SENSEX
NIFTY
GOLD
USD/INR

Weather

18    C
... ...View News by News Source

ನಕಲಿ ದಾಖಲೆ ಪ್ರಕರಣ | ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ಬಂಧನ

ಹೊಸದಿಲ್ಲಿ, ಫೆ. 5: ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ದಿಲ್ಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಚಾರಣೆ ಆರಂಭಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪುಕೋಟೆ ಸಮೀಪ ನಡೆದ ಸ್ಫೋಟದ ಬಳಿಕ ಖಾಸಗಿ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳಲ್ಲಿ ಅಕ್ರಮಗಳು ಹಾಗೂ ನಕಲಿ ದಾಖಲೆಗಳ ಬಳಕೆ ನಡೆದಿರುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನೀಡಿದ ದೂರಿನ ಮೇರೆಗೆ ದಿಲ್ಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಬಂಧಿತ ಸಿದ್ದಿಕಿ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ವಾರ್ತಾ ಭಾರತಿ 5 Feb 2026 9:29 am

ಮನೋಜ್ ಬಾಜ್ಪೇಯಿ ಅವರ ‘ಘೂಷ್‌ಖೋರ್ ಪಂಡತ್‌’ ಟೀಸರ್‌ ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

“ಶೀರ್ಷಿಕೆ ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನಕ್ಕೆ ಅಡ್ಡಿ” ಹೊಸದಿಲ್ಲಿ, ಫೆ. 5: ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ನಟ ಮನೋಜ್ ಬಾಜ್‌ಪೇಯಿ ಅಭಿನಯದ ‘ಘೂಷ್‌ಖೋರ್ ಪಂಡತ್‌’ ಸರಣಿಯ ಟೀಸರ್‌ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಆಕ್ಷೇಪಕ್ಕೆ ಗುರಿಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ‘ಪಂಡತ್‌’ ಪದವನ್ನು ಪಾತ್ರದ ವಿವರಣೆಗೆ ಬಳಸಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. “ಏಕೆ ಪಂಡಿತ್ ಮಾತ್ರ? ಏಕೆ ಮೌಲಾನಾ ಅಲ್ಲ? ಏಕೆ ʼಫಾದರ್ʼ ಅಲ್ಲ? ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ” ಎಂದು ಬಾಂಬೆ ಹೈಕೋರ್ಟ್‌ನ ವಕೀಲ ಅಶುತೋಷ್ ಜೆ. ದುಬೆ ಕಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. “ಶೀರ್ಷಿಕೆ ಕೆಟ್ಟದು, ಆಕ್ರಮಣಕಾರಿ ಮತ್ತು ಸೂಕ್ಷ್ಮವಲ್ಲದ್ದು. ಅದನ್ನು ತೆಗೆದುಹಾಕಲು ಚಲನಚಿತ್ರ ನಿರ್ಮಾಪಕರನ್ನು ಕೇಳುವುದು ಉತ್ತಮ” ಎಂದು ನವಿಕಾ ಚೌಹಾಣ್ ಎಂಬ ಬಳಕೆದಾರರ ಮತ್ತೊಂದು ಕಮೆಂಟ್ ಹೇಳಿದೆ. ಶುಭಂ ತಿವಾರಿ ಬಾಬಾ ಎಂಬವರು, ಬಾಜ್‌ಪೇಯಿ ಸ್ವತಃ ಬ್ರಾಹ್ಮಣರಾಗಿದ್ದು, ಬ್ರಾಹ್ಮಣ ಸಮುದಾಯವನ್ನು ಕೆಣಕಲು ಹಣ ಮತ್ತು ಅಧಿಕಾರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ►‘ತುಂಬಾ ಆಕ್ಷೇಪಾರ್ಹ’ ಈ ಸರಣಿಯ ನಿರ್ಮಾಪಕ ನೀರಜ್ ಪಾಂಡೆ. ಇವರು ಹಿಂದೆ ನೆಟ್‌ಫ್ಲಿಕ್ಸ್‌ನ ‘ಖಾಕೀ: ದಿ ಬಿಹಾರ್ ಚಾಪ್ಟರ್’ (2023) ಹಾಗೂ ಅದರ 2025ರ ಮುಂದುವರಿದ ಭಾಗವನ್ನೂ ನಿರ್ಮಿಸಿದ್ದರು. ಇತ್ತೀಚಿನ ಚಿತ್ರವು ನೆಟ್‌ಫ್ಲಿಕ್ಸ್ ಇಂಡಿಯಾದ 2026ರ ಕಂಟೆಂಟ್ ಸ್ಲೇಟ್‌ ನ ಭಾಗವಾಗಿದೆ. ಗಾಯಗೊಂಡ ಯುವತಿಯನ್ನು ಚಲಿಸುವ ಕಾರಿನಿಂದ ಹೊರಕ್ಕೆ ತಳ್ಳುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಬಳಿಕ “ತನಿಖಾ ಅಧಿಕಾರಿ ಯಾರು?” ಎಂಬ ವಾಯ್ಸ್‌ಓವರ್ ಕೇಳಿಸುತ್ತದೆ. “ಅವರ ಹೆಸರು ಅಜಯ್ ದೀಕ್ಷಿತ್ ಆದರೆ ಅವರು ದಿಲ್ಲಿ ಪೊಲೀಸ್ ವಲಯದಲ್ಲಿ ಪಂಡತ್‌ ಎಂದು ಕುಖ್ಯಾತರಾಗಿದ್ದಾರೆ. ಅವರು ವಿವಾಹಿತರು, ಆದರೆ ಪರಸ್ತ್ರೀ ವ್ಯಾಮೋಹಿ. ಅವರ ಸೇವಾ ದಾಖಲೆಯೂ ತುಂಬಾ ಕೆಟ್ಟದಾಗಿದೆ” ಎಂದು ಪುರುಷ ಧ್ವನಿ ಹೇಳುತ್ತಿದ್ದಂತೆ ಮನೋಜ್ ಬಾಜ್‌ಪೇಯಿ ಫ್ರೇಮ್‌ ಗೆ ಪ್ರವೇಶಿಸುತ್ತಾರೆ. ನಂತರ ಟೀಸರ್‌ ನಲ್ಲಿ ಇತರ ಪಾತ್ರಗಳ ಕ್ಷಿಪ್ರ ದೃಶ್ಯಗಳು ಕಾಣಿಸುತ್ತವೆ. ನೆಟ್‌ಫ್ಲಿಕ್ಸ್ ಇಂಡಿಯಾದ ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಲಾದ ಟೀಸರ್‌ ಗೆ “ಹರ್ ಭ್ರಷ್ಟ ಅಧಿಕಾರಿ ಕೋ ಬದಲ್ನೇ ಕಾ ಏಕ್ ಮೌಕಾ ಮಿಲ್ತಾ ಹೈ… ಅಬ್ ಆಫೀಸರ್ ಅಜಯ್ ದೀಕ್ಷಿತ್ ಕಿ ಬಾರಿ” (ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಗೂ ಬದಲಾಗಲು ಒಂದು ಅವಕಾಶ ಸಿಗುತ್ತದೆ… ಈಗ ಅಧಿಕಾರಿ ಅಜಯ್ ದೀಕ್ಷಿತ್ ಸರದಿ) ಎಂಬ ಶೀರ್ಷಿಕೆ ನೀಡಲಾಗಿದೆ. ಈ ʼರೀಲ್ʼ 20 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. “ಇಂದು, ಬ್ರಾಹ್ಮಣರನ್ನು ದೂಷಿಸಲಾಗುತ್ತಿದೆ, ಅವಮಾನಿಸಲಾಗುತ್ತಿದೆ ಮತ್ತು ಕೊಳಕು ಮತಬ್ಯಾಂಕ್ ರಾಜಕೀಯಕ್ಕಾಗಿ ಬಲಿಪಶುಗಳಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ, ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ(ಮದುವೆ ಮಾಡಿಕೊಡುವವರೆಗೆ) ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದರು. ‘ಬ್ರಾಹ್ಮಣ ಭಾರತ್ ಛೋಡೋ’ ಮತ್ತು ‘ಬ್ರಾಹ್ಮಣವಾದ್ ಸೆ ಆಝಾದಿ’ ನಂತಹ ಘೋಷಣೆಗಳು ತುಂಬಾ ಸಾಮಾನ್ಯವಾಗುತ್ತಿವೆ. ಬ್ರಾಹ್ಮಣರ ವಿರುದ್ಧ ದ್ವೇಷ ನಿಜವಾಗಿಯೂ ಮುಂದಿನ ಹಂತವಾಗಿರುವ ಸಮಯದಲ್ಲಿ, ಚಲನಚಿತ್ರಕ್ಕೆ ಅಂತಹ ಹೆಸರುಗಳನ್ನು ನೀಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ” ಎಂದು ಧರ್ಮ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕಿ ಹಾಗೂ ಸ್ವಯಂ ಘೋಷಿತ ಬ್ರಾಹ್ಮಣ ಹಕ್ಕುಗಳ ಕಾರ್ಯಕರ್ತೆ ಅನುರಾಧಾ ತಿವಾರಿ ಹೇಳಿದ್ದಾರೆ. ಶೀರ್ಷಿಕೆಯನ್ನು ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನ ನಿಷೇಧಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಸೌಜನ್ಯ:theprint.in

ವಾರ್ತಾ ಭಾರತಿ 5 Feb 2026 9:18 am

ಗೌರವ ಖರೀದಿಸಲು ಸಾಧ್ಯವಿಲ್ಲ; ಭಾರತ-ಯುಎಸ್‌ ವ್ಯಾಪಾರ ಒಪ್ಪಂದದ ಬಳಿಕ ಷರೀಫ್-ಮುನೀರ್‌ಗೆ ಪಾಕಿಸ್ತಾನಿಯರಿಂದ ಮಂಗಳಾರತಿ!

ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಭಾರತೀಯರನ್ನಲ್ಲ, ನೆರೆಯ ಪಾಕಿಸ್ತಾನಿಯರನ್ನು ಕೇಳಬೇಕು. ಭಾರತವನ್ನು ಹೊಗಳಿ ಅಟ್ಟಕ್ಕೇರಿಸುವ ಪಾಕಿಸ್ತಾನಿಯರು, ತಮ್ಮದೇ ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ನೋಡಬಹುದು. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಭಾರತವನ್ನು ಅಭಿನಂದಿಸಿರುವ ಅನೇಕ ಪಾಕಿಸ್ತಾನಿಯರು, ಗೌರವವನ್ನು ಸಂಪಾದಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಶೆಹಬಾಜ್‌ ಷರೀಫ್‌ ಮತ್ತು ಅಸಿಮ್‌ ಮುನೀರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 8:56 am

ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ಬಸ್‌ ಪ್ರಾರಂಭ: ಶೀಘ್ರವೇ ಉಜ್ಜಯಿನಿಗೆ ಬಸ್ , ಕಲ್ಯಾಣಕ್ಕೆ 4 ತಿಂಗಳಲ್ಲಿ 56 ಹೊಸ ಬಸ್‌ಗಳ ನಿರೀಕ್ಷೆ

ಕಲ್ಯಾಣ ಕರ್ನಾಟಕಕ್ಕೆ ಹಾಗೂ ರಾಜಧಾನಿ ಬೆಂಗಳೂರಿಗೆ ಜನರ ಸಂಪರ್ಕ ಸೇತುವೆಯಾಗಿ ಅಮೋಘವರ್ಷ ಬಸ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಖಾಸಗಿ ದುಬಾರಿ ಬಸ್‌ ಟಿಕೆಟ್ ಕೊಡುವ ಬದಲು ಕಡಿಮೆ ವೆಚ್ಚದಲ್ಲಿ ಜನರಿಗೆ ಸ್ಲೀವರ್ ಬಸ್ ಮೂಲಕ ಬರಲು ಅನುಕೂಲವಾಗಿದೆ. ಇನ್ನೂ 56 ಬಸ್ ಗಳು ಆರಂಭ ಆಗುವ ನಿರೀಕ್ಷೆ ಇವೆ.

ವಿಜಯ ಕರ್ನಾಟಕ 5 Feb 2026 8:44 am

ರಾತ್ರಿ ಬೆಳಗಾಗುವಷ್ಟರಲ್ಲಿ ಸುಟ್ಟು ಭಸ್ಮವಾದ ಕಾರ್‌ ಸರ್ವಿಸ್ ಸೆಂಟರ್: ವಿಜಯಪುರದ ಹನಮಂತರ ಕನಸು ನುಚ್ಚುನೂರು, ಕೋಟಿ ರೂ. ನಷ್ಟ!

ಜೀವನದಲ್ಲಿ ಎಲ್ಲವೂ ಸರಿ ಇದ್ದು, ನಾಲ್ಕಾರು ಮಂದಿಗೆ ಕೆಲಸವೂ ಕೊಟ್ಟಿದ್ದ ಕಾರ್ ಸರ್ವಿಸ್ ಸೆಂಟರ್ ಧಗಧಗನೇ ಹೊತ್ತಿ ಉರಿದಿದ್ದು, ಹನಮಂತ ಕನಮಡಿ ಅವರ ಕನಸೂ ಇದರೊಂದಿಗೆ ಭಸ್ಮವಾಗಿದೆ. ಆಕಸ್ಮಿಕ ಬೆಂಕಿ ಅವಘಡದ ಕಂಡ ದೃಶ್ಯಕ್ಕೆ ಏನೂ ಮಾಡಲಾಗದೆ, ಹನಮಂತ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ವಿಜಯ ಕರ್ನಾಟಕ 5 Feb 2026 8:20 am

ಉತ್ತರ ಪ್ರದೇಶ | ನಾಲ್ಕು ದಶಕಗಳ ಬಳಿಕ ಹತ್ಯೆ ಪ್ರಕರಣದ ಶತಾಯುಷಿ ಆರೋಪಿ ದೋಷಮುಕ್ತ

ಪ್ರಯಾಗ್‌ರಾಜ್: ನಾಲ್ಕು ದಶಕಗಳ ಕಾಲ ನಡೆದ ಕಾಯುವಿಕೆ ಬಳಿಕ ಶತಾಯುಷಿಯೊಬ್ಬರಿಗೆ ಕೊನೆಗೂ ನ್ಯಾಯ ದೊರೆತಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಮೀರ್ಪುರ ಜಿಲ್ಲೆಯ ಧನಿರಾಮ್ ಅವರನ್ನು ಅಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿದೆ. 1982ರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 1984ರಲ್ಲಿ ವಿಚಾರಣಾ ನ್ಯಾಯಾಲಯ ಧನಿರಾಮ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಅದೇ ವರ್ಷ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ 42 ವರ್ಷಗಳ ಬಳಿಕ ಅವರ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅವರನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿದೆ. ನ್ಯಾಯಮೂರ್ತಿಗಳಾದ ಚಂದ್ರಧರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, 23 ಪುಟಗಳ ತೀರ್ಪಿನಲ್ಲಿ ಅಭಿಯೋಜಕರ ಸಾಕ್ಷ್ಯಗಳಲ್ಲಿ ಕಂಡುಬಂದ ವೈರುದ್ಧ್ಯಗಳ ಆಧಾರದ ಮೇಲೆ ತೀರ್ಪು ನೀಡಿದೆ. ಪ್ರಕರಣದಲ್ಲಿ ಉಲ್ಲೇಖಿಸಲಾದ ಇಬ್ಬರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ನಂಬಿಕೆಗೆ ಅರ್ಹವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜೊತೆಗೆ ಎಫ್‌ಐಆರ್‌ನಲ್ಲಿರುವ ದೋಷಗಳನ್ನು ಉಲ್ಲೇಖಿಸಿ, ಆರೋಪಗಳು ಅಸಂಭವನೀಯವಾಗಿವೆ ಎಂದು ಹೇಳಿದೆ. ಪ್ರಕರಣದ ಮುಖ್ಯ ಆರೋಪಿ ಹಾಗೂ ಗುಂಡು ಹಾರಿಸಿದ್ದಾನೆ ಎನ್ನಲಾದ ವ್ಯಕ್ತಿ 1982ರಿಂದಲೇ ತಲೆಮರೆಸಿಕೊಂಡಿದ್ದು, ತಾರ್ಕಿಕ ಸಂಶಯಗಳಿಗೆ ಅತೀತವಾಗಿ ಆರೋಪವನ್ನು ಸಾಬೀತುಪಡಿಸಲು ಅಭಿಯೋಜಕರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ವಾರ್ತಾ ಭಾರತಿ 5 Feb 2026 8:10 am

ಭಾರತ ತಾನು ಬಯಸಿದ ರಾಷ್ಟ್ರದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ; ರಷ್ಯಾದಿಂದ ತೀವ್ರ ಬೇಸರದ ಹೇಳಿಕೆ! ಮುಂದೇನು?

ಕಳೆದ ಡಿಸೆಂಬರ್‌ವರೆಗೂ ಚೆನ್ನಾಗಿಯೇ ಇದ್ದ ಭಾರತ-ರಷ್ಯಾ ತೈಲ ಸಂಬಂಧ, ಇದೀಗ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಬಾಗಿ ಮಂಕಾಗುತ್ತಿದೆ. ಈ ಒಪ್ಪಂದದ ಭಾಗವಾಗಿ ಭಾರತಕ್ಕೆ ತನ್ನ ನಿಯಂತ್ರಣದ ವೆನೆಜುವೆಲಾ ತೈಲವನ್ನು ಮಾರಾಟ ಮಾಡುವುದಾಗಿ ಅಮೆರಿಕ ಹೇಳಿದ್ದೇ ತಡ, ರಷ್ಯಾ ತೀವ್ರ ಬೇಸರ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ತನ್ನ ಪರಿಷ್ಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾಸ್ಕೋ, ನವದೆಹಲಿ ತಾನು ಬಯಸಿದ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ ಎಂದು ಹೇಳಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 7:33 am

ಅಮೆರಿಕ | ಟ್ರಂಪ್ ಹತ್ಯೆಗೆ ಯತ್ನ; ಆರೋಪಿಗೆ ಜೀವಾವಧಿ ಶಿಕ್ಷೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಮೊದಲು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ರ‍್ಯಾನ್ ರುತ್ ಎಂಬ ಬಂದೂಕುಧಾರಿಗೆ ಅಮೆರಿಕ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅರೆ-ಸ್ವಯಂಚಾಲಿತ ರೈಫಲ್ ನೊಂದಿಗೆ ಫ್ಲೋರಿಡಾ ಗಾಲ್ಫ್ ಕೋರ್ಸ್ ನ ಪೊದೆಗಳ ಹಿಂದೆ ಅವಿತಿದ್ದ ರುತ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ಎಂದು ರಾಯ್ಟರ್ಸ್ ವರದಿ ಮಾಡಿದೆ. 2024ರ ಸೆಪ್ಟೆಂಬರ್ 15ರಂದು ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಅಧ್ಯಕ್ಷ ಟ್ರಂಪ್ ಗಾಲ್ಫ್ ಆಡುತ್ತಿದ್ದ ಸಂದರ್ಭ ಗಾಲ್ಫ್ ಕ್ಲಬ್ ನಿಂದ ಸರಿಸುಮಾರು ನೂರು ಗಜಗಳಷ್ಟು ದೂರದ ಪೊದೆಗಳಲ್ಲಿ ಅವಿತಿದ್ದ ಆರೋಪಿಯನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಪತ್ತೆ ಮಾಡಿದ್ದರು. ರುತ್ ತನ್ನ ರೈಫಲ್ ನೊಂದಿಗೆ ತಪ್ಪಿಸಿಕೊಂಡಿದ್ದರೂ, ಬಳಿಕ ಬಂಧಿಸಲಾಗಿತ್ತು. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಅಲೀನ್ ಕ್ಯಾನನ್, ಫ್ಲೋರಿಡಾದ ಫೋರ್ಟ್ ಪೀರ್ಸ್ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದರು. ಮನುಷ್ಯ ಜೀವ ತೆಗೆಯುವ ಲೆಕ್ಕಾಚಾರದ ಹಾಗೂ ಪೂರ್ವಯೋಜಿತ ಕೃತ್ಯದಲ್ಲಿ ತೊಡಗಿರುವುದು ಸ್ಪಷ್ಟ ಎಂದು ತೀರ್ಪಿನಲ್ಲಿ ಹೇಳಲಾಗಿದೆ. 2025ರ ಸೆಪ್ಟೆಂಬರ್ ನಲ್ಲಿ ನ್ಯಾಯಾಧೀಶರು ಐದು ಅಪರಾಧಗಳಲ್ಲಿ ರುತ್ ದೋಷಿ ಎಂದು ನಿರ್ಣಯಿಸಿದ್ದರು. ಇದರಲ್ಲಿ ಯಾವುದೇ ಔಪಚಾರಿಕ ಕಾನೂನು ತರಬೇತಿ ಇಲ್ಲದೆಯೂ ತಾನೇ ವಕೀಲನಾಗಿ ಕಾರ್ಯನಿರ್ವಹಿಸಿದ ಹಾಗೂ ಹತ್ಯೆಗೆ ಯತ್ನಿಸಿದ ಆರೋಪಗಳು ಸೇರಿದ್ದವು.

ವಾರ್ತಾ ಭಾರತಿ 5 Feb 2026 7:33 am

ಭಾರತದ ವಿರುದ್ಧ ಆಡುವುದಿಲ್ಲ ಎಂಬ ನಿಲುವು ಸ್ಪಷ್ಟ: ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಮ್ಮ ನಿಲುವು ಅಚಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಈ ತಿಂಗಳ 15ರಂದು ನಡೆಯುವ ಪಂದ್ಯವನ್ನು ಬಹಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟ ಎಂದು ಪಾಕ್ ಪ್ರಧಾನಿಯ ಹೇಳಿಕೆಯನ್ನು ಉಲ್ಲೇಖಿಸಿ 'ಡಾನ್' ವರದಿ ಮಾಡಿದೆ. ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ನಾವು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ ಎಂದು ಇಸ್ಲಾಮಾಬಾದ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟಪಡಿಸಿದರು. ಪರಿಸ್ಥಿತಿಯನ್ನು ಜಾಗೃತೆಯಿಂದ ಅವಲೋಕಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಂಡು ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಿವರಿಸಿದರು. ಕ್ರೀಡೆಯಲ್ಲಿ ರಾಜಕೀಯ ಇರಬಾರದು. ತೀರಾ ಜಾಗೃತೆಯಿಂದ ಅವಲೋಕಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದೇವೆ. ಇದು ಸೂಕ್ತ ನಿರ್ಧಾರ ಎಂದು ಅವರು ಸಮರ್ಥಿಸಿಕೊಂಡರು. ಇದಕ್ಕೂ ಮುನ್ನ ಪಾಕಿಸ್ತಾನ ಸರ್ಕಾರ ಎಕ್ಸ್ ಹ್ಯಾಂಡಲ್ ನಿಂದ ಪೋಸ್ಟ್ ಮಾಡಿ, ಟಿ20 ವಿಶ್ವಕಪ್ ನಲ್ಲಿ ಭಾರತ ವಿರುದ್ದದ ಪಂದ್ಯವನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿತ್ತು. ಆದರೆ ಇದಕ್ಕೆ ಯಾವುದೇ ಕಾರಣ ನೀಡಿರಲಿಲ್ಲ.

