ಕ್ರೀಡಾಂಗಣದಲ್ಲಿ ರೀಲ್ಸ್ ಗೀಳಿಗೆ 70,000 ರೂಪಾಯಿ ಮೌಲ್ಯದ ಬಂಗಾರದ ಉಂಗುರ ಕಳೆದುಕೊಂಡ ಯುವತಿ
Gold Ring: ಮನುಷ್ಯ ಅಂದಮೇಲೆ ಒಂದಲ್ಲ ಒಂದು ಹವ್ಯಾಸಗಳು ಇರುತ್ತವೆ ನಿಜ. ಆದರೆ, ಅದು ಅತಿರೇಕಕ್ಕೆ ಹೋದರೆ ಎಂತಹ ಆಪತ್ತು ತರುತ್ತದೆ ಎಂಬುದಕ್ಕೆ ಪಂಜಾಬ್ನ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪಂಜಾಬ್ ಕಿಂಗ್ಸ್ ಮತ್ತು ಎಸ್ಆರ್ಎಚ್ ನಡುವಿನ ಪಂದ್ಯದ ವೇಳೆ ಯುವತಿಯೊಬ್ಬರು ಮಾಡಿದ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಾರಾಜ
ಮಾತೃಶಕ್ತಿಗೆ ಅವಮಾನ, ನಾರಿಶಕ್ತಿ ಕ್ಷಮಿಸೋಲ್ಲ ಎಂದ HDK : ಪಿಆರ್ ಸ್ಟಂಟ್ ಸಾಕು ಎಂದ ಕಾಂಗ್ರೆಸ್
Women Bill - Congress Vs BJP : ಮಹಿಳಾ ಮೀಸಲಾತಿ ಬಿಲ್ಲಿಗೆ ಸಂಬಂಧಿಸಿದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿದಿದೆ. ದಶಕಗಳಿಂದಲೂ, ಕಾಂಗ್ರೆಸ್ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಿಮಗಷ್ಟು ಮಹಿಳೆಯರ ಬಗ್ಗೆ ಗೌರವವಿದ್ದರೆ, ಈಗಿರುವ ಕ್ಷೇತ್ರಗಳಲ್ಲೇ ಮೀಸಲಾತಿ ಪ್ರಕಟಿಸಿ ಎಂದು ಕಾಂಗ್ರೆಸ್ ಚಾಲೆಂಜ್ ಮಾಡಿದೆ.
ಕಾಮಿಡಿ ಶೋ ರೀತಿಯಾದ ಪಾಕ್ ಸೂಪರ್ ಲೀಗ್ : ಯಾರು ಪ್ಲೇಯಿಂಗ್ ಇಲೆವೆನ್?ಯಾರು ಬದಲಿಗ ಎಂಬುದೇ ಗೊಂದಲ!
Pakistan Super League Comedies- ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ಆಗುವ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಅಲ್ಲಿನ ಚುಟುಕು ಕ್ರಿಕೆಟ್ ಲೀಗ್ ಕ್ರಿಕೆಟ್ ಗಿಂತಲೂ ಎಡವಟ್ಟುಗಳಿಗೇ ವಿಶ್ವವಿಖ್ಯಾತವಾಗುತ್ತಿದೆ. ಇದೀಗ ಅಂತೂ ಪಿಎಸ್ಎಲ್ ಕಾಮಿಡಿಗಳು ಎಂದು ಹೊಸ ಸಿರೀಸ್ ಅನ್ನೇ ಶುರುಮಾಡಬಹುದು ಎಂದು ನೆಚ್ಚಿಗರು ಮೂದಲಿಸುವಷ್ಟು. ಇದೀಗ ನಡೆದಿರುವ ಘಟನೆಯಂತೂ ಟೂರ್ನಿಯ ಬಗ್ಗೆ ಜನ ಅಪಹಾಸ್ಯ ಮಾಡುವಂತಾಗಿದೆ. ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಂದ್ಯದಲ್ಲಿ, ಗಾಯಗೊಂಡ ಮೂಲ ಆಟಗಾರ ಮತ್ತು ಆತನ ಬದಲಿ ಆಟಗಾರ ಇಬ್ಬರ ಹೆಸರೂ ಅಧಿಕೃತ 'ಪ್ಲೇಯಿಂಗ್ ಇಲೆವೆನ್' ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಪಿಸಿಬಿ ಮತ್ತು ಮ್ಯಾನೇಜ್ಮೆಂಟ್ ನಡುವಿನ ಈ ಸಮನ್ವಯದ ಕೊರತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?
ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು
ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಬಹುನಿರೀಕ್ಷಿತ ಸಿಹಿಸುದ್ದಿಯೊಂದು ಸಿಕ್ಕಿದೆ. ದೆಹಲಿಯಲ್ಲಿ ನಡೆದ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (Dearness Allowance - DA) ಶೇಕಡಾ 2ರಷ್ಟು ಹೆಚ್ಚಿಸಲು ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ವರ್ಷಕ್ಕೆ
ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ: ಕೆಪಿಸಿಸಿ ಆಗ್ರಹ
ಬೆಂಗಳೂರು: ರಾಜಧಾನಿ ಬೆಂಗಳೂರಿನಂತಹ ನಗರಗಳಲ್ಲಿ ಆಟೋ, ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳ, ಕಿರುಕುಳ, ಹಲ್ಲೆ, ಬೆದರಿಕೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಭಾಷೆಯು ಒಂದು ಪ್ರಮುಖ ಕಾರಣವಾಗಿದೆ. ಕನ್ನಡ ನೆಲದಲ್ಲಿ ಇಲ್ಲಿನ ಬಾಷೆ ಮಾತನಾಡದೇ ಹಿಂದಿ, ಇನ್ನಿತರ ಭಾಷೆ ಮಾತನಾಡಿದ್ದ ಚಾಲಕರು, ಪ್ರಯಾಣಿಕರಿಂದ ತೊಂದರೆ ಆಗಿತ್ತು. ಇಂತಹ ತೊಂದರೆ ತಪ್ಪಿಸುವ ಜೊತೆಗೆ ಕನ್ನಡಕ್ಕೆ ಆದ್ಯತೆ
ಕರ್ನಾಟಕದಲ್ಲಿ ಬಿಸಿಲ ಧಗೆ ಮುಂದುವರಿದ್ದು, ಟ್ರಫ್ ಹಿನ್ನೆಲೆ ಏಪ್ರಿಲ್ 18 ರಿಂದ 4 ದಿನ ಮಳೆಯಾಗಲಿದೆ. ಅದರಲ್ಲೂ ಏಪ್ರಿಲ್ 18 ಮತ್ತು 19 ರಂದು ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ? ಎಲ್ಲೆಲ್ಲಿ ಅಧಿಕ ಬಿಸಿಲು? ವಿವರ ಇಲ್ಲಿದೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ತೊಗರಿ ಖರೀದಿಗೆ ಒಂದು ತಿಂಗಳ ಅವಧಿ ವಿಸ್ತರಣೆ
ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ತೊಗರಿ ಖರೀದಿಗೆ ಒಂದು ತಿಂಗಳ ಅವಧಿ ವಿಸ್ತರಣೆ ನೀಡಲಾಗಿದೆ. ಕೇಂದ್ರ ಸಚಿವರು ರಾಜ್ಯದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, ಹಿಂಗಾರು ಹಂಗಾಮಿನ MSP ದರದಂತೆ ಕ್ವಿಂಟಾಲ್ ಗೆ 7721ರೂ ನಂತೆ 11 ಸಾವಿರ ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸುವುದಾಗಿ ಮಾನ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವರಿಗೆ ವಿನಂತಿಸಿದರು.
ಜೇವರ್ಗಿ: ಅಕ್ರಮ ಮದ್ಯ ಮಾರಾಟ ವಿರೋಧಿಸಿ ಸಾರ್ವಜನಿಕರಿಂದ ರಸ್ತೆ ತಡೆ
ಜೇವರ್ಗಿ: ಪಟ್ಟಣದಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದಲ್ಲಿ ಕೂಲಿ ಕಾರ್ಮಿಕರೊಬ್ಬರು ಮದ್ಯ ವ್ಯಸನದಿಂದಾಗಿ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕನ ಸಾವಿಗೆ ಅಕ್ರಮ ಮದ್ಯ ಮಾರಾಟವೇ ಕಾರಣವಾಗಿದ್ದು, ಇದಕ್ಕೆ ಸಹಕರಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜೇವರ್ಗಿಯ ಕೆಲ ಅಂಗಡಿಗಳು ಕಾನೂನು ಉಲ್ಲಂಘಿಸಿ ಮುಂಜಾನೆ 4 ಗಂಟೆಯಿಂದಲೇ ಮದ್ಯ ಮಾರಾಟ ಆರಂಭಿಸುತ್ತಿವೆ. ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅಬಕಾರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅದರ ಪರಿಣಾಮವಾಗಿ ಬಡ ಕೂಲಿ ಕಾರ್ಮಿಕನೊಬ್ಬ ಜೀವ ಕಳೆದುಕೊಂಡಿದ್ದಾನೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ, ಜೇವರ್ಗಿಯ ಟಿಪ್ಪು ಸುಲ್ತಾನ ಕಮಿಟಿ ವತಿಯಿಂದ ರಸ್ತೆ ಬಂದ್ ನಡೆಸಲಾಯಿತು. ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ, ಜೇವರ್ಗಿ ಪಿಎಸ್ಸೈರಿಗೆ ಮನವಿ ಸಲ್ಲಿಸಲಾಯಿತು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ ಕಮಿಟಿ ಅಧ್ಯಕ್ಷ ಮುಹಿಯುದ್ದೀನ್ ಇನಾಮ್ದಾರ್, ಶೇಕ್ ಸದ್ದಾಂ, ಗೌಸ್ ಇನಾಮ್ದಾರ್, ಮೆಹಬೂಬ್ ಸಾಬ್ ಇನಾಮ್ದಾರ್ (ಚನ್ನೂರು), ದಾವೂದ್ ಸಾಬ್ ಇಬ್ರಾಹೀಂ ಪಟೇಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಲಬುರಗಿ | ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಪೊಲೀಸ್ ಕಾನ್ ಸ್ಟೇಬಲ್ ಮೃತ್ಯು
ಅಫ್ಝಲ್ ಪುರ, ಎ.18: ಸಂಚಾರದ ವೇಳೆ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಪೊಲೀಸ್ ಕಾನ್ ಸ್ಟೇಬಲ್ ಮೃತಪಟ್ಟ ಘಟನೆ ತಾಲೂಕಿನ ಗೊಬ್ಬೂರ ಬಿ ಗ್ರಾಮ ಸಮೀಪ ಇಂದು ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಶಿರವಾಳ ಗ್ರಾಮದ ನಿವಾಸಿ ಧರೆಪ್ಪ (24) ಎಂದು ಗುರುತಿಸಲಾಗಿದೆ. ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದ ಇವರು ಕಲಬುರಗಿಯಿಂದ ಶಿರವಾಳ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕಿ ಉರುಳಿಬಿದ್ದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಲಖನ್ ಮಸಗುಪ್ಪಿ ಹಾಗೂ ದೇವಲಗಂಗಾಪುರ ಪೊಲೀಸ್ ಠಾಣೆಯ ಪಿಎಸ್ಸೈ ಸಂಗೀತಾ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ನಗರಾಭಿವೃದ್ಧಿಗೆ 2600 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್
ಮಂಗಳೂರು ನಗರಾಭಿವೃದ್ಧಿಯ 25 ಕಾಮಗಾರಿಗಳಿಗೆ ಶಿಲಾನ್ಯಾಸ
ಚುನಾವಣೆಗೂ ಮುನ್ನವೇ ತಮಿಳುನಾಡು NDA ಅನ್ನು ಸೋಲಿಸಿದೆ: ಎಂ.ಕೆ.ಸ್ಟಾಲಿನ್
ದಿಂಡಿಗಲ್/ಥೇನಿ: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ತಮಿಳುನಾಡು ಎನ್ಡಿಎಯನ್ನು ಪರಾಭವಗೊಳಿಸಿದೆ ಎಂದು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಸೋಲನ್ನು ಉಲ್ಲೇಖಿಸಿ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ದಿಂಡಿಗಲ್ ನಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, “ಚುನಾವಣೆಗೂ ಮುನ್ನವೇ NDA ಪರಾಭವವನ್ನು ಎದುರಿಸಿದೆ. ಇದು ಹೊಸದಲ್ಲವಾದರೂ, ಇದೊಂದು ಐತಿಹಾಸಿಕ ಗೆಲುವಾಗಿದೆ. ತಮಿಳುನಾಡು ದುರಹಂಕಾರಿ ಬಿಜೆಪಿಯನ್ನು ಪರಾಭವಗೊಳಿಸಿದೆ. ವಿರೋಧ ಪಕ್ಷಗಳ ಕಪ್ಪು ದಿರಿಸು ಹಾಗೂ ಕಪ್ಪು ಬಾವುಟ ಪ್ರದರ್ಶನವನ್ನು NDA ಸದಸ್ಯರು ಪ್ರಶ್ನಿಸಿದ್ದರು. ಆದರೆ, ಇದಷ್ಟೇ ಸಾಲದು, ಎಪ್ರಿಲ್ 23ರಂದು ಅವರಿಗೆ ನೈಜ ಪರಾಭವವನ್ನು ಹಸ್ತಾಂತರಿಸಬೇಕು. ಬಿಜೆಪಿ ತಮಿಳುನಾಡನ್ನು ಮುಟ್ಟುವ ಧೈರ್ಯ ಮಾಡಕೂಡದು. ಇಲ್ಲವಾದರೆ ಅವರು ಅದರ ಬಿಸಿಯನ್ನು ಅನುಭವಿಸಲಿದ್ದಾರೆ” ಎಂದು ಎಚ್ಚರಿಸಿದರು. ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ 12 ವರ್ಷಗಳ ಆಡಳಿತದಲ್ಲಿ ಅನುಭವಿಸಿರುವ ಮೊದಲ ಪರಾಭವವಾಗಿದೆ ಎಂದು ಸ್ಟಾಲಿನ್ ಹೇಳಿದರು. “ಎಡಪ್ಪಾಡಿ ಕೆ. ಪಳನಿಸ್ವಾಮಿ ಚುನಾವಣೆಗೂ ಮುನ್ನವೇ ಅನುಭವಿಸಿರುವ ಮೊದಲ ಬೃಹತ್ ಸೋಲು ಇದಾಗಿದೆ. ಕಪ್ಪು ಶರ್ಟ್ ಗಳು ಕೇಸರಿ ಸೇನೆಯನ್ನು ಮಣಿಸಿವೆ. ಈ ತಿದ್ದುಪಡಿ ಮಸೂದೆಯನ್ನು ಮಹಿಳಾ ಮೀಸಲಾತಿ ಹೆಸರಲ್ಲಿ ತರಲಾಗಿತ್ತು ಹಾಗೂ ಈ ಮಸೂದೆಯನ್ನು ಇಂಡಿಯಾ ಮೈತ್ರಿಕೂಟ ಪರಾಭವಗೊಳಿಸಿತು” ಎಂದು ಅವರು ಹೇಳಿದರು. ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ತಮಿಳುನಾಡು ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ವಾಸ್ತವದ ಕಾನೂನಿನಲ್ಲಿ ಹಾಗೆ ಬರೆದಿಲ್ಲ ಎಂದೂ ಅವರು ಮಸೂದೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ಅಂಡಿಪಟ್ಟಿಯಲ್ಲಿ ಮಾತನಾಡಿದ ಸ್ಟಾಲಿನ್, ಕೇಂದ್ರ ಸರಕಾರ ತಮಿಳು ಜನತೆಯ ವಿರುದ್ಧ ವಿಭಜನಕಾರಿ ಮತ್ತು ದ್ವೇಷಪ್ರೇರಿತ ರಾಜಕಾರಣದಲ್ಲಿ ತೊಡಗಿದ್ದು, ಕ್ಷೇತ್ರ ಪುನರ್ವಿಂಗಣೆಯ ಮೂಲಕ ತಮಿಳುನಾಡು ಸಂಸದರ ಸಂಖ್ಯೆಯನ್ನು ಕಡಿತಗೊಳಿಸಲು ಪ್ರಯತ್ನಿಸಿತ್ತು ಎಂದು ಆರೋಪಿಸಿದರು.
ರಾತ್ರಿ 8-30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ; ವಿಷಯ ಏನು? ಸಸ್ಪೆನ್ಸ್
ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.18-ಶನಿವಾರ) ರಾತ್ರಿ 8-30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಪ್ರಧಾನಿ ಮೋದಿ ಅವರು ಮುಖ್ಯವಾದ ವಿಚಾರವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದೆ. ಆದರೆ ಪ್ರಧಾನಿ ಯಾವ ವಿಚಾರವಾಗಿ ಮಾತನಾಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿನ್ನೆ (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸೋಲುಂಟಾಗಿರುವ ಹಿನ್ನೆಲೆಯಲ್ಲಿ, ಮೋದಿ ಅವರ ಈ ಭಾಷಣ ಮಹತ್ವ ಪಡೆದುಕೊಂಡಿದೆ.
KL Rahul Birthday: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆಯುವ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಇವತ್ತೇ ಡಿಸಿಯ ವಿಕೆಟ್ ಕೀಪರ್ ಹಾಗೂ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್
ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ರದ್ದತಿಗೆ ಒತ್ತಾಯಿಸಿ ಎ.28ರಂದು ಡಿವೈಎಫ್ಐ ಪಾದಯಾತ್ರೆ
ಉಸ್ತುವಾರಿ ಸಚಿವರ ಕಚೇರಿ ಚಲೋ ಪ್ರತಿಭಟನೆ
ಉಡುಪಿಯ 137 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
►750 ವಸತಿ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ►ಕಳೆದ ಬಾರಿಗಿಂತ ಪರಿಸ್ಥಿತಿ ಗಂಭೀರ
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್: ಶೇಕಡಾ 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು
ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಶೇ. 2ರಷ್ಟು ಹೆಚ್ಚಿಸಿದೆ. ಕಳೆದ ಅಕ್ಟೋಬರ್ನಲ್ಲಿ ಶೇಕಡಾ 55 ರಿಂದ 58 ಕ್ಕೆ ಹೆಚ್ಚಳವಾಗಿದ್ದು, ಈ ಮತ್ತೆ ಏರಿಕೆ ಮಾಡಲಾಗಿದೆ. ಇದರಿಂದ ಲಕ್ಷಾಂತರ ನೌಕರರು ಹಾಗೂ ಪಿಂಚಣಿದಾರರಿಗೆ ನೆರವಾಗಲಿದೆ.
ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲನ್ನು ಕಂಡಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ತ್ವರಿತ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿಯನ್ನು ಅಂಗೀಕರಿಸುವಲ್ಲಿ ಎನ್ಡಿಎ ಸರಕಾರ ವಿಫಲವಾಗಿತ್ತು. ಇದರಿಂದ ಪ್ರಧಾನಿ ಮೋದಿ ಭಾಷಣ ಮಹತ್ವವನ್ನು ಪಡೆದುಕೊಂಡಿದೆ.
NWKRTC ರಾಜರಥ ಹೊಸ ಎಸಿ ಸ್ಲೀಪರ್ 4 ಬಸ್ಗಳ ಸೇವೆ ಆರಂಭ; 2 ಮಾರ್ಗದಲ್ಲಿ ಸಂಚಾರ; 6 ಜಿಲ್ಲೆಗಳಿಗೆ ಅನುಕೂಲ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸ 2 ಮಾರ್ಗದಲ್ಲಿ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಹುಬ್ಬಳ್ಳಿ - ಹೈದರಾಬಾದ್, ಬೆಳಗಾವಿ - ಹೈದರಾಬಾದ್ ನಡುವೆ ಈ ಬಸ್ಗಳು ಸಂಚಾರ ನಡೆಸಲಿವೆ. ಇದರಿಂದ ಉತ್ತರ ಹಾಗೂ ಕಲ್ಯಾಣದ ಕರ್ನಾಟಕದ 6 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಬಸ್ ವೇಳಾಪಟ್ಟಿ, ಮಾರ್ಗ ವಿವರ ಇಲ್ಲಿದೆ.
ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ ಆರೋಪ: ಹಾರ್ಮುಝ್ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ ಹೇರಿದ ಇರಾನ್ : ವರದಿ
ಟೆಹ್ರಾನ್: ಅಮೆರಿಕ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಮತ್ತೆ ನಿರ್ಬಂಧಗಳನ್ನು ಹೇರಿರುವ ಬಗ್ಗೆ ವರದಿಯಾಗಿದೆ. ಅಮೆರಿಕ ನೌಕಾ ದಿಗ್ಬಂಧನ ಮುಂದುವರಿಸಿರುವುದರಿಂದ ಇರಾನ್ ಹಾರ್ಮುಝ್ ಜಲಸಂಧಿಯನ್ನು ತೆರೆಯುವ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದುಕೊಂಡಿದೆ. ಹಾರ್ಮುಝ್ ಜಲಸಂಧಿಯ ನಿಯಂತ್ರಣವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದೆ ಎಂದು IRGC ಹೇಳಿದೆ. ಅದು ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಇರಾನ್ ಮಿಲಿಟರಿ ಕಮಾಂಡ್ ಘೋಷಿಸಿದೆ. ಇರಾನ್ ಬಂದರುಗಳನ್ನು ಅಮೆರಿಕ ನಿರಂತರವಾಗಿ ದಿಗ್ಬಂಧನಗೊಳಿಸುತ್ತಿರುವುದರಿಂದ ಹಾರ್ಮುಝ್ ಜಲಸಂಧಿಯನ್ನು ನಿರ್ಬಂಧಿಸಿರುವುದಾಗಿ IRGC ಹೇಳಿದೆ. ಅಮೆರಿಕವು ದಿಗ್ಬಂಧನದ ಸೋಗಿನಲ್ಲಿ ಕಡಲ್ಗಳ್ಳತನ ಮತ್ತು ಸಮುದ್ರ ಕಳ್ಳತನದ ಕೃತ್ಯಗಳನ್ನು ಮುಂದುವರೆಸಿದೆ ಎಂದು IRGC ಆರೋಪಿಸಿದೆ.
ಮಹಿಳಾ ಮೀಸಲಾತಿ ಚರ್ಚೆ ಜೋರು: ಕೈ ಕಮಲ ನಾಯಕರ ಪರ - ವಿರೋಧ ವಾಗ್ವಾದ
ಕ್ಷೇತ್ರ ಪುನರ್ವಿಂಗಡನೆ ಮೂಲಕ ರಾಜಕೀಯವಾಗಿ ತಮಗೆ ಆಗದಿರುವವರನ್ನು ಹತ್ತಿಕ್ಕೋ ತಂತ್ರ ಬಿಜೆಪಿ ಮಾಡುತ್ತಿದೆ. ನಮ್ಮ ಉದ್ದೇಶ ಸ್ಪಷ್ಟತೆ ಇದ್ರೆ ಇದೆಲ್ಲ ಗೊಂದಲ ಆಗಲ್ಲ. ಅದಕ್ಕಾಗಿಯೇ ಮಲ್ಲಿಕಾರ್ಜುನ ಖರ್ಗೆ ಆತುರದಲ್ಲಿ ಸದನ ಕರಿಬೇಡಿ ಎಂದಿದ್ದರು. ರಾಜಕಾರಣಕ್ಕೆ ಹಾಗೂ ಮತ ಓಲೈಸುವುದಕ್ಕೆ ಮಾಡಿದರೆ ಏನು ಲಾಭ ಆಗಲ್ಲ. ರಾಜಕೀಯ ಉದ್ದೇಶ ಇಟ್ಟುಕೊಂಡು ಚುನಾವಣಾ ಆಯೋಗದ ನೇತೃತ್ವದಲ್ಲಿ ಎದುರಾಳಿಗಳನ್ನು ಹತ್ತಿಕ್ಕಬಾರದು ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಆದರೆ ಬಿಜೆಪಿ ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಟೀಕಿಸಿದೆ. ಇದು ಮಹಿಳಾ ವಿರೋಧಿ ನಡೆ ಎಂದು ಕಿಡಿಕಾರಿದೆ.
Tourist Vehicle Rules: ಪ್ರವಾಸಿ ವಾಹನ ಸವಾರರೇ ಗಮನಿಸಿ: ಹೊರ ರಾಜ್ಯಗಳಲ್ಲಿ ತಂಗುವ ಅವಧಿ 60 ದಿನಗಳಿಗೆ ಕಡಿತ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಖಿಲ ಭಾರತ ಪ್ರವಾಸಿ ಪರವಾನಗಿ (ಎಐಟಿಪಿ) ನಿಯಮಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ತಂದಿದ್ದು, ಇವು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿವೆ. ಪ್ರವಾಸಿ ವಾಹನಗಳ ಸಂಚಾರದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದಲ್ಲಿ ಪ್ರಮುಖವಾಗಿ ಹೊರ ರಾಜ್ಯಗಳಲ್ಲಿ ಪ್ರವಾಸಿ ವಾಹನಗಳು ತಂಗುವ ಗರಿಷ್ಠ ಅವಧಿಯನ್ನು ಕಡಿತಗೊಳಿಸಲಾಗಿದೆ.
ಜಾಂಟಿ ರೋಡ್ಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 90ರ ದಶಕದ ಕ್ರಿಕೆಟ್ ಅಭಿಮಾನಿಗಳಿಗೆ ಜಾಂಟಿ ರೋಡ್ಸ್ ಎಂದರೆ ಅಚ್ಚುಮೆಚ್ಚು. ಮೈದಾನದಲ್ಲಿ ಪಾದರಸದಂತೆ ಓಡಾಡುತ್ತಿದ್ದ ಮತ್ತು ಅದ್ಭುತ ಡೈವ್ಗಳ ಮೂಲಕ ಕ್ಯಾಚ್ ಪಡೆಯುತ್ತಿದ್ದ ಜಾಂಟಿ ರೋಡ್ಸ್, ಫಾದರ್ ಆಫ್ ಫೀಲ್ಡಿಂಗ್ ಎಂದೇ ಜನಪ್ರಿಯ. ಆದರೆ ಇತ್ತೀಚಿಗೆ ಐಪಿಎಲ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಪಡೆದ ಅದ್ಭುತ ಕ್ಯಾಚ್, ಜಾಂಟಿ ರೋಡ್ಸ್ ಅವರ ಫೀಲ್ಡಿಂಗ್ ಪಿತಾಮಹಾ ನಂಬಿಕೆಯನ್ನೇ ಅಲುಗಾಡಿಸಿದೆಯಂತೆ.
ಬಜೆಟ್ ಅಧಿವೇಶನ ಅಂತ್ಯ: ಲೋಕಸಭೆ, ರಾಜ್ಯಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಹೊಸದಿಲ್ಲಿ: ಕಳೆದ ಜನವರಿಯಿಂದ ಆರಂಭಗೊಂಡಿದ್ದ ಮಹತ್ವದ ಬಜೆಟ್ ಅಧಿವೇಶನ ಶನಿವಾರ ಮುಕ್ತಾಯಗೊಂಡಿದ್ದು, ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮಾರೋಪದ ಮಾತುಗಳನ್ನು ಆಡಿದರು. ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲುಂಟಾದ ಮರುದಿನವೇ ಅಧಿವೇಶನವನ್ನು ಮುಂದೂಡಲಾಗಿದೆ. ಈ ಸೋಲಿನ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳ ಹೆಚ್ಚಳ ಸೇರಿದಂತೆ ಮತ್ತೊಂದು ಮಸೂದೆಯನ್ನು ಸರಕಾರ ಮತಕ್ಕೆ ಹಾಕಲಿಲ್ಲ. ಇತ್ತ ರಾಜ್ಯಸಭೆಯಲ್ಲೂ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದರು.
