SENSEX
NIFTY
GOLD
USD/INR

Weather

26    C
... ...View News by News Source

ಥಾಣೆ ಸ್ಥಳೀಯ ಸಂಸ್ಥೆ ಚುನಾವಣೆ | ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ

ಥಾಣೆ: ಗುರುವಾರ ನಡೆದ ಠಾಣೆ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಘರ್ಷಣೆಯನ್ನು ಶಮನಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ಮನ್ಪದ ಪ್ರದೇಶದ ವಾರ್ಡ್ ನಂ. 3ರಲ್ಲಿ ಶಿವಸೇನೆಯ ಅಭ್ಯರ್ಥಿ ಹಾಗೂ ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಹಾಗೂ ಶಿವಸೇನೆಯ ಬಂಡಾಯ ಅಭ್ಯರ್ಥಿ ಭೂಷಣ್ ಭೋಯಿರ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದರಿಂದ, ಸ್ಥಳದಲ್ಲಿ ಹೈಡ್ರಾಮಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಭೋಯಿರ್ ಸಶಸ್ತ್ರ ಜನರನ್ನು ಗುಂಪುಗೂಡಿಸಿದ್ದರು ಎಂದು ಮೀನಾಕ್ಷಿ ಶಿಂದೆ ಆರೋಪಿಸಿದ್ದಾರೆ. ಆದರೆ, ನಮ್ಮ ಅಭ್ಯರ್ಥಿಯ ಕಣ್ಣಿಗೆ ಶಿಂದೆ ಗುಂಪಿನ ಬೆಂಬಲಿಗರು ಮೆಣಸಿನ ಪುಡಿ ಎರಚಿದ್ದಾರೆ ಎಂದು ಭೋಯಿರ್ ಗುಂಪು ಆರೋಪಿಸಿದೆ. ಪ್ರತಿಭಟನಾಕಾರರು ಮತ ಪತ್ರಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಅನ್ನು ತಡೆದಾಗ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ ವಾಹನಗಳನ್ನು ಧ್ವಂಸಗೊಳಿಸಿದ ಘಟನೆಯೂ ಜರುಗಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ-5) ಪ್ರಶಾಂತ್ ಕದಮ್ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 1:53 pm

ಇರಾನ್ ನೆಲದಿಂದ ಭಾರತೀಯರ ರಕ್ಷಣೆಗೆ ಆಪರೇಷನ್ ಸ್ವದೇಶ್ ಆರಂಭ, ಮತ್ತೊಂದು ಭರ್ಜರಿ ಕಾರ್ಯಾಚರಣೆ Operation Swades

ಇರಾನ್ ದೇಶದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ಈ ಸಂದರ್ಭದಲ್ಲೇ ಇರಾನ್ ನೆಲದಲ್ಲಿ ವಾಸ ಮಾಡುತ್ತಿರುವ 10,000ಕ್ಕೂ ಹೆಚ್ಚು ಭಾರತೀಯರ ಕುರಿತು ಭಾರಿ ಕಳವಳ ವ್ಯಕ್ತವಾಗಿತ್ತು. ಅಲ್ಲದೆ ಅಮೆರಿಕ ಮತ್ತು ಇರಾನ್ ನಡುವೆ ನೇರವಾಗಿ ಯುದ್ಧ ಆರಂಭ ಆಗುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಇರಾನ್

ಒನ್ ಇ೦ಡಿಯ 16 Jan 2026 1:53 pm

ಭೂ ಒಡೆತನ ಯೋಜನೆ ಪರಿಷ್ಕರಣೆ: ಸ್ವಂತ ಭೂಮಿ ಖರೀದಿಸಲು 12.50 ಲಕ್ಷ ರೂ. ವರೆಗೆ ಸಬ್ಸಿಡಿ! ನಿಮ್ಮ ಜಿಲ್ಲೆಗೆ ಸಿಗುವ ಸೌಲಭ್ಯ ಎಷ್ಟು?

ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸಲು ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ 25 ಲಕ್ಷ ರೂ. ಹಾಗೂ ಇತರ ಜಿಲ್ಲೆಗಳಲ್ಲಿ 20 ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿದೆ. ಶೇ.50 ಸಹಾಯಧನ ಹಾಗೂ ಶೇ.50 ಸಾಲ ನೀಡಲಾಗುತ್ತದೆ. ಇದರಿಂದ ಬಡವರು ಕೂಡ ಭೂಮಿ ಹೊಂದುವಂತಾಗುತ್ತದೆ.

ವಿಜಯ ಕರ್ನಾಟಕ 16 Jan 2026 1:51 pm

HD Kumaraswamy: 2028ರ ವಿಧಾನಸಭಾ ಚುನಾವಣೆ; ರಾಜ್ಯ ರಾಜಕೀಯಕ್ಕೆ ಮತ್ತೆ ಎಂಟ್ರಿ: ಹೆಚ್‌ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಈ ಹಿಂದೆಯೂ ಕಣ್ಣೀಟ್ಟಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಸದ್ಯ ರಾಷ್ಟ್ರ ರಾಜಕಾರಣದ ಮೂಲಕಕ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ಕಣ್ಣೀಟ್ಟಿದ್ದಾರೆ. ಈಗಾಗಲೇ ನಾಯಕತ್ವ ಬದಲಾವಣೆ ಕುರಿತು ಕೈ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆಗಳ ಮೇಲೆ ಅಮಿತ್‌ ಶಾ ಜೊತೆಗೂ ಹೆಚ್‌ ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದು, ಕೈ ಪಾಳಯದಲ್ಲಿನ ಬಣ

ಒನ್ ಇ೦ಡಿಯ 16 Jan 2026 1:24 pm

PM Kisan Good News: ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಫೆಬ್ರುವರಿಯಲ್ಲಿ ಬಿಡುಗಡೆ ಸಾಧ್ಯತೆ

ನವದೆಹಲಿ: ರೈತರಿಗೆ ಆರ್ಥಿಕ ಸಹಾಯ ನೀಡುವ ಪ್ರಮುಖ ಯೋಜನೆಯಾದ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯ 22 ಕಂತಿಗಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ 21ನೇ ಕಂತು ಬಿಡುಗಡೆ ಆಗಿತ್ತು. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ 2026 ಮಂಡನೆ ಆಗುವ ಮೊದಲೇ ರೈತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ದೇಶದ ಅರ್ಹ

ಒನ್ ಇ೦ಡಿಯ 16 Jan 2026 1:20 pm

ವೈದ್ಯಕೀಯ ಶಿಕ್ಷಣ: 18,000ಕ್ಕೂ ಹೆಚ್ಚು PG ಸೀಟು ಬಾಕಿ, ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ: ಸೋಷಿಯಲ್ ಮೀಡಿಯಾ ಚರ್ಚೆ

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಈ CONFIDENTIAL ಎಂಬ ಬರಹ ಇರುವ ನೋಟಿಸ್ ಹೆಚ್ಚು ಚರ್ಚೆ ಆಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಸಾಮಾಜಿಕ ನ್ಯಾಯ ತಿರುಚುವ ದುಡ್ಡಿನಾಟ ಇದು ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ದೂರಿದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ

ಒನ್ ಇ೦ಡಿಯ 16 Jan 2026 1:08 pm

Gold: ಲಕ್ಕುಂಡಿ ನಿಧಿಯಲ್ಲಿ ಏರುಪೇರು, ದಿಢೀರ್ 4 ಗ್ರಾಂ ಚಿನ್ನ ವ್ಯತ್ಯಾಸ? ಕಾರಣ ತಿಳಿಯಿರಿ

ಲಕ್ಕುಂಡಿ ನಿಧಿ ವಿಚಾರ ಇಡೀ ಇಂಡಿಯಾ ಸದ್ದು ಮಾಡುತ್ತಿದೆ, ಕನ್ನಡ ನಾಡಿನಲ್ಲಿ ನಡೆದ ಈ ಘಟನೆ ಕೋಟಿ ಕೋಟಿ ಜನರ ಗಮನ ಸೆಳೆಯುತ್ತಿದೆ. ಇನ್ನು ಜನವರಿ 10 ಶನಿವಾರ ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾಗಿದ್ದವು. ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ ಕಟ್ಟಿಸಲು ಗುಂಡಿ ತೋಡುವ ಸಮಯದಲ್ಲಿ ನಿಧಿ ಸಿಕ್ಕಿತ್ತು, ಈ

ಒನ್ ಇ೦ಡಿಯ 16 Jan 2026 1:00 pm

ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ: ಎಚ್‌ಡಿಕೆಗೆ ಎಚ್ಚರಿಕೆ ನೀಡಿದ ಬಿ ಆರ್ ಪಾಟೀಲ್

ವಿಬಿ- ಜಿ ರಾಮ್ ಜಿಯಿಂದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಹಾಗಾಗಿ ಈ ಮಸೂದೆಗೆ ರಾಷ್ಟ್ರಪತಿಗಳು ಸಹಿ‌ ಮಾಡಬಾರದು. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ನಾವು‌ ಮನವಿ‌ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ರಾಜ್ಯ ಸರ್ಕಾರಗಳ‌ ನೋವು ಕೇಂದ್ರ ಸರ್ಕಾರ ಕೇಳುತ್ತಿಲ್ಲ. ತಾಳ್ಮೆಯಿಂದ ರಾಜ್ಯಗಳ ನೋವು ಕೇಂದ್ರ ಕೇಳಬೇಕು. ಈ ಹಿಂದೆ ದಕ್ಷಿಣ ಭಾರತ ಬೇರೆಯಾಗಬೇಕು ಎಂಬ ಕೂಗಿತ್ತು. ಆದ್ರೆ ಅದನ್ನು ‌ಮಾಡುವುದು ಸರಿಯಲ್ಲ. ಜನಸಂಖ್ಯೆ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಜಾಗೃತಿ ಇದೆ. ಆದ್ರೆ ಉತ್ತರ ಭಾರತದಲ್ಲಿ ಜಾಗೃತಿ ಇಲ್ಲ. ಈಗ ಜನಸಂಖ್ಯೆ ನಿಯಂತ್ರಣ ನಮಗೆ ಮುಳ್ಳಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅಭಿಪ್ರಾಯಪಟ್ಟರು.

ವಿಜಯ ಕರ್ನಾಟಕ 16 Jan 2026 12:50 pm

Odisha| ಸ್ವಘೋಷಿತ ಗೋರಕ್ಷಕರಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತ್ಯು: ಮೂವರು ಆರೋಪಿಗಳ ಬಂಧನ

ʼಜೈ ಶ್ರೀರಾಮ್ʼ, ʼಗೋ ಮಾತಾ ಕಿ ಜೈʼ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದ ದುಷ್ಕರ್ಮಿಗಳು

ವಾರ್ತಾ ಭಾರತಿ 16 Jan 2026 12:48 pm

ಪುನೀತ್ ಕೆರೆಹಳ್ಳಿ, ಸಹಚರರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಬೆಂಗಳೂರು : ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 'ದ್ವೇಷದ ಮಾತಿನ ವಿರುದ್ದ ಜನಾಂದೋಲನ/ Campaign Against Hate Speech' ವತಿಯಿಂದ email ಮೂಲಕ ಮನವಿ ಸಲ್ಲಿಸಲಾಗಿದೆ. ʼಪುನೀತ್ ಕೆರೆಹಳ್ಳಿ ಎಂಬ ಕೊಲೆ‌ ಆರೋಪಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿರುವʼ ಗಂಭೀರ ಆರೋಪಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ʼಸ್ವತಃ ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ, “ಬಾಂಗ್ಲಾದೇಶಿಗಳು” ಎಂದು ಮುಸ್ಲಿಂ ವಲಸೆ ಕಾರ್ಮಿಕರನ್ನು ಗುರುತಿಸಿ, ರಾತ್ರಿ ಸಮಯದಲ್ಲಿ ಘೋಷಣೆ ಕೂಗಿ, ಧರ್ಮಾಧಾರಿತ ದ್ವೇಷ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿರುವುದು ದಾಖಲಾಗಿದೆ. ಈತನ ಈ ವರ್ತನೆಯಿಂದ ಕಾರ್ಮಿಕರ ಗೌರವ, ಗೌಪ್ಯತೆ ಮತ್ತು ಜೀವಸುರಕ್ಷೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ. ʼಈ ರೀತಿಯ “ಬಾಂಗ್ಲಾದೇಶಿ” ಎಂಬ ಶಂಕೆಯ ಆಧಾರದಲ್ಲಿ ನಡೆದ ಹಲ್ಲೆ ಮತ್ತು ಲಿಂಚಿಂಗ್ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ (ಕೇರಳದಲ್ಲಿ ದಲಿತ ಕಾರ್ಮಿಕ ರಾಮನಾರಯಣ್ ಬಗೇಲ್ ಅವರ ಹತ್ಯೆ, ಒಡಿಶಾದಲ್ಲಿ ಜುವೆಲ್ ಶೇಕ್ ಅವರ ಹತ್ಯೆ, ಮಂಗಳೂರಿನಲ್ಲಿ ಅಂಸಾರಿ ಎಂಬ ಕಾರ್ಮಿಕರ ಮೇಲೆ ತಳಿತ) ಇತ್ತೀಚೆಗೆ ನಡೆದಿರುವುದನ್ನು ಉಲ್ಲೇಖಿಸಿ, ಇಂತಹ ಕೃತ್ಯಗಳು ಕರ್ನಾಟಕದಲ್ಲಿಯೂ ಪ್ರಾಣಾಪಾಯಕ್ಕೆ ದಾರಿ ಮಾಡಿಕೊಡಬಹುದುʼ ಎಂದು ಎಚ್ಚರಿಸಲಾಗಿದೆ. ʼಪುನೀತ್ ಕೆರೆಹಳ್ಳಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವುದರಿಂದ, ಅವನು ನಡೆಸುತ್ತಿರುವ ಇತ್ತೀಚಿನ ಕಾನೂನುಬಾಹಿರ ಕೃತ್ಯಗಳು ಜಾಮೀನಿನ ದುರುಪಯೋಗವಾಗಿದ್ದು, ತಕ್ಷಣವೇ ಎಫ್‌ಐಆರ್‌ ದಾಖಲಿಸಿ, ಜಾಮೀನು ರದ್ದುಗೊಳಿಸಲು ನ್ಯಾಯಾಲಯದ ಮುಂದೆ ವಿಷಯ ಮಂಡಿಸಬೇಕುʼ ಎಂದು ಆಗ್ರಹಿಸಲಾಗಿದೆ. ʼಜೊತೆಗೆ, ಇಂತಹ ಘಟನೆಗಳ ಸಂದರ್ಭದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಹಾಗೂ ಖಾಸಗಿ ವ್ಯಕ್ತಿಗಳು ಪೌರತ್ವ ವಿಚಾರಣೆ ನಡೆಸುವುದನ್ನು ತಡೆಯುವ ಸ್ಪಷ್ಟ ನಿರ್ದೇಶನಗಳನ್ನು ರಾಜ್ಯದಾದ್ಯಂತ ನೀಡಬೇಕುʼ ಎಂದು ಈ ಮನವಿ ಮೂಲಕ ಒತ್ತಾಯಿಸಲಾಗಿದೆ.  

ವಾರ್ತಾ ಭಾರತಿ 16 Jan 2026 12:46 pm

ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದ ವಾತಾವರಣ: ಜೀವನ ಅಸ್ತವ್ಯಸ್ತ, ವಿಮಾನಯಾನಕ್ಕೆ ಅಡ್ಡಿ

ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ಹಲವು ನಗರಗಳಲ್ಲಿ ಶೂನ್ಯ ಗೋಚರತೆ ದಾಖಲಾಗಿದೆ. ಇದರಿಂದಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ವಿಳಂಬವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತೀವ್ರ ಚಳಿಯಿಂದಾಗಿ ಉತ್ತರ ಪ್ರದೇಶದಲ್ಲಿ ಶಾಲಾ ರಜೆಯನ್ನು ವಿಸ್ತರಿಸಲಾಗಿದೆ. ಹವಾಮಾನ ಇಲಾಖೆ ಮತ್ತೊಂದು ದಟ್ಟ ಮಂಜಿನ ಎಚ್ಚರಿಕೆ ನೀಡಿದೆ.

ವಿಜಯ ಕರ್ನಾಟಕ 16 Jan 2026 12:43 pm

ಜಾಲತಾಣದ ಜಾತಿವಾದಿಗಳನ್ನು ನಿಯಂತ್ರಿಸಬೇಕಾಗಿದೆ

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ರೂಪುಗೊಂಡಿರುವ ಸಾಮಾಜಿಕ ಜಾಲತಾಣಗಳಿಂದ ಜಗತ್ತಿನ ವಿದ್ಯಮಾನಗಳು ಜನರ ಬೆರಳತುದಿಯಲ್ಲೇ ದೊರಕುವಂತೆ ಆವಿಷ್ಕಾರಗೊಂಡಿರುವುದು ದೇಶದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆ ಎಂದು ಪರಿಭಾವಿಸುವುದು ಸತ್ಯವಷ್ಟೆ. ಆದರೆ, ಈ ಜಾಲತಾಣಗಳು ಸಾಮಾಜಿಕ ಸೌಹಾರ್ದ ಹಾಗೂ ಸಾಮರಸ್ಯದ ಬದುಕನ್ನು ಬೆಸೆಯಲು ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂದು ಅವಲೋಕಿಸುವುದು ಈ ಹೊತ್ತಿನ ತುರ್ತಾಗಿದೆ. ಕಾರಣವೇನೆಂದರೆ, ಈ ಜಾಲತಾಣಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಮನರಂಜನೆಯ ಹಾದಿಯಿಂದ ಹೊರಳಿ ವೈಯಕ್ತಿಕ ನಿಂದನೆ, ಕುಚೋದ್ಯತನ ಹಾಗೂ ಸಾಮಾಜಿಕ ಸಂಘರ್ಷಗಳಿಗೆ ಮುನ್ನುಡಿ ಬರೆಯುವಂತಹ ವೇದಿಕೆಯನ್ನಾಗಿ ರೂಪಾಂತರಗೊಳಿಸುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಜಾತಿ ವೈಷಮ್ಯ ಹಾಗೂ ಮೇಲರಿಮೆ ಕೀಳರಿಮೆಯ ಜಂಜಾಟದಲ್ಲಿ ಮೈ ಮರೆತಿರುವ ಈ ಸಾಮಾಜಿಕ ವ್ಯವಸ್ಥೆಯೊಳಗೆ ನಿರುದ್ಯೋಗ, ಬಡತನ ಮತ್ತು ಆರ್ಥಿಕ ಸಂಕಷ್ಟಗಳಿಂದ ಕಂಗಾಲಾಗಿರುವ ಯುವಜನತೆಯನ್ನು ಹಾದಿ ತಪ್ಪಿಸಿ ದೇವರು, ಧರ್ಮದ ಅಮಲೇರಿಸಿ ಪರಸ್ಪರ ಕಚ್ಚಾಡುವಂತಹ ಪ್ರಕ್ರಿಯೆಗಳಲ್ಲಿ ಕೆಲವು ಶಕ್ತಿಗಳು ತೆರೆಮರೆಯಲ್ಲಿ ಸಕ್ರಿಯರಾಗಿರುವುದು ಗುಟ್ಟಾಗುಳಿದಿಲ್ಲ. ಆ ಶಕ್ತಿಗಳ ಕುಮ್ಮಕ್ಕಿನಿಂದ ಮತ್ತಷ್ಟು ಪ್ರಚೋದನೆಗೊಳಗಾಗಿ ಇದೀಗ ಸಂವಿಧಾನ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೀಸಲಾತಿ ವ್ಯವಸ್ಥೆಯ ಬಗ್ಗೆ ತೀವ್ರ ಅಸಹನೆ ಮತ್ತು ಆಕ್ರೋಶವನ್ನುಂಟು ಮಾಡಲು ಪೀಠಿಕೆಯಾಗುತ್ತಿರುವುದು ಭವಿಷ್ಯದ ಭಾರತಕ್ಕೆ ಕಳಂಕವಾಗುವುದರಲ್ಲಿ ಸಂಶಯವಿಲ್ಲ. ಅಸ್ಪಶ್ಯತೆ ಮತ್ತು ಜಾತಿಯ ಅಪಮಾನದಿಂದ ಸಾಮಾಜಿಕ ಶೋಷಣೆಗೆ ಒಳಗಾದವರಿಗೆ ಆರ್ಥಿಕ ಚೈತನ್ಯ ದೊರಕುವಂತೆ ಮಾಡಿ ಮುಖ್ಯವಾಹಿನಿಗೆ ತಂದು ಸಾಮಾಜಿಕ ಸಮಾನತೆಯನ್ನು ಮೂಡಿಸಬೇಕೆಂಬ ಸದುದ್ದೇಶದಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಇತ್ಯಾದಿಗಳಲ್ಲಿ ಮೀಸಲಾತಿ ಸವಲತ್ತನ್ನು ದೊರಕಿಸಿಕೊಡಲು ಆಳುವ ಸರಕಾರಗಳು ಕಾರ್ಯೋನ್ಮುಖರಾಗಿರುವುದನ್ನು ಜಾತೀಯ ಪೂರ್ವಾಗ್ರಹದಿಂದ ನೋಡುತ್ತಾ ಮತ್ತೆ ಯಥಾಸ್ಥಿತಿವಾದವನ್ನು ಮುಂದುವರಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾಗೃತರಾಗಿರುವುದರಿಂದ ಮೀಸಲಾತಿಯ ಅರ್ಹ ಫಲಾಪೇಕ್ಷಿಗಳು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದಲ್ಲದೆ ದೇಶವು ಜಾತೀಯತೆಯ ವಿಷವರ್ತುಲದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲವೆಂಬ ಅಪ್ಟಟ ಸತ್ಯವನ್ನು ಜಗತ್ತಿನ ಮುಂದೆ ಜಗಜ್ಜಾಹೀರುಗೊಳಿಸುವಂತಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ನಿರ್ದೇಶಕರು, ಚಲನಚಿತ್ರ ನಟ ನಟಿಯರು, ಸಾಮಾಜಿಕ ಗೌರವಗಳಿಗೆ ಪಾತ್ರರಾದವರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ತೇಜೋವಧೆ ಮಾಡುತ್ತಿರುವವರು ಮುಂದುವರಿದು ಇದೀಗ ಜಾತಿಯ ಪೂರ್ವಾಗ್ರಹದಿಂದ ದಲಿತ ಸಮುದಾಯದವರ ವಿರುದ್ಧ ದಲಿತರನ್ನೇ ಎತ್ತಿಕಟ್ಟುವ, ದಲಿತರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿ ಅವಾಚ್ಯ ಶಬ್ದಗಳನ್ನು ಬಳಸುತ್ತಾ, ಸಮುದಾಯದ ಬಗ್ಗೆ ಇನ್ನಿತರರಲ್ಲಿ ಆಕ್ರೋಶ, ಅಸಹನೆ ಮೂಡುವಂತಾಗಲು ಪ್ರೇರಣೆ ನೀಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಹದ್ದಬಸ್ತಿನಲ್ಲಿಡದಿದ್ದರೆ ಸಾಮಾಜಿಕ ಸಂಘರ್ಷಕ್ಕೆಡೆ ಮಾಡುವುದಲ್ಲದೆ ಶಾಂತಿ ಸೌಹಾರ್ದ ಪರಂಪರೆಗೆ ಧಕ್ಕೆಯುಂಟಾಗುವುದರಲ್ಲಿ ಸಂಶಯವಿಲ್ಲ. ದಲಿತರ ಹಿತರಕ್ಷಣೆಗಾಗಿ ರಚಿತಗೊಂಡಿರುವ ಪ್ರತ್ಯೇಕ ಪೊಲೀಸ್ ವ್ಯವಸ್ಥೆಯಾಗಲಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆಧುನಿಕ ಜಾತಿವಾದಿಗಳ ಉಪಟಳವನ್ನು ಕಂಡೂ ಕಾಣದಂತೆ ಜಾಣ ಕಿವುಡುತನ ಜಾಣ ಕುರುಡುತನ ತೋರದೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಯಂತ್ರಿಸಬೇಕು. ಯಾವುದೇ ಸಮುದಾಯದವರು ಮತ್ತಾವುದೇ ಸಮುದಾಯದ ವಿರುದ್ಧ ಅಥವಾ ಸಮಾಜದ ಗಣ್ಯರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಅಪಮಾನಗಳ ಹೇಳಿಕೆಗಳನ್ನು ದಾಖಲಿಸಿದರೆ ಅಂತಹವರುಗಳಿಗೆ ಕಾನೂನಿನ ರುಚಿ ತೋರಿಸದಿದ್ದರೆ ಜಾತ್ಯತೀತ ಭಾರತಕ್ಕೆ ಉಳಿಗಾಲವಿಲ್ಲ ಎನಿಸುತ್ತದೆ.

ವಾರ್ತಾ ಭಾರತಿ 16 Jan 2026 12:37 pm

ಚಿನ್ನದ ನಾಗಾಲೋಟಕ್ಕೆ ಬ್ರೇಕ್; ಇಂದಿನ ಚಿನ್ನದ ದರವೆಷ್ಟು?

ಸಂಕ್ರಾಂತಿಯ ಹಂತದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ನಂತರದ ದಿನಗಳಲ್ಲಿ ನಿಧಾನವಾಗಿ ಕುಸಿಯುತ್ತಿದೆ. ಸತತ ಏರು ಹಾದಿಯಲ್ಲಿದ್ದು ಸಾರ್ವಕಾಲಿಕ ಅಧಿಕ ದರ ದಾಖಲಿಸಿದ ನಂತರ ಕಳೆದ ಎರಡು ದಿನಗಳಿಂದ ಚಿನ್ನ ಅಲ್ಪಮಟ್ಟಿಗೆ ಕುಸಿತದ ಹಾದಿಯಲ್ಲಿದೆ. ಬೆಳಗಿನ ವಹಿವಾಟಿನಲ್ಲಿ ಜನವರಿ 15 ಮತ್ತು 16ರಂದು ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಕುಸಿತ ಕಂಡಿದೆ. ಆದರೆ ಒಟ್ಟು ಚಿನ್ನದ ಬೆಲೆ ದುಬಾರಿಯಾಗಿಯೇ ಇದೆ. ಸಂಕ್ರಾಂತಿಯ ಹಂತದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನ ನಂತರದ ದಿನಗಳಲ್ಲಿ ನಿಧಾನವಾಗಿ ಕುಸಿಯುತ್ತಿದೆ. ಜನವರಿ 16ರಂದು ದೇಶದ ರಾಜಧಾನಿ ದಿಲ್ಲಿಯಲ್ಲಿ 24 ಕ್ಯಾರೆಟ್‌ನ ಚಿನ್ನದ ದರ ಹತ್ತು ಗ್ರಾಂಗೆ 143,760 ರೂ. ಗೆ ಕುಸಿದಿದೆ. 22 ಕ್ಯಾರೆಟ್ ಚಿನ್ನದ ದರ ಹತ್ತು ಗ್ರಾಂಗೆ 131,790 ರೂ.ಗೆ ಕುಸಿದಿದೆ. ಮುಂಬೈಯಲ್ಲೂ 24 ಕ್ಯಾರೆಟ್ ಶುದ್ಧ ಚಿನ್ನದ ಹತ್ತು ಗ್ರಾಂ ದರ 143,610 ರೂ. ಗೆ ಇಳಿದಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶುಕ್ರವಾರ ಜನವರಿ 16ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,340 (-22) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,145 (-20) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,755 (-17) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? 2026 ಜನವರಿ 16 ಶುಕ್ರವಾರ 24 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 14,340 ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಸಿದರೆ 22 ಕ್ಯಾರೆಟ್‌ನ 1ಗ್ರಾಂ ಚಿನ್ನದ ಬೆಲೆಯು 13,145 ರೂಪಾಯಿ ಆಗಿದೆ. 18 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 10,755 ರೂಪಾಯಿ ಆಗಿದೆ. ವಿವಿಧ ನಗರಗಳಲ್ಲಿ ಚಿನ್ನದ ದರ ಹೇಗಿದೆ? ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ. ಮುಂಬೈ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 143660 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131690 ರೂ. ಇದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ. ಇದೆ. ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ದರ 143610 ರೂ.ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131640 ರೂ.ಇದೆ. ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790ರೂ. ಇದೆ. ಭೋಪಾಲ್‌ದಲ್ಲಿ 24 ಕ್ಯಾರೆಟ್ ಚಿನ್ನದ ದರ 143660 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131690 ರೂ. ಇದೆ. ಲಖನೌಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ. ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 143760 ರೂ.ಇದ್ದರೆ, 22 ಕ್ಯಾರೆಟ್ ಚಿನ್ನದ ದರ 131790 ರೂ. ಇದೆ.

