SENSEX
NIFTY
GOLD
USD/INR

Weather

23    C
...

Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ

Lunar Eclipse 2026: ಮಾರ್ಚ್ 3ರಂದು ಮಂಗಳವಾರ ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಎಲ್ಲರ ಗಮನ ಈಗ ದೇವಸ್ಥಾನಗಳತ್ತ ನೆಟ್ಟಿದೆ. ಗ್ರಹಣದ 'ಸೂತಕ'ದ ಕಾರಣದಿಂದಾಗಿ ಕರ್ನಾಟಕದ ಕಾಶಿಯಿಂದ ಹಿಡಿದು ತಿರುಪತಿಯವರೆಗೆ ಬಹುತೇಕ ಪ್ರಮುಖ ದೇವಸ್ಥಾನಗಳ ಪೂಜೆ ಮತ್ತು ದರ್ಶನದ ಅವಧಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಮಂಗಳವಾರ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಈ ಗ್ರಹಣವು ಮಧ್ಯಾಹ್ನ

ಒನ್ ಇ೦ಡಿಯ 2 Mar 2026 9:20 am

ಈ ವರ್ಷ ಕರ್ನಾಟಕಕ್ಕೆ ರಣಬಿಸಿಲಿನ ಮುನ್ಸೂಚನೆ, ಉತ್ತರ ಕರ್ನಾಟಕಕ್ಕೆ ಮುಂದಿನ 3 ತಿಂಗಳು ಎಚ್ಚರಿಕೆ

ಈ ವರ್ಷ ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಬಿಸಿಲು ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಮುಂದಿನ ಮೂರು ತಿಂಗಳು ಹೆಚ್ಚು ಬಿಸಿಲಿನ ಅಲರ್ಟ್‌ ಕೊಟ್ಟಿದೆ. ರಾಯಚೂರು, ಕಲಬುರಗಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು ಜನರು ಎಚ್ಚರದಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲು ಹೆಚ್ಚಾದಂತೆ ಮಾರ್ಚ್‌ ಆರಂಭದಲ್ಲೇ ಕೊಂಚ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಹಠಾತ್‌ ಹವಾಮಾನ ಬದಲಾವಣೆಗೆ ಕಾರಣವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.

ವಿಜಯ ಕರ್ನಾಟಕ 2 Mar 2026 9:11 am

Iran Vs Israel War: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಸರಣಿ ದಾಳಿ; ಗಗನಕ್ಕೇರಿದ ಕಚ್ಚಾ ತೈಲ ಬೆಲೆ

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ವಾಣಿಜ್ಯ ಹಡಗುಗಳ ಮೇಲೆ ನಡೆದ ಸರಣಿ ದಾಳಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಜಕೀಯ ಉದ್ವಿಗ್ನತೆಗಳು ಈಗ ಜಾಗತಿಕ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿವೆ. ಹಡಗುಗಳ ಮೇಲಿನ ಈ ಹಠಾತ್

ಒನ್ ಇ೦ಡಿಯ 2 Mar 2026 9:10 am

Iran Vs Israel War: ಇರಾನ್ - ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ

Iran Vs Israel War: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಾರಿ ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿರುವುದು ಯುದ್ಧದ ಸ್ವರೂಪವನ್ನೇ ಬದಲಾಯಿಸಿದೆ. ಇದೀಗ ಈ ಯುದ್ಧವು ಯುರೋಪಿಗೂ ವ್ಯಾಪಿಸುವ ಆತಂಕ ಎದುರಾಗಿದೆ. ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಇರಾನ್ ಇದೀಗ ಮಧ್ಯಪ್ರಾಚ್ಯಾದ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ.

ಒನ್ ಇ೦ಡಿಯ 2 Mar 2026 9:01 am

ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಮೋದಿ ದೂರವಾಣಿ ಮಾತುಕತೆ: ಯುದ್ಧ ನಿಲ್ಲಿಸಲು ಭಾರತ ಆಗ್ರಹ

ಹೊಸದಿಲ್ಲಿ : ಪ್ರಾದೇಶಿಕ ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಧಾನಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳವನ್ನು ಅವರು ವ್ಯಕ್ತಪಡಿಸಿದ್ದು, ನಾಗರಿಕರ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆಯಾಗುವ ಯಾವುದೇ ಕ್ರಮಗಳು ಆತಂಕಕಾರಿ ಎಂಬುದನ್ನೂ ತಿಳಿಸಿದ್ದಾರೆ. ಹಿಂಸಾಚಾರ ಮತ್ತು ಯುದ್ಧ ಪರಿಸ್ಥಿತಿಯಿಂದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಉದ್ವಿಗ್ನತೆಯನ್ನು ಶಮನಗೊಳಿಸುವ ದಿಕ್ಕಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವಿದೆ ಎಂಬ ನಿಲುವನ್ನು ಭಾರತ ಪುನರುಚ್ಚರಿಸಿದೆ. ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 2 Mar 2026 8:59 am

ಕುಡ್ಲದಲ್ಲಿ ಆಯುಷ್ಮತಿ ಕ್ಲಿನಿಕ್‌ಗೆ ಹೆಚ್ಚಿದ ಬೇಡಿಕೆ ; ಗ್ರಾಮೀಣ ಭಾಗಕ್ಕೂ ವಿಸ್ತರಣೆಗೆ ಆಗ್ರಹ

ನಗರ ಭಾಗದಲ್ಲಿ ಕೇಂದ್ರೀಕೃತವಾಗಿ ನಡೆಯುತ್ತಿರುವ ಆಯುಷ್ಮತಿ ಕೇಂದ್ರಗಳು ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಣೆಯಾಗಲಿ. ಹಾಗೆಯೇ ನಗರ ಭಾಗದಲ್ಲಿ ಈಗ ನಾಲ್ಕು ಕೇಂದ್ರಗಳಲ್ಲಿಮಾತ್ರ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿಉಳಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಸೇವೆ ವಿಸ್ತರಣೆಯಾದರೆ ಮತ್ತಷ್ಟು ಲಾಭವಿದೆ ಎಂದು ಮಹಿಳಾ ರೋಗಿ ಅಮಿತಾ ಮೊರಾಸ್‌ ಆಗ್ರಹಿಸಿದ್ದಾರೆ.

ವಿಜಯ ಕರ್ನಾಟಕ 2 Mar 2026 8:56 am

Middle East Crisis: ಯುಎಇ ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಒಗ್ಗಟ್ಟಿನ ಭರವಸೆ: ಸಂಘರ್ಷ ನಿಲ್ಲಿಸುವಂತೆ ಇಸ್ರೆಲ್ ಜೊತೆಗೂ ಮಾತುಕತೆ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ಯುಎಇ ಶಾಂತಿ, ಭದ್ರತೆ , ಸುರಕ್ಷತೆಗಾಗಿ ಒಗ್ಗಟ್ಟಿನಲ್ಲಿ ಇರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 2 Mar 2026 8:17 am

ಸೈಬರ್ ವಂಚನೆ ಬಗ್ಗೆ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ

ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಮಂಗಳೂರು ಪೊಲೀಸರು

ವಾರ್ತಾ ಭಾರತಿ 2 Mar 2026 8:00 am

ಮೈಸೂರಿನಲ್ಲಿ ತಲೆ ಎತ್ತಲಿದೆ ರಾಜ್ಯದಲ್ಲೇ ಅತೀ ದೊಡ್ಡ ಅಗ್ನಿಶಾಮಕ ಠಾಣೆ

ಮೈಸೂರಿನ ಅಗ್ನಿಶಾಮಕ ಠಾಣೆಯನ್ನು ರಾಜ್ಯದಲ್ಲಿಯೇ ಬೃಹತ್‌ ಅಗ್ನಿಶಾಮಕ ಠಾಣೆಯನ್ನಾಗಿ ಪರಿವರ್ತಿಸುವ 30 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದು ರಾಜ್ಯದಲ್ಲಿಯೇ ಅತೀ ದೊಡ್ಡ ಅಗ್ನಿಶಾಮಕ ಠಾಣೆ ಆಗಿರಲಿದೆ.

ವಿಜಯ ಕರ್ನಾಟಕ 2 Mar 2026 7:53 am

Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ

ಬೆಂಗಳೂರು: ಮದುವೆ ಸೀಸನ್ ನಡುವೆಯೇ ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Price) ಶಾಕ್ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತಗಳ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆಯೂ ಬೀರಿದೆ. ಇಂದು (ಮಾರ್ಚ್ 02, 2026) ಚಿನ್ನದ ದರದಲ್ಲಿ ಭಾರಿ

ಒನ್ ಇ೦ಡಿಯ 2 Mar 2026 7:48 am

ಇರಾನ್ ಮೇಲೆ ಯುದ್ಧ: ಜಾಗತಿಕ ವಿಮಾನಯಾನ ಸೇವೆ ಅಸ್ತವ್ಯಸ್ತ

ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಹಾಗೂ ಇರಾನ್ ನ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಅಂದರೆ ಯುಎಇನಿಂದ ಹಿಡಿದು ಇಸ್ರೇಲ್ ವರೆಗೂ ವಿಮಾನಯಾನ ಸೇವೆ ಅಸ್ತವ್ಯಸ್ತಗೊಂಡಿದೆ. ಎಮಿರೇಟ್ಸ್, ಇತ್ತಿಹಾದ್ ಹಾಗೂ ಕತಾರ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ರವಿವಾರ ಸಂಜೆಯವರೆಗೆ ಸುಮಾರು 1600ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿವೆ. ಭಾರತದ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್ಇಂಡಿಯಾ ಮತ್ತು Akasa air ಸುಮಾರು 350 ವಿಮಾನಗಳ ಸಂಚಾರವನ್ನು ರದ್ದುಪಡಿಸಿವೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಬಹಳಷ್ಟು ವಿಮಾನಯಾನ ಕಂಪನಿಗಳು ಸೋಮವಾರದ ವರೆಗೆ ಸೇವೆ ರದ್ದುಪಡಿಸಿರುವುದಾಗಿ ಘೋಷಿಸಿವೆ. ಯುದ್ಧವಲಯದಲ್ಲಿ ಸಂಚಾರ ಸುರಕ್ಷಿತ ಎಂಬ ವಾತಾವರಣ ನಿರ್ಮಾಣವಾದ ಬಳಿಕವಷ್ಟೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಏತನ್ಮಧ್ಯೆ ಏರ್ಇಂಡಿಯಾ ಹೇಳಿಕೆ ನೀಡಿ, ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ, ಲಭ್ಯವಿರುವ ಪಶ್ಚಿಮ ಏಷ್ಯಾದ ಉಳಿಕೆ ಭಾಗವನ್ನು ಬಳಸಿಕೊಂಡು ಪರ್ಯಾಯ ಮಾರ್ಗದ ಮೂಲಕ ವಿಮಾನಗಳನ್ನು ಹಾರಿಸಲಾಗುವುದು. ಇದರಿಂದ ಹಾರಾಟದ ಅವಧಿ ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದೆ. ನ್ಯೂಯಾರ್ಕ್ ನ ಜೆಎಫ್ ಕೆ ಹಾಗೂ ಲಿಬರ್ಟಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಗಳಿಗೆ ತೆರಳುವ ವಿಮಾನಗಳು ರೋಮ್ ನಲ್ಲಿ ತಾಂತ್ರಿಕ ನಿಲುಗಡೆ ನೀಡಿ ಮುಂದುವರಿಯಲಿವೆ ಎಂದು ತಿಳಿಸಿದೆ. ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ, ಲುಫ್ತಾನ್ಸಾ ಏರ್ಲೈನ್ಸ್ನಂಥ ಸಂಸ್ಥೆಗಳಿಗೆ ಲಭ್ಯವಿರುವ ಪಾಕಿಸ್ತಾನ-ಸಿಐಎಸ್ ಮಾರ್ಗವಾಗಿ ಪಾಶ್ಚಿಮಾತ್ಯದೇಶಗಳಿಗೆ ಸಂಚರಿಸುವ ಮಾರ್ಗ ಲಭ್ಯವಿಲ್ಲ. ಪಾಶ್ಚಿಮಾತ್ಯ ದೇಶಗಳಿಗೆ ಏರ್ಇಂಡಿಯಾ 125 ವಿಮಾನಗಳ ಸೇವೆಯನ್ನು ರದ್ದುಪಡಿಸಿವೆ. ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಹಾಗೂ ಕತಾರ್ ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ.

ವಾರ್ತಾ ಭಾರತಿ 2 Mar 2026 7:37 am

ಅಮೆರಿಕಾ-ಇರಾನ್ ಸಂಘರ್ಷ: ಸಮುದ್ರ ಮಾರ್ಗ ಬಂದ್‌ ಭೀತಿ : ಭಾರತದಲ್ಲಿ ತೈಲ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಆತಂಕ

ಭಾರತ ಹಾಗೂ ಇರಾನ್ ನಡುವೆ ವ್ಯಾಪಾರ ವಹಿವಾಟಿನ ಉತ್ತಮ ಸಂಬಂಧವಿದ್ದು, ಇರಾನ್ ಸಮುದ್ರ ಮಾರ್ಗವನ್ನೇ ಭಾರತ ಆಮದು-ರಫ್ತಿಗಾಗಿ ಅವಲಂಬಿಸಿದೆ. ಆದರೆ ಈಗ ಅಮೆರಿಕ- ಇರಾನ್ ಮಧ್ಯೆ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಸಮುದ್ರ ಮಾರ್ಗ ಬಂದ್ ಆದರೆ, ಭಾರತದ ರಫ್ತು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ವಿಜಯ ಕರ್ನಾಟಕ 2 Mar 2026 7:10 am

ಇರಾನ್ ಮೇಲೆ ದಾಳಿ: ಜಾಗತಿಕ ತೈಲ ಮಾರುಕಟ್ಟೆಯಲ್ಲೂ ತಲ್ಲಣ, ದಿಢೀರ್ ಬೆಲೆ ಏರಿಕೆ

ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚದ ಮೇಲೆ ಈ ಸಂಘರ್ಷದ ವಿಸ್ತೃತ ಪರಿಣಾಮವಾಗುವ ಭೀತಿಯ ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಇಂಧನ ಪೂರೈಕೆ ವ್ಯವಸ್ಥೆ ವ್ಯತ್ಯಯವಾಗುವ ಭೀತಿಯಿಂದ ತೈಲ ಬೆಲೆ ದಿಢೀರ್ ಶೇಕಡ 10ರಷ್ಟು ಹೆಚ್ಚಳವಾಗಿದೆ. ಸೋಮವಾರ ನಸುಕಿನ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಮತ್ತು ನೈಮೆಕ್ಸ್ ಲೈಟ್ ಸ್ವೀಟ್ ಕ್ರೂಟ್ ಜಿಗಿತ ಕಂಡಿದೆ. ಬ್ರೆಂಟ್ ಬೆಲೆ ಒಂದು ಹಂತದಲ್ಲಿ ಶೇಕಡ 12ರಷ್ಟು ಏರಿಕೆ ಕಂಡು ಬ್ಯಾರಲ್ ಗೆ 82 ಡಾಲರ್ ಗೆ ಹೆಚ್ಚಿದೆ. ಶುಕ್ರವಾರ ಈ ಬೆಲೆ ಬ್ಯಾರಲ್ ಗೆ 73 ಡಾಲರ್ ನಷ್ಟು ಇತ್ತು. ಏಷ್ಯಾದಲ್ಲಿ ಬೆಳಿಗ್ಗೆಯ ವೇಳೆಗೆ ಬಲೆ ಪ್ರತಿ ಬ್ಯಾರಲ್ ಗೆ 79.30 ಡಾಲರ್ ಇದೆ. ಅಮೆರಿಕದ ಕಚ್ಚಾತೈಲ ಬೆಲೆ 8 ಡಾಲರ್ ಅಥವಾ ಶೇಕಡ 12ರಷ್ಟು ಏರಿಕೆ ಕಂಡಿದ್ದು, ಬ್ಯಾರಲ್ ಗೆ 75 ಡಾಲರ್ ಇದೆ. ಪಶ್ಚಿಮ ಟೆಕ್ಸಸ್ ಇಂಟರ್ ಮೀಡಿಯೇಟ್ ಶೇಕಡ 8ರಷ್ಟು ಏರಿಕೆ ಕಂಡು ಬ್ಯಾರಲ್ ದರ 72 ಡಾಲರ್ ಗೆ ಏರಿದೆ. ಇಡೀ ವರ್ಷದಲ್ಲಿ ಏರುಗತಿಯಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇದೀಗ ಮತ್ತೆ ಜಿಗಿತ ಕಂಡಿದೆ. ಕಳೆದ ಜನವರಿಯಿಂದೀಚೆಗೆ ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಬೆಲೆ ಶೇಕಡ 20ರಷ್ಟು ಜಿಗಿತ ಕಂಡಿದೆ. ಸಂಘರ್ಷ ಮತ್ತಷ್ಟು ಉಲ್ಬಣವಾದಲ್ಲಿ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಇಡೀ ಪರಿಸ್ಥಿತಿ ಇರಾನ್ ನ ಪ್ರತಿದಾಳಿಯ ತೀವ್ರತೆಯನ್ನು ಅವಲಂಬಿಸಿದೆ ಎಂದು ತಜ್ಞರು ಹೇಳಿದ್ದಾರೆ. ಮುಖ್ಯವಾಗಿ ಪರ್ಶಿಯನ್ ಕೊಲ್ಲಿಗೆ ಪ್ರವೇಶ ನೀಡುವ ಹೊರ್ಮಝ್ ಕೊಲ್ಲಿಯ ಸುತ್ತ ಆತಂಕದ ವಾತವರಣವಿದ್ದು, ಪ್ರತಿ ದಿನ ಇಲ್ಲಿ 15 ದಶಲಕ್ಷ ಬ್ಯಾರಲ್ ತೈಲ ಸಾಗಾಣಿಕೆಯಾಗುತ್ತದೆ. ಇದು ಜಾಗತಿಕ ಪೂರೈಕೆಯ ಶೇಕಡ 20ರಷ್ಟಾಗಿದೆ. ಈ ಮಾರ್ಗದ ಮೂಲಕ ಸೌದಿ ಅರೇಬಿಯಾ, ಕುವೈತ್, ಇರಾಕ್, ಕತಾರ್, ಬಹರೈನ್, ಯುಎಇ ಮತ್ತು ಇರಾನ್ ನಿಂದ ತೈಲ ಹಾಗೂ ಅನಿಲ ಪೂರೈಕೆಯಾಗುತ್ತದೆ.

ವಾರ್ತಾ ಭಾರತಿ 2 Mar 2026 7:10 am

ವಿಮುಕ್ತ ದೇವದಾಸಿ ಸಮುದಾಯದ ಮಕ್ಕಳ ವಿವಾಹ ಪ್ರೋತ್ಸಾಹಧನಕ್ಕೆ ಕೊಕ್ಕೆ

ವಿಮುಕ್ತ ದೇವದಾಸಿ ಸಮುದಾಯದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿವಾಹ ಪ್ರೋತ್ಸಾಹಧನ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ಯೋಜನೆಯೇನೋ ಜಾರಿಯಲ್ಲಿದೆ ಆದರೆ ಫಲಾನುಭವಿಗಳಿಗೆ ಪ್ರೋತ್ಸಾಹಧನವೇ ಸಿಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನೂರಾರು ಅರ್ಜಿಗಳು ಅನುಮೋದನೆ ಮತ್ತು ಅನುದಾನ ಬಿಡುಗಡೆಯ ಹಂತದಲ್ಲಿಯೇ ಬಾಕಿ ಉಳಿದಿವೆ.

ವಿಜಯ ಕರ್ನಾಟಕ 2 Mar 2026 7:04 am

ಇರಾನ್ ವಿರುದ್ಧದ ಯುದ್ಧ ನಾಲ್ಕು ವಾರಗಳವರೆಗೆ ಮುಂದುವರಿಯಬಹುದು: ಅಮೆರಿಕ ಅಧ್ಯಕ್ಷ ಟ್ರಂಪ್

‘ಎಲ್ಲಾ ಉದ್ದೇಶಗಳು ಸಾಧಿಸುವವರೆಗೆ ಕಾರ್ಯಾಚರಣೆ ನಿಲ್ಲದು'

ವಾರ್ತಾ ಭಾರತಿ 2 Mar 2026 5:55 am

ಬೆಂಗಳೂರು -ಹೈದರಾಬಾದ್‌ ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ವೇಗ: ರಾಜ್ಯಕ್ಕೆ ಆಗಮಿಸಿದ ಕೇಂದ್ರ ತಂಡ, ಬಜೆಟ್‌ ಘೋಷಣೆ ಬೆನ್ನಲ್ಲೇ ಅನುಷ್ಠಾನ ಶುರು

ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪ್ರಯಾಣ ಅವಧಿ 8.5 ತಾಸನ್ನು 2 ಗಂಟೆ ಇಳಿಸುವ ಹೈಸ್ಪೀಡ್ ರೈಲು ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆ ಆರಂಭಗೊಂಡಿದೆ.

ವಿಜಯ ಕರ್ನಾಟಕ 2 Mar 2026 5:45 am

ರಾಜಧಾನಿ ಬೆಂಗಳೂರಿನ ಆಚೆಗೂ ಬೇಕಿದೆ ಐಟಿ ಬೂಸ್ಟ್‌: ಹಳೆ ಮೈಸೂರಿನಿಂದ ಕಿತ್ತೂರು-ಕಲ್ಯಾಣದವರೆಗೂ ನಡೆಯಲಿ ಡಿಜಿಟಲ್ ಕ್ರಾಂತಿ

ಬೆಂಗಳೂರಿನ ಒತ್ತಡ, ಟ್ರಾಫಿಕ್ , ಸಂಪನ್ಮೂಲ ಬ:ಕೆ ಕಡಿಮೆ ಮಾಡಲು ನಗರದ ಇತರ ಬಲಿಷ್ಠ ಜಿಲ್ಲೆಗಳಲ್ಲಿಯೂ ಡಿಜಿಟಲ್ ಕ್ರಾಂತಿ ಗಾಗಿ ಸರಕಾರ ಬಿಯಾಂಡ್ ಬೆಂಗಳೂರು ಮಿಷಿನ್ ಆರಂಭಿಸಿದ್ದರೂ, ಇದು ನಿಧಾನಗತಿಯಲ್ಲಿದೆ. ಮೈಸೂರು ಹಾಗೂ ಮಂಗಳೂರಲ್ಲಿ ಈ ನಿಟ್ಟಿನ ಬದಲಾವಣೆಗಳು ಕಾಣುತ್ತಿದ್ದು, ಹುಬ್ಬಳ್ಳಿ ಧಾರವಾಡದಲ್ಲಿ ಮೂಲಸೌಕರ್ಯ ಸುಧಾರಣೆಯಲ್ಲಿ ಹಿನ್ನಡೆಯಾಗಿದೆ.

