶಿವರಾಮಯ್ಯ ಎಚ್ಚರಿಸಿದ್ದಾರೆ. ಬುಧವಾರ ನಗರದ ನಯನ ಸಭಾಂಗಣದಲ್ಲಿ ರಂಗಚಂದಿರದ ವತಿಯಿಂದ ಆಯೋಜಿಸಿದ್ದ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ‘ಮಹಾಮನೆ’ ನಾಟಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ನಮ್ಮ ದೇಶದಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನ ಮಾತ್ರ ನಮ್ಮ ದೇಶದಲ್ಲಿ ಉಳಿಯುತ್ತದೆ. ಸಂವಿಧಾನ ಇಲ್ಲದೇ ಇದ್ದರೆ, ನಾನು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಕರ್ನಾಟಕ ಇತಿಹಾಸವನ್ನು ನೋಡಿದರೆ, ಚಾಲುಕ್ಯ ತೈಲಪನನ್ನು ಕೊಂದು ಕಲಚೂರಿ ಬಿಜ್ಜಳ ಚಕ್ರವರ್ತಿಯಾಗುತ್ತಾನೆ. ಆಗ ಬಸವಣ್ಣ ಅವರು ಮಂತ್ರಿಯಾಗುತ್ತಾರೆ. ಬಸವಣ್ಣ ಅವರು ಮಂತ್ರಿಯಾದಾಗ ವರ್ಗ ಮತ್ತು ವರ್ಣ ರಹಿತ ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಆ ಸಿದ್ಧಾಂತದ ಮೇಲೆ ಮಹಾಮನೆಯನ್ನು ಸಾಧಿಸುತ್ತಾರೆ ಎಂದು ಹೇಳಿದರು. ಬಸವಣ್ಣನವರ ಚಿಂತನೆಗಳಿಂದಾಗಿ ಕಲ್ಯಾಣದ ಜನರು ಎಚ್ಚೆತ್ತುಕೊಂಡು ದುಡಿದ ನಂತರ ಬಿಜ್ಜಳನ ಕಲ್ಯಾಣದ ಸಂಪತ್ತು ಹೆಚ್ಚಾಯಿತು. ಸಂಪತ್ತು ಹೆಚ್ಚಾದ ನಂತರ ಬೇರೆ ಬೇರೆ ಕಡೆಯಿಂದ ಜನರು ಬಂದು ಸೇರಿಕೊಂಡರು. ಆಗ ಸನಾತನವಾದಿಗಳಿಗೆ ಸಹಿಸಲು ಆಗಲಿಲ್ಲ. ಅಷ್ಟರಲ್ಲಿ ಕಲ್ಯಾಣದಲ್ಲಿ ಅಂತರ್ಜಾತಿ ವಿವಾಹ ನಡೆಯಿತು. ಆಗ ಕಲ್ಯಾಣ ಕ್ರಾಂತಿಯಾಯಿತು. ಇವತ್ತಿಗೂ ಅಂತರ್ಜಾತಿ ವಿವಾಹಕ್ಕೆ ಅನೇಕರು ಬಲಿಯಾಗುತ್ತಿದ್ದಾರೆ ಎಂದರು. ನಾಟಕಕಾರ ಡಾ.ಬೇಲೂರು ರಘುನಂದನ್ ಮಾತನಾಡಿರು. ಇದೇ ವೇಳೆ ಆದಿಮೂಲ ರಂಗ ತಂಡದಿಂದ ರಂಗ ಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶ್ಮೂರ್ತಿ, ರಂಗಚಂದಿರದ ಗೌರವಾಧ್ಯಕ್ಷ ರಾಮಕೃಷ್ಣ ಹೆಗಡೆ, ಕಾರ್ಯದರ್ಶಿ ಜಿಪಿಒ ಚಂದ್ರು, ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ನೌಕರರನ್ನು ಸಿ, ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹ : ಎ.21ರಿಂದ 23ರ ವರೆಗೆ ದಿಲ್ಲಿಯಲ್ಲಿ ಧರಣಿ
ಬೆಂಗಳೂರು : ಕೇಂದ್ರ ಸರಕಾರ ಅಂಗನವಾಡಿ ನೌಕರರ ಸೇವೆಯನ್ನು ಕೇವಲ ಗೌರವ ಸೇವೆಯಾಗಿ ಪರಿಗಣಿಸದೆ ಅವರನ್ನು ಖಾಯಂ ಉದ್ಯೋಗಿಯಾಗಿ ಮಾನ್ಯತೆ ನೀಡಿ, ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹಿಸಿ ಎ.21ರಿಂದ 23ರ ವರೆಗೆ ಹೊಸದಿಲ್ಲಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಧರಣಿ ನಡಸಲಿದ್ದಾರೆಂದು ಎಐಟಿಯುಸಿ ರಾಜ್ಯಾಧ್ಯಕ್ಷ ಬಿ.ಅಮ್ಜದ್ ತಿಳಿಸಿದ್ದಾರೆ. ಮಂಗಳವಾರ ನಗರದ ಶೇಷಾದ್ರಿಪುರಂನಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ಆದೇಶದಂತೆ ಅಂಗನವಾಡಿ ಉದ್ಯೋಗಿಗಳು ಪೂರ್ಣಕಾಲಿಕೆ ಸ್ಥಿರ ಉದ್ಯೋಗಿಗಳಾಗಿದ್ದು, ಅವರು ಗ್ರಾಚ್ಯುಟಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಆದುದರಿಂದ ಕೇಂದ್ರ ಸರಕಾರ ಖಾಯಂ ಉದ್ಯೋಗಿಯಾಗಿ ಮಾನ್ಯತೆ ನೀಡುವ ಮೂಲಕ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಬೇಕು ಎಂದರು. ಅಂಗನವಾಡಿ ನೌಕರರಿಗೆ ವೇತನ ನೀಡದೆ ಕೇಂದ್ರ ಮತ್ತು ರಾಜ್ಯ ಸರಕಾರ ಸಹಭಾಗಿತ್ವದ ಅನುಪಾತದಲ್ಲಿ ಕೇವಲ ಗೌರವಧನ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಇವರಿಗೆ ನೀಡುತ್ತಿರುವ ಗೌರವ ಸಂಭಾವನೆಯನ್ನು ಕನಿಷ್ಠವೇತನ ಕಾಯ್ದೆಯ ವ್ಯಾಪ್ತಿಗೊಳಪಡಿಸಿ ಕನಿಷ್ಠ ವೇತನ ನೀಡಲು ಕ್ರಮವಹಿಸಬೇಕು ಎಂದು ಬಿ.ಅಮ್ಜದ್ ಒತ್ತಾಯಿಸಿದರು. ಸುಪ್ರೀಂಕೋರ್ಟಿನ ಆದೇಶದಂತೆ ಅಂಗನವಾಡಿ ಸೇವೆಗೆ ಸೇರಿ ನಿವೃತ್ತರಾಗಿರುವವರೆಲ್ಲರಿಗೂ ಗ್ರಾಚ್ಯುಟಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನಿವೃತ್ತಿಯ ನಂತರ ಮಾಸಿಕ ನಿವೃತ್ತಿ ವೇತನ ನೀಡಲು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಅದರ ಪ್ರಯೋಜನ ಪಡೆಯಲು ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಬಿ.ಅಮ್ಜದ್ ತಿಳಿಸಿದರು. ಅಂಗನವಾಡಿ ನೌಕರರಿಗೆ ಆರೋಗ್ಯ ಸಮಸ್ಯೆಗಳು ಎದುರಾದಾಗ ಅವರ ಚಿಕಿತ್ಸೆಗೆ ಎಲ್ಲಾ ಆಸ್ಪತ್ರೆಗಳಲ್ಲೂ ಸೇವೆ ಪಡೆಯಲು ಅವಕಾಶ ಒದಗಿಸಬೇಕು. ಹಾಗೂ ಆರೋಗ್ಯ ವಿಮೆಯನ್ನು ಜಾರಿಗೊಳಿಸಿ ಅದರ ಪ್ರಯೋಜನ ಪಡೆಯಲು ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಬಿ.ಅಮ್ಜದ್ ಹೇಳಿದರು. ಅಂಗನವಾಡಿ ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ಕೆಲಸ ಕಾರ್ಯಗಳಿಗೆ ಅಂಗನವಾಡಿ ನೌಕರರನ್ನು ನಿಯೋಜಿಸದೆ ಐಸಿಡಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮವಹಿಸಬೇಕು ಎಂದು ಬಿ.ಅಮ್ಜದ್ ತಿಳಿಸಿದರು. ಅಂಗನವಾಡಿ ಫಲಾನುಭವಿಗಳಿಗೆ ಒದಗಿಲಾಗುವ (ಪೌಷ್ಟಿಕ ಆಹಾರ-ಆರೋಗ್ಯ)ಸೌಲಭ್ಯಗಳನ್ನು ನೀಡಲು ಜಾರಿಗೊಳಿಸಲಾಗಿರುವ ಎಫ್ಆರ್ಎಸ್ ಪದ್ದತಿಯನ್ನು ಕೈಬಿಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆಗೆ ಆದ್ಯತೆ ನೀಡಬೇಕು ಎಂದು ಬಿ.ಅಮ್ಜದ್ ಹೇಳಿದರು. ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆಯುವಂತೆ ಯುಜಿಸಿ ಹೊರಡಿಸಿರುವ ಆದೇಶ ವಾಪಸ್ಸಾಗಲಿ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಲಾ ಐದಾರು ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆಯಬೇಕೆಂದು ಆದೇಶಿಸಿರುವುದು ಅಂಗನವಾಡಿಗಳ ಮೂಲಭೂತ ಉದ್ದೇಶವನ್ನು ಬುಡಮೇಲುಗೊಳಿಸುವಂತಹ ಕ್ರಮವಾಗಿದೆ ಎಂದು ಬಿ.ಅಮ್ಜದ್ ಖಂಡಿಸಿದರು. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಧರಣಿಯ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು. ಧರಣಿಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಲಿದ್ದಾರೆ ಎಂದು ಬಿ.ಅಮ್ಜದ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ : ರುದ್ರಪ್ಪ ಲಮಾಣಿ
ಹಾವೇರಿ : ಇದುವರೆಗೆ ಅಡಳಿತ ನಡೆಸಿದ ಸರಕಾರಗಳಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಆ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದ್ದಾರೆ. ಬುಧವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂಬ ಕಪ್ಪು ಚುಕ್ಕೆ ಈ ಸರಕಾರಕ್ಕೆ ಬರುತ್ತೆ. ನಾಳೆ ನಾವು ಮತದಾನಕ್ಕೆ ಹೋದಾಗ ಬಂಜಾರ ಸಮುದಾಯದವರು ನಮ್ಮವರನ್ನ ಸಚಿವರನ್ನಾಗಿ ಮಾಡಿಲ್ಲವಲ್ಲ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ ಎಂದರು. ವಿಧಾನಸಭೆ ಉಪಸಭಾಪತಿ ಮಾಡುವ ವೇಳೆ ನಾನು ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದೆ. ಆಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸದ್ಯಕ್ಕೆ ಉಪಸಭಾಪತಿಯಾಗುವಂತೆ ಹಾಗೂ ಮುಂದೆ ಸಂಪುಟ ವಿಸ್ತರಣೆಯಾದಾಗ ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದರು. ಭರವಸೆ ಹಾಗೆಯೇ ಇದೆ ಎಂದು ಅವರು ಉಲ್ಲೇಖಿಸಿದರು.
ಸಿಬಿಎಸ್ಸಿ ಫಲಿತಾಂಶ |ರಾಜ್ಯದ ವಿದ್ಯಾರ್ಥಿಗಳಿಬ್ಬರಿಗೆ 500ಕ್ಕೆ 499 ಅಂಕಗಳು
ಬೆಂಗಳೂರು : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಶ್ರೀ ಚೈತನ್ಯ ಟೆಕ್ನೋ ಶಿಕ್ಷಣ ಸಂಸ್ಥೆಯ ಕಲ್ವಿ ಜಯಿತಾ ಮತ್ತು ಬಪಾತು ತಾರುಣ್ಯ ಅವರು 500ಕ್ಕೆ 499 ಅಂಕಗಳಿಗೆ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ನಿರ್ದೇಶಕಿ ಸೀಮಾ ಬೊಪ್ಪಣ, ‘ಪ್ರಕೃತಿ ಕೆ.ಎನ್., ಲೀಲಾ ಮಾನುಷ್ ಜಿ. ಮತ್ತು ಲಾಸ್ಯ ಮೇಕಲ ಅವರು 500ಕ್ಕೆ 498 ಅಂಕಗಳನ್ನು ಗಳಿಸಿದ್ದಾರೆ. ಸಂಸ್ಥೆಯ ಒಟ್ಟು 60 ಮಂದಿ ವಿದ್ಯಾರ್ಥಿಗಳು 490 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ’ ಎಂದು ಹೇಳಿದ್ದಾರೆ.
