SENSEX
NIFTY
GOLD
USD/INR

Weather

20    C
... ...View News by News Source

ವಿಜಯನಗರ | ಹಂಪಿ ಉತ್ಸವದ ಅಂಗವಾಗಿ ಬೈಕ್ ರ‍್ಯಾಲಿ: ಜಿಲ್ಲಾಧಿಕಾರಿಯಿಂದ ಚಾಲನೆ

ವಿಜಯನಗರ (ಹೊಸಪೇಟೆ), ಫೆ.10: ಐತಿಹಾಸಿಕ ಹಂಪಿ ಉತ್ಸವದ ಮಹತ್ವವನ್ನು ಜನತೆಗೆ ತಲುಪಿಸುವ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಯೋಜಿಸಲಾಗಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸ್ವತಃ ಬೈಕ್‌ನಲ್ಲಿ ಪಾಲ್ಗೊಂಡು ಅಧಿಕೃತ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ರ‍್ಯಾಲಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿ ಹಾಗೂ ಕಡ್ಡಿರಾಂಪುರ ಮಾರ್ಗವಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದವರೆಗೆ ಯಶಸ್ವಿಯಾಗಿ ತಲುಪಿತು. ರ‍್ಯಾಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮುಹಮ್ಮದ್‌ ಅಲಿ ಅಕ್ರಮ್ ಷಾ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 10 Feb 2026 11:30 pm

ದುಬೈನಲ್ಲಿ ‘ತುಂಬೆ ಮೆಡಿಸಿಟಿ’ ಉದ್ಘಾಟನೆ| 3 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ, 1 ಸಾವಿರ ಉದ್ಯೋಗ ಸೃಷ್ಟಿ

ದುಬೈ: ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ತುಂಬೆ ಮೆಡಿಸಿಟಿ ದುಬೈ’ ಯೋಜನೆಯನ್ನು ತುಂಬೆ ಗ್ರೂಪ್, ಅಲ್ ಕುಸೈಸ್ ಪ್ರದೇಶದಲ್ಲಿ ಆರಂಭಿಸಿದೆ. ಸಮಗ್ರ ಶೈಕ್ಷಣಿಕ ಮತ್ತು ಆರೋಗ್ಯ ನಗರವಾಗಿ ರೂಪುಗೊಂಡಿರುವ ಈ ತಾಣವು ಪ್ರಾರಂಭಿಕ ಹಂತದಲ್ಲೇ ಸುಮಾರು 3,000 ವಿದ್ಯಾರ್ಥಿಗಳಿಗೆ ಅವಕಾಶ, 1,000 ಉದ್ಯೋಗ ಸೃಷ್ಟಿ ಹಾಗೂ 6,000 ಜನರ ವಾಸ್ತವ್ಯ ಸಾಮರ್ಥ್ಯ ಹೊಂದಿರುವುದು ವಿಶೇಷ. ನಗರದೊಳಗಿನ ನಗರ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ಮೆಡಿಸಿಟಿಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ಯಾಂಪಸ್, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ, ಸುಧಾರಿತ ಸಂಶೋಧನಾ ಕೇಂದ್ರಗಳು, ಸಿಮ್ಯುಲೇಶನ್ ಹಾಗೂ ಸ್ಕಿಲ್ ಸೆಂಟರ್ ಗಳು, ಪ್ರಯೋಗಾಲಯಗಳು, ಔಷಧಾಲಯಗಳು, ಕ್ಷೇಮ ಕೇಂದ್ರಗಳು ಮತ್ತು ಆತಿಥ್ಯ ಸೌಲಭ್ಯಗಳು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ನೈಜ ಕ್ಲಿನಿಕಲ್ ವಾತಾವರಣದಲ್ಲಿ ತರಬೇತಿ ಸಿಗುವಂತೆ ಹಾಗೂ ರೋಗಿಗಳಿಗೆ ಸಂಶೋಧನೆ ಆಧಾರಿತ ಚಿಕಿತ್ಸೆ ದೊರಕುವಂತೆ ಮೂಲಸೌಕರ್ಯ ರೂಪಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, “ಇದು ಕೇವಲ ವಿಸ್ತರಣೆ ಅಲ್ಲ; ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಒಂದಾಗಿ ಬೆಳೆಯಬೇಕೆಂಬ ನಂಬಿಕೆಯ ಪ್ರತಿಫಲ. ದುಬೈನ ದೂರದೃಷ್ಟಿಯೊಂದಿಗೆ ನಿರ್ಮಿತವಾದ ಈ ಸಮಗ್ರ ಶೈಕ್ಷಣಿಕ ವೈದ್ಯಕೀಯ ನಗರ ಭವಿಷ್ಯದ ವೃತ್ತಿಪರರನ್ನು ರೂಪಿಸುವ ಜೊತೆಗೆ ರೋಗಿಗಳ ಆರೈಕೆಯ ಗುಣಮಟ್ಟ ಹೆಚ್ಚಿಸಲಿದೆ” ಎಂದರು. ಶೈಕ್ಷಣಿಕ ವಿಭಾಗದಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ದುಬೈ ಕ್ಯಾಂಪಸ್ ಕಾರ್ಯನಿರ್ವಹಿಸಲಿದ್ದು, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಧ್ಯಯನ, ಸುಧಾರಿತ ಸಿಮ್ಯುಲೇಶನ್ ಲ್ಯಾಬ್‌ಗಳು, ಶಸ್ತ್ರಚಿಕಿತ್ಸಾ ಕೌಶಲ್ಯ ಕೇಂದ್ರಗಳು ಹಾಗೂ ಅಂತರರಾಷ್ಟ್ರೀಯ ಪ್ರಮಾಣಿತ ಪಠ್ಯಕ್ರಮಗಳನ್ನು ಒಳಗೊಂಡಿದೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ವಾತಾವರಣ ಕಲ್ಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ” ಎಂದರು. ಆರೋಗ್ಯ ರಕ್ಷಣಾ ವಿಭಾಗವು ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ ಸುತ್ತ ಕೇಂದ್ರೀಕೃತವಾಗಿದ್ದು, ಪ್ರಥಮ ಹಂತದಲ್ಲಿ ಡಯಾಲಿಸಿಸ್, ಹೃದ್ರೋಗ, ಮೂಳೆಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳು ಆರಂಭಗೊಳ್ಳಲಿವೆ. ಮುಂದಿನ ಹಂತಗಳಲ್ಲಿ ಬಹು–ವಿಶೇಷ ಶೈಕ್ಷಣಿಕ ಆಸ್ಪತ್ರೆಯಾಗಿ ವಿಸ್ತರಣೆಗೊಳ್ಳುವ ಯೋಜನೆ ಹೊಂದಿದೆ. ದುಬೈ–ಶಾರ್ಜಾ ಗಡಿಭಾಗದ ಅಲ್ ಕುಸೈಸ್ ಪ್ರದೇಶದಲ್ಲಿರುವ ಈ ಮೆಡಿಸಿಟಿ, ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಮತ್ತು ಅಂತರರಾಷ್ಟ್ರೀಯ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 10 Feb 2026 11:25 pm

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು : ಡಾ.ಶರಣಪ್ರಕಾಶ್ ಪಾಟೀಲ್

‘ದುಬೈ ಅಂತರ್‌ರಾಷ್ಟ್ರೀಯ ಪ್ರದರ್ಶನದಲ್ಲಿ ಕರ್ನಾಟಕದ ಆರೋಗ್ಯ ರಕ್ಷಣಾ ಪ್ರಗತಿ ಪ್ರಸ್ತಾವ’

ವಾರ್ತಾ ಭಾರತಿ 10 Feb 2026 11:24 pm

ಬೆಂ.ದಕ್ಷಿಣ ಕ್ಷೇತ್ರದ ವಾರ್ಡ್‌ಗಳ ಪ್ರದೇಶಗಳನ್ನು ಬೇರೆ ವಾರ್ಡ್‌ಗೆ ಸೇರ್ಪಡೆ ಪ್ರಶ್ನಿಸಿ ರಿಟ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲ ವಾರ್ಡ್‌ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳ ಪ್ರದೇಶಗಳಿಗೆ ಸೇರಿಸಿರುವುದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತರು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರು, ವಾರ್ಡ್ ಮರು ವಿಂಗಡಣೆ ಸಮಿತಿ ಮುಖ್ಯಸ್ಥರು, ರಾಜ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳಿಗೆ ಸೇರಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರದ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಳ್ಳೇನಹಳ್ಳಿ ವಾರ್ಡ್‌ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳು ಹಾಗೂ ಕೊತ್ತನೂರು ವಾರ್ಡ್‌ನ ಕ್ಲಾಸಿಕ್ ಆರ್ಕಿರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್‌ಗೆ ಸೇರಿಸಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಒಂದು ವಾರ್ಡ್ ಅನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯ್ದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆ ರದ್ದುಪಡಿಸಬೇಕು. ಬೊಮ್ಮನಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಸೇರಿಸಿರುವ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳಿಗೆ ಮರು ಸೇರ್ಪಡೆಗೊಳಿಸಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಾರ್ತಾ ಭಾರತಿ 10 Feb 2026 11:19 pm

ವಿಜಯನಗರ | ಫೆ.12ರಂದು ಕೊಟ್ಟೂರು ಜಾತ್ರೆ: ಮದ್ಯ ಮಾರಾಟ ನಿಷೇಧ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಕೊಟ್ಟೂರು ತಾಲ್ಲೂಕಿನಲ್ಲಿ ಫೆ.12ರಂದು ನಡೆಯಲಿರುವ ಕೊಟ್ಟೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಫೆ.11ರ ಸಂಜೆ 6 ಗಂಟೆಯಿಂದ ಫೆ.13ರ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್‌ಗಳು ಹಾಗೂ ಇತರೆ ಮದ್ಯ ಮಾರಾಟ ಕೇಂದ್ರಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ವಾರ್ತಾ ಭಾರತಿ 10 Feb 2026 11:17 pm

ಪೋಷಕರ ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದತಿಗೆ ಆಧಾರವಾಗದು : ಹೈಕೋರ್ಟ್

ಬೆಂಗಳೂರು : ಬಾಲ್ಯ ವಿವಾಹ ನೆರವೇರಿಸಿದ ಆರೋಪದಲ್ಲಿ ಪೋಷಕರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಅಶೋಕ (56), ಅಶ್ವತ್ಥ ನಾರಾಯಣ (55), ರಂಗಮ್ಮ (49) ರಾಮಾಂಜಿನಮ್ಮ (48) ಮತ್ತು ಶ್ರೀರಾಮಪ್ಪ (56) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ವಿವಾಹವಾಗಿರುವ ದಂಪತಿಯ ಪೋಷಕರಾಗಿದ್ದಾರೆ. ಮದುವೆ ನಡೆದಾಗ ಯುವತಿಗೆ 16 ವರ್ಷ, 9 ತಿಂಗಳಾಗಿತ್ತು. ಗಂಡು-ಹೆಣ್ಣು ಪರಸ್ಪರ ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರಾಗಿದ್ದು, ತಿಳಿವಳಿಕೆಯಿಲ್ಲದೆ ಅವರು ಬಾಲ್ಯ ವಿವಾಹ ನೆರವೇರಿಸಿದ್ದಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಇದನ್ನು ಒಪ್ಪದ ನ್ಯಾಯಪೀಠ, ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದುಪಡಿಸಲು ಆಧಾರವಾಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಪ್ರಕರಣವನ್ನು ಎದುರಿಸಲೇಬೇಕು. ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು. ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕಿದೆ. ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಬಾರದು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ? ಅವರು ಏಕೆ ಬಾಲ್ಯ ವಿವಾಹ ಮಾಡಬೇಕು? ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ ಎಂದು ನ್ಯಾಯಪೀಠ ಪ್ರಶ್ನಿಸಿತು. ಮುಂದುವರಿದು, ಮದುವೆಯಾಗಿರುವ ಯುವತಿಗೆ ಮಗುವಿದೆ. ಈ ಅಂಶ ಪರಿಗಣಿಸಿ ಪೋಕ್ಸೋ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ ಎಂದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು. ಪ್ರಕರಣದ ಹಿನ್ನೆಲೆ: ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು, ಅರ್ಜಿದಾರರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಸಂಬಂಧ 2023ರಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ಎಫ್‌ಟಿಎಸ್‌ಸಿ-1) ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ, ತಮ್ಮ ವಿರುದ್ದದ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಇಡೀ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ವಾರ್ತಾ ಭಾರತಿ 10 Feb 2026 11:14 pm

BESCOMಗೆ ಕೇಂದ್ರದಿಂದ 'ರೆಡ್ ಕಾರ್ಡ್': ವಿದ್ಯುತ್ ವಿತರಣೆ ರ‍್ಯಾಕಿಂಗ್‌ ನಲ್ಲಿ '-C' ಶ್ರೇಣಿ

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಬೆಳಕು ನೀಡುವ 'ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ' (BESCOM) ಕೇಂದ್ರ ಸರ್ಕಾರದ ಮೌಲ್ಯಮಾಪನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇಂದ್ರ ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿರುವ 14ನೇ ವಾರ್ಷಿಕ ಸಮಗ್ರ ರೇಟಿಂಗ್ ಮತ್ತು ರ‍್ಯಾಕಿಂಗ್‌ ವರದಿಯಲ್ಲಿ ಬೆಸ್ಕಾಂ 'C-' (ಸಿ ಮೈನಸ್) ಶ್ರೇಣಿಯನ್ನು ಪಡೆಯುವ ಮೂಲಕ 'ರೆಡ್ ಕಾರ್ಡ್'ಗೆ

ಒನ್ ಇ೦ಡಿಯ 10 Feb 2026 11:09 pm

ಫೆ.11ರಿಂದ ಮೂರು ದಿನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ವಿಜಯನಗರ (ಹೊಸಪೇಟೆ) : ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಫೆ.11ರಿಂದ ವಿಜಯನಗರ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಫೆಬ್ರವರಿ 11ರಂದು ಬೆಳಗ್ಗೆ 10.30ಕ್ಕೆ ಹೊಸಪೇಟೆಗೆ ಆಗಮಿಸುವ ಅವರು, ಬಳಿಕ ಹಂಪಿಯಲ್ಲಿ ನಡೆಯಲಿರುವ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ನಂತರ ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಹಂಪಿ ಉತ್ಸವ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯುವ ಪ್ರಸಕ್ತ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪ ತುಂಗಾ ತಟದಲ್ಲಿ ಹಮ್ಮಿಕೊಳ್ಳಲಾಗಿರುವ ತುಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು. ಫೆಬ್ರವರಿ 12ರಂದು ಬೆಳಗ್ಗೆ 10.30ಕ್ಕೆ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಆಯೋಜಿಸಲಾದ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಬೆಳಗ್ಗೆ 11ಕ್ಕೆ ಬಳ್ಳಾರಿಗೆ ತೆರಳುವರು. ಮಧ್ಯಾಹ್ನ 3ಕ್ಕೆ ಮತ್ತೆ ಹೊಸಪೇಟೆಗೆ ಆಗಮಿಸಿ, ವಡಕರಾಯನ ದೇವಸ್ಥಾನ ರಥಬೀದಿಯಲ್ಲಿ ನಡೆಯುವ ವಿಜಯನಗರ ವಸಂತ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡುವರು. ಫೆಬ್ರವರಿ 13ರಂದು ಬೆಳಗ್ಗೆ 10ಕ್ಕೆ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗದಲ್ಲಿ ವಿವಿಧ ತಳಿಗಳ ಎತ್ತುಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು. 11.30ಕ್ಕೆ ವಸ್ತುಪ್ರದರ್ಶನ ಹಾಗೂ 12.30ಕ್ಕೆ ಬೋಟಿಂಗ್ ಪ್ರದರ್ಶನ ವೀಕ್ಷಿಸಲಿದ್ದಾರೆ. ಸಂಜೆ 4ಕ್ಕೆ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ಸ್ಥಳೀಯ ಹಾಗೂ ಜಿಲ್ಲಾ ಕಲಾವಿದರಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸಂಜೆ 7ಕ್ಕೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು.

ವಾರ್ತಾ ಭಾರತಿ 10 Feb 2026 11:04 pm

ಫೆ.12ರಿಂದ ಮಂಗಳೂರು-ಮೂಡುಬಿದಿರೆ ಹೆದ್ದಾರಿ ದುರಸ್ತಿ: ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬದಲಿ ರಸ್ತೆ

ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರ ಸೂಚನೆ

ವಾರ್ತಾ ಭಾರತಿ 10 Feb 2026 11:03 pm

ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ ರಾಮಯ್ಯ ಇನ್ನಿಲ್ಲ

ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ. ಅವರ ಅಗಲುವಿಕೆಗೆ ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂು ಸೇವೆ ಸಲ್ಲಿಸಿದ್ದರು. ಅವರಿಗೆ ಇಬ್ಬರು ಪುತ್ರರು , ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ. ಪತ್ರಿಕೋದ್ಯಮದ ತಪಸ್ವಿ ಪಿ. ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು 'ಪತ್ರಿಕೋದ್ಯಮದ ತಪಸ್ವಿ' ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ ನಾನು ಹಿಂದೂ ರಾಮಯ್ಯ ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ. ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು .ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಎಚ್ ಡಿ ಕುಮಾರಸ್ವಾಮಿ ಸಂತಾಪ ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು. ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ, ಹಿರಿಮೆಯನ್ನು ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ.ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 10 Feb 2026 11:01 pm

‘ಕಾನೂನುಬಾಹಿರ’ ಎಐ ನಿರ್ಮಿತ ವಿಷಯ 3 ಗಂಟೆಯಲ್ಲಿ ತೆಗೆಯಬೇಕು: ಕೇಂದ್ರದಿಂದ ನೂತನ ಕಠಿಣ ನಿಯಮಾವಳಿಗಳು

ಹೊಸದಿಲ್ಲಿ, ಫೆ. 10: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ವಿಷಯಗಳಿಗೆ ಸಂಬಂಧಿಸಿದ ಆದೇಶಗಳ ಪಾಲನೆಯನ್ನು ಮತ್ತಷ್ಟು ಕಠಿಣಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ನಿಯಮಾವಳಿಗಳನ್ನು ಹೊರಡಿಸಿದೆ. ಇನ್ನು ಮುಂದೆ, ಡೀಪ್‌ಫೇಕ್‌ಗಳು ಸೇರಿದಂತೆ ನ್ಯಾಯಾಲಯಗಳು ಅಥವಾ ಸಕ್ಷಮ ಪ್ರಾಧಿಕಾರಗಳು ಕಾನೂನುಬಾಹಿರ ಎಂದು ಗುರುತಿಸುವ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಆನ್‌ಲೈನ್ ವೇದಿಕೆಗಳು ಮೂರು ಗಂಟೆಗಳೊಳಗೆ ತೆಗೆದುಹಾಕಬೇಕಾಗಿದೆ. ಈ ಸಂಬಂಧ 2021ರ ಮಾಹಿತಿ ತಂತ್ರಜ್ಞಾನ (ಇಂಟರ್‌ಮೀಡಿಯರಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿದ್ದುಪಡಿಗಳನ್ನು ತಂದಿದೆ. ಪರಿಷ್ಕೃತ ನಿಯಮಾವಳಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುವ ವಿಷಯಕ್ಕೆ ಮೊದಲ ಬಾರಿಗೆ ಔಪಚಾರಿಕ ವ್ಯಾಖ್ಯಾನ ನೀಡಿವೆ. ನೂತನ ನಿಯಮಾವಳಿಗಳು ಫೆಬ್ರವರಿ 20ರಂದು ಜಾರಿಗೆ ಬರಲಿವೆ. ನೂತನ ನಿಯಮಾವಳಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯನ್ನು ಬಳಸಿ ನೈಜವೆಂಬಂತೆ ಕಂಡುಬರುವಂತೆ ಸೃಷ್ಟಿಸಲಾಗುವ ದೃಶ್ಯ, ಶ್ರಾವ್ಯ ಅಥವಾ ದೃಶ್ಯ–ಶ್ರಾವ್ಯ ವಿಷಯಗಳನ್ನು ‘ಸಿಂಥೆಟಿಕ್’ (ಕೃತಕ ಬುದ್ಧಿಮತ್ತೆ ಆಧಾರಿತ, ಮನುಷ್ಯ ನಿರ್ಮಿತವಲ್ಲ) ಎಂದು ವರ್ಗೀಕರಿಸಲಾಗುವುದು. ನೂತನ ನಿಯಮಾವಳಿಗಳು ವಿಷಯಗಳನ್ನು ಆನ್‌ಲೈನ್ ವೇದಿಕೆಗಳಿಂದ ತೆಗೆಯುವ ಅವಧಿಯನ್ನು 36 ಗಂಟೆಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸಿವೆ. ಕೃತಕ ಬುದ್ಧಿಮತ್ತೆ ನಿರ್ಮಿತ ವಿಷಯಗಳ ನಿರ್ಮಾಣ ಅಥವಾ ಹಂಚಿಕೆಯಲ್ಲಿ ತೊಡಗಿರುವ ಮಾಧ್ಯಮಗಳು ಅದನ್ನು ಲೇಬಲ್ ಮೂಲಕ ಸ್ಪಷ್ಟವಾಗಿ ತಿಳಿಸಬೇಕು ಎಂದು ಅವು ಹೇಳುತ್ತವೆ.

ವಾರ್ತಾ ಭಾರತಿ 10 Feb 2026 10:59 pm

ಯಾದಗಿರಿ | ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಶಾಂತವೀರ ಮಹಾಸ್ವಾಮಿಜಿ

ಯಾದಗಿರಿ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಆಸಕ್ತಿ ಹಾಗೂ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಲ್ಲಿ ಸ್ಪರ್ಧಾಮನೋಭಾವನೆ ಬೆಳೆಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ ಹೇಳಿದರು. ನಗರದ ಗ್ರೀನ್ ಸಿಟಿಯಲ್ಲಿರುವ ಸೆಂಚುರಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಶಿಕ್ಷಣ ಸಂಸ್ಥೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ಹುಡೇದ್ ದಂಪತಿಗಳು ಅರ್ಪಣಾಭಾವದಿಂದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸಕಾರಾತ್ಮಕ ಚಿಂತನೆ ಬೆಳೆಸಿ, ಉನ್ನತ ಗುರಿ ಸಾಧಿಸಲು ಸಕಾಲದಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಶಾಲೆಯಲ್ಲಿ ಪರಿಸರ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಮಕ್ಕಳ ಅಭ್ಯಾಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು. ಶಾಲೆಯ ಪ್ರಾಂಶುಪಾಲೆ ಸುಜಾತಾ ಎಸ್. ಹುಡೇದ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿಸುತ್ತದೆ. ಪೋಷಕರು ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆ ಅವಕಾಶ ನೀಡಬಾರದು, ಏಕೆಂದರೆ ಅದು ಅವರ ಏಕಾಗ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಶಿವರಾಜ ಹುಡೇದ್, ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ಚನ್ನಬಸಪ್ಪ, ಸೋಮಶೇಖರ ಮಣ್ಣೂರ, ಶಿಕ್ಷಕ ಮಡಿವಾಳಪ್ಪ, ಬಸ್ಸುಗೌಡ ಕಂಚನಕಾವಿ, ರಮೇಶ ಜಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಅಮಾತೆಪ್ಪ ಸ್ವಾಗತಿಸಿ, ಶಿಕ್ಷಕಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಾರ್ತಾ ಭಾರತಿ 10 Feb 2026 10:59 pm

CIC ನೇಮಕಾತಿ| ಪ್ರತಿಪಕ್ಷ ನಾಯಕರ ಭಿನ್ನಮತ ಬಹಿರಂಗಪಡಿಸುವಂತೆ ಸೂಚಿಸುವುದಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಫೆ.10: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರುಗಳ ನೇಮಕಾತಿಯ ವಿಷಯದಲ್ಲಿ, ಪ್ರತಿಪಕ್ಷ ನಾಯಕರ ಭಿನ್ನಮತವನ್ನು ಬಹಿರಂಗಪಡಿಸುವಂತೆ ತಾನು ಸರಕಾರಕ್ಕೆ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿತು. ಸಿಐಸಿಯಲ್ಲಿರುವ ಖಾಲಿ ಹುದ್ದೆಗಳನ್ನು ತಾನು ತುಂಬಿಸಿರುವುದಾಗಿ ಕೇಂದ್ರ ಸರಕಾರ ತಿಳಿಸಿದ ಬಳಿಕ, ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿತು

ವಾರ್ತಾ ಭಾರತಿ 10 Feb 2026 10:54 pm

ವಿಧಾನ ಪರಿಷತ್ ಮಾಜಿ ಸದಸ್ಯ‌, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ

ಬೆಂಗಳೂರು, ಫೆ.10: ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ(93) ಅವರು ನಿಧನರಾಗಿದ್ದಾರೆ‌. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅಂಗಾಂಗ ವೈಫಲ್ಯದಿಂದಾಗಿ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಾಜಿ ತಿಳಿಸಿದ್ದಾರೆ . 1933ರ ಸೆ.12 ರಂದು ಜನಿಸಿದ ರಾಮಯ್ಯ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ . 'ದಿ ಹಿಂದೂ' ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು, ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು . ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ಇಡಲಾಗುವುದು ಎಂದು ಡಾ.ಬಾಲಾಜಿ ತಿಳಿಸಿದ್ದಾರೆ .

ವಾರ್ತಾ ಭಾರತಿ 10 Feb 2026 10:54 pm

ಯಾದಗಿರಿ | ಮಸ್ಕನಳ್ಳಿಯಲ್ಲಿ ಕುಡಿಯುವ ನೀರಿನ ಸಂಕಷ್ಟ: ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಉಮೇಶ್ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ

ಯಾದಗಿರಿ: ತಾಲ್ಲೂಕಿನ ಹಳಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಸ್ಕನಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅವರು ತಮಟೆ ಬಾರಿಸಿ ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿ ಜನರ ಸಮಸ್ಯೆಗಳತ್ತ ಗಮನ ಸೆಳೆದರು. ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಎರಡು ನೀರಿನ ಮೇಲ್ತೊಟ್ಟಿಗಳನ್ನು ತಕ್ಷಣ ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಂಟ್) ಅನ್ನು ಕೂಡಲೇ ಜನಬಳಕೆಗೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಶುದ್ಧ ನೀರು ಸಿಗದೆ ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಪಂ, ತಾಪಂ, ಜಿಪಂ ಹಾಗೂ ಜಿಲ್ಲಾಡಳಿತ ಮಟ್ಟದಲ್ಲಿ ಸಭೆಗಳು ನಡೆದರೂ ಈ ಸಮಸ್ಯೆ ಚರ್ಚೆಯಾಗದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ತೊಟ್ಟಿ ಮತ್ತು ಆರೋ ಪ್ಲಾಂಟ್ ನಿರ್ಮಾಣಕ್ಕೆ ಯಾರು ಮನವಿ ಸಲ್ಲಿಸಿದ್ದರು, ಎಷ್ಟು ಹಣ ಮಂಜೂರಾಗಿದೆ, ಎಷ್ಟು ವೆಚ್ಚವಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಗ್ರಾಮದಲ್ಲಿ ಕುಡಿಯುವ ನೀರು ಹಲವು ಕಡೆ ಸೋರಿಕೆಯಾಗುತ್ತಿದ್ದು, ಕಲುಷಿತ ನೀರಿನ ಮಿಶ್ರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಚರಂಡಿ ವ್ಯವಸ್ಥೆಯ ಕೊರತೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ವಿದ್ಯುತ್ ಕಂಬಗಳು ಬಾಗಿ ನಿಂತಿದ್ದು, ಮನೆಯ ಮೇಲಿಂದ ತಂತಿಗಳು ಜೋತುಬಿದ್ದಿರುವುದರಿಂದ ಅನಾಹುತದ ಆತಂಕವೂ ವ್ಯಕ್ತವಾಗಿದೆ. ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಯ ಜಾಲಿ ಕಂಟಿ ತೆರವು, ಚರಂಡಿ ಸ್ವಚ್ಛತೆ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಆಗ್ರಹಿಸಿದರು. ತಕ್ಷಣ ಅಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ಕಾರ್ಯಾರಂಭ ಮಾಡಬೇಕು. ಇಲ್ಲದಿದ್ದರೆ ಹಳಗೇರಾ ಗ್ರಾಮ ಪಂಚಾಯತ್ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭೀಮಾಶಂಕರ, ಪವನ್, ಮಲ್ಲಿಕಾರ್ಜುನ, ಮಲ್ಲಪ್ಪ, ರಫೀಕ್, ಯಲ್ಲಪ್ಪ, ಶಾಣಪ್ಪ, ಆಂಜನೇಯ, ಖಾಸಿಂಮ್, ಹಣಮಂತ, ಅಲ್ಲಿಸಾಬ, ಮಾಂತೇಶ್, ಜಗಪ್ಪ, ದೈದಪ್ಪ, ಬಸಪ್ಪ, ಚಂದ್ರಕಾಂತ್, ಕಾಶಪ್ಪ, ದೇವಪ್ಪ, ನಾಗಪ್ಪ, ಮಹ್ಮದ್, ಫಕೀರ್, ಶಬೀರ್, ಸುಫೀಸಾಬ್ ವಲ್ಲಿ, ಶೀವರಡ್ಡಿ, ಖಾಜಸಾಬ್, ಮೈಬುಸಾಬ್, ಚೀರಂಜೀವಿ ಸಾಬಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 10:45 pm

ಎನ್‌ಐಟಿಕೆ ಸುರತ್ಕಲ್‌ನಲ್ಲಿ ಕೃಷಿಗಾಗಿ ಕೃತಕ ಬುದ್ಧಿಮತ್ತೆ ದುಂಡು ಮೇಜಿನ ಸಭೆ

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ಹಾಗೂ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಇಆರ್‌ಎನ್‌ಇಟಿ ಇಂಡಿಯಾ), ಸ್ವಾಯತ್ತ ಸಂಸ್ಥೆಯಾದ ಎರ್ನೆಟ್ ಇಂಡಿಯಾ (ಎಂಇಐಟಿ) ಇವುಗಳ ಸಹಯೋಗದಲ್ಲಿ ಸುಸ್ಥಿರ ಮತ್ತು ಸ್ಮಾರ್ಟ್ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಬಗ್ಗೆ ವಿಶೇಷ ದುಂಡುಮೇಜಿನ ಸಭೆಯನ್ನು ಎನ್‌ಐಟಿಕೆ ಸುರತ್ಕಲ್‌ನಲ್ಲಿ ಆಯೋಜಿಸಲಾಗಿತ್ತು. ‘ಇಂಡಿಯಾ-ಎಐಂ ಇಂಪ್ಯಾಕ್ಟ್ ಸಮ್ಮಿತ್ 2026’ ರ ಪೂರ್ವಭಾವಿ ಯಾಗಿ ನಡೆದ ಈ ಸಭೆಯಲ್ಲಿ ಎರ್ನೆಟ್ ಇಂಡಿಯಾ, ಐಸಿಎಆರ್ - ದಾಳಿಂಬೆ ಸಂಶೋಧನಾ ಕೇಂದ್ರ, ವಿಟ್ಲದ ಕೇಂದ್ರಿಯ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ), ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕ್ಯಾಲಿಕಟ್‌ನ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ, ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯ , ಕ್ಯಾಸ್ಪರ್ ಕೃಷಿ ವಿಜ್ಞಾನ ಬೆಂಗಳೂರು , ಐಐಐಟಿ ಧಾರವಾಡ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ಕರಾವಳಿ ಕರ್ನಾಟಕದಂತಹ ಪ್ರದೇಶಗಳ ರೈತರ ನಿಜವಾದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದರು. ಎನ್‌ಐಟಿಕೆ ವತಿಯಿಂದ ಕೃಷಿ ಮತ್ತು ಸಮುದ್ರ ಉತ್ಪನ್ನಗಳ ಸಂಶೋಧನೆಗಾಗಿ ವಿಶೇಷ ‘ರಿಸರ್ಚ್ ಇನ್ನೋವೇಶನ್ ಪಾರ್ಕ್ ಸ್ಥಾಪಿಸುವ ಯೋಜನೆಯನ್ನು ಹಂಚಿಕೊಂಡರು. ಎರ್ನೆಟ್ ಇಂಡಿಯಾ ಮಹಾನಿರ್ದೇಶಕಿ ಪ್ರೀತಿ ನಾಥ್ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ದೊಡ್ಡದಿದೆ. ಕಡಿಮೆ ಇಂಟರ್ನೆಟ್ ಸೌಲಭ್ಯವಿರುವ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸುವ ಅಗ್ಗದ ಮತ್ತು ರೈತರಿಗೆ ಸುಲಭವಾಗಿ ಲಭ್ಯವಾಗುವ ಎಐ ತಂತ್ರಜ್ಞಾನವನ್ನು ಗುರುತಿಸುವುದು ಈ ಸಭೆಯ ಮುಖ್ಯ ಉದ್ದೇಶ ಎಂದರು. ಸಮಾರೋಪದಲ್ಲಿ ಮಾತನಾಡಿದ ಎನ್‌ಟಿಕೆ ಡೀನ್ (ಸಂಶೋಧನೆ) ಪ್ರೊ. ಕೆ. ಉದಯ ಭಟ್ ಅವರು ವಿವಿಧ ಸಂಸ್ಥೆಗಳ ನಡುವಿನ ಸಂಶೋಧನೆಗೆ ಎನ್‌ಐಟಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮವನ್ನು ಎನ್‌ಐಟಿಕೆಯ ಡಾ.ಜೆ.ನಿ.ರಾಜನ್ ಮತ್ತು ಡಾ. ಸೌರವ್ ಕಾಂತಿ ಅಡ್ಯಾ ಹಾಗೂ ಎರ್ನೆಟ್ ಇಂಡಿಯಾದ ಡಾ. ಪವೆಂತನ್ ಕಾರ್ಯಕ್ರಮ ಸಂಯೋಜಿಸಿದ್ದರು. 