ವಾರ್ತಾ ಭಾರತಿ 5 Feb 2026 7:23 am

Karnataka Weather: ವಾಯು ಚಂಡಮಾರುತ ಪರಿಚಲನೆ ಕಡಿಮೆ: 5 ದಿನ ಹವಾಮಾನದಲ್ಲಿ ಮಹತ್ವದ ಬದಲಾವಣೆ ಇಲ್ಲ: ಐಎಂಡಿ

Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಫೆಬ್ರವರಿ 5ರಂದು ಕನಿಷ್ಠ ತಾಪಮಾನದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಚಳಿ ಹೆಚ್ಚಳವಾಗಿದೆ. ಇನ್ನು ಮುಂದಿನ ಐದು ದಿನಗಳ ವರೆಗೆ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ದಕ್ಷಿಣ ಕೇರಳ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5

ಒನ್ ಇ೦ಡಿಯ 5 Feb 2026 7:12 am

ಕರಾವಳಿ ಜನರಿಗೆ ಗುಡ್‌ನ್ಯೂಸ್: ಎ ಖಾತಾ ಪಡೆಯುವುದು ಇನ್ನು ಸುಲಭ, ಏಕವಿನ್ಯಾಸ ನಕ್ಷೆ ಸರಳೀಕರಣಕ್ಕೆ ಸರಕಾರ ನಿರ್ಧಾರ

ಕರಾವಳಿ ಜಿಲ್ಲೆಗಳಿಗೆ ಜಟಿಲವಾಗಿದ್ದ ಖಾತೆ ಸಮಸ್ಯೆ ಈಗ ಸರಳೀಕರಣಗೊಳಿಸಲಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸೌಲಭ್ಯ, ಖಾತೆ ಸೌಲಭ್ಯವೂ ಸರಳೀಕರಣಗೊಂಡಿದೆ. ಸರಕಾರದ ಹೊಸ ಆದೇಶ ಇದಕ್ಕೆಲ್ಲ ಪರಿಹಾರ ಕೊಟ್ಟಿದೆ,

ವಿಜಯ ಕರ್ನಾಟಕ 5 Feb 2026 7:02 am

ಭಾರತವನ್ನು ಅಮೆರಿಕ ಬೆದರಿಸಲಾಗದು; ಅಜಿತ್‌ ದೋವಲ್-ಮಾರ್ಕೊ ರುಬಿಯೊ ರಹಸ್ಯ ಸಭೆಯ ಮಾಹಿತಿ ಬಹಿರಂಗ!

ಭಾರತದ ಜೊತೆಗಿನ ತನ್ನ ವ್ಯಾಪಾರ ಸಂಬಂಧವನ್ನು ಸುಧಾರಿಸುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದೆ. ಇದೀಗ ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ವಿಚಾರವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನಡೆದ ಭಾರೀ ಮಹತ್ವದ ಸಭೆಯ ಬಗ್ಗೆ ಹೆಚ್ಚಿನ ವಿವರಗಳ ಲಭ್ಯವಾಗಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 6:44 am

ಗುಡಿಬಂಡೆ-ಬಾಗೇಪಲ್ಲಿಯಲ್ಲಿ ಚಿನ್ನ-ಬೆಳ್ಳಿ ನಿಕ್ಷೇಪಕ್ಕಾಗಿ 4 ತಿಂಗಳ ಕಾಲ ನಡೆಯಲಿದೆ ಸರ್ವೇ ಕಾರ್ಯಾಚರಣೆ

ಚಿನ್ನದ ಬೆಲೆ ಏರಿಕೆಯ ಬಿಸಿ ಸುದ್ದಿ ನಡುವೆಯೇ ಕರ್ನಾಟಕದಲ್ಲಿ ಚಿನ್ನದ ನಿಕ್ಷೇಒಕ್ಕಾಗಿ ಹುಡುಕಾಟ ಆರಂಭಿಸಿರುವುದು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಏರಿಯಲ್ ಸರ್ವೇ ಆರಂಭ ಆಗಿದ್ದು, ಯಾಕೆ, ಎಲ್ಲಿಯವರೆಗೆ ಸರ್ವೇ ನಡೆಯಲಿದೆ, ಇದರ ಫಲಿತಾಂಶ ಏನು ಎಂಬ ವಿವರ ಇಲ್ಲಿದೆ ನೋಡಿ.

ವಿಜಯ ಕರ್ನಾಟಕ 5 Feb 2026 6:43 am

ತೆಂಗಿಗೆ ಬೇಕಿದೆ ಖರೀದಿ ಕೇಂದ್ರದ ಬಲ; ಕನಿಷ್ಠ ಬೆಂಬಲ ಬೆಲೆ ದೊರೆತರೆ ಅನ್ನದಾತನಿಗೆ ನೂರಾನೆ ಬಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆಂಗು ಬೆಳೆಗೆ ಭಾರೀ ಬೇಡಿಕೆ ಇದೆ. ಆದರೆ ರೈತರು ಹೆಚ್ಚಿನ ಲಾಭ ಸಿಗದೇ ಪರದಾಡುತ್ತಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ತೆಂಗು ಖರೀದಿ ಕೇಂದ್ರಗಳ ಸ್ಥಾಪನೆ, ತೆಂಗಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆಯ ರೈತ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರ ಈ ನಿಟ್ಟಿನಲ್ಲಿ ರೈತರ ಧ್ವನಿಯನ್ನು ಆಲಿಸಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 5:48 am

Ladakh ಉದ್ವಿಗ್ನತೆ ಸಂದರ್ಭ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದ ಮೋದಿ: ರಾಹುಲ್ ಗಾಂಧಿ ಆರೋಪ

►‘ಯಾವುದು ಸಮಂಜಸವೆಂದು ಅನಿಸುವುದೋ ಅದನ್ನೇ ಮಾಡಿ ಎಂದು ನರವಣೆಗೆ ತಿಳಿಸಿದ್ದ ಪ್ರಧಾನಿ’►ನಿವೃತ್ತ ಸೇನಾ ವರಿಷ್ಠ ಜನರಲ್ ನರವಣೆ ಕೃತಿ ಉಲ್ಲೇಖಿಸಿದ ರಾಹುಲ್

ವಾರ್ತಾ ಭಾರತಿ 5 Feb 2026 12:29 am

ಅಂಡರ್-19 ವಿಶ್ವಕಪ್: ಫೈನಲ್‌ ಗೆ ಭಾರತ, ಇಂಗ್ಲೆಂಡ್ ಎದುರಾಳಿ

ಸೆಮಿ ಫೈನಲ್‌ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಜಯ, ಆ್ಯರೊನ್ ಜಾರ್ಜ್ ಶತಕ

ವಾರ್ತಾ ಭಾರತಿ 5 Feb 2026 12:22 am

ರೈಫಲ್, ಪಿಸ್ತೂಲ್ ಏಷ್ಯನ್ ಚಾಂಪಿಯನ್‌ಶಿಪ್ | ಬಂಗಾರ ಗೆದ್ದ ಇಶಾ ಸಿಂಗ್

ಭಾರತದ ಮಹಿಳಾ ತಂಡಕ್ಕೂ ಚಿನ್ನ; 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಾಮ್ರಾಟ್‌ ಗೆ ಕಂಚು ಹೊಸದಿಲ್ಲಿ, ಫೆ.4: ರಾಷ್ಟ್ರ ರಾಜಧಾನಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ರೈಫಲ್, ಪಿಸ್ತೂಲ್ ಏಷ್ಯನ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಪುರುಷರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಶಾ 239.8 ಅಂಕ ಗಳಿಸಿದರೆ, ಚೈನೀಸ್ ತೈಪೆಯ ಯೆನ್–ಚಿಂಗ್ ಚೆಂಗ್ (235.4) ಎರಡನೇ ಸ್ಥಾನ ಪಡೆದರು. ಚೆಂಗ್ ಅವರ ಸಹ ಆಟಗಾರ್ತಿ ವೆನ್ ಯು 217.7 ಅಂಕ ಗಳಿಸಿದರು. ಸ್ಪರ್ಧೆಯಲ್ಲಿದ್ದ ಭಾರತೀಯರಾದ ಸುರುಚಿ ಸಿಂಗ್ (197.7) ಹಾಗೂ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ (135.3) ಕ್ರಮವಾಗಿ ನಾಲ್ಕನೇ ಹಾಗೂ ಏಳನೇ ಸ್ಥಾನ ಪಡೆದಿದ್ದಾರೆ. ಸುರುಚಿ ಸಿಂಗ್ (576), ಮನು ಭಾಕರ್ (575) ಹಾಗೂ ಇಶಾ ಸಿಂಗ್ (575) ಎಂಟು ಮಹಿಳೆಯರಿದ್ದ ಫೈನಲ್‌ಗೆ ಅರ್ಹತೆ ಪಡೆದರು. ಈ ಮೂವರು ಒಟ್ಟು 1,726 ಅಂಕ ಗಳಿಸಿದ ಕಾರಣ ಭಾರತದ ಮಹಿಳಾ ತಂಡಕ್ಕೆ ಚಿನ್ನದ ಪದಕ ಲಭಿಸಿತು. 10 ಮೀ. ಏರ್ ಪಿಸ್ತೂಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಾಮ್ರಾಟ್ ರಾಣಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 220.3 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಉಜ್ಬೇಕಿಸ್ತಾನದ ವ್ಲಾಡಿಮಿರ್ ಸ್ವೆಚ್ನಿಕೋವ್ (242.0) ಹಾಗೂ ರಖೀಂಖಾನ್ (241.0) ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ಫೈನಲ್‌ನಲ್ಲಿದ್ದ ಭಾರತದ ಇನ್ನೋರ್ವ ಆಟಗಾರ ಶ್ರವಣ್ ಕುಮಾರ್ (198.6) ಪದಕ ಸ್ಪರ್ಧೆಯಿಂದ ಹೊರಗುಳಿದರು. ಒಟ್ಟು 1,732 ಅಂಕ ಗಳಿಸಿದ ಶ್ರವಣ್, ಸಾಮ್ರಾಟ್ ಹಾಗೂ ವರುಣ್ ತೋಮರ್ ಭಾರತೀಯ ಪುರುಷರ ತಂಡಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.

ವಾರ್ತಾ ಭಾರತಿ 5 Feb 2026 12:17 am

165 ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ: ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಫೆ‌.4: ಕೇಂದ್ರ ಬಿಜೆಪಿಯದ್ದು ಕಾರ್ಪೋರೆಟ್ ಸ್ಟೈಲ್ ಬಜೆಟ್ ಮತ್ತು ಬೇಸ್ ಲೆಸ್, ವಿಷನ್ ಲೆಸ್ ಬಜೆಟ್ ಇದಾಗಿದೆ. ಅಲ್ಲದೆ, 165ಲಕ್ಷ ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, 2026ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಒಂಭತ್ತನೇ ಬಜೆಟ್ ಸಾಧನೆಯಲ್ಲಿ 53.50 ಲಕ್ಷ ಗಾತ್ರದ ಬಜೆಟ್ ಮಂಡಿಸಿ 4 ಲಕ್ಷ ಕೋಟಿಯಷ್ಟು ಬಜೆಟ್ ಗಾತ್ರ ಹೆಚ್ಚಳ ಆಗಿದೆ. 1947ರಿಂದ 2014 ಮಾ.21ರವರೆಗೆ ದೇಶ ಸಾಲದ ಒಟ್ಟಾರೆ ಮೊತ್ತ 53.2 ಲಕ್ಷ ಕೋಟಿ ಇತ್ತು, ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಈ 12ವರ್ಷ ಅದು 218.6 ಲಕ್ಷ ಕೋಟಿ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 165 ಲಕ್ಷ ಕೋಟಿ ಸಾಲ ಮಾಡಿರುವುದೇ ಕೇಂದ್ರದ ಸಾಧನೆ ಆಗಿದೆ. ಇಷ್ಟೆಲ್ಲಾ ಸಾಲ ಮಾಡಿ ಎಷ್ಟು ಯೋಜನೆ ಜಾರಿಗೊಳಿಸಿದ್ದಾರೆ ಎಂದು ಪ್ರಶ್ನಿಸಿದರು. ಪ್ರತಿ ವರ್ಷ ನಮ್ಮ ದೇಶ 13 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದ್ದು, ಅಸಲು 18 ಲಕ್ಷ ಕೋಟಿ ಇದೆ. ಇಂತಹ ವ್ಯವಸ್ಥೆ ನಿರ್ಮಾಣ ಮಾಡಿರುವುದೇ ಬಿಜೆಪಿ ಸಾಧನೆ. 4.27 ಲಕ್ಷ ರೂ. ಸಾಲ ಪ್ರತಿಯೊಬ್ಬರ ಮೇಲಿರುವ ಸಾಲವಾಗಿದೆ. ಮೈಸೂರು-ಬೆಂಗಳೂರು ರಸ್ತೆ ನಿರ್ಮಾಣ ಸಾಧನೆ ಎನ್ನುವುದಾದರೆ 15ಸಾವಿರ ಕೋಟಿ ಬಂಡವಾಳ ಖಾಸಗಿ ಕಂಪನಿ ಹಾಕಿದ್ದು, ಒಮ್ಮೆ ಓಡಾಡಲು 1 ಸಾವಿರ ಟೋಲ್ ಕಟ್ಟಬೇಕಿದೆ ಎಂದು ಹೇಳಿದರು.   ಈ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅತಿ ಹೆಚ್ಚು ತೆರಿಗೆ ಸಂಗ್ರಹಿಸುವುದರಲ್ಲಿ ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲೇ ನಾವು 2 ಸ್ಥಾನದಲ್ಲಿದ್ದೇವೆ. ಪ್ರತಿ ವರ್ಷ ರಾಜ್ಯದಿಂದ ಒಂಭತ್ತು ವಿಧವಾದ ತೆರಿಗೆಗಳ ಮೂಲಕ 5ಲಕ್ಷದ 26ಸಾವಿರ ಕೋಟಿ ರೂ. ಕಟ್ಟುತ್ತಿದ್ದೇವೆ. 14ನೇ ಹಣಕಾಸು ನೀತಿ ಆಯೋಗದ ಪ್ರಕಾರ ಶೇ.41ರಷ್ಟು ರಾಜ್ಯದ ಪಾಲು ಕೇಂದ್ರ ಹಿಂದಿರುಗಿಸಬೇಕಿದೆ. ಹೀಗಾಗಿ 2 ಲಕ್ಷ ಕೋಟಿ ಕೊಡುವ ಜಾಗದಲ್ಲಿ 60 ಸಾವಿರ ಕೋಟಿ ಕೊಡುತ್ತಿದ್ದಾರೆ. ಉತ್ತರ ಪ್ರದೇಶದ 6 ಲಕ್ಷ ಕೋಟಿ ತೆರಿಗೆ ಕಟ್ಟಿದ್ದು, ಸದರಿ ರಾಜ್ಯಕ್ಕೆ 2 ಲಕ್ಷ 18ಸಾವಿರ ಕೋಟಿ ಕೊಡುತ್ತಿದ್ದಾರೆ. ಮದ್ಯಪ್ರದೇಶ 2.5 ಲಕ್ಷ ಕೋಟಿ ತೆರಿಗೆಗೆ 1.11 ಲಕ್ಷ ಕೋಟಿ ಹಣ ನೀಡುತ್ತಿದ್ದಾರೆ. ಆದರೆ, ಅತಿಹೆಚ್ಚು ತೆರಿಗೆ ಕಟ್ಟಿಸಿಕೊಂಡು ಅತಿ ಕಡಿಮೆ ಹಣ ನೀಡುವ ಮೂಲಕ ರಾಜ್ಯವನ್ನು ಕಡೆಗಣಿಸಿದ್ದಾರೆಂದರು. ಬೆಂಗಳೂರಿನಿಂದ ಹೈದರಾಬಾದ್ ವರೆಗೆ ಬಿಟ್ಟಿರುವುದು ಬುಲೆಟ್ ಟ್ರೈನ್ ಅಲ್ಲ, ಇದು ಕೇವಲ ಪುಂಗಿ ಊದುವ ವಿಚಾರ. ಈಗಿರುವ ಟ್ರೈನ್ ವೇಗ ಹೆಚ್ಚಿಸಿ ಹೈಸ್ಪೀಡ್ ಟ್ರೇನ್ ಎಂದು ಬದಲಾಯಿಸಿದ್ದು, ಇದು ಒಂದು ತಾಸು ಕಡಿಮೆ ಆಗಬಹುದಷ್ಟೇ ಆಗಿದೆ. ರಾಜ್ಯದ ಭ್ರದಾ ಮೇಲ್ದಂಡೆ, ಕಷ್ಣ ಮೇಲ್ದಂಡೆ, ಮೇಕೆದಾಟು, ಮಹಾದಾಯಿ ಯೋಜನೆಗೆ ನಾಯಪೈಸೆ ಹಣ ಕೊಡುತ್ತಿಲ್ಲ. ಹಣ ಕೊಡದಿದ್ದರೂ ಪರವಾಗಿಲ್ಲ ಅನುಮತಿ ಸಹ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾದ್ಯಮ ವಕ್ತಾರ ಮಹೇಶ್, ಕೆಪಿಸಿಸಿ ವಕ್ತಾರೆ ನಜ್ಮಾನಸೀರ್, ಉಪಾಧ್ಯಕ್ಷ ಗೋಪಿ, ಯುವಘಟಕದ ಅಧ್ಯಕ್ಷ ಅಬ್ರಾರ್, ಮಹದೇವ್, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 12:10 am

ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್ | ಭೂತಾನ್ ವಿರುದ್ಧ ಭರ್ಜರಿ ಜಯ, ಭಾರತ ಫೈನಲ್‌ ಗೆ

ಪೊಖಾರ, ಫೆ.4: ಭೂತಾನ್ ತಂಡವನ್ನು 8–0 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ತಂಡವು ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ನೇಪಾಳದ ಪೊಖಾರ ರಂಗಸಲದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಯುವ ಫುಟ್ಬಾಲ್ ಆಟಗಾರ್ತಿಯರು ಈ ಸಾಧನೆ ಮಾಡಿದರು. ಬುಧವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಆತಿಥೇಯ ನೇಪಾಳವನ್ನು 4–0 ಅಂತರದಿಂದ ಮಣಿಸಿದ ಹಿನ್ನೆಲೆಯಲ್ಲಿ ಭಾರತ ತಂಡವು ಫೈನಲ್‌ ನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿತು. ಪ್ರಶಸ್ತಿ ಸುತ್ತಿನಲ್ಲಿ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲಿದೆ. ಪ್ರಶಸ್ತಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಭಾರತ ತಂಡಕ್ಕೆ ಕನಿಷ್ಠ ಡ್ರಾ ಸಾಧಿಸುವ ಅಗತ್ಯವಿತ್ತು. ಆಕ್ರಮಣಕಾರಿ ಆಟ ಆಡಿದ ಭಾರತವು ಆರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ನಾಲ್ಕು ನಿಮಿಷಗಳ ನಂತರ ಅಭಿಷ್ಠಾ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಆ ನಂತರ ಗೋಲುಗಳ ಸುರಿಮಳೆಯಾಯಿತು. ಪರ್ಲ್ ಫೆರ್ನಾಂಡಿಸ್ ಹ್ಯಾಟ್ರಿಕ್ ಗೋಲು ಗಳಿಸಿದರೆ, ದಿವ್ಯಾನಿ ಲಿಂಡಾ ಹಾಗೂ ಪ್ರತಿಕಾ ಬರ್ಮನ್ ಕೂಡ ಗೋಲು ಗಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತವು 7–0 ಮುನ್ನಡೆ ಸಾಧಿಸಿ ಸಂಪೂರ್ಣ ಮೇಲುಗೈ ಸಾಧಿಸಿತು. ಬರ್ಮನ್ ತಮ್ಮ ಎರಡನೇ ಹಾಗೂ ಭಾರತದ ಪರ ಎಂಟನೇ ಗೋಲು ಗಳಿಸಿದರು. ಈ ಗೆಲುವಿನ ನಂತರ ಭಾರತ ತಂಡವು ಮೂರು ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶದ (9 ಅಂಕ) ನಂತರ ಎರಡನೇ ಸ್ಥಾನ ಪಡೆದಿದೆ. ಆತಿಥೇಯ ನೇಪಾಳ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಭೂತಾನ್ ಒಂದೂ ಪಂದ್ಯ ಗೆಲ್ಲದೆ ಕೊನೆಯ ಸ್ಥಾನದಲ್ಲಿದೆ.

ವಾರ್ತಾ ಭಾರತಿ 5 Feb 2026 12:07 am

ರಶ್ಯ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ: ಶ್ವೇತಭವನ

ವಾಷಿಂಗ್ಟನ್, ಫೆ.4: ಹೊಸದಾಗಿ ಘೋಷಿಸಲಾದ ಭಾರತ–ಅಮೆರಿಕಾ ಒಪ್ಪಂದದ ಅಡಿಯಲ್ಲಿ ರಶ್ಯದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ ಮತ್ತು ಅಮೆರಿಕದಿಂದ ಆಮದುಗಳನ್ನು ಹೆಚ್ಚಿಸಲಿದೆ ಎಂದು ಶ್ವೇತಭವನ ಬುಧವಾರ ಪ್ರತಿಪಾದಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ನೇರ ಮಾತುಕತೆಯ ಬಳಿಕ ಬದ್ದತೆ ಜಾರಿಗೆ ಬಂದಿದೆ. ಭಾರತವು ರಶ್ಯದ ತೈಲ ಖರೀದಿಯನ್ನು ನಿಲ್ಲಿಸುವ ಜೊತೆಗೆ ಅಮೆರಿಕಾ ಹಾಗೂ ಬಹುಶಃ ವೆನೆಝುವೆಲಾದಿಂದ ತೈಲ ಖರೀದಿಸಲಿದೆ. ಇದರಿಂದ ಅಮೆರಿಕಾ ಹಾಗೂ ಅಲ್ಲಿನ ಜನರಿಗೆ ನೇರ ಪ್ರಯೋಜನವಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಸಾರಿಗೆ, ಇಂಧನ ಮತ್ತು ಕೃಷ್ಯುತ್ಪನ್ನ ಸೇರಿದಂತೆ ಅಮೆರಿಕಾದಲ್ಲಿ 500 ಶತಕೋಟಿ ಡಾಲರ್ ಹೂಡಿಕೆಗೆ ಪ್ರಧಾನಿ ಮೋದಿ ಬದ್ದರಾಗಿದ್ದಾರೆ. ಇದು ಮತ್ತೊಂದು ಮಹತ್ವದ ಒಪ್ಪಂದವಾಗಿದೆ ಎಂದರು. ಒಪ್ಪಂದದ ಪ್ರಕಾರ ಭಾರತವು ರಶ್ಯದ ತೈಲ ಖರೀದಿಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಸಂಪೂರ್ಣ ನಿಲ್ಲಿಸಲಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ. ಭಾರತೀಯ ತೈಲ ಸಂಸ್ಕರಣಾಗಾರಗಳು ಅಸ್ತಿತ್ವದಲ್ಲಿರುವ ಖರೀದಿ ಬದ್ಧತೆಗಳನ್ನು ಗೌರವಿಸುವುದನ್ನು ಮುಂದುವರಿಸುತ್ತವೆ. ಆದರೆ ಹೊಸ ಆರ್ಡರ್‌ಗಳನ್ನು ಮುಂದಿಡುವುದಿಲ್ಲ. ಆಮದುಗಳು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ವಾರ್ತಾ ಭಾರತಿ 5 Feb 2026 12:05 am

ಕೊಲೆಗಾರ ನಿಮ್ಮ ಮಗುವಿನ ಫೋನ್ ನೊಳಗೆ ಅವಿತಿರಬಹುದು ಎಚ್ಚರ! ಗಾಝಿಯಾಬಾದ್ ದುರಂತ ಹುಟ್ಟುಹಾಕಿದ ಪ್ರಶ್ನೆಗಳು ಹತ್ತಾರು!