ವಿಜಯ ಕರ್ನಾಟಕ 2 Mar 2026 5:21 am

ಇರಾನ್‌ನ ಹೊಸ ನಾಯಕತ್ವದೊಂದಿಗೆ ಮಾತುಕತೆಗೆ ಟ್ರಂಪ್ ಮುಕ್ತ: ವೈಟ್ ಹೌಸ್

ವಾಷಿಂಗ್ಟನ್: ಇರಾನ್‌ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಬಳಿಕ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಹೊಸ ನಾಯಕತ್ವದೊಂದಿಗೆ ಮಾತುಕತೆಗೆ ಮುಕ್ತರಾಗಿದ್ದಾರೆ ಎಂದು ವೈಟ್ ಹೌಸ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಖಾಮಿನೈ ಅವರ ಹತ್ಯೆಯ ನಂತರ ನಡೆಯುತ್ತಿರುವ ಬೆಳವಣಿಗೆಗಳ ಕುರಿತು Aljazeeea ಗೆ ಪ್ರತಿಕ್ರಿಯಿಸಿದ ಅಧಿಕಾರಿ, “ಖಾಮಿನೈ ನಂತರ ಅಧಿಕಾರಕ್ಕೆ ಬರುವ ಇರಾನ್‌ ನ ನಾಯಕರು ಅಮೆರಿಕದೊಂದಿಗೆ ಸಂವಾದ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ. ಇದೇ ವಿಷಯವನ್ನು ಟ್ರಂಪ್ ಅವರು ಇಂದು ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲೂ ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ವೈಟ್ ಹೌಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಭದ್ರತೆ ಮತ್ತು ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸುವ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 2 Mar 2026 3:36 am

ಇಸ್ರೇಲ್ ನ ಜೆರುಸಲೆಮ್‌ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ; ಸೈರನ್‌ ಗಳ ನಡುವೆ ಸರಣಿ ಸ್ಫೋಟದ ಸದ್ದು

ಜೆರುಸಲೆಮ್: ಇರಾನ್‌ ನಿಂದ ಉಡಾಯಿಸಲಾದ ಕ್ಷಿಪಣಿಗಳು ಜೆರುಸಲೆಮ್ ನಗರದ ಮೇಲೆ ನೇರ ದಾಳಿ ನಡೆಸಿವೆ ಎಂದು Aljazeera ವರದಿ ಮಾಡಿದೆ. ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಹಾರಿಸಲ್ಪಟ್ಟಿರುವುದನ್ನು ಇಸ್ರೇಲ್ ಸೇನೆ ಪತ್ತೆಹಚ್ಚಿದ ಬಳಿಕ ಪಶ್ಚಿಮ ಜೆರುಸಲೆಮ್‌ ನಲ್ಲಿ ವಾಯುದಾಳಿ ಎಚ್ಚರಿಕಾ ಸೈರನ್‌ಗಳು ಮೊಳಗಿದವು. ಇದಾದ ನಂತರ ನಗರದಲ್ಲಿ ಜೋರಾಗಿ ಸರಣಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ. “ಸ್ವಲ್ಪ ಸಮಯದ ಹಿಂದೆ, ಇರಾನ್‌ ನಿಂದ ಇಸ್ರೇಲ್ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ನಾವು ಗುರುತಿಸಿದ್ದೇವೆ,” ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. “ಅಪಾಯವನ್ನು ತಡೆಯಲು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ,” ಎಂದು ಸೇನೆ ಸ್ಪಷ್ಟಪಡಿಸಿದೆ. ಸೈರನ್‌ ಗಳು ಮೊಳಗುತ್ತಿದ್ದಂತೆಯೇ ನಾಗರಿಕರು ಸುರಕ್ಷಿತ ಆಶ್ರಯ ಸ್ಥಳಗಳಿಗೆ ತೆರಳುವಂತೆ ಹಾಗೂ ಮುಂದಿನ ಸೂಚನೆ ಸಿಗುವವರೆಗೆ ಅಲ್ಲೇ ಉಳಿಯುವಂತೆ ಇಸ್ರೇಲಿ ಸೇನೆ ಮನವಿ ಮಾಡಿದೆ. ಪಶ್ಚಿಮ ಜೆರುಸಲೆಮ್‌ ನ ಹಲವು ಭಾಗಗಳಲ್ಲಿ ಸ್ಫೋಟಗಳ ಸರಣಿ ಕೇಳಿಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ವಾರ್ತಾ ಭಾರತಿ 2 Mar 2026 3:11 am

ವಾಯುದಾಳಿಯಲ್ಲಿ ಇರಾನಿನ 7 ಮಿಲಿಟರಿ ಕಮಾಂಡರ್‌ ಗಳ ಹತ್ಯೆ: ವರದಿ

ಟೆಹ್ರಾನ್: ಇರಾನ್‌ ನಲ್ಲಿ ನಡೆದ ವಾಯುದಾಳಿಯಲ್ಲಿ ದೇಶದ ಏಳು ಹಿರಿಯ ಮಿಲಿಟರಿ ಕಮಾಂಡರ್‌ ಗಳು ಸಾವನ್ನಪ್ಪಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು Aljazeera ವರದಿ ಮಾಡಿದೆ. ಸಾವನ್ನಪ್ಪಿದವರಲ್ಲಿ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಕಚೇರಿಯ ಮುಖ್ಯಸ್ಥ ಹಾಗೂ ಬಸಿಜ್ ಪಡೆಗೆ ಸಂಬಂಧಿಸಿದ ಮೇಜರ್ ಜನರಲ್ ಶಾಹಿದ್ ಮೊಹಮ್ಮದ್ ಶಿರಾಝಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಅವರು ಸೈನಿಕ ವ್ಯವಸ್ಥೆಯ ಪ್ರಮುಖ ಹುದ್ದೆಯನ್ನು ವಹಿಸಿಕೊಂಡಿದ್ದರು . ಇದೇ ವೇಳೆ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ ನ ಗುಪ್ತಚರ ವಿಭಾಗದ ಉಪ ಮುಖ್ಯಸ್ಥ ರೈಡರ್ ಜನರಲ್ ಶಾಹಿದ್ ಸಲೇಹ್ ಅಸಾದಿ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಚಟುವಟಿಕೆಗಳ ಸಂಯೋಜನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ. ಮೃತರಾದ ಇತರ ಕಮಾಂಡರ್‌ ಗಳ ವಿವರಗಳನ್ನು ಇನ್ನೂ ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ. ದಾಳಿಯ ಸ್ವರೂಪ, ಗುರಿ ಹಾಗೂ ಪರಿಣಾಮಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಾರ್ತಾ ಭಾರತಿ 2 Mar 2026 2:47 am

UAEನಲ್ಲಿ ಪರಿಸ್ಥಿತಿ ಸುರಕ್ಷಿತ: ಆಂತರಿಕ ಸಚಿವಾಲಯದಿಂದ ಜನರಿಗೆ ಮೊಬೈಲ್ ನಲ್ಲಿ ಸಲಹೆ

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ ನ ಆಂತರಿಕ ಸಚಿವಾಲಯವು ದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿ ಸುರಕ್ಷಿತವಾಗಿದ್ದು, ನಿಯಂತ್ರಣದಲ್ಲಿದೆ ಎಂದು ಪ್ರಕಟಿಸಿದೆ. ಈ ಸಂಬಂಧ ಸಾರ್ವಜನಿಕರಿಗೆ ಸಲಹೆ ನೀಡಿರುವ ಸಚಿವಾಲಯ, ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಪರಿಸ್ಥಿತಿ ಪ್ರಸ್ತುತ ಸುರಕ್ಷಿತವಾಗಿದೆ ಎಂಬುದಾಗಿ ನಾವು ಭರವಸೆ ನೀಡುತ್ತೇವೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾಗರಿಕರು ಹಾಗೂ ನಿವಾಸಿಗಳು ಜಾಗರೂಕರಾಗಿರಬೇಕು ಎಂದು ಮನವಿ ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಾ, ಸಂಬಂಧಿತ ಅಧಿಕಾರಿಗಳ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ವದಂತಿಗಳಿಗೆ ಒಳಗಾಗದೇ, ಅಧಿಕೃತ ಮಾಹಿತಿಗಳನ್ನೇ ನಂಬುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಇದೊಂದಿಗೇ, ಜನರು ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಹಂತ ಹಂತವಾಗಿ ಪುನರಾರಂಭಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಸಾರ್ವಜನಿಕ ಸುರಕ್ಷತೆ ಕಾಪಾಡಲು ಅಗತ್ಯ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಹೇಳಲಾಗಿದೆ.

ವಾರ್ತಾ ಭಾರತಿ 2 Mar 2026 2:36 am

ಇರಾನ್ ನ IRGCCಯ ಪ್ರಧಾನ ಕಚೇರಿ ಧ್ವಂಸ: ಅಮೆರಿಕದಿಂದ ಘೋಷಣೆ

ವಾಷಿಂಗ್ಟನ್: ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ IRGCCಯ ಪ್ರಧಾನ ಕಚೇರಿಯನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಸೇನೆ ಘೋಷಿಸಿದೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆಯಲ್ಲಿ , “ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಮಿಲಿಟರಿಯನ್ನು ಅಮೆರಿಕ ಹೊಂದಿದೆ. ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿಲ್ಲ,” ಎಂದು ಹೇಳಿದೆ. ಕಳೆದ 47 ವರ್ಷಗಳಲ್ಲಿ IRGCCಯು ಸಾವಿರಕ್ಕೂ ಹೆಚ್ಚು ಅಮೆರಿಕನ್ನರನ್ನು ಹತ್ಯೆ ಮಾಡಿದೆ ಎಂದು ಸೆಂಟ್‌ಕಾಮ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಮುಷ್ಕರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. The Iranian Islamic Revolutionary Guard Corps (IRGC) killed more than 1,000 Americans over the past 47 years. Yesterday, a large-scale U.S. strike cut off the head of the snake. America has the most powerful military on earth, and the IRGC no longer has a headquarters. pic.twitter.com/WdpN7JBECr — U.S. Central Command (@CENTCOM) March 1, 2026

ವಾರ್ತಾ ಭಾರತಿ 2 Mar 2026 2:05 am

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ : ಕೆ.ಎಸ್.ಈಶ್ವರಪ್ಪ

ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಎಂದೆಂದೂ ಬಂದಿಲ್ಲ. ಈ ಹಿಂದೆ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದೆ ಎಂದು ನಾನು ಮೊದಲೇ ಹೇಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆಡೆ ಹೋಗಲ್ಲ. ಆದರೆ, ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು. ಮುಂದಿನ ದಿನಗಳಲ್ಲಿ ಶುದ್ದೀಕರಣ ಆಗುವ ವಿಶ್ವಾಸವಿದ್ದು, ಆ ಬಳಿಕ ಪಕ್ಷಕ್ಕೆ ಹೋಗುತ್ತೇನೆ ಎಂದರು. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ, ಶಾಸಕರಿಗೆ ಅನುದಾನ ಬರುತ್ತಿಲ್ಲ. ಅನುದಾನವನ್ನು ಕಾಂಗ್ರೆಸ್ ಶಾಸಕರು ಬಾಯಿ ಬಿಟ್ಟು ಕೇಳುವ ಸ್ಥಿತಿಯಲ್ಲಿ ಇಲ್ಲ. ಏನಾದರೂ ಕೇಳಿದರೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೈ ತಪ್ಪುತ್ತದೆ ಎನ್ನುವ ಭಯ. ಈ ಸರಕಾರದಲ್ಲಿ ಎಲ್ಲರಿಗೂ ಅಧಿಕಾರ ದಾಹ ಆರಂಭವಾಗಿದ್ದು, ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಈಶ್ವರಪ್ಪ ಟೀಕಿಸಿದರು.

ವಾರ್ತಾ ಭಾರತಿ 2 Mar 2026 1:25 am

ದುಬೈನಲ್ಲಿ ಸಿಲುಕಿದ ಡಾ.ಪುಷ್ಪಾ ಅಮರನಾಥ್

ಮೈಸೂರು : ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಪತ್ರಿಕೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಅವರು ಇರಾನ್-ಇಸ್ರೇಲ್ ನಡುವೆ ನಡೆದ ಯುದ್ಧದ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬರಲಾಗದೆ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಈ ಸಂಬಂಧ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡಿದೆ. ನಾವು ಬರಬೇಕಿದ್ದ ವಿಮಾನ ರದ್ದಾಗಿದೆ. ಹಾಗಾಗಿ ನಾವುಗಳು ದುಬೈನಲ್ಲೇ ಉಳಿದುಕೊಳ್ಳಬೇಕಿದೆ. ಇಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ಹೋಟೆಲ್‌ನಲ್ಲಿ ತಂಗಲು ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನಾಳೆ ಅಥವಾ ನಾಡಿದ್ದು ವಿಮಾನಗಳ ಹಾರಾಟ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ನಾವು ಸುರಕ್ಷಿತವಾಗಿ ಭಾರತಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 2 Mar 2026 1:22 am

Shivamogga : ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಶಿವಮೊಗ್ಗ : ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪನವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸೊರಬ ತಾಲೂಕಿನ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯತ್‌ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ಮಾಡಿಸುವ ಮೂಲಕ ಹೊಸ ಮಾದರಿಯನ್ನು ತೋರಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕ್ಷಿಯಾದರು. ಸಚಿವ ಮಧು ಬಂಗಾರಪ್ಪನವರಿಗೆ ಜನ್ಮದಿನದ ಶುಭಾಶಯ ಕೋರಿದ ಸಿಎಂ, ಬಳಿಕ ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದ ಪೌರಕಾರ್ಮಿಕರೊಂದಿಗೆ ಮಾತನಾಡಿದರು. ʼಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸಿ ಮತ್ತು ಅವರಿಗೆ ವಿಮಾನಯಾನದಂತಹ ಅಪರೂಪದ ಅವಕಾಶ ಕಲ್ಪಿಸುವುದು ಶ್ಲಾಘನೀಯ ಕೆಲಸʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಸೇವೆಯನ್ನು ಗುರುತಿಸಿ ಇಂತಹದೊಂದು ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಋಣಿ ಎಂದು ಕಾರ್ಮಿಕರು ಭಾವುಕರಾಗಿ ಮಾತನಾಡಿದರು.

ವಾರ್ತಾ ಭಾರತಿ 2 Mar 2026 1:18 am

Sagara | ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ; ʼಮಕ್ಕಳ ಕಳ್ಳʼನೆಂದು‌ ಕಂಬಕ್ಕೆ ಕಟ್ಟಿ ಹಾಕಿದ ಸ್ಥಳೀಯರು!

ಸಾಗರ : ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ʼಮಕ್ಕಳ ಕಳ್ಳʼನೆಂದು‌ ಭಾವಿಸಿದ ಸ್ಥಳೀಯರು ಆತನನ್ನು ಪೋಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ನಡೆದಿದೆ. ತಾಲೂಕಿನ ತ್ಯಾಗರ್ತಿ ಮೂಲದ ಬಾಲಕನೊಬ್ಬ ರವಿವಾರ ಮಧ್ಯಾಹ್ನ ಜನ್ನತ್‌ ನಗರಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದನು. ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಭೇಟಿಯಾಗುವುದು ಆತನ ಉದ್ದೇಶವಾಗಿತ್ತು ಎನ್ನಲಾಗಿದೆ. ಆದರೆ, ಬುರ್ಖಾ ತೊಟ್ಟಿದ್ದ ಆತನ ನಡವಳಿಕೆ ಅಸಹಜವಾಗಿ ಕಂಡಿದ್ದರಿಂದ ಸ್ಥಳೀಯ ಮಕ್ಕಳು ಭಯಭೀತರಾಗಿದ್ದಾರೆ. ಈಗಾಗಲೇ ಹರಡಿರುವ ವದಂತಿಗಳಿಂದ ಪ್ರಭಾವಿತರಾಗಿದ್ದ ಮಕ್ಕಳು ಹಾಗೂ ಸ್ಥಳೀಯರು, ಆತನನ್ನು ಮಕ್ಕಳನ್ನು ಅಪಹರಿಸಲು ಬಂದ ಕಳ್ಳನೆಂದು ಭಾವಿಸಿದ್ದಾರೆ. ಸಂಶಯಗೊಂಡ ಸ್ಥಳೀಯರು ಬಾಲಕನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರ ಟೌನ್ ಪೊಲೀಸರು ಯುವಕನನ್ನು ಜನರ ಸಂಘರ್ಷದಿಂದ ಬಿಡಿಸಿ ವಶಕ್ಕೆ ಪಡೆದಿದ್ದಾರೆ. ನಂತರ ನಡೆಸಿದ ತೀವ್ರ ವಿಚಾರಣೆಯಲ್ಲಿ, ಆತ ಕಳ್ಳನಲ್ಲ ಎಂಬುದು ಹಾಗೂ ಕೇವಲ ತನ್ನ ಪ್ರೇಯಸಿಯನ್ನು ಕಾಣಲು ಈ ವೇಷ ಧರಿಸಿ ಬಂದಿದ್ದ ಎಂಬ ಸತ್ಯಾಂಶ ಹೊರಬಿದ್ದಿದೆ.

ವಾರ್ತಾ ಭಾರತಿ 2 Mar 2026 1:09 am

ಇಸ್ರೇಲ್‌- ಇರಾನ್‌ ಸಂಘರ್ಷದ ಬಳಿಕ ಮತ್ತೊಮ್ಮೆ ಬಯಲಾಯ್ತು ಚೀನಾದ ಯುದ್ಧೋಪಕರಣಗಳ ಕಳಪೆ ಗುಣಮಟ್ಟ!

ಭಾರತ ನಡೆಸಿದ ಆಪರೇಶನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನ ನೆಚ್ಚಿಕೊಂಡಿದ್ದ ಚೀನಾ ನಿರ್ಮಿತ ರಕ್ಷಣಾ ಉಪಕರಣದ ಹಣೆಬರಹ ಜಗಜ್ಜಾಹೀರಾಗಿತ್ತು. ಇದೀಗ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಇರಾನ್ ಬಳಸಿದ ಚೀನಾದ 'ಎಚ್‌ಕ್ಯೂ-9ಬಿ' ವಾಯು ರಕ್ಷಣಾ ವ್ಯವಸ್ಥೆಯು ವಿಫಲವಾಗಿದ್ದು, ಚೀನಾ ನಿರ್ಮಿತ ರಕ್ಷಣಾ ಉಪಕರಣಗಳ ಗುಣಮಟ್ಟದ ಮೇಲೆ ಅನುಮಾನ ಮೂಡಿಸಿದೆ. ಏತನ್ಮಧ್ಯೆ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿರುವ ಜಂಟಿ ದಾಳಿಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ಖಂಡನೆ ವ್ಯಕ್ತಪಡಿಸಿವೆ.

ವಿಜಯ ಕರ್ನಾಟಕ 2 Mar 2026 12:43 am

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ : ಶಾಲಿನಿ ರಜನೀಶ್

ಬೆಂಗಳೂರು, ಮಾ.1: ಇಸ್ರೇಲ್-ಇರಾನ್ ಯುದ್ಧದ ಭೀತಿಯಿಂದಾಗಿ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ವಿದೇಶದಲ್ಲಿರುವ ಕನ್ನಡಿಗರ ಸುರಕ್ಷತೆಗಾಗಿ ಸರಕಾರವು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಹೆಸರನ್ನು ನೋಂದಾಯಿಸಲು ಮತ್ತು ಮುಂದಿನ ನೆರವು, ರಕ್ಷಣಾ ಕಾರ್ಯಕ್ಕಾಗಿ ನಾವು ಎಲ್ಲ ಅಗತ್ಯ ವಿವರಗಳನ್ನು (ದೂರವಾಣಿ ಸಂಖ್ಯೆಗಳು ಮತ್ತು ಮಾಹಿತಿ) ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಗಳಿಗೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 2 Mar 2026 12:39 am

ಸತ್ಯಪಂಥದಿಂದ ಸಮಸಮಾಜ ಸಾಧ್ಯ : ನಟ ಚೇತನ್ ಅಹಿಂಸಾ

ಬೆಂಗಳೂರು, ಮಾ.1: ಸಮಾನತೆ, ನ್ಯಾಯ, ವೈಜ್ಞಾನಿಕತೆ, ಸಂವಿಧಾನ ಪೀಠಿಕೆಯನ್ನು ಸೂತ್ರವಾಗಿಸಿಕೊಂಡು, ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಶೀರಾಮ್‍ರ ಹಾದಿಯನ್ನು ಬಲವಾಗಿ ನಂಬಿರುವ ‘ಸತ್ಯ ಪಂಥ’ದಿಂದ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಚಿತ್ರನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾನತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯವಸ್ಥೆ ಬಹಳಷ್ಟು ಅಸಮಾನತೆಯಿಂದ ಕೂಡಿದೆ. ಶ್ರೀಮಂತರ ಪರವಾಗಿ ಮಾತ್ರ ಸಮಾಜ ನಡೆಯುತ್ತಿದೆ. ಭಾರತದಲ್ಲಿ ಇದುವರೆಗೂ ಬಲ ಪಂಥೀಯರಿಂದಾಗಲಿ, ಎಡ ಪಂಥೀಯ ಮತ್ತು ಮಧ್ಯ ಪಂಥೀಯರಿಂದಾಗಲಿ ಸಮ ಸಮಾಜ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದರು. ಪ್ರಸ್ತುತ ವ್ಯವಸ್ಥೆಯು ವರ್ಗ, ಜಾತಿ, ಲಿಂಗ, ಕುಟುಂಬ, ಭಾಷೆಯ ಅಸಮಾನತೆಗಳಿಂದ ಮತ್ತು ಅನ್ಯಾಯದಿಂದ ಕೂಡಿದೆ. ರಾಜಕಾರಣಿಗಳು ಅಧಿಕಾರ, ಹಣ ಮತ್ತು ಸ್ವಪ್ರತಿಷ್ಠೆಗಾಗಿ, ತಮ್ಮ ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ರಾಜ್ಯದ, ರಾಷ್ಟ್ರದ ಹಿತಾಸಕ್ತಿಗೆ ದುಡಿಯುತ್ತಿಲ್ಲ. ಆದುದರಿಂದ ಸತ್ಯ ಪಂಥದ ಮೂಲಕ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಚೇತನ್ ತಿಳಿಸಿದರು. ಪುರುಷ ಪ್ರಧಾನದ ವ್ಯವಸ್ಥೆಗೆ ಪ್ರತಿರೋಧವಾಗಿ ಲಿಂಗ ಸಮಾನತೆಯ ಕಾರ್ಯಕ್ರಮಗಳು, ಮಹಿಳೆಯರು ಮತ್ತು ಎಲ್‍ಜಿಬಿಟಿಕ್ಯೂ ಗಾಗಿ ನ್ಯಾಯ ಯೋಜನೆಗಳನ್ನು ರೂಪಿಸುತ್ತೇವೆ. ಬ್ರಾಹ್ಮಣ್ಯದ ವ್ಯವಸ್ಥೆಗೆ ಪ್ರತಿರೋಧವಾಗಿ ಎಸ್‍ಸಿ, ಎಸ್‍ಟಿ, ಎಂಬಿಸಿ, ಅಲೆಮಾರಿಗಳು, ಧಾರ್ಮಿಕ ಅಲ್ಪಸಂಖ್ಯಾರಿಗಾಗಿ ನ್ಯಾಯ ಯೋಜನೆಗಳನ್ನು ರೂಪಿಸಲಾಗುವುದು. ಬಂಡವಾಳಶಾಹಿ ವ್ಯವಸ್ಥೆಗೆ ಪ್ರತಿರೋಧವಾಗಿರುವ ಸಮಾಜವಾದದ ಪರವಾಗಿ ಬಡವರು, ಮಧ್ಯಮವರ್ಗ, ಕಾರ್ಮಿಕರು, ರೈತರು, ಭೂಮಿ, ಉದ್ಯೋಗದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಧರ್ಮನಿರಪೇಕ್ಷತೆಯನ್ನು ವ್ಯಾಖ್ಯಾನಿಸಿ ಮತ್ತು ಅದರಂತೆ ಕೆಲಸ ಮಾಡುವುದು. ದತ್ತಾಂಸ್ಕೃಕ, ಪ್ರಾದೇಶಿಕತೆಯ ನ್ಯಾಯಕ್ಕಾಗಿ, ಪರಿಸರ ಸಂರಕ್ಷಣೆ, ನೀರುಗಾಗಿ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರನ್ನು ಬಲಪಡಿಸುವುದು, ಲಂಚ ಮುಕ್ತ ಕರ್ನಾಟಕ, ಪಾರದರ್ಶಕತೆಯ ನೀತಿಗಳು, ತಪ್ಪುಗಳ ವಿರುದ್ಧ ಕ್ರಮ ಹಾಗೂ ಆರ್‍ಟಿಐ ಜಾಗೃತಿ ಸಭೆಗಳನ್ನು ಏರ್ಪಡಿಸಲಾವುದು ಎಂದು ಚೇತನ್ ಮಾಹಿತಿ ನೀಡಿದರು. ಅಭಿವ್ಯಕ್ತಿ, ಪ್ರತಿಭಟನೆ ಮತ್ತು ಮಾಧ್ಯಮದ ಸ್ವಾತಂತ್ರ್ಯಕ್ಕಾಗಿ ಆರ್ಟಿಕಲ್ 19ರ ಪ್ರಕಾರ ಪ್ರಜಾಪ್ರಭುತ್ವವನ್ನು ನಿರ್ಮಿಸುವುದು. ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ಶಾಲೆಗಳ ಬಲವಾದ ಸುಧಾರಣೆಗಾಗಿ ಕೆಲಸ ಮಾಡಲಾಗುತ್ತದೆ. ಪೊಲೀಸ್, ಜೈಲು, ನ್ಯಾಯಾಂಗ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುತ್ತೇವೆ. ಈಗಿನ ಯಾವ ರಾಜಕೀಯ ಪಕ್ಷಗಳು ಕೂಡ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸತ್ಯಪಂಥದ ಮೇಲೆ ನಂಬಿಕೆ ಇರುವ, ಸೇವಾ ಮನೋಭಾವ ಹೊಂದಿರುವ, ಕ್ಷೇತ್ರದಲ್ಲಿ ನೆಲೆಸಿರುವ, ಪ್ರಾಮಾಣಿಕ ಹಿನ್ನಲೆಯಿರುವ ಮತ್ತು ಆರ್ಥಿಕ ಭದ್ರತೆ ಇರುವ ವ್ಯಕ್ತಿಗಳ ಮೂಲಕ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುತ್ತದೆ. ಸಮಾನತೆ ಮತ್ತು ನ್ಯಾಯದೊಂದಿಗೆ 2028ರ ವಿಧಾನಸಭಾ ಚುನಾವಣೆಗೆ ಸಿದ್ದರಾಗುತ್ತೇವೆ. 2026ರ ನವೆಂಬರ್‍ನಲ್ಲಿ ಹೊಸ ಪಕ್ಷ ಉದ್ಘಾಟನೆ ಮಾಡಿ, 2027ರ ಫೆಬ್ರವರಿ ಅಷ್ಟರೊಳಗೆ ಪಕ್ಷದ ಹೆಸರು, ಪಕ್ಷದ ಬಾವುಟ, ವೆಬ್‍ಸೈಟ್ ಇತ್ಯಾದಿಗಳನ್ನು ಮಾಡುತ್ತೇವೆ ಎಂದು ಚೇತನ್ ಅಹಿಂಸ ಮಾಹಿತಿ ನೀಡಿದರು. ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹೋರಾಟಗಾರರು, ಚಿಂತಕರು, ಕಾರ್ಯಕರ್ತರು ಭಾಗವಹಿಸಿದ್ದರು.