ವಾರ್ತಾ ಭಾರತಿ 10 Feb 2026 10:42 pm

ಕೊಟ್ಟೂರು ಜಾತ್ರೆಗೆ ವಿಶೇಷ ರೈಲು: ನೆಮ್ಮದಿಯಾಗಿ ಅಜ್ಜಯ್ಯನ ದರ್ಶನ ಮಾಡಿ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಜಾತ್ರೆಗೆ ತೆರಳುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ನೈರುತ್ಯ ರೈಲ್ವೆ (SWR) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜಾತ್ರೆಯ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಭಕ್ತರಿಗೆ ಸುಗಮ ಪ್ರಯಾಣ ಒದಗಿಸಲು ಹೊಸಪೇಟೆ ಮತ್ತು ತೋಳಹುಣಸೆ (ದಾವಣಗೆರೆ ಸಮೀಪದ) ನಡುವೆ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು

ಒನ್ ಇ೦ಡಿಯ 10 Feb 2026 10:42 pm

ವಿಪಕ್ಷಗಳಿಂದ ಅವಿಶ್ವಾಸ ನೋಟಿಸ್| ಲೋಕಸಭೆ ಕಲಾಪಗಳ ಅಧ್ಯಕ್ಷತೆ ವಹಿಸದಿರಲು ಸ್ಪೀಕರ್ ಓಂ ಬಿರ್ಲಾ ನಿರ್ಧಾರ

ಹೊಸದಿಲ್ಲಿ, ಫೆ. 10: ಲೋಕಸಭೆ ಸ್ವೀಕರ್ ಒಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾದ ನೋಟಿಸ್ ಇತ್ಯರ್ಥವಾಗುವವರೆಗೆ ಅವರು ಸದನದ ಕಲಾಪಗಳ ಅಧ್ಯಕ್ಷತೆ ವಹಿಸುವುದಿಲ್ಲ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ ಹಾಗೂ 8 ಮಂದಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಬಿರ್ಲಾ ಅವರ ಪದಚ್ಯುತಿಗೆ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರತಿಪಕ್ಷ ಸಲ್ಲಿಸಿದ ನೋಟಿಸ್ ಅನ್ನು ಪರಿಶೀಲಿಸುವಂತೆ ಹಾಗೂ ಸಂಸದೀಯ ನಿಯಮಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಓಂ ಬಿರ್ಲಾ ಅವರು ಲೋಕಸಭೆಯ ಪ್ರಧಾನ ಕಾರ್ಯದಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶಿಸಿದ್ದಾರೆ.

ವಾರ್ತಾ ಭಾರತಿ 10 Feb 2026 10:40 pm

ಶಹಾಪುರ | ಶಿಕ್ಷಣವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ : ದೇವಿಂದ್ರಪ್ಪ ಮಡಿವಾಳಕರ

ಶಹಾಪುರ: ಶಿಕ್ಷಣವೇ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಅವಕಾಶ ದೊರಕುತ್ತಿರುವುದು ಸಂತಸದ ಸಂಗತಿ ಎಂದು ಭೀಮರಾಯನಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಂದ್ರಪ್ಪ ಮಡಿವಾಳಕರ ಹೇಳಿದರು. ದೋರನಹಳ್ಳಿ ಪಟ್ಟಣದ ಡಿ.ಡಿ.ಯು ಸಿ.ಬಿ.ಎಸ್.ಇ ಶಾಲೆಯ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂತಹ ಶಿಕ್ಷಣ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಶಹಾಪುರ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಂಕ್ರಮ್ಮಾ ಪಾಟೀಲ್ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ಯಾವುದೇ ಹಿಂಜರಿಕೆ ತೋರಬಾರದು. ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣದ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಬೆಳಗಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದರು. ಸಂಸ್ಥಾಪಕ ಡಾ. ಭೀಮಣ್ಣ ಮೇಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣವೇ ಮಕ್ಕಳ ಭವಿಷ್ಯ ನಿರ್ಮಾಣದ ಪ್ರಮುಖ ಆಧಾರವಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಸಂಸ್ಕಾರ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ರೂಢಿಸಬೇಕು ಎಂದು ಹೇಳಿದರು. ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷ ಗಮನ ಹರಿಸಿ, ಉತ್ತಮ ಹವ್ಯಾಸಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು. ಶಾಲೆಯ ಮುಖ್ಯಗುರು ಪ್ರಕಾಶ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಳೆದ ವರ್ಷದಲ್ಲಿ ನಡೆದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ವಿವರಗಳನ್ನು ನೀಡಿದರು. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಮತ್ತು ಆಡಳಿತ ಮಂಡಳಿಯ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಪಾಲಕರು ಹಾಗೂ ಸ್ಥಳೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ಸಂಗಮ್ಮ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 10 Feb 2026 10:40 pm

ಭಾರತ-ಅಮೆರಿಕ ಒಪ್ಪಂದ| ಪ್ರತಿಭಟನೆ ಏಕೈಕ ದಾರಿ: ರಾಕೇಶ್ ಟಿಕಾಯತ್

ಹೊಸದಿಲ್ಲಿ, ಫೆ. 10: ಭಾರತ ಹಾಗೂ ಆಮೆರಿಕ ವ್ಯಾಪಾರ ಒಪ್ಪಂದವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಈ ಒಪ್ಪಂದದ ವಿರುದ್ಧ ಗ್ರಾಮಗಳಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ರೈತರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯ ನೇಪಥ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರಲ್ಲಿ ಭಾರತ ಹೊಸ ಆರ್ಥಿಕತೆಗೆ ತೆರೆದುಕೊಂಡ ಆರಂಭಿಕ ದಿನಗಳ ಪರಿಸ್ಥಿತಿಯನ್ನು ಪ್ರಸಕ್ತ ಪರಿಸ್ಥಿತಿಗೆ ಹೋಲಿಸಿದರು. ‘‘ಭಾರತ-ಅಮೆರಿಕ ಒಪ್ಪಂದ ನಡೆದ ರೀತಿ, ಇದು ಭಾರತಕ್ಕೆ ಅಪಾಯಕಾರಿಯಾಗಲಿದೆ, ನಾವು ಮಾತನಾಡಲೇ ಬೇಕು’’ ಎಂದು ಅವರು ಹೇಳಿದ್ದಾರೆ. ‘‘ಇದು ಏಕಪಕ್ಷೀಯ ಒಪ್ಪಂದ, ಒತ್ತಡದಿಂದ ಆದ ಒಪ್ಪಂದ. ಇದು ಭಾರತೀಯ ರೈತರಿಗೆ ಸ್ವೀಕಾರಾರ್ಹವಲ್ಲ. ಅವರು ಸಬ್ಸಿಡಿ ಸರಕುಗಳನ್ನು ಇಲ್ಲಿ ಎಸೆಯುತ್ತಾರೆ, ನಮ್ಮ ರೈತರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ’’ ಎಂದು ಟಿಕಾಯತ್ ಹೇಳಿದ್ದಾರೆ. ರೈತರನ್ನು ರಕ್ಷಿಸಲಾಗುವುದು ಎಂಬ ಸರಕಾರದ ಭರವಸೆಯ ಕುರಿತು ಪ್ರಶ್ನಿಸಿದಾಗ ಅವರು, ‘‘ಸರಕಾರ ಸುಳ್ಳು ಹೇಳುತ್ತಿದೆ. ಅವರು ಏನನ್ನು ಕೂಡ ಪ್ರತಿಪಾದಿಸಬಹುದು. ಪ್ರತಿಭಟನೆ ಏಕೈಕ ದಾರಿ’’ ಎಂದಿದ್ದಾರೆ.

ವಾರ್ತಾ ಭಾರತಿ 10 Feb 2026 10:38 pm

ಗುರುಮಠಕಲ್ | ಹಬೀಬ್ ಅಬ್ದುಲ್ಲಾ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಸಂತಾಪ

ಗುರುಮಠಕಲ್: ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಹಬೀಬ್ ಅಹಮ್ಮದ್ ಅವರ ಅಣ್ಣ ಹಬೀಬ್ ಅಬ್ದುಲ್ಲಾ ಅವರ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಫೆ.6ರಂದು ವಯೋಸಹಜ ಕಾಯಿಲೆಯಿಂದ ಹಬೀಬ್ ಅಬ್ದುಲ್ಲಾ ಅವರು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.9ರಂದು ಶಾಸಕ ಶರಣಗೌಡ ಕಂದಕೂರ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಹಬೀಬ್ ಅಹಮ್ಮದ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು. ಶಾಸಕರ ಭೇಟಿಯ ಸಂದರ್ಭದಲ್ಲಿ ಶರಣು ಅವಂಟಿ, ರವಿ, ಹಬೀಬ್ ಅಬೂಬಕ್ಕರ್, ಹಬೀಬ್ ಅಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 10:37 pm

Kalaburagi | ಗನ್ ತೋರಿಸಿ ಡ್ಯಾನ್ಸ್ : ವೀಡಿಯೊ ವೈರಲ್ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲು

ಕಲಬುರಗಿ: ಗನ್ ತೋರಿಸಿ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್, ಇತ್ತೀಚೆಗೆ ಕಲಬುರಗಿ ನಗರದ ತಮ್ಮ ತಂಗಿಯ ಮಗಳ ಮದುವೆ ಪೂರ್ವದ ಕಾರ್ಯಕ್ರಮವೊಂದರಲ್ಲಿ ಗನ್ ತೋರಿಸಿ, ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಈ ಕುರಿತಾಗಿ ಪರಿಶೀಲಿಸಿದ ನಗರ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶಿಸಿದ್ದ ಮತೀನ್ ಪಟೇಲ್ ವಿರುದ್ಧ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 33/2026 ಕಲಂ 30 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 10 Feb 2026 10:27 pm

ಮಗುವಿಗೆ ಜನ್ಮನೀಡಿದ ಬಾಣಂತಿ ಮೃತ್ಯು

ಕೊಲ್ಲೂರು, ಫೆ.10: ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಹೃದಯ ಸಂಬಂಧಿ ಕಾಯಿಲೆ ಯಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕೆರಾಡಿಯ ವಿಷ್ಣುಮೂರ್ತಿ ನಾಯಕ್ ಎಂಬವರ ಮಗಳು ವಿನಯಾ (28) ಎಂದು ಗುರುತಿಸಲಾಗಿದೆ. ಇವರು ಜ.27ರಂದು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ 8 ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆ.5ರಂದು ವಿನಯಾ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ವೈದ್ಯರ ಸೂಚನೆ ಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಫೆ.6ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಫೆ.9ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Feb 2026 10:19 pm

ಇಸ್ರೇಲ್ ಅಧ್ಯಕ್ಷರ ಭೇಟಿ ವಿರುದ್ಧ ಆಸ್ಟ್ರೇಲಿಯದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಹಲವರಿಗೆ ಗಾಯ

ಮೆಲ್ಬೋರ್ನ್,ಫೆ.10: ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರೆರ್ೂಗ್ ಅವರ ಆಸ್ಟ್ರೇಲಿಯ ಭೇಟಿಯನ್ನು ವಿರೋಧಿಸಿ ಮೆಲ್ಬೋರ್ನ್ ಹಾಗೂ ಸಿಡ್ನಿ ನಗರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದೆ. ಎರಡೂ ನಗರಗಳಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಹಿಂಸಾಚಾರದಲ್ಲಿ ನ್ಯೂಸೌತ್‌ವೇಲ್ಸ್‌ನ ಗ್ರೀನ್ಸ್ ಪಕ್ಷದ ಸಂಸದ ಅಬಿಗೈಲ್ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ಪೊಲೀಸರು ತನಗೆ ಥಳಿಸಿದ್ದಾರೆಂದು ಅವರು ಆಪಾದಿಸಿದ್ದಾರೆ. ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 15 ಮಂದಿಯ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆರೊರ್‌ಗ್ ಅವರನ್ನು ಆಸ್ಟ್ರೇಲಿಯ ಸರಕಾರ ಆಹ್ವಾನಿಸಿತ್ತು. ಸಿಡ್ನಿಯಲ್ಲಿ ಸೋಮವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಮಂದಿಯನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಬೊಂಡಿ ಬೀಚ್ ದಾಳಿಯಲ್ಲಿ ಮೃತರ ಕುಟಂಬಸ್ಥರನ್ನು ಇಸ್ರೇಲ್ ಅಧ್ಯಕ್ಷರು ಭೇಟಿಯಾಗಲಿದ್ದಾರೆ.

ವಾರ್ತಾ ಭಾರತಿ 10 Feb 2026 10:16 pm

ಫೆ.12ರ ಮುಷ್ಕರ: ಪಾದಯಾತ್ರೆಯ ಮೂಲಕ ಕರಪತ್ರ ಹಂಚಿಕೆ

ಉಡುಪಿ, ಫೆ.10: ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಹಾಗೂ ಕೇಂದ್ರ ಸರಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರಕಾರ ಜಾರಿ ಮಾಡದಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಫೆ.12ರ ನಡೆಯಲಿರುವ ಮುಷ್ಕರದ ಅಂಗವಾಗಿ ಇಂದು ಉಡುಪಿ ನಗರದಲ್ಲಿ ಕರಪತ್ರ ಹಂಚಲಾಯಿತು. ಉಡುಪಿ ಜೋಡುಕಟ್ಟೆಯಿಂದ ನಗರದ ಪ್ರಮುಖ ಮಾರ್ಗದಲ್ಲಿ ಪಾದ ಯಾತ್ರೆ ನಡೆಸಿದ ಕಾರ್ಮಿಕ ಸಂಘಟನೆಗಳ ಮುಖಂಡರು, ಸಾರ್ವಜನಿಕರಿಗೆ ಮುಷ್ಕರದ ಕುರಿತ ಕರಪತ್ರ ಹಂಚಿ ಮುಷ್ಕರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಕವಿರಾಜ್. ಎಸ್ ಕಾಂಚನ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಮುಖಂಡರಾದ ಉಮೇಶ್ ಕುಂದರ್, ನಳಿನಿ ಎಸ್., ಸರೋಜ ಎಸ್., ಸೈಯಾದ್, ಕಟ್ಟಡ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಭಾಸ್ ನಾಯಕ್, ಎಐಟಿಯುಸಿ ಉಡುಪಿ ಜಿಲ್ಲಾ ಮುಖಂಡರಾದ ಶಿವಾನಂದ, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಇಂಟಕ್ ಮಹಿಳಾ ಮುಖಂಡರಾದ ಪ್ರೀತಿ, ಜೆಸಿಟಿಯು ಮುಖಂಡ ರಾದ ವಿಶ್ವನಾಥ, ನಾಗೇಶ್, ಮೋಹನ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 10:16 pm

‘ಮಾರ್ಜಾಲ ಮೋಹಿನಿಯರು’ ಹಾಸ್ಯಪ್ರಬಂಧಗಳ ಸಂಕಲನಕ್ಕೆ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ

ಉಡುಪಿ : ಕನ್ನಡ ಖ್ಯಾತ ಕವಯಿತ್ರಿ ಹಾಗೂ ಸಾಹಿತಿ ಸುಕನ್ಯಾ ಕಳಸ ಅವರ ‘ಮಾರ್ಜಾಲ ಮೋಹಿನಿಯರು’ ಎಂಬ ಹಾಸ್ಯಪ್ರಬಂಧಗಳ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ ಲಭಿಸಿದೆ. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.

ವಾರ್ತಾ ಭಾರತಿ 10 Feb 2026 10:14 pm

ಇರಾನ್ ಆಡಳಿತದ ಜೊತೆ ಅಮೆರಿಕದ ಸಂಭಾವ್ಯ ಒಪ್ಪಂದ ವಿರೋಧಿಸಿ ಯುವಕ ಆತ್ಮಹತ್ಯೆ

ಟೆಹರಾನ್,ಫೆ.10: ಇರಾನ್ ಆಡಳಿತದ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಹಾಗೂ ಆ ದೇಶದ ಮೇಲೆ ದಾಳಿ ನಡೆಸುವಂತೆ ಆಗ್ರಹಿಸುವ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಬಳಿಕ ಇರಾನ್‌ನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಇರಾನ್‌ನ ಬಂದರು ನಗರದ ಬುಶೇರ್‌ನ ನಿವಾಸಿ ಪೌರಿ ಹಾಮೀದಿ(28) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಆತ ಈ 10 ನಿಮಿಷ ಹಾಗೂ 44 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ವೀಡಿಯೋವನ್ನು ವೀಕ್ಷಿಸುವ ಸಂದರ್ಭ ನಾನು ಜೀವಂತವಿರುವುದಿಲ್ಲವೆಂದೂ ಆತ ಹೇಳಿಕೊಂಡಿದ್ದಾನೆ. ಇರಾನ್‌ನಾದ್ಯಂತ ಕಳೆದ ತಿಂಗಳು ನಡೆದ ಸರಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭ ಸರಕಾರವು ಪ್ರತಿಭಟನಕಾರರನ್ನು ಹಿಂಸಾತ್ಮಕವಾಗಿ ದಮನಿಸಿದೆಯೆಂದು ಆತ ವೀಡಿಯೋದಲ್ಲಿ ಆರೋಪಿಸಿದ್ದಾನೆ. ರಶ್ಯ-ಉಕ್ರೇನ್ ಯುದ್ಧ, ಇಸ್ರೇಲ್-ಫೆಲೆಸ್ತೀನ್ ಯುದ್ಧಕ್ಕಿಂತಲೂ ಹೆಚ್ಚಾಗಿ 40 ಸಾವಿರ ಮಂದಿ ಇರಾನ್ ಪ್ರತಿಭಟನಕಾರರನ್ನು ಹತ್ಯೆಗೈಯಲಾಗಿದೆ ’’ ಎಂದು ಈ ಯುವಕ ಹೇಳಿದ್ದಾನೆೆ. ‘‘ಪ್ರತಿಭಟನೆಗಳನ್ನು ಮುಂದುವರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ ಜನತೆಗೆ ಕರೆ ನೀಡಿದ್ದರು. ನಾವು ಅವರ ಮಾತನ್ನು ನಂಬಿದ್ದೆವು. ಆದರೆ ಶಸ್ತ್ರಾಸ್ತ್ರಗಳಿಲ್ಲದೆ ಹೋರಾಟ ಸಾಧ್ಯವಿಲ್ಲ. ಬಾಹ್ಯ ಬೆಂಬಲವಿಲ್ಲದೆ ಇರಾನ್‌ನ ಆಡಳಿತದ ವಿರುದ್ಧ ಜಯಗಳಿಸಲು ಇರಾನಿಯನ್ನರಿಗೆ ಸಾಧ್ಯವಿಲ್ಲ. ಇರಾನ್ ಆಡಳಿತದ ಜೊತೆ ನಡೆಸುವ ಯಾವುದೇ ಒಪ್ಪಂದವು, ಪ್ರತಿಭಟನೆಯಲ್ಲಿ ಮೃತರಿಗೆ ಬಗೆಯುವ ದ್ರೋಹವಾಗಿದೆ. ಹೀಗಾಗಿ ಈ ಒಪ್ಪಂದ ಏರ್ಪಡದಂತೆ ಸಾಧ್ಯವಿರುವುದೆಲ್ಲವನ್ನೂ ಮಾಡಿ’’ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ವಾರ್ತಾ ಭಾರತಿ 10 Feb 2026 10:12 pm

ಸೂಕ್ತ ಪ್ರಸ್ತಾವನೆ ಬಂದರೆ ನಂದಿಕೂರಿನಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಅನುಮತಿ: ಸಚಿವ ರಾಮಮೋಹನ್ ನಾಯ್ಡು

ಉಡುಪಿ, ಫೆ.10: ರಾಜ್ಯ ಸರಕಾರವೂ ಸೇರಿದಂತೆ ಯಾವುದೇ ಏರ್‌ಪೋರ್ಟ್ ಡೆವಲಪರ್‌ರಿಂದ ಸೂಕ್ತವಾದ ಪ್ರಸ್ತಾವನೆ ಸಲ್ಲಿಕೆಯಾದರೆ ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್‌ಪೋರ್ಟ್‌ನ್ನು ನಿರ್ಮಿಸಲು ಇಲಾಖೆ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ದು ಭರವಸೆ ನೀಡಿದ್ದಾರೆ. ನಂದಿಕೂರಿನಲ್ಲಿ ವಿಮಾನನಿಲ್ದಾಣ ಸ್ಥಾಪನೆಯ ಕುರಿತಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಅ.14ರಂದು ಇಲಾಖೆಗೆ ಬರೆದ ಪತ್ರಕ್ಕೆ ಜ.31ರಂದು ನೀಡಿದ ಉತ್ತರದಲ್ಲಿ ರಾಮ್‌ಮೋಹನ್ ನಾಯ್ದು ಈ ವಿಷಯ ತಿಳಿಸಿದ್ದಾರೆ. ಭಾರತ ಸರಕಾರ 2008ರಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್(ಜಿಎಫ್‌ಎ) ಪಾಲಿಸಿಯನ್ನು ರೂಪಿಸಿದ್ದು, ಇದರ ಮಾರ್ಗ ಸೂಚಿಗಳು, ಕಾರ್ಯವಿಧಾನ ಹಾಗೂ ನಿಬಂಧನೆಗಳಂತೆ ದೇಶದಲ್ಲಿ ನೂತನ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ನೀಡುತ್ತದೆ ಎಂದವರು ಹೇಳಿದ್ದಾರೆ. ಯೋಜನೆಯಂತೆ ರಾಜ್ಯ ಸರಕಾರವೂ ಸೇರಿದಂತೆ, ಯಾವುದೇ ಏರ್‌ಪೋರ್ಟ್ ಡೆವಲಪರ್‌ಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಯಸಿದರೆ, ಸೂಕ್ತವಾದ ಜಾಗವನ್ನು ಗುರುತಿಸಿ, ಆ ಜಾಗದಲ್ಲಿ ನಿಲ್ದಾಣ ಸ್ಥಾಪನೆಗೆ ಸಾಧ್ಯತಾ ಅಧ್ಯಯನ ನಡೆಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ‘ಜಾಗದ ಕ್ಲಿಯರೆನ್ಸ್’ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆಗ ಸರಕಾರ ಅದನ್ನು ಪರಿಶೀಲಿಸಿ ಇನ್‌ಪ್ರಿನ್ಸಿಪಲ್ ಅನುಮೋದನೆ ನೀಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಕರ್ನಾಟಕದ ನಂದಿಕೂರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಮುಂದೆ ರಾಜ್ಯ ಸರಕಾರ ಅಥವಾ ಏರ್‌ಪೋರ್ಟ್ ಡೆವಲಪರ್‌ರಿಂದ ಇದಕ್ಕೆ ಪ್ರಸ್ತಾಪ ಸಲ್ಲಿಕೆಯಾದರೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಪಾಲಿಸಿ 2008ರ ನಿಬಂಧನೆಗಳಂತೆ ಅನುಮೋದನೆಗೆ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ 21 ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗಳಿದ್ದು, ಇವುಗಳಲ್ಲಿ ಕರ್ನಾಟಕದ ಕಲಬುರ್ಗಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳೂ ಸೇರಿವೆ. ಅಭಿವೃದ್ಧಿಯಾಗದ ಜಾಗದಲ್ಲಿ ಸಂಪೂರ್ಣ ಹೊಸದಾಗಿ ವಿಮಾನನಿಲ್ದಾಣವನ್ನು ನಿರ್ಮಿಸಿದರೆ ಅದನ್ನು ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎಂದು ಕರೆಯಲಾಗುತ್ತದೆ. ನವಿಮುಂಬಯಿ ಇಂಟರ್‌ನೇಷನಲ್ ಏರ್‌ಪೋರ್ಟ್ ದೇಶದ ಅತ್ಯಂತ ವಿಶಾಲವಾದ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎನಿಸಿಕೊಂಡಿದೆ.

ವಾರ್ತಾ ಭಾರತಿ 10 Feb 2026 10:10 pm

ರಶ್ಯದಿಂದ ತೈಲ ಖರೀದಿಗೆ ಭಾರತಕ್ಕೆ ನಿರ್ಬಂಧ| ಅಮೆರಿಕದ ವಿರುದ್ಧ ರಶ್ಯ ವಾಗ್ದಾಳಿ

ಮಾಸ್ಕೋ,ಫೆ.10: ರಶ್ಯದಿಂದ ತೈಲವನ್ನು ಖರೀದಿಸದಂತೆ ಭಾರತ ಮತ್ತಿತರ ದೇಶಗಳಿಗೆ ನಿರ್ಬಂಧ ವಿಧಿಸುತ್ತಿರುವುದಕ್ಕಾಗಿ ರಶ್ಯವು ಅಮೆರಿಕದ ಟ್ರಂಪ್ ಆಡಳಿತದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಟ್ರಂಪ್ ಬಳಗವು ಸುಂಕ ಹೇರಿಕೆ, ನಿರ್ಬಂದಗಳು ಹಾಗೂ ಆರ್ಥಿಕ ಪ್ರಾಬಲ್ಯವನ್ನು ಸಾಧಿಸಲು ನೇರವಾಗಿ ನಿಷೇಧ ಹೇರಿಕೆಯಂತಹ ಬೆದರಿಕೆಯ ಕ್ರಮಗಳನ್ನು ಈ ದೇಶಗಳ ವಿರುದ್ಧ ಅನುಸರಿಸುತ್ತಿದೆಯೆಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಯಾವ್ರೋವ್ ತಿಳಿಸಿದ್ದಾರೆ. ‘‘ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಕಳೆದ ವರ್ಷ ಆಲಾಸ್ಕದಲ್ಲಿ ನಡೆದ ಶೃಂಗಸಭೆಯಲ್ಲಿ, ಉಕ್ರೇನ್ ಸಂಘರ್ಷ ಕೊನೆಗೊಳಿಸುವ ಕುರಿತಾಗಿ ಅಮೆರಿಕ ಮಾಡಿದ್ದ ಪ್ರಸ್ತಾವನೆಯನ್ನು ಮಾಸ್ಕೋ ಸ್ವೀಕರಿಸಿತ್ತು. ಅಮೆರಿಕದ ನಿಬಂಧನೆಗಳನ್ನು ಒಪ್ಪಿಕೊಂಡ ಹೊರತಾಗಿಯೂ ವಾಶಿಂಗ್ಟನ್ ರಶ್ಯದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದೆ ಹಾಗೂ ರಶ್ಯದಿಂದ ಇಂಧನ ಖರೀದಿಸದಂತೆ ಇತರ ದೇಶಗಳ ಮೇಲೆ ನಿರ್ಬಂಧ ಹೇರಿದೆ ಎಂದರು. ಸಾಗರ ಕಾನೂನಿನ ಕುರಿತಾದ ವಿಶ್ವಸಂಸ್ತೆಯ ಒಡಂಬಡಿಕೆಯನ್ನು ಉಲ್ಲೇಘಿಸಿ ಅಮೆರಿಕವು ಸಮುದ್ರದಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಾಗೂ ನಮ್ಮ ಇತರ ಪಾಲುದಾರರು ಕಡಿಮೆದರದ ಹಾಗೂ ಯೋಗ್ಯಬೆಲೆಯ ರಶ್ಯನ್ ಇಂಧನ ಸಂಪನ್ಮೂಲಗಳು ಖರೀದಿಸುವುದನ್ನು ನಿಷೇಧಿಸಲು ಅಮೆರಿಕವು ಯತ್ನಿಸುತ್ತಿದೆ ಮತ್ತು ಅಮೆರಿಕದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ವನ್ನು ದುಬಾರಿ ಬೆಲೆಗೆ ಖರೀದಿಸುವಂತೆ ಆ ದೇಶಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಲ್ಯಾವ್ರೋವ್ ತಿಳಿಸಿದ್ದಾರೆ. ಇಂಧನ ಮಾರ್ಗಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸುವುದು ವಾಶಿಂಗ್ಟನ್‌ನ ಉದ್ದೇಶವಾಗಿದೆ. ಇದಕ್ಕಾಗಿ ಅದು ಸುಂಕಗಳು, ನಿರ್ಬಂಧಗಳು, ಪ್ರತ್ಯಕ್ಷ ನಿಷೇಧಗಳು ಹೇರುತ್ತಿದೆ ಮತ್ತು ಇತರ ದೇಶಗಳ ಜೊತೆ ವ್ಯವಹಾರಗಳನ್ನು ನಡೆಸುವುದನ್ನು ತಡೆಗಟ್ಟುತ್ತಿದೆ ಎಂದರು. ನೂತನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಹೊಸದಿಲ್ಲಿಯು ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದೆಯೆಂದು ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬಳಿಕ ರಶ್ಯದಿಂದ ಈ ಮಹತ್ವದ ಪ್ರತಿಕ್ರಿಯೆ ಹೊರಬಿದ್ದಿದೆ.

ವಾರ್ತಾ ಭಾರತಿ 10 Feb 2026 10:10 pm

ಅಂತಿಮ ಹಂತದಲ್ಲಿ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ: ವಾಸ್ತವಾಂಶ ಪತ್ರ ಬಿಡುಗಡೆಗೊಳಿಸಿದ ಶ್ವೇತಭವನ

ವಾಶಿಂಗ್ಟನ್,ಫೆ.10: ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ವನ್ನು ಏರ್ಪಡಿಸಲು ಅಮೆರಿಕ ಹಾಗೂ ಭಾರತ ಶ್ರಮಿಸುತ್ತಿರುವಂತೆಯೇ, ಉಭಯದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವೊಂದನ್ನು ಅಂತಿಮಗೊಳಿಸುವ ಹಂತದಲ್ಲಿರುವುದಾಗಿ ಶ್ವೇತಭವನವು ಸೋಮವಾರ ಬಿಡುಗಡೆಗೊಳಿಸಿರುವ ವಾಸ್ತವಾಂಶ ಪತ್ರ (ಫ್ಯಾಕ್ಟ್‌ಶೀಟ್) ತಿಳಿಸಿದೆ. ಸೇವೆಗಳು ಹಾಗೂ ಹೂಡಿಕೆ, ಕಾರ್ಮಿಕ ಮತ್ತು ಸರಕಾರದ ಮೂಲಕ ಉತ್ಪನ್ನಗಳ ಖರೀದಿ ಸೇರಿದಂತೆ ಇತ್ಯರ್ಥಕ್ಕೆ ಬಾಕಿಯುಳಿದಿರುವ ಕ್ಷೇತ್ರಗಳ ಬಗ್ಗೆ ಎರಡೂ ದೇಶಗಳು ಮಾತುಕತೆಯನ್ನು ಮುಂದುವರಿಸಲಿವೆ. ‘ಅಮೆರಿಕ ಹಾಗೂ ಭಾರತವು ಐತಿಹಾಸಿಕ ವ್ಯಾಪಾರ ಒಪ್ಪಂದ (ಮಧ್ಯಂತರ ಒಡಂಬಡಿಕೆ)ವನ್ನು ಘೋಷಿಸಿದೆ ’ ಎಂಬ ಶೀರ್ಷಿಕೆಯ ಈ ವಾಸ್ತವಾಂಶ ಪತ್ರದಲ್ಲಿ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಉತ್ಪನ್ನಗಳು ಮತ್ತು ವಿವಿ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಪಡಿಸುವುದನ್ನು ಅಥವಾ ಕಡಿಮೆಗೊಳಿಸುವುದನ್ನು ಒಳಗೊಂಡಿದೆ. ಅಮೆರಿಕದ ಜನತೆಯ ಹಿತಾಸಕ್ತಿಗಳನ್ನು ಬಲಪಡಿಸಲು, ಅಮೆರಿಕದ ಆಹಾರ ಹಾಗೂ ಕೃಷಿ ಉತ್ಪನ್ನಗಳನ್ನು ಮೇಲಿನ ಸುಂಕವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಭಾರತದ ಬದ್ದತೆ ಸೇರಿದಂತೆ ಒಪ್ಪಂದದ ಮುಖ್ಯ ನಿಬಂಧನೆಗಳನ್ನು ಈ ವಾಸ್ತವಾಂಶ ಪತ್ರವು ಒಳಗೊಂಡಿದೆ. ಅಮೆರಿಕದಿಂದ ಇಂಧನ, ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತಿತರ ಉತ್ಪನ್ನಗಳು, ಒಣ ಸಂಸ್ಕರಿತ ಧಾನ್ಯಗಳು, ಕೆಂಪುಜೋಳ, ಬಾದಾಮಿ, ಗೋಡಂಬಿ, ವಾಲ್‌ನಟ್ ಮತ್ತಿತರ ಬೀಜಗಳು, ತಾಜಾ ಹಾಗೂ ಸಂಸ್ಕರಿತ ಹಣ್ಣುಗಳು, ಕೆಲವು ನಿರ್ದಿಷ್ಟ ದ್ವಿದಳ ಧಾನ್ಯಗಳು, ವೈನ್ ಹಾಗೂ ಸ್ಪಿರಿಟ್ ಉತ್ಪನ್ನ ಸೇರಿದಂತೆ 500 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಬದ್ಧತೆಯನ್ನು ಭಾರತ ವ್ಯಕ್ತಪಡಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಜಗತ್ತಿನ ಯಾವುದೇ ಪ್ರಮುಖ ಆರ್ಥಿಕತೆಯ ರಾಷ್ಟ್ರಕಿಂತಲೂ ಅಧಿಕ ಸುಂಕಗಳನ್ನು ಭಾರತವು ಅಮೆರಿಕದ ಮೇಲೆ ಹೇರುತ್ತಾ ಬಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಶೇ.37 ಹಾಗೂ ಕೆಲವು ನಿರ್ದಿಷ್ಟ ವಾಹನಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುತ್ತಿದೆ.ಅಮೆರಿಕದ ಹಲವಾರು ಉತ್ಪನ್ನಗಳನ್ನು ಅತ್ಯಧಿಕ ಸಂರಕ್ಷಣಾತ್ಮಕ ಸುಂಕೇತರ ಅಡೆತಡೆಗಳನ್ನು ಹೇರಿದ ಇತಿಹಾಸವನ್ನು ಕೂಡಾ ಭಾರತ ಹೊಂದಿದೆ ಎಂದು ಶ್ವೇತಪತ್ರದಲ್ಲಿ ಹೇಳಿದೆ. ಮುಂಬರುವ ವಾರಗಳಲ್ಲಿ ಅಮೆರಿಕ ಹಾಗೂ ಭಾರತ ಸಮರ್ಪಕವಾಗಿ ಈ ಒಪ್ಪಂದದ ಕಾರ್ಯಚೌಕಟ್ಟನ್ನು ಸಮರ್ಪಕವಾಗಿ ಜಾರಿಗೊಳಿಸಲಿದೆ. ಅಮೆರಿಕದ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಲಾಭಕರವಾಗಿರುವ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವನ್ನು ಪೂರ್ಣಗೊಳಿಸುವ ಮುನ್ನ ಉಭಯದೇಶಗಳ ನಡುವೆ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿವೆ ಎಂದು ವಾಸ್ತವಾಂಶ ಪತ್ರ ತಿಳಿಸಿದೆ.