ಯಡ್ರಾಮಿ: ಮೃತ್ಯುಕೂಪಗಳಾದ ಕೆರೆ-ಕೃಷಿ ಹೊಂಡಗಳು
ಯಡ್ರಾಮಿ: ಬೇಸಿಗೆ ಬಿಸಿಲು ತೀವ್ರವಾಗುತ್ತಿದ್ದಂತೆಯೇ ತಾಲೂಕಿನ ಕೆರೆ, ಕೃಷಿ ಹೊಂಡಗಳು ಇತ್ತೀಚಿನ ದಿನಗಳಲ್ಲಿ ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ಇವುಗಳ ಆಳ, ಅಗಲದ ಬಗ್ಗೆ ಅರಿವಿಲ್ಲದ ಬಹುತೇಕ ಮಕ್ಕಳು, ಯುವಕರು ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಮರುಕಳಿಸುತ್ತಿದ್ದು ಪಾಲಕರನ್ನು ಆತಂಕಕ್ಕೆ ದೂಡಿದೆ. ತಡೆಗೋಡೆ ಅಧವಾ ಕನಿಷ್ಠ ತಂತಿಬೇಲಿ ಇಲ್ಲದಿರುವುದು ಇಂತಹ ದುರ್ಘಟನೆ ಸಂಭವಿಸಲು ಕಾರಣ ಎಂಬ ಆರೋಪ ಕೇಳಿಬಂದಿವೆ. ಮಳೆಗಾಲ, ಚಳಿಗಾಲ ಕಳೆದು ಬೇಸಿಗೆ ಬಿಸಿಲು ತೀವ್ರವಾಗುತ್ತಿದ್ದಂತೆಯೇ ಮಕ್ಕಳು ಈಜುವುದಕ್ಕಾಗಿ ಕೆರೆ, ಕೃಷಿ ಹೊಂಡಗಳಿಗೆ ಜಿಗಿಯುತ್ತಿರುವುದು ಸಾಮಾನ್ಯವಾಗಿದೆ. ಈಜು ಬಾರದಿದ್ದರೂ ಕಾಲುವೆ, ಹೊಲಗಳಿಗೆ ಇಳಿಯುತ್ತಿರುವುದು ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ. ಇಂತಹ ಘಟನೆಗಳು ತಾಲೂಕಿನ ನಾನಾ ಕಡೆ ಕಳೆದ ಒಂದು ತಿಂಗಳಲ್ಲಿ ಸಂಭವಿಸಿದ್ದು ಸಾವುಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ಮೂಡಿದೆ. ಯಾರೋ ಮಾಡಿದ ತಪ್ಪಿಗೆ ತಮ್ಮ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳಿಗೆ ತಡೆಗೋಡೆ, ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮಗಳು ಅನಿವಾರ್ಯವಾಗಿದ್ದು, ಎಚ್ಚರಿಕೆ ಫಲಕ, ಬೇಲಿ ವ್ಯವಸ್ಥೆ ನಿರ್ಮಾಣ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಕೆರೆ ತುಂಬಿಸುವ ಜತೆಗೆವ ಮನರೇಗಾ ಯೋಜನೆಯಡಿ ರಕ್ಷಣಾತ್ಮಕ ಕಾಮಗಾರಿಗಳಿಗೂ ಹೆಚ್ಚು ಆದ್ಯತೆ ನೀಡಬಹುದಲ್ಲವೆ ಎಂಬ ಸಲಹೆಗಳು ವ್ಯಕ್ತವಾಗಿದೆ. ಪ್ರಸಕ್ತ ವರ್ಷ ತಾಲೂಕಿನ ಮಳ್ಳಿ ಹಾಗೂ ಈಜೇರಿ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ನಡೆದರೆ, ಇನ್ನೂ ಲೆಕ್ಕಕ್ಕೆ ಬಾರದ ಪ್ರಕರಣಗಳು ಎಷ್ಟಿದಿಯೋ ದೇವರೇ ಬಲ್ಲ. ಕಳೆದ ಒಂದು ತಿಂಗಳಿನಲ್ಲಿ ಬರೇ ಎರಡು ಗ್ರಾಮಗಳಲ್ಲಿ ಒಟ್ಟು 3 ಮಂದಿ ಜೀವ ಕಳೆದುಕೊಂಡಿರುವುದು ಪರಿಸ್ಥಿತಿಯ ಗಂಭೀರತೆ ತೋರಿಸುತ್ತದೆ. ಹೊಲ, ತೋಟಗಳಲ್ಲಿ ನಿರ್ಮಿಸಿರುವ ಕೃಷಿಹೊಂಡ ಹಾಗೂ ಕುಡಿಯುವ ನೀರಿನ ಕೆರೆಗಳಿಗೆ ಯಾವುದೇ ತಂತಿ ಬೇಲಿ, ತಡೆಗೋಡೆ ಅಥವಾ ಎಚ್ಚರಿಕೆ ಫಲಕ ಅಳವಡಿಸದಿರುವುದು ದುರಂತಗಳಿಗೆ ಕಾರಣವಾಗುತ್ತಿದೆ. ನೀರಿರುವ ಸ್ಥಳದ ಪರಿಪೂರ್ಣ ಮಾಹಿತಿ ಇಲ್ಲದೆ ಅಮಾಯಕ ಮಕ್ಕಳು ಅಪಾಯಕ್ಕೆ ಸಿಲುಕುತ್ತಿರುವುದು ಮಾತ್ರವಲ್ಲದೆ ಅವರನ್ನು ರಕ್ಷಿಸಲು ಹೋಗುವವರು ಕೂಡ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಈಜು ಬಾರದೆ ಮೃತಪಟ್ಟವರ ಸಂಖ್ಯೆ ಹೆಚ್ಚಿದ್ದು, ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟ ಬೆಳವಣಿಗೆಗಳೂ ಆಗಾಗ್ಗೆ ಸಂಭವಿಸಿದೆ. ಒಟ್ಟಾರೆ, ಕೆರೆಗಳ ನಿರ್ಮಾಣ ಅಭಿವೃದ್ಧಿಯ ಸಂಕೇತವಾದರೂ, ಸುರಕ್ಷತೆ ಇಲ್ಲದ ಅವು ಜೀವಹಾನಿಗೆ ದಾರಿ ಮಾಡಿಕೊಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಾವು ಕೆಲಸಕ್ಕೆ ಹೋಗಿದ್ದರೆ ಮಕ್ಕಳು ಈಜಾಡಲು ಓಡುತ್ತಾರೆ. ಆಳ ಎಷ್ಟಿದೆ, ಎಲ್ಲಿ ತಗ್ಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ತಡೆಗೋಡೆ ಇಲ್ಲ, ತಂತಿಬೇಲಿ ಇಲ್ಲ, ಎಚ್ಚರಿಕೆ ಫಲಕವೂ ಇಲ್ಲ. ನೀರಿಗೆ ಜಿಗಿದವರು ಮುಳುಗಿ ಹೋಗುತ್ತಿದ್ದಾರೆ. -ಮಲ್ಲಿಕಾರ್ಜುನ, ಗ್ರಾಮಸ್ಥ, ನಾಗರಹಳ್ಳಿ ಕೆರೆ, ಹಳ್ಳ ಮುಂತಾದ ನೀರಿನ ಮೂಲಗಳಿರುವ ಕಡೆ ಸಂಪೂರ್ಣ ತಡೆಗೋಡೆ ನಿರ್ಮಿಸಲು ಆಗದಿದ್ದರೂ ಕನಿಷ್ಠ ತಂತಿ ಬೇಲಿಗಳನ್ನಾದರೂ ಸಂಬಂಧಪಟ್ಟ ಇಲಾಖೆ, ಖಾಸಗಿ ಕೆರೆಗಳ ಮಾಲೀಕರು ಅಳವಡಿಸಿಕೊಂಡರೆ ಅಮಾಯಕ ಜೀವ ಬಲಿಯಾಗುವುದನ್ನು ತಪ್ಪಿಸಬಹುದು. ಬೇಸಿಗೆ ಸಂದರ್ಭ ನೀರಿನ ದಾಹ ತೀರಿಸಿಕೊಳ್ಳಲು ಕೆರೆ, ಹಳ್ಳಗಳತ್ತ ದನಕರು, ಕುರಿ, ನಾಯಿ ಮನುಷ್ಯರೂ ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪುತ್ತಿರುವುದರಿಂದ ಅಗತ್ಯ ಇರುವ ಎಲ್ಲ ಕಡೆ ಮೆಟ್ಟಿಲುಗಳ ವ್ಯವಸ್ಥೆ ಮಾಡುವತ್ತ ಸರಕಾರ ಗಮನಹರಿಸಬೇಕು. -ಸಾಹೇಬಗೌಡ ಬಿ.ದೇಸಾಯಿ ಕನ್ನಡಪರ ಹೋರಾಟಗಾರಕನ್ನಡಪರ ಹೋರಾಟಗಾರ
ಕಾಂಗ್ರೆಸ್ನಿಂದ ಭಾರತದ ಮಹಿಳಾ ಶಕ್ತಿಗೆ ಅಪಮಾನ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ಮಹಿಳಾ ವಂದನಾ (ಮಹಿಳಾ ಮೀಸಲಾತಿ) ಬಿಲ್ಲನ್ನು ವಿರೋಧಿಸಿ ಸಮಗ್ರ ಭಾರತದ ಮಹಿಳಾ ಶಕ್ತಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ನ ನಿಯತ್ತು ಯಾವತ್ತೂ ಮಹಿಳೆಯರಿಗೆ ಮೀಸಲಾತಿ ನೀಡಲು ಇರಲಿಲ್ಲ. ಮೂವತ್ತು ವರ್ಷಗಳಿಂದ ಮುಂದೂಡುತ್ತ ಬಂದಿರುವುದನ್ನು ಇದೀಗ ಮತ್ತೆ ಮುಂದುವರಿಸಿದೆ. ಇದರಿಂದ ಅವರಿಗೆ ಮಹಿಳೆಯರ ಶಾಪ ತಟ್ಟೇ ತಟ್ಟುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆಂಬ ಪ್ರಗತಿಪರ ಚಿಂತನೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗದಿರುವುದನ್ನು ಇಡೀ ದೇಶ ಗಮನಿಸುತ್ತಿದೆ. ಈಗ ಕಾಂಗ್ರೆಸ್ ಸುಳ್ಳು ಸಮರ್ಥನೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. 2023ರಲ್ಲಿ ಶೇ 50 ರಷ್ಟು ಕ್ಷೇತ್ರಗಳನ್ನು ಹೆಚ್ಚಳ ಮಾಡಬೇಕು, ಮುಂದಿನ ಜನಸಂಖ್ಯೆ ಆಧಾರದ ಮೇಲೆ ಜಾರಿಗೆ ತರಬೇಕು ಹಾಗೂ 2034ರೊಳಗೆ ಜಾರಿಗೊಳಿಸಬೇಕೆಂದು ತೀರ್ಮಾನವಾಗಿತ್ತು. ಅದನ್ನು 2029ರೊಳಗೆ ಜಾರಿಗೊಳಿಸುವ ಉದ್ದೇಶದಿಂದ ಶೇ 50 ರಷ್ಟು ಸ್ಥಾನಗಳನ್ನು ಹೆಚ್ಚಿಸಿ, ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವಂತೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಕ್ರಮ ಕೈಗೊಳ್ಳಲು ಪ್ರಯತ್ನಿಸಿದಾಗ, ಅದರಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಟೀಕಿಸಿದ್ದಾರೆ. ಈ ರಾಜಕೀಯ ಡೊಂಬರಾಟಕ್ಕೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಕಟು ಸತ್ಯ ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ವಾದವನ್ನು ಲೋಕಸಭೆಯಲ್ಲಿ ಮುಂದಿಟ್ಟಿರುವ ಕಾಂಗ್ರೆಸ್ ಮಿತ್ರಪಕ್ಷಗಳ ಬಗ್ಗೆ ಮಾತನಾಡಿದ ಅವರು, ಗೃಹ ಸಚಿವ ಅಮಿತ್ ಶಾ ಅವರು ಈಗಿರುವ ಲೋಕಸಭೆ ಹಾಗೂ ವಿಧಾನಸಭೆ ಸ್ಥಾನಗಳನ್ನು ಶೇ 50 ರಷ್ಟು ಹೆಚ್ಚಿಸಿ, ಅದಕ್ಕೆ ಕಾನೂನು ತಿದ್ದುಪಡಿ ತಂದು ಜಾರಿಗೊಳಿಸುತ್ತೇವೆ ಎಂದು ಹೇಳಿದರೂ ವಿಪಕ್ಷಗಳು ಒಪ್ಪಲಿಲ್ಲ. ಇದರಿಂದ ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳಾ ವಂದನಾ (ಮಹಿಳಾ ಮೀಸಲಾತಿ) ಬಿಲ್ ನ್ನು ವಿರೋಧಿಸುವ ಮೂಲಕ ದೇಶದ ಸಮಗ್ರ ಮಹಿಳಾ ಶಕ್ತಿಗೆ ಅಪಮಾನ ಮಾಡಿದೆ. ಮಹಿಳೆಯರಿಗೆ ಮೀಸಲಾತಿ ನೀಡುವ ನೈಜ ಇಚ್ಛಾಶಕ್ತಿ ಕಾಂಗ್ರೆಸ್ಗೆ ಯಾವತ್ತೂ ಇರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಅವರು ಮಾಡುತ್ತಿರುವುದನ್ನೇ ಈಗಲೂ ಮುಂದುವರಿಸಿದ್ದಾರೆ. ಇದರಿಂದ ಅವರಿಗೆ ಮಹಿಳೆಯರ ಶಾಪ… — Basavaraj S Bommai (@BSBommai) April 18, 2026
ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸಹಾಯಧನ ಬಿಡುಗಡೆಗೆ ಆಗ್ರಹಿಸಿ ಎಎಪಿ ಪ್ರತಿಭಟನೆ
ಬೆಂಗಳೂರು : ಸಂಕಷ್ಟದಲ್ಲಿರುವ ಬಡ ಆಟೋ ಚಾಲಕರ ಕುಟುಂಬಗಳಿಗೆ ತಕ್ಷಣ ಸಹಾಯಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ (ಎಎಪಿ) ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಯುದ್ಧದ ಪರಿಣಾಮವಾಗಿ ಎಲ್ಪಿಜಿ ಬಂಕ್ಗಳಲ್ಲಿ ಅನಿಲ ಕೊರತೆ ಉಂಟಾಗಿದೆ. ಇದರಿಂದ ಆಟೋ ಚಾಲಕರ ದೈನಂದಿನ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಹಲವರು ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ಉಪಚುನಾವಣೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯದಲ್ಲಿ ತೊಡಗಿ, ಚಾಲಕರ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ. ಅನೇಕ ಸಂಘಟನೆಗಳು ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು. ತಕ್ಷಣ ಸಂಕಷ್ಟದಲ್ಲಿರುವ ಚಾಲಕರಿಗೆ ತಲಾ 15,000 ರೂ. ಸಹಾಯಧನ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳದಿರುವುದು ದುರಂತಕರ ಎಂದು ಟೀಕಿಸಿದರು. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಚಾಲಕರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪ್ರತಿಭಟನೆಯಲ್ಲಿ ವಿವಿಧ ಆಟೋ ಸಂಘಟನೆಗಳ ಮುಖಂಡರು ಹಾಗೂ ಪಕ್ಷದ ನಾಯಕರಾದ ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಜಗದೀಶ್ ವಿ. ಸದಂ, ಸಂಚಿತ್ ಸೆಹ್ವಾನಿ, ಉಷಾ ಮೋಹನ್, ಪುಟ್ಟಣ್ಣ ಗೌಡ, ಇರ್ತಾದ್, ಶಶಿಧರ್ ಆರಾಧ್ಯ, ಮುನೇಶ್ ಕುಮಾರ್, ಚೆನ್ನಪ್ಪ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ರಷ್ಯಾ ಕಚ್ಚಾತೈಲ ಖರೀದಿ ವಿನಾಯಿತಿ ವಿಸ್ತರಿಸಿದ ಅಮೆರಿಕ; ಬೊಗಸೆ ತುಂಬಿಸಿಕೊಳ್ಳಲು ಸಿದ್ಧವಾದ ಭಾರತ! ಲಕ್ ಕೈಬಿಡದು
ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಗಂಟೆಗೊಂದು ಹೇಳಿಕೆ ನೀಡಲಾರಂಭಿಸಿದ್ದಾರೆ, ಹಿರಿಯಕ್ಕನ ಚಾಲಿ ಮನೆ ಮಂದಿಗೆಲ್ಲಾ ಎಂಬಂತೆ ಶ್ವೇತಭವನ ಕೂಡ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವುಗಳನ್ನು ಬದಲಾಯಿಸಲು ಆರಂಭಿಸಿದೆ. ಎರ್ಡು ದಿನಗಳ ಹಿಂದಷ್ಟೇ ರಷ್ಯಾ ಮತ್ತು ಇರಾನ್ ತೈಲ ಖರೀದಿ ನಿರ್ಬಂಧಗಳ ಮೇಲಿನ ವಿನಾಯಿತಿ ಗಡುವು ವಿಸ್ತರಿಸಲ್ಲ ಎಂದಿದ್ದ ಟ್ರಂಪ್ ಆಡಳಿತ, ಈಗ ರಷ್ಯಾದ ತೈಲ ಖರೀದಿ ಮೇಲಿನ ನಿರ್ಬಂಧ ಮೇಲಿನ ವಿನಾಯಿತಿ ವಿಸ್ತರಣೆ ಮಾಡಿದೆ.
ಮಾನ್ವಿ | ಸಮುದಾಯ ಭವನದ ನಾಮಫಲಕ ಬಿದ್ದು ಇಬ್ಬರು ಮಕ್ಕಳು ಮೃತ್ಯು
ಬಯಲಾಟ ವೀಕ್ಷಣೆ ವೇಳೆ ದುರ್ಘಟನೆ: ನಾಲ್ವರಿಗೆ ಗಂಭೀರ ಗಾಯ
RCB Vs DC: 'ಗ್ರೀನ್ ಜರ್ಸಿ'ಯಲ್ಲಿ ಅಖಾಡಕ್ಕಿಳಿಯಲಿದೆ ಆರ್ಸಿಬಿ; ಇದರ ಹಿಂದಿದೆ ಮಹತ್ವದ ಸಂದೇಶ
RCB IPL 2026: ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹಸಿರು ಜರ್ಸಿ ಧರಿಸಿ ಕಣಕ್ಕಿಯಲಿದ್ದಾರೆ. ಇದರ ಹಿಂದಿದೆ ಮಹತ್ವದ ಸಂದೇಶ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಐಪಿಎಲ್ ಇತಿಹಾಸದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ,
ಅಸಾರಾಂ ಆಶ್ರಮ ಅತಿಕ್ರಮಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರಕ್ಕೆ ಗುಜರಾತ್ ಹೈಕೋರ್ಟ್ ಅನುಮತಿ
ಅಹ್ಮದಾಬಾದ್: ಅತ್ಯಾಚಾರ ಅಪರಾಧಿ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ನಡೆಸುತ್ತಿರುವ ಮೊಟೆರಾ ಅಸಾರಾಂ ಆಶ್ರಮವು ಅತಿಕ್ರಮಿಸಿದೆ ಎನ್ನಲಾದ ಸುಮಾರು 45,000 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಗುಜರಾತ್ ಹೈಕೋರ್ಟ್ನ ವಿಭಾಗೀಯ ಪೀಠವು ರಾಜ್ಯ ಸರಕಾರಕ್ಕೆ ಹಾದಿ ಮಾಡಿಕೊಟ್ಟಿದೆ. ಈ ಪ್ರಮುಖ ಭೂಮಿ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣದ ಬಳಿ ಇದೆ. ಈ ಪ್ರದೇಶವನ್ನು 2030ರ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸಲು ಮತ್ತು ಒಲಿಂಪಿಕ್ಸ್ಗೆ ಸಿದ್ಧ ನಗರವನ್ನಾಗಿ ಮಾಡಲು ಪ್ರಮುಖ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಪ್ರಕರಣದ ಎಲ್ಲಾ ವಾಸ್ತವಾಂಶಗಳು ಮತ್ತು ಪರಿಸ್ಥಿತಿಗಳನ್ನು ಒಟ್ಟಾಗಿ ಪರಿಗಣಿಸಿದಾಗ, ಟ್ರಸ್ಟ್ ಭೂಮಿ ಹಂಚಿಕೆ, ಸಕ್ರಮಗೊಳಿಸುವಿಕೆ ಹಾಗೂ ಸರಕಾರದ ಭೂಮಿಯ ಮಂಜೂರಾತಿ ಆದೇಶಗಳ ಷರತ್ತುಗಳನ್ನು ಉಲ್ಲಂಘಿಸಿರುವುದಲ್ಲದೆ, ಹಂಚಿಕೆಯಾಗಿದ್ದ ಭೂಮಿಯ ಸುತ್ತಲಿನ ದೊಡ್ಡ ಪ್ರಮಾಣದ ತೆರೆದ ಭೂಮಿಯನ್ನೂ, ಸಬರಮತಿ ನದಿಪಾತ್ರದ ಭೂಮಿಯನ್ನೂ ತನ್ನ ಬಳಕೆಗಾಗಿ ಅಕ್ರಮವಾಗಿ ಕಬಳಿಸಿಕೊಂಡಿರುವುದು ಸ್ಪಷ್ಟವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ನೇತೃತ್ವದ ವಿಭಾಗೀಯ ಪೀಠವು ಆದೇಶದ ವೇಳೆ ತಿಳಿಸಿದೆ. ಅರ್ಜಿದಾರರು ಸಾಮಾನ್ಯ ಅಪರಾಧಿ ಎಂದು ಪೀಠವು ಗಮನಿಸಿದೆ, ಅವರು ಈ ಹಿಂದೆ ಸಬರಮತಿ ನದಿಯ ಒಂದು ಭಾಗದ ಉದ್ದಕ್ಕೂ ಸುಮಾರು 51,000 ಚದರ ಮೀಟರ್ ತೆರೆದ ಭೂಮಿಯನ್ನು ಅತಿಕ್ರಮಣ ಮಾಡಿದ್ದರು ಎಂದು ಗಮನಿಸಿದೆ. ಈ ಕುರಿತು ಏಕ ಸದಸ್ಯ ಪೀಠವು ನೀಡಿದ ಆದೇಶವನ್ನು ಪ್ರಶ್ನಿಸಿ ಸಂತ ಶ್ರೀ ಅಸಾರಾಂ ಆಶ್ರಮ ಟ್ರಸ್ಟ್ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು. ಸ್ಪೋರ್ಟ್ಸ್ ಎನ್ಕ್ಲೇವ್ ನಿರ್ಮಿಸಲು ಮತ್ತು ಪ್ರಸ್ತಾವಿತ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭೂಮಿಯನ್ನು ಬಳಸಲಾಗುತ್ತಿರುವುದರಿಂದ ಈ ಆದೇಶವು ಪೂರ್ವಯೋಜಿತ ಎಂದು ಟ್ರಸ್ಟ್ ವಾದಿಸಿತ್ತು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದೇಶದ ಹಿತಾಸಕ್ತಿಯನ್ನು ಅಮೆರಿಕಕ್ಕೆ ಅಡವಿಟ್ಟಿದೆ ಎಂದು ಟೀಕಿಸಿದ ಅವರು, ಕ್ಷೇತ್ರ ಮರು ವಿಂಗಡಣೆಯ ಮೂಲಕ ದೇಶವನ್ನು ಒಡೆದು 2029ರಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅನ್ನು ಹಾದಿಬೀದಿಗಳಲ್ಲಿ ಓಡಾಡಿಸುವ ಕಾಲ ಬರಲಿದೆ: ಆರ್.ಅಶೋಕ್
ಬೆಂಗಳೂರು: ಕಾಂಗ್ರೆಸ್ ಅನ್ನು ಹಾದಿಬೀದಿಗಳಲ್ಲಿ ಓಡಾಡಿಸುವ ಕಾಲ ಬರಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶಭ್ರಷ್ಟವಾಗಲಿದೆ. ಅವರನ್ನು ಓಡಿಸುವ ಕೆಲಸವನ್ನು ತಾಯಂದಿರು ಮಾಡಲಿದ್ದಾರೆ ಎಂದು ರಾಜ್ಯ ವಿಪಕ್ಷ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದರು. ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ನರೇಂದ್ರ ಮೋದಿ ಮಾಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ. ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದು ಹೇಳಿದರು. ಕಳೆದ 70 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್, ಮಹಿಳೆಯ ಹಕ್ಕಿನ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿತು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಮೀಸಲು ಮಸೂದೆಗೆ ಬೆಂಬಲ ಕೊಡುವ ಧೈರ್ಯ ಇಲ್ಲದ ಮೇಲೆ ಮಹಿಳೆಯರ ಬಗ್ಗೆ ಮಾತನಾಡುವ ಅಧಿಕಾರವೂ ಕಾಂಗ್ರೆಸ್ ಗೆ ಇಲ್ಲ. ಆದ್ದರಿಂದ ಮಹಿಳಾ ಕಾಂಗ್ರೆಸ್ ಘಟಕವನ್ನು ರದ್ದು ಮಾಡಿ ಎಂದು ಹೇಳಿದರು. ಕಾಂಗ್ರೆಸ್ಸಿಗರೇ ಇನ್ನೆಷ್ಟು ಕಾಲ ದಿನ, ವರ್ಷ ಮಹಿಳೆಯರನ್ನು ಕೇವಲ ಮತದಾರರಾಗಿ ಬಳಸುತ್ತೀರಿ. ಮಹಿಳೆಯರು ದುರ್ಬಲರು ಎಂದುಕೊಂಡು ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ರಾಜ್ಯಭಾರ ಮಾಡಿದ್ದರಲ್ಲ. ಆಗ ನಿಮಗೆ ಅವರ ಶಕ್ತಿ ಬಗ್ಗೆ ತಿಳಿಯಲಿಲ್ಲವೇ ಎಂದರು. ಮಹಿಳಾ ಮೀಸಲಿಗೆ ಮೋದಿ ಮುಂದಾದರೆ ವಿರೋಧಿಸಿ ಹೀನ ಕಾರ್ಯ ಮಾಡಿದ್ದೀರಿ. ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ವಿರೋಧಿ ನೀತಿ ಎಂದು ನುಡಿದರು. ಫ್ರೀ ಬಸ್ ಕೊಟ್ಟರೆ ಸಾಕೇ? ಮಹಿಳೆಯರಿಗೆ ಪುಕ್ಕಟೆಯಾಗಿ ಎರಡು ಸಾವಿರ ರೂ. ಕೊಟ್ಟರೆ ಸಾಕು. ಫ್ರೀ ಬಸ್ ಕೊಟ್ಟರೆ ಸಾಕು ಮನೆಯಲ್ಲೇ ಇರ್ತಾರೆ. ಅಡಿಗೆ ಮಾಡಿಕೊಂಡು, ದೇವಸ್ಥಾನಕ್ಕೆ ತಿರುಗಿಕೊಂಡು ಇರ್ತಾರೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬಾರದು. ಸಂಸತ್ಗೆ, ವಿಧಾನಸಭೆಗೆ ಹೋಗುವುದು ಬೇಡ ಎಂದು ಕಾಂಗ್ರೆಸ್ನವರು ತಿಳಿದಿದ್ದಾರೆ. ಮೀಸಲಾತಿ ಕಸಿದ ದ್ರೋಹಿ ಕಾಂಗ್ರೆಸ್ಸಿಗರು ಎಂದರು. ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ಸಿಗುವಂತೆ ಮಾಡಲು ಅವಕಾಶ ಇತ್ತು. ಆದರೆ ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಈ ಬಗ್ಗೆ ಚರ್ಚೆ ಮಾಡಬಹುದಿತ್ತು. ಹಿಂದೆ ಹಲವು ಬಾರಿ ಕ್ಷೇತ್ರ ಮರುವಿಂಗಡಣೆ ಆದಾಗ ಅವರು ವಿರೋಧಿಸಲಿಲ್ಲ. ಇದೇ ಮೊದಲ ಬಾರಿಗೆ ಆಗಿಲ್ಲ. ಆಗಲೂ ಸಂಸತ್ ಸೀಟು ಹೆಚ್ಚಳ ಆಗಿದೆ. ಆಗ ಇವರು ಬಾಯಿಗೆ ಬಟ್ಟೆ ತುರುಕಿಕೊಂಡಿದ್ದರೇ ಎಂದರು. ವಾಜಪೇಯಿ ಇದ್ದಾಗ ಕ್ಷೇತ್ರ ವಿಂಗಡಣೆ ಆಯಿತು. ಅವರು ಮತ್ತೆ ಗೆಲ್ಲಲಿಲ್ಲ, ಕಾಂಗ್ರೆಸ್ ಗೆದ್ದಿತು. ಆದರೆ ಈಗ ಇವರು ಮಹಿಳೆಯರನ್ನು ತುಳಿಯುವ ಪ್ರಯತ್ನಕ್ಕೆ ಡೀ ಲಿಮಿಟೇಷನ್ ಅನ್ನು ದಾಳವಾಗಿ ಬಳಸಿದ್ದಾರೆ. ಕ್ಷೇತ್ರ ಮರು ಹಂಚಿಕೆ ನಿರಂತರ ಪ್ರಕ್ರಿಯೆ. ಕಾಂಗ್ರೆಸ್ನ ಮಹಿಳಾ ವಿರೋಧಿ ಮನಸ್ಥಿತಿ ದೇಶದ ಜನರ ಮುಂದೆ ಬಟಾಬಯಲಾಗಿದೆ ಎಂದು ತಿಳಿಸಿದರು. ಹಿಂದೆ ತಲಾಖ್ ಸಂಬಂಧವೂ ಕಾಂಗ್ರೆಸ್ ವಿರೋಧ ಮಾಡಿತ್ತು. ದೇಶದ ಭದ್ರತೆ ಆರ್ಟಿಕಲ್ 370 ತಂದಾಗಲೂ ವಿರೋಧ ಮಾಡಿದ್ದರು. ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ವಿರೋಧಿಸಿದ್ದರು. ದೇಶದ ಒಳಿತಿಗಾಗಿ ಏನೆಲ್ಲ ಮಾಡಿದ್ದರೂ ಇವರು ವಿರೋಧಿಸಿದ್ದಾರೆ. ಕಾಂಗ್ರೆಸ್ ನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದರು. ಮೀಸಲು ಮಸೂದೆಯ ಕ್ರೆಡಿಟ್ ಅನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಇಷ್ಟು ವರ್ಷ ಸುಮ್ಮನಿದ್ದು ಈಗ ಯಾಕೆ ವಿರೋಧ ಮಾಡುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇತ್ತೀಚಿನ ಸಮೀಕ್ಷೆ ಅನುಸಾರವೇ ಕ್ಷೇತ್ರ ವಿಂಗಡಣೆಯನ್ನು ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಗ್ರೇಟರ್ ಬೆಂಗಳೂರು ರಚನೆಗೆ ಯಾವುದನ್ನು ಪರಿಗಣಿಸಿದ್ದೀರಿ ಎಂದರು. ತೆರಿಗೆ ಹೊರಲು ಜನ ಸಿದ್ಧರಾಗಬೇಕಿದೆ ಸಿದ್ದರಾಮಯ್ಯ ಕುತಂತ್ರಿ. ಈಗ ಅವರು ಅತಂತ್ರರಾಗಿದ್ದಾರೆ. ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಬಜೆಟ್ ನಲ್ಲಿ ಏನೂ ತೋರಿಸದೆ ಆನಂತರ ಬೆಲೆ ಏರಿಕೆ ಮಾಡಿದರು. ಉಪ ಚುನಾವಣೆಗೆ ಕಾದು ಈಗ ಬೆಲೆ ಏರಿಕೆ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಚುನಾವಣೆ ಬರುವ ಮೊದಲು ಸಾಲು ಸಾಲು ತೆರಿಗೆ ಹೊರಲು ರಾಜ್ಯದ ಜನ ಸಿದ್ಧರಾಗಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ ಉಪಸ್ಥಿತರಿದ್ದರು.
