ಕಾರ್ಕಳ| ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್
► ಎ.19ರಂದು ದಿನಾಂಕ ಘೋಷಣೆ, ಕಾರ್ಯಾಲಯ ಉದ್ಘಾಟನೆ
ಪ್ರಯಾಗರಾಜ್, ಎ.12: ಉತ್ತರ ಪ್ರದೇಶದ IAS ಅಧಿಕಾರಿ ರಿಂಕು ಸಿಂಗ್ ರಾಹಿ ಅವರು ಮಾ.26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ಭಾರೀ ಸಂಚಲನವನ್ನು ಮೂಡಿಸಿದ್ದಾರೆ. ಯೋಗಿ ಆದಿತ್ಯನಾಥ ಸರಕಾರವು ತನ್ನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, ಸಾಂವಿಧಾನಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಮತ್ತು ಸರಕಾರದ ರಾಜಕೀಯ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಮೇಲಿನಿಂದ ಸೂಚನೆಗಳು ಬರುತ್ತಿದ್ದವು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇದು ರಾಹಿ ರಾಷ್ಟ್ರಪತಿಗಳಿಗೆ ಬರೆದಿರುವ ಮೊದಲ ಪತ್ರವೇನಲ್ಲ. ಸೆ.29, 2025 ಮತ್ತು ಅ.27, 2025ರಂದು ಬರೆದಿದ್ದ ಹಿಂದಿನ ಪತ್ರಗಳಲ್ಲಿಯೂ ಅವರು, ಅಧಿಕಾರಿಗಳು ಕಾನೂನು ಮತ್ತು ಸಂವಿಧಾನಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದ ಸಿದ್ಧಾಂತ ಅಥವಾ ಇಚ್ಛೆಗೆ ಅನುಗುಣವಾಗಿ ರಾಜಿ ಮಾಡಿಕೊಂಡು ಕೆಲಸ ನಿರ್ವಹಿಸಬೇಕಾದ ವಾತಾವರಣವಿದೆ ಎಂದು ಆರೋಪಿಸಿದ್ದರು. ‘ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಶಿಸ್ತು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಎಲ್ಲರನ್ನೂ ಒಳಗೊಂಡ ಭಾಗಿಯಾಗುವಿಕೆಯ ಮೂಲಕ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಜ್ಜುಗೊಳಿಸಲಾಗಿದ್ದರೆ ಇಲ್ಲಿ ನಾವು ಸಾಂವಿಧಾನಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದಿದ್ದರೆ ಉಳಿಯುವುದು ಕಷ್ಟವಾಗುತ್ತದೆ ಎಂದು ಮೇಲಿನಿಂದ ಸಂಕೇತಗಳು ಬರುತ್ತಿದ್ದವು ಎಂದು ರಾಹಿ ರಾಷ್ಟ್ರಪತಿಗಳಿಗೆ ತನ್ನ ಇತ್ತಿಚಿನ ಏಳು ಪುಟಗಳ ಪತ್ರದಲ್ಲಿ ಬರೆದಿದ್ದಾರೆ. ಆಡಳಿತದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ರಾಜಕೀಯ ನಾಯಕತ್ವದಿಂದ ‘ಸಂಕೇತಗಳು’ ರವಾನೆಯಾಗುತ್ತಿದ್ದವು. ಇವು ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ಸರಕಾರದ ರಾಜಕೀಯ ಕಾರ್ಯಸೂಚಿಗೆ ಪೂರಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದವು. ಸಂವಿಧಾನಬದ್ಧವಾಗಿ ಮತ್ತು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಲು ಬಯಸುವ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ, ಅವರನ್ನು ಯಾವುದೇ ಪ್ರಭಾವವಿಲ್ಲದ ಅಥವಾ ಆಡಳಿತಾತ್ಮಕವಾಗಿ ಅಮುಖ್ಯ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ರಾಹಿ ಹೇಳಿದ್ದಾರೆ. ‘ಒಬ್ಬ ಅಧಿಕಾರಿಯಾಗಿ ಸಂವಿಧಾನಕ್ಕೆ ನಿಷ್ಠರಾಗಿರುವುದು ನಮ್ಮ ಮೊದಲ ಕರ್ತವ್ಯ, ಆದರೆ ಇಲ್ಲಿ ಸಂವಿಧಾನಕ್ಕಿಂತ ಹೆಚ್ಚಾಗಿ ರಾಜಕೀಯ ಆದೇಶಗಳೇ ಮೇಲುಗೈ ಸಾಧಿಸುತ್ತಿವೆ. ಇದಕ್ಕೆ ಒಪ್ಪಿಕೊಳ್ಳದಿದ್ದರೆ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ. 2023ರ ಬ್ಯಾಚಿನ IAS ಅಧಿಕಾರಿ ರಾಹಿಯವರ ‘ರಾಜೀನಾಮೆ’ಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ರಾಹಿ ತಂದೆ ಸೌದನ್ ಸಿಂಗ್ ರಾಹಿ, ‘ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ಏನೇ ನಿರ್ಧಾರವನ್ನು ತೆಗೆದುಕೊಂಡಿದ್ದರೂ ಅದು ಯಾವಾಗಲೂ ದೇಶದ ಹಿತಾಸಕ್ತಿಯಲ್ಲಿರುತ್ತದೆ’ ಎಂದು ಹೇಳಿದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಹಿ ಕುಟುಂಬದ ಆಪ್ತರೋರ್ವರು, ಮಾಧ್ಯಮಗಳು ಅವರ ಇತ್ತೀಚಿನ ಕ್ರಮವನ್ನು ತಪ್ಪಾಗಿ ವ್ಯಾಖ್ಯಾನಿಸಿವೆ. ಅವರು IAS ತೊರೆಯುವ ಬಗ್ಗೆ ಏನನ್ನೂ ಹೇಳಿಲ್ಲ. ಅವರು ಬರೆದಿರುವ ಪತ್ರವು ತಾಂತ್ರಿಕ ರಾಜೀನಾಮೆ ಸ್ವರೂಪದ್ದಾಗಿದ್ದು, ತಾನು ಪಡೆಯುತ್ತಿರುವ ವೇತನಕ್ಕೆ ಬದಲಾಗಿ ಕನಿಷ್ಠ ಕೆಲಸವನ್ನಾದರೂ ತನಗೆ ನೀಡಿ ಎಂದು ಅವರು ಆಗ್ರಹಿಸಿದ್ದಾರೆ ಎಂದರು. ಸೌಜನ್ಯ: thewire.in
ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಸವಾಲು: ಗೋಪಾಲಕೃಷ್ಣ ಸಾಮಗ
ಶಿರ್ವ, ಎ.12: ಮಗುನ ಜೀವನದ ನೀಲನಕ್ಷೆ ತಯಾರುವುದೇ ಪ್ರಾಥಮಿಕ ಶಾಲೆಗಳಲ್ಲಿ. ಇದೊಂದು ಸರಸ್ವತೀ ಮಂದಿರ. ಸರಕಾರದ ನೀತಿ ಧೋರಣೆಗಳಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಸವಾಲಾಗಿದೆ. ಉಳಿಸಿ ಬೆಳೆಸಲು ಹೆಚ್ಚಿನವರ ತ್ಯಾಗ, ಸೇವೆಯ ಅಗತ್ಯ ಇದೆ. ಎಂದು ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಇಲ್ಲಿನ ಉಪ ಮಹಾಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ ಬೆಳ್ಳೆ ಹೇಳಿದ್ದಾರೆ. ಶತಮಾನೋತ್ಸವದ ಸಂಭ್ರಮದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರ ಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಶಾಲೆಯ ಸಂಸ್ಥಾಪಕರ ಸಾತ್ವಿಕ ತಪಸ್ಸಿನ ಫಲದಿಂದ ನೂರು ವರ್ಷಗಳಿಂದ ಈ ಶಾಲೆ ಸಮಾಜಕ್ಕೆ ನೀಡಿದ ಕೊಡುಗೆ ಅಸ್ಮರಣೀಯ. ನಾವು ಅವರ ಋಣದಲ್ಲಿದ್ದೇವೆ. ಋಣಮುಕ್ತ ರಾಗಲು ಈಗ ಅವಕಾಶ ಒದಗಿಬಂದಿದೆ ಎಲ್ಲರೂ ಸೇರಿ ಈ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ನೂರು ವರ್ಷಗಳಲ್ಲಿ ಈ ಶಾಲೆ ದೇಶಕ್ಕೆ ನೂರಾರು ಸತ್ಪ್ರಜೆಗಳನ್ನು ಕೊಟ್ಟಿದೆ. ಶಿಕ್ಷಣದ ಮೂಲಕ ಜೀವನದ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದೆ. ಹಿರಿಯರ ಈ ಕೊಡುಗೆ ಶ್ಲಾಘನೀಯವಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಶಾಲಾ ಹಳೆ ವಿದ್ಯಾರ್ಥಿನಿ ಡಾ.ಗೀತಾ ಶರ್ಮಾ, ಉಡುಪಿ ಜಿಲ್ಲಾ ಮುಂಡಾಳ ಸಮಾಜದ ಅಧ್ಯಕ್ಷ, ಶಾಲಾ ಹಳೆ ವಿದ್ಯಾರ್ಥಿ ಶಂಕರ ಪದಕಣ್ಣಾಯ ಮಾತನಾಡಿದರು. ಈ ಸಂದರ್ಭದಲ್ಲಿ ಸರಿತಾರಾಣಿ, ಜಯರಾಮ ಪ್ರಭು, ರಾಮದಾಸ ಪ್ರಭು, ಶ್ರೇಯಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್ ಸನಿಲ್, ಶಾಲಾ ವಿದ್ಯಾರ್ಥಿ ನಾಯಕ ರಿತಿಕ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ವರದಿ ಓದಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೇವದಾಸ್ ಪಾಟ್ಕರ್ ಅರುಂಧತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ವೇತಾ ನಾಯಕ್ ವಂದಿಸಿದರು.
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಅವರ ಬರಹ ಇಲ್ಲಿದೆ. ನನ್ನೂರು ಕಲಬುರಗಿ... ಉರಿಬಿಸಿಲಿನ, ಬೆಂಕಿಯಂಥಾ ಊರು. ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಆ ಮಣ್ಣಿನ ವಾಸನೆಗೆ ಕಟಿಬಿದ್ದು ಊರಿಗೆ ಹೋಗುವುದು ನನ್ನ ರೂಢಿ. ನಾನು ಟ್ರಾವೆಲ್ ಮಾಡುವುದುಕ್ಕೆ ತುಂಬಾ ಪ್ರಾಶಸ್ಯ್ತ ಕೊಡುತ್ತೇನೆ. ಯಾಕೆಂದರೆ
ಸ್ಪಷ್ಟ ಗುರಿಯಿಂದ ನೈಜ ಬದಲಾವಣೆ ಸಾಧ್ಯ: ಅರುಂಧತಿ ಭಟ್ಟಾಚಾರ್ಯ
ಮಣಿಪಾಲ, ಎ.12: ಬದಲಾಗುತ್ತಿರುವ ಈ ಸಂಕೀರ್ಣ ಜಗತ್ತಿನಲ್ಲಿ ಸದಾ ಕ್ರಿಯಾಶೀಲರಾಗಿರುವುದು ಮತ್ತು ಸ್ಪಷ್ಟ ಗುರಿ ಹೊಂದಿರುವುದು ಬಹಳ ಮುಖ್ಯ. ಜಗತ್ತು ನಿರಂತರ ಪರಿವರ್ತನೆ ಹೊಂದುತ್ತಿರುವ ಕಾಲದಲ್ಲಿ ಸ್ಪಷ್ಟವಾದ ಉದ್ದೇಶವು ಮಾತ್ರ ನೈಜವಾದ ಬದಲಾವಣೆಯನ್ನು ತರಬಲ್ಲದು ಎಂದು ಸೇಲ್ಸ್ಫೋರ್ಸ್ ಸಂಸ್ಥೆಯ ಸೌತ್ ಏಷ್ಯಾ ವಿಭಾಗದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಶನಿವಾರ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ಅಂಗಸಂಸ್ಥೆಯಾದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ(ಟ್ಯಾಪ್ಮಿ) ಇದರ 40ನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು. ಭಾರತದ ಭವಿಷ್ಯವನ್ನು ರೂಪಿಸುವ ಯುವನೇತಾರರ ಪೀಳಿಗೆಯು ಸಂಕೀರ್ಣ ಸ್ಥಿತಿಯನ್ನು ಸ್ಪಷ್ಟತೆಯಿಂದ ನಿಭಾಯಿಸುವ ಸಾಮರ್ಥ್ಯದೊಂದಿಗೆ ಬುದ್ಧಿಮತ್ತೆ ಮತ್ತು ಕಾಳಜಿಯಿಂದ ಮುನ್ನಡೆಯುವ ಕೌಶಲವನ್ನೂ ಹೊಂದಿರಬೇಕು ಎಂದು ಅವರು ತಿಳಿಸಿದರು. ಪೇಜ್ ಇಂಡಸ್ಟ್ರೀಸ್ ಸಂಸ್ಥೆಯ ಸಿಇಒ ಹಾಗೂ ಟ್ಯಾಪ್ಮಿಯ ಹಳೆವಿದ್ಯಾರ್ಥಿ ಕಾರ್ತಿಕ್ ವೈ. ಮಾತನಾಡಿ, ವಿದ್ಯಾರ್ಥಿ ಗಳು ಸದಾ ಕುತೂಹಲಿಗಳಾಗಿ, ಭದ್ರ ತಳಹದಿಯನ್ನು ರೂಪಿಸಿಕೊಳ್ಳಬೇಕು. ಶಿಸ್ತು, ನಿಷ್ಠೆ ಹಾಗೂ ಜನರ ಮೇಲಿನ ಗೌರವದಂಥ ಮೌಲ್ಯಗಳಿಂದಾಗಿ ನಿರಂತರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಕಲಿಕೆಯನ್ನು ಜೀವನದ ನಿರಂತರ ಪ್ರಕ್ರಿಯೆಯಾಗಿ ಭಾವಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್(ಡಾ.) ಎಂ.ಡಿ.ವೆಂಕಟೇಶ್, ಮಾಹೆಯ ಸಹ ಕುಲಪತಿಗಳಾದ ಡಾ.ಶರತ್ ರಾವ್ (ಆರೋಗ್ಯ ವಿಜ್ಞಾನ), ಡಾ.ದಿಲೀಪ್ ನಾಯಕ್(ಮಂಗಳೂರು ಕ್ಯಾಂಪಸ್), ಡಾ.ನಾರಾಯಣ ಸಭಾಹಿತ್(ತಂತ್ರಜ್ಞಾನ ಮತ್ತು ವಿಜ್ಞಾನ), ಪ್ರೊ.ಮಧು ವೀರರಾಘವನ್ (ಬೆಂಗಳೂರು ಕ್ಯಾಂಪಸ್) ಮತ್ತು ರಿಜಿಸ್ಟ್ರಾರ್ ಡಾ.ಗಿರಿರ್ಧ ಕಿಣಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯುವ ಸಾಧಕ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಟ್ಯಾಪ್ಮಿಯ ಪ್ರಭಾರ ನಿರ್ದೇಶಕ ಡಾ.ದುರ್ಗಾ ಪ್ರಸಾದ್ ವಾರ್ಷಿಕ ಶೈಕ್ಷಣಿಕ ವರದಿ ಮಂಡಿಸಿದರು. ಸಂಸ್ಥೆಯ ಎಂಬಿಎ(ಕೋರ್ಸ್) ವಿಭಾಗದ 348 ವಿದ್ಯಾರ್ಥಿಗಳು, ಬ್ಯಾಂಕಿಂಗ್ ವಿಭಾಗದ 56, ಮಾರ್ಕೆಟಿಂಗ್ನ 50, ಮಾನವ ಸಂಪನ್ಮೂಲ ವಿಭಾಗದ 44 ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ 23 ಸೇರಿದಂತೆ ಒಟ್ಟು 521 ವಿದ್ಯಾರ್ಥಿಗಳು ಈ ಬಾರಿ ಪದವಿ ಪಡೆದಿದ್ದಾರೆ.
ಸಂಜೆ ವಿಶೇಷ ಕಣ್ಣಿನ ತಪಾಸಣಾ ಚಿಕಿತ್ಸಾಲಯ ಆರಂಭ
ಮಂಗಳೂರು, ಎ.12: ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಕೆಲಸದ ಒತ್ತಡದ ನಡುವೆ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಉದ್ದೇಶದಿಂದ, ಮಂಗಳೂರಿನ ಉಜ್ಜೋಡಿ ಪಂಪ್ವೆಲ್ನಲ್ಲಿರುವ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಈಗ ’ಸಂಜೆ ವಿಶೇಷ ಕಣ್ಣಿನ ತಪಾಸಣಾ ಚಿಕಿತ್ಸಾಲಯ’ ಸೇವೆಯನ್ನು ಆರಂಭಿಸಿದೆ. ದಿನವಿಡೀ ಕಚೇರಿ ಕೆಲಸಗಳಲ್ಲಿ ಕಾರ್ಯನಿರತರಾಗಿರುವ ಐಟಿ ಉದ್ಯೋಗಿ ಗಳು, ಬ್ಯಾಂಕ್ ಸಿಬ್ಬಂದಿ, ಶಿಕ್ಷಕರು, ಉದ್ಯಮಿಗಳು, ಖಾಸಗಿ ಉದ್ಯೋಗದಲ್ಲಿ ಹಾಗೂ ಸಾಮಾನ್ಯ ಜನರಿಗೆ ಹಗಲು ಹೊತ್ತಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಅಂತಹವರಿಗಾಗಿ ವಿಶೇಷವಾಗಿ ಈ ಸಂಜೆ ಅವಧಿಯ ಚಿಕಿತ್ಸಾಲಯವನ್ನು ವಿನ್ಯಾಸಗೊಳಿಸಲಾಗಿದೆ. ಕೆಲಸದ ಅವಧಿ ಮುಗಿದ ನಂತರ ಸಂಜೆ ವೇಳೆಯಲ್ಲಿ ತಪಾಸಣೆ ಲಭ್ಯ. ಸರಕಾರಿ ಮತ್ತು ಖಾಸಗಿ ಕಂಪನಿ ಉದ್ಯೋಗಿ ಗಳು, ಐಟಿ ವೃತ್ತಿಪರರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವರ್ತಕರು ಮತ್ತು ಸಾಮಾನ್ಯ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಡುಪಿ, ಎ.12: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧನಾ ವಿದ್ಯಾರ್ಥಿನಿ ಸುಮಾ ಜಿ.ಆರ್. ಮಂಡಿಸಿದ ಸಿಂಥೆಸಿಸ್ ಅಂಡ್ ಕ್ಯಾರೆಕ್ಟರೈಸೇಶನ್ ಆಫ್ ಪಿರಿಡೀನ್ ಡೆರಿವೇಟಿವ್ಸ್ ಅಂಡ್ ದೇರ್ ಹೈಡ್ರೋಜನ್ ಬಾಂಡಿಂಗ್ ಕಾಂಪ್ಲೆಕ್ಸಸ್: ಇನ್ವೆಸ್ಟಿಗೇಶನ್ಸ್ ಆನ್ ಮೆಸೊಮಾರ್ಫಿಸಂ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟೀಸ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಪಿಎಚ್ಡಿ ಪದವಿಯನ್ನು ನೀಡಿದೆ. ಇವರು ಈ ಸಂಶೋಧನೆಯನ್ನು ಎಂಐಟಿಯ ಬೇಸಿಕ್ ಸೈನ್ಸಸ್ ವಿಭಾಗದ ಅಡಿಷನಲ್ ಪ್ರೊಫೆಸರ್ ಡಾ.ಮದ್ದಸಾನಿ ಶ್ರೀನಿವಾಸುಲು ಅವರ ಮಾರ್ಗ ದರ್ಶನ ಹಾಗೂ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನರೇಶ್ ಕುಮಾರ್ ಮಣಿ ಅವರ ಸಹ-ಮಾರ್ಗದರ್ಶನದಲ್ಲಿ ಮಾಡಿದ್ದಾರೆ. ಇವರು ಕುಂದಾಪುರದ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುಮಾರು 19 ವರ್ಷಗಳ ಕಾಲ ಅನ್ವಯಿಕ ಜೀವವಿಜ್ಞಾನ ಹಾಗೂ ಸಹಾಯಕ ಪ್ರಾಧ್ಯಾಪಕಿ ಹಾಗು ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಅಗತ್ಯ: ನ್ಯಾ. ವಿಶ್ವಜಿತ್ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ
Iran ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲ: ಇರಾನ್ ನ ಮುಖ್ಯ ಸಂಧಾನಕಾರ
ಇಸ್ಲಾಮಾಬಾದ್: ಪಶ್ಚಿಮ ಏಶ್ಯ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಇರಾನ್ ವಿಶ್ವಾಸ ಗಳಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ರವಿವಾರ ಇರಾನ್ ನ ಪ್ರಮುಖ ಸಂಧಾನಕಾರ ಮುಹಮ್ಮದ್ ಬಘೇರ್ ಘಾಲಿಬಾಫ್ ಆರೋಪಿಸಿದರು. ಪಾಕಿಸ್ತಾನದಲ್ಲಿ ಇರಾನ್ ಹಾಗೂ ಅಮೆರಿಕ ನಿಯೋಗಗಳ ನಡುವೆ ನಡೆದ ಸುದೀರ್ಘ ಮಾತುಕತೆ ಯಾವುದೇ ಒಪ್ಪಂದಕ್ಕೆ ತಲುಪುವಲ್ಲಿ ವಿಫಲವಾದ ಬಳಿಕ, ಇರಾನ್ ನಿಯೋಗದ ನೇತೃತ್ವ ವಹಿಸಿದ್ದ ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್ ಬಘೇರ್ ಘಾಲಿಬಾಫ್ ಈ ಹೇಳಿಕೆ ನೀಡಿದರು. ಈ ಕುರಿತು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, “ಇರಾನ್ ನಿಯೋಗ ಮುನ್ನೋಟದ ಉಪಕ್ರಮಗಳನ್ನು ಪ್ರಸ್ತಾಪಿಸಿತು. ಆದರೆ, ಅಂತಿಮವಾಗಿ ಈ ಸಂಧಾನದ ಸುತ್ತಿನಲ್ಲಿ ಎದುರು ಬಣ ಇರಾನ್ ನ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು” ಎಂದು ಆರೋಪಿಸಿದರು. “ಸಂಧಾನಕ್ಕೂ ಮುನ್ನ, ನಮ್ಮ ಬಳಿ ಉತ್ತಮ ಭಾವನೆ ಮತ್ತು ಇಚ್ಛೆ ಇದೆ ಎಂದು ನಾನು ಹೇಳಿದ್ದೆ. ಆದರೆ, ಈ ಹಿಂದಿನ ಎರಡು ಯುದ್ಧಗಳ ಅನುಭವದಿಂದ ನಮಗೆ ವಿರೋಧಿ ಬಣದ ಬಗ್ಗೆ ಯಾವುದೇ ವಿಶ್ವಾಸವಿಲ್ಲ” ಎಂದೂ ಹೇಳಿದರು. “ಅಮೆರಿಕ ನಮ್ಮ ತರ್ಕ ಮತ್ತು ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡಿದೆ. ಇದೀಗ ನಮ್ಮ ವಿಶ್ವಾಸವನ್ನು ಗಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಸಮಯ ಅವರ ಬಳಿ ಇದೆ” ಎಂದು ಅವರು ಹೇಳಿದರು. ಇರಾನ್ ಜನರ ಹಕ್ಕುಗಳನ್ನು ಎತ್ತಿಹಿಡಿಯಲು ಇರಾನ್ ತನ್ನ ಸೇನಾ ಬಲದೊಂದಿಗೆ ಬಲವಾದ ರಾಜತಾಂತ್ರಿಕತೆಯನ್ನೂ ಮುಂದುವರಿಸುತ್ತದೆ ಎಂದೂ ಘೋಷಿಸಿದರು. “ಇರಾನ್ ಜನತೆಯ ಹಕ್ಕುಗಳನ್ನು ಸಾಧಿಸಲು ಸೇನಾ ಶಕ್ತಿಯ ಜೊತೆಗೆ ರಾಜತಾಂತ್ರಿಕತೆಯಲ್ಲೂ ನಾವು ನಂಬಿಕೆ ಇಟ್ಟಿದ್ದೇವೆ. ಕ್ಷಣಿಕ ಲಾಭಕ್ಕಾಗಿ 40 ದಿನಗಳ ಕಾಲ ರಾಷ್ಟ್ರೀಯ ರಕ್ಷಣೆಯನ್ನು ಮಾಡಿದ ಇರಾನ್ ಜನತೆಯ ಸಾಧನೆಯನ್ನು ಕುಂದಿಸುವ ಪ್ರಯತ್ನವನ್ನು ನಾವು ನಿಲ್ಲಿಸುವುದಿಲ್ಲ” ಎಂದು ಹೇಳಿದರು. ಇದೇ ವೇಳೆ, ಶಾಂತಿ ಮಾತುಕತೆಯನ್ನು ಆಯೋಜಿಸಿದ ಪಾಕಿಸ್ತಾನಕ್ಕೆ ಅವರು ಧನ್ಯವಾದ ಸಲ್ಲಿಸಿದರು. ಸಂಧಾನಕಾರರನ್ನು ಬೆಂಬಲಿಸಿದ ಇರಾನ್ ಜನತೆಯನ್ನು ಶ್ಲಾಘಿಸಿದ ಅವರು, ಪಾಕಿಸ್ತಾನದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ದಣಿವರಿಯದ ಪ್ರಯತ್ನ ನಡೆಸಿದ ತಮ್ಮ ತಂಡವನ್ನೂ ಅಭಿನಂದಿಸಿದರು. ಸಂಧಾನದ ಪ್ರಮುಖ ಅಂಶವಾಗಿದ್ದ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕು ಎಂಬ ಷರತ್ತಿಗೆ ಇರಾನ್ ಒಪ್ಪಿಗೆ ಸೂಚಿಸದ ಕಾರಣ, ಶಾಂತಿ ಒಪ್ಪಂದಕ್ಕೆ ತಲುಪಲು ವಿಫಲವಾಗಿದ್ದೇವೆ ಎಂದು ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ತಿಳಿಸಿದ್ದಾರೆ. “ಇದು ನಮ್ಮ ಅಂತಿಮ ಹಾಗೂ ಅತ್ಯುತ್ತಮ ಪ್ರಸ್ತಾವ ಎಂಬ ಮನವರಿಕೆಯಿಂದ ಈ ಸರಳ ಪ್ರಸ್ತಾವವನ್ನು ನೀಡುತ್ತಾ ಇಲ್ಲಿಂದ ತೆರಳುತ್ತಿದ್ದೇವೆ. ಅದನ್ನು ಇರಾನ್ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡುತ್ತೇವೆ” ಎಂದು ಅಮೆರಿಕಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ. ವಾನ್ಸ್ ಹೇಳಿದರು. ಎರಡೂ ದೇಶಗಳು ಆರು ದಿನಗಳ ಕದನ ವಿರಾಮವನ್ನು ಘೋಷಿಸಿದ ಬಳಿಕ, ಶನಿವಾರ ಆರಂಭಗೊಂಡ ಸಂಧಾನಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಪ್ರಪ್ರಥಮ ಉನ್ನತ ಮಟ್ಟದ ಮುಖಾಮುಖಿ ಮಾತುಕತೆ ಇದೇ ಆಗಿದೆ. ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಆರಂಭವಾದ ಬಳಿಕ ಈ ಬಿಕ್ಕಟ್ಟು ಪ್ರಾರಂಭಗೊಂಡಿದೆ. ಇದರಿಂದ ಜಾಗತಿಕ ಇಂಧನ ಮಾರುಕಟ್ಟೆ ಕುಂಠಿತಗೊಂಡಿದ್ದು, ವ್ಯಾಪಾರ ವ್ಯತ್ಯಯಗೊಂಡಿದೆ. ಪಶ್ಚಿಮ ಏಶ್ಯದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯಬೇಕು, ಇರಾನ್ ಮೇಲಿನ ದಿಗ್ಬಂಧನಗಳನ್ನು ತೆರವುಗೊಳಿಸಬೇಕು ಹಾಗೂ ಹಾರ್ಮುಝ್ ಜಲಸಂಧಿಯನ್ನು ನಿಯಂತ್ರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ 10 ಅಂಶಗಳ ಯೋಜನೆಯನ್ನು ಇರಾನ್ ಸಂಧಾನಕ್ಕಾಗಿ ಮುಂದಿಟ್ಟಿತ್ತು. ಎರಡೂ ದೇಶಗಳ ಮುಖಾಮುಖಿ ಮಾತುಕತೆಯ ಬಳಿಕವೂ ಒಪ್ಪಂದಕ್ಕೆ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ, ಅವುಗಳ ನಡುವೆ ಘೋಷಿಸಲಾದ ಎರಡು ವಾರಗಳ ನಾಜೂಕು ಕದನ ವಿರಾಮದ ಪರಿಣಾಮಕಾರಿತನದ ಬಗ್ಗೆ ಅನುಮಾನಗಳು ಮೂಡಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಮುಕ್ತವಾಗುವ ಸಾಧ್ಯತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರವಾಗುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.