ವಾರ್ತಾ ಭಾರತಿ 10 Feb 2026 10:06 pm

UTS App ಸ್ಥಗಿತ, RailOne ಅಚಲ ಎಂದ ರೈಲ್ವೆ ಇಲಾಖೆ: ವ್ಯಾಲೆಟ್ ದುಡ್ಡು ಏನಾಗುತ್ತೆ? ಇಲ್ಲಿದೆ ಉತ್ತರ

ಭಾರತೀಯ ರೈಲ್ವೆ ಇಲಾಖೆ ತನ್ನ ಡಿಜಿಟಲ್ ಸೇವೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದು, ರೈಲ್ವೆ ಪ್ರಯಾಣಿಕರಿಗೆ ಅತಿ ಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ. ನೀವು ಇಷ್ಟು ದಿನ ಜನರಲ್ ಟಿಕೆಟ್ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯಲು ಬಳಸುತ್ತಿದ್ದ 'UTSonMobile' (ಯುಟಿಎಸ್‌) 'ಆ್ಯಪ್' ಇನ್ನು ನೆನಪಿನ ಪುಟ ಸೇರಲಿದೆ. ಹೌದು, ಮಾರ್ಚ್ 1, 2026 ರಿಂದ ಹಂತ ಹಂತವಾಗಿ ಯುಟಿಎಸ್‌ ಆ್ಯಪ್

ಒನ್ ಇ೦ಡಿಯ 10 Feb 2026 9:47 pm

ಅಬಕಾರಿ ಇಲಾಖೆಯಲ್ಲಿ ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ : ಆರ್.ಬಿ.ತಿಮ್ಮಾಪುರ

ಬೆಂಗಳೂರು : 2025-26ನೆ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ., ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಅದರಲ್ಲಿ ಈವರೆಗೆ 34,235 ಕೋಟಿ ರೂ., ಸಂಗ್ರಹವಾಗಿದ್ದು, ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಗುರಿಗಿಂತ ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಅಬಕಾರಿ ಇಲಾಖೆಯಲ್ಲಿ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ವಿವಿಧ ಪರವಾನಗಿಗೆ 16 ಹಂತಗಳಲ್ಲಿ ಅಧಿಕಾರಿಗಳ ಬಳಿ ಕಡತಗಳನ್ನು ಕಳುಹಿಸುವುದನ್ನು ತಪ್ಪಿಸಿ 7 ಅಧಿಕಾರಿಗಳಿಗೆ ಇಳಿಸಲಾಗಿದೆ. ಸೇಂದಿ ಹೇಗೆ ತಡೆಯಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. 14,275 ಸನ್ನದ್ದನ್ನು 47 ಗಂಟೆಗಳಲ್ಲಿ ನವೀಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಮದ್ಯ ಮಾರಾಟ ಸನ್ನದ್ಧು ನೀಡುವಲ್ಲಿ ಲಂಚ ಪಡೆಯುವ ಅಧಿಕಾರಿಗಳು ನನ್ನ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ. ಅಕ್ರಮ ಎಸಗುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅಬಕಾರಿ ಖಾತೆಯೇ ಅಂತಹದ್ದು. ಈ ಹಿಂದೆ ಅಬಕಾರಿ ಸಚಿವರಾಗಿದ್ದವರ ವಿರುದ್ಧವೂ ಆರೋಪಗಳು ಕೇಳಿಬಂದಿತ್ತು. ಈಗಲೂ ಬರುತ್ತಿದೆ. ಆದರೆ, ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.   ಸಂಘಕ್ಕೆ ಮಾನ್ಯತೆಯೇ ಇಲ್ಲ: ನನ್ನ ಮತ್ತು ಇಲಾಖೆ ವಿರುದ್ಧ ಆರೋಪ ಮಾಡಿದ ಸಂಘಟನೆ ಮಾನ್ಯತೆ ಅವಧಿ ಮುಗಿದು ಹಲವು ವರ್ಷಗಳಾಗಿವೆ. ಆ ಸಂಘಕ್ಕೆ ಮಾನ್ಯತೆಯೇ ಇಲ್ಲ. ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂದಲ್ಲ. 158 ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, 19 ಮಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ. 85 ಅಧಿಕಾರಿಗಳ ವಿರುದ್ಧ ಪ್ರಕರಣವು ಸರಕಾರ ಹಂತದಲ್ಲಿದೆ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.  

ವಾರ್ತಾ ಭಾರತಿ 10 Feb 2026 9:42 pm

Kalaburagi | ಚಿತ್ತಾಪುರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಳಿಗೆ ಉದ್ಘಾಟನೆ

ಕಲಬುರಗಿ: ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮಾಹಿತಿ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ತಾಪುರ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಮಾಹಿತಿ ಪ್ರದರ್ಶನ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜನರನ್ನು ನೇರವಾಗಿ ಸಂಪರ್ಕಿಸುವ ಈ ವಿನೂತನ ಪ್ರಚಾರ ಕಾರ್ಯದಿಂದ ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಜನಮಾನಸಕ್ಕೆ ತಲುಪಲಿದೆ ಎಂದರು. ರಾಜ್ಯ ಸರ್ಕಾರದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕ್ರಿಯಾಯೋಜನೆಯಡಿಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ರೂಪಿಸಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಲು ಚಿತ್ತಾಪುರ ಸೇರಿದಂತೆ ರಾಜ್ಯದ ಇತರೆ ಆಯ್ದ ಮೀಸಲು ಕ್ಷೇತ್ರಗಳಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸೇಡಂ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ, ಕೆಕೆಆರ್‌ಟಿಸಿ ಚಿತ್ತಾಪುರ ಡಿಪೊ ಮ್ಯಾನೇಜರ್ ಗೊಲ್ಲಾಳಪ್ಪ ಬಿರಾದರ್ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 10 Feb 2026 9:32 pm

ಕೊಲ್ಲೂರು: ಉತ್ತಮ ಕರ್ತವ್ಯಕ್ಕೆ ಪ್ರಶಸ್ತಿ ಪಡೆದಿದ್ದ ಪೋಸ್ಟ್‌ಮೆನ್ ಆತ್ಮಹತ್ಯೆ

ಕೊಲ್ಲೂರು, ಫೆ.10: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್‌ಮೆನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.9ರಂದು ಬೆಳಗ್ಗೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್.(31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿ ನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು. ಇವರು ಇದೇ ವಿಚಾರದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Feb 2026 9:30 pm

ಕ್ಯಾಥೊಲಿಕ್ ಬಿಷಪ್‍ಗಳ ಸಮ್ಮೇಳನ | ಪ್ರತಿಯೊಬ್ಬರ ʼಸಮಾನತೆ ಹಕ್ಕುʼ ರಕ್ಷಣೆಗೆ ಸರಕಾರ ಮುಂದಾಗಬೇಕು : ಸಿಬಿಸಿಐ ಆಗ್ರಹ

ಬೆಂಗಳೂರು : ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಲಾಗಿದೆ. ಆದರೆ, ಇತ್ತೀಚಿಗೆ ಈ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಕೇಂದ್ರ ಸರಕಾರ ರಕ್ಷಣೆ ಮಾಡಲು ಮುಂದಾಗಬೇಕು ಎಂದು ‘ಭಾರತದ ಕ್ಯಾಥೊಲಿಕ್ ಬಿಷಪ್‍ಗಳ ಸಮ್ಮೇಳನ’(ಸಿಬಿಸಿಐ) ಆಗ್ರಹಿಸಿದೆ. ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯಲ್ಲಿ ಕಳೆದ ಆರು ದಿನಗಳಿಂದ ಆಯೋಜಿಸಲಾಗಿದ್ದ ಭಾರತದ ಕ್ಯಾಥೊಲಿಕ್ ಬಿಷಪ್‍ಗಳ ಸಮ್ಮೇಳನದ (ಸಿಬಿಸಿಐ) 37ನೇ ಸಮಗ್ರ ಸಭೆ ಮಂಗಳವಾರ ಕೊನೆಗೊಂಡಿತು. ಬಳಿಕ, ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಬಿಸಿಐ ನೂತನ ಅಧ್ಯಕ್ಷ ಕಾರ್ಡಿನಲ್ ಪೂಲಾ ಆಂಥೋನಿ, ʼದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಬೇಕಾಗಿದೆ. ಮುಖ್ಯವಾಗಿ ದೇಶದ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲ ವಿಷಯಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಇಂತಹ ಸಂವಿಧಾನವನ್ನು ಧರ್ಮ, ಜಾತಿಯ ಹೆಸರಿನಲ್ಲಿ ಬುಡಮೇಲು ಮಾಡಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಯಾರಿಂದಲೂ ಸಂವಿಧಾನ ಬುಡಮೇಲು ಮಾಡಲು ಸಾಧ್ಯವಿಲ್ಲ ಎಂದರು. ನಿಜವಾದ ಕ್ರಿಶ್ಚಿಯನ್ ಜೀವನವು ಶಾಂತಿಯನ್ನು ಉತ್ತೇಜಿಸುವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ, ಕಾನೂನು ಪಾಲಿಸುವ ನಾಗರಿಕರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಹೀಗಾಗಿ, ಸೌಹಾರ್ದತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕೂಡ ನಿಜವಾದ ದೇಶಭಕ್ತನಾಗಲು ಸಾಧ್ಯ. ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿನ ಪ್ರತಿಯೊಂದು ಧರ್ಮಗಳು ಸಾರುವುದರೊಂದಿಗೆ ಮಾನವೀಯತೆಯನ್ನು ಕಲಿಸುತ್ತವೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದ ಬಗ್ಗೆ ಅರಿತುಕೊಂಡು ಬಾಳಿದಾಗ ಸೌಹಾರ್ದ ಮೂಡಲು ಸಾಧ್ಯವಿದೆ. ಎಲ್ಲಾ ಹಬ್ಬಗಳ ಮೂಲ ತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದಾಗಿದೆ ಎಂದ ಅವರು, ನಮ್ಮ ಭಾರತೀಯ ಸಂವಿಧಾನದಲ್ಲಿನ ಮೌಲ್ಯಗಳು ನಾಗರೀಕರ ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ ಎಂದು ಅಭಿಪ್ರಾಯಪಟ್ಟರು. ದೇಶ ವ್ಯಾಪಿ ದಶಕಗಳಿಂದಲೂ ದಲಿತ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಅವರ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯವಹಿಸಲಾಗುತ್ತಿದೆ. ಇನ್ನೊಂದೆಡೆ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ಚರ್ಚಿನ ಸಮುದಾಯಗಳಲ್ಲಿ ಇದೆ ಎನ್ನಲಾದ ಯಾವುದೇ ರೀತಿಯ ತಾರತಮ್ಯವನ್ನು ತೊಡೆದುಹಾಕಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ ಎಂದು ಉದ್ದೇಶ ಪೂರಕವಾಗಿ ಆರೋಪಿಸಿ ಮುಗ್ಧ ವ್ಯಕ್ತಿಗಳನ್ನು ಜೈಲಿಗೆ ಹಾಕಲಾಗುತ್ತಿರುವುದರಿಂದ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಅಲ್ಲದೆ, ಸಂವಿಧಾನದ 25ನೆ ವಿಧಿಯು ಯಾವುದೇ ವ್ಯಕ್ತಿ ತನ್ನ ಇಚ್ಛೆಯಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದೆ. ಆದರೂ, ಸರಕಾರವೇ ಇದನ್ನು ಉಲ್ಲಂಘನೆ ಮಾಡುತ್ತಿರುವುದು ನೋವು ತಂದಿದೆ ಎಂದು ಕಾರ್ಡಿನಲ್ ಪೂಲಾ ಆಂಥೋನಿ ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ಪ್ರಮುಖ ನಿರ್ಣಯಗಳು..! ► ಭಾರತೀಯತೆ ಮೌಲ್ಯಗಳನ್ನು ವೃದ್ಧಿಸಿ, ಪ್ರಚಾರ ಮಾಡುವುದು. ► ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವುದು ► ಯುವಕರಲ್ಲಿ ನಾಯಕತ್ವದ ಅಭಿವೃದ್ಧಿಗೆ ಒತ್ತು ► ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರಚನೆ ► ಕ್ರೈಸ್ತ ಸಮುದಾಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು   ಸಿಬಿಸಿಐನ ಹೊಸ ಪದಾಧಿಕಾರಿಗಳು ► ಅಧ್ಯಕ್ಷರು: ಕಾರ್ಡಿನಲ್ ಪೂಲಾ ಆಂಥೋನಿ (ಹೈದರಾಬಾದ್‌ನ ಆರ್ಚ್‍ಬಿಷಪ್) ► ಉಪಾಧ್ಯಕ್ಷರು: ಥಾಮಸ್ ಮಾರ್ ಕುರಿಲೋಸ್ (ತಿರುವಳ್ಳದ ಆರ್ಚ್‍ಬಿಷಪ್) ► ಉಪಾಧ್ಯಕ್ಷರು: ಮ್ಯಾಥ್ಯೂ ಮೂಲಕ್ಕಟ್ (ಕೊಟ್ಟಾಯಂನ ಆರ್ಚ್‍ಬಿಷಪ್) ► ಪ್ರಧಾನ ಕಾರ್ಯದರ್ಶಿ: ಅನಿಲ್ ಕೌಟೊ, (ಹೊಸದಿಲ್ಲಿಯ ಆರ್ಚ್‍ಬಿಷಪ್) ಸಿಬಿಸಿಐ ವಿಭಾಗವಾರು ಅಧ್ಯಕ್ಷರು..! ►  ಕಾರ್ಮಿಕ ಮತ್ತು ವಲಸಿಗರು ವಿಭಾಗದ ಅಧ್ಯಕ್ಷರಾಗಿ ಬಿಷಪ್ ವಿನ್ಸೆಂಟ್ ಪೌಲೋಸ್ ಆಯ್ಕೆ ► ಸಂವಾದ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜೋಸೆಫ್ ಕಲ್ಲರಂಗಟ್ ಆಯ್ಕೆ ► ಪಾದ್ರಿಗಳು, ಧಾರ್ಮಿಕ ಮತ್ತು ಎನ್‍ವಿಎಸ್‍ಸಿ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜೋಹಾನ್ಸ್ ಗೊರಾಂಟ್ಲಾ ಆಯ್ಕೆ ► ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗದ ಅಧ್ಯಕ್ಷರಾಗಿ ಆರ್ಚ್‍ಬಿಷಪ್ ಎಲಿಯಾಸ್ ಗೊನ್ಸಾಲ್ವೆಸ್ ಆಯ್ಕೆ ►  ಆರೋಗ್ಯ ಮತ್ತು ರಕ್ಷಣೆ ವಿಭಾಗದ ಅಧ್ಯಕ್ಷರಾಗಿ ಆರ್ಚ್‍ಬಿಷಪ್ ಥಾಮಸ್ ನೆಟ್ಟೊ ಆಯ್ಕೆ ► ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳು ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜಯರಾವ್ ಪೊಲಿಮೆರಾ ಆಯ್ಕೆ ► ಬುಡಕಟ್ಟು ವ್ಯವಹಾರಗಳ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಟೆಲಿಸ್ಫೋರ್ ಬಿಲುಂಗ್ ಆಯ್ಕೆ ►  ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷರಾಗಿ ಬಿಷಪ್ ವಿಜಯ್ ಕುಮಾರ್ ರಾಯಲಾರ ಆಯ್ಕೆ ► ಸಿದ್ಧಾಂತ ವಿಭಾಗದ ಅಧ್ಯಕ್ಷರಾಗಿ ಆರ್ಚ್‍ಬಿಷಪ್ ರಾಫಿ ಮಂಜಲಿ ಆಯ್ಕೆ ► ಪರಿಸರ ಮತ್ತು ಹವಾಮಾನ ಬದಲಾವಣೆ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಇವಾನ್ ಪೆರೇರಾ ಆಯ್ಕೆ ► ನ್ಯಾಯ ಶಾಂತಿ ಮತ್ತು ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ಆರ್ಚ್‍ಬಿಷಪ್ ಪೀಟರ್ ಮಚಾದೊ ಆಯ್ಕೆ ► ಕ್ಯಾರಿಟಾ ಇಂಡಿಯಾ ವಿಭಾಗದ ಅಧ್ಯಕ್ಷರಾಗಿ ಆರ್ಚ್‍ಬಿಷಪ್ ಲಿನಸ್ ನೆಲಿ ಆಯ್ಕೆ

ವಾರ್ತಾ ಭಾರತಿ 10 Feb 2026 9:28 pm

ಪಣಂಬೂರು: ಜೂಜು ಆಡುತ್ತಿದ್ದ ಆರೋಪ; ಐದು ಮಂದಿ ಸೆರೆ

ಪಣಂಬೂರು: ಜೂಜು ಆಡುತ್ತಿದ್ದ ಐವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಲ್ಪಿ ಯಾನೆ ವಿಲ್ಪ್ರೇಢ್ ಡಿಸೋಜಾ, ಸತೀಶ, ಬಾಲಕೃಷ್ಣ, ಪಿ.ಟಿ. ಜೋಸೆಫ್ ಮತ್ತು ಉಪೇಂದ್ರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ರೈಲ್ವೇ ಬ್ರಿಡ್ಜ್ ನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜು ಆಡುತ್ತಿರುವ ಕುರಿತು ಕಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 17,120 ರೂ. ಹಣ, 52 ಇಸ್ಪೀಟು ಎಲೆಗಳು, 2 ಸ್ವಲ್ಪ ಉರಿದ ಕ್ಯಾಂಡಲ್ , 4 ಮೊಬೈಲ್ ಮತ್ತು ನೆಲಕ್ಕೆ ಆಟಕ್ಕಾಗಿ ಹಾಸಿದ ನೀಲಿ ಬಣ್ಣದ ಟರ್ಪಾಲನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.

ವಾರ್ತಾ ಭಾರತಿ 10 Feb 2026 9:21 pm

Kalaburagi | ತಾಲ್ಲೂಕುಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

ಕಲಬುರಗಿ: ಮಂಗಳವಾರ ಬೆಳಿಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಆರಂಭಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಶಹಬಾದ್ ತಾಲ್ಲೂಕಿನ ರಾವೂರು ಗ್ರಾಮಕ್ಕೆ ಭೇಟಿ ನೀಡಿ ನೂತನವಾಗಿ ಪ್ರಾರಂಭವಾಗುತ್ತಿರುವ ನೂವುಕು ಸಿಮೆಂಟ್ ಕಾರ್ಖಾನೆಯನ್ನು ವೀಕ್ಷಿಸಿದರು. ಬಳಿಕ ಕೊಂಚೂರು ಮಾರ್ಗವಾಗಿ ನಾಲವಾರ ಗ್ರಾಮದ ಭೂ ಪರಿವರ್ತನೆ ಪ್ರದೇಶವನ್ನು ಪರಿಶೀಲಿಸಿದರು. ನಾಲವಾರ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ವಸತಿ ನಿಲಯ ಹಾಗೂ ನಾಡ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಪದ್ಧತಿಯನ್ನು ಪರಿಶೀಲಿಸಿದರು. ನಂತರ ಚಿತ್ತಾಪುರ ತಾಲ್ಲೂಕಿನ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಬಳಿಕ ಪ್ರಜಾಸೌಧದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 9:20 pm

ಪ್ರತಿಭಟನಾ ಪಾದಯಾತ್ರೆ| ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಜ್ಪೆ: ಕೇಂದ್ರ ಸರಕಾರದ ನರೇಗಾ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಬದಲಾವಣೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ಪಾದಯಾತ್ರೆಯ ಪ್ರಯುಕ್ತ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳವಾರ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ಸ್ವಾತಂತ್ರ್ಯ ಸಂದರ್ಭ ಗಾಂಧಿಯನ್ನು ಕೊಂದವರು ಈಗ ಅವರ ಹೆಸರಿನ ಯೋಜನೆಯನ್ನು ತೆಗೆದು ಹಾಕುವ ಕೆಲಸಕ್ಕೆ ಮುಂದಾಗಿದೆ. ಈ ಮೂಲಕ ದೇಶದ ಅಸ್ಮಿತೆ ಗಾಂಧಿಯ ಹೆಸರನ್ನು ಇಲ್ಲದಾಗಿಸುವ ಹುನ್ನಾರವನ್ನು ನರೇಂದರ ಮೋದಿ ನೇತೃತ್ವದ ಭ್ರಷ್ಠ ಎನ್‌ಡಿಎ ಸರಕಾರ ನಡೆಸುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹೆಸರಿರುವ ಮಹಾತ್ಮ ಗಾಂಧಿ ಮನರೇಗಾ ಯೋಜನೆಯ ಹೆಸರು ಬದಲಾಯಿ ವಿಬಿ-ಜಿ ರಾಮ್ ಜಿ ಎಂದು ಮರು‌ ನಾಮಕರಣ‌ಮಾಡಲು ಮುಂದಾಗಿದೆ. ಜೊತೆಗೆ ಬಡವರಿಗೆ ನೀಡುತ್ತಿದ್ದ ಉದ್ಯೋಗದಲ್ಲೂ ಬದಲಾವಣೆಗಳನ್ನು ತಂದು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು. ಇಂದು ಮಹಾತ್ಮ ಗಾಂಧಿಯ ಹೆಸರುವುದಕ್ಕೆ ಯೋಜನೆಯ ಹೆಸರು ಬದಲಾಯಿಸಲು ಮುಂದಾಗಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯಲ್ಲಿರುವ ಗಾಂಧಿಜಿಯ ಭಾವಚಿತ್ರವನ್ನೂ ಬದಲಾಯಿಸಲು ಹೇಸುವವರಲ್ಲ ಎಂದು ಖಾರವಾಗಿ ನುಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಪರವಾಗಿದ್ದು, ಸ್ವಾತಂತ್ರ್ಯದ ವಿರುದ್ಧ ಹೋರಾಡಿದವರ ದೇಶ ಪ್ರೇಮ ನಾಡಿನ ಜನತೆಗೆ ತಿಳಿದೆ ಎಂದ ಅವರು, ಗಾಂಧಿಯ ಹೆಸರು ನಿರ್ನಾಮಕ್ಕೆ ಮುಂದಾಗಿರುವವರು ಗಾಂಧಿಯ ಧೂಳಿಗೂ ಸಮಾನರಲ್ಲ ಎಂದು ನರೇಂದ್ರ ಮೋದಿ ಹಾಗೂ ಎನ್ ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮನರೇಗಾ ಯೋಜನೆಯ ಹೆಸರು ಬದಲಾವಣೆಯ ಮೂಲಕ ದೇಶದ ಅಸ್ಮಿಯಗೆ ಧಕ್ಕೆ ತರಲು ಯತ್ನಿಸುತ್ತಿರುವವರು ಹಾಗೂ ದೇಶದ ಬಡವರ ಶತ್ರುಗಳ ಇಂತಹಾ ಕುಕೃತ್ಯ ಗಳನ್ನು ಖಂಡಿಸಿ ವಿಬಿ-ಜಿ ರಾಮ್ ಜಿ ಹೆಸರು ಕೈಬಿಡಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಮನರೇಗಾ ಬಚಾಯೋ ಆಂದೋಲನದಲ್ಲಿ ಭಾಗವಹಿಸಬೇಕೆಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಧ್ಮನಾಭ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುರ್ಶಿದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಕೃಷ್ಣ ಅಮೀನ್, ಜಿ.ಪಂ.‌ಮಾಜಿ ಸದಸ್ಯ ಯು.ಪಿ.‌ ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 9:15 pm

ಕೆಎಸ್‍ಡಿಎಲ್‍ನ 57 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಸಂಸ್ಥೆಯ ರಾಯಭಾರಿ ತಮನ್ನಾ ಭಾಟಿಯಾ

ಮೈಸೂರು ಸ್ಯಾಂಡಲ್ ಸೋಪ್ ಜತೆಗೆ ಹಲವು ಉತ್ಪನ್ನಗಳಿಗೆ ಸಮಕಾಲೀನ ಸ್ಪರ್ಶ

ವಾರ್ತಾ ಭಾರತಿ 10 Feb 2026 9:10 pm

ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘದಿಂದ ರಾಜೇಂದ್ರ ಕುಮಾರ್‌ಗೆ ಸನ್ಮಾನ

ಮಂಗಳೂರು, ಫೆ.10: ಎಸ್‌ಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಮುದ್ರದ ಅಪಾಯಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ತುರ್ತು ರಕ್ಷಣಾ ವ್ಯವಸ್ಥೆಯ ಅಗತ್ಯತೆಯನ್ನು ಮನಗಂಡು ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘ ‘ಬೋಟ್ ಆ್ಯಂಬುಲೆನ್ಸ್’ನ್ನು ಸುಮಾರು ರೂ.16 ಲಕ್ಷ ವೆಚ್ಚದಲ್ಲಿ ನಿರ್ಮಿಸಿ, ಈಚೆಗೆ ಲೋಕಾರ್ಪಣೆ ಮಾಡಿದ್ದು, ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘಕ್ಕೆ ಎಂ.ಎನ್.ರಾಜೇಂದ್ರ ಕುಮಾರ್ ಅವರು ನೀಡಿದ ಸಹಕಾರ ಹಾಗೂ ಸಂಘದ ಸದಸ್ಯರಿಗೆ ಈ ಹಿಂದೆ ನೀಡಿದ ಸಾಲ ಸೌಲಭ್ಯದ ಸಹಕಾರವನ್ನು ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಈ ಸಂದರ್ಭದಲ್ಲಿ ಸ್ಮರಿಸಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಸಲಹೆಗಾರ ಇಸ್ಮಾಯಿಲ್ ಕೋಡಿ ಸದಸ್ಯ ಮುಹಮ್ಮದ್ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 10 Feb 2026 9:10 pm

ಎಂಆರ್‌ಪಿಎಲ್‌ನಲ್ಲಿ ರಾಷ್ಟ್ರೀಯ ಹಿಂದಿ ವಿಚಾರ ಸಂಕಿರಣ

ಮಂಗಳೂರು, ಫೆ.10: ಅಧಿಕೃತ ಭಾಷೆಯ ಅಭಿವೃದ್ಧಿಯು ಕೇವಲ ಬಳಕೆಗೆ ಸೀಮಿತವಾಗದೆ, ಎಲ್ಲಾ ವರ್ಗ ಮತ್ತು ಪ್ರಾದೇಶಿಕ ಭಾಷೆಗಳನ್ನು ಒಳಗೊಳ್ಳುವ ಮೂಲಕ ರಾಷ್ಟ್ರದ ಆತ್ಮವನ್ನು ಪ್ರತಿನಿಧಿಸಬೇಕು ಎಂದು ಎಂಆರ್‌ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೃಷ್ಣ ಹೆಗ್ಡೆ ಮಿಯಾರ್ ಹೇಳಿದ್ದಾರೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ ಫೆ.9 ರಂದು ಎಂಆರ್‌ಪಿಎಲ್ ರಿಕ್ರೀಯೇಶನ್ ಸೆಂಟರ್‌ನಲ್ಲಿ ಸಾಮರಸ್ಯ ಮತ್ತು ಒಳಗೊಳ್ಳುವಿಕೆಯೊಂದಿಗೆ ಅಧಿಕೃತ ಭಾಷೆಯ ವಿಕಸನ ಪಯಣ ಎಂಬ ವಿಷಯದ ಬಗ್ಗೆ ಆಯೋಜಿಸಲಾದ ಒಂದು ದಿನದ ‘ರಾಷ್ಟ್ರೀಯ ಹಿಂದಿ ವಿಚಾರಸಂಕಿರಣ’ದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು. ಭಾರತವು ವೈವಿಧ್ಯಮಯ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ನೆಲೆಬೀಡು.ಹಿಂದಿಯು ಕೇವಲ ಸಂಪರ್ಕ ಭಾಷೆಯಲ್ಲದೆ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆಯ ಪ್ರಬಲ ಮಾಧ್ಯಮವಾಗಿದೆ ಎಂದರು. ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯ ಜಂಟಿ ನಿರ್ದೇಶಕ (ಅನುಷ್ಠಾನ) ಕುಮಾರ್ ಪಾಲ್ ಶರ್ಮಾ ಅವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಎನ್‌ಇಆರ್‌ಬಿಎಫ್‌ಐಡಿ ಹಿರಿಯ ವಿಶ್ಲೇಷಕ ಡಾ. ಧೀರಜ್ ಕುಮಾರ್ ಮಿಶ್ರಾ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಎಂಆರ್‌ಪಿಎಲ್ ತರಬೇತಿ ಮತ್ತು ಅಧಿಕೃತ ಭಾಷಾ ವಿಭಾಗದ ಜಿಎಂ ದೇವೇಶ್ ದುಬೆ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಕೃಷ್ಣ ಕುಮಾರ್ ಯಾದವ್, ಮತ್ತು ಅಧಿಕೃತ ಭಾಷಾ ವಿಭಾಗದ ಮುಖ್ಯ ವ್ಯವಸ್ಥಾಪಕ ಸುಧೀರ್ ದುಬೆ ಉಪಸ್ಥಿತರಿದ್ದರು. ವಿಚಾರಸಂಕಿರಣದಲ್ಲಿ ಒಟ್ಟು ಐದು ಮಾಹಿತಿಪೂರ್ಣ ಗೋಷ್ಠಿಗಳು ನಡೆದವು. ಪುತ್ತೂರು, ಉಡುಪಿ, ಕುಂದಾಪುರ, ಸುಳ್ಯ, ಕಾರ್ಕಳ, ಮೂಡುಬಿದಿರೆ, ಉಜಿರೆ ಮತ್ತು ಮಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳು, ಕೇಂದ್ರ ಸರಕಾರಿ ಕಚೇರಿಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಸಂಸ್ಥೆಗಳಿಂದ ಸುಮಾರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 10 Feb 2026 9:07 pm

ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಆಳ್ವಾಸ್ ವಿದ್ಯಾರ್ಥಿನಿಯರು‌ ಪ್ರಥಮ

ಮೂಡುಬಿದಿರೆ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಫೆ. 7 ಮತ್ತು 8ರಂದು ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಬಿ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸ್ನೇಹ ಪರಪ್ಪ ಸಮಾಯಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಾರ್ತಾ ಭಾರತಿ 10 Feb 2026 9:04 pm

ಗ್ರಾಮ ಪಂಚಾಯತಿ ಸದಸ್ಯರು ಅವಧಿ ಕೊನೆಯಲ್ಲೂಅವಿಶ್ವಾಸಕ್ಕೆ ಅವಕಾಶ - ಕರ್ನಾಟಕ ಹೈಕೋರ್ಟ್‌ ಆದೇಶ

ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್‌​ ಪೀಠವು ಆದೇಶ ನೀಡಿದೆ. ಕೋಲಾರ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಅವಿಶ್ವಾಸ ನಿರ್ಣಯ ದಿನಾಂಕ ನಿಗದಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಏಕ ಸದಸ್ಯ ಪೀಠ ಈ ತೀರ್ಮಾನ ಹೇಳಿದೆ.

