SENSEX
NIFTY
GOLD
USD/INR

Weather

24    C
...

ಗಣೇಶೋತ್ಸವದಿಂದ ಹಿಡಿದು ಬೈಎಲೆಕ್ಷನ್’ವರೆಗೆ ಅಬ್ಬರ, ಬಿಜೆಪಿ ನಿರುತ್ತರ: ಕೇಸರಿ ಪಡೆಗೆ ಯತ್ನಾಳ್ ಅನಿವಾರ್ಯನಾ?

Fire Brand Yatnal : ಬಿಜೆಪಿಯಿಂದ ಉಚ್ಚಾಟಿತರಾದ ಮೇಲೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಣೇಶ ಕಾರ್ಯಕ್ರಮದಿಂದ ಹಿಡಿದು, ಈಗಿನ ಉಪಚುನಾವಣೆಯ ವರೆಗೆ ಯತ್ನಾಳ್, ಸ್ಟಾರ್ ಭಾಷಣಕಾರರಾಗಿ ಹೊರಹೊಮ್ಮುತ್ತಿದ್ದಾರೆ. ಹಿಂದೂ ಸಂಘಟನೆಗಳು ಅವರನ್ನು ವಿಶೇಷವಾಗಿ ಆಹ್ವಾನಿಸುತ್ತಿವೆ. ಬಿಜೆಪಿ ಪ್ರಚಾರದಲ್ಲಿ ಯತ್ನಾಳ್ ಅಬ್ಬರ ಮುಂದುವರಿದಿದೆ.

ವಿಜಯ ಕರ್ನಾಟಕ 6 Apr 2026 9:24 am

ಹೊಸಪೇಟೆ : ಭೀಕರ ರಸ್ತೆ ಅಪಘಾತ; ಅರಣ್ಯ ಇಲಾಖೆಯ ಇಬ್ಬರು ಕಾವಲುಗಾರರು ಮೃತ್ಯು

ವಿಜಯನಗರ/ಹೊಸಪೇಟೆ: ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅರಣ್ಯ ಇಲಾಖೆಯ ಇಬ್ಬರು ಕಾವಲುಗಾರರು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ಕಮಲಾಪುರದ ಕೃಷ್ಣ (26) ಹಾಗೂ ವೆಂಕಟಾಪುರದ ಹನುಮಂತಪ್ಪ (50) ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಬೊಲೇರೋ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಪೊಲೀಸರು ಬೊಲೇರೋ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Apr 2026 9:21 am

ಬೆಂಗಳೂರಿನಲ್ಲಿ ಮತ್ತಷ್ಟು ಬಿಗಡಾಯಿಸಿದ ಆಟೊ ಎಲ್‌ಪಿಜಿ ಸಮಸ್ಯೆ

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಅಭಾವ ತೀವ್ರಗೊಂಡಿದ್ದು, ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಭ್ಯವಿರುವ ಕೆಲವೇ ಬಂಕ್‌ಗಳಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದ್ದು, ಈಗಾಗಲೇ ನಗರದ ಹಲವು ಬಂಕ್‌ಗಳು ಇಂಧನ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಇದು ಆಟೋ ಚಾಲಕರ ದೈನಂದಿನ ಜೀವನದ ಮೇಲೆ ಭಾರಿ ಹೊಡೆತ ನೀಡಿದೆ.

ವಿಜಯ ಕರ್ನಾಟಕ 6 Apr 2026 9:01 am

ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್‌ಡೇಟ್ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಇದೇ ಏಪ್ರಿಲ್‌ 08ರಂದು ಪ್ರಕಟವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಈ ಹಿಂದೆ ಬಿಡುಗಡೆಯಾಗಿದ್ದ

ಒನ್ ಇ೦ಡಿಯ 6 Apr 2026 8:52 am

ಬೆಂಗಳೂರಿನಲ್ಲಿ 2,000ಕ್ಕೂ ಅಧಿಕ ಬೀದಿನಾಯಿಗಳ ಪತ್ತೆ- ಸುಪ್ರೀಂ ಆದೇಶದಂತೆ ಸರ್ವೇ: 2 ಕೋಟಿ ವೆಚ್ಚದಲ್ಲಿ GBAಯಿಂದ ಆಶ್ರಯತಾಣ ನಿರ್ಮಾಣ!

ಸಾರ್ವಜನಿಕ ಸ್ಥಳಗಳಲ್ಲಿನ ಬೀದಿನಾಯಿಗಳನ್ನು ಲೆಕ್ಕಚಾರ ಮಾಡಲು ಸುಪ್ರೀಂ ಆದೇಶವನ್ನು ಪಾಲಿಸಲು ಜಿಬಿಎ ಮುಂದಾಗಿದ್ದು, 5 ಪಾಲಿಕೆಗಳಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ಕ್ರೀಡಾಂಗಣ, ಆಟದ ಮೈದಾನಗಳಂತ ಸಾರ್ವಜನಿಕ ಸ್ಥಳಗಳಲ್ಲಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಇದರಲ್ಲಿ ಕೆಲ ಪಾಲಿಕೆಗಳ ಭಾಗಶಃ ಅಂಕಿ-ಅಂಶಗಳನ್ನು ಬಿಚ್ಚಿಟ್ಟಿದೆ. ಇನ್ನು, ಈ ವರದಿಯ ಪ್ರಕಾರ, ನಗರದಲ್ಲಿ 2ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು, 2ಕೋಟಿ ವೆಚ್ಚದಲ್ಲಿ ಸುಮಾರು 500 ಬೀದಿನಾಯಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯವಿರುವ ಆಶ್ರಯ ತಾಣ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 6 Apr 2026 8:48 am

ಕೋಳಿಕ್ಕೋಡ್ ಕದನ: ಎಲ್ಡಿಎಫ್ ಭದ್ರಕೋಟೆಗೆ ಯುಡಿಎಫ್ ಲಗ್ಗೆ ನಿರೀಕ್ಷೆ

ಪೋರ್ಚುಗೀಸ್ ಅನ್ವೇಷಕ ವಾಸ್ಕೊಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದು ಬಂದಿಳಿದ ಕೇರಳದ ಐತಿಹಾಸಿಕ ತಾಣವೇ ಇಂದಿನ ಕೋಳಿಕ್ಕೋಡ್ ಅಥವಾ ಅಂದಿನ ಕ್ಯಾಲಿಕಟ್. ಕಲ್ಲಿಕೋಟೆ ಎಂದೂ ಕರೆಯಲ್ಪಡುವ ಈ ಕರಾವಳಿ ನಗರವು ಪ್ರಸ್ತುತ ಚುನಾವಣಾ ಕಣವಾಗಿ ರಂಗೇರಿದ್ದು, ಎಡರಂಗದ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸುತ್ತಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ವಾತಾವರಣಕ್ಕೆ ಹೆಸರಾಗಿರುವ ಇಲ್ಲಿನ ನಗರ ಜೀವನವು ಬೆಂಗಳೂರಿನ ಎಂ.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆಯ ಆಧುನಿಕತೆಯನ್ನು ನೆನಪಿಸುವಂತಿದೆ.

ವಿಜಯ ಕರ್ನಾಟಕ 6 Apr 2026 8:30 am

ತಡಿಯಂಡಮೋಳ್ ಬೆಟ್ಟದಲ್ಲಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ

ತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರು ಭಾನುವಾರ ಸಂಜೆ ಕೊನೆಗೂ ಪತ್ತೆಯಾಗಿದ್ದಾರೆ. ಕಳೆದ ಗುರುವಾರ ಚಾರಣಕ್ಕೆಂದು ತೆರಳಿದ್ದ ಇವರ ಪತ್ತೆಗಾಗಿ ಅರಣ್ಯ ಇಲಾಖೆ, ಪೊಲೀಸ್, ಗ್ರಾಮಸ್ಥರು ಮತ್ತು ನಕ್ಸಲ್ ನಿಗ್ರಹ ಪಡೆಯಿಂದ ಸತತವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ನಾಲ್ಕು ದಿನಗಳ ಆತಂಕದ ನಂತರ ಶರಣ್ಯ ಅವರು ಸುರಕ್ಷಿತವಾಗಿ ಸಿಕ್ಕಿರುವುದು ಎಲ್ಲರಿಗೂ ನಿಟ್ಟುಸಿರು ಬಿಡುವಂತೆ ಮಾಡಿದೆ.

ವಿಜಯ ಕರ್ನಾಟಕ 6 Apr 2026 7:31 am

ಒಡಿಶಾ: ಮುಕ್ತ ಮಾರುಕಟ್ಟೆಯಲ್ಲಿ ಎಲ್ ಪಿಜಿ ಸಿಲಿಂಡರ್ ಮಾರಾಟ ನಿಷೇಧ

ಭುವನೇಶ್ವರ: ಒಡಿಶಾದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇ-ಕೆವೈಸಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ಗ್ರಾಹಕರು ಮಾತ್ರವೇ ಅವುಗಳನ್ನು ಅಧಿಕೃತ ಡೀಲರ್ ಗಳ ಬಳಿ ಸಲ್ಲಿಸಿ ಸಿಲಿಂಡರ್ ಗಳನ್ನು ಪಡೆಯಬಹುದಾಗಿದೆ ಎಂದು ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಖಾತೆ ಸಚಿವ ಕೃಷ್ಣಚಂದ್ರ ಪಾತ್ರಾ ರವಿವಾರ ಹೇಳಿಕೆ ನೀಡಿದ್ದಾರೆ. ಅಡುಗೆ ಅನಿಲದ ಕೊರತೆ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಎಲ್ ಪಿಜಿ ಸಿಲಿಂಡರ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಗೃಹಬಳಕೆಯ ಸಿಲಿಂಡರ್ ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೊಸ ಮಾರ್ಗಸೂಚಿಯನ್ವಯ, ನಗರ ಗ್ರಾಹಕರಿಗೆ ಒಂದು ಸಿಲಿಂಡರ್ ಬುಕ್ ಮಾಡಿ 25 ದಿನಗಳ ಬಳಿಕ ಹಾಗೂ ಗ್ರಾಮೀಣ ಬಳಕೆದಾರರಿಗೆ 45 ದಿನಗಳ ಬಳಿಕ ಬುಕ್ಕಿಂಗ್ ಮಾಡಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 5 ಕೆಜಿ ಸಿಲಿಂಡರ್ ಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ 27 ಎಲ್ ಪಿಜಿ ಸಿಲಿಂಡರ್ ಗಳನ್ನು ಧೇನ್ ಕನಲ್ ಪಟ್ಟಣದಲ್ಲಿ ರವಿವಾರ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ವಾರ್ತಾ ಭಾರತಿ 6 Apr 2026 7:27 am

ರೋಹಿತ್ ಶರ್ಮಾ ದಾಖಲೆ ಪುಡಿಗಟ್ಟಿ, ಇತಿಹಾಸ ಬರೆದ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ರವಿವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪ್ರಸಕ್ತ ಋತುವಿನ ಐಪಿಎಲ್ ಪಂದ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಈ ಪಂದ್ಯದಲ್ಲಿ ಕೊಹ್ಲಿ 18 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆಗುವ ಮುನ್ನ, ಟಿ20 ಕ್ರಿಕೆಟ್ ನಲ್ಲಿ ಯಾವುದೇ ತಂಡದ ವಿರುದ್ಧ ಗರಿಷ್ಠ ರನ್ ಗಳಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಕೊಹ್ಲಿ ಇದೀಗ ಸಿಎಸ್ ಕೆ ವಿರುದ್ಧ 1174 ರನ್ ಗಳನ್ನು ಗಳಿಸಿದ್ದು, ಯಾವುದೇ ಟಿ20 ತಂಡದ ವಿರುದ್ಧ ಒಬ್ಬ ಬ್ಯಾಟ್ಸ್ಮನ್ ಗಳಿಸಿದ ಅತಿಹೆಚ್ಚು ರನ್ ಇದಾಗಿದೆ. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1161 ರನ್ ಗಳಿಸಿದ್ದ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇತ್ತು. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ರೋಹಿತ್ ಈ ದಾಖಲೆ ನಿರ್ಮಿಸಿದ್ದರು. ಕಾಕತಾಳೀಯವೆಂದರೆ ಯಾವುದೇ ತಂಡದ ವಿರುದ್ಧ ಮೂರನೇ ಅತಿಹೆಚ್ಚು ರನ್ ಗಳಿಸಿದ ದಾಖಲೆಯೂ ಕೊಹ್ಲಿ ಹೆಸರಿನಲ್ಲಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ಅವರು 1159 ರನ್ ಗಳಿಸಿದ್ದಾರೆ. ರವಿವಾರ ರಾತ್ರಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭುವನೇಶ್ವರ ಕುಮಾರ್ (3-41) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಆರ್‌ಸಿಬಿ ತನ್ನ ಬದ್ಧ ಎದುರಾಳಿ ಸಿಎಸ್‌ಕೆ ವಿರುದ್ಧ 43 ರನ್ ಗಳ ಜಯ ಸಾಧಿಸಿತು. ಟಿಮ್ ಡೇವಿಡ್, ರಜತ್ ಪಾಟಿದಾರ್ ಮತ್ತು ದೇವದತ್ತ ಪಡಿಕ್ಕಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 20 ಓವರ್ ಗಳಲ್ಲಿ 250 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 59 ರನ್ ಸಿಡಿಸಿ ಭದ್ರ ಬುನಾದಿ ಹಾಕಿಕೊಟ್ಟರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ (25 ಎಸೆತಗಳಲ್ಲಿ ಅಜೇಯ 70) ಮತ್ತು ರಜತ್ ಪಾಟಿದಾರ್ (19 ಎಸೆತಗಳಲ್ಲಿ 48) ಅಂತಿಮ ಓವರ್ ಗಳಲ್ಲಿ ಮೊತ್ತ ಹೆಚ್ಚಲು ಕಾರಣರಾದರು.

ವಾರ್ತಾ ಭಾರತಿ 6 Apr 2026 7:19 am

ತಮಿಳುನಾಡು: 35 ವರ್ಷದಲ್ಲೇ ಮೊದಲ ಬಾರಿಗೆ ಬ್ರಾಹ್ಮಣರಿಗೆ ದಕ್ಕದ ಪ್ರಮುಖ ಪಕ್ಷಗಳ ಟಿಕೆಟ್

ಚೆನ್ನೈ: ತಮಿಳುನಾಡು ರಾಜಕೀಯದ 35 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಎಐಎಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಇತರ ಪ್ರಮುಖ ಪಕ್ಷಗಳಲ್ಲಿ ಕೂಡಾ ಈ ಸಮುದಾಯದ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದು ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣರ ಪ್ರಭಾವ ಮಸುಕಾಗುತ್ತಿರುವುದರ ಸೂಚಕವಾಗಿದೆ. ತಮಿಳುನಾಡು ಬ್ರಾಹ್ಮಣ ಸಂಘದ ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ, ಎಐಎಡಿಎಂಕೆ ಮಿತ್ರಪಕ್ಷವಾಗಿರುವ ಬಿಜೆಪಿಗೆ ಹಂಚಿಕೆ ಮಾಡಿರುವ 27 ಸೀಟುಗಳಲ್ಲಿ ಕೂಡಾ ಯಾವುದೇ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕೂಡಾ ಬ್ರಾಹ್ಮಣ ಸಮುದಾಯದ ಯಾವುದೇ ಅಭ್ಯರ್ಥಿಗಳಿಲ್ಲ. ರಾಜ್ಯದ ಜನಸಂಖ್ಯೆಲ್ಲಿ ಬ್ರಾಹ್ಮಣರು ಶೇಕಡ 3ರಷ್ಟು ಪಾಲು ಹೊಂದಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಎಐಎಡಿಎಂಕೆ ಸಮುದಾಯದ ಒಬ್ಬರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಿತ್ತು. ನಿವೃತ್ತ ಡಿಜಿಪಿ ಆರ್.ನಟರಾಜ್ ಅವರು 2021ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದಕ್ಕೆ ವಿರುದ್ಧವಾಗಿ ನಟ ವಿಜಯ್ ಅವರ ಟಿವಿಕೆ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ತಮಿಳು ರಾಷ್ಟ್ರೀಯವಾದಿ ಸೀಮನ್ ಅವರ ಎನ್ ಟಿಕೆ ಆರು ಮಂದಿ ಬ್ರಾಹ್ಮಣರನ್ನು ಕಣಕ್ಕೆ ಇಳಿಸಿದೆ. ಮೈಲಾಪುರ ಹಾಗೂ ಶ್ರೀರಂಗಂನಂಥ ಬ್ರಾಹ್ಮಣ ಸಮುದಾಯದ ಮತಗಳು ಅಧಿಕವಿರುವ ಕ್ಷೇತ್ರಗಳನ್ನು ಆ ಸಮುದಾಯಕ್ಕೆ ಬಿಟ್ಟುಕೊಟ್ಟಿವೆ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆದ ಬಹುತೇಕ ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು. ಎಐಎಡಿಎಂಕೆ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಜಯಲಲಿತಾ ಮತ್ತು ಎಂಜಿಆರ್ ಅವರು ಸದಾ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದರು ಎಂದು ರಾಜಕೀಯ ವಿಶ್ಲೇಷಕ ರವೀಂದ್ರನ್ ದುರೈಸಾಮಿ ಹೇಳಿದ್ದಾರೆ. ಎಐಎಡಿಎಂಕೆ ದಶಕಗಳಿಂದ ಬ್ರಾಹ್ಮಣರ ಬೆಂಬಲ ಪಡೆಯುತ್ತಿತ್ತು. ಆದರೆ ಜಯಾ ನಿಧನದ ಬಳಿಕ ಬ್ರಾಹ್ಮಣ ಮತದಾರರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆದ್ದರಿಂದ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ನಿಲುವಿನಿಂದ ಎಐಎಡಿಎಂಕೆ ಈ ಕ್ರಮ ಕೈಗೊಂಡಿದೆ ಎಂದು ರಾಜಕೀಯ ವಿಶ್ಲೇಷಕ ಅರುಣ್ಕುಮಾರ್ ಹೇಳಿದ್ದಾರೆ.

ವಾರ್ತಾ ಭಾರತಿ 6 Apr 2026 7:15 am

Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ

Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಚಂಡಮಾರುತ ಪ್ರಸರಣದಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದಿನಿಂದ ಏಪ್ರಿಲ್ 11ರ ವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ. ಗಂಗಾ ನದಿಯ ಪಶ್ಚಿಮ ಬಂಗಾಳದಿಂದ ಛತ್ತೀಸ್‌ಗಢದಾದ್ಯಂತ ತೆಲಂಗಾಣಕ್ಕೆ ಸರಾಸರಿ ಸಮುದ್ರ ಮಟ್ಟದಿಂದ 0.9

ಒನ್ ಇ೦ಡಿಯ 6 Apr 2026 6:59 am

ಭೂ ಸುರಕ್ಷಾ ಯೋಜನೆ ಯಶಸ್ವಿ, ರಾಜ್ಯದಲ್ಲೇ ಮೈಸೂರಿನಲ್ಲಿ ಉತ್ತಮ ಪ್ರಗತಿ

ಭೂ ಸುರಕ್ಷಾ ಯೋಜನೆಯಡಿ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ಗಮನಾರ್ಹ ಸಾಧನೆ ಮಾಡಿದ್ದು, ತಹಸೀಲ್ದಾರ್ ಅನುಮೋದನೆ ನೀಡುವ ದಾಖಲೀಕರಣದಲ್ಲಿ 3ನೇ ಸ್ಥಾನ ಹಾಗೂ ಶಿರಸ್ತೇದಾರರ ಮಾನ್ಯತೆಯಲ್ಲಿ 8ನೇ ಸ್ಥಾನ ಪಡೆದಿದೆ. ಈಗಾಗಲೇ ಆನ್‌ಲೈನ್ ಮೂಲಕ ದಾಖಲೆಗಳ ವಿತರಣೆ ಪ್ರಕ್ರಿಯೆ ಚಾಲನೆಯಲ್ಲಿದ್ದು, ರೆಕಾರ್ಡ್ ರೂಂಗಳಲ್ಲಿ ನಾಲ್ಕು ಮಾದರಿ ವಿಭಾಗಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ.

ವಿಜಯ ಕರ್ನಾಟಕ 6 Apr 2026 6:58 am

ಯಾರಿಗೆ ದಕ್ಷಿಣ ದಾವಣಗೆರೆ ಬೆಣ್ಣೆದೋಸೆ? ಶಾಮನೂರು ಪರಂಪರೆಗೋ ಅಥವಾ ಬಿಜೆಪಿಯ ಹೊಸ ಪ್ರಯೋಗಕ್ಕೋ?

ದಾವಣಗೆರೆ ದಕ್ಷಿಣ ಕ್ಷೇತ್ರ ಆದಾಗಿನಿಂದ ಇದು ಐದನೇ ಚುನಾವಣೆ. ಕಾಂಗ್ರೆಸ್ -ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಡಿಸಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಅನುಕಂಪದ ಓಟ್ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದರೆ, ಬಿಜೆಪಿ ಈ ಬಾರಿ ಅಹಿಂದಾ ಮತ ಸೆಳೆಯಲು ಭರ್ಜರಿ ಪ್ಲ್ಯಾನ್ ಮಾಡಿದಂತಿದೆ. ಚುನಾವಣೆ ಲೆಕ್ಕಾಚಾರಗಳೇನು ಎಂಬ ವಿವರ ಇಲ್ಲಿದೆ ನೋಡಿ.

ವಿಜಯ ಕರ್ನಾಟಕ 6 Apr 2026 5:27 am

ಎಡ-ಬಲ ಎನ್ನದೇ ಒಗ್ಗಟ್ಟಿನಿಂದ ಸಾಗೋಣ: ಸಚಿವ ಡಾ.ಎಚ್.ಸಿ. ಮಹದೇವಪ್ಪ

ಬೆಂಗಳೂರು: ಪರಿಶಿಷ್ಟ ಸಮುದಾಯಗಳು ಎಡ-ಬಲ ಎನ್ನದೇ ಒಗ್ಗಟ್ಟಿನಿಂದ ಸಾಗಬೇಕು. ಇದು ಬಾಬಾ ಸಾಹೇಬರು, ಬಾಬೂಜಿ ಅವರು ಮತ್ತು ದೇಶದ ಸಂವಿಧಾನದ ಮೂಲ ಆಶಯವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ. ರವಿವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ ರಾಂ ಅವರ 119ನೆ ಜನ್ಮದಿನಾಚರಣೆ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಅವರು ಮಾತನಾಡಿದರು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದ ಅಡಿಯಲ್ಲಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಇದ್ದ ಬಾಬೂಜಿ ಅವರು ಸ್ವತಃ ಅವಮಾನ ಮತ್ತು ಅಸಮಾನತೆಯನ್ನು ಅನುಭವಿಸಿದಂತಹ ವ್ಯಕ್ತಿ. ಅಧಿಕಾರ ಇದ್ದ ಎಲ್ಲ ಸಂದರ್ಭದಲ್ಲಿಯೂ ಜನರಿಗಾಗಿ ದುಡಿದ ಅವರು ದೇಶದ ಆಹಾರ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದಂತವರು ಎಂದು ಅವರು ಉಲ್ಲೇಖಿಸಿದರು. ಇಂತಹ ವ್ಯಕ್ತಿಗಳನ್ನು ಈ ದಿನ ಜಾತೀಯ ಸಂಕೋಲೆಗಳಲ್ಲಿ ಬಂಧಿಸಿ, ಎಡ-ಬಲ ಎಂಬ ವರ್ಗೀಕರಣದಲ್ಲಿ ಸಿಲುಕಿಸುವುದು ಕೇವಲ ಬಾಬೂಜಿ ಅವರಿಗೆ ಮಾಡುವ ಅವಮಾನ ಅಲ್ಲ, ಅದು ಶೋಷಿತ ವರ್ಗಗಳ ಸಂಜೀವಿನಿ ಆದಂತಹ ಬಾಬಾ ಸಾಹೇಬರ ಸಂವಿಧಾನಕ್ಕೆ ಮಾಡುವ ಅವಮಾನ ಎಂದು ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು. ದೇಶದ ಯಾವುದೇ ಸಂವಿಧಾನಿಕ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಬಾಬು ಜಗಜೀವನ್ ರಾಂ ಅವರದ್ದು. ಮುಖ್ಯವಾಗಿ ನಾಯಕತ್ವ ಇಲ್ಲದ ಸಮುದಾಯಗಳು ಅನಾಥವಾಗುತ್ತವೆ ಎಂದು ಬಾಬಾ ಸಾಹೇಬರು ಸದಾ ಹೇಳುತ್ತಿದ್ದರು. ಈ ಹಿನ್ನಲೆಯಲ್ಲಿ ದೇಶದ ಒಳಿತಿಗಾಗಿ ದುಡಿದ ದೊಡ್ಡ ನಾಯಕರನ್ನು ಯಾವುದೋ ರಾಜಕೀಯ ಕಾರಣಕ್ಕೆ ಸೀಮಿತಗೊಳಿಸಿ ಅವರ ಪ್ರಾಮುಖ್ಯತೆಯನ್ನು ಕಳೆದರೆ, ಪರಿಶಿಷ್ಟರನ್ನು ಒಡೆಯುವ ಒಳ ಮತ್ತು ಹೊರ ಶಕ್ತಿಗಳಿಗೆ ಬಹಳ ಸುಲಭವಾಗುತ್ತದೆ ಎಂದು ಅವರು ಹೇಳಿದರು. ನೂರಾರು ವರ್ಷಗಳ ಬಳಿಕ ಶೋಷಿತರಿಗೆ ಸಂವಿಧಾನ ಒದಗಿಸಿಕೊಟ್ಟ, ದನಿ ಮತ್ತು ಅವಕಾಶವನ್ನು ಕಳೆದುಕೊಳ್ಳಬೇಕೋ ಅಥವಾ ಒಗ್ಗಟ್ಟಿನಿಂದ ಮುನ್ನಡೆಯಬೇಕೋ ಎಂಬುದನ್ನು ನಮ್ಮ ಪರಿಶಿಷ್ಟ ಸಮುದಾಯದವರು, ಸಂಘಟನೆಗಳು ಮತ್ತು ಎಲ್ಲ ಪ್ರಜ್ಞಾವಂತರೂ ಯೋಚಿಸಬೇಕು ಎಂದು ಡಾ.ಎಚ್.ಸಿ. ಮಹದೇವಪ್ಪ ನುಡಿದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮಹಾನ್ ನಾಯಕ ಬಾಬು ಜಗಜೀವನ ರಾಂ ರವರ ಜೀವನ ನಮಗೆ ಮಾರ್ಗದರ್ಶನ ಅವರ ರಾಜಕೀಯ ಜೀವನದುದ್ದಕ್ಕೂ ಕೇಂದ್ರದಲ್ಲಿ ಸಚಿವರಾಗಿಯೇ ಕಾರ್ಯ ನಿರ್ವಹಿಸಿ ಸುದೀರ್ಘ ಸಂಸದರಾಗಿ ಸೇವೆ ಸಲ್ಲಿಸಿರುವ ಮಹಾನ್ ಚೇತನ. ಅವರ ಆದರ್ಶವನ್ನು ನಾವು ಪಾಲನೆ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಭೋದಿಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಬಾಬೂ ಜಗಜೀವನ ರಾಂ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸರಕಾರದ ಕಾರ್ಯದರ್ಶಿ ರಣದೀಪ್, ಸಮುದಾಯದ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಗಜೀವನರಾಂ ಪ್ರೇರಣೆ: ‘ಡಾ.ಬಾಬು ಜಗಜೀವನ್ ರಾಂ ಅವರ 119ನೆ ಜನ್ಮ ದಿನದ ಅಂಗವಾಗಿ ವಿಧಾನಸೌಧದ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಸಮಾನತೆಗಾಗಿ ನಡೆಸಿದ ಹೋರಾಟ, ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಲು ತೆಗೆದುಕೊಂಡ ನಿಲುವು ಎಲ್ಲರಿಗೂ ಪ್ರೇರಣೆ’ ಎಂದು ನುಡಿದರು. ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ 2026ನೆ ಸಾಲಿನ ಡಾ.ಬಾಬು ಜಗಜೀವನ್ ರಾಮ್ ಪ್ರಶಸ್ತಿಯನ್ನು ಸಾಧಕರಾದ ಚಂದ್ರಮ್ಮ, ಡಿಂಗ್ರಿ ನರಸಪ್ಪ, ಡಾ.ಸರಜೂ ಕಾಟ್ಕರ್, ನಾರಾಯಣ ಹಾಗೂ ನರಸೀಯಪ್ಪ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ವಾರ್ತಾ ಭಾರತಿ 6 Apr 2026 12:08 am

RCB Vs CSK: ಆರ್‌ಸಿಬಿ ನೀಡಿದ ಗುರಿ ಮುಟ್ಟದೇ ಶರಣಾದ ಸಿಎಸ್‌ಕೆ

RCB Vs CSK IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಇಂದು (ಏಪ್ರಿಲ್‌ 5) ನಡೆದ ಐಪಿಎಲ್‌ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಸೀಸನ್‌ನಲ್ಲಿ ಸತತ ಎರಡನೇ ಜಯದೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ಹೆಜ್ಜೆ ಹಾಕಿದೆ. ಟಾಸ್‌

ಒನ್ ಇ೦ಡಿಯ 5 Apr 2026 11:56 pm

RCB ಟಿಕೆಟ್‌ ಮಾರಾಟ ನೆಪದಲ್ಲಿ ಟೋಪಿ: ಚಿನ್ನಸ್ವಾಮಿ ಮೈದಾನ ಬಳಿ ತೆರಳಿದ ಟೆಕ್ಕಿಗೆ ಟಿಕೆಟ್ಟೂ ಸಿಗಲಿಲ್ಲ; 1.45 ಲಕ್ಷವೂ ನಷ್ಟ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ ಮಾರಾಟ ಮಾಡುವ ನೆಪದಲ್ಲಿ ಸೈಬರ್‌ ವಂಚಕರು ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 1.45 ಲಕ್ಷ ರೂ. ವಂಚಿಸಿದ್ದು, ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್‌ ವಂಚಕರು, ಬಿ.ನಾರಾಯಣಪುರದ ಬಳಿಯ ಕಾವೇರಪ್ಪ ಲೇಔಟ್‌ನ ಗಣೇಶ್‌ ಎಂಬುವರಿಗೆ ಮೋಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಗಣೇಶ್‌ ಅವರಿಗೆ ಮಾರ್ಚ್30ರಂದು ಪರಿಚಯವಾಗಿದ್ದ ಸೈಬರ್‌ ವಂಚಕರು ಆರ್‌ಸಿಬಿ ಮತ್ತು ಚೆನ್ನೈ ತಂಡದ ನಡುವಿನ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜನೆಯಾಗಿದ್ದ ಆರ್‌ಸಿಬಿ ಮತ್ತು ಚೆನ್ನೈ ತಂಡದ ನಡುವಿನ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ ಮಾರಾಟದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಅವರನ್ನು ಗಣೇಶ್‌ ಸಂಪರ್ಕಿಸಿದಾಗ ವಂಚಕರು, ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್‌ ಮತ್ತು ವಿಐಪಿ ಸೌಲಭ್ಯವಿದೆ ಎಂದು ಆಮಿಷವೊಡ್ಡಿದ್ದರು. ಇದನ್ನು ನಿಜವೆಂದು ನಂಬಿದ ಗಣೇಶ್‌, ವಂಚಕರು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 1.45 ಲಕ್ಷ ರೂ. ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹಣ ಪಡೆದ ಬಳಿಕ ವಂಚಕರು, ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ನಂಬರ್‌ 10ರ ಬಳಿ ಬಂದು ಟಿಕೆಟ್‌ ಪಡೆದುಕೊಳ್ಳುವಂತೆ ಗಣೇಶ್‌ಗೆ ಸೂಚಿಸಿದ್ದರು. ಅದರಂತೆ ಗಣೇಶ್‌, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹೋಗಿ ವಂಚಕರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ವಂಚಕರು ಗಣೇಶ್‌ರ ಸಂಪರ್ಕಕ್ಕೂ ಸಿಕ್ಕಿಲ್ಲ ಹಾಗೂ ಟಿಕೆಟ್‌ ಸಹ ಕೊಟ್ಟಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಡ್ ಗಳಿಗೆ ಕುಂಬ್ಳೆ, ದ್ರಾವಿಡ್‌ ಹೆಸರು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಪೆವಿಲಿಯನ್‌ ಎಂಡ್‌ಗೆ ಅನಿಲ್‌ ಕುಂಬ್ಳೆ ಹೆಸರು ಮತ್ತು ನಾರ್ದರ್ನ್‌ ಎಂಡ್‌ಗೆ ರಾಹುಲ್‌ ದ್ರಾವಿಡ್‌ ಹೆಸರಿಟ್ಟಿರುವುದನ್ನು ಅನಾವರಣ ಮಾಡಲಾಯಿತು. ಈ ವೇಳೆ ದಿಗ್ಗಜರಾದ ಅನಿಲ್‌ ಕುಂಬ್ಳೆ ಮತ್ತು ರಾಹುಲ್‌ ದ್ರಾವಿಡ್‌ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಕುಂಬ್ಳೆ ಮತ್ತು ದ್ರಾವಿಡ್‌ ಅವರು ಭಾರತೀಯ ಕ್ರಿಕೆಟ್‌ ಗೆ ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಈ ಗೌರವ ಸಲ್ಲಿಸಿತು. ಈ ವೇಳೆ ಉಭಯ ಮಾಜಿ ಆಟಗಾರರಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಸಂತೋಷ್‌ ಮೆನನ್‌ ಸ್ಮರಣಿಕೆ ನೀಡಿ ಗೌರವಿಸಿದರು. ಮೈದಾನದ ಉಭಯ ಎಂಡ್‌ ಗಳಿಗೆ ಹೆಸರಿಟ್ಟಿರುವುದಕ್ಕೆ ಕುಂಬ್ಳೆ ಮತ್ತು ದ್ರಾವಿಡ್‌ ಸಂತಸ ಹಾಗೂ ಕೆಎಸ್‌ ಸಿಎಗೆ ಕೃತಜ್ಞತೆ ಸಲ್ಲಿಸಿದರು. ಪಂದ್ಯ ವೀಕ್ಷಿಸಿದ ಸುಧಾಮೂರ್ತಿ, ಮಂಜುನಾಥ್‌ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಿ.ಎನ್‌. ಮಂಜುನಾಥ್‌ ಅವರು ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಷೆ ಸಾಕ್ಷಿಯಾದರು.

ವಿಜಯ ಕರ್ನಾಟಕ 5 Apr 2026 11:45 pm

Bengaluru | ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 2026ರ ಕಾಯ್ದೆಯ ವಿರುದ್ಧ ಖಂಡನಾ ನಿರ್ಣಯ

ಬೆಂಗಳೂರು: ಕರ್ನಾಟಕ ಜನಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಸೇರಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 2026ರ ಕಾಯ್ದೆಯ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದ್ದಾರೆ. ಅಂತರ್‌ ಲಿಂಗಿ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಅಪರಾಧೀಕರಣಗೊಳಿಸುವ ವ್ಯವಸ್ಥೆಯ ವಿರುದ್ಧವಾಗಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು. ಇತ್ತೀಚೆಗಷ್ಟೇ ಸಂಸತ್‍ನ ಉಭಯ ಸದನಗಳಲ್ಲಿ ಅನಿರೀಕ್ಷಿತ ಮಸೂದೆಯೊಂದು ಮಂಡನೆಯಾಗಿದ್ದು, ಅದು ಕಾಯ್ದೆಯಾಗಿ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಕಲ ಮೂಲಭೂತ ಹಾಗೂ ನಾಗರಿಕ, ಸಾಂವಿಧಾನಿಕ ಹಕ್ಕನ್ನು ಪಡೆಯುವಲ್ಲಿ ತೀರ ದೂರ ಉಳಿದಂತಾಗಿದೆ ಎಂದು ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಗೌರವ, ಆತ್ಮವಿಶ್ವಾಸ, ಘನತೆಗೆ ವಿರುದ್ಧವಾಗಿರುವ 2026ರ ಕಾಯ್ದೆಯನ್ನು ತಿರಸ್ಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಲೈಂಗಿಕ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸುವ ಕುರಿತು ಎಲ್ಲ ಪಕ್ಷಗಳು ತುರ್ತು ನಿರ್ಣಯ ಕೈಗೊಳ್ಳುವ ಜವಾಬ್ಧಾರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲಿದೆ ಎಂದು ತಿಳಿಸಿದರು. ಈ ವೇಳೆ ಚಿತ್ರನಟಿ ರಮ್ಯಾ, ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ನಟ ಚೇತನ್, ಮೇಘನ, ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶಿ, ಕರ್ನಾಟಕ ಅಂತರ್‌ ಲಿಂಗಿ ಅಸೋಸಿಯೇಷನ್ ಅಧ್ಯಕ್ಷೆ ಅಬೇದ ಬೇಗಮ್, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ, ಲೇಖಕಿ ಮಮತಾ ಸಾಗರ್, ಮೋನಿಕಾ, ರೂಮಿ ಹರೀಶ್, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 11:41 pm

‘ವಿದ್ಯಾರ್ಥಿ ಸ್ನೇಹಿ ಸಾರಿಗೆ’ ವ್ಯವಸ್ಥೆ ಜಾರಿಗೊಳಿಸಲು ಸರಕಾರ ತೀರ್ಮಾನ

ಬೆಂಗಳೂರು: ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಾಲಾ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹೊಸದಾಗಿ ‘ವಿದ್ಯಾರ್ಥಿ ಸ್ನೇಹಿ ಸಾರಿಗೆ’ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಿದೆ. ‘ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಲು ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸ್ಸು ಮಾಡಿತ್ತು. ಆದನ್ನು ಆಧರಿಸಿ ಮೇಲ್ಕಂಡ ಯೋಜನೆ ಜಾರಿಗೆ ಸರಕಾರ ನಿರ್ಧರಿಸಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ರವಿವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಈ ವಿಷಯ ತಿಳಿಸಿದರು. ‘ರಾಜ್ಯದಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಹೆಚ್ಚಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್‍ಗಳನ್ನು ಅವಲಂಬಿಸಿದ್ದಾರೆ. ಇತ್ತೀಚೆಗೆ ಮಕ್ಕಳಿಬ್ಬರು ಬಸ್‍ನಿಂದ ಬಿದ್ದು ಗಾಯಗೊಂಡ ಪ್ರಕರಣ ವರದಿಯಾಗಿತ್ತು. ಇಂತಹ ಅವಘಡಗಳನ್ನು ತಪ್ಪಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೆ ಶಿಫಾರಸು ಮಾಡಿತ್ತು. ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ: ರಾಜ್ಯದಲ್ಲಿ ಈಗಾಗಲೇ ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಅದೇ ರೀತಿಯಲ್ಲಿ ಉಚಿತ ಪ್ರಯಾಣ ಅವಕಾಶವನ್ನು ದ್ವಿತೀಯ ಪಿಯುಸಿ ವರೆಗೆ ಗಂಡು ಮಕ್ಕಳಿಗೂ ವಿಸ್ತರಿಸಬೇಕು. ಪ್ರತಿ, ಶಾಲೆ-ಕಾಲೇಜು ಮಾರ್ಗದಲ್ಲಿ ಓದುತ್ತಿರುವ ಮಕ್ಕಳ ನಿಖರ ದತ್ತಾಂಶ ಸಂಗ್ರಹಿಸಿ ರೂಟ್ ಪ್ಲಾನಿಂಗ್ ಮಾಡಬೇಕು. ಶಿಕ್ಷಣಕ್ಕೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗದ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಯೋಗ ಶಿಫಾರಸ್ಸಿನಲ್ಲಿ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಗ್ರಾಮೀಣ ಪ್ರದೇಶದ ವಿವಿಧ ಮಾರ್ಗಗಳಲ್ಲಿ ವಿಶೇಷ ಶಾಲಾ-ಕಾಲೇಜು ಬಸ್‍ಗಳನ್ನು ಆರಂಭಿಸುವುದು, ತರಗತಿ ಸಮಯಕ್ಕೆ ತಕ್ಕಂತೆ ಬೆಳಗ್ಗೆ-ಸಂಜೆ ಹೆಚ್ಚುವರಿ ಟ್ರಿಪ್‍ಗಳನ್ನು ಮಾಡಲು ಉದ್ದೇಶಿಸಲಾಗಿದೆ. ರೂಪು-ರೇಷೆಗಳು: ಶಾಲಾ-ಕಾಲೇಜು ಸಮಯಕ್ಕೆ ಅಗತ್ಯ ಹೆಚ್ಚುವರಿ ಬಸ್ ವ್ಯವಸ್ಥೆ. ಮಕ್ಕಳ ಸುರಕ್ಷತೆಗಾಗಿ ಎಲ್ಲ ಬಸ್‍ಗಳಲ್ಲಿ ಸಿಸಿಟಿವಿ, ಜಿಪಿಎಸ್ ನಿಗಾ ವ್ಯವಸ್ಥೆ ಹಾಘೂ ತುರ್ತು ಪ್ಯಾನಿಕ್ ಬಟನ್ ಅಳವಡಿಕೆ ಮಾಡಬೇಕು. ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು 1098 ಪ್ರದರ್ಶಿಸುವುದು ಕಡ್ಡಾಯಗೊಳಿಸಬೇಕು. ಬಸ್ ಸೇವೆಯಲ್ಲಿ ಮಾರ್ಗ ಮತ್ತು ಸಮಯ ಪಾಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗೆ ಮಕ್ಕಳ ಸುರಕ್ಷತೆಗೆ ಅಗತ್ಯ ತರಬೇತಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇರುವ ಮಾರ್ಗಗಳಲ್ಲಿ ಮಹಿಳಾ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿತ್ತು. ‘ರಾಜ್ಯದಲ್ಲಿ ವಿದ್ಯಾರ್ಥಿಗಳ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಆ ಬಳಿಕ ಹಂತ-ಹಂತವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಾರ್ತಾ ಭಾರತಿ 5 Apr 2026 11:31 pm

ವಿಜಯನಗರ | ಡಿಡಿಪಿಐ ಕಚೇರಿಯಲ್ಲಿಯೇ ಕುಸಿದು ಬಿದ್ದ ಡಿಗ್ರೂಪ್ ನೌಕರ

ವಿಜಯನಗರ/ಹೊಸಪೇಟೆ : ಶಿಕ್ಷಣ ಇಲಾಖೆಯ ಡಿಗ್ರೂಪ್ ನೌಕರರೊಬ್ಬರು ಸ್ವಯಂ ನಿವೃತ್ತಿ ಮತ್ತು ಬಾಕಿ ವೇತನಕ್ಕಾಗಿ ತಿಂಗಳಿಡೀ ಅಲೆದಾಡಿ ಕೊನೆಗೆ ಕಚೇರಿಯಲ್ಲೇ ಕುಸಿದು ಬಿದ್ದ ಘಟನೆ ನಗರದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಡಿಡಿಪಿಐ) ಕಚೇರಿಯಲ್ಲಿ ಶನಿವಾರ ನಡೆದಿದೆ. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಡಿ ಗ್ರೂಪ್ ನೌಕರರಾದ ಎಸ್.ಎಂ. ನಾಗರಾಜ ಅವರು ಕಳೆದ 5-6 ತಿಂಗಳಿನಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಬಳಿಕ ವೈದ್ಯಕೀಯ ದಾಖಲೆಗಳೊಂದಿಗೆ ಕರ್ತವ್ಯಕ್ಕೆ ಹಾಜರಾದರೂ, ಕಾಲುಗಳಲ್ಲಿ ಗ್ಯಾಂಗ್ರೀನ್ ಹಾಗೂ ರಕ್ತಸ್ರಾವದಿಂದ ಕೆಲಸ ನಿರ್ವಹಿಸಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಯಂ ನಿವೃತ್ತಿ ನೀಡುವಂತೆ ಹಾಗೂ ಚಿಕಿತ್ಸೆ ಅವಧಿಯ ಮೂರು ತಿಂಗಳ ವೇತನ ಬಿಡುಗಡೆ ಮಾಡುವಂತೆ ಅವರು ಕಳೆದ ಕೆಲ ತಿಂಗಳಿನಿಂದ ಡಿಡಿಪಿಐ ಕಚೇರಿಗೆ ಅಲೆದಾಡುತ್ತಿದ್ದರು. ಶನಿವಾರ ತಮ್ಮ ಸಹೋದರ ಹಾಗೂ ಕುಟುಂಬ ಸದಸ್ಯರೊಂದಿಗೆ ಕಚೇರಿಗೆ ಆಗಮಿಸಿದ ವೇಳೆ, ರಕ್ತದೊತ್ತಡ ಮತ್ತು ಶುಗರ್ ಏರಿಕೆಯಿಂದ ಅಲ್ಲಿಯೇ ಎಚ್ಚರ ತಪ್ಪಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಕಚೇರಿಯಲ್ಲಿದ್ದ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಅವರು ತಕ್ಷಣ ವೈದ್ಯಕೀಯ ನೆರವು ಒದಗಿಸುವ ಬದಲು ಸಂಬಂಧಿಕರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮದೇ ಇಲಾಖೆಯ ನೌಕರನ ಸ್ಥಿತಿ ಗಂಭೀರವಾಗಿದ್ದರೂ ನಿರ್ಲಕ್ಷ್ಯ ತೋರಿದ ಘಟನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಂಕಟೇಶ್ ರಾಮಚಂದ್ರಪ್ಪ, ನೌಕರರು ಅನಧಿಕೃತವಾಗಿ ಗೈರುಹಾಜರಾಗಿದ್ದರಿಂದ ವೈದ್ಯಕೀಯ ಪ್ರಮಾಣಪತ್ರದ ಆಧಾರದಲ್ಲಿ ವೇತನ ನೀಡಲು ಸಾಧ್ಯವಿಲ್ಲ ಎಂದು ಕಾನೂನು ಪ್ರಕಾರ ವಿವರಿಸಿದರು. ಸ್ವಯಂ ನಿವೃತ್ತಿ ಪ್ರಕ್ರಿಯೆಗೆ ಸಮಯ ಬೇಕು ಎಂದು ಹೇಳಿದರು. ಪತ್ರಕರ್ತರ ಹಸ್ತಕ್ಷೇಪದ ಬಳಿಕ ವೈದ್ಯರನ್ನು ಕರೆಸಿ ಚಿಕಿತ್ಸೆ ಒದಗಿಸಲಾಯಿತು. ವೈದ್ಯರು ಶುಗರ್ ಮಟ್ಟ ಏರಿಕೆಯಿಂದ ನಾಗರಾಜ ಕುಸಿದು ಬಿದ್ದಿರುವುದಾಗಿ ತಿಳಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ನಾಗರಾಜ ಅವರ ಕುಟುಂಬಸ್ಥರು, “ನಾವು ತಿಂಗಳಿನಿಂದ ಕಚೇರಿಗಳ ನಡುವೆ ಅಲೆದಾಡುತ್ತಿದ್ದೇವೆ. ಎಲ್ಲೂ ಸ್ಪಂದನೆ ಸಿಗುತ್ತಿಲ್ಲ. ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಡಿಡಿಪಿಐ ಕಡೆ ಕಳುಹಿಸುತ್ತದೆ, ಇಲ್ಲಿ ಬಂದರೆ ಶಾಲೆಗೆ ಹೋಗಿ ಎಂದು ಹೇಳುತ್ತಾರೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ,” ಎಂದು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ, ಅಸ್ವಸ್ಥ ನೌಕರನಿಗೆ ತಕ್ಷಣ ನೆರವು ನೀಡದೇ ನಿರ್ಲಕ್ಷ್ಯ ತೋರಿದ ಆರೋಪ ಹಾಗೂ ಆಡಳಿತಾತ್ಮಕ ವಿಳಂಬದಿಂದ ನಾಗರಾಜ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವಾರ್ತಾ ಭಾರತಿ 5 Apr 2026 11:27 pm

RCB Vs CSK Highlights- ಚಿನ್ನಸ್ವಾಮಿಯಲ್ಲಿ ಟಿಂ ಡೇವಿಡ್ ಶೋ! RCB ಅಬ್ಬರದ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ನಿರುತ್ತರ

ಟಿಂ ಡೇವಿಡ್ ಅವರ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ವಿರುದ್ಧ 43 ರನ್ ಗಳ ಅಂತರದಿದ ಪರಾಭವಗೊಂಡಿದೆ. ಈ ಮೂಲಕ ರಜತ್ ಪಾಟೀದಾರ್ ಬಳಗ ಸೀಸನ್ ನಲ್ಲಿ ನಿರಂತರ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಸಿಎಸ್ ಕೆ ನಿರಂತರ 3ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭರ್ತಿ 250 ರನ್ ಕಲೆ ಹಾಕಿದರು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಯಿತು. ()ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ತಂಡ ಆರಂಭದ 3 ಓವರ್ ಗಳಲ್ಲಿ ಚೆನ್ನೈ ಬೌಲರ್ ಗಳಾದ ಖಲೀಲ್ ಅಹ್ಮದ್ ಮತ್ತು ಮ್ಯಾಟ್ ಹೆನ್ರಿ ಅವರ ಬಿಗು ಬೌಲಿಂಗ್ ದಾಳಿಯಿಂದಾಗಿ ರನ್ ಗಾಗಿ ಪರದಾಡಿತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಒಂದು ಜೀವದಾನ ಸಹ ಸಿಕ್ಕಿತು. ಇದರಿಂದ ಸಾವರಿಸಿಕೊಂಡ ಅವರು ಇನ್ನೇನು ಆಟಕ್ಕೆ ಕುದುರಬೇಕು ಎನ್ನುವಷ್ಟರಲ್ಲಿಯೇ ಅನ್ಶುಲ್ ಕಾಂಬೋಜ್ ಅವರ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಅವರು ಲಾಂಗ್ ಆನ್ ನಲ್ಲಿ ಶಿವಂ ದುಬೆಗೆ ಕ್ಯಾಚಿತ್ತು ಔಟಾದರು. ಆಗ ತಂಡದ ಮೊತ್ತ 4.3 ಓವರ್ ಗಳಲ್ಲಿ 37. ಔಟಾಗುವ ಮೊದಲು ಅವರು 18 ಎಸೆತದಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 28 ರನ್ ಬಾರಿಸಿದರು. ಇದಾದ ಬಳಿಕ ಫಿಲ್ ಸಾಲ್ಟ್(30 ಎಸೆತದಲ್ಲಿ 46 ರನ್) ಮತ್ತು ಕನ್ನಡಿಗ ದೇವದತ್ ಪಡಿಕ್ಕಲ್ ಅವರು 2ನೇ ವಿಕೆಟ್ ಗೆ 56 ರನ್ ಗಳ ಜೊತೆಯಾಟವಾಡಿದರು. ರನ್ ವೇಗವನ್ನೂ ಹೆಚ್ಚಿಸಿದರು. ಬಳಿಕ ದೇವದತ್ ಅವರು ನಾಯಕ ರಜತ್ ಪಾಟಿದಾರ್ ಅವರ ಜೊತೆ 58 ರನ್ ಗಳ ಜೊತೆಯಾಟವಾಡಿದರು. ಈ ವೇಳೆ ಪಡಿಕ್ಕಲ್ ಅವರು ಈ ಸೀಸನ್ ನಲ್ಲಿ 2ನೇ ಅರ್ಧಶತಕ ಬಾಕಿಸಿದರು. 29 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಒಳಗೊಂಡ 50 ರನ್ ಪೂರೈಸಿ ಓವರ್ಟನ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಸನ್ ರೈಸರ್ಸ್ ವಿರುದ್ಧ ಅವರು 61 ರನ್ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಅಕ್ಷರಶಃ ನಡೆದದ್ದು ಟಿಂ ಡೇವಿಡ್ ಶೋ. ಪರಿಣಾಮ 14 ಓವರ್ ಗಳಲ್ಲಿ 151 ರನ್ ಗಳಿಸಿದ್ದ ಆರ್ ಸಿಬಿ 20 ಓವರ್ ಗಳು ಮುಗಿಯುವುದರೊಳಗೆ 250ರ ಗಡಿ ತಲುಪಿತು. ಕೇವಲ 21 ಎಸೆತಗಳಲ್ಲಿ 50 ರನ್ ಪೂರೈಸಿದ ಟಿಂ ಡೇವಿಡ್ ಅವರು 3 ಬೌಂಡರಿ ಮತ್ತು 8 ಸಿಕ್ಸರ್ ಗಳಿದ್ದ ಅಜಯ 70 ರನ್ ಬಾರಿಸಿದರು. ನಾಯಕ ರಜತ್ ಪಾಟೀದಾರ್ ಅವರು 19 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 48 ರನ್ ಗಳಿಸಿ ಅಜೇಯರಾಗುಳಿದರು.

ವಿಜಯ ಕರ್ನಾಟಕ 5 Apr 2026 11:23 pm

ಹಾವೇರಿ ವಿವಿ ನೀಡಿರುವ ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು. ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ ಎಂದು ತಿಳಿಸಿದ್ದಾರೆ. ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತಾ, ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Apr 2026 11:22 pm

ಚಿನ್ನಸ್ವಾಮಿಯಲ್ಲಿ ರನ್ ಮಳೆ ಹರಿಸಿ ಸಿಎಸ್‌ಕೆಗೆ ರೆಡ್‌ ಅಲರ್ಟ್‌ ನೀಡಿದ ಆರ್‌ಸಿಬಿ

RCB Vs CSK IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಐಪಿಎಲ್‌ 2026ರ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿಯು ಸಿಎಸ್‌ಕೆ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 250 ರನ್‌ಗಳನ್ನು ಕಲೆಹಾಕಿತು. ಟಿಮ್ ಡೇವಿಡ್‌ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ತಂಡ ಇಷ್ಟೊಂದು ರನ್‌ಗಳನ್ನು ಪೇರಿಸಲು ಪ್ರಮುಖ ಕಾರಣವಾಯಿತು. ಟಾಸ್‌

ಒನ್ ಇ೦ಡಿಯ 5 Apr 2026 11:19 pm

IPL 2026 | CSK ವಿರುದ್ಧ RCBಗೆ ಭರ್ಜರಿ ಗೆಲುವು

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ CSK ವಿರುದ್ಧದ ಪಂದ್ಯದಲ್ಲಿ RCB ತಂಡವು ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ CSK ತಂಡವು ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 3 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದ RCB ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂದ್ಯ ಗೆಲ್ಲಲು 251 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ CSK ತಂಡವು 19.4 ಓವರುಗಳಲ್ಲಿ 207 ರನ್ ಗಳಿಸಿ ಆಲೌಟ್ ಆಯಿತು.

ವಾರ್ತಾ ಭಾರತಿ 5 Apr 2026 11:10 pm

Ballari | ಭರತನಾಟ್ಯದಲ್ಲಿ ಸಂಗೀತ ಸಣಾಪುರಗೆ ‘ಕರುನಾಡ ನಿಧಿ ಪ್ರಶಸ್ತಿ’

ಬಳ್ಳಾರಿ/ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದ ಕುಮಾರಿ ಸಂಗೀತ ಎಸ್.ಸಣಾಪುರ ಅವರು ತಮ್ಮ ಭರತನಾಟ್ಯ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ಜೊತೆಗೆ ಕಲೆಯಲ್ಲಿಯೂ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಬಡತನದ ನಡುವೆಯೂ ಭರತನಾಟ್ಯವನ್ನು ಅಚ್ಚುಮೆಚ್ಚಾಗಿ ಅಭ್ಯಾಸಿಸಿದ ಸಂಗೀತ, ಬಳ್ಳಾರಿ ಜಿಲ್ಲೆಯ ವಿವಿಧ ಕಾರ್ಯಕ್ರಮಗಳು ಹಾಗೂ ಉತ್ಸವಗಳಲ್ಲಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನೃತ್ಯದ ಅಭಿವ್ಯಕ್ತಿ, ಲಯ ಹಾಗೂ ಶೈಲಿ ಪ್ರೇಕ್ಷಕರ ಮನಸೆಳೆಯುವಂತಿದೆ. ಇನ್ನಷ್ಟು ಹೆಮ್ಮೆಯ ಸಂಗತಿಯಾಗಿ, ಹೈದರಾಬಾದ್‌ನಲ್ಲಿ ನಡೆದ ಕೂಚುಪಡಿ ಕಲಾ ವೈಭವಂ 2 ಕಾರ್ಯಕ್ರಮದಲ್ಲಿ ಸಾವಿರಾರು ಕಲಾವಿದರೊಂದಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಗೀತ ಅವರ ಸಾಧನೆಗೆ ಅವರ ಗುರು ಶ್ರೀ ಜೀಲಾನಿ ಭಾಷಾ ಅವರ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಅವರ ಪ್ರೋತ್ಸಾಹದಿಂದ ಸಂಗೀತ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಕರುನಾಡ ನಿಧಿ ಸಂಸ್ಥೆಯು 2026ರ ಎರಡನೇ ವಾರ್ಷಿಕೋತ್ಸವದ ಅಂಗವಾಗಿ “ಕರುನಾಡ ನಿಧಿ ಪ್ರಶಸ್ತಿ” ನೀಡಿ ಗೌರವಿಸುತ್ತಿದೆ. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಂಗೀತ ಉತ್ತಮ ಉದಾಹರಣೆ ಆಗಿದ್ದು, ಇತರ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದಾರೆ. ಸರ್ಕಾರಿ ಪ್ರಥಮ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಅವರ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ. ಭರತನಾಟ್ಯದ ಮೇಲಿನ ನಿಷ್ಠೆ ಹಾಗೂ ಕಠಿಣ ಪರಿಶ್ರಮದಿಂದ ಸಂಗೀತ ಸಾಧಿಸಿರುವ ಯಶಸ್ಸು ನಿಜಕ್ಕೂ ಮೆಚ್ಚುವಂತದ್ದು.

ವಾರ್ತಾ ಭಾರತಿ 5 Apr 2026 11:07 pm

ಕಂಪ್ಲಿ | 15 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ: ಶಾಸಕ ಜೆ.ಎನ್.ಗಣೇಶ

ಕಂಪ್ಲಿ : ಉಪ್ಪಾರಹಳ್ಳಿ, ಮೆಟ್ರಿ, ಚಿನ್ನಾಪುರ, ಜವುಕು ಗ್ರಾಮಗಳಿಗೆ ಅನುಕೂಲವಾಗಲು ಸುಮಾರು 15 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ ನೀರಿನ ಅನುಕೂಲದ ಜೊತೆಗೆ ಅಂತರ್ಜಲ ವೃದ್ಧಿ, ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದ್ದಾರೆ. ತಾಲೂಕಿನ ಮೆಟ್ರಿ ಗ್ರಾಮದಲ್ಲಿ 2025-26ನೇ ಸಾಲಿನ 4059 ಸಿಎಂಐಡಿಕ್ಯೂ ಯೋಜನೆಯ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮೆಟ್ರಿ-ಜವುಕು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಹೊನ್ನಳ್ಳಿ ಗಂಗಾಧರ, ಹೊಸಕೋಟೆ ಜಗದೀಶ, ಮೆಟ್ರಿ ಶಿವಪುತ್ರಪ್ಪ, ಮೆಟ್ರಿ ಗಿರೀಶ ನೆಣಕಿ, ಉಪ್ಪಾರಹಳ್ಳಿ ಹನುಮನಗೌಡ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 11:01 pm

Assam CM ಹಿಮಂತ ಬಿಸ್ವ ಶರ್ಮ ಪತ್ನಿಗೆ ಮೂರು ದೇಶಗಳ ಪಾಸ್‌ ಪೋರ್ಟ್‌, ಅಮೆರಿಕದಲ್ಲಿ 52,000 ಕೋಟಿ ರೂ. ಠೇವಣಿ: ಕಾಂಗ್ರೆಸ್ ಆರೋಪ

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿನಿಕಿ ಭುಯಾನ್ ಶರ್ಮ ಮೂರು ದೇಶಗಳ ಪಾಸ್‌ಪೋರ್ಟ್‌ ಗಳನ್ನು ಹೊಂದಿದ್ದಾರೆ ಹಾಗೂ ಅಮೆರಿಕದಲ್ಲಿ 52,000 ಕೋಟಿ ರೂ. ಮೊತ್ತವನ್ನು ಡಾಲರ್ ರೂಪದಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಈ ಆರೋಪ ಹೊರಬಿದ್ದಿದೆ. ರವಿವಾರ ಹೊಸ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ಪವನ್ ಖೇರಾ, ಹಿಮಂತ ಬಿಸ್ವ ಶರ್ಮ ತಮ್ಮ ಪತ್ನಿಯ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 9ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರನ್ನು ಅನರ್ಹಗೊಳಿಸಬೇಕು ಹಾಗೂ ಬಂಧಿಸಬೇಕು ಎಂದು ಆಗ್ರಹಿಸಿದರು. “ನಿಮ್ಮ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತ ಎಲ್ಲಿಂದ ಬಂದಿದೆ ಎಂಬುದನ್ನು ಅವರು ವಿವರಿಸಬೇಕು,” ಎಂದು ಖೇರಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವ ಶರ್ಮ, ಎಕ್ಸ್‌ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಆರೋಪಗಳನ್ನು ತಳ್ಳಿಹಾಕಿದರು. ಕಾಂಗ್ರೆಸ್ ಪಕ್ಷದೊಳಗಿನ ಆತಂಕದಿಂದಲೇ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. “ಈ ಆರೋಪಗಳು ನಿರಾಧಾರ ಮತ್ತು ರಾಜಕೀಯ ಪ್ರೇರಿತ. ನಾನು ಹಾಗೂ ನನ್ನ ಪತ್ನಿ ಮುಂದಿನ 48 ಗಂಟೆಗಳಲ್ಲಿ ಪವನ್ ಖೇರಾ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುತ್ತೇವೆ,” ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪವನ್ ಖೇರಾ ಯುಎಇ, ಈಜಿಪ್ಟ್ ಮತ್ತು ಅಂಟಿಗುವಾ ದೇಶಗಳ ಪಾಸ್‌ ಪೋರ್ಟ್‌ ಗಳ ಪ್ರತಿಗಳನ್ನು ಪ್ರದರ್ಶಿಸಿದರು. ಅವು ಕ್ರಮವಾಗಿ 2027, 2029 ಮತ್ತು 2031ರವರೆಗೆ ಮಾನ್ಯವಾಗಿವೆ ಎಂದು ಹೇಳಿದರು. “ಅವರಿಗೆ ಭಾರತೀಯ ಪಾಸ್‌ ಪೋರ್ಟ್ ಇದೆಯೇ?” ಎಂದು ಪ್ರಶ್ನಿಸಿದ ಅವರು, “ಈ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆ ನಡೆಸುವರೇ?” ಎಂದು ಕೇಳಿದ್ದರು. ಸೌಜನ್ಯ: thewire.in

ವಾರ್ತಾ ಭಾರತಿ 5 Apr 2026 10:58 pm

Ballari | ಜೆಸಿಐ ಸೇವಾ ಚಟುವಟಿಕೆ ಶ್ಲಾಘನೀಯ : ಸುರೇಶ್ ಗೊಂಪಾ

ಬಳ್ಳಾರಿ/ಕಂಪ್ಲಿ: ಸುಮಾರು ವರ್ಷಗಳಿಂದ ಸಮಾಜ ಸೇವೆಯ ಮೂಲಕ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದಿರುವ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಸ್ ಸುರೇಶ್ ಗೊಂಪಾ ಹೇಳಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಹೊಸಪೇಟೆ ಬಸ್ ನಿಲ್ದಾಣದ ಬಳಿ ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಡಾ. ಭರತ್ ಪದ್ಮಸಾಲಿ ನೇತೃತ್ವದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಬಸ್ ತಂಗುದಾಣ ಹಾಗೂ ಪೇಟೆ ಬಸವೇಶ್ವರ ದೇವಸ್ಥಾನದ ಬಳಿಯ ನೀರಿನ ಅರವಟ್ಟಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಜೆಸಿಐ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಮಾಜ ಸೇವೆಗೆ ಸದಸ್ಯರಿಗೆ ಅವಕಾಶ ಕಲ್ಪಿಸುತ್ತಿದೆ. ಸಮಾಜದಲ್ಲಿನ ಶೋಷಿತರ ಪರ ಕೆಲಸ ಮಾಡುವಲ್ಲಿ ಸದಸ್ಯರು ಮುಂಚೂಣಿಯಲ್ಲಿ ಇರಬೇಕು. ಜನಸಾಮಾನ್ಯರ ಕಾಳಜಿ ಅರಿತು ಅವರ ಶ್ರೇಯಸ್ಸಿಗಾಗಿ ದುಡಿಯುವುದು ಮಾನವ ಧರ್ಮ ಎಂದು ಹೇಳಿದರು. ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಡಾ. ಭರತ್ ಪದ್ಮಸಾಲಿ ಮಾತನಾಡಿ, ಮನುಷ್ಯನು ಸ್ವಾರ್ಥಪರ ಚಿಂತನೆ ಬಿಟ್ಟು ವಿಶ್ವಮಾನವನಾಗಬೇಕು. ತಂತ್ರಜ್ಞಾನ ಬೆಳವಣಿಗೆಯ ನಡುವೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿರುವುದು ಆತಂಕಕಾರಿ. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು. ಬೇಸಿಗೆ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಂದ ಬರುವ ಜನರ ನೀರಿನ ದಾಹ ನೀಗಿಸಲು ನೀರಿನ ಅರವಟ್ಟಿಗೆ ಆರಂಭಿಸಲಾಗಿದ್ದು, ಅಂಬೇಡ್ಕರ್ ವೃತ್ತದ ಬಳಿ ಪ್ರಯಾಣಿಕರಿಗೆ ಬಿಸಿಲಿನಿಂದ ರಕ್ಷಣೆಗಾಗಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಜೆಸಿಐ ವಲಯ-24 ಅಧ್ಯಕ್ಷ ಜೆಎಫ್‌ಎಸ್‌ಸಿಎ ಮಧುಸೂದನ್, ಡಾ. ಬಿ. ಸುಧಾಕರ್, ಬಿ.ಎಸ್. ಅರುಂಧತಿ, ಅಖಿಲ್ ಅಕ್ಕಿ, ಪ್ರಸಾದ್ ಗಡದ್, ನಿರಂಜನ್ ಗುಪ್ತಾ, ಮೌನೇಶ್, ಚಂದ್ರಶೇಖರ್ ಗೌಡ, ರಮೇಶ್ ಬೆಳಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 10:57 pm

ಹೊಸಪೇಟೆ | ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗೃಹರಕ್ಷಕ ದಳ ಸಿಬ್ಬಂದಿ ಮನೆ ಭಸ್ಮ

ಹೊಸಪೇಟೆ : ತಾಲೂಕಿನ ಹಂಪಿಯ ಎಂ.ಪಿ. ಪ್ರಕಾಶ್ ನಗರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ರವಿವಾರ ನಡೆದಿದೆ. ಪಿ. ಬಾಷಾಸಾಬ್ ಅವರಿಗೆ ಸೇರಿದ ತಗಡಿನ ಮನೆಯಲ್ಲಿ ಏಕಾಏಕಿ ವಿದ್ಯುತ್ ದೋಷ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ತಗಡಿನ ಮನೆ ಆಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ದವಸ-ಧಾನ್ಯ, ಪಾತ್ರೆಗಳು, ಗೃಹೋಪಯೋಗಿ ವಸ್ತುಗಳು ಎಲ್ಲವೂ ಸಂಪೂರ್ಣ ನಾಶವಾಗಿವೆ. ಆದರೆ ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಮಕ್ಕಳು ಸೇರಿದಂತೆ ಮನೆಯಲ್ಲಿದ್ದವರು ಅನಾಹುತದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾರ್ತಾ ಭಾರತಿ 5 Apr 2026 10:53 pm

ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್| ಐವರು ಭಾರತೀಯರು ಸೆಮಿಫೈನಲ್‌ಗೆ ಲಗ್ಗೆ

ಉಲಾನ್‌ಬಾಟರ್ (ಮಂಗೋಲಿಯ),ಎ.5: ಮಂಗೋಲಿಯದ ಉಲಾನ್‌ಬಾಟರ್‌ನಲ್ಲಿ ನಡೆಯುತ್ತಿರುವ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಕರ್ಷಕ ನಿರ್ವಹಣೆ ನೀಡುವುದನ್ನು ಭಾರತೀಯ ಮಹಿಳೆಯರು ಮುಂದುವರಿಸಿದ್ದಾರೆ. ರವಿವಾರ ಮೀನಾಕ್ಷಿ ಹೂಡಾ ಮತ್ತು ಜೈಸ್ಮಿನ್ ಲಂಬೋರಿಯ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಪುರುಷರ ವಿಭಾಗದಲ್ಲೂ, ಲೋಕೇಶ್, ಆಕಾಶ್ ಮತ್ತು ಹರ್ಷ ಚೌಧರಿ ತಮ್ಮ ಸೆಮಿಫೈನಲ್ ಸ್ಥಾನಗಳನ್ನು ಖಚಿತಪಡಿಸಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ, ಮೀನಾಕ್ಷಿ ಪರಿಣಾಮಕಾರಿ ಪ್ರದರ್ಶನವನ್ನು ನೀಡಿ ಜಪಾನ್‌ನ ಯೂಕಾ ಸಡಮಟ್ಸು ಅವರನ್ನು ಸರ್ವಾನುಮತದ 5-0 ಅಂಕಗಳಿಂದ ಸೋಲಿಸಿದ್ದಾರೆ. 57 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ, ಜೈಸ್ಮಿನ್ ಚೀನಾದ ಝಿಯಿ ಚೆನ್‌ರನ್ನು 5-0 ಅಂತರದಿಂದ ಸರ್ವಾಂಗೀಣವಾಗಿ ಸೋಲಿಸಿ ಸೆಮಿಫೈನಲ್ ತಲುಪಿದರು. ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಥಾಯ್ಲೆಂಡ್‌ನ ತಿಪ್ಸಚ ಯೊದ್ವಾರೀಯನ್ನು ಎದುರಿಸಲಿದ್ದರೆ, ಜೈಸ್ಮಿನ್ ಉಝ್ಬೆಕ್‌ನ ಒಲಿಂಪಿಕ್ ಸ್ಪರ್ಧಿ ನಿಗಿನಾ ಉಕ್ತಮೋವ ವಿರುದ್ಧ ಮುಖಾಮುಖಿಯಾಗಲಿದ್ದಾರೆ. ಪುರುಷರ 85 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಲೋಕೇಶ್ ದಕ್ಷಿಣ ಕೊರಿಯಾದ ಗಿಶೇ ಕಿಮ್‌ರನ್ನು 5-0 ಅಂತರದಿಂದ ಹಿಮ್ಮೆಟ್ಟಿಸಿ ಸೆಮಿಫೈನಲ್ ಮುಟ್ಟಿದರು. 75 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಆಕಾಶ್ ತುರ್ಕ್‌ಮೆನಿಸ್ತಾನದ ವೈಲಸ್ ಬಗ್ತಿಯರೊವ್ ವಿರುದ್ಧ 5-0 ಅಂತರದ ಮೇಲುಗೈ ಸಾಧಿಸಿದರೆ, 90 ಕೆಜಿ ವಿಭಾಗದಲ್ಲಿ ಹರ್ಷ ಚೌಧರಿ ಕಿರ್ಗಿಝ್ ರಿಪಬ್ಲಿಕ್‌ನ ಟೈನಿಸ್ಟನ್ ಅಲಿಬಯೇವ್‌ರನ್ನು ಸೋಲಿಸಿ ಸೆಮಿಫೈನಲ್‌ಗೆ ತೇರ್ಗಡೆಗೊಂಡರು. ಸೆಮಿಫೈನಲ್‌ಗಳಲ್ಲಿ ಆಕಾಶ್, ಲೋಕೇಶ್ ಮತ್ತು ಹರ್ಷ ಕ್ರಮವಾಗಿ ಜವೊಖಿರ್ ಅಬ್ದುರಖಿಮೊವ್, ಜಸುರ್ಬೆಕ್ ಯುಲ್ದೊಶೆವ್ ಮತ್ತು ಪರ್ವೀಝ್ ಕರಿಮೊವ್‌ರನ್ನು ಎದುರಿಸಲಿದ್ದಾರೆ.