ಎ.14ರಿಂದ ಅಡ್ಕಸ್ಥಳ ಮಖಾಂ ಉರೂಸ್; ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ
ಕಾಸರಗೋಡು, ಎ.12: ಕರ್ನಾಟಕ-ಕೇರಳ ಗಡಿಪ್ರದೇಶವಾಗಿರುವ ಅಡ್ಕಸ್ಥಳದಲ್ಲಿರುವ ಸುಮಾರು ಎರಡು ಶತಮಾನಗಳ ಚರಿತ್ರೆ ಹೊಂದಿರುವ ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್ನಲ್ಲಿ ಎರಡು ವರ್ಷಗಳಿ ಗೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಎ.14ರಿಂದ 21ರತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.13ರಂದು ರಾತ್ರಿ 7 ಗಂಟೆಗೆ ಸಂದಲ್ ಮೆರವಣಿಗೆ ಕಾರ್ಯಕ್ರಮ ಕಳಿಯಾರ್ ಜೆಎಚ್ಕ್ಯು ಕಾಲೇಜಿನ ಪ್ರಿನ್ಸಿಪಾಲ್ ಅಲ್ ಹಾಜ್ ಕೆ.ಬಿ.ಅಬ್ದುರ್ರಝಾಕ್ ಮಿಸ್ಬಾಹಿ ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ. ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ : ಎ.14ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ರಾತ್ರಿ 7 ಗಂಟೆಗೆ ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಲೋಕಾರ್ಪಣೆ ನೆರವೇರಿಸಲಿರುವರು. ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಮಸೂದ್ ತಂಙಳ್ ಅಲ್ ಬುಖಾರಿ ಕೂರ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ವ್ಯವಸ್ಥಾಪಕ ರೆ.ಫಾ ಜೋಸ್ ಚೆಂಪೊಟ್ಟಿಕ್ಕಲ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ , ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ ಸದಸ್ಯ ಐತಪ್ಪ ಕುಲಾಲ್ ಭಾಗವಹಿಸುವರು. ಧಾರ್ಮಿಕ ಪ್ರವಚನ : 8 ದಿನಗಳ ಧಾರ್ವಿಕ ಪ್ರವಚನ ಕಾರ್ಯಕ್ರಮದಲ್ಲಿ ಎ.14ರಂದು ರಾತ್ರಿ 8 ಗಂಟೆಗೆ ಹಾಮಿದ್ ಯಾಸೀನ್ ಜೌಹರಿ ಅಲ್ ಮದನಿ ಕೊಲ್ಲಂ, ಅಡ್ಯನಡ್ಕ ಖತೀಬ್ ಮುಹಮ್ಮದ್ ಹಾರಿಸ್ ರಹ್ಮಾನಿ , ಉಕ್ಕುಡ ಮುದರ್ರಿಸ್ ಹಾಫಿಳ್ ಅಹ್ಮದ್ ಶೆರೀಫ್ ಕಾಮಿಲ್ ಸಖಾಫಿ, ಎ.15ರಂದು ಹಾಫಿಳ್ ನವಾಸ್ ಮನ್ನಾನಿ ಪನವೂರು, ಖಂಡಿಗೆ ಖತೀಬ್ ಸಿರಾಜುದ್ದೀನ್ ಸಅದಿ , ಎ.16. ರಾಫಿ ಅಹಸ್ಸನಿ ಕಾಂತಪುರಂ, ಎ.17. ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ, ಕಾಟುಕುಕ್ಕೆ ಖತೀಬ್ ಬಶೀರ್ ದಾರಿಮಿ , ಎ.18. ಹಂಝ ಮಿಸ್ಬಾಹಿ ಓಟಪ್ಪದವು, ಉಕ್ಕಿನಡ್ಕ ಖತೀಬ್ ಮುಝಮ್ಮಿಲ್ ಮುಸ್ಲಿಯಾರ್ ಯು.ಕೆ , ಎ.19. ಹಾಫಿಳ್ ಶಮೀಸ್ ಖಾನ್ ನಾಫೀ ಇಡುಕ್ಕಿ, ಮರಕ್ಕಿಣಿ ಖತೀಬ್ ಸಿದ್ದೀಕ್ ದಾರಿಮಿ , ಎ.20.ವಹಾಬ್ ನಯೀಮಿ ಕೊಲ್ಲಂ, ಪೆರ್ಲ ಟೌನ್ ಖತೀಬ್ ನೌಫಲ್ ದಾರಿಮಿ ಕೊಟ್ಟಿಲಂ, ಎ.21ರಂದು ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ, ಮರ್ತ್ಯ ಖತೀಬ್ ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ ರಹೀಮ್ ಸಖಾಫಿ ಪ್ರವಚನ ನೀಡಲಿರುವರು. *ಸ್ವಲಾತ್ಗೆ ಚಾಲನೆ: ಎ.16ರಂದು ರಾತ್ರಿ 7 ಗಂಟೆಗೆ ಅಸ್ಸಯ್ಯಿದ್ ಇಂಬಿಚ್ಚಿ ಕೋಯ ಜಮುಲಿಲ್ಲೈಲಿ ತಂಙಳ್ ಕಾಟುಕುಕ್ಕೆ ಅವರು ದರ್ಗಾದಲ್ಲಿ ಸ್ವಲಾತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ: ಉರೂಸ್ ಸಮಾರೋಪ ಸಮಾರಂಭ ಎ.21ರಂದು ರಾತ್ರಿ ನಡೆಯಲಿದ್ದು, ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮಾಡು ದುಆ ನೇತೃತ್ವ ವಹಿಸಲಿದ್ದಾರೆ , ಅಡ್ಕಸ್ಥಳ ಜಮಾಅತ್ ಕಮಿಟಿ ಗೌರವಾಧ್ಯಕ್ಷ ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿರುವರು. ಅಡ್ಕಸ್ಥಳ ಖತೀಬ್ ಹಾಫಿಳ್ ರಾಝಿಮ್ ಯಮಾನಿ, ಸದರ್ ಮುಅಲ್ಲಿಂ ಮುಹಮ್ಮದ್ ಮದನಿ, ಮುಹಝ್ಝಿನ್ ಮುಝಮ್ಮಿಲ್ ಸಅದಿ ಭಾಗವಹಿಲಿದ್ದಾರೆ ಎಂದು ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಬ್ದುಲ್ ಜಬ್ಬಾರ್ ಆಯ್ತು ಶೀಘ್ರ ಮತ್ತೊಂದು ತಲೆದಂಡ! ಸ್ವತಃ ಸಿಎಂ ಸಿದ್ದರಾಮಯ್ಯ ಕೊಟ್ಟರು ಸುಳಿವು
ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್ ಬಂಡಾಯಕ್ಕೆ ಕಾರಣವಾಗಿದ್ದವರ ವಿರುದ್ಧ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಈ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿವೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸುಳಿವು ಕೊಟ್ಟಿದ್ದಾರೆ.
‘371 ಜೆ’ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ : ಸಚಿವ ಈಶ್ವರ ಖಂಡ್ರೆ
40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭ
Ballari | ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ
ಬಳ್ಳಾರಿ / ಕಂಪ್ಲಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗಾಗಿ ಭಾನುವಾರ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ನಡೆದ ಈ ಪ್ರವೇಶ ಪರೀಕ್ಷೆಗೆ 96 ವಿದ್ಯಾರ್ಥಿಗಳಲ್ಲಿ 85 ಮಂದಿ ಹಾಜರಾಗಿದ್ದು, 11 ಮಂದಿ ಗೈರುಹಾಜರಾಗಿದ್ದಾರೆ ಎಂದು ಪ್ರಾಂಶುಪಾಲ ಬಸವರಾಜ್ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಡಚಣೆಗಳಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿತು ಎಂದು ಅಧಿಕಾರಿಗಳು ತಿಳಿಸಿದರು. ಫಲಿತಾಂಶ ಶೀಘ್ರದಲ್ಲೇ ಪ್ರಕಟ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ dom.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಸಮವಸ್ತ್ರ, ಪಠ್ಯಪುಸ್ತಕಗಳು ಸೇರಿದಂತೆ ಗುಣಮಟ್ಟದ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುತ್ತದೆ.
ಮೀಫ್| ಉನ್ನತ ಶಿಕ್ಷಣದ ಉಚಿತ ಸೀಟುಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಎ.12: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಸಂಸ್ಥೆಯ ವತಿಯಿಂದ ನೀಡಲಾಗುವ ಉನ್ನತ ಶಿಕ್ಷಣಕ್ಕಾಗಿ ಉಚಿತ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಬೆಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಹಲವು ಕೋರ್ಸುಗಳನ್ನು ಮೀಫ್ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಕೋರ್ಸುಗಳ ವಿವರ: ಮೆಡಿಕಲ್ , ಡೆಂಟಲ್, ಇಂಜಿನಿಯರಿಂಗ್ ,ಸಿಎ, ಬಿಕಾಂ, ಬಿಬಿಎ, ಪ್ಯಾರಮೆಡಿಕಲ್, ನರ್ಸಿಂಗ್, ಹಾಸ್ಪಿಟಲ್ ಮ್ಯಾನೇಜ್ಮೆಂಟ್ , ಫಿಸಿಯೋಥೆರಪಿ ಮತ್ತು ನ್ಯೂಟ್ರೀಷಿಯನ್ ಇತ್ಯಾದಿ ಕೋರ್ಸ್ಗಳ ಅಧ್ಯಯನಕ್ಕೆ ಅವಕಾಶ ಇದೆ. ಪಿಯುಸಿಯಲ್ಲಿ ಅತ್ಯಂತ ಗರಿಷ್ಠ ಅಂಕಗಳಿಸಿರುವ ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅಲ್ಲದೇ ಉಡುಪಿ,ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಮೀಫ್ ಘಟಕಗಳ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆಗಳ ತೀರಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮೀಫ್ ಕಚೇರಿಯಿಂದ ಪಡೆಯಬಹುದು ಎಂದು ಸಂಸ್ಥೆಯ ಅದ್ಯಕ್ಷ ಮೂಸಬ್ಬ ಪಿ ಬ್ಯಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ ಇಂತಿವೆ. +91 8792115666, +91 8431990966 , ಸಂಪರ್ಕಿಸಬಹುದಾದ ಸಮಯ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರ ತನಕ,ಸ್ಥಳ ಕಾರ್ನಾಡು ಸದಾಶಿವ ಸ್ಮಾರಕ ಕಟ್ಟಡ, ಬಾವುಟಗುಡ್ಡೆ ಈದ್ಗಾ ಮಸೀದಿ ಎದುರುಗಡೆ, ಲೈಟ್ ಹೌಸ್ ರೋಡ್, ಮಂಗಳೂರು ಎಂದು ಪ್ರಕಟನೆ ತಿಳಿಸಿದೆ.
Kanakagiri | ಜ್ಯೋತಿ ಬಾಫುಲೆ ಭಾರತದ ಶ್ರೇಷ್ಠ ಸಮಾಜ ಸುಧಾರಕ : ಡಾ.ಎರಿಸ್ವಾಮಿ ಎಚ್.
ಕನಕಗಿರಿ: ಮಹಾತ್ಮ ಜ್ಯೋತಿ ಬಾಫುಲೆ ಅವರು 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದ್ದಾರೆ ಎಂದು ತಾವರಗೇರಾ ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಡಾ.ಎರಿಸ್ವಾಮಿ ಎಚ್. ಹೇಳಿದರು. ಇಲ್ಲಿನ ಪಂಪ್ಪಣ್ಣ ಶರಣಪ್ಪ ಗುಗ್ಗಳಶೇಟ್ರ ಕಾಲೇಜಿನಲ್ಲಿ ಭಾನುವಾರ ನಡೆದ ಶಿಕ್ಷಣ ಕ್ರಾಂತಿಯ ರೂವಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ 199ನೇ ಜನ್ಮ ಜಯಂತಿ, ವಿಶೇಷ ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಫುಲೆ ಅವರು ಕೇವಲ ಶಿಕ್ಷಣ ತಜ್ಞರಾಗಿರದೆ, ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರು. ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ನೀಡಿ, ಅವರನ್ನು ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದರು. ಸಮಾಜದ ತೀವ್ರ ವಿರೋಧದ ನಡುವೆಯೂ ಈ ದಂಪತಿಗಳು ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ತಿಳಿಸಿದರು. ಪ್ರಾಂಶುಪಾಲ ಬಜರಂಗ ಬಲಿ ಮಾತನಾಡಿದರು. ಕುಷ್ಟಗಿ ವಕೀಲರಾದ ಬೆಟ್ಟಪ್ಪ ಯತ್ನಟ್ಟಿ ಬಸವಂತಪ್ಪ ಚೌವ್ಹಾಣ ಪ್ರಾಧ್ಯಪಕ ರಕ್ಷಿತ್.ಎ, ವೀರೇಶ್ ಕೆಂಗಲ್, ಸರ್ವಮಂಗಳಮ್ಮ.ಟಿ.ಆರ್, ಹಿರಿಯ ಉಪನ್ಯಾಸಕ ಅಮರೇಶ ವೆಂಕಟಾಪುರ, ವಿನಯ್ ಕುಮಾರ್, ವಿಜಯ್ ಸರೋದೆ, ಬಸವರಾಜ್ ಚಿಗರಿ, ಹಲಿಗೆಮ್ಮ, ಬೋರಯ್ಯ ಸೇರಿದಂತೆ ಇತರರು ಇದ್ದರು. ಬಾಲಪ್ಪ ಕುರಿ ನಿರೂಪಿಸಿದರು, ವಿದ್ಯಾರ್ಥಿನಿ ಮೀನಾಕ್ಷಿ ಪ್ರಾಥಿಸಿದರು, ಸಂಗಮೇಶ್ ಸ್ವಾಗತಿಸಿದರು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಯ್ಕೆ
ಕುಂದಾಪುರ, ಎ.12: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸಿ.ಜೆ. ದೆಹಲಿಯ ಸಂಸತ್ ಭವನದಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಕೇವಲ 11 ವಿದ್ಯಾರ್ಥಿಗಳಲ್ಲಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಏಕೈಕ ವಿದ್ಯಾರ್ಥಿನಿಯಾಗಿ ಮಹಾಲಕ್ಷ್ಮೀ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಈಕೆ ಎಸ್.ಜಿ.ಪ್ರಸಾದ್ ರಾವ್ ಮತ್ತು ಪೂರ್ಣಿಮಾ ಪಿ.ರಾವ್ ದಂಪತಿಯ ಪುತ್ರಿ.
ನಿರಂತರ ಪರಿಶ್ರಮವು ಸಾಧನೆಯ ಶಿಖರಕ್ಕೆ ದಾರಿ: ನ್ಯಾ.ವಿಶ್ವಜಿತ್ ಶೆಟ್ಟಿ
10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಸಮಾರೋಪ
ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ: ಯಾದಗಿರಿ-ಗುರುಮಠಕಲ್ನಲ್ಲಿ ಆಕ್ರೋಶ
ಯಾದಗಿರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31 ಅವಧಿಯ ತಾಲೂಕು ಘಟಕಗಳ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳಲ್ಲಿ ಗೊಂದಲಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯಾದ್ಯಂತ ಏಪ್ರಿಲ್ 11ರಿಂದ ಆರಂಭಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 12ಕ್ಕೆ ಮುಕ್ತಾಯವಾದರೂ, ಈ ಎರಡು ತಾಲೂಕುಗಳಲ್ಲಿ ಯಾವುದೇ ಅಧಿಕೃತ ಚಟುವಟಿಕೆ ನಡೆದಿಲ್ಲ ಎಂದು ಸ್ಪರ್ಧಾ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಕಚೇರಿ ಸ್ಥಾಪನೆ ಇಲ್ಲದೆ, ಚುನಾವಣಾಧಿಕಾರಿ ನೇಮಕವಾಗದೆ ಹಾಗೂ ಮತದಾರರ ಪಟ್ಟಿ ಪ್ರಕಟವಾಗದೆ ಇರುವುದರಿಂದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣೆಯನ್ನು ಮುನ್ನಡೆಸಬೇಕಾದ ಸಂಘದ ಜಿಲ್ಲಾ ಅಧ್ಯಕ್ಷರು ಸಂಪರ್ಕಕ್ಕೆ ಸಿಗದಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ರಾಜ್ಯ ಮಟ್ಟದ ಪದಾಧಿಕಾರಿಗಳಿಂದಲೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಕೆಲವರು ತೆರೆಮರೆಯಲ್ಲಿ ವಾಮಮಾರ್ಗದಲ್ಲಿ ಚುನಾವಣೆ ನಡೆಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ 16 ಮಂದಿ ಶಿಕ್ಷಕ ಆಕಾಂಕ್ಷಿಗಳು ತಾಲೂಕು ಅಧ್ಯಕ್ಷ ಯೆಂಕಪ್ಪ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿ, ತಕ್ಷಣ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ. ತಾಲೂಕು ಅಧ್ಯಕ್ಷರು ಕೂಡ ರಾಜ್ಯ ಸಮಿತಿ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೊಸ ದಿನಾಂಕ ನಿಗದಿ ಮಾಡಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ. ನಿಗದಿಪಡಿಸಿದ ವೇಳಾಪಟ್ಟಿಯಂತೆ ಏಪ್ರಿಲ್ 12ರಂದು ನಾಮಪತ್ರ ಸಲ್ಲಿಕೆ, ಏಪ್ರಿಲ್ 13ರಂದು ಪರಿಶೀಲನೆ, ಏಪ್ರಿಲ್ 14ರಂದು ನಾಮಪತ್ರ ವಾಪಸ್ ಹಾಗೂ ಅಂತಿಮ ಪಟ್ಟಿ ಪ್ರಕಟಣೆ, ಏಪ್ರಿಲ್ 19ರಂದು ಮತದಾನ ಮತ್ತು ಫಲಿತಾಂಶ ಪ್ರಕಟಣೆ ನಡೆಯಬೇಕಾಗಿದ್ದರೂ, ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಯಾವುದೇ ಪ್ರಗತಿ ಕಾಣಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದ್ದು. ಆಕಾಂಕ್ಷಿ ಶಿಕ್ಷಕರಾದ ಬನ್ನಪ್ಪ, ತಾಯಪ್ಪ, ರಮ್ಯಾ ಎಚ್.ಕೆ., ನಾಗಪ್ಪ, ಮಂಜುಳಾ ಅಜನಾಳ, ಸುವರ್ಣಾ ರಾಠೋಡ್, ಗುಂಡುರಾವ್, ಬಸವರಾಜಪ್ಪ, ಕಲ್ಪನಾ, ಸುರೆ ಬಾ, ಗುರುನಾಥ, ದೇವಪ್ಪ, ಶಫಿ, ರವಿಚಂದ್ರ ಅವರು ಸಂಘದ ತಾಲೂಕು ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ
ಎ.20ರವರೆಗೆ ಘನ ವಾಹನಗಳ ಸಂಚಾರ ನಿಷೇಧ: ಉಡುಪಿ ಜಿಲ್ಲಾಧಿಕಾರಿ ಆದೇಶ
ಪಡುಬಿದ್ರೆ - ಚಿಕ್ಕಲ್ ಗುಡ್ಡ ರಾಜ್ಯ ಹೆದ್ದಾರಿಯಲ್ಲಿ ಮೋರಿ ನಿರ್ಮಾಣ ಕಾಮಗಾರಿ
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್
GT Vs LSG IPL 2026: ಲಕ್ನೋದಲ್ಲಿ ಭಾನುವಾರ (ಏಪ್ರಿಲ್ 12) ನಡೆದ ಐಪಿಎಲ್ 2026ರ 19ನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಳು ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗ್ರೂಪ್ ‘ಬಿ’ ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಪ್ರಕಟ
ಬೆಂಗಳೂರು : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ಎ.10ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಒದಗಿಸಲಾದ https://cetonline.karnataka.gov.in/kea ಮೂಲಕ ಎ.13 ಬೆಳಗ್ಗೆ 10 ಘಂಟೆಯೊಳಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ 25 ರೂ.ನ್ನು ಪಾವತಿಸಬೇಕು. ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಅಪೂರ್ಣ, ಆಧಾರರಹಿತವಾಗಿರುವ ಹಾಗೂ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಪ್ರಕಟನೆ ತಿಳಿಸಿದೆ.
ರಸ್ತೆ ಕಾಮಗಾರಿ ಸಂದರ್ಭ ಭೂಕುಸಿತ| ಬಾಳೆಬರೆ ಘಾಟಿಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ
ಉಡುಪಿ, ಎ.12: ಭೂಕುಸಿತದ ಹಿನ್ನೆಲೆಯಲ್ಲಿ ಬಾಳೆಬರೆ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಬಾಳೆಬರೆ ಘಾಟಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎ.9ರಂದು ಭೂಕುಸಿತ ಉಂಟಾಗಿ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ ಬಿರುಕುಗಳು ಕಂಡುಬಂದಿದ್ದು, ಈ ವಿಚಾರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಲೋಕೋಪಯೋಗಿ ಇಲಾಖೆ ಉಡುಪಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಬಾಳೆಬರೆ ಘಾಟಿಯಲ್ಲಿ ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಬೇಕೆಂದು ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಪರಿಶೀಲಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕಾವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪರ್ಯಾಯ ಸಂಚಾರ ಮಾರ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರಸ್ತೆಯ ತೀರ್ಥಹಳ್ಳಿಯಿಂದ ಕುಂದಾ ಪುರ ಕಡೆ ಹೋಗುವ (ತೀರ್ಥಹಳ್ಳಿ- ರಾವೆ-ಕಾನುಗೋಡು- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ಧಾಪುರ ಮೂಲಕ ಕುಂದಾಪುರ ರಾಜ್ಯ ಹೆದ್ದಾರಿ) ವಾಹನ ಗಳು ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು. ನಗರ ಯದಾಪುರ ರಾಜ್ಯ ಹೆದ್ದಾರಿ -278 ರಸ್ತೆಯ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ( ತೀರ್ಥಹಳ್ಳಿ- ಯಡೂರು-ಸುಳುಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್- ಹೊಸಂಗಡಿ- ಸಿದ್ದಾಪುರ-ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ತೀರ್ಥಹಳ್ಳಿ- ಯಡೂರು-ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು. ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ(ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ- ನಗರ- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ಧಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರಿಂದ ಭಟ್ಕಳ- ಬೈಂದೂರು-ಕುಂದಾಪುರ ರಸ್ತೆಯಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
Kalaburagi | ಜಗತ್ತಿನ ಮೊದಲ ವಚನಕಾರ್ತಿ ಅಕ್ಕಮಹಾದೇವಿ ಕುರಿತು ಅನುಭಾವ ಕಾರ್ಯಕ್ರಮ
ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶರಣರ ಸ್ಮರಣಾರ್ಥ “ಅರಿವಿನ ಮನೆ” 896ನೇ ದತ್ತಿ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಅವರು ಅಕ್ಕಮಹಾದೇವಿ ಅವರನ್ನು ಜಗತ್ತಿನ ಮೊದಲ ವಚನಕಾರ್ತಿಯಾಗಿ ವಿವರಿಸಿದರು. ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದಲ್ಲಿ ಜನಿಸಿದ ಅಕ್ಕಮಹಾದೇವಿಯಲ್ಲಿ ಬಾಲ್ಯದಲ್ಲೇ ಅಧ್ಯಾತ್ಮ ಚಿಂತನೆಗಳ ಲಕ್ಷಣಗಳು ಗೋಚರಿಸುತ್ತಿದ್ದವು ಎಂದರು. ಗುರುಲಿಂಗ ದೇವರಿಂದ ಶಿಕ್ಷಣ ಮತ್ತು ಸಂಸ್ಕಾರ ಪಡೆದ ಅಕ್ಕಮಹಾದೇವಿ “ನೀನೆಂಬುದು ದೇವರ ಸ್ವರೂಪ” ಎಂಬ ಆತ್ಮಜ್ಞಾನವನ್ನು ಅಳವಡಿಸಿಕೊಂಡಳು. ಲಿಂಗದೀಕ್ಷೆಯ ಮಹತ್ವವನ್ನು ವಿವರಿಸಿದ ಅವರು, ಗುರುದಿಂದ ದೀಕ್ಷೆ ಪಡೆಯುವುದು ಜೀವನದ ಎರಡನೇ ಹುಟ್ಟಾಗಿದ್ದು, ಪಂಚೇಂದ್ರಿಯಗಳ ಸಂಸಾರ ನಿಸ್ಸಾರವಾದದ್ದು ಎಂದು ಹೇಳಿದರು. ಯೌವನದಲ್ಲಿ ಮದುವೆಗೆ ಒತ್ತಾಯ ಬಂದಾಗ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಘೋಷಿಸಿದ ಅಕ್ಕಮಹಾದೇವಿ, ಬಳಿಕ ಕೌಶಿಕ ಮಹಾರಾಜನೊಂದಿಗೆ ವಿವಾಹವಾದರೂ ಕರಾರು ಪಾಲನೆಯಿಲ್ಲದ ಕಾರಣ ಅವನನ್ನು ತೊರೆದು ಕಲ್ಯಾಣದತ್ತ ಹೊರಟಳು ಎಂದು ವಿವರಿಸಿದರು. “ಹಸಿವಾದಡೆ ಭಿಕ್ಷಾನ್ನ, ತೃಷೆಯಾಗಿದಡೆ ನೀರಿನ ಮೂಲಗಳು, ಶಯನಕ್ಕೆ ಹಾಳಾದ ದೇವಾಲಯಗಳೇ ಸಾಕು” ಎಂಬ ಆಕೆಯ ವೈರಾಗ್ಯ ಜೀವನವನ್ನು ಉಲ್ಲೇಖಿಸಿ, ಪ್ರಕೃತಿಯಲ್ಲಿಯೇ ದೇವರನ್ನು ಕಂಡ ಮಹನೀಯಳಾಗಿದ್ದಾಳೆ ಎಂದು ಹೇಳಿದರು. ನಂತರ ಅಲ್ಲಮಪ್ರಭು ಅವರೊಂದಿಗೆ ನಡೆದ ಸಂವಾದಗಳ ಬಳಿಕ ಕಲ್ಯಾಣದ ಅನುಭವ ಮಂಟಪದಲ್ಲಿ ಆಕೆಗೆ ಸ್ವಾಗತ ನೀಡಲಾಯಿತು ಎಂದು ತಿಳಿಸಿದರು. ಅಕ್ಕಮಹಾದೇವಿ ಅಧ್ಯಾತ್ಮ ಲೋಕದ ವಿಸ್ಮಯ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ಡಾ. ಜಯಶ್ರೀ ದಂಡೆ, ಉದ್ಯಮಿ ರಾಜೇಂದ್ರ ಖೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ. ಕೆ.ಎಸ್. ವಾಲಿ, ಬಂಡಪ್ಪ ಕೇಸುರ್, ಶರಣಗೌಡ ಪಾಟೀಲ್ ಪಾಳ, ಶಿವಾನಂದ ಹತ್ತಿ, ಉದ್ದಂಡಯ್ಯ ಸೇರಿದಂತೆ ಹಲವರು ಭಾಗವಹಿಸಿದರು. ಸಾಕ್ಷಿ ಸತ್ಯಂಪೇಟೆ ಕಾರ್ಯಕ್ರಮವನ್ನು ನಿರೂಪಿಸಿದರು.
Kalaburagi | ಡಾ.ಅಂಬೇಡ್ಕರ್ 135ನೇ ಜಯಂತಿ ನಿಮಿತ್ತ ನೇತ್ರದಾನ ಶಿಬಿರ
ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ “ಡಾ.ಅಂಬೇಡ್ಕರ್ ಅರಿವು ಉತ್ಸವ - 2026” ಹಿನ್ನಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ಸಾನಿಧ್ಯ ವಹಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ಪಾಟೀಲ್, ಜಿಲ್ಲಾ ಆರ್ಸಿಎಚ್ ಅಧಿಕಾರಿಗಳಾದ ಡಾ.ಸಿದ್ರಾಮಪ್ಪ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದರು. ಇದೇ ವೇಳೆ ಸೋಮಶೇಖರ್ ಮೇಲಿನಮನಿ, ವಿಶ್ವನಾಥ ಕಾರ್ನಾಡ, ಹಣಮಂತ ಇಟಗಿ, ಅರವಿಂದ ಕಮಲಾಪೂರಕರ್, ರೆಣುಕಾ ಸರಡಗಿ, ವಿನೋದ ಕಾಂಬಳೆ, ಮಯೂರ ವಾಘಮೋರೆ, ಉಮರೆಶ ಶೃಂಗೆರಿ, ಸಿದ್ಧಾರ್ಥ ಪಾರೆ ಹಾಗೂ ಅಲ್ಲಮಪ್ರಭು ನಿಂಬರ್ಗಾ ಉಪಸ್ಥಿತರಿದ್ದರು.
ಯುಜಿಸಿಇಟಿ-2026 ಪರೀಕ್ಷೆ ಪ್ರವೇಶ ಪತ್ರದ ಲಿಂಕ್ ಬಿಡುಗಡೆ
ಬೆಂಗಳೂರು : ಇದೇ ತಿಂಗಳ 23 ಮತ್ತು 24ರಂದು ನಡೆಯಲಿರುವ ಯುಜಿಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಲಿಂಕ್ ಬಿಡುಗಡೆ ಮಾಡಿದೆ. https://share.google/r1PgwSVSfhrFcNrOu ಈ ಲಿಂಕ್ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕೆಲ ಕಿಡಿಗೇಡಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ನಕಲಿ ಲಿಂಕ್ ಸೃಷ್ಟಿ ಮಾಡಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ, ಅಭ್ಯರ್ಥಿಗಳು ಅಧಿಕೃತವಾದ ಕೆಇಎ ವೆಬ್ಸೈಟ್ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕೆಇಎ ತಿಳಿಸಿದೆ.
