ಕರ್ನಾಟಕದ ಆರ್ಸಿಬಿ ಅಭಿಮಾನಿಗಳ ಕ್ರಶ್ ಲಾರೆನ್ ಬೆಲ್ ಇನ್ಸ್ಟಾಗ್ರಾಂ ಫಾಲೋವರ್ಸ್ ಗಣನೀಯ ಏರಿಕೆ
Lauren Bell's: ಐಪಿಎಲ್ನಂತೆ ಡಬ್ಲ್ಯೂಪಿಎಲ್ನಲ್ಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಟೀಮ್ಗೆ ಎಂಟ್ರಿ ಕೊಟ್ಟವರ ಲಕ್ ಚೇಂಜ್ ಆಗಿಬಿಡುತ್ತದೆ ಎನ್ನುವುದು ಸಾಬೀತಾಗುತ್ತಲಿರುತ್ತದೆ. ಇದೀಗ ಈ ಸಾಲಿನಲ್ಲಿ ಲಾರೆನ್ ಬೆಲ್ ಕೂಡ ಇದ್ದು, ಆರ್ಸಿಬಿ ಸೇರ್ಪಡೆಯಾದ ಬಳಿಕ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಡಬ್ಲ್ಯೂಪಿಎಲ್ನಲ್ಲಿ ಲಾರೆನ್ ಬೆಲ್ ಆರ್ಸಿಬಿ ತಂಡಕ್ಕೆ
ಫೆ.24ರಂದು ಮನರೇಗಾ ಹಿಂತೆಗೆತದ ವಿರುದ್ಧ ಪ್ರತಿಭಟನೆ
ಉಡುಪಿ, ಫೆ.21: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯನ್ನು ಕೇಂದ್ರದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಹಿಂತೆಗೆದಿರುವ ಜನವಿರೋಧಿ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಫೆ.24ರಂದು ಬೆಳಗ್ಗೆ 10ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮಣಿಪಾಲದ ಕಾಯಿನ್ ಸರ್ಕಲ್ನಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಭಾಗವಹಿಸಲಿರುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿವಿಲ್ ನ್ಯಾಯಾಧೀಶರಾಗಿ ವಿರಾಜಪೇಟೆಯ ಸೈಯದಾ ಕಾಶ್ಮೀರ ಸಿಮ್ರಾನ್ ಆಯ್ಕೆ
ಮಡಿಕೇರಿ: ವೀರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿ. ಸಯ್ಯದ್ ನಝೀರ್ ಅಹಮ್ಮದ್ ಮತ್ತು ಸೈಯದಾ ನಿಖತ್ ಅಸ್ಮ ಅವರ ಪುತ್ರಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯನ್ನು ಎದುರಿಸಿದ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಮೊದಲ ಪ್ರಯತ್ನದಲ್ಲಿಯೇ 30ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶರ ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ. ವೀರಾಜಪೇಟೆ ಮೌಂಟನ್ ವ್ಯೂ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಸೈಯದಾ ಅವರು, ಮಂಗಳೂರಿನಲ್ಲಿ ಪಿಯುಸಿ ಶಿಕ್ಷಣ, ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ಬಿಬಿಎ ಎಲ್ಎಲ್ಬಿ ಪದವಿ ಮುಗಿಸಿದರು. 2023ರಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಹಿರಿಯ ವಕೀಲ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಸೈಯದಾ ಕಾಶ್ಮೀರ ಸಿಮ್ರಾನ್, ನನ್ನ ತಂದೆ, ತಾಯಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಾತ್ರವಲ್ಲ, ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇದೀಗ ಅವರು ಕನಸನ್ನು ನನಸು ಮಾಡಿದ ತೃಪ್ತಿ ತನಗಿದೆ ಎಂದು ಹೇಳಿದರು. ಇವರೊಂದಿಗೆ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನವೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾಯಿತು ಎಂದು ಅವರು ನೆನಪಿಸಿಕೊಂಡರು. 10 ಸಾವಿರಕ್ಕೂ ಅಧಿಕ ಮಂದಿ ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆ ಬರೆದಿದ್ದು, ಆ ಪೈಕಿ 83 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು 30 ನೇ ರ್ಯಾಂಕ್ ಗಳಿಸಿರುವುದು ವಿಶೇಷ.
ಮೂಲ ವಿಜ್ಞಾನ ಅಧ್ಯಯನದಲ್ಲಿ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ಅಗತ್ಯ: ಪ್ರೊ.ಬಿ.ಎಸ್.ಶೇರಿಗಾರ್
ಉಡುಪಿ, ಫೆ.21: ಮೂಲ ವಿಜ್ಞಾನ ಅಧ್ಯಯನದಲ್ಲಿ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸುವುದರ ಜೊತೆಗೆ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಾಗ ತಾವು ಬೆಳೆಯುವುದರ ಜೊತೆಗೆ ರಾಷ್ಟ್ರದ ತಾಂತ್ರಿಕ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡುವ ಸದಾವಕಾಶ ತಮದಾಗುತ್ತದೆ. ವಿಜ್ಞಾನ ಕಲಿಕೆಯ ವಿಧಾನದಲ್ಲಿ ಕೂಡ ಬಹಳಷ್ಟು ಪರಿಷ್ಕರಣೆಗಳು ಆಗ ಬೇಕಾದ ಅನಿವಾರ್ಯತೆ ಇದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎಸ್.ಶೇರಿಗಾರ್ ಹೇಳಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ವಿಜ್ಞಾನ ಸಂಘ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಆಲ್ಕೆಮಿ ಟು ಕೆಮಿಸ್ಟ್ರಿ ಎಂಬ ವಿಷಯದ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇದರ ಮಾಜಿ ಕಾರ್ಯದರ್ಶಿ ಪ್ರೊ.ಎಂ.ಆರ್. ನಾಗರಾಜ್ ರಸಾಯನಶಾಸ್ತ್ರ ಅಧ್ಯಯನದ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ ಶುಭ ಕೋರಿದರು. ಐಕ್ಯೂಎಸಿ ಮುಖ್ಯ ಸಂಯೇೂಜಕಿ ಪ್ರೊ.ಶೈಲಜಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ವೀರಾ ಇಡಾ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಉಮಾದೇವಿ, ಸಹ ಸಂಚಾಲಕ ಪಿ.ವಾಸವಿ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿನಿ ಕನ್ನಿಕಾ ಸ್ವಾಗತಿಸಿದರು. ಚೈತ್ರಾ ವಂದಿಸಿದರು.
ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಉದಯ ಶಂಕರ್ ಆಯ್ಕೆ
ಬೈಂದೂರು, ಫೆ.21: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ದೂರದರ್ಶನ ಚಂದನದ ಉದಯ ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ವಿಜಯ ಕರ್ನಾಟಕದ ರಾಮ ಬಿಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ಬೈಂದೂರು ಪ್ರವಾಸಿ ಬಂಗಲೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿಜಯವಾಣಿಯ ನರಸಿಂಹ ನಾಯಕ್, ಕೋಶಾಧಿಕಾರಿಯಾಗಿ ಉದಯವಾಣಿಯ ಕೃಷ್ಣ ಬಿಜೂರು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ವಿಫೋರ್ ನ್ಯೂಸ್ನ ಜಯಪ್ರಕಾಶ್ ವಿ. ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.
ಸರಕಾರದ ನಿರ್ಲಕ್ಷ್ಯದಿಂದ ಅನುದಾನಿತ ಕನ್ನಡ ಶಾಲೆಗಳ ಅವಸಾನ: ಸತ್ಯೇಂದ್ರ ಪೈ
ಕಾಪು, ಫೆ.21: ಸರಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳು ಬೇಡ. ಹಿಂದೆ ಸರಕಾರ ಅನುದಾನಿತ ಶಾಲೆಗಳ ನಿರ್ವಹಣೆಗೆ ಅನುದಾನ ಹಾಗೂ ಶಿಕ್ಷಕರನ್ನು ನೀಡುತ್ತಿತ್ತು. ಈಗ ಸರಕಾರದ ಅನುದಾನವೂ ಇಲ್ಲ. ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಶಿಕ್ಷಕರನ್ನೂ ಕೊಡುತ್ತಿಲ್ಲ. ನಾವು ಅನುದಾನವನ್ನು ಕೇಳುತ್ತಿಲ್ಲ. ಕನಿಷ್ಠ ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಕನಿಷ್ಠ ಗೌರವ ಶಿಕ್ಷಕರನ್ನೂದರೂ ಕೊಟ್ಟು ಕನ್ನಡ ಶಾಲೆಗಳನ್ನು ಸರಕಾರ ಉಳಿಸಬೇಕು ಎಂದು ಕಟಪಾಡಿ ಎಸ್.ವಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ ಹೇಳಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಕಟಪಾಡಿ ಎಸ್ವಿಎಸ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀಮತಿ ರತ್ನಾವತಿ ದತ್ತಿ ಉಪನ್ಯಾಸ-ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅವಿಭಜಿತ ದ.ಕ. ಜಿಲ್ಲೆ ಶೈಕ್ಷಣಿಕ ಮಟ್ಟದಲ್ಲಿ ದೇಶಕ್ಕೇ ಮಾದರಿಯಾಗಿದೆ. ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿ ಗುರುತಿಸು ವಂತಾಗುವಲ್ಲಿ ಶತಮಾನೋತ್ತರ ಇತಿಹಾಸ ಇರುವ ಅನುದಾನಿತ ಕನ್ನಡ ಶಾಲೆಗಳ ಕೊಡುಗೆ ಅನನ್ಯ ಎಂದು ಅವರು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮತ್ತು ಉಡುಪಿ ಜಿಲ್ಲಾ ಉಪನಿರ್ದೇಶಕ (ಅಭಿವೃದ್ಧಿ) ಡಾ.ಅಶೋಕ ಕಾಮತ್ ಮಾತನಾಡಿ, ಪರೀಕ್ಷೆಗಳ ಸಿದ್ದತೆ, ಏಕಾಗ್ರತೆಯ ಗುಟ್ಟು, ಸಮಯಪ್ರಜ್ಞೆ, ಖುಷಿಖಷಿಯಾಗಿ ಪರೀಕ್ಷೆಯನ್ನು ಬರೆಯುವುದು, ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ಟಿಪ್ಸ್ಗಳ ಮನವರಿಕೆ ಮಾಡಿ, ಸಂಭ್ರಮದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕ ದಂಪತಿಗಳಾದ ಅಲೆವೂರು ಸುಬೋಧಿನಿ ಶಾಲೆಯ ಕೆ.ಸುಬ್ರಾಯ ಹೆಬ್ಬಾರ್ ಹಾಗೂ ರತಿ ಎಸ್.ಹೆಬ್ಬಾರ್, ಬೈಲೂರು ಬಿ.ಎಂ. ಶಾಲೆಯ ವೆರೋನಿಕಾ ಎಂ. ಅಂಚನ್, ಕಟಪಾಡಿ ಎಸ್.ವಿ.ಎಸ್.ನ ಭಾಸ್ಕರ ಕಾಮತ್ ಅವರನ್ನು ಸನ್ಮಾನಿಸ ಲಾಯಿತು. ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಎಸ್ವಿಎಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಪೈ, ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಶುಭ ಹಾರೈಸಿದರು. ಶಂಕರ ಶ್ರೀಯಾನ್, ಗಣೇಶ್ ಕಿಣಿ ಕಟಪಾಡಿ ಉಪಸ್ಥಿತ ರಿದ್ದರು. ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಸಹಸಂಯೋಜಕ ಡೋಮಿಯನ್ ಆರ್. ನೋರೋನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಮಿತಿಯ ಸದಸ್ಯ ಮಧುಕರ್ ಎಸ್.ಕಲ್ಯಾ ವಂದಿಸಿದರು. ಸಮಿತಿ ಸದಸ್ಯ ಹಾಗೂ ಸಂಯೋಜಕ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಚಾಲನೆ
ವಾಮಂಜೂರು: 14ನೇ ವರ್ಷದ ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ದೊರೆಯಿತು. ಕಂಬಳ ಕರೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತಾಡಿದ ಜಿ.ಆರ್. ಎಜುಕೇಷನ್ ಟ್ರಸ್ಟ್ ಸ್ಥಾಪಕ ಗಣೇಶ್ ರಾವ್ ಅವರು, ದೇವರು ನೀಡಿದ ಪ್ರಕೃತಿಯನ್ನು ದಿಕ್ಕರಿಸುತ್ತಿದ್ದೇವೆ. ದೇವರು ಸೃಷ್ಠಿಸಿರುವ ಎಲ್ಲವೂ ಶ್ರೇಷ್ಠ. ಹಾಗಾಗಿ ಎಲ್ಲವನ್ನೂ ಗೌರವಿಸುವ ಮನೋಭಾವ ನಮ್ಮಲ್ಲಿರಬೇಕು. ಜೊತೆಗೆ ಎಲ್ಲಾ ಜಾತಿ ಧರ್ಮ ಪಕ್ಷ ಗಳನ್ನು ಸಮಾನವಾಗಿ ಪ್ರೀತಿಸಿ ಸಾಯುವ ವರೆಗೆ ಎಲ್ಲರೊಂದಿಗೆ ನಗುಮುಖದೊಂದಿಗೆ ಇರಬೇಕು ಎಂದರು. ನಮ್ಮ ಹೆಮ್ಮೆಯ ತುಳುನಾಡಿದ ಕ್ರೀಡೆ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳಸಲು ಸರಕಾರ ನೀಡುತ್ತಿರುವ ಸಹಾಯಧನ ಕನಿಷ್ಠ 25ಲಕ್ಷವಾದರೂ ನೀಡಬೇಕು ಎಂದು ಸರಕಾರವನ್ನು ಮನವಿ ಮಾಡಿದರು. ಕಂಬಳ ಸಮಿತಿಯ ಗೌರವಾಧ್ಯಕ್ಷ ಮಿಥುನ್ ರೈ ಅವರು ಮಾತನಾಡಿ, ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಂಬಳ ನಡೆಯುವುದರಿಂದ ಇದನ್ನು ದೇವರ ಕಂಬಳವೆಂದೇ ಕರೆಯುತ್ತಾರೆ. ಕಂಬಳದಿಂದ ಜನರ ನಡುವಿನ ಬೇಧ ದೂರವಾಗಿ ಸಾಮರಸ್ಯ ನೆಲೆಯಾಗಬೇಕು. ತುಳುನಾಡಿನ ಕಂಬಳಕ್ಕೆ ಎಲ್ಲೆಡೆ ಮಾನ್ಯತೆ ಸಿಗ ಬೇಕು. ಎರಡು ದಿನಗಳ ಕಾಲ ನಡೆಯುವ ವಾಮಂಜೂರು ಕಂಬಳದಲ್ಲಿ ಸುತ್ತಮುತ್ತಲಿನ ಊರುಗಳ ಕಂಬಳ ಪ್ರೇಮಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಕಂಬಳ ಸಮಿತಿಯ ಸ್ಥಾಪಕಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಕಂಬಳ ಅಸೋಶಿಯೇಶನ್ ಉಪಾಧ್ಯಕ್ಷ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ, ಪ್ರವೀಣ್ ಆಳ್ವ, ಕರ್ನಾಟಕ ರಾಜ್ಯ ಕಂಬಳ ಅಸೋಶಿಯೇಶನ್ ಕೋಶಾಧಿ ಕಾರಿ ಲೊಕೇಶ್ ಶೆಟ್ಟಿ ಮುಚೂರು ಕಲ್ಕುಡೆ, ಗಿರೀಶ್ ಆಳ್ವ, ಸೀತಾರಾಮ್ ಜಾನು ಶೆಟ್ಟಿ, ಶಶಿಧರ್ ಶೆಟ್ಟಿ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಷೇಕ್ ಕೆ.ವಿ., ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ ಮಂಜಯ್ಯ ಶೆಟ್ಟಿ, ಕದ್ರಿ ಮಂಜುಮಾಥ ದೇವಸ್ಥಾನದ ಆಡಳಿಯ ಸಮಿತಿ ಸದಸ್ಯ ದಿಲ್ ರಾಜ್ ಆಳ್ವ, ನಿತಿನ್ ಶೆಟ್ಟಿ, ಉಮೇಶ್ ಶೆಟ್ಟಿ ಪದವು ಮೇಗಿನ ಮನೆ, ಓಂಪ್ರಕಾಶ್ ಶೆಟ್ಟಿ, ಅನಿಲ್ ಪೂಜಾರಿ, ಗೋಪಾಲಕೃಷ್ಣ ಭಂಡಾರಿ, ಪುಷ್ಪ ರಾಜ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್, ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯವು ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬ : ಸಾಹಿತಿ ಹಮೀದ್ ಪಕ್ಕಲಡ್ಕ
ಪಾಲಡ್ಕದಲ್ಲಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಶಿರ್ವ| ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ: ಮೂರೇ ಗಂಟೆಯಲ್ಲಿ ಮೂವರು ಆರೋಪಿಗಳ ಬಂಧನ
ಶಿರ್ವ, ಫೆ.21: ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ಫೆ.21ರಂದು ಬೆಳಗ್ಗೆ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಮೂರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುರ್ಕಾಲು ಗ್ರಾಮದ ಶಂಕರಪುರದ ಹೆಲೆನ್ ಡಿಸೋಜ(69) ಎಂಬವರು ತನ್ನ ಮನೆಯ ಹಿಂಬದಿಯಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಬಾಡಿಗೆ ರೂಮ್ ಇಲ್ಲದಕ್ಕೆ ಇವರು ಅಲ್ಲೇ ಸಮೀಪದ ಬೇರೆ ಮನೆ ಕಡೆಗೆ ಹೋದರು. ನಂತರ ಅವರಲ್ಲಿ ಒಬ್ಬ ವಾಪಾಸ್ಸು ಹೆಲೆನ್ ಡಿಸೋಜ ಅವರ ಬಳಿಗೆ ಬಂದು, ಮೊಬೈಲ್ ನಂಬರ್ ಕೇಳಿದನು. ಹೆಲೆನ್ ಡಿಸೋಜ ಮೊಬೈಲ್ ನಂಬರ್ ಹೇಳುತ್ತಿರುವಾಗ ಆತ ಹೆಲೆನ್ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 3,50,000ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋದನು. ಆಗ ಆತನನ್ನು ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಎಂಬವರನ್ನು ದೂಡಿ ಹಾಕಿ ಮೂವರು ಬೈಕ್ನಲ್ಲಿ ಪರಾರಿಯಾದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಕಾರ್ಯಪ್ರವರ್ತರಾದ ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿ, ಘಟನಾ ಸ್ಥಳಕ್ಕೆ ತೆರಳಿ ಎಲ್ಲಾ ಆಯಾಮ ಗಳಲ್ಲಿ ಪರಿಶೀಲಿಸಿ, ಕೂಡಲೇ ಅಲ್ಲಿಯ ಸಮೀಪದಲ್ಲಿ ಲಭ್ಯವಿರುವ ಸಿಸಿಟಿವಿಗಳನ್ನು ಪರಿಶೀಲಿಸಿದರು. ಅದರಲ್ಲಿ ಪಲ್ಸರ್ ಬೈಕ್ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ಕಂಡುಬಂತು. ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಿಗೆ ಮಾಹಿತಿ ನೀಡಿ, ಸಿಸಿಟಿವಿ ಫೂಟೇಜ್ಗಳನ್ನು ಕಳುಹಿಸಲಾಯಿತು. ಅದರಂತೆ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆಯ ಒಳಗಾಗಿ ಶಿರೂರ ಚೆಕ್ ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದರು. ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ವೃತ್ತ ನಿರೀಕ್ಷಿಕ ಕಾಪು ಅಜ್ಮತ್ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಎಸ್ಸೈ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ ಅಲಿ, ಹರೀಶ, ಯಲಾಲ್ಲಿಂಗ ಸುರೇಶ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ನಡೆಸಿದ್ದಾರೆ.
ಜೈಲಿಗೆ ಹೋಗುವ ಆಸೆ: ಡಿಸಿ ಕಚೇರಿಗೆ ‘ನಕಲಿ ಬಾಂಬ್’ ಬೆದರಿಕೆ ಹಾಕಿದ ವ್ಯಕ್ತಿ ಬಂಧನ
ಕೆಲವರಿಗೆ ವಿಚಿತ್ರವಾದ ಆಸೆ. ಇಲ್ಲೊಬ್ಬ ಮನುಷ್ಯನಿಗೆ ಜೈಲಿನಲ್ಲಿ ಇರಬೇಕೆಂಬ ಆಸೆಯಿಂದ ಕೊಲ್ಲಂ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದಾನೆ. ಕರೆ ಮಾಡಿದ ಕೊಲ್ಲಂನ ವಯ್ಯನಾಡ್ನಲ್ಲಿರುವ ಮುಕ್ಕಂ ನಿವಾಸಿ ಪ್ರಮೋದ್ (44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಈತ ಎಡವಟ್ಟು ಮಾಡಿದ್ದಾನೆ ಎಂದು ಜಾಮೀನು ನೀಡಿ ಕಳುಹಿಸಿದ್ದಾರೆ.
ಕಾಂಗ್ರೆಸ್ ಸರಕಾರ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಸಂವಿಧಾನದ ಅಡಿಯಲ್ಲಿ ಮಾಧ್ಯಮದವರ ಅಭಿಪ್ರಾಯವನ್ನು ವ್ಯಕ್ತಿಪಡಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಭದ್ರತೆ ಮತ್ತು ತಾಂತ್ರಿಕ ಕಾರಣದಿಂದ ವಿಧಾನಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿರುವುದು ಕಾಂಗ್ರೆಸ್ ಸರಕಾರದ ಹೇಡಿತನಕ್ಕೆ ನಿದರ್ಶನ. ಇದು ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳು ನಡೆಸುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಮುಚ್ಚು ಹಾಕಲು ಮಾಧ್ಯಮಗಳನ್ನು ನಿರ್ಬಂಧಿಸಿದ್ದಾರೆ ಎಂದು ದೂರಿದರು. ಕಾಂಗ್ರೆಸ್ಸಿಗರ ರಕ್ತದಲ್ಲೆ ಸರ್ವಾಧಿಕಾರ ಇದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ತುಂಬಿದೆ. ಆ ಕರಾಳ ದಿನವನ್ನು ಕರ್ನಾಟಕದಲ್ಲಿ ಸುವರ್ಣ ಮಹೋತ್ಸವವಾಗಿ ಕಾಂಗ್ರೆಸ್ ಆಚರಿಸುತ್ತಿದೆ. ವಿಧಾನಸೌಧ ನಮ್ಮ ರಾಜ್ಯದ ಶಕ್ತಿ ಸೌಧ, ಇಂಥ ಶಕ್ತಿ ಸೌಧದಲ್ಲಿ ತುರ್ತುಪರಿಸ್ಥಿತಿ 2.0 ತಂದಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪತ್ರಕರ್ತರು ನಡೆಸಿದ ಪ್ರತಿಭಟನೆ ಕುರಿತು ಉಲ್ಲೇಖಿಸಿದ ಅವರು, ನಿಮ್ಮ ಹೋರಾಟಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ. ಇದು ಮಾಧ್ಯಮಗಳ ಹೋರಾಟವಲ್ಲ, ಏಳುಕೋಟಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದರು. ಕೋಲಾರದ ವೇಮಗಲ್ನಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆಗೆ ಶಾಸಕ ಕೊತ್ತೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ಕರ್ನಾಟಕಕ್ಕೆ ಬರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕು. ಪ್ರಚೋದನೆ ಹೇಳಿಕೆ ನೀಡುತ್ತಿರುವುದು ಒಬ್ಬ ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅಭಿವೃದ್ಧಿಗೆ ಸಹಕರಿಸಿ ಎಂದು ಕಿಡಿಕಾರಿದರು. ಕರ್ನಾಟಕ ರಾಜ್ಯದಲ್ಲಿ ಒಂದು ಕೈಗಾರಿಕೆ ಸ್ಥಾಪನೆ ಆಗುತ್ತೆ ಎಂದರೆ, ಒಬ್ಬ ಶಾಸಕ ಅದಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ಕೊಡಬೇಕು. ಇಲ್ಲಿ ಯಾರನ್ನು ಯಾರು ಬೊಟ್ಟು ಮಾಡುವ ಪ್ರಶ್ನೆಯಿಲ್ಲ. ಮೊದಲು ಇಂಥ ಸಂಸ್ಕೃ ತಿಯನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರಕಾರಕ್ಕೆ ಬೆಂಬಲ ಕೊಡಬೇಕು ಎಂದು ಅವರು ಹೇಳಿದರು. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಬಿಜೆಪಿ ಒಗ್ಗಟ್ಟಿನಿಂದ ಹೋಗುತ್ತೇವೆ. ರಾಜ್ಯದಲ್ಲಿ ಎನ್ಡಿಎ 140 ರಿಂದ 150 ಸ್ಥಾನವನ್ನು ಗೆಲ್ಲುತ್ತೆವೆ. ಮುಖ್ಯಮಂತ್ರಿ ಯಾವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಕುರ್ಚಿ ಕದನದ ಬಿಟ್ಟು ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
Lokayukta Raid: 11 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ
ಗದಗ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 11 ಲಕ್ಷ ಲಂಚದ ಹಣ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಶಾಸಕ ಹಾಗೂ ಅವರೊಂದಿಗೆ ಇಬ್ಬರು ವೈಯಕ್ತಿಕ ಸಹಾಯಕರನ್ನೂ ವಶಕ್ಕೆ ಪಡೆದಿದ್ದಾರೆ. ಚಿಂಚಿಲಿ ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ ಪುಜಾರ್ ನೀಡಿದ ದೂರಿನ ಮೇರೆಗೆ ಈ
ಚಾಮರಾಜನಗರ | ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ
ಚಾಮರಾಜನಗರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 3 ವರ್ಷದ ಹೆಣ್ಣು ಚಿರತೆಯೊಂದು ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಮಣಗಳ್ಳಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಬಂಡೀಪುರ ರಸ್ತೆಯಲ್ಲಿರುವ ಮಣಗಳ್ಳಿಯ ರೈತ ನಾಗರಾಜು ಎಂಬುವವರ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಗುರುವಾರ ರಾತ್ರಿ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ನಂತರ ರೈತರ ಒತ್ತಾಯದ ಮೇರೆಗೆ ಬಫರ್ ವಲಯದ ಅರಣ್ಯ ಸಿಬ್ಬಂದಿ ನಾಗರಾಜು ಎಂಬವರ ಜಮೀನಿನಲ್ಲಿ ಬೋನು ಇರಿಸಿದ್ದರು. ಬೇಟೆಯಾಸೆಗೆ ಬ೦ದ ಸುಮಾರು 3 ವರ್ಷದ ಹೆಣ್ಣು ಚಿರತೆ ಶನಿವಾರ ಬೆಳಗ್ಗೆ ಬೋನಿಗೆ ಬಿದ್ದಿದೆ. ಇದನ್ನು ಸ್ಥಳೀಯ ರೈತರು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಫರ್ ವಲಯದ ಆರ್ಎಫ್ಒ ಶಿವಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಚಿರತೆಯನ್ನು ಮೂಲೆಹೊಳೆ ದಟ್ಟಾರಣ್ಯದ ಮಧ್ಯ ಭಾಗದಲ್ಲಿ ಬಿಟ್ಟು ಬಂದಿದ್ದಾರೆ.
ಮಲ್ಪೆ| ಮೀನು ವ್ಯಾಪಾರಿಯ ಸುಲಿಗೆ ಪ್ರಕರಣ: ಓರ್ವ ಆರೋಪಿ ಸೆರೆ
ಮಲ್ಪೆ, ಫೆ.21: ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಮುಖಕ್ಕೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಚಿನ್ನದ ಸರ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮೂಲದ ಪ್ರಸ್ತುತ ಮಲ್ಪೆ ಕೊಳ ಬಾಡಿಗೆಮನೆ ನಿವಾಸಿ ಮುತ್ತಣ್ಣ(20) ಬಂಧಿತ ಆರೋಪಿ. ಈತನಿಂದ ಸುಲಿಗೆ ಮಾಡಿದ 37.570 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಫೆ.20ರಂದು ಬೆಳಗಿನ ಜಾವ ಮಲ್ಪೆ ಬಂದರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೀನು ವ್ಯಾಪಾರಿ ದಯಾನಂದ ಕುಂದರ್ ಅವರಲ್ಲಿ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಹತ್ತಿರ ಬಂದು, ಮುಖಕ್ಕೆ ಖಾರದ ಪುಡಿಯಲ್ಲಿ ಎರಚಿದನು. ನಂತರ ಅಲ್ಲಿದ್ದ ಇಬ್ಬರು ಅಪರಿಚಿತರು ಒಟ್ಟು ಸೇರಿ ದಯಾನಂದ ಕುಂದರ್ ಅವರಿಗೆ ಚಾಕು ತೋರಿಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಕೇಳಿದರು. ಸರ ಕೊಡಲು ನಿರಾಕರಿಸಿದಕ್ಕೆ ಆರೋಪಿ ಮುತ್ತಣ್ಣ ಮತ್ತು ಇಬ್ಬರು ಅಪರಿಚಿತರು ಸೇರಿ ದಯಾನಂದ ಕುಂದರ್ ಅವರ ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ 6 ಲಕ್ಷ ರೂ. ಮೌಲ್ಯದ ಸುಮಾರು 6 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಮತ್ತು ಮಲ್ಪೆ ವೃತ್ತ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ನಡೆಸಿದ್ದು, ಮಲ್ಪೆ ಎಸ್ಸೈ ಹುಸೇನ್ ಸಾಬ್ ಚಪ್ಪರಕರ್, ಸಿಬ್ಬಂದಿ ಆದರ್ಶ, ಬಸವರಾಜ ಹೈದ್ರಿ ಆರೋಪಿಯನ್ನು ಫೆ.20ರಂದು ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಾಮರಾಜನಗರ | ರೈಲಿಗೆ ಸಿಲುಕಿ ಯುವಕ ಮೃತ್ಯು
ಚಾಮರಾಜನಗರ: ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಪಣ್ಯದಹುಂಡಿ ಬಳಿ ನಡೆದಿದೆ. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ನಿವಾಸಿ ನಾಗೇಂದ್ರ(30) ಮೃತಪಟ್ಟವರು. ನಾಗೇಂದ್ರ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ರೈಲ್ವೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸಿಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಸಾವಿಗೆನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಸೇಡಂ | ಕಾರ್ಖಾನೆಗೆ ತೆರಳುವ ಲಾರಿಗಳ ಧೂಳಿನಿಂದ ಬೆಳೆ ಹಾನಿ; ಪರಿಹಾರಕ್ಕಾಗಿ ಆಗ್ರಹ
ಸೇಡಂ : ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆಗೆ ತೆರಳುವ ಲಾರಿಗಳ ಸಂಚಾರದಿಂದಾಗಿ ಧೂಳು ಹೆಚ್ಚಾಗಿ ಜಮೀನಿನ ಬೆಳೆ ಹಾನಿಗೀಡಾಗಿದ್ದು, ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿ, ರೈತರು ಹೂಡಾ (ಬಿ) ಭೀಮನಗರದ ಮುಖ್ಯರಸ್ತೆಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ತಾಲೂಕಿನ ಹೂಡಾ (ಬಿ) ಭೀಮನಗರದ ಮುಖ್ಯರಸ್ತೆಯ ಬದಿಯಲ್ಲಿರುವ ಜಮೀನುಗಳು ದಿನನಿತ್ಯದ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆ ತೆರಳುವ ಹಲವು ಲಾರಿ ಸಂಚಾರದಿಂದ ದಟ್ಟವಾದ ಧೂಳಿನಿಂದ ಸುತ್ತ ಮುತ್ತಲಿನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ, ಕೂಡಲೇ ಕಾರ್ಖಾನೆ ಆಡಳಿತ ಅಧಿಕಾರಿಗಳು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ನಡೆಸಿದ ಬಳಿಕ ಹಲವು ರೈತರು ಕೂಡಿಕೊಂಡು ಸೇಡಂ ಗ್ರೇಡ್ 2 ತಹಶೀಲ್ದಾರ್ ನಾಗನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕರಾದ ಭೀಮರಾವ್ ಮಾಲಿ ಪಾಟೀಲ್, ಅಶೋಕುಮಾರ ಶಿಲವಂತ, ರಾಘವೇಂದ್ರ ವಾಲಿಕರ್, ಶಾಂತಪ್ಪ ಮುಕರಂಬಿ, ಬಸವರಾಜ ಹಳಿಜೋಳ, ಹಸನಖಾನ ಮಳಖೇಡ, ಸುಬ್ಬಣ್ಣ ಜಮಾದರ, ಮುದ್ದಣ್ಣ ಜಮಾದರ್, ಶರಣಪ್ಪ ಪತ್ತಾರ, ಚಂದ್ರಶೇಖರ, ನಾಗಪ್ಪ ಜಮಾದ, ಭೀಮಾಶಂಕರ, ರಾಮಯ್ಯ, ಘಪುರ ಪಟೇಲ್ ಸೇರಿದಂತೆ ಹಲವರು ಇದ್ದರು.