ವಾರ್ತಾ ಭಾರತಿ 16 Jan 2026 12:32 pm

ʻಫೋಟೋ ಕೇಳಿದ್ದಕ್ಕೆ ಬಳೆಯನ್ನೇ ಕೊಟ್ಲು ಬಂಗಾರದಂತಹ ಹುಡುಗಿʼ; ನಮ್ಮ ಮೆಟ್ರೋದಲ್ಲೊಂದು ಬ‌ಳೆ ಕತೆ ವೈರಲ್

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣದಲ್ಲಿ ಕಿರಿಕಿರಿ ಮಾತ್ರವಲ್ಲ ಕೆಲವೊಮ್ಮೆ ಸುಂದರ ಘಟನೆಗಳು ನಡೆಯುತ್ತದೆ. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಬೆಂಗಳೂರಿಗರ ಮನ ಗೆದ್ದಿದೆ. ಅಪರಿಚಿತ ಮಹಿಳೆಯೊಬ್ಬರಿಗೆ ಬಳೆ ವಿನ್ಯಾಸಕ್ಕಾಗಿ ಫೋಟೋ ಕೇಳಿದ್ದಕ್ಕೆ, ಕೈಲಿದ್ದ ಬಳೆಯನ್ನೇ ಉಡುಗೊರೆಯಾಗಿ ನೀಡಿರುವುದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಜಯ ಕರ್ನಾಟಕ 16 Jan 2026 12:30 pm

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕ್‌ ಸೇನೆ ದಾಳಿ,13 TTP ಉಗ್ರರ ಬಲಿ: ಭಯೋತ್ಪಾದನೆ ಏರಿಕೆಯಿಂದ ಪಾಕ್‌ನಲ್ಲಿ ಮಾಡಿದ್ದುಣ್ಣೋ ಮಹಾರಾಯ ಸ್ಥಿತಿ!

ಪಾಕಿಸ್ತಾನ ಸೇನೆಯು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 13 ಟಿಟಿಪಿ ಉಗ್ರರನ್ನು ಹತ್ಯೆ ಮಾಡಿದೆ. ಬನ್ನೂ ಮತ್ತು ಕುರ‍್ರಂ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಯಶಸ್ಸು ಸಾಧಿಸಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧದ ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿದೆ, ಆದರೆ ದೇಶದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚುತ್ತಿದ್ದು, ಪಾಕ್‌ ಗೆ ತನ್ನದೇ ಔಷಧಿಯ ರುಚಿ ಸಿಗುತ್ತಿದೆ.

ವಿಜಯ ಕರ್ನಾಟಕ 16 Jan 2026 12:23 pm

ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್! ಏನದು

ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಅಸ್ಸಾಂ ಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿದ್ಯಾ? ಎಂಬುವುದು ಕುತೂಹಲ ಕೆರಳಿಸಿದೆ. ಒಂದು ವೇಳೆ ಅವಕಾಶ ಸಿಕ್ಕಲ್ಲಿ ಅವರು ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಮಾತನ್ನೇ ದಾಳವಾಗಿ ಬಳಸಿಕೊಳ್ಳಲು ಡಿಕೆಶಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ವಿಜಯ ಕರ್ನಾಟಕ 16 Jan 2026 12:22 pm

ಸುಪ್ರೀಂ ಕೋರ್ಟ್‌ನ ‘ಟ್ರಿಪಲ್ ಟೆಸ್ಟ್’ ಆದೇಶ ಉಲ್ಲಂಘಿಸಿ ಮೀಸಲಾತಿ ಪ್ರಕಟಿಸಿರುವ ಸರಕಾರ

ಸರಕಾರ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ? ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ. ಕಳೆದ ನಾಲ್ಕೈದು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿರುವ ಸರಕಾರ ಈಗ ಏಕಾಏಕಿ ಜಿಬಿಎ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿದೆ. ಪ್ರಕಟಣೆಗೂ ಮುನ್ನ ಸರಕಾರ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದಿರುವುದು, ಗೌರವಿಸದಿರುವುದು ಸರಕಾರದ ಉದ್ಧಟತನಕ್ಕೆ ಸಾಕ್ಷಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳಿರುತ್ತವೆ. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನು ಪ್ರಜೆಗಳು ತಮ್ಮ ಅಭಿಮತದಂತೆ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕಿರುತ್ತದೆ. ಮತದಾನ ಜನಪ್ರತಿನಿಧಿಗಳನ್ನು ಜವಾಬ್ದಾರರನ್ನಾಗಿ ಮಾಡಲು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಮಹತ್ವದ ಸಾಧನವಾಗಿದೆ. ಇದು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು ಜನರ ಆಶಯಗಳನ್ನು ಪ್ರತಿಬಿಂಬಿಸುವ ಮತ್ತು ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಸರಕಾರವು ಕೂಡ ನೀತಿ-ನಿಯಮ, ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಸರಕಾರ ಜಿಬಿಎ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸುವಲ್ಲಿ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ವಿಧಿಸಿರುವ ಆದೇಶವನ್ನು ಪಾಲಿಸಿಲ್ಲ. ಅದುವೇ ‘ಟ್ರಿಪಲ್ ಟೆಸ್ಟ್’ (ತ್ರಿಸ್ತರ). ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಮೂರು ದಶಕಗಳ ಇತಿಹಾಸವೇ ಇದೆ. 1993ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಲಾಗಾಯ್ತಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿರುವುದು ಸರಿಯಷ್ಟೇ. ಸರಕಾರವು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಯಾವುದೇ ಋಜು ಮಾರ್ಗ ಅನುಸರಿಸದೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಿರಿಸಿದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನೇ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಗೂ ಒಳಪಡಿಸಿರುವುದು ಮತ್ತು ಮೀಸಲಾತಿ ಕೋಟಾವನ್ನು ಶೇ. 50ಕ್ಕಿಂತ ಹೆಚ್ಚಿಸಿರುವುದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು. ಅದರಲ್ಲೂ ಪ್ರಶ್ನಿತರ ಮುಖ್ಯ ವಾದವೆಂದರೆ ಮೀಸಲಾತಿ ಶೇ. 50ಕ್ಕಿಂತ ಮೀರಿ ಹೋಗಿದೆ ಎಂಬುದೇ ಆಗಿತ್ತು. ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ (ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳುವಂತೆ ಸರಕಾರಕ್ಕೆ ಕಟ್ಟುನಿಟ್ಟಿನ ಆದೇಶವನ್ನು ವಿಧಿಸಿತು (ಕೆ. ಕೃಷ್ಣಮೂರ್ತಿ vs ಭಾರತ ಒಕ್ಕೂಟ). 2010ರಲ್ಲಿ ಇದ್ದ ಅಂದಿನ ಭಾಜಪ ಸರಕಾರ ಮೀಸಲಾತಿಯ ಮಿತಿಯನ್ನು ಶೇ. 50ರಷ್ಟಕ್ಕೆ ಇಳಿಸಿತೇ ವಿನಾ ಟ್ರಿಪಲ್ ಟೆಸ್ಟ್ ನ ಗೋಜಿಗೆ ಹೋಗದೆ ಹಿಂದುಳಿದ ವರ್ಗಗಳ ಬಗ್ಗೆ ಕ್ರೌರ್ಯ ಮೆರೆಯಿತು. ಟ್ರಿಪಲ್ ಟೆಸ್ಟ್ ಆದೇಶ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುವುದರಿಂದ ಕರ್ನಾಟಕವು ಅವನ್ನು ಅನುಷ್ಠಾನ ಮಾಡಬೇಕಾಗುತ್ತದೆ. ಅವೆಂದರೆ- 1.ರಾಜ್ಯದೊಳಗೆ ಹಿಂದುಳಿದ ಸಂಸ್ಥೆಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸಮಕಾಲೀನ ಕಟ್ಟುನಿಟ್ಟಿನ ಪ್ರಾಯೋಗಿಕ ವಿಚಾರಣೆ ನಡೆಸಲು ಮೀಸಲಾದ ಆಯೋಗವನ್ನು ಸ್ಥಾಪಿಸುವುದು. 2. ಆಯೋಗದ ಶಿಫಾರಸುಗಳ ಬೆಳಕಿನಲ್ಲಿ ಸ್ಥಳೀಯ ಸಂಸ್ಥೆವಾರು ಒದಗಿಸಬೇಕಾದ ಮೀಸಲಾತಿಯ ಕೋಟಾವನ್ನು ನಿರ್ದಿಷ್ಟಪಡಿಸುವುದರಿಂದ ಮಿತಿಮೀರಿದ ಪ್ರಮಾಣದಲ್ಲಿ ತಪ್ಪಾಗುವುದಿಲ್ಲ. 3. ಯಾವುದೇ ಸಂದರ್ಭದಲ್ಲಿ ಅಂತಹ ಮೀಸಲಾತಿಯು ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು/ಇತರ ಹಿಂದುಳಿದ ವರ್ಗಗಳ ಪರವಾಗಿ ಮೀಸಲಾಗಿರುವ ಸ್ಥಾನಗಳು ಶೇ. 50ರಷ್ಟು ಕೋಟಾವನ್ನು ಮೀರಬಾರದು. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿಯೂ ಕೂಡ, 2010ರಲ್ಲಿಯೇ ಪ್ರಶ್ನಿತಗೊಂಡು, ವಿಭಾಗೀಯ ಪೀಠ ಟ್ರಿಪಲ್ ಟೆಸ್ಟ್ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿತು(ರಾಜ್ಯ ಚುನಾವಣಾ ಆಯೋಗ vs ಕರ್ನಾಟಕ ಸರಕಾರ). ಆದೇಶದಲ್ಲಿ ಪ್ರಬಲ ಜಾತಿಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ರಾಜಕೀಯವಾಗಿ ಆಧಿಪತ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಿ ಈ ರೀತಿಯ ಅಭಿಪ್ರಾಯ ಪಟ್ಟಿದೆ: ‘‘...It would be legetimate for the state government to exclude all the known accepted and aclaimed 'politically advanced' castes from the list of backward classes for the purpose of reservation in the ensuing elections’’. ಅಷ್ಟರಲ್ಲಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ, ಚುನಾವಣೆ ನಡೆಸಲು ಸಹ ಅನುಮತಿ ನೀಡಿತು. ಮತ್ತೆ 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದ ಸರಕಾರ, ಆಗಲೂ ಟ್ರಿಪಲ್ ಟೆಸ್ಟ್ ಮಾಡುವ ಉಸಾಬರಿಗೆ ಹೋಗಲಿಲ್ಲ. ಮುಂದೊಂದು ದಿನ, ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ, ವಿಕಾಸ್ ರಾವ್ ಗೌಳಿ ಎಂಬವರು ಸಲ್ಲಿಸಿದ ಮನವಿ ಮೇರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸರ್ವೋಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ಟ್ರಿಪಲ್ ಟೆಸ್ಟ್ ನಡೆಸುವಂತೆ ತಾಕೀತು ಮಾಡಿತು. ಹಾಗೆಯೇ ಮಧ್ಯಪ್ರದೇಶದ ಪ್ರಕರಣ ಒಂದರಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಟ್ರಿಪಲ್ ಟೆಸ್ಟ್ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿತು(ಸುರೇಶ್ ಮಹಾಜನ್ vs ಮಧ್ಯ ಪ್ರದೇಶ). ಈ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನೀಡಿದ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರಕಾರವು ಅನ್ಯಮಾರ್ಗವಿಲ್ಲದೆ ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ಹೇರಿತು. ನಿಗದಿತ ಕಾಲಮಿತಿಯಲ್ಲಿ ಆಯೋಗ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ವರದಿ ಸಲ್ಲಿಸಲು ಸಾಧ್ಯವೇ ಎಂಬ ಅಂಶ ಅಂದು ಜನರ ಮಾತಾಯಿತು. 2022ರಲ್ಲಿ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಂದಿನ ಬಿಜೆಪಿ ಸರಕಾರ, ಟ್ರಿಪಲ್ ಟೆಸ್ಟ್ ಪರಿಶೀಲನಾ ಕಾರ್ಯಕ್ಕೆಂದು, ನ್ಯಾಯಮೂರ್ತಿ ಡಾ. ಭಕ್ತ ವತ್ಸಲ ಸಮಿತಿಯನ್ನು ರಚಿಸಿತು. ಈ ದಿಸೆಯಲ್ಲಿ ಆಯೋಗ ಯಾವ ಕಾರ್ಯವಿಧಾನ ಅನುಸರಿಸಿತು ಎಂಬುದು ಯಾರಿಗೂ ತಿಳಿಯದು. ಆಯೋಗ 90 ದಿನಗಳ ವರೆಗೂ ಕಾಯದೆ ಕೇವಲ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿ ಬಿಟ್ಟಿತು! ಮಾಂತ್ರಿಕನೋರ್ವನನ್ನು ಆಯೋಗ ಮೈಮೇಲೆ ಆವಾಹಿಸಿಕೊಂಡು ವರದಿ ಸಿದ್ಧ ಪಡಿಸಿರಬಹುದೇನೋ ಎಂದು ಯಾರಿಗಾದರೂ ಅನ್ನಿಸದಿರದು. ಉಭಯ ನ್ಯಾಯಾಲಯಗಳು ನಿರ್ಣಯಾತ್ಮಕ ಅಭಿಪ್ರಾಯ ನೀಡಿದ್ದರೂ ಆಯೋಗ ಇದಾವುದನ್ನೂ ಗಮನಿಸದಿರುವುದು ವಿಷಾದ ತರುವ ಸಂಗತಿ. ಆಯೋಗ ಯಾರದೋ ಮರ್ಜಿಗೆ ಒಳಗಾಗಿ ಕಾಲಕಾಲಕ್ಕೆ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅಂಶಗಳನ್ನು ಮನಗಾಣದೆ ವರದಿ ನೀಡಿರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಅಂದು ಕೇಳಿ ಬಂದವು. ಆಯೋಗ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಷ್ಟೇ ಸಾರ್ವಜನಿಕರಿಗೆ ತಿಳಿದು ಬಂದ ವಿಷಯ. ಆದರೆ ವರದಿಯಲ್ಲಿ ಏನಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸರಕಾರವು ಅದನ್ನು ಪ್ರಕಟಿಸುವ ತಂಟೆಗೆ ಹೋಗಲೇ ಇಲ್ಲ. ಸರಕಾರ ಜನಸಾಮಾನ್ಯರ ಅವಗಾಹನೆಗೆ ತರದೆ ಅದನ್ನು ಜಾರಿಗೊಳಿಸುವ ತುರ್ತಾದರೂ ಏನು ಎಂಬುದು ಪ್ರಶ್ನೆಯಾಗಿತ್ತು. ಇಷ್ಟಾದರೂ ವರದಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಾಗಲಿ ಅಥವಾ ಹಿಂದುಳಿದ ವರ್ಗಗಳ ಅಗ್ರಣಿಗಳಾಗಲಿ ಒತ್ತಡ ತರದಿರುವುದು ಕೂಡ ಸರಕಾರ ಮತ್ತು ರಾಜಕೀಯ ಪಕ್ಷಗಳ ನಡುವೆ ಇರುವ ನೈತಿಕತೆಗೆ ಹೊರತಾದ ಒಡಂಬಡಿಕೆ ಇರಬಹುದು ಎಂಬ ಗುಮಾನಿ ಇದ್ದೇ ಇತ್ತು. ಸರ್ವೋಚ್ಚ ನ್ಯಾಯಾಲಯ ಪ್ರಾಯೋಗಿಕ ದತ್ತಾಂಶಗಳನ್ನು ಕಟ್ಟುನಿಟ್ಟಿನ ಪರೀಕ್ಷೆಗೊಳಪಡಿಸಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸ್ಪಷ್ಟ ಮಾತಿನಲ್ಲಿ ಹೇಳಿತ್ತು. ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಈ ಅತ್ಯಲ್ಪ ಅವಧಿಯಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿದೆ ಹಾಗೂ ಯಾವ ಮಾನದಂಡಗಳನ್ನು ಅನುಸರಿಸಿ ಆ ವರ್ಗಗಳನ್ನು ಗುರುತಿಸಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಸರಕಾರ ವರದಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ವರದಿಯನ್ನು ಅಂಗೀಕರಿಸಬೇಕು ಮತ್ತು ಸಂಪುಟದ ಮುಂದಿಟ್ಟು ಅನುಮೋದಿಸಿದ ನಂತರ ಅದನ್ನು ಕಾರ್ಯನಿರ್ವಾಹಕ ಆದೇಶ ಹೊರಡಿಸುವುದರ ಮೂಲಕ ಜಾಹೀರುಪಡಿಸಬೇಕು. ಅನಂತರ ಅವುಗಳನ್ನು ಮೀಸಲಾತಿಗೆ ಒಳಪಡಿಸಬೇಕು. ಆದರೆ ಸರಕಾರ ಮಾತ್ರ ಇದಾವ ಪ್ರಕ್ರಿಯೆಗಳನ್ನೂ ಅನುಸರಿಸದೆ ಜನತೆಯನ್ನು ಕಗ್ಗತ್ತಲಿನಲ್ಲಿಟ್ಟಿತ್ತು. 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಬೊಮ್ಮಾಯಿ ಸರಕಾರ ಪತನಗೊಂಡು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ಏರಿದರು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರಕಾರದ ಸಂಪುಟದಲ್ಲಿ ನ್ಯಾ. ಭಕ್ತವತ್ಸಲ ಆಯೋಗದ ವರದಿಯನ್ನು ಚರ್ಚಿಸಿ ಆಯೋಗದ ಕೆಲವೊಂದು ಸಲಹೆಗಳನ್ನು ಒಪ್ಪಿ, ಕೆಲವೊಂದನ್ನು ತಿರಸ್ಕರಿಸಿದೆ ಎಂಬ ವಿಷಯ ಅಂದಿನ ದಿನಪತ್ರಿಕೆಗಳಿಂದ ತಿಳಿದು ಬಂದಿತಷ್ಟೇ. ಅಲ್ಲಿಗೆ ಈ ವಿಷಯದ ಮೇಲೆ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರಕಾರವಾದರೂ ನ್ಯಾಯಾಲಯದ ಆದೇಶದ ಪ್ರಕಾರ ಆಯೋಗವು ವರದಿ ಸಿದ್ಧಪಡಿಸಿದೆಯೇ ಎಂಬ ಅಂಶದ ಬಗ್ಗೆ ತಲೆನೋವು ಮಾಡಿಕೊಳ್ಳದೆ ಮುಂದುವರಿಯಿತು. ಸರಕಾರ ಇಷ್ಟೆಲ್ಲಾ ಲೋಪ ದೋಷಗಳನ್ನು ಇಟ್ಟುಕೊಂಡು ಜಿಬಿಎ ಚುನಾವಣೆಗಾಗಿ ವಾರ್ಡ್‌ಗಳ ಮೀಸಲಾತಿಯನ್ನು ಸದ್ಯ ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗದ ಪ್ರಾಜ್ಞರು, ತಮಗಾಗಿರುವ ಘೋರ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೇ? ಈಗ ಸರ್ವೋಚ್ಚ ನ್ಯಾಯಾಲಯ ಜಿಬಿಎ ಚುನಾವಣೆಯನ್ನು ಜೂನ್ ತಿಂಗಳೊಳಗೆ ನಡೆಸಬೇಕೆಂದು ಫರ್ಮಾನು ಹೊರಡಿಸಿದೆ. ಸರಕಾರ ಇಕ್ಕಟ್ಟಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಇಲ್ಲಿ ಒಂದು ಮಾತು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಎಲ್ಲಾ ವರ್ಗದವರನ್ನು ಒಳಗೊಂಡಿರಬೇಕಲ್ಲದೆ; ಕೆಲವರಿಗಷ್ಟೇ ಸೀಮಿತವಾದುದಲ್ಲ. ರಾಜಕೀಯ ಬೆಳಕನ್ನೇ ಕಾಣದ ಹಿಂದುಳಿದ ವರ್ಗ ಅದರಲ್ಲೂ ದಮನಿತ ಹಿಂದುಳಿದ ವರ್ಗದವರನ್ನು ಕತ್ತಲಲ್ಲಿಟ್ಟು ಚುನಾವಣೆ ನಡೆಸುವುದು ಆ ವರ್ಗದವರಿಗೆ ಎಸಗುವ ರೌರವ ದ್ರೋಹ.

ವಾರ್ತಾ ಭಾರತಿ 16 Jan 2026 12:08 pm

ಪಶ್ಚಿಮ ಬಂಗಾಳ SIR| SSLC ಪ್ರವೇಶ ಪತ್ರ ಮಾನ್ಯ ದಾಖಲೆಯಾಗಿ ಸ್ವೀಕರಿಸುವಂತೆ ಕೋರಿದ್ದ ಪ್ರಸ್ತಾಪ ತಿರಸ್ಕರಿಸಿದ ಚುನಾವಣಾ ಆಯೋಗ

ಕೊಲ್ಕತ್ತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ 10ನೇ ತರಗತಿ ಪ್ರವೇಶ ಪತ್ರವನ್ನು ಮಾನ್ಯ ದಾಖಲೆಯಾಗಿ ಸ್ವೀಕರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಭಾರತೀಯ ಚುನಾವಣಾ ಆಯೋಗ ಗುರುವಾರ ತಿರಸ್ಕರಿಸಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ ಪತ್ರದಲ್ಲಿ, ಭಾರತೀಯ ಚುನಾವಣಾ ಆಯೋಗ ಪ್ರಸ್ತಾವನೆಯನ್ನು ಪರಿಶೀಲಿಸಿರುವುದಾಗಿ ತಿಳಿಸಿದೆ. ಆದರೆ, ಎಸೆಸೆಲ್ಸಿ ಪ್ರವೇಶ ಪತ್ರ ಎಸ್ಐಆರ್ ಪ್ರಕ್ರಿಯೆಗೆ ಸೂಚಿಸಿದ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿಲ್ಲ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ SIR ನಡೆಸಲು ಅಕ್ಟೋಬರ್ 27ರಂದು ಹೊರಡಿಸಿದ ಸೂಚನೆಗಳಲ್ಲಿ, ಮಾಧ್ಯಮಿಕ ಶಿಕ್ಷಣದ ಪ್ರವೇಶ ಪತ್ರವನ್ನು ಪರಿಶೀಲನಾ ಉದ್ದೇಶಗಳಿಗಾಗಿ ಮಾನ್ಯ ದಾಖಲೆಯಾಗಿ ಗುರುತಿಸಲಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಸ್ಐಆರ್ ಪ್ರಕ್ರಿಯೆಗೆ ಮಾನ್ಯವಾಗಿ ಚುನಾವಣಾ ಆಯೋಗ ಈ ಹಿಂದೆ 13 ದಾಖಲೆಗಳನ್ನು ಘೋಷಿಸಿತ್ತು. ಇವುಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಿ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ನೀಡಲಾದ ಗುರುತಿನ ಚೀಟಿ, 1987ರ ಮೊದಲು ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಎಲ್ಐಸಿ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ ನೀಡಿದ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್‌, ರಾಜ್ಯ ಸರಕಾರಿ ಪ್ರಾಧಿಕಾರ ನೀಡಿದ ವಾಸ್ತವ್ಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಮನೆ ಹಂಚಿಕೆ ಪ್ರಮಾಣಪತ್ರ ಸೇರಿವೆ. ಈ ಕುರಿತು ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್‌ ಬ್ಯಾರಕ್ ಪೋರ್ ಕ್ಷೇತ್ರದ ಸಂಸದ ಪಾರ್ಥ ಭೌಮಿಕ್, ಮಾಧ್ಯಮಿಕ ಶಿಕ್ಷಣ ಪ್ರಮಾಣ ಪತ್ರ ಮಾನ್ಯವಲ್ಲ ಅಂದರೆ ಯಾವುದು ಮಾನ್ಯ? ಸಾಧ್ಯವಾದಷ್ಟು ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಏಕೈಕ ಉದ್ದೇಶದಿಂದಲೇ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ವಾರ್ತಾ ಭಾರತಿ 16 Jan 2026 11:58 am

ಮೆಮೊರಿ ಕೊರತೆಯಿಂದ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬೆಲೆಯಲ್ಲಿ ಭಾರೀ ಏರಿಕೆ; ಇನ್ನೂ ಹೆಚ್ಚಲಿದೆ ದರ

ಎಐ ತಂತ್ರಜ್ಞಾನದ ಬೇಡಿಕೆಯಿಂದಾಗಿ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ಗಗನಕ್ಕೇರಿದ್ದು, ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಮುಂದಿನ ವಾರಗಳಲ್ಲಿ ಶೇ. 4 ರಿಂದ 8 ರಷ್ಟು ಏರಿಕೆಯಾಗಲಿದೆ. ಈಗಾಗಲೇ ನವೆಂಬರ್-ಡಿಸೆಂಬರ್‌ನಲ್ಲಿ ಬೆಲೆಗಳು ಏರಿಕೆ ಕಂಡಿದ್ದವು. ವಿವೋ, ನಥಿಂಗ್ ಮುಂತಾದ ಕಂಪನಿಗಳು ದರ ಹೆಚ್ಚಿಸಿದ್ದರೆ, ಸ್ಯಾಮ್‌ಸಂಗ್ ಡಿಸ್ಕೌಂಟ್ ಕಡಿತಗೊಳಿಸಿದೆ.

ವಿಜಯ ಕರ್ನಾಟಕ 16 Jan 2026 11:53 am

ಕೇಂದ್ರ ಸರ್ಕಾರಿ ನೌಕರರಿಗೆ 'ಸಂಯೋಜಿತ ವೇತನ ಖಾತೆ ಪ್ಯಾಕೇಜ್' ಜಾರಿ: ಶೂನ್ಯ ಬ್ಯಾಲೆನ್ಸ್‌ ಖಾತೆ, 2 ಕೋಟಿ ರೂ. ವಿಮೆ, ಬ್ಯಾಂಕಿಂಗ್ ಸೇವೆ ಸೇರಿ ಹಲವು ಸೌಲಭ್ಯ!

ಕೇಂದ್ರ ನೌಕರರೇ ಗಮನಿಸಿ! ನಿಮ್ಮ ಸಂಬಳಕ್ಕೆ ಸಿಗಲಿದೆ ವಿಶೇಷ ಪ್ಯಾಕೇಜ್. 50 ಲಕ್ಷಕ್ಕೂ ಹೆಚ್ಚು ಮಂದಿಗೆ 'ಕಾಂಪೋಸಿಟ್ ಸ್ಯಾಲರಿ ಅಕೌಂಟ್' ಸೌಲಭ್ಯ. ಬ್ಯಾಂಕಿಂಗ್, ವಿಮೆ, ಡಿಜಿಟಲ್ ಕಾರ್ಡ್ ಸೇವೆಗಳು ಒಂದೇ ಸೂರಿನಡಿ. ಶೂನ್ಯ ಬ್ಯಾಲೆನ್ಸ್ ಖಾತೆ, ಉಚಿತ ಆನ್‌ಲೈನ್ ಟ್ರಾನ್ಸಾಕ್ಷನ್, ಸಾಲಗಳಲ್ಲಿ ರಿಯಾಯಿತಿ, ಅಪಘಾತ ವಿಮೆ, ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಲಾಭಗಳು ನಿಮ್ಮದಾಗಲಿವೆ.