ಮೇ 20 ಬರೆದಿಟ್ಟುಕೊಳ್ಳಿ ಎಂದ ಜುಕರ್ಬರ್ಗ್: 8 ಸಾವಿರ ಉದ್ಯೋಗಿಗಳಿಗೆ ಮೆಟಾ ಪಿಂಕ್ ಸ್ಲಿಪ್, ಯಾರಿಗೆಲ್ಲಾ?
Meta Biggest Layoffs : ಟೆಕ್ ದೈತ್ಯ ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್ ಬ್ರ್ಯಾಂಡಿನ ಮಾತೃ ಸಂಸ್ಥೆಯಾಗಿರುವ ಮೆಟಾ ಸಂಸ್ಥೆ, ತನ್ನದೇ ಹಿಂದಿನ ದಾಖಲೆಯನ್ನು ಮುರಿಯಲು ಹೊರಟಿದೆ. ದಾಖಲೆಯ ಎಂಟು ಸಾವಿರ ಉದ್ಯೋಗಿಗಳಿಗೆ ಹಾಲೀ ವರ್ಷದಲ್ಲಿ ಪಿಂಕ್’ಸ್ಲಿಪ್ ನೀಡಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆ, ಮೇ ಇಪ್ಪತ್ತರಂದು ಆರಂಭವಾಗಲಿದೆ.
ಟಿಸಿಎಸ್ ನ ನಾಸಿಕ್ ಬಿಪಿಒ ಘಟಕದಲ್ಲಿ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳ ಹಿಂದಿನ ʼಮಾಸ್ಟರ್ ಮೈಂಡ್ʼ ಎಂದು ಕೆಲವು ಮಾಧ್ಯಮಗಳು ಪ್ರಚಾರ ಮಾಡುತ್ತಿರುವ ನಿದಾ ಖಾನ್ HR ತಂಡದ ಭಾಗವಾಗಿರಲಿಲ್ಲ. ಆಕೆ ಕಂಪನಿಯ ಮಾನವ ಸಂಪನ್ಮೂಲ (HR) ಮ್ಯಾನೇಜರ್ ಅಲ್ಲ. ಆಕೆ ಈ ಕಂಪನಿಯಲ್ಲಿ ಯಾವುದೇ ನಾಯಕತ್ವದ ಪಾತ್ರವನ್ನು ಹೊಂದಿರಲಿಲ್ಲ. ಆಕೆ ಪ್ರಾಸೆಸ್ ಅಸೋಸಿಯೇಟ್ ಆಗಿದ್ದರು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಶುಕ್ರವಾರ (ಎ. 17)ರಂದು ಹೇಳಿಕೆ ಪ್ರಕಟಿಸಿದೆ. ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ ಕೃತಿವಾಸನ್ ಅವರು ನೀಡಿರುವ ಲಿಖಿತ ಹೇಳಿಕೆಯಲ್ಲಿ, “ಟಿಸಿಎಸ್ನ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಎಂದು ಪತ್ರಿಕೆಗಳಲ್ಲಿ ಪದೇ ಪದೇ ಉಲ್ಲೇಖಿಸಲ್ಪಡುತ್ತಿರುವ ನಿದಾ ಖಾನ್ ಅವರು ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಅಥವಾ ನೇಮಕಾತಿ ಮಾಡುವ ಜವಾಬ್ದಾರಿ ಹೊಂದಿರಲಿಲ್ಲ . ಅವರು ಪ್ರಾಸೆಸ್ ಅಸೋಸಿಯೇಟ್ ಆಗಿ ಸೇವೆ ಸಲ್ಲಿಸಿದ್ದರು. ಯಾವುದೇ ನಾಯಕತ್ವದ ಜವಾಬ್ದಾರಿಗಳನ್ನು ಹೊಂದಿರಲಿಲ್ಲ.” ಎಂದಿದ್ದಾರೆ. ಟಿಸಿಎಸ್ ನ ಈ ಸ್ಪಷ್ಟೀಕರಣವು ಮಹತ್ವದ್ದಾಗಿದೆ. ಯಾಕೆಂದರೆ ಟಿಸಿಎಸ್ ಪ್ರಕರಣದ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಯು ನೇಮಕಾತಿಯನ್ನು ಮೇಲ್ವಿಚಾರಣೆ ಮಾಡುವ ಮಾನವ ಸಂಪನ್ಮೂಲ (HR) ವ್ಯವಸ್ಥಾಪಕಿಯಾಗಿ, ನಿದಾ ಖಾನ್ ಅಂತಹ ಆಪಾದಿತ ಚಟುವಟಿಕೆಗಳನ್ನು ಸಂಘಟಿಸುವ ಅಧಿಕಾರವನ್ನು ಹೊಂದಿದ್ದರು ಎಂಬ ಹೇಳಿಕೆಯ ಮೇಲೆ ಅವಲಂಬಿತವಾಗಿದೆ. ವಾಸ್ತವವಾಗಿ, ಅವರು ಯಾವುದೇ ನಾಯಕತ್ವದ ಪಾತ್ರವಿಲ್ಲದ ಕಿರಿಯ ಉದ್ಯೋಗಿ ಆಗಿದ್ದರು. ಟಿಸಿಎಸ್ X ನಲ್ಲಿ ಶೇರ್ ಮಾಡಿರುವ ಹೇಳಿಕೆಯಲ್ಲಿ, ನಾಸಿಕ್ ಘಟಕದಲ್ಲಿನ ವ್ಯವಸ್ಥೆಗಳು ಮತ್ತು ದಾಖಲೆಗಳ ಪ್ರಾಥಮಿಕ ಪರಿಶೀಲನೆಯು ಅದರ ನೈತಿಕತೆ ಅಥವಾ POSH ಚಾನೆಲ್ಗಳಲ್ಲಿ ಯಾವುದೇ ದೂರುಗಳು ಕಂಡುಬಂದಿಲ್ಲ ಎಂದು ಉಲ್ಲೇಖಿಸಲಾಗಿದೆ. ವಿವರವಾದ ಪರಿಶೀಲನೆ ಇನ್ನೂ ನಡೆಯುತ್ತಿವೆ. altnews.in ಜತೆ ಮಾತನಾಡಿದ ನಾಸಿಕ್ ಪೊಲೀಸ್ ಅಧಿಕಾರಿಯೊಬ್ಬರು ಈ ಹೇಳಿಕೆ ಅಧಿಕೃತವಾಗಿದೆ ಎಂದು ದೃಢಪಡಿಸಿದ್ದಾರೆ. ನಿದಾ ಖಾನ್ ಅವರು ಮಾನವ ಸಂಪನ್ಮೂಲ ಅಧಿಕಾರಿಯಲ್ಲ ಎಂದು ಟಿಸಿಎಸ್ ತನಿಖಾ ಅಧಿಕಾರಿಗಳಿಗೆ ತಿಳಿಸಿತ್ತು. ಶುಕ್ರವಾರ, ಆಕೆಯ ಪತಿಯನ್ನು ಪೊಲೀಸರು ದೀರ್ಘ ವಿಚಾರಣೆಗೆ ಒಳಪಡಿಸಿದ್ದು, ನಿದಾ ಖಾನ್ ಪತ್ತೆಯಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಆಕೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ನಿದಾ ಅವರ ಕುಟುಂಬ ಹೇಳಿರುವುದಾಗಿ ʼಹಿಂದೂಸ್ತಾನ್ ಟೈಮ್ಸ್ʼ ವರದಿ ಮಾಡಿತ್ತು. ಭಾರತೀಯ ಮಾಧ್ಯಮಗಳು ನಿದಾ ಖಾನ್ ಅವರನ್ನು ಟಿಸಿಎಸ್ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಮತ್ತು ಆಪಾದಿತ ‘ಪ್ರಕರಣದ’ ಮಾಸ್ಟರ್ಮೈಂಡ್ ಎಂದು ಬಿಂಬಿಸಿ ತೀವ್ರ ವಾಗ್ದಾಳಿ ನಡೆಸಿದ ನಂತರ ಟಿಸಿಎಸ್ ಸಿಇಒ ಅವರ ಹೇಳಿಕೆ ಬಂದಿದೆ. ಪ್ರಕರಣದಲ್ಲಿ ಆಸಿಫ್ ಅನ್ಸಾರಿ, ದಾನಿಶ್ ಶೇಖ್, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ರಫೀಕ್ ಮೆನನ್, ತೌಸಿದ್ ಅತ್ತರ್ ಮತ್ತು ಅಶ್ವಿನಿ ಚೈನಾನಿ ಎಂಬವರನ್ನು ಬಂಧಿಸಿದ ನಂತರ, ಮತ್ತೊಬ್ಬ ಆರೋಪಿ ನಿದಾ ಖಾನ್ ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಬಹುತೇಕ ಎಲ್ಲಾ ಪ್ರಮುಖ ಮಾಧ್ಯಮಗಳು ನಿದಾ ಅವರನ್ನು ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಅಥವಾ ಎಚ್ಆರ್ ಮುಖ್ಯಸ್ಥೆ ಎಂದು ಹೇಳಿವೆ. 2026 ಎಪ್ರಿಲ್ 14, ರಂದು, NDTV ವರದಿಗಾರರು ನಿದಾ ಖಾನ್ ಟಿಸಿಎಸ್ ನಾಸಿಕ್ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಎಂದು ಹೇಳಿಕೊಂಡರು. ಇದೇ ಹೇಳಿಕೆಯನ್ನು ಶಿವ್ ಅರೂರ್ ಅವರು ಚಾನೆಲ್ನಲ್ಲಿ ಬಹು ಬುಲೆಟಿನ್ಗಳಲ್ಲಿ ಪದೇ ಪದೇ ಹೇಳಿದ್ದಾರೆ. ಎಪ್ರಿಲ್ 16 ರಂದು, ಶಿವ್ ಅರೂರ್ ನಡೆಸಿಕೊಡುವ ಪ್ರೈಮ್-ಟೈಮ್ ಕಾರ್ಯಕ್ರಮವನ್ನು ಎನ್ಡಿಟಿವಿ ಪ್ರಸಾರ ಮಾಡಿತು. ಅಲ್ಲಿ ಈ ಹೇಳಿಕೆಯನ್ನು ಪುನರುಚ್ಚರಿಸಲಾಯಿತು. ಕಂಪನಿಯೊಳಗಿನ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರದ ಚಟುವಟಿಕೆಗಳ ಹಿಂದಿನ ಮಾಸ್ಟರ್ ಮೈಂಡ್ ನಿದಾ ಖಾನ್ ಎಂದು ಎನ್ಡಿಟಿವಿ ವರದಿ ಆರೋಪಿಸಿದೆ. ನಿರೀಕ್ಷಣಾ ಜಾಮೀನು ಕೋರಿದ ನಿದಾ ಖಾನ್ ಬಗ್ಗೆ ವರದಿ ಮಾಡುವಾಗ ಅರೂರ್ ಇದನ್ನೇ ಪುನರಾವರ್ತಿಸಿದರು. ಅದೇ ರೀತಿ, ಆಜ್ತಕ್ ನಿರೂಪಕಿ ಅಂಜನಾ ಓಂ ಕಶ್ಯಪ್ ಖಾನ್, ನಿದಾ ಅವರು ಟಿಸಿಎಸ್ ನಲ್ಲಿ ಎಚ್ಆರ್ ಮ್ಯಾನೇಜರ್ ಎಂದು ಉಲ್ಲೇಖಿಸಿದ್ದು ಕಚೇರಿಯಲ್ಲಿ ನಡೆದ ಆಪಾದಿತ ದುಷ್ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಎಂದಿದ್ದಾರೆ. ನಿದಾ ಖಾನ್ ಟಿಸಿಎಸ್ ನಲ್ಲಿ HR ಮುಖ್ಯಸ್ಥೆ , ಆಪಾದಿತ ಮತಾಂತರ ಜಾಲದ ಮಾಸ್ಟರ್ ಮೈಂಡ್ ಎಂದು ನ್ಯೂಸ್ 18 ಹಲವಾರು ವರದಿಗಳಲ್ಲಿ ಹೇಳಿದೆ . ಅದೇ ರೀತಿ ರಿಪಬ್ಲಿಕ್ ಭಾರತ್, ಟೈಮ್ಸ್ ನೌ, ದಿ ಎಕನಾಮಿಕ್ ಟೈಮ್ಸ್, ಸಿಎನ್ಬಿಸಿ-ಟಿವಿ18, ಡಿಎನ್ಎ, ದಿ ಮೋಜೊ ಸ್ಟೋರಿ, ಫ್ರೀ ಪ್ರೆಸ್ ಜರ್ನಲ್, ದಿ ಸಂಡೇ ಗಾರ್ಡಿಯನ್, ವಿಯಾನ್ ಸೇರಿದಂತೆ ಹಲವಾರು ಇತರ ಮಾಧ್ಯಮಗಳು ಇದೇ ರೀತಿಯ ಹಕ್ಕುಗಳನ್ನು ಪ್ರತಿಧ್ವನಿಸಿದವು. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ ಗಳನ್ನು ಹೊಂದಿರುವ ಬಳಕೆದಾರರು ಕೂಡಾ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಸ್ವಾತಿ ಚತುರ್ವೇದಿ ತಮ್ಮ X ಪೋಸ್ಟ್ ನಲ್ಲಿ TCS ನಾಸಿಕ್ನ ಮಹಿಳಾ ಮಾನವ ಸಂಪನ್ಮೂಲ ಮುಖ್ಯಸ್ಥೆ ನಿದಾ ಖಾನ್ ಅವರನ್ನು ಅವರ ಅವರದ್ದೇ ಧರ್ಮದ ಪುರುಷ ಸಹೋದ್ಯೋಗಿಗಳು lady D ದಾವೂದ್ ಇಬ್ರಾಹಿಂ ಅವರ ಉಲ್ಲೇಖ) ಎಂದು ಕರೆಯುತ್ತಾರೆ ಎಂದು ಬರೆದಿದ್ದಾರೆ. ನಿಯಮಿತವಾಗಿ ಕೋಮು ಪ್ರಚಾರವನ್ನು ಹರಡುವ ಪ್ರಮುಖ ಬಲಪಂಥೀಯ ಪ್ರಭಾವಿ ಹ್ಯಾಂಡಲ್ಗಳು ಸಹ ಇದನ್ನೇ ಮಾಡಿವೆ. ಇವರಲ್ಲಿ ವಕೀಲ ಅಶುತೋಷ್ ಜೆ ದುಬೆ (@AdvAshutoshBJP), ಬಾಲಾ (@erbmjha), ಭಿಕು ಮ್ಹಾತ್ರೆ (@MumbaichaDon), ರೌಶನ್ ಸಿನ್ಹಾ (@MrSinha), ತತ್ವಮ್-ಆಸಿ (@tathvamasi6), ಆಕ್ಸೋಮಿಯಾ ಜಿಯೋರಿ (@SouleFacts), ಜಿತೇಂದ್ರ ಪ್ರತಾಪ್ ಸಿಂಗ್ (@jpsin1) ಮೊದಲಾದವರು ಇದೇ ರೀತಿಯ ಹಕ್ಕುಗಳನ್ನು ಪ್ರಚಾರ ಮಾಡಿದ್ದಾರೆ. ಕೃಪೆ: altnews.in
Puttur | ಎರಡು ಬೈಕ್ ಗಳ ಮಧ್ಯೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ
ಪುತ್ತೂರು: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಪುತ್ತೂರು ನಗರದ ಪಡೀಲ್ ಎಂಬಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ, ಓರ್ವ ಸವಾರ ರಾಂಗ್ ಸೈಡ್ ನಲ್ಲಿ ಬೈಕ್ ಚಲಾಯಿಸಿದ್ದರಿಂದ ಮತ್ತೊಂದು ಬೈಕ್ ಸವಾರನ ನಿಯಂತ್ರಣ ತಪ್ಪಿ ಪರಸ್ಪರ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟ ಯುವಕನ ಬಗ್ಗೆ, ಗಾಯಾಳುವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮತ್ತೆ ಅಲ್ಪ ಮಟ್ಟಿಗೆ ಏರಿದ ಚಿನ್ನ-ಬೆಳ್ಳಿಯ ಬೆಲೆ
ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ಒಳಗೆ ಉಳಿದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿದ್ದವು. ಆದರೆ ಶುಕ್ರವಾರ ಮಾರುಕಟ್ಟೆ ಮುಚ್ಚುವ ಕ್ಷಣದಲ್ಲಿ ಚಿನ್ನದ ಬೆಲೆಗಳು ಸ್ವಲ್ಪ ಕುಸಿದಿದ್ದವು. ಇದೀಗ ಶನಿವಾರ ಅಲ್ಪ ಮಟ್ಟಿಗೆ ಏರಿಕೆ ಕಂಡಿವೆ. ಜನವರಿಯಲ್ಲಿ ಅತ್ಯಧಿಕ ಪ್ರತಿ ಗ್ರಾಂಗೆ 18,000ಕ್ಕೆ ಏರಿದ್ದ ಶುದ್ಧ ಚಿನ್ನ ನಂತರ ಫೆಬ್ರವರಿಯಲ್ಲಿ ಕುಸಿಯುತ್ತಲೇ ಬಂದಿದೆ. ಆದರೆ ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಶುದ್ಧ ಚಿನ್ನದ ಬೆಲೆ ಗ್ರಾಂಗೆ 15,000-16,000 ರೂ. ಒಳಗೆ ಉಳಿದಿವೆ. ಆಭರಣ ಚಿನ್ನದ ಬೆಲೆ 13 ಸಾವಿರದಿಂದ 14 ಸಾವಿರ ರೂ. ನಡುವೆ ನಿಂತಿದೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 18ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 81 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,55,780 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 75 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,42,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 61 ರೂ. ಹೆಚ್ಚಾಗಿದ್ದು, ಹತ್ತು ಗ್ರಾಂಗೆ 1,16,840 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 18ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,578 (+81) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,280 (+75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,684 (+61) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರ ಏರಿಕೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಎಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಸೋಮವಾರ ಪ್ರತಿ ಗ್ರಾಂಗೆ 5 ರೂ. ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ. ಮಂಗಳವಾರವೂ ಇದೇ ದರದಲ್ಲಿ ಮುಂದುವರಿಯಿತು. ಬುಧವಾರ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 15 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,70,000 ಗೆ ಬಂದು ತಲುಪಿದ್ದು, ಗುರುವಾರವೂ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಶುಕ್ರವಾರ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,65,000 ಗೆ ಬಂದು ತಲುಪಿದೆ. ಇದೀಗ ಶನಿವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,75,000 ಕ್ಕೆ ಬಂದು ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,593 (+81) ರೂ., 22 ಕ್ಯಾರೆಟ್ ಚಿನ್ನದ ದರ 14,295 (+75) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,578 (+81) ರೂ., 22 ಕ್ಯಾರೆಟ್ ಚಿನ್ನದ ದರ 14,280 (+75) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,583 (+81) ರೂ., 22 ಕ್ಯಾರೆಟ್ ಚಿನ್ನದ ದರ 14,285 (+75) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,666 (+164) ರೂ., 22 ಕ್ಯಾರೆಟ್ ಚಿನ್ನದ ದರ 14,360 (+150) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,578 (+81) ರೂ., 22 ಕ್ಯಾರೆಟ್ ಚಿನ್ನದ ದರ 14,280 (+75) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,578 (+81) ರೂ., 22 ಕ್ಯಾರೆಟ್ ಚಿನ್ನದ ದರ 14,280 (+75) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,593 (+81) ರೂ., 22 ಕ್ಯಾರೆಟ್ ಚಿನ್ನದ ದರ 14,295 (+75) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,593 (+81) ರೂ., 22 ಕ್ಯಾರೆಟ್ ಚಿನ್ನದ ದರ 14,295 (+75) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,593 (+81) ರೂ., 22 ಕ್ಯಾರೆಟ್ ಚಿನ್ನದ ದರ 14,295 (+75) ರೂ.
ಏಪ್ರಿಲ್ 18ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 18) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಅಲ್ಪಸಂಖ್ಯಾತ ನಾಯಕರ ವಿರುದ್ಧ ಸರಣಿ ಕ್ರಮ: ರಾಜ್ಯ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತಾ?
ದಾವಣಗೆರೆ ದಕ್ಷಿಣ ಉಪಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಿರುಗಾಳಿಯಂತಹ ವಾತಾವರಣ ಸೃಷ್ಟಿಯಾಗಿದೆ. ಪಕ್ಷ ವಿರೋಧಿ ಚಟುವಟಿಕೆ ವಿಚಾರವನ್ನು ಮುಂದಿಟ್ಟುಕೊಂಡು ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕ್ರಮ ಆಗಿದೆ. ಆದರೆ ಇದು ಚರ್ಚೆಗೆ ಒಳಗಾಗುತ್ತಿದೆ. ಶೋಕಾಸ್ ನೋಟಿಸ್ ಕೂಡಾ ನೀಡದೆ ಇಂತಹ ಕ್ರಮ ಕೈಗೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಅಸಮಾಧಾನ ತಣಿಸಲು ಕಾಂಗ್ರೆಸ್ ನಾಯಕತ್ವ ಏನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲವೂ ಕೆರಳಿದೆ. ಮತ್ತಷ್ಟು ವಿವರ ಇಲ್ಲಿದೆ.
ತಿದ್ದುಪಡಿ ಮಸೂದೆಗೆ ಸೋಲು; ಕರಾಳ ಇತಿಹಾಸ ಮರುಕಳಿಸಲಿದೆ: ಕುಮಾರಸ್ವಾಮಿ
ಹೊಸದಿಲ್ಲಿ: ಸಂವಿಧಾನ ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೆಂಬಲ ಸಿಗದೆ ಮಸೂದೆ ಬಿದ್ದುಹೋದ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, 1996ರಿಂದ 2026; ಕರಾಳ ಇತಿಹಾಸ ಮರುಕಳಿಸಿದೆ! ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು ಎಂದು ಟೀಕಿಸಿದ್ದಾರೆ. ಅಂದು ಎಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇ. ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಅಂದು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ದಿಟ್ಟಹೆಜ್ಜೆ ಇರಿಸಿದ್ದರು. ಆದರೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಈ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಒಂದು ಗಂಟೆಯಲ್ಲಿ ಟ್ರಂಪ್ ಹೇಳಿದ 7 ಸುಳ್ಳುಗಳು: ಮತ್ತೆ, ಹೊರ್ಮುಜ್ ಮುಚ್ಚುವ ಇರಾನ್ ಎಚ್ಚರಿಕೆ
Close Of Strait Of Hormuz Again : ಹೊರ್ಮುಜ್ ಜಲಸಂಧಿ ತೆರೆಯುವ ಇರಾನ್ ಘೋಷಣೆಯಿಂದ ವಿಶ್ವದಲ್ಲಿ ಸ್ವಲ್ಪ ಮಟ್ಟಿನ ನಿರಾಳತೆ ಕಂಡಿತ್ತು. ಆದರೆ, ಈ ಘೋಷಣೆಯ ಕೆಲವೇ ಗಂಟೆಗಳಲ್ಲಿ ಮತ್ತೆ ಜಲಸಂಧಿ ಬಂದ್ ಮಾಡುವ ಎಚ್ಚರಿಕೆಯನ್ನು ಇರಾನ್ ನೀಡಿದೆ. ಒಂದು ಗಂಟೆಯಲ್ಲಿ ಅಮೆರಿಕದ ಅಧ್ಯಕ್ಷ ಡೂನಾಲ್ಡ್ ಟ್ರಂಪ್, ಏಳು ಸುಳ್ಳನ್ನು ಹೇಳಿದ್ದಾರೆ ಎಂದು ಇರಾನ್ ಸಚಿವರು ಲೇವಡಿ ಮಾಡಿದ್ದಾರೆ.
RCB Vs DC IPL 2026: ಕಿಂಗ್ ಕೊಹ್ಲಿ vs ಕೆ.ಎಲ್.ರಾಹುಲ್: ಬೆಂಗಳೂರಿನಲ್ಲಿ ಆರ್ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್
RCB Vs DC IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ಐಪಿಎಲ್ 2026ರ 26ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾದ್ರೆ, ಪಿಚ್ ರಿಪೋರ್ಟ್, ಬೆಂಗಳೂರಿನ ಹವಾಮಾನ ವರದಿ ಹಾಗೂ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈ ಮೈದಾನವು
ಕಳೆದ ವರ್ಷ ಅಕ್ಷಯ ತೃತೀಯದಲ್ಲಿ ಖರೀದಿಸಿದ್ದ ಚಿನ್ನದ ಎಷ್ಟು ಲಾಭ ತಂದುಕೊಟ್ಟಿತು? ಬೆಳ್ಳಿ ಬೆಲೆಯೇ 3 ಪಟ್ಟು ಹೆಚ್ಚಳ
ಕಳೆದ ವರ್ಷ ಅಕ್ಷಯ ತೃತೀಯಗೆ ಖರೀದಿ ಮಾಡಿದ್ದ ಚಿನ್ನ, ಬೆಳ್ಳಿ ಭರ್ಜರಿ ಲಾಭ ತಂದುಕೊಟ್ಟಿವೆ. ಚಿನ್ನದ ಶೇಕಡಾ 59 ರಷ್ಟು, ಬೆಳ್ಳಿ ಶೇಕಡಾ 175 ರಷ್ಟು ದರ ಏರಿಕೆಯಾಗಿದೆ. ಕಳೆದ ವರ್ಷ ದರ ಎಷ್ಟಿತ್ತು? ಈಗ ಎಷ್ಟಿದೆ? ಬದಲಾವಣೆಯ ವಿವರ ಇಲ್ಲಿದೆ.
