ಕುಂಬಳೆ| ಆರಿಕ್ಕಾಡಿ ಟೋಲ್ಗೇಟ್ ವಿರುದ್ಧ ಪ್ರತಿಭಟನೆ: ಟೋಲ್, ರಸ್ತೆ ಬಂದ್ ಮಾಡಿ ಆಕ್ರೋಶ
ಕಾಸರಗೋಡು: ಕುಂಬಳೆ ಆರಿಕ್ಕಾಡಿ ಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ಧದ ಹೋರಾಟ ಹಿಂಸಾತ್ಮಕ ರೂಪು ಪಡೆದಿದ್ದು, ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಹಾಗೂ ಗಾಜು ಪುಡಿ ಗೈದ ಘಟನೆ ಬುಧವಾರ ರಾತ್ರಿ ನಡೆದಿದೆ. ಹೋರಾಟಕ್ಕೆ ಬೆಂಬಲ ವಾಗಿ ಕುಂಬಳೆ ಪೇಟೆಯಿಂದ ಬಂದ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಗಳನ್ನು ಧ್ವಂಸ ಗೊಳಿಸಿದ್ದು, ಕಚೇರಿ ಗಾಜುಗಳನ್ನು ಹಾನಿ ಗೊಳಿಸಿದ್ದಾರೆ. ವಾಹನಗಳನ್ನು ತಡೆಯುವ ಟೋಲ್ ಬೂತ್ ನ ಹ್ಯಾಂಡಲ್ ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ. ಸ್ಕ್ಯಾನರ್ ಗಳಿಗೆ ಕಪ್ಪು ಸ್ಟಿಕ್ಕರ್ ಲಗತ್ತಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿದೆ. ಹಲವು ಯುವಜನ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕಚೇರಿಯೊಳಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದರು. ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೋಮವಾರ ದಿಂದ ಪೊಲೀಸರು ಟೋಲ್ ಗೇಟ್ ಗೆ ಭದ್ರತೆ ಕಲ್ಪಿಸಿದ್ದು, ಈ ನಡುವೆ ಬುಧವಾರ ರಾತ್ರಿ ನಡೆದ ಪ್ರತಿಭಟನಾ ಜಾಥಾ ದಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾ ಕರಾರು ಪಾಲ್ಗೊಂಡರು. ಇದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತೆ ಮಾಡಿತು. ಘಟನೆ ಬಳಿಕ ವಾಹನ ಗಳು ಟೋಲ್ ಶುಲ್ಕ ಇಲ್ಲದೆ ಸಂಚಾರ ನಡೆಸುತ್ತಿದೆ. ಟೋಲ್ ಶುಲ್ಕ ವಿರುದ್ಧ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ನೇತೃತ್ವದ ಲ್ಲಿ ಬುಧವಾರ ಸಂಜೆ ನಡೆದ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ವಿಫಲಗೊಂಡಿತ್ತು. ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ರವರ ಸಮ್ಮುಖದಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಆದರೆ ಪ್ರಕರಣ ಹೈಕೋರ್ಟ್ ವಿಚಾರಣೆ ಯಲ್ಲಿರುವುದರಿಂದ ಅಂತಿಮ ತೀರ್ಮಾನ ಹೊರಬೀಳುವ ತನಕ ಟೋಲ್ ಶುಲ್ಕ ವಸೂಲಿ ಸ್ಥಗಿತಗೊಳಿವಂತೆ ಶಾಸಕ ಅಶ್ರಫ್ ಒತ್ತಾಯಿಸಿದ್ದರು ಸೋಮವಾರ ಬೆಳಿಗ್ಗೆಯಿಂದ ಟೋಲ್ ಶುಲ್ಕ ವಸೂಲು ವಿರುದ್ಧ ಹೋರಾಟ ನಡೆಯುತ್ತಿದ್ದು, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಮೆರವಣಿಗೆ ನಡೆಸಿವೆ. ಈ ನಡುವೆ ಬುಧವಾರ ರಾತ್ರಿ ಯುವಜನ ಪಕ್ಷಗಳು ನಡೆಸಿದ ಪ್ರತಿಭಟನಾ ಜಾಥಾ ತೀವ್ರ ಸ್ವರೂಪ ಪಡೆದುಕೊಂಡಿದೆ. ಶುಲ್ಕ ವಸೂಲು ರದ್ದುಗೊಳಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.
ಶಾಲಾ-ಕಾಲೇಜುಗಳಲ್ಲಿ ಪತ್ರಿಕೆ ಓದು ಕಡ್ಡಾಯಗೊಳಿಸಲು ಸೂಕ್ತ ಕ್ರಮ : ಕೆ.ವಿ.ಪ್ರಭಾಕರ್
ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಓದುವುದು ಮತ್ತು ನೋಟೀಸ್ ಬೋರ್ಡ್ನಲ್ಲಿ ಹಾಕುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ಆದೇಶ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ. ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ.ಮದನಗೌಡ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದೆ ಶಾಲಾ ಕಾಲೇಜಿನಲ್ಲಿ ಪತ್ರಿಕೆಗಳನ್ನು ಓದುವ ಅಭ್ಯಾಸ ಇದ್ದಂತೆ ಈಗಲೂ ಮುಂದುವರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದರು. ಉತ್ತರ ಪ್ರದೇಶ ಸರಕಾರವು, ಆ ರಾಜ್ಯದ ಸರಕಾರಿ ಶಾಲೆಗಳಲ್ಲಿ ಪತ್ರಿಕೆ ಓದಿಸುವ ಮತ್ತು ನೋಟೀಸ್ ಬೋರ್ಡ್ನಲ್ಲಿ ಹಾಕುವುದನ್ನು ಕಡ್ಡಾಯ ಮಾಡಿರುವಂತೆ ರಾಜ್ಯದಲ್ಲಿಯೂ ಮಾಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮನವಿ ಮಾಡಿತ್ತು. ಪಠ್ಯ ಪುಸ್ತಕದಲ್ಲಿ ಪತ್ರಿಕೆಗಳ ವಿಷಯವನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಈ ಬಗ್ಗೆ ತಜ್ಞರ ಜೊತೆಗೆ ಅಧ್ಯಯನ ಮಾಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.
America And Iran: ಆಂತರಿಕ ಹಿಂಸಾಚಾರ ನಡುವೆ ಅಮೆರಿಕ ದಾಳಿ ಭೀತಿ, ಇರಾನ್ ಸೇನೆಗೆ ನಡುಕ
ಇರಾನ್ ನೆಲದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದ್ದು, ಭಾರಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಪ್ರತಿಭಟನೆ ಕೈಮೀರಿ ಹೋಗಿರುವ ಕಾರಣಕ್ಕೆ ಕಠಿಣ ಮಾರ್ಗಗಳನ್ನು ಅನುಸರಿಸುತ್ತಾ ಇದೀಗ ಹಿಂಸೆಗೆ ತಡೆ ಹಾಕಲು ಮುಂದಾಗಿದೆ ಇರಾನ್ ಸರ್ಕಾರ. ಇಂತಹ ಸಮಯದಲ್ಲೇ ಅಮೆರಿಕದ ಕಡೆಯಿಂದ ಕೂಡ ದಾಳಿಯ ಭೀತಿ ಎದುರಾಗಿದೆ. ಹೀಗಿದ್ದಾಗಲೇ ಇರಾನ್ ಸೇನೆ ಅಲರ್ಟ್ ಆಗಿದ್ದು, ಈ ಹೊತ್ತಲ್ಲಿ ದಿಢೀರ್ ಹೊರಗಿನಿಂದ
ಉಕ್ರೇನ್ಗೆ ಭರ್ಜರಿ ಸಾಲ, 90 ಬಿಲಿಯನ್ ಯುರೋ ಕೊಡಲು ಯುರೋಪಿಯನ್ ಒಕ್ಕೂಟ ಒಪ್ಪಿಗೆ!
ಉಕ್ರೇನ್ ಇದೀಗ ರಷ್ಯಾ ಜೊತೆಗಿನ ಯುದ್ಧದಲ್ಲಿ ಭಾರಿ ಒದ್ದಾಡುತ್ತಾ ಇದ್ದು, ಕೈಯಲ್ಲಿ ಕಾಸು ಇಲ್ಲ ಎಂಬ ಕಾರಣಕ್ಕೆ ನರಳುತ್ತಿದೆ. ಒಂದು ಕಡೆ ರಷ್ಯಾ ಸೇನೆ ಉಕ್ರೇನ್ನ ಭಾಗಶಃ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದ್ದು, ಇನ್ನೊಂದು ಕಡೆ ಯುದ್ಧ ಮಾಡಲು ಸರಿಯಾದ ಅಸ್ತ್ರಗಳು ಇಲ್ಲದೆ ನರಳುತ್ತಿರುವ ಉಕ್ರೇನ್ ಸೈನಿಕರು ಪ್ರಾಣ ಬಿಡುತ್ತಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್ ಜನರಿಗೆ ಸರಿಯಾಗಿ
ಬಸವಣ್ಣ ಅವರ ಹೆಸರಿನಲ್ಲಿ ಹೊಸ ಉದ್ಯಾನ ನಿರ್ಮಾಣ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಬಸವಣ್ಣ ಅವರ ಹೆಸರಿನಲ್ಲಿ ಲಾಲ್ಬಾಗ್ ಮಾದರಿ ಉದ್ಯಾನ ನಿರ್ಮಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಇದೇ ಮಾದರಿ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ತೋಟಗಾರಿಕೆ ಇಲಾಖೆಯ ವತಿಯಿಂದ ನಗರದ ಲಾಲ್ಬಾಗ್ನಲ್ಲಿ ಆಯೋಜಿಸಿದ ತೇಜಸ್ವಿ ವಿಸ್ಮಯ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು-ಬರಹ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಉದ್ಯಾನ ನಗರಿ ಎಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ. ಹೀಗಾಗಿ ಈ ಉದ್ಯಾನಗಳ ನಿರ್ಮಾಣಕ್ಕೆ ಜಿಬಿಎ, ಪಾಲಿಕೆ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದೇನೆ. ನಾನು ನಗರದ ಪಾರ್ಕ್ಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ನೋಡಿ, ಜನರ ಅಭಿಪ್ರಾಯ ಪಡೆದು ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸೂಚಿಸಿದ್ದೇನೆ. ನಮ್ಮ ರಾಜ್ಯದಿಂದ ಹೊರ ದೇಶಗಳಿಗೆ ಪ್ರತಿ ವಾರ 17 ವಿಮಾನದಷ್ಟು ಹೂ, ತರಕಾರಿ ರಫ್ತಾಗುತ್ತಿದೆ. ಅಂತರ್ರಾಷ್ಟ್ರೀಯ ಮಟ್ಟದ ಹೂ, ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು. ಮೆಟ್ರೋ ಹಾಗೂ ಸುರಂಗದಿಂದ ಲಾಲ್ಬಾಗ್ಗೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕಾರಣ ಮಾಡಿದ್ದಾರೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಈ ಐತಿಹಾಸಿಕ ಉದ್ಯಾನ ಕಾಪಾಡಲು ಬೇರೆಯವರಿಗಿಂತ ಹೆಚ್ಚಿನ ಆಸಕ್ತಿ ನನಗಿದೆ. ನಾಗರೀಕರ ಸೌಲಭ್ಯಕ್ಕೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೆಂಗಳೂರು ನಗರದ ಜನಸಂಖ್ಯೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಬೇಕಾಗಿದೆ. ಎಲ್ಲಾ ಪಾರ್ಕ್ ಹಾಗೂ ಕೆರೆ ಉಳಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಗತ್ಯ ಕ್ರಮವನ್ನು ನಮ್ಮ ಸರಕಾರ ಕೈಗೊಳ್ಳುತ್ತಿದೆ ಎಂದು ಶಿವಕುಮಾರ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ವಿರುದ್ಧದ ಅವಾಚ್ಯ ಶಬ್ಧ ಬಳಸಿರುವ ಬಗ್ಗೆ ಮಾತನಾಡಿ, ‘ಲಾಲ್ಬಾಗ್ ಪವಿತ್ರವಾದ ಜಾಗ, ಇಲ್ಲಿ ಅಂತಹ ವಿಚಾರ ಚರ್ಚೆ ಬೇಡ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಪ್ಪು ಮಾಡಿದವರು ಕ್ಷಮೆ ಕೇಳಬೇಕು ಎಂದು ಸೂಚಿಸುತ್ತೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡಿದ ಆರೋಪ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಎಫ್ಐಆರ್
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎಂಎಲ್ಸಿ ಜಗದೇವ ಗುತ್ತೇದಾರ್ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಶಕುಂತಲಾ ನಟರಾಜ್ ಹಾಗೂ ಬಿಜೆಪಿ ಕರ್ನಾಟಕ ಫೇಸ್ಬುಕ್ ಹಾಗೂ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಲಾಗಿದೆ. ಯಾದಗಿರಿ ಕ್ರೀಡಾಂಗಣ ಸರಿಪಡಿಸಿ ಎಂದು ಕೇಳಿಕೊಂಡಿದ್ದಕ್ಕೆ ರಾಷ್ಟ್ರ ಮಟ್ಟದ ಕ್ರೀಡಾಪಟುವಿನ ಮೇಲೆ ಕೇಸ್ ಹಾಕಿಸಿದ ಮಹಾನುಭಾವ ಪ್ರಿಯಾಂಕ್ ಖರ್ಗೆ ಎಂದು ಬರೆದು ಸಚಿವರ ವಿರುದ್ಧ ದ್ವೇಷ ಪ್ರಚೋದಿಸಿದ್ದಾರೆ. ಇದಲ್ಲದೆ ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ ಎಂದು ಜಗದೇವ್ ಗುತ್ತೇದಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಯಕರ್ತೆ ಪದ್ಮ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರಸ್ತೆಯಲ್ಲಿ ಪತ್ತೆ ಮಾಡಿದರು. ಅವರು ಅದನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು. ಈ ಚಿನ್ನಾಭರಣಗಳು ನಂಗನಲ್ಲೂರು ನಿವಾಸಿ ರಮೇಶ್ ಅವರಿಗೆ ಸೇರಿದ್ದವು. ಪದ್ಮ ಅವರ ಪ್ರಾಮಾಣಿಕತೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ₹1 ಲಕ್ಷ ಬಹುಮಾನ ನೀಡಿ ಸನ್ಮಾನಿಸಿದರು. ಇದು ಜನವರಿ 13, 2026 ರಂದು ಪ್ರಕಟವಾಯಿತು.
West Bengal | ಇಬ್ಬರು ನರ್ಸ್ ಗಳಿಗೆ ನಿಫಾ ವೈರಸ್ ಪಾಸಿಟಿವ್
ಕೋಲ್ಕತಾ, ಜ. 14: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್ ಗಳ ಮಾದರಿಗಳು ನಿಫಾ ವೈರಸ್ ಪಾಸಿಟಿವ್ ಆಗಿವೆ ಎಂಬುದು ಏಮ್ಸ್ ಕಲ್ಯಾಣಿಯ ವರದಿಯಲ್ಲಿ ತಿಳಿದುಬಂದಿತ್ತು. ನಂತರ ಮರುದೃಢೀಕರಣಕ್ಕಾಗಿ ಅವರ ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಪ್ರಸ್ತುತ ಇಬ್ಬರು ನರ್ಸ್ಗಳು ತಾವು ಕೆಲಸ ಮಾಡುತ್ತಿರುವ ಬರಾಸತ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಇಬ್ಬರು ನರ್ಸ್ ಗಳ ನಿಕಟ ಸಂಪರ್ಕಕ್ಕೆ ಬಂದ 120ಕ್ಕೂ ಅಧಿಕ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದೆ. ನಿಫಾ ವೈರಸ್ ಪಾಸಿಟಿವ್ ದೃಢಪಟ್ಟ ಇಬ್ಬರು ನರ್ಸ್ ಗಳಲ್ಲಿ ಒಬ್ಬರು ಮಹಿಳೆ ಹಾಗೂ ಮತ್ತೊಬ್ಬರು ಪುರುಷರು. ನಿಕಟ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಮುಂದುವರಿದಿದೆ. ನರ್ಸ್ಗಳ ಕುಟುಂಬ ಸದಸ್ಯರು ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ಇದುವರೆಗೆ ಸಂಪರ್ಕಕ್ಕೆ ಬಂದ 120 ಮಂದಿಯನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಕತ್ವಾದ 10 ಮಂದಿ ಹಾಗೂ 8 ವೈದ್ಯರು ಸೇರಿದಂತೆ ಬರ್ದ್ವಾನದ 38 ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Bengaluru | ದಂಪತಿಗೆ ಚಾಕು ತೋರಿಸಿ 1 ಲಕ್ಷ ರೂ.ಸುಲಿಗೆ; ಮೂವರ ಬಂಧನ
ಬೆಂಗಳೂರು : ಆಟೋರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ಅವರ ಬಳಿಯಿದ್ದ 1 ಲಕ್ಷ ರೂ.ನಗದು ಹಾಗೂ ಚಿನ್ನದುಂಗುರ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯ ವಲಗೇರಹಳ್ಳಿ ನಿವಾಸಿ ಸಿದ್ದಗಂಗಯ್ಯ ಎಂಬುವರು ನೀಡಿದ ದೂರಿನನ್ವಯ ಆರೋಪಿಗಳಾದ ಸುರೇಶ್, ಶಶಿಕುಮಾರ್ ಹಾಗೂ ಅಖಿಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.22ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಗಳ ಮನೆಗೆ ಆಟೋದಲ್ಲಿ ಹೋಗುವಾಗ ಮಾರ್ಗ ಮಧ್ಯೆ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿದ್ದರು. ಈ ವೇಳೆ, ದೂರುದಾರರ ಪತ್ನಿ ವ್ಯಾನಿಟಿ ಬ್ಯಾಗ್ನಲ್ಲಿದ್ದ 1 ಲಕ್ಷ ರೂ. ನಗದು ಹಾಗೂ ಎರಡೂವರೆ ಗ್ರಾಂ ಚಿನ್ನದುಂಗುರವನ್ನು ಸುಲಿಗೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಹಿಂದೆಯೇ ಕೊಲೆ, ದರೋಡೆ, ಹಲ್ಲೆ, ಕಳ್ಳತನ, ಸುಲಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತರ ಪೈಕಿ ಅಖಿಲ್, ಅಪರಾಧ ಕೃತ್ಯವೆಸಗುವಾಗ ಅಪ್ರಾಪ್ತನಾಗಿದ್ದರಿಂದ ಬಾಲಮಂದಿರದ ಸುಪರ್ದಿಗೆ ಪೊಲೀಸರು ಒಪ್ಪಿಸಿದ್ದರು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಇನ್ನಿತರ ಆರೋಪಿಗಳೊಂದಿಗೆ ಸೇರಿಕೊಂಡು ಮತ್ತೆ ಅಪರಾಧ ಕೃತ್ಯ ಎಸಗುವ ಪ್ರವೃತ್ತಿ ಮುಂದುವರೆಸಿದ್ದ ಎನ್ನಲಾಗಿದೆ. ಸದ್ಯ, ಈ ಮೂವರು ಆರೋಪಿಗಳು ಕೆಂಗೇರಿ, ಮಾದನಾಯಕನಹಳ್ಳಿ, ಪೀಣ್ಯ, ನಂದಿನಿ ಲೇಔಟ್, ಹಲಸೂರು, ಬ್ಯಾಡರಹಳ್ಳಿ ಹಾಗೂ ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸುಲಿಗೆ ಹಾಗೂ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ಎರಡು ಆಟೋ, ಮೂರು ದ್ವಿಚಕ್ರ ವಾಹನ, ಬೆಳ್ಳಿಯ ಸರ, ಕಡಗಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
Strike: ಸಾರಿಗೆ ಮುಷ್ಕರ ಎಚ್ಚರಿಕೆ ನೀಡಿದ ಬಿಜೆಪಿ: ₹224 ಕೋಟಿ ಪಾವತಿಸಿದ್ದೇವೆ ಎಂದ ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನೌಕರರ 38 ತಿಂಗಳ ಹಿಂಬಾಕಿ ವೇತನ ನೀಡಬೇಕಿದೆ. ಶಕ್ತಿ ಯೋಜನೆ ಜಾರಿ ಬಳಿಕವು ಸಾರಿಗೆ ಇಲಾಖೆ ಲಾಭದಲ್ಲಿದ್ದಿದ್ದೇ ಆದಲ್ಲಿ ನಿವೃತ್ತ ನೌಕರರ ಬಾಕಿ ಹಣವನ್ನು ನೀಡುತ್ತಿಲ್ಲವೇಕೆ?. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವ ಪರಿಸ್ಥಿತಿದೆ ಇದೆ ಎಂದು ಬಿಜೆಪಿ ಪ್ರಸ್ತಾಪಿಸಿದೆ. ಇದಕ್ಕೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿ
ಟೆನ್ಶನ್ನಲ್ಲಿ ಜೈಶಂಕರ್ಗೆ ಫೋನ್ ಮಾಡಿದ ಇರಾನ್ ವಿದೇಶಾಂಗ ಸಚಿವ; ಭಾರತದ ಸಲಹೆ ಆಲಿಸಿದ ಅಬ್ಬಾಸ್
ಇರಾನ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕೆಲಸವಾಗಿದೆ. ಈ ಮಧ್ಯೆ ಇರಾನ್ನ ವಿದೇಶಾಂಗ ಸಚಿವ ಸೈಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಅಸಹಜ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ವಿಜಯನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರು ಬದಲಾಯಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೊಸಪೇಟೆಯ ಅಮರಾವತಿ ಪ್ರವಾಸಿ ಮಂದಿರದ ಎದುರು ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಈ ಮಹತ್ವದ ಯೋಜನೆಗೆ ಯುಪಿಎ ಸರಕಾರ ನೀಡಿದ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ನಾಯಕರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೀರಾಜ್ ಶೇಕ್ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ರಾಜ್ಯದ ಪ್ರಭಾವಿ ನಾಯಕರು, ಜಿಲ್ಲಾ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಸಂಸದರಾದ ಇ. ತುಕಾರಾಂ, ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್. ಗಣೇಶ್, ಶ್ರೀಮತಿ ಲತಾ ಮಲ್ಲಿಕಾರ್ಜುನ ಭಾಗವಹಿಸಿದರು.
ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ: ಜನಪ್ರತಿನಿಧಿಗಳ ಗೈರು ಖಂಡಿಸಿ ಪ್ರತಿಭಟನೆ
ರಾಯಚೂರು; 12ನೇ ಶತಮಾನದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಚನಕಾರರಲ್ಲಿ ಪ್ರಮುಖರಾದ ಶಿವಯೋಗಿ ಸಿದ್ಧರಾಮೇಶ್ವರ ಅವರ ಜಯಂತಿಯನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಚರಣೆ ಮಾಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಸೇರಿದಂತೆ ಇತರೆ ಗಣ್ಯರು ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಸಿಪಿಐಗಳಾದ ಉಮೇಶ ಕಾಂಬಳೆ, ನಾಗರಾಜ್ ಮೇಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೈರಾಗಿರುವುದರಿಂದ ಬೋವಿ ಸಮಾಜದ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಮಾತ್ರ ಏಕೆ ಅಧಿಕಾರಿಗಳು ಗೈರಾಗುತ್ತಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಬೋವಿ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ; ಮಾಜಿ ಸಚಿವ ಬಿ.ನಾಗೇಂದ್ರಗೆ ನಿರೀಕ್ಷಣಾ ಜಾಮೀನು
ಬೆಂಗಳೂರು : ಮಾಜಿ ಸಚಿವ ಬಿ.ನಾಗೇಂದ್ರ ಅವರು ಹಲವು ಹಣ ದುರ್ಬಳಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ಸರಕಾರಿ ಮತ್ತು ಖಾಸಗಿ ವ್ಯಕ್ತಿಗಳ ನೆರವಿನಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ಟೆಂಡರ್ ಪ್ರಕ್ರಿಯೆ ತಿರುಚಿ ತಮಗೆ ಬೇಕಾದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ಲಂಚ ಸ್ವೀಕರಿಸಿದ ಆರೋಪ ಕುರಿತು ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದಾರೆ. ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಬಂಧಿಸಿದರೆ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು. ಆರೋಪಿಯು ಪ್ರಾಸಿಕ್ಯೂಷನ್ ಸಾಕ್ಷಿಯನ್ನು ಬೆದರಿಸಬಾರದು ಅಥವಾ ತಿರುಚಬಾರದು. ಇಂದಿನಿಂದ 15 ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಿ, ತನಿಖೆಗೆ ಸಹಕರಿಸಬೇಕು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಪೂರ್ವಾನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು. ಸಿಬಿಐ ಅಂತಿಮ ವರದಿ ಸಲ್ಲಿಸುವವರೆಗೆ ಅಥವಾ ಮುಂದಿನ 3 ತಿಂಗಳವರೆಗೆ ತಿಂಗಳ ಎರಡನೇ ಶನಿವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತನಿಖಾಧಿಕಾರಿಯ ಮುಂದೆ ಹಾಜರಿರಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಆದೇಶದಲ್ಲೇನಿದೆ? ವಾಲ್ಮೀಕಿ ನಿಗಮದ ಹಣವನ್ನು ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ವರ್ಗಾಯಿಸಲಾಗಿದ್ದು, ಅದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಲಾಗಿದೆ. ಸಿಬಿಐನ ಈ ವಾದವನ್ನು ಒಪ್ಪಿಕೊಳ್ಳುವುದಾದರೆ ಹಣ ವರ್ಗಾವಣೆಯ ಹೆಣಿಗೆ ಮತ್ತು ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುವ ಸೂಚನೆ ನೀಡುತ್ತಿದೆ. ಹೀಗಾದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಾಲ್ಮೀಕಿ ನಿಗಮದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲಿಸಿರುವ ಪ್ರಕರಣದ ಕುರಿತು ಉತ್ತರಿಸಬೇಕಿದೆ. ಆದರೆ, ಆಕ್ಷೇಪಣೆ ಹೊರತುಪಡಿಸಿ, ಸಿಬಿಐ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಕೆಜಿಟಿಟಿಐ ಟೆಂಡರ್ ಅನ್ನು ಸರ್ಕಾರದ ಪೋರ್ಟಲ್ ಮೂಲಕ ಕರೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ಮತ್ತು ಟೆಂಡರ್ ಅನುಷ್ಠಾನವಾಗಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಇ-ಆಡಳಿತ ಪರಿಶೀಲನೆಯ ಬಳಿಕ ಟೆಂಡರ್ ಹಣ ಬಿಡುಗಡೆ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ಏಕೆ ಮತ್ತೆ ತನಿಖೆ ನಡೆಸಬೇಕು ಎಂಬುದಕ್ಕೆ ಸಿಬಿಐ ಉತ್ತರಿಸಬೇಕಿದೆ ಎಂದು ಕೋರ್ಟ್ ಹೇಳಿದೆ. ಸಿಬಿಐ ತನಿಖಾ ವ್ಯಾಪ್ತಿ ಮತ್ತು ಹಂದರ ವಿಭಿನ್ನವಾಗಿದ್ದು, ವಾಲ್ಮೀಕಿ ನಿಗಮದ ಹಣ ಮತ್ತು ಇತರೆ ಹಣ ಎಲ್ಲಿ ಹೋಗಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಯಾವ ರೀತಿಯಲ್ಲಿ ಅಪರಾಧ ಪ್ರಕ್ರಿಯೆ ನಡೆದಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಇದನ್ನು ಪೂರಕ ದಾಖಲೆಗಳೊಂದಿಗೆ ಸಿಬಿಐ ಸಮರ್ಥಿಸಿಲ್ಲ. ತನಿಖೆಯ ವಿಧಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮೇಲ್ನೋಟಕ್ಕೆ ಪ್ರಕರಣ ಕಂಡರೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ. ಈ ನೆಲೆಯಲ್ಲಿ ಅರ್ಜಿದಾರ ನಾಗೇಂದ್ರ ಅವರು ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ, ಕಠಿಣ ಷರತ್ತು ವಿಧಿಸಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಮಂಗಳೂರು ವಿ.ವಿ. ಅಗ್ರ ಸ್ಥಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4x400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪಾರಮ್ಯ ಮೆರೆಯಿತು. ಸಮಗ್ರ ಪದಕ ಪಟ್ಟಿಯಲ್ಲಿ ಮಂಗಳೂರು ವಿ.ವಿ. 74 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿಗಳು ಬುಧವಾರ ಮೂರು ಚಿನ್ನ ಹಾಗೂ ಮೂರು ಕಂಚಿನ ಪದಕ ಗೆದ್ದಿದ್ದು, ಈವರೆಗೆ ಒಟ್ಟು 12 ಪದಕ ಜಯಿಸಿದರು. ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭಾಗೀರಥಿ ಬುಧವಾರ ಮುಂಜಾನೆ ನಡೆದ ಹಾಫ್ ಮ್ಯಾರಥಾನ್ನಲ್ಲಿ ಚಿನ್ನ ಗೆದ್ದು, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಭ್ರಮ ತಂದರು. ಹಾಫ್ ಮ್ಯಾರಥಾನ್ನಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾಲಯಕ್ಕೆ ಚಿನ್ನ ತಂದುಕೊಟ್ಟ ಭಾಗೀರಥಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ಮೂಲತಃ ಉತ್ತಾರಖಂಡ ಚಮೋಲಿ ಜಿಲ್ಲೆಯ ವ್ಯಾನ್ ಹಳ್ಳಿಯವರು. 2025ರ ಏಪ್ರಿಲ್ನಲ್ಲಿ ಇರಾಕ್ನಲ್ಲಿ ನಡೆದಿದ್ದ ಆಲ್ ಬಾಸ್ರಾ ಅಂತರ್ ರಾಷ್ಟ್ರೀಯ ಹಾಫ್ ಮ್ಯಾರಥಾನ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದೆಹಲಿ, ಮುಂಬೈ, ದೆಹಲಿ ಮಾತ್ರವಲ್ಲ ವಿದೇಶದಲ್ಲಿ ನಡೆಯುವ ಮ್ಯಾರಥಾನ್ಗಳಲ್ಲೂ ಪಾಲ್ಗೊಂಡಿದ್ದರು. ಕಳೆದ 35 ವರ್ಷಗಳಿಂದ ಮ್ಯಾರಾಥಾನ್ನಲ್ಲಿ ಹೆಸರು ಮಾಡುತ್ತಿರುವ ಸುನೀಲ್ ಶರ್ಮಾ ಅವರ ಶಿಷ್ಯೆ. ಡಿಸ್ಕಸ್ ಥ್ರೋದಲ್ಲಿ ಚಿನ್ನ ಗೆದ್ದ ಉಜ್ವಲ್ ಚೌಧರಿ ಹರಿಯಾಣದ ಹಿಸ್ಸಾರ್ನ ಕೃಷಿಕ ರಾಜೀವ್ ಮತ್ತು ಬಬ್ಲಿ ದಂಪತಿಯ ಪುತ್ರ. ಅರವಿಂದ್ ತರಬೇತಿಯಲ್ಲಿ ಪಳಗಿದ ಉಜ್ವಲ್ ಏಷಿಯನ್ ಚಾಂಪಿಯನ್ಶಿಪ್ ಗುರಿ ಹೊಂದಿ ದ್ದಾರೆ. ಇದೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಾಗೇಂದ್ರ ಅವರು ಭಟ್ಕಳದ ಆಟೋ ಚಾಲಕ ಅಣ್ಣಪ್ಪ ನಾಯ್ಕ ಅವರ ಪುತ್ರ. ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿದ್ದರು. 400 ಮೀಟರ್ಸ್ ಓಟದ ಮಹಿಳಾ ವಿಭಾಗದ ಚಿನ್ನ ಗೆದ್ದ ಚಂಡೀಗಢ ವಿಶ್ವವಿದ್ಯಾಲಯದ ಎಂ.ಎ. ಯೋಗ ವಿದ್ಯಾರ್ಥಿನಿ ಪ್ರಿಯಾ ಠಾಕೂರ್. ಹಿಮಾಚಲ ಪ್ರದೇಶದ ಅಮೀರ್ಪುರ್ ಕಂಗಾಡದ 24 ವರ್ಷದ ಅವರು, ಕೃಷಿಕರಾದ ದೇಸ್ರಾಜ್ ಮತ್ತು ಮಾಯಾದೇವಿ ದಂಪತಿ ಪುತ್ರಿ. ಅನಿಲ್ ಕುಮಾರ್ ತರಬೇತಿಯಲ್ಲಿ ಪಳಗಿದ್ದಾರೆ. ಫಲಿತಾಂಶ: 4x400 ಮೀಟರ್ಸ್ ಮಿಕ್ಸೆಡ್ ರಿಲೇ: ಮಂಗಳೂರು ವಿ.ವಿ. (ರೇಖಾ, ಆಕಾಶ್ ರಾಜ್, ಸಾಕೇತ್ ಮಿಂಜ್, ಮನಿಷಾ) (3:24.83ನಿ..)ಪ್ರಥಮ, ಚಂಡೀಗಢ ಪಂಜಾಬ್ ವಿ.ವಿ. (ರೋಜ್ಯ್ಜತ್ ಸಿಂಗ್, ನಿತಿಶಾ, ಕುಲ್ವೀರ್ ರಾಮ್, ಕಾಜಲ್) (3:24.87 ನಿ.) ದ್ವಿತೀಯ, ಅಮೃತಸರ ಗುರುನಾನಕ್ ದೇವ್ ವಿ.ವಿ. (ರಾಧಾದೇವಿ, ನವ್ಯಾ, ಅಮೃತ್, ಸಚಿನ್) (3:25.86ನಿ.) ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗ: ಹಾಫ್ ಮ್ಯಾರಥಾನ್: 1.ರವಿಕುಮಾರ್ ಪಾಲ್, ಲಕ್ನೋ ವಿ.ವಿ. (1:06:52.42) 2.ಪ್ರವೀಣ್ ಬಾಬನ್ ಕಾಂಬ್ಳೆ, ಕೊಲ್ಹಾಪುರ ಶಿವಾಜಿ ವಿ.ವಿ. (1:07:13.04)-2 3.ಸತೀಶ್ ಕುಮಾರ್ ವರ್ಮಾ, ಉ.ಪ್ರ. ಜವಾನ್ಪುರ್ ವೀರ ಬಹದ್ದೂರ್ ಸಿಂಗ್ ವಿ.ವಿ. (1:07:24.44)-3. ಟ್ರಿಪಲ್ ಜಂಪ್: 1.ಮೋಹನ್ ರಾಜ್, ಚೆನೈ ಮದ್ರಾಸ್ ವಿ.ವಿ. (16.09ಮೀ.) 2.ವಿದ್ಯಾ ವಿಕಾಸ್, ಮಧುರೈ ಕಾಮರಾಜ್ ವಿ.ವಿ.(15.56) 3ಡೊನಾಲ್ಡ್ ಎಂ., ಕೇರಳದ ಕ್ಯಾಲಿಕಟ್ವಿ.ವಿ.(15.50) ಡಿಸ್ಕಸ್ ಥ್ರೋ: 1ಉಜ್ವಲ್ ಚೌಧರಿ, ಮಂಗಳೂರು ವಿ.ವಿ. (54.16ಮೀ.) 2.ಋತಿಕ್, ಮೊಹಾಲಿಯ ಚಂಡೀಗಢ ವಿ.ವಿ. (53.50ಮೀ.) 3.ನಾಗೇಂದ್ರ ಅಣ್ಣಪ್ಪ ನಾಯ್ಕ, ಮಂಗಳೂರು ವಿ.ವಿ. (53.35ಮೀ) 400 ಮೀಟರ್ಸ್ ಓಟ: 1.ಅಜಯ್ ಡಿ, ಚೆ ನ್ನೈನ ಮದ್ರಾಸ್ ವಿ.ವಿ. (46.83ನಿ.) 2.ತರಂದೀಪ್ ಸಿಂಗ್, ಪಟಿಯಾಲ ಪಂಜಾಬಿ ವಿ.ವಿ. (46.91ನಿ.) 3. ಆಕಾಶ್ ರಾಜ್ ಎಸ್.ಎಂ., ಮಂಗಳೂರು ವಿಶ್ವವಿದ್ಯಾಲಯ (47.19ನಿ) 3000 ಮೀಟರ್ಸ್ ಸ್ಟೀಫಲ್ ಚೇಸ್: 1.ರಣವೀರ್ ಸಿಂಗ್, ವಡೋದರಾ ಸ್ವರ್ಣಿಮಾ ಗುಜರಾತ್ ಸ್ಪೋರ್ಟ್ಸ್ ವಿ.ವಿ. (8:45.94 ನಿ.) 2.ಮನೋಜ್ ಕುಮಾರ್, ಕೇರಳದ ಕ್ಯಾಲಿಕಟ್ ವಿ.ವಿ.(8:48.80ನಿ.) 3.ನವರತನ್, ಉ.ಪ್ರ. ಜವಾನ್ಪುರ್ ವೀರ ಬಹದ್ದೂರ್ ಸಿಂಗ್ ವಿ.ವಿ. (8:51.03ನಿ.) ಡೆಕಥ್ಲಾನ್: 1.ಮನೋಜ್ ಕುಮಾರ್ ಆರ್., ಚೆನ್ನೈ ಮದ್ರಾಸ್ ವಿ.ವಿ. (6872 ಅಂಕ) 2. ಹರೀಶ್, ಜೈನ್ ವಿ.ವಿ. ಬೆಂಗಳೂರು (6711) 3.ಚಮನ್ಜ್ಯೋತ್ ಸಿಂಗ್, ಮಂಗಳೂರು ವಿ.ವಿ. (6202) ಮಹಿಳೆಯರ ವಿಭಾಗ: ಹಾಫ್ ಮ್ಯಾರಾಥಾನ್ 1.ಭಾಗೀರಥಿ, ಮಂಗಳೂರು ವಿಶ್ವವಿದ್ಯಾಲಯ (1:21:49.95-ಗಂ:ನಿ:ಸೆ) 2.ಮಾಯಾ, ಉತ್ತಾರಖಂಡ ಅಲ್ಮೋರಾದ ಸೋಬಾನ್ ಸಿಂಗ್ ಜೀನಾ ವಿ.ವಿ. (1:22:13.44) 3. ಗಂಗಾ, ಮೀರತ್ ಚೌಧರಿ ಚರಣ್ಸಿಂಗ್ ವಿ.ವಿ. (1:23:07.35) 400 ಮೀಟರ್ಸ್ ಓಟ: 1.ಪ್ರಿಯಾ ಠಾಕೂರ್, ಚಂಡೀಗಢ ವಿ.ವಿ. (53.33 ನಿ.) 2.ಅಂಜಲಿ, ರೋಹ್ತಕ್ ಎಂ.ಡಿಯು ವಿ.ವಿ.(54.05ನಿ.), 3.ಆಯುಷಿ, ಸಹರಾನ್ಪುರ್ ಮಾ ಶಾಕುಂಬರಿ ವಿ.ವಿ. (54.24ನಿ.) 3000 ಮೀಟರ್ಸ್ ಸ್ಟೀಫಲ್ ಚೇಸ್: 1.ದೇವ್ಕಾರ್ ಪ್ರಾಚಿ ಅಂಕುಶ್, ಮೊಹಾಲಿ ಚಂಡೀಗಢ ವಿ.ವಿ. (10:22.04 ನಿ.) 2.ಚಂಚಲ್, ಕಾನ್ಪುರ ಛತ್ರಪತಿ ಸಾಹುಜೀ ವಿ.ವಿ. (10:33.51 ನಿ.)-2 3.ಅಂಜು, ವಿಜಯವಾಡ ಕೆ.ಎಲ್. ವಿ.ವಿ. (10:35.20ನಿ.) ಜಾವೆಲಿನ್ ಥ್ರೋ: 1.ದೀಪಿಕಾ, ಮೊಹಾಲಿ ಚಂಡೀಗಢ ವಿ.ವಿ. (54.64 ಮೀ.) 2. ಜ್ಯೋತಿ, ಗುರುಕಾಶಿ ವಿ.ವಿ. (52.59ಮೀ) 3. ಪೂನಂ, ಮೊಹಾಲಿ ಚಂಡೀಗಢ ವಿ.ವಿ. (50.85 ಮೀ.)