ಭಟ್ಕಳ: ʼSIRʼ ನನ್ನ ಮತ ನನ್ನ ಹಕ್ಕು ಸಂಘಟೆಯಿಂದ ಜನಜಾಗೃತಿ ಸಭೆ
ಭಟ್ಕಳ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಜನಜಾಗೃತಿ ಮೂಡಿಸಲು ‘ನನ್ನ ಮತ ನನ್ನ ಹಕ್ಕು’ ಸಂಘಟನೆ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹಯೋಗದಲ್ಲಿ ಭಾನುವಾರ ಇಲ್ಲಿನ ತಂಝೀಮ್ ಸಭಾಂಗಣದಲ್ಲಿ ಜನಜಾಗೃತಿ ಸಭೆ ಹಾಗೂ ಸ್ವಯಂಸೇವಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಸಭೆಯಲ್ಲಿ ಪಿಯುಸಿಎಲ್ನ ಐಶ್ವರ್ಯ ಹಾಗೂ ‘ನನ್ನ ಮತ ನನ್ನ ಹಕ್ಕು’ ಸಂಘಟನೆಯ ವಿನಯ ಶ್ರೀನಿವಾಸ ಅವರು ಎಸ್ಐಆರ್ ಪ್ರಕ್ರಿಯೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮತದಾರರ ಮ್ಯಾಪಿಂಗ್, ಎಣಿಕೆ, ಕರಡು ಮತ ದಾರರ ಪಟ್ಟಿಯ ಪ್ರಕಟಣೆ, ಹಕ್ಕು-ಆಕ್ಷೇಪಣೆ ಸಲ್ಲಿಕೆ ಮತ್ತು ಅಂತಿಮ ಪಟ್ಟಿಯ ಸಿದ್ಧತೆ ಸೇರಿದಂತೆ ವಿವಿಧ ಹಂತ ಗಳನ್ನು ವಿವರಿಸಿದರು. ಶುದ್ಧ, ನಿಖರ ಮತ್ತು ಪಾರದರ್ಶಕ ಚುನಾವಣೆಗೆ ಸರಿಯಾದ ಮತದಾರರ ಪಟ್ಟಿಯ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಎಸ್ಐಆರ್ ಜಾರಿಯಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ ವಕ್ತಾರರು, ಸ್ಪಷ್ಟ ಮಾರ್ಗಸೂಚಿಗಳ ಕೊರತೆ, ದಾಖಲೆ ಸಮಸ್ಯೆಗಳು ಹಾಗೂ ಮಹಿಳೆಯರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ಹಿಂದುಳಿದ ವರ್ಗ ಗಳು ಎದುರಿಸುವ ತೊಂದರೆಗಳ ಬಗ್ಗೆ ಗಮನಸೆಳೆದರು. ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯ ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿನಯ ಶ್ರೀನಿವಾಸ, ಎಸ್ಐಆರ್ ಪ್ರಕ್ರಿಯೆ ಮೂಲಕ ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟು ಅವರನ್ನು ನಾಗರಿಕರಲ್ಲ ಎಂಬ ರೀತಿಯಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ‘ನನ್ನ ಮತ ನನ್ನ ಹಕ್ಕು’ ಸಂಘಟನೆಯ ವತಿಯಿಂದ ರಾಜ್ಯದಾದ್ಯಂತ ಜನಜಾಗೃತಿ ಸಭೆಗಳನ್ನು ಆಯೋಜಿಸಿ, ಎಲ್ಲಾ ಸಮುದಾಯಗಳ ಅರ್ಹ ಮತದಾರರ ಹೆಸರುಗಳನ್ನು ಮತಪಟ್ಟಿಯಲ್ಲಿ ಸೇರಿಸಲು ಕ್ರಿಯಾಯೋಜನೆ ರೂಪಿಸಲಾ ಗಿದೆ ಎಂದು ತಿಳಿಸಿದರು. ಸಹಾಯ ಕೇಂದ್ರಗಳನ್ನು ತೆರೆಯುವ ಮೂಲಕ ಜನರಿಗೆ ಮಾರ್ಗದರ್ಶನ ನೀಡುವುದು, ಬೂತ್ ಮಟ್ಟದಲ್ಲಿ ಸ್ವಯಂಸೇವಕರನ್ನು ನೇಮಿಸಿ ಒಬ್ಬರೂ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿ ಕೊಳ್ಳುವುದು ಉದ್ದೇಶವಾಗಿದೆ ಎಂದರು. ಎಸ್ಐಆರ್ ವಿರುದ್ಧ ಎ.15ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಿದ್ದರು. ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಸ್ವಾಗತಿಸಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಯಾಸೀನ್ ಮಲ್ಪೆ ಸೇರಿ ದಂತೆ ಹಲವು ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಮುಬಶ್ಶಿರ್ ಹಲ್ಲಾರೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ; ಸಿಎಂ ಸಿದ್ದರಾಮಯ್ಯ ಸಹಿತ ಗಣ್ಯರ ಸಂತಾಪ
ಬೆಂಗಳೂರು : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದದಿಂದ ದುಃಖಿತನಾಗಿದ್ದೇನೆ. ಹಲವು ದಶಕಗಳಿಂದ ಸುಮಾರು 12ಸಾವಿರಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ’ ಎಂದು ಸ್ಮರಿಸಿದ್ದಾರೆ. ‘ತಮ್ಮ ಸುಮಧುರ ಧ್ವನಿ, ಸರಳ ನಡೆ ನುಡಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರು ಜನಮಾನಸದಲ್ಲಿ ಶಾಶ್ವತ. ಆಶಾ ಭೋಸ್ಲೆಯವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಬಂಧು ಮಿತ್ರರು ಹಾಗೂ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ’ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ. ತುಂಬಲಾರದ ನಷ್ಟ : ‘ಎಂಟು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದ ಗಾಯಕಿ ಆಶಾ ಭೋಸ್ಲೆ, ವಿವಿಧ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮ ವಿಶಿಷ್ಟ ಧ್ವನಿ ಮತ್ತು ವಿಭಿನ್ನ ಗಾಯನ ಶೈಲಿಯಿಂದ ಅವರು ಭಾರತೀಯ ಸಂಗೀತ ಲೋಕದಲ್ಲಿ ಅಪ್ರತಿಮ ಸ್ಥಾನವನ್ನು ಪಡೆದಿದ್ದಾರೆ. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ನೆನಪು ಮಾಡಿಕೊಂಡಿದ್ದಾರೆ. ಯುಗಾಂತ್ಯ: ‘ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ಹಿನ್ನೆಲೆ ಗಾಯಕಿಯಾಗಿದ್ದು, ಇವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಗಾನ ಕೋಗಿಲೆ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಂಬನಿ ಮಿಡಿದಿದ್ದಾರೆ. ಅಳಿಸಲಾಗದ ಹೆಗ್ಗುರುತು: ‘ಗಾಯಕಿ ಆಶಾ ಭೋಂಸ್ಲೆ ನಿಧನದಿಂದ ತೀವ್ರ ದುಃಖವಾಗಿದೆ. ಅವರ ವಿಶಿಷ್ಟ ಧ್ವನಿಯು ಭಾರತೀಯ ಸಂಗೀತದ ಪೀಳಿಗೆಗಳಿಗೆ ವ್ಯಾಖ್ಯಾನ ನೀಡಿದೆ. ನಮ್ಮ ಸಂಗೀತ ಪರಂಪರೆಯಲ್ಲಿ ಅದು ಅಳಿಸಲಾಗದ ಹೆಗ್ಗುರುತು. ಸಿನಿಮಾ ಮತ್ತು ಸಂಗೀತಕ್ಕೆ ಅವರ ಅಪ್ರತಿಮ ಕೊಡುಗೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಂಬನಿ ಮಿಡಿದಿದ್ದಾರೆ. ಚಿತ್ರರಂಗ ಬಡವಾಗಿದೆ : ‘ಕನ್ನಡ, ಹಿಂದಿ, ಮರಾಠಿ ಸೇರಿದಂತೆ 12ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ, ಭಾರತೀಯರ ಮನೆ ಮಾತಾಗಿದ್ದರು. ಅದ್ಭುತ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರು. ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ, ಪದ್ಮ ವಿಭೂಷಣ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಭೋಸ್ಲೆ ಅವರ ನಿಧನದಿಂದ ಭಾರತೀಯ ಚಿತ್ರರಂಗ ಬಡವಾಗಿದೆ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
Kodagu | ಈಜಲು ತೆರಳಿದ ಇಬ್ಬರು ನೀರುಪಾಲು
ಮಡಿಕೇರಿ : ಈಜಲೆಂದು ಕೆರೆಗೆ ಇಳಿದ ಬಾಲಕ ಹಾಗೂ ಯುವಕ ನೀರು ಪಾಲಾದ ಘಟನೆ ಶನಿವಾರ ಸಂಜೆ ದಕ್ಷಿಣ ಕೊಡಗಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳಲೆ ನಿವಾಸಿ ಪ್ರಕಾಶ ಹಾಗೂ ಚಂದ್ರಿಕ ದಂಪತಿಗಳ ಪುತ್ರ, ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗೌತಮ್(12) ಮತ್ತು ಮಂಜುಳಾ ಹಾಗೂ ದಿ.ರಾಜು ಎಂಬುವವರ ಪುತ್ರ ಕೃಷ್ಣ(22) ಮೃತರು. ಶನಿವಾರ ಸಂಜೆ ಇಬ್ಬರು ಬಾಳಲೆ ಗ್ರಾಮದ ಕೊಟ್ಟಕೇರಿ ಮಾರಿಗುಡಿ ಎಂಬಲ್ಲಿರುವ ಕೆರೆಗೆ ಈಜಲು ತೆರಳಿದ್ದು, ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ರವಿವಾರ ಬೆಳಗ್ಗೆ ಗೋಣಿಕೊಪ್ಪ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರ ಮೃತದೇಹಗಳನ್ನು ಹೊರ ತೆಗೆದರು. ಘಟನೆ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
IPL 2026- ಪ್ರಸಿದ್ಧ ಕೃಷ್ಣ ಬಿರುಗಾಳಿ ಬೌಲಿಂಗ್ ಬಳಿಕ ಶುಭಮನ್ ಗಿಲ್ ನಾಯಕನಾಟ; ಏಕನಾದಲ್ಲಿ ಲಖನೌ ಪತನ
ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಮಾರಕ ಬೌಲಿಂಗ್, ಜಾಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ ಗುಜರಾತ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಜಯಿಸಿ 4 ಅಂಕಗಳನ್ನು ಕಲೆ ಹಾಕಿ ಯಲ್ಲಿ 5ನೇ ಸ್ಥಾನಕ್ಕೇರಿದೆ. ಇದೇವೇಳೆ ಲಖನೌ ಸೂಪರ್ ಜೈಂಟ್ಸ್ ಅಷ್ಟೇ ಪಂದ್ಯಗಳಲ್ಲಿ 2 ಗೆಲುವು, 2 ಸೋಲುಗಳೊಂದಿಗೆ 4 ಅಂಕಗಳನ್ನು ಗಳಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡ 6ನೇ ಸ್ಥಾನಕ್ಕಿಳಿದಿದೆ. ಏಕನಾ ಕ್ರೀಡಾಂಗಣದಲ್ಲಿ ಏಪ್ರಿಲ್ 12ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ ಇನ್ನೂ 8 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ()ಇದಕ್ಕೂ ಮೊದಲು ಕನ್ನಡಿಗ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ಲಖನೌ ತಂಡ ರನ್ ಗಳಿಸಲು ಒದ್ದಾಡಿತು. ಐಡನ್ ಮಾರ್ಕಂ ಅವರು 21 ಎಸೆತಗಳಿಂದ 30 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಬ್ಯಾಟರ್ ಸಹ 20 ರನ್ ಗಳಿಸಲು ಸಹ ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಂತೂ ಯಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಪ್ರಸಿದ್ಧ ಕೃಷ್ಣ ಅವರು 4 ವಿಕೆಟ್ ಗಳಿಸಿದರು. ಇದೇವೇಳೆ ಅವರು ಆಡಿದ ತಮ್ಮದಾಗಿಸಿಕೊಂಡಿದ್ದಾರೆ. ಸಂಕ್ಷಿಪ್ತ ಸ್ಕೋರ್ ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 164/8, ಮಾರ್ಕಂ 30(21), ಪಂತ್ 18(11), ಮುಕುಲ್ ಚೌಧರಿ 18(14), ಪ್ರಸಿದ್ಧ ಕೃಷ್ಣ 28ಕ್ಕೆ 4, ಅಶೋಕ್ ಶರ್ಮಾ 32ಕ್ಕೆ2. ಗುಜರಾತ್ ಟೈಟಾನ್ಸ್ 18.4 ಓವರ್ ಗಳಲ್ಲಿ 165/3, ಜೋಸ್ ಬಟ್ಲರ್ 60(37), ಶುಭಮನ್ ಗಿಲ್ 56(40), ವಾಶಿಂಗ್ಟನ್ ಸುಂದರ್ ಅಜೇಯ 21(13), ದಿಗ್ವೇಶ್ ರಾಠಿ 31ಕ್ಕೆ 1, ಪ್ರಿನ್ಸ್ ಯಾದವ್ 31ಕ್ಕೆ 1.
ಬಂಟ್ವಾಳ| ಸಹಕಾರಿ ಸಂಘದಲ್ಲಿ ಮಹಿಳೆಗೆ ಜಾತಿ ನಿಂದನೆ, ಕಿರುಕುಳ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಣಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆ:- ನೆಟ್ಲಮುಡ್ನೂರು ಗ್ರಾಮದ ನೆಕ್ಕರೆಮಠ ನಿವಾಸಿ, ಪರಿಶಿಷ್ಟ ಜಾತಿಯ ಶೇಷಮ್ಮ (47) ಎಂಬವರು 24 ವರ್ಷಗಳಿಂದ ನೆಟ್ಲಮುಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆಯಲ್ಲಿ ಸಮೂಹ ಕಾಯಕ (ಸೇವಕಿ) ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅವರ ವಿರುದ್ಧ ದ್ವೇಷಪೂರಿತವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಕಾರ ಮಾರ್ಚ್ 29, ರಂದು ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಎಂಬಾತ ಶೇಷಮ್ಮ ಅವರಿಗೆ ಕರೆ ಮಾಡಿ, ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಎ.1 ರಂದು ಶೇಷಮ್ಮ ಅವರು ಕೆಲಸಕ್ಕೆ ಹೋದಾಗ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಕೆಲಸದಿಂದ ಅಮಾನತು ಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಎ. 4 ರಂದು ಅವರು ಕಚೇರಿಗೆ ಹೋದಾಗ ಶಾಖಾ ವ್ಯವಸ್ಥಾಪಕ ಯತೀಶ್ ಗೌಡ ಅವರು “ನೀನು ನಲಿಕೆ ಕೆಳಜಾತಿಯವಳು, ನಿನಗೆ ಇಲ್ಲಿ ಕೆಲಸ ಇಲ್ಲ” ಎಂದು ಹೇಳಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಘಟನೆಗಳಿಂದ ಮನನೊಂದ ಶೇಷಮ್ಮ ಅವರು ಮಾನಸಿಕವಾಗಿ ಜರ್ಜರಿತರಾಗಿ, ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ತಮಗೆ ನ್ಯಾಯ ಒದಗಿಸಬೇಕೆಂದು ಕೋರಿ ಎ. 11 ರಂದು ಪೊಲೀಸರ ಮೊರೆ ಹೋಗಿದ್ದಾರೆ. ಶೇಷಮ್ಮ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಕಚೇರಿಯ ಕೆಲಸದ ವಿಚಾರದಲ್ಲಿ ತಾರತಮ್ಯ ಎಸಗಿದ್ದಲ್ಲದೆ, ಇತರ ಸಿಬ್ಬಂದಿಗಳ ಮುಂದೆ ದೂರುದಾರ ಮಳೆಯ ಜಾತಿಯನ್ನು ಎತ್ತಿ ಹಿಡಿದು ಅವಮಾನಿಸಿದ್ದಾರೆ. ಅಲ್ಲದೆ, ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾ ಗಿದೆ. ಇದರಿಂದ ಮನನೊಂದ ಶೇಷಮ್ಮ ಅವರು ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನೆರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋದಾ ಮತ್ತು ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 74, 49 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಸ್ತುತ ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್
BMW Number Plate: ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಹೈದರಾಬಾದ್ನಲ್ಲಿ ನಡೆದ ಈ ಘಟನೆ ಪ್ರಮುಖ ಉದಾಹರಣೆಯಾಗಿದೆ. ಸಿನಿಮೀಯ ಮಾದರಿಯಲ್ಲಿ ಬಟನ್ ಒತ್ತಿದರೆ ನಂಬರ್ ಪ್ಲೇಟ್ ಬದಲಾಗುವಂತೆ ಮಾಡಿದ್ದ ಬಿಎಂಡಬ್ಲ್ಯೂ ಕಾರಿನ ಮಾಲೀಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಸಂಚಾರಿ ಪೊಲೀಸರು ಕುಡಿದು ವಾಹನ ಚಲಾಯಿಸುವವರ ಪತ್ತೆಗಾಗಿ ಕಾರ್ಯಾಚರಣೆ
Afzalpur | ಹೆಣ್ಣು ಮಕ್ಕಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ : ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು
ಅಫಜಲಪುರ: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘ ನಿಯಮಿತ ಇವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಪಟ್ಟಣದ ಶ್ರೀ ಮಳೇಂದ್ರ ಮಠದ ಆವರಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ಮಳೇಂದ್ರ ಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಬಣಜಿಗ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಹೆಣ್ಣು ಮಕ್ಕಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಹೇಳಿದರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ, ನಮ್ಮ ಸಮಾಜವು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆಗಳು ತಲುಪಿಸಲು ಇಂತಹ ಉಚಿತ ಶಿಬಿರಗಳು ಬಹಳ ಉಪಯುಕ್ತವಾಗಿವೆ. ಇಂದಿನ ಶಿಬಿರದಲ್ಲಿ 30 ಜನರು ರಕ್ತದಾನ ಮಾಡಿದ್ದು, ಸುಮಾರು 230 ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಶಾಂತಾಬಾಯಿ ಎಂ.ವೈ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಿಕಾ ಶರಣು ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಅನ್ನಪೂರ್ಣ ಪಾಟೀಲ ಅವರು ಪೂಜೆ ನೆರವೇರಿಸಿದರು. ಲಕ್ಷ್ಮೀ ಜಗದೀಶ ಗುಣಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಂದ ಎಸ್. ಮಾಲೀಪಾಟೀಲ ಅವರು ಅಕ್ಕಮಹಾದೇವಿ ವಚನ ಪ್ರಾರ್ಥನೆ ಸಲ್ಲಿಸಿದರು. ಸಾವಿತ್ರಿ ಎಸ್. ರೋಡಗಿ ಭಕ್ತಿಗೀತೆ ಹಾಡಿ ಅನುಭವ ನುಡಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅನ್ನಪೂರ್ಣ ಪಾಟೀಲ್ ಸೇರಿದಂತೆ ಅರುಣಾಬಾಯಿ ನೂಲಾ, ಪುಷ್ಪಾವತಿ ಎಸ್. ಟಕ್ಕಳಕಿ, ಸಾವಿತ್ರಿಬಾಯಿ ನಾಕೇದಾರ, ಜಯಶ್ರೀ ಉಪ್ಪಿನ, ಸಿದ್ದಮ್ಮ ಹೈಗೊಂಡೆ, ಪಾತಳಮ್ಮ ಫತಾಟೆ, ಡಾ. ಸಂಗಮೇಶ್ವರಿ ಪ್ರಮೋದ, ಜಗದೇವಿ ಜೇವರ್ಗಿ, ಚನ್ನಮ್ಮ ಜೇವರ್ಗಿ, ಲಕ್ಷ್ಮೀ ಗುಣಾರಿ, ಅಶ್ವಿನಿ ನಿಗಡಿ, ರೇಖಾ ಮಸಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವೈದ್ಯರಾದ ಡಾ. ಶರಣಬಸಪ್ಪ ದಾಮಾ, ಡಾ. ರುದ್ರಪ್ಪ ಗುಗವಾಡ, ಡಾ. ವಿ.ಎಸ್. ಸೋಬಾನಿ, ಡಾ. ಸಂಜೀವ ಪಾಟೀಲ ಹಾಗೂ ಡಾ. ಅಂಬಿಕಾ ಪಾಟೀಲ ಸೇರಿದಂತೆ ಅನೇಕ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.
ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಂಚಿಕೆ ವಿಳಂಬ, ಅಸಮರ್ಪಕ ಡೆಬ್ರಿ ನಿರ್ವಹಣೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ
ಕಲಬುರಗಿ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ
Prasidh Krishna Purple Cap- ಗುಜರಾತ್ ಟೈಟಾನ್ಸ್ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ಗಳಿಗೆ 4 ವಿಕೆಟ್ ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮಾರಕ ದಾಳಿಯ ನೆರವಿನಿಂದ ಲಖನೌ ತಂಡವನ್ನು 164 ರನ್ಗಳಿಗೆ ನಿಯಂತ್ರಿಸುವಲ್ಲಿ ಗುಜರಾತ್ ಯಶಸ್ವಿಯಾಯಿತು. ಪ್ರಸ್ತುತ ಈ ಸೀಸನ್ ನಲ್ಲಿ ಆಡಿರುವ 4 ಪಂದ್ಯಗಳಿಂದ 10 ವಿಕೆಟ್ ಕಲೆಹಾಕಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಉಪಚುನಾವಣೆ ಬೆನ್ನಲ್ಲೆ ‘ಸಂಪುಟ ಪುನರ್ ರಚನೆಗೆ ಶಾಸಕರ ಪಟ್ಟು’
ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರು ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಎರಡೂ ಕ್ಷೇತ್ರಗಳ ಉಪಚುನಾವಣೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಷದ ಮುಖಂಡರು ತೊಡಗಿರುವ ಸಂದರ್ಭದಲ್ಲೇ, ಸಂಪುಟ ಪುನರ್ ರಚನೆ ಮಾಡಬೇಕೆಂದು ಆಗ್ರಹಿಸಿ ಹಿರಿಯ-ಕಿರಿಯ ಶಾಸಕರು ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ದಿಲ್ಲಿ ತೆರಳಲು ಸಿದ್ಧತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ್ ನೇತೃತ್ವದಲ್ಲಿ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಿರಿಯ ಶಾಸಕರಾದ ಎನ್.ಎಚ್.ಕೋನರಡ್ಡಿ, ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ರವಿವಾರ ಸಂಜೆಯೆ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ರವಿವಾರ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಟಿ.ಬಿ.ಜಯಚಂದ್ರ, ‘ಈಗಾಗಲೇ ಚರ್ಚಿಸಿದಂತೆ ಮೂರ್ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸ್ವ ಇಚ್ಛೆಯಿಂದ ದಿಲ್ಲಿಗೆ ಬರುತ್ತಿದ್ದಾರೆ, ಸಂಪುಟದ ಅವಧಿ ಮೂರು ವರ್ಷ ಪೂರೈಸಲಿದೆ. ಮುಂದಿನ ಎರಡು ವರ್ಷಗಳಲ್ಲಿನ ರಾಜಕೀಯ ಏರು-ಪೇರುಗಳನ್ನು ಗಮನದಲ್ಲಿ ಇಟ್ಟುಕೊಂಡು ಇತರರಿಗೂ ಅವಕಾಶ ನೀಡಬೇಕು ಎಂಬುದು ಹಿರಿಯ ಶಾಸಕರ ಬೇಡಿಕೆಯಾಗಿದೆ’ ಎಂದರು. ‘ಸಚಿವ ಸಂಪುಟ ಪುನರ್ ರಚನೆಯ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ನಮ್ಮ ಬೇಡಿಕೆ ಮಂಡಿಸಲಾಗುವುದು. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನಕ್ಕೂ ನಮ್ಮ ದಿಲ್ಲಿ ಭೇಟಿಯ ವಿಷಯವನ್ನು ತಂದಿದ್ದು, ಅವರೂ ಸಮ್ಮತಿಸಿದ್ದಾರೆ' ಎಂದು ಜಯಚಂದ್ರ ನುಡಿದರು. ಮೂರು ವರ್ಷದ ಅವಧಿಯಲ್ಲಿ ಕಳಪೆ ಸಾಧನೆ ತೋರಿದ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಭವಿಷ್ಯದ ದೃಷ್ಟಿಯಿಂದ ಹೊರಬರಿಗೆ ಅವಕಾಶ ನೀಡಬೇಕು. ಆ ಮೂಲಕ ಮುಂಬರಲಿರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ತರಲು ಸಾಧ್ಯವಿದೆ. ಹೀಗಾಗಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ಹೊಸದಿಲ್ಲಿಗೆ ತೆರಳಲಿರುವ ಹಿರಿಯ ಶಾಸಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.
Afzalpur | ವಿದ್ಯುತ್ ಕಡಿತಕ್ಕೆ ರೈತ ಸಂಘಗಳ ತೀವ್ರ ವಿರೋಧ
ಅಫಜಲಪುರ: ಮಾ.26ರಂದು ಕಾರ್ಯಪಾಲಕ ಅಭಿಯಂತರರು ಭೀಮಾ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿದ ವಿದ್ಯುತ್ ಕಡಿತ ಆದೇಶಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ರೈತ ಹೋರಾಟಗಾರ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸುಮಾರು 25 ವರ್ಷಗಳಿಂದ ಭೀಮಾ ಏತನೀರಾವರಿ ಯೋಜನೆ ಜಾರಿಯಲ್ಲಿದ್ದರೂ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದೇ ರೈತರು ನಿರಂತರವಾಗಿ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಯೋಜನೆಗೆ ಬಂದ ಅನುದಾನ ಗುತ್ತಿಗೆದಾರರ ಪಾಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ನೀರು ಸಂಗ್ರಹಿಸುವ ಕಾರ್ಯ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು. ಮಳೆಗಾಲದಲ್ಲಿ 3.16 ಟಿಎಂಸಿ ಮಟ್ಟದ ನೀರು ಸಂಗ್ರಹಿಸಬೇಕಾದರೂ ಆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. ನದಿಯಲ್ಲಿ ನೀರು ಹರಿದು ಹೋದ ಬಳಿಕ ಸಂಗ್ರಹಿಸಲು ಪ್ರಯತ್ನಿಸುವುದರಿಂದ ಗರಿಷ್ಠ ಪ್ರಮಾಣದ ನೀರನ್ನು ತಡೆಹಿಡಿಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಹಿನ್ನೀರಿನ ಆಧಾರದಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರು ಬಿಡಬೇಕಾದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುವುದು ಪ್ರತಿವರ್ಷವೂ ನಡೆಯುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕವಟೆ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಶಾಂತಪ್ಪ ಅಂಜುಟಗಿ, ರಮೇಶ ಪಾಟೀಲ, ಭೀಮರಾವ ಗೌರ, ನೂರ ಅಹ್ಮದ ಭಾಗವಾನ, ಶಿವ ಪ್ರಸಾದ್ ನೂಲಾ, ಚಂದ್ರಶೇಖರ ಕರಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Wadi | ಜಗಜೀವನ ರಾಮ್ ಅವರು ರೈತ, ದಲಿತ, ಕಾರ್ಮಿಕರ ಪರ ಹೋರಾಡಿದ ಚೇತನ : ತಿಪ್ಪಣ್ಣ ಕಮಕನೂರು
ವಾಡಿ : ಅಧಿಕಾರದಲ್ಲಿದ್ದರೂ ರೈತ, ದಲಿತ ಹಾಗೂ ಕಾರ್ಮಿಕರ ಪರ ಹೋರಾಡಿದ ಮಹಾನ್ ಚೇತನ ಬಾಬು ಜಗಜೀವನ ರಾಮ್ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು. ಪಟ್ಟಣದ ಜಾಂಬವೀರ ಕಾಲೋನಿಯಲ್ಲಿ ಡಾ. ಬಾಬು ಜಗಜೀವನ ರಾಮ ಜಯಂತೋತ್ಸವ ಸಮಿತಿ, ಮಾದಿಗ ಸಮಾಜ ಹಾಗೂ ಆದಿ ಜಾಂಬವ ತರುಣ ಸಂಘದ ಸಹಯೋಗದಲ್ಲಿ ನಡೆದ 119ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗಜೀವನ ರಾಮ ಅವರು ಉಪ ಪ್ರಧಾನಿಯಾಗಿದ್ದರೂ, ಈ ಸಮುದಾಯದ ವ್ಯಕ್ತಿ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಮಾದಿಗ ಸಮುದಾಯದ ಬೇಡಿಕೆಯಂತೆ ಕಲ್ಯಾಣ ಮಂಟಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವಿಶೇಷ ಅನುದಾನದಡಿ ಮೊದಲ ಹಂತದಲ್ಲಿ 50 ಲಕ್ಷ ರೂ. ಮಂಜೂರು ಮಾಡುವುದಾಗಿ ಹೇಳಿದ್ದು, ತಮ್ಮ ವತಿಯಿಂದ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಜಗಜೀವನ ರಾಮ ಅವರು ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಮಹತ್ತರ ಸೇವೆ ಸಲ್ಲಿಸಿದ್ದಾರೆ ಎಂದರು. ಆದಿ ಜಾಂಬವ ಶಿಕ್ಷಣ ಸಂಸ್ಥೆಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು. ಜಿ.ಪಂ. ಮಾಜಿ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಮರತೂರ, ಕಾಂಗ್ರೆಸ್ನ ಮುಖಂಡರಾದ ಶಾಮ ನಾಟೇಕರ, ಲಿಂಗರಾಜ ತಾರಫೈಲ್, ಸ್ಥಳೀಯ ಬಿ.ಜೆ.ಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು. ಮಹಲ ರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ, ಇಮದಾಪುರದ ಶ್ರೀ ಸಾಯಪ್ಪ ಮುತ್ಯಾ ಸಾನಿದ್ಯ ವಹಿಸಿದ್ದರು. ಡಾ ಬಾಬು ಜಗಜೀವನ ರಾಮ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣು ಮರತೂರ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.5 ರಂದು ರಾಜ್ಯ ಸರ್ಕಾರ ನೀಡುವ 'ಡಾ. ಬಾಬು ಜಗಜೀವನ ರಾಮ' ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಗೌರವ ಅಧ್ಯಕ್ಷ ಚಂದಪ್ಪ ಕಟ್ಟಿಮನಿ, ವಾಡಿ ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ, ಅರ್ಜುನ ಕಾಳೆಕರ, ಭೀಮರಾಯ ದೊರಿ, ಬಸವರಾಜ ತುಮಕೂರ, ಗುರುನಾಥ ಮಣಿಗಿರ, ಭೀಮಣ್ಣ ಹವಾಲ್ದಾರ, ಬಸವರಾಜ ಬೂಧಿಹಾಳ, ಶರಣಬಸಪ್ಪ ರಾವೂರ, ಶಿವಕುಮಾರ, ಮಲ್ಲಿಕಾರ್ಜುನ ಮುದ್ನಾಳ, ಜಯಂತ್ಯೋತ್ಸವ ಸಮಿತಿಯ ಕುಮಾರ ರಾಮಚಂದ್ರ ದಾಸ, ಜಗದೀಶ ಮುಕ್ಕನಾಳ, ರಾಜು ರಾಂಪುರಹಳ್ಳಿ, ಶಶಿ ಅರೋಲಿಕರ, ಶಿವಕುಮಾರ ತುಮಕೂರಕರ, ಅನೀಲ ಮುದ್ನಾಳ, ವಿಜಯಕುಮಾರ ಯಲಗಟ್ಟಿ, ಮಲ್ಲಿಕಾರ್ಜುನ ಚಾಮನಳ್ಳಿ, ಚಂದು ಕಾಂಬಳೆ, ಈಶ್ವರ ಹೊಸಮನಿ ಸೇರಿದಂತೆ ಹಲವರಿದ್ದರು. ಶ್ರೀಕಾಂತ ಬಿರಾಳ ಸ್ವಾಗತಿಸಿದರು. ಆರ್.ಜೆ.ಮಂಜು ನಿರೂಪಣೆ ಮಾಡಿದರು, ರಿಚರ್ಡ್ ಮಾರೆಡ್ಡಿ, ವಂದಿಸಿದರು.