ಮಂಗಳೂರನ್ನು ರಾಜ್ಯದ ಎರಡನೇ ಬೆಂಗಳೂರು ನಗರದ ರೀತಿ ಅಭಿವೃದ್ಧಿ: ದಿನೇಶ್ ಗುಂಡೂರಾವ್
ವೆಲೆನ್ಸಿಯಾದಲ್ಲಿ 3.47 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಪ್ರಯಾಣಿಕರ ಆಸನ ನುಂಗಿದ ನಂದಿನಿ ಪಾರ್ಲರ್
ದೇವದುರ್ಗ: ಪಟ್ಟಣದ ಬಸ್ ನಿಲ್ದಾಣದ ಮಧ್ಯೆ ನಂದಿನಿ ಪಾರ್ಲರ್ ಅಂಗಡಿಗೆ ಅನುಮತಿ ನೀಡಿ ಸಾರ್ವಜನಿಕರಿಗೆ ಕೂಡಲು ಜಾಗವಿಲ್ಲದಂತಾಗಿದೆ ಎಂದು ಸಾರ್ವಜನಿಕರು ವ್ಯವಸ್ಥಾಪಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೇ ಪ್ರಯಾಣಿಕರ ಓಡಾಟ ಹೆಚ್ಚಾದಂತೆ ಬಸ್ಗಾಗಿ ತಾಸುಗಟ್ಟಲೆ ಕಾಯುವ ಅನಿವಾರ್ಯತೆ ಇದೆ. ಬಸ್ ನಿಲ್ದಾಣದ ವ್ಯಾಪ್ತಿಯೂ ಸಣ್ಣದಿರುವುದರಿಂದ ಸರಿಯಾದ ಕೂರುವ ವ್ಯವಸ್ಥೆಯೂ ಇಲ್ಲ. ಆಸನಗಳ ಸಂಖ್ಯೆಯೂ ಕಡಿಮೆ ಇದೆ. ಆದರೆ, ಇರುವ ಕೆಲವು ಆಸನಗಳನ್ನೂ ಕಿತ್ತು ಬಸ್ ನಿಲ್ದಾಣ ವೇದಿಕೆ ನಡುವೆ ನಂದಿನಿ ಪಾರ್ಲರ್ಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ನೆಲದ ಮೇಲೆ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾರ್ಲರ್ನಲ್ಲಿ ಕೇವಲ ನಂದಿನಿ ಸಾಮಾಗ್ರಿಗಳು ಮಾರಾಟ ಮಾಡುವ ಅನುಮತಿ ಇದೆ. ಆದರೆ, ಇಲ್ಲಿ ಮನಬಂದಂತೆ ರಾಜಾರೋಷವಾಗಿ ಎಲ್ಲಾ ತಿನಿಸು, ಗುಣಮಟ್ಟವಿಲ್ಲದ ಪ್ಯಾಕೆಟ್ ಆಹಾರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಧಗ ಧಗನೇ ಉರಿಯುವ ಬಿಸಿಲಲ್ಲಿ ಚಿಕ್ಕ ಚಿಕ್ಕಮಕ್ಕಳು, ಹಿರಿಯ ವಯಸ್ಸಿನವರು, ಮಹಿಳೆಯರಿಗೆ, ಪ್ರಯಾಣಿಕರಿಗೆ ಕೂರಲು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಆಸನಗಳು ಮಾಡಿ, ಸಾರ್ವಜನಿಕರಿಗೆ ಕೂರಲು ಆಸನದ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬುದು ಇಲ್ಲಿನ ಪ್ರಯಾಣಿಕರ ಆಗ್ರಹ. ಬಸ್ ನಿಲ್ದಾಣ ಕಸದ ರಾಶಿಯಿಂದ ತುಂಬಿದೆ. ಸ್ವಚ್ಚತೆಗೆ ಆದ್ಯತೆ ನೀಡುತ್ತಿಲ್ಲ. ಪ್ರಯಾಣಿಕರಿಗೆ ಕೂರಲು ಆಸನಗಳಿಲ್ಲಮ, ಅಂತಹದರಲ್ಲಿ ನಂದಿನಿ ಪಾರ್ಲರ್ ಗೆ ಅವಕಾಶ ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿದೆ. ವಾಹನಗಳು ನಿಲುಗಡೆಗೆ ಪಾರ್ಕಿಂಗ್ ಇಲ್ಲದೆ, ಎಲ್ಲಂದರಲ್ಲಿ ವಾಹನ ನಿಲ್ಲಿಸಿ ಹೋಗುವುದರಿಂದ ಬಸ್ ತೆಗೆಯಲು ಹಾಗೂ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. -ವಿಶ್ವನಾಥ ಬಲ್ಲಿದವ್ ಭೀಮ ಆರ್ಮಿ ಅಧ್ಯಕ್ಷ ದೇವದುರ್ಗಭೀಮ ಆರ್ಮಿ ಅಧ್ಯಕ್ಷ ದೇವದುರ್ಗ
ಉತ್ತರಪ್ರದೇಶ | ಫಿರೋಝಾಬಾದ್ ಜಿಲ್ಲಾಧಿಕಾರಿ ವಿರುದ್ಧ ಕಿರುಕುಳ, ಭ್ರಷ್ಟಾಚಾರದ ಆರೋಪ ಮಾಡಿದ ತಹಶೀಲ್ದಾರ್
ಐಫೋನ್ಗೆ ಬೇಡಿಕೆ, 8 ತಿಂಗಳ ವೇತನಕ್ಕೆ ತಡೆ: ತನಿಖೆ ನಡೆಸುವಂತೆ ಸಿಎಂಗೆ ಆಗ್ರಹ
ಕೋಟೆಕಾರ್ | ಹಿದಾಯತ್ ನಗರ ದರ್ಸ್ ಆರಂಭೋತ್ಸವ
ಕೋಟೆಕಾರ್: ಹಿದಾಯತ್ ನಗರ ಹುಸೈನಿಯಾ ದಅವಾ ದರ್ಸ್ ಆರಂಭೋತ್ಸವ ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿಯಲ್ಲಿ ನಡೆಯಿತು, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ದರ್ಸ್ ಆರಂಭಕ್ಕೆ ಚಾಲನೆ ನೀಡಿ ದರ್ಸ್ ಕಲಿಕೆಯ ಮಹತ್ವದ ಬಗ್ಗೆ ವಿವರಿಸಿದರು. ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ದುಆಗೈದರು. ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ಖಾದರ್, ಮುಅದ್ದಿನ್ ಶಕೂರ್ ಸಅದಿ, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ ಮತ್ತಿತರರು ಭಾಗವಹಿಸಿದ್ದರು. ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್. ಕಾರ್ಯಕ್ರಮ ನಿರೂಪಿಸಿದರು.
Gold Rate: ಬೆಂಗಳೂರಿನಲ್ಲಿ ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ: ಬೆಳ್ಳಿ ಕೆಜಿಗೆ 10,000 ರೂ.ವರೆಗೆ ಏರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ದರವು ಇಂದು ಏರುಗತಿಯಲ್ಲಿ ಸಾಗಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯ ಮೇಲೆ ಗಣನೀಯ ಹೆಚ್ಚಳ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ ₹15,578 ತಲುಪಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ
ತಮಿಳುನಾಡು ಅಖಾಡದಲ್ಲಿ ಉದಯನಿಧಿ - ಮೋದಿ ಜಿದ್ದಾಜಿದ್ದಿ, ದಳಪತಿಗೆ ಅಗ್ನಿಪರೀಕ್ಷೆ
ತಮಿಳುನಾಡಿನ ಚುನಾವಣಾ ಅಖಾಡವು ಪ್ರಕೃತಿಯ ಶಾಂತತೆಗೆ ವಿರುದ್ಧವಾಗಿ ರಾಜಕೀಯ ಕೆಂಡದಂತೆ ಕುದಿಯುತ್ತಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಗುಡುಗುತ್ತಿದ್ದರೆ, ಸ್ಟಾಲಿನ್ ಅವರು ಕ್ಷೇತ್ರ ವಿಂಗಡಣೆಯ ವಿರುದ್ಧ ದ್ರಾವಿಡ ಅಸ್ಮಿತೆಯ ಕಿಚ್ಚು ಹಚ್ಚುತ್ತಿದ್ದಾರೆ. ಭಾವನಾತ್ಮಕವಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರು 'ಅಮ್ಮ'ನ ಹೆಸರಿನಲ್ಲಿ ಮತ ಸೆಳೆಯಲು ಯತ್ನಿಸುತ್ತಿದ್ದರೆ, ಉದಯನಿಧಿ ಸ್ಟಾಲಿನ್ ಈ ಹೋರಾಟವನ್ನು ದೆಹಲಿ ವರ್ಸಸ್ ದ್ರಾವಿಡ ಭೂಮಿ ಎಂದು ಬಣ್ಣಿಸುತ್ತಿದ್ದಾರೆ.
ಮಹಿಳಾ ಮೀಸಲಾತಿಗೆ ಸೋಲು : ಬಿಜೆಪಿ ಹೂಡಿದ ಚತುರ ರಾಜಕೀಯ ಬಲೆಗೆ ವಿಪಕ್ಷಗಳು ಟ್ರ್ಯಾಪ್ - 3 ಸಾಧ್ಯತೆಗಳು?
Defeat to Women's Reservation Bill : ಮಹಿಳಾ ಮೀಸಲಾತಿ ಸಹಿತ ಮೂರು ಬಿಲ್ಲುಗಳಿಗೆ ಲೋಕಸಭೆಯಲ್ಲಿ ಸೋಲಾಗಿದೆ. ಆ ಮೂಲಕ, ವಿಪಕ್ಷಗಳು, ಬಿಜೆಪಿಯ ಸಂವಿಧಾನ ವಿರೋಧಿ ಕೆಲಸಕ್ಕೆ ತಡೆಯೊಡ್ಡಿದ್ದೇವೆ ಎನ್ನುವ ಖುಷಿಯಲ್ಲಿದೆ. ಇನ್ನೊಂದು ಕಡೆ, ಮಸೂದೆ ಸೋಲಿನಲ್ಲೂ ಬಿಜೆಪಿಗೆ ರಾಜಕೀಯ ಲಾಭ ಸಿಗುತ್ತಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವ ನಮ್ಮ ನಿಲುವಿಗೆ ವಿಪಕ್ಷಗಳು ತಡೆಯೊಡ್ಡಿವೆ ಎಂದು ಬಿಜೆಪಿ, ಜನರ ಬಳಿ ಹೋಗಲು ನಿರ್ಧರಿಸಿದೆ.
Adani Group: ಮುಂಬೈ ಮೋತಿಲಾಲ್ ನಗರ ಯೋಜನೆಗೆ 1ಲಕ್ಷ ಕೋಟಿ ರೂ ಹೂಡಿಕೆ, 17 ಲಕ್ಷ ಚಮೀ. ಮಾರಾಟ
ಮುಂಬೈ: ವಾಣಿಜ್ಯ ನಗರಿ ಮುಂಬೈನ ಉಪನಗರದಲ್ಲಿರುವ ಮೋತಿಲಾಲ್ ನಗರದ ಪುನರಾಭಿವೃದ್ಧಿ ಯೋಜನೆಗೆ ಅದಾನಿ ಗ್ರೂಪ್ ಬೃಹತ್ ಹೂಡಿಕೆ ಮಾಡಲು ಮುಂದಾಗಿದೆ. ಒಟ್ಟು ಸುಮಾರು 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಮೋತಿಲಾಲ್ ನಗರ ಸುಮಾರು 143 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಸುಮಾರು 28 ಲಕ್ಷ ಚದರ ಮೀಟರ್ ನಿರ್ಮಿತ ಪ್ರದೇಶ ಮತ್ತಷ್ಟು ಸುಂದರವಾಗಿ ತಲೆ ಎತ್ತಲಿದ್ದು,
ಮರವೂರು: 9 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ದಿನೇಶ್ ಗುಂಡೂರಾವ್ ಶಿಲಾನ್ಯಾಸ
ಮಂಗಳೂರು, ಎ.18: ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆ (ಹಂತ-2) ಮತ್ತು ಎನ್ ಜಿಟಿ ಪರಿಹಾರ ನಿಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದ ಅಂಗವಾಗಿ ಮರವೂರು -ಮರಕಡ ವರೆಗಿನ ಚತುಷ್ಪಥ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸುತ್ತಿರುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು ಶನಿವಾರ ಮರವೂರಿನಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. 9 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆ (ಹಂತ-2)ಮತ್ತು ಎನ್ ಜಿಟಿ ಪರಿಹಾರ ನಿಧಿ ಮೂಲಕ ಒಟ್ಟು 165 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಗುವುದು ಎಂದವರು ತಿಳಿಸಿದ್ದಾರೆ. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ. ಜಿಲ್ಲಾಧಿಕಾರಿ ದರ್ಶನ್, ಮಾಜಿ ಮೇಯರ್ ಗಳಾದ ಹರಿನಾಥ್, ಶಶಿಧರ ಹೆಗ್ಡೆ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಆರ್.ಪದ್ಮರಾಜ್ ಮಾಜಿ ಕಾರ್ಪೊರೇಟರ್ ಗಳಾದ ನವೀನ್ ಡಿಸೋಜ, ಅನಿಲ್, ಪ್ರವೀಣ್ ಚಂದ್ರ ಆಳ್ವ, ವಿಶ್ವಾಸ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಒಂದು ಗಂಟೆಯಲ್ಲಿ 7 ಸುಳ್ಳು: ಯುದ್ಧ ವಿಜಯದ ಕುರಿತ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಇರಾನ್
ಅಮೆರಿಕಾ ನೌಕಾ ದಿಗ್ಬಂಧನ ಮುಂದುವರಿಸಿದರೆ ಹಾರ್ಮುಝ್ ಜಲಸಂಧಿ ಮತ್ತೆ ಬಂದ್: ಇರಾನ್ ಎಚ್ಚರಿಕೆ
ಕಾಂಗ್ರೆಸ್: ತಾರಕಕ್ಕೇರಿದ ಬಣ ಬಡಿದಾಟ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಪರ್ಯಾಯ ದೊರಕಿದ್ದೇ ಅರಸು ಅವರು ಕಾಂಗ್ರೆಸ್ ಪಕ್ಷದಿಂದ ಹೊರ ಹೋದ ಗಳಿಗೆಯಿಂದ. ಅರಸು ಉತ್ತರಾಧಿಕಾರಿಯಾಗಿ ಬಂದ ಆರ್.ಗುಂಡೂರಾವ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸಂಪೂರ್ಣ ವಿಫಲರಾದರು. ಅರಸು ವಿರುದ್ಧ ಕುತಂತ್ರ ರೂಪಿಸಿದ ಯಾರೊಬ್ಬರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಲಿಲ್ಲ . ಸದ್ಯದ ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆಗಳು ಮೇಲ್ನೋಟಕ್ಕೆ ಶಿಸ್ತು ಕ್ರಮದಂತೆ ಕಾಣಿಸಿಕೊಂಡರೂ ಆಂತರ್ಯದಲ್ಲಿ ಬಣ ಬಡಿದಾಟದ ಬೇಗುದಿ ಕ್ರಿಯಾಶೀಲವಾಗಿರುವುದು ರಾಜಕೀಯ ಬಲ್ಲವರಿಗೆ ಅರ್ಥವಾಗುತ್ತದೆ. 136 ಶಾಸಕರ ಸಂಖ್ಯಾ ಬಲದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಮೊದಲ ದಿನದಿಂದಲೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟವರ ಕಾಕ ದೃಷ್ಟಿಗೆ ಗುರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚು ಕಡಿಮೆ ಒಂದು ವರ್ಷ ಮಾತ್ರ ನೆಮ್ಮದಿಯ ಆಡಳಿತ ನಡೆಸಿರಬಹುದು. ಅಧಿಕಾರ ಹಂಚಿಕೆಯ ಚರ್ಚೆಗಳು ಕಾಂಗ್ರೆಸ್ ಪಕ್ಷದ ಪಡಸಾಲೆಯಿಂದಲೇ ಹೊರಬೀಳುತ್ತಲಿವೆ. ಆಗಿನಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಬಣ ಬಡಿದಾಟದ ಲಕ್ಷಣಗಳು ಗೋಚರಿಸತೊಡಗಿದವು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರು ಬಹಿರಂಗವಾಗಿಯೇ ನಮ್ಮ ನಾಯಕರು ಮುಖ್ಯಮಂತ್ರಿಯಾಗುವುದು ಪಕ್ಕಾ ಎಂಬ ಮಾತುಗಳನ್ನು ಹರಿ ಬಿಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಬಣದ ಶಾಸಕರು, ಮಂತ್ರಿಗಳು ಎಲ್ಲಕ್ಕೂ ಮಿಗಿಲಾಗಿ ಅವರ ಮಗ ಯತೀಂದ್ರ ಐದು ವರ್ಷಗಳ ಕಾಲ ಅಪ್ಪಾಜಿಯೇ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಅತ್ಯಂತ ಆಪ್ತ ಬಳಗದ ಶಾಸಕರು, ಮಂತ್ರಿಗಳು ಪದೇ ಪದೇ ಶಿಸ್ತು ಉಲ್ಲಂಘಿಸಿ ಅಧಿಕಾರ ಹಂಚಿಕೆಯ ಕುರಿತು ಅನಗತ್ಯವಾಗಿ ಮಾತನಾಡಿದಾಗ ಹೈಕಮಾಂಡ್ ಒಮ್ಮೆಯೂ ಗಂಭೀರವಾಗಿ ಪರಿಗಣಿಸಲಿಲ್ಲ. ಹೈಕಮಾಂಡ್ನ ಭಾಗವಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದವರೇ. ಅಧಿಕಾರ ಹಂಚಿಕೆಯ ಮಾತುಗಳು ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದು ನಿಜವೇ ಆಗಿದ್ದರೆ ಅದನ್ನಾದರೂ ಹೇಳಬೇಕಿತ್ತು. ಅಂತಹ ಮಾತುಗಳು ನಡೆದೇ ಇಲ್ಲ ಎನ್ನುವುದಾದರೆ ಅದನ್ನಾದರೂ ಸ್ಪಷ್ಟಪಡಿಸಬೇಕಿತ್ತು. ಕಾಂಗ್ರೆಸ್ ಹೈಕಮಾಂಡ್ಗೆ ಪಕ್ಷದಲ್ಲಿ ಶಿಸ್ತು ಮೂಡಿಸುವುದು ಮೊದಲ ಆದ್ಯತೆಯಾಗಿದ್ದರೆ ಡಿ.ಕೆ.ಶಿವಕುಮಾರ್ ಬಣದ ಶಿವಗಂಗಾ ಶಾಸಕ, ರಾಮನಗರ ಶಾಸಕ ಮತ್ತು ಇನ್ನಿತರರ ಮೇಲೆ ಕಠಿಣ ಕ್ರಮ ಜರುಗಿಸಬೇಕಿತ್ತು. ಅಷ್ಟು ಮಾತ್ರವಲ್ಲ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾರೆ, ಅಧಿಕಾರ ಹಂಚಿಕೆಯ ಮಾತುಕತೆ ನಡೆದೇ ಇಲ್ಲ ಎಂದು ಹೈಕಮಾಂಡ್ ವಕ್ತಾರನಂತೆ ಅಧಿಕೃತವಾಗಿ ಹೇಳಿಕೆ ನೀಡಿದ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಿದ್ದರೆ ಎಲ್ಲ ಗೊಂದಲಗಳಿಗೆ ತೆರೆ ಎಳೆದಂತಾಗುತ್ತಿತ್ತು. ಅಧಿಕಾರ ಹಂಚಿಕೆಯ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಒಬ್ಬರ ಮೇಲೂ ಕ್ರಮ ಜರುಗಿಸದೆ, ಆ ಕುರಿತು ಸ್ಪಷ್ಟ ಮಾತುಗಳಲ್ಲಿ ಏನನ್ನೂ ಹೇಳದೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ವಲಯ ಮತ್ತು ಸರಕಾರಿ ವ್ಯವಸ್ಥೆಯಲ್ಲಿ ಅಸ್ಥಿರತೆ ಮೂಡಿಸಿದೆ. ಪಕ್ಷ ಮತ್ತು ಸರಕಾರಿ ವ್ಯವಸ್ಥೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಒಬ್ಬರ ಮೇಲೂ ಕಠಿಣ ಕ್ರಮ ಜರುಗಿಸದೆ ಶಿಸ್ತು ಕ್ರಮದ ಹೆಸರಲ್ಲಿ ಕೆಲವರನ್ನು ಬಲಿ ತೆಗೆದುಕೊಳ್ಳುತ್ತಿದೆ. ಆ ಕೆಲವರು ಪ್ರತಿನಿಧಿಸುವ ಸಮುದಾಯಗಳು ನಿಜವಾದ ಅರ್ಥದಲ್ಲಿ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭಗಳು. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಬಿಕ್ಕಟ್ಟಿಗೆ ನೈಜ ಕಾರಣ ಕಂಡುಕೊಳ್ಳದೆ, ಸ್ಪಷ್ಟ ಉತ್ತರ ನೀಡಲಾಗದೆ ಪಕ್ಷಕ್ಕೆ ನಷ್ಟವಾಗುವ ರೀತಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದೆ. ಹಾಗೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಘನತೆ, ಗೌರವಕ್ಕೆ ಕುಂದನ್ನುಂಟು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಈ ಚಾಳಿ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಹೈಕಮಾಂಡ್ ಹೆಸರಲ್ಲಿ ಜರುಗಿಸಿದ ಕ್ರಮಗಳೆಲ್ಲ ಗಾಳಿಯಲ್ಲಿ ಗುಂಡು ಹಾರಿಸಿದ ರೀತಿಯಲ್ಲೇ ಇವೆ. ಪಕ್ಷಪಾತಿ ನಿಲುವನ್ನು ಕಂಡ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ ಗಲಿಬಿಲಿಗೊಳ್ಳುತ್ತಾನೆ. ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡ್ ಸಾಮಾನ್ಯ ಕಾರ್ಯಕರ್ತರ ಪರವಾಗಿಲ್ಲ ಎಂಬ ನಿಲುವಿಗೆ ತಲುಪುತ್ತಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹೆಸರಲ್ಲಿ ಯಾರೋ ಕೆಲವರು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಮತದಾರ ಅತ್ಯಧಿಕ ಬಹುಮತ ನೀಡಿದಾಗಲೆಲ್ಲ ಸಮಸ್ಯೆ ಸೃಷ್ಟಿಸಿಕೊಂಡು ಜನರ ವಿಶ್ವಾಸ ಕಳೆದುಕೊಂಡಿದೆ. ಎಂಭತ್ತರ ದಶಕದವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪರ್ಯಾಯವೇ ಇರಲಿಲ್ಲ. ಆಗ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಹೆಸರಲ್ಲಿ ಏನೆಲ್ಲಾ ಆಟ ಆಡುತ್ತಿದ್ದರು. ಚಾಡಿ ಹೇಳಿ ದಕ್ಕಿಸಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಮುಖಂಡರೇ ಆಸ್ತಿಯಾಗಿದ್ದರು. ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಎಪ್ಪತ್ತರ ದಶಕದಲ್ಲಿಯೇ ತನ್ನ ನೆಲೆ ಕಳೆದುಕೊಳ್ಳತೊಡಗಿತ್ತು. ಆದರೆ ಕರ್ನಾಟಕದಲ್ಲಿ ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿಯಂತಹ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷವನ್ನು ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರು. ಎಪ್ಪತ್ತರ ದಶಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ಅದರ ಪರಿಣಾಮವಾಗಿ ಕರ್ನಾಟಕದಲ್ಲೂ ಕಾಂಗ್ರೆಸ್ ಎರಡು ಹೋಳಾಯಿತು. ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ದೇವರಾಜ ಅರಸು ಅವರಂತಹ ದೂರದೃಷ್ಟಿಯುಳ್ಳ ಸಮರ್ಥ ನಾಯಕ ಸಿಕ್ಕಿದ್ದರಿಂದ ಹಿನ್ನಡೆ ಅನುಭವಿಸಲಿಲ್ಲ. ಆದರೆ ಎಂಭತ್ತರ ದಶಕದ ಕೊನೆಯ ವರ್ಷಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಚಾಡಿಕೋರರ ಮಾತು ಕೇಳಿ ಸ್ಥಳೀಯ ಪ್ರಬಲ ನಾಯಕರಾದ ದೇವರಾಜ ಅರಸು ಅವರಿಗೆ ಕಿರುಕುಳ ಕೊಡಲು ಯತ್ನಿಸಿತು. ಅದರ ಪರಿಣಾಮ ಕಾಂಗ್ರೆಸ್ ಪಕ್ಷ ಈ ಹೊತ್ತಿಗೂ ಅನುಭವಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಪರ್ಯಾಯ ದೊರಕಿದ್ದೇ ಅರಸು ಅವರು ಕಾಂಗ್ರೆಸ್ ಪಕ್ಷದಿಂದ ಹೊರ ಹೋದ ಗಳಿಗೆಯಿಂದ. ಅರಸು ಉತ್ತರಾಧಿಕಾರಿಯಾಗಿ ಬಂದ ಆರ್.ಗುಂಡೂರಾವ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸಂಪೂರ್ಣ ವಿಫಲರಾದರು. ಅರಸು ವಿರುದ್ಧ ಕುತಂತ್ರ ರೂಪಿಸಿದ ಯಾರೊಬ್ಬರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಲಿಲ್ಲ. 1983 ಮತ್ತು 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪಕ್ಕಕ್ಕೆ ತಳ್ಳಿ ಜನತಾ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ನಿರಂತರ ಎರಡು ಅವಧಿಗೆ ಜನಾದೇಶ ಪಡೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಪ್ರಬಲ ನಾಯಕರನ್ನು ಚಾಡಿಕೋರರ ಮಾತು ಕೇಳಿ ಕೆಟ್ಟದ್ದಾಗಿ ನಡೆಸಿಕೊಂಡಿದ್ದರ ಪರಿಣಾಮವಾಗಿ ತನ್ನ ಗಟ್ಟಿ ನೆಲೆಯನ್ನು ಸಂಪೂರ್ಣ ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಗುರುತಿಸಿ ಶಿಕ್ಷೆ ನೀಡುವ ಪರಿಪಾಠ ಇಲ್ಲ. ಬದಲಿಗೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. 1989ರ ಹೊತ್ತಿಗೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಭವಿಷ್ಯವೇ ಇಲ್ಲ ಎಂಬ ವಾತಾವರಣ ಮೂಡಿತ್ತು. ರಾಜ್ಯದಲ್ಲಿ ಜನತಾ ಪಕ್ಷ ವ್ಯಾಪಕವಾಗಿ ಆವರಿಸಿಕೊಂಡಿತ್ತು. ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಜನತಾ ಪಕ್ಷ ಬೇರುಗಳನ್ನು ಗಟ್ಟಿಗೊಳಿಸಿಕೊಂಡಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ವೀರೇಂದ್ರ ಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಐತಿಹಾಸಿಕ ಗೆಲುವು ಪಡೆಯಿತು. ಆ ದಾಖಲೆಯ ಗೆಲುವಿನ ರೆಕಾರ್ಡ್ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಮುರಿಯಲು ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 178 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಪಕ್ಷ ಬಹುಮತ ಪಡೆದರೆ ವೀರೇಂದ್ರ ಪಾಟೀಲರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ ಎಂಬುದು ನಿಚ್ಚಳವಿತ್ತು. ಆ ಕಾರಣಕ್ಕಾಗಿಯೇ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ವೀರೇಂದ್ರ ಪಾಟೀಲರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಅನೇಕರು ತೆರೆಮರೆಯಲ್ಲಿ ಕುತಂತ್ರ ರೂಪಿಸಿದರು. ಜನತಾ ಪಕ್ಷದ ಅಭ್ಯರ್ಥಿಗೆ ಹಣ ಸರಬರಾಜು ಮಾಡಿದರು. ಅತ್ಯಂತ ಜನಪ್ರಿಯ ನಾಯಕರಾಗಿದ್ದ ವೀರೇಂದ್ರ ಪಾಟೀಲರು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಬೇಕಾಯಿತು. ಕೇವಲ ಎರಡು ಸಾವಿರ ಅಂತರದಿಂದ ಗೆಲುವು ಸಾಧಿಸಿದ ವೀರೇಂದ್ರ ಪಾಟೀಲರು ಅತ್ಯಧಿಕ ಶಾಸಕರನ್ನು ಗೆಲ್ಲಿಸಿಕೊಂಡಿದ್ದಕ್ಕೆ ಅನಿವಾರ್ಯವಾಗಿ ಮುಖ್ಯಮಂತ್ರಿಯಾದರು. ವೀರೇಂದ್ರ ಪಾಟೀಲರನ್ನು ಸೋಲಿಸಲು ಹರಸಾಹಸ ಪಟ್ಟ ಕುತಂತ್ರಿಗಳನ್ನು ಪತ್ತೆ ಹಚ್ಚಿ ಪಕ್ಷ ವಿರೋಧಿಗಳೆಂದು ಶಿಸ್ತು ಕ್ರಮ ಜರುಗಿಸಿದ್ದರೆ ಕಾಂಗ್ರೆಸ್ ಕರ್ನಾಟಕದಲ್ಲಿ ನೆಲೆ ಕಳೆದುಕೊಳ್ಳುತ್ತಿರಲಿಲ್ಲ. ದುರಂತವೆಂದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಚಾಡಿಕೋರರ ಮಾತಿಗೆ ಕಿವಿಗೊಟ್ಟು ಕೇವಲ ಒಂದೇ ವರ್ಷಕ್ಕೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ರಾಮನಗರ, ಚನ್ನಪಟ್ಟಣಗಳಲ್ಲಿ ಬೆಂಕಿ ಹಚ್ಚಿ ಅರಾಜಕತೆ ಸೃಷ್ಟಿಸಲು, ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣರಾದ ಯಾರನ್ನೂ ಕಾಂಗ್ರೆಸ್ ಹೈಕಮಾಂಡ್ ಶಿಕ್ಷಿಸಲಿಲ್ಲ. ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಗುಂಪೇ ಎಸ್.ಬಂಗಾರಪ್ಪ ಅವರನ್ನು ಅಧಿಕಾರ ನಡೆಸಲು ಬಿಡಲಿಲ್ಲ. ವೀರಪ್ಪ ಮೊಯ್ಲಿಯವರ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಪಕ್ಷ ಜನಪ್ರಿಯತೆ ಕಳೆದುಕೊಂಡಿತ್ತು. 