ನಾಳೆ ಹೊಸದಿಲ್ಲಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ 2ನೇ ಆವೃತ್ತಿ ಅನಾವರಣ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯ ಸರಕಾರವು ಎ.17ರಂದು ಹೊಸದಿಲ್ಲಿಯಲ್ಲಿ ದೇಶದ ಅತಿದೊಡ್ಡ ರಾಜತಾಂತ್ರಿಕ ಸಂವಾದ ಸಮಾವೇಶವಾದ ‘ಬ್ರಿಡ್ಜ್ ಬೆಂಗಳೂರು-2026’ ಅನ್ನು ಆಯೋಜಿಸಿದ್ದು, ಸಮಾವೇಶದಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಎರಡನೇ ಆವೃತ್ತಿಯನ್ನು(ಜಿಐಎ-2.0) ಅನಾವರಣ ಮಾಡಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲದೇ ಕಿರಣ್ ಮಜುಂದಾರ್ ಷಾ ಭಾಗವಹಿಸಲಿದ್ದಾರೆ. ದಿಲ್ಲಿಯ ಈ ಸಮಾವೇಶವು ನ.17ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮೀಟ್ಗೆ ಪೂರ್ವಭವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು. ರಾಜ್ಯ ಸರಕಾರವು ಕೈಗೊಳ್ಳುತ್ತಿರುವ ಹಲವು ಕಾರ್ಯಕ್ರಮಗಳ ಫಲವಾಗಿ ರಾಜ್ಯಕ್ಕೆ ಸುಮಾರು 5,500 ಕೋಟಿ ರೂ. ಮೊತ್ತದ ಜಾಗತಿಕ ಬಂಡವಾಳವು ಬರಲಿದ್ದು, ಸುಮಾರು 7,200 ಉದ್ಯೋಗಗಳು ಸೃಷ್ಟಿಯಾಗಲಿವೆ. 6,350 ಕೋಟಿ ರೂ. ಬಂಡವಾಳವು ಡಾಟಾ ಕೇಂದ್ರಗಳ ಸ್ಥಾಪನೆಗೆ ಹೂಡಿಕೆಯಾಗಲಿವೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಸರಕಾರವು ಜಾಗತಿಕ ನಾವೀನ್ಯತಾ ಮೈತ್ರಿಕೂಟದಲ್ಲಿ 40ಕ್ಕೂ ಹೆಚ್ಚು ದೇಶಗಳು, 2 ಸಾವಿರಕ್ಕಿಂತ ಅಧಿಕ ನವೋದ್ಯಮಗಳ ಬೆಂಬಲ ಹಾಗೂ 60ಕ್ಕೂ ಅಧಿಕ ಜಾಗತಿಕ ಮಟ್ಟದ ಒಡಂಬಡಿಕೆಗಳು(ಎಂಒಯು) ಹಾಗೂ ಬೇರೆ ಬೇರೆ ಕಂಪನಿಗಳ ಜತೆಗಿನ ಸಹಕಾರದೊಂದಿಗೆ ತನ್ನದೇ ಛಾಪನ್ನು ಮೂಡಿಸುತ್ತಿದೆ ಎಂದು ಅವರು ತಿಳಿಸಿದರು. ಪ್ರಮುಖವಾಗಿ ಯುಎಇ, ಸಿಂಗಾಪುರ್, ಬೆಲ್ಜಿಯಂ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಟ್ಜಲೆರ್ಂಡ್, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ನಂತಹ ದೇಶಗಳು ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಹೆಲ್ತ್ ಟೆಕ್, ಕ್ಲೀನ್ ಟೆಕ್, ಬಯೋಟೆಕ್ ಮತ್ತು ಟ್ರಾವೆಲ್ಟೆಕ್ ಕ್ಷೇತ್ರಗಳಲ್ಲಿ ಜಾಗತಿಕ ಹೂಡಿಕೆದಾರರು, ಕಾರ್ಪೊ ರೇಟ್ ಸಂಸ್ಥೆಗಳು ಮತ್ತು ನಿಯಂತ್ರಣಾ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸಂಪರ್ಕ ಸೇತುವೆಯನ್ನು ಕಲ್ಪಿಸಲು ನೆರವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಎಸ್ಐಆರ್ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ
ಬೆಂಗಳೂರು : ಅಕ್ರಮವಾಗಿ ಕೋಟ್ಯಂತರ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ‘ನನ್ನ ಮತ ನನ್ನ ಹಕ್ಕು’ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಬೆಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಬುಧವಾರ ಬೆಂಗಳೂರಿನ ವಿಧಾನಸೌಧ ಮುಂಭಾಗ, ವಿನೋಭಾ ನಗರ, ಆನಂದಪುರಂ, ಜನತಾ ಕಾಲನಿ ಹಾಗೂ ಮೈಸೂರು, ಕೊಡಗು, ಸಿಂಧನೂರು, ವಿಜಯನಗರ, ಕೊಪ್ಪಳ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿ, ಎಸ್ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಿಂದಾಗಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಲಾಗಿದ್ದು, ಪ್ರಜಾಪ್ರಭುತ್ವದ ಭಾಗವಹಿಸುವಿಕೆಯ ಅಡಿಪಾಯವನ್ನೇ ಹಾನಿಗೊಳಿಸಿದೆ. ಪಶ್ಚಿಮ ಬಂಗಾಳದಲ್ಲೇ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಆಗಿದ್ದು, ಸಂಬಂಧಿಸಿದಂತೆ ದಾಖಲೆಗಳನ್ನು ಹೊಂದಿದ್ದ ಲಾಜಿಕಲ್ ಡಿಸ್ಕರೆಪೆನ್ಸಿ ಎಂಬ ಅಕ್ರಮ ಪ್ರಕ್ರಿಯೆ ಮೂಲಕ 27ಲಕ್ಷಕ್ಕೂ ಹೆಚ್ಚು ಮತದಾರರನ್ನು ಪ್ರಸ್ತುತ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಎಸ್ಐಆರ್ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬೇಕು. ಮತಹಕ್ಕನ್ನು ಕಾಪಾಡಲು ಮತ್ತು ಎಸ್ಐಆರ್ಅನ್ನು ವಿರೋಧಿಸಲು ರಾಜ್ಯದ ಜನತೆ ಮುಂದಾಗಬೇಕು. ಅಳಿಸಲ್ಪಟ್ಟವರಿಗೆ ಮತಹಕ್ಕು ಮರುಸ್ಥಾಪನೆ ಆಗುವಂತೆ ಸುಪ್ರೀಂ ಕೋರ್ಟ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ನಮ್ಮದು ಕುಟುಂಬ ರಾಜಕಾರಣ ಅಲ್ಲ : ಯತೀಂದ್ರ ಸಿದ್ದರಾಮಯ್ಯ
ಮೈಸೂರು : ನಾನು ವಿಧಾನಪರಿಷತ್ ಸದಸ್ಯನಾಗಿರುವುದು ಕುಟುಂಬ ರಾಜಕಾರಣದಿಂದಲ್ಲ. ತಂದೆಯ ರಾಜಕೀಯ ಜೀವನದ ಮುಂದುವರಿದ ಭಾಗವಾಗಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಆರೋಪ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಾನು ಎಂಎಲ್ ಸಿ ಆಗಿರುವುದು ಕುಟುಂಬ ರಾಜಕಾರಣಕ್ಕಾಗಿ ಅಲ್ಲ. ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ. ನಮ್ಮ ಕ್ಷೇತ್ರದ ಜನರ ರಕ್ಷಣೆಗೆ ಎಂಎಲ್ಸಿ ಆಗಿದ್ದೇನೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆ ಏನು ನನ್ನನ್ನು ಪಕ್ಷದ ಅಧ್ಯಕ್ಷ ಮಾಡಿದ್ದಾರಾ? ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ಆದರೆ ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದೆ ಎಂದರು.
Belagavi | ಮರ್ಯಾದೆಗೇಡು ಹತ್ಯೆ ಪ್ರಕರಣ; ಮೂವರು ಆರೋಪಿಗಳ ಬಂಧನ
ಬೆಳಗಾವಿ : ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ತಿಳಿಸಿದ್ದಾರೆ. ಮೃತಳ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹಳವರ (46), ಸಹೋದರ ಶಾನೂರ ಸದಾಶಿವ ಹಳವರ (35) ಹಾಗೂ ಭಾವ ಕಲ್ಲಪ್ಪ ಮಾಯಪ್ಪ ಹಳವಿ (40) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ತಿಳಿಸಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ನಡೆಸಿದ ಯಮಕನಮರಡಿ ಪೊಲೀಸ್ ಇನ್ಸ್ಪೆೆಕ್ಟರ್ ಜಾವೀದ್ ಎಫ್. ಮುಷಾಪುರಿ ಅವರ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ. ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಅವರನ್ನು ಕುಟುಂಬದವರೇ ವಿಷವಿಕ್ಕಿ ಕೊಲೆ ಮಾಡಿ, ಬಳಿಕ ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿತ್ತು ಎಂದು ವಿವರಿಸಿದರು. ಈ ಕುರಿತು ಕೃಷ್ಣಾ ಸಹದೇವ ಪಾಟೀಲ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮೃತರಾದ ಸತ್ಯವ್ವ ಹಾಗೂ ಕೃಷ್ಣಾ ಸಹದೇವ ಪಾಟೀಲ ಇಬ್ಬರೂ ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಸತ್ಯವ್ವಗೆ ಸಂತೋಷ ಹಳವಿ ಎಂಬಾತನೊಂದಿಗೆ ಮದುವೆಯಾದರೂ, ಅವರ ಪ್ರೀತಿ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ಆಕೆ ಪ್ರಿಯಕರನೊಂದಿಗೆ ಬೆಳವಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದುಕೊಂಡ ಕುಟುಂಬಸ್ಥರು ಆಕೆಯನ್ನು ಪತ್ತೆಹಚ್ಚಿ ಕರೆತಂದು ಬುದ್ಧಿವಾದ ಹೇಳಿದರೂ, ಆಕೆ ಅವರ ಮಾತು ಕೇಳದೆ ಪ್ರಿಯಕರನ ಬಳಿಗೆ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಮಾರ್ಚ್ 21ರಂದು ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿ ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಕುಟುಂಬಸ್ಥರು ಬಲವಂತವಾಗಿ ವಿಷ ಕುಡಿಸಿ ಹತ್ಯೆಗೈದಿದ್ದಾರೆ. ನಂತರ ಅದೇ ರಾತ್ರಿ ಅರಗ ಗ್ರಾಮದ ಸ್ಮಶಾನದಲ್ಲಿ ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
RCB: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ, ಆರ್ಸಿಬಿ ಗೆಲ್ಲಿಸಿದ ರಸಿಖ್ ದಾರ್ ಸಲಾಂ
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲ್ಎಸ್ಜಿ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ರಸಿಖ್ ದಾರ್ ಸಲಾಂ ಮಾಡಿದ ಮಾರಕ ಬೌಲಿಂಗ್ ದಾಳಿಯು ಆರ್ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ವೇಗಿ ರಸಿಖ್ ಸಲಾಮ್ ದಾರ್ ಅವರು
ಸ್ಥಿರಾಸ್ತಿ ಸಂಬಂಧ ನ್ಯಾಯಾಲಯಗಳ ಡಿಕ್ರಿ ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ ಹೊರಡಿಸಿದ High Court
