SENSEX
NIFTY
GOLD
USD/INR

Weather

28    C
...

ಬಾಲಗಂಗಾಧರನಾಥ ಸ್ವಾಮಿಜಿಗೆ ಮರಣೋತ್ತರ ‘ಭಾರತ ರತ್ನ’ ಘೋಷಿಸಲು ಶಿಫಾರಸು : ಸಿಎಂ, ಡಿಸಿಎಂಗೆ ಶರತ್ ಬಚ್ಚೇಗೌಡ, ದಿನೇಶ್ ಗೂಳಿಗೌಡ ಮನವಿ

ಬೆಂಗಳೂರು : ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೆ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ. ಈ ಸಂಬಂಧ ಉಭಯ ಶಾಸಕರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಶ್ರೀಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ' ನೀಡಬೇಕೆಂಬುದು ಕೋಟ್ಯಂತರ ಭಕ್ತರ ಹಾಗೂ ಕನ್ನಡಿಗರ ಆಶಯವಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ. ಇಂದು ಆದಿಚುಂಚನಗಿರಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು ಸುಮಾರು 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಇವರ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಅವರ ಶೈಕ್ಷಣಿಕ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 60ಕ್ಕೂ ಹೆಚ್ಚು ವೇದ, ಆಗಮ ಹಾಗೂ ಸಂಸ್ಕೃತ ಪಾಠಶಾಲೆಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಉಳಿವಿಗಾಗಿ ಶ್ರೀಗಳು ಶ್ರಮಿಸಿದ್ದಾರೆ. ಗ್ರಾಮೀಣ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಲು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ಆರೋಗ್ಯ ಕಾಪಾಡಿದ್ದಾರೆ ಎಂದು ಶಾಸಕರು ಸ್ಮರಿಸಿದ್ದಾರೆ. ಜಾತಿ-ಮತದ ಭೇದವಿಲ್ಲದೆ ಲಕ್ಷಾಂತರ ಜನರಿಗೆ ಅನ್ನದಾಸೋಹ, ವಸತಿ ಮತ್ತು ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಎ.15ರಂದು ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳಿಗೆ ‘ಭಾರತ ರತ್ನ' ನೀಡುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು. ಶೀಘ್ರವಾಗಿ ಪ್ರಶಸ್ತಿ ಘೋಷಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ತಲುಪಿಸಿದ ಶ್ರೀಗಳ ಸೇವೆಗೆ ‘ಭಾರತ ರತ್ನ' ಗೌರವ ಸಲ್ಲುವುದು ಸಮಸ್ತ ಕನ್ನಡಿಗರಿಗೆ ಸಲ್ಲುವ ಗೌರವವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶರತ್ ಬಚ್ಚೇಗೌಡ ಹಾಗೂ ದಿನೇಶ್ ಗೂಳಿಗೌಡ ಕೋರಿದ್ದಾರೆ.  

ವಾರ್ತಾ ಭಾರತಿ 15 Apr 2026 12:28 am

ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತ ಕಟ್ಟಬೇಕು: ಪ್ರೊ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಪ್ರಸ್ತುತ ಜನಕೇಂದ್ರಿತವಾದ ಯೋಚನೆಗಳು ಹಿನ್ನಲೆಗೆ ಸರಿಯುತ್ತಿರುವಾಗ ನಾವೆಲ್ಲರೂ ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂಭಾಗ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ವತಿಯಿಮದ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ವಾದ ಸಂಚಿಕೆ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟ ರಾಷ್ಟ್ರೀಯವಾದ ಜನಕೇಂದ್ರಿತ ರಾಷ್ಟ್ರೀಯವಾದ. ಅದಕ್ಕಿಂತ ಹಿಂದೆ ಇದ್ದಂತ ರಾಷ್ಟ್ರೀಯವಾದಗಳೆಲ್ಲವೂ ಮತಕೇಂದ್ರಿತ ರಾಷ್ಟ್ರೀಯವಾದಗಳು. ಈಗಲೂ ಅನೇಕರು ಮತಕೇಂದ್ರಿತವಾದ ಭಾರತವನ್ನು ಕಟ್ಟಲು ಹೊರಡುತ್ತಿದ್ದಾರೆ ಎಂದರು. ಅಂಬೇಡ್ಕರ್ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಯಾಕೆಂದರೆ ಒಂದೆಡೆಯಲ್ಲಿ ಭಾರತದ ಸಂವಿಧಾನವನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿದೆ. ಸಂವಿಧಾನವನ್ನು ಇಟ್ಟುಕೊಂಡು ಸಂವಿಧಾನ ವಿರುದ್ಧದ ಚಳವಳಿಗಳು, ಕೆಲಸಗಳು ನಡೆಯುತ್ತಿವೆ. ಸಂವಿಧಾನದಲ್ಲಿ ಹೇಳಿದ ಅನುಚ್ಛೇದ 14, ಅನುಚ್ಛೇದ 15, ಅನುಚ್ಛೇದ 16ರಲ್ಲಿರುವ ಆಶಯಗಳನ್ನು ಈವತ್ತಿನ ಸಮಾಜ ಅಂಗೀರಿಸುತ್ತಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು. ಮುಸ್ಲಿಮ್‍ರು ಇಂತಹ ಕಡೆ ಅಂಗಡಿ ಇಡಬೇಕು, ಇಡಬಾರದು ಎನ್ನುವುದು ನಿರ್ಣಯ ಆಗುತ್ತಿದೆ. ಕಾನೂನುಗಳು ಇದ್ದವರಿಗೆ ಒಂದು ಇಲ್ಲದಿರುವರಿಗೆ ಒಂದು, ಹಿಂದುಗಳಿಗೊಂದು, ಮುಸಲ್ಮಾನರಿಗೊಂದು ಹೀಗಾಗಿದೆ. ಜನಗಳಿಗೆ ನ್ಯಾಯಾಂಗದ ಮೇಲೆ ನಂಬಿಕೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ ಚಿಂತನೆಗಳು ಗಟ್ಟಿಯಾಗಿ ಹಿಡಿದುಕೊಂಡು, ಅದನ್ನು ವರ್ತಮಾನಕ್ಕೆ ಒಗ್ಗಿಸುವ ಮತ್ತು ನಮ್ಮ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿ ಜನಗಳ ಹತ್ತಿರ ತೆಗೆದುಕೊಂಡು ಹೋಗಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. ಈ ಕೆಲಸವನ್ನು ಮಾಡುವುದಕ್ಕೆ ನಮಗೆ ದೊಡ್ಡಶಕ್ತಿಯಾಗಿ ಹಿನ್ನಲೆಯಲ್ಲಿರುವುದು ಅಂಬೇಡ್ಕರ್ ಅವರು. ನಮ್ಮನ್ನು ಕೈ ಹಿಡಿದು ಮುನ್ನಡಿಸುವ ಶಕ್ತಿ ಇರುವುದು ನಿಜವಾದ ಅರ್ಥದಲ್ಲಿ ಸಂವಿಧಾನ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ದಲಿತರು ಚಾರಿತ್ರಕವಾಗಿ ದೇಶವನ್ನು ನಡೆಸುವ ಹಕ್ಕಿದೆ. ಯಾಕೆಂದರೆ ಅತ್ಯಂತ ಶೋಷಿತರು. ಅವರು ಜವಾಬ್ದಾರಿಯಿಂದ ವರ್ತಿಸಬೇಕು. ಅದನ್ನು ಬೇಕಾಬಿಟ್ಟಿಯಾಗಿ ನಾಯಕತ್ವ ಸಿಕ್ಕಿದೆ ಎಂದು ಬೇರೆ ನಾಯಕತ್ವಗಳ ಜೊತೆಗೆ ಹೋಲಿಸಿಕೊಂಡು ಮಾಡುವ ಪ್ರಶ್ನೆಯಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್, ಲೇಖಕ ಡಾ.ನಟರಾಜ್ ಹುಳಿಯಾರ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.  

ವಾರ್ತಾ ಭಾರತಿ 15 Apr 2026 12:22 am

ಶೋಷಿತ ವರ್ಗಗಳ ಒಡಕು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ : ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು : ಶೋಷಿತ ವರ್ಗಗಳು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸುತ್ತಿದ್ದರು. ಆದರೆ ಈಗ ಶೋಷಿತ ವರ್ಗಗಳಲ್ಲಿಯೇ ಒಡಕು ಉಂಟಾಗುತ್ತಿದೆ. ಇದು ಬಾಬಾ ಸಾಹೇಬರಿಗೆ ಮಾಡುವ ದೊಡ್ಡ ಅವಮಾನ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮಂಗಳವಾರ ವಿಧಾನಸೌಧ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಬಹುಜನರಾಗಿರುವ ಕೆಳ ವರ್ಗಗಳ ಒಗ್ಗಟ್ಟನ್ನು ಒಡೆಯುವುದೇ ಮನುವಾದಿಗಳ ಮೊದಲ ಆದ್ಯತೆ ಆಗಿದೆ. ಬಹುಜನರು ಒಗ್ಗಟ್ಟಾಗಿ ಇಲ್ಲದೇ ಹೋದರೆ ಮುಂದೆ ಶೋಷಿತ ವರ್ಗಗಳು ನಾಯಿನರಿಗಳಂತೆ ಬದುಕಬೇಕಾಗುತ್ತದೆ ಎಂದು ಅವರು ಹೇಳಿದರು. ಲಂಡನ್ನಿನ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ ದಾಖಲೆ ಈಗಲೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಇದೆ. ಇನ್ನು ದೇಶದ ಬಹು ಜನರ ಬದುಕಿನ ಆಶಯಕ್ಕೆ ವಿರುದ್ಧವಾಗಿ ಧಾರ್ಮಿಕ ವಿಷದ ಕಂತೆಯಾಗಿದ್ದ ಮನುಸ್ಮೃತಿಯನ್ನು ಬಾಬಾ ಸಾಹೇಬರು ಸುಟ್ಟಿದ್ದಾರೆ. ಕುಡಿಯುವ ನೀರಿಗಾಗಿ ನಡೆದ ಜಗತ್ತಿನ ಮೊದಲ ಹೋರಾಟವಾದ ಮಹಾಡ್ ಚಳುವಳಿಯ ನೇತೃತ್ವವನ್ನು ಅವರು ವಹಿಸಿದ್ದರು. ಬಹು ಜನರ ಪರವಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಬಹುದೊಡ್ಡ ಧರ್ಮಯುದ್ಧ ಮಾಡಿದ ಜಗತ್ತಿನ ಮಹಾನ್ ನಾಯಕ ಎಂದರೆ ಅದು ಬಾಬಾ ಸಾಹೇಬರು ಎಂದು ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.

ವಾರ್ತಾ ಭಾರತಿ 15 Apr 2026 12:18 am

ಕಾರ್ಪೊರೇಟ್‌ ಆರ್ಥಿಕತೆ ದೇಶವನ್ನು ನಿಯಂತ್ರಿಸುತ್ತಿದೆ : ಕೋಟಿಗಾನಹಳ್ಳಿ ರಾಮಯ್ಯ

ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ವಾರ್ತಾ ಭಾರತಿ 15 Apr 2026 12:15 am

Bengaluru | ಹೆತ್ತ ಮಗಳ ಕೊಲೆಗೈದು ತಾಯಿಯೂ ಆತ್ಮಹತ್ಯೆ!

ಬೆಂಗಳೂರು : ಹೆತ್ತ ಮಗಳನ್ನೇ ಕೊಲೆಗೈದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವೈಟ್‍ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ವರದಿಯಾಗಿದೆ. ಕಾರುಣ್ಯಾ(17) ಹತ್ಯೆಯಾದ ಮಗಳು, ಸುವರ್ಣಾ(40) ಆತ್ಮಹತ್ಯೆ ಮಾಡಿಕೊಂಡ ತಾಯಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎ.14ರಂದು ಸುಮಾರು 11 ಗಂಟೆ ವೇಳೆಗೆ ವೈಟ್‍ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ಬಳಿಯಿರುವ ಮನೆಯಲ್ಲಿ ಕುಟುಂಬಸ್ಥರು ಇರುವ ಸಂದರ್ಭದಲ್ಲೇ ತಾಯಿ ಸುವರ್ಣ ತನ್ನ ಹದಿಹರೆಯದ ಪುತ್ರಿ ಕಾರುಣ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆ ಬಳಿಕ ತಾನು ಕೂಡ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ವೈಟ್‍ಫೀಲ್ಡ್ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.  

ವಾರ್ತಾ ಭಾರತಿ 15 Apr 2026 12:08 am

ಮಣಿಪುರದ ಬಿಷ್ಣುಪುರದಲ್ಲಿ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರ ಘರ್ಷಣೆ; ನಾಲ್ವರ ಬಂಧನ

ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿ

ವಾರ್ತಾ ಭಾರತಿ 15 Apr 2026 12:08 am

IPL 2026 | ಸ್ಯಾಮ್ಸನ್, ಬ್ರೆವಿಸ್, ಆಯುಷ್ ಸಂಘಟಿತ ಪ್ರದರ್ಶನ: ಕೆಕೆಆರ್ ವಿರುದ್ಧ ಸಿಎಸ್‌ಕೆ ಜಯಭೇರಿ

ಚೆನ್ನೈ: ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್(48 ರನ್, 32 ಎಸೆತ, 4 ಬೌಂಡರಿ,3 ಸಿಕ್ಸರ್), ಡೆವಾಲ್ಡ್ ಬ್ರೆವಿಸ್(41 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ಆಯುಷ್ ಮ್ಹಾತ್ರೆ(38 ರನ್, 17 ಎಸೆತ, 6 ಬೌಂಡರಿ,2 ಸಿಕ್ಸರ್) ಅವರ ಸಂಘಟಿತ ಪ್ರದರ್ಶನ, ನೂರ್ ಅಹ್ಮದ್(3-21) ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 32 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಸಿಎಸ್‌ಕೆ ಎರಡನೇ ಗೆಲುವು ದಾಖಲಿಸಿದರೆ, ಕೆಕೆಆರ್ ಸೋಲಿನ ಸುಳಿಯಿಂದ ಹೊರಬರುವಲ್ಲಿ ವಿಫಲವಾಯಿತು. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 22ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ಯಾವ ಹಂತದಲ್ಲೂ ಹೋರಾಟ ನೀಡದೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೆಕೆಆರ್ ಪರ ರಮಣ್‌ದೀಪ್ ಸಿಂಗ್(35 ರನ್, 23 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ರೋವ್‌ಮನ್ ಪೊವೆಲ್(ಔಟಾಗದೆ 31, 22 ಎಸೆತ), ನಾಯಕ ರಹಾನೆ(28 ರನ್, 22 ಎಸೆತ), ರಘುವಂಶಿ(27 ರನ್, 19 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. ಸಿಎಸ್‌ಕೆ ಪರ ನೂರ್ ಅಹ್ಮದ್(3-21)ಯಶಸ್ವಿ ಪ್ರದರ್ಶನ ನೀಡಿದರು. ಅನ್ಶುಲ್ ಕಾಂಬೋಜ್ (2-32)ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಸ್ಯಾಮ್ಸನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಋತುರಾಜ್ ಗಾಯಕ್ವಾಡ್(7 ರನ್)ಬೇಗನೆ ಔಟಾದರು. ಆಗ ಎರಡನೇ ವಿಕೆಟ್‌ಗೆ 47 ರನ್ ಸೇರಿಸಿದ ಸ್ಯಾಮ್ಸನ್ ಹಾಗೂ ಆಯುಷ್ ತಂಡವನ್ನು ಆಧರಿಸಿದರು. ಆಯುಷ್ ಹಾಗೂ ಸ್ಯಾಮ್ಸನ್ ಔಟಾದಾಗ ಸಿಎಸ್‌ಕೆ 111 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ಗೆ 51 ರನ್ ಜೊತೆಯಾಟದಲ್ಲಿ ಭಾಗಿಯಾದ ಬ್ರೆವಿಸ್ ಹಾಗೂ ಸರ್ಫರಾಝ್ ಖಾನ್(23 ರನ್, 18 ಎಸೆತ)ತಂಡದ ಮೊತ್ತವನ್ನು ಹೆಚ್ಚಿಸಿದರು. ಶಿವಂ ದುಬೆ(ಔಟಾಗದೆ 13 ರನ್)ಹಾಗೂ ಓವರ್ಟನ್(ಔಟಾಗದೆ 7) ಸಿಎಸ್‌ಕೆ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ವಿಫಲರಾದರು. ಕೆಕೆಆರ್ ಪರ ಕಾರ್ತಿಕ್ ತ್ಯಾಗಿ(2-35)ಯಶಸ್ವಿ ಪ್ರದರ್ಶನ ನೀಡಿದರು. 

ವಾರ್ತಾ ಭಾರತಿ 14 Apr 2026 11:41 pm

Vijayapura | ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ಪುತ್ರನ ಕೊಲೆ

ವಿಜಯಪುರ : ʼನೋಡಲು ತನ್ನಂತಿಲ್ಲʼ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪುತ್ರನನ್ನೇ ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಳೆದ ಮಾ. 15ರಂದು ಈ ಘಟನೆ ನಡೆದಿದೆ. ಈ ಮೊದಲು ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟಿದ್ದ ಕುಟುಂಬಸ್ಥರೇ ಇದೀಗ ತಂದೆಯೇ ಪುತ್ರನನ್ನು ಕೊಂದಿದ್ದಾನೆಂದು ದೂರು ದಾಖಲಿಸಿದ್ದು, ಇಡೀ ಪ್ರಕರಣ ರೋಚಕ ತಿರುವು ಪಡೆದಿದೆ. ಘಟನೆ ಹಿನ್ನೆಲೆ: ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಮಾ. 15ರಂದು ತನ್ನ ಆರು ವರ್ಷದ ಪುತ್ರ ಸಿದ್ಧಾರ್ಥನನ್ನು ಶಾಲೆಗೆ ಸೇರಿಸುವುದಾಗಿ ಮನೆಯಿಂದ ಕರೆದೊಯ್ದಿದ್ದಾನೆ. ಬಳಿಕ ಮನೆಗೆ ಬಂದು ಮಗನನ್ನು ಶಾಲೆಗೆ ಸೇರಿಸಿದ್ದಾಗಿ ತಿಳಿಸಿದ್ದಾನೆ. ಎ.1ರಂದು ಸಿದ್ಧಾರ್ಥನ ಜನ್ಮ ದಿನವಿದ್ದು, ಆಚರಣೆಗಾಗಿ ಕರೆತರಲು ಮಲ್ಲಿಕಾರ್ಜುನನ ಪತ್ನಿ ಭಾಗ್ಯಶ್ರೀ ದುಂಬಾಲು ಬಿದ್ದಿದ್ದಾಳೆ. ಕಡೇ ಪಕ್ಷ ಫೋನ್ ಮಾಡಿಯಾದರೂ ಮಗನೊಂದಿಗೆ ಮಾತನಾಡಿಸು ಎಂದು ಒತ್ತಾಯಿಸಿದ ಬಳಿಕ, ಯಾರ ಜೊತೆಗೋ ಮಾತನಾಡಿಸಿದ್ದು, ಮಗನ ಕೈಗೆ ಮೊಬೈಲ್ ಕೊಡುವಂತೆ ಹೇಳಿದಾಗ ಆತ ಮಾತನಾಡಲು ನಿರಾಕರಿಸುತ್ತಿರುವುದಾಗಿ ಅಪರಿಚಿತರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಭಾಗ್ಯಶ್ರೀ ಮಗನನ್ನು ಕರೆದುಕೊಂಡು ಬರೋಣವೆಂದು ಒತ್ತಾಯಿಸಿದ್ದು, ಮಲ್ಲಿಕಾರ್ಜುನ ಬೈಕ್ ಮೇಲೆ ಕರೆದೊಯ್ದು ಸಿಂದಗಿ ಬಸ್ ನಿಲ್ದಾಣ ಮತ್ತಿತರ ಕಡೆ ಸುತ್ತಾಡಿಸಿ ಬಂದಾಳ ಗ್ರಾಮದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿಸಿದ್ದಾನೆ. ವಾಪಸ್ ನಾಗಠಾಣಕ್ಕೆ ಬರುತ್ತಿರಬೇಕಾದರೆ ಮಾರ್ಗಮಧ್ಯೆ ಭಾಗ್ಯಶ್ರೀ ಹಠ ಹಿಡಿದಿದ್ದಾರೆ. ಆದರೆ ಮಲ್ಲಿಕಾರ್ಜುನ ನನ್ನನ್ನು ಕ್ಷಮಿಸು ಎಂದಷ್ಟೇ ಹೇಳಿದ್ದಾನೆ. ಬಳಿಕ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಹಿರಿಯರು ಸತ್ಯ ಬಾಯಿ ಬಿಡುವಂತೆ ಒತ್ತಾಯಿಸತೊಡಗಿದ್ದಾಗ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ಅನಂತರ ಪೊಲೀಸರು ಕರೆತಂದು ವಿಚಾರಣೆ ನಡೆಸಲಾಗಿ ಸತ್ಯ ಬಯಲಾಗಿದೆ. ಕರಾಡದಲ್ಲಿ ಕೊಲೆ: ಮಾ. 16ರಂದು ಮಹಾರಾಷ್ಟ್ರದ ಕರಾಡ ಬಳಿಯ ಕೃಷ್ಣಾ ನದಿಯಲ್ಲಿ ಪುತ್ರನನ್ನು ಕೊಂದು ಎಸೆದಿರುವ ಮಲ್ಲಿಕಾರ್ಜುನ ಬಳಿಕ ಸತ್ಯ ಮರೆಮಾಚಲು ಹಲವು ಕಸರತ್ತು ನಡೆಸಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಕರಾಡದಲ್ಲಿ ಬಾಲಕನೋರ್ವನ ಮೃತದೇಹ ಪತ್ತೆಯಾಗಿದ್ದು, ಮೃತದೇಹ ಪರಿಶೀಲಿಸಲಾಗಿ ಸಿದ್ಧಾರ್ಥನದ್ದೇ ಎಂದು ಗೊತ್ತಾಗಿದೆ.

ವಾರ್ತಾ ಭಾರತಿ 14 Apr 2026 11:39 pm

ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಕೈಚಳಕಕ್ಕೆ ಸುಸ್ತಾದ ಕೋಲ್ಕತ್ತಾ; ಚೆನ್ನೈ ಸೂಪರ್ ಕಿಂಗ್ಸ್ ಗೆ ಸತತ ಎರಡನೇ ಜಯಭೇರಿ

ಪ್ರಾರಂಭದ 2 ಪಂದ್ಯಗಳನ್ನು ಸತತವಾಗಿ ಸೋತು ಸಂಪೂರ್ಣ ಕಳೆಗುಂದಿದ್ದ ತಂಡ ಇದೀಗ ನಿರಂತರ ಎರಡನೇ ಜಯ ಗಳಿಸುವ ಮೂಲಕ ತನ್ನ ವೈಭವದ ದಿನಗಳನ್ನು ಮತ್ತೆ ಕಾಣುವ ಮುನ್ಸೂಚನೆ ನೀಡಿದೆ. ಎಡಗೈ ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಬಿಗು ದಾಳಿಯ ಪರಿಣಾಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 32 ರನ್ ಗಳಿಂದ ಸೋಲಿಸಿತು. ಈ ಮೂಲಕ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವುಗಳನ್ನು ಕಂಡಿರುವ ಋತುರಾಜ್ ಗಾಯಕ್ವಾಡ್ ಬಳಗ ಒಟ್ಟು 4 ಅಂಕಗಳೊಂದಿಗೆ ಯಲ್ಲಿ 9ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದೆ. ಇನ್ನು ಈವರೆಗೆ ಆಡಿರುವ ಪಂದ್ಯಗಳಲ್ಲಿ ಒಂದು ಗೆಲುವನ್ನೂ ಕಾಣದಿರುವ ಕೋಲ್ಕತಾ ಕೊನೇ ಸ್ಥಾನಿಯಾಗಿಯೇ ಉಳಿದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಏಪ್ರಿಲ್ 14ರ ಮಂಗಳವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 192 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ಕಳೆದುಕೊಂಡು ಕೇವಲ 160 ರನ್ ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ()

ವಿಜಯ ಕರ್ನಾಟಕ 14 Apr 2026 11:33 pm

RCB Playing 11 Prediction: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ

RCB Playing 11: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ. ಬುಧವಾರ (ಏಪ್ರಿಲ್ 15) ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜಸ್ಥಾನ್ ರಾಯಲ್ಸ್ ವಿರುದ್ಧದ

ಒನ್ ಇ೦ಡಿಯ 14 Apr 2026 11:32 pm

ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ತಕ್ಷಣ ನಡೆಯಲಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹ

ಮಂಗಳೂರು : ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ತಕ್ಷಣ ಕ್ರಮಕೈ ಗೊಳ್ಳಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಸುಮಾರು 2133 ಕೋಟಿ ರೂ. ಅನುದಾನ ವನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಣ ಮಾರ್ಚ್ ಅಂತ್ಯದವರೆಗೂ ಬಂದಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ನಡೆಸಿ ಆರ್ಥಿಕ ಸಂಕಷ್ಟ ಕ್ಕೀಡಾಗಿವೆ ಎಂದು ಅವರು ಹೇಳಿದರು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ನಡೆಸದೇ ಇರುವುದರಿಂದ ಹಾಗೂ ಆಯಾ ಕಾಲಕ್ಕೆ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡದಿರುವುದರಿಂದ ಈ ಅನುದಾನ ತಡೆಹಿಡಿಯಲಾಗಿದೆ ಎಂದು ಆಯೋಗವೇ ಕಾರಣ ನೀಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರ ಇದೆ ಎಂಬ ಕಾರಣ ನೀಡುವುದಾದರೆ, ರಾಜ್ಯದ 27 ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೇರಳ ಮತ್ತು ತಮಿಳು ನಾಡು ರಾಜ್ಯಗಳಿಗೆ ಅನುದಾನ ಬಿಡುಗಡೆ ಯಾಗಿದೆ ಎಂದರು. ಈ ಹಿನ್ನಲೆಯಲ್ಲಿ ಕೇರಳ ರಾಜ್ಯದ ಮಾದರಿಯನ್ನು ಅನುಸರಿಸಿ ತಕ್ಷಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಯನ್ನು ನಡೆಸಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ಕೇರಳ ಮಾದರಿಯಾಗಿದೆ. ಅಲ್ಲಿ ಪ್ರತಿ 5ವರ್ಷಗಳಿಗೊಮ್ಮೆ ಚುನಾವಣೆ ನಡೆಸುತ್ತಾರೆ. ರಾಜ್ಯದಲ್ಲಿ ಈ ಮಾದರಿ ಅನುಸರಿಸಲಿ ಎಂದವರು ಆಗ್ರಹಿಸಿದರು. ಈ ಕುರಿತು ಸ್ಥಳೀಯ ಸಂಸದರು, ವಿಧಾನ ಸಭಾ ಸದಸ್ಯರು,ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮೌನವಾಗಿರುವುದನ್ನು ಅವರು ಆಕ್ಷೇಪಿಸಿದರು. ಕೇಂದ್ರ ಸರ್ಕಾರವು ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಆಡಳಿತ ಇಲ್ಲದಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತ ಇರುವುದರಿಂದ ಹಣ ಬಿಡುಗಡೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಚುನಾವಣೆಗಳನ್ನು ನಡೆಸದೇ ಆರು ವರ್ಷಗಳಾಗಿದ್ದು, ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ತಕ್ಷಣ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ದಾವಣಗೆರೆಯಲ್ಲಿ ಎಸ್‌ಡಿಪಿಐ ಗೆಲ್ಲುವ ವಿಶ್ವಾಸವಿದ್ದು, ಎಲ್ಲಾ ಜಾತಿ-ಧರ್ಮದ ಜನರು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮುಸ್ಲಿಂ ಮತಗಳು ಹಾಗೂ ಶೇ.75 ಅಹಿಂದ ಮತಗಳಿವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಜನರು ಎಸ್‌ಡಿಪಿಐ ಪರ ಮತ ಚಲಾಯಿ ಸಿದ್ದಾರೆ ಎಂದು ಹೇಳಿದರು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸೋಲಿನ ಭೀತಿಯಿಂದ ಉಂಟಾದ ಹತಾಶೆಯ ಪ್ರತಿಕ್ರಿಯೆಗಳಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕತ್ವವನ್ನು ದುರ್ಬಲ ಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಹಿಂದಿನ ಕೆಲವು ಘಟನೆಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳದ ಕಾಂಗ್ರೆಸ್ ನಾಯಕತ್ವದ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಂಟ್ವಾಳದ ಮಾಜಿ ಕಾಂಗ್ರೆಸ್ ಶಾಸಕರು ಪರಾಭವ ಗೊಂಡಾಗ, ಪಕ್ಷ ವಿರೋಧಿ ಚಟುವಟಿಕೆ ನಡೆದ ಕಾರಣ ಸೋಲಾಗಿದೆ ಎಂದು ಆರೋಪ ಕೇಳಿ ಬಂದರೂ ಯಾರಾ ಮೇಲು ಕ್ರಮ ಆಗಿಲ್ಲ ,2018 ರ ಸಮ್ಮಿಶ್ರ ಸರಕಾರದ 14 ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷ ವಿರೋಧವಾಗಿ ನಡೆದು ಕೊಂಡಾಗಲೂ ಯಾರ ಮೇಲೂ ಕ್ರಮ ಆಗಿಲ್ಲ ಹಾಗೂ ಇತರರ ಹಲವು ಸಂದರ್ಭಗಳಲ್ಲಿ ಆರೋಪಗಳಿದ್ದರೂ ಕಾಂಗ್ರೆಸ್ ಪಕ್ಷದಿಂದ ಕ್ರಮ ಕೈಗೊಳ್ಳಲಾಗಿಲ್ಲ ಆದರೆ ಈಗ ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಭಾವಿ ನಾಯಕರ ಮೇಲೆ ಆರೋಪಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಟೀಕಿಸಿದರು. ಇದೀಗ ಮುತ್ಸದ್ಧಿ ರಾಜಕಾರಣಿ ನಸೀರ್ ಅಹ್ಮದ್ ಮೇಲೂ ಕ್ರಮ ಕೈಗೊಳ್ಳು ತ್ತಿರುವುದು ಪ್ರಶ್ನಾರ್ಹ ವಾಗಿದೆ. ಯುವಜನತೆ ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತ ಬೇಕು. ದಾವಣಗೆರೆ ಚುನಾವಣೆ ಒಂದು ಸ್ಯಾಂಪಲ್ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ರಾಜಕೀಯ ಬದಲಾವ ಣೆಗಳು ಕಾಣಿಸಿ ಕೊಳ್ಳಲಿವೆ ಎಂದು ಹೇಳಿದರು. ಮಂಗಳೂ ರಿನಲ್ಲಿ ಯಂಗ್ ಡೆಮಾಕ್ರಟಿಕ್ ಯುವ ಘಟಕವನ್ನು ಉದ್ಘಾಟಿಸಲಾಗಿದ್ದು, 15 ದಿನಗಳಲ್ಲಿ ಸಮಿತಿ ರಚನೆಗೊಳ್ಳಲಿದೆ ಎಂದರು. ದಾವಣ ಗೆರೆಯಲ್ಲಿ ಎಸ್‌ಡಿಪಿಐ ಗೆಲ್ಲುವ ವಿಶ್ವಾಸವಿದ್ದು, ಎಲ್ಲಾ ಜಾತಿ-ಧರ್ಮದ ಜನರು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯ ಅತ್ತಾವುಲ್ಲಾ ಜೋಕಟ್ಟೆ, ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 11:21 pm

ಮಂಗಳೂರು ಸಹಾಯಕ ಪೊಲೀಸ್ ಆಯುಕ್ತ ನಜ್ಮಾ ಫಾರೂಕಿಗೆ ಗೌರವ ಸನ್ಮಾನ

ಮುಲ್ಕಿ: ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ನಿಷ್ಠಾವಂತ ಸೇವೆಗಾಗಿ ನೀಡುವ ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಮುಖ್ಯಮಂತ್ರಿ ಪದಕ ಗೌರವಕ್ಕೆ ಭಾಜನರಾದ ಮಂಗಳೂರು ನಗರ ಸಂಚಾರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಅವರಿಗೆ ಮುಲ್ಕಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವು ಮಂಗಳವಾರ ಸಂಜೆ ಮೂಲ್ಕಿಯ ಪುನರೂರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು, ಪೊಲೀಸ್ ಇಲಾಖೆ ಯಲ್ಲಿ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ, ಸಾರ್ವಜನಿಕವಾಗಿ ಅವರಿಗೆ ನೀಡುವ ಅಭಿನಂದನೆಗಳು ಅದು ನಮ್ಮೆಲ್ಲರ ಕರ್ತವ್ಯ ಎಂದು ನಜ್ಮಾ ಫಾರೂಕಿ ಅವರ ಪ್ರಾಮಾಣಿಕ ಸೇವೆಯ ಬಗ್ಗೆ ಗೌರವ ವ್ಯಕ್ತಪಡಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಮನ್ಸೂರ್ ಮುಲ್ಕಿ ಅವರು ರಾಷ್ಟ್ರೀಯ ಹೆದ್ದಾರಿ 66'ರ ಮುಲ್ಕಿ, ಹಳೆಯಂಗಡಿ ಹಾಗೂ ಪಾವಂಜೆ ಪರಿಸರದಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಂಚಾರಿ ಇಲಾಖೆಯ ಗಮನಕ್ಕೆ ತಂದರು. ವೇದಿಕೆಯಲ್ಲಿ, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಹಳೆಯಂಗಡಿ ಪಿ.ಸಿ.ಎ ಬ್ಯಾಂಕಿನ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಸುನಿಲ್ ಆಳ್ವ, ಹರೀಶ್ ಪುತ್ರನ್, ರಾಮದಾಸ್ ನಾಯಕ್, ಶ್ರೀಮತಿ ಶ್ವೇತ ಪಳ್ಳಿ ಮುಲ್ಕಿ, ಸತೀಶ್ ಅಂಚನ್, ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮುಲ್ಕಿ ನಾಗರಿಕ ಹಿತ ರಕ್ಷಣಾ ಸಮಿತಿಯ ಸಂಚಾಲಕರಾದ ವಿನೋದ್ ಬೆಳ್ಳಾಯರು ಅತಿಥಿಗಳನ್ನು ಸ್ವಾಗತಿಸಿ, ಮನ್ಸೂರ್ ಮುಲ್ಕಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ರವೀಶ್ ಕಾಮತ್, ರಮೇಶ್ ಅಂಗಡಿಗ, ಸಾಧು ಅಂಚನ್, ಮುಲ್ಕಿ ನಗರಸಭೆ ಸದಸ್ಯ ಪುತ್ತುಬಾವ, ಶೈಲೇಶ್ ಮೂಲ್ಕಿ, ಅಶೋಕ್ ಜನನಿ, ಸದಾಶಿವ ಹೊಸದುರ್ಗ, ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು, ನಂದಾ ಪಾಯಸ್, ರೇಷ್ಮಾ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 11:12 pm

RCB Vs LSG: ಬೆಂಗಳೂರಿನಲ್ಲಿ ಆರ್‌ಸಿಬಿ-ಎಲ್‌ಎಸ್‌ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?

RCB VS LSG IPL 2026: ಐಪಿಎಲ್‌ 2026ರ 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಸತತ ಎರಡನೇ ಜಯದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ, ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಹಾಗಾದ್ರೆ, ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ?

ಒನ್ ಇ೦ಡಿಯ 14 Apr 2026 11:03 pm

ದಿನದ 24 ಗಂಟೆಯೂ EVM ಸಂಗ್ರಹ ಕೇಂದ್ರಗಳ ಸುತ್ತ ಕಾವಲಿರಿ: ಪಕ್ಷದ ಮತಗಟ್ಟೆ ಏಜೆಂಟ್ ಗಳಿಗೆ ಕೇರಳ ವಿಪಕ್ಷ ನಾಯಕ ವಿ.ಡಿ.ಸತೀಶನ್ ಸೂಚನೆ

ತಿರುವನಂತಪುರಂ: ಕೇರಳದಲ್ಲಿ ವಿಧಾನಸಭಾ ಚುನಾವಣಾ ಕಾವು ಏರಿರುವ ಬೆನ್ನಿಗೇ, ಚುನಾವಣಾ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸಲು ಇವಿಎಂ ಸಂಗ್ರಹ ಕೇಂದ್ರಗಳ ಸುತ್ತ ಕಟ್ಟೆಚ್ಚರ ವಹಿಸಬೇಕು ಹಾಗೂ ನಿರಂತರವಾಗಿ ನಿಗಾವಹಿಸಬೇಕು ಎಂದು ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಯುಡಿಎಫ್ ಮೈತ್ರಿಕೂಟದ ಎಲ್ಲ 140 ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟ್ ಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಯುಡಿಎಫ್ ಮುಖ್ಯಸ್ಥರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಹಾಲಿ ನಿಯಮಗಳತ್ತ ಬೊಟ್ಟು ಮಾಡಿರುವ ವಿ.ಡಿ.ಸತೀಶನ್, ಇವಿಎಂ ಸ್ಟ್ರಾಂಗ್ ರೂಂಗಳಲ್ಲಿ ಅಳವಡಿಸಲಾಗಿರುವ ನಿಗಾವಣೆ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸುವ ನಿಯಂತ್ರಣ ಕೊಠಡಿಗಳಿಗೆ ಅಭ್ಯರ್ಥಿಗಳು ತಮ್ಮ ಪ್ರತಿನಿಧಿಗಳನ್ನು ನಿಯೋಜಿಸಬಹುದಾಗಿದೆ ಎಂದು ಹೇಳಿದ್ದಾರೆ. ಈ ಸೌಲಭ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು, ಪ್ರಕ್ರಿಯೆಗಳ ಕಣ್ಣಿಡಲು ದಿನದ 24 ಗಂಟೆಯೂ ತಮ್ಮ ನಿಯೋಜಿತ ಪ್ರತಿನಿಧಿಗಳು ಅಲ್ಲಿ ಹಾಜರಿರುವುದನ್ನು ಖಾತರಿಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ. ಇದನ್ನು ಜಾರಿಗೆ ತರಲು ಸಂಬಂಧಿತ ಜಿಲ್ಲಾಧಿಕಾರಿಗಳಿಂದ ಅಗತ್ಯ ಪರವಾನಗಿಯನ್ನು ಪಡೆಯುವಂತೆ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಗಳು ಹಾಗೂ ಅವರ ಮುಖ್ಯ ಚುನಾವಣಾ ಏಜೆಂಟ್ ಗಳಿಗೆ ಅವರು ಸೂಚಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಂಬಿಕೆಯನ್ನು ಮರುಸ್ಥಾಪಿಸಲು ನಿಯಂತ್ರಣ ಕೊಠಡಿಗಳಲ್ಲಿ ಯುಡಿಎಫ್ ಪ್ರತಿನಿಧಿಗಳ ಅಡಚಣೆರಹಿತ ಉಪಸ್ಥಿತಿ ಅತ್ಯಗತ್ಯವಾಗಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.

ವಾರ್ತಾ ಭಾರತಿ 14 Apr 2026 10:58 pm

ಪಿಎಸ್‌ಎಲ್‌ನಿಂದ ಝಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರ್ಬನಿ ಎರಡು ವರ್ಷ ನಿಷೇಧ

ಕರಾಚಿ: ಝಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರ್ಬನಿ ಅವರನ್ನು ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಭಾಗವಹಿಸದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ)ಮಂಗಳವಾರ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಮುಝರ್ಬನಿ 2026ರ ಋತುವಿನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿ ಪರ ಸಹಿ ಹಾಕಿದ್ದರು. ಆ ನಂತರ ಪಿಎಸ್‌ಎಲ್ ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್)ಭಾಗವಹಿಸಿದ್ದಾರೆ. ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಗಿಂತ ಮೊದಲು ವೇಗದ ಬೌಲರ್ ಮುಝರ್ಬನಿ ಅವರನ್ನು ಐಪಿಎಲ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ‘ಶಿಸ್ತು ಸಮಿತಿಯು ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಝಿಂಬಾಬ್ವೆಯ ಕ್ರಿಕೆಟಿಗ ಬ್ಲೆಸ್ಸಿಂಗ್ ಮುಝರ್ಬನಿ ಅವರನ್ನು ಎಚ್‌ಬಿಎಲ್ ಪಿಎಸ್‌ಎಲ್‌ನ ಮುಂದಿನ ಎರಡು ಆವೃತ್ತಿಗಳಲ್ಲಿ ಭಾಗವಹಿಸಲು ಅನರ್ಹ ಎಂದು ಘೋಷಿಸಿದೆ. ಈ ನಿಷೇಧ ತಕ್ಷಣದಿಂದ ಜಾರಿಗೆ ಬರಲಿದೆ. ಮುಝರ್ಬನಿ ವರ್ತನೆಯು ಲೀಗ್‌ನ ವೃತ್ತಿಪರ ಚೌಕಟ್ಟನ್ನು ದುರ್ಬಲಗೊಳಿಸುತ್ತದೆ’ ಎಂದು ಪಿಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ. 29ರ ವಯಸ್ಸಿನ ಮುಝರ್ಬನಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತಾನಾಡಿದ ಎರಡನೇ ಐಪಿಎಲ್ ಪಂದ್ಯದಲ್ಲಿ 41 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು.

ವಾರ್ತಾ ಭಾರತಿ 14 Apr 2026 10:49 pm

PSLನಲ್ಲಿ ಪ್ರೇಕ್ಷಕರೇಕಿಲ್ಲ ಎಂದು ಕೇಳಿದ್ರೆ `ಭಾರತದಲ್ಲಿ ಇಂಧನವಿಲ್ಲ' ಎಂದ ಮೊಹ್ಸಿನ್ ನಖ್ವಿ!; ಅಜಯ್ ಜಡೇಜಾ ಕೌಂಟರ್ ಮಾತ್ರ ಸೂಪರ್

ಈ ಮೊಹ್ಸಿನ್ ನಖ್ವಿ ಮಾಡುವ ಜೋಕ್ ಗಳು ಒಂದೆರಡಲ್ಲ. ಇಲ್ಲವಾದಲ್ಲಿ ಪಾಕಿಸ್ತಾನದಲ್ಲಿ ಪಿಎಸ್ ಎಲ್ ಗೆ ಜನ ಭಾರತಕ್ಕೂ ಏನು ಸಂಬಂಧ? ಪತ್ರಕರ್ತನೊಬ್ಬ ಅಲ್ಲಿನ ಕ್ರಿಕೆಟ್ ಲೀಗ್ ಗೆ ಜನರ ಬರುವಿಕೆಗೆ ನಿಷೇಧ ಯಾಕೆ ಎಂದು ಕೇಳಿದರೆ, ನಖ್ವಿ ಮಾತ್ರ ಚಿತ್ರ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ.. ಪಾಕಿಸ್ತಾನದ ಇಂಧನ ಕೊರತೆಯಿಂದಾಗಿ ಪಿಎಸ್ಎಲ್ (PSL) ಪಂದ್ಯಗಳಿಗೆ ಪ್ರೇಕ್ಷಕರಿಲ್ಲಗೆ ನಿರ್ಬಂಧ ಹೇರಿರುವ ಬಗ್ಗೆ ಅವರು ಭಾರತದಲ್ಲಿ ಪೆಟ್ರೋಲ್ ಕೊರತೆಯಿದೆ ಎಂದು ನೀಡಿದ ಆಧಾರರಹಿತ ಹೇಳಿಕೆ ನಗೆಪಾಟಲಿಗೀಡಾಗಿದೆ. ಭಾರತದಲ್ಲಿ ಇಂಧನ ಪೂರೈಕೆ ಸ್ಥಿರವಾಗಿದ್ದರೂ, ನಖ್ವಿ ಹಸಿ ಸುಳ್ಳು ಹೇಳಿದ್ದಾರೆಂದು ನೆಟ್ಟಿಗರು ಹಾಗೂ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ವಿಜಯ ಕರ್ನಾಟಕ 14 Apr 2026 10:49 pm

ಪಶ್ಚಿಮ ಏಷ್ಯಾ ಸಂಘರ್ಷ: 4 ಅಂಶಗಳ ಶಾಂತಿ ಪ್ರಸ್ತಾಪ ಮುಂದಿರಿಸಿದ ಚೀನಾ

ಬೀಜಿಂಗ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಉದ್ದೇಶದ 4 ಅಂಶಗಳ ಪ್ರಸ್ತಾಪವನ್ನು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮುಂದಿರಿಸಿದ್ದಾರೆ ಎಂದು `ಕ್ಸಿನ್‍ಹುವ ಸುದ್ದಿಸಂಸ್ಥೆ' ಮಂಗಳವಾರ ವರದಿ ಮಾಡಿದೆ. ಯುಎಇ ನಾಯಕರೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಜಿಂಪಿಂಗ್ ಈ ಯೋಜನೆಯನ್ನು ಮುಂದಿರಿಸಿದ್ದಾರೆ. ಯೋಜನೆಯು ಮಧ್ಯಪ್ರಾಚ್ಯದ ದೇಶಗಳ ನಡುವೆ ಶಾಂತಿಯುತ ಸಹಬಾಳ್ವೆಯ ಪ್ರಾಮುಖ್ಯತೆಯನ್ನು ಎತ್ತಿತೋರಿಸಿದೆ. ರಾಷ್ಟ್ರಗಳು ಪರಸ್ಪರರ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮಗಳನ್ನು ತಪ್ಪಿಸಬೇಕು. ಪ್ರದೇಶದಾದ್ಯಂತ ಅಭಿವೃದ್ಧಿ ಮತ್ತು ಭದ್ರತಾ ನೀತಿಗಳ ನಡುವೆ ಉತ್ತಮ ಸಮನ್ವಯ ಇರಬೇಕು. ಅಂತರರಾಷ್ಟ್ರೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದ್ದು ಈ ಆದ್ಯತೆಗಳ ಮೂಲಕ ದೀರ್ಘಾವಧಿಯ ಸ್ಥಿರತೆಯನ್ನು ಸಾಧಿಸಬಹುದು ಎಂದು ಚೀನಾ ಪ್ರತಿಪಾದಿಸಿದೆ.

ವಾರ್ತಾ ಭಾರತಿ 14 Apr 2026 10:45 pm

ಅಮೆರಿಕದ ವ್ಯವಹಾರಗಳಿಂದ ದೂರ ಇರಬೇಕು: ಪೋಪ್‍ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಆಗ್ರಹ

ವಾಶಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೋಪ್ ಲಿಯೊ ನಡುವೆ ಬಹಿರಂಗ ವಾಗ್ಯುದ್ಧದ ನಡುವೆಯೇ, ಪೋಪ್ ಅವರು ನೈತಿಕತೆಗೆ ಬದ್ಧರಾಗಿರಬೇಕು ಮತ್ತು ಅಮೆರಿಕದ ವ್ಯವಹಾರಗಳಿಂದ ದೂರ ಇರಬೇಕು ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಆಗ್ರಹಿಸಿದ್ದಾರೆ. ಕೆಲವು ವಿಷಯಗಳಲ್ಲಿ ನೈತಿಕತೆಯ ವಿಷಯಕ್ಕೆ ಬದ್ಧವಾಗಿರುವುದು ವ್ಯಾಟಿಕನ್‍ಗೆ ಒಳ್ಳೆಯದು. ಕ್ಯಾಥೊಲಿಕ್ ಚರ್ಚ್‍ಗಳಲ್ಲಿ ಏನು ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂದು ವ್ಯಾನ್ಸ್ ಹೇಳಿರುವುದಾಗಿ ವರದಿಯಾಗಿದೆ. ಪೋಪ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿರುವುದನ್ನು ಒಪ್ಪುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ವ್ಯಾನ್ಸ್ `ಅಮೆರಿಕದ ಅಧ್ಯಕ್ಷರು ಅಮೆರಿಕಾದ ಸಾರ್ವಜನಿಕ ನೀತಿಯನ್ನು ನಿರ್ದೇಶಿಸಲು ಬಿಡಬೇಕು. ಇಬ್ಬರ ನಡುವಿನ ಬಿಕ್ಕಟ್ಟಿನ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ' ಎಂದು ಉತ್ತರಿಸಿದರು. ಈ ಮಧ್ಯೆ, ಶಾಂತಿಗಾಗಿ ಕರೆ ನೀಡಿರುವ ಪೋಪ್‍ರನ್ನು ಗುರಿಯಾಗಿಸುವ ಮೂಲಕ ಟ್ರಂಪ್ ಪೋಪ್ ಅವರನ್ನು ಅವಮಾನಿಸಿದ್ದಾರೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಖಂಡಿಸಿದ್ದಾರೆ.

ವಾರ್ತಾ ಭಾರತಿ 14 Apr 2026 10:42 pm

ಉಪ್ಪಿನಂಗಡಿ| ಕಂತು ಬಾಕಿಯಿರಿಸಿದ ಕೊಠಡಿಗಳಿಗೆ ಪಂಚಾಯತ್‍ನಿಂದ ಬೀಗ

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳ ಏಲಂ ಬಿಡ್‍ನಲ್ಲಿ ಪಡೆದ ಅಂಗಡಿ ಕೋಣೆಗಳ ಕಂತು ಬಾಕಿ ಇರಿಸಿದ್ದ 20 ಅಂಗಡಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗ್ರಸ್ ಮಂಗಳವಾರ ಬೀಗ ಜಡಿದಿದ್ದಾರೆ. ಏಲಂ ಪ್ರಕ್ರಿಯೆಯಲ್ಲಿ ಪಡೆದುಕೊಂಡ ಅಂಗಡಿ ಕೊಠಡಿಗಳ ಬಿಡ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದ್ದು, ಇದರಂತೆ ಹಲವರು ಉಳಿಕೆ ಮೊತ್ತದ ಕಂತುಗಳನ್ನು ಪಾವತಿಸದೆ ಪಂಚಾಯತ್ ಆಡಳಿತದ ವಿನಂತಿಗಳನ್ನು ಕಡೆಗಣಿಸುತ್ತಾ ಬಂದಿದ್ದರು ಎಂದು ತಿಳಿದುಬಂದಿದೆ. ಬಾಕಿಯಾದ ಮೊತ್ತವನ್ನು ಪಾವತಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ಪಂದಿಸದ ವ್ಯಕ್ತಿಗಳ ಅನುಭೋಗ ದಲ್ಲಿರುವ ಅಂಗಡಿ ಕೊಠಡಿಗಳಿಗೆ ಸರಕಾರಿ ರಜಾ ದಿನವಾದ ಮಂಗಳವಾರದಂದು ಮುಂಜಾನೆಯಿಂದಲೇ ಬೀಗ ಜಡಿಯುವ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ನಿಕಟಪೂರ್ವ ಪಂಚಾಯತ್ ಸದಸ್ಯರು ಅನುಭೋಗದಾರರಾಗಿರುವ ಅಂಗಡಿ ಕೊಠಡಿಗಳು ಸೇರಿದ್ದು, ಅವರ ಅಂಗಡಿಗಳಿಗೂ ಬೀಗ ಜಡಿಯುವ ಮೂಲಕ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿದೆ ಎಂಬ ಸಂದೇಶವನ್ನು ನೀಡಿದ್ದಾರೆ. ಮೊತ್ತ ಬಾಕಿ ಇರಿಸಲಾದ ಅಂಗಡಿಗಳಿಗೆ ಪಂಚಾಯತ್ ಆಡಳಿತದಿಂದಲೇ ಒಂದು ಬೀಗ ಜಡಿದು ಎಚ್ಚರಿಕೆ ನೋಟೀಸು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿತ್ತು. 

ವಾರ್ತಾ ಭಾರತಿ 14 Apr 2026 10:40 pm

ಶಾಂತಿ ಮಾತುಕತೆಯಲ್ಲಿ ಚೆಂಡು ಈಗ ಇರಾನ್‍ನ ಅಂಗಳದಲ್ಲಿದೆ: ಅಮೆರಿಕ

ಗುರುವಾರ ಮತ್ತೊಂದು ಸುತ್ತಿನ ಮಾತುಕತೆಯ ಸಾಧ್ಯತೆ: ವರದಿ

ವಾರ್ತಾ ಭಾರತಿ 14 Apr 2026 10:38 pm

West Bengal | ತಪ್ಪು ಮಾಡಬೇಡಿ: ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೆಲಸ ಮಾಡುವ ಮುಸ್ಲಿಂ ವಲಸೆ ಕಾರ್ಮಿಕರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರಿಗೆ ಅವರು ನೀಡಿದ ಎಚ್ಚರಿಕೆ ಭೀತಿಯ ವಾತಾವರಣ ಸೃಷ್ಟಿಸುವಂತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ಸಂದರ್ಭದಲ್ಲೇ ಸಾಮೂಹಿಕ ಮತದಾರರ ಹಕ್ಕು ನಿರಾಕರಣೆಯ ಕುರಿತು ಕಳವಳಗಳು ವ್ಯಕ್ತವಾಗುತ್ತಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ನಂದಿಗ್ರಾಮ ಕ್ಷೇತ್ರವನ್ನು ಉಲ್ಲೇಖಿಸಿದ ಅವರು, ಸಾವಿರಾರು ವಲಸೆ ಕಾರ್ಮಿಕರು ಗುಜರಾತ್, ಮಹಾರಾಷ್ಟ್ರ ಹಾಗೂ ಒಡಿಶಾ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಹೇಳಿದರು. “ನಂದಿಗ್ರಾಮದ 30,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಗುಜರಾತ್‌ ನಲ್ಲಿ 1,100 ಮುಸ್ಲಿಂ ಯುವಕರು, ಒಡಿಶಾದಲ್ಲಿ 800, ಮಹಾರಾಷ್ಟ್ರದಲ್ಲಿ 3,300 ಮಂದಿ ವಾಸಿಸುತ್ತಿದ್ದಾರೆ. ಈ ರಾಜ್ಯಗಳಲ್ಲಿ ಯಾರ ಸರ್ಕಾರವಿದೆ? ಬಿಜೆಪಿ ಸರ್ಕಾರ. ತಪ್ಪು ಮಾಡಬೇಡಿ. ನಿಮ್ಮ ನಡೆ ಸರಿಪಡಿಸಿಕೊಳ್ಳಿ. ಮೇ 4 (ಎಣಿಕೆ ದಿನ) ನಂತರ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ನೀವು ‘ಜಾಯ್ ಬಾಂಗ್ಲಾ’ ಎಂದು ಹೇಳಬಹುದು, ಆದರೆ ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ,” ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಾಬಿತ್ರ ಕರ್, ಸುವೇಂದು ಅವರ ರಾಜಕೀಯ ಶೈಲಿ ಬೆದರಿಕೆ ಮತ್ತು ಭೀತಿಯ ಮೇಲೆ ಆಧಾರಿತವಾಗಿದೆ ಎಂದು ಆರೋಪಿಸಿದರು. “ಚುನಾಯಿತ ಪ್ರತಿನಿಧಿಯಾಗಿ ತನ್ನ ಕ್ಷೇತ್ರದ ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಆದರೆ ಅವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಂದಿಗ್ರಾಮದ ಜನರು ಇವಿಎಂನಲ್ಲಿ ಅವರ ಬೆದರಿಕೆಗಳಿಗೆ ತಕ್ಕ ಉತ್ತರ ನೀಡುತ್ತಾರೆ,” ಎಂದು ಹೇಳಿದರು. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಇದರ ಮಧ್ಯೆ, ʼಟೈಮ್ಸ್ ಆಫ್ ಇಂಡಿಯಾʼ ವರದಿಯಲ್ಲಿ ಉಲ್ಲೇಖಿಸಲಾದ ಅಧ್ಯಯನದ ಪ್ರಕಾರ, ನಂದಿಗ್ರಾಮದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳಲ್ಲಿ 95.5 ಶೇಕಡಾ ಮುಸ್ಲಿಮರದ್ದಾಗಿದ್ದು, ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಕೇವಲ 25 ಶೇಕಡಾ ಮಾತ್ರವಾಗಿದೆ. ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆ ಸಬರ್ ಇನ್ಸ್ಟಿಟ್ಯೂಟ್ ವರದಿ ಪ್ರಕಾರ, ತೆಗೆದುಹಾಕಲಾದ ಹೆಸರುಗಳಲ್ಲಿ ಕೇವಲ 4.5 ಶೇಕಡಾ ಮಾತ್ರ ಮುಸ್ಲಿಮೇತರರಿಗೆ ಸೇರಿದ್ದವು ಎಂದು ತಿಳಿಸಲಾಗಿದೆ.