ವಿಜಯ ಕರ್ನಾಟಕ 10 Feb 2026 9:03 pm

CBSE 12ನೇ ತರಗತಿ ಪರೀಕ್ಷೆಗೆ ಬಂತು ಡಿಜಿಟಲ್ ಟಚ್‌ ; ಇನ್ಮುಂದೆ ಕಂಪ್ಯೂಟರ್‌ನಲ್ಲೇ ಮೌಲ್ಯಮಾಪನ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ ಶೈಕ್ಷಣಿಕ ಸಾಲಿನ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಮತ್ತು ಐತಿಹಾಸಿಕ ಬದಲಾವಣೆಯೊಂದನ್ನು ಘೋಷಿಸಿದೆ. ತಂತ್ರಜ್ಞಾನದ ಅಳವಡಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ನಿರ್ಧರಿಸಿದೆ. ಇದಕ್ಕೆ 'ಆನ್-ಸ್ಕ್ರೀನ್ ಮಾರ್ಕಿಂಗ್' (On-Screen Marking - OSM)

ಒನ್ ಇ೦ಡಿಯ 10 Feb 2026 8:59 pm

ಕಂಡ್ಲೂರು ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ; 11 ಮಂದಿ ಬಂಧನ

ನಾಲ್ಕು ದೋಣಿ ಸಹಿತ ಮರಳು ವಶ

ವಾರ್ತಾ ಭಾರತಿ 10 Feb 2026 8:58 pm

ಟಿ20 ವಿಶ್ವಕಪ್ ವೇಳೆ ಆಟಗಾರರೊಂದಿಗೆ ಇರಬಹುದೇ ಪತ್ನಿಯರು?: ಟೀಂ ಇಂಡಿಯಾ ಮನವಿಗೆ ಬಿಸಿಸಿಐ ಒಪ್ಪಿಗೆ ಯಾಕಿಲ್ಲ?

Team India News- ಭಾರತ ತಂಡದೊಂದಿಗೆ ಆಟಗಾರರ ಪತ್ನಿಯರು ಸಹ ವಾಸ್ತವ್ಯ ಹೂಡುವ, ಪ್ರಯಾಣ ಮಾಡುವ ಬಗ್ಗೆ ಕಳೆದ ವರ್ಷ ದೊಡ್ಡ ಚರ್ಚೆ ನಡೆದ ಬಳಿಕ ಬಿಸಿಸಿಐ ಸ್ಪಷ್ಟ ನಿಲುವಿಗೆ ಬಂದಿತ್ತು. ಅದರ ಪ್ರಕಾರ ಅನೇಕ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸಾಗಿತ್ತು. ದೀರ್ಘಕಾಲದ ಪ್ರವಾಸದಲ್ಲಿ ಮಾತ್ರ ಕೆಲ ದಿನಗಳ ಕಾಲ ಕುಟುಂಬದೊಂದಿಗೆ ಉಳಿಯಲು ಅವಕಾಶ ನೀಡಲಾಗಿತ್ತು. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮುಂದಿರಿಸಿದ ಪ್ರಸ್ತಾಪಕ್ಕೆ ಬಿಸಿಸಿಐ ಖಡಕ್ಕಾಗಿ ಹೇಳಿದ್ದೇನು?

ವಿಜಯ ಕರ್ನಾಟಕ 10 Feb 2026 8:54 pm

ಬಿಜೆಪಿಗರ ಹೋರಾಟ ಪ್ರಚಾರಕ್ಕಾಗಿಯೇ ಹೊರತು, ಜನರ ಹಿತಕ್ಕಾಗಿ ಅಲ್ಲ: ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ಬಿಜೆಪಿಯವರ ಹೋರಾಟ ಏನಿದ್ದರೂ ರಾಜಕೀಯಕ್ಕಾಗಿ ಹೊರತು, ಜನರ ಹಿತಕ್ಕಾಗಿ ಇಲ್ಲ. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಮಂಗಳವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಮೆಟ್ರೋ ದರ ಏರಿಕೆ ವಿಚಾರ ಕೇಂದ್ರ ಸರಕಾರ ದರ ಏರಿಕೆಗೆ ತಡೆ ಹಿಡಿಯಬಹುದಾಗಿತ್ತಲ್ಲವೇ? ಬಿಜೆಪಿ ನಾಯಕರು ಯಾವ ಕಾನೂನಿನ ಅಡಿಯಲ್ಲಿ ಇದನ್ನು ತಡೆದಿದ್ದಾರೆಂದು ಹೇಳಲಿ. ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ ಅಷ್ಟೇ. ಅವರು ಕೇಂದ್ರ ಮಂತ್ರಿ ಭೇಟಿ ಮಾಡಿರಬಹುದು. ಆದರೆ, ದರ ಏರಿಕೆ ತಡೆಯುವ ಯಾವ ರೀತಿಯ ಹಕ್ಕು ಅವರಿಗೆ ಇಲ್ಲ ಎಂದು ತಿಳಿಸಿದರು. ‘ರಾಜಕೀಯದಲ್ಲಿ ಬದುಕಿದ್ದೇನೆಂದು ತೋರಿಸಿಕೊಳ್ಳಲು, ಪ್ರಚಾರ ಪಡೆಯಲು ತೇಜಸ್ವಿ ಸೂರ್ಯ ಈ ರೀತಿ ಮಾಡುತ್ತಿದ್ದಾರೆ. ಅವರಿಂದ ಕರ್ನಾಟಕ ರಾಜ್ಯಕ್ಕೆ 1 ರೂ.ಅನುದಾನ ತರಲು ಆಗಿಲ್ಲ. ಬೆಂಗಳೂರಿಗೆ ಒಂದು ಯೋಜನೆ ತರಲು ಆಗಲಿಲ್ಲ. ಹೀಗಾಗಿ ಮಾತನಾಡುತ್ತಾರೆ, ಮಾಧ್ಯಮಗಳು ಅವರನ್ನು ದೊಡ್ಡ ನಾಯಕನಂತೆ ಬಿಂಬಿಸುತ್ತಿದ್ದೀರಿ. ಅವರಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿ ಬೇರೆಯವರು ಯಾರೂ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು. ಎಐಸಿಸಿ ನಾಯಕರು ಒಂದು ಸಭೆ ನಿಗದಿಪಡಿಸಿದ್ದಾರೆ. ವಿವಿಧ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಚರ್ಚೆಗೆ ಕರೆದಿದ್ದಾರೆ ಎಂದ ಅವರು, ದಿಲ್ಲಿಗೆ ಬಂದ ನಂತರ ಯಾರೆಲ್ಲಾ ಬಿಡುವಾಗಿರುತ್ತಾರೆ, ಸಮಯ ನೀಡುತ್ತಾರೋ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ವಾರ್ತಾ ಭಾರತಿ 10 Feb 2026 8:51 pm

ರಣಜಿ| ಸುದೀಪ್ ಘರಾಮಿ 299 ರನ್: ಬಂಗಾಳಕ್ಕೆ ಇನಿಂಗ್ಸ್ ಜಯ, ಸೆಮಿ ಫೈನಲ್‌ಗೆ ಲಗ್ಗೆ

ಕಲ್ಯಾಣಿ, ಫೆ.10: ಆಂಧ್ರ ತಂಡದ ವಿರುದ್ಧ ಇನಿಂಗ್ಸ್ ಹಾಗೂ 90 ರನ್‌ಗಳ ಅಂತರದಿಂದ ಜಯಶಾಲಿಯಾಗಿರುವ ಬಂಗಾಳ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ರಣಜಿಯ ಕ್ವಾರ್ಟರ್ ಫೈನಲ್ ಪಂದ್ಯದುದ್ದಕ್ಕೂ ಆಂಧ್ರ ತಂಡ ಸ್ಪರ್ಧೆಯಲ್ಲಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 295 ರನ್‌ಗೆ ಆಲೌಟಾಗಿದ್ದ ಆಂಧ್ರ ತಂಡ ಕೊನೆಯ ದಿನವಾದ ಮಂಗಳವಾರ ತನ್ನ ಎರಡನೇ ಇನಿಂಗ್ಸ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ 90 ರನ್ ಹೊರತಾಗಿಯೂ 244 ರನ್‌ಗೆ ಆಲೌಟಾಯಿತು. ಬಂಗಾಳ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಸುದೀಪ ಕುಮಾರ್ ಘರಮಿ ಅವರ ಭರ್ಜರಿ ಬ್ಯಾಟಿಂಗ್(299 ರನ್, 596 ಎಸೆತ, 31 ಬೌಂಡರಿ, 6 ಸಿಕ್ಸರ್)ಸಹಾಯದಿಂದ 629 ರನ್ ಗಳಿಸಿತು. ಹಬೀಬ್ ಗಾಂಧಿ(95 ರನ್, 229 ಎಸೆತ)ಹಾಗೂ ಸುಮಂತ ಗುಪ್ತಾ(81 ರನ್, 167 ಎಸೆತ)ಅರ್ಧಶತಕಗಳ ಕೊಡುಗೆ ನೀಡಿದರು. ಐದನೇ ದಿನವಾದ ಮಂಗಳವಾರ 3 ವಿಕೆಟ್‌ಗಳ ನಷ್ಟಕ್ಕೆ 64 ರನ್‌ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಆಂಧ್ರ ತಂಡ 72.2 ಓವರ್‌ಗಳಲ್ಲಿ 244 ರನ್‌ಗೆ ಸರ್ವಪತನವಾಗಿ ಇನಿಂಗ್ಸ್ ಹಾಗೂ 90 ರನ್‌ಗಳ ಅಂತರದಿಂದ ಸೋಲುಂಡಿತು. ಆಂಧ್ರ ಬ್ಯಾಟರ್‌ಗಳು ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರತಿರೋಧ ಒಡ್ಡಿದರು. ಬ್ಯಾಟರ್ ಕೆ.ಎಸ್. ಭರತ್ ಗಾಯಗೊಂಡಿರುವುದು ತಂಡದ ಹೋರಾಟಕ್ಕೆ ಹಿನ್ನಡೆವುಂಟು ಮಾಡಿತು. ಬಂಗಾಳದ ಪರ ಶಹಬಾಝ್ ಅಹ್ಮದ್(4-72)ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದರು. ವೇಗಿಗಳಾದ ಮುಕೇಶ್ ಕುಮಾರ್(5-66)ಹಾಗೂ ಆಕಾಶ್ ದೀಪ್(4-79)ಮೊದಲ ಇನಿಂಗ್ಸ್‌ನಲ್ಲಿ ಆಂಧ್ರ ತಂಡಕ್ಕೆ ಭಾರೀ ಹಾನಿವುಂಟು ಮಾಡಿದ್ದರು. ಬಂಗಾಳ ತಂಡವು ಫೆಬ್ರವರಿ 15ರಂದು ನಡೆಯಲಿರುವ ಮೊದಲ ಸೆಮಿ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಸೆಣಸಾಡಲಿವೆ. ಬಂಗಾಳ ತಂಡವು 2022-23ರ ಋತುವಿನಲ್ಲಿ ಕೊನೆಯ ಬಾರಿ ಸೆಮಿ ಫೈನಲ್ ಪಂದ್ಯವನ್ನು ಆಡಿತ್ತು. ‘‘ಬಂಗಾಳವು ಸರಿಯಾದ ಸಮಯಕ್ಕೆ ಉನ್ನತ ಮಟ್ಟ ತಲುಪಿದೆ. ನಾವು ಈ ವರ್ಷ ಸ್ಮರಣೀಯ ಕ್ಷಣ ಅನುಭವಿಸಿದ್ದೇವೆ. ಜ್ವರದ ಹೊರತಾಗಿಯೂ ಆಕಾಶ್ ದೀಪ್ ಸಹಿತ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದರು’’ ಎಂದು ನಾಯಕ ಅಭಿಮನ್ಯು ಈಶ್ವರನ್ ಹೇಳಿದ್ದಾರೆ.

ವಾರ್ತಾ ಭಾರತಿ 10 Feb 2026 8:50 pm

ಟಿ-20 ವಿಶ್ವಕಪ್| ನಮೀಬಿಯಾಕ್ಕೆ ಸೋಲುಣಿಸಿದ ನೆದರ್‌ಲ್ಯಾಂಡ್ಸ್

ಹೊಸದಿಲ್ಲಿ,ಫೆ.10: ಬಾಸ್ ಡಿ ಲೀಡ್ ಆಲ್‌ರೌಂಡ್ ಆಟದ(ಔಟಾಗದೆ 72 ರನ್, 2-20)ಸಹಾಯದಿಂದ ನೆದರ್‌ಲ್ಯಾಂಡ್ಸ್ ತಂಡವು ನಮೀಬಿಯಾ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಬಾಸ್ ಅವರ ತಂದೆ ಟಿಮ್ ಡಿ ಲೀಡ್ ಕೂಡ ನೆದರ್‌ಲ್ಯಾಂಡ್ಸ್ ಪರ ಆಡಿದ್ದರು. 2003ರ ಏಕದಿನ ವಿಶ್ವಕಪ್‌ನಲ್ಲಿ ಸಚಿನ್ ತೆಂಡುಲ್ಕರ್‌ರನ್ನು ಔಟ್ ಮಾಡಿದ್ದರು.ಇದರೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಕಬಳಿಸಿದ್ದರು. ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ತನ್ನ ಆಲ್‌ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ ಬಾಸ್ ಪಂದ್ಯಾವಳಿಯಲ್ಲಿ ನೆದರ್‌ಲ್ಯಾಂಡ್ಸ್ ತಂಡ ಸ್ಪರ್ಧೆಯಲ್ಲಿರುವಂತೆ ನೋಡಿಕೊಂಡರು. ಎರಡು ವಿಕೆಟ್ ಪಡೆದು ನಮೀಬಿಯಾ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ 156 ರನ್‌ಗೆ ನಿಯಂತ್ರಿಸಿದ ಬಾಸ್ ಡಿ ಲೀಡ್ 48 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು. ಡಿ ಲೀಡ್‌ಗೆ ಕಾಲಿನ್ ಆಕರ್ಮನ್ (32 ರನ್, 28 ಎಸೆತ)ಹಾಗೂ ಆರಂಭಿಕ ಆಟಗಾರ ಮೈಕಲ್ ಲೆವಿಟ್(28 ರನ್, 15 ಎಸೆತ)ಉತ್ತಮ ಸಾಥ್ ನೀಡಿದರು. ಆಕರ್ಮನ್ ಅವರೊಂದಿಗೆ ಮೂರನೇ ವಿಕೆಟ್‌ಗೆ 70 ರನ್ ಜೊತೆಯಾಟ ನಡೆಸಿದ ಡಿ ಲೀಡ್ ಪಂದ್ಯವನ್ನು ತನ್ನತ್ತ ಸೆಳೆದರು. ನೆದರ್‌ಲ್ಯಾಂಡ್ಸ್‌ನಂತೆಯೇ ನಮೀಬಿಯ ಕೂಡ ಸ್ಪಿನ್ ಬೌಲಿಂಗ್ ಮೂಲಕ ತನ್ನ ದಾಳಿಯನ್ನು ಆರಂಭಿಸಿತು. ಆರಂಭಿಕ ಆಟಗಾರ ಮ್ಯಾಕ್ಸ್ ಡಿ ಡೌಡ್(7 ರನ್)ಹಾಗೂ ಮೈಕಲ್ ಲೆವಿಟ್(28 ರನ್)ವಿಕೆಟ್‌ಗಳನ್ನು ಬೇಗನೆ ಉರುಳಿಸಿದ ನಮೀಬಿಯಾ ತಂಡ ಆರಂಭಿಕ ಮೇಲುಗೈ ಸಾಧಿಸಿತು. 22ರ ಹರೆಯದ ಲೆವಿಟ್ ಎಡಗೈ ವೇಗಿ ರುಬೆನ್‌ಗೆ ವಿಕೆಟ್ ಒಪ್ಪಿಸುವ ಮೊದಲು 15 ಎಸೆತಗಳಲ್ಲಿ 28 ರನ್ ಗಳಿಸಿ ಡಚ್ಚರು 50 ರನ್ ಗಳಿಸುವಲ್ಲಿ ನೆರವಾದರು. 13ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಅಕರ್ಮನ್(32 ರನ್, 28 ಎಸೆತ) ಔಟಾದಾಗ ನೆದರ್‌ಲ್ಯಾಂಡ್ಸ್ ಗೆಲುವಿಗೆ ಇನ್ನೂ 43 ರನ್‌ಗಳ ಅಗತ್ಯವಿತ್ತು. ಬಾಸ್ ಡಿ ಲೀಡ್(ಔಟಾಗದೆ 72, 48 ಎಸೆತ, 5 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ಸ್(ಔಟಾಗದೆ 18, 9 ಎಸೆತ)ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 24 ಎಸೆತಗಳಲ್ಲಿ 43 ರನ್ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನಮೀಬಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 156 ರನ್ ಕಲೆ ಹಾಕಿತು. ನಮೀಬಿಯಾ ಮೂರನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ಎರಡನೇ ವಿಕೆಟ್‌ಗೆ 50 ರನ್ ಸೇರಿಸಿದ ಜಾನ್ ಫೈಲಿಂಕ್(30 ರನ್, 26 ಎಸೆತ)ಹಾಗೂ ಜಾನ್ ನಿಕೊಲ್ ಲೋಫ್ಟಿ(42 ರನ್, 38 ಎಸೆತ)ತಂಡವನ್ನು ಆಧರಿಸಿದರು. ಜೆ.ಜೆ.ಸ್ಮಿತ್(22 ರನ್, 15 ಎಸೆತ)ಹಾಗೂ ನಾಯಕ ಗೆರ್ಹಾರ್ಡ್ ಎರಾಸ್ಮಸ್(18 ರನ್, 9 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದ ಪರಿಣಾಮ ನಮೀಬಿಯಾ ತಂಡವು 156 ರನ್ ಕಲೆ ಹಾಕಿತು. ನೆದರ್‌ಲ್ಯಾಂಡ್ಸ್ ತಂಡವು ಒಟ್ಟು 8 ಬೌಲರ್‌ಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ ಲೊಗನ್ ವಾನ್ ಬೀಕ್(2-13) ಹಾಗೂ ಬಾಸ್ ಡಿ ಲೀಡ್(2-20)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ವಾರ್ತಾ ಭಾರತಿ 10 Feb 2026 8:47 pm

ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಹರ್ಷಿತ್ ರಾಣಾ: ಐಪಿಎಲ್‌ನ ಬಹುತೇಕ ಪಂದ್ಯಗಳಿಗೆ ಅಲಭ್ಯ

ಮುಂಬೈ, ಫೆ.10: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ವೇಗದ ಬೌಲರ್ ಹರ್ಷಿತ್ ರಾಣಾ ಟಿ-20 ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. ಮುಂಬರುವ ಐಪಿಎಲ್‌ನ ಬಹುತೇಕ ಪಂದ್ಯಗಳಿಂದಲೂ ವಂಚಿತರಾಗಲಿದ್ದಾರೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ರಾಣಾ ಅವರು ಅಮೆರಿಕ ವಿರುದ್ಧ ಭಾರತ ತಂಡ ಆಡಿರುವ ಮೊದಲ ವಿಶ್ವಕಪ್ ಪಂದ್ಯದಿಂದಲೂ ಹೊರಗುಳಿದಿದ್ದರು. ‘‘ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ವೈದ್ಯ ದಿನ್‌ಶಾ ಪರ್ದಿವಾಲಾ ಅವರು ರಾಣಾ ಅವರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸರ್ಜರಿಯ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ(ಸಿಒಇ)ತೆರಳಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ’’ ಎಂದು ಮೂಲಗಳು ತಿಳಿಸಿವೆ. ರಾಣಾ ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದು, ಮುಂಬರುವ ಐಪಿಎಲ್‌ನ ಬಹುತೇಕ ಪಂದ್ಯಗಳು ಅಥವಾ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 10 Feb 2026 8:45 pm

ಅನಂತಶಯನ ಶ್ರೀವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ

ಕಾರ್ಕಳ: ಅನಂತಶಯನ ರಸ್ತೆ ಕಾರ್ಕಳದಲ್ಲಿರುವ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾಜಿ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಅವರು ತಿಳಿಸಿದರು. ಅವರು ಮಂಗಳವಾರ ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಶ್ರೀ ಚಿತ್ರಾಪುರ ಮಠದ ಶಿರಾಲಿ ಮಠಾಧೀಶರಾದ ಪರಮಪೂಜ್ಯ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳು ಉತ್ಸವದ ಅಂಗವಾಗಿ ಒಂದು ವಾರ ಕಾಲ ಮೊಕ್ಕಾಂ ಹೂಡಲಿದ್ದು, ಗುರುವರ್ಯರ ಪಾವನ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮಹೋತ್ಸವವು ನಡೆಯಲಿದೆ ಎಂದು ಅವರು ಹೇಳಿದರು. ಫೆ. 11ರಿಂದ 18ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ಆಯೋಜಿಸಲಾಗಿದೆ ಎಂದರು. ನಿಯೋಜಕ ಕೈಲಾಜೆ ಪ್ರಸನ್ನ ಮಾತನಾಡಿ , ಈ ಮಠವು ಭಟ್ಕಳದ ಶಿರಾಲಿ ಮಠಕ್ಕೆ ಸೇರಿದ ದೇವಾಲಯವಾಗಿದ್ದು, 1881ರಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರವು ಅನೇಕ ವರ್ಷಗಳಿಂದ ಭಕ್ತರ ಆಸ್ಥಾನವಾಗಿದೆ ಎಂದರು. ನಿಕಟಪೂರ್ವ ವ್ಯವಸ್ಥಾಪಕ ಬಿ.ಎಲ್. ಸುಧಾಕರ್ ಮಾತನಾಡಿ, ಮಹಾ ಶಿವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಸುಮಾರು 5,000ಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಭಕ್ತರ ಸೌಲಭ್ಯಕ್ಕಾಗಿ ದೇವಾಲಯದ ಪ್ರಾಂಗಣವನ್ನು ನವೀಕರಿಸಲಾಗಿದ್ದು, ಶುದ್ಧ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಸ್ವಚ್ಛತೆ ವ್ಯವಸ್ಥೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದರು. ಉತ್ಸವದ ಅವಧಿಯಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ರುದ್ರಾಭಿಷೇಕ, ರಾತ್ರಿ ಜಾಗರಣೆ, ಭಜನೆ ಹಾಗೂ ಧಾರ್ಮಿಕ ಪ್ರವಚನಗಳು ನಡೆಯಲಿದೆ ಎಂದರು.

ವಾರ್ತಾ ಭಾರತಿ 10 Feb 2026 8:43 pm

ಟಿ-20 ವಿಶ್ವಕಪ್‌| ಸೀಫರ್ಟ್, ಅಲೆನ್ ಭರ್ಜರಿ ಜೊತೆಯಾಟ: ಕಿವೀಸ್‌ಗೆ ಸುಲಭ ತುತ್ತಾದ ಯುಎಇ

ಚೆನ್ನೈ, ಫೆ.10: ಆರಂಭಿಕ ಬ್ಯಾಟರ್‌ಗಳಾದ ಟಿಮ್ ಸೀಫರ್ಟ್(ಔಟಾಗದೆ 89 ರನ್, 42 ಎಸೆತ, 12 ಬೌಂಡರಿ, 3 ಸಿಕ್ಸರ್)ಹಾಗೂ ಫಿನ್ ಅಲೆನ್(ಔಟಾಗದೆ 84, 50 ಎಸೆತ, 5 ಬೌಂಡರಿ, 5 ಸಿಕ್ಸರ್) ಐತಿಹಾಸಿಕ ಜೊತೆಯಾಟದ ನೆರವಿನಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ನಿರೀಕ್ಷೆಯಂತೆಯೇ ಟಿ-20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಯುಎಇ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿತು. ಗ್ಲೆನ್ ಫಿಲಿಪ್ಸ್ 18ನೇ ಓವರ್‌ನಲ್ಲಿ 27 ರನ್ ನೀಡಿದ್ದರು. ಜೆಮ್ಮಿ ನೀಶಾಮ್ ಓವರ್ ಥ್ರೋ ಮೂಲಕ ನಾಲ್ಕು ರನ್ ಸೋರಿಕೆ ಮಾಡಿದ ಹೊರತಾಗಿಯೂ ಕಿವೀಸ್ ಪಡೆ ಇನ್ನೂ 28 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು. ಸೂಪರ್-8 ಹಂತವನ್ನು ತಲುಪುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಅಲೆನ್ ಹಾಗೂ ಸೀಫರ್ಟ್ ಇಬ್ಬರೇ ಸೇರಿಕೊಂಡು 174 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ(175) ನಡೆಸಿದ ಹಿರಿಮೆಗೆ ಪಾತ್ರರಾದರು. ಟಿಮ್ ಶೆಫರ್ಟ್ ಹಾಗೂ ಫಿನ್ ಅಲೆನ್ ಟಿ-20 ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ಪರ ಮೊದಲ ವಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ(175 ರನ್)ನಡೆಸಿದರು. ಇದರೊಂದಿಗೆ ವಿನ್ಸೆಂಟ್ ಹಾಗೂ ಮೆಕಲಮ್ ನಡುವಿನ 68 ರನ್ ಜೊತೆಯಾಟವನ್ನು ಮುರಿದರು. ನ್ಯೂಝಿಲ್ಯಾಂಡ್ ಹಾಗೂ ಯುಎಇ ನಡುವಿನ ಟಿ-20 ಪಂದ್ಯದಲ್ಲಿ ಒಟ್ಟು ಗರಿಷ್ಠ ರನ್(348)ದಾಖಲಾಗಿದೆ. ಟಿ-20 ವಿಶ್ವಕಪ್‌ನಲ್ಲಿ ಯುಎಇ ಬೌಲರ್ ಮುಹಮ್ಮದ್ ರೋಹಿದ್ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ರನ್(51)ಬಿಟ್ಟುಕೊಟ್ಟರು. ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡವು ನಾಯಕ ಮುಹಮ್ಮದ್ ವಸೀಂ(ಔಟಾಗದೆ 66 ರನ್, 45 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಅಲಿಶನ್ ಶರಫು(55 ರನ್, 47 ಎಸೆತ, 5 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 173 ರನ್ ಕಲೆ ಹಾಕಿತು. ವಸೀಂ ಹಾಗೂ ಶರಫು ಯುಎಇ ತಂಡದ ಪರ ಎರಡನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ(107 ರನ್)ನಡೆಸಿದರು. ಈ ಮೂಲಕ ರಿಝ್ವಾನ್ ಹಾಗೂ ಮುಹಮ್ಮದ್ ವಸೀಂ ನಡುವಿನ 58 ರನ್ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ. ಮುಹಮ್ಮದ್ ವಸೀಂ ಅವರು ಪುರುಷರ ಟಿ-20 ವಿಶ್ವಕಪ್‌ನಲ್ಲಿ ಯುಎಇ ಪರ ಗರಿಷ್ಠ ವೈಯಕ್ತಿಕ ಸ್ಕೋರ್(66 ರನ್)ಕಲೆ ಹಾಕಿದರು. ವಸೀಂ ಟಿ-20 ವಿಶ್ವಕಪ್‌ನ ಇನಿಂಗ್ಸ್‌ವೊಂದರಲ್ಲಿ ಸಿಕ್ಸರ್, ಬೌಂಡರಿಗಳ ಮೂಲಕವೇ ಗರಿಷ್ಠ ರನ್(34) ದಾಖಲಿಸಿ ಶೈಮನ್ ಅನ್ವರ್(22 ರನ್)ದಾಖಲೆಯನ್ನು ಮುರಿದರು. ಮೊದಲ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಸೀಫರ್ಟ್-ಅಲನ್ ನ್ಯೂಝಿಲ್ಯಾಂಡ್ ತಂಡದ ಓಪನರ್‌ಗಳಾದ ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಜೊತೆಯಾಟದಲ್ಲಿ ಭಾಗಿಯಾದರು. ಮ್ಯಾಕ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಯುಎಇ ವಿರುದ್ಧದ ‘ಡಿ’ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಕಿವೀಸ್ ಜೋಡಿ ಆಸ್ಟ್ರೇಲಿಯದಲ್ಲಿ ನಡೆದಿದ್ದ 2022ರ ಆವೃತ್ತಿಯ ಸೆಮಿ ಫೈನಲ್‌ನಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ದಾಖಲಿಸಿದ್ದ 170 ರನ್ ಜೊತೆಯಾಟವನ್ನು ಮುರಿದರು. ಸೀಫರ್ಟ್ ಹಾಗೂ ಅಲೆನ್ ಅವರ ದಾಖಲೆಯ ಜೊತೆಯಾಟದ ನೆರವಿನಿಂದಾಗಿ ನ್ಯೂಝಿಲ್ಯಾಂಡ್ ತಂಡವು 173 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಪ್ರಸಕ್ತ ವಿಶ್ವಕಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿತು. ಟಿ-20 ವಿಶ್ವಕಪ್‌ನಲ್ಲಿ ಗರಿಷ್ಠ ಜೊತೆಯಾಟ 175: ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್(ನ್ಯೂಝಿಲ್ಯಾಂಡ್), 2026ರಲ್ಲಿ ಯುಎಇ ವಿರುದ್ಧ 170: ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್(ಇಂಗ್ಲೆಂಡ್), 2022ರಲ್ಲಿ ಭಾರತದ ವಿರುದ್ಧ 168: ರಿಲೀ ರೊಸ್ಸೌ ಹಾಗೂ ಕ್ವಿಂಟನ್ ಡಿಕಾಕ್(ದಕ್ಷಿಣ ಆಫ್ರಿಕಾ), 2022ರಲ್ಲಿ ಬಾಂಗ್ಲಾದೇಶ ವಿರುದ್ಧ 166: ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ, 2010ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 154: ರಹಮಾನುಲ್ಲಾ ಗುರ್ಬಾಝ್-ಇಬ್ರಾಹೀಂ ಝದ್ರಾನ್(ಅಫ್ಘಾನಿಸ್ತಾನ), 2024ರಲ್ಲಿ ಉಗಾಂಡ ವಿರುದ್ಧ

ವಾರ್ತಾ ಭಾರತಿ 10 Feb 2026 8:42 pm

Devadurga | ಸಾರಿಗೆ ಬಸ್–ಟಂಟಂ ಮುಖಾಮುಖಿ ಢಿಕ್ಕಿ : ಗರ್ಭಿಣಿ ಸೇರಿ ಇಬ್ಬರು ಮೃತ್ಯು, 14 ಜನರಿಗೆ ಗಾಯ

ದೇವದುರ್ಗ: ತಾಲೂಕಿನ ಕರಿಗುಡ್ಡ ಗ್ರಾಮ ಸಮೀಪ ಮಂಗಳವಾರ ಮಧ್ಯಾಹ್ನ ಸಾರಿಗೆ ಬಸ್ ಮತ್ತು ಟಂಟಂ ಆಟೋ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವದುರ್ಗ ಪಟ್ಟಣದತ್ತ ಬರುತ್ತಿದ್ದ ಟಂಟಂ ವಾಹನ ಕರಿಗುಡ್ಡ ತಿರುವಿನಲ್ಲಿ ಬಸ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಆಟೋದಲ್ಲಿದ್ದ ಗರ್ಭಿಣಿ ಮೋನಮ್ಮ (25) ಹಾಗೂ ಮಲ್ಲಪ್ಪ (50) ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮೋನಮ್ಮ ಸಿರವಾರ ತಾಲೂಕಿನವರಾಗಿದ್ದು, ತವರು ಮನೆ ಕರಿಗುಡ್ಡ ಗ್ರಾಮಕ್ಕೆ ಬಂದಿದ್ದರು. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರು ಸ್ಕ್ಯಾನಿಂಗ್ ತಪಾಸಣೆಗೆ ಕುಟುಂಬಸ್ಥರೊಂದಿಗೆ ದೇವದುರ್ಗಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಗರ್ಭದಲ್ಲಿದ್ದ ಮಗು ಕೂಡ ಮೃತಪಟ್ಟಿದೆ. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಪ್ಪ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ರೋಹಿತ್ (5) ಎಂಬ ಬಾಲಕನಿಗೆ ಮೂಗಿಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಟಂಟಂ ವಾಹನದಲ್ಲಿದ್ದ ದುರಗಪ್ಪ, ಬಾಲಪ್ಪ, ಬಾಳಪ್ಪ, ಶಿವಮ್ಮ, ರೇಣುಕಾ, ಅರಣಕುಮಾರ, ಶಿವರಾಜ ಸೇರಿದಂತೆ ಇತರರು ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕ ದುರಗಪ್ಪಗೆ ಕೈ-ಕಾಲಿಗೆ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಶಾಸಕಿ, ಹೆಚ್ಚುವರಿ ಎಸ್ಪಿ ಭೇಟಿ : ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕಿ ಕರೆಮ್ಮ ಜಿ. ನಾಯಕ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದರು.

ವಾರ್ತಾ ಭಾರತಿ 10 Feb 2026 8:39 pm

ಜನರಲ್ ನರವಾಣೆ ಆತ್ಮಕತೆ ಪ್ರಕಟವಾಗಿಯೇ ಇಲ್ಲ ಎಂದ ಪೆಂಗ್ವಿನ್ ಇಂಡಿಯಾ; ಯಾವುದು ಸತ್ಯ, ಯಾವುದು ಸುಳ್ಳು?