ಬೆಂಗಳೂರು: ಸ್ಥಿರಾಸ್ತಿಗಳ ನೋಂದಾಯಿತ ದಾಖಲೆಗಳನ್ನು ರದ್ದುಗೊಳಿಸುವ ಕುರಿತ ವಿಚಾರಣಾ ನ್ಯಾಯಾಲಯಗಳ ತೀರ್ಪುಗಳ (ಡಿಕ್ರಿ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿವಿಲ್ ನ್ಯಾಯಾಲಯಗಳು ಮತ್ತು ಉಪ-ನೋಂದಣಾಧಿಕಾರಿಗಳಿಗೆ (ಸಬ್-ರಿಜಿಸ್ಟ್ರಾರ್) ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ನ್ಯಾಯಾಲಯದ ತೀರ್ಪನ್ನು ಜಾರಿಗೆ ತರಲು ನಿರಾಕರಿಸಿದ್ದ ಬೆಂಗಳೂರಿನ ಮಹದೇವಪುರದ ಸಬ್ ರಿಜಿಸ್ಟ್ರಾರ್ ಕ್ರಮವನ್ನು ಪ್ರಶ್ನಿಸಿ ನಗರದ ಕೆ. ಆ್ಯಂಟನಿಸಾಮಿ ಸಲ್ಲಿಸಿದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಇತ್ತೀಚಿನ ದಿನಗಳಲ್ಲಿ ಡಿಕ್ರಿಗಳನ್ನು ಮಾನ್ಯ ಮಾಡದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಇದಕ್ಕೆ ಸಬ್ ರಿಜಿಸ್ಟ್ರಾರ್ಗಳೇ ಕಾರಣ. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು, ಸಿವಿಲ್ ನ್ಯಾಯಾಲಯದ ಡಿಕ್ರಿ ಇದ್ದರೂ ಅದನ್ನು ಆಧರಿಸಿ ಕ್ರಮ ಕೈಗೊಂಡಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ಸಂದರ್ಭಗಳು ಮರುಕಳಿಸುವುದನ್ನು ತಡೆಯಲು ಸಿವಿಲ್ ನ್ಯಾಯಾಲಯಗಳು ಹಾಗೂ ಸಬ್ ರಿಜಿಸ್ಟ್ರಾರ್ಗಳಿಗೆ ಹೈಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋರ್ಟ್ಗಳಿಗೆ ಮಾರ್ಗಸೂಚಿ: ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನೋಂದಾಯಿತ ದಾಖಲೆಯನ್ನು ಅಮಾನ್ಯವೆಂದು ಘೋಷಿಸಿದ, ರದ್ದುಗೊಳಿಸಿದ ಅಥವಾ ಮುಕ್ತಾಯಗೊಳಿಸಿದ ಮೊಕದ್ದಮೆಗಳಲ್ಲಿ ರಾಜ್ಯದ ಎಲ್ಲ ಸಿವಿಲ್ ನ್ಯಾಯಾಲಯಗಳು ಮತ್ತು ವಾಣಿಜ್ಯ ಕೋರ್ಟ್ಗಳು ತೀರ್ಪಿನ ಪ್ರತಿಯನ್ನು ದಾಖಲೆಯನ್ನು ನೋಂದಾಯಿಸಿದ ಅಧಿಕಾರ ವ್ಯಾಪ್ತಿಯ ಸಬ್-ರಿಜಿಸ್ಟ್ರಾರ್ಗೆ ರವಾನಿಸಲು ಕಚೇರಿಗೆ ನಿರ್ದೇಶಿಸಬೇಕು. ಸಾಮಾನ್ಯವಾಗಿ ತೀರ್ಪು ಹೊರಬಿದ್ದ ದಿನಾಂಕದಿಂದ 4 ವಾರಗಳಲ್ಲಿ ಸಂವನಹವನ್ನು ಕಳುಹಿಸಬೇಕು ಹಾಗೂ ಸಂವಹನವು ದಾಖಲೆ ಸಂಖ್ಯೆ, ನೋಂದಣಿ ದಿನಾಂಕ, ದಾಖಲೆ ಮತ್ತು ರದ್ದಾದ ದಾಖಲೆಯ ಸ್ವರೂಪವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಸಬ್ ರಿಜಿಸ್ಟ್ರಾರ್ಗಳಿಗೆ ಮಾರ್ಗಸೂಚಿಗಳು: * ಸಿವಿಲ್ ನ್ಯಾಯಾಲಯವು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ತೀರ್ಪನ್ನು ಹೊರಡಿಸಿದಾಗಲೆಲ್ಲ, ಉಪ-ನೋಂದಣಿದಾಧಿಕಾರಿಗಳು ಅಂತಹ ಸಂವಹನವನ್ನು ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ಸಂಬಂಧಿತ ರಿಜಿಸ್ಟರ್ ಮತ್ತು ದಾಖಲೆಗಳಲ್ಲಿ ಅಗತ್ಯವಿರುವ ನಮೂದುಗಳನ್ನು ಮಾಡಬೇಕು. * ನ್ಯಾಯಾಲಯದಿಂದ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸದ ಸಂದರ್ಭಗಳಲ್ಲಿಯೂ ಸಹ, ಒಬ್ಬ ಪಕ್ಷಗಾರರು (ಪಾರ್ಟಿ) ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಮತ್ತು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸಲಾಗಿದೆ ಅಥವಾ ಅನೂರ್ಜಿತವಾಗಿದೆ ಎಂದು ಘೋಷಿಸುವ ತೀರ್ಪನ್ನು ನೀಡಿದರೆ, ಉಪ-ನೋಂದಣಿದಾಧಿಕಾರಿಗಳು ತೀರ್ಪಿನ ಮೇಲೆ ಕಾರ್ಯನಿರ್ವಹಿಸಲು ನಿರಾಕರಿಸಬಾರದು. ಅಂತಹ ಸಂದರ್ಭಗಳಲ್ಲಿ, ಸಬ್-ರಿಜಿಸ್ಟ್ರಾರ್ಗಳು ಪ್ರಮಾಣೀಕೃತ ಪ್ರತಿಯ ದೃಢೀಕರಣವನ್ನು ಪರಿಶೀಲಿಸಬೇಕು ಮತ್ತು ನಿಯಮಗಳ ಪ್ರಕಾರ ಸಂಬಂಧಿತ ರಿಜಿಸ್ಟರ್ಗಳು ಮತ್ತು ಕಡತಗಳಲ್ಲಿ ರದ್ದತಿಯನ್ನು ದಾಖಲಿಸಬೇಕು. * ಸಕ್ಷಮ ಸಿವಿಲ್ ನ್ಯಾಯಾಲಯ ದಾಖಲೆಯನ್ನು ಅನೂರ್ಜಿತ ಅಥವಾ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ ನಂತರ ನೋಂದಣಿ ಪ್ರಾಧಿಕಾರವು ಹೈಕೋರ್ಟ್ ಅಥವಾ ಯಾವುದೇ ಇತರ ಪ್ರಾಧಿಕಾರದ ಪ್ರತ್ಯೇಕ ಆದೇಶಗಳನ್ನು ನೀಡುವಂತೆ ಒತ್ತಾಯ ಮಾಡಬಾರದು. ಪ್ರಕರಣವೇನು? ಅರ್ಜಿದಾರರು ಬಿಲ್ಡರ್ ಒಬ್ಬರ ಜತೆ ಮಾಡಿಕೊಂಡಿದ್ದ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಅನ್ನು ಸಿವಿಲ್ ನ್ಯಾಯಾಲಯ ರದ್ದುಗೊಳಿಸಿತ್ತು. ಈ ತೀರ್ಪಿನ ಪ್ರತಿಯನ್ನು ಮಹದೇವಪುರ ಸಬ್ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದಾಗ, ನ್ಯಾಯಾಲಯದಿಂದ ನೇರ ಸಂವಹನ ಬಂದಿಲ್ಲ ಮತ್ತು ಹೈಕೋರ್ಟ್ ನಿರ್ದೇಶನವಿಲ್ಲ ಎಂಬ ಕಾರಣ ನೀಡಿ ದಾಖಲೆಗಳಲ್ಲಿ ಬದಲಾವಣೆಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
2026ರ ಆವೃತ್ತಿಯ ಫಿಫಾ ಸೀರೀಸ್ ಟೂರ್ನಮೆಂಟ್: ಮಲಾವಿ ವಿರುದ್ಧ ಜಯ, ಭಾರತಕ್ಕೆ ಮೂರನೇ ಸ್ಥಾನ
ನೈರೋಬಿ, ಎ.15: ನಾಲ್ಕು ತಂಡಗಳು ಭಾಗವಹಿಸಿರುವ 2026ರ ಆವೃತ್ತಿಯ ಫಿಫಾ ಸೀರೀಸ್ ಟೂರ್ನಮೆಂಟ್ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಮಲಾವಿ ತಂಡವನ್ನು 3-2 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಫುಟ್ಬಾಲ್ ತಂಡವು ಮೂರನೇ ಸ್ಥಾನ ಪಡೆದಿದೆ. ಬುಧವಾರ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬದಲಿ ಆಟಗಾರ್ತಿ ಪ್ರಿಯದರ್ಶಿನಿ 84ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಭಾರತ ತಂಡದ ಪರವಾಗಿ ಅವೇಕಾ ಸಿಂಗ್(45+1 ನಿಮಿಷ)ಹಾಗೂ ಅಸ್ಟಮ್ ಓರಾನ್ ತಲಾ ಒಂದು ಗೋಲು ಗಳಿಸಿದರು. ಫಿಫಾ ರ್ಯಾಂಕಿಂಗ್ನಲ್ಲಿ 153ನೇ ಸ್ಥಾನದಲ್ಲಿರುವ ಮಲಾವಿ ತಂಡದ ಪರ ಐರೀನ್ ಖುಮಾಲೊ ಹಾಗೂ ಡೆಬೊರಾ ಹೆನ್ರಿ ತಲಾ ಒಂದು ಗೋಲು ಗಳಿಸಿದರು. ಇದಕ್ಕೂ ಮೊದಲು ನಡೆದಿದ್ದ ಸೆಮಿ ಫೈನಲ್ನಲ್ಲಿ ಭಾರತ ತಂಡವು ಕೀನ್ಯ ತಂಡದ ವಿರುದ್ಧ 0-2 ಅಂತರದಿಂದ ಸೋಲುಂಡಿತ್ತು.
ಫಿಡೆ ಕ್ಯಾಂಡಿಡೇಟ್ಸ್ ಮುಕ್ತ ವಿಭಾಗ: ಜಾವೊಖಿರ್ ಸಿಂದಾರೋವ್ ಚಾಂಪಿಯನ್
ಸೈಪ್ರಸ್, ಎ.15: ನೆದರ್ಲ್ಯಾಂಡ್ಸ್ ಆಟಗಾರ ಅನಿಶ್ ಗಿರಿ ವಿರುದ್ಧ 13ನೇ ಸುತ್ತಿನ ಪಂದ್ಯವನ್ನು ಡ್ರಾಗೊಳಿಸಿರುವ ಕಝಕ್ಸ್ತಾನದ ಯುವ ಚೆಸ್ ತಾರೆ ಜಾವೊಖಿರ್ ಸಿಂದಾರೋವ್ ಇನ್ನೊಂದು ಸುತ್ತು ಬಾಕಿ ಇರುವಾಗಲೇ ಫಿಡೆ ಕ್ಯಾಂಡಿಡೇಟ್ಸ್ನ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಫಿಡೆ ವಿಶ್ವ ಚಾಂಪಿಯನ್ಶಿಪ್ ಪಂದ್ಯದಲ್ಲಿ ಭಾರತದ ಚೆಸ್ ತಾರೆ ಡಿ.ಗುಕೇಶ್ರನ್ನು ಎದುರಿಸಲಿದ್ದಾರೆ. ಸಿಂದಾರೋವ್ ಅವರು ಬುಧವಾರ ನಡೆದ 14ನೇ ಸುತ್ತಿನ ಪಂದ್ಯದಲ್ಲಿ ವೀ ಯೀ ವಿರುದ್ದ ಡ್ರಾ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಅಜೇಯವಾಗುಳಿದರು. ಅರ್ಹವಾಗಿಯೇ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಂಗಳವಾರ ನಡೆದ 13ನೇ ಸುತ್ತಿನ ಪಂದ್ಯಕ್ಕಿಂತ ಮೊದಲು ಸಿಂದಾರೋವ್ ಎರಡು ಅಂಕದಿಂದ ಮುನ್ನಡೆಯಲ್ಲಿದ್ದರು. ಗಿರಿ ಅವರು ಸ್ಪರ್ಧೆಯನ್ನು ಅಂತಿಮ ದಿನಕ್ಕೆ ವಿಸ್ತರಿಸಲು ಈ ಪಂದ್ಯದಲ್ಲಿ ಗೆಲ್ಲುವ ಅಗತ್ಯವಿತ್ತು. ಆದರೆ, ಪಂದ್ಯವು ಡ್ರಾಗೊಂಡ ಕಾರಣ ಸಿಂದಾರೋವ್ ಪ್ರಶಸ್ತಿ ಗೆದ್ದುಕೊಂಡರು. ಮುಕ್ತ ವಿಭಾಗದ ಇತರ ಫಲಿತಾಂಶಗಳಲ್ಲಿ ಹಿಕಾರು ನಕಮುರಾ ಅವರು ಮಥಿಯಾಸ್ ಬ್ಲೂಬಾಮ್ ವಿರುದ್ಧ ಮತ್ತೊಂದು ಡ್ರಾ ಸಾಧಿಸಿದರು. ವೀ ಯೀ ಅವರು ಆಂಡ್ರೆ ಎಸಿಪೆಂಕೊರನ್ನು ಸೋಲಿಸಿದರು. ಆರ್. ಪ್ರಜ್ಞಾನಂದ ಅವರು ಫ್ಯಾಬಿಯಾನೊ ಕರುವಾನಾ ವಿರುದ್ಧ ಡ್ರಾ ಸಾಧಿಸಿದರು.
2024ರ ನಂತರ ಮೊದಲ ಬಾರಿ ಸತತ ಎರಡು ಪಂದ್ಯ ಗೆದ್ದ ಸಿಎಸ್ಕೆ
ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ಸುಮಾರು ಎರಡು ವರ್ಷಗಳ ನಂತರ ಮೊದಲ ಬಾರಿ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ನಾಲ್ಕು ಅಂಕಗಳನ್ನು ಗಳಿಸುವ ಮೂಲಕ ಇತರ ನಾಲ್ಕು ತಂಡಗಳನ್ನು ಸೇರಿಕೊಂಡಿದೆ. ಟಾಸ್ ಸೋತು, ತೀವ್ರ ಇಬ್ಬನಿಯಲ್ಲಿ ಬೌಲಿಂಗ್ ಮಾಡಿದ ಹೊರತಾಗಿಯೂ ಸಿಎಸ್ಕೆ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೇಲೆ ಸವಾರಿ ಮಾಡಿತು. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ 32 ರನ್ಗಳಿಂದ ಸೋತಿರುವ ಕೆಕೆಆರ್ ಈ ವರ್ಷದ ಐಪಿಎಲ್ನಲ್ಲಿ ತನ್ನ ಸೋಲಿನ ಸರಪಳಿ ಮುಂದುವರಿಸಿತು. ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್ ಹಾಗೂ ಆಯುಷ್ ಮ್ಹಾತ್ರೆ ಸಂಘಟಿತ ಪ್ರದರ್ಶನ ನೀಡಿ ಸಿಎಸ್ಕೆ ತಂಡವು 192 ರನ್ ಗಳಿಸುವಲ್ಲಿ ನೆರವಾದರು. ಆ ನಂತರ ಅನ್ಶುಲ್ ಕಾಂಬೋಜ್ ಹಾಗೂ ಖಲೀಲ್ ಅಹ್ಮದ್ ಪವರ್ಪ್ಲೇನೊಳಗೆ ಫಿನ್ ಅಲೆನ್ ಹಾಗೂ ಸುನೀಲ್ ನರೇನ್ರಂತಹ ಪ್ರಮುಖ ವಿಕೆಟ್ಗಳನ್ನು ಉರುಳಿಸಿದರು. ಸಿಎಸ್ಕೆ ಸ್ಪಿನ್ನರ್ಗಳು 8 ಓವರ್ಗಳ ಬೌಲಿಂಗ್ ಮಾಡಿ 47 ರನ್ ನೀಡಿ ನಾಲ್ಕು ವಿಕೆಟ್ಗಳನ್ನು ಪಡೆದರು.
ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಶ್ಯ, ಚೀನಾ ಒಟ್ಟಾಗಿ ಕೆಲಸ ಮಾಡಬೇಕು: ಕ್ಸಿ ಜಿಂಪಿಂಗ್ ಪ್ರತಿಪಾದನೆ
ಬೀಜಿಂಗ್, ಎ.15: ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಷ್ಯ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಬುಧವಾರ ಹೇಳಿದ್ದಾರೆ. ರಷ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅವರೊಂದಿಗೆ ಬೀಜಿಂಗ್ನಲ್ಲಿ ನಡೆಸಿದ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಸಿ ಜಿಂಪಿಂಗ್ ` ನ್ಯಾಯಯುತ, ಸಮತೋಲಿತ ಅಂತರರಾಷ್ಟ್ರೀಯ ಕ್ರಮ ಮರುಸ್ಥಾಪಿಸಲು ರಶ್ಯ ಮತ್ತು ಚೀನಾ ವಿಶ್ವಸಂಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ. ಮತ್ತು ಅಂತರರಾಷ್ಟ್ರೀಯ ಕ್ರಮವನ್ನು ಹೆಚ್ಚು ನ್ಯಾಯಯುತ ಮತ್ತು ಸಮಂಜಸವಾದ ದಿಕ್ಕಿನಲ್ಲಿ ಮುನ್ನಡೆಸಲು `ಬ್ರಿಕ್ಸ್' `ಎಸ್ಸಿಒ' ವೇದಿಕೆಗಳಲ್ಲಿ ನಿಕಟವಾಗಿ ಸಹಕರಿಸಲಿವೆ ಎಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ಏಕಪಕ್ಷೀಯ ಕ್ರಮಗಳ ವಿರುದ್ಧ ಎರಡೂ ದೇಶಗಳು ಪ್ರಯತ್ನಗಳನ್ನು ಹೆಚ್ಚಿಸಬೇಕು. ಜಗತ್ತು ಮತ್ತೆ `ಜಂಗಲ್ರಾಜ್' (ಕಾಡಿನ ಕಾನೂನು) ಅವಧಿಗೆ ಮರಳಬಾರದು. ಬಹುರಾಷ್ಟ್ರೀಯ ವ್ಯವಸ್ಥೆ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಮರುಸ್ಥಾಪಿಸಲು ರಶ್ಯ, ಚೀನಾ ಮತ್ತು ಇತರ ಮಿತ್ರರಾಷ್ಟ್ರಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಜಿಂಪಿಂಗ್ ಆಗ್ರಹಿಸಿದ್ದಾರೆ. ಬದಲಾವಣೆ ಮತ್ತು ಅವ್ಯವಸ್ಥೆಯಿಂದ ಕೂಡಿರುವ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಚೀನಾ-ರಶ್ಯ ಸಂಬಂಧಗಳ ಸ್ಥಿರತೆ ಮತ್ತು ನಿಶ್ಚಿತತೆಯು ಅತ್ಯಮೂಲ್ಯವಾಗಿವೆ. `ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ ಬಲವಾದ ಚೈತನ್ಯ ಮತ್ತು ಅನುಕರಣೀಯ ಮಹತ್ವವು ಇಂತಹ ಸನ್ನಿವೇಶದಲ್ಲಿ ಮಹತ್ವ ಪಡೆಯುತ್ತದೆ. ಕಾರ್ಯತಂತ್ರದ ಸಂವಹನ ಮತ್ತು ನಿಕಟ ರಾಜತಾಂತ್ರಿಕ ಸಮನ್ವಯತೆಯನ್ನು ಬಲಪಡಿಸಲು ಎರಡೂ ದೇಶಗಳ ವಿದೇಶಾಂಗ ಸಚಿವರು ಪ್ರಯತ್ನಗಳನ್ನು ಮುಂದುವರಿಸಬೇಕು. ಉಭಯ ದೇಶಗಳ ನಡುವೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಮುಂದುವರಿಸಬೇಕು ಎಂದು ಚೀನಾ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE) 2026ನೇ ಸಾಲಿನ ಬಹುನಿರೀಕ್ಷಿತ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಸಂಜೆ 4 ಗಂಟೆಗೆ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದಲ್ಲಿ ದಕ್ಷಿಣ ಭಾರತದ ವಲಯಗಳು ಎಂದಿನಂತೆ ತಮ್ಮ ಪಾರುಪತ್ಯ ಮೆರೆದಿದ್ದು, ಅತಿ ಹೆಚ್ಚು ಉತ್ತೀರ್ಣ ಪ್ರಮಾಣ ದಾಖಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಹಾಗೂ ಗಮನಾರ್ಹ ಸಾಧನೆ ಮಾಡಿವೆ. ಮಂಡಳಿಯು
ಪ್ರಸಕ್ತ ಸಾಲಿನ SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ಪ್ರಸಕ್ತ ಸಾಲಿನ (2025-2026) ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರ ಪ್ರಶ್ನಿಸಿ ವಿದ್ಯಾರ್ಥಿನಿಯರಾದ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್, ಉಡುಪಿಯ ಅನುಷಾ ಹಾಗೂ ಸುಧಿಕ್ಷಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರಕಾರಕ್ಕೆ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ. ಇದಕ್ಕೂ ಮುನ್ನ ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲ ಆರ್.ವಿ. ನಾಯ್ಕ್ ವಾದ ಮಂಡಿಸಿ, 2025-2026ನೇ ಸಾಲಿನಿಂದಲೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು 2026ರ ಮಾರ್ಚ್ 28ರಂದು ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಮುಂದುವರಿದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಮುಖ್ಯಸ್ಥರು 2024 ಅಕ್ಟೋಬರ್ 18 ಮತ್ತು 2025ರ ಅಕ್ಟೋಬರ್ 28ರಂದು ಮಾರ್ಗಸೂಚಿ ಹಾಗೂ ಸುತ್ತೋಲೆ ಹೊರಡಿಸಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 100 ಅಂಕ ನೀಡಬೇಕು. ಅದರಲ್ಲಿ ಲಿಖಿತ ಪರೀಕ್ಷೆಯ ಮೌಲ್ಯಮಾಪನದಲ್ಲಿ 80 ಅಂಕ, ಶಾಲಾ ಆಂತರಿಕ ಪರೀಕ್ಷೆಗೆ 20 ಅಂಕ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ, ಕೊನೇ ಹಂತದಲ್ಲಿ ಅಂದರೆ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಸರಕಾರ ಅಂಕಗಳ ಬದಲಿಗೆ ಗ್ರೇಡ್ ನೀಡುವ ತೀರ್ಮಾನ ಕೈಗೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸೇರಿದಂತೆ ಕೇಂದ್ರ ಸರಕಾರ ಹಾಗೂ ಕೇಂದ್ರ ಸ್ವಾಮ್ಯ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಗ್ರೇಡಿಂಗ್ ಅನ್ನು ಪರಿಗಣಿಸುವುದಿಲ್ಲ. ಕೇವಲ ಅಂಕಗಳನ್ನಷ್ಟೇ ಪರಿಗಣಿಸಲಾಗುತ್ತದೆ. ರಾಜ್ಯ ಸರಕಾರ ಹಿಂದಿ ಹಾಗೂ ಇತರ ತೃತೀಯ ಭಾಷಾ ವಿಷಯಗಳ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಂಡಿಗ್ ನೀಡಿದರೆ, ರಾಜ್ಯದ ವಿದ್ಯಾರ್ಥಿಗಳ/ಉದ್ಯೋಗ ಆಕಾಂಕ್ಷಿಗಳ ಮೇಲೆ ಭವಿಷ್ಯದಲ್ಲಿ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, 2025-2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಸರಕಾರ ಹಾಗೂ ಕೆಎಸ್ಇಎಬಿಗೆ ನಿರ್ದೇಶಿಸಬೇಕು ಎಂದು ಕೋರಿದರು. ಆಗ ನ್ಯಾಯಪೀಠ, ತೃತೀಯ ಭಾಷೆ ವಿಷಯಗಳ ಪರೀಕ್ಷೆಯಲ್ಲಿ ಗ್ರೇಡಿಂಗ್ ನೀಡುವ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ/ಸುತ್ತೋಲೆ ಹೊರಡಿಸಿದೆಯೇ ಎಂದು ಸರಕಾರಿ ವಕೀಲರನ್ನು ಕೇಳಿತು. ಸರಕಾರದ ಪರ ವಕೀಲರು, ಸದ್ಯ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸರಕಾರದಿಂದ ಪಡೆದು ತಿಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ 2025-2026ನೇ ಸಾಲಿನ ಎಸೆಸೆಲ್ಸಿಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ತುರ್ಕಿಯೆ ಶಾಲೆಯಲ್ಲಿ ಗುಂಡಿನ ದಾಳಿ: ನಾಲ್ವರು ಮೃತ್ಯು; 20 ಮಂದಿಗೆ ಗಾಯ
ಅಂಕಾರ, ಎ.15: ತುರ್ಕಿಯೆ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಶಿಕ್ಷಕ ಮತ್ತು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಹ್ರಮನ್ಮರಸ್ ಪ್ರಾಂತದ ಶಾಲೆಯಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿಯೊಬ್ಬ ಪಿಸ್ತೂಲಿನೊಂದಿಗೆ ಶಾಲೆಗೆ ಬಂದಿದ್ದು ತರಗತಿಗೆ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಸಾನ್ಲಿಯುರ್ಫಾ ಪ್ರಾಂತದ ಸಿವೆರೆಕ್ ಜಿಲ್ಲೆಯ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದರು. ಬಳಿಕ ಆರೋಪಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕದನ ವಿರಾಮ ಮಾತುಕತೆ| ಅಮೆರಿಕದ ಸಂದೇಶದೊಂದಿಗೆ ಇರಾನ್ಗೆ ತೆರಳಲಿರುವ ಪಾಕ್ ನಿಯೋಗ
ಟೆಹರಾನ್, ಎ.15: ಪಾಕಿಸ್ತಾನದ ನಿಯೋಗವು ಅಮೆರಿಕದ ಸಂದೇಶವನ್ನು ರವಾನಿಸಲು ಇರಾನ್ಗೆ ತೆರಳುತ್ತಿದೆ. ನಿಯೋಗವು ಎರಡೂ ದೇಶಗಳ ನಡುವೆ ಎರಡನೇ ಸುತ್ತಿನ ಮಾತುಕತೆಗೆ ಯೋಜಿಸಬಹುದು ಎಂದು ಇರಾನ್ನ ಸರಕಾರಿ ಸ್ವಾಮ್ಯದ ಮಾಧ್ಯಮವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇದಕ್ಕೂ ಮುನ್ನ, ಬುಧವಾರ ಟೆಹ್ರಾನ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಗಾಯಿ `ಇಸ್ಲಮಾಬಾದ್ನಲ್ಲಿ ಮಾತುಕತೆಗಳ ಮುಂದುವರಿಕೆಯಾಗಿ ಬುಧವಾರ ಇರಾನ್ಗೆ ಪಾಕಿಸ್ತಾನದ ನಿಯೋಗ ಬರುವ ಸಾಧ್ಯತೆಯಿದೆ' ಎಂದು ಹೇಳಿದ್ದರು. ಈ ಮಧ್ಯೆ, ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗೆ ಬುಧವಾರದಿಂದ ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ. ವಿಶೇಷವಾಗಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗುತ್ತಿದೆ. ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲಿ ಇಸ್ಲಮಾಬಾದ್ನಲ್ಲಿ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಪಾಕ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಾಳಗಿಯಲ್ಲಿ ನೀಲಕಂಠ ಕಾಳೇಶ್ವರ ಭವ್ಯ ರಥೋತ್ಸವ
ಕಾಳಗಿ : ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ರಾತ್ರಿ ಅಪಾರ ಭಕ್ತರ ಜೈ ಘೋಷಗಳ ಮಧ್ಯೆ ಸಂಭ್ರಮದಿಂದ ನೀಲಕಂಠ ಕಾಳೇಶ್ವರ ಭವ್ಯ ರಥೋತ್ಸವ ಜರುಗಿತು. ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ ಅಭಿಷೇಕ ಅರ್ಚನೆ ಅಲಂಕಾರ ಮಹಾಮಂಗಳಾರತಿ ಜರುಗಿತು. ಬಳಿಕ ಭಕ್ತರು ವೀರಭದ್ರೇಶ್ವರ ಅಗ್ನಿ ಪ್ರವೇಶ ಮಾಡಿ ಹರಕೆ ತೀರಿಸಿದರು. ಸಾಯಂಕಾಲ ಪಟ್ಟಣದ ಪ್ರಮುಖ ಮನೆತನಗಳಾದ ಜೈಶಂಕರ ಮಾಲಿಪಾಟೀಲ, ಶರಣಗೌಡ ಪೊಲೀಸ್ ಪಾಟೀಲ, ಶಿವಕುಮಾರ್ ಪಂಚಾಳ, ಪ್ರಭಾಕಾರ ಮಾಕಪನೋರ, ಗುರುಲಿಂಗಯ್ಯ ಮಠಪತ್ತಿ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭರತನೂರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರು, ಡೊಣ್ಣೂರ ವೀರಭಧ್ರಪ್ಪ ಅಜ್ಜನವರು, ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ನೀಲಕಂಠ ಕಾಳೇಶ್ವರ ಮಹಾರಜಕೀ ಜೈ ಎಂದು ಜಯಘೋಷಗಳನ್ನು ಕೂಗುತ್ತಾ ರತೋತ್ಸವಕ್ಕೆ ಉತ್ತುತ್ತಿ, ಬಾಳೆಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಸಮಿತಿ ಅಧ್ಯಕ್ಷ ಶಿವಶರಣರಪ್ಪ ಕಮಲಾಪೂರ, ಜಿಪಂ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ ಗಾಜರೆ, ನೀಲಕಂಠ ಗುತ್ತೇದಾರ, ವಿಶ್ವನಾಥ ವನಮಾಲಿ, ಪ್ರಶಾಂತ ಕದಮ, ಮಲ್ಲಿನಾಥ ಪಾಟೀಲ್, ಶಿವಶರಣಪ್ಪ ಹುಡಗಿ, ಶೇಖರ ಪಾಟೀಲ್, ಜಗಧೀಶ ಮಾಲಿಪಾಟೀಲ, ಶಿವಶರಣಪ್ಪ ಗುತ್ತೇದಾರ, ಸಂತೋಷ ಪತಂಗೆ, ಶಿವಕಿರಣ ಪ್ಯಾಟಿಮಠ, ಸಂತೋಷ ಕುಡ್ಡಳ್ಳಿ, ಶಿವರಾಜ್ ಕುಡ್ಡಳ್ಳಿ ಸೇರಿದಂತೆ ಅನೇಕರು ಇದ್ದರು.
IPL-2026| ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ
ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ವಿರುದ್ಧ ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ನಾಯಕ ಅಜಿಂಕ್ಯ ರಹಾನೆಗೆ ಬುಧವಾರ ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ಇದು ಕೆಕೆಆರ್ ತಂಡದ ಈ ವರ್ಷದ ಮೊದಲ ತಪ್ಪಾಗಿತ್ತು. ಹೀಗಾಗಿ ನಿಧಾನಗತಿಯ ಬೌಲಿಂಗ್ಗಾಗಿ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಪಂದ್ಯದಲ್ಲಿ 21 ರನ್ಗೆ ಮೂರು ವಿಕೆಟ್ಗಳನ್ನು ಉರುಳಿಸಿದ ನೂರ್ ಅಹ್ಮದ್ ಅವರು ಸಿಎಸ್ಕೆ ತಂಡವು ಕೋಲ್ಕತಾ ತಂಡವನ್ನು 32 ರನ್ಗಳಿಂದ ಮಣಿಸುವಲ್ಲಿ ನೆರವಾದರು. ಸಿಎಸ್ಕೆ ತಂಡವು ಸತತ ಎರಡನೇ ಗೆಲುವು ದಾಖಲಿಸಿತ್ತು. ಸಂಜು ಸ್ಯಾಮ್ಸನ್(48 ರನ್)ಹಾಗೂ ಡೆವಾಲ್ಡ್ ಬ್ರೆವಿಸ್(41 ರನ್)ಕೊಡುಗೆಯ ನೆರವಿನಿಂದ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಸಿಎಸ್ಕೆ ತಂಡವು ಐದು ವಿಕೆಟ್ಗಳ ನಷ್ಟಕ್ಕೆ 192 ರನ್ ಗಳಿಸಿತ್ತು. ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಅವರು ಕೋಲ್ಕತಾ ತಂಡವನ್ನು 7 ವಿಕೆಟ್ಗಳ ನಷ್ಟಕ್ಕೆ 160 ರನ್ಗೆ ನಿಯಂತ್ರಿಸಲು ನೆರವಾದರು. ಕೆಕೆಆರ್ ತಂಡವು 2026ರ ಆವೃತ್ತಿಯ ಐಪಿಎಲ್ನಲ್ಲಿ ಐದು ಪಂದ್ಯಗಳನ್ನು ಆಡಿದ್ದರೂ ಒಂದೂ ಪಂದ್ಯವನ್ನು ಗೆದ್ದಿಲ್ಲ. ಮಳೆಗಾಹುತಿಯಾದ ಪಂದ್ಯದಲ್ಲಿ ಒಂದು ಅಂಕವನ್ನು ಗಳಿಸಿದ್ದ ಕೆಕೆಆರ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸತತ ಮೂರು ಸೋಲಿನೊಂದಿಗೆ ಪ್ರಸಕ್ತ ಐಪಿಎಲ್ ಆರಂಭಿಸಿರುವ ಸಿಎಸ್ಕೆ ಇದೀಗ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಎಂ.ಎಸ್.ಧೋನಿ ಮರಳಿಕೆಗಾಗಿ ಸಿಎಸ್ಕೆ ತಂಡವು ಈಗಲೂ ಕಾಯುತ್ತಿದೆ. ಅವರು ಈ ತನಕ ಒಂದೂ ಪಂದ್ಯವನ್ನು ಆಡಿಲ್ಲ.