ವಾರ್ತಾ ಭಾರತಿ 14 Apr 2026 10:34 pm

IPL 2026| ಕೆಕೆಆರ್ ಪಾಳಯಕ್ಕೆ ಮರಳಿದ ವರುಣ್ ಚಕ್ರವರ್ತಿ

ಚೆನ್ನೈ: ಬೆರಳು ನೋವಿನಿಂದಾಗಿ ಹಿಂದಿನ ಎರಡು ಪಂದ್ಯಗಳಿಂದ ವಂಚಿತರಾಗಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ವಾಪಸಾಗಿದ್ದಾರೆ. ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕೆಕೆಆರ್‌ನ ಮೊದಲ ಆಡುವ 11ರ ಬಳಗದಲ್ಲಿ ನವದೀಪ್ ಸೈನಿ ಬದಲಿಗೆ ವರುಣ್ ಅವಕಾಶ ಪಡೆದಿದ್ದಾರೆ. ಕೆಕೆಆರ್ ತಂಡವು ಈ ವರ್ಷದ ಐಪಿಎಲ್‌ನಲ್ಲಿ ಮೊದಲ ಗೆಲುವಿನತ್ತ ಚಿತ್ತ ಹರಿಸಿದೆ. ಕೆಕೆಆರ್ ಎದುರಾಳಿ ಆತಿಥೇಯ ಚೆನ್ನೈ ತಂಡವು ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿತ್ತು. ಸಿಎಸ್‌ಕೆ ತಂಡವು ಯಾವುದೇ ಬದಲಾವಣೆ ಮಾಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಕೀಲ್ ಹುಸೇನ್‌ಗೆ ಅವಕಾಶ ನೀಡಬಹುದು.

ವಾರ್ತಾ ಭಾರತಿ 14 Apr 2026 10:31 pm

Raichur | ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ

ರಾಯಚೂರು: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ವೀರಹನುಮಾನ, ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಸಂಪೂರ್ಣವಾಗಿ ಪ್ರಸ್ತುತವಾಗದಿರುವುದು ನೋವಿನ ಸಂಗತಿ ಎಂದು ಹೇಳಿದರು. ಅಂಬೇಡ್ಕರ್ ಅವರು ಹಿಂದೂ ಕೋಡ್ ಕಾನೂನು ರೂಪಿಸಿದ ಮಹನೀಯರಾಗಿದ್ದು, ತಮ್ಮ ತತ್ವಗಳಿಗೆ ವಿರುದ್ಧವಾಗಿ ಬಂದ ವಿರೋಧದ ಹಿನ್ನೆಲೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ ಧೀರ ವ್ಯಕ್ತಿ. ಅವರ ಯಶಸ್ಸಿನ ಮೂಲ ಆತ್ಮವಿಶ್ವಾಸವಾಗಿದ್ದು, ಅವರು “ಗ್ರೇಟೆಸ್ಟ್ ಇಂಡಿಯನ್” ಎಂದರು. ಶಿಕ್ಷಣ ಪ್ರೇಮಿ ಹಾಗೂ ನಿವೃತ್ತ ಉಪನಿರ್ದೇಶಕಿ ಆರ್. ಇಂದಿರಾ ಮಾತನಾಡಿ, ಅಂಬೇಡ್ಕರ್ ಅವರ ದಿನವನ್ನು ಜ್ಞಾನ ದಿನವನ್ನಾಗಿ ಆಚರಿಸುವುದು ಸಾರ್ಥಕ ಎಂದರು. ಅಂಬೇಡ್ಕರ್ ಅವರ ಚಿಂತನೆಗಳು ಒಂದು ವರ್ಗಕ್ಕೆ ಸೀಮಿತವಾಗದೆ ವಿಶ್ವಮಟ್ಟದಲ್ಲಿ ಪ್ರಸ್ತುತವಾಗಿವೆ. ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಮಾಜದ ಎಲ್ಲ ವರ್ಗಗಳ ಹಕ್ಕುಗಳಿಗಾಗಿ ಅವರು ಧ್ವನಿ ಎತ್ತಿದ ಮಹಾನ್ ನಾಯಕರು ಎಂದು ಕೊಂಡಾಡಿದರು. ಹಿರಿಯ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎಂದು ಹೇಳಿದರು. ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಸಂದೇಶಗಳು ನವ ಸಮಾಜ ನಿರ್ಮಾಣಕ್ಕೆ ದಿಕ್ಕು ತೋರಿಸುತ್ತವೆ. ರಾಯಚೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಸಹ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ವಹಿಸಿಕೊಂಡು, ಅಂಬೇಡ್ಕರ್ ಅವರ ವಿಚಾರಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಜನತೆ ಅವರ ಚಿಂತನೆಗಳ ಅಧ್ಯಯನ ಮಾಡುವುದು ಅಗತ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಡಾ. ರೇಖಾ ಪಾಟೀಲ್ ನಿರೂಪಿಸಿದರೆ, ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ್ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ, ಯುವ ಸಾಹಿತಿ ಈರಣ್ಣ ಬೆಂಗಾಲಿ, ಜಿಕಸಾಪ ಸಂಘಟನಾ ಕಾರ್ಯದರ್ಶಿ ರಾಮಣ್ಣ ಬೋಯೇರ್, ತಾ ಕ ಸಾ ಪ ಗೌರವ ಕಾರ್ಯದರ್ಶಿ ರಾವುತರವ್ ಬರೂರ, ತಾ ಕ ಸಾ ಪ ಗೌರವಗೌರವ ಕೋಶಾಧ್ಯಕ್ಷ ಸೈಯದ್ ಹಫೀಜುಲ್ಲ ಖಾದರಿ, ತಾ ಕ ಸಾ ಪ ಮಹಿಳಾ ಪ್ರತಿನಿಧಿ ದೇವೇಂದ್ರಮ್ಮ , ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಆಹ್ವಾನಿತರಾದ ಕೆ. ವೀರೇಶ ಬಾಬು, ವಿದ್ಯಾಸಾಗರ್ ಚಿಮಣಗೇರಿ, ವೆಂಕಣ್ಣ, ಶರಣಗೌಡ, ಸಾಯಿ ಸಾಗರ್, ರಾಜು ಸೇರಿದಂತೆ ಸಾಹಿತಿಗಳು ಕವಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ವಾರ್ತಾ ಭಾರತಿ 14 Apr 2026 10:22 pm

ಸೇಡಂ | ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ : ಅದ್ಧೂರಿ ರಥೋತ್ಸವ

ಸೇಡಂ: ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವವು ಮಂಗಳವಾರ ಭಕ್ತಿಭಾವ, ಸಂಪ್ರದಾಯ ಮತ್ತು ವೈಭವದ ಸಮನ್ವಯವಾಗಿ ಕಂಗೊಳಿಸಿತು. ಜಾತ್ರೆಯ ಅಂಗವಾಗಿ ಅಗ್ಗಿ ಪ್ರವೇಶ ಹಾಗೂ ರಥೋತ್ಸವ ಕಾರ್ಯಕ್ರಮಗಳು ಭಾರೀ ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿದವು. ಬೆಳಿಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಹಬ್ಬದ ವಾತಾವರಣ ಆವರಿಸಿತ್ತು. ಬೆಳಗ್ಗೆ ಶ್ರೀ ಕೊತ್ತಲ ಬಸವೇಶ್ವರರಿಗೆ ವಿಶೇಷ ಅಭಿಷೇಕ, ಮಹಾಪೂಜೆ, ಪುಷ್ಪಾಲಂಕಾರ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಾಂಗಣವು ಹೂವುಗಳು, ತೋರಣಗಳು ಮತ್ತು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡು ಭಕ್ತರ ಗಮನ ಸೆಳೆಯಿತು. ಬೆಳಗ್ಗೆ ಜರುಗಿದ ಅಗ್ಗಿ ಪ್ರವೇಶ ಕಾರ್ಯಕ್ರಮ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ಭಕ್ತರು ಅಗ್ನಿಕುಂಡದ ಮೇಲೆ ನಡೆದು ತಮ್ಮ ನಂಬಿಕೆ ಮತ್ತು ಭಕ್ತಿಯನ್ನು ಮೆರೆದರು. ಮಹಿಳೆಯರು, ಯುವಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಗ್ನಿಕುಂಡದ ಸುತ್ತ ಭಕ್ತರ ಜೈಕಾರಗಳು ಧಾರ್ಮಿಕ ಘೋಷಣೆಗಳು ಮೊಳಗಿದವು. ಸಂಜೆ ವೇಳೆಗೆ ನಡೆದ ರಥೋತ್ಸವ ಮತ್ತೊಂದು ವೈಭವದ ಕ್ಷಣವಾಗಿತ್ತು. ವಿಶೇಷವಾಗಿ ಅಲಂಕೃತಗೊಂಡ ಭವ್ಯ ರಥಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಾವಿರಾರು ಭಕ್ತರು ಕೊತ್ತಲ ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳ ನಡುವೆ ರಥವನ್ನು ಎಳೆದರು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಭಾವ ಮೆರೆದರು. ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದು, ಸಂಚಾರ ನಿಯಂತ್ರಣ, ಕುಡಿಯುವ ನೀರು, ಆರೋಗ್ಯ ಸೇವೆಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿ, ಶಿವಶಂಕರ ಮಠದ ಶ್ರೀ ಶಿವಶಂಕರೇಶ್ವರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಶಿವುಕುಮಾರ ಪಾಟೀಲ್ ತೆಲ್ಕೂರ್, ಸಂತೋಷಿರಾಣಿ ಪಾಟೀಲ್ ತೆಲ್ಕೂರ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸಿಲ್ದಾರ್ ಶ್ರೀಯಾಂಕ ಧನಶ್ರೀ, ಸಿದ್ದಪ್ಪ ತಳ್ಳಳ್ಳಿ, ಬಸವರಾಜ ತಡಕಲ್, ನಾಗೇಂದ್ರಪ್ಪ ಡೊಳ್ಳಾ, ರಾಜಶೇಖರ ನಿಲಂಗಿ, ಶಿವುಕುಮಾರ ಬೊಳಶೆಟ್ಟಿ, ಸಮಾಜದ ಹಿರಿಯರು ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 14 Apr 2026 10:13 pm

ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ನೋಂದಣಿ ಮಾಡಲು ಎ.17ರ ವರೆಗೆ ಅವಕಾಶ

ಬೆಂಗಳೂರು : 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿಯನ್ನು ಮಾಡಿಕೊಳ್ಳಲು ಎ.17ರವರೆಗೆ ಅವಕಾಶ ಕಲ್ಪಿಸಲಾಗಿದ್ದು, 2026ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಬಹುದಾಗಿದೆ. ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ http://tinyurl.com/mvp9k6es   ಲಿಂಕ್ ಬಳಸಿ ಅಥವಾ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು 2026ರಲ್ಲಿ ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರಗಳಿಂದ ಪರೀಕ್ಷೆಗೆ ಗೈರುಹಾಜರಾದ ವಿದ್ಯಾರ್ಥಿಗಳನ್ನು ತಮ್ಮ ಲಾಗಿನ್ ಮುಖಾಂತರ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 2026 ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2ಕ್ಕೆ ನೋಂದಾಯಿಸಬಹುದು. ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರುಗಳ ಲಾಗಿನ್ ನಲ್ಲಿ ಲಭ್ಯಗೊಳಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. ವೇಳಾಪಟ್ಟಿ: ದ್ವಿತೀಯ ಪಿಯುಸಿ ಪರೀಕ್ಷೆ-2ಯ ವೇಳಾಪಟ್ಟಿ ಪ್ರಕಟವಾಗಿದ್ದು, ಎ.30ರಂದು ಕನ್ನಡ ಮತ್ತು ಅರೇಬಿಕ್ ಭಾಷೆ, ಮೇ 1ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ರಸಾಯನಶಾಸ್ತ್ರ, ಮೇ 4ರಂದು ಇಂಗ್ಲೀಷ್‌, ಮೇ 5ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ, ಮೇ 6ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 7ರಂದು ಇತಿಹಾಸ, ಗಣಿತ ಮತ್ತು ಗೃಹವಿಜ್ಞಾನ, ಮೇ 8ರಂದು ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ (ಎಲೆಕ್ಟ್ರಾನಿಕ್ಸ್) ಮತ್ತು ಗಣಕ ವಿಜ್ಞಾನ, ಮೇ 9ರಂದು ಹಿಂದಿ, ಮೇ 11ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 12ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ. ಮೇ 13ರಂದು ಬೆಳಗ್ಗೆ 10 ದಿಂದ ಮಧ್ಯಾಹ್ನ 1ರವರೆಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.15ರವರೆಗೆ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಮುಂತಾದ ವೃತ್ತಿಪರ ವಿಷಯಗಳ ಪರೀಕ್ಷೆಗಳು ಜರುಗಲಿವೆ.  

ವಾರ್ತಾ ಭಾರತಿ 14 Apr 2026 10:11 pm

ಸೇಡಂ | ಅಗ್ನಿ ಅವಘಡ ಪೀಡಿತರಿಗೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರಿಂದ ಧನಸಹಾಯ

ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿಗಾಹುತಿಯಾದ ಬಸವರಾಜ ಅರಿಕೇರಿ ಅವರ ಮನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಅಗ್ನಿ ಅವಘಡದಿಂದ ಸಂಭವಿಸಿದ ಹಾನಿಯ ಕುರಿತು ತಾಲೂಕು ಆಡಳಿತದಿಂದ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಘಟನೆಗೆ ನಿಖರ ಕಾರಣ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವೇಳೆ ಸಚಿವರು ಪೀಡಿತ ಕುಟುಂಬಕ್ಕೆ ವೈಯಕ್ತಿಕ ಧನಸಹಾಯ ನೀಡಿದರು. ಕಾಂಗ್ರೆಸ್ ಮುಖಂಡ ಸತೀಶರೆಡ್ಡಿ ಪಾಟೀಲ ರಂಜೋಳ ಅವರು ಸರ್ಕಾರದ ಮಟ್ಟದಲ್ಲಿ ಸಮರ್ಪಕ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು. ಈಗಾಗಲೇ ತಹಸೀಲ್ದಾರ್‌ಗೆ ಅಗತ್ಯ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ವರದಿ ಆಧರಿಸಿ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 10:10 pm

ಕಾಂಗ್ರೆಸ್‌ ಹೈಕಮಾಂಡ್‌ ಕೈಸೇರಿದ ಆಡಿಯೋ ದಾಖಲೆ! ನಸೀರ್‌ ಅಹ್ಮದ್‌ ತಲೆದಂಡ ಬೆನ್ನಲ್ಲೆ ಜಮೀರ್‌ಗೆ ಅಹ್ಮದ್‌ಗೆ ಎದೆ ನಡುಕ

ದಾವಣಗೆರೆ ದಕ್ಷಿಣ ಉಪ ಚುನಾವಣೆ ಬಂಡಾಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ನಾಯಕರಲ್ಲಿ 2 ನೇ ತಲೆ ದಂಡವಾಗಿದೆ. ನಸೀರ್‌ ಅಹ್ಮದ್‌ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇತ್ತ ಇನ್ನೊಂದೆಡೆ ಹೈಕಮಾಂಡ್‌ಗೆ ಆಡಿಯೋ ದಾಖಲೆ ಸೇರಿದ್ದು, ಸಚಿವ ಜಮೀರ್ ಅಹ್ಮದ್‌ಗೆ ಆತಂಕ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಬೇಟಿ ಮಾಡಿದ ಸಚಿವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ.

ವಿಜಯ ಕರ್ನಾಟಕ 14 Apr 2026 10:09 pm

Wadi | ತಮ್ಮ ಪಾಂಡಿತ್ಯದಿಂದ ಭಾರತದ ಚರಿತ್ರೆ ಬದಲಾಯಿಸಿದ ಅಂಬೇಡ್ಕರ್ : ಮನೋಜಕುಮಾರ

ವಾಡಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಅಪಾರ ವಿದ್ವತ್ತು ಹಾಗೂ ಪಾಂಡಿತ್ಯದಿಂದ ಭಾರತ ಚರಿತ್ರೆಯನ್ನು ಬದಲಾಯಿಸಿದ ಮಹಾನ್ ದರ್ಶನಿಕ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ನಿರ್ಮಾಣ ಮಾಡುವ ಸಂದರ್ಭದಲ್ಲಿ, ಬಾಬಾ ಸಾಹೇಬರ ಆರೋಗ್ಯ ತುಂಬಾ ಹದಗೆಟ್ಟಿತ್ತು. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಆದರೆ, ವೈದ್ಯರ ಸಲಹೆ ನಿರಾಕರಿಸಿದ ಭಾಬಾ ಸಾಹೇಬರು ದಿನದಲ್ಲಿ 18 ಗಂಟೆ ಶ್ರಮವಹಿಸಿ ಜಗತ್ತಿಗೆ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದರು ಎಂದರು. ಈ ವೇಳೆ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಶಿವಾನಂದ ನಿಂಬರಗಾ, ಮನೋಜಕುಮಾರ ಹೀರೋಳ್ಳಿ, ಬಸವರಾಜ ಪೂಜಾರಿ, ಸ್ಥಳೀಯ ಮುಖಂಡರಾದ ಚಂದ್ರಸೇನ ಮೇನಗಾರ, ಶರಣು ನಾಟೇಕರ, ಶರಣಬಸ್ಸು ಸಿರೂರಕರ, ನಾಗೇಂದ್ರ ಜಯಗಂಗಾ, ಮೊಹಮ್ಮದ್ ಗೌಸ್, ಲತಾಮಣಿ, ಬಸಮ್ಮ ಪಾಟೀಲ, ಪೂಜಾ ಫುಲಾರೆ, ಶಿವಕಾಂತಮ್ಮ ಎಸ್ ,ರೇಣು ಪ್ರಧಾನಿ, ರೇಖಾ ಮರೆತೂರ, ವಿರೂಪಾಕ್ಷ, ಮಲ್ಲಿಕಾರ್ಜುನ ಯಳಸಂಗಿ, ಅರುಣಕುಮಾರ ಮೈನಾಳಕರ, ಹರಿ ಗಲಾಂಡೆ, ಜ್ಯೋತಿ ಗುತ್ತೇದಾರ, ರಾಹುಲ ಹುಗ್ಗಿ, ವಿಶ್ವನಾಥ ಭಾಗೋಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಜರೀನಾ ಬೇಗಮ್, ಅಬ್ರಾಹಿಂ ರಾಜಣ್ಣ, ಮಲ್ಲಯ್ಯ ಗುತ್ತೇದಾರ, ಸ್ಯಾಮ್‌ಸನ್ ಐ ಸೇರಿದಂತೆ ಹಲವರು ಇದ್ದರು.

ವಾರ್ತಾ ಭಾರತಿ 14 Apr 2026 10:00 pm

ಸಚಿವ ಸಂಪುಟ ಪುನರ್ ರಚನೆ: ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕರು

ಬೆಂಗಳೂರು : ಉಪಚುನಾವಣೆ ಬೆನ್ನಲ್ಲೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಮಾಡಲಾಗಿದೆ. ಈ ಮಧ್ಯೆ ಸಂಪುಟ ಪುನರ್ ರಚನೆಗೆ ಆಗ್ರಹಿಸಿ 30ಕ್ಕೂ ಅಧಿಕ ಮಂದಿ ಕಾಂಗ್ರೆಸ್‍ನ ಹಿರಿಯ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಖುದ್ದು ಭೇಟಿ ಮಾಡಿದ್ದ ಶಾಸಕರಾದ ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಟಿ.ಬಿ.ಜಯಚಂದ್ರ, ಪುಟ್ಟರಂಗ ಶೆಟ್ಟಿ, ಷಡಕ್ಷರಿ ಸೇರಿ ಹಿರಿಯ ಶಾಸಕರು, ‘ಸಚಿವ ಸಂಪುಟದಲ್ಲಿ ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿ ಮಾಡಲಿದ್ದು, ಸಂಪುಟ ಪುನರ್ ರಚನೆ ಸಂಬಂಧ ಅವರಿಗೂ ಮನವರಿಕೆ ಮಾಡಿಕೊಡಲಿದ್ದಾರೆ. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ 2028ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗಲಿದೆ ಎಂದು ಶಾಸಕರು ಕೋರಿದ್ದಾರೆ ಎಂದು ಗೊತ್ತಾಗಿದೆ. ‘ಸಚಿವ ಸಂಪುಟ ಪುನರ್ ರಚನೆ ಮಾಡುವ ಸಂಬಂಧ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡಲು ಹಿರಿಯ ಶಾಸಕರು ಹೊಸದಿಲ್ಲಿಗೆ ಆಗಮಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೇವೆ. ಈಗಾಗಲೇ ಮೂರು ವರ್ಷ ಅವಧಿ ಮುಗಿದಿದ್ದು, ಮುಂದಿನ ಎರಡು ವರ್ಷಗಳ ಅವಧಿಗೆ ಹಿರಿಯ ಶಾಸಕರಿಗೆ ಅವಕಾಶ ಕೊಡಬೇಕು’ -ಟಿ.ಬಿ.ಜಯಚಂದ್ರ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ

ವಾರ್ತಾ ಭಾರತಿ 14 Apr 2026 9:59 pm

ತಮಿಳುನಾಡು ಚುನಾವಣೆ | ಟಿವಿಕೆ ಅಧಿಕಾರಕ್ಕೆ ಬಂದರೆ ರೈತರ ಬೆಳೆ ಸಾಲ ಮನ್ನಾ: ನಟ ವಿಜಯ್ ಭರವಸೆ

ತಿರುಪ್ಪುರ (ತ.ನಾಡು),ಎ.14: ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ರೈತರ ಬೆಳೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಮಂಗಳವಾರ ಭರವಸೆ ನೀಡಿದ ಟಿವಿಕೆ ಮುಖ್ಯಸ್ಥ ವಿಜಯ್ ಅವರು,ರಾಜ್ಯದಲ್ಲಿ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಮುಚ್ಚುಗಡೆಗಾಗಿ ಡಿಎಂಕೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಜಯ್, ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಸಂಪೂರ್ಣವಾಗಿ ಮತ್ತು ಐದು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವವರಿಗೆ ಶೇ.50ರಷ್ಟು ಬೆಳೆ ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಪ್ರತಿ ಕ್ವಿಂಟಲ್ ಭತ್ತಕ್ಕೆ 3,500 ರೂ. ಮತ್ತು ಪ್ರತಿ ಟನ್ ಕಬ್ಬಿಗೆ 4,500 ರೂ.ಗಳ ಬೆಲೆಗಳನ್ನು ಒದಗಿಸುವುದಾಗಿಯೂ ಅವರು ಆಶ್ವಾಸನೆ ನೀಡಿದರು. ಡಿಎಂಕೆ ಆಡಳಿತದಲ್ಲಿ ರಾಜ್ಯದಲ್ಲಿ ಹಲವಾರು ಎಂಎಸ್‌ಎಂಇಗಳು ಮುಚ್ಚಲ್ಪಟ್ಟಿದ್ದು,ಇದು ದೇಶದಲ್ಲಿಯೇ ಎರಡನೇ ಗರಿಷ್ಠ ಪ್ರಮಾಣವಾಗಿದೆ ಎಂದು ವಿಜಯ ಆರೋಪಿಸಿದರು.

ವಾರ್ತಾ ಭಾರತಿ 14 Apr 2026 9:58 pm

ಮಹಾರಾಷ್ಟ್ರ: ಮೇ 1ರಿಂದ ರಿಕ್ಷಾ,ಟ್ಯಾಕ್ಸಿ ಚಾಲಕರಿಗೆ ಮರಾಠಿ ತಿಳಿದಿರುವುದು ಕಡ್ಡಾಯ

ಮುಂಬೈ: ಮಹಾರಾಷ್ಟ್ರ ದಿನವಾದ ಮೇ 1ರಿಂದ ರಾಜ್ಯದಲ್ಲಿಯ ಪರವಾನಿಗೆ ಹೊಂದಿರುವ ಎಲ್ಲ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ತಿಳಿದಿರುವುದು ಕಡ್ಡಾಯವಾಗಲಿದೆ. ಚಾಲಕರು ಮರಾಠಿಯನ್ನು ಬರೆಯಲು ಮತ್ತು ಓದಲು ಬಲ್ಲರೇ ಎನ್ನುವುದನ್ನು ಪರಿಶೀಲಿಸಲು ರಾಜ್ಯಾದ್ಯಂತ ಸಾರಿಗೆ ಇಲಾಖೆಯ ಕಚೇರಿಗಳ ಮೂಲಕ ಅಭಿಯಾನವನ್ನು ನಡೆಸಲಾಗುವುದು ಎಂದು ಸಂಪುಟ ಸಚಿವ ಪ್ರತಾಪ ಸರನಾಯಕ್ ಅವರು ಮಂಗಳವಾರ ತಿಳಿಸಿದ್ದಾರೆ. ಮರಾಠಿ ಭಾಷೆಯ ಪ್ರಾಥಮಿಕ ಜ್ಞಾನವನ್ನು ಹೊಂದಿರದ ಚಾಲಕರ ಪರವಾನಿಗೆಗಳನ್ನು ರದ್ದುಗೊಳಿಸಲಾಗುವುದು ಎಂದು ಸಚಿವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಪರವಾನಿಗೆಗಳನ್ನು ನೀಡಲು ಸ್ಥಳೀಯ ಭಾಷಾ ಜ್ಞಾನವನ್ನು ಅಗತ್ಯವಾಗಿಸಿರುವ ನಿಯಮ ಈಗಾಗಲೇ ಅಸ್ತಿತ್ವದಲ್ಲಿದ್ದರೂ ಅದನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಪರವಾನಿಗೆಗಳನ್ನು ನೀಡುವ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸರನಾಯಕ್ ಹೇಳಿದ್ದಾರೆ.

