SENSEX
NIFTY
GOLD
USD/INR

Weather

26    C
...

ಉಪಚುನಾವಣೆ ರಿಸಲ್ಟ್ ಮುನ್ನವೇ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ : ರೈಟ್ ಟೈಮ್’ಗಾಗಿ ಕಾಯುತ್ತಿದ್ದ ಬಣಕ್ಕೆ ಸಿಕ್ಕಿತೇ ಬ್ರಹ್ಮಾಸ್ತ್ರ?

Karnataka Congress Conflict : ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಮತದಾನ ಮುಗಿದಿದೆ, ಆದರೆ, ಕಾಂಗ್ರೆಸ್ಸಿನಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕೈ ಪಾರ್ಟಿಯ ಅಲ್ಪಸಂಖ್ಯಾತ ಸಮುದಾಯದ ನಾಯಕರು ಗರಂ ಆಗಿದ್ದಾರೆ. ಉಪಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ, ಕಾಂಗ್ರೆಸ್ಸಿನ ಆಂತರಿಕ ಭಿನ್ನಮತ ಹೊಸಹೊಸ ಆಯಾಮಕ್ಕೆ ತಿರುಗುತ್ತಿದೆ.

ವಿಜಯ ಕರ್ನಾಟಕ 13 Apr 2026 9:13 am

ಬಿರುಬಿಸಿಲು, ಪದವಿ ಕಾಲೇಜು ಸಮಯ ಬದಲು ; ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ ಕೊಪ್ಪಳ ಜಿಲ್ಲೆಯ ಪ್ರಾಂಶುಪಾಲರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಪ್ರತಿವರ್ಷದಂತೆ ಕಚೇರಿಗಳ ಅವಧಿಯನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಬೀದರ್, ರಾಯಚೂರು, ಕಲಬುರಗಿ ಸೇರಿದಂತೆ ಈ ಭಾಗದ ಪ್ರಮುಖ ಜಿಲ್ಲೆಗಳಿಗೆ ಈ ಸೌಲಭ್ಯವಿದ್ದರೂ, ಪದವಿ ಕಾಲೇಜುಗಳಿಗೆ ಈ ನಿಯಮ ಅನ್ವಯವಾಗಿರಲಿಲ್ಲ.

ವಿಜಯ ಕರ್ನಾಟಕ 13 Apr 2026 8:58 am

ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇಗೆ ಕಂದಾಯ ಇಲಾಖೆ ನಿರ್ಧಾರ

PC: kga.in ಬೆಂಗಳೂರು : ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು ಕಂದಾಯ ಇಲಾಖೆಯು ಮುಂದಾಗಿದೆ. ಹಾಗೆಯೇ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಯ ಆದಾಯವನ್ನೂ ಸಹ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲು ಕ್ರಮವಹಿಸಿದೆ. ಈ ಸಂಸ್ಥೆಯ ಆಡಳಿತ ಮಂಡಳಿಗೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರದ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಪ್ರಕ್ರಿಯೆಗಳಿಗೆ ಮುಂದಾಗಿದ್ದ ಕಂದಾಯ ಇಲಾಖೆಯು ಇದೀಗ ಈ ಸಂಸ್ಥೆಯು ಹೊಂದಿರುವ ಜಮೀನಿನ ಸರ್ವೇ ನಡೆಸುವ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೂರ್ವ ವಲಯದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ. ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸಲು ಸಿದ್ಧತೆ ನಡೆಸಿರುವ ಸರಕಾರವು, ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿರುವ ನಡುವೆಯೇ ಜಮೀನಿನ ಸರ್ವೇ ನಡೆಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ. ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ಸಂಬಂಧ 2026ರ ಎಪ್ರಿಲ್ 7ರಂದು ನಡೆದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕಂದಾಯ ಇಲಾಖೆಯು ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ವಿವರಣೆಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ. ಇದೇ ಸಂಸ್ಥೆಗೆ ಸಂಬಂಧಿಸಿದಂತೆ 2023ರ ಮಾರ್ಚ್ 7, 2026ರ ಫೆ.10ರಂದು ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ನಡೆಸಿತ್ತು. ಗಾಲ್ಫ್ ಅಸೋಸಿಯೇಷನ್‌ಗೆ ನೀಡಿರುವ ಭೂಮಿಯ ಮೇಲ್ವಿಚಾರಣೆ, ಷರತ್ತುಗಳ ಅನುಸರಣೆಯಾಗಿದೆಯೇ ಇಲ್ಲವೇ, ಮೇಲ್ವಿಚಾರಣೆ ಮಾಡದ ಕಾರಣ ಆಗಿರುವ ಪರಿಣಾಮಗಳು, ಭೂಮಿಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಂಟಿ ಭೌತಿಕ ಪರಿವೀಕ್ಷಣೆ ಮಾಡುವುದು, ಗುತ್ತಿಗೆ ಬಾಡಿಗೆ ಪಾವತಿಗಾಗಿ ತಗಾದೆ ಸೃಷ್ಟಿಸದೇ ಇರುವ ವಿಷಯಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಸಿರುವುದು ತಿಳಿದು ಬಂದಿದೆ. 2026ರ ಎಪ್ರಿಲ್ 7ರಂದು ನಡೆದ ಸಭೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಇತ್ತೀಚಿನ ಮಾಹಿತಿಯನ್ನು ಸಭೆಗೆ ಒದಗಿಸಿರುವುದು ಗೊತ್ತಾಗಿದೆ. ಗಾಲ್ಪ್ ಅಸೋಸಿಯೇಷನ್ ಬಳಸುತ್ತಿರುವ ಜಮೀನು, ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಆಡಳಿತ ವಿಷಯದಲ್ಲಿಯೂ ನಿರ್ಣಯ ಕೈಗೊಳ್ಳುವ ಅಧಿಕಾರವೂ ಸರಕಾರಕ್ಕಿದೆ ಎಂದು ಪ್ರತಿಪಾದಿಸುತ್ತಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದರು. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆಡಳಿತವನ್ನು ನಿಯಂತ್ರಿಸಲು ಹೊರಟಿರುವ ಸರಕಾರವು, ಹಲವು ಸಮರ್ಥನೀಯ ಅಂಶಗಳನ್ನು ಪಟ್ಟಿ ಮಾಡಿತ್ತು. 1980ರಲ್ಲಿ ಸರಕಾರ ಹೊರಡಿಸಿದ್ದ ಆದೇಶ, 1986ರಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಮತ್ತು ನಿಗಮದ ನಡುವೆ ಆಗಿರುವ ಒಪ್ಪಂದವನ್ನು ಮುನ್ನೆಲೆಗೆ ತಂದಿತ್ತು. ಇದರ ಪ್ರಕಾರ ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸುವ ಕುರಿತು ಗೌರ್ನಿಂಗ್ ಕೌನ್ಸಿಲ್ ರಚಿಸಲು ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಪ್ರಸ್ತಾವವನ್ನೂ ಸಿದ್ಧಪಡಿಸಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮಾಲಕತ್ವಕ್ಕೆ ಒಳಪಟ್ಟಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಜಮೀನಿನ ಸರ್ವೇ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಇಲಾಖೆಯು ನಿರ್ದೇಶನ ನೀಡಿದೆ. ಹಾಗೆಯೇ ಈ ಸಂಸ್ಥೆಯ ಆದಾಯವನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ ವರದಿ ಸಲ್ಲಿಸಲು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ 2026ರ ಫೆ.6ರಂದು ಪತ್ರವನ್ನು ಬರೆದಿದೆ. ಅಲ್ಲದೇ 2026ರ ಎಪ್ರಿಲ್ 2ರಂದೂ ಸಹ ಈ ಇಲಾಖೆಗಳಿಗೆ ನೆನಪೋಲೆಗಳನ್ನೂ ಬರೆಯಲಾಗಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ವಾರ್ತಾ ಭಾರತಿ 13 Apr 2026 8:58 am

ಶಕ್ತಿ ಯೋಜನೆ ದುರ್ಬಳಕೆ: ಪುರುಷರಿಗೂ ಉಚಿತ ಟಿಕೆಟ್‌, ವೈಯಕ್ತಿಕ ಕ್ಯೂಆರ್‌ ಬಳಸಿ ಟಿಕೆಟ್ ಹಣ ದೋಚಿದ್ದ 5 ಕಂಡಕ್ಟರ್ಸ್ ಸಸ್ಪೆಂಡ್‌!

ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ರೂಪಿಸಿರುವ ಶಕ್ತಿಯೋಜನೆಯನ್ನು ದುರುಪಯೋಗಪಡಿಸಿಕೊಂಡ 5 ಜನ ಕಂಡಕ್ಟರ್‌ ಗಳು ಪುರುಷ ಪ್ರಯಾಣಿಕರಿಗೂ ಸಹ ಟಿಕೆಟ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಸ್‌ ಗಳಲ್ಲಿರುವ ನಿಗಮದ ಕ್ಯೂಆರ್‌ ಕೋಡ್‌ ಗಳನ್ನು ತೆಗೆದು ತಮ್ಮ ವೈಯಕ್ತಿಕ ಖಾತೆಯ ಕ್ಯೂಆರ್‌ ಮೂಲಕ ಟಿಕೆಟ್‌ ಹಣ ಪಡೆಯುವುದು ಸೇರಿದಂತೆ ಕನ್ನಡ ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಉಚಿತ ಟಿಕೆಟ್‌ ನೀಡಿ ಹಣ ಪಡೆದು ಕಳ್ಳಾಟವಾಡಿರುವುದು ಬಯಲಾಗಿದೆ. ಇದು ಅಧಿಕಾರಿಗಳ ತಪಾಸಣೆಯಲ್ಲಿ ಗೊತ್ತಾಗಿದ್ದು, ಈ ಹಿನ್ನಲೆಯಲ್ಲಿ ಐವರು ಕಂಡಕ್ಟರ್‌ ಗಳನ್ನು ಅಮಾನತುಗೊಳಿಸಿ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ವಿಜಯ ಕರ್ನಾಟಕ 13 Apr 2026 8:43 am

ತನ್ನ ಪುತ್ರನಿಗೆ ವಿದೇಶದಲ್ಲಿ ವ್ಯಾಸಂಗ; ಕಂಡವರ ಮಕ್ಕಳ ಕೈಗೆ ಲಾಠಿ, ತ್ರಿಶೂಲ!

‘ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ’ ರಾಜಕಾರಣಿಗಳು, ತಮ್ಮ ಮಕ್ಕಳ ವಿಷಯ ಬಂದಾಗ ಹೇಗೆ ಜಾಗರೂಕರಾಗುತ್ತಾರೆ ಎನ್ನುವುದಕ್ಕೆ ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ಕೋಮು ದ್ವೇಷಗಳನ್ನು ಹರಡುವ ಭಾಷಣಗಳಿಗಾಗಿಯೇ ಕುಖ್ಯಾತರಾಗಿದ್ದ ಈ ಮಾಜಿ ಸಂಸದರು ತಮ್ಮ ಅವಧಿಯಲ್ಲಿ ಮಾಡಿದ ಅತಿ ದೊಡ್ಡ ಸಾಧನೆಯೆಂದರೆ, ಕೋಮುಗಲಭೆಗಳ ಕಿಡಿ ಹಚ್ಚಿ ನೂರಾರು ಅಮಾಯಕ ಹಿಂದೂ ಯುವಕರ ಬದುಕನ್ನು ಸರ್ವ ನಾಶ ಮಾಡಿರುವುದು. ಇವರ ಮಾತುಗಳಿಂದ ಪ್ರಚೋದಿತರಾಗಿ ಹಿಂದುತ್ವವನ್ನು ತಲೆಗೇರಿಸಿಕೊಂಡ ಹಲವು ಯುವಕರು ಬೀದಿಯಲ್ಲಿ ದೊಂಬಿ ನಡೆಸಿ ಮೈತುಂಬಾ ಕೇಸುಗಳನ್ನು ಜಡಿದುಕೊಂಡು ತಮ್ಮ ಭವಿಷ್ಯವನ್ನು ತಾವೇ ಕೊಂದು ಕೊಂಡಿದ್ದಾರೆ. ಹೀಗಿರುವ ಹೊತ್ತಿಗೆ ಇದೇ ಮಾಜಿ ಸಂಸದರು ಇತ್ತೀಚೆಗೆ ಹೈಕೋರ್ಟ್‌ಗೆ ಮನವಿಯೊಂದನ್ನು ಮಾಡಿದ್ದು, ‘‘ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರ ಅಶುತೋಷ್ ಹೆಗಡೆಯ ವಿರುದ್ಧ ಬೆಂಗಳೂರಿನ ದಾಬಸ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದೇ ಇದ್ದರೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಆತನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಕೇಳಿಕೊಂಡಿದ್ದಾರೆ. ಅನಂತಕುಮಾರ್ ಹೆಗಡೆಯ ಪುತ್ರನ ಮೇಲೆ ‘ಹಿಂದುತ್ವಕ್ಕಾಗಿ ನಡೆಸಿದ ಹೋರಾಟ’ಕ್ಕಾಗಿ ದಾಖಲಾದ ಪ್ರಕರಣವಲ್ಲ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು, ಅದರ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಆತನ ಮೇಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಪುತ್ರ ಅಶುತೋಶ್ ಇತ್ತೀಚೆಗೆ ಊರಿಗೆ ಬಂದಿದ್ದು, ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಈತನ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದನ ಪುತ್ರ ಎನ್ನುವ ದುರಹಂಕಾರದಲ್ಲಿ ಅಶುತೋಶ್ ಇನ್ನೊಂದು ಕಾರಿನ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ವರದಿಗಳು ಹೇಳುತ್ತವೆ. ಅನಂತಕುಮಾರ್ ಹೆಗಡೆಯ ಭದ್ರತಾ ಸಿಬ್ಬಂದಿಯೂ ಈ ಹಲ್ಲೆ, ದಾಂಧಲೆಗಳಲ್ಲಿ ಜೊತೆಗೂಡಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರೂ ಪರಸ್ಪರ ದೂರು ದಾಖಲಿಸಿದ್ದಾರೆ. ‘ಅಶುತೋಷ್ ಮೇಲೆ ಪ್ರಕರಣ ದಾಖಲಾಗಿರುವುದರಿಂದಾಗಿ ವಿದೇಶಕ್ಕೆ ತೆರಳಲು ತೊಂದರೆಯಾಗಿದೆ. ಇದು ಆತನ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ, ಆತನನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಈಗ ಅನಂತಕುಮಾರ್ ಹೆಗಡೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಈ ನಡೆ ಉತ್ತರ ಕನ್ನಡ ಜಿಲ್ಲೆಯ ಯುವಕರಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಂಡವರ ಮಕ್ಕಳಿಗೆಲ್ಲ ಹಿಂದುತ್ವಕ್ಕಾಗಿ ಕತ್ತಿ ಹಿಡಿಯಿರಿ, ತ್ರಿಶೂಲ ಹಿಡಿಯಿರಿ ಎಂದು ಕರೆ ನೀಡಿದ್ದ ಅನಂತ ಕುಮಾರ್ ಹೆಗಡೆ, ತನ್ನ ಪುತ್ರನ ಕೈಗೆ ತ್ರಿಶೂಲ, ಕತ್ತಿಯನ್ನು ಯಾಕೆ ನೀಡಿಲ್ಲ? ತನ್ನ ಪುತ್ರನಿಗೆ ಹಿಂದುತ್ವ ರಕ್ಷಣೆಯ ಯಾವುದೇ ಹೊಣೆಗಾರಿಕೆಯನ್ನೂ ನೀಡದೆ ವಿದೇಶಕ್ಕೆ ಕಳುಹಿಸಿ ಉನ್ನತ ಶಿಕ್ಷಣವನ್ನು ಯಾಕೆ ಕೊಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ತಮ್ಮ ಭಾಷಣಗಳಲ್ಲೆಲ್ಲ ‘ಹಿಂದೂಸ್ಥಾನ’ ‘ಸ್ವದೇಶ’ ‘ವಿಶ್ವಗುರು’ ಎಂದು ಅಣಿಮುತ್ತುಗಳನ್ನು ಉದುರಿಸುವ ಇದೇ ಅನಂತಕುಮಾರ್ ಹೆಗಡೆಗೆ ತನ್ನ ಮಗನಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಭಾರತದೊಳಗೆ ಒಂದೇ ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜು ಯಾಕೆ ಕಾಣಿಸಲಿಲ್ಲ? ಈಗಾಗಲೇ ಆರೆಸ್ಸೆಸ್ ಸಂಘಟನೆಗಳು ಕಟ್ಟಿ ನಿಲ್ಲಿಸಿರುವ ನೂರಾರು ಗುರುಕುಲ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿರುವಾಗಲೂ ಅನಂತಕುಮಾರ್ ಹೆಗಡೆಗೆ ಮಗ ವಿದೇಶದಲ್ಲೇ ವ್ಯಾಸಂಗ ಮಾಡಬೇಕು ಎನ್ನುವ ಇಚ್ಛೆ ಯಾಕೆ? ಎಂದು ಆರೆಸ್ಸೆಸ್‌ನ ಲಾಠಿಯನ್ನು ನಂಬಿ ಮೋಸ ಹೋದ ಉತ್ತರ ಕನ್ನಡದ ನೂರಾರು ಶೂದ್ರ ಹುಡುಗರು ಕೇಳುತ್ತಿದ್ದಾರೆ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ವಾಹನಕ್ಕೆ ಗುದ್ದಿ, ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಅನಂತಕುಮಾರ್ ಹೆಗಡೆಯವರು, ತಮ್ಮ ಭಾಷಣದಿಂದ ಪ್ರಚೋದಿತರಾಗಿ ಲಾಠಿ, ತ್ರಿಶೂಲ ಹಿಡಿದು ಗಲಭೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಯುವಕರ ಪರವಾಗಿ ನ್ಯಾಯಾಲಯದಲ್ಲಿ ಯಾಕೆ ಈವರೆಗೆ ಒಂದೇ ಒಂದು ಮನವಿಯನ್ನೂ ಸಲ್ಲಿಸಲಿಲ್ಲ? ಎನ್ನುವ ಪ್ರಶ್ನೆಗೂ ಅನಂದಕುಮಾರ್ ಹೆಗಡೆ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಇಂತಹ ಪ್ರಶ್ನೆಗಳು ಕೇವಲ ಅನಂತಕುಮಾರ್ ಹೆಗಡೆಯವರಿಗಷ್ಟೇ ಸಂಬಂಧಿಸಿ ದ್ದಲ್ಲ. 2024ರಿಂದ 2026 ಮಾರ್ಚ್ ತಿಂಗಳವರೆಗೆ ಒಟ್ಟು 70 ಕೋಮುಗಲಭೆ ಪ್ರಕರಣಗಳು ಕರ್ನಾಟಕದಲ್ಲಿ ಸಂಭವಿಸಿವೆ. ಮಂಡ್ಯ ಜಿಲ್ಲೆಯೊಂದರಲ್ಲೇ ಈ ಅವಧಿಯಲ್ಲಿ 34 ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವರು ವಿಧಾನಪರಿಷತ್‌ಗೆ ಮಾಹಿತಿ ನೀಡಿದ್ದರು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 2024ರಲ್ಲಿ ಸುಮಾರು 48-50 ಕೋಮು ಸಂಘರ್ಷಗಳು ವರದಿಯಾಗಿವೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2024ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 123 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದರೆ, ಮದ್ದೂರಿನಲ್ಲಿ 2025ರಲ್ಲಿ ನಡೆದ ಘಟನೆಗಳಿಗೆ ಸಂಭವಿಸಿದಂತೆ 88 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿವೆ. ಯಾವುದೇ ಕೋಮುಗಲಭೆಗಳು ಸಂಭವಿಸಿದ ಕೆಲವೇ ದಿನಗಳಲ್ಲಿ ಮಾಧ್ಯಮಗಳು ಮರೆತು ಬಿಡುತ್ತವೆ. ನಾಶ, ನಷ್ಟ ಅನುಭವಿಸಿದವರು ಮತ್ತು ಗಲಭೆಗೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟವರ ಬದುಕು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತವೆ. ಯಾವುದೋ ರಾಜಕಾರಣಿಯ ಭಾಷಣಗಳಿಗೆ ಬಲಿ ಬಿದ್ದು ಕೋಮುಗಲಭೆಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ನೂರಾರು ಯುವಕರು ಈಗಲೂ ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಅಲೆದಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ತೊರೆದ, ಸರಕಾರಿ ನೌಕರಿಗೆ ಸೇರಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶನವನ್ನು ಸೃಷ್ಟಿಸಿಕೊಂಡ ಯುವಕರಿದ್ದಾರೆ. ಕೆಲವರು ಶಾಶ್ವತ ‘ರೌಡಿಶೀಟರ್’ ಹಣೆಪಟ್ಟಿಯನ್ನು ಧರಿಸಿಕೊಂಡು ಕ್ರಿಮಿನಲ್‌ಗಳಾಗಿ ಓಡಾಡುತ್ತಿದ್ದಾರೆ. ಇವರನ್ನು ಇಂತಹ ಸ್ಥಿತಿಗೆ ತಳ್ಳಿದ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುವುದರಿಂದ ತನ್ನ ಮಗನ ಮೇಲಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಅನಂತಕುಮಾರ್ ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಇದು. ಹಿಂದುತ್ವದ ಅಮಲನ್ನು ಹಂಚಿ, ತಮ್ಮ ಮಕ್ಕಳ ಶಿಕ್ಷಣವನ್ನು, ಅವರ ಭವಿಷ್ಯವನ್ನು ಯಾಕೆ ಸರ್ವ ನಾಶ ಮಾಡಿದಿರಿ ಎಂದು ಹಿಡಿಶಾಪ ಹಾಕಿ ಕೇಳುತ್ತಿರುವ ನೂರಾರು ಪೋಷಕರು ಉತ್ತರ ಕನ್ನಡ ಜಿಲ್ಲೆಯಲ್ಲೇ ಇದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಶಕ್ತಿ ಅನಂತಕುಮಾರ್ ಹೆಗಡೆಯ ಬಳಿ ಇದೆಯೆ? 

ವಾರ್ತಾ ಭಾರತಿ 13 Apr 2026 8:42 am

PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು

ಬೆಂಗಳೂರು: ಕರ್ನಾಟಕ ದ್ವೀತಿಯ ಪಿಯುಸಿ ಫಲಿತಾಂಶದ ನಂತರದ ಮರು ಮೌಲ್ಯಮಾಪನ, ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಪ್ರಕ್ರಿಯೆಗಳು ಆರಂಭವಾಗಿವೆ. 2026ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಸಾಧನೆ ದಾಖಲಾಗಿದೆ. ಶೇ.86ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ವರ್ಷಕ್ಕಿಂತ ಶೇ.13ರಷ್ಟು ಅಧಿಕವಾಗಿದೆ. ಯಾರೆಲ್ಲ ಅನುತ್ತೀರ್ಣರಾಗಿದ್ದಾರೋ ಅಥವಾ ಮರು ಮೌಲ್ಯಮಾಪನ ಬಯಸಿದ್ದಾರೋ ಅವರೆಲ್ಲ ಈ ಕೆಳಗೆ ನೀಡಿರುವ ಪ್ರಮುಖ ದಿನಾಂಕ

ಒನ್ ಇ೦ಡಿಯ 13 Apr 2026 8:35 am

ಚಿಕ್ಕಮಗಳೂರು : ಪ್ರವಾಸಿಗರಿಗೆ ಸುರಕ್ಷತೆ ಮರೀಚಿಕೆ, ತಾಣಗಳಲ್ಲಿ ಸಿಸಿ ಕ್ಯಾಮೆರಾ, ಭದ್ರತೆ, ಸುರಕ್ಷತಾ ಫಲಕಗಳಿಲ್ಲ!

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಹಾಗೂ ಜಲಪಾತಗಳಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯು ಪ್ರವಾಸಿಗರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ ಮತ್ತು ಗಾಳಿಕೆರೆಯಂತಹ ಆಕರ್ಷಣೀಯ ಪ್ರದೇಶಗಳಿಗೆ ವಾರಾಂತ್ಯದಲ್ಲಿ ಸಾವಿರಾರು ಜನ ಲಗ್ಗೆ ಇಡುತ್ತಾರೆಯಾದರೂ, ಅಲ್ಲಿನ ಕಡಿದಾದ ಹಾದಿ ಮತ್ತು ಅಪಾಯಕಾರಿ ಪಾಯಿಂಟ್‌ಗಳಲ್ಲಿ ಕನಿಷ್ಠ ರಕ್ಷಣಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ.

ವಿಜಯ ಕರ್ನಾಟಕ 13 Apr 2026 8:01 am

ಫಲಿಸದ ಬೂಮ್ರಾ ಮ್ಯಾಜಿಕ್: ವಿಕೆಟ್ ಬರ ಎದುರಿಸುತ್ತಿರುವ ಖ್ಯಾತ ಬೌಲರ್!

ಹೊಸದಿಲ್ಲಿ: ಪವರ್‌ ಪ್ಲೇನಲ್ಲಿ ರ‍್ಯಾಕರ್‌ಗಳ ಮೂಲಕ ಬ್ಯಾಟ್ಸ್ಮನ್ ಗಳನ್ನು ಕಂಗೆಡಿಸುವ ಮಧ್ಯಮವೇಗಿ ಜಸ್ಪ್ರೀತ್ ಬೂಮ್ರಾ ಪ್ರಸಕ್ತ ಐಪಿಎಲ್ ನಲ್ಲಿ ಐದು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸದೇ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರ ಅಪರೂಪಕ್ಕೆ ಎಂಬಂತೆ ವಿಕೆಟ್ ಬರ ಅನುಭವಿಸುತ್ತಿದ್ದಾರೆ. 2014ರ ಐಪಿಎಲ್ ಸರಣಿಯಲ್ಲಿ ಬೂಮ್ರಾ ಸತತ ನಾಲ್ಕು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸಿರಲಿಲ್ಲ. ಆದರೆ ಪ್ರಸಕ್ತ ಋತುವಿನಲ್ಲಿ ಇದು ಸತತ ಐದು ಪಂದ್ಯಗಳಿಗೆ ವಿಸ್ತರಿಸಿದೆ. 2025ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 40 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಬಳಿಕ ಪ್ರಸಕ್ತ ಸರಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್ ಗಳಲ್ಲಿ 35 ರನ್ ಬಿಟ್ಟುಕೊಟ್ಟಿದ್ದ ಬೂಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 21 ರನ್ ನೀಡಿದ್ದರೂ, ವಿಕೆಟ್ ಗಳಿಸಿರಲಿಲ್ಲ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಲ್ಲಿ ಬೂಮ್ರಾ ಕ್ರಮವಾಗಿ 32 ಹಾಗೂ 35 ರನ್ ನೀಡಿದ್ದರು. ಪ್ರಸಕ್ತ ಐಪಿಎಲ್ ನಲ್ಲಿ ಬೂಮ್ರಾ 90 ಎಸೆತಗಳಲ್ಲಿ 123 ರನ್ ನೀಡಿದ್ದು, ಯಾವುದೇ ವಿಕೆಟ್ ಪಡೆದಿಲ್ಲ. ಎಕಾನಮಿ ದರ 8.20 ಆಗಿದ್ದು, ಇದರಿಂದ ಬೂಮ್ರಾಗೆ ಇದ್ದ ಸ್ಟ್ರೈಕ್ ಬೌಲರ್ ಎಂಬ ಬಿರುದಿಗೆ ಧಕ್ಕೆ ಉಂಟಾದಂತಾಗಿದೆ. ಆರ್‌ಸಿಬಿ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಬೂಮ್ರಾ ದಾಳಿಯ ಮುಂಚೂಣಿಯಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆರ್‌ಸಿಬಿ ಬ್ಯಾಟ್ಸ್ಮನ್ ಗಳು ಪ್ರಾಬಲ್ಯ ಮೆರೆದರು. 4 ವಿಕೆಟ್ ನಷ್ಟಕ್ಕೆ 240 ರನ್ ಗಳ ಬೃಹತ್ ಮೊತ್ತವನ್ನು ಆರ್‌ಸಿಬಿ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 222 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡರು. ಆದಾಗ್ಯೂ ಐಪಿಎಲ್ ನಲ್ಲಿ 149 ಪಂದ್ಯಗಳಲ್ಲಿ 183 ವಿಕೆಟ್ ಗಳಿಸಿದ ದಾಖಲೆಯನ್ನು ಬೂಮ್ರಾ ಹೊಂದಿದ್ದಾರೆ.