ಗಾಝಿಯಾಬಾದ್ ನಲ್ಲಿ ಮೂವರು ಸಹೋದರಿಯರ ದುರಂತ ಸಾವು ನಮ್ಮ ಯುವ ಜನಾಂಗ ಎತ್ತ ಸಾಗುತ್ತಿದೆ ಎಂಬುದುಕ್ಕೆ ಕೈಗನ್ನಡಿಯಾಗಿದೆ. ಇಂದಿನ ಮಕ್ಕಳಲ್ಲಿ ಅತಿಯಾದ ಮೊಬೈಲ್ ಗೀಳು, ಆನ್ ಲೈನ್ ಗೇಮಿಂಗ್ ನ ಹುಚ್ಚು ಇದನ್ನು ಇಂದಿನ ಪೋಷಕರು ಬಿಡಿಸದೇ ಹೋದಲ್ಲಿ ಬಹಳ ಕೆಟ್ಟ ಪರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಲ್ಲಿ ಮೊಬೈಲ್ ಗೀಳು ಹಚ್ಚದಂತೆ ಪೋಷಕರು ಜಾಗ್ರತೆ ವಹಿಸಬೇಕಿದೆ. ಜೊತೆಗೆ ಈಗಾಗಲೇ ಈ ಚಟಕ್ಕೆ ಬಿದ್ದಿದ್ದರೆ ಅದನ್ನು ಬಿಡಿಸಲು ಮನೋವೈದ್ಯರನ್ನು, ಆಪ್ತ ಸಲಹೆಗಾರರ ಸಹಾಯ ಪಡೆದುಕೊಳ್ಳುವುದು ಒಳಿತು.

ವಿಜಯ ಕರ್ನಾಟಕ 4 Feb 2026 11:59 pm

ಫೆ.5ರಂದು ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್; RCB–ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಹೊಸದಿಲ್ಲಿ, ಫೆ.4: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ಏಕಪಕ್ಷೀಯವಾಗಿ ಸಾಗಿದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ ಗಳ ಅಂತರದಿಂದ ಮಣಿಸಿ ಸತತ ನಾಲ್ಕನೇ ಬಾರಿ ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿದೆ. ಡೆಲ್ಲಿ ತಂಡವು ಗುರುವಾರ ವಡೋದರದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಜೆಮಿಮಾ ರೊಡ್ರಿಗ್ಸ್ ನಾಯಕತ್ವದಲ್ಲಿ ಡೆಲ್ಲಿ ತಂಡವು ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡಿದ್ದು, ಮೊದಲ ಬಾರಿ ಡಬ್ಲ್ಯುಪಿಎಲ್ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಜೆಮಿಮಾರ ಆತ್ಮೀಯ ಸ್ನೇಹಿತೆ ಸ್ಮೃತಿ ಮಂಧಾನ ಆರ್‌ಸಿಬಿ ತಂಡದ ಸಾರಥ್ಯವಹಿಸಿದ್ದು, ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಲ್ಕು ಬಾರಿ ಫೈನಲ್‌ಗೆ ತಲುಪಿದ ಹೊರತಾಗಿಯೂ ತನ್ನ ಚೊಚ್ಚಲ ಪ್ರಶಸ್ತಿಗಾಗಿ ಹುಡುಕಾಟವನ್ನು ಮುಂದುವರಿಸಿದೆ. 169 ರನ್‌ಗಳನ್ನು ಚೇಸ್ ಮಾಡಿದ ಡೆಲ್ಲಿ ತಂಡವು ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿತು. ಶೆಫಾಲಿ ವರ್ಮಾ (31 ರನ್, 21 ಎಸೆತ) ಹಾಗೂ ಲಿಝೆಲ್ ಲೀ (43 ರನ್, 24 ಎಸೆತ) ಮೊದಲ ವಿಕೆಟ್‌ಗೆ 89 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಲೌರಾ ವೋಲ್ವಾರ್ಟ್ (ಔಟಾಗದೆ 32) ಹಾಗೂ ರೊಡ್ರಿಗ್ಸ್ (41 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ►ತಂಡಗಳು RCB: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರಿ, ಲೌರೆನ್ ಬೆಲ್, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೊಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ದಯಾಳನ್ ಹೇಮಲತಾ. ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗ್ಸ್ (ನಾಯಕಿ), ತನಿಯಾ ಭಾಟಿಯಾ, ಚಿನ್ಲೆ ಹೆನ್ರಿ, ಲಿಝೆಲ್ ಲೀ, ನಿಕಿ ಪ್ರಸಾದ್, ಶೆಫಾಲಿ ವರ್ಮಾ, ಲೌರಾ ವೋಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮರಿಝಾನ್ ಕಾಪ್, ಅಲನಾ ಕಿಂಗ್, ಸ್ನೇಹ ರಾಣಾ, ಪ್ರಗತಿ ಸಿಂಗ್, ಮಿನ್ನು ಮಣಿ, ನಂದಿನಿ ಶರ್ಮಾ, ಶ್ರೀಚರಣಿ, ಎಡ್ಲಾ ಸ್ರುಜಾನಾ. ಪಂದ್ಯ ಆರಂಭದ ಸಮಯ: ರಾತ್ರಿ 7:30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಾರ್ತಾ ಭಾರತಿ 4 Feb 2026 11:57 pm

ದಮ್ಮಾಮ್| heLPy ಲೈವ್ಲಿಹುಡ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ರಿಯಾದ್:‌ heLPy ಲೈವ್ಲಿಹುಡ್ ನ ವಾರ್ಷಿಕ ಮಹಾಸಭೆಯು ʼರೆಡ್ ಪಾಟ್ʼ ರೆಸ್ಟೋರೆಂಟ್ ದಮ್ಮಾಮ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಮೊಹಮ್ಮದ್ ರಿಯಾಝ್ ಅವರಿಂದ heLPyಯ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭ‌ವಾಯಿತು. ಅವರು ಕಳೆದ 14 ವರ್ಷಗಳಲ್ಲಿ ಸಂಸ್ಥೆಯ ಸಾಮಾಜಿಕ ಸೇವೆಯನ್ನು ವಿವರಿಸಿದರು. ಸಭೆಯು ಬದ್ರುದ್ದೀನ್ ಕೊಲ್ನಾಡ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ನಂತರ ಮೊಹಿದ್ದೀನ್ ಬಾವ ಸ್ವಾಗತಿಸಿದರು. ಮನ್ಸೂರ್ ಮಂಜೇಶ್ವರ ಅವರು 2025ರ ವಾರ್ಷಿಕ ವರದಿ ಮಂಡಿಸಿದರು, heLPy ಸಂಘಟನೆಯ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತು ಸಭಿಕರಿಗೆ ವಿವರಿಸಿದರು. ಸೌದಿ ಅರೇಬಿಯಾದಲ್ಲಿ ಇಲ್ಲದಿದ್ದರೂ ಸಹ, ವಿವರವಾದ ವರದಿ ಮತ್ತು ನಿರಂತರ ಬೆಂಬಲಕ್ಕಾಗಿ ಪ್ರಧಾನ ಕಾರ್ಯದರ್ಶಿ ಸುನೀರ್ ಅಹ್ಮದ್ ರಿಗೆ ಅವರು ಧನ್ಯವಾದ ಅರ್ಪಿಸಿದರು. ಸಭೆಯಲ್ಲಿ, heLPy ತಂಡವು ಮೊಹಮ್ಮದ್ ಆಸಿಫ್ ಜೆಪ್ಪು ಅವರ ನೇತೃತ್ವ ದಲ್ಲಿ 2025 ರ ಸಂಘಟನೆಯ ಯಶೋಗಾಥೆಗಳನ್ನು ಪ್ರತಿಬಿಂಬಿಸಿತು. ಪ್ರಮುಖ ಮುಖ್ಯಾಂಶಗಳಲ್ಲಿ ಫಲಾನುಭವಿಗಳಿಗಾಗಿ ಮಂಗಳೂರಿನಲ್ಲಿ ಆಯೋಜಿಸಲಾದ heLPy ಮೀಟ್ ಮತ್ತು ಪ್ರೇರಣಾ ಕಾರ್ಯಕ್ರಮ, ಜುಬೈಲ್‌ನಲ್ಲಿ ನಡೆದ heLPy ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಮತ್ತು ಉಸ್ಮಾನ್ ಶರೀಫ್ ನೇತೃತ್ವದಲ್ಲಿ ದಮ್ಮಾಮ್‌ನಲ್ಲಿ ಆಯೋಜಿಸಲಾದ ಸ್ಮರಣೀಯ ಫ್ಯಾಮಿಲಿ ಫೆಸ್ಟ್ -25 ಸೇರಿವೆ. ಕೋಶಾಧಿಕಾರಿ ಮೊಹಮ್ಮದ್ ನಿಝಾರ್ 2025 ರ ಹಣಕಾಸು ವರದಿಯನ್ನು ಸಿದ್ಧಪಡಿಸಿದರು, ಅದನ್ನು ಖಾದರ್ ಶಹೀರ್ ಅವರು ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರಗಳನ್ನು ಪರಿಶೀಲಿಸಿ, ಹಾಜರಿದ್ದ ಸದಸ್ಯರು ಸರ್ವಾನುಮತದಿಂದ ಅನುಮೋದಿಸಲಾಯಿತು. ನಿರ್ಗಮಿತ ಅಧ್ಯಕ್ಷ ಆಸಿಫ್ ಜೆಪ್ಪು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ತಾಯ್ನಾಡಿನ ಫಲಾನುಭವಿಗಳನ್ನು ಭೇಟಿ ಮಾಡಿದ ನಂತರ ತಮ್ಮ ವೈಯಕ್ತಿಕ ಅನುಭವಗಳು ಮತ್ತು ಭಾವನೆಗಳನ್ನು ಹಂಚಿ ಕೊಂಡು ಕೃತಜ್ಞತೆ ವ್ಯಕ್ತಪಡಿಸಿದರು. ಅಶ್ರಫ್ ಯೂಸುಫ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಅಸ್ತಿತ್ವದಲ್ಲಿರುವ ಸಮಿತಿಯನ್ನು ಔಪಚಾರಿಕವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ, 2026ರ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಶಹೀರ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಆಸಿಫ್, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಿಯಾಝ್‌, ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ತೌಫೀಕ್, ಸಲಹಾ ಕಾರ್ಯದರ್ಶಿಯಾಗಿ ಸುನೀರ್ ಅಹಮದ್, ಕೋಶಾಧಿಕಾರಿಯಾಗಿ ಮೊಹಮ್ಮದ್ ನಿಝಾರ್, ಜಂಟಿ ಕೋಶಾಧಿಕಾರಿಗಳಾಗಿ ಉಸ್ಮಾನ್ ಶರೀಫ್, ಅಬ್ದುಲ್ ಸಲಾಂ ಶಾವಾಝ್‌, ಶಿಕ್ಷಣಾಧಿಕಾರಿಯಾಗಿ ಮನ್ಸೂರ್ ಮಂಜೇಶ್ವರ, ಕಾರ್ಯಕ್ರಮಗಳ ಸಂಯೋಜಕರಾಗಿ ಸುನೈನ್ ಅಹ್ಮದ್, ಲೆಕ್ಕ ಪರಿಶೋಧಕರಾಗಿ ಸಮೀರ್ ಅಹ್ಮದ್, Feed The Needy ಮೇಲ್ವಿಚಾರಕರಾಗಿ ಮೊಹಿದ್ದೀನ್ ಬಾವ, Feed The Needy ಸಹಾಯಕ ಮೇಲ್ವಿಚಾರಕರಾಗಿ ಆಸಿಫ್ ಮೊಹಿಯುದ್ದೀನ್ ಇದರ ಜೊತೆಗೆ, ಮುಂಬರುವ ವರ್ಷಗಳಲ್ಲಿ heLPy ಲೈವ್ಲಿಹುಡ್ ಚಟುವಟಿಕೆಗಳನ್ನು ಬಲಪಡಿಸಲು 20 ಸಂಯೋಜಕರನ್ನು ನೇಮಿಸಲಾಯಿತು ಮತ್ತು ಅವರು 2026 ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಶಹೀರ್ ಅವರು ಕೃತಜ್ಞತೆ ಸಲ್ಲಿಸಿದರು ಮತ್ತು ಅರ್ಹ ಕುಟುಂಬಗಳನ್ನು ಗುರುತಿಸುವ ಮೂಲಕ heLPy ತನ್ನ ಸಹಾಯ ಹಸ್ತವನ್ನು ಚಾಚುತ್ತಲೇ ಇದೆ ಎಂದು ಹೇಳಿದರು. ಸಂಸ್ಥೆಯ ದೃಷ್ಟಿಕೋನವನ್ನು ಸಾಧಿಸಲು ಮತ್ತು ಹೆಚ್ಚಿನ ಫಲಾನುಭವಿಗಳನ್ನು heLPy ಅಡಿಯಲ್ಲಿ ತರಲು ಎಲ್ಲರ ಸಹಕಾರ ವನ್ನು ಅವರು ಕೋರಿದರು. ನೂತನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಝ್ ಅವರು ಧನ್ಯವಾದ ಸಮರ್ಪಿಸಿ, ನಿರ್ಗತಿಕ ಕುಟುಂಬ‌ ಗಳನ್ನು ಬೆಂಬಲಿಸುವ ಉದ್ದೇಶದಿಂದ ಸಂಸ್ಥೆಯನ್ನು ಬಲಪಡಿಸಲು ಎಲ್ಲಾ ಸದಸ್ಯರು ಒಂದೇ ತಂಡವಾಗಿ ಒಟ್ಟಾಗಿ ಕೆಲಸ ಮಾಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಅಲ್ ಖೋಬರ್, ದಮ್ಮಾಮ್ ಮತ್ತು ಜುಬೈಲ್‌ನ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು heLPy ಸದಸ್ಯರು ಭಾಗವಹಿಸಿದ್ದರು. ಅಬ್ದುಲ್ ವದೂದ್ ಅವರ ಕಫರಾ ಮಜ್ಲಿಸ್‌ನೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ವಾರ್ತಾ ಭಾರತಿ 4 Feb 2026 11:52 pm

ಸಂಡೂರು | ‘ವಾರ್ತಾಭಾರತಿ’ ವರದಿ ಫಲಶ್ರುತಿ : ನಿಡುಗುರ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪುನಶ್ಚೇತನ

ಸಂಡೂರು (ಬಳ್ಳಾರಿ ಜಿಲ್ಲೆ) :ಸಂಡೂರು ತಾಲ್ಲೂಕಿನ ನಿಡುಗುರ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಿಂಬಿಸಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಫಲ ನೀಡಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಒಂದು ಘಟಕವನ್ನು ತಕ್ಷಣ ದುರಸ್ತಿ ಮಾಡಿ ಪುನಃ ಸಾರ್ವಜನಿಕ ಬಳಕೆಗೆ ಲಭ್ಯವಾಗಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕದಿಂದಾಗಿ ನಿಡುಗುರ್ತಿ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ವಾರ್ತಾಭಾರತಿ ಪತ್ರಿಕೆ ವಾಸ್ತವಾಂಶಗಳೊಂದಿಗೆ ವರದಿಯನ್ನು ಪ್ರಕಟಿಸಿತ್ತು. ವರದಿ ಪ್ರಕಟವಾದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟಕದಲ್ಲಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಿ ನೀರಿನ ಘಟಕವನ್ನು ಮರುಚಾಲನೆಗೆ ತಂದಿದ್ದಾರೆ. ಇದರಿಂದ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ನಿರಾಳರಾಗಿದ್ದಾರೆ.  ಮುಂದಿನ ದಿನಗಳಲ್ಲಿ ಇಂತಹ ಮೂಲಭೂತ ಸೌಕರ್ಯಗಳು ಮತ್ತೆ ಸ್ಥಗಿತಗೊಳ್ಳದಂತೆ ನಿಯಮಿತ ನಿರ್ವಹಣೆ ನಡೆಸಬೇಕು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:52 pm

ಕರ್ನಾಟಕವನ್ನು ರಕ್ಷಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ಹೆಚ್.ಡಿ. ದೇವೇಗೌಡ

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿಗಳಿಂದ ಭಾಷಣ

ವಾರ್ತಾ ಭಾರತಿ 4 Feb 2026 11:51 pm

ಇರಾನ್‌ ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ: ಟ್ರಂಪ್

ವಾಷಿಂಗ್ಟನ್, ಫೆ. 4: ಅಮೆರಿಕಾ ಇರಾನ್ ಜೊತೆ ಸಕ್ರಿಯ ಮಾತುಕತೆಯಲ್ಲಿದೆ. ಅವರು (ಇರಾನ್) ಮತ್ತೊಂದು ಮಿಲಿಟರಿ ಮುಖಾಮುಖಿಯನ್ನು ತಪ್ಪಿಸಲು ಉತ್ಸುಕರಾಗಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ‘ಇರಾನಿಯನ್ನರು ಈಗಾಗಲೇ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂಘರ್ಷ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಏನನ್ನಾದರೂ ಮಾಡಲು ಅವರಿಗೆ ಅವಕಾಶವಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಾವು ಸರಿಯಾಗಿಯೇ ಹೊಡೆತ ನೀಡಿದ್ದೆವು. ಅದು ಮತ್ತೊಮ್ಮೆ ಸಂಭವಿಸಬೇಕೆಂದು ಅವರು ಭಾವಿಸುವುದಿಲ್ಲ ಎಂಬ ವಿಶ್ವಾಸವಿದೆ. ಈಗ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಇರಾನ್ ಅಧಿಕಾರಿಗಳನ್ನು ಭೇಟಿಯಾಗುವ ಯೋಜನೆಯಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ದೃಢಪಡಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಯಾವಾಗಲೂ ಮೊದಲು ರಾಜತಾಂತ್ರಿಕತೆಯನ್ನು ಮುಂದುವರಿಸಲು ಬಯಸುತ್ತಾರೆ. ಆದರೆ ರಾಜತಾಂತ್ರಿಕತೆ ಯಶಸ್ವಿಯಾಗಬೇಕಿದ್ದರೆ ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕು. ಸ್ಟೀವ್ ವಿಟ್ಕಾಫ್ ಇದನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ.

ವಾರ್ತಾ ಭಾರತಿ 4 Feb 2026 11:49 pm

ವಿಜಯನಗರ | ರೇಣುಕಾ ಪಿಯು ಕಾಲೇಜಿನ ಉಪನ್ಯಾಸಕ ವಿಜಯಕುಮಾರ್‌ಗೆ ಪಿಎಚ್‌ಡಿ ಪದವಿ

ಹೊಸಪೇಟೆ (ವಿಜಯನಗರ) : ಹಗರಿಬೊಮ್ಮನಹಳ್ಳಿ ಪಟ್ಟಣದ ರೇಣುಕಾ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕ ವಿಜಯಕುಮಾರ್ ಎಸ್.ಎಂ. ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ವಿಜಯಕುಮಾರ್ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ, “ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ಬುದ್ಧಿಶಕ್ತಿ, ಕಲಿಕಾ ಶೈಲಿ ಮತ್ತು ಕಲಿಕಾ ಮನೋಭಾವಗಳು ಬೀರುವ ಪ್ರಭಾವಗಳ ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ವಿಜಯಕುಮಾರ್ ಮಂಡಿಸಿದ್ದರು. ಈ ಸಂಶೋಧನಾ ಪ್ರಬಂಧವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದ್ದು, 21ನೇ ಘಟಿಕೋತ್ಸವ ಸಮಾರಂಭದಲ್ಲಿ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ವಿಜಯಕುಮಾರ್ ಅವರ ಈ ಶೈಕ್ಷಣಿಕ ಸಾಧನೆಗೆ ಶಿಕ್ಷಣ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:46 pm

ಒಮಾನ್‌ ನಲ್ಲಿ ಇರಾನ್–ಅಮೆರಿಕಾ ಪರಮಾಣು ಮಾತುಕತೆ?