ವಾರ್ತಾ ಭಾರತಿ 14 Apr 2026 9:57 pm

Wadi | ಅಂಬೇಡ್ಕರ್ ಅವರ ಚಿಂತನೆ ಯುವಜನರಿಗೆ ತಲುಪಿಸುವ ಅಗತ್ಯವಿದೆ: ಪಿಎಸ್‌ಐ ರೇಣುಕಾ

ವಾಡಿ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಯುವ ಜನತೆಗೆ ತಲಿಪಿಸುವ ಅಗತ್ಯವಿದೆ ಎಂದು ವಾಡಿ ಪೊಲೀಸ್ ಠಾಣೆಯ ಪಿಎಸ್ಐ (ಅಪರದ ವಿಭಾಗ) ರೇಣುಕಾ ಹುಡುಗಿ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೌದ್ಧ ಸಮಾಜದ ವತಿಯಿಂದ ಡಾ.ಅಂಬೇಡ್ಕರ್ ಅವರ 135ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ವಿದ್ಯಾರ್ಥಿಗಳು ಓದು ಅಂಕಗಳಿಗೆ ಸೀಮಿತಗೊಳಿಸಿದ್ದಾರೆ. ಹಾಗಾಗಿ, ಯುವಜನ ವಿದ್ಯಾರ್ಥಿಗಳೊಂದಿಗೆ ಸಮಾನತೆ ಮೌಲ್ಯ ಆಧಾರಿತ ಶಿಕ್ಷಣ ವೈಚಾರಿಕತೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು. ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಶರಣಬಸ್ಸು ಸಿರೂರಕರ, ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ, ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿದರು. ಭಿಕ್ಖುಣಿ ಮಾತಾ ಅರ್ಚಸ್ಮತಿ ಪಂಚಶೀಲ ಬೋಧಿಸಿದರು. ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ರಮೇಶ ಕಾರ್ಬಾರಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಕೋಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ವಾಡಿ ಟೌನ್ ಡೆವಲಪ್ಮೆಂಟ್ ಕಮೀಟಿ ಅಧ್ಯಕ್ಷ ಅಮೃತ ಕೋಮಟೆ, ಪೌರಕಾರ್ಮಿಕ ಸಂಘದ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಪುರಸಭೆ ಮಾಜಿ ಅಧ್ಯಕ್ಷರಾದ ಜರೀನಾ ಬೇಗಂ, ಅಬ್ರಾಹಂ ರಾಜಣ್ಣ, ಮಾಜಿ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮುಖಂಡರಾದ ಶರಣು ನಾಟೇಕರ, ಗೊಲ್ಲಾಳಪ್ಪ ಬಡಿಗೇರ, ವಿಠಲ ನಾಯಕ, ಸತೀಶ್ ಭಟ್ಟರ್ಕಿ, ಮಲ್ಲಿಕಾರ್ಜುನ ಕಟ್ಟಿ, ರಾಹುಲ ಮೇನಗಾರ, ಸುರೇಶ ಬನಸೋಡೆ, ವಿಜಯ ಸಿಂಗೆ, ಖೇಮಲಿಂಗ ಬೆಳಮಗಿ, ಸಂದೀಪ ಕಟ್ಟಿ, ಭೀಮಾ ನಾಟೇಕರ, ಅರುಣ ಬರ್ಮಾ, ಶೇಕಪ್ಪ ಹೇರೂರ, ಗುರುಪಾದ ದೊಡ್ಡಮನಿ, ಪ್ರದೀಪ ಸಿಂಗೆ, ಸೇರಿದಂತೆ ಹಲವರಿದ್ದರು. ಸೂರ್ಯಕಾಂತ ಅವರು ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 14 Apr 2026 9:56 pm

ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ; ಕಾಂಗ್ರೆಸ್‌ ಸರಕಾರ ಒಂದೇ ಒಂದು ನೇಮಕಾತಿ ಮಾಡಿಲ್ಲ : ಎಚ್‌ಡಿಕೆ

ಬೆಂಗಳೂರು : ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪಾರದರ್ಶಕ ನೇಮಕಾತಿ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮಗಳಲ್ಲಿ ಮುಳುಗಿದೆ. ಈ ಸರಕಾರ ಒಂದೇ ಒಂದು ನೇಮಕಾತಿ ಮಾಡಿಲ್ಲ. ಇಂಥ ಸಂದರ್ಭದಲ್ಲಿ ತಮ್ಮ ಹಕ್ಕು ಸಾಧನೆಗಾಗಿ ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. ಮಂಗಳವಾರ ನಗರದ ಶೇಷಾದ್ರಿಪುರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ. ಪೊಲೀಸ್ ಕೇಸುಗಳಿಗೆಲ್ಲ ಹೆದರಬೇಡಿ. ಆ ಕೇಸುಗಳನ್ನು ಕಿತ್ತೆಸೆಯುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಈ ಕೆಟ್ಟ ಸರಕಾರದ ವಿರುದ್ಧ ಧಾರವಾಡ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಹೋರಾಟ ನಡೆಸಬೇಕು. ಇದನ್ನು ನಾನು ಕೇವಲ ರಾಜಕೀಯಕ್ಕಾಗಿ ಹೇಳುತ್ತಿಲ್ಲ. ಪ್ರತಿಭಾವಂತ ನಿರುದ್ಯೋಗಿ ಯುವಜನರ ಭವಣೆಯನ್ನು ಕಂಡು ರೋಸಿ ಹೋಗಿ ಹೇಳುತ್ತಿದ್ದೇನೆ, ಕೆಪಿಎಸ್‍ಸಿಯಲ್ಲಿ ಏನೇನು ನಡೆಯುತ್ತಿದೆ ಗಮನಿಸುತ್ತಿದ್ದೇನೆ. ಅದನ್ನು ಸ್ವಚ್ಛ ಮಾಡುತ್ತೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಇನ್ನೂ ಸ್ವಚ್ಛ ಮಾಡುವುದರಲ್ಲಿ ಇದ್ದಾರೆ ಪಾಪ. ಆದರೆ ಕೆಪಿಎಸ್‍ಸಿ ಮಾತ್ರ ಕೊಳೆತು ನಾರುತ್ತಿದೆ ಎಂದು ಅವರು ಟೀಕಿಸಿದರು. ಕೆಪಿಎಸ್‍ಸಿಯಲ್ಲಿ ತಪ್ಪು ಮಾಡಿದವರನ್ನು ಹಾಗೆಯೇ ಬಿಟ್ಟಿದ್ದಾರೆ. ತಪ್ಪೇ ಮಾಡದಿರುವ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿರುವ ವಿದ್ಯಾರ್ಥಿಗಳು ಇಂತಹ ಕೆಟ್ಟ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಇಲ್ಲವಾದರೆ ಅವರಿಗೆ ನ್ಯಾಯ ಸಿಗಲ್ಲ. 60 ರಿಂದ 70 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಯುವ ಜನರಲ್ಲಿ ನಂಬಿಕೆ ಹುಟ್ಟಿಸಿದ್ದರು. ಆದರೆ, ಏನು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ವಾರಕ್ಕೆ ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ: ಈ ಸರಕಾರದ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ನಾನು ಸುಮ್ಮನೆ ಇರುವ ಹಾಗಿಲ್ಲ. ಜನರ ಪರವಾಗಿ ನಾನು ದನಿ ಎತ್ತಬೇಕಾಗಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲೆ ಇರುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ ಹಾಗೂ ಜನರ ಪರವಾಗಿಯೂ ಹೋರಾಟ ನಡೆಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು. ಈ ಸರಕಾರದಿಂದ ರಾಜ್ಯಕ್ಕೆ ಒಳ್ಳೆಯದು ಆಗುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ರಾಜ್ಯಕ್ಕೆ ಒಳ್ಳೆಯದಾಗಿದೆ. ಹೀಗಾಗಿ ಮುಂದೆ ನಾವು ಜನರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ. ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದರೆ ರಾಜಕೀಯ ಚಿತ್ರಣವೆ ಬದಲಾಗುತ್ತದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ನಾಯಕತ್ವದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಡಲಾಗುತ್ತಿದೆ. ಅಲ್ಲದೆ ಕ್ಷೇತ್ರಗಳ ಮರು ವಿಂಗಡಣೆ ನಂತರ ರಾಜ್ಯದಲ್ಲಿ 42 ಲೋಕಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ. ಈ 42 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ದೊರೆಯಲಿದ್ದು, ನಮ್ಮ ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರಿಗೆ ಹೆಚ್ಚಿನ ಉತ್ತೇಜನ ಕೊಡಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ಎಲ್ಲಿ ಹೋದರು ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳುವುದು ಬಿಟ್ಟು ಗ್ಯಾರಂಟಿಗಳ ಬಗ್ಗೆ ಭಜನೆ ಮಾಡುತ್ತಿದ್ದಾರೆ. 2000 ರೂ.ಗಳಿಂದ ಜನರು ಸುಖದ ಸುಪ್ಪತ್ತಿಗೆಯ ಮೇಲೆ ತೇಲುತ್ತಿದ್ದಾರೆ ಎಂದು ಕಥೆ ಕಟ್ಟಿ ಹೇಳುತ್ತಿದ್ದಾರೆ. ರಾಜ್ಯವನ್ನು ಆಳುವ ಜನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೆ ಜನರ ಬವಣೆ ನೀಗುವುದಿಲ್ಲ. ಸಣ್ಣ ಸಣ್ಣ ಹಳ್ಳಿಗಳಿಗೆ ಹೋಗಿ ಅವರ ಪರಿಸ್ಥಿತಿಗಳನ್ನು ಖುದ್ದು ನೋಡಬೇಕು ಎಂದು ಅವರು ಹೇಳಿದರು. ಯಾವ ಸಮಾಜವನ್ನು ಅತಿಯಾಗಿ ಓಲೈಕೆ ಮಾಡುತ್ತಿದ್ದರೋ ಈಗ ಅದೇ ಸಮಾಜದ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಗದಾ ಪ್ರಹಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ದ್ವಿಮುಖ ಧೋರಣೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಸಮುದಾಯಗಳನ್ನು ಒಂದೇ ರೀತಿ ನೋಡುವ ಪರಿಪಾಠ ಇರಬೇಕು. ರಾಜಕೀಯ ಪಕ್ಷಗಳಿಗೆ ನಿರ್ದಿಷ್ಟ ಒಂದು ಸಮುದಾಯದ ಬೆಂಬಲ ಶಾಶ್ವತವಲ್ಲ. ಇದನ್ನು ನಾಯಕರು ಅರ್ಥ ಮಾಡಿಕೊಂಡರೆ ಉತ್ತಮ. ಮುಂದಿನ ದಿನಗಳಲ್ಲಿ ಏನೇನು ಬೆಳವಣಿಗೆಗಳು ಆಗುತ್ತವೆ ಕಾದು ನೋಡೋಣ ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.  

ವಾರ್ತಾ ಭಾರತಿ 14 Apr 2026 9:53 pm

ಮಂಗಳೂರು: ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು

ಮಂಗಳೂರು: ನಗರದ ಜೆಪ್ಪು ಮಹಾಕಾಳಿಪಡ್ಪುಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೂಲತಃ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಪ್ರಸಕ್ತ ಜೆಪ್ಪು ಮಹಾಕಾಳಿಪಡ್ಪುನಿರ್ಮಲ ನಗರದಲ್ಲಿ ವಾಸವಾಗಿದ್ದ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಮೃತಪಟ್ಟ ಬಾಲಕ. ಎ.11ರಂದು ಮಹಾಕಾಳಿಪಡ್ಪಿಅಂಡರ್‌ಪಾಸ್ ಬಳಿಯ ಭಜನಾಮಂದಿರದ ಸಮೀಪ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಮಂದಿರದ ಛಾವಣಿ ಬಿದ್ದ ಬಾಲ್ ಹೆಕ್ಕಲು ಹೋದಾಗ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ವಾರದ ಹಿಂದೆಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ವರುಣ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಪುವಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದಾರೆ. ತಂದೆ-ತಾಯಿ, ಅಣ್ಣ ಮತ್ತು ಮೂರುವರೆ ವರ್ಷದ ತಂಗಿಯನ್ನು ವರುಣ್ ಅಗಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಾಲಕನ ಮನೆಗೆ ಭೇಟಿ ನೀಡಿದ್ದು, ಹೆತ್ತವರಿಗೆ ಸಾಂತ್ವನ ಹೇಳಿ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ವಾರ್ತಾ ಭಾರತಿ 14 Apr 2026 9:52 pm

ಶೇನ್ ವಾರ್ನ್ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ? ಅವರಿಗೆ ಇಷ್ಟವಿಲ್ಲದಿದ್ದರೂ ನೀಡಲಾಗಿತ್ತು ಎಂದಿದ್ದಾನೆ ಪುತ್ರ!

ಸ್ಪಿನ್ ಬೌಲಿಂಗ್ ದಂತಕತೆ ಶೇನ್ ವಾರ್ನ್ ಅವರ ನಿಧನಕ್ಕೆ ಕೋವಿಡ್ ಲಸಿಕೆಗಳೇ ಕಾರಣ ಎಂದು ಅವರ ಪುತ್ರ ಜಾಕ್ಸನ್ ಗಂಭೀರ ಆಱೋಪ ಮಾಡಿದ್ದಾರೆ. 2022ರಲ್ಲಿ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದ ವಾರ್ನ್, ಸರ್ಕಾರದ ಒತ್ತಾಯಕ್ಕೆ ಮೂರ್ನಾಲ್ಕು ಡೋಸ್ ಲಸಿಕೆ ಪಡೆದಿದ್ದರು ಎಂದು ಜಾಕ್ಸನ್ ತಿಳಿಸಿದ್ದಾರೆ. ವಾರ್ನ್‌ಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದರೂ, ಲಸಿಕೆಯು ಅದನ್ನು ಉಲ್ಬಣಗೊಳಿಸಿತು ಎಂಬುದು ಅವರ ವಾದ. ಅಧಿಕೃತ ಮರಣೋತ್ತರ ಪರೀಕ್ಷೆಯು ಇದನ್ನು 'ನೈಸರ್ಗಿಕ ಸಾವು' ಎಂದು ಹೇಳಿದ್ದರೂ, ಜಾಕ್ಸನ್ ಮಾತ್ರ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 14 Apr 2026 9:51 pm

ಡಾ.ಅಂಬೇಡ್ಕರ್ ಬಗ್ಗೆ ಓದಿರುವವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ: ಕುಂ.ವೀರಭದ್ರಪ್ಪ

‘ಅಂಬೇಡ್ಕರ್ ಹಬ್ಬ’ದ ಬೋಧಿವೃಕ್ಷ ಮತ್ತು ಬೋಧಿ ವರ್ಧನ ಪ್ರಶಸ್ತಿ ಪ್ರದಾನ ಸಮಾರಂಭ

ವಾರ್ತಾ ಭಾರತಿ 14 Apr 2026 9:46 pm

ಸಮಾನತೆ, ನ್ಯಾಯ ವ್ಯವಸ್ಥೆಗೆ ಅಡಿಪಾಯ ಹಾಕಿದ್ದು ಡಾ.ಬಿ.ಆರ್.ಅಂಬೇಡ್ಕರ್ : ಸಂತೋಷ್ ಲಾಡ್

ಧಾರವಾಡ : ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟವರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೆ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಎದುರಿಸಿದ ಕಷ್ಟಗಳು ಅಪಾರವಾಗಿದ್ದು, ಸಮಾಜದ ಅನ್ಯಾಯ ಮತ್ತು ಅಸಮಾನತೆ ನಡುವೆಯೆ ಅವರು ಉನ್ನತ ಶಿಕ್ಷಣ ಪಡೆದು, ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು. ಸಂವಿಧಾನವನ್ನು ರಚಿಸಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರ ಚರ್ಚೆ ನಡೆಸಿ ಈ ಮಹತ್ವದ ಗ್ರಂಥವನ್ನು ರೂಪಿಸಲಾಗಿದೆ. ಭಾರತದಲ್ಲಿ ಹಿಂದಿನಿಂದಲೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಇದ್ದ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅಂಬೇಡ್ಕರ್ ಹೋರಾಡಿ, ಎಲ್ಲ ವರ್ಗಗಳಿಗೂ ಸಮಾನ ಹಕ್ಕುಗಳನ್ನು ಒದಗಿಸುವ ವ್ಯವಸ್ಥೆಯನ್ನು ನಿರ್ಮಿಸಿದರು. ಸಂವಿಧಾನವು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲದೆ, ಎಲ್ಲ ನಾಗರಿಕರ ಹಿತಕ್ಕಾಗಿ ರೂಪಿತವಾಗಿದೆ ಎಂದು ಅವರು ಹೇಳಿದರು. ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯ ಸಾಧಿಸಲು ಅಗತ್ಯವಾಗಿದ್ದು, ಇದು ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಜಾರಿಯಲ್ಲಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶ. ಹೆಣ್ಣುಮಕ್ಕಳ ಹಕ್ಕುಗಳ ವಿಷಯದಲ್ಲಿ ಅಂಬೇಡ್ಕರ್ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರಿಗೆ ಆಸ್ತಿ ಹಕ್ಕು, ಮರು ವಿವಾಹ ಹಕ್ಕು ಹಾಗೂ ಸಮಾನ ಅವಕಾಶಗಳನ್ನು ನೀಡುವಲ್ಲಿ ಅವರ ಪಾತ್ರವನ್ನು ಸ್ಮರಿಸಬೇಕಾಗಿದೆ ಎಂದು ಸಂತೋಷ್ ಲಾಡ್ ತಿಳಿಸಿದರು. ಇಂದಿನ ಯುವಕರು ಅಂಬೇಡ್ಕರ್ ವಿಚಾರಗಳನ್ನು ಸರಿಯಾಗಿ ಅರಿತುಕೊಂಡು, ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲಿ ಪ್ರಚಾರ ಮಾಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಮಾನತೆ, ನ್ಯಾಯ ಮತ್ತು ಸಹಬಾಳ್ವೆಯ ಆಶಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶದಲ್ಲಿ ಸಾಮರಸ್ಯ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆಗೆ ಯುವ ಸಮೂಹ ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನೂ ಅರಿತುಕೊಳ್ಳಬೇಕು ಮತ್ತು ಯುವಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದಷ್ಟೇ ಸಾಕಾಗುವುದಿಲ್ಲ, ಆ ಹಕ್ಕುಗಳೊಂದಿಗೆ ಬಂದಿರುವ ಜವಾಬ್ದಾರಿಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದರು. ಹುಬ್ಬಳ್ಳಿಯ ಜೆ.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಎಡಿಸಿ ಗೀತಾ ಸಿ.ಡಿ, ಎಂ.ಬಿ.ಸನ್ನೇರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ್, ಮಹಾನಗರ ಸಮಿತಿ ಅಧ್ಯಕ್ಷ ಪ್ರಕಾಶ್ ಹಳಿಯಾಳ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮತ್ತು ಜಿ.ಪಂ. ಸಿಇಓ ಭುವನೇಶ ಪಾಟೀಲ್, ಎಸ್ಪಿ ಗುಂಜನ್ ಆರ್ಯ, ಎಸಿ ಶಾಲಂ ಹುಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸೆಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.  

ವಾರ್ತಾ ಭಾರತಿ 14 Apr 2026 9:41 pm

ಅಡುಗೆ ಅನಿಲ ಬೆಲೆ ಏರಿಕೆಯ ವಿರುದ್ಧ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ

ಖಾಲಿ ಸಿಲಿಂಡರ್ ಅಣಕು ಶವ ಯಾತ್ರೆ

ವಾರ್ತಾ ಭಾರತಿ 14 Apr 2026 9:39 pm

ಮಂಗಳೂರು: ಸಮುದಾಯ ಜಾಗೃತಿ ಅಭಿಯಾನ ಉದ್ಘಾಟನೆ

ಮಂಗಳೂರು, ಎ.14:ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ವತಿಯಿಂದ ಎ.22ರಂದು ನಗರದ ಪುರಭವನದಲ್ಲಿ ನಡೆಯಲಿರುವ ಜಿಲ್ಲೆಯ 600ಕ್ಕೂ ಹೆಚ್ಚು ಮೊಹಲ್ಲಾದ ಲೀಡರ್ಸ್ ಮೀಟ್‌ನ ಸಭೆ ಮತ್ತು ಎ.14ರಿಂದ ಜೂ.30ರವರೆಗೆ ಖೈರು ಉಮ್ಮ ಎಂಬ ಶೀರ್ಷಿಕೆಯಡಿ ಸುನ್ನಿ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ರಾಜ್ಯ ಮತ್ತು ಅಧೀನ ಘಟಕಗಳ ವತಿಯಿಂದ ನಡೆಯಲಿರುವ ಸಮುದಾಯ ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಪುಂಡೂರು ಇಬ್ರಾಹಿಂ ಸಖಾಫಿ ದುಆಗೈದರು. ಎಸ್‌ಜೆಎಂ ರಾಜ್ಯಾಧ್ಯಕ್ಷ ಜೆಪ್ಪುಅಬ್ದುಲ್ ರಹ್ಮಾನ್ ಮದನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್‌ಎಂಎ ರಾಜ್ಯ ಉಪಾಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಸಮುದಾಯ ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಮತ್ತು ಮೇ 8ರಂದು ಎಸ್‌ಎಂಎ ಹಮ್ಮಿಕೊಂಡ ಮದ್ರಸ ಡೇ ಎಂಬ ವಿಶೇಷ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಲೀಡರ್ಸ್ ಮೀಟ್‌ನ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಮೀದ್ ಹಾಜಿ ಕೊಡುಂಗಾಯಿ, ಮುಖ್ಯ ಸಂಚಾಲಕರಾಗಿ ಇಬ್ರಾಹೀಂ ನಈಮಿ ಹಾಗೂ ಸದಸ್ಯರಾಗಿ ಅಬ್ಬಾಸ್ ಸೆರ್ಕಳ, ಅನ್ಸಾರ್ ಕೃಷ್ಣಾಪುರ, ಎಂಬಿ. ಮುಹಮ್ಮದ್ ಸ್ವಾದಿಕ್ ಮಲೆಬೆಟ್ಟು, ಇಸ್ಮಾಯೀಲ್ ವೇಣೂರು, ಆಲಿಕುಂಞಿ ಮೋಂಟುಗೋಳಿ, ರಝಾಕ್ ಹಾಜಿ ಮುಕ್ಕ, ಅಬೂಬಕರ್ ಹಂದಾನಿ, ಯಾಕೂಬ್ ಲತ್ವೀಫಿ, ಹಮೀದ್ ಸಅದಿ ಮೂರುಗೋಳಿ, ಅಕ್ಬರ್ ಅಲಿ ಮದನಿ, ಇಬ್ರಾಹಿಮ್ ಸಖಾಫಿ ಕಬಕ, ನವಾಝ್ ಸಖಾಫಿ ಉಳ್ಳಾಲ, ರಫೀಕ್ ಝುಹ್ರಿ, ಹನೀಫ್ ಸಅದಿ, ರಝಾಕ್ ಸಖಾಫಿ ಕೊಳಕೆ, ಫಾರೂಕ್ ಶೇಡಿಗುರಿ, ನೌಫಲ್ ಅಹ್ಸನಿ ಪಕ್ಷಿಕೆರೆ ಆಯ್ಕೆಯಾದರು. ಇಬ್ರಾಹಿಂ ನಯೀಮಿ ವಂದಿಸಿದರು.

ವಾರ್ತಾ ಭಾರತಿ 14 Apr 2026 9:29 pm

2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ; ಈ ಬಾರಿ ದಸರಾ ರಜೆ 19 ದಿನ; ಶಾಲೆ ಆರಂಭ ಯಾವಾಗ?

2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ದಸರಾ ರಜೆಯು 19 ದಿನಗಳು ಇರಲಿವೆ. ಇನ್ನೂ ಈ ಬಾರಿ ಮೇ 29 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, 245 ಶಾಲಾ ಕೆಲಸದ ದಿನ ನಿಗದಿ ಮಾಡಲಾಗಿದೆ. 119 ರಜೆಗಳು ಸಿಗಲಿವೆ. ಪ್ರಮುಖ ದಿನಾಂಕಗಳು, ರಜೆ ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 14 Apr 2026 9:26 pm

ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರ ಆರೋಗ್ಯ ಸುಧಾರಿಸುವ ಹಾಗೂ ಉತ್ತಮ ಜೀವನಶೈಲಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಸಭೆಗಳು, ಸಮಾರಂಭಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿಗಳು, ಕಡಿಮೆ ಸಕ್ಕರೆ ಇರುವ ಆಹಾರ ಹಾಗೂ ಆರೋಗ್ಯಕರ ಪಾನೀಯಗಳನ್ನು ಮಾತ್ರ

ಒನ್ ಇ೦ಡಿಯ 14 Apr 2026 9:26 pm

ಸುಹಾಸಂನ ಅಧ್ಯಕ್ಷೆಯಾಗಿ ಸಂಧ್ಯಾ ಶೆಣೈ ಆಯ್ಕೆ

ಉಡುಪಿ, ಎ.14: ಖ್ಯಾತ ಲೇಖಕಿ, ಹಾಸ್ಯ ಬರಹಗಾರ್ತಿ ಉಡುಪಿಯ ಸಂಧ್ಯಾ ಶೆಣೈ ಅವರನ್ನು ಉಡುಪಿಯ ಸಾಹಿತ್ಯಿತ ಸಂಘಟನೆ ‘ಸುಹಾಸಂ’ನ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಮುರಳೀಧರ ಕೆ. ಅವರು ಸಂಘಟನೆಯ ನೂತನ ಪ್ರಧಾನ ಕಾರ್ಯದರ್ಶಿ ಯಾಗಿರುತ್ತಾರೆ. ಉಳಿದ ಪದಾಧಿಕಾರಿಗಳ ವಿವರ ಹೀಗಿದೆ. ಸುಹಾಸಂ ಸ್ಥಾಪಕಾಧ್ಯಕ್ಷರು:ಶ್ರೀನಿವಾಸ್ ರಾವ್, ಪೋಷಕಾಧ್ಯಕ್ಷರು: ಶಾಂತರಾಜ್ ಐತಾಳ್, ಗೌರವಾಧ್ಯಕ್ಷರು: ಕು.ಗೋಪಾಲ ಭಟ್, ಉಪಾಧ್ಯಕ್ಷರು: ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ರಾವ್, ಶ್ರೀನಿವಾಸ್ ಉಪಾಧ್ಯಾಯ. ಪ್ರಧಾನ ಕಾರ್ಯದರ್ಶಿ:ಮುರಳೀಧರ ಕೆ., ಕಾರ್ಯದರ್ಶಿ: ದಿನೇಶ ಉಪ್ಪೂರು, ಜೊತೆ ಕಾರ್ಯದರ್ಶಿ: ನಾರಾಯಣ ಮಡಿ, ಖಜಾಂಚಿ: ಕೆ. ಸದಾಶಿವ ರಾವ್, ರಾಜೇಶ್ ಪಣಿಯಾಡಿ, ಸಂಚಾಲಕಿ: ಶಿಲ್ಪಾ ಜೋಷಿ, ಸಹ ಸಂಚಾಲಕರು: ವಿವೇಕಾನಂದ ಪಾಂಗಣಾಯ. ಗೌರವ ಸಲಹೆಗಾರರು:ವಿಶ್ವನಾಥ್ ಶೆಣೈ, ಸಿ.ಎಸ್.ರಾವ್, ಮುರಳೀಧರ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೇಕಾರ್, ಗಣನಾಥ್ ಎಕ್ಕಾರ್, ಎಂ.ಎಲ್.ಸಾಮಗ, ಪ್ರಭಾಕರ ಭಂಡಾರಿ, ಜನಾರ್ದನ್ ಕೊಡವೂರು, ವಿಘ್ನೇಶ್ವರ ಅಡಿಗ, ನಾಗರಾಜ ಹೆಬ್ಬಾರ್, ಸುಗುಣ ಸುವರ್ಣ, ಗಂಗಾಧರ ಕಿದಿಯೂರು, ಡಾ.ಮಹಾಬಲೇಶ್ವರ ರಾವ್, ಡಾ.ಅಮ್ಮುಂಜೆ ಅರವಿಂದ ನಾಯಕ್, ಡಾ.ಸುರೇಶ್ ಶೆಣೈ, ರವಿರಾಜ್ ಹೆಚ್.ಪಿ., ರಾಮ್ ಭಟ್ ಸಜಂಗದ್ದೆ. ಕಾರ್ಯಕಾರಿ ಸಮಿತಿ ಸದಸ್ಯರು: ವಿದ್ಯಾ ಸರಸ್ವತಿ, ರಾಘವೇಂದ್ರ ನಾಯಕ್, ಹಫೀಜ್ ರೆಹಮಾನ್, ಪೂರ್ಣಿಮಾ ಜನಾರ್ದನ, ಸರೋಜ ಆಚಾರ್ಯ, ಮುರಳೀಧರ ಹಾಲಂಬಿ, ಸಿದ್ದಬಸಯ್ಯ ಚಿಕ್ಕಮಠ, ರಾಮಚಂದ್ರ ರಾವ್, ರಾಘವೇಂದ್ರ ಕರ್ವಾಲು, ಉಮಾಶಂಕರಿ, ವಾಸಂತಿ ಅಂಬಲ್ಪಾಡಿ, ಅನಿತಾ ಸಿಕ್ವೇರ, ರಂಜಿನಿ ವಸಂತ, ನರಸಿಂಹಮೂರ್ತಿ, ಶಶಿಕಾಂತ್ ಶೆಟ್ಟಿ, ಹಯವದನ ಉಪಾಧ್ಯಾಯ, ಎಂ.ಎಸ್.ಭಟ್.