ವಾರ್ತಾ ಭಾರತಿ 13 Apr 2026 7:39 am

ಬಿಹಾರದಲ್ಲಿ ಬಿಜೆಪಿ ಸರ್ಕಾರ ರಚನೆ ಕಸರತ್ತು ಶುರು; ಶಿವರಾಜ್ ಸಿಂಗ್ ವೀಕ್ಷಕ

ಹೊಸದಿಲ್ಲಿ: ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ತಿಂಗಳ 14ರಂದು ಪದತ್ಯಾಗ ಮಾಡುವ ಸುಳಿವು ನೀಡಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದೆ. ಕೇಂದ್ರ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರನ್ನು ಪಕ್ಷದ ಕೇಂದ್ರೀಯ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು, ಶಾಸಕಾಂಗ ಪಕ್ಷದ ಹೊಸ ನಾಯಕನ ಆಯ್ಕೆಯ ನೇತೃತ್ವ ವಹಿಸಲಿದ್ದಾರೆ. ಸಮರ್ಥ ಚೌಧರಿ ಸಿಎಂ ಹುದ್ದೆಯ ರೇಸ್ ನ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಶಾಸಕರು ತಮ್ಮ ನೂತನ ನಾಯಕನನ್ನು ಏಪ್ರಿಲ್ 14ರಂದು ಆಯ್ಕೆ ಮಾಡಲಿದ್ದು, ಅಂದು ಪಾಟ್ನಾಗೆ ಭೇಟಿ ನೀಡುವುದಾಗಿ ಚೌಹಾಣ್ ಹೇಳಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಎನ್ ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಹಾಗೂ ಅವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಏಪ್ರಿಲ್ 15ರಂದು ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಕೆಲ ಸದಸ್ಯರೊಂದಿಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಿತೀಶ್ ಅವರ ಪುತ್ರ ನಿಶಾಂತ್ ಅವರನ್ನು ಜೆಡಿಯು ಉಪಮುಖ್ಯಮಂತ್ರಿ ಹುದ್ದೆಗೆ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಜೆಡಿಯು ಪಕ್ಷದ ಸಂಸ್ಥಾಪಕರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಾರ್ತಾ ಭಾರತಿ 13 Apr 2026 7:33 am

ಹಂಗೇರಿ ಚುನಾವಣೆಯಲ್ಲಿ ವಿಕ್ಟರ್ ಒರ್ಬಾನ್ ಗೆ ಸೋಲು: ಟ್ರಂಪ್ ಆಪ್ತನ 16 ವರ್ಷದ ಯುಗಾಂತ್ಯ

ಬುಡಾಪೆಸ್ಟ್ : ಹಂಗೇರಿ ದೇಶವನ್ನು 16 ವರ್ಷಗಳ ಕಾಲ ಆಳಿದ ನ್ಯಾಷನಲಿಸ್ಟ್ ವಿಕ್ಟರ್ ಒರ್ಬಾನ್ ಅವರು ದೇಶದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಪೀಟರ್ ಮೆಗ್ಯಾರ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಟ್ರಂಪ್ ಆಪ್ತನ ಸುಧೀರ್ಘ ಅಧಿಕಾರಾವಧಿ ಕೊನೆಗೊಂಡಂತಾಗಿದೆ. ಕನ್ಸರ್ವೇಟಿವ್ ಪಕ್ಷದ ಶೇಕಡ 67ರಷ್ಟು ಮತಗಳನ್ನು ಪಡೆದಿದ್ದು, 199 ಸದಸ್ಯಬಲದ ಸಂಸತ್ತಿನಲ್ಲಿ 137 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಮೂರನೇ ಎರಡಕ್ಕಿಂತ ಅಧಿಕ. ರವಿವಾರ ನಡೆದ ಈ ಚುನಾವಣೆಯನ್ನು ಯೂರೋಪ್ ಹಾಗೂ ಅಮೆರಿಕ ಜನರು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒರ್ಬಾನ್ ಉಮೇದುವಾರಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜತೆಗೂ ಒರ್ಬಾನ್ ನಿಕಟ ನಂಟು ಹೊಂದಿದ್ದರು. ಚುನಾವಣಾ ಫಲಿತಾಂಶಗಳು ಇನ್ನೂ ಸಂಪೂರ್ಣ ಮುಕ್ತಾಯವಾಗದಿದ್ದರೂ, ಸ್ಪಷ್ಟ ಹಾಗೂ ಅರ್ಥ ಮಾಡಿಕೊಳ್ಳಬಹುದು; ನಮಗೆ ಇದು ನೋವಿನ ವಿಷಯ ಆದರೆ ನಿಸ್ಸಂದೇಹ ಎಂದು 62 ವರ್ಷ ವಯಸ್ಸಿನ ಒರ್ಬಾನ್ ಸುದ್ದಿಗಾರರಿಗೆ ತಿಳಿಸಿದರು. ನಮಗೆ ಆಡಳಿತದ ಹೊಣೆಗಾರಿಕೆ ಹಾಗೂ ಅವಕಾಶವನ್ನು ನೀಡಿಲ್ಲ. ವಿಜೇತ ಪಕ್ಷವನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು. ಮೊದಲು ಒರ್ಬಾನ್ ಸರ್ಕಾರದಲ್ಲೇ ಇದ್ದ 45 ವರ್ಷ ವಯಸ್ಸಿನ ಮೆಗ್ಯಾರ್, ಒರ್ಬಾನ್ ಅವರು ನಮ್ಮ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಾಲತಾಣ ಪೋಸ್ಟ್ ನಲ್ಲಿ ಹೇಳಿದ್ದಾರೆ. ಸಾರ್ವತ್ರಿಕ ಮತದಾನದಲ್ಲಿ ಶೇಕಡ 77.8ರಷ್ಟು ಮತದಾನ ಆಗಿತ್ತು.

ವಾರ್ತಾ ಭಾರತಿ 13 Apr 2026 7:25 am

Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ

ಬೆಂಗಳೂರು: ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ಬದಲಾವಣೆ ಕಾರಣಗಳಿಂದ ಕರ್ನಾಟಕದಲ್ಲಿ ಬೇಸಿಗೆಯಲ್ಲೂ ನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮಳೆ ಆಗುತ್ತಿದೆ. ಸಮುದ್ರ ಮೇಲ್ಮೈನಲ್ಲಿನ ಟ್ರಫ್, ಸುಳಿಗಾಳಿಯಿಂದ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳ ಕೆಲವು ಪ್ರತ್ಯೇಕ ಪ್ರದೇಶಗಲ್ಲಿ ಗುಡುಗು ಸಹಿತ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ. ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ

ಒನ್ ಇ೦ಡಿಯ 13 Apr 2026 6:54 am

ಬೆಂಗಳೂರು : ಬತ್ತಿದ ಹೊಸಕೆರೆ ಹಳ್ಳಿ ಕೆರೆ, ಟ್ಯಾಂಕರ್ ನಲ್ಲಿ ನೀರು ಪೂರೈಕೆ

ಬೇಸಿಗೆಯ ತಾಪ ಏರುತ್ತಿದ್ದಂತೆ ಹೊಸಕೆರೆಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಭಾಗದ ಪ್ರಮುಖ ಜಲಮೂಲವಾದ ಹೊಸಕೆರೆಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಂತರ್ಜಲ ಮಟ್ಟ ಕುಸಿದು, ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಶ್ರೀನಿವಾಸನಗರ, ಕೃಷ್ಣಪ್ಪ ಬಡಾವಣೆ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳಿಗೆ ಜಲಮಂಡಳಿಯಿಂದ ಪೂರೈಕೆಯಾಗುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.

ವಿಜಯ ಕರ್ನಾಟಕ 13 Apr 2026 6:48 am

ವಕ್ಫ್ ಆಸ್ತಿ ಕಬಳಿಕೆ ಮಾದರಿಯಲ್ಲೆ, ದೇವಾಲಯಗಳ ಜಾಗ ಒತ್ತುವರಿ: ದೇವರ ಆಸ್ತಿ ರಕ್ಷಣೆಯೆ ಸವಾಲು!

ದೇವಾಲಯಗಳ ಆಸ್ತಿ ರಕ್ಷಣೆಗೆ ಭೂ ವರಾಹ ಯೋಜನೆಯಿದೆ. ಆದರೆ ಎಲ್ಲಾ ಜಿಲ್ಲೆಗಳಿಗೆ ಇದರ ಅನುಕೂಲ ಇನ್ನೂ ತಲುಪಿಲ್ಲ. ದೇವಾಲಯಗಳ ಹೆಸರಿಗೆ ಖಾತೆ ಆಗದ ಕಾರಣ ಒತ್ತುವರಿಗಳು ಮುಂದುವರಿದಿದೆ.

ವಿಜಯ ಕರ್ನಾಟಕ 13 Apr 2026 5:52 am

ದಾವಣಗೆರೆ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ, ಸೋತರೂ ಇತಿಹಾಸ: ಪಕ್ಷಗಳ ಮೇಲೆ ಪರಿಣಾಮ ಬೀರುವ 5 ಅಂಶಗಳು

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಮತದಾನ ಮುಗಿದು ಪಕ್ಷದ ನಾಯಕರು, ಕಾರ್ಯಕರ್ತರು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚರ್ಚೆ ದೆಹಲಿವರೆಗೂ ತಲುಪಿದೆ. ಬಿಜೆಪಿ ಪಾಳಯದಲ್ಲಿ ಗೆಲುವಿನ ವಿಶ್ವಾಸ ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಮುಖಂಡರ ರಾಜೀನಾಮೆ ಮುಂದುವರಿದಿದೆ.

ವಿಜಯ ಕರ್ನಾಟಕ 13 Apr 2026 5:26 am

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಹೋರಾಟ

ಬೆಂಗಳೂರು : ಕೇಂದ್ರ ಸರಕಾರವು ಸಂಸತ್‌ನಲ್ಲಿ ಮಂಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್‌ಜೆಂಡರ್) ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಸಮಾನತೆ ಕಾಪಾಡಿ ಮಾನವ ಹಕ್ಕುಗಳನ್ನು ಗೌರವಿಸುವ ನೂತನ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟವನ್ನು ನಡೆಸಿದೆ. ಲಿಂಗತ್ವ ಅಲ್ಪಸಂಖ್ಯಾತ ಪ್ರತಿನಿಧಿ ಮಲ್ಲುಕುಂಬಾರ ಮಾತನಾಡಿ, ಸಮುದಾಯದ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ಇಲ್ಲದೇ ಸರ್ವಾಧಿಕಾರಿ ಧೋರಣೆ ಮೂಲಕ ಕೇಂದ್ರ ಸರಕಾರ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಇದು ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣೆ ಬದಲಾಗಿ ಸಂವಿಧಾನಾತ್ಮಕವಾದ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುವ ವಿರೋಧಿ ಕಾಯ್ದೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು. ದೇಶದ ಸಂವಿಧಾನದ ಪೀಠಿಕೆಯಲ್ಲಿ ಲಿಂಗತ್ವ ಆಧಾರಿತ ಪದ ಬಳಕೆಯಾಗಿಲ್ಲ. ಬದಲಾಗಿ ಸಮಾನತೆ ಹಕ್ಕನ್ನು ಪ್ರತಿಪಾದಿಸಲಾಗಿದೆ. ಆದರೆ, ಕೇಂದ್ರ ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣೆ ಹೆಸರಿನಲ್ಲಿ ಜಾರಿಗೊಳಿಸಲು ಮುಂದಾಗಿರುವ ತಿದ್ದುಪಡಿ ಕಾಯ್ದೆಯಲ್ಲಿ ಸಂಪೂರ್ಣ ವ್ಯಕ್ತಿಯ ಗೌರವ, ಖಾಸಗಿ ಹಕ್ಕುಗಳ ಉಲ್ಲಂಘನೆಯಾಗಲಿದೆ. ಸಮುದಾಯಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ, ಭದ್ರತೆ ಜೊತೆಗೆ ಸಮಾನತೆಯನ್ನು ಕಾಪಾಡುವ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು. ಲಿಂಗತ್ವ ಅಲ್ಪಸಂಖ್ಯಾತರು 25 ವರ್ಷಗಳಿಂದಲೂ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಆಡಳಿತ ನಡೆಸುವ ಸರಕಾರಗಳು ಈಡೇರಿಸುವಲ್ಲಿ ವಿಫಲವಾಗಿವೆ. 2019 ಕಾಯ್ದೆಯನ್ನು ಪೂರ್ವಭಾವಿ ಚರ್ಚೆಗಳಿಲ್ಲದೇ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಮಲ್ಲು ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾದ ಹೋರಾಟಗಾರರಾದ ವೈಶಾಲಿ, ರಿಯಾನ್ ರಾಜು, ಆಯಾನ್ ಸೈಯದ್, ದಿಲ್ ಫರಾಜ್, ಆಶಮ್ಮ ಮಾಲಕ್, ಜ್ಯೋತಿ, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಚಿಂತಕ ಶಿವಸುಂದರ್, ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 13 Apr 2026 12:39 am

ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆ ಅಗತ್ಯ: ದಿನೇಶ್ ಗುಂಡೂರಾವ್

ಬೆಂಗಳೂರು : ಹೋಮಿಯೋಪತಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಪ್ರಯೋಗ ನಡೆಯಬೇಕಿದೆ. ಎಲ್ಲರೂ ಸೇರಿ ಆ ಕುರಿತು ಸಹ ಯೋಚನೆ ಮತ್ತು ಯೋಜನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದಲ್ಲಿರುವ ಐಐಎಸ್ಸಿಯ ಎವಿ ರವಣ ರಾವ್ ಸಭಾಂಗಣದಲ್ಲಿ ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೋಮಿಯೋಪತಿ ಕುರಿತು ಜನರಲ್ಲಿ ನಂಬಿಕೆ ಮೂಡುವುದು ಮುಖ್ಯ. ಹಾಗಾದಾಗ ಮಾತ್ರ ಸರಕಾರ ಇನ್ನೂ ಹೆಚ್ಚಿನ ಕಾರ್ಯಯೋಜನೆ ಮಾಡಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ನಂದಾ, ಆಯುಷ್ ಆಯುಕ್ತ ಡಾ.ಸುನಿಲ್ ಪನ್ವರ್, ಕರ್ನಾಟಕ ಹೋಮಿಯೋಪತಿ ಅಸೋಸಿಯೇಷನ್‌ನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೋಮಿಯೋಪತಿಗೆ 200 ವರ್ಷಗಳ ಇತಿಹಾಸವಿದೆ. ಇದು ಒಂದು ವೈಜ್ಞಾನಿಕ ವೈದ್ಯಕೀಯ ಪದ್ದತಿ. ಇದು ಸುಲಭವಾದ ಚಿಕಿತ್ಸಾ ಪದ್ಧತಿ ಮತ್ತು ದೇಹವನ್ನು ಬಲಿಷ್ಠಗೊಳಿಸುವ ಒಂದು ವಿಧಾನವಾಗಿದೆ. ಸರಕಾರದ ವತಿಯಿಂದ ಸುಮಾರು 60-70 ಡಿಸ್ಪೆನ್ಸರಿ ಇದೆ. ಬೋರ್ಡ್ ಚುನಾವಣೆ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೀರಿ. ಸರಕಾರ ಮುಕ್ತ ಮಾತುಕತೆಗೆ ಸಿದ್ದವಿದೆ. ಕೆಲವೇ ದಿನಗಳಲ್ಲಿ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನಿರ್ಮಾಣವೂ ಸೇರಿದಂತೆ ನಿಮ್ಮ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿ, ಎಲ್ಲವನ್ನು ಬಗೆಹರಿಸೋಣ. -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ವಾರ್ತಾ ಭಾರತಿ 13 Apr 2026 12:37 am

‘ಇಸ್ರೋ’ ಸಂಸ್ಥೆಯಿಂದ ಮಹೋನ್ನತ ಸಾಧನೆೆ : ಶುಭಾಂಶು ಶುಕ್ಲಾ

ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮೊದಲ ಬಾರಿಗೆ ಆರ್ಯಭಟ ಉಪಗ್ರಹ ಉಡಾವಣೆ ಮಾಡಿದ್ದರಿಂದ ಇಲ್ಲಿಯವರೆಗೆ ಇಸ್ರೋ ಸಂಸ್ಥೆ ಮಹೋನ್ನತ ಸಾಧನೆಯನ್ನ ಮಾಡಿದೆ ಎಂದು ಇಸ್ರೋ ಸಂಸ್ಥೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೇಳಿದ್ದಾರೆ. ರವಿವಾರ ನಗರದ ಜಿಪಿಒ ಮೇಘದೂತ್ ಸಭಾಂಗಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವದ ಭಾರತದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ಗಮನಾರ್ಹ ಪ್ರಗತಿಯನ್ನು ಆಚರಿಸಲು ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತ ವತಿಯಿಂದ ಹಮ್ಮಿಕೊಂಡಿದ್ದ ಎರಡು ಸ್ಮರಣಾರ್ಥ ಅಂಚೆ ಚೀಟಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 18 ದಿನಗಳವರೆಗೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವವಾಗಿದೆ. ಇದರ ಭಾಗವಾಗಿದ್ದಕ್ಕೆ ನನಗೆ ಬಹಳಷ್ಟು ಹೆಮ್ಮೆ ಇದೆ. ಮುಂಬರುವ ದಿನಗಳಲ್ಲಿ ಭಾರತೀಯ ಗಗನಯಾತ್ರಿಗಳು ಹಾಗೂ ನಮ್ಮದೇ ಆದ ಉಡಾವಣಾ ವಾಹನಗಳನ್ನ ಕಕ್ಷೆಗೆ ಕಳಿಸುವ ವಿಶ್ವಾಸವಿದೆ. ಇಸ್ರೋ ಕಾರ್ಯಗಳಿಗೆ ಗೌರವವಾಗಿ ಇಂದು ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಹಾಗೂ ಸ್ಮರಣಿಕೆಗಳನ್ನ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಶುಭಾಂಶು ಶುಕ್ಲಾ ತಿಳಿಸಿದರು. ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಮಾತನಾಡಿ, ಆರಂಭದಲ್ಲಿ ಇಸ್ರೋ ಸೈಕಲ್‌ನಲ್ಲಿ ಕಾರೆಟ್ ಇಟ್ಟುಕೊಂಡು ಕಕ್ಷೆಗೆ ಉಪಗ್ರಹವನ್ನ ಉಡಾವಣೆ ಮಾಡಿತ್ತು. ಇಂದು ಕಕ್ಷೆಯಲ್ಲಿ ನಮ್ಮದೇ ಆದ(ಭಾರತ) ಬಾಹ್ಯಾಕಾಶ ಸ್ಪೇಸ್ ಸೆಂಟರ್ ಮಾಡುವತ್ತ ಸಾಗುತ್ತಿದ್ದೇವೆ. ಇಂದು ಉಪಗ್ರಹಗಳ ನೆರವಿನಿಂದ ಮೊಬೈಲ್ ಸಿಗ್ನಲ್, ಇಂಟರ್‌ನೆಟ್ ಸೇರಿದಂತೆ ಎಲ್ಲ ತಂತ್ರಜ್ಞಾನಗಳಲ್ಲಿ ಮಹೋನ್ನತ ಸಾಧನೆಯನ್ನ ಮಾಡಿದ್ದೇವೆ. ಇದಕ್ಕೆಲ್ಲ ಉಪಗ್ರಹಗಳೇ ಕಾರಣ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಅಂಚೆ ಸೇವೆಗಳ ನಿರ್ದೇಶಕ ಸಂದೇಶ ಮಹಾದೇವಪ್ಪ, ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 13 Apr 2026 12:35 am

ಸತಾರಾ ರಸ್ತೆ ಅಪಘಾತ; ಬೆಳಗಾವಿಯ ನಾಲ್ವರು ಮೃತ್ಯು

ಬೆಳಗಾವಿ : ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ಸಾತಾರಾ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರಲ್ಲಿ ಸಂಕೇಶ್ವರದ ಖ್ಯಾತ ವೈದ್ಯ ಡಾ. ಸಚಿನ್ ಶಂಕರಗೌಡ ಪಾಟೀಲ್ ಅವರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಯಿಂದ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತರ ಮೃತರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಗಾಯಾಳುಗಳಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ

ವಾರ್ತಾ ಭಾರತಿ 13 Apr 2026 12:27 am

IPL 2026 |ಸಾಲ್ಟ್, ಪಾಟಿದಾರ್, ಕೊಹ್ಲಿ ಅರ್ಧಶತಕ; ಮುಂಬೈ ವಿರುದ್ಧ RCBಗೆ ಜಯ

ಮುಂಬೈ, ಎ.12: ಫಿಲ್ ಸಾಲ್ಟ್ (78 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್), ರಜತ್ ಪಾಟಿದಾರ್ (53 ರನ್, 20 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (50 ರನ್, 38 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕಗಳ ಕೊಡುಗೆ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ ಅಂತರದಿಂದ ಮಣಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ 20ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ, RCB ತಂಡವನ್ನು ಬ್ಯಾಟಿಂಗ್‌ ಗೆ ಆಹ್ವಾನಿಸಿದರು. ಬ್ಯಾಟಿಂಗ್ ಪಿಚ್‌ನ ಲಾಭ ಪಡೆದ RCB ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಶೆರ್ಫಾನ್ ರುದರ್ಫೋರ್ಡ್ (ಔಟಾಗದೆ 71, 31 ಎಸೆತ, 1 ಬೌಂಡರಿ, 9 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಮೊದಲ ವಿಕೆಟ್‌ಗೆ 57 ರನ್ ಗಳಿಸಿದಾಗ ರೋಹಿತ್ ಶರ್ಮಾ (19 ರನ್) ಗಾಯಗೊಂಡು ನಿವೃತ್ತಿಯಾದರು. ಓಪನರ್ ರಿಕೆಲ್ಟನ್ (37 ರನ್, 22 ಎಸೆತ) ಹಾಗೂ ತಿಲಕ್ ವರ್ಮಾ (1 ರನ್) ಸ್ಪಿನ್ನರ್ ಸುಯಶ್ ಶರ್ಮಾ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಮಾಜಿ ನಾಯಕ ಸೂರ್ಯಕುಮಾರ್ (33 ರನ್, 22 ಎಸೆತ) ದೊಡ್ಡ ಮೊತ್ತ ಗಳಿಸಲಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ (40 ರನ್, 22 ಎಸೆತ) ಅವರನ್ನು ಜೇಕಬ್ ಡಫಿ ಪೆವಿಲಿಯನ್‌ ಗೆ ಕಳುಹಿಸಿದರು. RCB ಪರ ಸುಯಶ್ ಶರ್ಮಾ ಯಶಸ್ವಿ ಪ್ರದರ್ಶನ ನೀಡಿದರು. ರಾಸಿಖ್ ಸಲಾಂ (1-23), ಕೃನಾಲ್ ಪಾಂಡ್ಯ (1-26) ಹಾಗೂ ಡಫಿ (1-58) ತಲಾ ಒಂದು ವಿಕೆಟ್ ಪಡೆದರು. ಕೊಹ್ಲಿ ಮಹತ್ವದ ಮೈಲಿಗಲ್ಲು: ಇದಕ್ಕೂ ಮೊದಲು ಸಾಲ್ಟ್ ಹಾಗೂ ಕೊಹ್ಲಿ 10.5 ಓವರ್‌ ಗಳಲ್ಲಿ 120 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿದರು. ಐಪಿಎಲ್ ಇತಿಹಾಸದಲ್ಲಿ RCB ಪರ ಮೊದಲ ವಿಕೆಟ್‌ ಗೆ ಎರಡನೇ ಗರಿಷ್ಠ ಜೊತೆಯಾಟ ಇದಾಗಿದೆ. ಟಿ-20 ಕ್ರಿಕೆಟ್‌ ನಲ್ಲಿ 47ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದ ಕೊಹ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು. ಟಿ-20 ಕ್ರಿಕೆಟ್‌ ನಲ್ಲಿ ಈ ಸಾಧನೆಗೈದ ಮೊದಲ ಆಟಗಾರರಾಗಿದ್ದಾರೆ. ಪಾಕಿಸ್ತಾನದ ಬಾಬರ್ ಆಝಮ್ (46), ಕ್ರಿಸ್ ಗೇಲ್ (46), ಡೇವಿಡ್ ವಾರ್ನರ್ (45) ಹಾಗೂ ಎಫ್ ಡು ಪ್ಲೆಸಿಸ್ (40) ಅವರ ದಾಖಲೆಗಳನ್ನು ಮುರಿದರು. ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1,000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಟಿಮ್ ಡೇವಿಡ್ (ಔಟಾಗದೆ 34, 16 ಎಸೆತ, 2 ಬೌಂಡರಿ, 3 ಸಿಕ್ಸರ್) RCB ಇನ್ನಿಂಗ್ಸ್‌ಗೆ ಅಂತಿಮ ಸ್ಪರ್ಶ ನೀಡಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಲ್ಟ್ ಅವರು ಕೊಹ್ಲಿ ಜೊತೆ ಕೇವಲ 52 ಎಸೆತಗಳಲ್ಲಿ 100 ರನ್ ಜೊತೆಯಾಟ ನಡೆಸಿದರು. RCB ಪರ ಗರಿಷ್ಠ ಸ್ಕೋರ್ ಗಳಿಸಿದ ಸಾಲ್ಟ್ ಅವರ ಇನ್ನಿಂಗ್ಸ್‌ ಗೆ ಶಾರ್ದುಲ್ ಠಾಕೂರ್ ತೆರೆ ಎಳೆದರು. ಎರಡನೇ ವಿಕೆಟ್‌ ಗೆ 65 ರನ್ ಸೇರಿಸಿದ ಕೊಹ್ಲಿ ಹಾಗೂ ನಾಯಕ ಪಾಟಿದಾರ್ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊಹ್ಲಿ 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ತಕ್ಷಣವೇ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳ ಸಹಾಯದಿಂದ ಅರ್ಧಶತಕ ಪೂರೈಸಿದ ಪಾಟಿದಾರ್ ಅವರ ಅಬ್ಬರಕ್ಕೆ ಸ್ಪಿನ್ನರ್ ಸ್ಯಾಂಟ್ನರ್ ತೆರೆ ಎಳೆದರು. ವಿಕೆಟ್‌ಕೀಪರ್ ಜಿತೇಶ್ ಶರ್ಮಾ (10 ರನ್) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮುಂಬೈ ತಂಡದ ಪರವಾಗಿ ಶಾರ್ದುಲ್ ಠಾಕೂರ್ (1-32), ಹಾರ್ದಿಕ್ ಪಾಂಡ್ಯ (1-39), ಸ್ಯಾಂಟ್ನರ್ (1-43) ಹಾಗೂ ಟ್ರೆಂಟ್ ಬೌಲ್ಟ್ (1-50) ತಲಾ ಒಂದು ವಿಕೆಟ್ ಪಡೆದರು. ಮುಂಬೈ ತಂಡವು ಎರಡು ಬದಲಾವಣೆಗಳನ್ನು ಮಾಡಿದ್ದು, ಮಿಚೆಲ್ ಸ್ಯಾಂಟ್ನರ್ ಹಾಗೂ ಮಯಾಂಕ್ ಮರ್ಕಂಡೆ ಅವರನ್ನು ಘಝನ್ಫರ್ ಮತ್ತು ದೀಪಕ್ ಚಹಾರ್ ಬದಲಿಗೆ ಆಡಿಸಿತು. RCB ನಾಯಕ ರಜತ್ ಪಾಟಿದಾರ್ ಅವರು ಆಸ್ಟ್ರೇಲಿಯಾದ ವೇಗಿ ಹೇಝಲ್ವುಡ್ ಬದಲಿಗೆ ಜೇಕಬ್ ಡಫಿ ಅವರನ್ನು ಆಡಿಸಿದರು. ಸಂಕ್ಷಿಪ್ತ ಸ್ಕೋರ್: RCB: 20 ಓವರ್‌ಗಳಲ್ಲಿ 240/4 (ಫಿಲ್ ಸಾಲ್ಟ್ 78, ರಜತ್ ಪಾಟಿದಾರ್ 53, ವಿರಾಟ್ ಕೊಹ್ಲಿ 50, ಡೇವಿಡ್ ಔಟಾಗದೆ 34, ಶಾರ್ದುಲ್ 1-32) ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 222/5 (ರುದರ್ಫೋರ್ಡ್ ಔಟಾಗದೆ 71, ರಿಕೆಲ್ಟನ್ 37, ಸೂರ್ಯಕುಮಾರ್ 33, ಹಾರ್ದಿಕ್ ಪಾಂಡ್ಯ 40, ಸುಯಶ್ ಶರ್ಮಾ 2-47, ಕೃನಾಲ್ ಪಾಂಡ್ಯ 1-26)

ವಾರ್ತಾ ಭಾರತಿ 13 Apr 2026 12:02 am

IPL 2026- ಫಿಲ್ ಸಾಲ್ಟ್ ಆರ್ಭಟಕ್ಕೆ ವಿರಾಟ್ ಸಾಥ್! MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB

ಮೊದಲ ಬಾರಿ ಸೀಸನ್ ನಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಫಿಲ್ ಸಾಲ್ಟ್. ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ! ಐಪಿಎಲ್ ನ ಅತಿ ವೇಗದ ಅರ್ಧಶತಕ ತಪ್ಪಿದರೂ ಶರವೇಗದ ಶತಕ ಹೊಡೆದ ನಾಯಕ ರಜತ್ ಪಾಟೀದಾರ್. ನಿರ್ಣಾಯಕ ಹಂತದಲ್ಲಿ 2 ವಿಕೆಟ್ ಕಿತ್ತ ಸುಯೇಶ್ ಶರ್ಮಾ- ಇದು ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ಸೆಣೆಸಾಟದ ಝಲಕ್. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಬಳಗವನ್ನು 18 ರನ್ ಗಳಿಂದ ಪರಾಭವಗೊಳಿಸಿತು. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 6 ಅಂಕಗಳನ್ನು ಕಲೆ ಹಾಕಿದ ರಜತ್ ಪಾಟೀದಾರ್ ಬಳಗ ಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವುದರಿಂದ 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ()

ವಿಜಯ ಕರ್ನಾಟಕ 12 Apr 2026 11:58 pm

ಹಾರ್ಮುಝ್‌ ಜಲಸಂಧಿ ವಾಣಿಜ್ಯ ಹಡಗುಗಳಿಗೆ ಮುಕ್ತ; ಮಿಲಿಟರಿ ಹಡಗು ಬಂದರೆ ‘ಕಠಿಣ ಕ್ರಮ’: IRGC ಎಚ್ಚರಿಕೆ

ಟೆಹರಾನ್, ಎ.12: ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಝ್‌ ಜಲಸಂಧಿಯು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಾಣಿಜ್ಯ ಹಡಗುಗಳ ಸಾಗಣೆಗೆ ಮುಕ್ತವಾಗಿದೆ ಎಂದು ತಿಳಿಸಿದೆ ಎಂದು Aljazeera ವರದಿ ಮಾಡಿದೆ. ರವಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಜಲಸಂಧಿಯನ್ನು ಬಳಸುವ ವಾಣಿಜ್ಯ ಹಡಗುಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಜಲಸಂಧಿಯತ್ತ ಸಮೀಪಿಸುವ ಮಿಲಿಟರಿ ಹಡಗುಗಳು ಕದನ ವಿರಾಮವನ್ನು ಉಲ್ಲಂಘಿಸಿದಂತೆ ಪರಿಗಣಿಸಲಾಗುತ್ತದೆ ಎಂದು IRGC ಎಚ್ಚರಿಸಿದೆ. ಇಂತಹ ಹಡಗುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 12 Apr 2026 11:50 pm

ಕೆಲವರು ನಾನೇ ಹೆಚ್ಚು, ನಾನಿಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕನಿಲ್ಲ ಎಂಬ ಭಾವನೆಯಲ್ಲಿದ್ದಾರೆ : ರಿಝ್ವಾನ್‌ ಅರ್ಷದ್‌

ಬೆಂಗಳೂರು : ಉಪಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್‌ ಗೇಮ್‌ ಆಡಿ, ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು ಎಂದು ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್‌ ಅಸಮಾಧಾನ ಹೊರಹಾಕಿದ್ದಾರೆ. ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವೋಟ್‌ಗಳನ್ನು ವಿಭಜಿಸಿ ಬಿಜೆಪಿ ಗೆಲ್ಲಿಸಬೇಕೆಂದು ಯಾರು ಪ್ರಯತ್ನಪಟ್ಟರು ಎಂಬುದು ಗೊತ್ತಿದೆ. ಅವರ ಪ್ರಯತ್ನ ಫಲ ನೀಡಿಲ್ಲʼ ಎಂದು ಹೇಳಿದರು. ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರು ಜಬ್ಬಾರ್ ಅವರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಯ ಮುಂದೆಯೂ ಅದೇ ಒಬ್ಬ ನಾಯಕ, ಕೊಟ್ಟರೆ ಜಬ್ಬಾರ್‌ಗೆ ಕೊಡಿ ಎಂದರು. ಜಬ್ಬಾರ್‌ ಬಿಟ್ಟರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು. ʼಅಬ್ದುಲ್‌ ಜಬ್ಬಾರ್‌ ಅವರಿಗೆ ಟಿಕೆಟ್‌ ಪಟ್ಟು ಹಿಡಿದಿದ್ದು ಯಾರು’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ಉಪಚುನಾವಣೆ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರಲ್ಲಿ ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ, ಅದರಲ್ಲಿ ಒಬ್ಬರು ಜಬ್ಬಾರ್‌ಗೆ ಟಿಕೆಟ್‌ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದರು’ ಎಂದು ಪರೋಕ್ಷವಾಗಿ ಝಮೀರ್ ವಿರುದ್ಧ ಆರೋಪಿಸಿದರು.

ವಾರ್ತಾ ಭಾರತಿ 12 Apr 2026 11:49 pm

Koppal | ಯುವಕನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ ಆರೋಪ : ದೂರು, ಪ್ರತಿ ದೂರು ದಾಖಲು

ಕೊಪ್ಪಳ: ಮೊಬೈಲ್‌ನಲ್ಲಿ ವಿವಿಧ ಯುವತಿಯರ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದಾನೆ ಎಂಬ ಆರೋಪದ ಮೇಲೆ ಮುಸ್ತಪಾ ಖಾದ್ರಿ ಎಂಬ ಯುವಕನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿ ಯುವಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಯುವಕನ ಬಳಿಯಿದ್ದ ಮೊಬೈಲ್ ಪರಿಶೀಲಿಸಿದಾಗ ಸಾವಿರಾರು ಫೋಟೊಗಳು ಹಾಗೂ ವಿಡಿಯೋಗಳು ಪತ್ತೆಯಾಗಿದ್ದು, ಅವುಗಳಲ್ಲಿ ವಿವಿಧ ಯುವತಿಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಇರುವುದಾಗಿ ಆರೋಪಿಸಲಾಗಿದೆ. ಸುಮಾರು 16 ಯುವತಿಯರ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಪ್ರತಿ ದೂರು ನೀಡಿದ ಯುವತಿ : ಇನ್ನೊಂದೆಡೆ, ಈ ಘಟನೆಗೆ ಸಂಬಂಧಿಸಿ ಯುವತಿ ಕೂಡ ಪ್ರತ್ಯೇಕ ದೂರು ನೀಡಿದ್ದು, ನಾನು ಮತ್ತು ನಾನು ಪ್ರೀತಿಸುವ ಯುವಕ ಮುಸ್ತಾಫ ಆಸ್ಪತ್ರೆ ಆವರಣದಲ್ಲಿ ಇದ್ದಾಗ 8-10 ಜನರ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾಳೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾರ್ತಾ ಭಾರತಿ 12 Apr 2026 11:43 pm

RCB Vs MI- ಅನಾರೋಗ್ಯದ ಮಧ್ಯೆಯೂ ಅರ್ಧಶತಕ ಹೊಡೆದರೇ ವಿರಾಟ್ ಕೊಹ್ಲಿ? ರವಿ ಶಾಸ್ತ್ರಿ ಹೇಳಿದಾಗಲೇ ವಿಷಯ ಗೊತ್ತಾಗಿದ್ದು!

ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಜ್ವರದ ಮಧ್ಯೆಯೂ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡಿದರಾ? ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿ ಶಾಸ್ತ್ರಿ ಅವರ ಹೇಳಿಕೆಯ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೇಳೆ ಅವರು ಪೆವಿಲಿಯನ್ ನಲ್ಲಿ ವಿಶ್ರಾಂತಿ ಪಡೆದಿರುವುದು ಈ ಹೇಳಿಕೆಗೆ ಪೂರಕವಾಗಿದೆ. ಅವರ ಮುಖ ಲಕ್ಷಣ ಸಹ ಅವರ ಆರೋಗ್ಯ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿಯಂತಿದ್ದವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 12ರ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು. ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರು ಸೊಗಸಾದ ಅರ್ಧಶತಕ ಬಾರಿಸಿದರು. ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 50 ರನ್ ಗಳಿಸಿ ಔಟಾದರು. ()ಪಂದ್ಯ ನಡೆಯುತ್ತಿದ್ದ ವೇಳೆ ವೀಕ್ಷಕ ವಿವರಣೆಕಾರರಾಗಿದ್ದ ರವಿಶಾಸ್ತ್ರಿ ಅವರು ಕಳೆದ ಪಂದ್ಯದಿಂದ ವಿರಾಟ್ ಕೊಹ್ಲಿಗೆ ಸ್ವಲ್ಪ ಜ್ವರವಿದೆ.. ಆದರೂ ಅವರು ಇನ್ನೂ ಆಟವಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಇಂದು ಚೆಂಡನ್ನು ಬಯಸಿದ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಹೊಡೆಯಲು ಸಾಧ್ಯವಾಗಲಿಲ್ಲ. ಹೊರತು ಬೇರೇನೂ ಸಮಸ್ಯೆಯಾಗಲಿಲ್ಲ. ಹೆಚ್ಚಿನ ಬಾರಿ ಅವರಿಗೆ ಕನೆಕ್ಟ್ ಮಾಡಲು ಕಷ್ಟವಾಯಿತ ಎಂದಿದ್ದಾರೆ. ಅವರ ಈ ಹೇಳಿಕೆ ಇದೀಗ ಚರ್ಚೆಗೆ ಆಸ್ಪದವಾಗಿದೆ. ವಿರಾಟ್ ಕೊಹ್ಲಿ ಅವರು ಔಟಾದ ಬಳಿಕ ಡಗೌಟ್ ಕಡೆಗೆ ತೆರಳು ವೇಳೆ ಬೌಂಡರಿ ಬಳಿ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್ ಗಳನ್ನು ಎಸೆದ ಪ್ರಸಂಗ ಎಲ್ಲರಿಗೂ ಅಚ್ಚರಿ ತಂದಿತ್ತು. ಆ ಬಳಿಕ ಅವರು ಆರ್ ಸಿಬಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಮೈದಾನಕ್ಕೆ ಇಳಿಯಲಿಲ್ಲ. ಪೆವಿಲಿಯನ್ ನಲ್ಲೇ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅಷ್ಟೊಂದು ಅನಾರೋಗ್ಯದ ಮಧ್ಯೆಯೂ ಅವರು ಅರ್ಧಶತಕ ಹೊಡೆದಿರುವುದಕ್ಕೆ ಒಂದೆಡೆ ಪ್ರಶಂಸೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಅವರು ಅಷ್ಟೊಂದು ಅನಾರೋಗ್ಯ ಪೀಡಿತರಾಗಿದ್ದರೂ ತಂಡದ ಮ್ಯಾನೇಜ್ ಮೆಂಟ್ ಅವರನ್ನು ಆಡಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ವಿಜಯ ಕರ್ನಾಟಕ 12 Apr 2026 11:27 pm

ಮಹಿಳೆಯ ಚಿನ್ನದ ಸರ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು, ಎ.12: ಉಪ್ಪಿನಂಗಡಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಮಹಿಳೆಯೊಬ್ಬರ 91.679 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾದ ಘಟನೆ ವರದಿಯಾಗಿದೆ. ಉಳ್ಳಾಲದ ಮಿಲ್ಲತ್ ನಗರದ ಅಹ್ಮದ್ ಬಾವಾ ಎಂಬವರ ಪತ್ನಿ ನಫಿಸಾ ಇನ್ಶಾ ಅವರು ಎ.5ರಂದು ಉಪ್ಪಿಂಗಡಿಯ ಎಚ್‌ಎಂ ಆಡಿಟೋರಿಯಂನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಸಾಗುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳೆದು ಹೋಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಎ.7ರಂದು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 12 Apr 2026 11:22 pm

T20ಯಲ್ಲಿ ಬಾಬರ್ ಅಝಂ ದಾಖಲೆ ಮುರಿದ ವಿರಾಟ್ ಕೊಹ್ಲಿ! ಏನದು ದಾಖಲೆ?

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟನ್ನು ಅಕ್ಷರಶಃ ಗನ್ ಆಗಿಸಿಕೊಂಡ ವಿರಾಟ್ ಕೊಹ್ಲಿ–ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ ಗೆ ಬರೋಬ್ಬರಿ 120 ರನ್‌ ಗಳನ್ನು ಕಲೆಹಾಕಿತು. ಈ ಶತಕದ ಜೊತೆಯಾಟದ ಮೂಲಕ ವಿರಾಟ್ ಕೊಹ್ಲಿ T20 ಕ್ರಿಕೆಟ್ ಮಾದರಿಯಲ್ಲಿ ಮತ್ತೊಂದು ದಾಖಲೆ ಬರೆದರು. T20 ಕ್ರಿಕೆಟ್‌ ನಲ್ಲಿ ಇದುವರೆಗೆ ಪಾಕಿಸ್ತಾನದ ಸ್ಫೋಟಕ ಬ್ಯಾಟರ್ ಬಾಬರ್ ಅಝಂ 46 ಬಾರಿ ಶತಕದ ಜೊತೆಯಾಟಗಳಲ್ಲಿ ಭಾಗಿಯಾದ ದಾಖಲೆ ಹೊಂದಿದ್ದರು. ನಂತರದ ಸ್ಥಾನದಲ್ಲಿ ಕ್ರಿಸ್ ಗೇಲ್ (46), ಡೇವಿಡ್ ವಾರ್ನರ್ (45) ಹಾಗೂ ಫಾಫ್ ಡು ಪ್ಲೆಸಿಸ್ (40) ಇದ್ದಾರೆ. ಇಂದು ಕ್ರೀಸಿಗೆ ಬಂದ ತಕ್ಷಣವೇ ಮುಂಬೈ ಬೌಲರ್‌ಗಳನ್ನು ಮೂಲೆಮೂಲೆಗೂ ಅಟ್ಟಾಡಿದ ವಿರಾಟ್ ಕೊಹ್ಲಿ (50) ಹಾಗೂ ಫಿಲ್ ಸಾಲ್ಟ್ (78) ಜೋಡಿ ಮೊದಲ ವಿಕೆಟ್‌ ಗೆ ಮಹತ್ವದ 120 ರನ್‌ ಗಳ ಜೊತೆಯಾಟವಾಡಿತು. ಈ ಜೊತೆಯಾಟದೊಂದಿಗೆ T20 ಕ್ರಿಕೆಟ್‌ ನಲ್ಲಿ 47 ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ವಿರಾಟ್ ಕೊಹ್ಲಿ ಪಾಲಾಯಿತು.

ವಾರ್ತಾ ಭಾರತಿ 12 Apr 2026 11:21 pm

ಎ.14ರಂದು ಕೊನೆಯ ಸಚಿವ ಸಂಪುಟ ಸಭೆ ನಡೆಸಲಿರುವ ನಿತೀಶ್ ಕುಮಾರ್; ಅಂದೇ ರಾಜೀನಾಮೆ ಸಾಧ್ಯತೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಪ್ರಿಲ್ 14ರಂದು ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಧಾನಸಭೆಯ ಮುಖ್ಯ ಕಾರ್ಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಈ ಸಚಿವ ಸಂಪುಟ ಸಭೆ ನಿಗದಿಯಾಗಿದೆ. 53 ದಿನಗಳ ಬಳಿಕ ನಡೆಯುತ್ತಿರುವ ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಸಚಿವ ಸಂಪುಟ ಸಭೆಯ ಬಳಿಕ ಲೋಕ್ ಭವನಕ್ಕೆ ತೆರಳಲಿರುವ ನಿತೀಶ್ ಕುಮಾರ್, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸೈಯದ್ ಅಟಾ ಹುಸೈನ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಈ ನಡುವೆ, ಬಿಹಾರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ನಡೆಯಲಿರುವ ಚುನಾವಣೆಗೆ ಹಿರಿಯ ನಾಯಕ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೇಂದ್ರ ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದೆ. ರವಿವಾರ ಪಕ್ಷದ ಸಂಸದೀಯ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿಯ ನಾಯಕತ್ವದಲ್ಲಿ ನೂತನ ಸರ್ಕಾರ ರಚನೆಯಾಗಲಿರುವ ಹಿನ್ನೆಲೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವಾರ್ತಾ ಭಾರತಿ 12 Apr 2026 11:13 pm

ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ತಂದೆಯ ಅಂತ್ಯಕ್ರಿಯೆಯ ವೇಳೆ ಮಗು ಮೃತ್ಯು

ಬೈರೂತ್, ಎ.12: ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎರಡು ವರ್ಷದ ಮಗುವೊಂದು ಇತ್ತೀಚಿನ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಲೆಬನಾನ್‌ನಲ್ಲಿ ನಡೆದಿದೆ. ಮೃತ ಮಗುವನ್ನು ತಲೀನ್ ಎಂದು ಗುರುತಿಸಲಾಗಿದೆ. ಕಳೆದ ವಾರ ದಕ್ಷಿಣ ಲೆಬನಾನ್‌ ನಲ್ಲಿರುವ ತನ್ನ ನಿವಾಸದ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಆಕೆಯ ತಂದೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮತ್ತೆ ನಡೆದ ಇಸ್ರೇಲ್ ದಾಳಿಯಲ್ಲಿ ಎರಡು ವರ್ಷದ ತಲೀನ್ ಹಾಗೂ ಆಕೆಯ ಇನ್ನಿತರ ಸಂಬಂಧಿಕರು ಮೃತಪಟ್ಟಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಟ್ಟ ಮೊದಲ ದಿನವಾದ ಬುಧವಾರ ಸ್ರಿಫಾ ಗ್ರಾಮದಲ್ಲಿನ ತಲೀನ್ ಕುಟುಂಬದ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಈ ಕದನ ವಿರಾಮ ತಮಗೂ ಅನ್ವಯವಾಗುತ್ತದೆ ಎಂದು ಲೆಬನಾನ್ ಭಾವಿಸಿತ್ತು. ಆದರೆ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್‌ನಾದ್ಯಂತ ಮತ್ತೆ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ತಲೀನ್ ಕುಟುಂಬದಲ್ಲೂ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ತಲೀನ್‌ನ ಸಹೋದರಿಯಾದ ಏಳು ವರ್ಷದ ಅಲೈನ್ ಸಯೀದ್ ಸ್ವಲ್ಪದರಲ್ಲಿ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. “ಅವರು ಇದು ಕದನ ವಿರಾಮ ಎಂದು ಹೇಳಿದರು. ಎಲ್ಲರಂತೆ ನಾವೂ ಕೂಡ ಗ್ರಾಮಕ್ಕೆ ತೆರಳಿದೆವು. ನಾವು ಪ್ರಾರ್ಥನೆ ಮಾಡಲು ಕ್ಯಾಸ್ಕೆಟ್‌ ಗೆ ತೆರಳಿದೆವು, ಮನೆಯತ್ತ ಹೆಜ್ಜೆ ಹಾಕಿದೆವು. ದಿಢೀರನೆ ನಮ್ಮ ತಲೆಯ ಮೇಲೆಯೇ ಚಂಡಮಾರುತವೊಂದು ಅಪ್ಪಳಿಸಿದಂತಾಯಿತು” ಎಂದು ಈ ದಾಳಿಯಲ್ಲಿ ಬದುಕುಳಿದ ತಲೀನ್‌ ನ ತಾತ ನಾಸರ್ ಸಯೀದ್ ಹೇಳಿದ್ದಾರೆ. “ಮಾನವ ಹಕ್ಕುಗಳು ಎಲ್ಲಿವೆ? ಇಸ್ರೇಲ್‌ನಲ್ಲಿ ಒಂದು ಮಗು ಗಾಯಗೊಂಡರೆ ಇಡೀ ಜಗತ್ತೇ ಎದ್ದು ನಿಲ್ಲುತ್ತದೆ. ನಾವೂ ಜನರಲ್ಲವೆ? ನಾವೂ ಮನುಷ್ಯರಲ್ಲವೆ? ನಾವು ಕೂಡ ಅವರಂತೆಯೇ!” ಎಂದು ನಾಸರ್ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ದಕ್ಷಿಣ ಬಂದರು ನಗರವಾದ ಟೈರ್‌ನಿಂದ ಹಸಿರು ಬಟ್ಟೆಯಲ್ಲಿ ಸುತ್ತಿದ್ದ ಮೃತದೇಹಗಳನ್ನು ಸಂಗ್ರಹಿಸಲು ಅವರು ತಮ್ಮ ಸಂಬಂಧಿಕರ ಜೊತೆಗೂಡಿದ್ದರು. ಈ ಮೃತದೇಹಗಳ ಪೈಕಿ ಉಳಿದವರಿಗಿಂತ ಪುಟ್ಟ ಗಾತ್ರದಲ್ಲಿದ್ದ ಅವರ ಮೊಮ್ಮಗಳು ತಲೀನ್‌ ನ ಮೃತದೇಹವೂ ಇತ್ತು. ಆಕೆಗೆ ಇನ್ನೂ ಎರಡು ವರ್ಷ ಕೂಡ ಆಗಿರಲಿಲ್ಲವೆನ್ನಲಾಗಿದೆ. ಹಿಝ್ಬುಲ್ಲಾ ಹಾಗೂ ಇಸ್ರೇಲ್ ನಡುವೆ ಕೊನೆಯದಾಗಿ ನಡೆದಿದ್ದ 2024ರ ಯುದ್ಧದ ಸಂದರ್ಭದಲ್ಲಿ ತಲೀನ್ ಜನಿಸಿದ್ದಳು. “ಆಕೆ ಯುದ್ಧದ ವೇಳೆ ಜನಿಸಿದಳು, ಯುದ್ಧದ ವೇಳೆಯೇ ಮೃತಪಟ್ಟಳು” ಎಂದು ತಲೀನ್‌ ನ ತಾಯಿ ಘಿನ್ವಾರ ತಂದೆ ಮುಹಮ್ಮದ್ ನಝ್ಝಲ್ ಹೇಳಿದ್ದಾರೆ. ತಲೀನ್‌ನ ಈ ಅಕಾಲಿಕ ಮೃತ್ಯುವಿನ ಆಘಾತದಿಂದ ಆಕೆಯ ತಾಯಿ ಫಿನ್ವಾ ಇನ್ನೂ ಚೇತರಿಸಿಕೊಂಡಿಲ್ಲ.

ವಾರ್ತಾ ಭಾರತಿ 12 Apr 2026 11:11 pm

ವಿಟ್ಲ: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಬೈಕ್‌ ಸವಾರ

ವಿಟ್ಲ: ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ. ಘಟನೆಯ ವಿವರ: ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಕೆಟಿಎಂ (KTM) ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಮಗುವಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಸವಾರನು ಹೆಲ್ಮೆಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ, ಜನಸಾಮಾನ್ಯರು ಭಯರಹಿತವಾಗಿ ಜೀವನ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 12 Apr 2026 11:05 pm

Madhya Pradesh | ನದಿ ಜೋಡಣೆ ಯೋಜನೆ ನಿರ್ವಸಿತರ ಪ್ರತಿಭಟನೆ 8ನೇ ದಿನಕ್ಕೆ

ಚತ್ತರ್‌ಪುರ, ಎ.12: ಮಧ್ಯಪ್ರದೇಶದಲ್ಲಿ ಕೆನ್-ಬೆತ್ವಾ ನದಿಯನ್ನು ಜೋಡಿಸುವ ಯೋಜನೆಯ ವ್ಯಾಪ್ತಿಗೆ ಬರುವ ಪ್ರಸ್ತಾವಿತ ದೌದಾನ್ ಅಣೆಕಟ್ಟು ನಿರ್ಮಾಣಕ್ಕಾಗಿ ನಿರ್ವಸಿತರಾದ ಬುಡಕಟ್ಟು ಜನರು ಸತತ ಎಂಟನೇ ದಿನವಾದ ರವಿವಾರವೂ ಪ್ರತಿಭಟನೆ ಮುಂದುವರಿಸಿದ್ದು, ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಮಾಝ್‌ಗವಾನ್ ಹಾಗೂ ರುಂಜ್ ಗ್ರಾಮಗಳು ಸೇರಿದಂತೆ ಪನ್ನಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗಿರುವ ಗ್ರಾಮಸ್ಥರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ನಿರ್ವಸಿತ ಕುಟುಂಬಗಳಿಗೆ 12.5 ಲಕ್ಷ ರೂ.ಪರಿಹಾರ ಪ್ಯಾಕೇಜ್ ನೀಡಬೇಕೆಂದು ಪ್ರತಿಭಟನಕಾರರು ಬೇಡಿಕೆ ಇಟ್ಟಿದ್ದಾರೆ. ಪನ್ನಾ ಹೆಚ್ಚುವರಿ ಜಿಲ್ಲಾಧಿಕಾರಿ ಅಲೋಕ್ ಮಾರ್ಕೊ ಹಾಗೂ ಎಸ್‌ಡಿಎಂ ಸತೀಶ್ ನಾಗವಂಶಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಕಾರರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.

ವಾರ್ತಾ ಭಾರತಿ 12 Apr 2026 11:00 pm

IPL 2026 | ವಿರಾಟ್ ಕೊಹ್ಲಿ ಕ್ಲಬ್‌ ಗೆ ಸೇರಿದ ಬಟ್ಲರ್

ಲಕ್ನೊ, ಎ.12: ಲಕ್ನೊ ತಂಡ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವಳಿ ಸಾಧನೆ ಮಾಡಿದರು. ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಅವರು ಟಿ20 ಕ್ರಿಕೆಟ್‌ನಲ್ಲಿ ತಮ್ಮ 100ನೇ ಅರ್ಧಶತಕವನ್ನು ಗಳಿಸಿದ್ದಲ್ಲದೆ, 14,000 ರನ್‌ಗಳನ್ನು ಪೂರೈಸಿದರು. ಈ ಮೂಲಕ ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಕೀರೊನ್ ಪೊಲಾರ್ಡ್ ಹಾಗೂ ಅಲೆಕ್ಸ್ ಹೇಲ್ಸ್ ಇದ್ದ ಗಣ್ಯರ ಗುಂಪಿಗೆ ಸೇರ್ಪಡೆಯಾದರು. 100ನೇ ಅರ್ಧಶತಕವನ್ನು ಗಳಿಸಿದ ಬಟ್ಲರ್ ಅವರು ವಿರಾಟ್ ಕೊಹ್ಲಿ ಹಾಗೂ ವಾರ್ನರ್ ಇದ್ದ ವಿಶೇಷ ಕ್ಲಬ್‌ಗೆ ಸೇರಿದರು. ರಿಷಭ್ ಪಂತ್ ಅವರಿಂದ ಜೀವದಾನ ಪಡೆದಿದ್ದ ಬಟ್ಲರ್ 60 ರನ್ ಗಳಿಸಿದರು. ►ಕೊಹ್ಲಿ ದಾಖಲೆ ಮುರಿದ ಗಿಲ್ ಲಕ್ನೊ ವಿರುದ್ಧ 56 ರನ್ ಗಳಿಸಿದ ಶುಭಮನ್ ಗಿಲ್, ಐಪಿಎಲ್ ಇತಿಹಾಸದಲ್ಲಿ 4,000 ರನ್ ಪೂರೈಸಿದ ಅತ್ಯಂತ ಯುವ ಆಟಗಾರ ಎನಿಸಿಕೊಂಡರು. 26 ವರ್ಷ 216 ದಿನಗಳಲ್ಲಿ ಈ ಸಾಧನೆಗೈದ ಗಿಲ್ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು. ಕೊಹ್ಲಿ 2016ರಲ್ಲಿ 27 ವರ್ಷ 195 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಇದೀಗ 118 ಐಪಿಎಲ್ ಇನ್ನಿಂಗ್ಸ್‌ ಗಳಲ್ಲಿ 39.91ರ ಸರಾಸರಿಯಲ್ಲಿ 28 ಅರ್ಧಶತಕಗಳು ಹಾಗೂ ನಾಲ್ಕು ಶತಕಗಳೊಂದಿಗೆ 4,031 ರನ್ ಗಳಿಸಿದ್ದಾರೆ.

