SENSEX
NIFTY
GOLD
USD/INR

Weather

30    C
...

ಯುದ್ಧ ನಿಲ್ಲಿಸುವ ಪುಟ್ಟ ಹಕ್ಕಿಯ ಪ್ರಯತ್ನ

ಸಂದರ್ಶನ- 4

ವಾರ್ತಾ ಭಾರತಿ 17 Apr 2026 10:04 am

ಶೋಚನೀಯ ಪರಿಸ್ಥಿತಿಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕರು

ಮಾತೃತ್ವ ರಜೆ ಕರ್ನಾಟಕದಲ್ಲಿ ಮಹಿಳಾ ಸರಕಾರಿ ನೌಕರರ ಮೊದಲ ಎರಡು ಮಕ್ಕಳಿಗೆ 180 (6 ತಿಂಗಳು) ದಿನಗಳು ವೇತನ ಸಹಿತ ಪ್ರಸೂತಿ ರಜೆ ಹಾಗೂ ಖಾಸಗಿ ವಲಯದಲ್ಲಿ 1961ರ ಹೆರಿಗೆ ಪ್ರಯೋಜನ ಕಾಯ್ದೆ ಅಡಿ 26 ವಾರಗಳು (6 ತಿಂಗಳು) ರಜೆ ಸಿಗುತ್ತದೆ. ಈ ರಜೆಯನ್ನು ಹೆರಿಗೆ ಮುನ್ನ ಅಥವಾ ನಂತರ ಬಳಸಿಕೊಳ್ಳಬಹುದು. ಇದನ್ನು ಹೊರಗುತ್ತಿಗೆ ಮಹಿಳಾ ನೌಕರರಿಗೆ ಮಾತೃತ್ವ ರಜೆ ಸೌಲಭ್ಯ ವಿಸ್ತರಿಸಲಾಗಿದೆ ಹಾಗೂ ಎಲ್ಲಾ ಖಾಸಗಿ ವಲಯದಲ್ಲಿ ಕೂಡ ಈ ರಜೆಯನ್ನು ನೀಡಲಾಗುತ್ತಿದೆ. ಮಹಿಳೆಯರಿಗೆ ಮಾತೃತ್ವ ರಜೆ ನೀಡುತ್ತಿರುವ ಉದ್ದೇಶವೇ ಬಹಳ ಮಹತ್ವದ್ದು. ಗರ್ಭಧಾರಣೆ ಹಾಗೂ ಹೆರಿಗೆಯೂ ಮಹಿಳೆಯರ ದೇಹದ ಮೇಲಿನ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಹೆರಿಗೆ ನಂತರ ದೇಹವು ಸಹಜ ಸ್ಥಿತಿಗೆ ಮರಳಲು ಮತ್ತು ವಿಶ್ರಾಂತಿ ಪಡೆಯಲು ಸಮಯದ ಅಗತ್ಯವಿದೆ. ನವಜಾತ ಶಿಶುವಿಗೆ ಮೊದಲ ಕೆಲವು ತಿಂಗಳು ತಾಯಿಯ ನಿರಂತರ ಆರೈಕೆ ಮತ್ತು ಹಾಲುಣಿಸುವುದು, ಪೋಷಣೆ ಮಾಡುವುದು, ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯ ಬೆಳೆಸಲು ಹೆರಿಗೆಯ ನಂತರದ ಒತ್ತಡ ಮತ್ತು ಭಾವನಾತ್ಮಕ ಬದಲಾವಣೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮಾತೃತ್ವ ರಜೆ ಸಹಕಾರಿಯಾಗಿದೆ. ಮೇಲಿನ ವಿಷಯವನ್ನು ಚರ್ಚಿಸುತ್ತಿರುವ ಕಾರಣವೆಂದರೆ ಪ್ರಸ್ತುತ ಮಾರ್ಚ್ 2026ರ ಬಜೆಟ್‌ನಲ್ಲಿ ಮಹಿಳಾ ಅತಿಥಿ ಉಪನ್ಯಾಸಕರಿಗೆ ಕರ್ನಾಟಕ ಸರಕಾರ 90 ದಿನಗಳ (3 ತಿಂಗಳು) ಮಾತೃತ್ವ ರಜೆ ಘೊಷಿಸಿದೆ. ಸರಕಾರಿ ಮತ್ತು ಖಾಸಗಿ ವಲಯದಲ್ಲಿ 1961ರ ಹೆರಿಗೆ ಪ್ರಯೋಜನ ಕಾಯ್ದೆ ಅಡಿ ಮತ್ತು ಗುತ್ತಿಗೆ ನೌಕರರನ್ನು ಒಳಗೊಂಡಂತೆ ಆರು ತಿಂಗಳ ಮಾತೃತ್ವ ರಜೆ ಸೌಲಭ್ಯವನ್ನು ನೀಡಲಾಗಿದೆ. ಆದರೆ ಸರಕಾರ ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾತ್ರ ಮೂರು ತಿಂಗಳ ಸೌಲಭ್ಯ ಘೋಷಿಸಿದೆ. ದೈಹಿಕ ಚೇತರಿಕೆ, ಮಗುವಿನ ಆರೈಕೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತಿಥಿ ಉಪನ್ಯಾಸಕರಿಗೂ ಆರು ತಿಂಗಳು ಬೇಕಾಗುವುದಿಲ್ಲವೇ? ಅಥವಾ ಅವರು 3 ತಿಂಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಸರಕಾರ ಅವರ ಮೇಲೆ ಇಟ್ಟಿರುವ ಬಲವಾದ ನಂಬಿಕೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದು ಮಹತ್ವದ ವಿಷಯವೆಂದರೆ ಸರಕಾರಿ ಮತ್ತು ಖಾಸಗಿ ವಲಯದ ಮಹಿಳಾ ನೌಕರರು ಹೆಚ್ಚು ವೇತನ ಪಡೆಯುತ್ತಿದ್ದು ಕೇರ್‌ಟೇಕರ್‌ಗಳನ್ನು ನೇಮಿಸಿಕೊಂಡು ಮಗು ಪೋಷಣೆಯೊಂದಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ. ಆದರೆ ಮಹಿಳಾ ಅತಿಥಿ ಉಪನ್ಯಾಸಕರಿಗೆ ಬರುವ ಅತ್ಯಲ್ಪ ಸಂಬಳದಲ್ಲಿ ಕುಟುಂಬ ನಿಭಾಯಿಸುವುದು ಕಷ್ಟವಾಗಿರುವಾಗ ಕೇರ್ ಟೇಕರ್ ಇಟ್ಟು ಮಗುವನ್ನು ನೋಡಿಕೊಳ್ಳುವುದು ಅಸಾಧ್ಯವಾದ ಮಾತಾಗಿದೆ. ಇದರ ಮುಂದುವರಿದ ಭಾಗವಾಗಿ ಪ್ರತೀ ವರ್ಷ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಹತ್ತಿರದ ಕಾಲೇಜಿನಲ್ಲಿ ಕಾರ್ಯಭಾರದ ಕೊರತೆಯಾದಾಗ ಕೆಲಸದ ಅನಿವಾರ್ಯತೆಯಿಂದ ದೂರದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು 100 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣ ಮಾಡಿ ಕರ್ತವ್ಯ ಮಾಡುತ್ತಿದ್ದಾರೆ. ಪ್ರಸ್ತುತ ಬಜೆಟ್‌ನಲ್ಲಿ ಸರಕಾರ ಘೋಷಿಸಿರುವ 90 ದಿನಗಳ ಮಾತೃತ್ವ ರಜೆ ಮುಗಿದ ನಂತರ ಮಗುವಿಗೆ ಹಾಲುಣಿಸಿ, ಆರೈಕೆ ಮಾಡಲು ತೆರಳುವುದಾದರೂ ಹೇಗೆ? ಮಹಿಳಾ ಅತಿಥಿ ಉಪನ್ಯಾಸಕರು ಮನುಷ್ಯ ವರ್ಗಕ್ಕೆ ಸೇರುವುದಿಲ್ಲವೇ? ಋತುಚಕ್ರ ರಜೆ ‘ಋತುಚಕ್ರ ರಜೆ ಪಾಲಿಸಿ 2025’ ಕರ್ನಾಟಕ ಸರಕಾರವು ಮಹಿಳಾ ಉದ್ಯೋಗಿಗಳಿಗೆ ಪ್ರತೀ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವುದನ್ನು ಅನುಮೋದಿಸಿದೆ. ಈ ನೀತಿಯು 18ರಿಂದ 52 ವಯಸ್ಸಿನ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಸ್ಥ ಮಹಿಳೆಯರಿಗೆ ಅನ್ವಯವಾಗುತ್ತದೆ. ಇದಕ್ಕೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ವರ್ಷಕ್ಕೆ ಒಟ್ಟು 12 ದಿನಗಳ ರಜೆ ನೀಡುವುದಾಗಿ ನವೆಂಬರ್ 2025ರಲ್ಲಿ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಈ ಸೌಲಭ್ಯವನ್ನು ಸಾರ್ವಜನಿಕ ಮತ್ತು ಖಾಸಗಿ ವಲಯವೆಂಬ ತಾರತಮ್ಯವಿಲ್ಲದೆ ನೀಡಲಾಗಿದೆ. ಆದರೆ ಶಿಕ್ಷಣ ಕ್ಷೇತ್ರದ ವ್ಯವಸ್ಥೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಬಹುತೇಕ ಕಾಲೇಜುಗಳಲ್ಲಿ ಈ ಸೌಲಭ್ಯ ನೀಡಿಲ್ಲ. ಕೆಲವು ಕಾಲೇಜುಗಳಲ್ಲಿ ಪೂರ್ಣಾವಧಿಯ ಮಹಿಳಾ ಅತಿಥಿ ಉಪನ್ಯಾಸಕರಿಗೆ ಈ ಸೌಲಭ್ಯ ಲಭ್ಯವಾದರೂ ಅಲ್ಪಾವಧಿಯ ಅಂದರೆ ವಾರಕ್ಕೆ ಕನಿಷ್ಠ 4, 6, 8, 10, 12, 14 ಗಂಟೆಗಳ ಕಾರ್ಯಭಾರವಿದ್ದಲ್ಲಿ ಅದು ಅಲ್ಪಾವಧಿಯ ಕಾರ್ಯಭಾರವಾಗಿದ್ದು, ಈ ಅವಧಿ ಹೊಂದಿರುವ ಬಹುತೇಕ ಮಹಿಳಾ ಅತಿಥಿ ಉಪನ್ಯಾಸಕರು ವಾರದಲ್ಲಿ 2, 3, 4 ದಿನ ಹೆಚ್ಚೆಂದರೆ 5 ದಿನ ಮಾತ್ರ ಕಾಲೇಜಿಗೆ ಬರುತ್ತಾರೆ. ವಾರದಲ್ಲಿ ಈ ರೀತಿ ಬರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ ಈ ಋತುಚಕ್ರ ರಜೆ ದೊರೆಯುವುದೇ ಅಥವಾ ಕೇವಲ 2 ರಿಂದ 3 ದಿನ ಬರುವುದರಿಂದ ಈ ಸೌಲಭ್ಯವಿಲ್ಲದಂತಾಗುತ್ತದೆಯೇ? ಎಂಬ ಗೊಂದಲವಿದೆ. ಕಾರಣ 2-3 ದಿನ ಕಾಲೇಜಿಗೆ ಬರುವ ಮಹಿಳಾ ಅತಿಥಿ ಉಪನ್ಯಾಸಕರು ಆ ದಿನಗಳಲ್ಲಿ ಋತು ಚಕ್ರವಾಗಬಾರದೆಂಬ ನಿಯಮವಿಲ್ಲ. ಇವರಿಗೆ ರಜೆ ಇಲ್ಲ ಎಂಬುದಾದರೆ ಈ ಕಾರ್ಯಕ್ರಮದ ಪ್ರಯೋಜನ ಮಹಿಳಾ ಅತಿಥಿ ಉಪನ್ಯಾಸಕರಿಗೆ ಎಲ್ಲಿ ದೊರಕಿದಂತಾಯಿತು? ಈ ಪ್ರಕಾರ ಅತಿಥಿ ಉಪನ್ಯಾಸಕಿಯರು ಮಹಿಳೆಯರಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಸರಕಾರಗಳ ನಿಲುವು ಮತ್ತು ಘೋಷಣೆಗಳು ಮಹಿಳೆಯರ ಸಮಾನತೆಗೆ ಪ್ರಾಧ್ಯಾನತೆ ನೀಡುತ್ತಿರುವುದಾಗಿ ಹೇಳಲಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಮಹಿಳಾ ಸಮಾನತೆಯ ಹೆಸರಿನಲ್ಲಿ ಇವರೇ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎನಿಸುತ್ತದೆ. ಆದ್ದರಿಂದ ಮಹಿಳೆಯರ ನಡುವೆಯೇ ಇಂತಹ ತಾರತಮ್ಯ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ ಸರಕಾರ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಶೇಷವಾಗಿ ಮಹಿಳಾ ಆಯೋಗಗಳು ಎಚ್ಚೆತ್ತುಕೊಂಡು ಸರಕಾರಿ, ಖಾಸಗಿ ಮಹಿಳಾ ಅತಿಥಿ ಉಪನ್ಯಾಸಕರು ಹಾಗೂ ಅಲ್ಪಾವಧಿ, ದೀರ್ಘಾವಧಿ ಮಹಿಳಾ ಅತಿಥಿ ಉಪನ್ಯಾಸಕರು ಎಂಬ ಭೇದಭಾವ ಮಾಡದೆ ಸಂಪೂರ್ಣವಾಗಿ ಪ್ರಸೂತಿ ರಜೆ ಮತ್ತು ಋತುಚಕ್ರ ರಜೆಯ ಸೌಲಭ್ಯ ಎಲ್ಲರಿಗೂ ದೊರೆಯುವಂತೆ ಮಾಡಬೇಕಿದೆ.

ವಾರ್ತಾ ಭಾರತಿ 17 Apr 2026 9:59 am

ಸಾಟಿ ಇಲ್ಲದ ಸ್ವರ ಸಾಮ್ರಾಜ್ಞಿ -ಆಶಾ ಭೋಸಲೆ

ಹಂ ದೋನೋ ಚಿತ್ರದ ‘‘ಅಭೀ ನಾ ಜಾವೋ ಚೋಡ್ ಕರ್’’, ಯಾದೋಂಕಿ ಬಾರಾತ್ ಚಿತ್ರದ ‘‘ಚುರಾಲಿಯಾ ಹೈ ತುಮ್ ನೆ ಜೊ ದಿಲ್ ಕೋ’’, ಖೇಲ್ ಖೇಲ್ ಮೆ ಚಿತ್ರದ ‘‘ಸಪ್‌ನಾ ಮೆರಾ ಟೂಟ್ ಗಯಾ’’, ಗೀತ್ ಗಾಯಾ ಪತ್ಥರೋನೆ ಚಿತ್ರದ ‘‘ತೇರೇ ಖಯಾಲೋಂ ಮೆ ಹಮ್’’, ನವರಂಗ್ ಚಿತ್ರದ ‘‘ಆಧಾ ಹೈ ಚಂದ್ರಮಾ ರಾತ್ ಆಧೀ’’, ಬಂದಿನಿ ಚಿತ್ರದ ‘‘ಅಬ್ ಕೆ ಬರಸ್ ಭೇಜೋ ಭಯ್ಯಾ ಕೊ ಬಾಬುಲ್’’, ಕಾರವಾನ್ ಚಿತ್ರದ ‘‘ಪಿಯಾ ತೂ ಅಬ್ ತೊ ಆಜಾ’’, ಉಮ್ರಾವ್ ಜಾನ್ ಚಿತ್ರದ ‘‘ಯೇ ಕ್ಯಾ ಜಗಾ ಹೈ ದೋಸ್ತೋ’’...ಈ ಮಧುರ ಕಂಠದ ಹಾಡುಗಳಿಗೆ ಒಡತಿಯಾಗಿರುವ ಆಶಾ ಭೋಸಲೆ ಕೇವಲ ರೊಮ್ಯಾಂಟಿಕ್ ಹಾಡುಗಳಿಗೆ ಹೇಗೆ ಸೀಮಿತವಾಗಲು ಸಾಧ್ಯ? ಆದರೂ ಇತ್ತೀಚೆಗೆ ತಮ್ಮ ಪಯಣ ಮುಗಿಸಿದ ಆಶಾ ಜೀ ಅವರನ್ನು ನೆನಪಿಸಿಕೊಳ್ಳುವುದೇ ಹೀಗೆ. ಬಹುಶಃ ಆಕೆಯ ಸ್ವರದಲ್ಲೇ ಅಡಗಿದ್ದ ರೊಮ್ಯಾಂಟಿಸಿಸಂನ ಛಾಯೆ ಈ ವಿಶೇಷ ಬಿರುದಿಗೆ ಕಾರಣವಾಗಿರಬಹುದು. ಆದರೆ 1948ರಿಂದ 2025ರವರೆಗೆ ಆಶಾ ಜೀ ನಡೆದುಬಂದ ಹಾದಿಯಲ್ಲಿ ಒಮ್ಮೆ ಪಯಣಿಸಿದಾಗ, ಈ ಸ್ವರದಲ್ಲಿ ಶಾಸ್ತ್ರೀಯ ಮಾಧುರ್ಯ, ಭಾವನಾತ್ಮಕ ಆರ್ದ್ರತೆ, ಪ್ರಣಯದ ಸವಿ, ತುಂಟಾಟದ ಕಚಗುಳಿ, ದುಃಖದ ಛಾಯೆ, ಹುಡುಗಾಟಿಕೆಯ ಚೇಷ್ಟೆ ಇವೆಲ್ಲವನ್ನೂ ಗುರುತಿಸಬಹುದು. ಸಾವಿರಾರು ಗೀತೆಗಳ ಒಡತಿ ಕೊನೆಯುಸಿರೆಳೆದಾಗ ಒಂದು ಕ್ಷಣ ಆವರಿಸಿದ ಶೂನ್ಯ ಸುಲಭವಾಗಿ ಮರೆಯುವಂತಹುದಲ್ಲ. ಭಾವನೆಗಳನ್ನು ತಟ್ಟುತ್ತಿದ್ದ ಗಾಯನ ಯಾರೇ ಸಂಗೀತ ಪ್ರಿಯರಾದರೂ ತಮ್ಮ ಮೂಡ್‌ಗೆ ತಕ್ಕಂತಹ ಸಿನೆಮಾ ಹಾಡುಗಳನ್ನು ಕೇಳಬಯಸಿದರೆ ಅಲ್ಲಿ ಥಟ್ಟನೆ ನೆನಪಾಗುವ ಮಧುರ ಕಂಠಗಳೆಂದರೆ ಮುಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಆಶಾ ಭೋಸಲೆ ಎಂಬ ಸುಮಧುರ ಕಂಠದ ಗಾಯಕಿ. ಮನಸ್ಥಿತಿ ಮತ್ತು ಅಭಿವ್ಯಕ್ತಿ (Mood and Expression) ಎರಡನ್ನೂ ಮೇಳೈಸಿ ಗಾಯನದಲ್ಲಿ ತಲ್ಲೀನವಾಗುವ ಗಾಯಕಿಯರಲ್ಲಿ ಅಗ್ರಶ್ರೇಣಿಯಲ್ಲಿ ನಿಲ್ಲುವ ಪ್ರತಿಭೆಯ ಮೇರು ಆಶಾ ಭೋಸಲೆ. ಉಮ್ರಾವ್ ಜಾನ್ ಚಿತ್ರದ ಹಾಡುಗಳು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಬಹುಶಃ ಈ ಮಾತುಗಳು ಕೆಲವರಿಗಾದರೂ ಉತ್ಪ್ರೇಕ್ಷೆ ಎನಿಸಬಹುದು. ಆದರೆ 55 ವರ್ಷಗಳಿಂದ ಕೇಳುತ್ತಲೇ ಬಂದಿರುವ ಈ ಮಧುರ ಕಂಠವನ್ನು ನೆನಪಿಸಿಕೊಳ್ಳುವಾಗೆಲ್ಲಾ, ಈ ಉತ್ಪ್ರೇಕ್ಷೆಯೇ ಸಹಜ ಎನಿಸಿಬಿಡುತ್ತದೆ. ಹಾಡುವ ಧಾಟಿ- ಶೈಲಿ, ಗಾಯನದ ಲಾಲಿತ್ಯ, ಕಂಠ ವೈವಿಧ್ಯತೆ ಮತ್ತು ಧ್ವನಿಯ ಏರಿಳಿತಗಳನ್ನು ಒಂದೇ ಹಾಡಿನಲ್ಲಿ ಗುರುತಿಸಬಹುದಾದ ಸಾವಿರಾರು ಮಧುರ ಗೀತೆಗಳನ್ನು ಆಶಾ ಜೀ ಬಿಟ್ಟುಹೋಗಿದ್ದಾರೆ. ಹೆಲೆನ್, ಅರುಣಾ ಇರಾನಿಯ ಕ್ಲಬ್ ಡ್ಯಾನ್ಸ್ ಇರಲಿ, ಜಯಾಬಾಧುರಿ-ರೇಖಾ ಅವರ ತುಂಟತನ ಇರಲಿ, ಮೀನಾ ಕುಮಾರಿ ಅವರ ಗಾಂಭೀರ್ಯ ಇರಲಿ, ಹೇಮಾ ಮಾಲಿನಿಯ ಪ್ರಣಯ ಗೀತೆಯಾಗಲೀ, ಉರ್ಮಿಳಾ ಮಾತೋಂಡ್ಕರ್ ‘‘ರಂಗೀಲಾ ರೇ’’ ಅಂತಹ ರಸಭರಿತ ಯವ್ವನದ ಹಾಡಾಗಲೀ ಆಶಾ ಜೀ ಅಲ್ಲಿ ತಮ್ಮ ಮಧುರ ಕಂಠದ ಮೂಲಕ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಸೋದರಿ ಲತಾಮಂಗೇಶ್ಕರ್ ಅವರಷ್ಟು Deep Voice ಅಥವಾ ನಾಭಿ ಸ್ವರ ಹೊರಹೊಮ್ಮಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಲಾದರೂ, ಗೀತ್ ಗಾಯಾ ಪತ್ಥರೋನೇ ಚಿತ್ರದ ‘‘ತೇರೇ ಖಯಾಲೋ ಮೆ ಹಮ್’’ ಮತ್ತು ನವರಂಗ್ ಚಿತ್ರದ ‘‘ತೂ ಚುಪೀ ಹೈ ಕಹ್ಞಾ’’ (ಮನ್ನಾಡೇ ಅವರೊಂದಿಗೆ) ಹಾಡುಗಳನ್ನು ಕೇಳಿದಾಗ ಇದು ಅರ್ಧಸತ್ಯ ಎನಿಸಿಬಿಡುತ್ತದೆ. ಆಶಾ ಜೀ ಅವರ ಧ್ವನಿಯಲ್ಲಿ ಶೃಂಗಾರ ರಸ, ಪ್ರಣಯ ಭಾವ ಇದ್ದಷ್ಟೇ ಆಳವಾಗಿದ್ದುದು ಭಕ್ತಿ ರಸವೂ ಇದ್ದುದನ್ನು ಕಾಜಲ್ ಚಿತ್ರದ ‘‘ತೊರಾ ಮನ್ ದರ್ಪಣ್ ಕೆಹಲಾಯೇ’’ ಹಾಡಿನಲ್ಲಿ ಗುರುತಿಸಬಹುದು. ಇದೇ ತನ್ಮಯತೆಯನ್ನೇ ಆಶಾ ಜೀ ಮಾದಕ ವ್ಯಸನಿ ಹಾಡುವ ‘‘ದಂ ಮಾರೋ ದಂ’’ (ಹರೇರಾಮ ಹರೇಕೃಷ್ಣ) ಹಾಡಿನಲ್ಲಿ ತೋರುತ್ತಾರೆ. ಅವರ ರೊಮ್ಯಾಂಟಿಕ್ ಹಾಡುಗಳನ್ನೂ ದಾಟಿ ನೋಡುವುದಾದರೆ, ಆಶಾ ಜೀ ಲತಾ ದೀದಿಗೆ ಸರಿಸಾಟಿಯಾಗಿ ನಿಲ್ಲುವ ಕ್ಷಮತೆ ಹೊಂದಿದ್ದರು. ಆದರೆ 1950ರ ಆರಂಭದಲ್ಲಿ ಗಾಯನ ಲೋಕ ಪ್ರವೇಶಿಸಿದಾಗ ಅವರಿಗೆ ಲತಾ ಫೋಬಿಯಾ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. 1950ರ ಸುವರ್ಣ ಯುಗದಲ್ಲಿ 1940ರ ದಶಕದಲ್ಲಿ ಹಿಂದಿ ಗಾಯಕರಾಗಿ ಪ್ರವೇಶಿಸಿದ ಗಾಯಕರಿಗೆ ಕೆ.ಎಲ್. ಸೈಗಲ್ ಮತ್ತು ಗಾಯಕಿಯರಿಗೆ ನೂರ್ ಜಹಾನ್ ಮಾದರಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕರೂ ಸಹ ಇವರ ಧಾಟಿಯಲ್ಲೇ ಹಾಡಲು ಗಾಯಕರಿಂದ ನಿರೀಕ್ಷಿಸುತ್ತಿದ್ದರು. ಮುಖೇಶ್ ಅವರ ‘‘ದಿಲ್ ಜಲ್ತಾ ಹೈ ಓ ಜಲ್ನೇ ದೋ’’ (ಪೆಹಲಿ ನಜರ್) ಮತ್ತು ಮುಹಮ್ಮದ್ ರಫಿ ಅವರ ‘‘ಯಹ್ಞಾ ಬದಲಾ ವಫಾ ಕಾ ಬೇವಫಾಯಿ ಕೆ ಸಿವಾ ಕ್ಯಾ ಹೈ’’ (ಚಿತ್ರ ಜುಗ್ನು ನೂರ್ ಜಹಾನ್ ಜೊತೆಗೆ) ಇದರ ಉದಾಹರಣೆಗಳು. ಲತಾ ದೀದಿ ಅವರ ಈ ದಶಕದ ಹಾಡುಗಳಲ್ಲೂ ನೂರ್ ಜಹಾನ್ ಛಾಯೆ ಕಾಣಬಹುದಿತ್ತು. ಆದರೆ 1950ರ ಆರಂಭದ ವೇಳೆಗೆ ಲತಾ ಮಂಗೇಷ್ಕರ್ ತಮ್ಮದೇ ಆದ ವಿಶಿಷ್ಟ ಕಂಠದಿಂದ ಸಂಗೀತ ನಿರ್ದೇಶಕರನ್ನು ಆಕರ್ಷಿಸಿದ್ದರು. ಮಹಲ್ ಚಿತ್ರದ ‘‘ಆಯೇಗಾ ಆಯೇಗಾ ಆಯೇಗಾ ಆನೇವಾಲ’’ ಹಾಡು ಲತಾ ದೀದಿಯ ವಿಶಿಷ್ಟ ಕಂಠದ ಪೇಟೆಂಟ್ ಆಗಿಹೋಗಿತ್ತು. ಈ ಸಮಯದಲ್ಲೇ ಗಾನಲೋಕ ಪ್ರವೇಶಿಸಿದ ಆಶಾ ಭೋಸಲೆಗೆ ಲತಾ ಫೋಬಿಯಾ, ಅಂದರೆ ಲತಾ ಧಾಟಿಯಲ್ಲೇ ಹಾಡಬೇಕಾದ ಅನಿವಾರ್ಯತೆಯ ಭೀತಿ ಕಾಡತೊಡಗಿತ್ತು. ಈ ಭೀತಿಯನ್ನು ಹೋಗಲಾಡಿಸಿದ್ದು Foot Tapping ಸಂಗೀತ ನಿರ್ದೇಶಕ ಒ.ಪಿ. ನಯ್ಯರ್. ಲತಾ ಮಂಗೇಷ್ಕರ್ ಅವರಿಂದ ಒಂದು ಹಾಡನ್ನೂ ಹಾಡಿಸದ ನಯ್ಯರ್ ಅವರಿಗೆ ಆಶಾ ಅವರ ಧ್ವನಿಯಲ್ಲಿ ವಿಶಿಷ್ಟ ಶೈಲಿ ಗೋಚರಿಸಿತ್ತು. ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರೂ ಲತಾ ಮಂಗೇಷ್ಕರ್ ಅವರ ವಿಶಿಷ್ಟ ಸ್ವರ ಶ್ರುತಿ ಮತ್ತು ವೈವಿಧ್ಯತೆಯ ಶ್ರೇಣಿಯನ್ನು ಗುರುತಿಸಿ ಅವರೇ ಹಾಡಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುತ್ತಿದ್ದುದುಂಟು. ಬೇರೆ ಗಾಯಕಿಯರಿಂದಲೂ ಇದೇ ಧಾಟಿ-ಶೈಲಿಯನ್ನು ಅಪೇಕ್ಷಿಸುತ್ತಿದ್ದರು. ಈ ನಡುವೆ ಒ.ಪಿ. ನಯ್ಯರ್ ತಮ್ಮ ಕೈಡಿದು ಲತಾ ಫೋಬಿಯಾ ಹೋಗಲಾಡಿಸಿದರು ಎಂದು ಆಶಾ ಹೇಳಿಕೊಂಡಿದ್ದಾರೆ. ತನ್ನ ಧ್ವನಿಯಲ್ಲಿ ನವಿರಾದ ಕೆಳಸ್ಥಾಯಿಯ ಲಕ್ಷಣವಿದೆ, ದೀರ್ಘಕಾಲ ಶ್ವಾಸ ಹಿಡಿದು ಹಾಡುವ ಕ್ಷಮತೆ ಇದೆ ಎಂದು ಗುರುತಿಸಿದ ನಯ್ಯರ್, ಈ ಗುಣಗಳನ್ನೇ ಬಳಸಿಕೊಂಡು, ಮಂದಗತಿಯ, ದುಃಖಭರಿತ, ವಿಷಣ್ಣತೆಯ ಭಾವವನ್ನು ಅವರ ಹಾಡುಗಳಲ್ಲಿ ಸೃಷ್ಟಿಸುತ್ತಿದ್ದರು ಎಂದು ಆಶಾಭೋಸಲೆ ಸಂದರ್ಶನವೊಂದರಲ್ಲಿ ಹೇಳುತ್ತಾರೆ. (ರಾಜು ಭರತನ್ ಅವರA Musical Biography). ವಿಶಿಷ್ಟ ಕಂಠದ ಪ್ರಯೋಗಶೀಲ ಆಶಾ ಇತರ ಸಂಯೋಜಕರು ಕಟ್ಟುನಿಟ್ಟಾಗಿ ಗಾಯಕರು ಅವರ ಸಂಯೋಜನೆಗಳನ್ನು ಹಾಗೆಯೇ ಹಾಡುವಂತೆ ಅಪೇಕ್ಷಿಸುತ್ತಿದ್ದರು, ಆದರೆ ನಯ್ಯರ್ ಆಶಾ ಭೋಸಲೆಗೆ ‘ಈಗ ಮುಂದಿನ ಚರಣವನ್ನು ನೀವು ಬಯಸಿದ ರೀತಿಯಲ್ಲಿ ಹಾಡಿ’ ಎಂದು ಮುಕ್ತ ಸ್ವಾತಂತ್ರ್ಯ ನೀಡುತ್ತಿದ್ದರು ಎಂದು ಆಶಾ ಜೀ ನೆನಪಿಸಿಕೊಳ್ಳುತ್ತಾರೆ. ಇದೇ ರೀತಿ ತಮ್ಮ ಪತಿ ರಾಹುಲ್ ದೇವ್ ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲೂ ಆಶಾ ಜೀ ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದರು. ಕಟೀ ಪತಂಗ್ ಚಿತ್ರದ ಒಂದು ಕ್ಲಬ್ ದೃಶ್ಯದಲ್ಲಿ ಚಿತ್ರದ ನಿರ್ದೇಶಕರು ಸಂಭಾಷಣೆಯಾಗಿ ಬರೆದಿದ್ದ ಸಾಲುಗಳನ್ನು ಉನ್ನತ್ತತೆಯ ಹಾಡನ್ನಾಗಿ ಪರಿವರ್ತಿಸಿದ್ದ ಆರ್.ಡಿ. ಬರ್ಮನ್ ‘‘ಮೇರಾ ನಾಮ್ ಹೈ ಶಬ್ನಮ್’’ ಹಾಡಿನ ಮೂಲಕ ಆಶಾ ಭೋಸಲೆಯ ವಿಶಿಷ್ಟ ಕಂಠಶೈಲಿಗೆ ಮೆರುಗು ನೀಡಿದ್ದರು. ಸಿಐಡಿ (1956) ಚಿತ್ರದ ‘‘ಲೇಕೆ ಪೆಹಲಾ ಪೆಹಲಾ ಪ್ಯಾರ್’’ (ರಫಿ-ಶಂಶಾದ್ ಬೇಗಂ ಜೊತೆಗೂಡಿ) ರೊಮ್ಯಾಂಟಿಕ್ ಹಾಡಿನಿಂದ ತಮ್ಮದೇ ಆದ ವಿಶಿಷ್ಟ ಹಾಡುಗಳೊಂದಿಗೆ ರಂಜಿಸಿದ ಒ.ಪಿ. ನಯ್ಯರ್ ಆಶಾಭೋಸಲೆ ಮತ್ತು ಮುಹಮ್ಮದ್ ರಫಿ ಅವರ ಗಾಯನ ಜೋಡಿಯನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿದ್ದರು. ನಯಾದೌರ್ ಚಿತ್ರದ ‘‘ಮಾಂಗ್ ಕೆ ಸಾಥ್ ತುಮ್ಹಾರಾ’’ , ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದ ‘‘ಬಹುತ್ ಶುಖ್ರಿಯಾ ಬಡೀ ಮೆಹರ್‌ಬಾನಿ’’ ಮೊಹಬ್ಬತ್ ಜಿಂದಗಿ ಹೈ (1966) ಚಿತ್ರದ ‘‘ರಾತೋಂ ಕೋ ಚೋರಿ ಚೋರಿ’’ ಮೊದಲಾದ ಸುಮಧುರ ಗೀತೆಗಳು ನಯ್ಯರ್-ಆಶಾ ಜೋಡಿಯಿಂದ ಸಿನಿರಸಿಕರನ್ನು ರಂಜಿಸಿದೆ, ಇಂದಿಗೂ ರಂಜಿಸುತ್ತಲೇ ಇದೆ. ‘‘ನನ್ನ ಸುದೀರ್ಘ ವೃತ್ತಿಜೀವನದಲ್ಲಿ, ನಾನು ವಿಭಿನ್ನ ಶೈಲಿಗಳನ್ನು ಹೊಂದಿದ್ದ ಮತ್ತು ತಮ್ಮದೇ ಆದ ಪರಿಣತಿ ವಿಭಾಗದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ಎಲ್ಲಾ ಸಂಯೋಜಕರೊಂದಿಗೆ ಹಾಡಿದ್ದೇನೆ. ಆದರೆ ಕೆಲವೇ ಕೆಲವು ಟ್ರೆಂಡ್‌ಗಳು ಇದ್ದವು. ಅವರು ವಿಭಿನ್ನ ವೈಯಕ್ತಿಕ ಶೈಲಿಯನ್ನು ಅಳವಡಿಸಿದ್ದೇ ಅಲ್ಲದೆ ಇತರರು ಅದನ್ನು ಅನುಸರಿಸುವಂತೆ ಪ್ರಭಾವ ಬೀರಿದರು. ಒ.ಪಿ. ನಯ್ಯರ್ ಅಂತಹ ಕ್ರಾಂತಿಕಾರಿ ಟ್ರೆಂಡ್ ಸೃಷ್ಟಿಸಿದರು’’ ಎಂದು ಆಶಾ ಒ.ಪಿ. ನಯ್ಯರ್ ಅವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಇದೇ ರೀತಿ ಆಶಾ ಭೋಸಲೆ ಅವರ ವೈವಿಧ್ಯತೆಯನ್ನು ಬಳಸಿಕೊಂಡು ಟ್ರೆಂಡ್ ಸೃಷ್ಟಿಸಿದವರು ರಾಹುಲ್ ದೇವ್ ಬರ್ಮನ್. ತೀಸ್ರಿ ಮಂಝಿಲ್ ಚಿತ್ರದ ‘‘ಆಜಾ ಆಜಾ ಮೈ ಹ್ಞೂ ಪ್ಯಾರ್ ತೆರಾ’’ ಹಾಡಿನಲ್ಲಿ ಆಶಾ ಜೀ ಪ್ರಯೋಗಿಸಿದ ಧ್ವನಿ ಏರಿಳಿತ ಮತ್ತು ಶ್ವಾಸ ಬಿಗಿಹಿಡಿದು ಹಾಡುವ ಶೈಲಿ ಈ ಜೋಡಿಯನ್ನು ಜನಪ್ರಿಯತೆಯ ಶಿಖರಕ್ಕೇರಿಸಿತ್ತು. ವಿದಾಯ ಹೇಳುವ ಮುನ್ನ... ಅಶಾ ಭೋಸಲೆ ಹಲವು ರಾಷ್ಟ್ರೀಯ, ಫಿಲಂ ಫೇರ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಜಾಝತ್ (1987) ಚಿತ್ರದ ‘‘ಮೇರಾ ಕುಚ್ ಸಾಮಾನ್ ತುಮ್ಹಾರಿ ಪಾಸ್ ’’ ಮತ್ತು 1981 ಉಮ್ರಾವ್ ಜಾನ್ ಚಿತ್ರದ ದಿಲ್ ಚೀಜ್ ಕ್ಯಾ ಹೈ ಆಪ್ ಮೆರಿ ಜಾನ್ ಲೀಜಿಯೇ’’ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಹಲವು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1977ರಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಡನೆ ‘ಐegಚಿಛಿಥಿ’ ಆಲ್ಬಮ್ ಗ್ರಾಮಿ ಅವಾರ್ಡ್‌ಗೆ ನಾಮ ನಿರ್ದೇಶನ ಪಡೆದಿತ್ತು. 2008ರಲ್ಲಿ ಪದ್ಮವಿಭೂಷಣ್ ಮತ್ತು 2000ದಲ್ಲಿ ಜೀವಮಾನ ಸಾಧನೆಗೆ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಶಾ ಭೋಸಲೆ ಪಾತ್ರರಾಗಿದ್ದಾರೆ. ಆದರೆ 55 ವರ್ಷಗಳಿಂದ ಈ ಸುಮಧುರ ಕಂಠದ ಸವಿಯನ್ನು ಆನಂದಿಸಿರುವವರಿಗೆ, ನನ್ನನ್ನೂ ಸೇರಿದಂತೆ, ಆಶಾ ಮತ್ತು ಲತಾ ಸಂಗೀತ ಲೋಕದ ಎರಡು ಹೃದಯಗಳಂತೆಯೇ ಕಾಣುತ್ತಾರೆ. ಈಗ ಇಬ್ಬರೂ ನಮ್ಮೊಡನಿಲ್ಲ. ಸಂಗೀತ ಸಾಮ್ರಾಜ್ಞಿ ಆಶಾ ಜೀಯವರಿಗೆ ಅಂತಿಮ ನಮನಗಳು. ಪ್ರತಿಭೆಯಿಂದಲೇ ಸಿಕ್ಕ ಅವಕಾಶಗಳು 1950-60ರ ದಶಕದಲ್ಲಿ ಎಸ್.ಡಿ. ಬರ್ಮನ್ ಮತ್ತು ಲತಾ ಮಂಗೇಷ್ಕರ್ ನಡುವೆ ವಿರಸ ಏರ್ಪಟ್ಟು ಕೆಲವು ವರ್ಷಗಳ ಕಾಲ ಎಸ್.ಡಿ. ಬರ್ಮನ್ ಲತಾ ದೀದಿಗೆ ಹಾಡುಗಳನ್ನು ನೀಡಿರಲಿಲ್ಲ. ಈ ಅವಧಿಯಲ್ಲಿ ಆಶಾ ಭೋಸಲೆ, ಬರ್ಮನ್ ನಿರ್ದೇಶನದಲ್ಲಿ ಸುಮಧುರ ಗೀತೆಗಳನ್ನು ಹಾಡಿದ್ದರು. ಸುಜಾತಾ ಚಿತ್ರದ ‘‘ಕಾಲಿ ಘಟಾ ಛಾಯಿ’’ ಹಾಡು ಏಕ್‌ದಂ ಜನಪ್ರಿಯವಾಗಿತ್ತು. ದೇವಾನಂದ್ ನಟನೆಯ ಜೆವೆಲ್ ಥೀಫ್ ಚಿತ್ರದಲ್ಲಿ ಬರ್ಮನ್-ಲತಾ ಪುನಃ ಒಂದಾಗಿದ್ದರು, ‘‘ದಿಲ್ ಪುಕಾರೇ ಆರೆ ಆರೆ ಆರೆ’’ ಹಾಡಿನ ಮೂಲಕ. ಆದರೆ ಈ ಚಿತ್ರದಲ್ಲಿ ಆಶಾ ಹಾಡಿರುವ ‘‘ರಾತ್ ಅಖೇಲಿ ಹೈ ಬುಜ್‌ಗಯೆ ದಿಯೇ’’ ಹಾಡು ರಸಿಕರ ಹೃದಯ ಗೆದ್ದಿತ್ತು. ಈ ಹಾಡಿನಲ್ಲಿ ಆಶಾ ಭೋಸಲೆಯ ಶ್ವಾಸ ನಿಯಂತ್ರಣ ಅಭೂತಪೂರ್ವ ಎನ್ನಬಹುದು. ಆರ್.ಡಿ. ಬರ್ಮನ್-ಆಶಾ ಭೋಸಲೆ ನಿಜ ಜೀವನದಲ್ಲಿ ದಂಪತಿಯಾಗಿದ್ದಂತೆಯೇ ಸಿನೆಮಾ ಹಾಡುಗಳಲ್ಲೂ ಮರೆಯಲಾಗದ ಜೋಡಿಯಾಗಿದ್ದರು. ಹರೇ ರಾಮ ಹರೇಕೃಷ್ಣ ಚಿತ್ರದಿಂದ ಆರಂಭವಾದ ಈ ಜೋಡಿಯ ಪಯಣದಲ್ಲಿ ನೂರಾರು ಹಾಡುಗಳು ಚಿರಸ್ಮರಣೀಯವಾಗಿವೆ. 1981ರಲ್ಲಿ ಬಂದ ಅಮಿತಾಭ್ ಬಚ್ಚನ್ ನಟನೆಯ ಕಾಲಿಯಾ ಚಿತ್ರದಲ್ಲಿ ‘‘ಸನಮ್ ತುಮ್ ಜಹ್ಞಾ ಮೆರಾ ದಿಲ್ ವಹ್ಞಾ’’ ಎಂಬ ಹಾಡು ಆಶಾಭೋಸಲೆಯ ಸ್ವರ ವೈವಿಧ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅದೇ ರೀತಿ ಸದಾ ನೆನಪಾಗುವ ಹಾಡು ಡಾನ್ ಚಿತ್ರದ (1978) ‘‘ಏ ಮೆರಾ ದಿಲ್ ಪ್ಯಾರ್ ಕಾ ದೀವಾನಾ’’ ದೇವಾನಂದ್ ಅವರ ಲೂಟ್ ಮಾರ್ ಚಿತ್ರದ (1980) ‘‘ಜಬ್ ಛಾಯೇ ಮೇರಾ ಜಾದೂ’’ ಹಾಡುಗಳು ಆಶಾ ಭೋಸಲೆಯ ಸ್ವರ ವೈವಿಧ್ಯತೆ ಮತ್ತು ವಿಶಿಷ್ಟ ಶೈಲಿಗೆ ಉದಾಹರಣೆಗಳು. 1940-90ರ ದಶಕದ ಹಿಂದಿ ಚಲನಚಿತ್ರ ಗಾಯಕ-ಗಾಯಕಿಯರ ಶ್ರೇಷ್ಠತೆಯನ್ನು ಅವರು ಪಡೆದ ಪ್ರಶಸ್ತಿಗಳಿಂದ ಅಳೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ಅವರಲ್ಲೇ ಇದ್ದ ಸ್ಪರ್ಧೆ ಕೆಲವರನ್ನು ಪ್ರಶಸ್ತಿಯಿಂದ ವಂಚಿಸುತ್ತಿತ್ತು. ಕೆಲವೊಮ್ಮೆ ಅತ್ಯುತ್ತಮ ಎನಿಸುವ ಹಾಡುಗಳಿಗೆ ಬದಲು ಸಾಧಾರಣ ಹಾಡುಗಳಿಗೂ ಪ್ರಶಸ್ತಿ ಲಭಿಸುತ್ತಿತ್ತು. ಮೇರಾ ನಾಮ್ ಜೋಕರ್ ಚಿತ್ರದ ‘‘ಭಾಯ್ ಜರ ದೇಖ್ ಕೆ ಚಲೋ’’ ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಖ್ಯಾತ ಗಾಯಕ ಮನ್ನಾ ಡೇ ವಿವಿಧ್ ಭಾರತಿಯ ಸಂದರ್ಶನವೊಂದರಲ್ಲಿ ‘‘ನನ್ನ ಬಸಂತ್ ಬಹಾರ್, ಮೇರಿ ಸೂರತ್ ತೇರಿ ಆಂಖೆ, ಕಾಬೂಲಿವಾಲಾ, ಉಪಕಾರ್ ಚಿತ್ರದ ಹಾಡುಗಳಿಗೆ ಹೋಲಿಸಿದರೆ ಇದು ಪ್ರಶಸ್ತಿಗೆ ಅರ್ಹವಾಗುವ ಹಾಡೇ ಅಲ್ಲ, ಆದರೆ ಆ ಹಾಡುಗಳಿಗೆ ಇಂತಹ ಅದೃಷ್ಟ ಇರಲಿಲ್ಲ’’ ಎಂದು ಹೇಳುತ್ತಾರೆ.