Photo Credit : PTI  2025 ರ ಅಕ್ಟೋಬರ್‌ ನಲ್ಲಿ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ, ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಇತ್ತೀಚೆಗೆ ಬಿಡುಗಡೆಯಾದ ‘ದಿ ಕ್ಯಾಂಟೋನ್ಮೆಂಟ್ ಕಾನ್ಸ್ಪಿರಸಿ’ ಎಂಬ ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರ ಆತ್ಮಕತೆ ‘Four Stars of Destiny’ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನರವಾಣೆ, “ಅದು ಹಳೆಯ ವೈನ್‌ ನಂತೆ ಪಕ್ವವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದು ಅಲ್ಲಿ ಹೆಚ್ಚು ಕಾಲ ಇದ್ದಂತೆ, ಅದು ಹೆಚ್ಚು ಹೆಚ್ಚು ವಿಂಟೇಜ್ ಆಗುತ್ತದೆ; ಹೆಚ್ಚು ಮೌಲ್ಯಯುತವಾಗುತ್ತದೆ” ಎಂದು ಹೇಳಿದ್ದರು. ಮಾಜಿ ಜನರಲ್‌ ಗಳು, ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳಿಂದ ಹೊಗಳಲ್ಪಟ್ಟ ಈ ಪುಸ್ತಕವು ಅಧಿಕೃತವಾಗಿ ಪ್ರಕಟವಾಗದೆ ಹೇಗೆ ಬಿಡುಗಡೆಯಾಗಿದೆ ಎಂಬುದು ಸದ್ಯ ಬಹುಚರ್ಚಿತ ಸಂಗತಿಯಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಲು ಸಂಸತ್ತಿಗೆ ಅದರ ಒಂದು ಪ್ರತಿಯನ್ನು ತಂದಿದ್ದರು. “ಪೂರ್ವ-ಮುದ್ರಿತ” ಅನುಮೋದಿಸದ ಪ್ರತಿಯ ಪಿಡಿಎಫ್ ಆನ್‌ ಲೈನ್‌ ನಲ್ಲಿ ಪ್ರಸಾರವಾಗುತ್ತಿದೆ. ಇದರ ನಡುವೆ, ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ‘Four Stars of Destiny’ ಮುದ್ರಣಕ್ಕೂ ಹೋಗಿಲ್ಲ ಎಂದು ಹೇಳಿಕೆ ನೀಡಿದೆ. ►ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿದ್ದೇನು? Statement from the publisher. pic.twitter.com/pksacg3EeT — Penguin India (@PenguinIndia) February 9, 2026 “ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕತೆ ‘Four Stars of Destiny’ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಪುಸ್ತಕ ಪ್ರಕಟಣೆಗೆ ಹೋಗಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಕಂಪೆನಿಯು ಮುದ್ರಿತ ಅಥವಾ ಡಿಜಿಟಲ್ ರೂಪದಲ್ಲಿ ಪುಸ್ತಕದ ಯಾವುದೇ ಪ್ರತಿಗಳನ್ನು ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಪುಸ್ತಕದ ಯಾವುದೇ ಆವೃತ್ತಿಯು ಪೂರ್ಣವಾಗಲಿ, ಭಾಗಶಃವಾಗಲಿ ಮುದ್ರಣ, ಪಿಡಿಎಫ್ ಅಥವಾ ಆನ್‌ ಲೈನ್ ಪ್ರತಿಗಳು ಸೇರಿದಂತೆ ಯಾವುದೇ ಸ್ವರೂಪದಲ್ಲಿದ್ದರೂ, ಅದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ” ಎಂದು ಹೇಳಿದೆ. ರಕ್ಷಣಾ ಸಚಿವಾಲಯದಿಂದ ಇನ್ನೂ ಅನುಮೋದನೆ ಪಡೆಯದ ಹಸ್ತಪ್ರತಿಯ ಹಾರ್ಡ್‌ಬೌಂಡ್ ಪ್ರತಿಯೊಂದು ರಾಹುಲ್ ಗಾಂಧಿಗೆ ಹೇಗೆ ತಲುಪಿತು ಎಂಬ ಪ್ರಶ್ನೆ ಕೇಳಲಾಗುತ್ತಿರುವ ಹೊತ್ತಲ್ಲೇ ಪ್ರಕಾಶಕರಿಂದ ಈ ಹೇಳಿಕೆ ಬಂದಿದೆ. Hello friends. My book is available now. Just follow the link. Happy reading. Jai Hind pic.twitter.com/VCiLiZOWIi — Manoj Naravane (@ManojNaravane) December 15, 2023 ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪುಸ್ತಕ ಪ್ರಕಟವಾಗಿಲ್ಲ ಎಂದು ಪೆಂಗ್ವಿನ್ ಹೇಳುತ್ತಿದೆ. ಆದರೆ ಪುಸ್ತಕ ಅಮೆಝಾನ್‌ ನಲ್ಲಿ ಲಭ್ಯವಿದೆ. ಜನರಲ್ ನರವಾಣೆ ಅವರು 2023 ರಲ್ಲಿ ‘ದಯವಿಟ್ಟು ನನ್ನ ಪುಸ್ತಕವನ್ನು ಖರೀದಿಸಿ’ ಎಂದು ಟ್ವೀಟ್ ಮಾಡಿದ್ದಾರೆ. ನಾನು ಪೆಂಗ್ವಿನ್‌ ಗಿಂತ ನರವಾಣೆ ಜೀ ಅವರನ್ನು ನಂಬುತ್ತೇನೆ. ನೀವು ನರವಾಣೆ ಜೀ ಅವರನ್ನು ನಂಬುತ್ತೀರಾ? ನರವಾಣೆ ಜೀ ತಮ್ಮ ಪುಸ್ತಕದಲ್ಲಿ ಭಾರತ ಸರ್ಕಾರ ಮತ್ತು ಭಾರತದ ಪ್ರಧಾನ ಮಂತ್ರಿಗೆ ಅನಾನುಕೂಲಕರವಾದ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ ಎಂದು ನಾನು ನಂಬುತ್ತೇನೆ. ನಿಸ್ಸಂಶಯವಾಗಿ, ಪೆಂಗ್ವಿನ್ ಅಥವಾ ಸೇನೆಯ ಮಾಜಿ ಮುಖ್ಯಸ್ಥರು ಸತ್ಯವನ್ನು ಹೇಳುತ್ತಿದ್ದಾರೆಯೇ ಎಂಬುದನ್ನು ನೀವು ನಿರ್ಧರಿಸಬೇಕು” ಎಂದು ಹೇಳಿದ್ದಾರೆ. ►ಜನರಲ್ ನರವಾಣೆ ಪುಸ್ತಕ ವಿವಾದದ ಕೇಂದ್ರಬಿಂದುವಾಗಿದ್ದು ಹೇಗೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರಲ್ ನರವಾಣೆ ಅವರ ಪುಸ್ತಕ ಆಧರಿಸಿ ನಿಯತಕಾಲಿಕೆಯಲ್ಲಿನ ಲೇಖನವನ್ನು ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಈ ವಿಷಯ ರಾಜಕೀಯ ವಲಯದಲ್ಲಿ ಬಹುಚರ್ಚಿತವಾಗಿದೆ. ಲೋಕಸಭೆಯಲ್ಲಿ ರಾಹುಲ್ ಈ ವಿಷಯ ಪ್ರಸ್ತಾಪಿಸಿದಾಗ ಬಿಜೆಪಿ ನಾಯಕರು “ನೀವು ಪ್ರಕಟವಾದ ಪುಸ್ತಕದಿಂದ ಉಲ್ಲೇಖಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುವಂತೆ, ಕಳೆದ ವಾರ ಸಂಸತ್ತಿನ ಸಂಕೀರ್ಣದಲ್ಲಿ ರಾಹುಲ್ ಗಾಂಧಿ ಪುಸ್ತಕದ ಪ್ರತಿಯನ್ನು ಹಿಡಿದಿರುವುದು ಕಂಡುಬಂದಿತು. ಪುಸ್ತಕವು 2020 ರ ಭಾರತ-ಚೀನಾ ಮುಖಾಮುಖಿಯ ವಿವರಗಳು ಹಾಗೂ ನರವಾಣೆ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ನಡೆದ ಅಗ್ನಿಪಥ್ ನೇಮಕಾತಿ ಯೋಜನೆ ಕುರಿತ ಅವಲೋಕನಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಹಾಗಾದರೆ, ಪುಸ್ತಕ ಪ್ರಕಟವಾಗಿಲ್ಲದಿದ್ದರೆ ರಾಹುಲ್ ಗಾಂಧಿ ಅದರ ಪ್ರತಿಯನ್ನು ಹೇಗೆ ಪಡೆದರು? ಎಂಬುದು ಇನ್ನೊಂದು ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುತ್ತದೆ. ಪುಸ್ತಕವನ್ನು ಪ್ರೀ-ಆರ್ಡರ್ ಮಾಡಿದ ಸ್ಕ್ರೀನ್‌ ಶಾಟ್‌ ಗಳು ಹಾಗೂ ಖರೀದಿ ಪುರಾವೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಹಲವು ಓದುಗರು ಆನ್‌ ಲೈನ್‌ನಲ್ಲಿ ಮಾತ್ರವಲ್ಲದೆ ಪುಸ್ತಕ ಮಳಿಗೆಗಳಲ್ಲಿಯೂ ಸಹ ಮುಂಗಡ ಆರ್ಡರ್ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಆದರೆ ವಿವಾದದ ನಂತರ ಅಂತಹ ಎಲ್ಲಾ ಮುಂಗಡ ಆರ್ಡರ್‌ ಗಳನ್ನು ರದ್ದುಗೊಳಿಸಲಾಯಿತು. ವಿವಾದ ಭುಗಿಲೆದ್ದ ಬಳಿಕ ‘Four Stars of Destiny’ ಪ್ರತಿಗಳನ್ನು ಪ್ರಕಾಶಕರಿಗೆ ಹಿಂತಿರುಗಿಸಬೇಕಾಯಿತು ಎಂದು ದಿಲ್ಲಿಯ ಪುಸ್ತಕದಂಗಡಿಯ ಸಿಬ್ಬಂದಿಯೊಬ್ಬರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಇಲ್ಲಿರುವ ಪ್ರಶ್ನೆಯೆಂದರೆ, ಒಂದೇ ಒಂದು ಪ್ರತಿಯನ್ನು ಮುದ್ರಿಸದೇ ಇಷ್ಟು ಪ್ರಮಾಣದಲ್ಲಿ ಮುಂಗಡ ಆರ್ಡರ್‌ ಗಳಿಗೆ ಪುಸ್ತಕವನ್ನು ತೆರೆಯಬಹುದೇ? ತಾರ್ಕಿಕವಾಗಿ ಅದು ಸಾಧ್ಯವಿಲ್ಲ ಎಂದು ತೋರುತ್ತದೆ. ಆದರೆ ಸ್ಪಷ್ಟ ಉತ್ತರಗಳಿಲ್ಲ. ಬಿಡುಗಡೆಯಾಗದ ಪುಸ್ತಕದ ಪಿಡಿಎಫ್ ಆವೃತ್ತಿ ಈಗ ವಾಟ್ಸಾಪ್ ಮತ್ತು ಇ-ಮೇಲ್ ಚಾನೆಲ್‌ ಗಳಲ್ಲಿ ಪ್ರಸಾರವಾಗುತ್ತಿದೆ. ಇದು ಹೇಗೆ ಇಷ್ಟೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಯಿತು ಎಂಬುದರ ಕುರಿತು ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ, ಇನ್ನೂ ಅನುಮೋದನೆ ಪಡೆಯದ ‘Four Stars of Destiny’ ಪುಸ್ತಕದ ಸೋರಿಕೆ ಅಥವಾ ಉಲ್ಲಂಘನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಆನ್‌ ಲೈನ್ ಸುದ್ದಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ದಿಲ್ಲಿ ಪೊಲೀಸರ ವಿಶೇಷ ಘಟಕ ತನಿಖೆ ನಡೆಸಲಿದೆ. ಅಧಿಕಾರಿಗಳ ಪ್ರಕಾರ, 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಪೂರ್ವ-ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಲಾದ ವಿವಿಧ ಆನ್‌ಲೈನ್ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ವೇದಿಕೆಗಳಲ್ಲಿ ಕಂಡುಬಂದ ಮಾಹಿತಿಯನ್ನು ದೆಹಲಿ ಪೊಲೀಸರು ಗಮನದಲ್ಲಿಟ್ಟುಕೊಂಡಿದ್ದಾರೆ. ಪರಿಶೀಲಿಸಿದಾಗ M/s Penguin Random House India Pvt. Ltd. ಸಿದ್ಧಪಡಿಸಿದ ಅದೇ ಶೀರ್ಷಿಕೆಯ ಟೈಪ್-ಸೆಟ್ ಪುಸ್ತಕದ ಪಿಡಿಎಫ್ ಪ್ರತಿಯು ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವುದು ಕಂಡುಬಂದಿದೆ. ಕೆಲವು ಆನ್‌ ಲೈನ್ ಮಾರ್ಕೆಟಿಂಗ್ ಪ್ಲಾಟ್‌ ಫಾರ್ಮ್‌ ಗಳು ಪುಸ್ತಕವನ್ನು ಖರೀದಿಗೆ ಲಭ್ಯವಿದೆ ಎಂಬಂತೆ ಪ್ರದರ್ಶಿಸಿರುವುದೂ ಪತ್ತೆಯಾಗಿದೆ. ಇನ್ನೂ ಅನುಮೋದಿಸದ ಪ್ರಕಟಣೆಯ ಈ ಸೋರಿಕೆ/ಉಲ್ಲಂಘನೆ ಕುರಿತು ದಿಲ್ಲಿ ಪೊಲೀಸರ ವಿಶೇಷ ಘಟಕ ಸಂಪೂರ್ಣ ತನಿಖೆ ನಡೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ►ರಕ್ಷಣಾ ಸಚಿವಾಲಯವು 35 ಪುಸ್ತಕಗಳನ್ನು ಅನುಮೋದಿಸಿದೆ; ಬಾಕಿ ಇದ್ದದ್ದು ಇದೊಂದೇ ಪುಸ್ತಕ 2020 ರಿಂದ 2024 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ರಕ್ಷಣಾ ಸಚಿವಾಲಯದಿಂದ ಅನುಮೋದನೆಗೆ ಬಾಕಿ ಉಳಿದಿದ್ದವುಗಳಲ್ಲಿ ನರವಾಣೆಯವರ ಪುಸ್ತಕವೂ ಒಂದಾಗಿದೆ. ಆ ವರ್ಷದ ಜನವರಿಯಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ 2024 ಸೆಪ್ಟೆಂಬರ್ 17ರಂದು ನೀಡಿದ ಪ್ರತಿಕ್ರಿಯೆಯಲ್ಲಿ, ರಕ್ಷಣಾ ಸಚಿವಾಲಯದ ಸೇನಾ ಘಟಕವು 2020ರಿಂದ 35 ಪುಸ್ತಕ ಶೀರ್ಷಿಕೆಗಳು ಅನುಮೋದನೆಗಾಗಿ ಬಂದಿವೆ ಎಂದು ತಿಳಿಸಿದೆ. ಇವುಗಳಲ್ಲಿ ಕೇವಲ ಮೂರು ಪುಸ್ತಕಗಳಿಗೆ ಮಾತ್ರ ಇನ್ನೂ ಅನುಮೋದನೆ ಸಿಕ್ಕಿಲ್ಲ; ಅವುಗಳಲ್ಲಿ ಒಂದು ಜನರಲ್ ನರವಾಣೆ ಅವರ ಆತ್ಮಕಥೆ. ಆರ್‌ಟಿಐ ಉತ್ತರದ ಪ್ರಕಾರ, ಬ್ರಿಗೇಡಿಯರ್ ಜೀವನ್ ರಾಜ್‌ಪುರೋಹಿತ್ (ನಿವೃತ್ತ) ಅವರ ‘Leadership Beyond Barracks’ ಪುಸ್ತಕ “ಪ್ರಕ್ರಿಯೆಯಲ್ಲಿದೆ” ಎಂದು ತೋರಿಸಲಾಗಿದೆ. ಭಾರತೀಯ ಸೇನಾಧಿಕಾರಿ ಜನರಲ್ ಎನ್.ಸಿ. ವಿಜ್ (ನಿವೃತ್ತ) ಅವರ ‘Alone in the Ring’ ಹಾಗೂ ಜನರಲ್ ನರವಾಣೆ ಅವರ ‘Four Stars of Destiny’ ಎಂಬ ಎರಡು ಹಸ್ತಪ್ರತಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಜನರಲ್ ವಿಜ್ ಅವರ ಪುಸ್ತಕ ಮೇ 2025ರಲ್ಲಿ ಬಿಡುಗಡೆಗೊಂಡಿದೆ. ಬ್ರಿಗೇಡಿಯರ್ ರಾಜ್‌ಪುರೋಹಿತ್ ಅವರ ಪುಸ್ತಕಕ್ಕೂ ಅನುಮತಿ ದೊರೆತಿದ್ದು, ಲೇಖಕರ ಪ್ರಕಾರ ಅದು “ಪ್ರಕಟಣೆಗಾಗಿ ಕಾಯುತ್ತಿದೆ”. ಆದರೆ ನರವಾಣೆ ಅವರ ಪುಸ್ತಕಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆರ್‌ಟಿಐ ಉತ್ತರವು ನಿವೃತ್ತ ಮಿಲಿಟರಿ ಸಿಬ್ಬಂದಿಯಿಂದ ಪ್ರಕಟಣೆ ಅನುಮತಿಗಾಗಿ ಬಂದ ವಿನಂತಿಗಳಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತದೆ. 2020ರಲ್ಲಿ ಕೇವಲ ಒಂದು ಹಸ್ತಪ್ರತಿ ಪರಿಶೀಲನೆಗೆ ಕಳುಹಿಸಲಾಯಿತು; 2021ರಲ್ಲಿ ಯಾವುದೂ ಇಲ್ಲ. 2022ರಲ್ಲಿ ನಾಲ್ಕು ಹಸ್ತಪ್ರತಿಗಳು ಕಳುಹಿಸಲ್ಪಟ್ಟಿವೆ. 2023ರಲ್ಲಿ ನರವಾಣೆಯವರದೂ ಸೇರಿದಂತೆ 16 ಹಸ್ತಪ್ರತಿಗಳು ಸಲ್ಲಿಕೆಯಾಗಿವೆ. 2024ರಲ್ಲಿ ಸೆಪ್ಟೆಂಬರ್ ವರೆಗೆ ಈ ಸಂಖ್ಯೆ 14 ಆಗಿದೆ. ಲೆಫ್ಟಿನೆಂಟ್ ಜನರಲ್ ಎಸ್.ಎ. ಹಸ್ನೈನ್, ಲೆಫ್ಟಿನೆಂಟ್ ಜನರಲ್ ಎಸ್.ಕೆ. ಗಡೆಯೋಕ್, ಲೆಫ್ಟಿನೆಂಟ್ ಜನರಲ್ ಎಸ್.ಆರ್.ಆರ್. ಅಯ್ಯಂಗಾರ್, ಮೇಜರ್ ಜನರಲ್ (ಡಾ.) ಅಶೋಕ್ ಕುಮಾರ್, ಮೇಜರ್ ಜನರಲ್ ಸಶಿಕಾಂತ್ ಪಿತ್ರೆ, ಮೇಜರ್ ಜನರಲ್ ಆರ್.ಕೆ. ಶರ್ಮಾ, ಮೇಜರ್ ಜನರಲ್ ಜಿ.ಡಿ. ಬಕ್ಷಿ ಹಾಗೂ ಲೆಫ್ಟಿನೆಂಟ್ ಜನರಲ್ ಯೋಗೇಶ್ ಕುಮಾರ್ ಜೋಶಿ ಅವರ ಪುಸ್ತಕಗಳಿಗೆ ಅನುಮೋದನೆ ದೊರೆತಿದೆ.

ವಾರ್ತಾ ಭಾರತಿ 10 Feb 2026 8:33 pm

ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ | ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಾಂಗ್ರೆಸ್‍ನಿಂದ ವಿನೂತನ ಹೋರಾಟ

ಬೆಂಗಳೂರು : ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ದರ ಏರಿಕೆ ಕೇಂದ್ರದ ಬಿಜೆಪಿ ಸರಕಾರ ಮಾಡಿದೆ. ಅದರೆ, ಸಂಸದ ತೇಜಸ್ವಿ ಸೂರ್ಯ ಸಾರ್ವಜನಿಕ ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ, ತೇಜಸ್ವಿ ಸೂರ್ಯ ವೇಷ ಧರಿಸಿ, ಖಾಲಿ ಟ್ರಂಕ್ ಪ್ರದರ್ಶಿಸಿ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಇಲ್ಲಿನ ಆನಂದ್ ರಾವ್ ವೃತ್ತದಲ್ಲಿನ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಚೆನ್ನಾಗಿ ನಟನೆ ಮಾಡುತ್ತಿದ್ದು, ಸುಳ್ಳು ಹೇಳಿಕೆಗಳನ್ನು ನೀಡುವುದರಿಲ್ಲಿ ಆತನ ನಿಸ್ಸಿಮ. ಬಿಜೆಪಿಯವರು ಸುಳ್ಳನ್ನೇ ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. 11 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರಕಾರದ ಸಾಧನೆ ಎಂದರೆ 153ಲಕ್ಷ ಕೋಟಿ ರೂ. ಸಾಲ ಮಾಡಿರುವುದೇ ಸಾಧನೆಯಾಗಿದೆ ಎಂದು ಟೀಕಿಸಿದರು. ಬೆಂಗಳೂರು ಮೆಟ್ರೋ ರೈಲು 96 ಕಿ.ಮೀ. ರೈಲು ಮಾರ್ಗ, 200 ಕಿ.ಮೀ.ವರಗೆ ಹೆಚ್ಚಿಸಲಾಗುತ್ತಿದೆ. ಬಿಎಂಆರ್‍ಸಿಎಲ್ ಕೇಂದ್ರದ ಅಧೀನದಲ್ಲಿ ಇದೆ. ರಾಜ್ಯ ಸರಕಾರ ಸಾಲ ಪಡೆಯುವ ಮೂಲಕ ಮೆಟ್ರೋ ರೈಲು ಮಾರ್ಗವನ್ನು ನಿರ್ಮಾಣ ಮಾಡಿದೆ. 400 ಕೋಟಿ ರೂ.ಅಸಲು ಮತ್ತು 128 ಕೋಟಿ ರೂ. ಬಡ್ಡಿ ಪಾವತಿಸಲಾಗುತ್ತಿದೆ. ಮೆಟ್ರೋ ದರ ಏರಿಕೆ ಸಂಬಂಧ ಸಮಿತಿ ರಚಿಸಲಾಗಿದೆ ಈ ಸಮಿತಿ ರಚನೆ ಮಾಡಿರುವುದು ಕೇಂದ್ರ ಸರಕಾರ ಎಂದರು. ಬಿಜೆಪಿ ತೇಜಸ್ವಿಸೂರ್ಯ ಆ ಸಮಿತಿ ಮುಂದೆ ದರ ಏರಿಕೆ ಮಾಡಬೇಡಿ ಎಂದು ಯಾವುದೇ ಮನವಿ ಸಲ್ಲಿಸಿಲ್ಲ. ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ನಗರದ ಅಭಿವೃದ್ಧಿಗೆ ನಯಾಪೈಸೆ ಹಣವನ್ನು ತಂದಿಲ್ಲ. ಆದರೆ, ರಾಜ್ಯ ಸರಕಾರದ ಮೇಲೆ ಗೊಬೆ ಕೂರಿಸುತ್ತಿದ್ದಾರೆ. ಮೆಟ್ರೋ ದರ ಏರಿಕೆಗೆ ರಾಜ್ಯ ಸರಕಾರ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದರು. ಇದೇ ವೇಳೆ ಮಾತನಾಡಿದ ಎಸ್.ಮನೋಹರ್, ಮೆಟ್ರೋ ಪ್ರಯಾಣ ದರ ಏರಿಕೆ ಕೇಂದ್ರ ಸರಕಾರವೇ ಕಾರಣ. ಸಂಸದ ತೇಜಸ್ವಿ ಸೂರ್ಯ ಕೇಂದ್ರದ ತಪ್ಪು ನಿರ್ಧಾರ ಮಾರೆಮಾಚಲು ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರ ದರ ಏರಿಕೆಯನ್ನು ತಡೆ ಹಿಡಿದಿದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿಂಧುಗೌಡ, ಎ.ಆನಂದ್, ಜಿ.ಪ್ರಕಾಶ್, ಚಂದ್ರಶೇಖರ, ಮುರಳಿ, ನವೀನ್ ಸುಂಕದಕಟ್ಟೆ, ಉಮೇಶ್, ರಂಜಿತ್, ಪುಟ್ಟರಾಜು, ಓಬ್ಬಳೇಶ್, ಪ್ರವೀಣ್ ರಾವ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಾರ್ತಾ ಭಾರತಿ 10 Feb 2026 8:32 pm

ಮೇಘಾಲಯ| ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಮೃತರ ಸಂಖ್ಯೆ 30ಕ್ಕೆ ಏರಿಕೆ

ಸಿಲ್ಚಾರ್, ಫೆ. 10: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತರದ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇಬ್ಬರೂ ಅಸ್ಸಾಂ ಕಛಾರ್ ಜಿಲ್ಲೆಯ ಕಟಿಗೋರಾಹ್‌ನ ನಿವಾಸಿಗಳು. ಇವರು ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಎಸ್‌ಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ‘‘ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಎಸ್‌ಎಂಸಿಎಚ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಅವರನ್ನು ರಾಮಚಂದ್ರ ಬೈಷ್ಣವ್ ಹಾಗೂ ನಿಮರುದ್ದೀನ್ ಎಂದು ಗುರುತಿಸಲಾಗಿದೆ’’ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 5ರಂದು ಈ ಘಟನೆ ಸಂಭವಿಸಿದ ಬಳಿಕ ಎಸ್‌ಎಂಸಿಎಚ್‌ನಲ್ಲಿ ಒಟ್ಟು 9 ಮಂದಿ ಗಣಿ ಕಾರ್ಮಿಕರನ್ನು ದಾಖಲು ಮಾಡಲಾಗಿದೆ.

ವಾರ್ತಾ ಭಾರತಿ 10 Feb 2026 8:28 pm

ಪಡುಕೋಣೆ ಚರ್ಚಿನಲ್ಲಿ ದೇವರ ವಾಕ್ಯದ ಸಂಭ್ರಮ- ವಾರ್ಷಿಕ ಹಬ್ಬ

ಕುಂದಾಪುರ, ಫೆ.10: ಪಡುಕೋಣೆ ಪವಾಡ ಪುರುಷ ಸಂತ ಅಂತೋನಿ ಚರ್ಚಿನಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ವಾರ್ಷಿಕ ಮಹಾಹಬ್ಬ ಜರಗಿತು. ಇತ್ತೀಚೆಗೆ ಜರಗಿದ ತೆರಾಲಿ ಹಬ್ಬದ ಮೊದಲನೇ ದಿನ ನಡೆಯುವ ವೆಸ್ಪರ್ಸ್ ದೇವರ ವಾಕ್ಯದ ಸಂಭ್ರಮಕ್ಕೆ ಪವಾಡ ಪುರುಷ ಭಕ್ತ ಸಂತ ಅಂತೋನಿಯವರ ಪಲ್ಲಕ್ಕಿ ಮೇಲೆ ಇರಿಸಲ್ಪಟ್ಟ ಪ್ರತಿಮೆಯನ್ನು ಆಶೀರ್ವಾದಿಸಿ, ಭವ್ಯ ಮೆರ ವಣಿಗೆ ನಡೆಸಲಾಯಿತು. ನಂತರ ಕ್ರಿಸ್ತರ ನುಡಿ ನಿಮ್ಮ ಹೃದಯದಲ್ಲಿ ತುಂಬಿ ತುಳುಕಲಿ ಸಂದೇಶದೊಂದಿಗೆ ನಡೆಸಿಕೊಟ್ಟ ಪ್ರಧಾನ ಧರ್ಮಗುರು ವಂ.ಶರೊನ್ ರೊಯ್ ಡಿಸೋಜ ಬಸ್ರೂರು ನಡೆಸಿಕೊಟ್ಟರು. ಮಾರನೇ ದಿನ ಫೆ.4ರಂದು ವಾರ್ಷಿಕ ಮಹೋತ್ಸವದ ಅಂಗವಾಗಿ ’ಬಡವರು ನಿಮ್ಮ ಮಧ್ಯೆ ದಿನಾಲು ಇರುವರು’ ಎಂಬ ಸಂದೇಶದೊಂದಿಗೆ ಪ್ರಧಾನ ಯಾಜಕರಾಗಿ ವಂ.ಫಾ.ಡ್ಯಾನ್ಸಿ ಸುನಿಲ್ ಮಾರ್ಟಿಸ್, ಫಿಲಿಪ್ ನೇರಿ ಶಾಲೆಯ ಪ್ರಾಂಶುಪಾಲರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಚರ್ಚಿನ ಧರ್ಮಗುರು ವಂ.ಫಾ.ಫ್ರಾನ್ಸಿಸ್ ಕರ್ನೆಲಿಯೊ ಹಬ್ಬದ ಶುಭಾಶಯಗಳನ್ನು ಸಲ್ಲಿಸಿ ಧನ್ಯವಾದ ಅರ್ಪಿಸಿದರು. ಕುಂದಾಪುರ ಸಂತ ಜೋಸೆಫ್ ವಾಜ್ ವಲಯದ ಪ್ರಧಾನರಾದ ಅತಿ ವಂ.ಪೌಲ್ ರೇಗೊ ಹಬ್ಬದ ಪೋಷಕತ್ವ ವಹಿಸಿದ ಡೇರಿ ರೆಬೆಲ್ಲೊ ಮತ್ತು ಅವರ ಪುತ್ರ ಫ್ಲಾಯ್ಡ್ ಎಂಟನಿ ರೆಬೆಲ್ಲೊ ಮತ್ತು ಕುಟುಂಬಸ್ಥರನ್ನು ಗೌರವದ ಮೇಣದ ಬತ್ತಿ ನೀಡಿ ಅಭಿನಂದಿಸಿ, ಎಲ್ಲ ಧರ್ಮಗುರುಗಳ ಪರವಾಗಿ ಚರ್ಚಿನ ಧರ್ಮಗುರುಗಳಿಗೆ ಶುಭಾಶಯಗಳನ್ನು ಸಲ್ಲಿಸಿದರು.

ವಾರ್ತಾ ಭಾರತಿ 10 Feb 2026 8:26 pm

ಕೋಡಿ| ಪ್ರಿ-ಪ್ಲೇಸ್‌ಮೆಂಟ್ ತರಬೇತಿ ಕಾರ್ಯಕ್ರಮ

ಕುಂದಾಪುರ: ಫೆ.10: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ತರಬೇತಿ ಮತ್ತು ನಿಯೋಜನಾ ವಿಭಾಗದ ವತಿಯಿಂದ ನಾಂದಿ ಫೌಂಡೇಶನ್’ ಸಹಯೋಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾದ ಮೂರು ದಿನಗಳ ಪ್ರಿ-ಪ್ಲೇಸ್‌ಮೆಂಟ್ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ನಾಂದಿ ಫೌಂಡೇಶನ್‌ನ ತರಬೇತುದಾರ ಪ್ರಭಾಕರ್, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳು, ವ್ಯಕ್ತಿತ್ವ ವಿಕಾಸ, ಸಂವಹನ ಕೌಶಲ್ಯ, ಸಂದರ್ಶನ ತಂತ್ರಗಳು ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಮಾರ್ಗಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಶಬೀನಾ ಎಚ್., ಹೊಸ ಹೊಸ ಕೌಶಲ್ಯ ಆಧಾರಿತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸರ್ಟಿಫಿಕೇಟ್ ಕೋರ್ಸುಗಳು, ಉದ್ಯೋಗಕ್ಕೆ ಪೂರಕವಾದ ಕೋರ್ಸ್‌ಗಳ ಕುರಿತು ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಕರುಣಾಕರ ಶೆಟ್ಟಿ, ಜಯಂತ್ ಕುಮಾರ್, ಗಣಕ ವಿಭಾಗದ ಖಲೀಲ್ ಅಹಮ್ಮದ್ ಸಂಯೋಜಕ ರಾಗಿ ಕಾರ್ಯನಿರ್ವಹಿಸಿ ದರು. ಬಿಸಿಎ ವಿಭಾಗದ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 10 Feb 2026 8:24 pm

ಉತ್ತರ ಪ್ರದೇಶ| ಸಮಾಜವಾದಿ ಪಕ್ಷದ ನಾಯಕ ಮದನ್ ಚೌಹಾನ್‌ರನ್ನು ಹತ್ಯೆಗೆ ಯತ್ನ

ಹಾಪುರ, ಫೆ. 10: ಉತ್ತರಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ರಾಜ್ಯ ಸಚಿವ ಮದನ್ ಚೌಹಾನ್ ಅವರ ಹತ್ಯೆ ಯತ್ನ ನಡೆದಿದೆ. ಆದರೆ, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆ ಗಢಮುಖ್ತೇಶ್ವರ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ. ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೌಹಾನ್ ಅವರು ತನ್ನ ಕಾರಿನಲ್ಲಿ ಹಿರ್ನಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ‘‘ನಾನು ಎಕ್ಸ್‌ಪ್ರೆಸ್ ವೇಯಿಂದ ಗ್ರಾಮ ಪ್ರವೇಶಿಸುತ್ತಿರುವಾಗ ಕಾರಿನಲ್ಲಿ ಆಗಮಿಸಿದ ಕೆಲವು ಯುವಕರು ನನ್ನ ವಾಹನವನ್ನು ಅಡ್ಡಗಟ್ಟಿದರು. ಓರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ. ಆದರೆ, ಪಿಸ್ತೂಲ್ ಕಾರ್ಯ ನಿರ್ವಹಿಸಲಿಲ್ಲ’’ ಎಂದು ಚೌಹಾನ್ ಆರೋಪಿಸಿದ್ದಾರೆ. ‘‘ತನ್ನ ಜೊತೆಗಿದ್ದ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಆದರೆ, ಅವರು ಸ್ಥಳದಿಂದ ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ. ಚೌಹಾನ್ ಅವರ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನೀತ್ ಭಟ್ನಾಗರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 8:23 pm

ಆಳಂದ | ಪಡಸಾವಳಿ ಗ್ರಾಮ ಪಂಚಾಯತ್ ಸದಸ್ಯರಿಗೆ ಬಿಳ್ಕೊಡುಗೆ

ಆಳಂದ: ತಾಲೂಕಿನ ಪಡಸಾವಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ 2020-2021ರಿಂದ 2025-2026ರವರೆಗೆ ಸೇವೆ ಸಲ್ಲಿಸಿದ ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸದಸ್ಯರ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಸನ್ಮಾನಿಸಿದರು. ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಬೆಳಾಂ ಹಾಗೂ ಉಪಾಧ್ಯಕ್ಷ ಶಾಂತಮಲ್ಲಪ್ಪ ಅಚಲೇರಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಕೈಗೊಂಡ ಕೆಲಸಗಳು ಗ್ರಾಮಸ್ಥರ ಸಹಕಾರದಿಂದಲೇ ಸಾಧ್ಯವಾಯಿತು. ಈ ಗೌರವಪೂರ್ಣ ಬೀಳ್ಕೊಡುಗೆ ನಮ್ಮಿಗೆ ಹೊಸ ಉತ್ಸಾಹ ತುಂಬಿದೆ ಎಂದು ತಿಳಿಸಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪಂಚಾಯತ್ ವತಿಯಿಂದ ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳಾದ ಕುಡಿಯುವ ನೀರು ಸರಬರಾಜು ಸುಧಾರಣೆ, ರಸ್ತೆ ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ವಿಸ್ತರಣೆ ಹಾಗೂ ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಸದಸ್ಯರಾದ ಭೋಜನರಾಜ ನಿಂಬರಗಿ, ಪುನ್ನಪ್ಪ ಜಮಾದಾರ, ಮಲ್ಲಿನಾಥ ಸಿಂಗೆ, ಕಾಶಿನಾಥ ಗಾಯಕ್ವಾಡ, ಶ್ರೀಕಾಂತ ಜಮಾದಾರ, ಬಸವರಾಜ ಮುಲಗೆ, ಸಂತೋಷಿಬಾಯಿ ಜಮಾದಾರ ಹಾಗೂ ಫಕೀರಪ್ಪ ಗಾಯಕ್ವಾಡ ಅವರನ್ನು ಸನ್ಮಾನಿಸಲಾಯಿತು. ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸಿ ವಂದಿಸಿದರು.