ವಿಜಯ ಕರ್ನಾಟಕ 16 Jan 2026 11:48 am

ಹೋಗಿ ಬನ್ನಿ ಗಾಡ್ಗೀಳ್ ಸರ್...ನಮಸ್ಕಾರ

ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ. ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್‌ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ 24,1942-ಜನವರಿ 7,2026) ತಮ್ಮ ಸಾರ್ಥಕ ಜೀವನಯಾತ್ರೆಯನ್ನು ಅಂತ್ಯಗೊಳಿಸಿದ್ದಾರೆ. ಮಾಧವ ಗಾಡ್ಗೀಳ್ ಅವರಿಗೆ ಪಶ್ಚಿಮ ಘಟ್ಟಗಳ ಬಗ್ಗೆ ಒಲವು ಮೂಡಿದ್ದು ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರಿಂದ. ಡಿ.ಆರ್. ಗಾಡ್ಗೀಳ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕರಾಗಿದ್ದರು; ಕೇಂದ್ರ ಸರಕಾರವು ರಾಜ್ಯಗಳಿಗೆ ಹೇಗೆ ಅನುದಾನ ನಿಗದಿ ಪಡಿಸಬೇಕು ಎಂಬುದನ್ನು ವಿವರಿಸುವ ಗಾಡ್ಗೀಳ್ ಸೂತ್ರದ ಜನಕ. ಮಾಧವ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಬಳಿಕ ಹಾರ್ವರ್ಡ್ ವಿವಿಯಿಂದ ಗಣಿತಶಾಸ್ತ್ರೀಯ ಪರಿಸರ ವಿಜ್ಞಾನ ಮತ್ತು ಮೀನುಗಳ ವರ್ತನೆ ಕುರಿತು ಪಿಎಚ್.ಡಿ. ಪಡೆದರು. ಐಬಿಎಂ ಫೆಲೋಶಿಪ್ ಪಡೆದು ಹಾರ್ವರ್ಡ್ ಕಂಪ್ಯೂಟಿಂಗ್ ಸೆಂಟರ್‌ನಲ್ಲಿ ಸಂಶೋಧನಾ ಸಹೋದ್ಯೋಗಿಯಾಗಿ ಹಾಗೂ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿ 2 ವರ್ಷ ಕೆಲಸ ಮಾಡಿದರು. 1971ರಲ್ಲಿ ಭಾರತಕ್ಕೆ ವಾಪಸಾಗಿ ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕೆಲಸ ಮಾಡಿದರು. ಪತ್ನಿ ಸುಲೋಚನಾ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯನ್ನು ಸೇರಿದಾಗ, ಆಗಿನ ನಿರ್ದೇಶಕ ಸತೀಶ್ ಧವನ್ ಅವರು ಗಾಡ್ಗೀಳ್ ಅವರನ್ನೂ ಆಹ್ವಾನಿಸಿದರು. 1973ರಲ್ಲಿ ಸೈದ್ಧಾಂತಿಕ ಅಧ್ಯಯನಗಳ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, 1983ರಲ್ಲಿ ಪರಿಸರ ವಿಜ್ಞಾನಗಳ ಕೇಂದ್ರ(ಸಿಇಎಸ್) ಆರಂಭಿಸಿದರು. ಇದು ಇಂಥ ಮೊದಲ ಶ್ರೇಷ್ಠತಾ ಕೇಂದ್ರವಾಗಿತ್ತು. ಅವರು ತಮ್ಮನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತಗೊಳಿಸಲಿಲ್ಲ; ಕಲಿಕೆ ಜೊತೆಗೆ ಜನರು/ಸಮುದಾಯಗಳ ಪ್ರಯೋಜನಕ್ಕಾಗಿ ತಮ್ಮ ಜ್ಞಾನವನ್ನು ಬಳಸಿದರು. ಪಶ್ಚಿಮ ಘಟ್ಟಗಳಲ್ಲಿನ ಪವಿತ್ರ ವನಗಳ ಅಧ್ಯಯನ, ಅರಣ್ಯ ಮತ್ತು ಪರಿಸರ ನೀತಿಗಳ ಅಧ್ಯಯನ, ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು ರಕ್ಷಿಸುವ ಹಾಗೂ ಆರ್ಥಿಕ ಬೆಂಬಲ ನೀಡುವ ಜೈವಿಕ ವೈವಿಧ್ಯ ಕಾಯ್ದೆ 2002, ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಆರ್‌ಎ) ಸೇರಿದಂತೆ ಹಲವು ಪ್ರಮುಖ ಕಾರ್ಯನೀತಿ ಉಪಕ್ರಮಗಳಲ್ಲಿ ಕೈಜೋಡಿಸಿದರು. 2004ರಲ್ಲಿ ನಿವೃತ್ತಿ ಬಳಿಕ ಪುಣೆಯ ಅಗರ್ಕರ್ ಸಂಶೋಧನಾ ಕೇಂದ್ರ ಹಾಗೂ ಗೋವಾ ವಿವಿಯಲ್ಲಿ ಸಂಶೋಧನೆ-ಬೋಧನೆ ಮುಂದುವರಿಸಿದರು. ಹಲವು ಉಪಕ್ರಮ, ಅಧ್ಯಯನ ಅವರ ಅಧ್ಯಯನ-ಶ್ರಮದಿಂದ 1986ರಲ್ಲಿ ನೀಲಗಿರಿಯಲ್ಲಿ ದೇಶದ ಮೊದಲ ಜೀವಮಂಡಲ(ಬಯೋಸ್ಪಿಯರ್) ರಚನೆಯಾಯಿತು. 1970ರ ದಶಕದ ಅಂತ್ಯ ಮತ್ತು 1980ರ ದಶಕದ ಆರಂಭದಲ್ಲಿ ಸೈಲೆಂಟ್ ವ್ಯಾಲಿ(ಮೌನ ಕಣಿವೆ) ಮಳೆಕಾಡು ಸಂರಕ್ಷಿಸುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಸ್ತಾವಿತ ಜಲವಿದ್ಯುತ್ ಯೋಜನೆಯನ್ನು ರದ್ದುಗೊಳಿಸಿದರು. ಕಾಗದ ಕಾರ್ಖಾನೆಗಳು ಬಿದಿರನ್ನು ಬೇಕಾಬಿಟ್ಟಿ ಬಳಸಿದ್ದರಿಂದ ಸಂಪನ್ಮೂಲದ ಕೊರತೆಯುಂಟಾಗಿದೆ ಎಂಬ ಮೇದಾರರ ದೂರು ಕುರಿತು 1974ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕೋರಿಕೆ ಮೇರೆಗೆ ಅಧ್ಯಯನ ನಡೆಸಿದರು. 1986ರ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ(ಎಸ್‌ಡಬ್ಲ್ಯುಜಿಎಂ)’ವು ಅರಣ್ಯನಾಶ, ಗಣಿಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳಿಂದ ಆದ ವಿನಾಶವನ್ನು ಎತ್ತಿ ತೋರಿಸಿತು. 100 ದಿನಗಳ ಕಾಲ್ನಡಿಗೆ ಜಾಥಾ ನವೆಂಬರ್ 1987ರಲ್ಲಿ ಪ್ರಾರಂಭವಾಗಿ ಫೆಬ್ರವರಿ 1988ರಲ್ಲಿ ಗೋವಾದಲ್ಲಿ ಕೊನೆಗೊಂಡಿತು. 1990ರಲ್ಲಿ ಕರ್ನಾಟಕ ಸರಕಾರವು ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೌಲ್ಯಮಾಪನಕ್ಕೆ ನೇಮಿಸಿದಾಗ, ಆ ಪ್ರದೇಶದ 28 ಕಾಲೇಜುಗಳ ವಿದ್ಯಾರ್ಥಿಗಳು/ಶಿಕ್ಷಕರನ್ನು ಬಳಸಿಕೊಂಡು ಕ್ಷೇತ್ರಕಾರ್ಯ ನಡೆಸಿದರು. 2010ರಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ಪರಿಸರ ಸಚಿವ ಜೈರಾಮ್ ರಮೇಶ್ ಪಾಲ್ಗೊಂಡಿದ್ದ ಸಭೆಯು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ(ಡಬ್ಲ್ಯುಜಿಇಇಪಿ)ಯ ರಚನೆಗೆ ಕಾರಣವಾಯಿತು. ಘಟ್ಟದಾದ್ಯಂತ ಸುತ್ತಿ, ಸ್ಥಳೀಯರೊಟ್ಟಿಗೆ ಬೆರೆತು ವರದಿ ಸಿದ್ಧಗೊಳಿಸಿದರು. ಸಮುದಾಯ-ಜನರು ಅವರ ಸಂರಕ್ಷಣಾ ಸಿದ್ಧಾಂತದ ಕೇಂದ್ರ ಬಿಂದು ಆಗಿದ್ದರು. 6 ರಾಜ್ಯಗಳಲ್ಲಿ ಹರಡಿಕೊಂಡ ಪಶ್ಚಿಮ ಘಟ್ಟದ ಶೇ.75ರಷ್ಟನ್ನು ಸಂರಕ್ಷಿಸಬೇಕೆಂದು ಅವರ ನೇತೃತ್ವದ ಸಮಿತಿ ಆಗಸ್ಟ್ 2011ರಲ್ಲಿ ಶಿಫಾರಸು ಮಾಡಿತು. ಘಟ್ಟದ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಬೇಕು; ಗ್ರಾಮ-ನಗರ ಪ್ರದೇಶಗಳಲ್ಲಿ ಜೈವಿಕ ವೈವಿಧ್ಯ ನಿರ್ವಹಣೆ ಸಮಿತಿಗಳ ಒಳಗೊಳ್ಳುವಿಕೆಯಿಂದ ಈ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ಮಾಡಬೇಕು ಮತ್ತು ವರದಿಯನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ಸಾರ್ವಜನಿಕರಿಗೆ ಹಂಚಿ, ಗ್ರಾಮಪಂಚಾಯತ್‌ಗಳೊಟ್ಟಿಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರಿದ್ದರು. ಆದರೆ, 6 ರಾಜ್ಯಗಳ ಸರಕಾರಗಳು ಮತ್ತು ಸ್ಥಳೀಯ ಸಮುದಾಯಗಳು ಪರಿಸರ ಸೂಕ್ಷ್ಮ ವಲಯಗಳ ನಿಗದಿಗೆ ವಿರೋಧ ವ್ಯಕ್ತಪಡಿಸಿದವು. ಸರಕಾರಗಳು ವರದಿಯನ್ನು ಬಹಿರಂಗಗೊಳಿಸಲಿಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನೆ-ರಸ್ತೆ-ಶಾಲೆ ನಿರ್ಮಾಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸುಳ್ಳು ಪ್ರಚಾರ ನಡೆಯಿತು. ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಜನರನ್ನು ವರದಿ ವಿರುದ್ಧ ಎತ್ತಿಕಟ್ಟಿದರು. ಕೇರಳದಲ್ಲಿ ಚರ್ಚ್ ಕೂಡ ವರದಿಯನ್ನು ವಿರೋಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿತು. ಅದರ ಪ್ರತಿಫಲ ಉಣ್ಣಲು ಹೆಚ್ಚು ಕಾಲ ಬೇಕಾಗಲಿಲ್ಲ; 2018ರ ಪ್ರವಾಹದಲ್ಲಿ ಅಧಿಕೃತವಾಗಿ 483 ಮಂದಿ ಮೃತಪಟ್ಟರು; ಮೂಲಸೌಲಭ್ಯ ವ್ಯವಸ್ಥೆಗಳು ನೆಲಸಮವಾದವು. ಆನಂತರ, ಸರಕಾರ ಆಗಸ್ಟ್ 2012ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತಾಧಿಕಾರ ಕಾರ್ಯಕಾರಿ ಗುಂಪು(ಎಚ್‌ಎಲ್‌ಡಬ್ಲ್ಯುಜಿ) ನೇಮಕಗೊಳಿಸಿತು; ಸಮಿತಿಯು ಆಗಸ್ಟ್ 15, 2013ರಲ್ಲಿ ವರದಿ ಸಲ್ಲಿಸಿ, ಸಂರಕ್ಷಿಸಬೇಕಾದ ಪ್ರದೇಶವನ್ನು ಶೇ.37ಕ್ಕೆ ಇಳಿಸಿತು. ಇದು ಕೂಡ ರಾಜಕಾರಣಿಗಳು-ಅಧಿಕಾರಶಾಹಿಗೆ ಸಮ್ಮತವಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ತಿಂಗಳೊಳಗೆ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಅಳವಡಿಸುವುದಾಗಿ ಹೇಳಿತು. ಇದರಿಂದ ಗಾಡ್ಗೀಳ್ ನೊಂದುಕೊಂಡರು; ಆದರೆ, ಪಶ್ಚಿಮ ಘಟ್ಟಗಳ ಮೇಲಿನ ಅವರ ಪ್ರೀತಿ ಕಡಿಮೆಯಾಗಲಿಲ್ಲ ಹಾಗೂ ಅವರು ಸಿನಿಕರಾಗಲಿಲ್ಲ. ಅಭಿವೃದ್ಧಿಯು ಮಾನವೀಯ, ಪರಿಸರ ಸಂವೇದನೆಯುಳ್ಳ ಮತ್ತು ನ್ಯಾಯಸಮ್ಮತವಾಗಿರಬೇಕು; ಬಡವರನ್ನು ಪೊರೆಯುವ ಪರಿಸರದ ನಾಶದಿಂದ ಬರಬಾರದು. ನಿಜವಾದ ಅಭಿವೃದ್ಧಿಯ ಬೇರು ವೈಜ್ಞಾನಿಕ ತೀವ್ರತೆ, ನೈತಿಕ ಉತ್ತರದಾಯಿತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿದ್ದು, ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆಯ ಕೇಂದ್ರದಲ್ಲಿ ಸ್ಥಳೀಯ ಜನರು-ಸಮುದಾಯಗಳು ಇರಬೇಕು ಎಂದು ನಂಬಿದ್ದರು. ಕೊಂಕಣ ರೈಲು ಯೋಜನೆ, ಭೋಪಾಲ್ ಅನಿಲ ದುರಂತ ಕುರಿತು ವಸ್ತುನಿಷ್ಠ ವರದಿ ನೀಡಿದ್ದರು; ಅವನ್ನು ನಿರ್ಲಕ್ಷಿಸಲಾಯಿತು. ಬೇಡ್ತಿ ಕೊಳ್ಳ ಯೋಜನೆ ತಡೆಯುವಲ್ಲಿ ಅವರ ಪಾಲು ದೊಡ್ಡದು. ಅಘನಾಷಿನಿ ಕೊಳ್ಳದ ಪ್ರಾಮುಖ್ಯತೆಯನ್ನು ಆಗಲೇ ಗುರುತಿಸಿದ್ದರು. ಘಟ್ಟದ ಜೀವಕ್ಕೆ ಸಮ್ಮಾನ ‘‘ಪಶ್ಚಿಮ ಘಟ್ಟಗಳು ಗೋದಾವರಿ, ಕೃಷ್ಣ, ನೇತ್ರಾವತಿ, ಕಾವೇರಿ, ಕುಂತಿ, ವೈಗೈ ಸೇರಿದಂತೆ ಹತ್ತು ಹಲವು ನದಿಗಳ ಉಗಮಸ್ಥಾನ. ಕಾಳಿದಾಸ ಪಶ್ಚಿಮ ಘಟ್ಟವನ್ನು ಸುಂದರ ಯುವತಿಗೆ ಹೋಲಿಸಿದ್ದಾನೆ; ‘ಅಗಸ್ತ್ಯಮಲೈ ಆಕೆಯ ತಲೆ, ಅಣ್ಣೆಮಲೈ ಮತ್ತು ನೀಲಗಿರಿ ಸ್ತನಗಳು, ಕೆನರಾ ಮತ್ತು ಗೋವಾದ ಶ್ರೇಣಿಗಳು ಸೊಂಟ, ಉತ್ತರ ಸಹ್ಯಾದ್ರಿ ಕಾಲುಗಳು. ಆಕೆ ಹಸಿರು ಸೀರೆ ಧರಿಸಿದ್ದಾಳೆ’. ಆದರೆ, ಹಣವಂತರು ದುರಾಸೆಯಿಂದ ಹಾಗೂ ಬಡವರು ತಮ್ಮ ಜೀವನಾಧಾರಕ್ಕೆ ಆಕೆಯನ್ನು ಬಗೆದಿದ್ದಾರೆ. ಈ ಪರ್ವತಶ್ರೇಣಿ ದಕ್ಷಿಣ ಭಾರತದ ಆರ್ಥಿಕ ಮತ್ತು ಇಕಾಲಜಿಯ ಬೆನ್ನುಮೂಳೆ ಇದ್ದಂತೆ’’ ಎಂದು ಅವರು ಒಮ್ಮೆ ಹೇಳಿದ್ದರು. ಬ್ರಿಟಿಷ್ ಇಕಲಾಜಿಕಲ್ ಸೊಸೈಟಿ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡಮಿ ಮತ್ತು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಅನೇಕ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು; 2006ರಲ್ಲಿ ಪದ್ಮಭೂಷಣ ಮತ್ತು 2024ರಲ್ಲಿ ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದ ಅರ್ಥ್ ಪುರಸ್ಕಾರ ಲಭಿಸಿತು. 2021ರಲ್ಲಿ ಪಶ್ಚಿಮ ಘಟ್ಟಗಳ ನೆಲ್ಲಿಯಂಪತಿ ಬೆಟ್ಟದಲ್ಲಿ ಪತ್ತೆಹಚ್ಚಿದ ಹೊಸ ಸಸ್ಯಕ್ಕೆ ಗಾಡ್ಗೀಳ್ ಅವರ ಗೌರವಾರ್ಥ ‘ಎಲಿಯೋಕಾರ್ಪಸ್ ಗಾಡ್ಗೀಳಿ’ ಎಂದು ಹೆಸರಿಡಲಾಯಿತು. ‘ಎ ಫಿಶರ್ಡ್ ಲ್ಯಾಂಡ್’- ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಇಂಡಿಯಾ, 1992; ‘ಇಕಾಲಜಿ ಆಂಡ್ ಈಕ್ವಿಟಿ; ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಂಟೆಂಪರರಿ ಇಂಡಿಯಾ’-ಮಾಧವ ಗಾಡ್ಗೀಳ್ ಮತ್ತು ರಾಮಚಂದ್ರ ಗುಹಾ, ರೂಟ್ಲೆಡ್ಜ್, 1995; ‘ನರ್ಚರಿಂಗ್ ಬಯೋಡೈವರ್ಸಿಟಿ; ಆನ್ ಇಂಡಿಯನ್ ಅಜೆಂಡಾ’-ಮಾಧವ ಗಾಡ್ಗೀಳ್ ಮತ್ತು ಪಿ.ಆರ್. ಶೇಷಗಿರಿ ರಾವ್ 1998, ಪರಿಸರ ಶಿಕ್ಷಣ ಕೇಂದ್ರ; ‘ಡೈವರ್ಸಿಟಿ: ದ ಕಾರ್ನರ್‌ಸ್ಟೋನ್ ಆಫ್ ಲೈಫ್’-ಮಾಧವ ಗಾಡ್ಗೀಳ್, ವಿಜ್ಞಾನ ಪ್ರಸಾರ, 2005; ‘ಇಕಲಾಜಿಕಲ್ ಜರ್ನೀಸ್’-ಮಾಧವ ಗಾಡ್ಗೀಳ್, ಓರಿಯಂಟ್ ಬ್ಲ್ಯಾಕ್ಸ್ವಾನ್, 2005 ಅವರ ಹೊತ್ತಗೆಗಳು. ಅವರ ಆತ್ಮಚರಿತ್ರೆ- ‘ಎ ವಾಕ್ ಅಪ್ ದ ಹಿಲ್: ಲಿವಿಂಗ್ ವಿತ್ ಪೀಪಲ್ ಆಂಡ್ ನೇಚರ್’, ಪೆಂಗ್ವಿನ್ ಅಲೆನ್ ಲೇನ್, 2023(ಕನ್ನಡ ಅನುವಾದ-ಏರುಘಟ್ಟದ ನಡಿಗೆ, ಶಾರದಾ ಗೋಪಾಲ ಮತ್ತು ನಾಗೇಶ ಹೆಗಡೆ, ಆಕೃತಿ ಆಶಯ ಪಬ್ಲಿಕೇಶನ್, ಮಂಗಳೂರು). ಸಾಮಾಜಿಕ ನ್ಯಾಯದ ಹರಿಕಾರ ಗಾಡ್ಗೀಳ್ ಅವರ ಎರಡು ಪುಸ್ತಕಗಳ ಸಹಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ, ‘‘ಬೌದ್ಧಿಕ ಸ್ವಂತಿಕೆ, ಬೌದ್ಧಿಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗಳನ್ನು ಒಂದುಗೂಡಿಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಪ್ರವೃತ್ತಿ ಮತ್ತು ಸಿನಿಕತೆಯ ಅನುಪಸ್ಥಿತಿ ಗಾಡ್ಗೀಳ್ ಅವರ ಗುಣ. ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಮತ್ತು ಅಧಿಕಾರಸ್ಥರ ಬಗ್ಗೆ ಆಳವಾದ ಸಂಶಯ ಹೊಂದಿದ್ದರು. ಸಂಪನ್ಮೂಲ ನಿರ್ವಹಣೆಯ ವಿಶ್ವಾಸಾರ್ಹ ಮಾದರಿಗಳನ್ನು ರೂಪಿಸಲು ಸ್ಥಳೀಯರೊಂದಿಗೆ ಕೆಲಸ ಮಾಡಿದರು ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬರೆದರು. ಅವರ ನಿಷ್ಠುರತೆ ಯಾವುದೇ ಹೋರಾಟಗಾರನಿಗಿಂತ ಕಡಿಮೆ ಇರಲಿಲ್ಲ’’ ಎಂದು ಬಣ್ಣಿಸುತ್ತಾರೆ. ಅವರ ಆತ್ಮಚರಿತ್ರೆಯ ಅನುವಾದ ಸಂಬಂಧ ಅವರನ್ನು ಐಐಎಸ್‌ಸಿಯಲ್ಲಿ ಭೇಟಿ ಆಗಿದ್ದೇ ಕೊನೆ. ಅವರ ಸೌಜನ್ಯ, ಹೃದಯವಂತಿಕೆ, ಸರಳತೆ ಮೇರೆ ಇಲ್ಲದ್ದು. ವೈಯಕ್ತಿಕ ಕಾರಣಗಳಿಂದಾಗಿ ಪುಸ್ತಕದ ಅನುವಾದ ಸಾಧ್ಯವಾಗಲಿಲ್ಲ. ಐಐಎಸ್‌ಸಿಯಲ್ಲಿ ಹವಾಮಾನ ಸಂಶೋಧಕಿಯಾಗಿದ್ದ ಅವರ ಪತ್ನಿ ಸುಲೋಚನಾ ಅವರು ಜುಲೈ 2025ರಲ್ಲಿ ಮರಣ ಹೊಂದಿದರು. ಅವರ ಪುತ್ರ ಸಿದ್ಧಾರ್ಥ ಐಐಎಸ್‌ಸಿಯಲ್ಲಿ ಗಣಿತಶಾಸ್ತ್ರಜ್ಞ ಮತ್ತು ಪುತ್ರಿ ಗೌರಿ ಪತ್ರಕರ್ತೆ. ‘‘ಗಾಡ್ಗೀಳ್ ಅವರ ಅಂತ್ಯಸಂಸ್ಕಾರದ ವೇಳೆ ಕೇವಲ 50 ಜನ ಇದ್ದರು. ಸರಕಾರಗಳಿಂದ ಯಾವುದೇ ಗೌರವ ಸಲ್ಲಿಕೆಯಾಗಲಿಲ್ಲ’’ ಎಂದು ಪತ್ರಕರ್ತ ಎ.ವಿ.ಎಸ್. ನಂಬೂದಿರಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಪತ್ರಕರ್ತ ಕೆ.ಎ.ಶಾಜಿ ಬರೆಯುತ್ತಾರೆ; ‘‘ಗಾಡ್ಗೀಳ್ ಅವರು ನಿಶ್ಯಬ್ದವಾಗಿ, ಯಾರೂ ನೋಡದೆ ಇರುವಾಗ ಸುಡುವ ಕಾಡಿನಂತೆ ಸ್ಥಿರವಾಗಿ ಮತ್ತು ಚಮತ್ಕಾರವಿಲ್ಲದೆ ಪಂಚಭೂತಗಳಲ್ಲಿ ಲೀನವಾದರು. ತೋರುಗಾಣಿಕೆಯನ್ನು ವಿರೋಧಿಸುತ್ತಿದ್ದ ಅವರು ಪ್ರೇಕ್ಷಕರನ್ನು ಬೆಳೆಸಲಿಲ್ಲ; ವಾದಗಳನ್ನು ಬೆಳೆಸಿದರು. ರಾಜ್ಯದ ಅನುಮೋದನೆಯನ್ನು ಕೇಳಲಿಲ್ಲ; ಅದರ ಖಚಿತತೆಯನ್ನು ಪ್ರಶ್ನಿಸಿದರು. ಚಪ್ಪಾಳೆಗಳಿಂದ ಅವರಿಗೆ ಅಸಮಾಧಾನ ಆಗುತ್ತಿತ್ತು; ಏಕೆಂದರೆ, ಅದನ್ನು ಸುಲಭವಾಗಿ, ಹೆಚ್ಚು ಖರ್ಚಿಲ್ಲದೆ ಗಳಿಸಬಹುದು ಎಂಬುದು ಅವರಿಗೆ ಗೊತ್ತಿತ್ತು. ಅವರು ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಮಹತ್ವಾಕಾಂಕ್ಷೆ ಕಾರಣವಲ್ಲ; ಬದ್ಧತೆ ಕಾರಣ. ಸೈಲೆಂಟ್ ವ್ಯಾಲಿಯಿಂದ ಅವರು ಪ್ರಸಿದ್ಧರಾಗಲಿಲ್ಲ; ಬದಲಿಗೆ, ಆಂದೋಲನ ಅವರ ಮೇಲೆ ಜವಾಬ್ದಾರಿ ಹೊರಿಸಿತು. ಅಭಿವೃದ್ಧಿಯನ್ನು ಹೇಗೆ ಪ್ರಶ್ನಿಸಬೇಕು ಎಂಬುದನ್ನು ಮತ್ತು ವಿಜ್ಞಾನವು ಅಧಿಕಾರಕ್ಕೆ ತಲೆಬಾಗುವ ಅಗತ್ಯವಿಲ್ಲ ಎಂದು ತೋರಿಸಿಕೊಟ್ಟರು. ಪಶ್ಚಿಮ ಘಟ್ಟಗಳನ್ನು ರೈತರು, ಕಾಡು, ನದಿ ಹಾಗೂ ಇಳಿಜಾರುಗಳಿರುವ ಜೀವನ ವ್ಯವಸ್ಥೆ ಎಂದು ನೋಡಿದರು. ಅವರ ವರದಿ ಸರಕಾರ/ಧಾರ್ಮಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಿತು; ಏಕೆಂದರೆ, ಅದು ಸತ್ಯವನ್ನು ಅನುಕೂಲಕ್ಕಾಗಿ ದುರ್ಬಲಗೊಳಿಸಲು ನಿರಾಕರಿಸಿತು. ಇದರಿಂದ ಜೀವನ ಮಾತ್ರವಲ್ಲದೆ ಸಾವಿನಲ್ಲಿಯೂ ಅವರು ಸಾರ್ವಜನಿಕ ಗೌರವಕ್ಕೆ ಅಸ್ಪಶ್ಯರಾದರು. ಅಧಿಕಾರವು ತನಗೆ ವಿನಯದಿಂದ ಸೇವೆ ಸಲ್ಲಿಸುವವರನ್ನು ಗೌರವಿಸುತ್ತದೆ; ಆದರೆ, ಬೌದ್ಧಿಕವಾಗಿ ಅವಿಧೇಯರನ್ನು ಹೇಗೆ ಎದುರಿಸಬೇಕೆಂದು ಅದಕ್ಕೆ ತಿಳಿದಿಲ್ಲ. ಹೀಗಾಗಿ ಅಂಥವರನ್ನು ನಿರ್ಲಕ್ಷಿಸಲಾಗುತ್ತದೆ. ತಟಸ್ಥತೆ ಮತ್ತು ಪ್ರಾಮಾಣಿಕತೆ ಒಂದೇ ಅಲ್ಲ ಎಂದು ಅರಿತ ಪ್ರತಿಯೊಬ್ಬರಲ್ಲಿ ಅವರು ಬದುಕಿರುತ್ತಾರೆ. ಮಂತ್ರಿಗಳು ಮತ್ತು ಅಧಿಕಾರಿಗಳು ಅಡಿ ಟಿಪ್ಪಣಿಗಳಾಗಿ ಮಸುಕಾದ ನಂತರವೂ ಅವರ ಪ್ರಶ್ನೆಗಳು ನ್ಯಾಯಾಲಯಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತಲೇ ಇರುತ್ತವೆ. ಅವರು ರಕ್ಷಿಸಲು ಪ್ರಯತ್ನಿಸಿದ ಭೂಮಿಯ ದೀರ್ಘ ಸ್ಮರಣೆಯಲ್ಲಿ ಬೃಹತ್ತಾಗಿ ಬೆಳೆಯುತ್ತಾರೆ’’. ಹೌದು. ಜನ ಕೃತಘ್ನರು; ಅಧಿಕಾರಶಾಹಿ ಲಾಭಬಡುಕತನದ್ದು. ಆದರೆ, ಪಶ್ಚಿಮ ಘಟ್ಟಗಳು ನಿಮ್ಮನ್ನು ಮರೆಯುವುದಿಲ್ಲ. ಹೋಗಿ ಬನ್ನಿ ಸರ್. ನಿಮಗೆ ವಿದಾಯ.