ವಾರ್ತಾ ಭಾರತಿ 17 Apr 2026 9:54 am

Karnataka Drought: ರಾಜ್ಯದಲ್ಲಿ ಬರದ ಭೀತಿ, ದೆಹಲಿಯಲ್ಲಿ ಕುರ್ಚಿ ಕುಸ್ತಿ: ಕಾಂಗ್ರೆಸ್‌ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವ ಮತ್ತು ಅಂತರ್ಜಲ ಮಟ್ಟದ ತೀವ್ರ ಕುಸಿತದಿಂದಾಗಿ ಬರಗಾಲದ ಕರಿನೆರಳು ಆವರಿಸುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಡಳಿತವನ್ನು ಮರೆತು ದೆಹಲಿಯಲ್ಲಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಮೇಲಾಟದಲ್ಲಿ ಮಗ್ನರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕರುನಾಡು ಬರದ ದವಡೆಗೆ ಸಿಲುಕುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರ

ಒನ್ ಇ೦ಡಿಯ 17 Apr 2026 9:35 am

ಐಟಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ: ಹಳ್ಳ ಹಿಡಿದ ಅಭಿವ್ಯಕ್ತಿ ಸ್ವಾತಂತ್ರ್ಯ

ಸರಕಾರದ ಹಿಡಿತ ಬಲಪಡಿಸುವುದು. ಜನರು ಏನು ಹೇಳುತ್ತಾರೆ, ನೋಡುತ್ತಾರೆ, ಕೇಳುತ್ತಾರೆ ಮತ್ತು ಆನ್‌ಲೈನ್‌ನಲ್ಲಿ ಏನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಅಧಿಕಾರವನ್ನು ಕಾರ್ಯಾಂಗದಲ್ಲಿ ಕೇಂದ್ರೀಕರಿಸಲಾಗಿದೆ; ಇದರಿಂದ ಅಧಿಕಾರವು ನ್ಯಾಯಾಲಯಗಳಿಂದ ಕಾರ್ಯಾಂಗಕ್ಕೆ ವರ್ಗಾವಣೆಯಾಗಿದೆ. ಉತ್ತರದಾಯಿತ್ವವಿಲ್ಲದ ಅಧಿಕಾರ ಕಾಲಕ್ರಮೇಣ ಎಲ್ಲರ ಮೇಲೆ ಪ್ರಯೋಗಿಸಲ್ಪಡುತ್ತದೆ. ಸರ್ವಾಧಿಕಾರಗಳು ಒಂದೇ ದಿನದಲ್ಲಿ ಉದ್ಭವಿಸುವುದಿಲ್ಲ; ಭಯದ ಸೃಷ್ಟಿ ಮತ್ತು ನಿಯಂತ್ರಣದ ಮೂಲಕ ಕಾಲಕ್ರಮೇಣ ರೂಪುಗೊಳ್ಳುತ್ತವೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ)ವು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021ಕ್ಕೆ ಮತ್ತೊಂದು ತಿದ್ದುಪಡಿ ತರಲು ಕರಡು ಪ್ರಸ್ತಾವವನ್ನು ಪ್ರಕಟಿಸಿದೆ. ಒಂದು ವೇಳೆ ಅಂಗೀಕೃತಗೊಂಡರೆ, ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಇನ್ನಷ್ಟು ಬಿಗಿಯಾಗಲಿದೆ. ಶಾಸಕಾಂಗದ ಸಮ್ಮತಿ ಇಲ್ಲದೆ, ಸಂಸತ್‌ನಲ್ಲಿ ಚರ್ಚೆ ನಡೆಸದೆ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಐಟಿ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಆನ್‌ಲೈನ್ ಗೋಪ್ಯತೆ ಮತ್ತು ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ನ್ಯಾಯಾಲಯ ಈ ಅರ್ಜಿಗಳನ್ನು ಕ್ರೋಡೀಕರಿಸಿದ್ದು, ಮೊದಲಿಗೆ ಡಿಜಿಟಲ್ ಮೀಡಿಯಾ ಮತ್ತು ಆನಂತರ ಮಧ್ಯವರ್ತಿ ಮಾರ್ಗಸೂಚಿಗಳ ಕುರಿತು ವಿಚಾರಣೆ ನಡೆಯಲಿದೆ. ಸರಕಾರ ನ್ಯಾಯಾಲಯದ ತೀರ್ಪಿಗೆ ಕಾಯುವ ಬದಲು ಕಾಯ್ದೆಗೆ ತರಾತುರಿಯಿಂದ ಇನ್ನೊಂದು ತಿದ್ದುಪಡಿ ತರಲು ಮುಂದಾಗಿದೆ. ನಾಲ್ಕನೇ ತಿದ್ದುಪಡಿ ಐಟಿ ಕಾಯ್ದೆಗೆ 2021ರ ನಂತರ ನಾಲ್ಕು ತಿದ್ದುಪಡಿ ತರಲಾಗಿದೆ. ಅಕ್ಟೋಬರ್ 2022ರ ತಿದ್ದುಪಡಿ ಮೂಲಕ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸೃಷ್ಟಿಸಲಾಯಿತು. ಸಾಮಾಜಿಕ ವೇದಿಕೆಗಳ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಮನವಿಗಳ ಪರಿಶೀಲನೆಗೆ ಅಧಿಕಾರಿಗಳ ಮಂಡಳಿ ರಚನೆ ಹಾಗೂ ನಿಯಮ 3ಕ್ಕೆ ತಿದ್ದುಪಡಿ ಮಾಡಿ, ‘ಮಧ್ಯವರ್ತಿ ವೇದಿಕೆಗಳು ಅನುಸರಣೆಯನ್ನು ಖಾತ್ರಿಗೊಳಿಸಬೇಕು’ ಮತ್ತು ನಿಷೇಧಿತ ವಿಷಯಗಳನ್ನು ತೆಗೆದುಹಾಕಲು ‘ತಾರ್ಕಿಕ ಪ್ರಯತ್ನ’ ನಡೆಸಬೇಕು ಎಂದು ಹೇಳಲಾಯಿತು. ವಿಷಯವೊಂದನ್ನು ತೆಗೆದುಹಾಕಲು ನೀಡಿದ್ದ ಕಾಲಾವಧಿಯನ್ನು 72 ಗಂಟೆಗೆ ಕಡಿಮೆ ಮಾಡಲಾಯಿತು. ಇದರಿಂದ ವೇದಿಕೆಗಳು ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ, ತ್ವರಿತವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ತೆಗೆದುಹಾಕುವಂತೆ ಆಯಿತು. ಏನು ಪ್ರಕಟಿಸಬಹುದು/ಬಾರದು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕೇಂದ್ರಕ್ಕೆ ನೀಡಿತು. ಜನರ ಮಾತುಗಳು ಅಂಕುಶಕ್ಕೆ ಸಿಲುಕಿದವು. ಎಪ್ರಿಲ್ 2023ರ ತಿದ್ದುಪಡಿ ಇನ್ನೊಂದು ಹೆಜ್ಜೆ ಮುಂದೆ ಹೋಯಿತು. ಆನ್‌ಲೈನ್ ಆಟ ಕುರಿತ ನಿಯಮಗಳೊಟ್ಟಿಗೆ, ನಿಯಮ 3(1)(ಬಿ) ಅಡಿ ನಿಜಾಂಶ ಪತ್ತೆ ಅಧಿಕಾರವನ್ನು ನೀಡಿತು. ಸಚಿವಾಲಯದ ಸತ್ಯಾಂಶ ಪರಿಶೀಲನೆ ಘಟಕವು ನಕಲಿ, ಸುಳ್ಳು ಇಲ್ಲವೇ ಹಾದಿ ತಪ್ಪಿಸುತ್ತದೆ ಎಂದು ಗುರುತಿಸಿದ ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತಡೆಯಲು ವೇದಿಕೆಗಳು ತಾರ್ಕಿಕ ಪ್ರಯತ್ನ ಮಾಡಬೇಕು ಎಂದು ವಿಧಿಸಿತು. ಸೆಪ್ಟಂಬರ್ 2024ರಲ್ಲಿ ಬಾಂಬೆ ಹೈಕೋರ್ಟ್, ಈ ತಿದ್ದುಪಡಿ ಅಸಾಂವಿಧಾನಿಕ ಎಂದು ಹೇಳಿ ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಾರ್ಚ್ 2026ರಲ್ಲಿ ನಿರಾಕರಿಸಿತು. ಅಕ್ಟೋಬರ್ 2025ರ ತಿದ್ದುಪಡಿಯು ಸಹಯೋಗ್ ಪೋರ್ಟಲ್‌ನ್ನು ವಿಧ್ಯುಕ್ತಗೊಳಿಸಿತು; ಈ ಪೋರ್ಟಲ್ ಪೊಲೀಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ವಿಷಯವೊಂದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ರೂಪಿಸಿದ ಏಕೀಕೃತ ಆನ್‌ಲೈನ್ ವೇದಿಕೆ. ನಿಯಮ 3(1)(ಡಿ) ಪ್ರಕಾರ, ನ್ಯಾಯಾಂಗದ ಆದೇಶ ಅಥವಾ ಜಂಟಿ ಕಾರ್ಯದರ್ಶಿ ಇಲ್ಲವೇ ಅದಕ್ಕಿಂತ ಮೇಲ್ಮಟ್ಟದ ಅಧಿಕಾರಿ(ಪೊಲೀಸ್ ಆಗಿದ್ದರೆ ಡಿಐಜಿ) ಹೇಳಿದಲ್ಲಿ ವಿಷಯ ತೆಗೆದುಹಾಕಬೇಕು; ಆನಂತರ ಕಾರ್ಯದರ್ಶಿ ಹಂತದ ಅಧಿಕಾರಿಯಿಂದ ವೇದಿಕೆಯ ಮಾಸಿಕ ಪರಿಶೀಲನೆ ನಡೆಸಬೇಕು. ಸೂಕ್ತವಲ್ಲ ಎಂದು ಪರಿಗಣಿಸಿದ ವಿಷಯವನ್ನು 36 ಗಂಟೆಗಳೊಳಗೆ ತೆಗೆದುಹಾಕಬೇಕು. ಈ ತಿದ್ದುಪಡಿಯು ಕೇಂದ್ರೀಕೃತ, ಪೋರ್ಟಲ್ ಆಧರಿತ ಸೆನ್ಸರ್‌ಶಿಪ್‌ಗೆ ದಾರಿ ಮಾಡಿಕೊಟ್ಟಿದೆ. ವಿಷಯ ತೆಗೆಯಲು ಸೆಕ್ಷನ್ 69 ಹೇಳುವ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ ಮತ್ತು 2009ರ ಬ್ಲಾಕಿಂಗ್ ನಿಯಮಗಳು ಪಾಲನೆಯಾಗುತ್ತಿಲ್ಲ; ವಿಷಯದ ಮೂಲಲೇಖಕ ಇಲ್ಲವೇ ಬಳಕೆದಾರರಿಗೆ ನೋಟಿಸ್ ನೀಡುವುದಿಲ್ಲ ಮತ್ತು ಅಹವಾಲು ಆಲಿಸುವುದಿಲ್ಲ. ಮಾರ್ಚ್ 30, 2026ರ ತಿದ್ದುಪಡಿ ಕರಡು ಗಾವುದ ದೂರ ಮುಂದೆ ಹೋಗಿದೆ. ಡಿಜಿಟಲ್ ಸೇವೆ ಒದಗಿಸುವ ವೇದಿಕೆಗಳು/ಮಧ್ಯವರ್ತಿಗಳಿಗೆ ಸ್ಪಷ್ಟೀಕರಣ, ಸಲಹೆ, ನಿರ್ದೇಶನ ಮತ್ತು ಇನ್ನಿತರ ಆದೇಶ ನೀಡಲು ಎಂಇಐಟಿವೈಗೆ ಅಧಿಕಾರ ನೀಡಲಿದೆ. ಐಟಿ ಕಾಯ್ದೆಯ ಸೆಕ್ಷನ್ 79ರಡಿ ಲಭ್ಯವಿರುವ ನಿರ್ದಿಷ್ಟ ಹೊಣೆಗಾರಿಕೆಯಿಂದ ರಕ್ಷಣೆ ನೀಡುವ ‘ಸೇಫ್ ಹಾರ್ಬರ್’ ಸವಲತ್ತು ಉಳಿಸಿಕೊಳ್ಳಲು ವೇದಿಕೆಗಳು ಸಚಿವಾಲಯದ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯ ಆಗಲಿದೆ. ಈ ಮೊದಲು, ಸೇಫ್ ಹಾರ್ಬರ್ ಸವಲತ್ತಿಗೆ ಸರಕಾರದ ನಿರ್ಬಂಧಗಳು ಅನ್ವಯಿಸುತ್ತಿರಲಿಲ್ಲ; ತಿದ್ದುಪಡಿ ಮೂಲಕ ವೇದಿಕೆಗಳು ಪ್ರಕಟಿಸುವ ವಿಷಯಗಳಿಗೆ ಅವುಗಳನ್ನೇ ಸಂಪೂರ್ಣ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆದಿದೆ. ಇದರಿಂದಾಗಿ ವೇದಿಕೆಗಳು ಸರಕಾರದ ದೃಷ್ಟಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಹೆಚ್ಚು ಎಚ್ಚರಿಕೆಯಿಂದ ವರ್ತಿಸಲು ತೊಡಗುತ್ತವೆ. ಎರಡನೆಯದಾಗಿ, ಪ್ರಸ್ತಾವದಲ್ಲಿ ಮೇಲ್ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಂಶವೊಂದು ಇದೆ-ಅಂತರ್ ವಿಭಾಗೀಯ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಮಧ್ಯವರ್ತಿಗಳು/ಬಳಕೆದಾರರು ಸೃಷ್ಟಿಸುವ ವಿಷಯಗಳ ಪರಿಶೀಲನೆ ನಡೆಸುವ ಅಧಿಕಾರ ಕೊಡುವುದು. ಇದರಿಂದ ಆನ್‌ಲೈನ್ ಸಂವಹನ ಕಠಿಣ ಪರಿಶೀಲನೆಗೆ ಸಿಲುಕಲಿದೆ. ಡಿಜಿಟಲ್ ಸುದ್ದಿ ವೇದಿಕೆಗಳಲ್ಲದೆ, ಬಾಹ್ಯ ಮೂಲಗಳ ಸುದ್ದಿಯನ್ನು ಹಂಚಿಕೊಳ್ಳುವ ಬಳಕೆದಾರರು-ಇನ್‌ಫ್ಲುಯನ್ಸರ್‌ಗಳನ್ನು ಬಾಧ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ. ಜೊತೆಗೆ, ನಿಯಮ 3(1)(ಡಿ) ಅಡಿ ವಿಷಯವನ್ನು ತೆಗೆದುಹಾಕಬೇಕಿರುವ ಅವಧಿಯನ್ನು 30ರಿಂದ 3 ಗಂಟೆಗೆ, ಕುಂದುಕೊರತೆ ಪರಿಹಾರ ಅವಧಿಯನ್ನು 15ರಿಂದ 7 ದಿನಕ್ಕೆ, ಸೂಕ್ಷ್ಮ/ಅನ್ಯೋನ್ಯ ವಿಷಯಗಳನ್ನು ತೆಗೆದುಹಾಕಬೇಕಿರುವ ಅವಧಿಯನ್ನು 24ರಿಂದ 2 ಗಂಟೆಗೆ ಹಾಗೂ ಇನ್ನಿತರ ವಿಷಯಗಳಿಗೆ 72 ರಿಂದ 36 ಗಂಟೆಗೆ ಕಡಿಮೆಮಾಡಿದೆ. ಹೊಸ ಪರಿಶೀಲನೆ ವ್ಯವಸ್ಥೆ ‘ಸಿಂಥೆಟಿಕಲಿ ಜನರೇಟೆಡ್ ಇನ್ಫರ್ಮೇಷನ್(ಕೃತಕವಾಗಿ ಸೃಷ್ಟಿಸಿದ ಮಾಹಿತಿ)’ ಯನ್ನು ಪರಿಚಯಿಸಿದೆ- ಇಂಥ ವಿಷಯವನ್ನು ಸೃಷ್ಟಿಸುವ ಇಲ್ಲವೇ ವಿತರಿಸುವ ವೇದಿಕೆಗಳು ತಾರ್ಕಿಕ ಹಾಗೂ ಸೂಕ್ತವಾದ ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು; ಮಧ್ಯವರ್ತಿಗಳು ಪ್ರಕಟಣೆಗೆ ಮುನ್ನ ಬಳಕೆದಾರರಿಂದ ಹೇಳಿಕೆ, ವಿಷಯದ ತಾಂತ್ರಿಕ ಪರಿಶೀಲನೆ ಹಾಗೂ ಅದು ಸಿಂಥೆಟಿಕ್ ವಿಷಯ ಎಂದು ಖಾತ್ರಿಪಡಿಸಿಕೊಳ್ಳಬೇಕು; ಇಲ್ಲವಾದಲ್ಲಿ ನಿರ್ಲಕ್ಷ್ಯ ಧೋರಣೆ ಎಂದು ಪರಿಗಣಿಸಲಾಗುತ್ತದೆ ಎಂದಿದೆ. ಸಿಂಥೆಟಿಕ್ ಕಂಟೆಂಟ್ ಎಂದರೇನು? ಅದರ ವಿವರಣೆ ಏನು? ಇದರಿಂದಾಗಿ ವೇದಿಕೆಗಳು ಸಮಸ್ಯಾತ್ಮಕ ಎನ್ನಬಹುದಾದ ವಿಷಯಗಳ ಪ್ರಕಟಣೆಯನ್ನೇ ಸ್ಥಗಿತಗೊಳಿಸುತ್ತವೆ. ವಿಷಯವೊಂದರ ವಸ್ತುನಿಷ್ಠತೆ, ಅಧಿಕೃತತೆಯನ್ನು ಪರಿಶೀಲಿಸಲು ಕಾಲಾವಕಾಶ ಅಗತ್ಯವಿದೆ. ಕಾಲಾವಧಿಯನ್ನು ಕಡಿತಗೊಳಿಸಿರುವುದರಿಂದ, ಪರಿಶೀಲನೆ ಅಸಾಧ್ಯವಾಗುತ್ತದೆ ಮತ್ತು ವಿಷಯವನ್ನು ತೆಗೆದುಹಾಕಲಾಗಿದೆ ಎಂಬುದೇ ಬಳಕೆದಾರನಿಗೆ ತಿಳಿಯುವುದಿಲ್ಲ. ಈ ತಿದ್ದುಪಡಿಯು ವಿಷಯ ತೆಗೆದುಹಾಕುವಿಕೆಯನ್ನು ದಾಟಿ, ಪ್ರಕಟಣೆಗೆ ಮುನ್ನ ಸೆನ್ಸರ್ ವ್ಯವಸ್ಥೆ ಆಗಲಿದೆ ಹಾಗೂ ವೇದಿಕೆಗಳ ನಿರಂತರ ಸರ್ವೇಕ್ಷಣೆ ನಡೆಯಲಿದೆ. ಮುಖ್ಯವಾಹಿನಿ ಮಾಧ್ಯಮಗಳು ಸರಕಾರಗಳ ಕೈಗೊಂಬೆಯಾಗಿರುವ ಸನ್ನಿವೇಶದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಜನರಿಗೆ ಇರುವ ಏಕೈಕ ಮಾರ್ಗವಾದ ಸಾಮಾಜಿಕ ಮಾಧ್ಯಮಗಳ ಬಾಗಿಲು ಮುಚ್ಚಿಹೋಗುತ್ತದೆ. ಸಂಘರ್ಷದ ಇನ್ನೊಂದು ಆಯಾಮ ತಿದ್ದುಪಡಿ ಪ್ರಸ್ತಾವವು ರಾಜ್ಯದಿಂದ ಡಿಜಿಟಲ್ ಕ್ಷೇತ್ರದ ಕೈವಶ-ನಿಯಂತ್ರಣ ಪ್ರಯತ್ನ ಮತ್ತು ಮುಕ್ತ ಅಭಿವ್ಯಕ್ತಿ ನಡುವಿನ ದೀರ್ಘಕಾಲೀನ ಸಂಘರ್ಷದ ಇನ್ನೊಂದು ಆಯಾಮವನ್ನು ತೆರೆದಿಡುತ್ತವೆ. ಈ ಮೊದಲು ಅಂತರ್ ಇಲಾಖಾ ಸಮಿತಿ(ಐಡಿಸಿ)ಯು ಪ್ರಕಟಿತ ವಿಷಯಗಳ ಪರಿಶೀಲನೆಗೆ ಸೀಮಿತವಾಗಿತ್ತು; ಈಗ ಅದು ವೇದಿಕೆಯಲ್ಲಿ ಬಳಕೆದಾರರು ಸೃಷ್ಟಿಸುವ ವಿಷಯವನ್ನೂ ಪರಿಶೀಲಿಸಬಹುದು ಮತ್ತು ಸಚಿವಾಲಯ ತನಗಿಷ್ಟ ಬಂದ ಯಾವುದೇ ವಿಷಯವನ್ನು ಐಡಿಸಿಗೆ ಪರಿಶೀಲನೆಗೆ ಕಳಿಸಬಹುದು. ಕರಡಿನ ಭಾಷೆ ಅಸ್ಪಷ್ಟವಾಗಿದೆ; ವಿಷಯದ ಪರಿಶೀಲನೆ ನಡೆಸಬೇಕೆಂದು ಯಾರೂ ದೂರು ನೀಡಬೇಕಿಲ್ಲ, ನೀತಿಸಂಹಿತೆಯ ಉಲ್ಲಂಘನೆ ಆಗಿದೆ ಎಂದು ಸಾಬೀತುಪಡಿಸಬೇಕಿಲ್ಲ ಮತ್ತು ದೂರನ್ನು ಐಡಿಸಿಗೆ ಕಳಿಸುವ ಮುನ್ನ ಸಂತ್ರಸ್ಥರ ಅಹವಾಲು ಆಲಿಸಲಾಗುತ್ತದೆ ಎಂಬ ಖಾತ್ರಿಯಿಲ್ಲ. ಇದರಿಂದ ಇಡೀ ಪರಿಶೀಲನೆ ವ್ಯವಸ್ಥೆ ಕೇಂದ್ರೀಕೃತ ಹಾಗೂ ಅಧಿಕಾರಶಾಹಿ ನಿಯಂತ್ರಣ ದಲ್ಲಿರುವ ಪ್ರಕ್ರಿಯೆ ಆಗಲಿದೆ. ಯುಟ್ಯೂಬ್, ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ನಂಥ ವೇದಿಕೆಗಳು ನಿಯಮಗಳನ್ನು ಅನುಸರಿಸದಿದ್ದರೆ, ಸೇಫ್ ಹಾರ್ಬರ್ ಸವಲತ್ತಿನ ಮೇಲೆ ಪರಿಣಾಮ ಆಗಲಿದೆ. ಎಕ್ಸ್‌ನ ಕಮ್ಯುನಿಟಿ ನೋಟ್ಸ್ (ಸಮುದಾಯದ ಟಿಪ್ಪಣಿಗಳು) ಸುದ್ದಿ, ರಾಜಕೀಯ ಅಥವಾ ಸಾರ್ವಜನಿಕ ನೀತಿಗೆ ಸಂಬಂಧಿಸಿದ್ದರೆ, ಅವುಗಳನ್ನು ಪರಿಶೀಲಿಸಬಹುದು. ಆದರೆ, ಈ ಟಿಪ್ಪಣಿಗಳನ್ನು ಒಬ್ಬ ವ್ಯಕ್ತಿ ಬದಲು ಬಹುಬಳಕೆದಾರರು ರೂಪಿಸಿರುತ್ತಾರೆ. ಅಂಥ ಸನ್ನಿವೇಶದಲ್ಲಿ ಯಾರ ಮೇಲೆ ಹೊಣೆಗಾರಿಕೆ ಹೊರಿಸಲಾಗುತ್ತದೆ? ಇಡೀ ಸಮುದಾಯದ ಮೇಲೆ? ಅಂತರ ಇಲಾಖೆ ಸಮಿತಿ ಸ್ವೀಕರಿಸಿದ ಕುಂದುಕೊರತೆಗಳಲ್ಲಿ ಸ್ವತಂತ್ರ ಸುದ್ದಿ ಸೃಷ್ಟಿಕರ್ತರು ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನು ನಿರ್ಬಂಧಿಸಲು ಸರಕಾರ ಆದೇಶ ಹೊರಡಿಸಬಹುದು. ಸರಕಾರದ ಸೂಚನೆ, ನಿರ್ದೇಶನ ಹಾಗೂ ಮಾರ್ಗದರ್ಶಿ ಸೂತ್ರಗಳ ಅನುಸರಣೆ ಮಾಡಬೇಕೆಂಬ ಷರತ್ತಿನಿಂದ ವಿಷಯಗಳನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚುತ್ತದೆ. ರಾಣಾ ಅಯ್ಯೂಬ್ ಪ್ರಕರಣವನ್ನು ನೋಡೋಣ: ಅಯ್ಯೂಬ್ ಅವರ ಹಳೆಯ ಪೋಸ್ಟ್‌ಗಳನ್ನು ತೆಗೆದುಹಾಕಲು ಎಕ್ಸ್ ವಿಫಲವಾದರೆ, ಸೇಫ್ ಹಾರ್ಬರ್ ರಕ್ಷಣೆ ಕಳೆದುಕೊಳ್ಳಲಿದೆ ಎಂದು ಸರಕಾರ ಮತ್ತು ಪೊಲೀಸರು ದಿಲ್ಲಿ ಹೈಕೋರ್ಟ್‌ಗೆ ಎಪ್ರಿಲ್ 10, 2026ರಂದು ಹೇಳಿದ್ದಾರೆ. 2013-2017ರ ಅವಧಿಯಲ್ಲಿ ಅಯ್ಯೂಬ್ ಅವರು ಹಿಂದೂ ದೇವತೆಗಳು ಮತ್ತು ಸಾವರ್ಕರ್ ಬಗ್ಗೆ ಮಾಡಿದ ಆರು ಪೋಸ್ಟ್‌ಗಳನ್ನು ತೆಗೆದುಹಾಕಬೇಕು. ಇವು ಕೋಮುಸೌಹಾರ್ದಕ್ಕೆ ಭಂಗ ತರಬಹುದು ಎಂದು ಅಮಿತಾ ಸಚ್‌ದೇವ ಎಂಬ ವಕೀಲರು ಜನವರಿ 2025ರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಪುರುಷೇಂದ್ರ ಕುಮಾರ್ ಕೌರವ್ ಅವರು ಅಯ್ಯೂಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ‘ಎಕ್ಸ್‌ನಲ್ಲಿನ ತಮ್ಮ ಪೋಸ್ಟ್ ಗಳು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಇದು ನನ್ನನ್ನು ಬೆದರಿಸುವ ಮತ್ತು ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ’ ಎಂದು ಅಯ್ಯೂಬ್ ಪ್ರತಿಕ್ರಿಯಿಸಿದ್ದಾರೆ. ವಿಷಯವನ್ನು ಅಪ್‌ಲೋಡ್ ಮಾಡಿದ ಅಯ್ಯೂಬ್ ಅವರಿಗೆ ತೆಗೆದುಹಾಕುವಂತೆ ನಿರ್ದೇಶನ ನೀಡಬೇಕು ಎಂದು ಎಕ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಜನವರಿ-ಜೂನ್ 2025ರಲ್ಲಿ ಎಕ್ಸ್‌ಗೆ 29,118 ಪೋಸ್ಟ್/ಟ್ವೀಟ್‌ಗಳನ್ನು ತೆಗೆದುಹಾಕಿ ಆದೇಶ ನೀಡಲಾಗಿದ್ದು, ಇದರಲ್ಲಿ ಎಷ್ಟನ್ನು ಜಂಟಿಕಾರ್ಯದರ್ಶಿ ಪರಿಶೀಲಿಸಿದ್ದಾರೆ? ಪರಿಶೀಲನೆ ಪ್ರಕ್ರಿಯೆ ಆಂತರಿಕವಾದದ್ದು; ಆರಂಭಿಕ ಆದೇಶ ನೀಡಿದವರೇ ಪರಿಶೀಲನೆ ಮಾಡುವ ಸಾಧ್ಯತೆಯೂ ಇರುತ್ತದೆ. ಆಗ ದೂರು ನೀಡಿದವರಿಗೆ ಹೇಗೆ ನ್ಯಾಯ ಸಿಗುತ್ತದೆ? ಶ್ರೇಯಾ ಸಿಂಘಾಲ್ ವಿ/ಎಸ್ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 69ನ್ನು ತೆಗೆದುಹಾಕದೆ ಇರಲು ಕಾರಣಗಳಿದ್ದವು. ಆದರೆ, ಹಾಲಿ ತಿದ್ದುಪಡಿ ಸಾಂವಿಧಾನಿಕ ಹಕ್ಕುಗಳನ್ನೇ ಘರ್ಷಣೆ ಎಂದು ಪರಿಗಣಿಸುತ್ತವೆ ಹಾಗೂ ಸೇಫ್ ಹಾರ್ಬರ್ ನೆಪದಲ್ಲಿ ಸೆನ್ಸರ್‌ಶಿಪ್ ನಡೆಸುತ್ತದೆ. ಸ್ವತಂತ್ರ ವ್ಯಾಖ್ಯಾನಕಾರರಿಗೆ ಅಂಕುಶ ಮಾರ್ಚ್ 30, 2026ರ ತಿದ್ದುಪಡಿಯು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಾಖ್ಯಾನ/ವಿಮರ್ಶೆ ಮಾಡುವವರನ್ನು ಅಂಕೆಯಲ್ಲಿಡಲು ಬಳಕೆಯಾಗಲಿದೆ. ಮುಖ್ಯವಾಹಿನಿ ಮಾಧ್ಯಮ ಉದ್ಯಮಿ-ರಾಜಕಾರಣಿಗಳ ಜೇಬಿನಲ್ಲಿರುವುದರಿಂದ, ಸ್ವತಂತ್ರ ವ್ಯಾಖ್ಯಾನಕಾರರು ಮತ್ತು ಪರ್ಯಾಯ ಮಾಧ್ಯಮಗಳು ಹೆಚ್ಚಿವೆ. ದೇಶಿ-ವಿದೇಶಿ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ಇವುಗಳ ನಿಯಂತ್ರಣ ಪ್ರಯತ್ನ ನಡೆದಿದೆ. ತಿದ್ದುಪಡಿಯು ಮೂಲ ಕಾಯ್ದೆಯ ವ್ಯಾಪ್ತಿಯನ್ನು ಮೀರಿರುವುದಲ್ಲದೆ, ಮಧ್ಯವರ್ತಿ ವೇದಿಕೆಗಳ ಮರುವಿನ್ಯಾಸಕ್ಕೆ ಒತ್ತಡ ಹೇರುತ್ತದೆ. ಉದಾಹರಣೆಗೆ, ಕಮ್ಯುನಿಟಿ ನೋಟ್ಸ್ ಮತ್ತು ಬಳಕೆದಾರರಿಂದ ಸತ್ಯಾಂಶ ಪರಿಶೀಲನೆಗೆ ವೇದಿಕೆಗಳನ್ನು ಉತ್ತರದಾಯಿಯಾಗಿ ಮಾಡಿದರೆ, ಅವು ಆ ವೈಶಿಷ್ಟ್ಯಗಳನ್ನೇ ತೆಗೆದುಹಾಕುತ್ತವೆ. ತಿದ್ದುಪಡಿ ಪ್ರಸ್ತಾವ ದೇಶದ ಸೆನ್ಸರ್‌ಶಿಪ್ ವಸ್ತ್ರದ ಇನ್ನೊಂದು ಪದರ; ಬಳಕೆದಾರರೊಬ್ಬರ ಪೋಸ್ಟ್ ಇಲ್ಲವೇ ಇಡೀ ಖಾತೆಯನ್ನೇ ತೆಗೆದುಹಾಕಿದರೂ, ತೆಗೆದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಮತ್ತು ಕಾನೂನಿನಡಿ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಇದಕ್ಕೆ ಐಟಿ ಕಾಯ್ದೆ 2000ದ 2 ಅಂಶಗಳು ಕಾರಣ: ಬ್ಲಾಕ್ ಮಾಡಲು ಅವಕಾಶ ನೀಡುವ ಸೆಕ್ಷನ್ 69ಎ ಮತ್ತು ವೇದಿಕೆಗಳಿಗೆ ಬಳಕೆದಾರರ ಪೋಸ್ಟ್‌ಗಳಿಂದ ರಕ್ಷಣೆ ನೀಡುವ ಸೇಫ್ ಹಾರ್ಬರ್ ಖಾತ್ರಿ. ಶ್ರೇಯಾ ಸಿಂಘಾಲ್ ವಿ/ಎಸ್ ಭಾರತ ಸರಕಾರ ಪ್ರಕರಣ(ಮಾರ್ಚ್ 24, 2015)ದಲ್ಲಿ ಎಂಇಐಟಿವೈ ಉಲ್ಲೇಖಿಸಿದ್ದ ಸುರಕ್ಷಾ ಕ್ರಮಗಳನ್ನು ಆಧರಿಸಿ, ಇವೆರಡನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಕಳೆದ 10 ವರ್ಷದಲ್ಲಿ ಇಲಾಖೆ ತಿದ್ದುಪಡಿಗಳ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸಿದೆ; ಸೆಕ್ಷನ್ 69ಎ ಅಡಿ ಬ್ಲಾಕಿಂಗ್ ಆದೇಶಗಳನ್ನು ಅತಿ ಶೀಘ್ರವಾಗಿ, ಅತ್ಯಂತ ಹೆಚ್ಚು ಪ್ರಕರಣ ಗಳಲ್ಲಿ ನೀಡಲಾಗಿದೆ. ಏಕೆ ಆದೇಶ ನೀಡಲಾಗಿದೆ ಎಂದು ತಿಳಿಸುವುದಿಲ್ಲ ಹಾಗೂ ಆದೇಶದ ನಕಲನ್ನು ಗ್ರಾಹಕರಿಗೆ ನೀಡುವುದಿಲ್ಲ. ಏನು ತಪ್ಪಾಗಿದೆ ಎನ್ನುವುದನ್ನೇ ವಿವರಿಸದೆ ವಿಚಾರಣೆಗೆ ದಿಲ್ಲಿಗೆ ಕರೆಸಲಾಗುತ್ತದೆ. ಸೆಕ್ಷನ್ 79ನ್ನು ಇನ್ನಷ್ಟು ತಿರುಚಲಾಗಿದೆ. ಸಾಮಾಜಿಕ ವೇದಿಕೆಗಳು(ಯುಟ್ಯೂಬ್, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್, ಫೇಸ್‌ಬುಕ್, ಎಕ್ಸ್, ಲಿಂಕ್ಡ್‌ಇನ್ ಇತ್ಯಾದಿ) ವಾಣಿಜ್ಯಿಕ ಉದ್ದೇಶವುಳ್ಳವು. ಇವು 103 ಕೋಟಿ ಅಂತರ್ಜಾಲ ಬಳಕೆದಾರರು ಹಾಗೂ 106 ಕೋಟಿ ಮೊಬೈಲ್ ಗ್ರಾಹಕರಿರುವ ದೇಶದ ಸರಕಾರವನ್ನು ಎದುರುಹಾಕಿಕೊಳ್ಳುತ್ತವೆ ಮತ್ತು ಜನರ ಹಕ್ಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತವೆ ಎಂದುಕೊಳ್ಳುವುದು ಭ್ರಮೆ. ಇಲ್ಲಿ ಅಂದಾಜು 500 ದಶಲಕ್ಷ ಯುಟ್ಯೂಬ್, 481 ದಶಲಕ್ಷ ಇನ್‌ಸ್ಟಾಗ್ರಾಂ, 213 ದಶಲಕ್ಷ ಸ್ನ್ಯಾಪ್‌ಚಾಟ್, 403 ದಶಲಕ್ಷ ಫೇಸ್‌ಬುಕ್, 22 ದಶಲಕ್ಷ ಎಕ್ಸ್ ಹಾಗೂ 120 ದಶಲಕ್ಷ ಲಿಂಕ್ಡ್ ಇನ್ ಬಳಕೆದಾರರು ಇದ್ದಾರೆ(ಮಾಹಿತಿ:ಜಚಿಣಚಿಡಿeಠಿoಡಿಣಚಿಟ). ಇವರಲ್ಲಿ ಹೆಚ್ಚಿನವರು ಜೆನ್ ಝಿಗೆ ಸೇರಿದವರು ಮತ್ತು ಆರ್ಥಿಕತೆಯನ್ನು ಮುನ್ನಡೆಸುವವರು. ಇಂಥ ಪರಿಸ್ಥಿತಿಯಲ್ಲಿ ಬಳಕೆದಾರರ ಜಾಗೃತಿಯಿಂದಷ್ಟೇ ಸರಕಾರವನ್ನು ಮಣಿಸಬಹುದು. ಸುಳ್ಳು ಮಾಹಿತಿಗೆ ತೆ ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿ, ವದಂತಿ ಮತ್ತು ದ್ವೇಷದ ವಿಷಯಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿವೆ ಎನ್ನುವುದು ನಿಜ. ಇದನ್ನು ನಿಯಂತ್ರಿಸಬೇಕು; ತಪ್ಪು ಮಾಹಿತಿಗೆ ತಡೆ, ನಿರ್ಬಂಧ ಹೇರಬೇಕು ಎನ್ನುವುದು ಸಮರ್ಥನೀಯ. ‘ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಉತ್ತರದಾಯಿತ್ವ ಇರುವ ಅಂತರ್ಜಾಲ ಸೇವೆ ವ್ಯವಸ್ಥೆಯನ್ನು ಖಾತ್ರಿಗೊಳಿಸುವುದು ನನ್ನ ಕರ್ತವ್ಯ’ ಎಂದು ಸರಕಾರ ಹೇಳುತ್ತದೆ; ಆದರೆ, ತಿದ್ದುಪಡಿ ವೇದಿಕೆಗಳಲ್ಲಿ ಜನರ ಧ್ವನಿಯನ್ನು ಉಡುಗಿಸಲಿದೆ; ಮುಕ್ತ ಅಭಿವ್ಯಕ್ತಿಗೆ ಧಕ್ಕೆ ತರುತ್ತದೆ ಮತ್ತು ಅಧಿಕ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಿದೆ. ಸರಕಾರ ತನಗೆ ತಾನೇ ಪರಮಾಧಿಕಾರ ಕೊಟ್ಟುಕೊಂಡಿದೆ ಮತ್ತು ಏಕಪಕ್ಷೀಯವಾಗಿ ಕಾಯ್ದೆಗೆ ಒಪ್ಪಿಗೆ ಪಡೆಯಲು ಮುಂದಾಗಿದೆ! ಕಾನೂನಿನ ಸಮರ್ಪಕ ಅನುಷ್ಠಾನ, ವೇದಿಕೆಗಳ ಉತ್ತರದಾಯಿತ್ವ ಹೆಚ್ಚಳ ಮತ್ತು ಡಿಜಿಟಲ್ ಸಾಕ್ಷರತೆ ಹೆಚ್ಚಳದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆದರೆ, ಇದು ಸರಕಾರಕ್ಕೆ ಅಪಥ್ಯ. ಈ ಎಲ್ಲ ತಿದ್ದುಪಡಿಗಳ ಲಕ್ಷ್ಯ ಒಂದೇ ಸರಕಾರದ ಹಿಡಿತ ಬಲಪಡಿಸುವುದು. ಜನರು ಏನು ಹೇಳುತ್ತಾರೆ, ನೋಡುತ್ತಾರೆ, ಕೇಳುತ್ತಾರೆ ಮತ್ತು ಆನ್‌ಲೈನ್‌ನಲ್ಲಿ ಏನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಅಧಿಕಾರವನ್ನು ಕಾರ್ಯಾಂಗದಲ್ಲಿ ಕೇಂದ್ರೀಕರಿಸಲಾಗಿದೆ; ಇದರಿಂದ ಅಧಿಕಾರವು ನ್ಯಾಯಾಲಯಗಳಿಂದ ಕಾರ್ಯಾಂಗಕ್ಕೆ ವರ್ಗಾವಣೆಯಾಗಿದೆ. ಉತ್ತರದಾಯಿತ್ವವಿಲ್ಲದ ಅಧಿಕಾರ ಕಾಲಕ್ರಮೇಣ ಎಲ್ಲರ ಮೇಲೆ ಪ್ರಯೋಗಿಸಲ್ಪಡುತ್ತದೆ. ಸರ್ವಾಧಿಕಾರಗಳು ಒಂದೇ ದಿನದಲ್ಲಿ ಉದ್ಭವಿಸುವುದಿಲ್ಲ; ಭಯದ ಸೃಷ್ಟಿ ಮತ್ತು ನಿಯಂತ್ರಣದ ಮೂಲಕ ಕಾಲಕ್ರಮೇಣ ರೂಪುಗೊಳ್ಳುತ್ತವೆ. ಆದರೆ, 16 ವರ್ಷ ಆಡಳಿತ ನಡೆಸಿದ್ದ ಹಂಗರಿಯ ಅಧ್ಯಕ್ಷ ವಿಕ್ಟರ್ ಒರ್ಬನ್‌ಗೆ ಜನ ಚುನಾವಣೆಯಲ್ಲಿ ಸೋಲುಣಿಸಿದರು ಎಂಬುದನ್ನು ಮರೆಯಬಾರದು.