ಖಮೇನಿ ವಿರುದ್ಧ ಅಮೆರಿಕ ದೊಡ್ಡ ಪ್ಲಾನ್, ಇರಾನ್ ನೆಲದಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ... Donald Trump
ಇರಾನ್ ಬಗ್ಗೆ ರೊಚ್ಚಿಗೆದ್ದು ಕೂತಿರುವ ಅಮೆರಿಕ ಅಧ್ಯಕ್ಷರು, ಕೂಡಲೇ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಿ ಅಂತಿದ್ದಾರೆ. ಆದರೆ ಇದಕ್ಕೆ ಇರಾನ್ ಸರ್ವಾಧಿಕಾರಿ ಖಮೇನಿ ಒಪ್ಪುತ್ತಿಲ್ಲ. ಈ ಹಿನ್ನೆಲೆ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧದ ಭೀತಿ ಹೆಚ್ಚಾಗುತ್ತಿದ್ದು, ಸೇನಾ ಕಾರ್ಯಾಚರಣೆಗೆ ಈಗಾಗಲೇ ತನ್ನ ಸೇನೆಯನ್ನ ಸಜ್ಜಾಗಿ ನಿಲ್ಲಿಸಿದೆ ಅಮೆರಿಕ. ಹೀಗಿದ್ದಾಗಲೇ ಖಮೇನಿ ವಿರುದ್ಧ ಅಮೆರಿಕ ದೊಡ್ಡ ಪ್ಲಾನ್ ಮಾಡಿರುವುದು ಪಕ್ಕಾ ಎನ್ನಲಾಗುತ್ತಿದ್ದು,
ದಿಲ್ಲಿಯಲ್ಲಿ ಲಷ್ಕರ್ ದಾಳಿ ಸಂಚು ಎಚ್ಚರಿಕೆ ಬೆನ್ನಲ್ಲೇ ಪಂಜಾಬ್, ಕಾಶ್ಮೀರಗಳಲ್ಲಿ 2 ಐಇಡಿ ಸ್ಫೋಟಕ ಪತ್ತೆ
IED Found In Punjab And Kashmir- ದಿಲ್ಲಿಯ ಕೆಂಪುಕೋಟೆ ಸೇರಿದಂತೆ ಕೆಲವೆಡೆ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಎ ತೈಬಾ ದಾಳಿಯ ಸಂಚು ರೂಪಿಸಿದೆ ಎಂದು ಶುಕ್ರವಾರ ಬೆಳಗ್ಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಇದೀಗ ಪಂಜಾಬ್ ಮತ್ತು ಕಾಶ್ಮೀರಗಳಲ್ಲಿ 2 ಐಇಡಿ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಎರಡೂ ಸ್ಫೋಟಕಗಳನ್ನೂ ಬಾಂಬ್ ನಿಷ್ಕ್ರಿಯ ದಳ ನಿಷ್ಟ್ರಿಯಗೊಳಿಸಲು ಸಫಲವಾಗಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಈ ಎರಡು ಘಟನೆಗಳಲ್ಲಿ ಯಾರ ಕೈವಾಡ ಇದೆ ಎಂಬ ಪೊಲೀಸರು ಈವರೆಗೂ ಮಾಹಿತಿ ನೀಡಿಲ್ಲ.
ಹನೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ವಿಶೇಷವಾಗಿ ಕಾಳಜಿ ವಹಿಸಿದ್ದೇನೆ: ಶಾಸಕ ಎಂ. ಆರ್. ಮಂಜುನಾಥ್
ಹನೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ವಿಶೇಷವಾಗಿ ಕಾಳಜಿ ವಹಿಸಿದ್ದೇನೆ: ಶಾಸಕ ಎಂ. ಆರ್. ಮಂಜುನಾಥ್ ಹನೂರು: ಹನೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ವಿಶೇಷವಾಗಿ ಕಾಳಜಿ ವಹಿಸಿದ್ದೇನೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು. ಹನೂರು ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಾರದೆ ಇರುವುದರಿಂದ ಪಟ್ಟಣದ 13 ವಾರ್ಡ್ ಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದೆ ಜನರು ಪರಿತಪಿಸುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ 7ನೇ ವಾರ್ಡಿನಲ್ಲಿ ಕನಿಷ್ಠ ಮೂಲಭೂತ ಸೌಲಭ್ಯವು ಇಲ್ಲದೆ ಇರುವುದರಿಂದ 50 ಲಕ್ಷ ವಿಶೇಷ ಅನುದಾನದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಯೋಜನೆ ನಿರ್ಮಾಣ ಮಾಡಲು 81 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಮಾಡಲಾಗಿದೆ ಪಟ್ಟಣದ ಹದಿಮೂರು ವಾರ್ಡ್ ಗಳಿಗೂ ಸಮಗ್ರ ಕುಡಿಯುವ ನೀರು ಪೂರೈಕೆ ಮಾಡಲು 30 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ಮಾಡಲಾಗಿದೆ. ಈ ಸಾಲಿನ ಬಜೆಟ್ ನಲ್ಲಿ ಅನುದಾನ ನೀಡಿದರೆ ಪಟ್ಟಣವನ್ನು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುವುದು ಎಂದರು. ಇನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸ್ವತ್ತು ಸಮಸ್ಯೆ ಇರುವುದರಿಂದ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಡ್ರೋನ್ ಸರ್ವೆ ನಡೆಸಲಾಗುತ್ತದೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಗೂ ಈ ಸ್ವತ್ತು ವಿತರಣೆ ಮಾಡಲಾಗುವುದು ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಅಮೃತ ಯೋಜನೆ ಅಡಿ ಮನೆಮನೆಗೂ ಕುಡಿಯುವ ನೀರಿನ ಸಂಪರ್ಕ ನೀಡಲು ರಸ್ತೆ ಹರಿಯುತ್ತಿರುವುದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ ಸಂಪೂರ್ಣ ಕಾಮಗಾರಿ ಮುಗಿದ ನಂತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳಿಂದ ಸಮರ್ಪಕವಾಗಿ ಬಾಡಿಗೆ ವಸೂಲಾತಿ ಮಾಡದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ, ಮುಂದಿನ ದಿನಗಳಲ್ಲಿ ವಾಣಿಜ್ಯ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಿ ವಸೂಲಾತಿ ಮಾಡಬೇಕು, ಏಕಾಏಕಿ ಬಾಗಿಲು ಮುಚ್ಚುವುದು ಬೇಡ ಅವರು ಸಹ ಬಾಡಿಗೆ ಕಟ್ಟಲು ಬದ್ಧರಾಗಿದ್ದಾರೆ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು. ಪಟ್ಟಣದ ದಲಿತ ಮುಖಂಡ ಕಿರಣ್ ಮಾತನಾಡಿ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸ್ವಚ್ಛತೆ ಸಮರ್ಪಕವಾಗಿ ಆಗದೆ ಇರುವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಗ್ರಾಮ ಠಾಣ ವ್ಯಾಪ್ತಿಯಲ್ಲಿರುವ ನಿವೇಶನಗಳಿಗೆ ಈ ಸ್ವತ್ತು ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ ಹನೂರು ಪಟ್ಟಣದ 1,2,4 ವಾರ್ಡ್ ಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಪೈಕಿ ಕೆಲವರಿಗೆ ಸರ್ಕಾರದಿಂದಲೇ ನಿವೇಶನ ನೀಡಲಾಗಿದೆ ಹಾಗಿದ್ದರೂ ಪಟ್ಟಣ ಪಂಚಾಯಿತಿಯವರು ಈ ಸ್ವತ್ತು ಮಾಡಿಕೊಡದೆ ಕಚೇರಿಗೆ ಅಲೆದಾಟ ಮಾಡಿಸುತ್ತಿದ್ದಾರೆ. ನಿಮ್ಮ ಬಳಿಯೇ ದಾಖಲೆ ಇಲ್ಲದಿದ್ದ ಮೇಲೆ ಇನ್ನು ಸಾರ್ವಜನಿಕರ ಬಳಿ ಎಲ್ಲಿ ದಾಖಲಾತಿ ಸಿಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಪಟ್ಟಣ ಪಂಚಾಯಿತಿ ವತಿಯಿಂದ ಮಾಡಿರುವ ಕಾಮಗಾರಿಗಳೆಲ್ಲ ಕಳಪೆ ಕಾಮಗಾರಿಯಾಗಿರುವುದರಿಂದ ಚರಂಡಿ ರಸ್ತೆ ಆರು ತಿಂಗಳಿಗೆ ಕುಸಿಯುತ್ತಿದೆ. ಕೆಲವು ಅಧಿಕಾರಿಗಳು ಆಸ್ತಿಯ ಮಾಲೀಕರು ಹೆಸರನ್ನೇ ತಿದ್ದುಪಡಿ ಮಾಡಿದ್ದಾರೆ ಇದರಿಂದ ಬಡವರು ಕೋರ್ಟ್ ಸುತ್ತುತ್ತಿದ್ದಾರೆ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು, ಕಳೆದ 35 ವರ್ಷಗಳಿಂದ ಬಡವರಿಗೆ ಯಾವುದೇ ನಿವೇಶನ ಹಂಚಿಕೆ ಮಾಡಿಲ್ಲ ಈ ಕೂಡಲೇ ಅಧಿಕಾರಿಗಳು ಸರ್ಕಾರಿ ನಿವೇಶನವನ್ನು ಗುರುತಿಸಿ ಪೌರಕಾರ್ಮಿಕರು ಹಾಗೂ ಬಡವರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು. ನಾಮನಿರ್ದೇಶಿತ ಸದಸ್ಯ ಮಹಾದೇಶ್ ಮಾತನಾಡಿ ಹನೂರು ಪಟ್ಟಣದ ಪೆಟ್ರೋಲ್ ಬಂಕ್ ಸಮೀಪದ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡ ವೃತ ಎಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದೆ. ಆದರೆ ಅಧಿಕಾರಿಗಳು ದಾಖಲಾತಿಗಳನ್ನು ಇನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡದೆ ಇರುವುದರಿಂದ ವೃತ್ತ ನಾಮಕರಣ ಪ್ರಕ್ರಿಯೆ ವಿಳಂಬವಾಗಿದೆ ಈ ಕೂಡಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ , ಪುತ್ತಳಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಶಾಸಕ ಎಂಆರ್ ಮಂಜುನಾಥ್ ಪ್ರತಿಕ್ರಿಯಿಸಿ, ಈಗಾಗಲೇ ನಾಡಪ್ರಭು ಕೆಂಪೇಗೌಡ ವಿರುದ್ಧದ ಸಂಬಂಧ ಸಮುದಾಯದವರು ಹಲವಾರು ಬಾರಿ ಗಮನಕ್ಕೆ ತಂದಿದ್ದಾರೆ. ಈ ಕೂಡಲೇ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಕಳುಹಿಸಿ ಸರ್ಕಾರಕ್ಕೆ ವರದಿ ನೀಡಿ ನಾನು ಸಂಬಂಧಪಟ್ಟವರ ಜೊತೆ ಚರ್ಚಿಸಿ ವೃತ್ತ ನಾಮಕರಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಮಹಾದೇಶ್ ಮಾತನಾಡಿ, ಪ್ರತಿ ವರ್ಷ ಪಟ್ಟಣ ಪಂಚಾಯಿತಿ ಬಜೆಟ್ ನಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ 5 ಲಕ್ಷ ಮೀಸಲಿಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಕೇವಲ ಹತ್ತು ಸಾವಿರ ಮಾತ್ರ ಖರ್ಚಾಗಿದೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಪತ್ರಕರ್ತರಿಗೆ ಆ ಹಣದಲ್ಲಿ ಲ್ಯಾಪ್ಟಾಪ್ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರು ಮುಂದಿನ ದಿನಗಳಲ್ಲಿ ಲ್ಯಾಪ್ ಟಾಪ್ ನೀಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಯುವ ಮುಖಂಡ ಪ್ರಸನ್ನ ಮಾತನಾಡಿ ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಶವ ಸಾಗಿಸುವ ಯಂತ್ರ ಇಲ್ಲದೆ ತೊಂದರೆಯಾಗುತ್ತಿದೆ ಶಾಸಕರ ಅನುದಾನದಲ್ಲಿ ಸಹ ಸಾಗಿಸುವ ವಾಹನ ನೀಡಬೇಕು ಎಂದು ಮನವಿ ಮಾಡಿದರು. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಸಿಲ್ದಾರ್ ಚೈತ್ರ ಮುಖ್ಯಾಧಿಕಾರಿ ರೇಖಾ, ಸಮುದಾಯ ಸಂಘಟನಾಧಿಕಾರಿ ಚಂದ್ರಕುಮಾರ್, ಆರೋಗ್ಯ ನಿರೀಕ್ಷಕ ಪ್ರಕಾಶ್, ದ್ವಿತೀಯ ದರ್ಜೆ ಸಹಾಯಕರುಗಳಾದ ಮಾದೇಶ್, ಪ್ರತಾಪ್, ಮಾಜಿ ಅಧ್ಯಕ್ಷರಾದ ಮಮ್ತಾಜ್ ಬಾನು, ಬಾಲರಾಜ್ ನಾಯ್ಡು ಮಾಜಿ ಸದಸ್ಯೆ ಲತಾಮಣಿ ಮುಖಂಡರಾದ ಸಿದ್ದೇಗೌಡ, ವಿಜಯಕುಮಾರ್, ಗುರುಸ್ವಾಮಿ, ಮಹದೇವ ಸೇರಿದಂತೆ ಇನ್ನಿತರರು ಹಾಜರಿದ್ದರು.
ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಮಧು ಬಂಗಾರಪ್ಪ
ಮುಂಬರುವ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷಾ ಪ್ರಕ್ರಿಯೆ, ಭದ್ರತೆ ಮತ್ತು ವಿದ್ಯಾರ್ಥಿಗಳ ಆತಂಕ ದೂರ ಮಾಡುವ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಳ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಎಸ್ಪಿ ಅವರಿಗೆ ಪೂರ್ಣ ಜವಾಬ್ದಾರಿ
ಬಳ್ಳಾರಿ | ಸಂತೋಷ್ ಬಸವರಾಜ ಬೆಳಗೋಡು ನ್ಯಾಯಾಧೀಶರಾಗಿ ಆಯ್ಕೆ
ಬಳ್ಳಾರಿ / ಕಂಪ್ಲಿ : ಹೈಕೋರ್ಟ್ ನೇಮಕಾತಿ ಸಮಿತಿ ನಡೆಸಿದ ನ್ಯಾಯಾಧೀಶರ ಆಯ್ಕೆಯಲ್ಲಿ ಕಂಪ್ಲಿ ಸಮೀಪದ ಚಿಕ್ಕಜಂತಕಲ್ ಗ್ರಾಮದ ಸಂತೋಷ್ ಬಸವರಾಜ ಬೆಳಗೋಡು ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಸಣಾಪುರ ಗ್ರಾಮ ಹಾಗೂ ಕಂಪ್ಲಿ ಪಟ್ಟಣದಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಸಂತೋಷ್ ಅವರ ತಾಯಿ ಶಶಿಕಲಾ ಬಸವರಾಜ ಅವರು ಮೂಲತಃ ಸಣಾಪುರ ಗ್ರಾಮದವರಾಗಿದ್ದು, ಸಮೀಪದ ಚಿಕ್ಕಜಂತಕಲ್ ಗ್ರಾಮದ ಬಸವರಾಜ ಬೆಳಗೋಡು ಅವರಿಗೆ ವಿವಾಹವಾಗಿದ್ದಾರೆ. ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಕಡೆ ವಿಶೇಷ ಆಸಕ್ತಿ ಹೊಂದಿದ್ದ ಸಂತೋಷ್, ಗಂಗಾವತಿಯ ಲಿಟಲ್ ಹಾರ್ಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಡ್ಯ ಜಿಲ್ಲೆಯಲ್ಲಿ ಪ್ರೌಢಶಿಕ್ಷಣ, ಚಿಕ್ಕಬಳ್ಳಾಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬೆಂಗಳೂರುಯ ಪ್ರತಿಷ್ಠಿತ ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. 2023ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ನಲ್ಲಿ ನೋಂದಾಯಿಸಿಕೊಂಡು ಬೆಂಗಳೂರಿನ ನ್ಯಾಯಾಲಯಗಳಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದರು. 2025 ಫೆ.10ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಪ್ರಕಟಿಸಿದ ಅಧಿಸೂಚನೆಯಂತೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಜನವರಿಯಲ್ಲಿ ನಡೆದ ಸಂದರ್ಶನದಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಈ ಸಾಧನೆ ಕುಟುಂಬಸ್ಥರಲ್ಲಿ ಅಪಾರ ಸಂತಸ ಮೂಡಿಸಿದೆ. ಸಂತೋಷ್ ಅವರ ತಾಯಿ ತವರೂರಾದ ಸಣಾಪುರ ಹಾಗೂ ಕಂಪ್ಲಿ ಪಟ್ಟಣದಲ್ಲಿ ಆಜ್ಜಿ ಕನಕಗಿರಿ ಈರಮ್ಮ, ರೇಣುಕಗೌಡ, ದೊಡ್ಡಬಸವರಾಜ ಸೇರಿದಂತೆ ಕುಟುಂಬದವರು ಸಿಹಿ ಹಂಚಿ, ಸಂತೋಷ್ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ನಡೆಸಿದರು.
ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ತಡೆಯುವುದು ಸರ್ಕಾರದ ಆಶಯ : ಸಿದ್ದರಾಮಯ್ಯ
ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಸರ್ಕಾರದ ಆಶಯ. ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನೌಕರರು ಇದಕ್ಕೆ ಬಲಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು: ಫೆ. 24ರಂದು ನೀರು ಪೂರೈಕೆ ಇಲ್ಲ
ಮಂಗಳೂರು, ಫೆ.21: ತುಂಬೆ ಸ್ಥಾವರದಲ್ಲಿ ಮೆಸ್ಕಾಂನಿಂದ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣ ಫೆ. 24ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ಪೂರೈಕೆ ನಿಲುಗಡೆಯಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.
ಶೀಘ್ರದಲ್ಲೇ ಭಾರತ ಮೂರನೆಯ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ : ಪ್ರಹ್ಲಾದ್ ಜೋಶಿ
ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ
2022 ರಷ್ಯಾ ಆಕ್ರಮಣ ಬಳಿಕ ಉಕ್ರೇನ್ನಲ್ಲಿ ಏನಾಗಿದೆ ಎಂಬುದರ ಬಗ್ಗೆ ವಿಶ್ವಸಂಸ್ಥೆ ವರದಿ | Ukraine-Russia Conflict
ಜಗತ್ತಿನಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದ್ದು, ರಷ್ಯಾ &ಉಕ್ರೇನ್ ಯುದ್ಧವು ವಿನಾಶ ಸೃಷ್ಟಿ ಮಾಡುತ್ತಿದೆ. ನೋಡ ನೋಡುತ್ತಲೇ ಜಗತ್ತಿನ ಪ್ರತಿಯೊಂದು ದೇಶವೂ ಈ ಯುದ್ಧದ ಪರಿಣಾಮ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದು, ಜಾಗತಿಕ ಆರ್ಥಿಕತೆ ಕೂಡ ಈಗ ಸಮಸ್ಯೆ ಎದುರಿಸುತ್ತಾ ಇದೆ. ಮಧ್ಯಪ್ರಾಚ್ಯ ಭಾಗದಲ್ಲಿ ರಷ್ಯಾ &ಉಕ್ರೇನ್ ಯುದ್ಧದ ಕಾರಣಕ್ಕೆ ಹಲವು ಗಲಾಟೆಗಳು ಕೂಡ
T20 ವಿಶ್ವಕಪ್: ಒಂದೇ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡದಳು; ICC ವಿರುದ್ಧ ಟೀಕೆ
ಮುಂಬೈ: ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಗುಂಪುಗಳ ವಿಂಗಡನೆಯು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಲೀಗ್ ಹಂತದ ನಾಲ್ಕು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಸೂಪರ್-8ರ ಗ್ರೂಪ್-1ರಲ್ಲಿ ಸ್ಥಾನ ಪಡೆದಿವೆ. ಇತ್ತ, ಪ್ರತಿಯೊಂದು ಗುಂಪಿನ ದ್ವಿತೀಯ ಸ್ಥಾನ ಪಡೆದ ನ್ಯೂಝಿಲ್ಯಾಂಡ್, ಪಾಕಿಸ್ಥಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಗ್ರೂಪ್-2ರಲ್ಲಿ ವಿಂಗಡಿಸಲಾಗಿದೆ. ಈ ವಿನ್ಯಾಸಕ್ಕೆ ಕಾರಣವಾದುದು ಐಸಿಸಿ ಅನುಸರಿಸಿದ ‘ಪ್ರಿ-ಸೀಡಿಂಗ್’ ವಿಧಾನ. ಟೂರ್ನಿ ಆರಂಭಕ್ಕೂ ಮುನ್ನವೇ ಸೂಪರ್-8 ಹಂತದ ಗ್ರೂಪ್-1 ಮತ್ತು ಗ್ರೂಪ್-2ರಲ್ಲಿ ಯಾವ ತಂಡಗಳು ಇರಬೇಕೆಂಬುದನ್ನು ನಿಗದಿ ಮಾಡಲಾಗಿತ್ತು. ಲೀಗ್ ಹಂತದ ಫಲಿತಾಂಶಗಳು ಬಂದ ನಂತರವೂ ಅದರಲ್ಲಿ ಬದಲಾವಣೆ ಮಾಡಲಾಗಲಿಲ್ಲ. ಈ ಕ್ರಮಕ್ಕೆ ಕ್ರಿಕೆಟ್ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ. ಲೀಗ್ ಹಂತದಲ್ಲಿ ಅಜೇಯವಾಗಿ ಉತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳಲ್ಲಿ ಸೂಪರ್-8 ಸುತ್ತಿನ ಬಳಿಕ ಎರಡು ತಂಡಗಳು ಹೊರಬೀಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಆದರೆ ಲೀಗ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದ ತಂಡಗಳಲ್ಲಿ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುವ ಅವಕಾಶ ಪಡೆಯಲಿವೆ. ಇದರಿಂದ ಲೀಗ್ ಹಂತದ ಸಾಧನೆಗೆ ತಕ್ಕ ಮೌಲ್ಯ ಸಿಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಏನಿದು ಪ್ರಿ-ಸೀಡಿಂಗ್? ಪ್ರಿ-ಸೀಡಿಂಗ್ ಎಂದರೆ ಟೂರ್ನಿಯ ಮಧ್ಯಂತರ ಪ್ರದರ್ಶನವನ್ನು ಲೆಕ್ಕಿಸದೇ, ಮುಂಚಿತವಾಗಿ ತಂಡಗಳನ್ನು ನಿರ್ದಿಷ್ಟ ಗುಂಪುಗಳಲ್ಲಿ ವಿಂಗಡಿಸುವ ವಿಧಾನ. ಇದರಂತೆ, ಸೂಪರ್-8 ಹಂತದ ಎರಡು ಗುಂಪುಗಳ ರಚನೆಯನ್ನು ಟೂರ್ನಿಗೂ ಮುನ್ನವೇ ಐಸಿಸಿ ನಿಗದಿ ಮಾಡಿತ್ತು. ಆಸ್ಟ್ರೇಲಿಯಾ ಮುಂದುವರಿಯಲಿದೆ ಎಂಬ ಅಂದಾಜು ಇತ್ತಾದರೂ, ಅದು ಹೊರಬಿದ್ದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಝಿಂಬಾಬ್ವೆ ಪ್ರವೇಶಿಸಿದೆ.
ಹುಮನಾಬಾದ್ | ಅಕ್ರಮ ಮರಳು ಸಾಗಟದ ಟಿಪ್ಪರ್ಗಳನ್ನು ತಡೆದ ಶಾಸಕ ಸಿದ್ದು ಪಾಟೀಲ್
ಹುಮನಾಬಾದ್ : ಕಲಬುರಗಿ ಕಡೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನಗಳನ್ನು ವಳಖಿಂಡಿ ಗ್ರಾಮದ ಹತ್ತಿರ ತಡೆದು ಪರಿಶೀಲನೆ ನಡೆಸಿದ ಶಾಸಕ ಸಿದ್ದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿರುವ ಮಾಹಿತಿ ಪಡೆದ ಅವರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ವಾಹನಗಳಿಗೆ ಯಾವುದೇ ಮಾನ್ಯ ದಾಖಲೆಗಳು ಇರಲಿಲ್ಲ. ಅಲ್ಲದೆ ನಂಬರ್ ಪ್ಲೇಟ್ ಬದಲಾಯಿಸಿ ವಾಹನ ಚಲಾಯಿಸುತ್ತಿರುವುದು ಪತ್ತೆಯಾಯಿತು. ಚಾಲಕರ ಬಳಿ ಚಾಲನಾ ಪರವಾನಗಿ (ಲೈಸೆನ್ಸ್) ಸಹ ಇಲ್ಲದಿರುವುದು ಕಂಡು ಬಂದಿದ್ದು, ಇದರಿಂದಾಗಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ಶಾಸಕ ಸಿದ್ದು ಪಾಟೀಲ್, ಕ್ಷೇತ್ರದಲ್ಲಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು. “ಯಾವುದೇ ಪರವಾನಗಿ ಮತ್ತು ದಾಖಲೆಗಳಿಲ್ಲದೆ ಅತಿಭಾರದ ವಾಹನಗಳನ್ನು ಸಂಚರಿಸಲಾಗುತ್ತಿದೆ. ಅಪಘಾತ ಸಂಭವಿಸಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನಾಹುತವಾದರೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.
Glenn Maxwell: ಹೈದರಾಬಾದ್ ತಂಡ ಸೇರಿದ ಆರ್ಸಿಬಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್: ಎಷ್ಟು ಕೋಟಿಗೆ ಗೊತ್ತಾ?