ಕೆಲ್ಲೂರು | ಉಚಿತ ಆರೋಗ್ಯ ತಪಾಸಣಾ ಶಿಬಿರ
ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಕೆಲ್ಲೂರು ಗ್ರಾಮದಲ್ಲಿ ಕಾಲೇಜಿನ ಐಕ್ಯೂಏಸಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಕಲಬುರಗಿ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಅರುಣ್ ಕುಮಾರ್ ಲೋಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಅಸ್ಟಿಗೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಸಮಿತಿಯ ಸಂಚಾಲಕ ಡಾ. ಸೈಯದ್ ಸನಾವುಲ್ಲಾ ಮಾತನಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಪ್ಪಯ್ಯ ಪತ್ತಿ, ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಮರಣ್ಣಗೌಡ ಉಪಸ್ಥಿತರಿದ್ದರು. ಯುವರ್ ಎಡ್ ಕ್ರಾಸ್ ಸಂಚಾಲಕಿ ಡಾ. ಖುತೇಜಾ ನಸ್ರಿನ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ ಶರಣಪ್ಪ ಗುಂಡಗುರ್ತಿ, ಕುಪೇಂದ್ರ ರಾಥೋಡ್, ಹಾಗೂ ಅಪರ್ಣ ಇನ್ನಿತರ ಅಧ್ಯಾಪಕರು ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಲ್ಬುರ್ಗಿಯ ಅಲ್ ಬದರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಮತ್ತು ಜೇವರ್ಗಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು ಬಿಪಿ, ಮಧುಮೇಹ,ಕಣ್ಣು ಕಿವಿ,ಮೂಗು, ಗಂಟಲು, ತಜ್ಞರು ಹಾಗೂ ಮೂಳೆ, ಮಕ್ಕಳ ತಜ್ಞರು ವಿವಿಧ ರೀತಿಯಲ್ಲಿ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿ ಮಾತ್ರೆಗಳನ್ನು ವಿತರಿಸಿದರು. 180ಕ್ಕೂಅಧಿಕ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಪ್ರೊ.ಭೀಮಣ್ಣ ನಿರೂಪಿಸಿದರೆ, ಡಾ.ಎನ್.ಜಿ.ಶ್ರೀಧರ್ ವಂದಿಸಿದರು.
ಭಾರತದ ಬ್ಯಾಂಕುಗಳಲ್ಲಿ ಬಿದ್ದಿದೆ ವಾರಸುದಾರರಿಲ್ಲದ 2 ಲಕ್ಷ ಕೋಟಿ ರೂ.!
ನಿಮ್ಮದೇ ಹಣ ಪತ್ತೆ ಮಾಡುವುದು ಸಾಧ್ಯವಿಲ್ಲವೇಕೆ?; ಇಲ್ಲಿದೆ ಮಾಹಿತಿ...
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ?
Vaibhav Suryavanshi: ಸದ್ಯ ಐಪಿಎಲ್ 2026ನೇ ಸೀಸನ್ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದ ಮೂಲಕ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು, ವೈಭವ್ ಅವರನ್ನು ಕೂಡಲೇ ಸೀನಿಯರ್ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಆಗ್ರಹಿಸಿದ್ದಾರೆ. ಕೇವಲ 15 ವರ್ಷದ ಈ
ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿಹಾರದ 163 ಬಾಲಕರ ರಕ್ಷಣೆ: ಮಾನವ ಕಳ್ಳಸಾಗಣೆ ಶಂಕೆ
ಕತ್ನಿ (ಮಧ್ಯಪ್ರದೇಶ): ಎಕ್ಸ್ ಪ್ರೆಸ್ ರೈಲಿನಲ್ಲಿ ಬಿಹಾರದ ಸುಮಾರು 163 ಬಾಲಕರನ್ನು ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸುಳಿವನ್ನು ಆಧರಿಸಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿದ ರೈಲ್ವೆ ರಕ್ಷಣಾ ಪಡೆ ಹಾಗೂ ಸರಕಾರಿ ರೈಲ್ವೆ ಪೊಲೀಸರು, ಲಾತೂರಿಗೆ ಕೂಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದ್ದ ಸುಮಾರು ಆರರಿಂದ ಹದಿಮೂರು ವರ್ಷಗಳ ನಡುವಿನ ಮಕ್ಕಳನ್ನು ತಡೆದು ರಕ್ಷಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಧ್ಯರಾತ್ರಿಯಲ್ಲಿ ನಡೆದ ಈ ಜಂಟಿ ಕಾರ್ಯಾಚರಣೆಯಲ್ಲಿ ಯಾವುದೇ ಮಾನ್ಯತೆ ಹೊಂದಿದ ಟಿಕೆಟ್ ಅಥವಾ ದಾಖಲೆಗಳಿಲ್ಲದೆ ಪಾಟ್ನಾ-ಪೂರ್ನಾ ಎಕ್ಸ್ ಪ್ರೆಸ್ ರೈಲಿನಲ್ಲಿ ಅಪ್ರಾಪ್ತ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಎಂಟು ಮಂದಿಯ ಗುಂಪನ್ನು ರೈಲ್ವೆ ರಕ್ಷಣಾ ಪಡೆ ಹಾಗೂ ಸರಕಾರಿ ರೈಲ್ವೆ ಪೊಲೀಸರು ಕತ್ನಿ ರೈಲ್ವೆ ನಿಲ್ದಾಣದಲ್ಲಿ ತಡೆ ಹಿಡಿದಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೂಲಿ ಕೆಲಸಕ್ಕಾಗಿ ಬಿಹಾರದ ಅರಾರಿಯಾ ಪ್ರಾಂತ್ಯದಿಂದ ಮಹಾರಾಷ್ಟ್ರದ ಲಾತೂರಿಗೆ ಈ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಮಕ್ಕಳ ಕಳ್ಳಸಾಗಣೆಯಾಗುತ್ತಿರುವ ಸಾಧ್ಯತೆ ಇದೆ ಎಂಬ ಸುಳಿವನ್ನು ಸ್ವೀಕರಿಸಿದ ಬಳಿಕ ಹಾಗೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಬಳಿ ಯಾವುದೇ ಪ್ರಯಾಣದ ದಾಖಲೆಗಳು ಇಲ್ಲದೆ ಇದ್ದುದರಿಂದ ಅನುಮಾನಗೊಂಡು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆಯ ಇನ್ಸ್ ಪೆಕ್ಟರ್ ವಿರೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಕಳ್ಳಸಾಗಣೆಯನ್ನು ಭೇದಿಸಿದ ಬಳಿಕ, ಸರಕಾರಿ ರೈಲ್ವೆ ಪೊಲೀಸರು ಎಂಟು ಮಂದಿ ಆರೋಪಿಗಳ ವಿರುದ್ಧ 18 ವರ್ಷದ ಕೆಳಗಿನ ಮಕ್ಕಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲ ಆರೋಪಿಗಳೂ ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರು ಎಂದು ಹೇಳಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ
ವಾರ್ತಾಭಾರತಿಯ ಯೋಗೇಶ್ ಮಲ್ಲೂರು, ಅಬ್ದುಲ್ ರಹಿಮಾನ್ ತಲಪಾಡಿಗೆ ಪ್ರಶಸ್ತಿ
ಮತೀಶ ಪತಿರಾಣಾ ಐಪಿಎಲ್ ಆಡಲು ಶ್ರೀಲಂಕಾ ಕ್ರಿಕೆಟ್ ಗ್ರೀನ್ ಸಿಗ್ನಲ್; ಕೋಲ್ಕತಾ ನೈಟ್ ರೈಡರ್ಸ್ ನಿಟ್ಟುಸಿರು!
ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಲಭಿಸಿದ ಹಿನ್ನೆಲೆಯಲ್ಲಿ ವೇಗಿ ಮತೀಶ ಪತಿರಾಣ ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಲಿದ್ದಾರೆ. ಹರ್ಷಿತ್ ರಾಣಾ ಮತ್ತು ಮುಸ್ತಫಿಝುರ್ ಅಲಭ್ಯತೆಯಿಂದ ಕಂಗೆಟ್ಟಿದ್ದ ಕೆಕೆಆರ್ಗೆ ಇದು ಆನೆಬಲ ತಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರಿಲೀಸ್ ಆಗಿದ್ದ ಮತೀಶ್ ಅವರು ಈ ಸೀಸನ್ ನ ಮಿನಿ ಹರಾಜಿನಲ್ಲಿ 18 ಕೋಟಿ ರೂಪಾಯಿಗೆ ಕೋಲ್ಕತಾ ಪಾಲಾಗಿದ್ದರು. ಏಪ್ರಿಲ್ 14ರಂದು ತಮ್ಮ ಹಳೆಯ ತಂಡವಾದ ಸಿಎಸ್ಕೆ ವಿರುದ್ಧವೇ ಅವರು ಕೆಕಆರ್ ಪರ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ದೇಶದ ಎರಡನೇ ವಂದೇ ಭಾರತ್ ರೈಲು ಕರ್ನಾಟಕ - ಮಹಾರಾಷ್ಟ್ರ ನಡುವೆ ಸಂಚಾರ ನಡೆಸಲಿದೆ. ಬೆಂಗಳೂರು ಮುಂಬೈ ನಡುವೆ ಈ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಯಾವ ಮಾರ್ಗ ಆಯ್ಕೆ ಮಾಡಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಒಂದು ಬೆಂಗಳೂರು - ಹುಬ್ಬಳ್ಳಿ- ಬೆಳಗಾವಿ - ಮುಂಬೈ, ಮತ್ತೊಂದು ಬೆಂಗಳೂರು ಕಲಬುರಗಿ ಮುಂಬೈ ಮಾರ್ಗವಿದ್ದು, ಈ ಎರಡರಲ್ಲಿ ಯಾವುದು ಬೆಸ್ಟ್, ಫಾಸ್ಟ್ ಎಂಬ ಮಾಹಿತಿ ಇಲ್ಲಿದೆ.
Gas Booking New Rules: ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೊಸ LPG ಬುಕಿಂಗ್ ನಿಯಮ ಹಾಗೂ ನಿಮ್ಮ ಮಾಸಿಕ ಸಿಲಿಂಡರ್ ಮಿತಿಯ ವಿವರವನ್ನು ಈ ಲೇಖನದಲ್ಲಿ ಕೊಡಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಸಿಲಿಂಡರ್ ಪೂರೈಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರವು ಕೆಲವೊಂದು ಹೊಸ
ಎ.19: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ
ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಕಾರ್ಯಕ್ರಮವು ಎ. 19 ರಂದು ಪೂರ್ವಾಹ್ನ ಘಂಟೆ 10.30ಕ್ಕೆ ಕಾರ್ಕಳ 'ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎನ್ ಎನ್ ರಾಜೇಂದ್ರ ಕುಮಾರ್ ಹೇಳಿದರು. ಅವರು ರವಿವಾರ ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2027ರ ಮಹಾ ಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡಲಿರುವರು. ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯ ಉದ್ಘಾಟನೆ ನೆರವೇರಿಸಲಿರುವರು. ಕರ್ನಾಟಕ ಸರಕಾರದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖಾ ಸಚಿವರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಗೌರವ ಸಂರಕ್ಷಕರಾದ ಶ್ರೀ ಡಿ. ಸುಧಾಕರ್ ಅವರು ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಸಚಿವರು, ಶಾಸಕ ಸುನಿಲ್ ಕುಮಾರ್ ಹಾಗೂ ಅಧಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ. ಹಾಗೂ ಮಾಜಿ ಸಚಿವರು, ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದರು. ಕಾರ್ಕಳ ಶ್ರೀ ಜೈನ ಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾ ರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯ, ತ್ಯಾಗಿಗಳು ಹಾಗೂ ನಾಡಿನ ಎಲ್ಲಾ ಪೂಜ್ಯ ಗುರುವರೇಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಮಹಾಮಸ್ತಕಾಭಿಷೇಕ ಮಹೋತ್ಸವವು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಅವರ ಕಾರ್ಯಾಧ್ಯಕ್ಷತೆಯಲ್ಲಿ ಸಂಯೋಜಿಸಲ್ಪಟ್ಟ ಮಹಾಮಸ್ತಕಾಭಿಷೇಕ ಸಮಿತಿಯು ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸುವ್ಯವಸ್ಥಿತವಾಗಿ ನೆರವೇರಿಸುವುದಕ್ಕಾಗಿ ಈಗಾಗಲೇ ಸಮಾಜದ ಸಮಸ್ತ ಸಜ್ಜನರ ಸಹಕಾರದೊಂದಿಗೆ ಕಾರ್ಯಪ್ರವೃತ್ತವಾಗಿದೆ. ಈ ಮಹೋತ್ಸವದ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಆಗಮಿಸಲಿರುವ ಲಕ್ಷಾಂತರ ಯಾತ್ರಿಕರಿಗೆ ಕಾರ್ಕಳ ಕ್ಷೇತ್ರದಲ್ಲಿ ಮೂಲಭೂತ ಸವಲತ್ತುಗಳನ್ನು ಒದಗಿಸುವುದರ ಬಗ್ಗೆ ಸರಕಾರದ ವಿವಿಧ ಇಲಾಖೆಗಳು ವ್ಯವಸ್ಥೆ ಮಾಡಬೇಕಾದ ಸೌಲಭ್ಯಗಳು, ಕಾಮಗಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯಬೇಕಾದ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಒಟ್ಟು ರೂ. 82,37,52,000/- ವೆಚ್ಚದ ಅಂದಾಜು ಪಟ್ಟಿಯ ಪ್ರಸ್ತಾವನೆ ಯನ್ನು ಈಗಾಗಲೇ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. 2015ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಹೆಚ್ಚಿನ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದು, ಈ ಬಾರಿಯೂ ಅವರ ನೇತೃತ್ವದ ರಾಜ್ಯ ಸರಕಾರಕ್ಕೆ ಸಲ್ಲಿಸಲಾದ ಅಂದಾಜು ಪಟ್ಟಿಯ ಉಲ್ಲೇಖಿತ ಕ್ರಿಯಾ ಯೋಜನೆಗೆ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ಇದೆ. ಈ ಉಲ್ಲೇಖಿತ ಕ್ರಿಯಾ ಯೋಜನೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೂ. 1.59 ಕೋಟಿ ಮಂಜೂರು ಮಾಡಿ ಮೊದಲನೇ ಕಂತಾಗಿ ಶೇಕಡಾ75ರಷ್ಟು (ರೂ.1,19,25,000) ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅನುದಾನ ದಲ್ಲಿ ಅಟ್ಟಳಿಗೆ ನಿರ್ಮಾಣಕ್ಕೆ ರೂ. 37.50ಲಕ್ಷ, ಜೈನ ಮಠದ ಬಳಿಯಿರುವ ತ್ಯಾಗಿ ಭವನ ಹಾಗೂ ಮಾತಾಜಿ ಭವನ ನವೀಕರಣಕ್ಕೆ ರೂ.63.75ಲಕ್ಷ, ಶ್ರೀ ಜೈನ ಮಠದ ಬಳಿಯಿರುವ ಸಭಾಂಗಣದ ನವೀಕರಣಕ್ಕೆ ರೂ. 8.25ಲಕ್ಷ ಹಾಗೂ ಶ್ರೀ ಗೊಮ್ಮಟೇಶ್ವರ ಬೆಟ್ಟಕ್ಕೆ ನೀರಿನ ಸರಬರಾಜು ಹಾಗೂ ಕೊಳವೆ ಬಾವಿ ನಿರ್ಮಾಣಕ್ಕೆ ರೂ. 9.75 ಲಕ್ಷ ಬಿಡುಗಡೆಗೊಳಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಹಾಗೂ ಇತರರು ಉಪಸ್ಥಿತರಿದ್ದರು.
ಮಹಾಯುತಿ ಮೈತ್ರಿಕೂಟದ ಪ್ರಮುಖ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ: ರೋಹಿತ್ ಪವಾರ್ ಆರೋಪ
ಮುಂಬೈ: ಮಹಾಯುತಿ ಮೈತ್ರಿಕೂಟದ ಪ್ರಮುಖ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ ಎಂದು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಆಪಾದಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರೋಹಿತ್ ಪವಾರ್, ಮುಂದಿನ ತಿಂಗಳ ಕೊನೆಯ ವೇಳೆ ಅಧಿಕಾರದಲ್ಲಿರುವ ದೊಡ್ಡ ಪಕ್ಷವೊಂದು ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಪಕ್ಷಾಂತರ ಮಾಡುವ ವಿಶ್ವಾಸಾರ್ಹ ಮಾಹಿತಿ ಇದೆ ಎಂದು ಹೇಳಿದ್ದಾರೆ. ಮೈತ್ರಿ ಪಕ್ಷದ ಬಗ್ಗೆ ಬಿಜೆಪಿ ಅಚಲವಾದ ಸ್ನೇಹವನ್ನು ಪ್ರದರ್ಶಿಸುತ್ತಿದ್ದರೂ, ಮುಂದೆ ಪರಿಸ್ಥಿತಿ ಬದಲಾಗಬಹುದು. ಇದು ಮೈತ್ರಿ ಪಕ್ಷಗಳಲ್ಲಿ ದ್ರೋಹದ ಭಾವನೆ ಮೂಡಲು ಕಾರಣವಾಗಬಹುದು ಎಂದು ರೋಹಿತ್ ಪವಾರ್ ಹೇಳಿದ್ದಾರೆ. ಬಿಜೆಪಿಯನ್ನುದ್ದೇಶಿಸಿ ರೋಹಿತ್ ಪವಾರ್ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಎಂದಿಗೂ ನಮ್ಮ ಸ್ನೇಹಿತರನ್ನು ಕೈಬಿಡುವುದಿಲ್ಲ ಎಂಬ ಭಾವನೆಯನ್ನು ಬಿಜೆಪಿ ಮೂಡಿಸಬಹುದು. ಆದರೆ ನಾಳೆ ಮಿತ್ರಪಕ್ಷಗಳಿಗೆ ದ್ರೋಹದ ಅನುಭವ ಆಗಬಹುದು. ಸಣ್ಣ ಮಿತ್ರಪಕ್ಷಗಳು ಜಾಗರೂಕರಾಗಿರಬೇಕು ಎಂದು ರೋಹಿತ್ ಪವಾರ್ ಹೇಳಿದ್ದಾರೆ. भाजपचे सत्तेतले मित्रपक्ष विरोधी पक्षाचे आमदार खासदार फोडणार असल्याच्या बातम्या बघितल्या, परंतु वस्तुस्थिती मात्र वेगळीच आहे, पुढच्या महिन्याच्या शेवटपर्यंत सत्तेतल्या मोठ्या पक्षाकडून सत्तेतल्या त्यांच्या मित्रांचीच शिकार केली जाणार असल्याची पक्की माहिती आहे. महाराष्ट्राला… — Rohit Pawar (@RRPSpeaks) April 12, 2026
ʼ20 ಭಾಷೆಗಳಲ್ಲಿ 12,000 ಹಾಡುಗಳುʼ; ಆಶಾ ಭೋಸ್ಲೆ ಯುಗಾಂತ್ಯ
ಬಾಲಿವುಡ್ ಸಂಗೀತದ ಸುವರ್ಣಯುಗದ ಗಾಯಕಿಯ ಪರಿಚಯ ಇಲ್ಲಿದೆ...
‘ಜನನಾಯಗನ್’ ಸೋರಿಕೆ ಹೇಳಿಕೆಗಳು ಆಧಾರರಹಿತ; ಸ್ಪಷ್ಟನೆ ನೀಡಿದ CBFC
ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಎಲ್ಲಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾಗಳನ್ನು ಸುರಕ್ಷಿತವಾಗಿಡಲು ಕೀ ಡೆಲಿವರಿ ಮೆಸೇಜ್ ಬಳಸುವುದಾಗಿ CBFC ಹೇಳಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ‘ಜನನಾಯಗನ್’ ಸಿನಿಮಾ ಸೋರಿಕೆಯಾಗಿದೆ ಎಂದು ಸೂಚಿಸುವ ವರದಿಗಳನ್ನು ಅದು ‘ಆಧಾರ ರಹಿತ’ ಎಂದು ಅಲ್ಲಗಳೆದಿದೆ. ಈ ಆರೋಪಗಳನ್ನು ನಿರಾಕರಿಸಲು CBFC ಸ್ಪಷ್ಟೀಕರಣವನ್ನು ನೀಡಿದೆ. ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಎಲ್ಲಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾಗಳನ್ನು ಸುರಕ್ಷಿತವಾಗಿಡಲು ಕೀ ಡೆಲಿವರಿ ಮೆಸೇಜ್ (KDM) ಬಳಸುವುದಾಗಿ CBFC ಹೇಳಿದೆ. ಹೀಗಾಗಿ ಚಲನಚಿತ್ರ ಕಂಟೆಂಟ್ ಅನ್ನು ಪಾಸ್ವರ್ಡ್ ಮೂಲಕ ರಕ್ಷಿಸಲಾಗುತ್ತದೆ. ಈ KDM ರಚಿಸಿದವರು ಮತ್ತು ಸಿನಿಮಾದ ನಿರ್ಮಾಪಕರ ಬಳಿ ಮಾತ್ರ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. “KDM ಇಲ್ಲದೆ ಚಲನಚಿತ್ರವನ್ನು ತೆರೆಯಲು ಅಥವಾ ವೀಕ್ಷಿಸಲು ಸಾಧ್ಯವಿಲ್ಲ. ಸಲ್ಲಿಸಿದ ವಿಷಯದ ಸುರಕ್ಷತೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಲು ಈ ಕ್ರಮ ಜಾರಿಯಲ್ಲಿದೆ. ತಮಿಳು ಚಲನಚಿತ್ರ ‘ಜನ ನಾಯಗನ್’ ಅನ್ನು CBFC ಸೋರಿಕೆ ಮಾಡಲಾಗಿದೆ ಎಂದು ಹೇಳುವ ವರದಿಗಳು ಆಧಾರ ರಹಿತ ಮತ್ತು ದಾರಿ ತಪ್ಪಿಸುವವು” ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋಗೆ CBFC ಹೇಳಿದೆ. “ಸೋರಿಕೆಯಾದ ವಿಷಯವನ್ನು ವಾಟ್ಸ್ಆ್ಯಪ್, ಟೆಲಿಗ್ರಾಂ, ಇನ್ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್, ಯುಟ್ಯೂಬ್, ವೆಬ್ಸೈಟ್ಗಳು, ಟೊರೆಂಟ್ಗಳು ಅಥವಾ ಯಾವುದೇ ಇತರ ಮಾಧ್ಯಮಗಳ ಮೂಲಕ ಡೌನ್ಲೋಡ್ ಮಾಡುವುದು, ವೀಕ್ಷಿಸುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು ಹಂಚಿಕೊಳ್ಳುವುದು, ಅಪ್ಲೋಡ್ ಮಾಡುವುದು ಅಥವಾ ಪ್ರಸಾರ ಮಾಡುವುದು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಹಕ್ಕು ಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗುತ್ತದೆ” ಎಂದು ನಿರ್ಮಾಣ ಕಂಪನಿ ಕೆವಿಎನ್ ಪ್ರೊಡಕ್ಷನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. CBFC ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವಾಗ ಸಿನಿಮಾ ಸೋರಿಕೆಯಾಗಿದೆ. ‘ಜನನಾಯಗನ್’ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಪ್ರಮಾಣಪತ್ರದ ಸಮಸ್ಯೆಯಿಂದಾಗಿ ಬಿಡುಗಡೆ ತಡವಾಗಿದೆ.
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ
Dr Rajkumar: ಏಪ್ರಿಲ್ 12 ಇಂದು ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರು ಪುಣ್ಯಸ್ಮರಣೆ. ಡಾ.ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವು ಗಣ್ಯರು ರಾಜ್ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಅಣ್ಣಾವ್ರ ಬಗ್ಗೆ ಯಾರು ಏನಂದ್ರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
IPL 2026- ಮೂರು ತಂಡಗಳ ಪರ ಶತಕದ ಸಾಧನೆ: ಕನ್ನಡಿಗ ಕೆಎಲ್ ರಾಹುಲ್ ಸಾಲಿಗೆ ಈಗ ಸಂಜು ಸ್ಯಾಮ್ಸನ್!
Sanju Samson And KL Rahul-ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ಸಂ ಜು ಸ್ಯಾಮ್ಸನ್ ಸಿಎಸ್ಕೆ ಪರ ಮೊದಲ ಶತಕ (ಅಜೇಯ 115 ರನ್) ಸಿಡಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ. ಈ ಸಾಧನೆಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇರೆ ತಂಡಗಳ (ಡೆಲ್ಲಿ, ರಾಜಸ್ಥಾನ, ಚೆನ್ನೈ) ಪರ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಕೆ.ಎಲ್. ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು.
ತಂದೆಯೊಬ್ಬ ಆಕೆಯ ಸಂಗಾತಿಯ ಒತ್ತಡದಿಂದಾಗಿ ತನ್ನ 9ವರ್ಷದ ಮಗನನ್ನು 2024ರಿಂದ ಸುಮಾರು 2ವರ್ಷಗಳ ಕಾಲ ವ್ಯಾನ್ ನಲ್ಲಿ ಬಂಧಿಸಿಟ್ಟಿರುವ ಘಟನೆ ಫ್ರಾನ್ಸ್ ನ ಹ್ಯಾಗೆನ್ ಬಾಚ್ ನಲ್ಲಿ ನಡೆದಿದೆ. ಇತ್ತೀಚೆಗೆ ಹುಡುಗನ ಶಬ್ದವನ್ನು ಸ್ಥಳೀಯರು ಕೇಳಿ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಬಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಾಲಕನ ಬಂಧಿಸಿಟ್ಟಿದ್ದ ಆರೋಪಿ ತಂದೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ದಾವಣಗೆರೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರ ಕೈತಪ್ಪಿದ ಸತ್ಯ ಬಿಚ್ಚಿಟ್ಟ ಶಿವಾಜಿನಗರ MLA ರಿಜ್ವಾನ್! ಇಬ್ಬರೇ ಹೊಣೆ
ದಾವಣಗೆರೆ ಟಿಕೆಟ್ ಹಂಚಿಕೆ ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಸಮುದಾಯದಿಂದ ಪರ್ಯಾಯ ವ್ಯಕ್ತಿಯ ಆಯ್ಕೆ ನೀಡಿದೆ ಜಬ್ಬಾರ್ ಅವರ ಹೆಸರರಿಗೆ ಪಟ್ಟು ಬಿದ್ದಿದ್ದು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೈತಪ್ಪಲು ಕಾರಣ ಎಂದು ಶಾಸಕರು ವಿವರಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಹೆಸರು ಹೇಳದೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Hassan | ಬೇಲೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾದ ದಾರುಣ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕಣಗುಪ್ಪೆ ಗ್ರಾಮದ ನಿವಾಸಿ ರಾಜಶೆಟ್ಟಿ (65) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ತಮ್ಮ ತೋಟಕ್ಕೆ ಕೆಲಸಕ್ಕಾಗಿ ತೆರಳಿದ್ದ ವೇಳೆ ಪೊದೆಯೊಳಗೆ ಅಡಗಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯ ವೇಳೆ ಕಾಡಾನೆ ತನ್ನ ಸೊಂಡಿಲಿನಿಂದ ರಾಜಶೆಟ್ಟಿಯನ್ನು ಎತ್ತಿ ಬಿಸಾಡಿ, ಬಳಿಕ ನೆಲಕ್ಕೆ ಬಿದ್ದ ಅವರನ್ನು ಕಾಲಿನಿಂದ ತುಳಿದು ಹತ್ಯೆ ಮಾಡಿದೆ. ಘಟನೆ ನಂತರವೂ ಕಾಡಾನೆ ಮೃತದೇಹದ ಸಮೀಪವೇ ತಂಗಿದ್ದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕಾಡಾನೆಯನ್ನು ಅಲ್ಲಿಂದ ಓಡಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ?
ಬೆಂಗಳೂರು; ಬಹಳ ದೂರದ ಮಾರ್ಗದಲ್ಲಿ ಪ್ರಯಾಣಿಸಲು ಜನರಿಗೆ ನೆರವಾಗಲು, ಆರಾಮದಾಯಕ ಸಾರಿಗೆ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆಯು ಮೊದಲ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Sleeper Train) ರೈಲನ್ನು ಪರಿಚಯಿಸಿದೆ. ಒಂದು ರೈಲು ಕಾರ್ಯಾಚರಣೆ ಮಾಡುತ್ತಿದ್ದು, ಬೆಂಗಳೂರು-ಮುಂಬೈ ಮಾರ್ಗದ ಸೇವೆ ಒಪ್ಪಿಗೆ ನೀಡಲಾಗಿದೆ. ಇದು ಸೇರಿ ಒಟ್ಟು 12 ಸ್ಲೀಪರ್
IPL 2026- ಮುಂಬೈ ಇಂಡಿಯನ್ಸ್ ಗೆ ರಾಯಲ್ ಚಾಲೆಂಜರ್ಸ್ ಸವಾಲು: RCB-MI ಮಾಜಿ ನಾಯಕರ ಸಮಾಗಮಕ್ಕೆ ವಾಂಖೆಡೆ ಸಜ್ಜು!
ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ(ಏ.12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳು ಪೈಪೋಟಿ ನಡೆಸಲು ಸಿದ್ದವಾಗಿವೆ.RR ವಿರುದ್ದ ಸೋತಿರುವ RCB MI ವಿರುದ್ದ ಗೆದ್ದು ಮತ್ತೆ ಗೆಲುವಿನ ಹಾದಿ ಹಿಡಯಲು ನೋಡುತ್ತಿದ್ದರೆ, ಇತ್ತ ಕೆಕೆಆರ್ ವಿರುದ್ದ ಗೆದ್ದ ಬಳಿಕ ಆಡಿದ ಎರಡೂ ಪಂದ್ಯಗಳಲ್ಲೂ ಸೋತಿರುವ MI, ಆರ್ ಸಿಬಿ ವಿರುದ್ದದ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಅಲ್ಲದೆ, ಮುಂಬಯಿ ಹಾಗೂ RCB ತಂಡದ ಮಾಜಿ ನಾಯಕರಾದ ರೋ-ಕೊ ಜೋಡಿ ಸಮಾಗಮಕ್ಕೆ ವಾಖೆಂಡೆ ಸಜ್ಜಾಗಿದೆ.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ಅಬ್ದುಲ್ ಜಬ್ಬಾರ್ ನೀಡಿದ ರಾಜೀನಾಮೇ ಅಂಗೀಕಾರವಾಗಿದೆ. ಇದರ ಜತೆಗೆ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನೂ ವಿಸರ್ಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜತೆಗೆ ಹೊಸ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದ ಹೇಳಿದ್ದಾರೆ.