ವಾರ್ತಾ ಭಾರತಿ 17 Apr 2026 9:33 am

ಚಾಮರಾಜನಗರ : ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ; ಬೈಕ್ ಸವಾರ ಮೃತ್ಯು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲ್ಲಯ್ಯನಪುರ ಬಳಿಯ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್, ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಬೆಳಕವಾಡಿ ಗ್ರಾಮದ ಯೋಗೇಶ್ (36) ಎಂದು ತಿಳಿದು ಬಂದಿದೆ. ಹನೂರು ತಾಲ್ಲೂಕಿನ ಮಲ್ಲಯ್ಯನಪುರ ಬಳಿ, ಕೆಎಸ್ಸಾರ್ಟಿಸಿ ಬಸ್ ಹನೂರು ಕಡೆಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದಾಗ, ಕೌದಳ್ಳಿ ಕಡೆಯಿಂದ ಎದುರುಗಡೆಯಿಂದ ಬರುತ್ತಿದ್ದ ಗೂಡ್ಸ್ ಆಟೋಗೆ ಢಿಕ್ಕಿ ಹೊಡೆದಿದೆ. ನಂತರ ಗೂಡ್ಸ್ ಆಟೋ ಹಿಂದಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ . ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸರು ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 17 Apr 2026 9:10 am

ಇಸ್ರೇಲ್-ಲೆಬನಾನ್‌ ಯುದ್ಧಕ್ಕೆ 10 ದಿನಗಳ ಕದನವಿರಾಮ ಘೋಷಿಸಿದ ಟ್ರಂಪ್:‌ ಇದು ತಾನು ನಿಲ್ಲಿಸಿದ 10ನೇ ಯುದ್ಧ ಎಂದು ಹೇಳಿಕೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ ಇಸ್ರೇಲ್-ಲೆಬನಾನ್‌ ಯುದ್ಧಕ್ಕೆ 10 ದಿನಗಳ ಕದನವಿರಾಮವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿರುವ ಟ್ರಂಪ್‌ ಈವರೆಗೂ ತಾನು 9 ಯುದ್ಧಗಳನ್ನು ನಿಲ್ಲಿಸಿದ್ದು, ಇದು 10ನೇ ಯುದ್ಧವಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಉಭಯದೇಶಗಳ ನಾಯಕರನ್ನು ಮಾತುಕತೆಗಾಗಿ USಗೆ ಆಹ್ವಾನಿವುದಾಗಿ ತಿಳಿಸಿದ್ದಾರೆ. ಈ ಕದನವಿರಾಮವನ್ನು ಉಭಯದೇಶಗಳು ದೃಢಿಕರಿಸಿವೆ. ಆದಾಗ್ಯೂ, ಹೆಜ್ಬೊಲ್ಲಾ ಮಾತುಕತೆ ನಡೆಸಿದ್ದಾಕ್ಕಾಗಿ ಲೆಬನಾನ್‌ ಸರ್ಕಾರದ ಮೇಲೆ ಕಿಡಿಕಾರಿದೆ. ಈ ಬೆನ್ನಲ್ಲೇ, ಕದನವಿರಾಮದ ಕುರಿತು ಒಳ್ಳೆಯ ರೀತಿಯಲ್ಲಿ ವರ್ತಿಸಿ ಎಂದು ಹೆಜ್ಬೊಲ್ಲಾ ಪಡೆಗಳಿಗೆ ಟ್ರಂಪ್‌ ಸಂದೇಶ ರವಾನಿಸಿದ್ದಾರೆ. ಈ ಕುರಿತು ವಿವರ ಇಲ್ಲಿದೆ..

ವಿಜಯ ಕರ್ನಾಟಕ 17 Apr 2026 8:54 am

ಡಿಕೆಶಿ 'ಶಿಸ್ತಿನ’ ಅಸ್ತ್ರವನ್ನು ಅವರಿಗೇ ತಿರುಗುಸಿದರೇ ಜಮೀರ್ ಅಹ್ಮದ್ : ಇದು ಪಾರ್ಟಿ ನಿಷ್ಠೆಯೋ, ಪರೋಕ್ಷ ತಿರುಗೇಟೋ?

Zameer Ahmed Vs DK Shivakumar : ಶಾಮನೂರು ಶಿವಶಂಕರಪ್ಪನವರಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿದ್ಯಮಾನಗಳು, ಕಾಂಗ್ರೆಸ್ಸಿನ ಮುಸ್ಲಿಂ ನಾಯಕರನ್ನು ಬೇರೆಬೇರೆ ಮಾಡುವಂತೆ ಮಾಡಿದೆ. ನಜೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ಸಿನಿಂದ ಅಮಾನತುಗೊಳಿಸಲಾಗಿದೆ. ಡಿಕೆ ಶಿವಕುಮಾರ್ ಅವರ ಶಿಸ್ತು ಮುಖ್ಯ ಎನ್ನುವ ಹೇಳಿಕೆಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಿಜಯ ಕರ್ನಾಟಕ 17 Apr 2026 8:51 am

FSSAI: ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ರಾಸಾಯನಿಕ ಬಳಕೆ: ಕಟ್ಟುನಿಟ್ಟಿನ ಕ್ರಮಕ್ಕೆ ಎಫ್‌ಎಸ್‌ಎಸ್‌ಎಐ ಸೂಚನೆ

ಮಾರುಕಟ್ಟೆಯಲ್ಲಿ ಮಾವು, ಬಾಳೆಹಣ್ಣು ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿರುವುದರ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಕಾನೂನುಬಾಹಿರವಾಗಿ ಹಣ್ಣು ಮಾಡುವ

ಒನ್ ಇ೦ಡಿಯ 17 Apr 2026 8:12 am

ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ಜಾಗತಿಕ ಮಟ್ಟದಲ್ಲಿ ಬೆದರಿಕೆ, ಪೋಪ್ ಅದನ್ನು ಅರ್ಥಮಾಡಿಕೊಳ್ಳಬೇಕು: ಟ್ರಂಪ್

ವಾಶಿಂಗ್ಟನ್: ಇರಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆದರಿಕೆಯಾಗಿದೆ. ಈ ವಿಚಾರವನ್ನು ಪೋಪ್ ಲಿಯೋ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪೋಪ್ ಲಿಯೋ ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಆದರೆ ಇರಾನ್ ಯಾವತ್ತೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅವರು ಗಮನಿಸಬೇಕು ಎಂದು ಟ್ರಂಪ್ ಒತ್ತಿಹೇಳಿದ್ದಾರೆ. ಇತ್ತೀಚಿನ ವಾರಗಳಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಸಂಘರ್ಷದ ಬಗ್ಗೆ ಪೋಪ್ ಲಿಯೋ ಅವರು ಟೀಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪೋಪ್‌ ವಿರುದ್ಧ ಟ್ರಂಪ್ ಪದೇಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಪೋಪ್ ಲಿಯೋ ಅವರನ್ನು ನೇಮಿಸಲು ತಾವು ಕಾರಣವೆಂದು ಟ್ರಂಪ್ ಹೇಳಿಕೊಂಡಿದ್ದು, ವಿದೇಶಾಂಗ ನೀತಿಯಲ್ಲಿ ಅವರು ದುರ್ಬಲ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಬಹಳ ಸರಳ ವಿಷಯ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಇಲ್ಲವಾದರೆ ಜಗತ್ತು ದೊಡ್ಡ ಅಪಾಯಕ್ಕೆ ಸಿಲುಕುತ್ತದೆ, ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Apr 2026 8:06 am

ತಮಿಳುನಾಡು ಚುನಾವಣೆ: ವಿಜಯ್ ಪ್ರಣಾಳಿಕೆಯಲ್ಲಿ ‘ಭರ್ಜರಿ ಗಿಫ್ಟ್’ ಆಫರ್!

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಗುರುವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್ ಆಫರ್‌ಗಳನ್ನು ಮುಂದಿಟ್ಟಿದ್ದಾರೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌, ವಾರ್ಷಿಕ 200 ಯುನಿಟ್ ಉಚಿತ ವಿದ್ಯುತ್‌, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಮಾಸಿಕ 2,500 ರೂ., ಕುಟುಂಬಕ್ಕೆ 25 ಲಕ್ಷ ರೂ. ಮೌಲ್ಯದ ವಿಮಾ ಸುರಕ್ಷೆ ಒದಗಿಸುವ ಭರವಸೆಗಳು ಪ್ರಣಾಳಿಕೆಯಲ್ಲಿ ಸೇರಿವೆ. ಇದರ ಜೊತೆಗೆ 100 ಕಾಮರಾಜರ್ ಸ್ಕೂಲ್ ಆಫ್ ಎಕ್ಸಲೆನ್ಸ್ ಆರಂಭಿಸುವ ಘೋಷಣೆಯನ್ನೂ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ನಟ ವಿಜಯ್ ಮಾಡಿದರು. ಇದಲ್ಲದೆ, ಬಡ ಮಹಿಳೆಯರಿಗೆ ವಿವಾಹಕ್ಕಾಗಿ 8 ಗ್ರಾಂ ಉಚಿತ ಚಿನ್ನ ನೀಡುವ ಭರವಸೆಯೂ ಸೇರಿದೆ. ಪ್ರಮುಖ ದ್ರಾವಿಡ ಪಕ್ಷಗಳು ನೀಡಿರುವ ಕೊಡುಗೆಗಳನ್ನು ಮೀರಿಸುವ ರೀತಿಯಲ್ಲಿ ಟಿವಿಕೆ ಪಕ್ಷ ಆಫರ್‌ಗಳನ್ನು ನೀಡಿದೆ. ಚೆನ್ನೈನಲ್ಲಿ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ವಿಜಯ್, ತಮ್ಮ ಪಕ್ಷ ಡಿಎಂಕೆ ಹಾಗೂ ಎಐಎಡಿಎಂಕೆಗಿಂತ ಭಿನ್ನವಾಗಿದೆ ಎಂದು ಹೇಳಿದರು. ಉಭಯ ಪಕ್ಷಗಳು ಒಂದೇ ರೀತಿಯ ಪ್ರಣಾಳಿಕೆ ನೀಡಿದ್ದು, ಭ್ರಷ್ಟಾಚಾರದಲ್ಲೂ ಒಂದೇ ರೀತಿಯ ಪಕ್ಷಗಳೆಂದು ದೂರಿದರು. ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರೂ. ನಿರುದ್ಯೋಗ ಭತ್ಯೆ, ಡಿಪ್ಲೋಮಾ ಮಾಡಿದ ಯುವಕರಿಗೆ ಮಾಸಿಕ 2,000 ರೂ. ನಿರುದ್ಯೋಗ ಭತ್ಯೆ, ಯುವ ಉದ್ಯಮಶೀಲರಿಗೆ 25 ಲಕ್ಷ ರೂ. ಜಾಮೀನು ರಹಿತ ಸಾಲ, ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ಬಡ್ಡಿರಹಿತ ಸಾಲ, 20 ಲಕ್ಷ ರೂ. ಜಾಮೀನು ರಹಿತ ಶಿಕ್ಷಣ ಸಾಲದಂತಹ ಕೊಡುಗೆಗಳು ಪ್ರಣಾಳಿಕೆಯಲ್ಲಿ ಸೇರಿವೆ.

ವಾರ್ತಾ ಭಾರತಿ 17 Apr 2026 7:48 am

ಕೇರಳದಲ್ಲಿ ಕಾರ್ಮಿಕರ ಕೊರತೆ: ಚುನಾವಣೆ ಹಿನ್ನಲೆಯಲ್ಲಿ 8 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರ ನಿರ್ಗಮನದಿಂದ ಬಿಕ್ಕಟ್ಟು!

ತಮಿಳುನಾಡು, ಪ.ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ್ದು, ಈ ಕಾರ್ಮಿಕರು ಮರಳಿ ಬರಲು ಕನಿಷ್ಠ 2 ತಿಂಗಳಾದರೂ ಹಿಡಿಯಲಿದೆ. ಕೇರಳದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರ ನಿರ್ಗಮಿಸಿದ್ದು, ಇದರಿಂದಾಗಿ ನಿರ್ಮಾಣ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವರದಿ ಇಲ್ಲಿದೆ..

ವಿಜಯ ಕರ್ನಾಟಕ 17 Apr 2026 7:44 am

ಬ್ಯಾಗಿನಲ್ಲಿ ಗಾಂಜಾ ಪತ್ತೆ: ಏರ್ ಇಂಡಿಯಾ ಸಹ ಪೈಲಟ್ ಅಮೆರಿಕದಿಂದ ಗಡೀಪಾರು

ಹೊಸದಿಲ್ಲಿ: ಬ್ಯಾಗಿನಲ್ಲಿ ಗಾಂಜಾ ಒಯ್ಯುತ್ತಿದ್ದ ಆರೋಪದಲ್ಲಿ ಏರ್ ಇಂಡಿಯಾ ಸಹ ಪೈಲಟ್ ಒಬ್ಬರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ಈ ಪೈಲಟ್ ದೆಹಲಿ–ಸ್ಯಾನ್ಫ್ರಾನ್ಸಿಸ್ಕೊ ವಿಮಾನದಲ್ಲಿ ಮಂಗಳವಾರ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೆಸರಿನಲ್ಲಿ ಪ್ರಯಾಣಿಸುತ್ತಿದ್ದ. ಈತ ವಿಮಾನ ದೆಹಲಿಗೆ ವಾಪಸ್ಸಾಗುವ ಸಂದರ್ಭದಲ್ಲಿ ವಿಮಾನ ಚಾಲನೆ ಕರ್ತವ್ಯ ನಿರ್ವಹಿಸಬೇಕಿತ್ತು. ಸ್ಯಾನ್ಫ್ರಾನ್ಸಿಸ್ಕೊಗೆ ವಿಮಾನ ಆಗಮಿಸಿದ ವೇಳೆ ಈತನ ಬ್ಯಾಗಿನಲ್ಲಿ ಅಮೆರಿಕ ಅಧಿಕಾರಿಗಳು ಗಾಂಜಾ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ವಿಮಾನ ನಿಲ್ದಾಣದಿಂದ ಹೊರಹೋಗಲು ಆತನಿಗೆ ಅವಕಾಶ ನೀಡಲಿಲ್ಲ ಹಾಗೂ ತಕ್ಷಣವೇ ಲಭ್ಯವಿರುವ ವಿಮಾನದಲ್ಲಿ ಆತನನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ಈ ಬಗ್ಗೆ ಡಿಜಿಸಿಎಗೆ ಮಾಹಿತಿ ನೀಡಿದ್ದು, ಆರೋಪಿ ಪೈಲಟ್ ಗುರುವಾರ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಏರ್ ಇಂಡಿಯಾ ವಕ್ತಾರರು ದೃಢಪಡಿಸಿದ್ದಾರೆ. ಆದರೆ ಪೈಲಟ್ ಗಾಂಜಾ ಸೇವಿಸಿರಲಿಲ್ಲ; ಆತನ ಬ್ಯಾಗಿನಲ್ಲಿ ಹೊಂದಿದ್ದ ಎಂದು ಪ್ರಕರಣದ ಬಗ್ಗೆ ಅರಿವು ಇರುವ ಮೂಲಗಳು ಹೇಳಿವೆ. ಕೆಲ ದೇಶಗಳಲ್ಲಿ ಗಾಂಜಾ ಬಳಸುವುದಕ್ಕೆ ವೈದ್ಯಕೀಯವಾಗಿ ಕೂಡಾ ಅವಕಾಶವಿದೆ.

ವಾರ್ತಾ ಭಾರತಿ 17 Apr 2026 7:38 am

Heat wave: ರಾಜ್ಯದಲ್ಲಿ ಹೆಚ್ಚಲಿದೆ ಬಿಸಿಲ ಧಗೆ, ಬಿಸಿಗಾಳಿಯ ಎಚ್ಚರಿಕೆ; ಈ ಜಿಲ್ಲೆಗಳಲ್ಲಿ ಮುಂದಿನ ಏಳು ದಿನ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 23ರಿಂದ 25ರ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ತಾಪಮಾನವು ಕ್ರಮೇಣ ಹೆಚ್ಚಾಗುತ್ತಾ ಹೋಗಲಿದೆ. ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿಗಾಳಿ (Heat wave) ಬೀಸುವ ಸಾಧ್ಯತೆ ಇರುವುದರಿಂದ

ಒನ್ ಇ೦ಡಿಯ 17 Apr 2026 7:14 am

RTI ದಂಡಾಸ್ತ್ರಕ್ಕಿಲ್ಲ ಕಿಮ್ಮತ್ತು: 10 ಕೋಟಿ ದಂಡದಲ್ಲಿ ಬರೀ 2 ಕೋಟಿ ವಸೂಲಿ; ಕಾಯಿದೆ ಉಲ್ಲಂಘನೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಟಾಪ್‌!

ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಪ್ರಕರಣಗಳಲ್ಲಿ ಆಯೋಗ ವಿಧಿಸಿರುವ ದಂಡ ಕಟ್ಟಲೂ ಸರ್ಕಾರಿ ಅಧಿಕಾರಿಗಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕರ್ನಾಟಕ ಮಾಹಿತಿ ಹಕ್ಕು ಆಯೋಗ ರಾಜ್ಯದಲ್ಲಿ ಸುಮಾರು 10,843 ಪ್ರಕರಣಗಳಲ್ಲಿ ಸಕಾಲಕ್ಕೆ ಮಾಹಿತಿ ನೀಡದಿರುವುದೂ ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಯಿಂದ ಬರೋಬ್ಬರಿ ಕೋಟಿ ದಂಡ ವಿಧಿಸಿದೆ. ಆದರೆ, ಇದರಲ್ಲಿ ಈವರೆಗೂ ಕೇವಲ ಕೋಟಿ ಮಾತ್ರ ವಸೂಲಿಯಾಗಿದೆ. ಈ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದು, ಇಲಾಖೆಗಳಿಗೆ

ವಿಜಯ ಕರ್ನಾಟಕ 17 Apr 2026 6:43 am

ದಕ್ಷಿಣ ಕನ್ನಡ ಸೇರಿ ರಾಜ್ಯದ 12 ಜಿಲ್ಲೆಗಳ ವಾರ್ತಾ ಇಲಾಖೆಗೆ ನೂತನ ಮಿನಿ ಬಸ್‌ ಭಾಗ್ಯ!

ರಾಜ್ಯದ 2ನೇ ಮಹಾನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಪ್ರತಿನಿತ್ಯವೂ ಹಲವಾರು ಸರ್ಕಾರಿ ಕಾರ್ಯಕ್ರಮಗಳು ನಡೆಯಲಿದ್ದು, ರಾಜಕಾರಣಿಗಳು ಅಧಿಕಾರಿಗಳ ಭೇಟಿ ನಿರಂತರವಾಗಿರುತ್ತದೆ. ಇಂತಹ ಕಾರ್ಯಕ್ರಮಗಳ ಸಮರ್ಪಕ ಪ್ರಚಾರ ಹಾಗೂ ಸುದ್ದಿ ನಿರ್ವಹಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಪತ್ರಕರ್ತ ಓಡಾಟಕ್ಕಾಗಿ ಸೂಕ್ತ ಬಸ್‌ ವ್ಯವಸ್ಥೆ ಇರಲಿಲ್ಲ. ಈ ಕುರಿತು ವಿಜಯ ಕರ್ನಾಟಕ ವಿಶೇಷ ವರದಿಯ ಮೂಲಕ ಸಿಎಂ ಅವರ ಗಮನಸೆಳೆದಿದ್ದು, ಇದೀಗ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಪತ್ರಕರ್ತರ ಓಡಾಟಕ್ಕಾಗಿ ಹವಾನಿಯಂತ್ರಿತ ನೂತನ ಮಿನಿ ಬಸ್‌ ಮಂಜೂರಾಗಿದೆ. ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 17 Apr 2026 6:06 am

ಮನೆ ಮನೆ ಗಣತಿಗೆ ವಿಧ್ಯುಕ್ತ ಚಾಲನೆ- 23 ಸಾವಿರಕ್ಕೂ ಹೆಚ್ಚಿನ ಗಣತಿದಾರರ ನೇಮಕ; ಏನೆಲ್ಲಾ ಪ್ರಶ್ನೆ ಕೇಳ್ತಾರೆ?

ಬೆಂಗಳೂರಿನಲ್ಲಿ ಸ್ವಯಂ ಗಣತಿಗೆ ನಾಗರಿಕರಿಂದ ನಿರಾಶೆಯ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಶೇ.2ರಷ್ಟು ನಾಗರಿಕರು ಮಾತ್ರ ಸ್ವಯಂ ಗಣತಿಯಲ್ಲಿ ಭಾಗವಹಿಸಿದ್ದಾರೆ. ಈ ಬೆನ್ನಲ್ಲೇ, ಇದೀಘ GBA ವ್ಯಾಪ್ತಿಯ 5 ಪಾಲಿಕೆಗಳಲ್ಲಿ ರಾಷ್ಟ್ರೀಯ ಜನಗಣತಿ-2027ರ ಮನೆ ಮನೆ ಗಣತಿ ಕಾರ್ಯ ಆರಂಭವಾಗಿದ್ದು, ಈ ಕಾರ್ಯಕ್ಕಾಗಿ ಸುಮಾರು 23 ಸಾವಿರಕ್ಕೂ ಅಧಿಕ ಗಣತಿದಾರರು ಹಾಗೂ 2900 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇನ್ನು, ಮೊದಲ ಹಂತದಲ್ಲಿ ಏ.16ರಿಂದ ಮೇ.16ರವರೆಗೆ ಮನೆ ಪಟ್ಟಿ ಹಾಗೂ ಮನೆ ಗಣತಿ ನಡೆಯಲಿದ್ದು, 2027ರ ಏಪ್ರಿಲ್‌ ನಿಂದ 2ನೇ ಹಂತದ ಜನಗಣತಿ ಆರಂಭವಾಗಲಿದೆ. ಹಾಗಾದ್ರೆ ಈ ಕಾರ್ಯ ಯಾವ ಸಮಯದಿಂದ ನಡೆಯಲಿದೆ? ಗಣತಿದಾರರು ಏನೆಲ್ಲಾ ಪ್ರಶ್ನೆಗಳನ್ನು ಕೇಳಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 17 Apr 2026 5:44 am

‘ಎಲ್ಲ ಕ್ಷೇತ್ರಗಳ ಪ್ರಶಸ್ತಿ ಆಯಾ ವರ್ಷವೇ ಕೊಡಬೇಕು’ ಸಿಎಂ ಆಶಯದಂತೆ ಕೆಲಸ : ಕೆ.ವಿ.ಪ್ರಭಾಕರ್

ಬೆಂಗಳೂರು : ಸಿನಿಮಾ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ಸೇರಿ ಎಲ್ಲ ಕ್ಷೇತ್ರಗಳ ಪ್ರಶಸ್ತಿ, ಪುರಸ್ಕಾರಗಳನ್ನು ಆಯಾ ವರ್ಷವೇ ಕೊಡಬೇಕು ಎನ್ನುವುದು ಸಿಎಂ ಸಿದ್ದರಾಮಯ್ಯರ ಖಚಿತ ನಿಲುವಾಗಿದ್ದು, ಇದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು. ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮತ್ತು ಸಹಾಯ ಧನ ಆಯ್ಕೆ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇವತ್ತು ನನಗೆ ಅಭಿನಂದನೆ ಸಲ್ಲಿಸಲು ಆಹ್ವಾನಿಸಿದ ಎಲ್ಲ ಆತ್ಮೀಯರಿಗೂ, ಸ್ನೇಹಿತರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ, ಈ ಅಭಿನಂದನೆ ಸಲ್ಲಬೇಕಾದ್ದು ಸಿಎಂ ಅವರಿಗೆ ಎಂದು ಹೇಳಿದರು. ಸಿಎಂ ಆಶಯದಂತೆ ಹಿಂದಿನ ಸರಕಾರದ ಅವಧಿಯಿಂದ ಬಾಕಿ ಉಳಿದ ಹಿಂದಿನ ವರ್ಷಗಳ ಪ್ರಶಸ್ತಿಗಳನ್ನು ಕೊಡ ಮಾಡಿದ್ದೇವೆ. ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಸಹನೆಯಿಂದ ಆಗಬೇಕಾದ ಕಾರ್ಯ. ಎಲ್ಲ ಹೆಸರುಗಳೂ ಆಯ್ಕೆ ಸಮಿತಿ ಮೂಲಕವೇ ಬರಬೇಕು. ಆಯ್ಕೆ ಸಮಿತಿಗೆ ಅಗತ್ಯವಾದ ಸಮಯಾವಕಾಶ ಕೊಡಬೇಕು ಎನ್ನುವ ಕಾರಣಕ್ಕೇ ಹಂತ ಹಂತವಾಗಿ ಕೆಲಸಗಳು ನಡೆಯುತ್ತಿವೆ ಎಂದವರು ಸ್ಪಷ್ಟಪಡಿಸಿದರು. ಪ್ರಶಸ್ತಿಗೆ ಅರ್ಹರನ್ನು ಆರಿಸುವುದು ಎಷ್ಟು ಸೂಕ್ಷ್ಮವಾದ ವಿಷಯವೋ, ಆಯ್ಕೆ ಸಮಿತಿ ಸದಸ್ಯರನ್ನು ಆರಿಸುವುದೂ ಅಷ್ಟೇ ಸೂಕ್ಷ್ಮ ಸಂಗತಿ. ಹತ್ತು ಹಲವು ಸೂಕ್ಷ್ಮಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ತಕರಾರುಗಳು ಇಲ್ಲದಂತೆ ಪ್ರಶಸ್ತಿಗಳಿಗೆ ಆಯ್ಕೆ ವಿತರಣೆ ನಡೆದಿರುವುದು ಸಮಾಧಾನಕರ ಸಂಗತಿ ಎಂದರು. ಪ್ರಶಸ್ತಿ ಗಳಿಸದ ಸಿನಿಮಾಗಳು, ವ್ಯಕ್ತಿಗಳಿಗೆ ಬೇಸರ ಆಗುವುದು ಸಹಜ. ಆದರೆ ಮಾನದಂಡಗಳಿಗೆ ಸೀಮಿತವಾದಾಗ, ಸಾಮಾಜಿಕ-ಪ್ರಾದೇಶಿಕ ನ್ಯಾಯದ ವಿಚಾರಗಳು ಬಂದಾಗ ಕೆಲ ಅನಿವಾರ್ಯತೆಗಳನ್ನು ಪಾಲಿಸಬೇಕಾಗುತ್ತದೆ. ಸಿಎಂ ನನಗೆ ಅವಕಾಶ ಒದಗಿಸಿ, ನನ್ನ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ, ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ ಇಲಾಖೆಯ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು. ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ, ಸಮಿತಿಗಳ ಅಧ್ಯಕ್ಷರಾದ ಬಾ.ನಾ.ಸುಬ್ರಮಣ್ಯ, ಬಿ.ಎಸ್.ಲಿಂಗದೇವರು, ಬಿ.ರಾಮಮೂರ್ತಿ, ವೀರಪ್ಪ ಮರಳವಾಡಿ, ನಟಿ ಪ್ರೇಮಾ, ಗಾಯಕಿ ಚಂದ್ರಿಕಾ ಗುರುರಾಜ್, ಪಂಚಮಿ ಅನ್ಸಾರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 17 Apr 2026 1:21 am

ಜಾನಪದ ಅಧ್ಯಯನಕ್ಕೆ ಒತ್ತು ನೀಡಿರುವ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ

ಬೆಂಗಳೂರು : ಜಾನಪದ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳಲ್ಲಿ ಜಾನಪದ ಅಧ್ಯಯನಕ್ಕೆ ಒತ್ತು ನೀಡಿರುವ ಬಗ್ಗೆ ಪರಿಶೀಲಿಸಿ 15 ದಿನಗಳೊಳಗಾಗಿ ವರದಿಯನ್ನು ನೀಡುವಂತೆ ಜಾನಪದ ಲೋಕದ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ. 2018-19ರಿಂದ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದಕ್ಕೆ ಹೊರತಾಗಿ ಕನ್ನಡ, ಇಂಗ್ಲಿಷ್‌, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ ಸೇರಿದಂತೆ ಹಲವು ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಿ ಶೈಕ್ಷಣಿಕ ಗೊಂದಲಕ್ಕೆ ಎಡೆ ಮಾಡಿ ಮಾಡಿಕೊಟ್ಟಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗಿದ್ದು, ವಿವಿಯ ಎಲ್ಲ ಸ್ನಾತಕೋತ್ತರ ಕೋರ್ಸುಗಳ ಪಠ್ಯಕ್ರಮಗಳಲ್ಲಿ ಜಾನಪದ ಅಧ್ಯಯನಕ್ಕೆ ಒತ್ತುಕೊಡಲಾಗಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್ತು ತಿಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಆರ್. ಕೇಶವ, ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಆರ್. ರಾಜೇಶ್, ಇಂಗ್ಲೀಷ್‌ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀಕೀರ್ತಿ ಬಿ.ಎನ್., ಪ್ರದರ್ಶನ ಕಲೆಗಳ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ರಾಮಕೃಷ್ಣಯ್ಯ, ದೃಶ್ಯ ಕಲೆಗಳ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಯಕುಮಾರ್ ರೆಡ್ಡಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಜಿ. ಪರಶುರಾಮ ಸಮಿತಿಯ ಸದಸ್ಯರಾಗಿದ್ದಾರೆ. ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಕೆ.ಜಿ. ಚಂದ್ರಶೇಖರ್ ಸದಸ್ಯ ಕಾರ್ಯದರ್ಶಿಯಾಗಿರುತ್ತದೆ.  

ವಾರ್ತಾ ಭಾರತಿ 17 Apr 2026 1:16 am

ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿ; ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಬೆಂಗಳೂರು : 'ಸ್ವಯಂ-ಗುರುತಿಸುವಿಕೆ'ಯ ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು 'ತೃತೀಯ ಲಿಂಗಿ ವ್ಯಕ್ತಿ'ಯ ಕಾನೂನು ವ್ಯಾಖ್ಯಾನದಿಂದ ಹೊರಗಿಡುವ ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷ ಣೆ) ತಿದ್ದುಪಡಿ ಕಾಯ್ದೆ-2026 ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಕೇಂದ್ರ ಸರ್ಕಾರದಿಂದ ಹೈಕೋರ್ಟ್ ಪ್ರತಿಕ್ರಿಯೆ ಕೋರಿದೆ. ಕೆಲವು ವರ್ಷಗಳಿಂದ ಹಾರ್ಮೋನ್‌ ಚಿಕಿತ್ಸೆಗೆ ಒಳಗಾಗುತ್ತಿರುವ ಲಿಂಗಪರಿವರ್ತಿತ ತೃತೀಯ ಲಿಂಗಿ ಮಾಯಾ ಹಾಗೂ ಹಾರ್ಮೋನ್‌ ಚಿಕಿತ್ಸೆಗೆ ಒಳಗಾಗಿ ಲಿಂಗಪರಿರ್ತನೆ ಮಾಡಿಕೊಂಡು ತನ್ನ ಅಧಿಕೃತ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ತೃತೀಯ ಲಿಂಗಿ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2019ರ ಕಾಯ್ದೆಯ ಸೆಕ್ಷನ್‌ 2(ಕೆ) ಅಡಿಯಲ್ಲಿ 'ಟ್ರಾನ್ಸ್‌ಜೆಂಡರ್‌ ವ್ಯಕ್ತಿ' ಎಂಬ ವ್ಯಾಖ್ಯಾನದಿಂದ ಮೊದಲನೇ ಅರ್ಜಿದಾರರನ್ನು ಹೊರಗಿಟ್ಟಿರುವುದರಿಂದ ಅವರಿಗೆ ಯಾವ ಸೇವೆಗಳೂ ಸಿಗುವುದಿಲ್ಲ. ಎರಡನೇ ಅರ್ಜಿದಾರರು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವರ ಅಧಿಕೃತ ದಾಖಲೆಗಳನ್ನು ಆದ್ಯತೆಯ ಮೇರೆಗೆ ನವೀಕರಿಸಬೇಕು ಎಂದು ಕೋರಿದರು. ಮೊದಲನೇ ಅರ್ಜಿದಾರರು ಫೆಬ್ರವರಿಯಲ್ಲಿ ತಮ್ಮ ಔಷಧಿ ಪ್ರಿಸ್ಕ್ರಿಪ್ಷನ್‌ ಪಡೆದಿದ್ದು, ಮತ್ತೀಗ ಅದನ್ನು ಶೀಘ್ರದಲ್ಲೇ ನವೀಕರಿಸಬೇಕು. ಆದರೂ ಸಹ 2026ರ ತಿದ್ದುಪಡಿ ಜಾರಿಗೆ ಬಂದ ನಂತರ ಈ ಸೇವೆಗಳು ಅವರಿಗೆ ಲಭ್ಯವಿಲ್ಲದಿರಬಹುದು. ಆದ್ದರಿಂದ, ಚಿಕಿತ್ಸೆಯನ್ನು ಮುಂದುವರಿಸಲು ಮಧ್ಯಂತರ ಆದೇಶ ನೀಡಬೇಕು ಮತ್ತು ಆಕ್ಷೇಪಾರ್ಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಂತರ ಪರಿಶೀಲಿಸಬಹುದು ಎಂದರು. ಕೇಂದ್ರ ಸರ್ಕಾರದ ಪರ ವಕೀಲರು ಯಾವುದೇ ಮಧ್ಯಂತರ ಪರಿಹಾರ ನೀಡುವುದನ್ನು ಆಕ್ಷೇಪಿಸಿದರಲ್ಲದೆ, ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿರುವ ಎರಡನೇ ಅರ್ಜಿದಾರರ ಆಧಾರ್‌, ಪ್ಯಾನ್‌ ಇತ್ಯಾದಿಗಳ ದಾಖಲೆಗಳನ್ನು ರದ್ದುಗೊಳಿಸಲು ಈವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅದೇ ರೀತಿ, ಯಾವುದೇ ವೈದ್ಯರು ಮೊದಲ ಅರ್ಜಿದಾರರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅರ್ಜಿದಾರರು ಹಾನಿಯಾಗುತ್ತದೆಂದು ಹೇಳುತ್ತಿರುವುದು 'ನಿರೀಕ್ಷಿತ' ಸ್ವರೂಪದ್ದಾಗಿದ್ದು, ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಯಾವುದೇ ಮಧ್ಯಂತರ ಪರಿಹಾರ ನೀಡಬಾರದು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.