ವಾರ್ತಾ ಭಾರತಿ 16 Jan 2026 11:47 am

ಸಂಪಾದಕೀಯ | ಭಾರತಕ್ಕೆ ಅಪಾಯ ತಂದಿಡಲಿರುವ ದ್ವೇಷ ಭಾಷಣಗಳೆಂಬ ವೈರಸ್‌ಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 16 Jan 2026 11:30 am

ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಪತ್ತೆ

ವಿಜಯಪುರದ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ರಣಹದ್ದೊಂದು ಪತ್ತೆಯಾಗಿದೆ. ಮಹಾರಾಷ್ಟ್ರದ ಮೇಲಘಾಟ ಪ್ರದೇಶದಿಂದ ಬಂದಿದ್ದ ಈ ರಣಹದ್ದು, ಟ್ರ್ಯಾಕರ್‌ನ ಭಾರದಿಂದಾಗಿ ಬಸವಳಿದಿತ್ತು. ಮಹಾರಾಷ್ಟ್ರ ಅರಣ್ಯಾಧಿಕಾರಿಗಳು ರಣಹದ್ದುಗಳ ಅಧ್ಯಯನಕ್ಕಾಗಿ ಈ ಉಪಕರಣ ಅಳವಡಿಸಿದ್ದರು. ವಿಜಯಪುರ ಅರಣ್ಯಾಧಿಕಾರಿಗಳು ರಣಹದ್ದಿನ ಆರೈಕೆ ಮಾಡುತ್ತಿದ್ದು, ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ವಿಜಯ ಕರ್ನಾಟಕ 16 Jan 2026 11:30 am

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ | ಮಹಾಯುತಿಗೆ ಆರಂಭಿಕ ಮುನ್ನಡೆ: ಮುಂಬೈನಲ್ಲಿ ಮಹಾಯುತಿ-ಠಾಕ್ರೆಗಳ ನಡುವೆ ನಿಕಟ ಪೈಪೋಟಿ

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಪ್ರಾರಂಭಗೊಂಡಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ ಲಭಿಸಿದೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಹಾಗೂ ಠಾಕ್ರೆ ಸಹೋದರರ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ನಾಗಪುರ ನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ. 

ವಾರ್ತಾ ಭಾರತಿ 16 Jan 2026 11:29 am

ದೆಹಲಿ ವಿಮಾನ ಏರಿದ ಡಿಕೆಶಿ: ಹೈಕಮಾಂಡ್‌ ಜತೆ ಒನ್ ಟು ಒನ್ ಮಾತುಕತೆಗೆ ಸಿಗುತ್ತಾ ಅವಕಾಶ?

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದ್ದರು. ಇದೀಗ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರದ ಕುರಿತಾಗಿ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಸ್ಸಾಂ ಚುನಾವಣಾ ವೀಕ್ಷಕರಾಗಿ ಎಐಸಿಸಿಯಿಂದ ನೇಮಕಗೊಂಡಿರುವ ಡಿಕೆ ಶಿವಕುಮಾರ್ ಅವರು ಭಾಗಿಯಾಗಲಿದ್ದಾರೆ. ಇದೇ ವೇಳೆ ಹೈಕಮಾಂಡ್ ನಾಯಕರನ್ನು ಅವರು ಭೇಟಿ ಮಾಡುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 16 Jan 2026 11:19 am

ದ.ಕ. ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘದ ಸ್ಥಾಪಕಾಧ್ಯಕ್ಷ ಪೋಂಕು ನಿಧನ

ಮೂಡುಬಿದಿರೆ, ಜ.16: ದಕ್ಷಿಣ ಕನ್ನಡ ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘದ ಸ್ಥಾಪಕಾಧ್ಯಕ್ಷ, ಮೂಡುಬಿದಿರೆ ಸರಕಾರಿ ಆರೋಗ್ಯ ಕೇಂದ್ರದ ನಿವ್ರತ್ತ ಫಾರ್ಮಾಸಿಸ್ಟ್ ಬಿ.ಪೋಂಕು (86) ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೆಲ್ಲ ಪುತಿಗೆಯಲ್ಲಿರುವ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 16 Jan 2026 11:14 am

ಬೆಂಗಳೂರು ರೈಲುಗಳ ಟರ್ಮಿನಲ್‌ಗಳ ಬದಲಾವಣೆ: ಈ ರೈಲುಗಳು ಭಾಗಶಃ ರದ್ದತಿ

ಬೆಂಗಳೂರು: ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಅವುಗಳ ಮುಂದೆ ನೀಡಿರುವ ವಿವರದಂತೆ ಬದಲಾವಣೆಯನ್ನು ಮಾಡಲಾಗಿದೆ. 1) ದಿನಾಂಕ 16.01.2026 ರಿಂದ 10.03.2026 ರವರೆಗೆ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು

ಒನ್ ಇ೦ಡಿಯ 16 Jan 2026 11:09 am

BELTHANGADY: ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ

ಅಡಿಕೆ ಮರವೇರಿ ಜೀವ ಉಳಿಸಿಕೊಂಡ ಮಂಜಪ್ಪ

ವಾರ್ತಾ ಭಾರತಿ 16 Jan 2026 11:05 am

ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಪದಕ ಸಮರ್ಪಿಸಿದ ಮಚಾಡೊ

ವಾಷಿಂಗ್ಟನ್, ಜ.16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಈ ವೇಳೆ ಮಚಾಡೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಟ್ರಂಪ್ ಅವರಿಗೆ ಪ್ರದಾನ ಮಾಡಿದರು. ಈ ಭೇಟಿಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ದೃಢಪಡಿಸಿದರು. ಮಚಾಡೊ ಅವರನ್ನು “ವೆನೆಝುವೆಲಾದ ಅನೇಕ ಜನರ ಪರ ಧೈರ್ಯಶಾಲಿ ಮತ್ತು ಜನರ ಧ್ವನಿ” ಎಂದು ಅವರು ವರ್ಣಿಸಿದರು. ಆದರೆ, ಈ ಸಭೆಯಿಂದ ಮಚಾಡೊ ಅವರ ರಾಜಕೀಯ ಭವಿಷ್ಯದ ಕುರಿತು ಅಧ್ಯಕ್ಷರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ವೆನೆಝುವೆಲಾವನ್ನು ಮುನ್ನಡೆಸಲು ಮಚಾಡೊ ಅವರಿಗೆ ಅಗತ್ಯಮಟ್ಟದ ಬೆಂಬಲವಿಲ್ಲ ಎಂಬ ಅಧ್ಯಕ್ಷರ ಹಿಂದಿನ ಮೌಲ್ಯಮಾಪನ ಇನ್ನೂ ಬದಲಾಗಿಲ್ಲ ಎಂದು ಲೀವಿಟ್ ಹೇಳಿದರು. ಈ ಮೌಲ್ಯಮಾಪನವು ನೆಲದ ಮೇಲಿನ ವಾಸ್ತವಗಳ ಆಧಾರದ ಮೇಲೆ ಮಾಡಲಾಗಿದೆ ಎಂದರು. ವೆನೆಝುವೆಲಾದಲ್ಲಿ ಒಂದು ದಿನ ಚುನಾವಣೆಗಳು ನಡೆಯಬೇಕು ಎಂಬ ಆಶಯವನ್ನು ಟ್ರಂಪ್ ಹೊಂದಿದ್ದಾರೆ ಎಂದು ಅವರು ತಿಳಿಸಿದರು. ಆದರೆ ಅದರ ಸಮಯವನ್ನು ನಿರ್ದಿಷ್ಟಪಡಿಸಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾಡೊ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನೀಡಿರುವುದನ್ನು ದೃಢಪಡಿಸಿದರು. ಇದನ್ನು ಅವರು “ವೆನೆಝುವೆಲಾದ ಸ್ವಾತಂತ್ರ್ಯ ಹೋರಾಟಕ್ಕೆ ಟ್ರಂಪ್ ನೀಡಿದ ಬೆಂಬಲಕ್ಕೆ ಸಲ್ಲಿಸಿದ ಗೌರವ” ಎಂದು ಹೇಳಿದರು. ಟ್ರಂಪ್ ಪದಕವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆಯೇ ಎಂಬುದನ್ನು ಶ್ವೇತಭವನ ತಕ್ಷಣ ದೃಢಪಡಿಸಲಿಲ್ಲ. ಆದರೆ, ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಮಚಾಡೊ ಅವರನ್ನು “ಅದ್ಭುತ ಮಹಿಳೆ” ಎಂದು ಹೊಗಳಿ, ಪದಕ ಪ್ರದಾನವನ್ನು ಪರಸ್ಪರ ಗೌರವದ ಸಂಕೇತವೆಂದು ಬಣ್ಣಿಸಿದ್ದಾರೆ. ಮುಚ್ಚಿದ ಬಾಗಿಲಿನ ಚರ್ಚೆಯ ಬಳಿಕ ನಡೆದ ಈ ಸಭೆಯ ನಂತರ ಮಚಾಡೊ ಶ್ವೇತಭವನದ ಹೊರಗೆ ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. “ನಾವು ಅಧ್ಯಕ್ಷ ಟ್ರಂಪ್ ಅವರನ್ನು ನಂಬಬಹುದು” ಎಂದು ಅವರು ಹೇಳಿದರು. ವೆನೆಝುವೆಲಾದ ತೈಲ ಕ್ಷೇತ್ರದ ಮೇಲೆ ಅಮೆರಿಕ ಒತ್ತಡವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆದಿದೆ. ಇತ್ತೀಚೆಗೆ ಕ್ಯಾರಕಾಸ್‌ಗೆ ಸಂಬಂಧಿಸಿದ ಮಂಜೂರಾದ ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿದೆ. ಮಧ್ಯಂತರ ಆಡಳಿತವು ಅಮೆರಿಕದೊಂದಿಗೆ ಸಹಕರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರ ಐದು ಅಮೆರಿಕ ನಾಗರಿಕರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮೊದಲು ಟ್ರಂಪ್ ಅವರು ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆದಿರುವುದಾಗಿ ಹೇಳಿದ್ದರು. ಆದಾಗ್ಯೂ, ಮಚಾಡೊ ಅವರ ನಾಯಕತ್ವ ಸಾಮರ್ಥ್ಯ ಮತ್ತು ದೇಶದೊಳಗಿನ ಬೆಂಬಲದ ಕುರಿತು ಟ್ರಂಪ್ ಇನ್ನೂ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಶ್ವೇತಭವನದಲ್ಲಿದ್ದ ಮಚಾಡೊ ನಂತರ ಕ್ಯಾಪಿಟಲ್ ಹಿಲ್‌ನಲ್ಲಿ ಅಮೆರಿಕದ ಸೆನೆಟರ್‌ಗಳೊಂದಿಗೆ ಸಭೆ ನಡೆಸಿದರು. ನಿರ್ಗಮನದ ವೇಳೆ ನೊಬೆಲ್ ಪದಕದ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸದೆ “ಧನ್ಯವಾದಗಳು” ಎಂದಷ್ಟೇ ಹೇಳಿದರು.

ವಾರ್ತಾ ಭಾರತಿ 16 Jan 2026 11:02 am

800 ಜನರ ಜೀವ ಉಳಿಸಿದ್ದೇವೆ ಎಂದ ಅಮೆರಿಕ: ಇರಾನ್ ಬಿಕ್ಕಟ್ಟಿನ ತಾಜಾ ಮಾಹಿತಿ ಇಲ್ಲಿದೆ

ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗಿಲ್ಲ, ಇಬ್ಬರೂ ಯಾವುದೇ ಸಮಯದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ಮಾಡಿ ಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಅಮೆರಿಕದ ಪಡೆಗಳು ಇರಾನ್ ಮೇಲೆ ದಾಳಿ ಮಾಡಲು ಸನ್ನದ್ಧವಾಗಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಕೊನೇ ಕ್ಷಣದಲ್ಲಿ ಡೊನಾಲ್ಡ್

ಒನ್ ಇ೦ಡಿಯ 16 Jan 2026 10:58 am

5 ವರ್ಷದಿಂದ ಹೆದ್ದಾರಿ ಕಾಮಗಾರಿ ಕುಂಠಿತ; ಸಾರ್ವಜನಿಕರ ಅಹವಾಲುಗಳಿಗೆ ಕಿವುಡರಾದ ಜನಪ್ರತಿನಿಧಿಗಳು

​ಸುಮಾರು ಎರಡೂವರೆ ದಶಕ ಕಳೆದರೂ ತೀರ್ಥಹಳ್ಳಿ ಮಾರ್ಗದ ರಸ್ತೆ ಶೀಘ್ರವಾಗಿ ಅಭಿವೃದ್ಧಿಗೊಂಡಿಲ್ಲ. ತೀರ್ಥಹಳ್ಳಿ-ನೆಲ್ಲಿಸರ, ತೀರ್ಥಹಳ್ಳಿ-ಆಗುಂಬೆ ಸಂಪರ್ಕದ ಹೆದ್ದಾರಿ ಮಾರ್ಗದಲ್ಲಿ ಮರ ಕಡಿತಲೆ ಆದೇಶ, ಅರಣ್ಯ ಪ್ರದೇಶ ಬಳಕೆಗೆ ಅರಣ್ಯ ಇಲಾಖೆ ಮಾತ್ರ ಇನ್ನು ಎನ್‌ಒಸಿ ನೀಡಿಲ್ಲ. ಸಂತ್ರಸ್ತರಿಗೆ ಸೇರಿದ ಕಾಮಗಾರಿ ವ್ಯಾಪ್ತಿ ಅಡಕೆ ಮರ, ಮನೆ, ಕಟ್ಟಡ ತೆರವು ಮಾಡಲಾಗುತ್ತಿದೆ.

ವಿಜಯ ಕರ್ನಾಟಕ 16 Jan 2026 10:52 am

Maharashtra Civic Election Results ; ಠಾಕ್ರೆ ಸಹೋದರರ ಪಾಲಿಗೆ ಅಸ್ತಿತ್ವದ ಪರೀಕ್ಷೆ‌; ಇಂದು ಯಾರ ಪಾಲಿಗೆ ʻಮಹಾʼ ತೀರ್ಪು

ಮಹಾರಾಷ್ಟ್ರದಲ್ಲಿ ಮರಾಠ ಭಾಷೆ ಉಳಿವಿಗಾಗಿ ಹಾಗೂ ಮತ್ತೆ ತಮ್ಮ ಗೆಲುವಿಗಾಗಿ ಠಾಕ್ರೆ ಸೋದರರು ಒಂದಾಗಿದ್ದಾರೆ. ಆಮುಂಬೈನಲ್ಲಿ ಠಾಕ್ರೆ ಸಹೋದರರ ಮೈತ್ರಿ ಮತ್ತು ಮಹಾಯುತಿ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಎಕ್ಸಿಟ್ ಪೋಲ್‌ಗಳು ಮಹಾಯುತಿ ಪರ ಒಲವು ತೋರಿಸಿವೆ. ಈ ಮಧ್ಯೆ ಯಾರಿಗೆ ಜಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯ ಕರ್ನಾಟಕ 16 Jan 2026 10:46 am

ಕುಂಬ್ರ ಮರ್ಕಝುಲ್ ಹುದಾ ಮಕ್ಕಾ ವಲಯ ಕೋ ಆರ್ಡಿನೇಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಆಯ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮಕ್ಕಾ ವಲಯದ ಸಂಯೋಜಕರಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಅವರನ್ನು ನೇಮಕ ಮಾಡಲಾಗಿದೆ. ಮರ್ಕಝುಲ್ ಹುದಾ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೃನಿ ಕಾಮಿಲ್ ನೇತೃತ್ವದಲ್ಲಿ ಮಕ್ಕಾ ಅಝೀಝಿಯ್ಯಾ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ಮಾಡಲಾಗಿದೆ. ಹಾಜಿ ಅಬ್ದುಲ್ ಹಮೀದ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿಯ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು, ಕೆಸಿಎಫ್ ಜಿದ್ದಾ ವಲಯ ಅಧ್ಯಕ್ಷ ಅಶ್ರಫ್ ಎಮ್ಮೆಸ್ಸೆಮ್ ಕಕ್ಕಿಂಜೆ ಶುಭ ಹಾರೈಸಿದರು

ವಾರ್ತಾ ಭಾರತಿ 16 Jan 2026 10:43 am

ಗ್ರೀನ್ ಲ್ಯಾಂಡ್‌ನಲ್ಲಿ ನ್ಯಾಟೋ ಸೇನೆ ನಿಯೋಜನೆಗೆ ಸಿದ್ದತೆ: ಅಮೆರಿಕಾ-ನ್ಯಾಟೋ ನಡುವೆ ಬಿರುಕು! ಯುರೋಪ್‌ ಸೇನೆ ನಿಯೋಜನೆ ಬಗ್ಗೆ ರಷ್ಯಾ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳಲು ಮುಂದಾಗಿರುವುದು ನ್ಯಾಟೋ ಮತ್ತು ಅಮೆರಿಕಾ ನಡುವೆ ಭಿನ್ನತೆಗೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಯುರೋಪ್‌ನ ಹಲವು ದೇಶಗಳು ಗ್ರೀನ್‌ಲ್ಯಾಂಡ್‌ಗೆ ತಮ್ಮ ಸೈನಿಕರನ್ನು ಕಳುಹಿಸಲು ಸಿದ್ದವಾಗುವ ಮೂಲಕ ಬೆಂಬಲ ಸೂಚಿಸಿವೆ. ರಷ್ಯಾ ಮತ್ತು ಚೀನಾ ಆರ್ಕ್ಟಿಕ್ ಪ್ರದೇಶದಲ್ಲಿ ಯುದ್ಧನೌಕೆಗಳನ್ನು ನಿಯೋಜಿಸಿವೆ ಎಂಬ ಟ್ರಂಪ್‌ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಯುರೋಪಿಯನ್ ದೇಶಗಳ ಈ ಕ್ರಮದಿಂದ ಅಮೆರಿಕಾದ ನಿರ್ಧಾರ ಬದಲಾಗುವುದಿಲ್ಲ ಎಂದು ಶ್ವೇತಭವನ ತಿಳಿಸಿದೆ. ಇತ್ತ ಈ ವಿವಾದಕ್ಕೆ ಮೊದಲಬಾರಿಗೆ ಎಂಟ್ರಿ ಕೊಟ್ಟಿರುವ ರಷ್ಯಾ ಗ್ರೀನ್‌ಲ್ಯಾಂಡ್ ನಲ್ಲಿ ನ್ಯಾಟೋ ಸೇನೆ ನಿಯೋಜನೆ ರಷ್ಯಾ ಹಾಗೂ ಚೀನಾಗೆ ವಿರೋಧವಾಗಿ ನಡೆಸುತ್ತಿರುವ ಯುದ್ದೋನ್ಮಾದದ ಕಾರ್ಯಸೂಚಿಯ ಭಾಗ ಎಂದು ಗುಡುಗಿದೆ. ಇದು ಆರ್ಕ್ಟಿಕ್‌ ಪ್ರದೇಶದಲ್ಲಿ ಯುದ್ದದಕಾರ್ಮೋಡ ಸೃಷ್ಟಿಯಾಗುವಂತೆ ಮಾಡಿದೆ.

ವಿಜಯ ಕರ್ನಾಟಕ 16 Jan 2026 10:43 am

Gold Rate Fall: ಸತತ ಎರಡನೇ ದಿನ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ 3 ಸಾವಿರ ರೂ ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಇಳಿಕೆಯಾಗುತ್ತಿದ್ದು, 14340 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯೂ ಇಂದು ಕಡಿತ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

ವಿಜಯ ಕರ್ನಾಟಕ 16 Jan 2026 10:40 am

KARKALA | ಸಾಣೂರು: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

ಕಾರ್ಕಳ: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾದ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ 1:30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮುದ್ದಣ್ಣ ನಗರದ ವಾರಿಜಾ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೊಂಡಿವೆ. ಮನೆಯ ಹೊರಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಯಾರಿಗೂ ಹಾನಿಯಾಗಿಲ್ಲ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಸುಮಾರು 3 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.        

ವಾರ್ತಾ ಭಾರತಿ 16 Jan 2026 10:35 am

Gold Rate Jan 16: ಚಿನ್ನ ಪ್ರಿಯರಿಗೆ ಶುಭ ಶುಕ್ರವಾರ: ಚಿನ್ನ &ಬೆಳ್ಳಿ ಬೆಲೆ ಭರ್ಜರಿ ಇಳಿಕೆ

Gold Rate Jan 16: ಚಿನ್ನ ಪ್ರಿಯರಿಗೆ ಚಿನ್ನದ ಬೆಲೆಯ ವಿಚಾರದಲ್ಲಿ ಜನವರಿ 16 ಶುಭ ಶುಕ್ರವಾರವಾಗಿದೆ. ಚಿನ್ನದ ಬೆಲೆಯು ಸಂಕ್ರಾಂತಿ ಹಬ್ಬದ ನಂತರವೂ ಇಳಿಕೆಯ ಹಾದಿಯಲ್ಲಿದೆ. ಕಳೆದ ಒಂದು ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿತ್ತು. ಇದೀಗ ಜನವರಿ 15 ಹಾಗೂ ಜನವರಿ 16ರಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದು

ಒನ್ ಇ೦ಡಿಯ 16 Jan 2026 10:31 am

Power Sharing : ’ಹಾಲು ಒಡೆದರೆ ಸರಿಪಡಿಸಲು ಸಾಧ್ಯವೇ’ - ಶಿವಯೋಗಿ ಸ್ವಾಮೀಜಿಗಳ ಸಂಕ್ರಾಂತಿ ಭವಿಷ್ಯ

Shivayogi Seer on Power sharing : ಉತ್ತರಾಯಣ ಪರ್ವಕಾಲದ ಮಕರ ಸಂಕ್ರಾಂತಿಯ ವೇಳೆ ವಿವಿಧ ಪೀಠಾಧಿಪತಿಗಳು ಭವಿಷ್ಯ ನುಡಿಯುವ ಪದ್ದತಿಯಿದೆ. ಕೋಡಿಮಠದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ಮತ್ತು ಯುಗಾದಿಯ ವೇಳೆ ಭವಿಷ್ಯವನ್ನು ನುಡಿಯುತ್ತಾರೆ. ಇನ್ನು, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿಯು, ಶಿವಲಿಂಗದ ಮೇಲೆ ಬೀಳುವುದನ್ನು ಆಧರಿಸಿಯೂ, ಭವಿಷ್ಯವನ್ನು ನುಡಿಯಲಾಗುತ್ತದೆ. ಈಗ, ಚಂದ್ರವನ ಆಶ್ರಮದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.

ವಿಜಯ ಕರ್ನಾಟಕ 16 Jan 2026 9:59 am

ಭಟ್ಕಳ | ‘ಆದರ್ಶ ಹಾಸ್ಪಿಟಲ್ ಕನೆಕ್ಟ್'; ಲೈಫ್ ಕೇರ್ ಜೊತೆ ವೈದ್ಯಕೀಯ ಸಂವಾದ

ಭಟ್ಕಳ, ಜ.16: ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್, ಭಟ್ಕಳ ಹಾಗೂ ಉಡುಪಿಯ ಆದರ್ಶ ಹಾಸ್ಪಿಟಲ್ ಜಂಟಿ ಆಶ್ರಯದಲ್ಲಿ ‘ಆದರ್ಶ ಹಾಸ್ಪಿಟಲ್ ಕನೆಕ್ಟ್’ ಎಂಬ ವೈದ್ಯಕೀಯ ಸಂವಾದ ಮತ್ತು ಶೈಕ್ಷಣಿಕ ಕಾರ್ಯಕ್ರಮ ರವಿವಾರ ಸಂಜೆ ಇಲ್ಲಿ ನಡೆಯಿತು.  ನಗರದ ರಾಯಲ್ ಓಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರು ಭಾಗವಹಿಸಿದ್ದರು. ಹಿರಿಯ ಅರಿವಳಿಕೆ ತಜ್ಞ ಡಾ. ಸವಿತಾ ಕಾಮತ್ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದರು. ತುರ್ತು ಚಿಕಿತ್ಸಾ ವ್ಯವಸ್ಥೆ, ಸಮಯೋಚಿತ ತಪಾಸಣೆ ಹಾಗೂ ಸಮನ್ವಯಿತ ಚಿಕಿತ್ಸೆಯ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ವಿವಿಧ ಉಪನ್ಯಾಸಗಳು ನಡೆದವು. ಹೃದಯ ತಜ್ಞ ಡಾ.ಸುಹಾಸ್ ಜಿ.ಸಿ. ಇಸಿಜಿ ತುರ್ತು ಪರಿಸ್ಥಿತಿಗಳ ಕುರಿತು ಮಾತನಾಡಿ, ಹೃದಯ ಸಂಬಂಧಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ತಕ್ಷಣ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು. ನೆಫ್ರಾಲಜಿಸ್ಟ್ ಡಾ. ಮೇಘಾ ಪೈ ಗ್ಲೊಮೆರೂಲರ್ ಕಾಯಿಲೆಗಳ ಕುರಿತು ಉಪನ್ಯಾಸ ನೀಡಿ, ಕಿಡ್ನಿ ಆರೋಗ್ಯದ ಮೇಲೆ ಇವುಗಳ ಪರಿಣಾಮ ಹಾಗೂ ಮುಂಚಿತ ನಿರ್ಣಯದ ಮಹತ್ವವನ್ನು ವಿವರಿಸಿದರು. ನ್ಯೂರೋ ಸರ್ಜನ್ ಡಾ. ರಾಜೇಶ್ ನಾಯರ್ ತಲೆಯ ಗಾಯಗಳ ಕುರಿತು ಮಾತನಾಡಿ, ಪ್ರಾಥಮಿಕ ಮೌಲ್ಯಮಾಪನ ಮತ್ತು ನಿರ್ವಹಣೆಯ ಪ್ರಮುಖ ಅಂಶಗಳನ್ನು ವಿವರಿಸಿದರು. ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್ ವೈದ್ಯ ಡಾ.ಕೆನ್ನೆತ್ ಕ್ರಿಸ್ಪಿನ್ ಮಧುಮೇಹಿಗಳಲ್ಲಿ ಕಿಡ್ನಿ ಸುರಕ್ಷೆಗೆ ಸಮಯೋಚಿತ ತಪಾಸಣೆ ಅಗತ್ಯವಿದೆ ಎಂದು ಹೇಳಿದರು. ರೇಡಿಯಾಲಜಿಸ್ಟ್ ಡಾ. ಎಂ.ಡಿ. ನೌಷಾದ್ ಅಕ್ಯೂಟ್ ಸ್ಟ್ರೋಕ್ ಸಂದರ್ಭಗಳಲ್ಲಿ ಇಮೇಜಿಂಗ್ ನ ಪಾತ್ರ ಮತ್ತು ತ್ವರಿತ ನಿರ್ಣಯದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಲೈಫ್ ಕೇರ್ ಹಾಸ್ಪಿಟಲ್, ಭಟ್ಕಳದ ಮೆಡಿಕಲ್ ಡೈರೆಕ್ಟರ್ ಡಾ.ಮುಹಮ್ಮದ್ ನವಾಬ್ ಹಾಗೂ ಆದರ್ಶ ಹಾಸ್ಪಿಟಲ್, ಉಡುಪಿಯ ಮೆಡಿಕಲ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದು, ವೈದ್ಯರೊಂದಿಗೆ ಸಂವಾದ ನಡೆಸಿದರು. ಲೈಫ್ ಕೇರ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಝುಬೈರ್ ಕೋಲಾ, ಸಲ್ಮಾನ್ ಜುಬಾಪು, ಸಾಮಾಜಿಕ ಕಾರ್ಯಕರ್ತ ನಝೀರ್ ಕಾಶಿಂಜಿ ಸೇರಿದಂತೆ ಅನೇಕ ಹಿರಿಯ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Jan 2026 9:43 am

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ನೇರ ಗುತ್ತಿಗೆಯಲ್ಲಿ ಅಕ್ರಮ ಶಂಕೆ: ಬಹಿರಂಗ ಹರಾಜಿಗೆ ಜಿಲ್ಲಾಧಿಕಾರಿಗೆ ಮನವಿ

ಯರಗೋಳ್‌ ಡ್ಯಾಂನಲ್ಲಿ ಮೀನು ಸಾಕಾಣಿಕೆ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ನಿಯಮ ಉಲ್ಲಂಘಿಸಿ, ಕೋಲಾರ ಮೂಲದ ಕಂಪನಿಗೆ 5 ವರ್ಷಗಳ ಕಾಲ ಕೇವಲ 25,200 ರೂ.ಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಬಲಾಢ್ಯರ ಕೈವಾಡ ಶಂಕಿಸಲಾಗಿದೆ. ಹಾಗಾಗಿ ಬಹಿರಂಗ ಹರಾಜಿಗೆ ಒತ್ತಾಯ ಕೇಳಿಬರುತ್ತಿದೆ.