ರಾಯಚೂರು ಜಿಲ್ಲಾ ಉತ್ಸವ: ಜನವರಿ 26ರಿಂದ ಹೆಲಿಕಾಪ್ಟರ್ ರೈಡ್
ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 26ರಿಂದ 31ರವರೆಗೆ ರಾಯಚೂರು ಜಿಲ್ಲೆಯ ನಾಗರಿಕರಿಗೆ ಬಾನಂಗಳದಿಂದ ರಾಯಚೂರು ವೀಕ್ಷಣೆಗೆ ರಾಯಚೂರು ಬೈಸ್ಕಯ್ ಎಂಬ ವಿಶೇಷ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಿಂದ ಹೆಲಿಕಾಪ್ಟರ್ ರೈಡ್ಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 12.30ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಪ್ರತಿಯೊಬ್ಬರಿಗೆ ಕೇವಲ 3,500 ರೂ.ಗಳನ್ನು ನಿಗದಿ ಮಾಡಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು. ಟಿಕೆಟ್ ಕುರಿತು ಮಾಹಿತಿಗಾಗಿ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಂತ ನರೇಂದ್ರ ಪ್ರಸಾದ್ ಗಿರಿ ಆತ್ಮಹತ್ಯೆ ಪ್ರಕರಣ | ಪ್ರಮುಖ ಆರೋಪಿಗೆ ಜಾಮೀನು
ಹೊಸದಿಲ್ಲಿ, ಜ.14: ಅಖಿಲ ಭಾರತೀಯ ಆಖಾಡ ಪರಿಷತ್ನ ವರಿಷ್ಠ ಮಹಂತ ನರೇಂದ್ರ ಗಿರಿ ಅವರ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ. ಭಾರೀ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಭಾರತದ ಅತಿ ದೊಡ್ಡ ಸಾಧು–ಸಂತರ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್ನ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ಮೃತದೇಹವು 2021ರ ಅಕ್ಟೋಬರ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಪರಿತ್ಯಕ್ತ ಶಿಷ್ಯ ಆನಂದ್ ಗಿರಿ, ಆರ್ಚಕ ಆದ್ಯ ಪ್ರಸಾದ್ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ತಿವಾರಿಯಿಂದ ನರೇಂದ್ರ ಗಿರಿ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದರು. ಸಮಾಜದ ಕಣ್ಣಲ್ಲಿ ಕಳಂಕಿತ ಹಾಗೂ ಅಪಮಾನಕ್ಕೊಳಗಾಗುವುದನ್ನು ತಪ್ಪಿಸಲು ಅವರು ಸಾವಿಗೆ ಶರಣಾಗಿದ್ದಾರೆ ಎಂದು ಸಿಬಿಐ 2021ರ ನವೆಂಬರ್ ನಲ್ಲಿ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ತಿಳಿಸಿತ್ತು. ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಜಾಮೀನು ನಿರಾಕರಿಸಿದ್ದ ಅಲಹಾಬಾದ್ ಹೈಕೋರ್ಟ್ನ ಅಕ್ಟೋಬರ್ 14, 2025ರ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಸತೀಶ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಮಾರು 150 ಸಾಕ್ಷಿಗಳ ವಿಚಾರಣೆ ನಡೆಸಬೇಕಾಗಿದ್ದ ಸಿಬಿಐ ಈವರೆಗೆ ಕೇವಲ ಮೂವರನ್ನಷ್ಟೇ ವಿಚಾರಣೆ ನಡೆಸಿದೆ. ಆದ್ದರಿಂದ ನಿಕಟ ಭವಿಷ್ಯದಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ತೀರಾ ವಿರಳ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಬಿಐ, ಮಹಂತ ನರೇಂದ್ರ ಗಿರಿ ಅವರು ಸಾವಿಗೆ ಮುನ್ನ ಸ್ವತಃ ಚಿತ್ರೀಕರಿಸಿದ್ದ ವೀಡಿಯೊವೊಂದನ್ನು ವಶಪಡಿಸಿಕೊಂಡಿತ್ತು. ಅದರಲ್ಲಿ, ತಾವು ಮಹಿಳೆಯೊಬ್ಬರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವಂತೆ ಎಡಿಟ್ ಮಾಡಲಾದ ವೀಡಿಯೊವನ್ನು ಆನಂದ್ ಗಿರಿ ಬಿಡುಗಡೆಗೊಳಿಸಲಿದ್ದಾನೆ ಎಂದು ನರೇಂದ್ರ ಗಿರಿ ಅವರು ಖಿನ್ನತೆ ವ್ಯಕ್ತಪಡಿಸಿದ್ದರು. ಆರೋಪಿಗಳಾದ ಅಲಹಾಬಾದ್ನ ಬಡೆ ಹನುಮಾನ್ ಮಂದಿರದ ಆರ್ಚಕ ಆನಂದ್ ಗಿರಿ, ಆದ್ಯ ಪ್ರಸಾದ್ ತಿವಾರಿ ಹಾಗೂ ಸಂದೀಪ್ ತಿವಾರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪಗಳನ್ನು ಹೊರಿಸಲಾಗಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದಿಂದ ಬಿಜೆಪಿ, ಆರೆಸ್ಸೆಸ್ ಭೇಟಿ; ಸಮಯ, ಉದ್ದೇಶ ಪ್ರಶ್ನಿಸಿದ ಕಾಂಗ್ರೆಸ್
ಹೊಸದಿಲ್ಲಿ, ಜ. 14: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದ ಒಂದು ದಿನದ ಬಳಿಕ, ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ)ಯ ನಿಯೋಗವೊಂದು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಹಿರಿಯ ಬಿಜೆಪಿ ನಾಯಕರೂ ಮಾತುಕತೆಯ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗದ ಭೇಟಿಯನ್ನು ‘‘ಸೌಜನ್ಯದ ಭೇಟಿ’’ ಎಂದಷ್ಟೇ ಅವರು ಬಣ್ಣಿಸಿದ್ದಾರೆ. ಈ ನಡುವೆ, ಚೀನಾ ಕಮ್ಯುನಿಸ್ಟ್ ಪಕ್ಷ ಹಾಗೂ ಆರ್ಎಸ್ಎಸ್ ಮತ್ತು ಬಿಜೆಪಿ ನಡುವಿನ ಭೇಟಿಯ ಸಮಯ ಮತ್ತು ಉದ್ದೇಶವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ‘‘ಭೇಟಿಯ ಬಗ್ಗೆ ಆಕ್ಷೇಪವಿಲ್ಲ. ಮಾತುಕತೆಯ ಬಗ್ಗೆ ಆಕ್ಷೇಪವಿಲ್ಲ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದರು. ‘‘ಸಮಸ್ಯೆ ಇರುವುದು ಬಿಜೆಪಿಯ ಸೋಗಲಾಡಿತನ ಮತ್ತು ವಂಚನೆಯ ಬಗ್ಗೆ’’ ಎಂದು ಅವರು ಹೇಳಿದರು. ಕೆಲವು ವರ್ಷಗಳ ಹಿಂದೆ, ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಮುಚ್ಚಿದ ಬಾಗಿಲ ಸಭೆಯ ಗಂಟೆಗಳ ಬಳಿಕ, ಜಮ್ಮು ಮತ್ತು ಕಾಶ್ಮೀರದ ಶಕ್ಸ್ಗಮ್ ಕಣಿವೆ ತನ್ನದೆಂದು ಚೀನಾ ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿವಾದಿತ ಪ್ರದೇಶದಲ್ಲಿ ಚೀನಾ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂಬ ವರದಿಗಳ ನಡುವೆ, ಆಡಳಿತಾರೂಢ ಪಕ್ಷವು ಚೀನಾಕ್ಕೆ ಮಿಶ್ರ ಸಂದೇಶಗಳನ್ನು ನೀಡುತ್ತಿದೆ ಎಂದು ಅದು ಹೇಳಿದೆ. ‘‘ಈ ಮುಚ್ಚಿದ ಬಾಗಿಲ ಸಭೆಗಳಲ್ಲಿ ಏನು ನಡೆಯಿತು ಎಂಬುದನ್ನು ಬಿಜೆಪಿ ಮತ್ತು ಪ್ರಧಾನಿ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಿರೀಕ್ಷಿಸುತ್ತದೆ. ಈ ವಿಷಯದಲ್ಲಿ ಅವರು ಸಂಪೂರ್ಣ ಉತ್ತರದಾಯಿತ್ವ ವಹಿಸಿಕೊಳ್ಳಬೇಕು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು’’ ಎಂದು ಪವನ್ ಖೇರಾ ಹೇಳಿದರು. ಭಾರತೀಯ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬುದಾಗಿ ಅವರು ಪ್ರಶ್ನಿಸಿದರು.
ಸಂಸ್ಕಾರಯುತ ಶಿಕ್ಷಣದಿಂದ ಬದುಕು ಸುಂದರ: ನವೀನ್ ಚಂದ್ರ ಶೆಟ್ಟಿ
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ರಾಷ್ಟ್ರೀಯ ಯುವಕ ದಿನಾಚರಣೆ
ಭಟ್ಕಳ: ಜಾಗ ವಿವಾದದ ಹಿನ್ನೆಲೆ; ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು
ಭಟ್ಕಳ: ಮಾರುಕೇರಿ ಗ್ರಾಮದ ಹೆಜ್ಜಲು ಪ್ರದೇಶದಲ್ಲಿ ಜಾಗ ಸಂಬಂಧಿತ ವಿವಾದ ನ್ಯಾಯಾಲಯದಲ್ಲಿ ಪ್ರಚಲಿತ ದಲ್ಲಿರುವ ನಡುವೆಯೇ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಮತಿ ಸುಜಾತಾ ರವಿ ಗೊಂಡ (39) ಅವರು ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಪತಿ ರವಿ ನಾಗಪ್ಪ ಗೊಂಡ ಹಾಗೂ ಅಣ್ಣ ಶಿವರಾಮ ನಾಗಪ್ಪ ಗೊಂಡ ಧನದ ಕೊಟ್ಟಿಗೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ, ಜಾಗದ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಆರೋಪಿತರು ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿತರು ಬುಲೆರೋ ವಾಹನದ ಗ್ಲಾಸ್ನ್ನು ಒಡೆದು, ರಾಡಿನಿಂದ ಕಣ್ಣಿನ ಮೇಲೆ ಹೊಡೆದು ತೀವ್ರ ರಕ್ತಗಾಯ ಪಡಿಸಿದ್ದಲ್ಲದೆ, ಬಳಿಕ ಕಲ್ಲಿನಿಂದ ತಲೆಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ತಡೆಯಲು ಮುಂದಾದ ಸುಜಾತಾ ಗೊಂಡ ಅವರನ್ನು ದೂಡಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ, ಪ್ರಕರಣ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಇದೆ. ಹಲ್ಲೆಯಿಂದ ಗಾಯಗೊಂಡ ಶಿವರಾಮ ನಾಗಪ್ಪ ಗೊಂಡ (ಸುಮಾರು 50) ಅವರಿಗೆ ತಲೆಗೆ ಗಂಭೀರ ಗಾಯಗಳಾ ಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರವಿ ನಾಗಪ್ಪ ಗೊಂಡ (42) ಹಾಗೂ ಸುಜಾತಾ ರವಿ ಗೊಂಡ ಸೇರಿದಂತೆ ಇತರರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೆಜ್ಜಲು–ಮಾರುಕೇರಿ ನಿವಾಸಿಗಳಾದ ಮಾದೇವ ಮಂಜು ಗೊಂಡ, ನಾರಾಯಣ ಮಂಜು ಗೊಂಡ, ಸದಾನಂದ ನಾಗಪ್ಪ ಗೊಂಡ, ನಾಗಪ್ಪ ಸಣ್ಣು ಗೊಂಡ ಹಾಗೂ ಅನಂತ ತಿಮ್ಮಪ್ಪ ಗೊಂಡ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಖತರ್ ನಲ್ಲಿರುವ ಅಮೆರಿಕ ವಾಯುನೆಲೆಯ ಕೆಲವು ಸಿಬ್ಬಂದಿಗೆ ನಿರ್ಗಮಿಸಲು ಸೂಚನೆ
ದೋಹ, ಜ.14: ಬುಧವಾರ ಸಂಜೆಯೊಳಗೆ ಖತರ್ ನಲ್ಲಿರುವ ಅಮೆರಿಕ ಮಿಲಿಟರಿಯ ಅಲ್ ಉದೈದ್ ವಾಯುನೆಲೆಯನ್ನು ತೊರೆಯುವಂತೆ ಕೆಲವು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಅಲ್ ಉದೈದ್ ಮಧ್ಯಪ್ರಾಚ್ಯದ ಅತಿದೊಡ್ಡ ಅಮೆರಿಕಾ ಮಿಲಿಟರಿ ನೆಲೆಯಾಗಿದ್ದು, ಅಮೆರಿಕಾದ ಸುಮಾರು 10,000 ಯೋಧರನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಇದು ಕಾರ್ಯತಂತ್ರದ ಬದಲಾವಣೆಯಾಗಿದ್ದು ಸ್ಥಳಾಂತರವಲ್ಲ. ಈ ಕ್ರಮಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ರಾಜತಾಂತ್ರಿಕ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಸಂಭಲ್ ಹಿಂಸಾಚಾರ | 12 ಪೊಲೀಸ್ ಅಧಿಕಾರಿಗಳ ವಿರುದ್ಧ FIR ದಾಖಲಿಸಲು ಉತ್ತರ ಪ್ರದೇಶ ನ್ಯಾಯಾಲಯ ಆದೇಶ
ಲಕ್ನೊ, ಜ. 14: 2024ರಲ್ಲಿ ಮಸೀದಿಯೊಂದರ ಧ್ವಂಸದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ 12 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ನ್ಯಾಯಾಲಯವೊಂದು ಆದೇಶಿಸಿದೆ. ಈ ಪ್ರಕರಣದ ಆರೋಪಿಗಳಲ್ಲಿ ಸಂಭಲ್ನ ಮಾಜಿ ಸರ್ಕಲ್ ಅಧಿಕಾರಿ ಅನುಜ್ ಜೌಧರಿ, ಸಂಭಲ್ ಕೊಟ್ವಾಲಿಯ ಮಾಜಿ ಉಸ್ತುವಾರಿ ಅನುಜ್ ತೋಮರ್ ಅವರಂತಹ ಹಿರಿಯ ಅಧಿಕಾರಿಗಳು ಸೇರಿದ್ದಾರೆ. ಯಾಮೀನ್ ಅವರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಭಾಂಶು ಸುಧೀರ್ ಅವರು ಜನವರಿ 9ರಂದು ಈ ಆದೇಶ ನೀಡಿದ್ದಾರೆ. ಹಿಂಸಾಚಾರದ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಯಾಮೀನ್ ಅವರ ಪುತ್ರ ಗಾಯಗೊಂಡಿದ್ದರು ಎಂದು ಹೇಳಲಾಗಿದೆ. 2024 ನವೆಂಬರ್ 24ರಂದು ಶಾಹಿ ಜಾಮಾ ಮಸೀದಿ ಪ್ರದೇಶದ ಸಮೀಪ ನಡೆದ ಹಿಂಸಾಚಾರದ ವೇಳೆ ತನ್ನ 24 ವರ್ಷದ ಪುತ್ರ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಸಂಭಲ್ ನ ಖಗ್ಗು ಸರಾಯಿ ಅಂಜುಮಾನ್ ಪ್ರದೇಶದ ನಿವಾಸಿ ಯಾಮೀನ್ ಆರೋಪಿಸಿದ್ದಾರೆ. ಪೊಲೀಸರು ಆಲಂ ಮೇಲೆ ಗುಂಡು ಹಾರಿಸುವ ಸಂದರ್ಭ ಆಲಂ ಮಸೀದಿಯ ಸಮೀಪ ರಸ್ಕ್ ಹಾಗೂ ಬಿಸ್ಕಿಟುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ 2024 ನವೆಂಬರ್ 24ರಂದು ಬೆಳಗ್ಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ಪ್ರತಿಭಟನಕಾರರ ಮೇಲೆ ಹಾರಿಸಿದ ಗುಂಡಿನಿಂದ ಐವರು ಸಾವನ್ನಪ್ಪಿದ್ದರು ಹಾಗೂ ಇತರ ಹಲವರು ಗಾಯಗೊಂಡಿದ್ದರು.
ಸದೃಢ ದೇಶ ನಿರ್ಮಾಣಕ್ಕೆ ಕುಟುಂಬವೇ ತಳಪಾಯ: ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ
ಭಟ್ಕಳ: ಸದೃಢವಾದ ರಾಷ್ಟ್ರ ನಿರ್ಮಾಣಕ್ಕೆ ಕುಟುಂಬವೇ ಮೊದಲ ಮತ್ತು ಅತ್ಯಂತ ಪ್ರಮುಖ ತಳಪಾಯವಾಗಿದ್ದು, ಕುಟುಂಬ ಗಟ್ಟಿಯಾದರೆ ಸಮಾಜ ಹಾಗೂ ರಾಜ್ಯವೂ ಗಟ್ಟಿಯಾಗುತ್ತದೆ ಎಂದು ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ ಹೇಳಿದರು. ನಗರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ‘ಸಂತೃಪ್ತ ಕುಟುಂಬ, ಸದೃಢ ಸಮಾಜ’ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಮಾತುಗಳನ್ನು ಸ್ಮರಿಸಿ, ದೇಶದ ಬಲವರ್ಧನೆಯಲ್ಲಿ ಕೌಟುಂಬಿಕ ವ್ಯವಸ್ಥೆಯ ಮಹತ್ವವನ್ನು ಒತ್ತಿ ಹೇಳಿದರು. ಇಂದಿನ ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜನರೇಷನ್ ಝೀ ಪೀಳಿಗೆಯಲ್ಲಿ ತಾಳ್ಮೆ ಮತ್ತು ಹೊಂದಾಣಿಕೆಯ ಕೊರತೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ ರೀಲ್ಸ್ ಸಂಸ್ಕೃತಿ ಹೆಚ್ಚಾಗುತ್ತಿದೆ, ಬದುಕಿನಲ್ಲಿ ಯಾವುದೂ ತಕ್ಷಣ ಸಿಗುವುದಿಲ್ಲ ಎಂಬ ಸತ್ಯವನ್ನು ಯುವಜನತೆ ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಹಾಗೂ ಪ್ರವಚನಕಾರ ಮುಹಮ್ಮದ್ ಕುಂಞಿ, ಕುಟುಂಬವು ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ, ಅದು ದೇವ ನಿರ್ಮಿತ ಪವಿತ್ರ ವ್ಯವಸ್ಥೆ ಎಂದು ಹೇಳಿದರು. ಕುಟುಂಬ ಮೌಲ್ಯಗಳು ಕುಸಿದರೆ ಇಡೀ ಸಮಾಜವೇ ಕುಸಿಯುತ್ತದೆ ಎಂದು ಎಚ್ಚರಿಸಿದರು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದರೂ ಸತ್ಯ, ನ್ಯಾಯ, ಸಹನೆ, ಕರುಣೆ ಹಾಗೂ ಪರೋಪಕಾರ ದಂತಹ ಮೌಲ್ಯಗಳು ಎಂದಿಗೂ ಬದಲಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿದ್ದು, ಕುಟುಂಬದೊಳಗಿನ ಆತ್ಮೀಯತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಕ್ಕಳನ್ನು ಕೇವಲ ವೃತ್ತಿಪರರನ್ನಾಗಿ ಮಾಡುವುದಕ್ಕಿಂತ ಅವರಿಗೆ ಪ್ರೀತಿ, ಗೌರವ ಮತ್ತು ಸಹನೆಯ ಪಾಠಗಳನ್ನು ಮನೆಯಲ್ಲೇ ಕಲಿಸಬೇಕು ಎಂದ ಅವರು, ಡಾ. ಅಬ್ದುಲ್ ಕಲಾಂ ಅವರ ಬಾಲ್ಯದ ಘಟನೆಯನ್ನು ಉಲ್ಲೇಖಿಸಿ, ಕುಟುಂಬದಲ್ಲಿ ಹಿರಿಯರು ತೋರಿಸುವ ಮೌಲ್ಯಗಳೇ ಮಕ್ಕಳಿಗೆ ಜೀವನ ಪಾಠವಾಗುತ್ತವೆ ಎಂದು ತಿಳಿಸಿದರು. ಪೋಷಕರನ್ನು ವೃದ್ಧಾಪ್ಯದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಕುರಾನ್ ಬೋಧನೆಗಳನ್ನು ನೆನಪಿಸಿದರು. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಆಧುನಿಕ ಯುಗದಲ್ಲಿ ಮನೆಗಳು ದೊಡ್ಡದಾಗುತ್ತಿದ್ದರೂ ಮನಸ್ಸುಗಳು ಸಣ್ಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ತಾಂತ್ರಿಕವಾಗಿ ಅಣುವನ್ನೂ ವಿಭಜಿಸುವಷ್ಟು ಪ್ರಗತಿ ಸಾಧಿಸಿದ್ದರೂ, ನಮ್ಮೊಳಗಿನ ಅಹಂಕಾರವನ್ನು ಒಡೆಯಲು ಸಾಧ್ಯವಾಗುತ್ತಿಲ್ಲ ಎಂದರು. ವಿವಿಧ ಧರ್ಮಗಳ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಮೂಲ ಸಂದೇಶ ಮಾನವೀಯ ತೆಯೇ ಆಗಿದ್ದು, ಧರ್ಮವು ಗೋಡೆ ಕಟ್ಟಲು ಅಲ್ಲ, ದೃಷ್ಟಿಕೋನವನ್ನು ವಿಶಾಲಗೊಳಿಸಲು ಸಹಾಯಕವಾಗಬೇಕು ಎಂದರು. ಮಕ್ಕಳ ಶಿಕ್ಷಣವು ಪುಸ್ತಕಗಳಿಗೆ ಸೀಮಿತವಾಗದೇ, ಬದುಕಿನಲ್ಲಿ ಪ್ರತಿಬಿಂಬಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಸಮಾಜವನ್ನು ಒಗ್ಗೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ, ಭಟ್ಕಳ ತನ್ನ ಮೂಲ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಸಂಸ್ಕೃತಿಯತ್ತ ಮರಳುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಮುಖಂಡ ರಾಮಾ ಮೊಗೇರ್, ನೇತ್ರಾಣಿ ಗುಡ್ಡದ ಉದಾಹರಣೆ ನೀಡುತ್ತಾ, ಭಟ್ಕಳದ ಸೌಹಾರ್ದ ಪರಂಪರೆ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಮೊದಲು ಕುಟುಂಬ ಒಗ್ಗೂಡಿದರೆ ಸಮಾಜವೂ ಸ್ವಯಂ ಒಗ್ಗೂಡುತ್ತದೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪ್ರಾಧ್ಯಾಪಕ ಆರ್.ಎಸ್. ನಾಯಕ ಹಾಗೂ ಕಾರ್ಮಿಕ ಮುಖಂಡ ಜಿ.ಎನ್. ರೇವಣಕರ್, ತಂಝಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, , ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ್ ಪೂಜಾರಿ ಮಾತನಾಡಿ, ಭಾರತದ ವೈವಿಧ್ಯತೆಯೇ ಅದರ ಸೊಬಗು ಸಮಾಜವನ್ನು ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಪ್ರಸ್ತಾವಿಕವಾಗಿ ಮಾತ ನಾಡಿ ಸ್ವಾಗತಿಸಿದರು. ಕುರ್ಆನ್ ಪ್ರವಚನ ಸಂಚಾಲಕ ಇಂಜಿನೀಯರ್ ನಝೀರ್ ಖಾಝಿ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.
ನಿಷೇಧಿತ ಮಾಂಜಾ ದಾರ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೀದರ್: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ವೇಳೆ ನಿಷೇಧಿತ ಮಾಂಜಾ ದಾರ ಬಳಕೆ ಮಾಡಿರುವ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾಕ್ರಾಸ್ ಬಳಿ ಈ ದಾರಕ್ಕೆ ಸಿಲುಕಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲೆಯಾದ್ಯಂತ ಯಾವುದೇ ಮಳಿಗೆಯಲ್ಲಿ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಮತ್ತು ಈ ಪ್ರಕರಣದಲ್ಲಿ ವ್ಯಕ್ತಿಯ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಲಿಖಿತ ಸೂಚನೆ ನೀಡಿದ್ದಾರೆ. ತಕ್ಷಣವೇ ಈ ಬಗ್ಗೆ ಜಿಲ್ಲೆಯ ಸಾರ್ವಜನಿಕರ ಮೊಬೈಲ್ ಸಂಖ್ಯೆಗೆ ಸಾಮಾಜಿಕ ತಾಣಗಳ ಮೂಲಕ ಸಂದೇಶ ರವಾನಿಸಿ ಜಾಗೃತಿ ಮೂಡಿಸುವಂತೆ ಆಗ್ರಹಿಸಿದ್ದಾರೆ.