ವಾರ್ತಾ ಭಾರತಿ 17 Apr 2026 1:13 am

ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿಯಂತೆ ಒಳಮೀಸಲಾತಿ ಕಲ್ಪಿಸಿದರೆ ಕಾನೂನು ಹೋರಾಟ : ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು : ಸರಕಾರವು ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಆಧಾರದಲ್ಲಿಯೇ ಒಳಮೀಸಲಾತಿ ಕಲ್ಪಿಸಿದರೆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಬಲಗೈ ಸಮುದಾಯ ಒಕ್ಕೂಟದ ರಾಜ್ಯಾಧ್ಯಕ್ಷ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿಯಿಂದ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ವರದಿ ನೀಡಿದ ನ್ಯಾ. ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯಲ್ಲಿರುವ ಅಂಕಿ-ಅಂಶಗಳು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿವೆ. ಹೀಗಾಗಿ ವರದಿಯಂತೆ ಒಳ ಮೀಸಲಾತಿಯನ್ನು ಕಲ್ಪಿಸಿದರೆ, ಕಾನೂನು ಹೋರಾಟ ಮಾಡಲಾಗುತ್ತದೆ ಎಂದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ಒಕ್ಕೂಟದ ರಾಜ್ಯ ಸಂಚಾಲಕ ಸಿದ್ದಯ್ಯ, ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕ ಶಿವಣ್ಣ ಬಿ. ಕನಕಪುರ, ಡಾ. ದೀಪಕ್ ಅಪ್ಪಾಜಿ, ಡಾ. ಈಶ್ವರ್ ಸಿರಿಗೇರಿ, ಗೌರಿಶಂಕರ್ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 17 Apr 2026 1:08 am

Hassan | ಸಾಕಾನೆ ತುಳಿತ: ಕಾವಾಡಿಗ ಗಂಭೀರ

ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಕ್ಯಾಂಪ್‌ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಸಾಕಾನೆ ‘ಸುಗ್ರೀವ’ ಕಾವಾಡಿಗನ ಮೇಲೆಯೇ ದಾಳಿ ನಡೆಸಿ ತುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜು ಎಂಬವರನ್ನು ಹಾಸನ ನಗರದ ಹಿಮ್ಸ್ ಆಸ್ಪತ್ರೆಗೆ ತುರ್ತು ವಾಹನದಲ್ಲಿ ರವಾನಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಮಾಹಿತಿಯಂತೆ, ಬುಧವಾರ ರಾತ್ರಿ ಸೆರೆ ಹಿಡಿದ ಬಳಿಕ ತಪ್ಪಿಸಿಕೊಂಡು ಹೋಗಿದ್ದ ನರಹಂತಕ ಒಂಟಿಕೋರೆ ಕಾಡಾನೆಯನ್ನು ಮರು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರು ಬೆಳಗ್ಗಿನಿಂದಲೇ ಸಿದ್ಧತೆ ನಡೆಸುತ್ತಿದ್ದರು. ಕ್ಯಾಂಪ್ ಪ್ರದೇಶದಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದ ವೇಳೆ, ಅಕಸ್ಮಿಕವಾಗಿ ಸಾಕಾನೆ ‘ಸುಗ್ರೀವ’ ಆಕ್ರೋಶಗೊಂಡು ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲೇ ಸಮೀಪದಲ್ಲಿದ್ದ ಕಾವಾಡಿಗ ರಾಜು ಮೇಲೆ ದಾಳಿ ನಡೆಸಿದ ಸುಗ್ರೀವ, ಅವನನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ತೀವ್ರತೆಯಿಂದ ರಾಜು ನೆಲಕ್ಕುರುಳಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಆತಂಕಗೊಂಡು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡ ರಾಜುಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಕೂಡಲೇ ಆಂಬುಲೆನ್ಸ್ ಮೂಲಕ ಹಾಸನ ನಗರದ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಲ್ಲಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ರಾಜುವಿನ ಸ್ಥಿತಿ ಗಂಭೀರವಾಗಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.  

ವಾರ್ತಾ ಭಾರತಿ 17 Apr 2026 1:04 am

ವಚನಾನಂದ ಶ್ರೀಗಳಿಗೆ ಗಡುವು: ವಾರದೊಳಗೆ ಮಠ ತೊರೆಯದಿದ್ದರೆ ಸಾವಿರಾರು ಜನರೊಂದಿಗೆ ಮುತ್ತಿಗೆ : ಎಚ್.ಎಸ್.ನಾಗರಾಜ್ ಎಚ್ಚರಿಕೆ

ದಾವಣಗೆರೆ : ಪಂಚಮಸಾಲಿ ಸಮಾಜದ ಉಚ್ಚಾಟಿತ ವಚನಾನಂದ ಶ್ರೀ ವಾರದೊಳಗೆ ಮಠ ತೊರೆಯದಿದ್ದರೆ ಸಮಾಜದ ಸಾವಿರಾರು ಜನರೊಂದಿಗೆ ಮಠಕ್ಕೆ ಬಂದು ವಚನಾನಂದ ಶ್ರೀಯನ್ನು ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಏಳಿಗೆಗಾಗಿ ಕಟ್ಟಿರುವ ಟ್ರಸ್ಟ್‌ನನ್ನು ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ದ್ರೋಹ ಮಾಡಿದ್ದೀರಿ. ಅಲ್ಲದೆ, ಲೆಕ್ಕ ಕೊಡುವ ವಿಚಾರದಲ್ಲಿ ನಿಮ್ಮ ವರ್ತನೆ ಸಹಿಸಲು ಸಾಧ್ಯವಿಲ್ಲ. ಮುಂದಿನ ವಾರದೊಳಗೆ ಮಠ ಖಾಲಿ ಮಾಡದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು. ಸಮಾಜದ ಉದ್ಧಾರಕ್ಕಾಗಿ ಪೀಠಕ್ಕೆ ಶ್ರೀಗಳ ನೇಮಿಸಲಾಗಿತ್ತು. ಆದರೆ, ಅವರು ತಮ್ಮ ಸ್ವಂತ ಬೆಳವಣಿಗೆಗೆ ಮಠ ಬಳಸಿಕೊಂಡರೇ ವಿನಃ ಸಮಾಜೋದ್ಧಾರಕ್ಕಾಗಿ ಏನು ಮಾಡಿಲ್ಲ. ಮಠಕ್ಕಾಗಿ ಮುರುಗೇಶ್ ನಿರಾಣಿ ಅವರು ನೀಡಿದ 2 ಕೋಟಿ ರೂ. ತಮ್ಮ ಐಷಾರಾಮಿ ಜೀವನಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಿದರು. ಟ್ರಸ್ಟ್ ಮೂಲಕವೇ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತದೆ. ಆದರೆ, ಶ್ರೀಗೆ ಹಣ ಏಕೆ ಬೇಕು? ಎಂದು ಗೊತ್ತಾಗುತ್ತಿಲ್ಲ. ಈಗ ಸ್ವಾಮೀಜಿ ಪರವಾಗಿ ಲೆಕ್ಕ ಕೊಡಿ ಚಳುವಳಿ ಆರಂಭಿಸಿರುವ ಎಲ್ಲರ ಇತಿಹಾಸಗಳು ನಮಗೆ ಗೊತ್ತಿವೆ. ಅವರೆಲ್ಲರೂ ಹತ್ತಿದ ಏಣಿಯನ್ನು ಒದೆಯುವಂತಹ ಜಾಯಮಾನದವರು. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡದೆ ಇರುವುದೇ ಸೂಕ್ತ ಎಂದು ಹೇಳಿದರು. ಟ್ರಸ್ಟಿನ ಧರ್ಮದರ್ಶಿ ಉಮಾಪತಿಯವರು ಸಮಾಜಕ್ಕೆ ಸಾಕಷ್ಟು ತ್ಯಾಗ, ಸಹಕಾರ ಮಾಡಿದ್ದಾರೆ. ಸಮಾಜದ ಬೆಳವಣಿಗೆಗೆ ಅವರ ಕೊಡುಗೆ ಅನನ್ಯ. ಇಂಥವರನ್ನು ಲೆಕ್ಕ ಕೊಡಿ ಎಂದು ಪ್ರಶ್ನಿಸುವ ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಸಂದರ್ಭ ಸಾವಿರಾರೂ ಕ್ವಿಂಟಲ್ ಸಂಗ್ರಹವಾಗಿದ್ದ ಅಕ್ಕಿ, ಧವಸ ಧಾನ್ಯವನ್ನು ಮಾರಾಟ ಮಾಡಿದ ಹಣ ಎಲ್ಲಿ ಹೋಗಿತು. ಕೂಡಲ ಸಂಗಮ ಪೀಠಕ್ಕಾಗಿ ಈ ಭಾಗದಿಂದ ಸಂಗ್ರಹಿಸಿದ ಹಣ, ಅಕ್ಕಿ ಸೇರಿದಂತೆ ಕೋಟ್ಯಂತರ ರೂ. ದುರುಪಯೋಗಪಡಿಸಿಕೊಂಡವರ ಬಗ್ಗೆ ನಾವೂ ಶೀಘ್ರದಲ್ಲಿಯೇ ಲೆಕ್ಕ ಕೊಡಿ ಚಳುವಳಿ ಆರಂಭಿಸಲಿದ್ದೇವೆ ಎಂದು ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಗೋಪನಾಳು, ಹಾಲೇಶ್ ಕಾಯಿಪೇಟೆ, ರುದ್ರಣ್ಣ ಸೋಗಿ, ಚನ್ನಬಸಪ್ಪ, ಜಗದೀಶ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Apr 2026 12:58 am

ಒಳಗೊಳ್ಳುವುದು ಪ್ರಬುದ್ಧತೆ, ಹೊರಗಿಡುವುದು ಅಪ್ರಬುದ್ಧತೆ : ಪ್ರೊ.ರಹಮತ್ ತರೀಕೆರೆ

ಮೈಸೂರು : ಒಳಗೊಳ್ಳುವುದು ಪ್ರಬುದ್ಧತೆ. ಹೊರಗಿಡುವುದು ಅಪ್ರಬುದ್ಧತೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಭಾರತಕ್ಕೆ ಬಾಬಾ ಸಾಹೇಬ್‌ ಬಿ.ಆರ್.ಅಂಬೇಡ್ಕರ್ ಅವರ ಒಳಗೊಳ್ಳುವ ಬದುಕು, ಜ್ಞಾನ, ತತ್ವ ಮತ್ತು ಸಂವಿಧಾನದಲ್ಲಿ ಪರಿಹಾರ ಇದೆ ಎಂದು ಚಿಂತಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ 135ನೇ ಜಯಂತಿಯಲ್ಲಿ ಒಳಗೊಳ್ಳುವ ಪ್ರಬುದ್ಧ ಭಾರತ: ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆ ವಿಷಯ ಕುರಿತು ಮಾತನಾಡಿದರು. ಪ್ರಬುದ್ಧತೆ ಬೌದ್ಧದ ಧಮ್ಮದ ಸಾರ. ಅಲ್ಲಿ ತತ್ವ, ಕರುಣೆ, ಮೈತ್ರಿ ಇದೆ. ಅತ್ಯಂತ ಶ್ರೇಷ್ಠ ಮೌಲ್ಯಗಳು ಭಾರತದ ಆತ್ಮವಾಗಬೇಕು. ದಾರಿ ದೀಪಕವಾಗಬೇಕು. ಜಾತಿ, ಧರ್ಮದ ಸಮಸ್ಯೆಗಳಿಂದ ಭಾರತದ ಅಪ್ರಬುದ್ಧವಾಗಿದೆ. ಪ್ರಬುದ್ಧತೆ ಬೆಳೆಸಿಕೊಂಡು ವಿವೇಕ ಮತ್ತು ಮಾನವೀಯತೆ ಕಡೆ ಸಾಗಬೇಕು ಎಂದರು. ಸ್ವಚ್ಛತಾಕರ್ಮಿ ಶಾಂತಮ್ಮ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಮಾರಂಭ ಉದ್ಘಾಟಿಸಿದರು. ಉಳುಮೆ ಪ್ರತಿಷ್ಠಾನದ ಅಧ್ಯಕ್ಷ ಅವಿನಾಶ್ ಟಿಜೆಎಸ್ ಪರಿಸರ ಮತ್ತು ಪ್ರಕೃತಿ: ಡಾ.ಬಿ.ಆರ್. ಅಂಬೇಡ್ಕರ್ ದಾರ್ಶನಿಕತೆ ಕುರಿತು ವಿಷಯ ಮಂಡಿಸಿದರು. ಚರಿತ್ರಾ ಸಂವಿಧಾನ ಪೀಠಿಕೆ ಓದಿದರು. ಮೈಸೂರು ವಿವಿ ಕಲಾ ನಿಕಾಯದ ಡೀನ್ ಪ್ರೊ.ಎಂ.ಎಸ್ ಶೇಖರ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಕವಿ ಶಂಕನಪುರ ಮಹಾದೇವ, ಮುಕ್ತವಿವಿ ಸಿಂಡಿಕೇಟ್ ಸದಸ್ಯ ಮಹೇಶ್ ಸೊಸ್ಲೆ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಮೈಸೂರು ವಿವಿ ಗ್ರಂಥಪಾಲಕಿ ಸರಸ್ವತಿ, ಪ್ರಾಧ್ಯಾಪಕರಾದ ಪ್ರೊ.ಮಮತಾ, ಪ್ರೊ. ವಿಜಯಲಕ್ಷ್ಮೀ ಮನಾಪುರ, ಪ್ರೊ.ಪುಷ್ಪಾ ಮುಂತಾದವರಿದ್ದರು. ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರಎಂ ಸ್ವಾಗತಿಸಿದರು. ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ವಂದಿಸಿದರು. ದೇವಾನಂದ ವರಪ್ರಸಾದ್, ಅಮ್ಮರಾಮಚಂದ್ರ, ಶೇಷಣ್ಣ ಮತ್ತು ತಂಡದವರು ಭೀಮಗೀತೆ ಹಾಡಿದರು. ಭಾರತದ ಚರಿತ್ರೆ ಬಹುಜನರನ್ನು ಹೊರಗಿಟ್ಟ ಚರಿತ್ರೆಯಾಗಿದೆ. ಸಮಾಜವನ್ನು ಜಾತಿ, ಧರ್ಮ, ಲಿಂಗ, ಭಾಷೆಯ ಆಧಾರ ದಲ್ಲಿ ವಿಭಜನೆ ಮಾಡುವುದು. ಸಂಪತ್ತಿನ ಹಂಚಿಕೆ, ಅಧಿಕಾರ ಕೆಲವರ ಬಳಿಯೇ ಇರ ಬೇಕೆಂದು ಆದೇಶಿಸುವುದು ಹೊರಗಿಡುವ ಗುಣವಾಗಿದೆ. ಭಾರತದ ಅಭಿವೃದ್ದಿಯ ಬಲಿಪಶುಗಳು ಆದಿವಾಸಿಗಳು. ಶಿಕ್ಷಣ, ಅಭಿವೃದ್ಧಿ, ರಾಜಕಿಯ ಹೊರಗಿಟ್ಟಾಗ ಪ್ರಬುದ್ಧವಾಗಿಲ್ಲ. ಅರಸು ಉಳುವವನಿಗೆ ಭೂಮಿ ಕೊಟ್ಟಾಗ, ನಾಲ್ವಡಿ ಮಿಲ್ಲರ್ ಆಯೋಗ ರಚಿಸಿದಾಗ ಒಳಗೊಳ್ಳುವ ಗುಣಗಳನ್ನು ಕಾಣಬಹುದು. ಇವರ ಮೇಲೆ ಅಂಬೇಡ್ಕರ್‌ರ ಪ್ರಭಾವ ಬೀರಿದೆ. -ಪ್ರೊ.ರಹಮತ್ ತರೀಕೆರೆ, ಚಿಂತಕ

ವಾರ್ತಾ ಭಾರತಿ 17 Apr 2026 12:48 am

Hanur | ಸ್ವಜಾತಿಯವರಿಂದ ಬಹಿಷ್ಕಾರ ಆರೋಪ ; ನ್ಯಾಯಕ್ಕಾಗಿ ಪೊಲೀಸರ ಮೊರೆ

ಹನೂರು : ತಾಲೂಕಿನ ಗಡಿ ಗ್ರಾಮಗಳಲ್ಲಿ ಸ್ವಜಾತಿಗಳಿಂದಲೇ ಸಾಮಾಜಿಕ ಬಹಿಷ್ಕಾರ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನೊಂದ ಕುಟುಂಬಗಳು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿರುವ ಘಟನೆ ವರದಿಯಾಗಿದೆ. ರಾಮಾಪುರ ಹೋಬಳಿಯ ಹೂಗ್ಯಂ ಮತ್ತು ಮಿಣ್ಯಂ ಗ್ರಾಮಗಳಲ್ಲಿ ಅನಧಿಕೃತ ಸಮುದಾಯ ಪಂಚಾಯತ್‌ಗಳು ನಡೆಯುತ್ತಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಪಂಚಾಯತ್‌ಗಳ ಮೂಲಕ ನಗದು ದಂಡ ವಸೂಲಿ, ಸಾಮಾಜಿಕ ಬಹಿಷ್ಕಾರ ಹೇರಿಕೆ, ಹಾಗೂ ಮನೆತನದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮುನಿಯಪ್ಪ ಅವರು ಮಾರ್ಚ್ 22, 2026ರಂದು ರಾಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಬಳಿಕ ಹನೂರು ತಾಲೂಕು ದಂಡಾಧಿಕಾರಿಗೆ ಮನವಿ ನೀಡಿದ್ದಾರೆ. ದೂರಿನಲ್ಲಿ 2018ರಿಂದಲೇ ಈ ರೀತಿಯ ಸಾಮಾಜಿಕ ದಬ್ಬಾಳಿಕೆ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದ್ದು, ಮಹಿಳೆಯರು ಹಾಗೂ ಕುಟುಂಬಗಳು ನಿರಂತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶುಭ ಸಮಾರಂಭಗಳು, ಅಂತ್ಯಕ್ರಿಯೆಗಳು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ತಡೆಹಿಡಿಯಲಾಗುತ್ತಿದೆ ಎಂಬ ಗಂಭೀರ ಅಂಶವೂ ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿಗಳು ಚ್ಯೆತ್ರಾ ಗುರುವಾರ ನಡೆಸಿದ ಸಭೆಗೆ ಕೆಲ ಮುಖಂಡರು ಹಾಜರಾಗದ ಹಿನ್ನೆಲೆಯಲ್ಲಿ, ಎ.23ರಂದು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದು ಕಾನೂನುಬಾಹಿರ ಚಟುವಟಿಕೆಗಳು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 17 Apr 2026 12:32 am

ರೋಹಿತ್ ವೇಮುಲಾ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕು ರಕ್ಷಣೆಗಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದ್ದಾರೆ. ಈ ಹಿಂದೆಯೂ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಚರ್ಚೆಗೆ ಬಂದಿತ್ತಾದರೂ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಬದಲಿಗೆ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಲು ಸಂಪುಟ ಸಭೆಯಲ್ಲಿ ಸೂಚಿಸಿ, ವಿಧೇಯಕದ ಬಗೆಗಿನ ನಿರ್ಧಾರವನ್ನು ಮುಂದೂಡಲಾಗಿತ್ತು. ಇದೀಗ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಿದ್ದು, ವಿಧೇಯಕದ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯವಾಗಿದೆ. ವಿಧೇಯಕದಲ್ಲಿನ ಅಂಶಗಳ ಉಲ್ಲಂಘನೆಯು ಜಾಮೀನುರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ ಸರಕಾರದಿಂದ ಹಣಕಾಸು ನೆರವು ಮತ್ತು ಅನುದಾನ ನಿಲ್ಲಿಸುವ ಅಂಶಗಳು ಈ ಹಿಂದೆ ವಿಧೇಯಕದಲ್ಲಿ ಸೇರಿಸಲಾಗಿತ್ತು ಎಂದೂ ಸಚಿವರು ನುಡಿದರು. ಅದೇ ರೀತಿ, ಜಿಬಿಎ ವ್ಯಾಪ್ತಿಯಲ್ಲಿರುವ ರಾಜಭವನ, ಕುಮಾರ ಕೃಪಾ ಅತಿಥಿ ಗೃಹ, ಶ್ರೀ ಕಂಠೀರವ ಕ್ರೀಡಾಂಗಣ, ಕೋರಮಂಗಲ ಕ್ರೀಡಾಂಗಣ, ಈ ಎಲ್ಲಾ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವರ್ಗಾಯಿಸಲು ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. -ಎಚ್.ಕೆ.ಪಾಟೀಲ್, ಕಾನೂನು ಸಚಿವ

ವಾರ್ತಾ ಭಾರತಿ 17 Apr 2026 12:05 am

13,262 ಕೋಟಿ ರೂಪಾಯಿ ವೆಚ್ಚದ ಬೃಹತ್ 'ಎಲಿವೇಟೆಡ್ ಕಾರಿಡಾರ್' ಯೋಜನೆ ಸಂಪುಟ ಸಭೆ ಒಪ್ಪಿಗೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುಮಾರು 13,262 ಕೋಟಿ ರೂಪಾಯಿ ವೆಚ್ಚದ ಬೃಹತ್ 'ಎಲಿವೇಟೆಡ್ ಕಾರಿಡಾರ್' ಯೋಜನೆ ಒಪ್ಪಿಗೆ ನೀಡಿ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 75.6 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಬೃಹತ್ ಯೋಜನೆಗೆ 13,262 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಮೇಲ್ಸೇತುವೆ ಹಾಗೂ ರೈಲ್ವೆ ಓವರ್ ಬ್ರಿಡ್ಜ್ ಐಓಸಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್ ಮತ್ತು ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ 2-ಲೇನ್ ROB ನಿರ್ಮಾಣಕ್ಕೆ 436.44 ಕೋಟಿ ರೂ.ಗಳ ಪರಿಷ್ಕೃತ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದೂ ಉಲ್ಲೇಖಿಸಿದರು. ಬೆಂಗಳೂರು ಜಲಮಂಡಳಿಯ 5 ತ್ಯಾಜ್ಯನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕೆಸರನ್ನು ಬಳಸಿ ಬಯೋಗ್ಯಾಸ್ ಉತ್ಪಾದಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇದೇ ವೇಳೆ, ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಸ್ಪಷ್ಟಪಡಿಸಿದರು. ಅಲ್ಲದೆ, ಸರ್ಕಾರದಲ್ಲಿ ಖಾಲಿ ಇರುವ 56,000 ಹುದ್ದೆಗಳ ಭರ್ತಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಾರ್ತಾ ಭಾರತಿ 17 Apr 2026 12:00 am

ಶೀಘ್ರದಲ್ಲಿ ನಾಗರಿಕರಿಗಾಗಿ ಆನ್‍ಲೈನ್ ಖಾತಾ ತಿದ್ದುಪಡಿ ಸೌಲಭ್ಯ : ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್

ಬೆಂಗಳೂರು : ನಾಗರಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ನಾಗರಿಕರೇ ಆನ್‍ಲೈನ್ ಖಾತಾ ತಿದ್ದುಪಡಿ ಮಾಡುವ ಸೌಲಭ್ಯವನ್ನು ಶೀಘ್ರದಲ್ಲಿ ಪರಿಚಯಿಸಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಗುರುವಾರ ಇಲ್ಲಿನ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ನಾಗರಿಕರು ತಮ್ಮ ಖಾತಾ ವಿವರಗಳಲ್ಲಿ ಇರುವ ದೋಷಗಳನ್ನು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪುಗೊಳ್ಳಲಿದೆ. ಮಾಲಕರ ಹೆಸರು ಮತ್ತು ಆಸ್ತಿಯ ಅಳತೆ ಹೊರತುಪಡಿಸಿ, ಸ್ಥಳ, ವಾರ್ಡ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ನಾಗರಿಕರು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪ್ರಗತಿ: ಸುಮಾರು 25 ಲಕ್ಷ ಡ್ರಾಫ್ಟ್ ಖಾತಾ ಅರ್ಜಿಗಳು ಆನ್‍ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಈಗಾಗಲೇ ಅಂತಿಮ ಇ-ಖಾತಾ ನೀಡಲಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದಲ್ಲಿ ಸರಾಸರಿ ಐದು ದಿನಗಳೊಳಗೆ ಅಂತಿಮ ಇ-ಖಾತಾ ನೀಡಲಾಗುತ್ತಿದೆ. ಡ್ರಾಫ್ಟ್ ಖಾತೆಯಿಂದ ಅಂತಿಮ ಖಾತೆಗೆ ಪರಿವರ್ತನೆಯ ಪ್ರಕ್ರಿಯೆ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆ: ಪ್ರತಿದಿನ 1,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸರಾಸರಿ ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಿಸಲಾಗುತ್ತಿದೆ. ಇದು ಡಿಜಿಟಲ್ ಪ್ರಕ್ರಿಯೆಯ ವೇಗ ಮತ್ತು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನೀಶ್ ಮೌದ್ಗಿಲ್ ಹೇಳಿದರು. ಖಾತಾ ತಿರಸ್ಕಾರ ಪ್ರಕ್ರಿಯೆಯಲ್ಲಿ ಕೆಲವು ಸವಾಲುಗಳು ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಲು ರಿಜೆಕ್ಷನ್ ಆಡಿಟ್ ತಂಡವನ್ನು ರಚಿಸಲಾಗಿದೆ. ಈ ತಂಡವು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ತಿರಸ್ಕರಿಸಲಾದ ಅರ್ಜಿಗಳನ್ನು ಮರುಪರಿಶೀಲಿಸಿ ಅವುಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು. ಮ್ಯೂಟೇಷನ್ ಪ್ರಕ್ರಿಯೆಯಲ್ಲಿ ವಿಳಂಬವನ್ನು ಕಡಿಮೆ ಮಾಡಲು ಸ್ವಯಂಚಾಲಿತ ಮ್ಯೂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉಪ-ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆದ ವಹಿವಾಟುಗಳು ಈಗ ಸ್ವಯಂಚಾಲಿತವಾಗಿ ಮ್ಯೂಟೇಷನ್ ಆಗಲಿವೆ. ನೋಟಿಸ್ ಅವಧಿ ಪೂರ್ಣಗೊಂಡ ನಂತರ ಮ್ಯೂಟೇಷನ್ ಪೂರ್ಣಗೊಳ್ಳುತ್ತದೆ. ಏಳನೇ ದಿನದ ಬಳಿಕ ನಾಗರಿಕರಿಗೆSMSಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.  

ವಾರ್ತಾ ಭಾರತಿ 16 Apr 2026 11:54 pm

Bengaluru | ಮನೆಗಳ್ಳತನ ಪ್ರಕರಣ : ಆರೋಪಿ ಬಂಧನ; 35 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ

ಬೆಂಗಳೂರು : ಮನೆಯೊಳಗೆ ನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಆರೋಪಿಯೊಬ್ಬನನ್ನು ಇಲ್ಲಿನ ತಿಲಕನಗರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 4ನೇ ಬ್ಲಾಕ್‍ನ ನಿವಾಸಿಯೊಬ್ಬರು ಮನೆಯ ಬಾಗಿಲ ಚಿಲಕ ಹಾಕಿಕೊಂಡು ದಿನಸಿ ತರಲು ಸಮೀಪದ ಅಂಗಡಿಗೆ ತೆರಳಿದ್ದಾರೆ. ಕೆಲ ಸಮಯದ ಬಳಿಕ ನಿವಾಸಿಯ ತಂದೆ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ನೋಡಿದಾಗ ಬೀರುವಿನಲ್ಲಿಟ್ಟಿದ್ದ 423 ಗ್ರಾಂ ಚಿನ್ನಾಭರಣ, 110 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 50 ಸಾವಿರ ರೂ. ಹಣ ಕಳುವಾಗಿರುವುದು ಕಂಡುಬಂದಿದ್ದು, ತಕ್ಷಣ ಅವರು ತಿಲಕ್‍ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬಾಣಸವಾಡಿಯ ಹೋಟೇಲ್‍ವೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿ ಗಿರಿನಗರ ಹಾಗೂ ಕೆ.ಆರ್.ಪುರ ಜ್ಯುವೆಲ್ಲರಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಸ್ವಲ್ಪ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ರಾಮಮೂರ್ತಿನಗರದ ಪಾರ್ಕ್‍ವೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದ ಆಭರಣಗಳು ಸೇರಿದಂತೆ ಒಟ್ಟು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ವಾರ್ತಾ ಭಾರತಿ 16 Apr 2026 11:51 pm

ಐಎಎಸ್‌ ಅಧಿಕಾರಿ ಸೋಗಿನಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯರಿಗೇ ಮಕ್ಮಲ್ ಟೋಪಿ ಇಟ್ಟವ ಈಗ ಪೊಲೀಸರ ಅತಿಥಿ!

Chikkamagaluru Fraud Case- ತನ್ನನ್ನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಚಿಕ್ಕಮಗಳೂರಿನ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಮೆಡಿಕಲ್ ಶಾಪ್ ಮಾಲೀಕರಿಗೆ 41 ಲಕ್ಷ ರೂ. ವಂಚಿಸಿದ್ದ ಮಿಥುನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆಯ ಉಸ್ತುವಾರಿ ಎಂದು ನಂಬಿಸಿದ್ದ ಈತ, ಔಷಧ ಸರಬರಾಜು ಆದೇಶ ಕೊಡಿಸುವುದಾಗಿ ನಕಲಿ ಗುರುತಿನ ಚೀಟಿ ತೋರಿಸಿ ಹಣ ಪಡೆದಿದ್ದ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಅವರೂ ಸಹ ಈತನ ನಕಲಿ ಐಡಿ ನಂಬಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ಈ ನಕಲಿ ಅಧಿಕಾರಿಯ ವಂಚನೆ ಜಾಲ ಬಯಲಾಗಿದೆ.

ವಿಜಯ ಕರ್ನಾಟಕ 16 Apr 2026 11:50 pm

ಎ.18ರಂದು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದೊಂದಿಗೆ ಮೇ 12 ರಂದು ಪಾಣೆಮಂಗಳೂರು ಸಮೀಪದ ಎಸ್ ಎಸ್ ಹಾಲ್ ನಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಎಪ್ರಿಲ್ 18 ರಂದು ಸಂಜೆ 4.00 ಕ್ಕೆ ಬಿ.ಸಿ.ರೋಡಿನ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಇದೇ ವೇಳೆ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗುವುದು. ಬಂಟ್ವಾಳ ತಾಲೂಕಿನ ಬ್ಯಾರಿ ಭಾಷೆ ಮತ್ತು ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ವಾರ್ತಾ ಭಾರತಿ 16 Apr 2026 11:23 pm

IPL 2026 | ಮುಂಬೈ ವಿರುದ್ಧ ಪಂಜಾಬ್ ಕಿಂಗ್ಸ್‌ ಗೆ ಜಯ

ಕ್ವಿಂಟನ್ ಡಿಕಾಕ್ ಶತಕ ವ್ಯರ್ಥ, ಪ್ರಭ್ಸಿಮ್ರನ್ ಅರ್ಧಶತಕ

ವಾರ್ತಾ ಭಾರತಿ 16 Apr 2026 11:17 pm

ಮುಂಬೈಗೆ ಮುಳುವಾದ ಶ್ರೇಯಸ್ ಅಯ್ಯರ್- ಪ್ರಭಸಿಮ್ರಾನ್ ಜೊತೆಯಾಟ; ಪಂಜಾಬ್ ಕಿಂಗ್ಸ್ ಅಜೇಯ ಓಟ

ಆರಂಭಕಾರ ಪ್ರಭಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಬಳಗದ ಅಜೇಯ ಯಾತ್ರೆ ಮುಂದುವರಿದಿದೆ. ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ರದ್ದಿನಿಂದಾಗಿ ಒಟ್ಟು 9 ಅಂಕಗಳನ್ನು ಗಳಿಸಿರುವ ಪಂಜಾಬ್ ಇದೀಗ ಯಲ್ಲಿ ಆರ್ ಸಿಬಿಯನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ. ಏತನ್ಮಧ್ಯೆ ಮುಂಬೈ ಇಂಡಿಯನ್ಸ್ ನ ಆರಂಭಕಾರ ಕ್ವಿಂಟನ್ ಡಿಕಾಕ್ ಅವರು ಹೊಡೆದ ಭರ್ಜರಿ ವ್ಯರ್ಥವಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 16ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಇನ್ನೂ 21 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು. () ಸಂಕ್ಷಿಪ್ತ ಸ್ಕೋರ್ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 195/6, ಕ್ಲಿಂಟನ್ ಡಿ ಕಾಕ್ ಅಜೇಯ 112(60), ನಮನ್ ಧಿರ್ 50(31), ಹಾರ್ದಿಕ್ ಪಾಂಡ್ಯ 14(12), ಅರ್ಶದೀಪ್ ಸಿಂಗ್ 22ಕ್ಕೆ 3, ಮಾರ್ಕೋ ಯಾನ್ಸನ್ 30ಕ್ಕೆ 1, ಶಶಾಂಕ್ ಸಿಂಗ್ 19ಕ್ಕೆ 1. ಪಂಜಾಬ್ ಕಿಂಗ್ಸ್ 16.3 ಓವರ್ ಗಳಲ್ಲಿ 198/3, ಪ್ರಭಸಿಮ್ರಾನ್ ಸಿಂಗ್ ಅಜೇಯ 80(39), ಶ್ರೇಯಸ್ ಅಯ್ಯರ್ 68(35), ಕೂಪರ್ ಕಾನಲಿ17(12), ಗಜನಫರ್ 31ಕ್ಕೆ 2, ಶಾರ್ದೂಲ್ ಠಾಕೂರ್ 42ಕ್ಕೆ 1.

ವಿಜಯ ಕರ್ನಾಟಕ 16 Apr 2026 11:10 pm

ಹೆಚ್ಚುತ್ತಿರುವ ವೆಚ್ಚಗಳು, ಸ್ಥಗಿತಗೊಂಡ ವೇತನ: ಭಾರತದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದೇಕೆ?