Glenn Maxwell: ಕೆಲವೇ ದಿನಗಳಲ್ಲಿ ಐಪಿಎಲ್ 2026 ಆರಂಭವಾಗಲಿದೆ. ಈ ನಡುವೆಯ ಟೂರ್ನಿಯಿಂದ ಹೊರಗುಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಹೈದರಾಬಾದ್ ತಂಡವನ್ನು ಸೇರ್ಪಡೆ ಆಗಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್ನಲ್ಲಿ
Bidar |ಫೇ.22 ರಿಂದ 8 ದಿನ ಧಮ್ಮ ಪ್ರವಚನ ಕಾರ್ಯಕ್ರಮ : ರಾಜಪ್ಪ ಗುನಳ್ಳಿ
ಬೀದರ್ : ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ದಾರ್ಥ್ ಕಾಲೇಜು ಆವರಣದಲ್ಲಿ ಫೆ.22 ರಿಂದ ಮಾ.1ರ ವರೆಗೆ 8 ದಿನಗಳ ಕಾಲ ಧಮ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ. 22 ರಿಂದ ಪ್ರತಿ ದಿನ ಸಾಯಂಕಾಲ 6:30 ರಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಗೌತಮ ಬುದ್ಧರ ಶಾಂತಿ, ಸಮಾನತೆ, ನೈತಿಕತೆ ಹಾಗೂ ಕರುಣೆ ತತ್ವಗಳ ಕುರಿತು ಪ್ರವಚನಗಳು ನಡೆಯಲಿವೆ. ಇಂದಿನ ಸಮಾಜದಲ್ಲಿ ನೆಮ್ಮದಿಯ ಬದುಕಿಗೆ ಶೀಲ ಹಾಗೂ ಸನ್ನಡತೆಗಳ ಅಗತ್ಯತೆ ಮನಗಾಣಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಸ್ತುತ ಜಗತ್ತಿನಲ್ಲಿ ಮೂಢನಂಬಿಕೆ, ಹಿಂಸಾಚಾರ ಮತ್ತು ಕೋಮುವಾದಗಳಿಂದ ನಲುಗುತ್ತಿರುವ ಪರಿಸ್ಥಿತಿಯಲ್ಲಿ ಬುದ್ಧರ ಶಾಂತಿ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಉತ್ತಮ ಸಮಾಜ ನಿರ್ಮಾಣದ ಮೂಲಕ ಉತ್ತಮ ರಾಷ್ಟ್ರ ಕಟ್ಟಲು ಸಾಧ್ಯವೆಂದು ಅಂಬೇಡ್ಕರ್ ಹೇಳಿದ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಧಮ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯ ಭಂತೆ ಧಮ್ಮಾನಂದ್ ಮಹಾಥೇರೊ, ಭಂತೆ ವರಜ್ಯೋತಿ, ಭಂತೆ ಮನೋರಜ್ಜಿತ್, ಭಂತೆ ಭೋಧಿರತ್ನ, ಭಂತೆ ಜ್ಞಾನಸಾಗರ್ ಥೇರೊ, ಭಂತೆ ರೇವತ್ ಥೇರೊ ಹಾಗೂ ಭಂತೆ ಧರ್ಮಪಾಲ್ ಸೇರಿದಂತೆ ಅನೇಕ ಭಂತೆಜೀಯವರು ಧಮ್ಮ ಪ್ರವಚನ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಣದೂರ್ ನ ವೈಶಾಲಿನಗರದ ಭಂತೆ ಸಂಘರಖ್ಖಿತ್, ನಿವೃತ್ತ ಪ್ರಾಚಾರ್ಯ ಪ್ರೊ.ವಿಠಲದಾಸ್ ಪ್ಯಾಗೆ ಹಾಗೂ ಶಾಮಸುಂದರ್ ಖಾನಾಪುರೆ ಮಾತನಾಡಿದರು. ಖಜಾಂಚಿ ನರಸಪ್ಪ ಮೇಟಿ, ಬಾಬು ಆಣದೂರ್ ಹಾಗೂ ಜಗನ್ನಾಥ್ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
Bidar | ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ಶಿವಲೀಲಾ ನೇಮಕ
ಬೀದರ್ : ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಶಿವಲೀಲಾ ಪೂಜಾರಿ ಅವರನ್ನು ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಷ್ ಕೆನಡೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ರಾಜ್ಯ ಉಪಾಧ್ಯಕ್ಷ ಡಾ. ರವಿಸ್ವಾಮಿ ನಿರ್ಣ ಅವರ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದ್ದು, ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಶಿವಲೀಲಾ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ. ನಾಡು ನುಡಿ, ನೆಲ ಜಲಕ್ಕಾಗಿ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಾಡಲಾಗಿದೆ. ಅವರು ಸಂಘಟನೆಯ ಉದ್ದೇಶಗಳು ಜನರಿಗೆ ತಲುಪಿಸುವಲ್ಲಿ ಹಾಗೂ ಮಹಿಳಾ ವಿಭಾಗವನ್ನು ಬಲಪಡಿಸುವಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು : ಹಿರಿಯ ಪತ್ರಕರ್ತ, ಕಬಕ ನಿವಾಸಿ ಸುಂದರ ಕಬಕ (56 ) ಅವರು ಮಂಗಳೂರಿನಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಚೆನ್ನೈ, ಹೈದರಾಬಾದ್, ಬೆಂಗಳೂರು ಮಹಾನಗರಗಳಲ್ಲಿ ಅವರು ಹಲವು ಟಿವಿ ಚಾನೆಲ್ಗಳಲ್ಲಿ ಮುಖ್ಯ ಸಂಪಾದಕೀಯ ಹುದ್ದೆಗಳನ್ನು ನಿರ್ವಹಿಸಿದ್ದರು. ಅನಾರೋಗ್ಯ ಪೀಡಿತರಾಗಿದ್ದ ಅವರು ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
Bidar | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸಬೇಕು : ಅಫ್ರಾನಾಜ್
ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಸಮೀಕ್ಷೆ
ತುಂಗಾ ನದಿ ತೀರದಲ್ಲಿ ವಿದೇಶಿಗರ ಮೋಜು ಮಸ್ತಿ ಪಾರ್ಟಿ; ರೆಸಾರ್ಟ್ ಮಾಲಿಕನ ಮೇಲೆ ಕೇಸ್
ಹಂಪಿಯ ತುಂಗಾ ನದಿ ತೀರದಲ್ಲಿ ವಿದೇಶಿಗರ ಮೋಜು ಮಸ್ತಿ ಜೋರಾಗಿ ನಡೆಯುತ್ತದೆ. ಕೆಲ ದಿನಗಳ ಹಿಂದೆ ಪೂರ್ವಾನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡಿದ್ದರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ರೆಸಾರ್ಟ್ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Ballari | ಪ್ರೊ.ಬಿ.ಕೃಷ್ಣರವರು ಹೋರಾಟದ ಬೀಜ ಬಿತ್ತಿದ್ದಾರೆ : ಎಚ್.ಗುಂಡಪ್ಪ
ಬಳ್ಳಾರಿ / ಕಂಪ್ಲಿ : ಹಲವು ದಶಕಗಳ ಹಿಂದೆ ಪ್ರೊ.ಬಿ.ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ ಅಸಂಘಟಿತ ಹಾಗೂ ಶೋಷಿತ ದಲಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಹೋರಾಟದ ಬೀಜ ಬಿತ್ತಿದ್ದಾರೆ ಎಂದು ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಎಚ್.ಗುಂಡಪ್ಪ ಹೇಳಿದರು. ಪಟ್ಟಣದ ಅತಿಥಿ ಗೃಹದಲ್ಲಿ ನಡೆದ ಸಂಘಟನಾ ಸಭೆ ಹಾಗೂ ದೇವಲಾಪುರ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವು ಹೋರಾಟಗಳ ಮೂಲಕ ದಲಿತ ಸಮುದಾಯಗಳಲ್ಲಿ ಸ್ವಾಭಿಮಾನ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಲು ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು. ಸಂಘಟನೆಯ ಪದಾಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ತಾಲೂಕು ಸಂಘಟನಾ ಸಂಚಾಲಕ ಎಚ್.ಮರಿಯಪ್ಪ ಮಾತನಾಡಿ, ಸಂಘಟನೆಯ ಬೆಳವಣಿಗೆಯ ಹಾದಿ ವಿವರಿಸಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ಜನತೆಗೆ ತಲುಪಿಸುವಲ್ಲಿ ನೂತನ ಪದಾಧಿಕಾರಿಗಳು ಸಕ್ರಿಯರಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಹುಲುಗಪ್ಪ, ಲಕ್ಷ್ಮಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ವೇಳೆ ದೇವಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗ್ರಾಮ ಘಟಕದ ಸಂಚಾಲಕರಾಗಿ ಪರಶುರಾಮ, ಸಂಘಟನಾ ಸಂಚಾಲಕರಾಗಿ ಎಚ್.ತಿಪ್ಪೇಶ, ಶಿವರಾಜ, ಮಾರುತಿ, ಖಜಾಂಚಿಯಾಗಿ ಎಚ್.ಹನುಮಂತ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಾ, ಪರಶುರಾಮ, ಇಮಂತರಾಜ, ಹೆಚ್.ವಿನೋದ, ಅಶೋಕ, ಅಭಿಷೇಕ, ಯಲ್ಲಪ್ಪ, ದುರುಗೇಶ, ಉಮೇಶ, ಹಿರಿಯ ಸಲಹೆಗಾರರಾಗಿ ಎಚ್.ನಾಗರಾಜ, ವಿರೇಶ, ರವಿ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆಯೊಂದಿಗೆ ಗೌರವಿಸಿದರು.
ನೆಹರೂ-ಕಾಮರಾಜ್ ಮಾದರಿ: ರಾಹುಲ್ ಕೈಹಿಡಿಯುವರೇ ಸ್ಟಾಲಿನ್? ಮೈತ್ರಿಕೂಟದ ಹೊಸ ಲೆಕ್ಕಾಚಾರ
ಭಾರತೀಯ ರಾಜಕೀಯದ ಇತಿಹಾಸದಲ್ಲಿ ಜವಾಹರಲಾಲ್ ನೆಹರೂ ಮತ್ತು ಕೆ. ಕಾಮರಾಜ್ ಅವರ ಜೋಡಿ ಅತ್ಯಂತ ಯಶಸ್ವಿ ಎನ್ನಲಾಗಿತ್ತು. ನೆಹರೂ ದೇಶದ ಜನಪ್ರಿಯ ಮುಖವಾಗಿದ್ದರೆ, ಕಾಮರಾಜ್ ಅವರು ಪಕ್ಷವನ್ನು ಸಂಘಟಿಸುವ ಶಕ್ತಿಯಾಗಿದ್ದರು. ಇಂದು ರಾಷ್ಟ್ರ ರಾಜಕಾರಣದಲ್ಲಿ ಅಂತಹದ್ದೇ ಒಂದು ಕುತೂಹಲಕಾರಿ ಪ್ರಶ್ನೆ ಎದ್ದಿದೆ. ಕೇಂದ್ರದಲ್ಲಿ ಬಿಜೆಪಿಯನ್ನು ಎದುರಿಸಲು ರಚನೆಯಾಗಿರುವ 'ಇಂಡಿಯಾ' (I.N.D.I.A) ಮೈತ್ರಿಕೂಟದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Tumakuru | ದಲಿತ ದಂಪತಿಗೆ ದೇವಾಲಯ ಪ್ರವೇಶಕ್ಕೆ ತಡೆ; ವ್ಯಕ್ತಿಯ ಬಂಧನ
ಗದರಿಸಿ ದಂಪತಿಯನ್ನು ಹೊರಕಳಿಸುತ್ತಿರುವ ವಿಡಿಯೋ ವೈರಲ್
ಶಾಲೆಗಳಲ್ಲಿ ʼವಂದೇ ಮಾತರಂʼ: ಕೇಂದ್ರದ ನಿರ್ದೇಶನಕ್ಕೆ ನಾಗಾ ವಿದ್ಯಾರ್ಥಿ ಒಕ್ಕೂಟದ ವಿರೋಧ
ಕೊಹಿಮಾ: ಈಶಾನ್ಯ ಭಾರತದಲ್ಲಿ ಪ್ರಭಾವಿ ವಿದ್ಯಾರ್ಥಿ ಸಂಘಟನೆಯಾಗಿರುವ ನಾಗಾ ವಿದ್ಯಾರ್ಥಿಗಳ ಒಕ್ಕೂಟವು (ಎನ್ಎಸ್ಎಫ್),ಅಧಿಕೃತ ಕಾರ್ಯಕ್ರಮಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಗೀತೆಗೆ ಮೊದಲು ‘ವಂದೇ ಮಾತರಂ’ ಅನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ನಿರ್ದೇಶನವನ್ನು ಬಲವಾಗಿ ವಿರೋಧಿಸಿದೆ. ‘ಮುಖ್ಯವಾಗಿ ಶಾಲೆಗಳಿಗೂ ಅನ್ವಯಿಸುವ ಈ ನಿರ್ದೇಶನವು ನಾಗಾ ಜನರ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಾಸ್ತವಗಳನ್ನು ಪರಿಗಣಿಸದ ಹೇರಿಕೆಯಾಗಿದೆ. ವಿಧಿ 51ಎ(ಎ) ಸೇರಿದಂತೆ ಭಾರತೀಯ ಸಂವಿಧಾನಾತ್ಮಕ ಚೌಕಟ್ಟಿನ ಬಗ್ಗೆ ಎನ್ಎಸ್ಎಫ್ಗೆ ತಿಳಿದಿದ್ದರೂ ಯಾವುದೇ ಪ್ರಾಧಿಕಾರವು ನಮ್ಮ ವಿಶಿಷ್ಟ ಇತಿಹಾಸ ಮತ್ತು ಅನನ್ಯತೆಯನ್ನು ನಿರ್ಲಕ್ಷಿಸುವ ರೀತಿಯಲ್ಲಿ ನಾಗಾ ತಾಯ್ನಾಡಿನ ಮೇಲೆ ಸಾಂಸ್ಕೃತಿಕ ಅಥವಾ ಸೈದ್ಧಾಂತಿಕಕ ಅನುಸರಣೆಯನ್ನು ಒತ್ತಾಯದಿಂದ ಹೇರಲು ಸಾಧ್ಯವಿಲ್ಲ ಎಂದು ನಾವು ಸ್ಪಷ್ಟವಾಗಿ ಪ್ರತಿಪಾದಿಸುತ್ತೇವೆ’ ಎಂದು ಒಕ್ಕೂಟವು ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಶಾಲೆಗಳಲ್ಲಿ ದಿನದ ಕೆಲಸವು ವಂದೇ ಮಾತರಂನ ಸಾಮೂಹಿಕ ಗಾಯನದೊಂದಿಗೆ ಆರಂಭವಾಗಬಹುದು ಎಂಬ ಕೇಂದ್ರದ ನಿರ್ದಿಷ್ಟ ಸೂಚನೆ ಹಾಗೂ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಜನಪ್ರಿಯಗೊಳಿಸಲು ನಿರ್ದೇಶನಗಳು ಕಳವಳಕಾರಿಯಾಗಿವೆ ಎಂದು ಎನ್ಎಸ್ಎಫ್ ತಿಳಿಸಿದೆ. ಜನ ಗಣ ಮನಕ್ಕೆ ಮುನ್ನ ವಂದೇ ಮಾತರಂ ಹಾಡುವುದನ್ನು ಅಥವಾ ನುಡಿಸುವುದನ್ನು ಕಡ್ಡಾಯಗೊಳಿಸುವ ಯಾವುದೇ ಚಟುವಟಿಕೆಗಳು ನಾಗಾ ತಾಯ್ನಾಡಿನಾದ್ಯಂತ ಶಾಲೆಗಳಲ್ಲಿ ನಡೆಯಕೂಡದು ಎಂದು ಎನ್ಎಸ್ಎಫ್ ಎಚ್ಚರಿಕೆ ನೀಡಿದೆ.
ಪಟ್ಟಣಂತಿಟ್ಟ (ಕೇರಳ): ಕೆಲ ವರ್ಷಗಳ ಹಿಂದೆ ಸರಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ನಡೆದಿದ್ದ ಶಸ್ತ್ರಚಿಕಿತ್ಸೆಯ ಲೋಪ ಚುನಾವಣಾ ರಾಜ್ಯವಾದ ಕೇರಳದಲ್ಲಿ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಶನಿವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ. ಈ ಘಟನೆಯನ್ನು ಬಲವಾಗಿ ಖಂಡಿಸಿರುವ ಸಚಿವೆ ವೀಣಾ ಜಾರ್ಜ್, ರಾಜ್ಯದಲ್ಲಿ ಹಿಂಸಾಚಾರ ನಡೆಸಲು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ವೀಣಾ ಜಾರ್ಜ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹೀನ ತಂತ್ರಗಳನ್ನು ಅನುಸರಿಸುತ್ತಿದ್ದು, ತಿರುವನಂತಪುರಂನಲ್ಲಿರುವ ನನ್ನ ನಿವಾಸದ ಮೇಲೆ ನಡೆದಿರುವ ದಾಳಿ ಇದಕ್ಕೊಂದು ಉದಾಹರಣೆ ಎಂದು ಆರೋಪಿಸಿದ್ದಾರೆ. 2021ರಲ್ಲಿ ಆಲಪ್ಪುಝ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಕತ್ತರಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿವೃತ್ತ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬೆನ್ನಿಗೆ ಪ್ರತಿಭಟನೆ ನಡೆದಿದೆ. ಆಲಪ್ಪುಝ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ವಿಭಾಗದ ಮಾಜಿ ಮುಖ್ಯಸ್ಥೆಯಾದ ಡಾ. ಲಲಿತಾಂಬಿಕಾ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 2021ರಲ್ಲಿ ಪುನ್ನಪ್ರ ನಿವಾಸಿಯಾದ ಉಷಾ ಜೋಸೆಫ್ (51) ಎಂಬ ಮಹಿಳೆಗೆ ಅವರು ಗರ್ಭಾಶಯ ಗಡ್ಡೆಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ವೀಣಾ ಜಾರ್ಜ್ ನಿವಾಸದ ಬಳಿ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
Power Tariff: ಕರ್ನಾಟಕದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್? ಏಪ್ರಿಲ್ 1ರಿಂದ ಹೆಚ್ಚಳಕ್ಕೆ ಎಸ್ಕಾಂಗಳ ಪ್ರಸ್ತಾವನೆ
ಬೆಂಗಳೂರು: ರಾಜ್ಯ ಸರ್ಕಾರವು ನಿರಂತರವಾಗಿ ಜನರಿಗೆ ದರ ಏರಿಕೆ ಶಾಕ್ ಕೊಡುತ್ತಲೇ ಬಂದಿದೆ. ಇದೀಗ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆ ಜಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಾದ ಐದು ಎಸ್ಕಾಂಗಳು ಈ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ರಾಜ್ಯದ
ಆರೋಗ್ಯ ಇಲಾಖೆ: 1,000 ಮಂದಿಗೆ ನೇಮಕಾತಿ ಆದೇಶ ವಿತರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಅಭಯ ಹಸ್ತ' ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವೃಂದಗಳ ನೇಮಕಾತಿ ಆದೇಶಗಳನ್ನು ಸಿಎಂ ಸಿದ್ದರಾಮಯ್ಯ ವಿತರಿಸಿದರು. 1,000 ಮಂದಿ ನೇಮಕಾತಿ ಆದೇಶಗಳನ್ನು ಪಡೆದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯ ಎಂದು ಹೇಳಿದರು. ಇದು ಕೇವಲ
Kalaburagi | ಬ್ಯಾಂಕಿಂಗ್ ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಇಲ್ಲಿನ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ IQAC ಮುಂದಾಳತ್ವದಲ್ಲಿ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ “ಬ್ಯಾಂಕಿಂಗ್ ಪರೀಕ್ಷಾ ತಯಾರಿ ಮತ್ತು ವೃತ್ತಿ ಮಾರ್ಗದರ್ಶನ” ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ಶನಿವಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಬಿ.ಕೊಂಡಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಯೋಜಿತ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಗುರು ದೀಕ್ಷಾ ಅಕಾಡೆಮಿ, ಕಲಬುರಗಿಯ ತರಬೇತುದಾರರಾದ ರಾಜಶಂಕರ ಬಿ. ಕರಡಿ ಗುಡ್ಡಿ ಅವರು ಭಾಗವಹಿಸಿ IBPS, SBI ಹಾಗೂ RRB ಬ್ಯಾಂಕಿಂಗ್ ಪರೀಕ್ಷೆಗಳ ಅರ್ಹತೆ, ಹಂತಗಳು ಮತ್ತು ಸಿಲೆಬಸ್ ಕುರಿತು ವಿವರಿಸಿದರು. ಗಣಿತ, ರೀಸನಿಂಗ್, ಇಂಗ್ಲಿಷ್, ಸಾಮಾನ್ಯ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಅಧ್ಯಯನ ವಿಧಾನಗಳು, ದಿನನಿತ್ಯ ಪತ್ರಿಕೆ ಓದುವ ಅಭ್ಯಾಸ, ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಮಾಕ್ ಟೆಸ್ಟ್ಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ.ವೀಣಾ ಎಚ್., ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ, IQAC ಸಂಯೋಜಕರಾದ ಡಾ.ಶಿವರಾಜ ಗೌನಹಳ್ಳಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಕನ್ಯಾಕುಮಾರಿ ವಿ.ಆರ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಿಬ್ಬಂದಿಗಳಾದ ಅನುರಾಧಾ ಎಸ್.ಪಾಟೀಲ್, ರೀತಾ ಕುಲಕರ್ಣಿ ಹಾಗೂ ಸಂಗಮೇಶ್ ಟಿ. ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು. ತೇಜಸ್ವಿನಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಂಜನಾ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಪ್ರಶ್ನೋತ್ತರ ಅವಧಿ ನಡೆಯಿತು.
T20 World Cup- ಕುತೂಹಲ ಕೆರಳಿಸಿದೆ ಭಾರತ Vs ದಕ್ಷಿಣ ಆಫ್ರಿಕಾ ಪೈಪೋಟಿ: ಹೀಗಿದೆ ನೋಡಿ ಮೋದಿ ಕ್ರೀಡಾಂಗಣದ ಪಿಚ್ ವರದಿ
India Vs South Africa Match Preview-ಈ ಬಾರಿಯ ಟಿ20 ವಿಶ್ವಕಪ್ ನ ಎರಡು ಫೇವರಿಟ್ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಇದೀಗ ಸೂಪರ್ 8 ಹಂತದಲ್ಲಿ ಮುಖಾಮುಖಿಯಾಗುತ್ತಿವೆ. ಫೆಬ್ರವರಿ 22 ಭಾನುವಾರದಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಇಡೀ ಕ್ರಿಕೆಟ್ ವಿಶ್ವವೇ ಎದುರು ನೋಡುತ್ತಿದೆ. ಬ್ಯಾಟಿಂಗ್ ಗೆ ಅನುಕೂಲಕರವಾದ ಪಿಚ್ ನಲ್ಲಿ ಇತ್ತಂಡಗಳು ಹೇಗೆ ಆಡುತ್ತವೇ ಎಂಬ ಬಗ್ಗೆಯೂ ಬಹಳ ಕುತೂಹಲ ಇದೆ.
ಜಾತಿ ಧರ್ಮಗಳನ್ನು ಮೀರಿ ಮಾನವೀಯತೆಯಿಂದ ಸೇವೆ ಸಲ್ಲಿಸಿ : ಆರೋಗ್ಯ ಸಿಬ್ಬಂದಿಗೆ ಸಿಎಂ ಸಿದ್ದರಾಮಯ್ಯ ಕಿವಿ ಮಾತು
ಅಭಯ ಹಸ್ತ ಕಾರ್ಯಕ್ರಮ
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಹೊಸದಿಲ್ಲಿ: ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಪ್ರತಿಸುಂಕ ರದ್ದುಗೊಳಿಸಿದ ಬೆನ್ನಲ್ಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಈ ಕುರಿತ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ. ಅವರು ಮರು ಮಾತುಕತೆ ನಡೆಸಲು ಸಾಧ್ಯವಿಲ್ಲ. ಅವರು ಮತ್ತೆ ಶರಣಾಗುತ್ತಾರೆ. ಅವರ ದ್ರೋಹ ಈಗ ಬಹಿರಂಗಗೊಂಡಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದುರ್ಬಲವಾದ ವರ್ಚಸ್ಸನ್ನು ಕಾಪಾಡಿಕೊಳ್ಳಲು ಇಷ್ಟು ಆತುರ ತೋರಿಸದೇ ಇನ್ನೂ 18 ದಿನ ಕಾಯುತ್ತಿದ್ದರೆ, ಭಾರತೀಯ ರೈತರು ಅನುಭವಿಸುತ್ತಿರುವ ವೇದನೆ ಮತ್ತು ಸಂಕಷ್ಟದಿಂದ ತಪ್ಪಿಸಿಕೊಳ್ಳಬಹುದಿತ್ತು ಹಾಗೂ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಎಫ್ಐಆರ್ಗಳಲ್ಲಿ ಹಿಂದಿ ಚಿತ್ರಗಳ ಸಂಭಾಷಣೆಗಳ ಬಳಕೆ: ಉತ್ತರ ಪ್ರದೇಶ ಪೋಲಿಸರಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ
ಲಕ್ನೋ: ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಅಪರಾಧ ಘಟನೆಗಳಿಗೆ ಸಂಬಂಧಿಸಿದ ಎಫ್ಐಆರ್ಗಳಲ್ಲಿ ಹಿಂದಿ ಸಿನಿಮಾಗಳ ಸಂಭಾಷಣೆಗಳನ್ನು ಬಳಸುತ್ತಿರುವುದಕ್ಕಾಗಿ ಪೋಲಿಸರನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಎಫ್ಐಆರ್ಗಳು ಅಸಂಬದ್ಧವಾಗಿವೆ ಮತ್ತು ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಅದು ಬಣ್ಣಿಸಿದೆ. ಬಹ್ರೈಚ್ ಜಿಲ್ಲೆಯಲ್ಲಿ ಗೋಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಎನ್ಕೌಂಟರ್ ಬಳಿಕ ಪೋಲಿಸರು ಬಂಧಿಸಿದ್ದರು. ಈ ಪೈಕಿ ಅಕ್ಬರ್ ಅಲಿ ಎಂಬಾತ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಎಫ್ಐಆರ್ ಅತಿರಂಜಿತ, ಕಲ್ಪಿತ ಮತ್ತು ಸಿನಿಮಾಗಳ ಡೈಲಾಗ್ಗಳಿಂದ ಕೂಡಿದೆ ಎಂದು ಟೀಕಿಸಿತು. ಎಫ್ಐಆರ್ನಲ್ಲಿ ‘ತುಮ್ ಪೋಲಿಸ್ ಸೆ ಘೇರ್ ಚುಕೆ ಹೋ( ನೀವು ಪೋಲಿಸರಿಂದ ಸುತ್ತುವರಿಯಲ್ಪಟ್ಟಿದ್ದೀರಿ)’ ಎಂಬಂತಹ ಹಿಂದಿ ಚಿತ್ರಗಳಲ್ಲಿ ಬಳಕೆಯಾಗುವ ಸಂಭಾಷಣೆಯನ್ನು ಉಲ್ಲೇಖಿಸಿದ್ದನ್ನು ನ್ಯಾಯಾಲಯವು ಗಮನಿಸಿದೆ. ಎಫ್ಐಆರ್ನಲ್ಲಿ ಎನ್ಕೌಂಟರ್ನ ಸಮಯ ಪೂರ್ವಾಹ್ನ 10:45 ಎಂದು ನಮೂದಿಸಲಾಗಿದ್ದರೂ ಆರೋಪಿಯೋರ್ವ ‘ಉಜಾಲಾ ಹೋನೆವಾಲಾ ಹೈ (ಬೆಳಗಾಗಲಿದೆ) ’ ಎಂದು ಹೇಳಿದ್ದನ್ನು ಉಲ್ಲೇಖಿಸಲಾಗಿದ್ದನ್ನೂ ಗಮನಿಸಿದ ನ್ಯಾಯಮೂರ್ತಿಗಳಾದ ಅಬ್ದುಲ್ ಮೊಯಿನ್ ಮತ್ತು ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರ ಪೀಠವು, ಘಟನೆಯ ಸಮಯ ಪೂರ್ವಾಹ್ನ 10:45 ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿರುವಾಗ ‘ಬೆಳಗಾಗಲಿದೆ’ ಎಂಬ ಹೇಳಿಕೆ ಅಸಂಗತವಾಗಿದೆ ಎಂದು ಹೇಳಿತು. ಇಂತಹ ಕಲ್ಪಿತ ಮತ್ತು ಅತಿರಂಜಿತ ಎಫ್ಐಆರ್ಗಳಿಗೆ ತಡೆಹಾಕುವ ಸಮಯವೀಗ ಬಂದಿದೆ ಎಂದೂ ಪೀಠವು ಝಾಡಿಸಿತು. ಎರಡು ವಾರಗಳಲ್ಲಿ ವೈಯಕ್ತಿಕ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ, ಇಲ್ಲದಿದ್ದರೆ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಬಹ್ರೈಚ್ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿದ ಪೀಠವು, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದೆ.
ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿದ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ‘ನಮ್ಮ ದೇಶಕ್ಕೆ ಸರಿಯಾದದ್ದನ್ನು ಮಾಡುವ ಧೈರ್ಯ ಇಲ್ಲದಿದ್ದಕ್ಕಾಗಿ ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನಾಚಿಕೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್ 6:3 ಬಹುಮತದ ತೀರ್ಪು ನೀಡಿ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿದೆ. ಟ್ರಂಪ್ ಆಡಳಿತದ ಸುಂಕ ನೀತಿಗಳನ್ನು ಪ್ರಶ್ನಿಸಿದ ಪ್ರಮುಖ ಕಾನೂನು ಹೋರಾಟಗಳಲ್ಲಿ ಭಾರತೀಯ ಮೂಲದ ಖ್ಯಾತ ವಕೀಲ ನೀಲ್ ಕತ್ಯಾಲ್ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದು ಗಮನಾರ್ಹ .ಸಣ್ಣ ವ್ಯವಹಾರಗಳ ಗುಂಪನ್ನು ಪ್ರತಿನಿಧಿಸುವ ಕತ್ಯಾಲ್, ಈ ನಿರ್ಧಾರವನ್ನು ಸಂಪೂರ್ಣ ಗೆಲುವು ಎಂದಿದ್ದಾರೆ. ಈ ತೀರ್ಪು ನಮ್ಮ ಪ್ರಮುಖ ಕಾನೂನುಗಳು ಇನ್ನೂ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಾಬೀತುಪಡಿಸುತ್ತದೆ. ತೆರಿಗೆಗಳನ್ನು ರಚಿಸುವ ಅಧಿಕಾರ ಕಾಂಗ್ರೆಸ್ಗೆ ಮಾತ್ರ ಇದೆ, ಅಧ್ಯಕ್ಷರಂತಹ ಒಬ್ಬ ವ್ಯಕ್ತಿಗೆ ಮಾತ್ರವಲ್ಲ ಎಂದು ಇದು ತೋರಿಸುತ್ತದೆ ಎಂದಿದ್ದಾರೆ ಕತ್ಯಾಲ್. ಯಾರು ಆ ನೀಲ್ ಕತ್ಯಾಲ್ 1970 ಮಾರ್ಚ್ 12ರಂದು ಜನನ. ಇಲಿನಾಯ್ಸ್ನ ಶಿಕಾಗೋದಲ್ಲಿ ಭಾರತೀಯ ವಲಸಿಗರಾದ ಪ್ರತಿಭಾ (ಮಕ್ಕಳ ತಜ್ಞೆ) ಮತ್ತು ಸುರೇಂದರ್ (ಇಂಜಿನಿಯರ್) ಪುತ್ರನಾದ ನೀಲ್ ಕುಮಾರ್ ಕತ್ಯಾಲ್ ಅಮೆರಿಕನ್ ವಕೀಲ ಮತ್ತು ಕಾನೂನು ತಜ್ಞರಾಗಿದ್ದಾರೆ. 55 ವರ್ಷ ವಯಸ್ಸಿನ ಕತ್ಯಾಲ್ ಪ್ರಸ್ತುತ ಮಿಲ್ಬ್ಯಾಂಕ್ ಎಲ್ಎಲ್ಪಿಯಲ್ಲಿ ಪಾಲುದಾರರಾಗಿದ್ದಾರೆ. ಜಾರ್ಜ್ಟೌನ್ ಯುನಿವರ್ಸಿಟಿ ಲಾ ಸೆಂಟರ್ ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನಿನ ಪ್ರಾಧ್ಯಾಪಕರಾಗಿದ್ದಾರೆ. ಈ ಹಿಂದೆ, ಒಬಾಮಾ ಆಡಳಿತದಲ್ಲಿ ಅವರು ಮೇ 2010 ರಿಂದ ಜೂನ್ 2011 ರವರೆಗೆ ಯುನೈಟೆಡ್ ಸ್ಟೇಟ್ಸ್ನ ಆಕ್ಟಿಂಗ್ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಸಾಲಿಸಿಟರ್ ಜನರಲ್ ಕಚೇರಿಯಲ್ಲಿ ವಕೀಲರಾಗಿದ್ದರು. ಅಮೆರಿದ ನ್ಯಾಯ ಇಲಾಖೆಯಲ್ಲಿ ಪ್ರಧಾನ ಉಪ ಸಾಲಿಸಿಟರ್ ಜನರಲ್ ಆಗಿದ್ದರು. ಕತ್ಯಾಲ್ ಅವರ ತಂದೆ 2005 ರಲ್ಲಿ ನಿಧನರಾದರು. ಕತ್ಯಾಲ್ ಸಹೋದರಿ ಸೋನಿಯಾ ಕೂಡ ವಕೀಲರಾಗಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ ಕಾನೂನು ಶಾಲೆಯಲ್ಲಿ ಬೋಧಿಸುತ್ತಿದ್ದಾರೆ. ಡಾರ್ಟ್ಮೌತ್ ಕಾಲೇಜು ಮತ್ತು ಯೇಲ್ ಕಾನೂನು ಶಾಲೆಯಲ್ಲಿ ಪದವಿ ಪಡೆದ ಕತ್ಯಾಲ್, ಅವರ ಆರಂಭಿಕ ದಿನಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಅವರ ಕಚೇರಿಯಲ್ಲಿ ಗುಮಾಸ್ತರಾಗಿದ್ದರು ಎಂದು IANS ವರದಿ ತಿಳಿಸಿದೆ. ಕತ್ಯಾಲ್ ಈ ಹಿಂದಿನ ವರ್ಷಗಳಲ್ಲಿ ಟ್ರಂಪ್ ಅವರ 2017 ರ ಪ್ರಯಾಣ ನಿಷೇಧವನ್ನು ಪ್ರಶ್ನಿಸುವುದು, 1965 ರ ಮತದಾನದ ಹಕ್ಕು ಕಾಯ್ದೆಯ ಸಾಂವಿಧಾನಿಕತೆಯನ್ನು ಸಮರ್ಥಿಸುವುದು ಸೇರಿದಂತೆ ಸುಪ್ರೀಂ ಕೋರ್ಟ್ ಮುಂದೆ 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾದಿಸಿದ್ದಾರೆ. kettering.org ಪ್ರಕಾರ, 53 ನೇ ವಯಸ್ಸಿಗೆ ಕತ್ಯಾಲ್ ಅವರು ಅಮೆರಿಕದ ಇತಿಹಾಸದಲ್ಲಿ ಯಾವುದೇ ಅಲ್ಪಸಂಖ್ಯಾತ ವಕೀಲರಿಗಿಂತ ಹೆಚ್ಚು ಸುಪ್ರೀಂ ಕೋರ್ಟ್ ಪ್ರಕರಣಗಳಲ್ಲಿ ವಾದಿಸಿದ್ದಾರೆ. ಜಾರ್ಜ್ ಫ್ಲಾಯ್ಡ್ ಕೊಲೆ ಪ್ರಕರಣದಲ್ಲಿ ಮಿನ್ನೇಸೋಟ ರಾಜ್ಯದ ವಿಶೇಷ ಪ್ರಾಸಿಕ್ಯೂಟರ್ ಆಗಿ ಕತ್ಯಾಲ್ ಕಾನೂನು ಹೋರಾಟ ನಡೆಸಿದ್ದರು. 'ಇಂಪೀಚ್: ದಿ ಕೇಸ್ ಎಗೇನ್ಸ್ಟ್ ಡೊನಾಲ್ಡ್ ಟ್ರಂಪ್' ಎಂಬ ಪುಸ್ತಕವನ್ನೂ ಇವರು ಬರೆದಿದ್ದಾರೆ. ಯುಎಸ್ ನ್ಯಾಯ ಇಲಾಖೆಯ ಅತ್ಯುನ್ನತ ನಾಗರಿಕ ಗೌರವ - ಎಡ್ಮಂಡ್ ರಾಂಡೋಲ್ಫ್ ಪ್ರಶಸ್ತಿ ಇವರಿಗೆ ಸಂದಿದೆ. 2017 ಮತ್ತು 2023 ರಲ್ಲಿ ದಿ ಅಮೇರಿಕನ್ ಲಾಯರ್ನಿಂದ ವರ್ಷದ ಲಿಟಿಗೇಟರ್ ಪ್ರಶಸ್ತಿ ಗೆದ್ದಿದ್ದಾರೆ. 2024 ಮತ್ತು 2025 ರಲ್ಲಿ ಫೋರ್ಬ್ಸ್ನಿಂದ ಅಮೆರಿಕದ ಟಾಪ್ 200 ವಕೀಲರ ಪಟ್ಟಿಯಲ್ಲಿಯೂ ಇವರು ಸ್ಥಾನ ಗಳಿಸಿದ್ದಾರೆ. ತೀರ್ಪಿನ ನಂತರ ನೀಲ್ ಕತ್ಯಾಲ್ ಪ್ರತಿಕ್ರಿಯೆ ಹೇಗಿತ್ತು?: ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಸಂಭ್ರಮಿಸಿದ ಕತ್ಯಾಲ್ ಸಾಮಾಜಿಕ ಮಾಧ್ಯಮ Xನಲ್ಲಿ Victory ಎಂದು ಬರೆದಿದ್ದಾರೆ. “ಇಂದು ಅಮೆರಿಕದ ಸುಪ್ರೀಂ ಕೋರ್ಟ್ ಎಲ್ಲೆಡೆ ಕಾನೂನಿನ ಆಳ್ವಿಕೆ ಮತ್ತು ಅಮೆರಿಕನ್ನರ ಪರವಾಗಿ ನಿಂತಿದೆ. ಅದರ ಸಂದೇಶ ಸರಳವಾಗಿತ್ತು. ಅಧ್ಯಕ್ಷರು ಶಕ್ತಿಶಾಲಿಗಳು, ಆದರೆ ನಮ್ಮ ಸಂವಿಧಾನವು ಇನ್ನೂ ಹೆಚ್ಚು ಶಕ್ತಿಶಾಲಿಯಾಗಿದೆ. ಅಮೆರಿಕದಲ್ಲಿ, ಕಾಂಗ್ರೆಸ್ ಮಾತ್ರ ಅಮೆರಿಕನ್ ಜನರ ಮೇಲೆ ತೆರಿಗೆ ವಿಧಿಸಬಹುದು. ನಮ್ಮ ಕಾನೂನು ಪ್ರಕರಣದಲ್ಲಿ ನಾವು ಕೇಳಿದ ಎಲ್ಲವನ್ನೂ ಅಮೆರಿಕದ ಸುಪ್ರೀಂ ಕೋರ್ಟ್ ನಮಗೆ ನೀಡಿದೆ.” “ಈ ಅನ್ಯಾಯದ, ಅಸಂವಿಧಾನಿಕ ತೆರಿಗೆಗಳ ವಿರುದ್ಧ ನಿಂತ ಐದು ಸಣ್ಣ ವ್ಯಾಪಾರ ಮಾಲಕರಿಗೂ ನಾನು ಕೃತಜ್ಞನಾಗಿದ್ದೇನೆ. ನಿಲುವು ತೆಗೆದುಕೊಳ್ಳುವ ಮೂಲಕ, ಅವರು ದೇಶಾದ್ಯಂತ ಹತ್ತಾರು ಸಾವಿರ ವ್ಯವಹಾರಗಳು ಮತ್ತು ಲಕ್ಷಾಂತರ ಗ್ರಾಹಕರಿಗೆ ನಿರ್ಣಾಯಕ ಪರಿಹಾರವನ್ನು ನೀಡಿದ್ದಾರೆ. ಈ ಕಾನೂನು ಹೋರಾಟವು ಯಾವಾಗಲೂ ಅಧ್ಯಕ್ಷ ಸ್ಥಾನದ ಬಗ್ಗೆ, ಯಾವುದೇ ಒಬ್ಬ ಅಧ್ಯಕ್ಷರ ಬಗ್ಗೆ ಅಲ್ಲ. ಇದು ಯಾವಾಗಲೂ ಅಧಿಕಾರಗಳ ಪ್ರತ್ಯೇಕತೆಯ ಬಗ್ಗೆಯಾಗಿದ್ದು ಆ ಕ್ಷಣದ ರಾಜಕೀಯದ ಬಗ್ಗೆ ಅಲ್ಲ. 250 ವರ್ಷಗಳಿಂದ ನಮ್ಮ ಸರ್ಕಾರದ ಆಧಾರಸ್ತಂಭವಾಗಿರುವ ನಮ್ಮ ಸುಪ್ರೀಂ ಕೋರ್ಟ್ ನಮ್ಮ ಅತ್ಯಂತ ಮೂಲಭೂತ ಮೌಲ್ಯಗಳನ್ನು ರಕ್ಷಿಸುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಕತ್ಯಾಲ್ ಇನ್ನೊಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ತೀರ್ಪಿನ ನಂತರ MSNBC ಜೊತೆ ಮಾತನಾಡಿದ ಅವರು, ಅಮೆರಿಕದ ಸಣ್ಣ ವ್ಯವಹಾರಗಳ ಪರವಾಗಿ ವಲಸಿಗರ ಮಗನಾದ ನಾನು ನ್ಯಾಯಾಲಯಲ್ಲಿ ವಾದಿಸಲು ಸಾಧ್ಯವಾಯಿತು. ನೋಡಿ, ಈ ಅಧ್ಯಕ್ಷರು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಲು ಸಾಧ್ಯವಾಯಿತು. ನಾನು ನನ್ನ ವಾದವನ್ನು ಮಂಡಿಸಲು ಸಾಧ್ಯವಾಯಿತು, ಕಠಿಣ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಯಿತು. ಅದರ ಕೊನೆಯಲ್ಲಿ ಅವರು ಮತ ಚಲಾಯಿಸಿದರು . ನಾವು ಗೆದ್ದೆವು. ಅದು ಈ ದೇಶದಲ್ಲಿನ ಅಸಾಧಾರಣವಾದ ವಿಷಯ ಎಂದಿದ್ದಾರೆ.
Gadag | 5 ಲಕ್ಷ ರೂ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಗದಗ : ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ಗುತ್ತಿಗೆದಾರನಿಂದ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಶಾಸಕ ಚಂದ್ರು ಲಮಾಣಿ, ಪಿಎಗಳಾದ ಮಂಜುನಾಥ್ , ಗುರು ಲಮಾಣಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಸ್ತೆ ಕಾಮಗಾರಿ ಗುತ್ತಿಗೆ ನೀಡಲು ₹5 ಲಕ್ಷ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ
ಗುತ್ತಿಗೆದಾರರರೊಬ್ಬರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರ ವಿಜಯ್ ಎಂಬುವವರಿಂದ ಶಾಸಕರು ಐದು ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಇದನ್ನು ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ಮತ್ತಷ್ಟು ವಿವರ ಇಲ್ಲಿದೆ.
ಮಲೆನಾಡು ಭಾಗದಲ್ಲಿ ಕಾಡಾನೆ, ಚಿರತೆ ಹಾವಳಿಗೆ ಜನ ತತ್ತರ: ಅರಣ್ಯ ಇಲಾಖೆ ವಿರುದ್ಧ ಜನಾಆಕ್ರೋಶ
ಚಿಕ್ಕಮಗಳೂರು/ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ, ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರ ಪರಿಣಾಮವಾಗಿ ಹಲವಾರು ಜನ ರೈತರು, ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಳೆದ ನಾಲ್ಕು ದಿನಗಳ ಹಿಂದೆ ಯಲ್ಲಪ್ಪ ಎನ್ನುವ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಪುರ ಗ್ರಾಮದಲ್ಲಿ ನಡೆದಿತ್ತು. ಈ ಪ್ರಕರಣಲ್ಲೆ
T20 ವಿಶ್ವಕಪ್ | ಅಭ್ಯಾಸದ ವೇಳೆ ಹಾರ್ದಿಕ್ ಪಾಂಡ್ಯ ಹೊಡೆದ ಚೆಂಡಿನಿಂದ ವೇಗಿ ಮುಹಮ್ಮದ್ ಸಿರಾಜ್ ಮೊಣಕಾಲಿಗೆ ಗಾಯ
ಸೂಪರ್ 8 ಹಂತದಲ್ಲಿ ಭಾರತ ತಂಡಕ್ಕೆ ಆಘಾತ
ಹೊಸದಿಲ್ಲಿ: ಸಂಚಾರ ಜಾಗೃತಿ ಅಭಿಯಾನವನ್ನು ಟೀಕಿಸುವ ವ್ಯಂಗ್ಯಾತ್ಮಕ ಪೋಸ್ಟ್ ಮಾಡಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತನೋರ್ವನ ಮೇಲೆ 'ದೇಶದ್ರೋಹ' ಪ್ರಕರಣ ದಾಖಲಿಸಿ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಹೂಗ್ಲಿಯ ಚಿನ್ಸುರಾದ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ ಅಮಿತ್ ನಂದಿ ಅವರನ್ನು ಫೆಬ್ರವರಿ 14ರಂದು ಬಂಧಿಸಲಾಗಿದೆ. ಅವರ ವಿರುದ್ಧ ದಾಖಲಾದ ಎಫ್ಐಆರ್ ನಲ್ಲಿ ಪುರಬ ಮೆದಿನೀಪುರ ಜಿಲ್ಲೆಯ ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ಟ್ರಾಫಿಕ್ ಪೋಸ್ಟ್ನಲ್ಲಿ ಹಾಕಿದ್ದ ರಸ್ತೆ ಸುರಕ್ಷತಾ ಸಂದೇಶವನ್ನು ನಂದಿ ಫೇಸ್ಬುಕ್ ಪೋಸ್ಟ್ನಲ್ಲಿ ವ್ಯಂಗ್ಯವಾಗಿ ಟೀಕಿಸಿದ್ದಾಗಿ ಉಲ್ಲೇಖಿಸಲಾಗಿದೆ. ಎಫ್ಐಆರ್ ಪ್ರಕಾರ, ಈಗ ಅಳಿಸಲ್ಪಟ್ಟಿರುವ ಅಮಿತ್ ನಂದಿ ಅವರ ಪೋಸ್ಟ್ ನಲ್ಲಿ “Gari kheye mod chalabben na” (ಕಾರನ್ನು ಕುಡಿಯಬೇಡಿ, ಮದ್ಯವನ್ನು ಓಡಿಸಬೇಡಿ)” ಎಂದು ಬರೆಯಲಾಗಿದೆ. ಇದು “mod kheye gari chalaben na (ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ)” ಎಂಬ ಘೋಷಣೆಯನ್ನು ವ್ಯಂಗ್ಯವಾಗಿ ತಿರುಚಿರುವುದಾಗಿದೆ ಎಂದು ಆರೋಪಿಸಲಾಗಿದೆ. ನಂದಿ ಅವರು ಈ ಪೋಸ್ಟ್ ಅನ್ನು ಜನವರಿ 27ರಂದು ಪೋಸ್ಟ್ ಮಾಡಿದ್ದರು. ಕಾಂತಿ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ದಿಲೀಪ್ ಗುಪ್ತಾ ಅವರು ಜನವರಿ 28 ರಂದು ಈ ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಅದರಲ್ಲಿ, ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಪುಟದಲ್ಲಿ ಅಪ್ಲೋಡ್ ಮಾಡಿದ ಸಾರ್ವಜನಿಕ ಜಾಗೃತಿ ಸಂದೇಶದ ವಿರೂಪ ಎಂದು ಆರೋಪಿಸಿದ್ದಾರೆ. ಈ ಪೋಸ್ಟ್ ಪೊಲೀಸರ ವಿರುದ್ಧ ಯೋಜಿತ ಅಪಪ್ರಚಾರದ ಭಾಗವಾಗಿದೆ. ಅವರು ಅಧಿಕೃತ ಸಾರ್ವಜನಿಕ ಜಾಗೃತಿ ಪೋಸ್ಟ್ ಅನ್ನು ವಿರೂಪಗೊಳಿಸಿದ್ದಾರೆ. ಅವರಿಗೆ ಅನೇಕ ಅನುಯಾಯಿಗಳಿರುವುದರಿಂದ, ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಘಟನೆ ಪೊಲೀಸರಿಗೆ ಮಾನಹಾನಿಕರವಾಗಿರುವುದರಿಂದ, ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಂದಿ ವಿರುದ್ಧ ದೇಶದ್ರೋಹ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ನಂದಿ ಅವರ ಬಂಧನವನ್ನು ಪ್ರಶ್ನಿಸಿದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್, ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ, ಸರಕಾರವನ್ನು ವಿರೋಧಿಸುವವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಮಿತ ಕಣ್ಗಾವಲಿಡಲಾಗುತ್ತಿದೆ. ವಿಚಿತ್ರವೆಂದರೆ, ತೃಣಮೂಲ ಸರಕಾರವೂ ಅದೇ ಮಾರ್ಗವನ್ನು ಅನುಸರಿಸಿದೆ. ಸರಕಾರ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
2025ರಲ್ಲಿ ಸೈಬರ್ ಅಪರಾಧಗಳಲ್ಲಿ ಶೇ.24ರಷ್ಟು ಏರಿಕೆ; 22,495 ಕೋಟಿ ರೂ.ಕಳೆದುಕೊಂಡ ಭಾರತೀಯರು!
ಹೊಸದಿಲ್ಲಿ: ಕಳೆದ ವರ್ಷ ಸೈಬರ್ ಅಪರಾಧಗಳಿಂದಾಗಿ ಭಾರತೀಯರು ಕಳೆದುಕೊಂಡಿರುವ ಹಣದಲ್ಲಿ ಶೇ.76ರಷ್ಟು ಸಿಂಹಪಾಲು ಹೂಡಿಕೆ ವಂಚನೆಗಳದ್ದಾಗಿದೆ. ಒಟ್ಟಾರೆ ಆರ್ಥಿಕ ನಷ್ಟವು 2024ಕ್ಕೆ ಹೋಲಿಸಿದರೆ ಕೊಂಚ ಇಳಿಕೆಯನ್ನು ಕಂಡಿದೆ ಎಂದು ಗೃಹ ಸಚಿವಾಲಯದಿಂದ ಲಭ್ಯವಾಗಿರುವ ದತ್ತಾಂಶಗಳು ತೋರಿಸಿವೆ ಎಂದು theprint.in ವರದಿಯಾಗಿದೆ. ಭಾರತೀಯರು ಸೈಬರ್ ವಂಚನೆಗಳಿಂದಾಗಿ 2024ರಲ್ಲಿ 22,845 ಕೋಟಿ ರೂ.ಕಳೆದುಕೊಂಡಿದ್ದರೆ 2025ರಲ್ಲಿ ಇದು 22,495 ಕೋಟಿ ರೂ.ಗೆ ಇಳಿದಿದೆ, ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 2024ರಲ್ಲಿ ಒಟ್ಟು 22.68 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ 2025ರಲ್ಲಿ ಈ ಸಂಖ್ಯೆ 28.15 ಲಕ್ಷಕ್ಕೇರಿದೆ. ಈ ಏರಿಕೆಯ ಹೊರತಾಗಿಯೂ ಎಫ್ಐಆರ್ಗಳ ಸಂಖ್ಯೆ 2024ರಲ್ಲಿದ್ದ 66,370ರಿಂದ 55,484ಕ್ಕೆ ಇಳಿಕೆಯಾಗಿದೆ. ಬ್ಯಾಂಕುಗಳು ಮತ್ತು ಪೋಲಿಸರ ತ್ವರಿತ ಹಸ್ತಕ್ಷೇಪಗಳು ದೂರುಗಳಿಗೆ ಸಂಬಂಧಿಸಿದಂತೆ ವಿಧ್ಯುಕ್ತವಾಗಿ ಎಫ್ಐಆರ್ಗಳು ದಾಖಲಾಗುವ ಮುನ್ನ ವಂಚನೆಗೊಳಗಾದ ಹಣವನ್ನು ನಿರ್ಬಂಧಿಸಲು ನೆರವಾಗಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಆದಾಗ್ಯೂ ಅಂಕಿಅಂಶಗಳು ಸೈಬರ್ ಅಪರಾಧಗಳಲ್ಲಿ ಏರಿಕೆಯ ಆತಂಕಕಾರಿ ಪ್ರವೃತ್ತಿಯನ್ನು ಸೂಚಿಸುತ್ತಿವೆ. ಹೀಗಿದ್ದರೂ,ಕಾನೂನು ಜಾರಿ ಸಂಸ್ಥೆಗಳು ಸಕಾಲಿಕ ಹಸ್ತಕ್ಷೇಪ,ಖಾತೆಯಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಮತ್ತು ಅಂತರ-ಸಂಸ್ಥೆ ಸಮನ್ವಯದ ಮೂಲಕ ಆರ್ಥಿಕ ಹಾನಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿವೆ. ದತ್ತಾಂಶಗಳ ಪ್ರಕಾರ 2025ರಲ್ಲಿ ಜನರು ಕಳೆದುಕೊಂಡಿರುವ ಒಟ್ಟು ಹಣದಲ್ಲಿ ಶೇ.76ರಷ್ಟು ಪಾಲು ಹೂಡಿಕೆ ವಂಚನೆಗಳದ್ದಾಗಿದೆ. ಪೊಂಝಿ ಸ್ಕೀಮ್ಗಳು,ನಕಲಿ ಶೇರು ಮಾರುಕಟ್ಟೆ ಟ್ರೇಡಿಂಗ್ ಮತ್ತು ಕ್ರಿಪ್ಟೊಕರೆನ್ಸಿ ವಂಚನೆಗಳು,ಗೇಮಿಂಗ್ ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಹೂಡಿಕೆ ವಂಚನೆಗಳು ಹೆಚ್ಚಲು ಸುಲಭವಾಗಿ ಹಣ ಗಳಿಸುವ ಜನರ ದುರಾಸೆಯೇ ಕಾರಣವಾಗಿದ್ದು,ಇದರಿಂದಾಗಿ ಅವರು ತ್ವರಿತ ಪ್ರತಿಫಲಗಳ ಆಮಿಷಕ್ಕೆ ಬಲಿಯಾಗುತ್ತಾರೆ ಮತ್ತು ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುತ್ತಾರೆ ಎಂದು ಮೂಲಗಳು ಬೆಟ್ಟು ಮಾಡಿವೆ. ಡಿಜಿಟಲ್ ಅರೆಸ್ಟ್ಗಳು ಒಟ್ಟು ನಷ್ಟದಲ್ಲಿ ಶೇ.9ರಷ್ಟು ಮತ್ತು ಸೆಕ್ಸ್ಟಾರ್ಷನ್ (ಖಾಸಗಿ/ಅಶ್ಲೀಲ ಚಿತ್ರ ಅಥವಾ ವೀಡಿಯೊವನ್ನು ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಕೀಳುವುದು) ಶೇ.4ರಷ್ಟು ಪಾಲು ಹೊಂದಿವೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ.35ರಷ್ಟು ಹೂಡಿಕೆ ವಂಚನೆ,ಶೇ.19ರಷ್ಟು ಸೆಕ್ಸ್ಟಾರ್ಷನ್ ಮತ್ತು ಶೇ.6ರಷ್ಟು ಡಿಜಿಟಲ್ ಬಂಧನಗಳಿಗೆ ಸಂಬಂಧಿಸಿವೆ. ಈ ನಡುವೆ ಕೇಂದ್ರ ಸರಕಾರವು ಸೈಬರ್ ಅಪರಾಧಗಳನ್ನು ಎದುರಿಸಲು ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ. ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) ಈಗ ರಾಜ್ಯಗಳು,ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಸಮನ್ವಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದೆ. ಸೆ.2024ರಲ್ಲಿ ಸ್ಥಾಪನೆಗೊಂಡ I4C ವಂಚನೆ ಪತ್ತೆ ಮತ್ತು ತಡೆಗಟ್ಟುವಿಕೆಗೆ ನೆರವಾಗಲು ಬ್ಯಾಂಕ್ಗಳ ಸಹಕಾರದೊಂದಿಗೆ ಶಂಕಿತ ಸೈಬರ್ ಅಪರಾಧಿಗಳ ಗುರುತು ರಿಜಿಸ್ಟ್ರಿಯನ್ನು ಆರಂಭಿಸಿದೆ. ಇದರೊಂದಿಗೆ 2021ರಲ್ಲಿ ಆರಂಭಗೊಂಡ ನಾಗರಿಕ ಹಣಕಾಸು ಸೈಬರ್ ವಂಚನೆ ವರದಿಗಾರಿಕೆ ಮತ್ತು ನಿರ್ವಹಣೆ ವ್ಯವಸ್ಥೆಯು ತಕ್ಷಣ ವರದಿ ಮಾಡಲು ಅನುಕೂಲ ಕಲ್ಪಿಸುವ ಮೂಲಕ 23.02 ಲಕ್ಷ ದೂರುಗಳಲ್ಲಿ 7,130 ಕೋಟಿ ರೂ.ಗೂ ಅಧಿಕ ಹಣ ವಂಚಕರ ಪಾಲಾಗುವುದನ್ನು ತಪ್ಪಿಸಿದೆ. ಪ್ರಸ್ತುತ ಭಾರತದಲ್ಲಿ 459 ವಿಶೇಷ ಸೈಬರ್ ಅಪರಾಧ ಪೋಲಿಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ ಇವುಗಳ ಸಂಖ್ಯೆ 169ರಷ್ಟಿತ್ತು.ಉತ್ತರ ಪ್ರದೇಶವು 75 ಠಾಣೆಗಳೊಂದಿಗೆ ಮುಂಚೂಣಿಯಲ್ಲಿದೆ.
ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ: ಯತೀಂದ್ರಗೆ ಪ್ರತಾಪ್ ಸಿಂಹ ಸವಾಲು
ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದೇ ಕೆಲಸವಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಕೆಲಸ ಮಾಡುತ್ತೀದ್ದೀರಿ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ ಎಂದು ಯತೀಂದ್ರಗೆ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಬೆಳ್ತಂಗಡಿ : ಲಾಯಿಲದಲ್ಲಿ ಡಿವೈಡರ್ಗೆ ಬೈಕ್ ಢಿಕ್ಕಿ; ಸವಾರ ಗಂಭೀರ
ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಪ್ರಸನ್ನ ಕಾಲೇಜು ಸಮೀಪ ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಗಾಯಾಳುವನ್ನು ಬೆಳ್ತಂಗಡಿ ತಾಲೂಕಿನ ಬೆಳಾಲಿನ ಮಾಯಾ ನಿವಾಸಿ ಸಂಜೀವ (50) ಎಂದು ಗುರುತಿಸಲಾಗಿದೆ. ಉಜಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ವೇಳೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಡೊನಾಲ್ಡ್ ಟ್ರಂಪ್ (Photo: PTI) ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ (IEEPA) ಎಂಬ ರಾಷ್ಟ್ರೀಯ ಆರ್ಥಿಕ ತುರ್ತು ಕಾನೂನಿನಡಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವ್ಯಾಪಾರ ಪಾಲುದಾರರ ಮೇಲೆ ವ್ಯಾಪಕ ಆಮದು ಸುಂಕಗಳನ್ನು ವಿಧಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರ (ಫೆಬ್ರವರಿ 20) ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ನ 6-3 ಬಹುಮತದ ನಿರ್ಧಾರವು ಅಧ್ಯಕ್ಷ ಟ್ರಂಪ್ ವಿದೇಶಾಂಗ ನೀತಿಯಲ್ಲಿ ಸುಂಕಗಳನ್ನು ಅಸ್ತ್ರವಾಗಿ ಬಳಸದಂತೆ ತಡೆಹಿಡಿದಿದೆ. ಈ ತೀರ್ಪು ಹಿಂದಿನ ಎರಡು ನ್ಯಾಯಾಲಯದ ತೀರ್ಪುಗಳನ್ನು ಬೆಂಬಲಿಸುತ್ತದೆ. ಕಾಂಗ್ರೆಸ್ (ಸಂಸತ್ತು) ಸುಂಕಗಳನ್ನು ವಿಧಿಸುವ ಅಧಿಕಾರವನ್ನು ನೀಡಿದಾಗ, ಅದು ಸ್ಪಷ್ಟವಾಗಿ ಮತ್ತು ಎಚ್ಚರಿಕೆಯಿಂದ ನಿರ್ಬಂಧಗಳೊಂದಿಗೆ ಮಾಡುತ್ತದೆ. ಅದು IEEPA ನಲ್ಲಿ ಮಾಡಲಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಬಹುಮತದ ಅಭಿಪ್ರಾಯದಲ್ಲಿ ಹೇಳಿದರು. ಟ್ರಂಪ್ ನೇಮಕ ಮಾಡಿದ ಒಂಬತ್ತು ನ್ಯಾಯಾಧೀಶರಲ್ಲಿ ಮೂವರು (ನ್ಯಾಯಮೂರ್ತಿಗಳು ನೀಲ್ ಗೊರ್ಸುಚ್, ಬ್ರೆಟ್ ಕವನಾಗ್ ಮತ್ತು ಆಮಿ ಕೋನಿ ಬ್ಯಾರೆಟ್) ಅವರೊಂದಿಗೆ ಉನ್ನತ ನ್ಯಾಯಾಲಯವು ಪ್ರಸ್ತುತ 6-3 ಬಹುಮತವನ್ನು ಹೊಂದಿದೆ. ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ ಮುಂದಿನ ಐದು ತಿಂಗಳವರೆಗೆ ಜಾಗತಿಕವಾಗಿ ಶೇ 10ರಷ್ಟು ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಈ ಆದೇಶ ನೀಡಲಾಗಿದೆ. ►IEEPA ಎಂದರೇನು? ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ 1977 ರಲ್ಲಿ 1917 ರ Trading with the Enemy Act (TWEA)ಯನ್ನು ಬದಲಾಯಿಸಲು IEEPA ಅನ್ನು ಜಾರಿಗೆ ತಂದರು. 1971 ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ವ್ಯಾಪಕ ಅಧಿಕಾರವನ್ನು ಬಳಸಿಕೊಂಡು ಎಲ್ಲಾ ಆಮದುಗಳ ಮೇಲೆ 10% ಸುಂಕವನ್ನು ವಿಧಿಸಲಾಯಿತು. IEEPA ಅಡಿಯಲ್ಲಿ, ಅಮೆರಿಕದ ಅಧ್ಯಕ್ಷರು ದೇಶದ ಹೊರಗಿನಿಂದ ಹೆಚ್ಚಾಗಿ ಉದ್ಭವಿಸುವ ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆಯಿಂದ ಉಂಟಾಗುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಬೆದರಿಕೆ ನಿರ್ದಿಷ್ಟವಾಗಿ ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಅಥವಾ ಆರ್ಥಿಕತೆಗೆ ಅಪಾಯವನ್ನುಂಟುಮಾಡಬೇಕು. ಇದು ಅಧ್ಯಕ್ಷರಿಗೆ ಸ್ವತ್ತುಗಳನ್ನು ಸ್ಥಗಿತಗೊಳಿಸಲು ಅಥವಾ ವಹಿವಾಟುಗಳನ್ನು ನಿರ್ಬಂಧಿಸಲು ಅಧಿಕಾರವನ್ನು ನೀಡುತ್ತದೆ. ಟ್ರಂಪ್ಗಿಂತ ಮೊದಲು, ಈ ಕಾಯ್ದೆಯನ್ನು ಇತರ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಬಳಸಲಾಗುತ್ತಿತ್ತು, 1979 ರ ಇರಾನ್ ಒತ್ತೆಯಾಳು ಬಿಕ್ಕಟ್ಟಿನ ನಂತರ ಜಿಮ್ಮಿ ಕಾರ್ಟರ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಅಮೆರಿಕದಲ್ಲಿ ಎಲ್ಲಾ ಇರಾನಿನ ಸರ್ಕಾರಿ ಸ್ವತ್ತುಗಳನ್ನು ಸ್ಥಗಿತಗೊಳಿಸಿದರು. ಈ ತುರ್ತು ಪರಿಸ್ಥಿತಿಯನ್ನು 40 ವರ್ಷಗಳಲ್ಲಿ ಸತತ ಎಂಟು ಅಧ್ಯಕ್ಷರು ವಾರ್ಷಿಕವಾಗಿ ನವೀಕರಿಸಿದ್ದಾರೆ. ಸೆಪ್ಟೆಂಬರ್ 11 ರ ದಾಳಿಯ ನಂತರ 2001 ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ಇದೇ ರೀತಿ ಮಾಡಿದ್ದರು. ಕಾಂಗ್ರೆಸ್ಸಿನ ಸಂಶೋಧನಾ ಸೇವಾ ವರದಿಯ ಪ್ರಕಾರ 2025 ಸೆಪ್ಟೆಂಬರ್ 1, ರ ಹೊತ್ತಿಗೆ ಐಇಇಪಿಎ ಅಡಿಯಲ್ಲಿ 77 ರಾಷ್ಟ್ರೀಯ ತುರ್ತು ಪರಿಸ್ಥಿತಿಗಳನ್ನು ಘೋಷಿಸಲಾಗಿದೆ, ಅವುಗಳಲ್ಲಿ 46 ಮುಂದುವರೆದಿವೆ. ಆದಾಗ್ಯೂ, ಟ್ರಂಪ್ಗಿಂತ ಮೊದಲು ಯಾವುದೇ ಅಮೆರಿಕನ್ ಅಧ್ಯಕ್ಷರು ಸುಂಕಗಳನ್ನು ವಿಧಿಸಲು IEEPA ಅನ್ನು ಅನ್ವಯಿಸಿಲ್ಲ . ಆದಾಗ್ಯೂ, 2025 ಎಪ್ರಿಲ್ 2ರಂದು ಸುಂಕ ಘೋಷಣೆ ಮಾಡುವಾಗ ಅಮೆರಿಕ 'ರಾಷ್ಟ್ರೀಯ ತುರ್ತುಸ್ಥಿತಿ'ಯನ್ನು ಎದುರಿಸುತ್ತಿದೆ ಎಂದಿದ್ದರು ಟ್ರಂಪ್. ಇತರ ದೇಶಗಳು ಅಮೆರಿಕದ ಲಾಭವನ್ನು ಪಡೆದುಕೊಳ್ಳುತ್ತಿವೆ.ಅನೇಕ ದೇಶಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುತ್ತಿದ್ದವು. ಆದರೆ ಅಮೆರಿಕ ಅದೇ ರೀತಿ ಮಾಡದ ಕಾರಣ ವ್ಯಾಪಾರದಲ್ಲಿ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದರು. ಮರುಪಾವತಿ ಸಾಧ್ಯವೆ? IEEPA ಸುಂಕಗಳಿಂದ ಬರುವ ಹಣವು ಅಮೆರಿಕ ಸರ್ಕಾರದ ಖಜಾನೆಗೆ ಬಂದು ಸೇರುತ್ತದೆ. ʼದಿ ಬಜೆಟ್ ಲ್ಯಾಬ್ ಅಟ್ ಯೇಲ್ʼ ಪ್ರಕಾರ ಶುಕ್ರವಾರ ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ನ ಇತ್ತೀಚಿನ ದತ್ತಾಂಶವು 2025 ರ ಅವಧಿಯಲ್ಲಿ ಈ ಸುಂಕಗಳಿಂದ 142 ಬಿಲಿಯನ್ ಡಾಲರ್ ಸಂಗ್ರಹಿಸಲಾಗುತ್ತಿತ್ತು ಎಂದು ಸೂಚಿಸಿದೆ. “ಆಮದುದಾರರು ತಾವು ಪಾವತಿಸಿರಬಹುದಾದ ಯಾವುದೇ IEEPA ಸುಂಕಗಳ ಮೇಲೆ ಮರುಪಾವತಿಯನ್ನು ಪಡೆಯಲು SCOTUS (ಅಮೆರಿಕದ ಸುಪ್ರೀಂಕೋರ್ಟ್) ಅನುಮತಿಸುವುದನ್ನು ತಳ್ಳಿಹಾಕಲಿಲ್ಲ. ಮರುಪಾವತಿಗಳನ್ನು ಪಡೆಯಲು ಸಂಸ್ಥೆಗಳು ನಡೆಸುವ ಪ್ರಕ್ರಿಯೆಯ ಕುರಿತು ಹಲವಾರು ಪ್ರಶ್ನೆಗಳಿದ್ದರೂ, 2025 ರಲ್ಲಿ IEEPA ಮೂಲಕ ಸಂಗ್ರಹಿಸಿದ ಆದಾಯದ ಗಣನೀಯ ಭಾಗವನ್ನು ಸಂಸ್ಥೆಗಳಿಗೆ ಹಿಂತಿರುಗಿಸುವ ಸಾಧ್ಯತೆಯಿದೆ, ”ಎಂದು ಯೇಲ್ನಲ್ಲಿರುವ ಬಜೆಟ್ ಲ್ಯಾಬ್ ಶುಕ್ರವಾರ ಹೇಳಿದೆ. ಆದಾಗ್ಯೂ, ಯಾವುದೇ ಮರುಪಾವತಿ ಪ್ರಕ್ರಿಯೆಯು ಸುಲಭವಲ್ಲ. ►ಸುಂಕದ ಆದಾಯ, ಮರುಪಾವತಿ ನಿರೀಕ್ಷೆಗಳು ಸರ್ಕಾರವು ವ್ಯವಹಾರಗಳಿಂದ ಈಗಾಗಲೇ ತೆಗೆದುಕೊಂಡ ಶತಕೋಟಿ ಡಾಲರ್ಗಳನ್ನು ಹಿಂದಿರುಗಿಸಬೇಕೇ ಅಥವಾ ಅದು ಹೇಗೆ ಎಂಬುದನ್ನು ನ್ಯಾಯಾಲಯ ವಿವರಿಸಲಿಲ್ಲ. ಕಾನೂನು ಚರ್ಚೆಗಳ ಸಮಯದಲ್ಲಿ, ಆದರೆ ಆ ಪ್ರಕ್ರಿಯೆಯು 'ಅವ್ಯವಸ್ಥೆ'ಯಾಗುವ ಸಾಧ್ಯತೆಯಿದೆ ಎಂದು ಎಲ್ಲರೂ ಒಪ್ಪಿಕೊಂಡರು. ಸುಪ್ರೀಂ ಕೋರ್ಟ್ IEEPA ಸುಂಕಗಳನ್ನು ರದ್ದುಗೊಳಿಸಿದರೆ ವಿವಿಧ ದೇಶಗಳಿಗೆ ಸಂಭಾವ್ಯ ಮರುಪಾವತಿ ಅವಕಾಶಗಳನ್ನು ಲೆಕ್ಕಪತ್ರ ಸಂಸ್ಥೆ PwC ಕಳೆದ ವರ್ಷ ಅಂದಾಜಿಸಿತ್ತು. ಅದರ ವಿಶ್ಲೇಷಣೆಯ ಪ್ರಕಾರ, ಅಕ್ಟೋಬರ್ 2025 ರವರೆಗೆ ನಡೆಸಿದ ವ್ಯಾಪಾರಕ್ಕಾಗಿ ಭಾರತದಿಂದ ರಫ್ತುಗಳು ಒಟ್ಟು 108 ಬಿಲಿಯನ್ ಡಾಲರ್ ನಲ್ಲಿ 487 ಮಿಲಿಯನ್ ಡಾಲರ್ ನಷ್ಟು ಸುಂಕಗಳನ್ನು ಎದುರಿಸಿದ್ದವು. ಮರುಪಾವತಿಗಳನ್ನು ಅನುಮತಿಸಿದರೂ ಸಹ, ಮರುಪಡೆಯುವಿಕೆ ಪ್ರಕ್ರಿಯೆಯು ಸಂಕೀರ್ಣವಾಗಿರಬಹುದು ಎಂದು PwC ವರದಿಯಲ್ಲಿ ಎಚ್ಚರಿಸಿತ್ತು. ►ಮತ್ತೆ ಸುಂಕ ವಿಧಿಸಿದ ಟ್ರಂಪ್ ಸುಪ್ರೀಂಕೋರ್ಟ್ ನಿಂದ ಹಿನ್ನೆಡೆ ಅನುಭವಿಸಿದ ನಂತರ ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ ಮುಂದಿನ 5 ತಿಂಗಳವರೆಗೆ ಜಾಗತಿಕವಾಗಿ ಶೇ 10ರಷ್ಟು ಸುಂಕ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ . ಸೆಕ್ಷನ್ 122 ರ ಅಡಿಯಲ್ಲಿ ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ 10% ಜಾಗತಿಕ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಈ ಸೆಕ್ಷನ್ ಮೂಲಭೂತ ಅಂತರರಾಷ್ಟ್ರೀಯ ಪಾವತಿ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ 150 ದಿನಗಳವರೆಗೆ 15% ಸುಂಕಗಳನ್ನು ತಾತ್ಕಾಲಿಕವಾಗಿ ವಿಧಿಸಲು ಅನುಮತಿಸುತ್ತದೆ. ►ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಸುಂಕಗಳ ಕುರಿತು ಅಮೆರಿಕ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ, ಭಾರತದ ಜತೆಗಿನ ಒಪ್ಪಂದ ಮುಂದುವರೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್ ತನ್ನ ಸುಂಕಗಳನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಟ್ರಂಪ್ ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ , ಭಾರತದೊಂದಿಗಿನ ಸಂಬಂಧ ಅದ್ಭುತವಾಗಿದೆ, ನಾವು ಭಾರತದೊಂದಿಗೆ ವ್ಯಾಪಾರ ಮಾಡುತ್ತಿದ್ದೇವೆ ಎಂದಿದ್ದಾರೆ. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಜಾಗತಿಕ ಸುಂಕವನ್ನು ಘೋಷಿಸಿದ ನಂತರ ಭಾರತದ ಮೇಲಿನ ಸುಂಕವು ತಾತ್ಕಾಲಿಕವಾಗಿ ಶೇಕಡಾ 10 ಕ್ಕೆ ಇಳಿಯುತ್ತದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಕಾನೂನುಬಾಹಿರ ಎಂದು ಘೋಷಿಸಿದ ಹಿಂದಿನ ತೆರಿಗೆಗಳನ್ನು ಈ ಹೊಸ ತೆರಿಗೆ ಬದಲಾಯಿಸುತ್ತದೆ. ಕನಿಷ್ಠ ತಾತ್ಕಾಲಿಕವಾಗಿ, ಹೊಸ ಸೆಕ್ಷನ್ 122 ಪ್ರಾಧಿಕಾರದ ಅಡಿಯಲ್ಲಿ ಭಾರತಕ್ಕೆ ಅನ್ವಯವಾಗುವ ದರವು ಶೇಕಡಾ 10 ಕ್ಕೆ ಇಳಿಯುತ್ತದೆ ಎಂದು ಶ್ವೇತಭವನ ದೃಢಪಡಿಸಿದೆ. ವಿದೇಶಾಂಗ ಸಚಿವಾಲಯವು, ಇತ್ತೀಚೆಗೆ ಅಂಗೀಕರಿಸಿದ ಜಂಟಿ ಹೇಳಿಕೆಯ ಪ್ರಕಾರ ಭಾರತ ಮತ್ತು ಅಮೆರಿಕ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಕೆಲಸ ಮಾಡುತ್ತಿವೆ ಎಂದು ಹೇಳಿದೆ. ಹೊಸದಿಲ್ಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಮುಖ್ಯ ಸಮಾಲೋಚಕರ ನೇತೃತ್ವದ ಭಾರತದ ನಿಯೋಗವು ಮುಂದಿನ ವಾರ ಯುಎಸ್ಗೆ ಭೇಟಿ ನೀಡಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಗಾಯಗೊಂಡಿದ್ದ ಬೆಳ್ತಂಗಡಿ ಯುವಕ ಮೃತ್ಯು
ಬೆಳ್ತಂಗಡಿ: ಬೆಂಗಳೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತೋಟತ್ತಾಡಿ ನಿವಾಸಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಫೆ. 20ರಂದು ಮೃತಪಟ್ಟಿದ್ದಾರೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಸನಲ್ ಆಂಟನಿ (25) ಎಂದು ಗುರುತಿಸಲಾಗಿದೆ. ಫೆ. 14ರಂದು ಬೆಂಗಳೂರಿನ ಬೆಳ್ಳೂರು ಕ್ರಾಸ್ ಸಮೀಪ ನಡೆದ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಮಗು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Arsikere | ಬಸ್ ಬಾಗಿಲು ಹಾಕಲು ಹಿಂದೆ ಸರಿಯುವಂತೆ ಹೇಳಿದ್ದೇ ತಪ್ಪಾಯಿತು; ಚಾಲಕ ಕಂ ನಿರ್ವಾಹಕನ ಮೇಲೆ ಹಲ್ಲೆ: ಆರೋಪ
ಹಾಸನ: ಹಾಸನದಿಂದ ಅರಸೀಕೆರೆಯತ್ತ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಬಸ್ ನ ಚಾಲಕ ಕಂ ನಿರ್ವಾಹಕ ಮೇಲೆ ಹಲ್ಲೆ ನಡೆದಿರುವ ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸಂಜೆ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಸ್ ತುಂಬಿಕೊಂಡಿತ್ತು. ಬಾಗಿಲು ಮುಚ್ಚುವ ವೇಳೆ ಬಾಗಿಲಿನ ಬಳಿಯಲ್ಲಿ ನಿಂತಿದ್ದ ಪ್ರಯಾಣಿಕರನ್ನು ಒಳಕ್ಕೆ ಸರಿಸಲು ಚಾಲಕ ಕಂ ನಿರ್ವಾಹಕ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಮಹಿಳೆಯೊಬ್ಬಳಿಗೆ ತಳ್ಳಾಟ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಕುರಿತು ಮಹಿಳೆ ತನ್ನ ಪತಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದು, ಚಾಲಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ ಹಾಗೂ ಇನ್ನೂ ಕೆಲವರು ವಾಹನದಲ್ಲಿ ಬಂದು ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಚಾಲಕ-ನಿರ್ವಾಹಕ ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.
Hassan | ಎಟಿಎಂಗಳಿಗೆ ಹಣ ಹಾಕದೇ 3.40 ಕೋಟಿ ವಂಚನೆ ಆರೋಪ; ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ ಎಫ್ಐಆರ್
ಹಾಸನ : ನಗರದ ವಿವಿಧ ಬ್ಯಾಂಕ್ಗಳ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊಂದಿದ್ದ ಸಿಎಂಎಸ್ (Cash Management Services) ಕಂಪನಿಯ ಇಬ್ಬರು ಸಿಬ್ಬಂದಿ ಎಟಿಎಂಗಳಿಗೆ ಹಣ ಹಾಕದೇ ಕೋಟ್ಯಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ 15 ಎಟಿಎಂಗಳಿಗೆ ನಿಗದಿತ ಮೊತ್ತವನ್ನು ತುಂಬಿಸುವ ಹೊಣೆ ಹೊತ್ತಿದ್ದ ಬೂವನಹಳ್ಳಿ ಗ್ರಾಮದ ನಂದೀಶ್ ಬಿ.ಎಲ್. ಹಾಗೂ ದಾಸರಕೊಪ್ಪಲಿನ ಮಧುಕುಮಾರ್ ಎಂ.ಪಿ. ಅವರು ಎಟಿಎಂಗಳಿಗೆ ಹಣ ಜಮಾ ಮಾಡದೇ ಒಟ್ಟು ₹3,40,28,200 ಹಣವನ್ನು ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಸಿಎಂಎಸ್ ಬ್ರಾಂಚ್ ಮ್ಯಾನೇಜರ್ ನೀಡಿದ ದೂರು ಆಧರಿಸಿ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 306, 316(4), 318(4) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಹಣ ದುರುಪಯೋಗದ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಜಿಲ್ಲೆಯ ಬ್ಯಾಂಕಿಂಗ್ ವಲಯದಲ್ಲಿ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಎಂಸಿ ಸುಧಾಕರ್ಗೆ ಮುಜುಗರ ತಂದ ವೈರಲ್ ಆಡಿಯೋ: ವಿರೋಧಿ ಬಣಕ್ಕೆ ಅಸ್ತ್ರ, ಸಚಿವರ ಪರ ಆಪ್ತರ ಬ್ಯಾಟಿಂಗ್
ಸಚಿವ ಎಂಸಿ ಸುಧಾಕರ್ ಅವರದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರ ಜೊತೆಗೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದ ಆಡಿಯೋ ಇದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸ್ವತಃ ಸಚಿವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಆಡಿಯೋ ಫೇಕ್ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕೂಡಾ ಸಚಿವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವಿವರ ಇಲ್ಲಿದೆ.
Bagalkot Clash: ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ, ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ
ಬೆಂಗಳೂರು: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ಗಲಾಟೆ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹ ಕೇಳಿ ಬಂದ ಬೆನ್ನಲ್ಲೆ ಪ್ರತಿಕ್ರಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ಹೆಚ್ಚಿನ ಪೊಲೀಸ್ ಫೋರ್ಸ್ ಅಲ್ಲಿಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳು, ಲಾಂಡ್ ಆ್ಯಂಡ್ ಆರ್ಡರ್ ಎಡಿಜಿಪಿ ಅವರನ್ನು ಕಳಿಸಿದ್ದೇನೆ. ಬಾಗಲಕೋಟೆ ಈಗ ಶಾಂತವಾಗಿದೆ. ಅಲ್ಲಿಯ ಜನರು
ಮಂಗಳೂರು: ಎಂಐಆರ್ ಗ್ರೂಪ್ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ
ಮಂಗಳೂರು, ಫೆ.21: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್ನ ಉತ್ಪಾದನಾ ಘಟಕ ಸ್ಥಾಪನೆಗೆ ಶನಿವಾರ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ ಭೂಮಿ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸತತ ಪ್ರಯತ್ನ ದಿಂದ ಎಂಐಆರ್ ಗ್ರೂಪ್ , ಜಿಲ್ಲೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮಂಗಳೂರಿನಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ. ಇಲ್ಲಿ ಕಟ್ಟಡ ನಿರ್ಮಾಣ ನಡೆದು ಉತ್ಪಾದನೆ ಮಾಡುವವರೆಗೆ ನಮ್ಮೆಲ್ಲರ ಸಹಕಾರವಿದೆ. ಇದು ಮುಂದೆ ಇನ್ನಷ್ಟು ಕಂಪೆನಿ ಜಿಲ್ಲೆಗೆ ಬರಲು ಪ್ರೇರೇಪಣೆಯಾಗಲಿ. ಇಂತಹ ಬೃಹತ್ ಉದ್ಯಮಗಳು ಜಿಲ್ಲೆಗೆ ಬಂದು ನಮ್ಮ ಜಿಲ್ಲೆಯ ಜನರಿಗೆ ಉದ್ಯೋಗ ದೊರೆಯಲಿ ಎಂದು ಆಶಿಸಿದರು. ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಂಪನಿಯ ಸಿಇಒ ಆರ್ಕಿಟೆಕ್ಟ್ ರಫೇಲೆ ಮರಾಝೂ ಮಾತನಾಡಿ, ಭಾರತದಲ್ಲಿ ಪ್ರಪಥಮ ಬಾರಿಗೆ ನಮ್ಮ ಸಂಸ್ಥೆ ಕಾರ್ಯಾಚರಿಸಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು ಎಂಐ ಆರ್ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್, ಇಮ್ಮಾನುಯೆಲ್ ಪಿನಾ, ಗಜ್ಮೆಂಡ್ ಲುಜಿ, ಸುನಜೆ, ಪ್ರಮೋದ್ ಪಿಂಟೋ, ಕಮರ್ಷಿಯಲ್ ಡೈರೆಕ್ಟರ್ ಸೂರ್ಯ ನಾರಾಯಣ್ ಸಿಇಓ ಎಂಎಸ್ಇಝೆಡ್, ಸುನಿಲ್ ಆಚಾರ್, ಸಂಜಯ್ ಪ್ರಭು, ರತ್ನಾಕರ್ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
8.1 ಬಿಲಿಯನ್ ಡಾಲರ್ ಸಾಲಕ್ಕಾಗಿ ಉಕ್ರೇನ್ ಪರದಾಟ, ಶೀಘ್ರದಲ್ಲೇ ಸಿಹಿಸುದ್ದಿ ಸಾಧ್ಯತೆ... | Ukraine And Russia
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ಇನ್ನೇನು 5ನೇ ವರ್ಷಕ್ಕೆ ಎಂಟ್ರಿ ಕೊಟ್ಟು, ದೊಡ್ಡ ಸಮಸ್ಯೆ ಮಾಡಲು ಸಜ್ಜಾದಂತೆ ಕಾಣುತ್ತಿದೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಎದ್ದೂ ಬಿದ್ದು ಸಂಧಾನ ಮಾಡಿಸಲು ಪರದಾಡುತ್ತಿದ್ದಾರೆ. ಹೀಗಿದ್ದರೂ ಯಾವುದೇ ರೀತಿ ರಿಯಾಕ್ಷನ್ ಕೊಡದ ರಷ್ಯಾ ತನ್ನ ಪಾಡಿಗೆ ತಾನು ದಾಳಿ ಮುಂದುವರಿಸಿದೆ. ಪರಿಣಾಮ ಕೈಯಲ್ಲಿ ಕಾಸು ಇಲ್ಲದೆ ಉಕ್ರೇನ್
IND Vs PAK: ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಮತ್ತೆ ಹೈವೋಲ್ಟೇಜ್ ಕದನ ಸಾಧ್ಯತೆ: ಇಲ್ಲಿದೆ ವರದಿ
India Vs Pakistan match in T20 World cup: ಟಿ20 ವಿಶ್ವಕಪ್ 2026 ಇದೀಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಸೂಪರ್ 8 ಹಂತಕ್ಕೆ ಪ್ರವೇಶಿಸಿರುವ ತಂಡಗಳು ಖಚಿತವಾಗಿದ್ದು, ಪಂದ್ಯಗಳ ವೇಳಾಪಟ್ಟಿಯೂ ಪ್ರಕಟವಾಗಿದೆ. ಇನ್ಮುಂದೆ ನಡೆಯುವ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದ್ದು, ನಾಕೌಟ್ ಹಂತ ಪ್ರಮುಖ ತಂಡಗಳಿಗೆ ಕಠಿಣ ಪರೀಕ್ಷೆಯಾಗಲಿದೆ. ಇನ್ನೂ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ
ಇರಾನ್ ಪರ ನಿಂತ ರಷ್ಯಾ ಮತ್ತು ಚೀನಾ, ಅಮೆರಿಕಗೆ ಶುರುವಾಯ್ತು ಹೊಸ ಚಿಂತೆ... US Military
ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಯುದ್ಧದ ಆಟ ಶುರುವಾಗಿದೆ, ಈ ಬಾರಿ ಘೋರ ಯುದ್ಧ ಶುರುವಾಗಿ ಅದು ದೊಡ್ಡ ಹಂತಕ್ಕೆ ತಿರುಗಿದರೆ ಇಡೀ ಭೂಮಿ ನಾಶವಾಗಿ ಹೋಗುವ ಭಯ ಕೂಡ ಆವರಿಸುತ್ತಿದೆ. ಎಲ್ಲಾ ಆತಂಕದ ನಡುವೆ ಕೂಡ ಇರಾನ್ ಮತ್ತು ಅಮೆರಿಕ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿ ಸೇನಾ ಕಾರ್ಯಾಚರಣೆ ಹಂತಕ್ಕೆ ಹೋಗಿದ್ದಾರೆ. ಇದು ಸಾಕಷ್ಟು ಆತಂಕ
ಅಮೆರಿಕ| ಪ್ರತಿಸುಂಕ ರದ್ದುಪಡಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್: ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ ಟ್ರಂಪ್ ವಿಧಿಸಿರುವ ಜಾಗತಿಕ ಸುಂಕ ಕಾನೂನುಬಾಹಿರ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ಡೊನಾಲ್ಡ್ ಟ್ರಂಪ್ ನ್ಯಾಯಾಧೀಶರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನ್ಯಾಯಾಲಯದ ತೀರ್ಪು ತೀವ್ರ ನಿರಾಶಾದಾಯಕವಾಗಿದೆ. ಬಹುಮತದ ಅಭಿಪ್ರಾಯ ಬೆಂಬಲಿಸಿದ ನ್ಯಾಯಾಧೀಶರು ತಮಗೆ ತಾವೇ ನಾಚಿಕೆಪಡಬೇಕು ಮತ್ತು ಸರಿಯಾದ ಕೆಲಸ ಮಾಡಲು ಧೈರ್ಯವಿಲ್ಲದವರು ಎಂದು ಟೀಕಿಸಿದರು. ಅವರು(ನ್ಯಾಯಮೂರ್ತಿಗಳು) ಮೂರ್ಖರಾಗಿದ್ದು, ಎಡಪಂಥೀಯ ಡೆಮಾಕ್ರೆಟ್ಗಳ ಕೈಗೊಂಬೆಗಳಾಗಿದ್ದಾರೆ. ಅವರಿಗೆ ದೇಶಭಕ್ತಿ ಇಲ್ಲ ಹಾಗೂ ನಮ್ಮ ಸಂವಿಧಾನದ ಬಗ್ಗೆ ನಿಷ್ಠೆಯೂ ಇಲ್ಲದವರಾಗಿದ್ದಾರೆ’ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂಬುದು ನನ್ನ ಅಭಿಪ್ರಾಯ ಎಂದು ಟ್ರಂಪ್ ಹೇಳಿದ್ದಾರೆ. ಈ ವೇಳೆ ವರದಿಗಾರರೊಬ್ಬರು ತಮ್ಮ ಮಾತಿನ ಅರ್ಥವನ್ನು ವಿವರಿಸಲು ಟ್ರಂಪ್ ಅವರನ್ನು ಒತ್ತಾಯಿಸಿದಾಗ ಅವರು ವಿವರಿಸಲು ನಿರಾಕರಿಸಿದ್ದಾರೆ. ಇದೇ ವೇಳೆ ಪ್ರತಿಸುಂಕವನ್ನು ಸಮರ್ಥಿಸಿಕೊಂಡಿದ್ದ ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ಕ್ಲಾರೆನ್ಸ್ ಥಾಮಸ್ ಮತ್ತು ಬ್ರೆಟ್ ಕ್ಯಾವನಾ ಅವರಿಗೆ ಟ್ರಂಪ್ ಧನ್ಯವಾದ ಸಲ್ಲಿಸಿದ್ದಾರೆ.