ವಾರ್ತಾ ಭಾರತಿ 5 Apr 2026 10:50 pm

ಎಸ್‌ಐಆರ್ ಮೂಲಕ ನಿಶ್ಯಸ್ತ್ರ ಜನರ ಮೇಲೆ ದಾಳಿ : ಚಿಂತಕ ಶಿವಸುಂದರ್

ಶಹಾಪುರ : ಎಸ್‌ಐಆರ್ ನಿಶ್ಯಸ್ತ್ರ ಜನರ ಮೇಲೆ ನಡೆಯುತ್ತಿರುವ ದಾಳಿಯಂತಾಗಿದೆ. ಇದು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ವ್ಯವಸ್ಥಿತ ಮಿಷನ್ ಆಗಿದೆ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ. ನಗರದ ಮಾತೋಶ್ರೀ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಮೇ ಸಾಹಿತ್ಯ ಮೇಳ ಹಾಗೂ ಯಾದಗಿರಿ ಬಳಗದ ಸಹಯೋಗದಲ್ಲಿ, ದಲಿತ, ಪ್ರಗತಿಪರ, ರೈತ, ಅಲ್ಪಸಂಖ್ಯಾತ ಮತ್ತು ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ‘ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ವಿಷಯದ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು 1947-49ರ ಸಂವಿಧಾನ ರಚನಾ ಕಾಲಘಟ್ಟವನ್ನು ಉಲ್ಲೇಖಿಸಿ, ಅಸಮಾನತೆಯ ವಿರುದ್ಧ ನಡೆದ ಮಹತ್ವದ ಕ್ರಾಂತಿಯ ಫಲವೇ ಭಾರತೀಯ ಸಂವಿಧಾನ ಎಂದು ಹೇಳಿದರು. ‘ಒಂದು ಓಟು-ಒಂದು ಮೌಲ್ಯ’ ಎಂಬ ಪ್ರಜಾತಾಂತ್ರಿಕ ತತ್ವವನ್ನು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದು, ಮತಪಟ್ಟಿಯೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂದು ಅವರು ತಿಳಿಸಿದರು. ಎಸ್‌ಐಆರ್ ಪ್ರಕ್ರಿಯೆ ಅಸಂವಿಧಾನಿಕವಾಗಿದ್ದು, ಚುನಾವಣಾ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 2003ರಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ತಿದ್ದುಪಡಿ ಬಳಿಕ ನಾಗರಿಕತ್ವದ ಪ್ರಶ್ನೆ ಉದ್ಭವಿಸಿದ್ದು, ‘ನೀವು ಈ ದೇಶದ ನಾಗರಿಕರೇ?’ ಎಂಬ ಪ್ರಶ್ನೆಯನ್ನು ಎತ್ತುವ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದರು. ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ; ನಾಗರಿಕತ್ವದ ಪರಿಶೀಲನೆಯಾಗಿದೆ. ಸಾಮಾನ್ಯ ಜನರು ಸಾಬೀತುಪಡಿಸಲು ಕಷ್ಟವಾಗುವ ರೀತಿಯಲ್ಲಿ ದಾಖಲೆಗಳನ್ನು ಕೇಳಲಾಗುತ್ತಿದೆ. ಸಂವಿಧಾನದ ಆರ್ಟಿಕಲ್ 5ರ ಪ್ರಕಾರ ಈ ದೇಶದಲ್ಲಿ ಹುಟ್ಟಿದವರೆಲ್ಲ ಭಾರತೀಯರು ಎಂಬುದನ್ನು ಉಲ್ಲೇಖಿಸಿದರು. ಪ್ರಕ್ರಿಯೆಯಲ್ಲಿ 11 ವಿಧದ ದಾಖಲೆಗಳನ್ನು ಕೇಳಲಾಗುತ್ತಿದ್ದು, ಕೇಂದ್ರ ಸರಕಾರದ ನೌಕರರ ದಾಖಲೆ, 1987ರ ಹಿಂದಿನ ಬ್ಯಾಂಕ್/ಪೋಸ್ಟ್ ಆಫೀಸ್ ವ್ಯವಹಾರ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಆಸ್ತಿ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು, ಎನ್‌ಆರ್ಸಿ, ಅರಣ್ಯ ಹಕ್ಕುಪತ್ರ, ವಾಸ ಹಾಗೂ ಜಾತಿ ಪ್ರಮಾಣಪತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇವುಗಳನ್ನು ಒದಗಿಸುವುದು ಸಾಮಾನ್ಯ ಜನರಿಗೆ, ವಿಶೇಷವಾಗಿ ಹಿಂದುಳಿದ ವರ್ಗದವರಿಗೆ ಕಷ್ಟಕರವಾಗಿದೆ ಎಂದು ಹೇಳಿದರು. ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನರೇಂದ್ರ ಮೋದಿಯವರು ಹಿಟ್ಲರ್ ಶೈಲಿಯ ಆಡಳಿತ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುಮಾರು 15 ಕೋಟಿ ಜನರು ನಾಗರಿಕತ್ವ ಕಳೆದುಕೊಳ್ಳುವ ಅಪಾಯವಿದೆ. ಎಸ್‌ಐಆರ್ ರಾಜಕೀಯ ಉದ್ದೇಶ ಹೊಂದಿದ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಆರ್. ಚನ್ನಬಸಪ್ಪ ವನದುರ್ಗ, ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ಎಸ್‌ಐಆರ್ ಪ್ರಕ್ರಿಯೆ ಮೂಲಕ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರನ್ನು ಮತಪಟ್ಟಿಯಿಂದ ಹೊರಹಾಕುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯುಂಟು ಮಾಡುವ ಪ್ರಯತ್ನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮರೆಪ್ಪ ಚಟ್ಟೇಕರ್ ಮಾತನಾಡಿ, ಎಸ್‌ಐಆರ್ ಅತ್ಯಂತ ಗಂಭೀರ ವಿಷಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಿರೆಪ್ಪಗೌಡ ಬಾಣತಿಹಾಳ, ಮಲ್ಲಕಾರ್ಜುನ ಪೂಜಾರಿ, ಚನ್ನಪ್ಪ ಆನೇಗುಂದಿ, ನೀಲಕಂಠ ಬಡಿಗೇರ, ಶಿವಣ್ಣ ಇಜೇರಿ, ರಾಜು ಅಣಬಿ, ಸೈಯ್ಯದ್ ಉದ್ದಿನ್ ಖಾದ್ರಿ, ಶರೀಫ್ ಬಿಳೆಯಲಿ, ನೀಲಮ್ಮ ಮಲ್ಲೆ, ಡಾ.ರವೀಂದ್ರನಾಥ ಹೊಸ್ಮನಿ, ಪ್ರಕಾಶ ದೊರೆ, ಕೇಶವ್ ಕಟ್ಟಿಮನಿ, ಮಡಿವಾಳಪ್ಪ ಪಾಟೀಲ್, ಶರಣಬಸವ ಬಿರಾದಾರ, ಬಸವರಾಜ್ ಗುಡಿಮನಿ, ರಾಯಪ್ಪ ಸಾಲಿಮನಿ, ನಿಂಗಣ್ಣ ತಿಪ್ಪನಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 10:41 pm

ಇರಾಕ್| ಅಮೆರಿಕದ ರಾಜತಾಂತ್ರಿಕ ತಾಣಗಳ ಮೇಲೆ ಇರಾನ್ ಪರ ಗುಂಪಿನಿಂದ ದಾಳಿ

ಬಗ್ದಾದ್, ಎ.5: ಇರಾಕ್‍ನಲ್ಲಿರುವ ಅಮೆರಿಕದ ರಾಜತಾಂತ್ರಿಕ ತಾಣಗಳ ಮೇಲೆ ಶನಿವಾರ ರಾತ್ರಿ ಇರಾನ್ ಪರ ಗುಂಪು ದಾಳಿ ನಡೆಸಿರುವುದಾಗಿ ಬಗ್ದಾದ್‍ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ರವಿವಾರ ಹೇಳಿದೆ. `ಇರಾನ್ ಜೊತೆ ಗುರುತಿಸಿಕೊಂಡಿರುವ ಇರಾಕ್‍ನ ಸಶಸ್ತ್ರ ಭಯೋತ್ಪಾದಕರ ಗುಂಪು ಅಮೆರಿಕದ ರಾಜತಾಂತ್ರಿಕರನ್ನು ಕೊಲ್ಲುವ ಪ್ರಯತ್ನದಲ್ಲಿ ಶನಿವಾರ ರಾತ್ರಿ ಅಮೆರಿಕ ರಾಜತಾಂತ್ರಿಕ ತಾಣಗಳ ಮೇಲೆ ಭೀಕರ ದಾಳಿ ನಡೆಸಿದೆ ಎಂದು ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ. ಇರಾನ್ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು: ಇಸ್ರೇಲ್‍ನ ಪೆಟಾಹ್ ಟಿಕ್ವ ನಗರದಲ್ಲಿನ ಡ್ರೋನ್ ಉತ್ಪಾದನಾ ಕೈಗಾರಿಕೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು ಕಾರ್ಖಾನೆಗೆ ತೀವ್ರ ಹಾನಿಯಾಗಿದೆ. ಕಾರ್ಖಾನೆಯ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು ಕಾರ್ಖಾನೆಯನ್ನು ದುರಸ್ತಿಪಡಿಸುವುದು ಬಹುತೇಕ ಅಸಾಧ್ಯ ಎಂದು ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್‍ನ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಯಾವುದೇ ಮುಂದಿನ ಕ್ರಮವು ಜಾಗತಿಕ ವ್ಯಾಪಾರ ಮತ್ತು ಇಂಧನದ ಹರಿವನ್ನು ಅಡ್ಡಿಪಡಿಸಬಹುದು. ಹಾರ್ಮುಜ್‍ನಂತೆ ಬಾಬ್-ಎಲ್-ಮಂಡೆಬ್ ಜಲಸಂಧಿಯನ್ನೂ ಇರಾನ್ ಗುರಿಯಾಗಿಸಬಹುದು ಎಂದು ಇರಾನ್‍ನ ಸರ್ವೋಚ್ಛ ನಾಯಕರ ಸಲಹೆಗಾರ ಅಲಿಯಕ್ಬರ್ ವೆಲಾಯಟಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ(ಎಪ್ರಿಲ್ 6)ರಂದು ಇರಾನ್ ಜೊತೆ ಒಪ್ಪಂದದ ಉತ್ತಮ ಅವಕಾಶವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗಲ್ಫ್‌ನಾದ್ಯಂತ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ದಾಳಿ ಲೆಬನಾನ್ ಕರಾವಳಿ ಬಳಿ ಇಸ್ರೇಲ್‍ನ ಯುದ್ಧನೌಕೆಯ ಮೇಲೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.

ವಾರ್ತಾ ಭಾರತಿ 5 Apr 2026 10:30 pm

RCB Vs CSK- ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಸಿಡಿಸಿದ ಬಳಿಕ ಚೆಂಡಿಗೆ ಬೈಬೈ ಅಂದ್ರಾ ಟಿಂ ಡೇವಿಡ್? ವೈರಲ್ ಆಗಿದೆ ವಿಡಿಯೋ!

TIm David Bye Gesture After Hitting Six- ಡೆತ್ ಓವರ್ ಗಳ ಖತರ್ನಾಕ್ ಬ್ಯಾಟರ್ ಎಂದೇ ಖ್ಯಾತರಾಗಿರುವ ಟಿಂ ಡೇವಿಡ್ ಭಾನುವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ ಕಿಂಗ್ಸ್ ವಿರುದ್ಧ ಸಿಕ್ಸರ್ ಗಳ ಸುರಿಮಳೆಗೈದರು. ಈ ವೇಳೆ ಅವರು ಬಾರಿಸಿದ ಭರ್ಜರಿ ಸಿಕ್ಸರ್ ಒಂದು ಕ್ರೀಡಾಂಗಣದ ಛಾವಣಿ ಮೇಲೆ ಬಿತ್ತು. ಈ ವೇಳೆ ಅವರು ಚೆಂಡಿಗೆ 'ಬೈ-ಬೈ' ಎಂಬೆಂತೆ ಸನ್ನೆ ಮಾಡಿರುವ ಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯ ಕರ್ನಾಟಕ 5 Apr 2026 10:25 pm

\ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು\: ಸಿಎಸ್‌ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ?

Devdutt Padikkal: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆದ ಐಪಿಎಲ್‌ 2026ರ 11ನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ ರನ್‌ಗಳ ಹೊಳೆಯನ್ನೇ ಹರಿಸಿದೆ. ಈ ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಸ್ಟಾರ್ ಬ್ಯಾಟರ್ ಕನ್ನಡಿಗ ದೇವದತ್ ಪಡಿಕ್ಕಲ್ ಮಾತನಾಡಿ, ಟೈಮ್-ಔಟ್ ಸಮಯದಲ್ಲಿ ಪಂದ್ಯದ ವೇಗವನ್ನು ಕಾಯ್ದುಕೊಳ್ಳುವಂತೆ ಸಂದೇಶ ಬಂದಿತ್ತು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಟಿಮ್ ಡೇವಿಡ್

ಒನ್ ಇ೦ಡಿಯ 5 Apr 2026 10:00 pm

Afzalpur | ಎಪಿಎಂಸಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಅವಕಾಶ ನೀಡಬೇಕು: ಮಕ್ಬೂಲ್ ಪಟೇಲ್ ಆಗ್ರಹ

ಅಫಜಲಪುರ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ಸಮುದಾಯಗಳ ಬೆಂಬಲ ಮುಖ್ಯವಾಗಿದೆ. ಆದರೆ ಅಫಜಲಪುರ ಮತಕ್ಷೇತ್ರದಲ್ಲಿ ಕೇವಲ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಇತರ ಸಮುದಾಯಗಳಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಮುಸ್ಲಿಂ ಜನ ಜಾಗೃತಿ ಸಮಿತಿ ಅಧ್ಯಕ್ಷ ಮಕ್ಬೂಲ್ ಪಟೇಲ್ ಆರೋಪಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್, ಪಿಎಲ್‌ಡಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುರಸಭೆ ಸೇರಿದಂತೆ ಹಲವು ಹುದ್ದೆಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಇದೇ ವೇಳೆ, ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಬಂದಿರುವ ಮುಖಂಡರಿಗೆ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಅವರು ಆರೋಪಿಸಿದರು. ಶಾಸಕ ಎಂ.ವೈ. ಪಾಟೀಲ್ ಅವರ ಮೇಲೆ ಪಕ್ಷದ ಹಳೆಯ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುವ ಆರೋಪವನ್ನೂ ಮಾಡಿದರು. “ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈಗಾಗಲೇ ಅನೇಕ ಹುದ್ದೆಗಳು ಆ ಸಮುದಾಯಕ್ಕೆ ಸಿಕ್ಕಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅವಕಾಶ ನೀಡಬೇಕು. ಆಗ ಮಾತ್ರ ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಧೋರಣೆ ಜನರಲ್ಲಿ ಸ್ಪಷ್ಟವಾಗುತ್ತದೆ” ಎಂದು ಹೇಳಿದರು. ಈ ಸಂಬಂಧ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಹೇಳಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ವಿವಿಧ ನಾಮ ನಿರ್ದೇಶಿತ ಹುದ್ದೆಗಳ ನೇಮಕಾತಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ದೂರು ನೀಡುವುದಾಗಿ ಅವರು ಎಚ್ಚರಿಸಿದರು.

ವಾರ್ತಾ ಭಾರತಿ 5 Apr 2026 9:58 pm

ಮೂರು ದಿನ ಏಕಾಂಗಿಯಾಗಿ ಕಾಡಿನಲ್ಲಿ ಓಡಾಡಿರುವ ಶರಣ್ಯ ಧೈರ್ಯವಂತೆ; ಶೋಧ ಕಾರ್ಯಾಚರಣೆ ಮಾಡಿದ ಅಧಿಕಾರಿ-ಸಿಬ್ಬಂದಿಗೆ ಈಶ್ವರ ಖಂಡ್ರೆ ಅಭಿನಂದನೆ

ಬೆಂಗಳೂರು: ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಎ.2ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ (36) ಪತ್ತೆಯಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ರವಿವಾರ ಬೆಂಗಳೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅರಣ್ಯ ಇಲಾಖೆ ಒಂಭತ್ತು ತಂಡಗಳು ಹಗಲಿರುಳು ಕಾರ್ಯಾಚರಣೆ ನಡೆಸಿ ಯುವತಿಯನ್ನು ಕರೆತಂದಿದ್ದಾರೆ. ಅವರನ್ನು ಸುರಕ್ಷಿತವಾಗಿ ಕೇರಳದ ಅವರ ಮನೆಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಚಾರಣಕ್ಕೆ ಬಂದಿದ್ದ ಶರಣ್ಯ ಅವರು ಎ.2ರಂದು ಗುರುವಾರ ಇತರ 15 ಮಂದಿ ಚಾರಣಿಗರೊಂದಿಗೆ ಮತ್ತು ನೇಚರ್ ಗೈಡ್ ಜೊತೆಯಲ್ಲಿ ಚಾರಣಕ್ಕೆ ಹೋಗಿದ್ದರು. ಆದರೆ ಮಧ್ಯಾಹ್ನ ಮೂಲ ನೆಲೆಗೆ ಎಲ್ಲ ಚಾರಣಿಗರು ಬಂದಾಗ ಇವರು ದಾರಿ ತಪ್ಪಿರುವುದು ತಿಳಿಯಿತು. ವಿಷಯ ತಿಳಿದ ಕೂಡಲೇ ಎ.2ರಿಂದಲೇ 5 ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಯುವತಿ ನಾಪತ್ತೆ ಆಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಿಎಂ ಸೂಚನೆಯ ಮೇರೆಗೆ ಇಂದು ಹೆಚ್ಚುವರಿ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಅವರು ವಿವರಿಸಿದರು. ತಾವು ದಾವಣಗೆರೆ ಉಪ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ವಿಷಯ ತಿಳಿಯಿತು. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಯುವತಿ ಈಗ ಪತ್ತೆಯಾಗಿದ್ದು, ಅವರೊಂದಿಗೆ ಸಹ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು. ಇಂದು ಹೆಚ್ಚವರಿಯಾಗಿ 40 ಅರಣ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಒಟ್ಟು 9 ತಂಡಗಳು ಶೋಧ ಕಾರ್ಯಚಾರಣೆ ನಡೆಸಿದ್ದವು. ಇದರಲ್ಲಿ ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ದಳ, ಅರಣ್ಯ ಇಲಾಖೆ ಸೇರಿದಂತೆ ಬಹು ಸಂಸ್ಥೆಗಳು ಸಹಯೋಗ ನೀಡಿದ್ದವು. ಸ್ಥಳೀಯ ಬುಡಕಟ್ಟು ಜನರೂ ಶೋಧ ಕಾರ್ಯಾಚರಣೆಗೆ ನೆರವಾಗಿದ್ದರು. ಎಲ್ಲರಿಗೂ ತಾವು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮೂರು ದಿನವಾದರೂ ಏಕಾಂಗಿಯಾಗಿ ಕಾಡಿನಲ್ಲಿ ಓಡಾಡಿರುವ ಅವರು ಧೈರ್ಯವಂತೆಯಾಗಿದ್ದಾರೆ. ಕಾಡಿನಲ್ಲಿ ಮೊಬೈಲ್‍ಫೋನ್ ಸಂಪರ್ಕ ಸಿಗುವುದಿಲ್ಲ. ಹೀಗಾಗಿ ಅವರು ಇದ್ದ ನಿಶ್ಚಿತ ಸ್ಥಳದ ಮಾಹಿತಿ ತಿಳಿದಿರಲಿಲ್ಲ. ಹೀಗಾಗಿ ಶೋಧ ವಿಳಂಬವಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು. ಯಾರೇ ಯಾವುದೇ ರಾಜ್ಯದಿಂದ ಚಾರಣಕ್ಕೆ ಬಂದು ನಾಪತ್ತೆಯಾದರೆ, ಅವರನ್ನು ಹುಡುಕುವ ಜವಾಬ್ದಾರಿ ನಮ್ಮ ಸರಕಾರದ ಮೇಲಿರುತ್ತದೆ. ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವಾರ್ತಾ ಭಾರತಿ 5 Apr 2026 9:56 pm

Andhra Pradesh| ಪುತ್ರಿಯನ್ನು ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ತಂದೆ

ವಿಶಾಖಪಟ್ಟಣ,ಮಾ.5: ತಮ್ಮ ಇಚ್ಚೆಗೆ ವಿರುದ್ಧವಾಗಿ ಪ್ರೇಮವಿವಾಹವಾದುದಕ್ಕಾಗಿ 22 ವರ್ಷದ ಯುವತಿಯೊಬ್ಬರನ್ನು ಆಕೆಯ ಕುಟುಂಬಸ್ಥರು ಹತ್ಯೆ ಮಾಡಿ, ಪೊಲೀಸ್ ಅಧಿಕಾರಿಯೊಬ್ಬನ ನೆರವಿನಿಂದ ಕೃತ್ಯವನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲು ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ಮಚೇರ್ಲಾ ಪಟ್ಟಣದಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಚೌಡೇಶ್ವರಿ, ಯುವಕನೊಬ್ಬನೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದು, ಆಕೆಯ ಕುಟುಂಬವು ಅದನ್ನು ವಿರೋಧಿಸಿತ್ತು. ಮಾರ್ಚ್ 4ರಂದು ಮನೆ ಬಿಟ್ಟು ಹೋದ ಆಕೆ, ತನ್ನ ಪ್ರಿಯಕರನನ್ನು ವಿವಾಹವಾಗಿದ್ದಳು. ಕೆಲವು ದಿನಗಳ ಆನಂತರ ಕುಟುಂಬಿಕರು ಯುವತಿ ನಾಪತ್ತೆಯಾಗಿದ್ಧಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಮಾರ್ಚ್ 15ರಂದು ದಂಪತಿಯನ್ನು ಪತ್ತೆ ಹಚ್ಚಿದ ಮಚೆರ್ಲಾ ಪಟ್ಟಣದ ವೃತ್ತ ನಿರೀಕ್ಷಕ (ಸಿಐ), ಬಲವಂತವಾಗಿ ಯುವತಿಯನ್ನು ಆಕೆಯ ಹೆತ್ತವರ ಮನೆಗೆ ಮರಳುವಂತೆ ಮಾಡಿದ್ದ ಎನ್ನಲಾಗಿದೆ. ಇದಾದ ಮೂರು ದಿನಗಳ ಬಳಿಕ ಚೌಡೇಶ್ವರಿ ಹೆತ್ತವರ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಯುವತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ಹೇಳಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಕೊಲೆ ಪ್ರಕರಣವೆಂದು ದೃಢಪಟ್ಟಿತ್ತು. ಯುವತಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆಯಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿತ್ತು. ಆ ನಂತರ ತನಿಖಾಧಿಕಾರಿಗಳು ಯುವತಿಯ ತಂದೆ ಚಂದ್ರಶೀನು ಹಾಗೂ ಇನ್ನೋರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ,ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ್ದರಿಂದ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಚೆರ್ಲಾ ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕನನ್ನು ಅಮಾನತುಗೊಳಿಸಲಾಗಿದೆ. ಆತ ವಿರುದ್ಧ ಲಂಚ ಪಡೆದ ಹಾಗೂ ಸಾಕ್ಷ್ಯ ನಾಶದ ಆರೋಪವನ್ನು ಹೊರಿಸಲಾಗಿದೆ.

ವಾರ್ತಾ ಭಾರತಿ 5 Apr 2026 9:55 pm

ಬುಷೆಹರ್ ಪರಮಾಣು ಸ್ಥಾವರದ ಮೇಲಿನ ದಾಳಿಯಿಂದ ವಿಕಿರಣ ಸೋರಿಕೆಯ ಅಪಾಯ: ಇರಾನ್ ಎಚ್ಚರಿಕೆ

ಟೆಹ್ರಾನ್, ಎ.5: ಇರಾನ್‍ನ ಬುಷೆಹರ್ ಪರಮಾಣು ಸ್ಥಾವರದ ಮೇಲೆ 4ನೇ ಬಾರಿ ಅಮೆರಿಕ-ಇಸ್ರೇಲ್ ದಾಳಿಯ ನಂತರ ಪಶ್ಚಿಮ ಏಶ್ಯಾ ಪ್ರದೇಶದಲ್ಲಿ ವಿಕಿರಣಶೀಲ ದುರಂತದ ಸಾಧ್ಯತೆಯಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‍ನ ಝಪೋರಿಝಿಯಾ ವಿದ್ಯುತ್ ಸ್ಥಾವರದ ಬಳಿ ರಶ್ಯ ದಾಳಿ ನಡೆಸಿದ್ದಕ್ಕೆ ವ್ಯಕ್ತವಾಗಿದ್ದ ಆಕ್ರೋಶವನ್ನು `ಪಾಶ್ಚಿಮಾತ್ಯ ಬೂಟಾಟಿಕೆ' ಎಂದು ಉಲ್ಲೇಖಿಸಿದ ಅರಾಘ್ಚಿ, ಬುಷೆಹರ್ ಪರಮಾಣು ಸ್ಥಾವರದ ಮೇಲೆ 4 ಬಾರಿ ದಾಳಿ ನಡೆದಿದ್ದರೂ ಇವರು ಸುಮ್ಮನಿದ್ದಾರೆ ಎಂದು ಟೀಕಿಸಿದ್ದಾರೆ. ಬುಷೆಹರ್ ಸ್ಥಾವರದ ಮೇಲೆ ಇಸ್ರೇಲ್-ಅಮೆರಿಕ ನಾಲ್ಕು ಬಾರಿ ಬಾಂಬ್ ಹಾಕಿವೆ. ವಿಕಿರಣಶೀಲ ಧೂಳಿನ ಮಳೆಯಿಂದ ಗಲ್ಫ್ ಸಹಕಾರ ಮಂಡಳಿಯ(ಜಿಸಿಸಿ) ರಾಜಧಾನಿಗಳಲ್ಲಿ ಸಾವು-ನೋವು ಸಂಭವಿಸುತ್ತವೆ. ಟೆಹ್ರಾನ್‍ನಲ್ಲಿ ಅಲ್ಲ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಬುಷೆಹರ್ ಪರಮಾಣು ಸ್ಥಾವರದ ಮೇಲಿನ ದಾಳಿಯಿಂದ ತೀವ್ರ ವಿಕಿರಣಶೀಲ ಮಾಲಿನ್ಯದ ಅಪಾಯದ ಬಗ್ಗೆ ಇರಾನ್ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದೆ. ಸಕ್ರಿಯ ಬುಷೆಹರ್ ಪರಮಾಣು ವಿದ್ಯುತ್ ಸ್ಥಾವರದ ವ್ಯಾಪ್ತಿಯಲ್ಲಿ ಪುನರಾವರ್ತಿತ ದಾಳಿಗಳು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದು ಸಂಪೂರ್ಣ ಪ್ರದೇಶವನ್ನು ಗಂಭೀರ ಮಾನವ ಮತ್ತು ಪರಿಸರ ಪರಿಣಾಮಗಳೊಂದಿಗೆ ವಿಕಿರಣಶೀಲ ಮಾಲಿನ್ಯದ ಗಂಭೀರ ಅಪಾಯಕ್ಕೆ ಒಡ್ಡುತ್ತದೆ' ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರದಿಯಾದ ಘಟನೆಯ ಬಗ್ಗೆ ಐಎಇಎ(ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ನಿರ್ದೇಶಕ ರಾಫೆಲ್ ಗ್ರೊಸ್ಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದು ಪರಮಾಣು ಸ್ಥಾವರಗಳು ಮತ್ತು ಸಮೀಪದ ಪ್ರದೇಶಗಳ ಮೇಲೆ ಯಾವತ್ತೂ ದಾಳಿ ನಡೆಯಬಾರದು ಎಂದು ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 5 Apr 2026 9:52 pm

ರೇಡಿಯೊ, ಜಿಪಿಎಸ್ ಸಾಧನ, ಪಿಸ್ತೂಲ್‍ನೊಂದಿಗೆ ಇರಾನ್‍ನ ಪರ್ವತದಲ್ಲಿ ಅಡಗಿದ್ದ ಅಮೆರಿಕದ ಪೈಲಟ್!

ವಾಶಿಂಗ್ಟನ್, ಎ.5: ಅಮೆರಿಕದ ಮಿಲಿಟರಿ ರಕ್ಷಿಸಿದ ಪೈಲಟ್ ಶುಕ್ರವಾರ ವಿಮಾನದಿಂದ ಕೆಳಗೆ ಹಾರುವಾಗ ಗಾಯಗೊಂಡಿದ್ದ. ಆದರೂ ಕಷ್ಟಪಟ್ಟು ನಡೆಯುತ್ತಾ ಪರ್ವತ ಪ್ರದೇಶಗಳಲ್ಲಿ 36 ಗಂಟೆ ಅಡಗಿ ಕುಳಿತಿದ್ದ. ಈತನ ಬಳಿ ರಕ್ಷಣೆಗಾಗಿ ಒಂದು ಪಿಸ್ತೂಲ್ ಮಾತ್ರವಿತ್ತು ಎಂದು ವರದಿಯಾಗಿದೆ. ಪೈಲಟ್ ಪಡೆದಿದ್ದ `ಬದುಕುಳಿಯುವುದು, ತಪ್ಪಿಸಿಕೊಳ್ಳುವುದು, ಪ್ರತಿರೋಧ ಮತ್ತು ಪಾರಾಗುವುದು' ತರಬೇತಿಯು ಆತನನ್ನು ಉಳಿಸಿದೆ. ಅಮೆರಿಕದ ವಾಯುಪಡೆ ಸಿಬ್ಬಂದಿಗಳಿಗೆ ರೇಡಿಯೊ/ಜಿಪಿಎಸ್ ಕೋಡ್ ಹೊಂದಿರುವ ಸಾಧನ, ಕನಿಷ್ಠ ಆಹಾರ ಮತ್ತು ನೀರು, ಪ್ರಥಮ ಚಿಕಿತ್ಸಾ ಸಾಧನಗಳನ್ನು ಹೊಂದಿರುವ ಜಾಕೆಟ್ ಒದಗಿಸಲಾಗುತ್ತದೆ. ಇರಾನ್ ಹೊಡೆದುರುಳಿಸಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನದಲ್ಲಿದ್ದ ಪೈಲಟ್‍ ನಾಪತ್ತೆಯಾಗಿದ್ದರು. ಅವರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ತಿಳಿಸಿದ್ದರು.  

ವಾರ್ತಾ ಭಾರತಿ 5 Apr 2026 9:50 pm

ಗ್ಯಾರಂಟಿ ಯೋಜನೆಗಳ ಪ್ರಭಾವ ಜನರ ಮೇಲೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ

ಬಾಗಲಕೋಟೆ: ರಾಜ ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟವಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಐದು ದಿನ ಬಾಗಲಕೋಟೆಯಲ್ಲಿ ಪ್ರಚಾರ ಮಾಡುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ರವಿವಾರ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಲು ಬಾಗಲಕೋಟೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಶತಾಯಗತಾಯ ಎರಡೂ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲೇಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ವಿಧಾನಸೌಧದಲ್ಲಿನ ಕಚೇರಿಗಳನ್ನು ಬಿಟ್ಟು ಚುನಾವಣಾ ಕಣದಲ್ಲಿ ಬೆವರು ಹರಿಸುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದಿದ್ದರೆ ಇವರೆಲ್ಲ ಇಷ್ಟೊಂದು ಸರ್ಕಸ್ ಮಾಡುವ ಅಗತ್ಯ ಏನಿತ್ತು ಎಂದು ಲೇವಡಿ ಮಾಡಿದರು. ‘ನುಡಿದಂತೆ ನಡೆದಿದ್ದೇವೆ’ ಎಂದು ಇವರು ಹೇಳುತ್ತಾರೆ. ಆದರೆ 2018ರಲ್ಲಿ ಬಾದಾಮಿಯಿಂದ ಅಲ್ಪ ಮತಗಳ ಅಂತರದಿಂದ ಗೆದ್ದ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ದತ್ತು ತೆಗೆದುಕೊಳ್ಳಲಿಲ್ಲ, ಬಾದಾಮಿ ಅಭಿವೃದ್ಧಿಯನ್ನು ಮಾಡಲಿಲ್ಲ ಎಂದು ಅವರು ಟೀಕಿಸಿದರು. ಸಾಲವನ್ನು ಪ್ರತೀ ಸರಕಾರವು ಮಾಡುತ್ತದೆ. ರಾಜ್ಯ ಸರಕಾರವು ಸಾಲ ಮಾಡಿದೆ, ಇದೇ ರೀತಿ ಕೇಂದ್ರ ಸರಕಾರವು ಸಾಲ ಮಾಡಿದೆ. ಮಾಡಿದ ಸಾಲವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಮಾಡಿರುವ ವೆಚ್ಚಕ್ಕಿಂತ ಸಾಲವನ್ನೇ ಹೆಚ್ಚು ಮಾಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು. ರಾಜ್ಯದ ಖಜಾನೆಯನ್ನು ಭರ್ತಿ ಮಾಡುತ್ತೇವೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಇದನ್ನು ಯಾರಾದರೂ ಹಣಕಾಸು ನಿರ್ವಹಣೆ ಎಂದು ಕರೆಯಲು ಸಾಧ್ಯವೇ? ಈ ದೇಶದ ಇತಿಹಾಸದಲ್ಲಿ ಈ ರೀತಿಯ ಅಸಂಬದ್ಧ ಬಜೆಟ್ ಅನ್ನು ಯಾರೂ ನೀಡಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ರಾಜ್ಯ ಸರಕಾರ ಜನರ ಕೆಲಸಗಳನ್ನು ಮಾಡುವುದು ಬಿಟ್ಟು ಕಾಲಹಣ ಮಾಡುತ್ತಿದೆ. ಅದನ್ನು ಬಿಟ್ಟರೆ ಯಾವುದೇ ಉತ್ತಮ ಯೋಜನೆಯನ್ನು ಸಕಾಲಕ್ಕೆ ಕಾರ್ಯಗತ ಮಾಡುವ ಬಗ್ಗೆ ಚಿಂತಿಸುತ್ತಿಲ್ಲ. ಯುಕೆಪಿ ಯೋಜನೆಗೆ ಗೆಜೆಟ್ ಅಧಿಸೂಚನೆ ಯಾಕಾಗ್ತಿಲ್ಲ ಎಂಬ ಪ್ರಶ್ನೆ ನನ್ನದು. ರಾಜ್ಯ ಸರಕಾರ ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಕೇಂದ್ರವನ್ನು ವಿಶ್ವಾಸ ತೆಗೆದುಕೊಂಡು ರಾಜ್ಯಕ್ಕೆ ಹೆಚ್ಚು ಅನುಕೂಲ ಎಂದು ಅವರು ಹೇಳಿದರು.