ವಾರ್ತಾ ಭಾರತಿ 12 Apr 2026 10:50 pm

ಮಂಗಳೂರು| ಯುವಕನ ಆತ್ಮಹತ್ಯೆಗೆ ಯುವತಿಯ ಕಿರುಕುಳದ ಆರೋಪ: ಪೊಲೀಸರಿಗೆ ದೂರು

ಮಂಗಳೂರು, ಎ.12: ಮೂಡುಶೆಡ್ಡೆ ಎದುರುಪದವಿನ ಯುವಕ ಮುಹಮ್ಮದ್ ಆಶಿಕ್ (22) ಆತ್ಮಹತ್ಯೆಗೆ ಯುವತಿಯೊಬ್ಬಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರೀತಿಸಿದ ಹುಡುಗಿಯ ಮಾನಸಿಕ ಕಿರುಕುಳ ತಾಳಲಾರದೆ ಆಶಿಕ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆತನ ತಂದೆ ಮುಹಮ್ಮದ್ ಹನೀಫ್ ಎಂಬವರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ. ಮಾರ್ಚ್ 21ರ ಮಧ್ಯರಾತ್ರಿ ಆಶಿಕ್ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಈ ಸಾವಿಗೆ ನಿಖರ ಕಾರಣ ತಿಳಿದಿರಲಿಲ್ಲ. ಆದರೆ ಆಶಿಕ್‌ನ ಮೊಬೈಲ್ ಪರಿಶೀಲಿಸಿದಾಗ ಈತನ ಸಾವಿನ ರಹಸ್ಯ ಹೊರಬಿದ್ದಿದೆ ಎಂದು ತಿಳಿದು ಬಂದಿದೆ. ಆಶಿಕ್ ನಗರದ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ಅದೇ ಕಾಲೇಜಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಅನ್ಯೋನ್ಯ ಬಾಂಧವ್ಯವಿತ್ತು. ಆದರೆ ಬಳಿಕ ಆಕೆ ಈತನಿಂದ ದೂರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ದೂರಲಾಗಿದೆ.

ವಾರ್ತಾ ಭಾರತಿ 12 Apr 2026 10:40 pm

ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್: ವಾರ್ಷಿಕೋತ್ಸವದ ಅಂಗವಾಗಿ BHLಲ್ ಒರುನಾಲ್ ಕ್ರೀಡಾಕೂಟ

ಸುರತ್ಕಲ್: ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ಇದರ 39ನೇ ವಾರ್ಷಿಕೋತ್ಸವದ ಅಂಗವಾಗಿ BHLಲ್ ಒರು ನಾಲ್ ಕ್ರೀಡಾಕೂಟ ಕಾರ್ಯಕ್ರಮ ಸುರತ್ಕಲ್ ಬದ್ರಿಯಾ ಹೆಲ್ತ್ ಲೀಗ್ ಪರಿಸರದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಕುಸ್ತಿ, ಕ್ರಿಕೆಟ್, ಹಗ್ಗಜಗ್ಗಾಟ, ಬೈಠಕ್, ದಂಡ್, ಮಡಿಕೆ ಒಡೆಯುವ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಹಾರೂನ್ ರಶೀದ್ ವಹಿಸಿದ್ದರು. ಅತಿಥಿಗಳನ್ನು ಮಾಜಿ ಅಧ್ಯಕ್ಷ, ನ್ಯಾಯವಾದಿ ಜಿಷಾನ್ ಅಲಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಾರ್ಯದರ್ಶಿ ಇಬ್ರಾಹಿಂ ಎಸ್ ಎಸ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಕುಸ್ತಿಪಟು ಝುಲ್ಫಿಕರ್ ಅಲಿ, ಮಾಜಿ ಕುಸ್ತಿಪಟುಗಳಾದ ಅಬ್ದುಲ್ ಹಮೀದ್ ಸಾಹುಕಾರ್, ಸಿರಾಜ್, ಅರ್ಷಾದ್ ಕೆನಡಾ, ಉಮರ್ ಫಾರೂಕ್ ಸಾಹುಕಾರ್, ಎಸ್ ಕೆ ಮುಸ್ತಾಫಾ, ಅಬ್ದುಲ್ ರಹಿಮಾನ್ ಹಾಜರ್ ಹೌಸ್, ಫಾರೂಕ್ ಗುಡ್ ಲಕ್, ಕರೀಂ ಬೊಟ್ಟು, ಶೇಕ್ ಅಬ್ದುಲ್ಲಾ, ಅಬ್ದುಲ್ ರಹಿಮಾನ್ ಕಾನಾ, ಅಬ್ದುಲ್ ಹಮೀದ್ ಸುರತ್ಕಲ್, ಬದ್ರಿಯಾ ಹೆಲ್ತ್ ಲೀಗ್ UAE ಘಟಕದ ಪದಾಧಿಕಾರಿಗಳಾದ ನಹೀಮ್, ಶಕೀಲ್, ಫತವುಲ್ಲಾ, ಊರಿನ ಹಿರಿಯ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಸಂಯೋಜನೆಯನ್ನು ಸಾಹಿಲ್ ಸಹದ್, ಶೇರಿನ್, ನಾಸಿರ್ ಸುರತ್ಕಲ್, ಮುಸ್ತಾಫಾ ಸಾಹುಕಾರ್ ಸಂಯೋಜಿಸಿ ದರು. ಸುರತ್ಕಲ್ ಪರಿಸರದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಮುಂದಿನ ಕಾರ್ಯಕ್ರಮ ದಲ್ಲಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಘೋಷಿಸಲಾಯಿತು.

ವಾರ್ತಾ ಭಾರತಿ 12 Apr 2026 10:27 pm

ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್‌ ಬೌಲರ್‌ಗಳಿಗೆ ಬೆವರಿಳಿಸಿದ ಆರ್‌ಸಿಬಿ ಫಿಲ್‌ ಸಾಲ್ಟ್‌

RCB Vs MI IPL 2026: ವಾಂಖೇಡೆ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್‌ 11) ನಡೆಯುತ್ತಿರುವ ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ

ಒನ್ ಇ೦ಡಿಯ 12 Apr 2026 10:23 pm

ಗಂಜಿಮಠದಲ್ಲಿ ಟ್ರಾಫಿಕ್ ಜಾಮ್: ರಾಯಲ್ ಪ್ಯಾಲೇಸ್, ಒಂಡೆಲಾ ಹಾಲ್ ಮಾಲಕರು, ಆಯೋಜಕರ ವಿರುದ್ಧ ಎಫ್‌ಐಆರ್‌

ಬಜ್ಪೆ:  ಮುಚ್ಚೂರು ಕ್ರಾಸ್ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ ಗಂಜಿಮಠದ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲಕರು ಮತ್ತು ಆಯೋಜಕರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ. ರವಿವಾರ ಮಧ್ಯಾಹ್ನ 12ರಿಂದ 2ರ ನಡುವೆ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಕರು ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ಮದುವೆ ಕಾರ್ಯಕ್ರಮಕ್ಕೆ ಹಾಲ್ ನ್ನು ಬಾಡಿಗೆ ನೀಡಿದ್ದರು ಎಂದು ದೂರಲಾಗಿದೆ. ಸಮಾರಂಭಕ್ಕೆ ಬಂದಿದ್ದ ವಾಹನಗಳು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಪಾರ್ಕಿಂಗ್ ಮಾಡಿ ವಾಹನ ಮತ್ತು ಜನ ಸಂಚಾರಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಸಾರ್ವಜನಿಕರಿಗೆ ತೊಂದರೆ ಮತ್ತು ಅಪಾಯವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅ.ಸಂ. 73/2026 ಕಲಂ 126(2), 285, 292 ಬಿಎನ್‌ಎಸ್ ಕಲಂ 122 ಐಎಂವಿ ಕಾಯ್ದೆಯಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 12 Apr 2026 10:22 pm

ಕೇರಳದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರಾಧ್ಯಾಪಕರ ಕಿರುಕುಳ ಕಾರಣವೆಂದು ಕುಟುಂಬದ ಆರೋಪ

ಕಣ್ಣೂರು, ಎ.12: ಶಂಕಿತ ಆತ್ಮಹತ್ಯೆ ಪ್ರಕರಣದಲ್ಲಿ ಕಣ್ಣೂರಿನ ದಂತ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯೋರ್ವ ಕಟ್ಟಡದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದು, ಚಕ್ಕರಕ್ಕಲ್ ಠಾಣಾ ಪೊಲೀಸರು ಪ್ರಾಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ನಿತಿನ್ ರಾಜ್ ಆರ್.ಎಲ್. (22) ಪ್ರಾಧ್ಯಾಪಕರಿಂದ ಭಾವನಾತ್ಮಕ ಕಿರುಕುಳ ಅನುಭವಿಸಿದ್ದ ಎಂದು ಆತನ ಹೆತ್ತವರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ. ತಿರುವನಂತಪುರದ ಪುದುಕುಳಂಗರದ ಉಳಮಾಳಕಲ್ ನಿವಾಸಿ ರಾಜ್, ಇಲ್ಲಿನ ಅಂಜರಕಾಂಡಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದ. ಪೊಲೀಸರ ಪ್ರಕಾರ, ರಾಜ್ ಎ.10ರಂದು ಮೆಡಿಕಲ್ ಕಾಲೇಜು ಬ್ಲಾಕ್ ಬಳಿ ಕಟ್ಟಡದಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ಆತನನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಘಟನೆಯ ಬಳಿಕ ಆಂತರಿಕ ವಿಚಾರಣೆಯನ್ನು ಆರಂಭಿಸಿದ್ದ ಕಾಲೇಜು, ಶನಿವಾರ ಡೆಂಟಲ್ ಅನಾಟಮಿ ವಿಭಾಗದ ಮುಖ್ಯಸ್ಥ ಎಂ.ಕೆ. ರಾಮ ಮತ್ತು ಸಹ ಪ್ರಾಧ್ಯಾಪಕಿ ಕೆ.ಟಿ. ಸಂಗೀತಾ ನಂಬಿಯಾರ್ ಅವರನ್ನು ಅಮಾನತುಗೊಳಿಸಿದೆ. ದೈಹಿಕ ಹಲ್ಲೆ ನಡೆಸುವ ಹಾಗೂ ಪರೀಕ್ಷೆಗಳಲ್ಲಿ ತನ್ನ ಅಂಕಗಳನ್ನು ಕಡಿಮೆ ಮಾಡುವ ಬೆದರಿಕೆ ಸೇರಿದಂತೆ, ತಾನು ಬೋಧಕ ವೃಂದದಿಂದ ಕಿರುಕುಳ ಎದುರಿಸುತ್ತಿದ್ದೇನೆ ಎಂದು ರಾಜ್ ತನ್ನ ಸ್ನೇಹಿತರಿಗೆ ಆಡಿಯೊ ಸಂದೇಶ ರವಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ವಿವರವಾದ ತನಿಖೆ ನಡೆಯುತ್ತಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಚಕ್ಕರಕ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್‌ನ ಸಹಪಾಠಿಗಳು, ಕಾಲೇಜು ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಹೇಳಿಕೆಗಳನ್ನು ಶೀಘ್ರವೇ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ತಂದೆ ರಾಜನ್, ತನ್ನ ಮಗನ ಕಪ್ಪು ಮೈಬಣ್ಣ ಮತ್ತು ಬಡ ಕುಟುಂಬದ ಹಿನ್ನೆಲೆಯ ಕಾರಣದಿಂದ ಪ್ರಾಧ್ಯಾಪಕರು ಭಾವನಾತ್ಮಕ ಮತ್ತು ಮೌಖಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದರು.

ವಾರ್ತಾ ಭಾರತಿ 12 Apr 2026 10:21 pm

ಇಸ್ರೇಲನ್ನು ಆಕ್ರಮಿಸುವ ಬೆದರಿಕೆ ಒಡ್ಡಿದ ಟರ್ಕಿ ಅಧ್ಯಕ್ಷ; ಇಸ್ರೇಲ್-ಟರ್ಕಿ ನಡುವೆ ವಾಕ್ಸಮರ ಉಲ್ಬಣ

ಅಂಕಾರ, ಎ.12: ಇಸ್ರೇಲ್ ಮತ್ತು ಟರ್ಕಿ ದೇಶಗಳ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಇಸ್ರೇಲನ್ನು ಆಕ್ರಮಿಸುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಟರ್ಕಿ ತನ್ನದೇ ನಾಗರಿಕರ ಸಾಮೂಹಿಕ ಹತ್ಯಾಕಾಂಡ ನಡೆಸಿದೆ” ಎಂದು ಆರೋಪಿಸಿದ್ದಾರೆ. “ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರದಿದ್ದರೆ ನಾವು ಇಸ್ರೇಲ್‌ ಗೆ ಅದರ ಸ್ಥಾನವನ್ನು ತೋರಿಸುತ್ತಿದ್ದೆವು. ಲಿಬಿಯಾ ಮತ್ತು ಕರಾಬಾಖ್ ಪ್ರವೇಶಿಸಿದ ರೀತಿಯಲ್ಲೇ ಇಸ್ರೇಲನ್ನೂ ಪ್ರವೇಶಿಸುತ್ತಿದ್ದೆವು” ಎಂದು ಶನಿವಾರ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಎರ್ಡೋಗನ್ ಹೇಳಿದ್ದಾರೆ. ಜೊತೆಗೆ, ನೆತನ್ಯಾಹು ರಕ್ತ ಮತ್ತು ದ್ವೇಷದಿಂದ ಕುರುಡಾಗಿದ್ದಾರೆ ಎಂದು ಆಪಾದಿಸಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ ನ ದಿಗ್ಬಂಧನವನ್ನು ಧಿಕ್ಕರಿಸಿ ಗಾಝಾ ಪಟ್ಟಿಗೆ ಮಾನವೀಯ ನೆರವು ಸಾಗಿಸಲು ಪ್ರಯತ್ನಿಸಿದ ಜಾಗತಿಕ ‘ಸುಮುದ್ ಫ್ಲೋಟಿಲ್ಲಾ’ ಅಭಿಯಾನವನ್ನು ತಡೆದಿದ್ದಕ್ಕಾಗಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಇತರ 35 ಇಸ್ರೇಲಿ ಅಧಿಕಾರಿಗಳೊಂದಿಗೆ ಶುಕ್ರವಾರ ಟರ್ಕಿ ದೋಷಾರೋಪಣೆ ಮಾಡಿತ್ತು ಮತ್ತು ಶಿಕ್ಷೆಯಾಗಿ 4,596 ವರ್ಷಗಳ ಜೈಲುಶಿಕ್ಷೆ ಬೇಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗೆ ಪ್ರತಿಕ್ರಿಯಿಸಿದ ನೆತನ್ಯಾಹು, “ಇರಾನ್‌ನ ಭಯೋತ್ಪಾದಕ ಆಡಳಿತ ಮತ್ತು ಅದರ ಪ್ರತಿನಿಧಿಗಳ ವಿರುದ್ಧ ಹೋರಾಟವನ್ನು ಇಸ್ರೇಲ್ ಮುಂದುವರಿಸುತ್ತದೆ. ಆದರೆ ಎರ್ಡೋಗನ್ ತಮ್ಮದೇ ಕುರ್ದಿಶ್ ನಾಗರಿಕರನ್ನು ಕಗ್ಗೊಲೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಯೆಹೂದ್ಯ ವಿರೋಧಿಯಾದ ಟರ್ಕಿಯು ಇಸ್ರೇಲಿ ರಾಜಕಾರಣಿಗಳು ಮತ್ತು ಮಿಲಿಟರಿ ನಾಯಕತ್ವದ ವಿರುದ್ಧ ಸುಳ್ಳು ವಿಚಾರಣೆ ನಡೆಸಿದೆ ಎಂದು ಇಸ್ರೇಲ್‌ ನ ರಕ್ಷಣಾ ಸಚಿವ ಇಸ್ರಾಯೆಲ್ ಕಟ್ಜ್ ಆರೋಪಿಸಿದ್ದಾರೆ. ►‘ನೆತನ್ಯಾಹು ನಮ್ಮ ಕಾಲದ ಹಿಟ್ಲರ್’ ಎರ್ಡೋಗನ್ ವಿರುದ್ಧದ ನೆತನ್ಯಾಹು ಹೇಳಿಕೆಗೆ ಪ್ರತಿಕ್ರಿಯಿಸಿರುವ ಟರ್ಕಿಯ ವಿದೇಶಾಂಗ ಇಲಾಖೆ, “ನೆತನ್ಯಾಹು ನಮ್ಮ ಕಾಲದ ಹಿಟ್ಲರ್” ಎಂದು ಬಣ್ಣಿಸಿದ್ದು, “ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯನ್ನು ಹಾಳುಮಾಡುವುದು ಅವರ ಉದ್ದೇಶ” ಎಂದು ಟೀಕಿಸಿದೆ. “ನಮ್ಮ ಕಾಲದ ಹಿಟ್ಲರ್ ಎಂದು ವರ್ಣಿಸಲ್ಪಟ್ಟ ನೆತನ್ಯಾಹು ಅವರ ಗುರುತು ಮತ್ತು ದಾಖಲೆ ಚಿರಪರಿಚಿತ. ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಕ್ಕಾಗಿ ಅವರ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದೆ. ನೆತನ್ಯಾಹು ಅವರ ನಾಯಕತ್ವದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆಯ ಆರೋಪದ ಮೇಲೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದೆ” ಎಂದು ವಿದೇಶಾಂಗ ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ವಾರ್ತಾ ಭಾರತಿ 12 Apr 2026 10:20 pm

ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಸಿದರೆ 50% ಸುಂಕ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್, ಎ.12: ಇರಾನ್‌ ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಚೀನಾ ತಯಾರಿ ನಡೆಸುತ್ತಿದೆ ಎಂಬ ವರದಿಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಶಸ್ತ್ರಾಸ್ತ್ರ ಪೂರೈಸಿದರೆ 50% ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಚೀನಾ ಇರಾನ್‌ ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದರೆ ಅವರಿಗೆ ದೊಡ್ಡ ಸಮಸ್ಯೆಯಾಗಲಿದ್ದು, 50% ಸುಂಕ ತೆರಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್, “ಚೀನಾದೊಂದಿಗೆ ಸ್ಥಿರ ಸಂಬಂಧಗಳನ್ನು ಉಳಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತದೆ. ಆದರೆ ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿ ಇರಾನ್‌ ನೊಂದಿಗೆ ಚೀನಾದ ಒಳಗೊಳ್ಳುವಿಕೆ ಸಂಬಂಧಗಳನ್ನು ಜಟಿಲಗೊಳಿಸಬಹುದು. ಅದನ್ನು ತೊಡೆದುಹಾಕುವುದು ಚೀನಾದ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ. ಮುಂದಿನ ವಾರಗಳಲ್ಲಿ ಇರಾನ್‌ ಗೆ ವಾಯು ರಕ್ಷಣಾ ವ್ಯವಸ್ಥೆ ಪೂರೈಸಲು ಚೀನಾ ತಯಾರಿ ನಡೆಸುತ್ತಿರುವ ಸೂಚನೆಗಳಿವೆ. ಚೀನಾವು ಭುಜದ ಮೇಲಿಂದ ಚಲಾಯಿಸಬಹುದಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಇರಾನ್‌ ಗೆ ವರ್ಗಾಯಿಸಲು ಯೋಜಿಸುತ್ತಿದೆ. ಮೂಲವನ್ನು ಮರೆಮಾಚಲು ಈ ಸಾಗಣೆಗಳನ್ನು ಮೂರನೇ ದೇಶದ ಮೂಲಕ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ತಿಳಿಸಿದೆ.

ವಾರ್ತಾ ಭಾರತಿ 12 Apr 2026 10:20 pm

ನಾವೇ ಹಾರ್ಮುಝ್ ಬಂದ್ ಮಾಡುತ್ತೇವೆ: ಗುಡುಗಿದ ಡೊನಾಲ್ಡ್ ಟ್ರಂಪ್

ಹಡಗುಗಳು ಇರಾನ್‌ ಗೆ ಸುಂಕ ಪಾವತಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದ ಅಮೆರಿಕ ಅಧ್ಯಕ್ಷ; ಮತ್ತೆ ಸಂಘರ್ಷದಡೆಗೆ ಪಶ್ಚಿಮ ಏಶ್ಯಾ?

ವಾರ್ತಾ ಭಾರತಿ 12 Apr 2026 10:10 pm

ಮೂರು ವರ್ಷ ಮುಗಿದಿದೆ, ಸಚಿವ ಸಂಪುಟ ಬದಲಿಸಿ: ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಟಿ.ಬಿ.ಜಯಚಂದ್ರ ಸಜ್ಜು

ನವದೆಹಲಿ: ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸಂಪುಟ ಪುನರ್‌ರಚನೆಯ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ದೆಹಲಿಯಲ್ಲಿರುವ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು, ಸಂಪುಟ ಪುನರ್‌ರಚನೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿರಿಯ ಶಾಸಕರ ಪರವಾಗಿ ದನಿ ಎತ್ತುವುದಾಗಿ ತಿಳಿಸಿದ್ದಾರೆ. ಸಂಪುಟ ಪುನರ್‌ರಚನೆಯ

ಒನ್ ಇ೦ಡಿಯ 12 Apr 2026 10:09 pm

Iran ಯುದ್ಧ | ಭಾರತೀಯ ಕಾಫಿ ರಫ್ತಿಗೆ ತೀವ್ರ ಹೊಡೆತ

ಹೊಸದಿಲ್ಲಿ, ಎ.12: ದಶಕಗಳಿಂದಲೂ ದುಬೈ, ಕುವೈಟ್ ನಗರ ಮತ್ತು ರಿಯಾದ್‌ ನಲ್ಲಿನ ಕೆಫೆಗಳಲ್ಲಿ ಜನಪ್ರಿಯವಾಗಿರುವ ಭಾರತೀಯ ಕಾಫಿ ಈಗ ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ನೌಕಾ ದಿಗ್ಬಂಧನದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಪಶ್ಚಿಮ ಏಶ್ಯಾದ ಮಾರುಕಟ್ಟೆಗಳಲ್ಲಿ ಭಾರತದ ಕಾಫಿ ವ್ಯಾಪಾರವು ಶೇ.80ರಷ್ಟು ಕುಸಿಯುವ ಭೀತಿಯನ್ನು ಉದ್ಯಮವು ಎದುರಿಸುತ್ತಿದೆ ಎಂದು ‘ನಿಕ್ಕೀ ಏಶ್ಯಾ’ ವರದಿ ಮಾಡಿದೆ. ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರೂ, ವ್ಯಾಪಾರ ಮಾರ್ಗಗಳು ಅಡಚಣೆಗಳಿಂದ ಮುಕ್ತಗೊಂಡಿಲ್ಲ. ಅತಿಯಾಗಿ ಏರಿಕೆಯಾಗಿರುವ ಸಾಗಾಣಿಕೆ ವೆಚ್ಚವು ಕಾಫಿ ಉದ್ಯಮವನ್ನು ಕಂಗೆಡಿಸಿದೆ. ಇಸ್ಲಾಮಾಬಾದ್‌ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ 21 ಗಂಟೆಗಳ ಕಾಲ ನಡೆದ ಸುದೀರ್ಘ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಇದು ಸಂಕಷ್ಟದಿಂದ ಪಾರಾಗುವ ಕಾಫಿ ಉದ್ಯಮದ ವಿಶ್ವಾಸವನ್ನು ಇನ್ನಷ್ಟು ಕುಗ್ಗಿಸಿದೆ. ಮಾತುಕತೆ ವಿಫಲಗೊಂಡಿರುವುದು ಭಾರತೀಯ ಕಾಫಿ ರಫ್ತುದಾರರಿಗೆ ಹಾರ್ಮುಝ್ ಜಲಸಂಧಿ ಬಿಕ್ಕಟ್ಟು ಸುದೀರ್ಘ ಕಾಲ ಮುಂದುವರಿಯಬಹುದು ಎಂಬ ಸಂಕೇತವಾಗಿದೆ. ಭಾರತವು ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶವಾಗಿದ್ದು, ತನ್ನ ಉತ್ಪಾದನೆಯ ಸುಮಾರು ಶೇ.70ರಷ್ಟನ್ನು ರಫ್ತು ಮಾಡುತ್ತಿದೆ. ಕಳೆದೊಂದು ದಶಕದಲ್ಲಿ ಪಶ್ಚಿಮ ಏಶ್ಯಾದಲ್ಲಿ ತನ್ನ ನೆಲೆಯನ್ನು ಸ್ಥಿರವಾಗಿ ವಿಸ್ತರಿಸಿಕೊಂಡಿದ್ದು, 2024ರಲ್ಲಿ ತನ್ನ ಒಟ್ಟು ರಫ್ತಿನ ಶೇ.16ಕ್ಕೂ ಅಧಿಕ ಕಾಫಿಯನ್ನು ಯುಎಇ, ಜೋರ್ಡಾನ್ ಮತ್ತು ಸೌದಿ ಅರೇಬಿಯಗಳಂತಹ ಮಾರುಕಟ್ಟೆಗಳಿಗೆ ರವಾನಿಸಿತ್ತು. ಭಾರತೀಯ ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ ರಾಜಾ ಅವರ ಪ್ರಕಾರ, ರಫ್ತುದಾರರು ಮುಂಬರುವ ತಿಂಗಳುಗಳಲ್ಲಿ ಪಶ್ಚಿಮ ಏಶ್ಯಾ ಮಾರುಕಟ್ಟೆಯಲ್ಲಿ ಶೇ.80ರಷ್ಟು ನಷ್ಟವನ್ನು ಎದುರಿಸಬಹುದು. ಹೆಚ್ಚಿನ ಭಾರತೀಯ ಕಾಫಿ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಹಡಗುಗಳ ಮಾರ್ಗ ಬದಲಾವಣೆ ಮತ್ತು ವಿಳಂಬವು ನಷ್ಟಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಗಾಣಿಕೆ ಸಮಸ್ಯೆಯಿಂದಾಗಿ ಐರೋಪ್ಯ ಖರೀದಿದಾರರು ಈಗಾಗಲೇ ಉಗಾಂಡಾದಂತಹ ಪರ್ಯಾಯ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದು ಭಾರತವು ಕಷ್ಟಪಟ್ಟು ಗಳಿಸಿರುವ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಭೀತಿಯನ್ನುಂಟು ಮಾಡಿದೆ. ಭಾರತದ ಕಾಫಿ ಉದ್ಯಮವು ತನ್ನ ಸುವರ್ಣ ಯುಗದಲ್ಲಿತ್ತು. ಭಾರತೀಯ ಕಾಫಿ ಮಂಡಳಿಯ ಪ್ರಕಾರ, 2023ರಲ್ಲಿ 1.4 ಶತಕೋಟಿ ಡಾಲರ್‌ಗಳಿದ್ದ ಅದರ ರಫ್ತು ಗಳಿಕೆ ಕಳೆದ ವರ್ಷ ಇಮ್ಮಡಿಗೊಂಡು ದಾಖಲೆಯ 2.13 ಶತಕೋಟಿ ಡಾಲರ್‌ಗೆ ತಲುಪಿತ್ತು. ವಾರ್ಷಿಕ ಉತ್ಪಾದನೆಯು ಸುಮಾರು 3.5 ಲಕ್ಷ ಮೆಟ್ರಿಕ್ ಟನ್‌ಗಳಿಂದ 3.70 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದ್ದು, ಇದು ಜಾಗತಿಕ ಉತ್ಪಾದನೆಯ ಶೇ.3ರಿಂದ ಶೇ.4ರಷ್ಟಾಗಿದೆ.

ವಾರ್ತಾ ಭಾರತಿ 12 Apr 2026 10:06 pm

IPL 2026- ಭರ್ಜರಿ ಫಾರ್ಮ್ ನಲ್ಲಿರುವ ರಾಜಸ್ಥಾನ ರಾಯಲ್ಸ್; ಸನ್‌ರೈಸರ್ಸ್‌ಗೂ ವೈಭವ್‌ ಸೂರ್ಯವಂಶಿಯದ್ದೇ ಭಯ!

ಐಪಿಎಲ್ 2026ರ 21ನೇ ಪಂದ್ಯದಲ್ಲಿ ಸೋಮವಾರದಂದು ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿಯಾಗಲಿವೆ. ಇಶಾನ್ ಕಿಶನ್ ನೇತೃತ್ವದ ಹೈದರಾಬಾದ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದರೆ, ರಿಯಾನ್ ಪರಾಗ್ ಸಾರಥ್ಯದ ರಾಜಸ್ಥಾನ ಸತತ ನಾಲ್ಕು ಗೆಲುವುಗಳೊಂದಿಗೆ ಭರ್ಜರಿ ಫಾರ್ಮ್‌ನಲ್ಲಿದೆ. ವಿಶೇಷವಾಗಿ 15 ವರ್ಷದ ವೈಭವ್ ಸೂರ್ಯವಂಶಿ ರಾಜಸ್ಥಾನದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇನ್ನು ಸನ್ ರೈಸರ್ಸ್ ತಂಡ ಅಭಿಷೇಕ್ ಶರ್ಮಾ ಮತ್ತು ಟ್ರವಿಸ್ ಹೆಡ್ ಅವರ ಸ್ಫೋಟಕ ಆರಂಭವನ್ನು ನೆಚ್ಚಿಕೊಂಡಿದೆ.