ಚಂದ್ರಗುತ್ತಿ ದೇವಾಲಯದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿ : ಮಧುಬಂಗಾರಪ್ಪ ಭರವಸೆ
ಶಿವಮೊಗ್ಗ : ಚಂದ್ರಗುತ್ತಿ ದೇವಾಲಯವನ್ನು ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದಾಗಿ ಪ್ರಾಧಿಕಾರ ರಚಿಸಲಾಗಿದ್ದು, ಅಭಿವೃದ್ದಿಗೆ ಸಂಪೂರ್ಣ ಅನುದಾನ ತರುವ ಜವಾಬ್ದಾರಿ ನನ್ನದು. ಮುಂದಿನ ಜಾತ್ರೆಯೊಳಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪ ಭರವಸೆ ನೀಡಿದರು. ಶನಿವಾರ ಅವರು ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಮೂಲಭೂತ ಸೌಕರ್ಯದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಜನಸಂಪರ್ಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 2.84 ಕೋಟಿ ವೆಚ್ಚದ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ಜನವರಿ ತಿಂಗಳಲ್ಲಿ ಚಂದ್ರಗುತ್ತಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಿದ್ದು, ಇದರಿಂದಾಗಿ ದೇವಾಲಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸಗಳನ್ನು ಮಾಡಬೇಕಾಗಿದೆ. ದೇವಸ್ಥಾನದ ಮುಖ್ಯ ದ್ವಾರದಿಂದ ಹತ್ತಲು ಮೆಟ್ಟಿಲುಗಳಿವೆ. ಆದರೆ ದೇವಸ್ಥಾನದ ಇನ್ನೊಂದು ಕಡೆಯಿಂದ ಇಳಿಯಲು ಮೆಟ್ಟಿಲು ನಿರ್ಮಿಸಲಾಗುವುದು. ಹಾಗೂ ಛಾವಣಿ ನಿರ್ಮಿಸಲಾಗುವುದು ಎಂದರು. ಸೊರಬ ತಾಲ್ಲೂಕಿನಲ್ಲಿ ಗುಡವಿ, ಕೋಟಿಪುರ, ಚಂದ್ರಗುತ್ತಿ, ಬಂಗಾರಧಾಮ, ಬನವಾಸಿ ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ 64 ಪ್ರವಾಸಿ ತಾಣಗಳಿದ್ದು ಜಿಲ್ಲೆ ಉತ್ತಮಪ್ರವಾಸಿ ತಾಣವಾಗುತ್ತಿದೆ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ರೂ. 341 ಕೋಟಿ ಹಣ ಯಾರ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಫನಾನುಭವಿಗಳಿಗೆ ತಲುಪುತ್ತಿದ್ದು ಬಡವರ ಬಾಳಿಗೆ ಆಸರೆಯಾಗಿದೆ. ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಬದಲಾಯಿಸಿ, ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟ ಯೋಜನೆ ತಂದಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು. ಕಾನೂನಾತ್ಮಕವಾಗಿ ಉಳುಮೆ ಮಾಡುತ್ತಿರುವ ಬಗರ್ ಹುಕುಂ ರೈತರನ್ನು ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವಂತಿಲ್ಲ. ಬಡವರಿಗೆ ಹಕ್ಕುಪತ್ರ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷಸಿ.ಎಸ್.ಚಂದ್ರಭೂಪಾಲ, ಸಾಗರ ಎಸಿ ವೀರೇಶ್ ಕುಮಾರ್ , ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಡಾ.ಸುಜಿತ್ ನಯನ್, ಸೊರಬ ತಹಶೀಲ್ದಾರರಾದ ಪುರಂದರ ಕೆ , ಸೊರಬ ಇಓ ಶಶಿಧರ್, ಚಂದ್ರಗುತ್ತಿ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಮೀಳಾ ಕುಮಾರಿ ಮುಖಂಡರಾದ ಗಣಪತಿ, ಸದಾನಂದಗೌಡ, ಅಣ್ಣಪ್ಪ ಇತರೆ ಮುಖಂಡರು, ಚಂದ್ರಗುತ್ತಿ ಗ್ರಾಮದ ಪ್ರಮುಖರು ಹಾಜರಿದ್ದರು.
Gold: ಹೂಡಿಕೆದಾರರಿಗೆ ಲಾಭ, ಗ್ರಾಹಕರಿಗೆ ಆಘಾತ: ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರವೂ ಹೆಚ್ಚಳ
Gold Price on Feb 21st: ಭಾರತ ಸೇರಿದಂತೆ ಜಾಗತಿಕವಾಗಿ ಹೆಚ್ಚು ಬೇಡಿಕೆ ಇರುವ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಸತತ ಮೂರನೇ ದಿನವು ಚಿನ್ನದ ಬೆಲೆ ಹೆಚ್ಚಳ ಮುಂದುವರಿದಿದೆ. ಬೆಳ್ಳಿಯ ದರ ಎರಡು ದಿನದಲ್ಲಿ ಬರೋಬ್ಬರಿ 20,000 ಸಾವಿರ ರೂಪಾಯಿ ಹೆಚ್ಚಾಗಿದೆ. ಇಂದು ನಗರವಾರು ಚಿನ್ನದ ಬೆಲೆ ಎಷ್ಟಿದೆ?, ಇತ್ತೀಚೆಗೆ ಎಷ್ಟು ಬಾರಿ ಈ ಲೋಹಗಳ
ಕಾನೂನು ಕೈಗೆತ್ತಿಕೊಳ್ಳಬೇಡಿ, ಸಹಕಾರ ಕೊಡಿ: ಬಾಗಲಕೋಟೆ ಜನರಿಗೆ ಜಿ ಪರಮೇಶ್ವರ್ ಮನವಿ
ಬಾಗಲಕೋಟೆಯಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜನೆ ಮಾಡಲಾಗಿದೆ. ಶಾಂತಿ ಸಭೆಗೆ ಪ್ರಮುಖರು ಗೈರಾಗಿದ್ದಾರೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ಯಾರೂ ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಮತ್ತಷ್ಟು ವಿವರ ಇಲ್ಲಿದೆ.
’ಕಾಂಗ್ರೆಸ್ಸಿಗರ ರಕ್ತದಲ್ಲೇ ಸರ್ವಾಧಿಕಾರಿ ಧೋರಣೆಯಿದೆ’ : ಅದಕ್ಕೆ 2 ಕಾರಣ ಕೊಟ್ಟ ನಿಖಿಲ್ ಕುಮಾರಸ್ವಾಮಿ
NIkhil Kumaraswamy On Congress : ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ನಿಖಿಲ್, ಕಾಂಗ್ರೆಸ್ ಸರ್ಕಾರ, ಸರ್ವಾಧಿಕಾರಿ ಧೋರಣೆಯನ್ನು ತಾಳುತ್ತಿದೆ ಎಂದು ಅದಕ್ಕೆ 2 ಕಾರಣವನ್ನು ನೀಡಿದ್ದಾರೆ.
ಮತ್ತೆ ಏರು ಹಾದಿಯಲ್ಲಿರುವ ಚಿನ್ನದ ಬೆಲೆ; ಇಂದಿನ ದರವಷ್ಟು?
ಅಮೆರಿಕ ಇತರ ದೇಶಗಳ ಮೇಲೆ ಹೇರಿದ ತೆರಿಗೆಗಳ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಅರ್ಥವ್ಯವಸ್ಥೆಯಲ್ಲಿ ಮತ್ತು ಚಿನ್ನದ ಬೆಲೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಲಿದೆ. ಜನವರಿಯಲ್ಲಿ ನಾಗಾಲೋಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ ಆರಂಭದಿಂದಲೇ ಕುಸಿಯುತ್ತಾ ಬಂದಿತ್ತು. ನಂತರ ಸತತ ಕುಸಿತ ಮತ್ತು ಅಲ್ಪ ಏರಿಕೆಗಳ ನಡುವೆ ಪ್ರತಿ ಗ್ರಾಂಗೆ 15 ಸಾವಿರದಿಂದ 16 ಸಾವಿರ ರೂ. ನಡುವೆ ಸ್ಥಿರವಾಗಿ ನಿಂತಿತ್ತು. ಇದೀಗ ಈ ವಾರವಿಡೀ ಇದೇ ಬೆಲೆಯ ನಡುವೆ ಚಿನ್ನ ಏರಿಳಿತ ಕಾಣುತ್ತಿದೆ. ನಿನ್ನೆ ಅಲ್ಪ ಮಟ್ಟಿಗೆ ಕುಸಿದಿದ್ದ ಬೆಲೆ ಇಂದು ಮತ್ತೆ ಅಲ್ಪ ಮಟ್ಟಿಗೆ ಏರಿಕೆಯಾಗಿದೆ. ಅಮೆರಿಕ ಇತರ ದೇಶಗಳ ಮೇಲೆ ಹೇರಿದ ತೆರಿಗೆಗಳ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಅರ್ಥವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯನ್ನು ಹುಡುಕುವುದರಿಂದ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಫೆಬ್ರವರಿ 21ರಂದು ಶನಿವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 191 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,59,280 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 175 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,46,000 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 143 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,19,460 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 21ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,928 (+191) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,600 (+175) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,946 (+143) ರೂ. ಬೆಲೆಗೆ ತಲುಪಿದೆ. ಏರುಹಾದಿಯಲ್ಲಿರುವ ಬೆಳ್ಳಿ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಅಲ್ಪ ಏರಿಕೆ ಕಂಡಿತ್ತು. ನಂತರ ಫೆಬ್ರವರಿ 10ರಿಂದ ಸತತ ಕುಸಿತ ಕಾಣುತ್ತಾ ಬಂದಿದೆ. ಈ ವಾರದ ಆರಂಭದಲ್ಲಿ ಮಂಗಳವಾರ ಪ್ರತಿ ಗ್ರಾಂಗೆ 8 ರೂ. ಕುಸಿತ ಕಂಡಿದ್ದ ಬೆಳ್ಳಿ ಕೆಜಿಗೆ 2,60,000 ರೂ. ಗೆ ಬಂದು ನಿಂತಿತ್ತು. ನಂತರ ಬುಧವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಕೆಜಿಗೆ 2,55,000 ರೂ. ಗೆ ಬಂದು ನಿಂತಿತ್ತು. ಆದರೆ ಗುರುವಾರದಿಂದ ಬೆಳ್ಳಿ ಏರುಹಾದಿಯಲ್ಲಿದೆ. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,933 (+191) ರೂ., 22 ಕ್ಯಾರೆಟ್ ಚಿನ್ನದ ದರ 14,605 (+175) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,015 (+284) ರೂ., 22 ಕ್ಯಾರೆಟ್ ಚಿನ್ನದ ದರ 14,680 (+260) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ.
ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್–ಕಾರು ಢಿಕ್ಕಿ; ಓರ್ವ ಮೃತ್ಯು
ಕಾಸರಗೋಡು: ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಸಮೀಪ ಶನಿವಾರ ಮುಂಜಾನೆ ಸಂಭವಿಸಿದ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಮೃತರನ್ನು ನೆಲ್ಲಿಕಟ್ಟೆಯ ಸಂಶುದ್ದೀನ್ (68) ಎಂದು ಗುರುತಿಸಲಾಗಿದೆ. ಅವರ ಮಗ ಸಲ್ಮಾನ್ ಹಾರಿಸ್ (22) ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆ ಅಪಘಾತ ಸಂಭವಿಸಿದೆ. ಕಾಸರಗೋಡಿನಿಂದ ಪುತ್ತೂರಿಗೆ ಸಾಗುತ್ತಿದ್ದ ಕೆಎಸ್ಸಾರ್ಟಿಸಿ(ಕರ್ನಾಟಕ) ಬಸ್ ಮತ್ತು ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣದತ್ತ ತೆರಳುತ್ತಿದ್ದ ಕಾರು ಪರಸ್ಪರ ಢಿಕ್ಕಿ ಹೊಡೆದಿವೆ. ಢಿಕ್ಕಿಯ ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ತಂದೆ–ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಸಂಶುದ್ದೀನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಕ್ಷಿಪ್ರ ಬೆಳವಣಿಗೆಗಳು; ಶೀಘ್ರದಲ್ಲೇ ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ ಭೇಟಿ ಸಾಧ್ಯತೆ, ಸೆರ್ಗಿಯೊ ಗೋರ್ ಏನಂದ್ರು?
ಭಾರತದ ಸರುಕುಗಳ ಮೇಲಿನ ಅಮೆರಿಕ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಈ ಒಪ್ಪಂದ ಶೀಘ್ರದಲ್ಲೇ ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ನೇರ ಭೇಟಿ ಏರ್ಪಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಕುರಿತು ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿದೆ ಮಾಹಿತಿ.
ಉಳ್ಳಾಲ: ಬಸ್ ದುರಂತದಲ್ಲಿ ಮೃತಪಟ್ಟ ಆಟೋ ಚಾಲಕನ ಕುಟುಂಬಕ್ಕೆ ಯೂನಿಯನ್ ನಿಂದ ನೆರವು
ಉಳ್ಳಾಲ: ಇತ್ತೀಚೆಗೆ ತಲಪಾಡಿಯಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಾಜಾಕಮ್ಮಾರ್ ಯೂನಿಯನ್ ಸದಸ್ಯ ಹೈದರ್ ಅಲಿ ಅವರ ಕುಟುಂಬಕ್ಕೆ ಯೂನಿಯನ್ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು. ಆಟೋ ಚಾಲಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಗ್ರಹಿಸಲಾದ ಒಟ್ಟು 4,60,000 ರೂ.ಗಳನ್ನು ಚೆಕ್ ಮೂಲಕ ಕುಟುಂಬದವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಾಜಾಕಮ್ಮಾರ್ ಯೂನಿಯನ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಕೊಡಕ್ಕಲ್, ಹೈದರ್ ಅಲಿ ಅವರಿಗೆ ನಾಲ್ಕು ಸಣ್ಣ ಪ್ರಾಯದ ಮಕ್ಕಳು ಇದ್ದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಎಲ್ಲರ ಸಹಕಾರದಿಂದ ಸಂಗ್ರಹಿಸಿದ ಮೊತ್ತವನ್ನು ಕುಟುಂಬಕ್ಕೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೂನಿಯನ್ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ., ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್, ಹಣಕಾಸು ಕಾರ್ಯದರ್ಶಿ ಇಕ್ಬಾಲ್ ಮಾಡೂರ್, ಉಪಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ಶಫೀಕ್ ಸೇರಿದಂತೆ ಪದಾಧಿಕಾರಿಗಳು ಶರೀಫ್, ಸಿರಾಜ್, ಅಬ್ಬಾಸ್, ಯೂಸುಫ್, ನಿಸಾರ್, ಸಾಧಿಕ್ ಹಾಗೂ ಕಾರ್ಯನಿರ್ವಾಹಕರು ರಿಝ್ವಾನ್, ತಾಸೀನ್, ಉಸ್ಮಾನ್, ಶಾಫೀ, ಹಾರಿಸ್, ಸಮೀರ್, ಇಮ್ರಾನ್, ರಝಾಕ್, ಅಬ್ದುಲ್ಲ ಕೆದುಂಬಾಡಿ ಮತ್ತಿತರರು ಉಪಸ್ಥಿತರಿದ್ದರು.
ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಶನಿವಾರ ಮುಂಬೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ಘಟನೆಯ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ. ಆರೆಸ್ಸೆಸ್ಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಭಿವಂಡಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಲು ಲೋಕಸಭೆಯ ವಿರೋಧ ಪಕ್ಷದ ನಾಯಕ ಮುಂಬೈಗೆ ತೆರಳಿದ್ದರು. ಅವರ ಆಗಮನದ ಹಿನ್ನೆಲೆ ಭಿವಂಡಿಯ ಸ್ಥಳೀಯ ಆಡಳಿತವು ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಿತ್ತು.
UGC ನಿಯಮಗಳ ಕುರಿತು ಮಾತನಾಡುವಾಗ “ಜಾತಿವಾದಿ ಹೇಳಿಕೆ” ಆರೋಪ: ವಿವಾದದಲ್ಲಿ JNU ಉಪಕುಲಪತಿ
ಪ್ರತಿಭಟನೆಗೆ ಕರೆ ನೀಡಿದ ವಿದ್ಯಾರ್ಥಿ ಸಂಘಟನೆ
ಉಡುಪಿ: ಸಾಹೆಬಾನ್ ಕಮ್ಯೂನಿಟಿ ಫೋರಮ್ ವತಿಯಿಂದ ಇಫ್ತಾರ್ ಕೂಟ
ಉಡುಪಿ: ಸಾಹೆಬಾನ್ ಕಮ್ಯೂನಿಟಿ ಫೋರಮ್ ವತಿಯಿಂದ ಫೆ. 20ರಂದು ಉಡುಪಿಯ ಹಾಶಿಮಿ ಮಸ್ಜಿದ್ನಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಾಹೇಬನ್ ಉಪಾಧ್ಯಕ್ಷ ಜುನೈದ್ ಅಸಾದಿ , ಪ್ರಧಾನ ಕಾರ್ಯದರ್ಶಿ ಎಂ. ಇಕ್ಬಲ್ ಮನ್ನಾ, ಹಾಶಿಮಿ ಮಸೀದಿ ಉಪಾಧ್ಯಕ್ಷ ಗುಲಾಮ್ ರೌಫ್ ಸೇರಿದಂತೆ 220ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದರು. ರಮಝಾನ್ ಉಪವಾಸದ ಮಹತ್ವ ಹಾಗೂ ಸಮಾಜದಲ್ಲಿ ಸಹಬಾಳ್ವೆಯ ಸಂದೇಶವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಾಹೆಬಾನ್ ಕಮ್ಯೂನಿಟಿ ಫೋರಮ್ ತನ್ನ ಮುಂದಿನ ಇಫ್ತಾರ್ ಕೂಟವನ್ನು ರವಿವಾರ ತೋಕುರ್ ಜುಮ್ಮಾ ಮಸೀದಿಯಲ್ಲಿ ಆಯೋಜಿಸಿರುವುದಾಗಿ ತಿಳಿಸಿದೆ.
ಜಮಖಂಡಿ: ಕಂದಕಕ್ಕೆ ಬಿದ್ದ 17 ಕಬ್ಬು ಕಾರ್ಮಿಕರಿದ್ದ ಟ್ರ್ಯಾಕ್ಟರ್: 2 ವರ್ಷದ ಮಗು ಸೇರಿ ನಾಲ್ವರು ಸಾವು
ಬಾಗಲಕೋಟೆ: ಹೊಲದ ಕೆಲಸಕ್ಕೆಂದು ನೆರೆಯ ಮಹಾರಾಷ್ಟ್ರದಿಂದ ಬಂದಿದ್ದ ಕಬ್ಬು ಕಟಾವು ಗ್ಯಾಂಗ್ ಕೆಲಸ ಮುಗಿಸಿ ಮರಳಿ ತಮ್ಮೂರುಗಳಿಗೆ ಹೋಗುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನೋಡ ನೋಡುತ್ತಲೇ ಕೂಲಿ ಕಾರ್ಮಿಕರನ್ನು ಒಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಭಾರೀ ಅನಾಹುತ ಸಂಭವಿಸಿದ್ದು, ಇದರಲ್ಲಿ ಎರಡು ವರ್ಷ ಮಗು ಸೇರಿ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ
ಚಿತ್ರ: ಸೆಕೆಂಡ್ ಕೇಸ್ ಆಫ್ ಸೀತಾರಾಮ್ ನಿರ್ದೇಶನ: ದೇವಿ ಪ್ರಸಾದ್ ಶೆಟ್ಟಿ ನಿರ್ಮಾಣ: ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ತಾರಾಗಣ: ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು. ಸೀತಾರಾಮ್ ಬಿನೊಯ್ ಸಿನೆಮಾ ನೋಡಿದವರಿಗೆ ಸೀತಾರಾಮ್ ಯಾರೆಂದು ಚೆನ್ನಾಗಿ ಗೊತ್ತಿರುತ್ತದೆ. ಗೊತ್ತಿಲ್ಲದವರು ಕೂಡ ಅರ್ಥ ಮಾಡಿಕೊಳ್ಳುವಂಥ ಕಥೆಯನ್ನು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ. ಅದು ಆನೆಗದ್ದೆ ಪೊಲೀಸ್ ಸ್ಟೇಷನ್. ಅಲ್ಲಿನ ಇನ್ಸ್ಪೆಕ್ಟರ್ ಸೀತಾರಾಮ್. ಚಾಣಾಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಾತ. ಆದರೆ ಆತನ ಚಾಣಾಕ್ಷತೆಗೆ ಸವಾಲೆಸೆಯುವಂಥ ಘಟನೆ ಅಲ್ಲಿ ಸಂಭವಿಸುತ್ತದೆ. ಒಂದರ ಹಿಂದೆ ಒಂದು ಎನ್ನುವಂತೆ ಸರಣಿ ಕೊಲೆಗಳು ನಡೆಯತೊಡಗುತ್ತವೆ. ಪತ್ತೆಯಾಗುವುದು ಎಲ್ಲವೂ ಚಿತ್ರಹಿಂಸೆಯಿಂದ ಸಾವಿಗೀಡಾದ ಮಧ್ಯವಯಸ್ಕ ಗಂಡಸರ ಮೃತದೇಹಗಳು. ಹೋಟೆಲ್ ಜಯಣ್ಣ, ಟ್ಯಾಕ್ಸಿ ಡ್ರೈವರ್ ಅಶೋಕ, ಪೊಲೀಸ್ ಅಧಿಕಾರಿ ವಸಂತ್.. ಹೀಗೆ ವಿಭಿನ್ನ ಕ್ಷೇತ್ರದ ವ್ಯಕ್ತಿಗಳ ಕೊಲೆ. ಒಂದಕ್ಕೊಂದು ಸಂಬಂಧವೇ ಇರದಂಥ ಸರಣಿ ಕೊಲೆಗಳು! ಆದರೆ ಇವುಗಳನ್ನು ಜೋಡಿಸುವಂಥ ಸರಪಣಿ ಏನು? ಅದರ ಹುಡುಕಾಟವೇ ಈ ಸೆಕೆಂಡ್ ಕೇಸ್ ಆಫ್ ಸೀತಾರಾಮ್. ಚಿತ್ರದ ಮೊದಲಾರ್ಧದಲ್ಲೇ ಅಪರಾಧಿ ಸಿಕ್ಕೇಬಿಟ್ಟ ಎನ್ನುವ ಭಾವ ಮೂಡಿಸುವಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಆದರೆ ಮಧ್ಯಂತರದ ಹೊತ್ತಿಗೆ ಹೊಸದೊಂದು ತಿರುವಿನೊಂದಿಗೆ ಬಂದು ನಿಲ್ಲುತ್ತಾರೆ. ಕ್ಲೈಮ್ಯಾಕ್ಸ್ ಹೊತ್ತಿಗೆ ಕೊಲೆಗಾರ ಯಾರೆನ್ನುವ ತಲೆನೋವು ಪ್ರೇಕ್ಷಕರನ್ನು ಕಾಡುತ್ತದೆ. ಆದರೆ ಅಂತಿಮವಾಗಿ ಎಲ್ಲದಕ್ಕೂ ಕಥೆ ಸಮರ್ಪಕ ಉತ್ತರ ನೀಡುತ್ತದೆ. ಸರಣಿ ಕೊಲೆಗಳ ಬಗ್ಗೆ ನಡೆಯುವ ತನಿಖೆಯನ್ನು ಆಧಾರವಾಗಿಸಿ ಈಗಾಗಲೇ ಸರಣಿಯಾಗಿ ಸಿನೆಮಾಗಳು ಬರುತ್ತಿವೆ. ಅದರ ನಡುವೆ ಈ ಚಿತ್ರವನ್ನು ವಿಭಿನ್ನವಾಗಿಸಲು ಇರುವ ಏಕೈಕ ಅಂಶ ಅಂದರೆ ಅದು ಈ ನಿರ್ದೇಶಕ ಮತ್ತು ನಾಯಕ ನಟನ ನಡುವೆ ಇರುವ ಕಾಂಬಿನೇಶನ್. ಕನ್ನಡದಲ್ಲಿ ತನಿಖಾ ಚಿತ್ರಗಳ ಪಂಟರಾಗುತ್ತಿರುವವರು ದೇವಿ ಪ್ರಸಾದ್ ಶೆಟ್ಟಿ. ಇವರ ನಿರ್ದೇಶನದ ಇದುವರೆಗಿನ ಮೂರು ಚಿತ್ರಗಳು ಕೂಡ ಪೊಲೀಸ್ ತನಿಖೆಯದ್ದೇ ಆಗಿದ್ದು ವಿಜಯರಾಘವೇಂದ್ರ ಅವರೇ ಪ್ರಧಾನ ಪಾತ್ರ ನಿಭಾಯಿಸಿದ್ದಾರೆ. ಚಿನ್ನಾರಿ ಮುತ್ತನಿಗೆ ಹೊಸ ಇಮೇಜ್ ತಂದುಕೊಟ್ಟಿರುವ ಈ ನಿರ್ದೇಶಕರ ಗರಡಿಯಲ್ಲಿ ಚಿತ್ರದಿಂದ ಚಿತ್ರಕ್ಕೆ ರಾಘು ಹೊಸ ಹೊಳಪಿನಲ್ಲಿ ಗೋಚರಿಸುತ್ತಿದ್ದಾರೆ. ಸೀತಾರಾಮ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಮತ್ತೊಮ್ಮೆ ನೈಜ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಾಲಾಶಿಕ್ಷಕ ಸೆಬಾಸ್ಟಿಯನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯನ್ನು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ನಾಯಕನ ಅಕ್ಕನ ಪಾತ್ರವನ್ನು ಉಷಾ ಭಂಡಾರಿ ನಿರ್ವಹಿಸಿದ್ದಾರೆ. ಭಾವನ ಪಾತ್ರಧಾರಿಯ ನಟನೆಯೂ ಗಮನ ಸೆಳೆಯುತ್ತದೆ. ನಟನೆಯ ವಿಚಾರದಲ್ಲಿ ಎಲ್ಲವನ್ನು ನೈಜವೆನಿಸುವಂತೆ ತೋರಿಸಿರುವುದೇನೋ ನಿಜ. ಆದರೆ ನಿರ್ದೇಶಕರು ಸರಣಿ ಕೊಲೆಯಂಥ ಗಂಭೀರ ಪ್ರಕರಣದ ತನಿಖೆಯನ್ನು ಒಂದು ಪೊಲೀಸ್ ಸ್ಟೇಷನ್ ಒಳಗೆ ಸೀಮಿತಗೊಳಿಸಿರುವುದು ವಾಸ್ತವಕ್ಕೆ ದೂರವೆನಿಸುತ್ತದೆ. ಅದರಲ್ಲೂ ಪೊಲೀಸ್ ಅಧಿಕಾರಿಯ ಕೊಲೆ ನಡೆದಾಗಲಾದರೂ ಪ್ರಕರಣದ ಪರಿಣಾಮ ಪೊಲೀಸ್ ವಲಯದ ಆಚೆ ಹೇಗಿದೆ ಎನ್ನುವ ಕುತೂಹಲ ಮೂಡುವುದು ಸಹಜ. ಆದರೆ ಅದಕ್ಕೆ ಇಲ್ಲಿ ಯಾವುದೇ ಉತ್ತರವಿಲ್ಲ. ಚಿತ್ರದ ಕಥೆಯಲ್ಲಿ ಸಂಗೀತಕ್ಕೆ ಒಂದು ಪ್ರಧಾನ ಪಾತ್ರವಿದೆ. ಅದೇ ಎಳೆಯೊಂದಿಗೆ ಚಿತ್ರವನ್ನು ಇನ್ನಷ್ಟು ಮ್ಯೂಸಿಕಲ್ ಮಾಡಬಹುದಿತ್ತು ಅನಿಸದಿರದು. ಆದರೆ ಸಂಗೀತ ನಿರ್ದೇಶಕ ನವನೀತ ಶ್ಯಾಮ್ ಸಿಕ್ಕ ಅವಕಾಶವನ್ನೇ ಚೆನ್ನಾಗಿ ಬಳಸಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ವೀಣೆ ಮತ್ತು ವಯೊಲಿನ್ ಬಳಕೆ ಮನ ಸೆಳೆಯುತ್ತದೆ. ಖುದ್ದು ವಿಜಯ ರಾಘವೇಂದ್ರ ಕಂಠದಲ್ಲಿರುವ ‘ಉರುಳೋ ಕಾಲವೇ..’ ಎನ್ನುವ ತ್ರಿಲೋಕ್ ತ್ರಿವಿಕ್ರಮ ರಚನೆ ಅರ್ಥಪೂರ್ಣ, ಭಾವಪೂರ್ಣ ಎನಿಸುತ್ತದೆ. ಭವಾನಿ ಶಂಕರ್ ಆನೆಕಲ್ಲು ಸಂಭಾಷಣೆ ಸಂದರ್ಭಕ್ಕೆ ಹೊಂದುವಂತಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣದಲ್ಲಿ ಪ್ರತೀ ಫ್ರೇಮ್ಗಳು ಮಾತನಾಡುತ್ತವೆ. ಈ ಚಿತ್ರದಲ್ಲಿನ ತನಿಖಾಧಿಕಾರಿಯ ಸಹನೆ ನಿಮಗೂ ಇದ್ದರೆ ಖಂಡಿತವಾಗಿ ಚಿತ್ರವನ್ನು ಅನುಭವಿಸಿ ಆಸ್ವಾದಿಸಬಹುದಾಗಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಬಡವರು ಮತ್ತು ಕಡು ಬಡವರನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಉಚಿತ ಯೋಜನೆಗಳನ್ನು ನೀಡುತ್ತಿರುವುದರ ಬಗ್ಗೆ ವ್ಯಾಪಕವಾದ ಚರ್ಚೆಗಳಾಗುತ್ತಿವೆ. ದೇಶದಲ್ಲಿ ಕೆಲವರಿಗೆ ಐವತ್ತು ಸಾವಿರದಿಂದ ಹಿಡಿದು 5 ಲಕ್ಷ ರೂಪಾಯಿ ತನಕ ಸಂಬಳವಿದೆ. ಇದೇ ವೇಳೆಯಲ್ಲಿ ದಿನಕ್ಕೆ 250 ಕೂಲಿಯಿಂದ ಹಿಡಿದು ಮಾಸಿಕ 10 ಸಾವಿರ ರೂಪಾಯಿಗಳ ಸಂಬಳ ಪಡೆಯುವ ನೌಕರರೂ ಇದ್ದಾರೆ. ಕೆಲವರಿಗೆ ವಾಸಿಸಲು ದೊಡ್ಡ ದೊಡ್ಡ ಮನೆಗಳು ಮತ್ತು ಕೆಲವರಿಗೆ ಸಕಲ ಸೌಕರ್ಯ ಸೌಲಭ್ಯವಿರುವ ಮನೆಗಳು ಇರುತ್ತವೆ. ಇದೇ ವೇಳೆಯಲ್ಲಿ ಸರಕಾರ ಕೊಡುವ ಕೇವಲ ಮೂರು ಚದರ ಗೂಡಿನ ರೂಪದ ಮನೆಯಲ್ಲಿ ಮತ್ತು ಬಯಲುಗಳಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕುವ, ಯಾವುದೂ ಇಲ್ಲದೆ ಬೆಳಗ್ಗೆಯಿಂದ ರಾತ್ರಿ ವರೆಗೂ ದುಡಿದು ಎಲ್ಲೋ ಒಂದಷ್ಟು ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಂಡು, ಮುಚ್ಚಿದ ಅಂಗಡಿಗಳ ಮುಂದೆ ಇಲ್ಲವೇ ರಸ್ತೆಗಳ ಮೇಲೆ ಹಾಗೂ ಬಸ್ ನಿಲ್ದಾಣಗಳಲ್ಲಿ ಮಲಗಿ ಬದುಕು ಸಾಗಿಸುತ್ತಿರುವ ಮಂದಿಗೆ ಲೆಕ್ಕವಿಲ್ಲ. ಪ್ರತಿಷ್ಠಿತ ಆಸ್ಪತ್ರೆಗಳ ಸೌಲಭ್ಯ, ಶಾಲೆಗಳ ಸೌಲಭ್ಯ ಉಳ್ಳ ಜನರು ಮತ್ತು ಅವರ ಕುಟುಂಬದ ಸದಸ್ಯರು ಒಂದು ಕಡೆಯಲ್ಲಿ ಸಂತೋಷವಾಗಿ ಬದುಕುತ್ತಿದ್ದರೆ, ಸೌಕರ್ಯ ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳು ಮತ್ತು ಆಟದ ಮೈದಾನಗಳಿಲ್ಲದ, ಶೌಚಾಲಯಗಳಿಲ್ಲದ, ಗ್ರಂಥಾಲಯ ಗಳಿಲ್ಲದ, ಕುಳಿತುಕೊಳ್ಳಲು ಬೆಂಚುಗಳಿಲ್ಲದ, ಕುಡಿಯುವ ನೀರಿಲ್ಲದ, ಮುರುಕಲು ಕಟ್ಟಡಗಳನ್ನು ತಾವು ಕಲಿಯುವ ಶಾಲೆಗಳೆಂದು ಭಾವಿಸಿ ಬದುಕುತ್ತಿರುವ ಲಕ್ಷಾಂತರ ಮಕ್ಕಳು ಒಂದು ಕಡೆಯಲ್ಲಿದ್ದಾರೆ. ದಿನಕ್ಕೆ 250 ರೂ. ಕೂಲಿ ಪಡೆಯುವ ವ್ಯಕ್ತಿ ಇಲ್ಲವೇ ಕನಿಷ್ಠ 10 ಸಾವಿರ ರೂಪಾಯಿ ಸಂಬಳ ಪಡೆಯುವ ಮನೆಯ ಮಕ್ಕಳು ಪುಸ್ತಕವನ್ನು ಖರೀದಿಸಿದರೆ ಬಡವರೆಂದು ಯಾರೂ ರಿಯಾಯಿತಿ ಕೊಡುವುದಿಲ್ಲ, ಮಕ್ಕಳಿಗೆ ವಸ್ತ್ರಗಳನ್ನು ಖರೀದಿಸಿದರೆ ಬಡವರೆಂದು ಯಾರೂ ರಿಯಾಯಿತಿ ಕೊಡುವುದಿಲ್ಲ, ಬಡವರೆಂದು ರೈಲು, ಬಸ್ಸು ಟಿಕೆಟ್ ದರದಲ್ಲಿ ರಿಯಾಯಿತಿ ಕೊಡುವುದಿಲ್ಲ, ದಿನಸಿ ಅಂಗಡಿಯಲ್ಲಿ ಪದಾರ್ಥಗಳನ್ನು ಖರೀದಿಸಿದರೆ ಬಡವರು ಎಂದು ಯಾರೂ ರಿಯಾಯಿತಿ ದರದಲ್ಲಿ ಕೊಡುವುದಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ ಇಲ್ಲವೇ ಔಷಧಿಗಳನ್ನು ಖರೀದಿಸಿದಾಗ ಬಡವರೆಂದು ಯಾರೂ ಇವರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡುವುದಿಲ್ಲ, ಔಷಧಿಯನ್ನು ಕೊಡುವುದಿಲ್ಲ. ಎಲ್ಲಿಯ ತನಕ ಎಲ್ಲರಿಗೂ ಅವರ ದುಡಿಮೆಗೆ ಮತ್ತು ಬದುಕಿಗೆ ಬೇಕಾಗುವಷ್ಟು, ಸಂಬಳದ ವ್ಯವಸ್ಥೆ, ಬದುಕಲು ಸರಿಯಾದಂತಹ ವಸತಿ ವ್ಯವಸ್ಥೆ, ಕುಡಿಯುವ ನೀರು, ಶುದ್ಧವಾದ ಗಾಳಿ, ಸಾರಿಗೆ ವ್ಯವಸ್ಥೆ, ಸೌಕರ್ಯ ಸೌಲಭ್ಯಗಳು ದೊರೆಯುತ್ತವೆಯೋ ಅಂದು ಯಾವ ಉಚಿತಗಳು ಬೇಕಾಗುವುದಿಲ್ಲ, ಇಲ್ಲದಿದ್ದರೆ ಉಳ್ಳವರ ನಡುವೆ ಇಲ್ಲದವರು ಪೈಪೋಟಿ ನಡೆಸಿ ಬದುಕಲು ಸಾಧ್ಯವಾಗುವುದಿಲ್ಲ. ಅನೇಕರಿಗೆ ಅನೇಕ ರೀತಿಯ ಅಗತ್ಯಕ್ಕೆ ಮೀರಿದ ಸೌಲಭ್ಯ ಸೌಕರ್ಯಗಳು, ಸಂಬಳಗಳು ದೊರೆಯುತ್ತವೆ. ಪ್ರಯೋಜನವಿಲ್ಲದ ನೂರಾರು ಯೋಜನೆಗಳಿಗೆ ಕೋಟಿ ಕೋಟಿ ಹಣ ವ್ಯಯವಾಗುತ್ತದೆ. ಇವುಗಳು ಸಹ ಆಲೋಚಿಸಬೇಕಾದ ವಿಚಾರಗಳಾಗಿವೆ. ಅಧಿಕಾರಿಗಳ ಮತ್ತು ನಮ್ಮ ಸರಕಾರದ ಪ್ರತಿನಿಧಿಗಳ ಸೌಕರ್ಯ ಸೌಲಭ್ಯ, ಸಂಬಳ ಇತರ ಅನುಕೂಲತೆಗಳು ಇವುಗಳಿಗೆ ಖರ್ಚು ಮಾಡುವ ಹಣದಲ್ಲಿ ಬಡವರಿಗೆ ಕೊಡುವ ಒಂದಷ್ಟು ಉಚಿತಗಳು ಏನೇನೂ ಅಲ್ಲ. ಒಟ್ಟಾರೆ ಬಡವರಿಗೆ ಕೊಡುವ ವಿಚಾರದಲ್ಲಿ ಮತ್ತು ಬಡವರ ವಿಚಾರದಲ್ಲಿ ಚರ್ಚೆಗಳಂತೂ ಎಲ್ಲಾ ಕಡೆಯಲ್ಲೂ ಆಗುತ್ತದೆ, ಆದರೆ ಮೂಲಭೂತವಾಗಿ ಅವರ ಬದುಕು ಹೇಗಿದೆ ಎಂದು ಯಾರಾದರೂ ಅವರೊಡನೆ ಒಂದಷ್ಟು ದಿನಗಳ ಕಾಲ ಕಳೆದು ಆ ಯಾತನೆಗಳನ್ನು ಅನುಭವಿಸಿದರೆ ಅವರು ಬದುಕುವ ಸ್ಥಳಗಳಲ್ಲಿ ಒಂದು ರಾತ್ರಿ ಕಳೆದರೆ ಆಗ ಬಡವರ ಬದುಕಿನ ಯಾತನೆ, ಹಸಿವಿನ ಸಂಕಷ್ಟ ಅರಿವಾಗಬಹುದು, ಆನಂತರ ದೂರದಲ್ಲಿ ನಿಂತು ಮಾತನಾಡುವವರ ಮಾತಿನ ಧಾಟಿ ಬದಲಾಗಬಹುದು.