ಟರ್ಕಿಯಿಂದ ಸ್ಥಳಾಂತರಕ್ಕೆ ಇರಾನ್ ಪಟ್ಟು: ವರದಿ

ವಾರ್ತಾ ಭಾರತಿ 4 Feb 2026 11:45 pm

ಅಕ್ರಮ ವಲಸಿಗರ ವಿಚಾರದಲ್ಲಿ ಕೈಗೊಂಡ ಕ್ರಮಗಳೇನು?: ರಾಜ್ಯ ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಅಕ್ರಮ ವಲಸಿಗರಿಂದ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಸರಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಇಂಥವರ ವಿಚಾರದಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ, ಬಾಂಗ್ಲಾ ಅಕ್ರಮ ವಲಸಿಗರ ವಿಚಾರವಾಗಿ ಹೋರಾಟ ಮಾಡಿದ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ಒಂದು ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಸರಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ  ಸಲ್ಲಿಸಿರುವ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ‌ ನಿರ್ದೇಶನ‌ ನೀಡಿತು. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಆರ್‌ಒ) ನೋಂದಣಿ ಮಾಡಿಸದವರನ್ನು ಪತ್ತೆ ಮಾಡುವುದು ರಾಜ್ಯ ಸರಕಾರದ ಕೆಲಸ. ಸರಕಾರ ಕೆಲಸ ಮಾಡುತ್ತಿಲ್ಲ ಎಂದು ಅರ್ಜಿದಾರರು ತೋರಿಸಿದ್ದಾರೆ. ಅದಕ್ಕೆ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಹೇಗೆ? ವಿದೇಶದಿಂದ ಬಂದಿರುವವರು ಬೆಂಗಳೂರಿನ ಎಲ್ಲ ಕಡೆ ನೆಲೆಸಿದ್ದಾರೆ. ಯಾರ ಬಳಿಯೂ ವೀಸಾ, ಅನುಮತಿ ಇಲ್ಲ. ಅದಾಗ್ಯೂ, ಅವರು ಇಲ್ಲಿ ನೆಲೆಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅರ್ಜಿದಾರರು ಅದನ್ನು ತೋರಿಸಿದ್ದಕ್ಕೆ ನಿಮಗೆ ಸಮಸ್ಯೆಯೇ? ಎಂದು ಸರಕಾರವನ್ನು ಕುಟುಕಿತು. ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿದಾರರು ದಾಖಲೆ ತೋರಿಸಲಿ. ಅಕ್ರಮ ವಲಸಿಗರನ್ನು ಗುರುತಿಸಲು ವಿಧಾನವಿದೆ. ನೇರವಾಗಿ ಅಲ್ಲಿಗೆ ಹೋಗಿ ಹಲ್ಲೆ ನಡೆಸಲಾಗದು. ಅಕ್ರಮ ವಲಸಿಗರನ್ನು ಬಂಧನದಲ್ಲಿ ಇಡಲಾಗಿದೆ. ದೇಶದಿಂದ ಹೊರಗೆ ಕಳುಹಿಸುವುದರ ಕುರಿತು ಎಫ್‌ಆರ್‌ಆರ್‌ಒ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದ ವಲಸಿಗರ ಕುರಿತು ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ನ್ಯಾಯಪೀಠ, ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಸರಕಾರದ ಕೆಲಸ. ಅರ್ಜಿದಾರರು ಅದನ್ನು ಬಿಂಬಿಸಿದ್ದಾರೆ ಅಷ್ಟೆ. ತನಿಖೆ ನಡೆಸಿ, ಸರಕಾರ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಸರಕಾರ ಏನಾದರೂ ಕ್ರಮ ಕೈಗೊಂಡಿದೆಯೇ? ಯಾವ ಕ್ರಮ ಕೈಗೊಂಡಿದ್ದೀರಿ? ಅವಧಿ ಮೀರಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಸಲ್ಲಿಸಬೇಕು. ಯಾವಾಗ ಅವರನ್ನು ದೇಶದಿಂದ ಹೊರಗೆ ಕಳುಹಿಸುತ್ತೀರಿ? ಎಫ್‌ಆರ್‌ಆರ್‌ಒಗೆ ಸಮನ್ಸ್‌ ಜಾರಿ ಮಾಡಲಾಗುವುದು. ಒಂದು ದೇಶ ಅಥವಾ ಇನ್ನೊಂದು ದೇಶದ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಕ್ರಮ ವಲಸಿಗರು ಎಲ್ಲಾ ಕಡೆ ಇದ್ದಾರೆ ಎಂದು ಹೇಳಿತು. ಅಂತಿಮವಾಗಿ ನ್ಯಾಯಪೀಠ, ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತಲ್ಲದೆ, ಒಂದು ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ವಾರ್ತಾ ಭಾರತಿ 4 Feb 2026 11:45 pm

ಬಳ್ಳಾರಿ | ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕರೆ

ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆ ಕಲ್ಪಿಸಲು ಸರ್ಕಾರದ ವಿಶೇಷ ಕ್ರಮ : ತಹಶೀಲ್ದಾರ್ ಜೂಗಲ್ ಮಂಜುನಾಯಕ

ವಾರ್ತಾ ಭಾರತಿ 4 Feb 2026 11:43 pm

ಕನಕಗಿರಿ | ಯುವತಿ ನಾಪತ್ತೆ

ಕನಕಗಿರಿ : ತಾಲ್ಲೂಕಿನ ಹುಲಿಹೈದಾರ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿಂಗಮ್ಮ ಕೋಮಾರ್ ಎಂಬ ಯುವತಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಯುವತಿಯ ತಾಯಿ ದ್ಯಾಮವ್ವ ದೇವಪ್ಪ ಅವರು ಸಂಬಂಧಿಕರು ಹಾಗೂ ಪರಿಚಿತರ ಮೂಲಕ ಮಗಳನ್ನು ಹುಡುಕಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಪತ್ತೆಹಚ್ಚಿ ಕೊಡುವಂತೆ ದ್ಯಾಮವ್ವ ದೇವಪ್ಪ ಅವರು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 4 Feb 2026 11:33 pm

T20 ವಿಶ್ವಕಪ್ ಅಭ್ಯಾಸ ಪಂದ್ಯ | ಅಬ್ಬರಿಸಿದ ಇಶಾನ್ ಕಿಶನ್; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯಭೇರಿ

ನವಿ ಮುಂಬೈ, ಫೆ.4: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (53 ರನ್, 20 ಎಸೆತ, 2 ಬೌಂಡರಿ, 7 ಸಿಕ್ಸರ್) ಮಿಂಚಿನ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ 30 ರನ್ ಅಂತರದಿಂದ ಜಯಶಾಲಿಯಾಯಿತು. ಡಿ.ವೈ. ಪಾಟೀಲ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ನಿಗದಿತ 20 ಓವರ್‌ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು 241 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 45 ರನ್ ಗಳಿಸಿದರು. ಇದಕ್ಕೂ ಮೊದಲು ಅಭಿಷೇಕ್ ಶರ್ಮಾ (24 ರನ್) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕಿಶನ್ ಮೊದಲ ವಿಕೆಟ್‌ ಗೆ 5.4 ಓವರ್‌ ಗಳಲ್ಲಿ 80 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ತಿಲಕ್ ವರ್ಮಾ 45 ರನ್ ಗಳಿಸಿ ಜಾನ್ಸನ್‌ಗೆ ಕ್ಲೀನ್‌ ಬೌಲ್ಡ್ ಆದರು. ಸೂರ್ಯಕುಮಾರ್ (30 ರನ್), ಅಕ್ಷರ್ ಪಟೇಲ್ (ಔಟಾಗದೆ 35) ಹಾಗೂ ಹಾರ್ದಿಕ್ ಪಾಂಡ್ಯ (30 ರನ್) ಎರಡಂಕೆ ದಾಟಿದರು. ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಜಾನ್ಸನ್ (1-18), ಕ್ವೆನಾ ಮಫಾಕಾ (1-19), ಬಾಷ್ (1-31) ಹಾಗೂ ಅನ್ರಿಚ್ ನೋಟ್ಜೆ (1-57) ತಲಾ ಒಂದು ವಿಕೆಟ್ ಪಡೆದರು.

ವಾರ್ತಾ ಭಾರತಿ 4 Feb 2026 11:33 pm

ಕನಕಗಿರಿ | ಸಹಕಾರಿ ಸಂಘದ ಸಿಬ್ಬಂದಿ ಮನೆಯಲ್ಲಿ ಕಳ್ಳತನ : ನಗ, ನಗದು ಕಳವು

ಕನಕಗಿರಿ : ತಾಲ್ಲೂಕಿನ ನವಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಿಪಾಯಿಯಾಗಿ (ಸಹಾಯಕ ಹುದ್ದೆ) ಕಾರ್ಯನಿರ್ವಹಿಸುತ್ತಿರುವ ಮೆಹಬೂಬಸಾಬ ಪಿಂಜಾರ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಮೆಹಬೂಬಸಾಬ ಪಿಂಜಾರ ಅವರು ಗ್ರಾಮದ ವೀರಸಂಗಪ್ಪ ಪಟ್ಟಣಶೆಟ್ಟಿ ಅವರ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ಬಾಡಿಗೆಗೆ ವಾಸವಾಗಿದ್ದು, ಸುಮಾರು 15 ವರ್ಷಗಳಿಂದ ಸಹಕಾರಿ ಸಂಘದಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ನುಗ್ಗಿ 1.50 ಲಕ್ಷ ರೂ. ನಗದು ಹಾಗೂ ಸುಮಾರು 7.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳು ಸೇರಿದಂತೆ ಉಂಗುರ, ನೆಕ್ಲೆಸ್, ಮಂಗಳಸೂತ್ರ, ತಾಳಿ ಮತ್ತು ಕಿವಿಯೋಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಕಳ್ಳತನವಾದ ನಗದು ಹಾಗೂ ಬಂಗಾರವನ್ನು ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೆಹಬೂಬಸಾಬ ಪಿಂಜಾರ ಅವರು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:31 pm

ಕೋಗಿಲು ಬಡಾವಣೆಯಲ್ಲಿ ಯಾರಿಗೂ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ; ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರಕಾರ

ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ. ಕೋಗಿಲು ಬಡಾವಣೆಯ ಹೊರೆಗೆ ಮೂವರಿಗೆ ಹಕ್ಕು ಪತ್ರ ನೀಡಿರುವ ಮಾಹಿತಿ ಇದ್ದು, ಉಳಿದ ನಾಲ್ಕು ಮಂದಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿತು. ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನಿವೇಶನಕ್ಕೆ ತಾತ್ಕಾಲಿಕ ಹಕ್ಕು ಪತ್ರ ನೀಡಿರುವ ಮಾಹಿತಿ ಎಲ್ಲಿ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಮೂವರಿಗೆ ಕೋಗಿಲು ಬಡಾವಣೆಯ ಹೊರಗೆ ತಾತ್ಕಾಲಿಕ ನಿವೇಶನ ಹಂಚಿಕೆಯಾಗಿದೆ. ಇದೂ ಷರತ್ತಿಗೆ ಒಳಪಟ್ಟಿದೆ. ಉಳಿದ ನಾಲ್ವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ತೆರವು ಕಾರ್ಯಾಚರಣೆಯಲ್ಲಿ 167 ಮಂದಿ ಸಂತ್ರಸ್ತರಾಗಿದ್ದು, ನಾಲ್ಕು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ. ಈ ಸಂಬಂಧ ನ್ಯಾಯಾಲಯದ ನಿರ್ದೇಶನದಂತೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದರು. ಅರ್ಜಿದಾರರ ಪರ ವಕೀಲರು, ನಾಲ್ಕು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸಂಪರ್ಕ ಸಂಖ್ಯೆಯೂ ಸರಿಯಾಗಿಲ್ಲ. ಬಿಬಿಎಂಪಿಗೆ ತೆರವು ಕಾರ್ಯಾಚರಣೆ ನಡೆಸುವ ಅಧಿಕಾರವಿಲ್ಲ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ವಕೀಲೆ ಬಿ.ವಿ. ವಿದ್ಯುಲ್ಲತಾ ಅವರನ್ನು ಅಮೈಕಸ್‌ ಕ್ಯೂರಿಯನ್ನಾಗಿ ನೇಮಿಸಿತಲ್ಲದೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಯು) ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಮತ್ತು ಅಮಿಕಸ್‌ ಕ್ಯೂರಿಗೆ ನೆರವಾಗಬೇಕು ಎಂದು ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.

ವಾರ್ತಾ ಭಾರತಿ 4 Feb 2026 11:30 pm

ಮಂಗಳೂರು: ಬಸ್ ಢಿಕ್ಕಿ; ಸ್ಕೂಟರ್ ಸಹಸವಾರೆ ಸ್ಥಳದಲ್ಲೆ ಮೃತ್ಯು

 ಮಂಗಳೂರು, ಫೆ.4: ನಗರದ ನಂತೂರಿನಲ್ಲಿ ಬುಧವಾರ ರಾತ್ರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಲ್ಲಾಳ್ ಬಾಗ್‌ ನಿವಾಸಿ ದೀಪ್ತಿ (26) ಮೃತಪಟ್ಟವರು. ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಬಸ್ ಮತ್ತು ಸ್ಕೂಟರ್ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದವು. ನಂತೂರು ಬಸ್‌ ನಿಲ್ದಾಣದ ಬಳಿ ಸ್ಕೂಟರ್ ಗೆ ಬಸ್ ಢಿಕ್ಕಿಯಾದಾಗ ಸ್ಕೂಟರ್ ಬಸ್ ನಡಿ ಬಿದ್ದು ಸಹಸವಾರೆಯ ಮೇಲೆಯೆ ಬಸ್ ನ ಟಯರ್ ಹರಿದು ಹೋಗಿತ್ತು. ಪರಿಣಾಮ ದೀಪ್ತಿ ಸ್ಥಳದಲ್ಲೆ ಮೃತಪಟ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:26 pm

ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಕೆ‌ಎಸ್‌ಎಲ್‌ಯು‌ಗೆ ಒಂದು ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ 'ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ' ರಚಿಸಲು ಕೆಎಸ್‌ಎಲ್‌ಯುಗೆ ಹೈಕೋರ್ಟ್ ಒಂದು ವಾರ ಗಡುವು ನೀಡಿದೆ. ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ನಿರ್ದೇಶನ ಕೋರಿ ಕಾನೂನು ವಿದ್ಯಾರ್ಥಿ ಕೆ.ಎನ್. ಪ್ರಣವ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಬೆಳಗಿನ ಕಲಾಪದ ವೇಳೆ ಕೆಎಸ್‌ಎಲ್‌ಯು ಪರ ವಕೀಲರು ಹಾಜರಾಗಿ, ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚನೆ ಬಗ್ಗೆ ಅರ್ಜಿದಾರರು ಕೇಳಿದ್ದಾರೆ ಎಂದರು. ಹೌದು, ಸಮಿತಿಗಳನ್ನು ರಚಿಸಲಾಗಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ವಕೀಲರು, ಮಾಹಿತಿ ಪಡೆದು ತಿಳಿಸಲು ಕಾಲಾವಕಾಶ ಕೋರಿದರು. ಅದರಂತೆ ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಮತ್ತೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಕೆಎಸ್‌ಎಲ್‌ಯು ಪರ ವಕೀಲರು 2024ರ ಅಧಿಸೂಚನೆಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಕೆಎಸ್‌ಎಲ್‌ಯು ಹಾಜರುಪಡಿಸಿರುವುದು ವಿದ್ಯಾರ್ಥಿಗಳ ಕಲ್ಯಾಣ ಸಮಿತಿಗೆ ಸಂಬಂಧಿಸಿದ ಅಧಿಸೂಚನೆಯಾಗಿದೆ. ಯುಜಿಸಿ ನಿರ್ದೇಶನ ಪ್ರಕಾರ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲು ಮನವಿ ಮಾಡಲಾಗಿದೆ ಎಂದರು. ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು ಹಳೆಯ ಅಧಿಸೂಚನೆ ಹಾಜರುಪಡಿಸಿರುವುದಕ್ಕೆ ಅಸಮಧಾನಗೊಂಡ ನ್ಯಾಯಪೀಠ, ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದೀರಾ? ರಿಜಿಸ್ಟ್ರಾರ್ ಅವರನ್ನು ಕೋರ್ಟ್‌ಗೆ ಕರೆಸಬೇಕಾಗುತ್ತದೆ. ರಿಜಿಸ್ಟ್ರಾರ್ ಅವರ ಈ ನಡವಳಿಕೆ ದಾಖಲಿಸಬೇಕಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು. ಮತ್ತೆ ಸಮಯ ಕೇಳಿದ ವಕೀಲರು, ಸಂಜೆ ವೇಳೆಗೆ ಹಾಜರಾಗಿ, ಯುಜಿಸಿ ನಿರ್ದೇಶನದ ಪ್ರಕಾರ ಸಮಿತಿ ರಚಿಸಲಾಗಿಲ್ಲ, ಅದಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲಾಗಿಲ್ಲ ಎಂದರೆ ಏನರ್ಥ. ಒಂದು ವಾರದಲ್ಲಿ ಸಮಿತಿಗಳನ್ನು ರಚಿಸಬೇಕು, ಮತ್ತೆ ಸಮಯ ಕೊಡಲ್ಲ. ಇಲ್ಲವಾದರೆ, ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು. ಮನವಿ ಏನು? ವಿಶ್ವವಿದ್ಯಾಲಯ ಅನುದಾನ ಆಯೋಗ (ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ನಿಯಮಗಳು) 2023ರ ಪ್ರಕಾರ ಪ್ರತಿ ಕಾನೂನು ವಿವಿ ಹಾಗೂ ಕಾಲೇಜುಗಳಲ್ಲಿ ಕುಂದುಕೊರತೆ ಪರಿಹಾರ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಿ ಅದಕ್ಕೆ ಒಂಬಡ್ಸಮನ್ ನೇಮಕ ಮಾಡಬೇಕು. ಆದರೆ, ಕೆಎಸ್‌ಎಲ್‌ಯು ಹಾಗೂ ರಾಜ್ಯಾದ್ಯಂತ ಅದರ ಅಧೀನದ ಕಾಲೇಜು ಮತ್ತು ಸಂಸ್ಥೆಗಳಲ್ಲಿ ಈ ಸಮಿತಿಗಳನ್ನು ರಚಿಸಲಾಗಿಲ್ಲ. ಈ ಬಗ್ಗೆ ಕಾನೂನು ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್ ಹಾಗೂ ಯುಜಿಸಿ ಅಧ್ಯಕ್ಷರಿಗೆ 2025ರ ನವೆಂಬರ್ 8 ಮತ್ತು ಡಿಸೆಂಬರ್ 8ರಂದು ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಾರ್ತಾ ಭಾರತಿ 4 Feb 2026 11:26 pm

ಕನಕಗಿರಿ | ಬೀದಿ ನಾಯಿಗಳ ದಾಳಿ ಪ್ರಕರಣ : ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಿತ ದೂರು

5 ದಿನಗಳಲ್ಲಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ

ವಾರ್ತಾ ಭಾರತಿ 4 Feb 2026 11:25 pm

ಸೋನಮ್ ವಾಂಗ್ಚುಕ್ ಆರೋಗ್ಯ ಚೆನ್ನಾಗಿಲ್ಲ; ಅವರ ಬಂಧನದ ಬಗ್ಗೆ ಪುನರ್‌ವಿಮರ್ಶಿಸಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 4: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲದೇ ಇರುವುದರಿಂದ ಅವರ ಬಂಧನದ ಕುರಿತು ಪುನರ್‌ವಿಮರ್ಶಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಪಿ.ಬಿ. ವರಾಲೆ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ಲಡಾಖ್‌ಗೆ ರಾಜ್ಯದ ಸ್ಥಾನಮಾನ ಹಾಗೂ ಅದನ್ನು ಸಂವಿಧಾನದ 6ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸಿ ಲೇಹ್‌ನಲ್ಲಿ ಪ್ರತಿಭಟನೆ ನಡೆದ ಬಳಿಕ ಸೋನಮ್ ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಬಂಧಿಸಲಾಗಿತ್ತು ಹಾಗೂ ರಾಜಸ್ಥಾನದ ಜೋಧಪುರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಪ್ರತಿಭಟನೆ ಸಂದರ್ಭ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದರು. ಪೊಲೀಸರು ಹಾರಿಸಿದ ಗುಂಡಿಗೆ ನಾಲ್ವರು ಮೃತಪಟ್ಟಿದ್ದರು.

ವಾರ್ತಾ ಭಾರತಿ 4 Feb 2026 11:25 pm

ವಾಲ್ಮೀಕಿ ನಿಗಮದ ಹಗರಣ ಪ್ರಕರಣ| ಬಿ. ನಾಗೇಂದ್ರ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕೋಟ್ಯಂತರ ರೂ. ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ. ಇದೇ ವೇಳೆ, ಪ್ರಕರಣ ಸಂಬಂಧ ಬಿ. ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌ ವಿರುದ್ಧ ಗುರುವಾರದವರೆಗೆ ಬಲವಂತದ ಕ್ರಮ ಜರುಗಿಸದಂತೆ ಸಿಬಿಐಗೆ ಸೂಚಿಸಿದೆ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತ್ತೊಂದೆಡೆ, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನೆಕ್ಕಂಟಿ ನಾಗರಾಜ್ ಸಹ ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೆಲ ಕಾಲ ಅರ್ಜಿಗಳ ಕುರಿತು ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಜತೆಗೆ, ಬಂಧನ ಭೀತ ಇರುವ ಹಿನ್ನೆಲೆಯಲ್ಲಿ ಗುರುವಾರದವರೆಗೆ ನೆಕ್ಕಂಟಿ ನಾಗರಾಜ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸಿಬಿಐಗೆ ಸೂಚಿಸಿದ ನ್ಯಾಯಪೀಠ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಒಡ್ಡದಂತೆ ನೆಕ್ಕಂಟಿ ನಾಗರಾಜ್‌ಗೆ ತಾಕೀತು ಮಾಡಿತು.

ವಾರ್ತಾ ಭಾರತಿ 4 Feb 2026 11:17 pm

ಉಪ್ಪಿನಂಗಡಿ: ಯುವತಿ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(20) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ. ದಿವಂಗತ ಶೀನಪ್ಪ ಎಂಬವರ ಮಗಳಾಗಿರುವ ಈಕೆ ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವಳು ಮಂಗಳವಾರ ನಸುಕಿನ ವೇಳೆ ಕಾಣಿಸದೇ ಇದ್ದು, ಮೊಬೈಲ್ ಫೋನ್ ಕರೆಯೂ ಸ್ವೀಕರಿಸಿರಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹತ್ತನೇ ತರಗತಿಯ ವರೆಗೆ ಕಲಿತಿರುವ ಈಕೆ 4 ಅಡಿ 6 ಇಂಚು ಎತ್ತರವಿದ್ದು, ಸಪೂರ ಶರೀರ, ಉರುಟು ಮುಖ ವನ್ನು ಹೊಂದಿರುತ್ತಾಳೆ. ಕನ್ನಡ ತುಳು ಭಾಷೆಯನ್ನು ಮಾತನಾಡುತ್ತಾಳೆ. ಈಕೆಯ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಸುತೇಶ್ ಎಸ್. ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:17 pm

ಬಲೂಚಿಸ್ತಾನ ಬಂಡುಕೋರರಿಗೆ ಹೆದರಿ ಹೆಲಿಕಾಪ್ಟರ್, ಡ್ರೋನ್ ನಿಯೋಜಿಸಿದ ಪಾಕ್ ಸರ್ಕಾರ | Baloch Rebels

ಪಾಕಿಸ್ತಾನ ತಾನು ಕೂಡ ನೆಮ್ಮದಿಯಾಗಿ ಇರಲ್ಲ, ಅಕ್ಕಪಕ್ಕದ ದೇಶಗಳನ್ನು ಕೂಡ ನೆಮ್ಮದಿಯಾಗಿ ಬದಕಲು ಬಿಡಲ್ಲ. ಯಾಕಂದ್ರೆ ಉಗ್ರರ ಪೋಷಕ ಪಾಕಿಸ್ತಾನಕ್ಕೆ ನೆಮ್ಮದಿ ಅನ್ನೋ ಪದವೇ ಇಷ್ಟ ಇಲ್ಲ ಅಂತಾ ಕಾಣುತ್ತದೆ. ಹೀಗೆ ತಾನೇ ಹಾವುಗಳ ರೀತಿ ಸಾಕಿಕೊಂಡ ಉಗ್ರರು ಪಾಕಿಸ್ತಾನ ನೆಲವನ್ನೇ ನಲುಗಿಸುತ್ತಾ, ಅಮಾಯಕ ಪಾಕಿಸ್ತಾನ ಪ್ರಜೆಗಳ ಜೀವ ತೆಗೆಯುತ್ತಿದ್ದಾರೆ. ಅದರಲ್ಲೂ ಗಡಿಯಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ

ಒನ್ ಇ೦ಡಿಯ 4 Feb 2026 11:14 pm

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ಕ್ಕೆ ಸಕಲ ಸಿದ್ಧತೆ

ಫೆ.5ರಿಂದ 7ರವರೆಗೆ ಮೂರು ದಿನಗಳ ಉತ್ಸವಕ್ಕೆ ಸಜ್ಜಾದ ರಾಯಚೂರು

ವಾರ್ತಾ ಭಾರತಿ 4 Feb 2026 11:13 pm

ಸುಪ್ರೀಂ ಆದೇಶವಿದ್ದರೂ UPಯಲ್ಲಿ ‘ಬುಲ್ಡೋಝರ್ ನ್ಯಾಯ’ ಮುಂದುವರಿದಿದೆ: ಅಲಹಾಬಾದ್ ಹೈಕೋರ್ಟ್

ಹೊಸದಿಲ್ಲಿ, ಫೆ. 4: ಸುಪ್ರೀಂ ಕೋರ್ಟ್ 2024 ನವೆಂಬರ್‌ನಲ್ಲಿ ಆದೇಶ ನೀಡಿದ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ‘ಬುಲ್ಡೋಝರ್ ನ್ಯಾಯ’ ಮುಂದುವರಿದಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಮಂಗಳವಾರ ಅಭಿಪ್ರಾಯಿಸಿದೆ. ಶಿಕ್ಷಾರ್ಹ ಕ್ರಮವಾಗಿ ಆಸ್ತಿಯನ್ನು ಧ್ವಂಸಗೊಳಿಸಲು ಅವಕಾಶ ನೀಡುವ ಯಾವುದೇ ನಿಯಮಗಳು ಭಾರತೀಯ ಕಾನೂನಿನಲ್ಲಿ ಇಲ್ಲ. ಆದರೂ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಇದು ಸಾಮಾನ್ಯವಾಗಿದೆ ಎಂದು ಅದು ಹೇಳಿದೆ. ರಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆಯೇ? ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಹಾಗೂ ಸಿದ್ಧಾರ್ಥಾನಂದನ್ ಅವರ ಪೀಠ ಮಂಗಳವಾರ ಪ್ರಶ್ನಿಸಿದೆ. ಆರೋಪಿಯ ಮನೆಯನ್ನು ಕೆಡವಲು ಆಡಳಿತಕ್ಕೆ ಅಧಿಕಾರ ಇದೆಯೇ? ಅದಕ್ಕೆ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯ ಇಲ್ಲವೇ? ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ. ಧ್ವಂಸಗೊಳಿಸುವುದನ್ನು ಶಿಕ್ಷೆಯ ರೂಪವಾಗಿ ಬಳಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಪ್ರತಿಪಾದನೆಯನ್ನು ಅದು ಪುನರುಚ್ಛರಿಸಿದೆ. ಶಿಕ್ಷೆ ಜಾರಿಗೊಳಿಸುವ ಅಧಿಕಾರ ಇರುವುದು ನ್ಯಾಯಾಂಗಕ್ಕೆ, ಕಾರ್ಯಾಂಗಕ್ಕೆ ಅಲ್ಲ ಎಂದು ಪೀಠ ಹೇಳಿದೆ.