ವಿಜಯ ಕರ್ನಾಟಕ 12 Apr 2026 10:05 pm

ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದರೆ ಗಂಭೀರ ಪರಿಣಾಮ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್, ಎ.12: ಇರಾನ್‌ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಚೀನಾ ತಯಾರಿ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. “ಚೀನಾ ಒಂದು ವೇಳೆ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದರೆ ಅವರಿಗೆ ದೊಡ್ಡ ಸಮಸ್ಯೆಯಾಗಲಿದೆ” ಎಂದು ಟ್ರಂಪ್ ಎಚ್ಚರಿಸಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್, “ಚೀನಾದೊಂದಿಗೆ ಸ್ಥಿರ ಸಂಬಂಧಗಳನ್ನು ಉಳಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತದೆ. ಆದರೆ ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ಇರಾನ್‌ ನೊಂದಿಗೆ ಚೀನಾದ ಒಳಗೊಳ್ಳುವಿಕೆ ಸಂಬಂಧಗಳನ್ನು ಜಟಿಲಗೊಳಿಸಬಹುದು. ಅದನ್ನು ತೊಡೆದುಹಾಕುವುದು ಚೀನಾದ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ. ಮುಂದಿನ ವಾರಗಳಲ್ಲಿ ಇರಾನ್‌ ಗೆ ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸಲು ಚೀನಾ ತಯಾರಿ ನಡೆಸುತ್ತಿರುವ ಸೂಚನೆಗಳಿವೆ. ಭುಜದ ಮೇಲಿಂದ ಚಲಾಯಿಸಬಹುದಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಇರಾನ್‌ ಗೆ ವರ್ಗಾಯಿಸಲು ಚೀನಾ ಯೋಜಿಸುತ್ತಿದೆ. ಮೂಲವನ್ನು ಮರೆಮಾಚಲು ಈ ಸಾಗಣೆಗಳನ್ನು ಮೂರನೇ ದೇಶದ ಮೂಲಕ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.

ವಾರ್ತಾ ಭಾರತಿ 12 Apr 2026 9:48 pm

ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್‌ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕಿಳಿದಿದ್ದಾರೆ. ಭಾನುವಾರ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರ ಸ್ಮರಣಾರ್ಥವಾಗಿ ಪಂದ್ಯದ ಆರಂಭಕ್ಕೂ ಮುನ್ನ ಒಂದು ನಿಮಿಷದ ಮೌನವನ್ನು ಆಚರಿಸಲಾಯಿತು. ಮತ್ತೊಬ್ಬ ದಂತಕಥೆ ಲತಾ ಮಂಗೇಶ್ಕರ್ ಅವರ ಕಿರಿಯ

ಒನ್ ಇ೦ಡಿಯ 12 Apr 2026 9:41 pm

ಶಹಾಬಾದ್‌ | ಲಕ್ಕಮ್ಮ ದಶರಥಗೆ ವಾಣಿಜ್ಯ ವಿಭಾಗದಲ್ಲಿ 567 ಅಂಕ

ಸರ್ಕಾರಿ ಪಿಯು ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ವಾರ್ತಾ ಭಾರತಿ 12 Apr 2026 9:41 pm

ಹಾರ್ಮುಝ್‌ ದಾಟಿದ ಅಮೆರಿಕದ ಯುದ್ಧನೌಕೆ: ತೀವ್ರ ಕ್ರಮದ ಎಚ್ಚರಿಕೆ ನೀಡಿದ ಇರಾನ್

ಟೆಹರಾನ್, ಎ.12: ಹಾರ್ಮುಝ್‌ ಜಲಸಂಧಿಯಲ್ಲಿ ಇರಾನ್ ನೀರಿನಡಿ ಇರಿಸಿರುವ ಸ್ಫೋಟಕಗಳನ್ನು ತೆರವುಗೊಳಿಸಲು ತನ್ನ ಎರಡು ಯುದ್ಧನೌಕೆಗಳು ಕಾರ್ಯಾಚರಣೆ ನಡೆಸಿವೆ ಎಂಬ ಅಮೆರಿಕದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ಹಾರ್ಮುಝ್‌ ಮೂಲಕ ಸಾಗುವ ಯಾವುದೇ ಮಿಲಿಟರಿ ಹಡಗುಗಳು ಬಲವಾದ ಪ್ರತಿಕ್ರಿಯೆಯನ್ನು ಎದುರಿಸಲಿವೆ ಎಂದು ಎಚ್ಚರಿಕೆ ನೀಡಿದೆ. “ಜಲಸಂಧಿಯನ್ನು ನಿರ್ವಹಿಸಲು ತನಗೆ ಸಂಪೂರ್ಣ ಅಧಿಕಾರವಿದೆ. ಕೇವಲ ನಾಗರಿಕ ಹಡಗುಗಳಿಗೆ, ಅದೂ ನಿರ್ದಿಷ್ಟ ಷರತ್ತುಗಳಡಿ ಮಾತ್ರ ಜಲಸಂಧಿಯನ್ನು ದಾಟಲು ಅವಕಾಶವಿದೆ. ಇದನ್ನು ಉಲ್ಲಂಘಿಸುವ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಲಸಂಧಿಗೆ ಪ್ರವೇಶವನ್ನು ಬಿಗಿಯಾಗಿ ನಿಯಂತ್ರಿಸಲಾಗುವುದು. ಮಿಲಿಟರಿ ಚಲನೆಗಳನ್ನು ಸಹಿಸಲಾಗುವುದಿಲ್ಲ. ಆದರೆ ನಾಗರಿಕ ಹಡಗು ಸಾಗಣೆ ನಿಯಂತ್ರಿತ ನಿಯಮಗಳ ಅಡಿಯಲ್ಲಿ ಮುಂದುವರಿಯಬಹುದು” ಎಂದು ಇರಾನ್‌ ನ IRGC ನೌಕಾ ಕಮಾಂಡ್ ಹೇಳಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಸುಮಾರು 100 ಹಡಗುಗಳು ಹಾರ್ಮುಝ್‌ ಜಲಸಂಧಿಯನ್ನು ದಾಟಿವೆ. ಈ ಮಧ್ಯೆ, ಸಂಘರ್ಷದ ಸಂದರ್ಭ ಹಾರ್ಮುಝ್‌ ಜಲಸಂಧಿಯ ಸಮುದ್ರದಡಿ ಇರಿಸಲಾಗಿರುವ ಎಲ್ಲಾ ಸ್ಫೋಟಕಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಇರಾನ್‌ ಗೆ ಸಾಧ್ಯವಾಗದ ಕಾರಣ, ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ವಾರ್ತಾ ಭಾರತಿ 12 Apr 2026 9:40 pm

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳ ಬೆಂಬಲ ಕೇಳಿದ ಮೋದಿ

ಹೊಸದಿಲ್ಲಿ, ಎ.12: ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿನ ವಾರ ಸಂಸತ್‌ನಲ್ಲಿ ಅವಿರೋಧವಾಗಿ ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ಉಭಯ ಸದನಗಳ ಎಲ್ಲಾ ನಾಯಕರ ಬೆಂಬಲವನ್ನು ಕೋರಿದ್ದಾರೆ. 2029ರಿಂದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಉದ್ದೇಶವನ್ನು ‘ನಾರಿಶಕ್ತಿ ವಂದನ್ ಅಧಿನಿಯಮ, 2021’ ಹೊಂದಿದೆ. ವಿಸ್ತೃತ ಮಾತುಕತೆಗಳ ಬಳಿಕ ನಾರಿಶಕ್ತಿ ವಂದನ ಅಧಿನಿಯಮವನ್ನು ಅದರ ನೈಜ ಆಶಯದೊಂದಿಗೆ ದೇಶಾದ್ಯಂತ ಜಾರಿಗೊಳಿಸುವ ಸಮಯ ಬಂದಿದೆ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ. 2029ರ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸುವುದು ಅನಿವಾರ್ಯವಾಗಿದೆ ಎಂದು ಮೋದಿ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ ನಲ್ಲಿ ಹೇಳಿದ್ದಾರೆ. ಏಪ್ರಿಲ್ 16ರಂದು ಆರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಧಿನಿಯಮವನ್ನು ಅಂಗೀಕರಿಸಲು ಸರ್ಕಾರ ಬಯಸುತ್ತಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಮೀಸಲಾತಿಯನ್ನು ಒದಗಿಸುವ ಉದ್ದೇಶ ಯಾವುದೇ ಪಕ್ಷ ಅಥವಾ ವ್ಯಕ್ತಿಗಿಂತ ಮಿಗಿಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಮಹಿಳೆಯರು ಹಾಗೂ ಭವಿಷ್ಯದ ತಲೆಮಾರಿನೆಡೆಗೆ ಜವಾಬ್ದಾರಿಯನ್ನು ಪ್ರದರ್ಶಿಸುವ ಕ್ಷಣ ಇದಾಗಿದೆ ಎಂದು ಅವರು ಹೇಳಿದ್ದಾರೆ. “ದೀರ್ಘಕಾಲದಿಂದ ರಾಜಕೀಯದಲ್ಲಿ ಮಹಿಳೆಯರ ಪ್ರತಿನಿಧಿತ್ವವನ್ನು ಹೆಚ್ಚಿಸುವ ಅಗತ್ಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಒತ್ತಿಹೇಳುತ್ತಿವೆ. ಈ ಆಶೆಯನ್ನು ವಾಸ್ತವಕ್ಕೆ ತರುವ ಸಮಯ ಬಂದಿದೆ” ಎಂದು ಅವರು ಹೇಳಿದ್ದಾರೆ. 2023ರಲ್ಲಿ ತನ್ನ ಸರ್ಕಾರ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಿದಾಗ ಅವಿರೋಧ ಬೆಂಬಲ ವ್ಯಕ್ತವಾಗಿದ್ದನ್ನು ಪ್ರಧಾನಿ ಸ್ಮರಿಸಿದ್ದಾರೆ. ►ಮಹಿಳಾ ಮೀಸಲಾತಿ ಮಸೂದೆ: ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರ ಬಹುಮತ ಅಗತ್ಯ ಮಹಿಳಾ ಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡುವ ನಾರಿಶಕ್ತಿ ವಂದನ ಅಧಿನಿಯಮ ಅಂಗೀಕರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರ ಬಹುಮತ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಸೂದೆ ಅಂಗೀಕಾರಕ್ಕೆ ಪ್ರತಿಪಕ್ಷಗಳ ಬೆಂಬಲ ಅಗತ್ಯವಾಗಿದೆ. ►ಲೋಕಸಭಾ ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆ ಸಾಧ್ಯತೆ ಮಹಿಳಾ ಮೀಸಲಾತಿ ಜಾರಿಗಾಗಿ ಸಂವಿಧಾನ ತಿದ್ದುಪಡಿಯಿಂದ ಲೋಕಸಭಾ ಸ್ಥಾನಗಳ ಸಂಖ್ಯೆ 543ರಿಂದ 816ಕ್ಕೆ ಏರಲಿದ್ದು, 273 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟವು ಕಳೆದ ವಾರದ ಆರಂಭದಲ್ಲಿ ಸಂವಿಧಾನಕ್ಕೆ ಮೂರು ತಿದ್ದುಪಡಿಗಳಿಗೆ ಅನುಮೋದನೆ ನೀಡಿದೆ. ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ, ಕ್ಷೇತ್ರ ಪುನರ್‌ವಿಂಗಡಣಾ ವಿಧೇಯಕ ಹಾಗೂ ಮಹಿಳಾ ಮೀಸಲಾತಿಯನ್ನು ದಿಲ್ಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ಅವಕಾಶ ನೀಡುವ ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ.

ವಾರ್ತಾ ಭಾರತಿ 12 Apr 2026 9:39 pm

ಜಾತಿಗಣತಿಯನ್ನು ಶಿಥಿಲಾವಸ್ಥೆಯಲ್ಲಿಡಲು ಮೋದಿ ಯತ್ನ: ಕಾಂಗ್ರೆಸ್ ಆರೋಪ

ಹೊಸದಿಲ್ಲಿ, ಎ.12: ಜಾತಿ ಆಧಾರಿತ ಜನಗಣತಿಯನ್ನು ಶಿಥಿಲಾವಸ್ಥೆಯಲ್ಲಿ ಇಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಹಾಗೂ ವರ್ಷಗಳಿಂದ ಈ ವಿಷಯದಲ್ಲಿ ಅದರ ನಿಲುವು ಅಸಮಂಜಸವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸುತ್ತಲೇ ಬಂದಿದೆ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಎಸ್‌ಸಿ, ಎಸ್‌ಟಿ ಜನಗಣತಿಯ ಹೊರತಾಗಿ ಇತರ ಜಾತಿ ಆಧಾರಿತ ಜನಗಣತಿಯನ್ನು ನಡೆಸದಿರಲು ಕೇಂದ್ರ ಸರ್ಕಾರವು 2021ರ ಜುಲೈ 20ರಂದು ನಿರ್ಧರಿಸಿತ್ತು. ಅಲ್ಲದೆ, ಜಾತಿಗಣತಿಯನ್ನು ನಡೆಸದಿರುವ ತನ್ನ ನಿರ್ಧಾರವನ್ನು ಪುನರುಚ್ಚರಿಸುವ ಅಫಿಡವಿಟ್ ಅನ್ನು 2021ರ ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ ಗೆ ಸಲ್ಲಿಸಿತ್ತು ಎಂದು ಹೇಳಿದರು. ಜಾತಿಗಣತಿ ನಡೆಸಬೇಕೆಂಬ ಕಾಂಗ್ರೆಸ್‌ನ ಬೇಡಿಕೆಯ ಹಿಂದೆ ‘ನಗರ ನಕ್ಸಲರ ಮನಸ್ಥಿತಿ’ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ 2024ರ ಏಪ್ರಿಲ್‌ನಲ್ಲಿ ಆರೋಪಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಕೆಲವೇ ಸಮಯದ ಬಳಿಕ 2025ರ ಏಪ್ರಿಲ್ 30ರಂದು ಜಾತಿಗಣತಿಯನ್ನು ಮುಂಬರುವ ರಾಷ್ಟ್ರೀಯ ಜನಗಣತಿಯೊಂದಿಗೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿರುವುದನ್ನು ಜೈರಾಮ್ ರಮೇಶ್ ಗಮನಸೆಳೆದರು. ಈಗ ನಡೆಯುತ್ತಿರುವ ಜನಗಣತಿ ಡಿಜಿಟಲ್ ರೂಪದಲ್ಲಿರುವುದರಿಂದ ಅದರ ಬಹುತೇಕ ಅಂಕಿಅಂಶಗಳು 2027ರ ವೇಳೆಗೆ ಮಾತ್ರ ಲಭ್ಯವಾಗಲಿವೆ ಎಂದು ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರು 2025ರ ಮಾರ್ಚ್ 30ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ರಮೇಶ್ ಹೇಳಿದರು. ಬಿಹಾರ ಹಾಗೂ ತೆಲಂಗಾಣದಂತಹ ರಾಜ್ಯಗಳು ಕೇವಲ ಆರು ತಿಂಗಳಲ್ಲಿ ಜಾತಿ ಸಮೀಕ್ಷೆಗಳನ್ನು ನಡೆಸಿವೆ ಎಂದರು.

ವಾರ್ತಾ ಭಾರತಿ 12 Apr 2026 9:38 pm

ಅರುಣಾಚಲದ ಸ್ಥಳಗಳಿಗೆ ಚೀನಾ ಮರುನಾಮಕರಣ ಯತ್ನ; ಭಾರತದಿಂದ ಬಲವಾದ ಖಂಡನೆ

ಹೊಸದಿಲ್ಲಿ, ಎ.12: ಅರುಣಾಚಲ ಪ್ರದೇಶದ ಸ್ಥಳಗಳನ್ನು ಚೀನಾ ಮರುನಾಮಕರಣಗೊಳಿಸಿರುವುದನ್ನು ಭಾರತವು ರವಿವಾರ ಬಲವಾಗಿ ತಿರಸ್ಕರಿಸಿದ್ದು, ಇದನ್ನು ಕಿಡಿಗೇಡಿತನದ ಕೃತ್ಯವೆಂದು ಬಣ್ಣಿಸಿದೆ. ಇಂತಹ ಆಧಾರರಹಿತ ನಿರೂಪಣೆಗಳು ನಿರಾಕರಿಸಲಾಗದ ವಾಸ್ತವತೆಯನ್ನು ಬದಲಾಯಿಸಲಾರವು ಎಂದು ಹೇಳಿದೆ. “ಭಾರತದ ಪ್ರದೇಶದ ಭಾಗವಾಗಿರುವ ಸ್ಥಳಗಳಿಗೆ ಕಾಲ್ಪನಿಕ ಹೆಸರುಗಳನ್ನು ಇಡಲು ಚೀನಾ ನಡೆಸುವ ಯಾವುದೇ ಕಿಡಿಗೇಡಿತನದ ಪ್ರಯತ್ನಗಳನ್ನು ಭಾರತವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. “ಹುಸಿ ಹಕ್ಕೊತ್ತಾಯಗಳನ್ನು ಮಂಡಿಸುವುದು ಹಾಗೂ ಆಧಾರರಹಿತ ನಿರೂಪಣೆಗಳನ್ನು ಸೃಷ್ಟಿಸುವುದು, ಅರುಣಾಚಲ ಪ್ರದೇಶ ಸೇರಿದಂತೆ ಈ ಸ್ಥಳಗಳು ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗವಾಗಿವೆ ಮತ್ತು ಮುಂದೆಯೂ ಹಾಗೆಯೇ ಇರುತ್ತವೆ ಎಂಬ ನಿರಾಕರಿಸಲಾಗದ ವಾಸ್ತವವನ್ನು ಬದಲಾಯಿಸಲಾರವು” ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಸಿದರು. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಪುನರ್‌ ನಾಮಕರಣ ಮಾಡುವ ಚೀನಾದ ನಡೆ, ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸ್ಥಿರಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದು ಜೈಸ್ವಾಲ್ ಹೇಳಿದರು. ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ನಕಾರಾತ್ಮಕತೆಯನ್ನು ಒಳನುಗ್ಗಿಸುವ ಇಂತಹ ಕೃತ್ಯಗಳಿಂದ ಚೀನಾ ದೂರವಿರಬೇಕು ಎಂದು ಅವರು ಆಗ್ರಹಿಸಿದರು. ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕೊತ್ತಾಯವನ್ನು ಮಂಡಿಸುವ ಪ್ರಯತ್ನವಾಗಿ ಚೀನಾ ಈ ಗಡಿರಾಜ್ಯದ ಸ್ಥಳಗಳಿಗೆ ಮರುನಾಮಕರಣ ನಡೆಸಲು ಯತ್ನಿಸಿರುವುದು ಇದು ಆರನೇ ಸಲವಾಗಿದೆ. ಇದಕ್ಕೂ ಮುನ್ನ ಮೇ 2025ರಲ್ಲಿ ಅರುಣಾಚಲದ 27 ಸ್ಥಳಗಳಿಗೆ ಮರುನಾಮಕರಣ ಮಾಡಲು ಚೀನಾ ನಡೆಸಿದ ಪ್ರಯತ್ನವನ್ನು ಭಾರತ ತಳ್ಳಿಹಾಕಿ ಅದನ್ನು ಅಸಂಬದ್ಧವೆಂದು ಬಣ್ಣಿಸಿತ್ತು.

ವಾರ್ತಾ ಭಾರತಿ 12 Apr 2026 9:37 pm

ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರಸ್ತೆ ಅಪಘಾತ: ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

ಸುಳ್ಯ: ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುಳ್ಯದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದ ಕಂದಡ್ಕದ ಶಶಿಕಲಾ ಭಟ್ ಎಂಬವರ ಪುತ್ರಿ ಕ್ಷಿಪ್ರ (27) ಎಂಬ ಯುವತಿ ಶನಿವಾರ ರಾತ್ರಿ ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ಕ್ಷಿಪ್ರ ಅವರು ಸಹದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. ನಿದ್ದೆಯ ಮಂಪರಿನಲ್ಲಿ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ. ಶಶಿಕಲಾ ಅವರಿಗೆ ಏಕಮಾತ್ರ ಪುತ್ರಿಯಾಗಿದ್ದ ಕ್ಷಿಪ್ರ ಅವರು ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ ಮಾಡಿ ನಿಟ್ಟೆಯಲ್ಲಿ ಎಂ.ಟೆಕ್ ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾ ತಾಯಿಯ ಜತೆಗೆ ನೆಲೆಸಿದ್ದರು ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 12 Apr 2026 9:36 pm

`ಇದೇ ಹಣದಲ್ಲಿ ಸಂಜೀವ್ ಗೋಯೆಂಕಾ ಕಾರು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಿದ್ದರೂ ಸಾಕಿತ್ತು': ಟ್ರೋಲ್ ಆದ ರಿಷಬ್ ಪಂತ್

Rishabh Pant Troll- ಐಪಿಎಲ್ ನ ದುಬಾರಿ ಆಟಗಾರ ರಿಷಬ್ ಪಂತ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 18 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 27 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಹರಾಜಾಗಿದ್ದರೂ ಪಂತ್ ಅವರು ತಕ್ಕ ಪ್ರದರ್ಶನ ನೀಡಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸಂಜೀವ್ ಗೋಯೆಂಕಾ ಈ ಹಣದಿಂದ ಕಾರುಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಿದ್ದರೂ ಹೆಚ್ಚಿನ ಲಾಭ ಪಡೆಯುತ್ತಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಲಾಗುತ್ತಿದೆ.

ವಿಜಯ ಕರ್ನಾಟಕ 12 Apr 2026 9:15 pm

Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್‌ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ

ಚಿಕ್ಕಮಗಳೂರು: ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಸಂಪುಟ ಪುನರ್‌ರಚನೆಯ ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳುವ ಮೂಲಕ ಚೆಂಡನ್ನು ಪಕ್ಷದ ವರಿಷ್ಠರ ಅಂಗಳಕ್ಕೆ ಎಸೆದಿದ್ದಾರೆ. ದೆಹಲಿ ಭೇಟಿ ತಪ್ಪಲ್ಲ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹಲವು ಶಾಸಕರು

ಒನ್ ಇ೦ಡಿಯ 12 Apr 2026 8:43 pm

ಕಾರ್ಕಳ| ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್

► ಎ.19ರಂದು ದಿನಾಂಕ ಘೋಷಣೆ, ಕಾರ್ಯಾಲಯ ಉದ್ಘಾಟನೆ

ವಾರ್ತಾ ಭಾರತಿ 12 Apr 2026 8:27 pm

Uttar Pradesh | ಸಾಂವಿಧಾನಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಮೇಲಿನಿಂದ ಸೂಚನೆಗಳಿದ್ದವು: IAS ಅಧಿಕಾರಿ ರಿಂಕು ಸಿಂಗ್ ರಾಹಿ

ಪ್ರಯಾಗರಾಜ್, ಎ.12: ಉತ್ತರ ಪ್ರದೇಶದ IAS ಅಧಿಕಾರಿ ರಿಂಕು ಸಿಂಗ್ ರಾಹಿ ಅವರು ಮಾ.26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ಭಾರೀ ಸಂಚಲನವನ್ನು ಮೂಡಿಸಿದ್ದಾರೆ. ಯೋಗಿ ಆದಿತ್ಯನಾಥ ಸರಕಾರವು ತನ್ನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ಸಾಂವಿಧಾನಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಮತ್ತು ಸರಕಾರದ ರಾಜಕೀಯ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಮೇಲಿನಿಂದ ಸೂಚನೆಗಳು ಬರುತ್ತಿದ್ದವು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇದು ರಾಹಿ ರಾಷ್ಟ್ರಪತಿಗಳಿಗೆ ಬರೆದಿರುವ ಮೊದಲ ಪತ್ರವೇನಲ್ಲ. ಸೆ.29, 2025 ಮತ್ತು ಅ.27, 2025ರಂದು ಬರೆದಿದ್ದ ಹಿಂದಿನ ಪತ್ರಗಳಲ್ಲಿಯೂ ಅವರು, ಅಧಿಕಾರಿಗಳು ಕಾನೂನು ಮತ್ತು ಸಂವಿಧಾನಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದ ಸಿದ್ಧಾಂತ ಅಥವಾ ಇಚ್ಛೆಗೆ ಅನುಗುಣವಾಗಿ ರಾಜಿ ಮಾಡಿಕೊಂಡು ಕೆಲಸ ನಿರ್ವಹಿಸಬೇಕಾದ ವಾತಾವರಣವಿದೆ ಎಂದು ಆರೋಪಿಸಿದ್ದರು. ‘ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಶಿಸ್ತು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಎಲ್ಲರನ್ನೂ ಒಳಗೊಂಡ ಭಾಗಿಯಾಗುವಿಕೆಯ ಮೂಲಕ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಜ್ಜುಗೊಳಿಸಲಾಗಿದ್ದರೆ ಇಲ್ಲಿ ನಾವು ಸಾಂವಿಧಾನಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದಿದ್ದರೆ ಉಳಿಯುವುದು ಕಷ್ಟವಾಗುತ್ತದೆ ಎಂದು ಮೇಲಿನಿಂದ ಸಂಕೇತಗಳು ಬರುತ್ತಿದ್ದವು ಎಂದು ರಾಹಿ ರಾಷ್ಟ್ರಪತಿಗಳಿಗೆ ತನ್ನ ಇತ್ತಿಚಿನ ಏಳು ಪುಟಗಳ ಪತ್ರದಲ್ಲಿ ಬರೆದಿದ್ದಾರೆ. ಆಡಳಿತದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ರಾಜಕೀಯ ನಾಯಕತ್ವದಿಂದ ‘ಸಂಕೇತಗಳು’ ರವಾನೆಯಾಗುತ್ತಿದ್ದವು. ಇವು ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ಸರಕಾರದ ರಾಜಕೀಯ ಕಾರ್ಯಸೂಚಿಗೆ ಪೂರಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದವು. ಸಂವಿಧಾನಬದ್ಧವಾಗಿ ಮತ್ತು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಲು ಬಯಸುವ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ, ಅವರನ್ನು ಯಾವುದೇ ಪ್ರಭಾವವಿಲ್ಲದ ಅಥವಾ ಆಡಳಿತಾತ್ಮಕವಾಗಿ ಅಮುಖ್ಯ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ರಾಹಿ ಹೇಳಿದ್ದಾರೆ. ‘ಒಬ್ಬ ಅಧಿಕಾರಿಯಾಗಿ ಸಂವಿಧಾನಕ್ಕೆ ನಿಷ್ಠರಾಗಿರುವುದು ನಮ್ಮ ಮೊದಲ ಕರ್ತವ್ಯ, ಆದರೆ ಇಲ್ಲಿ ಸಂವಿಧಾನಕ್ಕಿಂತ ಹೆಚ್ಚಾಗಿ ರಾಜಕೀಯ ಆದೇಶಗಳೇ ಮೇಲುಗೈ ಸಾಧಿಸುತ್ತಿವೆ. ಇದಕ್ಕೆ ಒಪ್ಪಿಕೊಳ್ಳದಿದ್ದರೆ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ. 2023ರ ಬ್ಯಾಚಿನ IAS ಅಧಿಕಾರಿ ರಾಹಿಯವರ ‘ರಾಜೀನಾಮೆ’ಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ರಾಹಿ ತಂದೆ ಸೌದನ್ ಸಿಂಗ್ ರಾಹಿ, ‘ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ಏನೇ ನಿರ್ಧಾರವನ್ನು ತೆಗೆದುಕೊಂಡಿದ್ದರೂ ಅದು ಯಾವಾಗಲೂ ದೇಶದ ಹಿತಾಸಕ್ತಿಯಲ್ಲಿರುತ್ತದೆ’ ಎಂದು ಹೇಳಿದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಹಿ ಕುಟುಂಬದ ಆಪ್ತರೋರ್ವರು, ಮಾಧ್ಯಮಗಳು ಅವರ ಇತ್ತೀಚಿನ ಕ್ರಮವನ್ನು ತಪ್ಪಾಗಿ ವ್ಯಾಖ್ಯಾನಿಸಿವೆ. ಅವರು IAS ತೊರೆಯುವ ಬಗ್ಗೆ ಏನನ್ನೂ ಹೇಳಿಲ್ಲ. ಅವರು ಬರೆದಿರುವ ಪತ್ರವು ತಾಂತ್ರಿಕ ರಾಜೀನಾಮೆ ಸ್ವರೂಪದ್ದಾಗಿದ್ದು, ತಾನು ಪಡೆಯುತ್ತಿರುವ ವೇತನಕ್ಕೆ ಬದಲಾಗಿ ಕನಿಷ್ಠ ಕೆಲಸವನ್ನಾದರೂ ತನಗೆ ನೀಡಿ ಎಂದು ಅವರು ಆಗ್ರಹಿಸಿದ್ದಾರೆ ಎಂದರು. ಸೌಜನ್ಯ: thewire.in