T20 World Cup: ಪ್ರಶಸ್ತಿಯ ಕನಸಿಗೆ, ಬುಮ್ರಾ ಸೇರಿದಂತೆ ಟೀಂ ಇಂಡಿಯಾದ ಪಾಲಿನ ಮೂವರು ಗೇಮ್ ಚೇಂಜರ್ಸ್
T20 World Cup : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿರುವ ಟಿ20 ವಿಶ್ವಕಪ್ ಸರಣಿಯಲ್ಲಿ ಸೂಪರ್ ಎಂಟರ ಪಂದ್ಯ ಆರಂಭವಾಗಲಿದೆ. ಭಾರತ ತಂಡದ ಹಿರಿಯ ಆಟಗಾರ ಮತ್ತು ಮಾಜಿ ಕೋಚ್, ಸಂಜಯ್ ಬಂಗಾರ್, ತಂಡದ ಮೂವರು ಕ್ರಿಕೆಟಿಕಲ್ ಆಟಗಾರರನ್ನು ಹೆಸರಿಸಿದ್ದಾರೆ. ಇವರ ಪ್ರದರ್ಶನ ಭಾರತದ ಮುಂದಿನ ಹಾದಿಗೆ ನಿರ್ಣಾಯಕ ಎಂದು ಇವರು ಹೇಳಿದ್ದಾರೆ.
New Railway Line: ಆಂಧ್ರ ಸಂಪರ್ಕಿಸುವ ತುಮಕೂರು-ರಾಯದುರ್ಗ ರೈಲು ಯೋಜನೆ, 83 ಕಿಮೀ ಕಾರ್ಯಾರಂಭ, ಅಪ್ಡೇಟ್
Tumakur-Rayadurg Railway Line: ಕೇಂದ್ರ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸ ರೈಲು ಯೋಜನೆಗಳನ್ನು ಆರಂಭಿಸಿದೆ. ಇದರಲ್ಲಿ ಹೊಸ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ. ಈ ಪೈಕಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹೊಸ ರೈಲು ಮಾರ್ಗದ ಬಗ್ಗೆ ನೈಋತ್ಯ ರೈಲ್ವೆಯು ಮಹತ್ವದ ಅಪ್ಡೇಟ್ ನೀಡಿದೆ. ಯಾವ ಮಾರ್ಗ, ಎಷ್ಟು ಕಿಲೋ
ಲೆಬನಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್ ಸೇನೆ, ಇರಾನ್ ಜೊತೆಗೆ ಹೊಸ ತಲೆನೋವು ಶುರು... Israel And Lebanon
ಮಧ್ಯಪ್ರಾಚ್ಯದ ಹಣೆಬರಹವೇ ಸರಿ ಇಲ್ಲ ಅಂತಾ ಕಾಣುತ್ತದೆ, ಏಕೆಂದರೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಪತ್ತು ಹೊಂದಿದ್ದರೂ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲ. ಪದೇ ಪದೇ ಅಲ್ಲಿ ನಡೆಯುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಈಗಾಗಲೇ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ತಲೆನೋವು ಶುರುವಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಕೂಡ
US ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೆ ಶೇ.10ರಷ್ಟು ಹೊಸ ಜಾಗತಿಕ ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದ ಅಮೆರಿಕ ಅಧ್ಯಕ್ಷ
ಕೆಂಪು ಕೋಟೆ ಬಳಿ ಮತ್ತೊಂದು ಸ್ಪೋಟಕ್ಕೆ ಪಾಕಿಸ್ತಾನದ ಲಷ್ಕರ್ ಸಂಚು ಬಯಲು; ಭಾರತದ ನೆಮ್ಮದಿಯ ಶತ್ರುಗಳು!
ಭಾರತದ ನೆಮ್ಮದಿಯನ್ನು ಹಾಳು ಮಾಡುಲು ಹೊಂಚು ಹಾಕಿರುವ ಭಯೋತ್ಪಾದಕ ಸಂಘಟನೆಗಳು, ಭಾರತದ ಮೇಲೆ ದಾಳಿಗಳನ್ನು ತೀವ್ರಗೊಳಿಸಲು ಯೋಜನೆ ರೂಪಿಸುತ್ತಿವೆ, ಇದಕ್ಕೆ ಸಾಕ್ಷಿ ಎಂಬಂತೆ, ಹೊಸದಿಲ್ಲಿಯ ಕೆಂಪು ಕೋಟೆಯೂ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಸ್ಫೋಟ ಕೃತ್ಯಗಳನ್ನು ನಡೆಸಲು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ಸಿಎಂ ಸಿದ್ದರಾಮಯ್ಯ ಪೋಸ್ಟ್
ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಸುದೀರ್ಘ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ, ಅದರಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈ ಪೋಸ್ಟ್ನಲ್ಲಿ ಸಿಎಂ ಸಿದ್ದರಾಯಮ್ಮ ಅವರನ್ನು ತುಳಿಯಲು
ಕರ್ನಾಟಕ ವಿ.ವಿ.ಗೆ ಕುಲಸಚಿವರೇ ಕಂಟಕ
ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಗೆ ಮಂತ್ರಿಯಾಗಿದ್ದರು. ಉನ್ನತ ಶಿಕ್ಷಣ ಇಲಾಖೆಯ ಜೊತೆಗೆ ಅನಾಯಾಸವಾಗಿ ಹಣ ತಂದು ಕೊಡುವ ಐ.ಟಿ., ಬಿ.ಟಿ. ಖಾತೆಯ ಸಚಿವರಾಗಿದ್ದರು. ವೈದ್ಯಕೀಯ ಶಿಕ್ಷಣ ಪಡೆದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಯಾಗುವ ಅವಕಾಶ ಸಿಕ್ಕಾಗ ಅತ್ಯುತ್ತಮ ಕೆಲಸ ಮಾಡಿ ಹೆಸರು ಮಾಡಬಹುದಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮನಸ್ಸು ಮಾಡಿದ್ದರೆ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳನ್ನಾಗಿ ರೂಪಿಸಬಹುದಿತ್ತು. ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಶತ ಅರುವತ್ತರಷ್ಟು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದವು. ಈಗ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸ್ನಾತಕೋತ್ತರ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಕೈಗೊಳ್ಳಲು ಮಾರ್ಗದರ್ಶಕರೇ ಲಭ್ಯ ಇಲ್ಲ. ಅಷ್ಟು ಮಾತ್ರವಲ್ಲ: ರಾಜ್ಯದ ಬಹುಪಾಲು ವಿಶ್ವವಿದ್ಯಾನಿಲಯಗಳು ಮೂಲಭೂತ ಸೌಕರ್ಯಗಳಿಲ್ಲದೆ ಕಳೆಗುಂದಿವೆ. ಕೇಂದ್ರ ಸರಕಾರದಿಂದ ಹೆಚ್ಚು ಅನುದಾನ ತಂದು ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಖಾಸಗಿ ವಿವಿಗಳಿಗೆ ಮೀರಿಸುವಂತೆ ಅತ್ಯುತ್ತಮ ಗುಣಮಟ್ಟದಲ್ಲಿ ಪುನರ್ ಸಂಘಟಿಸಬಹುದಿತ್ತು. ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಬಹುದಿತ್ತು. ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ವಿಶ್ವಭಾರತಿ ವಿಶ್ವವಿದ್ಯಾನಿಲಯದ ಅಂತರ್ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗುವಂತೆ ಪುನರ್ ರೂಪಿಸಲು ಅವಕಾಶಗಳಿದ್ದವು. 64 ವರ್ಷಗಳನ್ನು ಪೂರೈಸಿರುವ ಜ್ಞಾನಭಾರತಿ (ಬೆಂಗಳೂರು ವಿಶ್ವವಿದ್ಯಾನಿಲಯ)ಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಹಾಗೆ ಅತ್ಯುತ್ತಮ ಗುಣಮಟ್ಟದ ಸಂಶೋಧನಾ ಕೇಂದ್ರವನ್ನಾಗಿ ಕಟ್ಟಬಹುದಿತ್ತು. ಅವಕಾಶ ಇದ್ದಾಗ ಅತ್ಯುತ್ತಮ ಕೆಲಸಗಳನ್ನು ಮಾಡದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮೂರು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳನ್ನು ದುಸ್ಥಿತಿಗೆ ತಳ್ಳಿದರು. ಯುಯುಸಿಎಂಎಸ್ ವೆಬ್ ಪೋರ್ಟಲ್ ಪರಿಚಯಿಸುವ ಮೂಲಕ ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆ ಕಿತ್ತುಕೊಂಡರು. ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ, ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ನಿತ್ರಾಣ ಸ್ಥಿತಿಗೆ ತಲುಪುವಂತೆ ಮಾಡಿದರು. ಮೂರನೆಯ ಅತ್ಯಂತ ಕೆಟ್ಟ ನಿರ್ಧಾರವೆಂದರೆ, ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ಕಳುಹಿಸುವ ಆದೇಶ ಮಾಡಿದ್ದು. ದೇಶದ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಾಗಲಿ, ಐಐಟಿಗಳಲ್ಲಾಗಲಿ, ಸರಕಾರದ ಸೇವೆಗಳಲ್ಲಿರುವ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸುವ ನಿಯಮ ಇಲ್ಲ. ಬೆಂಗಳೂರಿನಲ್ಲಿ ವಿ.ಕೆ.ಆರ್.ವಿ. ರಾವ್ ಸ್ಥಾಪಿಸಿದ (1972) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ಕುಲಸಚಿವರ ನೇಮಕಾತಿಯಲ್ಲೂ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರ ನೇಮಕಾತಿಯ ಅಧಿಕಾರ ಸಿಂಡಿಕೇಟ್-ಕುಲಪತಿಗಳಿಗೆ ನೀಡಲಾಗಿದೆ. ಒಂದು ವಿಶ್ವವಿದ್ಯಾನಿಲಯಕ್ಕೆ ಕುಲಸಚಿವರನ್ನು ನೇಮಿಸಿಕೊಳ್ಳುವ ಅಧಿಕಾರ ಸಿಂಡಿಕೇಟ್ ಮತ್ತು ಕುಲಸಚಿವರಿಗೆ ಇದ್ದರೆ ಸುಗಮ ಆಡಳಿತ ಸಾಧ್ಯವಾಗುತ್ತದೆ. ಡಾ.ಸಿ.ಎನ್. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ ಸಚಿವರಾಗುವುದಕ್ಕೂ ಮೊದಲು ಹಿರಿಯ ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ನೇಮಿಸುವ ಪರಿಪಾಠ ಇತ್ತು. ಆಗಲೂ ಸಮಸ್ಯೆಗಳಿದ್ದವು. ಆದರೆ ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ನೇಮಕ ಮಾಡಿದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ. ಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯರ ನಡುವೆ ಸಮನ್ವಯತೆ ಇಲ್ಲದಿದ್ದರೆ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳು ಸದ್ಯ ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ಹೊಂದಿವೆ. ಬೆರಳೆಣಿಕೆಯ ಅಧಿಕಾರಿಗಳು ಸಂಘರ್ಷವಿಲ್ಲದೆ ಶೈಕ್ಷಣಿಕ ಮಹತ್ವ ಅರಿತು ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ ಬಹುತೇಕ ಕಡೆ ಸಮನ್ವಯತೆಯ ಕೊರತೆ ಢಾಳಾಗಿ ಎದ್ದು ಕಾಣುತ್ತದೆ. ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವರ ನಡುವೆ ಸಮನ್ವಯತೆ ಸಾಧ್ಯವಾಗದೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸಿಂಡಿಕೇಟ್ ಮತ್ತು ಅಕಾಡಮಿಯ ಸದಸ್ಯರು ಬೇಸತ್ತು ಹೋಗಿದ್ದಾರೆ. ಕರ್ನಾಟಕ ಸರಕಾರ ಪ್ರಾಮಾಣಿಕರು ಮತ್ತು ಕ್ರಿಯಾಶೀಲರನ್ನು ಸಿಂಡಿಕೇಟ್-ಅಕಾಡಮಿಕ್ ಸದಸ್ಯರನ್ನಾಗಿ ನೇಮಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಯಾರಿಗೂ ಕಿರುಕುಳ ಕೊಡದ ಸಜ್ಜನ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಪ್ರಾಮಾಣಿಕತೆ-ದಕ್ಷತೆಯನ್ನು ಪರಿಗಣಿಸಿ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರನ್ನೇ ಕುಲಪತಿಯನ್ನಾಗಿ ನೇಮಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ಹಣವಿಲ್ಲದವರೂ, ಪ್ರತಿಭಾವಂತರು ಕಲಪತಿಯಾಗಬಹುದು ಎಂಬುದನ್ನು ರುಜುವಾತುಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯದ ಆಧಾರದಲ್ಲಿ ಕಳೆದ ಏಳು ತಿಂಗಳ ಹಿಂದೆ ಪ್ರೊ. ಎ.ಎಂ. ಖಾನ್ ಅವರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿ ನೇಮಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ರಾಜ್ಯಪಾಲರು ಕೂಡಾ ಅನಗತ್ಯ ರಾಜಕೀಯ ಮಾಡದೆ ಸರಕಾರದ ಶಿಫಾರಸನ್ನು ಮಾನ್ಯ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನ್ ಆಗಿ, ಮೌಲ್ಯ ಮಾಪನ ಮತ್ತು ಆಡಳಿತಾಂಗದ ಕುಲಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡವರು. ಇಲೆಕ್ಟ್ರಾನಿಕ್ಸ್ ವಿಷಯದ ಮೇಲೆ ಪ್ರಭುತ್ವ ಸಾಧಿಸಿರುವ ಪ್ರೊ. ಖಾನ್ ಅವರು ಬೆಲ್ಜಿಯಂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಅಧ್ಯಯನ ಕೈಗೊಂಡಿದ್ದಾರೆ. ಬಯೋ ಮೆಡಿಕಲ್ ಇಮೇಜ್ ಪ್ರೊಸೆಸ್ಸಿಂಗ್, ಕಂಪ್ಯೂಟರ್ ನೆಟ್ ವರ್ಕ್ಸ್ ಸೇರಿದಂತೆ ವಿವಿಧ ವಲಯದಲ್ಲಿ ವಿಶೇಷ ಸಂಶೋಧನೆ ಮಾಡಿ ಅಪಾರ ಖ್ಯಾತಿ ಪಡೆದಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರಾಮಾಣಿಕ ವ್ಯಕ್ತಿತ್ವ ಕಾಪಾಡಿಕೊಂಡಿದ್ದಾರೆ. ದಕ್ಷರು, ಕ್ರಿಯಾಶೀಲರೂ ಆಗಿರುವ ಪ್ರೊ. ಎ.ಎಂ. ಖಾನ್ ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಾಯಕಲ್ಪ ದೊರೆಯಬಹುದೆಂದು ಆ ಭಾಗದ ಜನರು ಕನಸುಗಣ್ಣಿನಿಂದ ಎದುರು ನೋಡುತ್ತಿದ್ದರು. ಪ್ರೊ. ಎ.ಎಂ. ಖಾನ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾನಿಲಯದ ಭವ್ಯ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದದವರು. ಎಲ್ಲಕ್ಕೂ ಮಿಗಿಲಾಗಿ ಆದರ್ಶ ಶಿಕ್ಷಕರ ಮಗನಾಗಿ ಕರ್ನಾಟಕ ವಿಶ್ವವಿದ್ಯಾನಿಲಯದ ಉನ್ನತ ಶೈಕ್ಷಣಿಕ ಪರಂಪರೆಯನ್ನು ವಿಸ್ತರಿಸುವ ಹಂಬಲ ಹೊತ್ತು ಕುಲಪತಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಧಾರವಾಡದ ಕರ್ನಾಟಕ ಕಾಲೇಜು ಮುಂಬೈ ಸರಕಾರದ ಅವಧಿಯಲ್ಲಿ ಆರಂಭವಾಗಿತ್ತು. ದಿವಾನ್ ರಾವ್ ಬಹಾದ್ದೂರು ರೊದ್ದ ಶ್ರೀನಿವಾಸರಾವ್ ಮತ್ತು ರಾವ್ ಬಹಾದ್ದೂರು ಆರ್.ಸಿ. ಅರಟಾಳ್ ರುದ್ರಗೌಡರ ಪ್ರಯತ್ನದ ಫಲವಾಗಿ 1917ರಲ್ಲಿ ಕರ್ನಾಟಕ ಕಾಲೇಜು ಆರಂಭವಾಯಿತು. ಆಗ ಅದು ಮುಂಬೈ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿತ್ತು. ಕರ್ನಾಟಕ ಕಾಲೇಜು ಆರಂಭವಾಗುವುದಕ್ಕೂ ಮುನ್ನ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮುಂಬೈ, ಪುಣೆ ನಗರಗಳಿಗೆ ಹೋಗಬೇಕಿತ್ತು. ಬ್ರಿಟಿಷ್ ಕಾಲದ ಮುಂಬೈ ಪ್ರಾಂತದ ಶಾಸನ ಸಭೆಯಲ್ಲಿ ಹುಬ್ಬಳ್ಳಿಯ ಸರ್ ಸಿದ್ದಪ್ಪ ತೋಟಪ್ಪ ಕಂಬಳಿಯವರು ಸದಸ್ಯರಾಗಿದ್ದರು. ಅವರ ಪ್ರಭಾವದ ಕಾರಣಕ್ಕೆ ಕರ್ನಾಟಕ ಕಾಲೇಜು ಆರಂಭವಾಯಿತು. ಮೊದ ಮೊದಲು ಕಲಾ ಮತ್ತು ವಿಜ್ಞಾನ ವಿಭಾಗಗಳು ಆರಂಭವಾಗಿದ್ದವು. ನಂತರ ವಾಣಿಜ್ಯ, ಅರ್ಥ ಶಾಸ್ತ್ರದ ವಿಭಾಗಗಳು ಶುರುವಾದವು. ಕರ್ನಾಟಕ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ಖ್ಯಾತ ವಿಜ್ಞಾನಿ ಭಾರತ ರತ್ನ ಸಿ.ವಿ. ರಾಮನ್ ಕಾರ್ಯ ನಿರ್ವಹಿಸಿದ್ದಾರೆ. ಡಿ.ಸಿ. ಪಾವಟೆ, ವಿ.ಕೆ. ಗೋಕಾಕ, ನಂದನ್ ನೀಲಕೇಣಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಎಪ್ಪತ್ತೈದು ವರ್ಷಗಳು ಕಳೆದಿವೆ. ಕರ್ನಾಟಕ ಕಾಲೇಜು ಶತಮಾನ ಪೂರೈಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ ಸಿದ್ದಪ್ಪ ಕಂಬಳಿಯವರು ಮುಂಬೈ ಪ್ರಾಂತದ ಧಾನಜಿ ಶಹಾ ಕೂಪರ್ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿದ್ದರು. 1949ರಲ್ಲಿ ಮುಂಬೈ ವಿಧಾನಸಭೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕಾಯ್ದೆ ಪಾಸ್ ಆಯಿತು. 1950ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಕಾರ್ಯಾರಂಭ ಮಾಡಿತು. ಮೊದಲ ಕುಲಪತಿಯಾಗಿ ಆರ್. ಜಹಾಗೀರದಾರ್ ನೇಮಕೊಂಡಿದ್ದರು. ಈ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಐದು ಕಾಲೇಜುಗಳು ಒಂದು ಪಬ್ಲಿಕ್ ಶಾಲೆ ಕಾರ್ಯ ನಿರ್ವಹಿಸುತ್ತವೆ. ಕರ್ನಾಟಕ ಕಲಾ ಕಾಲೇಜು, ಕರ್ನಾಟಕ ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯದ ಶಿಕ್ಷಣ ಕಾಲೇಜು, ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾನಿಲಯ, ಸಂಗೀತ ಮತ್ತು ಲಲಿತ ಕಲಾ ಮಹಾವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತಿವೆ. ಈಗಲೂ ಕರ್ನಾಟಕ ವಿಜ್ಞಾನ ಕಾಲೇಜು ಅತ್ಯಂತ ಬೇಡಿಕೆಯುಳ್ಳ ಮಹಾವಿದ್ಯಾನಿಲಯವಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಇಲ್ಲಿಯವರೆಗೆ ಅದರ ಘನತೆ ಗೌರವ ಹೆಚ್ಚಿಸುವ ವ್ಯಕ್ತಿಗಳೇ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ಡಾ. ಡಿ.ಸಿ. ಪಾವಟೆ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಡಾ. ಎ.ಎಸ್. ಅಡಕೆ, ಖ್ಯಾತ ಭಾಷಾ ವಿಜ್ಞಾನಿ ಡಾ. ಆರ್.ಸಿ. ಹಿರೇಮಠ, ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ, ಡಾ. ಜಿ.ಕೆ. ನಾರಾಯಣ ರೆಡ್ಡಿ, ಡಾ. ಎ.ಎಂ. ಪಟಾಣ ಮುಂತಾದವರು ವಿಶ್ವವಿದ್ಯಾನಿಲಯದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಡಾ. ಎ.ಎಂ. ಪಟಾಣ ಅವರು ಎಲ್ಲ ಸಮುದಾಯದ ಪ್ರತಿಭಾವಂತರನ್ನು ಹುಡುಕಿ ಪ್ರಾಧ್ಯಾಪಕ ಹುದ್ದೆ ನೀಡಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಹೆಸರು ಈ ಹೊತ್ತು ರಾಷ್ಟ್ರೀಯ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಿದ್ದು ಆ ಎಲ್ಲ ಮಹನೀಯರ ಉದಾತ್ತ ಚಿಂತನೆಗಳಿಂದ, ಜಾತ್ಯತೀತ ನಡೆಯಿಂದ. ಒಂದು ಕಾಲದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ ಜಿಲ್ಲೆಗಳು ಸೇರಿದ್ದವು. 1980ರಲ್ಲಿ ಕಲಬುರ್ಗಿ ವಿಶ್ವವಿದ್ಯಾನಿಲಯವಾಗಿ ಕೆಲವು ಜಿಲ್ಲೆಗಳು ಕಳಚಿಕೊಂಡವು. 1953-1965ರವರೆಗೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಮಹಾವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದವು. ಜೆ. ಅಲೆಕ್ಸಾಂಡರ್, ಡಾ. ಜಿ.ಎಸ್. ಅಮೂರ್, ಸುರೇಶ್ ಹೆಬ್ಲೀಕರ್, ಟಿ.ಎಂ.ಪೈ, ಗಿರೀಶ್ ಕಾರ್ನಾಡ್, ಅನಿಲ್ ಸಹಸ್ರ ಬುಧೆ ಈ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು. ಇಂತಹ ಶ್ರೇಷ್ಠ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವ ಹುದ್ದೆ ಅಲಂಕರಿಸುವುದೆಂದರೆ ಅತ್ಯಂತ ಗೌರವದ ಪ್ರತೀಕ. ಆದರೆ ಕೆಲವರಿಗೆ ಒಂದು ಸಂಸ್ಥೆಯ ಘನತೆ ಗೌರವ ತಿಳಿದಿರುವುದಿಲ್ಲ. ಅತ್ಯಂತ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಸಚಿವನ್ನಾರಾಗಿ ಕೆ. ಎಸ್. ಅಧಿಕಾರಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ಸರಕಾರ ನೇಮಿಸಿದೆ. ಡಾ. ಶಂಕರಪ್ಪ ವಣಿಕ್ಯಾಳ ಅವರ ಸಂಬಂಧಿ ಶಂಕರಣ್ಣ ವಣಿಕ್ಯಾಳ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಹಾಪುರ ತಾಲೂಕಿನ ನಗನೂರು ಗ್ರಾಮದ ಡಾ. ಶಂಕರಪ್ಪ ವಣಿಕ್ಯಾಳ ಪ್ರತಿಭಾವಂತ. ಪಿಎಸ್ಐ ಮತ್ತು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಹುದ್ದೆಗೆ ಆಯ್ಕೆಯಾದವರು. ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರು. ಆದರೆ ಹುದ್ದೆ ದೊರಕಿದಾಗ ಜನೋಪಯೋಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಡಾ. ಶಂಕರಪ್ಪ ವಣಿಕ್ಯಾಳ ಬೇಡಿಕೆಯುಳ್ಳ ಅಧಿಕಾರಿಯಾಗಿ ಹೊರ ಹೊಮ್ಮುತ್ತಿದ್ದರು. ಅತ್ಯಂತ ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿ ಹಾಲಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಅವರು ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಶಹಾಪುರ ತಾಲೂಕಿನ ತಹಶೀಲ್ದಾರ್ ಹುದ್ದೆಗೆ ಹಾಕಿಸಿಕೊಂಡಿದ್ದರು. ಆದರೆ ವಣಿಕ್ಯಾಳ ಅವರ ಕಾರ್ಯ ವೈಖರಿ ಕಂಡು ಹೌಹಾರಿದ ದರ್ಶನಾಪುರ ಅವರು ಅಂದಿನ ಕಲಬುರಗಿ ಜಿಲ್ಲಾಧಿಕಾರಿ ಪಂಕಜ ಪಾಂಡೆಯವರಿಗೆ ಹೇಳಿ ತಕ್ಷಣವೇ ಶಹಾಪುರದಿಂದ ರಿಲೀವ್ ಮಾಡಿಸಿದ್ದರು. ಡಾ. ಶಂಕರಪ್ಪ ಅವರನ್ನು ಸರಕಾರ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಅಲ್ಲಿ ಅಂದಾಜು ರೂ. 800ಕೋಟಿ ಹಣವಿತ್ತು. ಆಗ ಮಂತ್ರಿಯಾಗಿದ್ದ ಹಾಲಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ಈಗ ಅರಣ್ಯ ಖಾತೆಯ ಮಂತ್ರಿಯಾಗಿರುವ ಈಶ್ವರ್ ಖಂಡ್ರೆಯವರು ಅಲ್ಲಿಗೆ ಬರಲು ಬಿಡಲೇ ಇಲ್ಲ. ಕಾರಣ ಡಾ. ಶಂಕರಪ್ಪ ವಣಿಕ್ಯಾಳ ಅವರ ಕಾರ್ಯ ವೈಖರಿ. ವಣಿಕ್ಯಾಳ ಅವರು ಕಲಬುರಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕಲಬುರ್ಗಿ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದ್ದರು. ಇವರ ಕಾರ್ಯವೈಖರಿಗೆ ಬೇಸತ್ತ ಕೆಲವರು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇ ವರ್ಷದ ಜೂನ್ ತಿಂಗಳಲ್ಲಿ ಲಂಚಕ್ಕೆ ಪೀಡಿಸುತ್ತಿದ್ದಾರೆಂದು ಶರಣಬಸಪ್ಪ ಅಂಬೇಸಿಂಗ್ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಕೋವಿಡ್ ಸುರಕ್ಷಾ ಹೆಲ್ಪ್ಲೈನ್ ಕಾರ್ಯ ನಿರ್ವಹಿಸಿದ್ದ ಶರಣಪ್ಪ ರೂ. 7.5ಲಕ್ಷದ ಬಿಲ್ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಡಾ. ಶಂಕರಪ್ಪ ಅವರ ಅಕೌಂಟಂಟ್ ಚೆನ್ನಪ್ಪ ಬನ್ನೂರ್ ಮೂಲಕ ಹಣದ ವ್ಯವಹಾರ ನಡೆಸಿ ಎಸಿಬಿ ತಂಡ ರೆಡ್ ಹ್ಯಾಂಡ್ ಆಗಿ ಬಲೆಗೆ ಹಾಕಿದೆ. ಡಾ. ಶಂಕರಪ್ಪ ಅವರ ಮನೆ ಶೋಧ ನಡೆಸಿದ ಎಸಿಬಿ ತಂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಾಲ್ಕು ದಿನ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನು ಕೋರಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಿರೀಶ್ ಕಾಶೇಂಪುರ್ ಎಸಿಬಿ ಪರ ಸಮರ್ಥ ವಾದ ಮಂಡಿಸಿ ಜಾಮೀನು ನಿರಾಕರಣೆಗೆ ಭೂಮಿಕೆ ಸಿದ್ಧಪಡಿಸಿದ್ದಾರೆ. ಆಗ ನ್ಯಾಯಾಧೀಶರಾಗಿದ್ದ ಗೌರವಾನ್ವಿತ ಎಂ.ಜಿ. ಮೇಡಂ ಅವರು ಜಾಮೀನು ನಿರಾಕರಿಸಿದ್ದಾರೆ. ಅನಿವಾರ್ಯವಾಗಿ ಡಾ. ಶಂಕರಪ್ಪ ವಣಿಕ್ಯಾಳ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ವಾಸ ಅನುಭವಿಸುವಂತಾಗಿದೆ. ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು. ಕಳಂಕಿತ ಅಧಿಕಾರಿಗೆ ಹುದ್ದೆ ನಿರಾಕರಿಸಲು ಆಗುವುದಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಮಾಡಲಿ. ಜೈಲಿಗೆ ಹೋಗಿ ಬಂದ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ವಿಶ್ವವಿದ್ಯಾನಿಲಯದಂತಹ ಭವ್ಯ ಪರಂಪರೆಯುಳ್ಳ ಸಂಸ್ಥೆಗೆ ಕುಲಸಚಿವರನ್ನಾಗಿ ನೇಮಕ ಮಾಡಿದರೆ ಕೆಟ್ಟ ಹೆಸರು ಬರದೇ ಇರುತ್ತದೆಯೇ? ಡಾ. ಶಂಕರಪ್ಪ ವಣಿಕ್ಯಾಳ ಅವರು ಸಂವೇದನಾಶೀಲ ವ್ಯಕ್ತಿಯಾಗಿದ್ದರೆ ಹಳೆಯ ಕಳಂಕ ತೊಡೆದು ಕೊಳ್ಳುವ ಸಂಕಲ್ಪ ಮಾಡುತ್ತಿದ್ದರು. ಆದರೆ ವಣಿಕ್ಯಾಳ ಅವರಿಗೆ ಬದಲಾಗುವ ಇರಾದೆಯೇ ಇಲ್ಲ. ಎಷ್ಟೇ ಹೆಸರು ಕೆಡಲಿ ದುಡ್ಡು ಮಾಡಲೇಬೇಕೆಂದು ನಿರ್ಧಾರ ಮಾಡಿಕೊಂಡ ಆತ ಸದ್ಯ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ಕಳೆದ ಏಳು ತಿಂಗಳಿಂದ ಕರ್ನಾಟಕ ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಅಕಾಡಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದು ಆಡಳಿತದ ಕುಲಸಚಿವ ಮತ್ತು ಮೌಲ್ಯಮಾಪನ ಕುಲಸಚಿವರ ಆದ್ಯ ಕರ್ತವ್ಯ. ಮುಂದಿನ ಸಭೆಯಲ್ಲಿ ಅನುಪಾಲನ ವರದಿ ಮಂಡಿಸಬೇಕೇ ಹೊರತು ಕಾನೂನು ಅಭಿಪ್ರಾಯ ಕೋರಲಾಗಿದೆ ಎಂದು ಹೇಳಕೂಡದು. ಡಾ. ಶಂಕರಪ್ಪ ವಣಿಕ್ಯಾಳ ತನ್ನ ಘನತೆ ಗೌರವವನ್ನು ಕಳೆದುಕೊಂಡಿದ್ದಲ್ಲದೆ ಈಗ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿದ್ದು ಬಹು ದೊಡ್ಡ ದುರಂತ. ಕುಲಪತಿ ಮತ್ತು ಆಡಳಿತ ಮಂಡಳಿಯ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಅಡ್ಡಿಯಾಗುವುದೆಂದರೆ ಘನ ರಾಜ್ಯಪಾಲರಿಗೆ, ಸರಕಾರಕ್ಕೆ ಅಗೌರವ ತೋರಿದಂತೆ. ಒಂದು ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಅತ್ಯುನ್ನತ ಪ್ರಾಧಿಕಾರ. ಕುಲಪತಿ ಆ ಸಂಸ್ಥೆಯ ಮುಖ್ಯಸ್ಥರು. ಶಾಸನ ಬದ್ಧ ಪ್ರಾಧಿಕಾರಗಳು ಮತ್ತು ಸ್ಥಾನಕ್ಕೆ ಧಿಕ್ಕರಿಸಿ ಕಾರ್ಯ ನಿರ್ವಹಿಸುವುದು ಅಪರಾಧವೇ ಸರಿ. ಕರ್ನಾಟಕ ವಿಶ್ವವಿದ್ಯಾನಿಲಯದ ಘನತೆ ಗೌರವಕ್ಕೆ ನಿತ್ಯ ಚ್ಯುತಿ ತರುತ್ತಿರುವ ಕುಲಸಚಿವರನ್ನು ತಕ್ಷಣವೇ ಬೇರೆಡೆಗೆ ವರ್ಗಾಯಿಸಬೇಕು. ಅತ್ಯುತ್ತಮ ಕೆಲಸ ಮಾಡಬೇಕೆಂಬ ಹಂಬಲದ ಕುಲಪತಿ ಮತ್ತು ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಸದಸ್ಯರ ಅತ್ಯುತ್ಸಾಹಕ್ಕೆ ಸರಕಾರ ಒತ್ತಾಸೆಯಾಗಿ ನಿಲ್ಲಬೇಕು. ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುವಾಗ ಯಾವತ್ತೂ ಹಿಂದೆ ಬಿದ್ದಿಲ್ಲ. ಕರ್ನಾಟಕ ವಿಶ್ವವಿದ್ಯಾನಿಲಯದ ಕೆಟ್ಟ ನಿದರ್ಶನ ಎಲ್ಲೆಡೆ ಪಸರಿಸುವ ಮುನ್ನ ಸರಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು
Trump Tariff : ನೀಲ್ ಕಟ್ಯಾಲ್ - ಯುಎಸ್ ಅಧ್ಯಕ್ಷರಿಗೆ ಕೋರ್ಟ್’ನಲ್ಲಿ ಸೋಲುಣಿಸಿದ ಭಾರತೀಯ ಮೂಲದ ಕಾನೂನು ದೈತ್ಯ
Neal Katyal Vs Donald Trump : ಗೊತ್ತು ಗುರಿಯಿಲ್ಲದೇ ಸುಂಕವನ್ನು ವಿಧಿಸುತ್ತಾ ಬರುತ್ತಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ಗೆ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಸರಿಯಾಗಿ ಚಾಟಿ ಬೀಸಿದೆ. ಈಗ ಘೋಷಣೆಯಾಗಿರುವ ಟಾರಿಫ್, ಸಂವಿಧಾನಬಾಹಿರ ಎಂದು ಹೇಳಿದೆ. ಕೋರ್ಟ್’ನಲ್ಲಿ ಟ್ರಂಪ್’ಗೆ ಹಿನ್ನಡೆ ಆಗುವಂತೆ ಮಾಡಿದ್ದು, ಭಾರತೀಯ ಮೂಲದ ಕಾನೂನು ದೈತ್ಯ ನೀಲ್ ಕಟ್ಯಾಲ್.
ಈ ‘ಗೋವಾ ಮಾದರಿ’ಯಲ್ಲಿ ನಮಗೇನು ಪಾಠ ಇದೆ?
ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು. ಗೋವಾದಲ್ಲೊಂದು ವಿಶಿಷ್ಟ ವಿದ್ಯಮಾನ ನಡೆಯುತ್ತಿದೆ. ದಕ್ಷಿಣ ಗೋವಾದ ದಾಬೋಲಿಮ್ನಲ್ಲಿರುವ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕೆಂಬ ‘ಆನಿ ಒತ್ತಡ’ವನ್ನು ಗೋವಾದ ಬಿಜೆಪಿ, ಕಾಂಗ್ರೆಸ್, AAP, ಇತರ ಪ್ರಾದೇಶಿಕ ಪಕ್ಷಗಳೆಲ್ಲವೂ ಒಟ್ಟಾಗಿ ಒಕ್ಕೊರಲಿನಿಂದ ವಿರೋಧಿಸುತ್ತಿವೆ ಮತ್ತು ತಮ್ಮ ಅಭಿಪ್ರಾಯವನ್ನು ಮೀರಿ ಅಂತಹದೇನಾದರೂ ಸಂಭವಿಸಿದರೆ, ಎಲ್ಲರೂ ಒಟ್ಟಾಗಿ ಹೋರಾಟ ಕಟ್ಟುವ ಎಚ್ಚರಿಕೆಗಳೂ ಹೊರಬೀಳುತ್ತಿವೆ. ಈ ಜನಾಭಿಪ್ರಾಯದ ಮಹಾಪೂರಕ್ಕೆ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದ್ಯಕ್ಕೆ ಮಣಿದಿರುವಂತೆ ಕಾಣಿಸುತ್ತಿದೆ. ವಿಷಯ ಏನೆಂದರೆ, ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಒಂದು ದಕ್ಷಿಣ ಗೋವಾದ ದಾಬೋಲಿಮ್ನಲ್ಲಿರುವ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದರೆ, ಇನ್ನೊಂದು ಉತ್ತರ ಗೋವಾದ ಮೋಪಾದಲ್ಲಿ ಇರುವ ‘ಮನೋಹರ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ’. ಈ ಮೋಪಾದಲ್ಲಿರುವ ವಿಮಾನ ನಿಲ್ದಾಣವನ್ನು GMR ಎಂಬ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಲ್ಲಿ GMR ಕೂಡ ಒಂದು. ದಾಬೋಲಿಮ್ನಲ್ಲಿರುವ ವಿಮಾನ ನಿಲ್ದಾಣ ಮುಚ್ಚಿಕೊಂಡರೆ, ತಮ್ಮ ಮೋಪಾ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಲಾಭ ಇದೆ ಎಂಬುದು ಖಾಸಗಿ ನಿರ್ವಾಹಕರ ದೂರಾಲೋಚನೆ ಇರುವಂತಿದೆ. ಖಾಸಗಿ ದೂರಾಲೋಚನೆಯ ಹಿಂದೆ ಒಂದು ಬಲವಾದ ಕಾರಣ ಇದೆ. ದಾಬೋಲಿಮ್ನಲ್ಲಿರುವ ವಿಮಾನ ನಿಲ್ದಾಣವನ್ನು 1955ರಲ್ಲಿ ಪೋರ್ಚುಗೀಸರು ನಿರ್ಮಿಸಿದ್ದರು. 1961ರಲ್ಲಿ ಗೋವಾ ವಿಮೋಚನೆ ಆದ ಬಳಿಕ, ಈ ನಿಲ್ದಾಣವನ್ನು ಭಾರತೀಯ ನೌಕಾಪಡೆಯ ವಿಮಾನಗಳ ವಿಭಾಗ ನಿರ್ವಹಿಸುತ್ತಾ ಬಂದಿದೆ. ಹಾಗಾಗಿ, ಈ ವಿಮಾನ ನಿಲ್ದಾಣ ಇನ್ನೂ ಭಾರತೀಯ ರಕ್ಷಣಾ ಇಲಾಖೆಯ ಸುಪರ್ದಿಯಲ್ಲೇ ಇದೆ. ಅದು ನೌಕಾಪಡೆಯ ಐಎನ್ಎಸ್ ಹಂಸ ಹೆಲಿಕಾಪ್ಟರ್ಗಳ ಏರ್ಬೇಸ್ ಕೂಡ ಹೌದು. ಆ ಏರ್ಬೇಸಿನ ಒಂದು ಭಾಗವನ್ನು ಭಾರತೀಯ ವಿಮಾನಯಾನ ಪ್ರಾಧಿಕಾರವು (ಎಎಐ) ನಾಗರಿಕ ವಿಮಾನಯಾನಕ್ಕೆ ಬಳಸುತ್ತಿದೆ. ಅಲ್ಲಿನ ಏರ್ ಟ್ರಾಫಿಕ್ ನಿಯಂತ್ರಣ ಇನ್ನೂ ನೌಕಾಪಡೆಯ ಕೈಯಲ್ಲಿದೆ. ಅಲ್ಲಿ 1983ರಲ್ಲಿ ಡೊಮೆಸ್ಟಿಕ್ ಟರ್ಮಿನಲ್ ಮತ್ತು 1996ರಲ್ಲಿ ಇಂಟರ್ನ್ಯಾಷನಲ್ ಟರ್ಮಿನಲ್ಗಳನ್ನು ನಿರ್ಮಿಸಲಾಗಿದೆ. 2006ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ಅಲ್ಲಿ ನಿಲ್ದಾಣ ವಿಸ್ತರಣೆಗೆ ಹೊರಟಿತಾದರೂ, ಭೂಸ್ವಾಧೀನಕ್ಕೆ ನೌಕಾಪಡೆಯ ಕಡೆಯಿಂದ ಪೂರಕ ಅಭಿಪ್ರಾಯ ವ್ಯಕ್ತ ಆಗದೆ, ಯೋಜನೆ ನನೆಗುದಿಗೆ ಬಿದ್ದಿತ್ತು. ಈ ನಡುವೆ, ಉತ್ತರ ಗೋವಾದ ಮೋಪಾದಲ್ಲಿ ಮನೋಹರ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ, ದಾಬೋಲಿಮ್ನಲ್ಲಿ ವಿಸ್ತರಣೆಗೆ ಅಡಚಣೆಗಳಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ದಾಬೋಲಿಮ್ ನಿಲ್ದಾಣವನ್ನು ನಾಗರಿಕ ಬಳಕೆಗೆ ಮುಚ್ಚುವ ಯೋಚನೆ ಮಾಡಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾದ ಹಿನ್ನೆಲೆಯಲ್ಲಿ ಆ ತೀರ್ಮಾನವನ್ನು ಕೈಬಿಟ್ಟು, 2010ರಲ್ಲಿ ದಾಬೋಲಿಮ್ ನಿಲ್ದಾಣವನ್ನು ವಿಸ್ತರಿಸುವ, ಮೇಲ್ದರ್ಜೆಗೆ ಏರಿಸುವ, ನವೀಕರಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಕಡೆಗೆ ನವೀಕೃತ-ವಿಸ್ತರಿತ ದಾಬೋಲಿಮ್ ವಿಮಾನ ನಿಲ್ದಾಣ ಉದ್ಘಾಟನೆಗೊಂಡದ್ದು 2013ರಲ್ಲಿ. ಈ ವಿಚಾರದಲ್ಲಿ ಈಗ ಮತ್ತೊಮ್ಮೆ ಗದ್ದಲ ಎದ್ದಿದೆ. ಮೋಪಾ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಖಾಸಗಿ ಸಂಸ್ಥೆಯು ಗೋವಾದ ಪ್ರವಾಸೋದ್ಯಮ ಸಾಧ್ಯತೆಗಳು ಮತ್ತು ತನ್ನ ಲಾಭವನ್ನು ಗಮನದಲ್ಲಿ ಇರಿಸಿಕೊಂಡು, ದಕ್ಷಿಣ ಗೋವಾದ ದಾಬೋಲಿಮ್ ನಿಲ್ದಾಣವನ್ನು ಮುಚ್ಚಬೇಕೆಂದು ಮತ್ತು ಪೂರ್ಣಪ್ರಮಾಣದ ನೌಸೇನಾ ನೆಲೆಯಾಗಿ ಅಭಿವೃದ್ಧಿಪಡಿಸಬೇಕೆಂದು ಬಲವಾದ ಲಾಬಿ ಮಾಡುತ್ತಿದೆಯಂತೆ. ಒಂದು ವೇಳೆ ಈ ಲಾಬಿ ಜಯಪ್ರದವಾದರೆ, ಅಂತರ್ರಾಷ್ಟ್ರೀಯ ಪ್ರವಾಸೋದ್ಯಮವೇ ಆದಾಯ ಮೂಲ ಆಗಿರುವ ಗೋವಾದ ದಾಬೋಲಿಮ್ಗೆ ದೊಡ್ಡ ಪ್ರಮಾಣದಲ್ಲಿ ಬಂದಿಳಿಯುತ್ತಿರುವ ವಿದೇಶಿ ಪ್ರಯಾಣಿಕರು ಮತ್ತು ದೇಶಿ ಪ್ರಯಾಣಿಕರು (ವಾರ್ಷಿಕ ಅಂದಾಜು ಸುಮಾರು 60 ಲಕ್ಷಕ್ಕೂ ಮಿಕ್ಕಿ ಮಂದಿ) ಉತ್ತರ ಗೋವಾದ ಖಾಸಗಿ ನಿರ್ವಹಣೆಯ ನಿಲ್ದಾಣ ಮೋಪಾದಲ್ಲಿಯೇ ಇಳಿದು ಅಲ್ಲಿಂದ ಮೂರು ತಾಸು ಬಾಡಿಗೆ ಕಾರಿನಲ್ಲಿ ಪ್ರಯಾಣಿಸಿ (ಬಾಡಿಗೆ ಅಂದಾಜು 4,500-5,000 ರೂ.) ದಕ್ಷಿಣ ಗೋವಾದ ಪಾಲೋಲಿಮ್ ತಲುಪಬೇಕಾಗುತ್ತದೆ. ಸ್ಟ್ರಾಟಜಿಕ್ ಆಗಿ, ಗೋವಾದ ಎಲ್ಲ ಪ್ರಮುಖ ಪ್ರವಾಸಿ ತಾಣಗಳಿಗೆ ದಾಬೋಲಿಮ್ ಸಮಾನದೂರದಲ್ಲಿರುವುದರಿಂದ ಬಹುತೇಕ ಗೋವನ್ನರು ದಾಬೋಲಿಮ್ ನಿಲ್ದಾಣ ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ದಿಲ್ಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಗೋವಾದ ಸಾರಿಗೆ ಸಚಿವ ಮತ್ತು ದಾಬೋಲಿಮ್ ಶಾಸಕ ಮೌವಿನ್ ಗೊಧಿಣೊ ಅವರು ಈ ಎಲ್ಲ ವಿವರಗಳನ್ನು ಬಿಚ್ಚಿಟ್ಟಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೂಡ ಹೇಳಿಕೆ ನೀಡಿ, ‘‘ದಾಬೋಲಿಮ್ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸ್ಥಗಿತಗೊಳ್ಳಲಿದೆ ಎಂಬುದು ಸುಳ್ಳು ಸುದ್ದಿ ಮತ್ತು ತಪ್ಪು ಹಾದಿಗೆಳೆಯುವಂತಹದು’’ ಎಂದು ಸ್ಪಷ್ಟಪಡಿಸಿದ್ದಾರೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು, ಪ್ರವಾಸೋದ್ಯಮ ವ್ಯವಹಾರಸ್ಥರು ದಾಬೋಲಿಮ್ ವಿಮಾನ ನಿಲ್ದಾಣ ಮುಚ್ಚುಗಡೆಯಾದರೆ, ರಾಜ್ಯದಲ್ಲಿ ಪ್ರವಾಸೋದ್ಯಮವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಶೇ. 65 ಜನರಿಗೆ ಮತ್ತು ಗೋವಾದ ಒಟ್ಟು ಪ್ರವಾಸೋದ್ಯಮ ರಂಗಕ್ಕೇ ಅದು ಮಾರಕ ಹೊಡೆತವಾಗಲಿದೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ಇದನ್ನು ಪ್ರತಿಭಟಿಸುವುದಕ್ಕೂ ಅವರು ಸನ್ನದ್ಧರಾಗುತ್ತಿದ್ದಾರೆ. ನಮಗೇನು ಪಾಠ? ಗೋವಾದ ಈ ಘಟನೆಯಲ್ಲಿ, ಅದೇ ಪಶ್ಚಿಮ ಕರಾವಳಿಯ ಮುಂದುವರಿಕೆ ಆಗಿರುವ ಕರ್ನಾಟಕ ಕರಾವಳಿಗೂ ಪಾಠ ಇದೆ. ಮೊದಲನೆಯದಾಗಿ, ದಾಬೋಲಿಮ್ ವಿಮಾನ ನಿಲ್ದಾಣವು ಒಂದು ವೇಳೆ ಸೇನಾನೆಲೆಯಾಗಿ ಉಳಿಯದೆ ಸಂಪೂರ್ಣವಾಗಿ ನಾಗರಿಕ ವಿಮಾನಯಾನಕ್ಕೆ ಸೀಮಿತಗೊಂಡರೆ, ಸಹಜವಾಗಿಯೇ ನೌಸೇನಾ ವಾಯುನೆಲೆಯು ಕಾರವಾರದ ಸೀಬರ್ಡ್ ನೌಕಾನೆಲೆಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೇಶದ ಭದ್ರತೆ ಆದ್ಯತೆಯ ಸಂಗತಿಯೇ ಆದರೂ, ಈಗಾಗಲೇ ಕರ್ನಾಟಕ ಕರಾವಳಿಯನ್ನು ಆವರಿಸುತ್ತಿರುವ ಖಾಸಗಿ ಚಟುವಟಿಕೆಗಳ ಜೊತೆಗೆ ಸೇನಾ ಚಟುವಟಿಕೆಗಳೂ ವಿಸ್ತಾರಗೊಳ್ಳತೊಡಗಿದರೆ, ಅದರ ಸಾಧಕ-ಬಾಧಕಗಳನ್ನು, ಕರಾವಳಿ ಕರ್ನಾಟಕದ ಧಾರಣ ಶಕ್ತಿಯನ್ನು ಅಧ್ಯಯನ ನಡೆಸುವ ತುರ್ತು ಇದೆ. ಎರಡನೆಯದಾಗಿ, ದೇಶದ ಎಲ್ಲೆಡೆ ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳುತ್ತಿವೆ. ಈ ಗುತ್ತಿಗೆ ಪಡೆದುಕೊಳ್ಳುವ, ವಿಮಾನ ನಿಲ್ದಾಣಗಳ ಉಸ್ತುವಾರಿ ಹೊರುವ ಪ್ರಭಾವಿ ‘ಆನಿಗಳು’ ಮುಂದಿನ ದಿನಗಳಲ್ಲಿ ಹೇಗೆ ಕಾರ್ಯಾಚರಿಸಬಹುದೆಂಬುದಕ್ಕೆ ಈ ಪ್ರಕರಣ ಒಂದು ಒಳ್ಳೆಯ ನಿದರ್ಶನ. ಈ ಪ್ರಭಾವಿಗಳು ತಮ್ಮ ಲಾಭದ ಮೂಗಿನ ನೇರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಪ್ರಭುತ್ವದ ಮೇಲೆ ಒತ್ತಡ ಹೇರತೊಡಗಿದರೆ, ಅದು ದೇಶದ ಸಾರ್ವಜನಿಕ ಹಿತಾಸಕ್ತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮೂರನೆಯದಾಗಿ, ಪ್ರಭಾವೀ ಆನಿಗಳು ರಾಜಕೀಯ ಲಾಬಿಗಳಲ್ಲಿ ತೊಡಗಿಕೊಂಡಾಗ, ಅದು ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ತರುವಂತಹ ಸ್ಥಿತಿಯನ್ನು ಮುಂದೊಡ್ಡಿದರೆ, ಆಗ ನಾಡಿನ ಜನತೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದಕ್ಕೆ ಈ ಗೋವಾದ ಮಾದರಿ ಅನುಸರಣಯೋಗ್ಯ ಮಾದರಿ ಅನ್ನಿಸುತ್ತದೆ. ಬ್ಯಾಂಕಿಂಗ್ನ ತೊಟ್ಟಿಲು ಎಂದೆನ್ನಿಸಿಕೊಂಡಿದ್ದ ಕರ್ನಾಟಕ ಕರಾವಳಿಯ ಎಲ್ಲ ಬ್ಯಾಂಕುಗಳೂ ಏಕಾಏಕಿ ಹೇಳಹೆಸರಿಲ್ಲದಂತೆ ಮಾಯವಾದಾಗ ನಮ್ಮ ನಾಗರಿಕ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಪ್ರಭುತ್ವದ ಪರ-ವಿರುದ್ಧ ವಾಗ್ವಾದಗಳ ಅಬ್ಬರದಲ್ಲಿ ನಮ್ಮದೆಂಬ ಯಾವ ಬ್ಯಾಂಕೂ ನಮಗೆ ಉಳಿಯಲಿಲ್ಲ. ಗುಜರಾತ್ ಬ್ಯಾಂಕುಗಳು ಅವನ್ನು ನುಂಗಿಬಿಟ್ಟವು. ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು.
ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ಶುರು ಸಾಧ್ಯತೆ, ಭೀತಿ ಶುರು... US Military
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಜ್ಞೆ ಪಾಲಿಸಲು ಇದೀಗ ಸುಮಾರು ಅರ್ಧ ಲಕ್ಷದಷ್ಟು ಅಮೆರಿಕ ಸೈನಿಕರು ಸಜ್ಜಾಗಿದ್ದಾರೆ. ಇರಾನ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನು ಕೆಲವೇ ಗಂಟೆಗಳಲ್ಲಿ ಮಹತ್ವದ ಆದೇಶ ಹೊರಡಿಸುವ ಸಾಧ್ಯತೆ ಹೆಚ್ಚಾಗಿದ್ದು, ಇರಾನ್ ವಿರುದ್ಧ ಈ ಸಮಯದಲ್ಲಿ ಸೇನಾ ಕಾರ್ಯಾಚರಣೆ ಮೂಲಕ ಯುದ್ಧ ಘೋಷಣೆ ಆಗುವುದು ಬಹುತೇಕ ನಿಶ್ಚಿತವಾಗಿದೆ ಎನ್ನಲಾಗಿದೆ.

27 C