ವಾರ್ತಾ ಭಾರತಿ 4 Feb 2026 11:13 pm

ಉದ್ಯಮಿ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ ನಿಧನ

ಸುಳ್ಯ: ನಾವೂರು ನಿವಾಸಿ ರಥಬೀದಿಯಲ್ಲಿರುವ ಕಟ್ಟೆಕ್ಕಾರ್ ಶೂ ಶಾಪಿನ್ ಫೂಟ್ ವೇರ್ ಪಾಲುದಾರ ಹಿದಾಯತ್ತುಲ್ಲಾ ಕಟ್ಟೆಕ್ಕಾರ್ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಾವೂರು ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಹಾಗೂ ಮೂವರು ಸಹೋದರರು, ನಾಲ್ಕು ಮಂದಿ ಸಹೋದರಿಯರು ಇದ್ದಾರೆ. 

ವಾರ್ತಾ ಭಾರತಿ 4 Feb 2026 11:11 pm

ಕೇಂದ್ರ ಸರಕಾರ ರಾಷ್ಟ್ರದ ಭದ್ರತೆಯಂತಹ ವಿಷಯಗಳನ್ನು ಚರ್ಚಿಸದೆ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಫೆ.4 – ಸಂಸತ್ತಿನಲ್ಲಿ ರಾಷ್ಟ್ರದ ಭದ್ರತೆಯಂತಹ ಗಂಭೀರ ವಿಷಯಗಳನ್ನು ಚರ್ಚಿಸುವ ಬದಲು, ಕೇಂದ್ರ ಸರಕಾರ ದಿಕ್ಕು ತಪ್ಪಿಸುವ ಮಾತುಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಗಂಭೀರ ಆರೋಪ ಮಾಡಿದ್ದಾರೆ. ದಿಲ್ಲಿಯಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸತ್ತಿನಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರು ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅವುಗಳಿಂದ ಉಲ್ಲೇಖಿಸುತ್ತಾ ಮಾತನಾಡಿದಾಗ ಅವರ ಮೈಕ್‌ನ್ನು ಬಂದ್ ಮಾಡಲಿಲ್ಲ. ಆದರೆ ವಿರೋಧ ಪಕ್ಷಗಳ ಧ್ವನಿಯನ್ನು ಮಾತ್ರ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಸರಕಾರಕ್ಕೆ ಸದನವನ್ನು ಅಸ್ತವ್ಯಸ್ತಗೊಳಿಸುವ ಅಗತ್ಯ ಬಂದಾಗ ನಿಶಿಕಾಂತ್ ದುಬೆ ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಅದೇ ವೇಳೆ, ಎಂ.ಎಂ ನರವಾಣೆ ಅವರ ಪುಸ್ತಕದಿಂದ ವಾಕ್ಯಗಳನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂದರು. ಆಡಳಿತ ಸರಕಾರ ಸಂಸತ್ತನ್ನು ತನ್ನ ಇಚ್ಛೆಯಂತೆ ನಿಯಂತ್ರಿಸಬಹುದು ಎಂಬ ಸಂದೇಶ ನೀಡಲು ಪ್ರಯತ್ನಿಸುತ್ತಿದೆ. ವಿಪಕ್ಷದವರಿಗೆ ಮಾತನಾಡಲು ಅವಕಾಶ ನಿರಾಕರಿಸುತ್ತಾರೆ. ಇದು ಸ್ಪೀಕರ್ ಸ್ಥಾನಕ್ಕೆ, ಸಂಸತ್ತಿಗೆ, ಪ್ರಜಾಪ್ರಭುತ್ವಕ್ಕೆ ಹಾಗೂ ದೇಶದ ಜನತೆಗೆ ಮಾಡಿದ ಅವಮಾನವಾಗಿದೆ. ವಿರೋಧ ಪಕ್ಷ ಎಂದರೆ ಒಬ್ಬ ವ್ಯಕ್ತಿಯಲ್ಲ. ಅವರು ಮತ ಹಾಕಿದ ಲಕ್ಷಾಂತರ ಜನರ ಪ್ರತಿನಿಧಿಗಳು. ವಿರೋಧ ಪಕ್ಷದ ಧ್ವನಿಯನ್ನು ಮೌನಗೊಳಿಸುವುದು ಅಂದರೆ ಆ ಲಕ್ಷಾಂತರ ಜನರ ಧ್ವನಿಯನ್ನು ನಿಗ್ರಹಿಸುವುದೇ ಆಗಿದೆ ಎಂದು ಹೇಳಿದರು.   ಒಂದು ಕಡೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ತಡೆಹಿಡಿಯಲಾಗುತ್ತದೆ. ಮತ್ತೊಂದು ಕಡೆ ಅರ್ಥವಿಲ್ಲದ ಮಾತುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ. ಇದು ದೇಶದ ಗಮನವನ್ನು ಮೂಲಭೂತ ಮತ್ತು ಗಂಭೀರ ವಿಚಾರಗಳಿಂದ ದೂರ ಸರಿಸುವ ತಂತ್ರವಾಗಿದೆ ಎಂದು ಟೀಕಿಸಿದರು. ಎಂ.ಎಂ. ನರವಾಣೆ ಅವರು ಬರೆದಿರುವ ವಿಷಯಗಳನ್ನು ಜನರು ತಿಳಿಯಬಾರದು ಎಂಬುದೇ ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದ ಅವರು, ಚೀನಾ ಸೇನೆ ನಮ್ಮ ಗಡಿಯಲ್ಲಿ ನಿಂತಿದ್ದಾಗ ಅಧಿಕಾರದಲ್ಲಿದ್ದ ನಾಯಕರು ನಿರ್ಧಾರ ಕೈಗೊಳ್ಳಲು ಅಸಮರ್ಥರಾಗಿದ್ದರು. ಎರಡು ಗಂಟೆಗಳ ನಂತರ ‘ನೀವು ಸ್ವತಃ ನಿರ್ಧಾರ ತೆಗೆದುಕೊಳ್ಳಿ’ ಎಂದು ಹೇಳುವ ಸ್ಥಿತಿ ನಿರ್ಮಾಣವಾಯಿತು. ಆದರೆ ಬಿಜೆಪಿ ನಾಯಕರು ಮಾತ್ರ ಸದನದಲ್ಲಿ ಇಂದಿರಾ ಗಾಂಧೀಜಿ ಹಾಗೂ ಇತಿಹಾಸದ ಬಗ್ಗೆ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  

ವಾರ್ತಾ ಭಾರತಿ 4 Feb 2026 11:11 pm

ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ ನಿಧನ

ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪೂರ್ಣಚಂದ್ರ ಕಣೆಮರಡ್ಕ (58) ಅಸೌಖ್ಯದಿಂದ ಬುಧವಾರ ನಿಧನರಾದರು. ಕೆಲವು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಪೂರ್ಣಚಂದ್ರ ಕಣೆಮರಡ್ಕರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅಸೌಖ್ಯ ಉಲ್ಬಣಿಸಿದಾಗ ಮನೆಯವರು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆ ಮೃತಪಟ್ಟರು. ಅವರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಇಬ್ಬರು ಸಹೋದರರು ಇದ್ದಾರೆ. ಮಂಡೆಕೋಲು ಪ್ರದೇಶದಲ್ಲಿ ಜನಾನುರಾಗಿಯಾಗಿದ್ದ ಪೂರ್ಣಚಂದ್ರರು ಮಂಡೆಕೋಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದರು. ಮಂಡೆಕೋಲು ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ, ಮಂಡೆಕೋಲು ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ದುಡಿಯುತ್ತಿದ್ದರು. 

ವಾರ್ತಾ ಭಾರತಿ 4 Feb 2026 11:09 pm

ನಮ್ಮ ನಾಡಾ ಒಕ್ಕೂಟ ವತಿಯಿಂದ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ ಕಾರ್ಯಕ್ರಮ

ಮೂಡುಬಿದಿರೆ: ನಮ್ಮ ನಾಡಾ ಒಕ್ಕೂಟ ಇದರ ಮೂಡಬಿದಿರೆ ತಾಲೂಕು ಸಮಿತಿ ರಚಿಸುವ “Let Us Begin” ಕಾರ್ಯಕ್ರಮವು ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ. ಆರಿಫ್ ಮಸೂದ್ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಸಂಜೆ ಮೂಡಬಿದಿರೆಯ ಮಂಗಳೂರು ರೆಸ್ಟೋರೆಂಟ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಇದೇ ಸಂದರ್ಭ ನೂತನ ಮೂಡುಬಿದಿರೆ ತಾಲೂಕು ಸಮಿತಿಯನ್ಗನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಶೇಖ್ ನೂರುದ್ದೀನ್, ಉಪಾಧ್ಯಕ್ಷರಾಗಿ ಅಶ್ರಫ್ ಮರೋಡಿ, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್, ಖಜಾಂಚಿ ಯಾಗಿ ಎಲ್.ಆರ್. ರಿಝ್ವಾನ್ ಅಹ್ಮದ್, ಮಾಧ್ಯಮ ಕಾರ್ಯದರ್ಶಿಯಾಗಿ ಮುಹಮ್ಮದ್ ಆಸೀಫ್, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ನದೀಮ್ ಆಯ್ಕೆಯಾದರು. ಅಲ್ಲದೆ, 15 ಕಾರ್ಯಕಾರಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಶೇಖ್ ನೂರುದ್ದೀನ್ ಅವರು, ಮುಂದಿನ ದಿನಗಳಲ್ಲಿ ಮೂಡಬಿದಿರೆಯಲ್ಲಿ ಸಮುದಾಯ ಕೇಂದ್ರವನ್ನು ಸ್ಥಾಪಿಸುವುದು, ಸರಕಾರಿ ಸೇವೆಗಳು, ದಾಖಲೆಗಳ , ಉದ್ಯೋಗಾರ್ಥಿಗಳಿಗೆ ಮಾರ್ಗ ದರ್ಶನ, ಉದ್ಯೋಗದಾತರು ಮತ್ತು ಉದ್ಯೋಗಾರ್ಥಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿ ಸುವುದು ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶವನ್ನು ವಿವರಿಸಿದರು. ಇದೇ ವೇಳೆ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ. ಆರಿಫ್ ಮಸೂದ್ ಅವರ ಸಭೆಯ ಹಲವು ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಮ್ಮ ನಾಡಾ ಒಕ್ಕೂಟದ ಟ್ರಸ್ಟಿಗಳಾದ ಮುಹಮ್ಮದ್ ಹುಸೈನ್, ಅಬ್ದುಲ್ ಹಮೀದ್ ರಾಯಲ್ ಮೊದಲಾದವರು ಉಪಸ್ಥಿತರಿದ್ದರು. ಮುಹಮ್ಮದ್ ರಿಜ್ವಾನ್ ಎಲ್.ಆರ್. ಕಿರಾಅತ್‌ ಪಠಿದರು.

ವಾರ್ತಾ ಭಾರತಿ 4 Feb 2026 11:06 pm

ದೇಶದಲ್ಲಿ 10 ವರ್ಷಗಳಲ್ಲಿ 1,279 ಜನರಿಗೆ ಮರಣ ದಂಡನೆ: ವರದಿ

ಹೊಸದಿಲ್ಲಿ, ಫೆ.4: ಕ್ರಿಮಿನಲ್ ಸುಧಾರಣೆ ಪರ ಗುಂಪು ‘ದಿ ಸ್ಕ್ವೇರ್ ಸರ್ಕಲ್ ಕ್ಲಿನಿಕ್’ ನಡೆಸಿದ ಅಧ್ಯಯನದ ಪ್ರಕಾರ 2016 ಮತ್ತು 2025ರ ನಡುವೆ ಭಾರತದಲ್ಲಿನ ಸೆಷನ್ಸ್ ನ್ಯಾಯಾಲಯಗಳು 1,279 ಜನರಿಗೆ ಮರಣ ದಂಡನೆ ವಿಧಿಸಿವೆ. ಈ ವ್ಯಕ್ತಿಗಳಿಗೆ ಒಟ್ಟು 1,310 ಮರಣ ದಂಡನೆಗಳನ್ನು ವಿಧಿಸಲಾಗಿದೆ. ಅಂದರೆ ಈ ವರ್ಷಗಳಲ್ಲಿ ಕೆಲವರು ಬಹು ಮರಣ ದಂಡನೆಗಳಿಗೆ ಗುರಿಯಾಗಿರಬಹುದು ಎಂದು ಬುಧವಾರ ಬಿಡುಗಡೆಗೊಳಿಸಲಾದ ವರದಿ ತಿಳಿಸಿದೆ. ಕೇವಲ 70 ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯಗಳು ಮರಣ ದಂಡನೆಯನ್ನು ದೃಢಪಡಿಸಿವೆ. ಕಳೆದ ವರ್ಷದ ಅಂತ್ಯದ ವೇಳೆಗೆ 574 ಜನರು ಮರಣ ದಂಡನೆಯನ್ನು ಎದುರಿಸುತ್ತಿದ್ದು, ಇದು 2016ರಿಂದೀಚೆಗೆ ಅತ್ಯಧಿಕವಾಗಿದೆ. ಆ ವರ್ಷ 400 ಜನರು ಮರಣ ದಂಡನೆಯನ್ನು ಎದುರಿಸುತ್ತಿದ್ದರು ಎಂದು ವರದಿ ಹೇಳಿದೆ. 2025ರ ಒಂದು ವರ್ಷದಲ್ಲೇ ಸೆಷನ್ಸ್ ನ್ಯಾಯಾಲಯಗಳು 94 ಪ್ರಕರಣಗಳಲ್ಲಿ 128 ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿವೆ. ಅದೇ ವರ್ಷ ಉಚ್ಚ ನ್ಯಾಯಾಲಯಗಳು ವಿಚಾರಣೆ ನಡೆಸಿದ ಶೇ.25ಕ್ಕೂ ಅಧಿಕ ಪ್ರಕರಣಗಳಲ್ಲಿ ಮರಣ ದಂಡನೆಯನ್ನು ರದ್ದುಗೊಳಿಸಿದ್ದರೆ, ಸರ್ವೋಚ್ಚ ನ್ಯಾಯಾಲಯವು ತಾನು ವಿಚಾರಣೆ ನಡೆಸಿದ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸತತ ಮೂರನೇ ವರ್ಷವೂ ಸರ್ವೋಚ್ಚ ನ್ಯಾಯಾಲಯವು ಯಾವುದೇ ಮರಣ ದಂಡನೆಯನ್ನು ದೃಢಪಡಿಸಿಲ್ಲ ಎಂದು ವರದಿ ಹೇಳಿದೆ. 2016 ಮತ್ತು 2025ರ ನಡುವೆ ರಾಷ್ಟ್ರಪತಿಗಳು 19 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದು, ಐದು ಅರ್ಜಿಗಳನ್ನು ಪುರಸ್ಕರಿಸಿದ್ದಾರೆ. ಡಿ.31ಕ್ಕೆ ಉಚ್ಚ ನ್ಯಾಯಾಲಯಗಳಲ್ಲಿ 478 ಜನರನ್ನೊಳಗೊಂಡ 312 ಪ್ರಕರಣಗಳು ಬಾಕಿಯಿದ್ದವು. ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯದಿಂದ ಮರಣ ದಂಡನೆ ಘೋಷಣೆ ಮತ್ತು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯ ವಿಚಾರಣೆಯ ನಡುವೆ ಪ್ರಕರಣ ಬಾಕಿಯ ಸರಾಸರಿ ಅವಧಿ ಸುಮಾರು 36 ತಿಂಗಳುಗಳಾಗಿದೆ ಎಂದು ವರದಿ ತಿಳಿಸಿದೆ. ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ಸರಾಸರಿ 138 ತಿಂಗಳುಗಳಿಗೂ ಅಧಿಕ ಸಮಯದಿಂದ ಮೇಲ್ಮನವಿಗಳು ಬಾಕಿಯುಳಿದಿವೆ. 2025ರ ಅಂತ್ಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅತ್ಯಂತ ಹೆಚ್ಚಿನ ಮರಣ ದಂಡನೆ ಪ್ರಕರಣಗಳು (91) ಬಾಕಿಯಿದ್ದವು ಎಂದು ವರದಿ ಹೇಳಿದೆ. 2015ರ ಕಾನೂನು ಆಯೋಗದ ವರದಿ ಭಯೋತ್ಪಾದನೆ ಸಂಬಂಧಿತ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣಗಳನ್ನು ಹೊರತುಪಡಿಸಿ ಮರಣ ದಂಡನೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು. ಭಾರತವು ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂಬ ಆಶಯವನ್ನೂ ವ್ಯಕ್ತಪಡಿಸಿತ್ತು. ಆದರೆ ಭಾರತವು ಸಾಮಾನ್ಯ ಅಪರಾಧಗಳಿಗೆ ಮರಣ ದಂಡನೆಯನ್ನು ಉಳಿಸಿಕೊಂಡಿರುವ 55 ದೇಶಗಳಲ್ಲಿ ಒಂದಾಗಿ ಮುಂದುವರಿದಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 2023ರ ದತ್ತಾಂಶಗಳು ತೋರಿಸಿವೆ.

ವಾರ್ತಾ ಭಾರತಿ 4 Feb 2026 11:05 pm

ಬೀದರ್ | ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ : ಡಾ.ಮನ್ಮಥ್ ಡೋಳೆ

ಔರಾದ್ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

ವಾರ್ತಾ ಭಾರತಿ 4 Feb 2026 11:03 pm

ಮೈಸೂರು| ಎಂಡಿಎಂಎ ಮಾದಕ ವಸ್ತುಗಳ ಮಾರಾಟ: ಮೂವರು ಆರೋಪಿಗಳ ಬಂಧನ

ಮೈಸೂರು(ಫೆ.4): ಮೈಸೂರು ನಗರದ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ಎಂಡಿಎಂಎ ಮಾದಕ ವಸ್ತುಗಳ  ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಅಮೀರ್ ಖಾನ್ (27), ಸೈಯದ್ ಇಮ್ರಾನ್ (30), ಮಹಮ್ಮದ್ ನಬೀಲ್ (28) ಬಂಧಿತ ಆರೋಪಿಗಳು. ಬಂಧಿತರಿಂದ 11 ಗ್ರಾಂ ತೂಕದ ಎಂಡಿಎಂಎ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ.   ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 4 Feb 2026 11:02 pm

Gujarat | ಹೋಮ್ ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿನಿಗೆ ಕಪಾಳಮೋಕ್ಷ, ಶ್ರವಣದೋಷ: ಶಿಕ್ಷಕಿಗೆ ಜೈಲು ಶಿಕ್ಷೆ

ಗಾಂಧಿನಗರ, ಫೆ.4: ಹೋಮ್ ವರ್ಕ್ ಮಾಡದ್ದಕ್ಕೆ 9ನೇ ತರಗತಿಯ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದ ಶಾಲಾ ಶಿಕ್ಷಕಿಗೆ ಇಲ್ಲಿನ ನ್ಯಾಯಾಲಯ ಮೂರು ವರ್ಷ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷಕಿಯ ಕೃತ್ಯದಿಂದ ಬಾಲಕಿಯ ಎಡ ಕರ್ಣಪಟಲ ಛಿದ್ರಗೊಂಡಿದ್ದು, ಆಕೆ ಶ್ರವಣದೋಷ ಅನುಭವಿಸುತ್ತಿದ್ದಾಳೆ. ಶಿಕ್ಷಕಿ ಅಧಿಕಾರದ ದುರುಪಯೋಗ ಮಾಡಿಕೊಂಡು 14 ವರ್ಷದ ಬಾಲಕಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಇದು ದೀರ್ಘಕಾಲದ ಶ್ರವಣದೋಷಕ್ಕೆ ಕಾರಣವಾಗಿದ್ದು, ಘಟನೆ ನಡೆದು ನಾಲ್ಕೂವರೆ ವರ್ಷಗಳ ಬಳಿಕವೂ ಬಾಲಕಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ನ್ಯಾಯಾಧೀಶ ಹಿಮಾಂಶು ಚೌಧರಿ ತಮ್ಮ ಜ.30ರ ತೀರ್ಪಿನಲ್ಲಿ ತಿಳಿಸಿದ್ದಾರೆ. ಶಿಕ್ಷಕಿ ಪರುಲಬೆನ್ ಪಟೇಲ್‌ಗೆ 50,000 ರೂ.ದಂಡ ವಿಧಿಸಿರುವ ನ್ಯಾಯಾಲಯವು, ಅದನ್ನು ಪರಿಹಾರ ರೂಪದಲ್ಲಿ ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ನಿರ್ದೇಶಿಸಿದೆ. 2020 ಜ.1ರಂದು ಗಾಂಧಿನಗರದ ಖಾಸಗಿ ಬಾ ಶ್ರೀ ವಸಂತಕುಂವರಬಾ ಶಾಲೆಯಲ್ಲಿ ಈ ಘಟನೆ ನಡೆದಿತ್ತು.