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ 178ರಿಂದ 34ಕ್ಕೆ ಇಳಿದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಒಂದು ವರ್ಗವಿದೆ. ಅದು ಸದಾ ಕುತಂತ್ರ ಮಾಡುತ್ತಲೇ ಇರುತ್ತದೆ. ನಾಯಕತ್ವ ವಹಿಸಿಕೊಂಡು 120 ಸ್ಥಾನಗಳಲ್ಲಿ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಆ ಗುಂಪಿಗಿಲ್ಲ. ಬೇರೊಬ್ಬರು ನಾಯಕತ್ವ ವಹಿಸಿಕೊಂಡು ಅಭೂತಪೂರ್ವ ಗೆಲುವು ಸಾಧಿಸಿದ ಮೇಲೆ ಅದರಲ್ಲಿ ತಮ್ಮದು ಪಾಲು ಇದೆ ಎಂದು ಹಕ್ಕು ಚಲಾಯಿಸಲು ಬರುತ್ತಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬರದೇ ಹೋಗಿದ್ದರೆ ಧರಂಸಿಂಗ್ ಅವರೇ ಆ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗುತ್ತಿದ್ದರು. ಸಿದ್ದರಾಮಯ್ಯ ಅವರು ಜನನಾಯಕ ಎಂಬುದು ಸಾಬೀತಾದ ಸತ್ಯ. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಡುವ ಏಕೈಕ ನಾಯಕ. ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅದರಲ್ಲಿ ನಮ್ಮದೂ ಪಾಲಿದೆ ಎಂದು ಕೇಳಿದರೆ ಸಾಮಾನ್ಯ ಕಾರ್ಯಕರ್ತರು ಮೆಚ್ಚಿ ಕೊಳ್ಳುವುದಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಅನಿವಾರ್ಯವಾಗಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆ ಸರಕಾರ ರಚನೆಯಾಗುವುದು ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಕುಮಾರಸ್ವಾಮಿ ಸರಕಾರ ಒಂದು ವರ್ಷಕ್ಕೆ ಅಧಿಕಾರ ಕಳೆದುಕೊಂಡಿತ್ತು. ಕುಮಾರಸ್ವಾಮಿ ಸರಕಾರ ಬೀಳಲು ಯಾರು ಕಾರಣರು ಎಂಬುದು ರಾಜ್ಯದ ಎಳೆಯ ಮಕ್ಕಳಿಗೂ ಗೊತ್ತಿತ್ತು. ಕಾಂಗ್ರೆಸ್ ಹೈಕಮಾಂಡ್ ಆಗ ಕಠಿಣ ಕ್ರಮ ಜರುಗಿಸಿದ್ದರೆ ಹೊಸ ನಾಯಕತ್ವವಾದರೂ ಹುಟ್ಟಿಕೊಳ್ಳುತ್ತಿತ್ತು. ಆಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು ಮತ್ತೆ ಸಿದ್ದರಾಮಯ್ಯ ಅವರ ಮೊರೆ ಹೋದರು. ಸಿದ್ದರಾಮಯ್ಯ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಹಗಲಿರುಳು ವಿರೋಧ ಪಕ್ಷದ ನಾಯಕರಾಗಿ ದುಡಿದ ಸಿದ್ದರಾಮಯ್ಯ ಅವರು 2023ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರು. ನೇತೃತ್ವ ಅವರದು, ಶ್ರಮ ಅವರದು, ಗೆಲುವಿನಲ್ಲಿ ಅವರ ಪಾಲು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಈಗ ಅಧಿಕಾರ ಹಂಚಿಕೆಯಾಗಬೇಕು, ಮುಖ್ಯಮಂತ್ರಿ ಹುದ್ದೆ ಬೇಕು ಎಂದು ಹಪಾಹಪಿ ಮಾಡುವವರು 2019ರಲ್ಲಿ ಎಲ್ಲಿ ಹೋಗಿದ್ದರು? ಆಗಲೇ ಹೈಕಮಾಂಡ್ ಬಳಿ ಹೋಗಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಅಧಿಕಾರ ಕೊಟ್ಟಿದ್ದೀರಿ, ಕುಮಾರಸ್ವಾಮಿ ಸರಕಾರ ಬೀಳಲು ಅವರೇ ಕಾರಣ, ವಿರೋಧ ಪಕ್ಷದ ನಾಯಕನ ಸ್ಥಾನ ನನಗೇ ಕೊಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ, 150 ಸ್ಥಾನಗಳಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೈಕಮಾಂಡ್ ಎದುರುಗಡೆ ಹೇಳಬಹುದಿತ್ತಲ್ಲ. ಈಗ ಕಡ್ಡಿಯಾಡಿಸುತ್ತಿರುವ ಹೈಕಮಾಂಡ್ ಸಿದ್ದರಾಮಯ್ಯ ಅವರೇ ನಿಮಗೆ ಒಂದು ಅವಧಿಗೆ ಮುಖ್ಯಮಂತ್ರಿ ಹುದ್ದೆ ಪಕ್ಷ ನೀಡಿದೆ. ಮೈತ್ರಿ ಸರಕಾರ ಬೀಳಲು ನೀವೇ ಕಾರಣ. ಹೊಸಬರಿಗೆ ನಾಯಕತ್ವ ನೀಡುತ್ತೇವೆ ಎಂದು ಕಡ್ಡಿ ತುಂಡರಿಸಿದ ಹಾಗೆ ಹೇಳಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಕಾಂಗ್ರೆಸ್ ಹೈಕಮಾಂಡ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಜಾಯಮಾನವೇ ಬೆಳೆಸಿಕೊಂಡಿಲ್ಲ. ಪಕ್ಷದ ಅವಕಾಶವಾದಿ ನಿಲುವೇ ದಿನೇ ದಿನೇ ಪಕ್ಷಕ್ಕೆ ಮುಳುವಾಗುತ್ತಿದೆ. 90ರ ದಶಕದಲ್ಲಿ ಕಲಬುರಗಿ ಜಿಲ್ಲೆಗೆ ಬಿಜೆಪಿ ಪ್ರವೇಶವಾಗಿರಲಿಲ್ಲ. ಕಮಲಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರೇವೂ ನಾಯಕ ಗೆಲುವು ಸಾಧಿಸಿದ್ದು ಯಾರ ಸಹಾಯದಿಂದ. ಒಂದಲ್ಲ ನಾಲ್ಕು ಅವಧಿಗೆ ಗೆಲುವು ಸಾಧಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಲೇ ಇಲ್ಲ. ಅದೇ ಬಿಜೆಪಿ ಮುಂದೊಂದು ದಿನ ಮಲ್ಲಿಕಾರ್ಜುನ ಖರ್ಗೆಯವರನ್ನೇ ಬಲಿ ತೆಗೆದುಕೊಂಡಿತು. ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಯಾರ ಸಹಕಾರದಿಂದ ಗೆಲ್ಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಯಾವ ಶಿಕ್ಷೆಯಾಗಿದೆ? ಬೀದರ್ ಜಿಲ್ಲೆಯಲ್ಲಿ ಬಿಜೆಪಿಯ ಪ್ರಭು ಚವ್ಹಾಣ ನಿರಂತರ ಗೆಲ್ಲುವುದು ಯಾರ ಸಹಾಯದಿಂದ? ಹುಮನಾಬಾದ ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ್ ಪಾಟೀಲ್ ಸೋತಿದ್ದು ಯಾರಿಂದ? ಅದೆಲ್ಲ ಬಿಡಿ ಖುದ್ದು ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ವಿಜಯೇಂದ್ರ ನೀನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದು ನಮ್ಮ ಭಿಕ್ಷೆಯಿಂದ ಎಂದು ಬಹಿರಂಗ ಹೇಳಿಕೆ ನೀಡಿದರು. ದಿ.ಶಾಮನೂರು ಶಿವಶಂಕರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಹೋಗಿ ಈ ಬಾರಿಯೂ ರಾಘವೇಂದ್ರ ಅವರನ್ನೇ ಗೆಲ್ಲಿಸಿ ಎಂದು ಫರ್ಮಾನು ಹೊರಡಿಸಿ ಬಂದರು. ಹೇಳಿಕೇಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾದರ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಇವೆ. ಶಾಮನೂರು ವಿರುದ್ಧ ಕಠಿಣ ಕ್ರಮ ಜರುಗಿಸುವುದು ದೂರದ ಮಾತು, ಒಂದು ನೋಟೀಸ್ ಕೂಡಾ ನೀಡಲಿಲ್ಲ. ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿರಲಿಲ್ಲ. ಮುಂಚೆಯೇ ಸಮರ್ಥ್ ನಾಮಪತ್ರ ಸಲ್ಲಿಸಿದ್ದ. ಅದು ಶಿಸ್ತು ಉಲ್ಲಂಘನೆ ಅಂತ ಕಾಂಗ್ರೆಸ್ ಹೈಕಮಾಂಡ್ಗೆ ಅನಿಸಲೇ ಇಲ್ಲ. ದುರಂತ ನೋಡಿ: ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರು ಹೆಚ್ಚಾಗಿದ್ದಾರೆ. ಸಮುದಾಯದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಒಂದು ಅವಕಾಶ ಕೊಡಿ ಅಂತ ನ್ಯಾಯ ಕೇಳಿದ ಅಬ್ದುಲ್ ಜಬ್ಬಾರ್ ಮತ್ತು ಆ ಮಾತಿಗೆ ದನಿಗೂಡಿಸಿದ ನಸೀರ್ ಅಹ್ಮದ್ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಶಿಸ್ತು ಕ್ರಮ ಜರುಗಿಸಿದೆ. ಈ ಹಿಂದೆ ಕಟು ಸತ್ಯವನ್ನೇ ಮಾತನಾಡಿದ್ದ ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಪದವಿಯಿಂದ ಕೆಳಗಿಳಿಸಿದರು. ಸದ್ಯ ಶಿಸ್ತು ಕ್ರಮಕ್ಕೆ ಒಳಗಾದವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣಕ್ಕೆ ಸೇರಿದವರೇ ಜಾಸ್ತಿ ಇದ್ದಾರೆ. ಇಷ್ಟಾಗಿಯೂ ಸಿದ್ದರಾಮಯ್ಯ ಅವರು ಮೌನವಾಗಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಝಮೀರ್ ಮೇಲೂ ಶಿಸ್ತು ಕ್ರಮದ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಪರೋಕ್ಷವಾಗಿ ಸಾಮಾಜಿಕ ನ್ಯಾಯದ ದನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರವೇ ರಚಿಸಿದ ಕಾಂತರಾಜು ಆಯೋಗದ ವರದಿ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳು ಬಹಿರಂಗ ಹೇಳಿಕೆ ನೀಡಿದರು. ಆ ವರದಿ ಸಿದ್ಧಪಡಿಸಲು ಸರಕಾರ ನೂರಾರು ಕೋಟಿ ರೂ. ಖರ್ಚು ಮಾಡಿತ್ತು. ಸಾಮಾಜಿಕ ನ್ಯಾಯದ ವಿರುದ್ಧ ದನಿ ಎತ್ತಿದವರ ಮಾತು ಕೇಳಿ ಕಾಂತರಾಜು ವರದಿಯನ್ನು ಸರಕಾರ ತಿರಸ್ಕರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಎಲ್ಲ ಅನ್ಯಾಯ ನೋಡಿಕೊಂಡು ಸುಮ್ಮನಿರುವುದು ಸೋಜಿಗದಂತೆ ಕಾಣುತ್ತದೆ. ಸಿದ್ದರಾಮಯ್ಯ ಅವರ ಮಗ ಯತೀಂದ್ರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಧೈರ್ಯ ತೋರದ ಹೈಕಮಾಂಡ್ ಕುಚೇಷ್ಟೆಯ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದೇಶದ ತುಂಬಾ ನೆಲೆ ಕಳೆದುಕೊಳ್ಳಲು ಈ ಇಬ್ಬಂದಿ ನೀತಿಯೇ ಕಾರಣ. ಮುಸ್ಲಿಮ್ ಮತ್ತು ವಾಲ್ಮೀಕಿ ಸಮುದಾಯದ ನಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಹೈಕಮಾಂಡ್ ಶಾಮನೂರು ಕುಟುಂಬವನ್ನು ನಿಯಂತ್ರಿಸುವಲ್ಲಿ ಯಾಕೆ ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್ ಪಕ್ಷದ ಅತಿಯಾದ ಕುಟುಂಬ ರಾಜಕಾರಣವನ್ನೇ ಬಿಜೆಪಿ ತನ್ನ ರಾಜಕೀಯ ಬಂಡವಾಳ ಮಾಡಿಕೊಂಡು ಮುನ್ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈ ಹಂತದಲ್ಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ರಾಜಕೀಯ ಬಾಯಿ ಪಟಾಕಿಗಳಲ್ಲೇ ಕಳೆದುಹೋದ ‘ಕಲ್ಲಿದ್ದಲು ಅನಿಲೀಕರಣ’
ಒಟ್ಟಿನಲ್ಲಿ 2070ಕ್ಕೆ ಮುನ್ನ ನೆಟ್ ಝೀರೊ ಸಾಧಿಸುವುದಕ್ಕಾಗಿ ಸರಕಾರ ಎದ್ದೂ ಬಿದ್ದೂ ಓಡುತ್ತಿದೆಯಾದರೂ, ಈ ಓಟ ದಿಕ್ಕುದೆಸೆ ಇಲ್ಲದೆ ಸಾಗುತ್ತಿರುವುದು ಸ್ಪಷ್ಟ. ತನ್ನ ನಾಯಕತ್ವದಲ್ಲಿ, 2028ರ ಹೊತಿಗೆ ಭಾರತದಲ್ಲಿ ನಡೆಯಬೇಕಿದ್ದ ಅಔP 33 ಆತಿಥೇಯತ್ವದಿಂದಲೇ ಹಿಂದೆಸರಿಯುವ ಮೂಲಕ ಭಾರತವು, ತನ್ನ ಓಟವು ದಿಕ್ಕೆಟ್ಟ ಓಟ ಎಂದು ಜಾಗತಿಕ ರಂಗಕ್ಕೆ ತೆರೆದು ತೋರಿಸಿದಂತಾಗಿದೆ. ಅಮೆರಿಕ-ಇಸ್ರೇಲ್-ಇರಾನ್ ಕದನ ಕೋಲಾಹಲದ ಹಿನ್ನೆಲೆಯಲ್ಲಿ ಇಂಧನ ಕೊರತೆ ಜಗತ್ತಿನಾದ್ಯಂತ ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ಉಂಟುಮಾಡುತ್ತಿದೆ. ಹಾಗಾಗಿ, ಇಂಧನ ಮೂಲದ ಹೊಸ ಸಾಧ್ಯತೆಗಳ ಕಡೆ ಜಗತ್ತಿನ ಗಮನ ಹರಿಯತೊಡಗಿದೆ. ಕಳೆದ ವಾರ ಈ ಅಂಕಣದಲ್ಲಿ, ವಿದ್ಯುತ್ ಮೂಲದ ಇಂಡಕ್ಷನ್ ಪ್ಲೇಟ್ಗಳ ಬಗ್ಗೆ ಚರ್ಚಿಸಲಾಗಿತ್ತು. ಅಂತಹದೇ ಇನ್ನೊಂದು ಸಾಧ್ಯತೆ ಸಿನ್ಗ್ಯಾಸ್ (SNG) ನದು. ಆ ವಿಚಾರದಲ್ಲಿ ನಾವು ಎಲ್ಲಿಂದ ಹೊರಟು ಎಲ್ಲಿಗೆ ತಲುಪಿದ್ದೇವೆ? ಮತ್ತು ಅದೇ ವೇಳೆಗೆ ಬೇರೆಯವರು ಏನು ಮಾಡಿದ್ದಾರೆ? ಎಂಬುದನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು ಈ ಬರಹದ ಉದ್ದೇಶ. 2030ರ ಒಳಗೆ ಭಾರತದಲ್ಲಿ 100 MMTPA(ಮಿಲಿಯನ್ ಮೆಟ್ರಿಕ್ ಟನ್ ಪ್ರತೀ ವರ್ಷ) ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ (ಗ್ಯಾಸಿಫಿಕೇಷನ್) ಸಾಮರ್ಥ್ಯವನ್ನು ಹೊಂದುವ ಸಂಕಲ್ಪದೊಂದಿಗೆ, ಭಾರತ ಸರಕಾರವು ‘‘ನ್ಯಾಷನಲ್ ಕೋಲ್ ಗ್ಯಾಸಿಫಿಕೇಷನ್ ಮಿಷನ್’’ ಅನ್ನು 2020ರಲ್ಲಿ ಸ್ಥಾಪಿಸಿತ್ತು. (ಆಧಾರ: PIB Release ID: 2037489). ಅದಕ್ಕಾಗಿ ನಾಲ್ಕು ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಲ್ಲದೇ, ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಉದ್ಯಮಿಗಳಿಗೆ ನಷ್ಟ ಭರ್ತಿ ಮಾಡಿಕೊಡಲು, ವಯಬಿಲಿಟಿ ಗ್ಯಾಪ್ ಫಂಡಿಂಗ್ ಮತ್ತಿತರ ಹಲವು ಸವಲತ್ತುಗಳ ಪ್ರಸ್ತಾವವನ್ನು ಸರಕಾರದ ಕಡೆಯಿಂದ ಒದಗಿಸಲಾಗಿತ್ತು. ಸರಕಾರ ತನಗೆ ತಾನೇ ವಿಧಿಸಿಕೊಂಡಿರುವ ಈ ಗುರಿ (2030) ತಲುಪಲು ಇನ್ನು ಕೇವಲ ನಾಲ್ಕು ವರ್ಷಗಳಿವೆ. ಆದರೆ, ಬಾಯುಪಚಾರದ ಕೆಲವು ಮಾತುಗಳನ್ನು ಮತ್ತು ಕೆಲವು ಚಿಲ್ಲರೆ ಬೆಳವಣಿಗೆಗಳನ್ನು ಹೊರತುಪಡಿಸಿ, ಕಾರ್ಯರೂಪದಲ್ಲಿ ಹೆಚ್ಚೇನೂ ಆಗಿಲ್ಲ. ಸಣ್ಣ ಉದಾಹರಣೆ ಬೇಕೆಂದರೆ, 2025-26ನೇ ಸಾಲಿನಲ್ಲಿ (BE) 300 ಕೋಟಿ ರೂ.ಗಳನ್ನು ಇದಕ್ಕೆ ಮೀಸಲಿರಿಸಲಾಗಿತ್ತು. ಆದರೆ ಜನವರಿ ತನಕವೂ ಈ ಹಣ ವೆಚ್ಚವಾಗದ ಕಾರಣಕ್ಕೆ, ಅದನ್ನು 285 ಕೋಟಿ ರೂ.ಗಳಿಗೆ (BE) ತಗ್ಗಿಸಲಾಗಿದೆ. ಈಗ 2026-27ನೇ ಸಾಲಿನಲ್ಲಿ ಆ ಮೊತ್ತವನ್ನು ಏಕಾಏಕಿ 3525 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆದರೆ, ಗಮನಾರ್ಹವಾದುದೇನೂ ಈವತ್ತಿನ ಆಪತ್ಕಾಲಕ್ಕೆ ಒದಗಿಬರುವಂತೆ ಕಾಣಿಸುತ್ತಿಲ್ಲ. ನಿಜಕ್ಕೆಂದರೆ, ಭಾರತದಲ್ಲಿರುವ ಕಲ್ಲಿದ್ದಲು ನಿಕ್ಷೇಪ ಜಗತ್ತಿನ ನಾಲ್ಕನೆಯ ದೊಡ್ಡ ಗಾತ್ರದ್ದಾಗಿದ್ದು, 38.9 ಲಕ್ಷ ಕೋಟಿ ಟನ್ ಕಲ್ಲಿದ್ದಲು ಭಾರತದಲ್ಲಿದೆ. ಅದರ ಪೈಕಿ 21.2 ಲಕ್ಷ ಕೋಟಿ ಟನ್ ಕಲ್ಲಿದ್ದಲು ಖಚಿತಪಡಿಸಿಕೊಳ್ಳಲಾದ ಭೂಗರ್ಭ ಸ್ಟಾಕ್. ಒಂದು ವೇಳೆ, ಈ ಅನಿಲೀಕರಣ ಸಾಧ್ಯವಾಗಿದ್ದಿದ್ದರೆ, ಈಗ ಯುದ್ಧಕಾಲದಲ್ಲಿ ದೇಶವು ಕಂಡವರ ಕೈ-ಬಾಯಿ ನೋಡುವುದು, ಇಂಧನ ಆಮದಿಗೆ ಬಲಿಷ್ಠರ ಅನುಮತಿ ಪಡೆಯುವುದು ಅಗತ್ಯವಿರುತ್ತಿರಲಿಲ್ಲ. ಇಂಧನ ಭದ್ರತೆಯಲ್ಲಿ ಆತ್ಮನಿರ್ಭರತೆ ಸಾಧ್ಯವಾಗುತ್ತಿತ್ತು; ನೈಸರ್ಗಿಕ ಅನಿಲ, ಮಿಥೆನಾಲ್, ಅಮೋನಿಯಂ ನೈಟ್ರೇಟ್ ಮತ್ತಿತರ ಹಲವು ಉತ್ಪನ್ನಗಳ ಆಮದಿನ ಮೇಲೆ ಅವಲಂಬನೆ ಅಗತ್ಯವಿರುತ್ತಿರಲಿಲ್ಲ. ಅನಿಲೀಕರಣದಿಂದ ಸಿಗುವ ಸಿಂಥೆಟಿಕ್ ಗ್ಯಾಸ್ (ಸಿನ್ಗ್ಯಾಸ್- SNG) ಅನ್ನು ವಿದ್ಯುತ್ ಉತ್ಪಾದನೆ, ಮಿಥೆನಾಲ್, ಅಮೋನಿಯಾ, ಹೈಡ್ರೋಜನ್, ಯೂರಿಯಾದಂತಹ ರಾಸಾಯನಿಕಗಳ ಉತ್ಪಾದನೆ, ದ್ರವ ಇಂಧನಗಳ ಉತ್ಪಾದನೆಗೆ ವ್ಯಾಪಕವಾಗಿ ಬಳಸಬಹುದಾಗಿದ್ದು, ಚೀನಾ, ಅಮೆರಿಕ, ದ. ಆಫ್ರಿಕಾ ದೇಶಗಳು ಈ ನಿಟ್ಟಿನಲ್ಲಿ ಬಹುದೂರ ಸಾಗಿಯಾಗಿವೆ. ಸಾಂಪ್ರದಾಯಿಕ ಅನಿಲೀಕರಣ ವಿಧಾನದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ದಾಸ್ತಾನು, ಸಾಗಣೆ, ಉರಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ ಅಂತರ್ಜಲ ಕಲುಷಿತಗೊಳ್ಳುವ, ಗ್ರೀನ್ಹೌಸ್ ಅನಿಲಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುವ, ಭೂಕುಸಿತದಂತಹ ಅಪಾಯಗಳಿವೆ. ಆದರೆ, ನೆಲದಡಿ ಕಲ್ಲಿದ್ದಲು ಇರುವಲ್ಲೇ ಅದರ ನಿರ್ದಿಷ್ಟ ಭೂಗರ್ಭ ಸ್ಥರವನ್ನು 1000 ಡಿಗ್ರಿಗೂ ಮಿಕ್ಕಿ ಉಷ್ಣತೆಯಲ್ಲಿ ಉರಿಸುವ ಮೂಲಕ ಅನಿಲೀಕರಿಸುವ, ನೆಲದಡಿಯ ಕಲ್ಲಿದ್ದಲು ಅನಿಲೀಕರಣ ವಿಧಾನವು (underground coal gasification - UCG)ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಉಷ್ಣವಿದ್ಯುತ್ ಸ್ಥಾವರಗಳಿಗೆ ಹೋಲಿಸಿದರೆ, ಹಲವು ಪಟ್ಟು ಕಡಿಮೆ ಮಾಲಿನ್ಯಕಾರಕ ಎಂಬ ಅಭಿಪ್ರಾಯಗಳಿವೆ. ಇನ್ನಷ್ಟೇ ಅಭಿವೃದ್ಧಿಗೊಳ್ಳಬೇಕಿರುವ ಮಿನಿ ಪರಮಾಣು ವಿದ್ಯುತ್ ಸ್ಥಾವರಗಳಂತಹ ವಿಚಾರಗಳಲ್ಲಿ ಗಡಿಬಿಡಿ ತೋರುವ ಸರಕಾರ, UCG ವಿಚಾರದಲ್ಲಿ ಮಾತ್ರ ಆಮೆನಡಿಗೆಯಲ್ಲಿದೆ. ಗಮನಿಸಬೇಕಾದ ಸಂಗತಿ ಎಂದರೆ, ಭಾರತವು ಕಲ್ಲಿದ್ದಲು ಅನಿಲೀಕರಣದ ವಿಚಾರದಲ್ಲಿ ಮೊದಲ ಬಾರಿಗೆ ಆಸಕ್ತಿ ತೋರಿದ್ದು UPA ಆಡಳಿತ ಕಾಲದಲ್ಲಿಯೇ (2007). ಅದೇ ಸಮಯದಲ್ಲಿ, ನೆರೆಯ ಚೀನಾ ಕೂಡ ಆ ಬಗ್ಗೆ ಆಸಕ್ತಿ ತಳೆದಿತ್ತು. ಭಾರತದಲ್ಲಿ ಮುಂದೆ ಹಗರಣದ ಹೆಸರಿನಲ್ಲಿ, ಕಲ್ಲಿದ್ದಲು ಗಣಿಗಾರಿಕೆಯು ಸುಪಾರಿ ಹೋರಾಟಗಾರರ ಕೈಗೆ ಸಿಕ್ಕು, ಕಲ್ಲಿದ್ದಲು ಎಂದರೆ ಜನ ಮಾರು ದೂರ ಓಡುವ ಸ್ಥಿತಿ ನಿರ್ಮಾಣ ಆಯಿತು. ಯಾರು ಈ ಹಗರಣಗಳ ಕುರಿತು ಗದ್ದಲ ಎಬ್ಬಿಸಿ, ಅದರ ಬೆನ್ನೇರಿ ಅಧಿಕಾರಕ್ಕೆ ಬಂದರೋ, ಅವರು ಕಡೆಗೆ, 2020ರಲ್ಲಿ ಅನಿಲೀಕರಣ ಮಿಷನ್ ಸ್ಥಾಪನೆ ಪ್ರಕಟಿಸಿದರು; ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದರು; ಅದನ್ನು ಸಾಧಿಸಲು 2030ರ ಗಡುವನ್ನೂ ಘೋಷಿಸಿಕೊಂಡರು. ಆದರೆ, ಈಗ ಗಡು ಪೂರೈಸಲು ನಾಲ್ಕು ವರ್ಷ ಬಾಕಿ ಇರುವಾಗ, ಭಾರತ ತಾನು ಘೋಷಿಸಿಕೊಂಡ 100 MMTPA ಪೈಕಿ ಸಾಧಿಸಿದ್ದೆಷ್ಟು? ನಾವು ಸಾಧಿಸಿರುವುದು ಕೇವಲ 5 MMTPA ಕಲ್ಲಿದ್ದಲಿನ ಅನಿಲೀಕರಣ ಸಾಮರ್ಥ್ಯ. ಅದರಲ್ಲೂ 2 MMTPA ಖಾಸಗಿ ಮೂಲಗಳ ಪ್ರಯತ್ನದ್ದು. ಆದರೆ ನಮ್ಮೊಂದಿಗೇ ಓಟ ಆರಂಭಿಸಿದ್ದ ಚೀನಾ, ಇಂದು 80 MMTPA ಕಲ್ಲಿದ್ದಲು ಅನಿಲೀಕರಣ ಸಾಮರ್ಥ್ಯವನ್ನು ಸಾಧಿಸಿಕೊಂಡಿದೆ. ಅದಕ್ಕೆ ಕಾರಣ, ಅಲ್ಲಿ ಹೂಡಿಕೆ, ಕೌಶಲ ವೃದ್ಧಿ, ತಂತ್ರಜ್ಞಾನ ಸುಧಾರಣೆಗೆ ದೊರೆತ ಆದ್ಯತೆ. ಈ ಕಾರಣದಿಂದಾಗಿ ಇಂದು ಯುದ್ಧದ ಸಂದರ್ಭ ಇರುವಾಗಲೂ ಚೀನಾ ತನ್ನ ಇಂಧನ, ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಮತ್ತು ಅವರಿವರ ಮರ್ಜಿಗೆ ಕಾದು ನಿಂತಿಲ್ಲ. ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ, ಚೀನಾ ತನ್ನ DAP (ಡೈಯಮೋನಿಯಂ ಫಾಸ್ಫೇಟ್) ಉತ್ಪಾದನೆಗೆ ಬಳಸುವ ಅಮೋನಿಯಾದ 90ಶೇ. ಭಾಗವನ್ನು ತಯಾರಿಸಿಕೊಳ್ಳುತ್ತಿರುವುದು ಇದೇ ಅನಿಲೀಕರಣದಿಂದ. ಹಾಗೆಯೇ ಜಗತ್ತಿನಲ್ಲಿ ಉತ್ಪಾದನೆ ಆಗುವ ಯೂರಿಯಾದ 40ಶೇ. ಭಾಗವನ್ನೂ, ಮೆಥನಾಲ್ನ 54ಶೇ. ಭಾಗವನ್ನೂ ಉತ್ಪಾದಿಸುವ ಚೀನಾ, ಅದಕ್ಕೆ ಅಗತ್ಯವಿರುವ ರಾಸಾಯನಿಕಗಳ 70ಶೇ. ಭಾಗವನ್ನು ತನ್ನ ಅನಿಲೀಕರಣ ಸ್ಥಾವರಗಳಿಂದಲೇ ಪಡೆಯುತ್ತಿದೆ. ಆದರೆ ಭಾರತ, ಈ ಎಲ್ಲದಕ್ಕೂ ಆಮದನ್ನು ಅವಲಂಬಿಸಿದೆ. ಹಾಗಾಗಿ, ಈಗ ಯುದ್ಧಕಾಲದಲ್ಲಿ ಒಂದೆಡೆ ಇಂಧನಕ್ಕಾಗಿ ಹಾಹಾಕಾರ ಎದ್ದಿದ್ದರೆ, ಇನ್ನೊಂದೆಡೆ ಯುದ್ಧದ ಅನಿಶ್ಚಿತತೆ ಮುಂದುವರಿದರೆ ರಸಗೊಬ್ಬರಗಳಿಗೂ ಹಾಹಾಕಾರ ಏಳುವ ಲಕ್ಷಣಗಳು ಕಾಣಿಸುತ್ತಿವೆ. ಸ್ವತಃ ಕಲ್ಲಿದ್ದಲು ಸಚಿವರೇ ಇತ್ತೀಚೆಗೆ ಭಾರತವು ಕಚ್ಚಾತೈಲದ ಮಟ್ಟಿಗೆ 83ಶೇ. ಭಾಗಕ್ಕೆ, ನೈಸರ್ಗಿಕ ಅನಿಲದ ಮಟ್ಟಿಗೆ 50ಶೇ. ಭಾಗಕ್ಕೆ ಮತ್ತು ರಸಗೊಬ್ಬರಗಳ ಮಟ್ಟಿಗೆ 90ಶೇ. ಭಾಗಕ್ಕೆ ಆಮದಿನ ಮೇಲೆ ಅವಲಂಬಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ! ಭಾರತವು 2030ಕ್ಕೆ 100 MMTPA ಅನಿಲೀಕರಣ ಗುರಿ ಸಾಧಿಸುವ ನಿಟ್ಟಿನಲ್ಲಿ 8,500 ಕೋಟಿ ರೂ.ಗಳ ಇನ್ಸೆಂಟಿವ್ ಯೋಜನೆಯನ್ನು ಪ್ರಕಟಿಸಿದೆ. 64,000 ಕೋಟಿ ರೂ.ಗಳ ಗಾತ್ರದ ಹೊಸ ಅನಿಲೀಕರಣ ಯೋಜನೆಗಳು ಸರಕಾರಿ ಹಾಗೂ ಖಾಸಗಿ ರಂಗದಲ್ಲಿ ಸಿದ್ಧಗೊಳ್ಳುತ್ತಿವೆ ಎಂದು ಸರಕಾರ ಇತ್ತೀಚೆಗೆ ಹೇಳಿಕೊಂಡಿದೆ (ಆಧಾರ: PIB Release ID: 224362). ನೆಲದಡಿಯಲ್ಲಿ ಕಲ್ಲಿದ್ದಲು ಅನಿಲೀಕರಣಕ್ಕೆ, ಕಲ್ಲಿದ್ದಲು ಇಲಾಖೆ 150-160 ಮೀ. ಅಡಿಯಲ್ಲಿ ಅದು ನಡೆಯಬೇಕು ಎಂದು ಹೇಳುತ್ತಿದ್ದರೆ, ಪರಿಸರ ಇಲಾಖೆ ಅದು 300 ಮೀ. ಅಡಿ ನಡೆಯಬೇಕು ಅನ್ನುತ್ತಿದೆಯಂತೆ. ಈ ವಿವಾದದಲ್ಲಿ ಅಂತಿಮ ತೀರ್ಮಾನ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಭಾರತ ಸರಕಾರವು ತಾನು ಈ ವರೆಗೆ ಅನಿಲೀಕರಣದ ವೇಗ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಾ, ಈ ಯೋಜನೆಗಳ ಅನುಷ್ಠಾನ ಸಮಯ ಮಿತಿಯ ಒಳಗೆ ಆಗಲು ಹೆಚ್ಚುವರಿ ಕಾರ್ಯದರ್ಶಿ (ಕಲ್ಲಿದ್ದಲು) ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದಿದೆ. 21 ಗಣಿಗಳನ್ನು ನೆಲದಡಿಯ ಅನಿಲೀಕರಣಕ್ಕಾಗಿ ನಿಗದಿಪಡಿಸಿದ್ದು ಸೇರಿದಂತೆ, ಒಟ್ಟು 41 ಕಲ್ಲಿದ್ದಲು ಗಣಿಗಳನ್ನು ಅಕ್ಟೋಬರ್ 2025ರಲ್ಲಿ ಹರಾಜು ಹಾಕುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಿತ್ತು; ಅದಕ್ಕಾಗಿ ವಿಶೇಷ ರಿಯಾಯಿತಿಗಳನ್ನೂ ಪ್ರಕಟಿಸಿತ್ತು. ಆ ಪ್ರಕ್ರಿಯೆ ನಡೆದಿದೆ. (ಆಧಾರ: PIB Release ID: 2213723). ಇದೇ ಫೆಬ್ರವರಿ ಅಂತ್ಯದ ಹೊತ್ತಿಗೆ ಅದಾನಿ ಬಳಗವು, ಕಲ್ಲಿದ್ದಲು ಅನಿಲೀಕರಣಕ್ಕೆ ತಮ್ಮ ಕಂಪೆನಿ 70 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಒಟ್ಟಿನಲ್ಲಿ 2070ಕ್ಕೆ ಮುನ್ನ ನೆಟ್ ಝೀರೊ ಸಾಧಿಸುವುದಕ್ಕಾಗಿ ಸರಕಾರ ಎದ್ದೂ ಬಿದ್ದೂ ಓಡುತ್ತಿದೆಯಾದರೂ, ಈ ಓಟ ದಿಕ್ಕುದೆಸೆ ಇಲ್ಲದೆ ಸಾಗುತ್ತಿರುವುದು ಸ್ಪಷ್ಟ. ತನ್ನ ನಾಯಕತ್ವದಲ್ಲಿ, 2028ರ ಹೊತಿಗೆ ಭಾರತದಲ್ಲಿ ನಡೆಯಬೇಕಿದ್ದ COP 33 ಆತಿಥೇಯತ್ವದಿಂದಲೇ ಹಿಂದೆಸರಿಯುವ ಮೂಲಕ ಭಾರತವು, ತನ್ನ ಓಟವು ದಿಕ್ಕೆಟ್ಟ ಓಟ ಎಂದು ಜಾಗತಿಕ ರಂಗಕ್ಕೆ ತೆರೆದು ತೋರಿಸಿದಂತಾಗಿದೆ. ಹೀಗೆ ಎಲ್ಲವನ್ನೂ ಬಾಯಿ ಬಡಾಯಿ ಮಾಡಿಕೊಂಡು, ಕಾರ್ಯರೂಪಕ್ಕೆ ತರುವಾಗ, ಆಗಬೇಕಾದುದಕ್ಕೆ ವಿರುದ್ಧದಿಕ್ಕಿನಲ್ಲಿ ಸಾಗುವುದೇ ‘ವಿಕಾಸ’ ಎಂದಾಗಿಬಿಟ್ಟಿದೆ.