ವಾರ್ತಾ ಭಾರತಿ 10 Feb 2026 8:23 pm

ಬಿಡಿಎ ಕಾರ್ಯಾಚರಣೆ: ಸುಮಾರು 125 ಕೋಟಿ ರೂ.ಗಳ ಆಸ್ತಿ ವಶ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ಇಲ್ಲಿನ ಉಲ್ಲಾಳು ಮತ್ತು ಅಗ್ರಹಾರ ದಾಸರಹಳ್ಳಿಗಳಲ್ಲಿ ಒತ್ತುವರಿಯಾಗಿದ್ದ 125 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಉಲ್ಲಾಳು ಗ್ರಾಮದ ಸರ್ವೆ ನಂ. 34ರಲ್ಲಿ 1 ಎಕರೆ ಹಾಗೂ ಸರ್ವೆ ನಂ. 38/1, 2, 4, 5 ರಲ್ಲಿ 1 ಎಕರೆ 1 ಗುಂಟೆ ಮತ್ತು ಅಗ್ರಹಾರ ದಾಸರಹಳ್ಳಿ ಗ್ರಾಮದ ಸರ್ವೆ ನಂ. 8ರ 33 ಗುಂಟೆ ಪ್ರದೇಶಗಳಲ್ಲಿ ಅನಧಿಕೃವಾಗಿ ನಿರ್ಮಾಣಗಳನ್ನು ತೆರವುಗೊಳಿಸಿ, ಸುಮಾರು 125 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವನ್ನು ವಶಪಡಿಸಿಕೊಂಡಿತು. ಕಾರ್ಯಾಚರಣೆ ಬೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.  

ವಾರ್ತಾ ಭಾರತಿ 10 Feb 2026 8:22 pm

ಕೋಡಿ| ಎಸೆಸೆಲ್ಸಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರ ಕಾರ್ಯಕ್ರಮ

ಕುಂದಾಪುರ, ಫೆ.10: ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯಲ್ಲಿ ಮೀಫ್ ಸಹಯೋಗದೊಂದಿಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಸೋಮವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆಯನ್ನು ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ರಾಜೇಂದ್ರ ಭಟ್ ರಾಷ್ಟ್ರೀಯ ತರಬೇತು ದಾರರು ಕಾರ್ಯಗಾರವನ್ನು ನಡೆಸಿ ಕೊಟ್ಟರು. ಎಸೆಸೆಲ್ಸಿ ಪರೀಕ್ಷೆಯನ್ನು ಹೇಗೆ ಎದುರಿಸುವುದು, ಪರೀಕ್ಷಾ ವಿಧಾನ, ನಮೂನೆ, ತಂತ್ರಗಳು, ಪರೀಕ್ಷ ಸಮಯ ನಿರ್ವಹಣೆ, ವಿದ್ಯಾರ್ಥಿಗಳ ಪರೀಕ್ಷಾ ಭೀತಿಯನ್ನು ಹೋಗ ಲಾಡಿಸುವುದು ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸಿಫ್ ಬ್ಯಾರಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಮೀಫ್‌ನ ಉಡುಪಿ ಚಾಪ್ಟರ್‌ನ ಗೌರವ ಅಧ್ಯಕ್ಷ ಶಬೀಹ್ ಅಹಮದ್ ಖಾಝೀ, ಅಧ್ಯಕ್ಷ ಮೊಹಮ್ಮದ್ ಅಕ್ರಮ್ ಮೌಲಾ ಉಪಸ್ಥಿತರಿದ್ದರು. ಬ್ಯಾರೀಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಫಿರ್ದೋಸ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಜೆನಿಫರ್ ಲೂಯಿಸ್ ಹಾಗೂ ಹಾಜಿ ಕೆ.ಮೊಹಿದ್ದೀನ್ ಸ್ಮಾರಕ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು. ಹಾಜಿ ಕೆ ಮೊಯಿದ್ದೀನ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಆಮಿನ ಮಾಯಿಷ ವಂದಿಸಿ ದರು. ರಾಯಿಫ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಅನುದಾನಿಕ ಹಾಗೂ ಖಾಸಗಿ ಶಾಲೆಯ ಒಟ್ಟು 250 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

ವಾರ್ತಾ ಭಾರತಿ 10 Feb 2026 8:20 pm

ಕಲಬುರಗಿ | ಕಾರಾಗೃಹದ ಬಂದಿಗಳಿಗೆ ʼಕ್ರೀಯೇಟಿವ್ ಸಾಫ್ಟ್ ಟಾಯ್ಸ್ ಮೇಕರ್ ತರಬೇತಿʼ

ಕಲಬುರಗಿ: ಜನ ಶಿಕ್ಷಣ ಸಂಸ್ಥಾನ್ ಹಾಗೂ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ‘ಕ್ರೀಯೇಟಿವ್ ಸಾಫ್ಟ್ ಟಾಯ್ಸ್ ಮೇಕರ್ (ಅಡ್ವಾನ್ಸ್)’ ಎಂಬ 45 ದಿನಗಳ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ತರಬೇತಿಗೆ 20 ಬಂದಿಗಳನ್ನು ಶಿಬಿರಾರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಸುರೇಂದ್ರ ಪಾಟೀಲ್ ಮಾತನಾಡಿ, ಪ್ರತಿ ತಂಡದಲ್ಲಿ 20 ಶಿಬಿರಾರ್ಥಿಗಳಿಗೆ ವಿವಿಧ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ನಿರಂತರ ಅಭ್ಯಾಸದ ಮೂಲಕ ಸ್ವಯಂ ಉದ್ಯೋಗದತ್ತ ಮುಂದಾಗಬೇಕು ಎಂದು ಕರೆ ನೀಡಿದರು. ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ಕೈದಿಗಳ ಸುಧಾರಣೆ ಮತ್ತು ಪುನರ್ವಸತಿ ಉದ್ದೇಶದಿಂದ ಕಾರಾಗೃಹದಲ್ಲಿ ವಿವಿಧ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಬಿಡುಗಡೆ ನಂತರ ಸಮಾಜದಲ್ಲಿ ತಲೆ ಎತ್ತಿ ಬದುಕಲು ಹಾಗೂ ಕುಟುಂಬದೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಈ ತರಬೇತಿಗಳು ಸಹಕಾರಿಯಾಗಲಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ವಹಿಸಿದ್ದರು. ರಾಜಶೇಖರ್ ಪಾಟೀಲ್, ಸಹಾಯಕ ಅಧೀಕ್ಷಕ ಬಿ. ಸುರೇಶ್, ಭೀಮಾಶಂಕರ್ ಡಾಂಗೆ, ಜೈಲರ್ ವೃಂದದವರು ಉಪಸ್ಥಿತರಿದ್ದರು. ನಾಗರಾಜ ಮುಲಗೆ ಸ್ವಾಗತಿಸಿದರು. ಚನ್ನಪ್ಪ ಯಟಗಲ್ ವಂದಿಸಿದರು.

ವಾರ್ತಾ ಭಾರತಿ 10 Feb 2026 8:20 pm

Bengaluru | ಕಸವನ್ನು ಎಲ್ಲೆಂದರಲ್ಲಿ ಎಸೆಯುವವರಿಂದ 30 ಲಕ್ಷ ರೂ.ದಂಡ ವಸೂಲಿ : ಜಿಬಿಎ

ಬೆಂಗಳೂರು : ನಗರದಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರ ವಿರುದ್ಧ ಮಾರ್ಷಲ್‍ಗಳು ಪರಿಶೀಲನೆ ನಡೆಸಿ, ಮೂರು ತಿಂಗಳ ಅವಧಿಯಲ್ಲಿ ಅಂದಾಜು 30 ಲಕ್ಷ ರೂ.ಗಳಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಮಂಗಳವಾರ ಪ್ರಾಧಿಕಾರವು ಪ್ರಕಟನೆ ಹೊರಡಿಸಿದ್ದು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್‍ಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಸರಕಾರಿ ಸ್ವತ್ತುಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು, ಶೇಖರಿಸುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವವರ ಅಥವಾ ಬ್ಲ್ಯಾಕ್ ಸ್ಪಾಟ್ ನಿರ್ಮಾಣ ಮಾಡುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಅಂದಾಜು ಮೊತ್ತ 30 ಲಕ್ಷ ರೂ.ಗಳಷ್ಟು ದಂಡವನ್ನು ಸಂಗ್ರಹಿಸಲಾಗಿದೆ ಎಂದು ಪ್ರಾಧಿಕಾರವು ಹೇಳಿದೆ.

ವಾರ್ತಾ ಭಾರತಿ 10 Feb 2026 8:18 pm

ಫೆ.12ರಂದು ಸಾರ್ವತ್ರಿಕ ಮುಷ್ಕರ: ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ, ಫೆ.10: ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಹಾಗೂ ಕೇಂದ್ರ ಸರಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರಕಾರ ಜಾರಿ ಮಾಡದಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಫೆ.12ರಂದು ಬೆಳಿಗ್ಗೆ 9.30 ಗಂಟೆಗೆ ಉಡುಪಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರ 44 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿರುವುದು ಬಂಡವಾಳಗಾರರಿಗೆ ಲಾಭ ಮಾಡಿ ದುಡಿಯುವ ವರ್ಗದ ಜನರಿಗೆ ಮಾಡಿದ ಮಹಾಮೋಸ ಮಾಡುವಂತದ್ದಾಗಿದೆ. ಕೇಂದ್ರ ಸರಕಾರ ಖಾಸಗೀಕರಣ ಭಾಗವಾಗಿ ತಂದಿರುವ ವಿದ್ಯುತ್ ಕಾಯ್ದೆ -2025 ಅನುದಾನ ಕಡಿತ ಮಾಡಿ ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳ ಹಿಡಿಸುವ ಯೋಜನೆ, ಕಾರ್ಖಾನೆ ಕಾಯ್ದೆ ತಿದ್ದುಪಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಕಾಯ್ದೆ ರದ್ದತಿ, ಆಟೋರಿಕ್ಷಾ ಮತ್ತು ವಾಹನ ಚಾಲಕರ ಬೇಡಿಕೆಗಳಿಗಾಗಿ ಬೀಜ ಮಸೂದೆ ಕಾಯ್ದೆ, ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣದ ವಿರುದ್ಧ ಸಾರ್ವತ್ರಿಕ ಮುಷ್ಕರ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಕವಿರಾಜ್ ಎಸ್.ಕಾಂಚನ್ ತಿಳಿಸಿದ್ದಾರೆ. ಫೆ.12ರಂದು ಜಿಲ್ಲೆಯ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಮೀನುಗಾರರು ಮೊದಲಾದ ದುಡಿಯುವ ವರ್ಗದ ಜನರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 8:16 pm

ಸಾಮಾಜಿಕ ಮಾಧ್ಯಮಗಳಲ್ಲಿ ‘ದಿ ವೈರ್’ ಪೋಸ್ಟ್ ಮಾಡಿದ ಪ್ರಧಾನಿ ಕುರಿತ ವಿಡಂಬನಾ ಅನಿಮೇಷನ್‌ಗೆ ನಿರ್ಬಂಧ

ಹೊಸದಿಲ್ಲಿ,ಫೆ. 10: ಸುದ್ದಿ ಸಂಸ್ಥೆ ‘‘ದಿ ವೈರ್’’ ಪೋಸ್ಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಡಂಬನೆಯ ಅನಿಮೇಷನ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಎಕ್ಸ್ ತಡೆ ಹಿಡಿದಿದೆ. ಸೋಮವಾರ ಸಂಜೆ ‘‘ದಿ ವೈರ್’’ನ ಇನ್‌ಸ್ಟಾಗ್ರಾಂ ಖಾತೆ ಸುಮಾರು ಎರಡು ಗಂಟೆಗಳ ಕಾಲ ಭಾರತದಲ್ಲಿ ಲಭ್ಯವಿರಲಿಲ್ಲ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಂ ಪುಟಕ್ಕೆ ಭೇಟಿ ನೀಡಿದವರು, ‘‘ಈ ವಿಷಯವನ್ನು ನಿರ್ಬಂಧಿಸುವ ಕಾನೂನಾತ್ಮಕ ವಿನಂತಿಯನ್ನು ವೇದಿಕೆ ಪಾಲಿಸುತ್ತಿರುವುದರಿಂದ, ಈ ಪುಟ ಭಾರತದಲ್ಲಿ ಲಭ್ಯವಿಲ್ಲ’’ ಎಂಬ ಸಂದೇಶವನ್ನು ನೋಡಿದ್ದಾರೆ. ವಿದೇಶಗಳ ಅಥವಾ ವಿಪಿಎನ್ ಬಳಕೆದಾರರಿಗೆ ಮಾತ್ರ ಈ ಖಾತೆ ಲಭ್ಯವಾಗಿದೆ ಎಂದು ‘‘ದಿ ವೈರ್’’ ವರದಿ ಮಾಡಿದೆ. ಇನ್‌ಸ್ಟಾಗ್ರಾಮ್, ಪೇಸ್‌ಬುಕ್ ಹಾಗೂ ಎಕ್ಸ್‌ನಲ್ಲಿ ಶನಿವಾರ ಸಂಜೆ ಸುಮಾರು 6.30ಕ್ಕೆ ಅಪ್‌ಲೋಡ್ ಮಾಡಲಾದ 52 ಸೆಕೆಂಡ್‌ಗಳ ಈ ವೀಡಿಯೋವನ್ನು ಬ್ಲಾಕ್ ಮಾಡಲಾಗಿದೆ. ಮಂಗಳವಾರ ಸಂಜೆ 3 ಗಂಟೆಗೆ ‘‘ದಿ ವೈರ್’’ನ ಇನ್‌ಸ್ಟಾಗ್ರಾಂ ಖಾತೆಯನ್ನು ಮರು ಸ್ಥಾಪಿಸಲಾಗಿದೆ. ಆದರೆ ಮೂರು ವೇದಿಕೆಗಳಲ್ಲಿ ಈ ವಿಡಂಬನೆಯ ಅನಿಮೇಷನ್ ಲಭ್ಯವಿರಲಿಲ್ಲ. ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳಿಂದ ನುಣುಚಿಕೊಂಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿಮೇಷನ್ ವಿಡಂಬನೆ ಮಾಡಿದೆ.

ವಾರ್ತಾ ಭಾರತಿ 10 Feb 2026 8:16 pm

ತಾಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

ಉಡುಪಿ, ಫೆ.10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್‌ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್, ಸಂಭಾವನೆ, ಕಮಿಷನ್ ಪಡೆದಿರುವ ದಾಖಲೆ) ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವ ಬ್ಯಾಂಕ್ ಸ್ಟೇಟ್‌ಮೆಂಟ್ ಲಗತ್ತಿಸಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಸಲ್ಲಿಸುವ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್‌ಪಾಸ್ ಮಂಜೂರು ಮಾಡಲಾಗುತ್ತದೆ. ರಾಜ್ಯದ ಎಲ್ಲ ತಾಲೂಕುಗಳ ಅರ್ಹ ಪತ್ರಕರ್ತರು ಕೂಡಲೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 8:12 pm

ಕಳ್ಳತನ ಪ್ರಕರಣ | ನಾಲ್ವರ ಬಂಧನ; 19.10 ಲಕ್ಷ ಮೌಲ್ಯದ ಸ್ವತ್ತು ಜಪ್ತಿ : ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ: ಸೇಡಂ ತಾಲೂಕಿನ ಮುಧೋಳ ಹಾಗೂ ಚಿಂಚೋಳಿ ತಾಲೂಕಿನ ಸುಲೇಪೇಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು ನಾಲ್ವರನ್ನು ಬಂಧಿಸಿ, ಒಟ್ಟು 19.10 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಠಾಣಾ ವ್ಯಾಪ್ತಿಯಲ್ಲಿ ಕಾಶಿನಾಥ್ ಎನಕಿ ಅವರು ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಕುರಿತು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ಈ ಸಂಬಂಧ ಶಿಲಾರಕೋಟದ ಶ್ರೀನಿವಾಸ ಸಾಯಪ್ಪ ಭೈರಗೊಂಡ ಹಾಗೂ ನವೀನ್ ನರಸಪ್ಪ ಕುರುಕು ಅವರನ್ನು ಬಂಧಿಸಲಾಗಿದ್ದು, ಅವರಿಂದ ಬಂಗಾರದ ಆಭರಣಗಳು ಹಾಗೂ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 17.50 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ, ಸುಲೇಪೇಟ ಠಾಣಾ ವ್ಯಾಪ್ತಿಯಲ್ಲಿ ರಾಮಾಚಾರಿ ರತ್ನಾಚಾರಿ ಅವರ ಅಂಗಡಿಯಲ್ಲಿ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೀದರ್ ನಗರದ ಚಿದ್ರಿ ಬಂದೇನವಾಜ್ ಕಾಲೋನಿಯ ನಿವಾಸಿಗಳಾದ ಸಲ್ಮಾ ಮುಸ್ತಾಕಿನ್ ಹಾಗೂ ಶನ್ನು ಬೇಗಂ ಅವರನ್ನು ಬಂಧಿಸಿ, 1.60 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರತ್ಯೇಕ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಭೇದಿಸಿ ಇಬ್ಬರು ಕಳ್ಳರು ಹಾಗೂ ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿ, ಪ್ರಶಂಸನಾ ಪತ್ರಗಳನ್ನು ಪ್ರದಾನ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಪಿಐ ದೌಲತ್, ಕೃಷ್ಣಕುಮಾರ್ ಪಾಟೀಲ್, ಮುರುಡೇಶ್ವರ, ಅಮರ ಕುಲಕರ್ಣಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 10 Feb 2026 8:12 pm

ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಸ್ವಯಂ ಘೋಷಣೆ ಸಲ್ಲಿಸಲು ಸೂಚನೆ

ಉಡುಪಿ, ಫೆ.10:ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೃಹತ್ ತ್ಯಾಜ್ಯ ಉತ್ಪಾದಕರು ಅಂದರೆ ಪ್ರತಿದಿನ ಸರಾಸರಿ 100 ಕೆ.ಜಿಗಿಂತ ಅಧಿಕ ತ್ಯಾಜ್ಯ ಉತ್ಪತ್ತಿ ಮಾಡುವ ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಕಂಪೆನಿಗಳು, ಆಸ್ಪತ್ರೆಗಳು, ಶಾಲೆಗಳು, ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆಗಳು, ಪೂಜಾ ಸ್ಥಳಗಳು ಹಾಗೂ ಆಟೋಟ ಸಮುಚ್ಛಾಲಯಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗೆ ಲಿಖಿತ ರೂಪದಲ್ಲಿ ಸ್ವಯಂ ಘೋಷಣೆ ಸಲ್ಲಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 8:09 pm

ಫೆ.18: ವಂದೇಮಾತರಂ ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿ

ಉಡುಪಿ, ಫೆ.10: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವತಿಯಿಂದ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026 ರ್ಯಾಲಿ ಇದೇ ಫೆ.18ರಂದು ಜಿಲ್ಲೆಯಲ್ಲಿ ಸಂಚರಿಸಲಿದೆ. ಈ ಸೈಕ್ಲಿಂಗ್ ರ್ಯಾಲಿಯನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದ್ದಾರೆ. ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ಸಿಐಎಸ್‌ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಕಾರ್ಯಕ್ರಮ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ವಂದೇ ಮಾತರಂ ಗೀತೆಗೆ 150 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವತಿಯಿಂದ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026ನ್ನು ಹಮ್ಮಿಕೊಳ್ಳಲಾ ಗಿದೆ. ದೇಶದ ಪಶ್ಚಿಮ ಸಮುದ್ರ ತೀರದಲ್ಲಿ ಕರಾವಳಿ ಸಮುದಾಯಗಳು, ಸಂಸ್ಕೃತಿ ಮತ್ತು ರಾಷ್ಟ್ರೀಯ ಸಂಕಲ್ಪವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೋಸ್ಟಲ್ ಸೈಕ್ಲೋಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು. ರ್ಯಾಲಿಗೆ ಕಳೆದ ಜನವರಿ ತಿಂಗಳಲ್ಲಿ ಗುಜರಾತ್ ಮತ್ತು ಪಶ್ಚಿಮ ಬಂಗಾಳ ದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ರ್ಯಾಲಿಯು ಸುಮಾರು 6,500 ಕಿ.ಮೀ. ದೂರ ಸಂಚರಿಸುವುುದರೊಂದಿಗೆ ಕೇರಳದ ಕೊಚ್ಚಿಯಲ್ಲಿ ಫೆಬ್ರವರಿ 21ರಂದು ಮುಕ್ತಾಯಗೊಳ್ಳಲಿದೆ ಎಂದರು. ಜಿಲ್ಲೆಯಲ್ಲಿ ರ್ಯಾಲಿಯು ಬೈಂದೂರು ತಾಲೂಕಿನ ಶಿರೂರಿನಿಂದ ಪ್ರಾರಂಭ ಗೊಂಡು ಕುಂದಾಪುರ-ಬ್ರಹ್ಮಾವರ- ಉಡುಪಿ-ಕಾಪು- ಹೆಜಮಾಡಿ ಮೂಲಕ ಸಂಚರಿಸಿ ಮುಂದೆ ಹಾದುಹೋಗಲಿದೆ. ಈ ರ್ಯಾಲಿಯಲ್ಲಿ ಸಾರ್ವಜನಿಕರು, ಸಮುದಾಯದ ಜನತೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಸೈಕ್ಲೋಥಾನ್ ರ್ಯಾಲಿಯ ಸ್ಪರ್ಧಾಳುಗಳನ್ನು ಸ್ಥಳೀಯ ಸಂಪ್ರದಾಯ ದೊಂದಿಗೆ ಅಂದು ಬೆಳಗ್ಗೆ 8:30ಕ್ಕೆ ತ್ರಾಸಿಯಲ್ಲಿ ಸ್ವಾಗತಿಸಲಾಗುವುದು. ಅಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಾಗುವುದು. ಬೆಳಗ್ಗೆ 11:30ಕ್ಕೆ ಬ್ರಹ್ಮಾವರದ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಹಾಗೂ ಸಂಜೆ 3:30ಕ್ಕೆ ಕಾಪು ತಾಲೂಕಿನ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮುದಾಯದ ಜನರು ಹಾಗೂ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಲಾಗುವುದು ಅಬಿದ್ ಗದ್ಯಾಳ್ ತಿಳಿಸಿದ್ದಾರೆ. ರ್ಯಾಲಿಯು ಸುಗಮವಾಗಿ ಸಾಗಲು ಸೈಕ್ಲಿಸ್ಟ್‌ಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಯಾವುದೇ ಅನಾನುಕೂಲ ಉಂಟಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಗದ್ಯಾಳ್, ರ್ಯಾಲಿ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ಆಂಬುಲೆನ್ಸ್‌ನ್ನು ಸ್ಥಳದಲ್ಲಿ ನಿಯೋಜಿಸಬೇಕು ಎಂದರು. ಸಭೆಯಲ್ಲಿ ಎನ್‌ಎಂಪಿಎ ಮಂಗಳೂರು ಸೆಂಟ್ರಲ್ ಇಂಡಸ್ಟ್ರೀಯಲ್ ಫೋರ್ಸ್‌ನ ರಾಜೇಂದ್ರ ಪ್ರಸಾದ್ ಪಾಠಕ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಸಂಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 8:06 pm

ಮಾತ್ರೆಯಿಂದ ಜಂತುಹುಳು ಬಾಧೆ ಶೇ.90ರಷ್ಟು ನಿವಾರಣೆ: ಡಿಎಚ್‌ಓ ಡಾ.ಬಸವರಾಜ್

ಉಡುಪಿ, ಫೆ.10: ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯ ದಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ಸು ಕಂಡಿದ್ದು, ಮಕ್ಕಳಲ್ಲಿ ಜಂತು ಹುಳುವಿನ ಬಾಧೆ ಗಣನೀಯವಾಗಿ ಕಡಿಮೆ ಯಾಗಿದೆ. ಮಾತ್ರೆಯಿಂದ ಜಂತುಹುಳು ಬಾಧೆ ನಿವಾರಣೆಯಲ್ಲಿ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಜಂತುಹುಳು ನಿವಾರಣಾ ದಿನಾಚರಣೆ ಪ್ರಯುಕ್ತ ಅಂಗನವಾಡಿಯ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿಭಾಗದ ಮಕ್ಕಳವರೆಗೆ ಎಲ್ಲರಿಗೂ ಅಲ್‌ಬೆಂಡಜೋಲ್ ಮಾತ್ರೆಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಅಲ್‌ಬೆಂಡಜೋಲ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ ಎಂದರು. ವಿಶೇಷವಾಗಿ ಹೆಣ್ಣು ಮಕ್ಕಳು ಈ ಮಾತ್ರೆ ಸೇವಿಸುವುದರಿಂದ ಭವಿಷ್ಯದಲ್ಲಿ ವೈವಾಹಿಕ ಬದುಕಿನಲ್ಲಿ ಎದುರಾಗಬಹು ದಾದ ಅಪೌಷ್ಠಿಕತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು. ವಿದ್ಯಾರ್ಥಿಗಳು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಆರೋಗ್ಯ ಮತ್ತು ಶಿಕ್ಷಣ ಒಂದಕ್ಕೊಂದು ಪೂರಕ. ಉತ್ತಮ ಆರೋಗ್ಯ ಹೊಂದಿದ್ದಾಗ ಪಾಠಗಳ ಬಗ್ಗೆ ಆಸಕ್ತಿ ಹೆಚ್ಚಿ ಕಲಿತದ್ದು ನೆನಪಿನಲ್ಲಿ ಉಳಿಯುತ್ತದೆ. ಜಂತುಹುಳು ನಿವಾರಣಾ ಕಾರ್ಯಕ್ರಮ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಲು ಸರಕಾರದ ವತಿಯಿಂದ ಕೈಗೊಂಡ ಉತ್ತಮ ಉಪಕ್ರಮವಾಗಿದೆ ಎಂದರು. ಅಭಿಯಾನದ ದಿನದಂದು ತಪ್ಪಿ ಹೋದ ಮಕ್ಕಳಿಗೆ ಮನೆಗೆ ಭೇಟಿ ನೀಡುವ ಮೂಲಕ ಮಾತ್ರೆಗಳನ್ನು ತಲುಪಿಸಲಾ ಗುತ್ತದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ ಎಂದರು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದನ್ನು ರೂಢಿಸಿ ಕೊಳ್ಳ ಬೇಕು. ಜಂತುಹುಳದ ನಿವಾರಣೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು ಎಂದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜೋತ್ಸ್ನಾಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಂತು ಹುಳು ನಿವಾರಣೆ ಜಾಗೃತಿ ಕುರಿತ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಮಂಜು ನಾಥ್ ಬಿ, ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿ, ಶಶಿಧರ್ ಹೆಚ್ ಕಾರ್ಯಕ್ರಮ ನಿರೂಪಿಸಿದರು. ಡಿಪಿಸಿ ಸುಧೀಂದ್ರ ವಂದಿಸಿದರು.

ವಾರ್ತಾ ಭಾರತಿ 10 Feb 2026 8:04 pm

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಸುರಕ್ಷಿತವೇ?