ಬಿಜೆಪಿಯವರು ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ: ಪ್ರದೀಪ್ ಬೆಲಾಡಿ ಆರೋಪ
ಕಾರ್ಕಳ: ಹಿಂದುತ್ವದ ಪ್ರತಿಪಾದಕರೆಂದು ಬೊಗಳೆ ಬಿಡುತ್ತಿರುವ ಬಿಜೆಪಿಯವರು ಹಿಂದೂ ಧರ್ಮದ ಪವಿತ್ರ ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ . ಅಷ್ಟಮಂಗಲ ಪ್ರಶ್ನೆ ಹಾಕಿದರೆ ತುಳುನಾಡಿನ ಕರ್ತ ಪರಶುರಾಮನಿಗೆ ನಡೆದಿರುವ ಮೋಸ, ಮೋಸ ಮಾಡಿದವರ ಹಾಗೂ ಮಾಡುತ್ತಿರುವವರ ಬಣ್ಣ ಬಯಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೆಲಾಡಿ ಆರೋಪಿಸಿದರು. ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಟ್ಟದ ಮೇಲೆ ಬೆಂಕಿ ಕಾಣಿಸಿಕೊಳ್ಳುವುದು, ಮೂರ್ತಿ ಕಳ್ಳತನ ಹಾಗೂ ವಸ್ತುಗಳ ಕಳ್ಳತನದಂತಹ ದುರ್ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ವಿದ್ವಾಂಸರು ಹಾಗೂ ಪುರೋಹಿತರನ್ನು ಒಳಗೊಂಡು ಅಷ್ಟಮಂಗಲ ಪ್ರಶ್ನೆ ಹಾಕಬೇಕು. ಇದರಿಂದ ತಪ್ಪು ಎಲ್ಲಿದೆ ಎಂಬ ನೈಜತೆ ಜನರಿಗೆ ತಿಳಿಯಬೇಕು ಎಂದರು. “ಕಾರ್ಕಳ ತಾಲೂಕು ಯಾರಿಗೂ ಪಿತೃಾರ್ಜಿತ ಆಸ್ತಿಯಲ್ಲ. ಬೆದರಿಕೆಗಳು ಹಾಗೂ ಗೂಂಡಾ ಪ್ರವೃತ್ತಿಗಳು ಕಾರ್ಕಳದಂತಹ ಸಾತ್ವಿಕ ಭೂಮಿಗೆ ಶೋಭೆ ತರುವುದಿಲ್ಲ” ಎಂದು ಹೇಳಿದರು. ಪರಶುರಾಮ ಥೀಮ್ ಪಾರ್ಕ್ನ ನಕಲಿ ಪ್ರತಿಮೆ ಹಗರಣದಿಂದ ಕಂಗೆಟ್ಟಿರುವ ಶಾಸಕ ಸುನಿಲ್ ಕುಮಾರ್ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಆರೋಪಗಳಿಂದ ಪಾರಾಗಲು ತಮ್ಮ ಹಿಂಬಾಲಕರ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸಿರುವುದು ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಹಿಂಬಾಲಕರ ಮಾತುಗಳನ್ನು ಕೇಳಿದಾಗ, ಅವರು ಹಗರಣದಿಂದ ಸಂಪೂರ್ಣ ವಿಚಲಿತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ತುಳುನಾಡಿನ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕ ಮತ್ತು ಬಡ ಜನರ ಆರೋಗ್ಯ ಸೇವೆಗೆ ತಮ್ಮ ಪ್ರಾಮಾಣಿಕ ಸಂಪಾದನೆಯನ್ನು ದಾನ ಮಾಡಿದ ಧರ್ಮಿಷ್ಠ ನಾಯಕರ. ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳ ಜನರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವದವರು. ಇಂತಹ ಸಚ್ಚರಿತ್ರ್ಯವಂತ ನಾಯಕನ ಬಗ್ಗೆ ಬ್ರಹ್ಮoಡ ಭ್ರಷ್ಟಾಚಾರದಲ್ಲಿರುವ ಸುನಿಲ್ ಕುಮಾರ್ ಅವರ ಹಿಂಬಾಲಕರಿಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದರು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಕಾರ್ಕಳದ ನಾಗರಿಕರು ಯಾರೂ ಮನವಿ ಸಲ್ಲಿಸಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಅನುದಾನ ಬಿಡುಗಡೆಗೊಳಿಸಿ, ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಆಗಿನ ಮುಖ್ಯಮಂತ್ರಿ ಗಳನ್ನು ಕರೆಸಿ ಅಪೂರ್ಣ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆ “ಕಂಚಿನ ಪ್ರತಿಮೆ”ಯ ಬಣ್ಣ ಬಯಲಾಗಿದ್ದು, ಅದನ್ನು ಮುಚ್ಚಲು ಟಾರ್ಪಲ್ ಸುತ್ತಿ ಬಣ್ಣ ಬಳಿಯಲು ಯತ್ನಿಸಲಾಯಿತು ಈ ಯೋಜನೆಯ ಸತ್ಯಾಸತ್ಯತೆ ಕುರಿತು ಅನುಮಾನಗೊಂಡ ಸಮಾನ ಮನಸ್ಕ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸಿದರೂ, ತುಟಿ ಪಿಟಿಕ್ ಅನ್ನದ. ಶಾಸಕ ಸುನಿಲ್ ಕುಮಾರ್ ಪ್ರಕರಣವನ್ನು ತಿರುವುಮಾಡಲು ಯತ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಸಹಕರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರ ತೇಜೋವಧೆಗೆ ಇಳಿದಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದರು. ಉದ್ಘಾಟನಾ ಸಂದರ್ಭದಲ್ಲಿ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಎಂದಿದ್ದ ಶಾಸಕರು, ಬಳಿಕ ಅದನ್ನು ಪ್ರವಾಸಿ ತಾಣ ಎಂದು ಹೇಳುತ್ತಿರುವುದು ದ್ವಂದ್ವ ನೀತಿಯಾಗಿದೆ. ಅದು ಪ್ರವಾಸಿ ತಾಣವಾಗಿದ್ದರೆ ಪರಶುರಾಮನ ಕಾಲಿನಡಿ ತುಳು ನಾಡಿನ ದೈವಗಳನ್ನು ಚಿತ್ರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದು ತುಳುನಾಡಿನ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು. ಉಮಿಕಲ್ ಬೆಟ್ಟದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಉಲ್ಲೇಖಿಸಿದ ಅವರು, ಅಲ್ಲಿ ತುಳುನಾಡಿನ ಅವಳಿ ವೀರರಾದ ಕೋಟಿ–ಚೆನ್ನಯ್ಯರ ಪಾದಗುರುತು ಇದ್ದು, ಅದನ್ನು ಒಡೆದು ತೆಗೆದಿರುವುದು ಸಮಸ್ತ ತುಳು ನಾಡಿನ ದೈವಗಳಿಗೆ ಮಾಡಿದ ಅಪಚಾರವಾಗಿದೆ ಸರ್ವಾಧಿಕಾರಿ ಮನೋಭಾವದ ದಿಂದಿರುವ ಬಿಜೆಪಿಗೆ , ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು. ಯುತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಮಾತನಾಡಿ, ನಕಲಿ ಪ್ರತಿಮೆ ವಿಚಾರದಲ್ಲಿ ಬಿಜೆಪಿ ಆತ್ಮಸಾಕ್ಷಿಯಿಂದ ಸ್ಪಷ್ಟನೆ ನೀಡಬೇಕು ಎಂದರು. ಜೆಡಿಎಸ್ನಿಂದ ಪಂಚಾಯತ್ ಸದಸ್ಯ ಹಾಗೂ ಎಪಿಎಂಸಿ ಸದಸ್ಯರಾಗಿದ್ದ ಮಹಾ ವೀರ ಹೆಗ್ಡೆಯನ್ನು ಬಿಜೆಪಿ ಸೇರಿದ ತಕ್ಷಣ ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿದ ಹಿಂದಿನ ಕಾರಣವೇನು ಎಂಬುದನ್ನು ಬಿಜೆಪಿ ಕಾರ್ಯಕರ್ತರಿಗೆ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂತೋಷ್ ದೇವಾಡಿಗ, , ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ, ಮಂಜುನಾಥ ಜೋಗಿ, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
RCB ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಡಲಿದೆಯೇ?: ಮುಂದಿನ ವಾರ ಅಂತಿಮ ನಿರ್ಧಾರ
ಬೆಂಗಳೂರು, ಜ.13: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತವರು ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಕುರಿತು ಅಂತಿಮ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪುಣೆಯ ಎಂಸಿಎ ಕ್ರೀಡಾಂಗಣವನ್ನು RCB ಮರುಪರಿಶೀಲಿಸಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಪತ್ರಿಕಾ ಪ್ರಕಟಣೆಯಲ್ಲಿ ಧನ್ಯವಾದ ಅರ್ಪಿಸಿದ ನಂತರ, RCB ತನ್ನ ಪಂದ್ಯಗಳನ್ನು ಗಾರ್ಡನ್ ಸಿಟಿಯಿಂದ ಹೊರಗೆ ಸ್ಥಳಾಂತರಿಸುವ ಬಗ್ಗೆ ವದಂತಿಗಳು ಹೆಚ್ಚಾಗಿದ್ದವು. 2025ರ ಜೂನ್ 4ರಂದು RCB ಪ್ರಶಸ್ತಿ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಚಿನ್ನಸ್ವಾಮಿ ಸ್ಟೇಡಿಯಂ ಮುಚ್ಚಲಾಗಿದೆ. ನಿಯಮಗಳನ್ನು ಪಾಲಿಸದ ಕಾರಣ ಇತ್ತೀಚೆಗೆ ರಾಜ್ಯ ಸರ್ಕಾರವು ವಿಜಯ್ ಹಝಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಅನುಮತಿ ನಿರಾಕರಿಸಿತ್ತು. ಹೀಗಾಗಿ ವಿರಾಟ್ ಕೊಹ್ಲಿ ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ದಿಲ್ಲಿ ಪರವಾಗಿ ಎರಡು ಪಂದ್ಯಗಳನ್ನು ಆಡಿದ್ದರು. ಕರ್ನಾಟಕ ತಂಡವು ಮಧ್ಯಪ್ರದೇಶ ವಿರುದ್ಧದ ಮುಂಬರುವ ರಣಜಿ ಟ್ರೋಫಿ ಪಂದ್ಯವನ್ನು ಜನವರಿ 22ರಂದು ಆಲೂರು ಮೈದಾನದಲ್ಲಿ ಆಡಲಿದೆ. ‘‘RCBಯೊಂದಿಗೆ ಮಾತುಕತೆ ಮುಂದುವರಿದಿದೆ. ಫ್ರಾಂಚೈಸಿಯ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಸ್ಥಳಾಂತರವಾಗುವ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಮುಂದಿನ ವಾರ ಮಾತ್ರ ಅಧಿಕೃತ ಹೇಳಿಕೆಯನ್ನು ನೀಡಲು ಸಾಧ್ಯ. ರಣಜಿ ಟ್ರೋಫಿ ಪಂದ್ಯಗಳಿಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂ ಇನ್ನೂ ಸಂಪೂರ್ಣ ಸಜ್ಜಾಗಿಲ್ಲ’’ ಎಂದು ಕೆಎಸ್ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಐಸಿಸಿ ಏಕದಿನ ರ್ಯಾಂಕಿಂಗ್ | ವಿರಾಟ್ ಕೊಹ್ಲಿಯೇ ನಂ.1
ಹೊಸದಿಲ್ಲಿ, ಜ.14: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ಯ ಶ್ರೇಷ್ಠ ಫಾರ್ಮ್ನಲ್ಲಿರುವ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೆ ಮರಳಿದ್ದಾರೆ. ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 93 ರನ್ ಗಳಿಸಿದ್ದ ಕೊಹ್ಲಿ ಅವರು 2021ರ ಜುಲೈ ನಂತರ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಅರ್ಧಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದ್ದು, 37 ವರ್ಷದ ಕೊಹ್ಲಿ ಈಗಲೂ 50 ಓವರ್ ಗಳ ಕ್ರಿಕೆಟ್ ನಲ್ಲಿ ‘ರನ್ ಯಂತ್ರ’ ಎಂಬ ಖ್ಯಾತಿಗೆ ತಕ್ಕಂತೆ ಆಡುತ್ತಿದ್ದಾರೆ. ಕೊಹ್ಲಿ 2013ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ನಂ.1 ರ್ಯಾಂಕಿನ ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಒಟ್ಟು 825 ದಿನಗಳ ಕಾಲ ವಿಶ್ವದ ನಂ.1 ಏಕದಿನ ಬ್ಯಾಟರ್ ಆಗಿ ಕೊಹ್ಲಿ ಮಿಂಚಿದ್ದಾರೆ. ಇದು ಭಾರತೀಯ ಬ್ಯಾಟರ್ ನ ಶ್ರೇಷ್ಠ ಸಾಧನೆಯಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅಗ್ರ-10ರಲ್ಲಿರುವ ಇನ್ನೋರ್ವ ಆಟಗಾರರಾಗಿದ್ದಾರೆ. ನ್ಯೂಝಿಲ್ಯಾಂಡ್ನ ಡ್ಯಾರಿಲ್ ಮಿಚೆಲ್ ಮೊದಲ ಪಂದ್ಯದಲ್ಲಿ 84 ರನ್ ಗಳಿಸಿದ ಕಾರಣ ಭಡ್ತಿ ಪಡೆದಿದ್ದು, ಕೊಹ್ಲಿಗಿಂತ ಕೇವಲ ಒಂದು ಅಂಕದಿಂದ ಹಿಂದೆ ಇದ್ದಾರೆ. ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಐದು ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 41 ರನ್ಗೆ ನಾಲ್ಕು ವಿಕೆಟ್ ಗಳನ್ನು ಕಬಳಿಸಿದ್ದ ಕಿವೀಸ್ ವೇಗದ ಬೌಲರ್ ಕೈಲ್ ಜೆಮೀಸನ್ 27 ಸ್ಥಾನಗಳಲ್ಲಿ ಭಡ್ತಿ ಪಡೆದು 69ನೇ ಸ್ಥಾನ ಹಂಚಿಕೊಂಡಿದ್ದಾರೆ.
‘ನ್ಯಾಯ ಸಮಿತಿ’ ರಚಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ UGC ನಿರ್ದೇಶನ
ಹೊಸದಿಲ್ಲಿ, ಜ. 14: ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ರೂಪಿಸಲಾಗಿರುವ ತನ್ನ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ, ‘ನ್ಯಾಯ ಸಮಿತಿ’ಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು ಸಮಾನ ಅವಕಾಶ ಕೇಂದ್ರ ಹಾಗೂ ನ್ಯಾಯ ಸಮಿತಿಯನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿಯು ಮಂಗಳವಾರ ಸೂಚಿಸಿದೆ. ನೂತನ ನಿಯಮಗಳನ್ನು ಒಳಗೊಂಡ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯ ಕಾಪಾಡಲು ನಿಯಮಾವಳಿಗಳು, 2026’ನ್ನು ಅದು ಪ್ರಕಟಿಸಿದೆ. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಮತ್ತು ಅಂಗವೈಕಲ್ಯ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಉನ್ನತ ಶಿಕ್ಷಣದಲ್ಲಿ ‘ಸಂಪೂರ್ಣ ನ್ಯಾಯ ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು’ ಈ ನೂತನ ನಿಯಮಾವಳಿಗಳನ್ನು ರೂಪಿಸಲಾಗಿದೆ. ನಿಯಮಾವಳಿಗಳ ಪ್ರಕಾರ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನ್ಯಾಯ ಸಮಿತಿಯನ್ನು ರಚಿಸಬೇಕು. ದೂರುಗಳನ್ನು ವಿಚಾರಿಸುವುದು, ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವುದು ಹಾಗೂ ದೂರುದಾರರನ್ನು ಪ್ರತೀಕಾರದ ಕ್ರಮಗಳಿಂದ ರಕ್ಷಿಸುವುದು ನ್ಯಾಯ ಸಮಿತಿಯ ಹೊಣೆಗಾರಿಕೆಯಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ‘ನ್ಯಾಯ ಸಹಾಯವಾಣಿ’ಯನ್ನು ನಡೆಸಬೇಕು. ಜೊತೆಗೆ, ತಾರತಮ್ಯ ಸಂಬಂಧಿ ಘಟನೆಗಳನ್ನು ವರದಿ ಮಾಡಲು ಆನ್ಲೈನ್ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂಬುದಾಗಿಯೂ ಯುಜಿಸಿ ನಿಯಮಾವಳಿಗಳು ಹೇಳುತ್ತವೆ. ನ್ಯಾಯ ಸಮಿತಿಯ ಮುಖ್ಯಸ್ಥರು ಸಂಸ್ಥೆಯ ಮುಖ್ಯಸ್ಥರೇ ಆಗಿರುತ್ತಾರೆ. ಸಮಿತಿಯಲ್ಲಿ ಹಿರಿಯ ಬೋಧಕ ಸಿಬ್ಬಂದಿ, ಓರ್ವ ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಇರಬೇಕು. ಸಮಾನ ಅವಕಾಶ ಕೇಂದ್ರದ ಸಮನ್ವಯಾಧಿಕಾರಿಯು ನ್ಯಾಯ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಅಂಗವೈಕಲ್ಯ ಹೊಂದಿರುವವರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು.
ದಿಲ್ಲಿಯಲ್ಲಿ ತೀವ್ರ ವಾಯು ಮಾಲಿನ್ಯ | ಇಂಡಿಯಾ ಓಪನ್ ಟೂರ್ನಿಯಿಂದ ಹಿಂದೆ ಸರಿದ ವಿಶ್ವದ ನಂ.3ನೇ ಆಟಗಾರ ಆಂಟೊನ್ಸನ್
ಹೊಸದಿಲ್ಲಿ, ಜ.14: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿರುವುದಾಗಿ ವಿಶ್ವದ ನಂ.3ನೇ ಪುರುಷರ ಸಿಂಗಲ್ಸ್ ಆಟಗಾರ ಆ್ಯಂಡರ್ಸ್ ಆಂಟೊನ್ಸನ್ ಬುಧವಾರ ತಿಳಿಸಿದ್ದಾರೆ. ‘‘ಸತತ ಮೂರನೇ ಬಾರಿಯೂ ಇಂಡಿಯಾ ಓಪನ್ ನಿಂದ ನಾನು ಏಕೆ ಹಿಂದೆ ಸರಿದಿದ್ದೇನೆ ಎಂದು ತಿಳಿದುಕೊಳ್ಳಲು ಹಲವರು ಕುತೂಹಲದಿಂದಿದ್ದಾರೆ. ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಸೂಕ್ತ ಪ್ರದೇಶವೆಂದು ನಾನು ಭಾವಿಸುವುದಿಲ್ಲ’’ ಎಂದು ಆಂಟೊನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಆಂಟೊನ್ಸನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 348 ಎಂದು ದಾಖಲಾಗಿದ್ದು, ಪರಿಸ್ಥಿತಿ ಅಪಾಯಕಾರಿ ಎನ್ನುವುದನ್ನು ಸೂಚಿಸುತ್ತದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಬಾರಿ ಪದಕ ವಿಜೇತ ಆಂಟೊನ್ಸನ್ ಅವರು ತಮ್ಮ ಈ ನಿರ್ಧಾರಕ್ಕಾಗಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ಗೆ (ಬಿಡಬ್ಲ್ಯುಎಫ್) 5,000 ಅಮೆರಿಕನ್ ಡಾಲರ್ ಗಳ (4.5 ಲಕ್ಷ ರೂ.) ದಂಡ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. 9,50,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಆಡುವ ಪರಿಸ್ಥಿತಿಯ ಬಗ್ಗೆ ಡೆನ್ಮಾರ್ಕ್ ನ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಟ್ ಟೀಕೆ ವ್ಯಕ್ತಪಡಿಸಿದ್ದ ಮರುದಿನವೇ ಆಂಟೊನ್ಸನ್ ಈ ಹೆಜ್ಜೆ ಇಟ್ಟಿದ್ದಾರೆ. ದಿಲ್ಲಿ ನಗರವು ಹೆಚ್ಚಾಗಿ ದಟ್ಟವಾದ ಹೊಗೆಯಿಂದ ಆವೃತವಾಗಿರುತ್ತದೆ. ಇದನ್ನು ವೈದ್ಯರು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದ ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಿಂದ ಇಂಡಿಯಾ ಓಪನ್ ಟೂರ್ನಿಯನ್ನು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣವು ಆಗಸ್ಟ್ನಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ಶಿಪ್ ಆಯೋಜಿಸಲು ಸಜ್ಜಾಗಿದೆ.
ಬಿಜೆಪಿ ಸಂಸದ ದುಬೆ ವಿರುದ್ಧದ ಭ್ರಷ್ಟಾಚಾರ ಅರ್ಜಿಯನ್ನು ವಜಾಗೊಳಿಸಿದ ಲೋಕಪಾಲ್
ಹೊಸದಿಲ್ಲಿ, ಜ. 14: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆದಾಯ ಮೀರಿ ಸಂಪತ್ತು ಸಂಗ್ರಹಿಸಿದ್ದಾರೆ ಎಂಬ ಆರೋಪದಡಿ ಸಾಮಾಜಿಕ ಹೋರಾಟಗಾರ ಅಮಿತಾಭ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಲೋಕಪಾಲ ಮಂಗಳವಾರ ತಿರಸ್ಕರಿಸಿದೆ. ದೂರಿನಲ್ಲಿ ಸತ್ಯಾಂಶವಿಲ್ಲ ಹಾಗೂ ಅದು ಕ್ಷುಲ್ಲಕವಾಗಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ತೀರ್ಮಾನಿಸಿತು. ದೂರು ನಿಶಿಕಾಂತ್ ದುಬೆಗಿಂತಲೂ ಅವರ ಪತ್ನಿಯನ್ನು ಮುಖ್ಯವಾಗಿ ಗುರಿಯಾಗಿಸಿದೆ ಎಂದು ಲೋಕಪಾಲ ಪೀಠವು ತನ್ನ 134 ಪುಟಗಳ ಆದೇಶದಲ್ಲಿ ಹೇಳಿದೆ. ದುಬೆ ಅವರು 2009ರಿಂದ 2024ರವರೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಗಳ ಆಧಾರದಲ್ಲಿ ದೂರು ಸಲ್ಲಿಸಲಾಗಿತ್ತು. ಅವರ ಪತ್ನಿಯ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ದುಬೆಗೆ ಸೇರಿದ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ ಲೋಕಪಾಲವು, ಅವರ ಸ್ವಂತ ಸಂಪತ್ತಿನಲ್ಲಿ ಕೇವಲ ಅಲ್ಪ ಬದಲಾವಣೆಗಳು ಮಾತ್ರ ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿದೆ. ಸಾರ್ವಜನಿಕವಾಗಿ ಲಭ್ಯವಿದ್ದ ಮಾಹಿತಿಗಳ ಆಧಾರದಲ್ಲಿ ಪರಿಶೀಲನೆ ನಡೆಸದೆ ದೂರು ಸಲ್ಲಿಸಿರುವುದಕ್ಕಾಗಿ ಆದೇಶವು ದೂರುದಾರರನ್ನು ಟೀಕಿಸಿದೆ. ಲೋಕಪಾಲ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅವರಿಗೆ ಲೋಕಪಾಲವು ಶೋಕಾಸ್ ನೋಟಿಸ್ ಕೂಡ ನೀಡಿತ್ತು. ಈಗ ಆ ನೋಟಿಸ್ ಅನ್ನು ಹಿಂದಕ್ಕೆ ಪಡೆಯಲಾಗಿದೆಯಾದರೂ, ತನ್ನ ಖಾಸಗಿತನದ ಉಲ್ಲಂಘನೆ ಮತ್ತು ಪ್ರತಿಷ್ಠೆ ಹಾನಿಗೆ ಸಂಬಂಧಿಸಿ ಠಾಕೂರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ದುಬೆಗೆ ಲೋಕಪಾಲ ನೀಡಿದೆ.
ಹಂಗೆಲ್ಲಾ ಓಪನ್ ಆಗಿ ಹೇಳಕ್ಕಾಗಲ್ಲ; ರಾಹುಲ್ ಗಾಂಧಿ ಜೊತೆಗಿನ ಖಾಸಗಿ ಚರ್ಚೆಯ ಗುಟ್ಟು ಬಿಡದ ಡಿಕೆ ಶಿವಕುಮಾರ್
ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ಧಂತೇ ಡಿಕೆ ಶಿವಕುಮಾರ್ ಪಳೆಯ ಹೈಪರ್ ಆ್ಯಕ್ಟೀವ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರೊಂದಿಗೆ ಖಾಸಗಿಯಾಗಿ ಏನು ಚರ್ಚೆ ನಡೆಯಿತು ಎಂಬುದರ ಬಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ಕುರಿತು ಕೇಳಿದ ಪ್ರಶ್ನೆಗೆ ಖಾಸಗಿ ಮಾತುಕತೆ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ವಡೋದರಾ ಸೋಲಿಗೆ ರಾಜಕೋಟ್ ನಲ್ಲಿ ಕಿವೀಸ್ ತಿರುಗೇಟು; ಡೆರಿಲ್ ಮಿಚೆಲ್ ರಾಜಾರೋಷದ ಶತಕದ ಮಂದೆ ಮಂಕಾದ ಭಾರತ
New Zealand Beat India- ರಾಜಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸ್ಥಾಪಿಸಿದೆ. ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಮತ್ತು ವಿಲ್ ಯಂಗ್ 3ನೇ ವಿಕೆಟ್ ಗೆ 164 ರನ್ ಗಳ ಜೊತೆಯಾಟವಾಡಿದ್ದು ಭಾರತದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡಿತು. ಅಜೇಯ 131 ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣಕರ್ತರಾದ ಡೆರಿಲ್ ಮಿಚೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶೀರೂರು ಪರ್ಯಾಯ: ನಗರ ದೀಪಾಲಂಕಾರಕ್ಕೆ ಚಾಲನೆ; ಜ. 16ರಂದು ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ
ಉಡುಪಿ, ಜ.14: ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಚೊಚ್ಚಲ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಜ್ಜುಗೊಂಡಿರುವ ನಡುವೆಯೇ, ಉಡುಪಿ ನಗರಸಭೆ ವತಿಯಿಂದ ಶಾಸಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸುವ ಯೋಜನೆಗೆ ಜ.16ರಂದು ಚಾಲನೆ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಸುಮಾರು 50 ಲಕ್ಷ ರೂ.ಗಳ ವೆಚ್ಚದಲ್ಲಿ ಉಡುಪಿ ನಗರದ ಶ್ರೀಕೃಷ್ಣ ಮಠದ ಆಸುಪಾಸಿನ ಇಡೀ ಪ್ರದೇಶವನ್ನು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರಗೊಳಿಸಲಾಗುತ್ತಿದೆ. ಈ ಯೋಜನೆಗೆ ಶುಕ್ರವಾರ ಸಂಜೆ 7ಗಂಟೆಗೆ ಕೋರ್ಟ್ ರಸ್ತೆಯ ಕೆನರಾಬ್ಯಾಂಕ್ ಶಾಖೆಯ ಎದುರು ಚಾಲನೆ ನೀಡಲಾಗುತ್ತದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್ ಸುವರ್ಣ ಇಂದು ಶೀರೂರು ಮಠದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಉಡುಪಿ ನಗರಸಭೆ ಅನುಷ್ಠಾನಗೊಳ್ಳುವ ಈ ಯೋಜನೆಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು ನಗರ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಉದ್ಘಾಟನೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನೆರವೇರಿಸಲಿದ್ದಾರೆ. ಪರಶುರಾಮ ಸ್ವಾಗತ ಗೋಪುರಕ್ಕೆ ಶೀಲನ್ಯಾಸ: ಉಡುಪಿಯ ದಕ್ಷಿಣ ಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿ ಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ನಲ್ಲಿ ಪರಶುರಾಮ ಸ್ವಾಗತ ಗೋಪುರ ನಿರ್ಮಾಣಕ್ಕೆ ಜ.16ರಂದು ಬೆಳಗ್ಗೆ 9ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ಹೇಳಿದರು. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಭವ್ಯ ಸ್ವಾಗತ ಗೋಪುರವನ್ನು ಅಂಬಾಗಿಲು ಜಂಕ್ಷನ್ ಬಳಿ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ನಿರ್ಮಿಸಲಾಗುತ್ತದೆ. ಇದರ ಶಿಲಾನ್ಯಾಸವನ್ನು ಸಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ನೆರವೇರಿಸುವರು. ಅನ್ನಸಂತರ್ಪಣೆ: ಪರ್ಯಾಯ ಮುನ್ನಾದಿನ ಜ.17ರ ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪದ ಬೋರ್ಡ್ ಶಾಲೆ - ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷದಷ್ಟು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನವರಿ 17ರಿಂದ 22ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು. ಪರ್ಯಾಯ ಶೋಭಾಯಾತ್ರೆ: ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ ಎಂದವರು ತಿಳಿಸಿದರು. ಇದರಲ್ಲಿ ದೇಶಾದ್ಯಂತದಿಂದ ಬಂದ ಸಾಂಸ್ಕೃತಿಕ ತಂಡಗಳೊಂದಿಗೆ ಸ್ಥಳೀಯ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ. ಶೋಭಾ ಯಾತ್ರೆ ಜ.18ರ ರವಿವಾರ ಬೆಳಿಗ್ಗೆ ಎರಡು ಗಂಟೆಗೆ ಆರಂಭ ವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದೆ. ಬಳಿಕ ಅಲಂಕೃತ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಮುಂಜಾನೆ 5:30ರಿಂದ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ.ಇದರಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ, ನಾಡಿನ ಗಣ್ಯರು, ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪರ್ಯಾಯ ದರ್ಬಾರ್ನಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಮಧುಕರ ಮುದ್ರಾಡಿ, ಸಂತೋಷ್ ಸುವರ್ಣ ಬೆಳ್ಳೆ ಉಪಸ್ಥಿತರಿದ್ದರು.
ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ
ಉಡುಪಿ, ಜ.14: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿಯ ಪ್ರಯುಕ್ತ ಬುಧವಾರ ಸಂಜೆ ಬ್ರಹ್ಮರಥ ಸಹಿತ ಸಂಭ್ರಮದ ಮೂರುತೇರು ಉತ್ಸವ ನಡೆಯಿತು. 800 ವರ್ಷಗಳ ಹಿಂದೆ ಆಚಾರ್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನದಂದು ಈ ಉತ್ಸವವನ್ನು ಸಂಭ್ರಮ ಹಾಗೂ ಸಡಗರಗಳಿಂದ ನಡೆಸಲಾಗುತ್ತದೆ. ರಾತ್ರಿ ರಥಬೀದಿಯಲ್ಲಿ ಮೂರು ತೇರುಗಳ ಉತ್ಸವ ನಡೆಯುವುದು ಇದರ ವೈಶಿಷ್ಟ್ಯವಾಗಿದೆ. ಇಂದು ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥರು ನೆರವೇರಿಸಿದರು. ಇಂದು ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಮಠದಲ್ಲಿ ಇರಲಿಲ್ಲ. ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆದಿದ್ದು, ಅದಮಾರು ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಇದರಲ್ಲಿ ಭಾಗವಹಿಸಿದ್ದರು. ಭಾವಿ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಕ್ತಿಭೃಂಗ ಸ್ವಾಮೀಜಿ ಭಾಗಿ: 1971ರಲ್ಲಿ ಇಸ್ಕಾನ್ನ ಪ್ರಭುಪಾದರಿಂದ ಪ್ರಭಾವಿತರಾದ ಭಕ್ತಿಭೃಂಗ ಶ್ರೀಗೋವಿಂದ ಸ್ವಾಮಿ ಮಹಾರಾಜ್ ವಿದೇಶ ದಿಂದ ಉಡುಪಿಗೆ ಆಗಮಿಸಿ, ರಥೋತ್ಸವದಲ್ಲಿ ಭಾಗಿಯಾದರು. ಅವರು ಖಜಕಿಸ್ತಾನ ಮುಂತಾದ ಇಸ್ಲಾಂ ರಾಷ್ಟ್ರಗಳಲ್ಲಿ ಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿದ್ದಾರೆ. ಗುರುವಾರ ಚೂರ್ಣೋತ್ಸವ: ಇಂದು ಮೂರು ತೇರು ಉತ್ಸವದ ಬಳಿಕ ನಾಳೆಜ.15ರ ಬೆಳಿಗ್ಗೆ 9ರಿಂದ ರಥಬೀದಿ ಯಲ್ಲಿ ಚೂರ್ಣೋತ್ಸವ ನಡೆಯಲಿದೆ. ಅಪರಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು ಮಕರ ಸಂಕ್ರಾಂತಿಯಂದು ಏಕಾದಶಿಯ ನಿರ್ಜಲ ಉಪವಾಸದಲ್ಲಿದ್ದು, ಮಾರನೆ ದಿನ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆನಂತರ ಚೂರ್ಣೋತ್ಸವ ಆರಂಭವಾಗಲಿದೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
ಚತುಷ್ಪಥ ಕಾಮಗಾರಿ: ಬಜತ್ತೂರಿನಲ್ಲಿ ತಲೆಯೆತ್ತಲು ಸಿದ್ಧವಾಗಿದೆ ಟೋಲ್ ಪ್ಲಾಝಾ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ..ರೋಡ್-ಅಡ್ಡಹೊಳೆ ತನಕದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ಟೋಲ್ ಪ್ಲಾಝಾ ನಿರ್ಮಾಣ ಆಗುತ್ತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ಚತುಷ್ಪಥ ರಸ್ತೆ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್ಗೇಟ್ ಆರಂಭವಾಗುವ ಸಾಧ್ಯತೆಗಳು ವ್ಯಕ್ತವಾಗಿದೆ. ಬಿ.ಸಿ. ರೋಡ್ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ಕಾಮಗಾರಿ ಶೇಕಡಾ 75ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್ಗೇಟ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲವಾದ ಜಾಗವನ್ನು ಹೊಂದಿದ್ದು, ಇಲ್ಲಿ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು ಟೋಲ್ ಪ್ಲಾಝಾ ಅನುಷ್ಠಾನದ ಕಾರ್ಯ ನಡೆಯುತ್ತಿದೆ. ಶೆಲ್ಟರ್ ಹಾಗೂ ಹೆದ್ದಾರಿಯ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು ಇನ್ನು ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ಸಂಸ್ಥೆ ಟೋಲ್ ಪ್ಲಾಝಾ ನಿರ್ಮಾಣದ ಕಾರ್ಯವನ್ನು ನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್ಗಳಿರಲಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದೆ. ಏಪ್ರಿಲ್ನಿಂದ ಟೋಲ್ ಸಂಗ್ರಹ ಸಾಧ್ಯತೆ: ಚತುಷ್ಪಥ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು ಮಾರ್ಚ್, ಏಪ್ರಿಲ್ ವೇಳೆಗೆ ಬಜತ್ತೂರು ಟೋಲ್ಗೇಟ್ ಓಪನ್ ಆಗಿ ಟೋಲ್ ಸಂಗ್ರಹವೂ ಆರಂಭವಾಗುವ ಸಾಧ್ಯತೆ ಇದೆ. ಟೋಲ್ ಆರಂಭಗೊಳ್ಳಬೇಕಾದರೆ ಅದಕ್ಕೆ ಪ್ರತ್ಯೇಕ ನೋಟಿಫಿಕೇಶನ್ ಆಗಬೇಕಿದೆ. ಆ ಬಳಿಕವೇ ಟೋಲ್ ಸಂಗ್ರಹದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ. ಸ್ಥಳೀಯರಿಗೆ ಯಾವ ರೀತಿಯ ಶುಲ್ಕ, ವಿನಾಯಿತಿ ಹೇಗೆ, ಉಳಿದ ವಾಹನಗಳಿಗೆ ಹೇಗೆ ಶುಲ್ಕ ಇರುತ್ತದೆ ಎಂಬುದು ನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ನಡೆಯಲಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಪಂಪ್ವೆಲ್- ಗುಂಡ್ಯ ಮಧ್ಯೆ 7ನೇ ಟೋಲ್ ಫ್ಲಾಝಾ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರ ಮಧ್ಯೆ 5 ಕಡೆ ಟೋಲ್ ಫ್ಲಾಝಾ ಇದೆ. ದ.ಕ. ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್ವೆಲ್ ಮಧ್ಯೆ ಬಿ.ಸಿ. ರೋಡು ಸಮೀಪ ಬ್ರಹ್ಮರಕೂಟ್ಲುನಲ್ಲಿ ಟೋಲ್ ಫ್ಲಾಝಾ ಇದ್ದು, ವಳಾಲುನಲ್ಲಿ ನಿರ್ಮಾಣವಾಗುತ್ತಿರುವ ಟೋಲ್ ಫ್ಲಾಝಾ 2ನೇಯದ್ದಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ 7 ಟೋಲ್ ಫ್ಲಾಝಾಗಳಲ್ಲಿ ಶುಲ್ಕ ತೆರಬೇಕಾಗುತ್ತದೆ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣ; ʼಟೋಲ್ ಫ್ಲಾಝಾ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪೆನಿಯೇ ಟೋಲ್ ಪ್ಲಾಝಾ ನಿರ್ಮಾಣದ ಕಾಮಗಾರಿ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರ ಆಗಲಿದೆ. ಆ ಬಳಿಕವೇ ಟೋಲ್ ಸಂಗ್ರಹದ ಬಗ್ಗೆ ಇಲಾಖೆ ನಿರ್ಧರಿಸಲಿದೆ. -ಅನಿಲ್ಕುಮಾರ್ ಸಿಂಗ್, ಕಾಮಗಾರಿ ಮೇಲ್ವಿಚಾರಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಒಂದು ಟೋಲ್ ಪ್ಲಾಝಾದಿಂದ ಇನ್ನೊಂದು ಟೋಲ್ ಪ್ಲಾಝಾಕ್ಕೆ 60 ಕಿ.ಮೀ.ನ ಅಂತರ ಬೇಕು. ಆದರೆ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಿಂದ ಬಜತ್ತೂರು ಟೋಲ್ ಪ್ಲಾಝಾಕ್ಕೆ ಇರುವ ಅಂತರ ಕೇವಲ 38.06 ಕಿ.ಮೀ. ಆದ್ದರಿಂದ ಈ ಟೋಲ್ ಪ್ಲಾಝಾ ನಿರ್ಮಾಣವು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ದಿನವೊಂದಕ್ಕೆ ಸುಮಾರು 400ರಷ್ಟು ಖಾಸಗಿ ಬಸ್ಗಳು ಪ್ರಯಾಣಿಸುತ್ತಿವೆ. ಇಲ್ಲಿ ಟೋಲ್ ಫ್ಲಾಝಾ ನಿರ್ಮಾದಿಂದ ಇಲ್ಲಿ ಕಟ್ಟಬೇಕಾದ ಶುಲ್ಕದ ಹೊರೆ ಪ್ರಯಾಣಿಕರ ಪಾಲಿಗೆ ಬೀಳುತ್ತದೆ. ಇದಲ್ಲದೆ, ಬೆಂಗಳೂರು, ಹಾಸನ, ಸಕಲೇಶಪುರ ಭಾಗದಿಂದಲೇ ಈ ಭಾಗಕ್ಕೆ ತರಕಾರಿ, ಆಹಾರ ಸಾಮಗ್ರಿಗಳು ಬರುವುದು. ಅವುಗಳಿಗೂ ಬೆಲೆಯೇರಿಕೆ ಆಗಲಿದೆ. ಉದನೆ, ನೆಲ್ಯಾಡಿ, ಶಿರಾಡಿ, ಗುಂಡ್ಯ ಭಾಗದಲ್ಲಿ ಕೃಷಿಕರು ಹೆಚ್ಚಿದ್ದು, ಅವರೆಲ್ಲಾ ಅವಲಂಬನೆ ಮಾಡಿರೋದು ಉಪ್ಪಿನಂಗಡಿಯನ್ನೇ. ಈ ಟೋಲ್ನಿಂದಾಗಿ ಅವರಿಗೂ ತೊಂದರೆಯಾಗಲಿದೆ. ಪ್ರವಾಸಿಗರಿಗೂ ಹೊರೆಯಾಗಲಿದೆ. ಬ್ರಹ್ಮರಕೂಟ್ಲು ಟೋಲ್ಗೆ .36 ವರ್ಷದ ರಿಯಾಯಿತಿ ಅವಧಿಯಿದ್ದು, ಅಲ್ಲಿ ಇನ್ನು 24ವರ್ಷ ಟೋಲ್ ಶುಲ್ಕವನ್ನು ಸಂಗ್ರಹಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಆದ್ದರಿಂದ ಇಲ್ಲಿ ಟೋಲ್ ಪ್ಲಾಝಾ ನಿರ್ಮಾಣದಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. - ಶಬೀರ್ ಅಹಮ್ಮದ್ ನೆಕ್ಕಿಲಾಡಿ, ಸಾಮಾಜಿಕ ಕಾರ್ಯಕರ್ತರು
IND Vs NZ ODI | KL ರಾಹುಲ್ ಆಟ ವ್ಯರ್ಥ; ನ್ಯೂಝಿಲ್ಯಾಂಡ್ ಗೆ 7 ವಿಕೆಟ್ ಗಳ ಜಯ
1-1ರಿಂದ ಸರಣಿ ಸಮಬಲ
ಫೇಸ್ಬುಕ್ನಲ್ಲಿ ಧ್ವೇಷದ ಸಂದೇಶ: ಪ್ರಕರಣ ದಾಖಲು
ಕಾರ್ಕಳ, ಜ.14: ಸಾಮಾಜಿಕ ಜಾಲತಾಣದಲ್ಲಿ ಪರಶುರಾಮ ಥೀಮ್ ಪಾರ್ಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಂಘರ್ಷ ಹುಟ್ಟುಹಾಕುವ ಸಂದೇಶ ಪೋಸ್ಟ್ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ ದೇವಾಡಿಗ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಕಳ್ಳತನಕ್ಕೆ ಟ್ವಿಸ್ಟ್, ಥೀಮ್ ಪಾರ್ಕ್ ಕಟ್ಟಡ ಒಳಗಿನ ಫ್ಯಾನ್ ಎಲೆಕ್ಟ್ರಿಕಲ್ ಉಪಕರಣಗಳನ್ನು ಮೊದಲೇ ಎಗರಿಸಿದ ಆರ್ಎಸ್ಎಸ್ ಕಾರ್ಯಕರ್ತ’ ಎಂಬ ಬರವಣಿಗೆಯ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದನು. ಈತ ಜಾತಿ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿ ಸಮಾಜದಲ್ಲಿ ಅಶಾಂತಿಯನ್ನು ಕೆಡಿಸುವ ಹಾಗೂ ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಈ ಸಂದೇಶವನ್ನು ಪೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವು ದಾಗಿ ದೂರಲಾಗಿದೆ.