ವಾರ್ತಾ ಭಾರತಿ 4 Feb 2026 10:58 pm

ಶಾಂತಿಗಾಗಿ ರಷ್ಯಾ ಕಡೆಯಿಂದ ಅದೊಂದೇ ಡಿಮ್ಯಾಂಡ್, ಉಕ್ರೇನ್ ಒಪ್ಪದಿದ್ದರೆ ಯುದ್ಧ ನಿಲ್ಲಲ್ಲ | Ukraine Peace Deal

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಇನ್ನು 20 ದಿನಗಳಲ್ಲಿ 4 ವರ್ಷ ಸಂಪೂರ್ಣವಾಗಲಿದೆ. ಹೀಗೆ ಎರಡೂ ದೇಶಗಳ ನಡುವಿನ ಭೀಕರ ಕದನ ಹೇಗಾದರೂ ನಿಲ್ಲಬೇಕು, ಎಂಬ ಜಗತ್ತಿನ ಆಸೆಯು ಈಗ ಆಸೆಯಾಗಿಯೇ ಉಳಿಯುತ್ತಿದೆ. ಏಕೆಂದರೆ ಒಂದು ಕಡೆ ಉಕ್ರೇನ್ ತಗ್ಗಿಬಗ್ಗಿ ನಡೆದು ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ, ಹಾಗೇ ಇನ್ನೊಂದು ಕಡೆ ರಷ್ಯಾ ಕೂಡ ತಕ್ಷಣಕ್ಕೆ ತಲೆಬಾಗಿ ಯುದ್ಧವನ್ನ

ಒನ್ ಇ೦ಡಿಯ 4 Feb 2026 10:57 pm

ರಾಯಚೂರು ಜಿಲ್ಲಾ ಉತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

3 ಡಿವೈಎಸ್ಪಿಗಳು, 8 ಇನ್‌ಸ್ಪೆಕ್ಟರ್, 16 ಸಬ್ ಇನ್‌ಸ್ಪೆಕ್ಟರ್‌ಗಳು, 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ವಾರ್ತಾ ಭಾರತಿ 4 Feb 2026 10:56 pm

ಜ್ಞಾನವೆಂಬ ಆಯುಧವೇ ಸಮಸ್ತದ ಯಶಸ್ಸು: ಪಾಣಕ್ಕಾಡ್ ಶಿಹಾಬ್ ತಂಙಳ್

ಸಮಸ್ತ ಶತಾಬ್ದಿ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ವಾರ್ತಾ ಭಾರತಿ 4 Feb 2026 10:52 pm

ಫೆ.12ಕ್ಕೆ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಬೆಂಗಳೂರು, ಫೆ. 4: ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ-ಯುವಜನ ಸಂಘಟನೆಗಳು ಕೆಲಸ ಸ್ಥಗಿತಗೊಳಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿವೆ. ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಎಚ್.ಆರ್.ಬಸವರಾಜು, ಎಸ್. ವರಲಕ್ಷ್ಮಿ, ನೂರ್ ಶ್ರೀಧರ್, ಜಿ.ಆರ್.ಶಿವಶಂಕರ್, ಕೆ.ವಿ.ಭಟ್, ಶಾಮಣ್ಣರೆಡ್ಡಿ, ಟಿ.ಯಶವಂತ, ಚಂದ್ರಪ್ಪ ಹೊಸ್ಕೆರಾ, ಎಚ್‍ಎಂಎಸ್ ರವಿ, ಅಪ್ಪಣ್ಣ, ಚಾಯಾ, ಕಾಳಪ್ಪ, ವೀರಸಂಗಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ವ್ಯಾಪಾರ ಸುಲಭ ಗೊಳಿಸÀಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ 29ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ, ರಾಜಕೀಯ ದಾಳಿಯೂ ಆಗಿದೆ. ಗುತ್ತಿಗೆ ಕಾರ್ಮಿಕರ ಪರವಾನಗಿಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ ಶೇ.90ರಷ್ಟು ಕಾರ್ಮಿಕರಿಗೆ ವೇತನ, ಇಎಸ್‍ಐ, ಪಿಎಫ್, ಗ್ರಾಚ್ಯುಟಿ, ಭೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ ಎಂದು ಪದಾಧಿಕಾರಿಗಳು ಆರೋಪಿಸಿದರು. ಜೀವನೋಪಾಯ ವೇತನದ ಜಾರಿಯ ಪ್ರಸ್ತಾಪವಿಲ್ಲ, ಕನಿಷ್ಠ ವೇತನ ಅಥವಾ ರಾಷ್ಟ್ರೀಯ ಸರಾಸರಿ ವೇತನದ ಖಾತ್ರಿಯ ಬದಲಿಗೆ ತಳಹಂತದ 178ರೂ. ಕೂಲಿಯನ್ನು ಹೊಸದಾಗಿ ಪರಿಷ್ಕರಿಸಲಾಗಿದೆ. ಇನ್ನು ಯಾವುದೇ ವಲಯದ ವೇತನಗಳ ಹೆಚ್ಚಳಕ್ಕೆ ಆಧಾರವಿಲ್ಲದಂತೆ ಮಾಡಲಾಗಿದೆ. ಕಾರ್ಮಿಕರಿಂದ ಪ್ರಾಥಮಿಕವಾಗಿ ಸಂಘ ರಚಿಸಿಕೊಳ್ಳುವ ಹಕ್ಕುಗಳನ್ನು ನಿಬರ್ಂಧಿಸಲಾಗಿದೆ. ರಾಜ್ಯ ಸರಕಾರ ಈ ಕೋಡ್‍ಗಳಿಗೆ ನಿಯಮಾವಳಿ ರಚಿಸಬಾರದೆಂದೂ ಒತ್ತಾಯಿಸಿದರೂ ಕಾರ್ಮಿಕರ ಸಂಘಟನೆಗಳ ಬಳಿ ಕನಿಷ್ಠ ಚರ್ಚೆಯನ್ನು ಮಾಡುವ ಸೌಜನ್ಯ ತೋರದೇ ನಾಲ್ಕು ಕೋಡ್‍ಗಳಿಗೆ ಗೆಜೆಟ್ ಅಧಿಸೂಚನೆ ತಂದು ಕಾರ್ಮಿಕರು ಉಸಿರೆತ್ತದಂತಹ ಸ್ಥಿತಿಯನ್ನು ನಿರ್ಮಿಸುತ್ತಿದೆ ಎಂದು ಹೋರಾಟಗಾರರು ಆಕ್ಷೇಪಿಸಿದರು. ಮನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮಜೀವಿಗಳ ಕೊಂಡುಕೊಳ್ಳುವ ಸಾಮಥ್ರ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ, ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪೆನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ, ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ ಎಂದು ತಿಳಿಸಿದರು. ಫೆ.1ರಂದು ಕೇಂದ್ರ ಸರಕಾರ 53.5ಲಕ್ಷ ಕೋಟಿ ರೂ.ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಿಲ್ಲ. ಬದಲಿಗೆ ಬಂಡವಾಳಗಾರರಿಗೆ ಹಸೆಮಣೆ ಹಾಕಲಾಗಿದೆ. ನುಡಿದಂತೆ ನಡೆಯುತ್ತೇವೆಂದು ಹೇಳುವ ರಾಜ್ಯ ಸರಕಾರ, ಕೇಂದ್ರ ಸರಕಾರ ತರುತ್ತಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ತಾನೂ ಮುಂದುವರೆಸುತ್ತಿದೆ. ಈ ನೀತಿಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟವಾಗಿ ಘೋಷಿಸಬೇಕು ಎಂದು ಹೋರಾಟಗಾರರು ಒತ್ತಾಯ ಮಾಡಿದರು. ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ‘ವಿಬಿ-ಜಿ ಗ್ರಾಮ್ ಜಿ’ ಕಾಯ್ದೆ ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು, ಕೇಂದ್ರ ಮತ್ತು ರಾಜ್ಯ ಸರಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗಿಕರಣ, ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ವಾರ್ತಾ ಭಾರತಿ 4 Feb 2026 10:48 pm

ಬಳ್ಳಾರಿ | ಕಾರ್ಮಿಕ ಇಲಾಖೆಯಿಂದ ವಿವಿಧೆಡೆ ದಾಳಿ : ಮೂರು ಬಾಲಕಾರ್ಮಿಕರ ರಕ್ಷಣೆ

ಬಳ್ಳಾರಿ : ಕಾರ್ಮಿಕ ಇಲಾಖೆ ಹಾಗೂ ಇತರೆ ಸಹಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಕುರುಗೋಡು ಪಟ್ಟಣದ ವಿವಿಧೆಡೆ ದಾಳಿ ನಡೆಸಿ ಮೂವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಹಾಗೂ ಪ್ಯಾನ್–ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದ ಅಂಗವಾಗಿ, ಗ್ರೇಡ್–2 ತಹಶೀಲ್ದಾರ ಮಲ್ಲೇಶಪ್ಪ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ, ದಾಳಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕುರುಗೋಡು ಪಟ್ಟಣದ ಗೆಣಿಕೆಹಾಳ್ ರಸ್ತೆ, ತೇರು ಬೀದಿ, ಹಳೇ ಎಸ್‌ಬಿ‌ಎಂ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಗ್ಯಾರೇಜ್‌, ಮೆಕ್ಯಾನಿಕ್ ಶಾಪ್‌, ಬೇಕರಿ ಹಾಗೂ ಇತರೆ ಉದ್ದಿಮೆಗಳ ಮೇಲೆ ಟಾಸ್ಕ್ ಫೋರ್ಸ್ ಸಮಿತಿ ಭೇಟಿ ನೀಡಿದ ವೇಳೆ, ಮಕ್ಕಳು ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಯಿತು. ತಕ್ಷಣವೇ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಿ, ಸ್ಥಳದಲ್ಲಿಯೇ ಅವರ ಹೇಳಿಕೆಗಳನ್ನು ಪಡೆದುಕೊಳ್ಳಲಾಯಿತು. ಬಳಿಕ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ದಾಳಿ ವೇಳೆ ಎಲ್ಲಾ ಉದ್ದಿಮೆ ಮಾಲಕರಿಗೆ ಕರಪತ್ರಗಳು ಹಾಗೂ ಪೋಸ್ಟರ್‌ಗಳನ್ನು ವಿತರಿಸಿ ಬಾಲಕಾರ್ಮಿಕ ನಿಷೇಧ ಕುರಿತು ಜಾಗೃತಿ ಮೂಡಿಸಲಾಯಿತು. ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕುರುಗೋಡು ತಾಪಂ ಕಚೇರಿಯ ಶಿವರಣ ರೆಡ್ಡಿ, ಪುರಸಭೆಯ ಆರೋಗ್ಯಾಧಿಕಾರಿ ಆದಿಕೇಶವ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಡೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಮಂಜುಳ, ಆರೋಗ್ಯ ಇಲಾಖೆಯ ಗೋವಿಂದಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರವಿಕುಮಾರ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಕಾರ್ತಿಕ್ ಮತ್ತು ರೀಚ್ ಸಂಸ್ಥೆಯ ಸಂಯೋಜಿಕಿ ಬಸಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 4 Feb 2026 10:46 pm

Odisha | ಗಜಪತಿ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ತಿರುಗಿದ ಕುಡುಕರ ಜಗಳ; 8 ಜನರ ಬಂಧನ

ಭುವನೇಶ್ವರ, ಫೆ.4: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಕುಡುಕರ ನಡುವಿನ ಜಗಳ ಕೋಮು ಘರ್ಷಣೆಯಾಗಿ ಉಲ್ಬಣಗೊಂಡಿದ್ದು, 10 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಬುಧವಾರ ತಿಳಿಸಿದ್ದಾರೆ. ಸೋಮವಾರ ಸಂಜೆ ಮೊಹಾನಾ ಪೋಲಿಸ್ ಠಾಣಾ ವ್ಯಾಪ್ತಿಯ ಚಾಂದಿಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಿಂಸಾಚಾರದಲ್ಲಿ ಸ್ಥಳೀಯ ಬಿಜೆಪಿ ನಾಯಕನೊಬ್ಬರ ಮನೆಯ ಮೇಲೆ ದಾಳಿ ನಡೆದಿದೆ. ಕೋಮು ಘರ್ಷಣೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದ್ದ ಎಂಟು ಜನರನ್ನು ಬಂಧಿಸಲಾಗಿದ್ದು, ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರು ಪಾನಮತ್ತರಾಗಿ ಜಗಳವಾಡಿದ್ದ ಯುವಕರಾಗಿದ್ದಾರೆ. ಕೋಮು ಘರ್ಷಣೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ಕಂಡು ಬಂದಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳ ಮೊಬೈಲ್ ಟವರ್ ಲೊಕೇಶನ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಗಜಪತಿ ಎಸ್‌ಪಿ ಜತೀಂದ್ರ ಕುಮಾರ ಪಾಂಡಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇನ್ನಷ್ಟು ಅಹಿತಕರ ಘಟನೆಗಳನ್ನು ತಡೆಯಲು ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎರಡೂ ಸಮುದಾಯಗಳ ನಾಯಕರು ಪ್ರದೇಶದಲ್ಲಿ ಸಹಜ ಸ್ಥಿತಿ ಮರಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 4 Feb 2026 10:45 pm

ಬಳ್ಳಾರಿ | ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಎಫ್‌ಎಕ್ಯೂ (FAQ) ಗುಣಮಟ್ಟದ ಹಿಂಗಾರು ಹಂಗಾಮಿನ ಕಡಲೆಕಾಳು ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದರು. ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2025–26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 5,875 ರೂ. ದರದಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿತ ರೈತರಿಂದ, ಬೆಳೆದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಡಲೆಕಾಳು ಖರೀದಿಸಲಾಗುತ್ತದೆ ಎಂದರು. ಬೆಂಬಲ ಬೆಲೆ ಯೋಜನೆಯಡಿ ಫ್ರೂಟ್ಸ್ ತಂತ್ರಾಂಶದ ಆಧಾರದಲ್ಲಿ ರೈತರಿಂದ ಉತ್ಪನ್ನ ಖರೀದಿಸಬೇಕು ಹಾಗೂ ಅಗತ್ಯ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಬಳ್ಳಾರಿ ಮತ್ತು ಸಿರುಗುಪ್ಪ ಪಟ್ಟಣಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೋದಾಮುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಮೂಲಭೂತ ಸೌಕರ್ಯಗಳಿರುವ ಖರೀದಿ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ತೂಕ ಪ್ರಮಾಣೀಕರಣ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಪೂರ್ಣಗೊಳಿಸಬೇಕೆಂದರು. ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಫೆ.12ರಿಂದ ಮೇ 2ರವರೆಗೆ ಖರೀದಿ ಅವಧಿ ನಿಗದಿಪಡಿಸಲಾಗಿದೆ. ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡುವಾಗ ಆಧಾರ್ ಕಾರ್ಡ್, ಪಹಣಿ ಪ್ರತಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಸಲ್ಲಿಸಬೇಕು. ಪಿ.ಓ.ಎಸ್. ಯಂತ್ರದ ಮೂಲಕ ನೋಂದಣಿ ಹಾಗೂ ಖರೀದಿ ವೇಳೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯವಾಗಿದ್ದು, ರೈತರು ಸಹಕರಿಸಬೇಕೆಂದು ಮನವಿ ಮಾಡಿದರು. ಅದೇ ರೀತಿ, ಫ್ರೂಟ್ಸ್ ಐಡಿ ಹೊಂದಿರುವ ರೈತರು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಅಗತ್ಯ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಿಸಲಾದ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಜಮೆ ಆಗಲಿರುವುದರಿಂದ, ಎಫ್‌ಐಡಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದು ತಿಳಿಸಿದರು. ಸಭೆಯಲ್ಲಿ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಓಂಕಾರಯ್ಯ, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಸಹಕಾರ ಇಲಾಖೆಯ ಉಪನಿಬಂಧಕ ವೀರಭದ್ರಯ್ಯ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಮನೋಜ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Feb 2026 10:42 pm

ಸುಮಂತ್ ಕೊಲೆ ಪ್ರಕರಣ| ವದಂತಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೆಳ್ತಂಗಡಿ; ಕಳಿಯದಲ್ಲಿ ನಡೆದ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈ ವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಫೆ.3 ರಂದು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಜ. 14 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ, ಮೃತ್ಯುವಿನ ಕಾರಣ ಮುಳುಗು (drowning) ಆಗಿದೆ. ಆದರೆ ತಲೆಯಲ್ಲಿದ್ದ ಗಾಯದಿಂದ ಸಂಶಯ ಉಂಟಾದ ಕಾರಣ ಪ್ರಕರಣವನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ತನಿಖೆ ನಡೆಸುವ ಉದ್ದೇಶದಿಂದ ಹತ್ಯೆ (murder) ಕಲಂನ್ನು ಸೇರಿಸಲಾಗಿದೆ. ವೈದ್ಯಕೀಯ ನ್ಯಾಯವಿಜ್ಞಾನ (Forensic) ಹಾಗೂ ಅಂತಿಮ ಮರಣೋತ್ತರ ಪರೀಕ್ಷಾ (Final PM) ವರದಿ ಇನ್ನೂ ಬರಬೇಕಿದ್ದು, ಇದು ಹತ್ಯೆಯೇ ಅಥವಾ ಅಸಹಜ ಮರಣ (UDR)ವೇ ಎಂಬುದರ ಬಗ್ಗೆ ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಈ ಮಧ್ಯೆ, ಕೆಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಿದ್ಧಾಂತಗಳನ್ನು ರೂಪಿಸಿ ಆರೋಪಿಗಳನ್ನು ಕುರಿತು ಊಹಾಪೋಹಗಳನ್ನು ಹರಡುತ್ತಿದ್ದಾರೆ. ತನಿಖೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವ ದಿಸೆಯಲ್ಲಿ ನಡೆಯುತ್ತಿದೆ; ಆದರೆ ವಿಚಾರಣೆಗೊಳಪಡಿಸಲಾದ ಪ್ರತಿಯೊಬ್ಬರೂ ಆರೋಪಿಗಳೇ ಎನ್ನುವುದಿಲ್ಲ. ಈ ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ನಾಲ್ಕು ವಿಶೇಷ ತನಿಖಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಆಗಸ್ಟ್ 2025 ರ ಒಂದು ಅಸಹಜ ಮರಣ (UDR) ಪ್ರಕರಣವನ್ನು ಈ ಪ್ರಕರಣದೊಂದಿಗೆ ಸಂಪರ್ಕಿಸ ಲಾಗಿದೆ ಎಂದು ಗಮನಕ್ಕೆ ಬಂದಿದೆ. ಇದುವರೆಗೆ ಆ ಇನ್ನೊಂದು ಪ್ರಕರಣ ಹತ್ಯೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಯಾವುದೇ ಶಂಕಿತರ ಕುರಿತು ಹರಡಲಾಗುತ್ತಿರುವ ವಿವಿಧ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ. ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 10:41 pm

ವಿಜಯನಗರ | ಬಸವ ಕಾಲುವೆ ಸ್ವಚ್ಛತೆ: 48 ಗಂಟೆಯಲ್ಲಿ ಸಮಸ್ಯೆಗೆ ಸ್ಪಂದನೆ

ವಿಜಯನಗರ / ಹೊಸಪೇಟೆ: ಕ್ಷೇತ್ರದ ಎಂಟು ಹಳ್ಳಿಗಳನ್ನು ಒಳಗೊಂಡು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಬಸವ ಕಾಲುವೆಯಲ್ಲಿ ಗಿಡಗಳು ಹಾಗೂ ಗಂಟಿಗಳು ಬೆಳೆದ ಪರಿಣಾಮ, ಪ್ರಾರಂಭ ಹಂತದಿಂದ ಕೊನೆಯ ಹಂತದವರೆಗೂ ರೈತರಿಗೆ ಗಂಭೀರ ನೀರಿನ ಕೊರತೆ ಎದುರಾಗಿತ್ತು. ಈ ಕಾಲುವೆಯ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಆರ್.ಎನ್.ಎಸ್ ಸಂಸ್ಥೆಗೆ ಒಳಪಟ್ಟಿದ್ದರೂ, ರೈತರು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಸ್ಥೆ ಸಮರ್ಪಕವಾಗಿ ಸ್ಪಂದಿಸದೇ ಕಾಲುವೆ ದುರಸ್ತಿ ಕೈಗೊಳ್ಳದ ಕಾರಣ, ಬೆಳೆಗಳಿಗೆ ಬೇಕಾದಷ್ಟು ನೀರು ಲಭ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಮಸ್ಯೆಯನ್ನು ರೈತರು ಶಾಸಕರ ಪುತ್ರ ಹಾಗೂ ಯುವ ನಾಯಕ ಎಚ್.ಜಿ. ವಿರೂಪಾಕ್ಷಿ ಅವರ ಗಮನಕ್ಕೆ ತಂದ ತಕ್ಷಣ, ಅವರು ಸಮಸ್ಯೆಗೆ ಸ್ಪಂದಿಸಿ 48 ಗಂಟೆಗಳೊಳಗೆ ಜೆಸಿಬಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಕಾಲುವೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದಾರೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ರಾಜಕೀಯದ ಜೊತೆಗೆ ಕೃಷಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಚುರುಕಾಗಿ ಸ್ಪಂದಿಸುತ್ತಿರುವ ಎಚ್.ಜಿ. ವಿರೂಪಾಕ್ಷಿ, ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಎಂ.ಡಿ. ಹುಲುಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡೊಳ್ಳಿನ ರಮೇಶ್, ಗ್ರಾಮಸ್ಥ ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Feb 2026 10:37 pm