ವಾರ್ತಾ ಭಾರತಿ 5 Apr 2026 9:42 pm

ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಕರ್ನಾಟಕ, ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಸಿಂಹಪಾಲು ದೊರೆಯಲಿದೆ. ಆದರೆ, ಕರ್ನಾಟಕದ ಧ್ವನಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಲೋಕಸಭೆಯ ಒಟ್ಟು ಸ್ಥಾನಗಳನ್ನು 816ಕ್ಕೆ ವಿಸ್ತರಿಸಿದರೂ, ದಕ್ಷಿಣ ರಾಜ್ಯಗಳ ಒಟ್ಟು ಪಾಲು ಸುಮಾರು ಶೇ.24ಕ್ಕೆ ಸಮಾನವಾಗಿಯೇ ಉಳಿಯುತ್ತದೆ. ಇದು ಈಗಾಗಲೇ ಕಡಿಮೆ ಪ್ರಮಾಣವಾಗಿದೆ. ಜನಸಂಖ್ಯೆ ನಿಯಂತ್ರಣ ಮತ್ತು ಉತ್ತಮ ಆಡಳಿತದಲ್ಲಿ ಸಾಧನೆ ಮಾಡಿದ ರಾಜ್ಯಗಳಿಗೆ ಶಿಕ್ಷೆ ವಿಧಿಸಿದಂತಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಚಾಲಕವಾಗಿರುವ ಕರ್ನಾಟಕ ರಾಜ್ಯವನ್ನು ಉದ್ದೇಶಪೂರ್ವಕವಾಗಿ ಹಿಂದೆ ಸರಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಪಾಲು ಹೆಚ್ಚದಿದ್ದರೆ ಮತ್ತು ದೊಡ್ಡ ರಾಜ್ಯಗಳ ಸಂಖ್ಯಾತ್ಮಕ ಪ್ರಭುತ್ವ ಹೆಚ್ಚಿದರೆ, ಈ ಪ್ರಕ್ರಿಯೆಯಿಂದ ಕರ್ನಾಟಕಕ್ಕೆ ಏನು ಲಾಭ. ಇದರಿಂದ ಅಸಮತೋಲನ ಹೆಚ್ಚಾಗುತ್ತಿದೆ. ಇಂದಿಗೆ ಉತ್ತರ ಪ್ರದೇಶಕ್ಕೆ ಕರ್ನಾಟಕಕ್ಕಿಂತ 52 ಸ್ಥಾನಗಳು ಹೆಚ್ಚು ಇದ್ದರೆ, ಇದು 78ಕ್ಕೆ ಏರಲಿದೆ. ಮಹಾರಾಷ್ಟ್ರದ ಮುನ್ನಡೆ 20ರಿಂದ 30 ಸ್ಥಾನಗಳಿಗೆ ಏರಲಿದೆ. ಇದು ಕೇವಲ ವಿಸ್ತರಣೆ ಅಲ್ಲ, ಇದು ಅಧಿಕಾರದ ಏಕಾಗ್ರತೆ. ಇದು ಸಹಕಾರಿ ಫೆಡರಲಿಸಂ ಅಲ್ಲ, ಇದು ಫೆಡರಲಿಸಂ ಮೇಲೆ ಮತ್ತೊಂದು ಸ್ಪಷ್ಟ ದಾಳಿ. ಕರ್ನಾಟಕದಂತಹ ರಾಜ್ಯಗಳ ಧ್ವನಿಯನ್ನು ಕುಗ್ಗಿಸಲು ರೂಪಿಸಿದ ಕ್ರಮವಾಗಿದೆ. ದಕ್ಷಿಣ ಭಾರತದ ಜನರ ವಿಶ್ವಾಸ ಗೆಲ್ಲಲು ವಿಫಲವಾದ ನಂತರ, ಮೋದಿ ಸರಕಾರವು ಪ್ರತಿನಿಧಿತ್ವದ ರಚನೆಯನ್ನು ಬದಲಾಯಿಸುವ ಮೂಲಕ ನಮ್ಮ ಧ್ವನಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಇಂತಹ ಮೂಲಭೂತ ಬದಲಾವಣೆಗಳನ್ನು ಸಮಾಲೋಚನೆ ಅಥವಾ ಸಾರ್ವಜನಿಕ ಚರ್ಚೆ ಇಲ್ಲದೇ ನಡೆಸಲಾಗುತ್ತಿದೆ. ಆರ್ಥಿಕ ಮತ್ತು ಜಾಗತಿಕ ಸವಾಲುಗಳ ನಡುವೆಯೂ ಕೇಂದ್ರ ಸರಕಾರ ರಾಷ್ಟ್ರೀಯ ಆದ್ಯತೆಗಳಿಗಿಂತ ರಾಜಕೀಯ ಲೆಕ್ಕಾಚಾರಕ್ಕೆ ಒತ್ತು ನೀಡುತ್ತಿದೆ. ಮೋದಿ ಅವರು ಕೊನೆಗೂ ಪ್ರಸ್ತಾಪಿತ ಕ್ಷೇತ್ರ ಮರುವಿಂಗಡಣೆ ಕುರಿತು ಮಾತನಾಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ದಕ್ಷಿಣ ರಾಜ್ಯಗಳಿಗೆ ‘ಭರವಸೆ ನೀಡುವ’ ಈ ಆಕಸ್ಮಿಕ ಚಿಂತನೆ ರಾಜ್ಯಕಾರಣದ ದೂರದೃಷ್ಟಿಗಿಂತಲೂ ಚುನಾವಣಾ ರಾಜಕೀಯದ ಲೆಕ್ಕಾಚಾರಕ್ಕೆ ಅನುಗುಣವಾಗಿ, ವಿಶೇಷವಾಗಿ ಕೇರಳ-ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಸಮಯೋಚಿತವಾಗಿ ಮಾಡಿರುವ ಸಂದೇಶದಂತಿದೆ ಎಂದು ಅವರು ದೂರಿದ್ದಾರೆ. ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಬೇಕೇ ಬೇಡವೇ ಎಂಬುದೇ ಪ್ರಶ್ನೆಯಾಗಿಲ್ಲ. ಅದು ಹೇಗೆ ಹೆಚ್ಚುತ್ತದೆ ಮತ್ತು ಯಾರಿಗೆ ಅಸಮಾನ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂಬುದೇ ಮುಖ್ಯ ಚಿಂತನೆ. ಪ್ರಸ್ತಾಪಿತ ವಿಸ್ತರಣೆಯಡಿ, ಎಲ್ಲ ರಾಜ್ಯಗಳಿಗೂ ಸ್ಥಾನಗಳು ಹೆಚ್ಚಾದರೂ, ಅದರ ಪ್ರಮಾಣ ಮತ್ತು ವೇಗವು ಸ್ಪಷ್ಟವಾಗಿ ಬಿಜೆಪಿ ಪ್ರಭುತ್ವವಿರುವ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತವೆ. ಐದು ದಕ್ಷಿಣ ರಾಜ್ಯಗಳು ಒಟ್ಟಾಗಿ ಕೇವಲ 63-66 ಹೆಚ್ಚುವರಿ ಸ್ಥಾನಗಳನ್ನು ಪಡೆಯುತ್ತವೆ. ಆದರೆ ಈ ಏಳು ಬಿಜೆಪಿ ಆಡಳಿತವಿರುವ ರಾಜ್ಯಗಳು ಸುಮಾರು 128-131 ಸ್ಥಾನಗಳನ್ನು ಪಡೆಯುತ್ತವೆ ಇದು ಸುಮಾರು ದ್ವಿಗುಣವಾಗಿದೆ ಎಂದು ಅವರು ವಿವರಿಸಿದ್ದಾರೆ. ದಕ್ಷಿಣ ರಾಜ್ಯಗಳಿಗೆ ಅನ್ಯಾಯ: ಉತ್ತರ ಪ್ರದೇಶ 80ರಿಂದ 120ಕ್ಕೆ (+40), ಮಹಾರಾಷ್ಟ್ರ 48ರಿಂದ 72ಕ್ಕೆ (+24), ಬಿಹಾರ 40ರಿಂದ 60ಕ್ಕೆ (+20), ಮಧ್ಯ ಪ್ರದೇಶ 29ರಿಂದ 43-44ಕ್ಕೆ (+14-15), ರಾಜಸ್ಥಾನ 25ರಿಂದ 37-38ಕ್ಕೆ (+12-13), ಮತ್ತು ಗುಜರಾತ್ 26ರಿಂದ 39ಕ್ಕೆ (+13) ಏರಿಕೆಯಾಗುವ ನಿರೀಕ್ಷೆಯಿದೆ. ದಕ್ಷಿಣ ರಾಜ್ಯಗಳಿಳಾದ ಕರ್ನಾಟಕ 28ರಿಂದ 42ಕ್ಕೆ (+14), ತಮಿಳುನಾಡು 39ರಿಂದ 58-59ಕ್ಕೆ (+20), ಆಂಧ್ರ ಪ್ರದೇಶ 25ರಿಂದ 37-38ಕ್ಕೆ (+12-13), ತೆಲಂಗಾಣ 17ರಿಂದ 25-26ಕ್ಕೆ (+8-9), ಮತ್ತು ಕೇರಳ 20ರಿಂದ 30ಕ್ಕೆ (+10) ಮಾತ್ರ ಹೆಚ್ಚಳವಾಗುತ್ತದೆ. I welcome Prime Minister @narendramodi finally opening his mouth on the proposed delimitation exercise. This sudden concern for “reassuring” southern states appears less like statesmanship and more like election-driven messaging, timed conveniently with political calculations in… pic.twitter.com/Cs5xaBkxzD — Siddaramaiah (@siddaramaiah) April 5, 2026

ವಾರ್ತಾ ಭಾರತಿ 5 Apr 2026 9:32 pm

Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು

Virat Kohli: ಐಪಿಎಲ್‌ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಎಸ್‌ಆರ್‌ಎಚ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕೊಹ್ಲಿ ಅವರಿಗೆ ವಿದೇಶದಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ವೇಳೆ ವಿರಾಟ್‌ ಕೊಟ್ಟ ಉತ್ತರ ಇದೀಗ

ಒನ್ ಇ೦ಡಿಯ 5 Apr 2026 9:27 pm

ಸಂವಿಧಾನದ ಆಶಯ ಉಳಿಯಬೇಕಾದರೆ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯಾಚರಿಸಲಿ: ನ್ಯಾ.ಬಿ.ವಿ. ನಾಗರತ್ನ

ಹೊಸದಿಲ್ಲಿ, ಎ.5: ಸಂವಿಧಾನದ ಆಶಯ ಉಳಿಯಬೇಕಾದರೆ ಚುನಾವಣಾ ಆಯೋಗವು ಸಂಪೂರ್ಣ ಸ್ವತಂತ್ರವಾಗಿ ಕಾರ್ಯಾಚರಿಸಬೇಕು. ಒಂದು ವೇಳೆ ಚುನಾವಣಾ ಆಯೋಗವು ಚುನಾವಣಾ ಸ್ಪರ್ಧಿಗಳಿಗೆ ಅನುಗುಣವಾಗಿ ಕಾರ್ಯಾಚರಿಸಿದಲ್ಲಿ, ನಿಷ್ಪಕ್ಷಪಾತ ಚುನಾವಣೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ತಿಳಿಸಿದ್ದಾರೆ. ಪಾಟ್ನಾದ ಚಾಲುಕ್ಯ ಕಾನೂನು ವಿವಿಯಲ್ಲಿ ಶನಿವಾರ ರಾಜೇಂದ್ರ ಪ್ರಸಾದ್ ಸ್ಮಾರಕ ದತ್ತಿ ಉಪನ್ಯಾಸವನ್ನು ನೀಡಿದ ಸಂದರ್ಭ ಬಿ.ವಿ.ನಾಗರತ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ಚುನಾವಣೆಗಳ ಸಮಗ್ರತೆಯನ್ನು ಸಂರಕ್ಷಿಸುವ ಅತ್ಯಂತ ಮಹತ್ವದ ಸಾಂವಿಧಾನಿಕ ಪ್ರಾಧಿಕಾರವಾಗಿದೆ ಎಂದು ಸುಪ್ರೀಂಕೋರ್ಟ್ 1995ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸುತ್ತಾ, ನಾಗರತ್ನ ತಿಳಿಸಿದ್ದಾರೆ. ಚುನಾವಣೆಯೆಂಬುದು ಕೇವಲ ಕಾಲಕಾಲಕ್ಕೆ ನಡೆಯುವ ಘಟನೆಗಳಲ್ಲ, ಬದಲಿಗೆ ರಾಜಕೀಯ ಅಧಿಕಾರವನ್ನು ನಿರ್ಮಿಸುವ ಕಾರ್ಯವಿಧಾನವಾಗಿದೆ ಎಂದು ನಾಗರತ್ನ ಅಭಿಪ್ರಾಯಿಸಿದರು. ಸಕಾಲಿಕವಾಗಿ ಚುನಾವಣೆಗಳು ನಡೆಯುವುದರಿಂದ ಸರಕಾರಗಳು ಸುಗಮವಾಗಿ ಬದಲಾಗುವುದನ್ನು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವವು ತೋರಿಸಿಕೊಟ್ಟಿದೆ ಎಂದವರು ತಿಳಿಸಿದರು. ಸಂವಿಧಾನದ ಆಶಯಗಳು ಉಳಿಯಬೇಕಾದರೆ ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದ ಅವರು, ರಾಜ್ಯಗಳನ್ನು ಸಮನ್ವಯಕಾರರೆಂದು ತಿಳಿಯಬೇಕೇ ಹೊರತು ಅಧೀನದಲ್ಲಿರುವವರು ಎಂದು ತಿಳಿಯಕೂಡದು ಎಂದು ನಾಗರತ್ನ ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಕೇಂದ್ರ ರಾಜ್ಯ ಸಂಬಂಧದ ವಿಷಯದಲ್ಲಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುವಂತೆಯೂ ನಾಗರತ್ನ ಅವರು ರಾಜಕೀಯ ಪಕ್ಷಗಳನ್ನು ಆಗ್ರಹಿಸಿದರು.

ವಾರ್ತಾ ಭಾರತಿ 5 Apr 2026 9:20 pm

ದಿಲ್ಲಿ| ಸರಕಾರಿ ಔಷಧಿ ಕಳ್ಳಸಾಗಣೆ ಜಾಲ ಬಯಲು: ಐವರ ಬಂಧನ; 70 ಲಕ್ಷ ರೂ. ಮೌಲ್ಯದ ಔಷಧಿ ವಶ

ಹೊಸದಿಲ್ಲಿ,ಎ.5: ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ವಿತರಣೆಗಾಗಿ ಸರಕಾರ ಪೂರೈಕೆ ಮಾಡಿದ ಔಷಧಿಗಳನ್ನು,ಅಕ್ರಮವಾಗಿ ಬೇರೆಡೆಗೆ ತಿರುಗಿಸಿ ಮಾರಾಟ ಮಾಡುತ್ತಿದ್ದ ಸಂಘಟಿತ ಜಾಲವೊಂದನ್ನು ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ರವಿವಾರ ಭೇದಿಸಿದ್ದಾರೆ. ಸುಮಾರು 70 ಲಕ್ಷ ರೂ.ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ತಮಗೆ ದೊರೆತ ನಿರ್ದಿಷ್ಟ ಮಾಹಿತಿಯ ಮೇರೆಗೆ ಕ್ರೈಂ ಬ್ರಾಂಚ್ ಪೊಲೀಸರ ತಂಡವು ದಿಲ್ಲಿಯ ತೀಸ್ ಹಝಾರಿ ಪ್ರದೇಶದಲ್ಲಿರುವ ಜೈ ಭಾರತ್ ಸಾರಿಗೆ ಸಂಸ್ಥೆ ಮೇಲೆ ಬಲೆ ಬೀಸಿತ್ತು. ಮಹೀಂದ್ರ ಟೆಂಪೊ ಹಾಗೂ ಕಾರೊಂದರಲ್ಲಿ ಔಷಧಿಗಳ ದೊಡ್ಡ ಸರಕನ್ನು ಸಾಗಿಸುತ್ತಿದ್ದ ಆರೋಪಿಗಳಾದ ನೀರಜ್ ಕುಮಾರ್, ಸುಶೀಲ್ ಕುಮಾರ್ ಹಾಗೂ ಲಕ್ಷ್ಮಣ್ ಮುಖಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಈ ಜಾಲವು ವಿವಿಧ ನಗರಗಳಲ್ಲಿ ಬ್ರೋಕರ್‌ಗಳ ಜಾಲಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತೆಂಬುದು ವಿಚಾರಣೆಯಲ್ಲಿ ಬಹಿರಂಗಗೊಂಡಿದೆ ದಾಖಲೆಗಳನ್ನು ತಿರುಚುವ ಮೂಲಕ ಆಸ್ಪತ್ರೆಯ ದಾಸ್ತಾನಿನಲ್ಲಿದ್ದ ಔಷಧಿಗಳನ್ನು ಬೇರೆಡೆಗೆ ಸಾಗಿಸಿದ ಇ ದೀನದಯಾಳ್ ಉಪಾಧ್ಯಯ ಆಸ್ಪತ್ರೆಯ ಫಾರ್ಮಾಸಿಸ್ಟ್ ಹಾಗೂ ದಾಸ್ತಾನುಗಾರ ಬಿನೇಶ್ ಕುಮಾರ್ ಹಾಗೂ ಗುತ್ತಿಗೆಯ ಸಹಾಯಕ ಪ್ರಕಾರ ಮೆಹ್ತೊ ಎಂಬವರನ್ನು ಕೂಡಾ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಾರ್ತಾ ಭಾರತಿ 5 Apr 2026 9:20 pm

IPL 2026- ವಿರಾಟ್ ಕೊಹ್ಲಿ ಹೊಸ ವಿಕ್ರಮ: ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದ RCB ಕಿಂಗ್!

Virat Kohli New IPL Record- ಕಿಂಗ್ ಕೊಹ್ಲಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸುವ ಮೂಲಕ ಐಪಿಎಲ್ ತಂಡವೊಂದರ (CSK) ವಿರುದ್ಧ ಅತಿ ಹೆಚ್ಚು ರನ್ (1,174) ಗಳಿಸಿದ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಈವರೆಗೂ ಪಂಜಾಬ್ ಕಿಂಗ್ಸ್ ವಿರುದ್ಧ ಅವರು ಗಳಿಸಿರುವ 1159 ರನ್ ತಂಡವೊಂದರ ವಿರುದ್ಧ ಗಳಿಸಿದ ಅತಿ ಹೆಚ್ಚಿನ ಮೊತ್ತವಾಗಿತ್ತು. ಇದೀಗ ಸಿಎಸ್ ಕೆ ವಿರುದ್ಧ ಕೊಹ್ಲಿ ಅವರು, 1174 ರನ್ ಕಲೆ ಹಾಕಿ ಈ ದಾಖಲೆಯನ್ನು ಮುರಿದಿದ್ದಾರೆ.

ವಿಜಯ ಕರ್ನಾಟಕ 5 Apr 2026 9:16 pm

ನ್ಯಾಯಾಲಯಗಳಲ್ಲಿ ತೀರ್ಪು ಸಿದ್ಧಪಡಿಸಲು AI ಬಳಸದಂತೆ ಗುಜರಾತ್ ಹೈಕೋರ್ಟ್ ಕಡಿವಾಣ

ಅಹ್ಮದಾಬಾದ್,ಎ.5: ನ್ಯಾಯಾಲಯಗಳಲ್ಲಿ ಕೃತಕ ಬುದ್ದಿಮತ್ತೆ ಬಳಕೆಗೆ ಗುಜರಾತ್ ಹೈಕೋರ್ಟ್ ಕಡಿವಾಣ ಹಾಕಿದೆ. ಆದೇಶಗಳ ಕರಡು ರಚನೆ ಹಾಗೂ ತೀರ್ಪುಗಳನ್ನು ಸಿದ್ಧಪಡಿಸುವುದಕ್ಕೆ ಕೃತಕ ಬುದ್ದಿಮತ್ತೆಯ ಬಳಕೆಯನ್ನು ಗುಜರಾತ್ ಹೈಕೋರ್ಟ್ ನಿಷೇಧಿಸಿರುವುದಾಗಿ barandbench ಶನಿವಾರ ವರದಿ ಮಾಡಿದೆ. ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವ ನ್ಯಾಯಿಕ ಅಧಿಕಾರಿಗಳು, ರಿಜಿಸ್ಟ್ರಿ ಸಿಬ್ಬಂದಿ, ಕಾನೂನು ಸಹಾಯಕರು, ತರಬೇತಿ ನಿರತ ಸಹಾಯಕರು (ಇಂಟರ್ನ್)ಗಳಿಗೆ ಈ ನೀತಿಯು ಅನ್ವಯಿಸುತ್ತದೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವಿಕೆ, ನ್ಯಾಯಾಂಗ ತರ್ಕಬದ್ಧತೆ, ಕರಡು ಆದೇಶಗಳು, ತೀರ್ಪುಗಳ ಸಿದ್ಧಪಡಿಸುವಿಕೆ, ಜಾಮೀನು ಅಥವಾ ಶಿಕ್ಷೆ ವಿಧಿಸುವಿಕೆಯ ಪರಿಶೀಲನೆ ಅಥವಾ ಯಾವುದೇ ಗಣನೀಯವಾದ ತೀರ್ಪು ನೀಡಿಕೆ ಪ್ರಕ್ರಿಯೆಗಳಲ್ಲಿ, ಒಂದು ವೇಳೆ ಅವು ನ್ಯಾಯಾಧೀಶರ ಪರಾಮರ್ಶೆಗೊಳಪಡಲಿದ್ದರೂ ಕೃತಕ ಬುದ್ಧಿಮತ್ತೆಯನ್ನು ಬಳಸುವಂತಿಲ್ಲವೆಂದು ‘ ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ. ಕಾನೂನಾತ್ಮಕ ಸಂಶೋಧನೆ, ಭಾಷಾಂತರಗಳು, ಕರಡು ರಚನೆ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಭಾಷಾ ಸುಧಾರಣೆಯಂತಹ ಪೂರಕ ಕಾರ್ಯಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ಸೀಮಿತ ಬಳಕೆಗೆ ಅನುಮತಿ ನೀಡಲಾಗಿದೆ. ಆದಾಗ್ಯೂ ಅಂತಹ ಉತ್ಪನ್ನಗಳನ್ನು ಅರ್ಹ ಮಾನವ ಅಧಿಕಾರಿಯಿಂದ ಪರಿಶೀಲನೆಗೊಳಪಡಬೇಕಾಗಿದೆ ಎಂದು ನೂತನ ನೀತಿಯಲ್ಲಿ ತಿಳಿಸಲಾಗಿದೆ. ಗೌಪ್ಯ ಹಾಗೂ ವೈಯಕ್ತಿಕ ಪ್ರಕರಣಗಳ ದತ್ತಾಂಶವನ್ನು ಸಾರ್ವಜನಿಕ ಕೃತಕ ಬುದ್ದಿಮತ್ತೆಯ ಟೂಲ್ಸ್‌ಗಳಲ್ಲಿ ದಾಖಲಿಸುವುದನ್ನು ನಿಷೇಧಿಸಲಾಗಿದೆ. ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ರಚಿಸಲಾದ ಕಂಟೆಂಟ್ ಒಮ್ಮೆ ಅಂಗೀಕರಿಸಲ್ಪಟ್ಟ ಬಳಿಕ ಅದು ಸೃಷ್ಟಿಸಿದ ವ್ಯಕ್ತಿಯ ಹೊಣೆಗಾರಿಕೆಯಾಗಿರುತ್ತದೆ. ಯಾವುದೇ ತಪ್ಪು ಅಥವಾ ದುರ್ನಡತೆಯಿಂದ ರಕ್ಷಣೆ ಪಡೆಯಲು ಎಐ ಬಳಕೆಯನ್ನು ಉಲ್ಲೇಖಿಸಲಾಗದು ಎಂದು ನೂತನ ನೀತಿಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 5 Apr 2026 9:10 pm

ಉಳ್ಳಾಲ| ನೂರೆ ಅಜ್ಮೀರ್ ಐದನೇ ವಾರ್ಷಿಕದ ಮಹಾ ಸಂಗಮ

ಉಳ್ಳಾಲ: ನೂರೆ ಅಜ್ಮೀರ್ ಇದರ ಐದನೇ ವಾರ್ಷಿಕದ ಐತಿಹಾಸಿಕ ಮಹಾ ಸಂಗಮ ಕಾರ್ಯಕ್ರಮ ಉಳ್ಳಾಲ ಹಝ್ರತ್ ಕಾಲೇಜು ಮೈದಾನದಲ್ಲಿ ನಡೆಯಿತು. ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವಿಧ ಧಾರ್ಮಿಕ ಕೇಂದ್ರಗಳ ಜೊತೆ ಸೌಹಾರ್ದ ಸಾಮರಸ್ಯ ಇರುವ ಈ ಉಳ್ಳಾಲ ಅಭಿವೃದ್ಧಿ ಆಗಬೇಕು.ಇದು ನಮ್ಮ ಯೋಜನೆ ಆಗಬೇಕು. ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ನಾವು ಮಾಡಬೇಕು ಎಂದು ಕರೆ ನೀಡಿದರು. ಶೈಖುನಾ ಇರ್ಶಾದ್ ದಾರಿಮಿ ಮಿತ್ತ ಬೈಲ್ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಶುಭಹಾರೈಸಿದರು. ವಲಿಯುದ್ದೀನ್ ಫೈಝಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಫಾರೂಕ್ ಉಳ್ಳಾಲ್, ಶರೀಫ್ ಹಾಜಿ ವೈಟ್ ಸ್ಟೋನ್, ಉಳ್ಳಾಲ ದರ್ಗಾ ಮಾಜೀ ಅಧ್ಯಕ್ಷ ಅಬ್ದುಲ್ ರಶೀದ್ , ಮುಸ್ತಫಾ ಅಬ್ದುಲ್ಲಾ, ಲತೀಫ್ ಗುರುಪುರ, ನಾಝಿಮ್ ಮುಕ್ಕಚೇರಿ,ಎಂ ಎಚ್ ಮೊಯ್ದಿನ್ ಹಾಜಿ, ಆಸಿಫ್ ಅಬ್ದುಲ್ಲಾ,ಅಬ್ದುಲ್ ರಹ್ಮಾನ್ ಫ್ಲವರ್, ಫಕೀರಬ್ಬ ಮಾಸ್ಟರ್, ಕೆ.ಎಸ್.ಮೊಯ್ದಿನ್, ಹಮೀದ್ ಕಣ್ಣೂರು, ಅಶ್ರಫ್ ಮುಕ್ಕಚೇರಿ, ಯು.ಟಿ.ಫರೀದ್, ಅಬ್ದುಲ್ ರಹ್ಮಾನ್ ಅದ್ದಾಮ, ಮೊಯ್ಯದ್ದೀನ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ಇಕ್ಬಾಲ್ ಬಾಳಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 5 Apr 2026 9:07 pm

Kalaburagi | ಧರ್ಮಗಳಿಗಿಂತ ಮನುಷ್ಯತ್ವವೇ ಶ್ರೇಷ್ಠ : ಗುರುದ್ವಾರದ ದೀಪ್ ಸಿಂಗ್ ಗ್ರಂಥಿ

ಈಸ್ಟರ್, ಈದ್ ಮಿಲಾಪ್ ಕಾರ್ಯಕ್ರಮ

ವಾರ್ತಾ ಭಾರತಿ 5 Apr 2026 9:04 pm

ಹಿರಿಯ ಪತ್ರಕರ್ತ ಚೆಲುವರಾಜ ಪೆರಂಪಳ್ಳಿ ನಿಧನ

ಉಡುಪಿ, ಎ.5: ಹಿರಿಯ ಪತ್ರಕರ್ತ ಚೆಲುವರಾಜ ಪೆರಂಪಳ್ಳಿ(69) ಸ್ವಗೃಹದಲ್ಲಿ ಅಸೌಖ್ಯದಿಂದ ಎ.5ರಂದು ನಿಧನರಾದರು. ಪೆರಂಪಳ್ಳಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ, ಯುವಕ ಮಂಡಲದ ಗೌರವಾಧ್ಯಕ್ಷ, ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರದ ಟ್ರಸ್ಟಿಯಾಗಿದ್ದ ಇವರು, ತರಂಗ ವಾರಪತ್ರಿಕೆಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ನಾಟಕ ರಚನೆಕಾರರು, ಸಾಹಿತಿ ಹಾಗೂ ಊರಿನ ಎಲ್ಲ ದೇವಸ್ಥಾನ ಮತ್ತು ದೈವಸ್ಥಾನಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಆದಿಉಡುಪಿಯ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದಶ್ರೀಯ ಉಪಾಧ್ಯಕ್ಷ ಮತ್ತು ವಕ್ತಾರರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ವಾರ್ತಾ ಭಾರತಿ 5 Apr 2026 9:02 pm

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಮೂವರು ಆರೋಪಿಗಳ ಬಂಧನ

ಅಮಾಸೆಬೈಲು, ಎ.5: ಬೆಂಗಾವಲು ಕಾರಿನೊಂದಿಗೆ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮಂದಿಯನ್ನ್ನು ಅಮಾಸೆಬೈಲು ಪೊಲೀಸರು ಎ.5ರಂದು ಬೆಳಗಿನ ಜಾವಾ ಹೊಸಂಗಡಿ ಚೆಕ್‌ ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ. ಬೆಳಗಾಂ ಜಿಲ್ಲೆಯ ರಾಮದುರ್ಗಾದ ಮುಸ್ತಾಕ್ ಹುಸೇನ್(29), ಸಲೀಂ ಹುಸೇನ್ ಸಾಬ್ ನದಾಫ್(33), ಕಂಡ್ಲೂರಿನ ನದೀಂ ಅಬ್ದುಲ್ ಖಾದರ್(34) ಬಂಧಿತ ಆರೋಪಿಗಳು. ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ತಡೆದು ತಾಪಸಣೆ ಮಾಡಿ ದಾಗ ಮೂರು ಎತ್ತು ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಇದರಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ ಮೂರು ಎತ್ತುಗಳನ್ನು, 4ಲಕ್ಷ ರೂ. ಮೌಲ್ಯದ ವಾಹನ ಮತ್ತು ಬೆಂಗಾವಲಾಗಿದ್ದ 5ಲಕ್ಷ ರೂ. ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಕಾರಿನಲ್ಲಿದ್ದ ಇಬ್ಬರು ಇಳಿದು ಓಡಿ ಹೋಗಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಾರ್ತಾ ಭಾರತಿ 5 Apr 2026 9:00 pm

ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಹಿರಿಯಡ್ಕ, ಎ.5: ಬೆಂಕಿ ನಂದಿಸಲು ಹೋದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಎ.4ರಂದು ಸಂಜೆ ವೇಳೆ ಪೆರ್ಡೂರು ಗ್ರಾಮದ ಪೆಳಜೆಕಟ್ಟ ಎಂಬಲ್ಲಿ ನಡೆದಿದೆ. ಮೃತರನ್ನು ಪೆಳಜೆಕಟ್ಟ ನಿವಾಸಿ ಜ್ಞಾನೇಶ್ ಹೆಗ್ಡೆ (58) ಎಂದು ಗುರುತಿಸಲಾಗಿದೆ. ಮನೆ ಸಮೀಪದ ಕಾಡಿಗೆ ಬೆಂಕಿ ಬಿದ್ದಿದ್ದು ಅದನ್ನು ನಂದಿಸಲು ಜ್ಞಾನೇಶ್ ನೀರು ತೆಗೆದುಕೊಂಡು ಹೋಗಿದ್ದರು. ಅಲ್ಲಿ ಬೆಂಕಿ ನಂದಿಸುವ ವೇಳೆ ಅವರು ಕುಸಿದು ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Apr 2026 8:58 pm

ಫೋಟೋಗ್ರಾಫರ್ ಆತ್ಮಹತ್ಯೆ

ಕೋಟ, ಎ.5: ಛಾಯಾಚಿತ್ರಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.4ರಂದು ರಾತ್ರಿ ಮೂಡಹಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮೂಡಹಡು ನಿವಾಸಿ ಗಣೇಶ ಮೆಂಡನ್(38) ಎಂದು ಗುರುತಿಸಲಾಗಿದೆ. ಪೋಟೋಗ್ರಾಫರ್ ಆಗಿರುವ ಇವರು, ಕೊಮೆ ಬೀಚ್‌ಗೆ ತೆರಳಿ ಅಲ್ಲಿಂದ ಶೂಟ್ ಮುಗಿಸಿ ರಾತ್ರಿ ಮನೆಗೆ ಬಂದಿದ್ದರು. ವೈಯಕ್ತಿಕ ಕಾರಣದಿಂದ ಮನನೊಂದ ಅವರು ಮನೆಯ ಹಾಲ್‌ನಲ್ಲಿ ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Apr 2026 8:57 pm

‘ರಜಾದೊಂದಿಗೆ ಮಜಾ’ ಬೇಸಿಗೆ ಶಿಬಿರ ಉದ್ಘಾಟನೆ

ಮುಲ್ಕಿ, ಎ.5: ಮುಲ್ಕಿ ಶ್ರೀನಾರಾಯಣ ಗುರು ವಿದ್ಯಾಸಂಸ್ಥೆ ಮತ್ತು ಪಡುಬಿದ್ರೆ ಓಂಕಾರ ಕಲಾಸಂಗಮ ಸಹಯೋಗ ದೊಂದಿಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ‘ರಜಾದೊಂದಿಗೆ ಮಜಾ’ 15ದಿನಗಳ ಬೇಸಿಗೆ ಶಿಬಿರ ರವಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಇಂತಹ ಶಿಬಿರಗಳು ನಡೆಯಬೇಕು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ, ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಹರೀಂದ್ರ ಸುವರ್ಣ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಓಂಕಾರ ಕಲಾಸಂಗಮದ ನಿರ್ದೇಶಕಿ ಗೀತಾ ಅರುಣ್, ಮಕ್ಕಳ ಬೆಳವಣಿಗೆಗೆ ಮಾರ್ಗದರ್ಶನ ನೀಡಿದರು. ಶಾಲಾ ಆಡಳಿತಾಧಿಕಾರಿ ಮಂಜುಳಾ ಕೆ.ವಿ. ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಯತೀಶ್ ಅಮೀನ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಥ್ವಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಶಿಕ್ಷಕಿ ಸಾವಿತ್ರಿ ವಂದಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ, ರಂಗಭೂಮಿ ಕಲಾವಿದ ರಾಮಾಂಜಿ ನಮ್ಮಭೂಮಿ ಮಕ್ಕಳ ಕೈಗೆ ಪುಸ್ತಕ ನೀಡಿ, ಮೊಬೈಲ್ ಬಿಡಿ ಎಂಬ ಸಂದೇಶದೊಂದಿಗೆ, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ವಾರ್ತಾ ಭಾರತಿ 5 Apr 2026 8:55 pm