ಕುಂದಾಪುರ, ಜ.14: ಹಟ್ಟಿಯಂಗಡಿ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿ ಮೇಳದಲ್ಲಿ ಲೈಟಿಂಗ್ ಕೆಲಸ ಮಾಡಿ ಕೊಂಡಿದ್ದ 34ನೇ ಕುದಿ ಗ್ರಾಮದ ಕಂಬಳಗದ್ದೆಯ ಹೊರ್ಲಾಳಿ ನಿವಾಸಿ ಸೂರ್ಯ(32) ಎಂಬವರು ಜ.12ರಂದು ಸಂಜೆ ಉಪ್ಪಿನಕುದ್ರುವಿನಲ್ಲಿ ಮೇಳದ ಯಕ್ಷಗಾನ ಕಾರ್ಯಕ್ರಮಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿಯ ಶೇಕಡಾ 25 ರಷ್ಟು ಆದಾಯವನ್ನು ಪತ್ನಿ ಜೀವನಾಂಶವಾಗಿ ಪಡೆಯಬಹುದು: ಹೈಕೋರ್ಟ್ ಮಹತ್ವದ ಆದೇಶ
ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ ಪತಿಯ ಆದಾಯದ ಶೇಕಡಾ 25 ರವರೆಗೆ ನೀಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ. ವಿಶೇಷಚೇತನರಲ್ಲದ ಪತಿ, ಪತ್ನಿಯನ್ನು ಪೋಷಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದೂ ತಿಳಿಸಿದೆ.
ಉಡುಪಿ: ಶಿವಯೋಗಿ ಸಿದ್ಧರಾಮರ ಜಯಂತಿ
ಉಡುಪಿ, ಜ.14: ಕಾಯಕದ ಮಹತ್ವವನ್ನು ತಿಳಿಸಿದ ಶಿವಯೋಗಿ ಸಿದ್ದರಾಮರ ತತ್ವ ಆದರ್ಶಗಳನ್ನು ಭೋವಿ ಸಮಾಜದವರು ಸೇರಿದಂತೆ ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹನ್ನೆರಡನೆಯ ಶತಮಾನದ ಪ್ರಮುಖ ಪಂಚ ಶಿವಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ಧರಾಮ ಅವರು ಮಾನವರೆಲ್ಲರೂ ಸಮಾನರು ಎಂಬ ಪರಿಕಲ್ಪನೆಯ ಮೇಲೆ ವಚನ ಸಾಹಿತ್ಯವನ್ನು ರಚಿಸುವುದರೊಂದಿಗೆ ಸಮುದಾಯದ ನಾಯಕರಾದರು. ವಚನ ಸಾಹಿತ್ಯ ಚಳುವಳಿಯ ಸಂದರ್ಭ ದಲ್ಲಿ ಉಂಟಾದ ಸಾಮಾಜಿಕ ಕ್ರಾಂತಿಯಿಂದ ಶಿವಶರಣೆಯರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದ್ದರು ಎಂದರು. ಈ ಹಿಂದೆ ಇದ್ದಂತಹ ಶಿವಶರಣರ ಜೀವನ ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಮಹನೀಯರ ಜಯಂತಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಚದುರಿಹೋದ ಸಂಘಟನೆಗಳು ಒಗ್ಗೂಡಲು ಸಹ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ಶ್ರಮ ಜೀವಿಗಳಾದ ಭೋವಿ ಸಮುದಾಯ ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ರಾಜ್ ಕುಮಾರ್ ಪೆರ್ಣಂಕಿಲ ಮಾತನಾಡಿ, ಶಿವಯೋಗಿ ಸಿದ್ಧರಾಮ ಅವರನ್ನು ಭೋವಿ ಜನಾಂಗ ತಮ್ಮ ಕುಲಗುರುಗಳಾಗಿ ಸ್ವೀಕರಿಸಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಸಮಾಜದ ಪ್ರತಿಯೊಬ್ಬರೂ ನಡೆಯಬೇಕು. ಶ್ರಮ ಜೀವಿಗಳಿಗೆ ಬೆಲೆಯಿದೆ ಎಂದು ಭೋವಿ ಸಮುದಾಯದವರು ತೋರಿಸಿ ಕೊಟ್ಟಿದ್ದಾರೆ. ಕಾಯಕವೇ ಕೈಲಾಸ ಎಂಬ ನುಡಿಯ ಅಡಿಯಲ್ಲಿ ಭೋವಿ ಸಮುದಾಯದವರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಉಡುಪಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಜಗದೀಶ ಪರ್ಕಳ ಶಿವಯೋಗಿ ಸಿದ್ಧರಾಮರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಸಿದ್ಧರಾಮ, ತಮ್ಮ ಕಾರ್ಯಚಟುವ ಟಿಕೆಗಳ ಮೂಲಕ ಗಮನ ಸೆಳೆದಿದ್ದರು. ಬಾಲ್ಯದಿಂದಲೇ ಮುಗ್ಧರಾಗಿದ್ದ ಇವರು ದೈವಭಕ್ತರೂ ಆಗಿದ್ದರು. ಇವರು ಜನಿಸಿದ ಸೊನ್ನಲಿಗೆ ಸ್ಥಳವು ಇಂದು ಪ್ರಸಿದ್ಧ ಧಾರ್ಮಿಕ ನಗರವಾಗಿ ಪರಿವರ್ತನೆಯಾಗಲು ಇವರೇ ಮೂಲ ಕಾರಣೀ ಭೂತರು ಎಂದರು. ಅಪ್ಪಟ ಕನ್ನಡ ಕವಿಯಾದ ಇವರು, ಅನುಭವ ಮಂಟಪದಲ್ಲಿ ಬಸವಣ್ಣ ಸೇರಿದಂತೆ ಹಲವು ಶಿವಶರಣರ ಭೇಟಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಿ, ಸಕಲರ ನೋವಿಗೆ ಸ್ಪಂದಿಸುವುದರೊಂದಿಗೆ ಸಾಮಾಜಿಕ ಕಾರ್ಯಗಳಾದ ಕೆರೆಕಟ್ಟೆ ಹಾಗೂ ದೇವಸ್ಥಾನ ನಿರ್ಮಾಣ, ಅಕ್ಷರ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದರು. ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿದ್ದಾರೆ.ಮೌಢ್ಯತೆ, ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಮನುಷ್ಯರು, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಭಾರತೀಯ ಸೇನೆಯ ವಿಶ್ವನಾಥ ಪೆರ್ಡೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮುದಾಯದ ವ್ಯವಸ್ಥಾಪಕ ಶಂಕರ್, ಭೋವಿ ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ವರ್ಷಾ ಬಿ ಕೋಟ್ಯಾನ್ ವಂದಿಸಿದರು.
ಮೈಸೂರು ರನ್ವೇನಲ್ಲಿ ರಾಹುಲ್ ಗಾಂಧಿ ನ್ಯಾಯ ಪಂಚಾಯ್ತಿ : ಸಿಎಂ, ಡಿಸಿಎಂಗೆ ಸಿಕ್ಕ ಭರವಸೆ ಏನು?
Karnataka Power sharing : ಮೈಸೂರು ರನ್ವೇನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಾತುಕತೆಯ ವಿಚಾರ ರಾಜ್ಯ ರಾಜಕಾರಣದಲ್ಲಿ ತರಹೇವಾರಿ ಸುದ್ದಿಗಳಿಗೆ ಕಾರಣವಾಗುತ್ತಿದೆ. ಈ ನಡುವೆ, ಡಿಕೆಶಿ ಮತ್ತು ಅವರ ಸಹೋದರ ಡಿಕೆ ಸುರೇಶ್, ಮಾಡಿರುವ ಟ್ವೀಟ್, ವಿಷಯವನ್ನು ಇನ್ನಷ್ಟು ಕುತೂಹಲಕ್ಕೆ ದೂಡಿದೆ.
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ನಿಂದ ನೋಟಿಸ್!
ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ರಾಜಮನೆತನದ ಪ್ರಮೋದಾದೇವಿ ಒಡೆಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಾಧಿಕಾರದ ರಚನೆ ಮತ್ತು ಕಾಮಗಾರಿಗಳ ಬಗ್ಗೆ ವಿವರಣೆ ಕೇಳಿದೆ. ಮುಂದಿನ ವಿಚಾರಣೆ ಫೆಬ್ರವರಿ 13ಕ್ಕೆ ನಿಗದಿಯಾಗಿದೆ.
ಉಡುಪಿ: ವಿವಿಧ ಧಾನ್ಯಗಳಲ್ಲಿ ಮೂಡಿಬಂದ ಶ್ರೀಕೃಷ್ಣ
ಉಡುಪಿ, ಜ.14: ಈ ವಾರದ ಕೊನೆಯಲ್ಲಿ ನಡೆಯುವ ಉಡುಪಿ ಪರ್ಯಾಯ ಮಹೋತ್ಸವದ ಆಕರ್ಷಣೆಯಾಗಿ ನಗರದ ಆಭರಣ ಜ್ಯುವೆಲ್ಲರಿ ಆವರಣದಲ್ಲಿ ಒಂದು ವಿಶಿಷ್ಟ ಶ್ರೀಕೃಷ್ಣನ ಕಲಾಕೃತಿಯನ್ನು ರಚಿಸಿ ಪ್ರದರ್ಶನಕ್ಕಿಡಲಾಗಿದೆ. ಉಡುಪಿ ಆರ್ಟಿಸ್ಟ್ ಫೋರಂನ ಕಲಾವಿದರಾದ ಶ್ರೀನಾಥ ಮಣಿಪಾಲ ಇವರು ಸುಮಾರು 20 ಕೆ.ಜಿ. ವಿವಿಧ ಧಾನ್ಯ ಗಳನ್ನು ಬಳಸಿ ಸುಮಾರು 9 ಅಡಿ ಎತ್ತರದ ಕೃಷ್ಣನ ಸುಂದರ ಕಲಾಕೃತಿಯನ್ನು ರಚಿಸಿ, ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶನಕ್ಕಿಟ್ಟಿದ್ದಾರೆ. ಕಲಾಕೃತಿಯನ್ನು ರಚಿಸಲು ಹುರಿಗಡಲೆ, ತೊಗರಿಬೇಳೆ, ಅವರೆಕಾಳು, ಬಟಾಣಿ ಕಾಳು, ಹೆಸರು, ಉದ್ದು, ತಿಂಗಳಾ ವರೆ ಮುಂತಾದ ಧಾನ್ಯಗಳನ್ನು ವರ್ಣಕ್ಕನುಸಾರವಾಗಿ ಪೋಣಿಸಲಾಗಿದೆ. ಆರ್ಟಿಸ್ಟ್ ಫೋರಂನ ಸಹ ಕಲಾವಿದ ರವಿ ಹಿರೇಬೆಟ್ಟು ಕಲಾಕೃತಿಯನ್ನು ರಚಿಸಲು ಸಹಕರಿಸಿದ್ದು ಎಂದು ಕಲಾವಿದ ಶ್ರೀನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಳಮೀಸಲಾತಿ ಮಸೂದೆ ವಾಪಸ್: ನೇಮಕಾತಿ ಪ್ರಕ್ರಿಯೆ ವಿಳಂಬ ಸಾಧ್ಯತೆ
ಬೆಂಗಳೂರು : ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ‘ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕ’ಕ್ಕೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆ ವಾಪಸ್ ಕಳುಹಿಸಿದ್ದು, ಇದರಿಂದಾಗಿ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಗಳಿವೆ. ಡಿಸೆಂಬರ್ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಿನ ವಿಧಾನ ಮಂಡಲ ಅಧಿವೇಶನದಲ್ಲಿ ಒಳ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ರವಾನಿಸಿತ್ತು. ಈ ಮಸೂದೆಗೆ ಹೆಚ್ಚಿನ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಬಿ.ಇಡಿ ಪ್ರವೇಶ ಪರೀಕ್ಷೆ: ಕಾಲೇಜುಗಳ ಆಯ್ಕೆಗೆ ಜ.17ರವರೆಗೆ ಅವಕಾಶ
ಬೆಂಗಳೂರು : 2025ನೇ ಸಾಲಿನ ಬಿ.ಇಡಿ. ದಾಖಲಾತಿ ಸಂಬಂಧ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು https://sts.karnataka.gov.in/GPSTRHK ನಲ್ಲಿ ಪ್ರಕಟಿಸಲಾಗಿದ್ದು, ಕಾಲೇಜುಗಳ ಆಯ್ಕೆಗೆ ಜ.17ರವರೆಗೆ ಅವಕಾಶ ನೀಡಲಾಗಿದೆ. ಈ ಬಾರಿ ಕಲಾ ಅಭ್ಯರ್ಥಿಗಳು ವಿಜ್ಞಾನ ಸೀಟುಗಳಿಗೂ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ. ವಿಜ್ಞಾನ ವಿಷಯದಲ್ಲಿ ಖಾಲಿಯಿರುವ ಸೀಟುಗಳಿಗಿಂತ ವಿಜ್ಞಾನ ವಿಷಯದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ ಸೀಟುಗಳನ್ನು ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ವಿಜ್ಞಾನ ಸೀಟುಗಳನ್ನು ಕಲಾ ಸೀಟುಗಳಾಗಿ ಪರಿವರ್ತಿಸಿ ಕಲಾ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ಆದುದರಿಂದ ಕಾಲೇಜಿನಲ್ಲಿ ಖಾಲಿಯಿರುವ ವಿಜ್ಞಾನ ಸೀಟುಗಳಿಗೂ ಕಲಾ ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಮಾಡಬಹುದಾಗಿದೆ. ಜ.12ಪ್ರಕಟಿಸಿರುವ ಆಕ್ಷೇಪಿತ/ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದಲ್ಲಿ ಹಾಗೂ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಭ್ಯರ್ಥಿಗಳು ತಮ್ಮ ನೋಡಲ್ ಕೇಂದ್ರಗಳಿಗೆ ತೆರಳಿ ಮೂಲ ದಾಖಲೆಗಳ ಪರಿಶೀಲನೆಯನ್ನು ಜ.17ರೊಳಗೆ ಮಾಡಿಸಿಕೊಂಡು ಆಪ್ಷನ್ ಎಂಟ್ರಿ ಮಾಡಿಕೊಂಡಲ್ಲಿ ಮಾತ್ರ ಅಂಥವರನ್ನು ಮುಂದಿನ ಆಯ್ಕೆಪಟ್ಟಿಗೆ ಪರಿಗಣಿಸಲಾಗುವುದು. ಅಂಥವರು ತಮ್ಮ ಮೂಲ ದಾಖಲೆಗಳನ್ನು ಸಂಬಂಧಿತ ನೋಡಲ್ ಕೇಂದ್ರಗಳಲ್ಲಿ ಪರಿಶೀಲನೆಗೊಳಪಡಿಸಿ, ಒದಗಿಸಲಾದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಿಂದಿನ ಆಯ್ಕೆಯನ್ನು ಅಳಿಸಿ ಹೊಸದಾಗಿ ಕಾಲೇಜು ಆಯ್ಕೆಯನ್ನು ಮಾಡಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಶಾಹೀನ್ ಸಂಸ್ಥೆಯಿಂದ ಶಿಕ್ಷಣದ ಜೊತೆಗೆ ಮಾನವೀಯ ಕಾರ್ಯ: ಸುರೇಶ್ ಚೆನಶೆಟ್ಟಿ
ಮೊಬೈಲ್ ಬಳಕೆ, ಮಹಿಳಾ ಸುರಕ್ಷತೆ, ಸ್ವಚ್ಛತೆ ಕುರಿತ ಸಮೀಕ್ಷೆಗೆ ಚಾಲನೆ
ಬ್ಯಾಂಕ್ ಆಫ್ ಬರೋಡಾಗೆ ಐದು ಪ್ರಶಸ್ತಿ
ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲೊಂದಾದ ಬ್ಯಾಂಕ್ ಆಫ್ ಬರೋಡಾವು ಭಾರತೀಯ ಬ್ಯಾಂಕ್ಗಳ ಆಯೋಜಿಸಿದ ಪ್ರತಿಷ್ಠಿತ 21ನೇ ವಾರ್ಷಿಕ ಬ್ಯಾಂಕಿಂಗ್ ತಂತ್ರಜ್ಞಾನ ಪ್ರಶಸ್ತಿಗಳು 2024-25ರಲ್ಲಿ ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿನ ನಾಯಕತ್ವಕ್ಕಾಗಿ ಲಾರ್ಜ್ ಬ್ಯಾಂಕ್ಗಳ ವಿಭಾಗದಲ್ಲಿ ಐದು ಪ್ರಶಸ್ತಿ ವಿಭಾಗಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಎಐ ಮತ್ತು ಎಂಎಲ್ ಅಳವಡಿಕೆ, ಅತ್ಯುತ್ತಮ ಫಿನ್ಟೆಕ್ ಹಾಗೂ ಡಿಪಿಐ ಅಳವಡಿಕೆ, ಅತ್ಯುತ್ತಮ ಐಟಿ ಅಪಾಯ ನಿರ್ವಹಣೆ ಮತ್ತು ಅತ್ಯುತ್ತಮ ತಂತ್ರಜ್ಞಾನ ಪ್ರತಿಭೆ. ಇದಲ್ಲದೆ, ಅತ್ಯುತ್ತಮ ತಂತ್ರಜ್ಞಾನ ಬ್ಯಾಂಕ್ ವಿಭಾಗದಲ್ಲಿ ಬ್ಯಾಂಕ್ಗೆ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಸಾಧನೆ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಅವರು, ‘‘ಐಬಿಎ ಪ್ರಶಸ್ತಿಗಳನ್ನು ಸ್ವೀಕರಿಸುವುದು ಬ್ಯಾಂಕ್ ಆಫ್ ಬರೋಡಾಗೆ ಅಪಾರ ಗೌರವದ ವಿಚಾರವಗಿದೆ. ಇವು ನಾವೀನ್ಯತೆ, ಬಲಿಷ್ಠ ಅಪಾಯ ನಿರ್ವಹಣೆ ಹಾಗೂ ದೃಢವಾದ ತಂತ್ರಜ್ಞಾನ ತಂಡ ನಿರ್ಮಾಣದ ಮೇಲೆ ನಮ್ಮ ನಿರಂತರ ಗಮನವನ್ನು ನೀಡುತ್ತಿದ್ದೆವೆ. ಎಂದು ಹೇಳಿದರು. ಈ ಗೌರವಗಳು ತಂತ್ರಜ್ಞಾನ ಆಧಾರಿತ ನಾವೀನ್ಯತೆ ಮತ್ತು ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಮೇಲಿನ ಬ್ಯಾಂಕ್ ಆಫ್ ಬರೋಡಾದ ದೃಢ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2025ರಲ್ಲಿ ದ್ವೇಷ ಭಾಷಣಗಳ ಭಾರಿ ಏರಿಕೆ: ಇಂಡಿಯಾ ಹೇಟ್ ಲ್ಯಾಬ್ ವರದಿ
ದ್ವೇಷ ಭಾಷಣಗಳಲ್ಲಿ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಟಾಪರ್!
ಮಹಿಳಾ ಅಧಿಕಾರಿಗೆ ನಿಂದನೆ | ಕಠಿಣ ಕ್ರಮ ಕೈಗೊಳ್ಳದಿದ್ದರೆ ಜನರೇ ಪಾಠ ಕಲಿಸಲಿದ್ದಾರೆ : ವಿಜಯೇಂದ್ರ
ಬೆಂಗಳೂರು : ‘ಅಧಿಕಾರ ಮದದಿಂದ ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ನೋಡಿಕೊಂಡು ಪಕ್ಷ ಸುಮ್ಮನಿರಲಾಗದು. ಮಹಿಳಾ ಅಧಿಕಾರಿ ವಿರುದ್ಧ ದಬ್ಬಾಳಿಕೆ ನಡೆಸುವ ಕಾಂಗ್ರೆಸ್ನ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ ಕಾಂಗ್ರೆಸ್ ಸರಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ, ಒಬ್ಬ ಕರ್ತವ್ಯನಿರತ ಮಹಿಳಾ ಅಧಿಕಾರಿಯ ಮೇಲೆ ಹೀಗೆ ಅಸಭ್ಯ ಪುಂಡನಂತೆ ವರ್ತಿಸುತ್ತಿರುವುದು ಅಕ್ಷಮ್ಯ’ ಎಂದು ಆಕ್ಷೇಪಿಸಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದೇ ಪಕ್ಷದ ಈ ಮುಖಂಡನ ಈ ‘ಗೂಂಡಾ ವರ್ತನೆ'ಗೂ ಬಳ್ಳಾರಿಯ ಪ್ರಕರಣದಲ್ಲಿ ವಹಿಸಿದಂತೆ ಇದಕ್ಕೂ ನಿಮ್ಮ 'ಮೌನ' ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ? ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನಂತೂ ಕೇಳುವಂತೆಯೇ ಇಲ್ಲ. ಅವರ ಬಳಿ ಮಾಹಿತಿ ಇರುವುದೇ ಇಲ್ಲ. ಪೊಲೀಸ್ ಇಲಾಖೆಯ ಕೈಕಟ್ಟಿ ಹಾಕಿ, ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ?’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ. ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ @INCKarnataka ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ… pic.twitter.com/01OJDguCJA — Vijayendra Yediyurappa (@BYVijayendra) January 14, 2026
Sabarimala: ಸಂಜೆ 6.43ಕ್ಕೆ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪನ ಭಕ್ತರು
ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಕಳೆದೊಂದು ದಿನದಿಂದ ಕಾದು ಕುಳಿತಿದ್ದ ಲಕ್ಷಾಂತರ ಭಕ್ತರಿಗೆ ಇಂದು ಮಕರ ಸಂಕ್ರಾಂತಿಯಂದು (ಜನವರಿ 14) ಶಬರಿಮಲೆ ಮಕರ ಜ್ಯೋತಿ (Sabaraimale Makara Jyothi 2026) ದರ್ಶನವಾಯಿತು. ಸಂಜೆ 6.43 ರಿಂದ 6.46ರವರೆಗೆ ಜ್ಯೋತಿ ರೂಪದಲ್ಲಿ ಅಯ್ಯಪ್ಪನನ್ನು ಕಂಡು ದೇವಸ್ಥಾನ ಬಳಿ ನೆರೆದಿದ್ದ ಮಾಲಾಧಾರಿಗಳು ಪುನೀತರಾದರು. 2026 ವರ್ಷದ ಮೊದಲ ಹಬ್ಬ ಈ ಮಕರ
ಉಳ್ಳಾಲ: ಮೀಫ್ನಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕೇಂದ್ರ ಸಮಿತಿ ಮಂಗಳೂರು ಇದರ ವತಿಯಿಂದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ಇವರ ಸಹಯೋಗದೊಂದಿಗೆ ಆಯ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಎರಡು ದಿವಸಗಳ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವನ್ನು ಇಸ್ಲಾಹಿ ವಿದ್ಯಾ ಸಂಸ್ಥೆಯಲ್ಲಿ ಜ.12ರಂದು ನಡೆಯಿತು. ಇಸ್ಲಾಹಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಝಾಕ್ ಜಿ. ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾ ಸ್ಪೀಕರ್ ಡಾ.ಯು.ಟಿ. ಖಾದರ್ ಫರೀದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಮೀಫ್ ಹಮ್ಮಿಕೊಂಡ ಇಂತಹಾ ಎಸ್ಎಸ್ಎಲ್ಸಿ ಕಾರ್ಯಾಗಾರಗಳಲ್ಲಿ ಮೀಫ್ನ ಹಲವು ಸದಸ್ಯರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದು, ಈ ಶ್ರಮವನ್ನು ಸಾರ್ಥಕಗೊಳಿಸಲು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ತೇರ್ಗಡೆಗೊಳ್ಳಬೇಕೆಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳ ಮುಂದಿನ ಜೀವನವು ಉತ್ತಮಗೊಳ್ಳಬೇಕಾದಲ್ಲಿ ಎಸ್ಎಸ್ಎಲ್ಸಿಯು ಒಂದು ಪ್ರಮುಖ ಘಟ್ಟವಾ ಗಿದ್ದು, ಮುಖ್ಯವಾಗಿ ಬಾಲಕರು ಹೆಚ್ಚಿನ ಶ್ರಮ ವಹಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಬೇಕಾದದ್ದು ಕಾಲದ ಬೇಡಿಕೆಯಾಗಿದೆ ಎಂದು ಒತ್ತಿ ಹೇಳಿದರು. ಸಮಾರಂಭದಲ್ಲಿ ದ.ಕ. ಜಿಲ್ಲಾ ಡಿಡಿಪಿಐ ಜಿ.ಎಸ್.ಶಶಿಧರ್ , ಬಿಇಒ ಎಚ್.ಆರ್. ಈಶ್ವರ ಮತ್ತು ಜಿಲ್ಲಾ ವಿಷಯ ಪರಿವೀಕ್ಷಕರು ಲಕ್ಷ್ಮೀ ನಾರಾಯಣ್ ಸಮಯೋಚಿತವಾಗಿ ಮಾತನಾಡಿದರು. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ಈ ವರ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳು ಸೇರಿ ಒಟ್ಟು 15 ಕಾರ್ಯಗಾರಗಳನ್ನು ಮೀಫ್ ನಡೆಸಿದ್ದು , ಮುಂದಿನ ದಿನಗಳಲ್ಲಿ ಜಿಲ್ಲೆಯ ಮೌಲಾನಾ ಆಜಾದ್ ವಿದ್ಯಾ ಸಂಸ್ಥೆ ಗಳನ್ನು ಸೇರಿಸಿ, ಇನ್ನು ನಾಲ್ಕು ಕಾರ್ಯಗಾರಗಳನ್ನು ಸಂಘಟಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ತಿಳಿಸಿದರು. ಬೆಂಗಳೂರು ಯುನಿವರ್ಸಿಟಿಯಿಂದ ಇತ್ತೀಚಿಗೆ ಗೌರವ ಡಾಕ್ಟರೇಟ್ ಪಡೆದ ಸ್ಪೀಕರ್ಯು.ಟಿ. ಖಾದರ್ ಅವರನ್ನು ಇಸ್ಲಾಹಿ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಉಳ್ಳಾಲ ತಾಲೂಕಿನ ಆರು ಮೀಫ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟೀಯ ಪ್ರಶಸ್ತಿ ವಿಜೇತ ಯಾಕೂಬ್ ಕಾಯರ್ತಡ್ಕ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಶರೀಫ್ ನಾರಾವಿ ಎರಡು ದಿವಸಗಳ ತರಬೇತಿಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೀಫ್ನ ಉಪಾಧ್ಯಕ್ಷ ಪರ್ವೆಝ್ ಅಲಿ, ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ ಮತ್ತು ಶೇಕ್ ರಹ್ಮತುಲ್ಲಾ, ಕಾರ್ಯಕಾರಿ ಸದಸ್ಯರುಗಳಾದ ಬಿ.ಎ. ನಝೀರ್, ಶರೀಫ್ ಬಜ್ಪೆ, ಕಾರ್ಯಕ್ರಮದ ಸಂಚಾಲಕ ಅಝೀಝ್ ಅಂಬರ್ವ್ಯಾಲಿ, ಇಸ್ಲಾಹಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಬಾಷಾ, ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್, ಸದಸ್ಯರಾದ ಅಬ್ದುಲ್ ಲತೀಫ್, ಅಬೂಹುರೈರ ,ನಿರ್ವಹಣಾಧಿಕಾರಿ ಆಯಿಷಾ ಸಬೀನಾ ಕೈಸಿರೀನ್, ಪ್ರಾಂಶುಪಾಲ ಸುಮಂಗಲಾ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಮತ್ತು ಮ್ಯಾನೇಜರ್ ಅನಿಲಾ ಶೆಟ್ಟಿ ಉಪಸ್ಥಿತರಿದ್ದರು. ಮೀಫ್ನ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು, ಇಸ್ಲಾಹಿ ಶಾಲಾ ಶಿಕ್ಷಕರಾದ ಮುಹಮ್ಮದ್ ಮೂನಿಸ್ ಅಹ್ಸಾನ್ ವಂದಿಸಿದರು. ಇಸ್ಲಾಹಿ ವಿದ್ಯಾ ಸಂಸ್ಥೆಯ ಶಿಕ್ಷಕಿ ನಿತಾಶ ಕಾರ್ಯಕ್ರಮ ನೆರೆವೇರಿಸಿದರು. ಎರಡು ದಿನಗಳ ಕಾರ್ಯಾಗಾರದ ಪ್ರಾಯೋಜಕತ್ವವನ್ನು ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ವಹಿಸಿತ್ತು.