Asha Bhosle: ಸಂಗೀತ ಜಗತ್ತಿಗೆ ಆಶಾ ಭೋಸ್ಲೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ
Asha Bhosle Tributes: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದ ಮುಂಬೈನ ಬ್ರೀಚ್ ಸ್ಯಾಂಡಿ ಆಸ್ಪತ್ರೆಯತ್ತ ಅಭಿಮಾನಿಗಳು, ಆಪ್ತರು ಧಾವಿಸುತ್ತಿದ್ದಾರೆ. ದೇಶವ್ಯಾಪಿ ಅಪಾರ ಅಭಿಮಾನಿಗಳನ್ನು ಅವರ ಅಗಲಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಕರ್ನಾಟಕ ಒಳಗೊಂಡಂತೆ ರಾಜಕಾರಣಿಗಳು,
ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂಗೀಕರಿಸಿದ್ದಾರೆ. ಅಬ್ದುಲ್ ಜಬ್ಬಾರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೂತನ ಸಮಿತಿ ಶೀಘ್ರ ರಚನೆಗೆ ಕ್ರಮ ವಹಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Asha Bhosle Life: ಆಶಾ ಭೋಸ್ಲೆ ವೃತ್ತಿ - ವೈಯಕ್ತಿಕ ಜೀವನ: 16 ವರ್ಷಕ್ಕೆ ವಿವಾಹ, 2ನೇ ಮದುವೆ - ಬದುಕಿನ ಏರಿಳಿತ
Asha Bhosle Life: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ಮೃತಪಟ್ಟಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಿನಿಮಾ ರಂಗದಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿರುವ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಅವರ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್ರಾವ್ ಭೋಸ್ಲೆ ಅವರೊಂದಿಗೆ ಓಡಿಹೋಗಿ
ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಂಗಳೂರಿನಿಂದ 2 ಹೊಸ ಮಾರ್ಗದಲ್ಲಿ ಪಲ್ಲಕ್ಕಿ ಬಸ್ ಸೇವೆ ಆರಂಭವಾಗಿದೆ. ಬೆಂಗಳೂರು ಅಥಣಿ, ಬೆಂಗಳೂರು ದಾಂಡೇಲಿ ನಡುವೆ ಈ ಬಸ್ಗಳು ಸಂಚಾರ ನಡೆಸಲಿವೆ. ಇದರಿಂದ ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಸ್ಗಳ ವೇಳಾಪಟ್ಟಿ ಏನು? ಟಿಕೆಟ್ ದರ ಎಷ್ಟು? ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಇಲ್ಲಿದೆ.
ಹುಲಿಕಲ್ ಘಾಟ್ ಗುಡ್ಡ ಕುಸಿತ: ತೀರ್ಥಹಳ್ಳಿ ಕುಂದಾಪುರ ಹೆದ್ದಾರಿಗೆ ಪರ್ಯಾಯ ಮಾರ್ಗಗಳ ಸೂಚನೆ
ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ ನಲ್ಲಿ ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಬಾಳೆಬರೆ ಘಾಟ್ ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರವನ್ನು ನಿಷೇಧಗೊಳಿಸಲಾಗಿದೆ. ಹಾಗೂ ಈ ಕೆಳಗಿನಂತೆ ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಇರಾನ್ಗೆ ಶಸ್ತ್ರಾಸ್ತ್ರ ರವಾನಿಸಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್: ಅಮೆರಿಕ ಮತ್ತು ಟೆಹ್ರಾನ್ ನಡುವಿನ ಕದನ ವಿರಾಮ ಮುಂದುವರಿಯುತ್ತಾ ಎಂಬ ಕಳವಳದ ಮಧ್ಯೆ ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಿಂದ ಮಿಯಾಮಿಗೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ಚೀನಾ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎಂದು ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂಬರುವ ದಿನಗಳಲ್ಲಿ ಇರಾನ್ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯಬಹುದು ಎಂಬ ವರದಿ ಬೆನ್ನಲ್ಲೆ ಈ ಹೇಳಿಕೆಯನ್ನು ನೀಡಲಾಗಿದೆ. ವರದಿಯ ಪ್ರಕಾರ, ಚೀನಾ ಈ ಶಸ್ತ್ರ ಸಾಗಣೆಗಳನ್ನು ನೇರವಾಗಿ ಕಳುಹಿಸುವ ಬದಲು, ಮೂರನೇ ದೇಶಗಳ ಮೂಲಕ ರಹಸ್ಯವಾಗಿ ಸಾಗಿಸುವ ಸಾಧ್ಯತೆ ಇದೆ.
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ
Asha Bhosle: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (96) ಅವರು ನಿಧನರಾದರು. ಅವರ ನಿಧನಕ್ಕೆ ಅಪಾರ ಗಣ್ಯರು, ಸಂಗೀತ ಪ್ರೇಮಿಗಳು, ವಿವಿಧ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಅವರ ನಿಧಣ ಸುದ್ದಿ ಅದೆಷ್ಟೋ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು #Asha Bhosle ಟ್ರೆಂಡಿಂಗ್ನಲ್ಲಿದೆ. ಮೃತರ ಆರೋಗ್ಯದ ಬಗ್ಗೆ ಮೊಮ್ಮಗಳಾದ ಝನೈ
ಹೊಸದಿಲ್ಲಿ: “ಆರೆಸ್ಸೆಸ್-ಬಿಜೆಪಿ ಸಮಾನ ಭಾರತದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದು, ಸಂವಿಧಾನವನ್ನು ಮುಗಿಸಲು ಬಯಸುತ್ತಿದೆ” ಎಂದು ರವಿವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಗೂ ಮುನ್ನ ಮಂಡಿ ಹೌಸ್ ಬಳಿ “ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ” ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರ ಪ್ರಮುಖ ಸಂದೇಶ ಸಂವಿಧಾನ. ಸಂವಿಧಾನವಿಲ್ಲದೆ ನಾವು ಕರೆಯುತ್ತಿರುವ ಭಾರತ ಇರುತ್ತಿರಲಿಲ್ಲ. ಆರೆಸ್ಸೆಸ್-ಬಿಜೆಪಿ ಮನಸ್ಥಿತಿ ಹೊಂದಿರುವವರು ಇಂದು ಸಂವಿಧಾನವನ್ನು ಮುಗಿಸಲು ಬಯಸುತ್ತಿದ್ದಾರೆ. ಅವರೇನೇ ಹೇಳಿದರೂ, ಅವರ ಪ್ರಮುಖ ಉದ್ದೇಶ ಸಂವಿಧಾನವನ್ನು ಅಳಿಸಿ ಹಾಕುವುದು. ಯಾಕೆಂದರೆ, ಅವರಿಗೆ ಭಾರತದಲ್ಲಿನ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುವುದು ಬೇಕಿಲ್ಲ” ಎಂದು ಅವರು ಆರೋಪಿಸಿದರು. “ಆರೆಸ್ಸೆಸ್—ಬಿಜೆಪಿ ಏನೇ ಮಾಡಿದರೂ, ಅಂಬೇಡ್ಕರ್ ಪ್ರತಿಮೆಯೆದುರು ತಲೆ ಬಾಗಿದರೂ, ಅವರ ಉದ್ದೇಶ ಮಾತ್ರ ಸಂವಿಧಾನವನ್ನು ಮುಗಿಸುವುದಾಗಿದೆ. ನಮ್ಮ ಉದ್ದೇಶ ಸಂವಿಧಾನವನ್ನು ರಕ್ಷಿಸುವುದು ಹಾಗೂ ಸಂವಿಧಾನವನ್ನು ಬಲಪಡಿಸುವುದಾಗಿದೆ” ಎಂದು ಅವರು ಘೋಷಿಸಿದರು. ಸಂವಿಧಾನಿಕ ಮೌಲ್ಯಗಳ ಸಂದೇಶವನ್ನು ದೇಶಾದ್ಯಂತ ಕೊಂಡೊಯ್ಯುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ನಮಗೆ ಸಂವಿಧಾನದ ಚಿಂತನೆ ಬೇಕಿದೆ ಹಾಗೂ ಅದರ ರಕ್ಷಣೆ ದೇಶದ ಮೂಲೆಮೂಲೆಗೂ ತಲುಪಬೇಕಿದೆ. ಹೀಗಾಗಿಯೇ ನಾವು, “ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ” ಆಯೋಜಿಸಿದ್ದೇವೆ ಎಂದು ಅವರು ಹೇಳಿದರು. ಬಳಿಕ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಈ ಮ್ಯಾರಥಾನ್ ಅನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗ ಆಯೋಜಿಸಿದ್ದು, ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳಿಗೆ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಸೂಚಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.13ರಂದು ಸಂಜೆ 6:30ಕ್ಕೆ ಅಂಬೇಡ್ಕರ್ ವೃತ್ತದ ಬಳಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ಏಪ್ರಿಲ್ 14ರಂದು ಸಂಜೆ 6 ಗಂಟೆಗೆ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಪೂಜ್ಯ ಸಿದ್ದರಾಮೇಶ್ವರ ಬೆಲ್ದಾಳ ಶರಣರು ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಜ್ಯೋತಿ ಬೆಳಗಿಸಲಿದ್ದು, ಶಾಸಕ ಶರಣಗೌಡ ಕಂದಕೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾಹಿತಿ ನೀಡಿದ್ದು, ಏಪ್ರಿಲ್ 14ರ ಬೆಳಿಗ್ಗೆ ಅಂಬೇಡ್ಕರ್ ನಗರದಿಂದ ಬೈಕ್ ರ್ಯಾಲಿ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳ ಮೂಲಕ ಡಿಸಿ ಕಚೇರಿ ವರೆಗೆ ಸಾಗಲಿದೆ. ಬಳಿಕ ಜಿಲ್ಲಾಡಳಿತದಿಂದ ಜಯಂತಿ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ದಲಿತ ಮುಖಂಡರು, ಚಿಂತಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಕಾರ್ಯದರ್ಶಿ ಕಾಶೀನಾಥ್ ನಾಟೇಕಾರ್, ಖಜಾಂಚಿ ಅರುಣ್ ದಾಸನಕೇರಿ, ಉಪಾಧ್ಯಕ್ಷ ಮಂಜುನಾಥ ಗುರುಸಣಗಿ, ಸುಭಾಷ್ ವಾಡಿ, ಸಹ ಖಜಾಂಚಿ ಭೀಮಾಶಂಕರ ಅರಕೇರಿ, ಶರಣು ಎಸ್ ನಾಟೇಕಾರ್, ಮಲ್ಲಿಕಾರ್ಜುನ ಈಟೇ, ಭೀಮರಾಯ ಹೊಸ್ಮನಿ, ನಿಂಗಪ್ಪ ಬೀರನಾಳ, ಹಣಮಂತ ಮಿಲ್ಟ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Yadgiri | ಎ.13ರಂದು 135ನೇ ಅಂಬೇಡ್ಕರ್ ಜಯಂತಿ
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.13ರಂದು ಸಂಜೆ 6:30ಕ್ಕೆ ಅಂಬೇಡ್ಕರ್ ವೃತ್ತದ ಬಳಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ಏಪ್ರಿಲ್ 14ರಂದು ಸಂಜೆ 6 ಗಂಟೆಗೆ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಪೂಜ್ಯ ಸಿದ್ದರಾಮೇಶ್ವರ ಬೆಲ್ದಾಳ ಶರಣರು ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಜ್ಯೋತಿ ಬೆಳಗಿಸಲಿದ್ದು, ಶಾಸಕ ಶರಣಗೌಡ ಕಂದಕೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾಹಿತಿ ನೀಡಿದ್ದು, ಏಪ್ರಿಲ್ 14ರ ಬೆಳಿಗ್ಗೆ ಅಂಬೇಡ್ಕರ್ ನಗರದಿಂದ ಬೈಕ್ ರ್ಯಾಲಿ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳ ಮೂಲಕ ಡಿಸಿ ಕಚೇರಿ ವರೆಗೆ ಸಾಗಲಿದೆ. ಬಳಿಕ ಜಿಲ್ಲಾಡಳಿತದಿಂದ ಜಯಂತಿ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ದಲಿತ ಮುಖಂಡರು, ಚಿಂತಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಕಾರ್ಯದರ್ಶಿ ಕಾಶೀನಾಥ್ ನಾಟೇಕಾರ್, ಖಜಾಂಚಿ ಅರುಣ್ ದಾಸನಕೇರಿ, ಉಪಾಧ್ಯಕ್ಷ ಮಂಜುನಾಥ ಗುರುಸಣಗಿ, ಸುಭಾಷ್ ವಾಡಿ, ಸಹ ಖಜಾಂಚಿ ಭೀಮಾಶಂಕರ ಅರಕೇರಿ, ಶರಣು ಎಸ್ ನಾಟೇಕಾರ್, ಮಲ್ಲಿಕಾರ್ಜುನ ಈಟೇ, ಭೀಮರಾಯ ಹೊಸ್ಮನಿ, ನಿಂಗಪ್ಪ ಬೀರನಾಳ, ಹಣಮಂತ ಮಿಲ್ಟ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ. ಆಶಾ ಭೋಸ್ಲೆ (92) ಅವರು ಭಾನುವಾರ ಮೃತಪಟ್ಟಿದ್ದಾರೆ. ಸಂಗೀತ ಲೋಕದ ರಾಣಿ ಎಂದೇ ಖ್ಯಾತಿ ಗಳಿಸಿದ್ದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಈಗ ನಮ್ಮೊಂದಿಗಿಲ್ಲ. ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ನಿಧನರಾದರು. ವರದಿಗಳ
92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ
ದಶಕಗಳ ಕಾಲ ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನ ರಂಜಿಸಿದ್ದ ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇಂದು (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ
RCB Vs MI Match Weather Report: ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 12) ಸಂಜೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವಾಂಖೆಡೆ ಕ್ರೀಡಾಂಗಣದಲ್ಲಿಂದು
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ನಿಧನರಾಗಿದ್ದಾರೆ ಎಂದು ANI ವರದಿ ಮಾಡಿದೆ. ಹೃದಯಾಘಾತದ ಹಿನ್ನೆಲೆ ಶನಿವಾರ ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ : ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಸಮರ್ಥ್ ಶಾಸಕರಾಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಚಿವರು, ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ. ಸಿಎಂ ಸಿದ್ದರಾಮಯ್ಯರಿಂದ ಹಿಡಿದು ಕಟ್ಟಕಡೆಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಅಬ್ದುಲ್ ಜಬ್ಬಾರ್ನನ್ನು ಎಂಎಲ್ಸಿ ಮಾಡಿದ್ದು ನಾವು, ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ನುಡಿದರು. ನಾಯಕರ ನಡುವೆ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಗೆದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇವೆ, ಇಲ್ಲ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಸಮಿತಿಯ ಮುಂದೆ ಹಕ್ಕುಚ್ಯುತಿ ವಿಚಾರಣೆ ವೇಳೆ ರಾಜಕೀಯ ವಿಡಂಬನೆಯ ಬಗ್ಗೆ ದೃಢವಾದ ನಿಲುವನ್ನು ಪ್ರತಿಪಾದನೆ ಮಾಡಿದರು. ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ವ್ಯಂಗ್ಯಚಿತ್ರಗಳನ್ನು ಉಲ್ಲೇಖಿಸಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು. ಇತ್ತೀಚೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸವಲತ್ತು ಸಮಿತಿಯ ಮುಂದೆ ಕುನಾಲ್ ಕಾಮ್ರಾ ಹಾಜರಾಗಿದ್ದರು. ಕಾಮ್ರಾ ಅವರು ಭಾರತದ ಪ್ರಮುಖ ರಾಜಕೀಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ಪರಂಪರೆಯ ಹೊರತಾಗಿಯೂ ತಮ್ಮನ್ನು ತಮಾಷೆಗಾಗಿ ಗುರಿಯಾಗಿಸಲಾಗುತ್ತಿದೆ ಎಂದು ಗಮನಸೆಳೆದರು. ಬಾಳಾಸಾಹೇಬ್ ಠಾಕ್ರೆ ಅವರು ಭಾರತದ ಪ್ರಮುಖ ರಾಜಕೀಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು ಮತ್ತು ಶಿವಸೇನಾ ಮುಖ್ಯಸ್ಥರಾಗಿದ್ದವರು. ಬಾಳಾಸಾಹೇಬ್ ಠಾಕ್ರೆ ಹಲವು ದಶಕಗಳ ಕಾಲ ಪ್ರಧಾನ ಮಂತ್ರಿಗಳನ್ನೂ ಒಳಗೊಂಡಂತೆ ಅಧಿಕಾರದಲ್ಲಿರುವ ನಾಯಕರನ್ನು ಟೀಕಿಸುತ್ತಿದ್ದರು ಮತ್ತು ವ್ಯಂಗ್ಯವಾಡುತ್ತಿದ್ದರು. ಅವರು ಯಾವತ್ತೂ ಕ್ರಮವನ್ನು ಎದುರಿಸಿಲ್ಲ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿನಿಧಿಸುವ ಪಕ್ಷದ ಸಿದ್ಧಾಂತದ ಅಡಿಪಾಯ ರಾಜಕೀಯ ವಿಡಂಬನೆಯಾಗಿದೆ. ಅಂತಹ ಪರಂಪರೆಯನ್ನು ರಕ್ಷಿಸುವುದೆಂದರೆ ಆಧುನಿಕ ಕಾಲದ ವಿಡಂಬನಕಾರರ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿದೆ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧದ ಬಂಡಾಯ ಮತ್ತು ನಂತರದ ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಶಿಂಧೆಯವರ ಹೆಸರೆತ್ತದೆ ಅವರನ್ನು ಕುನಾಲ್ ಕಾಮ್ರಾ ಪರೋಕ್ಷವಾಗಿ ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇಸ್ಲಾಮಾಬಾದ್ ವೇದಿಕೆಯಾಗಿ ಅಮೆರಿಕಾ-ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಸಂಭಾವ್ಯ ದಾಳಿ ಹಾಗೂ ನಿಯಂತ್ರಣದ ವಿಶ್ಲೇಷಣಾತ್ಮಕ ಪತ್ರಿಕಾ ವರದಿಯೊಂದನ್ನು ತಮ್ಮ ಟ್ರುತ್ ಸೋಶಿಯಲ್ ನಲ್ಲಿ ರಿಪೋಸ್ಟ್ ಮಾಡಿದ್ದಾರೆ. ಇದು ಸದ್ಯ ಇರಾನ್ ಮೇಲೆ ಅಮೆರಿಕಾದ ವಿಧ್ವಂಸಕ ದಾಳಿಯ ಮುನ್ಸೂಚನೆ ನೀಡುತ್ತಿದ್ದು, ಈ ಹಿಂದೆ ಟೆಹ್ರಾನ್ ವಿರುದ್ದ ಮಾಡಿದ್ದ ಶಿಲಾಯುಗ ಹೇಳಿಕೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಹಾಗಾದ್ರೆ ಟ್ರಂಪ್ ರಿಪೋಸ್ಟ್ ಮಾಡಿದ ಈ ವರದಿಯಲ್ಲಿ ಅಂತದ್ದೇನಿದೆ ಎಂಬ ಮಾಹಿತಿ ಇಲ್ಲಿದೆ..
Mining Properties: \ಕರ್ನಾಟಕದ ಗಣಿ ಸಂಪತ್ತು ಕೇರಳಂಗೆ; ಈ 'ಕಲೆಕ್ಷನ್' ಹಣ ಯಾರ ಜೇಬಿಗೆ\
Mining Properties: ಕರ್ನಾಟಕದ ಗಣಿ ಸಂಪತ್ತನ್ನು ಕೇರಳಂಗೆ ಗುಳುಂ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದ್ದು, ಇದಕ್ಕೆ ಮುಖ್ಯ ಕಾರಣವಾಗಿರುವುದು ಕರ್ನಾಟಕದ ಗಡಿ ಭಾಗದಿಂದ ಕೇರಳಂಗೆ ಗಣಿ ಸಂಪತ್ತು ಸಾಗಾಣಿಕೆ ಅವ್ಯಾಹತವಾಗಿದೆ ಎನ್ನುವುದು. ಕರ್ನಾಟಕದಿಂದ ನಿತ್ಯವೂ ಅಂದಾಜು 200ಕ್ಕೂ ಹೆಚ್ಚು ಟಿಪ್ಪರ್ಗಳಲ್ಲಿ ಎಂ ಸ್ಯಾಂಡ್,
ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಯ ಅಂಕಗಳನ್ನು ವಿದ್ಯಾರ್ಥಿಯ ಉತ್ತೀರ್ಣತೆಗೆ ಪರಿಗಣಿಸದಿರಲು ನಿರ್ಧರಿಸಲಾಗಿದೆ. ಇದರ ಜತೆಗೆ ಪರೀಕ್ಷೆ ಉತ್ತೀರ್ಣಕ್ಕೆ ಹೊಸ ಮಾನದಂಡವು ನಿಗದಿಯಾಗಿದೆ.
ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು: MLC ಜಬ್ಬಾರ್ ವಿರುದ್ಧ SS ಮಲ್ಲಿಕಾರ್ಜುನ್ ಕಿಡಿ
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕೆ ಬಾರದೇ ಕಾರಣಕೊಟ್ಟ ಎಂಎಲ್ಸಿ ಅಬ್ದುಲ್ ಜಬ್ಬಾರ್ ವಿರುದ್ಧ ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದಿದ್ದಾರೆ. ಕೆಲಸ ಮಾಡಬೇಕಿತ್ತು ಎಂದು ಸಚಿವರು ಕಿಡಿಕಾರಿದ್ದಾರೆ. ಇನ್ನೂ ಹೈಕಮಾಂಡ್ ಸೂಚನೆಯಂತೆ ಚುನಾವಣೆ ನಡೆಸಿದ್ದೇವೆ, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದ್ದಾರೆ.
Vijay: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಟ ಹಾಗೂ ರಾಜಕಾರಣ ವಿಜಯ್ ಅವರು ವಿಶೇಷ ಟ್ವೀಟ್ವೊಂದನ್ನು ಮಾಡಿದ್ದಾರೆ. ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರೂ ಆಗಿರುವ ನಟ ವಿಜಯ್ ಅವರು, ಅವರ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂನ್ನು ನೀಡಿದ್ದಾರೆ. ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲಾ ಸಹೋದರರಿಗೆ ಹಾರ್ದಿಕ ಶುಭಾಶಯಗಳು. ಈ ಮಹತ್ವದ ಪ್ರಯಾಣದಲ್ಲಿ
ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲ: ಇರಾನ್
ಟೆಹ್ರಾನ್: ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೆ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ ಅಮೆರಿಕಗೆ ವಾಪಸ್ಸಾಗಿದೆ. ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲವಾಗಿದೆ ಎಂದು ಇರಾನ್ನ ಸರಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಮಾತುಕತೆ ವಿಫಲವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ಅಮೆರಿಕ ಕೆಲವು ವಿಷಯಗಳಲ್ಲಿ ಪರಸ್ಪರ ಒಪ್ಪಂದದ ಹಂತಕ್ಕೆ ತಲುಪಿದೆ. ಆದರೆ ಎರಡು-ಮೂರು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಮಾತುಕತೆಗಳು 40 ದಿನಗಳ ಬಲವಂತದ ಯುದ್ಧದ ನಂತರ ನಡೆದಿವೆ. ಪರಸ್ಪರ ಅನುಮಾನ ಮತ್ತು ಅವಿಶ್ವಾಸದ ವಾತಾವರಣದಲ್ಲಿ ನಡೆದಿದೆ. ಆದ್ದರಿಂದ, ಒಂದೇ ಸಭೆಯಲ್ಲಿ ಒಪ್ಪಂದ ಸಾಧ್ಯವೆಂದು ಆರಂಭದಿಂದಲೇ ನಾವು ನಿರೀಕ್ಷಿಸಿಲ್ಲ ಎಂದು ಹೇಳಿದ್ದಾರೆ. ಮಾತುಕತೆಗಳ ಯಶಸ್ಸು ಎದುರಾಳಿಗಳ ಗಂಭೀರತೆ ಮತ್ತು ನಂಬಿಕೆ ಮೇಲೆ ಅವಲಂಬಿತವಾಗಿದೆ. ಜೊತೆಗೆ, ಇರಾನ್ನ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಒಪ್ಪಿಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದ ಯುದ್ಧ ಅಂತ್ಯಗೊಳಿಸಲು ಇಸ್ಲಾಮಾಬಾದ್ನಲ್ಲಿ ನಡೆದ ಮಾತುಕತೆಗಳು ಅಮೆರಿಕದ “ಅಸಂಗತ ಬೇಡಿಕೆಗಳ” ಕಾರಣದಿಂದ ವಿಫಲವಾಗಿದೆ ಎಂದು ಇರಾನ್ ರಾಜ್ಯ ಪ್ರಸಾರ ಸಂಸ್ಥೆ IRIB ರವಿವಾರ ತಿಳಿಸಿದೆ. “ಇರಾನ್ ನಿಯೋಗ 21 ಗಂಟೆಗಳ ಕಾಲ ನಿರಂತರವಾಗಿ ಮಾತುಕತೆ ನಡೆಸಿತು. ಇದರ ಉದ್ದೇಶ ಇರಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿತ್ತು. ಇರಾನ್ ಹಲವಾರು ಪ್ರಸ್ತಾಪಗಳನ್ನು ಮುಂದಿಟ್ಟಿದ್ದರೂ, ಅಮೆರಿಕದ ಅಸಂಗತ ಬೇಡಿಕೆಗಳು ಮಾತುಕತೆ ಮುಂದುವರಿಯುವುದನ್ನು ತಡೆಯುವಲ್ಲಿ ಕಾರಣವಾದವು. ಹೀಗಾಗಿ, ಮಾತುಕತೆಗಳು ಅಂತ್ಯಗೊಂಡವು ಎಂದು IRIB ಹೇಳಿದೆ.
ಗುವಾಹಟಿಯಲ್ಲಿ RCB ಹಾಗೂ RR ನಡುವೆ ನಡೆದ ಮ್ಯಾಚ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್ ಓಳಗೆ ಕೂತು ಫೋನ್ ಬಳಕೆ ಮಾಡಿದ್ದು, ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ವಿವಾದವನ್ನು ಮತ್ತಷ್ಟು ಜೋರಾಗುವಂತೆ ಮಾಡಿದ್ದು, ರೋಮಿ ಬಿಂಧರ್ ಫೋನ್ ಬಳಕೆ ವೇಳೆ RR ತಂಡದ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲೇ ಕುಳಿತು ಫೋನ್ನತ್ತ ನೋಡುತ್ತಾ ಇರುವುದು. ಇದು ಸದ್ಯ ವಿವಾದ ಹುಟ್ಟುಹಾಕಿದ್ದು, ಈ ಕುರಿತು IPL PMOA ನಿಯಮ ಹೇಳೋದೇನು? ಎಂಬ ಮಾಹಿತಿ ಇಲ್ಲಿದೆ..
ಬೇಸಿಗೆ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಮನೆಯಿಂದ ಹೊರಗೆ ಕಾಲಿಡುವುದೇ ಆತಂಕಕಾರಿಯೆನಿಸಿದೆ.