ಜಮೀರ್ ತಲೆದಂಡದ ವದಂತಿ : ಕಾಂಗ್ರೆಸ್ಸಿಗೆ ಅದಷ್ಟು ಸುಲಭದ ಮಾತಲ್ಲ- ಇಲ್ಲಿವೆ 2 ಬಲವಾದ ಕಾರಣಗಳು?
Action against Zameer Ahmed : ಕರ್ನಾಟಕ ಉಪಚುನಾವಣೆಯಲ್ಲಿನ ಟಿಕೆಟ್ ಹಂಚಿಕೆ, ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಕು ಮೂಡಿಸಿದೆ. ಅದರಲ್ಲೂ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ಇಬ್ಬಾಗ ಆಗುವಂತೆ ಮಾಡಿದೆ. ಈಗಾಗಲೇ, ಇಬ್ಬರು ಕಾಂಗ್ರೆಸ್ ನಾಯಕರನ್ನು ಅಮಾನತುಗೊಳಿಸಲಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದವೂ ಶಿಸ್ತುಕ್ರಮದ ಮುನ್ಸೂಚನೆ ಕೇಳಿ ಬರುತ್ತಿದೆ. ಆದರೆ, ಜಮೀರ್ ವಿರುದ್ದ ಕ್ರಮ ತೆಗೆದುಕೊಳ್ಳುವುದು ಸುಲಭವೇ?
ರಾಯಚೂರು | ಹೋಟೆಲ್ ನಲ್ಲಿ ಬೆಂಕಿ ಅವಘಡ:ಪೀಠೋಪಕರಣಗಳು ಧ್ವಂಸ
ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿರುವ ರಂಜೀತ್ ಪ್ಯಾಲೇಸ್ ಹೋಟೆಲ್ ನಲ್ಲಿ ಶುಕ್ರವಾರ ರಾತ್ರಿ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳ ಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಬಸ್ ಚಾಲಕ, NWKRTC
ಹುಬ್ಬಳ್ಳಿ: ಮಕ್ಕಳ ಶಾಲಾ ಖರ್ಚಿಗೆ, ಆಸ್ಪತ್ರೆಗೆ ಅಥವಾ ಕುಟುಂಬ ನಿರ್ವಹಣೆಗೆ ಸೇರಿ ಹಲವು ಕಾರಣಗಳಿಗೆ ಚಿನ್ನ ಮತ್ತು ದುಡ್ಡನ್ನು ಒಯ್ಯುತ್ತಿರುತ್ತೇವೆ. ಕೆಲವೊಮ್ಮೆ ನಗದು, ಚಿನ್ನಾಭರಣಗಳಿದ್ದ ಬ್ಯಾಗ್ ಕಳೆದುಕೊಂಡರೆ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಕಳೆದುಹೋದ ಅದೇ ಬ್ಯಾಗ್ ಮತ್ತೆ ಸಿಕ್ಕರೆ ಆಗುವ ಖುಷಿಗೂ ಮಿತಿ ಇರಲ್ಲ. ಇದೀಗ ಅಂಥದ್ದೆ ಘಟನೆ ವಾಯವ್ಯ ಸಾರಿಗೆಯಲ್ಲಿ ಜರುಗಿದೆ. ವಾಯವ್ಯ ಸಾರಿಗೆ ಬಸ್ನಲ್ಲಿ
ಚಾರಣ ದುರಂತ : ಎಚ್ಚೆತ್ತುಕೊಳ್ಳದ ಪ್ರವಾಸೋದ್ಯಮ ಇಲಾಖೆ, ಸಕಲೇಶಪುರದಲ್ಲಿ ಪ್ರವಾಸಿಗರ ಸುರಕ್ಷತೆಗಿಲ್ಲ ಖಾತರಿ
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಸಕಲೇಶಪುರವು ತನ್ನ ಮನಮೋಹಕ ಕಾಫಿ ತೋಟಗಳು, ಜಲಪಾತಗಳು ಮತ್ತು ಚಾರಣ ತಾಣಗಳಿಂದಾಗಿ 'ಪ್ರವಾಸಿಗರ ಸ್ವರ್ಗ' ಎಂದು ಖ್ಯಾತಿ ಪಡೆದಿದೆ. ಅಗ್ನಿಗುಡ್ಡ, ಪಟ್ಲಬೆಟ್ಟ, ಎತ್ತಿನ ಭುಜ ಹಾಗೂ ಮೂಕನಮನೆ ಫಾಲ್ಸ್ನಂತಹ ಸುಂದರ ತಾಣಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಹರಿದು ಬರುತ್ತಾರೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಈ ಗಿರಿಶ್ರೇಣಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಬೇಕಾದ ಕನಿಷ್ಠ ಸೌಲಭ್ಯಗಳಿಲ್ಲದಿರುವುದು ಆತಂಕಕಾರಿ ವಿಷಯವಾಗಿದೆ.
ಕಚೇರಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಪ್ರಕರಣ : ಉದ್ಯೋಗಿಗಳಿಂದ ಅಧಿಕೃತ ದೂರು ದಾಖಲಾಗಿಲ್ಲ ಎಂದು ಟಿಸಿಎಸ್ ಸ್ಪಷ್ಟನೆ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಕಿರುಕುಳ ಮತ್ತು ಮತಾಂತರದ ಆರೋಪಗಳಿಗೆ ಸಂಬಂಧಿಸಿದಂತೆ ಕಂಪನಿಯು ಸ್ಪಷ್ಟನೆಯನ್ನು ನೀಡಿದೆ. ಈ ಕುರಿತು ಆಂತರಿಕ ತನಿಖೆ ನಡೆಸಿರುವ ಟಿಸಿಎಸ್, ತನ್ನ ಕಚೇರಿಯಲ್ಲಿ ಮತಾಂತರ ಅಥವಾ ಯಾವುದೇ ರೀತಿಯ ಕಿರುಕುಳಕ್ಕೆ ಸಂಬಂಧಿಸಿದ ಅಧಿಕೃತ ದೂರುಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿನಯ್ ಕುಲಕರ್ಣಿಗೆ ಜೀವಾವಧಿ: ಬಿಎಸ್ ಯಡಿಯೂರಪ್ಪಗೆ ಜೈ ಎಂದ BJP ಕಾರ್ಯಕರ್ತರು; 2019 ರ ದಿಟ್ಟ ನಿರ್ಧಾರವೇ ಕಾರಣ
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ತಮ್ಮ ಅಧಿನಾಯಕ ಬಿಎಸ್ ಯಡಿಯೂರಪ್ಪಗೆ ಜೈ ಎಂದಿದ್ದಾರೆ. ಇದಕ್ಕೆ 2019 ರ ದಿಟ್ಟ ನಿರ್ಧಾರವೇ ಕಾರಣವಾಗಿದೆ. ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ವೇಳೆ ಯೋಗೀಶ್ ಗೌಡ ಹತ್ಯೆ ಕೇಸ್ ಅನ್ನು ಸಿಬಿಐ ತನಿಖೆಗೆ ನೀಡಿದ್ದರು. ಪ್ರಕರಣದ ತನಿಖೆ ಬಲವಾಗಿ ಸದ್ಯ ತೀರ್ಪು ಬಂದಿದೆ. ಈ ಬಗ್ಗೆ ಸ್ವತಃ ಯಡಿಯೂರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಬನ್ನೇರುಘಟ್ಟ ಮೃಗಾಲಯಕ್ಕೆ 4 ಚೀತಾಗಳ ಆಗಮನ: ವಿಮಾನ ನಿಲ್ದಾಣದಲ್ಲಿ ಸಚಿವ ಈಶ್ವರ ಖಂಡ್ರೆ ಪರಿಶೀಲನೆ
ಬೆಂಗಳೂರು ಏ.18: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಲಾದ 4 ಚೀತಾಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಕಲ್ಬುರ್ಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೈದರಾಬಾದ್ ಮಾರ್ಗವಾಗಿ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಸಚಿವರು, ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿದರು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ವಾತಾವರಣ ಹಾಗೂ ಹವಾಮಾನ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆಗಳು ಎದುರಾಗದಂತೆ ಸೂಕ್ತ ನಿಗಾ ವಹಿಸಬೇಕು. ವನ್ಯಜೀವಿಗಳನ್ನು ಕ್ವಾರಂಟೈನಿನಲ್ಲಿ ಇರಿಸಿ, 30 ದಿನಗಳ ಕಾಲ ನಿಗದಿತ ಆಹಾರ ನೀಡಬೇಕು. ಈ ವಿದೇಶಿ ವನ್ಯಜೀವಿಗಳಿಗೆ ಯಾವುದೇ ಸೋಂಕು ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳು ಮತ್ತು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುವ ಚೀತಾಗಳು ಇದ್ದವು. ಆದರೆ ರಾಜ್ಯದ ಕಾಡುಗಳಲ್ಲಿ ಇವು ಈಗ ನಾಮಾವಶೇಷವಾಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಸೂಚನೆ ನೀಡಿದರು.
ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಸಾಹಿತ್ಯ ಸಮ್ಮೇಳನಕ್ಕೆ ರಾಜಕೀಯ ಮೇಲಾಟ !
ಬಳ್ಳಾರಿ ಜಿಲ್ಲೆಯಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೇವಲ ಘೋಷಣೆಗೆ ಸೀಮಿತವಾಗಿರುವುದು ಬೇಸರದ ಸಂಗತಿ. 1958ರಲ್ಲಿ ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ನಡೆದ 40ನೇ ಸಮ್ಮೇಳನದ ನಂತರ, ಸುಮಾರು ಆರೂವರೆ ದಶಕಗಳ ಸುದೀರ್ಘ ಕಾಯುವಿಕೆಯ ಫಲವಾಗಿ ಜಿಲ್ಲೆಗೆ ಈ ಅವಕಾಶ ಸಿಕ್ಕಿತ್ತು. ಜಿಲ್ಲೆಯ ಜನರ ಮತ್ತು ಸಂಘ-ಸಂಸ್ಥೆಗಳ ನಿರಂತರ ಹೋರಾಟದಿಂದಾಗಿ 87ನೇ ಸಮ್ಮೇಳನದಲ್ಲಿ ಈ ತೀರ್ಮಾನವನ್ನು ಅಧಿಕೃತವಾಗಿ ಕೈಗೊಳ್ಳಲಾಗಿತ್ತು.
ಹಾರ್ಮುಝ್ ಜಲಸಂಧಿ ತೆರವು: ತೈಲ ವಹಿವಾಟುದಾರರಿಗೆ ಸಂತಸ
ಹೊಸದಿಲ್ಲಿ: ಜಾಗತಿಕ ವಾಣಿಜ್ಯ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಭಾರತದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರ ಸಂತಸಕ್ಕೆ ಕಾರಣವಾಗಿದೆ. ಹಾರ್ಮುಝ್ ಜಲಸಂಧಿ ದಾಟಲು 41 ಭಾರತ ಹಾಗೂ ವಿದೇಶಿ ಹಡಗುಗಳು ಭರ್ತಿಯಾಗಿ, ಅಗಲ ಕಿರಿದಾದ ಜಲಸಂಧಿಯನ್ನು ದಾಟಲು ಕಾಯುತ್ತಿವೆ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯಲ್ಲಿ ಸಂಚಾರ ನಿರ್ಬಂಧಗೊಳಿಸಿತ್ತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಮುನ್ನ ಭಾರತದ ಕೃಷಿಕ್ಷೇತ್ರಕ್ಕೆ ಅಗತ್ಯವಾಗಿರುವ ರಸಗೊಬ್ಬರ ಹೊತ್ತಿರುವ 12ಕ್ಕೂ ಹೆಚ್ಚು ಹಡಗುಗಳು ಜಲಸಂಧಿ ದಾಟಲು ಕಾಯುತ್ತಿವೆ. ಹಾರ್ಮುಝ್ ಪಶ್ಚಿಮದಲ್ಲಿ ಕಾಯುತ್ತಿರುವ ಹಡಗುಗಳಲ್ಲಿ 15 ಭಾರತೀಯ ಹಡಗುಗಳಾಗಿದ್ದರೆ, ಉಳಿದ 26 ವಿದೇಶಿ ಹಡಗುಗಳಾಗಿವೆ. ಈ ಪೈಕಿ 10 ಕಚ್ಚಾ ತೈಲದ ಹಡಗುಗಳು, ನಾಲ್ಕು ಎಲ್ಪಿಜಿ ಟ್ಯಾಂಕರ್ಗಳು ಮತ್ತು ಮೂರು ಎಲ್ಎನ್ ಜಿ ಒಯ್ಯುವ ಹಡಗುಗಳು ಸೇರಿವೆ ಎಂದು ತಿಳಿದುಬಂದಿದೆ. ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದನ್ನು ಘೋಷಿಸಿದ ಬೆನ್ನಲ್ಲೇ ತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗಿಂತ ಕೆಳಗಿಳಿದಿವೆ. ಬ್ರೆಂಟ್ ಫ್ಯೂಚರ್ಸ್ ಟ್ರೇಡಿಂಗ್ ಶೇಕಡ 11.5ರಷ್ಟು ಕುಸಿದು ಬ್ಯಾರಲ್ ಗೆ 87.9 ಡಾಲರ್ ಗಳಾಗಿವೆ. ತೈಲಬೆಲೆ ಇಳಿದಿರುವುದು ಸಾಗಾಣಿಕೆ ವೆಚ್ಚ ಕಡಿಮೆಯಾಗಲು ಕಾರಣವಾಗುತ್ತದೆ. ತೈಲ ಬೆಲೆ ಇಳಿಕೆಯಾಗಿರುವುದರ ಪರಿಣಾಮ ಅಂತರರಾಷ್ಟ್ರೀಯ ಸಾಗಾಣಿಕೆ ದರವೂ ಇಳಿಯುತ್ತದೆ. ಇದು ಎಲ್ಲ ವಲಯಗಳಿಗೆ ದೊಡ್ಡ ಲಾಭ ಎಂದು ಸಿಂಗಾಪುರ ಮೂಲದ ಶಿಪ್ಪಿಂಗ್ ಕಂಪನಿ ಎಕ್ಸಿಮ್ವಾಲಾ ಸೊಲ್ಯೂಶನ್ಸ್ ನಿರ್ದೇಶಕ ಡೇವ್ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ತೈಲ ಬೆಲೆ ಏರಿಕೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಪಶ್ಚಿಮ ಏಷ್ಯಾಗೆ ಈರುಳ್ಳಿ ರಫ್ತು ಬಹುತೇಕ ನಿಂತು ಹೋಗಿತ್ತು ಎಂದು ಪುಣೆ ಮೂಲದ ಸಂಗ್ಹಾರ್ ಎಕ್ಸ್ಪೋರ್ಟ್ಸ್ ಮಾಲೀಕ ಡ್ಯಾನಿಶ್ ಶಾ ಹೇಳಿದ್ದಾರೆ.
ತಾಪಮಾನ ಏರಿಕೆ, ಮತ್ಸ್ಯಕ್ಷಾಮದ ಆತಂಕ, ಅವಧಿಗೆ ಮುನ್ನವೇ ಲಂಗರು ಹಾಕುತ್ತಿವೆ ಬೋಟ್ಗಳು
ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ, ಸಮುದ್ರದ ಉಷ್ಣಾಂಶ ಹೆಚ್ಚಳ, ಮತ್ಸ್ಯಕ್ಷಾಮ ಹಾಗೂ ಇಂಧನ ಕೊರತೆಯಂತಹ ಸಾಲು ಸಾಲು ಸಮಸ್ಯೆಗಳಿಂದಾಗಿ ಮೀನುಗಾರಿಕಾ ವಲಯ ಇಂದು ತೀವ್ರ ಸಂಕಷ್ಟ ಎದುರಿಸುತ್ತಿದೆ. ಮುಂಗಾರು ನಿಷೇಧಕ್ಕೆ ಇನ್ನೂ ಕಾಲಾವಕಾಶವಿದ್ದರೂ, ಲಾಭದಾಯಕವಲ್ಲದ ಪರಿಸ್ಥಿತಿಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಂಗಳೂರು, ಮಲ್ಪೆ ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಬಹುತೇಕ ಬೋಟ್ಗಳು ಈಗಾಗಲೇ ಮೀನುಗಾರಿಕೆ ಸ್ಥಗಿತಗೊಳಿಸಿ ಲಂಗರು ಹಾಕುತ್ತಿವೆ.
ಬಿಸಿಲ ಝಳ : ಚಿಲ್ಡ್ ಬಿಯರ್ಗೆ ಮನಸೋತ ಗುಂಡು ಪ್ರಿಯರು , ಅಬಕಾರಿ ಇಲಾಖೆ ಬೊಕ್ಕಸಕ್ಕೆ ಆದಾಯದ ಹೊಳೆ
ಬೇಸಿಗೆಯ ತಾಪ ಏರುತ್ತಿದ್ದಂತೆ ರಾಜ್ಯದಲ್ಲಿ ಮದ್ಯದ ಮಾರಾಟ ಹೊಸ ದಾಖಲೆ ಸೃಷ್ಟಿಸುತ್ತಿದೆ. ಬಿಸಿಲಿನ ಬೇಗೆಯಿಂದ ಬಸವಳಿದ ಜನರು ತಂಪು ಪಾನೀಯಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮೊರೆ ಹೋಗುತ್ತಿದ್ದಾರೆ. ಕಳೆದ ಕೇವಲ 16 ದಿನಗಳ ಅವಧಿಯಲ್ಲಿ ಬಿಯರ್ ಮಾರಾಟವು ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆಯಾಗಿದೆ.
Karnataka Weather: ಏಪ್ರಿಲ್ 24ರವರೆಗೆ ಕರ್ನಾಟಕದ 25 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲ ಝಳ ತೀವ್ರಗೊಂಡಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಇಡೀ ರಾಜ್ಯದಲ್ಲೇ ಕಲಬುರಗಿ ಜಿಲ್ಲೆಯು ಗರಿಷ್ಠ 43.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸುವ ಮೂಲಕ ಅತ್ಯಂತ ಬಿಸಿಯಾದ ಪ್ರದೇಶವಾಗಿ ಹೊರಹೊಮ್ಮಿದೆ. ಉತ್ತರ ಒಳನಾಡಿನ ಹಲವೆಡೆ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಜನಜೀವನದ ಮೇಲೆ ಪರಿಣಾಮ
ಜಿಬಿಎ ಪಂಚ ನಗರ ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ; ಸೆ. 30 ರವರೆಗೆ ಪಾಲಿಕೆ ಚುನಾವಣೆಗೆ ಕಾಲಾವಧಿ ವಿಸ್ತರಿಸಲು ಕೋರಿಕೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವುದು ಸದ್ಯಕ್ಕೆ ಅನುಮಾನವಾಗಿ ಕಾಣುತ್ತಿದೆ. ಕಳೆದ ಐದೂವರೆ ವರ್ಷಗಳಿಂದಲೂ ವಿವಿಧ ನೆಪಗಳ ಮೂಲಕ ಚುನಾವಣೆಯನ್ನು ಮುಂದೂಡುತ್ತಾ ಬರಲಾಗುತ್ತಿದ್ದು, ಸದ್ಯದ ಬೆಳವಣಿಗೆಗಳು ಇದನ್ನು ಮತ್ತಷ್ಟು ವಿಳಂಬಗೊಳಿಸುವ ಮುನ್ಸೂಚನೆ ನೀಡುತ್ತಿವೆ.
ವಿದ್ಯಾರ್ಥಿಗೆ ಕಿರುಕುಳ : ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್ ವಿರುದ್ಧ ಎಫ್ಐಆರ್ಗೆ ಸೂಚನೆ
ಮೈಸೂರು,ಎ.17: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಮೈಸೂರು ವಿವಿ ಕುಲಪತಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕುಲಪತಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಆಯೋಗ ಆದೇಶಿಸಿದೆ. ಏನಿದು ಘಟನೆ : ಅರ್ಜಿದಾರ ಜಿ.ಎನ್.ಕಾರ್ತಿಕ್ ನೀಡಿದ ದೂರಿನ ಆಧಾರದ ಮೇಲೆ ಕುಲಪತಿ ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಜಾತಿ ಆಧಾರಿತ ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನ್ಯಾಯ ಕೇಳಲು ಹೋದ ವಿದ್ಯಾರ್ಥಿಗೆ ಅವಮಾನಕಾರಿ ವರ್ತನೆ, ಮಾನಸಿಕ ಹಿಂಸೆ, ಜೊತೆಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಆರೋಪಗಳು ಕೂಡ ದಾಖಲಾಗಿದೆ. ದೂರು ನೀಡಲು ಹೋದಾಗ ಪೊಲೀಸರು ಸಹ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಹೊರಬಂದಿದೆ. ಆಯೋಗದ ಕಠಿಣ ಆದೇಶ : ಪ್ರೊ.ಎನ್.ಕೆ.ಲೋಕನಾಥ್ ಸೇರಿ ಡಾ.ಎಂ.ಸುರೇಶ್ ಬೆಂಜಮೀನ್, ಪ್ರೊ.ಆರ್.ಎಸ್.ಉಮಾಕಾಂತ್ ಹಾಗೂ ಅಶ್ವಥ್ ಪ್ರಸಾದ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಅಡಿಯಲ್ಲಿ ತಕ್ಷಣ ಎಫ್ ಐಆರ್ ದಾಖಲಿಸಲು ಜಯಲಕ್ಷ್ಮೀಪುರಂ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಾಮಿಡಿಯನ್ ಫಾರೂಕಿ ಶೋಗೆ ವಿರೋಧ
ಬೆಂಗಳೂರು : ಬೆಂಗಳೂರಿನಲ್ಲಿ ಎ.18ರಂದು ನಡೆಯಲಿರುವ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕಾರ್ಯಕ್ರಮಕ್ಕೆ ಕೆಲ ಸಂಘಟನೆಗಳಿಂದ ಆಕ್ಷೇಪ ಕೇಳಿಬಂದಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. 2021ರಲ್ಲಿ ಇಂದೋರ್ನಲ್ಲಿ ಮುನಾವರ್ ಫಾರೂಕಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಫಾರೂಕಿ ಮೇಲೆ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಸಂಬಂಧ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆಯಾದರೂ, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಮನವಿಯಲ್ಲಿ ಸಮಿತಿ ಹೇಳಿದೆ ಎನ್ನಲಾಗಿದೆ.
ಮುಸ್ಲಿಮ್ ನಾಯಕರ ಮೇಲಿನ ಕ್ರಮಕ್ಕೆ ಸಂಪುಟ ಸಭೆಯಲ್ಲಿ ಸಚಿವರ ಆಕ್ರೋಶ
ಬೆಂಗಳೂರು : ಮುಸ್ಲಿಮ್ ನಾಯಕರ ವಿರುದ್ಧದ ಶಿಸ್ತು ಕ್ರಮ ಮತ್ತು ಚುನಾವಣಾ ವೈಫಲ್ಯದ ವಿಚಾರ ವಿಧಾನಸೌಧದಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ದು ಮಾಡಿದ್ದು, ಹಲವು ಸಚಿವರು ಏಕಾಏಕಿ ಕೈಗೊಂಡಿರುವ ಕ್ರಮಕ್ಕೆ ಗರಂ ಆದರು ಎಂದು ಗೊತ್ತಾಗಿದೆ. ವಿಧಾನ ಪರಿಷತ್ನ ಸದಸ್ಯರಾದ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧ ತೆಗೆದುಕೊಳ್ಳಲಾಗಿರುವ ಕಠಿಣ ಕ್ರಮದ ಬಗ್ಗೆ ಹಲವು ಸಚಿವರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅದರಲ್ಲೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿ, ಮುಸ್ಲಿಮ್ ಸಮುದಾಯದ ಬೆಂಬಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದರು ಎನ್ನಲಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಅಬ್ದುಲ್ ಜಬ್ಬಾರ್ ಅವರ ಮೇಲೆ ಕೈಗೊಂಡ ಶಿಸ್ತು ಕ್ರಮದ ಕುರಿತು ಅಸಮಾಧಾನ ಹೊರಹಾಕಿದರು. ಈ ನಡುವೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಆಗ ನಾನು ಕೇರಳ ಚುನಾವಣಾ ಪ್ರಚಾರದಲ್ಲಿದ್ದೆ ಎಂದು ತಮ್ಮ ಮೇಲಿನ ಆರೋಪಗಳಿಗೆ ಸಮಜಾಯಿಷಿ ನೀಡಿದರು ಎನ್ನಲಾಗಿದೆ. ‘ನನ್ನ-ಝಮೀರ್ ಮಧ್ಯೆ ಗಲಾಟೆ ನಡೆದಿಲ್ಲ’ : ಸಚಿವ ಸಂಪುಟ ಸಭೆಯಲ್ಲಿ ಗಲಾಟೆ ನಡೆದಿದೆ ಎಂದು ಪತ್ರಿಕೆಗಳಲ್ಲಿ ಬರೆಯಲಾಗಿದೆ. ಆದರೆ, ಅದು ಸುಳ್ಳು. ನನ್ನ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಮಧ್ಯೆ ಯಾವ ಗಲಾಟೆ ನಡೆದಿಲ್ಲ.ಝಮೀರ್ ನನ್ನ ಜತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭೆಯಿಂದ ಹೊರಹೋದ ಡಿಕೆಶಿ : ಸಭೆಯಲ್ಲಿ ಮುಸ್ಲಿಮ್ ನಾಯಕರ ವಿಚಾರ ಸದ್ದು ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಯಾರು ಏನು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಎನ್ನುವುದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ’ ಎಂದು ಉಲ್ಲೇಖಿಸಿದರು ಎನ್ನಲಾಗಿದೆ. ಆಗ ಕೆಲ ಸಚಿವರು ವಾದಿಸಲು ಮುಂದಾದ ಹಿನ್ನೆಲೆ ಅಸಮಾಧಾನಗೊಂಡ ಶಿವಕುಮಾರ್ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಭೆಯಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ.