Aland | ಎ.17ರಿಂದ ಸಿಯುಕೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಎ.7 ಮತ್ತು 18ರಂದು “ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆ” ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸಿಯುಕೆಯ ತರಗತಿ ಸಂಕೀರ್ಣದ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರದ ಕರಪತ್ರವನ್ನು ಬಿಡುಗಡೆಗೊಳಿಸಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಮಾನವಶಾಸ್ತ್ರ ಮತ್ತು ಭಾಷೆಗಳ ಸಂಶೋಧನೆ ಸಾಂಸ್ಕೃತಿಕ ತಿಳುವಳಿಕೆ, ವಿಮರ್ಶಾತ್ಮಕ ಚಿಂತನೆ ಹಾಗೂ ಮಾನವಿಕ ಜ್ಞಾನ ಉತ್ಪಾದನೆಗೆ ಬಲವಾದ ಬೌದ್ಧಿಕ ನೆಲೆ ಒದಗಿಸುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ವಿಷಯಗಳ ಜೊತೆಗೆ ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆಯಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಮಾನವಶಾಸ್ತ್ರದಲ್ಲಿನ ಸಂಶೋಧನಾ ವಿಧಾನವು ಏಕಮುಖ ಶಿಸ್ತಲ್ಲ, ಬದಲಾಗಿ ವ್ಯಾಖ್ಯಾನಾತ್ಮಕ, ವಿಮರ್ಶಾತ್ಮಕ, ಪ್ರಾಯೋಗಿಕ ಹಾಗೂ ಮಿಶ್ರ ಚೌಕಟ್ಟುಗಳ ಮೇಲೆ ಆಧಾರಿತವಾಗಿದೆ ಎಂದು ವಿವರಿಸಿದರು. ಡೀನ್ ಪ್ರೊ. ವಿಕ್ರಮ್ ವಿಸಾಜಿ ಮಾತನಾಡಿ, ಶೈಕ್ಷಣಿಕ ಬರವಣಿಗೆಯಲ್ಲಿ ವಾದರಚನೆ, ಶಿಸ್ತಿನ ಸಂಪ್ರದಾಯಗಳು, ಉಲ್ಲೇಖ ವಿಧಾನಗಳು ಹಾಗೂ ಪ್ರಕಟಣಾ ಮಾನದಂಡಗಳ ಮೇಲೆ ಪಟ್ಟು ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಈ ಕ್ಷೇತ್ರಗಳಲ್ಲಿ ಸಮರ್ಪಕ ತರಬೇತಿ ಕೊರತೆಯಿಂದ ಡಾಕ್ಟರೇಟ್ ಪ್ರಬಂಧಗಳ ಗುಣಮಟ್ಟ ಹಾಗೂ ಸಂಶೋಧನಾ ಪ್ರಕಟಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಎಂ., ಪ್ರೊ. ಪಾಂಡಾ, ಡಾ. ರೇಣುಕಾ, ಡಾ. ಪ್ರಕಾಶ ಹಾಗೂ ಡಾ. ಆಶಿಶ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಹೈದರಾಬಾದ್ನ ಇಇಐಯು ವಿಶ್ವವಿದ್ಯಾಲಯದಿಂದ ಆಹ್ವಾನಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ತಾರಕೇಶ್ವರ್ ವಿ.ಬಿ. ಮತ್ತು ಪ್ರೊ. ನಿಖಿಲಾ ಎಚ್. ಅವರು ಸಂಶೋಧನಾ ವಿಧಾನ, ಪರಿಕಲ್ಪನೆಗಳು, ಸಂಶೋಧನಾ ವಿನ್ಯಾಸ, ಶೈಕ್ಷಣಿಕ ಬರವಣಿಗೆ, ಪ್ರಕಟಣೆ ನೀತಿಶಾಸ್ತ್ರ, ಕೃತಿಚೌರ್ಯ ಹಾಗೂ ಉಲ್ಲೇಖ ಶೈಲಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
ಇದು ಹಾಲಿ ಚಾಂಪಿಯನ್ಸ್ ಗೆ ತಕ್ಕುದಾದ ಆಟ! ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಅಧಿಕಾರಯುತ ಜಯ ಸಾಧಿಸಿದೆ. ಈ ಮೂಲಕ ಆಢಿದ 5 ಪಂದ್ಯಗಳಲ್ಲಿ 4 ಜಯ ಗಳಿಸಿರುವ ರಜತ ಪಾಟೀದಾರ್ ಬಳಗವು 8 ಅಂಕಗಳನ್ನು ಸಂಪಾದಿಸಿದೆ. ಜೊತಗೆ ಅತ್ಯುನ್ನತ ರನ್ ರೇಟ್(1.503) ಆಧಾರದಲ್ಲಿ ಯಲ್ಲಿ ಮೊದಲ ಸ್ಥಾನಕ್ಕೇರಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15ರ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡವು ಇನ್ನೂ 29 ಎಸತೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. () ಸಂಕ್ಷಿಪ್ತ ಸ್ಕೋರ್ ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 146ಕ್ಕೆ ಆಲೌಟ್, ಮಿಚೆಲ್ ಮಾರ್ಷ್ 40(32), ಆಯುಷ್ ಬದೋನಿ 38(24), ಮುಕುಲ್ ಚೌಧರಿ 38(28), ಭುವನೇಶ್ವರ್ ಕುಮಾರ್ 27ಕ್ಕೆ 3, ರಸಿಕ್ ಸಲಾಂ 34ಕ್ಕೆ 4,
Kalaburagi | ಎನ್ನೆಸ್ಸೆಸ್ ಶಿಬಿರದಿಂದ ವ್ಯಕ್ತಿತ್ವ ಬೆಳವಣಿಗೆ : ಡಾ.ಇಂದಿರಾ ಶೇಟಕಾರ
ಕಲಬುರಗಿ: ಎನ್ನೆಸ್ಸೆಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಡಾ.ಇಂದಿರಾ ಶೇಟಕಾರ ಹೇಳಿದರು. ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಎನ್ಎಸ್ಎಸ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶಿಬಿರದ ಮೂಲಕ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳ ಅರಿವು ಪಡೆದು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು. ಗ್ರಾಮ ಸ್ವಚ್ಛತೆ, ಆರೋಗ್ಯ ಜಾಗೃತಿ, ಶಿಕ್ಷಣ ಪ್ರಚಾರ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಶ್ಲಾಘನೀಯವಾಗಿದೆ. “ಪುಸ್ತಕ ಜ್ಞಾನ ಮಾತ್ರ ಸಾಕಾಗುವುದಿಲ್ಲ, ಸಮಾಜಜ್ಞಾನವೂ ಅಗತ್ಯ” ಎಂದು ಅವರು ತಿಳಿಸಿದರು. ಈ ಶಿಬಿರವು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಸಹಕಾರ ಮನೋಭಾವ, ಸಮಯಪಾಲನೆ ಹಾಗೂ ಶಿಸ್ತುಗಳನ್ನು ಕಲಿಸಿದ್ದು, ಇವುಗಳು ಅವರ ಭವಿಷ್ಯದ ಯಶಸ್ಸಿಗೆ ಬುನಾದಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಶರಥ ಮೇತ್ರೆ ಮಾತನಾಡಿ, ಶಿಬಿರದಿಂದ ಗ್ರಾಮೀಣ ಜೀವನ ಮತ್ತು ಅಲ್ಲಿನ ಸಮಸ್ಯೆಗಳ ಅರಿವು ಮೂಡುತ್ತದೆ. ದೇಶದ ಅಭಿವೃದ್ಧಿಗೆ ಯುವಜನರ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಈ ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಾವಿದ್ಯಾಲಯದ ಎನ್ನೆಸ್ಸೆಸ್ ಅಧಿಕಾರಿ ಪ್ರೊ.ದಯಾನಂದ ಹೊಡಲ್ ಪ್ರಾಸ್ತಾವಿಕ ಮಾತನಾಡಿದರು. ಕು.ಮನೋಜಕುಮಾರ ಸ್ವಾಗತಿಸಿದರು, ಕು. ರಕ್ಷಿತ್ ನಿರೂಪಿಸಿದರೆ, ಕು. ಹರೀಶ್ ವಂದಿಸಿದರು. ವಿದ್ಯಾರ್ಥಿಗಳು ಶಿಬಿರದ ಅಭಿಪ್ರಾಯ ತಿಳಿಸಿದರು.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ನಿರಾಕರಿಸಿರುವ ಹೈಕೋರ್ಟ್, ಅರಣ್ಯದ ಯಾವ ವಲಯದಲ್ಲಿ ಸಫಾರಿಗೆ ಅವಕಾಶ ನೀಡಲಾಗಿದೆ ಎಂಬ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ರಾಜ್ಯದ ಸೂಕ್ಷ್ಮ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಶಾಶ್ವತವಾಗಿ ನಿಷೇಧಿಸಲು ನಿರ್ದೇಶನ ಕೋರಿ ಮೈಸೂರಿನ ವಿ. ರವಿಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಶೇ.50 ರಷ್ಟು ಸಫಾರಿಗೆ ಅವಕಾಶ ನೀಡಿ ಅರಣ್ಯ ಇಲಾಖೆ 2026ರ ಫೆಬ್ರವರಿ 21 ರಂದು ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ಜತೆಗೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮ ವಲಯ, ಕೋರ್ ಹಾಗೂ ಬಫರ್ ವಲಯಗಳೆಂಬ ಮೂರು ವಲಯಗಳಿರುತ್ತವೆ. ಇವುಗಳ ಪೈಕಿ ಯಾವ ವಲಯದಲ್ಲಿ ಸಫಾರಿಗೆ ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಸಫಾರಿ ನಿಷೇಧಿಸಲ್ಪಟ್ಟಿರುವ, ಹುಲಿಗಳು ನೆಲೆಸಿರುವ ಪ್ರಮುಖ ಸ್ಥಳಗಳಲ್ಲಿ ಸಫಾರಿ ನಡೆಸಲಾಗುತ್ತಿದೆ. ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಸಫಾರಿ ಮತ್ತ ಆರಂಭಿಸಲಾಗಿದೆ. ಸಫಾರಿ ಚಟುವಟಿಕೆ ಮುಂದುವರಿಸುವುದರಿಂದ ಮಾನವ-ವನ್ಯಜೀವಿಗಳ ಸಂಘರ್ಷ ವ್ಯಾಪಕವಾಗಲಿದೆ ಎಂದರು. ಈ ಹಂತದಲ್ಲಿ ನ್ಯಾಯಪೀಠ, ನಿರ್ಣಾಯಕ ಹುಲಿ ಆವಾಸಸ್ಥಾನವು ಯಾವಾಗಲೂ ಕೋರ್ ವಲಯಕ್ಕೆ ಸಮಾನಾರ್ಥಕವಲ್ಲ ಮತ್ತು ಸರಿಯಾದ ವರ್ಗೀಕರಣವನ್ನು ಪರಿಶೀಲಿಸಬೇಕು. ಹುಲಿ ಸಂರಕ್ಷಿತ ಪ್ರದೇಶಗಳು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳನ್ನು ಒಳಗೊಂಡಿರುತ್ತವೆ. ಸಫಾರಿಯನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ, ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ ಎಂದು ಹೇಳಿತು. ಮುಂದುವರಿದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬಫರ್ ವಲಯಗಳೊಳಗಿನ ಅರಣ್ಯೇತರ ಅಥವಾ ಅವನತಿ ಹೊಂದಿದ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು, ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್ಗಳನ್ನು ತಪ್ಪಿಸಬೇಕು ಎಂದು ನ್ಯಾಯಪೀಠ ಹೇಳಿತು. ಪ್ರಕರಣವೇನು? ಕಳೆದ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ವ್ಯಾಪಕವಾಗಿ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಿಂದ, ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ತಿಂಗಳಿಗೂ ಅಧಿಕ ಕಾಲ ಸಫಾರಿಗೆ ನಿಷೇಧ ಹೇರಿತ್ತು. ಆದರೆ, ಫೆಬ್ರವರಿಯಲ್ಲಿ ತಾಂತ್ರಿಕ ಸಮಿತಿಯ ಶಿಫಾರಸುಗಳು ಆಧಾರದ ಮೇಲೆ ಶೇ. 50ರಷ್ಟು ಸಫಾರಿಗೆ ಅನುಮತಿಸಿ ಅರಣ್ಯ ಇಲಾಖೆ ಫೆಬ್ರವರಿ 21ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಸಫಾರಿ ಚಟುವಟಿಕೆ ಸ್ಥಾಪಿತ ಸಂರಕ್ಷಣಾ ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಹುಲಿ ಸಫಾರಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಭಾರತದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಸಂಬಂಧಿಸಿದ ಟಿ.ಎನ್. ಗೋದವರ್ಮನ್ ತಿರುಮುಲ್ಪಾಡ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಡೆನ್ಮಾರ್ಕ್ ಬ್ಯಾಡ್ಮಿಂಟನ್ ದಂತಕತೆ ವಿಕ್ಟರ್ ಅಕ್ಸೆಲ್ಸೆನ್ ನಿವೃತ್ತಿ
ಚೆನ್ನೈ, ಎ.15: ಎರಡು ಬಾರಿಯ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ತನ್ನ 32ನೇ ವಯಸ್ಸಿನಲ್ಲಿ ವೃತ್ತಿಪರ ಬ್ಯಾಡ್ಮಿಂಟನ್ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಬುಧವಾರದ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಡೆನ್ಮಾರ್ಕ್ ಆಟಗಾರ ವಿಕ್ಟರ್, ‘‘ಇಂದು ನನಗೆ ಕಷ್ಟದ ದಿನವಾಗಿದೆ. ನನ್ನ ಬೆನ್ನುನೋವಿನಿಂದಾಗಿ ದೀರ್ಘಕಾಲ ಉನ್ನತ ಮಟ್ಟದಲ್ಲಿ ನನಗೆ ಸ್ಪರ್ಧಿಸಲು ಹಾಗೂ ತರಬೇತಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಸ್ವೀಕರಿಸುವುದು ತುಂಬಾ ಕಷ್ಟಕರ. ನನ್ನ ದೇಹವು ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ನೀಡುತ್ತಿಲ್ಲ’’ ಎಂದರು. ವಿಕ್ಟರ್ ಅಕ್ಸೆಲ್ಸೆನ್ 2010ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗುವ ಮೂಲಕ ಬೆಳಕಿಗೆ ಬಂದಿದ್ದರು. ಟೋಕಿಯೊ(2021)ಹಾಗೂ ಪ್ಯಾರಿಸ್(2024)ನಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್ಗಳಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿದ್ದರು. 2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2022ರಲ್ಲಿ ಎರಡು ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಜಯಿಸಿದ್ದರು. 2021 ಹಾಗೂ 2023ರ ನಡುವೆ ಸತತ ಮೂರು ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ವಿಜಯಿಯಾಗಿದ್ದರು. ಮೂರು ಬಾರಿಯ ಯುರೋಪಿಯನ್ ಚಾಂಪಿಯನ್ ಅಕ್ಸೆಲ್ಸೆನ್ 2016ರಲ್ಲಿ ಡೆನ್ಮಾರ್ಕ್ ತಂಡವು ತನ್ನ ಚೊಚ್ಚಲ ಥಾಮಸ್ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು. ಪುರುಷರ ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ ಒಟ್ಟು 183 ವಾರಗಳ ಕಾಲ ನಂ.1 ಆಟಗಾರನಾಗಿದ್ದರು. ಮಲೇಶ್ಯದ ಲೀ ಚೊಂಗ್ ವೀ(398)ಹಾಗೂ ಚೀನಾದ ಲಿನ್ ಡಾನ್(211) ನಂತರ ದೀರ್ಘಕಾಲ ಅಗ್ರ ಸ್ಥಾನದಲ್ಲಿದ್ದ ಮೂರನೇ ಆಟಗಾರನಾಗಿದ್ದಾರೆ. ‘‘ನಾನು ರಾಕೆಟ್ ಹಿಡಿದ ದಿನದಿಂದಲೇ ವಿಶ್ವದ ಅತ್ಯುತ್ತಮ ಆಟಗಾರನಾಗುವುದು ನನ್ನ ಕನಸಾಗಿತ್ತು. ನಾನು ಈ ಕ್ರೀಡೆಗಾಗಿ ಎಲ್ಲವನ್ನೂ ನೀಡಿದ್ದೇನೆ. ಇದು ನನಗೆ ಕೇವಲ ವೃತ್ತಿಜೀವನವಾಗಿರಲಿಲ್ಲ. ಇದು ನನ್ನ ಜೀವನವಾಗಿತ್ತು. ನಾನು ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ’’ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಫ್ರೆಂಚ್ ಓಪನ್ನಿಂದ ಹೊರಗುಳಿದಿದ್ದ ಅಕ್ಸೆಲ್ಸೆನ್ ಹೇಳಿದ್ದಾರೆ.