ಕಾನೂನುಗಳು ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಸಾಧನಗಳು. ಜೀವ ಜಗತ್ತಿಗೆ ತೊಂದರೆ ಆಗದಂತೆ ಬದುಕುವುದನ್ನು ಕಲಿಸಿಕೊಡುತ್ತವೆ. ಅದೊಂದು ರೀತಿಯ ಜೀವನ ಪಾಠದ ಮಾರ್ಗಗಳಾಗಿರುತ್ತವೆ. ದುರ್ಬಳಕೆ ಮತ್ತು ದುರ್ನಡತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಅದರ ಮುಂದೆ ಎಲ್ಲರೂ ಸಮಾನರೇ. ಅಧಿಕಾರ, ಅಂತಸ್ತು, ಯಜಮಾನಿಕೆ ಇವ್ಯಾವುವು ಕೂಡ ಅಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡಿ ಜನರಲ್ಲಿ ಭರವಸೆಯನ್ನು ಮೂಡಿಸುವ ವಿಶಿಷ್ಟ ಶಕ್ತಿ ಅವುಗಳಲ್ಲಿ ಅಡಕ ಮಾಡಲಾಗಿದೆ. ಕಾನೂನನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಮೂಲಭೂತ ಕರ್ತವ್ಯ. ಆದರೂ ಅಂಕೆ ಮೀರುವ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಸರಕಾರ, ಪೊಲೀಸು ಮತ್ತು ನ್ಯಾಯಾಂಗ ವ್ಯವಸ್ಥೆಗಳು ನಮ್ಮಲ್ಲಿ ಜಾರಿಯಲ್ಲಿವೆ. ಇತ್ತೀಚೆಗೆ ಮದುರೈನ ನ್ಯಾಯಾಲಯವು ನೀಡಿರುವ ತೀರ್ಪು ಮಾನವ ಕುಲದ ಇತಿಹಾಸದಲ್ಲೇ ಬಹುದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ನೆಲದ ಕಾನೂನನ್ನು ಜೀವ ಪರವಾಗಿಸಿಕೊಳ್ಳಬೇಕು. ಸ್ವೇಚ್ಛಾಚಾರದಿಂದ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂಬ ಕಟು ಎಚ್ಚರಿಕೆಯ ಸಂದೇಶ ದೇಶದ ಮೂಲೆ ಮೂಲೆಗಳಿಗೂ ತಲುಪಿಸಿದೆ. ಇದೊಂದು ತೀರ್ಪು ಹಲವು ಪಾಠಗಳನ್ನು ಹೇಳಿಕೊಡುತ್ತಿದೆ. ಘಟನೆ 2020, ಜೂನ್, 19ರ ಕೋವಿಡ್ ಕಾಲದ್ದು. ಸ್ಥಳ- ತಮಿಳುನಾಡಿನ ತೂತ್ತುಕ್ಕುಡಿ ಜಿಲ್ಲೆಯ ಸಾತ್ತಾನ್ಕುಳಂ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ್ದು. ಕೊರೋನ ಕಾಲದಲ್ಲಿ ವಿಧಿಸಿದ ಸಮಯವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಅಂಗಡಿಯ ಪಿ. ಜಯರಾಜ್ ಮತ್ತು ಪುತ್ರ ಜೆ. ಬೆನಿಕ್ಸ್ರನ್ನು ಎಫ್ಐಆರ್ ಮೂಲಕ ಲಾಕ್ ಮಾಡಲಾಗಿತ್ತು. ಆ ಘಟನೆ ಕೊನೆಗೆ ಲಾಕಪ್ ಡೆತ್ ಆಗಿ ಹೆಚ್ಚು ಸುದ್ದಿ ಮಾಡಿತು. ಇದು ಬಹುದೊಡ್ಡ ಜನಾಕ್ರೋಶಕ್ಕೂ ಕಾರಣವಾಯಿತು. ಆಗ ಸಿಬಿಐಯೂ ತನಿಖೆ ಮಾಡಿ, ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಹೇಳಿದ್ದಲ್ಲದೆ, ಪೆರೋಲ್ ಸಾಧ್ಯತೆ ಇಲ್ಲದೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿತ್ತು. ಆನಂತರ ಮಧುರೈನ ನ್ಯಾಯಾಲಯವು ಒಂಭತ್ತು ಜನ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಾನ್ಸ್ಟೇಬಲ್ ರೇವತಿ ಜಗತ್ತಿನಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿದ ದೇಶಗಳಿವೆ. ಇನ್ನೂ ಕೆಲವು ದೇಶಗಳು ಚಿಂತನೆಗಳಲ್ಲಿವೆ. ಈ ಪ್ರಕರಣವು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗೆ ಒಳಪಡುವ ಗಂಭೀರ ಪ್ರಕರಣವಲ್ಲ ಎಂಬ ಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅದೇನೇ ಇರಲಿ, ಚಿತ್ರಹಿಂಸೆಗೆ ಬಲಿಯಾದ ಎರಡು ಜೀವಗಳು ಲಾಕಪ್ ಡೆತ್ ಆಗಿರುವುದಂತೂ ಹೇಯ ಕೃತ್ಯ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣಗಳು ಇದೇ ಮೊದಲಲ್ಲ, ಇದೇ ಕೊನೆಯೂ ಆಗಬಹುದೆಂದು ಭಾವಿಸಲು ಸಾಧ್ಯವಿಲ್ಲ. ಆದರೆ ಅಮಾನವೀಯತೆಗೆ ಮನ್ನಣೆ ಇಲ್ಲ ಎನ್ನುವುದನ್ನು ಒತ್ತಾಯಿಸುತ್ತದೆ. ಅರಿವು, ಜಾಗೃತಿ ಮತ್ತು ಸ್ವಯಂಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಸಂಯಮದ ನಡವಳಿಕೆಯನ್ನು ಬೋಧಿಸುತ್ತದೆ. ಪಾಠ ಒಂದು, ರಕ್ಷಕರೇ ಭಕ್ಷಕರಾದರೆ ಅವರಿಗೂ ತಕ್ಕ ಶಾಸ್ತಿ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ವ್ಯವಸ್ಥೆಯ ಒಳಗೆ ನಡೆಯುವ ದೌರ್ಜನ್ಯಗಳಿಗೆ ವಿರುದ್ಧವಾಗಿ ಪ್ರಾಮಾಣಿಕತೆ ಮತ್ತು ಕರ್ತವ್ಯದ ಮೂಲಕ ನ್ಯಾಯವನ್ನು ಹುಟ್ಟು ಹಾಕುವ ಹೊಸ ಪರಂಪರೆಗೆ ಒಬ್ಬ ಮಹಿಳೆ ದಾಖಲಾಗುತ್ತಾರೆ. ಆಕೆಯ ಹೆಸರು ಅದೇ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ರೇವತಿ. ಈ ಹೊಸ ಬಗೆಯ ನ್ಯಾಯಕ್ಕೆ ತಾನೇ ಸಾಕ್ಷಿಯಾಗಿ ತನ್ನದೇ ವ್ಯವಸ್ಥೆಯ ವಿರುದ್ಧವಾಗಿ ಹೋರಾಡುವ ದಿಟ್ಟತನ ಸಾಮಾನ್ಯವಾದದ್ದಲ್ಲ. ಬಾಹ್ಯ ಮತ್ತು ಆಂತರಿಕ ಒತ್ತಡಗಳನ್ನು ಮೆಟ್ಟಿನಿಂತು ಸಾಕ್ಷಿಯಾಗಿ ದಡ ಸೇರಿಸಿದ ತೀರ್ಪಿದು. ಒಂದು ಕ್ಷಣ ‘ಜೈ ಭೀಮ್’ ಸಿನೆಮಾ ನೆನಪಿಸುತ್ತದೆ. ಅದರ ವಸ್ತು ವಿಷಯವು ಲಾಕಪ್ ಡೆತ್ ಕುರಿತದ್ದು. ತನ್ನ ಗಂಡನ ಸಾವಿನ ನ್ಯಾಯಕ್ಕಾಗಿ ಅಲ್ಲಿಯೂ ಕೂಡ ಮಹಿಳೆಯ ಹೋರಾಟವೇ ಇದೆ. ಪಾಠ ಎರಡು, ಕಾನೂನುಗಳು ಇಚ್ಛಾನುಸಾರಿಗಳಲ್ಲ; ವಿವೇಚನ ಅಧಿಕಾರವುಳ್ಳವು. ಜನಪರ ಮತ್ತು ಜೀವ ಪರವಾಗಿ ಯೋಚಿಸಬೇಕು. ತಾನು ಬದುಕುವುದು ಮತ್ತು ಇತರರಿಗೆ ಬದುಕಲು ಬಿಡುವುದನ್ನು ಹೇಳಿ ಕೊಡುತ್ತವೆ. ನ್ಯಾಯ ವಿಮರ್ಶೆ ಮಾಡುವ ಮೇಲ್ವಿಚಾರಣೆಗಳಿವೆ. ವಿವಿಧ ಬಗೆಯ ತನಿಖೆ ಸಂಸ್ಥೆಗಳಿವೆ. ವಿವಿಧ ಹಂತದ ನ್ಯಾಯಾಂಗಗಳಿವೆ. ಸತ್ಯಾಸತ್ಯತೆಯನ್ನು ಒರೆಗಚ್ಚುವ ಪ್ರಕ್ರಿಯೆ ಇದೆ. ಹೀಗಿರುವಾಗ ಸಾಕ್ಷಿ ನಾಶ ಮಾಡಬಲ್ಲ ಹುಂಬತನಕ್ಕೆ ಗರ್ವಭಂಗವಾಗದಿರದೆ? ಅಧಿಕಾರ ಎನ್ನುವುದು ದರ್ಪದ ಹೊರತಾಗಿರಬೇಕು. ಅದು ಅಂಗಿಯ ಮೇಲಿನದ್ದಲ್ಲ ಅಂಗದ ಒಳಗಿನದ್ದು. ಕಾನೂನಿನ ಅರಿವಿನ ಚೌಕಟ್ಟಿನಲ್ಲಿ ವರ್ತಿಸಬೇಕಾದದ್ದು ಅತ್ಯಗತ್ಯ. ಹಾಗಂತ ಪೊಲೀಸರು ಕೆಟ್ಟವರು ಎಂದು ಹೇಳಲು ಸಾಧ್ಯವೇ ಇಲ್ಲ. ಅವರೂ ಮನುಷ್ಯರು, ಮನುಷ್ಯತ್ವ ಉಳ್ಳವರು. ಮನುಷ್ಯತ್ವ ಕಳೆದುಕೊಂಡವರಿಂದ ಇಂತಹ ಘಟನೆಗಳು ಸಂಭವಿಸಿ ಸಮಾಜಕ್ಕೆ ಕೆಟ್ಟ ಪರಂಪರೆಯನ್ನು ಸೃಷ್ಟಿಸುವುದು ದುರದೃಷ್ಟಕರ. ಪ್ರತೀ ಕಾನೂನುಗಳ ಮೂಲ ಆಶಯ ಮನುಷ್ಯ ಮನುಷ್ಯನನ್ನಾಗಿಯೇ ಮಾಡುವುದು, ನೋಡುವುದಾಗಿರುತ್ತದೆ. ಜೆ. ಬೆನಿಕ್ಸ್ ಮತ್ತು ಪಿ. ಜಯರಾಜ್ ಪಾಠ ಮೂರು, ಈ ತೀರ್ಪು ನಮ್ಮ ಆತ್ಮವಿಮರ್ಶೆಯ ಭಾಗವಾಗಿಯೇ ನೋಡಬೇಕು. ನಮ್ಮ ನಡವಳಿಕೆಯನ್ನು ತಿದ್ದುತ್ತದೆ. ಮುಂದಿನ ದೃಷ್ಟಿಯನ್ನು ಬದಲಾಯಿಸುತ್ತದೆ. ಕ್ರೌರ್ಯದ ಸ್ವರೂಪಕ್ಕೆ ಕಾಲದ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಅದು ಕಾನೂನಿನ ಮೂಲಕ ದೃಢಪಡಿಸುವುದು ಸಹಜವಾಗಿರುತ್ತದೆ. ಬಸವಣ್ಣನವರು ಹೇಳುವ ಅಂತರಂಗ ಮತ್ತು ಬಹಿರಂಗದ ಶುದ್ಧಿಗಳು ನಮ್ಮ ಕರ್ತವ್ಯಕ್ಕೆ ಗರಿಮೆಗಳನ್ನು ಉಂಟು ಮಾಡುತ್ತವೆ. ಕುವೆಂಪು ಅವರು ಪಕ್ಷಿಕಾಶಿ ಪದ್ಯದಲ್ಲಿ ಅರ್ಥಪೂರ್ಣ ಪದ್ಯವೊಂದಿದೆ. ‘ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:/ ಇದು ಪಕ್ಷಿಕಾಶಿ!....../ ಬಿಂಕದುಕುತಿಯನು ಕೊಂಕುಯುಕುತಿಯನು/ ಎಲ್ಲ ಬಿಟ್ಟು ಬಾ’ ಎನ್ನುತ್ತಾರೆ. ಪೊಲೀಸರನ್ನೆಲ್ಲಾ ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದಿಲ್ಲ. ಮಾನವೀಯತೆಯ ಮಹಾನುಭಾವರು ಇದ್ದಾರೆ. ಇಂತಹವರ ಪರಂಪರೆ ಹೆಚ್ಚಲಿ.
ಇರಾನ್ ಜೊತೆಗಿನ ಮಾತುಕತೆ ವಿಫಲ: ಪಾಕಿಸ್ತಾನದಿಂದ ನಿರ್ಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಟೆಹ್ರಾನ್: ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವಿವಾರ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ. 21 ಗಂಟೆಗಳ ಕಾಲ ನಡೆದ ಮಾತುಕತೆಗಳ ನಂತರವೂ ಇರಾನ್-ಅಮೆರಿಕ ಒಪ್ಪಂದ ಮಾಡಿಕೊಳ್ಳಲು ವಿಫಲವಾಗಿದೆ. ಇದರಿಂದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್ನಿಂದ ವಾಪಾಸ್ಸಾಗಿದ್ದಾರೆ. ನಾವು ಈಗ 21 ಗಂಟೆಗಳ ಕಾಲ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಿದ್ದೇವೆ. ಅದು ಒಳ್ಳೆಯ ಸುದ್ದಿ. ಕೆಟ್ಟ ಸುದ್ದಿ ಎಂದರೆ ನಾವು ಒಪ್ಪಂದಕ್ಕೆ ಬಂದಿಲ್ಲ ಎಂಬುದಾಗಿದೆ ಎಂದು ಜೆಡಿ ವ್ಯಾನ್ಸ್ ಹೇಳಿದರು. ನಮ್ಮ ಕೆಂಪು ರೇಖೆಗಳು ಯಾವುವು, ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ಧರಿದ್ದೇವೆ ಮತ್ತು ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ದರಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ನಮ್ಮ ಷರತ್ತುಗಳನ್ನು ಸ್ವೀಕರಿಸದಿರಲು ಇರಾನಿನ ನಿಯೋಗ ನಿರ್ಧರಿಸಿದೆ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.
ಅನುಭವ-ಅನುಭಾವದ ವಿಶಿಷ್ಟ ಹೂರಣ ‘ಆಚೀಚಿನ ಆಯಾಮಗಳು’
ಅಂಕಣ ಬರಹಗಳ ಒಂದು ವೈಶಿಷ್ಟ್ಯ ಎಂದರೆ ಬರಹಗಾರರಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ತಾತ್ವಿಕ ಹಾಗೂ ಮುದ್ರಣ ಮಾಧ್ಯಮಗಳ ಪದಮಿತಿ/ಪುಟಮಿತಿ ಹೊರತುಪಡಿಸಿದರೆ, ಅಕ್ಷರಜೋಡಣೆಗೆ ಅನಿರ್ಬಂಧಿತ ಸ್ವಾತಂತ್ರ್ಯ ಇರುವುದೇ ಅಂಕಣ ಬರಹದ ಸೌಂದರ್ಯಕ್ಕೆ ಕಾರಣ. ಸಾಮಾನ್ಯವಾಗಿ ವೈಯಕ್ತಿಕ ಅಭಿವ್ಯಕ್ತಿಯನ್ನು ಸಾಮಾಜಿಕ/ಸಾಂಸ್ಕೃತಿಕ ಹಂದರದಲ್ಲಿ ಹರಡುವ ಪ್ರವೃತ್ತಿಯನ್ನು ಇಲ್ಲಿ ಗುರುತಿಸಬಹುದು. ಒಬ್ಬ ಅಂಕಣಕಾರನಾಗಿ ಹೇಳುವುದಾದರೆ, ಕೆಲವು ಬರಹಗಳನ್ನು ಓದುವಾಗ, ‘ಹೌದಲ್ಲವೇ? ಈ ರೀತಿಯಲ್ಲೂ ಬರೆಯಬಹುದಲ್ಲಾ !!’ ಎಂದು ಭಾಸವಾಗುತ್ತದೆ. ಅಂತಹ ಒಂದು ಬರಹ ಗುಚ್ಛ ಚಂದಕಚರ್ಲ ರಮೇಶಬಾಬು ಅವರ ‘ಆಚೀಚಿನ ಆಯಾಮಗಳು’. ರಮೇಶಬಾಬು ಅವರು ನನ್ನಂತೆಯೇ ಬ್ಯಾಂಕ್ಉದ್ಯೋಗಿ. ಹಾಗಾಗಿ ಬಿಡುವಿನ ವೇಳೆಯಲ್ಲಿ ಲೇಖನ ಬರೆಯುವಾಗ ಅವರ ಮನಸ್ಸು, ಬ್ಯಾಂಕ್ಸೇವೆಯಲ್ಲಿರುವಾಗ ಕಂಡಂತಹ ಎಲ್ಲ ಸಾಮಾಜಿಕ ವಾಸ್ತವಗಳ ಕಡೆಗೂ ವಾಲುವುದು ಸಹಜ. ಈ ವೈವಿಧ್ಯಮಯ ಆಯಾಮ ಮತ್ತು ರಮೇಶ್ಬಾಬು ಅವರ ಬರಹದ ಚೆಂದದ ಶೈಲಿ ಓದುಗರಲ್ಲಿ ನಗು ಮೂಡಿಸುತ್ತಾ, ಅಚ್ಚರಿ ಹುಟ್ಟಿಸುತ್ತಾ, ಕುತೂಹಲ ಕೆರಳಿಸುತ್ತಾ, ಆಸಕ್ತಿ ಸೃಷ್ಟಿಸುತ್ತಾ 34 ಅಧ್ಯಾಯಗಳನ್ನೂ ಪಯಣಿಸುವಂತೆ ಮಾಡುತ್ತದೆ. ಹಾಸ್ಯಪ್ರಜ್ಞೆ ಅವರಲ್ಲಿ ಅಂತರ್ಗತವಾಗಿರುವುದು ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆಧುನಿಕ ಸಂವಹನ ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ಪುರಾಣ, ರಾಜಕಾರಣ, ಜೀವ ಪ್ರೀತಿ ಮತ್ತು ವೈಯಕ್ತಿಕ ಬದುಕಿನ ಸುಂದರ ಕ್ಷಣಗಳು ಇವೆಲ್ಲವನ್ನೂ ಒಳಗೊಂಡ ಈ ಪುಸ್ತಕದ Sಠಿeಛಿಣಡಿum ಬಹಳ ವಿಸ್ತಾರದ್ದು. ಸರಳ ನಿರೂಪಣೆಯ ಮೂಲಕ ಗಂಭೀರ ವಿಚಾರಗಳನ್ನು ಸಂವಾದಿಸುವ ರಮೇಶ್ಬಾಬು ಅವರ ಶೈಲಿ ಸಹಜವಾಗಿ ಆಪ್ತತೆ ಮೂಡಿಸುತ್ತದೆ. ಅವರಲ್ಲಿನ ಹಾಸ್ಯಪ್ರಜ್ಞೆ ‘ನಾಸಿಕ ಪುರಾಣ’ದಿಂದಲೇ ಆರಂಭವಾಗುತ್ತದೆ. ಮೂಗಿನ ಉಪಯುಕ್ತತೆಗಳೊಂದಿಗೇ ಅದರ ವಿಶೇಷ ಗುಣಗಳನ್ನು ರಸವತ್ತಾಗಿ ವರ್ಣಿಸುವ ಮೂಲಕ ಲೇಖಕರು, ಓದುಗರ ವಿಸ್ಮತಿಯ ಕಣಜದಿಂದ ಮರೆತ ಕ್ಷಣಗಳನ್ನೂ ಹೊರತೆಗೆಯುತ್ತಾರೆ. ಕನ್ನಡ ಭಾಷೆಯ ಬಗ್ಗೆ ಅವರಲ್ಲಿರುವ ಪ್ರೀತಿ-ಅಭಿಮಾನ ‘ಕನ್ನಡವೆನ್ನುವ ಗುಪ್ತಗಾಮಿನಿ’ ಲೇಖನದಲ್ಲಿ ಸ್ಫುಟವಾಗಿ ನಿರೂಪಿಸಲಾಗಿದೆ. ‘ಕನ್ನಡವೆಂದರೆ ಬರೀ ಭಾಷೆಯಲ್ಲ, ಒಂದು ಸಂಸ್ಕೃತಿ...’ (ಪುಟ 29) ಎಂಬ ಸಾಲುಗಳು ರಮೇಶ ಬಾಬು ಅವರ ಭಾಷಾ ಪ್ರೇಮದ ದ್ಯೋತಕವಾಗಿ ಕಾಣುತ್ತದೆ. ಮುಂದೆ ‘ಬಕ್ಕತಲೆ’ ನಗೆಬರಹ ಓದುತ್ತಾ ಹೋದಂತೆ, ಗತ ಬದುಕಿನ ಹಲವಾರು ಕ್ಷಣಗಳು ಮೆರವಣಿಗೆಯಂತೆ ಸಾಗುತ್ತವೆ. ಇದು ಎಲ್ಲರ ಅನುಭವವೂ ಆಗಲು ಸಾಧ್ಯ. ‘ಬಾಚಲು ಕಡಿಮೆ ತಲೆ ತೊಳೆಯಲು ಹೆಚ್ಚು ಮುಖ’ ಎಂಬ ವ್ಯಾಖ್ಯಾನವೂ ಉಂಟು. ಲೇಖಕರು ಈ ರೀತಿಯ ಹಲವು ಪ್ರಸಂಗಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಬೆಳೆದು, ಅಮೆರಿಕ ಅಥವಾ ಪಾಶ್ಚಾತ್ಯ ದೇಶಗಳಿಗೆ ಆಕಾಶಯಾನ ಮಾಡುವಾಗ ಎದುರಾಗಬಹುದಾದ ವಾಸ್ತವ ಸನ್ನಿವೇಶಗಳನ್ನು ‘ಆಕಾಶಯಾನವೂ...’ ಲೇಖನದಲ್ಲಿ ರಮೇಶಬಾಬು ತಮ್ಮದೇ ಅನುಭವದ ನೆಲೆಯಲ್ಲಿ ವಿವರಿಸಿದ್ದರೂ, ಈ ಅನುಭವಗಳು ಎಲ್ಲರದೂ ಹೌದು. ನಮ್ಮ ಪೀಳಿಗೆಯವರಿಗೆ ಕೇವಲ ಕಣ್ತುಂಬಿಕೊಳ್ಳುವ ಒಂದು ಪಯಣ ಸಾಧನವಾಗಿದ್ದ ವಿಮಾನ, ವಯಸ್ಸಾದ ಮೇಲೆ ಪಯಣದ ಸಾಥಿಯಾದಾಗ ಎದುರಾಗುವ ವಿಚಿತ್ರ ಸಂದರ್ಭಗಳು, ಲೇಖಕರ ಶೈಲಿಯ ಕಾರಣದಿಂದ ಇನ್ನೂ ಹೆಚ್ಚು ಆಕರ್ಷಣೀಯವಾಗುತ್ತದೆ. ರಮೇಶ ಬಾಬು ಅವರ ಅಕ್ಷರದೌತಣ ಮನಸ್ಸಿಗೆ ಮುದ ನೀಡುತ್ತಲೇ ಥಟ್ಟನೆ ನಾಲಗೆಯಲ್ಲಿ ನೀರೂರಿಸಿಬಿಡುವುದು ಒಂದು ವಿಶೇಷ. ‘ರಸಂ ಎನ್ನುವ ಅಪ್ಪಟ ಕನ್ನಡ ಸಾರು’ ಈ ಲೇಖನ ಓದುಗರ ಮುಂದೆ ಊಟದೆಲೆಯನ್ನು ಇಡುವ ರೀತಿಯಲ್ಲಿ ರುಚಿಕರ ರಸಂ ಇಲ್ಲಿ ಸ್ಥಾನ ಗಳಿಸಿಕೊಂಡಿದೆ. ರಸಂ ಇಲ್ಲದ ಊಟ ಊಟವೇ ಅಲ್ಲ ಎನ್ನುವುದು ಒಂದು ಕಾಲದ ನಾಣ್ಣುಡಿಯೇ ಆಗಿದ್ದುದು ಸತ್ಯ. ಅಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳು ಮಿಲೆನಿಯಂ ಸಮಾಜವನ್ನು ಪ್ರಭಾವಿಸುತ್ತಿರುವ ರೀತಿ ಆತಂಕಕಾರಿಯಾದದ್ದು. ಇದನ್ನು ಲೇಖಕರು ‘ಸಾಹಿತ್ಯದ ಮೇಲೆ...’’ ಲೇಖನದಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಸ್ ದೃಷ್ಟಿಯನ್ನಿಟ್ಟುಕೊಂಡು ವಿಶ್ಲೇಷಿಸಿದ್ದಾರೆ. ‘‘ಬೆಂಕಿ ಕಡ್ಡಿಯಿಂದ ದೀಪವನ್ನಾದರೂ ಬೆಳಗಬಹುದು ಅಥವಾ ಮನೆಗೆ ಬೆಂಕಿ ಸಹ ಹಚ್ಚಬಹುದು’’(ಪುಟ 75) ರಮೇಶಬಾಬು ಅವರ ಈ ಸಾಲು ಯುವ ಸಮಾಜವನ್ನು ಜಾಗೃತಗೊಳಿಸುವ ಘೋಷವಾಕ್ಯವಾಗಿ ಕಾಣುತ್ತದೆ. ಅದೇ ರೀತಿಯ ಜಾಗೃತಿಯ ಸಂದೇಶ ‘ಬೇಲಿಯೇ ಎದ್ದು’ ಲೇಖನದಲ್ಲಿದೆ. ಪ್ರಜಾಪ್ರಭುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ವೈಚಾರಿಕ-ವೈಜ್ಞಾನಿಕ ಪ್ರಜ್ಞೆ ಮತ್ತು ಸಾಮಾಜಿಕ ಅರಿವು ಎಷ್ಟು ಮುಖ್ಯ ಎನ್ನುವುದನ್ನು ಈ ಲೇಖನ ಸೂಚ್ಯವಾಗಿ ಕಾಣಿಸುತ್ತದೆ. ಗಾಂಧಿವಾದವನ್ನು ಕುರಿತ ಲೇಖಕರ ಅಭಿಪ್ರಾಯಗಳು ಇವತ್ತಿನ ಸಮಾಜಕ್ಕೆ ಅಗತ್ಯವಾದ ಮಾರ್ಗದರ್ಶನವೇ ಸರಿ. ಏಕೆಂದರೆ ತಾತ್ವಿಕವಾಗಿ-ಸೈದ್ಧಾಂತಿಕವಾಗಿ ಗಾಂಧಿಯನ್ನು ಸಮರ್ಥಿಸುವುದು, ನಿರಾಕರಿಸುವುದು ವೈಯುಕ್ತಿಕ ಅಭಿವ್ಯಕ್ತಿಯಾದರೂ, ಕುಸಿಯುತ್ತಿರುವ ಮಾನವೀಯ-ನೈತಿಕ-ರಾಜಕೀಯ ಮೌಲ್ಯಗಳ ನಡುವೆ ಗಾಂಧಿ ಹೆಚ್ಚು ಪ್ರಸ್ತುತವಾಗುವುದನ್ನು ಲೇಖಕರು ಸುಂದರವಾಗಿ ವಿಶ್ಲೇಷಿಸಿದ್ದಾರೆ. ಶ್ವಾನಪ್ರೀತಿ, ಪಾರ್ಕಿಂಗ್ ಸಮಸ್ಯೆ, ಐಪಿಎಲ್ ಜಾತ್ರೆ, ನಿರೂಪಕರ ಬವಣೆ ಹೀಗೆ ವಿಭಿನ್ನ ಆಯಾಮಗಳಲ್ಲಿ ನಮ್ಮ ಸುತ್ತಲೂ ನಿತ್ಯ ನಡೆಯುವ ಪ್ರಸಂಗಗಳ ವಿಶಿಷ್ಟ ಆಯಾಮಗಳನ್ನು ರಮೇಶ ಬಾಬು ತಮ್ಮ ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ರಮೇಶ ಬಾಬು ಅವರ ‘ಆಚೀಚಿನ ಆಯಾಮಗಳು’ ಎಲ್ಲರ ಬದುಕಿನಲ್ಲಿ ಹಾದು ಹೋಗುವ ಆಯಾಮಗಳನ್ನು ತೆರೆದಿಡುವ ಒಂದು ಅಪೂರ್ವ ಕೃತಿ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಸುಂದರ ಉಡುಗೊರೆ. ರಮೇಶ ಬಾಬು ಈ ಕಾರಣಕ್ಕಾಗಿ ಅಭಿನಂದನಾರ್ಹರು.
ಅಂಡಮಾನ್ : ಮೋಜಿಗಾಗಿ ಕರಗದಿರಲಿ ಕಾಡು-ಕಡಲಿನ ಮೌನ!