ವಿಜಯ ಕರ್ನಾಟಕ 16 Jan 2026 9:23 am

ಇಂದು ಕೈ ಹೈಕಮಾಂಡ್‌ ನಾಯಕ ಭೇಟಿಯಾಗಲಿರುವ ಡಿ ಕೆ ಶಿವಕುಮಾರ್‌; ಕನಕಪುರ ಬಂಡೆಗೆ ಸಿಗುತ್ತಾ ಕುರ್ಚಿ ಅಭಯ?

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಭರ್ಜರಿಯಾಗಿ ಚರ್ಚೆಯಾಗುತ್ತಿರುವ ನಡುವೆ, ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದೆಹಲಿಯತ್ತ ಮುಖ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರೀ ಸಂಕ್ರಾಂತಿಗೆ ಕೈ ಪಾಳಯದಲ್ಲಿ ಕ್ರಾಂತಿಯಾಗಲಿದೆ ಎಂಬೆಲ್ಲ ಚರ್ಚೆಗಳು ಹುಟ್ಟಿಕೊಂಡಿತ್ತು. ಅಲ್ಲದೇ ಕಾಂಗ್ರೆಸ್‌ ಹೈಕಮಾಂಡ್‌ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಎಲ್ಲಾ ಗೊಂದಲಕ್ಕೆ ಬ್ರೇಕ್‌ ಹಾಕಲು

ಒನ್ ಇ೦ಡಿಯ 16 Jan 2026 9:20 am

ತೊಗರಿ ಇಳುವರಿಯಲ್ಲಿ ಇಳಿಕೆ, ಹೊಟ್ಟಿಗೆ ಡಿಮ್ಯಾಂಡ್‌; ಮಳೆ, ನೆರೆ ಹಾವಳಿ ನಡುವೆ ಸೋತಿದ್ದ ರೈತರ ಕೈಹಿಡಿದ ಮೇವು

ನಾಲತವಾಡದಲ್ಲಿ ತೊಗರಿ ಬೆಳೆ ಕೈಕೊಟ್ಟಿದ್ದರೂ, ರೈತರಿಗೆ ತೊಗರಿ ಹೊಟ್ಟು ಆಶಾಕಿರಣವಾಗಿದೆ. ನೆರೆ ಹಾವಳಿಯ ನಡುವೆಯೂ, ತೊಗರಿ ಹೊಟ್ಟಿಗೆ ಗಡಿ ಜಿಲ್ಲೆಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ರೈತರು ಉತ್ತಮ ದರದಲ್ಲಿ ಮಾರಾಟ ಮಾಡಿ ನಷ್ಟ ಸರಿದೂಗಿಸಿಕೊಳ್ಳುತ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಹೊಟ್ಟಿಗೆ 7 ಸಾವಿರ ರೂ. ದರ ದೊರೆಯುತ್ತಿದೆ.

ವಿಜಯ ಕರ್ನಾಟಕ 16 Jan 2026 9:06 am

ʻಪುರುಷರು ಗರ್ಭಧರಿಸಲು ಸಾಧ್ಯವೇʼ; ಅಮೆರಿಕ ಸೆನೆಟರ್ ಪ್ರಶ್ನೆಗೆ ಭಾರತೀಯ ಮೂಲದ ವೈದ್ಯೆ ನೀಡಿದ ಉತ್ತರ ಈಗ ವೈರಲ್!

ಅಮೆರಿಕದ ಸೆನೆಟ್ ಸಮಿತಿಯ ವಿಚಾರಣೆಯ ವೇಳೆ ಗರ್ಭಪಾತದ ಮಾತ್ರೆಗಳ ಸುರಕ್ಷತೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ, ಭಾರತೀಯ ಮೂಲದ ವೈದ್ಯೆ ಡಾ. ನಿಶಾ ವರ್ಮಾ ಮತ್ತು ರಿಪಬ್ಲಿಕನ್ ಸೆನೆಟರ್ ಜೋಶ್ ಹಾಲೆ ನಡುವೆ ಪುರುಷರು ಗರ್ಭಧರಿಸಲು ಸಾಧ್ಯವೇ? ಎಂಬ ವಿಚಾರದ ಬಗ್ಗೆ ನಡೆದ ಚರ್ಚೆ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ

ವಿಜಯ ಕರ್ನಾಟಕ 16 Jan 2026 8:58 am

ಕಾರನ್ನು ಮಾರ್ಪಡಿಸಿ ಬೆಂಕಿ ಚಿಮ್ಮಿಸುತ್ತಾ ರಸ್ತೆಯಲ್ಲಿ ಪುಂಡಾಟ; ಇಂಜಿನಿಯರಿಂಗ್ ವಿದ್ಯಾರ್ಥಿಗೆ ಬಿತ್ತು ಭಾರೀ ದಂಡ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ, ಮಾರ್ಪಡಿಸಿದ ಕಾರಿನಲ್ಲಿ ಬೆಂಕಿ ಚಿಮ್ಮಿಸುತ್ತಾ ಪುಂಡಾಟ ಮೆರೆದ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗೆ 1.1 ಲಕ್ಷ ರೂ. ದಂಡ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಗಾಗಿ ಕಾರನ್ನು ಅಕ್ರಮ ಮಾರ್ಪಾಡು ಮಾಡಿದ್ದ. ಸಂಚಾರ ಪೊಲೀಸರ ಗಮನಕ್ಕೆ ಬಂದು ಭಾರೀ ದಂಡಕ್ಕೆ ಗುರಿಯಾಯಿತು. ಕಾನೂನುಬಾಹಿರ ಚಟುವಟಿಕೆಗಳ ಅಪಾಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ವಿಜಯ ಕರ್ನಾಟಕ 16 Jan 2026 8:58 am

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಜ.16ರ 10 ಗಂಟೆಗೆ ಮತ ಎಣಿಕೆ

ಮುಂಬೈ: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (Brihanmumbai Municipal Corporation) ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 16ರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಎನ್ನುವ ಖ್ಯಾತಿಯನ್ನು ಬೃಹನ್‌ಮುಂಬೈ

ಒನ್ ಇ೦ಡಿಯ 16 Jan 2026 8:51 am

ಬ್ಲೂ ಫ್ಲ್ಯಾಗ್ ಬೀಚ್: ನಿಮ್ಮ ಮನೆಯ ಒಳಹೊಕ್ಕಲು ನೀವೇ ಟೋಲ್ ಕಟ್ಟಿ: ರಾಜಾರಾಂ ತಲ್ಲೂರು ಬರಹ

ಕರಾವಳಿಯ ಅಭಿವೃದ್ಧಿ ಹೇಗೆ, ಎಷ್ಟು ಎಂದು ಕರಾವಳಿಯವರಲ್ಲಿ ಕೇಳದೇ, ಬೆಂಗಳೂರಿನಲ್ಲಿ ಕುಳಿತವರು ನಿರ್ಧಾರ ಮಾಡುತ್ತಿದ್ದಾರೆ. - ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬಹರ ಇಲ್ಲಿದೆ. ಮೂವತ್ತು ವರ್ಷ ಹಿಂದೆ ಮಂಗಳೂರಿನಿಂದ ಕಾರವಾರದ ತನಕ ಇಡಿಯ ಕರಾವಳಿಯಲ್ಲಿ ಸಮುದ್ರ ತೀರಕ್ಕೆ ಹೋಗುವುದಕ್ಕೆ, ಅಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವುದಕ್ಕೆ, ಅಥವಾ ವಿಹರಿಸುವುದಕ್ಕೆ, ವಸತಿ ನಿರ್ಮಾಣಕ್ಕೆ ಯಾರಾದರೂ ಅಡ್ಡಿ ಮಾಡಿದ್ದಿದೆಯೆ?

ಒನ್ ಇ೦ಡಿಯ 16 Jan 2026 8:24 am

7 ತಿಂಗಳಿಂದ ಕೇಂದ್ರ ಸರಕಾರದ ಡೇ-ನಲ್ಮ್‌ನ 500 ಕ್ಕೂ ಹೆಚ್ಚಿನ ಸಿಬ್ಬಂದಿಗಿಲ್ಲ ಸಂಬಳ

ಕೌಶಲಾಭಿವೃದ್ಧಿ ಇಲಾಖೆಯ ಡೇ-ನಲ್ಮ್‌ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 500 ಕ್ಕೂ ಹೆಚ್ಚು ಸಿಬ್ಬಂದಿ ಏಳು ತಿಂಗಳಿಂದ ಗೌರವಧನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಯೋಜನೆಗಳ ಜಾಗೃತಿ ಮೂಡಿಸುವುದು, ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘ ರಚನೆ ಮುಂತಾದ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ. ತಿಂಗಳಿಗೆ 8,000 ರೂ. ಗೌರವಧನ ಹಾಗೂ 2,000 ರೂ. ಭತ್ಯೆ ನೀಡಲಾಗುತ್ತಿತ್ತು. ಆದರೆ, ಸದ್ಯ ಬಜೆಟ್ ಇಲ್ಲ ಎಂದು ಮೇಲಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಸಿಬ್ಬಂದಿ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಶೀಘ್ರ ಗೌರವಧನ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ವಿಜಯ ಕರ್ನಾಟಕ 16 Jan 2026 8:15 am

Bengaluru Second Airport: ಬೆಂಗಳೂರು - ಹೊಸೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರದಿಂದ ಗುಡ್‌ನ್ಯೂಸ್

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ವಿಳಂಬವಾಗುತ್ತಿರುವುದರ ನಡುವೆ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯು ಚುರುಕು ಪಡೆದುಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಇನ್ನೂ ಜಾಗ ಅಂತಿಮವಾಗಿಲ್ಲ. ಈ ರೀತಿ ಇರುವಾಗಲೇ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ಯೋಜನೆ ಜಾರಿಗೆ ಮಹತ್ವದ ಹೆಜ್ಜೆಯನ್ನು ಇರಿಸಿದೆ. ವಿಮಾನ ನಿಲ್ದಾಣಗಳ

ಒನ್ ಇ೦ಡಿಯ 16 Jan 2026 8:00 am

ಕೆಐಎನಲ್ಲಿ ಪ್ರಯಾಣಿಕರ ಸಂಚಾರ ಶೇ.8ರಷ್ಟು ಬೆಳವಣಿಗೆ; ಒಂದೇ ವರ್ಷದಲ್ಲಿ 43.82 ಲಕ್ಷ ಜನ ಓಡಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ನಿರ್ಮಿಸಿದ್ದು, ಶೇ.8ರಷ್ಟು ಬೆಳವಣಿಗೆ ಸಾಧಿಸಿದೆ. ದೇಶೀಯ ವಿಮಾನಗಳ ಕಾರ್ಯಾಚರಣೆಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯೂ ಶೇ.28.7ರಷ್ಟು ಹೆಚ್ಚಿದೆ. ಸರಕು ಸಾಗಣೆಯಲ್ಲೂ ಶೇ.5ರಷ್ಟು ಏರಿಕೆಯಾಗಿದ್ದು, ಒಟ್ಟಾರೆ ವಿಮಾನ ನಿಲ್ದಾಣವು ಮಹತ್ವದ ಬೆಳವಣಿಗೆಯನ್ನು ದಾಖಲಿಸಿದೆ.

ವಿಜಯ ಕರ್ನಾಟಕ 16 Jan 2026 7:11 am

ಕರ್ನಾಟಕದ ವಿವಿಧ ಭಾಗಗಳಲ್ಲಿ ಚಳಿ ಮತ್ತೆ ಹೆಚ್ಚಳ, ಹೇಗಿದೆ ಜ.16ರ ಹವಾಮಾನ

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿ ಪ್ರಮಾಣವು ತುಸು ಇಳಿಕೆ ಕಂಡಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿತ್ತು. ರಾಜ್ಯದಾದ್ಯಂತ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗಿದೆ. ಜನವರಿ 16ರಂದು ಸಹ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜನವರಿ 16

ಒನ್ ಇ೦ಡಿಯ 16 Jan 2026 6:55 am

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌; ಎಂದಿನಿಂದ ಆರಂಭ, ಎಷ್ಟು ದಿನ ಇರಲಿದೆ?

ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿವೆ. ಫೆಬ್ರವರಿ 13, 14, 15 ರಂದು ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಈ ಬಾರಿ ಐದು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡ್ರೋನ್ ಶೋ, ಗಾಳಿಪಟ ಉತ್ಸವ ಸೇರಿ ಹಲವು ವಿಶೇಷತೆಗಳು ಇರಲಿವೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು.

ವಿಜಯ ಕರ್ನಾಟಕ 16 Jan 2026 6:40 am

ನಿವೇಶನ ರಹಿತರಿಗೆ ಸಂಕ್ರಾಂತಿ ಸಿಹಿ: ದಕ್ಷಿಣ ಕನ್ನಡದ ಪುತ್ತೂರು ತಾಲೂಕಿಗೆ ಬಂಪರ್ ಅವಕಾಶ, ಏನದು ಗೊತ್ತೆ?

ಪುತ್ತೂರು ತಾಲೂಕಿನ ನಿವೇಶನ ರಹಿತರಿಗೆ ಸಿಹಿ ಸುದ್ದಿ. ಈಗ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ತಾಲೂಕಿನ ಯಾವುದೇ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು. ರಾಜೀವ್‌ ಗಾಂಧಿ ವಸತಿ ನಿಗಮ ಈ ಹೊಸ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ವಸತಿ ರಹಿತರಿಗೆ ಅನುಕೂಲವಾಗಲಿದೆ. ಶಾಸಕ ಅಶೋಕ್‌ ರೈ ಅವರ ಪ್ರಯತ್ನ ಫಲಿಸಿದೆ. ಈ ಆದೇಶದಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಸುಗಮವಾಗಲಿದೆ.

ವಿಜಯ ಕರ್ನಾಟಕ 16 Jan 2026 6:11 am

ಇರಾನ್‌ನಲ್ಲಿ ಜೆನ್‌ ಜೀ ನಾರಿ ಶಕ್ತಿ; ಮಹಿಳೆಯರಿಗೇಕೆ ಅಯತೊಲ್ಲಾ ಖಮೇನಿ ಆಡಳಿತದ ಮೇಲೆ ಸಿಟ್ಟು, ಮುಂದೇನಾಗುತ್ತೆ?

ಇರಾನ್‌ನಲ್ಲಿ ನಾಗರಿಕರ ಪ್ರತಿಭಟನೆ ಭುಗಿಲೆದ್ದಿದೆ. ಹಲವು ದೇಶಗಳಲ್ಲಿಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ಜೆನ್‌ ಜೀ ಪೀಳಿಗೆ ಸರಕಾರಗಳನ್ನೇ ಬುಡಮೇಲು ಮಾಡಿದೆ. ಇರಾನ್‌ನಲ್ಲೂಅದರ ಸೂಚನೆ ಕಾಣುತ್ತಿದೆ. ಮುಖ್ಯವಾಗಿ ಜೆನ್‌ ಜೀ ಯುವತಿಯರ ಪಡೆ ಖಮೇನಿ ಆಡಳಿತದ ವಿರುದ್ಧ ತೊಡೆ ತಟ್ಟಿ ನಾನಾ ವಿಧಗಳಲ್ಲಿಪ್ರತಿಭಟಿಸುತ್ತಿರುವುದು ಜಗತ್ತಿನ ಗಮನ ಸೆಳೆದಿದೆ.

ವಿಜಯ ಕರ್ನಾಟಕ 16 Jan 2026 6:08 am

ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿ, 10 ಎಕರೆ ಪಿತ್ರಾರ್ಜಿತ ಜಮೀನು ದಾನ ಮಾಡಲು ಮುಂದಾದ ‘ಮಹಾದಾನಿ’ ಅಜ್ಜಿಯ ಕೊಂದ ಸಂಬಂಧಿಕರು

ತೇರದಾಳದ 80 ವರ್ಷದ ಚಂದ್ರವ್ವ ನೀಲಜಗಿ, ಆಸ್ತಿಗಾಗಿ ಸಂಬಂಧಿಕರಿಂದಲೇ ಕೊಲೆಯಾದ ದುರಂತ. ದೇವಸ್ಥಾನಕ್ಕೆ 10 ಎಕರೆ ಜಮೀನು ದಾನ ಮಾಡಲು ಮುಂದಾಗಿದ್ದ ವೃದ್ಧೆಯನ್ನು, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ಕೊಂದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಮಹಾದಾನಿ ಚಂದ್ರವ್ವ 18 ಲಕ್ಷ ರೂ. ಬೆಳ್ಳಿ ಕವಚವನ್ನೂ ದೇವಸ್ಥಾನಕ್ಕೆ ನೀಡಿದ್ದರು.

ವಿಜಯ ಕರ್ನಾಟಕ 16 Jan 2026 12:05 am

ರೀಲ್ಸ್ ಮೂಲಕ ಕಾನೂನು ಸಲಹೆ; ಐವರು ವಕೀಲರ ಸನ್ನದು ಅಮಾನತು ಆದೇಶ ಹಿಂಪಡೆದ ಕೆಎಸ್‌ಬಿಸಿ

ಬೆಂಗಳೂರು : ರೀಲ್ಸ್‌ ಮೂಲಕ ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಮತ್ತು ವೃತ್ತಿ ಘನತೆಗೆ ಅಪಚಾರ ಎಸಗಿದ ಆರೋಪದ ಮೇಲೆ ಒಬ್ಬರು ಮಹಿಳೆ ಸೇರಿ ಐವರು ವಕೀಲರ ಸನ್ನದು ಅಮಾನತುಗೊಳಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಹಿಂಪಡೆದಿದೆ. ಕೆಎಸ್‌ಬಿಸಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ವಿ.ಡಿ. ಕಾಮರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತೆಯೇ, ಪರಿಷತ್‌ ವಿರುದ್ಧ ಮತ್ತು ಹಾಲಿ ವಿಚಾರದ ಕುರಿತು ಪರ-ವಿರೋಧ ಆರೋಪ ಮಾಡಲು ಯಾವುದೇ ವಕೀಲರು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಕೂಡದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕಾಮರಡ್ಡಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮಾಡುವ ಮೂಲಕ ಕಾನೂನು ಸಲಹೆಗಳನ್ನು ನೀಡುತ್ತಿದ್ದ ಆರೋಪದಲ್ಲಿ ವಕೀಲರಾದ ಬೆಂಗಳೂರಿನ ವಿನಯ್‌ಕುಮಾರ್‌, ಜಿ. ಮಂಜುನಾಥ್‌ ಮತ್ತು ರೇಣುಕಾ ದೇವಿ ಅಲಿಯಾಸ್‌ ರೇಣುಕಾ ಹಿರೇಮಠ, ಮೈಸೂರಿನ ವಿ. ರವಿಕುಮಾರ್‌ ಮತ್ತು ಹುಣಸೂರಿನ ಎನ್‌. ಪುಟ್ಟೇಗೌಡ ಅವರ ಸನ್ನದನ್ನು ಅಮಾನತುಗೊಳಿಸಿ ವಕೀಲರ ಪರಿಷತ್ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು.

ವಾರ್ತಾ ಭಾರತಿ 16 Jan 2026 12:04 am

ಇರಾನ್ ವಾಯು ಪ್ರದೇಶ ಮತ್ತೆ ಮುಕ್ತ, ಭಾರತದ ವಿಮಾನ ಪ್ರಯಾಣಿಕರಿಗೆ ಭರ್ಜರಿ ಸುದ್ದಿ!

ಇರಾನ್ ಮತ್ತು ಅಮೆರಿಕ ನಡುವೆ ಜಟಾಪಟಿ ನಡೆಯುತ್ತಿರುವ ಸಮಯದಲ್ಲೇ ಯುದ್ಧದ ಆತಂಕವೂ ಆವರಿಸಿತ್ತು. ಇಡೀ ಮಧ್ಯಪ್ರಾಚ್ಯ ಭಯದಲ್ಲಿ ನಲುಗಿ, ಮುಂದೆ ಏನಾಗುತ್ತೋ? ಎಂಬ ಚಿಂತೆಯಲ್ಲಿ ಮುಳುಗಿ ಹೋಗಿತ್ತು. ಇರಾನ್ ದೇಶದಲ್ಲಿ ಅಲ್ಲಿನ ಆಡಳಿತದ ವಿರುದ್ಧ ಜನರು ರೊಚ್ಚಿಗೆದ್ದು ಘೋರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಸಾವಿರಾರು ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದು ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಈ ಎಲ್ಲಾ

ಒನ್ ಇ೦ಡಿಯ 15 Jan 2026 11:56 pm

Madikeri | ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಪ್ರಕರಣ : 8 ಆರೋಪಿಗಳ ಬಂಧನ

ಮಡಿಕೇರಿ : ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ್ಕೇರಿ ನಿವಾಸಿ ದೇವಯ್ಯ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಬುರೋ ಎಂಬುವವರನ್ನು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿರುವ ಕುರಿತು ಜ.13 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೊಸ್ಕೇರಿ ನಿವಾಸಿಗಳಾದ ಪ್ರಶಾಂತ್ ಮುದಿ (27), ದೇವಯ್ಯ ಎಂ.ಎಸ್ (71), ಭಾರತಿ ಎಂ.ಡಿ (57), ಶ್ರೀಕಾಂತ್ ಮುದಿ (25), ಸುಧನ್ ಮುದಿ (50), ಲಕ್ಷ್ಮೀ ಮುದಿ (37), ತನುಶ್ರೀ (20) ಹಾಗೂ ಬಸಂತಿ ಮುದಿ (49) ಬಂಧಿತ ಆರೋಪಿಗಳಾಗಿದ್ದಾರೆ. ಜ.11 ರಂದು ರಾತ್ರಿ ಬುರೋ ಹಾಗೂ ಅವರ ಪುತ್ರ ಪ್ರಶಾಂತ್ ಮುದಿ ಮದ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದರು. ಈ ಸಂದರ್ಭ ಪ್ರಶಾಂತ್ ಮುದಿ ದೊಣ್ಣೆಯಿಂದ ಹಲ್ಲೆ ಮಾಡಿದ್ದರಿಂದ ಬುರೋ ಮೃತಪಟ್ಟಿದ್ದರು. ಬುರೋನ ಮೃತ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಸೂರಜ್.ಪಿ.ಎ, ಮಡಿಕೇರಿ ಗ್ರಾಮಾಂತರ ಠಾಣೆಯ ಪಿಐ ಚಂದ್ರಶೇಖರ್ ಹೆಚ್.ವಿ, ಪಿಎಸ್‍ಐ ಜವರೇಗೌಡ, ಗ್ರಾಮಾಂತರ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷ ಕಾರ್ಯಾಚರಣೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 15 Jan 2026 11:52 pm

ಶಾಲಾ ಮಕ್ಕಳ ಶೂ ವಿತರಣೆಗೆ 6 ಕೋಟಿ ರೂ. ಬಿಡುಗಡೆ

ಬೆಂಗಳೂರು : ಸರಕಾರಿ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ವಿದ್ಯಾ ವಿಕಾಸ ಯೋಜನೆಯಡಿ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಶಾಲೆಯ ವಿದ್ಯಾರ್ಥಿಗಳ ದಾಖಲಾತಿಯನ್ನು ಖಚಿತಪಡಿಸಿಕೊಂಡು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಗತ್ಯ ಅನುದಾನ ವಿತರಣೆ ಮಾಡಬೇಕು. ಪ್ರತಿ ವಿದ್ಯಾರ್ಥಿಗೂ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಬೇಕು. ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಮೂವರು ಸದಸ್ಯರು, ಮುಖ್ಯ ಶಿಕ್ಷಕರ ಸಮಿತಿ ಮೂರು ತಿಂಗಳ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 265 ರೂ. 6ರಿಂದ 8ನೇ ವಿದ್ಯಾರ್ಥಿಗಳಿಗೆ 295 ರೂ. ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಲಾಗಿದೆ. ಶೂ ಮತ್ತು ಸಾಕ್ಸ್‌ ಗಳ ಗುಣಮಟ್ಟ ಪರಿಶೀಲಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಮಿತಿ ರಚಿಸಬೇಕು. ಹಿಂದೆ ಕಳಪೆ ಗುಣಮಟ್ಟದ ಶೂ ವಿತರಿಸಿರುವ ದೂರುಗಳಿದ್ದರೆ ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ.

ವಾರ್ತಾ ಭಾರತಿ 15 Jan 2026 11:47 pm

Vijay Hazare Trophy- ಕರ್ನಾಟಕವನ್ನು ಮಕಾಡೆ ಮಲಗಿಸಿದ ಅಮನ್ ಮೊಖಾಡೆ!; ಸತತ 2ನೇ ಬಾರಿ ಫೈನಲ್ ಗೇರಿದ ವಿದರ್ಭ

Vidarbha Beat Karnataka In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ತಂಡದ ಅಭಿಯಾನ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಕರ್ನಾಟಕವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸತತ 2ನೇ ಬಾರಿ ಫೈನಲ್ ಗೇರಿ ನಿಂತಿದೆ. ಅಮನ್ ಮೋಖಾಡೆ ಅವರ ಅಮೋಘ 138 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ಕರ್ನಾಟಕ ಮೂಲದವರೇ ಆದ ಆರ್ ಸಮರ್ಥ್ ಅವರ ಅರ್ಧಶತಕ ಕರ್ನಾಟಕದ ಫೈನಲ್ ಆಸೆಗೆ ತಣ್ಣೀರೆರಚಿತು.