ಅಂತರರಾಷ್ಟ್ರೀಯ ವಾಣಿಜ್ಯ ಮೇಳ| ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಫೆ. 4: ‘ನಮ್ಮ ಸರಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.  ಬುಧವಾರ ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಇಲಾಖೆ ಸಮೃದ್ಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, 2025ರಲ್ಲಿ ನಡೆದ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ಯುವ ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಹಾಗೂ ಸಿರಿಧಾನ್ಯಗಳನ್ನು ಆಹಾರ ಪದ್ಧತಿಯಲ್ಲಿ ಅವಳವಡಿಸಿಕೊಳ್ಳಲು ಈ ಹಿಂದಿನ ಮೇಳಗಳು ಯಶಸ್ಸು ಕಂಡಿವೆ ಎಂದು ತಿಳಿಸಿದರು. ಈ ವರ್ಷ ನಮ್ಮ ಸರಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದೇಶದಲ್ಲಿ ಪ್ರಥಮವಾಗಿ ‘ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಫೆ.6, 7 ಮತ್ತು 8ರಂದು ಅರಮನೆ ಮೈದಾನದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಹಿಂದೆ ನಮ್ಮ ದೇಶ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಇಂದು ಬದಲಾದ ಸನ್ನಿವೇಶದಲ್ಲಿ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದು ಇತರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ. ಹಾಗೇಯೇ ಅಕ್ಕಿ ಉತ್ಪಾದನೆಯಲ್ಲಿ ಚೀನಾ ದೇಶವನ್ನು ಹಿಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದರು. ಈ ಬಾರಿಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ ಹಾಗೂ ಬ್ರ್ಯಾಂಡಿಂಗ್ ಎಂಬ ಮೂರು ಉಪ ಧ್ಯೇಯಗಳೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಉತ್ಪಾದನೆ ನಂತರ, ರೈತರಿಗೆ ನಿರಂತರ ಆದಾಯ ದೊರಕಿಸುವ ಸಲುವಾಗಿ ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ, ಭೌಗೋಳಿಕ ಸೂಚ್ಯಂಕವಿರುವ ಉತ್ಪನ್ನಗಳನ್ನು ಬಳಸುವ ಬಗ್ಗೆ ನಮ್ಮ ಸರಕಾರದಿಂದ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.   ಕೃಷಿ ಉತ್ಪಾದನೆ ನಂತರ ಮೌಲ್ಯವರ್ಧನೆಗೆ ಒತ್ತು ಕೊಡಲು ಈಗಾಗಲೇ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಿದ್ದು, ಅದರ ಮೂಲಕ ರೈತರು ಕೃಷಿ ಸಂಸ್ಕರಣೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂದು ಈ ವಿಷಯಗಳ ಬಗ್ಗೆ ಚರ್ಚಿಸಲು ಜರ್ಮನಿ, ಅಮೆರಿಕಾ, ವಿಯಟ್ನಾಂ, ಕಾಂಬೋಡಿಯ ಹಾಗೂ ನಮ್ಮ ದೇಶದ ವಿವಿಧ ಭಾಗಗಳಿಂದ ಬಂದ 35ಕ್ಕಿಂತ ಹೆಚ್ಚು ತಜ್ಞರು, ನಮ್ಮ ರಾಜ್ಯದಿಂದ ಬಂದ ರೈತರು ಎಲ್ಲರೂ ಈ ಚರ್ಚೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ವಾರ್ತಾ ಭಾರತಿ 4 Feb 2026 10:37 pm

Digital arrest scam | ಎನ್‌ಆರ್‌ಐಯಿಂದ 48 ಲಕ್ಷ ರೂ. ದೋಚಿದ ಸೈಬರ್ ವಂಚಕರು

ಮುಂಬೈ, ಫೆ. 4: ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರ ತಂಡವೊಂದು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಯುವಕನೋರ್ವನನ್ನು ಡಿಜಿಟಲ್ ಅರೆಸ್ಟ್ ಮಾಡಿದೆ. ಆತನನ್ನು ಒಂದು ತಿಂಗಳ ಕಾಲ ವರ್ಚುವಲ್ ಕಣ್ಗಾವಲಿನಲ್ಲಿ ಇರಿಸಿ, ಆಸ್ಟ್ರೇಲಿಯಾ ಹಾಗೂ ಅಹ್ಮದಾಬಾದ್‌ ನಲ್ಲಿರುವ ಆತನ ಬ್ಯಾಂಕ್ ಖಾತೆಗಳಿಂದ 48 ಲಕ್ಷ ರೂ. ದೋಚಿದೆ. ಯುವಕನ ಕುಟುಂಬ ಗುಜರಾತ್‌ ನ ಅಹ್ಮದಾಬಾದ್‌ ನ ನಾರಣಪುರ ಪ್ರದೇಶದಲ್ಲಿ ವಾಸಿಸುತ್ತಿದೆ. ಅವರ ತಂದೆಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ಆಸ್ಟ್ರೇಲಿಯಾದ ಅಡೆಲೈಡಿನಲ್ಲಿ ಹಾಗೂ ಕಿರಿಯ ಪುತ್ರ ಸಿಡ್ನಿಯಲ್ಲಿ ವಾಸಿಸುತ್ತಿದ್ದಾರೆ. ಈ ಡಿಜಿಟಲ್ ಅರೆಸ್ಟ್ ಆರಂಭವಾದುದು 2025ರ ಆಗಸ್ಟ್ 26ರಂದು. ಅಂದು ಸಿಡ್ನಿಯಲ್ಲಿರುವ ಕಿರಿಯ ಪುತ್ರ ಭಾರತೀಯ ದೂರವಾಣಿ ಸಂಖ್ಯೆಯಿಂದ ವಾಟ್ಸ್ಆಪ್ ಕರೆ ಸ್ವೀಕರಿಸಿದ್ದ. ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಆದರೆ, ನಿಮಿಷಗಳಲ್ಲಿ ಆತ ಬೆದರಿಕೆ ಒಡ್ಡಲು ಆರಂಭಿಸಿದ. ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿ ಕೋಟ್ಯಂತರ ರೂಪಾಯಿಗಳ ಅನುಮಾನಾಸ್ಪದ ವಹಿವಾಟುಗಳು ತಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಆರೋಪಿಸಿದ್ದ. ಅಸಹಕಾರ ತೋರಿಸಿದರೆ ಸ್ಥಳೀಯ ಪೊಲೀಸರ ನೆರವಿನಿಂದ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗುವುದು ಅಥವಾ ಭಾರತಕ್ಕೆ ಬಂದ ನಂತರ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ. ತಂಡ ಆತನನ್ನು ವೀಡಿಯೊ ಕರೆ ಮೂಲಕ 24 ಗಂಟೆಗಳ ಕಾಲ ವರ್ಚುವಲ್ ಕಣ್ಗಾವಲಿನಲ್ಲಿ ಇರಿಸಿತು ಹಾಗೂ ನಿರಂತರವಾಗಿ ಕ್ಯಾಮೆರಾ ಮುಂದೆ ಇರುವಂತೆ ಆದೇಶಿಸಿತು. ಯಾರೊಂದಿಗೂ ಮಾತನಾಡುವುದು ಅಥವಾ ಭೇಟಿಯಾಗುವುದನ್ನು ನಿಷೇಧಿಸಿತು. ಬಂಧನದ ಬೆದರಿಕೆ ಮೂಲಕ ಪ್ರತಿ ಸೂಚನೆಯನ್ನು ಕಾರ್ಯರೂಪಕ್ಕೆ ತಂದಿತು. ದಿನ ಕಳೆದಂತೆ ಆತನ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಿತು. ನಿಯಂತ್ರಣ ಬಿಗಿಗೊಳಿಸಲು ತಂಡ ಆತನನ್ನು ಸಿಡ್ನಿಯಲ್ಲಿ ಹೊಸ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಖರೀದಿಸುವಂತೆ ಬಲವಂತಪಡಿಸಿತು. ಅನಂತರ ಆತನ ಫೋನ್ ಹಾಗೂ ಲ್ಯಾಪ್‌ಟಾಪ್‌ನ ಐಪಿ ವಿಳಾಸವನ್ನು ಪಡೆಯಿತು. ತನಿಖೆ ನಡೆಯುತ್ತಿರುವಂತೆ ನಟಿಸಿ, ತಂಡ ಆತನ ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಂಡು ಆಸ್ಟ್ರೇಲಿಯಾ ಬ್ಯಾಂಕ್ ಖಾತೆಯಿಂದ 25,000 ಆಸ್ಟ್ರೇಲಿಯಾ ಡಾಲರ್‌ (14 ಲಕ್ಷ ರೂ.) ದೋಚಿತು. ಅನಂತರ ಅಹ್ಮದಾಬಾದ್‌ ನಲ್ಲಿರುವ ಬ್ಯಾಂಕ್‌ನ ಆತನ ಖಾತೆಯಲ್ಲಿದ್ದ 34 ಲಕ್ಷ ರೂ. ಸ್ಥಿರ ಠೇವಣಿಯ ಸಂಪೂರ್ಣ ಮೊತ್ತವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿತು. ಸುಮಾರು ಒಂದು ತಿಂಗಳ ಬಳಿಕ ಯುವಕ ಆಸ್ಟ್ರೇಲಿಯಾದ ಸೈಬರ್ ಭದ್ರತಾ ವಿಭಾಗವನ್ನು ಸಂಪರ್ಕಿಸಿದ. ಇದೇ ಸಂದರ್ಭದಲ್ಲಿ ಅಹ್ಮದಾಬಾದ್‌ ನಲ್ಲಿರುವ ಆತನ ತಂದೆ ಸ್ಥಳೀಯ ಬ್ಯಾಂಕ್ ಖಾತೆಯಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನು ಗಮನಿಸಿದರು. ಬ್ಯಾಂಕ್‌ನಲ್ಲಿ ವಿಚಾರಣೆ ನಡೆಸಿದಾಗ ಖಾತೆಯಿಂದ 24 ಲಕ್ಷ ರೂ. ದೋಚಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಅಹ್ಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್‌ ನಲ್ಲಿ ದೂರು ದಾಖಲಿಸಿದ್ದಾರೆ. ಸೈಬರ್ ಅಪರಾಧಿಗಳು ವಿದೇಶದಲ್ಲಿ ವಾಸಿಸುವ ಭಾರತೀಯ ನಾಗರಿಕನನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ಸುಲಿಗೆ ಮಾಡಿದ ಮೊದಲ ಪ್ರಕರಣ ಇದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 10:37 pm

‘ಮನರೇಗಾ’ ಉಳಿಸಲು ಕೇಂದ್ರ ಸಚಿವರು ಪ್ರಯತ್ನಿಸಲಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಫೆ. 4: ಕರ್ನಾಟಕ ರಾಜ್ಯದಿಂದ ಚುನಾಯಿತರಾಗಿ ಕೇಂದ್ರದಲ್ಲಿ ಮಂತ್ರಿಯಾಗಿರುವವರಿಗೆ ರಾಜ್ಯದ ಜನರ ಬಗ್ಗೆ ನಿಜಕ್ಕೂ ಕಳಕಳಿ ಇದ್ದರೆ ‘ಮನರೇಗಾ’ ಯೋಜನೆ ಉಳಿಸಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕುಮಾರಸ್ವಾಮಿ ಹೆಸರು ಉಲ್ಲೇಖಿಸದೆ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ‘ದೇಶದಲ್ಲಿ ಶೇ.100ರಷ್ಟು ಕೂಲಿ ನೀಡಲಾಗುತ್ತಿದ್ದ ಮನರೇಗಾ ಯೋಜನೆಯ ಸ್ವರೂಪವನ್ನೇ ಬದಲಿಸಿ, ಲೋಪದೋಷಗಳನ್ನು ಹೊಂದಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ತರಲು ಹೊರಟಿದ್ದಾರೆ. ಅದರಲ್ಲೂ ಶೇ.60-40 ಕೇಂದ್ರ ಹಾಗೂ ರಾಜ್ಯ ಸರಕಾರ ಪಾಲುದಾರಿಕೆ ಯೋಜನೆ ಬಡವರ ವಿರೋಧಿಯಾಗಿದೆ ಎಂದು ಟೀಕಿಸಿದರು. ರಾಜ್ಯದಿಂದ ಬಿಜೆಪಿ-ಜೆಡಿಎಸ್ ಸಂಸದರು ಆಯ್ಕೆಯಾಗಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಕರ್ನಾಟಕ ರಾಜ್ಯ ಸರಕಾರಕ್ಕೆ ತಮಿಳುನಾಡು ಮಾದರಿಯಲ್ಲಿ ಬೆಂಬಲ ನೀಡಬೇಕು. ಅದು ಬಿಟ್ಟು ರಾಜ್ಯದ ಹಿತವನ್ನು ಕಡೆಗಣಿಸಿ ಬಿಜೆಪಿಗೆ ಬೆಂಬಲ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಚಲುವರಾಯಸ್ವಾಮಿ, ಮನರೇಗಾ ಚರ್ಚೆ ಆಗದಂತೆ ಬಿಜೆಪಿಯವರು ಸದನದಲ್ಲಿ ಅಡ್ಡಿಪಡಿಸುತ್ತಿದ್ದಾರೆಂದು ದೂರಿದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ಅವರು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕುಳಿತು ಚರ್ಚಿಸಲಾಗಿದೆ. ಇಷ್ಟಾದರೂ ‘ಮನರೇಗಾ’ ಬಗ್ಗೆ ಎರಡು ದಿನ ಚರ್ಚಿಸಲು ಸರಕಾರ ತಯಾರಿದೆ. ಆದರೆ, ಬಿಜೆಪಿ-ಜೆಡಿಎಸ್‍ನವರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತ ರಾಜ್ಯದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಚಲುವರಾಯಸ್ವಾಮಿ ಹೇಳಿದರು.  

ವಾರ್ತಾ ಭಾರತಿ 4 Feb 2026 10:28 pm

ಕರ್ನಾಟಕ ರಾಜ್ಯಪಾಲರ ಸಹಿ ದುರ್ಬಳಕೆ, ಸುಳ್ಳು ನೇಮಕಾತಿ ಆದೇಶ! ಯಾರು ಈ ನಕಲಿ IAS, IPS ಅಧಿಕಾರಿ ಸುಜಯೇಂದ್ರ?

ಕರ್ನಾಟಕ ರಾಜ್ಯಪಾಲರ ಹೆಸರಿನ ಸಹಿಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ನೇಮಕಾತಿ ಆದೇಶ ನೀಡಿದ ಆರೋಪದಲ್ಲಿ ಸುಜಯೇಂದ್ರ ಎಂಬುವವರ ಮೇಲೆ ಪೊಲೀಸ್‌ ಕೇಸ್‌ ದಾಖಲಾಗಿದೆ. ಈತ ನಕಲಿ IAS, IPS ಅಧಿಕಾರಿಯಾಗಿದ್ದು, ಹೆಸರಿನ ಲೆಟರ್‌ಹೆಡ್‌ಗಳಲ್ಲಿ ರಾಜ್ಯಪಾಲರ ಹೆಸರು ಬಳಕೆ ಮಾಡುತ್ತಿದ್ದನು. ಈ ಹಿಂದೆ ಗೃಹ ಸಚಿವ ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿ ವಂಚನೆ ಎಸಗಿದ್ದನು.

ವಿಜಯ ಕರ್ನಾಟಕ 4 Feb 2026 10:28 pm

ಯಾದಗಿರಿ | ಚೌಡಯ್ಯ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಲಿ : ಉಮೇಶ ಕೆ. ಮುದ್ನಾಳ್‌ ಆಗ್ರಹ

ಯಾದಗಿರಿ: ರಾಜ್ಯ ಸರ್ಕಾರವು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರೂ, ಕೋಲಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲ. ಇದರ ಪರಿಣಾಮವಾಗಿ ಸಮಾಜದ ಬಡವರು ಹಾಗೂ ಕೂಲಿ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಚೌಡಯ್ಯ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್‌ ಅವರು ಒತ್ತಾಯಿಸಿದರು. ಯಾದಗಿರಿ ಸಮೀಪದ ಚಟ್ನಳ್ಳಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದ ಜನಸಂಖ್ಯೆ ಹೆಚ್ಚಿದ್ದು, ಹೆಚ್ಚಿನವರು ಕೃಷಿ ಕೂಲಿ ಕಾರ್ಮಿಕರು ಹಾಗೂ ಬಡ ರೈತರಾಗಿದ್ದಾರೆ. ನಿಗಮಕ್ಕೆ ಸಮರ್ಪಕ ಅನುದಾನ ಇಲ್ಲದ ಕಾರಣ ಅರ್ಜಿ ಸಲ್ಲಿಸಿದರೂ ಸಾಲ ಹಾಗೂ ಇತರೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚುವರಿ ಅನುದಾನ ನೀಡಿದರೆ ಸಮಾಜದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಚಟ್ನಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಅನುಯಾಯಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಚೌಡಯ್ಯನವರ ಹೆಸರಿನ ಭಜನೆಗಳನ್ನು ಹಾಡಿ ರಾಜ್ಯ ಸರ್ಕಾರವು ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು. ಚುನಾವಣೆ ಸಮಯದಲ್ಲಿ ಸಮಾಜವನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು, ಚುನಾವಣೆ ನಂತರ ಸಮಾಜದ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಉಮೇಶ ಕೆ. ಮುದ್ನಾಳ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪವನ ಮುದ್ನಾಳ, ಚನ್ನಪ್ಪ ತಿರ್ಕಪ್ಪ, ದೇವಪ್ಪ, ಸಾಬಣ್ಣ ಯಡ್ಡಳ್ಳಿ, ಬಾಗಪ್ಪ, ಭೀಮರಾಯ, ಸಾಬಣ್ಣ ಲಾಲೆನೂರ, ರೆಡ್ಡಪ್ಪ, ಮಲ್ಲಪ್ಪ ಪರಶುರಾಮ್, ಜೆಟ್ಯಪ್ಪ, ಯಂಕಪ್ಪ, ಸಣ್ಣೋಸನಪ್ಪ, ಅದ್ದಪ್ಪ, ನಿಂಗಪ್ಪ, ಸೈದಪ್ಪ, ಕಸ್ತೂರಮ್ಮ, ಭೀಮಬಾಯಿ, ನಾಗಮ್ಮ, ಸಾಬಲಿಂಗಮ್ಮ, ಅಯ್ಯಮ್ಮ, ಶರಣಮ್ಮ ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 4 Feb 2026 10:23 pm

ಕ್ಯೂಬಾ ಪ್ರಜೆಗಳಿಗೆ ಇಂಧನದ್ದೇ ತಲೆನೋವು, ಅಮೆರಿಕ ಹಾಕಿದ ಒತ್ತಡಕ್ಕೆ ಸಿಲುಕಿ ಒದ್ದಾಟ | Cuba Energy Sector

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮಾತು ಕೇಳದ ಯಾವುದೇ ದೇಶವನ್ನೂ ಆರಾಮವಾಗಿ ಇರಲು ಬಿಡುತ್ತಿಲ್ಲ. ಅದರಲ್ಲೂ ಅಮೆರಿಕದ ಅಕ್ಕಪಕ್ಕ ಇರುವ ದೇಶಗಳಿಗೆ ಇದೀಗ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದೋ ಟ್ರಂಪ್ ಅವರ ಆದೇಶ ಪಾಲನೆ ಮಾಡಬೇಕು, ಇಲ್ಲವಾದರೆ ಮುಂದೆ ಬರುವ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂಬ ವಾತಾವರಣ ಇದೆ. ಹೀಗಿದ್ದಾಗ ಕ್ಯೂಬಾ ಪ್ರಜೆಗಳು ಗಾಡಿಗೆ

ಒನ್ ಇ೦ಡಿಯ 4 Feb 2026 10:21 pm

ಶಹಾಪುರ | ಹಳೆ ತಹಶೀಲ್‌ ಜಾಗದಲ್ಲೇ ಪ್ರಜಾ ಸೌಧ ನಿರ್ಮಾಣಕ್ಕೆ ಒತ್ತಾಯ

ಶಹಾಪುರ : ಶಹಾಪುರ ನಗರದ ಹೃದಯ ಭಾಗದಿಂದ ದೂರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟು, ಈ ಮೊದಲಿನಿಂದಲೂ ಇದ್ದ 4 ಎಕರೆ ವಿಸ್ತೀರ್ಣ ಹೊಂದಿರುವ ಹಳೆ ತಹಶೀಲ್‌ ಜಾಗದಲ್ಲಿಯೇ ಪ್ರಜಾ ಸೌಧ ನಿರ್ಮಿಸಬೇಕು ಎಂದು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ, ಶಹಾಪುರ ತಾಲೂಕು ಅಧ್ಯಕ್ಷ ಪ್ರದೀಪ ಅಣಬಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಳೆ ತಹಶೀಲ್‌ ಸಂಕೀರ್ಣವು 1967ರಿಂದ 2015ರವರೆಗೆ ಯಾವುದೇ ಅಡಚಣೆ ಇಲ್ಲದೆ ಕಾರ್ಯನಿರ್ವಹಿಸಿದ್ದು, ಶಹಾಪುರ–ಯಾದಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದರಿಂದ ನಗರ ಹಾಗೂ ಗ್ರಾಮಾಂತರ ಜನರಿಗೆ ಬಹಳ ಅನುಕೂಲಕರವಾಗಿತ್ತು ಎಂದು ಹೇಳಿದರು. ನಗರದಿಂದ 4–5 ಕಿ.ಮೀ ದೂರದ ಪ್ರದೇಶದಲ್ಲಿ ಪ್ರಜಾ ಸೌಧ ನಿರ್ಮಿಸಿದರೆ, ತಾಲೂಕು ಆಡಳಿತ ಕಚೇರಿಗಳಿಗೆ ಬರುವ ಶೇ.80ರಷ್ಟು ಗ್ರಾಮೀಣ ಜನರಿಗೆ ತೀವ್ರ ತೊಂದರೆ ಆಗಲಿದೆ ಎಂದು ಆರೋಪಿಸಿದರು. ಬಸ್ ನಿಲ್ದಾಣದಿಂದ ಆಟೋಗಳ ಅವಲಂಬನೆ, ರೂ.50 ರಿಂದ 100ರವರೆಗೆ ಹೆಚ್ಚುವರಿ ಪ್ರಯಾಣ ವೆಚ್ಚ, ಸಮಯಕ್ಕೆ ಅಧಿಕಾರಿಗಳು ಸಿಗದ ಸಮಸ್ಯೆಗಳು ಎದುರಾಗಲಿವೆ ಎಂದು ತಿಳಿಸಿದರು. ಹಳೆ ತಹಶೀಲ್‌ ಜಾಗವು ನಗರದ ಹೃದಯ ಭಾಗದಲ್ಲಿದ್ದು, ಶೀಘ್ರದಲ್ಲೇ ನಿರ್ಮಾಣವಾಗಲಿರುವ ಶಹಾಪುರ ರೈಲ್ವೆ ನಿಲ್ದಾಣಕ್ಕೂ ಮುಖ್ಯ ರಸ್ತೆಯ ಮೂಲಕ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯಿಂದಲೂ ಈ ಜಾಗವೇ ಪ್ರಜಾ ಸೌಧ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಹೇಳಿದರು. 2015ರಿಂದ ಪಾಳುಬಿದ್ದಿರುವ ಹಳೆ ತಹಸೀಲ ಕಟ್ಟಡಗಳನ್ನು ಪುನರ್ ಅಭಿವೃದ್ಧಿಪಡಿಸಿ, ಅಲ್ಲಿಯೇ ಪ್ರಜಾ ಸೌಧ ನಿರ್ಮಿಸಿದರೆ ಸಾರ್ವಜನಿಕರಿಗೂ ಹಾಗೂ ಅಧಿಕಾರಿಗಳಿಗೂ ಅನುಕೂಲವಾಗಲಿದೆ. ಹೀಗಾಗಿ ಈಗ ನಿಗದಿಪಡಿಸಿರುವ ಸ್ಥಳವನ್ನು ರದ್ದುಗೊಳಿಸಿ, ಹಳೆ ತಹಶೀಲ್‌ ಜಾಗದಲ್ಲಿಯೇ ಪ್ರಜಾ ಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಪರಶುರಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Feb 2026 10:18 pm

Maharashtra | ಯವತಮಾಳ ಜಿಲ್ಲೆಯಲ್ಲಿ ಜನವರಿಯಲ್ಲಿ 21 ರೈತರ ಆತ್ಮಹತ್ಯೆ!