ಕಾಡು ಮತ್ತು ಕಡಲಿನ ನಡುವೆ ಇರುವ ಸಮತೋಲನ ಬಹಳ ನಾಜೂಕು. ಅದು ಕೇವಲ ದೃಶ್ಯವಲ್ಲ, ಒಂದು ಜೀವಂತ ಸಮೀಕರಣ. ಅದನ್ನು ನಾವು ಪ್ರವಾಸದ ಹೆಸರಿನಲ್ಲಿ ನಿಧಾನವಾಗಿ ಬದಲಾಯಿಸುತ್ತಿದ್ದೇವೆ ಎಂಬ ಅರಿವು ನಮ್ಮೊಳಗೆ ಮೂಡದಿದ್ದರೆ, ಅಂಡಮಾನ್ ಕೂಡ ಬೇರೆ ಪ್ರವಾಸಿ ಸ್ಥಳಗಳಂತೆಯೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ದಿನ ದೂರದಲ್ಲಿಲ್ಲ. ಹೀಗಾಗಿ, ಅಂಡಮಾನ್ ನೋಡಬೇಕೆಂದರೆ ಕೇವಲ ಕಣ್ಣುಗಳಿಂದ ಅಲ್ಲ, ಒಂದು ಜವಾಬ್ದಾರಿಯ ಮನಸ್ಸಿನಿಂದ ನೋಡಬೇಕು. ಇಲ್ಲವಾದರೆ, ನಾವು ನೋಡಲು ಹೊರಟ ಪ್ರಕೃತಿಯೇ ನಮ್ಮಿಂದ ಅಳಿದುಹೋಗುವ ಸಾಧ್ಯತೆ ಇದೆ. ಅಂಡಮಾನ್ ಗುಂಪುದ್ವೀಪಗಳು ಮನುಷ್ಯನಿಗೆ ತಡವಾಗಿ ಸಿಕ್ಕಿದವು ಎನ್ನುವುದರಲ್ಲಿ ಒಂದು ವಿಚಿತ್ರ ವ್ಯಂಗ್ಯವಿದೆ. ಲಕ್ಷಾಂತರ ವರ್ಷಗಳಿಂದ ಇಲ್ಲಿ ಕಾಡು ಮತ್ತು ಕಡಲು ತನ್ನದೇ ಭಾಷೆಯಲ್ಲಿ ಉಸಿರಾಡುತ್ತಿತ್ತು. ಯಾವಾಗ ಮನುಷ್ಯ ಕಾಲಿಟ್ಟನೋ ಆ ಕ್ಷಣದಿಂದ ಅಲ್ಲಿಯ ಮೌನದೊಳಗೆ ಬೇರೆ ಅರ್ಥಗಳು ತುಂಬಲು ಆರಂಭವಾಯಿತು.ಈಗ ಆ ಅರ್ಥಗಳು ಪೂರ್ಣ ಪ್ರವಾಸದ ರೂಪ ತಾಳಿವೆ. ಹೊರ ಜಗತ್ತು ನಾವೇ ಸೃಷ್ಟಿಸಿಕೊಂಡ ಒತ್ತಡ, ತ್ರಿಶಂಕು ಸ್ಥಿತಿ, ಶಬ್ದ ಮಾಲಿನ್ಯಕ್ಕೆ ಒಳಗೊಳ್ಳುತ್ತಿದ್ದ ಹಾಗೆಯೇ ದೂರದ ಅಂಡಮಾನಿನ ದ್ವೀಪಗಳು ಅನೇಕರಿಗೆ ವಿರಾಮದ ಮನೆಗಳಾಗಿ ರೂಪಗೊಂಡಿವೆ. ಆದಿವಾಸಿಗಳನ್ನು ಬಿಟ್ಟು ಇಲ್ಲಿ ಇರುವವರಿಗೆಲ್ಲ ಬಹಳ ದೊಡ್ಡ ಇತಿಹಾಸವಿಲ್ಲ. ಇಷ್ಟರಲ್ಲೇ ಭೂಮಿಯ ಆಯಪಾಯವನ್ನು ಅವರು ತಮ್ಮ ಬದುಕಿನ ಮಾರ್ಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕಾಡು ಮತ್ತು ಕಡಲು ಈ ಎರಡೂ ಇಲ್ಲಿನ ಜನರಿಗೆ ಕೇವಲ ನಿಸರ್ಗ ದೃಶ್ಯವಲ್ಲ, ಆದಾಯದ ದಾರಿಗಳು. ಒಂದು ಕಡೆ ದಟ್ಟವಾದ ಕಾಡು, ಇನ್ನೊಂದು ಕಡೆ ಅಂತ್ಯವಿಲ್ಲದ ಸ್ಪಟಿಕ ಶುಭ್ರ ನೀಲಿ ಕಡಲು ಈ ಎರಡು ಅಂಚುಗಳ ಮಧ್ಯೆ ಹರಿಯುವ ಹೆದ್ದಾರಿ ನನಗೆ ಒಂದು ಸಂಕೇತದಂತೆ ಕಾಣುತ್ತದೆ. ಅದೇ ಹೆದ್ದಾರಿಯ ಎರಡೂ ಬದಿಯಲ್ಲಿ ನಿಂತಿರುವ ನೂರಾರು ರೆಸಾರ್ಟ್ಗಳು ಮನುಷ್ಯನ ಅನ್ನದಾರಿಯ ಹೊಸ ರೂಪಗಳು. ಕಾಡಿನ ಕಡೆ ಕುಟೀರ ಕಟ್ಟಿಕೊಂಡವರು ಪ್ರವಾಸಿಗರಿಗೆ ಕಾಡಿನ ಸುಖವನ್ನು ತೋರಿಸುತ್ತಾರೆ. ಕಡಲಿನ ಕಡೆ ಮನೆ ಕಟ್ಟಿಕೊಂಡವರು ಉಪ್ಪು ನೀರನ್ನು ಜೀವನ ದಾರಿಯನ್ನಾಗಿಸಿದ್ದಾರೆ. ಇಲ್ಲಿ ಕಾಡು ಕೇವಲ ಮರಗಳ ಗುಂಪಲ್ಲ, ಅದು ಹೊರಗಡೆಯಿಂದ ಬಂದವರಿಗೆ ಅನುಭವವಾಗುತ್ತದೆ. ಕಡಲು ಕೇವಲ ನೀರಿನ ವಿಸ್ತಾರವಲ್ಲ, ಅದು ಮನರಂಜನೆಯಾಗಿ ರೂಪಾಂತರಗೊಳ್ಳುತ್ತದೆ. ಒಂದು ಕಡೆ ನೀವು ಕಾಡನ್ನು ನೋಡುತ್ತೀರಿ ಸ್ವಚ್ಛ ಗಾಳಿ, ಪುಟ್ಟ ಜಲಪಾತಗಳು, ತೊರೆಗಳ ನಿನಾದ. ಮತ್ತೊಂದು ಕಡೆ ಕಡಲಿನೊಳಗೆ ಇಳಿದು ಚಿಪ್ಪುಗಳು, ಜಲಚರಗಳ ಲೋಕವನ್ನು ಕಣ್ಣು ತುಂಬಿಕೊಳ್ಳುತ್ತೀರಿ. ಈ ಎರಡರ ನಡುವೆ ಮನುಷ್ಯ ನಿರಂತರ ತನ್ನ ನೆಮ್ಮದಿಯನ್ನು ಹುಡುಕುತ್ತಾನೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಪ್ರಶ್ನೆ ಎದ್ದೆದ್ದು ಬರುತ್ತದೆ. ಇದು ಪ್ರಕೃತಿಯೊಂದಿಗೆ ಹೊಂದಾಣಿಕೆಯಾ ಅಥವಾ ಪ್ರಕೃತಿಯನ್ನು ರೂಪಾಂತರಗೊಳಿಸುವ ಒಂದು ಮೌನದ ಪ್ರಯತ್ನವಾ? ಮನುಷ್ಯ ಪ್ರವೇಶ ಅತಿಯಾಗಿ ಕಾಡು ಮತ್ತು ಕಡಲು ತನ್ನ ಸಹಜ ಸ್ವಭಾವವನ್ನು ಉಳಿಸಿಕೊಂಡಿದೆಯಾ ಅಥವಾ ಅದು ನಮ್ಮ ಮನರಂಜನೆಗೆ ತಕ್ಕಂತೆ ಮೃದುವಾಗಿಸಿಕೊಂಡಿದೆಯಾ? ಹೌದು, ಇಲ್ಲಿ ಬರುವ ಪ್ರತಿಯೊಬ್ಬ ಪ್ರವಾಸಿಗನು ಒಂದು ಕ್ಷಣ ತನ್ನನ್ನು ತಾನು ಮರೆತು ಪ್ರಕೃತಿಯೊಳಗೆ ಕರಗಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಯದಲ್ಲಿ, ಆ ಪ್ರಕೃತಿಯೇ ನಿಧಾನವಾಗಿ ಮನುಷ್ಯನ ಕೈಯಲ್ಲಿ ರೂಪಾಂತರಗೊಳ್ಳುತ್ತಿರುವುದನ್ನು ಗಮನಿಸಬೇಕು. ಹೀಗಾಗಿಯೇ, ಅಂಡಮಾನ್ ಕೇವಲ ವಿರಾಮದ ಮನೆ ಅಲ್ಲ. ಅದು ಮನುಷ್ಯ ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಮೌನ ಸಂಭಾಷಣೆ. ಒಂದು ಕಡೆ ಕಾಡು ತನ್ನದೇ ಭಾಷೆಯಲ್ಲಿ ಮಾತಾಡುತ್ತಿದೆಯಾದರೆ, ಇನ್ನೊಂದು ಕಡೆ ಕಡಲು ತನ್ನದೇ ಲಯದಲ್ಲಿ ಪ್ರತಿಕ್ರಿಯಿಸುತ್ತಿದೆ. ಈ ಎರಡರ ನಡುವೆ ನಿಂತಿರುವ ಮನುಷ್ಯ ತನ್ನ ಸುಖಕ್ಕಾಗಿ ಎಲ್ಲವನ್ನೂ ರೂಪಾಂತರಗೊಳಿಸುವವನೂ, ಅದೇ ಸಮಯದಲ್ಲಿ ಅದರಲ್ಲಿ ನೆಮ್ಮದಿಯನ್ನು ಹುಡುಕುವವನೂ ಆಗಿದ್ದಾನೆ. ಅಂಡಮಾನ್ಗೆ ಇನ್ನೊಂದು ಮುಖವಿದೆ. ಬೆಂಗಾಲಿಗಳು, ತಮಿಳಿಗರು, ಕೇರಳಿಗರು, ಆಂಧ್ರದ ರೆಡ್ಡಿಗಳು ಪ್ರತೀ ಸಮುದಾಯವೂ ಭಾಗಶಃ ತಮ್ಮ ತಮ್ಮ ನೆಲದಿಂದ ದೂರ ಬಂದು ಇಲ್ಲಿ ಒಂದು ಹೊಸ ನೆಲೆಯನ್ನೇ ಕಟ್ಟಿಕೊಂಡಿದ್ದರೂ ಅವರು ಕಟ್ಟಿಕೊಂಡಿದ್ದು ಕೇವಲ ಮನೆಗಳಲ್ಲ; ಒಂದು ದೃಷ್ಟಿ, ಒಂದು ಸಂಯಮ. ಇಲ್ಲಿ ಸುಸ್ಥಿರವಾಗಿ ನಿಲ್ಲಬೇಕು ಎಂದರೆ, ಪ್ರಕೃತಿಯನ್ನು ನೇರವಾಗಿ ಎದುರಿಸದೆ, ಅದರ ಜೊತೆ ಸೇರಿ ಬದುಕಬೇಕು ಎನ್ನುವ ಅಲ್ಪಾಂಶದ ಅರಿವು ಇವರಲ್ಲಿ ನಿಧಾನವಾಗಿ ಬೆಳೆದಿದೆ. ಪ್ರವಾಸೋದ್ಯಮವೇ ಬದುಕಿನ ದಾರಿ ಎನ್ನುವ ನಿರ್ಧಾರ ಮಾಡಿದ ಕ್ಷಣದಿಂದ, ಅದನ್ನು ಉಳಿಸುವ ಹೊಣೆಗಾರಿಕೆಯನ್ನು ಸಹ ಇವರೇ ಹೊತ್ತಿದ್ದಾರೆ. ಈ ನಡುವೆ ಮುಂದಿನ ತಲೆಮಾರು ಮತ್ತು ಹೊಸ ತಂತ್ರಜ್ಞಾನ ಇಲ್ಲಿ ಅಗಾಧಶಕ್ತಿಯ ಪ್ರಕೃತಿಯನ್ನು ಸುಸ್ಥಿರವಾಗಿ ಉಳಿಸುತ್ತದೆಯೇ ಎನ್ನುವುದು ದೊಡ್ಡ ಪ್ರಶ್ನೆ. ‘ನಾವು ಪ್ರಕೃತಿಯನ್ನು ಹಾಳು ಮಾಡಿದರೆ, ಅದು ನಮ್ಮ ಬದುಕಿನ ಬೇರುಗಳನ್ನು ಕತ್ತರಿಸುತ್ತದೆ’ ಎನ್ನುವ ಸರಳವಾದ, ಆದರೆ ಗಂಭೀರವಾದ ಅರಿವು ಈಗ ಇಲ್ಲಿ ಭಾಗಶಃ ರಸ್ತೆಗುಂಟ ಸ್ವಚ್ಛತೆಯಾಗಿ ಕಾಣುತ್ತದೆ. ಕೆಲವು ದ್ವೀಪಗಳಲ್ಲಿ ನಾನು ನಡೆದುಹೋಗುತ್ತಿದ್ದಾಗ ಗಮನಿಸಿದ ಒಂದು ಸಣ್ಣ ಸಂಗತಿ ರಸ್ತೆಯ ಎರಡೂ ಬದಿಯಲ್ಲಿ ಕಸದ ಗೂಡುಗಳಿಗಿಂತ, ಕಸ ಹಾಕದಿರುವ ಶಿಸ್ತೇ ಹೆಚ್ಚು ಗೋಚರಿಸಿತು. ಎಲ್ಲೂ ದೂಳು ಇಲ್ಲ. ಇದು ನಿಯಮದ ಭಯವಲ್ಲ, ಬದುಕಿನ ಅರಿವು. ಪ್ಲಾಸ್ಟಿಕ್ ಕಸದಿಂದ ತುಂಬಿದ ಕರಾವಳಿಗಳು ಪ್ರವಾಸಿಗರನ್ನು ದೂರ ತಳ್ಳುತ್ತವೆ ಎಂಬುದನ್ನು ಅವರು ಅನುಭವದಿಂದಲೇ ಕಲಿತಿದ್ದಾರೆ. ಕಾಡು-ಕಡಲನ್ನು ಹಂಚಿಕೊಂಡ ರೆಸಾರ್ಟ್ಗಳು ಕೂಡ ಇಲ್ಲಿ ಒಂದು ಬೇರೆ ರೀತಿಯ ಕಥೆ ಹೇಳುತ್ತವೆ. ಬಹುಮಹಡಿ ಕಾಂಕ್ರಿಟ್ ಕಟ್ಟಡಗಳ ಬದಲು, ಮರದ ಮನೆಗಳು, ಸಣ್ಣ ಸಣ್ಣ ಕಟ್ಟಡಗಳು ಅವು ಕಾಡಿನ ನಡುವೆ ಬೆರೆತು ಹೋಗುವಂತೆ ನಿರ್ಮಾಣಗೊಂಡಿವೆ. ಕಟ್ಟಡಕ್ಕೆ ಬೇಕಾಗುವ ವಸ್ತುಗಳು ಹೊರಗಡೆಯಿಂದಲೇ ಬರಬೇಕಾದ ಕಾರಣಕ್ಕಾಗಿ ಈಗ ಈ ಮಿತಿಗಳಿವೆ. ಬೀಚ್ ಬದಿಯನ್ನು ಚೊಕ್ಕಟವಾಗಿಡುವ ಅವರ ಪ್ರಯತ್ನದಲ್ಲಿ ಒಂದು ವ್ಯಾವಹಾರಿಕ ಬುದ್ಧಿ ಇದ್ದರೂ, ಅದರ ಒಳಹೊರತಿನಲ್ಲಿ ಪ್ರಕೃತಿಯ ಬಗ್ಗೆ ಇರುವ ಮೌನ ಗೌರವವೂ ಕಾಣುತ್ತದೆ. ಈವರೆಗೆ ಇಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನು ದೊಡ್ಡದಾಗಿ ತೋರಿಸಿಕೊಂಡಿಲ್ಲ; ಕಾಡಿನೊಳಗೆ ನಡೆಸುವ ಚಾರಣಗಳು, ಕಡಲಿನೊಳಗೆ ತೋರಿಸುವ ಜಲಚರಗಳ ಲೋಕ, ಆದಿವಾಸಿಗಳ ಮುಖಾಮುಖಿ ಇವು ಎಲ್ಲವೂ ಇಲ್ಲಿ ಕೇವಲ ಮನರಂಜನೆಯ ಸಾಧನಗಳಲ್ಲ, ಪ್ರಕೃತಿಯೊಂದಿಗೆ ಹೊಂದಾಣಿಕೆಯ ಒಂದು ರೀತಿಯ ಪಾಠಗಳು. ಇಲ್ಲೆಲ್ಲಾ ತನ್ನನ್ನು ಸ್ವಲ್ಪ ಸಣ್ಣದಾಗಿ ಮಾಡಿಕೊಂಡು ಪ್ರಕೃತಿಯೊಳಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಇಲ್ಲಿಯ ಕಡಲು ಇನ್ನೂ ಸ್ಪಟಿಕ ಶುಭ್ರವಾಗಿ ಉಳಿದಿದೆ. ಕಾಡಿನ ಬಹುಭಾಗ ನಿಬಿಡವಾಗಿದೆ. ಮನುಷ್ಯನ ಸ್ಪರ್ಶ ನಿಧಾನವಾಗಿ ಅವುಗಳೊಳಗೆ ಪ್ರವೇಶಿಸುತ್ತಿದೆ. ಆ ಸ್ಪರ್ಶ ಸೌಮ್ಯವಾಗಿರಬೇಕು, ಸಂಯಮಿತವಾಗಿರಬೇಕು ಎನ್ನುವ ಅರಿವು ಇಲ್ಲಿನ ಜನರಲ್ಲಿ ಕಾಣುವುದು ಈ ದ್ವೀಪಗಳ ಭವಿಷ್ಯಕ್ಕೆ ಒಂದು ಆಶೆಯಾಗಿದೆ. ದೇಶ ಯಾವುದು ಎಂಬುದು ಇಲ್ಲಿ ಮುಖ್ಯವಲ್ಲ; ಪ್ರಕೃತಿ ಯಾವ ಭಾಷೆಯಲ್ಲಿ ಮಾತನಾಡುತ್ತದೆ ಎಂಬುದೇ ಮುಖ್ಯ. ಬೆಟ್ಟಗಳು, ನದಿಗಳು, ಕಡಲುಗಳು ಇವುಗಳೆಲ್ಲ ಪ್ರಪಂಚದ ಯಾವ ಮೂಲೆಯಲ್ಲೂ ಒಂದೇ ಮಾತನ್ನು ಹೇಳುತ್ತವೆ: ‘‘ನನ್ನನ್ನು ಹಾಗೆಯೇ ಉಳಿಸು, ನಾನು ನಿನ್ನ ಬದುಕನ್ನು ಉಳಿಸುತ್ತೇನೆ’’ ಎಂದು. ಈ ಸರಳ ವಾಕ್ಯವನ್ನು ಮನುಷ್ಯ ಎಲ್ಲಿಯವರೆಗೆ ಅರ್ಥ ಮಾಡಿಕೊಂಡಿರುತ್ತಾರೋ, ಅಲ್ಲಿ ಪರಿಸರ ಪ್ರವಾಸೋದ್ಯಮ ಯಶಸ್ಸು ಕಾಣುತ್ತದೆ. ಪ್ರವಾಸಿಗನು ಯಾವ ದೇಶದಿಂದ ಬಂದವನಾಗಿರಲಿ, ಅವನು ಮೊದಲು ಹುಡುಕುವುದು ಸ್ವಚ್ಛತೆ, ಶಾಂತಿ ಮತ್ತು ಸ್ಪರ್ಶಿಸದಂತೆ ಉಳಿದಿರುವ ಪ್ರಕೃತಿ. ಆ ಅನುಭವವನ್ನು ಕೊಡಬಲ್ಲವರು ಅಲ್ಲಿ ಬದುಕುವ ಸ್ಥಳೀಯರು ಮಾತ್ರ. ಬೆಟ್ಟದ ಬುಡದಲ್ಲಿ ಕುಟೀರ ಕಟ್ಟಿಕೊಂಡವನಾಗಲೀ, ಕಡಲ ಕಿನಾರೆಯಲ್ಲಿ ರೆಸಾರ್ಟ್ ನಡೆಸುವವನಾಗಲೀ, ಕಾಡಿನ ಅಂಚಿನಲ್ಲಿ ಮಾರ್ಗದರ್ಶಕನಾಗಿರುವವನಾಗಲೀ ಅವರ ಕೈಯಲ್ಲೇ ಆ ಪ್ರದೇಶದ ಭವಿಷ್ಯ ಇದೆ. ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಈ ಸತ್ಯವು ನಿಧಾನವಾಗಿ, ಆದರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ಪ್ರಕೃತಿ ಕೇವಲ ಒಂದು ಸಂಪನ್ಮೂಲ ಅಲ್ಲ; ಅದು ಬದುಕಿನ ಮೂಲ. ಕಡಲನ್ನು ತೋರಿಸುವವನು ಮೊದಲು ಕಡಲನ್ನು ಕಾಪಾಡಿಕೊಳ್ಳಬೇಕು, ಕಾಡನ್ನು ತೋರಿಸುವವನು ಕಾಡಿನ ಉಸಿರನ್ನು ಕದಡುವಂತಾಗಬಾರದು. ಈ ಬದ್ಧತೆ ಇಲ್ಲದೆ, ಪ್ರವಾಸೋದ್ಯಮ ಕೇವಲ ಕ್ಷಣಿಕ ಆದಾಯವಾಗಬಹುದು; ದೀರ್ಘಕಾಲದ ಬದುಕಾಗಲು ಸಾಧ್ಯವಿಲ್ಲ. ನಾವು ಯಾವ ಕಾರಣಕ್ಕಾಗಿ ಪ್ರವಾಸೋದ್ಯಮವನ್ನು ಆರಂಭಿಸಿದ್ದೇವೋ, ಆ ಮೂಲ ಕಾರಣವನ್ನು ಮರೆಯುವ ಕ್ಷಣದಿಂದಲೇ ಕುಸಿತ ಆರಂಭವಾಗುತ್ತದೆ. ಪ್ರಕೃತಿಯನ್ನು ತೋರಿಸಲು ಆರಂಭಿಸಿದ ಉದ್ಯಮ, ಪ್ರಕೃತಿಯನ್ನು ನಾಶಮಾಡಲು ಆರಂಭಿಸಿದರೆ, ಅದು ತನ್ನದೇ ಪಾದವನ್ನು ಕಡಿದಂತಾಗುತ್ತದೆ. ಹೀಗಾಗಿಯೇ, ಪರಿಸರ ಪ್ರವಾಸೋದ್ಯಮ ಒಂದು ವ್ಯವಹಾರವಲ್ಲ-ಒಂದು ಸಂಸ್ಕಾರ. ಅದು ಸ್ಥಳೀಯರ ಮನಸ್ಸಿನಲ್ಲಿ ಹುಟ್ಟಬೇಕು, ಅವರ ನಡೆಗಳಲ್ಲಿ ಕಾಣಬೇಕು. ಅಂಡಮಾನ್ ನಿಕೋಬಾರ್ ದ್ವೀಪಗಳು ಭಾಗಶಃ ಇಂದು ಈ ಸಂಸ್ಕಾರದ ಒಂದು ಪಾಠಶಾಲೆಯಂತೆ ಕಾಣುತ್ತಿವೆ. ಈ ಕಾರಣದಿಂದಾಗಿಯೇ ನನಗೆ ಇಡೀ ಅಂಡಮಾನ್ನಲ್ಲಿ ಹೆಚ್ಚು ಪೊಲೀಸರು ಕಾಣಿಸಲಿಲ್ಲ. ಅಲ್ಲಿ ಪ್ರತಿದಿನ ದೂರದ ನಗರ, ದೇಶಗಳಿಂದ ವಿಮಾನ ಮತ್ತು ಹಡಗಿನಲ್ಲಿ ಬಂದು ರಾಶಿ ಬೀಳುವ ಪ್ರವಾಸಿ ಜನರ ಮುಂದೆ ಸ್ಥಳೀಯ ಜನ ಒಂದು ದೊಡ್ಡ ಪಾಠವನ್ನು ಕಲಿಯಬೇಕು. ಪ್ರಕೃತಿಯನ್ನು ಕಾಪಾಡುವುದು ಎಂದರೆ, ತಮ್ಮ ಬದುಕನ್ನು ಕಾಪಾಡಿಕೊಳ್ಳುವುದೇ ಎಂದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನಕ್ಷೆಯಲ್ಲಿ ನೋಡಿದರೆ, ಅವು ಭಾರತದಿಂದ ದೂರ ಸರಿದು ನಿಂತಿರುವ ಚಿಕ್ಕ ಚಿಕ್ಕ ಬಿಂದುಗಳಂತೆ ಕಾಣುತ್ತವೆ. ಆದರೆ ಆ ಬಿಂದುಗಳೊಳಗೆ ಒಂದು ದೊಡ್ಡ ಭೂಗೋಳ, ಒಂದು ಮೌನ ಇತಿಹಾಸ ಮತ್ತು ಒಂದು ಸಂಕೀರ್ಣ ಮಾನವಕಥೆ ಅಡಗಿದೆ. ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ, ಮ್ಯಾನ್ಮಾರ್ ಮತ್ತು ಇಂಡೋನೇಶ್ಯಕ್ಕೆ ಹತ್ತಿರವಾಗಿ ಹಬ್ಬಿಕೊಂಡಿರುವ ಈ ದ್ವೀಪಸಮೂಹ, ಸುಮಾರು ಐನೂರಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವೇ ದ್ವೀಪಗಳಲ್ಲಿ ಮನುಷ್ಯನ ಹೆಜ್ಜೆ ಗುರುತು ಇದೆ; ಉಳಿದವುಗಳು ಇನ್ನೂ ಕಾಡಿನ ಉಸಿರಿನಲ್ಲೇ ಜೀವಿಸುತ್ತಿವೆ. ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳು ಪೋರ್ಟ್ ಬ್ಲೇರ್ನ ಸೆಲ್ಲ್ಯುಲರ್ ಜೈಲು, ಹೇವ್ಲಾಕ್ (ಸ್ವರಾಜ್ ದ್ವೀಪ) ದ್ವೀಪದ ರಾಧಾನಗರ ಬೀಚ್, ನೀಲ್ ದ್ವೀಪದ ನಿಶ್ಶಬ್ದ ಕಡಲುತೀರಗಳು, ನ್ಯಾಚುರಲ್ ಬ್ರಿಡ್ಜ್, ಲೈಮ್ಸ್ಟೋನ್ ಗುಹೆಗಳು ಇವೆಲ್ಲವೂ ಕೇವಲ ದೃಶ್ಯಗಳಲ್ಲ, ಅನುಭವಗಳಾಗಿವೆ. ಪ್ರತೀ ಸ್ಥಳವೂ ತನ್ನದೇ ಕಥೆಯನ್ನು ಹೇಳುತ್ತದೆ. ಕೆಲವೆಡೆ ಇತಿಹಾಸದ ನೋವು, ಕೆಲವೆಡೆ ಪ್ರಕೃತಿಯ ಮೌನ, ಇನ್ನೂ ಕೆಲವೆಡೆ ಮನುಷ್ಯನ ಸಂಯಮ ಎಲ್ಲ ಸೇರಿ ಈ ದ್ವೀಪಗಳ ರೂಪವನ್ನು ಕಟ್ಟುತ್ತವೆ. ಬಹಳಷ್ಟು ಜನರಿಗೆ ಅಂಡಮಾನ್ ಎಂದರೆ ಇನ್ನೂ ಕೂಡ ಒಂದು ಚಿತ್ರ ಮಾತ್ರ-ಕಟ್ಟುನಿಟ್ಟಿನ ಗೋಡೆಗಳೊಳಗೆ ಸಿಲುಕಿದ ಸೆಲ್ಯುಲರ್ ಜೈಲ್. ಇತಿಹಾಸದ ಭಾರದಿಂದ ತುಂಬಿದ ಆ ಜಾಗವೇ ಅಂಡಮಾನ್ನ ಸಂಪೂರ್ಣ ರೂಪ ಎಂದುಕೊಳ್ಳುವ ಸರಳ ಕಲ್ಪನೆ. ಆದರೆ ವರ್ಷದಿಂದ ವರ್ಷಕ್ಕೆ, ಆ ಕಲ್ಪನೆಯ ಅಂಚುಗಳನ್ನು ಮೀರಿ ಅಂಡಮಾನ್ ತನ್ನ ಹಸಿರು ರೆಕ್ಕೆಗಳನ್ನು ನಿಧಾನವಾಗಿ ಬಿಚ್ಚಿಕೊಳ್ಳುತ್ತಿದೆ. ಅದು ಕೇವಲ ಒಂದೇ ದ್ವೀಪದ ಕಥೆಯಲ್ಲ; ನೂರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚದುರಿರುವ ಪುಟ್ಟ ಪುಟ್ಟ ಹಸಿರು ದ್ವೀಪಗಳ ಕಥೆ. ಇವತ್ತು ಮನುಷ್ಯನ ಕಾಲು ಅಲ್ಲಿ ಮುಟ್ಟುತ್ತಿದೆ. ಅದರ ಜೊತೆಗೇ, ರೆಸಾರ್ಟ್ಗಳು, ಹೊಸ ಪ್ಯಾಕೇಜುಗಳು, ಮೋಜುಮಸ್ತಿಯ ಆವಿಷ್ಕಾರಗಳು ಕೂಡ ಅಲ್ಲಿ ಬೇರು ಬಿಡುತ್ತಿವೆ. ಒಮ್ಮೆ ಜೈಲನ್ನು ನೋಡಲು ಬಂದು ಹಿಂದಿರುಗುತ್ತಿದ್ದ ಪ್ರವಾಸಿಗರು, ಇವತ್ತು ಒಂದು ದ್ವೀಪಕ್ಕೆ ಸೀಮಿತವಾಗದೆ ಮತ್ತೊಂದು ದ್ವೀಪದತ್ತ ಕಣ್ಣು ಹಾಯಿಸುತ್ತಿದ್ದಾರೆ. ಕಡಲ ತೀರದಲ್ಲಿ ಮೌನವಾಗಿ ಕುಳಿತುಕೊಳ್ಳುವುದಕ್ಕೂ, ನೀರಿನ ಮೇಲಿನ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದಕ್ಕೂ, ಅಡಗಿರುವ ಸಣ್ಣ ಪ್ರಕೃತಿಯ ವಿಸ್ಮಯಗಳನ್ನು ಹುಡುಕುವುದಕ್ಕೂ ಅವರು ಹೆಚ್ಚು ದಿನಗಳನ್ನು ಮೀಸಲಿಡುತ್ತಿದ್ದಾರೆ. ಮೊದಮೊದಲು ಈ ಬದಲಾವಣೆ ಸಣ್ಣದಾಗಿ ಕಾಣಬಹುದು, ಆದರೆ ಅದರ ಹಿಂದೆ ಒಂದು ದೊಡ್ಡ ಚಲನೆ ಇದೆ. ಎರಡು ದಿನಗಳಲ್ಲಿ ಮುಗಿಯುತ್ತಿದ್ದ ಪ್ರವಾಸ ಇವತ್ತು ದ್ವೀಪದಿಂದ ದ್ವೀಪಕ್ಕೆ ವಿಸ್ತರಿಸುತ್ತಿದೆ. ಪೆರಿಗಳು, ದೋಣಿಗಳು, ಹೊಸ ಹೊಸ ಮಾರ್ಗಗಳು ಎಲ್ಲವೂ ಪ್ರವಾಸಿಗರನ್ನು ಇನ್ನಷ್ಟು ಒಳಗೆ, ಇನ್ನಷ್ಟು ದೂರಕ್ಕೆ ಕರೆದೊಯ್ಯಲು ಹಾತೊರೆಯುತ್ತಿವೆ. ಆದರೆ ಇದೇ ಜಾಗದಲ್ಲಿ ಒಂದು ಸೂಕ್ಷ್ಮವಾದ ಪ್ರಶ್ನೆ ಮೂಡುತ್ತದೆ. ಈ ವಿಸ್ತರಣೆ ಯಾವ ದಿಕ್ಕಿಗೆ ಸಾಗುತ್ತಿದೆ? ಇಂದಿಗೂ ಮನುಷ್ಯನ ಹೆಜ್ಜೆ ತಟ್ಟದ ನಿರ್ಜನ, ನಿಬಿಡ ಅರಣ್ಯಗಳು ಇನ್ನೂ ಉಳಿದಿವೆ. ಅವು ಕೇವಲ ಕಾಡುಗಳಲ್ಲ-ಪರಿಸರದ ಸಮತೋಲನವನ್ನು ಹಿಡಿದು ನಿಲ್ಲಿಸುವ ನಿಶ್ಶಬ್ದ ಖಜಾನೆಗಳು. ಆದರೆ ಈ ಪ್ರವಾಸೋದ್ಯಮದ ವೇಗ ಇದೇ ರೀತಿ ಮುಂದುವರಿದರೆ, ಇನ್ನೂ 25-50 ವರ್ಷಗಳಲ್ಲಿ ಅಂಡಮಾನ್ನ ಆ ಮೌನವೂ ಮುರಿಯಬಹುದು. ಸರಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹಾಕದೆ ಇದ್ದರೆ, ಇವತ್ತಿನ ಅಪರೂಪದ ಎನ್ನುವ ಪದ ನಾಳೆ ಸಾಮಾನ್ಯವಾಗಬಹುದು. ದುರ್ಗಮ ಕಾಡುಗಳು, ಮನುಷ್ಯ ಮುಟ್ಟದ ಕಡಲ ತೀರಗಳು ಇವೆಲ್ಲವೂ ನಿಧಾನವಾಗಿ ಮನುಷ್ಯನ ಪ್ರವೇಶಕ್ಕೆ ತೆರೆದುಕೊಳ್ಳಬಹುದು. ಅದರ ಜೊತೆಗೆ, ನಾವು ಯಾವತ್ತೂ ತಪ್ಪಿಸಿಕೊಳ್ಳಲಾಗದ ಒಂದು ನೆರಳು ಮಾಲಿನ್ಯ ಅಲ್ಲಿಯೂ ನೆಲೆಸಬಹುದು. ಕಾಡು ಮತ್ತು ಕಡಲಿನ ನಡುವೆ ಇರುವ ಈ ಸಮತೋಲನ ಬಹಳ ನಾಜೂಕು. ಅದು ಕೇವಲ ದೃಶ್ಯವಲ್ಲ, ಒಂದು ಜೀವಂತ ಸಮೀಕರಣ. ಅದನ್ನು ನಾವು ಪ್ರವಾಸದ ಹೆಸರಿನಲ್ಲಿ ನಿಧಾನವಾಗಿ ಬದಲಾಯಿಸುತ್ತಿದ್ದೇವೆ ಎಂಬ ಅರಿವು ನಮ್ಮೊಳಗೆ ಮೂಡದಿದ್ದರೆ, ಅಂಡಮಾನ್ ಕೂಡ ಬೇರೆ ಪ್ರವಾಸಿ ಸ್ಥಳಗಳಂತೆಯೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ದಿನ ದೂರದಲ್ಲಿಲ್ಲ. ಹೀಗಾಗಿ, ಅಂಡಮಾನ್ ನೋಡಬೇಕೆಂದರೆ ಕೇವಲ ಕಣ್ಣುಗಳಿಂದ ಅಲ್ಲ, ಒಂದು ಜವಾಬ್ದಾರಿಯ ಮನಸ್ಸಿನಿಂದ ನೋಡಬೇಕು. ಇಲ್ಲವಾದರೆ, ನಾವು ನೋಡಲು ಹೊರಟ ಪ್ರಕೃತಿಯೇ ನಮ್ಮಿಂದ ಅಳಿದುಹೋಗುವ ಸಾಧ್ಯತೆ ಇದೆ. ಅಂಡಮಾನಿನ ಮಣ್ಣು ಸಾಮಾನ್ಯ ಮಣ್ಣು ಅಲ್ಲ; ಅದು ಕಾಲದ ನಿಧಾನ ಉಸಿರು. ಲಕ್ಷಾಂತರ ವರ್ಷಗಳಿಂದ ಮರಗಳು ಉದುರಿಸಿದ ತರಗೆಲೆ, ಬಿದ್ದ ಮರ,ಕೊಂಬೆ ತ್ಯಾಜ್ಯಗಳು, ಬಾನಾಡಿ ಕಾಡಾಡಿಗಳ ಮಲಮೂತ್ರ ಎಲ್ಲವೂ ಸೇರಿ ಒಂದು ಜೀವಂತ ಹಾಸಿಗೆಯನ್ನೇ ಅಲ್ಲಿ ಹಾಸಿವೆ. ಆ ಮಣ್ಣಿನ ಒಂದು ಹಿಡಿ ಕೈಗೆತ್ತಿಕೊಂಡರೆ, ಅದರಲ್ಲಿ ಎಷ್ಟು ಜೀವಶಕ್ತಿ ಇರುತ್ತದೆ ಎಂಬುದನ್ನು ಅಳೆಯಲು ನಮ್ಮ ಅಂಕೆಗಳು ಸಾಲುವುದಿಲ್ಲ. ಅದು ಕೇವಲ ಮಣ್ಣು ಅಲ್ಲ; ಅದೊಂದು ಅತ್ಯಪೂರ್ವ ಹಸಿರು ನಿಧಿ. ಕಾಡಿನ ಅಂಚಿನಲ್ಲಿ ಕೃಷಿಗೆ ಸಜ್ಜಾಗುವುದು ಪ್ರಕೃತಿಯ ಸಹಜ ವಿಸ್ತರಣೆ. ಆದರೆ ಅದೇ ಅಂಚು ಮೀರಿದಾಗ, ಪ್ರವಾಸೋದ್ಯಮದ ಹೆಸರಿನಲ್ಲಿ ಹೊಸಹೊಸ ಆವಿಷ್ಕಾರಗಳು ಕಾಡಿನ ಒಳಗಡೆ ನುಗ್ಗಲಾರಂಭಿಸಿದಾಗ, ಸಮಸ್ಯೆ ಶುರುವಾಗುತ್ತದೆ. ನಿಧಾನವಾಗಿ, ಅಜಾಗರೂಕವಾಗಿ, ಕಾಡಿನ ಕಡಲಿನ ಮೌನವನ್ನು ಕತ್ತರಿಸುತ್ತಾ ಒಳನುಗ್ಗುವ ಮಾನವ ಹೆಜ್ಜೆಗಳು ಅನೇಕ ಜೀವ ವೈವಿಧ್ಯಗಳನ್ನು ಅಳಿಸಿಬಿಡುವ ಶಕ್ತಿಯನ್ನು ಹೊತ್ತಿವೆ. ಈ ಕಡಲ ಮಧ್ಯೆ ಹರಡಿಕೊಂಡಿರುವ ಹಸಿರು ತುಂಡುಗಳು ಕೇವಲ ದ್ವೀಪಗಳಲ್ಲ; ಅವು ಪ್ರಪಂಚದ ಉಸಿರಿನ ತುಣುಕುಗಳು. ಅವು ನಾಶವಾದರೆ ಅದು ಭಾರತಕ್ಕೆ ಮಾತ್ರ ನಷ್ಟವಲ್ಲ ಈ ಭೂಮಿಯನ್ನೇ ಉಸಿರಾಡಿಸುವ ಶಕ್ತಿಗೆ ಆಗುವ ಗಾಯ. ಪ್ರಕೃತಿಯೊಳಗೆ ನಾವು ಅತಿಥಿಗಳೆಂಬ ಸತ್ಯವನ್ನು ಮರೆಯುವ ಕ್ಷಣದಲ್ಲೇ, ಈ ಹಸಿರು ಮೌನ ನಮ್ಮಿಂದ ದೂರವಾಗುವ ಆರಂಭವಾಗುತ್ತದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್ನಲ್ಲಿ ಅಮೆರಿಕಾ-ಇರಾನ್ ನಡುವೆ ನಡೆದ ಮಾತುಕತೆಗಳು ವಿಫಲವಾಗಿದೆ. ಈ ಕುರಿತು ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ತಿಳಿಸಿದ್ದು, ಅಮೆರಿಕಾ ನೀಡಿದ ಷರತ್ತುಗಳನ್ನು ಟೆಹ್ರಾನ್ ತಿರಸ್ಕರಿಸಿದೆ ಎಂದಿದ್ದಾರೆ. ಇನ್ನು ಈ ಮಾತುಕತೆಗಳಲ್ಲಿ ಅಮೆರಿಕಾದ ಪ್ರಮುಖ ಗುರಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು, ಮಾತುಕತೆಗಳಿಗೆ ಕುರಿತು ಇರಾನ್ ಸಹ ಹೇಳಿಕೆ ನೀಡಿದ್ದು, ಅಮೆರಿಕಾದ ಅತಿಯಾದ ಬೇಡಿಕೆ ಹಾಗೂ ಕಾನೂನುಬಾಹಿರ ವಿನಂತಿಯಿಂದಾಗಿ ಒಪ್ಪಂದವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಬ್ಬ ಮನುಷ್ಯನೊಳಗೂ ಒಂದು ಮನಸ್ಸು ಇರುತ್ತದೆ. ಅದು ನಾಜೂಕಾಗಿರುವುದೋ, ಸಂಕೀರ್ಣವಾಗಿರುವುದೋ, ಜಡವಾಗಿರುವುದೋ, ಕಠೋರವಾಗಿರುವುದೋ ಅಥವಾ ಅತ್ಯಂತ ಸಂವೇದನಾಶೀಲವಾಗಿರುವುದೋ. ಒಟ್ಟಿನಲ್ಲಿ ಒಂದೋ ಅಥವಾ ಹಲವು ರೀತಿಗಳ ಬೆರಕೆಯಾಗಿಯೋ ಇರುತ್ತದೆ. ಈ ಮನಸ್ಸು ಸ್ವಭಾವತಃ ಒಳ್ಳೆಯದೂ ಅಲ್ಲ, ಕೆಟ್ಟದೂ ಅಲ್ಲ. ಅದು ಕೇವಲ ಅಭ್ಯಾಸವಿಲ್ಲದ ಮನಸ್ಸು. ವ್ಯಕ್ತಿಯ ಬಾಲ್ಯದ ಅನುಭವಗಳು, ಪೋಷಕರ ನಡತೆ, ಸಾಮಾಜಿಕ ಮಾದರಿ, ಆರ್ಥಿಕ ಒತ್ತಡಗಳು, ನರಸಂಬಂಧಿ ಸ್ಥಿತಿಗಳು ಮತ್ತು ಆನುವಂಶಿಕ ಪ್ರಭಾವಗಳು; ಈ ಎಲ್ಲವೂ ಮನಸ್ಸಿನ ರೂಪವನ್ನು ಕೊಡುತ್ತವೆ. ಒಬ್ಬನು ಒಳ್ಳೆಯದನ್ನು ಮಾಡುತ್ತಿದ್ದರೆ, ಅದು ತರಬೇತಿ ಪಡೆದ ಮನಸ್ಸಿನ ಅಭಿವ್ಯಕ್ತಿ. ಅದೇ ಒಬ್ಬನು ಹಾನಿ ಮಾಡುತ್ತಿದ್ದರೆ, ತೊಂದರೆ ಕೊಡುತ್ತಿದ್ದರೆ, ಅದು ತರಬೇತಿ ಪಡೆಯದ ಮನಸ್ಸಿನ ಪ್ರತಿಕ್ರಿಯೆಯಾಗಿರುತ್ತದೆ. ನೋವು, ನಿರ್ಲಕ್ಷ್ಯ ಅಥವಾ ದಿಕ್ಕುತೋಚದ ಪರಿಸ್ಥಿತಿಗಳಿಂದ ರೂಪುಗೊಂಡಿರುವ ಮನಸ್ಸು ಅದಾಗಿರುತ್ತದೆ. ಹೀಗಾಗಿ, ನಾವು ಯಾರನ್ನಾದರೂ ಕೆಟ್ಟವನು ಎಂದು ಹೇಳುವುದು ಅವನ ಮನಸ್ಸಿನ ಒಂದು ಭಾಗವನ್ನು ಅಥವಾ ಪ್ರತಿಫಲನವನ್ನು ನೋಡಿ ಹಣೆಪಟ್ಟೆ ಕಟ್ಟಿ ತೀರ್ಪು ಕೊಡುತ್ತಿದ್ದೇವೆಂದು ಅರ್ಥ. ಕೆಟ್ಟತನವೆಂದರೆ ಪ್ರೇಮವನ್ನು ಕಲಿಯದ ಮನಸ್ಸಿನ ನೋವು. ಮನೋವೈಚಾರಿಕ ದೃಷ್ಟಿಕೋನದಿಂದ ದಂಡನೆಯನ್ನು ಮೀರಿ ವಿಶ್ಲೇಷಣಾತ್ಮಕವಾಗಿ ನೋಡಿದರೆ, ಒಳ್ಳೆಯವರು, ಕೆಟ್ಟವರು ಇಲ್ಲ; ತರಬೇತಿ ಪಡೆದ ಮತ್ತು ಪಡೆಯದ ಮನಸ್ಸುಗಳೇ ಇವೆ ಎಂದು ಸ್ಪಷ್ಟವಾಗಿ ಹೇಳಬಹುದು. ಇಲ್ಲಿ ಅಪರಾಧ ಅಥವಾ ಪಾಪಪ್ರಜ್ಞೆಯನ್ನು ನಿರಾಕರಿಸುತ್ತಿಲ್ಲ. ಆದರೆ ಪ್ರತಿ ವಿನಾಶಕಾರಿ ಕ್ರಿಯೆಯ ಹಿಂದೆ ಒಂದು ಮಾನಸಿಕ ಅಥವಾ ಭಾವನಾತ್ಮಕ ಅಸ್ವಸ್ಥತೆ ಅಡಗಿದೆ ಎಂಬ ಅರಿವು ಬೇಕಿದೆ. ಮನೋವೈಜ್ಞಾನಿಕ ಮತ್ತು ಮನಶಾಸ್ತ್ರೀಯ ದೃಷ್ಟಿಕೋನದಿಂದ ನೋಡುವಾಗ ನ್ಯಾಯಾಲಯ ಅಥವಾ ಸಮಾಜದಂತೆ ಆರೋಪ ಮಾಡಲಾಗುವುದಿಲ್ಲ. ಬದಲಿಗೆ ಅದರ ಹಿಂದಿನ ಕಾರಣವನ್ನು ಅರಿಯುವವರಾಗಿರುತ್ತೇವೆ. ನ್ಯಾಯಾಧೀಶರು ಶಿಕ್ಷೆಯನ್ನು ನಿರ್ಧರಿಸಬಹುದು, ಆದರೆ ಮನೋವೈದ್ಯರು ನೋವನ್ನು ಪರಿಹರಿಸುತ್ತಾರೆ. ಯಾವುದೇ ಅಪರಾಧಿಯನ್ನು ಅವರು ಸಮಾಜದ ಶತ್ರುವೆಂದು ನೋಡಲಾಗುವುದಿಲ್ಲ. ಅವನನ್ನು ಅವರು ಮನಸ್ಸಿನ ರೋಗಿಯೆಂದು ಮಾತ್ರ ಕಾಣುತ್ತಾರೆ. ಅಪರಾಧಿ ಎಂಬುವನು ತನ್ನೊಳಗಿನ ಅಸಮತೋಲನ, ನೋವು ಅಥವಾ ತಪ್ಪು ಮಾರ್ಗದರ್ಶನದಿಂದ ದಿಕ್ಕು ಕಳೆದುಕೊಂಡಿರುವ ವ್ಯಕ್ತಿ. ಮನೋವೈದ್ಯರಿಗೆ ಅಪರಾಧವೆಂದರೆ ಲಕ್ಷಣ. ಅಪರಾಧಿಗೆ ಕೊಡುವ ದಂಡನೆ ಚಿಕಿತ್ಸೆ ಆಗುವುದಿಲ್ಲ. ಚಿಕಿತ್ಸೆ, ಕರುಣೆ, ಅರಿವು ಮತ್ತು ಪುನರ್ಶಿಕ್ಷಣದ ಮೂಲಕ ಮಾತ್ರ ಅವರು ಗುಣಮುಖರಾಗಲು ಸಾಧ್ಯ. ಇಲ್ಲಿ ಸಮಾಜ ಮತ್ತು ನ್ಯಾಯದ ಪಾತ್ರವನ್ನೂ ನಿರಾಕರಿಸುವಂತಿಲ್ಲ. ಸಮಾಜಕ್ಕೆ ಕಾನೂನು ಮತ್ತು ಶಿಸ್ತು ಅಗತ್ಯ. ನ್ಯಾಯಾಂಗವು ನಿರಪರಾಧಿಯನ್ನು ರಕ್ಷಿಸಬೇಕು. ಆದರೆ ನ್ಯಾಯವೆಂದರೆ ಪ್ರತೀಕಾರವಲ್ಲ. ಅದು ಪುನರ್ನಿರ್ಮಾಣದ ಪ್ರಕ್ರಿಯೆಯಾಗಬೇಕು. ಕಾನೂನು ಹೊರಗಿನ ಕ್ರಿಯೆಯನ್ನು ತಿದ್ದುತ್ತದೆ. ಮನೋವೈದ್ಯರು ಮತ್ತು ಆಪ್ತ ಸಮಾಲೋಚಕರು ಮಾಡುವ ಮಾನಸಿಕ ಮಾರ್ಗದರ್ಶನ ಒಳಗಿನ ಚಿಂತನೆಗೆ ದಾರಿ ತೋರಿಸುತ್ತದೆ. ಒಬ್ಬರನ್ನು ಶಿಕ್ಷಿಸುವುದರಿಂದ ಅವರ ಮನಸ್ಸು ಬದಲಾಗುವುದಿಲ್ಲ. ಅವರ ನೋವನ್ನು ಅರಿಯದೆ ಶಿಕ್ಷೆ ಕೊಟ್ಟರೆ, ಅದು ಮತ್ತಷ್ಟು ವಿರೋಧ ಮತ್ತು ಹಗೆತನ ಉಂಟಾಗುತ್ತದೆ. ನಿಜವಾದ ಸಾಮಾಜಿಕ ಸುರಕ್ಷತೆ ಎಂದರೆ ಜೈಲುಗಳನ್ನು ಕಟ್ಟುವುದಲ್ಲ. ಮನಸ್ಸುಗಳನ್ನು ಕಟ್ಟುವುದು. ಅಪರಾಧಿಗಳನ್ನು ಶಿಕ್ಷಿಸುವ ಸಮಾಜ ಹೊಸ ಅಪರಾಧಿಗಳನ್ನು ಸೃಷ್ಟಿಸುತ್ತದೆ. ಆದರೆ ಮನಸ್ಸುಗಳಿಗೆ ತರಬೇತಿ ನೀಡುವ ಸಮಾಜ ಮುಂದೆ ಒಂದು ದಿನ ಜೈಲುಗಳ ಅಗತ್ಯವನ್ನೇ ಕಳೆದುಕೊಳ್ಳುತ್ತದೆ. ಆಧುನಿಕ ಮನೋವಿಜ್ಞಾನ ಮತ್ತು ನರಶಾಸ್ತ್ರವು ಈ ದೃಷ್ಟಿಕೋನವನ್ನು ಬೆಂಬಲಿಸುತ್ತವೆ. ಆಘಾತ ಸಿದ್ಧಾಂತ (Trauma Theory): ಬಾಲ್ಯದಲ್ಲಿ ಹಿಂಸೆ ಅಥವಾ ನಿರ್ಲಕ್ಷ್ಯ ಅನುಭವಿಸಿದ ಮಕ್ಕಳು ಮುಂದಿನ ಜೀವನದಲ್ಲಿ ಹೆಚ್ಚು ಸಮಾಜ ವಿರೋಧಿ ವರ್ತನೆ ತೋರುತ್ತಾರೆ. ನರಜೈವಿಕತೆ (Neurobiology): ಒತ್ತಡದಿಂದ ಮಿದುಳಿನ ನಿಯಂತ್ರಣ ಭಾಗ ಕುಗ್ಗಿ, ತುರ್ತು ನಿರ್ಧಾರಗಳ ಅಥವಾ ಹಠಾತ್ ವರ್ತನೆಗಳ ಮೇಲೆ ಪ್ರಭಾವ ಬೀರುತ್ತದೆ. ಬ್ಯಾಂಡುರಾ ಸಾಮಾಜಿಕ ಅಧ್ಯಯನ ಸಿದ್ಧಾಂತ (Social Learning Theory): ಹಿಂಸೆಯ ಮೂಲಗಳಿಂದ ಕಲಿಯಲ್ಪಡುವ ವರ್ತನೆ, ಸಹವಾಸಗಳ ಅನುಭವದಿಂದ ಬದಲಾಗುವ ವರ್ತನೆ ಅಲ್ಲ. ಹೀಗಾಗಿ ಅಪರಾಧವೆಂದರೆ ಕೆಟ್ಟತನದ ಅಥವಾ ಅನೈತಿಕತೆಯ ಬೆಳವಣಿಗೆ ಅಲ್ಲ, ಅದು ಶಿಕ್ಷಣದ, ಪ್ರೇಮದ ಮತ್ತು ಅರಿವಿನ ಕೊರತೆಯ ಫಲ. ಮನುಷ್ಯನ ಮನಸ್ಸನ್ನು ದಯೆ ಮತ್ತು ಅರಿವಿನ ಶಿಕ್ಷಣ ನೀಡಿದಾಗ ಮಾತ್ರ, ನಿಜವಾದ ನೈತಿಕತೆ ಸಾಧ್ಯ. ದಂಡನೆ ಎಂಬುದು ಭಯದಿಂದ ವ್ಯಕ್ತಿಯ ವರ್ತನೆಯನ್ನು ಬದಲಿಸುತ್ತದೆ. ಆದರೆ ಶಿಕ್ಷಣ ಅರಿವಿನಿಂದ ಬದಲಿಸುತ್ತದೆ. ಕರುಣೆ ಪ್ರೇಮದಿಂದ ಬದಲಿಸುತ್ತದೆ. ಶಿಕ್ಷೆಯಿಂದ ಕರುಣೆಯ ಹಾದಿ ಹಿಡಿದ ಸಮಾಜವೇ ನಿಜವಾದ ನಾಗರಿಕ ಸಮಾಜ. ಕರುಣೆ ಎಂದರೆ ವ್ಯವಸ್ಥೆಯ ಬಲಹೀನತೆ ಅಲ್ಲ. ಅದು ಅಪರಾಧಿಗಳನ್ನು ಬಿಡುವುದೋ ಅಥವಾ ಬಲಿಪಶುಗಳನ್ನು ನಿರ್ಲಕ್ಷ್ಯ ಮಾಡುವುದೂ ಅಲ್ಲ. ಅದು ಇಬ್ಬರನ್ನೂ ಅಪರಾಧಿ ಮತ್ತು ಬಲಿಪಶು ಅಥವಾ ಪೀಡಿತರು; ನೋವಿನ ಎರಡು ಬದಿಗಳಂತೆ ಕಾಣುವುದು. ನ್ಯಾಯಾಲಯದ ಕೆಲಸ ಕಾನೂನಿನ ಶಿಸ್ತು ಕಾಯುವುದಾದರೆ, ಸಮಾಲೋಚಕನ ಕೆಲಸ ಮನುಷ್ಯನ ಮನಸ್ಸಿನ ಶಾಂತಿ ಕಾಯುವುದು.
Gold Rate Today: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ
Gold Silver Price Today: ದೇಶೀಯ ಚಿನ್ನದ ಬೆಲೆ ಏರಿಕೆ ಕಂಡರೆ, ಬೆಳ್ಳಿ ಇತ್ತೀಚಿನ ಗರಿಷ್ಠ ಮಟ್ಟ ತಲುಪಿದರೂ ಇದೀಗ ಸ್ಥಿರವಾಗಿದೆ. ದುರ್ಬಲ ಡಾಲರ್, ಕಡಿಮೆ ಕಚ್ಚಾ ತೈಲ ಬೆಲೆಗಳು ಹಾಗೂ ಇನ್ನಿತರ ಅಂಶಗಳಿಂದ ಲೋಹಗಳ ಬೆಲೆಯಲ್ಲಿ ಆಶಾವಾದ ಏರಿಕೆ ಆಗಿದೆ. ಜೊತೆಗೆ, ಪ್ರಾದೇಶಿಕ ಬೇಡಿಕೆ ಮತ್ತು ತಯಾರಿಕಾ ಶುಲ್ಕಗಳೂ ಸಹ ಪ್ರಮುಖ ಕೇಂದ್ರಗಳಲ್ಲಿ ಬೆಲೆಗಳ ಮೇಲೆ
ಯಡ್ರಾಮಿ | ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಸರಾಗ, ವಾಣಿಜ್ಯ ಬಳಕೆಗೆ ಸವಾಲು
ಯಡ್ರಾಮಿ: ಕೊಲ್ಲಿ ಯುದ್ಧದ ಬಿಸಿ ಅವಳಿ ತಾಲೂಕು ಗಳಿಗೂ ತಟ್ಟಲು ಶುರುವಾಗಿದ್ದು, ಜೇವರ್ಗಿ, ಯಡ್ರಾಮಿ ತಾಲೂಕುಗಳಲ್ಲಿ ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಸ್ವಲ್ಪ ಮಟ್ಟಿಗೆ ಸರಾಗವಾಗಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಸುವಲ್ಲಿ ತೊಂದರೆ ಉಂಟಾಗಿದೆ. ಯುದ್ಧ ಶುರುವಾದ ಕಾರಣ ಎಲ್ಪಿಜಿ ಸಿಲಿಂಡರ್ ದೊರೆಯುವುದಿಲ್ಲ ಎಂಬ ವದಂತಿ ಹಿನ್ನೆಲೆಯಲ್ಲಿ ಜನ ಮುಗಿಬೀಳುತ್ತಿರುವುದು ಕಂಡು ಬಂದಿದ್ದು ಬುಕಿಂಗ್ ಭರಾಟೆಯೂ ಜೋರಾಗಿ ನಡೆದಿದೆ. ಅವಳಿ ತಾಲೂಕಿನಲ್ಲಿರುವ ಸರಕಾರಿ ಸ್ವಾಮ್ಯ ಹಾಗೂ ಖಾಸಗಿ ಗ್ಯಾಸ್ ಏಜೆನ್ಸಿಗಳಿಂದ ಸಿಲಿಂಡರ್ಗಳು ಪೂರೈಕೆ ಯಾಗುತ್ತವೆ. ದೇಶದ ನಾನಾ ಭಾಗಗಳಲ್ಲಿರುವ ಗ್ಯಾಸ್ ರೀಫಿಲ್ಲಿಂಗ್ ಘಟಕಗಳಿಂದ ಇಲ್ಲಿಗೆ ಸಿಲಿಂಡರ್ ಬಂದು ತಲುಪುತ್ತಿದ್ದು, ಜನ ಗೃಹಬಳಕೆ ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ. ಯಡ್ರಾಮಿ ಪಟ್ಟಣದ ಏಜೆನ್ಸಿಯೊಂದರಲ್ಲಿ ಪ್ರತಿ ದಿನ 80ರಷ್ಟು ಸಿಲಿಂಡರ್ ಬುಕ್ ಮಾಡಲಾಗುತ್ತಿತ್ತು. ಆದರೆ ಸದ್ಯ ಸುಮಾರು 200ರಷ್ಟು ಸಿಲಿಂಡರ್ ಬುಕ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಅಲಭ್ಯವಾದರೆ ಎಂಬ ಭೀತಿಯಲ್ಲಿ ಜನ ಸಿಲಿಂಡರ್ ಕಾಯ್ದಿಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಕೆಲವರು ಸಿಲಿಂಡರ್ ಖಾಲಿ ಇಲ್ಲದಿದ್ದರೂ ಬುಕ್ ಮಾಡುತ್ತಿರುವ ಉದಾಹರಣೆಗಳಿವೆ. ಸರಕಾರಿ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿ ಗಳ ಪ್ರಕಾರ ಗೃಹಬಳಕೆ ಸಿಲಿಂಡರ್ಗಳ ಕೊರತೆ ಕಂಡು ಬಂದಿಲ್ಲ. ಕಳೆದ 30 ದಿನಗಳಿಂದ ಸಿಲಿಂಡರ್ ಪೂರೈಕೆಯಾಗುತ್ತಿವೆ. ಗೃಹಬಳಕೆ ಸಿಲಿಂಡರ್ಗಳ ಜತೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೇಡಿಕೆ ಕಳುಹಿಸಿಕೊಡಲಾಗುತ್ತದೆ. ಆದರೆ ಕೇಂದ್ರ ಸರಕಾರ ಗೃಹ ಬಳಕೆ ಸಿಲಿಂಡರ್ ಗಳ ನಿಯಮಿತ ಪೂರೈಕೆಗೆ ಆದೇಶಿಸಿದೆ. ಹೀಗಾಗಿ ಸಿಲಿಂಡರ್ ಪೂರೈಕೆ ಸರಾಗವಾಗಿದೆ. ಆದರೆ ಬೇಡಿಕೆ ಹೆಚ್ಚಾದ ಕಾರಣ ಪೂರೈಕೆ ಕಡಿಮೆಯಾಗಿ ಕೆಲವೆಡೆ ನಿಗದಿತ ದಿನಗಳಂದು ಗ್ರಾಹಕರಿಗೆ ತಲುಪುತ್ತಿಲ್ಲ. ಸಿಲಿಂಡರ್ ಬಗ್ಗೆ ಇನ್ನಿಲ್ಲದ ಗೊಂದಲಕ್ಕೆ ಒಳಗಾಗಿ ಏಜೆನ್ಸಿಗಳ ಮುಂದೆ ಜನರು ಮುಗಿಬೀಳುತ್ತಿದ್ದಾರೆ. ಸದ್ಯಕ್ಕೆ ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಅಂತಹ ಸಮಸ್ಯೆ ಇಲ್ಲ. ಆದರೆ ವಾಣಿಜ್ಯ ಸಿಲಿಂಡರ್ ಪೂರೈಕೆ ಅಷ್ಟೊಂದು ಸರಿ ಇಲ್ಲ. -ಸಾಹಿಲ್, ಗ್ಯಾಸ್ ಏಜೆನ್ಸಿ ಸಿಬ್ಬಂದಿ, ಯಡ್ರಾಮಿ ಗ್ಯಾಸ್ ಬಂದಿದ್ದರಿಂದ ಸೌದೆ ಒಲೆ ಮರೆತಿದ್ದೆವು. ಈಗ ಹೋಟೆಲ್ಗಳಂತೆ ನಾಳೆ ಮನೆಗೂ ಗ್ಯಾಸ್ ಪೂರೈಕೆ ನಿಲ್ಲುತ್ತದೆಯೇ ಎಂಬ ಭಯವಿದೆ. -ಸೋನಾಬಾಯಿ ಚವ್ಹಾಣ, ಗೃಹಿಣಿ ಗ್ರಾಹಕರನ್ನು ಉಳಿಸಿಕೊಳ್ಳಲು ಸೌದೆ ಒಲೆ ಹಚ್ಚುತ್ತಿದ್ದೇವೆ. ಆದರೆ ಅಡುಗೆ ಭಟ್ಟರು ಒಪ್ಪುತ್ತಿಲ್ಲ ಆದರೂ ಅನಿವಾರ್ಯವಾಗಿಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದೇವೆ. -ಬಸವರಾಜ, ಹೋಟೆಲ್ ಮಾಲಕರು. ನಾಗರಹಳ್ಳಿ
ಬೀದಿ ನಾಯಿಗಳ ಹಾವಳಿ: ಬೈಕ್ ಸವಾರರಿಗೆ ಸಂಕಟ
ಕನಕಗಿರಿಯಲ್ಲಿ ನಿಲ್ಲದ ಶ್ವಾನಗಳ ಕಾಟ

30 C