ವಾರ್ತಾ ಭಾರತಿ 12 Apr 2026 8:27 pm

Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ

Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಅವರ ಬರಹ ಇಲ್ಲಿದೆ. ನನ್ನೂರು ಕಲಬುರಗಿ... ಉರಿಬಿಸಿಲಿನ, ಬೆಂಕಿಯಂಥಾ ಊರು. ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಆ ಮಣ್ಣಿನ ವಾಸನೆಗೆ ಕಟಿಬಿದ್ದು ಊರಿಗೆ ಹೋಗುವುದು ನನ್ನ ರೂಢಿ. ನಾನು ಟ್ರಾವೆಲ್ ಮಾಡುವುದುಕ್ಕೆ ತುಂಬಾ ಪ್ರಾಶಸ್ಯ್ತ ಕೊಡುತ್ತೇನೆ. ಯಾಕೆಂದರೆ

ಒನ್ ಇ೦ಡಿಯ 12 Apr 2026 8:22 pm

ಸ್ಪಷ್ಟ ಗುರಿಯಿಂದ ನೈಜ ಬದಲಾವಣೆ ಸಾಧ್ಯ: ಅರುಂಧತಿ ಭಟ್ಟಾಚಾರ್ಯ

ಮಣಿಪಾಲ, ಎ.12: ಬದಲಾಗುತ್ತಿರುವ ಈ ಸಂಕೀರ್ಣ ಜಗತ್ತಿನಲ್ಲಿ ಸದಾ ಕ್ರಿಯಾಶೀಲರಾಗಿರುವುದು ಮತ್ತು ಸ್ಪಷ್ಟ ಗುರಿ ಹೊಂದಿರುವುದು ಬಹಳ ಮುಖ್ಯ. ಜಗತ್ತು ನಿರಂತರ ಪರಿವರ್ತನೆ ಹೊಂದುತ್ತಿರುವ ಕಾಲದಲ್ಲಿ ಸ್ಪಷ್ಟವಾದ ಉದ್ದೇಶವು ಮಾತ್ರ ನೈಜವಾದ ಬದಲಾವಣೆಯನ್ನು ತರಬಲ್ಲದು ಎಂದು ಸೇಲ್ಸ್ಫೋರ್ಸ್ ಸಂಸ್ಥೆಯ ಸೌತ್ ಏಷ್ಯಾ ವಿಭಾಗದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ಅಂಗಸಂಸ್ಥೆಯಾದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ(ಟ್ಯಾಪ್ಮಿ) ಇದರ 40ನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು. ಭಾರತದ ಭವಿಷ್ಯವನ್ನು ರೂಪಿಸುವ ಯುವನೇತಾರರ ಪೀಳಿಗೆಯು ಸಂಕೀರ್ಣ ಸ್ಥಿತಿಯನ್ನು ಸ್ಪಷ್ಟತೆಯಿಂದ ನಿಭಾಯಿಸುವ ಸಾಮರ್ಥ್ಯದೊಂದಿಗೆ ಬುದ್ಧಿಮತ್ತೆ ಮತ್ತು ಕಾಳಜಿಯಿಂದ ಮುನ್ನಡೆಯುವ ಕೌಶಲವನ್ನೂ ಹೊಂದಿರಬೇಕು ಎಂದು ಅವರು ತಿಳಿಸಿದರು. ಪೇಜ್ ಇಂಡಸ್ಟ್ರೀಸ್ ಸಂಸ್ಥೆಯ ಸಿಇಒ ಹಾಗೂ ಟ್ಯಾಪ್ಮಿಯ ಹಳೆವಿದ್ಯಾರ್ಥಿ ಕಾರ್ತಿಕ್ ವೈ. ಮಾತನಾಡಿ, ವಿದ್ಯಾರ್ಥಿ ಗಳು ಸದಾ ಕುತೂಹಲಿಗಳಾಗಿ, ಭದ್ರ ತಳಹದಿಯನ್ನು ರೂಪಿಸಿಕೊಳ್ಳಬೇಕು. ಶಿಸ್ತು, ನಿಷ್ಠೆ ಹಾಗೂ ಜನರ ಮೇಲಿನ ಗೌರವದಂಥ ಮೌಲ್ಯಗಳಿಂದಾಗಿ ನಿರಂತರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಕಲಿಕೆಯನ್ನು ಜೀವನದ ನಿರಂತರ ಪ್ರಕ್ರಿಯೆಯಾಗಿ ಭಾವಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್(ಡಾ.) ಎಂ.ಡಿ.ವೆಂಕಟೇಶ್, ಮಾಹೆಯ ಸಹ ಕುಲಪತಿಗಳಾದ ಡಾ.ಶರತ್ ರಾವ್ (ಆರೋಗ್ಯ ವಿಜ್ಞಾನ), ಡಾ.ದಿಲೀಪ್ ನಾಯಕ್(ಮಂಗಳೂರು ಕ್ಯಾಂಪಸ್), ಡಾ.ನಾರಾಯಣ ಸಭಾಹಿತ್(ತಂತ್ರಜ್ಞಾನ ಮತ್ತು ವಿಜ್ಞಾನ), ಪ್ರೊ.ಮಧು ವೀರರಾಘವನ್ (ಬೆಂಗಳೂರು ಕ್ಯಾಂಪಸ್) ಮತ್ತು ರಿಜಿಸ್ಟ್ರಾರ್ ಡಾ.ಗಿರಿರ್ಧ ಕಿಣಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯುವ ಸಾಧಕ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಟ್ಯಾಪ್ಮಿಯ ಪ್ರಭಾರ ನಿರ್ದೇಶಕ ಡಾ.ದುರ್ಗಾ ಪ್ರಸಾದ್ ವಾರ್ಷಿಕ ಶೈಕ್ಷಣಿಕ ವರದಿ ಮಂಡಿಸಿದರು. ಸಂಸ್ಥೆಯ ಎಂಬಿಎ(ಕೋರ್ಸ್) ವಿಭಾಗದ 348 ವಿದ್ಯಾರ್ಥಿಗಳು, ಬ್ಯಾಂಕಿಂಗ್ ವಿಭಾಗದ 56, ಮಾರ್ಕೆಟಿಂಗ್‌ನ 50, ಮಾನವ ಸಂಪನ್ಮೂಲ ವಿಭಾಗದ 44 ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ 23 ಸೇರಿದಂತೆ ಒಟ್ಟು 521 ವಿದ್ಯಾರ್ಥಿಗಳು ಈ ಬಾರಿ ಪದವಿ ಪಡೆದಿದ್ದಾರೆ.

ವಾರ್ತಾ ಭಾರತಿ 12 Apr 2026 8:22 pm

ಸಂಜೆ ವಿಶೇಷ ಕಣ್ಣಿನ ತಪಾಸಣಾ ಚಿಕಿತ್ಸಾಲಯ ಆರಂಭ

ಮಂಗಳೂರು, ಎ.12: ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಕೆಲಸದ ಒತ್ತಡದ ನಡುವೆ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಉದ್ದೇಶದಿಂದ, ಮಂಗಳೂರಿನ ಉಜ್ಜೋಡಿ ಪಂಪ್ವೆಲ್‌ನಲ್ಲಿರುವ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಈಗ ’ಸಂಜೆ ವಿಶೇಷ ಕಣ್ಣಿನ ತಪಾಸಣಾ ಚಿಕಿತ್ಸಾಲಯ’ ಸೇವೆಯನ್ನು ಆರಂಭಿಸಿದೆ. ದಿನವಿಡೀ ಕಚೇರಿ ಕೆಲಸಗಳಲ್ಲಿ ಕಾರ್ಯನಿರತರಾಗಿರುವ ಐಟಿ ಉದ್ಯೋಗಿ ಗಳು, ಬ್ಯಾಂಕ್ ಸಿಬ್ಬಂದಿ, ಶಿಕ್ಷಕರು, ಉದ್ಯಮಿಗಳು, ಖಾಸಗಿ ಉದ್ಯೋಗದಲ್ಲಿ ಹಾಗೂ ಸಾಮಾನ್ಯ ಜನರಿಗೆ ಹಗಲು ಹೊತ್ತಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಅಂತಹವರಿಗಾಗಿ ವಿಶೇಷವಾಗಿ ಈ ಸಂಜೆ ಅವಧಿಯ ಚಿಕಿತ್ಸಾಲಯವನ್ನು ವಿನ್ಯಾಸಗೊಳಿಸಲಾಗಿದೆ. ಕೆಲಸದ ಅವಧಿ ಮುಗಿದ ನಂತರ ಸಂಜೆ ವೇಳೆಯಲ್ಲಿ ತಪಾಸಣೆ ಲಭ್ಯ. ಸರಕಾರಿ ಮತ್ತು ಖಾಸಗಿ ಕಂಪನಿ ಉದ್ಯೋಗಿ ಗಳು, ಐಟಿ ವೃತ್ತಿಪರರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವರ್ತಕರು ಮತ್ತು ಸಾಮಾನ್ಯ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 12 Apr 2026 8:20 pm

ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ವಿದ್ಯುತ್ ದೀಪಾಲಂಕರ ಉದ್ಘಾಟನೆ

ಉಡುಪಿ, ಎ.12: ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವದ ದೀಪಾಲಂಕಾರ ವನ್ನು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲಿ ನಾವು ದೀಪವನ್ನು ಬೆಳಗುತ್ತೇವೊ ಅಲ್ಲಿ ಭಗವಂತನ ಸಾನಿಧ್ಯ ಇದ್ದೇ ಇರುತ್ತದೆ. ಭಗವಂತನಲ್ಲಿ ನಮ್ಮ ಕಷ್ಟವನ್ನು ತೋಡಿಕೊಂಡಾಗ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಭಗವಂತ ನನ್ನು ತೃಪ್ತಿಗೊಳಿಸುವ ಸಲುವಾಗಿ ಬ್ರಹ್ಮಕಲಶ ನಡೆಯುತ್ತಿದ್ದು ಭಕ್ತಾದಿಗಳೆಲ್ಲರೂ ಸೇರಿ ದೇವರ ಸೇವೆ ಮಾಡುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕು ಎಂದರು. ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ, ಹಿರಿಯರಾದ ಭುಜಂಗ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Apr 2026 8:18 pm

ಸುಮಾ ಜಿ.ಆರ್.ಗೆ ಪಿಎಚ್‌ಡಿ ಪದವಿ

ಉಡುಪಿ, ಎ.12: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧನಾ ವಿದ್ಯಾರ್ಥಿನಿ ಸುಮಾ ಜಿ.ಆರ್. ಮಂಡಿಸಿದ ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಸೇಶನ್ ಆಫ್ ಪಿರಿಡೀನ್ ಡೆರಿವೇಟಿವ್ಸ್ ಅಂಡ್ ದೇರ್ ಹೈಡ್ರೋಜನ್ ಬಾಂಡಿಂಗ್ ಕಾಂಪ್ಲೆಕ್ಸಸ್: ಇನ್ವೆಸ್ಟಿಗೇಶನ್ಸ್ ಆನ್ ಮೆಸೊಮಾರ್ಫಿಸಂ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟೀಸ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಪಿಎಚ್‌ಡಿ ಪದವಿಯನ್ನು ನೀಡಿದೆ. ಇವರು ಈ ಸಂಶೋಧನೆಯನ್ನು ಎಂಐಟಿಯ ಬೇಸಿಕ್ ಸೈನ್ಸಸ್ ವಿಭಾಗದ ಅಡಿಷನಲ್ ಪ್ರೊಫೆಸರ್ ಡಾ.ಮದ್ದಸಾನಿ ಶ್ರೀನಿವಾಸುಲು ಅವರ ಮಾರ್ಗ ದರ್ಶನ ಹಾಗೂ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನರೇಶ್ ಕುಮಾರ್ ಮಣಿ ಅವರ ಸಹ-ಮಾರ್ಗದರ್ಶನದಲ್ಲಿ ಮಾಡಿದ್ದಾರೆ. ಇವರು ಕುಂದಾಪುರದ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುಮಾರು 19 ವರ್ಷಗಳ ಕಾಲ ಅನ್ವಯಿಕ ಜೀವವಿಜ್ಞಾನ ಹಾಗೂ ಸಹಾಯಕ ಪ್ರಾಧ್ಯಾಪಕಿ ಹಾಗು ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 12 Apr 2026 8:17 pm

Iran ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲ: ಇರಾನ್‌ ನ ಮುಖ್ಯ ಸಂಧಾನಕಾರ

ಇಸ್ಲಾಮಾಬಾದ್: ಪಶ್ಚಿಮ ಏಶ್ಯ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಇರಾನ್ ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ರವಿವಾರ ಇರಾನ್‌ ನ ಪ್ರಮುಖ ಸಂಧಾನಕಾರ ಮುಹಮ್ಮದ್ ಬಘೇರ್ ಘಾಲಿಬಾಫ್ ಆರೋಪಿಸಿದರು. ಪಾಕಿಸ್ತಾನದಲ್ಲಿ ಇರಾನ್ ಹಾಗೂ ಅಮೆರಿಕ ನಿಯೋಗಗಳ ನಡುವೆ ನಡೆದ ಸುದೀರ್ಘ ಮಾತುಕತೆ ಯಾವುದೇ ಒಪ್ಪಂದಕ್ಕೆ ತಲುಪುವಲ್ಲಿ ವಿಫಲವಾದ ಬಳಿಕ, ಇರಾನ್ ನಿಯೋಗದ ನೇತೃತ್ವ ವಹಿಸಿದ್ದ ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್ ಬಘೇರ್ ಘಾಲಿಬಾಫ್ ಈ ಹೇಳಿಕೆ ನೀಡಿದರು. ಈ ಕುರಿತು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, “ಇರಾನ್ ನಿಯೋಗ ಮುನ್ನೋಟದ ಉಪಕ್ರಮಗಳನ್ನು ಪ್ರಸ್ತಾಪಿಸಿತು. ಆದರೆ, ಅಂತಿಮವಾಗಿ ಈ ಸಂಧಾನದ ಸುತ್ತಿನಲ್ಲಿ ಎದುರು ಬಣ ಇರಾನ್‌ ನ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು” ಎಂದು ಆರೋಪಿಸಿದರು. “ಸಂಧಾನಕ್ಕೂ ಮುನ್ನ, ನಮ್ಮ ಬಳಿ ಉತ್ತಮ ಭಾವನೆ ಮತ್ತು ಇಚ್ಛೆ ಇದೆ ಎಂದು ನಾನು ಹೇಳಿದ್ದೆ. ಆದರೆ, ಈ ಹಿಂದಿನ ಎರಡು ಯುದ್ಧಗಳ ಅನುಭವದಿಂದ ನಮಗೆ ವಿರೋಧಿ ಬಣದ ಬಗ್ಗೆ ಯಾವುದೇ ವಿಶ್ವಾಸವಿಲ್ಲ” ಎಂದೂ ಹೇಳಿದರು. “ಅಮೆರಿಕ ನಮ್ಮ ತರ್ಕ ಮತ್ತು ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡಿದೆ. ಇದೀಗ ನಮ್ಮ ವಿಶ್ವಾಸವನ್ನು ಗಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಸಮಯ ಅವರ ಬಳಿ ಇದೆ” ಎಂದು ಅವರು ಹೇಳಿದರು. ಇರಾನ್ ಜನರ ಹಕ್ಕುಗಳನ್ನು ಎತ್ತಿಹಿಡಿಯಲು ಇರಾನ್ ತನ್ನ ಸೇನಾ ಬಲದೊಂದಿಗೆ ಬಲವಾದ ರಾಜತಾಂತ್ರಿಕತೆಯನ್ನೂ ಮುಂದುವರಿಸುತ್ತದೆ ಎಂದೂ ಘೋಷಿಸಿದರು. “ಇರಾನ್ ಜನತೆಯ ಹಕ್ಕುಗಳನ್ನು ಸಾಧಿಸಲು ಸೇನಾ ಶಕ್ತಿಯ ಜೊತೆಗೆ ರಾಜತಾಂತ್ರಿಕತೆಯಲ್ಲೂ ನಾವು ನಂಬಿಕೆ ಇಟ್ಟಿದ್ದೇವೆ. ಕ್ಷಣಿಕ ಲಾಭಕ್ಕಾಗಿ 40 ದಿನಗಳ ಕಾಲ ರಾಷ್ಟ್ರೀಯ ರಕ್ಷಣೆಯನ್ನು ಮಾಡಿದ ಇರಾನ್ ಜನತೆಯ ಸಾಧನೆಯನ್ನು ಕುಂದಿಸುವ ಪ್ರಯತ್ನವನ್ನು ನಾವು ನಿಲ್ಲಿಸುವುದಿಲ್ಲ” ಎಂದು ಹೇಳಿದರು. ಇದೇ ವೇಳೆ, ಶಾಂತಿ ಮಾತುಕತೆಯನ್ನು ಆಯೋಜಿಸಿದ ಪಾಕಿಸ್ತಾನಕ್ಕೆ ಅವರು ಧನ್ಯವಾದ ಸಲ್ಲಿಸಿದರು. ಸಂಧಾನಕಾರರನ್ನು ಬೆಂಬಲಿಸಿದ ಇರಾನ್ ಜನತೆಯನ್ನು ಶ್ಲಾಘಿಸಿದ ಅವರು, ಪಾಕಿಸ್ತಾನದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ದಣಿವರಿಯದ ಪ್ರಯತ್ನ ನಡೆಸಿದ ತಮ್ಮ ತಂಡವನ್ನೂ ಅಭಿನಂದಿಸಿದರು. ಸಂಧಾನದ ಪ್ರಮುಖ ಅಂಶವಾಗಿದ್ದ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕು ಎಂಬ ಷರತ್ತಿಗೆ ಇರಾನ್ ಒಪ್ಪಿಗೆ ಸೂಚಿಸದ ಕಾರಣ, ಶಾಂತಿ ಒಪ್ಪಂದಕ್ಕೆ ತಲುಪಲು ವಿಫಲವಾಗಿದ್ದೇವೆ ಎಂದು ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ತಿಳಿಸಿದ್ದಾರೆ. “ಇದು ನಮ್ಮ ಅಂತಿಮ ಹಾಗೂ ಅತ್ಯುತ್ತಮ ಪ್ರಸ್ತಾವ ಎಂಬ ಮನವರಿಕೆಯಿಂದ ಈ ಸರಳ ಪ್ರಸ್ತಾವವನ್ನು ನೀಡುತ್ತಾ ಇಲ್ಲಿಂದ ತೆರಳುತ್ತಿದ್ದೇವೆ. ಅದನ್ನು ಇರಾನ್ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡುತ್ತೇವೆ” ಎಂದು ಅಮೆರಿಕಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ. ವಾನ್ಸ್ ಹೇಳಿದರು. ಎರಡೂ ದೇಶಗಳು ಆರು ದಿನಗಳ ಕದನ ವಿರಾಮವನ್ನು ಘೋಷಿಸಿದ ಬಳಿಕ, ಶನಿವಾರ ಆರಂಭಗೊಂಡ ಸಂಧಾನಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಪ್ರಪ್ರಥಮ ಉನ್ನತ ಮಟ್ಟದ ಮುಖಾಮುಖಿ ಮಾತುಕತೆ ಇದೇ ಆಗಿದೆ. ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಆರಂಭವಾದ ಬಳಿಕ ಈ ಬಿಕ್ಕಟ್ಟು ಪ್ರಾರಂಭಗೊಂಡಿದೆ. ಇದರಿಂದ ಜಾಗತಿಕ ಇಂಧನ ಮಾರುಕಟ್ಟೆ ಕುಂಠಿತಗೊಂಡಿದ್ದು, ವ್ಯಾಪಾರ ವ್ಯತ್ಯಯಗೊಂಡಿದೆ. ಪಶ್ಚಿಮ ಏಶ್ಯದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯಬೇಕು, ಇರಾನ್ ಮೇಲಿನ ದಿಗ್ಬಂಧನಗಳನ್ನು ತೆರವುಗೊಳಿಸಬೇಕು ಹಾಗೂ ಹಾರ್ಮುಝ್ ಜಲಸಂಧಿಯನ್ನು ನಿಯಂತ್ರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ 10 ಅಂಶಗಳ ಯೋಜನೆಯನ್ನು ಇರಾನ್ ಸಂಧಾನಕ್ಕಾಗಿ ಮುಂದಿಟ್ಟಿತ್ತು. ಎರಡೂ ದೇಶಗಳ ಮುಖಾಮುಖಿ ಮಾತುಕತೆಯ ಬಳಿಕವೂ ಒಪ್ಪಂದಕ್ಕೆ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ, ಅವುಗಳ ನಡುವೆ ಘೋಷಿಸಲಾದ ಎರಡು ವಾರಗಳ ನಾಜೂಕು ಕದನ ವಿರಾಮದ ಪರಿಣಾಮಕಾರಿತನದ ಬಗ್ಗೆ ಅನುಮಾನಗಳು ಮೂಡಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಮುಕ್ತವಾಗುವ ಸಾಧ್ಯತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರವಾಗುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.

ವಾರ್ತಾ ಭಾರತಿ 12 Apr 2026 8:12 pm

ಎ.14ರಿಂದ ಅಡ್ಕಸ್ಥಳ ಮಖಾಂ ಉರೂಸ್; ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ

ಕಾಸರಗೋಡು, ಎ.12: ಕರ್ನಾಟಕ-ಕೇರಳ ಗಡಿಪ್ರದೇಶವಾಗಿರುವ ಅಡ್ಕಸ್ಥಳದಲ್ಲಿರುವ ಸುಮಾರು ಎರಡು ಶತಮಾನಗಳ ಚರಿತ್ರೆ ಹೊಂದಿರುವ ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್‌ನಲ್ಲಿ ಎರಡು ವರ್ಷಗಳಿ ಗೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಎ.14ರಿಂದ 21ರತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.13ರಂದು ರಾತ್ರಿ 7 ಗಂಟೆಗೆ ಸಂದಲ್ ಮೆರವಣಿಗೆ ಕಾರ್ಯಕ್ರಮ ಕಳಿಯಾರ್ ಜೆಎಚ್‌ಕ್ಯು ಕಾಲೇಜಿನ ಪ್ರಿನ್ಸಿಪಾಲ್ ಅಲ್ ಹಾಜ್ ಕೆ.ಬಿ.ಅಬ್ದುರ‌್ರಝಾಕ್ ಮಿಸ್ಬಾಹಿ ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ. ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ : ಎ.14ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ರಾತ್ರಿ 7 ಗಂಟೆಗೆ ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಲೋಕಾರ್ಪಣೆ ನೆರವೇರಿಸಲಿರುವರು. ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಯ್ಯದ್ ಅಬ್ದುರ‌್ರಹ್ಮಾನ್ ಮಸೂದ್ ತಂಙಳ್ ಅಲ್ ಬುಖಾರಿ ಕೂರ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ವ್ಯವಸ್ಥಾಪಕ ರೆ.ಫಾ ಜೋಸ್ ಚೆಂಪೊಟ್ಟಿಕ್ಕಲ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ , ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ ಸದಸ್ಯ ಐತಪ್ಪ ಕುಲಾಲ್ ಭಾಗವಹಿಸುವರು. ಧಾರ್ಮಿಕ ಪ್ರವಚನ : 8 ದಿನಗಳ ಧಾರ್ವಿಕ ಪ್ರವಚನ ಕಾರ್ಯಕ್ರಮದಲ್ಲಿ ಎ.14ರಂದು ರಾತ್ರಿ 8 ಗಂಟೆಗೆ ಹಾಮಿದ್ ಯಾಸೀನ್ ಜೌಹರಿ ಅಲ್ ಮದನಿ ಕೊಲ್ಲಂ, ಅಡ್ಯನಡ್ಕ ಖತೀಬ್ ಮುಹಮ್ಮದ್ ಹಾರಿಸ್ ರಹ್ಮಾನಿ , ಉಕ್ಕುಡ ಮುದರ್ರಿಸ್ ಹಾಫಿಳ್ ಅಹ್ಮದ್ ಶೆರೀಫ್ ಕಾಮಿಲ್ ಸಖಾಫಿ, ಎ.15ರಂದು ಹಾಫಿಳ್ ನವಾಸ್ ಮನ್ನಾನಿ ಪನವೂರು, ಖಂಡಿಗೆ ಖತೀಬ್ ಸಿರಾಜುದ್ದೀನ್ ಸಅದಿ , ಎ.16. ರಾಫಿ ಅಹಸ್ಸನಿ ಕಾಂತಪುರಂ, ಎ.17. ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ, ಕಾಟುಕುಕ್ಕೆ ಖತೀಬ್ ಬಶೀರ್ ದಾರಿಮಿ , ಎ.18. ಹಂಝ ಮಿಸ್ಬಾಹಿ ಓಟಪ್ಪದವು, ಉಕ್ಕಿನಡ್ಕ ಖತೀಬ್ ಮುಝಮ್ಮಿಲ್ ಮುಸ್ಲಿಯಾರ್ ಯು.ಕೆ , ಎ.19. ಹಾಫಿಳ್ ಶಮೀಸ್ ಖಾನ್ ನಾಫೀ ಇಡುಕ್ಕಿ, ಮರಕ್ಕಿಣಿ ಖತೀಬ್ ಸಿದ್ದೀಕ್ ದಾರಿಮಿ , ಎ.20.ವಹಾಬ್ ನಯೀಮಿ ಕೊಲ್ಲಂ, ಪೆರ್ಲ ಟೌನ್ ಖತೀಬ್ ನೌಫಲ್ ದಾರಿಮಿ ಕೊಟ್ಟಿಲಂ, ಎ.21ರಂದು ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ, ಮರ್ತ್ಯ ಖತೀಬ್ ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ ರಹೀಮ್ ಸಖಾಫಿ ಪ್ರವಚನ ನೀಡಲಿರುವರು. *ಸ್ವಲಾತ್‌ಗೆ ಚಾಲನೆ: ಎ.16ರಂದು ರಾತ್ರಿ 7 ಗಂಟೆಗೆ ಅಸ್ಸಯ್ಯಿದ್ ಇಂಬಿಚ್ಚಿ ಕೋಯ ಜಮುಲಿಲ್ಲೈಲಿ ತಂಙಳ್ ಕಾಟುಕುಕ್ಕೆ ಅವರು ದರ್ಗಾದಲ್ಲಿ ಸ್ವಲಾತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ: ಉರೂಸ್ ಸಮಾರೋಪ ಸಮಾರಂಭ ಎ.21ರಂದು ರಾತ್ರಿ ನಡೆಯಲಿದ್ದು, ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮಾಡು ದುಆ ನೇತೃತ್ವ ವಹಿಸಲಿದ್ದಾರೆ , ಅಡ್ಕಸ್ಥಳ ಜಮಾಅತ್ ಕಮಿಟಿ ಗೌರವಾಧ್ಯಕ್ಷ ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿರುವರು. ಅಡ್ಕಸ್ಥಳ ಖತೀಬ್ ಹಾಫಿಳ್ ರಾಝಿಮ್ ಯಮಾನಿ, ಸದರ್ ಮುಅಲ್ಲಿಂ ಮುಹಮ್ಮದ್ ಮದನಿ, ಮುಹಝ್ಝಿನ್ ಮುಝಮ್ಮಿಲ್ ಸಅದಿ ಭಾಗವಹಿಲಿದ್ದಾರೆ ಎಂದು ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Apr 2026 8:12 pm

‘371 ಜೆ’ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ : ಸಚಿವ ಈಶ್ವರ ಖಂಡ್ರೆ

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭ

ವಾರ್ತಾ ಭಾರತಿ 12 Apr 2026 8:10 pm

Ballari | ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ

ಬಳ್ಳಾರಿ / ಕಂಪ್ಲಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗಾಗಿ ಭಾನುವಾರ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ನಡೆದ ಈ ಪ್ರವೇಶ ಪರೀಕ್ಷೆಗೆ 96 ವಿದ್ಯಾರ್ಥಿಗಳಲ್ಲಿ 85 ಮಂದಿ ಹಾಜರಾಗಿದ್ದು, 11 ಮಂದಿ ಗೈರುಹಾಜರಾಗಿದ್ದಾರೆ ಎಂದು ಪ್ರಾಂಶುಪಾಲ ಬಸವರಾಜ್ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಡಚಣೆಗಳಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿತು ಎಂದು ಅಧಿಕಾರಿಗಳು ತಿಳಿಸಿದರು. ಫಲಿತಾಂಶ ಶೀಘ್ರದಲ್ಲೇ ಪ್ರಕಟ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ dom.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಸಮವಸ್ತ್ರ, ಪಠ್ಯಪುಸ್ತಕಗಳು ಸೇರಿದಂತೆ ಗುಣಮಟ್ಟದ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುತ್ತದೆ.