ಉಡುಪಿ, ಜ.14: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾ ಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಪರ್ಯಾಯ ಮಹೋತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ. ಅಲ್ಲದೇ ಗಣ್ಯ ವ್ಯಕ್ತಿಗಳು ಜಿಲ್ಲಾ ಭೇಟಿ ಹಾಗೂ ಜಿಲ್ಲೆಯ ಸೂಕ್ಷತೆಯನ್ನು ಕಂಡು ಮುಂಜಾಗ್ರತೆಗಾಗಿ ಮತ್ತು ಬಂದೊಬಸ್ತ್ ಕರ್ತವ್ಯಕ್ಕೆ ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಎಂಟು ಡಿವೈಎಸ್ಪಿ, 21 ಪೊಲೀಸ್ ನಿರೀಕ್ಷ ಕರು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಪೊಲೀಸ್ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ಕೊಳ್ಳಲಾಗಿದೆ. ಅಲ್ಲದೇ 4 ಕೆಎಸ್ಆರ್ಪಿ, 14-ಡಿಎಆರ್, 5-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ 70 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ. ಒಂದು ಕ್ಯೂಆರ್ಟಿ ತಂಡ, 6 ಆಂಬ್ಯುಲೆನ್ಸ್, 6 ಅಗ್ನಿಶಾಮಕ, 5 ಅಗ್ನಿ ಬುಲೆಟ್, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ, 120 ಬೈನಾಕುಲರ್, 3 ಡ್ರೋನ್ ಕ್ಯಾಮೆರಾ, 300 ಬ್ಯಾರಿಕೇಡ್ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾಜಕ್ಕೆ ಮಠ ಮಂದಿರಗಳ ಕೊಡುಗೆ ಅಪಾರ: ಶಾಸಕ ಶರಣಗೌಡ ಕಂದಕೂರ್
ವಡಗೇರಾ: ತಾಲೂಕಿನ ಸಂಗಮದ ಸಂಗಮೇಶ್ವರ ದೇವಸ್ಥಾನವು ಅತ್ಯಂತ ಐತಿಹಾಸಿಕ ದೇವಸ್ಥಾನವಾಗಿದ್ದು, ಸರಕಾರ ಈ ಸ್ಥಳದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗುರುಮಿಟ್ಕಲ್ ಶಾಸಕ ಶರಣಗೌಡ ಕಂದುಕೂರ ಒತ್ತಾಯಿಸಿದರು. ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣಗೌಡ ಕಂದುಕೂರ, ಸಮಾಜಕ್ಕೆ ಮಠ ಮಂದಿರಗಳ ಕೊಡುಗೆ ಅಪಾರ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. ಮಠ ಮಂದಿರ ಬೆಳವಣಿಗೆಗೆ ಭಕ್ತರ ಸಹಕಾರ ಅತ್ಯಂತ ಮುಖ್ಯವಾಗಿದೆ. ಕರುಣೇಶ್ವರ ಶ್ರೀಗಳು ಸಂಗಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಇಲ್ಲಿ ಉತ್ತಮವಾದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಮಹಿಳೆಯರನ್ನು ಪ್ರತಿಯೊಬ್ಬರು ಪೂಜ್ಯ ಭಾವನೆಯಿಂದ ಕಾಣಬೇಕು. ಮಹಿಳೆಯರಿಗೆ ನಮ್ಮ ದೇಶದಲ್ಲಿ ತುಂಬಾ ಗೌರವ ಇದೆ ಎಂದರು. ಸಿದ್ದಗಂಗಾ ಮಠದ ಶ್ರೀಗಳಿಗೂ ಮತ್ತು ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೂ ಅವಿನಾಭಾವ ಸಂಬಂಧವಿದೆ. ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಾನು ಒಬ್ಬ ಸಾಮಾನ್ಯ ಭಕ್ತನಾಗಿ ಶ್ರಮಿಸುವುದರ ಜೊತೆಗೆ ದೇವಸ್ಥಾನದಲ್ಲಿ ಹಮ್ಮಿಕೊಳ್ಳುವ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೆ ಸದಾ ಕಾಲ ಬೆಂಬಲವಾಗಿ ಶ್ರೀ ಕರುಣೆಶ್ವರ ಮಹಾಸ್ವಾಮಿಗಳ ಜೊತೆಗೆ ಇರುವುದಾಗಿ ಹೇಳಿದರು. ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಮಹದೇವಿ ಬೇವಿನಾಳ ಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವರಾಜ್ ಪಾಟೀಲ್ ಗುರ್ಜಾಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೃಷ್ಣವೇಣಿ ಭೀಮಾ ಸಂಗಮದ ಪರಮ ಪೂಜ್ಯ ಶ್ರೀ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದನಕೆರಾದ ಪರಮಪೂಜ್ಯ ಬನದರಾಚೊಟ್ಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಇದೆ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ವೀರಭದ್ರಯ್ಯ ಸ್ವಾಮಿ ದೇವಸುಗೂರ, ಶಿವರುದ್ರಯ್ಯ ಶಾಸ್ತ್ರಿಗಳು, ಬಸಯ್ಯಸ್ವಾಮಿ ಶಿವಪುರ, ಶಿವಯ್ಯ ಸ್ವಾಮಿ ಸಾತಕೇಡ, ಸಿದ್ದ ಬಸಯ್ಯಸ್ವಾಮಿ ಶಿವಪೂರ, ವಿಶ್ವನಾಥ್ ರೆಡ್ಡಿ ಗೊಂದೆಡಗಿ, ಬಸವಂತರಾಯ ಗೌಡ ಸೈದಾಪುರ, ಮಲ್ಲನಗೌಡ ಕೌಳುರ, ಮಲ್ಲಿಕಾರ್ಜುನ್ ಸತ್ಯಂಪೇಟೆ, ಮಲ್ಲಣ್ಣ ಐಕೂರ, ಮಲ್ಲಿಕಾರ್ಜುನ್ ಕರಿಕಳ್ಳಿ, ಬಾಶುಮಿಯಾ ನಾಯ್ಕೊಡಿ, ಚಂದ್ರುಗೌಡ ಸೈದಾಪುರ, ಪಂಪನಗೌಡ ಸಿರವಾರ ಮತ್ತು ಸಂಗಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮಹಿಳೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
3 ತಿಂಗಳಲ್ಲಿ ಉಡುಪಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ: ಎಸ್ಪಿ ಹರಿರಾಮ್ ಶಂಕರ್
ಉಡುಪಿ: ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮೂರು ನಾಲ್ಕು ತಿಂಗಳಲ್ಲಿ ಜಿಲ್ಲೆಯ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ. ಕೆನರಾ ಬ್ಯಾಂಕ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಲಾದ ಸುಮಾರು ಎರಡು ಲಕ್ಷ ರೂ. ವೆಚ್ಚದ 25 ಬ್ಯಾರಿಕೇಡ್ಗಳನ್ನು ಬುಧವಾರ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಿ ಅವರು ಮಾತನಾಡುತಿದ್ದರು. ಉದ್ಯಾವರ ಬಲಾಯಿಪಾದೆ ಮತ್ತು ಅಂಬಾಗಿಲಿನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಉದ್ದೇಶಿಸಲಾಗಿದೆ. ಕೇಂದ್ರ ಸರಕಾರದಿಂದ ಬಿಡುಗಡೆಯಾಗಿ ರುವ ಐದು ಕೋಟಿ ಅನುದಾನದಲ್ಲಿ, ಉಡುಪಿಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನೀಡಲಾದ ಒಂದು ಕೋಟಿ ರೂ. ಅನುದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ರಾಜ್ಯ ಸರಕಾರ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ 2.5ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು. ಉಡುಪಿ ಜಿಲ್ಲೆಯ ವಿವಿಧೆಡೆ ಅಳವಡಿಸಲಾದ ಬ್ಯಾರಿಕೇಡ್ಗಳ ಪೈಕಿ ಹಲವು ಬ್ಯಾರಿಕೇಡ್ಗಳು ಹಾಳಾಗಿವೆ. ದುಸ್ಥಿತಿಯಲ್ಲಿರುವ ಬ್ಯಾರಿಕೇಡ್ಗಳೇ ಇಂದು ಅಪಘಾತಕ್ಕೆ ಕಾರಣವಾಗುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ರಿಫ್ಲೆಕ್ಟರ್ ಹೊಂದಿರುವ ಗುಣಮಟ್ಟದ ಬ್ಯಾರಿಕೇಡ್ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಬ್ಯಾರಿಕೇಡ್ಗಳನ್ನು ಬಳಸಲಾಗುತ್ತಿದೆ. ಈ ಬಾರಿಯ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಕೆನರಾ ಬ್ಯಾಂಕಿನವರು ನೀಡಿದ ಬ್ಯಾರೀಕೇಡ್ ಸದ್ಬಳಕೆ ಯಾಗಲಿದ್ದು, ಹೆಚ್ಚುವರಿಯಾಗಿ 100 ಬ್ಯಾರಿಕೇಡ್ ಹೊರ ಜಿಲ್ಲೆಯಿಂದ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಕೆನರಾ ಬ್ಯಾಂಕ್ನ ಮಣಿಪಾಲ ವೃತ್ತದ ಜನರಲ್ ಮೆನೇಜರ್ ಎಚ್.ಕೆ.ಗಂಗಾಧರ್, ಹಾಗೂ ಉಡುಪಿ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್, ಮ್ಯಾನೇಜರ್ ನಿರಂಜನ್ ಆಚಾರ್ಯ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾಧಿಕಾರಿಗೆ ಕಾಂಗ್ರೆಸ್ ಮುಖಂಡ ಧಮ್ಕಿ: ಯಾರೇ ಆಗಿದ್ರೂ ಕಾನೂನು ಕ್ರಮ ಎಂದ ಡಿ.ಕೆ.ಶಿವಕುಮಾರ್
ಚಿಕ್ಕಬಳ್ಳಾಪುರ: ಬ್ಯಾನರ್ ತೆರವು ಮಾಡಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ಪಕ್ಷದ ನಾಯಕನ ಈ ವರ್ತನೆ ಏನು ಕ್ರಮ
ಪವರ್ ಟಿವಿ ರಾಕೇಶ್ ಶೆಟ್ಟಿಗೆ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ: ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕೆ ದಂಡನೆ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು, ಪವರ್ ಟಿವಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅವರಿಗೆ ಮೂರು ತಿಂಗಳ ಕಾಲ ಸಿವಿಲ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಅಬ್ದುಲ್ ಸಲೀಂ ಅವರು ಈ ಆದೇಶವನ್ನು ಹೊರಡಿಸಿದ್ದು, ನ್ಯಾಯಾಲಯವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆಯ (CPC) ಆರ್ಡರ್ 39 ರೂಲ್ 2A ಅಡಿಯಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಪ್ರಕರಣದ ಹಿನ್ನೆಲೆಯೆಂದರೆ, ರವಿಕಾಂತೇಗೌಡ ಅವರು ತಮ್ಮ ವಿರುದ್ಧ ಯಾವುದೇ ಆಧಾರರಹಿತ, ಅವಹೇಳನಕಾರಿ ಅಥವಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ಪವರ್ ಟಿವಿ ಸೇರಿದಂತೆ ಹಲವರ ವಿರುದ್ಧ 2023ರಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಸೆಪ್ಟೆಂಬರ್ 8, 2023 ರಂದು ಮಧ್ಯಂತರ ತಡೆಯಾಜ್ಞೆ ನೀಡಿ, ಅರ್ಜಿದಾರರ ಬಗ್ಗೆ ಯಾವುದೇ ನಕಾರಾತ್ಮಕ ಚಿತ್ರಣ ನೀಡುವಂತಹ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಸ್ಪಷ್ಟವಾಗಿ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಈ ಆದೇಶ ಜಾರಿಯಲ್ಲಿದ್ದರೂ ಸಹ, ಪವರ್ ಟಿವಿ ವಾಹಿನಿಯು ಸೆಪ್ಟೆಂಬರ್ 22 ಮತ್ತು 23, 2023 ರಂದು ರವಿಕಾಂತೇಗೌಡರ ವಿರುದ್ಧ ಸರಣಿ ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮಗಳಲ್ಲಿ ರವಿಕಾಂತೇಗೌಡರನ್ನು ದುಷ್ಟ ಐಪಿಎಸ್ ಅಧಿಕಾರಿ ಎಂದು ಕರೆಯಲಾಗಿತ್ತು ಮತ್ತು ಅವರು ಕೋಟ್ಯಂತರ ರೂಪಾಯಿ ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಸೆಟ್ಲ್ಮೆಂಟ್ ಮಾಡಿಕೊಳ್ಳಲು ತಮ್ಮದೇ ಆದ ಒಂದು ಗ್ಯಾಂಗ್ ಹೊಂದಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ರವಿಕಾಂತೇಗೌಡರ ಫೋಟೋಗಳನ್ನು ಬಳಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರು ಸಲ್ಲಿಸಿದ ಫೋಟೋಗಳು ಮತ್ತು ಸುದ್ದಿ ಪ್ರಸಾರದ ಧ್ವನಿಮುದ್ರಿಕೆ ಹೊಂದಿದ್ದ ಪೆನ್-ಡ್ರೈವ್ ಸಾಕ್ಷ್ಯಗಳನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಿದೆ. ನ್ಯಾಯಾಲಯದ ಆದೇಶವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದೇಶದ ಬಗ್ಗೆ ಅರಿವಿದ್ದರೂ ಅದನ್ನು ಉಲ್ಲಂಘಿಸಿರುವುದು ಅಕ್ಷಮ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ರಾಕೇಶ್ ಶೆಟ್ಟಿ ಅವರಿಗೆ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿದರು. ನಿಯಮದಂತೆ, ಜೈಲಿನಲ್ಲಿ ಇರುವ ಅವಧಿಯಲ್ಲಿ ರಾಕೇಶ್ ಶೆಟ್ಟಿ ಅವರಿಗೆ ತಗಲುವ ದಿನಚರಿ ಭತ್ಯೆಯನ್ನು ಅರ್ಜಿದಾರರಾದ ರವಿಕಾಂತೇಗೌಡ ಅವರೇ ಭರಿಸಬೇಕು ಎಂದು ನ್ಯಾಯಾಲಯವು ಸೂಚಿಸಿದೆ. ನ್ಯಾಯಾಲಯವು ಈ ಆದೇಶದ ಮುಂದುವರಿದ ಭಾಗವಾಗಿ, ರಾಕೇಶ್ ಶೆಟ್ಟಿ ಅವರನ್ನು ಸಿವಿಲ್ ಜೈಲಿನಲ್ಲಿ ಇರಿಸಲು ತಗಲುವ ದಿನಚರಿ ಭತ್ಯೆಯನ್ನು (Subsistence Allowance) ಠೇವಣಿ ಇಡಲು ಜನವರಿ 31, 2026 ರಂದು ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ. ಕಾನೂನಿನ ನಿಯಮದಂತೆ, ಒಬ್ಬ ವ್ಯಕ್ತಿಯನ್ನು ಸಿವಿಲ್ ಜೈಲು ಶಿಕ್ಷೆಗೆ ಒಳಪಡಿಸಿದಾಗ, ಆತನ ಜೈಲುವಾಸದ ಖರ್ಚು ವೆಚ್ಚಗಳನ್ನು ಭರಿಸಲು ಸರ್ಕಾರವು ನಿಗದಿಪಡಿಸಿದ ಹಣವನ್ನು ದೂರುದಾರರೇ (ಈ ಪ್ರಕರಣದಲ್ಲಿ ರವಿಕಾಂತೇಗೌಡ ಅವರು) ಪಾವತಿಸಬೇಕಾಗುತ್ತದೆ. ಈ ಭತ್ಯೆಯನ್ನು ಪಾವತಿಸಿದ ನಂತರವಷ್ಟೇ ಶಿಕ್ಷೆಯ ಅನುಷ್ಠಾನದ ಪ್ರಕ್ರಿಯೆಗಳು ಮುಂದುವರಿಯಲಿವೆ.
ಒಕ್ಕೆತ್ತೂರು ಮಸೀದಿ, ಮದರಸ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಜಾಥಾ
ವಿಟ್ಲ : ವಿಟ್ಲ ಸಮೀಪದ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಸೆಕೆಂಡರಿ ಮದರಸ ಇದರ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಭೆ ನಡೆಯಿತು. ಈ ಸಂದರ್ಭ ಒಕ್ಕೆತ್ತೂರು ಮಸೀದಿ ಆವರಣದಿಂದ ಮೆರವಣಿಗೆ ಹೊರಟು ಒಕ್ಕೆತ್ತೂರು ಜಂಕ್ಷನ್ ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಭಾಷಣಗಾರಾದ ಮಹಮ್ಮದ್ ಶಹೀರ್ ಸಖಾಫಿ ಸಾಲೆತ್ತೂರು ಅವರು ಮಾದಕ ದ್ರವ್ಯಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಎಲ್ಲರೂ ಪಣತೊಡಬೇಕೆಂದು ಹೇಳಿದರು. ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ವಿ.ಎಂ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಮಹಮ್ಮದ್ ರಫೀಕ್ ಅಹ್ಸನಿ ಉದ್ಘಾಟಿಸಿದರು. ವಿಟ್ಲ ಡಿ ಗ್ರೂಪ್ ಸಂಘಟನೆಯ ಅಧ್ಯಕ್ಷ ಶಾಕಿರ್ ಅಳಕೆಮಜಲು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭ ಸುನ್ನೀ ಜಮೀಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಂದ ಏಕದಿನ ವಿದ್ಯಾರ್ಥಿ ಸಂಗಮ ಮುಲ್ತಖತ್ತುಲಬ' ನಡೆಯಿತು. ಸ್ವಾದಿಕ್ ಸಖಾಫಿ ಸದರ್ ಉಸ್ತಾದ್ ಸ್ವಾದಿಕ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಅಮೃತರ ಇಂಗ್ಲಿಷ್ಗೆ ಅನುದಾನಿತ ಮೂರು ನಾಟಕ ಕೃತಿಗಳ ಬಿಡುಗಡೆ
ಮಂಗಳೂರು, ಜ.14: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಅಮೃತ ಸೋಮೇಶ್ವರ ಅವರ ಇಂಗ್ಲಿಷ್ಗೆ ಅನುವಾದಿತ ಮೂರು ತುಳು ನಾಟಕ ಕೃತಿಗಳಾದ ‘ಗೊಂದೋಳು’, ‘ಸತ್ಯನಾಪುರತ ಸಿರಿ’, ‘ರಾಯ ರಾವುತೆ’ ಬುಧವಾರ ಬಿಡುಗೆಗೊಂಡಿದೆ. ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನಿಧ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮೂರು ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ‘ಅಮೃತರು ಪ್ರತಿಯೊಂದಕ್ಕೂ ಗುರುಗಳಂತೆ ತಮಗೆ ಮಾರ್ಗದರ್ಶನ ನೀಡಿದವರು. ಅಮೃತರ ಸಾಹಿತ್ಯದ ಹತ್ತು ಹಲವು ಕ್ಷೇತ್ರಗಳಲ್ಲಿ ನಾಟಕವೂ ಒಂದು. ಅವರ ಈ ಮೂರು ನಾಟಕಗಳು ಮೂರು ಮಗ್ಗಲು ಗಳಲ್ಲಿದೆ. ಈ ನಾಟಕಗಳನ್ನು ಅರ್ಥ ಮಾಡಿಕೊಂಡು ಅನುವಾದಿಸುವುದು ಸುಲಭದ ಕೆಲಸವಲ್ಲ. ಡಾ. ಸಿಲ್ವಿಯಾ ರೇಗೊ ಅವರು ಉತ್ತಮ ರೀತಿಯಲ್ಲಿ ಅನುವಾದ ಮಾಡಿದ್ದಾರೆ ’ಎಂದು ವಿವೇಕ ರೈ ಶ್ಲಾಘಿಸಿದರು. ಅಮೃತರ ನಾಟಕಗಳು ಇಂಗ್ಲಿಷ್ನಲ್ಲಿಯೂ ಬರಬೇಕಾಗಿದೆ. ಹೀಗಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವರ ನಾಟಕಗಳು ಜನಪ್ರಿಯವಾಗಲು ಸಾಧ್ಯ ಎಂದರು. ಸಾಹಿತಿಗಳು ಅವರ ಬರಹದ ಮೂಲಕ ಉಳಿಯುತ್ತಾರೆ. ಅವರ ಕೃತಿಗಳ ಪ್ರಕಟನೆ, ಅನುವಾದ ಕೃತಿಗಳ ಪ್ರಕಟನೆ ಮಾಡಿದಾಗ ಅವರ ನೆನಪು ನಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು. *ಅನುವಾದದಲ್ಲಿ ವೃತ್ತಿಪರತೆ ಅಗತ್ಯ: ಸಾಹಿತ್ಯ ಕೃತಿಗಳ ಅನುವಾದ ಎರಡು ಅಗಲಿನ ಕತ್ತಿಯಂತೆ. ಅನುವಾದದಲ್ಲಿ ವೃತ್ತಪರತೆ ಅಗತ್ಯವಾಗಿದೆ. ಇವತ್ತು ಎಐ ತಂತ್ರಜ್ಞಾನವನ್ನು ಪ್ರತಿಯೊಂದಕ್ಕೆ ಬಳಸಲಾಗುತ್ತಿದೆ.ಅದರ ಜ್ಞಾನ ನಮಗೆ ಬೇಕು. ಆದರೆ ಭಾಷಾಂತರ ವಿಚಾರದಲ್ಲಿ ಎಐಯನ್ನು ಅವಲಂಭಿಸಿದರೆ ಭಾಷಾಂತರ ಸರಿಯಾಗದು. ಈಗಾಗಿ ಅನುವಾದ ಮಾಡುವಾಗ ವೃತಿಪರರ ನೆರವು ಪಡೆಯಬೇಕು ಎಂದು ನುಡಿದರು. *ಭಾಷಾಂತರ ವಿಭಾಗ ಆರಂಭವಾಗಲಿ: ವಿಶ್ವ ವಿದ್ಯಾನಿಯಗಳಲ್ಲಿ ಇವತ್ತು ಭಾಷಾಂತರ ವಿಭಾಗಕ್ಕೆ ಹೆಚ್ಚು ಬೇಡಿಕೆ ಇದೆ. ಇದು ಅತ್ಯಂತ ಪ್ರಮುಖವಾದುದು. ಅಲೋಶಿಯೆಸ್ ವಿವಿಯಲ್ಲಿ ಭಾಷಾಂತರ ವಿಭಾಗವನ್ನು ತೆರೆಯುವಂತೆ ಡಾ.ವಿವೇಕ ರೈ ಸಲಹೆ ನೀಡಿದರು. ಅಮೃತ ಸೋಮೇಶ್ವರ ಅವರ ‘ಗೊಂದೋಳು’, ‘ಸತ್ಯನಾಪುರತ ಸಿರಿ’, ‘ರಾಯ ರಾವುತೆ’ ಈ ಮೂರು ನಾಟಕ ಕೃತಿಯನ್ನು ಅಲೋಶಿಯಸ್ ವಿ.ವಿ.ಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸಿಲ್ವಿಯಾ ರೇಗೊ ಅವರು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ರೆ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ತಮ್ಮ ವಿಶ್ವವಿದ್ಯಾನಿಲಯದಲ್ಲಿ ತುಳು ಅಧ್ಯಯನ ಪೀಠ ರಚನೆಯಾಗಲಿದೆ. ನ್ಯೂಯಾರ್ಕ್ನ ದಿನಕರ ರೈ ಅವರು ಇದಕ್ಕಾಗಿ ದೇಣಿಗೆ ನೀಡಲು ಆಸಕ್ತಿ ವಹಿಸಿದ್ದಾರೆ ಎಂದರು. ವಿಶ್ರಾಂತ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಮುದ್ದು ಮೂಡುಬೆಳ್ಳೆ, ನಿವೃತ್ತ ಸಹ ಪ್ರಾಧ್ಯಾಪಕ ಡಾ. ಚೇತನ್ ಸೋಮೇಶ್ವರ, ಅಮೃತರ ನಾಟಕ ಕೃತಿಯನ್ನು ಇಂಗ್ಲೀಷ್ಗೆ ಅನುವಾದಿಸಿರುವ ಅಲೋಶಿಯಸ್ ವಿ.ವಿ.ಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸಿಲ್ವಿಯಾ ರೇಗೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುನರ್ ರಚಿಸಲಾದ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು. ಅಕಾಡೆಮಿ ಲಾಂಛನ ರಚಿಸಿದ ಕಲಾವಿದ ಗೋಪಿ ಅವರನ್ನು ಅಭಿನಂದಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಮೆಲಿಸಾ ಗೋವಿಯಸ್ ಸ್ವಾಗತಿಸಿದರು. ಕರ್ನಾಟಕ ತುಳು ಅಕಾಡೆಮಿ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ದೇಶಾದ್ಯಂತ 9 ಹೊಸ ಅಮೃತ್ ಭಾರತ್ ರೈಲು ಆರಂಭ - ರೈಲ್ವೆ ಸಚಿವ ಘೋಷಣೆ; ಕರ್ನಾಟಕಕ್ಕೂ ಒಂದು! ಎಲ್ಲಿಂದ ಎಲ್ಲಿಗೆ ಸಂಚಾರ?
ಭಾರತೀಯ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಒಂಬತ್ತು ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ರೈಲುಗಳು ಸಂಪೂರ್ಣವಾಗಿ ನಾನ್-ಎಸಿ ಆಗಿದ್ದು, ದೇಶದ ಹಲವು ರಾಜ್ಯಗಳನ್ನು ಸಂಪರ್ಕಿಸಲಿವೆ. ಕರ್ನಾಟಕಕ್ಕೂ ಒಂದು ರೈಲು ಲಭ್ಯವಾಗಲಿದೆ. ಈ ಹೊಸ ರೈಲುಗಳು ಪ್ರಯಾಣಿಕರ ಸೌಕರ್ಯ ಮತ್ತು ಸಂಪರ್ಕವನ್ನು ಸುಧಾರಿಸಲಿವೆ. ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಇವು ಸಹಕಾರಿಯಾಗಲಿವೆ.
ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ನಲ್ಲಿ 2023ರ ವಿಶ್ವಕಪ್ ಫೈನಲ್ ನ ಕಹಿನೆನಪು! ತಪ್ಪಿ ಹೋಯ್ತು ಅಪರೂಪದ ದಾಖಲೆ
Virat Kohli Records- ರಾಜ್ಕೋಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ಗಳಿಗೆ ಔಟಾದರು. ಈ ಪಂದ್ಯ ಅನೇಕ ಕಾರಣಗಳಿಗೆ ಸ್ಮರಣೀಯವೆನ್ನಿಸಿಕೊಂಡಿತು. ಅವರು ಔಟಾದ ರೀತಿ 2023ರ ವಿಶ್ವಕಪ್ ಫೈನಲ್ನ ದುರಂತವನ್ನು ನೆನಪಿಸಿತು. ಆ ಬಳಿಕ 18 ಏಕದಿನ ಇನ್ನಿಂಗ್ಸ್ ನಲ್ಲಿ ಅವರು ಕ್ಲೀನ್ ಬೌಲ್ಡ್ ಆದ ಉದಾಹರಣೆಗಳಿಲ್ಲ. ಇದೀಗ ಬರೋಬ್ಬರಿ 783 ದಿನಗಳ ನಂತರ ಅವರು ಕ್ಲೀನ್ ಬೌಲ್ಡ್ ಆಗಿ ಔಟ್ ಆಗಿದ್ದಾರೆ. ಬೌಲ್ಡ್ ಆದ ಕೊಹ್ಲಿ, ಸತತ ಆರು ಅರ್ಧಶತಕಗಳ ಭಾರತೀಯ ದಾಖಲೆ ಮಾಡುವ ಅಪೂರ್ವ ಅವಕಾಶವನ್ನು ಕಳೆದುಕೊಂಡರು.
ಕೆಪಿಟಿ : ಅರೆಕಾಲಿಕ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು,ಜ.14: ನಗರದ ಕೆಪಿಟಿ (ಕರ್ನಾಟಕ ಪಾಲಿಟೆಕ್ನಿಕ್)ಯಲ್ಲಿ 2025-26ನೇ ಸಾಲಿನ ಅರೆಕಾಲಿಕ (ಪಾರ್ಟ್-ಟೈಮ್) ದ್ವಿತೀಯ ವಷರ್ದ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶಕ್ಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಪಟ್ಟ ವಿಷಯದಲ್ಲಿ 2 ವಷರ್ಗಳ ತಾಂತ್ರಿಕ ಸೇವಾನುಭವ ಹೊಂದಿರುವ ಹಾಗೂ ಎಸೆಸ್ಸೆಲ್ಸಿ ತೇರ್ಗಡೆ ಹೊಂದಿದ ನಂತರ ಯಾವುದೇ ಅವಧಿಯಲ್ಲಿ 2 ವಷರ್ಗಳ ಐಟಿಐ ಕೋರ್ಸ್/ದ್ವಿತೀಯ ಪಿಯುಸಿ ವಿಜ್ಞಾನ/ತಾಂತ್ರಿಕ ವಿಷಯಗಳಲ್ಲಿ ಕರ್ನಾಟಕದಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ಅರ್ಹ ಆಸಕ್ತ ಅಭ್ಯರ್ಥಿಗಳು ಜ.15 ರೊಳಗೆ ಕೆಪಿಟಿ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಪ್ರವೇಶ ಪ್ರಕ್ರಿಯೆಯನ್ನು ಜ.20ರೊಳಗೆ ನಡೆಸಲಾಗುತ್ತದೆ ಎಂದು ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಳಿಗಳ ದ್ವಿಪಥ, ಬೆಂಗಳೂರು-ಕಾರವಾರ ನಡುವೆ ವಂದೇಭಾರತ್ ರೈಲು ಕರಾವಳಿ ಜನರ ಬೇಡಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆ
‘ಕರ್ನಾಟಕದ ನಾವೀನ್ಯತೆ ಮತ್ತು ಕೌಶಲ್ಯ ಸಹಯೋಗ’; ನ್ಯೂಝಿಲ್ಯಾಂಡ್ ನಿಯೋಗಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮನವರಿಕೆ
ಬೆಂಗಳೂರು : ನ್ಯೂಝಿಲ್ಯಾಂಡ್ ಪ್ರಧಾನಮಂತ್ರಿಗಳ ಏಷ್ಯಾ ವಿದ್ಯಾರ್ಥಿ ವೇತನ (PMSA)ಕಾರ್ಯಕ್ರಮದ ಭಾಗವಾಗಿರುವ ನ್ಯೂಝಿಲ್ಯಾಂಡ್ನ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿಯೋಗವು ರಾಜ್ಯದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಉದಯೋನ್ಮುಖ ವಲಯಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸಿತು. ಜನರಿಂದ ಜನರಿಗೆ ಸಂಪರ್ಕಗಳನ್ನು ಬಲಪಡಿಸುವುದು ಮತ್ತು ಕರ್ನಾಟಕ ಮತ್ತು ನ್ಯೂಝಿಲ್ಯಾಂಡ್ ನಡುವೆ ದೀರ್ಘಕಾಲೀನ ಸಾಂಸ್ಥಿಕ ಸಂಪರ್ಕಗಳನ್ನು ನಿರ್ಮಿಸುವ ಮೇಲೆ ಈ ಸಂವಾದ ಕೇಂದ್ರೀಕರಿಸಿತ್ತು. ಏಷ್ಯಾಕ್ಕಾಗಿ ಪ್ರಧಾನಮಂತ್ರಿಗಳ ವಿದ್ಯಾರ್ಥಿವೇತನ ನ್ಯೂಝಿಲ್ಯಾಂಡ್ ಸರಕಾರದ ಅನುದಾನಿತ ಕಾರ್ಯಕ್ರಮವಾಗಿದ್ದು, ಇದನ್ನು ಶಿಕ್ಷಣ ನ್ಯೂಝಿಲ್ಯಾಂಡ್ (ENZ) ನಿರ್ವಹಿಸುತ್ತದೆ. ಇದು ನಾವೀನ್ಯತೆ, ಶಿಕ್ಷಣ ಮತ್ತು ನಾಯಕತ್ವದಲ್ಲಿ ಜಾಗತಿಕ ಸಾಮರ್ಥ್ಯ ಗಳನ್ನು ನಿರ್ಮಿಸುವಾಗ ಏಷ್ಯಾದಾದ್ಯಂತ ಪಾಲುದಾರಿಕೆಗಳನ್ನು ಗಾಢವಾಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಿಯೋಗವು ನ್ಯೂಝಿಲ್ಯಾಂಡ್ನ ಸಂಶೋಧನೆ, ತಂತ್ರಜ್ಞಾನ, ಶಿಕ್ಷಣ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡಿತ್ತು ಎಂಬ ಮಾಹಿತಿ ನೀಡಿದ್ದಾರೆ. ಭಾರತದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕರ್ನಾಟಕದ ಪ್ರಮುಖ ಸ್ಥಾನವನ್ನು ಪಡೆದಿದೆ ಎಂದು ಸಚಿವರು ನ್ಯೂಝಿಲ್ಯಾಂಡ್ ಪ್ರತಿನಿಧಿಗಳಿಗೆ ತಿಳಿಸಿದರು. 250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ದೊಡ್ಡ ಜಾಲವನ್ನು ಹೊಂದಿರುವ ರಾಜ್ಯದ ಬಲವಾದ ಪ್ರತಿಭೆಗಳ ನೆಲೆಯ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕ ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗದ ನೈಸರ್ಗಿಕ ತಾಣವಾಗಿದೆ, ಕೌಶಲ್ಯ ಮತ್ತು ಮಾರುಕಟ್ಟೆ ಪ್ರವೇಶ ಕಾರಿಡಾರ್ಗಳನ್ನು ರಚಿಸುವುದರ ಮೇಲೆ ಕರ್ನಾಟಕ ಒತ್ತು ನೀಡಿದೆ. ಅಲ್ಲದೆ, ಎರಡೂ ದೇಶಗಳ ನವೋದ್ಯಮಗಳು, ಸಂಶೋಧಕರು ಮತ್ತು ಕಂಪನಿಗಳು ಮಾರುಕಟ್ಟೆಗಳಲ್ಲಿ ಪರಿಹಾರಗಳನ್ನು ಅಳೆಯಲು ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದ ‘ಡೀಪ್ಟೆಕ್ ದಶಕದ’ ಮಾರ್ಗಸೂಚಿಯ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಹವಾಮಾನ ಮತ್ತು ಸಂವೇದಕ ತಂತ್ರಜ್ಞಾನಗಳು, ಕೃಷಿ ತಂತ್ರಜ್ಞಾನ, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಇತರ ಉದಯೋನ್ಮುಖ ಡಿಜಿಟಲ್ ವಲಯಗಳಲ್ಲಿ ಸಂಭಾವ್ಯ ಸಹಯೋಗವನ್ನು ನಿರೀಕ್ಷಿಸುವುದಾಗಿ ಹೇಳಿದರು. ನವೋದ್ಯಮಗಳು, ಶೈಕ್ಷಣಿಕ, ಕೈಗಾರಿಕೆ ಮತ್ತು ಸರಕಾರಿ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಕ್ರಿಯಗೊಳಿಸಲು ನಿಯೋಗವು ಅದರ ಜಾಗತಿಕ ಇನ್ನೋವೇಶನ್ ಅಲೈಯನ್ಸ್ ವೇದಿಕೆಯ ಮೂಲಕ ಐಟಿ ಮತ್ತು ಬಿಟಿ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡಬೇಕೆಂದು ಸಚಿವರು ಸೂಚಿಸಿದರು. ಸಹಯೋಗದ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಲು ಮತ್ತು ಅವುಗಳನ್ನು ಪ್ರಗತಿಗೊಳಿಸಲು ಕಾರ್ಯನಿರತ ಗುಂಪನ್ನು ರಚಿಸಲು ಇಲಾಖೆಯೊಂದಿಗೆ ಕೆಲಸ ಮಾಡಲು ಮೈಕೆಲ್ ಜಾನ್ ನೆಹೊ ನಿಯೋಗವು ಆಸಕ್ತಿ ವ್ಯಕ್ತಪಡಿಸಿತು ಎಂದು ಪ್ರಕಟಣೆ ತಿಳಿಸಿದೆ.
ಜ.17ಕ್ಕೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
ಉಡುಪಿ, ಜ.14: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜ.17ರ ಶನಿವಾರ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಈ ವರ್ಷದ ಪ್ರಶಸ್ತಿಯನ್ನು ಹಿರಿಯ ಲೇಖಕಿ ಡಾ. ಗಿರಿಜಾ ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಗುವುದು. ಅಧ್ಯಕ್ಷತೆಯನ್ನು ಮುಳಿಯ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ನಾ ದಾಮೋದರ ಶೆಟ್ಟಿ ವಹಿಸಲಿದ್ದು, ಹಿರಿಯ ವಿದ್ವಾಂಸ ಡಾ. ಬಿ.ಎ.ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕಿ ಡಾ.ಸರಸ್ವತಿ ಅಭಿನಂದನಾ ಭಾಷಣ ಮಾಡಲಿರುವರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ತಾಜ್ ಮಹಲ್ ನಲ್ಲಿ ನಡೆಯುವ ಉರೂಸ್ ಗೆ ನಿಷೇಧ ಹೇರಬೇಕು: ಹಿಂದೂ ಮಹಾಸಭಾ ಆಗ್ರಹ
ಲಕ್ನೊ: ಉತ್ತರ ಪ್ರದೇಶದ ಆಗ್ರಾ ಪಟ್ಟಣದಲ್ಲಿ ನಡೆಯಲಿರುವ ಮೂರು ದಿನಗಳ ಅವಧಿಯ ಉರೂಸ್ ಅನ್ನು ನಿಷೇಧಿಸಬೇಕು ಎಂದು ಹಿಂದೂ ಬಲಪಂಥೀಯ ಸಂಘಟನೆಗಳು ಆಗ್ರಹಿಸಿವೆ. ಪ್ರೀತಿಯ ಸ್ಮಾರಕ ತಾಜ್ ಮಹಲ್ ಎದುರು ಗುರುವಾರದಿಂದ ಪ್ರಾರಂಭವಾಗಲಿರುವ ಪ್ರಸ್ತಾವಿತ ಉರೂಸ್ ಕಾರ್ಯಕ್ರಮವನ್ನು ಪ್ರತಿಭಟಿಸಿ ಧರಣಿ ನಡೆಸಿದ ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕರ್ತರು, ಉರೂಸ್ ಗೆ ನಿಷೇಧ ಹೇರಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿದರು. “ತಾಜ್ ಮಹಲ್ ನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಸ್ಥಳೀಯ ನಿವಾಸಿಗಳಿಗೆ ಈ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಮಾತ್ರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ” ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷೆ ಮೀರಾ ರಾಥೋರ್ ಹೇಳಿದರು. “ತಾಜ್ ಮಹಲ್ ಒಳಗೆ ಉರೂಸ್ ನಡೆದ ಇತಿಹಾಸವೇ ಇಲ್ಲ. ಒಂದು ವೇಳೆ ತಾಜ್ ಮಹಲ್ ಒಳಗೆ ಉರೂಸ್ ನಡೆಸಲು ಅನುಮತಿ ನೀಡಿದರೆ, ಹಿಂದುತ್ವ ಸಂಘಟನೆಗಳು ಶಿವ ತಾಂಡವ ಕಾರ್ಯಕ್ರಮವನ್ನು ಆಯೋಜಿಸಲಿವೆ”, ಎಂದು ಅವರು ಎಚ್ಚರಿಕೆ ನೀಡಿದರು. ಉರೂಸ್ ಗೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗ್ರಾದ ಜಿಲ್ಲಾ ನ್ಯಾಯಾಲಯದ ಮುಂದೆ ಬಾಕಿಯಿದೆ. ಈ ಅರ್ಜಿಯ ವಿಚಾರಣೆ ಗುರುವಾರ ನ್ಯಾಯಾಲಯದ ಮುಂದೆ ಬರಲಿದೆ.
ರಜೆಯಲ್ಲೂ ಲಿಂಗ ತಾರತಮ್ಯ; ಬಹುತೇಕ ಭಾರತೀಯ ನಾರಿಯರಿಗೆ ಸಜೆಯಾಗುತ್ತಿದೆ ರಜೆ!