ವಾರ್ತಾ ಭಾರತಿ 14 Apr 2026 9:16 pm

ಕನ್ನಡದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ, ಎ.14: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಮೇ 3ರಂದು ಡಾ.ಬಿ.ಭಾಸ್ಕರಾನಂದ ಕುಮಾರ್ ಸರ್ವಾಧ್ಯಕ್ಷತೆ ಯಲ್ಲಿ ನಡೆಯಲಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಡುಪಿ ತಾಲೂಕು ಮಟ್ಟದ ಸರಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿಭಾಗದಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲು ನಿರ್ಧರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು (ಮೊ.:9880811036) ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 14 Apr 2026 9:14 pm

ಪ್ರಧಾನಿ ಮೋದಿಗೆ ಟ್ರಂಪ್‌ ದೂರವಾಣಿ ಕರೆ; 40 ನಿಮಿಷ ಮಾತುಕತೆ

ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಹಾಗೂ ಇಸ್ಲಾಮಾಬಾದ್‌ ನಲ್ಲಿ ಸುಮಾರು 21 ಗಂಟೆಗಳ ಕಾಲ ನಡೆದ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡ ಬಳಿಕ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸುಮಾರು 40 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಳಿಕ ಇಬ್ಬರು ನಾಯಕರ ನಡುವಿನ ಮೊದಲ ಸಂಭಾಷಣೆ ಇದಾಗಿದೆ. ಮಾತುಕತೆಯ ವಿವರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, “ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿರುವ ಮಹತ್ವದ ಪ್ರಗತಿಯ ಕುರಿತು ಮಾತನಾಡಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯನ್ನೂ ಈ ವೇಳೆ ಇಬ್ಬರು ನಾಯಕರು ಚರ್ಚಿಸಿದ್ದು, ಹಾರ್ಮುಝ್ ಜಲಸಂಧಿಯನ್ನು ಮುಕ್ತ ಹಾಗೂ ಸುರಕ್ಷಿತವಾಗಿರಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ ಎಂದು ಮೋದಿ ಹೇಳಿದ್ದಾರೆ. ಮಧ್ಯಪ್ರಾಚ್ಯದ ರಾಜಕೀಯ ಉದ್ವಿಗ್ನತೆ ಉನ್ನತ ಮಟ್ಟದಲ್ಲಿರುವ ಸಂದರ್ಭದಲ್ಲಿ ಈ ಮಾತುಕತೆ ನಡೆದಿದ್ದು, ಎರಡೂ ದೇಶಗಳು ಅಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿವೆ. ಈ ನಡುವೆ, ಭಾರತಕ್ಕೆ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಭಾರತ–ಅಮೆರಿಕ ಸಂಬಂಧಗಳು ಬಲಿಷ್ಠ ನೆಲೆಯಲ್ಲಿವೆ ಎಂದು ಹೇಳಿದ್ದಾರೆ. “ಮುಂದಿನ ಕೆಲವು ದಿನಗಳು ಮತ್ತು ವಾರಗಳಲ್ಲಿ ಇಂಧನ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳು ನಡೆಯುವ ನಿರೀಕ್ಷೆಯಿದೆ. ಆರ್ಥಿಕ ಸಹಕಾರ ಮತ್ತಷ್ಟು ಗಾಢವಾಗಬಹುದು” ಎಂದು ಅವರು ತಿಳಿಸಿದ್ದಾರೆ. ಮಾತುಕತೆಯ ಕುರಿತು ವಿವರ ನೀಡಿದ ಗೋರ್, “ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ ಎಂದು ನಿಮಗೆ ತಿಳಿಸಬೇಕೆಂದು ನಾನು ಬಯಸುತ್ತೇನೆ” ಎಂದು ಟ್ರಂಪ್ ಮೋದಿಗೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇನ್ನೊಂದೆಡೆ, ದುರ್ಬಲವಾದ ಕದನ ವಿರಾಮದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ಈ ಹಿಂದೆ ಫೆಬ್ರವರಿ 2ರಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಲು ಹಾಗೂ ಮಾರ್ಚ್ 24ರಂದು ಪ್ರಾದೇಶಿಕ ಪರಿಸ್ಥಿತಿಗಳ ಕುರಿತು ಚರ್ಚಿಸಲು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಮಂಗಳವಾರದ ಸಂಭಾಷಣೆಯ ಸಂಪೂರ್ಣ ವಿವರಗಳನ್ನು ತಕ್ಷಣ ಬಹಿರಂಗಪಡಿಸದಿದ್ದರೂ, ಸುಮಾರು 40 ನಿಮಿಷಗಳ ಅವಧಿಯ ಈ ಮಾತುಕತೆ ಇಬ್ಬರು ನಾಯಕರ ನಡುವೆ ಮಹತ್ವದ ವಿಚಾರ ವಿನಿಮಯ ನಡೆದಿರುವುದನ್ನು ಸೂಚಿಸುತ್ತದೆ.

ವಾರ್ತಾ ಭಾರತಿ 14 Apr 2026 9:13 pm

Vijayapura | ಟಿಪ್ಪರ್‌ನಲ್ಲಿ ಜೀಪಿಗೆ ಢಿಕ್ಕಿ, 6 ಸುತ್ತಿನ ಗುಂಡಿನ ದಾಳಿ : ಗ್ರಾ.ಪಂ. ಸದಸ್ಯನ ಭೀಕರ ಹತ್ಯೆ

ವಿಜಯಪುರ : ನಗರದ ಹೊರವಲಯ ಅಲಿಯಾಬಾದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಗ್ರಾ.ಪಂ. ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ನಗರದ ಸಮೀಪ ಇರುವ ಅಲಿಯಾಬಾದ ಗ್ರಾ.ಪಂ. ಸದಸ್ಯ, ಪಾಂಗರುನ ದೊಡ್ಡಿ ನಿವಾಸಿ ರಾಜು ಕರೆ (48) ಮೃತಪಟ್ಟಿದ್ದಾರೆ. ರಾಜು ಕರೆ ತಮ್ಮ  ವಾಹನದಲ್ಲಿ ತೆರಳುತ್ತಿದ್ದಾಗ, ದುಷ್ಕರ್ಮಿಗಳು ಟಿಪ್ಪರ್ ಮೂಲಕ ಢಿಕ್ಕಿ ಹೊಡೆಸಿದ್ದು, ಬಳಿಕ ಜೀಪಿನ ಮೇಲೆ 6 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಜೀಪ್ ಡೋರ್ ಓಪನ್ ಆಗದ್ದಕ್ಕೆ ನಂತರ ಜೀಪಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳ ಭೀಕರ ದಾಳಿಯಿಂದ ರಾಜು ಕರೆ  ಜೀಪಿನಲ್ಲಿಯೇ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಕುರಿತು ತನಿಖೆ‌ ಮುಂದುವರಿದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾರ್ತಾ ಭಾರತಿ 14 Apr 2026 9:07 pm

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ವಿಜಯನಗರ : ಜಿಲ್ಲೆಯ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಮಾತನಾಡುತ್ತಾ, ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಅವರ ತತ್ವಗಳು ದಿಕ್ಕು ತೋರಿಸುತ್ತಿದ್ದು, ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಕೇವಲ ಹಕ್ಕುಗಳ ಹೋರಾಟಗಾರರಾಗಿ ಮಾತ್ರವಲ್ಲ, ಸಮಗ್ರ ಸಮಾಜದ ಮಾರ್ಗದರ್ಶಕರಾಗಿ ಗುರುತಿಸಬೇಕು ಎಂದು ಅಭಿಪ್ರಾಯಪಟ್ಟರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಮಾತನಾಡಿ, ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮಹಿಳಾ ಹಕ್ಕುಗಳ ಸ್ಥಾಪನೆಗೂ ಅವರ ಕೊಡುಗೆ ಮಹತ್ವದ್ದಾಗಿದೆ. ಅವರ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 9:06 pm

ಲೆಬನಾನ್‍ನ ಪ್ರಮುಖ ನಗರವನ್ನು ಸುತ್ತುವರಿದ ಇಸ್ರೇಲಿ ಪಡೆ: ವರದಿ

ಜೆರುಸಲೇಂ: ಕಳೆದ ವಾರದಲ್ಲಿ 100ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆಗೈದ ಬಳಿಕ ತನ್ನ ಪಡೆಗಳು ದಕ್ಷಿಣ ಲೆಬನಾನ್‍ನ ಪ್ರಮುಖ ಪಟ್ಟಣವನ್ನು ಸುತ್ತುವರಿದಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. 98ನೆ ಬೆಟಾಲಿಯನ್‍ನ ಪಡೆಗಳು ಆಯಕಟ್ಟಿನ ನಗರ ಬಿಂಟ್ ಜಬೆಲಿಯನ್ನು ಸುತ್ತುವರಿದಿದ್ದು ಅದರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಈ ನಗರದ ಸುತ್ತಮುತ್ತ ಕಳೆದ ಒಂದು ವಾರದಿಂದ ನಡೆದ ಸಂಘರ್ಷದಲ್ಲಿ ಇಸ್ರೇಲಿ ಪಡೆಗಳು 100ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆಗೈದಿವೆ' ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಹೇಳಿದ್ದಾರೆ. ನಗರದ ಪ್ರವೇಶ ದ್ವಾರದಲ್ಲಿ ಇಸ್ರೇಲಿ ಪಡೆಗಳಿಂದ ತೀವ್ರ ಫಿರಂಗಿ ದಾಳಿ ಮುಂದುವರಿದಿರುವುದಾಗಿ ಲೆಬನಾನ್‍ನ ಸರ್ಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ. ಈ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು `ಹಿಜ್ಬುಲ್ಲಾದ ಬೆದರಿಕೆಯನ್ನು ಇಸ್ರೇಲಿ ಪಡೆಗಳು ನಿವಾರಿಸಿವೆ. ಆದರೆ ಇನ್ನೂ ಬಹಳ ಕೆಲಸವನ್ನು ಮಾಡಬೇಕಿದೆ ಮತ್ತು ನಾವದನ್ನು ಮಾಡುತ್ತಿದ್ದೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 14 Apr 2026 9:02 pm

ಹೊಸಪೇಟೆಯಲ್ಲಿ ಅಂಬೇಡ್ಕರ್, ಜಗಜೀವನ ರಾಮ್ ಜಯಂತಿ ಸಂಭ್ರಮ

ಶಿಕ್ಷಣವೇ ಯಶಸ್ಸಿನ ಕೀಲಿ ಕೈ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ವಾರ್ತಾ ಭಾರತಿ 14 Apr 2026 9:01 pm

ತುಂಗಭದ್ರಾ ಜಲಾಶಯ ಗೇಟ್ ಕಾಮಗಾರಿ ಬಹುತೇಕ ಪೂರ್ಣ: ಮೇ 2ನೇ ವಾರಕ್ಕೆ ಸಂಪೂರ್ಣ ಮುಕ್ತಾಯ ಸಾಧ್ಯತೆ

ವಿಜಯನಗರ : ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಗೇಟ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೇವಲ ಒಂದು ಗೇಟ್‌ನಲ್ಲಿ ಮಾತ್ರ ಎರಕ್ಷನ್ ಕೆಲಸ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಗೇಟ್‌ಗಳ ಸ್ಥಿತಿಯನ್ನು ಮುಖ್ಯ ಇಂಜಿನಿಯರ್ ಕನ್ನಯ್ಯ ನಾಯ್ಡು ಪರಿಶೀಲಿಸಿ ನಂತರ ವೈಕುಂಠ ವಸತಿ ಗೃಹದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈಗಾಗಲೇ ಎಲ್ಲಾ ಗೇಟ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು ಯಾವುದೇ ತಾಂತ್ರಿಕ ದೋಷಗಳು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಚೈನ್ ಲಿಂಕ್ ಅಳವಡಿಕೆ ಕುರಿತು ಮಾತನಾಡಿದ ಅವರು, ಒಂದು ಗೇಟ್‌ಗೆ ಮಾತ್ರ ಪೂರ್ಣವಾಗಿ ಚೈನ್ ಲಿಂಕ್ ಅಳವಡಿಸಲಾಗಿದೆ. ಉಳಿದ ಗೇಟ್‌ಗಳಿಗೆ ಅಳವಡಿಸಲು ಗುತ್ತಿಗೆದಾರರು ಮುಂದೆ ಬರದ ಕಾರಣ ತಮಿಳುನಾಡಿನ ಖಾಸಗಿ ಕಂಪನಿಯೊಂದಿಗೆ ಕೆಲಸ ಆರಂಭಿಸಲಾಗಿದೆ. ಈ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಈ ಮಹತ್ವದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಸಹಕಾರದಿಂದ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಂಡ ಬಳಿಕ ರೈತರಿಗೆ ಎರಡು ಬೆಳೆಗಳಿಗೆ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು. ಮೇ ತಿಂಗಳ ಎರಡನೇ ವಾರದೊಳಗೆ ಸಂಪೂರ್ಣ ಕಾಮಗಾರಿ ಮುಗಿಯುವ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಾರ್ತಾ ಭಾರತಿ 14 Apr 2026 8:58 pm

RCB: ಬೆಂಗಳೂರಿನಲ್ಲಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆಡ್ತಾರಾ ವಿರಾಟ್‌ ಕೊಹ್ಲಿ?, ಇಲ್ಲಿದೆ ಮಾಹಿತಿ

Virat Kohli: ಮುಂಬೈನ ವಾಂಖೆಡೆಯಲ್ಲಿ ಏಪ್ರಿಲ್‌ 12ರಂದು ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಈ ವೇಳೆ ಗಾಯಗೊಂಡಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರು ಫೀಲ್ಡಿಂಗ್‌ಗೆ ಬಾರದೆ ಹೊರಗುಳಿದಿದ್ದರು. ಆದ್ದರಿಂದ ಮುಂದಿನ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಅವರು ಆಡುವುದು ಅನುಮಾನ ಎನ್ನುವ ಸುದ್ದಿ ಹಬ್ಬಿದ್ದವು.

ಒನ್ ಇ೦ಡಿಯ 14 Apr 2026 8:43 pm

ಸಿಎಂ ಹುದ್ದೆಗಾಗಿ ಖರ್ಗೆ ಮನೆಯಲ್ಲಿ ಡಿಕೆ ಶಿವಕುಮಾರ್ ಗಲಾಟೆ ಮಾಡಿದ್ರಾ? ಏನಿದು ಆರ್.ಅಶೋಕ ವ್ಯಂಗ್ಯ

R Ashoka on KPCC : ರಾಜ್ಯ ಕಾಂಗ್ರೆಸ್ಸಿನಲ್ಲಿ ಮತ್ತು ಸರ್ಕಾರದಲ್ಲಿ ಹೊಂದಾಣಿಕೆ ಎನ್ನುವುದೇ ಇಲ್ಲ. ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬೇಕಿತ್ತು. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತಿಗೆ ಬೆಲೆ ಅನ್ನೋದೇ ಇಲ್ಲ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಹೋಗಿ, ಗಲಾಟೆ ಮಾಡಿದ್ದಾರೆ ಎಂದು ವಿಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದ್ದಾರೆ.

ವಿಜಯ ಕರ್ನಾಟಕ 14 Apr 2026 8:29 pm

ತಮಿಳುನಾಡು ವಿಧಾನಸಭಾ ಚುನಾವಣೆ | ಮಹಿಳೆಯರಿಗೆ ತಿಂಗಳಿಗೆ 2,000 ರೂ., 3 ಎಲ್‌ಪಿಜಿ ಉಚಿತ: ಬಿಜೆಪಿ ಚುನಾವಣಾ ಪ್ರಣಾಳಿಕೆ

ಚೆನ್ನೈ: ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಮಂಗಳವಾರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮನೆಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ. 2,000 ನೆರವು ಮತ್ತು ಪ್ರತಿ ಮನೆಗೆ ಒಂದು ಬಾರಿ ರೂ. 10,000 ನೀಡುವುದಾಗಿ ಪಕ್ಷವು ಭರವಸೆ ನೀಡಿದೆ. ಅದೂ ಅಲ್ಲದೆ, ವರ್ಷದಲ್ಲಿ ಮೂರು ಹಬ್ಬಗಳ ಸಂದರ್ಭದಲ್ಲಿ- ಪೊಂಗಾಲ್, ತಮಿಳು ಪುತ್ತಾಂಡು ಮತ್ತು ದೀಪಾವಳಿ- ಮೂರು ಎಲ್‌ಪಿಜಿ ತುಂಬಿದ ಸಿಲಿಂಡರ್‌ಗಳನ್ನು ಉಚಿತವಾಗಿ ಕೊಡಲಾಗುವುದು ಎಂದು ಬಿಜೆಪಿಯ ಪ್ರಣಾಳಿಕೆ ಆಶ್ವಾಸನೆ ನೀಡಿದೆ. ಮುರುಗನ್ ದೇವರ ಸ್ಮರಣೆಗಾಗಿ ‘ತೈಪೂಸಮ್’ ಜಾತ್ರೆಯನ್ನು ರಾಜ್ಯ ಹಬ್ಬ ಎಂಬುದಾಗಿ ಘೋಷಿಸಲಾಗುವುದು ಎಂಬ ಭರವಸೆಯನ್ನೂ ಬಿಜೆಪಿ ನೀಡಿದೆ. ತಿರುಪರಂಕುಂಡ್ರಮ್ ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪವನ್ನು ಹಚ್ಚುವ ಸಂಪ್ರದಾಯವನ್ನು ಪುನರಾರಂಭಿಸಲಾಗುವುದು ಹಾಗೂ ಮುಂದಿನ ವರ್ಷಗಳಲ್ಲಿ ಅದನ್ನು ರಕ್ಷಿಸಿಕೊಂಡು ಹೋಗಲಾಗುವುದು ಎಂಬುದಾಗಿಯೂ ಅದು ಹೇಳಿದೆ. ತಮಿಳುನಾಡು ರೈಲ್ವೇ ಜಾಲವನ್ನು ಆಮೂಲಾಗ್ರ ಬದಲಾವಣೆಗೆ ಒಳಪಡಿಸಲಾಗುವುದು ಎಂದು ಹೇಳಿರುವ ಪ್ರಣಾಳಿಕೆ, ನ್ಯಾಯೋಚಿತ ದರದಲ್ಲಿ ಭೂಸ್ವಾಧೀನ ಮಾಡಲಾಗುವುದು ಎಂದಿದೆ. ಹೈಸ್ಪೀಡ್ ರೈಲು ಕಾರಿಡಾರ್‌ಗಳಂಥ ಯೋಜನೆಗಳ ಮೂಲಕ ರೈಲು ಸಂಪರ್ಕವನ್ನು ವಿಸ್ತರಿಸಲಾಗುವುದು ಎಂದು ಹೇಳಿದೆ. ಬಿಜೆಪಿಯು ಎಐಎಡಿಎಮ್‌ಕೆಯೊಂದಿಗೆ ಮೈತ್ರಿ ಏರ್ಪಡಿಸಿಕೊಂಡಿದ್ದು, ರಾಜ ವಿಧಾನಸಭಾ ಚುನಾವಣೆಯಲ್ಲಿ 27 ಸ್ಥಾನಗಳಿಂದ ಸ್ಪರ್ಧಿಸಲಿದೆ.

ವಾರ್ತಾ ಭಾರತಿ 14 Apr 2026 8:26 pm

Raichur | ವೈಜ್ಞಾನಿಕ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಸಿಐಟಿಯು ವತಿಯಿಂದ ಸಹಿ ಸಂಗ್ರಹ ಚಳುವಳಿ

ರಾಯಚೂರು: ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಹರಿಜನವಾಡ ಬಡಾವಣೆಯಲ್ಲಿ ಮಂಗಳವಾರ ಸಹಿ ಸಂಗ್ರಹ ಚಳುವಳಿ ನಡೆಯಿತು. ಚಳುವಳಿಗೆ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮಾ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಹಿ ಹಾಕುವ ಮೂಲಕ ಚಾಲನೆ ನೀಡಿದರು. ರಾಜ್ಯದಲ್ಲಿ 2025ರ ಏಪ್ರಿಲ್‌ನಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ್ದರೂ, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕಾರ್ಮಿಕರಿಗೆ ನೀಡಬೇಕಾದ ವೈಜ್ಞಾನಿಕ ಕನಿಷ್ಠ ವೇತನದ ಅಂತಿಮ ಪ್ರಕಟಣೆಯನ್ನು ರಾಜ್ಯ ಸರ್ಕಾರ ಇನ್ನೂ ಹೊರಡಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಡಿತಗೊಳಿಸುವ ಅಂಶಗಳಿದ್ದು, ರಾಜ್ಯ ಸರ್ಕಾರವು ಕಾರ್ಮಿಕರ ಪರವಾಗಿ ತಿದ್ದುಪಡಿಗಳನ್ನು ಮಾಡಿ ನಂತರವೇ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ವಲಯಗಳಲ್ಲಿ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವ ಕಾರ್ಮಿಕರು ಮತ್ತು ಖಾಯಾಮೇತರ ನೌಕರರಿಗೆ ಕೂಡ ಕನಿಷ್ಠ ವೇತನ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಈ ಸಹಿ ಸಂಗ್ರಹ ಚಳುವಳಿ ಮೇ 30ರವರೆಗೆ ಮುಂದುವರಿಯಲಿದ್ದು, ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಸಹಿ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಮಲ್ಲೇಶಪ್ಪ, ಕೆ.ಜಿ.ವೀರೇಶ, ನಿರ್ಮಲ, ಮಹಾದೇವಿ, ಆಂಜಿನಮ್ಮ, ತಿಮಲಮ್ಮ, ಅನಿಲ ಕುಮಾರ, ಜನಾರ್ಧನ ಅರಳಿಬೆಂಚಿ, ಶರಣಪ್ಪ, ಪ್ರತಿಭಾ ಈರಣ್ಣ ಬಂಢಾರಿ, ಆ‌ರ್. ಆಂಜಿನೇಯ, ಆರ್. ಹನುಮಂತು, ಮಹಾದೇವ ಕೊಲಮಿ, ಜಿ.ಎಸ್‌. ನರಸಪ್ಪ, ಚಂದ್ರಶೇಖರ, ವೆಂಕಟೇಶ, ಟಿ. ಬೂದೆಪ್ಪ, ನರಸಿಂಹಲು ಮಾಡಿಗೇರಿ, ರಾಮುಲು ದೇವಿನಗರ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 14 Apr 2026 8:25 pm

ಚತ್ತೀಸ್‌ಗಢ | ವಿದ್ಯುತ್ ಸ್ಥಾವರದ ಬಾಯ್ಲರ್ ಸ್ಪೋಟ: 9 ಮಂದಿ ಸಾವು

ರಾಯಪುರ: ಚತ್ತೀಸ್‌ಗಢದ ಶಕ್ತಿ ಜಿಲ್ಲೆಯ ಸಿಂಘಿತಾರಿ ಗ್ರಾಮದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದ ಪ್ರಮುಖ ಬಾಯ್ಲರ್ ಮಂಗಳವಾರ ಸ್ಫೋಟಗೊಂಡ ಪರಿಣಾಮ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಫೋಟ ಸಂಭವಿಸಿದ ಕೂಡಲೇ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ಧಾವಿಸಲು ಪ್ರಯತ್ನಿಸಿರುವುದರಿಂದ ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಯಿತು. ಇದರಿಂದ ಸುಮಾರು 30ರಿಂದ 40 ಮಂದಿ ಗಂಭೀರ ಗಾಯಗೊಂಡರು. ಹಲವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆ ಅಧಿಕಾರಿಗಳು ಇನ್ನಷ್ಟೇ ದೃಢಪಡಿಸಬೇಕಿದೆ. ‘‘ಶಕ್ತಿ ಜಿಲ್ಲೆಯ ಸಿಂಘಿ ತರೈ ಪ್ರದೇಶದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಿಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡರವನ್ನು ರಾಯಗಡದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಶಕ್ತಿ ಜಿಲ್ಲಾ ಎಸ್‌ಪಿ ಪ್ರಫುಲ್ ಠಾಕೂರ್ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ತುರ್ತು ಪ್ರತಿಕ್ರಿಯೆ ತಂಡಗಳು ಹಾಗೂ ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಪ್ರಾಥಮಿಕ ಮಾಹಿತಿ ಪ್ರಕಾರ ಈ ಘಟನೆ ಅಪರಾಹ್ನ 2 ಗಂಟೆಗೆ ಸಂಭವಿಸಿದೆ. ಸ್ಪೋಟ ಸಂಭವಿಸಿದ ಸಂದರ್ಭ ಎಲ್ಲಾ ಕಾರ್ಮಿಕರು ಘಟಕದ ಒಳಗಡೆ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಂಭವಿಸಿದ ಸ್ಫೋಟ ಈ ಪ್ರದೇಶದಲ್ಲಿ ಆಂತಕದ ವಾತಾವರಣವನ್ನು ನಿರ್ಮಾಣ ಮಾಡಿತು. ಆದರೆ, ಘಟನೆ ನಡೆದ ಬಳಿಕ ಕೂಡಲೇ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 14 Apr 2026 8:23 pm

Madhya Pradesh | ಅಪಘಾತದಲ್ಲಿ ಪತ್ರಕರ್ತ ಮೃತ್ಯು; ಆ್ಯಂಬುಲೆನ್ಸ್ ವಿಳಂಬವೇ ಸಾವಿಗೆ ಕಾರಣ ಎಂದ ಕುಟುಂಬ

ಭೋಪಾಲ: ಮಧ್ಯಪ್ರದೇಶದಲ್ಲಿ ಸಂಭವಿಸಿದ ಅಫಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸೂಕ್ತ ಸಮಯದಲ್ಲಿ ಆಗಮಿಸದೇ ಇರುವುದು ಸಾವಿಗೆ ಕಾರಣ ಎಂದು ಅವರ ಕುಟುಂಬದ ಆರೋಪಿಸಿದೆ. ‘ಸ್ವರ್ಣ ಮಂಗಳಂ’ ಮಾಸಿಕ ಪತ್ರಿಕೆಯ ಸಂಪಾದಕಾರದ ದೀಪಕ್ ಸೋನಿ ಅವರು ಶುಕ್ರವಾರ ರಾಯ್‌ಸನ್‌ನಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಕುಟುಂಬದ ಪ್ರಕಾರ, ಅಪಘಾತ ಸಂಭವಿಸಿದ ಬಳಿಕ ಸೋನಿ ಅವರನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರ ಸ್ಥಿತಿ ಗಂಭೀರವಾಗಿದ್ದರೂ ಸುಮಾರು ಎರಡು ಮೂರು ಗಂಟೆಗಳ ಕಾಲ ಆ್ಯಂಬುಲೆನ್ಸ್ ಆಗಮಿಸಲಿಲ್ಲ. ಸಮಯ ಕಳೆಯುತ್ತಿದ್ದಂತೆ ಯಾವುದೇ ಆಯ್ಕೆಗಳು ಇಲ್ಲದಿರುವುದರಿಂದ ಸೋನಿ ಅವರನ್ನು ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಭೋಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಕುಟುಂಬ ಹೇಳಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಪಾಲ್ಗೊಂಡಿದ್ದ ಕೃಷಿ ಮೇಳಕ್ಕೆ ಸಂಬಂಧಿಸಿದ ‘‘ವಿಐಪಿ ಕರ್ತವ್ಯ’’ಕ್ಕೆ ಜಿಲ್ಲಾಸ್ಪತ್ರೆಯಲ್ಲಿದ್ದ ಆ್ಯಂಬಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಸೋನಿ ಕುಟುಂಬ ಆರೋಪಿಸಿದೆ. ಆ್ಯಂಬುಲೆನ್ಸ್‌ಗಳು ವಿಐಪಿ ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದವು. ತತ್‌ಕ್ಷಣ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿವಿಲ್ ಸರ್ಜನ್ ಯಶ್ಪಾಲ್ ಬಲಿಯಾನ್ ಅವರು ದೂರವಾಣಿ ಮಾತುಕತೆಯ ಸಂದರ್ಭ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಪತ್ರಕರ್ತರು ಹಾಗೂ ನಾಗರಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಯ್‌ಸನ್‌ನ ಪತ್ರಕರ್ತರ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ರೀತಿಯ ಮನವಿಯನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಅವರಿಗೆ ಕೂಡ ಸಲ್ಲಿಸಲಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ವಾರ್ತಾ ಭಾರತಿ 14 Apr 2026 8:21 pm