ವಾರ್ತಾ ಭಾರತಿ 2 Mar 2026 12:35 am

ಯುಎಇ ಮೇಲಿನ ದಾಳಿಗೆ ಪ್ರಧಾನಿ ಮೋದಿ ಖಂಡನೆ

ಭಾರತೀಯರ ಸುರಕ್ಷತೆಗೆ ಕಾಳಜಿ ವಹಿಸಿದ ಅಧ್ಯಕ್ಷ ಅಲ್ ನಹ್ಯಾನ್ ಅವರಿಗೆ ಟೆಲಿಫೋನ್ ಮೂಲ ಕೃತಜ್ಞತೆ ಸಲ್ಲಿಸಿದ ಮೋದಿ

ವಾರ್ತಾ ಭಾರತಿ 2 Mar 2026 12:30 am

ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ: ಇರಾನ್‌ ನ ಸರ್ವೋಚ್ಚ ನಾಯಕ ಖಾಮಿನೈ ಹತ್ಯೆ ಖಂಡಿಸಿದ ಕಾಂಗ್ರೆಸ್

ಹೊಸದಿಲ್ಲಿ: ಇರಾನ್‌ ನ ಸರ್ವೋಚ್ಚ ನಾಯಕ ಅಯತುಲ್ಲಾ ಸಯ್ಯದ್ ಅಲಿ ಖಾಮಿನೈ ಅವರನ್ನು “ಗುರಿಯಿಟ್ಟು ಹತ್ಯೆ” ಮಾಡಿದ ಕ್ರಮವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ, ಇರಾನ್‌ನ ಜನತೆ ಹಾಗೂ ಜಗತ್ತಿನಾದ್ಯಂತದ ಶಿಯಾ ಸಮುದಾಯಕ್ಕೆ ಸಂತಾಪ ಸೂಚಿಸಿದೆ. ಸಂವಿಧಾನದ 51ನೇ ವಿಧಿಯನ್ನು ಉಲ್ಲೇಖಿಸಿದ ಪಕ್ಷ,ವು ಭಾರತದ ವಿದೇಶಾಂಗ ನೀತಿ ಸಂವಾದ, ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನಿನ ಗೌರವದ ಮೇಲೆ ಆಧಾರಿತವಾಗಿದೆ ಎಂದು ಹೇಳಿದೆ. “ಸಾರ್ವಭೌಮ ಸಮಾನತೆ, ಹಸ್ತಕ್ಷೇಪ ಮಾಡದಿರುವುದು ಮತ್ತು ಶಾಂತಿಯುತ ಇತ್ಯರ್ಥ ಇವು ಭಾರತೀಯ ಮೌಲ್ಯಗಳ ಅಡಿಪಾಯ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ‘ವಸುಧೈವ ಕುಟುಂಬಕ’ ತತ್ವ, ಮಹಾತ್ಮ ಗಾಂಧಿ ಅವರ ಅಹಿಂಸಾ ಸಿದ್ಧಾಂತ ಹಾಗೂ ಜವಾಹರಲಾಲ್ ನೆಹರು ಅವರ ಅಲಿಪ್ತ ನೀತಿಗೆ ವಿರುದ್ಧವಾಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇರಾನ್ ಮತ್ತು ವೆನೆಝುವೆಲಾದಲ್ಲಿ ಆಡಳಿತ ಅಸ್ಥಿರಗೊಳಿಸುವ ಉದ್ದೇಶದಿಂದ ಬಲಪ್ರಯೋಗ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ 2(4) ಮತ್ತು 2(7) ಉಲ್ಲೇಖಿಸಿ, ಯಾವುದೇ ರಾಜ್ಯದ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಮತ್ತು ದೇಶೀಯ ವಿಷಯಗಳಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿದೆ. “ಹಾಲಿ ರಾಷ್ಟ್ರದ ಮುಖ್ಯಸ್ಥರನ್ನು ಗುರಿಯಿಟ್ಟು ಹತ್ಯೆ ಮಾಡಿರುವುದು ಅಂತರರಾಷ್ಟ್ರೀಯ ನಿಯಮಗಳ ಮೇಲೆ ಹೊಡೆತ ನೀಡುತ್ತದೆ,” ಎಂದು ಅಭಿಪ್ರಾಯಪಟ್ಟಿದೆ. The Indian National Congress (INC) unequivocally condemns the targeted assassination of Iran's Supreme Leader, Ali Hosseini Khamenei, in a military strike carried out without a formal declaration of war. The INC extends its deepest condolences to the Supreme Leader's family, to… pic.twitter.com/CSQAbds3tS — Mallikarjun Kharge (@kharge) March 1, 2026

ವಾರ್ತಾ ಭಾರತಿ 2 Mar 2026 12:14 am

Middle East Crisis- ಪ್ರಧಾನಿ ಮೋದಿ ಮಹತ್ವದ ಸಂಪುಟ ಸಭೆ; ಗಲ್ಫ್ ನಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ ಚರ್ಚೆ

PM Modi Cabinet Meeting- ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ರಾತ್ರಿ ಪ್ರಮುಖ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜನಾಥ ಸಿಂಗ್, ಅಮಿತ್ ಶಾ, ಜೈಶಂಕರ್, ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು. ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ವಾಪಸ್ ಕರೆ ತರಲು ಕ್ರಮ, ಇಂಧನ ಪೂರೈಕೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬಂದಿವೆ ಎಂದು ತಿಳಿದು ಬಂದಿದೆ.

ವಿಜಯ ಕರ್ನಾಟಕ 2 Mar 2026 12:02 am

ಖಮೇನಿ ಬಳಿಕ ಇರಾನ್ ದೇಶಕ್ಕೆ ಹೊಸ ಸರ್ವಾಧಿಕಾರಿ, ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ದಾಳಿ | Operation Roaring Lion

ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ಪಾಲಿಗೆ ದೊಡ್ಡ ಶತ್ರುವಾಗಿದ್ದ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿ ದೊಡ್ಡಣ್ಣ ಅಮೆರಿಕ ಖುಷಿಯಾಗಿದೆ. ಅಮೆರಿಕ ತನ್ನ ಮಿತ್ರ ದೇಶ, ಇಸ್ರೇಲ್ ಮೂಲಕ ಈ ಕೆಲಸ ಸಾಧಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಜೊತೆಗೆ ಉತ್ತಮ ನಂಟು ಹೊಂದಿರುವ ದೇಶಗಳೇ ಹೆಚ್ಚು. ಆದರೆ ಇರಾನ್ ಮಾತ್ರ ಅಮೆರಿಕ ಹಾಗೂ ಇಸ್ರೇಲ್

ಒನ್ ಇ೦ಡಿಯ 1 Mar 2026 11:57 pm

ಹಿಟ್ಲರ್ ಮತ್ತು ಆತನ ಅಪಾಯಕಾರಿ ಅಗ್ಗದ ನಕಲುಗಳು ಜಗತ್ತಿಗೆ ವಿಪತ್ತನ್ನು ತರುತ್ತಾರೆ : ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆ ನಟ ಕಿಶೋರ್ ಕುಮಾರ್ ಪೋಸ್ಟ್‌

ಬೆಂಗಳೂರು : “ಹಿಟ್ಲರ್ ಮತ್ತು ಆತನ ಅಪಾಯಕಾರಿ ಅಗ್ಗದ ನಕಲುಗಳು ಜಗತ್ತಿಗೆ ವಿಪತ್ತನ್ನೇ ತರುತ್ತಾರೆ” ಎಂದು ನಟ ಕಿಶೋರ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, ಪ್ರಸ್ತುತ ನಾಯಕತ್ವದ ಧೋರಣೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಭಾರತ ಸದಾ ಬೆಂಬಲಿಸುತ್ತಿದ್ದ ಮೌಲ್ಯಗಳಿಗೆ ಬಲವಾದ ನಿಲುವು ತೆಗೆದುಕೊಳ್ಳುವ ಬದಲು, ಸ್ನೇಹಪರ ರಾಷ್ಟ್ರಗಳ ಮೇಲೆ ದಾಳಿ ಮಾಡುವ “ಅನೈತಿಕ ಯುದ್ಧೋನ್ಮಾದಕ ಮೂರ್ಖರನ್ನು” ಧೈರ್ಯದಿಂದ ಖಂಡಿಸುವುದನ್ನು ಬಿಟ್ಟು, ವೈಯುಕ್ತಿಕ ದೌರ್ಬಲ್ಯ ಮತ್ತು ಲಾಭಕ್ಕಾಗಿ “ಜೀ ಹುಜೂರ್” ಮನೋಭಾವದಲ್ಲಿ ಅವರ ಮುಂದೆ “ನೃತ್ಯಮಾಡುತ್ತಾ ಹಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಇರಾನಿನಲ್ಲಿ ಖಾಮಿನೈ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದರೂ, ಅವರ ಸಮಸ್ಯೆಗಳನ್ನು ಸರಿಪಡಿಸುವುದು ಅವರ ಆಂತರಿಕ ವಿಚಾರವಾಗಿದ್ದು, ಹೊರಗಿನವರ ವ್ಯವಹಾರವಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. ಶಾಂತಿಗಾಗಿ ಹಾಗೂ ಸ್ನೇಹಪರ ರಾಷ್ಟ್ರದ ಬೆಂಬಲಕ್ಕಾಗಿ ಒಂದೇ ಒಂದು ಸ್ಪಷ್ಟ ಹೇಳಿಕೆಯೂ ಕಾಣಿಸದಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮಗೇನಾಗಿದೆ? ಆದರ್ಶಗಳಿಲ್ಲ! ಯಾವುದೇ ರಾಜಕೀಯ ನಿಲುವಿಲ್ಲ!” ಎಂದು ಪ್ರಶ್ನಿಸಿರುವ ಅವರು, ಪ್ರಚಾರ ತಜ್ಞರು ಭಾರತದ ಇಮೇಜ್ ಅನ್ನು “ಹೇಡಿ ಅವಕಾಶವಾದಿಗಳ ಗುಂಪು” ಎಂದು ತೋರುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಇಂತಹ ಜೀವಂತಿಕೆಯಿಲ್ಲದವರು ಅಧಿಕಾರದಲ್ಲಿರುವಾಗ ದೇಶವು ‘ವಿಶ್ವಗುರು’ ಆಗಲು ಹತ್ತಿರದಲ್ಲಿಲ್ಲ ಎಂಬುದನ್ನೂ ಅವರು ತಮ್ಮ ಬರಹದಲ್ಲಿ ಹೇಳಿದ್ದಾರೆ. ಅದೇ ವೇಳೆ, “ನಾವು ಮತ್ತು ಯುಎಸ್‌ಎ ಜನರು ಇಂತಹ ಅಪಾಯಕಾರಿ, ದೂರದೃಷ್ಟಿಯಿಲ್ಲದ ಮೂರ್ಖರನ್ನು ಅಧಿಕಾರಕ್ಕೆ ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ತಾವು ಹೇಗೆ ನೆನಪಿನಲ್ಲಿರಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಜನರಿಗೆ, ಅಮೆರಿಕದ ಕಾಂಗ್ರೆಸ್‌ ಹಾಗೂ ಅಮೆರಿಕದ ನ್ಯಾಯಾಲಯಗಳಿಗೆ ಸೇರಿದೆ. ಇದೇ ಜವಾಬ್ದಾರಿ ಭಾರತೀಯರಾದ ನಮ್ಮ ಮೇಲೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಟನ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗೆ ಕಾರಣವಾಗಿದೆ.      

ವಾರ್ತಾ ಭಾರತಿ 1 Mar 2026 11:56 pm

Iran | ಶಾಲೆಯ ಮೇಲಿನ ಇಸ್ರೇಲ್ ನ ಮಾರಕ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 150ಕ್ಕೆ ಏರಿಕೆ!

ಟೆಹ್ರಾನ್: ದಕ್ಷಿಣ ಇರಾನ್‌ ನ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್ ನಿಂದ ನಡೆದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಸುಮಾರು 150ಕ್ಕೆ ಏರಿದೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಶನಿವಾರ ಬೆಳಿಗ್ಗೆ ನಡೆದ ಈ ದಾಳಿ, ಅಮೆರಿಕ –ಇಸ್ರೇಲ್ ಬಾಂಬ್ ದಾಳಿ ಕಾರ್ಯಚರಣೆಯ ಅತ್ಯಂತ ಮಾರಕ ಘಟನೆಯಾಗಿ ಪರಿಣಮಿಸಿದೆ. ಇಸ್ರೇಲ್ ಹಾಗೂ ಅಮೆರಿಕ ರವಿವಾರ ಇರಾನ್‌ ನ ವಿವಿಧ ಪ್ರದೇಶಗಳಲ್ಲಿ ಮತ್ತೊಂದು ಸುತ್ತಿನ ಭಾರೀ ವೈಮಾನಿಕ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಇರಾನ್ ಸರ್ಕಾರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಎರಡನೇ ದಿನ ಇದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸ್ಪಷ್ಟ ಅಂತ್ಯ ಕಾಣದ ಈ ಸಂಘರ್ಷವು ಪ್ರಾದೇಶಿಕ ಮುಖಾಮುಖಿಗೆ ತಿರುಗುವ ಆತಂಕ ವ್ಯಕ್ತವಾಗಿದೆ ಎಂದು theguardian.com ವರದಿಯಾಗಿದೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನ ಹೇಳಿಕೆಗಳ ವಿನಿಮಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಿಲಿಟರಿ ಬೆಳವಣಿಗೆಗಳು ಸಂಭವಿಸಬಹುದೆಂಬ ಸೂಚನೆಗಳು ಲಭ್ಯವಾಗಿವೆ. ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಶನಿವಾರ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವರದಿಗಳ ಬಳಿಕ, ಟೆಹ್ರಾನ್ ಪ್ರತೀಕಾರದ ಬೆದರಿಕೆಗಳನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ಇರಾನ್ ಮೇಲಿನ ದಾಳಿಯ ನಂತರ ಅಮೆರಿಕದ ವಿವಿಧ ನಗರಗಳಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ನಡೆದಿವೆ. ಶ್ವೇತಭವನದ ಹೊರಭಾಗ ಮತ್ತು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ ನಲ್ಲಿ ನಡೆದ ಸಭೆಗಳಲ್ಲಿ ಪ್ರತಿಭಟನಾಕಾರರು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 1 Mar 2026 11:45 pm

ಇಸ್ರೇಲ್ ಪಾಲಿಗೆ ಶ್ರೀರಕ್ಷೆ ಆಗಿರುವ ಐರನ್ ಡೋಮ್, ಇರಾನ್ ದಾಳಿಯಿಂದ ಸಿಗುತ್ತಿದೆ ರಕ್ಷಣೆ | Operation Roaring Lion

ಇರಾನ್ ವಿರುದ್ಧ ಯುದ್ಧ ಆರಂಭವಾದ ನಂತರ ಇಸ್ರೇಲ್ ಹಾಗೂ ಅಮೆರಿಕ ತಮ್ಮ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿವೆ. ಪ್ರಮುಖವಾಗಿ ಇರಾನ್ ಪಕ್ಕದಲ್ಲೇ ಇರುವ ಇಸ್ರೇಲ್‌ಗೆ ಈಗ ರಕ್ಷಣೆಯ ಅಗತ್ಯತೆ ಇದ್ದು, ಇರಾನ್ ಹಾರಿಸುತ್ತಿರುವ ಕ್ಷಿಪಣಿಗಳಿಂದ ರಕ್ಷಣೆ ಪಡೆಯಬೇಕಿದೆ. ಹೀಗಿದ್ದಾಗ ಇಸ್ರೇಲ್ ಪಾಲಿಗೆ ಐರನ್ ಡೋಮ್ ಎಂಬುದು ಶ್ರೀರಕ್ಷೆ ಆಗಿದ್ದು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡ್ತಾ ಇದೆ.

ಒನ್ ಇ೦ಡಿಯ 1 Mar 2026 11:45 pm

ಸಹಕಾರಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರವಾಗುತ್ತಿದೆ: ಡಾ.ರಾಜೇಂದ್ರ ಕುಮಾರ್

ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ

ವಾರ್ತಾ ಭಾರತಿ 1 Mar 2026 11:44 pm

ಇರಾನ್‌ ನ ಹೊಸ ನಾಯಕತ್ವದೊಂದಿಗೆ ಮಾತುಕತೆಗೆ ಸಿದ್ಧ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ

ವಾಷಿಂಗ್ಟನ್: ಇರಾನ್‌ ನ ಹೊಸ ನಾಯಕತ್ವವು ಅಮೆರಿಕದೊಂದಿಗೆ ಮಾತುಕತೆ ಆರಂಭಿಸಲು ಆಸಕ್ತಿ ತೋರಿರುವುದಾಗಿ ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಮಾತುಕತೆಗೆ ಸಮ್ಮತಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನಲ್ಲಿ ರೂಪುಗೊಂಡಿರುವ ಹೊಸ ಆಡಳಿತವು ತನ್ನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ. “ಅವರು ಮಾತನಾಡಲು ಬಯಸುತ್ತಾರೆ ಮತ್ತು ನಾನು ಮಾತನಾಡಲು ಒಪ್ಪಿಕೊಂಡಿದ್ದೇನೆ. ಆದ್ದರಿಂದ ನಾನು ಅವರೊಂದಿಗೆ ಮಾತನಾಡುತ್ತೇನೆ,” ಎಂದು ಅವರು ‘ದಿ ಅಟ್ಲಾಂಟಿಕ್’ ನಿಯತಕಾಲಿಕೆಗೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಾತುಕತೆಗಳು ಯಾವಾಗ ಹಾಗೂ ಯಾವ ಮಟ್ಟದಲ್ಲಿ ನಡೆಯಲಿವೆ ಎಂಬುದರ ಕುರಿತು ಟ್ರಂಪ್ ಯಾವುದೇ ವಿವರ ನೀಡಿಲ್ಲ. ಇರಾನ್–ಅಮೆರಿಕ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಇರಾನ್ ನಾಯಕತ್ವವು ಈ ನಿರ್ಧಾರವನ್ನು ಮುಂಚಿತವಾಗಿಯೇ ಕೈಗೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವನ್ನೂ ಟ್ರಂಪ್ ವ್ಯಕ್ತಪಡಿಸಿದ್ದಾರೆ. “ಅವರು ಅದನ್ನು ಬೇಗ ಮಾಡಬೇಕಿತ್ತು. ಬಹಳ ಪ್ರಾಯೋಗಿಕ ಮತ್ತು ಮಾಡಲು ಸುಲಭವಾಗಿದ್ದ ವಿಷಯವನ್ನು ಅವರು ಶೀಘ್ರದಲ್ಲೇ ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಅವರು ತುಂಬಾ ವಿಳಂಬ ಮಾಡಿದರು,” ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 1 Mar 2026 11:39 pm

ಅಲಿ ಖಮೇನಿ ಸಾವಿಗೆ ಸೇಡು, ಇರಾನ್‌ನ ನೂತನ ಸರ್ವಾಧಿಕಾರಿಗೆ ಜನರ ಆಗ್ರಹ | Operation Roaring Lion

ಇಸ್ರೇಲ್ ಸೇನೆ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿದು ಹೋಗಿದೆ. ಗುಟ್ಟಾದ ಸ್ಥಳದಲ್ಲಿ ಇದ್ದರೂ ಅಲಿ ಖಮೇನಿ ಮಾತ್ರ ಜೀವ ಉಳಿಸಿಕೊಳ್ಳಲು ಆಗಿಲ್ಲ, ಹಲವು ತಿಂಗಳಿಂದ ಪಕ್ಕಾ ಪ್ಲಾನ್ ಮಾಡಿದ್ದ ಇಸ್ರೇಲ್ ಸೇನೆ ದಿಢೀರ್ ನುಗ್ಗಿ ದಾಳಿ ನಡೆಸಿದೆ. ಪರಿಣಾಮ ಸುಮಾರು 3 ದಶಕ ಎಂದರೆ 30 ವರ್ಷಗಳಿಂದ

ಒನ್ ಇ೦ಡಿಯ 1 Mar 2026 11:31 pm

ಇರಾನ್ ಕಾರ್ಯಾಚರಣೆಯಲ್ಲಿ ಮೂವರು ಅಮೆರಿಕ ಸೈನಿಕರು ಮೃತ್ಯು; ಐವರಿಗೆ ಗಂಭೀರ ಗಾಯ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಮೂವರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ರವಿವಾರ ಪ್ರಕಟನೆಯಲ್ಲಿ ತಿಳಿಸಿದೆ. ಶನಿವಾರ ಆರಂಭವಾದ ಮಿಲಿಟರಿ ಕಾರ್ಯಾಚರಣೆ ನಂತರ ದೃಢಪಟ್ಟ ಮೊದಲ ಮೃತ್ಯು ಪ್ರಕರಣ ಇದಾಗಿದೆ. ಎಂದು guardian.com ವರದಿ ಮಾಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಐದು ಹೆಚ್ಚುವರಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೈನಿಕ ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟ ಮೂವರು ಸೈನಿಕರ ಗುರುತುಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ವಾರ್ತಾ ಭಾರತಿ 1 Mar 2026 11:22 pm

ನಾವೆಲ್ಲ ಸುರಕ್ಷಿತರಾಗಿದ್ದೇವೆ; ಗಾಳಿ ಸುದ್ದಿಗೆ ಕಿವಿಗೊಡಬೇಡಿ: ಯುಎಇಯಲ್ಲಿರುವ ಕನ್ನಡಿಗರ ಮನವಿ