ಮಹಿಳೆಯರೂ ಭಾವನಾತ್ಮಕವಾಗಿ ಹೆಚ್ಚು ಪುನಶ್ಚೇತನ ಸಿಗುವಂತಹ ರಜಾ ದಿನಗಳನ್ನು ಅನುಭವಿಸಬೇಕು. ಹೆಚ್ಚು ಜವಾಬ್ದಾರಿ, ನಿರೀಕ್ಷೆಗಳು ಇರಬಾರದು. ದೈನಂದಿನ ಚಟುವಟಿಕೆಗಳಿಂದ ಮುಕ್ತಿ ಸಿಗಬೇಕು. ರಜಾ ದಿನಗಳು ಭಾರತೀಯ ಮಹಿಳೆಯರಿಗೆ ಹೊರೆಯೇ? ಬಹಳಷ್ಟು ಭಾರತೀಯ ಮಹಿಳೆಯರಿಗೆ ರಜಾ ದಿನಗಳೆಂದರೆ ಬಾಯಲ್ಲಿ ಹೇಳಲಾಗದ, ಮೌನವಾಗಿ ಅನುಭವಿಸುವ ವಾಸ್ತವವಾಗಿರುತ್ತದೆ. ಈ ಬಗ್ಗೆ ಭಾರತೀಯ ಮಹಿಳೆಯರು ಏನು ಹೇಳುತ್ತಾರೆ? ಪ್ರವಾಸ ರಗಳೆ ಆಗಬಾರದು ಪ್ರವಾಸ ಒಂದು ಪ್ಯಾಶನ್ (passion). ಈ ವಿಚಾರದಲ್ಲಿ ಗಂಡ-ಹೆಂಡತಿಯ ಅಭಿರುಚಿ ಒಂದೇ ಇದ್ದಾಗ ಮಾತ್ರ ಅದು ಪ್ರವಾಸ. ಇಲ್ಲದಿದ್ದರೆ ಅದು ತ್ರಾಸ ಎಂದು ಹೇಳುತ್ತಾರೆ ಬೆಂಗಳೂರಿನ ಸರ್ಕಾರಿ ಉದ್ಯೋಗಿ ಲೀಲಾ. “ನಮ್ಮ ಮನೆಯಲ್ಲಂತೂ ಪ್ರವಾಸದ ಆರಂಭ ಅಂದರೆ ಪ್ಲ್ಯಾನಿಂಗ್, ಬಜೆಟ್, ಬಟ್ಟೆಬರೆ, ಸಾಕ್ಸ್ ಪ್ಯಾಕ್ ಮಾಡುವುದರಿಂದ ಹಿಡಿದು ಕೊನೆಗೆ ವಾಪಸ್ ಬಂದ ನಂತರ ಅನ್ಪ್ಯಾಕ್ ಮಾಡುವವರೆಗಿನ ರಗಳೆ ನನ್ನದೇ. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡು ಗುರಿ ತಲುಪಿದ ನಂತರ ಟೂರ್ ಆಪರೇಟರ್ ಪಾತ್ರವನ್ನೂ ನಿಭಾಯಿಸಬೇಕು. ಹೋಟೆಲ್ ರೂಮ್ ಸರಿಯಿಲ್ಲದಿದ್ದರೆ, ಊಟ ಸರಿಯಾಗದಿದ್ದರೆ ಅದರ ಜವಾಬ್ದಾರಿಯನ್ನೂ ಹೊತ್ತು ಮನೆಯವರ ಮಾತು ಕೇಳಬೇಕು. ಮಕ್ಕಳನ್ನು ಕರೆದುಕೊಂಡು ಪ್ರವಾಸ ಹೋಗುವುದು ಎಂದರೆ ಮನೆಯನ್ನೇ ಬೇರೆ ಲೊಕೇಶನ್ಗೆ ಶಿಫ್ಟ್ ಮಾಡಿದಂತೆ!” ಎಂದು ತಮ್ಮ ಅನುಭವ ವಿವರಿಸಿದರು. “ದಿನಚರಿಯಲ್ಲಿ ಅಡುಗೆ, ಮನೆಗೆಲಸ ಬಿಟ್ಟರೆ ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ, ಸ್ನಾನದ ಟವಲ್ ಇಟ್ಟು, ಕೊಳೆಯಾದ ಬಟ್ಟೆಯನ್ನು ಬೇರೆ ಕವರ್ಗೆ ತುಂಬಿಸಿ, ಅವರಿಗೆ ತಿಂಡಿ ತಿನ್ನಿಸಿ, ರೆಡಿ ಮಾಡಿ ಹೊರಗೆ ಕರೆದುಕೊಂಡು ಹೋಗುವುದು ನನ್ನ ಟೂರ್ ಪ್ಯಾಕೇಜ್ನಲ್ಲಿ ಸೇರಿರುತ್ತದೆ. ಮಕ್ಕಳಷ್ಟೇ ಅಲ್ಲ, ಗಂಡನಿಗೂ ಪ್ರತಿಯೊಂದು ವಸ್ತುವನ್ನು ಕೈಗೆ ಹಿಡಿಯಬೇಕು. ರೂಮ್ನಿಂದ ಹೊರಟು ಹೊರಗೆ ತಿರುಗಾಡುವಾಗಲೂ ಯಾರಿಗೂ ಯಾವುದೂ ಕಮ್ಮಿಯಾಗದಂತೆ ನೋಡಿಕೊಳ್ಳಬೇಕು” ಎಂದು ಲೀಲಾ ಹೇಳುತ್ತಾರೆ. ಅವಲಂಬನೆಯೇ ದೊಡ್ಡ ಸಮಸ್ಯೆ ಮಂಗಳೂರಿನ ನಿವಾಸಿ ಡಿಯಾನ್ ವ್ಯಾಸ್ ಅವರ ಪ್ರಕಾರ, ಪತಿ ಅಥವಾ ಪತ್ನಿ ಬಹಳ ಅವಲಂಬಿತವಾಗಿದ್ದರೆ ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಪತಿ ಎಲ್ಲದಕ್ಕೂ ಪತ್ನಿಯ ಮೇಲೆ ಅವಲಂಬಿತನಾಗಿದ್ದರೆ ರಜೆ ಮತ್ತು ಮನೆ ಎರಡೂ ಒಂದೇ ಆಗಿರುತ್ತದೆ. “ಬಹಳಷ್ಟು ಬಾರಿ ನನ್ನ ಪತಿ ಬ್ಯುಸಿಯಾಗಿರುತ್ತಾರೆ. ಅವರ ಲಭ್ಯತೆಯನ್ನು ಅನುಸರಿಸಿ ನಮ್ಮ ರಜಾ ಯೋಜನೆ ಆಗುತ್ತದೆ. ಹೀಗಾಗಿ ಪ್ರತಿಬಾರಿಯೂ ನನ್ನ ಅಗತ್ಯಗಳಿಗಿಂತ ಅವರಿಗೇ ಆದ್ಯತೆ ಸಿಗುತ್ತದೆ” ಎಂದು ಡಿಯಾನ್ ಹೇಳುತ್ತಾರೆ. ಏಕಾಂಗಿ ಪ್ರವಾಸ ಕಲಿತ ಲೀಲಾ ಅವ್ಯವಸ್ಥೆ ಮತ್ತು ಹೊರೆಯನ್ನು ಹೊತ್ತು ಸಾಕಾಗಿರುವ ಲೀಲಾ ಈಗ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. “ಮನೆಯಿಂದ ಒಬ್ಬರೇ ಹೊರಗೆ ಹೋದಾಗಲೇ ಅದು ನಿಜವಾದ ಪ್ರವಾಸ ಅನ್ನಿಸುತ್ತದೆ. ಅಲ್ಲಿ ಮನೆಯ ಮುಖಗಳು ಕಾಣುವುದಿಲ್ಲ. ಯಾರ ಜವಾಬ್ದಾರಿಯೂ ಇರುವುದಿಲ್ಲ. ಒತ್ತಡರಹಿತವಾಗಿ ಅಡ್ಡಾಡುವುದೇ ನಿಜವಾದ ಪ್ರವಾಸ. ಹಾಗಾಗಿ ಸಮಾನ ಮನಸ್ಕರ ಜತೆ ಪ್ರವಾಸ ಹೋದಾಗಲೇ ಚೆನ್ನ. ಹಾಲಿ ಅಥವಾ ಮಾಜಿ ಸಹೋದ್ಯೋಗಿಗಳು, ಬಾಲ್ಯದ ಸ್ನೇಹಿತರು, ನೆರೆಹೊರೆಯವರ ಜತೆ ಪ್ರವಾಸ ಮಾಡುವುದು ಒಳ್ಳೆಯ ಐಡಿಯಾ. ಖರ್ಚೂ ಕಡಿಮೆ ಇರುತ್ತದೆ, ಜವಾಬ್ದಾರಿಯೂ ಇರುವುದಿಲ್ಲ. ವಿದೇಶ ಪ್ರವಾಸಕ್ಕೆ ಇಡೀ ಕುಟುಂಬ ಹೊರಟರೆ 6–15 ಲಕ್ಷ ರೂ. ಬೇಕಾಗುತ್ತದೆ. ಒಬ್ಬರೇ ಹೋದರೆ 1–3 ಲಕ್ಷ ರೂ.ನಲ್ಲಿ ಮುಗಿಸಬಹುದು” ಎಂದು ಲೀಲಾ ವಿವರಿಸುತ್ತಾರೆ. ಪತಿಯ ನೆರವು ಸಿಕ್ಕರೆ ರಜಾ ಮಜಾ ಆದರೆ ಸಬೀನಾ ಇರ್ಷಾದ್ ಅವರು ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ರಜೆಯಲ್ಲಷ್ಟೇ ಅಲ್ಲ, ಪ್ರತಿದಿನವೂ ಮನೆಯಲ್ಲಿನ ಕೆಲಸದ ಮುಕ್ಕಾಲು ಭಾಗವನ್ನು ಪತಿಯೇ ಮಾಡುತ್ತಾರೆ. ಅವರು ಬಹಳ ಉತ್ಸಾಹಿ. ಹೀಗಾಗಿ ಹೊರಗೆ ಹೋದಾಗಲೂ ಅವರಿಗೆ ಅದು ದಿನಚರಿಯಂತೆಯೇ ಆಗುತ್ತದೆ. ಪಾತ್ರೆ ತೊಳೆಯುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಶಾಲೆಗೆ ಕಳುಹಿಸುವುದು, ಕರೆದುಕೊಂಡು ಬರುವುದು ಎಲ್ಲವನ್ನೂ ಅವರೇ ಮಾಡುತ್ತಾರೆ. ಅಡುಗೆ ಮಾತ್ರ ನನ್ನ ಕೆಲಸ, ಅದ್ರಲ್ಲೂ ಕೆಲವೊಮ್ಮೆ ಅವರು ಸಹಾಯ ಮಾಡುತ್ತಾರೆ. ಮೀನು ತೊಳೆಯಲು ನನಗೆ ಬರಲ್ಲ, ಅದನ್ನೂ ಅವರೇ ಕಟ್ ಮಾಡಿ ಕ್ಲೀನ್ ಮಾಡಿ ಕೊಡುತ್ತಾರೆ” ಎಂದು ಅವರು ಹೇಳುತ್ತಾರೆ. ಮಕ್ಕಳು ದೊಡ್ಡವರಾದ ಮೇಲೆ ಬದಲಾಗುವ ಜಗತ್ತು ಅಮೆರಿಕದ ಮಿಚಿಗನ್ ನಿವಾಸಿ ಅಂಜಲಿ ಅವರಿಗೆ ಹಿಂದೆ ಇದೇ ಅನುಭವವಿತ್ತು. “ಮಕ್ಕಳು ಚಿಕ್ಕವರಿದ್ದಾಗ ಪ್ರವಾಸ ಹೋದರೆ ಹೊರೆಯಂತೆಯೇ ಅನಿಸುತ್ತಿತ್ತು. ಮಕ್ಕಳ ಆಹಾರ, ಆರೋಗ್ಯ ಎಲ್ಲವನ್ನೂ ನೋಡಿಕೊಳ್ಳಬೇಕಾಗುತ್ತಿತ್ತು. ಬಂದ ಮೇಲೂ ಕೆಲಸ ಇರುತ್ತಿತ್ತು. ಆದರೆ ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಎಲ್ಲವನ್ನೂ ಅವರ ಜೊತೆಗೂಡಿ ಯೋಜಿಸುತ್ತೇವೆ. ಹೀಗಾಗಿ ಪರಿಸ್ಥಿತಿ ಬದಲಾಗಿದೆ. ಈಗ ಪ್ರವಾಸವನ್ನು ನಿಜವಾದ ರಜೆಯಂತೆ ಸಂಭ್ರಮಿಸುತ್ತೇನೆ. ಇತ್ತೀಚೆಗೆ ಲಾಸ್ ಏಂಜಲೀಸ್ ಗೆ ಹೋಗಿ ಬಂದಿದ್ದೆವು. ಬಹಳ ಆರಾಮವಾಗಿ ಆನಂದಿಸಿದ್ದೇನೆ. ಬಂದ ಮೇಲೂ ಮಕ್ಕಳೇ ಎಲ್ಲವನ್ನೂ ನಿಭಾಯಿಸಿ ನನಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರು” ಎಂದು ಅಂಜಲಿ ಹೇಳುತ್ತಾರೆ. ರಜೆಯಂತೆ ಅನಿಸದ ದಿನಗಳು ಉಜಿರೆಯ ನಿವಾಸಿ ರೇಣುಕಾ ಸುಧೀರ್ ಅವರ ಪ್ರಕಾರ, “ರಜಾ ದಿನಗಳು ಬಂದಾಗ ಗಂಡ, ಮಕ್ಕಳು ಎಲ್ಲರೂ ವಿಶ್ರಾಂತಿ ಪಡೆಯುತ್ತಾರೆ. ಆದರೆ ಮನೆಯಾಕೆಗೆ ಮಾತ್ರ ಕೆಲಸಗಳು ಹೆಚ್ಚಾಗುತ್ತವೆ. ವಿಶ್ರಾಂತಿ ಪಡೆಯುವವರ ಎಲ್ಲ ಬೇಕು-ಬೇಡಗಳನ್ನು ಪೂರೈಸಬೇಕಾಗುತ್ತದೆ. ವಿಶೇಷ ಅಡುಗೆ, ಸಂಜೆ ಚಹಾದ ಜೊತೆ ತಿಂಡಿ, ಹಿಂದಿನ ದಿನಗಳಲ್ಲಿ ಬಾಕಿಯಾಗಿದ್ದ ಕೆಲಸಗಳನ್ನು ಮುಗಿಸುವ ಒತ್ತಡ. ಹೊರಗೆ ಹೋಗಿ ಬಂದ ನಂತರ ಮನೆಗೆ ಮರಳಿ ಎಲ್ಲವನ್ನೂ ಸಹಜ ಸ್ಥಿತಿಗೆ ತರುವುದು ದೊಡ್ಡ ಸಾಹಸ. ಮನೆಮಂದಿ ಟಿವಿ, ಸಿನಿಮಾ ನೋಡುತ್ತಾ ಸಮಯ ಕಳೆಯುವಾಗ ಮನೆಯ ಹೆಣ್ಣುಮಗಳು ಮಾತ್ರ ನಿರಂತರ ಕೆಲಸದಲ್ಲಿ ತೊಡಗಿರುತ್ತಾಳೆ. ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂಬ ಆಸೆ ಇದ್ದರೂ ಒಂದು ಕೆಲಸ ಮುಗಿಯುವಷ್ಟರಲ್ಲಿ ಇನ್ನೊಂದು ಕೆಲಸ ಎದುರು ಕಾಣುತ್ತದೆ.” ಹೆತ್ತವರು–ಪೋಷಕರ ಆರೈಕೆಯ ಜವಾಬ್ದಾರಿ ಸುರತ್ಕಲ್ ನಿವಾಸಿ ಸುಮಂಗಲಾ ಅವರ ಪ್ರಕಾರ, “ರಜೆ ಎಂದರೆ ದೈನಂದಿನ ಕೆಲಸಗಳಿಂದ ಸಂಪೂರ್ಣ ಮುಕ್ತಿ ಸಿಗಬೇಕು. ಸ್ವತಂತ್ರವಾಗಿರಲು ಅವಕಾಶ ಇರಬೇಕು. ಆದರೆ ಬಹಳಷ್ಟು ಬಾರಿ ಮನೆಯಲ್ಲಿರುವ ಹೆತ್ತವರು, ಅಜ್ಜಿ ಮೊದಲಾದವರ ಆರೈಕೆ ವ್ಯವಸ್ಥೆ ಮಾಡುವ ಜವಾಬ್ದಾರಿ ಮಹಿಳೆಯರ ಮೇಲೇ ಇರುತ್ತದೆ.” “ಕುಟುಂಬದ ಜತೆ ಪ್ರವಾಸ ಹೋಗುವುದು ಅಪರೂಪ. ಆದರೆ ಬಹಳಷ್ಟು ಮಂದಿ ಹೇಳುವ ಪ್ರಕಾರ, ಪತಿಯಂದಿರು ಕುಟುಂಬದ ಜತೆಗೆ ಹೋಗುವಾಗ ಅಗ್ಗದ ಪ್ರಯಾಣ ಮತ್ತು ವಸತಿಯನ್ನು ಆರಿಸುತ್ತಾರೆ. ಆದರೆ ಸ್ನೇಹಿತರ ಜತೆ ಹೋಗುವಾಗ ವಿಮಾನ, ಐಷಾರಾಮಿ ಹೋಟೆಲ್ಗಳನ್ನು ಆಯ್ಕೆ ಮಾಡುತ್ತಾರೆ. ಕುಟುಂಬದ ಪ್ರವಾಸವನ್ನು ವ್ಯರ್ಥ ಖರ್ಚು ಎನ್ನುವ ಮನೋಭಾವ ಹೆಚ್ಚಾಗಿದೆ” ಎಂದು ಸುಮಂಗಲಾ ಹೇಳುತ್ತಾರೆ. ಮಾನಸಾ ಹರಿಪ್ರಸಾದ್ ಅವರ ಪ್ರಕಾರ, “ಮನೆಯಲ್ಲಿರುವ ಹಿರಿಯರ ಆರೈಕೆ, ಪತಿಯ ವರ್ತನೆ, ಮಕ್ಕಳ ಜವಾಬ್ದಾರಿ—all ಇವುಗಳ ನಡುವೆ ಮಹಿಳೆಯರು ರಜೆಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಪ್ಯಾಕಿಂಗ್ನಿಂದ ಹಿಡಿದು ವಾಪಸ್ ಬಂದು ಅನ್ಪ್ಯಾಕ್ ಮಾಡುವವರೆಗೂ ಎಲ್ಲವೂ ಮಹಿಳೆಯರ ಹೊಣೆ. ರಜೆ ಎಂದರೂ ದೈನಂದಿನ ದಿನಚರಿಯೇ ಮುಂದುವರಿಯುತ್ತದೆ.” ರಜಾ ಭಾವನಾತ್ಮಕವಾಗಿಯೂ ಅಗತ್ಯ ಮುಂಬೈ ಮೂಲದ ಚಿಕಿತ್ಸಾತ್ಮಕ ಮನಶ್ಶಾಸ್ತ್ರಜ್ಞರೊಬ್ಬರ ಪ್ರಕಾರ, “ಮಹಿಳೆಯರಿಗೆ ರಜಾ ಎಂದರೆ ವಿಶ್ರಾಂತಿಗಿಂತ ಜವಾಬ್ದಾರಿಗಳ ಪಟ್ಟಿಯೇ ಹೆಚ್ಚಾಗಿರುತ್ತದೆ. ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಅವರು ಸುಸ್ತಾಗುತ್ತಾರೆ. ಹೀಗಾಗಿ ಬಹಳಷ್ಟು ಮಹಿಳೆಯರು ರಜೆಯ ನಂತರವೂ ದಣಿವಿನೊಂದಿಗೆ ಮರಳುತ್ತಾರೆ.” ಮಹಿಳೆಯರೂ ಭಾವನಾತ್ಮಕವಾಗಿ ಪುನಶ್ಚೇತನ ಪಡೆಯುವಂತಹ ರಜಾ ದಿನಗಳನ್ನು ಅನುಭವಿಸಬೇಕು. ಹೆಚ್ಚು ಜವಾಬ್ದಾರಿಗಳಿಲ್ಲದ, ನಿರೀಕ್ಷೆಗಳಿಲ್ಲದ, ದೈನಂದಿನ ಚಟುವಟಿಕೆಗಳಿಂದ ಮುಕ್ತಿ ಸಿಗುವ ರಜೆಯೇ ಭಾರತೀಯ ಮಹಿಳೆಯರ ಪಾಲಿಗೆ ನಿಜವಾದ ರಜೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ತಂಡ ಕಳುಹಿಸುವುದಿಲ್ಲ. ಭದ್ರತಾ ಕಾರಣಗಳನ್ನು ಮುಂದಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ, ಬಾಂಗ್ಲಾದೇಶದ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಹಿದ್ ಸೈಕತ್ ಭಾರತದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಆಡಳಿತಾತ್ಮಕ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಐಸಿಸಿ ನಿಯಮಗಳ ಅನ್ವಯ ಅಂಪೈರ್ ನೇಮಕ ನಡೆಯುತ್ತದೆ.
ಫೆಬ್ರವರಿಯಲ್ಲಿ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: ವಿಜಯಕುಮಾರ್ ತೇಗಲತಿಪ್ಪಿ
ಕಲಬುರಗಿ: ಇಂದಿನ ಯುವ ಜನರನ್ನು ಕನ್ನಡ ಸಾಹಿತ್ಯದತ್ತ ಆಕರ್ಷಿತರಾಗುವಂತೆ ಮಾಡಲು ಮತ್ತು ಹೊಸ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಲು ಪ್ರೇರೇಪಿಸುವ ಉದ್ದೇಶದಿಂದ ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ಏರ್ಪಡಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ತಿಳಿಸಿದ್ದಾರೆ. ಕಲಬುರಗಿ ನೆಲವು ಪ್ರತಿಭಾವಂತರ ನೆಲವಾಗಿದೆ. ಇದು ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದು, ಶರಣರು, ಸೂಫಿ-ಸಂತರ ನಾಡಾಗಿದೆ. ಜೊತೆಗೆ ಸಾಮರಸ್ಯ ಮತ್ತು ಭಾವೈಕ್ಯತೆಯ ನಾಡಾಗಿದೆ ಎಂದು ಅವರು ವಿವರಿಸಿದರು. ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರನ್ನು ಕಸಾಪ ನಿಯೋಗ ಭೇಟಿ ಮಾಡಿ ಸಮ್ಮೇಳನದ ಬಗ್ಗೆ ಚರ್ಚಿಸಿತು. ಸಚಿವರ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿಯೇ ಫೆಬ್ರವರಿ ಮೂರನೇ ವಾರದಲ್ಲಿ ನಡೆಸುವ ಪ್ರಸ್ತಾಪವನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾಡಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಮ್ಮೇಳನ ಸುಸುತ್ರವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸೂಚನೆ ನೀಡಿದರು. ಇದಕ್ಕೆ ಸಂಬoಧಪಟ್ಟಂತೆ ಕಸಾಪ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು. ಮುಂದಿನ ವಾರದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚನೆ ಹಾಗೂ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಪ್ರಮುಖರಾದ ಶಕುಂತಲಾ ಪಾಟೀಲ್, ಜಯಶ್ರೀ ಜಮಾದಾರ, ಕಲ್ಯಾಣಕುಮಾರ್ ಶೀಲವಂತ, ವಿನೊದಕುಮಾರ್ ಜೆ.ಎಸ್., ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ್ ಭಂಟನಳ್ಳಿ, ಡಾ. ರೆಹಮಾನ್ ಪಟೇಲ್, ಶಿವಾನಂದ ಪೂಜಾರಿ, ರಾಜೇಂದ್ರ ಮಾಡಬೂಳ, ದಿನೇಶ್ ಮದಕರಿ, ತಾಲೂಕಾಧ್ಯಕ್ಷರಾದ ಶಿವಲೀಲಾ ಕಲಗುರ್ಕಿ, ಎಸ್.ಕೆ. ಬಿರಾದಾರ, ನಾಗಪ್ಪ ಸಜ್ಜನ್, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಹಣಮಂತ ಖಜೂರಿ, ಪ್ರಭಾವತಿ ಮೇತ್ರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪೂರಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Student Scholarship: ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್ಗೆ ಅರ್ಜಿ ಆಹ್ವಾನ, ಅರ್ಹತೆ-ವಿವರ
ಬೆಂಗಳೂರು: ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್ (ದೀಪಿಕಾ ವಿದ್ಯಾರ್ಥಿವೇತನ)ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ-ವಿವರಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಇದೀಗ ಮೊದಲ ವರ್ಷದ ಸರ್ಕಾರಿ ಅಥವಾ ಖಾಸಗಿ ಖಾಲೇಜುಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಹರಿಗೆ ಎಷ್ಟು ಆರ್ಥಿಕ ಸಹಾಯ ಸಿಗಲಿದೆ. ಅರ್ಜಿ ಸಲ್ಲಿಕೆ ಹೇಗೆ, ದಾಖಲೆಗಳೇನೇನು ಬೇಕು? ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್
ಕುದುರೆಮುಖ, ಕೊಡಚಾದ್ರಿ ಸೇರಿ ರಾಜ್ಯದ 11 ಟ್ರಕ್ಕಿಂಗ್ ಸ್ಥಳಕ್ಕೆ ಸಾರ್ವಜನಿಕರಿಗೆ ನಿರ್ಬಂಧ! ಅರಣ್ಯ ಇಲಾಖೆ ಆದೇಶ
ಅರಣ್ಯ ಇಲಾಖೆಯು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಒಂದು ಮುಖ್ಯ ಸುದ್ದಿಯನ್ನು ನೀಡಿದೆ. ಬೇಸಿಗೆ ಸಮೀಪಿಸುತ್ತಿರುವ ಕಾರಣ ಮತ್ತು ಕಾಡ್ಗಿಚ್ಚಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕುದುರೆಮುಖ ವನ್ಯಜೀವಿ ವಿಭಾಗದ 11 ಪ್ರಮುಖ ಚಾರಣ ಮಾರ್ಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಆದೇಶವು ಜನವರಿ 14, 2026 ರಿಂದ ಜಾರಿಗೆ ಬರಲಿದೆ. ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಕಲಬುರಗಿ: ಸಾಮರ್ಥ್ಯ ಬಲವರ್ಧನೆ ಕುರಿತಾಗಿ ಯುವಕರಿಗೆ ತರಬೇತಿ
ಕಲಬುರಗಿ: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಬೆಂಗಳೂರು ಹಾಗೂ ಪರಿವರ್ತನ್ ರೂರಲ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ, ಕಲಬುರಗಿ ಯುವ ಚೇತನ ಸಂಸ್ಥೆ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕಲಬುರಗಿ, ವಿ.ಟಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕುಸನೂರಿನ ದಾದಾಸಾಹೇಬ್ ಕ್ಯಾನ್ಸಿರಾಮ್ ಮೆಮೋರಿಯಲ್ ಡಿಗ್ರಿ ಕಾಲೇಜ್ ನಲ್ಲಿ ಸಾಮರ್ಥ್ಯ ಬಲವರ್ಧನೆ ಹಾಗೂ ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಅಕ್ಟ್ ಕುರಿತು ಯುವಕ, ಯುವತಿರಿಗಾಗಿ ಮೂರು ದಿನದ ತರಬೇತಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣ ಜಾನೇಕಲ್ ಮಾತನಾಡಿ, ಗ್ರಾಮ ಪಂಚಾಯತಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಕೊಡುವುದರ ಮುಖಾಂತರ ಜಾಗೃತಿಯನ್ನು ಮೂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವೀರೇಶ್ ಮಾನ್ವಿ ಮಾತನಾಡಿ, ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಆಕ್ಟ್, ಗ್ರಾಮ ಸಭೆ, ವಾರ್ಡ್ ಸಭೆ, ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ಪ್ರೊ. ವಿ.ಟಿ ಕಾಂಬ್ಳೆ, ಸುನಿತಾ ಕಾಂಬಳೆ, ಸಂತೋಷ್ ಗಾಯಕ್ವಾಡ್, ಹಾಗೂ ಐಎಸ್ಐ ಸಂಸ್ಥೆಯ ರಾಜ್ಯ ಸಂಯೋಜಕರಾದ ವಸಂತ್ ಕುಮಾರ್ ಪ್ರತಾಪೆ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು| ವಲಸೆ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ
ಮಂಗಳೂರು, ಜ.14: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹಲ್ಲೆಗೈದು ಜನಾಂಗೀಯ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತನನ್ನು ಕೂಳೂರಿನ ಮೋಹನ್ (37) ಎಂದು ಗುರುತಿಸಲಾಗಿದೆ. ಈಗಾಗಲೆ ಕೂಳೂರಿನ ರತೀಶ್ ದಾಸ್ (32), ಧನುಷ್ (24), ಸಾಗರ್ (24) ಎಂಬವರನ್ನು ಬಂಧಿಸಲಾಗಿದೆ. ಮೋಹನ್ನ ಬಂಧನದೊಂದಿಗೆ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ. ಕಳೆದ 15 ವರ್ಷಗಳಿಂದ ನಗರ ಮತ್ತಿತರ ಕಡೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ದಿಲ್ಜಾನ್ ಅನ್ಸಾರಿ ಜ.11ರಂದು ಸಂಜೆ ಕೆಲಸ ಮುಗಿಸಿ ಕೂಳೂರಿನಲ್ಲಿ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಬಾಂಗ್ಲಾದೇಶಿ ಪ್ರಜೆ ಎಂದು ನಿಂದಿಸಿ ದೌರ್ಜನ್ಯ ಎಸಗಿದ್ದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಂಗಳವಾರ ಮೂವರು ಮತ್ತು ಬುಧವಾರ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲ್ವೆ ಸಮವಸ್ತ್ರ ‘ಬಂದ್ ಗಲಾ’ ಕೈಬಿಡಲು ಕೇಂದ್ರ ನಿರ್ಧಾರ; ಅದರ ಇತಿಹಾಸವೇನು?