Raichur | ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕಿ ಕರೆಮ್ಮ ಜಿ.ನಾಯಕ್

ರಾಯಚೂರು: ಭಾರತದ ಪ್ರತಿ ಪ್ರಜೆಯೂ ಬಾಬಾ ಸಾಹೇಬರ ಕೊಡುಗೆಗಳನ್ನು ಸ್ಮರಿಸಿ ಗೌರವಿಸುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ್ ಹೇಳಿದರು. ದೇವದುರ್ಗ ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಪರಿಣಾಮವಾಗಿ ಇಂದು ನಾವು ಸುಖಕರ ಜೀವನ ನಡೆಸಲು ಸಾಧ್ಯವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರ ಭವಿಷ್ಯ ಬಂಗಾರವಾಗುತ್ತದೆ ಎಂದು ಅವರು ತಿಳಿಸಿದರು. ಅಂಬೇಡ್ಕರ್ ಅವರ ಬದುಕು, ಜೀವನಶೈಲಿ ಹಾಗೂ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಅವರ ಕೊಡುಗೆಗಳಿಂದಲೇ ದೇಶದಲ್ಲಿ ಸಮಾನತೆ, ಹಕ್ಕು ಮತ್ತು ಕರ್ತವ್ಯಗಳ ಅರಿವು ಸಾಧ್ಯವಾಗಿದೆ ಎಂದು ಹೇಳಿದರು. ಅಸ್ಪೃಶ್ಯತೆ ಎಂಬುದು ಜಾತಿ ಆಧಾರಿತ ತಾರತಮ್ಯವಾಗಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ. ಭಾರತೀಯ ಸಂವಿಧಾನದ ಅನುಚ್ಛೇದ 17ರ ಅಡಿಯಲ್ಲಿ ಇದು ಕಾನೂನುಬಾಹಿರವಾಗಿದೆ ಎಂದು ಅವರು ವಿವರಿಸಿದರು. ತಮ್ಮ ಬಾಲ್ಯ ಅನುಭವವನ್ನು ಹಂಚಿಕೊಂಡ ಶಾಸಕಿ ಕರೆಮ್ಮ ಅವರು, ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಂಡು ಯುವಕರು ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಹಶಿಲ್ದಾರ ನಾಗಮ್ಮ ಕಟ್ಡಿಮನಿ,ಸಾನಿದ್ಯ ನಾಗರತ್ನ ಬನ್ತೇಜಿ ಲುಂಬಿನಿ‌ ಬುದ್ದ ಬೆಂಗಳೂರು, ಶರಣಗೌಡ ಮದರಕಲ್,ಆದನಗೌಡ ಬುಂಕಲದೊಡ್ಡಿ,ಲಕ್ಷ್ಮಣ‌ಜ್ಯೋತಿ,ಹನುಮಂತ್ರಾಯ ಶಾಖೆ,ಬಸವರಾಜ ಹಟ್ಟಿ,ಸಮಾಜಕಲ್ಯಾಣ ಅಧಿಕಾರಿ ರಾಜಕುಮಾರ,ಪಿ.ಐ.ಮಂಜುನಾಥ, ಸಿ.ಪಿ.ಐ ಗುಂಡುರಾವ್,ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ,ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಶಿವರಾಜ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 8:18 pm

Mumbai | ಸಂಗೀತ ಕಾರ್ಯಕ್ರಮದಲ್ಲಿ ಅತಿಯಾದ ಮಾದಕ ದ್ರವ್ಯ ಸೇವನೆ ಶಂಕೆ: ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವು

ಮುಂಬೈ: ಮುಂಬೈಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅತಿಯಾದ ಮಾದಕ ದ್ರವ್ಯ ಸೇವಿಸಿದ ಪರಿಣಾಮ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗೊರೆಗಾಂವ್‌ನ ನೆಸ್ಕೋ ಸೆಂಟರ್‌ನಲ್ಲಿ ಎಪ್ರಿಲ್ 11ರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 4,000 ಜನರು 2,000 ರೂ. ಪ್ರವೇಶ ಶುಲ್ಕ ಪಾವತಿಸಿ ಪಾಲ್ಗೊಂಡಿದ್ದರು. ಪಾಲ್ಗೊಂಡವರಲ್ಲಿ ಕೆಲವರು ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಅವರು ನಿಷೇಧಿತ ಎಂಡಿಎಂಎ ಸೇವಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾತ್ರಿ ಸುಮಾರು 12 ಗಂಟೆಗೆ ಮೂವರು ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ 24 ವರ್ಷದ ಯುವತಿ ಹಾಗೂ 28 ವರ್ಷದ ಯುವಕ ಮೃತಪಟ್ಟಿದ್ದಾರೆ. 25 ವರ್ಷದ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಮುಂಬೈ ಪೊಲೀಸ್ ಮೂಲದ ಪ್ರಕಾರ, ಸಾವನ್ನಪ್ಪಿದ ವಿದ್ಯಾರ್ಥಿಗಳಲ್ಲಿ ಓರ್ವ ಕಾರ್ಯಕ್ರಮಕ್ಕೆ ಹೋಗುವಾಗ ರಿಕ್ಷಾದೊಳಗೇ ಮಾತ್ರೆ ಸೇವಿಸಿದ್ದಾನೆ. ಅನಂತರ ಆತ ಕಾರ್ಯಕ್ರಮದಲ್ಲಿ ಎರಡನೇ ಮಾತ್ರೆ ಸೇವಿಸಿದ. ಇದರಿಂದ ಆತನ ದೇಹದಲ್ಲಿ ಮಾದಕ ದ್ರವ್ಯದ ಪ್ರಮಾಣ ಹೆಚ್ಚಾಯಿತು. ಅಧಿಕ ಪ್ರಮಾಣದಲ್ಲಿ ಮಾದಕ ದ್ರವ್ಯ ಸೇವಿಸಿರುವುದು ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾತ್ರೆಗಳನ್ನು ಪೂರೈಸಿದ ವ್ಯಕ್ತಿ ಕೂಡ ವಿದ್ಯಾರ್ಥಿ ಎಂದು ಹೇಳಲಾಗಿದೆ. ಆತನನ್ನು ಬಂಧಿಸಲಾಗಿದೆ. ಆತನಿಂದ 6ರಿಂದ 7 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈಯ ಹೊರಗಿನಿಂದ ಈ ಮಾದಕ ದ್ರವ್ಯಗಳನ್ನು ತರಲಾಗಿದೆ ಎಂದು ತನಿಖೆ ಬಹಿರಂಗಪಡಿಸಿದೆ. ಬಂಧಿತರಲ್ಲಿ ಕಾರ್ಯಕ್ರಮದ ಸಂಘಟಕರಾದ ವಿಹಾನ್ ಆಲಿಯಾಸ್ ಆಕಾಶ್ ಸಾಮಲ್, ನೆಸ್ಕೊ ಕಾರ್ಯಕ್ರಮ ಸಂಘಟನೆ ಹಾಗೂ ನಿರ್ವಹಣೆಯ ಸನ್ನಿ ವಿನೋದ್ ಜೈನ್, ಆಂತರಿಕ ಭದ್ರತಾ ತಂಡದ ಸದಸ್ಯ ಬಾಲಕೃಷ್ಣ ಬಲರಾಮ್ ಹಾಗೂ ಇತರ ಇಬ್ಬರು ವಿದ್ಯಾರ್ಥಿಗಳು ಸೇರಿದ್ದಾರೆ. ‘‘ಪರಿಸ್ಥಿತಿಯ ಗಂಭೀರತೆ ಬಗ್ಗೆ ನಮಗೆ ಅರಿವಿದೆ. ನಾವು ಸಂಬಂಧಿತ ಅಧಿಕಾರಿಗಳಿಗೆ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಸತ್ಯ ಆದಷ್ಟು ಬೇಗ ಹೊರಬರಲು ಸಂಬಂಧಿತ ಎಲ್ಲಾ ಮಾಹಿತಿ ಹಾಗೂ ನೆರವವನ್ನು ಒದಗಿಸಲಾಗುವುದು’’ ಎಂದು ನೆಸ್ಕೊ ಸೆಂಟರ್‌ನ ವಕ್ತಾರನ ಹೇಳಿಕೆ ತಿಳಿಸಿದೆ.

ವಾರ್ತಾ ಭಾರತಿ 14 Apr 2026 8:17 pm

ರಾಯಚೂರು | ದ್ವಿತೀಯ ಪಿಯುಸಿ ಫಲಿತಾಂಶ : ಪೂರ್ಣಿಮಾ ಪದವಿ ಪೂರ್ವ (ವೇದಾಂತ ) ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ರಾಯಚೂರು : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ನಗರದ ಪೂರ್ಣಿಮಾ ಪದವಿ ಪೂರ್ವ ಕಾಲೇಜಿನ (ವೇದಾಂತ ) ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೃತಿಕಾ ಬೊಹಾರಾ ಶೇ.98.83 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಹಾಗೂ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ದೀಪ್ತಿ ಕಿಲಿಕಿಲೆ ಶೇ.98.67 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದು. ಹಿತೇನ್ ಜೈನ್ ಶೇ.98 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದಿದ್ದು, 109 ವಿದ್ಯಾರ್ಥಿಗಳಲ್ಲಿ 58 ಡಿಸ್ಟಿಂಕ್ಷನ್ ಪಡೆದರೆ, 51 ವಿದ್ಯಾರ್ಥಿಗಳು ಪ್ರಥಮಸ್ಥಾನವನ್ನು ಪಡೆದಿದ್ದು , ವಿಶೇಷವಾಗಿ ಸಂಖ್ಯಾಶಾಸ್ತ್ರದಲ್ಲಿ 100 ಕ್ಕೆ 100 ಅಂಕಗಳನ್ನು 26 ವಿದ್ಯಾರ್ಥಿಗಳು, ಲೆಕ್ಕಶಾಸ್ತ್ರದಲ್ಲಿ 24, ವ್ಯವಹಾರ ಅಧ್ಯಯನದಲ್ಲಿ 10, ಅರ್ಥಶಾಸ್ತ್ರ 02 ವಿದ್ಯಾರ್ಥಿಗಳು ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಪೂರ್ಣಿಮಾ ಕಾಲೇಜು ಮತ್ತೊಮ್ಮೆ ಪ್ರಾಬಲ್ಯ ಮರೆದಿದೆ. ವಿಜ್ಞಾನ ವಿಭಾಗದಲ್ಲಿ ಶಬರೀಶ್ ಬಿ. ಶೇ.95.83 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ವಿ.ಪಲ್ಲವಿ ಶೇ.95.17 ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು, ಹೆಚ್.ರಚಿತ್ ಶೇ.95 ರಷ್ಟು ಅಂಕವನ್ನು ಪಡೆಯುವ  ಮೂಲಕ ತೃತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ವಿಜ್ಞಾನ ವಿಭಾಗದ 202 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ ,137 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ ಒಟ್ಟಾರೆ ಶೇ.99.50 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಗಣಿತಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು , ಗಣಕಶಾಸ್ತ್ರದಲ್ಲಿ 2 , ಭೌತಶಾಸ್ತ್ರ 1 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಗ್ರಾಮೀಣ ಪ್ರತಿಭೆಗಳಾದ ಅಂಕಿತಾ ಹಾಗೂ ಶೋಭಾ ವಿದ್ಯಾರ್ಥಿನಿಯರು ಶೇ.92.33 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದು , ದ್ವಿತೀಯ ಸ್ಥಾನವನ್ನು ಅಮೃತಾ ಬಸವರಾಜ್ ಶೇ.92 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು, ಯಂಕಮ್ಮ ಜಾಲಡದಿನ್ನಿ ಶೇ.89.33 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನವನ್ನು ಪಡೆದಿದ್ದು‌, ಕಲಾ ವಿಭಾಗದಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ , 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಈ ಅತ್ಯುತ್ತಮ ಸಾಧನೆಗೆ ಕಾಲೇಜಿನ ಉಪನ್ಯಾಸಕರು ಮತ್ತು ಆಡಳಿತಾಧಿಕಾರಿಗಳಾದ ರಾಕೇಶ್ ರಾಜಲಬಂಡಿಯವರು ಶುಭಾಶಯ ಕೋರಿದ್ದಾರೆ.

ವಾರ್ತಾ ಭಾರತಿ 14 Apr 2026 8:14 pm

ಕುಮಾರಣ್ಣ ಮುಂದಿನ CM ಎಂದವರಿಗೆ ನಯವಾಗಿ ಬುದ್ಧಿಮಾತು ಹೇಳಿದ ಎಚ್‌ಡಿ ಕುಮಾರಸ್ವಾಮಿ; ರಾಜ್ಯ ಸರ್ಕಾರಕ್ಕೊಂದು ಸಂದೇಶ

ಕಾರ್ಯಕ್ರಮದಲ್ಲಿ ಕುಮಾರಣ್ಣ ಮುಂದಿನ ಸಿಎಂ ಎಂಬ ಜೆಡಿಎಸ್‌ ಮುಖಂಡರು ಅಭಿಮಾನಿಗಳ ಘೋಷಣೆಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅಂಬೇಡ್ಕರ್ ಕಾರ್ಯಕ್ರಮದಲ್ಲಿ ನನ್ನ ವೈಭವೀಕರಣ ಬೇಡ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಮಾತ್ರವಲ್ಲದೇ, ವಾರಕ್ಕೆ 2 ದಿನ ಕರ್ನಾಟಕದಲ್ಲಿ ಇರುತ್ತೇನೆ ರಾಜ್ಯ ಸರ್ಕಾರದ ವಿರುದ್ಧ ದನಿ ಎತ್ತುವೆ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ವಿಜಯ ಕರ್ನಾಟಕ 14 Apr 2026 8:07 pm

ಬಿಕ್ಲು ಶಿವ ಕೊಲೆ ಪ್ರಕರಣ; ಜಾಮೀನು ರದ್ದು ಕೋರಿದ ಅರ್ಜಿ ಸಂಬಂಧ ಬೈರತಿ ಬಸವರಾಜ್‌ಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿರುವ ಅರ್ಜಿ ಸಂಬಂಧ ಐದನೇ ಆರೋಪಿ ಬೈರತಿ ಬಸವರಾಜ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್‌ಗೆ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್‌ 12ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿ ಬೈರತಿ ಬಸವರಾಜ್‌ಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್‌ 12ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿತ್ತು.

ವಾರ್ತಾ ಭಾರತಿ 14 Apr 2026 8:07 pm

ವಿಟ್ಲ| ಅಕ್ರಮ ಸುಡುಮದ್ದು ತಯಾರಿಸುತ್ತಿದ್ದ ಪ್ರಕರಣ: ಆರೋಪಿ ಜಗದೀಶ ಪೂಜಾರಿ ಸೆರೆ

ವಿಟ್ಲ : ಕಂಬಳಬೆಟ್ಟು ಸಮೀಪದ ಅಮೈ ಎಂಬಲ್ಲಿ ಮನೆಯ ಆವರಣದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಸುಡುಮದ್ದು ತಯಾರಿಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ತನ್ನ ಮನೆಯ ಆವರಣದಲ್ಲಿ ಸುಡುಮದ್ದು ತಯಾರಿಗೆ ಬೇಕಾದ ಸ್ಫೋಟಕ ಸಾಮಗ್ರಿಗಳನ್ನು ಶೇಖರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ನೇತೃತ್ವದ ತಂಡ ದಾಳಿ ನಡೆಸಿದೆ. ಸ್ಥಳ ಪರಿಶೀಲನೆ ವೇಳೆ ಸುಮಾರು 1.9 ಕೆ.ಜಿ ಯಷ್ಟು ಸ್ಫೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಗದೀಶ ಪೂಜಾರಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 93/2026 ಕಲಂ: 9B Explosive Act 1884, ಕಲಂ: 5 Explosive Substances Act 1908, ಹಾಗೂ ಕಲಂ: 288 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 14 Apr 2026 8:06 pm

ರಾಯಚೂರಿನಲ್ಲಿ 38 ಅಂಬೇಡ್ಕರ್ ಅಭಿಮಾನಿಗಳಿಗೆ ‘ಭೀಮಾ ಮಾಲೆ’ ಧಾರಣೆ

ರಾಯಚೂರು: ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಹುಜನ ಸಂಘರ್ಷ ಸಮಿತಿಯ ನೇತೃತ್ವದಲ್ಲಿ 38 ಅಂಬೇಡ್ಕರ್ ಅಭಿಮಾನಿಗಳು ‘ಭೀಮಾ ಮಾಲೆ’ ಧರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಭಾಗವಹಿಸಿದವರು ಮದ್ಯಪಾನ ಮಾಡದಿರುವುದು, ಸುಳ್ಳು ಹೇಳದಿರುವುದು, ವೈಭಿಚಾರ, ಪ್ರಾಣಹಿಂಸೆ, ಕಳ್ಳತನ ಮಾಡದಿರುವುದು ಸೇರಿದಂತೆ ಸಂವಿಧಾನದ ಆಶಯಗಳು ಹಾಗೂ ಬಹುತ್ವ ಭಾರತದ ಸಂರಕ್ಷಣೆ ಕುರಿತಾಗಿ 11 ಪ್ರತಿಜ್ಞೆಗಳನ್ನು ಸ್ವೀಕರಿಸಿದರು. ಬಹುಜನ ಸಂಘರ್ಷ ಸಮಿತಿಯ ಸಂಚಾಲಕ ಶರಣಪ್ಪ ಬಲ್ಲಟಗಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ವರ್ಷ 38 ಜನರು ಭೀಮಾ ಮಾಲೆ ಧರಿಸಿದ್ದು, ಮುಂದಿನ 15 ದಿನಗಳ ಕಾಲ ಅವರು ಬಿಳಿ ಅಂಗಿ, ನೀಲಿ ಲುಂಗಿ ಮತ್ತು ನೀಲಿ ಟವೆಲ್ ಧರಿಸಿ ಅಂಬೇಡ್ಕರ್ ಅವರ ಬರಹಗಳು ಹಾಗೂ ಭಾಷಣಗಳನ್ನು ಅಧ್ಯಯನ ಮಾಡಿ ಜನರಿಗೆ ತಿಳಿಸುವ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಸಮಾರೋಪ ಹಾಗೂ ಮಾಲೆ ವಿಸರ್ಜನೆ ಬುದ್ಧ ಪೂರ್ಣಿಮೆಯ ದಿನ ಮಸ್ಕಿಯ ಐತಿಹಾಸಿಕ ಅಶೋಕ ಶಿಲಾಶಾಸನದ ಬಳಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಹಾಗೂ ಭೀಮ ಮಾಲಾಧಾರಿ ಎಂ.ಆರ್ ಭೇರಿ, ಸೋಮಣ್ಣ ನಾಯಕ, ರಮೇಶ ಬಲ್ಲಟಗಿ, ರಮೇಶ ಮರಾಠ, ಯಮನಪ್ಪ ಪನ್ನೂರು, ಸಂಪತ್ ರಾಜ್, ಮರಿಸ್ವಾಮಿ ಅಮರಾವತಿ, ವೆಂಕನಗೌಡ, ಮಾರೆಪ್ಪ ಹರವಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 8:06 pm

Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ?

Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ ಸುಮಾರು 60ರ ಸರಾಸರಿ ಮತ್ತು 163ರ ಸ್ಟ್ರೈಕ್ ರೇಟ್‌ನಲ್ಲಿ 179 ರನ್ ಗಳಿಸಿದ್ದಾರೆ. ಆದರೂ ಸಹ, ಅವರ ನಿಧಾನಗತಿಯ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಕೆಕೆಆರ್ ಪರ ಆಡಿದ್ದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್

ಒನ್ ಇ೦ಡಿಯ 14 Apr 2026 8:00 pm

ಶಹಾಪುರ | ತಾಲೂಕಾಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ

ಶಹಾಪುರ: ತಾಲೂಕಾಡಳಿತದ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ನಗರದ ನಗರಸಭೆ ಆವರಣದಲ್ಲಿ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಕಲಬುರಗಿಯ ಕವಿ ಹಾಗೂ ಸಾಹಿತಿ ಡಾ.ಪಿ.ನಂದಕುಮಾರ ಅವರು, ಶೋಷಿತ ಸಮುದಾಯದ ಹಳ್ಳಿಯಲ್ಲಿ ಜನಿಸಿದ ಡಾ.ಅಂಬೇಡ್ಕರ್ ಅನೇಕ ಅವಮಾನಗಳನ್ನು ಮೀರಿ ಅಸಂಖ್ಯಾತ ಪದವಿಗಳನ್ನು ಪಡೆದು ಭಾರತದ ಸಂವಿಧಾನದ ರೂಪಕರ್ತರಾಗಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಎಂದು ಹೇಳಿದರು. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳನ್ನು ಅಳವಡಿಸಿಕೊಂಡು ಜಾಗೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ತಿಳಿಸಿದರು. ತಹಶೀಲ್ದಾರ್ ಸಿದ್ದಾರೂಡ ಬನ್ನಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಜಯಂತೋತ್ಸವ ಸಮಿತಿ ಅಧ್ಯಕ್ಷ ರಾಜು ಅಣಬಿ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೊಳ ಅವರು ಜ್ಯೋತಿ ಬೆಳಗಿಸಿದರು. ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋನಪ್ಪ ಶಿರವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಶರಬೈ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಸಿಪಿಐ ಶರಣಗೌಡ ನ್ಯಾಮಣನವರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಬಾಲರಾಜ ಕೋರವಾರ, ಪಿ.ಐ. ಎಸ್.ಎಂ. ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಮೆರವಣಿಗೆಗೆ ಚಾಲನೆ : ನಗರದ ಬುದ್ದನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೊಳ ಟ್ರಾಕ್ಟರ್ ಚಾಲನೆ ಮಾಡುವ ಮೂಲಕ ಮೆರವಣಿಗೆ ಆರಂಭಿಸಿದರು. ಈ ವೇಳೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಪಿ.ಐ. ಎಸ್.ಎಂ. ಪಾಟೀಲ್, ದಲಿತ ಮುಖಂಡ ನೀಲಕಂಠ ಬಡಿಗೇರ, ರಾಜು ಅಣಬಿ, ಭೀಮರಾಯ ತಳವಾರ ಸೇರಿದಂತೆ ಹಲವರು ಭಾಗವಹಿಸಿದರು.

ವಾರ್ತಾ ಭಾರತಿ 14 Apr 2026 8:00 pm

IPL 2026- ವಾಂಖೆಡೆಯಲ್ಲಿ ಗಾಯಗೊಂಡಿದ್ದ RCB ಸ್ಟಾರ್ ವಿರಾಟ್ ಕೊಹ್ಲಿ ಚಿನ್ನಸ್ವಾಮಿಯಲ್ಲಿ ಲಖನೌ ವಿರುದ್ಧ ಆಡ್ತಾರಾ?

Virat Kohli Injury- ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾದದ ನೋವಿನಿಂದಾಗಿ ಫೀಲ್ಡಿಂಗ್ ಮಾಡದ ವಿರಾಟ್ ಕೊಹ್ಲಿ ಅವರು, ಏಪ್ರಿಲ್ 15 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅವರು ಅಭ್ಯಾಸ ಸೆಶನ್‌ನಲ್ಲಿ ಅತ್ಯಂತ ಸಕ್ರಿಯವಾಗಿ ಮತ್ತು ಲವಲವಿಕೆಯಿಂದ ಪಾಲ್ಗೊಂಡಿರುವುದು ಅಭಿಮಾನಿಗಳಲ್ಲಿ ಆಶಾವಾದ ಮೂಡಿಸಿದೆ. ಈ ಬಗ್ಗೆ ಮ್ಯಾನೇಜ್‌ಮೆಂಟ್ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ತಾಲೀಮಿನ ವೇಳೆ ಅವರ ಲವಲವಿಕೆ ಗಮನಿಸಿದ ಬಳಿಕ ಅವರು ಆಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿಜಯ ಕರ್ನಾಟಕ 14 Apr 2026 7:59 pm

Yadgir | ಡಾ.ಅಂಬೇಡ್ಕರ್‌ ವ್ಯಕ್ತಿಯಲ್ಲ, ಜ್ಞಾನದ ಶಕ್ತಿ: ಭೀಮಾಶಂಕರ ದೊಡ್ಮನಿ

ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಜ್ಞಾನದ ಶಕ್ತಿ ಮತ್ತು ದೇಶದ ಜನರ ಆರಾಧ್ಯ ದೈವ ಎಂದು ಭಾರತಾಂಬೆ ಸಂಸ್ಥೆಯ ಮುಖ್ಯಸ್ಥ ಭೀಮಾಶಂಕರ ದೊಡ್ಮನಿ ಅಭಿಪ್ರಾಯಪಟ್ಟರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ನಗರಸಭೆ ಹಾಗೂ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರ ಚಿಂತನೆಗಳನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಅವರು ಬರೆದಿರುವ ಗ್ರಂಥಗಳು ಅಪಾರವಾಗಿದ್ದು, ಜೀವನಪೂರ್ತಿ ಓದಿದರೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲದೆ, ಎಲ್ಲರ ಹಿತಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ನಿರಾಶ್ರಿತರ ಕೇಂದ್ರದ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ ಮಾತನಾಡಿ, ಅಂಬೇಡ್ಕರ್ ಅವರನ್ನು ಮರೆತರೆ ಸಮಾಜದ ಪ್ರಗತಿ ಸಾಧ್ಯವಿಲ್ಲ. ಅವರ ಜಯಂತಿ ಆಚರಣೆಯ ಉದ್ದೇಶವೇ ಯುವಪೀಳಿಗೆಗೆ ಅವರ ತತ್ವ ಆದರ್ಶಗಳನ್ನು ಪರಿಚಯಿಸಿ, ರಾಷ್ಟ್ರಪ್ರಜ್ಞೆ ಹಾಗೂ ಸಮಾಜಪ್ರಜ್ಞೆಯನ್ನು ಬೆಳೆಸುವುದಾಗಿದೆ ಎಂದರು. ಜಾತಿ ತಾರತಮ್ಯ ನಿವಾರಣೆಗೆ ಕಾನೂನುಗಳಿದ್ದರೂ, ಮನಸ್ಸಿನ ಬದಲಾವಣೆ ಅತ್ಯಂತ ಮುಖ್ಯ. ದಲಿತರು, ಶೂದ್ರರು ಮತ್ತು ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಮಹಾನ್ ವ್ಯಕ್ತಿಗಳು ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೇರ್ ಟೇಕರಗಳಾದ ದೇವಮ್ಮ, ಕೃಷ್ಣ, ಸಿದ್ರಾಮ್, ಅಮೃತ ನಿರಾಶ್ರಿತರಾದ ಪಟೇಲ್ ಸಾಬ್, ಬಾಲಪ್ಪ, ಮುನ್ನಾ, ಭುವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 7:57 pm

Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ

Virat Kohli: ಇಷ್ಟು ವರ್ಷಗಳ ಕಾಲ ಆರ್‌ಸಿಬಿ ಜೊತೆ ಇದ್ದ ವಿರಾಟ್ ಕೊಹ್ಲಿ ಕನ್ನಡ ಕಲಿಯಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗಿರುವ ಪೋಸ್ಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಮಾಡಲಾಗಿರುವ ಈ ಪೋಸ್ಟ್‌ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಳು ಭಾಷೆಗೆ ಬೆಂಬಲ ನೀಡುವ ಸೋಷಿಯಲ್ ಮೀಡಿಯಾ ಪುಟದಿಂದ ಈ ಪೋಸ್ಟ್‌ ಮಾಡಲಾಗಿದೆ. ಕನ್ನಡ -