ವಿಜಯನಗರ | ಡಾ.ಬಾಬು ಜಗಜೀವನ ರಾಂ ಜಯಂತಿ ಸರಳ ಆಚರಣೆ

ವಿಜಯನಗರ/ಹೊಸಪೇಟೆ : ಹಸಿರು ಕ್ರಾಂತಿಯ ಹರಿಕಾರರು ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರಾದ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿಯನ್ನು ವಿಜಯನಗರ ಜಿಲ್ಲಾಡಳಿತ ಭಾನುವಾರ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಿತು. ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಮೀಪ ಇರುವ ಡಾ. ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಡಾ. ಬಾಬು ಜಗಜೀವನ ರಾಂ ಅವರು ಸಾಮಾಜಿಕ ಸಮಾನತೆ, ದಲಿತರ ಹಕ್ಕುಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳು ದೇಶಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಅವರ ಜೀವನ ಸಂದೇಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಶೋಷಿತ ವರ್ಗಗಳ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಹಸಿರು ಕ್ರಾಂತಿಯಲ್ಲಿ ಅವರ ಪಾತ್ರವು ಭಾರತದ ಕೃಷಿ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ. ಎ. ಕಾಳೆ, ತಹಶೀಲ್ದಾರ್ ಶೃತಿ ಎಂ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಆಲಂ ಭಾಷಾ, ನಗರಸಭೆ ಪೌರಾಯುಕ್ತ ಶಿವಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಜಿಲ್ಲಾಡಳಿತದ ಈ ಸರಳ ಆಚರಣೆ ಡಾ. ಬಾಬು ಜಗಜೀವನ ರಾಂ ಅವರ ಆದರ್ಶಗಳನ್ನು ನೆನಪಿಸುವುದರ ಜೊತೆಗೆ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಬಲಪಡಿಸುವ 

ವಾರ್ತಾ ಭಾರತಿ 5 Apr 2026 8:55 pm

Ballari | ಜಗಜೀವನ ರಾಮ್ ಸಾಧನೆಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಪ್ರೊ.ಎಂ.ಮುನಿರಾಜು ಕರೆ

ಬಳ್ಳಾರಿ : ವರ್ಣವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಜೀವನಪರ್ಯಂತ ಹೋರಾಟ ನಡೆಸಿದ ಮಹಾನ್ ನಾಯಕ ಡಾ. ಬಾಬು ಜಗಜೀವನ ರಾಮ್ ಅವರ ಸಾಧನೆಗಳು ಇಂದಿನ ಪೀಳಿಗೆಗೆ ದಿಕ್ಕು ತೋರಿಸುವಂತಿವೆ. ವಿದ್ಯಾರ್ಥಿಗಳು ಅವರ ಜೀವನ ಮತ್ತು ಸಾಧನೆಗಳ ಕುರಿತು ಆಳವಾದ ಸಂಶೋಧನೆ ನಡೆಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಮುನಿರಾಜು ಕರೆ ನೀಡಿದರು. ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ, ಡಾ. ಬಾಬು ಜಗಜೀವನ ರಾಮ್ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಪಿ.ಎಚ್‌.ಡಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಶೋಧನಾ ವಿಧಾನ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜಗಜೀವನ ರಾಮ್ ಅವರ ಸಾಮಾಜಿಕ ಹೋರಾಟ, ಸಮಾನತೆಗಾಗಿ ನಡೆಸಿದ ಚಳವಳಿಗಳು ಹಾಗೂ ಆಡಳಿತಾತ್ಮಕ ಸಾಧನೆಗಳ ಕುರಿತು ಪ್ರಬಂಧಗಳನ್ನು ರಚಿಸುವಂತೆ ಸಲಹೆ ನೀಡಿದರು. ಜಾತಿ ಪದ್ಧತಿ ನಿರ್ಮೂಲನೆಗಾಗಿ ಜಗಜೀವನ ರಾಮ್ ಪೀಠವು ಹತ್ತು ಹಳ್ಳಿಗಳನ್ನು ದತ್ತು ಪಡೆದು ಸಾಮಾಜಿಕ ಬದಲಾವಣೆ ತರಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ್ ಜಿ ಮಾತನಾಡಿ, ಡಾ. ಬಾಬು ಜಗಜೀವನ ರಾಮ್ ಅವರು ಬಾಲ್ಯದಲ್ಲಿಯೇ ಅಸ್ಪೃಶ್ಯತೆ ವಿರುದ್ಧ ಹೋರಾಟ ಆರಂಭಿಸಿದ್ದರು ಎಂದು ತಿಳಿಸಿದರು. ಕಾರ್ಮಿಕ ಕಲ್ಯಾಣ, ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆ ಮಹತ್ವದ್ದಾಗಿದೆ ಎಂದರು. “ಯಾರೂ ಹಸಿವಿನಿಂದ ಸಾಯಬಾರದು” ಎಂಬ ಅವರ ಘೋಷಣೆ ಸಾಮಾಜಿಕ ನ್ಯಾಯದ ಪ್ರತಿಬಿಂಬವಾಗಿತ್ತು ಎಂದು ಹೇಳಿದರು. ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ ಮಾತನಾಡಿ, 2016ರಲ್ಲಿ ಸ್ಥಾಪಿತವಾದ ಜಗಜೀವನ ರಾಮ್ ಅಧ್ಯಯನ ಪೀಠಕ್ಕೆ ನೀಡಿರುವ ಅನುದಾನವನ್ನು ಸಮರ್ಥವಾಗಿ ಬಳಸಿ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು ಎಂದು ಸೂಚಿಸಿದರು. ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ತಿಪ್ಪೇಸ್ವಾಮಿ ಎಚ್ ಅವರು ಮಾತನಾಡಿ, ಕೃಷಿ ಸಚಿವರಾಗಿ ಡಾ. ಬಾಬು ಜಗಜೀವನ ರಾಮ್ ಅವರು ರೈತರಿಗೆ ಸುಧಾರಿತ ಬೀಜ ಮತ್ತು ತಳಿಗಳನ್ನು ಪರಿಚಯಿಸಿ ಆಹಾರ ಉತ್ಪಾದನೆ ಹೆಚ್ಚಿಸಲು ಕಾರಣರಾಗಿದ್ದು, ಹಸಿರು ಕ್ರಾಂತಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡೀನರು, ವಿಭಾಗ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 5 Apr 2026 8:49 pm

ಹರ್ದೀಪ್ ಸಿಂಗ್ ಪುರಿ ಪುತ್ರಿ-ಎಪ್‌ಸ್ಟೀನ್ ನಂಟು ಆರೋಪದ ಪೋಸ್ಟ್ ಅಳಿಸಲು ಆದೇಶ: ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಸಾಮಾಜಿಕ ಹೋರಾಟಗಾರ

ರಾಯ್ಪುರ, ಎ.5: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪುತ್ರಿ ಹಿಮಾಯನಿ ಪುರಿಗೆ ಅಮೆರಿಕದ ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ನೊಂದಿಗೆ ನಂಟು ಆರೋಪಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ತೆಗೆದು ಹಾಕುವಂತೆ ಏಕ ಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ರಾಯ್ಪುರ ಮೂಲದ ಸಾಮಾಜಿಕ ಹೋರಾಟಗಾರ ಕುನಾಲ್ ಶುಕ್ಲಾ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಹಾಗೂ ರೇಣು ಭಟ್ನಗರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮುಂದಿನ ವಾರ ವಿಚಾರಣೆ ನಡೆಸಲಿದೆ. ತನ್ನ ಅರ್ಜಿಯಲ್ಲಿ ಶುಕ್ಲಾ ಅವರು ಮೂಲ ಆದೇಶವನ್ನು ‘‘ವಿಚಾರಣಾ ಪೂರ್ವ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ’’ ಎಂದು ವಿವರಿಸಿದ್ದಾರೆ. ಅವರು ತಾನು ಪ್ರಕಟಿಸಿದ ಮಾಹಿತಿ ಕಟ್ಟು ಕಥೆಯಲ್ಲ. ಬದಲಾಗಿ ಸಂಪೂರ್ಣವಾಗಿ ಶೇರು ಹಾಗೂ ವಿನಿಮಯ ಆಯೋಗ (ಎಸ್‌ಇಸಿ)ದ ಸಲ್ಲಿಕೆ, ಅಂತರ ರಾಷ್ಟ್ರೀಯ ತನಿಖಾ ವರದಿಗಳು ಹಾಗೂ ಅಧಿಕೃತವಾಗಿ ಬಿಡುಗಡೆ ಮಾಡಲಾದ ಸಾರ್ವಜನಿಕ ದಾಖಲೆಗಳು ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳಿಂದ ಪಡೆಯಲಾದ ಮಾಹಿತಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 5 Apr 2026 8:19 pm

ಹಾರ್ಮುಜ್ ಜಲಸಂಧಿ ತೆರೆಯಿರಿ; ಇಲ್ಲವಾದ್ರೆ ನಿಮಗೆ ನರಕ ತೋರಿಸುವೆ: ಇರಾನ್‌ಗೆ ಟ್ರಂಪ್ ಎಚ್ಚರಿಕೆ; ತೀರಾ ಅಸಭ್ಯ ಪದ ಬಳಕೆ

ಇರಾನ್ ಅಮೆರಿಕ ನಡುವಿನ ಸಮರ ಜೋರಾಗಿದ್ದು, ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಭೀಕರ ಪರಿಣಾಮ ಎದುರಿಸುತ್ತೀರಾ. ನಕರ ದರ್ಶನ ಮಾಡಿಸುವೆ ಎಂದು ಟ್ರಂಪ್‌ ಹೇಳಿದ್ದಾರೆ. ಇತ್ತ ಇರಾನ್ ಕೂಡ ತಿರುಗೇಟು ನೀಡಿದ್ದು, ಅಮೆರಿಕಕ್ಕೂ ನಾವು ನರಕದ ಬಾಗಿಲನ್ನು ತೆರೆಯುತ್ತೇವೆ ಎಂದು ಹೇಳಿದೆ. ಇನ್ನು ಟ್ರಂಪ್‌ ಅಸಭ್ಯ ಪದ ಬಳಕೆ ಮಾಡಿ ಎಚ್ಚರಿಸಿರುವುದು ಟೀಕೆಗೆ ಕಾರಣವಾಗಿದೆ.

ವಿಜಯ ಕರ್ನಾಟಕ 5 Apr 2026 8:13 pm

ಎ.10ರಂದು ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ

ಪಾಟ್ನಾ, ಎ. 5: ಬಿಹಾರದ ಮುಖ್ಯಮಂತ್ರಿ ಹಾಗೂ ಜನತಾ ದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ ಅವರು ಎಪ್ರಿಲ್ 10ರಂದು ರಾಜ್ಯ ಸಭೆಯ ಸದಸ್ಯರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರದ ಬಳಿಕ ಬಿಜೆಪಿಯ ಕೇಂದ್ರ ನಾಯಕತ್ವ, ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮಿತ್ರ ಪಕ್ಷಗಳು ಸಂಪುಟ ರಚನೆ ಕುರಿತು ಚರ್ಚೆ ನಡೆಸಲಿವೆ ಎಂದು ಬಿಹಾರ ಬಿಜೆಪಿ ನಾಯಕ ಸಂಜಯ್ ಸಾರಯೋಗಿ ರವಿವಾರ ಹೇಳಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಿರುವ ನಿತೀಶ್ ಕುಮಾರ್ ಅವರು ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಬಿಹಾರದ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ನಿತೀಶ್ ಕುಮಾರ್ ಮಾರ್ಚ್ 5ರ ಪತ್ರವೊಂದರಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಸಂಸತ್ತು ಹಾಗೂ ಬಿಹಾರ ವಿಧಾನ ಪರಿಷತ್‌ನಲ್ಲಿ ಸೇವೆ ಸಲ್ಲಿಸುವ ತಮ್ಮ ಬಲವಾದ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅವರು ಹೊಸ ಸರಕಾರಕ್ಕೆ ‘‘ಸಹಕಾರ ಹಾಗೂ ಮಾರ್ಗದರ್ಶನ’’ ಮುಂದುವರಿಸುವುದಾಗಿ ಭರವಸೆ ನೀಡಿದ್ದರು. ಅಭಿವೃದ್ಧಿ ಹೊಂದಿದ ಬಿಹಾರ ನಿರ್ಮಾಣದ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದ್ದರು. ನಿತೀಶ್ ಕುಮಾರ್ ಅವರ ನಡೆಯನ್ನು ಎನ್‌ಡಿಎ ಶ್ಲಾಘಿಸಿತ್ತು. ‘‘ಅದು ಅವರ ಸ್ವಂತ ನಿರ್ಧಾರ. ಅವರು ಒಂದು ಹುದ್ದೆಯ ಪ್ರಮಾಣ ವಚನ ಸ್ವೀಕರಿಸುವುದಾದರೆ, ಇನ್ನೊಂದು ಹುದ್ದೆಗೆ ರಾಜೀನಾಮೆ ನೀಡಬೇಕಾಗಿರುವುದು ಸಾಂವಿಧಾನಿಕ ವ್ಯವಸ್ಥೆಯಾಗಿದೆ’’ ಎಂದು ಬಿಹಾರದ ಉಪ ಮುಖ್ಯಮಂತ್ರಿ ವಿಜಯ್ ಸಿನ್ಹಾ ಹೇಳಿದ್ದರು.

ವಾರ್ತಾ ಭಾರತಿ 5 Apr 2026 8:10 pm

ಮಧ್ಯಪ್ರದೇಶ| ಪತ್ನಿಯನ್ನು ಹತ್ಯೆಗೈದು ಆಕೆಯ ಮೃತದೇಹದ ಜೊತೆ 2 ದಿನ ಕಳೆದ ಪತಿ

ಭೋಪಾಲ, ಎ. 5: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆಗೈದು ಆಕೆಯ ಮೃತದೇಹದೊಂದಿಗೆ ತಮ್ಮ ಮಕ್ಕಳ ಸಹಿತ ಎರಡು ದಿನಗಳನ್ನು ಕಳೆದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಖರಗೋನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು 38 ವರ್ಷದ ಜಗದೀಶ ದಬಾರ್ ಎಂದು ಗುರುತಿಸಲಾಗಿದೆ. ಈತ ತನ್ನ 25 ವರ್ಷ ವಯಸ್ಸಿನ ಎರಡನೇ ಪತ್ನಿ ರೀಮಾಬಾಯಿ, ಮೂರು ಹಾಗೂ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳೊಂದಿಗೆ ಇಲ್ಲಿನ ಹಳ್ಳಿಯಲ್ಲಿ ವಾಸಿಸುತ್ತಿದ್ದ. ದಂಪತಿ ಸಣ್ಣಪುಟ್ಟ ವಿಷಯಗಳ ಕುರಿತು ಜಗಳವಾಡುತ್ತಿದ್ದರು. ಆರೋಪಿ ಪತ್ನಿಗೆ ಆಗಾಗ ಥಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ಆಹಾರದ ಕುರಿತು ದಂಪತಿ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ಜಗದೀಶ್ ಕೋಪದ ಬರದಲ್ಲಿ ಕಟ್ಟಿಗೆ ತುಂಡಿನಿಂದ ರೀಮಾ ಬಾಯಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ರೀಮಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯನ್ನು ಹತ್ಯೆಗೈದರೂ ಜಗದೀಶ್ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಬದಲಾಗಿ ಆತ ಪತ್ನಿಯ ಮೃತದೇಹವಿದ್ದ ಮಂಚದಲ್ಲಿ ತನ್ನ ಮಕ್ಕಳೊಂದಿಗೆ ಎರಡು ದಿನಗಳ ಕಾಲ ಮಲಗಿದ್ದಾನೆ. ಆರೋಪಿ ಜಗದೀಶ್‌ನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಮೃತದೇಹವನ್ನು ವಶಕ್ಕೆ ತೆಗೆದುಕೊಂಡಿದೆ ಹಾಗೂ ಜಗದೀಶ್‌ನನ್ನು ಬಂಧಿಸಿದೆ. ಜಗದೀಶ್ ಈ ಹಿಂದೆ ತನ್ನ ಮೊದಲ ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ತ್ಯಜಿಸಿದ್ದ. ಅನಂತರ ರೀಮಾ ಬಾಯಿಯನ್ನು ವಿವಾಹವಾಗಿದ್ದ. ಜಗದೀಶ್ ಎರಡನೇ ವಿವಾಹದ ಬಳಿಕ ಮೊದಲ ಪತ್ನಿ ಆತನನ್ನು ತ್ಯಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು ಜೈಲಿಗೆ ಕಳುಹಿಸಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಗೆಹ್ಲೋಟ್ ಸೆಮ್ಲಿಯಾ ತಿಳಿಸಿದ್ದಾರೆ.

ವಾರ್ತಾ ಭಾರತಿ 5 Apr 2026 8:10 pm

ಲೋಕಸಭಾ ಸ್ಥಾನಗಳ ಸಂಖ್ಯೆ ಏರಿಕೆ ಪ್ರಸ್ತಾಪಕ್ಕೆ ಕಾಂಗ್ರೆಸ್‌ ವಿರೋಧ: ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ

ಹೊಸದಿಲ್ಲಿ, ಎ. 5: ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ವಿರೋಧಿಸಿರುವ ಕಾಂಗ್ರೆಸ್ ರವಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಈ ಕ್ರಮದಿಂದ ಜನಭರಿತ ರಾಜ್ಯಗಳು ಅಳತೆ ಮೀರಿ ಲಾಭ ಪಡೆಯುತ್ತವೆ ಎಂದು ಆರೋಪಿಸಿರುವ ಪಕ್ಷವು, ಇದು ‘‘ವೆಪನ್ ಆಫ್ ಮಾಸ್ ಡಿಸ್‌ಟ್ರ್ಯಾಕ್ಷನ್- ಜನರ ಗಮನ ಬೇರೆಡೆಗೆ ಸೆಳೆಯುವ ಅಸ್ತ್ರ’’ವಾಗಿದೆ ಎಂದು ಬಣ್ಣಿಸಿದೆ. ಸರಿಯಾದ ಸಮಾಲೋಚನೆಗಳನ್ನು ನಡೆಸದೆ ಹಾಗೂ ಅದರ ಪರಿಣಾಮಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಾ ಈ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿಯವರು ಉದ್ದೇಶಿಸಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದೆ. ‘‘ಜನರನ್ನು ವಂಚಿಸುವ ಉದ್ದೇಶದ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ತಂತ್ರವನ್ನು ಪ್ರಧಾನಿಯವರು ಎಂದಿನಂತೆ ಅನುಸರಿಸುತ್ತಿದ್ದಾರೆ. ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 50 ಶೇಕಡದಷ್ಟು ಮತ್ತು ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಕೂಡ 50 ಶೇಕಡದಷ್ಟು ಹೆಚ್ಚಿಸುವುದರಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘‘ಇದು ದೇಶದ ಜನರನ್ನು ವಂಚಿಸುವ ರೀತಿಯಾಗಿದೆ. ಇದರಲ್ಲಿ ಪ್ರಧಾನಿಯವರು ಪರಿಣತಿ ಪಡೆದಿದ್ದಾರೆ’’ ಎಂದು ಅವರು ಹೇಳಿದರು. ಇದರಿಂದ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅಂತರವು ಗಣನೀಯವಾಗಿ ಹೆಚ್ಚುತ್ತದೆ ಎಂದು ಅವರು ಬೆಟ್ಟು ಮಾಡಿದ್ದಾರೆ. ‘‘ಉದಾಹರಣೆಗೆ; ಈಗ ಲೋಕಸಭೆಯಲ್ಲಿ ಉತ್ತರಪ್ರದೇಶ ಮತ್ತು ಕೇರಳ ರಾಜ್ಯಗಳ ನಡುವಿನ ಅಂತರ 60. ಮೋದಿಯ ಪ್ರಸ್ತಾವವು ಅದನ್ನು 90ಕ್ಕೆ ಹೆಚ್ಚಿಸುತ್ತದೆ’’ ಎಂದು ಅವರು ತಿಳಿಸಿದರು. ‘‘ಅದೇ ರೀತಿ, ಉತ್ತರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಅಂತರವು ಈಗಿನ 41ರಿಂದ ಕನಿಷ್ಠ 61ಕ್ಕೆ ಏರುತ್ತದೆ’’ ಎಂದರು. ‘‘ಬೃಹತ್ ಮತ್ತು ಜನಭರಿತ ರಾಜ್ಯಗಳಿಗೆ ಲಾಭದಾಯಕವಾದ ಪ್ರಸ್ತಾವವೊಂದನ್ನು ಮೋದಿಯವರು ತಿರುಚಿ ಸಣ್ಣ ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ಆರೋಪಿಸಿದರು. ಈ ಪ್ರಸ್ತಾವವು ಪಂಜಾಬ್, ಹರ್ಯಾಣ ಮತ್ತು ಈಶಾನ್ಯ ಭಾರತದ ರಾಜ್ಯಗಳ ಪ್ರಭಾವವನ್ನು ಕಡಿಮೆಗೊಳಿಸುತ್ತದೆ ಎಂದು ರಮೇಶ್ ಹೇಳಿದರು.

ವಾರ್ತಾ ಭಾರತಿ 5 Apr 2026 8:09 pm

ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌: ಮಹಾವೀರ ಕಾಲೇಜಿನ ವಿಕ್ರೀತಾ ಆಯ್ಕೆ

ಮೂಡುಬಿದಿರೆ: ಮಹಾರಾಷ್ಟ್ರದ ಬಲ್ಹಾರಷ್‌ನಲ್ಲಿ ಎ. 3ರಿಂದ ಪ್ರಾರಂಭವಾಗಿರುವ 2025-26ನೇ ಸಾಲಿನ 19ನೇ ರಾಷ್ಟ್ರಮಟ್ಟದ ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ವಿಕ್ರೀತಾ ಆಯ್ಕೆಯಾಗಿದ್ದಾರೆ. ವಿಕ್ರೀತ ಅವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್ ರೈ ತರಬೇತಿ ನೀಡಿದ್ದಾರೆ‌.

ವಾರ್ತಾ ಭಾರತಿ 5 Apr 2026 8:04 pm

ಮತ್ತೊಮ್ಮೆ ಶೂನ್ಯ ಸಂಪಾದಿಸಿದ ಅಭಿಷೇಕ್ ಶರ್ಮಾ: ರೋಹಿತ್, ಸಂಜು ಅವರಿದ್ದ ಅನಪೇಕ್ಷಿತ ದಾಖಲೆ ಪಟ್ಟಿಗೆ ಸೇರ್ಪಡೆ

ಹೈದರಾಬಾದ್, ಎ.5: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ತನ್ನ ಕಳಪೆ ಫಾರ್ಮ್ ಮುಂದುವರಿಸಿದ್ದು, ಮತ್ತೊಮ್ಮೆ ಶೂನ್ಯ ಸಂಪಾದಿಸಿದರು. ಈ ಮೂಲಕ ಟಿ-20 ಕ್ರಿಕೆಟಿನ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸೊನ್ನೆ ಸುತ್ತಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾದರು. ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ರವಿವಾರ ನಡೆದ 2026ರ ಐಪಿಎಲ್ ಪಂದ್ಯದಲ್ಲಿ ಎರಡು ಎಸೆತಗಳನ್ನು ಎದುರಿಸಿದ್ದ ಅಭಿಷೇಕ್ ರನ್ ಖಾತೆ ತೆರೆಯುವ ಮೊದಲೇ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. 2026ರಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಆರನೇ ಬಾರಿ ಸೊನ್ನೆಗೆ ಔಟಾದರು. ಕ್ಯಾಲೆಂಡರ್ ವರ್ಷದಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ್ದ ರೋಹಿತ್ ಶರ್ಮಾ(2018ರಲ್ಲಿ ಆರು ಸೊನ್ನೆ)ಹಾಗೂ ಸಂಜು ಸ್ಯಾಮ್ಸನ್(2024ರಲ್ಲಿ ಆರು ಸೊನ್ನೆ)ಅವರಿದ್ದ ಪಟ್ಟಿಗೆ ಸೇರಿದರು. ಪ್ರಸಕ್ತ ಐಪಿಎಲ್‌ನಲ್ಲಿ ಅಭಿಷೇಕ್ ಮೂರು ಇನಿಂಗ್ಸ್‌ಗಳಲ್ಲಿ ಒಟ್ಟು 55 ರನ್ ಗಳಿಸಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಕೋಲ್ಕತಾ ತಂಡದ ವಿರುದ್ಧ 48 ರನ್ ಗಳಿಸಿದ್ದರು. ಅಗ್ರ ರ್ಯಾಂಕಿನ ಟಿ-20 ಬ್ಯಾಟರ್ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ರನ್‌ಗಾಗಿ ಪರದಾಡಿದ್ದರು. ಆಗ ಅವರು ಎಂಟು ಇನಿಂಗ್ಸ್‌ಗಳಲ್ಲಿ 17.62ರ ಸರಾಸರಿಯಲ್ಲಿ, 158ರ ಸ್ಟ್ರೈಕ್‌ರೇಟ್‌ನಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 141 ರನ್ ಗಳಿಸಿದ್ದರು. ಒಂದು ಅರ್ಧಶತಕವನ್ನು ಫೈನಲ್ ಪಂದ್ಯದಲ್ಲಿ ಗಳಿಸಿದ್ದರು. ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಸತತ ಮೂರು ಬಾರಿ ಸೊನ್ನೆಗೆ ಔಟಾಗಿದ್ದರು. ಅಭಿಷೇಕ್ ಈ ವರ್ಷ ಒಟ್ಟಾರೆ 16 ಟಿ-20 ಇನಿಂಗ್ಸ್‌ಗಳಲ್ಲಿ 25.20ರ ಸರಾಸರಿಯಲ್ಲಿ 195ರ ಸ್ಟ್ರೈಕ್‌ರೇಟ್‌ನಲ್ಲಿ ನಾಲ್ಕು ಅರ್ಧಶತಕಗಳ ಸಹಿತ ಒಟ್ಟು 378 ರನ್ ಗಳಿಸಿದ್ದರು. ಇದರಲ್ಲಿ 84 ಗರಿಷ್ಠ ಸ್ಕೋರಾಗಿದೆ.

ವಾರ್ತಾ ಭಾರತಿ 5 Apr 2026 8:03 pm

First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ

ದಶಕದ ಹಿಂದೆ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅವರು ದೆಹಲಿಯ ಹಜರತ್ ನಿಜಾಮುದ್ದೀನ್ (NZM) ರೈಲ್ವೆ ನಿಲ್ದಾಣದಿಂದ ಉದ್ಘಾಟಿಸಿದ್ದ 'ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು' ಇಂದು ಭಾನುವಾರ ಏಪ್ರಿಲ್ 5ಕ್ಕೆ 10 ವರ್ಷ ಪೂರೈಸಿದೆ. ಸದ್ಯ ಉತ್ತರ ರೈಲ್ವೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ರೈಲಿನ ಮಾರ್ಗ, ವೇಗ ಎಷ್ಟಿದೆ, ಇನ್ನಿತರ ವಿವರ ಇಲ್ಲಿದೆ.

ಒನ್ ಇ೦ಡಿಯ 5 Apr 2026 8:02 pm

Yadgir | ಡಾ.ಬಾಬು ಜಗಜೀವನರಾಂ ಸಾಮಾಜಿಕ ನ್ಯಾಯದ ಹರಿಕಾರ : ಡಿಸಿ ಹರ್ಷಲ್ ಭೋಯರ್

ಯಾದಗಿರಿ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅಪ್ರತಿಮ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೇಳಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಂ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಾಬು ಜಗಜೀವನರಾಮ್ ಅವರು ದೀರ್ಘಕಾಲದ ಸಂಸತ್ತು ಪಟುವಾಗಿ, ಕೇಂದ್ರ ಸರ್ಕಾರದ ಹಲವು ಕ್ಷೇತ್ರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವುದು ಅಪ್ರತಿಮ ಸಾಧನೆಯಾಗಿದೆ. ಸಾಮಾನ್ಯ ಜನರಿಂದ ಇದು ಸಾಧ್ಯವಿಲ್ಲ ಎಂದ ಅವರು ಕೃಷಿ, ರಕ್ಷಣಾ ಸಚಿವರಾಗಿ, ಉಪಪ್ರಧಾನಿಯಾಗಿ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. ಬಾಬು ಜಗಜೀವನರಾಂ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಅವಶ್ಯಕ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿಯಲ್ಲಿ ಪರಿಣಾಮಕಾರಿ ಕೊಡುಗೆ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಯರಗೋಳ ವಸತಿ ಪದವಿ ಕಾಲೇಜು ಉಪನ್ಯಾಸಕರಾದ ಶಿವಪ್ಪ ಹಣಮಂತ ಅವರು, ಡಾ. ಬಾಬು ಜಗಜೀವನರಾಂ ಅವರು ಮಹಾನ್ ನಾಯಕರಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರ, ಅಸ್ಪೃಶ್ಯತೆ ವಿರುದ್ಧದ ಹೋರಾಟಗಾರ, ಮುತ್ಸದ್ದಿ ರಾಜಕಾರಣಿ, ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿ ಹರಿಕಾರ, ನವಭಾರತ ನಿರ್ಮಾಣದ ಹರಿಕಾರ, ಎಂದೇ ಖ್ಯಾತಿ ಪಡೆದಿದ್ದಾರೆ. 1961 ರಲ್ಲಿ ಬರ ದಂತಹ ಕಷ್ಟದ ಸಂದರ್ಭದಲ್ಲಿ ಭಾರತದ ಆಹಾರ ಕೊರತೆ ನೀಗಿಸಿದರು. ಪಾಕ್ ಜೊತೆ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಮಿಕ ಸಚಿವರಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಕಾನೂನು ರೂಪಿಸಿದರು. ಕನಿಷ್ಟ ಕೂಲಿ ಗೊತ್ತುವಳಿ, ಭವಿಷ್ಯ ನಿಧಿ, ಇಎಸ್ಐ, ಶಿಷ್ಯ ವೇತನ, ವಿವಿಧ ಯೋಜನೆ ಜಾರಿಗೆ ತಂದರು. ಕಾರ್ಮಿಕರ ನ್ಯಾಯ ಮಂಡಳಿ ಅಸ್ತಿತ್ವಕ್ಕೆ ತಂದರು. ಹಲವು ಅಂಚೆ ಕಚೇರಿಗಳ ಸ್ಥಾಪನೆ, ವಾಯು, ನೌಕಾದಳ ಸೈನಿಕರ ವೇತನ ಹೆಚ್ಚಿಸಿದರು. ಸಾಮಾಜಿಕ ಸಮಾನತೆ,ಹಸಿರು ಕ್ರಾಂತಿ ಹರಿಕಾರರಾಗಿ, ಆಧುನಿಕ ಭಾರತದ ನಿರ್ಮಾತೃ ಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಡಾ. ಬಾಬುಜಗಜೀವನರಾಮ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಶಿರಗೋಳ ಅವರು, ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಅಂಬೇಡ್ಕರರಂತೆ ಚಿಂತಕರಾಗಬೇಕು. ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು, ಡಾ. ಬಾಬು ಜಗಜೀವನ್ ರಾಮ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಪಾಲಕರು ತಮ್ಮ ಮಕ್ಕಳು ಹಾಗೂ ಯುವ ಜನಾಂಗದಲ್ಲಿ ಡಾ. ಬಾಬು ಜಗಜೀವನರಾಂ ಅವರ ಆದರ್ಶಗಳ ಬಗ್ಗೆ ತಿಳಿಹೇಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕುಮುಲಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಸ್ವಾಗತಿಸಿದರು.ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಇಂದು ಬೆಳಿಗ್ಗೆ ನಗರದ ಜಗಜೀವನರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ, ಸಮಾಜದ ಮುಖಂಡರಾದ ಮರಿಯಪ್ಪ ಸೇರಿದಂತೆ ಇತರರು ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು.

ವಾರ್ತಾ ಭಾರತಿ 5 Apr 2026 7:59 pm

ರಕ್ತದಾನದಿಂದ ಮಾನವೀಯ ಸೇವೆಗೆ ಪ್ರೇರಣೆ: ರೆಡ್‌ಕ್ರಾಸ್ ನಿರ್ದೇಶಕ ಪುಷ್ಪರಾಜ್ ಜೈನ್

ಮಂಗಳೂರು: ಪ್ರಾಣಾಪಾಯದಲ್ಲಿರುವ ವ್ಯಕ್ತಿಯ ಜೀವ ಉಳಿಸಲು ನೆರವಾಗುವ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲೇ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಿರುವುದು ಭವಿಷ್ಯದಲ್ಲಿ ಇನ್ನಷ್ಟು ಮಾನವೀಯ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಲಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ಪುಷ್ಪರಾಜ್ ಜೈನ್ ಹೇಳಿದ್ದಾರೆ. ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ -ಡಾ.ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಶನಿವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಭಂಡಾರಿ ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ 2ನೇ ಬಾರಿ ರಕ್ತದಾನ ಶಿಬಿರ ಆಯೋಜಿಸಿದ್ದು, ವಿದ್ಯಾರ್ಥಿಗಳು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ’ ಎಂದರು. ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ನಿರ್ದೇಶಕ ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್ಚಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ದೇವಿಪ್ರಸಾದ್, ಜ್ಯೋತಿ ಪ್ರಿಯಾ, ಯೂತ್ ರೆಡ್‌ಕ್ರಾಸ್ ಸಂಯೋಜಕರಾದ ಡಾ.ಅಶೋಕ್,ಸಿ,ಎಚ್., ಡಾ.ಜ್ಯೋತಿ. ಪಿ., ಮೈತ್ರಿ.ಬಿ., ವಿದ್ಯಾರ್ಥಿ ಸಂಯೋಜಕರಾದ ಕೌಶಿಕ್, ತೃಷಾ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮನಿಷಾ ಕಾರ್ಯಕ್ರಮ ನಿರೂಪಿಸಿದರು. 

ವಾರ್ತಾ ಭಾರತಿ 5 Apr 2026 7:58 pm

ಹೆಬ್ರಿಯಲ್ಲಿ ಆನೆ ದಾಳಿ: ಬಾಳೆ, ತೆಂಗಿನ ತೋಟಗಳಿಗೆ ಹಾನಿ

ಹೆಬ್ರಿ, ಎ.5: ಹೆಬ್ರಿ ತಾಲೂಕಿನಲ್ಲಿ ಮತ್ತೆ ಆನೆ ಹೆಜ್ಜೆ ಗುರುತು ಕಂಡು ಬಂದಿದ್ದು, ನಾಡ್ಪಾಲು ಹಾಗೂ ಪೀತಬೈಲು ಎಂಬಲ್ಲಿನ ತೋಟಗಳಿಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಸಂಪೂರ್ಣ ಹಾನಿಗೊಳಿಸಿರುವ ಬಗ್ಗೆ ವರದಿಯಾಗಿದೆ. ನಾಡ್ಪಾಲು ಗ್ರಾಮದ ತೆಂಗುಮಾರ್ ಲಕ್ಷ್ಮಣ ಗೌಡ, ಆನಂದ ಗೌಡ ಹಾಗೂ ಪೀತಬೈಲು ಜಯಂತ ಗೌಡ ಎಂಬವರ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಮರಗಳು, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳು ನಾಶ ಮಾಡಿವೆ. ರಾತ್ರೋರಾತ್ರಿ ಕಬ್ಬಿನಾಲೆ ಭಾಗಗಳಲ್ಲಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿರುವುದರಿಂದ ಮಲೆನಾಡು ಪ್ರದೇಶದ ಕುಟುಂಬಗಳು ತೊಂದರೆಗೆ ಒಳಗಾಗಿವೆ. ರಾತ್ರಿ ಹೊತ್ತಿನಲ್ಲಿ ಸಂಚರಿಸುವುದಕ್ಕೂ ಜನರು ಭೀತಿ ಮತ್ತು ಆತಂಕ ಪಡುತಿದ್ದಾರೆ. ಕೆಲವು ವರ್ಷಗಳ ಹಿಂದೆ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್‌ಎಫ್ ಗುಂಡಿಗೆ ಬಲಿಯಾದ ಬಳಿಕ ಪರಿಸ್ಥಿತಿ ಸ್ವಲ್ಪ ಶಾಂತವಾಗಿದ್ದರೂ, ಇದೀಗ ಮತ್ತೆ ಆನೆ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಸುಮಾರು ಹನ್ನೆರಡು ವರ್ಷದ ಸಣ್ಣ ಆನೆ ಈ ದಾಳಿ ನಡೆಸಿದೆ ಎಂದು ಅಂದಾಜಿಸಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಹಲಸು ಮತ್ತು ಮಾವಿನ ಋತುವಿನ ವೇಳೆ ಆನೆಗಳು ಹೆಚ್ಚು ಸಂಚರಿಸುತ್ತಿವೆ. ಕಬ್ಬಿನಾಲೆ ಪ್ರದೇಶದ ವಾಲಿಕುಂಜ ಗುಡ್ಡದ ಮೇಲ್ಭಾಗದಲ್ಲಿ ಈ ಆನೆ ಕಾಣಿಸಿಕೊಂಡಿದ್ದು, ಗೇಮ್ ರೋಡ್ ಮೂಲಕ ಮಲೆನಾಡಿನ ತಪ್ಪಲು ಪ್ರದೇಶಗಳಾದ ಕಬ್ಬಿನಾಲೆ, ನಾಡ್ಪಾಲು, ಚಾರ, ವರಂಗ, ಅಂಡಾರು ಹಾಗೂ ಕಾರ್ಕಳ ತಾಲೂಕಿನ ಶಿರ್ಲಾಲು, ಕೆರುವಾಶೆ ಭಾಗಗಳಲ್ಲಿ ಸಂಚರಿಸುತ್ತಿದೆ.