ವಿಜಯ ಕರ್ನಾಟಕ 15 Jan 2026 11:41 pm

Bengaluru | ಬೆಂಕಿ ಅವಘಡ: ಹೊತ್ತಿ ಉರಿದ 15 ಶೆಡ್‍ಗಳು

ಬೆಂಗಳೂರು : ಕಸಕ್ಕೆ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲೇ ಸಂಗ್ರಹವಾಗಿದ್ದ ಗುಜರಿ ವಸ್ತುಗಳಿಗೂ ತಾಗಿದ ಕಿಡಿ 15 ಶೆಡ್‍ಗಳಿಗೂ ಹರಡಿ ಹೊತ್ತಿ ಉರಿದ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಳೇನಹಳ್ಳಿಯಲ್ಲಿರುವ ಕಸದ ಡಂಪಿಂಗ್ ಯಾರ್ಡ್‍ನಲ್ಲಿ ಗುರುವಾರ ನಡೆದಿದೆ. ಗುರುವಾರ ಬೆಳಗಿನ ಜಾವ 3.15ರ ಸುಮಾರಿನಲ್ಲಿ ಕಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕಿಡಿ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ ಗುಜರಿ ವಸ್ತುಗಳಿಗೂ ತಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿ ಪಕ್ಕದ 15 ಶೆಡ್‍ಗಳು ಹರಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಹರಸಾಹಸದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದಾಗಿ 15 ಶೆಡ್‍ಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್ ಶೆಡ್‍ಗಳಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ ಮೂಲದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಶೆಡ್‍ನಲ್ಲಿ ವಾಸವಾಗಿರುವವರು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೇಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಇದೇ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿ 50 ಗುಡಿಸಲುಗಳು ಭಸ್ಮಗೊಂಡಿದ್ದವು. ಹಾಗಾಗಿ ಗುಡಿಸಲಿನಲ್ಲಿದ್ದ ನಿವಾಸಿಗಳು ಬೇರೆಡೆ ನೆಲೆಸಿದ್ದಾರೆ. ಸದ್ಯ, ಮತ್ತೆ ಈ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಸಂಬಂಧ ಬೇಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 15 Jan 2026 11:39 pm

ರಾಜ್ಯಾದ್ಯಂತ ಸಂಕ್ರಾಂತಿ ಸಂಭ್ರಮ

ಬೆಂಗಳೂರು : ವರ್ಷದ ಮೊದಲನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ರಾಜ್ಯಾದ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸಹಿತ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಂಕ್ರಾಂತಿ ಸಂದರ್ಭದಲ್ಲೇ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿ ಪ್ರವೇಶ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಂಕ್ರಾಂತಿ ಹಬ್ಬದಲ್ಲಿ ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ’ ಎಂದು ಜನರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಬೆಂಗಳೂರಿನ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲೂ ಗುರುವಾರ ಸಂಜೆ 5.02ರ ಸುಮಾರಿಗೆ ಸೂರ್ಯ ಕಿರಣಗಳು ಗಂಗಾಧರೇಶ್ವರ ಸ್ವಾಮಿ ಶಿವಲಿಂಗದ ಮೇಲೆ ಬಿದ್ದದ್ದನ್ನು ಕಣ್ತುಂಬಿಕೊಳ್ಳಲು ದೇವಾಲಯದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಎರಡು ನಿಮಿಷಗಳ ಕಾಲ ಸೂರ್ಯ ರಶ್ಮಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ. ಗ್ರಾಮೀಣ ಭಾಗದಲ್ಲಿ ರೈತರ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ವರ್ಷವಿಡೀ ದುಡಿದ ಜಾನುವಾರುಗಳನ್ನು ಶೃಂಗರಿಸಿ ಯಾವುದೇ ರೋಗ-ರುಜಿನಗಳು ಬಾರದಿರಲಿ ಎಂದು ಕಿಚ್ಚು ಹಾಯಿಸಿದರು. ಕಷ್ಟಪಟ್ಟು ಬೆಳೆದ ದವಸ-ಧಾನ್ಯ ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಿಲಿಕಾನ್ ಸಿಟಿಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪೊಂಗಲ್ ತಯಾರಿಸಿ ಸಂಕ್ರಾಂತಿ ಸಂಭ್ರಮ: ಜಯನಗರ ಕ್ಷೇತ್ರದ ರಾಗಿಗುಡ್ಡ ಪ್ರದೇಶದಲ್ಲಿ ಬಿಜೆಪಿ ನಾಯಕರು ಪೊಂಗಲ್ ತಯಾರಿಸುವ ಮೂಲಕ ಸಂಕ್ರಾಂತಿ ಆಚರಿಸಿದರು. ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿಸೂರ್ಯ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪೊಂಗಲ್ ತಯಾರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ವಾರ್ತಾ ಭಾರತಿ 15 Jan 2026 11:35 pm

Dharwad | ವಿದ್ಯಾರ್ಥಿ ಕೊಲೆ ಪ್ರಕರಣ; ಮೂವರು ಬಾಲಕರು ವಶಕ್ಕೆ : ಎಸ್ಪಿ ಗುಂಜನ್ ಆರ್ಯ

ಧಾರವಾಡ : ಪಟ್ಟಣದ ಬಸ್ ನಿಲ್ದಾಣ ಬಳಿಯ ಟಿಎಪಿಎಂಎಸ್ ಸೊಸೈಟಿ ಮೈದಾನದಲ್ಲಿ ಬುಧವಾರ ನಡೆದ ವಿದ್ಯಾರ್ಥಿ ನಿಂಗರಾಜ ಮಲ್ಲಿಕಾರ್ಜುನ ಅವಾರಿ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗುರುವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕೊಲೆಗೆ ಹಳೇ ದ್ವೇಷ ಹಾಗೂ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳವೇ ಕಾರಣವಾಗಿದೆ. ಇದನ್ನೇ ದೊಡ್ಡದು ಮಾಡಿ ಕೃತ್ಯ ಎಸಗಿದ್ದಾರೆ. ಇದರಲ್ಲಿ ಓರ್ವನಿಗೆ ಗಾಯವೂ ಆಗಿವೆ. ಕೊಲೆಯಾದ ಹುಡುಗ ಮತ್ತು ಕೊಲೆ ಮಾಡಿದ ಎ1 ಆರೋಪಿ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದವರು. ಇವರ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಪಿ ಗುಂಜನ್ ಆರ್ಯ ಮಾಹಿತಿ ನೀಡಿದರು. ಕುಂದಗೋಳದಲ್ಲಿ ಅಂತ್ಯ ಸಂಸ್ಕಾರ: ಬುಧವಾರ ಹತ್ಯೆಗೀಡಾಗಿದ್ದ ವಿದ್ಯಾರ್ಥಿ ನಿಂಗರಾಜ ಮಲ್ಲಿಕಾರ್ಜುನ ಅವಾರಿಯ ಮರಣೋತ್ತರ ಪರೀಕ್ಷೆಯನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಡೆಸಿ, ಪೋಷಕರಿಗೆ ಗುರುವಾರ ಹಸ್ತಾಂತರಿಸಲಾಯಿತು. ಬಳಿಕ ಕುಂದಗೋಳ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ನಿನ್ನೆ ನಮ್ಮ ಮಗ ಶಾಲೆಗೆ ಹೋದವನು ಮರಳಿ ಬರಲಿಲ್ಲ. ಸಂಜೆ 5 ಗಂಟೆಗೆ ನಮ್ಮ ಮಗ ಇನ್ನೂ ಮನೆಗೆ ಬಂದಿಲ್ಲ ಎಂದು ಶಾಲೆಗೆ ಫೋನ್ ಮಾಡಿ ವಿಚಾರಿಸಿದಾಗ, ಶಾಲೆ ಬಿಟ್ಟಿದೆ, ಆತ ಹೋಗಿದ್ದಾನೆ ಎಂದು ಶಿಕ್ಷಕರು ತಿಳಿಸಿದ್ದರು. ಬಳಿಕ ನಾನು ಶಾಲೆಯ ಬಳಿ ಹುಡುಕಾಡುತ್ತಿದ್ದೆ, ಅಷ್ಟರಲ್ಲಿ ಶಿಕ್ಷಕರು ನನಗೆ ಫೋನ್ ಮಾಡಿ ಸೊಸೈಟಿ ಮೈದಾನದ ಬಳಿ ಬರುವಂತೆ ಹೇಳಿದರು.ಅಲ್ಲಿ ಹೋಗಿ ನೋಡಿದರೆ ನನ್ನ ಮಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತ ಯಾರ ಜೊತೆಗೂ ಜಗಳವಾಡುತ್ತಿರಲಿಲ್ಲ. ನಾಲ್ಕರಿಂದ ಐದು ಜನರು ಸೇರಿ ಮಗನನ್ನು ಕೊಲೆ ಮಾಡಿದ್ದಾರೆ -ಮಲ್ಲಿಕಾರ್ಜುನ ಅವಾರಿ, ಮೃತ ವಿದ್ಯಾರ್ಥಿ ತಂದೆ

ವಾರ್ತಾ ಭಾರತಿ 15 Jan 2026 11:25 pm

ಏಷ್ಯಾದ ಅತಿ ಶ್ರೀಮಂತ ಕಾರ್ಪೊರೇಷನ್ 'ಮುಂಬೈ ಮಹಾನಗರ ಪಾಲಿಕೆ' ಚುನಾವಣೆ 2026 - ಎಕ್ಸಿಟ್ ಪೋಲ್ಸ್ ಹೇಳಿದ್ದೇನು?

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ ಮೈತ್ರಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. 227 ವಾರ್ಡ್‌ಗಳ ಪಾಲಿಕೆಯಲ್ಲಿ ಬಿಜೆಪಿ ಮೈತ್ರಿ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಉದ್ಧವ್ ಠಾಕ್ರೆ ಬಣ ಸುಮಾರು 60-70 ಸ್ಥಾನ ಪಡೆಯಬಹುದು. ಉತ್ತರ, ದಕ್ಷಿಣ ಭಾರತದ ಮತದಾರರು, ಯುವಕರು, ಮಹಿಳೆಯರು ಬಿಜೆಪಿಗೆ ಒಲವು ತೋರಿದ್ದಾರೆ.

ವಿಜಯ ಕರ್ನಾಟಕ 15 Jan 2026 11:08 pm

ಜ. 18 ರಂದು ಜೋಕಟ್ಟೆಯಲ್ಲಿ ಸಮಸ್ತ ಸಮ್ಮೇಳನ

ಮಂಗಳೂರು, ಜ.15: ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ಇದರ ಜಂಟಿ ಆಶ್ರಯದಲ್ಲಿ, ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಜೋಕಟ್ಟೆ ಹೊಸ ಮಸೀದಿ ವಠಾರದಲ್ಲಿ 2026 ಜನವರಿ 18 ರಂದು (ಆದಿತ್ಯವಾರ) ಮಗ್ರಿಬ್ ನಮಾಜ್ ನಂತರ ಸಮಸ್ತ ಸಮ್ಮೇಳನ ನಡೆಯಲಿದೆ. ಈ ಪ್ರಯುಕ್ತ, ಅದೇ ದಿನ ಅಸರ್ ನಮಾಜ್ ನಂತರ ಜೋಕಟ್ಟೆ ಹಳೆಯ ಮಸೀದಿಯಿಂದ ಈದ್ಗಾ ಮಸೀದಿ ತನಕ ದಫ್, ಸ್ಕೌಟ್, ಫ್ಲವರ್ ಶೋ ಮುಂತಾದ ಕಾರ್ಯಕ್ರಮಗಳೊಂದಿಗೆ ಸಮಸ್ತ ಸಂದೇಶ ಜಾಥಾ ನಡೆಯಲಿದೆ. ಮಗ್ರಿಬ್ ನಮಾಜ್ ನಂತರ ನಡೆಯಲಿರುವ ಸಮಸ್ತ ಸಮ್ಮೇಳನವು ವೈಟ್ ಸ್ಟೋನ್ ಮಾಲಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಶರೀಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕೇರಳದ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣ ನೀಡಲಿದ್ದು, ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಫಝಲ್ ರಹ್ಮಾನ್ ನಿಝಾಮಿ ಅಲ್ ಫಾರೂಕಿ ಪಾಸ್ತಾವಿಕ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೌದಿ ಅರೇಬಿಯಾದ ಅಲ್ ಮುಝಯಿನ್ ಕಂಪನಿ ಮಾಲಕರಾದ ಹಾಜಿ ಬಿ.ಎಂ. ಝಕರಿಯಾ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಳೆಯ ಮಸೀದಿ ಖತೀಬ್ ಯೂಸುಫ್ ಮಿಸ್ಬಾಹಿ, ಮುದರ್ರಿಸ್ ಅಬ್ದುರಹ್ಮಾನ್ ದಾರಿಮಿ, ದಕ್ಷಿಣ ಕನ್ನಡ ಜಿಲ್ಲಾ ಜಂಹಿಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ, ಈದ್ಗಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಹನೀಫಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಮುದರ್ರಿಬ್ ತಾಜುದ್ದೀನ್ ರಹ್ಮಾನಿ, ಸಮಸ್ತ ಮದರಸ ಮ್ಯಾನೇಜ್‌ಮೆಂಟ್ ದ.ಕ. ಜಿಲ್ಲಾ ಅಧ್ಯಕ್ಷ ಎಂ.ಎಚ್. ಮೊಯಿದಿನಬ್ಬ, ಹಳೆಯ ಮಸೀದಿ ಅಧ್ಯಕ್ಷ ಅಬ್ದುಲ್ ರಶೀದ್ ಕೊಪ್ಪ, ಒ.ಎಂ. ಅಬ್ದುಲ್ ಕಾದರ್, ಅಂಜುಮನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಹಾಜಿ ಸುಲೈಮಾನ್ ಬೊಟ್ಟು, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಮರುಲ್ ಫಾರೂಕ್, ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯ ಹಾಗೂ ಕಾರ್ಪೊರೇಟರ್ ಜನಾಬ್ ಮುನೀಬ್ ಬೆಂಗರೆ, ಮಂಗಳೂರು ವೆಸ್ಟ್ ರೇಂಜ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಬಿಲಾಲ್ ಮೊಯಿದಿನ್ ಬೆಂಗರೆ, ತಣ್ಣೀರುಬಾವಿ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ಬೆಂಗರೆದೋಟ ಮಸೀದಿ ಅಧ್ಯಕ್ಷ ಅಬ್ದುಲ್ ರೌಫ್, ಕಳವಾರು ಜುಮಾ ಮಸೀದಿ ಅಧ್ಯಕ್ಷ ಬಿ. ಆದಂ, ಕೆ.ಕೆ. ಅಬ್ದುಲ್ ಕಾದರ್ (ಜೋಕಟ್ಟೆ), ಮಂಗಳೂರು ವೆಸ್ಟ್ ರೇಂಜ್ ಜಂಹಿಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಹಲೀಮ್ ಆರ್ಶದಿ ಸೇರಿದಂತೆ ಅನೇಕ ಉಲಮಾ, ಉಮರಾ ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 7:00ಕ್ಕೆ ವಲಿಯುಲ್ಲಾಹಿ ಶೇಕಾಜಿ ಮಖಾಂ ಝಿಯಾರತ್, 7:30ಕ್ಕೆ ವಲಿಯುಲ್ಲಾಹಿ ಸೀವಾ ಇಮಾಮ್ ಮಖಾಂ ಝಿಯಾರತ್, 8:30ಕ್ಕೆ ಹೊಸ ಮಸೀದಿ ವಠಾರದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಶರೀಫ್ ಹಾಜಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಷಿದಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 15 Jan 2026 11:06 pm

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್: ಓರ್ವ ಆರೋಪಿ ಬಂಧನ

ಮಂಗಳೂರು, ಜ.15: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಹಾಕಿ ವೈರಲ್ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಧರ್ಮಪಾಲ್ ಶೆಟ್ಟಿ(70) ಬಂಧಿತ ಆರೋಪಿ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ರಾವ್ ಎಂಡ್ ರಾವ್ ಸರ್ಕಲ್ ಬಳಿ ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿ ಅಕ್ರಮ ವ್ಯವಹಾರವೂ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಸಂಬಂಧ ಪಟ್ಟವರಿಗೆ ತಲುಪಿಸಬೇಕು ಎಂದು ರವೀಂದ್ರ ಎಂಬ ವ್ಯಕ್ತಿ ವಾಟ್ಸಪ್ ಪೋಸ್ಟ್ ಹಾಕಿದ್ದ. ಇದು  ವೈರಲ್ ಆಗಿತ್ತು.

ವಾರ್ತಾ ಭಾರತಿ 15 Jan 2026 11:03 pm

ಇರಾನ್ ಮೇಲಿನ ದಾಳಿಗೆ ತೆರಬೇಕಾದೀತು ಭಾರೀ ಬೆಲೆ; ಮಧ್ಯಪ್ರಾಚ್ಯ ಮತ್ತೆ ರಣಾಂಗಣವಾದರೆ ಗತಿ ಏನು?

ಇರಾನ್‌ ಆಂತರಿಕ ಬಿಕ್ಕಟ್ಟು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದು, ಅಮೆರಿಕದ ಮಧ್ಯಪ್ರವೇಶದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಅಮೆರಿಕ ಈಗಾಗಲೇ ಮಧ್ಯಪ್ರಾಚ್ಯದತ್ತ ತನ್ನ ನೌಕಾಸೇನೆಯ ಯುದ್ಧವಾಹಕ ನೌಕೆಯ ಗುಂಪೊಂದನ್ನು ರವಾನಿಸಿದೆ. ಆದರೆ ಇರಾನ್‌ ಮೇಲೆ ಅಮೆರಿಕ ದಂಡೆತ್ತಿ ಬರುವುದು ಅಷ್ಟು ಸುಲಭವೇ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಒಂದು ವೇಳೆ ಅಮೆರಿಕವು ಇರಾನ್‌ ಮೇಲೆ ದಾಳಿ ಮಾಡಿದ್ದೇ ಆದಲ್ಲಿ, ಮಧ್ಯಪ್ರಾಚ್ಯದಲ್ಲಿ ಏನೆಲ್ಲಾ ಭೀಕರ ಪರಿಣಾಮಗಳು ಎದುರಾಗಲಿವೆ? ಈ ಕುರಿತು ಇಲ್ಲಿದೆ ಗಿರೀಶ್‌ ಲಿಂಗಣ್ಣ ಅವರ ವಿಸ್ತೃತ ಲೇಖನ.

ವಿಜಯ ಕರ್ನಾಟಕ 15 Jan 2026 10:50 pm

ದಿಲೀಪ್ ಪರ ಒಲವು, ಸಂತ್ರಸ್ತೆ ಬಗ್ಗೆ ಅವಹೇಳನಕಾರಿ ಹೇಳಿಕೆ; ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ ವಕೀಲೆ ಟಿ.ಬಿ. ಮಿನಿ

ಎರ್ನಾಕುಲಂ: ಖ್ಯಾತ ಮಲಯಾಳಂ ನಟ ದಿಲೀಪ್ ವಿರುದ್ಧದ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕೀಲೆ ಟಿ.ಬಿ. ಮಿನಿ ಅವರು, ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ಸಲ್ಲಿಸಿದ್ದಾರೆ. ನಟಿ ಮೇಲಿನ ದಾಳಿ ಪ್ರಕರಣವನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ನ್ಯಾಯಾಲಯದಲ್ಲೇ ನಿದ್ದೆ ಮಾಡುತ್ತಿದ್ದರು ಎಂಬ ಹಾಸ್ಯಾಸ್ಪದ ಟಿಪ್ಪಣಿಗಳನ್ನು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮಿನಿ ಅವರ ಬಗ್ಗೆ ಮಾಡಿದ ಬಳಿಕ, ಹನಿ ವರ್ಗೀಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಿನಿ ಅರ್ಜಿ ಸಲ್ಲಿಸಿದ್ದಾರೆ. ಈ ಹೇಳಿಕೆಗಳನ್ನು ಸುಳ್ಳು ಮತ್ತು ಮಾನಹಾನಿಕಾರಿಯೆಂದು ಕರೆದಿರುವ ಮಿನಿ, ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ನಟ ದಿಲೀಪ್‌ ಗೆ ಹನಿ ವರ್ಗೀಸ್ ಅನಗತ್ಯವಾಗಿ ಒಲವು ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಸೆಂಬರ್ 2025ರಲ್ಲಿ ನೀಡಿದ ತೀರ್ಪಿನಲ್ಲಿ ಹನಿ ವರ್ಗೀಸ್ ಅವರು ದಿಲೀಪ್ ಮತ್ತು ಇತರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಆರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದ್ದರು. ಈ ತೀರ್ಪು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಮಿನಿ ನ್ಯಾಯಾಧೀಶರ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿರಲಿಲ್ಲ. ತೀರ್ಪು ನಿರಾಶಾದಾಯಕವಾಗಿದೆ ಎಂದು ಮಾತ್ರ ಹೇಳಿದ್ದರು. ಫೆಬ್ರವರಿ 4ರಂದು ಹೈಕೋರ್ಟ್ ಆರು ಅಪರಾಧಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ. ಈ ಮಧ್ಯೆ ಮಿನಿ ಇದೀಗ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅರ್ಜಿಯಲ್ಲಿ ಮತ್ತಷ್ಟು ಉಲ್ಲೇಖಿಸಿರುವಂತೆ, ವಿಚಾರಣೆಯ ಆರಂಭಿಕ ಹಂತದಿಂದಲೇ ಹನಿ ವರ್ಗೀಸ್ ಅವರು ಸಂತ್ರಸ್ತೆಯ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು ಮತ್ತು ಪ್ರಾಸಿಕ್ಯೂಷನ್ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದರು. ಇದರ ಪರಿಣಾಮವಾಗಿ ಇಬ್ಬರು ವಿಶೇಷ ಸಾರ್ವಜನಿಕ ಅಭಿಯೋಜಕರು ರಾಜೀನಾಮೆ ನೀಡುವಂತಾಯಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹನಿ ವರ್ಗೀಸ್ ಅವರು ದಿಲೀಪ್ ಅವರಿಗೆ ತೋರಿದ ಅನಗತ್ಯ ಒಲವು ನ್ಯಾಯಾಂಗ ವ್ಯವಸ್ಥೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಮಿನಿ ಆರೋಪಿಸಿದ್ದಾರೆ. ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಹನಿ ವರ್ಗೀಸ್ ಅವರ ನಿಯಮಿತ ಅಭ್ಯಾಸವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಇಂತಹ ವರ್ತನೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು ನ್ಯಾಯಾಧೀಶರಿಗೆ ನೆನಪಿಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಹೇಳಲಾಗಿದೆ. ಸೆಷನ್ಸ್ ನ್ಯಾಯಾಲಯದ ವಶದಲ್ಲಿದ್ದ ನಿರ್ಣಾಯಕ ಸಾಕ್ಷ್ಯವಾದ ಮೆಮೊರಿ ಕಾರ್ಡ್ ಅನ್ನು ಕಾನೂನುಬಾಹಿರವಾಗಿ ತಿರುಚಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಜುಲೈ 2021ರಲ್ಲಿ ಮೆಮೊರಿ ಕಾರ್ಡ್ ಹನಿ ವರ್ಗೀಸ್ ಅವರ ಪೀಠದ ಕಸ್ಟಡಿಯಲ್ಲಿದ್ದ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ಅದನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಮಿನಿ ಉಲ್ಲೇಖಿಸಿದ್ದಾರೆ. ಖಾಸಗಿತನ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದಾಗ, ಹೈಕೋರ್ಟ್ ಹನಿ ವರ್ಗೀಸ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಆದರೆ ನ್ಯಾಯಾಧೀಶರು ಹೈಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ಕೇವಲ ಔಪಚಾರಿಕ ತನಿಖೆ ನಡೆಸಿದ್ದಾರೆ ಎಂದು ಮಿನಿ ಆರೋಪಿಸಿದ್ದಾರೆ. “ಸುಳ್ಳು ಆರೋಪಗಳ ಮೂಲಕ ತೆರೆದ ನ್ಯಾಯಾಲಯದಲ್ಲೇ ವಕೀಲರ ಮಾನಹಾನಿ ನಡೆದಲ್ಲಿ ಸಂಬಂಧಿತ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ಕ್ರಮ ಕೈಗೊಳ್ಳಬಹುದು” ಎಂದು ಉಲ್ಲೇಖಿಸಿ, ಹನಿ ವರ್ಗೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಿನಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 15 Jan 2026 10:49 pm

ಬಾಂಗ್ಲಾ ಕ್ರಿಕೆಟ್ ನಲ್ಲಿ ಮಹತ್ವದ ಬೆಳವಣಿಗೆ: ಭಾರತದ ಬಗ್ಗೆ ಬೇಕಾಬಿಟ್ಟಿ ಮಾತಾಡಿದ್ದ ನಜ್ಮುಲ್ ಇಸ್ಲಾಂ ಬಿಸಿಬಿಯಿಂದ ವಜಾ!

BCB Sacks Najmul Islam- ಮುಸ್ತಫಿಝುರ್ ರಹಮಾನ್ ಅವರನ್ನು ಐಪಿಎಲ್ ನಿಂದ ಹೊರಹಾಕಿದ ಮತ್ತು ಟಿ20 ವಿಶ್ವಕಪ್ ವಿಚಾರದಲ್ಲಿ ಭಾರತವನ್ನು ವಿರೋಧಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರನ್ನು ಬಿಸಿಬಿಯು ಪದಚ್ಯುತಿಗೊಳಿಸಿದೆ. ಒಂದು ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಹೋಗದೇ ಇದ್ದಲ್ಲ ಆಟಗಾರರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂಬ ಅವರ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಆಟಗಾರರು BPL ಮತ್ತು DPL ಪಂದ್ಯಗಳನ್ನು ಬಹಿಷ್ಕರಿಸಿದ ಬಳಿಕ ಬಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.

ವಿಜಯ ಕರ್ನಾಟಕ 15 Jan 2026 10:48 pm

ಮಾನ್ವಿ | ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಮೃತ್ಯು

ಮಾನ್ವಿ : ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ಮೃತಪಟ್ಟಿದ್ದಾರೆ ಘಟನೆ ಗುರುವಾರ ಸಂಭವಿಸಿದೆ. ಮೃತ ಯುವಕನನ್ನು ಮಾನ್ವಿ ಪಟ್ಟಣದ ವಂಶಿ ರೆಡ್ಡಿ ಸುರೇಂದ್ರ ರೆಡ್ಡಿ ರಾಜಲದಿನ್ನಿ (18) ಎಂದು ಗುರುತಿಸಲಾಗಿದೆ. ಯುವಕ ವಂಶಿ ರೆಡ್ಡಿ ಸ್ನಾನಕ್ಕಾಗಿ ನೀರಿಗೆ ಇಳಿದಾಗ ಮುಳುಗಿ ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 15 Jan 2026 10:47 pm

West Bengal | S I R ವಿಚಾರಣೆ; ಬಿಡಿಒ ಕಚೇರಿಗಳಿಗೆ ಗುಂಪು ದಾಳಿ, ಇನ್ಸ್‌ಪೆಕ್ಟರ್‌ ಗೆ ಗಂಭೀರ ಗಾಯ

ಕೋಲ್ಕತಾ, ಜ.15: ಉತ್ತರ ದಿನಾಜ್‌ಪುರದ ಚಕುಲಿಯಾ ಪ್ರದೇಶದಲ್ಲಿ ಗುರುವಾರ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರಣೆಗಳ ಸಂದರ್ಭದಲ್ಲಿ ಟಿಎಂಸಿ ಬೆಂಬಲಿತರೆನ್ನಲಾದ ಪ್ರತಿಭಟನಾಕಾರರು ಪೊಲೀಸರ ಮೇಲೆ ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಪ್ರತಿಭಟನಾಕಾರರು ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾದಲ್ಲಿ ಬಿಡಿಒ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಎರಡೂ ಘಟನೆಗಳಲ್ಲಿ ಆಡಳಿತಾರೂಢ ಟಿಎಂಸಿ ಬೆಂಬಲಿತ ಪ್ರತಿಭಟನಾಕಾರರು ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಸಿಪಿಎಂ ಆರೋಪಿಸಿವೆ. ಹಿಂಸಾಚಾರದ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಚಕುಲಿಯಾ ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದೆ. ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಉತ್ತರ ದಿನಾಜ್‌ಪುರ ಜಿಲ್ಲಾಧಿಕಾರಿಗೆ ಆಯೋಗ ನಿರ್ದೇಶನ ನೀಡಿದೆ. ಎಸ್‌ಐಆರ್ ವಿಚಾರಣೆಗಳಿಗೆ ಹಾಜರಾಗುವಂತೆ ಸೂಚಿಸಲಾಗಿದ್ದ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ವಿರುದ್ಧ ಪ್ರತಿಭಟಿಸಲು ಗುರುವಾರ ಚಕುಲಿಯಾದ ಕಹಾಟಾ ಪ್ರದೇಶದ ನಿವಾಸಿಗಳು ಬಿಡಿಒ ಕಚೇರಿ ಬಳಿಯ ರಾಜ್ಯ ಹೆದ್ದಾರಿಯನ್ನು ನಿರ್ಬಂಧಿಸಿದ್ದರು. ನಿರ್ಬಂಧ ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ಗುಂಪು ಇಟ್ಟಿಗೆಗಳನ್ನು ತೂರಿದೆ. ಗುಂಪು ಬಿಡಿಒ ಕಚೇರಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದು, ಅಲ್ಲಿದ್ದ ಪೀಠೋಪಕರಣಗಳು ಹಾಗೂ ಎಸ್‌ಐಆರ್ ಸಂಬಂಧಿತ ದಾಖಲೆಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ನಿಯಂತ್ರಣ ಮೀರಿದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು. ಚಕುಲಿಯಾ ಘಟನೆ ರಾಜ್ಯದಲ್ಲಿ ಎಸ್‌ಐಆರ್ ವಿರುದ್ಧ ನಡೆದ ಅತ್ಯಂತ ಕೆಟ್ಟ ಪ್ರತಿಭಟನೆಗಳಲ್ಲಿ ಒಂದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಿಂಸಾಚಾರದಲ್ಲಿ ಆಡಳಿತ ಪಕ್ಷವು ನೇರವಾಗಿ ಭಾಗವಹಿಸಿದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ವಾರ್ತಾ ಭಾರತಿ 15 Jan 2026 10:41 pm