ವಾರ್ತಾ ಭಾರತಿ 12 Apr 2026 8:10 pm

ಮೀಫ್‌| ಉನ್ನತ ಶಿಕ್ಷಣದ ಉಚಿತ ಸೀಟುಗಳಿಗೆ ಅರ್ಜಿ ಆಹ್ವಾನ

ಮಂಗಳೂರು, ಎ.12: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಸಂಸ್ಥೆಯ ವತಿಯಿಂದ ನೀಡಲಾಗುವ ಉನ್ನತ ಶಿಕ್ಷಣಕ್ಕಾಗಿ ಉಚಿತ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಬೆಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಹಲವು ಕೋರ್ಸುಗಳನ್ನು ಮೀಫ್ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಕೋರ್ಸುಗಳ ವಿವರ: ಮೆಡಿಕಲ್ , ಡೆಂಟಲ್, ಇಂಜಿನಿಯರಿಂಗ್ ,ಸಿಎ, ಬಿಕಾಂ, ಬಿಬಿಎ, ಪ್ಯಾರಮೆಡಿಕಲ್, ನರ್ಸಿಂಗ್, ಹಾಸ್ಪಿಟಲ್ ಮ್ಯಾನೇಜ್ಮೆಂಟ್ , ಫಿಸಿಯೋಥೆರಪಿ ಮತ್ತು ನ್ಯೂಟ್ರೀಷಿಯನ್ ಇತ್ಯಾದಿ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಇದೆ. ಪಿಯುಸಿಯಲ್ಲಿ ಅತ್ಯಂತ ಗರಿಷ್ಠ ಅಂಕಗಳಿಸಿರುವ ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅಲ್ಲದೇ ಉಡುಪಿ,ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಮೀಫ್ ಘಟಕಗಳ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆಗಳ ತೀರಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮೀಫ್ ಕಚೇರಿಯಿಂದ ಪಡೆಯಬಹುದು ಎಂದು ಸಂಸ್ಥೆಯ ಅದ್ಯಕ್ಷ ಮೂಸಬ್ಬ ಪಿ ಬ್ಯಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ ಇಂತಿವೆ. +91 8792115666, +91 8431990966 , ಸಂಪರ್ಕಿಸಬಹುದಾದ ಸಮಯ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರ ತನಕ,ಸ್ಥಳ ಕಾರ್ನಾಡು ಸದಾಶಿವ ಸ್ಮಾರಕ ಕಟ್ಟಡ, ಬಾವುಟಗುಡ್ಡೆ ಈದ್ಗಾ ಮಸೀದಿ ಎದುರುಗಡೆ, ಲೈಟ್ ಹೌಸ್ ರೋಡ್, ಮಂಗಳೂರು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 12 Apr 2026 8:08 pm

ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕ: ಸ್ಪೀಕರ್ ಯು.ಟಿ ಖಾದರ್

ಕೆಯುಡಬ್ಲ್ಯುಜೆ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ತೆರೆ

ವಾರ್ತಾ ಭಾರತಿ 12 Apr 2026 8:06 pm

Kanakagiri | ಜ್ಯೋತಿ ಬಾಫುಲೆ ಭಾರತದ ಶ್ರೇಷ್ಠ ಸಮಾಜ ಸುಧಾರಕ : ಡಾ.ಎರಿಸ್ವಾಮಿ ಎಚ್.

ಕನಕಗಿರಿ: ಮಹಾತ್ಮ ಜ್ಯೋತಿ ಬಾಫುಲೆ ಅವರು 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದ್ದಾರೆ ಎಂದು ತಾವರಗೇರಾ ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಡಾ.ಎರಿಸ್ವಾಮಿ ಎಚ್. ಹೇಳಿದರು. ಇಲ್ಲಿನ ಪಂಪ್ಪಣ್ಣ ಶರಣಪ್ಪ ಗುಗ್ಗಳಶೇಟ್ರ ಕಾಲೇಜಿನಲ್ಲಿ ಭಾನುವಾರ ನಡೆದ ಶಿಕ್ಷಣ ಕ್ರಾಂತಿಯ ರೂವಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ 199ನೇ ಜನ್ಮ ಜಯಂತಿ, ವಿಶೇಷ ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಫುಲೆ ಅವರು ಕೇವಲ ಶಿಕ್ಷಣ ತಜ್ಞರಾಗಿರದೆ, ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರು. ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ನೀಡಿ, ಅವರನ್ನು ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದರು. ಸಮಾಜದ ತೀವ್ರ ವಿರೋಧದ ನಡುವೆಯೂ ಈ ದಂಪತಿಗಳು ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ತಿಳಿಸಿದರು. ಪ್ರಾಂಶುಪಾಲ ಬಜರಂಗ ಬಲಿ ಮಾತನಾಡಿದರು. ಕುಷ್ಟಗಿ ವಕೀಲರಾದ ಬೆಟ್ಟಪ್ಪ ಯತ್ನಟ್ಟಿ ಬಸವಂತಪ್ಪ ಚೌವ್ಹಾಣ ಪ್ರಾಧ್ಯಪಕ ರಕ್ಷಿತ್.ಎ, ವೀರೇಶ್ ಕೆಂಗಲ್, ಸರ್ವಮಂಗಳಮ್ಮ.ಟಿ.ಆರ್, ಹಿರಿಯ ಉಪನ್ಯಾಸಕ ಅಮರೇಶ ವೆಂಕಟಾಪುರ, ವಿನಯ್ ಕುಮಾರ್, ವಿಜಯ್ ಸರೋದೆ, ಬಸವರಾಜ್ ಚಿಗರಿ, ಹಲಿಗೆಮ್ಮ, ಬೋರಯ್ಯ ಸೇರಿದಂತೆ ಇತರರು ಇದ್ದರು. ಬಾಲಪ್ಪ ಕುರಿ ನಿರೂಪಿಸಿದರು, ವಿದ್ಯಾರ್ಥಿನಿ ಮೀನಾಕ್ಷಿ ಪ್ರಾಥಿಸಿದರು, ಸಂಗಮೇಶ್ ಸ್ವಾಗತಿಸಿದರು.

ವಾರ್ತಾ ಭಾರತಿ 12 Apr 2026 8:06 pm

ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಯ್ಕೆ

ಕುಂದಾಪುರ, ಎ.12: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸಿ.ಜೆ. ದೆಹಲಿಯ ಸಂಸತ್ ಭವನದಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಕೇವಲ 11 ವಿದ್ಯಾರ್ಥಿಗಳಲ್ಲಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಏಕೈಕ ವಿದ್ಯಾರ್ಥಿನಿಯಾಗಿ ಮಹಾಲಕ್ಷ್ಮೀ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಈಕೆ ಎಸ್.ಜಿ.ಪ್ರಸಾದ್ ರಾವ್ ಮತ್ತು ಪೂರ್ಣಿಮಾ ಪಿ.ರಾವ್ ದಂಪತಿಯ ಪುತ್ರಿ.

ವಾರ್ತಾ ಭಾರತಿ 12 Apr 2026 8:00 pm

ನಿರಂತರ ಪರಿಶ್ರಮವು ಸಾಧನೆಯ ಶಿಖರಕ್ಕೆ ದಾರಿ: ನ್ಯಾ.ವಿಶ್ವಜಿತ್ ಶೆಟ್ಟಿ

10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಸಮಾರೋಪ

ವಾರ್ತಾ ಭಾರತಿ 12 Apr 2026 7:56 pm

ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ: ಯಾದಗಿರಿ-ಗುರುಮಠಕಲ್‌ನಲ್ಲಿ ಆಕ್ರೋಶ

ಯಾದಗಿರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31 ಅವಧಿಯ ತಾಲೂಕು ಘಟಕಗಳ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳಲ್ಲಿ ಗೊಂದಲಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯಾದ್ಯಂತ ಏಪ್ರಿಲ್ 11ರಿಂದ ಆರಂಭಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 12ಕ್ಕೆ ಮುಕ್ತಾಯವಾದರೂ, ಈ ಎರಡು ತಾಲೂಕುಗಳಲ್ಲಿ ಯಾವುದೇ ಅಧಿಕೃತ ಚಟುವಟಿಕೆ ನಡೆದಿಲ್ಲ ಎಂದು ಸ್ಪರ್ಧಾ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಕಚೇರಿ ಸ್ಥಾಪನೆ ಇಲ್ಲದೆ, ಚುನಾವಣಾಧಿಕಾರಿ ನೇಮಕವಾಗದೆ ಹಾಗೂ ಮತದಾರರ ಪಟ್ಟಿ ಪ್ರಕಟವಾಗದೆ ಇರುವುದರಿಂದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣೆಯನ್ನು ಮುನ್ನಡೆಸಬೇಕಾದ ಸಂಘದ ಜಿಲ್ಲಾ ಅಧ್ಯಕ್ಷರು ಸಂಪರ್ಕಕ್ಕೆ ಸಿಗದಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ರಾಜ್ಯ ಮಟ್ಟದ ಪದಾಧಿಕಾರಿಗಳಿಂದಲೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಕೆಲವರು ತೆರೆಮರೆಯಲ್ಲಿ ವಾಮಮಾರ್ಗದಲ್ಲಿ ಚುನಾವಣೆ ನಡೆಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ 16 ಮಂದಿ ಶಿಕ್ಷಕ ಆಕಾಂಕ್ಷಿಗಳು ತಾಲೂಕು ಅಧ್ಯಕ್ಷ ಯೆಂಕಪ್ಪ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿ, ತಕ್ಷಣ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ. ತಾಲೂಕು ಅಧ್ಯಕ್ಷರು ಕೂಡ ರಾಜ್ಯ ಸಮಿತಿ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೊಸ ದಿನಾಂಕ ನಿಗದಿ ಮಾಡಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ. ನಿಗದಿಪಡಿಸಿದ ವೇಳಾಪಟ್ಟಿಯಂತೆ ಏಪ್ರಿಲ್ 12ರಂದು ನಾಮಪತ್ರ ಸಲ್ಲಿಕೆ, ಏಪ್ರಿಲ್ 13ರಂದು ಪರಿಶೀಲನೆ, ಏಪ್ರಿಲ್ 14ರಂದು ನಾಮಪತ್ರ ವಾಪಸ್ ಹಾಗೂ ಅಂತಿಮ ಪಟ್ಟಿ ಪ್ರಕಟಣೆ, ಏಪ್ರಿಲ್ 19ರಂದು ಮತದಾನ ಮತ್ತು ಫಲಿತಾಂಶ ಪ್ರಕಟಣೆ ನಡೆಯಬೇಕಾಗಿದ್ದರೂ, ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಯಾವುದೇ ಪ್ರಗತಿ ಕಾಣಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದ್ದು. ಆಕಾಂಕ್ಷಿ ಶಿಕ್ಷಕರಾದ ಬನ್ನಪ್ಪ, ತಾಯಪ್ಪ, ರಮ್ಯಾ ಎಚ್.ಕೆ., ನಾಗಪ್ಪ, ಮಂಜುಳಾ ಅಜನಾಳ, ಸುವರ್ಣಾ ರಾಠೋಡ್, ಗುಂಡುರಾವ್, ಬಸವರಾಜಪ್ಪ, ಕಲ್ಪನಾ, ಸುರೆ ಬಾ, ಗುರುನಾಥ, ದೇವಪ್ಪ, ಶಫಿ, ರವಿಚಂದ್ರ ಅವರು ಸಂಘದ ತಾಲೂಕು ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ

ವಾರ್ತಾ ಭಾರತಿ 12 Apr 2026 7:50 pm

IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್‌ಎಸ್‌ಜಿ ಮಣಿಸಿದ ಗುಜರಾತ್ ಟೈಟಾನ್ಸ್

GT Vs LSG IPL 2026: ಲಕ್ನೋದಲ್ಲಿ ಭಾನುವಾರ (ಏಪ್ರಿಲ್‌ 12) ನಡೆದ ಐಪಿಎಲ್ 2026ರ 19ನೇ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್‌ ನಾಯಕ ಶುಭ್‌ಮನ್

ಒನ್ ಇ೦ಡಿಯ 12 Apr 2026 7:45 pm

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗ್ರೂಪ್ ‘ಬಿ’ ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಪ್ರಕಟ

ಬೆಂಗಳೂರು : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ಎ.10ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕೆಇಎ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಒದಗಿಸಲಾದ https://cetonline.karnataka.gov.in/kea   ಮೂಲಕ ಎ.13 ಬೆಳಗ್ಗೆ 10 ಘಂಟೆಯೊಳಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ 25 ರೂ.ನ್ನು ಪಾವತಿಸಬೇಕು. ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಅಪೂರ್ಣ, ಆಧಾರರಹಿತವಾಗಿರುವ ಹಾಗೂ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಪ್ರಕಟನೆ ತಿಳಿಸಿದೆ.  

ವಾರ್ತಾ ಭಾರತಿ 12 Apr 2026 7:44 pm

ರಸ್ತೆ ಕಾಮಗಾರಿ ಸಂದರ್ಭ ಭೂಕುಸಿತ| ಬಾಳೆಬರೆ ಘಾಟಿಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

ಉಡುಪಿ, ಎ.12: ಭೂಕುಸಿತದ ಹಿನ್ನೆಲೆಯಲ್ಲಿ ಬಾಳೆಬರೆ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಬಾಳೆಬರೆ ಘಾಟಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎ.9ರಂದು ಭೂಕುಸಿತ ಉಂಟಾಗಿ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ ಬಿರುಕುಗಳು ಕಂಡುಬಂದಿದ್ದು, ಈ ವಿಚಾರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಲೋಕೋಪಯೋಗಿ ಇಲಾಖೆ ಉಡುಪಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಬಾಳೆಬರೆ ಘಾಟಿಯಲ್ಲಿ ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಬೇಕೆಂದು ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಪರಿಶೀಲಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕಾವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪರ್ಯಾಯ ಸಂಚಾರ ಮಾರ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರಸ್ತೆಯ ತೀರ್ಥಹಳ್ಳಿಯಿಂದ ಕುಂದಾ ಪುರ ಕಡೆ ಹೋಗುವ (ತೀರ್ಥಹಳ್ಳಿ- ರಾವೆ-ಕಾನುಗೋಡು- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ಧಾಪುರ ಮೂಲಕ ಕುಂದಾಪುರ ರಾಜ್ಯ ಹೆದ್ದಾರಿ) ವಾಹನ ಗಳು ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು. ನಗರ ಯದಾಪುರ ರಾಜ್ಯ ಹೆದ್ದಾರಿ -278 ರಸ್ತೆಯ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ( ತೀರ್ಥಹಳ್ಳಿ- ಯಡೂರು-ಸುಳುಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್- ಹೊಸಂಗಡಿ- ಸಿದ್ದಾಪುರ-ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ತೀರ್ಥಹಳ್ಳಿ- ಯಡೂರು-ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು. ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ(ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ- ನಗರ- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ಧಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರಿಂದ ಭಟ್ಕಳ- ಬೈಂದೂರು-ಕುಂದಾಪುರ ರಸ್ತೆಯಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Apr 2026 7:43 pm

ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ : ಬೇಸಿಗೆ ಪ್ರಾರಂಭಿಕ ಹಂತದಲ್ಲಿಯೇ ಕಲಬುರಗಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಜನರು ಪರದಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಕುಡಿಯುವ ನೀರಿನ ಸರಬರಾಜು ಮಾಡಲು ಮುಂದಾಗಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿ ನಗರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ನಲ್ಲಿಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ಮೊದ ಮೊದಲು ವಾರಕ್ಕೋಮ್ಮೆಯಾದರೂ ನಲ್ಲಿಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ಹದಿನೈದು ದಿನಕ್ಕೊಮ್ಮೆ ನೀರು ಬರುತ್ತದೆ. ಇದರಿಂದ ಜನರು ದಿನ ನಿತ್ಯ ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿಯೇ ಈ ಸಮಸ್ಯೆ ಉಂಟಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುನ್ನೇಚ್ಚರಿಕೆ ಕ್ರಮ ಕೈಗೊಂಡಿಲ್ಲ. ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆಡೆ ಈ ಸಮಸ್ಯೆ ಇದ್ದರೆ ಇನ್ನೊಂದೆಡೆ ಬಿಸಿಲಿನ ಝಳದಿಂದ ಜನರು ಕಂಗಾಲಾಗಿದ್ದಾರೆ. ಆದರೆ ಮಹಾನಗರ ಪಾಲಿಕೆ ಹೆಚ್ಚುತ್ತಿರುವ ಉಷ್ಣತೆ ಶಮನಕ್ಕೆ ರಸ್ತೆ ಮತ್ತು ಬೀದಿಗಳಲ್ಲಿ ನೀರು ಚಿಮುಕಿಸಬೇಕು. ಕಲಬುರಗಿ ನಗರದ ಪ್ರಮುಖ ಸ್ಥಳಗಳಲ್ಲಿ, ಪ್ರತಿ ಗ್ರಾಪಂ ಮಟ್ಟದಲ್ಲಿ ಜನರಿಗೆ ಶುದ್ದ ಕುಡಿಯಲು ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಆದರೆ ಇವ್ಯಾವುದೂ ತಲೆ ಕೆಡಿಸಿಕೊಳ್ಳದೆ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನೂ ಎರಡು ತಿಂಗಳು ಬೇಸಿಗೆ ಇರುವುದರಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಜನರು ರೊಚ್ಚಿಗೆದ್ದು ಬೀದಿಗಿಳಿಯುವ ಮುನ್ನ ಜಿಲ್ಲಾಡಳಿತ ಕುಡಿಯುವ ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 12 Apr 2026 7:39 pm

Kalaburagi | ಜಗತ್ತಿನ ಮೊದಲ ವಚನಕಾರ್ತಿ ಅಕ್ಕಮಹಾದೇವಿ ಕುರಿತು ಅನುಭಾವ ಕಾರ್ಯಕ್ರಮ

ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶರಣರ ಸ್ಮರಣಾರ್ಥ “ಅರಿವಿನ ಮನೆ” 896ನೇ ದತ್ತಿ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಅವರು ಅಕ್ಕಮಹಾದೇವಿ ಅವರನ್ನು ಜಗತ್ತಿನ ಮೊದಲ ವಚನಕಾರ್ತಿಯಾಗಿ ವಿವರಿಸಿದರು. ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದಲ್ಲಿ ಜನಿಸಿದ ಅಕ್ಕಮಹಾದೇವಿಯಲ್ಲಿ ಬಾಲ್ಯದಲ್ಲೇ ಅಧ್ಯಾತ್ಮ ಚಿಂತನೆಗಳ ಲಕ್ಷಣಗಳು ಗೋಚರಿಸುತ್ತಿದ್ದವು ಎಂದರು. ಗುರುಲಿಂಗ ದೇವರಿಂದ ಶಿಕ್ಷಣ ಮತ್ತು ಸಂಸ್ಕಾರ ಪಡೆದ ಅಕ್ಕಮಹಾದೇವಿ “ನೀನೆಂಬುದು ದೇವರ ಸ್ವರೂಪ” ಎಂಬ ಆತ್ಮಜ್ಞಾನವನ್ನು ಅಳವಡಿಸಿಕೊಂಡಳು. ಲಿಂಗದೀಕ್ಷೆಯ ಮಹತ್ವವನ್ನು ವಿವರಿಸಿದ ಅವರು, ಗುರುದಿಂದ ದೀಕ್ಷೆ ಪಡೆಯುವುದು ಜೀವನದ ಎರಡನೇ ಹುಟ್ಟಾಗಿದ್ದು, ಪಂಚೇಂದ್ರಿಯಗಳ ಸಂಸಾರ ನಿಸ್ಸಾರವಾದದ್ದು ಎಂದು ಹೇಳಿದರು. ಯೌವನದಲ್ಲಿ ಮದುವೆಗೆ ಒತ್ತಾಯ ಬಂದಾಗ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಘೋಷಿಸಿದ ಅಕ್ಕಮಹಾದೇವಿ, ಬಳಿಕ ಕೌಶಿಕ ಮಹಾರಾಜನೊಂದಿಗೆ ವಿವಾಹವಾದರೂ ಕರಾರು ಪಾಲನೆಯಿಲ್ಲದ ಕಾರಣ ಅವನನ್ನು ತೊರೆದು ಕಲ್ಯಾಣದತ್ತ ಹೊರಟಳು ಎಂದು ವಿವರಿಸಿದರು. “ಹಸಿವಾದಡೆ ಭಿಕ್ಷಾನ್ನ, ತೃಷೆಯಾಗಿದಡೆ ನೀರಿನ ಮೂಲಗಳು, ಶಯನಕ್ಕೆ ಹಾಳಾದ ದೇವಾಲಯಗಳೇ ಸಾಕು” ಎಂಬ ಆಕೆಯ ವೈರಾಗ್ಯ ಜೀವನವನ್ನು ಉಲ್ಲೇಖಿಸಿ, ಪ್ರಕೃತಿಯಲ್ಲಿಯೇ ದೇವರನ್ನು ಕಂಡ ಮಹನೀಯಳಾಗಿದ್ದಾಳೆ ಎಂದು ಹೇಳಿದರು. ನಂತರ ಅಲ್ಲಮಪ್ರಭು ಅವರೊಂದಿಗೆ ನಡೆದ ಸಂವಾದಗಳ ಬಳಿಕ ಕಲ್ಯಾಣದ ಅನುಭವ ಮಂಟಪದಲ್ಲಿ ಆಕೆಗೆ ಸ್ವಾಗತ ನೀಡಲಾಯಿತು ಎಂದು ತಿಳಿಸಿದರು. ಅಕ್ಕಮಹಾದೇವಿ ಅಧ್ಯಾತ್ಮ ಲೋಕದ ವಿಸ್ಮಯ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ಡಾ. ಜಯಶ್ರೀ ದಂಡೆ, ಉದ್ಯಮಿ ರಾಜೇಂದ್ರ ಖೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ. ಕೆ.ಎಸ್. ವಾಲಿ, ಬಂಡಪ್ಪ ಕೇಸುರ್, ಶರಣಗೌಡ ಪಾಟೀಲ್ ಪಾಳ, ಶಿವಾನಂದ ಹತ್ತಿ, ಉದ್ದಂಡಯ್ಯ ಸೇರಿದಂತೆ ಹಲವರು ಭಾಗವಹಿಸಿದರು. ಸಾಕ್ಷಿ ಸತ್ಯಂಪೇಟೆ ಕಾರ್ಯಕ್ರಮವನ್ನು ನಿರೂಪಿಸಿದರು.

ವಾರ್ತಾ ಭಾರತಿ 12 Apr 2026 7:36 pm

Kalaburagi | ಡಾ.ಅಂಬೇಡ್ಕರ್ 135ನೇ ಜಯಂತಿ ನಿಮಿತ್ತ ನೇತ್ರದಾನ ಶಿಬಿರ

ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ “ಡಾ.ಅಂಬೇಡ್ಕರ್ ಅರಿವು ಉತ್ಸವ - 2026” ಹಿನ್ನಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ಸಾನಿಧ್ಯ ವಹಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ಪಾಟೀಲ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ.ಸಿದ್ರಾಮಪ್ಪ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದರು. ಇದೇ ವೇಳೆ ಸೋಮಶೇಖರ್ ಮೇಲಿನಮನಿ, ವಿಶ್ವನಾಥ ಕಾರ್ನಾಡ, ಹಣಮಂತ ಇಟಗಿ, ಅರವಿಂದ ಕಮಲಾಪೂರಕರ್, ರೆಣುಕಾ ಸರಡಗಿ, ವಿನೋದ ಕಾಂಬಳೆ, ಮಯೂರ ವಾಘಮೋರೆ, ಉಮರೆಶ ಶೃಂಗೆರಿ, ಸಿದ್ಧಾರ್ಥ ಪಾರೆ ಹಾಗೂ ಅಲ್ಲಮಪ್ರಭು ನಿಂಬರ್ಗಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Apr 2026 7:34 pm

ಯುಜಿಸಿಇಟಿ-2026 ಪರೀಕ್ಷೆ ಪ್ರವೇಶ ಪತ್ರದ ಲಿಂಕ್ ಬಿಡುಗಡೆ

ಬೆಂಗಳೂರು : ಇದೇ ತಿಂಗಳ 23 ಮತ್ತು 24ರಂದು ನಡೆಯಲಿರುವ ಯುಜಿಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಲಿಂಕ್ ಬಿಡುಗಡೆ ಮಾಡಿದೆ. https://share.google/r1PgwSVSfhrFcNrOu   ಈ ಲಿಂಕ್ ಮೂಲಕ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಕೆಲ ಕಿಡಿಗೇಡಿಗಳು ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಬಹುದೆಂದು ನಕಲಿ ಲಿಂಕ್ ಸೃಷ್ಟಿ ಮಾಡಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ, ಅಭ್ಯರ್ಥಿಗಳು ಅಧಿಕೃತವಾದ ಕೆಇಎ ವೆಬ್‍ಸೈಟ್‍ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಕೆಇಎ ತಿಳಿಸಿದೆ.  

ವಾರ್ತಾ ಭಾರತಿ 12 Apr 2026 7:26 pm

ಭಟ್ಕಳ: ʼSIRʼ ನನ್ನ ಮತ ನನ್ನ ಹಕ್ಕು ಸಂಘಟೆಯಿಂದ ಜನಜಾಗೃತಿ ಸಭೆ

ಭಟ್ಕಳ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಜನಜಾಗೃತಿ ಮೂಡಿಸಲು ‘ನನ್ನ ಮತ ನನ್ನ ಹಕ್ಕು’ ಸಂಘಟನೆ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹಯೋಗದಲ್ಲಿ ಭಾನುವಾರ ಇಲ್ಲಿನ ತಂಝೀಮ್ ಸಭಾಂಗಣದಲ್ಲಿ ಜನಜಾಗೃತಿ ಸಭೆ ಹಾಗೂ ಸ್ವಯಂಸೇವಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಸಭೆಯಲ್ಲಿ ಪಿಯುಸಿಎಲ್‌ನ ಐಶ್ವರ್ಯ ಹಾಗೂ ‘ನನ್ನ ಮತ ನನ್ನ ಹಕ್ಕು’ ಸಂಘಟನೆಯ ವಿನಯ ಶ್ರೀನಿವಾಸ ಅವರು ಎಸ್‌ಐಆರ್ ಪ್ರಕ್ರಿಯೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮತದಾರರ ಮ್ಯಾಪಿಂಗ್, ಎಣಿಕೆ, ಕರಡು ಮತ ದಾರರ ಪಟ್ಟಿಯ ಪ್ರಕಟಣೆ, ಹಕ್ಕು-ಆಕ್ಷೇಪಣೆ ಸಲ್ಲಿಕೆ ಮತ್ತು ಅಂತಿಮ ಪಟ್ಟಿಯ ಸಿದ್ಧತೆ ಸೇರಿದಂತೆ ವಿವಿಧ ಹಂತ ಗಳನ್ನು ವಿವರಿಸಿದರು. ಶುದ್ಧ, ನಿಖರ ಮತ್ತು ಪಾರದರ್ಶಕ ಚುನಾವಣೆಗೆ ಸರಿಯಾದ ಮತದಾರರ ಪಟ್ಟಿಯ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಎಸ್‌ಐಆರ್ ಜಾರಿಯಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ ವಕ್ತಾರರು, ಸ್ಪಷ್ಟ ಮಾರ್ಗಸೂಚಿಗಳ ಕೊರತೆ, ದಾಖಲೆ ಸಮಸ್ಯೆಗಳು ಹಾಗೂ ಮಹಿಳೆಯರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ಹಿಂದುಳಿದ ವರ್ಗ ಗಳು ಎದುರಿಸುವ ತೊಂದರೆಗಳ ಬಗ್ಗೆ ಗಮನಸೆಳೆದರು. ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯ ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿನಯ ಶ್ರೀನಿವಾಸ, ಎಸ್‌ಐಆರ್ ಪ್ರಕ್ರಿಯೆ ಮೂಲಕ ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟು ಅವರನ್ನು ನಾಗರಿಕರಲ್ಲ ಎಂಬ ರೀತಿಯಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ‘ನನ್ನ ಮತ ನನ್ನ ಹಕ್ಕು’ ಸಂಘಟನೆಯ ವತಿಯಿಂದ ರಾಜ್ಯದಾದ್ಯಂತ ಜನಜಾಗೃತಿ ಸಭೆಗಳನ್ನು ಆಯೋಜಿಸಿ, ಎಲ್ಲಾ ಸಮುದಾಯಗಳ ಅರ್ಹ ಮತದಾರರ ಹೆಸರುಗಳನ್ನು ಮತಪಟ್ಟಿಯಲ್ಲಿ ಸೇರಿಸಲು ಕ್ರಿಯಾಯೋಜನೆ ರೂಪಿಸಲಾ ಗಿದೆ ಎಂದು ತಿಳಿಸಿದರು. ಸಹಾಯ ಕೇಂದ್ರಗಳನ್ನು ತೆರೆಯುವ ಮೂಲಕ ಜನರಿಗೆ ಮಾರ್ಗದರ್ಶನ ನೀಡುವುದು, ಬೂತ್ ಮಟ್ಟದಲ್ಲಿ ಸ್ವಯಂಸೇವಕರನ್ನು ನೇಮಿಸಿ ಒಬ್ಬರೂ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿ ಕೊಳ್ಳುವುದು ಉದ್ದೇಶವಾಗಿದೆ ಎಂದರು. ಎಸ್‌ಐಆರ್ ವಿರುದ್ಧ ಎ.15ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಿದ್ದರು. ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಸ್ವಾಗತಿಸಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಯಾಸೀನ್ ಮಲ್ಪೆ ಸೇರಿ ದಂತೆ ಹಲವು ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಮುಬಶ್ಶಿರ್ ಹಲ್ಲಾರೆ ಕಾರ್ಯಕ್ರಮವನ್ನು ನಿರ್ವಹಿಸಿದರು.