ವಾರ್ತಾ ಭಾರತಿ 5 Apr 2026 7:56 pm

ಬಾಬು ಜಗಜೀವನ್ ರಾಮ್‌ರ ಉದಾತ್ತ ಗುಣಗಳು ಎಲ್ಲರಿಗೂ ಮಾದರಿ: ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಡಾ.ಬಾಬು ಜಗಜೀವನ್ ರಾಮ್ ಅವರನ್ನು ನಾವು ಹಸಿರು ಕ್ರಾಂತಿಯ ಹರಿಕಾರ ಎಂದು ಸ್ಮರಿಸುತ್ತೇವೆ. ಇಂತಹ ಮಹಾನ್ ನಾಯಕರ ಉದಾತ್ತ ಗುಣಗಳು ನಮಗೆಲ್ಲರಿಗೂ ಮಾದರಿಯಾಗಿದ್ದು ನಾವು ಕೂಡ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ ನಲ್ಲಿ ರವಿವಾರ ಆಯೋಜಿಸಲಾದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು. ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ದೇಶದ ರಕ್ಷಣಾ ಮಂತ್ರಿಯಾಗಿ ಸೈನಿಕರ ಬೆಂಬಲಕ್ಕೆ ನಿಂತು ಸೇನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಮತ್ತು ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ.ಅಂಬೇಡ್ಕರ್ ಅವರಂತೆಯೆ ಬಾಬೂಜಿ ಅವರ ಜೀವನ ಮತ್ತು ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಯಾಗಿದೆ. ದೇಶದ ಏಳಿಗೆ ಮತ್ತು ನಾಗರಿಕರ ಕಲ್ಯಾಣಕ್ಕಾಗಿ ಶ್ರಮಿಸಿದ ಇಂತಹ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ದೇಶದ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ಸಮತಾ ದಿವಸ್ ಎಂದು ಆಚರಿಸುತ್ತೇವೆ. ಜಾತಿ-ಮತ, ಮೇಲು-ಕೀಳುಗಳ ತಾರತಮ್ಯದಿಂದ ಮುಕ್ತವಾದ ಸಮಾನತೆಯ ಸಮಾಜ ವನ್ನು ನಿರ್ಮಿಸಲು ಬಾಬೂಜಿಯವರು ಅವಿರತ ಶ್ರಮಿಸಿದ್ದಾರೆ. ದಲಿತರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಕೈಗೊಂಡ ಸಂಘಟನಾ ತ್ಮಕ ಕಾರ್ಯಗಳು ಇಂದಿಗೂ ಪ್ರಸ್ತುತ ಎಂದರು. ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ದಯಾನಂದ ಡಿ.ಕಿದಿಯೂರು ವಿಶೇಷ ಉಪನ್ಯಾಸ ನೀಡಿ, ಬಿಹಾರದ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಬಾಬು ಜಗಜೀವನ್ ರಾಮ್ ಅವರ ಜೀವನವೇ ಒಂದು ಆದರ್ಶ. ಅವರು ನೇರ ನಡೆ-ನುಡಿಯ ಆದರೆ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿ ದ್ದರು. ಬಾಬೂಜಿ ಅತ್ಯಪೂರ್ವ ಸಂಘಟನಾ ಚತುರ. ಅತಿ ಕಿರಿಯ ವಯಸ್ಸಿನಿಂದಲೇ ನಾಯಕತ್ವ ಗುಣವನ್ನು ಬೆಳೆಸಿ ಕೊಂಡ ಅವರು ದೇಶದಾದ್ಯಂತದ ದಲಿತರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ಹೋರಾಡಿದವರು ಎಂದು ತಿಳಿಸಿದರು. ಇಂದಿನ ಯುವ ಜನಾಂಗವು ಬಾಬೂಜಿಯವರ ಜೀವನದಿಂದ ಮಾರ್ಗದರ್ಶನ ಪಡೆದು ತಮಗೆ ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ‘ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಉನ್ನತಿ ಸಾಧ್ಯ ಎನ್ನುವುದನ್ನು ಅವರು ಸಾಧಿಸಿ ತೋರಿಸಿದ್ದಾರೆ. ನಾವು ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬದುಕದೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ದಿಯನ್ನು ಗಮನದಲ್ಲಿಟ್ಟು ಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವುದನ್ನು ಕಲಿಸಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಇಂತಹ ಮಹಾನ್ ನಾಯಕರ ಗುಣಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಂಡು ಸಮಾನತೆಯ ಸಮಾಜವನ್ನು ನಿರ್ಮಿಸಲು ಪಣತೊಡಬೇಕು ’ -ಅಬೀದ್ ಗದ್ಯಾಳ್, ಅಪರ ಜಿಲ್ಲಾಧಿಕಾರಿ, ಉಡುಪಿ

ವಾರ್ತಾ ಭಾರತಿ 5 Apr 2026 7:54 pm

Kalaburagi | ಡಾ.ಬಾಬು ಜಗಜೀವನರಾಂ ದೇಶದ ನಿಜವಾದ ಅನ್ನದಾತ : ಶಾಸಕ ಅಲ್ಲಮಪ್ರಭು ಪಾಟೀಲ್‌

ಕಲಬುರಗಿ : ದೇಶವು ಆಹಾರದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಹಸಿವನ್ನು ನೀಗಿಸಿದ ಮಹಾನ್ ನಾಯಕರು ಡಾ. ಬಾಬು ಜಗಜೀವನರಾಂ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು. ನಗರದ ಇಂದಿರಾ ಸ್ಮಾರಕ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಹಸಿವಿನಿಂದ ಬಳಲುತ್ತಿದ್ದ ಕಾಲದಲ್ಲಿ ಕೃಷಿ ಸಚಿವರಾಗಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳಿಂದ ದೇಶ ಇಂದು ಆಹಾರ ರಫ್ತು ಮಾಡುವ ಹಂತಕ್ಕೆ ತಲುಪಿದೆ. ಅವರು ಈ ದೇಶದ ನಿಜವಾದ ಅನ್ನದಾತ ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ನಂತರ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ಪ್ರಬಲ ಧ್ವನಿ ಎತ್ತಿದವರು ಬಾಬುಜೀ. ಅವರ ಹೋರಾಟ ಮತ್ತು ಆಡಳಿತ ದಕ್ಷತೆ ಯುವಜನತೆಗೆ ಮಾದರಿ. ಮಹಾನ್ ಪುರುಷರ ಸಾಧನೆಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ತೋರಿದ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಮಾತನಾಡಿ, ಹಸಿರು ಕ್ರಾಂತಿಯ ಮೂಲಕ ಭಾರತವನ್ನು ಆಹಾರ ಸ್ವಾವಲಂಬನೆಯತ್ತ ಕೊಂಡೊಯ್ದ ನಾಯಕರು ಬಾಬುಜೀ ಎಂದು ಶ್ಲಾಘಿಸಿದರು. ಪ್ರಾಚಾರ್ಯ ರಾಜಶೇಖರ ಮಾಂಗ ಅವರು ವಿಶೇಷ ಉಪನ್ಯಾಸ ನೀಡಿ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬುಜಿಯವರ ತತ್ವಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಟೌನ್ ಹಾಲ್ ಬಳಿಯ ಬಾಬುಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಎಸ್‌.ಡಿ.,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಉಪವಿಭಾಗ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ, ಗೌರವಾಧ್ಯಕ್ಷರಾದ ಶ್ಯಾಮ್ ನಾಟಿಕರ್ ಸೇರಿದಂತೆ ಸಮಾಜದ ಮುಖಂಡರು ಮಹೇಶ್ ಹುಬ್ಬಳ್ಳಿ, ಲಿಂಗರಾಜ್ ,ರಾಜು ವಾಡೆಕರ್, ಇತರರು ಹಾಜರಿದ್ದರು.

ವಾರ್ತಾ ಭಾರತಿ 5 Apr 2026 7:53 pm

‘ಉಪಚುನಾವಣೆ’ ಕಾರಣಕ್ಕೆ ಒಳಮೀಸಲಾತಿ ಅನುಷ್ಠಾನ ಮುಂದೂಡಿಕೆ: ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು: ಉಪ ಚುನಾವಣೆ ಕಾರಣದಿಂದಾಗಿ ಒಳಮೀಸಲಾತಿ ಅನುಷ್ಠಾನ ಪ್ರಕ್ರಿಯೆ ಮುಂದೂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದರ ಸಾಧಕ-ಬಾಧಕಗಳ ಚರ್ಚಿಸಿ ಅತಿ ಶೀಘ್ರದಲ್ಲಿ ಒಳಮೀಸಲಾತಿ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ರವಿವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ ರಾಂ ಅವರ 119ನೆ ಜನ್ಮದಿನಾಚರಣೆ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಅವರು ಮಾತನಾಡಿದರು. ಒಳಮೀಸಲಾತಿ ವಿಚಾರದಲ್ಲಿ ಕೆಲವರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಬಗ್ಗೆ ಜಟುವಾಗಿ ಮಾತಾನಾಡಿದ್ದಾರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಅವರ ಮುಂದಾಳತ್ವದಲ್ಲಿಯೇ ಒಳಮೀಸಲಾತಿ ಅನುಷ್ಠಾನ ಆಗಲಿದೆ. ಈಗಾಗಲೇ ಸಚಿವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಿದ್ದು, ಮುಂದಿನ ಕೆಲವೆ ದಿನಗಳಲ್ಲಿ ಇದರ ಸಾಧಕ ಬಾಧಕಗಳ ಚರ್ಚಿಸಿ ಅತಿ ಶೀಘ್ರದಲ್ಲಿ ಒಳಮೀಸಲಾತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮುದಾಯದ ನಾವೆಲ್ಲಾರು ಒಗ್ಗಟ್ಟಾಗಿರಬೇಕು. ನಾವು ಒಂದಾಗಿದ್ದರೆ ಏನು ಬೇಕಾದರು ಸಾಧಿಸಬಹುದು. ಸಂಘಟನೆಯ ಮುಖಂಡರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು. ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಲಿದ್ದು, ಒಳಮೀಸಲಾತಿ ಅನುಷ್ಠಾನ ಮಾತ್ರವಲ್ಲ ದಲಿತ, ಶೋಷಿತ ಸಮುದಾಯದ ಏಳಿಗೆಗೆ ಹತ್ತು ಹಲವು ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಬದ್ಧವಾಗಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 5 Apr 2026 7:52 pm

F-15 ಯುದ್ಧ ವಿಮಾನದಲ್ಲಿದ್ದ 2ನೇ ಪೈಲಟ್‌ನನ್ನು ರಕ್ಷಿಸಲಾಗಿದೆ: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಎ.5: ಇರಾನ್ ಹೊಡೆದುರುಳಿಸಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನದಲ್ಲಿದ್ದ ಎರಡನೇ ಪೈಲಟ್‍ನನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದಾರೆ. ಈ ಮಧ್ಯೆ, ಇಷ್ಫಹಾನ್ ಪ್ರಾಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಮೆರಿಕದ ಮತ್ತೊಂದು ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಪ್ರತಿಪಾದಿಸಿದೆ. `ಶತ್ರುವಿನ ಗಡಿಯೊಳಗೆ ಇರಾನ್‍ನ ಅಪಾಯಕಾರಿ ಪರ್ವತಗಳಲ್ಲಿ ಇದ್ದ ಈ ಕೆಚ್ಚೆದೆಯ ಯೋಧನನ್ನು ಶತ್ರುಗಳು ಬೇಟೆಯಾಡುತ್ತಿದ್ದರು. ಗೌರವಾನ್ವಿತ ಕರ್ನಲ್ ಗಾಯಗೊಂಡಿದ್ದರೂ ಕ್ಷೇಮವಾಗಿದ್ದಾನೆ. ನಮ್ಮ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಮೆರಿಕದ ಯಾವುದೇ ಸಿಬ್ಬಂದಿ ಪ್ರಾಣಕ್ಕೆ ಹಾನಿಯಾಗದೆ ಅಥವಾ ಗಾಯಗೊಳ್ಳದೆ ನಮ್ಮ ಎರಡೂ ಪೈಲಟ್‍ಗಳನ್ನು ಶತ್ರುಗಳ ಪ್ರದೇಶದಿಂದ ಹೊರಗೆ ತಂದಿರುವುದು ನಾವು ಇರಾನ್‍ನ ಆಗಸದ ಮೇಲೆ ಅಗಾಧವಾದ ವಾಯುಪ್ರಾಬಲ್ಯ ಮತ್ತು ಶ್ರೇಷ್ಠತೆಯನ್ನು ಸಾಧಿಸಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ'ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಶುಕ್ರವಾರ ರಾತ್ರಿಯೇ ಒಬ್ಬ ಪೈಲಟ್‍ನನ್ನು ಅಮೆರಿಕದ ಮಿಲಿಟರಿ ರಕ್ಷಿಸಿತ್ತು. ವಿಮಾನ ಪತನಗೊಂಡ ಸ್ಥಳದಲ್ಲಿ ಶನಿವಾರದಿಂದ ನಿರಂತರ ವೈಮಾನಿಕ ದಾಳಿ, ಸರಣಿ ಸ್ಫೋಟದ ಶಬ್ದ ಕೇಳಿಸುತ್ತಿತ್ತು. 10ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಒಳಗೊಂಡಿದ್ದ ಅಮೆರಿಕದ ರಕ್ಷಣಾ ಕಾರ್ಯಾಚರಣೆಗೆ ಇರಾನ್‍ನಿಂದ ತೀವ್ರ ಪ್ರತಿರೋಧ ಎದುರಾಗಿತ್ತು ಎಂದು ಸ್ಥಳೀಯರನ್ನು ಉಲ್ಲೇಖಿಸಿ ಅಲ್‍ಜಝೀರಾ ವರದಿ ಮಾಡಿದೆ. ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 10ಕ್ಕೂ ಹೆಚ್ಚು ಯುದ್ಧವಿಮಾನಗಳು, ಹಲವಾರು ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಾಚರಣೆ ನಮ್ಮ ಕೆಚ್ಚೆದೆಯ ಪೈಲಟ್‍ನನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಶುಕ್ರವಾರ ರಾತ್ರಿ ಒಬ್ಬ ಸಿಬ್ಬಂದಿಯನ್ನು ರಕ್ಷಿಸಿದ ಬಳಿಕ ಅಮೆರಿಕದ ಕಾರ್ಯಾಚರಣೆಗೆ ಇರಾನ್ ಪಡೆಗಳಿಂದ ತೀವ್ರ ಪ್ರತಿರೋಧ ಎದುರಾಗಿತ್ತು. ಕೊಹ್ಗಿಲುಯೆಹ್ ಮತ್ತು ಬೊಯರ್-ಅಹ್ಮದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು 9 ಮಂದಿ ಮೃತಪಟ್ಟಿರುವ ಮಾಹಿತಿಯಿದೆ. ಆದರೆ ಕಾರ್ಯಾಚರಣೆಗೆ ಸಂಬಂಧಿಸಿದ ದಾಳಿಯಲ್ಲಿ ಈ ಸಾವು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಲ್‍ಜಝೀರಾ ವರದಿ ಮಾಡಿದೆ. ಪೈಲಟ್‍ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಿದ್ದ ಇರಾನ್ ಶುಕ್ರವಾರ ಅಮೆರಿಕದ ಎಫ್-15ಇ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಪರ್ವತಮಯ ನೈಋತ್ಯ ಕೊಹ್ಗಿಲುಯೆಹ್ ಮತ್ತು ಬೊಯರ್-ಅಹ್ಮದ್ ಪ್ರಾಂತವನ್ನು ಸುತ್ತುವರಿದಿತ್ತು. ಈ ಪ್ರದೇಶದಲ್ಲಿ ಪೈಲಟ್ ಅಡಗಿಕೊಂಡಿರಬಹುದು ಎಂದು ಇರಾನ್ ನಂಬಿತ್ತು. ದಕ್ಷಿಣ ಖುಜೆಸ್ತಾನ್ ಪ್ರದೇಶದ ಕೆಲವು ಭಾಗಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿದ್ದವು. ಈ ಪ್ರದೇಶದಲ್ಲಿ ಶನಿವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಾಪತ್ತೆಯಾಗಿದ್ದ ಅಮೆರಿಕದ ಪೈಲಟ್‍ನನ್ನು ಪತ್ತೆಹಚ್ಚಿ ಸೆರೆಹಿಡಿಯಲು ನೆರವಾಗುವವರಿಗೆ 60,000 ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಅಧಿಕಾರಿಗಳು ಘೋಷಿಸಿದ್ದರು. ಈ ಪ್ರದೇಶದಲ್ಲಿರುವ ಅಲೆಮಾರಿ ಬುಡಕಟ್ಟುಗಳು ಅಮೆರಿಕದ ಪೈಲಟ್‍ನ ಹುಡುಕಾಟ ಆರಂಭಿಸಿದ್ದರು. ರೈಫಲ್‍ಗಳು ಮತ್ತು ಇರಾನ್‍ನ ಧ್ವಜವನ್ನು ಹಿಡಿದಿರುವ ವ್ಯಕ್ತಿಗಳು ದೇಶದ ನೈಋತ್ಯ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿರುವ ವೀಡಿಯೊವನ್ನು ಇರಾನ್‍ನ ಮಾಧ್ಯಮ ಪ್ರಸಾರ ಮಾಡಿತ್ತು. ಅಮೆರಿಕದ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದ ಎರಡು ಬ್ಲ್ಯಾಕ್‍ಹಾಕ್ ಹೆಲಿಕಾಪ್ಟರ್‌ಗಳನ್ನು ಈ ಗುಂಪು ಹೊಡೆದುರುಳಿಸಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಕಾರ್ಯಾಚರಣೆ ಸಂಪೂರ್ಣ ವಿಫಲ: ಇರಾನ್ ಮಿಲಿಟರಿ ಹೇಳಿಕೆ ಪತನಗೊಂಡ ಯುದ್ಧ ವಿಮಾನದಲ್ಲಿದ್ದ ಪೈಲಟ್‍ನನ್ನು ರಕ್ಷಿಸುವ ಅಮೆರಿಕದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ ಎಂದು ಇರಾನ್‍ನ ಮಿಲಿಟರಿ ರವಿವಾರ ಹೇಳಿದೆ. ಪತನಗೊಂಡ ಯುದ್ಧವಿಮಾನದ ಪೈಲಟ್‍ನನ್ನು ರಕ್ಷಿಸುವ ಉದ್ದೇಶದಿಂದ ದಕ್ಷಿಣ ಇಸ್ಫಹಾನ್ ಪ್ರಾಂತದಲ್ಲಿ ಪರಿತ್ಯಕ್ತ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ಕಪಟ ನಾಟಕ ವಿಫಲವಾಗಿದೆ. ಎರಡು ಸಿ-130 ಮಿಲಿಟರಿ ಸಾರಿಗೆ ವಿಮಾನಗಳು ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ನಾಶಗೊಂಡಿವೆ' ಎಂದು ಇರಾನ್ ಮಿಲಿಟರಿಯ ಸೆಂಟ್ರಲ್ ಕಮಾಂಡ್‍ನ ವಕ್ತಾರರು ಹೇಳಿದ್ದಾರೆ.

ವಾರ್ತಾ ಭಾರತಿ 5 Apr 2026 7:48 pm

ಯುವ ಜನತೆಗೆ ಮುಖ್ಯಪ್ರಾಣ ದೇವರು ಮಾದರಿ: ಪೇಜಾವರ ಶ್ರೀ

ಉಡುಪಿ, ಎ.5: ಇಂದಿನ ಯುವ ಜನತೆಯಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಗಳಿವೆ. ಆದರೆ ಅದರ ಬಳಕೆ ಹೇಗೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ. ಆದುದರಿಂದ ಯುವ ಜನತೆಗೆ ದೇಶ ಸೇವೆ ಮತ್ತು ಈಶ ಸೇವೆಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಮುಖ್ಯಪ್ರಾಣ ದೇವರು ಮಾದರಿಯಾಗಿದ್ದಾರೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಂದ್ರಾಳಿಯ ಇಂದ್ರಾಣಿ ಶ್ರೀಪಂಚದುರ್ಗಪರಮೇಶ್ವರಿ ದೇವಸ್ಥಾನ ಸಮೀಪ ಇರುವ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಸಿರು ಕಾನನದ ನಡುವೆ ಮೇಲೆ ಪಂಚದುರ್ಗಾಪರಮೇಶ್ವರಿ, ಕೆಳಗೆ ಮುಖ್ಯಪ್ರಾಣ ದೇವರು ಇರುವ ಪರಿಪೂರ್ಣ ದೈವಿ ಪ್ರಭಾವವಿರುವ ಕ್ಷೇತ್ರ ಇಂದ್ರಾಳಿ. ಇದರ ಜೀರ್ಣೋದ್ಧಾರದ ಫಲ ಇಡೀ ಸಮಾಜಕ್ಕೆ ಸಿಗಲಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಕೊಡೇರಿ ವೆಂಕಟ್ರಾಯ ಶಾನುಭಾಗ್ ಅವರಿಂದ ಕನ್ನಡಕ್ಕೆ ಅನುವಾದಗೊಂಡ ಹನುಮಾನ್ ಚಾಲೀಸವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಬಿಡುಗಡೆಗೊಳಿಸಿದರು. ವಿದ್ವಾಂಸ ದಾಮೋದಕ ಶರ್ಮ ಬಾರಕೂರು ಧಾರ್ಮಿಕ ಉಪನ್ಯಾಸ ನೀಡಿದರು. ಕಾಪು ಮಾರಿಗುಡಿಯ ಆಡಳಿತ ಮೊಕ್ತೇಸರ ರಾಜರ್ಷಿ ವಾಸುದೇವ ಶೆಟ್ಟಿ, ದಾನಿಗಳಾದ ಮುಂಬೈ ಉದ್ಯಮಿ ಬುಡ್ನಾರು ಜಯಕರ ಶೆಟ್ಟಿ ಬುಡ್ನಾರು, ಉಜ್ವಲ್ ಸಮೂಹ ಸಂಸ್ಥೆಗಳ ಪುರುಷೋತ್ತಮ ಶೆಟ್ಟಿ, ಮತ್ತು ಬೆಂಗಳೂರಿನ ಉದ್ಯಮಿ ಇಂದ್ರಾಳಿಮನೆ ಕುಶಲ ಶೆಟ್ಟಿ, ವಾಸ್ತುಶಿಲ್ಪಿ ನಾಗೇಶ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಇಂದ್ರಾಣಿ ಪಂಚದುರ್ಗ ದೇವಳದ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ಇಂದ್ರಾಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು. ಶಮಿತಾ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 5 Apr 2026 7:44 pm

ಎ.7ರಂದು ಹಿರಿಯಡ್ಕದಲ್ಲಿ ಶ್ಯಾಮಿಲಿ ಸ್ಪಿಂಗ್ಸ್ ಲೋಕಾರ್ಪಣೆ

ಉಡುಪಿ, ಎ.5: ಹಿರಿಯಡ್ಕ ಪರಿಸರದ ಪ್ರಕೃತಿ ರಮಣೀಯವಾಗಿರುವ ರಾಷ್ಟಿಥಯ ಹೆದ್ದಾರಿ ಸನಿಹದಲ್ಲಿ ಸುಮಾರು ವಿಶಾಲ 5 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಒಂದೇ ಸೂರಿನಡಿಯಲ್ಲಿ ಅತ್ಯಾಧುನಿಕ ಸೌಕರ್ಯಗಳ ನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ಕೋಸ್ಟಲ್ ವುಡ್ ರೆಸಾರ್ಟ್ಸ್ ಉಡುಪಿಯ ಸಹಸಂಸ್ಥೆ ಶ್ಯಾಮಿಲಿ ಸ್ಪಿಂಗ್ಸ್ ಎ.7ರಂದು ಲೋಕಾರ್ಪಣೆಯಾಗಲಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕನ್ವೆನ್ಷನ್ ಸೆಂಟರ್ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ಡಾ.ಜಿ.ಶಂಕರ್ ಅವರ ಕನಸ್ಸಿನ ಯೋಜನೆ ಶ್ಯಾಮಿಲಿ ಸ್ಪಿಂಗ್ಸ್ ನಿರ್ಮಾಣ ಮಾಡಲಾಗಿದೆ. ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೋರೇಟ್ ವಲಯದ ಮೀಟಿಂಗ್, ಪಾರ್ಟಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ವಿಶಾಲ ಭೂ ಪ್ರದೇಶದಲ್ಲಿ ಪಾರ್ಕಿಂಗ್, ಮಕ್ಕಳದ ಆಟದ ಮೈದಾನ, ತೆರೆದ ಸಭಾಂಗಣಗಳನ್ನು ಒಳಗೊಂಡಿರುವ ಶ್ಯಾಮಿಲಿ ಸ್ಪಿಂಗ್ಸ್ ರಾಯಲ್ ಲುಕ್ ಕೊಟ್ಟಿದ್ದು, ಆಕರ್ಷಣೀಯ ಸ್ಥಳವಾಗಿದೆ. ಸಂಪೂರ್ಣ ಹವಾನಿಯಂತ್ರಿತ 1000 ಮಂದಿ ಆಸೀನರಾಗುವುದಕ್ಕೆ ಬೇಕಾದ ವ್ಯವಸ್ಥೆವುಳ್ಳ ಶಾನ್ವಿಕ ಕನ್ವೆನ್ಷನ್ ಸೆಂಟರ್, ಊಟಕ್ಕೆ ಪ್ರತ್ಯೇಕವಾಗಿರುವ ಶನಾಯ ಗ್ರ್ಯಾಂಡ್ ಹಾಲ್‌ಗಳಿವೆ(ವೆಜ್ ಹಾಗೂ ನಾನ್ವೆಜ್ಗೆ ಪ್ರತ್ಯೇಕ ಅಡುಗೆ ಕೋಣೆ) ಸೌಲಭ್ಯವಿದೆ. ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರ ಇದೆ. ಮೆಹಂದಿ, ಹಳದಿ, ಗೋಧುಳಿ ಲಗ್ನ ಸಹಿತ ಶುಭ ಸಮಾರಂಭಗಳಿಗೆ, ನೈಟ್ ಪಾರ್ಟಿಗೆ ಅನುಕೂಲವಾಗುವ ಮತ್ತು ಗ್ರ್ಯಾಂಡ್ ಲುಕ್ ನೀಡುವ ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್ ಸಭಾಂಗಣವೂ ಇಲ್ಲಿದೆ. ವಿಶಾಲ ಪ್ರದೇಶದಲ್ಲಿರುವ ಓಪನ್ ಗಾರ್ಡನ್ ಆಕರ್ಷಣೀಯವಾಗಿದೆ. ವಿಶಾಲ ವಾದ ಊಟದ ಹಾಲ್, ವೆಜ್ ಮತ್ತು ನಾನ್‌ವೆಜ್‌ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆಯನ್ನು ಒಳಗೊಂಡಿದೆ. ಗ್ರಾಹಕರು ಇಚ್ಛಿಸುವ ಮಾದರಿಯಲ್ಲಿ ಈ ಓಪನ್ ಗಾರ್ಡನ್ ಸಭಾಂಗಣವಿದೆ. ಶ್ಯಾಮಿಲಿ ಸ್ಪಿಂಗ್ಸ್ ಕೇವಲ ಸಭಾಂಗಣಕ್ಕಷ್ಟೇ ಸೀಮಿತವಾಗದೇ 30 ಎಸಿ ಡಿಲೆಕ್ಸ್ ರೂಮ್, 2 ಪ್ರತ್ಯೇಕ ವಿಲ್ಲಾ ಗಳನ್ನು ಒಳಗೊಂಡಿದೆ. ದೂರದ ಊರಿನಿಂದ ಆಗಮಿಸಿ ಉಳಿದುಕೊಂಡು ಮದುವೆ, ಸಮಾರಂಭಗಳನ್ನು ಮುಗಿಸಿ ತೆರಳುವುದಕ್ಕೂ ಇಲ್ಲಿ ವ್ಯವಸ್ಥೆ ಇದೆ. 300 ಕ್ಕೂ ಅಧಿಕ ಕಾರುಗಳು ಪಾರ್ಕ್ ಮಾಡುವುದಕ್ಕೆ ಬೇಕಾದ ವಿಶಾಲ ಪಾರ್ಕಿಂಗ್ ಏರಿಯಾ, ಸ್ವಿಮ್ಮಿಂಗ್ ಫುಲ್, ರಿಕ್ರಿಯೇಶನ್ ಕ್ಲಬ್, ಜಿಮ್ಮ, ಮಕ್ಕಳ ಆಟದ ಮೈದಾನವೂ ಇದೆ. ಕಾರ್ಪೋರೇಟ್ ಸಂಸ್ಥೆಯ ಸಭೆ, ಸಮಾರಂಭಗಳಿಗೆ ಅನುಕೂಲವಾಗುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಜೋಡಿಸಿ ಕೊಳ್ಳಲಾಗಿದೆ. ಮೆಹಂದಿ, ಹಳದಿ, ಡೆಸ್ಟಿನೇಶನ್ ಮ್ಯಾರೇಜ್ ಸಹಿತ ಇನ್ನಿತರ ಶುಭ ಸಮಾರಂಭಗಳಿಗೆ ವ್ಯವಸ್ಥೆ ಗಳಿವೆ. ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದ್ದು, ಮೊಬೈಲ್ ಸಂಖ್ಯೆ- 9448930820ನ್ನು ಸಂಪರ್ಕಿಸಬಹುದು. ಹವಾನಿಯಂತ್ರಿತ ಶಾಮಿಲಿ ಸ್ಪಿಂಗ್ಸ್‌ನ್ನು ಅತ್ಯಾರ್ಷಕವಾಗಿ ನಿರ್ಮಿಸಿದ್ದು, ಸಭಾಂಗಣಕ್ಕೆ ಪ್ರವೇಶಿಸುವ ಪ್ರವೇಶ ದ್ವಾರ ಕಣ್ಮನ ಸೆಳೆಯುತ್ತಿದೆ. ಕರಕುಶಲ ಕರ್ಮಿಗಳಿಂದ ಕಸುರಿ ಕೆಲಸ ಮಾಡಿದ್ದು, ಗತವೈಭವವನ್ನು ನೆನಪಿಸುವ ಪ್ರವೇಶ ದ್ವಾರಗಳು ವಿಶೇಷ ಅನುಭವವನ್ನು ನೀಡಲಿದೆ. ಶಾಮಿಲಿ ಸ್ಪಿಂಗ್ಸ್‌ನಲ್ಲ್ ಫ್ಯಾಮಿಲಿ ರೆಸ್ಟೋರೆಂಟ್ ಇದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 5 Apr 2026 7:40 pm

Kodagu | ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಶರಣ್ಯ ಕೊನೆಗೂ ಪತ್ತೆ

ಕುಡಿಯ ಸಮುದಾಯದ ಯುವಕರ ಕಾರ್ಯಾಚರಣೆ ಯಶಸ್ವಿ

ವಾರ್ತಾ ಭಾರತಿ 5 Apr 2026 7:39 pm

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಈಸ್ಟರ್ ಆಚರಣೆ

ಉಡುಪಿ, ಎ.5: ಯೇಸುವಿನ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತಾ ಉಪವಾಸ ಮತ್ತು ವೃತಾಚರಣೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಯೇಸುಕ್ರಿಸ್ತ ಪುನರುತ್ಥಾನದ ಈರ್ಸ್ಟ ಹಬ್ಬವನ್ನು ರವಿವಾರ ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ರವಿವಾರದ ಈಸ್ಟರ್ ಹಬ್ಬದ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನೆರವೇರಿ ದವು. ಮನೆಗಳಲ್ಲೂ ನೆಂಟರಿಷ್ಟರು ಮತ್ತು ಅತಿಥಿಗಳನ್ನು ಸ್ವಾಗತಿಸಿ ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಸಂತೋಷವನ್ನು ಹಂಚಿಕೊಂಡರು. ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶನಿವಾರ ರಾತ್ರಿ ಜರಗಿದ ಪಾಸ್ಕ ಜಾಗರಣೆಯಲ್ಲಿ ಭಾಗವಹಿಸಿದ್ದು ರವಿವಾರ ತಮ್ಮ ನಿವಾಸದಲ್ಲಿನ ಚಾಪೆಲ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಈಸ್ಟರ್ ರವಿವಾರದ ಬಲಿಪೂಜೆಯ ನೇತೃತ್ವವನ್ನು ಧರ್ಮಗುರು ವಂ.ಡೆನಿಸ್ ಡೆಸಾ ವಹಿಸಿದ್ದರು. ಈ ವೇಳೆ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ ಉಪಸ್ಥಿತರಿದ್ದರು ಈ ವೇಳೆ ಪ್ರವಚನ ನೀಡಿದ ಅವರು ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಯೇಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈರ್ಸ್ಟ.ಯೇಸುವಿನ ಸಾವಿನಿಂದ ಭಯ ಪಟ್ಟು, ಅಧಿಕಾರಸ್ಥರ ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಪೂರ್ತಿ ತುಂಬಿತ್ತು. ಈರ್ಸ್ಟ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದರು. ರವಿವಾರ ಬೆಳಿಗ್ಗೆ ಹೊಸಬಟ್ಟೆಗಳನ್ನುಟ್ಟು ಖುಷಿಯಿಂದ ಚರ್ಚಿನ ಪ್ರಾರ್ಥನಾವಿಧಿಯಲ್ಲಿ ಭಾಗವಹಿಸಿ ಬಳಿಕ ಧರ್ಮ ಗುರುಗಳಿಂದ ಆಶೀರ್ವಾದ ಪಡೆದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮನೆಗೆ ತೆರಳಿ ಕುಟುಂಬಿಕರು, ಸ್ನೇಹಿತರೊಂದಿಗೆ ಸೇರಿ ಹಬ್ಬವನ್ನು ಆಚರಿಸಿದರು. ಕುಂದಾಪುರದಲ್ಲಿ ಈಸ್ಟರ್ ಹಬ್ಬದ ಆಚರಣೆ ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ ಶನಿವಾರ ರಾತ್ರಿ ಕುಂದಾಪುರದಾದ್ಯಂತ ಎಲ್ಲ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. 455 ವರ್ಷಗಳ ಇತಿಹಾಸವಿರುವ ಉಡುಪಿ ಧರ್ಮಪ್ರಾಂತ್ಯದಲ್ಲೇ ಹಿರಿಯ ಇಗರ್ಜಿಗಳಲ್ಲಿ ಒಂದಾದ ಕುಂದಾಪುರದ ರೋಜರಿ ಮಾತಾ ಇಗರ್ಜಿಯಲ್ಲಿ ಶನಿವಾರ ಯೇಸುವಿನ ಪುನರುತ್ಥಾನ ಹೊಂದಿದ ಈಸ್ಟರ್ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಮೈದಾನದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿ ಬೆಳಗಿಸಲಾಯಿತು. ಇಗರ್ಜಿಯೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆಯಿತು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿಧಿಯನ್ನು ಆಚರಿಸಲಾಯಿತು.