ದುಬೈ, ಮಾ.1: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದಾಳಿಗೆ ಸಂಬಂಧಿಸಿದ ಸುದ್ದಿ, ವೀಡಿಯೊಗಳಿಂದಾಗಿ ಜನ ಇನ್ನಷ್ಟು ಭಯಭೀತರಾಗಿದ್ದಾರೆ. ಯುಎಇಯಲ್ಲಿ ದಾಳಿಯ ಭೀತಿ ಇದ್ದರೂ ಜನಜೀವನ ಎಂದಿನಂತಿದೆ. ಜನ ಸುರಕ್ಷಿತರಾಗಿದ್ದು, ಅಂಗಡಿ, ಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಇಲ್ಲಿನ ಪ್ರಸಕ್ತ ಪರಿಸ್ಥಿತಿ ಬಗ್ಗೆ ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ ಕನ್ನಡಪರ ಸಂಘಟನೆಗಳ ಹಾಗು ವಿವಿಧ ಕರ್ನಾಟಕ ಮೂಲದ ಸಂಘಟನೆಗಳ ಮುಖಂಡರು ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ. ನಾವು ಸುರಕ್ಷಿತರಾಗಿದ್ದೇವೆ ಯುಎಇಯಲ್ಲಿ ಪ್ರಸಕ್ತ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಇಲ್ಲಿನ ಸರಕಾರ ಜನರೊಂದಿಗಿದೆ. ಕರ್ನಾಟಕದಿಂದ ದುಬೈಗೆ ಬಂದಿರುವ ಕೆಲವು ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದು, ಅವರನ್ನು ನಾವು ಭೇಟಿ ಮಾಡಿ ಎಲ್ಲ ರೀತಿಯ ಸಹಾಯ, ಸಹಕಾರದ ಭರವಸೆ ನೀಡಿದ್ದೇವೆ. ಇಲ್ಲಿ ಎಲ್ಲ ಭಾರತೀಯರು ಸುರಕ್ಷಿತರಾಗಿದ್ದಾರೆ. ಸರಕಾರ ನೀಡುತ್ತಿರುವ ಸೂಚನೆಗಳನ್ನು ಪಾಲಿಸಿ, ಯಾವುದೇ ಗಾಳಿಸುದ್ದಿಗಳನ್ನು ಹರಡಬೇಡಿ. -ಹಿದಾಯತ್ ಅಡ್ಡೂರು,  ಅಧ್ಯಕ್ಷರು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸರಕಾರ ಎಲ್ಲ ರೀತಿಯ ಭದ್ರತೆ ನೀಡಿದೆ, ಆತಂಕ ಬೇಡ ಯುಎಇಯಲ್ಲಿನ ಸರಕಾರ ಎಲ್ಲ ರೀತಿಯ ಭದ್ರತೆ ನೀಡಿರುವುದರಿಂದ ಜನರು ಭಯ, ಆತಂಕ ಪಡುವ ಅಗತ್ಯವಿಲ್ಲ. ಕಳೆದ ಎರಡು ದಿನಗಳಿಂದ ಇಲ್ಲಿನ ಸಚಿವಾಲಯ ಜನರ ಸುರಕ್ಷತೆಯ ದೃಷ್ಟಿನಿಂದ ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಲೇ ಇದೆ. ಸಾಮಾಜಿಕ ಜಾಲತಾಣಗಳ ಸುದ್ದಿಗಳನ್ನು ನಂಬಬೇಡಿ. ಸರಕಾರ ನೀಡುವ ಸುದ್ದಿ, ಸೂಚನೆಯನ್ನಷ್ಟೇ ಪಾಲಿಸಿ. ಕನ್ನಡಿಗರೊಂದಿಗೆ ಯುಎಇ ಸರಕಾರ, ಕರ್ನಾಟಕ ಸರಕಾರ ಹಾಗೂ ಕೆಎನ್‌ಆರ್‌ಐ ಫೋರಂ ಸದಾ ಇರುತ್ತದೆ. ನಾವು ಹೋಟೆಲ್ ಉದ್ಯಮಿಯಾಗಿದ್ದು, ನಮ್ಮ ಹೋಟೆಲ್ ನಲ್ಲಿ ಇರುವವರಿಗೆ ಅವರ ಕಾಲಮಿತಿ ಮುಗಿದರೂ ಪ್ರಸಕ್ತ ಸನ್ನಿವೇಶದಿಂದಾಗಿ ಹೆಚ್ಚು ಕಾಲ ಹೋಟೆಲ್‌ನಲ್ಲೇ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಯುಎಇಯ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಇಲ್ಲಿನ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುವಂತೆಯೋ ಸರಕಾರ ಆದೇಶ ಹೊರಡಿಸಿದೆ. -ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಕೆಎನ್‌ಆರ್‌ಐ ಫೋರಂ ಆತಂಕಿತರಾಗಬೇಡಿ ಯುಎಇಯಲ್ಲಿ ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಯಾರೂ ಆತಂಕಿತರಾಗಬೇಡಿ. ಎಲ್ಲ ಕಡೆ ಅಂಗಡಿ, ಶಾಪಿಂಗ್ ಮಾಲ್‌ಗಳು ತೆರೆದಿವೆ. ಜನರು ಎಂದಿನಂತೆ ತಿರುಗಾಡುತ್ತಿದ್ದಾರೆ. ಸರಕಾರ ಎಲ್ಲ ರೀತಿಯ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ. ದುಬೈಗೆ ಆಗಮಿಸಿರುವ ಸುಮಾರು 85 ಕನ್ನಡಿಗರು ದಾಳಿಯ ಹಿನ್ನೆಲೆಯಲ್ಲಿ ಸಿಕ್ಕಾಕಿಕೊಂಡಿದ್ದು, ಅವರನ್ನೆಲ್ಲ ಸುರಕ್ಷಿತವಾಗಿ ಹೋಟೆಲೊಂದರಲ್ಲಿ ಇರಿಸಲಾಗಿದೆ. ಅವರಿಗೆ ಆಹಾರ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಆದರೂ ನಮ್ಮನ್ನು ಸಂಪರ್ಕಿಸಬಹುದು. -ಶಶಿಧರ್ ನಾಗರಾಜಪ್ಪ, ಅಧ್ಯಕ್ಷರು, ಕರ್ನಾಟಕ ಸಂಘ, ದುಬೈ ಪ್ರವಾಸ ಬಂದಿರುವ ಕನ್ನಡಿಗರಿಗೆ ಅಗತ್ಯ ನೆರವು ಸದ್ಯ ಕರ್ನಾಟಕದಿಂದ ದುಬೈಗೆ ಪ್ರವಾಸ ಬಂದಿರುವ ಹಲವಾರು ಕನ್ನಡಿಗರು ವಾಪಸ್ ಹೋಗಲು ಆಗದೆ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೆರೆಡು ದಿನದಲ್ಲಿ ಸುರಕ್ಷಿತರಾಗಿ ಅವರು ತಾಯ್ನಾಡು ಸೇರಲಿದ್ದಾರೆ. ಇಲ್ಲಿನ ಸರಕಾರ ಎಲ್ಲ ರೀತಿಯಲ್ಲೂ ಜನರ ಸುರಕ್ಷತೆಯನ್ನು ಕಾಪಾಡುತ್ತಿದೆ. ಎಲ್ಲ ರೀತಿಯ ಮುನ್ಸೂಚನೆ ನೀಡುವ ಜೊತೆಗೆ ಸಹಾಯವಾಣಿ ತೆರೆಯಲಾಗಿದೆ. ಈ ದೇಶದಲ್ಲಿ ಜನ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದ್ದಾರೆ. - ಅರುಣ್ ಕುಮಾರ್, ಅಧ್ಯಕ್ಷರು, ಕನ್ನಡ ಕೂಟ ದುಬೈ ಸುಳ್ಳುಸುದ್ದಿಗಳನ್ನು ನಂಬಬೇಡಿ ಯುಎಇಯಲ್ಲಿ ಯುದ್ಧದ ವಾತಾವರಣ ಇದ್ದರೂ ಇಲ್ಲಿ ಜನ ಭಯ, ಆತಂಕಿತರಾಗಬೇಕಿಲ್ಲ. ಇಲ್ಲಿನ ಸರಕಾರ ಜನರ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿಯ ಬಗ್ಗೆ ಬರುತ್ತಿರುವ ಸುದ್ದಿಗಳು, ವೀಡಿಯೊಗಳನ್ನು ಯಾರೂ ನಂಬ ಬೇಡಿ. ಅವರು ತಮ್ಮ ಟಿಆರ್‌ಪಿ ಹೆಚ್ಚಿಸಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅಂತಹ ಘಟನೆಗಳು ಎಲ್ಲಿಯೂ ನಡೆದಿಲ್ಲ. ಇಲ್ಲಿ ಎಲ್ಲವೂ ಸಹಜವಾಗಿದೆ. ಜನರು ಸುರಕ್ಷಿತರಾಗಿದ್ದಾರೆ. -ಎಂ.ಇ.ಮೂಳೂರು, ಉಪಾಧ್ಯಕ್ಷರು, ಬ್ಯಾರೀಸ್ ಕಲ್ಚರಲ್ ಫೋರಂ, ದುಬೈ ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಯುಎಇಯಲ್ಲಿರುವ ಎಲ್ಲ ಕನ್ನಡಿಗರು ಸುರಕ್ಷಿತರಾಗಿದ್ದಾರೆ. ಇಲ್ಲಿರುವ ಎಲ್ಲ ಅನಿವಾಸಿಗಳ ಸುರಕ್ಷತೆಗೆ ಯುಎಇ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಇಲ್ಲಿನ ಸರಕಾರ ಸೂಚನೆ ನೀಡಿದೆ. ಸರಕಾರಿ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಜೊತೆಗೆ ಯಾವುದೇ ರೀತಿಯ ಭಯ ಪಡುವ ಅಗತ್ಯತೆ ಇಲ್ಲ. - ನಾಸಿರ್ ಕರಾಜೆ, ಕನ್ನಡಿಗ, ದುಬೈ

ವಾರ್ತಾ ಭಾರತಿ 1 Mar 2026 11:20 pm

ಹೋಳಿ ಹಬ್ಬ ಹಿನ್ನೆಲೆ ಯಾದಗಿರಿಯಲ್ಲಿ ಮದ್ಯ ಮಾರಾಟ ನಿಷೇಧ

ಯಾದಗಿರಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ 2026ರ ಮಾ.3ರ ಬೆಳಿಗ್ಗೆ 6 ಗಂಟೆಯಿಂದ ಮಾ.5ರ ಬೆಳಿಗ್ಗೆ 6 ಗಂಟೆಯವರೆಗೆ ಯಾದಗಿರಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹಬ್ಬದ ನಿಮಿತ್ತ ಎಲ್ಲಾ ವೈನ್‌ಶಾಪ್‌ಗಳು, ಬಾರ್‌ಗಳು ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 11:14 pm

ಅಮೆರಿಕ ಯುದ್ಧನೌಕೆ ಮೇಲೆ ದಾಳಿ ಮಾಡಿದ ಇರಾನ್, ಮಧ್ಯಪ್ರಾಚ್ಯ ಸಮುದ್ರ ಭಾಗದಲ್ಲೂ ಹಿಂಸಾಚಾರ | Israel Military

ಇಸ್ರೇಲ್ ಹಾಗೂ ಅಮೆರಿಕ ದಾಳಿಯ ಹಿನ್ನೆಲೆ ನಲುಗಿ ಹೋಗಿರುವ ಇರಾನ್ ಮರುದಾಳಿ ನಡೆಸುತ್ತಾ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಸಾಲು ಸಾಲು ಹಿಂಸಾಚಾರ ಹಾಗೂ ತಿಕ್ಕಾಟ ಜೋರಾಗುತ್ತಿದೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯದ ಪ್ರತಿಯೊಂದು ದೇಶ ಕೂಡ ಈ ಹಿಂಸೆಯ ಬೆಂಕಿಯಲ್ಲಿ ಬಳಲಿ ಹೋಗುವ ಲಕ್ಷಣ ಗೋಚರಿಸುತ್ತಿದೆ. ಅದರಲ್ಲೂ ಅಮೆರಿಕ ಸೇನಾ ನೆಲೆ ಹೊಂದಿರುವ ದೇಶಗಳ

ಒನ್ ಇ೦ಡಿಯ 1 Mar 2026 11:14 pm

ಯಾದಗಿರಿ | ಆರೋಗ್ಯವೇ ಮಹಾಸಂಪತ್ತು: ಪೃಥ್ವಿಕ್ ಶಂಕರ್

ಯಾದಗಿರಿ: ಆರೋಗ್ಯ ಸಂಪತ್ತಿನ ಮುಂದೆ ಮತ್ತಾವ ಸಂಪತ್ತೂ ಸಮಾನವಲ್ಲ. ಅದನ್ನು ನಿರ್ಲಕ್ಷ್ಯಿಸಿ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು. ನಗರದ ಲುಂಬಿನಿ ವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ನಶೆಮುಕ್ತ, ಅಪರಾಧಮುಕ್ತ ಸಮಾಜ, ಸೈಬರ್ ಕ್ರೈಂ ಜಾಗೃತಿ, “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಹಾಗೂ ಉತ್ತಮ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ರನ್ನಿಂಗ್ ಸ್ಪರ್ಧೆ ವಿಜೇತರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅವರು ಸಾರ್ವಜನಿಕರ ಸೇವೆಗಾಗಿ ಇದ್ದಾರೆ. ಯಾವುದೇ ಅನಾಹುತ ಸಂಭವಿಸಿದರೆ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಜನರ ಸಹಕಾರ ಅಗತ್ಯವಿದೆ ಎಂದರು. ಯುವಕರು ಮೊಬೈಲ್ ಗೀಳಿನಿಂದ ದೂರವಿದ್ದು ಕಠಿಣ ಅಭ್ಯಾಸ ಮಾಡಿ, ಉತ್ತಮ ಆರೋಗ್ಯಕ್ಕಾಗಿ ಓಟ, ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರಂಭದಲ್ಲಿ 5 ಮತ್ತು 10 ಕಿಮೀ ಓಟ ಸ್ಪರ್ಧೆಗೆ ಜಿಲ್ಲಾ ನ್ಯಾಯಾಧೀಶ ಮರಿಯಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಹೆಚ್ಚುವರಿ ಎಸ್‌ಪಿ ಧರಣೇಶ್, ಡಿವೈಎಸ್‌ಪಿಗಳಾದ ಭರತಕುಮಾರ ತಳವಾರ, ಸುರೇಶ ನಾಯಕ, ಸಿಪಿಐ ಸುನೀಲ್ ಮೂಲಿಮನಿ, ಅಕ್ಕಮಹಾದೇವಿ ಬಿರಾದಾರ, ಪಿಎಸ್‌ಐ ಮಂಜನಗೌಡ, ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ನಾಗರಿಕರು, ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 650 ಮಂದಿ ಓಟದಲ್ಲಿ ಭಾಗವಹಿಸಿದ್ದರು. ಎರಡು ವಿಭಾಗಗಳ ತಲಾ ಐದು ವಿಜೇತರಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಾರ್ತಾ ಭಾರತಿ 1 Mar 2026 11:11 pm

ರಾಯಚೂರು | ತುಂಗಭದ್ರಾ ನೀರಾವರಿ ಕಾರ್ಮಿಕರನ್ನು ಖಾಯಂಗೊಳಿಸಲು ಸಂಸದ ರಾಜಾರಾಮ ಸಿಂಗ್ ಆಗ್ರಹ

ರಾಯಚೂರು: ತುಂಗಭದ್ರಾ ನೀರಾವರಿ ಯೋಜನೆ ಕೇಂದ್ರ ವಲಯ, ಮುನಿರಾಬಾದ್ ವ್ಯಾಪ್ತಿಯ ಕಾಲುವೆ ಹಾಗೂ ಕ್ಯಾಂಪ್‌ಗಳಲ್ಲಿ ಕಳೆದ 25–30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿ, ಅವರಿಗೆ ವರ್ಷಪೂರ್ತಿ ಉದ್ಯೋಗದ ಭದ್ರತೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ, ಜವಳಿ ಹಾಗೂ ಕೌಶಲ್ಯಾಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯ ಹಾಗೂ ಬಿಹಾರ ಸಂಸದ ರಾಜಾರಾಮ ಸಿಂಗ್ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಬರೆದ ಪತ್ರದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಮಸ್ಯೆಗಳತ್ತ ಗಮನ ಸೆಳೆದಿರುವ ಅವರು, ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಗ್ಯಾಂಗ್‌ಮನ್, ಗೇಜ್ ರೀಡರ್, ವರ್ಕ್ ಇನ್ಸ್‌ಪೆಕ್ಟರ್, ಡ್ರೈವರ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ರೈತರ ಜಮೀನುಗಳಿಗೆ ನೀರು ಹರಿಸುವ ಮಹತ್ವದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಉದ್ಯೋಗದ ಭದ್ರತೆ ಇಲ್ಲದಿರುವುದು ವಿಷಾದನೀಯ ಎಂದು ಹೇಳಿದ್ದಾರೆ. 2021-22ರವರೆಗೆ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಲಾಗುತ್ತಿತ್ತು. ಇತ್ತೀಚೆಗೆ ನೀರು ನಿರ್ವಹಣೆ ಮುಗಿದ ಬಳಿಕ ಎರಡು ತಿಂಗಳು ಕೆಲಸ ನಿಲ್ಲಿಸಲಾಗುತ್ತಿದೆ. ನೀರು ನಿಂತ ನಂತರ ಕಾಲುವೆಗಳಲ್ಲಿ ಸೀಲ್ಟ್ ತೆರವು, ಜಂಗಲ್ ಕ್ಲಿಯರೆನ್ಸ್ ಹಾಗೂ ಸೇವಾ ರಸ್ತೆ ದುರಸ್ತಿ ಕಾರ್ಯಗಳನ್ನು ಕಾರ್ಮಿಕರ ಮೂಲಕವೇ ಮಾಡಬಹುದಾದರೂ, ಅವುಗಳನ್ನು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡುತ್ತಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತುಂಗಭದ್ರಾ ಜಲಾಶಯ ಮತ್ತು ಕಾಲುವೆಗಳು ಶಾಶ್ವತ ಯೋಜನೆಯಾಗಿದ್ದರೂ ಶೇ.90ರಷ್ಟು ಕಾರ್ಮಿಕರನ್ನು ಖಾಯಂಗೊಳಿಸಿಲ್ಲ. ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಹೋರಾಟದ ಬಳಿಕ ಸರ್ಕಾರ ವರ್ಷಪೂರ್ತಿ ಉದ್ಯೋಗ ನೀಡುವಂತೆ ಸೂಚನೆ ನೀಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಯೋಜನೆಯ ಅಧಿಕಾರಿಗಳು ಕಾರ್ಮಿಕರನ್ನು ನಿರಂತರವಾಗಿ ಕೆಲಸದಲ್ಲಿ ಮುಂದುವರಿಸಿದರೆ ಸರ್ಕಾರಕ್ಕೆ ಹೆಚ್ಚಿನ ಅನುದಾನ ಉಳಿತಾಯವಾಗುತ್ತದೆ ಎಂಬ ವರದಿಯೂ ಸಲ್ಲಿಕೆಯಾಗಿದೆ. ಆದ್ದರಿಂದ ತಕ್ಷಣ ಸ್ಪಷ್ಟ ಆದೇಶ ಹೊರಡಿಸಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡಬೇಕು ಎಂದು ಅವರು ಕೋರಿದ್ದಾರೆ. ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ, ಉದ್ಯೋಗದ ಭದ್ರತೆ ಹಾಗೂ ಖಾಯಂಗೊಳಿಸುವಿಕೆ ಸರ್ಕಾರದ ತಕ್ಷಣದ ಜವಾಬ್ದಾರಿಯಾಗಿದೆ ಎಂದು ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.

ವಾರ್ತಾ ಭಾರತಿ 1 Mar 2026 11:04 pm

ರಾಯಚೂರು | ತಾರಾನಾಥ ಪೂಜಾರಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ: ತಲಕಾಯ್ ಮಾರೆಪ್ಪ ಅಭಿನಂದನೆ

ರಾಯಚೂರು: ವಕೀಲ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ದೀನದಲಿತರು ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ಗುರುತಿಸಿಕೊಂಡಿರುವ ತಾರಾನಾಥ ಪೂಜಾರಿ ಅವರು ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯ್ ಮಾರೆಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ತಾರಾನಾಥ ಪೂಜಾರಿ ಅವರು ಸದಾ ಜನಪರ ಧೋರಣೆಯೊಂದಿಗೆ ಕಾರ್ಯನಿರ್ವಹಿಸಿ ಎಲ್ಲರ ವಿಶ್ವಾಸ ಗಳಿಸಿರುವ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ. ಇಂತಹ ವ್ಯಕ್ತಿಗೆ ಸರ್ಕಾರ ಮಹತ್ವದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆ ನೀಡಿರುವುದು ಶ್ಲಾಘನೀಯ ಕ್ರಮವಾಗಿದೆ. ಅವರ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ದೊರಕಲಿ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸಿದ್ದಾರೆ.

ವಾರ್ತಾ ಭಾರತಿ 1 Mar 2026 10:57 pm

ಯುದ್ದ ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ: ಇರಾನ್ ವೈಮಾನಿಕ ದಾಳಿಗೆ ಯುಎಇ ಖಂಡನೆ

ಅಬುಧಾಬಿ: ಅಮೆರಿಕ-ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಯುಎಇಯ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಇರಾನ್ ನಡೆಸಿದ ವೈಮಾನಿಕ ದಾಳಿಯನ್ನು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರರು ಖಂಡಿಸಿದ್ದಾರೆ. `ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್‍ನ ಆಕ್ರಮಣವು ತನ್ನ ಗುರಿಯನ್ನು ಕಳೆದುಕೊಂಡಿದೆ ಮತ್ತು ನಿರ್ಣಾಯಕ ಕ್ಷಣದಲ್ಲಿ ಇರಾನ್ ಅನ್ನು ಪ್ರತ್ಯೇಕಿಸಿದೆ. ನಿಮ್ಮ ಯುದ್ದವು ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ. ಮತ್ತು ಈ ಪ್ರತಿದಾಳಿಯ ಮೂಲಕ ಇರಾನ್ ಅನ್ನು ಪ್ರದೇಶದ ಪ್ರಾಥಮಿಕ ಅಪಾಯದ ಮೂಲವಾಗಿ ಮತ್ತು ಅದರ ಕ್ಷಿಪಣಿ ಕಾರ್ಯಕ್ರಮವನ್ನು ಅಸ್ಥಿರತೆಯ ಪ್ರಕ್ರಿಯೆಯ ಭಾಗವೆಂದು ನೋಡುವವರ ನಿರೂಪಣೆಗೆ ಶಕ್ತಿ ತುಂಬುತ್ತಿದ್ದೀರಿ. ವಿವೇಕದಿಂದ ವರ್ತಿಸಿ ಮತ್ತು ಉಲ್ಬಣ ವ್ಯಾಪಕಗೊಳ್ಳುವ ಮುನ್ನ ನಿಮ್ಮ ನೆರೆಯವರೊಂದಿಗೆ ಜವಾಬ್ದಾರಿಯಿಂದ ವರ್ತಿಸಿ' ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಷ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 1 Mar 2026 10:42 pm

ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ?

ನವದೆಹಲಿ: ದೇಶಾದ್ಯಂತ ರೈಲು ಜಾಲ ವಿಸ್ತರಣೆ ಆಗುತ್ತಿದೆ. ರೈಲ್ವೆ ಮೂಲ ಸೌಕರ್ಯ ಸುಧಾರಿಸುವ ಜೊತೆಗೆ ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಸಹಸ್ರಾರು ರೈಲು ನಿಲ್ದಾಣಗಳು ಪುನರ್ ಅಭೀವೃದ್ಧಿಯಾಗಿ, ಆಧುನಿಕರಣಗೊಳ್ಳುತ್ತಿವೆ. ಈ ಮಧ್ಯೆ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣಗಳನ್ನು (ಪ್ಯಾಸೆಂಜರ್‌ ಹೋಲ್ಡಿಂಗ್‌ ಏರಿಯಾ) ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ರೈಲ್ವೆ ಸಚಿವ ಸಚಿವರಾದ

ಒನ್ ಇ೦ಡಿಯ 1 Mar 2026 10:42 pm

ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ಮಾಡಲು ನಾವು ಬಿಡುವುದಿಲ್ಲ : ಸಚಿವ ಬೋಸರಾಜು

ಸಿರವಾರ: ಸಿರವಾರ ತಾಲೂಕನ್ನು ಪ್ರಸ್ತಾವಿತ ಸಿಂಧನೂರು ಜಿಲ್ಲೆಗೆ ಸೇರ್ಪಡೆ ಮಾಡುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ತಾಲೂಕಿನ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಸ್ಪಷ್ಟಪಡಿಸಿದರು. ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿರವಾರ ತಾಲೂಕಿನ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಹೊಸ ಜಿಲ್ಲೆ ರಚನೆ ಕುರಿತು ಸರ್ಕಾರದ ಮುಂದೆ ಸದ್ಯ ಯಾವುದೇ ಪ್ರಸ್ತಾವನೆ ಇಲ್ಲ. ಅಖಂಡ ಮಾನ್ವಿ ಹಾಗೂ ಸಿರವಾರ ತಾಲೂಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ಸಿರವಾರ ತಾಲೂಕು ಸಿಂಧನೂರು ಜಿಲ್ಲೆಗೆ ಸೇರುತ್ತದೆ ಎಂಬುದು ಸುಳ್ಳು ಸಂದೇಶವಾಗಿದ್ದು, ಇಂತಹ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಹೇಳಿದರು. ಶಾಸಕ ಜಿ. ಹಂಪಯ್ಯ ನಾಯಕ ಮಾತನಾಡಿ, ಸಿರವಾರ ತಾಲೂಕು ಸಿಂಧನೂರು ಜಿಲ್ಲೆಗೆ ಸೇರ್ಪಡೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಸ್ವಗ್ರಾಮ ಬಲ್ಲಟಿಗಿಯೂ ಸಿರವಾರ ತಾಲೂಕಿನಲ್ಲೇ ಇದೆ. ತಾಲೂಕಿನ ಜನರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ತಾಲೂಕಿನ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇಬ್ಬರೂ ನಾಯಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪಗೌಡ, ಮಹಾಂತೇಶ ಪಾಟೀಲ್ ಅತ್ತನೂರು, ರುದ್ರಪ್ಪ ಅಂಗಡಿ, ಜಿ.ಲೋಕರೆಡ್ಡಿ, ಟಿ.ಆರ್.ಪಾಟೀಲ್, ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿ, ಜೆ.ದೇವರಾಜಗೌಡ, ಬ್ರಿಜೇಶ್ ಪಾಟೀಲ್, ಅರಕೇರಿ ಶಿವಶರಣ ಸಾಹುಕಾರ್, ರಮೇಶ ದರ್ಶನಕರ್, ವೈ.ಭೂಪನಗೌಡ, ಮಲ್ಲಪ್ಪ ಸಾಹುಕಾರ್, ಅಯ್ಯನಗೌಡ ಎರಡ್ಡಿ, ಚಂದ್ರಶೇಖರಯ್ಯಸ್ವಾಮಿ, ಕಲ್ಲೂರು ಬಸವರಾಜ ನಾಯಕ, ಜೆ.ಅಬ್ರಹಾಂ ಹೊನ್ನಟಿಗಿ, ಶಿವಪ್ಪಗೌಡ ಹಳ್ಳಿಹೊಸೂರು, ಡಿ.ಜಯಪ್ಪ, ಮಲ್ಲಿಕಾರ್ಜುನಗೌಡ ಮರಕಂದಿನ್ನಿ, ಅರಳಪ್ಪ‌ಯದ್ದಲದಿನ್ನಿ ಸೇರಿದಂತೆ ಅನೇಕರು ಇದ್ದರು.