ವಾಡಿ | ಬೈಕ್ ಗೆ ಲಾರಿ ಢಿಕ್ಕಿ: ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು
ವಾಡಿ: ಪಟ್ಟಣ ಸಮೀಪದ ಇಂಗಳಗಿ–ಶಹಾಬಾದ್ ಮಾರ್ಗ ಮಧ್ಯೆ ಎ.12ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿರುವ ಘಟನೆ ನಡೆದಿದೆ. ಇಂಗಳಗಿ ಗ್ರಾಮದ ತಾಂಡಾ ನಿವಾಸಿ ತುಕಾರಾಮ ದೇವು ಪವಾರ್ (25) ಮೃತ ದುರ್ದೈವಿ. ತಂದೆ-ತಾಯಿ, ಇಬ್ಬರು ಅಕ್ಕ ಹಾಗೂ ತಮ್ಮ ಸೇರಿದಂತೆ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಘಟನೆ ವಿವರ : ತುಕಾರಾಮ ಅವರು ಇಂಗಳಗಿ ಗ್ರಾಮದಿಂದ ಶಹಾಬಾದ್ ಕಡೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆಯಲ್ಲಿ ಮರಳು ತುಂಬಿದ ಟಿಪ್ಪರ್ ಮತ್ತು ಲಾರಿ ನಿಂತಿದ್ದರಿಂದ ಬೈಕ್ ಲಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ತುಕಾರಾಮ ಅವರ ಸಾವಿನಿಂದ ಇಡೀ ತಾಂಡಾದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಎಸಿಸಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವರು ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರು. ಗ್ರಾಮಸ್ಥರು ಕೂಡ ಈ ದುರ್ಘಟನೆಗೆ ಬೇಸರ ವ್ಯಕ್ತಪಡಿಸಿ, ಲಾರಿ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂಗಳಗಿ–ಶಹಾಬಾದ್ ರಸ್ತೆ ಕಿರಿದಾಗಿದೆ. ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕು. ಅಕ್ರಮ ಮರಳು ಸಾಗಣೆ ಟಿಪ್ಪರ್ಗಳಿಗೆ ಕಡಿವಾಣ ಹಾಕಿ, ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. -ಪ್ರೇಮಕುಮಾರ ರಾಠೋಡ, ತಾಂಡಾ ನಾಯಕ
ನೋಯ್ಡಾ ಕಾರ್ಮಿಕರ ಪ್ರತಿಭಟನೆ| ಹೊರಗುತ್ತಿಗೆ ಸಂಸ್ಥೆ, ಕೈಗಾರಿಕಾ ಘಟಕದ ಗುತ್ತಿಗೆದಾರರೊಂದಿಗೆ ಜಿಲ್ಲಾಧಿಕಾರಿ ಸಭೆ
ಲಕ್ನೋ, ಎ. 15: ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗಾರ್ಮೆಂಟ್ಸ್ ಕಾರ್ಮಿಕರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ, ಜಿಲ್ಲಾಧಿಕಾರಿ ಬುಧವಾರ ಹೊರಗುತ್ತಿಗೆ ಸಂಸ್ಥೆಗಳು ಹಾಗೂ ವಿವಿಧ ಕೈಗಾರಿಕಾ ಘಟಕಗಳ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಕೈಗಾರಿಕಾ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸುವ ಬಗ್ಗೆ ಸಭೆ ಗಮನ ಹರಿಸಿತು. ಸಭೆಯಲ್ಲಿ ನೋಯ್ಡಾದ ಜಿಲ್ಲಾಧಿಕಾರಿ ಮೇಧಾ ರೂಪಂ, ಜನರಿಗೆ ಉದ್ಯೋಗ ಒದಗಿಸುವ ಮೂಲಕ ಕೈಗಾರಿಕಾ ಘಟಕಗಳು ಕಾರ್ಯ ನಿರ್ವಹಿಸುವಲ್ಲಿ ಹೊರಗುತ್ತಿಗೆ ಸಂಸ್ಥೆಗಳು ಹಾಗೂ ಗುತ್ತಿಗೆದಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಆದ್ದರಿಂದ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಕೈಗಾರಿಕಾ ಘಟಕಗಳಲ್ಲಿ ಕೆಲಸಗಳು ನಡೆಯುವಂತೆ ನಿರಂತರ ಪ್ರಯತ್ನಿಸುವುದು ಎಲ್ಲಾ ಹೊರಗುತ್ತಿಗೆ ಸಂಸ್ಥೆಗಳು ಹಾಗೂ ಗುತ್ತಿಗೆದಾರರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಯಾವುದೇ ಸಂಸ್ಥೆ, ಅದರ ಸಿಬ್ಬಂದಿ ಅಥವಾ ಕಾರ್ಮಿಕರು ತೊಂದರೆ ಉಂಟು ಮಾಡುವ ನಡವಳಿಕೆಯಲ್ಲಿ ಭಾಗಿಯಾಗಿರುವುದು ಕಂಡು ಬಂದರೆ, ಆ ಸಂಸ್ಥೆಯನ್ನು ಕೂಡ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಅಂತಹ ಪ್ರಕರಣಗಳಲ್ಲಿ, ಹೊರಗುತ್ತಿಗೆ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬಹುದು ಹಾಗೂ ಅದರ ಪರವಾನಿಗೆಯನ್ನು ರದ್ದುಗೊಳಿಸಬಹುದು ಎಂದು ಅವರು ತಿಳಿಸಿದರು. ರಾಜ್ಯ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನವನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿ, ಕೌಶಲ ರಹಿತ ಕಾರ್ಮಿಕರಿಗೆ ತಿಂಗಳಿಗೆ 13,690 ರೂ., ಅರೆ ಕೌಶಲಪೂರ್ಣ ಕಾರ್ಮಿಕರಿಗೆ ತಿಂಗಳಿಗೆ 15,059 ಹಾಗೂ ಕೌಶಲಪೂರ್ಣ ಕಾರ್ಮಿಕರಿಗೆ ತಿಂಗಳಿಗೆ 16,868 ವೇತನ ನಿಗದಿಪಡಿಸಲಾಗಿದೆ ಎಂದರು. ಎಲ್ಲಾ ಗುತ್ತಿಗೆದಾರರು ಈ ವೇತನ ಮಾನದಂಡವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಹಾಗೂ ಪೂರ್ಣ ಪಾವತಿಯನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸೂಚಿಸಿದ್ದಾರೆ. ಯಾವುದೇ ನಿಯಮಗಳ ಉಲ್ಲಂಘನೆ ಅಥವಾ ಕಾರ್ಮಿಕರ ಶೋಷಣೆ ಕಠಿಣ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Kalaburagi | ಸಾವಳಗಿ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ
ಕಲಬುರಗಿ: ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಾರ್ಷಿಕ ವಿಶೇಷ ಶಿಬಿರ 2025-26ರ ಅಂಗವಾಗಿ ಸಾವಳಗಿ (ಬಿ) ಗ್ರಾಮದಲ್ಲಿ “ನನ್ನ ಭಾರತಕ್ಕಾಗಿ ಯುವಕರು” ಹಾಗೂ “ಡಿಜಿಟಲ್ ಸಾಕ್ಷರತೆಗಾಗಿ ಯುವಕರು” ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಗುರುನಾಥ ಮಹಾಸ್ವಾಮಿಗಳು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸ್ವಚ್ಛತೆ, ಸೇವಾ ಮನೋಭಾವ ಹಾಗೂ ಸಾಮಾಜಿಕ-ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಗ್ರಾಮೀಣ ಜೀವನಶೈಲಿ ಮತ್ತು ಸ್ವಚ್ಛತೆಯ ಕುರಿತು ಅರಿವು ಹೊಂದಿರುವುದು ಮುಖ್ಯವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇನ್ನೂ ದುಶ್ಚಟಗಳು ಗ್ರಾಮೀಣ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಗ್ರಾಮಗಳನ್ನು ದುಶ್ಚಟಮುಕ್ತಗೊಳಿಸಲು ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿದ್ದು, ವಿದ್ಯಾರ್ಥಿಗಳ ಇಂತಹ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು. ಎನ್ಎಸ್ಎಸ್ ಗೌರವ ಸಲಹೆಗಾರರಾದ ಡಾ. ಲತಾದೇವಿ ಕರೆಕಲ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದರು. ಯುವಕರು ಸೇವಾ ಮನೋಭಾವ ಬೆಳೆಸಿ, ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜ ಪರಿವರ್ತನೆಗೆ ಕಾರಣರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಡಾ. ಓಂ ಪ್ರಕಾಶ್ ಕೂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಬಸವರಾಜ್ ನರಬೋಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ರಮೇಶ್ ವಂದಿಸಿದರು. ವೇದಿಕೆಯಲ್ಲಿ ಪವನ ಹಾಗೂ ಡಾ. ಆನಂದ್ ಗುತ್ತೇದಾರ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಮಧುರಾ ಶೆಟ್ಟಿ ಅವರ ಪ್ರಾರ್ಥನೆ ಹಾಗೂ ಶಿಬಿರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸ್ಫೂರ್ತಿ ಅತಿಥಿಗಳನ್ನು ಪರಿಚಯಿಸಿದರು.