ವಾರ್ತಾ ಭಾರತಿ 5 Apr 2026 7:37 pm

ಬಾಗಲಕೋಟೆ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ: ಆರ್.ಅಶೋಕ್ ಆರೋಪ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ಸಿಗೆ ಹೋಗಿ ನೀವು ಬಿಜೆಪಿಗೆ ಮತ ಕೊಟ್ಟರೆ ಜೈಲಿಗೆ ಹಾಕುತ್ತೇವೆ ಎಂಬ ಮಾಹಿತಿಯುಳ್ಳ ಒಂದು ಕರಪತ್ರವನ್ನು ಹಂಚಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ಸಂಸದ ಗೋವಿಂದ ಕಾರಜೋಳ ಪೊಲೀಸರಿಗೆ ದೂರು ನೀಡಿದ ಬಳಿಕ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಪೊಲೀಸ್ ಠಾಣೆಯಲ್ಲೆ ಆರೋಪಿಗಳು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇನ್‍ಸ್ಪೆಕ್ಟರ್ ಬಾಯಿ ಮುಚ್ಚಿಕೊಂಡು ಆರಾಮವಾಗಿ ಕುಳಿತಿದ್ದರು. ಬಂಧಿತರು ಲಾಕಪ್ ಒಳಗಡೆ ಇರಬೇಕಿತ್ತು. ಆದರೆ, ರಾಜಾರೋಷವಾಗಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇದೆಯೇ ಎಂದು ಅಶೋಕ್ ಪ್ರಶ್ನಿಸಿದರು. ಕಾಂಗ್ರೆಸ್ಸಿಗರು ಡಿ.ಕೆ.ಶಿವಕುಮಾರ್ ಹೇಳಿದ ಮಾದರಿಯಲ್ಲಿ ಬಂದು ಗೂಂಡಾಗಿರಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಈ ಘಟನೆಗೆ ನೇರ ಕಾರಣ. ನಾಳೆ ಹಳ್ಳಿಗಳಲ್ಲೂ ಇದೇ ವರ್ತನೆ ಮರುಕಳಿಸಬಹುದು ಎಂದು ಅವರು ಹೇಳಿದರು. ನೂರಾರು ಕೋಟಿ ಹಣ ಹಂಚಲು ಸಿದ್ಧತೆ: ಉಪ ಚುನಾವಣೆಯಲ್ಲಿ ಗೆಲ್ಲಲು ನೂರಾರು ಕೋಟಿ ಹಣ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಅಭಿವೃದ್ಧಿ-ಜನಪರ ಕೆಲಸ ಮಾಡಿಲ್ಲ. ಆದುದರಿಂದ, ಹಣ ಹಂಚಿ ಗೆಲ್ಲಲು ಹೊರಟಿದ್ದಾರೆ. ಹೀಗಾದರೆ ನ್ಯಾಯಯುತ ಚುನಾವಣೆ ಆಗುವುದು ಹೇಗೆ? ಎಂದು ಅಶೋಕ್ ಪ್ರಶ್ನಿಸಿದರು.

ವಾರ್ತಾ ಭಾರತಿ 5 Apr 2026 7:29 pm

Karnataka Weather: ರಾಜ್ಯದಲ್ಲಿ ಏ.6 ರಿಂದ 4 ದಿನಗಳು ಮಳೆ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. 16 ಕ್ಕೂ ಅಧಿಕ ಜಿಲ್ಲೆಗಳಿಗೆ ಏಪ್ರಿಲ್‌ 6 ರಿಂದ 9 ರವರೆಗೂ ವಿವಿಧ ದಿನಗಳಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಹವಾಮಾನ ಇಲಾಖೆಯ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 5 Apr 2026 7:22 pm

ಕೇರಳದಲ್ಲಿ ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟಕ್ಕೆ ಬಹುಮತ: ಡಿ.ಕೆ.ಶಿವಕುಮಾರ್

ಕಣ್ಣೂರು(ಕೇರಳ): ಕೇರಳದ ಜನತೆ ಬದಲಾವಣೆ ಬಯಸಿದ್ದು, ಅಭಿವೃದ್ಧಿ, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಸ್ವಾಮಿ ಅಯ್ಯಪ್ಪನಿಗೆ ನ್ಯಾಯ ಒದಗಿಸಲು ಬಯಸುತ್ತಿರುವ ಜನ ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟಕ್ಕೆ ಮೂರನೆ ಎರಡರಷ್ಟು ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ ಎಂದು ಶೇಕಡ ನೂರರಷ್ಟು ವಿಶ್ವಾಸ ನಮಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ರವಿವಾರ ಕಣ್ಣೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಎಂ.ಮೋಹನನ್ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿದೇವಾಲಯದ ಚಿನ್ನ ಕಳ್ಳತನ ಪ್ರಕರಣವನ್ನು ಸಿಪಿಐಎಂ ಸರಕಾರ ಸರಿಯಾದ ತನಿಖೆ ನಡೆಸಿಲ್ಲ. ಕೇಂದ್ರ ಬಿಜೆಪಿ ಸರಕಾರ ಕೂಡ ಈ ಪ್ರಕರಣದ ಸಿಬಿಐ ತನಿಖೆ ನಡೆಸಿಲ್ಲ ಎಂದು ಹೇಳಿದರು. ಬೆಲೆ ಏರಿಕೆ ಸಮಸ್ಯೆ ನಡುವೆ ಸೌದಿ ಸೇರಿದಂತೆ ಅರಬ್ ರಾಷ್ಟ್ರಗಳಿಂದ ಲಕ್ಷಾಂತರ ಜನ ಕೇರಳಕ್ಕೆ ಮರಳುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಯುವಕರು ಕೆಲಸ ಹುಡುಕಿಕೊಂಡು ಕೇರಳದಿಂದ ಹೊರಗೆ ಹೋಗುತ್ತಿದ್ದಾರೆ. ಇದು ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವಿದ್ದು ಯುಡಿಎಫ್ ಮೈತ್ರಿಕೂಟವನ್ನು ಕೇರಳಿಗರು ಆರಿಸಲಿದ್ದಾರೆ. ಕಳೆದ ಹತ್ತು ವರ್ಷಗಳ ಪಿಣರಾಯಿ ವಿಜಯನ್ ಅವರ ಸರಕಾರ ವಿಫಲವಾಗಿದ್ದು, ಅಭಿವೃದ್ಧಿಯ ಯಾವುದೆ ಗುರುತು ನಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದು ಅವರು ತಿಳಿಸಿದರು. ಯುಡಿಎಫ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕಾಂಗ್ರೆಸ್ ಪಕ್ಷದವರೆ ಮುಖ್ಯಮಂತ್ರಿ ಆಗುತ್ತಾರೆ. ಇಲ್ಲಿ ನಿರ್ದಿಷ್ಠ ವ್ಯಕ್ತಿ ಎಂಬುದಕ್ಕಿಂತ ಪಕ್ಷ ಮುಖ್ಯ. ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದು, ಕಾಂಗ್ರೆಸ್ ಪಕ್ಷದ ನಾಯಕತ್ವದ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವುದು ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರಾ? ಕೇರಳ ಜನ ಭರ್ಜರಿ ಮತಗಳೊಂದಿಗೆ ರಾಹುಲ್ ಗಾಂಧಿ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿದಾಗ, ಅವರು ಕೋಲಾರದಲ್ಲಿ ಮಾಡಿದ ಭಾಷಣವನ್ನು ನೆಪವಾಗಿಟ್ಟುಕೊಂಡು ಸಂಸತ್ ಸದಸ್ಯತ್ವದಿಂದ ಅನರ್ಹ ಮಾಡಲು ಮುಂದಾದರು. ಆ ಮೂಲಕ ಕೇರಳ ಜನರಿಗೆ ಅಪಮಾನ ಎಸಗಿದರು. ಇದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುತ್ತಾರಾ? ಎಂದು ತಿಳಿಸಿದರು. ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಪ್ರತಿ ಮರಕ್ಕೆ ಬೇರು ಮುಖ್ಯ. ನಾವು ಬೇರನ್ನು ನಂಬಿರುವವರು. ಬೇರು ಇಲ್ಲದೇ ನಂಬಿಕೆ ಮೂಡಲು ಸಾಧ್ಯವಿಲ್ಲ. ಜನರು ನಮ್ಮನ್ನು ನಂಬಿದರು. ನಾವು ಅವರ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಕೇರಳದಲ್ಲಿ ಕೊಟ್ಟಿರುವ ಭರವಸೆಯಂತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ, ಆಹಾರ ಭದ್ರತೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದೆವು ಎಂದು ಶಿವಕುಮಾರ್ ತಿಳಿಸಿದರು. ಶಬರಿಮಲೆ ವಿಚಾರ ಎಲ್‍ಡಿಎಫ್ ಮೇಲೆ ಪರಿಣಾಮ ಬೀರಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಖಂಡಿತವಾಗಿ ಪರಿಣಾಮ ಬೀರಲಿದೆ. ಇದು ದೇವರ ನಾಡು. ಇಲ್ಲಿನ ಜನ ದೇವರು, ಧರ್ಮ, ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇವರ ಹಿತಾಸಕ್ತಿಯನ್ನು ನಾವು ಕಾಪಾಡಬೇಕು. ದೇಶದ ಎಲ್ಲ ಭಾಗದ ಜನ ನಂಬಿಕೆಯ ಮೇಲೆ ಶಬರಿಮಲೆಗೆ ಬರುತ್ತಾರೆ. ಈ ಕಾರಣದಿಂದಾಗಿ ಎಲ್‍ಡಿಎಫ್ ಸರಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಬೇರು ಸಮೇತ ಕಿತ್ತೊಗೆಯಲಾಗುವುದು ಎಂದು ತಿಳಿಸಿದರು. ಮಲಯಾಳಂ ಭಾಷಾ ನೀತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೇರಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನ ಅಸಂತುಷ್ಟರಾಗಿದ್ದು, ಈ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ಯುಡಿಎಫ್ ಗೆ ಬೆಂಬಲ ನೀಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷ ಹಾಗೂ ಯುಡಿಎಫ್‍ಗೆ ಭರ್ಜರಿ ಬಹುಮತ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲೂ ಮೂರನೇ ಎರಡರಷ್ಟು ಬಹುಮತ ನೀಡಲಿದ್ದಾರೆ ಎಂದು ತಿಳಿಸಿದರು.

ವಾರ್ತಾ ಭಾರತಿ 5 Apr 2026 7:21 pm

IPL 2026 | ಹೈದರಾಬಾದ್ ವಿರುದ್ಧ ಲಕ್ನೋಗೆ 5 ವಿಕೆಟ್‌ಗಳ ಜಯ

ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್‌ಗಳ ಜಯಸಾಧಿಸಿದೆ.

ವಾರ್ತಾ ಭಾರತಿ 5 Apr 2026 7:18 pm

ಸನ್ ರೈಸರ್ಸ್ ದಿಕ್ಕು ತಪ್ಪಿಸಿದ ಮೊಹಮ್ಮದ್ ಶಮಿ ! ಲಖನೌ ಸೂಪರ್ ಜೈಂಟ್ಸ್ ಅನ್ನು ದಡ ಸೇರಿಸಿದ ರಿಷಬ್ ಪಂತ್

ಮೊದಲಿಗೆ ಮೊಹಮ್ಮದ್ ಶಮಿ ಬೆಂಕಿ ಬೌಲಿಂಗ್, ಬಳಿಕ ರಿಷಬ್ ಪಂತ್ ಹೊಣೆಯರಿತ ಬ್ಯಾಟಿಂಗ್. ಪರಿಣಾಮ ಬೌಲರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಸನ್ ರೈಸರ್ಸ್ ತಂಡವನ್ನು ಅವರ ತವರು ನೆಲದಲ್ಲೇ 6 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಇದಕ್ಕುತ್ತರವಾಗಿ ಲಖನೌ ಸೂಪರ್ ಜೈಂಟ್ಸ್ ತಂಡ ಇನ್ನೂ 1 ಎಸೆತ ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()ಇದಕ್ಕೂ ಮೊದಲು ಮಧ್ಯಮ ವೇಗಿ ಗೆ ಆಡಲು ಸನ್ ರೈಸರ್ಸ್ ಬ್ಯಾಟರ್ ಗಳು ಅಕ್ಷರಶಃ ಒದ್ದಾಡಿದರು. ಮೊದಲ ಓವರ್ ನಲ್ಲೇ ನಂಬರ್ ಒನ್ ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆದ ಅವರ ಮೂರನೇ ಓವರ್ ನ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ ಅವರನ್ನೂ ಪೆವಿಲಿಯನ್ ಗೆ ಅಟ್ಟಿದರು. ಹೀಗಾಗಿ ಒತ್ತಡದಲ್ಲಿ ಸಿಲುಕಿದ ಸನ್ ರೈಸರ್ಸ್ ತಂಡ ಪವರ್ ಪ್ಲೇನ 6 ಓವರ್ ಗಳಲ್ಲಿ ಗಳಿಸಲು ಸಾಧ್ಯವಾಗಿದ್ದು ಕೇವಲ 3 ವಿಕೆಟ್ ನಷ್ಟಕ್ಕೆ 22 ರನ್! ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್(41 ಎಸೆತದಲ್ಲಿ 62) ಮತ್ತು ನಿತೀಶ್ ಕುಮಾರ್ ರೆಡ್ಡಿ(33 ಎಸೆತದಲ್ಲಿ 58) ಐದನೇ ವಿಕೆಟ್ ಗೆ 116 ರನ್ ಗಳ ಮಹತ್ವದ ಜೊತೆಯಾಟವಾಡಿದ್ದರಿಂದ ತಂಡ ಗೌರವಯುತ ಮೊತ್ತ ಗಳಿಸುವಂತಾಯಿತು. ಮೊಹಮ್ಮದ್ ಶಮಿ ಅವರ ಬೌಲಿಂಗ್ ಸ್ಪೆಲ್ 4-0-9- 2 ಇಷ್ಟು ಆಕರ್ಷಕವಾಗಿತ್ತು. ಉಳಿದಂತೆ ಪ್ರಿನ್ಸ್ ಯಾದವ್ ಮತ್ತು ಆವೇಶ್ ಖಾನ್ ತಲಾ 2 ವಿಕೆಟ್ ಗಳನ್ನು ಕಬಳಿಸಿದರು. ಸಂಕ್ಷಿಪ್ತ ಸ್ಕೋರ್ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 156/9, ಹೆನ್ರಿಚ್ ಕ್ಲಾಸನ್ 63(41), ನಿತೀಶ್ ಕುಮಾರ್ ರೆಡ್ಡಿ 56(33), ಲಿಯಾಮ್ ಲಿವಿಂಗ್ ಸ್ಟೋನ್ 14(20), ಶಮಿ 9ಕ್ಕೆ 2, ಆವೇಶ್ ಖಾನ್ 38ಕ್ಕೆ 2, ಪ್ರಿನ್ಸ್ ಯಾದವ್ 34ಕ್ಕೆ 2. ಲಖನೌ ಸೂಪರ್ ಜೈಂಟ್ಸ್ 19.5 ಓವರ್ ಗಳಲ್ಲಿ 160/4, ರಿಷಬ್ ಪಂತ್ ಅಜೇಯ 68(50), ಮಾರ್ಕಂ 46(27), ಅಬ್ದುಲ್ ಸಮದ್ 16(12), ಹರಷ್ ದುಬೆ 18ಕ್ಕೆ 2, ಇಶಾನ್ ಮಾಲಿಂಗ 30ಕ್ಕೆ , ಶಿವಾಂಗ್ ಕುಮಾರ್ 30ಕ್ಕೆ 1.

ವಿಜಯ ಕರ್ನಾಟಕ 5 Apr 2026 7:14 pm

ಕೊಪ್ಪಳ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪರಶುರಾಮಗೆ ಪ್ರಥಮ ರ‍್ಯಾಂಕ್

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆಯುವ ಮೂಲಕ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಪರಶುರಾಮ ರಾಮಣ್ಣ ಗಮನ ಸೆಳೆದಿದ್ದಾರೆ. 2024-25ನೇ ಸಾಲಿನ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟವಾಗಿದ್ದು, ಗಂಗಾವತಿ ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಯನ ಮಾಡಿ, ಶೇ.73.71 ಅಂಕ ಪಡೆದು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪಂಪಾಪತಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ : ಗಂಗಾವತಿ : ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನ ವಿದ್ಯಾರ್ಥಿ ಕೊಪ್ಪಳ ವಿದ್ಯಾಲಯದ 2024-25ನೇ ಸಾಲಿನ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟವಾಗಿದ್ದು, ಪತ್ರಿಕೋದ್ಯಮ ವಿಭಾಗದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಮೊದಲನೇ ರ‍್ಯಾಂಕ್ ಪಡೆಯುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿ ಗಮನ ಸೆಳೆದಿದ್ದಾನೆ. ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಪಂಪಾಪತಿ ಬೆನ್ನೂರು ಈ ಸಾಧನೆ ಮಾಡಿದ್ದಾರೆ. ಶೇ.77.13% ಅಂಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅಲ್ಲದೆ, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ತಮ್ಮ ಪರಿಶ್ರಮ, ಶಿಸ್ತಿನ ಅಧ್ಯಯನ, ತಂದೆ ತಾಯಿಯ ಪ್ರೋತ್ಸಾಹ ಮತ್ತು ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಈ ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಮರುದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ತಿಳಿಸಿದ್ದಾರೆ.

ವಾರ್ತಾ ಭಾರತಿ 5 Apr 2026 6:50 pm

Hulsur | ಬಾಬು ಜಗಜೀವನ ರಾಮ್ ಅವರ ಕೊಡುಗೆ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ : ತಹಶೀಲ್ದಾರ್ ಶಿವಾನಂದ್ ಮೇತ್ರೆ

ಹುಲಸೂರ್ : ವಿದ್ಯಾರ್ಥಿ ದಿನಗಳಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ, ಆಲ್ ಇಂಡಿಯಾ ಡಿಪ್ರೆಸ್ಡ್ ಕ್ಲಾಸೆಸ್ ಲೀಗ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಾಬು ಜಗಜೀವನ ರಾಮ್ ಅವರು ಸಮಾಜ ಪರಿವರ್ತನೆಗೆ ನೀಡಿದ ಕೊಡುಗೆ ಇಂದಿನ ಯುವಜನತೆಗೆ ಮಹತ್ತರ ಸ್ಪೂರ್ತಿಯಾಗಿದೆ ಎಂದು ತಹಸೀಲ್ದಾರ್ ಶಿವಾನಂದ್ ಮೇತ್ರೆ ಅಭಿಪ್ರಾಯಪಟ್ಟರು. ತಾಲೂಕು ಆಡಳಿತದಿಂದ ಹುಲಸೂರ್ ತಹಶೀಲ್ದಾರ್ ಕಚೇರಿ ಆವರಣದಲ್ಲಿ ರವಿವಾರ ನಡೆದ ಸಮತಾ ದಿವಸ್ ಹಾಗೂ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾ ದಿನಗಳಲ್ಲಿ ಪರಿಶಿಷ್ಟ ಜಾತಿ ಮಕ್ಕಳಿಗೆ ಮತ್ತು ಮೇಲ್ವರ್ಗದ ಮಕ್ಕಳಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಇಟ್ಟಿದ್ದನ್ನು ವಿರೋಧಿಸಿ ಅದನ್ನು ಧ್ವಂಸಗೊಳಿಸಿ ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಲು ಪ್ರೇರಣೆ ನೀಡಿದ ಕ್ರಾಂತಿಕಾರಿಯೂ ಆಗಿದ್ದರು ಎಂದು ಹೇಳಿದರು. 1937ರಲ್ಲಿ ಬಿಹಾರ್ ವಿಧಾನಸಭೆಗೆ ಆಯ್ಕೆಯಾಗಿ, 1946ರಲ್ಲಿ ಜವಾಹರಲಾಲ್ ನೆಹರು ಅವರ ತಾತ್ಕಾಲಿಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ನಂತರ ರಕ್ಷಣಾ ಸಚಿವ, ಉಪಪ್ರಧಾನಿ, ಕೃಷಿ ಸಚಿವ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು ಎಂದು ವಿವರಿಸಿದರು. 1971ರ ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಉಂಟಾದ ಆಹಾರ ಕೊರತೆಯನ್ನು ನಿವಾರಿಸಲು ಹಸಿರು ಕ್ರಾಂತಿಗೆ ಉತ್ತೇಜನ ನೀಡಿ ಯಶಸ್ಸು ಸಾಧಿಸಿದ ನಾಯಕರಾಗಿದ್ದರು. ಸಾಮಾಜಿಕ ಸುಧಾರಕ, ದಲಿತರ ಹಕ್ಕುಗಳ ಹೋರಾಟಗಾರ ಹಾಗೂ ಬಹುಮುಖ ವ್ಯಕ್ತಿತ್ವದ ನಾಯಕನಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದರು. ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಿದ್ದು, ಸಮಾನತೆ, ನ್ಯಾಯ ಮತ್ತು ಸೇವಾಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಸುನೀಲ್ ಸಜ್ಜನ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರೇಣುಕಾ ಕಟ್ಟಿಮನಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ್ ಜಮ್ಮು ಹಾಗೂ ಕಂದಾಯ ನಿರೀಕ್ಷಕ ಶರಣು ಪವಡಶೇಟ್ಟಿ, ಆದಿ ಜಂಬೂ ಸಮಾಜ ಸಂಘಟನೆಯ ತಾಲೂಕು ಅಧ್ಯಕ್ಷ ಧನಾಜಿ ಸೂರ್ಯವಂಶಿ, ವೀರಪ್ಪ ಗವಾರೆ, ಪಿಕೆಪಿಎಸ್ ಸಂಘದ ಅಧ್ಯಕ್ಷ ಭಾಗವತ್ ಜಾನಬಾ, ಕಲ್ಯಾಣಿ ದಾನ, ನಾಗೇಶ್ ಸೂರ್ಯವಂಶಿ, ವೀರಭದ್ರ ಗವಾರೆ, ಸುಭು ಜಾಧವ್, ದೇವಾ ಮೇತ್ರೆ, ಕೃಷ್ಣ ಸೂರ್ಯವಂಶಿ, ಸುಮಿತ್ ಸೂರ್ಯವಂಶಿ, ಡಿಗಂಬರ್ ತೂರೆ, ಪ್ರವೀಣ್ ಮೇತ್ರೆ, ಅಜಯ್ ಮೊರೆ, ಕಾಶಿನಾಥ್ ಮೇಘಶಾಮ, ಅಂಬಾದಾಸ್ ಗವಾರೆ, ಸುಮಿತ್ ಗಾಯಕವಾಡ್ ಹಾಗೂ ಗಣೇಶ್ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 6:46 pm

Basavakalyan | ಶರಣೆ ದಾನಮ್ಮ ತಪೊಸ್ಥಾನ ಅಭಿವೃದ್ಧಿಯಾಗಲಿ : ನಿಜಗುಣಾನಂದ್ ಸ್ವಾಮಿ

ಬಸವಕಲ್ಯಾಣ : ಶರಣೆ ದಾನಮ್ಮ ತಪೋಸ್ಥಾನ ಅಭಿವೃದ್ಧಿಯಾಗಿ, ಭಕ್ತಿ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕವಡಿಯಾಳನ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಶರಣೆ ದಾನಮ್ಮ ಉತ್ಸವ ಹಾಗೂ 4ನೇ ಶರಣ ಸಮಾಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶರಣೆ ದಾನಮ್ಮ ಅವರು ಬಸವಣ್ಣ ಅವರ ಕಾರ್ಯ ಮತ್ತು ಸಾಧನೆಯನ್ನು ವಚನಗಳ ಮೂಲಕ ಇತಿಹಾಸದಲ್ಲಿ ದಾಖಲಿಸಿದವರು. ಶೋಷಿತ ಹಾಗೂ ದಮನಿತ ಸಮುದಾಯದಿಂದ ಬಂದ ಶರಣರನ್ನು ಮರೆಯಬಾರದು. ನೆಲಮೂಲ ಸಂಸ್ಕೃತಿಗೆ ಬಸವಣ್ಣ ಗೌರವ ನೀಡಿದ್ದು, ಆ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣ ಸಂಸ್ಕೃತಿ ಪ್ರಸಾರಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಡಾ. ವಚನ ಕುಮಾರಸ್ವಾಮಿ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಎಸ್.ಎಸ್. ನಾಗರಾಳಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಮಹಾಂತೇಶ್ ಕುಂಬಾರ್ ಅವರು ವೀರ ಶರಣೆ ದಾನಮ್ಮ ದೇವಿ ಕುರಿತು ಅನುಭಾವ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಮಹಾಮನೆ ಚಾರಿಟೇಬರ್ ಟ್ರಸ್ಟ್ ಕಾರ್ಯಾಧ್ಯಕ್ಷ ದಿಲೀಪ್ ಸಿಂಧೆ, ಕಲಬುರಗಿ ಕ.ಸ.ಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಸುಧಾಕರ್ ರೆಡ್ಡಿ, ರಾಜಕುಮಾರ್ ಧನ್ನೂರ್, ಬಸವರಾಜ್ ವೆಂಕಟಾಪುರೆ, ಯುವರಾಜ್ ಭಂಡೆ ಹಾಗೂ ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಸೇರಿದಂತೆ ಇತರರು ಇದ್ದರು. ಪಂಡಿತ ಬಾಳೂರೆ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಾರ್ಥ ಲಿಂಗಾಯತ್ ಸ್ವಾಗತಿಸಿದರು. ರವಿ ಪಾಪಡೆ ನಿರೂಪಣೆ ಮಾಡಿದರು.

ವಾರ್ತಾ ಭಾರತಿ 5 Apr 2026 6:43 pm

Bidar | ಡಾ.ಬಾಬು ಜಗಜೀವನ ರಾಮ್ ಅಪ್ರತಿಮ ನಾಯಕ : ಸಚಿವ ರಹೀಂ ಖಾನ್

ಬೀದರ್ : ಭಾರತದ ಹಸಿರು ಕ್ರಾಂತಿಯ ಹರಿಕಾರರೆಂದೇ ಖ್ಯಾತರಾದ ಬಾಬು ಜಗಜೀವನ್ ರಾಮ್ ಅವರು ಶೋಷಿತ ಸಮುದಾಯದಿಂದ ಬಂದು ದೇಶದ ಉಪಪ್ರಧಾನಿ ಹುದ್ದೆಯವರೆಗೆ ಏರಿದ ಅಪ್ರತಿಮ ನಾಯಕ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ರವಿವಾರ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಆಯೋಜಿಸಿದ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 1970ರ ದಶಕದಲ್ಲಿ ಭಾರತವು ಎದುರಿಸುತ್ತಿದ್ದ ತೀವ್ರ ಆಹಾರ ಸಮಸ್ಯೆಯನ್ನು ನೀಗಿಸಿ, ಕೃಷಿಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಿದ ಕೀರ್ತಿ ಬಾಬು ಜಗಜೀವನ ರಾಮ್ ಅವರಿಗೆ ಸಲ್ಲುತ್ತದೆ. ಆದ್ದರಿಂದಲೇ ಅವರ ಜನ್ಮದಿನವಾದ ಎ.5ರಂದು ನಾವು ಸಮತಾ ದಿನ ಎಂದು ಆಚರಿಸುತ್ತೇವೆ. ಸುಮಾರು ಮೂರು ದಶಕಗಳ ಕಾಲ ಕೇಂದ್ರ ಸಚಿವರಾಗಿ, ರಕ್ಷಣಾ ಸಚಿವರಾಗಿ 1971ರ ಯುದ್ಧದ ಸಮಯದಲ್ಲಿ ಮತ್ತು ಕೃಷಿ ಸಚಿವರಾಗಿ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಸಮಾನತೆಯ ಸಿದ್ಧಾಂತದ ಪ್ರತಿಪಾದಕರಾಗಿದ್ದ ಬಾಬೂಜಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದರು. ಜಿಲ್ಲೆಯಲ್ಲಿ ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣಕ್ಕೆ ಈಗಾಗಲೇ 2 ಕೋಟಿ ರೂ. ಅನುದಾನ ನೀಡಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು. ವೃತ್ತ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವಿ ಹೆಬ್ಬಾಳೆ ಅವರು, ಡಾ.ಬಾಬು ಜಗಜೀವನ ರಾಮ್ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆ ಕಾರ್ಯಕ್ರಮ ಚಾಲನೆಗೂ ಮುನ್ನ ಡಾ.ಬಾಬು ಜಗಜೀವನ ರಾಮ್ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಬಸವವೇಶ್ವರ್ ವೃತ್ತದ ಮಾರ್ಗವಾಗಿ ಡಾ.ಬಾಬು ಜಗಜೀವನ ರಾಮ್ ಅವರ ಪ್ರತಿಮೆ ಬಳಿಗೆ ತೆರಳಿ ಅಲ್ಲಿ ಗಣ್ಯರ ಸಮ್ಮುಖದಲ್ಲಿ ಜಗಜೀವನ ರಾಮ್ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ನಂತರ ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗದಿಂದ ಸಾಗಿ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರಕ್ಕೆ ತಲುಪಿತು. ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಅಪರ್ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಯೋಗೇಶ್ ಎಸ್. ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಪ್ರಮುಖರಾದ ಚಂದ್ರಕಾಂತ್ ಹಿಪ್ಪಳಗಾಂವ್, ಫಾರ್ನಾಡಿಸ್ ಹಿಪ್ಪಳಗಾಂವ್, ಮಾರುತಿ ಬೌದ್ಧೆ, ರಾಜು ಕಡ್ಯಾಳ್, ವಿಜಯಕುಮಾರ್ ಸೋನಾರೆ, ರವಿರಾಜ್ ಘೋಡೆ, ಅಭಿ ಕಾಳೆ, ಶಾಮಣ್ಣ ಬಾವಗೆ, ಮಹೇಶ್ ದೊಡ್ಡಿ, ಶಾಮಣ್ಣ ಬೊಂಬಳಗಿ ಹಾಗೂ ರವಿ ನಿಜಾಮಪುರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 5 Apr 2026 6:40 pm

ಸನ್ ರೈಸರ್ಸ್ ಗೆ ಚಮಕ್ ಕೊಟ್ಟ ಮೊಹಮ್ಮದ್ ಶಮಿ!: ಅಗರ್ಕರ್, ಗಂಭೀರ್ ಎಲ್ಲಿದ್ದಾರೆ ಎಂದು ಮೂದಲಿಸಿದ ನೆಟ್ಟಿಗರು

Mohammed Shami Vs Gambhir And Agarkar- ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಸ್ಫೋಟಕ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸಿರುವುದು ಅವರ ಕ್ಷಮತೆಗೆ ಸಾಕ್ಷಿಯಾಗಿದ್ದು ಅವರನ್ನು ರಾಷ್ಟ್ರೀಯ ತಂಡದಿಂದ ಹೊರಗಿಟ್ಟಿಕುವುದಕ್ಕೆ ನೆಟ್ಟಿಗರು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಟೀಂ ಇಂಡಿಯಾ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯ ಕರ್ನಾಟಕ 5 Apr 2026 6:39 pm

ಒಂದೇ ಬಾರಿಗೆ ಬಹುಕೆಲಸ ಮಾಡುವುದು ಶಕ್ತಿಯಲ್ಲ, ಮೆದುಳಿಗೆ ಸುಸ್ತು ನೀಡುವ ಅಭ್ಯಾಸ!