85ನೇ ಅಖಿಲ ಭಾರತ ಅಂತರ್‌ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮಂಗಳೂರು ವಿವಿಗೆ 13 ಪದಕ

ಮೂಡುಬಿದಿರೆ : 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26ರ ನಾಲ್ಕನೇ ದಿನ ಮಂಗಳೂರು ವಿಶ್ವವಿದ್ಯಾಲಯವು ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಒಟ್ಟು ಪದಕ ಪಟ್ಟಿಯಲ್ಲಿ ನಾಲ್ಕು ಚಿನ್ನ, ಐದು ಬೆಳ್ಳಿ ಹಾಗೂ ನಾಲ್ಕು ಕಂಚು ಸೇರಿದಂತೆ 13 ಪದಕಗಳನ್ನು ತನ್ನದಾಗಿಸಿಕೊಂಡಿದೆ. 4x400 ಮೀ. ಮಿಕ್ಸೆಡ್ ರಿಲೇ ಮತ್ತು ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟದ್ಲಲಿ ನಿರ್ಮಲಾ(ಚಿನ್ನ)ಕ್ಕೆ ಮುತ್ತಿಟ್ಟರು. ಹಾಫ್ ಮ್ಯಾರಥಾನ್: ಭಾಗೀರಥಿ (ಚಿನ್ನ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ಬೆಳ್ಳಿ), ಲಾಂಗ್ ಜಂಪ್: ಶ್ರೀದೇವಿಕಾ ವಿ.ಎಸ್. (ಬೆಳ್ಳಿ) ಹಾಗೂ ಪುರುಷರ ವಿಭಾಗದಲ್ಲಿ ಡಿಸ್ಕಸ್ ಥ್ರೋ: ಉಜ್ವಲ್ ಚೌಧರಿ (ಚಿನ್ನ), ನಾಗೇಂದ್ರ ಅಣ್ಣಪ್ಪ ನಾಯ್ಕ(ಕಂಚು), 100 ಮೀ. ಓಟ: ವಿಭಾಸ್ಕರ್ ಕುಮಾರ್ (ಬೆಳ್ಳಿ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ಬೆಳ್ಳಿ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ಬೆಳ್ಳಿ), ಶಾಟ್‌ಪುಟ್: ಅನಿಕೇತ್ (ಕಂಚು), ಡೆಕಥ್ಲಾನ್: ಚಮನ್‌ಜ್ಯೋತ್ ಸಿಂಗ್ (ಕಂಚು), 400 ಮೀಟರ್ಸ್ ಓಟ: ಆಕಾಶ್ ರಾಜ್ ಎಸ್.ಎಂ. (ಕಂಚು) ಸ್ಥಾನ ಪಡೆದಿದ್ದಾರೆ. ಪೋಲ್‌ವಾಲ್ಟ್ ನಲ್ಲಿ ನೂತನ ಕೂಟ ದಾಖಲೆ: ಮದ್ರಾಸ್ ವಿ.ವಿ. ಪಾರಮ್ಯ : ಆಗಸದಲ್ಲಿ ಸೂರ್ಯ ‘ಉತ್ತರ’ದ ಚಲನೆ ಆರಂಭಿಸಿ ‘ಮಕರ ಸಂಕ್ರಾಂತಿ’ಯ ಸುಗ್ಗಿ ನೀಡಿದರೆ, ಮೂಡುಬಿದಿರೆಯ ಅಂಕಣದಲ್ಲಿ ಪದಕಗಳ ಬೇಟೆಯು ‘ದಕ್ಷಿಣ’ದತ್ತ ಹೊರಳಿತ್ತು. ಸಮಗ್ರ ಪದಕ ಪಟ್ಟಿಯಲ್ಲಿ ತಮಿಳುನಾಡಿನ ಮದ್ರಾಸ್ ವಿ.ವಿ. ಪಾರಮ್ಯ ಮೆರೆದರೆ, ಮಂಗಳೂರು ವಿ.ವಿ. ದ್ವಿತೀಯ ಸ್ಥಾನಕ್ಕೆ ಜಾರಿತು. ಪೋಲ್ ವಾಲ್ಟ್ ಜಿಗಿತದಲ್ಲಿ ‘ಎತ್ತರ’ದ ಹಣಾಹಣಿ ಏರ್ಪಟ್ಟು, ನೂತನ ಕೂಟ ದಾಖಲೆಯೊಂದಿಗೆ ದಿನದ ಆಕರ್ಷಣೆಯಾಯಿತು. * ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ನಾಲ್ಕನೇ ದಿನವಾದ ಗುರುವಾರದ ಪ್ರಮುಖ ಝಲಕ್‌ಗಳು. ಪುರುಷರ ಅಂಕ ಪಟ್ಟಿಯಲ್ಲಿ ಮದ್ರಾಸ್ ಹಾಗೂ ಮಹಿಳೆಯರ ಪೈಕಿ ಚಂಡೀಗಢ ವಿ.ವಿ. ಅಗ್ರಸ್ಥಾನದಲ್ಲಿದ್ದರೆ, ಎರಡರಲ್ಲೂ ಮಂಗಳೂರು ವಿ.ವಿ. ರನ್ನರ್ ಅಪ್ ಸ್ಥಾನದಲ್ಲಿದೆ. ಪುರುಷರ ಪೋಲ್ ವಾಲ್ಟ್ನಲ್ಲಿ ಗ್ವಾಲಿಯರ್‌ನ ಕುಲ್ದೀಪ್ ಯಾದವ್ 5.10 ಮೀಟರ್ ಎತ್ತರ ಜಿಗಿಯುವ ಮೂಲಕ ನೂತನ ಕೂಟ ದಾಖಲೆ ಬರೆದರು. 2024ರಲ್ಲಿ ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯದ ಎಂ. ಗೌತಮ್ ಅವರು (5.0ಮೀ. ಎತ್ತರ) ಬರೆದಿದ್ದ ದಾಖಲೆಯನ್ನು ಮುರಿದರು. ಸೇಲಂ ಪರಿಯಾರ್ ವಿ.ವಿ. ಎಸ್.ಕವಿನ್ರಯ್ಯ ಹಾಗೂ ಗುರುಕಾಶಿ ವಿ.ವಿ.ಯ ರಾಮ್‌ರತನ್ (5.10) ಅಷ್ಟೇ ಎತ್ತರ ಜಿಗಿದು ಹಿಂದಿನ ದಾಖಲೆ ಮುರಿದರೂ, ಒಟ್ಟು ಪೌಲ್‌ಗಳ ಆಧಾರದಲ್ಲಿ ಕುಲ್ದೀಪ್ ಯಾದವ್ ವಿಜಯಿಯಾದ ಕಾರಣ, ನೂತನ ಕೂಟ ದಾಖಲೆ ಅವರ ಪಾಲಾಯಿತು. ಮಹಿಳಾ ವಿಭಾಗದ ಪೋಲ್ ವಾಲ್ಟ್ನಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ವಂಶಿಕಾ, ಕಾರ್ತಿಕಾ ಮತ್ತು ನೇಖಾ ಅವರು ಮೂವರ ಜಿಗಿತ (3.70 ಮೀ. ಎತ್ತರ) ಸಮವಾಗಿತ್ತು, ಹಿಂದಿನ ಫೌಲ್‌ಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಯಿತು. 100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಮಹಿಳೆಯರು ಅಕ್ಷರಶಃ ಮೇಲುಗೈ ಸಾಧಿಸಿದರು. ಅಕ್ಷಿದಾ ಮತ್ತು ಶ್ರೀರೇಷ್ಮಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಒಂದು ಸೆಕೆಂಡ್ ಅನ್ನು ಸಾವಿರ ವಿಭಾಗಿಸಿದಾಗ (.003) ಅಂತರ ಕಂಡು ಬಂದಿದ್ದು, ಅಕ್ಷಿದ ಚಿನ್ನಕ್ಕೆ ಪಾತ್ರರಾದರು. ಕಂಚು ಕೂಡಾ ಚೆನ್ನೈ ಪಾಲಾಯಿತು. ಸ್ಪರ್ಧಾ ಫಲಿತಾಂಶವು ಕ್ರೀಡಾಕೂಟದ ಅಂತರರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ವ್ಯವಸ್ಥೆಯನ್ನು ಸಾಕ್ಷೀಕರಿಸಿತು. ದೂರ ಜಿಗಿತದಲ್ಲಿ ಆಂಧ್ರಪ್ರದೇಶದ ಎಸ್‌ಆರ್‌ಎಂ ವಿಶ್ವವಿದ್ಯಾಲಯದ 19 ವರ್ಷದ ಮುಬಾಸ್ಸಿನಾ ಚಿನ್ನ ಗೆದ್ದರು. ಅವರು ಈ ಹಿಂದೆ 6.36 ಮೀ. ಜಿಗಿದ ದಾಖಲೆ ಹೊಂದಿದ್ದಾರೆ. ‘ಈ ಯಶಸ್ಸಿಗೆ ನನ್ನ ಕುಟುಂಬ ನೀಡಿದ ಪ್ರೋತ್ಸಾಹ ಹಾಗೂ ತರಬೇತುದಾರರ ಬೆಂಬಲ ಕಾರಣ’ ಎಂದರು. ದ್ವಿತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯದ ಶ್ರೀದೇವಿಕಾ ವಿ.ಎಸ್. ಪಡೆದಿದ್ದಾರೆ. ಉಡುಪಿ ಮೂಲದ ಅವರು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ. ವಸಂತ ಜೋಗಿ ತರಬೇತಿಯಲ್ಲಿ ಪಳಗಿದ್ದಾರೆ. ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಆಂಧ್ರಪ್ರದೇಶದ ಆದಿತ್ಯ ಅವರು, ‘ಎಸೆತಕ್ಕೂ ಮೊದಲಿನ ನನ್ನ ಓಟ ಅಭಿವೃದ್ಧಿ ಪಡಿಸಿದ್ದೇನೆ. ಅಂತರ ವಿಶ್ವವಿದ್ಯಾಲಯದ ಸ್ಪರ್ಧೆ ಇದೇ ಮೊದಲು. ಆದರೆ, ಇಲ್ಲಿ ಉತ್ತಮ ಅನುಭವ ದೊರೆಯಿತು. ಅರವಿಂದ ಹಾಗೂ ಧ್ಯಾನ ಕೃಷ್ಣ ಅವರಲ್ಲಿ ತರಬೇತಿ ಪಡೆದಿದ್ದೇನೆ’ ಎಂದರು. ‘ಇಂದು ನನಗೆ ಆರಂಭದಲ್ಲಿ ಒತ್ತಡ ಉಂಟಾಗಿತ್ತು. ಆದರೆ, ಒಂದು ಉತ್ತಮ ಎಸೆತ ಎಲ್ಲವನ್ನೂ ಮರೆಸಿ, ಆತ್ಮ ವಿಶ್ವಾಸ ನೀಡಿತು. ದಾಖಲೆಯ ಆಸೆ ಇತ್ತು. ಮುಂದಿನ ಬಾರಿ ದಾಖಲೆ ಮಾಡುತ್ತೇನೆ’ ಎಂದು ಭರವಸೆ ವ್ಯಕ್ತಪಡಿಸಿದರು. ಫಲಿತಾಂಶ- ಪುರುಷರ ವಿಭಾಗ: 110 ಮೀ. ಹರ್ಡಲ್ಸ್: ಅರವಿಂತ ಎ., ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (14.10ನಿ. ಸಮಯ)-1, ಶಾಹುಲ್ ಎಸ್., ಕೇರಳದ ಕ್ಯಾಲಿಕಟ್ ವಿ.ವಿ. (14.20)-2, ಪಾರಿ ಕೆ., ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (14.47)-3. ಪೋಲ್ ವಾಲ್ಟ್: ಕುಲ್ದೀಪ್ ಯಾದವ್, ಗ್ವಾಲಿಯರ್, ಐಟಿಎಂ ವಿ.ವಿ. (5.10 ಮೀ. ಎತ್ತರ)-1, ಎಸ್.ಕವಿನ್ರಯ್ಯ, ಸೇಲಂ ಪರಿಯಾರ್ ವಿ.ವಿ. (5.10)-2, ರಾಮ್‌ರತನ್, ಗುರುಕಾಶಿ ವಿ.ವಿ. (5.10)-3. 1500 ಮೀ. ಓಟ: ವಿಕಾಸ್, ಚಂಡೀಗಢದ ಪಂಜಾಬ್ ವಿ.ವಿ. (3:44.83 ನಿ. ಸಮಯ)-1, ಆಕಾಶ್ ಭಾಟಿ, ರೋಹ್ತಕ್ ಎಂ.ಡಿ.ಯು. ವಿ.ವಿ (3:45.06)-2, ಯೋಗೇಶ್ ಕುಮಾರ್ ದಿಂಡಾವಾಲಾ, ಚೆನ್ನೈ ಮದ್ರಾಸ್ ವಿ.ವಿ. (3:45.07)-3. ಜಾವೆಲಿನ್ ಥ್ರೋ: ಆದಿತ್ಯ, ಆಂಧ್ರಪ್ರದೇಶ ಎಸ್.ಆರ್.ಎಂ. ವಿ.ವಿ. (74.43ಮೀ. ದೂರ)-1, ಮೋಹಿತ್, ರೋಹ್ತಕ್ ಎಂಡಿಯು ವಿ.ವಿ. (73.90)-2, ಮೊಹಮ್ಮದ್ ಜುನೈದ್, ಚೆನ್ನೈಯ ಮದ್ರಾಸ್ ವಿ.ವಿ. (73.54ಮೀ.)-3. ಮಹಿಳೆಯರ ವಿಭಾಗ: ಪೋಲ್ ವಾಲ್ಟ್: ವಂಶಿಕಾ ಗಂಘಾಸ್, ಮೊಹಾಲಿ ಚಂಡೀಗಢ ವಿ.ವಿ. (3.70ಮೀ. ಎತ್ತರ)-1, ಕಾರ್ತಿಕಾ ವಿ., ಚೆನ್ನೈ ಮದ್ರಾಸ್ ವಿ.ವಿ. (3.70)-2, ನೇಖಾ ಎಲ್ದೋ, ಕೇರಳದ ಕ್ಯಾಲಿಕಟ್ ವಿ.ವಿ. (3.70)-3. (ಜಿಗಿತದ ಎತ್ತರ ಸಮವಾದರೆ, ಫೌಲ್‌ಗಳನ್ನು ಪರಿಗಣಿಸಿ ಸ್ಥಾನ ನಿರ್ಧರಿಸಲಾಗುತ್ತದೆ). 1500 ಮೀ. ಓಟ: ಅನಿಷಾ ಪಟೇಲ್, ಅಯೋಧ್ಯಾ ಡಾ.ರಾಮಮನೋಹರ ಲೋಹಿಯಾ ವಿ.ವಿ. (4:22.80 ನಿ. ಸಮಯ)-1, ಮಿಲಾಲಿ ದೀಪಕ್ ಬೋಯಾರ್, ನಾಗಪುರ, ತುಕ್ದೋಜಿ ಮಹರಾಜ ವಿ.ವಿ. (4:24.04)-2, ಅಂಜು, ವಿಜಯವಾಡ ಕೆ.ಎಲ್. ವಿಶ್ವವಿದ್ಯಾಲಯ (4:25.12)-3. 100 ಮೀ. ಹರ್ಡಲ್ಸ್: ಅಕ್ಷಿದಾ ಎಸ್, ಚೆನ್ನೈ ಅಣ್ಣಾ ವಿ.ವಿ. (13.75 ನಿ. ಸಮಯ (13.741)-1, ಶ್ರೀರೇಷ್ಮಾ, ಚೆನ್ನೈ ಮದ್ರಾಸ್ ವಿ.ವಿ. (13.75 (13.744)-2, ಕೆ.ಯಾಮಿನಿ, ಚೆನ್ನೈ ಮದ್ರಾಸ್ ವಿ.ವಿ. (13.84)-3. (ಓಟದ ಸಮಯ ಸಮವಾದರೆ, ಸಾವಿರದಿಂದ ವಿಭಾಗಿಸಿ ಅಂಕಿಅಂಶ ಪರಿಗಣಿಸಲಾಗುತ್ತದೆ) ಲಾಂಗ್ ಜಂಪ್: ಮುಬಾಸ್ಸಿನಾ ಮೊಹಮ್ಮದ್, ಆಂಧ್ರಪ್ರದೇಶದ ಎಸ್.ಆರ್.ಎಂ. ವಿ.ವಿ. (6.15ಮೀ.)-1, ಶ್ರೀದೇವಿಕಾ ವಿ.ಎಸ್., ಮಂಗಳೂರು ವಿ.ವಿ (6.06ಮೀ.)-2, ಒ. ಪಮಿಲಾ ವರ್ಷಿಣಿ, ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (5.87ಮೀ.)-3. ಹೆಪ್ಟಾಥ್ಲಾನ್: ಅನಾಮಿಕಾ, ಆಂಧ್ರಪ್ರದೇಶ ಎಸ್.ಆರ್.ಎಂ. ವಿ.ವಿ (5158 ಅಂಕ)-1, ಕೀರ್ತಿ ಈಶ್ವರ್‌ಲಾಲ್, ಪಂಜಾಬ್ ಲವ್ಲೀ ಪ್ರೊಫೆಷನ್ ವಿ.ವಿ. (4979)-2, ಇಶಾ ನೇಗಿ, ಭುವನೇಶ್ವರ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (4949)-3. ಶಾಟ್‌ಪಟ್: ಅನುಪ್ರಿಯಾ, ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ (14.53 ಮೀ. ದೂರ)-1, ಜಾಸ್ಕನ್‌ವಾಲ್ ಕೌರ್ , ಪಾಟಿಯಾಲ ಪಂಜಾಬಿ ವಿಶ್ವವಿದ್ಯಾಲಯ(14.50)-2, ಸೋನು ಕುಮಾರಿ, ಉದಯ್‌ಪುರ ಭೂಪಾಲ್ ನೊಬ್ಲೆಸ್ ವಿ.ವಿ. (14.44 ಮೀ.)-3.

ವಾರ್ತಾ ಭಾರತಿ 15 Jan 2026 10:26 pm

Google Trends: ಹೊಸ ಅಳಿಯನಿಗೆ ಸಂಕ್ರಾಂತಿ ದಿನ 158 ಬಗೆಯ ಖಾದ್ಯ ಉಣಬಡಿಸಿದ ಹೆಣ್ಣಿನ ಮನೆಯವರು!

ಆಂಧ್ರಪ್ರದೇಶದ ತೆನಾಲಿ ನಗರದಲ್ಲಿ, ಮೊದಲ ಸಂಕ್ರಾಂತಿಗೆ ಅಳಿಯನಿಗಾಗಿ ಕುಟುಂಬವೊಂದು 158 ಬಗೆಯ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದಿದೆ. ಇದು ಆಂಧ್ರದ ಸಂಪ್ರದಾಯದಂತೆ ಅಳಿಯನಿಗೆ ರಾಜಮರ್ಯಾದೆ ನೀಡುವ ಸಂಭ್ರಮ. ಸಿಹಿ, ತಿಂಡಿ, ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳ ವೈವಿಧ್ಯತೆ ಎಲ್ಲರನ್ನೂ ಬೆರಗುಗೊಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯ ಕರ್ನಾಟಕ 15 Jan 2026 10:24 pm

ನಿಟ್ಟೆ: ವಿನಯ ಹೆಗ್ಡೆಗೆ ಹುಟ್ಟೂರ ನುಡಿ ನಮನ ಕಾರ್ಯಕ್ರಮ

ಕಾರ್ಕಳ: ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಿಧನರಾದ ವಿನಯ ಹೆಗ್ಡೆ ಅವರಿಗೆ ನುಡಿನಮನ ಕಾರ್ಯಕ್ರಮ ಬುಧವಾರ ನಡೆಯಿತು. ನಿಟ್ಟೆ ಗ್ರಾಮದಲ್ಲಿ ಶೈಕ್ಷಣಿಕ, ವೈದ್ಯಕೀಯ ಹಾಗೂ ಔದ್ಯೋಗಿಕ ಕ್ರಾಂತಿ ನಡೆಸಿ ನಿಟ್ಟೆ ಗ್ರಾಮದ ಹೆಸರನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿನಯ ಹೆಗ್ಡೆಯವರ ಸಾಧನೆಗಳನ್ನು ನಿಟ್ಟೆ ಕೆಮ್ಮಣ್ಣು ದುರ್ಗಾ ಪರಮೇಶ್ವರಿ ದೇವಸ್ಥಾನದ‌ ಅರ್ಚಕ ಪ್ರಸನ್ನ ಆಚಾರ್ಯ, ಕಾರ್ಕಳ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ‌ ಅಧ್ಯಕ್ಷ ಸುಧಾಕರ ಶೆಟ್ಟಿ, ನಿಟ್ಟೆ ವಿದ್ಯಾಸಂಸ್ಥೆಯ‌ ಹಿರಿಯ ಅಧಿಕಾರಿ ಯೋಗೀಶ್ ಹೆಗ್ಡೆ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ಮರಿಸಿ ವಿನಯ ಹೆಗ್ಡೆಯವರು ಗ್ರಾಮದ ಜನತೆಯ ಆಶ್ರಯದಾತರಾ ಗಿದ್ದರು ಎಂದು ನುಡಿನಮನ ಸಲ್ಲಿಸಿದರು. ವಿನಯ ಹೆಗ್ಡೆ ಅವರ ಪುತ್ರ ವಿಶಾಲ ಹೆಗ್ಡೆ ಅವರು ಮಾತನಾಡಿ ನಿಟ್ಟೆ ಗ್ರಾಮಸ್ಥರೊಂದಿಗೆ ತನ್ನ ತಂದೆಗೆ ಇದ್ದ ಪ್ರೀತಿ ಮತ್ತು ಅಭಿಮಾನಗಳ ಪ್ರತೀಕವಾಗಿ ನಿಟ್ಟೆಯ ಗ್ರಾಮಸ್ಥರು ಸೇರಿ ಸಲ್ಲಿಸಿದ ನುಡಿನಮನ ವಿನಯ ಹೆಗ್ಡೆಯವರ ಆತ್ಮಕ್ಕೆ ತೃಪ್ತಿ ನೀಡಲಿದೆ ಎಂದರು. ವಿನಯ ಹೆಗ್ಡೆಯವರ ಮೊಮ್ಮಗ ವಿರೇನ್ ಉಪಸ್ಥಿತರಿದ್ದರು. ನಿಟ್ಟೆ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ವಿನಯ ಹೆಗ್ಡೆಯವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಅರವಿಂದ ಕುಮಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 15 Jan 2026 10:15 pm

‘ಜನನಾಯಗನ್’ ಸೆನ್ಸಾರ್ ಪ್ರಮಾಣಪತ್ರ ವಿವಾದ | ಹೈಕೋರ್ಟ್ ಮೆಟ್ಟಲೇರುವಂತೆ ನಿರ್ಮಾಪಕರಿಗೆ ಸುಪ್ರೀಂಕೋರ್ಟ್ ಸೂಚನೆ

ಹೊಸದಿಲ್ಲಿ, ಜ.15: ನಟ–ರಾಜಕಾರಣಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಪ್ರಮಾಣಪತ್ರ ನೀಡಿಕೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ ನ ವಿಭಾಗೀಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಜನನಾಯಗನ್ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯುವಲ್ಲಿ ನಿರ್ಮಾಪಕರು ವಿಫಲರಾದ ಹಿನ್ನೆಲೆಯಲ್ಲಿ, ಜನವರಿ 9ರಂದು ತೆರೆಕಾಣಬೇಕಿದ್ದ ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಚಿತ್ರವನ್ನು ಪುನರ್‌ಪರಿಶೀಲನಾ ಸಮಿತಿಗೆ ಕಳುಹಿಸುವ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷರ ಆದೇಶವನ್ನು ನಿರ್ಮಾಪಕರು ಪ್ರಶ್ನಿಸಿಲ್ಲವೆಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ವಿಷಯದಲ್ಲಿ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಸಮೀಪಿಸಬಹುದೆಂದು ಸರ್ವೋಚ್ಚ ನ್ಯಾಯಾಲಯವು ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆ.ವಿ. ಪ್ರೊಡಕ್ಷನ್ಸ್‌ ಗೆ ತಿಳಿಸಿದೆ. ಪೊಂಗಲ್ ಹಬ್ಬ (ಮಕರ ಸಂಕ್ರಾಂತಿ)ದ ಸಂದರ್ಭ ಜನನಾಯಗನ್ ಬಿಡುಗಡೆಗೊಳ್ಳಬೇಕಿದ್ದರೂ ಆದೇಶ ನೀಡಿಕೆಯಲ್ಲಿ ವಿಳಂಬವಾಗಿರುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತಾ ಅವರು, “ಅರ್ಜಿಯನ್ನು ಸಲ್ಲಿಸಿದ ಒಂದೆರಡು ದಿನಗಳಲ್ಲೇ ವಿಚಾರಣೆ ಇತ್ಯರ್ಥವಾಗುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಎಲ್ಲಾ ಪ್ರಕರಣಗಳಿಗೂ ಅನ್ವಯವಾಗಬೇಕು” ಎಂದು ಹೇಳಿದರು. ಈ ಅರ್ಜಿಯು ಜನವರಿ 6ರಂದು ಸಲ್ಲಿಕೆಯಾಗಿದ್ದು, ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಸಿಬಿಎಫ್‌ಸಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದೆ ಎಂದರು. ಜನನಾಯಗನ್ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಜನವರಿ 20ರಂದು ತೀರ್ಪು ನೀಡಲು ಪ್ರಯತ್ನಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಿಜಯ್ ನಿರ್ಧರಿಸಿರುವುದರಿಂದ, ಜನನಾಯಗನ್ ಅವರು ನಟಿಸಿರುವ ಕೊನೆಯ ಚಿತ್ರವಾಗಲಿದೆ. ಈ ಚಿತ್ರವನ್ನು 2026ರ ಜನವರಿ 9ರಂದು ಬಿಡುಗಡೆಗೊಳಿಸಲು ನಿರ್ಮಾಪಕರು ನಿರ್ಧರಿಸಿದ್ದರು.