ಸೋಮವಾರ ನೋಯ್ಡಾದಲ್ಲಿ ಸಾವಿರಾರು ಕಾರ್ಖಾನೆ ಕಾರ್ಮಿಕರು ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಕನಿಷ್ಠ ವೇತನ ಹೆಚ್ಚಳ, ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಹೆಚ್ಚುವರಿ ಕೆಲಸದ ಪಾವತಿಗಳನ್ನು ಕೋರಿ ಅವರ ಪ್ರತಿಭಟನೆ ಎಪ್ರಿಲ್ 8 ರಂದು ಪ್ರಾರಂಭವಾಗಿತ್ತು. ಎಪ್ರಿಲ್ 9 ರಂದು ನೆರೆಯ ಹರಿಯಾಣದಲ್ಲಿ ಶೇ. 35 ರಷ್ಟು ಕನಿಷ್ಠ ವೇತನ ಹೆಚ್ಚಳವನ್ನು ಘೋಷಿಸುವ ಅಧಿಸೂಚನೆಯ ನಂತರ ಈ ಪ್ರತಿಭಟನೆ ಭುಗಿಲೆದ್ದಿತು, ಇದರ ನಂತರ ಕೈಗಾರಿಕಾ ಕೇಂದ್ರವಾದ ಮಾನೇಸರ್‌ ನಲ್ಲಿಯೂ ಇದೇ ರೀತಿಯ ಪ್ರತಿಭಟನೆ ನಡೆಯಿತು. ಪಶ್ಚಿಮ ಏಷ್ಯಾ ಯುದ್ಧದ ಮಧ್ಯೆ ಬೆಲೆ ಏರಿಕೆಯೇ ಈ ಪ್ರತಿಭಟನೆಗಳ ಹಿಂದಿನ ಕಾರಣ. ಒಟ್ಟಾರೆ ಮಾಸಿಕ ಕನಿಷ್ಠ ವೇತನವನ್ನು ರೂಪಿಸುವ ಎರಡು ಅಂಶಗಳಲ್ಲಿ ಒಂದಾದ ಮೂಲ ಕನಿಷ್ಠ ವೇತನವನ್ನು ಪರಿಷ್ಕರಿಸುವಲ್ಲಿ ರಾಜ್ಯಗಳ ವಿಳಂಬದಿಂದ ಇದು ಜಟಿಲವಾಗಿದೆ. ಮೂಲ ಕನಿಷ್ಠ ವೇತನ ಪರಿಷ್ಕರಣೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಬೇಕಿತ್ತು. ಆದರೆ ಹರಿಯಾಣ 10 ವರ್ಷಗಳ ನಂತರವೇ ಅದನ್ನು ಪರಿಷ್ಕರಿಸಿತು. ಈಗ ಮಧ್ಯಂತರ ಹೆಚ್ಚಳದೊಂದಿಗೆ ಹೆಜ್ಜೆ ಹಾಕಿರುವ ಉತ್ತರ ಪ್ರದೇಶವು ಕೊನೆಯದಾಗಿ 2012 ರಲ್ಲಿ ಅದನ್ನು ಪರಿಷ್ಕರಿಸಿತ್ತು. ಪರಿಷ್ಕರಣೆಗೆ ಮುನ್ನ, ಹರಿಯಾಣದಲ್ಲಿ ಕೌಶಲ್ಯರಹಿತ ಕಾರ್ಮಿಕರ ಒಟ್ಟಾರೆ ಮಾಸಿಕ ಕನಿಷ್ಠ ವೇತನ 11,274.60 ರೂ.ಗಳಷ್ಟಿತ್ತು. ಇದು ಈಗ ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ 15,220.71 ರೂ.ಗಳಾಗಿದೆ. ಉತ್ತರ ಪ್ರದೇಶದಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಅದೇ ದರ 11,313 ರೂ. ಇತ್ತು. ಈಗ ಮಧ್ಯಂತರ ಪರಿಷ್ಕರಣೆಯಿಂದ ವೇತನ ನೋಯ್ಡಾ (ಗೌತಮ್ ಬುದ್ಧ ನಗರ) ಮತ್ತು ಗಾಜಿಯಾಬಾದ್‌ನಲ್ಲಿ 13,690 ರೂ., ಪುರಸಭೆಗಳಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ 13,006 ರೂ. ಮತ್ತು ಇತರ ಪ್ರದೇಶಗಳಿಗೆ 12,356 ರೂ. ಆಗಿ ಬದಲಾಗಿದೆ. ಇದು ಒಟ್ಟು ಮಾಸಿಕ ಕನಿಷ್ಠ ವೇತನದ ಎರಡನೇ ಅಂಶಕ್ಕೆ ಕಾರಣವಾಗುತ್ತದೆ. ಅದೇ ಜೀವನ ವೆಚ್ಚ. ಇದನ್ನು ವಾರ್ಷಿಕವಾಗಿ ಎರಡು ಬಾರಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ, ಇದು ಗ್ರಾಹಕ ಬೆಲೆ ಸೂಚ್ಯಂಕ-ಕೈಗಾರಿಕಾ ಕಾರ್ಮಿಕರ (CPI-IW) ನಿರ್ಧರಿಸಿದಂತೆ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರಗಳನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ರಾಜ್ಯಗಳು ಅರ್ಧ-ವಾರ್ಷಿಕ ಪರಿಷ್ಕರಣೆಗಳನ್ನು ಕೈಗೊಂಡಿದ್ದರೂ, ವಿಶೇಷವಾಗಿ ಕೋವಿಡ್-19 ನಂತರದ ವರ್ಷಗಳಲ್ಲಿ ಅವರು ಮೂಲ ಕನಿಷ್ಠ ವೇತನ ಪರಿಷ್ಕರಣೆಗಳನ್ನು ಮಾಡಿಲ್ಲ. ►ಜೀವನ ವೆಚ್ಚ ಏರಿಕೆ 2016 ರ ಇತ್ತೀಚಿನ ನವೀಕರಿಸಿದ ಮೂಲ ವರ್ಷದೊಂದಿಗೆ, CPI-IW ದತ್ತಾಂಶದ ಪ್ರಕಾರ, ಫೆಬ್ರವರಿ 2021 ಮತ್ತು ಫೆಬ್ರವರಿ 2026 ರ ನಡುವೆ, ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಹಣದುಬ್ಬರ ದರವು 24.8% ರಷ್ಟಿತ್ತು. ಹರಿಯಾಣದಲ್ಲಿ, ಈ ಅವಧಿಯಲ್ಲಿ ಹಣದುಬ್ಬರ ದರವು ಗುರುಗ್ರಾಮ್‌ನಲ್ಲಿ 27.9% ಮತ್ತು ಫರಿದಾಬಾದ್‌ ನಲ್ಲಿ 27.2% ರಷ್ಟಿತ್ತು. ಉತ್ತರ ಪ್ರದೇಶದಲ್ಲಿ, ಈ ಅಂಕಿ ಅಂಶವು ಘಾಝಿಯಾಬಾದ್ ಮತ್ತು ನೋಯ್ಡಾದಲ್ಲಿ 27.4% ರಷ್ಟಿತ್ತು. ದೆಹಲಿಯಲ್ಲಿ ಫೆಬ್ರವರಿ 2021 ಮತ್ತು ಫೆಬ್ರವರಿ 2026 ರ ನಡುವೆ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರವು 27.4% ರಷ್ಟು ಏರಿಕೆಯಾಗಿದೆ. ಹೋಲಿಸಿ ನೋಡಿದರೆ ಹರಿಯಾಣದಲ್ಲಿ ಒಟ್ಟಾರೆ ಕನಿಷ್ಠ ವೇತನ ದರವು ಜುಲೈ 2021 ರಲ್ಲಿ 9,803.24 ರೂ.ಗಳಿಂದ ಜುಲೈ 2025 ರಲ್ಲಿ 11,274.60 ರೂ.ಗಳಿಗೆ (ಎಪ್ರಿಲ್ 2026 ರ ಪರಿಷ್ಕರಣೆಯ ಮೊದಲು) ಕೇವಲ 15% ರಷ್ಟು ಹೆಚ್ಚಾಗಿದೆ. ಅದೇ ರೀತಿ, ಉತ್ತರ ಪ್ರದೇಶಕ್ಕೆ, ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವು ಎಪ್ರಿಲ್ 2021 ರಲ್ಲಿ ರೂ. 9,078 ರಿಂದ ರೂ. 11,313 ಕ್ಕೆ ಶೇ. 24.6 ರಷ್ಟು ಹೆಚ್ಚಾಗಿದೆ. ಆದ್ದರಿಂದ, ಕನಿಷ್ಠ ವೇತನ ಪರಿಷ್ಕರಣೆಗಳು ದೆಹಲಿ-ಎನ್‌ಸಿಆರ್‌ನಲ್ಲಿನ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ದರಕ್ಕೆ ಅನುಗುಣವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಕೈಗಾರಿಕಾ ಘಟಕಗಳು ಇನ್‌ ಪುಟ್ ವೆಚ್ಚದ ಒತ್ತಡದಲ್ಲಿ ಸಿಲುಕಿರುವುದರಿಂದ ಇದರ ಪರಿಣಾಮ ಹದಗೆಟ್ಟಿದೆ. ಆರಂಭದಲ್ಲಿ ಅಮೆರಿಕದ ಸುಂಕಗಳು ಇದಕ್ಕೆ ಕಾರಣವಾದರೆ, ಪ್ರಸ್ತುತ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದ ಇದು ಮತ್ತಷ್ಟು ಜಟಿಲವಾಗಿದೆ. ಇದು ಕಾರ್ಮಿಕರಿಗೆ ವಿಳಂಬವಾದ ಪಾವತಿಗಳಿಗೆ ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಉದ್ಯೋಗಗಳ ಬಗ್ಗೆ ಅನಿಶ್ಚಿತತೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾ ಯುದ್ಧದ ಹೊಡೆತವನ್ನು ಈ ಕಾರ್ಖಾನೆ ಕಾರ್ಮಿಕರು ಅನುಭವಿಸುತ್ತಿದ್ದಾರೆ, ಅವರಲ್ಲಿ ಹಲವರು ವಲಸಿಗರು. ಅವರು ಹೆಚ್ಚಾಗಿ ಎಲ್‌ಪಿಜಿ ಸಿಲಿಂಡರ್‌ ಗಳಿಗಾಗಿ ಕಾಳದಂಧೆಯನ್ನು ಅವಲಂಬಿಸಬೇಕಾಗುತ್ತದೆ, ಅಲ್ಲಿ ಬೆಲೆ 4,000 ರೂ.ಗಳಷ್ಟು ಹೆಚ್ಚಿರಬಹುದು. ಇದು, ಕೊಠಡಿ ಬಾಡಿಗೆ ಮತ್ತು ಹೊರಗಿನಿಂದ ಬೇಯಿಸಿದ ಆಹಾರದ ಬೆಲೆಗಳ ಏರಿಕೆಯೊಂದಿಗೆ, ಅವರ ಹೊರೆಯನ್ನು ಹೆಚ್ಚಿಸಿದೆ. ►ಕಾರ್ಮಿಕ ಸಂಹಿತೆಗಳು ನೋಯ್ಡಾ ಮತ್ತು ಮಾನೇಸರ್‌ ನಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಕಾರ್ಮಿಕರು ಎತ್ತಿದ ಕಳವಳಗಳಲ್ಲಿ ಸಾಮಾನ್ಯವಾದ ಅಂಶವೆಂದರೆ, ನವೆಂಬರ್ 2025 ರಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ನಂತರ ವೇತನ ಹೆಚ್ಚಾಗುವ ನಿರೀಕ್ಷೆ ಇತ್ತು, ಆದರೆ ಅದು ಆಗಲಿಲ್ಲ. ಮಂಗಳವಾರ ಹೇಳಿಕೆಯಲ್ಲಿ, ಉತ್ತರ ಪ್ರದೇಶ ಸರ್ಕಾರವು ತಿಂಗಳಿಗೆ 20,000 ರೂ.ಗಳ ಏಕರೂಪದ ಕನಿಷ್ಠ ವೇತನದ ಬಗ್ಗೆ ಹೇಳಿಕೆಗಳು ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು ಮತ್ತು ಕಾರ್ಮಿಕರು 2024 ಸೆಪ್ಟೆಂಬರ್ 26 ರಂದು ಕೇಂದ್ರ ಸರ್ಕಾರದ ಬಿಡುಗಡೆಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ, ಅದು 'A ಪ್ರದೇಶ'ದಲ್ಲಿ ನಿರ್ಮಾಣ, ಗುಡಿಸುವುದು, ಸ್ವಚ್ಛಗೊಳಿಸುವುದು, ಲೋಡ್ ಮಾಡುವುದು ಮತ್ತು ಇಳಿಸುವ ಕೆಲಸಕ್ಕಾಗಿ ಕೌಶಲ್ಯರಹಿತ ಕಾರ್ಮಿಕರಿಗೆ ದಿನಕ್ಕೆ 783 ರೂ. ಅಥವಾ ತಿಂಗಳಿಗೆ 20,358 ರೂ. ಆಗಿರುತ್ತದೆ ಎಂದು ಹೇಳಿದೆ. ಈ ದರವು ಕೇಂದ್ರ ವಲಯದ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನವೆಂಬರ್ 2025 ರಲ್ಲಿ ಸೂಚಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳ ಮಾದರಿಯಲ್ಲಿ ಹೆಚ್ಚಿನ ರಾಜ್ಯಗಳು ರೂಪಿಸಿದ ಅಂತಿಮ ನಿಯಮಗಳನ್ನು ಕೇಂದ್ರ ಅಥವಾ ಹೆಚ್ಚಿನ ರಾಜ್ಯಗಳು ಇನ್ನೂ ಅಧಿಸೂಚನೆ ಹೊರಡಿಸದ ಕಾರಣ ಕಾರ್ಖಾನೆ ಕಾರ್ಮಿಕರಲ್ಲಿ ಅವರ ಕೆಲಸದ ಸಮಯ ಮತ್ತು ವಿಶ್ರಾಂತಿ ಮಧ್ಯಂತರಗಳ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. 2025 ನವೆಂಬರ್ 21 ರಿಂದ ಜಾರಿಗೆ ಬರುವಂತೆ, ವೇತನ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSH) ಸಂಹಿತೆ ಎಂಬ ನಾಲ್ಕು ಕಾರ್ಮಿಕ ಸಂಹಿತೆಗಳು ತರಲಾಯಿತು. ಇದು ಉದ್ಯೋಗದಾತರಿಗೆ ನಿಯಮಗಳು ಮತ್ತು ಅನುಸರಣೆ ಮಾನದಂಡಗಳನ್ನು ಸರಾಗಗೊಳಿಸಲು ಮತ್ತು ವೇತನ ರಚನೆ ಹಾಗೂ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ರಕ್ಷಣೆಯಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಕೇಂದ್ರ ಸರ್ಕಾರ 2025 ಡಿಸೆಂಬರ್‌ನಲ್ಲಿ ಕರಡು ನಿಯಮಗಳನ್ನು ಹೊರಡಿಸಿದ್ದು, ಅಂತಿಮ ನಿಯಮಗಳನ್ನು ಇನ್ನೂ ತಿಳಿಸಲಾಗಿಲ್ಲ. ಹಿಂದಿನ ಕಾರ್ಖಾನೆಗಳ ಕಾಯ್ದೆ, 1948 ರಂತೆ, ದೈನಂದಿನ ಮತ್ತು ವಾರದ ಕೆಲಸದ ಸಮಯ ಮತ್ತು 'ವಿಸ್ತರಿಸಿದ' ಗಂಟೆಗಳು (ಉದ್ಯೋಗಿಯ ಒಟ್ಟು ಕೆಲಸದ ಸಮಯ ಮತ್ತು ವಿಶ್ರಾಂತಿ ವಿರಾಮಗಳನ್ನು ಒಳಗೊಂಡಂತೆ) ಹೊಸ ಕಾರ್ಮಿಕ ಸಂಹಿತೆಗಳು ಎಂಟು ಗಂಟೆಗಳ ಕೆಲಸದ ದಿನ ಮತ್ತು 48 ಗಂಟೆಗಳ ವಾರದ ಕೆಲಸದ ಮಿತಿಯನ್ನು ವ್ಯಾಖ್ಯಾನಿಸುತ್ತವೆ, ಇದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಡಿಸೆಂಬರ್‌ ನಲ್ಲಿ ಹೊರಡಿಸಲಾದ ತನ್ನ ಕರಡು ನಿಯಮಗಳಲ್ಲಿ, ಕೇಂದ್ರ ಸರ್ಕಾರವು ಪ್ರತಿ ದಿನದ ಕೆಲಸದ ಅವಧಿಯನ್ನು, ಮಧ್ಯಂತರಗಳು ಮತ್ತು ಸ್ಪ್ರೆಡ್ ಓವರ್‌ ಗಳೊಂದಿಗೆ, ಕಾಲಕಾಲಕ್ಕೆ ಪ್ರತ್ಯೇಕವಾಗಿ ತಿಳಿಸುವುದಾಗಿ ಹೇಳಿತ್ತು. ಉದಾಹರಣೆಗೆ, ನಾಲ್ಕು ಕೆಲಸದ ದಿನಗಳವರೆಗೆ 12 ಗಂಟೆಗಳ ಪಾಳಿಯೊಂದಿಗೆ ತಮ್ಮ ಉದ್ಯೋಗಿಗಳಿಗೆ ಮೂರು ದಿನಗಳ ವಾರದ ರಜೆಯನ್ನು ನೀಡಲು ಬಯಸಬಹುದಾದ ಉದ್ಯೋಗದಾತರಿಗೆ ಫ್ಲೆಕ್ಸಿಬಿಲಿಟಿ ಒದಗಿಸಲು ಇದು ಉದ್ದೇಶಿಸಲಾಗಿತ್ತು. ಆದರೆ ಇದು ಉದ್ಯೋಗದಾತರು ಹಾಗೂ ಉದ್ಯೋಗಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ, ಇದು ಹೆಚ್ಚಾಗಿ ಫ್ಲೆಕ್ಸಿಬಿಲಿಟಿ ಹೆಸರಿನಲ್ಲಿ ಹೆಚ್ಚಿನ ಕೆಲಸಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. “ಇತ್ತೀಚಿನ ಕಾರ್ಮಿಕ ಕಾನೂನು ಸುಧಾರಣೆಗಳು ಸಂಸತ್ತಿನಿಂದ ಕಾರ್ಯಾಂಗಕ್ಕೆ ನಿಯಮಗಳನ್ನು ರಚಿಸುವ ಅಧಿಕಾರವನ್ನು ವರ್ಗಾಯಿಸಿವೆ, ಇದರಿಂದಾಗಿ ರಾಜ್ಯ ಸರ್ಕಾರಗಳು ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಕೆಲಸದ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಿದ ಹಿಂದಿನ ಕಾರ್ಮಿಕ ಕಾನೂನುಗಳಿಗಿಂತ ಭಿನ್ನವಾಗಿ, ಹೊಸ ಸಂಹಿತೆಗಳು ಅದನ್ನು ನಮ್ಯತೆಯನ್ನಾಗಿ ಇರಿಸಿಕೊಂಡಿದ್ದು ನಿಯಮಗಳ ಭಾಗವನ್ನಾಗಿ ಮಾಡಿವೆ. ಆದರೆ ಇದನ್ನು ನಮ್ಯತೆಯ ಹೆಸರಿನಲ್ಲಿ ಉದ್ಯೋಗದಾತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ಐಟಿ ಕ್ಷೇತ್ರದಂತಹ ಕೆಲವು ವಲಯಗಳಲ್ಲಿ ಉದ್ಯೋಗಿಗಳು ವರ್ಷಪೂರ್ತಿ ಕೆಲಸ ಮಾಡುವುದನ್ನು ನೋಡುತ್ತಿವೆ. ಯಾವುದೇ ಕಾನೂನಿನ ಅನುಷ್ಠಾನಕ್ಕೆ ಬಹಳ ಮುಖ್ಯವಾದ ಕಾರ್ಮಿಕ ಸಂಹಿತೆಗಳ ನಿಯಮಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಈ ಪ್ರಕ್ರಿಯೆಯಲ್ಲಿ, ಕಾನೂನು ರಚನೆಗೆ ಅನಿರೀಕ್ಷಿತ ಹಾನಿಯಾಗಿದೆ̧” ಎಂದು XLRI ಯ ಕಾರ್ಮಿಕ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಾಧ್ಯಾಪಕ ಕೆ.ಆರ್. ಶ್ಯಾಮ್ ಸುಂದರ್ ಹೇಳಿರುವುದಾಗಿ The Indian Express ವರದಿ ಉಲ್ಲೇಖಿಸಿದೆ. ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಗಳ ಮಾನ್ಯತೆಯನ್ನು ರಾಜ್ಯಗಳಿಗೆ ಬಿಟ್ಟುಕೊಡುವುದರ ಜೊತೆಗೆ ಸಾಮೂಹಿಕ ಚೌಕಾಸಿಗೆ ಅವಕಾಶವನ್ನು ಸಹ ನೀಡುತ್ತವೆ, ಇದರಿಂದಾಗಿ ಕಾರ್ಮಿಕ ಕಾನೂನು ಸುಧಾರಣೆಗಳಿಗೆ ಯಾವುದೇ ವಿಶ್ವಾಸಾರ್ಹ ಪ್ರಕ್ರಿಯೆಯನ್ನು ಅನುಸರಿಸಲಾಗುವುದಿಲ್ಲ. X ರಾಜ್ಯಗಳು ಹೊಸ ಕನಿಷ್ಠ ವೇತನ ದರಗಳು ಮತ್ತು ಕೆಲಸದ ಸಮಯವನ್ನು ತಿಳಿಸಿದರೆ ಮತ್ತು Y ರಾಜ್ಯಗಳು ಹಾಗೆ ಮಾಡದಿದ್ದರೆ, ಈ ಪ್ರಕ್ರಿಯೆಯು ಪ್ರಾದೇಶಿಕ ಅಸಮಾನತೆಗಳನ್ನು ಸೃಷ್ಟಿಸುತ್ತದೆ. ಕೇಂದ್ರವು ಸಂಹಿತೆಗಳಲ್ಲಿಯೇ ವಿವರಗಳನ್ನು ನಿರ್ದಿಷ್ಟಪಡಿಸಬೇಕಾಗಿತ್ತು, ಎಂದಿದ್ದಾರೆ ಶ್ಯಾಮ್. ಕಾರ್ಖಾನೆಗಳ ಕಾಯ್ದೆಯು ಕೆಲಸದ ಸಮಯವನ್ನು ದಿನಕ್ಕೆ 10.5 ಗಂಟೆಗಳವರೆಗೆ ಮಿತಿಗೊಳಿಸಿತು, ಇದನ್ನು ಮುಖ್ಯ ನಿರೀಕ್ಷಕರ ಲಿಖಿತ ಅನುಮತಿಯೊಂದಿಗೆ 12 ಗಂಟೆಗಳವರೆಗೆ ಮತ್ತು ದೈನಂದಿನ ಕೆಲಸದ ಸಮಯವನ್ನು ದಿನಕ್ಕೆ ಒಂಭತ್ತು ಗಂಟೆಗಳವರೆಗೆ ವಿಸ್ತರಿಸಬಹುದು. ಸಾಂಕ್ರಾಮಿಕ ಸಮಯದಲ್ಲಿ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಕೆಲಸದ ಸಮಯವನ್ನು 10-12 ಗಂಟೆಗಳವರೆಗೆ ಹೆಚ್ಚಿಸಿದವು. ಯಾವುದೇ ಕಾರ್ಮಿಕನು ಯಾವುದೇ ವಾರದಲ್ಲಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಬೇಕಾಗಿಲ್ಲ ಅಥವಾ ಅನುಮತಿಸಬೇಕಾಗಿಲ್ಲ. ಪ್ರತಿ ದಿನದ ಕೆಲಸದ ಅವಧಿ ಮಧ್ಯಂತರಗಳು ಮತ್ತು ಸ್ಪ್ರೆಡ್ ಓವರ್‌ ಗಳೊಂದಿಗೆ, ಕೇಂದ್ರ ಸರ್ಕಾರವು ಸೂಚಿಸಿದಂತೆ ಇರುತ್ತದೆ ಎಂದು ಹೊಸ ಕಾರ್ಮಿಕ ಸಂಹಿತೆಯ ಕರಡು ನಿಯಮಗಳು ಹೇಳಿವೆ. ಈ ನಿಯಮಗಳು ಕೇಂದ್ರ ವಲಯದ ಸಂಸ್ಥೆಗಳಿಗೆ ಅನ್ವಯವಾಗಿದ್ದರೂ, ಇದು ಕಾರ್ಖಾನೆಗಳಂತಹ ಸಂಸ್ಥೆಗಳಿಗೆ ಅನ್ವಯವಾಗುವ ರಾಜ್ಯಗಳ ಅಂತಿಮ ಅಧಿಸೂಚನೆಯಾಗಿದೆ.

ವಾರ್ತಾ ಭಾರತಿ 16 Apr 2026 10:58 pm

ಭಟ್ಕಳ: ಕರ್ನಾಟಕ ಉರ್ದು ಅಕಾಡೆಮಿಯಿಂದ ಈದ್ ಮಿಲನ್, ರಾಷ್ಟ್ರೀಯ ಏಕತಾ ಮುಶಾಯಿರಾ

ಭಟ್ಕಳ: ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಭಟ್ಕಳದ ಆಮಿನಾ ಪ್ಯಾಲೇಸ್ ನಲ್ಲಿ ಗುರುವಾರ ರಾತ್ರಿ ಈದ್ ಮಿಲನ್ ಹಾಗೂ ರಾಷ್ಟ್ರೀಯ ಏಕತಾ ಮುಶಾಯಿರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಹ್ವಾನಿತ ಕವಿಗಳು ಹಾಗೂ ಸ್ಥಳೀಯ ಕವಿಗಳು ತಮ್ಮ ಮನೋಹರ ಕವನಗಳ ಮೂಲಕ ಪ್ರೇಕ್ಷಕರನ್ನು ಮನಮೋಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನಾ ಮುಫ್ತಿ ಮೊಹಮ್ಮದ್ ಅಲಿ ವಹಿಸಿದ್ದು, ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಾ ಪತ್ರ ಹಾಗೂ ತಲಾ ರೂ. 1,000 ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಡಾ. ಅನೀಸ್ ಸಿದ್ದೀಖಿ ಹಾಗೂ ಶರೀಫ್ ಅಹ್ಮದ್ ಶರೀಫ್ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಠಾಣೆಯ ಪಿಎಸ್‌ಐ ನವೀನ್, ಇನಾಯತುಲ್ಲಾ ಶಾಬಂದ್ರಿ ಹಾಗೂ ಮೌಲಾನಾ ಮುಹಮ್ಮದ್ ಇಲ್ಯಾಸ್ ನದ್ವಿ ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳ ಗಣ್ಯರು ಹಾಜರಿದ್ದು, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಮೌಲಾನಾ ಮುಫ್ತಿ ಮೊಹಮ್ಮದ್ ಅಲಿ, ಉರ್ದು ಭಾಷೆಯ ಪ್ರಚಾರ ಮತ್ತು ರಾಷ್ಟ್ರೀಯ ಏಕತೆ, ಸಮುದಾಯ ಸೌಹಾರ್ದತೆಗೆ ಅಕಾಡೆಮಿ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು. ಭಟ್ಕಳದಲ್ಲಿ ಉರ್ದು ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಸೂಕ್ತ ಜಾಗವನ್ನು ಮಂಜೂರು ಮಾಡಲು ತಹಶೀಲ್ದಾರ್‌ರನ್ನು ಮನವಿ ಮಾಡಿದರು. ಎರಡನೇ ಅಧಿವೇಶನದಲ್ಲಿ ಮುಶಾಯಿರಾ (ಉರ್ದು ಕವಿಗೋಷ್ಟಿ) ಕಾರ್ಯಕ್ರಮ ನಡೆಯಿತು. ಹೈದರಾಬಾದ್‌ನ ಖ್ಯಾತ ಕವಿ ಸರ್ದಾರ್ ಸಲೀಂ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಅಬ್ದುಲ್ ಕಾದಿರ್ ನಾಜಿಂ, ಪ್ರೊ. ರಿಯಾಝ್ ಮಹಮೂದ್, ಡಾ. ದಾವೂದ್ ಮೊಹ್ಸಿನ್, ಡಾ. ನಾತಿಕ್ ಅಲಿ ಪೂರಿ, ಅನ್ವರ್ ಖಾನ್, ಶೇಖ್ ಹಬೀಬ್, ಅಹ್ಮದ್ ಬಾಷಾ ಸಾಗರ್, ಶರೀಫ್ ಅಹ್ಮದ್ ಶರೀಫ್, ಅಸ್ಲಂ ಬನಾರಸಿ, ತನ್ವೀರ್ ಅಹ್ಮದ್ ಅಝೀಮ್, ಸರ್ದಾರ್ ಸಲೀಂ, ಸಿರಾಜ್ ಶೋಲಾಪುರಿ ಹಾಗೂ ರಫೀಕ್ ಸರ್ವರ್ ಸೇರಿದಂತೆ ಅತಿಥಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಇದೇ ವೇಳೆ ಸ್ಥಳೀಯ ಕವಿಗಳಾದ ಡಾ. ಮೊಹಮ್ಮದ್ ಹನೀಫ್ ಶಬಾಬ್, ಇಕ್ಬಾಲ್ ಸಯೀದಿ, ಇಬ್ನ್ ಹಸನ್, ಮೌಲಾನಾ ಸಮಾನ್ ಖಲೀಫಾ ನದ್ವಿ ಹಾಗೂ ಸುಹೈಲ್ ಅರ್ಷಿ ತಮ್ಮ ಕವನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ವಾರ್ತಾ ಭಾರತಿ 16 Apr 2026 10:53 pm

Afzalpur | ಪ್ರಕಾಶ್ ಜಮಾದಾರ ಹೇಳಿಕೆಗೆ ಮಾಲಿಕಯ್ಯ ಗುತ್ತೇದಾರ್ ಬೆಂಬಲಿಗರಿಂದ ತಿರುಗೇಟು

ಅಫಜಲಪುರ: ದಿವಂಗತ ವಿಠ್ಠಲ್ ಹೇರೂರ ಅವರ ಹೆಸರನ್ನು ಬಳಸಿ ರಾಜಕಾರಣ ಮಾಡುತ್ತಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ತಮ್ಮ ಹಿಂದಿನ ಇತಿಹಾಸವನ್ನು ಮರೆತಿದ್ದಾರೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ರಾಮಣ್ಣಾ ನಾಯಕೋಡಿ ಆರೋಪಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಠ್ಠಲ್ ಹೇರೂರ ಅವರು ಚುನಾವಣೆಗೆ ಸ್ಪರ್ಧಿಸಿದ ವೇಳೆ ಮೋಸ ಮಾಡಿ ಎಂ.ವೈ. ಪಾಟೀಲ್ ಅವರಿಗೆ ಬೆಂಬಲ ನೀಡಿದ ವಿಚಾರವನ್ನು ಕೋಲಿ ಸಮಾಜ ಮರೆತಿಲ್ಲ ಎಂದು ಹೇಳಿದರು. ನೀವು ಎಂ.ವೈ. ಪಾಟೀಲ್ ಹಿಂಬಾಲಕರಾಗಿ ಕೋಲಿ ಸಮಾಜಕ್ಕೆ ಎಷ್ಟು ನ್ಯಾಯ ಒದಗಿಸಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಯಾವುದೇ ಪಕ್ಷದ ಸಿದ್ಧಾಂತ ಅಥವಾ ಬದ್ಧತೆ ಇಲ್ಲ ಎಂದು ಟೀಕಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮುಖಂಡ ದೇವಿಂದ್ರ ಜಮಾದಾರ ಮಾತನಾಡಿ, ಮಾಲಿಕಯ್ಯ ಗುತ್ತೇದಾರ್ ಅವರ ಅವಧಿಯಲ್ಲಿ ಕೋಲಿ ಸಮಾಜದ ಅನೇಕ ಮಂದಿಗೆ ಪ್ರಮುಖ ಹುದ್ದೆಗಳು ಲಭಿಸಿವೆ. ಜ್ಯೋತಿ ಜಮಾದಾರ, ರುಕ್ಮಿಣಿ ಜಮಾದಾರ ತಾಪಂ ಅಧ್ಯಕ್ಷರಾಗಿ, ರಾಮಣ್ಣಾ ನಾಯಕೋಡಿ ಎಪಿಎಂಸಿ ಅಧ್ಯಕ್ಷರಾಗಿ, ಪುಂಡಲೀಕ ಕಟ್ಟಿಮನಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇರಿದಂತೆ ಹಲವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಮುಸ್ಲಿಂ ಸಮುದಾಯದ ಮುಖಂಡ ಜಮೀಲ್ ಗೌಂಡಿ ಮಾತನಾಡಿ, ಮಕ್ಬೂಲ್ ಪಟೇಲ್, ಪಪ್ಪು ಪಟೇಲ್, ಚಾಂದಪಾಷಾ ಅರ್ಜುಣಗಿ, ಅಕಲಾಕ್ ಸೋಲಾಪುರ, ಫಿರೋಜ್ ಜಾಗಿರದಾರ, ನಬೀಲಾಲ್ ಮಾಶಾಳಕರ ಸೇರಿದಂತೆ ಅನೇಕ ಮಂದಿಗೆ ವಿವಿಧ ಹುದ್ದೆಗಳ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಂಜೂರು ಅಹ್ಮದ್ ಅಗರಖೇಡ, ಶಂಕರಲಿಂಗ ಮೇತ್ರಿ, ಸುರೇಶ್ ಹಲಸಂಗಿ, ನಿಜಾಮುದ್ದೀನ್ ಜಮಾದಾರ, ಅವಧೂತ ಜಮಾದಾರ ಬನ್ನಟ್ಟಿ, ವಿಜುಗೌಡ ಪಾಟೀಲ್, ಶ್ರೀಮಂತ ಭಂಡಾರಿ, ರವಿ ಪಾಟೀಲ್, ವೀರಣ್ಣ ಬೂಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 10:50 pm

ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇಸ್ರೇಲ್ ಹಾಗೂ ಲೆಬನಾನ್ ದೇಶಗಳು 10 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ. ಗಡಿಭಾಗದಲ್ಲಿ ಕಳೆದ ಹಲವು ವಾರಗಳಿಂದ ತೀವ್ರಗೊಂಡಿದ್ದ ಉದ್ವಿಗ್ನತೆಯ ನಡುವೆ ಈ ಅನಿರೀಕ್ಷಿತ ರಾಜತಾಂತ್ರಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್

ಒನ್ ಇ೦ಡಿಯ 16 Apr 2026 10:42 pm

ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್; ಎಡಗೈ ವೇಗಿಗಳ ಕ್ಲಬ್‌ ಗೆ ಸೇರಿದ ಅರ್ಷದೀಪ್ ಸಿಂಗ್

ಹೊಸದಿಲ್ಲಿ, ಎ.16: ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಗಳನ್ನು ಪಡೆದರು. ಈ ಮೂಲಕ ಐಪಿಎಲ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿಗಳ ವಿಶೇಷ ಕ್ಲಬ್‌ ಗೆ ಪ್ರವೇಶಿಸಿದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಷದೀಪ್ ಅವರು ಇನಿಂಗ್ಸ್‌ನ ಎರಡನೇ ಓವರ್‌ ನ ಮೊದಲ ಎಸೆತದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ ಅವರನ್ನು 2 ರನ್‌ ಗೆ ಔಟ್ ಮಾಡಿದರು. ಇದರೊಂದಿಗೆ ಐಪಿಎಲ್‌ ನಲ್ಲಿ ತಮ್ಮ 100ನೇ ವಿಕೆಟ್ ಪೂರೈಸಿದರು. ಮುಂಬೈ ತಂಡವು ಚೇತರಿಸಿಕೊಳ್ಳುವ ಮೊದಲೇ ಅರ್ಷದೀಪ್ ಮತ್ತೊಮ್ಮೆ ಆಘಾತ ನೀಡಿದರು. ಎರಡನೇ ಓವರ್‌ ನ ಎರಡನೇ ಎಸೆತದಲ್ಲಿ ಮಾಜಿ ನಾಯಕ ಸೂರ್ಯಕುಮಾರ ಯಾದವ್ (0) ಅವರ ವಿಕೆಟ್ ಪಡೆದರು. ಅವಳಿ ವಿಕೆಟ್ ಪಡೆದ ಅರ್ಷದೀಪ್ ಅವರು ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಎಡಗೈ ವೇಗಿಗಳಾದ ಟ್ರೆಂಟ್ ಬೌಲ್ಟ್, ಜಯದೇವ್ ಉನದ್ಕಟ್, ಆಶೀಷ್ ನೆಹ್ರಾ ಹಾಗೂ ಝಹೀರ್ ಖಾನ್ ಅವರನ್ನು ಒಳಗೊಂಡ ವಿಶೇಷ ಪಟ್ಟಿಗೆ ಸೇರಿದರು. ಅರ್ಷದೀಪ್ ಅವರಿಗೆ ಹಿಂದಿನ 11 ಐಪಿಎಲ್ ಇನಿಂಗ್ಸ್‌ಗಳಲ್ಲಿ ಪವರ್‌ ಪ್ಲೇನಲ್ಲಿ ಪಡೆದ ಮೊದಲ ವಿಕೆಟ್ ಇದಾಗಿದೆ. ಅರ್ಷದೀಪ್ ಅವರ ಸ್ಪೆಲ್ ಮುಂಬೈಗೆ ಆರಂಭಿಕ ಆಘಾತ ನೀಡಿದಷ್ಟೇ ಅಲ್ಲದೆ, ಪಂಜಾಬ್ ಪಾಳಯದಲ್ಲಿ ಹರ್ಷ ಮೂಡಿಸಿತು. ಆರು ಓವರ್‌ ಗಳ ನಂತರ 48 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ಕ್ವಿಂಟನ್ ಡಿಕಾಕ್ ಹಾಗೂ ನಮನ್ ಧೀರ್ ತಂಡಕ್ಕೆ ಆಸರೆಯಾದರು. ///

ವಾರ್ತಾ ಭಾರತಿ 16 Apr 2026 10:40 pm

ಅನಿಲ್ ಅಂಬಾನಿ ಕುರಿತು ವರದಿಯಲ್ಲಿ ಅನಗತ್ಯ ವಿವರಗಳನ್ನು ಸೇರಿಸಬೇಡಿ: ರಿಪಬ್ಲಿಕ್ ಟಿವಿಗೆ ಬಾಂಬೆ ಹೈಕೋರ್ಟ್ ಸೂಚನೆ

ಮುಂಬೈ, ಎ.16: ಉದ್ಯಮಿ ಅನಿಲ್ ಅಂಬಾನಿಯವರ ಹಣಕಾಸು ವಹಿವಾಟುಗಳು ಮತ್ತು ಅವರ ವಿರುದ್ಧ ನಡೆಯುತ್ತಿರುವ ತನಿಖೆಗಳ ಕುರಿತು ವರದಿ ಮಾಡುವಾಗ ಯಾವುದೇ ಅನಗತ್ಯ ವಿವರಗಳನ್ನು ಸೇರಿಸಬಾರದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮೌಖಿಕವಾಗಿ ಸೂಚಿಸಿದೆ. ನ್ಯಾ. ಆರಿಫ್ ಡಾಕ್ಟರ್ ಅವರು ಸುದ್ದಿವಾಹಿನಿಯ ವಿರುದ್ಧ ಯಾವುದೇ ನಿಷೇಧಾಜ್ಞೆಯನ್ನು ಹೊರಡಿಸಲಿಲ್ಲ. ಆದರೆ ಅಂಬಾನಿ ವಿರುದ್ಧ ವರದಿ ಮಾಡುವಾಗ ಭಾಷೆ ಮತ್ತು ಶೈಲಿಯನ್ನು ಮಿತಗೊಳಿಸುವಂತೆ ಗೋಸ್ವಾಮಿಯವರಿಗೆ ಸೂಚಿಸಿದರು. ಕಾನೂನು ಕಲಾಪಗಳನ್ನು ವರದಿ ಮಾಡದಂತೆ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದರೆ ಅದು ನ್ಯಾಯಾಲಯದ ಆದೇಶಗಳು ಮತ್ತು ದಾಖಲೆಗಳಲ್ಲಿನ ವಾಸ್ತವಾಂಶಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ನ್ಯಾಯಾಧೀಶರು ಹೇಳಿದರು. ಕಳೆದ ಮಾರ್ಚ್‌ನಲ್ಲಿ ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಅಂಬಾನಿ, ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ್ದಿವಾಹಿನಿಯ ವರದಿಗಳು ತನ್ನ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿ ಉಂಟುಮಾಡಿವೆ ಎಂದು ಆರೋಪಿಸಿದ್ದರು. ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್‌ಜಿ ಔಟ್‌ ಲೈಯರ್, ಗೋಸ್ವಾಮಿ ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಅವರ ಅರ್ಜಿಯಲ್ಲಿ ಕೋರಲಾಗಿತ್ತು. ಹಿಂದಿನ ವಿಚಾರಣೆಯಲ್ಲಿಯೂ ನ್ಯಾಯಾಲಯವು ‘ಕೆಳಮಟ್ಟದ’ ಸುದ್ದಿಗಳನ್ನು ಪ್ರಕಟಿಸಬಾರದು ಮತ್ತು ವರದಿಗಾರಿಕೆಯಲ್ಲಿ ಅತಿಶಯೋಕ್ತಿಗಳನ್ನು ಕಡಿಮೆ ಮಾಡಬೇಕು ಎಂದು ರಿಪಬ್ಲಿಕ್ ಟಿವಿ ಹಾಗೂ ಗೋಸ್ವಾಮಿಗೆ ಸೂಚಿಸಿತ್ತು. ಗುರುವಾರದ ವಿಚಾರಣೆ ವೇಳೆ ಅಂಬಾನಿ ಪರ ವಕೀಲ ಮಹೇಶ್ ಜೇಠ್ಮಲಾನಿ, ಅಂಬಾನಿಯವರು ಆಕ್ಷೇಪ ಹೊಂದಿರುವ ರಿಪಬ್ಲಿಕ್ ಟಿವಿಯ ಕಾಮೆಂಟ್‌ ಗಳ ಪಟ್ಟಿಯನ್ನು ಒದಗಿಸಿದರೆ ಮತ್ತು ಇಂತಹ ಹೇಳಿಕೆಗಳು ನಿಜಕ್ಕೂ ಆಕ್ರಮಣಕಾರಿ ಎಂದು ಸುದ್ದಿ ವಾಹಿನಿಯು ಭಾವಿಸಿದರೆ ಅವುಗಳನ್ನು ಪುನರ್‌ಪರಿಶೀಲಿಸಬಹುದು ಎಂದು ತಿಳಿಸಿದರು. ನ್ಯಾಯಾಧೀಶರು ವಾಸ್ತವಿಕ ವರದಿಗಾರಿಕೆ ಮತ್ತು ಪ್ರಕರಣದಲ್ಲಿ ಆಸಕ್ತಿಯನ್ನು ಮೂಡಿಸುವ ವ್ಯಾಖ್ಯಾನಗಳ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದರು. ಸಾರ್ವಜನಿಕರಿಗೆ ವಿಷಯ ತಿಳಿಸುವ ಆಸಕ್ತಿ ಒಂದು ವಿಷಯ. ಆದರೆ ಅನಗತ್ಯ ವಿವರಗಳನ್ನು ಅಥವಾ ಅತಿಶಯೋಕ್ತಿಗಳನ್ನು ಸೇರಿಸುವ ಮೂಲಕ ಆಸಕ್ತಿ ಹುಟ್ಟಿಸುವುದು ಮತ್ತು ಪ್ರಚೋದಿಸುವುದು ಬೇರೆ ವಿಷಯ ಎಂದು ಹೇಳಿದರು. ಪರಸ್ಪರ ಮಾತುಕತೆಗಳ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದೂ ಅವರು ಅಭಿಪ್ರಾಯಪಟ್ಟರು. ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಎ.29ಕ್ಕೆ ಮುಂದೂಡಿದರು.

ವಾರ್ತಾ ಭಾರತಿ 16 Apr 2026 10:40 pm

ಬೆಂಗಳೂರಿನಲ್ಲಿ 11 ಹೊಸ ಎಲಿವೇಟೆಡ್ ಕಾರಿಡಾರ್, ರೋಹಿತ್‌ ವೇಮುಲಾ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ; ಇತರೆ ನಿರ್ಣಯಗಳೇನು?

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 13,262 ಕೋಟಿ ರೂ. ವೆಚ್ಚದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಣದಲ್ಲಿ ತಾರತಮ್ಯ ತಡೆಯಲು 'ಕರ್ನಾಟಕ ರೋಹಿತ್ ವೇಮುಲ ವಿಧೇಯಕ' ಜಾರಿಗೆ ಅನುಮೋದನೆ ದೊರೆತಿದೆ. ಜೊತೆಗೆ 436 ಕೋಟಿ ರೂ. ವೆಚ್ಚದ ಐಓಸಿ ಮೇಲ್ಸೇತುವೆ, ರಾಜಭವನ ಸೇರಿದಂತೆ ಕೆಲವು ಸರ್ಕಾರಿ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಎಎಐಗೆ ವಹಿಸಲು ನಿರ್ಧರಿಸಲಾಗಿದೆ.

ವಿಜಯ ಕರ್ನಾಟಕ 16 Apr 2026 10:33 pm

ಆರೆಸ್ಸೆಸ್ ಶತಮಾನೋತ್ಸವ | ಮುದ್ರಣ ಜಾಹೀರಾತುಗಳಿಗೆ 76.13 ಲಕ್ಷ ರೂ. ವ್ಯಯಿಸಿದ ಕೇಂದ್ರ: RTI ಮಾಹಿತಿ

ಹೊಸದಿಲ್ಲಿ, ಎ.16: ಆರೆಸ್ಸೆಸ್‌ ನ ಶತಮಾನೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ವಿವಿಧ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ 76,13,129 ಲಕ್ಷ ರೂ. ವೆಚ್ಚ ಮಾಡಿದೆ. RTI ಕಾರ್ಯಕರ್ತ ಅಜಯ ಬಸುದೇವ ಬೋಸ್ ಅವರು ಆರೆಸ್ಸೆಸ್ ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ವೆಚ್ಚಗಳ ವಿವರಗಳನ್ನು ಕೋರಿ ಸಲ್ಲಿಸಿದ್ದ RTI ಅರ್ಜಿಗೆ ಉತ್ತರವಾಗಿ ಸಚಿವಾಲಯವು ಈ ಮಾಹಿತಿಯನ್ನು ಒದಗಿಸಿದೆ.