ವಾರ್ತಾ ಭಾರತಿ 1 Mar 2026 10:40 pm

ಅಮೆರಿಕದ ಸಮರನೌಕೆಯ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ಟೆಹ್ರಾನ್: ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ವಿಮಾನವಾಹಕ ಯುದ್ದನೌಕೆ ಯುಎಸ್‍ಎಸ್ ಅಬ್ರಹಾಂ ಲಿಂಕನ್ ಮೇಲೆ 4 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಇರಾನ್‍ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ರವಿವಾರ ಹೇಳಿದೆ. ಸಶಸ್ತ್ರ ಪಡೆಗಳು ಮಿಲಿಟರಿ ಸಂಘರ್ಷದ ಹೊಸ ಹಂತವನ್ನು ಪ್ರವೇಶಿಸಿದ್ದು ಭೂಮಿ ಮತ್ತು ನೆಲದಲ್ಲಿನ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಭೂಮಿ ಮತ್ತು ಸಮುದ್ರವು ಭಯೋತ್ಪಾದಕ ಆಕ್ರಮಣಕಾರರಿಗೆ ಸ್ಮಶಾನವಾಗಲಿದೆ' ಎಂದು ಐಆರ್‍ಜಿಸಿ ಎಚ್ಚರಿಸಿದೆ. ದಾಳಿ ನಡೆದಿರುವ ಬಗ್ಗೆ ಅಮೆರಿಕ ದೃಢಪಡಿಸಿಲ್ಲ.

ವಾರ್ತಾ ಭಾರತಿ 1 Mar 2026 10:38 pm

ಗಲ್ಫ್‌ನಲ್ಲಿರುವ ಮಲಯಾಳಿಗಳ ಸುರಕ್ಷೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪಿಣರಾಯಿ ವಿಜಯನ್ ಪತ್ರ

ವಯನಾಡು: ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮಲೆಯಾಳಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಲ್ಪೆಟ್ಟಾದಲ್ಲಿ ರವಿವಾರ ವಯನಾಡ್ ಮಾದರಿ ಪಟ್ಟಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಪತ್ರದಲ್ಲಿ ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದೇನೆ. ಪರಿಸ್ಥಿತಿ ಹದಗೆಟ್ಟರೆ, ಗಲ್ಫ್ ದೇಶಗಳಲ್ಲಿ ವಾಸಿಸುವ ಹಾಗೂ ಕೆಲಸ ಮಾಡುವ ಭಾರತೀಯರು, ವಿಶೇಷವಾಗಿ ಮಲೆಯಾಳಿಗಳು ಅಪಾಯಕ್ಕೆ ಸಿಲುಕಬಹುದು ಎಂದು ತಾನು ಎಚ್ಚರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಭಾಷಣದ ವೇಳೆ ಅವರು ಇರಾನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಸೇನಾ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ ಎಂದು ಅವರು ಹೇಳಿದರು. ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬದ ಹತ್ಯೆಯನ್ನು ಅವರು ಖಂಡಿಸಿದರು. ಇದು ಬರ್ಬರ ಕೃತ್ಯ ಎಂದು ಅವರು ಕರೆದರು. ಜಗತ್ತಿನಲ್ಲಿ ಹಲವು ಒರಟು ದೇಶಗಳಿವೆ. ಅಮೆರಿಕ ಅವುಗಳ ನೇತೃತ್ವವನ್ನು ವಹಿಸಿದೆ. ಇರಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಪರಿಸ್ಥಿತಿ ಇರಲಿಲ್ಲ. ಆಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬವನ್ನು ಗುರಿಯಾಗಿರಿಸಿಕೊಂಡಿರುವುದು ಗಂಭೀರ ಕ್ರೌರ್ಯದ ಕೃತ್ಯ ಎಂದು ಮುಖ್ಯಮಂತ್ರಿ ಹೇಳಿದರು. ಭಾರತವು ಅಮೆರಿಕ ಹಾಗೂ ಇಸ್ರೇಲ್ ಅನ್ನು ಬಲವಾಗಿ ಖಂಡಿಸಬೇಕು ಎಂದು ಪಿಣರಾಯಿ ವಿಜಯನ್ ಹೇಳಿದರು.

ವಾರ್ತಾ ಭಾರತಿ 1 Mar 2026 10:35 pm

ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ದಾಳಿ ಖಂಡನೀಯ: ಜನವಾದಿ ಮಹಿಳಾ ಸಂಘಟನೆ

ಕಲಬುರಗಿ: ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ಅವರು, ಸಾಮ್ರಾಜ್ಯಶಾಹಿ ಮನೋಭಾವದಿಂದ ನಡೆದ ಈ ಕ್ರೂರ ದಾಳಿ ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಿ, ವಿನಾಶಕಾರಿ ಪರಿಣಾಮಗಳನ್ನು ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದಿಂದಾಗಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಭೀಕರ ಪರಿಣಾಮ ಬೀರಲಿದ್ದು, ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಿಂದ ಹಲವಾರು ಮಕ್ಕಳು ಸಾವನ್ನಪ್ಪಿರುವುದು ಅಮಾನವೀಯ ಕೃತ್ಯವೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್ ದೀರ್ಘಕಾಲದಿಂದ ಭಾರತದ ಸ್ನೇಹಿ ರಾಷ್ಟ್ರವಾಗಿದ್ದು, ಭಾರತ ಸರ್ಕಾರವು ಇರಾನ್ ಮೇಲಿನ ಈ ಆಕ್ರಮಣಕಾರಿ ದಾಳಿಯನ್ನು ಖಂಡಿಸಿ, ಯುದ್ಧ ನಿಲ್ಲಿಸಲು ತುರ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 1 Mar 2026 10:33 pm

ಕಲಬುರಗಿ | ಎಸ್ಐಆರ್ ವಿರೋಧಿಸದಿದ್ದರೆ ಎರಡನೇ ದರ್ಜೆ ನಾಗರಿಕರಾಗಿ ಬದುಕುವ ಸ್ಥಿತಿ: ಶಿವಸುಂದರ್

ಎಸ್ಐಆರ್ ಪರಿಣಾಮ - ಸವಾಲು ಸಂವಾದ ಗೋಷ್ಠಿ

ವಾರ್ತಾ ಭಾರತಿ 1 Mar 2026 10:29 pm

ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಬಂದ್: ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ

ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನಯಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಯುಎಇ (ದುಬೈ) ಸೇರಿದಂತೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರಯಾಣಿಕರ ನೆರವಿಗೆ ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಇರಾನ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ ಮತ್ತು ಖತಾರ್ ಸೇರಿದಂತೆ ಸುಮಾರು 11 ದೇಶಗಳ ವಾಯುಪ್ರದೇಶವನ್ನು ಮಾರ್ಚ್ 2ರವರೆಗೆ ಮುಚ್ಚಲಾಗಿದೆ.

ಒನ್ ಇ೦ಡಿಯ 1 Mar 2026 10:29 pm

ಮಾನವಕುಲಕ್ಕೆ ಜಗದ್ಗುರು ರೇಣುಕಾಚಾರ್ಯರ ತತ್ವಗಳೇ ದಾರಿದೀಪ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ವಾರ್ತಾ ಭಾರತಿ 1 Mar 2026 10:26 pm

ಆಳಂದ | ಗುರುಸ್ಮರಣೆ–ಸ್ನೇಹಬಂಧದ ಭಾವನಾತ್ಮಕ ಸಂಭ್ರಮ

ಆಳಂದ: “ಕಲಿತ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಭಾವನಾತ್ಮಕ ಗುರುವಂದನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೇರಣೆಯ ದಾರಿ ದೀಪವಾಗುತ್ತವೆ” ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು. ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಶ್ರೀ ಶಿವಲಿಂಗೇಶ್ವರ ಪ್ರೌಢ ಶಾಲೆಯ 1999–2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಬೃಹತ್ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಾನವನ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯವಾದದ್ದು. ಸಮಾಜದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ತ್ಯಾಗ, ಶ್ರಮ ಹಾಗೂ ಮಾರ್ಗದರ್ಶನ ನೀಡಿದ ಗುರುಗಳ ಕೈಚಳಕ ಅಡಗಿದೆ ಎಂದರು. ಗುರುವಂದನೆ ಸ್ವೀಕರಿಸಿದ ಸಾಹಿತಿ ಎಸ್.ಬಿ. ಪಾಟೀಲ ಹಾಗೂ ಹಿರಿಯ ನಿವೃತ್ತ ಶಿಕ್ಷಕ ಎಸ್.ಎಂ. ಧುಲಂಗೆ ಮಾತನಾಡಿ, “ಗುರು–ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಮಹತ್ವದ ಅಡಿಪಾಯ. ಈ ಪರಂಪರೆಯನ್ನು ಜೀವಂತವಾಗಿಡುವ ಇಂತಹ ಕಾರ್ಯಕ್ರಮಗಳು ಸಮಾಜದ ನೈತಿಕ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ಹೇಳಿದರು. ಸಮಾರಂಭದ ಸಾನಿಧ್ಯವನ್ನು ಗ್ರಾಮದ ಸಂಸ್ಥಾನ ಹಿರೇಮಠದ ಸಿದ್ಧಮಲ್ಲ ಶಿವಾಚಾರ್ಯರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಹುಂಡೇಕಾರ, ಉಪಾಧ್ಯಕ್ಷೆ ನಿರ್ಮಲಾ ಶಾಂತಪ್ಪಾ, ಕಾರ್ಯದರ್ಶಿ ಶ್ರೀಮಂತ ನಾಮಣೆ ಹಾಗೂ ನಿರ್ದೇಶಕರು ಹಳೆಯ ವಿದ್ಯಾರ್ಥಿಗಳ ಈ ಸಾರ್ಥಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದರು. ಹಳೆಯ ವಿದ್ಯಾರ್ಥಿ ಬಳಗದ ಅರುಣಕುಮಾರ ಸಿ. ಬಿರಾದಾರ, ಗುರುಶರಣ ಕಸ್ತೂರೆ, ಸಂತೋಷಕುಮಾರ ಸಿರಸೆ, ಈಶ್ವರ ಬಿರಾದಾರ, ಸಂತೋಷಕುಮಾರ ಬುಜುರ್ಕೆ, ಮಲ್ಲಿನಾಥ ವಾಲಿ, ಮಮತಾ ದೇಗಾಂವ, ಸೂರ್ಯಕಾ ಮಹಾಜನ, ವಿಜಯಲಕ್ಷೀ ಎನ್. ಮಂಠಾಳೆ, ಶ್ರೀದೇವಿ ಮಂಠಾಳೆ, ಸಂತೋಷ ಸಿರಸೆ, ಮಹಾದೇವಿ ಮುಗಳೆ, ಕನ್ನಯ್ಯಾ ಜಮಾದಾರ, ನೀಲಮ್ಮ ಗೌರಿ ಸೇರಿದಂತೆ 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಎಸ್.ಎಂ. ಧುಲಂಗೆ, ಎಂ.ಎಸ್. ಬೆಳ್ಳೆ, ಎಸ್.ಬಿ. ಪಾಟೀಲ, ಪಿ.ಪಿ. ಶಿವಶೆಟ್ಟಿ, ಎ.ಎಸ್. ಗುಂಡೆ, ಸಿ.ಜಿ. ಕಲಶೆಟ್ಟಿ, ಬಿ.ಪಿ. ಜಾಧವ, ರತನಚಂದ ಪಾಟೀಲ ಹಾಗೂ ಚಂದ್ರಕಾoತ ಅಟ್ಟೂರ ಅವರಿಗೆ ಗೌರವ ಸನ್ಮಾನ ನೆರವೇರಿತು. ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊoಡು, ವಿದ್ಯಾರ್ಥಿಗಳ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯಗುರು ಚಂದ್ರಕಾoತ ಕಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ತೀರ್ಥೆ ನಿರೂಪಿಸಿದರು. ಅರುಣಕುಮಾರ ಬಿರಾದಾರ ಸ್ವಾಗತಿಸಿದರು. ಉಮಾದೇವಿ ಮುಗಳೆ ಪ್ರಸ್ತಾವಿಕ ಮಾತನಾಡಿದರು.

ವಾರ್ತಾ ಭಾರತಿ 1 Mar 2026 10:20 pm

ಇರಾನ್ ಬಿಕ್ಕಟ್ಟು: ಸಾಗಣೆ ಅಡ್ಡಿ, ಪಾವತಿ ವಿಳಂಬ ಎದುರಿಸುತ್ತಿರುವ ಅಕ್ಕಿ ರಫ್ತುದಾರರು

ಚಂಡಿಗಢ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸೇನಾ ದಾಳಿಯ ಹಿನ್ನೆಲೆಯಲ್ಲಿ ಹರ್ಯಾಣದ ಅಕ್ಕಿ ರಫ್ತುದಾರರು ಪಾವತಿ ವಿಳಂಬ ಎದುರಿಸುತ್ತಿದ್ದಾರೆ ಹಾಗೂ ಇರಾನ್, ಅಪಘಾನಿಸ್ತಾನಕ್ಕೆ ಸಾಗಣೆಗೆ ಅಡ್ಡಿ ಉಂಟಾಗುತ್ತಿದೆ. ‘‘ಸಂಘರ್ಷದ ಕೆಲವು ಪರಿಣಾಮಗಳು ವ್ಯಾಪಾರದ ಮೇಲೆ ಈಗಾಗಲೇ ಆರಂಭವಾಗಿದೆ’’ ಎಂದು ಅಕ್ಕಿ ರಫ್ತುದಾರರ ಅಸೋಸಿಯೇಶನ್‌ನ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಕುಮಾರ್ ಜೈನ್ ತಿಳಿಸಿದ್ದಾರೆ. ಇರಾನ್‌ನ ಅತಿ ದೊಡ್ಡ ಬಂದರು ‘ಬಂದರ್ ಅಬ್ಬಾಸ್’ ಮೂಲಕ ಇರಾನ್ ಅಥವಾ ಅಫಘಾನಿಸ್ತಾನಕ್ಕೆ ಹೋಗುವ ಸಾಗಣೆಗಳನ್ನು ತಡೆ ಹಿಡಿಯಲಾಗಿದೆ. ಪರಿಸ್ಥಿತಿ ಸುಧಾರಿಸುವ ವರೆಗೆ ಈ ಸಾಗಣೆಗಳು ಸ್ಥಗಿತಗೊಳ್ಳಲಿವೆ. ಇದರಿಂದ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಲಿವೆ. ಪಾವತಿ ಕೂಡ ವಿಳಂಬವಾಗಬಹುದು ಎಂದು ಜೈನ್ ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 10:19 pm

ಆಳಂದ | ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿ

ಆಳಂದ: ಜಾತಿ, ವರ್ಗ, ಲಿಂಗ ಭೇದ ಮರೆತು ಭಾರತೀಯ ಮೂಲನಿವಾಸಿ ಮಹಾಪುರುಷರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಸ್ತುರಿ ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ದೇಗಾಂವ ಗ್ರಾಮದಲ್ಲಿ ಭೀಮಸೇನೆ ಆಶ್ರಯದಲ್ಲಿ ಆಯೋಜಿಸಿದ್ದ ರಮಾಬಾಯಿ ಜಯಂತಿ ಹಾಗೂ ಕರ್ನಾಟಕ ಭೀಮಸೇನೆ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ರಮಾಬಾಯಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರ ಧ್ವನಿಯಾಗಿ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಜೀವನ ಸಮರ್ಪಿಸಿದ ಮಹಾನ್ ವ್ಯಕ್ತಿತ್ವಗಳು. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಿಕ್ಕು ತೋರಿಸುತ್ತವೆ. ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹಾಪುರುಷರ ಆದರ್ಶಗಳನ್ನು ಆಚರಣೆಗೆ ತರಬೇಕು ಎಂದು ಸಲಹೆ ನೀಡಿದರು. ಗ್ರಾಮ ಶಾಖೆ ಉದ್ಘಾಟಿಸಿದ ಜಿಲ್ಲಾ ದಲಿತ ಮುಖಂಡ ಸಂತೋಷ ಹಾದಿಮನಿ ಮಾತನಾಡಿ, ಭೀಮಸೇನೆ ಸಂಘಟನೆ ಸಮಾಜದ ಅಂಚಿನಲ್ಲಿರುವವರ ಹಕ್ಕುಗಳಿಗಾಗಿ ಹೋರಾಡುವ ವೇದಿಕೆಯಾಗಿದೆ. ಗ್ರಾಮ ಮಟ್ಟದಲ್ಲಿ ಶಾಖೆ ಸ್ಥಾಪನೆಯಿಂದ ಸಂಘಟನೆ ಬಲಗೊಳ್ಳಲಿದೆ ಎಂದು ಹೇಳಿದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಾಬುರಾವ್ ಅರುಣೋದಯ ಜಯಂತಿ ಉದ್ಘಾಟಿಸಿದರು. ಭೀಮಸೇನೆ ಜಿಲ್ಲಾಧ್ಯಕ್ಷ ಸಂಜಯ ಬೋಸ್ಲೆ, ತಾಲೂಕು ಯುವ ಅಧ್ಯಕ್ಷ ನೀತಿನ ಡೊಲೆ, ಪ್ರಜ್ವಲ ಡೊಲೆ, ಉಪನ್ಯಾಸಕ ಜಿತೆಂದ್ರ ತಳವಾರ ಮಾತನಾಡಿದರು. ನಾಗರ ಸಿಂಗೆ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಮಹಿಳಾ ಘಟಕದ ಗಜಾಬಾಯಿ ಆರ್ಯ, ಸುನಂದ ಸಿಂಗೆ, ಬಂಡೆಮ್ಮ, ಚಂದ್ರಕಲಾ ನಡಗೇರಿ ಸೇರಿದಂತೆ ಅನೇಕ ಗಣ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಣಯ ಡೊಲೆ ನಿರೂಪಿಸಿದರು.

ವಾರ್ತಾ ಭಾರತಿ 1 Mar 2026 10:18 pm

Ind Vs Wi Highlights- ಅಭಿಷೇಕ್ ಶರ್ಮಾ ಔಟ್ ಆದಾಗ ಅಖೈಲ್ ಹೊಸೇನ್ `ಶ್' ಸೆಲೆಬ್ರೇಶನ್! ಮೌನವಾದ ಈಡನ್ ಗಾರ್ಡನ್ಸ್

india Vs West Indies Super 8 Match- ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧವೂ ಸಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಭಾರತದ ಅಭಿಮಾನಿಗಳು. ಆದರೆ ವಿಂಡೀಸ್ ಮಧ್ಯಮವೇಗಿ ಅಖೈಲ್ ಹೊಸೈನ್ ಎಸೆತಕ್ಕೆ ಲೆಕ್ಕಾಚಾರ ತಪ್ಪಿದ ಅವರು ಹೆಟ್ಮೆಯರ್ ಗೆ ಕ್ಯಾಚ್ ನೀಡಿ ಔಟಾದರು. ಈ ಕ್ಷಣ ಇಡೀ ಈಡನ್ ಗಾರ್ಡನ್ಸ್ ಮೈದಾನವೇ ಅಕ್ಷರಶಃ ಸೈಲೆಂಟ್ ಆಗಿತ್ತು. ಈ ವೇಳೆ ಹೊಸೈನ್ ಮಾಡಿದ `ಶ್' ಸಂಭ್ರಮಾಚರಣೆ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯ ಕರ್ನಾಟಕ 1 Mar 2026 10:17 pm

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಕೇಂದ್ರ ಸರಕಾರದ ನಿಲುವು ಖಂಡಿಸಿದ ಸಂಜಯ್ ರಾವತ್

ಮುಂಬೈ: ಇರಾನ್‌ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರನ್ನು ಬಲಿ ತೆಗೆದುಕೊಂಡ ಇರಾನ್ ಮೇಲಿನ ಅಮೆರಿಕ-ಇಸ್ರೇಲ್‌ನ ದಾಳಿಯ ಕುರಿತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿಲುವನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ರವಿವಾರ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಇರಾನ್ ದುರ್ಬಲವಾಗುವುದು ಭಾರತಕ್ಕೆ ಕೂಡ ಅಪಾಯಕಾರಿ. ಯಾಕೆಂದರೆ, ಇರಾನ್ ಅನ್ನು ಅಮೆರಿಕ ಹಾಗೂ ಇಸ್ರೇಲ್ ನಿಯಂತ್ರಿಸಿದರೆ, ಅವರು ಮುಂದಿನ ಹೆಜ್ಜೆ ಭಾರತದತ್ತ ಎಂದಿದ್ದಾರೆ. ‘‘ಈ ವಿಷಯದ ಬಗ್ಗೆ ಭಾರತ ಇದುವರೆಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಯುದ್ಧ ಅದರ ಮನೆ ಬಾಗಿಲಿಗೆ ತಲುಪಿದೆ’’ ಎಂದು ಅವರು ಪ್ರತಿಪಾದಿಸಿದ್ದಾರೆ. ನರೇಂದ್ರ ಮೋದಿ ಅವರ ಕಳೆದ ವಾರ ಇಸ್ರೇಲ್ ಭೇಟಿ ನೀಡಿರುವುದನ್ನು ‘‘ಭಾರತೀಯರ ಜಾಗತಿಕ ನೀತಿಗೆ ಆಘಾತ’’ ಎಂದು ರಾವತ್ ಬಣ್ಣಿಸಿದರು. ಅಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ಇಸ್ರೇಲ್ ಹಾಗೂ ಅಮೆರಿಕದ ಕ್ರೌರ್ಯ ಹಾಗೂ ಬೆದರಿಕೆ ಎಂದು ಅವರು ಕರೆದರು. ‘‘ಇರಾನ್ ಭಾರತದ ಸ್ನೇಹಿತ. ಅದೇ ರೀತಿ ಇಸ್ರೇಲ್ ಕೂಡ. ಕಾಶ್ಮೀರ ವಿಷಯದಲ್ಲಿ ಇರಾನ್ ಬಹಿರಂಗವಾಗಿ ನಮಗೆ ಬೆಂಬಲ ನೀಡಿದೆ. ಭಾರತದೊಂದಿಗಿನ ಗೆಳೆತನದ ಕಾರಣಕ್ಕೆ ಅದು ನಮಗೆ ಕಡಿಮೆ ಬೆಲೆಗೆ ತೈಲವನ್ನು ಒದಗಿಸಿದೆ’’ ಎಂದು ಅವರು ಹೇಳಿದರು. ಆದುದರಿಂದ ಇರಾನ್ ಕುರಿತಂತೆ ಭಾರತ ಒಂದು ನಿಲುವು ತಳೆಯಬೇಕು ಎಂದು ಅವರು ತಿಳಿಸಿದರು. ‘‘ಅಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬವನ್ನು ಹತೈಗೈಯುವಾಗ ಭಾರತದ ನಾಯಕತ್ವ ಹಾಗೂ ಅದರ ವಿದೇಶಿ ನೀತಿ ಏನು ಮಾಡುತ್ತಿತ್ತು ? ಇದು ವಿಶ್ವ ರಾಜಕೀಯದಲ್ಲಿ ದುರಾದೃಷ್ಟಕರ ಘಟನೆ. ಪಶ್ಚಿಮ ಏಷ್ಯದ ಸ್ಥಿರತೆಗೆ ಹಾನಿಕರ’’ ಎಂದು ಅವರು ಹೇಳಿದ್ದಾರೆ. ಅಫಘಾನಿಸ್ತಾನದ ಮೇಲಿನ ದಾಳಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಬೆಂಬಲ ನೀಡಿದೆ ಎಂದು ಅವರು ಗಮನ ಸೆಳೆದರು. ಬಿಕ್ಕಟ್ಟು ಭಾರತದ ಮನೆ ಬಾಗಿಲಿಗೆ ತಲುಪಿದೆ. ಅದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು. ಭೌಗೋಳಿಕೆಯನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.