ಭಾರತದಲ್ಲಿ ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಪ್ರಯತ್ನದ ಭಾಗವಾಗಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬ್ರಿಟಿಷರು ಪರಿಚಯಿಸಿದ ರೈಲ್ವೆ ಸಮವಸ್ತ್ರಗಳಾದ ಕಪ್ಪು ಪ್ರಿನ್ಸ್ ಕೋಟ್ ಗಳು (ಬಂದ್ ಗಲಾ ಕೋಟುಗಳು) ಇನ್ನು ಮುಂದೆ ಸಮವಸ್ತ್ರವಾಗಿರುವುದಿಲ್ಲ ಎಂದು ಘೋಷಿಸಿದ್ದಾರೆ. ಜನವರಿ 10ರಂದು ರೈಲ್ವೆ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, “ನಮ್ಮ ಕೆಲಸದ ಶೈಲಿಯಲ್ಲಿರಲಿ ಅಥವಾ ಡ್ರೆಸ್ಸಿಂಗ್ ಶೈಲಿಯಲ್ಲಿರಲಿ, ಎಲ್ಲಾ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕಬೇಕು. ನಾವು ವಸಾಹತುಶಾಹಿಯ ಪ್ರತಿಯೊಂದು ಕುರುಹನ್ನು ಕಂಡುಹಿಡಿದು ಅವುಗಳನ್ನು ಹೊರಹಾಕಬೇಕು. ಇಂದು ನಾನು ಮೊದಲ ಘೋಷಣೆ ಮಾಡುತ್ತಿದ್ದೇನೆ. ಇಂದಿನಿಂದ ಬ್ರಿಟಿಷರು ಪರಿಚಯಿಸಿದ ಕಪ್ಪು ಬಂದ್ ಗಲಾ ಕೋಟುಗಳು ಇನ್ನು ಮುಂದೆ ರೈಲ್ವೆಯಲ್ಲಿ ಫಾರ್ಮಲ್ ಡ್ರೆಸ್ ನ ಭಾಗವಾಗಿರುವುದಿಲ್ಲ” ಎಂದು ಹೇಳಿದರು. ಭಾರತೀಯ ರೈಲ್ವೆಯ ಸಮವಸ್ತ್ರವಾಗಿದ್ದ ಬಂದ್ ಗಲಾ—ಹೈ-ಕಾಲರ್, ಬಟನ್-ಅಪ್ ಜಾಕೆಟ್—ಅನ್ನು ಇಂಡೋ–ಪಾಶ್ಚಿಮಾತ್ಯ ಉಡುಗೆ ಎಂದು ಪರಿಗಣಿಸಲಾಗುತ್ತದೆ. ಆದರೆ ಸಚಿವಾಲಯವು ಇದು ವಸಾಹತುಶಾಹಿ ಅಧಿಕಾರದ ಸಂಕೇತ ಎಂದು ಹೇಳಿದೆ. ಬಂದ್ ಗಲಾ ಸಮವಸ್ತ್ರವನ್ನು ಬದಲಾಯಿಸಿ, ಅದರ ಬದಲು ಭಾರತೀಯ ಹವಾಮಾನಕ್ಕೆ ಹೆಚ್ಚು ಸೂಕ್ತವಾದ ‘ಸ್ವದೇಶಿ’ (ಸ್ಥಳೀಯ) ಉಡುಗೆಯನ್ನು ಸಮವಸ್ತ್ರವಾಗಿ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಸಾಮಾನ್ಯವಾಗಿ ‘ಪ್ರಿನ್ಸ್ ಸೂಟ್’ ಅಥವಾ ‘ಪ್ರಿನ್ಸ್ ಕಟ್’ ಎಂದು ಕರೆಯಲ್ಪಡುವ ಬಂದ್ ಗಲಾ ರಾಜಸ್ಥಾನದ ಜೋಧ್ ಪುರ ರಾಜಪ್ರಭುತ್ವದಲ್ಲಿ ಹುಟ್ಟಿಕೊಂಡಿತು. ಮೊಘಲ್–ರಜಪೂತರಿಂದ ಬಂದ ಬಂದ್ ಗಲಾ ಜೋಧ್ ಪುರಿ ಜಾಕೆಟ್ ಎಂದೂ ಕರೆಯಲ್ಪಡುವ ಬಂದ್ ಗಲಾ ಜಾಕೆಟ್, ಬೇರೆ ಯಾವುದೇ ಉಡುಗೆಯ ನಕಲು ಅಥವಾ ಸ್ಫೂರ್ತಿಯಿಂದ ಆಗಿದ್ದಲ್ಲ. ಮೊಘಲ್ ಸಂಹಿತೆಗಳು, ರಜಪೂತ ಯೋಧರ ಸೌಂದರ್ಯಶಾಸ್ತ್ರ ಮತ್ತು ಮಾರ್ವಾರ್ ನ ಟೈಲರಿಂಗ್—ಇವುಗಳಿಂದ ರೂಪುಗೊಂಡ ದಿರಿಸು ಇದಾಗಿದ್ದು, ಇದಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ. ಆಧುನಿಕ ಬಂದ್ ಗಲಾದ ಮೂಲ ಮೊಘಲ್ ಯುಗದ ಜಾಮಾ ಮತ್ತು ಅಂಗ್ರಖಾ. ಇವು ಚಕ್ರವರ್ತಿಗಳು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಔಪಚಾರಿಕ ಉಡುಪುಗಳಾಗಿದ್ದವು. ನಂತರ ಅಕ್ಬರ್ ಚಕ್ರವರ್ತಿ ಈ ಉಡುಪುಗಳನ್ನು ಪರಿಷ್ಕರಿಸಿದರು. ಮಾರ್ವಾರ್ ನ ರಾಥೋಡ್ ಆಡಳಿತಗಾರರು ಮೊಘಲರ ಅಡಿಯಲ್ಲಿ ಸಾಮ್ರಾಜ್ಯಶಾಹಿ ಸೇವೆಗೆ ಪ್ರವೇಶಿಸಿದಾಗ, ಮೊಘಲ್ ಶೈಲಿಯ ಕೋರ್ಟ್ ಉಡುಗೆಯು ರಜಪೂತ ಯೋಧ ಸಂಸ್ಕೃತಿಯನ್ನೂ ಅಳವಡಿಸಿಕೊಂಡಿತು. ರಾಜಾ ಉದಯ್ ಸಿಂಗ್ ಆಳ್ವಿಕೆಯಿಂದ ಜೋಧ್ ಪುರದ ಆಡಳಿತಗಾರರು ‘ಬಾಗೊ’ ಎಂದು ಕರೆಯಲ್ಪಡುವ ಉಡುಗೆಯನ್ನು ಪರಿಚಯಿಸಿದರು. ಕಾಲಾನಂತರದಲ್ಲಿ ಮಾರ್ವಾರ್ ಆಸ್ಥಾನವು ದಗಲಿ ಮತ್ತು ಗುಡಡಿಯಂತಹ ಉಡುಪುಗಳನ್ನು ಪರಿಚಯಿಸಿತು. ಇದರ ಜೊತೆಗೆ ಉದ್ದವಾದ ಮೊಘಲ್ ಕೋಟ್ ಚಿಕ್ಕದಾಗಿ ಜಾಕೆಟ್ನಂತೆ ರೂಪುಗೊಂಡಿತು ಎಂದು ಫ್ಯಾಷನ್ ಡಿಸೈನರ್ ರಾಘವೇಂದ್ರ ಸಿಂಗ್ ರಾಥೋಡ್ ಹೇಳುತ್ತಾರೆ. ಬಂದ್ ಗಲಾ ಬದಲಾಗಿದ್ದು ಹೀಗೆ ಮೊಘಲ್ ಅವಧಿಯ ಅಂತ್ಯದ ವೇಳೆಗೆ ಸೊಂಟದವರೆಗೆ ಬಿಗಿಯಾಗಿರುವ ಜಾಕೆಟ್ ಗಳು ಆಸ್ಥಾನದಲ್ಲಿ ಸಾಮಾನ್ಯವಾಗಿದ್ದವು. ಸಂಗೀತಗಾರರು, ಕಾವಲುಗಾರರು ಮತ್ತು ಆಸ್ಥಾನದಲ್ಲಿ ನಡೆಯುವ ಔಪಚಾರಿಕ ಕಾರ್ಯಕ್ರಮಗಳಲ್ಲಿ ಸೇವಕರು ಇವನ್ನು ಧರಿಸುತ್ತಿದ್ದರು. ಸಾಮಾನ್ಯವಾಗಿ ಮೊಣಕಾಲಿನವರೆಗೆ ತಲುಪುವ, ಸೊಂಟಕ್ಕಿಂತ ಕೆಳಗೆ ಸಡಿಲವಾಗಿರುವ, ಕುತ್ತಿಗೆವರೆಗೆ ಇರುವ ಕೋಟು ‘ಅಚ್ಕನ್’. ಇದು ಆಧುನಿಕ ಬಂದ್ ಗಲಾ ಜೊತೆ ಹೆಚ್ಚಿನ ಸಾಮ್ಯತೆ ಹೊಂದಿದೆ. ಆದಾಗ್ಯೂ, ಸಾಂಪ್ರದಾಯಿಕ ಅಚ್ಕನ್ ಪೋಲೋ ಆಡುವಾಗ ಧರಿಸಲು ತುಂಬಾ ಉದ್ದ ಮತ್ತು ದೊಡ್ಡದಾಗಿತ್ತು. ಇದು ರೈಡಿಂಗ್ ಬ್ರೀಚ್ ಗಳಿಗೆ (ಕುದುರೆ ಸವಾರಿಗೆ ಧರಿಸುವ ಬಿಗಿಯಾದ ಪ್ಯಾಂಟ್) ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಇದನ್ನು ಸರಿಪಡಿಸಲು ಜೋಧ್ ಪುರದ ಮಹಾರಾಜರು ಲಂಡನ್ ಗೆ ಕೊಂಡೊಯ್ದರು. ಅಲ್ಲಿನ ದರ್ಜಿಯಲ್ಲಿ ಈ ಉದ್ದನೆಯ ಕೋಟನ್ನು ಚಿಕ್ಕ ಜಾಕೆಟ್ ಆಗಿ ಪರಿವರ್ತಿಸಲು ಕೇಳಿಕೊಂಡರು. ಈ ಹೊಸ ಉಡುಗೆ ಕುದುರೆ ಸವಾರಿಗೆ ಸೂಕ್ತವಾಗಿತ್ತು. ಜಾಕೆಟ್ ಮತ್ತು ಬ್ರೀಚ್ ಗಳ ಸಂಯೋಜಿತ ಉಡುಪನ್ನು ‘ಜೋಧ್ ಪುರ’ ಎಂದು ಕರೆಯಲಾಗುತ್ತಿತ್ತು. 1930ರ ದಶಕದಲ್ಲಿ ಲಂಡನ್ ಸೇರಿದಂತೆ ಇತರಡೆ ಪಂದ್ಯಗಳಿಗಾಗಿ ಜೋಧ್ ಪುರ ಪೋಲೋ ತಂಡಗಳು ಪ್ರಯಾಣಿಸುತ್ತಿದ್ದಂತೆ ಇದು ಪಾಶ್ಚಾತ್ಯರ ಗಮನ ಸೆಳೆಯಿತು. 19ನೇ ಶತಮಾನದಲ್ಲಿ ಭಾರತೀಯ ರಾಜಮನೆತನವು ಯುರೋಪಿಯನ್ ಮತ್ತು ಬ್ರಿಟಿಷ್ ಮಿಲಿಟರಿ ಸಂಸ್ಕೃತಿಯೊಂದಿಗೆ ತೊಡಗಿಸಿಕೊಂಡಿದ್ದರಿಂದ, ಸ್ಟುಡಿಯೋಗಳಲ್ಲಿ ತೆಗೆದ ರಾಜಮನೆತನದ ಫೋಟೋಗಳ ಮೂಲಕ ಈ ಜಾಕೆಟ್ ಹೆಚ್ಚು ಜನಪ್ರಿಯವಾಯಿತು. ಇದು ಪಶ್ಚಿಮದ ದೇಶಗಳಿಗೆ ಸ್ಫೂರ್ತಿಯಾಯಿತು. ಮಹಾರಾಜ ಪ್ರತಾಪ್ ಸಿಂಗ್ ಲಂಡನ್ ನಲ್ಲಿ ರಾಣಿ ವಿಕ್ಟೋರಿಯಾಳ ವಜ್ರ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಉಡುಗೆಗಳ ಪೆಟ್ಟಿಗೆ ಕಳೆದುಕೊಂಡು ಸವಿಲ್ ರೋನಲ್ಲಿ ತಮಗೆ ಬೇಕಾದ ಉಡುಪನ್ನು ಹೇಗೆ ತಯಾರಿಸಿದರು ಎಂಬುದರ ಕುರಿತು ಹಲವಾರು ಕಥೆಗಳಿವೆ. ಆದರೆ ಭಾರತೀಯ ಉಡುಪಿನ ಬಗ್ಗೆ ದರ್ಜಿಗಳ ಕುತೂಹಲವನ್ನು ಹುಟ್ಟುಹಾಕಿದ್ದು ಭಾರತದ ಛಾಯಾಚಿತ್ರಗಳೇ ಎಂದು ಡಿಸೈನರ್ ರಾಥೋಡ್ ಹೇಳುತ್ತಾರೆ. ಮಹಾರಾಜ ಉಮೈದ್ ಸಿಂಗ್ ಅವರಿಗೆ ವಿಮಾನ ಚಾಲನೆ ತಿಳಿದಿತ್ತು. 1930ರಲ್ಲಿ ಅವರು ಜೋಧ್ ಪುರ ಫ್ಲೈಯಿಂಗ್ ಕ್ಲಬ್ ಅನ್ನು ಸ್ಥಾಪಿಸಿದಾಗಿನಿಂದ ಜೋಧ್ ಪುರದಲ್ಲಿ ಅಮೆರಿಕನ್ ಸ್ಕ್ವಾಡ್ರನ್ ಅನ್ನು ಹೊಂದಿದ್ದರು. ಅವರು ಜೋಧ್ ಪುರ ಬೂಟುಗಳು, ಬ್ರೀಚ್ ಗಳು ಮತ್ತು ಬಂದ್ ಗಲಾವನ್ನು ಜನಪ್ರಿಯಗೊಳಿಸಿದರು. ಕಪ್ಪು ಬಂದ್ ಗಲಾ ಕೋಟ್ ಅನ್ನು 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಔಪಚಾರಿಕ ಉಡುಪಾಗಿ ಪರಿಚಯಿಸಲಾಯಿತು. ಬ್ರಿಟಿಷ್ ಆಡಳಿತಾತ್ಮಕ ಡ್ರೆಸ್ ಕೋಡ್ಗಳು ಮತ್ತು ರಾಜರ ಆಸ್ಥಾನದ ಸಮವಸ್ತ್ರಗಳಿಂದ ಪ್ರೇರಿತರಾಗಿ, ಇದು ರೈಲ್ವೆಯೊಳಗಿನ ಅಧಿಕಾರ ಮತ್ತು ಶ್ರೇಣಿಯ ಸಂಕೇತವಾಯಿತು. 1947ರಲ್ಲಿ ಸ್ವಾತಂತ್ರ್ಯದ ನಂತರವೂ ಅಧಿಕೃತ ಪ್ರೋಟೋಕಾಲ್ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಇದು ಹೆಚ್ಚಾಗಿ ಬದಲಾಗದೆ ಮುಂದುವರಿಯಿತು. ಘಟಿಕೋತ್ಸವದಲ್ಲಿ ದೇಸಿ ದಿರಿಸು ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವದ ವೇಳೆ ಕಪ್ಪು ಗೌನ್, ಹ್ಯಾಟ್, ಶಾಲುಗಳನ್ನು ಧರಿಸುವ ರೂಢಿಯನ್ನು ಕೈಬಿಟ್ಟು ದೇಸಿ ಉಡುಗೆಗಳನ್ನು ಧರಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದು ಕೂಡ ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಪ್ರಕ್ರಿಯೆಯ ಭಾಗವಾಗಿತ್ತು. ಘಟಿಕೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗ ಬಟ್ಟೆಗಳನ್ನು ಬಳಸುವುದನ್ನು ಪರಿಗಣಿಸಲು ಯುಜಿಸಿ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿತ್ತು. ಯುಜಿಸಿ ಸಲಹೆಯ ನಂತರ 2018ರಲ್ಲಿ ಅಂದಿನ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವವಾಗಿ ‘ಬ್ರಿಟಿಷ್-ಪ್ರೇರಿತ’ ಉಡುಪನ್ನು ಬದಲಾಯಿಸುವಂತೆ ವಿಶ್ವವಿದ್ಯಾಲಯಗಳನ್ನು ಒತ್ತಾಯಿಸಿದ್ದರು. ಬ್ರಿಟಿಷ್ ಯುಗದ ಗೌನ್ ಕುರಿತ ಚರ್ಚೆ ಹೊಸದೇನಲ್ಲ. 2010ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ವಿದೇಶಿ ಮೂಲದ ಈ ಗೌನ್ ಅನ್ನು ಕೈಬಿಡಬೇಕು ಎಂದು ಹೇಳಿದ್ದರು. ಲಕ್ನೋ NIT 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ನಾವು ಈ ಸುಂದರವಾದ ಕೋಟ್ ಧರಿಸಿದ್ದೇವೆ. ಬ್ರಿಟಿಷರು ಈ ಕೋಟ್ ಅನ್ನು ಪರಿಚಯಿಸಿದರು ಎಂದು ನಾನು ನಿಮ್ಮ ನಿರ್ದೇಶಕರಿಗೆ ಹೇಳಿದೆ. ನಮಗೆ ನಮ್ಮದೇ ಆದ ಒಂದು ಕೋಟ್, ನಮ್ಮದೇ ಆದ ಸಮವಸ್ತ್ರ ಇರಬೇಕು. ಮುಂದಿನ ಬಾರಿ ಸುಂದರವಾದ ‘ಅಂಗವಸ್ತ್ರ’ವನ್ನು ಪರಿಚಯಿಸಿ” ಎಂದು ಹೇಳಿದ್ದರು. ಮೋದಿಯವರ ದುಬಾರಿ ಬಂದ್ ಗಲಾ ಸೂಟ್ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಕಾರ್ಯಕ್ರಮಗಳಿಗೆ ಬಂದ್ ಗಲಾ ಸೂಟ್ ಧರಿಸಿದ್ದಾರೆ. 2014ರ ಜಪಾನ್ ಭೇಟಿಯ ವೇಳೆ ಮೋದಿ ಧರಿಸಿದ್ದ ಬಂದ್ ಗಲಾ ಸೂಟ್ ಭಾರೀ ಗಮನ ಸೆಳೆದಿತ್ತು. 2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ ನೇವಿ ಬ್ಲೂ ಬಂದ್ ಗಲಾ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಮೋದಿ ಧರಿಸಿದ್ದ ಆ ಸೂಟ್ನಲ್ಲಿ ‘ನರೇಂದ್ರ ದಾಮೋದರ್ ದಾಸ್ ಮೋದಿ’ ಎಂದು ಚಿನ್ನದ ಎಳೆಗಳಿಂದ ಹೆಣೆಯಲಾಗಿತ್ತು. 10 ಲಕ್ಷ ರೂ. ಬೆಲೆಬಾಳುವ ಈ ಸೂಟ್ ಹರಾಜಿನಲ್ಲಿ 4.31 ಕೋಟಿ ರೂ.ಗೆ ಮಾರಾಟವಾಗಿತ್ತು. ಅತ್ಯಧಿಕ ಬೆಲೆಗೆ ಹರಾಜಾದ ಈ ದುಬಾರಿ ಸೂಟ್ ಗಿನ್ನೆಲ್ ವಿಶ್ವದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಹರಾಜಿನಿಂದ ಬಂದ ಹಣವನ್ನು ‘ಸ್ವಚ್ಛ ಗಂಗಾ’ ಮಿಷನ್ ಗೆ ನೀಡಲಾಗಿತ್ತು.
ಕುಷ್ಟಗಿ: ಮಂಗಳವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಲ್ಲಾ ಆರು ಸ್ಥಾನಗಳನ್ನು ಗೆಲ್ಲುವಷ್ಟು ಬಹುಮತ ಹೊಂದಿದ್ದರೂ ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸೀಮಿತವಾಗಿರುವುದು ಪಕ್ಷದ ಕಾರ್ಯತಂತ್ರದ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ನಾಲತ್ವಾಡ್ ಹೇಳಿದರು. ಒಟ್ಟು 96 ಮತದಾರರಲ್ಲಿ 94 ಮತಗಳು ಚಲಾವಣೆಯಾಗಿದ್ದು, ಒಂದು ಮತ ಅಮಾನ್ಯಗೊಂಡಿದೆ. ಮಾನ್ಯವಾದ 93 ಮತಗಳಲ್ಲಿ ಸಿದ್ದೇಶಕುಮಾರ್ ಕಲ್ಲಬಾಗಿಲಮಠ ಹಾಗೂ ಈಶಪ್ಪ ಅಮರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಬಹುಮತ ಇದ್ದರೂ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಪಕ್ಷ ವಿಫಲವಾಗಿರುವುದು ಆತ್ಮಪರಿಶೀಲನೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಚುನಾವಣೆಯ ಘೋಷಣೆಯಾದ ದಿನದಿಂದಲೇ ಸಮಗ್ರ ಹಾಗೂ ಸ್ಪಷ್ಟ ಕಾರ್ಯತಂತ್ರ ರೂಪಿಸುವಲ್ಲಿ ಪಕ್ಷ ವಿಫಲವಾಗಿದೆ. ಶಾಸಕರು, ಸಂಸದರು ಮತ್ತು ಜಿಲ್ಲಾ ಘಟಕದ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದೆ. ಮತದಾನಕ್ಕೂ ಮುನ್ನ ಸಭೆಗಳನ್ನು ನಡೆಸಿ ಸೂಕ್ತ ಯೋಜನೆ ರೂಪಿಸಬಹುದಾಗಿದ್ದರೂ, ನಾಯಕತ್ವದಿಂದ ಅಗತ್ಯ ಉತ್ಸಾಹ ಮತ್ತು ಬದ್ಧತೆ ಕಾಣಿಸಲಿಲ್ಲ ಎಂದು ಟೀಕಿಸಿದರು. ಬಹುಮತ ಇದ್ದರೂ ಗೆಲುವು ಕೈ ತಪ್ಪಿದ ಪರಿಣಾಮ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ. ಸೋಲಿಗೆ ಕಾರಣರಾದವರನ್ನು ಗುರುತಿಸಿ, ಹೈಕಮಾಂಡ್ಗೆ ವರದಿ ಸಲ್ಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಚುನಾವಣಾ ಫಲಿತಾಂಶದ ಕುರಿತು ಎಲ್ಲ ಆಸಕ್ತರಿಗೆ ಅವಕಾಶ ನೀಡುವಂತೆ ಸಮಗ್ರ ಪರಾಮರ್ಶೆ ನಡೆಯಬೇಕು. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಉತ್ತಮ, ವಿದ್ಯಾವಂತ ಹಾಗೂ ಜನಪರ ಕಾಳಜಿ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ಚಂದ್ರಶೇಖರ್ ನಾಲತ್ವಾಡ್ ಹೇಳಿದರು.
ಕುತ್ತಿಗೆ ಸೀಳಿ ಬೈಕ್ ಸವಾರನ ಜೀವ ತೆಗೆದ ಗಾಳಿಪಟದ ದಾರ
ಬೀದರ್: ಕರ್ನಾಟಕದಲ್ಲಿ ಗಾಳಿಪಟದ ದಾರದಿಂದಾಗುವ ಅಪಾಯಗಳ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಮತ್ತೊಂದು ಭೀಕರ ಘಟನೆ ನಡೆದುಹೋಗಿದೆ. ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಸಮೀಪ ನಡೆದ ದಾರುಣ ಘಟನೆಯಲ್ಲಿ, ದ್ವಿಚಕ್ರ ವಾಹನ ಸವಾರ ಗಾಳಿಪಟದ ದಾರ ತಗುಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಮೃತರನ್ನು 48 ವರ್ಷದ ಸಂಜುಕುಮಾರ್ ಹೊಸಮನಿ ಎಂದು ಗುರುತಿಸಲಾಗಿದೆ. ಘಟನೆ
ಪಾರಿವಾಳದ ಹಿಕ್ಕೆಗಳ ಸಮಸ್ಯೆ; ಬ್ಯಾಡ್ಮಿಂಟನ್ ಆಟಗಾರ್ತಿಯ ಆರೋಗ್ಯ ಕಳವಳ ತಪ್ಪಲ್ಲ
2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಮಿಯಾ ಹೇಳಿರುವುದು ವೈರಲ್ ಆಗಿದೆ. ಡ್ಯಾನಿಷ್ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಮಿಯಾ ಬ್ಲಿಚ್ಫೆಲ್ಡ್ಟ್ ಮತ್ತೆ ಭಾರತದ ಪಾರಿವಾಳದ ಸಮಸ್ಯೆಯನ್ನು ಮುನ್ನೆಲೆಗೆ ತಂದಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಬೇಗನೇ ವೈರಲ್ ಆಗಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ. ಪಾರಿವಾಳದ ಹಿಕ್ಕೆಗಳು ಸಮಸ್ಯೆ ಏಕೆ? ಪಾರಿವಾಳದ ಹಿಕ್ಕೆಗಳನ್ನು ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಲಾಗಿದೆ. ಮುಖ್ಯವಾಗಿ ಹೆಚ್ಚು ಓಡಾಟವಿರುವ ಸ್ಥಳಗಳಲ್ಲಿ ಇದು ನೈರ್ಮಲ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಭಾರತದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ‘ಕರುಣೆ’ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ದೇವಾಲಯಗಳು, ಉದ್ಯಾನವನಗಳು ಮತ್ತು ವಸತಿ ಸಂಕೀರ್ಣಗಳ ಬಾಲ್ಕನಿಗಳಲ್ಲಿ ಅವುಗಳಿಗೆ ಆಹಾರ ನೀಡಲಾಗುತ್ತದೆ. ಆದರೆ ಪಾರಿವಾಳಗಳು ಹಾರಾಡುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಬಹುದು ಎಂದು ಪರಿಗಣಿಸಲಾಗಿದೆ. ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ಪಾರಿವಾಳ ವೈದ್ಯರ ಪ್ರಕಾರ ಪಾರಿವಾಳದ ಹಿಕ್ಕೆಗಳಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಪ್ರೋಟೀನ್ಗಳು ಇರುವುದರಿಂದ ಇದು ‘ಅತಿಸೂಕ್ಷ್ಮ ನ್ಯುಮೊನೈಟಿಸ್’ ಎನ್ನುವ ಗಂಭೀರ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು. ಪಾರಿವಾಳದ ಹಿಕ್ಕೆಗಳಲ್ಲಿ ಕಂಡುಬರುವ ಅತಿ ಅಪಾಯಕಾರಿ ಜೀವಿ ಫಂಗಸ್ ‘ಹಿಸ್ಟೊಪ್ಲಾಸ್ಮ’ ಆಗಿದ್ದು, ಇದು ಹಿಸ್ಟೊಪ್ಲಾಸ್ಮೋಸಿಸ್ಗೆ ಕಾರಣವಾಗಬಹುದು ಹಾಗೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತದೆ. ಪಾರಿವಾಳದ ಹಿಕ್ಕೆಗಳ ಸುತ್ತ ಪದೇಪದೆ ಓಡಾಡಿದರೆ ಇಂಟರ್ಸ್ಟಿಷಿಯಲ್ ಲಂಗ್ ಡಿಸೀಸ್ (ಐಎಲ್ಡಿ)ಗೆ ಕಾರಣವಾಗಿ, ಅಂತಿಮವಾಗಿ ಲಂಗ್ ಫೈಬ್ರೋಸಿಸ್ ಉಂಟಾಗಬಹುದು. ಈ ಹಂತದಲ್ಲಿ ಶ್ವಾಸಕೋಶಗಳು ಗಟ್ಟಿಯಾಗುತ್ತವೆ ಹಾಗೂ ಗೀಚುಗಳು ಮೂಡುತ್ತವೆ. ಆಗ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಮ್ಲಜನಕದ ಬೆಂಬಲದ ಅಗತ್ಯ ಬೀಳಬಹುದು. ಮಾರಕವಾಗಿ ಪರಿಣಮಿಸಿದಲ್ಲಿ ಶ್ವಾಸಕೋಶ ಕಸಿಯ ಅಗತ್ಯವೂ ಬರುವ ಸಾಧ್ಯತೆ ಇದೆ. ಜನರು ಗಮನಿಸಬೇಕಾದ ಚಿಹ್ನೆಗಳು ಯಾವುವು? ಪದೇಪದೆ ಕೆಮ್ಮು, ಉಸಿರಾಟ ಕಷ್ಟವಾಗುವುದು, ಎದೆ ಬಿಗಿತ ಅಥವಾ ಸುಸ್ತು ಕಾಣಿಸಿಕೊಂಡರೆ ಎಚ್ಚರಿಕೆಯ ಗಂಟೆ ಎಂದುಕೊಳ್ಳಬೇಕು. ಬಹಳ ದೀರ್ಘಕಾಲ ಪಾರಿವಾಳದ ಹಿಕ್ಕೆಗಳ ನಡುವೆ ಇದ್ದಲ್ಲಿ ಜ್ವರ, ತೂಕ ನಷ್ಟ ಮತ್ತು ಶ್ವಾಸಕೋಶಗಳಲ್ಲಿ ಗೀರುಗಳು ಕಂಡುಬರಬಹುದು. ಶಿಲೀಂಧ್ರ ಸೋಂಕು ತೀವ್ರವಾಗಿದ್ದರೆ ಶ್ವಾಸಕೋಶವಿಡೀ ರೋಗದ ಚಿಹ್ನೆಗಳು ಹರಡಿರುತ್ತವೆ. ಆಸ್ತಮಾ ಇರುವವರಿಗೆ ಆಗಾಗ್ಗೆ ವೀಜಿಂಗ್ ಕಾಣಿಸಿಕೊಳ್ಳಬಹುದು. ಪಾರಿವಾಳಗಳು ಇರುವ ಕಡೆ ಅಸಹಜವಾದ ಉಸಿರಾಟದ ತೊಂದರೆ ಕಂಡುಬಂದರೆ ವೈದ್ಯಕೀಯ ಪರೀಕ್ಷೆ ಅಗತ್ಯ. ರೋಗ ತಪ್ಪಿಸಲು ಏನು ಮಾಡಬಹುದು? ಬಾಲ್ಕನಿ ಅಥವಾ ಕಿಟಕಿಯನ್ನು ಸ್ವಚ್ಛವಾಗಿಡಬೇಕು. ಬಾಲ್ಕನಿಯ ಸುತ್ತ ಪಾರಿವಾಳಗಳ ಗೂಡುಗಳಿಗೆ ಅವಕಾಶ ಕೊಡಬಾರದು. ಪಾರಿವಾಳದ ಹಿಕ್ಕೆಗಳನ್ನು ಸ್ವಚ್ಛಗೊಳಿಸುವಾಗ ಎನ್95 ಮಾಸ್ಕ್ ಮತ್ತು ಗ್ಲವ್ಸ್ ಧರಿಸಬೇಕು. ಮೊದಲಿಗೆ ಸ್ಥಳಕ್ಕೆ ನೀರು ಹರಿಸಿ ನಂತರ ಸ್ವಚ್ಛಗೊಳಿಸಿದರೆ ಧೂಳು ಹರಡುವುದಿಲ್ಲ. ಪಾರಿವಾಳಗಳು ಓಡಾಡುವ ಸ್ಥಳದ ಬಳಿ ಬಟ್ಟೆಗಳನ್ನು ಒಣಗಿಸಬಾರದು. ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳು ಹೆಚ್ಚಾಗಿ ಓಡಾಡುತ್ತಿದ್ದರೆ ಅಧಿಕಾರಿಗಳು ಸೋಂಕುರಹಿತಗೊಳಿಸುವ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಕೊಡಬಾರದು.
ಕೊಪ್ಪಳ| ಕೃಷಿಗೆ ನಿಗದಿತ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತರಿಂದ ಧರಣಿ
ಕುಷ್ಟಗಿ: ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ ಕನಿಷ್ಠ ಏಳು ಗಂಟೆ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಜನದರ್ಶನ ವೇದಿಕೆಯ ರಾಜ್ಯಾಧ್ಯಕ್ಷ ದೇವಪ್ಪ ಮೆಣಸಗಿ ಅವರ ನೇತೃತ್ವದಲ್ಲಿ ರೈತರು ಸಮೀಪದ ಹನಮನಾಳ ಜೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಿದರು. ಹನಮನಾಳ ಹೋಬಳಿ ವ್ಯಾಪ್ತಿಗೆ ಒಳಪಡುವ ವಾರಿಕಲ್, ಯರಗೇರ, ಗೊರೆಬಿಹಾಳ, ಕುಂಬಾಳವತಿ, ನರಸಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 28 ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದ ರೈತರು ಮತ್ತು ಗ್ರಾಮಸ್ಥರಿಗೆ ನಿಗದಿತ ವೇಳಾಪಟ್ಟಿ ಇಲ್ಲದೆ ಮನಬಂದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ರೈತರು ನಿದ್ರೆಯನ್ನು ತ್ಯಜಿಸಿ ಹೊಲಗಳಲ್ಲಿ ಕಾದು ನೀರಾವರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಾದರೂ ರಾತ್ರಿಯ ಸಮಯದಲ್ಲಿಯೂ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಆದ್ದರಿಂದ ರಾತ್ರಿ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ಅವರು ಒತ್ತಾಯಿಸಿದರು. ಸರಕಾರದ ಮಾರ್ಗಸೂಚಿಯಂತೆ ಕೃಷಿಗೆ ಏಳು ಗಂಟೆ ವಿದ್ಯುತ್ ನೀಡಲೇಬೇಕು ಎಂದು ಪಟ್ಟು ಹಿಡಿದ ರೈತರು, ಬೇಸಿಗೆ ಆರಂಭಕ್ಕೂ ಮುನ್ನವೇ ಅಕ್ರಮ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದು ಆತಂಕಕಾರಿ ಎಂದು ಹೇಳಿದರು. ವಿದ್ಯುತ್ ಯಾವ ಸಮಯದಲ್ಲಿ ಬರುತ್ತದೆ ಎಂಬ ಸ್ಪಷ್ಟತೆ ಇಲ್ಲದ ಕಾರಣ ಜಮೀನಿಗೆ ನೀರು ಪೂರೈಸಲು ತೀವ್ರ ತೊಂದರೆ ಎದುರಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಿದರೆ ಸಿಬ್ಬಂದಿಯಿಂದ ಸಮರ್ಪಕ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ಪರಿವರ್ತಕ ಬದಲಾವಣೆ ಹಾಗೂ ಮಾರ್ಗ ದುರಸ್ತಿ ಸಂಬಂಧ ಸಕಾಲ ಯೋಜನೆಯಡಿ ನಿಗದಿತ ಅವಧಿ ಇದ್ದರೂ ಜೆಸ್ಕಾಂ ಅದನ್ನು ಪಾಲಿಸುತ್ತಿಲ್ಲ. 72 ಗಂಟೆಗಳೊಳಗೆ ಪರಿವರ್ತಕ ಬದಲಾವಣೆ ಮಾಡಬೇಕೆಂಬ ನಿಯಮವಿದ್ದರೂ ತಿಂಗಳುವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಬೆಳೆಗಳಿಗೆ ನೀರು ಒದಗಿಸಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೇವಪ್ಪ ಮೆಣಸಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಶೋಕ ಉಪ್ಪಾರ, ಶರಣಪ್ಪ ಉಪ್ಪಾರ, ಶ್ರೀಕಾಂತ್, ಹನುಮಪ್ಪ ಪೂಜಾರ, ಶೇಖಪ್ಪ ಗುಡಿ, ಹೇಮಂತ್ ನರಿ, ಕನಕಪ್ಪ ಲಕ್ಕಲಕಟ್ಟಿ, ಹನುಮಂತ, ಅಂದಪ್ಪ, ಬಸವರಾಜ, ಈರಪ್ಪ, ಫಕ್ಕೀರಪ್ಪ, ಯಂಕಪ್ಪ, ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೆಬ್ರವರಿ 13ರಿಂದ ಮೂರು ದಿನಗಳ ಕಾಲ 'ಹಂಪಿ ಉತ್ಸವ' : ಸಚಿವ ಝಮೀರ್ ಅಹ್ಮದ್ ಖಾನ್
ಹಂಪಿ ಉತ್ಸವ-2026ರ ಲಾಂಛನ ಬಿಡುಗಡೆ
ಜ.17ರಂದು ಉಡುಪಿ ಜಿಲ್ಲಾಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ
ಉಡುಪಿ, ಜ.14: ಉದ್ಯಮಿ ಪ್ರಸಾದ್ರಾಜ್ ಕಾಂಚನ್ಕಂಚನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ವತಿಯಿಂದ ಶಿರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ‘ಪರ್ಯಾಯ ಮಿಸ್ಟರ್ ಉಡುಪಿ 2026-ಕ್ಲಾಸಿಕ್’ ಉಡುಪಿ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯನ್ನು ಉಡುಪಿ ಶೋಕಾ ಮಾತಾ ಇಗರ್ಜಿ ಚರ್ಚ್ ಆವರಣದಲ್ಲಿ ಜ.17ರಂದು ಆಯೋಜಿಸಲಾಗಿದೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಜೇಸನ್ ಡಯಾಸ್, ಸಂಜೆ 6ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿರುವರು. ಸ್ಪರ್ಧೆಗಳು ಸಂಜೆ 7ಗಂಟೆಯಿಂದ ಆರಂಭವಾಗಲಿದೆ ಎಂದರು. ಉಡುಪಿ ಜಿಲ್ಲೆಯಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಗೆ ಐಬಿಬಿಎಫ್ನಿಂದ ಆಯ್ಕೆಯಾದ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ತೀರ್ಪುಗಾರರು ಆಗಮಿಸಲಿ ದ್ದಾರೆ. ಸ್ಪರ್ಧೆಯು ಒಟ್ಟು 5,85,000ರೂ. ನಗದು ಬಹುಮಾನಗಳೊಂದಿಗೆ 55, 60, 65, 70, 75, 80, 80+ಕೆಜಿ ಸಹಿತ ಒಟ್ಟು 7 ವಿಭಾಗಗಳಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಮಿಥಿಲೇಶ್, ಅಸೋಸಿಯೇಶನ್ ಕಾರ್ಯದರ್ಶಿ ವಿಶ್ವನಾಥ ಕಾಮತ್, ಖಜಾಂಚಿ ಮಾರುತಿ ಜಿ.ಬಂಗೇರಾ, ಜಾನ್ಸನ್ ಅರುಣ್ ಡಿಸೋಜ ಉಪಸ್ಥಿತರಿದ್ದರು.