ವಾರ್ತಾ ಭಾರತಿ 12 Apr 2026 7:26 pm

Kodagu | ಈಜಲು ತೆರಳಿದ ಇಬ್ಬರು ನೀರುಪಾಲು

ಮಡಿಕೇರಿ : ಈಜಲೆಂದು ಕೆರೆಗೆ ಇಳಿದ ಬಾಲಕ ಹಾಗೂ ಯುವಕ ನೀರು ಪಾಲಾದ ಘಟನೆ ಶನಿವಾರ ಸಂಜೆ ದಕ್ಷಿಣ ಕೊಡಗಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳಲೆ ನಿವಾಸಿ ಪ್ರಕಾಶ ಹಾಗೂ ಚಂದ್ರಿಕ ದಂಪತಿಗಳ ಪುತ್ರ, ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗೌತಮ್(12) ಮತ್ತು ಮಂಜುಳಾ ಹಾಗೂ ದಿ.ರಾಜು ಎಂಬುವವರ ಪುತ್ರ ಕೃಷ್ಣ(22) ಮೃತರು. ಶನಿವಾರ ಸಂಜೆ ಇಬ್ಬರು ಬಾಳಲೆ ಗ್ರಾಮದ ಕೊಟ್ಟಕೇರಿ ಮಾರಿಗುಡಿ ಎಂಬಲ್ಲಿರುವ ಕೆರೆಗೆ ಈಜಲು ತೆರಳಿದ್ದು, ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ರವಿವಾರ ಬೆಳಗ್ಗೆ ಗೋಣಿಕೊಪ್ಪ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರ ಮೃತದೇಹಗಳನ್ನು ಹೊರ ತೆಗೆದರು. ಘಟನೆ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ವಾರ್ತಾ ಭಾರತಿ 12 Apr 2026 7:15 pm

IPL 2026- ಪ್ರಸಿದ್ಧ ಕೃಷ್ಣ ಬಿರುಗಾಳಿ ಬೌಲಿಂಗ್ ಬಳಿಕ ಶುಭಮನ್ ಗಿಲ್ ನಾಯಕನಾಟ; ಏಕನಾದಲ್ಲಿ ಲಖನೌ ಪತನ

ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಮಾರಕ ಬೌಲಿಂಗ್, ಜಾಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ ಗುಜರಾತ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಜಯಿಸಿ 4 ಅಂಕಗಳನ್ನು ಕಲೆ ಹಾಕಿ ಯಲ್ಲಿ 5ನೇ ಸ್ಥಾನಕ್ಕೇರಿದೆ. ಇದೇವೇಳೆ ಲಖನೌ ಸೂಪರ್ ಜೈಂಟ್ಸ್ ಅಷ್ಟೇ ಪಂದ್ಯಗಳಲ್ಲಿ 2 ಗೆಲುವು, 2 ಸೋಲುಗಳೊಂದಿಗೆ 4 ಅಂಕಗಳನ್ನು ಗಳಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡ 6ನೇ ಸ್ಥಾನಕ್ಕಿಳಿದಿದೆ. ಏಕನಾ ಕ್ರೀಡಾಂಗಣದಲ್ಲಿ ಏಪ್ರಿಲ್ 12ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ ಇನ್ನೂ 8 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ()ಇದಕ್ಕೂ ಮೊದಲು ಕನ್ನಡಿಗ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ಲಖನೌ ತಂಡ ರನ್ ಗಳಿಸಲು ಒದ್ದಾಡಿತು. ಐಡನ್ ಮಾರ್ಕಂ ಅವರು 21 ಎಸೆತಗಳಿಂದ 30 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಬ್ಯಾಟರ್ ಸಹ 20 ರನ್ ಗಳಿಸಲು ಸಹ ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಂತೂ ಯಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಪ್ರಸಿದ್ಧ ಕೃಷ್ಣ ಅವರು 4 ವಿಕೆಟ್ ಗಳಿಸಿದರು. ಇದೇವೇಳೆ ಅವರು ಆಡಿದ ತಮ್ಮದಾಗಿಸಿಕೊಂಡಿದ್ದಾರೆ. ಸಂಕ್ಷಿಪ್ತ ಸ್ಕೋರ್ ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 164/8, ಮಾರ್ಕಂ 30(21), ಪಂತ್ 18(11), ಮುಕುಲ್ ಚೌಧರಿ 18(14), ಪ್ರಸಿದ್ಧ ಕೃಷ್ಣ 28ಕ್ಕೆ 4, ಅಶೋಕ್ ಶರ್ಮಾ 32ಕ್ಕೆ2. ಗುಜರಾತ್ ಟೈಟಾನ್ಸ್ 18.4 ಓವರ್ ಗಳಲ್ಲಿ 165/3, ಜೋಸ್ ಬಟ್ಲರ್ 60(37), ಶುಭಮನ್ ಗಿಲ್ 56(40), ವಾಶಿಂಗ್ಟನ್ ಸುಂದರ್ ಅಜೇಯ 21(13), ದಿಗ್ವೇಶ್ ರಾಠಿ 31ಕ್ಕೆ 1, ಪ್ರಿನ್ಸ್ ಯಾದವ್ 31ಕ್ಕೆ 1.

ವಿಜಯ ಕರ್ನಾಟಕ 12 Apr 2026 7:14 pm

ಬಂಟ್ವಾಳ| ಸಹಕಾರಿ ಸಂಘದಲ್ಲಿ ಮಹಿಳೆಗೆ ಜಾತಿ ನಿಂದನೆ, ಕಿರುಕುಳ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಣಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆ:- ನೆಟ್ಲಮುಡ್ನೂರು ಗ್ರಾಮದ ನೆಕ್ಕರೆಮಠ ನಿವಾಸಿ, ಪರಿಶಿಷ್ಟ ಜಾತಿಯ ಶೇಷಮ್ಮ (47) ಎಂಬವರು 24 ವರ್ಷಗಳಿಂದ ನೆಟ್ಲಮುಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆಯಲ್ಲಿ ಸಮೂಹ ಕಾಯಕ (ಸೇವಕಿ) ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅವರ ವಿರುದ್ಧ ದ್ವೇಷಪೂರಿತವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಕಾರ ಮಾರ್ಚ್ 29, ರಂದು ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಎಂಬಾತ ಶೇಷಮ್ಮ ಅವರಿಗೆ ಕರೆ ಮಾಡಿ, ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಎ.1 ರಂದು ಶೇಷಮ್ಮ ಅವರು ಕೆಲಸಕ್ಕೆ ಹೋದಾಗ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಕೆಲಸದಿಂದ ಅಮಾನತು ಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಎ. 4 ರಂದು ಅವರು ಕಚೇರಿಗೆ ಹೋದಾಗ ಶಾಖಾ ವ್ಯವಸ್ಥಾಪಕ ಯತೀಶ್ ಗೌಡ ಅವರು “ನೀನು ನಲಿಕೆ ಕೆಳಜಾತಿಯವಳು, ನಿನಗೆ ಇಲ್ಲಿ ಕೆಲಸ ಇಲ್ಲ” ಎಂದು ಹೇಳಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಘಟನೆಗಳಿಂದ ಮನನೊಂದ ಶೇಷಮ್ಮ ಅವರು ಮಾನಸಿಕವಾಗಿ ಜರ್ಜರಿತರಾಗಿ, ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ತಮಗೆ ನ್ಯಾಯ ಒದಗಿಸಬೇಕೆಂದು ಕೋರಿ ಎ. 11 ರಂದು ಪೊಲೀಸರ ಮೊರೆ ಹೋಗಿದ್ದಾರೆ.‌ ಶೇಷಮ್ಮ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಕಚೇರಿಯ ಕೆಲಸದ ವಿಚಾರದಲ್ಲಿ ತಾರತಮ್ಯ ಎಸಗಿದ್ದಲ್ಲದೆ, ಇತರ ಸಿಬ್ಬಂದಿಗಳ ಮುಂದೆ ದೂರುದಾರ ಮಳೆಯ ಜಾತಿಯನ್ನು ಎತ್ತಿ ಹಿಡಿದು ಅವಮಾನಿಸಿದ್ದಾರೆ. ಅಲ್ಲದೆ, ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾ ಗಿದೆ. ಇದರಿಂದ ಮನನೊಂದ ಶೇಷಮ್ಮ ಅವರು ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನೆರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋದಾ ಮತ್ತು ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 74, 49 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಸ್ತುತ ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 12 Apr 2026 7:13 pm

ಸಚಿವ ಸಂಪುಟ ಪುನಾರಚನೆ: ನನಗೂ ಸಚಿವ ಸ್ಥಾನ ಕೊಡಿ - ದೆಹಲಿಗೆ ತೆರಳಿದ 25 ಕ್ಕೂ ಅಧಿಕ ಕಾಂಗ್ರೆಸ್‌ ಶಾಸಕರು; ಯಾರೆಲ್ಲಾ?

ಕರ್ನಾಟಕ ಉಪ ಚುನಾವಣೆ ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25 ಕ್ಕೂ ಅಧಿಕ ಶಾಸಕರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಯಾರೆಲ್ಲಾ ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ? ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 12 Apr 2026 7:07 pm

ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್

BMW Number Plate: ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಪ್ರಮುಖ ಉದಾಹರಣೆಯಾಗಿದೆ. ಸಿನಿಮೀಯ ಮಾದರಿಯಲ್ಲಿ ಬಟನ್ ಒತ್ತಿದರೆ ನಂಬರ್ ಪ್ಲೇಟ್ ಬದಲಾಗುವಂತೆ ಮಾಡಿದ್ದ ಬಿಎಂಡಬ್ಲ್ಯೂ ಕಾರಿನ ಮಾಲೀಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಸಂಚಾರಿ ಪೊಲೀಸರು ಕುಡಿದು ವಾಹನ ಚಲಾಯಿಸುವವರ ಪತ್ತೆಗಾಗಿ ಕಾರ್ಯಾಚರಣೆ

ಒನ್ ಇ೦ಡಿಯ 12 Apr 2026 6:58 pm

Afzalpur | ಹೆಣ್ಣು ಮಕ್ಕಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ : ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು

ಅಫಜಲಪುರ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘ ನಿಯಮಿತ ಇವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಪಟ್ಟಣದ ಶ್ರೀ ಮಳೇಂದ್ರ ಮಠದ ಆವರಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ಮಳೇಂದ್ರ ಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಬಣಜಿಗ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಹೆಣ್ಣು ಮಕ್ಕಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಹೇಳಿದರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ, ನಮ್ಮ ಸಮಾಜವು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆಗಳು ತಲುಪಿಸಲು ಇಂತಹ ಉಚಿತ ಶಿಬಿರಗಳು ಬಹಳ ಉಪಯುಕ್ತವಾಗಿವೆ. ಇಂದಿನ ಶಿಬಿರದಲ್ಲಿ 30 ಜನರು ರಕ್ತದಾನ ಮಾಡಿದ್ದು, ಸುಮಾರು 230 ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಶಾಂತಾಬಾಯಿ ಎಂ.ವೈ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಿಕಾ ಶರಣು ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಅನ್ನಪೂರ್ಣ ಪಾಟೀಲ ಅವರು ಪೂಜೆ ನೆರವೇರಿಸಿದರು. ಲಕ್ಷ್ಮೀ ಜಗದೀಶ ಗುಣಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಂದ ಎಸ್. ಮಾಲೀಪಾಟೀಲ ಅವರು ಅಕ್ಕಮಹಾದೇವಿ ವಚನ ಪ್ರಾರ್ಥನೆ ಸಲ್ಲಿಸಿದರು. ಸಾವಿತ್ರಿ ಎಸ್. ರೋಡಗಿ ಭಕ್ತಿಗೀತೆ ಹಾಡಿ ಅನುಭವ ನುಡಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅನ್ನಪೂರ್ಣ ಪಾಟೀಲ್ ಸೇರಿದಂತೆ ಅರುಣಾಬಾಯಿ ನೂಲಾ, ಪುಷ್ಪಾವತಿ ಎಸ್. ಟಕ್ಕಳಕಿ, ಸಾವಿತ್ರಿಬಾಯಿ ನಾಕೇದಾರ, ಜಯಶ್ರೀ ಉಪ್ಪಿನ, ಸಿದ್ದಮ್ಮ ಹೈಗೊಂಡೆ, ಪಾತಳಮ್ಮ ಫತಾಟೆ, ಡಾ. ಸಂಗಮೇಶ್ವರಿ ಪ್ರಮೋದ, ಜಗದೇವಿ ಜೇವರ್ಗಿ, ಚನ್ನಮ್ಮ ಜೇವರ್ಗಿ, ಲಕ್ಷ್ಮೀ ಗುಣಾರಿ, ಅಶ್ವಿನಿ ನಿಗಡಿ, ರೇಖಾ ಮಸಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವೈದ್ಯರಾದ ಡಾ. ಶರಣಬಸಪ್ಪ ದಾಮಾ, ಡಾ. ರುದ್ರಪ್ಪ ಗುಗವಾಡ, ಡಾ. ವಿ.ಎಸ್. ಸೋಬಾನಿ, ಡಾ. ಸಂಜೀವ ಪಾಟೀಲ ಹಾಗೂ ಡಾ. ಅಂಬಿಕಾ ಪಾಟೀಲ ಸೇರಿದಂತೆ ಅನೇಕ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ವಾರ್ತಾ ಭಾರತಿ 12 Apr 2026 6:57 pm

ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಂಚಿಕೆ ವಿಳಂಬ, ಅಸಮರ್ಪಕ ಡೆಬ್ರಿ ನಿರ್ವಹಣೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

ಕಲಬುರಗಿ ಮಹಾನಗರ‌ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ

ವಾರ್ತಾ ಭಾರತಿ 12 Apr 2026 6:54 pm

GT Vs LSG Highlights- ಲಖನೌ ಸೂಪರ್ ಜೈಂಟ್ಸ್ ಅನ್ನು ಕಟ್ಟಿ ಹಾಕಿದ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಪರ್ಪಲ್ ಕ್ಯಾಪ್ ಗೌರವ

Prasidh Krishna Purple Cap- ಗುಜರಾತ್ ಟೈಟಾನ್ಸ್ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳಿಗೆ 4 ವಿಕೆಟ್ ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮಾರಕ ದಾಳಿಯ ನೆರವಿನಿಂದ ಲಖನೌ ತಂಡವನ್ನು 164 ರನ್‌ಗಳಿಗೆ ನಿಯಂತ್ರಿಸುವಲ್ಲಿ ಗುಜರಾತ್ ಯಶಸ್ವಿಯಾಯಿತು. ಪ್ರಸ್ತುತ ಈ ಸೀಸನ್ ನಲ್ಲಿ ಆಡಿರುವ 4 ಪಂದ್ಯಗಳಿಂದ 10 ವಿಕೆಟ್ ಕಲೆಹಾಕಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 12 Apr 2026 6:29 pm

ಉಪಚುನಾವಣೆ ಬೆನ್ನಲ್ಲೆ ‘ಸಂಪುಟ ಪುನರ್ ರಚನೆಗೆ ಶಾಸಕರ ಪಟ್ಟು’

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರು ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಎರಡೂ ಕ್ಷೇತ್ರಗಳ ಉಪಚುನಾವಣೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಷದ ಮುಖಂಡರು ತೊಡಗಿರುವ ಸಂದರ್ಭದಲ್ಲೇ, ಸಂಪುಟ ಪುನರ್ ರಚನೆ ಮಾಡಬೇಕೆಂದು ಆಗ್ರಹಿಸಿ ಹಿರಿಯ-ಕಿರಿಯ ಶಾಸಕರು ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ದಿಲ್ಲಿ ತೆರಳಲು ಸಿದ್ಧತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ್ ನೇತೃತ್ವದಲ್ಲಿ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಿರಿಯ ಶಾಸಕರಾದ ಎನ್.ಎಚ್.ಕೋನರಡ್ಡಿ, ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ರವಿವಾರ ಸಂಜೆಯೆ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ರವಿವಾರ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಟಿ.ಬಿ.ಜಯಚಂದ್ರ, ‘ಈಗಾಗಲೇ ಚರ್ಚಿಸಿದಂತೆ ಮೂರ್ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸ್ವ ಇಚ್ಛೆಯಿಂದ ದಿಲ್ಲಿಗೆ ಬರುತ್ತಿದ್ದಾರೆ, ಸಂಪುಟದ ಅವಧಿ ಮೂರು ವರ್ಷ ಪೂರೈಸಲಿದೆ. ಮುಂದಿನ ಎರಡು ವರ್ಷಗಳಲ್ಲಿನ ರಾಜಕೀಯ ಏರು-ಪೇರುಗಳನ್ನು ಗಮನದಲ್ಲಿ ಇಟ್ಟುಕೊಂಡು ಇತರರಿಗೂ ಅವಕಾಶ ನೀಡಬೇಕು ಎಂಬುದು ಹಿರಿಯ ಶಾಸಕರ ಬೇಡಿಕೆಯಾಗಿದೆ’ ಎಂದರು. ‘ಸಚಿವ ಸಂಪುಟ ಪುನರ್ ರಚನೆಯ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ನಮ್ಮ ಬೇಡಿಕೆ ಮಂಡಿಸಲಾಗುವುದು. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನಕ್ಕೂ ನಮ್ಮ ದಿಲ್ಲಿ ಭೇಟಿಯ ವಿಷಯವನ್ನು ತಂದಿದ್ದು, ಅವರೂ ಸಮ್ಮತಿಸಿದ್ದಾರೆ' ಎಂದು ಜಯಚಂದ್ರ ನುಡಿದರು. ಮೂರು ವರ್ಷದ ಅವಧಿಯಲ್ಲಿ ಕಳಪೆ ಸಾಧನೆ ತೋರಿದ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಭವಿಷ್ಯದ ದೃಷ್ಟಿಯಿಂದ ಹೊರಬರಿಗೆ ಅವಕಾಶ ನೀಡಬೇಕು. ಆ ಮೂಲಕ ಮುಂಬರಲಿರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ತರಲು ಸಾಧ್ಯವಿದೆ. ಹೀಗಾಗಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ಹೊಸದಿಲ್ಲಿಗೆ ತೆರಳಲಿರುವ ಹಿರಿಯ ಶಾಸಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್‍ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.    

ವಾರ್ತಾ ಭಾರತಿ 12 Apr 2026 6:27 pm

Afzalpur | ವಿದ್ಯುತ್ ಕಡಿತಕ್ಕೆ ರೈತ ಸಂಘಗಳ ತೀವ್ರ ವಿರೋಧ

ಅಫಜಲಪುರ: ಮಾ.26ರಂದು ಕಾರ್ಯಪಾಲಕ ಅಭಿಯಂತರರು ಭೀಮಾ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿದ ವಿದ್ಯುತ್ ಕಡಿತ ಆದೇಶಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ರೈತ ಹೋರಾಟಗಾರ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸುಮಾರು 25 ವರ್ಷಗಳಿಂದ ಭೀಮಾ ಏತನೀರಾವರಿ ಯೋಜನೆ ಜಾರಿಯಲ್ಲಿದ್ದರೂ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದೇ ರೈತರು ನಿರಂತರವಾಗಿ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಯೋಜನೆಗೆ ಬಂದ ಅನುದಾನ ಗುತ್ತಿಗೆದಾರರ ಪಾಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ನೀರು ಸಂಗ್ರಹಿಸುವ ಕಾರ್ಯ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು. ಮಳೆಗಾಲದಲ್ಲಿ 3.16 ಟಿಎಂಸಿ ಮಟ್ಟದ ನೀರು ಸಂಗ್ರಹಿಸಬೇಕಾದರೂ ಆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. ನದಿಯಲ್ಲಿ ನೀರು ಹರಿದು ಹೋದ ಬಳಿಕ ಸಂಗ್ರಹಿಸಲು ಪ್ರಯತ್ನಿಸುವುದರಿಂದ ಗರಿಷ್ಠ ಪ್ರಮಾಣದ ನೀರನ್ನು ತಡೆಹಿಡಿಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಹಿನ್ನೀರಿನ ಆಧಾರದಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರು ಬಿಡಬೇಕಾದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುವುದು ಪ್ರತಿವರ್ಷವೂ ನಡೆಯುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕವಟೆ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಶಾಂತಪ್ಪ ಅಂಜುಟಗಿ, ರಮೇಶ ಪಾಟೀಲ, ಭೀಮರಾವ ಗೌರ, ನೂರ ಅಹ್ಮದ ಭಾಗವಾನ, ಶಿವ ಪ್ರಸಾದ್ ನೂಲಾ, ಚಂದ್ರಶೇಖರ ಕರಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Apr 2026 6:26 pm

Wadi | ಜಗಜೀವನ ರಾಮ್‌ ಅವರು ರೈತ, ದಲಿತ, ಕಾರ್ಮಿಕರ ಪರ ಹೋರಾಡಿದ ಚೇತನ : ತಿಪ್ಪಣ್ಣ ಕಮಕನೂರು

ವಾಡಿ : ಅಧಿಕಾರದಲ್ಲಿದ್ದರೂ ರೈತ, ದಲಿತ ಹಾಗೂ ಕಾರ್ಮಿಕರ ಪರ ಹೋರಾಡಿದ ಮಹಾನ್ ಚೇತನ ಬಾಬು ಜಗಜೀವನ ರಾಮ್‌ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು. ಪಟ್ಟಣದ ಜಾಂಬವೀರ ಕಾಲೋನಿಯಲ್ಲಿ ಡಾ. ಬಾಬು ಜಗಜೀವನ ರಾಮ ಜಯಂತೋತ್ಸವ ಸಮಿತಿ, ಮಾದಿಗ ಸಮಾಜ ಹಾಗೂ ಆದಿ ಜಾಂಬವ ತರುಣ ಸಂಘದ ಸಹಯೋಗದಲ್ಲಿ ನಡೆದ 119ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗಜೀವನ ರಾಮ ಅವರು ಉಪ ಪ್ರಧಾನಿಯಾಗಿದ್ದರೂ, ಈ ಸಮುದಾಯದ ವ್ಯಕ್ತಿ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಮಾದಿಗ ಸಮುದಾಯದ ಬೇಡಿಕೆಯಂತೆ ಕಲ್ಯಾಣ ಮಂಟಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವಿಶೇಷ ಅನುದಾನದಡಿ ಮೊದಲ ಹಂತದಲ್ಲಿ 50 ಲಕ್ಷ ರೂ. ಮಂಜೂರು ಮಾಡುವುದಾಗಿ ಹೇಳಿದ್ದು, ತಮ್ಮ ವತಿಯಿಂದ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಜಗಜೀವನ ರಾಮ ಅವರು ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಮಹತ್ತರ ಸೇವೆ ಸಲ್ಲಿಸಿದ್ದಾರೆ ಎಂದರು. ಆದಿ ಜಾಂಬವ ಶಿಕ್ಷಣ ಸಂಸ್ಥೆಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು. ಜಿ.ಪಂ. ಮಾಜಿ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಮರತೂರ, ಕಾಂಗ್ರೆಸ್‌ನ ಮುಖಂಡರಾದ ಶಾಮ ನಾಟೇಕರ, ಲಿಂಗರಾಜ ತಾರಫೈಲ್, ಸ್ಥಳೀಯ ಬಿ.ಜೆ.ಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು. ಮಹಲ ರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ, ಇಮದಾಪುರದ ಶ್ರೀ ಸಾಯಪ್ಪ ಮುತ್ಯಾ ಸಾನಿದ್ಯ ವಹಿಸಿದ್ದರು. ಡಾ ಬಾಬು ಜಗಜೀವನ ರಾಮ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣು ಮರತೂರ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.5 ರಂದು ರಾಜ್ಯ ಸರ್ಕಾರ ನೀಡುವ 'ಡಾ. ಬಾಬು ಜಗಜೀವನ ರಾಮ' ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಗೌರವ ಅಧ್ಯಕ್ಷ ಚಂದಪ್ಪ ಕಟ್ಟಿಮನಿ, ವಾಡಿ ಅಪರಾಧ ವಿಭಾಗದ ಪಿಎಸ್‌ಐ ರೇಣುಕಾ ಉಡಗಿ, ಅರ್ಜುನ ಕಾಳೆಕರ, ಭೀಮರಾಯ ದೊರಿ, ಬಸವರಾಜ ತುಮಕೂರ, ಗುರುನಾಥ ಮಣಿಗಿರ, ಭೀಮಣ್ಣ ಹವಾಲ್ದಾರ, ಬಸವರಾಜ ಬೂಧಿಹಾಳ, ಶರಣಬಸಪ್ಪ ರಾವೂರ, ಶಿವಕುಮಾರ, ಮಲ್ಲಿಕಾರ್ಜುನ ಮುದ್ನಾಳ, ಜಯಂತ್ಯೋತ್ಸವ ಸಮಿತಿಯ ಕುಮಾರ ರಾಮಚಂದ್ರ ದಾಸ, ಜಗದೀಶ ಮುಕ್ಕನಾಳ, ರಾಜು ರಾಂಪುರಹಳ್ಳಿ, ಶಶಿ ಅರೋಲಿಕರ, ಶಿವಕುಮಾರ ತುಮಕೂರಕರ, ಅನೀಲ ಮುದ್ನಾಳ, ವಿಜಯಕುಮಾರ ಯಲಗಟ್ಟಿ, ಮಲ್ಲಿಕಾರ್ಜುನ ಚಾಮನಳ್ಳಿ, ಚಂದು ಕಾಂಬಳೆ, ಈಶ್ವರ ಹೊಸಮನಿ ಸೇರಿದಂತೆ ಹಲವರಿದ್ದರು. ಶ್ರೀಕಾಂತ ಬಿರಾಳ ಸ್ವಾಗತಿಸಿದರು. ಆರ್.ಜೆ.ಮಂಜು ನಿರೂಪಣೆ ಮಾಡಿದರು, ರಿಚರ್ಡ್ ಮಾರೆಡ್ಡಿ, ವಂದಿಸಿದರು.

ವಾರ್ತಾ ಭಾರತಿ 12 Apr 2026 6:23 pm

ಕೆಲ್ಲೂರು | ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಕೆಲ್ಲೂರು ಗ್ರಾಮದಲ್ಲಿ ಕಾಲೇಜಿನ ಐಕ್ಯೂಏಸಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಕಲಬುರಗಿ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಅರುಣ್ ಕುಮಾರ್ ಲೋಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಅಸ್ಟಿಗೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಸಮಿತಿಯ ಸಂಚಾಲಕ ಡಾ. ಸೈಯದ್ ಸನಾವುಲ್ಲಾ ಮಾತನಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಪ್ಪಯ್ಯ ಪತ್ತಿ, ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಮರಣ್ಣಗೌಡ ಉಪಸ್ಥಿತರಿದ್ದರು. ಯುವರ್ ಎಡ್ ಕ್ರಾಸ್ ಸಂಚಾಲಕಿ ಡಾ. ಖುತೇಜಾ ನಸ್ರಿನ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ ಶರಣಪ್ಪ ಗುಂಡಗುರ್ತಿ, ಕುಪೇಂದ್ರ ರಾಥೋಡ್, ಹಾಗೂ ಅಪರ್ಣ ಇನ್ನಿತರ ಅಧ್ಯಾಪಕರು ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಲ್ಬುರ್ಗಿಯ ಅಲ್ ಬದರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಮತ್ತು ಜೇವರ್ಗಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು ಬಿಪಿ, ಮಧುಮೇಹ,ಕಣ್ಣು ಕಿವಿ,ಮೂಗು, ಗಂಟಲು, ತಜ್ಞರು ಹಾಗೂ ಮೂಳೆ, ಮಕ್ಕಳ ತಜ್ಞರು ವಿವಿಧ ರೀತಿಯಲ್ಲಿ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿ ಮಾತ್ರೆಗಳನ್ನು ವಿತರಿಸಿದರು. 180ಕ್ಕೂಅಧಿಕ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಪ್ರೊ.ಭೀಮಣ್ಣ ನಿರೂಪಿಸಿದರೆ, ಡಾ.ಎನ್.ಜಿ.ಶ್ರೀಧರ್ ವಂದಿಸಿದರು.

ವಾರ್ತಾ ಭಾರತಿ 12 Apr 2026 6:17 pm