ಹೂಡಿಕೆದಾರರಿಗೆ ನಿಜವಾದ ಅಪಾಯ ಬರುವುದು ಮಾರುಕಟ್ಟೆಯ ಚಂಚಲತೆಯಿಂದಲ್ಲ, ದೀರ್ಘಕಾಲೀನ ಯೋಜನೆಯನ್ನು ಹಳಿ ತಪ್ಪಿಸುವ ಅಲ್ಪಾವಧಿ ಧ್ವನಿ. ಷೇರು ಮಾರುಕಟ್ಟೆಗಳು ಸ್ವಾಭಾವಿಕವಾಗಿ ಚಂಚಲವಾಗಿರುತ್ತವೆ. ಆದರೆ ಕಳೆದ ವಾರ ಹೂಡಿಕೆದಾರರ ಸಹನೆಯನ್ನು ಹೆಚ್ಚು ಪರೀಕ್ಷಿಸಿದೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದ, ಭಾರತ–ಯೂರೋಪ್ ವ್ಯಾಪಾರ ಒಪ್ಪಂದ, 2026ರ ಕೇಂದ್ರ ಬಜೆಟ್, ಚಿನ್ನ ಮತ್ತು ಬೆಳ್ಳಿಯ ತೀವ್ರ ಏರಿಳಿತ ಮತ್ತು ಐಟಿ ಷೇರುಗಳ ಪತನ—ಎಲ್ಲವೂ ಒಂದೇ ವಾರದಲ್ಲಿ ನಡೆದಿವೆ. ಇಷ್ಟೆಲ್ಲಾ ಒಂದೇ ಬಾರಿಗೆ ಆಗುವುದನ್ನು ನೋಡಿ ಹೂಡಿಕೆದಾರರು ಮಾಡುವ ಬಹಳ ಸಾಮಾನ್ಯ ತಪ್ಪೆಂದರೆ ಮಾರುಕಟ್ಟೆಯ ಪ್ರತೀ ಚಲನೆಗೂ ಪ್ರತಿಕ್ರಿಯಿಸುವುದು. ದೀರ್ಘಾವಧಿಯ ಲಾಜಿಕ್ ನೋಡುವ ಬದಲು ಅಲ್ಪಾವಧಿ ಆತಂಕದಲ್ಲಿ ಪೋರ್ಟ್‌ಫೋಲಿಯೊ ಬದಲಿಸುವುದು. ಮಾರುಕಟ್ಟೆಯಲ್ಲಿ ಯಾವಾಗಲೂ ಅತ್ಯಧಿಕ ಲಾಭಗಳಿಕೆಯ ನಂತರ ಇಳಿತ ಕಾಣುವುದು ಸಹಜ. ಮುಖ್ಯವಾಗಿ ಈ ಇಳಿತಗಳು ಹಠಾತ್ ಆಘಾತವಾಗಿ ಬರುತ್ತವೆ. ಹೂಡಿಕೆದಾರರಿಗೆ ನಿಜವಾದ ಅಪಾಯ ಬರುವುದು ಮಾರುಕಟ್ಟೆಯ ಚಂಚಲತೆಯಿಂದಲ್ಲ, ದೀರ್ಘಕಾಲೀನ ಯೋಜನೆಯನ್ನು ಹಳಿ ತಪ್ಪಿಸುವ ಅಲ್ಪಾವಧಿ ಧ್ವನಿಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಈಗ ಹೆಚ್ಚು ಚಂಚಲತೆ ಏಕೆ? 2026ರ ಆರಂಭದಲ್ಲಿ ಷೇರು ಮಾರುಕಟ್ಟೆಗೆ ಹೆಚ್ಚಿನ ಉತ್ತಮ ಸುದ್ದಿಗಳು ಇರಲಿಲ್ಲ. 2025ರಲ್ಲಿ ಮಾರುಕಟ್ಟೆ ಧನಾತ್ಮಕವಾಗಿದ್ದರೂ ಹೆಚ್ಚಿನ ಲಾಭಗಳಿಕೆ ಸಾಧ್ಯವಾಗಿರಲಿಲ್ಲ. ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 8–10ರ ನಡುವೆ ಲಾಭ ದಾಖಲಿಸಿವೆ. ಆದರೆ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಭಾರತ ಅನೇಕ ಪ್ರಮುಖ ಮಾರುಕಟ್ಟೆಗಳಲ್ಲಿ ಕಳಪೆ ಕಾರ್ಯಕ್ಷಮತೆ ತೋರಿಸಿದೆ. ಜಪಾನ್, ಅನೇಕ ಯುರೋಪಿಯನ್ ದೇಶಗಳು, ದಕ್ಷಿಣ ಕೊರಿಯಾ ಮತ್ತು ಮೆಕ್ಸಿಕೊ ಬಲವಾದ ಲಾಭ ಗಳಿಸಿವೆ. ಕೆಲವು ಸಂದರ್ಭಗಳಲ್ಲಿ ಶೇ 20ರಷ್ಟು ಲಾಭ ಕಂಡಿವೆ. ವಿಶ್ಲೇಷಕರ ಪ್ರಕಾರ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಆಶಾವಾದವನ್ನು ಸೃಷ್ಟಿಸಿದರೂ, ಒಪ್ಪಂದ ಮುದ್ರಿತ ರೂಪದಲ್ಲಿ ಬಂದ ಮೇಲಷ್ಟೇ ನಿಜವಾದ ಪರಿಣಾಮ ತಿಳಿದು ಬರಲಿದೆ. ಐಟಿ, ಉತ್ಪಾದನೆ, ಫಾರ್ಮಾ ಹಾಗೂ ಆಭರಣ ಮತ್ತು ಹರಳುಗಳ ಉದ್ಯಮ ಲಾಭ ಪಡೆದುಕೊಳ್ಳಬಹುದಾದರೂ, ಯಾವುದೇ ನಿರ್ಣಯಕ್ಕೆ ಬರಲು ಒಪ್ಪಂದ ಇನ್ನೂ ಆರಂಭಿಕ ಘಟ್ಟದಲ್ಲೇ ಇದೆ. ಐಟಿ ಷೇರುಗಳು ಕುಸಿದಿರುವುದು ತಾತ್ಕಾಲಿಕ ಬೆಳವಣಿಗೆಯಾಗಿರಬಹುದು. AI ಐಟಿ ಸೇವೆಗಳ ಮೇಲೆ ಪರಿಣಾಮ ಬೀರುವ ಆತಂಕ ಹೂಡಿಕೆದಾರರಲ್ಲಿದೆ. ಭಾರತೀಯ ಐಟಿ ಕಂಪನಿಗಳು AI ಸಾಮರ್ಥ್ಯದಲ್ಲಿ ಹೂಡಿಕೆ ಮಾಡುತ್ತಿರುವ ಕಾರಣ ಕ್ಷೇತ್ರ ದೃಢವಾಗಿ ನಿಲ್ಲುವ ಸಾಧ್ಯತೆಯಿದೆ. ►ಹೂಡಿಕೆದಾರರು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಬದಲಿಸಬೇಕೆ? ವಿಶ್ಲೇಷಕರ ಪ್ರಕಾರ ಖಂಡಿತ ಅಗತ್ಯವಿಲ್ಲ. ವ್ಯಾಪಾರ ಒಪ್ಪಂದ, ಬಜೆಟ್ ಘೋಷಣೆಗಳು, AI ಆತಂಕ ಅಥವಾ ತಾತ್ಕಾಲಿಕ ಐಟಿ ಕ್ಷೇತ್ರದ ಒತ್ತಡದಂತಹ ಅಲ್ಪಾವಧಿ ಸುದ್ದಿಗಳಿಗಾಗಿ ಮ್ಯೂಚುವಲ್ ಫಂಡ್ ಕಾರ್ಯಯೋಜನೆಯನ್ನು ಬದಲಿಸುವ ಅಗತ್ಯವಿಲ್ಲ. ಉದ್ಯಮ ಅರ್ಥವ್ಯವಸ್ಥೆ ಅಥವಾ ವೈಯಕ್ತಿಕ ಹಣಕಾಸು ಗುರಿಗಳಲ್ಲಿ ದೀರ್ಘಾವಧಿ ಬದಲಾವಣೆಗಳು ಆಗಿದಾಗ ಮಾತ್ರವೇ ಮ್ಯೂಚುವಲ್ ಫಂಡ್ ಕಾರ್ಯಯೋಜನೆಗಳನ್ನು ಬದಲಿಸಬೇಕು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಮೂಲಭೂತವಾಗಿ ಮುಂದಿನ 20 ವರ್ಷಗಳಲ್ಲಿ ಉದ್ಯಮ ನಡೆಸುವ ವಿಧಾನವನ್ನು ತಕ್ಷಣ ಬದಲಿಸುವುದಿಲ್ಲ. 2026ರ ಬಜೆಟ್ ಪ್ರಗತಿಯ ನಿರೀಕ್ಷೆಗಳನ್ನು ಬದಲಿಸಿಲ್ಲ. AI ತಂತ್ರಜ್ಞಾನ ಕಂಪನಿಗಳನ್ನು ರಾತ್ರೋರಾತ್ರಿ ಬದಲಿಸಿಲ್ಲ. ಮಾರುಕಟ್ಟೆ ಬಹಳಷ್ಟು ಸಲ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಆದರೆ, ಹೂಡಿಕೆದಾರರು ವಲಯ–ನಿರ್ದಿಷ್ಟ ವಿಷಯಾಧಾರಿತ ಫಂಡ್‌ಗಳ ಬಗ್ಗೆ ಅತಿ ಜಾಗರೂಕರಾಗಿರಬೇಕು. ಮುಖ್ಯವಾಗಿ ರಕ್ಷಣಾ ವಲಯ ಅಥವಾ ತಂತ್ರಜ್ಞಾನಕ್ಕೆ ಕೇಂದ್ರೀಕರಿಸಿದ ಫಂಡ್‌ಗಳು. ವಲಯ–ನಿರ್ದಿಷ್ಟ ಫಂಡ್‌ಗಳಲ್ಲಿ ಕೇಂದ್ರೀಕರಣದ ಅಪಾಯ ಇರುತ್ತದೆ. (ಮ್ಯೂಚುವಲ್ ಫಂಡ್‌ಗಳಲ್ಲಿ ಕೇಂದ್ರೀಕರಣದ ಅಪಾಯವೆಂದರೆ ಕಡಿಮೆ ಸಂಖ್ಯೆಯ ಸೆಕ್ಯುರಿಟಿಗಳು, ವಲಯಗಳು ಅಥವಾ ಆಸ್ತಿ ವರ್ಗಗಳ ಕಡೆಗೆ ಹೆಚ್ಚು ತೂಕವಿರುವ ಪೋರ್ಟ್‌ಫೋಲಿಯೊದಿಂದ ಉಂಟಾಗುವ ಗಮನಾರ್ಹ ಆರ್ಥಿಕ ನಷ್ಟಗಳ ಸಂಭಾವ್ಯತೆ.) ಆ ವಲಯ ಏರಿಳಿತಗಳನ್ನು ಕಂಡರೆ ಸಂಪೂರ್ಣ ಹೂಡಿಕೆಗೆ ತೊಂದರೆಯಾಗಬಹುದು. ವಿಶ್ಲೇಷಕರ ಪ್ರಕಾರ ನಿಧಿಯನ್ನು ವೈವಿಧ್ಯಮಯವಾಗಿ ಹೂಡಿಕೆ ಮಾಡುವುದು ಉತ್ತಮ. ಕೃಪೆ: India Today

ವಾರ್ತಾ ಭಾರತಿ 10 Feb 2026 8:04 pm

ಸ್ವಚ್ಛ ವಾರ್ಡ್ ಪ್ರಶಸ್ತಿ : ನಾಮನಿರ್ದೇಶನ ಸಲ್ಲಿಸಲು ಸೂಚನೆ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ ಅತೀ ಹೆಚ್ಚು ಸ್ವಚ್ಛವಾಗಿರುವ ವಾರ್ಡನ್ನು ಪ.ಪಂ. ವತಿಯಿಂದ ಗುರುತಿಸಿ ಸ್ವಚ್ಛ ವಾರ್ಡ್ ಎಂದು ಘೋಷಿಸಿ, ಪಾರಿತೋಷಕವನ್ನು ನೀಡಲಾಗುವುದು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳ ನಾಗರಿಕರು ತಮ್ಮ ವಾರ್ಡ್ ಅತೀ ಹೆಚ್ಚು ಸ್ವಚ್ಛವಾಗಿದ್ದಲ್ಲಿ ಫೆಬ್ರವರಿ 17ರ ಒಳಗೆ ಸ್ವಚ್ಛ ವಾರ್ಡ್ ಬಗ್ಗೆ ಪಟ್ಟಣ ಪಂಚಾಯತ್ ಕಚೇರಿಗೆ ನಾಮ ನಿರ್ದೇಶನ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಆರೋಗ್ಯ ವಿಭಾಗವನ್ನು ಸಂಪರ್ಕಿಸು ವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 10 Feb 2026 8:01 pm

ದಂಡದ ಬದಲು ಬಹುಮಾನ ಪಡೆದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ!

T20 ವಿಶ್ವಕಪ್ ತಪ್ಪಿಸಿಕೊಂಡಿರುವ ಬಾಂಗ್ಲಾದೇಶಕ್ಕೆ ದಂಡದ ಬದಲು ಬಹುಮಾನ ದೊರೆತಿದೆ. ಲಾಹೋರ್ ಮಾತುಕತೆಯ ನಂತರ ಐಸಿಸಿ ಪಂದ್ಯಾವಳಿ ಆಯೋಜಿಸುವ ಹಕ್ಕು ನೀಡುವ ಭರವಸೆಯನ್ನು ಬಾಂಗ್ಲಾದೇಶಕ್ಕೆ ನೀಡಲು ಕಾರಣವೇನು? ಭಾರತದಲ್ಲಿ ನಡೆಯುವ 2026ರ T20 ವಿಶ್ವಕಪ್ ತಪ್ಪಿಸಿಕೊಂಡಿರುವ ಬಾಂಗ್ಲಾದೇಶದ ಮೇಲೆ ನಿರ್ಬಂಧಗಳ ಬದಲಾಗಿ ಬಹುಮಾನವನ್ನು ನೀಡಲಾಗಿದೆ. ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ಭರವಸೆ ನೀಡಿದೆ ಮತ್ತು 2031ರೊಳಗೆ ಐಸಿಸಿ ಪಂದ್ಯಾವಳಿ ಆಯೋಜಿಸುವ ಹಕ್ಕನ್ನು ನೀಡುವ ಭರವಸೆ ನೀಡಿದೆ. ಈ ಸಮತೋಲನದ ನಿರ್ಧಾರವನ್ನು ಐಸಿಸಿ ಕೈಗೊಳ್ಳಲು ಕಾರಣವೇನು? ಕ್ರಿಕೆಟ್ ವಿಶ್ವಕಪ್ ಸುತ್ತಲಿನ ಬಿಕ್ಕಟ್ಟನ್ನು ಎದುರಿಸುವಲ್ಲಿ ಐಸಿಸಿಯು, ಕ್ರಿಕೆಟ್ ಅನ್ನು ನೈತಿಕ ಅಥವಾ ಸೈದ್ಧಾಂತಿಕ ಪರಿಗಣನೆಗಳಿಗಿಂತ ಪ್ರಾಯೋಗಿಕತೆಯನ್ನು ಆಧರಿಸಿದ ರಾಜಕೀಯ ಅಥವಾ ತತ್ವಗಳ ವ್ಯವಸ್ಥೆಯಲ್ಲಿ ಮುಂದಿಡುವ ನಿರ್ಧಾರ ಮಾಡಿದೆ. ►ಬಿರುಗಾಳಿಯ ಕೇಂದ್ರ ಬಿಂದು ಬಿಸಿಬಿ ಬಿರುಗಾಳಿಯ ಕೇಂದ್ರ ಬಿಂದು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ. ಅದು T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತ್ತು. ಅದಕ್ಕಾಗಿ ಶಿಕ್ಷೆಯ ಬದಲಾಗಿ ಬೆಂಬಲ ನೀಡುವ ಸಿದ್ಧಾಂತವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಳವಡಿಸಿಕೊಂಡಿದೆ. ಬಾಂಗ್ಲಾದೇಶ ಭಾರತಕ್ಕೆ ಬರಲು ವಿರೋಧಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ (ಪಿಸಿಬಿ) ಭಾರತದ ವಿರುದ್ಧ ಪಂದ್ಯದಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಹೀಗಾಗಿ ಪಿಸಿಬಿ ಮತ್ತು ಬಿಸಿಬಿ ಜೊತೆಗೆ ತೀವ್ರ ಮಾತುಕತೆಯ ನಂತರ ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿ ಬಾಂಗ್ಲಾದೇಶದ ಮೇಲೆ ಯಾವುದೇ ದಂಡ ಹೇರದಿರಲು ನಿರ್ಧರಿಸಿದೆ. ಐಸಿಸಿ ಅಧಿಕೃತವಾಗಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ತಟಸ್ಥ ಮತ್ತು ನ್ಯಾಯಯುತ” ನಿರ್ಧಾರ ಕೈಗೊಂಡಿದ್ದು, ದಂಡ ಹೇರುವ ಬದಲಾಗಿ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಐಸಿಸಿ ವ್ಯಾಜ್ಯ ಪರಿಹಾರ ಸಮಿತಿಯನ್ನು ಸಂಪರ್ಕಿಸುವ ಹಕ್ಕನ್ನು ಬಿಸಿಬಿ ಉಳಿಸಿಕೊಂಡಿದೆ. ದಂಡವನ್ನು ನೀಡದೆ ಇರುವ ಕ್ರಮದ ಜೊತೆಗೆ 2031ರೊಳಗೆ ಪುರುಷರ ವಿಶ್ವಕಪ್ ಕ್ರಿಕೆಟ್‌ ನಲ್ಲಿ ಮತ್ತೊಂದು ಐಸಿಸಿ ಜಾಗತಿಕ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ನೀಡುವುದಾಗಿ ಭರವಸೆ ನೀಡಲಾಗಿದೆ. ಈ ಆಯೋಜನೆಯ ಹಕ್ಕನ್ನು ನೀಡುವ ಭರವಸೆಯು ಸಾಮಾನ್ಯ ಐಸಿಸಿ ಆಯ್ಕೆ ಮತ್ತು ವೇಳಾಪಟ್ಟಿ ಪ್ರಕ್ರಿಯೆಗಳ ಮೇಲೆ ಷರತ್ತುಬದ್ಧವಾಗಿದೆ. ಆದರೆ ಮಂಡಳಿ ಬಿಸಿಬಿ ಕುರಿತಾಗಿ ದೀರ್ಘಕಾಲೀನ ಸದ್ಭಾವನೆ ಪ್ರಕಟಿಸಿರುವುದನ್ನು ಇದು ಸೂಚಿಸುತ್ತದೆ. ಐಸಿಸಿ ಹೇಳಿಕೆಯ ಪ್ರಕಾರ, “ಬಾಂಗ್ಲಾದೇಶವು ‘ಆದ್ಯತೆಯ ಕ್ರಿಕೆಟ್ ಪರಿಸರ’ವಾಗಿ ಉಳಿದಿದೆ ಮತ್ತು ಹೂಡಿಕೆ ಸಂಭಾವ್ಯ ರಾಷ್ಟ್ರವಾಗಿ ಕ್ರೀಡಾ ಜಾಗತಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.” ►ಪಾಕಿಸ್ತಾನದ ಯು–ಟರ್ನ್‌ ಗೆ ಕಾರಣವೇನು? ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್ಬುಲ್ ಐಸಿಸಿಯ ಹೇಳಿಕೆಯನ್ನು ಸ್ವಾಗತಿಸಿದ್ದಾರೆ ಮತ್ತು ಮಂಡಳಿ ಹಾಗೂ ಜಾಗತಿಕ ಕ್ರಿಕೆಟ್ ಸಂಸ್ಥೆಗಳ ಜೊತೆಗೆ ಉತ್ತಮ ಸಹಕಾರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಚರ್ಚೆಯ ಸಮಯದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಬೆಂಬಲ ನೀಡಿತ್ತು ಮತ್ತು ಫೆಬ್ರವರಿ 15ರಂದು ನಡೆಯುವ ಭಾರತದ ವಿರುದ್ಧ ಪಂದ್ಯದಲ್ಲಿ ಭಾಗವಹಿಸುವಂತೆ ಬಿಸಿಬಿಯು ಪಾಕ್ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿತು. ಆದರೆ ಬಹಳಷ್ಟು ಮಂದಿಯ ಅಂದಾಜಿನ ಪ್ರಕಾರ ಭಾರತ–ಪಾಕಿಸ್ತಾನ ನಡುವಿನ ಪಂದ್ಯದ ಹಣಕಾಸು ತೂಕವೇ ಪಾಕಿಸ್ತಾನ ಭಾಗವಹಿಸಲು ಒಪ್ಪಲು ಮುಖ್ಯ ಕಾರಣವಾಗಿದೆ. ►ಸರಣಿ ಪ್ರತಿಕ್ರಿಯೆಗೆ ಕಾರಣವಾದ ಬಿಸಿಬಿ ಬಿಕ್ಕಟ್ಟು ಒಟ್ಟಾರೆ ಬಿಕ್ಕಟ್ಟು ಜನವರಿಯಿಂದ ಆರಂಭವಾಗಿತ್ತು. ಭಾರತದಲ್ಲಿ ಬಾಂಗ್ಲಾದೇಶ ಪಂದ್ಯ ಆಡುವುದಿಲ್ಲ ಎಂದು ಐಸಿಸಿಗೆ ಬಿಸಿಬಿ ಸೂಚಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಗೆ ಬದಲಿಸಲು ಐಸಿಸಿ ನಿರಾಕರಿಸಿತು. ಹೀಗಾಗಿ ಬಾಂಗ್ಲಾದೇಶದ ಸ್ಥಾನದಲ್ಲಿ T20 ವಿಶ್ವಕಪ್‌ ನಲ್ಲಿ ಆಡುವ ಅವಕಾಶವನ್ನು ಸ್ಕಾಟ್ಲೆಂಡ್ ಪಡೆದುಕೊಂಡಿತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಸರಣಿ ಪ್ರತಿಕ್ರಿಯೆಗೆ ಕಾರಣವಾಯಿತು. ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿ ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಸಲು ಉದ್ದೇಶಿಸಲಾದ ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಆಡಲು ನಿರಾಕರಿಸಿತು. ಈ ಪಂದ್ಯದಿಂದ ಸಿಗುತ್ತಿದ್ದ ಶತಕೋಟಿ ಪ್ರಮಾಣದ ಪ್ರಸಾರ ಹಕ್ಕುಗಳು ನೆನೆಗುದಿಗೆ ಬಿದ್ದವು. ►ಬಾಂಗ್ಲಾದೇಶದ ಬಿಕ್ಕಟ್ಟಿಗೆ ತುಪ್ಪ ಸುರಿದ ಪಾಕಿಸ್ತಾನ ಪಾಕಿಸ್ತಾನದ ನಿರ್ಧಾರ ಬದಲಿಸಲು ಲಾಹೋರಿನಲ್ಲಿ ಐಸಿಸಿ ಮತ್ತು ಪಿಸಿಬಿ ನಡುವೆ ನಿರ್ಣಾಯಕ ಮಾತುಕತೆ ನಡೆಯಿತು. ಬಿಸಿಬಿ ಅಧ್ಯಕ್ಷ ಬುಲ್ಬುಲ್ ಕೂಡ ಈ ಮಾತುಕತೆಯ ಭಾಗವಾಗಿದ್ದರು. ಮಾತುಕತೆಗಳು ರಚನಾತ್ಮಕ ಮತ್ತು ಹಿತಕರ ವಾತಾವರಣದಲ್ಲಿ ನಡೆದವು ಎಂದು ಐಸಿಸಿ ತಿಳಿಸಿದೆ. ನಂತರ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ಷರೀಫ್ ಅವರು ಪಿಸಿಬಿಗೆ ಕೊಲಂಬೊಗೆ ಪ್ರಯಾಣಿಸಲು ಹಸಿರು ನಿಶಾನೆ ನೀಡಿದರು. ಐಸಿಸಿ ಸಿಇಒ ಸಂಜೋಗ್ ಗುಪ್ತಾ ಅವರು ಸಂಪೂರ್ಣ ವಿವಾದವನ್ನು ವಿಷಾದನೀಯ ಎಂದು ಹೇಳಿದ್ದಾರೆ. ವಿಶ್ವ ಕ್ರಿಕೆಟ್‌ ನಲ್ಲಿ ಬಾಂಗ್ಲಾದೇಶದ ದೀರ್ಘಕಾಲೀನ ಸ್ಥಾನಕ್ಕೆ ಇದರಿಂದ ಧಕ್ಕೆ ಬರುವುದಿಲ್ಲ. ಅಲ್ಪಾವಧಿಯ ಬಿಕ್ಕಟ್ಟು ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರಗಳ ಪಾತ್ರವನ್ನು ವ್ಯಾಖ್ಯಾನಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು. ►ನ್ಯಾಯಯುತ ನಿರ್ಧಾರ ಅಥವಾ ಪೂರ್ಣ ಸದಸ್ಯರಿಗೆ ನೀಡಿದ ಗೌರವ? ಐಸಿಸಿ ಹೇಳುವ ಈ ನ್ಯಾಯಯುತ ನಿರ್ಧಾರ ಅಥವಾ ಪೂರ್ಣ ಸದಸ್ಯರಿಗೆ ನೀಡಿದ ಗೌರವ ಎನ್ನುವುದು ಮೇಲ್ನೋಟದ ಮಾತಾಗಿರಬಹುದು. ಲಾಹೋರಿನಲ್ಲಿ ನಡೆದ ಮಾತುಕತೆಯಲ್ಲಿ ಪಾಕಿಸ್ತಾನದ ಪಾತ್ರದಿಂದಾಗಿ ಬಿಸಿಬಿಗೆ ವಾದ ಮಂಡಿಸುವ ಅವಕಾಶ ದೊರಕಿತು. ಪಾಕಿಸ್ತಾನದ ಬೆಂಬಲದಿಂದಲೇ ಬಾಂಗ್ಲಾದೇಶ ವಿಶ್ವಕಪ್‌ನಿಂದ ಹೊರಗುಳಿಯುವ ನಿರ್ಧಾರದಲ್ಲಿ ದೃಢವಾಗಿತ್ತು. ಐಸಿಸಿ ಮಟ್ಟಿಗೆ ಭಾರತ–ಪಾಕಿಸ್ತಾನ ನಡುವಿನ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಅದೊಂದೇ ಪಂದ್ಯ ಅನೇಕ ವಿಶ್ವಕಪ್ ಪಂದ್ಯಗಳಿಗಿಂತ ಹೆಚ್ಚು ಆದಾಯ ತಂದುಕೊಡುತ್ತದೆ. ಅದರ ರದ್ದತಿಯಿಂದ ಪಂದ್ಯಾವಳಿಗೆ ದೊಡ್ಡ ನಷ್ಟವಾಗುತ್ತಿತ್ತು. ಜೊತೆಗೆ ಪಿಸಿಬಿ ಮತ್ತು ಬಿಸಿಬಿಯಂತಹ ಸಣ್ಣ ಮಂಡಳಿಗಳು ಅನುದಾನಕ್ಕಾಗಿ ಐಸಿಸಿಯನ್ನೇ ಅವಲಂಬಿಸಿವೆ. ಹೀಗಾಗಿ ಐಸಿಸಿಗೂ ಇದು ಚಿಂತೆಯ ವಿಷಯವಾಗಿತ್ತು. ►ಬಾಂಗ್ಲಾದೇಶಕ್ಕೆ ದಂಡನೆ ನೀಡಿದ್ದರೆ ಏನಾಗುತ್ತಿತ್ತು? ಬಾಂಗ್ಲಾದೇಶಕ್ಕೆ ದಂಡನೆ ನೀಡಿದ್ದರೆ ವಿಸ್ತೃತ ಪರಿಣಾಮ ಬೀರುವ ಸಾಧ್ಯತೆಯಿತ್ತು. ಸಣ್ಣ ಸಂಸ್ಥೆಯಾಗಿರುವ ಬಿಸಿಬಿಯ ಆದಾಯದ ಮೇಲೆ ದೊಡ್ಡ ಹೊಡೆತ ಬೀಳುತ್ತಿತ್ತು. ಅಭಿಮಾನಿಗಳಲ್ಲಿ ಹತಾಶೆ ಉಂಟಾಗುತ್ತಿತ್ತು ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗುತ್ತಿತ್ತು. ಜಾಗತಿಕವಾಗಿ ಬಾಂಗ್ಲಾದೇಶ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಸುಮಾರು 200 ಮಿಲಿಯನ್ ಅಭಿಮಾನಿ ವರ್ಗ ಬಾಂಗ್ಲಾದೇಶದಲ್ಲಿದೆ. ಐಸಿಸಿಗೆ ಇದು ವಾಣಿಜ್ಯ ಆಸ್ತಿಯಾಗಿದೆ. ದಂಡ ವಿಧಿಸಿದ್ದರೆ ಬಾಂಗ್ಲಾದೇಶದ ಚಿಗುರುವ ಪ್ರತಿಭೆಗಳು ಮತ್ತು ಭರವಸೆಯ ಆಟಗಾರರ ಮೇಲೂ ಪರಿಣಾಮ ಬೀರುತ್ತಿತ್ತು. ಐಸಿಸಿ ಕೇಂದ್ರೀಕೃತವಾಗಿ ಆದಾಯ ಸಂಗ್ರಹಿಸಿ ಮರು ವಿತರಣೆ ಮಾಡುತ್ತದೆ. ಹೀಗಾಗಿ ಬಿಸಿಬಿಯಂತಹ ಮಂಡಳಿಗಳು ದೇಶೀಯ ಪಂದ್ಯಗಳು ಮತ್ತು ಆಟಗಾರರ ವೇತನದ ಬಾಧ್ಯತೆಗಳನ್ನು ನಿಭಾಯಿಸುತ್ತವೆ. ಐಸಿಸಿಯ ಆದಾಯಕ್ಕೆ ಪೆಟ್ಟು ಬಿದ್ದರೆ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಹೊರತುಪಡಿಸಿ ಉಳಿದ ಬಹುತೇಕ ರಾಷ್ಟ್ರಗಳಿಗೂ ಪರಿಣಾಮ ಬೀಳಲಿದೆ.

ವಾರ್ತಾ ಭಾರತಿ 10 Feb 2026 7:59 pm

ಮಾಜಿ ಸೇನಾ ಮುಖ್ಯಸ್ಥ ನರವಣೆಯವರ ಅಪ್ರಕಟಿತ ಆತ್ಮಚರಿತ್ರೆ ಕುರಿತ ವಿವಾದ: ಸ್ಪಷ್ಟೀಕರಣ ನೀಡಿದ ಪಿಆರ್‌ಎಚ್‌ಐ

ಹೊಸದಿಲ್ಲಿ, ಫೆ. 10: ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆಯ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್‌ ಆಫ್ ಡೆಸ್ಟಿನಿ’ಯ ಸಂಪೂರ್ಣ ಪ್ರಕಾಶನ ಹಕ್ಕುಗಳನ್ನು ತಾನು ಹೊಂದಿದ್ದೇನೆ ಹಾಗೂ ಪುಸ್ತಕವು ಪ್ರಕಟಗೊಂಡಿಲ್ಲ ಎಂದು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಅಧಿಕೃತ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಪುಸ್ತಕದ ಅನಧಿಕೃತ ಪ್ರತಿಗಳು ಚಲಾವಣೆಯಲ್ಲಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವದದ ನಡುವೆ ಪೆಂಗ್ವಿನ್ ಈ ಸ್ಪಷ್ಟೀಕರಣ ನೀಡಿದೆ. ಹಸ್ತಪ್ರತಿಯು ಡಿಜಿಟಲ್ ಮತ್ತು ಇತರ ರೂಪಗಳಲ್ಲಿ ಅಕ್ರಮವಾಗಿ ಚಲಾವಣೆಯಲ್ಲಿದೆ ಎಂದು ಆರೋಪಿಸಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಬಳಿಕ ಪ್ರಕಾಶಕರ ಹೇಳಿಕೆ ಹೊರಬಿದ್ದಿದೆ. ಅಪ್ರಕಟಿತ ಪುಸ್ತಕದ ಸಂಭಾವ್ಯ ಸೋರಿಕೆಯ ಬಗ್ಗೆ ವಿವರವಾದ ತನಿಖೆಗಾಗಿ ಪ್ರಕರಣವನ್ನು ವಿಶೇಷ ಘಟಕಕ್ಕೆ ವಹಿಸಲಾಗಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಾತುಗಳು ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ನಮ್ಮ ನಿಲುವನ್ನು ತಿಳಿಸಲು ತಾನು ಬಯಸಿರುವುದಾಗಿ ಸೋಮವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಪೆಂಗ್ವಿನ್ ತಿಳಿಸಿದೆ. ತಾನು ಈ ಆತ್ಮಚರಿತ್ರೆಯ ಏಕೈಕ ಹಕ್ಕುದಾರನಾಗಿದ್ದು, ಪುಸ್ತಕದ ಯಾವುದೇ ಅಧಿಕೃತ ಮಾದರಿಯನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಲಾಗಿಲ್ಲ ಎಂದು ಅದು ಹೇಳಿದೆ. ‘‘ಈಗ ಚಲಾವಣೆಯಲ್ಲಿದೆ ಎನ್ನಲಾದ ಪುಸ್ತಕದ ಯಾವುದೇ ಪ್ರತಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ರೂಪದಲ್ಲಿ ಯಾವುದೇ ವೇದಿಕೆಯಲ್ಲಿದ್ದರೂ ಅದು ಪೆಂಗ್ವಿನ್ ಸಂಸ್ಥೆಯ ಕಾಪಿರೈಟ್ ಹಕ್ಕಿನ ಉಲ್ಲಂಘನೆಯಾಗಿದೆ ಹಾಗೂ ಅದನ್ನು ನಿಲ್ಲಿಸಬೇಕಾಗಿದೆ’’ ಎಂದು ಹೇಳಿಕೆ ತಿಳಿಸಿದೆ. ಈ ಪುಸ್ತಕದ ವಿಷಯಗಳನ್ನು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಬಳಿಕ ಅದು ರಾಜಕೀಯ ವಿವಾದವಾಗಿ ಪರಿಣಮಿಸಿದೆ.

ವಾರ್ತಾ ಭಾರತಿ 10 Feb 2026 7:49 pm

MM Naravane: ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ

MM Naravane: ಭಾರತ - ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದ ಬಗ್ಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರು ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ನಾವು ಬಿಡುಗಡೆಯೇ ಮಾಡಿಲ್ಲ ಎಂದು ಪೆಂಗ್ವಿನ್ ಸಂಸ್ಥೆ ಹೇಳಿತ್ತು. ಇದೀಗ ಈ ವಿಷಯದ ಬಗ್ಗೆ

ಒನ್ ಇ೦ಡಿಯ 10 Feb 2026 7:47 pm

DCM ಅಜಿತ್ ಪವಾರ್ ಸಾವು ಅಪಘಾತವಲ್ಲ: ಪ್ರಮುಖ 5 ಪ್ರಶ್ನೆಗಳನ್ನು ಮುಂದಿಟ್ಟ ರೋಹಿತ್ ಪವಾರ್! ಏನವು?