ವಾರ್ತಾ ಭಾರತಿ 1 Mar 2026 10:17 pm

ಒಂದು ತಿಂಗಳಲ್ಲಿ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸೂಚನೆ

ಬೆಂಗಳೂರು, ಮಾ.1: ರಾಜ್ಯ ಸರಕಾರವು ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ, ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆಶಾ ಕುಮಾರಿ ಎ.ಜೆ. ಆದೇಶ ಹೊರಡಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗಧಿಪಡಿಸಿ ನೇಮಕಾತಿ ಅಧಿಸೂಚನೆಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ. ಆದರೆ, ಹೈಕೋರ್ಟ್‍ನ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಗಳು /ನೇಮಕಾತಿ ಪ್ರಾಧಿಕಾರಗಳು ಮುಂದಿನ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಶೇ.6ರಷ್ಟು(ಪರಿಶಿಷ್ಟ ಜಾತಿಗೆ ಶೇ.2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.4) ಹುದ್ದೆಗಳನ್ನು ಕಾಯ್ದಿರಿಸಬೇಕು ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ 2025ರ ನ.27ರ ಮದ್ಯಂತರ ಆದೇಶಕ್ಕಿಂತ ಹಿಂದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿರುವ ಪ್ರಕರಣಗಳನ್ನು ಯಥಾಪ್ರಕಾರ ಮುಂದುವರೆಸಿ, ಅಂತಿಮಗೊಳಿಸಬೇಕು. ಆದರೆ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ “ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ” ಎಂದು ಷರಾ ದಾಖಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 1 Mar 2026 10:16 pm

ಕಲಬುರಗಿ | ಡಾ.ಅಂಬೇಡ್ಕರ್‌ 135 ನೆಯ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಶೋಕ್ ವೀರನಾಯಕ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ರವರ 135 ನೇ ಜಯಂತ್ಯೋತ್ಸವ ನಿಮಿತ್ತ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಶೋಕ ವೀರನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಅದರಂತೆಯೇ ಸಮಿತಿಯ ಗೌರವಾಧ್ಯಕ್ಷರಾಗಿ ದಶರಥ ಬಾಬು ಒಂಟಿ ಅವರನ್ನು ಹಿರಿಯರಾದ ಡಾ.ವಿಠ್ಠಲ ದೊಡ್ಡಮನಿ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಪಣ್ಣ ಗಂಜಗೇರಿ, ದಿಗಂಬರ ಬೆಳಮಗಿ, ಗಣೇಶ ವಳಕೇರಿ, ಅಂಬಾರಾಯ ಅಷ್ಟಗಿ, ಗುಂಡಪ್ಪ ಲಂಡನಕರ್, ಅರ್ಜುನ್ ಭದ್ರೆ, ವಿಶಾಲ ಧರ್ಗಿ, ರಾಹುಲ ಉಪಾರೆ, ಸುರೇಶ ಹಾದಿಮನಿ, ಎಸ್ ಎಸ್ ತವಡೆ, ದೇವೇಂದ್ರ ಸಿನ್ನೂರ್, ಪ್ರಕಾಶ ಮೂಲಭಾರತಿ, ವಿಶಾಲ ನವರಂಗ್, ರಾಜಕುಮಾರ ಕಪನೂರ, ಅವಿನಾಶ ಗಾಯಕವಾಡ, ಪ್ರಕಾಶ ಔರಾದಕರ, ಶ್ರೀನಿವಾಸ ಲಾಖೆ, ದಿನೇಶ ದೊಡ್ಡಮನಿ, ರಾಜು ಸಂಕಾ, ವಾಸು ಒಂಟಿ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 1 Mar 2026 10:15 pm

ರೆಸಾರ್ಟ್‌ನಲ್ಲಿ ಮಲಗಿದ್ದ ಪ್ರವಾಸಿ ಮಹಿಳೆ ಮೃತ್ಯು

ಮಲ್ಪೆ, ಮಾ.1: ರೆಸಾರ್ಟ್‌ನಲ್ಲಿ ತಂಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಎಲ್.ಜಾಕ್ಸನ್ ಎಂಬವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ(36) ಎಂದು ಗುರುತಿಸಲಾಗಿದೆ. ಇವರು ಫೆ.26ರಂದು ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಫೆ.27ರಂದು ಮಲ್ಪೆ ಬೀಚ್‌ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು. ಫೆ.28ರಂದು ಬೆಳಗ್ಗೆ 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಿದಾಗ ಏಳದೆ ಇದ್ದು, ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು. ಲೆನ್ಸಿ ಮೇರಿ ಹೃದಯಾಘಾತದಿಂದಲೋ ಅಥವಾ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗದಿದೆ.

ವಾರ್ತಾ ಭಾರತಿ 1 Mar 2026 9:32 pm

ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಮೃತ್ಯು: ವರದಿ

ಟೆಹ್ರಾನ್: ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರು ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ILNA ವರದಿ ಮಾಡಿದೆ. ILNA ತಿಳಿಸಿದಂತೆ, ಟೆಹ್ರಾನ್ ನಗರದ ನರ್ಮಕ್ ಪ್ರದೇಶದಲ್ಲಿ ನಡೆದ ವಾಯುದಾಳಿಯಲ್ಲಿ ಅಹ್ಮದಿನೆಜಾದ್ ಅವರ ನಿವಾಸ ಗುರಿಯಾಗಿದ್ದು, ದಾಳಿಯ ಪರಿಣಾಮವಾಗಿ ಅವರು ಹಾಗೂ ಅವರ ಮೂವರು ಅಂಗರಕ್ಷಕರು ಸಾವನ್ನಪ್ಪಿದ್ದಾರೆ. ಫೆಬ್ರವರಿ 28ರಂದು ಅಂಗರಕ್ಷಕರ ಸಾವಿನ ಬಗ್ಗೆ ಪ್ರಾಥಮಿಕ ಮಾಹಿತಿ ಹೊರಬಂದಿತ್ತು. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಹ್ಮದಿನೆಜಾದ್, ತಮ್ಮ ಅಧಿಕಾರಾವಧಿಯಲ್ಲಿ ಇಸ್ರೇಲ್ ವಿರುದ್ಧದ ಕಠಿಣ ನಿಲುವು ಹಾಗೂ ಪರಮಾಣು ಕಾರ್ಯಕ್ರಮಕ್ಕೆ ನೀಡಿದ ವೇಗದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. 2009ರ ವಿವಾದಾತ್ಮಕ ಮರುಚುನಾವಣೆಯ ನಂತರ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು ‘ಗ್ರೀನ್ ಮೂವ್‌ಮೆಂಟ್’ ಎಂದು ಪ್ರಸಿದ್ಧಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆಯ ವಿರುದ್ಧ ಟೀಕಾತ್ಮಕ ಧೋರಣೆ ತಾಳಿದ್ದ ಅವರು, ಎಕ್ಸ್‌ಪೆಡಿಯೆನ್ಸಿ ವಿವೇಚನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಾರ್ತಾ ಭಾರತಿ 1 Mar 2026 9:32 pm

ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ: ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ

ಬೆಂಗಳೂರು : ಇಸ್ರೇಲ್–ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಹಿನ್ನಲೆಯಲ್ಲಿ ನಗರದ ಜಾನ್ಸನ್ ಮಾರುಕಟ್ಟೆ ಸಮೀಪವಿರುವ ಅಸ್ಕರಿ ಮಸೀದಿಯ ಮುಂಭಾಗದಲ್ಲಿ ಶಿಯಾ ಮುಸ್ಲಿಮರು ರವಿವಾರ ಮೌನ ಪ್ರತಿಭಟನೆ ನಡೆಸುವ ಮೂಲಕ ಶೋಕ ವ್ಯಕ್ತಪಡಿಸಿದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಪ್ರತಿಕ್ರಿಯಿಸಿರುವ ಅಂಜುಮನ್ ಇ ಇಸ್ಲಾಮಿಯಾ ಬೆಂಗಳೂರಿನ ಅಧ್ಯಕ್ಷ ಸೈಯದ್ ಜಮೀನ್ ರಜಾ, ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಮಿಲಿಟರಿ ದಾಳಿಗಳು ಅತ್ಯಂತ ಖಂಡನೀಯವಾಗಿವೆ. ಈ ದಾಳಿಗಳಿಗೆ ಸಂಬಂಧಪಟ್ಟಂತೆ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಮೂಕಪ್ರೇಕ್ಷಕರಾಗಿರುವುದು ದುರದೃಷ್ಟಕರ. ಇದು ಕೇವಲ ಒಂದು ದೇಶದ ಮೇಲಿನ ದಾಳಿಯಲ್ಲ, ಬದಲಿಗೆ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಇಂತಹ ಕೃತ್ಯಗಳಿಗೆ ಯಾರೇ ಜವಾಬ್ದಾರರಾಗಿದ್ದರೂ ಸಹ ಅದನ್ನು ಖಂಡಿಸಬೇಕು ಎಂದರು. ಇಸ್ರೇಲ್ ಮತ್ತು ಅಮೆರಿಕ ದಾಳಿಯಲ್ಲಿ ಇರಾನ್ ನಾಯಕ ಖಾಮಿನೈ ಮೃತಪಟ್ಟಿದ್ದು, ಇದು ಖಂಡನೀಯವಾದದ್ದು. ನಾವೆಲ್ಲ ಇಲ್ಲಿ ಸೇರಿಕೊಂಡು ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ ಎಂದು ಸೈಯದ್ ಜಮೀನ್ ಹೇಳಿದರು.

ವಾರ್ತಾ ಭಾರತಿ 1 Mar 2026 9:27 pm

ಸೌದಿ ರಾಜಕುಮಾರ ಇರಾನ್ ಮೇಲೆ ದಾಳಿ ಮಾಡಲು ʼಲಾಬಿ' ನಡೆಸಿದ್ದರು: Washington Post ವರದಿ

  ನ್ಯೂಯಾರ್ಕ್: ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸಾರ್ವಜನಿಕವಾಗಿ ರಾಜತಾಂತ್ರಿಕತೆಗೆ ಒಲವು ತೋರಿದರೂ ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅನೇಕ ಖಾಸಗಿ ಕರೆಗಳನ್ನು ಮಾಡಿ ಇರಾನ್ ಮೇಲೆ ದಾಳಿ ನಡೆಸಬೇಕೆಂದು ʼಲಾಬಿ' ನಡೆಸಿದ್ದರು ಎಂದು Washington Post ವರದಿ ಮಾಡಿದೆ. ಇರಾನ್ ಮೇಲಿನ ದಾಳಿಗೆ ತಮ್ಮ ದೇಶದ ವಾಯುಪ್ರದೇಶ ಅಥವಾ ಪ್ರದೇಶವನ್ನು ಬಳಸಲು ಅವಕಾಶ ನೀಡುವುದಿಲ್ಲ. ಇರಾನ್‍ನ ಸಾರ್ವಭೌಮತ್ವವನ್ನು ಸೌದಿ ಅರೆಬಿಯಾ ಗೌರವಿಸುತ್ತದೆ ಮತ್ತು ಇರಾನ್ ಹಾಗೂ ಅಮೆರಿಕ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತದೆ ಎಂದು ಜನವರಿಯಲ್ಲಿ ಯುವರಾಜ ಹೇಳಿಕೆ ನೀಡಿದ್ದರು.

ವಾರ್ತಾ ಭಾರತಿ 1 Mar 2026 9:25 pm

ಕಲಬುರಗಿಯ ಐಟಿಎಫ್ ಮಹಿಳಾ ಟೂರ್ನಿ : ಅರ್ಹತಾ ಸುತ್ತಿನಲ್ಲಿ ಮಿಂಚಿದ ಭಾರತೀಯರು

ಕಲಬುರಗಿ : ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ನಿಮಿತ್ತ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ಮೊದಲ ದಿನದಂದು ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. 11 ನೇ ಶ್ರೇಯಾಂಕದ ವಂಶಿತಾ ಪಠಾನಿಯಾ 6-3, 6-1 ಅಂತರದಲ್ಲಿ ಅರುಣ್‌ಕುಮಾರ್ ಲಕ್ಷ್ಮಿ ಪ್ರಭಾ ಅವರನ್ನು ಸೋಲಿಸಿದರು, ಅಗ್ರ ಶ್ರೇಯಾಂಕದ ಮರಿಯಾ ಮಿಖೈಲೋವಾ 6-2, 6-1 ಅಂತರದಲ್ಲಿ ಚಂದನಾ ಪೋಟುಗರಿ ಅವರ ಅಭಿಯಾನವನ್ನು ಕೊನೆಗೊಳಿಸಿದರು. ಎರಡನೇ ಶ್ರೇಯಾಂಕದ ಸಿಂಗಾಪುರದ ಇವಾ ಮೇರಿ ಡೆಸ್ವಿಗ್ನೆಸ್ ಕೂಡ ವೈಲ್ಡ್‌ಕಾರ್ಡ್ ಓಮ್ನಾ ಯಾದವ್ ದಾವುನಬೋಯಿನಾ ಅವರನ್ನು 6-1, 6-3 ಅಂತರದಲ್ಲಿ ಸೋಲಿಸಿ ಮುನ್ನಡೆದರು. ಸೌಮ್ಯ ರೋಂಡೆ 15 ನೇ ಶ್ರೇಯಾಂಕದ ದಿಶಾ ಬೆಹೆರಾ ಅವರನ್ನು 7-5, 6-4 ಅಂತರದಿಂದ ಸೋಲಿಸಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಕಾಶಿಶ್ ಭಾಟಿಯಾ ನಾಲ್ಕನೇ ಶ್ರೇಯಾಂಕದ ಪೂಜಾ ಇಂಗಲೆ ಅವರನ್ನು 6-4, 6-0 ಅಂತರದಿಂದ ಸೋಲಿಸಿದರು. 12ನೇ ಶ್ರೇಯಾಂಕದ ಆಹಾನ್ ಆಹಾನ್ ನಾಟಕೀಯ ಟೈ-ಬ್ರೇಕರ್ ಮುಖಾಮುಖಿಯಲ್ಲಿ ಡ್ಯಾನಿಕಾ ಫರ್ನಾಂಡೊ ಅವರನ್ನು ಎದುರಿಸಿದರು, 5-7, 6-4, 11-9 ಅಂತರದಿಂದ ಗೆಲುವು ಸಾಧಿಸಿದರು. ಉಳಿದಂತೆ, ಐಶ್ವರ್ಯಾ ಜಾಧವ್ ಐದನೇ ಶ್ರೇಯಾಂಕದ ಪ್ರತ್ಯುಷಾ ರಾಚಪುಡಿ ವಿರುದ್ಧ 6-3, 6-1 ಅಂತರದಿಂದ ಜಯಗಳಿಸಿ, 16 ನೇ ಶ್ರೇಯಾಂಕದ ಶ್ರೀಮಾನ್ಯ ರೆಡ್ಡಿ ಅನುಗೊಂಡ ಸಂಜನಾ ಸಿರಿಮಲ್ಲ ಅವರನ್ನು 3-6, 6-4, 10-6 ಅಂತರದಿಂದ ಸೋಲಿಸುವ ಮೂಲಕ ದೃಢತೆಯನ್ನು ತೋರಿಸಿದರು. ಏತನ್ಮಧ್ಯೆ, 13 ನೇ ಶ್ರೇಯಾಂಕದ ಮಹಿಕಾ ಖನ್ನಾ ಯಾವುದೇ ತಪ್ಪುಗಳನ್ನು ಮಾಡದಂತೆ ಖಚಿತಪಡಿಸಿಕೊಂಡರು, ವೈಲ್ಡ್‌ಕಾರ್ಡ್ ಹೃದಯೇಶಿ ಪೈ ಅವರನ್ನು 6-1, 6-3 ಅಂತರದಿಂದ ಸೋಲಿಸಿದರು. ವೈಲ್ಡ್‌ಕಾರ್ಡ್ ಸ್ನಿಗ್ಧಾ ಕಾಂತಾ ಕೂಡ ಪ್ರಭಾವಶಾಲಿ ಪ್ರದರ್ಶನ ನೀಡಿದರು, ಆರನೇ ಶ್ರೇಯಾಂಕದ ಮಲೇಷ್ಯಾದ ಎಲ್ಸಾ ವಾನ್ ಅವರನ್ನು 6-1, 5-7, 10-3 ಅಂತರದಿಂದ ಸೋಲಿಸಿದರು, ಇದು ಭಾರತೀಯ ತಂಡದ ಹೋರಾಟದ 9ನೇ ಶ್ರೇಯಾಂಕದ ಸಂದೀಪ್ತಿ ಸಿಂಗ್ ರಾವ್ ಸೈಲಿ ಪ್ರಶಾಂತ್ ಕುಮಾರ್ ಥಕ್ಕರ್ ವಿರುದ್ಧ 7-5, 6-2 ಅಂತರದಿಂದ ಜಯಗಳಿಸಿದರು, ಆದರೆ 10 ನೇ ಶ್ರೇಯಾಂಕದ ಯಶಸ್ವಿನಿ ಪನ್ವಾರ್ ಆಕೃತಿ ಸೋಂಕುಸಾರೆ ನಾರಾಯಣ್ ಸೋಂಕುಸಾರೆ ವಿರುದ್ಧ 6-4, 6-4 ಅಂತರದಲ್ಲಿ ಸ್ಥಿರ ಫಲಿತಾಂಶವನ್ನು ಪಡೆದರು. ಎಂಟನೇ ಶ್ರೇಯಾಂಕದ ಬೇಲಾ ತಮ್ಹಂಕರ್ ಮತ್ತು 14 ನೇ ಶ್ರೇಯಾಂಕದ ಲಕ್ಷ್ಮಿಸಿರಿ ದಂಡು ಕ್ರಮವಾಗಿ ಜಿಗ್ಯಾಸಾ ನರಸಿಂಘಾನಿ ಮತ್ತು ಜೀತೇಶ್ ಕುಮಾರಿ ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸುವ ಮೂಲಕ ಮೊದಲ ಅರ್ಹತಾ ದಿನವನ್ನು ಸಂಪನ್ನಗೊಳಿಸಿದರು.    

ವಾರ್ತಾ ಭಾರತಿ 1 Mar 2026 9:23 pm

ಅವರು ನನ್ನನ್ನು ಕೊಂದರೂ ನೀವು ದೃಢವಾಗಿ ಉಳಿಯುವವರೆಗೆ ಅದನ್ನು ನಷ್ಟವೆಂದು ಪರಿಗಣಿಸಬೇಡಿ: ಖಾಮಿನೈ ಅವರ ಹೇಳಿಕೆಯ ವೀಡಿಯೊ ವೈರಲ್

ಟೆಹ್ರಾನ್: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಇರಾನ್‍ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಇತ್ತೀಚಿನ ದಿನಗಳಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿರುವ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಫೆಬ್ರವರಿ 17ರಂದು ಪೂರ್ವ ಅಝರ್ ಬೈಜಾನ್ ಪ್ರಾಂತದ ಜನರೊಂದಿಗೆ ನಡೆಸಿದ ಸಭೆಯಲ್ಲಿ ಖಾಮಿನೈ ನನ್ನ ದೇಹಕ್ಕೆ ಹೆಚ್ಚಿನ ಮೌಲ್ಯವಿಲ್ಲ. ಒಂದು ವೇಳೆ ಅವರು ನನ್ನನ್ನು ಕೊಂದರೂ ನೀವು ಇಮಾಮ್ ಹುಸೇನ್ ಅವರ ತತ್ವಗಳ ಮೇಲೆ ದೃಢವಾಗಿ ಉಳಿಯುವವರೆಗೆ ಅದನ್ನು ನಮ್ಮ ನಷ್ಟವೆಂದು ಪರಿಗಣಿಸಬೇಡಿ' ಎಂದಿದ್ದರು. ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಂದಾಗಿ ಅಮೆರಿಕವು ಪತನದ ಅಂಚಿನತ್ತ ಸಾಗುತ್ತಿದೆ. ಅಮೆರಿಕದ ಜನಸಂಖ್ಯೆಯ 50%ಕ್ಕೂ ಹೆಚ್ಚಿನವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿರೋಧಿಸುತ್ತಿದ್ದಾರೆ. ಅಮೆರಿಕದ ವ್ಯವಸ್ಥೆಯೂ ಕುಸಿತದತ್ತ ಸಾಗುತ್ತಿದೆ ಎಂದು ಖಾಮಿನೈ ಹೇಳಿರುವ ವೀಡಿಯೊ ವೈರಲ್ ಆಗಿದೆ. ನಮ್ಮಲ್ಲಿ ನಿರೋಧಕ(ತಡೆಗಟ್ಟುವ) ಆಯುಧಗಳು ಇರಬೇಕು. ಒಂದು ದೇಶದ ಬಳಿ ಇಂತಹ ಆಯುಧಗಳಿಲ್ಲದಿದ್ದರೆ ಆ ದೇಶವು ಶತ್ರುಗಳ ಪಾದದಡಿ ಅಪ್ಪಚ್ಚಿಯಾಗುತ್ತದೆ. ಅಮೆರಿಕ ತನಗೆ ಅಗತ್ಯವೇ ಇಲ್ಲದ ವಿಷಯಗಳಲ್ಲಿ ಮಧ್ಯಪ್ರವೇಶಿಸುತ್ತಿದೆ. ನಿಮ್ಮ ಬಳಿ ಅಂತಹ ಶಸ್ತ್ರಾಸ್ತ್ರ(ಪರಮಾಣು ಶಸ್ತ್ರಾಸ್ತ್ರ)ಗಳಿದ್ದರೆ ಅದಕ್ಕೂ ಅವರಿಗೂ ಏನು ಸಂಬಂಧ? ಅದು ಇರಾನ್ ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯ. ತಮ್ಮ ಸೇನೆ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸೇನೆ ಎಂದು ಅಮೆರಿಕ ಅಧ್ಯಕ್ಷರು ಹೇಳುತ್ತಾ ಬಂದಿದ್ದಾರೆ. ಜಗತ್ತಿನ ಅತ್ಯಂತ ಬಲಿಷ್ಠ ಸೇನೆಗೂ ಒಮ್ಮೊಮ್ಮೆ ಎದ್ದು ನಿಲ್ಲಲೂ ತ್ರಾಣವಿಲ್ಲದಂತೆ ಕಪಾಳಮೋಕ್ಷ ಆಗಬಹುದು' ಎಂದು ಖಾಮಿನೈ ಹೇಳಿರುವ ಮತ್ತೊಂದು ವೀಡಿಯೊ ಕೂಡಾ ವೈರಲ್ ಆಗಿದೆ.