ಮಧ್ಯಪ್ರಾಚ್ಯ ಸಂಘರ್ಷ| ನೇರ ಮಾತುಕತೆಗೆ ಇಸ್ರೇಲ್, ಲೆಬನಾನ್ ಒಪ್ಪಿಗೆ
ವಾಶಿಂಗ್ಟನ್, ಎ.15: ಅಮೆರಿಕದ ವಾಶಿಂಗ್ಟನ್ನಲ್ಲಿ ಮಂಗಳವಾರ ನಡೆದ ಉತ್ಪಾದಕ ಮಾತುಕತೆಯ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನೇರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಟಾಮಿ ಪಿಗೊಟ್ ಹೇಳಿದ್ದಾರೆ. ಮಂಗಳವಾರ ಅಮೆರಿಕದ ನೇತೃತ್ವದಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆಯಲ್ಲಿ ಎರಡೂ ನಿಯೋಗಗಳು ಪರಸ್ಪರ ಒಪ್ಪಿದ ಸಮಯ ಮತ್ತು ಸ್ಥಳದಲ್ಲಿ ನೇರ ಮಾತುಕತೆ ನಡೆಸಲು ಸಮ್ಮತಿಸಿದ್ದು ಇದು ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಭಾವ್ಯ ಹೆಜ್ಜೆಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ವಿರೋಧಿಸುವಲ್ಲಿ ಎರಡೂ ದೇಶಗಳು ಒಂದೇ ನಿಲುವು ಹೊಂದಿವೆ. ಇರಾನ್ ಬೆಂಬಲಿತ ಹಿಜ್ಬುಲ್ಲಾದ ಆಕ್ರಮಣದಿಂದ ಲೆಬನಾನ್ ಅನ್ನು ಸ್ವತಂತ್ರಗೊಳಿಸಲು ನಾವಿಬ್ಬರೂ ಒಗ್ಗೂಡುತ್ತೇವೆ' ಎಂದು ಇಸ್ರೇಲಿ ರಾಯಭಾರಿ ಯೆಚಿಲ್ ಲೀಟರ್ ಹೇಳಿದ್ದಾರೆ. ಮಾತುಕತೆ ರಚನಾತ್ಮಕವಾಗಿತ್ತು. ಇದೀಗ ಕದನ ವಿರಾಮ, ಸ್ಥಳಾಂತರಗೊಂಡ ನಾಗರಿಕರ ಮರಳುವಿಕೆ ಮತ್ತು ಲೆಬನಾನ್ಗೆ ತನ್ನ ಪ್ರದೇಶದ ಮೇಲೆ ಸಂಪೂರ್ಣ ಸಾರ್ವಭೌಮತ್ವದ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಲೆಬನಾನ್ ರಾಯಭಾರಿ ನಡಾ ಹಮದೇಹ್ ಮೊವಾಡ್ ಸಭೆಯ ಬಳಿಕ ಹೇಳಿದ್ದಾರೆ.
SSLC ಹಿಂದಿ ಪರೀಕ್ಷೆಗೆ ಗ್ರೇಡ್ ಬೇಡ, ಅಂಕ ನೀಡಲು ಹೈಕೋರ್ಟ್ ಆದೇಶ; ಕರ್ನಾಟಕ ಸರ್ಕಾರಕ್ಕೆ ತೀವ್ರ ಹಿನ್ನಡೆ
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 'ಗ್ರೇಡ್' ಬದಲಿಗೆ 'ಅಂಕ'ಗಳನ್ನೇ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಯುಪಿಎಸ್ಸಿ ಹಾಗೂ ಬ್ಯಾಂಕಿಂಗ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡಿಂಗ್ ಪರಿಗಣಿಸದ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ. ಇದರಿಂದ ಗ್ರೇಡಿಂಗ್ ವ್ಯವಸ್ಥೆ ತರಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಗುಜರಾತ್| ತಿಂಗಳುಗಳಿಂದಲೂ ಮನರೇಗಾ ಕೂಲಿ ಬಾಕಿ; ಕಾರ್ಮಿಕರಿಂದ ತೀವ್ರ ಆಕ್ರೋಶ
ಅಹ್ಮದಾಬಾದ್: ಗುಜರಾತಿನಲ್ಲಿ ಮನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕಳೆದ ಐದಾರು ತಿಂಗಳುಗಳಿಂದಲೂ ಕೂಲಿ ಪಾವತಿಯಾಗಿಲ್ಲ. ಇದು ರಾಜ್ಯಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ್ದು,ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಬಾಕಿಯನ್ನು ತಕ್ಷಣವೇ ಪಾವತಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ. ವೇತನ ವಿಳಂಬದ ದೂರುಗಳಿಂದ ಆರಂಭಗೊಂಡಿದ್ದ ಸಮಸ್ಯೆ ಈಗ ರಾಜ್ಯವ್ಯಾಪಿ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ಸೌರಾಷ್ಟ್ರದ ಉನಾ ಮತ್ತು ಗಿರಗಢಾದಂತಹ ಪ್ರದೇಶಗಳು ಅತ್ಯಂತ ಸಂಕಷ್ಟಕ್ಕೆ ತುತ್ತಾಗಿವೆ. ರಾಜ್ಯಾದ್ಯಂತ ಮನರೇಗಾ ಕಾರ್ಮಿಕರು ಮತ್ತು ಉದ್ಯೋಗಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದರೂ ಐದಾರು ತಿಂಗಳುಗಳಿಂದಲೂ ಅವರಿಗೆ ವೇತನಗಳನ್ನು ಪಾವತಿಸಲಾಗಿಲ್ಲ. ಇದು ಕೇವಲ ವಿಳಂಬವಲ್ಲ,ಇದು ಆಡಳಿತಾತ್ಮಕ ಕಾರ್ಯ ವೈಖರಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಗಂಭೀರ ಲೋಪಗಳನ್ನು ತೋರಿಸುತ್ತಿದೆ. ಕಾರ್ಮಿಕರ ಕುಟುಂಬಗಳು ತೀವ್ರ ಹಣಕಾಸು ತೊಂದರೆಗೆ ಸಿಲುಕಿವೆ. ಮೂಲಭೂತ ಅಗತ್ಯಗಳಿಗೂ ಹಣವಿಲ್ಲದೆ ಜನರು ಸಾಲದ ಮೊರೆ ಹೋಗುತ್ತಿದ್ದಾರೆ ಎಂದು ಅಖಿಲ ಗುಜರಾತ್ ಮನರೇಗಾ ಉದ್ಯೋಗಿಗಳ ಯೂನಿಯನ್ ಅಧ್ಯಕ್ಷ ರಾಕೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಹೊಸಪೇಟೆ | 1,368 ಕೆಜಿ ಅಕ್ರಮ ಪಡಿತರ ಅಕ್ಕಿ ವಶ
ವಿಜಯನಗರ (ಹೊಸಪೇಟೆ): ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ. ಸಂಡೂರು ರಸ್ತೆಯ ಎಲ್.ಎಫ್.ಎಸ್ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸಾಗಾಣಿಕೆಗೆ ಸಿದ್ಧತೆ ನಡೆಸುತ್ತಿರುವ ಕುರಿತು ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಆಹಾರ ನಿರೀಕ್ಷಕರು ಎ.14ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ, 4 ಚಕ್ರದ ಸರಕು ಸಾಗಣೆ ವಾಹನದಲ್ಲಿ ಇರಿಸಲಾಗಿದ್ದ 36 ಚೀಲಗಳಲ್ಲಿ ಒಟ್ಟು 1,368 ಕೆ.ಜಿ ಪಡಿತರ ಅಕ್ಕಿಯನ್ನು ಪತ್ತೆಹಚ್ಚಿದರು. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 30,944 ರೂ. ಎಂದು ತಿಳಿದುಬಂದಿದೆ. ಅಕ್ಕಿ ಸಾಗಾಣಿಕೆಗೆ ಬಳಸಲಾಗುತ್ತಿದ್ದ ವಾಹನವನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ. 41/26 ಅಡಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಪಡಿತರ ವಸ್ತುಗಳ ಸಂಗ್ರಹ ಮತ್ತು ಸಾಗಾಣಿಕೆಯನ್ನು ತಡೆಯಲು ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಕೋರಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಸ್ಥಳೀಯ ವಾರ್ಡ್ ಸಮಿತಿಗಳು ಹಾಗೂ ಏರಿಯಾ ಸಭಾಗಳನ್ನು ರಚಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ನ ಸಂಚಾಲಕ ಲಿಂಗರಾಜ ಧಾರವಾಡ ಶೆಟ್ಟರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು. ಅರ್ಜಿದಾರರ ಮನವಿ ಏನು? ಸಂವಿಧಾನದ 73ನೇ ತಿದ್ದುಪಡಿಯಂತೆ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವುದು ಕಡ್ಡಾಯವಾಗಿದೆ. ಅಲ್ಲದೇ ಕರ್ನಾಟಕ ಪೌರನಿಗಮಗಳ ಕಾಯ್ದೆ-1976ಕ್ಕೆ ರಾಜ್ಯ ಸರ್ಕಾರ 2011ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ವಾರ್ಡ್ ಸಮಿತಿಗಳ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ 2022ರಲ್ಲಿ ಪಾಲಿಕೆಯ ಮೇಯರ್, ವಿಶೇಷ ಸದನ ಸಮಿತಿಗೆ ಮನವಿ ಸಲ್ಲಿಸಲಾಗಿದೆ. 2023ರಲ್ಲಿ ಮುಖ್ಯಮಂತ್ರಿ, 2024ರಲ್ಲಿ ನಗರಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರಿಗೂ ಹಲವು ಬಾರಿ ಮನವಿಯನ್ನು ಮಾಡಲಾಗಿದೆ. 2025ರಲ್ಲಿ ಅರ್ಜಿದಾರ ಸಂಸ್ಥೆಯು ಪಾಲಿಕೆಗೆ ಲೀಗಲ್ ನೋಟಿಸ್ ಸಹ ಕೊಟ್ಟಿದೆ. ಹೀಗಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ಹೊಸಪೇಟೆಯಲ್ಲಿ ಆಧುನಿಕ ಡುಪ್ಲೆಕ್ಸ್ ಅಂಗನವಾಡಿ ಉದ್ಘಾಟನೆ
ವಿಜಯನಗರ (ಹೊಸಪೇಟೆ): ನಗರದ 20ನೇ ವಾರ್ಡಿನಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಡುಪ್ಲೆಕ್ಸ್ ಮಾದರಿಯ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕರ ಪುತ್ರ ಹಾಗೂ ಸಮಾಜಸೇವಕರಾದ ಹೆಚ್.ಜಿ. ವಿರೂಪಾಕ್ಷ ಅವರು ಬುಧವಾರ ಉದ್ಘಾಟಿಸಿದರು. ನಗರದಲ್ಲಿ ಇದು ಎರಡನೇ ಡುಪ್ಲೆಕ್ಸ್ ಮಾದರಿಯ ಅಂಗನವಾಡಿಯಾಗಿದ್ದು, ಸ್ಥಳೀಯರ ಗಮನ ಸೆಳೆದಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಸುಸಜ್ಜಿತ ಕೇಂದ್ರಗಳು ಮಕ್ಕಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತವೆ. ಮಕ್ಕಳಿಗೆ ಆಟದ ಮೂಲಕ ಕಲಿಕೆ ನೀಡುವುದರ ಜೊತೆಗೆ ಪ್ರಾಥಮಿಕ ಹಂತದಲ್ಲೇ ಸಮಾನತೆ, ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯ ಎಂದು ಹೇಳಿದರು. ಸಮಾಜದಲ್ಲಿ ಇರುವ ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯನ್ನು ತೊರೆದು ಒಗ್ಗಟ್ಟಿನ ಸಮಾಜ ನಿರ್ಮಾಣದತ್ತ ಸಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಸದುಪಯೋಗಪಡಿಸಿಕೊಂಡು ದೇಶವನ್ನು ಮುಂದಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು. ನಂತರ ಮಾತನಾಡಿದ ನಗರಸಭಾ ಸದಸ್ಯ ಕಿರಣ್ ಕುಮಾರ್, ಹೊಸಪೇಟೆಯಲ್ಲಿ ಇದು ಎರಡನೇ ಡುಪ್ಲೆಕ್ಸ್ ಅಂಗನವಾಡಿಯಾಗಿದ್ದು, ನಗರಸಭೆ ವ್ಯಾಪ್ತಿಯ ಐದು ಅಂಗನವಾಡಿಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡಗಳ ಅಗತ್ಯವಿದ್ದು, ಶಾಸಕರ ಸಹಕಾರದಿಂದ ಈ ಕೇಂದ್ರ ನಿರ್ಮಾಣವಾಗಿದೆ ಎಂದರು. ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ, ಪೌಷ್ಠಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸ್ಥಳೀಯರಿಗೆ ಮಹತ್ವದ ಮೂಲಸೌಕರ್ಯವಾಗಿ ಪರಿಣಮಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ನೆರವಿನಿಂದ ಮಾದರಿಯ ಅಂಗನವಾಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಿದ್ದು, ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ ಎಂದು ನಗರಸಭೆ ಸದಸ್ಯ ಕಿರಣ್ ಕುಮಾರ್ ತಿಳಿಸಿದ್ದಾರೆ.
ಹಾರ್ಮಝ್ ಜಲಸಂಧಿಯನ್ನು ದಾಟಿ ಗುಜರಾತ್ ತಲುಪಿದ ಎಲ್ಪಿಜಿ ಹೊತ್ತ ‘ಜಗ್ ವಿಕ್ರಮ್ʼ ಹಡಗು
ಅಹ್ಮದಾಬಾದ್, ಎ. 15: ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ನಡುವೆ 20,400 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಭಾರತದ ‘ಜಗ್ ವಿಕ್ರಮ್’ ಹಡಗು ಗುಜರಾತ್ನ ಕಾಂಡ್ಲಾ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಮೆರಿಕ ಹಾಗೂ ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆಯಲ್ಲಿ ಈ ಹಡಗು ಹಾರ್ಮುಝ್ ಜಲಸಂಧಿಯನ್ನು ದಾಟಿತ್ತು. ಅದು ಮಂಗಳವಾರ ರಾತ್ರಿ ಕಚ್ಛ್ ನ ಡಿಪಿಎ ಕಾಂಡ್ಲಾ ಬಂದರಿನ ತೈಲ ಜಟ್ಟಿ-1ರಲ್ಲಿ ಲಂಗರು ಹಾಕಿದೆ ಎಂದು ದೀನ್ ದಯಾಳ್ ಬಂದರು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಪರ್ಶಿಯನ್ ಕೊಲ್ಲಿಯಿಂದ ನಿರ್ಗಮಿಸಿದ 9ನೇ ಹಡಗು ಇದಾಗಿದೆ. ಈಗ ಭಾರತದ ಇತರ 15 ಹಡಗುಗಳು ಈ ವಲಯದಲ್ಲಿದ್ದು, ಅನುಮತಿಗಾಗಿ ಕಾಯುತ್ತಿವೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ‘ಜಗ್ ವಿಕ್ರಮ್’ ಹಡಗು ಎಪ್ರಿಲ್ 11ರಂದು ಹಾರ್ಮುಝ್ ಜಲ ಸಂಧಿಯನ್ನು ದಾಟಿತ್ತು. ಇದರೊಂದಿಗೆ ಎರಡು ವಾರಗಳ ಕದನ ವಿರಾಮ ಘೋಷಿಸಿದ ಬಳಿಕ ಅಲ್ಲಿಂದ ಸಾಗಿ ಬಂದ ಮೊದಲ ಹಡಗು ಇದಾಗಿದೆ.