ವಾರ್ತಾ ಭಾರತಿ 15 Jan 2026 10:13 pm

ಉಡುಪಿ: ಬೈಕ್ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಉಡುಪಿ, ಜ.15: ಮಣಿಪಾಲ ಕಾಯಿನ್ ಸರ್ಕಲ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಕಿರಣ್ ಬಿ.ಎನ್.(32) ಹಾಗೂ ಶಿವಮೊಗ್ಗ ದುರನಮಲ್ಲಿ ನಿವಾಸಿ ಯೋಗೇಶ ನಾಯ್ಕ ಎನ್. (22) ಬಂಧಿತ ಆರೋಪಿಗಳು. 2025ರ ಆ.30ರಂದು ನಿಲ್ಲಿಸಿದ್ದ ಹೆರ್ಗಾ ಗ್ರಾಮದ ಪ್ರದೀಪ್ ಸಾಲ್ಯಾನ್ ಎಂಬವರ 30,000 ರೂ. ಮೌಲ್ಯದ ಸ್ಕೂಟರ್‌ನ್ನು ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಡಿವೈಎಸ್ಪಿ ಪ್ರಭು ಡಿ.ಟಿ. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ ಪ್ರಸಾದ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಬಿ.ಎಂ., ಅಕ್ಷಯ ಕುಮಾರಿ ಎಸ್.ಎನ್., ಸಿಬ್ಬಂದಿಗಳಾದ ವಿಶ್ವಜಿತ್, ಚೇತನ್, ಅಜ್ಮಲ್, ರವಿರಾಜ್, ಮಂಜುನಾಥ ಅವರನ್ನು ಒಳಗೊಂಡ ತಂಡವು ಜ.7ರಂದು ಆರೋಪಿ ಗಳನ್ನು ಬಂಧಿಸಿ, ಸ್ಕೂಟರ್ ವಶಪಡಿಸಿಕೊಂಡಿದೆ. ಆರೋಪಿ ಕಿರಣ್ ಬಿ.ಎನ್. ವಿರುದ್ದ ಈ ಹಿಂದೆಯೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಾರ್ತಾ ಭಾರತಿ 15 Jan 2026 10:06 pm

ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಬದ್ಧ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ (ಸೇಡಂ) : ಬಹು ದಿನಗಳ ಬೇಡಿಕೆ ಹಾಗೂ ನಗರ ಸೌಂದರ್ಯಕ್ಕೆ ಪುಷ್ಠಿ ನೀಡುವಂತಹ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ.‌ ಬೇಕಾದ ಕ್ರಮಗಳನ್ನು ಅನುಸರಿಸಿ ದುರಸ್ತಿ ಕೈಗೊಂಡು ಬಸವೇಶ್ವರ ವೃತ್ತವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು. ಸೇಡಂ ಪಟ್ಟಣ್ಣದ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಾಸ್ತು ತಜ್ಞ ಬಸರಾಜಪ್ಪ ಖಂಡೇರಾವ್ ಅವರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸೇಡಂ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿತವಾಗಿರುವ ಅಣ್ಣ ಬಸವಣ್ಣ ಅವರ ಅಶ್ವಾರೂಢ ಮೂರ್ತಿ ಹಾಗೂ ಅದರ ಸುತ್ತಲಿನ ಸ್ಥಳದ ಸೌಂದರ್ಯ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ತಜ್ಞ ಖಂಡೇರಾವ್ ಅವರೊಟ್ಟಿಗೆ ಚರ್ಚಿಸಿದಂತೆ ಫ್ಲೋರಿಂಗ್, ಹಿಂಭಾಗ ಗೋಡೆ ಹಾಗೂ ಬಸವೇಶ್ವರ ಮೂರ್ತಿ ಸ್ಥಳದ ಸುತ್ತಲಿನ ಗ್ರ್ಯಾನೇಟ್ ದುರಸ್ತಿ ಕೈಗೊಳ್ಳಬೇಕಾಗಿದೆ ಎಂದರು. ಈ ವೇಳೆ ಮುಖಂಡರಾದ ಬಸವರಾಜ ಪಾಟೀಲ ಊಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ಕೃಷಿ ಸಮಾಜದ ಅಧ್ಯಕ್ಷ ಬಸವರಾಜ ರೇವಗೊಂಡ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರು, ಶಿವರುದ್ರ ಕೊಳಕುರು, ಸತೀಶ್ ಪೂಜಾರಿ, ಸಂತೋಷ ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸೇಡಂ ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಅಂಬಿಗ ಚೌಡಯ್ಯ, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಳದ ಅಭಿವೃದ್ಧಿಯನ್ನು ಕೈಗೊಳ್ಳುವ ಕುರಿತು ವಾಸ್ತು ತಜ್ಞರೊಟ್ಟಿಗೆ ಚರ್ಚಿಸಿದ್ದೇನೆ. ಬರುವ ದಿನಗಳಲ್ಲಿ ಬೇಕಾದ ಅನುದಾನ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಈ ಮೂರು ಸ್ಥಳಗಳ ಅಭಿವೃದ್ಧಿಪಡಿಸಲಾಗುವುದು. - ಡಾ.ಶರಣಪ್ರಕಾಶ್‌ ಪಾಟೀಲ್‌  (ಸಚಿವ)

ವಾರ್ತಾ ಭಾರತಿ 15 Jan 2026 9:58 pm

ವಿಶೇಷ ಕಾರ್ಯಾಚರಣೆ: ಖನಿಜ ಸಾಗಾಟದ 163 ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ

ಉಡುಪಿ, ಜ.15: ಉಡುಪಿ ಜಿಲ್ಲೆಯಲ್ಲಿ ಜ.14ರಂದು ಕಲ್ಲು ಮಣ್ಣು ಜಲ್ಲಿ ಮರಳುಗಳನ್ನು ಸಾಗಿಸುವ ವಾಹನಗಳ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 832 ವಾಹನಗಳನ್ನು ಪರಿಶೀಲಿಸಲಾಗಿದ್ದು, 182 ವಾಹನಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಅಧಿಕ ಭಾರ ಹಾಗೂ ಇತರೆ ಅಪರಾಧಗಳಿ ಗಾಗಿ 66 ವಾಹನಗಳ ಮೇಲೆ ಸ್ಥಳದಲ್ಲಿ ದಂಡ ಹಾಕಿ 22,500ರೂ. ಹಣ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾ ಗಿದ್ದು, 27 ವಾಹನಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ(ಜ.8ರಿಂದ ಜ.14ರವರೆಗೆ) ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಕರಪತ್ರ ಹಂಚುವ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ. ಈ ವೇಳೆ ಒಟ್ಟು 1240 ಕರಪತ್ರಗಳನ್ನು ಹಂಚಲಾಗಿದ್ದು, ಈಗಾಗಲೇ 163 ವಾಹನಗಳಿಗೆ ಸ್ಪೀಡ್ ಗವರ್ನರ್‌ನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 15 Jan 2026 9:57 pm

ಜೇವರ್ಗಿ | ಸಿದ್ಧರಾಮೇಶ್ವರರ ತತ್ವಾದರ್ಶ ಪಾಲಿಸಿ : ರವಿಚಂದ್ರ ಗುತ್ತೇದಾರ

ಜೇವರ್ಗಿ : ಶಿವಯೋಗಿ ಸಿದ್ದರಾಮೇಶ್ವರರ ಕಾಯಕ ತತ್ವಗಳು ಮತ್ತು ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವು ಇಡೀ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಅವರ ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಭೋವಿ ಸಮಾಜದ ಮುಖಂಡ ರವಿಚಂದ್ರ ಗುತ್ತೇದಾರ್ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧದ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಶಿವಯೋಗಿ ಸಿದ್ದರಾಮೇಶ್ವರ ಜಯಂತಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಪಂ ಇಒ ರವಿಚಂದ್ರರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ಸುಮಂಗಲಾದೇವಿ ಹೂಗಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಸಂಗನ್, ಪಶು ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಶೋಭಾ ಸಜ್ಜನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗುರುಶಾಂತಯ್ಯ ಗದ್ದಗಿಮಠ, ಸಂತೋಷ ಯಚಿ, ಸುರೇಖಾ ನಡಗೇರಿ, ಸಿದ್ದಣ್ಣ ಹುಲಕಲ್, ಭೀಮಾಶಂಕರ ಯಲಗೋಡ, ಶರಣು ಗುತ್ತೇದಾರ, ಮಲ್ಲಿಕಾರ್ಜುನ ದಂಡೂಲ್ಕರ್, ಸಾಯಬಣ್ಣ ಗುತ್ತೇದಾರ, ಭಗವಂತ್ರಾಯ ಬೆಣ್ಣೂರ, ಮೈಲಾರಿ ಗುಡೂರ, ಗಿರೀಶ್ ತುಂಬಗಿ, ರಾಜು ತಳವಾರ, ಸಂತೊಷ ಪೂಜಾರಿ ಗುಡೂರ, ಭೀಮರಾಯ ಖಾದ್ಯಾಪೂರ, ಸಾಯಬಣ್ಣ ಕಲ್ಯಾಣಕರ್, ಸಂತೋಷ ಸಂಗನ, ಬಾಪುಗೌಡ ಪಾಟೀಲ, ಗಂಗಾಧರ, ಮಕ್ಬೂಲ್ ಪಟೇಲ, ದಶರಥ ಇದ್ದರು.

ವಾರ್ತಾ ಭಾರತಿ 15 Jan 2026 9:54 pm

ಭ್ರಾಮರೀ ನಾಟ್ಯಾಲಯದಿಂದ ಭರತನಾಟ್ಯ ಪ್ರಸ್ತುತಿ

ಉಡುಪಿ, ಜ.15: ಅಮ್ಮುಂಜೆಯ ಶ್ರೀಭ್ರಾಮರೀ ನಾಟ್ಯಾಲಯ ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೂರು ಜೋಡಿ ಬಾಲಪತ್ರಿಭೆಗಳಿಂದ ಬಾಲ ಯುಗ್ಮ ನೃತ್ಯ ಎಂಬ ಭರತನಾಟ್ಯ ಪ್ರದರ್ಶನವನ್ನು ಪ್ರಸ್ತುತ ಪಡಿಸಲಿ ಎಂದು ಸಂಸ್ಥೆಯ ನಿರ್ದೇಶಕರಾಗಿರುವ ವಿದ್ವಾನ್ ಕೆ.ಭವಾನಿಶಂಕರ್ ತಿಳಿಸಿದ್ದಾರೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಖ್ಯಾತ ನೃತ್ಯಗುರುಗಳಾದ ನೃತ್ಯ ಕಲಾಸಿಂಧು ನಾಟ್ಯಕಲಾ ಪ್ರವೀಣ ದಿ.ರಾಧಾಕೃಷ್ಣ ತಂತ್ರಿ ಹಾಗೂ ವಿಧುಷಿ ವೀಣಾ ಸಾಮಗರ ಶಿಷ್ಯರಾಗಿರುವ ತಾವು ಎರಡೂವರೆ ದಶಕಗಳಿಂದ ಉಪ್ಪೂರು ಸಮೀಪದ ಕುಗ್ರಾಮವಾಗಿರುವ ಅಮ್ಮುಂಜೆಯಲ್ಲಿ ಕಲಾಸಕ್ತ ಮಕ್ಕಳಿಗಾಗಿ ಭರತನಾಟ್ಯ, ಕೂಚಿಪುಡಿ ಹಾಗೂ ಕರ್ನಾಟಕ ಸಂಗೀತ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು. ಇದೀಗ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ’ಯಡಿ 25 ಕಾರ್ಯಕ್ರಮಗಳನ್ನು ಆಯೋಜಿಸುತಿದ್ದು, ಇದೇ ಜ.26ರಂದು ಕಲ್ಯಾಣಪುರ ಸಂತೆಕಟ್ಟೆಯ ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸಂಜೆ 5 ಕ್ಕೆ ಅರಳು ಪ್ರತಿಭೆಗಳಾದ ಮೂರು ಜೋಡಿಗಳಿಂದ ಬಾಲ ಯುಗ್ಮ ನೃತ್ಯ ಪ್ರದರ್ಶನ ಆಯೋಜಿಸಿದ್ದಾಗಿ ತಿಳಿಸಿದರು. ನೃತ್ಯ ಕಾರ್ಯಕ್ರಮವನ್ನು ಕೆಮ್ಮಣ್ಣು ಪಡುಕುದ್ರು ಗಣಪತಿ ಮಠದ ಅರ್ಚಕ ನೆಂಪು ಶ್ರೀಧರ ಭಟ್ ಉದ್ಘಾಟಿಸಲಿದ್ದು, ಸಿದ್ಧಕಟ್ಟೆ ನಾಟ್ಯಾಲಯ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಕೆ.ವಿ.ರಮಣಾಚಾರ್ಯ, ಕೆಮ್ಮಣ್ಣಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ಹಾಗೂ ಕಲ್ಯಾಣಪುರ ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು. ಅರಳು ಪತ್ರಿಭೆ ಬಾಲಕಲಾವಿದರಾದ ನಿವೇದಿತಾ ಪೂಜಾರಿ ಮತ್ತು ಹನಿಷ್ಕ ಎನ್.ರಾವ್, ಕ್ಷಿತಿ ಬಿ.ಪೂಜಾರಿ ಮತ್ತು ಸೃಷ್ಟಿ ಅರುಣ್ ಹಾಗೂ ಕಿಯಿರಾ ಸಚಿನ್ ಸುವರ್ಣ ಮತ್ತು ವೈಷ್ಣವಿ ಜೋಡಿ ಇಲ್ಲಿ ನೃತ್ಯ ಪ್ರದರ್ಶನ ನೀಡಲಿ ದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಯೋಗೀಶ್ ಎನ್.ಗಾಣಿಗ ಕೊಳಲಗಿರಿ, ಕೆ.ನಂದಕುಮಾರ್ ರಾವ್ ಹಾಗೂ ದೀಪ್ತಿ ಸುವರ್ಣ ಉಪಸ್ಥಿತರಿದ್ದರು.

ವಾರ್ತಾ ಭಾರತಿ 15 Jan 2026 9:52 pm

PAK, IRAN ಸೇರಿದಂತೆ 75 ದೇಶಗಳಿಗೆ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತ: ಅಮೆರಿಕ ಸೂಚನೆ

ವಾಷಿಂಗ್ಟನ್, ಜ.15: ಸಾರ್ವಜನಿಕ ಕಲ್ಯಾಣ ಪ್ರಯೋಜನಗಳ ಮೇಲೆ ಅವಲಂಬಿತವಾಗಿರುವ ಜನರಿಗೆ ಪ್ರವೇಶವನ್ನು ನಿರ್ಬಂಧಿಸುವ ನವೀಕೃತ ಪ್ರಯತ್ನದ ಭಾಗವಾಗಿ ಅಮೆರಿಕಾದ ವಿದೇಶಾಂಗ ಇಲಾಖೆಯು 75 ದೇಶಗಳ ಅರ್ಜಿದಾರರಿಗೆ ವಲಸೆ ವೀಸಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸೂಚಿಸಿದೆ. ಕಾನ್ಸುಲರ್ ಕಚೇರಿಗಳಿಗೆ ರವಾನಿಸಿರುವ ಮೆಮೋ ಪ್ರಕಾರ, ಇಲಾಖೆ ತನ್ನ ಸ್ಕ್ರೀನಿಂಗ್ ಮತ್ತು ಪುನರ್‌ಪರಿಶೀಲನಾ ಕಾರ್ಯವಿಧಾನಗಳನ್ನು ಮರುಮೌಲ್ಯಮಾಪನ ಮಾಡುವ ಅವಧಿಯಲ್ಲಿ, ಅಸ್ತಿತ್ವದಲ್ಲಿರುವ ವಲಸೆ ಕಾನೂನುಗಳ ಅಡಿಯಲ್ಲಿ ವೀಸಾಗಳನ್ನು ನಿರಾಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕ್ರಮ ಜನವರಿ 21ರಿಂದ ಜಾರಿಗೆ ಬರಲಿದ್ದು, ಅನಿರ್ದಿಷ್ಟಾವಧಿಗೆ ಜಾರಿಯಲ್ಲಿರುತ್ತದೆ. ಪಾಕಿಸ್ತಾನ, ರಷ್ಯಾ, ಇರಾನ್, ಸೊಮಾಲಿಯಾ, ಅಫ್ಘಾನಿಸ್ತಾನ, ಬ್ರೆಜಿಲ್, ಇರಾಕ್, ಈಜಿಪ್ಟ್ ಸೇರಿದಂತೆ ಹಲವು ದೇಶಗಳು ಈ ಪಟ್ಟಿಯಲ್ಲಿ ಸೇರಿವೆ.

ವಾರ್ತಾ ಭಾರತಿ 15 Jan 2026 9:47 pm

ಉಕ್ರೇನ್ ಶಾಂತಿ ಒಪ್ಪಂದ ಸ್ಥಗಿತಕ್ಕೆ ಝೆಲೆನ್‌ ಸ್ಕಿ ಕಾರಣ: ಅಮೆರಿಕ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್, ಜ.15: ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಶಾಂತಿ ಯೋಜನೆ ಸ್ಥಗಿತಗೊಂಡಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿಯೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಸಾವಿರಾರು ಜನರ ಸಾವಿಗೆ ಕಾರಣವಾದ ಸುಮಾರು ನಾಲ್ಕು ವರ್ಷಗಳ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಝೆಲೆನ್‌ಸ್ಕಿಯೇ ಮುಖ್ಯ ಅಡ್ಡಿಯಾಗಿದ್ದಾರೆ ಎಂದು ಶ್ವೇತಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಿದ್ಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ಒಪ್ಪಂದಕ್ಕೆ ಯಾರು ಅಡ್ಡಿಯಾಗಿದ್ದಾರೆ ಎಂಬ ಪ್ರಶ್ನೆಗೆ ‘ಝೆಲೆನ್‌ಸ್ಕಿ, ಒಪ್ಪಂದದ ಹಾದಿಯಲ್ಲಿ ಮುಂದುವರಿಯಲು ಅಧ್ಯಕ್ಷ ಝೆಲೆನ್‌ಸ್ಕಿಯನ್ನು ಸಿದ್ಧಪಡಿಸಬೇಕಿದೆ’ ಎಂದು ಟ್ರಂಪ್ ಉತ್ತರಿಸಿದರು. ಗುಪ್ತಚರ ಮಾಹಿತಿ ಹಂಚಿಕೆಯ ಮೂಲಕ ಉಕ್ರೇನ್‌ ಗೆ ಭದ್ರತಾ ಖಾತರಿ ಒದಗಿಸುವ ಅಮೆರಿಕ ಪ್ರಸ್ತಾಪವನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ‘ನಾವು ಏನಾದರೂ ಮಾಡಲು ಸಾಧ್ಯವಾದರೆ ಸಹಾಯ ಮಾಡುತ್ತೇವೆ. ಯುದ್ಧದಲ್ಲಿ ಅವರು ತಿಂಗಳಿಗೆ ಸುಮಾರು 30,000 ಯೋಧರನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಉತ್ತರಿಸಿದ್ದಾರೆ.

ವಾರ್ತಾ ಭಾರತಿ 15 Jan 2026 9:43 pm

Gazaದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಳ: ಅಧ್ಯಯನ ವರದಿಯಲ್ಲಿ ಉಲ್ಲೇಖ

ಇಸ್ರೇಲ್ ದಾಳಿಯಿಂದ ಆರೋಗ್ಯ ವ್ಯವಸ್ಥೆಗಳಿಗೆ ಹಾನಿ

ವಾರ್ತಾ ಭಾರತಿ 15 Jan 2026 9:42 pm

‘ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ’ ಫೆ.6ಕ್ಕೆ ಮುಂದೂಡಿಕೆ : ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶ

ರಾಯಚೂರು: ಜಿಲ್ಲೆಯಲ್ಲಿ ಜ. 29ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ‘ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ’ವನ್ನು ಇದೀಗ ಫೆಬ್ರವರಿ 6, 7 ಮತ್ತು 8ಕ್ಕೆ ಮುಂದೂಡಲಾಗಿದೆ. ಜಿಲ್ಲಾಧಿಕಾರಿ ನಿತಿಶ್ ಕೆ. ಅವರ ನಿರ್ದೇಶನದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸುಮಾರು 24 ವರ್ಷಗಳ ಸುದೀರ್ಘ ವಿರಾಮದ ನಂತರ ರಾಯಚೂರು ಜಿಲ್ಲಾ ಉತ್ಸವವನ್ನು ಜ. 29, 30 ಮತ್ತು 31ರಂದು ಆಚರಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಉತ್ಸವದ ಯಶಸ್ವಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ 22 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವ ಸಿದ್ಧತಾ ಸಭೆಗಳೂ ಪೂರ್ಣಗೊಂಡಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ವೇದಿಕೆ ನಿರ್ಮಾಣ ಸೇರಿದಂತೆ ಬಹುತೇಕ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದವು. ಆದರೆ, ಈಗ ಅನಿವಾರ್ಯ ಕಾರಣಗಳಿಂದಾಗಿ ಉತ್ಸವದ ದಿನಾಂಕವನ್ನು ಫೆಬ್ರವರಿಗೆ ಮುಂದೂಡಲಾಗಿದ್ದು, ಜಿಲ್ಲಾಡಳಿತದ ಈ ಹಠಾತ್ ನಿರ್ಧಾರಕ್ಕೆ ನಿಖರ ಕಾರಣಗಳು ಇನ್ನು ತಿಳಿದುಬಂದಿಲ್ಲ. 

ವಾರ್ತಾ ಭಾರತಿ 15 Jan 2026 9:39 pm

ಮಾನ್ವಿ | ಜ.18ರಂದು ಉಚಿತ ಸಾಮೂಹಿಕ ವಿವಾಹ : ಯು.ಟಿ. ಖಾದರ್ ಸಹಿತ ಹಲವು ಸಚಿವರ ಆಗಮನ

ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಪಕ್ಕದ ಬಯಲು ಜಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆ ಸಿದ್ಧತೆಗಳನ್ನು ಶಾಸಕ ಹಂಪಯ್ಯನಾಯಕ ಹಾಗೂ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಮಂಗಳವಾರ ಪರಿಶೀಲಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರ ನೇತೃತ್ವದಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ. ಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ರವಿ ಬೋಸರಾಜು, ಜ.18 ರಂದು ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕೈಗೊಳ್ಳಲು ಸಂಘಟಕರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಪಿಐ ಸೋಮಶೇಖರ್, ಎಸ್. ಕೆಂಚರೆಡ್ಡಿ, ಸೈಯದ್ ಅಕ್ಬರ್ ಪಾಷಾ ಹುಸೇನಿ, ಕಾಂಗ್ರೆಸ್ ಮುಖಂಡರಾದ ಖಾಲಿದ್ ಖಾದ್ರಿ, ಅಮ್ಜದ್ ಸೇಠ್, ರಾಜಾ ಸುಭಾಶ್ಚಂದ್ರನಾಯಕ, ಚಂದ್ರಶೇಖರ್ ಕುರುಡಿ, ಆರ್. ಗುರುನಾಥ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 15 Jan 2026 9:33 pm

ಶೀರೂರು ಪರ್ಯಾಯ: ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ, ಜ.15: ಶೀರೂರು ಪರ್ಯಾಯದ ಪ್ರಯುಕ್ತ ಇದೇ ಮೊದಲ ಬಾರಿ ಕೈಗೊಂಡ ಉಡುಪಿ ನಗರ ವಿದ್ಯುತ್ ದೀಪಾಲಂಕಾರವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರು ಇಂದು ಸಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಸ್ವರೂಪ ಟಿ.ಕೆ.,ಮೊದಲ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ವಿಶಿಷ್ಟವಾಗಿ ಸಿಂಗಾರಗೊಂಡ ನಗರ, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ ಎಂದರು. ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್ ಸುವರ್ಣ, ಪರ್ಯಾಯ ಕಾರ್ಯಕ್ರಮಕ್ಕೆ ಹೆಚ್ವಿನ ಮೆರುಗು ನೀಡಲು ಈ ಬಾರಿ ವಿಶೇಷ ವಿದ್ಯುದ್ದೀಪಾಲಂಕಾರದ ವ್ಯವಸ್ಥೆಯನ್ನು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಿದ ಕೃಷ್ಣ ಕುಲಾಲ್ ಅವರನ್ನು ಶಾಸಕರು ಅಭಿನಂದಿಸಿದರು. ಶೀರೂರು ಪರ್ಯಾಯಕ್ಕೆ ಉಡುಪಿ ನಗರ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ಇದರ ಮೆರುಗು ಹೆಚ್ಚಿಸಲು ಈ ಬಾರಿ ಉಡುಪಿ ನಗರಸಭೆ ಅನುದಾನದೊಂದಿಗೆ 50ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೆನರಾಬ್ಯಾಂಕ್‌ನ ಜಿ.ಎಂ. ಗಂಗಾಧರ್, ನಗರಸಭೆ ಆಯುಕ್ತ ಮಹಾಂತೇಶ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ರಜನಿ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಮಹಿಳಾ ಘಟಕದ ಪದ್ಮಲತಾ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 15 Jan 2026 9:30 pm

ಕಲಬುರಗಿ | ಸಿದ್ಧರಾಮೇಶ್ವರರ ತತ್ವಗಳು ಅಳವಡಿಸಿಕೊಳ್ಳಿ : ಮರಲಿಂಗ ಹೊನಗುಂಟಿಕರ್

ಕಲಬುರಗಿ : ಸೊನ್ನಲಗಿಯ ಕರ್ಮಯೋಗಿ ಸಿದ್ಧರಾಮೇಶ್ವರರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ತತ್ವ ಸಿದ್ಧಾಂತಗಳು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ ಹೊನಗುಂಟಿಕರ್ ಅಭಿಪ್ರಾಯಪಟ್ಟರು. ನಿಗಮದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಕರ್ಮಯೋಗಿ ಸಿದ್ಧರಾಮೇಶ್ವರರ ಅವರ ಜಯಂತಿ ನಿಮಿತ್ತ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಸತೀಶ್ ಕುಮಾರ, ಲಗಮಣ್ಣ ಸಿಬ್ಬಂದಿಗಳಾದ ಸಂಜೀವಕುಮಾರ, ಮಹೇಶ ಗುತ್ತೇದಾರ, ಸುನೀಲ, ದೇವೇಂದ್ರ ದೋತ್ರೆ, ಚನ್ನಬಸಪ್ಪ, ಸುನೀಲ್ ಪ್ರತಾಪೆ, ವಿವೇಕ ನಂದಿ, ರಂಗಪ್ಪ, ಹೊನ್ನಪ್ಪ, ರಮೇಶ, ರಾಮಣ್ಣ ಭಂಡಾರಿ, ವಿದ್ಯಾನಂದ ವಡೆಯರ ದಾನಮ್ಮ ಸೇರಿದಂತೆ ಇತರರರು ಇದ್ದರು.

ವಾರ್ತಾ ಭಾರತಿ 15 Jan 2026 9:21 pm

Exit Poll BMC Election 2026: ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಎನ್‌ಡಿಎ ವಿಕ್ಟರಿ, ಗೆಲ್ಲವು ಸೀಟುಗಳೆಷ್ಟು?

ನವದೆಹಲಿ: ಮಹಾರಾಷ್ಟ್ರದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೇರಿ ಒಟ್ಟು 28 ಪಾಲಿಕೆಗಳಿಗೆ ಇಂದು ಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಆಕ್ಸಿಸ್ ಮೈ ಇಂಡಿಯಾದ ನಿರ್ಗಮನ ಸಮೀಕ್ಷೆ (BMC Axis My India Exit Poll 2026) ಪ್ರಕಟಿಸಿತು. ಅದರ ಪ್ರಕಾರ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಉದ್ಧವ್ ಠಾಕ್ರೆ

ಒನ್ ಇ೦ಡಿಯ 15 Jan 2026 9:11 pm

ಇರಾನ್‌ನಿಂದ ಭಾರತೀಯರ ರಕ್ಷಣೆಗೆ ಮೋದಿ ಸರ್ಕಾರದ ಕಾರ್ಯಾಚರಣೆ; ಜ.16ಕ್ಕೆ ಹಾರಲಿದೆ ಮೊದಲ ವಿಮಾನ

ಅಂದುಕೊಂಡಂತೆ ಇರಾನ್‌ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ, ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ನಾಳೆ (ಜ.16-ಶುಕ್ರವಾರ) ಇರಾನ್‌ನಿಂದ ಭಾರತೀಯರನ್ನು ಕರೆತರಲು ಮೊದಲ ವಿಮಾನವು ನವದೆಹಲಿಯಿಂದ ಇರಾನ್‌ನತ್ತ ಹಾರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯರ ರಕ್ಷಣೆಗೆ ಕಟಿಬದ್ಧವಾಗಿದ್ದು, ಅದರಂತೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇದಕ್ಕೆ ಸಾಥ್‌ ನೀಡಲಿದೆ. ಇರಾನ್‌ನಿಂದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ಮೋದಿ ಸರ್ಕಾರದ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 15 Jan 2026 9:09 pm

TATA Mumbai Marathon 2026; ಪ್ಯಾಲಿಯೇಟಿವ್ ಕೇರ್‌ಗಾಗಿ ಮಂಗಳೂರಿನಲ್ಲಿ ₹5 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!

Haseena Themali Contribution To TMM 2026- ಓಟಗಾರ್ತಿ ಹಸೀನಾ ಥೆಮಾಲಿ ಅವರು ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಮೊದಲ ಬಾರಿಗೆ ₹5,01,001 ನಿಧಿ ಸಂಗ್ರಹಿಸಿದ್ದಾರೆ. 95 ದಾನಿಗಳ ನೆರವಿನಿಂದ ಕರ್ನಾಟಕದಲ್ಲಿ ಪ್ಯಾಲಿಯೇಟಿವ್ ಕೇರ್ ಸೇವೆಗಳ ಬಲವರ್ಧನೆಗೆ ಇದು ಕೊಡುಗೆ ನೀಡಿದೆ. ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಸೇವೆ ಒದಗಿಸುವ ತಪಸ್ಯಾ ಫೌಂಡೇಶನ್ ಪರವಾಗಿ ಈ ನಿಧಿ ಸಂಗ್ರಹ ನಡೆದಿದೆ. ಸಂಗ್ರಹಿಸಿದ ಹಣ ಮಂಗಳೂರಿನಲ್ಲಿ ವಿಶ್ವಮಟ್ಟದ ಪ್ಯಾಲಿಯೇಟಿವ್ ಕೇರ್ ಕೇಂದ್ರ ನಿರ್ಮಾಣಕ್ಕೆ ಬಳಕೆಯಾಗಲಿದೆ.

ವಿಜಯ ಕರ್ನಾಟಕ 15 Jan 2026 9:04 pm