ವಾರ್ತಾ ಭಾರತಿ 1 Mar 2026 9:22 pm

Bengaluru | ಹಾಸಿಗೆ, ಸೋಫ ಗೋದಾಮಿನಲ್ಲಿ ಬೆಂಕಿ ಅವಘಡ

ಬೆಂಗಳೂರು, ಮಾ.1: ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾನಪುರ ಸಮೀಪದ ಕೆಂಬತ್ತಹಳ್ಳಿಯಲ್ಲಿರುವ ಬೃಹತ್ತಾದ ಹಾಸಿಗೆ, ಸೋಫ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ರವಿವಾರ ವರದಿಯಾಗಿದೆ. ಈ ಗೋದಾಮಿನಲ್ಲಿ ಹಾಸಿಗೆ ಹಾಗೂ ಸೋಫಾ ತಯಾರಿಸಲಾಗುತ್ತದೆ. ಮಾ.1ರ ಬೆಳಗ್ಗೆ 8.15ರ ಸುಮಾರಿನಲ್ಲಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ 8 ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಗೋದಾಮಿನ ಕಾಂಪೌಂಡ್‍ನೊಳಗೆ ನಿಲ್ಲಿಸಿದ್ದ ಮೂರು ಕಾರುಗಳು ಹಾಗೂ ಎರಡು ಗೂಡ್ಸ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಗೊತ್ತಾಗಿದೆ. ಈ ಗೋದಾಮು ಅಕ್ಕಪಕ್ಕದ ಅಪಾರ್ಟ್‍ಮೆಂಟ್‍ಗಳಲ್ಲಿರುವ ನಿವಾಸಿಗಳನ್ನು ಮತ್ತೊಂದು ಬ್ಲಾಕ್‍ಗೆ ಸ್ಥಳಾಂತರಿಸಲಾಗಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಲ್ಲಘಟ್ಟಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 1 Mar 2026 9:17 pm

ಕೊಪ್ಪಳ | ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಿಢೀರ್ ದಾಳಿ: 9 ಟ್ರಕ್‌, 15 ಟ್ರ್ಯಾಕ್ಟರ್‌ ಸೇರಿ ಹಲವು ವಾಹನ ವಶ

ಕೊಪ್ಪಳ : ತಾಲೂಕಿನ ಶಿವಪುರ, ಬಂಡಿಹರ್ಲಾಪುರ, ಬಸಾಪುರ ಹಾಗೂ ಹುಸೇನಪುರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಭಾನುವಾರ ವಿವಿಧ ಇಲಾಖೆಗಳ ಸಂಯುಕ್ತ ತಂಡ ದಿಢೀರ್ ದಾಳಿ ನಡೆಸಿ ಟ್ರ್ಯಾಕ್ಟರ್‌, ಟಿಪ್ಪರ್‌, ಜೆಸಿಬಿ ಸೇರಿದಂತೆ ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹಿಟ್ನಾಳ ಹೋಬಳಿಯ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿಕೊಂಡು ಕಾರ್ಯಾಚರಣೆ ನಡೆಸಿದವು. ದಾಳಿಯಲ್ಲಿ 9 ಟ್ರಕ್‌ಗಳು, 15 ಟ್ರ್ಯಾಕ್ಟರ್‌ಗಳು, ಕಾಂಪ್ರೆಸ್ಸರ್‌ಗಳು, 13 ಜೆಸಿಬಿ ಮತ್ತು ಹಿಟಾಚಿಗಳು ಹಾಗೂ ಎರಡು ಕ್ರೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಲು ಸ್ಫೋಟಕ್ಕೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ದಿ ಅವರ ನೇತೃತ್ವದಲ್ಲಿ ಸ್ಥಳವನ್ನು ಪರಿಶೀಲಿಸಲಾಯಿತು. ಈ ವೇಳೆ ಅವರು ಮಾತನಾಡಿ, “ಸಾರ್ವಜನಿಕರ ದೂರಿನ ಅನ್ವಯ ಹಾಗೂ ಐಜಿಪಿ ಮಾರ್ಗದರ್ಶನದಂತೆ ಅಡಿಷನಲ್ ಎಸ್ಪಿ, ಇಬ್ಬರು ಇನ್ಸ್‌ಪೆಕ್ಟರ್‌, ಮೂವರು ಪಿಎಸ್‌ಐ ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ವಾಹನಗಳು ಮತ್ತು ಸಾಮಗ್ರಿಗಳ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ,” ಎಂದು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ತಮ್ಮ ಖಾಸಗಿ ಜಮೀನಿನಲ್ಲಿ ನಡೆಯುತ್ತಿದೆ ಎಂದು ಹೇಳುವವರು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಪರವಾನಿಗೆಗಳನ್ನು ಪಡೆದು ಮಾತ್ರ ಕಾರ್ಯಾಚರಣೆ ನಡೆಸಬೇಕು ಎಂದು ಎಚ್ಚರಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಳೆಯಲಾಗುತ್ತಿದ್ದು, ಅಕ್ರಮ ನಡೆಸಿದವರ ವಿರುದ್ಧ ದಂಡ ವಿಧಿಸಲಾಗುವುದು. ವಶಪಡಿಸಿಕೊಂಡ ವಾಹನಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 9:14 pm

ವಾಟ್ಸಾಪ್ ಸಂದೇಶದಿಂದ ಲಕ್ಷಾಂತರ ರೂ. ಹಣ ವಂಚನೆ: ಪ್ರಕರಣ ದಾಖಲು

ಅಮಾಸೆಬೈಲು, ಮಾ.1: ವಾಟ್ಸಾಪ್ ಸಂದೇಶದ ಮೂಲಕ ಹಣ ಕಳುಹಿಸುವಂತೆ ಹೇಳಿ ಯುವಕನೋರ್ವನಿಗೆ ಲಕ್ಷಾಂತರ ರೂ. ಹಣ ಮೋಸ ಮಾಡಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಂಗಡಿ ಗ್ರಾಮದ ರವಿಚಂದ್ರ(29) ಎಂಬವರು ಮೂರು ವರ್ಷಗಳ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದು ಅನುಷಾಳ ಹೆತ್ತವರಿಗೆ ಈ ವಿಷಯದಲ್ಲಿ ಒಪ್ಪಿಗೆ ಇಲ್ಲದ ಕಾರಣ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಪ್ರಕರಣ ಇತ್ಯರ್ಥ ಮಾಡಲಾಗಿತ್ತು. ನಂತರ 2025ರ ಅ.24ರಂದು ಈ ಹಿಂದೆ ಅನುಷಾಳು ಉಪಯೋಗಿ ಸುತ್ತಿದ್ದ ಮೊಬೈಲ್ ನಂಬರಿನಿಂದ ದಿವ್ಯಾ ಎಂಬಾಕೆ ರವಿಚಂದ್ರ ಅವರ ವಾಟ್ಸಾಪ್‌ಗೆ ಹುಟ್ಟುಹಬ್ಬದ ಶುಭಾಶಯ ಎಂದು ಮೆಸೆಜ್ ಕಳುಹಿಸಿದ್ದರು. ಈ ಸಂದೇಶ ಅನುಷಾಳೆ ಕಳುಹಿಸಿರಬಹುದೆಂದು ರವಿಚಂದ್ರ, ಮರು ಸಂದೇಶ ಕಳುಹಿಸಿದ್ದು ನಂತರ ಇಬ್ಬರೂ ಪರಸ್ಪರ ಸಂದೇಶ ವಿನಿಮಯ ಮಾಡಿಕೊಂಡಿದ್ದರು. ಈ ಮಧ್ಯೆ ಸಂದೇಶದ ಮೂಲಕ ಆರೋಪಿ ದಿವ್ಯಾ, ತನಗೆ ಮನೆಯಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದು, ಅದನ್ನು ನಂಬಿದ ರವಿಚಂದ್ರ, ಆಕೆ ಕಳುಹಿಸಿದ ಸ್ಕ್ಯಾನರ್ ಮೂಲಕ ಒಟ್ಟು 1,80,200ರೂ. ಹಣವನ್ನು ಕಳುಹಿಸಿದ್ದರು. ಆರೋಪಿ ದಿವ್ಯಾ, ಮೋಸ ಮಾಡುವ ಉದ್ದೇಶದಿಂದ ವಾಟ್ಸಾಪ್‌ನಲ್ಲಿ ಚಾಟ್ ಮಾಡಿ ಅನ್ಯ ವ್ಯಕ್ತಿಯಂತೆ ನಟಿಸಿ ರವಿಚಂದ್ರ ಅವರಿಂದ ಹಣ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 1 Mar 2026 9:10 pm

ಮೀನುಗಾರಿಕೆ ದೋಣಿಯಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಗಂಗೊಳ್ಳಿ, ಮಾ.1: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಲ್ಲಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಗ್ರಾಮದ ಜಗನ್ನಾಥ ಖಾರ್ವಿ(43) ಎಂದು ಗುರುತಿಸಲಾಗಿದೆ. ಇವರು ನಾಡದೋಣಿಯಲ್ಲಿ ಫೆ.27ರಂದು ಬೆಳಗ್ಗೆ ಇತರರೊಂದಿಗೆ ದಾಕುಹಿತ್ಲುವಿನಿಂದ ಹೊರಟು ಸುಮಾರು 5 ಮಾರು ದೂರದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ವಿಪರೀತ ಗಾಳಿಯಿಂದ ದೋಣಿ ಅಲುಗಾಡಿದ್ದು, ಜಗನ್ನಾಥ ಖಾರ್ವಿ ಆಯತಪ್ಪಿ ದೋಣಿಯೊಳಗೆ ಬಿದ್ದರೆನ್ನಲಾಗಿದೆ. ಇದರಿಂದ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿ ಸಲಾಯಿತು. ಆದರೆ ಅವರು ಮಾ.1ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 1 Mar 2026 9:08 pm

ದುಬೈನಲ್ಲಿ ಸಿಲುಕಿಕೊಂಡ ಇಂಗ್ಲೆಂಡ್, ಪಾಕಿಸ್ತಾನ ಕ್ರಿಕೆಟಿಗರು!

ಹೊಸದಿಲ್ಲಿ: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಳವಾಗುತ್ತಿರುವಾಗಲೇ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ಕ್ರಿಕೆಟಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಲಯನ್ಸ್ ತಂಡವು ಪಾಕಿಸ್ತಾನದ ಶಾಹೀನ್ಸ್ ತಂಡದ ವಿರುದ್ಧ ಆಡಲು ಯುಎಇಗೆ ತೆರಳಿದೆ. ಆದರೆ ಇರಾನ್ ದೇಶವು ದುಬೈ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ನಂತರ ಎಲ್ಲವೂ ಬದಲಾಗಿದೆ. ಇದರ ಪರಿಣಾಮವಾಗಿ ಯುಎಇ, ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು, ವಿಮಾನಗಳ ಹಾರಾಟಗಳನ್ನು ರದ್ದುಪಡಿಸಿದ್ದು, ರವಿವಾರದ ಕ್ರಿಕೆಟ್ ಪಂದ್ಯವು ರದ್ದಾಗಿದೆ. ಜಾನಿ ಬೈರ್‌ಸ್ಟೋವ್, ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಹಾಗೂ ಇತರ 24 ಆಟಗಾರರು ಹಾಗೂ ಸಿಬ್ಬಂದಿ ಸದಸ್ಯರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ತಂಡಗಳಿಗೆ ದುಬೈಯಿಂದ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ‘‘ಪ್ರತಿಯೊಬ್ಬರು ಸುರಕ್ಷಿತವಾಗಿರುವುದನ್ನು ಹಾಗೂ ಎಲ್ಲರೂ ಆದಷ್ಟು ಬೇಗನೆ ತವರಿಗೆ ಮರಳುವುದನ್ನು ಖಚಿತಪಡಿಸಲು ನಾವು ಕಾರ್ಯಪ್ರವೃತ್ತರಾಗದ್ದೇವೆ’’ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ತಿಳಿಸಿದೆ. ‘‘ನಮ್ಮ ತಂಡಗಳು ಹಾಗೂ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯು ನಮ್ಮ ಮೊದಲ ಆದ್ಯತೆಯಾಗಿದೆ. ಮಧ್ಯ ಪ್ರಾಚ್ಯದ ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿ ನಾವು ಭದ್ರತಾ ತಜ್ಞರುಗಳ ಹಾಗೂ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಅಧಿಕಾರಿಯ ಸಲಹೆಯನ್ನು ಪಾಲಿಸುತ್ತಿದ್ದೇವೆ’’ ಎಂದು ಇಸಿಬಿ ವಕ್ತಾರರು ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 9:06 pm

ವಿದಾಯ ಪಂದ್ಯದಲ್ಲಿ ಪತ್ನಿ ಅಲಿಸ್ಸಾ ಹೀಲಿ ಶತಕ ಬಾರಿಸಿದಾಗ ಭಾವುಕರಾದ ಮಿಚೆಲ್ ಸ್ಟಾರ್ಕ್; ವೈರಲ್ ಆಗಿದೆ ವಿಡಿಯೋ

India W Vs Australia W- ಮಿಚೆಲ್ ಸ್ಟಾರ್ಕ್ ಮತ್ತು ಅಲಿಸ್ಸಾ ಹೀಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ದಂಪತಿ ಎಂದರೆ ಖಂಡಿತ ತಪ್ಪಿಲ್ಲ. ಪತಿ ಆಸ್ಟ್ರೇಲಿಯಾ ತಂಡದ ಮುಂಚೂಣಿ ವೇಗಿಯಾಗಿದ್ದರೆ, ಪತ್ನಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ. ಇಬ್ಬರೂ ಯಶಸ್ವಿ ಕ್ರಿಕೆಟಿಗರು. ಇದೀಗ ಅಲಿಸ್ಸಾ 17 ವರ್ಷದ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಸಾರಿದ್ದಾರೆ. ಭಾರತ ಮಹಿಳಾ ತಂಡದ ವಿರುದ್ಧ ಹೋಬರ್ಟ್ ನಲ್ಲಿ ನಡೆದ 3ನೇ ಏಕದಿನ ಪಂದ್ಯ ಅವರ ವಿದಾಯದ ಪಂದ್ಯವಾಗಿತ್ತು. ಈ ವೇಳೆ ಅವರ ಶತಕ ಹೊಡೆದಾಗ ಮಿಚೆಲ್ ಸ್ಟಾರ್ಕ್ ಭಾವುಕರಾಗಿರುವ ವಿಡಿಯೋ ವೈರಲ್ ಆಗಿದೆ.

ವಿಜಯ ಕರ್ನಾಟಕ 1 Mar 2026 9:04 pm

ಉಡುಪಿ ಜಿಲ್ಲೆಯಲ್ಲಿ 58,676 ಅರ್ಜಿದಾರರ ಮ್ಯುಟೇಶನ್‌ಗಳು ಸ್ವಯಂಚಾಲಿತ ಅನುಮೋದನೆ: ಡಿಸಿ ಸ್ವರೂಪ ಟಿ.ಕೆ.

ಉಡುಪಿ, ಮಾ.1: ಭೂಮಿ ಮ್ಯುಟೇಷನ್‌ಗಳಿಗೆ ಸಂಬಂಧಿಸಿದಂತೆ ಆಕ್ಷೇಪ ರಹಿತ 7 ದಿನಗಳ (ನೋಂದಾಯಿತ) ಹಾಗೂ 15 ದಿನಗಳ(ನೋಂದಾಯಿತ ವಲ್ಲದ) ನೋಟೀಸು ಅವಧಿ ಹೊಂದಿರುವ ಮ್ಯುಟೇಶನ್‌ಗಳನ್ನು ನೋಟೀಸು ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಈ ಸ್ವಯಂ ಚಾಲಿತ ಮ್ಯುಟೇಶನ್‌ಗೆ ಫೆ.24ರಂದು ಕಂದಾಯ ಸಚಿವರು ಚಾಲನೆಯನ್ನು ನೀಡಿದ್ದು, ಜಿಲ್ಲೆಯಲ್ಲಿ ಈ ಹಿಂದೆ ನೋಟೀಸು ರಹಿತ ಅಂದರೆ 9 ರೀತಿಯ(ಹಕ್ಕು ಋಣ, ಭೂಪರಿವರ್ತನೆ, ಪೋಡಿ, ಭೂಸ್ವಾಧೀನ, ಕೋರ್ಟ್ ಆದೇಶ, ಕೋರ್ಟ್ ತಡೆ/ತಡೆ ಬಿಡುಗಡೆ, ಸರಕಾರಿ ಆದೇಶ, ಸಾಗುವಳಿದಾರರು ಮತ್ತು ಪಹಣಿ ವರ್ಗಾವಣೆ) ಮ್ಯುಟೇಶನ್‌ಗಳು ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 2025ರ ಎ.1ರಿಂದ ಒಟ್ಟು 58,676 ಅರ್ಜಿದಾರರ ಮ್ಯುಟೇಶನ್‌ಗಳು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಅನುಮೋದನೆ ಯಾಗಿವೆ. ಇದರಿಂದಾಗಿ ಸಾರ್ವಜನಿಕರು ತಮ್ಮ ನೋಂದಾಯಿತ ದಸ್ತಾವೇಜುಗಳ (ಕ್ರಯ, ವಿಭಾಗ, ದಾನ) ಮ್ಯುಟೇಶನ್ ಪ್ರಕ್ರಿಯೆಗಾಗಿ ತಾಲ್ಲೂಕು ಕಛೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದು ತಪ್ಪಿದಂತಾಗಿದೆ. ಸಾರ್ವ ಜನಿಕರು ಸುಲಭ ಹಾಗೂ ಸುಲಲಿತವಾಗಿ ಅವರ ಜಮೀನಿನ ಮ್ಯುಟೇಶನ್ ಗಳನ್ನು ಕ್ಲಪ್ತ ಸಮಯದಲ್ಲಿ ಪಡೆಯಬಹುದಾಗಿದೆ ಹಾಗೂ ಜಮೀನಿನ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲು ಬಾಕಿ ಇರುವ ಸಾರ್ವಜನಿಕರು ಈ ಕೂಡಲೇ ಆಧಾರ್ ಜೋಡಣೆ ಮಾಡಿಸಿಕೊಂಡು ಅಕ್ರಮ ಖಾತಾ ಬದಲಾವಣೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 9:03 pm

Kalaburagi | ಎಸ್ಐಆರ್ ಎನ್ನುವುದು ಭಾರತೀಯರ ಮೇಲಿನ ಎಫ್ಐಆರ್ : ಶಿವಸುಂದರ್

►ಎಸ್ಐಆರ್ ಮೂಲಕ ದಲಿತ, ಮುಸ್ಲಿಂ ಹೆಣ್ಣುಮಕ್ಕಳ ಟಾರ್ಗೆಟ್ ►ಎಸ್ಐಆರ್ ಒಂದು ಚಿಂತನೆ ಕಾರ್ಯಗಾರ

ವಾರ್ತಾ ಭಾರತಿ 1 Mar 2026 8:58 pm

T20 ವಿಶ್ವಕಪ್ | ಭಾರತಕ್ಕೆ 196 ರನ್ ಗಳ ಗುರಿ ನೀಡಿದ ವೆಸ್ಟ್ ಇಂಡೀಸ್

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ನ ಭಾರತದ ಎದುರಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಪಂದ್ಯ ಗೆಲ್ಲಲು ಭಾರತಕ್ಕೆ 196 ರನ್ ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.

ವಾರ್ತಾ ಭಾರತಿ 1 Mar 2026 8:54 pm

ಅಮೆರಿಕದ ದಾಳಿ ಮಾನವೀಯತೆಯ ವಿರುದ್ದದ ಅಪರಾಧ: ಭದ್ರತಾ ಮಂಡಳಿಯಲ್ಲಿ ಇರಾನ್ ಪ್ರತಿಪಾದನೆ

ವಿಶ್ವಸಂಸ್ಥೆ: ಇರಾನ್‍ನ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿ ಮತ್ತು ಇರಾನ್‍ನ ಪ್ರತಿದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿರುವ ಉದ್ವಿಗ್ನತೆಯ ಬಗ್ಗೆ ಚರ್ಚಿಸಲು ಶನಿವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಯಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ತೀವ್ರ ವಾಗ್ಯುದ್ದ ನಡೆದಿರುವುದಾಗಿ ವರದಿಯಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಇರಾನ್‍ನ ಕಾಯಂ ಪ್ರತಿನಿಧಿ ಅಮೀರ್ ಸಯೀದ್ ಇರಾವಾನಿ ` ವೈಮಾನಿಕ ದಾಳಿಯು ನೂರಾರು ಇರಾನಿಯನ್ ಪ್ರಜೆಗಳ ಸಾವು-ನೋವಿಗೆ ಕಾರಣವಾಗಿದ್ದು ಇದು ಯುದ್ದಾಪರಾಧ ಮತ್ತು ಮಾನವೀಯತೆಯ ವಿರುದ್ದದ ಅಪರಾಧವಾಗಿದೆ' ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಅಮೆರಿಕದ `ಯುದ್ದೋತ್ಸಾಹದ ಹೇಳಿಕೆಗಳ' ಬಗ್ಗೆ ಇರಾನ್ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಿದ ಅವರು ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಗೆ ಅಮೆರಿಕದ ವಿಶೇಷ ಪ್ರತಿನಿಧಿ ಮೈಕ್ ವಾಲ್ಟ್ಸ್ ` ಇರಾನ್ ರಕ್ತಪಾತ ಮತ್ತು ಸಾಮೂಹಿಕ ಹತ್ಯೆಯ ಅಂತ್ಯವಿಲ್ಲದ ಅಭಿಯಾನವನ್ನು ನಡೆಸುತ್ತಿದೆ. ಇರಾನ್‍ನ ಆಡಳಿತವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಹತ್ಯೆಗೆ ಪ್ರಯತ್ನಿಸಿತ್ತು. ಆದರೆ ಈಗ ಇರಾನ್‍ನ ನಾಯಕತ್ವ ತನ್ನನ್ನು ಬಲಿಪಶು ಎಂದು ಬಿಂಬಿಸುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಇದು ರಾಜಕೀಯಕ್ಕೆ ಸಂಬಂಧಿಸಿದ ವಿಷಯವಲ್ಲ, ಜಾಗತಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯವಾಗಿದೆ. ಆದ್ದರಿಂದ ನಾವು ಈಗ ಕಾನೂನುಬದ್ದ ಕ್ರಮ ಕೈಗೊಂಡಿದ್ದೇವೆ' ಎಂದು ಪ್ರತಿಪಾದಿಸಿದರು. ಉಲ್ಬಣಗೊಳ್ಳುವುದನ್ನು ತಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ. ಇಲ್ಲದಿದ್ದರೆ ಸಂಭಾವ್ಯ ವ್ಯಾಪಕ ಸಂಘರ್ಷವು ನಾಗರಿಕರ ಮತ್ತು ಪ್ರದೇಶದ ಸ್ಥಿರತೆಗೆ ಗಂಭೀರ ಪರಿಣಾಮ ಬೀರುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಸಭೆಗೆ ತಿಳಿಸಿದರು. ಸಮಿತಿಯ ಐದು ಸದಸ್ಯರಾದ ಫ್ರಾನ್ಸ್, ರಶ್ಯ, ಚೀನಾ, ಕೊಲಂಬಿಯಾ ಮತ್ತು ಬಹ್ರೇನ್ ಮನವಿಯಂತೆ ತುರ್ತು ಸಭೆಯನ್ನು ಕರೆಯಲಾಗಿತ್ತು.