ಹರಪನಹಳ್ಳಿ | ಬೈಕ್ ಕಳವು ಪ್ರಕರಣ : ಇಬ್ಬರ ಬಂಧನ, 16 ಬೈಕ್ ವಶ
ಹರಪನಹಳ್ಳಿ, ಎ.17: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅರಸೀಕೆರೆ ಪೊಲೀಸರು, ಅವರಿಂದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಅರಸೀಕೆರೆ ಅಲ್ತಾಪ್ ಹಾಗೂ ಸಿಂಗ್ರಿಹಳ್ಳಿ ಗ್ರಾಮದ ಜಾಬೀರ್ ಮತ್ತು ಶಾಹೀದ್ ಬಂಧಿತ ಆರೋಪಿಗಳಾಗಿದ್ದಾರೆ. ಫೆಬ್ರವರಿ 1ರಂದು ಬೇವಿನಹಳ್ಳಿ ದೊಡ್ಡ ತಾಂಡ ಹಾಗೂ ಮಾರ್ಚ್ 31ರಂದು ಮಾದಿಹಳ್ಳಿ ಗ್ರಾಮಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಸುಮಾರು ₹6.65 ಲಕ್ಷ ಮೌಲ್ಯದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬೈಕ್ಗಳಲ್ಲಿ ಅರಸೀಕೆರೆ ಠಾಣಾ ವ್ಯಾಪ್ತಿಯ 8, ರಾಣೇಬೆನ್ನೂರು 3, ದಾವಣಗೆರೆ 2 ಹಾಗೂ ಚಿಗಟೇರಿ, ಹಲುವಾಗಲು ಮತ್ತು ಹರಪನಹಳ್ಳಿ ಠಾಣಾ ವ್ಯಾಪ್ತಿಯ ತಲಾ ಒಂದರಂತೆ ವಾಹನಗಳು ಸೇರಿವೆ. ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವಿಜಯನಗರ ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಕ್ಕಿ ಜ್ವರ ದೃಢ; ಆರೋಗ್ಯ ಇಲಾಖೆ ಅಲರ್ಟ್! ಕೋಳಿ ಮಾಂಸ ತಿನ್ನುವವರಿಗೆ ಮಹತ್ವದ ಸೂಚನೆ
ಬೆಂಗಳೂರಿನ ಹೆಸರಘಟ್ಟದ ಮುತ್ಕೂರು ಗ್ರಾಮದಲ್ಲಿ ಹಕ್ಕಿಜ್ವರದೃಢಪಟ್ಟಿದ್ದು, ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಸೋಂಕಿತ ಪ್ರದೇಶದ ಸುತ್ತ 10 ಕಿ.ಮೀ ಕಣ್ಗಾವಲು ವಲಯ ನಿರ್ಮಿಸಲಾಗಿದೆ. ಮೃತ ಹಕ್ಕಿಗಳಿಂದ ದೂರವಿರಲು ಮತ್ತು ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಇದರ ಪ್ರಮುಖ ಲಕ್ಷಣಗಳು.
Raichur | ಯೂಟ್ಯೂಬರ್ ದಾನಿಶ್ ಬಂಧನಕ್ಕೆ ಒತ್ತಾಯ
ರಾಯಚೂರು : ಮಧ್ಯರಾತ್ರಿ ನನ್ನ ಪತ್ನಿಯ ಮನೆಗೆ ಅಕ್ರಮ ಪ್ರವೇಶ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಜೀವಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ ಯೂಟ್ಯೂಬರ್ ದಾನಿಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಇಫ್ತೆಕಾರುದ್ದೀನ್ ಅಹ್ಮದ್ ( ಮದನಿ ) ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಬಿಎಸ್ ನಗರದ ನನ್ನ ಪತ್ನಿ ಮೆಹರುನ್ನಿಸಾ ಬಾಡಿಗೆ ಮನೆಗೆ ಎ.6ರಂದು ಮಧ್ಯರಾತ್ರಿ ದಾನಿಶ್ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಈಗಾಗಲೇ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಸಂಪೂರ್ಣ ಮುಕ್ತ’ವಲ್ಲ ಹಾರ್ಮುಝ್ ಜಲಸಂಧಿ: ನಿಯಂತ್ರಿತ ಮಾರ್ಗ ಕಡ್ಡಾಯವೆಂದ ಇರಾನ್
ಟೆಹ್ರಾನ್/ಬೈರೂತ್, ಎ. 17: ಲೆಬನಾನ್ ಕದನ ವಿರಾಮದ 10 ದಿನಗಳ ಅವಧಿಯಲ್ಲಿ ಹಾರ್ಮುಝ್ ಜಲಸಂಧಿಯನ್ನು “ಸಂಪೂರ್ಣವಾಗಿ ಮುಕ್ತ” ಎಂದು ಘೋಷಿಸಿರುವ ಇರಾನ್, ಅದೇ ವೇಳೆ ನೌಕಾಸಂಚಾರಕ್ಕೆ ನಿಯಂತ್ರಿತ ಶರತ್ತು ವಿಧಿಸಿದೆ. ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳು “ಸಂಘಟಿತ ಮಾರ್ಗ”ವನ್ನು ಅನುಸರಿಸುವುದು ಕಡ್ಡಾಯ ಎಂದು ತಿಳಿಸಿದೆ. ಈ ಬಗ್ಗೆ Aljazeera ಗೆ ಪ್ರತಿಕ್ರಿಯಿಸಿದ ಮಿಲಿಟರಿ ಹಾಗೂ ರಾಜತಾಂತ್ರಿಕ ವಿಶ್ಲೇಷಕ ಅಲೆಕ್ಸಾಂಡ್ರು ಹುಡಿಸ್ಟಿಯನು, ಈ ಸಂಘಟಿತ ಮಾರ್ಗವು ಹಡಗುಗಳನ್ನು ಇರಾನ್ ನ ಪ್ರಾದೇಶಿಕ ಜಲಪ್ರದೇಶದೊಳಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರಿಂದ ಟೆಹ್ರಾನ್ ಗೆ ಪರಿಸ್ಥಿತಿಯ ಮೇಲೆ ನೇರ ನಿಯಂತ್ರಣ ಇಟ್ಟುಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಅವರು ವಿವರಿಸಿದರು. ““ಉಭಯ ಪಕ್ಷಗಳಲ್ಲಿ ನಂಬಿಕೆ ಕೊರತೆ ಇದೆ. ಹೀಗಾಗಿ ಒತ್ತಡ ಹೇರುವ ಮಾರ್ಗಗಳನ್ನು ಬಿಡಲು ಯಾರೂ ಸಿದ್ಧರಿಲ್ಲ,” ಎಂದು ಹುಡಿಸ್ಟಿಯನು ಹೇಳಿದರು. ಅಮೆರಿಕವೂ ತನ್ನ ದಿಗ್ಬಂಧನವನ್ನು ಮುಂದುವರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾರ್ಮುಝ್ ಜಲಸಂಧಿಯಲ್ಲಿ ನೌಕಾಸಂಚಾರ ಪುನರಾರಂಭದ ಈ ಹಂತವನ್ನು ‘ವಿಶ್ವಾಸ ನಿರ್ಮಾಣ ಪ್ರಕ್ರಿಯೆ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹಾರ್ಮುಝ್ ಜಲಸಂಧಿ ಪುನರಾರಂಭ: ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿದ ಟ್ರಂಪ್
ಶೆಹಬಾಝ್ ಷರೀಫ್, ಅಸಿಮ್ ಮುನೀರ್ ಅದ್ಭುತ ವ್ಯಕ್ತಿಗಳು ಎಂದು ಪೋಸ್ಟ್
Kalaburagi | ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಾಡಹಬ್ಬದಂತೆ ಆಚರಿಸಲು ಆಗ್ರಹ
ಕಲಬುರಗಿ: ವಿಶ್ವ ಕಾರ್ಮಿಕ ದಿನಾಚರಣೆಯನ್ನು ರಾಷ್ಟ್ರ ಹಾಗೂ ನಾಡ ಹಬ್ಬದ ಮಾದರಿಯಲ್ಲಿ ಸಾರ್ವತ್ರಿಕವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮೇ 1ರಂದು ಆಚರಿಸುವ ವಿಶ್ವ ಕಾರ್ಮಿಕ ದಿನಾಚರಣೆ ಇನ್ನೂ ಕಾಟಾಚಾರದ ಮಟ್ಟದಲ್ಲೇ ಸೀಮಿತವಾಗಿದ್ದು, ಕಾರ್ಮಿಕರ ಹಕ್ಕುಗಳ ಈ ಮಹತ್ವದ ದಿನವನ್ನು ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಆಚರಿಸುವ ಅಗತ್ಯವಿದೆ ಎಂದು ಸಂಘಟನೆ ಮುಖಂಡರು ಒತ್ತಾಯಿಸಿದರು. ಆಗಸ್ಟ್ 15 ಮತ್ತು ಜನವರಿ 26ರಂತಹ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಕಾರ್ಮಿಕ ದಿನಾಚರಣೆಯನ್ನು ನಾಡಹಬ್ಬದ ರೀತಿಯಲ್ಲಿ ಭವ್ಯವಾಗಿ ಆಚರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮುಂದಿನ ಸಾಲಿನಿಂದಲೇ ರಾಜ್ಯಾದ್ಯಂತ ಈ ಆಚರಣೆಯನ್ನು ವ್ಯಾಪಕವಾಗಿ ಜಾರಿಗೊಳಿಸಿ, ಕರ್ನಾಟಕವನ್ನು ದೇಶಕ್ಕೆ ಮಾದರಿಯನ್ನಾಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೀಮರಾಯ ಕಂದಳ್ಳಿ, ರಾಜು ಜಮಾದಾರ್, ಮರೆಪ್ಪ ರೊಟ್ನಗಿ, ಶಿವಕುಮಾರ್ ಬೆಳಗೇರಿ, ಚಂದ್ರಕಾಂತ ತುಪ್ಪದಕರ್, ಅಣ್ಣಯ್ಯ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯದ ತೀರ್ಪನ್ನು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ. ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಬಲ ಮತ್ತು ಅಧಿಕಾರದ ಮದದಿಂದ ಕೊಲೆ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದವರಿಗೆ ಈ ತೀರ್ಪು ತಕ್ಕ ಸಂದೇಶ ನೀಡಿದೆ. ಅಂದಿನ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಸಚಿವರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು. ಇಂತಹವರನ್ನು ಸಂಭಾಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ವಿನಯ್ ಕುಲಕರ್ಣಿ ಅವರು ಪ್ರಕರಣದ ಹಾದಿ ತಪ್ಪಿಸಲು ಪೊಲೀಸರನ್ನೇ ಬಳಸಿಕೊಂಡಿದ್ದಾರೆ. ಅಂದು ಈ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಯೊಬ್ಬರಿಗೆ ಸಿದ್ದರಾಮಯ್ಯ ಅವರು ಸಿಎಂ ಪದಕ ಕೊಡಿಸಿ ಗೌರವಿಸಿದ್ದರು. ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಒಳ್ಳೆಯ ಹೆಸರಿದೆ. ಆದರೆ, ಕಾಂಗ್ರೆಸ್ ಶಾಸಕರು ಮತ್ತು ಸಚಿವರು ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಸಮವಸ್ತ್ರ ಹಾಕಿಕೊಂಡು ಏನೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಕೆಲವು ಅಧಿಕಾರಿಗಳಿಗೆ ಈ ತೀರ್ಪು ಆಘಾತ ತಂದಿದೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.
35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಸೆರೆ
ಮಂಗಳೂರು, ಎ.17: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಎ.16ರಂದು ಅಬ್ಬಾಸ್ ವಿದೇಶದಿಂದ ಹಿಂತಿರುಗುವಾಗ ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮೋಹನ ಮತ್ತು ವೆಂಕಪ್ಪದಸ್ತಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೋಲಾರ : ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ ವಾಪಸ್ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಮಧ್ಯಾಹ್ನ ನಮಾಝ್ ಬಳಿಕ ನಗರದ ಟಿಪ್ಪು ಸುಲ್ತಾನ್ ರಸ್ತೆಯಲ್ಲಿನ ಬಿಲಾಲ್ ಮಸೀದಿ ಮುಂದೆ ಸೇರಿದ ಸಮುದಾಯದ ಮುಖಂಡರು, ಬಿತ್ತಿಪತ್ರ ಹಿಡಿದು, ನಸೀರ್ ಅಹ್ಮದ್ ಪರ ಘೋಷಣೆ ಕೂಗಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್ ಮಾತನಾಡಿ, ‘ನಾವು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ; ನಮ್ಮ ಹಕ್ಕು ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮೆಲ್ಲರ ಮುಖಂಡ ನಸೀರ್ ವಿರುದ್ಧ ಕ್ರಮ ಕೈಗೊಂಡಿರುವುದು ಸರಿ ಅಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಅವರಿಗೆ ನ್ಯಾಯ ನೀಡುವಂತೆ ಮನವಿ ಮಾಡುತ್ತಿದ್ದೇವೆ’ ಎಂದರು. ನಸೀರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಕಾಂಗ್ರೆಸ್ನ ಕಷ್ಟಕಾಲದಲ್ಲೂ ಆಪತ್ಭಾಂದವರಾಗಿ ಕೆಲಸ ಮಾಡಿದ್ದಾರೆ. ಮತ್ತೆ ರಾಜಕೀಯ ಸ್ಥಾನಮಾನ ನೀಡಿ ಅವರನ್ನು ಗೌರವಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಸಂವಿಧಾನ ಉಳಿಸುವ ಏಕೈಕ ಪಕ್ಷ. ನಸೀರ್ ಆಗಲಿ, ಸಚಿವ ಝಮೀರ್ ಆಗಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಯಾವುದೇ ರೀತಿ ಮಾತನಾಡಿಲ್ಲ. ಝಮೀರ್ ಅವರು ಸ್ಟಾರ್ ಪ್ರಚಾರಕರಾಗಿ ಕೇರಳ ರಾಜ್ಯದಲ್ಲಿದ್ದರು ಎಂದು ತಿಳಿಸಿದರು. ಕೋಮುಲ್ ನಾಮಿನಿ ನಿರ್ದೇಶಕ ಶಂಷೀರ್ ಮಾತನಾಡಿ, ‘ನಾವೆಲ್ಲಾ ಕಾಂಗ್ರೆಸ್ ಜೊತೆಗೆ ಇದ್ದೇವೆ. ಈಗ ಉಂಟಾಗಿರುವ ತಪ್ಪುಗಳನ್ನು ತಿದ್ದಿಕೊಂಡರೆ ಪಕ್ಷಕ್ಕೆ ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲ ಕಿಡಿಗೇಡಿಗಳು ಹೈಕಮಾಂಡ್ಗೆ ತಪ್ಪು ಸಂದೇಶ ನೀಡಿರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದರು. ನಸೀರ್ ನಮ್ಮ ನಾಯಕರು. ಅವರಿಗೆ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು, ಕೋರ್ ಕಮಿಟಿಯಲ್ಲಿದ್ದರು. ಅವರನ್ನು ಕೈಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ. ಕಾಂಗ್ರೆಸ್ ನಾವು ಕಟ್ಟಿ ಬೆಳೆಸಿದ ಪಕ್ಷ. ನಾವು ಪಕ್ಷದ ವಿರುದ್ಧ ನಿಂತಿಲ್ಲ. ಬದಲಾಗಿ ನಸೀರ್ ಅವರಿಗೆ ನ್ಯಾಯ ನೀಡುವಂತೆ ಕೇಳುತ್ತಿದ್ದೇವೆ ಎಂದು ತಿಳಿಸಿದರು. ಮುಖಂಡ ಸೈಫ್ ಮಾತನಾಡಿ, ‘ನಸೀರ್ ಹಾಗೂ ಜಮೀರ್ ಜೊತೆ ನಮ್ಮ ಸಮುದಾಯ ಗಟ್ಟಿಯಾಗಿ ನಿಂತಿದೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ನಸೀರ್ ಜೊತೆ ಇರುವುದಾಗಿ ಹೇಳಿದ್ದಾರೆ. ನಸೀರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿತ್ತು. ಮುಂದೆ ಧರ್ಮದ ಗುರುಗಳು ಹೇಳಿದಂತೆ ನಾವು ಕೇಳುತ್ತೇವೆ’ ಎಂದು ನುಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್ಗೆ ಶೇ 100ರಷ್ಟು ವೋಟ್ ಹಾಕಿರುವ ಯಾವುದಾದರೂ ಸಮುದಾಯ ಇದ್ದರೆ ಅದು ಮುಸ್ಲಿಂ ಸಮುದಾಯ. ಆದರೆ, ಈಗ ಈ ಸಮುದಾಯಕ್ಕೆ ಅನ್ಯಾಯ, ದ್ರೋಹ ಬಗೆಯುವ ರೀತಿಯ ವಾತಾವರಣ ನಿರ್ಮಾಣವಾಗಿದೆ. ಈಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅವರನ್ನು ಕೆಳಗಿಳಿಸಿರುವುದಕ್ಕೆ ಮುಸ್ಲಿಮರಿಗೆ ನೋವಾಗಿದೆ ಎಂದರು. ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷ ಹನೀಫ್ ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಖಯ್ಯುಂ, ಜಫರುಲ್ಲಾ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಫೈರೋಜ್ ಖಾನ್, ಸೈಫುಲ್ಲಾ, ಏಜಾಜ್, ಶಫಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರಿದ್ ಯುವ ಮುಖಂಡರಾದ ಮನ್ಸೂರ್ ಅಲಿ, ಮೊಹಮ್ಮದ್ ನೂರ್, ಬಾಬರ್ , ಸಾಧೀಕ್, ರಿಯಾಜ್ ಗೋರು, ರೋಹಿದ್, ಸುಹೈಲ್, ಅರ್ಬಾಜ್, ಮುಂತಾದವರು ಉಪಸ್ಥಿತರಿದ್ದರು.
ಫಾದರ್ ಮಲ್ಲರ್ ಆಸ್ಪತ್ರೆ: ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆ
ಮಂಗಳೂರು: ಹೃದ್ರೋಗ ಸಂಬಂಧಿಸಿ ಬಳಲುತ್ತಿದ್ದ ಕಾಸರಗೋಡು ಮೂಲದ 46 ಹರೆಯದ ಮಹಿಳೆಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ವಿನೂತನ ಶೈಲಿಯ ಚಿಕಿತ್ಸೆಯ ನೀಡಿದ್ದಾರೆ. ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ತೀಕ್ಷ್ಣ ಎದೆನೋವು, ನಿಶಕ್ತಿ, ದಣಿವು, ದೌರ್ಬಲ್ಯ, ರಕ್ತ ಚಲನವಲನ ಸಮಸ್ಯೆಯಿಂದ ಬಳಲುತಿದ್ದು, ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥಳಾಗಿದ್ದರು. ಅವರು ಫಾದರ್ ಮುಲ್ಲರ್ ಆಸ್ಪತ್ರೆಯ ಮುಖ್ಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಎಚ್. ಪ್ರಭಾಕರ್ರನ್ನು ಭೇಟಿ ಮಾಡಿ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ವೈದ್ಯರು ತಪಾಸಣೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗಿ ಸಂಬಂಧಿ ಅಪರೂಪದ ‘‘ತಕಯಾಸು’’ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ರೋಗಿಗೆ ಹೃದಯದ ರಕ್ತನಾಳದಲ್ಲಿ ರಕ್ತ ಚಲನವಲನದ ಅಡ್ಡಿಯಾಗುತ್ತಿದ್ದು, ಹೃದಯದ ಕಾರ್ಯಕ್ಷಮತೆ ಕುಂಠಿತವಾಗುತ್ತಿತ್ತು. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಮತ್ತು ಶಸ್ತ್ರ ಚಿಕಿತ್ಸೆಯ ಅಪಾಯ ಅತ್ಯಂತ ಗಂಭೀರವಾಗಿತ್ತು. ಈ ಸಮಸ್ಯೆಯನ್ನು ಪರಿಗಣಿಸಿ ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ತಂಡವು 2 ವಿಭಿನ್ನ ದಿನಗಳ ಅವಧಿಯ 2 ಪ್ರತ್ಯೇಕ ಹಂತದಲ್ಲಿ ವಿನೂತನ ಶೈಲಿಯ ಜೀವ ಅಪಾಯಕಾರಿ ಕ್ಲಿಷ್ಟಕರ ‘‘ಅಂಜಿಯೋಪ್ಲಾಸ್ಟಿ’’ ಚಿಕಿತ್ಸೆಯನ್ನು ನೆರವೇರಿಸಿ ಸಾಮಾನ್ಯ ರಕ್ತ ಚಲನವಲನಕ್ಕೆ ಅನುವು ಮಾಡಿಕೊಟ್ಟರು. ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿ, ಅದರ ಮೂಲಕ ವಿಶೇಷ ಕ್ಯಾಮರಾ ಮತ್ತು ಬೆಲೂನನ್ನು ಅಳವಡಿಸಿ, ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾ ಯಿತು. ಈ ಅಪರೂಪದ ಚಿಕಿತ್ಸೆಯಲ್ಲಿ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟಲ್ ಪಿಂಟೊ ಮತ್ತು ಡಾ. ಅಶೋಕ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಸಂಪೂರ್ಣವಾಗಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಡಾ. ಎಚ್. ಪ್ರಭಾಕರ್ರವರು ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಈ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡಿದ್ದು, ಮತ್ತು ಮಾರಣಾಂತಿಕ ಸಮಸ್ಯೆಯನ್ನು ಹೊಂದಿರುವ ರೋಗಿಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂ. ಫಾವುಸ್ಟಿನ್ ಲೂಕಸ್ ಲೋಬೋ ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದ್ದಾರೆ.
Kalaburagi | ಯುವಕರಿಗೆ ಬಸವಣ್ಣನ ಪರಿಚಯಿಸುವುದು ಅಗತ್ಯ: ಬಿ.ಜಿ.ಪಾಟೀಲ್
893ನೇ ಬಸವ ಜಯಂತಿ
Kerala | ವಾಲ್ಪರೈ ಘಾಟ್ ರಸ್ತೆಯಲ್ಲಿ ಅಪಘಾತ: ಮಲಪ್ಪುರಂನ ಶಾಲೆಯ ಎಂಟು ಸಿಬ್ಬಂದಿ ಮೃತ್ಯು
ಮಲಪ್ಪುರಂ, ಎ.17: ತಮಿಳುನಾಡಿನ ವಾಲ್ಪರೈ ಘಾಟ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. 13ನೇ ಹೇರ್ ಪಿನ್ ತಿರುವಿನಲ್ಲಿ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ರಸ್ತೆಯಿಂದ ಆಚೆಗೆ ಉರುಳಿ ಕಣಿವೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಮೃತರು ಮಲಪ್ಪುರಂ ಜಿಲ್ಲೆಯ ಕೊಲತ್ತೂರು ಬಳಿಯ ಪಾಂಗು ಪ್ರದೇಶದಲ್ಲಿರುವ ಪರಮಲ್ ಎಎಲ್ಪಿ ಶಾಲೆ ಹಾಗೂ ಪಾಂಗು ಜಿಯುಪಿ ಶಾಲೆಗಳ ಸಿಬ್ಬಂದಿ ಮೃತಪಟ್ಟವರು ಎಂದು ತಿಳಿದು ಬಂದಿದೆ. ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದ ತಂಡದಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಕುಟುಂಬ ಸದಸ್ಯರು ಹಾಗೂ ಚಾಲಕ ಸೇರಿದ್ದರು. ಪರಮಲ್ ಎಎಲ್ಪಿ ಶಾಲೆಯ ಸಿಬ್ಬಂದಿ ಈ ಪ್ರವಾಸವನ್ನು ಆಯೋಜಿಸಿದ್ದರೆ, ಜಿಯುಪಿ ಶಾಲೆಯ ಸಹೋದ್ಯೋಗಿಯೊಬ್ಬರು ಸಹ ಇವರೊಂದಿಗೆ ಸೇರಿಕೊಂಡಿದ್ದರು. ತಂಡವು ಶುಕ್ರವಾರ ಮುಂಜಾನೆ ವಾಲ್ಪರೈಗೆ ಪ್ರವಾಸಕ್ಕೆ ತೆರಳಿದ್ದು, ಸಂಜೆ ಸುಮಾರು 5.30ರ ವೇಳೆಗೆ ಪೊಲ್ಲಾಚಿಯಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರು ಪ್ರಯತ್ನಿಸುತ್ತಿದ್ದ ವಾಹನವು 13ನೇ ಹೇರ್ ಪಿನ್ ತಿರುವಿನಲ್ಲಿ ನಿಯಂತ್ರಣ ತಪ್ಪಿ 11ನೇ ಹೇರ್ ಪಿನ್ ತಿರುವಿನತ್ತ ಉರುಳಿ ಬಿದ್ದಿದೆ ಎನ್ನಲಾಗಿದೆ. ಮೃತರಲ್ಲಿ ಪುಲಮಂತೋಳೆ ಮೂಲದ ಪರಮಲ್ ಎಎಲ್ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅಜಿತಾ (54) ಸೇರಿದ್ದಾರೆ. ಪಾಂಗು ನಿವಾಸಿಗಳಾದ ರಮ್ಲಾ (52), ಸುಹರಾ (43), ಆಶಾ (41), ಮಜೀದ್ (43), ಶಾಲೆಯ ಅಡುಗೆ ಸಿಬ್ಬಂದಿ ಸಜಿತಾ (45), ಶಾಲಾ ಬಸ್ ಚಾಲಕ ನೌಶಾದ್ (39) ಹಾಗೂ ಮಜೀದ್ ಅವರ ಪತ್ನಿ ರುಖಿಯಾ (39) ಮೃತಪಟ್ಟ ಇತರರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಲ್ಲಿ ಪಾಂಗು ಜಿಯುಪಿ ಶಾಲೆಯ ಶಿಕ್ಷಕಿ ಶಕೀನಾ (37), ಸುಹರಾ ಅವರ ಪುತ್ರ ಹಿಶಾಮ್ (12), ಸಜಿತಾ ಅವರ ಪುತ್ರ ಶಹಾದಿನ್, ಶಕೀನಾ ಅವರ ಪುತ್ರ ಮಸ್ನೀನ್ (10) ಹಾಗೂ ಮೊಹಮ್ಮದ್ ಫಹಿಸ್ ಸೇರಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲ್ಲಾಚಿ–ವಾಲ್ಪರೈ ರಸ್ತೆಯ ಅರಣ್ಯ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರಿಂದ ಸ್ಥಳೀಯರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ವಿಳಂಬವಾಯಿತು. ಗಾಯಾಳುಗಳನ್ನು ಮೊದಲಿಗೆ ಪೊಲ್ಲಾಚಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪ್ರಸ್ತುತ ಒಬ್ಬರು ಪೊಲ್ಲಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದ ಮೂವರು ಕೊಯಮತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯಲ್ಲಿ 45.3 ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲು
ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯ ಫರಹತಾಬಾದ್ ಹೋಬಳಿಯಲ್ಲಿ 45.3 ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ವರ್ಷದ ಬೇಸಿಗೆಯಲ್ಲಿಯೇ ಅತ್ಯಧಿಕವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬುಧವಾರವೇ ಕಲಬುರಗಿ ತಾಲೂಕಿನ ಔರಾದ್ ಹೋಬಳಿಯಲ್ಲಿ 45 ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಇದೀಗ ಆ ದಾಖಲೆ ಫರಹತಾಬಾದ್ನಲ್ಲಿ ಮುರಿಯಲಾಗಿದೆ. ಕಲಬುರಗಿ, ರಾಯಚೂರು, ಬೀದರ್, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವೆಡೆ 42 ಸೆಲ್ಸಿಯಸ್ ನಿಂದ 45.3 ಸೆಲ್ಸಿಯಸ್ ನಡುವೆ ತಾಪಮಾನ ದಾಖಲಾಗಿದ್ದು, ಜನಜೀವನ ತೀವ್ರವಾಗಿ ಅಸ್ತವ್ಯಸ್ತವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಕೇಂದ್ರ (KSNDMC) ಮಾಹಿತಿ ಪ್ರಕಾರ, ಕಲಬುರಗಿಯಲ್ಲಿ 26 ಸ್ಥಳಗಳು, ರಾಯಚೂರಿನಲ್ಲಿ 23, ಬೀದರ್ನಲ್ಲಿ 17, ಯಾದಗಿರಿಯಲ್ಲಿ 13 ಮತ್ತು ವಿಜಯಪುರದಲ್ಲಿ 11 ಸ್ಥಳಗಳಲ್ಲಿ 42 ಸೆಲ್ಸಿಯಸ್ ಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. IMD ಮುನ್ಸೂಚನೆಯಂತೆ ಮುಂದಿನ ಐದು ದಿನಗಳವರೆಗೆ ತಾಪಮಾನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಬಿಸಿಲಿನಿಂದ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭಾಲ್ಕಿ | ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ
ಪ್ರೀತಿ ಜಾಧವ್ ಶಾಲೆಗೆ ಪ್ರಥಮ
India GDP Decline: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಕುಸಿತ; ಟಾಪ್ 5 ರಿಂದ ಹೊರಕ್ಕೆ! ಮುಂಚೂಣಿ ರಾಷ್ಟ್ರಗಳಾವು?