ಆಗಾಗ್ಗೆ ಕಾರ್ಯ ಬದಲಾಯಿಸುವುದರಿಂದ ಮೆದುಳಿನ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಹೀಗಾಗಿ ಮಾನಸಿಕ ಆಯಾಸ ಉಂಟಾಗಿ ಗಮನ ಕಡಿಮೆಯಾಗುತ್ತದೆ. ಬಹಳಷ್ಟು ಮಂದಿ ಒಂದೇ ಸಮಯಕ್ಕೆ ಎರಡೆರಡು ಕೆಲಸ ಮಾಡುವುದು ಮಹಾನ್ ಸಾಧನೆ ಎಂದುಕೊಳ್ಳುವುದು ಇದೆ. ವಾಹನ ಚಲಾಯಿಸುವಾಗ ಫೋನ್‌ನಲ್ಲಿ ಮಾತಾಡುವುದು, ಸಭೆಗಳ ಸಮಯದಲ್ಲಿ ಮೊಬೈಲ್ ಸಂದೇಶ ಕಳುಹಿಸುವುದು, ಟೆಲಿವಿಜನ್ ನೋಡುವಾಗ ಲಾಂಡ್ರಿ ಮಡಚುವುದು ಇತ್ಯಾದಿ ಅನೇಕ ಕೆಲಸಗಳನ್ನು ಏಕಕಾಲದಲ್ಲಿ ಮಾಡುವಲ್ಲಿ ಹೆಮ್ಮೆ ಪಡುತ್ತಾರೆ. ಈ ಸಾಮರ್ಥ್ಯವನ್ನು ಬಹುತೇಕ ದಕ್ಷತೆಯ ಸಂಕೇತವಾಗಿ ಅಥವಾ ಅತಿಶಕ್ತಿ ಎಂದು ನೋಡಲಾಗುತ್ತದೆ. ಆದರೆ ನರವಿಜ್ಞಾನಿಗಳ ಪ್ರಕಾರ ಬಹುಕಾರ್ಯ ನಿಜವಾಗಿಯೂ ಸಾಧ್ಯವಿಲ್ಲ. ನಾವು ಬಹು ಕಾರ್ಯ ಎಂದು ಕರೆಯುವುದು ವಾಸ್ತವದಲ್ಲಿ ಕಾರ್ಯಬದಲಾವಣೆಯಾಗಿದ್ದು, ಮೆದುಳಿಗೆ ಹೊಡೆತ ಕೊಡಲಿದೆ! ಕಾರ್ಯ ಬದಲಾವಣೆಯಿಂದ ಮೆದುಳಿನ ಶಕ್ತಿಯ ಸೋರಿಕೆ ನ್ಯೂರೋಲೀಪ್‌ನ ಸಂಸ್ಥಾಪಕ ಕುಮಾರ್ ಬಾಗ್ರೊಡಿಯ ಪ್ರಕಾರ, ಪ್ರತಿ ಬಾರಿ ಮೆದುಳು ಒಂದು ಕಾರ್ಯದಿಂದ ಇನ್ನೊಂದಕ್ಕೆ ಬದಲಾದಾಗ ಅದು ಮೊದಲನೆ ಸಂದರ್ಭ ತೊರೆದು ಎರಡನೆಯದನ್ನು ಗ್ರಹಿಸಬೇಕು. ಈ ನಿರಂತರ ಬದಲಾವಣೆಗೆ ಹೆಚ್ಚಿನ ಶಕ್ತಿ ಬಳಕೆಯಾಗುತ್ತದೆ. ದೇಹದ ತೂಕದ ಶೇ 2ರಷ್ಟು ಮಾತ್ರ ಹೊಂದಿದ್ದರೂ, ಮೆದುಳು ದೇಹದ ಶಕ್ತಿಯ ಮೂರನೇ ಒಂದು ಭಾಗವನ್ನು ಬಳಸುತ್ತದೆ. ಆಗಾಗ್ಗೆ ಕಾರ್ಯ ಬದಲಾಯಿಸುವುದರಿಂದ ಮೆದುಳಿನ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಹೀಗಾಗಿ ಮಾನಸಿಕವಾಗಿ ವ್ಯಕ್ತಿ ಆಯಾಸಗೊಂಡು ಗಮನ ಕಡಿಮೆಯಾಗುತ್ತದೆ. ಬಹುಕಾರ್ಯದಿಂದ ಗಮನ ದುರ್ಬಲ ಬಹುಕಾರ್ಯದ ಅಭ್ಯಾಸವು ಭಾಗಶಃ ಗಮನದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಮೆದುಳಿಗೆ ತರಬೇತಿ ನೀಡುತ್ತದೆ. ಕಾಲಾನಂತರದಲ್ಲಿ ಇದು ಏಕಾಗ್ರತೆ ದುರ್ಬಲಗೊಳಿಸುತ್ತದೆ ಮತ್ತು ಆಳವಾದ, ಕೇಂದ್ರೀಕೃತ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಬಹುಕಾರ್ಯದ ಹೊರತಾಗಿಯೂ ಯಶಸ್ಸು ದೊರೆಯಲಿದೆ. ಬಹುಕಾರ್ಯದಿಂದ ಯಶಸ್ಸು ದೊರೆಯುತ್ತದೆ ಎನ್ನುವ ಭಾವನೆ ತಪ್ಪು. ಹೀಗೆ ದೀರ್ಘಕಾಲದ ಗಮನಹರಣದ ಮಾದರಿಗಳು ಸುಸ್ತು, ಚಡಪಡಿಕೆ ಮತ್ತು ಆತಂಕಕ್ಕೆ ಕಾರಣವಾಗಲಿದೆ. ನರವಿಜ್ಞಾನಿ ರಿಚರ್ಡ್ ಸೈಟೋವಿಕ್ ತಮ್ಮ “ಯುವರ್ ಸ್ಟೋನ್ ಏಜ್ ಬ್ರೈನ್ ಇನ್ ದಿ ಸ್ಕ್ರೀನ್ ಏಜ್” ಎಂಬ ಪುಸ್ತಕದಲ್ಲಿ ಮಾನವರು ಬಹುಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಶಕ್ತಿಯ ಕೊರತೆ ಹೊಂದಿರುತ್ತಾರೆ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಯೋಗಗಳಲ್ಲಿ ಬಹುಕಾರ್ಯ ನಿರ್ವಹಿಸುವವರು ಅಪ್ರಸ್ತುತ ಮಾಹಿತಿ ಶೋಧಿಸಲು, ಆಲೋಚನೆಗಳನ್ನು ಸಂಘಟಿಸಲು ಮತ್ತು ಕಾರ್ಯಗಳನ್ನು ಪರಿಣಾಮಕಾರಿಯಾಗಿ ಬದಲಿಸಲು ಹೆಣಗಾಡುತ್ತಾರೆ ಎಂದು ಖಚಿತವಾಗಿವೆ. ಒಂದೇ ಕಾರ್ಯಕ್ಕೆ ಸಜ್ಜಾಗಿರುವ ಮೆದುಳು ವಿಕಸನದ ದೃಷ್ಟಿಕೋನದಲ್ಲಿ ನೋಡಿದಾಗ ಮಾನವನ ಮೆದುಳು ಗಮನ ಕೇಂದ್ರೀಕರಿಸಲೆಂದೇ ಸಜ್ಜಾಗಿದೆ. ಉದಾಹರಣೆಗೆ ನಿರಂತರ ಸಂಭಾಷಣೆಗಳು ಅಥವಾ ಅಡೆತಡೆಯಿಲ್ಲದ ಸಮಸ್ಯೆ ಪರಿಹಾರಕ್ಕಾಗಿ ಸಿದ್ಧವಾಗಿದೆ. ಆದರೆ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಮಾಹಿತಿ ಮೆದುಳಿಗೆ ತುಂಬಿಸುವ ಆಧುನಿಕ ಅಭ್ಯಾಸಗಳು ವಿನ್ಯಾಸಕ್ಕೆ ವಿರುದ್ಧವಾಗಿವೆ. ಜನರು ಒಂದು ಸಮಯಕ್ಕೆ ಒಂದೇ ಕಾರ್ಯದತ್ತ ಗಮನಹರಿಸಿದಾಗ ವೇಗವಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುತ್ತಾರೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಬಹು ಕಾರ್ಯದ ಆರೋಗ್ಯ ಅಪಾಯಗಳು ಬಹು ಕಾರ್ಯದ ಪರಿಣಾಮವು ಉತ್ಪಾದಕತೆಯನ್ನು ಮೀರಿದೆ. ನಿರಂತರವಾಗಿ ಕೆಲಸ ಬದಲಿಸುವುದರಿಂದ ಒತ್ತಡದ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತ ತಾತ್ಕಾಲಿಕವಾಗಿ ಹೆಚ್ಚಿಸಬಹುದು ಎಂದು ವೈಜ್ಞಾನಿಕ ಪುರಾವೆಗಳು ತೋರಿಸಿವೆ. ಅಧ್ಯಯನಗಳ ಪ್ರಕಾರ ದೀರ್ಘಕಾಲದಲ್ಲಿ ಈ ಪರಿಣಾಮಗಳು ಆತಂಕ, ಖಿನ್ನತೆಗೆ ಕಾರಣವಾಗಬಹುದು ಮತ್ತು ಸೆರೆಬ್ರೊವಾಸ್ಕ್ಯುಲರ್ ರೋಗ ಮತ್ತು ಅರಿವಿನ ಕುಸಿತದ ಅಪಾಯ ಹೆಚ್ಚಿಸಬಹುದು. ಅಪಾಯವನ್ನು ಕಡಿಮೆಗೊಳಿಸುವುದು ಹೇಗೆ? * ನರವಿಜ್ಞಾನಿಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ: * ಒಂದು ಕಾರ್ಯದ ಮೇಲೆ ಕನಿಷ್ಠ 20 ನಿಮಿಷ ಗಮನಹರಿಸಿ ನಂತರ ಬೇರೆ ಕೆಲಸಕ್ಕೆ ಹೋಗಬೇಕು. * ಇಮೇಲ್‌ಗಳನ್ನು ನಿರಂತರವಾಗಿ ಪರೀಕ್ಷಿಸುವ ಬದಲಾಗಿ ನಿರ್ದಿಷ್ಟ ವೇಳಾಪಟ್ಟಿ ನಿಗದಿಗೊಳಿಸಿ. * ಅಧಿಸೂಚನೆಗಳನ್ನು ಆಫ್ ಮಾಡಿ ಶಾಂತ ಸ್ಥಳದಲ್ಲಿ ಕೆಲಸ ಮಾಡುವ ಮೂಲಕ ಅಡಚಣೆಯನ್ನು ತಪ್ಪಿಸಿ. * ಮಾನಸಿಕವಾಗಿ ಅತಿಯಾದ ಭಾರ ಹೊರುವುದನ್ನು ಕಡಿಮೆಗೊಳಿಸಲು ಕಾರ್ಯಕ್ಷೇತ್ರವನ್ನು ಒಂದಕ್ಕೆ ಮಿತಿಗೊಳಿಸಿ. * ಕೈಯಲ್ಲಿರುವ ಕಾರ್ಯ ಪೂರ್ಣಗೊಳ್ಳಲು ಸಾವಧಾನತೆಯಿಂದ ಇರುವುದನ್ನು ಅಭ್ಯಾಸ ಮಾಡಿ. ಅಂತಿಮವಾಗಿ ಹೇಳುವುದಾದಲ್ಲಿ, ಬಹುಕಾರ್ಯವು ಶಕ್ತಿಯಲ್ಲ. ಬದಲಾಗಿ ಮಾನಸಿಕವಾಗಿ ಶಕ್ತಿ ಖಾಲಿ ಮಾಡುವುದು. ಗಮನವನ್ನು ದುರ್ಬಲಗೊಳಿಸುವುದು ಮತ್ತು ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಆಹ್ವಾನಿಸುವುದಾಗುತ್ತದೆ. ಅಧಿಕ ಉತ್ಪಾದಕತೆ ಮತ್ತು ಯೋಗಕ್ಷೇಮದ ಮಾರ್ಗವೆಂದರೆ ಒಂದು ಬಾರಿಗೆ ಒಂದೇ ಕೆಲಸ ಮಾಡುವುದು ಮತ್ತು ಅದರತ್ತ ಸಂಪೂರ್ಣ ಗಮನಹರಿಸುವುದು.

ವಾರ್ತಾ ಭಾರತಿ 5 Apr 2026 6:34 pm

ಮೇ 2ರಂದು 'ಮಾದರಿ ಮದುವೆ' ಅಭಿಯಾನದ ಸಮಾರೋಪ ಸಮ್ಮೇಳನ: ಎ.ಪಿ. ಉಸ್ತಾದ್ ಘೋಷಣೆ

ಕಲ್ಲಿಕೋಟೆ: ಮದುವೆ ಅನಾಚಾರ, ಮುಂದುವೆಚ್ಚಗಳಿಂದಾಗಿ ಬಹುದೊಡ್ಡ ಭಾರವಾಗುತ್ತಿರುವುದು ಅತ್ಯಂತ ದುರದೃಷ್ಟಕರ, ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಬೇಕಾದುದು ಸಾಮಾಜಿಕ ಸಂಘಟನೆಗಳ ಜವಾಬ್ದಾರಿ ಎಂದು ಭಾರತದ ಗ್ರ್ಯಾಂಡ್‌ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ' ಅಭಿಯಾನದ ಸಮಾರೋಪ ಸಮ್ಮೇಳನವನ್ನು ಘೋಷಿಸಿ ಅವರು ಮಾತನಾಡಿದರು. ಸಮ್ಮೇಳನವು ಮೇ 2ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, 'ಸಮಸ್ತ' ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಲ್ಲಿಕೋಟೆ ಮರ್ಕಝ್ ವಿದ್ಯಾಲಯದಲ್ಲಿ ನಡೆದ ಘೋಷಣಾ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಉಪಾಧ್ಯಕ್ಷರಾದ ಸೈಯದ್ ಇಲ್ಯಾಸ್ ತಂಙಳ್ ಎರುಮಾಡ್, ಸೈಯದ್ ಶಾಫಿ ನಈಮಿ ತಂಙಳ್, ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್, ಕೋಶಾಧಿಕಾರಿ ಮನ್ಸೂರ್ ಅಲಿ ಕೋಟೆಗದ್ದೆ, ಕಾರ್ಯದರ್ಶಿ ಹಸೈನಾರ್ ಆನೆಮಹಲ್, ಸ್ವಾಗತ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಸಂಚಾಲಕ ಸಾಲಿಹ್ ಮುರ, ಪ್ರಮುಖರಾದ ಹಾರಿಸ್ ಅಡ್ಕ, ರವೂಫ್ ಹಾಶಿಮಿ, ಅಬ್ದುಲ್ಲಾ ಕಾವು, ಜಮಾಲ್ ಮೈದಾನಿಮೂಲೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Apr 2026 6:33 pm

ಡಬಲ್ ಕ್ಲೆನ್ಸಿಂಗ್ ಬೇಸಿಗೆಗೆ ಅಗತ್ಯವಿರುವ ಚರ್ಮ ರಕ್ಷಣೆಯೆ? ವೈದ್ಯರು ಹೇಳುವುದೇನು?

ಡಬಲ್ ಕ್ಲೆನ್ಸಿಂಗ್ ಪ್ರಚಾರವೆ? ನಿಜವಾಗಿಯೂ ಅಗತ್ಯವಿರುವ ಚರ್ಮದ ರಕ್ಷಣೆಯೆ? ವೈದ್ಯರು ಹೇಳುವುದೇನು? ಹವಾಮಾನವು ಚರ್ಮಕ್ಕೆ ಒಡ್ಡುವ ಸವಾಲುಗಳನ್ನು ನಿಭಾಯಿಸಲು ಚರ್ಮದ ಆರೈಕೆಯನ್ನು ಋತುವಿಗೆ ಅನುಗುಣವಾಗಿ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಅಂದರೆ ಅತಿ ಶಾಖ, ಅತಿ ಬೆವರು ಮತ್ತು ನಿಮ್ಮ ಚರ್ಮದ ಸಮತೊಲನ ಸುಲಭವಾಗಿ ತೊಂದರೆಗೊಳಿಸುವ ಒಟ್ಟು ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ದಿನಚರಿಯನ್ನು ಋತುವಿನ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ. ಗಮನಸೆಳೆದಿರುವ ಚರ್ಮದ ಆರೈಕೆ ಎಂದರೆ ಡಬಲ್ ಕ್ಲಿನ್ಸಿಂಗ್. ಇದು ಚರ್ಮವನ್ನು ಸಂಪೂರ್ಣ ಸ್ವಚ್ಛಗೊಳಿಸಲು ವಿನ್ಯಾಸಗೊಳಿಸಲಾದ ಎರಡು ಹಂತದ ವಿಧಾನವಾಗಿದೆ. ಆದರೆ ಇದು ಪ್ರಚಾರವೆ? ಅಥವಾ ನಿಜವಾಗಿಯೂ ಅಗತ್ಯವಿರುವ ಚರ್ಮದ ರಕ್ಷಣೆಯೆ? ಚರ್ಮ ವೈದ್ಯರು ಹೇಳುವುದೇನು? ಡಬಲ್ ಕ್ಲೆನ್ಸಿಂಗ್ ಎಂದರೇನು? ಮೊದಲಿಗೆ ಡಬಲ್ ಕ್ಲೆನ್ಸಿಂಗ್ ಎಂದರೆ ಏನೆಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಚರ್ಮದ ಆರೈಕೆಯಲ್ಲಿ ದಿನಚರಿಯಲ್ಲಿ ಕ್ಲೆನ್ಸಿಂಗ್ ಮೂಲಭೂತವಾಗಿ ಮೊದಲ ಹೆಜ್ಜೆಯಾಗಿದೆ. ಕ್ಲೆನ್ಸಿಂಗ್ ಹಂತದಲ್ಲಿ ಕಲ್ಮಶಗಳನ್ನು ತೆಗೆಯಲು ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಡಬಲ್ ಕ್ಲೆನ್ಸಿಂಗ್ ಮುಖ್ಯವಾಗಿ ಗಮನ ಸೆಳೆಯಲು ಕಾರಣ ಬೇಸಿಗೆಯಲ್ಲಿ ಶಾಖ, ಬೆವರು ಮತ್ತು ಹೆಚ್ಚುವರಿ ಎಣ್ಣೆಯನ್ನು ತರುತ್ತದೆ. ಇದು ಕಲ್ಮಶಗಳನ್ನು ಹಿಡಿದಿಡಬಹುದು. ಹೀಗಾಗಿ ಸಂಪೂರ್ಣ ಶುದ್ಧೀಕರಣದ ಅಗತ್ಯವಿರುತ್ತದೆ. ಸೋಲ್ ಡರ್ಮಾ ಕ್ಲಿನಿಕ್‌ ಚರ್ಮವೈದ್ಯರಾದ ಡಾ ಅನಿಕಾ ಗೋಯೆಲ್ ಹೇಳುವ ಪ್ರಕಾರ, ಡಬಲ್ ಕ್ಲೆನ್ಸಿಂಗ್ ಎಂದರೆ ಮೊದಲ ಹಂತದಲ್ಲಿ ಎಣ್ಣೆ ಆಧರಿತ ಕ್ಲೆನ್ಸರ್ ಬಳಸಲಾಗುತ್ತದೆ. ಸೆಬಮ್ ಮತ್ತು ಎಸ್ಪಿಎಫ್ನಂತಹ ಎಣ್ಣೆ ಆಧರಿತ ಕಲ್ಮಶಗಳನ್ನು ಕರಗಿಸಲು ನೆರವಾಗುತ್ತದೆ. ನಂತರ ಎರಡನೇ ಹಂತದಲ್ಲಿ ಬೆವರು, ಕೊಳಕು ಮತ್ತು ಉಳಿದಿರುವ ಯಾವುದೇ ಶೇಷ ತೆಗೆದು ಹಾಕುವ ನೀರು ಆಧರಿತ ಕ್ಲೆನ್ಸರ್ ಅನ್ನು ಬಳಸಲಾಗುತ್ತದೆ. ಆದರೆ ಡಬಲ್ ಕ್ಲೆನ್ಸರ್ಗೆ ಸೂಕ್ತವಾದ ಉತ್ಪನ್ನಗಳನ್ನು ಆರಿಸುವುದು ಅಗತ್ಯ ಎನ್ನುತ್ತಾರೆ ವೈದ್ಯರು. ಹಗುರವಾದ ಎಣ್ಣೆಗಳು ಅಥವಾ ಬಾಮ್‌ಗಳನ್ನು ಬಳಸಬಹುದು. ಚರ್ಮದ ಪ್ರಕಾರಕ್ಕೆ ಸೂಕ್ತವಾದ ಸೌಮ್ಯವಾದ ಫೇಸ್ ವಾಶ್, ಎಣ್ಣೆಯುಕ್ತ ಚರ್ಮಕ್ಕಾಗಿ ಜೆಲ್ ಆಧರಿತ ಅಥವಾ ಶುಷ್ಕ ಮತ್ತು ಸೂಕ್ಷ್ಮ ಚರ್ಮಕ್ಕಾಗಿ ಹೈಡ್ರೇಟಿಂಗ್ ಸೂತ್ರಗಳನ್ನು ಬಳಸಬಹುದು. ಬೇಸಗೆಯಲ್ಲಿ ಡಬಲ್ ಕ್ಲೆನ್ಸಿಂಗ್ ಅಗತ್ಯವೆ? ಮತ್ತೊಬ್ಬ ಚರ್ಮ ವೈದ್ಯರಾದ ಡಾ ಆಕ್ಷಿತಾ ಭಾನ್ ಅವರ ಪ್ರಕಾರ ಬೇಸಗೆಯ ತಿಂಗಳುಗಳಲ್ಲಿ ಡಬಲ್ ಕ್ಲೆನ್ಸಿಂಗ್ ನಿಜವಾಗಿಯೂ ಉಪಯುಕ್ತವಾಗಬಹುದು. “ಹೆಚ್ಚಿದ ಬೆವರು, ಎಣ್ಣೆ ಉತ್ಪಾದನೆ ಮತ್ತು ಸನ್ಸ್ಕ್ರೀನ್ನ ನಿಯಮಿತ ಬಳಕೆಯಿಂದ ಚರ್ಮವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದರೆ ರಂಧ್ರಗಳ ದಟ್ಟಣೆಗೆ ಹೆಚ್ಚಿನ ಅವಕಾಶವಿದೆ. ಆದರೆ ಎಲ್ಲರಿಗೂ ಡಬಲ್ ಕ್ಲೆನ್ಸಿಂಗ್ ಸೂಕ್ತವಲ್ಲ” ಎಂದು ಅವರು ಹೇಳಿದ್ದಾರೆ. “ಒಣ ಅಥವಾ ಸೂಕ್ಷ್ಮ ಚರ್ಮ ಹೊಂದಿರುವ ಮಂದಿ ಅಥವಾ ಅತಿಯಾಗಿ ಮೇಕಪ್ ಉತ್ಪನ್ನಗಳನ್ನು ಬಳಸದವರು ಪ್ರತಿದಿನ ಡಬಲ್ ಕ್ಲೆನ್ಸಿಂಗ್ ಮಾಡುವ ಅಗತ್ಯವಿರುವುದಿಲ್ಲ. ಅತಿ ಶುದ್ಧೀಕರಣದಿಂದ ಚರ್ಮದ ತಡೆಗೋಡೆಗೆ ಸಮಸ್ಯೆಯಾಗಬಹುದು. ಕಿರಿಕಿರಿ ಅಥವಾ ನಿರ್ಜಲೀಕರಣಕ್ಕೆ (ಡಿಹೈಡ್ರೇಶನ್) ಕಾರಣವಾಗಬಹುದು” ಎನ್ನುತ್ತಾರೆ. ಚರ್ಮದ ಆರೈಕೆಯನ್ನು ಮಾಡುವುದು ಹೇಗೆ? ಒಂದು ವೇಳೆ ಡಬಲ್ ಕ್ಲೆನ್ಸಿಂಗ್ ಅನ್ನು ರಾತ್ರಿಯ ದಿನಚರಿಯಲ್ಲಿ ಸೇರಿಸಿದರೆ ಸೌಮ್ಯವಾದ, ಕಾಮೆಡೋಜೆನಿಕ್ ಅಲ್ಲದ ಉತ್ಪನ್ನಗಳನ್ನು ಬಳಸಬೇಕು. ನಿಯಾಸಿನಮೈಡ್, ಸೆರಾಮೈಡ್ಗಳು ಮತ್ತು ಹೈಲುರಾನಿಕ್ ಆಮ್ಲದಂತಹ ವಸ್ತುಗಳು ಹೈಡ್ರೇಶನ್ ಕಾಪಾಡಲು ಮತ್ತು ಚರ್ಮದ ತಡೆಗೋಡೆಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ ಡಬಲ್ ಕ್ಲೆನ್ಸಿಂಗ್ ನಿರ್ಧಾರವು ಚರ್ಮದ ಪ್ರಕಾರ, ಜೀವನಶೈಲಿ ಮತ್ತು ದೈನಂದಿನ ಮಾನ್ಯತೆಯನ್ನು ಅವಲಂಬಿಸಿರುತ್ತದೆ. ಸೂಚನೆ: ಲೇಖನವನ್ನು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದ್ದು, ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ವೈದ್ಯರ ಸಲಹೆಯನ್ನು ಅನುಸರಿಸಿ.

ವಾರ್ತಾ ಭಾರತಿ 5 Apr 2026 6:30 pm

ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ!

SWR Good News: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಕಲ್ಪಿಸುತ್ತಲಿರುತ್ತದೆ. ಇದೀಗ ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಉತ್ತರ ಕರ್ನಾಟಕ ಮತ್ತು ತೆಲಂಗಾಣದ ಭಾಗದ ಮೂರು ಪ್ರಮುಖ ವಿಶೇಷ ರೈಲುಗಳನ್ನು ಇನ್ಮುಂದೆ ಖಾಯಂ ಆಗಿ ಓಡಿಸಲು ಹಾಗೂ ದರ ಇಳಿಕೆ ಮಾಡಲು ನಿರ್ಧರಿಸಿದೆ. ಹಾಗಾದ್ರೆ,

ಒನ್ ಇ೦ಡಿಯ 5 Apr 2026 6:27 pm

ವಾಡಿ | ಬಿಜೆಪಿ ಕಚೇರಿಯಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ರವಿವಾರ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಸಮಾಜ ಸುಧಾರಣೆ ಶ್ರಮಿಸಿದ ಬಾಬು ಜಗಜೀವನ್ ರಾಮ್ ಅವರು ದೇಶದಲ್ಲಿರಿವ ಎಲ್ಲರೂ ಸಮಾನವಾಗಿ ಬಾಳಬೇಕು. ಪರಸ್ಪರ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೆಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು ಎಂದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದ ಅವರು ದೇಶದಲ್ಲಿ ಆಹಾರ ಕೊರತೆ ಎದುರಾದಾಗ ಹಸಿರು ಕ್ರಾಂತಿ ಮಾಡುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಣೆ ಮಾಡಿದರು. ಇಂತಹ ಮಹಾನ್‌ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ನಾವುಗಳು ಪಾಲಿಸಬೇಕು. ನಮ್ಮ ಯುವಜನತೆಗೆ ಇಂತಹ ನಾಯಕರನ್ನು ಮಾದರಿಯಾಗಿ ಸ್ವೀಕರಿಸಿ ಅವರ ಆಶಯದಂತೆ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಕ್ಷ ಆಡಳಿತಗಾರರಾಗಿದ್ದರು ಎಂದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದೆಂದಿಗೂ ಮರೆಯದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರು ಜೀವನ ಸಂಘರ್ಷ ಇಂದಿನ ರಾಜಕೀಯ ನಾಯಕರರುಗಳಿಗೆ ಮಾದರಿಯಾಗಿದೆ ಎಂದರು. ಮಾದಿಗ ಸಮಾಜದ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಎಸ್.ಸಿ.ಮೂರ್ಚಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜು ಮುಕ್ಕಣ್ಣ ಅವರು ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಸ್ಥಳೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ಸಿ. ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಮುಖಂಡರಾದ ಹರಿ ಗಲಾಂಡೆ, ರಿಚರ್ಡ್ ಮಾರೆಡ್ಡಿ, ಭೀಮರಾವ ಸುಬೇದಾರ, ಮಲ್ಲಿಕಾರ್ಜುನ ಸಾತಖೇಡ, ಕುಮಾರ ರಡ್ಡಿ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಹಾಜಪ್ಪ ಬಂಡಾರಿ, ರವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 5 Apr 2026 6:23 pm

Afzalpur | ಒಳಮೀಸಲಾತಿ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಒತ್ತಾಯ

ಅಫಜಲಪುರ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮವು ಜಯಂತಿ ಆಚರಣೆಯ ಜೊತೆಗೆ ಒಳಮೀಸಲಾತಿ ಕುರಿತ ಚರ್ಚೆಗೆ ವೇದಿಕೆಯಾಗಿದ್ದು ವಿಶೇಷತೆ ಕಂಡುಬಂತು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂವೈ ಪಾಟೀಲ್, ಡಾ.ಬಾಬು ಜಗಜೀವನರಾಂ ಅವರು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಅಮೂಲ್ಯ ನಾಯಕರು ಎಂದು ಹೇಳಿದರು. ಮಾದಿಗ ಸಮಾಜದ ಮುಖಂಡ ಶ್ರೀಕಾಂತ ಮಾಶಾಳಕರ ಪಟ್ಟಣದಲ್ಲಿ ಜಗಜೀವನರಾಂ ಅವರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣಕುಮಾರ ಪಾಟೀಲ್, ಶೀಘ್ರದಲ್ಲೇ ಶಾಸಕರ ಗಮನಕ್ಕೆ ತಂದು ಮೂರ್ತಿ ಸ್ಥಾಪನೆ ಹಾಗೂ ಸಮುದಾಯ ಭವನ ನಿರ್ಮಾಣ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯುವ ಮುಖಂಡ ಪರುಶುರಾಮ ಒಳಮೀಸಲಾತಿ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ, ಮುಂದಿನ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಅರುಣಕುಮಾರ ಪಾಟೀಲ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಮಹಾತ್ಮ ಗಾಂಧಿ ಅವರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಹಾನ್ ನಾಯಕರು ಎಂದು ಹೇಳಿದರು. ಪಶುಸಂಗೋಪನಾ ಇಲಾಖೆ ಅಧಿಕಾರಿ ಎಚ್.ಎಂ. ಕೊಟೆ ಹಾಗೂ ಬಂಡಾಯ ಸಾಹಿತಿ ಬಿ.ಎಂ. ರಾವ ಅವರು ಜಗಜೀವನರಾಂ ಅವರ ಸಾಮಾಜಿಕ ಹೋರಾಟ ಹಾಗೂ ಕ್ರಾಂತಿಕಾರಿ ಚಿಂತನೆಗಳನ್ನು ಸ್ಮರಿಸಿದರು. ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಮೇಶ ಪೂಜಾರಿ ವಿಶೇಷ ಉಪನ್ಯಾಸ ನೀಡಿ ಅವರ ಜೀವನ ಹಾಗೂ ಸಾಧನೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಕವಲಗಿ, ಕೃಷಿ ಇಲಾಖೆ ಅಧಿಕಾರಿ ಎಸ್.ಎಚ್. ಗಡಗಿಮನಿ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಆರೋಗ್ಯ ಇಲಾಖೆ ಅಧಿಕಾರಿ ಚೇತನ ಹಾಗೂ ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಲಕ್ಷ್ಮೀಪುತ್ರ ಬಬಲಾದ, ಭಾಗಣ್ಣ ಘತ್ತರಗಿ, ಶ್ರೀಕಾಂತ ಮಾಶಾಳಕರ್, ಶಿವಾನಂದ ಗಾಡಿಸಾಹುಕಾರ, ಮಾದಿಗ ಸಮಾಜದ ಮಾಜಿ ಅಧ್ಯಕ್ಷ ಗುಂಡಪ್ಪ ಕಾರಬೋಸಗಾ,ದತ್ತು ಘೂಳನೂರ, ಗುಂಡಪ್ಪ ಕಾರಬೋಸಗಾ, ಶರಣು ಕೇಸಾಪೂರ, ಕಾಳಪ್ಪ ಪೂಜಾರಿ ಹಿಂಚಗೇರಾ, ಚಂದ್ರಕಾಂತ ತೇಲಕರ್, ಚಂದಪ್ಪ ಕೆರಕನಳ್ಳಿ, ಭಾಗಣ್ಣ ಪಾಟೋಳಿ, ಸುನೀಲ ಕಟ್ಟಿಮನಿ, ಪರುಶರಾಂ ನಂದರ್ಗಿ, ಧರ್ಮಣ ಗಾಣಗಾಪೂರ,ಬಾಬು ಬೋಗನಳ್ಳಿ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 5 Apr 2026 6:18 pm

ನನ್ನ ಮತ್ತು ಸಚಿವ ಮಲ್ಲಿಕಾರ್ಜುನ್ ನಡುವೆ ಯಾವುದೇ ಮನಸ್ತಾಪವಿಲ್ಲ: ಸಚಿವ ಝಮೀರ್ ಅಹ್ಮದ್

ದಾವಣಗೆರೆ: ನಮ್ಮ ಮತ್ತು ಸಚಿವ ಮಲ್ಲಿಕಾರ್ಜುನ್ ನಡುವೆ ಯಾವುದೇ ಮನಸ್ತಾಪವಾಗಲೀ, ಮುನಿಸಾಗಲೀ ಇಲ್ಲ. ಇದೆಲ್ಲವೂ ಮಾಧ್ಯಮದ ಸೃಷ್ಟಿ ಮಾತ್ರ ಎಂದು ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದರು. ನಗರದ ಸಚಿವ ಮಲ್ಲಿಕಾರ್ಜುನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಲ್ಲಿಕಾರ್ಜುನ್ ಮತ್ತು ನಾವು ಆತ್ಮೀಯ ಸ್ನೇಹಿತರು. ನಾವು ಏಕವಚನದಲ್ಲಿ ಮಾತನಾಡಿಸಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಎ. 5 ರಂದು ದಾವಣಗೆರೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರಕ್ಕೆ ಬಂದ್ದಿದ್ದೇನೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಯಾರು ಬಂದರೂ, ಬರದಿದ್ದರೂ ಕಾಂಗ್ರೆಸ್ ಗೆಲ್ಲಲಿದೆ. ಸಮುದಾಯ ಮತ್ತು ಪಕ್ಷದಲ್ಲಿ ಕೆಲವರು ಅಸಮಾಧಾನಗೊಂಡಿದ್ದು ಅವರನ್ನು ಮಾತನಾಡಿಸಿ ಸಮಾಧಾನ ಪಡಿಸಿ ಕೆಲಸ ಮಾಡುವಂತೆ ತಿಳಿಸುತ್ತೇನೆ ಎಂದು ಹೇಳಿದರು. ಪಕ್ಷದ ಸಂಪ್ರದಾಯದಂತೆ ಅನುಕಂಪದ ಹಿನ್ನಲೆಯಲ್ಲಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಖಾಸಗಿ ಸಮಾರಂಭಕ್ಕೆಂದು ನಗರಕ್ಕೆ ಬಂದಾಗ ಆಹಿಂದ ಸಮಾಜದವರು ಮುಖ್ಯವಾಗಿ ಮುಸ್ಲಿಂ ಸಮಾಜದ ಮುಖಂಡರು ನನ್ನನ್ನು ದಾವಣಗೆರೆ ದಕ್ಷಿಣದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿಸುವಂತೆ ಕೇಳಿದ್ದರು. ಈ ಹಿನ್ನಲೆಯಲ್ಲಿ ನಾವು ಹೈಕಮಾಂಡಗೆ ಟಿಕೆಟ್‍ಗಾಗಿ ಬೇಡಿಕೆ ಇಟ್ಟಿದ್ದವು. ಅದರೆ, ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ. 224 ಕ್ಷೇತ್ರಗಳು ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಗಾಂಧಿ, ರಾಹುಲ್ ಗಾಂಧಿ ಅವರ ಕ್ಷೇತ್ರಗಳಾಗಿದ್ದು ಅವರು ಯಾರಿಗೆ ಬೇಕಾದರೂ ಟಿಕೆಟ್ ಕೊಡಬಹುದು ಎಂದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದು 3 ಸಾವಿರ ಮತ ಪಡೆದಿದ್ದರು. ಈ ಬಾರಿ 11 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು ಅವರನ್ನು ಮನವೊಲಿಸುವ ಕೆಲಸ ಮಾಡುತ್ತೇವೆ. ವಿಧಾನಪರಿಷತ್ ಸದಸ್ಯ ಜಬ್ಬಾರ್ ಸಾಬ್ ಸೇರಿದಂತೆ ಅಸಮಾಧಾನಿತ ಎಲ್ಲಾ ಕಾಂಗ್ರೆಸ್ ಸದಸ್ಯರು ಒಂದೇ ಕುಟುಂಬವಿದ್ದಂತೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅಸಮಾಧಾನಿತರೊಂದಿಗೆ ಮಾತನಾಡಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ತಿಳಿಸಿದರು. ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ಝಮೀರ್ ಮತ್ತು ನಾವು ಆತ್ಮೀಯ ಸ್ನೇಹಿತರು. ನಾವು ಆತ್ಮೀಯವಾಗಿ ಬಾರೋ ..ಹೋಗೋ ಎಂದು ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತೇವೆ. ಮಾತನಾಡುವ ಬರದಲ್ಲಿ ನಾನು ಅಂದು ಆ ರೀತಿ ಮಾತನಾಡಿರುವುದು. ಅದನ್ನು ಬೆಳಸಿಕೊಂಡು ಹೋಗುವ ಅಗತ್ಯವಿಲ್ಲ. ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು. ರಾಜ್ಯ ಚುನಾವಣಾ ಉಸ್ತುವಾರಿ ಅಭಿಷೇಕ ದತ್ತ, ಸಚಿವ ಎಂ.ಸಿ. ಸುಧಾಕರ, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಇತರರು ಇದ್ದರು. ಅಸಮಾಧಾನಕ್ಕೆ ತೆರೆ ಸಚಿವರಾದ ಮಲ್ಲಿಕಾರ್ಜುನ್ ಮತ್ತು ಝಮೀರ್ ಅಹಮದ್ ನಡುವೆ ಉಂಟಾಗಿದ್ದ ಅಸಮಾಧಾನಕ್ಕೆ ಕೊನೆಗೂ ರವಿವಾರ ಝಮೀರ್ ಆಹಮದ್ ಅವರೇ ನಗರಕ್ಕೆ ಆಗಮಿಸುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದರು. ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸಿದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಝಮೀರ್ ಪರ ಘೋಷಣೆಗಳನ್ನು ಕೂಗಿ ಪುಷ್ಪ ಎರಚುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಅಭಿಮಾನದಿಂದ ಬರಮಾಡಿಕೊಂಡರು.

ವಾರ್ತಾ ಭಾರತಿ 5 Apr 2026 6:15 pm