ಮುಟ್ಟಿನ ರಜೆ ನೀತಿಯನ್ನು ಎಲ್ಲ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು/ಧಾರವಾಡ : ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಧಾರವಾಢದಲ್ಲಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು. ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಪೀಠ, ಅಸಂಘಟಿತ ವಲಯ ಸೇರಿ ಎಲ್ಲ ವಲಯಗಳಲ್ಲೂ ಸರ್ಕಾರ ತನ್ನ ನೀತಿ ಜಾರಿಗೊಳಿಸುವುದನ್ನು ಖಾತ್ರಿಪಡಿಸಬೇಕು. ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ಮುಟ್ಟಿನ ರಜೆಯ ನೀತಿ ಮತ್ತು ಇದರ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿ ವಿಸ್ತರಿಸಲಾಗಿದೆ ಎಂದು ಹೇಳಿದೆ. ಕಾನೂನಿನಲ್ಲಿ ಸಮಾನರಾದರೂ ಜೈವಿಕವಾಗಿ ಭಿನ್ನ: ಮಹಿಳೆ ಮತ್ತು ಪುರುಷ ಇಬ್ಬರೂ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕ ಅನುಭವಗಳು ಅವರನ್ನು ಪ್ರತ್ಯೇಕಿಸುತ್ತವೆ. ಆದ್ದರಿಂದ, ಮುಟ್ಟಿನ ರಜೆಯ ಮನವಿಯು ವಿಶೇಷದ ವಿಚಾರವಲ್ಲ. ಬದಲಿಗೆ ಅದು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು; ಆದರೂ, ಅವರು ಜೈವಿಕವಾಗಿ ಭಿನ್ನರು. ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು, ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಮಾನತೆಯ ಗ್ಯಾರಂಟಿಯನ್ನು ತುಳಿಯುವುದಕ್ಕೆ ಬದಲಾಗಿ ಗಣನೀಯ ಅರ್ಥವನ್ನು ನೀಡುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣವೇನು? ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಯ ಪರವಾಗಿ ವಕೀಲೆ ದೀಕ್ಷಾ ಅಮೃತೇಶ್ ವಾದಿಸಿದ್ದರು. ಇನ್ನು ರಾಜ್ಯ ಸರ್ಕಾರದ ಋತುಚಕ್ರ ರಜೆ ನೀತಿ ಪ್ರಶ್ನಿಸಿ ಹಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಏಕಸದಸ್ಯ ನ್ಯಾಯಪೀಠ ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ʼಜಾನಪದ ಶ್ರೀ ಪ್ರಶಸ್ತಿಗೆ ಬಿ.ಲಕ್ಷ್ಮಣ ಆಯ್ಕೆ
ಯಾದಗಿರಿ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಿ. ಲಕ್ಷ್ಮಣ ಅವರು ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದುಂದುಮೆಯ ದುಂದುಭಿ ಎಂಬ ಜನಪದ ಹಾಡಿನ ಮೂಲಕ ಪರಿಚಿತರಾಗಿರುವ ಲಕ್ಷ್ಮಣ ಅವರು, ಜಾನಪದ ಕಲೆ ಉಳಿವಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಜನಪದ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಅವರು ಶ್ರಮಿಸಿದ ಪ್ರಯುಕ್ತ ಸರ್ಕಾರ ಅವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದೇಶೀಯ ಗ್ರಾಹಕರಿಗೆ ಶೇ.100ರಷ್ಟು ಎಲ್ಪಿಜಿ, ಪಿಎನ್ಜಿ ಪೂರೈಕೆ: ಕೇಂದ್ರ ಸರಕಾರ ಭರವಸೆ
ಹೊಸದಿಲ್ಲಿ,ಎ.15: ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆಯೂ ದೇಶದ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್ಜಿ) ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಪೂರೈಕೆ ಮಾಡುವುದಾಗಿ ಕೇಂದ್ರ ಸರಕಾರವು ಭರವಸೆ ನೀಡಿದೆ. ಪಶ್ಚಿಮ ಏಶ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ(ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು, ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. ನಿಮಗೆ ತಿಳಿದಿರುವಂತೆ ಪಶ್ಚಿಮ ಏಶ್ಯಾ ಬಿಕ್ಕಟ್ಟು ಭಾರತದ ಇಂಧನ ಪೂರೈಕೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಆದರೆ ಭಾರತ ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೇಶಿಯ ಪಿಎನ್ಜಿ ಮತ್ತು ಎಲ್ಪಿಜಿ ಗ್ರಾಹಕರಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೂರೈಕೆಯನ್ನು ಖಚಿತಪಡಿಸಲಾಗಿದೆ. ಇದರ ಜೊತೆಗೆ ಸಿಎನ್ಜಿ ಸಾಗಾಣಿಕೆಯನ್ನು ಶೇ.100ರಷ್ಟು ಖಚಿತಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದರು. ಸರಕಾರದ ಪ್ರಯತ್ನಗಳನ್ನು ಬೆಂಬಲಿಸಲು ದೇಶೀಯ ಸಂಸ್ಕರಣಾಗಾರಗಳು ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಿವೆ. ಇದೇ ವೇಳೆ ಬೇಡಿಕೆಯನ್ನು ನಿಭಾಯಿಸಲು ಸರಕಾರವು ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ನಿಗದಿಗೊಳಿಸಿದೆ ಎಂದರು. ಈ ವ್ಯೆಹಾತ್ಮಕ ಕ್ರಮಗಳಿಂದಾಗಿ ವಾಣಿಜ್ಯ ಎಲ್ಪಿಜಿ ಪೂರೈಕೆಯನ್ನು ಶೇ.70ರಷ್ಟು ಹೆಚ್ಚಿಸಲು ಸಾಧ್ಯವಾಗಿದೆ. ಸರಕಾರವು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಔಷಧಿಗಳು, ಉಕ್ಕು, ವಾಹನಗಳು ಮತ್ತು ಕೃಷಿಯಂತಹ ಕೈಗಾರಿಕೆಗಳು ಸೇರಿದಂತೆ ಪ್ರಮುಖ ವಲಯಗಳಿಗೂ ಆದ್ಯತೆಯನ್ನು ನೀಡಿದೆ. ಮಾ.14ರಿಂದ 1,34,000 ಟನ್ಗಳಷ್ಟು ವಾಣಿಜ್ಯ ಎಲ್ಪಿಜಿಯನ್ನು ಮಾರಾಟ ಮಾಡಲಾಗಿದೆ ಎಂದು ಶರ್ಮಾ ಹೇಳಿದರು. ದೇಶಿಯ ಎಲ್ಪಿಜಿ ಪೂರೈಕೆಯು ಸಹಜ ಸ್ಥಿತಿಯಲ್ಲಿದೆ. ಐದು ಕೆಜಿ ಸಿಲಿಂಡರ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಮಾ.23ರಿಂದ ಐದು ಕೆ.ಜಿ.ಯ ಸುಮಾರು 14,60,000 ಸಿಲಿಂಡರ್ಗಳನ್ನು ಮಾರಾಟ ಮಾಡಲಾಗಿದೆ. ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನೂ ಬಳಕೆದಾರರಿಗೆ ಲಭ್ಯವಾಗಿಸಲಾಗಿದೆ ಎಂದು ಅವರು ತಿಳಿಸಿದರು.
Devadurga | ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ
ದೇವದುರ್ಗ: ತಾಲೂಕಿನ ಶಾವಂತಗೇರ ಪಂಚಾಯತಿಯ ಹಿರೇರಾಯಕುಂಪಿ ಗ್ರಾಮದಲ್ಲಿ ಬುಧವಾರ ನಡೆದ ಭೀಕರ ಘಟನೆಯಲ್ಲಿ ಕುರಿಗಾಹಿ ಹೊನ್ನಗುಂಡಪ್ಪ (32) ಮೊಸಳೆ ದಾಳಿಗೆ ಒಳಗಾಗಿ ಕೈ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋಗಿದ್ದ ವೇಳೆ, ಕುರಿ ಮರಿಗಳಿಗೆ ನೀರು ತರಲು ಕೃಷ್ಣಾ ನದಿಗೆ ಇಳಿದಾಗ ನೀರಿನಲ್ಲಿ ಅಡಗಿದ್ದ ಮೊಸಳೆ ಅವರ ಕೈಗೆ ಕಚ್ಚಿಕೊಂಡಿದೆ. ಮೊಸಳೆ ಅವರನ್ನು ನದಿ ದಂಡೆಯಿಂದ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದರೂ, ಬಿಡದ ಹಿನ್ನೆಲೆಯಲ್ಲಿ ಹೊನ್ನಗುಂಡಪ್ಪ ಜೋರಾಗಿ ಎಳೆದಾಗ ಕೈ ದೇಹದಿಂದ ಬೇರ್ಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ಅಲಿಮುದ್ದೀನ್ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಹೊನ್ನಗುಂಡಪ್ಪ ಅವರನ್ನು ತಕ್ಷಣ ರಾಯಚೂರಿನ ಒಪೆಕ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಂದೆ ಬಸ್ಸಪ್ಪ ಬಚ್ಚಲ್ ತಿಳಿಸಿದ್ದಾರೆ.
IPL 2026- ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು
MI Vs PBKS Match Preview- ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗಾಯಾಳು ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಮತ್ತು ಬುಮ್ರಾ ಅವರ ವಿಕೆಟ್ ಬರ ಮುಂಬೈಗೆ ದೊಡ್ಡ ಆತಂಕ ತಂದಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಭರ್ಜರಿ ಫಾರ್ಮ್ನಲ್ಲಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ಯಾಟಿಂಗ್ ಸ್ವರ್ಗವೆನಿಸಿದ ವಾಂಖೆಡೆ ಪಿಚ್ನಲ್ಲಿ ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗಿದ್ದು, ಗೆಲುವಿನ ಹಾದಿಗೆ ಮರಳಲು ಹಾರ್ದಿಕ್ ಪಾಂಡ್ಯ ಪಡೆ ಸಂಘಟಿತ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.
ನೌಕಾ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರದಲ್ಲಿ ತಡೆ: ಇರಾನ್ ಎಚ್ಚರಿಕೆ
ಟೆಹರಾನ್, ಎ.15: ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿದರೆ ಗಲ್ಫ್ ಮತ್ತು ಒಮನ್ ಸಮುದ್ರದೊಂದಿಗೆ ಕೆಂಪು ಸಮುದ್ರದ ಮೂಲಕ ವ್ಯಾಪಾರವನ್ನು ನಿರ್ಬಂಧಿಸುವುದಾಗಿ ಇರಾನ್ನ ಮಿಲಿಟರಿ ಬುಧವಾರ ಎಚ್ಚರಿಕೆ ನೀಡಿದೆ. ಅಮೆರಿಕ ತನ್ನ ದಿಗ್ಬಂಧನವನ್ನು ಮುಂದುವರಿಸಿದರೆ ಮತ್ತು ಇರಾನ್ನ ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ಗ ಳಿಗೆ ಅಭದ್ರತೆ ಸೃಷ್ಟಿಸಿದರೆ ಅದನ್ನು ಕದನ ವಿರಾಮ ಉಲ್ಲಂಘನೆಗೆ ಮುನ್ನುಡಿ ಎಂದು ಪರಿಗಣಿಸಲಾಗುತ್ತದೆ. ಇರಾನ್ನ ಪ್ರಬಲ ಸಶಸ್ತ್ರ ಪಡೆಗಳು ಅರೆಬಿಯನ್ ಕೊಲ್ಲಿ, ಒಮನ್ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ಯಾವುದೇ ರಫ್ತು ಮತ್ತು ಆಮದು ಮುಂದುವರಿಸಲು ಅವಕಾಶ ನೀಡುವುದಿಲ್ಲ' ಎಂದು ಇರಾನ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಮುಸ್ಲಿಮರು ಒಬ್ಬರನ್ನು ನೋಡಿ ಮತ ನೀಡುತ್ತಾರೆ ಅಂದುಕೊಂಡಿದ್ದರೆ ಅಂತವರು ಆ ಭ್ರಮೆಯಿಂದ ಹೊರ ಬರಲಿ: ಸಲೀಂ ಅಹ್ಮದ್
ಕೊಪ್ಪಳ: ಮುಸ್ಲಿಂ ಸಮುದಾಯದವರು ಯಾರನ್ನಾದರೂ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಭಾವಿಸುವವರು ಭ್ರಮೆಯಲ್ಲಿ ಇದ್ದಾರೆ, ಅಂತಹವರು ತಮ್ಮ ಭ್ರಮೆಯಿಂದ ಹೊರಬರಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ಕೊಪ್ಪಳದಲ್ಲಿ ಖಾಸಗಿ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ತಾವು ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಮನವಿ ಮಾಡಿದ್ದೇವು ಎಂದು ಹೇಳಿದರು. ಆದರೆ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ, ಪಕ್ಷದ ನಾಯಕರ ನಿಧನವಾದ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದೇ ರೀತಿಯಲ್ಲಿ ಈ ಕ್ಷೇತ್ರದಲ್ಲೂ ಟಿಕೆಟ್ ಹಂಚಿಕೆ ನಡೆದಿದೆ ಎಂದು ತಿಳಿಸಿದರು. ಎಲ್ಲರೂ ಒಪ್ಪಿಗೆಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವರ್ಷಗಳ ಮಟ್ಟಿಗೆ ಮಾತ್ರ ಈ ನಿರ್ಧಾರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಮುಕ್ತಗೊಳಿಸುವ ಭರವಸೆ ಪಕ್ಷದ ನಾಯಕರು ನೀಡಿದ್ದಾರೆ ಎಂದು ಹೇಳಿದರು. ಅಬ್ದುಲ್ ಜಬ್ಬಾರ್ ಅವರ ಅಮಾನತ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು. ಸಚಿವ ಸಂಪುಟ ಪುನರ್ರಚನೆ ಕುರಿತು ಮಾತನಾಡಿದ ಅವರು, ಸಂಪುಟ ರಚನೆಯಾಗಿ ಮೂರು ವರ್ಷವಾದರೂ ಇನ್ನೂ ಪುನರ್ರಚನೆ ಆಗಿಲ್ಲ. ಆದರೆ ಒಳ್ಳೆಯದು ಎಂದು ಹೇಳಿದರು.

33 C