ರೂಪಾಯಿ ಮೌಲ್ಯ ಕುಸಿತ ಮತ್ತು ಜಿಡಿಪಿ ಮೂಲ ವರ್ಷದ ಪರಿಷ್ಕರಣೆಯಿಂದಾಗಿ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಕಳೆದುಕೊಂಡು 6ನೇ ಸ್ಥಾನಕ್ಕೆ ಕುಸಿದಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಪ್ರಸ್ತುತ ಬ್ರಿಟನ್ 5ನೇ ಸ್ಥಾನಕ್ಕೇರಿದ್ದು, 2026-27ರ ವೇಳೆಗೆ ಭಾರತದ ಜಿಡಿಪಿ 4.15 ಲಕ್ಷ ಕೋಟಿ ಡಾಲರ್ ತಲುಪುವ ಅಂದಾಜಿದೆ. ನೊಮಿನಲ್ ಜಿಡಿಪಿ ಇಳಿಕೆ ಈ ಪಲ್ಲಟಕ್ಕೆ ಪ್ರಮುಖ ಕಾರಣವಾಗಿದೆ.
Aurad | ಸುಂಕನಾಳ್ ಜೆಜೆಎಂ ಪೈಪ್ಲೈನ್ ಕಾಮಗಾರಿ ಕಳಪೆ ಆರೋಪ : ಕ್ರಮಕ್ಕೆ ಆಗ್ರಹ
ಔರಾದ್: ತಾಲೂಕಿನ ಚಿಕ್ಲಿ (ಜೆ) ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕನಾಳ್ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಪೈಪ್ಲೈನ್ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮದ ಮುಖಂಡ ಸುರ್ಯಕಾಂತ್ ಮಾಲೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಪಕ್ಕದ ಉಜನಿ ಗ್ರಾಮದ ಕೊಳವೆಬಾವಿಯಿಂದ ಸುಮಾರು 3 ಕಿ.ಮೀ ದೂರದವರೆಗೆ ಅಳವಡಿಸಿರುವ HDPE ಪೈಪ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪದೇ ಪದೇ ಒಡೆದು ಗ್ರಾಮಕ್ಕೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ದೂರಿದ್ದಾರೆ. ಕಾಮಗಾರಿಗೆ ಬಳಸಿದ ಪೈಪ್ಗಳನ್ನು ಬದಲಾಯಿಸಿ ಹೊಸದಾಗಿ ಅಳವಡಿಸಬೇಕು ಹಾಗೂ ಸರಬರಾಜು ಮಾಡಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ ಸಹಾಯಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ಸರ್ಕಾರದ ಮಹತ್ವದ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಆರೋಪಿಸಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮುಂಬೈ: ಹಲವಾರು ಮಹಿಳೆಯರನ್ನು ಲೈಂಗಿಕ ಮತ್ತು ಆರ್ಥಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್ ಅವರ ಆಪ್ತ ಜಿತೇಂದ್ರ ಶೆಲ್ಕೆ, ಮುಂಬೈ–ನಾಗ್ಪುರ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಜಿತೇಂದ್ರ ಶೆಲ್ಕೆ ಅವರು ದೇವಮಾನವ ಅಶೋಕ್ ಖಾರಟ್ ನೇತೃತ್ವದ ಶಿವಾನಿಕ್ ಟ್ರಸ್ಟ್ ನ ಉಪಾಧ್ಯಕ್ಷರಾಗಿದ್ದು, ಅಶೋಕ್ ಖಾರಟ್ ರಾಜಕೀಯ, ವ್ಯವಹಾರ ಹಾಗೂ ಅಧಿಕಾರಶಾಹಿ ವಲಯದಲ್ಲಿ ಹೊಂದಿದ್ದ ಸಂಪರ್ಕಗಳ ಕುರಿತು ಹಲವು ವಿವರಗಳನ್ನು ಬಲ್ಲವರಾಗಿದ್ದರು. ಹೀಗಾಗಿ ಅವರು ಅನೇಕ ಅಸಹ್ಯ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದರು ಹಾಗೂ ಮಹಾರಾಷ್ಟ್ರದ ಹಲವು ಉನ್ನತ ವ್ಯಕ್ತಿಗಳನ್ನು ಬಯಲು ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಸಾವಿನ ಕುರಿತು ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿವೆ. ಕುತೂಹಲಕರ ಸಂಗತಿಯೆಂದರೆ, ಮೂರು ದಿನಗಳ ಹಿಂದಷ್ಟೇ ಶೆಲ್ಕೆ ಅವರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿತ್ತು. ಹೀಗಾಗಿ ಅವರದ್ದು ಅಪಘಾತವೋ ಅಥವಾ ಅಶೋಕ್ ಖಾರಟ್ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ನಡೆಸಿರುವ ವ್ಯವಸ್ಥಿತ ಪಿತೂರಿಯೋ ಎಂಬ ಶಂಕೆ ವ್ಯಕ್ತವಾಗಿದೆ. ಮುಂಬೈ–ನಾಗ್ಪುರ ಸಮೃದ್ಧಿ ಮಾರ್ಗದಲ್ಲಿ ಜಿತೇಂದ್ರ ಶೆಲ್ಕೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಜಿತೇಂದ್ರ ಶೆಲ್ಕೆ (50), ಪತ್ನಿ ಅನುರಾಧ (45) ಹಾಗೂ ಪುತ್ರ ಸುಚಿತ್ (14) ಸ್ಥಳದಲ್ಲಿಯೇ ಮೃತಪಟ್ಟರು. ಈ ಕುರಿತು ಪ್ರತಿಕ್ರಿಯಿಸಿದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್, ತನಿಖಾ ಸಂಸ್ಥೆಗಳು ಅಶೋಕ್ ಖಾರಟ್ ಪ್ರಕರಣವನ್ನು ಭೇದಿಸುವ ಸನಿಹದಲ್ಲಿದ್ದು, ಈ ಹಂತದಲ್ಲಿ ಜಿತೇಂದ್ರ ಶೆಲ್ಕೆ ಸಾವು ಸಂಭವಿಸಿರುವುದು ತುಂಬಾ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಜಿತೇಂದ್ರ ಶೆಲ್ಕೆ, ಅಶೋಕ್ ಖಾರಟ್ ಹಾಗೂ ಈ ಕುಖ್ಯಾತ ಪ್ರಕರಣದಲ್ಲಿ ಭಾಗಿಯಾಗಿರುವ ಗಣ್ಯ ವ್ಯಕ್ತಿಗಳ ನಡುವಿನ ಕೊಂಡಿಯಾಗಿದ್ದರು. ಈ ಆಯಾಮದಲ್ಲಿ ಜಿತೇಂದ್ರ ಶೆಲ್ಕೆ ಅವರ ಮೃತ್ಯು ಗಮನಾರ್ಹವಾಗಿದೆ ಎಂದು ಶಿವಸೇನೆ (ಉದ್ಧವ್ ಬಣ) ನಾಯಕಿ ಸುಷ್ಮಾ ಅಂಧಾರೆ ಅಭಿಪ್ರಾಯಪಟ್ಟಿದ್ದಾರೆ.
ಹುಲಸೂರು | ಎ.20ರಂದು ಬಸವಣ್ಣ ಜಯಂತಿ: ತಹಶೀಲ್ದಾರ್ ಶಿವಾನಂದ್ ಮೇತ್ರೆ ಮಾಹಿತಿ
ಹುಲಸೂರ್ : ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಎ.20ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ತಿಳಿಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತದ ವತಿಯಿಂದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಅಂದು ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವ ಜಯಂತಿ ಆಚರಿಸಲು ಸೂಚನೆ ನೀಡಲಾಗಿದೆ. ತಾಲೂಕು ಕೇಂದ್ರದ ಮುಖ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತಿ ಪ್ರತಿನಿಧಿಗಳು, ರಾಜಕೀಯ ಮುಖಂಡರು, ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8:30ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಬೆಳಿಗ್ಗೆ 9 ಗಂಟೆಗೆ ಅಲ್ಲಮಪ್ರಭು ಶೂನ್ಯಪೀಠದಿಂದ ಪ್ರತಿಮೆ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮೆರವಣಿಗೆಯು ಲಕ್ಷ್ಮೀ ಚೌಕ್, ಗಾಂಧಿ ವೃತ್ತ, ಬಸವಣ್ಣ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾಪ್ತಿಯಾಗಲಿದೆ. ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದು, ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಉಪತಹಶೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯಕುಮಾರ್ ಮುಖಂಡರಾದ ರಣಜೀತ್ ಗಾಯಕವಾಡ್, ಸುನೀಲಕುಮಾರ್ ಕಾಡಾದಿ, ಅರವಿಂದ್ ಹರಪಲ್ಲೆ, ಶಿವರಾಜ್ ಖಪಲೆ, ಸಂದೀಪ್ ಬಿರಾದಾರ್, ಶಿವರಾಜ್ ಚಾಕೋತೆ, ಮಾಂತೇಶ ಇಲ್ಲಾಮಲ್ಲೆ, ಸಿದ್ದು ಪಾರಶೆಟ್ಟೆ, ಮಾಹದೇವ್ ಕವಟೆ, ಗಣೇಶ್ ಚಿಲ್ಲರ್ಗೆ ಹಾಗೂ ವಿರೇಶ್ ವಡ್ಡೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಪುನರ್ ವಿಂಗಡಣೆ: ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಯಾವ ಬದಲಾವಣೆ ಆಗಲಿದೆ?
ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರ ಪುನರ್ ವಿಂಗಡಣೆಯಿಂದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಸಣ್ಣ ಅಥವಾ ದೊಡ್ಡ, ಉತ್ತರ ಅಥವಾ ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಯಾವುದೇ ರಾಜ್ಯಗಳ ಬಗ್ಗೆ ತಾರತಮ್ಯ ಮಾಡುವುದಿಲ್ಲ ಎಂದಿದ್ದಾರೆ. ದಕ್ಷಿಣ ರಾಜ್ಯಗಳಿಂದ ಹೆಚ್ಚುತ್ತಿರುವ ಕಳವಳಗಳನ್ನು ಶಮನಗೊಳಿಸಲು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯಲ್ಲಿ ಈ ಪ್ರದೇಶಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಲೋಕಸಭೆಗೆ ಭರವಸೆ ನೀಡಿದರು. ಚೆನ್ನೈನಲ್ಲಿ ಡಿಎಂಕೆ ನೇತೃತ್ವದಲ್ಲಿ ಪ್ರಬಲ ಪ್ರತಿಭಟನೆಗಳು ನಡೆದಾಗಲೂ, ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಮತ್ತು ಪ್ರಸ್ತಾವಿತ ಮಸೂದೆಯ ಪ್ರತಿಗಳನ್ನು ಸುಟ್ಟುಹಾಕುತ್ತಿದ್ದಾಗಲೂ ಈ ಭರವಸೆ ಬಂದಿತು. ಸದನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ದಕ್ಷಿಣ ಪ್ರಾತಿನಿಧ್ಯ ಕಳೆದುಕೊಳ್ಳುವ ಭಯ ಸಂಪೂರ್ಣವಾಗಿ ಸುಳ್ಳು ಎಂದರು. ವಾಸ್ತವವಾಗಿ ಈ ಪ್ರಕ್ರಿಯೆಯು ಸ್ಥಾನಗಳು ಮತ್ತು ಪ್ರಭಾವ ಎರಡನ್ನೂ ವಿಸ್ತರಿಸುತ್ತದೆ ಎಂದು ಪ್ರತಿಪಾದಿಸಿದರು. ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ, ಅಧಿಕಾರ ಬೆಳೆಯುತ್ತದೆ ಎಂದು ಶಾ ಹೇಳಿ, ದಕ್ಷಿಣದ ಐದು ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯವು ಪ್ರಸ್ತುತ 129 ಸ್ಥಾನಗಳಿಂದ 195 ಕ್ಕೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಅವುಗಳ ಒಟ್ಟಾರೆ ಪಾಲು 23.76% ರಿಂದ ಸುಮಾರು 24% ಕ್ಕೆ ಏರುತ್ತದೆ ಎಂದು ವಿವರಿಸಿದರು. ಹೀಗೆ ಮಾಡಿದಾಗ ಕರ್ನಾಟಕದ ಸ್ಥಾನಗಳು 28 ರಿಂದ 42 ಕ್ಕೆ, ಆಂಧ್ರಪ್ರದೇಶ 25 ರಿಂದ 38 ಕ್ಕೆ, ತೆಲಂಗಾಣ 17 ರಿಂದ 26 ಕ್ಕೆ, ತಮಿಳುನಾಡಿನ ಸ್ಥಾನಗಳು 39 ರಿಂದ 59 ಕ್ಕೆ ಮತ್ತು ಕೇರಳ 20 ರಿಂದ 30 ಕ್ಕೆ ಏರುತ್ತವೆ ಎಂದು ಅವರು ಹೇಳಿದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ದಕ್ಷಿಣ ರಾಜ್ಯಗಳಲ್ಲಿನ ಸೀಟುಗಳ ಸಂಖ್ಯೆ ಕರ್ನಾಟಕ ಕರ್ನಾಟಕವು ಪ್ರಸ್ತುತ 28 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಸದನದ ಬಲದ 5.15% ರಷ್ಟಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ರಾಜ್ಯವು ತನ್ನ ಸ್ಥಾನಗಳ ಸಂಖ್ಯೆಯನ್ನು 42 ಕ್ಕೆ ಏರಿಸುವ ನಿರೀಕ್ಷೆಯಿದೆ. ಅದರ ಒಟ್ಟಾರೆ ಪಾಲು 5.14% ಕ್ಕೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ. ಆಂಧ್ರಪ್ರದೇಶ ಆಂಧ್ರಪ್ರದೇಶವು ಪ್ರಸ್ತುತ 25 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಕೆಳಮನೆಯ 4.60% ರಷ್ಟಿದೆ. ಪ್ರಸ್ತಾವಿತ ವಿಸ್ತರಣೆಯ ನಂತರ, ಅದರ ಸ್ಥಾನಗಳ ಸಂಖ್ಯೆ 38 ಸ್ಥಾನಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ, ಅದರ ಪಾಲು ಸುಮಾರು 0.05 ಶೇಕಡಾ ಅಂಕಗಳಿಂದ ಸ್ವಲ್ಪ ಹೆಚ್ಚಾಗುತ್ತದೆ. ತೆಲಂಗಾಣ ತೆಲಂಗಾಣವು ಪ್ರಸ್ತುತ ಲೋಕಸಭೆಯಲ್ಲಿ 17 ಸ್ಥಾನಗಳನ್ನು ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ಅದರ ಬಲ 26 ಸ್ಥಾನಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಸದನದಲ್ಲಿ ಅದರ ಪಾಲು 3.13% ರಿಂದ 3.18% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ತಮಿಳುನಾಡು ಲೋಕಸಭೆಗೆ ಅತಿ ಹೆಚ್ಚು ಕೊಡುಗೆ ನೀಡುವ ದೇಶಗಳಲ್ಲಿ ಒಂದಾದ ತಮಿಳುನಾಡು, ಪ್ರಸ್ತುತ 39 ಸಂಸದರನ್ನು ಹೊಂದಿದೆ, ಅವರ ಪಾಲು 7.18%. ಕ್ಷೇತ್ರ ಪುನರ್ ವಿಂಗಡಣೆಯ ನಂತರ, ಅದರ ಸ್ಥಾನಗಳ ಸಂಖ್ಯೆ ಗಮನಾರ್ಹವಾಗಿ 59 ಕ್ಕೆ ಏರಬಹುದು, ಇದರಿಂದಾಗಿ ಅದರ ಪಾಲು ಸ್ವಲ್ಪ ಹೆಚ್ಚಾಗುತ್ತದೆ. ಕೇರಳ ಕೇರಳವು ಪ್ರಸ್ತುತ ಲೋಕಸಭೆಗೆ 20 ಸಂಸದರನ್ನು ಆಯ್ಕೆ ಮಾಡುತ್ತದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಈ ಸಂಖ್ಯೆ 30 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಸದನದಲ್ಲಿ ಅದರ ಪಾಲು ಬಹುತೇಕ ಬದಲಾಗದೆ ಉಳಿಯುವ ಸಾಧ್ಯತೆಯಿದೆ; ಇದು 3.68% ರಿಂದ 3.67% ಕ್ಕೆ ಸ್ವಲ್ಪ ಇಳಿಯುತ್ತದೆ. ಒಟ್ಟಾರೆಯಾಗಿ, 543 ಸದಸ್ಯರ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳು 129 ಸಂಸದರನ್ನು ಹೊಂದಿದ್ದು, ಒಟ್ಟು ಸಂಸದರಲ್ಲಿ 23.75% ಅನ್ನು ಪ್ರತಿನಿಧಿಸುತ್ತವೆ ಎಂದು ಶಾ ಹೇಳಿದ್ದಾರೆ. ಇದರಿಂದ ಲೋಕಸಭೆಯಲ್ಲಿ 195 ಸ್ಥಾನಗಳು ಮತ್ತು ಪ್ರಾತಿನಿಧ್ಯ 23.9% ಕ್ಕೆ ಹೆಚ್ಚಾಗುತ್ತದೆ. ದಕ್ಷಿಣದ ಪ್ರಾತಿನಿಧ್ಯವು ಮೇಲಕ್ಕೆ ಹೋಗುತ್ತಿದೆ, ಕೆಳಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ ಅವರು. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, ನಾನು, ಗೃಹ ಸಚಿವ, ಮಸೂದೆಯನ್ನು ಜಾರಿಗೆ ತಂದ ಸಚಿವ ಅಮಿತ್ ಶಾ, ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು. ಡಿಲಿಮಿಟೇಷನ್ ಮಸೂದೆಯಲ್ಲಿ ದಕ್ಷಿಣ ರಾಜ್ಯಗಳ ಪಾಲಿನ ಸಂಖ್ಯೆಗಳನ್ನು ಎಲ್ಲಿ ಉಲ್ಲೇಖಿಸಲಾಗಿದೆ ಎಂದು ಕೇಳಿದಾಗ, ಕೆಜಿ (ಕಿಂಡರ್ಗಾರ್ಟನ್) ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಷ್ಟು ಸರಳ ಭಾಷೆಯಲ್ಲಿ ಅದನ್ನು ವಿವರಿಸುವುದಾಗಿ ಶಾ ಹೇಳಿದರು. ಈ ನಡುವೆ, ಸರ್ಕಾರ ಜಾತಿ ಜನಗಣತಿ ನಡೆಸಲು ಬಯಸುವುದಿಲ್ಲ ಎಂಬ ನಿರೂಪಣೆ ನಿಜವಲ್ಲ ಎಂದು ಶಾ ಹೇಳಿದ್ದಾರೆ. ಜನಗಣತಿಯಲ್ಲಿ ಎರಡು ಭಾಗಗಳಿವೆ ಎಂದು ಪ್ರಕ್ರಿಯೆಯ ಪರಿಚಯವಿರುವ ಜನರಿಗೆ ತಿಳಿದಿದೆ. ಮೊದಲನೆಯದ್ದು ಮನೆಗಳನ್ನು ಎಣಿಸುವುದು ಮತ್ತು ನಂತರ ಜನರ ಎಣಿಕೆ. ಜನಗಣತಿಯ ಎರಡನೇ ಭಾಗ ನಡೆಸಿದಾಗ, ಜಾತಿ ಜನಗಣತಿ ನಡೆಯುತ್ತದೆ ಎಂದು ಅವರು ಹೇಳಿದರು. ವಿಧಾನಸಭೆ ಚುನಾವಣೆಯ ಮಧ್ಯದಲ್ಲಿ ಮಸೂದೆಗಳನ್ನು ತರಲಾಗುತ್ತಿದ್ದರೂ, ಸಂಸತ್ತು ಅವುಗಳನ್ನು ಅನುಮೋದಿಸುವವರೆಗೆ ಮತ್ತು ರಾಷ್ಟ್ರಪತಿಗಳು ಸಹಿ ಮಾಡುವವರೆಗೆ ಅವುಗಳನ್ನು ಜಾರಿಗೆ ತರಲಾಗುವುದಿಲ್ಲ ಎಂದು ಗೃಹ ಸಚಿವರು ಹೇಳಿದರು. ಆದ್ದರಿಂದ ಅಖಿಲೇಶ್ ಯಾದವ್ ಚಿಂತಿಸಬಾರದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ ಹೇಳಿದ್ದಾರೆ. ಸರ್ಕಾರ ಹೇಳಿದ್ದೇನು? ಒಟ್ಟು ಸಂಸದರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪ್ರತಿ ರಾಜ್ಯದ ಶೇಕಡಾವಾರು ಸ್ಥಾನಗಳ ಪಾಲು ಬಹುತೇಕ ಬದಲಾಗದೆ ಉಳಿದಿದೆ ಎಂದು ಗೃಹ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. ದಕ್ಷಿಣ ರಾಜ್ಯಗಳು ಪ್ರಸ್ತುತ 543 ಸ್ಥಾನಗಳಲ್ಲಿ 129 ಸ್ಥಾನಗಳನ್ನು (23.76%) ಹೊಂದಿವೆ. ಪ್ರಸ್ತಾವಿತ ವಿಸ್ತರಣೆಯ ನಂತರ ಅದು 816 ಸ್ಥಾನಗಳಲ್ಲಿ 195 ಕ್ಕೆ (23.87%) ಏರುತ್ತದೆ. ಉಳಿದ 621 ಸ್ಥಾನಗಳು (ಸದನದ ಸುಮಾರು 76%) ಇತರ ರಾಜ್ಯಗಳಿಗೆ, ಮುಖ್ಯವಾಗಿ ಉತ್ತರಕ್ಕೆ ಹೋಗುತ್ತವೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರವೂ ದಕ್ಷಿಣದ ಒಟ್ಟಾರೆ ಪಾಲು ಸರಿಸುಮಾರು 24% ರಷ್ಟಿದೆ ಎಂದು ಇದು ತೋರಿಸುತ್ತದೆ ಎಂದು ಸರ್ಕಾರ ಹೇಳುತ್ತದೆ. ಸರ್ಕಾರದ ಯೋಜನೆ ಅಮಿತ್ ಶಾ ಅವರ ಹೇಳಿಕೆಯ ಪ್ರಕಾರ, ಯಾವುದೇ ರಾಜ್ಯ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಕಡಿಮೆ ಪ್ರಾತಿನಿಧ್ಯವನ್ನು ಎದುರಿಸುವುದಿಲ್ಲ. ಸೀಟು ಹೆಚ್ಚಳವು ಏಕರೂಪದ ಅನುಪಾತದ ಮಾದರಿಯನ್ನು ಅನುಸರಿಸುತ್ತದೆ. ಈ ಪ್ರಕ್ರಿಯೆ ಅದರ ಪಠ್ಯದಲ್ಲಿ ಬದಲಾವಣೆಗಳಿಲ್ಲದೆ ಅಸ್ತಿತ್ವದಲ್ಲಿರುವ ಕಾನೂನನ್ನು ಆಧರಿಸಿರುತ್ತದೆ. ಅನುಷ್ಠಾನವು 2029 ರ ನಂತರ ಮಾತ್ರ ನಡೆಯಲಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪ್ರಸ್ತುತ ಚುನಾವಣೆಗಳು ಪರಿಣಾಮ ಬೀರುವುದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಅಗತ್ಯವಿದೆ. ಸಂಸತ್ತಿನ ಮತ್ತು ರಾಷ್ಟ್ರಪತಿಗಳ ಅನುಮೋದನೆಯ ನಂತರ ಮಾತ್ರ ಜಾರಿಗೆ ಬರುತ್ತದೆ ಎಂದು ಸರ್ಕಾರ ಹೇಳಿದೆ. ಭಾರತವು ಸ್ವಾತಂತ್ರ್ಯದ ನಂತರ ಕೇವಲ ಮೂರು ಬಾರಿ, 1951, 1961 ಮತ್ತು 1971 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯನ್ನು ನಡೆಸಿದೆ. ಜನಸಂಖ್ಯಾ ನಿಯಂತ್ರಣ ಪ್ರಯತ್ನಗಳನ್ನು ರಾಜಕೀಯ ಪ್ರಾತಿನಿಧ್ಯದೊಂದಿಗೆ ಸಮತೋಲನಗೊಳಿಸಲು ಈ ಪ್ರಕ್ರಿಯೆಯನ್ನು ದಶಕಗಳಿಂದ ಸ್ಥಗಿತಗೊಳಿಸಲಾಗಿತ್ತು.
ಭಾಲ್ಕಿ | ದೇಶದ ಭವಿಷ್ಯ ರೂಪಿಸುವವರು ಶಿಕ್ಷಕರಾಗಿದ್ದಾರೆ : ಗುರುಬಸವ ಪಟ್ಟದೇವರು
ಭಾಲ್ಕಿ: ಶಿಕ್ಷಕರು ರಾಷ್ಟ್ರ ನಿರ್ಮಾಣದ ಭದ್ರ ಬುನಾದಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಗುರುಬಸವ ಪಟ್ಟದೇವರು ಹೇಳಿದ್ದಾರೆ. ನಗರದಲ್ಲಿ ಗುರುವಾರ ನಡೆದ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ–2026, ಡಾ. ಚನ್ನಬಸವ ಪಟ್ಟದೇವರ 37ನೇ ಸ್ಮರಣೋತ್ಸವ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವದ ಅಂಗವಾಗಿ 75 ಶಿಕ್ಷಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಸೈನಿಕರು ಗಡಿ ಕಾಯುವಂತೆ ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂದು ಅವರು ಹೇಳಿದರು. ಶಿಕ್ಷಕ ವೃತ್ತಿಯ ಕುರಿತು ಪೂಜ್ಯರಿಗೆ ಅಪಾರ ಗೌರವವಿದೆ ಎಂದು ಹೇಳಿದ ಅವರು, ಅವರ ಆಶಯದಂತೆ ಅನೇಕ ಶಿಕ್ಷಕರಿಗೆ ಸನ್ಮಾನ ನೀಡಲಾಗುತ್ತಿರುವುದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ರಾಜೇಶ್ವರದ ಶಿವಾಚಾರ್ಯರು ಮಾತನಾಡಿ, ಶಿಕ್ಷಕರು ಗುರುಸ್ವರೂಪರಾಗಿದ್ದು, ಅವರ ಮಾರ್ಗದರ್ಶನದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ದಾಕ್ಷಾಯಣಿ ತಾಯಿ ಅಧ್ಯಕ್ಷತೆ ವಹಿಸಿದ್ದರು. ಸಾಯಗಾಂವದ ಶಿವಾನಂದ್ ಮಹಾಸ್ವಾಮಿ, ಹುಡಗಿಯ ಚನ್ನಮಲ್ಲ ಮಹಾಸ್ವಾಮಿ, ಬಸವರಾಜ್ ದೇಶಮುಖ, ಅನೀಲ್ ಸಿಂಧೆ, ಉಮಾ ಖಂಡ್ರೆ, ಶರದ್ ಮಹಾರುದ್ರಪ್ಪ ಸಿರ್ಸೆ, ಎಲ್.ಜಿ.ಗುಪ್ತಾ, ಸಂತೋಷ್ ಖಂಡ್ರೆ, ಸಿದ್ರಾಮಯ್ಯ ಸ್ವಾಮಿ, ಸಂಜುಕುಮಾರ್ ಜ್ಯಾಂತೆ, ಮಲ್ಲಿಕಾರ್ಜುನ್ ಹಲ್ಮಂಡಗೆ, ಸೋಮನಾಥ್ ಮುದ್ದಾ, ರೋಹಿತ್ ವೈರಾಗೆ, ವಿನೋದ್ ಜಗತಾಪ್, ಮಹೇಶ್ ಧನ್ನೂರೆ, ಸುಧೀರ್ ನಾಯಕ್, ವಸಂತ್ ಪಾಟೀಲ್, ಕಾಶಿನಾಥ್ ಚಲ್ವಾ, ಸುಭಾಷ್ ಹುಲಸೂರೆ ಹಾಗೂ ತಿಪ್ಪಣ್ಣ ಶಿವಪುರೆ ಸೇರಿದಂತೆ ಅನೇಕರು ಇದ್ದರು. ಚಂದ್ರಕಾಂತ್ ಬಿರಾದಾರ್ ನಿರೂಪಿಸಿದರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಶರಣು ಸಮರ್ಪಣೆ ಮಾಡಿದರು.

35 C