S I R ಸೂಚನೆಗಳನ್ನು ವಾಟ್ಸಾಪ್ ಮೂಲಕ ನೀಡುತ್ತಿರುವ ಚುನಾವಣಾ ಆಯೋಗ: the reportersʼ collective ವರದಿ
S I R ವೇಳೆ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ಗೆ TMC ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗ ತನ್ನ ಸೂಚನೆಗಳನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ ಎನ್ನುವುದೂ ಆ ಆರೋಪಗಳಲ್ಲಿ ಒಂದಾಗಿದೆ. ಈ ಆದೇಶಗಳಲ್ಲಿ ಕೆಲವಂತೂ ಪಶ್ಚಿಮ ಬಂಗಾಳದಲ್ಲಿ S I R ಸಂಬಂಧ ಚುನಾವಣಾ ಆಯೋಗ ನೀಡಿರುವ ಲಿಖಿತ ಸೂಚನೆಗಳಿಗೆ ವಿರುದ್ಧವಾಗಿವೆ ಎನ್ನಲಾಗಿದೆ. TMC ನಾಯಕ, ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿದ ಆರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಿರುವ the reportersʼ collective ತನ್ನ ವರದಿಯಲ್ಲಿ ಅವುಗಳನ್ನು ದೃಢಪಡಿಸಿದೆ. ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ವಾಟ್ಸಾಪ್ ಮೂಲಕ ರಾಜ್ಯ ಅಧಿಕಾರಿಗಳಿಗೆ ಅನೌಪಚಾರಿಕವಾಗಿ ಸೂಚನೆಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಕೆಲವು ಆಯೋಗದ ಲಿಖಿತ ಆದೇಶಗಳಿಗೆ ವಿರುದ್ಧವಾಗಿವೆ ಎಂಬುದನ್ನು ʼರಿಪೋರ್ಟರ್ಸ್ ಕಲೆಕ್ಟಿವ್ʼ ವರದಿ ಖಚಿತಪಡಿಸಿದೆ. ಒಬ್ರಯಾನ್ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಈಗಾಗಲೇ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಇದೇ ಹೊತ್ತಲ್ಲಿ the reportersʼ collective ವರದಿ ಮಹತ್ವದ ಅಂಶಗಳನ್ನು ಹೊರಹಾಕಿದೆ. ನಿತಿನ್ ಸೇಥಿ ಮತ್ತು ಆಯುಷಿ ಕರ್ ಸಿದ್ಧಪಡಿಸಿರುವ ಈ ವರದಿ, ರಾಜ್ಯದ ಕೆಲ ಅಧಿಕಾರಿಗಳು S I R ಪ್ರಕ್ರಿಯೆ ಸಂಬಂಧ ನಿರ್ದಿಷ್ಟ ಸೂಚನೆಗಳಿಗಾಗಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯನ್ನು ವರ್ಚುವಲ್ ಸಭೆಯ ವೇಳೆ ಪ್ರಶ್ನಿಸಿದ್ದನ್ನು ದೃಢಪಡಿಸುತ್ತದೆ. S I R ನ ನಿಗದಿತ ನಿಯಮಗಳಿಗೆ ವಿರುದ್ಧವಾಗಿರುವ ಎರಡು ವಾಟ್ಸಾಪ್ ಸಂದೇಶಗಳ ಬಗ್ಗೆ ವರದಿ ಉಲ್ಲೇಖಿಸಿದೆ. S I R ಅಡಿಯಲ್ಲಿ ಮತದಾರರ ಆರಂಭಿಕ ನೋಂದಣಿಗೆ ಗಡುವು ನಿಗದಿಪಡಿಸಲಾಗಿತ್ತು. ಆದರೆ ವಾಟ್ಸಾಪ್ ಮೂಲಕ ಮಾತ್ರ ನೀಡಲಾದ ಸೂಚನೆಗಳಲ್ಲಿ, ಈ ನಿಗದಿತ ಗಡುವಿಗೆ ಮುನ್ನವೇ ಮತದಾರರು ಕಂಡುಬಂದಿಲ್ಲ ಎಂದು ನಮೂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹಾಗೆ ನಮೂದಿಸುವ ಮೊದಲು, ಕಡಿಮೆ ಅವಧಿಯಲ್ಲಿ ಮೂರು ಮನೆಗಳಿಗೆ ಭೇಟಿ ಪೂರ್ಣಗೊಳಿಸಬೇಕೆಂದು ವಾಟ್ಸಾಪ್ ಸೂಚನೆಗಳಲ್ಲಿ ಹೇಳಲಾಗಿತ್ತು. ವರ್ಚುವಲ್ ಸಭೆಯ ವೇಳೆ ಹಾಜರಿದ್ದ ಮೂವರು ಅಧಿಕಾರಿಗಳ ಬಳಿ ʼರಿಪೋರ್ಟರ್ಸ್ ಕಲೆಕ್ಟಿವ್ʼ ಈ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದೆ. ಇಬ್ಬರು ಅಧಿಕಾರಿಗಳು ಆ ಸಂದೇಶಗಳನ್ನು ತೋರಿಸಿದರೆ, ಮತ್ತೊಬ್ಬರು ಅಂಥ ಸಂದೇಶ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಚುನಾವಣಾ ಆಯೋಗದ ಡೇಟಾಬೇಸ್ನಲ್ಲಿ ರೋಲ್ ಬ್ಯಾಕ್ ಆಯ್ಕೆಯ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ಹಲವಾರು ಅಧಿಕಾರಿಗಳು ಹೇಳಿದ್ದಾರೆ. ಮತದಾರರನ್ನು ಕರಡು ಪಟ್ಟಿಯಿಂದ ಇದ್ದಕ್ಕಿದ್ದಂತೆ ತೆಗೆದುಹಾಕಲಾಗಿತ್ತು. ಆದರೆ ಈ ರೋಲ್ಬ್ಯಾಕ್ ಆಯ್ಕೆ ಕಾರ್ಯರೂಪಕ್ಕೆ ಬರಲಿಲ್ಲ. ಸರ್ಕಾರಿ ನಿಯಮಗಳ ಪ್ರಕಾರ, ಅಧಿಕಾರಿಗಳು ಅನೌಪಚಾರಿಕ ಸಂವಹನಗಳ ಆಧಾರದಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಹೊಣೆಗಾರಿಕೆ ಮತ್ತು ಪಾರದರ್ಶಕತೆ ಖಚಿತಪಡಿಸಲು ಎಲ್ಲಾ ಆದೇಶಗಳು ಮತ್ತು ಸಂವಹನಗಳಿಗೆ ಔಪಚಾರಿಕ ದಾಖಲೆ ಹಾಗೂ ಫೈಲಿಂಗ್ ವ್ಯವಸ್ಥೆ ಇರಬೇಕೆಂದು ನಿಯಮಗಳು ಹೇಳುತ್ತವೆ. ಆದರೆ S I Rನ ಆರಂಭಿಕ ಆದೇಶಗಳನ್ನಷ್ಟೇ ಬಹಿರಂಗಪಡಿಸಲಾಗಿದ್ದು, ನಂತರ ರಾಜ್ಯದ ಅಧಿಕಾರಿಗಳಿಗೆ ಕಳುಹಿಸಲಾದ ಹಲವು ಆದೇಶಗಳು ಮತ್ತು ಸೂಚನೆಗಳನ್ನು ಆಯೋಗ ಬಹಿರಂಗಪಡಿಸಿಲ್ಲ. ಈ ಹಿಂದೆ ಆಯೋಗ ಮತದಾರರ ನೋಂದಣಿಯ ಪ್ರತಿಯೊಂದು ಹಂತದ ಬಗ್ಗೆ ಬಹಿರಂಗವಾಗಿ ವಿವರಿಸಿತ್ತು. ಈಗ ರಾಜ್ಯದ ಅಧಿಕಾರಿಗಳಿಗೆ ಖಾಸಗಿಯಾಗಿ ಸೂಚನೆ ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸೂಚನೆಗಳನ್ನು ಮೌಖಿಕವಾಗಿ ಅಥವಾ ಅನೌಪಚಾರಿಕವಾಗಿ ನೀಡುವ ಸಂದರ್ಭಗಳು ಇರಬಹುದು. ಆದರೆ ನಿಯಮಗಳ ಪ್ರಕಾರ, ಅವುಗಳನ್ನೂ ನಂತರ ಔಪಚಾರಿಕವಾಗಿ ದಾಖಲಿಸಬೇಕಾಗಿದೆ. ಈಗ ಕಳುಹಿಸಲಾದ ವಾಟ್ಸಾಪ್ ಆದೇಶಗಳನ್ನು ನಂತರ ಔಪಚಾರಿಕ ದಾಖಲೆಗಳಲ್ಲಿ ದಾಖಲಿಸಲಾಗಿದೆವೆಯೇ ಎಂಬ ಪ್ರಶ್ನೆಗೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಉತ್ತರಿಸಿಲ್ಲ ಎಂದು ವರದಿ ಹೇಳುತ್ತದೆ. ಈ ಸಂದೇಶಗಳನ್ನು ‘ಪಶ್ಚಿಮ ಬಂಗಾಳ ಸಿಇಒ ಮತ್ತು ಜಿಲ್ಲಾ ಚುನಾವಣಾಧಿಕಾರಿ’ ಎಂಬ ವಾಟ್ಸಾಪ್ ಗುಂಪಿನ ಮೂಲಕ ಹಂಚಿಕೊಳ್ಳಲಾಗಿದೆ. ಈ ವಾಟ್ಸಾಪ್ ಸಂದೇಶಗಳನ್ನು S I R ನ ಎಣಿಕೆ ಹಂತದಲ್ಲಿ ಕಳುಹಿಸಲಾಗಿದೆ. ಅವುಗಳೆಲ್ಲವೂ ಕೈಪಿಡಿಗಳು ಮತ್ತು ಲಿಖಿತ ಆದೇಶಗಳಿಗೆ ವಿರುದ್ಧವಾಗಿವೆ ಎಂದು ಹಲವು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. S I Rನ ಎಣಿಕೆ ಹಂತದ ಮಧ್ಯೆ ಆಯೋಗ ದಾಖಲೆರಹಿತ ಸಾಫ್ಟ್ವೇರ್ ಅನ್ನು ಪರಿಚಯಿಸಿದ ಸಮಯದಲ್ಲೇ ಈ ವಾಟ್ಸಾಪ್ ಸೂಚನೆಗಳ ಬಳಕೆಯಾಗಿದೆ ಎಂದು ವರದಿ ಗಮನಿಸಿದೆ. ಸಾಫ್ಟ್ವೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಆರಂಭದಲ್ಲಿ ಕೇವಲ ಎರಡು ರಾಜ್ಯಗಳಲ್ಲಿ 3.66 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದರೆಂದು ಗುರುತಿಸಲಾಗಿತ್ತು. ನಂತರ ಇದನ್ನು ‘ತಾರ್ಕಿಕ ವ್ಯತ್ಯಾಸಗಳು’ ಎಂದು ಹೇಳಲಾಗಿದ್ದು, ಮತದಾರರು ತಮ್ಮ ಗುರುತು, ಮತದಾನದ ಹಕ್ಕು ಮತ್ತು ಪೌರತ್ವದ ದಾಖಲೆಗಳನ್ನು ಸಲ್ಲಿಸಬೇಕಾಯಿತು. ಆರಂಭಿಕ ಲಿಖಿತ ಆದೇಶಗಳಲ್ಲಿ ಸಾಫ್ಟ್ವೇರ್ ಬಳಕೆಯ ಉಲ್ಲೇಖವೇ ಇರಲಿಲ್ಲ. ಸಾಫ್ಟ್ವೇರ್ ಸಕ್ರಿಯಗೊಳಿಸುವ ಎರಡು ವಾರಗಳ ಮುಂಚೆಯೇ ಆಯೋಗ ತನ್ನ ಸಾಫ್ಟ್ವೇರ್ ದೋಷಯುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತ್ತು. ಡಿಸೆಂಬರ್ 29ರಂದು ಎಣಿಕೆ ಹಂತ ಪೂರ್ಣಗೊಂಡ ಬಳಿಕ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಾಫ್ಟ್ವೇರ್ ಅಸಮರ್ಪಕತೆಯನ್ನು ಒಪ್ಪಿಕೊಂಡಿತು. 2002ರ ಮತದಾರರ ಪಟ್ಟಿಯನ್ನು ನಿಖರವಾಗಿ ಡಿಜಿಟಲೀಕರಣಗೊಳಿಸದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಅನುಮಾನಾಸ್ಪದ ಎಂದು ಗುರುತಿಸಲಾದ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಲು ನಂತರ ಸಾಫ್ಟ್ವೇರ್ನಲ್ಲಿ ಬದಲಾವಣೆ ಮಾಡಲಾಗಿದೆ. ಪಶ್ಚಿಮ ಬಂಗಾಳ ಸಿಇಒ ಕಚೇರಿಯಿಂದ ಯಾವ ಆದೇಶಗಳು ಬರುತ್ತಿವೆ ಮತ್ತು ಯಾವವು ಆಯೋಗದ ಕೇಂದ್ರ ಕಚೇರಿಯಿಂದ ಬರುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮತ್ತೊಬ್ಬ ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಈ ಸೂಚನೆಗಳಲ್ಲಿ ಯಾವುದಾದರೂ ತಪ್ಪಿನಿಂದ ಮತದಾರರ ಹಕ್ಕುಗಳು ಅಳಿಸಿಹೋಗಿದರೆ, ಅದರ ಹೊಣೆಗಾರರು ಯಾರು ಎಂಬ ಪ್ರಶ್ನೆಯನ್ನೂ ಆ ಅಧಿಕಾರಿ ಎತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪರಿಶೀಲನೆಯ ಮಟ್ಟ ಇತರ ರಾಜ್ಯಗಳಿಗಿಂತ ಒಂದು ಹಂತ ಹೆಚ್ಚಿನದ್ದಾಗಿದೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅನುಮಾನಾಸ್ಪದ ಮತದಾರರ ಪರಿಶೀಲನೆ ಹೇಗೆ ನಡೆಯುತ್ತಿದೆ ಎಂಬುದನ್ನೂ ಅವರು ವಿವರಿಸಿದ್ದಾರೆ. ರಾಜ್ಯದ ಅಧಿಕಾರಿಗಳು ಸೂಕ್ಷ್ಮ ವೀಕ್ಷಕರ ಸಮ್ಮುಖದಲ್ಲಿ ನಡೆಯುವ ವಿಚಾರಣೆಗಳ ಛಾಯಾಚಿತ್ರ ಸಾಕ್ಷ್ಯವನ್ನು ಅಪ್ಲೋಡ್ ಮಾಡಬೇಕಾಗಿದೆ. ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಬ್ಲಾಕ್ ಮಟ್ಟದಲ್ಲಿ ಕೇವಲ 160 ಕೇಂದ್ರಗಳಷ್ಟೇ ಇವೆ. ಈ ಪ್ರಕ್ರಿಯೆ ಅತ್ಯಂತ ಕಷ್ಟಕರವಾಗಿದ್ದು, ಇಷ್ಟು ಕಡಿಮೆ ಕೇಂದ್ರಗಳಲ್ಲಿ ಲಕ್ಷಾಂತರ ಮತದಾರರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಬೆಂಗಳೂರು : ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಯಲಿಗೆಳೆದಿದ್ದು, ಬೆಂಗಳೂರು, ಉತ್ತರ ಪ್ರದೇಶ, ಹೊಸದಿಲ್ಲಿ, ಬಿಹಾರ, ರಾಜಸ್ಥಾನ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದ 11 ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಆರೋಪಿಗಳು ವಂಚಿಸಿದ್ದ 94 ಲಕ್ಷ ರೂಪಾಯಿ ಹಣ ಹಿಂಪಡೆಯಲಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 240 ಕೋಟಿ ರೂಪಾಯಿ ಹಣವನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸದಿಲ್ಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ಕಾಲ್ಸೆಂಟರ್ ನಡೆಸುತ್ತಿದ್ದ ಆರೋಪಿಗಳು, ಜನರಿಗೆ ಕರೆ ಮಾಡಿ ಹೂಡಿಕೆ ಯೋಜನೆಗಳ ಬಗ್ಗೆ ಅವರನ್ನು ಆಕರ್ಷಿಸುತ್ತಿದ್ದರು. ನಂತರ ತಮ್ಮದೇ ಅನಧಿಕೃತ ಆ್ಯಪ್ ಇನ್ಸ್ಟಾಲ್ ಮಾಡಿಸಿ ಅದರ ಮೂಲಕ ಹೂಡಿಕೆ ಮಾಡಿಸುತ್ತಿದ್ದರು. ಹಣ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭಾಂಶ ನೀಡುವ ಮೂಲಕ ನಂಬಿಕೆ ಗಳಿಸುತ್ತಿದ್ದರು ಎನ್ನಲಾಗಿದೆ. ಆದರೆ, ಹೆಚ್ಚು ಹಣ ಹೂಡಿಕೆ ಮಾಡಿದ ಬಳಿಕ ವಾಪಸ್ ಪಡೆಯುವ ಅವಕಾಶ ನೀಡುತ್ತಿರಲಿಲ್ಲ. ಇದೇ ರೀತಿ ನೂರಾರು ಜನರಿಗೆ ವಂಚಿಸಿದ್ದ ಆರೋಪಿಗಳ ವಿರುದ್ಧ ದೇಶದ ವಿವಿಧೆಡೆ ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇದೇ ವೇಳೆ, ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 3.20 ಕೋಟಿ ರೂ. ವಂಚಿಸಿದ್ದ ಆರೋಪಿಗಳ ವಿರುದ್ಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಂಚನೆ ಪ್ರಕರಣದ ತನಿಖೆ ಕೈಗೊಂಡ ಹುಳಿಮಾವು ಪೊಲೀಸರು ಆರಂಭದಲ್ಲಿ ಹಣ ವರ್ಗಾವಣೆಯಾಗಿದ್ದ ಖಾತೆಗಳ ಮಾಲಕ ಮಹಮ್ಮದ್ ಹುಜೈಫಾ ಮತ್ತು ಆತನ ತಾಯಿ ಸಭಾ ಎಂಬಾಕೆಯನ್ನು ಬಂಧಿಸಿದ್ದರು. ಪ್ರಮುಖ ಆರೋಪಿಗಳ ಸೂಚನೆಯಂತೆ ‘ಮ್ಯೂಲ್ ಅಕೌಂಟ್’ ತೆರೆದುಕೊಟ್ಟಿರುವುದಾಗಿ ಬಂಧಿತರು ಬಾಯ್ಬಿಟ್ಟಿದ್ದರು. ನಂತರ ಹಣ ವರ್ಗಾವಣೆಯಾಗಿದ್ದ ಖಾತೆಗಳ ವಿವರಗಳನ್ನು ಆಧರಿಸಿ ಹೊಸದಿಲ್ಲಿ ಸೇರಿದಂತೆ ವಿವಿಧೆಡೆ 11 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸುಮಾರು 9 ಸಾವಿರ ಮ್ಯೂಲ್ ಅಕೌಂಟ್ಗಳನ್ನು ಬಳಸಿರುವುದು ಪತ್ತೆಯಾಗಿದ್ದು, ಬಂಧಿತರಿಂದ ಒಟ್ಟು 58 ಮೊಬೈಲ್ ಫೋನ್ಗಳು, 242 ಡೆಬಿಟ್ ಕಾರ್ಡ್ಗಳು, 7 ಲ್ಯಾಪ್ಟಾಪ್ಗಳು, 530 ಗ್ರಾಂ ಚಿನ್ನ, 4.89 ಲಕ್ಷ ನಗದು, 21 ಬ್ಯಾಂಕ್ ಪಾಸ್ಬುಕ್ಗಳು, 33 ಚೆಕ್ ಬುಕ್ಗಳು, 9 ದುಬಾರಿ ಬೆಲೆಯ ವಾಚುಗಳು, 1 ಆನ್ಲೈನ್ ಡಿಜಿಟಲ್ ಪೇಮೆಂಟ್ ರಿಂಗ್, 1 ಕ್ರಿಪ್ಟೋ ಕರೆನ್ಸಿ ಲೆಡ್ಜರ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ದುಬೈನಲ್ಲಿದ್ದು, ಆತನ ಪತ್ತೆಗಾಗಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಲೇಜು ಹುಡುಗಿ ಪ್ರೇಮ ಪಾಶದಲ್ಲಿ ಬಿದ್ದಿದ್ದರು ಮುಖ್ಯಮಂತ್ರಿ, ಯಾವ ಸಿನಿಮಾಗೂ ಕಮ್ಮಿ ಇಲ್ಲ ಲವ್ ಸ್ಟೋರಿ! Love Story
ರಾಜಕೀಯ ನಾಯಕರಿಗೆ ಕೂಡ ಲವ್ ಸ್ಟೋರಿ ಇದ್ದೇ ಇರುತ್ತದೆ, ಅದರಲ್ಲೂ ತಮ್ಮ ಐಷಾರಾಮಿ ಜೀವನ ಮೂಲಕ ಸಾಕಷ್ಟು ಸದ್ದು ಮಾಡುವ ರಾಜಕೀಯ ನಾಯಕರು ಪ್ರೇಮದಲ್ಲಿ ಬಿದ್ದು ಅವರನ್ನೇ ಮದುವೆ ಆಗಿರುವ ಘಟನೆಗಳು ಮತ್ತು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅದರಲ್ಲೂ ಕಾಲೇಜು ಹುಡುಗಿ ಪ್ರೇಮ ಪಾಶದಲ್ಲಿ ಬಿದ್ದಿದ್ದರು ಈ ಮುಖ್ಯಮಂತ್ರಿ, ಯಾವುದೇ ಸಿನಿಮಾಗೂ ಕಮ್ಮಿ ಇಲ್ಲ
ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುನೀರ್ ಆಯ್ಕೆ
ಉಡುಪಿ, ಜ.14: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ 43ನೆ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮುನೀರ್ ಮೊಹಮ್ಮದ್, ಉಪಾಧ್ಯಕ್ಷರಾಗಿ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಸ್.ಉಮರ್, ಖಜಾಂಜಿಯಾಗಿ ಇಕ್ವಾನ್ ರವೂಫ್ ಆಯ್ಕೆಯಾದರು. ಇತರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಿಯಾಝ್ ಅಹಮದ್ ಉಡುಪಿ, ಗಫೂರ್ ಆದಿಉಡುಪಿ, ಖಾಲಿದ್ ಅಬ್ದುಲ್ ಅಝೀಝ್, ಹನೀಫ್ ಕುಂಜಿಬೆಟ್ಟು, ಶಮೀಮ್ ಶಾಂತಿನಗರ, ಪರ್ವೇಜ್ ಶೈಖ್, ಸುಲೈಮಾನ್ ಶೈಖ್, ಇಕ್ಬಾಲ್ ಮನ್ನಾ, ಸಲೀಂ ಬೈಲೂರು ಅವರನ್ನು ಆಯ್ಕೆ ಮಾಡಲಾಯಿತು.
ಸಂಡೂರು: ನಾರಿಹಳ್ಳ ಜಲಾಶಯಕ್ಕೆ ಮೀನುಮರಿ ದಾಸ್ತಾನು ಕಾರ್ಯಕ್ರಮ
ಬಳ್ಳಾರಿ,ಜ.14: ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯಕ್ಕೆ ರಾಜ್ಯ ವಲಯ ಯೋಜನೆಯಡಿ 5.80 ಲಕ್ಷ ಬಲಿತ ಮೀನುಮರಿಗಳನ್ನು ಮಂಗಳವಾರ ದಾಸ್ತಾನು ಮಾಡಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ವಲಯ ಮೀನುಗಾರಿಕೆ ಜಂಟಿ ನಿರ್ದೇಶಕ ಶರಣಬಸವ, ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ, ತಾರನಗರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಂಪಾಪತಿ, ಸಂಡೂರು ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಕೆ.ಎಸ್ ಸೇರಿದಂತೆ ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
ಬಳ್ಳಾರಿ| ವೃದ್ಧೆ ನಾಪತ್ತೆ: ಪತ್ತೆಗಾಗಿ ಮನವಿ
ಬಳ್ಳಾರಿ,ಜ.14: ನಗರದ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರು ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಗಿರಿಜಮ್ಮ(78) ನಾಪತ್ತೆಯಾದ ವೃದ್ಧೆ. ಗಿರಿಜಮ್ಮ ಕಳೆದ ಡಿ.29 ರಂದು ಮನೆಯಿಂದ ಅಂಗಡಿಗೆ ಹೋಗಿದ್ದು, ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ವೃದ್ಧೆ 4.5 ಅಡಿ ಎತ್ತರ, ದಪ್ಪನೆಯ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆಯ ಮುಖ ಹೊಂದಿದ್ದಾರೆ. ನಾಪತ್ತೆ ವೇಳೆ ಹಸಿರು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ಕುಪ್ಪಸ ಧರಿಸಿರುತ್ತಾರೆ. ಕನ್ನಡ, ತೆಲುಗು ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತರೆ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಕುಲಾಲ - ಕುಂಬಾರರಿಗೆ ರಾಜಕೀಯದಲ್ಲಿ ಕಡೆಗಣನೆ: ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಆರೋಪ
ಮಂಗಳೂರು, ಜ.14: ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟು ಇರುವ ಕುಲಾಲ/ಕುಂಬಾರರಿಗೆ ಇಲ್ಲಿಯವರೆಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದು ಕುಲಾಲ ಕುಂಬಾರರ ಸಮಾಜಕ್ಕೆ ಅತೀ ದೊಡ್ಡ ಅನ್ಯಾಯ ಎಂದು ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಬೇಸರ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಅವರು, ನಮ್ಮ ಸಮಾಜದ ಜನಸಂಖ್ಯೆಯನ್ನು ಪರಿಗಣಿಸಿ ಆಯಾ ರಾಜಕೀಯ ಪಕ್ಷದಲ್ಲಿ ಇರುವವರು ಕುಲಾಲ/ಕುಂಬಾರರನ್ನು ಪರಿಗಣಿಸಿ ಗೌರವ ಸ್ಥಾನಮಾನವನ್ನು ನೀಡಬೇಕು ಎಂದು ಒತ್ತಾಯಿಸಿದರು. ಮುಂದೆ ನಡೆಯುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಮ್ಮನ್ನು ಪರಿಗಣಿಸಬೇಕು. ವಿಧಾನಸಭೆ, ಪರಿಷತ್ ಹಾಗೂ ಸಂಸತ್ ಚುನಾವಣೆಯಲ್ಲಿಯೂ ಸೂಕ್ತ ಸ್ಥಾನಮಾನ ಸಿಗಬೇಕು. ದೇವರಾಜ ಅರಸು ನಿಗಮದಲ್ಲಿ 103 ಜಾತಿಗಳನ್ನು ಸೇರಿದ 600ರಿಂದ 700 ಕೋ.ರೂ ಅನುದಾನ ಕೊಡುತ್ತಿರುವ ಸರಕಾರ ಕುಲಾಲ ಕುಂಬಾರರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ನಮ್ಮ ಅಭಿವೃದ್ದಿ ನಿಗಮ ದೊಂದಿಗೆ 250 ಕೋ.ರೂ. ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಮಂಜಪ್ಪ ಬಿಜೈ, ರಾಜೇಂದ್ರ ಕುಮಾರ್, ಟಿ.ಶೇಷಪ್ಪ ಮೂಲ್ಯ, ವಿಶ್ವನಾಥ ಬಂಗೇರ ಕುಳಾಯಿ, ಸೋಮಯ್ಯ ಹನೈನಡೆ, ಗಿರೀಶ್ ಎಂ.ಪಿ.ಕುತ್ತಾರ್, ದೇವಪ್ಪ ಕುಲಾಲ್ ಪಂಜಿಕಲ್ಲು ಉಪಸ್ಥಿತರಿದ್ದರು.
ಬಿಸಿ ರೋಡ್ನಿಂದ ಸುರತ್ಕಲ್ ಚತುಷ್ಪಥದಿಂದ ಷಟ್ಪಥ: ಎನ್ಎಚ್ಎಐನಿಂದ ಡಿಪಿಆರ್ಗೆ ಸಿದ್ಧತೆ
ಮಂಗಳೂರು, ಜ.14: ನಗರದಲ್ಲಿ ಸುಗಮ ವಾಹನ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಬಿ.ಸಿ.ರೋಡ್ನಿಂದ ಸುರತ್ಕಲ್ನ ನಡುವಿನ 35 ಕಿ.ಮೀ. ವ್ಯಾಪ್ತಿಯ ಬಂದರು ಸಂಪರ್ಕ ರಸ್ತೆಯನ್ನು ಚತುಷ್ಪಥದಿಂದ ಷಟ್ಪಥಗೊಳಿಸಲು ಮುಂದಾಗಿದೆ. ಸರ್ವಿಸ್ ರಸ್ತೆಗಳೊಂದಿಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಜತೆಗೆ ಕುಂದಾಪುರ-ಸುರತ್ಕಲ್, ಹಾಗೂ ನಂತೂರು-ತಲಪಾಡಿ ಈ ಹೆದ್ದಾರಿ ಭಾಗಗಳನ್ನು ಸುಧಾರಣೆಗೊಳಿಸುವುದಕ್ಕಾಗಿ ಸಾಧ್ಯತಾ ವರದಿ ಸಿದ್ಧಪಡಿಸುವಂತೆ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಸಾಧ್ಯತಾ ವರದಿಗೆ ಸದ್ಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಕುಂದಾಪುರ- ತಲಪಾಡಿ 700 ಕೋ.ರೂ ಹಾಗೂ ಸುರತ್ಕಲ್-ಬಿ.ಸಿ.ರೋಡ್ 400 ಕೋ.ರೂ. ಯೋಜನೆ ಸಿದ್ಧಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಈ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಿರಂತರ ವಾಗಿ ಭೇಟಿ ಹಾಗೂ ಮನವಿ ಪತ್ರಗಳ ಮೂಲಕ ಸುರತ್ಕಲ್- ನಂತೂರು- ಬಿ.ಸಿ.ರೋಡ್ ಹೆದ್ದಾರಿ ವ್ಯಾಪ್ತಿಯನ್ನು ಎನ್ಎಚ್ಎಐಗೆ ಹಸ್ತಾಂತರಿಸಲು ಒತ್ತಾಯಿಸಿ ಇದಕ್ಕೆ ಕಳೆದ ಅಕ್ಟೋಬರ್ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿರುವ ಬೆನ್ನಲ್ಲೇ ಇದೀಗ ಈ ಹೆದ್ದಾರಿ ರಸ್ತೆಗಳ ಷಟ್ಪಥ ಕಾರ್ಯ ಸಾಧ್ಯತೆಯ ಬಗ್ಗೆಯೂ ಪ್ರಕ್ರಿಯೆಗಳು ನಡೆದಿವೆ. ಹೆದ್ದಾರಿ ಸಚಿವಾಲಯವು ಪ್ರಾಧಿಕಾರಕ್ಕೆ ಸುರತ್ಕಲ್- ಬಿ.ಇಸರೋಡ್ ಹೆದ್ದಾರಿ ಸುಧಾರಣೆ ಹಾಗೂ ರಸ್ತೆ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಸೂಚಿಸಿದ್ದು, ಈ ಸಂಬಂಧ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಏಜೆನ್ಸಿ ಮೂಲಕ ಡಿಪಿಆರ್ಗೆ ಮುಂದಾಗಿದೆ. ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಇರುವ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡು 20 ವರ್ಷಗಳಾಗಿವೆ. ಈಗ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವುದಲ್ಲದೆ, ಸರ್ವಿಸ್ ರಸ್ತೆಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ ಪ್ರಾಧಿಕಾರದ್ದಾಗಿದೆ. ಪ್ರಾಥಮಿಕ ಮಾಹಿತಿಯನ್ನಷ್ಟೇ ಸದ್ಯ ಹೆದ್ದಾರಿ ಪ್ರಾಧಿಕಾರ ಹೊಂದಿದ್ದು, ವಿಸ್ತೃತ ತಾಂತ್ರಿಕ ವಿವರಗಳನ್ನು ಕಾರ್ಯ ಸಾಧ್ಯತಾ ವರದಿಯಲ್ಲಿ ಕನ್ಸಲ್ಟೆನ್ಸಿಯವರು ನೀಡಲಿದ್ದಾರೆ. ಧ್ರುವ ಕನ್ಸಲ್ಟೆನ್ಸಿ ಎಂಬ ಸಂಸ್ಥೆಯನ್ನು ಡಿಪಿಆರ್ ಮಾಡುವುದಕ್ಕಾಗಿ ಅಂತಿಮಗೊಳಿಸಲಾಗಿದೆ. ಇವರು ಕುಂದಾಪುರ-ತಲಪಾಡಿ ಡಿಪಿಆರ್ ಮಾಡಲಿದ್ದು, ಸುರತ್ಕಲ್-ಬಿ.ಸಿ.ರೋಡ್ ಕೂಡಾ ನಿರ್ವಹಿಸುವ ಸಾಧ್ಯತೆ ಇದೆ. ಪ್ರಸ್ತುತ ತಲಪಾಡಿ-ಕುಂದಾಪುರ ಹೆದ್ದಾರಿ ಭಾಗದಲ್ಲಿ ಹೊಸದಾಗಿ ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಕಲ್ಲಾಪುವಿನಲ್ಲಿ ನೂತನ ಫ್ಲೈಓವರ್ ನಿರ್ಮಿಸುವ ಬಗ್ಗೆ ಯೋಜನೆ ಇದೆ. ನವಮಂಗಳೂರು ಬಂದರು ಸಂಪರ್ಕದ ಹೆದ್ದಾರಿ ರಸ್ತೆ ಮತ್ತು ಬೈಪಾಸ್ ಹೆದ್ದಾರಿ ರಸ್ತೆಗಳ ಅಗಲೀಕರಣ ಚಟುವಟಿಕೆ ಗಳಿಗೆ ಸಂಬಂಧಿಸಿ ಡಿಪಿಆರ್ ಸಿದ್ಧಪಡಿಸುವಂತೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಏಜೆನ್ಸಿಯನ್ನು ಅಂತಿಮ ಗೊಳಿಸಲಾಗುವುದು. ಹೆದ್ದಾರಿಯನ್ನು 45 ಮೀಟರ್ಗೆ ಅಗಲಗೊಳಿಸಲು ಅಗತ್ಯವಾದ ಭೂಮಿಯನ್ನು ಎನ್ಎಚ್ಎಐ ಈಗಾಗಲೇ ಹೊಂದಿದೆ ಎಂದು ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ತಿಳಿಸಿದ್ದಾರೆ. ನವ ಮಂಗಳೂರು ಬಂದರು ರಸ್ತೆಗೆ ಸಂಬಂಧಿಸಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಅಂದಾಜು 34 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿದ್ದ ಕೆಪಿಟಿ- ನಂತೂರು ನಡುವಿನ ಮೇಲ್ಸೇತುವೆ ಗುತ್ತಿಗೆಯನ್ನು ಪಾಧಿಕಾರ ಸದ್ಯ ಕೈಗೆತ್ತಿಕೊಳ್ಳುತ್ತಿಲ್ಲ. ಅದೇ ರೀತಿ, ನಂತೂರು ವೃತ್ತದಲ್ಲಿ ಸುಮಾರು 51 ಕೋಟಿ ರೂ. ವೆಚ್ಚದ ಪ್ರಸ್ತಾವಿತ ಗ್ರೇಡ್ ಸಪರೇಟರ್ ಕಾಮಗಾರಿಯನ್ನೂ ಪ್ರಾಧಿಕಾರ ಸದ್ಯ ನಡೆಸುತ್ತಿಲ್ಲ. ನಂತೂರು ಮತ್ತು ಕೆಪಿಟಿ ವೃತ್ತದಲ್ಲಿ ನಡೆಯುತ್ತಿರುವ ಸರ್ವಿಸ್ ರಸ್ತೆಗಳ ಬಳಿಕ ಈ ಕಾಮಗಾರಿ ಕೊನೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತೂರು ಬಳಿ ಎಲ್ಲಾ ದಿಕ್ಕುಗಳಲ್ಲೂ ಈಗಾಗಲೇ ಎಡಕ್ಕೆ ಮುಕ್ತ ಸಂಚಾರಕ್ಕಾಗಿ ರಸ್ತೆಗಳ ಅಗಲೀಕರಣ ಕಾರ್ಯವನ್ನು ಪ್ರಾಧಿಕಾರದಿಂದ ನಡೆಸಲಾಗಿದೆ. ಕೂಳೂರು-ನಂತೂರು ಎಲಿವೇಟೆಡ್ ಕಾರಿಡಾರ್? ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಸದ್ಯ ಕ್ಯಾರೇಜ್ ವೇ 23-24 ಮೀಟರ್ ಅಷ್ಟೇ ಇದೆ. ಈ ಭಾಗದ ಹೆದ್ದಾರಿ ಮೇಲೆ ತೀರಾ ಒತ್ತಡವಿರುವುದರಿಂದ 45 ಮೀಟರ್ ಗೆ ಅಗಲಗೊಳಿಸಿ, ಷಟ್ಪಥಗೊಳಿಸುವ ಉದ್ದೇಶ ಹೊಂದಲಾಗಿದೆ. 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ ಫ್ಲೈಓವರ್ಗಳನ್ನು ಯಾವ ರೀತಿಯಲ್ಲಿ ಮರುವಿನ್ಯಾಸ ಮಾಡಬಹುದು ಅಥವಾ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆಯೂ ಅಧ್ಯಯನ ನಡೆಯಲಿದೆ. ಮುಖ್ಯವಾಗಿ ಕೂಳೂರಿನಿಂದ ನಂತೂರುವರೆಗೆ ಎಲಿವೇಟೆಡ್ ಹೈವೇ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಕುಳೈ ಮತ್ತು ಕುಂಟಿಕಾನ ಹೈವೇಯಲ್ಲಿ ಎಲಿವೇಟೆಡ್ ಹೈವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಜೆ ಆಸ್ಪತ್ರೆಯ ಬಳಿಕ ಕದ್ರಿ ಹಿಲ್ಸ್ ಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎನ್ನುತ್ತಾರೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು. ‘ಬಿ.ಸಿ.ರೋಡ್- ಸುರತ್ಕಲ್ ಹಾಗೂ ಕುಂದಾಪುರ-ತಲಪಾಡಿ ಹೆದ್ದಾರಿ ಭಾಗಗಳನ್ನು ಸುಧಾರಣೆಗೊಳಪಡಿಸುವುದಕ್ಕೆ ಕುರಿತು ಡಿಪಿಆರ್ ಮಾಡುವುದಕ್ಕೆ ಪ್ರಾಧಿಕಾರ ನಿರ್ಧರಿಸಿದೆ. ಸದ್ಯ ಟೆಂಡರ್ ಪಡೆಯುವ ಏಜೆನ್ಸಿ ಈ ಬಗ್ಗೆ ಸರ್ವೆ ನಡೆಸಿ ಡಿಪಿಆರ್ ಸಿದ್ಧಗೊಳಿಸಲು ಇನ್ನೂ 7-8 ತಿಂಗಳು ಬೇಕಾಗಬಹುದು. ಕೂಳೂರಿಂದ ನಂತೂರುವರೆಗೆ ಸುಗಮ ಸಂಚಾರಕ್ಕೆ ಸಂಬಂಧಿಸಿ ಸರ್ವಿಸ್ ರಸ್ತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಡಿಪಿಆರ್ ನಡೆಸಲಾಗುತ್ತಿದೆ. ಅಬ್ದುಲ್ಲ ಜಾವೇದ್ ಅಜ್ಮಿ, ಯೋಜನಾ ನಿರ್ದೇಶಕರು, ಎನ್ಎಚ್ಎಐ, ಮಂಗಳೂರು
ಕನ್ನಡಿಗರಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭ ಕೋರಿದ ಮೋದಿ
ನವದೆಹಲಿ: ಕರ್ನಾಟಕದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸಂಕ್ರಾಂತಿ ಶುಭಾಶಯಗಳನ್ನು ಟ್ವೀಟ್ ಮಾಡಿರುವ ಅವರು, ಮಕರ ಸಂಕ್ರಾಂತಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ಇದೊಂದು ವಿಶೇಷವಾದ ಹಬ್ಬ. ಇದು ಪ್ರತಿಯೊಬ್ಬರ ಜೀವನದಲ್ಲಿ ಆನಂದ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಆಶಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಆತ್ಮೀಯ
ಬಳ್ಳಾರಿ,ಜ.14: ಗಣರಾಜ್ಯೋತ್ಸವದ ಅಂಗವಾಗಿ ವಾಹನಗಳಿಗೂ ಕೂಡ ಧ್ವಜಸಂಹಿತೆ ಪಾಲಿಸಿಕೊಂಡು, ರಾಷ್ಟ್ರಧ್ವಜವನ್ನು ಅಳವಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷ್ಟನೆ ನೀಡಿದ್ದಾರೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಕೆಗೆ ನಿರ್ಬಂಧಿಸಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಕೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿ ಯಾರೂ ಕೂಡ ರಾಷ್ಟ್ರಧ್ವಜ ಬಳಸಬಾರದು. ಧ್ವಜ ಸಂಹಿತೆ ಪಾಲಿಸಿಕೊಂಡು ಸಾರ್ವಜನಿಕರು ಗಣರಾಜ್ಯೋತ್ಸವವನ್ನು ಆಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷಪಡಿಸಿದ್ದಾರೆ.
‘ಓ ರೋಮಿಯೊ’ ತಂಡಕ್ಕೆ ನೋಟೀಸ್ ನೀಡಿದ ಹುಸೇನ್ ಉಸ್ತರಾ ಪುತ್ರಿ; 2 ಕೋಟಿ ಪರಿಹಾರ ಬೇಡಿಕೆ
ಹುಸೇನ್ ಕುಟುಂಬದ ಆರೋಪಗಳೇನು?

21 C