ವಾರ್ತಾ ಭಾರತಿ 16 Apr 2026 10:30 pm

ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಎಚ್.ಡಿ.ದೇವೇಗೌಡರಿಗೆ ಬಹಿರಂಗ ಪತ್ರ; ಮಸೂದೆಯನ್ನು ರದ್ದುಪಡಿಸಲು ನೇತೃತ್ವವಹಿಸುವಂತೆ ಮನವಿ

ಬೆಂಗಳೂರು : ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತಾಗಿ ಕೇಂದ್ರ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಲೇಖಕರು ಬಹಿರಂಗ ಪತ್ರ ಬರೆದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಮಸೂದೆಯನ್ನು ತಡೆಯಲು ಅವರು ನಾಯಕತ್ವವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಮಾಜಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿರುವ ಲೇಖಕರಾದ ನಾಗೇಗೌಡ ಕೀಲಾರ ಹಾಗೂ ರಾಜೇಂದ್ರ ಪ್ರಸಾದ್ ಅವರು, ಕಳೆದ ಒಂದೂಕಾಲು ದಶಕದಲ್ಲಿ ದೆಹಲಿಯ ಒಕ್ಕೂಟ ಸರಕಾರವು (ಮೋದಿ ಸರಕಾರ) ರಾಜ್ಯ ಸರಕಾರಗಳ ಅಧಿಕಾರ, ಹಣ, ಸ್ವಾಯತ್ತತೆಗಳನ್ನು ಕಸಿದುಕೊಳ್ಳುವಂತಹ ಹಲವು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಬಂದಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯೊಳಗೆ ತರುವ ಬಹುದೊಡ್ಡ ಹುನ್ನಾರದಂತೆ ಕಾಣುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳು ಅಲ್ಲಲ್ಲಿ ಪ್ರತಿರೋಧ ತೋರಿದ್ದರಾದರೂ ಸಫಲರಾಗಲು ಸಾಧ್ಯವಾಗಿಲ್ಲ. ಇದೆಲ್ಲವೂ ತಮ್ಮ ಗಮನದಲ್ಲಿರುತ್ತದೆಯಾದರೂ ನೆನಪಿಸುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮೋದಿ ಅವರ ನೇತೃತ್ವದ ಒಕ್ಕೂಟ ಸರಕಾರವು 'ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ'ಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಕಲ ಸಿದ್ದತೆ ನಡೆಸಿದೆ. ಇದು ದಕ್ಷಿಣ ಭಾರತದ ನಾಡು, ನುಡಿ ಮತ್ತು ಜನರನ್ನು ಉತ್ತರ ಭಾರತೀಯರ ದಾಸ್ಯಕ್ಕೆ ದೂಡುವ ಅಧಿಕೃತ ಶಾಸನವಾಗಿ ಹೊರಹೊಮ್ಮಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಾನಂತರದ ಏಳೆಂಟು ದಶಕಗಳ ನಂತರವೂ ಉತ್ತರದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಅಲ್ಲಿನ ಜನಸಂಖ್ಯೆ ಅತಿಯಾಗಿ, ದಕ್ಷಿಣದ ರಾಜ್ಯಗಳಿಗೆಡೆಗೆ ವಲಸೆ ವಿಪರೀತವಾಗಿದೆ. ಇದರಿಂದಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ, ವೃತ್ತಿಪರ ಅವಕಾಶಗಳು ಕಡಿಮೆಯಾಗಿ ಪೈಪೋಟಿ ಅನಾರೋಗ್ಯಕರವಾಗಿದೆ. ಇದೀಗ ಜನಸಂಖ್ಯೆಯ ಆಧಾರದ ಮೇಲೆ ಉತ್ತರದ ರಾಜ್ಯಗಳು ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಲಿವೆ. ಜನಸಂಖ್ಯೆ ನಿಯಂತ್ರಿಸಿದ್ದು ದಕ್ಷಿಣದ ಭಾರತದ ಜನರ ಅಪರಾಧವಾಯಿತೇ?!. ತೆರಿಗೆ ಹಣದ ಪಾಲು, ಅನುದಾನಗಳ ಪಾಲು ಸೇರಿದಂತೆ ಹಲವು ನಿಧಿಗಳ ಹಣದಲ್ಲಿ ದಕ್ಷಿಣದ ರಾಜ್ಯಗಳಿಗೆ ಮೋಸವಾಗುತ್ತಿದೆ. ಒಕ್ಕೂಟ ಸರಕಾರವು ಉತ್ತರ ರಾಜ್ಯಗಳ ಸಂವರ್ಧನೆಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜು ನೀಡುತ್ತಿದ್ದು. ದಕ್ಷಿಣಕ್ಕೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. ಮುಂದೆ ದಕ್ಷಿಣ ದ್ರಾವಿಡ ರಾಜ್ಯಗಳ ಒಟ್ಟು ಕ್ಷೇತ್ರಗಳಿಗಿಂತಲೂ ಉತ್ತರ ಪ್ರದೇಶ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೇ ಅಧಿಕವಾಗುತ್ತದೆ. ಅಲ್ಲಿಗೆ ದಕ್ಷಿಣದ ಕನ್ನಡಿಗರ, ಉಳಿದವರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದಿ ಭಾಷೆಯನ್ನು ಅಧಿಕೃತವಾಗಿ ಹೇರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಒಕ್ಕೂಟ ಸರಕಾರವು ಅನುಸರಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ನಾಗರೀಕ ಸೇವಾ ಪರೀಕ್ಷೆಗಳು ಮತ್ತು ಆಡಳಿತದಲ್ಲೂ ಮೂರನೇ ಭಾಷೆಯಾಗಿ ಹೇರುತ್ತಿದೆ. ಆದರೆ ಉತ್ತರದ ರಾಜ್ಯಗಳು ಎರಡು ಭಾಷೆಗಳ ಪದ್ದತಿಯನ್ನು ಮಾತ್ರ ಅನುಸರಿಸುತ್ತಿವೆ. ಇದೆಂಥಾ ನೀತಿ. ಹಿಂದಿ ಪ್ರಚಾರ ಮತ್ತು ಬಳಕೆಗಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದೆ. ಆದರೆ ಕನ್ನಡಕ್ಕೆ ಸಿಗುತ್ತಿರುವುದೆಷ್ಟು ಎಂದು ನೋಡಿದರೆ ಬಹಳ ಸಂಕಟವಾಗುತ್ತದೆ. ಮುಂದೆ ಹೆಚ್ಚಿನ ಲೋಕಸಭಾ ಕ್ಷೇತ್ರಗಳು 'ಹಿಂದಿ ಭಾಗದವೇ' ಆದಾಗ ನಮ್ಮ ಪರಿಸ್ಥಿತಿ ಏನು?!ಇದುವರೆಗಿನ ಭಾರತದ ಪ್ರಧಾನಿಗಳನ್ನು ಗಮನಿಸಿದರೆ, ಒಟ್ಟು 15 ಜನರಲ್ಲಿ ನೀವು ಮತ್ತು ಪಿ ವಿ ನರಸಿಂಹರಾವ್ ಇಬ್ಬರನ್ನು ಬಿಟ್ಟು ಉಳಿದವರೆಲ್ಲಾ ಉತ್ತರ ಭಾರತೀಯರು. ರಾಜಕೀಯವಾಗಿ ಸಮಾನ ಅವಕಾಶವನ್ನು ದಕ್ಷಿಣ ಭಾರತದ ಜನನಾಯಕರಿಗೆ ಇದುವರೆಗೂ ನೀಡಲಾಗಿಲ್ಲ! ಇನ್ನು ಮುಂದೆ ಅಂತಹ ಆದ್ಯತೆ ಸಿಗುವ ಭರವಸೆ ಇಡಲಾಗುವುದೇ?! ಎಷ್ಟು ದಿನ ಉತ್ತರ ಭಾರತೀಯರ ದಾಸ್ಯದಲ್ಲಿರುವುದು?! ಸಂವಿಧಾನದ ಸಮಾನ ಅವಕಾಶ ಮತ್ತು ಸ್ಥಾನಮಾನ ದಕ್ಷಿಣಕ್ಕೆ ಸಿಗುವುದು ಯಾವಾಗ?! 543 ಕ್ಷೇತ್ರಗಳು ಇದ್ದಾಗಲೇ ಇಲ್ಲದ ಆದ್ಯತೆ, ಅಂದಾಜು 850 ಕ್ಷೇತ್ರಗಳು ಆದಾಗ, ಅದರಲ್ಲೂ ಅಂದಾಜು 305-10 ಕ್ಷೇತ್ರಗಳು ಬಿಮಾರು ಉತ್ತರ ರಾಜ್ಯಗಳೇ ಅದಾಗ ನಮ್ಮ ಪಾಡು ಏನು?! ಎಂದು ಕೇಳಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣದ ರಾಜ್ಯಗಳ ಸಾಂವಿಧಾನಿಕ ಸಾರ್ವಭೌಮತ್ವದ ಅಸ್ತಿತ್ವಕ್ಕೇ ಧಕ್ಕೆಯುಂಟುಮಾಡಲಿದೆ. ನಮ್ಮ‌ ಜನರು ಜನಸಂಖ್ಯೆ ನಿಯಂತ್ರಿಸಿ, ಹಗಲಿರುಳು ದುಡಿದು ಸಂಪಾದಿಸಿ, ವಲಸಿಗರಿಗೂ ಅವಕಾಶಕೊಟ್ಟು, ತಾಯ್ನುಡಿಯನ್ನು ಉಸಿರಾಗಿಸಿಕೊಂಡು ಬಾಳಿ ಬದುಕಿದ್ದಾರೆ. ಅಂತಹ ಬದುಕನ್ನು ಉತ್ತರದ ದಾಸ್ಯಕ್ಕೆ ತಳ್ಳುವ ಈ ಮಸೂದೆಯನ್ನು ಜಾರಿಗೊಳ್ಳಲು ನಿಮ್ಮಂತಹ ಹಿರಿಯ ಸಂಸದೀಯ ನಾಯಕರು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಸಂಸತ್ತಿನ ಎರಡೂ ಸದನಗಳಲ್ಲಿರುವ ಅತ್ಯಂತ ಹಿರೀಕ ಸಂಸದೀಯ ಪಟುವೂ ನೀವೇ ಆಗಿದ್ದೀರಿ. ಅಷ್ಟಲ್ಲದೆ ದಕ್ಷಿಣವನ್ನು ಪ್ರತಿನಿಧಿಸಿರುವ ಪ್ರಧಾನಿಯೂ ನೀವಾಗಿದ್ದಿರಿ. ನಿಮ್ಮ ಪಕ್ಷವು ಬಿಜೆಪಿಯನ್ನು ಬೆಂಬಲಿಸಿರಬಹುದು, ಆದರೆ ಇಂತಹ ಮೋಸದ ಮಸೂದೆಯು ಮಂಡನೆಯನ್ನು ನೀವು ತಡೆಗಟ್ಟಬೇಕು. ನಿಮ್ಮ ಬದುಕಿನ ಸಮಯದಲ್ಲಿ ಇದು ಮಂಡನೆಯಾಗಿ ಜಾರಿಯಾದರೆ ಮುಂದಿನ ಪೀಳಿಗೆಗಳು ನಿಮ್ಮನ್ನು ನೆನೆಯಲಾರವು. ನೀವು ಕೂಡ ಉತ್ತರದ ವಂಚಕರೊಂದಿಗೆ ಸೇರಿ ನಮ್ಮ ನಾಡು, ನುಡಿ, ಜನಕ್ಕೆ ವಂಚಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ಎಲ್ಲಾ ಜನ ನಾಯಕರನ್ನು ಒಗ್ಗೂಡಿ, ಸಮಾಲೋಚಿಸಿ ಈ ಕ್ಷೇತ್ರ ಪುನರ್ವಿಂಗಡಣೆಯ ಮಸೂದೆಯನ್ನು ರದ್ದುಪಡಿಸಲು ನೀವು ನೇತೃತ್ವವಹಿಸಿ. ದಕ್ಷಿಣದ ಭಾರತದ ಜನರಿಗೆ ಒಕ್ಕೂಟ ಸರಕಾರದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ ಮುಂದಾದರೂ ದೊರೆಯುವಂತಾಗಲಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 16 Apr 2026 10:22 pm

ಮಧ್ಯಪ್ರದೇಶ| ಅತ್ಯಾಚಾರ ಆರೋಪ: ಬಿಜೆಪಿ ಕೌನ್ಸಿಲರ್ ಪುತ್ರನ ವಿರುದ್ಧ ಪ್ರಕರಣ ದಾಖಲು

ಭೋಪಾಲ, ಎ. 16: ವಿವಾಹವಾಗುವ ಭರವಸೆ ನೀಡಿ 27 ವರ್ಷದ ಯುವತಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಮಧ್ಯಪ್ರದೇಶದ ಸಾತ್ನಾದ ಬಿಜೆಪಿ ಕೌನ್ಸಿಲರ್ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ. ತಂಡ ಕೌನ್ಸಿಲರ್ ಮನೆ ಮೇಲೆ ದಾಳಿ ನಡೆಸಿದೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಯೋಗೇಂದ್ರ ಸಿಂಗ್ ಪರಿಹಾರ್ ತಿಳಿಸಿದ್ದಾರೆ. ಆತ ಇರುವ ಸ್ಥಳ ಜಬಲ್ಪುರ ಎಂಬುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಜಬಲ್ಪುರದ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಯುವತಿ ಹಲವು ವರ್ಷಗಳಿಂದ ಆರೋಪಿಯ ಸಂಪರ್ಕದಲ್ಲಿದ್ದಳು ಎಂದು ಪರಿಹಾರ್ ತಿಳಿಸಿದ್ದಾರೆ. ವಿವಾಹವಾಗುವ ಭರವಸೆ ನೀಡಿ ಆತ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಆದರೆ, ಈಗ ವಿವಾಹವಾಗುವುದಕ್ಕೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆರೋಪಿಯ ತಾಯಿ ಬಿಜೆಪಿ ಸೇರುವ ಮುನ್ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಕೌನ್ಸಿಲರ್ ಆಗಿದ್ದರು.

ವಾರ್ತಾ ಭಾರತಿ 16 Apr 2026 10:16 pm

Telangana SEEEPC Survey | 12 ಲಕ್ಷಕ್ಕೂ ಹೆಚ್ಚು ಮಂದಿಯಿಂದ ‘ಜಾತಿಯಿಲ್ಲ’ ಎಂಬ ಆಯ್ಕೆ!

ಹೈದರಾಬಾದ್: 2024ರ ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆ (SEEEPC)ಯಲ್ಲಿ ಅನಿರೀಕ್ಷಿತ ಅಂಶಗಳು ಪತ್ತೆಯಾಗಿದ್ದು, ಗಮನಾರ್ಹ ಪ್ರಮಾಣದ ಹಾಗೂ ವೈವಿಧ್ಯಮಯ ಗುಂಪಿನ ನಾಗರಿಕರು ತಮ್ಮನ್ನು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ತೆಲಂಗಾಣ ಜನಸಂಖ್ಯೆಯಲ್ಲಿ 10ನೇ ಅತಿ ದೊಡ್ಡ ಸಮುದಾಯವಾಗಿರುವ ಈ ಗುಂಪಿನ 12 ಲಕ್ಷ ಮಂದಿ ಸಾಂಪ್ರದಾಯಿಕ ಜಾತಿ ಪ್ರವರ್ಗದಲ್ಲಿ ಗುರುತಿಸಿಕೊಳ್ಳಲು ನಿರಾಕರಿಸಿ, ಅದನ್ನು ಮೀರುವ ನಾಗರಿಕ ಗುರುತನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ದತ್ತಾಂಶದಲ್ಲಿ ಪ್ರಧಾನವಾಗಿ ನಗರವಾಸಿ, ಸಾಕಷ್ಟು ಸುಶಿಕ್ಷಿತ ಹಾಗೂ ವೃತ್ತಿಪರ ಮತ್ತು ಅರ್ಹತೆ ಆಧಾರಿತ ವಲಯಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ವಿವರಗಳಿವೆ. ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಬಹುತೇಕ ನಾಗರಿಕರು ಹೈದರಾಬಾದ್‌ ನ ವಿಸ್ತರಿತ ಮಹಾನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಕ್ಷಣ ಪಡೆದ ವೃತ್ತಿಪರರು. ವಿಶೇಷವಾಗಿ ಐಎಎಸ್ ಅಥವಾ ಐಪಿಎಸ್‌ನಂತಹ ಉನ್ನತ ಸರ್ಕಾರಿ ಸೇವೆಗಳಲ್ಲಿ ಉದ್ಯೋಗದಲ್ಲಿರುವವರು ಅಥವಾ ಸಾಫ್ಟ್‌ವೇರ್, ಬಿಪಿಒ ಹಾಗೂ ಔಷಧ ಕ್ಷೇತ್ರದಂತಹ ನಗರ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅವರ ಕುಟುಂಬಗಳು ಸಾಮಾನ್ಯವಾಗಿ ಮಧ್ಯಮದಿಂದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ್ದು, ಉತ್ತಮ ಮನೆಗಳಲ್ಲಿ ವಾಸಿಸುತ್ತಿದ್ದು, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಸೀಮಿತ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಸಾರ್ವಜನಿಕವಾಗಿ ‘ಜಾತಿಯಿಲ್ಲ’ ಎಂದು ಹೇಳಿಕೊಂಡಿರುವ ಶೇ. 43 ಮಂದಿ ತಮ್ಮ ಬಳಿ ಜಾತಿ ಪ್ರಮಾಣಪತ್ರವಿದೆ ಎಂದು ತಿಳಿಸಿದ್ದಾರೆ. ಇವರಲ್ಲಿ ಶೇ. 13.5 ಮಂದಿ ಈ ಹಿಂದೆ ಮೀಸಲಾತಿ ಸೌಲಭ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ. ಈ ವ್ಯಕ್ತಿವಿವರಗಳು ಜಾತಿ ಸಂಬಂಧಿತ ಮಾರ್ಗಗಳ ಮೂಲಕ ಅವರ ಚಲನಶೀಲತೆಯ ಪಥ ರೂಪುಗೊಂಡಿರುವುದನ್ನು ಸೂಚಿಸುತ್ತವೆ. ಇದೀಗ ಜಾತಿ ತಟಸ್ಥತೆಯನ್ನು ಆಯ್ಕೆ ಮಾಡಿಕೊಂಡಿರುವುದಾದರೂ, ಅವರು ಇನ್ನೂ ಸಂಪೂರ್ಣವಾಗಿ ಸಮಾನವಾದ ಸಾಂಸ್ಥಿಕ ಮತ್ತು ವೃತ್ತಿಪರ ಜಾಗಗಳಲ್ಲಿ ನೆಲೆಗೊಳ್ಳಿಲ್ಲವೆಂಬುದು ಗಮನಾರ್ಹ. ತೆಲಂಗಾಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯಲ್ಲಿ ‘ಜಾತಿಯಿಲ್ಲ’ ಎಂಬ ಹೊಸ ಪ್ರವರ್ಗವನ್ನು ಪರಿಚಯಿಸಲಾಗಿದ್ದು, ಅದಕ್ಕೆ ಕ್ರಮ ಸಂಖ್ಯೆ 999 ಅನ್ನು ನೀಡಲಾಗಿದೆ. ಈ ಪ್ರವರ್ಗವನ್ನು ವಿಶಾಲವಾಗಿ ಇತರೆ ಜಾತಿಗಳು ಅಥವಾ ಸಾಮಾನ್ಯ ವರ್ಗಗಳಡಿ ವರ್ಗೀಕರಿಸಲಾಗಿದ್ದರೂ, ಇದು ಸಾಮಾಜಿಕವಾಗಿ ವಿಶಿಷ್ಟ ಗುಂಪನ್ನು ಪ್ರತಿನಿಧಿಸುತ್ತದೆ. ‘ಜಾತಿಯಿಲ್ಲ’, ‘ಧರ್ಮವಿಲ್ಲ’ ಹಾಗೂ ‘ಯಾವುದೇ ಸಾಮಾಜಿಕ ಪ್ರವರ್ಗವಿಲ್ಲ’ ಎಂಬ ತಟಸ್ಥ ಪ್ರವರ್ಗಗಳನ್ನು ಪರಿಗಣಿಸಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿಗೆ ಪ್ರತಿಯಾಗಿ ತೆಲಂಗಾಣ ಸರ್ಕಾರ ಈ ಸೇರ್ಪಡೆ ಮಾಡಿದೆ. ಸೌಜನ್ಯ: deccanherald.com

ವಾರ್ತಾ ಭಾರತಿ 16 Apr 2026 10:14 pm

ಮೀಸಲಾತಿ ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ, ಎ. 16: ದೇಶವೊಂದರ ಇತಿಹಾಸದಲ್ಲಿ ಕೆಲವು ‘‘ಮಹತ್ವದ ಕ್ಷಣಗಳು’’ ಇರುತ್ತವೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯು ಅಂತಹ ಕ್ಷಣಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ‘‘ಮಹಿಳಾ ಮೀಸಲಾತಿಯು ಸುಮಾರು 30 ವರ್ಷಗಳ ಹಿಂದಿನ ಕಲ್ಪನೆಯಾಗಿದೆ ಎಂದು ಮಸೂದೆಯ ಜಾರಿ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಾ ಅವರು ಹೇಳಿದರು. ‘‘25-30 ವರ್ಷಗಳ ಹಿಂದೆಯೇ ಇಂಥ ಮಸೂದೆಯೊಂದರ ಅಗತ್ಯವಿತ್ತು. ಈ ಕಲ್ಪನೆ ಮೊದಲು ಬಂದಾಗಲೇ ನಾವು ಅದನ್ನು ಜಾರಿಗೊಳಿಸಬೇಕಾಗಿತ್ತು. ಅದು ಸಾಧ್ಯವಾಗಿದ್ದರೆ, ಇಂದು ಆ ಕಲ್ಪನೆಯು ಗಣನೀಯವಾಗಿ ಪಕ್ವವಾಗಿರುತ್ತಿತ್ತು. ಅದು ಕಾಲ ಕಾಲಕ್ಕೆ ಅಗತ್ಯವಿದ್ದಂತೆ ಸುಧಾರಣೆಗಳನ್ನು ಕಂಡಿರುತ್ತಿತ್ತು. ಅಂತಿಮವಾಗಿ, ಪ್ರಜಾಪ್ರಭುತ್ವದ ನೈಜ ಸೌಂದರ್ಯವೇ ಇದಾಗಿದೆ’’ ಎಂದು ಮೋದಿ ಹೇಳಿದರು. ‘‘ದೇಶವೊಂದರ ಇತಿಹಾಸದಲ್ಲಿ ಕೆಲವು ಮಹತ್ವದ ಕ್ಷಣಗಳಿರುತ್ತವೆ. ಆ ಕಾಲದ ಸಮಾಜದ ಮಾನಸಿಕ ಸ್ಥಿತಿ ಮತ್ತು ಆ ಕ್ಷಣವನ್ನು ಗುರುತಿಸುವ ನಾಯಕತ್ವದ ಸಾಮರ್ಥ್ಯವು ಆ ಕ್ಷಣವನ್ನು ರಾಷ್ಟ್ರೀಯ ಪರಂಪರೆಯಾಗಿ ಮಾರ್ಪಡಿಸುತ್ತದೆ. ಇದು ಭಾರತದ ಸಂಸದೀಯ ಇತಿಹಾಸದಲ್ಲಿ ನಿಖರವಾಗಿ ಅಂಥ ಒಂದು ಕ್ಷಣವಾಗಿದೆ’’ ಎಂದು ಮೋದಿ ಅಭಿಪ್ರಾಯಪಟ್ಟರು. ಈ ನಿರ್ಧಾರವು ಒಂದು ರಾಜಕೀಯ ಪಕ್ಷಕ್ಕೆ ಲಾಭ ತರುವುದಿಲ್ಲ, ಇದು ದೇಶದ ಪ್ರಜಾಪ್ರಭುತ್ವದ ಪರವಾಗಿದೆ ಎಂದು ಅವರು ಹೇಳಿದರು. ‘‘ಈ ಹಕ್ಕನ್ನು ಮಹಿಳೆಯರಿಗೆ ನೀಡುವುದನ್ನು ವಿರೋಧಿಸಿದವರನ್ನು ಈ ದೇಶದ ಮಹಿಳೆಯರು ಕ್ಷಮಿಸಿಲ್ಲ. ಅವರು ಅದರ ಪರಿಣಾಮಗಳನ್ನು ಎದುರಿಸಿದ್ದಾರೆ. ನಾವೆಲ್ಲಾ ಜೊತೆಯಾಗಿ ಮುಂದುವರಿದರೆ, ಈ ನಿರ್ಧಾರದ ಪ್ರಯೋಜನವನ್ನು ಯವುದೇ ಒಂದು ರಾಜಕೀಯ ಪಕ್ಷ ಪಡೆದುಕೊಳ್ಳುವುದಿಲ್ಲ, ಬದಲಿಗೆ ಅದು ದೇಶದ ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುತ್ತದೆ’’ ಎಂದು ಪ್ರಧಾನಿ ಮೋದಿ ನುಡಿದರು.

ವಾರ್ತಾ ಭಾರತಿ 16 Apr 2026 10:10 pm

ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ: ಪೋಪ್ ಲಿಯೋ

ಕ್ಯಾಮರೂನ್, ಎ.16: ಜಾಗತಿಕ ರಾಜಕೀಯ ಮತ್ತು ಯುದ್ಧ ಪರಿಸ್ಥಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಲಿಯೋ, “ಕ್ರೂರ ಮನೋಭಾವದ ನಾಯಕರು ಜಗತ್ತನ್ನು ಆಳುತ್ತಿದ್ದಾರೆ” ಎಂದು ಹೇಳಿದ್ದಾರೆ. ಕ್ಯಾಮರೂನ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗಳಿಗೆ ಶತಕೋಟಿ ಡಾಲರ್‌ ಗಳನ್ನು ಖರ್ಚು ಮಾಡುವ ಪ್ರವೃತ್ತಿಯನ್ನು ಖಂಡಿಸಿದರು. “ಕೆಲವೇ ನಿರಂಕುಶ ನಾಯಕರು ಜಗತ್ತನ್ನು ಧ್ವಂಸಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು. ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಬಳಿಕ ಪ್ರತಿಕ್ರಿಯಿಸಿದ ಪೋಪ್, “ಯುದ್ಧದ ಮಾಸ್ಟರ್ಸ್‌ ಗೆ ನಾಶಮಾಡಲು ಒಂದು ಕ್ಷಣ ಸಾಕು. ಆದರೆ ಪುನರ್‌ ನಿರ್ಮಾಣಕ್ಕೆ ಇಡೀ ಜೀವನ ಸಾಲದು ಎಂಬುದನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು. “ಕೊಲೆ ಮತ್ತು ವಿನಾಶಕ್ಕೆ ಶತಕೋಟಿ ಹಣ ಖರ್ಚಾಗುತ್ತದೆ. ಆದರೆ ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲಗಳು ಎಲ್ಲಿಯೂ ಕಾಣುತ್ತಿಲ್ಲ” ಎಂದು ಪೋಪ್ ಲಿಯೋ ಅವರು ಬೇಸರ ವ್ಯಕ್ತಪಡಿಸಿದರು. ಜಗತ್ತಿನ ನಾಯಕರು ಶಾಂತಿ, ಮಾನವೀಯತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಪೋಪ್ ಲಿಯೋ ಕರೆ ನೀಡಿದರು.

ವಾರ್ತಾ ಭಾರತಿ 16 Apr 2026 10:05 pm

ಕಾಳಗಿ | ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ

ಕಾಳಗಿ: ದಕ್ಷಿಣಕಾಶಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಕಂಠ ಕಾಳೇಶ್ವರ ಅಲಂಕೃತ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವುದರೊಂದಿಗೆ ಜಾತ್ರೆ ತೆರೆ ಕಂಡಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ದೇವಸ್ಥಾನದಿಂದ ಪ್ರಾರಂಭವಾದ ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಉತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಪಟ್ಟಣದ ಮುತ್ತನಕಟ್ಟಿ ಅಂಬಿಗರ ಚೌಡಯ್ಯ ದೇವಸ್ಥಾನ, ಚಾಮುಂಡೇಶ್ವರ ದೇವಸ್ಥಾನ, ಮರ್ಗಮ್ಮ ದೇವಸ್ಥಾನ, ಮುಖ್ಯಬಜಾರ ರಸ್ತೆ, ಚೌವಡಿ ಕಟ್ಟಿ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಅರ್ಚಕರ ಮನೆಗೆ ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾ ತಂಡಗಳು ಹಾಗೂ ಡೊಳ್ಳು ಭಾಜ, ಭಜಂತ್ರಿ, ಹಲಗೆ, ಭಜನೆಗಳು ಮೆರಗು ನೀಡಿದವು. ಯುವಕರ ತಂಡ ಪಲ್ಲಕ್ಕಿ ಉತ್ಸವದಲ್ಲಿ ದಾಸೋಹ ವ್ಯವಸ್ಥೆ ಮಾಡಿತ್ತು. ನಂತರ ದೇವಸ್ಥಾನ ಆವರಣದಲ್ಲಿ ಪೈಲ್ವಾನರಿಂದ ನಡೆದ ಜಂಗಿ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಹಾಗೂ ನೀಲಕಂಠ ಕಾಳೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಶರಣಗೌಡ ಪೊಲೀಸ್ ಪಾಟೀಲ, ಜಗದೀಶ್ ಮಾಲಿಪಾಟೀಲ, ನೀಲಕಂಠ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಅನೀಲಕುಮಾರ ಮಾಲಿಪಾಟೀಲ, ವೇದಪ್ರಕಾಶ ಮೊಟಗಿ, ಸಂತೋಷ ಪಂತಗೆ, ಪರಮೇಶ್ವರ ಮಡಿವಾಳ, ಬಂಡಪ್ಪ ಬೊಮ್ಮಣ್ಣಿ, ಸೋಮಣ್ಣ ಮಕಪನೋರ, ಜಗನ್ನಾಥ ಚಂದನಕೇರಿ, ಶರಣಪ್ಪ ಮುಕರಂಬಿ, ಶಿವಕಿರಣ ಪ್ಯಾಟಿಮಠ, ನಾಗಯ್ಯಸ್ವಾಮಿ ಮಠಪತಿ, ಬಸವರಾಜ ಸಿಂಗಶೆಟ್ಟಿ, ಸಂತೊಷ ಕಡಬೂರ, ಯಲ್ಲಾಲಿಂಗ ಉನ್ನಿ, ಉದಯಕುಮಾರ ಸುಂಠಾಣ, ರೇವಣಸಿದ್ದ ಕಲಶೆಟ್ಟಿ, ಶಾಮರಾವ ಕಡಬೂರ, ಸುನೀಲ್ ರಾಜಾಪೂರ ಸೇರಿದಂತೆ ಅನೇಕರು ಇದ್ದರು.

ವಾರ್ತಾ ಭಾರತಿ 16 Apr 2026 10:02 pm

ಸುರಪುರ | ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ವಿವರವುಳ್ಳ ಗ್ರಂಥ ಬಿಡುಗಡೆ

ಸುರಪುರ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಅಪರೂಪದ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಅಪ್ಪಾರಾವ್ ವಕೀಲರ ಆತ್ಮಚರಿತ್ರೆ ಆಟೋ ಬಯೋಗ್ರಾಫಿ ಆಫ್ ಆನ್ ಅನಾನಿಮಸ್ ಫ್ರೀಡಮ್ ಫೈಟರ್ ಗ್ರಂಥವನ್ನು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಡಾ. ಲಕ್ಷ್ಮಾರೆಡ್ಡಿ ಅವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ ಮಾತನಾಡಿ, ಹೈದರಾಬಾದ್ ವಿಮೋಚನ ಹೋರಾಟದ ಅಜ್ಞಾತ ಪುಟಗಳನ್ನು ದಿವಂಗತ ಅಪ್ಪಾರಾವ್ ವಕೀಲರು ಈ ಕೃತಿಯ ಮೂಲಕ ಸಮಾಜದ ಮುಂದೆ ತಂದಿದ್ದು, ಇದು ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ ಎಂದು ಹೇಳಿದರು. ಗ್ರಂಥದ ಮುದ್ರಣ ವೆಚ್ಚವನ್ನು ಡಾ. ಲಕ್ಷ್ಮಾರೆಡ್ಡಿ ವಹಿಸಿಕೊಂಡಿದ್ದು, ಸುರಪುರ ಕನ್ನಡ ಸಾಹಿತ್ಯ ಸಂಘದಿಂದ ಈ ಕೃತಿ ಪ್ರಕಟಿಸಲಾಗಿದೆ. ಕಾರ್ಯಕ್ರಮದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ಹಾಗೂ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಾದ ಜೆ ಆಗಸ್ಟಿನ್ ನ್ಯಾಯವಾದಿ, ಕೋಶ್ಯಾಧ್ಯಕ್ಷರಾದ ಪ್ರಕಾಶ್ ಚಂದ್ ಜೈನ್, ಉಸ್ಮಾನಿಯಾ ವಿಶ್ವವಿದ್ಯಾಲಯ ಹೈದರಾಬಾದ್ ನ ಕಲಾ ವಿಭಾಗದ ಡೀನ್ ಆಗಿರುವ ಡಾ.ಲಿಂಗಪ್ಪ ಗೋನಾಳ ಹಾಗೂ ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರೊಫೆಸರ್ ಕೊಂಡ ರಾಮಚಂದ್ರರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಹೈಕೋರ್ಟ್ ಗೌರ್ನ್ಮೆಂಟ್ ಅಡ್ವೊಕೇಟ್ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಡಾ. ಲಕ್ಷ್ಮಾರೆಡ್ಡಿ ಅವರು ಸೇರಿದಂತೆ ಇತರ ಬಂಧು ಬಳಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:54 pm

ಸುರಪುರ | ರಾಜುಗೌಡ, ಶರಣಗೌಡ ಕಂದಕೂರ ಮುಂಬರುವ ದಿನಗಳಲ್ಲಿ ಸಚಿವರಾಗುತ್ತಾರೆ : ರಂಭಾಪುರಿ ಶ್ರೀ

ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ರಾಜಕಾರಣಿಗಳಾದ ನರಸಿಂಹ ನಾಯಕ ರಾಜುಗೌಡ ಹಾಗೂ ಶರಣಗೌಡ ಕಂದಕೂರು ಅವರು ಮುಂದಿನ ದಿನಗಳಲ್ಲಿ ಸಚಿವರಾಗಲಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದರು. ತಾಲೂಕಿನ ದೇವಪುರ ಗ್ರಾಮದಲ್ಲಿ ಜಡಿ ಶಾಂತಲಿಂಗೇಶ್ವರ ದೇವಸ್ಥಾನದ ಕಳಸಾರೋಹಣದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸರ್ಕಾರ ರಚನೆಯಾಗಲಿದ್ದು, ಆ ಸರ್ಕಾರದಲ್ಲಿ ಈ ಇಬ್ಬರು ನಾಯಕರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದರು. ರಾಜುಗೌಡ ಮತ್ತು ಶರಣಗೌಡ ಇಬ್ಬರೂ ಅಭಿವೃದ್ಧಿ ಪರ ಧೋರಣೆಯ ಯುವ ನಾಯಕರು ಆಗಿದ್ದು, ವಿಧಾನಸೌಧದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಧ್ವನಿಯನ್ನು ಗಟ್ಟಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ನೀಡುವ ಇವರಿಂದ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ರಾಜುಗೌಡ ಅವರು ನನಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ರಂಭಾಪುರಿ ಶ್ರೀಗಳ ಆಶೀರ್ವಾದದಿಂದ ನಮ್ಮ ಕುಟುಂಬ ರಾಜಕೀಯವಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ರಾಜುಗೌಡ ಅವರಿಗೆ ಸಹ ಆಶೀರ್ವಾದ ದೊರೆಯಲಿ ಎಂದು ವಿನಂತಿಸಿದರು. ಮಾಜಿ ಸಚಿವ ರಾಜುಗೌಡ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಶರಣಗೌಡ ಕಂದಕೂರು ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ರಂಭಾಪುರಿ ಶ್ರೀಗಳು ಮಾಜಿ ಸಚಿವ ರಾಜುಗೌಡ ಶಾಸಕ ಶರಣಗೌಡ ಕಂದಕೂರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಿಎಸ್ ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ ದಯಾನಂದ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇವಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆಳಗೆ ಮುದ್ರ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಕಲಬುರ್ಗಿಯ ಚವದಾಪುರಿ ಮಠದ ಡಾ. ರಾಜಶೇಖರ ಶಿವಾಚಾರ್ಯ, ತೊನಸನಹಳ್ಳಿಯ ರೇವಣಸಿದ್ದ ಶಿವಾಚಾರ್ಯ, ನವಲಕಲ್ಲದ ಸೋಮನಾಥ ಶಿವಾಚಾರ್ಯ, ರುಕ್ಮಾಪುರ ಹಿರೇಮಠದ ಗುರು ಶಾಂತ ಮೂರ್ತಿ ಶಿವಾಚಾರ್ಯ, ಲಕ್ಷ್ಮಿಪುರ ಶ್ರೀ ಗಿರಿ ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಹಾಗೂ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ, ವೇಣು ಮಾಧವ ನಾಯಕ, ಸುರೇಶ ಆರ್ ಸಜ್ಜನ್, ವೀರೇಶ ಚಿಂಚೋಳಿ, ಸಿದ್ದನಗೌಡ ಕರಿಬಾವಿ, ಶಂಕರ ನಾಯಕ, ಮಹೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:51 pm

ದ್ವಿತೀಯ ಪಿಯುಸಿ ಪರೀಕ್ಷೆ-02: ನೋಂದಣಿಗೆ ವಿದ್ಯಾರ್ಥಿಗಳ ಪರದಾಟ

ಉಡುಪಿ: ಎ.30ರಿಂದ ಪ್ರಾರಂಭಗೊಳ್ಳುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕಾಗಿ ಆನ್‌ಲೈನ್ ಮೂಲಕ ನೋಂದಾಯಿ ಸಲು ಎ.17 ಶುಕ್ರವಾರ ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದಾಗಿ ವೆಬ್‌ಸೈಟ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಇದರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೊಂದಾಯಿಸಲು ವಿದ್ಯಾರ್ಥಿಗಳು ಪರದಾಡುತಿದ್ದಾರೆ ಎಂದು ಉಡುಪಿ ಸ್ನೇಹ ಟ್ಯುಟೋರಿಯಲ್‌ನ ಪ್ರಾಂಶುಪಾಲರಾದ ಉಮೇಶ್ ಚೇರ್ಕಾಡಿ ತಿಳಿಸಿದ್ದಾರೆ. ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣ ಗೊಳಿಸದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ನಡೆಸಲು ಮಂಡಳಿ ಪ್ರಕಟಿಸಿದ್ದು, ಎ.30ರಂದು ಈ ಪರೀಕ್ಷೆ ನಡೆಯುವು ದಾಗಿ ಪ್ರಕಟಿಸಿದೆ. ಪರೀಕ್ಷೆಗೆ ಹೆಸರು ನೊಂದಾಯಿಸಲು ಎ.17ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದ ತಾಂತ್ರಿಕ ತೊಂದರೆಯಿಂದ ಮೊಬೈಲ್ ರಿಜಿಸ್ಟರ್ ಮಾಡಲಾಗದೇ, ಒಟಿಪಿ ಬಾರದೇ ಸೈಬರ್ ಸೆಂಟರ್‌ನ ಮೂಲಕ ನೊಂದಾಯಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಆಪ್‌ಲೈನ್‌ನಲ್ಲಿ ಕಾಲೇಜಿ ನಲ್ಲಿ ನೊಂದಾಯಿಸಲು ಸಹ ಪ್ರಾಂಶುಪಾಲರಿಗೆ ಸಾಧ್ಯವಾಗದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಮಂಡಳಿ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಕಣ್ಣುಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್‌ನಿಂದ ಕಾಲೇಜಿಗೆ ಅಲೆದಾಡುತಿದ್ದಾರೆ ಎಂದು ಉಮೇಶ್ ಚೇರ್ಕಾಡಿ ಹೇಳಿದ್ದಾರೆ.