ಒನ್ ಇ೦ಡಿಯ 14 Apr 2026 7:56 pm

ಅಂಬೇಡ್ಕರ್ ಸಮಾನತೆ ಕನಸು ನನಸಾಗಿಸಲು ಎಲ್ಲರೂ ಬದ್ಧರಾಗಬೇಕು : ಸಚಿವ ಶರಣಬಸಪ್ಪ ದರ್ಶನಾಪುರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ವಾರ್ತಾ ಭಾರತಿ 14 Apr 2026 7:53 pm

Yadgir | ಅಂಬೇಡ್ಕರ್ ವಿಚಾರಧಾರೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ಭೀಮುನಾಯಕ

ಯಾದಗಿರಿ: ಎ.14 ಪ್ರತಿಯೊಬ್ಬ ಭಾರತೀಯನಿಗೂ ಮಹತ್ವದ ದಿನವಾಗಿದ್ದು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು. ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಮಹಿಳೆಯರ ಪ್ರಗತಿ ಹಾಗೂ ಸಮಾಜದ ಏಳಿಗೆಯ ಕನಸು ಕಂಡ ಅಂಬೇಡ್ಕರ್ ಅವರು ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಮಾನತೆಯ ಆಧಾರದ ಮೇಲೆ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸಿದರು ಎಂದು ತಿಳಿಸಿದರು. ಅಸ್ಪೃಶ್ಯ ಸತ್ಯಾಗ್ರಹಗಳಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರೆ, ಸವರ್ಣೀಯರಿಂದ ಹಿಂಸಾತ್ಮಕ ಪ್ರತಿಕ್ರಿಯೆಗಳು ಎದುರಿಸಲ್ಪಟ್ಟವು. ಚೌಡಾರ್ ಕೆರೆಯ ಚಳುವಳಿ ನ್ಯಾಯಾಲಯದ ಮೂಲಕ ಅಂತಿಮವಾಗಿ ಕೆಳವರ್ಗಗಳ ಪರವಾಗಿ ಜಯ ಸಾಧಿಸಿತು ಎಂದು ವಿವರಿಸಿದರು. ಅಸ್ಪೃಶ್ಯತೆ ಮತ್ತು ಅಸಮಾನತೆಯ ಮೂಲ ಕಾರಣ ‘ಮನುಸ್ಮೃತಿ’ ಎಂದು ಅಂಬೇಡ್ಕರ್ ನಂಬಿದ್ದರು. ಭಾರತೀಯ ಸಂವಿಧಾನವು ದೇಶದ ಪವಿತ್ರ ಗ್ರಂಥವಾಗಿದ್ದು, ಪ್ರಜಾಪ್ರಭುತ್ವಕ್ಕೆ ಅರ್ಥ ನೀಡಿದ ಮಹತ್ವದ ದಸ್ತಾವೇಜು ಎಂದರು. ಬಾಲ್ಯದಲ್ಲೇ ಅಸಮಾನತೆ ಅನುಭವಿಸಿದ ಅಂಬೇಡ್ಕರ್ ಅವರು ಬಳಿಕ ವಿಶ್ವಪ್ರಸಿದ್ಧ ನಾಯಕರಾಗಿ ಹೊರಹೊಮ್ಮಿ, ಸ್ವಾಭಿಮಾನದ ಬದುಕಿಗೆ ದಾರಿ ತೋರಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಕೊಂಡಾಡಿದರು. ಹಿಂದುಳಿದ ವರ್ಗಗಳ ಹಕ್ಕಿಗಾಗಿ ಜೀವನವನ್ನೇ ಅರ್ಪಿಸಿದ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯದ ಆಧಾರದ ಮೇಲೆ ಜಾತ್ಯಾತೀತ ಹಾಗೂ ಸಮಾಜವಾದಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅವರ ಕನಸಿನ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಪಾಟೀಲ್, ಸಿದ್ಧಲಿಂಗರೆಡ್ಡಿ ಮುನಗಲ್, ನಾಗು ತಾಂಡ್ಲೂಕರ್, ಮಹೇಶ ಠಾಣಗುಂದಿ, ಜರ್ನಾಧನ ಬಡಿಗೇರಾ, ಲಿಂಗಾರೆಡ್ಡಿ ಪಾಟೀಲ್, ಅಶೋಕ ನಾಯಕ, ಶರಣು ತಿಂಥಣಿ, ಮಲ್ಲು ಬಿಳ್ಹಾರ, ಹಣಮಂತ ದೊರೆ, ನಾಗರಾಜ ಪಿಲ್ಲಿ, ವಿರುಪಾಕ್ಷ ಸ್ವಾಮಿ, ಶರಣು ಹಬಳ್ಳಿ, ವಿಶ್ವ ಯಾದಗಿರಿ, ರಮೇಶ ಡಿ. ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 7:49 pm

ವಾಹನ ಅಡ್ಡವಿಟ್ಟು ಸಂಚಾರಕ್ಕೆ ಅಡ್ಡಿ ಆರೋಪ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಎ.14: ಕಾವೂರಿನಿಂದ ನಗರಕ್ಕೆ ಬರುವ ರಸ್ತೆಯಲ್ಲಿ ಅಂದರೆ ನಗರದ ಕುಂಟಿಕಾನ ಫ್ಲೈಓವರ್ ಬಳಿ ವಾಹನವನ್ನು ಅಡ್ಡಗಟ್ಟಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕುಂಜತ್ತಬೈಲ್ ನಿವಾಸಿ ತನ್ಸೀರ್ (25) ಮತ್ತು ಗದಗ ಜಿಲ್ಲೆ ನರಗುಂದ ತಂಡಾಪುರ ಓಣಿಲೆ ಚಂದ್ರಶೇಖರ್ (55) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ವಿಚಾರದಲ್ಲಿ ಈ ಇಬ್ಬರ ನಡುವೆ ಗಲಾಟೆಯಾಗಿತ್ತು. ಪರಿಣಾಮ ಇಬ್ಬರೂ ರಸ್ತೆಗೆ ತಮ್ಮ ವಾಹನಗಳನ್ನು ಅಡ್ಡವಾಗಿರಿಸಿ, ಪರಸ್ಪರ ಬೈದಾಡುತ್ತಾ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿ ಇಬ್ಬರನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 14 Apr 2026 7:48 pm

ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನವನ್ನು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವಿರೋಧಿಸುತ್ತಿರುವುದೇಕೇ?

2029ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಾರಿ ಶಕ್ತಿ ವಂದನ ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ 2023) ಕಾರ್ಯಗತಗೊಳಿಸಲ ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಯನ್ನು ತ್ವರಿತಗೊಳಿಸುವ ಕೇಂದ್ರದ ಪ್ರಯತ್ನವು ಗಮನಾರ್ಹ ರಾಜಕೀಯ ಅಡಚಣೆಯನ್ನು ಎದುರಿಸುತ್ತಿದೆ. ಈ ಅಡಚಣೆಗೆ ಕಾರಣ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಬೆಂಬಲದ ಕೊರತೆ. 2027 ರ ಜನಗಣತಿಯ ನಂತರದ ಕ್ಷೇತ್ರ ಮರುವಿಂಗಡಣೆಗೆಸಂಬಂಧಿಸಿದ ಪ್ರಸ್ತುತ ಸಮಯದ ಬದಲು, 2029 ರ ಮೊದಲು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಅನುಮತಿಸುವ ತಿದ್ದುಪಡಿಗಳನ್ನು ಪರಿಚಯಿಸಲು ಎಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಮೂರು ದಿನಗಳ ಅಧಿವೇಶನವನ್ನು ಕರೆಯಲಾಗಿದೆ. ಮಸೂದೆಯ ಪ್ರತಿಯನ್ನು ಮಂಗಳವಾರ ಸಂಸದರೊಂದಿಗೆ ಹಂಚಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಪಕ್ಷಗಳು ಈ ಕ್ರಮವನ್ನು ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ. ಪೂರ್ಣ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ವಿಪ್ ಜಾರಿ ಮಾಡಿದೆ. ಆದರೆ ಸಂಸತ್ತಿನಲ್ಲಿನ ಅಂಕಗಣಿತವು ವಿರೋಧ ಪಕ್ಷದ ಬೆಂಬಲವನ್ನು ಅನಿವಾರ್ಯವಾಗಿಸುತ್ತದೆ. ಸಂಖ್ಯೆಗಳು ಮುಖ್ಯ: ಲೋಕಸಭೆಯಲ್ಲಿ, ಎನ್‌ಡಿಎ 293 ಸ್ಥಾನಗಳನ್ನು ಹೊಂದಿದೆ, ಆದರೆ ವಿರೋಧ ಪಕ್ಷದ ಬಳಿ 240 ಮತ್ತು ಇತರರು 12 ಸ್ಥಾನಗಳನ್ನು ಹೊಂದಿದ್ದಾರೆ. ಸಾಂವಿಧಾನಿಕ ತಿದ್ದುಪಡಿಗೆ ಹಾಜರಿರುವ ಮತ್ತು ಮತದಾನ ಮಾಡುವ ಸದಸ್ಯರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ, ಅಂದರೆ ಎಲ್ಲಾ ಸದಸ್ಯರು ಭಾಗವಹಿಸಿದರೆ ಕನಿಷ್ಠ 364 ಮತಗಳು ಬೇಕಾಗುತ್ತವೆ. ಇದು ವಿರೋಧ ಪಕ್ಷದ ಬೆಂಬಲವಿಲ್ಲದೆ ಸರ್ಕಾರವು ಅಗತ್ಯವಿರುವ ಬೆಂಬಲ ತಲುಪಲು ಸಾಧ್ಯವಾಗದಂತೆ ಮಾಡುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳ ಸಂಯೋಜಿತ ಬಲವನ್ನು ಪರಿಗಣಿಸುವಾಗಲೂ ಇದೇ ರೀತಿಯ ಅಂತರವಿದೆ. ಅಲ್ಲಿ ಎನ್‌ಡಿಎ ಸ್ವತಂತ್ರವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಗತ್ಯವಿರುವ ಸೂಪರ್ ಬಹುಮತವನ್ನು ಹೊಂದಿಲ್ಲ. ಇದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ನೇರವಾಗಿ ಗಮನ ಸೆಳೆಯುತ್ತದೆ. ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ತಡೆಯುವ ಬಗ್ಗೆ ಎಚ್ಚರದಿಂದಿದ್ದರೂ, ಪ್ರಸ್ತಾವಿತ ತಿದ್ದುಪಡಿಗಳ ಸಮಯ ಮತ್ತು ಉದ್ದೇಶದ ಬಗ್ಗೆ ಅವರು ಗಣನೀಯ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದಿಂದ ವಿರೋಧ: ಕಾಂಗ್ರೆಸ್ ಮುಖ್ಯಸ್ಥ ಮತ್ತು ಮೇಲ್ಮನೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಹಠಾತ್ ಆತುರವನ್ನು ಪ್ರಶ್ನಿಸಿದ್ದಾರೆ. ನಡೆಯುತ್ತಿರುವ ಚುನಾವಣೆಗಳ ಮಧ್ಯೆ ಈ ಕ್ರಮವು ರಾಜಕೀಯ ಲಾಭಕ್ಕಾಗಿ ನಡೆಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ಅವರು ವಿಶಾಲವಾದ ಸಮಾಲೋಚನೆಗಳನ್ನು ಕೋರಿದ್ದು ಅಂಥಾ ಸಾಂವಿಧಾನಿಕ ಬದಲಾವಣೆಗಳು ಎಲ್ಲಾ ಪಾಲುದಾರರನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ. ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡುವಿನ ಸಂಪರ್ಕವು ಒಂದು ಪ್ರಮುಖ ಅಂಶವಾಗಿದೆ. ಮಹಿಳಾ ಸಬಲೀಕರಣಕ್ಕಿಂತ ಕ್ಷೇತ್ರ ಮರುವಿಂಗಡಣೆ ಪ್ರಮುಖ ವಿಷಯ ಎಂದ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ, ಪ್ರಸ್ತಾವಿತ ಪ್ರಕ್ರಿಯೆಯನ್ನು ಅತ್ಯಂತ ಅಪಾಯಕಾರಿ ಮತ್ತು ಸಂವಿಧಾನದ ಮೇಲಿನ ದಾಳಿ ಎಂದು ಕರೆದಿದ್ದಾರೆ. ಜನಸಂಖ್ಯೆಯ ಆಧಾರದ ಮೇಲೆ ಯಾವುದೇ ಸೀಟು ಪುನರ್ವಿತರಣೆಯು ಉತ್ತರ ರಾಜ್ಯಗಳಿಗೆ ಅಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ದಕ್ಷಿಣ ಮತ್ತು ಈಶಾನ್ಯ ಪ್ರದೇಶಗಳಿಗೆ ಅನನುಕೂಲಕರವಾಗಿರುತ್ತದೆ ಎಂದು ವಿರೋಧ ಪಕ್ಷಗಳು ಭಯಪಡುತ್ತವೆ. ಈ ಕಳವಳಗಳನ್ನು ಪ್ರತಿಧ್ವನಿಸುತ್ತಾ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಈ ಕ್ಷೇತ್ರ ಮರುವಿಂಗಡಣೆ ವಿಷಯವು ದಕ್ಷಿಣ ಭಾರತಕ್ಕೆ ತುಂಬಾ ಹಾನಿಕಾರಕವಾಗಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ನಾವು ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ.ಯಾವುದೇ ರಾಜ್ಯವು ಬಳಲುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಲೋಕಸಭಾ ಸ್ಥಾನಗಳಲ್ಲಿ ಶೇ.50 ರಷ್ಟು ಏರಿಕೆಯಾಗುವ ಸಾಧ್ಯತೆ: ಸರ್ಕಾರವು ಲೋಕಸಭಾ ಸ್ಥಾನಗಳನ್ನು ಶೇ.50 ರಷ್ಟು ಹೆಚ್ಚಿಸುವ ಬಗ್ಗೆಯೂ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಇದು ವಿರೋಧ ಪಕ್ಷದ ಪ್ರತಿರೋಧವನ್ನು ತೀವ್ರಗೊಳಿಸಿದೆ. ಕ್ಷೇತ್ರ ಮರುವಿಂಗಡಣೆ ಮತ್ತು ಪ್ರಾತಿನಿಧ್ಯದ ಬಗ್ಗೆ ಸ್ಪಷ್ಟತೆ ಇಲ್ಲದೆ, ತಿದ್ದುಪಡಿಯ ಬಗ್ಗೆ ಅರ್ಥಪೂರ್ಣ ಚರ್ಚೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಾರೆ. ಅದೇ ಸಮಯದಲ್ಲಿ, ವಿರೋಧ ಪಕ್ಷಗಳು ಮೀಸಲಾತಿ ಚೌಕಟ್ಟಿನೊಳಗೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಪ-ಕೋಟಾಗಳಿಗಾಗಿ ಒತ್ತಾಯಿಸಬಹುದು. ಅಧಿವೇಶನಕ್ಕೆ ಮುಂಚಿತವಾಗಿ ಇಂಡಿಯಾ ಬ್ಲಾಕ್ ಸಭೆಯನ್ನು ನಿಗದಿಪಡಿಸಲಾಗಿರುವುದರಿಂದ, ವಿರೋಧ ಪಕ್ಷದ ಅಂತಿಮ ನಿಲುವು ನಿರ್ಣಾಯಕವಾಗಿರುತ್ತದೆ. ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸಲು ಮೋದಿ ಸರ್ಕಾರ ಪ್ರಸ್ತಾಪ: ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟುಕೊಂಡು, ಕೇಂದ್ರ ಸರ್ಕಾರವು ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯನ್ನು 543 ರಿಂದ 850 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಈ ವಿಸ್ತರಣೆಯು ನಾರಿ ಶಕ್ತಿ ವಂದನ್ ಅಧಿನಿಯಮ್ (ಮಹಿಳಾ ಮೀಸಲಾತಿ ಕಾಯ್ದೆ) ಅನುಷ್ಠಾನವನ್ನು ತ್ವರಿತಗೊಳಿಸುವ ಯೋಜನೆಯ ಭಾಗವಾಗಿದೆ, ಇದು ಸದನದ ಸರಿಸುಮಾರು ಮೂರನೇ ಒಂದು ಭಾಗ ಅಥವಾ 273 ಸ್ಥಾನಗಳನ್ನು ಮಹಿಳಾ ಶಾಸಕರಿಗೆ ಮೀಸಲಿಡುವುದನ್ನು ಖಚಿತಪಡಿಸುತ್ತದೆ. ನಾರಿ ಶಕ್ತಿ ವಂದನ ಅಧಿನಿಯಮ ಎಂದರೇನು?: ನಾರಿ ಶಕ್ತಿ ವಂದನ ಅಧಿನಿಯಮ (ಅಧಿಕೃತವಾಗಿ ಸಂವಿಧಾನ [106 ನೇ ತಿದ್ದುಪಡಿ] ಕಾಯ್ದೆ, 2023) ಅನ್ನು ಸಂಸತ್ತು 2023 ಸೆಪ್ಟೆಂಬರ್ ನಲ್ಲಿ ಅಂಗೀಕರಿಸಿತು. ಇದನ್ನು ಸೆಪ್ಟೆಂಬರ್ 19, 2023 ರಂದು ಲೋಕಸಭೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಯಿತು. 2023 ಸೆಪ್ಟೆಂಬರ್ 20ರಂದು ಇದರ ಪರವಾಗಿ 454 ಮತಗಳು ಮತ್ತು ವಿರುದ್ಧವಾಗಿ 2 ಮತಗಳು ಸಿಕ್ಕಿದ್ದು ಕಾಯ್ದೆಯನ್ನು ಅಂಗೀಕರಿಸಲಾಯಿತು. ರಾಜ್ಯಸಭೆಯು 2023 ಸೆಪ್ಟೆಂಬರ್ 21ರಂದು 214 ಮತಗಳೊಂದಿಗೆ ಇದನ್ನು ಸರ್ವಾನುಮತದಿಂದ ಅಂಗೀಕರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023 ಸೆಪ್ಟೆಂಬರ್ 28 ರಂದು ಇದನ್ನು ಕಾನೂನಾಗಿ ಸಹಿ ಮಾಡಿದರು. ► ನಿಬಂಧನೆಗಳು 33% ಮೀಸಲಾತಿ: ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮೀಸಲಿಡಲಾಗಿದೆ. ಅನುಷ್ಠಾನದ ಸ್ಥಿತಿ: 2023 ರಲ್ಲಿ ಅಂಗೀಕರಿಸಲ್ಪಟ್ಟಾಗ, ಮೂಲ ಕಾಯ್ದೆ ಜಾರಿಗೆ ಬರುವ ಮೊದಲು ಹೊಸ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಅಗತ್ಯವಿತ್ತು. ► ಮಸೂದೆ ಜಾರಿಗೆ ಆತುರ ಯಾಕೆ? ಹೊಸ ಜನಗಣತಿ ಮತ್ತು ನಂತರದ ಕ್ಷೇತ್ರ ವಿಂಗಡಣೆಯ ಅವಶ್ಯಕತೆಯಿಂದ ಮೀಸಲಾತಿಯನ್ನು ಬೇರ್ಪಡಿಸಲು ಸರ್ಕಾರ ಪ್ರಸ್ತಾಪಿಸಿದೆ. ಮೂಲತಃ, 2023 ರಲ್ಲಿ ಜಾರಿಗೆ ತರಲಾದ ಕಾನೂನು ಮುಂದಿನ ಜನಗಣತಿಯ ನಂತರವೇ ಜಾರಿಗೆ ಬರುತ್ತಿತ್ತು, ಇದು 2034 ಕ್ಕೆ ಜಾರಿಯಾಗುವುದನ್ನು ಸಂಭಾವ್ಯವಾಗಿ ತಳ್ಳುತ್ತದೆ. ವಿಳಂಬವಾದ 2021 ಜನಗಣತಿಯ ಫಲಿತಾಂಶಗಳಿಗಾಗಿ ಕಾಯುವ ಬದಲು 2011 ರ ಜನಗಣತಿ ಡೇಟಾವನ್ನು ಬಳಸಲು ಸರ್ಕಾರ ಯೋಜಿಸಿದೆ, ಇದು 2029 ರ ಸಾರ್ವತ್ರಿಕ ಚುನಾವಣೆಗಳ ವೇಳೆಗೆ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ. ►ಮೋದಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ ನೀಡಲು ಹೇಗೆ ಯೋಜಿಸಿದೆ ? ಸ್ಥಾನಗಳ ವಿಸ್ತರಣೆ: ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು (543) ಹೆಚ್ಚಿಸುವುದು ಇಲ್ಲಿ ಪ್ರಮುಖ ಉದ್ದೇಶ. ಇವುಗಳಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಈ ವಿಸ್ತರಣೆಯು ಪ್ರಸ್ತುತ ಸದಸ್ಯರಿಗೆ ಅಸ್ತಿತ್ವದಲ್ಲಿರುವ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡದೆಯೇ ಮಹಿಳಾ ಕೋಟಾಕ್ಕೆ ಅವಕಾಶ ನೀಡುತ್ತದೆ. ಪರಿಶಿಷ್ಟ ಜಾತಿಗಳ ಸ್ಥಾನಗಳು 84 ರಿಂದ 126/136 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಸ್ಥಾನಗಳು 47 ರಿಂದ 70 ಕ್ಕೆ ಏರುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತವೆ. ಕ್ಷೇತ್ರ ಮರುವಿಂಗಡಣೆ : ಹೊಸ ಜನಸಂಖ್ಯಾ ಅಂಕಿಅಂಶಗಳಿಗಾಗಿ ಕಾಯುವ ಬದಲು 2011 ರ ಜನಗಣತಿಯ ದತ್ತಾಂಶವನ್ನು ಆಧರಿಸಿ ಕ್ಷೇತ್ರ ಗಡಿಗಳನ್ನು ಮರುರೂಪಿಸಲು 2026 ರ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ. ಪ್ರಸ್ತಾವಿತ ಪ್ರಕ್ರಿಯೆಯು ಕೇರಳ ಮತ್ತು ತಮಿಳುನಾಡಿನಂತಹ ದಕ್ಷಿಣ ರಾಜ್ಯಗಳ ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅನುಪಾತದ ಆಧಾರದ ಮೇಲೆ ಸ್ಥಾನಗಳನ್ನು ಹೆಚ್ಚಿಸುವ ಮೂಲಕ, ಸರ್ಕಾರವು ಅಸ್ತಿತ್ವದಲ್ಲಿರುವ ಅಧಿಕಾರದ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಉತ್ತರದ ರಾಜ್ಯಗಳು ಅಸಮಾನ ಪ್ರಭಾವವನ್ನು ಪಡೆಯುವುದನ್ನು ತಡೆಯಲು ಉದ್ದೇಶಿಸಿದೆ. ಶಾಸಕಾಂಗ ಮಾರ್ಗ : ಈ ಕ್ರಮಕ್ಕೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುವ ಎರಡು ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳು ಬೇಕಾಗುತ್ತವೆ. ►ಪ್ರಧಾನಿ ಮೋದಿ ಖರ್ಗೆ ಅವರಲ್ಲಿ ಹೇಳಿದ್ದು ಏನು? ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ 'ನಾರಿ ಶಕ್ತಿ ವಂದನ ಸಮ್ಮೇಳನ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಕ್ರಮವನ್ನು 21 ನೇ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದು ಎಂದು ಶ್ಲಾಘಿಸಿದರು. ಅಂಬೇಡ್ಕರ್ ಜಯಂತಿಯಂದು ಸಂಸತ್ತಿನ ಸಂಕೀರ್ಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಸಂಸತ್ತಿನಲ್ಲಿ ಮಂಡಿಸಲಿರುವ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು. ಮಹಿಳಾ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡು ಕ್ರಮಗಳನ್ನು ಬೆಂಬಲಿಸುವುದನ್ನು ಪಕ್ಷಗಳಾದ್ಯಂತ ಹಂಚಿಕೆಯ ಜವಾಬ್ದಾರಿಯಾಗಿ ನೋಡಬೇಕು ಎಂದು ಅವರು ಒತ್ತಿ ಹೇಳಿದರು. ಮಹಿಳೆಯರ ಹಿತಾಸಕ್ತಿಗಾಗಿ ಮಸೂದೆಯನ್ನು ತರಲಾಗುತ್ತಿದೆ ಎಂದು ಪ್ರಧಾನಿ ಮೋದಿ ಖರ್ಗೆ ಅವರಲ್ಲಿ ಹೇಳಿದ್ದು ಸಾಮೂಹಿಕ ಬೆಂಬಲಕ್ಕಾಗಿ ಕರೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಲುವು ತೆಗೆದುಕೊಳ್ಳುವ ಮೊದಲು ಕಾಂಗ್ರೆಸ್ ಆಂತರಿಕವಾಗಿ ಪ್ರಸ್ತಾವನೆಯನ್ನು ಚರ್ಚಿಸುತ್ತದೆ.ಈ ವಿಷಯದ ಬಗ್ಗೆ ಸೂಕ್ತ ಚರ್ಚೆಯ ನಂತರ ಪಕ್ಷವು ತನ್ನ ನಿಲುವನ್ನು ತಿಳಿಸುತ್ತದೆ ಎಂದು ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ವಾರ್ತಾ ಭಾರತಿ 14 Apr 2026 7:44 pm

Aland | ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಜಾರಿಗೆ ತರುವುದು ಅಗತ್ಯ: ಶಾಸಕ ಬಿ.ಆರ್.ಪಾಟೀಲ್‌

ಆಳಂದ: ತಾಲೂಕು ಆಡಳಿತ ಸೌಧದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್‌ ಅವರು ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳನ್ನು ನೈಜ ಜೀವನದಲ್ಲಿ ಈಡೇರಿಸಲು ಸಮಾಜ ಸಂಕಲ್ಪದಿಂದ ಮುಂದೆ ಬರಬೇಕು ಎಂದು ಹೇಳಿದರು. ಅವರು ಮುಂದುವರೆದು, ಸಂಪೂರ್ಣ ನ್ಯಾಯ ಸಾಧನೆ ಅಂಬೇಡ್ಕರ್ ಅವರ ಮಹತ್ತರ ಕನಸಾಗಿದ್ದು, ಅದನ್ನು ನನಸಾಗಿಸಲು ಸಮಾನತೆ, ನ್ಯಾಯ ಮತ್ತು ಸೌಹಾರ್ದತೆಯನ್ನು ಸಮಾಜದಲ್ಲಿ ಬೆಳೆಸಬೇಕು. ಮೂಲಭೂತ ಬದಲಾವಣೆಗಳಿಲ್ಲದೆ ಸಮಾನ ಅವಕಾಶಗಳು ಸಾಧ್ಯವಿಲ್ಲ. ದೇಶದಲ್ಲಿ ಸಂಪತ್ತಿನ ಸಮನ್ವಯ ಹಾಗೂ ವಿಕೇಂದ್ರೀಕರಣ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಹಾಗೂ ಉಪನ್ಯಾಸಕ ಜಿತೇಂದ್ರ ತಳವಾರ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನ ಸಂದೇಶ, ಶಿಕ್ಷಣದ ಮಹತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು. ವೇದಿಕೆಯಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ವಿಜಲಕ್ಷ್ಮಿ ಹೋಳ್ಕರ್, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಹಿರಿಯ ಮುಖಂಡ ದಯಾನಂದ ಶೇರಿಕಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೊಳ, ಜಿಪಂ ಎಇಇ ಸಂಗಮೇಶ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಾಗರಿಕ ಮುಖಂಡರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇಸಿಒ ಶ್ರೀಮಂತ ಪಾಟೀಲ ನಿರೂಪಿಸಿದರು. ಇಒ ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು.