ಅಜಿತ್ ಪವಾರ್ ಅವರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಅಪಘಾತವೇ ಅಥವಾ ಪಿತೂರಿಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಅಗತ್ಯ ಇದ್ದರೆ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳ ನೆರವು ಪಡೆದು ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ವಿಜಯ ಕರ್ನಾಟಕ 10 Feb 2026 7:46 pm

ರಾಯಚೂರು | ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬೈಕ್ ರ‍್ಯಾಲಿ

ರಾಯಚೂರು : ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಫೆ.12 ರಂದು ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಜೆಸಿಟಿಯು ವತಿಯಿಂದ ನಗರದಲ್ಲಿ ಮಂಗಳವಾರ ಬೈಕ್ ರ‍್ಯಾಲಿ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಫೆ.12ಕ್ಕೆ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ, ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಸೇರಿದಂತೆ 9 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಸ್ವಯಂಚಾಲಿತವಾಗಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು. ಎಲ್ಲಾ ಕಾರ್ಮಿಕ ಸಂಘಟನೆಗಳು, ಕಾರ್ಮಿಕರು, ವ್ಯಾಪಾರಿಗಳು, ಸಾರಿಗೆ, ಆಟೋ, ನೌಕರರು, ಸೇರಿದಂತೆ ಎಲ್ಲಾ ರೀತಿ ಕಾರ್ಮಿಕರು ಹೋರಾಟಕ್ಕೆ ಬೆಂಬಲಿಸಿ ಬಂದ್‌ನಲ್ಲಿ ಭಾಗವಹಿಸಲು ತಿಳಿಸಿದರು. ಬೈಕ್ ರ‍್ಯಾಲಿ ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾಗಿ ಕೇಂದ್ರ ಬಸ್ ನಿಲ್ದಾಣ, ಮಹಾ ನಗರ ಪಾಲಿಕೆ, ಜೈಲ್ ರಸ್ತೆ, ಜಾಕೀರ್ ಹುಸೇನ್ ವೃತ್ತ, ಏಕ್ ಮಿನಾರ್, ಭಗತ್ ಸಿಂಗ್ ವೃತ್ತ, ಸರಾಫ್‌ ಬಜಾ‌ರ್, ಶೆಟ್ಟಿಭಾವಿ ಸರ್ಕಲ್, ಪಟೇಲ ವೃತ್ತ, ಮಹಾವೀರ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಂಜ್ ರಸ್ತೆ, ಗೋಶಾಲೆ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ಈ ಸಂದರ್ಭದಲ್ಲಿ ಡಿ.ಎಸ್. ಶರಣಬಸವ, ಕೆ.ಜಿ.ವೀರೇಶ, ಮಹೇಶ.ಸಿ, ಅಜೀಜ್ ಜಾಗೀರ್‌ದಾರ, ಮಾನಪ್ಪ, ಜಿಲಾನಿ ಪಾಷಾ, ಜಗದೀಶ, ನಿಸಾರ್ ಅಹಮದ್‌ ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 7:46 pm

ಮಥುರಾ| ಒಂದೇ ಕುಟುಂಬದ ಐವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಪೊಲೀಸರಿಂದ ತನಿಖೆ

ಲಕ್ನೋ,ಫೆ.10: ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿದಂತೆ ಒಂದು ಕುಟುಂಬದ ಐವರು ಸದಸ್ಯರು ಉತ್ತರಪ್ರದೇಶದ ಮಥುರಾ ಜಿಲ್ಲೆಯ ಖಪ್ಪರ್‌ಪುರ ಗ್ರಾಮದ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಸಾಮೂಹಿಕ ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಒಂದು ಆತ್ಮಹತ್ಯಾ ಪತ್ರ, ಗೋಡೆಯ ಮೇಲೆ ಬರೆಯಲಾದ ಒಂದು ಸಂದೇಶ ಮತ್ತು ಕುಟುಂಬದ ಹಿರಿಯ ವ್ಯಕ್ತಿ ಮಾಡಿರುವ ವೀಡಿಯೊವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮೃತರನ್ನು ರೈತ ಮನೀಶ್ ಕುಮಾರ್ (35), ಅವರ 32 ವರ್ಷದ ಪತ್ನಿ ಹಾಗೂ ಇಬ್ಬರು ಹೆಣ್ಣು ಮತ್ತು ಒಂದು ಗಂಡು ಸೇರಿದಂತೆ ಅವರ ಮೂವರು ಅಪ್ರಾಪ್ತ ಮಕ್ಕಳು ಎಂಬುದಾಗಿ ಗುರುತಿಸಲಾಗಿದೆ ಎಂದು ಮಥುರಾ ಪೊಲೀಸ್ ಸೂಪರಿಂಟೆಂಡೆಂಟ್ ಶ್ಲೋಕ್‌ ಕುಮಾರ್ ತಿಳಿಸಿದರು. ಘಟನೆಯ ಬಗ್ಗೆ ಮನೀಶ್ ಕುಮಾರ್‌ರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳು ಬೆಳಗ್ಗೆ ಆಡಲು ಮನೆಯಿಂದ ಹೊರಗೆ ಬಾರದಿರುವುದನ್ನು ಕಂಡು ಮನೀಶ್‌ರ ಸಹೋದರ ಬಾಗಿಲು ಒಡೆದು ಮನೆಯೊಳಗೆ ಹೋದಾಗ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ. ಅವರ ಆತ್ಮಹತ್ಯೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 10 Feb 2026 7:45 pm

Kalaburagi | ಫೆ.16 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಫೆ.16 ಮತ್ತು 17ರಂದು ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ನಡೆಯಲಿರುವ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ರಚಿಸಲಾದ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕೃತವಾಗಿ ಸತ್ಕರಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಉದ್ದಿಮೆದಾರ ಜಗನ್ನಾಥ ಶೇಗಜೀ, ಗೌರವಾಧ್ಯಕ್ಷರಾಗಿ ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ, ಹಾಗೂ ಕಾರ್ಯಾಧ್ಯಕ್ಷರಾಗಿ ಮೋಸಿನ್ ಎಂ. ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಗನ್ನಾಥ ಶೇಗಜೀ ಅವರು, ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಮ್ಮೇಳನಗಳು ಅತ್ಯಂತ ಅವಶ್ಯಕ. ಈ ಸಮ್ಮೇಳನವನ್ನು ಮಾದರಿ ಸಮ್ಮೇಳನವನ್ನಾಗಿ ರೂಪಿಸಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಹೇಳಿದರು. ಇಂತಹ ಜವಾಬ್ದಾರಿಯನ್ನು ನಿಭಾಯಿಸಲು ಅವಕಾಶ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ಅರ್ಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನುಡಿಜಾತ್ರೆಯನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳು ಕೈಗೊಳ್ಳಲಾಗುತ್ತಿವೆ. ಅನುಭವ ಮಂಟಪದ ಮಾದರಿಯಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಲಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ್, ಸರ್ಕಾರಿ ನೌಕರರ ಸಂಘದ ನಿವೃತ್ತ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ನಾಗಪ್ಪ ಸಜ್ಜನ್, ರಾಜೇಂದ್ರ ಮಾಡಬೂಳ, ಜಯಶ್ರೀ ಜಮಾದಾರ, ರವಿಕುಮಾರ ಶಹಾಪೂರಕರ್, ದಿನೇಶ ಮದಕರಿ, ಚಂದ್ರಕಾಂತ ಸೂರನ್, ಸಿದ್ಧಲಿಂಗ ಬಾಳಿ, ಮಹಾಲಿಂಗಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Feb 2026 7:44 pm

ಫೆಬ್ರವರಿ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 10) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 10 Feb 2026 7:41 pm

ಗ್ರಾ.ಪಂ.‌ ಚುನಾಯಿತ ಸದಸ್ಯರ ಅವಧಿಯ ಕೊನೆಯಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಬಹುದು : ಹೈಕೋರ್ಟ್

ಬೆಂಗಳೂರು : ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಅವಧಿಯ ಕೊನೆಯಲ್ಲೂ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮತಿ ನೀಡಬಹುದು. ಇದರಿಂದ, ಚುನಾಯಿತ ಪದಾಧಿಕಾರಿಗಳು ಉಳಿದ ಅಧಿಕಾರಾವಧಿ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಅಲ್ಲದೆ, ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ 15 ತಿಂಗಳ ಅವಧಿ ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಂಬಂಧ ಸದಸ್ಯರ ಮನವಿಯ ಮೇರೆಗೆ ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿದ್ದ ಕ್ರಮ ಪ್ರಶ್ನಿಸಿ ಗ್ರಾ.ಪಂ. ಅಧ್ಯಕ್ಷ ಸಿ.ಎನ್‌. ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಗ್ರಾಮ ಪಂಚಾಯತಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ 15 ತಿಂಗಳ ಆರಂಭಿಕ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿರಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅವಧಿಯ ಕೊನೆಯ ಹಂತದಲ್ಲಿ ಅವಿಶ್ವಾಸ ಮಂಡಿಸಲು ಸದಸ್ಯರು ಮುಂದಾಗಿದ್ದಾರೆಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದರೆ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಯಾವ ಸಂದರ್ಭದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದಾಗಿದೆ. ಆದ್ದರಿಂದ, ಅರ್ಜಿದಾರರ ವಾದ ಒಪ್ಪಲಾಗುವುದಿಲ್ಲ. ಜತೆಗೆ, ಅವಧಿಯ ಅಂತ್ಯದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ನೀಡುವುದರಿಂದ ಚುನಾಯಿತ ಪದಾಧಿಕಾರಿಗಳ ಉಳಿದ ಅಧಿಕಾರಾವಧಿ ದುರುಪಯೋಗವಾಗಲಿದೆ ಎನ್ನಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸದಸ್ಯರ ಮನವಿ ಮೇರೆಗೆ ಅವಿಶ್ವಾಸ ನಿರ್ಣಯ ಅಂಗೀಕರಿಸುವ ಸಲುವಾಗಿ ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ಆರ್ಥಿಕ ಅವ್ಯವಹಾರ ಸಂಬಂಧ ಅರ್ಜಿದಾರರು ಮಾಡಿರುವ ಆರೋಪ ಸಂಬಂಧ ಪರಿಶೀಲನೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸಬೇಕು. ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕ ಏಳು ದಿನಗಳೊಳಗೆ ಅಕ್ರಮ ಆರೋಪ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ. ಕಾರ್ಯದರ್ಶಿಗೆ ಸೂಚಿಸಿದೆ. ಪ್ರಕರಣವೇನು? ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಂಬಂಧ ಸದಸ್ಯರು ಮನವಿ ಸಲ್ಲಿಸಿದ್ದರು. ಆ ಮನವಿಯ ಆಧಾರದಲ್ಲಿ 2026ರ ಜನವರಿ 7ರಂದು ಅವಿಶ್ವಾಸ ನಿರ್ಣಯಕ್ಕೆ ಸಭೆ ನಡೆಸುವುದಕ್ಕಾಗಿ ಉಪ ವಿಭಾಗಾಧಿಕಾರಿಗಳು 2025ರ ಡಿಸೆಂಬರ್ 20ರಂದು ನೋಟಿಸ್‌ ಜಾರಿ ಮಾಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಪಂಚಾಯತ್‌ನಲ್ಲಿ ಲಭ್ಯವಿರುವ 65 ಲಕ್ಷ ರೂ. ಅನುದಾನ ಬಿಡುಗಡೆಗೆ ಕೆಲ ಸದಸ್ಯರು ಮನವಿ ಮಾಡಿದ್ದರು. ಅದಕ್ಕೆ ಅಧ್ಯಕ್ಷರು ಒಪ್ಪದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ. 2020ರ ಡಿಸೆಂಬರ್ 30ರಂದು ಆಯ್ಕೆಯಾಗಿದ್ದು, ಅವರ ಅವಧಿ ಪೂರ್ಣಗೊಳ್ಳುವ ಸಮಯದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ. ಆದ್ದರಿಂದ, ನೋಟಿಸ್‌ ರದ್ದುಪಡಿಸಬೇಕು ಎಂದು ಕೋರಿದ್ದರು.

ವಾರ್ತಾ ಭಾರತಿ 10 Feb 2026 7:36 pm

Maharashtra | ಅಜಿತ್ ಪವಾರ್ ಪ್ರಯಾಣ ಪೂರ್ವಯೋಜಿತವಲ್ಲ; ವಿಮಾನ ಅಪಘಾತದ ಕುರಿತು ಗಂಭೀರ ಅನುಮಾನಗಳಿವೆ: ಶಾಸಕ ರೋಹಿತ್ ಪವಾರ್

ಮುಂಬೈ: ಅಜಿತ್ ಪವಾರ್ ಅವರ ವಿಮಾನ ಅಪಘಾತದ ಕುರಿತು ಹಲವು ಅನುಮಾನಗಳಿವೆ ಎಂದು ಹೇಳಿರುವ ಅವರ ಸೋದರಳಿಯ ಹಾಗೂ ಶಾಸಕ ರೋಹಿತ್ ಪವಾರ್, ಘಟನೆಯ ಬಗ್ಗೆ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಮಮತಾ ಬ್ಯಾನರ್ಜಿ, ಸಂಜಯ್ ರಾವತ್, ಎನ್‌ಸಿಪಿ ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷದ ಶಾಸಕರು ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ಪ್ರಕರಣದ ಬಗ್ಗೆ ಪ್ರಶ್ನೆಗಳು ಎತ್ತಿರುವ ಸಂದರ್ಭದಲ್ಲಿ ಅವರ ಹೇಳಿಕೆಗಳು ಗಮನ ಸೆಳೆದಿವೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಂದೇ ಪ್ರಶ್ನೆ ಇದೆ; ಇದು ಅಪಘಾತವೇ ಅಥವಾ ಇನ್ನೇನಾದರೂ ಆಗಿದೆಯೇ?” ಎಂದು ಪ್ರಶ್ನಿಸಿದರು. ವಿಮಾನದಲ್ಲಿ ಹೆಚ್ಚುವರಿ ಇಂಧನ ಟ್ಯಾಂಕ್‌ ಗಳನ್ನು ಅಳವಡಿಸಲಾಗಿತ್ತೇ ಎಂಬುದನ್ನು ಹ್ಯಾಂಗರ್‌ ನ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲಿಸಬೇಕೆಂದು ಒತ್ತಾಯಿಸಿದ ಅವರು, “ಹೆಚ್ಚುವರಿ ಇಂಧನ ಟ್ಯಾಂಕ್‌ ಗಳು ಕೇವಲ ಕಾನೂನುಬಾಹಿರವಷ್ಟೇ ಅಲ್ಲ, ಅವು ಬಾಂಬ್‌ ನಂತೆಯೂ ಕಾರ್ಯನಿರ್ವಹಿಸಬಹುದು. ಪೈಲಟ್‌ ಗೆ ಇಂಧನ ಉಳಿಸಲು ಸೂಚನೆ ನೀಡಲಾಗಿತ್ತೇ? ಅವರು ವಿಮಾನವನ್ನು ಮತ್ತೊಂದು ಸುತ್ತು ಏಕೆ ತಿರುಗಿಸಲಿಲ್ಲ? ಇಳಿಯಲು ಬೇರೆ ಮಾರ್ಗವಿತ್ತೇ?” ಎಂದು ಪ್ರಶ್ನಿಸಿದರು. ಪ್ರಯಾಣದ ವೇಳಾಪಟ್ಟಿ ಬದಲಾವಣೆಯ ಕುರಿತು ವಿವರಿಸಿದ ಅವರು, “ಅಜಿತ್‌ ಪವಾರ್‌ ಅವರು ಜನವರಿ 27ರ ಸಂಜೆ ಮುಂಬೈನಿಂದ ಪುಣೆಗೆ ಹೊರಡುವ ಯೋಜನೆ ಇತ್ತು. ಬೆಂಗಾವಲು ಪಡೆ ಕೂಡ ಸಿದ್ಧವಾಗಿತ್ತು. ಆದರೆ ಒಬ್ಬ ಉನ್ನತ ನಾಯಕ ಭೇಟಿ ಮಾಡಿದ ಕಾರಣ ವಿಳಂಬವಾಯಿತು. ಹೀಗಾಗಿ ಯೋಜನೆಯನ್ನು ಬದಲಿಸಿ ಜನವರಿ 28ರ ಬೆಳಿಗ್ಗೆ ಪ್ರಯಾಣಿಸಲು ನಿರ್ಧರಿಸಿದರು. ದಾದಾ ವಿಮಾನ ಹಾರಾಟದ ವಿಚಾರದಲ್ಲಿ ಅತ್ಯಂತ ಜಾಗರೂಕರಾಗಿದ್ದರು. ಅವರು ಯಾವತ್ತೂ ಯಾವುದೇ ಅಪಾಯವನ್ನು ತೆಗೆದುಕೊಳ್ಳುವವರಲ್ಲ. ಸಮಯಕ್ಕೆ ವಿಮಾನ ನಿಲ್ದಾಣ ತಲುಪಿದ್ದರೂ, ವಿಮಾನ ಹೊರಟದ್ದು ತಡವಾಯಿತು,” ಎಂದರು. ಅಪಘಾತದ ತನಿಖೆಯನ್ನು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಗಳು ನಡೆಸಬೇಕೆಂದು ಒತ್ತಾಯಿಸಿದ ರೋಹಿತ್ ಪವಾರ್ ಅವರು, “ಸರ್ಕಾರಿ ತನಿಖೆಯ ಹೊರತಾಗಿ ಯುಕೆಯ AAIB, ಫ್ರಾನ್ಸ್‌ನ BEA ಅಥವಾ ಅಮೆರಿಕದ NTSB ಸಂಸ್ಥೆಗಳ ಪೈಕಿ ಯಾವುದಾದರೂ ಒಂದರಿಂದ ಈ ಕುರಿತು ತನಿಖೆ ನಡೆಯಬೇಕು,” ಎಂದು ಹೇಳಿದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ ರೋಹಿತ್ ಪವಾರ್ ವಿಮಾನದ ನಿರ್ವಹಣೆಯ ಮೇಲೂ ಅನುಮಾನ ವ್ಯಕ್ತಪಡಿಸಿದರು. “ದಾದಾ ಎಡಭಾಗದಲ್ಲಿ ಕುಳಿತಿದ್ದರು. ಹೆಚ್ಚುವರಿ ಸಾಮಾನುಗಳು ಹಾಗೂ ದಾಖಲೆಗಳನ್ನು ಹಿಂಭಾಗದಲ್ಲಿ ಇಡಲಾಗಿತ್ತು. ಬೆಳಿಗ್ಗೆ 7:10ಕ್ಕೆ ಪೈಲಟ್ ಬಾರಾಮತಿಯಲ್ಲಿ ಗೋಚರತೆಯ ಕುರಿತು ಪರಿಶೀಲಿಸಿದ್ದರು. ಎಲ್ಲವೂ ಸರಿಯಾಗಿದೆ ಎಂದು ತಿಳಿಸಲಾಯಿತು. ಆದರೆ ಒಬ್ಬ ಮಹಿಳಾ ಪ್ರತ್ಯಕ್ಷದರ್ಶಿಯು ವಿಮಾನ ಇಳಿಯುವಾಗ ವಿಚಿತ್ರ ಶಬ್ದ ಮಾಡುತ್ತಿತ್ತು ಎಂದು ಹೇಳಿದ್ದಾರೆ,” ಎಂದು ವಿವರಿಸಿದರು. 2023ರ ಲಿಯರ್‌ ಜೆಟ್ ಅಪಘಾತದ ವರದಿ ಇನ್ನೂ ಪ್ರಕಟವಾಗಿಲ್ಲವೆಂದು ಆರೋಪಿಸಿದ ಅವರು, ಡಿಜಿಸಿಎ ಮೇಲೆ ಖಾಸಗಿ ಸಂಸ್ಥೆಯ ಪ್ರಭಾವವಿದೆಯೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು. “ESA ರದ್ದುಪಡಿಸಿದರೂ VSR ಸಂಸ್ಥೆ ಇನ್ನೂ ಕಾರ್ಯನಿರ್ವಹಿಸುತ್ತಿರುವುದು ಪ್ರಶ್ನಾರ್ಹ,” ಎಂದು ರೋಹಿತ್‌ ಪವಾರ್ ಕಳವಳ ವ್ಯಕ್ತಪಡಿಸಿದರು. ಪೈಲಟ್ ಬದಲಾವಣೆಯ ವಿಚಾರದಲ್ಲೂ ಪ್ರಶ್ನೆ ಎತ್ತಿದ ಅವರು, “ಹಾರಾಟದ ಮೊದಲು ಮುಖ್ಯ ಪೈಲಟ್ ಅನ್ನು ಏಕೆ ಬದಲಾಯಿಸಲಾಯಿತು? ಸಾಹಿಲ್ ಮದನ್ ಮತ್ತು ಯಶ್ ಅವರನ್ನು ಕೊನೆಯ ಕ್ಷಣದಲ್ಲಿ ಬದಲಿಸಿದರು. ಸುಮಿತ್ ಕಪೂರ್ ಹಾಂಗ್ ಕಾಂಗ್‌ ನಿಂದ ಏಕೆ ಹಿಂತಿರುಗಿದರು? ಅವರು ವಿಮಾನ ಹತ್ತುವಾಗ ಮದ್ಯಪಾನ ಮಾಡಿದ್ದರೇ?” ಎಂದು ಪ್ರಶ್ನಿಸಿದರು. ಪೈಲಟ್‌ನ ಕುಟುಂಬದವರು ನನ್ನ ಹೇಳಿಕೆಯನ್ನು ಅತಿರೇಕವಾಗಿದೆ ಎಂದು ಭಾವಿಸಬಹುದು. ನಮಗೆ ಸ್ಪಷ್ಟ ಉತ್ತರಗಳು ಅಗತ್ಯವಿವೆ. ನಾವು ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದೇವೆ. ಸುಮಿತ್ ಕಪೂರ್ ಅವರ ಹಿಂದಿನ ಸೇವಾ ದಾಖಲೆಗಳು ಪ್ರಶ್ನಾರ್ಹವಾಗಿವೆ. 2010ರಲ್ಲಿ ಅವರು ವಿಮಾನದಲ್ಲಿ ಹಾರಾಟ ಮಾಡುವ ಮುನ್ನ ಮದ್ಯಪಾನ ಮಾಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಇದೇ ರೀತಿಯ ಘಟನೆ 2017ರಲ್ಲಿಯೂ ಸಂಭವಿಸಿತ್ತು. ಮದ್ಯಪಾನದ ಕಾರಣದಿಂದ ಅವರು ಅಮೆರಿಕದ ತರಬೇತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಎಲ್ಲ ಅಂಶಗಳನ್ನು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕಾಗಿದೆ. ಜೊತೆಗೆ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಪೈಲಟ್‌ ಗಳು ಹಾರಾಟ ನಡೆಸಿದ ಕುರಿತು VRS ಸಂಸ್ಥೆಯ ಮಾಲೀಕರ ಆಂತರಿಕ ವಾಟ್ಸಾಪ್ ಸಂಭಾಷಣೆಗಳನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ರೋಹಿತ್ ಪವಾರ್ ಒತ್ತಾಯಿಸಿದ್ದಾರೆ. “ಇದು ಕೇವಲ ಅಪಘಾತವಲ್ಲ, ಪಿತೂರಿಯೂ ಆಗಿರಬಹುದು ಎಂಬ ನಂಬಿಕೆ ನನ್ನದು. ಟ್ರಾನ್ಸ್‌ಪಾಂಡರ್‌ ನ ಕೊನೆಯ ಒಂದು ನಿಮಿಷದ ವಿವರಗಳು ಲಭ್ಯವಿಲ್ಲ. 8:43ಕ್ಕೆ ಅದನ್ನು ಏಕೆ ಸ್ಥಗಿತಗೊಳಿಸಲಾಯಿತು? ಕೊನೆಯ ಕ್ಷಣದಲ್ಲಿ ಏನಾಯಿತು? ಮುಖ್ಯ ಪೈಲಟ್‌ನ ಧ್ವನಿ ದಾಖಲೆ ಏಕೆ ಇಲ್ಲ?” ಎಂದು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 10 Feb 2026 7:35 pm

ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ರೂ. ದೇಣಿಗೆ

ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡಿನ ಪೈಂಟಿಂಗ್, ಸುಂದರೀಕರಣ ಹಾಗೂ ಚಿತ್ರಗಳ ಬಿಡಿಸುವಿಕೆಗಾಗಿ 50 ಸಾವಿರ ರೂಪಾಯಿ ದೇಣಿಗೆಯನ್ನು ಸಂಘದ ಸದಸ್ಯ ಅಮೀರ್ ಹುಸೇನ್ ಅವರ ಸಹಕಾರ ದೊಂದಿಗೆ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ನೀಡಲಾಯಿತು. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ತಾಲೂಕು ಅರೋಗ್ಯಧಿಕಾರಿ ಡಾ ಸಂದೀಪ್ ಕುಡ್ವರವರಿಗೆ 50 ಸಾವಿರ ರೂ. ಚೆಕ್ಕನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯ ಕಿವಿ ಮತ್ತು ಗಂಟಲು ತಜ್ಞ ಡಾ ಅನಂತ್ ಕಾಮತ್, ಮಕ್ಕಳ ತಜ್ಞೆ ಸೌಜನ್ಯ, ಅರಿವಿಳಿಕೆ ತಜ್ಞ ಡಾ ತುಷಾರ್, ಎಲುಬು ಮತ್ತು ಕೀಲು ತಜ್ಞ ಡಾ ನಿತಿನ್ ಶೆಟ್ಟಿ, ಫಿಜಿಶಿಯನ್ ಡಾ. ಚಂದ್ರ ಕಾಂತ್, ಪ್ರಸುತಿ ತಜ್ಞೆ ಡಾ ಜಾಸ್ಮಿನ್, ಜಮೀಯತುಲ್ ಫಲಹ್ ದ. ಕ. ಉಡುಪಿ ಜಿಲ್ಲಾ ಅಧ್ಯಕ್ಷ ಅಷ್ಪಾಕ್ ಅಹ್ಮದ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕೋಶಾಧಿಕಾರಿ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಅಮೀರ್ ಹುಸೇನ್ ಇನ್ನಿತರ ಸದಸ್ಯರು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 10 Feb 2026 7:34 pm

ಕಲಬುರಗಿ | ಸಾರ್ವತ್ರಿಕ ಮುಷ್ಕರಕ್ಕೆ ಎಡಪಕ್ಷಗಳಿಂದ ಬೆಂಬಲ

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಫೆ.12 ರಂದು ದೇಶದಾದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಡಪಕ್ಷಗಳು ಸಂಪೂರ್ಣ ಬೆಂಬಲ ನೀಡುತ್ತವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಸಿ) ಪಕ್ಷಗಳ ಕಲಬುರಗಿ ಘಟಕಗಳು ಪ್ರಕಟಣೆಯಲ್ಲಿ ತಿಳಿಸಿವೆ. ಕೇಂದ್ರ ಸರ್ಕಾರವು ದೇಶದ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಎಡಪಕ್ಷಗಳು ಆಗ್ರಹಿಸಿವೆ. ಇಂದಿನ ದಿನಗಳಲ್ಲಿ ಅನೇಕ ಇಲಾಖೆಗಳ ಉದ್ಯೋಗಿಗಳು ಖಾಯಂ ನೌಕರರಲ್ಲದೇ ಹೊರಗುತ್ತಿಗೆ ಹಾಗೂ ಗುತ್ತಿಗೆ ವ್ಯವಸ್ಥೆಯಲ್ಲಿ ಅತೀ ಕಡಿಮೆ ವೇತನಕ್ಕೆ ದುಡಿಯುವಂತಾಗಿದೆ. ಕಾರ್ಮಿಕರ ಶ್ರಮವನ್ನು ಬಿಟ್ಟಿಯಾಗಿಸುವಂತಹ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಕಾರ್ಮಿಕ ವಿರೋಧಿ ಕಾಯ್ದೆಗಳ ಮೂಲಕ ಕಾರ್ಪೊರೇಟ್‌ಗಳ ಸಂಪತ್ತನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ತೀವ್ರ ಬಡತನ, ನಿರುದ್ಯೋಗ ಹಾಗೂ ಅನಾರೋಗ್ಯ ಹೆಚ್ಚುತ್ತಿದೆ. ಜೊತೆಗೆ ವಿದ್ಯುತ್ ಮಸೂದೆ ಹಾಗೂ ಶಾಂತಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಎಡಪಕ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಮೂಲಕ 100 ದಿನಗಳ ಉದ್ಯೋಗ ಖಾತ್ರಿ ದೊರಕುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮನರೇಗಾ ಯೋಜನೆಗೆ ನೀಡುತ್ತಿದ್ದ ಬಜೆಟ್‌ನಲ್ಲಿ ತೀವ್ರ ಕಡಿತ ಮಾಡಿದ್ದು, ಇದೀಗ ಕಾಯ್ದೆಯನ್ನೇ ದುರ್ಬಲಗೊಳಿಸಿ ಅದರ ಹೆಸರನ್ನು ಬದಲಿಸಿ ವಿಬಿ ಗ್ರಾಮ್‌ಜಿ ಕಾಯ್ದೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿಯಲಾಗಿದೆ ಎಂದು ಆರೋಪಿಸಲಾಗಿದೆ. ಸಿಪಿಎಂ ಕಾರ್ಯದರ್ಶಿ ಕೆ.ನೀಲಾ, ಸಿಪಿಐ ಕಾರ್ಯದರ್ಶಿ ಮಹೇಶ ರಾಠೋಡ, ಹಾಗೂ ಎಸ್‌ಯುಸಿಐ (ಸಿ) ಪಕ್ಷದ ಕಾರ್ಯದರ್ಶಿ ಕೆ.ಆರ್. ವೀರಭದ್ರಪ್ಪ ಅವರು ಮುಷ್ಕರಕ್ಕೆ ಬೆಂಬಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 7:32 pm

ಫೆ.12: ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ

ಮಂಗಳೂರು, ಫೆ.10: ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಫೆ.12ರ ಅಖಿಲ ಭಾರತ ಸಾರ್ವತ್ರಿಕ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಮಂಗಳವಾರ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ಸಂಹಿತೆ ಜಾರಿಗೊಳಿಸಿ ಕಾರ್ಮಿಕರ ಕಾನೂನುಗಳನ್ನು ಶೈತ್ಯಾಗಾರದಲ್ಲಿ ಇಟ್ಟಿದೆ. ಕಾರ್ಮಿಕರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ ದೇಶದ ದುಡಿಯುವ ಜನರು ಒಂದಾಗಿ ಕಾರ್ಮಿಕ ಸಂಹಿತೆಯನ್ನು ವಿರೋಧಿಸಬೇಕಿದೆ ಎಂದರು. ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಖಜಾಂಚಿ ಶಮೀರ್ ಬೋಳಿಯಾರ್, ಪ್ರಮುಖರಾದ ಮಜೀದ್ ಉಳ್ಳಾಲಬೈಲ್, ಮೋಹನ್ ಕುಂಪಲ, ಅನಿಲ್, ಪದ್ಮನಾಭ, ಸಿದ್ದೀಕ್ ಬೆಂಗ್ರೆ, ಸಿರಾಜ್, ಶರಣಪ್ಪ, ಬಶೀರ್ ಪಾವೂರು ಪಾಲ್ಗೊಂಡಿದ್ದರು. *ಫೆ.12: ಹಳೆ ಬಂದರು ಸಗಟು ಮಾರುಕಟ್ಟೆ ಬಂದ್ ಅಖಿಲ ಭಾರತ ಕಾರ್ಮಿಕರ ಮುಷ್ಕರದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಫೇ.12ರಂದು ಮಾರುಕಟ್ಟೆಯಲ್ಲಿ ಯಾವುದೇ ಲೋಡಿಂಗ್, ಆನ್‌ಲೋಡಿಂಗ್ ಕೆಲಸಗಳು ನಡೆಯದೆ ಸಗಟು ಮಾರುಕಟ್ಟೆ ವ್ಯವಹಾರದಲ್ಲಿ ವ್ಯತ್ಯಯ ಆಗಲಿದೆ. ಲಾರಿ, ಟೆಂಪೊ ಮಾಲಕರು ಬಂದರಿನ ವರ್ತಕರು, ಗ್ರಾಹಕರು ಸಹಕರಿಸುವಂತೆ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 10 Feb 2026 7:29 pm

Kalaburagi | ಸಾರ್ವತ್ರಿಕ ಮುಷ್ಕರಕ್ಕೆ ಜನವಾದಿ ಸಂಘಟನೆಯಿಂದ ಬೆಂಬಲ

ಕಲಬುರಗಿ: ಫೆ.12 ರಂದು ನಡೆಸಲು ಉದ್ದೇಶಿಸಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲಿಸಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ತಿಳಿಸಿದ್ದಾರೆ. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ನಾಲ್ಕು ಲೇಬರ್ ಕೋಡ್‌, ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಹಿಂಪಡೆದು ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂಬಂತೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ರೈತರ, ಕಾರ್ಮಿಕರ ಹಿತದೃಷ್ಟಿಯಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Feb 2026 7:27 pm

ಟಿ20 ವಿಶ್ವಕಪ್ ಪಾಕಿಸ್ತಾನ ಯೂಟರ್ನ್ ಹೊಡೆದಿದ್ದಕ್ಕೆ ಐಸಿಸಿಗೆ ಎಷ್ಟು ದುಡ್ಡು ಲಾಭ? ಹೀಗಿದೆ ನೋಡಿ ಲೆಕ್ಕಾಚಾರ!

India Vs Pakistan Cricket Rivalry- ಪಾಕಿಸ್ತಾನ ಭಾರತಕ್ಕೆ ಆಡುತ್ತೋ ಬಿಡುತ್ತೋ ಎಂದು ಭಾರತವಂತೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮಾತು ಆಡಿ ಕೆಟ್ಟೆ ಎಂಬಂತೆ ಪಾಕಿಸ್ತಾನ ಮಾತ್ರ ಈ ಸುಳಿಯಿಂದ ಹೊರಬರುವುದು ಹೇಗೆ ಎಂದು ತಲೆ ಕಡೆಸಿಕೊಂಡಿತ್ತು. ಅಂತೂ ಇಂತೂ ಹೊರಬಂದು ದೊಡ್ಡ ನಷ್ಟದಿಂದ ಪಾರಾಗಿದೆ. ಆದರೆ ಪಾಕ್ ನ ಈ ನಿರ್ಧಾರದಿಂದ ಅಂತಾರಾಷ್ಟ್ರೀಯ ಕ್ರಿಕಟ್ ಮಂಡಳಿಗೂ ಸುಮಾರು 1560 ಕೋಟಿ ರುಪಾಯಿ ನಷ್ಟವಾಗವುದು ತಪ್ಪಿದೆ. ಇಲ್ಲಿದೆ ಈ ಬಗ್ಗೆ ಲೆಕ್ಕಾಚಾರ.

ವಿಜಯ ಕರ್ನಾಟಕ 10 Feb 2026 7:27 pm