ವಾರ್ತಾ ಭಾರತಿ 16 Apr 2026 9:51 pm

ಸೇನಾ ಸಂಘರ್ಷವು ಸಮಸ್ಯೆಯನ್ನು ಪರಿಹರಿಸಲಾರದು: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ, ಎ.15: ಪಶ್ಚಿಮ ಏಶ್ಯಾ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷಗಳನ್ನು ಶಾಂತಿಯುತವಾಗಿ ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ. ಸೇನಾ ಸಂಘರ್ಷವು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟ್ರಿಯಾದ ಫೆಡರಲ್ ಚಾನ್ಸಲರ್ ಕ್ರಿಶ್ಚಿಯನ್ ಸ್ಟಾಕರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದರು. ಇಂದು ಇಡೀ ಜಗತ್ತು ಅತ್ಯಂತ ಗಂಭೀರ ಹಾಗೂ ಉದ್ವಿಗ್ನ ಪರಿಸ್ಥಿತಿ ಎದುರಿಸುತ್ತಿದೆ. ಜಾಗತಿಕ ಉದ್ವಿಗ್ನತೆಗಳ ಪರಿಣಾಮ ಎಲ್ಲಾ ದೇಶಗಳಲ್ಲಿ ಕೂಡ ಕಂಡು ಬರುತ್ತಿದೆ ಎಂದು ಹೇಳಿದರು. ಸಂಘರ್ಷಗಳನ್ನು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಬೇಕು ಎಂಬ ಅಭಿಪ್ರಾಯವನ್ನು ಭಾರತ ಹಾಗೂ ಆಸ್ಟ್ರೀಯ ದೇಶಗಳು ಹಂಚಿಕೊಂಡಿವೆ ಎಂದು ಪ್ರಧಾನಿ ಹೇಳಿದರು. ಆಸ್ಟ್ರಿಯಾದ ಚಾನ್ಸಲರ್ ಭೇಟಿಯಿಂದ ವ್ಯಾಪಾರ ಮತ್ತು ಹೂಡಿಕೆಯಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿರೀಕ್ಷೆ ಇದೆ ಎಂದು ಎಂದು ಮೋದಿ ಅವರು ಗಮನ ಸೆಳೆದರು. ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಇದು ಯುರೋಪ್ ಒಕ್ಕೂಟದೊಂದಿಗೆ ಭಾರತದ ಸಂಬಂಧಗಳಲ್ಲಿ ಹೊಸ ಮಜಲನ್ನು ಆರಂಭಿಸಿದೆ ಎಂದರು. ಚಾನ್ಸೆಲರ್ ಸ್ಟಾಕರ್ ತಮ್ಮ ಮೊದಲ ಅಧಿಕೃತ ಭಾರತದ ಭೇಟಿಗಾಗಿ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದರು. ಈ ಭೇಟಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ವಾರ್ತಾ ಭಾರತಿ 16 Apr 2026 9:50 pm

ಉತ್ತರ ಪ್ರದೇಶ| ಅಕ್ರಮ ನಿರ್ಮಾಣ ಆರೋಪ: ಸಂಭಲ್‌ನಲ್ಲಿ ಈದ್ಗಾ, ಇಮಾಮ್‌ಬಾರಾ ನೆಲಸಮಗೊಳಿಸಿದ ಅಧಿಕಾರಿಗಳು

ಲಕ್ನೋ, ಎ. 15: ಉತ್ತರಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ನಾಲ್ಕು ಬುಲ್ಡೋಝರ್‌ಗಳನ್ನು ಬಳಸಿ ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಈದ್ಗಾ ಹಾಗೂ ಇಮಾಮ್‌ಬಾರಾವನ್ನು ನೆಲಸಮಗೊಳಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆ ಕೊಟ್ವಾಲಿ ಸಂಭಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಚೋಲಿ ಗ್ರಾಮದಲ್ಲಿ ನಡೆದಿದೆ. ಈದ್ಗಾವನ್ನು ಸುಮಾರು 7 ಬಿಗಾ ಮೇವು ಭೂಮಿಯಲ್ಲಿ ನಿರ್ಮಿಸಲಾಗಿದೆ. ಇಮಾಮ್‌ಬಾರಾವನ್ನು ಗೊಬ್ಬರ ಗುಂಡಿಗೆ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸ್ಥಳದಲ್ಲಿ ಐದು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಪ್ರೊವಿನಿಕಲ್ ಆರ್ಮಡ್ ಕಾನ್ಸ್‌ಟೆಬ್ಯುಲರಿ (ಪಿಎಸಿ) ಯ ಒಂದು ಕಂಪೆನಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನೆಯ ಭೀತಿಯಿಂದ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರನ್ನು ಚದುರಿಸಲಾಯಿತು. ಗ್ರಾಮಸ್ಥರ ದೂರುಗಳ ಹಿನ್ನೆಲೆಯಲ್ಲಿ ಲೇಖಪಾಲ್ ಸ್ಪರ್ಶ ಗುಪ್ತಾ ಅವರು ಜನವರಿ 18ರಂದು ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಜನವರಿ 31ರಂದು ದಿನಪತ್ರಿಕೆಗಳಲ್ಲಿ ನೋಟಿಸನ್ನು ಪ್ರಕಟಿಸಲಾಗಿತ್ತು. ಯಾರಿಗಾದರೂ ಆಕ್ಷೇಪ ಇದ್ದರೆ, ಪ್ರತಿಕ್ರಿಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಸುಮಾರು 7.30ಕ್ಕೆ ಅಪರ ಜಿಲ್ಲಾಧಿಕಾರಿ ನಿಧಿ ಪಟೇಲ್ ನಾಯಬ್ ತಹಶೀಲ್ದಾರ್ ದೀಪಕ್ ಕುಮಾರ್ ಜುರೈಲ್ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಕೆಲವರು ಉಳಿ ಹಾಗೂ ಸುತ್ತಿಗೆಗಳನ್ನು ಬಳಸಿ ಇಮಾಮ್‌ಬಾರವನ್ನು ನೆಲಸಮಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಆದರೆ, ಅಧಿಕಾರಿಗಳು ಅವರನ್ನು ತೆರವುಗೊಳಿಸಿದರು. ಬಳಿಕ ಅವರು ಈದ್ಗಾ ಹಾಗೂ ಇಮಾಮ್‌ಬಾರವನ್ನು ನೆಲಸಮಗೊಳಿಸಿದರು. ಜಿಲ್ಲಾಡಳಿತದ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಸ್ಥಳೀಯ ಗ್ರಾಮಸ್ಥೆ ಝುಬೈದಾ, ಈ ಪ್ರದೇಶದಲ್ಲಿರುವ ಪ್ರತಿಯೊಬ್ಬರೂ ಇಮಾಮ್‌ಬಾರಾ ಹಾಗೂ ಈದ್ಗಾವನ್ನು ಬಳಸುತ್ತಾರೆ. ಬಡ ಕುಟುಂಬಗಳು ವಿವಾಹದ ಮೆರವಣಿಗೆ ಸಂದರ್ಭ ಇಲ್ಲಿ ತಂಗುತ್ತಾರೆ ಎಂದಿದ್ದಾರೆ. ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದ್ದರೆ, ಈ ಕ್ರಮವನ್ನು ದೇವಾಲಯಗಳಿಗೆ ಕೂಡ ಅನ್ವಯಿಸಬೇಕು ಎಂದು ಝುಬೈದಾ ಹೇಳಿದ್ದಾರೆ.

ವಾರ್ತಾ ಭಾರತಿ 16 Apr 2026 9:50 pm

ಮಂಗಳೂರು ಲಾಠಿ ಚಾರ್ಜ್ ಪ್ರಕರಣದ 101 ಆರೋಪಿಗಳ ಖುಲಾಸೆ

ಮಂಗಳೂರು, ಎ.16: ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ 2017ರ ಎ.4ರಂದು ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಎಲ್ಲಾ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಆ ಪೈಕಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಇನ್ನೊಂದು ಪ್ರಕರಣದ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸರಕಾರಿ ಪರ ವಕೀಲರು ವಿಫಲವಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟು ಪ್ರಕರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರಹ್ಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮುಹಮ್ಮದ್ ಆದಿಲ್, ನಿಶಾನ್ ಎಂ.ಕೆ, ರುಬೀನ, ಅಂಸೀನ ವಾದಿಸಿದ್ದರು.

ವಾರ್ತಾ ಭಾರತಿ 16 Apr 2026 9:48 pm

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ : ಉಡುಪಿ ಜಿಲ್ಲಾ ಸಮಿತಿ ರಚನೆ

ಮೂಳೂರು :  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಇದರ ನೂತನ ಉಡುಪಿ ಜಿಲ್ಲಾ ಸಮಿತಿ ರಚಿಸುವ ಸಲುವಾಗಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಭಾಂಗಣದಲ್ಲಿ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷ  ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಲ್‌ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್‌ರವರ ದುಆದೊಂದಿಗೆ ಸಭೆಯು ಪ್ರಾರಂಭವಾಯಿತು. ಸಂಸ್ಥೆಯ ಮ್ಯಾನೇಜರ್ ಅಲ್ ಹಾಜ್ ಯು.ಕೆ. ಮುಸ್ತಫ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಕೆ.ಎಸ್.ಸಿ ವಿಝನ್ 30 ಚೇರ್ಮೆನ್  ಹಾತಿಂ ಕೂಳೂರು ಹಾಗೂ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಅರಮೆಕ್ಸ್ ಹಾಜರಿದ್ದರು. ವಿಝನ್ 30 ಚೇರ್‌ಮ್ಯಾನ್ ಹಾತಿಂ ಕೂಳೂರು ಮಾತನಾಡಿ ಶುಭಾಶಂಸೆಗೈದರು. ಚುನಾವನಾಧಿಕಾರಿ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಅಝೀಝ್ ಮೂಳೂರುರವರ ನೇತೃತ್ವದಲ್ಲಿ ಡಿ.ಕೆ.ಎಸ್.ಸಿ ನೂತನ ಉಡುಪಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ಅಲ್ ಹೈದ್ರೋಸಿ ಕುಂಬೋಳ್, ಡೆವಲಪ್ಮೆಂಟ್ ಚೇರ‍್ಮೆನ್ ಆಗಿ ಅಬ್ದುಲ್ಲಾಹ್ ಹಾಜಿ ಸೂಪರ್ ಸ್ಟೋರ್, ಕಾಪು ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿಯಾಗಿ  ಫಾರೂಕ್ ಅಹ್ಮದ್ ಕರ್ನಿರೆ ಆಯ್ಕೆಯಾದರು. ಹಣಕಾಸು ಕಾರ್ಯದರ್ಶಿಯಾಗಿ ಎ.ಹೆಚ್ ಅಬ್ದುಲ್ ಖಾದರ್ ಪಡುಬಿದ್ರಿ, ಉಪ ಹಣಕಾಸು ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್ ಕೋಡಿ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಕೆ.ಎಚ್. ಮುಹಮ್ಮದ್ ಕನ್ನಂಗಾರ್, ಅಬ್ಬು ಹಾಜಿ ಮೂಳೂರು ಹಾಗೂ ಸಯ್ಯಿದ್ ಅಲಿ ಪಡುಬಿದ್ರಿ ಜೊತೆ ಕಾರ್ಯದರ್ಶಿಗಳಾಗಿ ಮೊಹಿದಿನ್ ಪಡುಬಿದ್ರಿ,(Ex.D.S.P) ಅಬ್ದುಲ್ಲ ಮೂಳೂರು ಹಾಗೂ ಹಮೀದ್ ಯೂಸುಫ್ ಮೂಳೂರು. ಸಂವಹನ ಕಾರ್ಯದರ್ಶಿಯಾಗಿ  ವೈ.ಬಿ.ಸಿ. ಬಶೀರ್ ಅಲಿ, ಸಲಹೆಗಾರರಾಗಿ ಇಕ್ಬಾಲ್ ಕಲ್ಯಾಣಪುರ, ಲೆಕ್ಕಪರಿಶೋಧಕರಾಗಿ ಹಮೀದ್ ಅದ್ದು ಮುಂತಾದವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ದ.ಕ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಹಾಗೂ ಇನ್ನಿತರ ಸದಸ್ಯರು, ಘಟಕಗಳ ನಾಯಕರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ಕಾರ್ಯಕ್ರಮವನ್ನು ನಿರೂಪಿಸಿ, ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಫಾರೂಕ್ ಅಹ್ಮದ್ ಕರ್ನಿರೆ ಧನ್ಯವಾದಗೈದರು.

ವಾರ್ತಾ ಭಾರತಿ 16 Apr 2026 9:41 pm

Bidar | ಜಿಲ್ಲೆಯ ಎಲ್ಲಾ ಇಲಾಖೆಗಳು ಕೆ-ಜಿಐಎಸ್ ಆವೃತ್ತಿ 2.0ರ ಪ್ರಯೋಜನ ಪಡೆಯಿರಿ : ಎಡಿಸಿ ಶಿವಾನಂದ್ ಕರಾಳೆ

ಬೀದರ್: ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸುಧಾರಿತ ಆವೃತ್ತಿಯಾದ ಕೆ-ಜಿಐಎಸ್ 2.0 ಅನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಎಲ್ಲಾ ಇಲಾಖೆಗಳು ಇದರ ಪ್ರಯೋಜನ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಕೆ-ಜಿಐಎಸ್ 2.0 ತಾಂತ್ರಿಕ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಆಸ್ತಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ನಿಖರ ಮೇಲ್ವಿಚಾರಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಅತ್ಯಂತ ಅಗತ್ಯವಾಗಿದೆ. ಕೆ-ಜಿಐಎಸ್ 2.0 ಆವೃತ್ತಿ ಭೂಮಿಯ ಅಂಕಿ-ಅಂಶಗಳು, ನಕ್ಷೆಗಳು ಹಾಗೂ ಇಲಾಖಾವಾರು ದತ್ತಾಂಶಗಳನ್ನು ವೇಗವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಶ್ ಎನ್.ಎಲ್. ಅವರು, ಕೆ-ಜಿಐಎಸ್ ಯೋಜನೆಯ ಉದ್ದೇಶಗಳು ಹಾಗೂ ಅಭಿವೃದ್ಧಿ ಕುರಿತು ವಿವರಿಸಿದರು. 2016ರಲ್ಲಿ ಕೆ-ಜಿಐಎಸ್ 1.0 ಜಾರಿಗೆ ಬಂದಿದ್ದು, ಸುಮಾರು 600 ಜಿಐಎಸ್ ಪದರಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ 41 ಮೊಬೈಲ್ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಕೆ-ಜಿಐಎಸ್ ಯೋಜನೆಗೆ 2024ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಿ, ಸ್ಥಳೀಯ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಆಧಾರದಲ್ಲಿ ಪರಿಹಾರ ಕಂಡುಕೊಳ್ಳಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದರು. ಕಾರ್ಯಾಗಾರದಲ್ಲಿ ಇ-ಆಡಳಿತ ಇಲಾಖೆಯ ವೈಜ್ಞಾನಿಕ ಅಧಿಕಾರಿಗಳಾದ ಕರುಣಾಕರ್ ಸಂಗನಬಸಪ್ಪ ಹಾಗೂ ಲಕ್ಷ್ಮೀಜಿ ಅವರು ಕೆ-ಜಿಐಎಸ್ 2.0 ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶರಣಪ್ಪ ಕೊಟ್ಟಪ್ಪಗೊಳ್, ಡಿವೈಎಸ್ಪಿ ದೂದಪೀರ್ ಮುಲ್ಲಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:40 pm

Bidar | ಬ್ರೀಮ್ಸ್‌ನಲ್ಲಿ ಅಕ್ರಮ ನೇಮಕ ಆರೋಪ: ಗುತ್ತಿಗೆ ನೌಕರರ ವಜಾಗೆ ಕರವೇ ಒತ್ತಾಯ

ಬೀದರ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಬ್ರೀಮ್ಸ್ ಸಂಸ್ಥೆಯಲ್ಲಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರೀಮ್ಸ್‌ನ ಮಾಜಿ ನಿರ್ದೇಶಕರಾಗಿದ್ದ ಡಾ. ಶಿವಕುಮಾರ್ ಶೆಟಕರ್ ಅವರ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಸುಮಾರು 10ರಿಂದ 12 ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶುಶ್ರೂಷಕ ಅಧಿಕಾರಿ ಲಿಂಗರಾಜ್ ಹಿರೇಮಠ್, ಟ್ಯೂಟರ್ ಡಾ. ಜೈಸಿಂಗ್ ಡಿ. ಹಾಗೂ ಕಚೇರಿ ಅಧಿಕ್ಷಕ ಶ್ರೀನಿವಾಸ್ ಜಮಾದಾರ್ ಸೇರಿದಂತೆ ಕೆಲವರು ಸೇರಿ ಈ ನೇಮಕಾತಿಗಳನ್ನು ನಡೆಸಿದ್ದಾರೆ ಎಂದು ದೂರಲಾಗಿದೆ. ನೇಮಕಗೊಂಡ ಕೆಲ ಸಿಬ್ಬಂದಿಗಳು ಸಂಸ್ಥೆಯಲ್ಲಿ ನಿಯಮಿತವಾಗಿ ಸೇವೆ ಸಲ್ಲಿಸದೇ, ಅಕ್ರಮವಾಗಿ ಹಾಜರಾತಿ ತೋರಿಸಿ ವೇತನ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ಗುರುತಿಸಿ 15 ದಿನಗಳೊಳಗೆ ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬ್ರೀಮ್ಸ್ ಸಂಸ್ಥೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮರ್ಜಾಪುರ್, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾವ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೂರ್, ಜಿಲ್ಲಾ ಸಹ ಕಾರ್ಯದರ್ಶಿ ಅಲೆಕ್ಸಾಂಡರ್, ಜಿಲ್ಲಾ ಮುಖಂಡ ಸಂಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರೆ, ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷ ಧನರಾಜ್ ಚಿಟ್ಟಾವಾಡಿ, ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ರಾಜಗೊಂಡ, ಅನಿಲ್ ಕಮಠಾಣಾ ಹಾಗೂ ಸುಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:37 pm

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ| ಹರ್ಯಾಣದ ಐವರು ಶಾಸಕರನ್ನು ಅಮಾನತುಗೊಳಿಸಿದ ಕಾಂಗ್ರೆಸ್

ಚಂಡಿಗಢ, ಎ.15: ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಲ್ ಪರವಾಗಿ ಅಡ್ಡ ಮತದಾನ ಮಾಡಿರುವುದಕ್ಕಾಗಿ ಕಾಂಗ್ರೆಸ್ ಹರ್ಯಾಣದ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ರಾಜ್ಯ ಶಿಸ್ತು ಸಮಿತಿಯ ಶಿಫಾರಸು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಔಪಚಾರಿಕ ಅನುಮೋದನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಗಢದ ಶೆಲ್ಲಿ ಚೌಧರಿ, ಸಡೌರದ ರೇಣು ಬಾಲಾ, ರತಿಯಾದ ಜರ್ನೈಲ್ ಸಿಂಗ್, ಹಥಿನ್‌ನ ಮುಹಮ್ಮದ್ ಇಸ್ರೈಲ್ ಹಾಗೂ ಪುನಹಾನದ ಮುಹಮ್ಮದ್ ಇಲ್ಯಾಸ್ ಅಮಾನತುಗೊಂಡ ಶಾಸಕರಾಗಿದ್ದಾರೆ. ಧರ್ಮಪಾಲ್ ಮಲಿಕ್ ನೇತೃತ್ವದ ಪಕ್ಷದ ರಾಜ್ಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್‌ಗೆ ಅವರ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಅಮಾನತು ಮಾಡಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಐವರು ಶಾಸಕರಲ್ಲಿ ಶೆಲ್ಲಿ ಚೌಧರಿ, ರೇಣು ಬಾಲಾ ಹಾಗೂ ಜರ್ನೈಲ್ ಸಿಂಗ್ ಅಡ್ಡ ಮತದಾನದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಹಮ್ಮದ್ ಇಲ್ಯಾಸ್ ಹಾಗೂ ಮುಹಮ್ಮದ್ ಇಸ್ರೈಲ್ ಪ್ರತಿಕ್ರಿಯೆ ನೀಡಿಲ್ಲ. ರೇಣು ಬಾಲಾ ಹಾಗೂ ಶೆಲ್ಲಿ ಚೌಧರಿ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕಿದ್ದೇವೆ. ತಮ್ಮನ್ನು ವಿನಾ ಕಾರಣ ಸಿಲುಕಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಡ್ಡ ಮತದಾನದ ಆರೋಪವನ್ನು ಜರ್ನೈಲ್ ಸಿಂಗ್ ಕೂಡ ನಿರಾಕರಿಸಿದ್ದಾರೆ. ತಾವು ಮತಗಳನ್ನು ಪರಿಶೀಲಿಸಲು ಪಕ್ಷದಿಂದ ಅಧಿಕಾರ ಪಡೆದಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಮತಗಳನ್ನು ತೋರಿಸಿರುವುದಾಗಿ ಮೂವರು ಶಾಸಕರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ‘‘ಗಂಭೀರ ಅಶಿಸ್ತು’’ ಪ್ರಕರಣ ಎಂದು ಕರೆದ ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದರ್ ಸಿಂಗ್, ಪಕ್ಷದ ಅಧಿಕೃತ ಅಭ್ಯರ್ಥಿ ಕರಮ್‌ವೀರ್ ಸಿಂಗ್ ಬೌದ್ಧ್ ವಿರುದ್ಧ ಮತ ಚಲಾಯಿಸಿರುವುದರಿಂದ ಈ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಿ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದರು.

ವಾರ್ತಾ ಭಾರತಿ 16 Apr 2026 9:36 pm

ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಚೀನಾದ ಬೇಹುಗಾರಿಕಾ ಉಪಗ್ರಹ ಬಳಸಿದ ಇರಾನ್: ವರದಿ

ನ್ಯೂಯಾರ್ಕ್, ಎ.16: ಇರಾನ್ 2024ರ ಅಂತ್ಯದಲ್ಲಿ ರಹಸ್ಯವಾಗಿ ಚೀನಾದ ಬೇಹುಗಾರಿಕಾ ಉಪಗ್ರಹವನ್ನು ಪಡೆದಿದ್ದು, ಇದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಲು ನೆರವಾಗಿತ್ತು ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ. `ಅರ್ಥ್ ಐ ಕಂಪೆನಿ' ಎಂಬ ಚೀನೀ ಸಂಸ್ಥೆ ನಿರ್ಮಿಸಿದ್ದ `ಟಿಇಇ-01ಬಿ' ಉಪಗ್ರಹವನ್ನು ಚೀನಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ ಅದನ್ನು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಖರೀದಿಸಿತ್ತು ಎಂದು ಸೋರಿಕೆಯಾದ ಇರಾನ್ ಮಿಲಿಟರಿ ದಾಖಲೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್‍ನ ಮಿಲಿಟರಿ ಕಮಾಂಡರ್‌ಗಳು ಉಪಗ್ರಹವನ್ನು ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದರು ಎಂದು ಉಪಗ್ರಹ ಚಿತ್ರಣ ಮತ್ತು ಕಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಒಪ್ಪಂದದ ಭಾಗವಾಗಿ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಇತರ ಪ್ರದೇಶಗಳಾದ್ಯಂತ ವಿಸ್ತರಿಸಿರುವ ನೆಟ್‍ವರ್ಕ್‍ನೊಂದಿಗೆ ಬೀಜಿಂಗ್ ಮೂಲದ ಉಪಗ್ರಹ ನಿಯಂತ್ರಣ ಮತ್ತು ಡೇಟಾ ಸೇವೆಗಳ ಪೂರೈಕೆದಾರ `ಎಂಪೋಸ್ಯಾಟ್' ನಿರ್ವಹಿಸುವ ಕೇಂದ್ರಗಳಿಗೆ ಐಆರ್‌ಜಿಸಿ ಪ್ರವೇಶವನ್ನು ಪಡೆದುಕೊಂಡಿದೆ ಎಂದು ವರದಿ ಹೇಳಿದೆ. ಚೀನಾದ ವಿದೇಶಾಂಗ ಇಲಾಖೆ ವರದಿಯನ್ನು ನಿರಾಕರಿಸಿದೆ. ಇತ್ತೀಚೆಗೆ, ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಚೀನಾದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ನಡೆಸುತ್ತಿದ್ದು, ಈ ವರದಿ ಇಂತಹ ಪ್ರಯತ್ನಗಳ ಭಾಗವಾಗಿದೆ ಎಂದು ವಿದೇಶಾಂಗ ಇಲಾಖೆ ಖಂಡಿಸಿದೆ.

ವಾರ್ತಾ ಭಾರತಿ 16 Apr 2026 9:34 pm

Humnabad | ಡಾ ಬಿ.ಆರ್ ಅಂಬೇಡ್ಕರ್‌ಗೆ ಅವಮಾನ ಆರೋಪ : ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಹುಮನಾಬಾದ್: ಎ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಹಣಕುಣಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಹಾಗೂ ಆಡಳಿತಾಧಿಕಾರಿಗಳು ಭಾವಚಿತ್ರಕ್ಕೆ ಗೌರವ ಸಲ್ಲಿಸದೇ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆ ಒತ್ತಾಯಿಸಿದೆ. ಗುರುವಾರ ಹುಮನಾಬಾದ್ ತಹಶೀಲ್ದಾರ್ ಅವರ ಮೂಲಕ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಆಡಳಿತಾಧಿಕಾರಿಗಳ ಕರ್ತವ್ಯವಾಗಿದ್ದು, ಈ ಬಾರಿ ಅವರು ಯಾವುದೇ ರೀತಿಯ ಗೌರವ ಸಲ್ಲಿಸದೇ ಮಹಾನ್ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದಾಗ, ಆಡಳಿತದಿಂದ ಯಾವುದೇ ಆದೇಶ ಅಥವಾ ಸಹಾಯಧನ ಬಂದಿಲ್ಲ ಎಂದು ಉಡಾಫೆಯ ಉತ್ತರ ನೀಡಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಗಣಪತಿ ಅಷ್ಟೋರೆ, ವೈಜಿನಾಥ್ ಶಿಂಧೆ, ಸುಶೀಲಕುಮಾರ್ ಭೂಲಾ, ಸಿದ್ಧಾರ್ಥ ಜಾನ್ವೀರ್, ರಾಹುಲ್ ಚಿಟಗುಪ್ಪಕರ್, ರವಿ ಶಿಂಧೆ, ವಿಠಲ್ ಶಿವನಾಯಕ್, ಉದಯಕುಮಾರ್, ಲಕ್ಷ್ಮಣ್ ಶಿಂಧೆ, ಪ್ರಭು ಮಟ್ಟೆನೋರ್ ಹಾಗೂ ರಾಜಪ್ಪ ಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:32 pm

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆಗೆ ನಿರಾಕರಿಸಿದ ಲೆಬನಾನ್ ಅಧ್ಯಕ್ಷ

ಬೈರೂತ್, ಎ.16: ಯೋಜಿತ ಸಭೆಗೂ ಮುನ್ನ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಲು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ನಿರಾಕರಿಸಿದ್ದಾರೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಗುರುವಾರ ವರದಿ ಮಾಡಿದೆ. ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ನಾಯಕರ ನಡುವೆ ನೇರ ಮಾತುಕತೆ ನಡೆಯಲಿದೆ. ಲೆಬನಾನ್‍ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದರು. ಆದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತನಾಡಲು ಲೆಬನಾನ್ ಅಧ್ಯಕ್ಷರು ನಿರಾಕರಿಸಿದ್ದಾರೆ. ಈ ವಿಷಯವನ್ನು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೊತೆ ಫೋನ್‍ನಲ್ಲಿ ನಡೆಸಿದ ಮಾತುಕತೆ ಸಂದರ್ಭ ಸ್ಪಷ್ಟಪಡಿಸಿದ್ದಾರೆ. ಮತ್ತು ಅಮೆರಿಕವು ಲೆಬನಾನ್‍ನ ಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ.

ವಾರ್ತಾ ಭಾರತಿ 16 Apr 2026 9:30 pm

Humnabad | ವಿವಿಧ ಕಳ್ಳತನ ಪ್ರಕರಣ : 34.55 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ, 26 ಆರೋಪಿಗಳ ಬಂಧನ

ಹುಮನಾಬಾದ್: ಚಿಟಗುಪ್ಪಾ, ಬಸವಕಲ್ಯಾಣ, ಮುಡಬಿ, ಮಂಠಾಳ್ ಹಾಗೂ ಹುಮನಾಬಾದ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ, ಒಟ್ಟು 34 ಲಕ್ಷ 55 ಸಾವಿರ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 26 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 4.15 ಲಕ್ಷ ರೂ. ಮೌಲ್ಯದ ಕೇಬಲ್ ವೈರ್, ಕಬ್ಬಿಣದ ರಾಡು, ಮೋಟಾರ್ ಸೇರಿದಂತೆ ಸಾಮಾನುಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ ಎಂದರು. ಹಂದಿಕೇರಾ ಗ್ರಾಮದಲ್ಲಿ 2 ಎಮ್ಮೆ ಹಾಗೂ 1 ಕೋಣ ಕಳ್ಳತನ ಪ್ರಕರಣದಲ್ಲಿ 3.50 ಲಕ್ಷ ರೂ. ಮೌಲ್ಯದ ಒಂದು ಎಮ್ಮೆ, 1 ಲಕ್ಷ ರೂ. ನಗದು ಮತ್ತು ಒಂದು ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಮಾಣಿಕ್ ನಗರದಲ್ಲಿ ಮನೆ ಬೀಗ ಮುರಿದು 8 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 7.52 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಚಿಟಗುಪ್ಪಾ ಠಾಣೆ ವ್ಯಾಪ್ತಿಯ ಹಳ್ಳಿಖೇಡ (ಕೆ) ಗ್ರಾಮದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಹಿಳೆಯ ಕೊರಳಿಂದ ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 80 ಸಾವಿರ ರೂ. ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ಸೋಯಾಬಿನ್ ಕಳ್ಳತನ ಹಾಗೂ 70 ಸಾವಿರ ರೂ. ಜೇಬು ಕಳ್ಳತನ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 80 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯ 40 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು 35 ಸಾವಿರ ರೂ. ಜಪ್ತಿ ಮಾಡಿ ನೋಟಿಸ್ ನೀಡಿ ಬಿಡಲಾಗಿದೆ. ಮುಡಬಿ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಆಕಳು ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 1 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾರ್‌ನಲ್ಲಿ ನಡೆದ 22 ಸಾವಿರ ರೂ. ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 25 ಸಾವಿರ ರೂ. ಮೌಲ್ಯದ ನಗದು ಮತ್ತು ಸ್ಕೂಟಿ ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬೈಕ್ ಕಳ್ಳತನ ಪ್ರಕರಣದಲ್ಲಿ 80 ಸಾವಿರ ರೂ. ಮೌಲ್ಯದ ಬೈಕ್ ಕಲಬುರಗಿ ಗಂಜ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ. ಮಂಠಾಳ್ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನ ಪ್ರಕರಣದಲ್ಲಿ ಬೆರಳು ಮುದ್ರೆಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ವಾರ್ತಾ ಭಾರತಿ 16 Apr 2026 9:29 pm

ಡಾ.ಎಂ.ಎ.ಸಲೀಂ ಅವಧಿ ವಿಸ್ತರಣೆ: 2027ರ ಆ.29ರ ವರೆಗೆ ಡಿಜಿ-ಐಜಿಪಿಯಾಗಿ ಕರ್ತವ್ಯ

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ಅವರ ಸೇವಾ ಅವಧಿಯನ್ನು ವಿಸ್ತರಿಸಿ ರಾಜ್ಯ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, 2027ರ ಆಗಸ್ಟ್ 29ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. 1993ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಎಂ.ಎ.ಸಲೀಂ ಅವರು, ಈ ಹಿಂದೆ ಅಪರಾಧ ತನಿಖಾ ದಳ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿಪಿ) ಸೇವೆ ಸಲ್ಲಿಸಿದ್ದರು.  

ವಾರ್ತಾ ಭಾರತಿ 16 Apr 2026 9:26 pm

Raichur | ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ವಿಳಂಬ: ಪ್ರತಿಭಟನೆ

ರಾಯಚೂರು: ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡುವಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿಂಚಣಿದಾರರು, ಫೆಬ್ರವರಿ 27ರಂದು ಹೊರಡಿಸಲಾದ ಡಿಪಿಇ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಕೈಗಾರಿಕಾ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡುವ ಪದ್ಧತಿ ಇದ್ದರೂ, ಈ ಬಾರಿ ಅನಗತ್ಯ ವಿಳಂಬವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 1997, 2007 ಹಾಗೂ 2017ರ ವೇತನ ಮಾಪಕಗಳ ಅಡಿಯಲ್ಲಿ ಸಿಪಿಎಸ್‌ಇ ಉದ್ಯೋಗಿಗಳಿಗೆ ಜನವರಿ 1ರಿಂದ ಅನ್ವಯವಾಗುವ ಐಡಿಎ ದರಗಳನ್ನು ನಿಗದಿಪಡಿಸಲಾಗಿದೆ. 2007ರ ವೇತನ ಮಾಪಕಕ್ಕೆ ಅನುಗುಣವಾಗಿ ಡಿಒಟಿ (ಐಡಿಎ) ಪಿಂಚಣಿದಾರರು ಡಿಆರ್ ಹೆಚ್ಚಳಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಸಂಬಂಧಿತ ದೂರಸಂಪರ್ಕ ಇಲಾಖೆ ಇನ್ನೂ ಆದೇಶ ಜಾರಿಗೆ ತರದಿರುವುದು ಲಕ್ಷಾಂತರ ಪಿಂಚಣಿದಾರರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು. ದೇಶಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಪಿಂಚಣಿದಾರರು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಫೆ.27ರ ಆದೇಶವನ್ನು ತಕ್ಷಣ ಜಾರಿಗೆ ತರಬೇಕು, ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಆರ್ ನೀಡಬೇಕು, ಆದೇಶದ ಪ್ಯಾರಾ 5 ಅನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ತುಟ್ಟಿ ಪರಿಹಾರವನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏಪ್ರಿಲ್ 30ರಂದು ದೇಶಾದ್ಯಂತ ಸಿಸಿಎ/ಬಿಎಸ್‌ಎನ್‌ಎಲ್ ಕಚೇರಿಗಳ ಮುಂದೆ ಬೃಹತ್ ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ವಲಯ ಉಪಾಧ್ಯಕ್ಷ ಎಸ್.ವಿ.ಅರಳಿ, ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಕ್ಬರ್ ಹುಸೇನ್, ಖಜಾಂಚಿ ಮೊಹ್ಮದ್ ಯೂನೂಸ್, ಗೌರವಾಧ್ಯಕ್ಷ ಬಸವರಾಜ, ಬಾಬುಲಾಲ್, ಮುಕ್ತಾ ಯರನಾಕರ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 16 Apr 2026 9:25 pm

ಕುಂದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಇಚ್ಛಾಶಕ್ತಿ ತೋರದ ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ

ಕುಂದಾಪುರ, ಎ.16: ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳಿಗೆ ಇವತ್ತಿಗೂ ಪರಿಹಾರ ಸಿಕ್ಕಿಲ್ಲ. ಕಳೆದ ಸಭೆಗೂ ಇಂದಿನ ಸಭೆಗೂ ನಡುವೆ ಕೇವಲ ಪತ್ರ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆನೂ ಪ್ರಗತಿ ಆಗಿಲ್ಲ. ಪತ್ರ ಬರೆದು ಸುಮ್ಮನೆ ಕುಳಿತರೆ ಹೇಗೆ? ಸಮಸ್ಯೆ ಪರಿಹಾರಕ್ಕೆ ಇಚ್ಚಾಶಕ್ತಿ ತೋರಿಸುತ್ತಿಲ್ಲ. ಸಭೆಯಲ್ಲಿ ಪ್ರತಿಬಾರಿ ಅದೇ ಸಮಸ್ಯೆಗಳನ್ನು ಮತ್ತೆ ಮತ್ತೆ ಹೇಳಿದರೆ ಏನು ಮಾಡಲು ಸಾಧ್ಯ ಎಂದು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜೆಜೆಎಂ ಯೋಜನೆಯಡಿ 3 ವರ್ಷಗಳಿಂದ ಏನೂ ಕೆಲಸ ಆಗಿಲ್ಲ. ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಕೂಡ ಮುಂದೆ ಹೋಗಿಲ್ಲ, ಎಲ್ಲ ಕಡೆ ಪೈಪ್‌ಲೈನ್ ಆಗಿದೆ ಬಿಟ್ಟರೆ ನೀರಿಲ್ಲ. ಯಾವುದಕ್ಕೂ ಒಂದು ಪ್ಲಾನ್ ಇಲ್ಲ. ಭೂಸ್ವಾಧೀನ ಮಾಡಿಕೊಂಡಿಲ್ಲ. ಹೊಸ ಟ್ಯಾಂಕ್ ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್‌ಲೈನ್ ಮಾಡಿದ ಬಳಿಕ ಮೀಸಲು ಅರಣ್ಯ ಅನುಮತಿಗೆ ಬರೆದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿ ಎಂದರು. ಕೋಟೇಶ್ವರದಲ್ಲಿ ಹಾನಿಯಾದ 280 ಮೀ. ಪೈಪ್‌ಲೈನ್‌ನ್ನು ಗ್ರಾ.ಪಂ. ಮೂಲಕ ಸರಿಪಡಿಸಲಾಗಿದೆ ಎಂದು ಕೋಟೇಶ್ವರ ಪಿಡಿಒ ಹೇಳಿದರೆ, ಗೋಪಾಡಿಯಲ್ಲಿ 340 ಮೀ. ಪೈಪ್‌ಲೈನ್ ಹಾನಿಯಾಗಿದ್ದು, ನೀರು ಸರಬರಾಜು ಮಾಡುವ ಬಾವಿಯಲ್ಲಿ ಎಪ್ರಿಲ್ ಅಂತ್ಯಕ್ಕಾಗುವಷ್ಟು ನೀರಿದ್ದು, ಮೇನಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಗೋಪಾಡಿ ಪಿಡಿಒ ಹೇಳಿದರು. ಗೋಪಾಡಿಯಲ್ಲಿ ಶಾಲೆ ಸಮೀಪ ಟ್ಯಾಂಕ್ ನಿರ್ಮಿಸಲು ಸ್ಥಳೀಯರ ಆಕ್ಷೇಪವಿದ್ದು, ಕೋಟೇಶ್ವರದ ಕುಂಬ್ರಿ ಭಾಗದಲ್ಲಿ ನೀರು ಕಲುಷಿತವಾಗಿದೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಬೀಜಾಡಿಯಲ್ಲಿ ಕುಡಿಯುವ ನೀರು ಸರಬರಾಜು ಬಾವಿಯನ್ನು ಆಳ ಗೊಳಿಸಬೇಕು ಎಂದು ಬೀಜಾಡಿ ಪಿಡಿಒ ಹೇಳುತ್ತಿದ್ದಂತೆಯೇ, ಕಳೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಈಗ ಮತ್ತೆ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಗೊಂಡರು. ಮಲ್ಯಾಡಿಯಲ್ಲಿ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಕೊರ್ಗಿ ಗ್ರಾಮದ ಕುಂಜನಕಟ್ಟೆ ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಗುಡ್ಡಟ್ಟು ಎಂಬಲ್ಲಿ ಬಾವಿಗೆ ಫಿಲ್ಟರ್ ಅಳವಡಿಸಬೇಕು. ಯಡಾಡಿ- ಮತ್ಯಾಡಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ, ಮಡಾಮಕ್ಕಿ-ಶೇಡಿಮನೆ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಗಿಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ಇದ್ದು 2 ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಐರೋಡಿಯಲ್ಲಿ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆವರ್ಸೆ ಗ್ರಾಮದ ನಾಲ್ಕು ಟ್ಯಾಂಕ್‌ಗಳಿಗೆ ವಾರಾಹಿ ನೀರಿನ ಹರಿವು ತುಂಬಾ ಕಡಿಮೆಯಿದ್ದು, ಟ್ಯಾಂಕ್ ತುಂಬಲು ತುಂಬಾ ಸಮಯ ಬೇಕಾಗುತ್ತದೆ. ನೀರು ರಭಸವಾಗಿ ಬರುವಂತೆ ಮಾಡಬೇಕು ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಕುಂದಾಪುರ ಇಒ ಮಹೇಶ ಕೆ.ಜಿ., ಬ್ರಹ್ಮಾವರ ಇಒ ಎಚ್.ವಿ. ಇಬ್ರಾಹಿಂಪುರ, ಕಾರ್ಕಳ ಇಒ ಪ್ರಶಾಂತ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಉದಯ ಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 9:25 pm

ಲೆಬನಾನ್–ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದ ಜಾರಿ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್, ಎ.16: ಲೆಬನಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗೆ ತಾತ್ಕಾಲಿಕ ಶಮನವಾಗಿ 10 ದಿನಗಳ ಕದನ ವಿರಾಮ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಟ್ರೂತ್ ಸೋಷಿಯಲ್‌ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ‘ಬೀಬಿ’ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಕದನ ವಿರಾಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. “ಲೆಬನಾನ್ ಸ್ಥಳೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ 10 ದಿನಗಳ ಕಾಲ ಕದನ ವಿರಾಮ ಜಾರಿಯಾಗಲಿದೆ. ಮಂಗಳವಾರ, 34 ವರ್ಷಗಳ ಬಳಿಕ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ಪ್ರತಿನಿಧಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಚರ್ಚೆ ನಡೆಸಿದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಶಾಶ್ವತ ಕದನ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ”, ಎಂದು ಟ್ರಂಪ್ ತಿಳಿಸಿದ್ದಾರೆ. “ವಿಶ್ವದ ವಿವಿಧ ಭಾಗಗಳಲ್ಲಿ ಒಂಭತ್ತು ಯುದ್ಧಗಳನ್ನು ನಿಲ್ಲಿಸುವಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ. ಇದು ನನ್ನ 10ನೇ ಪ್ರಯತ್ನವಾಗಿದ್ದು, ಇದನ್ನೂ ಅಂತ್ಯಗೊಳಿಸಲು ಬದ್ಧನಾಗಿದ್ದೇನೆ” ಎಂದು ಟ್ರಂಪ್ ಅವರು ಹೇಳಿದ್ದಾರೆ.