ವಾರ್ತಾ ಭಾರತಿ 14 Apr 2026 7:44 pm

ಬುಧವಾರ ಶುಭವಾರ ಆಗಲಿದೆಯಾ? ಷೇರು ಮಾರುಕಟ್ಟೆ ಏರಿಕೆ ಕಾಣುವ ಭರವಸೆಯಲ್ಲಿ ಹೂಡಿಕೆದಾರ

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಅನಿಶ್ಚಿತತೆ ಹಾದಿ ಹಿಡಿದಿರುವ ಭಾರತೀಯ ಷೇರು ಮಾರುಕಟ್ಟೆ, ಏರಿಳಿತದ ತೂಗುಯ್ಯಾಲೆ ಆಡುತ್ತಿದೆ. ಬಹುತೇಕ ಕುಸಿತದ ಹಾದಿಯಲ್ಲೇ ಇರುವ ಮಾರುಕಟ್ಟೆ, ಕೆಲವೊಮ್ಮೆ ಮಾತ್ರ ಏರಿಕೆಯತ್ತ ಮುಖ ಮಾಡುತ್ತಿದೆ. ಆದರೀಗ ಅಮೆರಿಕ ಮತ್ತು ಇರಾನ್‌ ನಡುವೆ ಕದನ ವಿರಾಮ ಒಪ್ಪಂದ ಮಾತುಕತೆಗಳು ನಡೆಯುತ್ತಿರುವುದರಿಂದ, ನಾಳೆ ಅಂದರೆ ಬುಧವಾರ (ಏ. 15) ಭಾರತೀಯ ಷೇರು ಮಾರುಕಟ್ಟೆ ಯಾವ ರೀತಿ ವರ್ತಿಸಲಿದೆ ಎಂಬುದರ ಬಗ್ಗೆ ಹೂಡಿಕೆದಾರರು ಚರ್ಚಿಸುತ್ತಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 14 Apr 2026 7:40 pm

Aland | ನರೋಣಾದಲ್ಲಿ ಡಾ.ಅಂಬೇಡ್ಕರ್ 135ನೇ ಜಯಂತಿ ಆಚರಣೆ

ಆಳಂದ: ತಾಲೂಕಿನ ನರೋಣ ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಭಕ್ತಿ-ಭಾವದಿಂದ ಆಚರಿಸಲಾಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ನರೋಣ ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಜೈ ಭೀಮ್ ನಗರದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಪುತ್ರ ಬೀರಾಗಿ, ನರೋಣ ಪೊಲೀಸ್ ಠಾಣೆಯ ಪಿಎಸ್‌ಸಿ ಸಿದ್ದರಾಮ ನಿಂಬರಗಿ ಹಾಗೂ ಆರೋಗ್ಯ ಇಲಾಖೆಯ ಶಕ್ತಿ ಪ್ರಸಾದ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ನೀಲಿ ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಶ್ರೀಮಂತರು ನೆರವೇರಿಸಿದರೆ, ಪಂಚಶೀಲ ಧ್ವಜಾರೋಹಣವನ್ನು ದಿಲೀಪ್ ಕಡ್ಡಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬುದ್ಧ ವಂದನೆಯನ್ನು ಶಕ್ತಿ ಬಾಚನಹಳ್ಳಿ ಹಾಗೂ ವಿಜಯಕುಮಾರ್ ಮೇಲಕೇರಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೈಲಾಸ ದೆಕುನ್, ಸೂರ್ಯಕಾಂತ್ ಹಾದಿಮನಿ, ವಿಜಯಕುಮಾರ್ ಹಾದಿಮನಿ, ಶೇಖರ್ ಕೋರೆ, ಶ್ರೀಕಾಂತ್ ಕೋರೆ, ಅಭಿಷೇಕ್ ಕೋರೆ, ರಂಜಿತ್ ರಾಗಿ, ಚಂದ್ರಕಾಂತ್ ಹಾದಿಮನಿ ಸೇರಿದಂತೆ ಜೈ ಭೀಮ್ ನಗರದ ಹಿರಿಯರು, ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಂಜುನಾಥ್ ಕೋರೆ ನಿರೂಪಿಸಿದರು. ಚಂದ್ರಕಾoತ್ ಕೋರೆ ಸ್ವಾಗತಿಸಿದರು. ಕೈಲಾಸ ರಾಗಿ ವಂದಿಸಿದರು.

ವಾರ್ತಾ ಭಾರತಿ 14 Apr 2026 7:39 pm

Aland | ಡಾ.ಅಂಬೇಡ್ಕರ್ ಕೊಡುಗೆ ಅಪಾರ : ಸಿಒ ಪನಶೆಟ್ಟಿ

ಆಳಂದ : ದೇಶಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಇಂದಿಲ್ಲಿ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆಯಿಂದ ಹಾಗೂ ಮುಂಭಾಗದಲ್ಲಿ ನೀಲಿ ಧ್ವಜ ವೃತ್ತದಲ್ಲಿ ಪೌರ ಕಾರ್ಮಿಕರು ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುರಸಭೆ ನಿಕಟಪೂರ್ವ ಸದಸ್ಯ ಶಿವುಪುತ್ರ ನಡಗೇರಿ, ಎಇಇ ಜಗದೀಶ,ಪೌರನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಬಟಗೇರಿ, ಗೌರವ ಅಧ್ಯಕ್ಷ ಶಿವರಾಯ ಸರಸಂಬಿ, ಮುಖಂಡ ಜೀವರಾಜ ದೇವನೂರ, ಆರ್‌ಐ ಹರಿಷ ಗೋವಿನ, ಎಸ್‌ಐ ಲಕ್ಷ್ಮಣ ತಳವಾರ,ಆನಂದ, ಶಿವರಾಯ ಮಂಗಲಗಿ, ಶಫಿ ರೋತೆ, ಚೋಟು, ಚಿದಾನಂದ, ಮಲ್ಲು ಲಂಗೋಟೆ, ಮೌಲಾ ಖಂಡುವಾಲೆ, ಗುತ್ತಿಗೆದಾರ ಸಿದ್ಧರಾಮ ದೇಸಾಯಿ ಸೇರಿದಂತೆ ಪೌರ ಕಾರ್ಮಿಕರು ಮತ್ತು ನೌಕರರು ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಪುರಸಭೆ ಆವರಣದಲ್ಲೂ ಡಾ. ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.

ವಾರ್ತಾ ಭಾರತಿ 14 Apr 2026 7:37 pm

Aland | ಅಂಬೇಡ್ಕರ್ ವಿಚಾರಧಾರೆ ವಿಶ್ವಕ್ಕೆ ಮಾದರಿ: ಪ್ರೊ.ಅನಷುಮನ್ ಬೆಹರಾ

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ಸಿದ್ಧಾಂತ, ಪ್ರಜಾಪ್ರಭುತ್ವದ ಕಲ್ಪನೆ, ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ರಾಜಕೀಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಅನಷುಮನ್ ಬೆಹರಾ ಅಭಿಪ್ರಾಯಪಟ್ಟರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ದೇಶದ ಭವಿಷ್ಯದ ಬಗ್ಗೆ ವಿಶಾಲ ದೃಷ್ಟಿಕೋನ ಹೊಂದಿದ್ದು, ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಹಕ್ಕುಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಜಾತಿ ತಾರತಮ್ಯ ನಿರ್ಮೂಲನೆ, ಸಂವಿಧಾನ ರಚನೆ ಹಾಗೂ ಚುನಾವಣಾ ಸುಧಾರಣೆಗಳ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಅವರ ಚಿಂತನೆಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಪ್ರಜಾಪ್ರಭುತ್ವದ ನಾಲ್ಕು ಆಧಾರಸ್ತಂಭಗಳನ್ನು ನೀಡಿದರು. ಅನೇಕ ಮಹನೀಯರ ತ್ಯಾಗದ ಫಲವಾಗಿ ನಮ್ಮ ದೇಶ ಇಂದು ಸುಭದ್ರವಾಗಿದೆ. ನೆರೆ ರಾಷ್ಟ್ರಗಳ ಪ್ರಜಾಪ್ರಭುತ್ವದೊಂದಿಗೆ ಹೋಲಿಸಿದರೆ ಭಾರತದ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠವಾಗಿದ್ದು, ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣವಾಗಿದೆ ಎಂದು ಹೇಳಿದರು. ಪ್ರಭಾರಿ ಕುಲಸಚಿವ ಪ್ರೊ. ಚೆನ್ನವೀರ ಆರ್. ಎಂ ಅವರು ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ದೇವರಾಜಪ್ಪ ಎಸ್. ಅವರು ಸ್ವಾಗತಿಸಿದರು. ಪ್ರೊ.ಅಂಗಡಿ, ಪ್ರೊ. ಪಾಂಡುರಂಗ, ಡಾ.ಭರತ್, ಡಾ.ರಾಜಶ್ರೀ, ಡಾ.ಒಯಿನಂ, ಡಾ.ಬಾಬು, ಡಾ.ಅಲೋಕ್, ಪ್ರಕಾಶ ಭಾಲಕಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಅಶ್ವಿನಿ ರಾಷ್ಟ್ರಗೀತೆ ಹಾಡಿದರು. ಡಾ.ಜೈಪಾಲ್ ರಾಠೋಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 14 Apr 2026 7:34 pm

ರೈಲು ಢಿಕ್ಕಿ: ವ್ಯಕ್ತಿಗೆ ಗಂಭೀರ ಗಾಯ

ಉಳ್ಳಾಲ, ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ತೊಕ್ಕೊಟ್ಟು ಸಮೀಪ ಮಂಗಳವಾರ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕೇರಳದ ಸುಜಿತ್ ಎಂದು ಗುರುತಿಸಲಾಗಿದೆ. ಅವರು ರೈಲ್ವೆ ಹಳಿ ಬಳಿ ಇದ್ದ ಸಂದರ್ಭದಲ್ಲಿ ರೈಲು ಢಿಕ್ಕಿಯಾಗಿದ್ದು ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ಪಾಕೆಟ್ ನಲ್ಲಿ ಆಧಾರ್ ಕಾರ್ಡ್ ಪತ್ತೆ ಆಗಿದ್ದು. ಅದರಲ್ಲಿ ಕೇರಳ ಕಣ್ಣೂರು ಜಿಲ್ಲೆಯ ವಿಳಾಸ ಇದೆ. ಗಾಯಾಳು ಸುಜಿತ್ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 14 Apr 2026 7:33 pm

Kalaburagi | ಅಂಬೇಡ್ಕರ್ ಚಿಂತನೆ ಅರ್ಥೈಸಿಕೊಂಡರೆ ಮಾತ್ರ ನಿಜವಾದ ಭಾರತ ನಿರ್ಮಾಣ: ಪ್ರೊ. ಶಶಿಕಾಂತ ಎಸ್. ಉಡಿಕೇರಿ

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಇಡೀ ಜಗತ್ತು ಆಚರಿಸುತ್ತಿರುವ ಸಂದರ್ಭದಲ್ಲಿ, ಅವರ ನೈಜ ಕನಸಿನ ಭಾರತ ನಿರ್ಮಿಸಲು ಅವರ ಜೀವನ ಮತ್ತು ಚಿಂತನೆಗಳನ್ನು ಆಳವಾಗಿ ಅರ್ಥೈಸಿಕೊಳ್ಳಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಮೀಸಲಾತಿ ಮೂಲಕ ಶಿಕ್ಷಣ, ಉದ್ಯೋಗ ಹಾಗೂ ಅವಕಾಶಗಳು ದೊರೆತಿದ್ದರೂ, ಸಮಾಜದಲ್ಲಿ ಬದಲಾವಣೆಗೆ ಪ್ರಶ್ನಿಸುವ ಮನೋಭಾವ ಅಗತ್ಯವಾಗಿದೆ. ಆತ್ಮಸಾಕ್ಷಿಯಿಂದ ಅಂಬೇಡ್ಕರ್ ಅವರ ಚಿಂತನೆಗಳನ್ನು ಬೋಧಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಭಾರತೀಯ ಸಂವಿಧಾನದ ಆಶಯವೇ ಪ್ರಜಾಪ್ರಭುತ್ವ ಯಶಸ್ಸಿಗೆ ಕಾರಣವಾಗಿದೆ. ವಿಶ್ವದ ರಾಷ್ಟ್ರಗಳು ಅಂಬೇಡ್ಕರ್ ಅವರ ಕೊಡುಗೆಗಳನ್ನು ಗೌರವಿಸುತ್ತಿದ್ದು, ಅವರ ಅಪಾರ ಜ್ಞಾನವನ್ನು ಪ್ರಶಂಸಿಸುತ್ತಿವೆ. ಅವರು ಅನುಭವಿಸಿದ ನೋವಿನ ಫಲವಾಗಿ ನಾವು ಇಂದು ಸೌಕರ್ಯಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು. ಬೆಂಗಳೂರು ಮುಕ್ತಿ ಒಕ್ಕೂಟದ ಸಂಚಾಲಕಿ ಬೃಂದಾ ಅಡಿಗೆ ಮುಖ್ಯ ಅತಿಥಿಯಾಗಿ ಮಾತನಾಡಿ, “ಡಾ. ಬಿ.ಆರ್. ಅಂಬೇಡ್ಕರ್: ಪ್ರಜಾಪ್ರಭುತ್ವ ಮತ್ತು ಬಿನ್ನಾಭಿಪ್ರಾಯದ ಪ್ರತೀಕ” ವಿಷಯ ಕುರಿತು ಉಪನ್ಯಾಸ ನೀಡಿ, ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಶಿಕ್ಷಣ ಎಂದರೆ ಕೇವಲ ಪದವಿ ಅಲ್ಲ, ಜ್ಞಾನ ಮತ್ತು ವಿವೇಚನೆಯ ಮೂಲಕ ಅನ್ಯಾಯವನ್ನು ಪ್ರಶ್ನಿಸುವ ಶಕ್ತಿ ಎಂದು ಹೇಳಿದರು. ಯುವಜನತೆ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ‘ಒನ್ ಮ್ಯಾನ್ ಒನ್ ವೋಟ್’ ಹಕ್ಕಿನ ಮೌಲ್ಯವನ್ನು ಅರಿತು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸುವತ್ತ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು. ಸಂವಿಧಾನ ಜಾರಿಗೆ ಬಂದು 76 ವರ್ಷಗಳಾದರೂ, ಶೋಷಿತರು ಹಾಗೂ ದುರ್ಬಲ ವರ್ಗಗಳಿಗೆ ಸಂಪೂರ್ಣ ಸಮಾನತೆ ಇನ್ನೂ ಸಿಕ್ಕಿಲ್ಲ. ಸಮಾನತೆ ಎಂದರೆ ಕೇವಲ ಆರ್ಥಿಕ ಸ್ಥಿತಿಗತಿ ಅಲ್ಲ, ಸಮಾಜದಲ್ಲಿ ಸಮಾನ ಅವಕಾಶಗಳ ಲಭ್ಯತೆ ಎಂದು ಅಭಿಪ್ರಾಯಪಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಪ್ರೊ. ಚಂದ್ರಕಾoತ ಯಾತನೂರ್ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ವಿದ್ಯಾವಿಷಯಕ ಪರಿಷತ್ ಸದಸ್ಯೆ ಡಾ.ಪ್ರತಿಮಾ ಮಠದ್, ಮೌಲ್ಯಮಾಪನ ಕುಲಸಚಿವ ಡಾ.ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ. ರಮೇಶ ಲಂಡನ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಶ್ರೀರಾಮುಲು, ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷೇಯಕ ಪರಿಷತ್ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು. ಪ್ರಾಧ್ಯಾಪಕರು, ನಿವೃತ್ತ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ನಗರದ ನಾಗರೀಕರು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ನಾಡಗೀತೆ ಹಾಡಿದರು. ಸಿದ್ಧಾರ್ಥ ಚಿಮ್ಮಯಿ ಇದ್ಲಾಯಿ ಡಾ. ಬಿ. ಆರ್. ಅಂಬೇಡ್ಕರ್ ಗೀತೆ ಪ್ರಸ್ತುತಪಡಿಸಿದರು. ಡಾ. ಅಮಿತಾ ರಾಣಿ ಅತಿಥಿ ಪರಿಚಯಿಸಿದರು. ಡಾ. ಕಾಶಿನಾಥ ನೂಲಕರ್ ನಿರೂಪಿಸಿದರು. ಶಾಂತಪ್ಪ ಹೆಬಳಿ ವಂದಿಸಿದರು.

ವಾರ್ತಾ ಭಾರತಿ 14 Apr 2026 7:29 pm

ತುಮಕೂರು ಶಿರಾ ಬಳಿ KSRTC ಬಸ್‌ - ಲಾರಿ ನಡುವೆ ಭೀಕರ ಅಪಘಾತ; ಹಲವು ಸಾವು ನೋವು

ತುಮಕೂರಿನ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಭೀಕರ ಅಪಘಾತಕ್ಕೂಡಾಗಿದೆ. ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, 10 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.

ವಿಜಯ ಕರ್ನಾಟಕ 14 Apr 2026 7:22 pm

ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ: ಬೆಳ್ಳೆ ಗ್ರಾಪಂಗೆ ಕೇಂದ್ರ ತಂಡ ಭೇಟಿ

ಶಿರ್ವ, ಎ.14: ಆತ್ಮ ನಿರ್ಭರ ಭಾರತ ರಾಷ್ಟ್ರೀಯ ಪ್ರಶಸ್ತಿಗೆ ಇಡೀ ರಾಜ್ಯದಿಂದ ರಾಷ್ಟ್ರದ ಇತರ ಐದು ಪಂಚಾಯತ್‌ಗಳೊಂದಿಗೆ ನಾಮ ನಿರ್ದೇಶನಗೊಂಡ ಬೆಳ್ಳೆ ಗ್ರಾಮ ಪಂಚಾಯತ್‌ಗೆ ಕೇಂದ್ರ ಸರಕಾರದ ತಂಡ ಭೇಟಿ ನೀಡಿದೆ. ಬೆಳ್ಳೆ ಗ್ರಾಮ ಪಂಚಾಯತ್ 2024-25ನೇ ಸಾಲಿನಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಸ್ವಂತ ಸಂಪನ್ಮೂಲವನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸಿ ಬಳಕೆ ಮಾಡಿರುವ ಬಗ್ಗೆ ಧನಂಜಯ್ ಚಾವ್ಲಾ ಮತ್ತು ಉಪೇಂದ್ರ ನೇತೃತ್ವದ ಕೇಂದ್ರ ಸರಕಾರದ ತಂಡ ಭೇಟಿ ನೀಡಿ ಪರಿಶೀಲಿಸಿತು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಿಪಿಒ ಉದಯಕುಮಾರ್ ಶೆಟ್ಟಿ, ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ,ಸಿಲ್ವ, ಅನಿಲ್ ಶೆಟ್ಟಿ, ತಾಪಂ ಅಧಿಕಾರಿ ಗಳಾದ ರಜನಿ, ಚಂದ್ರಕಲಾ, ಪಿಡಿಒ ಆಶಾಲತಾ, ರಾಜೇಶ್ ಶೆಣೈ, ತಿಲಕ್ ರಾಜ್, ಶಶಿಧರ ಆಚಾರ್ಯ, ಮಹೇಶ್ ಶಂಕರ್, ಗ್ರಾಪಂ ಆಡಳಿತಾಧಿಕಾರಿ ನಿಧೀಶ್ ಹೊಳ್ಳ, ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ದಿವ್ಯಾ ಆಚಾರ್ಯ, ಮಾಜಿ ಉಪಾಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ತಾಪಂ ಮಾಜಿ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಗ್ರಾಪಂ ಮಾಜಿ ಸದಸ್ಯರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ ಗಳು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂಧಿವರ್ಗ, ಗ್ರಂಥಾಲಯ ಮತ್ತು ಎಸ್‌ಎಲ್‌ಆರ್‌ಎಂ ಸಿಬ್ಬಂದಿ, ಸಂಜೀನಿ ಒಕ್ಕೂಟದ ಪ್ರಮುಖರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 14 Apr 2026 7:20 pm

ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 14) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಒನ್ ಇ೦ಡಿಯ 14 Apr 2026 7:12 pm

ಲೋಕಸಭಾ ಕ್ಷೇತ್ರಗಳನ್ನ 543 ರಿಂದ 850ಕ್ಕೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಿದ್ಧತೆ; ವಿಶೇಷ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ

ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದೆ. ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಹಾಗೂ ಮರು ವಿಂಗಡಣೆಗೂ ವೇದಿಕೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಸೂದೆ ಮಂಡನೆಗೆ ತಯಾರಿ ನಡೆಸಿದೆ. ಇತ್ತ ವಿಪಕ್ಷಗಳ ಮಸೂದೆ ವಿರೋಧಿಸಲು ಸಭೆ ನಡೆಸಿದ್ದು, ಹಲವು ಆಕ್ಷೇಪಣೆಗಳನ್ನು ಮುಂದಿಟ್ಟಿವೆ.

ವಿಜಯ ಕರ್ನಾಟಕ 14 Apr 2026 7:08 pm

ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿಗೆ 2 ವರ್ಷ ನಿಷೇಧ; ಪಿಸಿಬಿ ಹೇಳಿದ್ದೇನು?

Blessing Muzarabani Vs PSL- ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಐಪಿಎಲ್ ಆಡುವ ಸಲುವಾಗಿ ಪಿಎಸ್ಎಲ್ (PSL) ತೊರೆದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ಅವರ ಮೇಲೆ 2 ವರ್ಷಗಳ ನಿಷೇಧ ಹೇರಿದೆ. ಕೆಕೆಆರ್ ತಂಡವು ಬಾಂಗ್ಲಾದ ಮಧ್ಯಮ ವೇಗಿ ಮುಸ್ತಫಿಝುರ್ ರೆಹ್ಮಾನ್ ಅವರ ಬದಲಿಗೆ ಮುಝರಬಾನಿ ಅವರನ್ನು ಸೇರಿಸಿಕೊಂಡಿತ್ತು. ಆದರೆ ಮುಝರಬಾನಿ ಅವರು ಇಸ್ಲಾಮಾಬಾದ್ ಯುನೈಟೆಡ್ ಜೊತೆಗಿನ ಒಪ್ಪಂದ ಮುರಿದ ಕಾರಣ ಪಿಸಿಬಿ ಈ ಕಠಿಣ ಕ್ರಮ ಕೈಗೊಂಡಿದೆ. ಲೀಗ್‌ನ ಸಮಗ್ರತೆ ಮತ್ತು ವೃತ್ತಿಪರತೆಯನ್ನು ಕಾಪಾಡಲು ಈ ನಿರ್ಧಾರ ಅಗತ್ಯ ಎಂದು ಪಿಸಿಬಿ ತಿಳಿಸಿದ್ದು, ಪರೋಕ್ಷವಾಗಿ ಐಪಿಎಲ್ ಪ್ರಾಬಲ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ವಿಜಯ ಕರ್ನಾಟಕ 14 Apr 2026 7:04 pm

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ರೀತಿಯ ಮಸೀದಿ ನಿರ್ಮಾಣ ಮಾಡಲು ಬಿಡಲ್ಲ; ಅಮಿತ್‌ ಶಾ ಶಪಥ!

ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರ್ಕಾರ, ಯಾವುದೇ ಕಾರಣಕ್ಕೂ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲು ಬಿಡುವುದಿಲ್ಲ ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ವಿಧಾನಸಭೆ ಚುನಾವಣೆಗಾಗಿ ನಡೆಸಿದ ಪ್ರಚಾರ ಸಭೆಯಲ್ಲಿ ಜನತೆಗೆ ನೀಡಿದ ಭರವಸೆ. ಇಲ್ಲಿನ ಗಂಗಾರಾಮಪುರ್‌ದಲ್ಲಿ ಭರ್ಜರಿ ಪ್ರಚಾರ ನಡೆಸಿದ ಅಮಿತ್‌ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 14 Apr 2026 6:58 pm

ಛತ್ತೀಸ್‌ಗಢ ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ: 9 ಜನ ಸಾವು, 40ಕ್ಕೂ ಹೆಚ್ಚು ಜನ ಗಾಯ

Chhattisgarh Power Plant: ಛತ್ತೀಸ್‌ಗಢ ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು 9 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ವರದಿಯಾಗಿದೆ. ಛತ್ತೀಸ್‌ಗಢದ ಶಕ್ತಿ ಜಿಲ್ಲೆಯಸಿಂಗಿತರೈ ಎನ್ನುವ ಹಳ್ಳಿಯಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಕಾರ್ಮಿಕರು

ಒನ್ ಇ೦ಡಿಯ 14 Apr 2026 6:56 pm

Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಂಗಳವಾರ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಸುಮಾರು ಎರಡು ದಶಕಗಳ ಕಾಲ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬೆನ್ನಲ್ಲೇ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡ ಹಾಗೂ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್

ಒನ್ ಇ೦ಡಿಯ 14 Apr 2026 6:51 pm

ಹುಲ್ಲುಕಡ್ಡಿಗೂ ಮಹತ್ವವಿದೆ! ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ : ಕಾಂಗ್ರೆಸ್ ಕಾರ್ಯಕರ್ತರಿಗೆ ಮಹತ್ವದ ಸಂದೇಶ ಕೊಟ್ಟ ಡಿಕೆಶಿ

ಮಹಾತ್ಮ ಗಾಂಧಿ ಅವರನ್ನು ಈ ದೇಶದ ಮಹಾತ್ಮ ಎಂದು ಕರೆಯುತ್ತೇವೆ. ಅನೇಕ ಕಡೆ ಇವರ ಪ್ರತಿಮೆಗಳನ್ನು ನೋಡಿದ್ದೇವೆ. ಜೊತೆಗೆ ದೇವರ ಪ್ರತಿಮೆಗಳನ್ನೂ ನೋಡಿದ್ದೇವೆ. ಅದೇ ರೀತಿ ಅಂಬೇಡ್ಕರ್‌ ಅವರನ್ನು ದೇವರ ರೂಪದಲ್ಲಿಟ್ಟು ಅನೇಕ ಕಡೆ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಅಂಬೇಡ್ಕರ್‌ ಅವರು ಎಡ, ಬಲ, ಲಂಬಾಣಿ, ಕೊರಮ, ಕೊರಚ ಸಮುದಾಯದವರ ಆಸ್ತಿಯಲ್ಲ. ಇವರು ಇಡೀ ದೇಶದ ಸರ್ವ ಜನಾಂಗದ ಆಸ್ತಿ. ಎಲ್ಲಾ ವರ್ಗದ ಜನರಿಗೆ ದನಿ ಕೊಟ್ಟ ಧೀಮಂತರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 14 Apr 2026 6:51 pm

ರಾಜ್ಯದಲ್ಲಿ ವಾರಕ್ಕೆರಡು ದಿನ ಇರುತ್ತೇನೆ, ಈ ಕೆಟ್ಟ ಸರ್ಕಾರದ ವಿರುದ್ಧ ದನಿ ಎತ್ತುತ್ತೇನೆ: ಎಚ್‌ಡಿಕೆ ಎಚ್ಚರಿಕೆ

ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ಇದು ದೊಡ್ಡ ಪ್ರಮಾಣದಲ್ಲಿ ಗೋಚರವಾಗುತ್ತಿದೆ ಎಂದು ಹೇಳಿದರು. ಆದರೆ ಅವರ ಪಕ್ಷದ ಬಗ್ಗೆ ನಾನು ಏನನ್ನು ಹೇಳಲು ಬರುವುದಿಲ್ಲ. ಇದ್ದರು ಆಂತರಿಕವಾಗಿ ಅವರಿಗೆ ಸಂಬಂಧಪಟ್ಟ ವಿಚಾರ. ಒಂದು ಮಾತನ್ನು ನಾನು ಹೇಳಬಲ್ಲೆ, ಇವರ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಹಳಿತಪ್ಪಿದೆ ಎಂದರು. ಯಾವ ಸಮಾಜವನ್ನು ಅತಿಯಾಗಿ ಓಲೈಕೆ ಮಾಡುತ್ತಿದ್ದರೋ ಈಗ ಅದೇ ಸಮಾಜದ ನಾಯಕರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ ಎಂದರು.

ವಿಜಯ ಕರ್ನಾಟಕ 14 Apr 2026 6:50 pm

ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್

Mohammed Siraj: ಭಾರತೀಯ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯನ್ನು ಸೋಮವಾರ ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಗಾಯಕಿಯ ಅಂತಿಮ ದರ್ಶನ ಪಡೆಯಲು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಕೂಡ ಸೇರಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಸಿರಾಜ್ ಅವರು ಆಶಾ ಭೋಸ್ಲೆ ಅವರ ಮೊಮ್ಮಗಳು

ಒನ್ ಇ೦ಡಿಯ 14 Apr 2026 6:45 pm