ವಾರ್ತಾ ಭಾರತಿ 1 Mar 2026 8:52 pm

War Update: ಯುದ್ಧದ ಇಂದಿನ 10 ಪ್ರಮುಖಾಂಶಗಳು: ಅಲಿ ಖಮೇನಿ ಸಾವಿನ ಸೇಡಿಗಾಗಿ ಇರಾನ್ ಭೀಕರ ಪ್ರತಿದಾಳಿ

Iran War Highlights Today: ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿ ವೈಮಾನಿಕ ದಾಳಿಯು ಮುಂದುವರಿದಿದೆ. ಇಂದೂ ಸಹ ಇರಾನ್ ಪ್ರತಿದಾಳಿ ಮುಂದುವರಿಸಿದೆ. ಇರಾನ್‌ನ ಸರ್ವೋಚ್ಚ ನಾಯಕರನ್ನು ಹತ್ಯೆಗೈದಿರುವುದಾಗಿ ಭಾನುವಾರ ಬೆಳಗ್ಗೆ ಯುಎಸ್ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದರು. ಅಲ್ಲದೇ ಇರಾನ್ ರಕ್ಷಣಾ ಸಚಿವ, ಕಮಾಂಡರ್ ಸಹ ದಾಳಿಯಲ್ಲಿ ಶನಿವಾರವೇ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಪ್ರತಿಯಾಗಿ ಭಾನುವಾರ

ಒನ್ ಇ೦ಡಿಯ 1 Mar 2026 8:52 pm

ಅಜ್ಜಾವರ| ರಸ್ತೆ ಅಭಿವೃದ್ಧಿ ವಿಳಂಬ ಖಂಡಿಸಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಕೆ

ಅಜ್ಜಾವರ: ರಸ್ತೆ ಅಭಿವೃದ್ಧಿ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಸಲಾಗಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್‍ನ ಅಡ್ಡರಸ್ತೆಯಿಂದ ಬೇಲ್ಯ 4ನೇ ವಾರ್ಡ್‍ನ ಬೀನಡ್ಕದವರೆಗೆ ಸುಮಾರು 3.ಕಿ.ಮೀ. ರಸ್ತೆ ಡಾಮರೀಕರಣ ಮಾಡಲು ವಿಳಂಬ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್‍ನ ಅಡ್ಡರಸ್ತೆಯಿಂದ ಬೇಲ್ಯ 4ನೇ ವಾರ್ಡ್‍ನ ಬೀನಡ್ಕದವರೆಗೆ ಸುಮಾರು 3.ಕಿ.ಮೀ. ರಸ್ತೆ ಡಾಮರೀಕರಣಕ್ಕೆ 40 ವರ್ಷಗಳಿಂದ ಅನೇಕ ಬಾರಿ ಬೇಡಿಕೆ ಇಟ್ಟಿದ್ದು ಹಾಗೂ ಸಮರ್ಪಕ ಕುಡಿ ಯುವ ನೀರಿನ ಸೌಲಭ್ಯ ದೊರಕದೇ ಇದ್ದು, ಯಾವುದೇ ಮನವಿಗೆ ಸ್ಪಂದಿಸದೆ ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಬಂದು ಮತದಾನ ಯಾಚಿಸುವ ರಾಜಕಾರಣಿಗಳಿಗೆ „ಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಸೌಲಭ್ಯ ವಂಚಿತ ಶಿರಾಜೆ, ಬೇಲ್ಯ ಬೀನಡ್ಕ ನಾಗರೀಕರು ಎಂಬ ಬ್ಯಾನರ್ ಅಳವಡಿಸಲಾಗಿದೆ.

ವಾರ್ತಾ ಭಾರತಿ 1 Mar 2026 8:49 pm

ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ

ಬಂಟ್ವಾಳ : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ವೈ.ಸಿ.ಜಿ.2026 ಹೊನಲು ಬೆಳಕಿನ ಕ್ರೀಡಾ ಕೂಟವು ಶನಿವಾರ ಸಂಜೆ ನೇರಳಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಿದರು. ವೈಸಿಜಿ ಅದ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಶ್ರೀಧರ್ ರೈ, ಯುವ ಮುಖಂಡ ನಿರಂಜನ್ ರೈ ಶುಭ ಹಾರೈಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೇರಳಕಟ್ಟೆ ಡಿ.ಕೆ.ಶ್ರಧ್ಧಾ ಕೇಂದ್ರದ ಡಿ.ಕೆ.ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಸಿದರು. ಯುವ ಮುಖಂಡ ಫಾರೂಕ್ ಬಯಬೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರೈ, ಧನುಂಜಯ ಗೌಡ, ಪ್ರೇಮಾ ಜಯಕರ ದೇವಾಡಿಗ, ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ, ನಾಟಿ ವೈದ್ಯ ಗಂಗಾಧರ ಪಂಡಿತ್, ಪ್ರಮುಖರಾದ ವೆಂಕಪ್ಪ ರೈ ಕುರ್ಲೆತ್ತಿಮಾರು, ರಾಮಚಂದ್ರ ಮಾಸ್ಟರ್, ಭೋಜ ನಾರಾಯಣ, ಬೇಬಿ ನಾಯ್ಕ, ರಾಜೇಶ್ ಕರುವನ್, ರೋಹಿತಾಶ್ವ, ಕುಸುಮಾಕರ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಯಂಗ್ ಚಾಲೆಂಜರ್ಸ್ ಗೌರವಾಧ್ಯಕ್ಷ ವಿಶುಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪೆರಾಜೆ, ಮಾಣಿ, ವೈಸಿಜಿ ನೇರಳಕಟ್ಟೆ ತಂಡಗಳಿಗೆ ಪ್ರಥಮ ಪ್ರಶಸ್ತಿ ಆಹ್ವಾನಿತ ತಂಡಗಳ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಶ್ರೀ ವಿಷ್ಣು ಪೆರಾಜೆ ಪ್ರಥಮ, ಪಂಡಿತ್ ಗಯ್ಸ್ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತೀಯ, ಯುವಶಕ್ತಿ ಗಣೇಶನಗರ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಅಂಡರ್ 21 ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ಪ್ರಥಮ, ತತ್ವಮಸಿ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತಿಯ ಹಾಗೂ ಜನನಿ ಕ್ಯಾಟರಿಂಗ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಬೆಲ್ಟ್ ಏರ್ಯ ವಾಲಿಬಾಲ್ ಪಂದ್ಯಾಟದಲ್ಲಿ ವೈಸಿಜಿ ನೇರಳಕಟ್ಟೆ ಪ್ರಥಮ, ತತ್ವಮಸಿ ದ್ವಿತೀಯ, ನೇತಾಜಿ ತೃತಿಯ ಹಾಗೂ ಯುವಶಕ್ತಿ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ವಾರ್ತಾ ಭಾರತಿ 1 Mar 2026 8:44 pm

ಮಂಗಳೂರು ವಿವಿ ಹಳೆ ವಿದ್ಯಾರ್ಥಿ ಸಂಘ ಇಡೀ ರಾಜ್ಯಕ್ಕೆ ಮಾದರಿ: ಪ್ರೊ. ಎ.ಎಂ.ಖಾನ್

ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮ

ವಾರ್ತಾ ಭಾರತಿ 1 Mar 2026 8:41 pm

ಮಲಾರ್ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕೊಣಾಜೆ: ಹರೇಕಳ ಗ್ರಾಮದಲ್ಲಿ ಹಿಂದೆ ಮಣ್ಣಿನ ರಸ್ತೆಯಾಗಿದ್ದ ಮಾರ್ಗಗಳೆಲ್ಲವೂ ಈಗ ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಒತ್ತಡ ಹಾಕಿದ್ದರಿಂದ ಹೆಚ್ಚುವರಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು. ಹರೇಕಳ ಗ್ರಾಮದ ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆಯ ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಾರ್ ಮತ್ತು ಕೋಡಿ ಭಾಗದ ಎಲ್ಲಾ ರಸ್ತೆಗಳು ಗ್ರಾಮ ಪಂಚಾಯಿತಿಗೆ ನೇರ ಸಂಪರ್ಕ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ ಹಾಗೂ ನೀರಿನ ಸಮಸ್ಯೆ ಬಾರ ದಂತೆ ಸುದೀರ್ಘ ಕಾಲದ ಯೋಜನೆ ರೂಪಿಸಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಹಿರಿಯರಾದ ಮಹಮ್ಮದ್ ಮಲಾರ್ ರಸ್ತೆ ಉದ್ಘಾಟಿಸಿದರು. ಮಸೀದಿಯ ಖತೀಬ್ ಸಿರಾಜುದ್ದೀನ್ ದಾರಿಮಿ ಉಸ್ತಾದ್ ದುವಾ ನೆರವೇರಿಸಿದರು. ಮುಅದ್ದೀನ್ ಶರೀಫ್ ಉಮೈದಿ, ಅಧ್ಯಕ್ಷ ಎಸ್.ಎಂ. ಆಸಿಫ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ರಹ್ಮತುಲ್ಲಾ, ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಿಯಾಝ್ ಅಹ್ಮದ್, ಸಂಶುದ್ದೀನ್, ಹರೇಕಳ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ. ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಎಚ್.ಎಂ. ಮಹಮ್ಮದ್, ಇಸ್ಮಾಯಿಲ್ ಮಾಸ್ಟರ್, ಝಕರಿಯಾ ಮಲಾರ್, ಝಾಯಿದ್ ಮಲಾರ್, ಅಶ್ರಫ್ ಮದೀನಾ, ಹಸನ್ ಕುಂಞಿ ಮಲಾರ್, ಇಬ್ರಾಹಿಂಮೋನು, ಹಾರಿಸ್ ಮಲಾರ್, ಮುನೀರ್ ಆಲಡ್ಕ, ಹಮೀದ್ ಕಂಡಿಲ, ಅಬ್ದುಲ್ ರಹ್ಮಾನ್, ಹಮೀದ್ ಎಂ.ಬಿ, ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾರ್ತಾ ಭಾರತಿ 1 Mar 2026 8:39 pm

ಪುತ್ತೂರು: ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮ

ಪುತ್ತೂರು; ಗಾಣಿಗ ಸಮಾಜದಿಂದ ವಿಶ್ವದಲ್ಲಿಯೇ ಭಾರತದ ಹೆಸರು ಚಿರಸ್ಥಾಯಿಯಾಗಿದೆ. ಗಾಣಿಗ ಸಮಾಜದ ಮಗನಿಂದ ದೇಶದಲ್ಲಿಯೇ ದೊಡ್ಡ ಬದಲಾವಣೆ ಉಂಟಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಿದೆ. ಸಭ್ ಕಾ ಸಾಥ್ ಸಭ್ ಕಾ ವಿಕಾಸ್‌ನಿಂದ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಅಭಿಪ್ರಾಯಪಟ್ಟರು. ಅವರು ರವಿವಾರ ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಾಣಿಗ ಸಮಾಜದ ಸಂಗಟಯಾಗುವ ಮೂಲಕ ನಾವು ಏನೆಂದು ತೋರಿಸಬೇಕಾದ ಅವಶ್ಯಕತೆ ಇದೆ. ದೇಶದಾದ್ಯಂತ 14 ಕೋಟಿ ಗಾಣಿಗ ಸಮಾಜದವರಿದ್ದೇವೆ. ರಾಮಾಯಣದಲ್ಲೂ ಗಾಣಿಗರ ಪಾತ್ರವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಣಿಗರ ಕೊಡುಗೆ ಇದೆ. ಆದರೆ ನಾವು ಸಂಘಟಿತರಾಗಿಲ್ಲ ಎಂಬುವುದು ಸತ್ಯ ಎಂದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್ ಸುದರ್ಶನ್ ಅವರು ಮಾತನಾಡಿ, ಸಮುದಾಯದ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ ಬೆಳೆಯಬೇಕು. ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿಯೂ ಗಾಣಿಗ ಸಮಾಜದ ಮಂದಿ ಅಧಿಕಾರಿಗಳಾಗಿ ಬರಬೇಕು. ಗಾಣಿಗ ಸಮಾಜದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಚಿಂತನೆಗಳನ್ನು ನಡೆಸಬೇಕು. ಕೇವಲ ಹೆಸರಿಗೋಸ್ಕರ ಸಂಘಟನೆ ಬೇಡ. ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಸದ ಬ್ರಿಜೇಶ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯೊಬ್ಬ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕಾದರೆ ಅದರಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಯುವಜನತೆ ಹೆಚ್ಚು ಹೆಚ್ಚಾಗಿ ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ. ಅದು ಇಡೀ ಭಾರತದೇಶದ ಸಂಕಲ್ಪವಾಗಿದೆ. ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಅದರಲ್ಲೂ ವಿಶೇಷ ವಾಗಿ ಮಹಿಳೆಯರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ಗಾಣಿಗ ಸಮಾಜ ಗಟ್ಟಿಯಾಗಬೇಕಾದರೆ ಅದಕ್ಕೆ ಹಿಂದುತ್ವದ ಹಿನ್ನಲೆ ಬೇಕು. ದಕ ಜಿಲ್ಲೆಯಲ್ಲಿ ನಾವು ಹಿಂದುತ್ವದ ಗಟ್ಟಿತನ ಕಾಣಬಹುದಾಗಿದೆ. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದ ಕಡೆಗೆ ಹೆಜ್ಜೆ ಹಾಕಬೇಕಾದರೆ ನಮ್ಮ ಒಗ್ಗಟ್ಟು ಅತೀ ಅಗತ್ಯ ಎಂದರು. ಶಾಸಕ ಅಶೋಕ್ ರೈ ಅವರು ಮಾತನಾಡಿ, ಗಾಣಿಗ ಸಮಾಜದ ಅಭಿವೃದ್ಧಿಯಾಗಬೇಕಾದರೆ ಮೊದಲು ವಿದ್ಯೆಯತ್ತ ಆದ್ಯತೆ ನೀಡಬೇಕು. ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಯೋಜನೆಗಳು ಸಾಕಾರ ಗೊಳ್ಳುತ್ತವೆ. ಗಾಣಿಗ ಸಮಾಜದ ಅಭಿವೃದ್ಧಿಗೆ ಗಾಣಿಗ ನಿಗಮ ಇದೆ. ಅದಕ್ಕೆ ಶಕ್ತಿ ತುಂಬುವ ಕೆಲಸವಾದರೆ ಅಭಿವೃದ್ಧಿಯ ಹಂತಕ್ಕೇರಬಹುದಾಗಿದೆ. ಪುತ್ತೂರಿನಲ್ಲಿ ಗಾಣಿಗ ಸಭಾಭವನ ನಿರ್ಮಾಣಕ್ಕೆ ಪಹಣಿಪತ್ರ ಸಹಿತ ಜಾಗ ಹುಡುಕಿಕೊಡಿ. ಅದಕ್ಕೆ ಮುಖ್ಯಮಂತ್ರಿಯವರ ಅನುಮೋದನೆ ಮಾಡಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ ಅವರು ಮಾತನಾಡಿ, ಇಚ್ಛಾಶಕ್ತಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ನಡೆದಿರುವುದು ಗಾಣಿಗ ಸಂಗಮ ಅಲ್ಲ. ಅದು ಗಾಣಿಗರ ಆತ್ಮಾವ ಲೋಕನ. ಗಾಣಿಗ ಸಮಾಜದ ಭವಿಷ್ಯವನ್ನು ನಿರ್ಧರಿಸುವ ಚಿಂತನೆಯಾಗಿದೆ. ಗಾಣಿಗ ಸಮಾಜದ ಆಚಾರ-ವಿಚಾರಗಳು ಪ್ರಸ್ತುತ ದಿಕ್ಕು ತಪ್ಪುತ್ತಿದೆ. ಅದಕ್ಕಾಗಿ ಸಂಘಟನೆ ಅತೀ ಅಗತ್ಯವಾಗಿದೆ. ಗಾಣಿಗರ ಜೀವನ ಸಂಸ್ಕೃತಿಯನ್ನು ಬಿಂಬಿಸುವ ವೆಬ್‌ಸೈಟ್ ಗಳ ಅಗತ್ಯವಿದ್ದು, ಸಂಘಟನೆ ಈ ಬಗ್ಗೆ ಚಿಂತನೆ ಮಾಡುವ ಕಾಲ ಬಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮುಂಬೈ ಉದ್ಯಮಿ ವಸಂತ ಜಿ ಸಪಲ್ಯ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ ಕುಮಾರ್ ದಾಸ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಮಾಧವ ಮಾವೆ, ಉಪ್ಪಿನಂಗಡಿ ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ, ಉದ್ಯಮಿ ಭುವನೇಶ್ ರಘು ಸಪಲ್ಯ ಪಾಣೆಮಂಗಳೂರು, ಪ್ರಹ್ಲಾದ್ ಮೋದಿ ಪುತ್ರಿ ಸೋನಾಲ್ ಬೆನ್ ಮೋದಿ, ಪ್ರವೀಣ್ ತೆಲಂಗಾಣ, ವಿನಯಕುಮಾರ್ ಬಾರ್ಕೂರು, ವಿಜಯಕುಮಾರ್, ಉದ್ಯಮಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ವಿವಿಧಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸೀರೆ ವಿತರಣೆ ನಡೆಯಿತು. ವಧು-ವರರ ಅನ್ವೇಷಣೆಯ ನೋಂದಾವಣೆ ನಡೆಸಲಾಯಿತು. ಡ್ಯಾನ್ಸ್ ಗಾಣಿಗ ಡ್ಯಾನ್ಸ್ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ಬೆಟ್ಟ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 1 Mar 2026 8:37 pm

ಎಂಸಿಸಿ ಬ್ಯಾಂಕ್ ಮೂಲಕ ಶೀಘ್ರ ಯುಪಿಐ, ಗೂಗಲ್ ಪೇ ಸೌಲಭ್ಯ: ಅನಿಲ್ ಲೋಬೊ

ಎಂಸಿಸಿ ಬ್ಯಾಂಕ್ ಬೆಳ್ಮಣ್ ಪ್ರಥಮ ವಾರ್ಷಿಕೋತ್ಸವ

ವಾರ್ತಾ ಭಾರತಿ 1 Mar 2026 8:34 pm

T20 World Cup 2026: ಸೆಮಿಫೈನಲ್ ಸ್ಥಾನಕ್ಕಾಗಿ ಟೀಂ ಇಂಡಿಯಾ ಕಾದಾಟ

T20 World Cup 2026: ಕೋಲ್ಕತ್ತಾದಲ್ಲಿ ಭಾನುವಾರ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್‌ನ ಕೊನೆಯ ಉಳಿದ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಈಗಾಗಲೇ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳು ತಮ್ಮ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈಗಾಗಲೇ ಸೂಪರ್

ಒನ್ ಇ೦ಡಿಯ 1 Mar 2026 8:34 pm

ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಶ್ರಮದಾನ

ಮಂಗಳೂರು,ಮಾ.1:ನಗರದ ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ರವಿವಾರ ನಡೆದ ಶ್ರಮದಾನಕ್ಕೆ ಮಂಗಳೂರು ಮನಪಾ ಹಿರಿಯ ಆರೋಗ್ಯಾಧಿಕಾರಿ ಡಾ. ಮಂಜಯ್ಯಶೆಟ್ಟಿ ಹಾಗೂ ಕೆನಡಾ ಓಂಟಾರಿಯೊ ಸರಕಾರದ ಆರ್ಥಿಕ ತಜ್ಞ ಪ್ರಾಂಜಲ್ ಘಾಟೆ ಚಾಲನೆ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕ ರಂಜನ್ ಬೆಳ್ಳರ್ಪಾಡಿ ಉಪಸ್ಥಿತರಿದ್ಧರು. ಬಾಲಕೃಷ್ಣ ಭಟ್,ಅನಿರುದ್ಧ ನಾಯಕ್, ಪ್ರಕಾಶ್, ರಾಮಚಂದ್ರ ಭಟ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಸಾಲಿಯನ್, ಅವಿನಾಶ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುಕುಮಾರ್ ಸಾಲಿಯಾನ್, ಉಪನ್ಯಾಸಕ ಡಾ.ಪುರುಷೋತ್ತಮನ್ ಚಿಪ್ಪಾಲ, ಡಾ. ಜಯೇಶ್ ಚಂದ್ರನ್, ಡಾ. ರುಚಿತಾ, ಡಾ. ಹೇಮಂತ್ ಶ್ರಮದಾನದ ನೇತೃತ್ವ ವಹಿಸಿದ್ದರು. *ಈ ಸಂದರ್ಭ ಲಭಿಸಿದ ದೇವತೆಗಳ ಚಿತ್ರಪಟಗಳು ಮತ್ತು ಮೂರ್ತಿಗಳನ್ನು ತಾರಾನಾಥ ಆಳ್ವ, ಕಮಲಾಕ್ಷ ಪೈ, ದಿಲ್ರಾಜ್ ಆಳ್ವ, ಸಚಿನ್ ಶೆಟ್ಟಿ, ಭತ್ ಸಾಲಿಯನ್, ವರುಣ್, ಗಗನ್, ಯಲ್ಲಪ್ಪ, ಮಂಜುನಾಥ್ ಮತ್ತಿತರರು ಸಂಗ್ರಹಿಸಿದರು. ಇದನ್ನು ಮುಂದಿನ ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 1 Mar 2026 8:29 pm

ವಿದೇಶಿಗನಿಂದ ಶಿರ್ವದ ಮಹಿಳೆಗೆ 14 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಶಿರ್ವ, ಮಾ.1: ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿತನಾದ ವಿದೇಶದ ವ್ಯಕ್ತಿ ಕೋರಿಯರ್ ಕಳುಹಿಸಿರುವುದಾಗಿ ನಂಬಿಸಿ ಶಿರ್ವದ ಮಹಿಳೆಗೆ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾ ಎಂಬವರಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಪರಿಚಯ ಆಗಿದ್ದು ಆತನು ತಾನು ವಿದೇಶದಲಿದ್ದು, ಅಲ್ಲಿಂದ ಗಿಫ್ಟ್ ಕೋರಿಯರ್ ಮಾಡಿರುವುದಾಗಿ ಫೆ.22ರಂದು ತಿಳಿಸಿದ್ದನು. ಫೆ.23ರಂದು ವಿದ್ಯಾ ಅವರಿಗೆ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ವಿದೇಶದಿಂದ ಕೋರಿಯರ್ ಬಂದಿದ್ದು, ಅದು ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ 49,700ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ವಿದ್ಯಾ ಹಣ ಪಾವತಿಸಿದ್ದರು. ಬಳಿಕ ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿ, ಕೋರಿಯರ್‌ನಲ್ಲಿ 30,000 ವಿದೇಶದ ಪೌಂಡ್ ಇದ್ದು, ಇದಕ್ಕೆ ಕೂಡಲೇ 1,89,000ರೂ. ಹಣವನ್ನು ಹಾಕುವಂತೆ ತಿಳಿಸಿದ್ದಳು. ಹಾಗೇ ವಿದ್ಯಾ ಮತ್ತೆ ಹಣ ಪಾವತಿಸಿ ದರು. ಅದೇ ದಿನ ಸಂಜೆ ಕರೆ ಮಾಡಿ ಮನಿ ಎಕ್ಸ್ಚೇಂಜ್ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದಳು. ಅದರಂತೆ ಒಟ್ಟು 2,50,000ರೂ. ಹಣವನ್ನು ಪಾವತಿಸಿದ್ದರು. ಹೀಗೆ ಹಲವು ಬಾರಿ ಫೆ.23ರಿಂದ ಫೆ.27ರವರೆಗೆ ಒಟ್ಟು 13,99,700ರೂ. ಹಣವನ್ನು ಬೇರೆ ಬೇರೆ ಖಾತೆಗೆ ಹಾಕಿದ್ದರು. ಆದರೆ ಕೋರಿಯರ್ ಮಾತ್ರ ಬಂದಿರುವುದಿಲ್ಲ. ಸ್ನೇಹಿತನ ಹೆಸರಿನಲ್ಲಿ ವಿದೇಶದ ವ್ಯಕ್ತಿ ವಿದ್ಯಾ ಅವರಿಗೆ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 1 Mar 2026 8:27 pm

ಕಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು

ಕಾರ್ಕಳ, ಮಾ.1: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಫೆ.28ರಂದು ರಾತ್ರಿ 8.45ರ ಸುಮಾರಿಗೆ ಕುಕ್ಕುಂದೂರು ಗ್ರಾಮದ ಮಹಾತ್ಮ ಗಾಂಧಿ ಶಾಲೆ ಎದುರುಗಡೆ ನಡೆದಿದೆ. ಮೃತರನ್ನು ಎರ್ಲಪಾಡಿ ಗೋವಿಂದೂರಿನ ಬೈಕ್ ಸವಾರ ರಕ್ಷೀತ್(18) ಮತ್ತು ಅವರ ಸಂಬಂಧಿ ಸಹ ಸವಾರ ಶಿವಾನಂದ(19) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರು, ಎದುರಿ ನಲ್ಲಿದ್ದ ವಾಹನವನ್ನು ಒವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಅಂದರೆ ಕಾರ್ಕಳದಿಂದ ಬೈಲೂರು ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸವಾರರು ಬೈಕ್ ಸಮೇತ ರಸ್ತೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷೀತ್ ಮತ್ತು ಶಿವಾನಂದ ಕಾರ್ಕಳ ಸರಕಾರಿ ಆಸ್ಪತ್ರಗೆ ಕೆರೆದೊಯ್ಯುತ್ತಿರುವ ದಾರಿ ಮದ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಕಾರು ಚಾಲಕ ಅಪಘಾತ ಉಂಟು ಮಾಡಿದ ನಂತರ ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ನೀಡದೇ ಸ್ಥಳದಿಂದ ಓಡಿ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 1 Mar 2026 8:21 pm