ವಾರ್ತಾ ಭಾರತಿ 16 Apr 2026 9:22 pm

Raichur | ಜನನ–ಮರಣ ಪ್ರಮಾಣಪತ್ರ ವಿಭಾಗದಲ್ಲಿ ಅವ್ಯವಸ್ಥೆ ಆರೋಪ : ಕ್ರಮಕ್ಕೆ ಕರವೇಯಿಂದ ಆಗ್ರಹ

ರಾಯಚೂರು: ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಅಧಿಕ ಶುಲ್ಕ ವಸೂಲಿ ಆರೋಪಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದವರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮನವಿ ಸಲ್ಲಿಸಿದರು. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ಸಿಬ್ಬಂದಿಗಳು ಸಮರ್ಪಕ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರಿಂದ ಜನರು ಹಲವು ಬಾರಿ ಕಚೇರಿಗೆ ಸುತ್ತಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂದು ದೂರಿದರು. ಮಹಬೂಬ್ ಪಾಶಾ ಅವರ ಜನನ ಪ್ರಮಾಣಪತ್ರ ಪ್ರಕರಣವನ್ನು ಉದಾಹರಿಸಿ, ಕೋರ್ಟ್ ಆದೇಶದಂತೆ ಸಲ್ಲಿಸಿದ ಅರ್ಜಿಯಲ್ಲಿಯೂ ತಪ್ಪು ಮಾಹಿತಿಯನ್ನು ನಮೂದಿಸಿ ಪ್ರಮಾಣಪತ್ರ ನೀಡಲಾಗಿದೆ. ನಂತರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡಲಾಗುತ್ತಿದ್ದು, ಪ್ರತಿ ಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ರೀತಿ ಹಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ದಾಖಲೆಗಳನ್ನು ನಮೂದಿಸಿ ನಂತರ ತಿದ್ದುಪಡಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ದಾಖಲೆಗಳಿಲ್ಲದಿದ್ದರೆ ರೂ.500 ರಿಂದ 1000ರವರೆಗೆ ಲಂಚ ಪಡೆದು ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಖಲೀಲ್ ಪಾಷಾ, ರಾಚಯ್ಯ ಸ್ವಾಮಿ, ಬಂದೇನವಾಜ್, ಜಾಫರ್, ಸೈಯದ್ ಮನ್ಸೂರ್, ಮನ್ನಾನ್, ಫಾರೂಕ್, ತಾಹೇರ್, ಸುದರ್ಶನರೆಡ್ಡಿ, ಈರಣ್ಣ, ಅಬ್ದುಲ್ ಹಬೀಬ್, ಮೌಲಾ, ಬಾಬು, ಗುರು, ಪಾಂಡುರಂಗ, ಮಹೆಬೂಬ್, ಹುಸೇನ್, ಬಾಬಾಫಕ್ರುದ್ದಿನ್, ಆನಂದ, ಶಕ್ಷಾವಲಿ, ಸೈಯದ್ ಮಹೆಬೂಬ್, ಸಾದೀಕ್, ನಿಸಾರ್ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 16 Apr 2026 9:22 pm

ಎ.17ರಿಂದ ಲ್ಯಾಂಡ್ ಮಾರ್ಕ್ ಫೋರಮ್‌ನ ಅಂತರರಾಷ್ಟ್ರೀಯ ಕಾರ್ಯಾಗಾರ; ಸ್ಪೀಕರ್‌ ಯು.ಟಿ. ಖಾದರ್ ಭಾಗಿ

ಹೊಸದಿಲ್ಲಿ: ಲ್ಯಾಂಡ್ ಮಾರ್ಕ್ ಫೋರಮ್ ಸಂಸ್ಥೆ ಆಯೋಜಿಸಿರುವ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರವು ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಎ.17 ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 11ರವರೆಗೆ ನಡೆಯಲಿದೆ. ವಿಶ್ವದ ವಿವಿಧ ದೇಶಗಳಿಂದ ಸುಮಾರು 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದು, ನಾಯಕತ್ವ, ವ್ಯಕ್ತಿತ್ವ ವಿಕಾಸ, ಪರಿಣಾಮಕಾರಿ ಸಂವಹನ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 16 Apr 2026 9:21 pm

ಕ್ಷೇತ್ರ ಮರುವಿಂಗಡಣೆ ಮೂಲಕ ಗೆಲ್ಲುವ ಕ್ಷೇತ್ರಗಳನ್ನು ಹೆಚ್ಚಿಸಲು ಬಿಜೆಪಿಯಿಂದ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ

ಹೊಸದಿಲ್ಲಿ, ಎ. 16: ದೋಷಪೂರಿತ ಕ್ಷೇತ್ರ ಮರುವಿಂಗಡಣೆ ಮಸೂದೆ ಮೂಲಕ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ. ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ಸೋಗಿನಲ್ಲಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಪುನರ್‌ ರೂಪಿಸಲು ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ‘‘ಮಹಿಳಾ ಮೀಸಲಾತಿಯ ಸೋಗಿನಲ್ಲಿರುವ ದೋಷಪೂರಿತ ಕ್ಷೇತ್ರ ಮರುವಿಂಗಡಣಾ ಮಸೂದೆಗಳು ಸಂಸತ್ತನ್ನು ಅಪಹರಿಸಲು ಪ್ರತಿಪಕ್ಷವು ಬಿಡುವುದಿಲ್ಲ. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ’’ ಎಂದು ಅವರು ಹೇಳಿದರು. ‘‘ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ ಆಡಳಿತಾರೂಢ ಪಕ್ಷವು ಪ್ರಬಲವಾಗಿರುವ ಪ್ರದೇಶಗಳಲ್ಲಿ ಸ್ಥಾನಗಳನ್ನು ಹೆಚ್ಚಿಸುವ ಯೋಜನೆಯನ್ನು ಸರಕಾರ ಹೊಂದಿದೆ’’ ಎಂದು ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು. ‘‘ಹೀಗೆ ಮಾಡಲು ಅವರು ನೆಪವಾಗಿ ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ಅವರು ಈಗಾಗಲೇ 2023ರಲ್ಲಿ ತಂದಿರುವ ಸಾಂವಿಧಾನಿಕ ತಿದ್ದುಪಡಿಗಳಿಗೆ ಮತ್ತೆ ತಿದ್ದುಪಡಿಗಳನ್ನು ತರುತ್ತಿದ್ದಾರೆ’’ ಎಂದು ಅವರು ಬೆಟ್ಟು ಮಾಡಿದರು.

ವಾರ್ತಾ ಭಾರತಿ 16 Apr 2026 9:20 pm

IPL 2026: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕೆ ಆಡುತ್ತಿಲ್ಲ? ಇನ್ನೆಷ್ಟು ಪಂದ್ಯ ಆಡುವುದಿಲ್ಲ?

Rohit Sharma Injury- ಐಪಿಎಲ್ 2026ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಚೇತರಿಸಿಕೊಳ್ಳಲು ಇನ್ನು ಎರಡು ಪಂದ್ಯಗಳ ಕಾಲಾವಕಾಶ ಬೇಕಾಗಬಹುದು ಎಂದು ನಾಯಕ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿದ್ದ ರೋಹಿತ್ ಅನುಪಸ್ಥಿತಿಯು ತಂಡದ ಬ್ಯಾಟಿಂಗ್ ಸಂಯೋಜನೆಗೆ ದೊಡ್ಡ ಹಿನ್ನಡೆಯಾಗಿದ್ದು, ಅವರ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸ್ಯಾಂಟ್ನರ್ ಕೂಡ ಅನಾರೋಗ್ಯದಿಂದ ಪಂದ್ಯ ತಪ್ಪಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 16 Apr 2026 9:19 pm

ಶಾಸಕ ವಿನಯ್ ಕುಲಕರ್ಣಿ ಕಣ್ಣೀರು! ಶಿಕ್ಷೆ ಪ್ರಕಟಕ್ಕೂ ಮುನ್ನ ಜಡ್ಜ್‌ ಮುಂದೆ ಕೊನೆ ಮಾತು ಹೇಳಿದ್ದೇನು?

ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯದಲ್ಲಿ ಕಣ್ಣೀರಿಟ್ಟಿದ್ದು, ಶಿಕ್ಷೆ ಪ್ರಕಟಕ್ಕೂ ಮುನ್ನ ನ್ಯಾಯಾಧೀಶರ ಮುಂದೆ ಕೊನೆಯ ಮಾತುಗಳನ್ನಾಡಿದ್ದಾರೆ. ಮಕ್ಕಳು, ಕ್ಷೇತ್ರ ಹಾಗೂ ತಮ್ಮ ಕೃಷಿ ಜೀವನ, ರಾಜಕೀಯ ಪಿತೂರಿ ಉಲ್ಲೇಖಿಸಿ ಶಿಕ್ಷೆ ಪ್ರಮಾಣ ಕಡಿಮೆ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 16 Apr 2026 8:53 pm

National Highway: ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್‌

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿಗಳ ಹಂತದಲ್ಲಿವೆ. ಈ ಸಾಲಿಗೆ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ NH ಕೂಡ ಸೇರಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766Cಯಡಿ ಬರುವ ಬೈಂದೂರು- ಕೊಲ್ಲೂರು ನಡುವಿನ 38 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ

ಒನ್ ಇ೦ಡಿಯ 16 Apr 2026 8:40 pm

ವಿರಾಟ್ ಕೊಹ್ಲಿಗೆ ಮರೆತು ಹೋಯಿತೇ ತಮ್ಮದೇ ಮಾತು? ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಾಗ ಅಭಿಮಾನಿಗಳಿಗೆ ನೆನಪಾಯ್ತು!

Virat Kohli And Impact Player Rule 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವ ದಿನವೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದ ವಿರಾಟ್ ಕೊಹ್ಲಿ, ಲಖನೌ ವಿರುದ್ಧದ ಪಂದ್ಯದಲ್ಲಿ ಅನಿವಾರ್ಯವಾಗಿ ಅದೇ ನಿಯಮದಡಿ ಕಣಕ್ಕಿಳಿದಿದ್ದಾರೆ. ಪಾದದ ನೋವಿನ ಕಾರಣ ಫೀಲ್ಡಿಂಗ್ ಮಾಡದ ಅವರು, ಸುಯಶ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿ 48 ರನ್ ಗಳಿಸಿದರು. ಈ ಮೂಲಕ ತಮ್ಮ ಹಳೆಯ ಹೇಳಿಕೆಯಿಂದ ಅವರು ಹಿಂದೆ ಸರಿದರಾ ಎಂಬ ಚರ್ಚೆ ಶುರುವಾಗಿದೆ. ಪೂರ್ಣ ಫಿಟ್‌ನೆಸ್ ಇದ್ದರೆ ಮಾತ್ರ ಆಡುವುದಾಗಿ ಈ ಹಿಂದೆ ಅವರು ಸಂದರ್ಶನದಲ್ಲಿ ತಿಳಿಸಿದ್ದರು.

ವಿಜಯ ಕರ್ನಾಟಕ 16 Apr 2026 8:40 pm

Indian Railway: ಭಾರತದ ಟಾಪ್ 6 ಅತಿ ಉದ್ದವಾದ ರೈಲು ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಇಲ್ಲಿದೆ

ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಂಪರ್ಕಿಸುವ ಅತಿ ದೊಡ್ಡ ವ್ಯವಸ್ಥೆಯಲ್ಲಿ ಕೆಲವು ರೈಲು ನಿಲ್ದಾಣಗಳು ತಮ್ಮ ದೇಶದಲ್ಲೆ ಅತಿ ಉದ್ದವಾದ ಪ್ಲಾಟ್‌ಫಾರ್ಮ್‌ಗಳಿಂದ ವಿಶೇಷ ಗಮನ ಸೆಳೆಯುತ್ತಿವೆ. ಇಂತಹ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ರೈಲುಗಳನ್ನು ಸುಲಭವಾಗಿ ನಿಲುಗಡೆಗೊಳಿಸಲು ಸಹಾಯ ಮಾಡುವುದರ ಜೊತೆಗೆ, ಹೆಚ್ಚಿನ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗುತ್ತವೆ.

ಒನ್ ಇ೦ಡಿಯ 16 Apr 2026 8:33 pm

ಗುರುಗ್ರಾಮ| ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ಆತ್ಮಹತ್ಯೆ

ಗುರುಗ್ರಾಮ,ಎ.16: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶಗಳು ಬುಧವಾರ ಪ್ರಕಟಗೊಂಡ ಬೆನ್ನಲ್ಲೆ ಇಲ್ಲಿಯ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು. ಕುನಾಲ್ (16) ಮೃತ ವಿದ್ಯಾರ್ಥಿಯಾಗಿದ್ದು,ನಿರೀಕ್ಷಿತ ಅಂಕಗಳು ಬಾರದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಜತೋಲಿ ಪ್ರದೇಶದ ಬಾಬಾ ಹರದೇವ ಕಾಲನಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಕುನಾಲ್ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದ. ಆದರೆ ಫಲಿತಾಂಶ ತನ್ನ ನಿರೀಕ್ಷೆಯಂತೆ ಬರದಿದ್ದರಿಂದ ಬೇಸರಗೊಂಡಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೋಷಕರು ಮರುಪರೀಕ್ಷೆ ಬರೆಯುವಂತೆ ಮಗನಿಗೆ ಉತ್ತೇಜನವನ್ನೂ ನೀಡಿದ್ದರು. ಆದರೆ ಆತ ಖಿನ್ನತೆಗೆ ಒಳಗಾಗಿದ್ದ. ಫಲಿತಾಂಶ ಪ್ರಕಟಗೊಂಡ ಬಳಿಕ ಕುನಾಲ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 16 Apr 2026 8:28 pm

ಎ.18ರಿಂದ ಪದವು ಕುಲಶೇಖರದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ

​ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ. 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಅವರು ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ​ಎಂ. ಗಿರಿಧರ ಭಟ್ ಮತ್ತು ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಏಪ್ರಿಲ್ 18ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಏಪ್ರಿಲ್ 22 ರವರೆಗೆ ಲಕ್ಷ್ಮೀನಾರಾಯಣ ಪ್ರಧಾನ ಹೋಮ ನಡೆಯಲಿದ್ದು, ಏಪ್ರಿಲ್ 23 ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲ ಶಾಭಿಷೇಕ ನೆರವೇರಲಿದೆ. ಏಪ್ರಿಲ್ 24 ರಂದು ಚಂಡಿಕಾಯಾಗ ಮತ್ತು ಸಮಗ್ರ ಶನೈಶ್ಚರ ಮಹಾಯಾಗದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ​ಉತ್ಸವದ ಅಂಗವಾಗಿ ಏಪ್ರಿಲ್ 19 ರಂದು ಬೆಳಿಗ್ಗೆ 9 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಪದವು ದೇವಸ್ಥಾನದವರೆಗೆ ಹಸಿರುವಾಣಿ (ಹೊರೆಕಾಣಿಕೆ) ಮೆರವಣಿಗೆ ನಡೆಯಲಿದ್ದು, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಶಿವಾಜಿ ಮಂಟಪದಲ್ಲಿ ಹಿಂದು ಯುವಸೇನೆಯ ಸಮಾವೇಶ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ, ನಾಟಕ ಹಾಗೂ ಸಂಗೀತ ಲಹರಿಗಳು ಪ್ರದರ್ಶನ ಗೊಳ್ಳಲಿವೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ವೇದವ್ಯಾಸ ಕಾಮತ್, ಪ್ರದಾನ ಕಾರ್ಯದರ್ಶಿ ಬಾಸ್ಕರ ಚಂದ್ರ ಶೆಟ್ಟಿ, ಶನಿಶ್ಚರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 8:27 pm

Raichur | ಬಿಸಿಲಿನಿಂದ ಜನರಿಗೆ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆ ಮಾಡಲು ಎಐಡಿಎಸ್ಒ ಮನವಿ

ರಾಯಚೂರು: ನಗರದ ವಿವಿಧ ವೃತ್ತಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಉರಿ ಬಿಸಿಲಿನಿಂದ ಜನರನ್ನು ರಕ್ಷಿಸಲು ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಪದಾಧಿಕಾರಿಗಳು ಮಹಾನಗರ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, 43 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ. ಬೆಳಿಗ್ಗೆ 10 ಗಂಟೆಯಿಂದಲೇ ಜನರು ಹೊರಗೆ ಬರಲು ಕಷ್ಟಪಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಮತ್ತು ಬಿಸಿ ಗಾಳಿ ಜನರನ್ನು ಹೈರಾಣಾಗಿಸುತ್ತಿದ್ದು, ಸಂಜೆ 4.30 ಆದರೂ ಸಹ ತಾಪಮಾನದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ವೃದ್ಧರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಲಿನ ಪರಿಣಾಮವಾಗಿ ದೇಹದ ಅಸ್ವಸ್ಥತೆ, ದಾಹ, ತಲೆ ಸುತ್ತುವುದು ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ನಗರದ ಎಲ್ಲಾ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ನೆರಳಿನ ವ್ಯವಸ್ಥೆ (ಶೆಡ್‌ಗಳು/ಷೆಲ್ಟರ್‌ಗಳು) ಕಲ್ಪಿಸುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದರು. ಇನ್ನೂ ಒಂದೂವರೆ ತಿಂಗಳ ಕಾಲ ಬಿಸಿಲಿನ ತೀವ್ರತೆ ಮುಂದುವರಿಯಲಿದ್ದು, ಮುಂದಿನ ಒಂದು ವಾರದಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಉಲ್ಲೇಖಿಸಿ ತಿಳಿಸಿದರು. ಈಗಾಗಲೇ ಮಹಾನಗರ ಪಾಲಿಕೆ ಕೆಲವು ಸ್ಥಳಗಳಲ್ಲಿ ‘ಅಮೃತ ನೆರಳು’ ಕೇಂದ್ರಗಳನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾದರೂ, ಅವು ಕೆಲವೇ ವೃತ್ತಗಳಿಗೆ ಸೀಮಿತವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ನಂತರ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಐಡಿವೈಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ, ಸಂಘಟನೆಯ ಪದಾಧಿಕಾರಿ ಮೌನೇಶ, ನೂರ್ ಪಾಶಾ, ಅಶೋಕ, ಹಿರಿಯ ನಾಗರಿಕರಾದ ವೀರೇಶ ಬಾಬು, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ರುದ್ರಯ್ಯ ಗುಣಾರಿ, ಅಣ್ಣಪ್ಪ, ತಾಯಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 16 Apr 2026 8:25 pm

ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ಹೊರಟ ಸರಕಾರ: ಗೌರವ್ ಗೊಗೋಯ್

ಹೊಸದಿಲ್ಲಿ, ಎ. 16: ಸರಕಾರ ಮಂಡಿಸಿರುವ ಮೂರು ಮಸೂದೆಗಳು ‘‘ಮಹಿಳಾ ವಿರೋಧಿ, ಜಾತಿ ಗಣತಿ ವಿರೋಧಿ, ಸಂವಿಧಾನ ವಿರೋಧಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆ ವಿರೋಧಿಯಾಗಿದೆ ಎಂಬುದಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ ಗುರುವಾರ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ನೈಜ ಬದ್ಧತೆ ಸರಕಾರಕ್ಕೆ ಇದ್ದರೆ, ಲೋಕಸಭೆಯ ಪ್ರಸಕ್ತ ಬಲದ ಆಧಾರದಲ್ಲೇ ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಹೇಳಿದರು. ಸರಕಾರವು ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತನಗೆ ಬೇಕಾದಂತೆ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಸೂದೆಗಳ ಚರ್ಚೆ ವೇಳೆ ಮಾತನಾಡಿದ ಗೊಗೋಯಿ ಆರೋಪಿಸಿದರು. ‘‘ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಮ್‌ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅವರು ಏನು ಮಾಡಿರುವರೋ, ಅದನ್ನು ಮಹಿಳಾ ಮೀಸಲಾತಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮಾಡಲು ಬಯಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರದ ಕೃತ್ಯಗಳು ‘‘ನಾಚಿಕೆಗೇಡಿನವು’’ ಎಂದು ಅವರು ಬಣ್ಣಿಸಿದರು.

ವಾರ್ತಾ ಭಾರತಿ 16 Apr 2026 8:25 pm

ಮಾದಕ ವಸ್ತು ಸೇವನೆ ಮಾಡಿದ ಆರೋಪ: ಯುವಕ ಸೆರೆ

ಮಂಗಳೂರು, ಎ.16: ನಗರದ ಬಂದರ್ ದಕ್ಕೆ ಪರಿಸರದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಹೊಯಿಗೆ ಬಜಾರ್ ನಿವಾಸಿ ಪ್ರಣಮ್ ಸಾಲಿಯಾನ್ (30)ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಠಾಣೆಯ ಸಿಬ್ಬಂದಿ ಸಾಗರ್ ದೆವಕತ್ತಿ ಜೊತೆ ಬುಧವಾರ ಅಪರಾಹ್ನ ಗಸ್ತು ನಿರತರಾಗಿದ್ದ ವೇಳೆ ಆರೋಪಿ ಪೊಲೀಸರನ್ನು ಕಂಡು ತಪ್ಪಿಸಲು ಯತ್ನಿಸಿದ. ಸಂಶಯದ ಮೇರೆಗೆ ಹಿಡಿದು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:17 pm

5 ರಿಂದ 17 ವರ್ಷದೊಳಗಿನವರಿಗೆ ಆಧಾರ್ ಬಯೋಮೆಟ್ರಿಕ್ ಅಪ್‍ಡೇಟ್‍ಗೆ ಸೆ.30ರ ವರೆಗೆ ಕಾಲಾವಕಾಶ

ಬೆಂಗಳೂರು : ರಾಜ್ಯದಲ್ಲಿನ 5 ರಿಂದ 17 ವರ್ಷದೊಳಗಿನವರಿಗೆ ಸೆಪ್ಟೆಂಬರ್ 30ರ ವರೆಗೆ ಆಧಾರ್ ಸಂಖ್ಯೆಯ ಕಡ್ಡಾಯ ಬಯೋಮೆಟ್ರಿಕ್ ಅಪ್‍ಡೇಟ್ ಮಾಡಿಸಲು ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಗುರುವಾರ ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ರಾಜ್ಯದ ಎಲ್ಲ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿತ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಎಲ್ಲ ಪೋಷಕರು ಜವಾಬ್ದಾರಿಯಿಂದ ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಈ ವಿಷಯದ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಅಪ್‍ಡೇಟ್ ಏತಕ್ಕೆ? : ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‍ಡೇಟ್ ಮಾಡಿಸುವುದರಿಂದ ಹಲವು ಸರಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು, ಸರಕಾರದ ಯೋಜನೆಗಳ ಲಾಭ ಪಡೆಯುವುದು ಹಾಗೂ ವಿದ್ಯಾರ್ಥಿ ವೇತನ-ತರಬೇತಿ ಸೌಲಭ್ಯಗಳನ್ನು ಪಡೆಯುವುದು ಒಳಗೊಂಡಿದೆ.  

ವಾರ್ತಾ ಭಾರತಿ 16 Apr 2026 8:16 pm

Kalaburagi | ಮಾನಸಿಕ ಗುಲಾಮಗಿರಿಯಿಂದ ಹೊರಬನ್ನಿ: ನಿಜಗುಣಾನಂದ ಸ್ವಾಮೀಜಿ ಕರೆ

135ನೇ ಜಯಂತ್ಯೋತ್ಸವ ಸಮಾರೋಪ ಸಮಾರಂಭ

ವಾರ್ತಾ ಭಾರತಿ 16 Apr 2026 8:16 pm

ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ನಷ್ಟವಿಲ್ಲ; ಕರ್ನಾಟಕಕ್ಕೆ 42 ಲೋಕಸಭಾ ಸ್ಥಾನಗಳು: ಗೃಹ ಸಚಿವ ಅಮಿತ್ ಶಾ

ಹೊಸದಿಲ್ಲಿ, ಎ.16: ಕ್ಷೇತ್ರ ಪುನರ್ವಿಂಗಡಣೆ ಹಾಗೂ ಸಂಬಂಧಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕುಗ್ಗುತ್ತದೆ ಎಂಬ ಭೀತಿ ಆಧಾರರಹಿತವಾಗಿದ್ದು, ಗೊಂದಲವನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಗುರುವಾರ ಹೇಳಿದರು. ಸದನದಲ್ಲಿ ಚರ್ಚೆಗೆ ಉತ್ತರಿಸಿದ ಅವರು, “ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೇರಿ ಮೂರು ಮಸೂದೆಗಳು ಸದನದ ಮುಂದಿವೆ. ಇವುಗಳಿಂದ ದಕ್ಷಿಣ ರಾಜ್ಯಗಳಿಗೆ ಹಾನಿ ಉಂಟಾಗುತ್ತದೆ ಎನ್ನುವ ನಿರೂಪಣೆಗೆ ಯಾವುದೇ ವಾಸ್ತವಿಕತೆ ಇಲ್ಲ,” ಎಂದು ಸ್ಪಷ್ಟಪಡಿಸಿದರು. ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ವಿವರಿಸಿದ ಶಾ, “ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿದ್ದು, ಒಟ್ಟು 543 ಸ್ಥಾನಗಳ ಪೈಕಿ ಶೇ. 5.15ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ಬಳಿಕ ಈ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ. 812 ಸದಸ್ಯರ ಬಲದ ಲೋಕಸಭೆಯಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ. 5.14ರಷ್ಟೇ ಇರುತ್ತದೆ. ಹೀಗಾಗಿ ರಾಜ್ಯಕ್ಕೆ ಯಾವುದೇ ನಷ್ಟವಾಗುವುದಿಲ್ಲ,” ಎಂದು ಅವರು ತಿಳಿಸಿದರು. ಆಂಧ್ರಪ್ರದೇಶದ ಕುರಿತು ಮಾತನಾಡಿದ ಅವರು, “ಪ್ರಸ್ತುತ 25 ಸ್ಥಾನಗಳಿದ್ದು, ಶೇ. 4.60ರಷ್ಟು ಪ್ರಾತಿನಿಧ್ಯ ಹೊಂದಿದೆ. ಪುನರ್ವಿಂಗಡಣೆಯ ನಂತರ ಸ್ಥಾನಗಳು 38ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 4.75ಕ್ಕೆ ಹೆಚ್ಚಳವಾಗಲಿದೆ. ತೆಲಂಗಾಣದಲ್ಲಿ 17 ಸ್ಥಾನಗಳಿರುವ ರಾಜ್ಯದ ಪ್ರಾತಿನಿಧ್ಯ ಶೇ. 3.13. ಶೇ. 50ರಷ್ಟು ಏರಿಕೆಯ ಬಳಿಕ ಸ್ಥಾನಗಳು 26ಕ್ಕೆ ಹೆಚ್ಚಳವಾಗಲಿದ್ದು, ಪ್ರಾತಿನಿಧ್ಯ ಶೇ. 3.18ಕ್ಕೆ ಏರಲಿದೆ,” ಎಂದು ವಿವರಿಸಿದರು. ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಭರವಸೆ ನೀಡಿದ ಶಾ, “39 ಸ್ಥಾನಗಳು 59ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯ ಶೇ. 7.18ರಿಂದ ಶೇ. 7.23ಕ್ಕೆ ಹೆಚ್ಚಳವಾಗಲಿದೆ. ಕೇರಳದಲ್ಲಿಯೂ 20 ಸ್ಥಾನಗಳು 30ಕ್ಕೆ ಏರಿಕೆಯಾಗಲಿದ್ದು, ಪ್ರಾತಿನಿಧ್ಯದ ಪಾಲು ಶೇ. 3.67ರಿಂದ ಶೇ. 3.68ಕ್ಕೆ ಸ್ವಲ್ಪ ಮಾತ್ರ ಏರಿಕೆಯಾಗಲಿದೆ”, ಎಂದು ಅಮಿತ್‌ ಶಾ ಅವರು ಹೇಳಿದರು.

ವಾರ್ತಾ ಭಾರತಿ 16 Apr 2026 8:15 pm

ಕಾರವಾರ: ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಸ್ಫೋಟ

ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಸಮೀಪದ ರಾಸಾಯನಿಕ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡು ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ಸಂಭವಿಸಿದೆ. ಈ ಅಪಘಾತ ಸಂಭವಿಸಿದ ಬೆನ್ನಲ್ಲೇ ಟ್ಯಾಂಕರ್ ಚಾಲಕ ನಾಪತ್ತೆಯಾಗಿದ್ದು, ಆತನ ಸ್ಥಿತಿಯ ಬಗ್ಗೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಿವೆಯಾದರೂ, ಉರಿಯುತ್ತಿರುವ ಬೆಂಕಿಯ ಕೆನ್ನಾಲಗೆ ಮತ್ತು ಅತಿಯಾದ ಶಾಖದಿಂದಾಗಿ ಕಾರ್ಯಾಚರಣೆಗೆ ತೀವ್ರ ಅಡೆತಡೆ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಕೋಲಾ-ಹುಬ್ಬಳ್ಳಿ ನಡುವಿನ ಈ ಬ್ಯುಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಟ್ಯಾಂಕರ್ನಲ್ಲಿದ್ದ ರಾಸಾಯನಿಕ ಪದಾರ್ಥದ ಸ್ವರೂಪದಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:14 pm

ಟೆಕ್ಕಿಗಳಿಗೆ 10,000 ರೂ ಸ್ಟೈಪೆಂಡ್‌ನೊಂದಿಗೆ ಎನ್‌ಐಸಿಯಿಂದ ಡಿಜಿಟಲ್ ಇಂಡಿಯಾ ಇಂಟರ್ನ್‌ಶಿಪ್ ಘೋಷಣೆ

ಬೆಂಗಳೂರು: ನೀವು ಭವಿಷ್ಯದ ತಂತ್ರಜ್ಞಾನವನ್ನು ರೂಪಿಸುವ, ಹೊಸ ಕೋಡಿಂಗ್ (Coding) ಕಲಿಯುವ ಮತ್ತು ಪ್ರಪಂಚದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಹ ಆವಿಷ್ಕಾರಗಳನ್ನು ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಬರುವ 'ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್' (NIC) ಇದೀಗ ಡಿಜಿಟಲ್ ಇಂಡಿಯಾ ಇಂಟರ್ನ್‌ಶಿಪ್

ಒನ್ ಇ೦ಡಿಯ 16 Apr 2026 8:13 pm

Kalaburagi | ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1.25 ರೂ. ಲಕ್ಷ ದಂಡ

ಕಲಬುರಗಿ : ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,25,000 ರೂ. ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಮಲರಾಜ ಬಾಬು ನಾಯ್ಕೋಡಿ(24) ಶಿಕ್ಷೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ಪ್ರಕರಣದ ವಿವರಗಳ ಪ್ರಕಾರ, ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚೂರ ಗ್ರಾಮದ 17 ವರ್ಷದ ಬಾಲಕಿಯೊಂದಿಗೆ ಆರೋಪಿ ಮಲರಾಜ (24), ಕಳೆದ ಕೆಲವು ತಿಂಗಳಿನಿಂದ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ಅಪಹರಿಸಿದ್ದನು. 2025ರ ಫೆ.16ರಂದು ರಾತ್ರಿ ಕೊಂಚೂರ ಗ್ರಾಮದ ಅಂಜನೇಯ ದೇವಸ್ಥಾನದ ಸಮೀಪದಿಂದ ಮೋಟಾರ್ ಸೈಕಲ್‌ನಲ್ಲಿ ಕರೆದುಕೊಂಡು ಹೋಗಿ, ಯಾದಗಿರಿ ರೈಲು ನಿಲ್ದಾಣದ ಮೂಲಕ ಬೆಂಗಳೂರಿನ ಯಲಹಂಕಕ್ಕೆ ತೆರಳಿ, ಬಳಿಕ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿ ಗ್ರಾಮದ ಹೊಲದಲ್ಲಿರುವ ಶೆಡ್‌ನಲ್ಲಿ ಇರಿಸಿದ್ದನು. ಅಲ್ಲಿ ಫೆ.17ರಿಂದ 21ರವರೆಗೆ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು, ಮದುವೆಯ ನೆಪದಲ್ಲಿ ಪುಸಲಾಯಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣವನ್ನು ವಾಡಿ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ಆರೋಪಿ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಲರಾಜನಿಗೆ ಪೋಕ್ಸೋ ಕಾಯ್ದೆಯ ಕಲಂ 6ರಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಇದೇ ವೇಳೆ, ಬಿಎನ್‌ಎಸ್ ಕಲಂ 137(2) ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 25,00 ರೂ.0 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 5 ತಿಂಗಳ ಸಾಧಾ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಲ್ಲದೆ, ಪೀಡಿತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಕಾನೂನು ಪ್ರಾಧಿಕಾರದಿಂದ ಒಂದು ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ಅವರು ವಾದ ಮಂಡಿಸಿದ್ದರು.

ವಾರ್ತಾ ಭಾರತಿ 16 Apr 2026 8:12 pm

Kalaburagi | ಡಾ.ಶಿವಕುಮಾರ ಸ್ವಾಮಿಗಳ ಜಯಂತಿ : ಗುರುವಂದನಾ ಮಹೋತ್ಸವ

ಕಲಬುರಗಿ : ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಚರಿಸಲಾಯಿತು. ತುಮಕೂರ ಸಿದ್ಧಗಂಗಾಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸಮಾರಂಭವನ್ನು ಉದ್ಘಾಟಿಸಿದರು. ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಸಮಾರಂಭ ಜರುಗಿತು. ಕರುಣೇಶ್ವರ ಶಿವಾಚಾರ್ಯರು, ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅಪ್ಪಾರಾವ ದೇವಿಮುತ್ಯಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ, ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ, ರಾಜು ಭೀಮಳ್ಳಿ, ಅಲ್ಲಮಪ್ರಭು ದೇಶಮುಖ, ಜಯಶ್ರೀ ಮತ್ತಿಮೂಡ, ನೀಲಕಂಠರಾವ ಮೂಲಗೆ, ಅರುಣಕುಮಾರ ಪಾಟೀಲ, ದೇವಿಂದ್ರಪ್ಪ ಅವಂಟಿ, ಚನ್ನಬಸಯ್ಯಗುರುವಿನ, ಕಲ್ಯಾಣಪ್ಪ ಪಾಟೀಲ, ಸಂಗಮೇಶ ನಾಗನಳ್ಳಿ, ಶರಣು ಭೂಸನೂರ, ಮಂಜು ರೆಡ್ಡಿ, ರಾಜಕುಮಾರ ಕೋಟೆ, ವಿಶ್ವನಾಥ ಪಾಟೀಲ, ಪ್ರಶಾಂತ ಗುಡ್ಡಾ, ಈಶ್ವರ ಪನಶೆಟ್ಟಿ, ಶ್ರೀಶೈಲ ಘೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾರ್ಯನಿರತರ ಪತ್ರಕರ್ತರ ಸಂಘದ ಚುನಾಯಿತ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಾರ್ತಾ ಭಾರತಿ 16 Apr 2026 8:09 pm

Delimitation: ನಿಮ್ಮ ಕುತಂತ್ರ ನೋಡಿ ಚಾಣಕ್ಯ ಶಾಕ್‌ ಆಗ್ತಿದ್ದ! ಅಮಿತ್ ಶಾಗೆ ಪ್ರಿಯಾಂಕಾ ಗಾಂಧಿ ಟಾಂಗ್; ಗೊಳ್ಳೆಂದು ನಕ್ಕ ಸದನ

ಲೋಕಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು. ಗೃಹ ಸಚಿವರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ನಿಮ್ಮ ಸುಳ್ಳುಗಳು ಮಹಿಳೆಯರಿಗೆ ಚನ್ನಾಗಿ ಗೊತ್ತಾಗುತ್ತದೆ. ಮಹಿಳಾ ಮೀಸಲಾತಿ ವಿಷಯ ಸ್ವಾಗತಾರ್ಹ ಆದರೆ, ಇದರ ಹಿಂದೆ ರಾಜಕೀಯ ವಾಸನೆ ಇದೆ. ನಿಮ್ಮ ಕುತಂತ್ರ ನೋಡಿ ಚಾಣಕ್ಯನೇ ಶಾಕ್‌ ಆಗುತ್ತಿದ್ದ ಎಂದು ಟಾಂಗ್ ಕೊಟ್ಟಿದ್ದಾರೆ.

ವಿಜಯ ಕರ್ನಾಟಕ 16 Apr 2026 8:06 pm

ಲಾಡ್ಜ್‌ನಲ್ಲಿರಿಸಿದ್ದ ಬ್ಯಾಗ್‌ನಿಂದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಮಂಗಳೂರು, ಎ.16: ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ವೊಂದರಲ್ಲಿ ಇರಿಸಿದ್ದ ಬ್ಯಾಗ್‌ನಿಂದ ಚಿನ್ನಾಭರಣ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ನಲ್ಲಿ ತಾನು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎ.13ರಂದು ಬೆಳಗ್ಗೆ 6:30ರಿಂದ ವಾಸ್ತವ್ಯ ಹೊಂದಿದ್ದು, ಎ.15ರಂದು ಬೆಳಗ್ಗೆ 8:30ಕ್ಕೆ ತಣ್ಣೀರುಬಾವಿ ಬೀಚ್‌ಗೆ ಹೋಗುವ ವೇಳೆ ಬ್ಯಾಗ್‌ ನಲ್ಲಿ ಲ್ಯಾಪ್‌ಟಾಪ್, ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ತನಗೆ ಸೇರಿದ ಬ್ರಾಸ್‌ಲೆಟ್‌ ಗಳನ್ನಿಟ್ಟು ರೂಮ್‌ಗೆ ಲಾಕ್ ಮಾಡಿ ಕೀಯನ್ನು ಕೊಂಡು ಹೋಗಿದ್ದೆ. ಅಂದು ಪೂ.11:30 ವಾಪಸ್ ರೂಮ್‌ಗೆ ಬಂದು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್‌ನಿಂದ ಸುಮಾರು 10 ಗ್ರಾಂ ತೂಕದ ತನ್ನ 1.40 ಲಕ್ಷ ರೂ. ಮೌಲ್ಯದ ಬ್ರಾಸ್‌ಲೆಟ್ ಇರಲಿಲ್ಲ. ಉಳಿದ ವಸ್ತುಗಳು ಯಥಾ ಸ್ಥಿತಿಯಲ್ಲಿತ್ತು. ಸದ್ರಿ ಸೊತ್ತನ್ನು ನಕಲಿ ಕೀ ಬಳಸಿ ಬಾಗಿಲು ತೆರೆದು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಎ.ಎನ್. ಶಿವ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:04 pm

ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು

ಮಂಗಳೂರು, ಎ.16: ನಗರದ ಉರ್ವಸ್ಟೋರ್ ಜಂಕ್ಷನ್ ಬಳಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಹಾಗೂ ಹಿಂಬದಿ ಸವಾರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. 74ರ ಹರೆಯದ ಬಿ.ಎಚ್. ವೆಂಕಟರಮಣ ಪೈ ಮೃತಪಟ್ಟಿದ್ದು, ಅವರ ಮೊಮ್ಮಗ 10ರ ಹರೆಯದ ಅಥರ್ವ ಗಾಯಗೊಂಡಿರುವುದಾಗಿ ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ. ಎ.15ರಂದು ಬೆಳಗ್ಗೆ 8:15ಕ್ಕೆ ವೆಂಕಟರಮಣ ಸ್ಕೂಟರ್‌ನಲ್ಲಿ ತನ್ನ ಮೊಮ್ಮಗ ಅಥರ್ವನನ್ನು ಕೂರಿಸಿಕೊಂಡು ಮನೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಹೊರಟಿದ್ದರು. ಉರ್ವಸ್ಟೋರ್ ಜಂಕ್ಷನ್ ಬಳಿ ಯು ಟರ್ನ್ ತೆಗೆದು ಕೊಳ್ಳುತ್ತಿರುವ ವೇಳೆ ಕೊಟ್ಟಾರ ಚೌಕಿ ಕಡೆಯಿಂದ ಕಾರನ್ನು ಅದರ ಚಾಲಕ ಮುಹಮ್ಮದ್ ಶಂಶೀರ್ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದರು. ವೆಂಕಟರಮಣ ಗಂಭೀರ ಗಾಯಗೊಂಡಿದ್ದರೆ, ಅಥರ್ವನಿಗೆ ತರಚಿದ ಗಾಯವಾಗಿತ್ತು. ಸಾರ್ವಜನಿಕರು ಹಾಗೂ ಕಾರು ಚಾಲಕ ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೆಂಕಟರಮಣ ಪೈ 8:49ಕ್ಕೆ ಮೃತಪಟ್ಟಿರುವುದಾಗಿದೆ ಬಿ.ಎಚ್. ಮಹೇಶ್ ಪೈ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 8:03 pm

Ballari | ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ: ಪಿಡಿಒ ಶೇಷಗಿರಿ

ಬಳ್ಳಾರಿ / ಕಂಪ್ಲಿ: ಇಂದಿನ ಜೀವನದ ಒತ್ತಡದಲ್ಲಿ ಜನರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಪಿಡಿಒ ಹಾರ್ವಿ ಶೇಷಗಿರಿ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ವಿನೂತನ ಪದವಿ ಕಾಲೇಜಿನ ನೇತೃತ್ವದಲ್ಲಿ ಎನ್‌ಎಸ್‌ಎಸ್ ಶಿಬಿರದ ಅಂಗವಾಗಿ, ಕಂಪ್ಲಿ ತಾಲೂಕು ಜೆಸಿಐ ಸೋನಾ ಘಟಕ ಹಾಗೂ ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರದಲ್ಲಿ ತಜ್ಞ ವೈದ್ಯರಾದ ಜೆಸಿ ಡಾ. ಭರತ್ ಪದ್ಮಶಾಲಿ, ಜೆಸಿ ಡಾ. ಶ್ರದ್ಧಾ ಭರತ್ ಹಾಗೂ ಜೆಸಿ ಡಾ. ಪ್ರವೀಣ್ ಅವರು ಭಾಗವಹಿಸಿ, ವಯಸ್ಕರು ಮತ್ತು ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿದರು. ಸುಮಾರು 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ವೈದ್ಯಕೀಯ ಸಲಹೆ ಹಾಗೂ ಔಷಧಿಗಳನ್ನು ಪಡೆದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಫಾರೂಕ್, ಶಿಕ್ಷಕ ರಾಮುಲು, ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ, ಉಪನ್ಯಾಸಕರು, ಸಿಬ್ಬಂದಿ ವರ್ಗ, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 7:59 pm