ನಾಗ್ಪುರ, ಫೆ.4: ಪೂರ್ವ ಮಹಾರಾಷ್ಟ್ರದ ಯವತಮಾಳ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕಾರದ ವಸಂತರಾವ್ ನಾಯ್ಕ ಶೇತಿ ಸ್ವಾವಲಂಬನ ಮಿಷನ್‌ನ ಮಾಜಿ ಅಧ್ಯಕ್ಷ ಕಿಶೋರ್ ತಿವಾರಿ ಆರೋಪಿಸಿದ್ದಾರೆ. ಅವರು ಕಳೆದ ತಿಂಗಳು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಅಧಿಕೃತ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಹತ್ತಿ ಮತ್ತು ಸೋಯಾಬೀನ್ ಪ್ರಮುಖ ಬೆಳೆಗಳಾಗಿರುವ ಪಶ್ಚಿಮ ವಿದರ್ಭದಲ್ಲಿ 1998ರಿಂದಲೂ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಯುಪಿಎ ಮತ್ತು ಎನ್‌ಡಿಎ ಸರಕಾರಗಳ ಎಲ್ಲ ಪರಿಹಾರ ಪ್ಯಾಕೇಜ್‌ಗಳು ಕೃಷಿ ವೆಚ್ಚ, ನೀರಾವರಿ, ಮಣ್ಣಿನ ಆರೋಗ್ಯ, ಕನಿಷ್ಠ ಬೆಂಬಲ ಬೆಲೆ, ಸ್ಥಳೀಯ ದಾಸ್ತಾನು ಮತ್ತು ಸಂಸ್ಕರಣೆ ಸೌಲಭ್ಯಗಳು ಹಾಗೂ ಸರಕಾರದಿಂದ ಖರೀದಿ ಇತ್ಯಾದಿ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿವೆ. ಆಗಾಗ್ಗೆ ಸಾಲ ಮನ್ನಾ ಮಾಡುವ ಬದಲು ರೈತರು ವಾಣಿಜ್ಯ ಬೆಳೆಗಳಿಂದ ಸಿರಿಧಾನ್ಯಗಳು ಮತ್ತು ಬೇಳೆಕಾಳುಗಳ ಕೃಷಿಯತ್ತ ಗಮನ ಹರಿಸುವಂತೆ ಮಾಡಲು ದೀರ್ಘಾವಧಿಯ ಸಾಲ ನೀತಿ ಮತ್ತು ಸೂಕ್ತ ಪ್ರೋತ್ಸಾಹದ ಅಗತ್ಯವಿದೆ ಎಂದು ತಿವಾರಿ ಪ್ರತಿಪಾದಿಸಿದ್ದಾರೆ. ಜನವರಿಯಲ್ಲಿ ಜಿಲ್ಲೆಯಲ್ಲಿ 21 ರೈತರ ಆತ್ಮಹತ್ಯೆಗಳನ್ನು ದೃಢಪಡಿಸಿದ ಯವತಮಾಳ ಜಿಲ್ಲಾಧಿಕಾರಿ ವಿಕಾಸ್ ಮೀನಾ ಅವರು, ರೈತರ ಆತ್ಮಹತ್ಯೆಗಳು ಮತ್ತು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಗುರಿಯನ್ನು ಹೊಂದಿರುವ ರಾಜ್ಯ ಸರಕಾರದ ‘ಮಿಷನ್ ಉಭಾರಿ ಅಭಿಯಾನ’ದಡಿ ಗಮನಾರ್ಹ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 10:16 pm

ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.4: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ವ್ಯಕ್ತಿಗೆ 23.10 ಲ.ರೂ ವಂಚಿಸಿದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ತಾನು ಫೇಸ್‌ಬುಕ್ ನೋಡುತ್ತಿದ್ದಾಗ ಮಿ. ಮೋಹನ್ ಪಾಟೀಲ್ ಎಂಬಾತ ವಿಐಪಿ 21 ಇಂಡಿಯನ್ ಡೇ ಟ್ರೇಡರ್ ಎಂಬ ಖಾತೆಗೆ ಸೇರಲು ತಿಳಿಸಿದ್ದ. ಅದರಂತೆ ತಾನು ಆ ಖಾತೆಗೆ ಸೇರಿಕೊಂಡೆ. ಮೋಹನ್ ಪಾಟೀಲ್ ಆನ್‌ಲೈನ್ ಟ್ರೇಡಿಂಗ್‌ನಲ್ಲಿ 15 ವರ್ಷಗಳ ಅನುಭವ ಹೊಂದಿದ್ದು, ಫೆ.22ರಂದು ಸ್ಟಾಕ್ ಮಾರ್ಕೆಟ್ ವಿನ್ನರ್ ಎಂಬ ಪುಸ್ತಕ ಪ್ರಕಟಿಸಲಿರುವುದಾಗಿ ತಿಳಿಸಿದ್ದ. ಈ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಸುಮಾರು 163 ಜನ ಸದಸ್ಯರಿದ್ದು, ಈ ಗ್ರೂಪಿನಲ್ಲಿ ಹಣ ಜಮೆ ಹಾಗೂ ವಿತ್ ಡ್ರಾ ಮಾಡುವ ಕೆಲಸವನ್ನು ರವಿ ಎಂಬಾತ ನಿರ್ವಹಿಸು ತ್ತಿದ್ದ. ಮೋಹನ್ ಪಾಟೀಲ್ ಅಧಿಕ ಲಾಭದ ಆಮಿಷವೊಡ್ಡಿದ ಮೇರೆಗೆ ತಾನು ಬೇರೆ ಬೇರೆ ಖಾತೆಗಳಿಗೆ 23,10,000 ರೂ.ವನ್ನು ಪಾವತಿಸಿ ವಿವಿಧ ಕಂಪೆನಿಗಳ ಶೇರುಗಳನ್ನು ಖರೀದಿಸಿದ್ದೆ. ಆವಾಗ ತನ್ನ ಖಾತೆಯಲ್ಲಿ 47 ಲ.ರೂ. ಏರಿಕೆ ಕಂಡುಬಂದಿರುತ್ತದೆ. ಆ ಮೊತ್ತವನ್ನು ತಾನು ನಗದೀಕರಿಸಲು ಯತ್ನಿಸಿದಾಗ ತನ್ನ ಖಾತೆಯನ್ನು ಬ್ಲಾಕ್ ಮಾಡಿರು ವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಬ್ಲಾಕ್ ತೆಗೆಯಬೇಕಾದಲ್ಲಿ ಪುನಃ 18 ಲ.ರೂ. ಜಮೆ ಮಾಡಲು ತಿಳಿಸಿದ್ದರು. ಆವಾಗ ತಾನು ಮೋಸ ಹೋಗಿರುವುದು ತಿಳಿದು ಬಂತು ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Feb 2026 10:15 pm

ಸುರಪುರ | ರೈತರ ಆತ್ಮಹತ್ಯೆ ತಡೆಗೆ ಋಣಮುಕ್ತ ಕಾಯ್ದೆ ಜಾರಿ ಅಗತ್ಯ : ಆನೆಗುಂದಿ

ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮ್ಮೇಳನ

ವಾರ್ತಾ ಭಾರತಿ 4 Feb 2026 10:13 pm

ಯುವತಿ ನಾಪತ್ತೆ

ಉಡುಪಿ, ಫೆ.4: ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮ ಕದಿಕೆ ಯಲ್ಲಿರುವ ಅಣ್ಣನ ಮನೆಗೆ ವಾರದ ಹಿಂದೆ ಬಂದಿದ್ದ ಸಂಗೀತಾ (24) ಎಂಬ ಯುವತಿ ಫೆ.2ರಿಂದ ನಾಪತ್ತೆಯಾಗಿದ್ದಾರೆ. 4 ಅಡಿ 5 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡು ತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ:0820-2537999, ಮಲ್ಪೆ ಪಿಎಸ್‌ಐ ಮೊ.ನಂ:9480805447, ಮಲ್ಪೆ ವೃತ್ತ ನಿರೀಕ್ಷಕ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದು ಎಂದು ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 4 Feb 2026 10:11 pm

ಬೆಳಗಾವಿ| ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲಕನನ್ನು ಥಳಿಸಿ ಕೊಲೆ: ನಾಲ್ವರು ಆರೋಪಿಗಳ ಬಂಧನ

ಬೆಳಗಾವಿ : ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ನಾಲ್ವರು ಯುವಕರು ಅಂಗಡಿ ಮಾಲಕನನ್ನು ಥಳಿಸಿ ಕೊಲೆಗೈದ ಘಟನೆ ನಡೆದಿದೆ. ಮೃತನನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಎಂದು ಗುರುತಿಸಲಾಗಿದೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಹಾಗೂ ಶ್ರೀಧರ್ ರತನ ಪಾಟಿಲ್ (21)ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಬುಧವಾರ ರಾತ್ರಿ ಹುಕ್ಕೇರಿ ತಾಲೂಕಿನ ಮೋಹನಗಾದಲ್ಲಿ ಜಾತ್ರೆ ಮುಗಿಸಿ ಮದ್ಯದ ಅಮಲಿನಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ಆರೋಪಿಗಳು ಮಧ್ಯರಾತ್ರಿ ಸಿಗರೇಟ್ ಸೇದಲು ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಅಂಗಡಿ ಮುಚ್ಚುತ್ತಿದ್ದ ವೇಳೆ ಅಂಗಡಿ ಮಾಲಕನನ್ನು ತಡೆದು ಸಿಗರೇಟ್ ಪಡೆದು ಅಲ್ಲಿಯೇ ಸೇದಿದ್ದಾರೆ. ನಂತರ ಹಣ ಕೇಳಿದ ಅಂಗಡಿ ಮಾಲಕ ಯಲ್ಲಪ್ಪ ನಾಯಿಕರೊಂದಿಗೆ ವಾಗ್ವಾದ ನಡೆಸಿ ಥಳಿಸಿದ್ದಾರೆ.   ಘಟನೆಯಲ್ಲಿ ಗಂಭೀರವಾಗಿದ್ದ ಯಲ್ಲಪ್ಪ ನಾಯಿಕರನ್ನು ಸ್ಥಳೀಯರು ತಕ್ಷಣ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.   ಕೂಡಲೇ ಕಾಕತಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.  

ವಾರ್ತಾ ಭಾರತಿ 4 Feb 2026 10:09 pm

ಅಫ್ಘಾನಿಸ್ತಾನ ಬೌಲರ್ ಗಳ ಬೆಂಡೆತ್ತಿದ ವೈಭವ್ ಸೂರ್ಯವಂಶಿ, ಆ್ಯರೋನ್ ಜಾರ್ಜ್: ಅಂಡರ್ 19 ವಿಶ್ವಕಪ್ ಫೈನಲ್ ಗೇರಿದ ಭಾರತ!

India U19 Vs Afghanistan U19- ಐಸಿಸಿ ಟಿ20 ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ತಂಡ ಇದೀಗ ಫೈನಲ್ ಪ್ರವೇಶಿಸಿದೆ. ಬುಧವಾರ ಅಫ್ಘಾನಿಸ್ತಾನದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ತಂಡ 311 ರನ್ ಗಳ ಬೃಹತ್ ಗುರಿಯನ್ನು ಕೇವಲ 41.1 ಓವರ್ ಗಳಲ್ಲಿ ಬೆಂಬತ್ತಿ 7 ವಿಕೆಟ್ ಗಳ ಜಯ ಗಳಿಸಿತು. ವೈಭವ್ ಸೂರ್ಯವಂಶಿ, ಆ್ಯರೋನ್ ಜಾರ್ಜ್ ಮತ್ತು ನಾಯಕ ಆಯುಷ್ ಮ್ಹಾತ್ರೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಫೆಬ್ರವರಿ 8ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣೆಸಬೇಕಿದೆ.

ವಿಜಯ ಕರ್ನಾಟಕ 4 Feb 2026 10:08 pm

ಪ್ರಧಾನಿಯವರ ಕುರ್ಚಿಯ ಬಳಿ ಮಹಿಳಾ ಸಂಸದರ ಘೇರಾವ್: ಭಾಷಣಕ್ಕೂ ಮುನ್ನ ಲೋಕಸಭೆಯಲ್ಲಿ ಉದ್ವಿಗ್ನ ವಾತಾವರಣ

“ಸಚಿವ ಅಶ್ವಿನಿ ವೈಷ್ಣವ್, MP ನಿಶಿಕಾಂತ್ ದುಬೆ ಬುಲೆಟ್ ರೈಲಿನಂತೆ ಓಡಿಹೋದರು”

ವಾರ್ತಾ ಭಾರತಿ 4 Feb 2026 10:07 pm

ಕಲಬುರಗಿ | ಪಿಎಮ್‌ಎಸ್‌ವೈಎಂ ಯೋಜನೆಯಡಿ ನೋಂದಣಿಗೆ ಸೂಚನೆ

ಕಲಬುರಗಿ: ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಮ್.ಎಸ್.ವೈ.ಎಂ.) ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬೇಕೆಂದು ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮುಹಮ್ಮದ್ ಬಶೀರ್ ಅನ್ಸಾರಿ ಅವರು ತಿಳಿಸಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ 55 ರೂ. ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ನೊಂದಣಿಯಾದ ಪಲಾನುಭವಿಯು ವಯಸ್ಸು 60 ಪೂರ್ಣಗೊಂಡ ನಂತರ ತಿಂಗಳಿಗೆ 3,000 ರೂ. ಖಚಿತ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ. ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಹಮಾಲರು, ಟೈಲರ್ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕ ಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಅಸಂಘಟಿತ ವಿಲಕಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು, ಹಗ್ಗ ಸಿದ್ಧಪಡಿಸುವ (ಬೈಜಂತ್ರಿ) ಕಾರ್ಮಿಕರು, ಉಪ್ಪನ್ನು ತಯಾರಿಸುವ ಉಪ್ಪಾರರು, ಬಿದಿರು ವೃತ್ತಿಯಲ್ಲಿರುವ ಮೇದಾರರು, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಕಲ್ಯಾಣಮಂಟಪ/ಸಭಾಭವನ/ ಟೆಂಟ್/ಪೆoಡಾಲ್ಗಳ ಕಾರ್ಮಿಕರು, ಗಾದಿ, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು (ಪಿಂಜಾರರು/ ನದಾಫರು), ಬಡಗಿ/ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ದೆ ಹಾಗೂ ಕಂಬಳಿ ತಯಾರಿಕೆ, ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ರಿಸ್ಟಿಂಗ್ ಕೆಲಸ, ಪೊರಕೆ ಕಡ್ಡಿ ತಯಾರಿಕೆ, ಸುಣ್ಣ ಸುಡುವುದು, ವಾಲಗ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ (ಗೌಳಿವೃತ್ತಿ), ಬಳೆ ವ್ಯಾಪಾರ/ಮೇಣದಬತ್ತಿ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ/ಕಲ್ಲುಕೆತ್ತನೆ ಕೆಲಸ, ಮೀನುಗಾರಿಕೆ ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ (ರಟ್ಟನ್) ಆಟಿಕೆ/ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ನಾಟಿ ಔಷಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್) ಮಾಡುವ ವೃತ್ತಿ, ಶೀಟ್ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ. ಮೆಟಲ್ ಕ್ರಾಫ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷನರಿ ಕೆಲಸ, ಹೂವುಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯ ವೃಂದವೃತ್ತಿ, ವೆಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ, ಧಾರ್ಮಿಕ ಭಿಕ್ಷುಕ ವೃತ್ತಿ, ಮೋಡಿಗಾರರು, ಕಣ್ಣು ಕಟ್ಟು ವಿದ್ಯೆ, ಭವಿಷ್ಯ ನುಡಿಯುವುದು, ಲಾವಣಿ ಪದಗಳನ್ನು ಹಾಡುವುದು, ಹವಾಮಾನ ಪ್ರವಾದಿಗಳು, ಗೊಂದಲು ಹಾಕುವುದು (ಪೂಜಾವಿಧಾನ), ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಇತರೆ ಕಸರತ್ತುಗಳ ವೃತ್ತಿ, ಗ್ರಾಮ ಚರಿತ್ರೆಗಳ ಪಾರು ಪತ್ತೆಗಾರರು, ತಂಬೂರಿ ಮತ್ತು ಹಾರ್ಮೋನಿಯಂ ಸಹಾಯದಿಂದ ಪದಗಳನ್ನು ಕಟ್ಟಿಹಾಡುವುದು, ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಅಂಭಾದೇವಿಯ ಆರಾಧಕರು, ಗೋಂಧಳಿ ನೃತ್ಯ ಮಾಡುವುದು, ಬೊಂಬೆ, ಹೊದಿಕೆ, ಬಾಚಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಜ್ಯೋತಿಷ್ಯ ಗಿಣಿಶಾಸ್ತç, ಹಸ್ತ ಮುದ್ರಿಕೆ ಶಾಸ್ತç, ಬುಡಬುಡಕಿ ಭವಿಷ್ಯ, ಕಣಿ ಹೇಳುವುದು, ಎತ್ತನ್ನು ಹಿಡಿದು ಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ, ಧರ್ಮಪ್ರಚಾರ, ಕಾಲಭೈರವನ ಆರಾಧನೆ ಕತ್ತಿ ತಯಾರಿಕೆ, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ, ಔಷಧಿ ಮಾರಾಟಗಾರರು, ಭಿಕಾರಿ ವೈದ್ಯ ವೃತ್ತಿ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲುಬಡಿದು ಹಾಡುಹೇಳುವುದು, ಗಾರುಡಿಗರು, ಬೀಸುವ ಕಲ್ಲು ಮತ್ತು ಬೀಸಣಿಕೆ ಮಾರಾಟ, ಮರದ ಸೌಟುಗಳ ತಯಾರಿಕೆ, ಸೂಜಿ, ದಾರ, ಒಳಕಲ್ಲು ಮಾರಾಟ, ಅರಿಶಿಣ, ಕುಂಕುಮ ಮಾರಾಟ, ಮಸಾಲೆ ದಿನಸಿ ಮಾರಾಟ, ಡ್ರಂ-ಬಾರಿಸುವುದು ಮತ್ತು ಕೊಳಲು ನುಡಿಸುವುದು, ದೊಂಬರಾಟ. ವಿದೂಷಕ, ಕಬ್ಬಿಣದ ತಾಮ್ರದ ತಂತಿಗಳನ್ನು ಉಪಯೋಗಿಸಿ ವಿಧವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಬೊಂಬೆ ಆಡಿಸುವುದು, ಮರಗವನ ಆಡಿಸುವುದು ಊರೂರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ, ಬೆಳ್ಳಿ, ಕಲ್ಲು, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶು ಪಾಲಕರು, ಕೋಳಿಮೊಟ್ಟೆ ಮೀನು ಮಾರಾಟ ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿಗೆ ಅರ್ಹತೆಗಳು : ವಯೋಮಿತಿ 18 ರಿಂದ 40ವರ್ಷದೊಳಗಿರಬೇಕು. ಇ.ಪಿ.ಎಫ್ ಸದಸ್ಯರಾಗಿರಬಾರದು. ಇ.ಎಸ್.ಐ.ಸಿ ಸದಸ್ಯರಾಗಿರಬಾರದು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಯಾಗಿ ವಯೋಮಿತಿ ಆಧಾರದ ಮೇಲೆ ವಂತಿಕೆ ಪಾವತಿಸಬೇಕಾಗುತ್ತದೆ. ನೋಂದಣಿಗೆ ಬೇಕಾಗಿರುವ ದಾಖಲೆಗಳು : ಆಧಾರ ಕಾರ್ಡ್, ಚಾಲ್ತಿಯುಳ್ಳ ಬ್ಯಾಂಕ್ ಖಾತೆಯ ಪಾಸ್ಬುಕ್, ಸಕ್ರೀಯ ಮೊಬೈಲ್ ಸಂಖ್ಯೆ, ಆಧಾರ ಕಾರ್ಡ ಇ-ಕೆ.ವೈ.ಸಿ. ಕಡ್ಡಾಯ, ನಾಮ ನಿರ್ದೇಶಿತರ ಹೆಸರು ಮತ್ತು ಜನ್ಮ ದಿನಾಂಕ ಹಾಗೂ ಇ-ಶ್ರಮ ಯೋಜನೆ ಕಾರ್ಡ. ಅಸಂಘಟಿತ ವಲಯದ ಕಾರ್ಮಿರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊoದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ https://maandhan.in/maandhan/login ವೆಬ್ಸೈಟ್ನಲ್ಲಿ ನೋಂದಣಿಯಾಗಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕಾರ್ಮಿಕ ಅಧಿಕಾರಿಗಳ ಕಛೇರಿಯನ್ನು ಅಥವಾ ಆಯಾ ತಾಲ್ಲೂಕಿನ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರುಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 4 Feb 2026 10:04 pm

ಗಂಗೊಳ್ಳಿ: ಯಕ್ಷಗಾನ ಕಲಾರಂಗದ 86ನೇ ಮನೆ ಹಸ್ತಾಂತರ

ಉಡುಪಿ, ಫೆ.4: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಇವಳ ಬಡ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕಿದಿಯೂರು ಎಸ್.ವಿ.ಎಸ್.ಟಿ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಭಾಸ್ಕರ ಭಟ್ ಪ್ರಾಯೋಜಕತ್ವದಲ್ಲಿ, ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ‘ಲಲಿತಾ ಸದನ’ ಮನೆಯನ್ನು ಮಂಗಳವಾರ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಿಸರ್ಗ ಹಾಗೂ ಆಕೆಯ ಹೆತ್ತವರಾದ ರಾಘವೇಂದ್ರ ಖಾರ್ವಿ ಮತ್ತು ರೇಷ್ಮಾ ದಂಪತಿಗೆ ಮನೆಯನ್ನು ಹಸ್ತಾಂತರಿಸಲಾಯಿತು. ಮನೆಯನ್ನು ಉದ್ಘಾಟಿಸಿದ ಕಾಣಿಯೂರು ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಜಿಲ್ಲೆಯೇ ಅಭಿಮಾನ ಪಡುವ ಸಂಘಟನೆ ಯಾಗಿದ್ದು, ಅವರ ಸಾಮಾಜಿಕ ಕಳಕಳಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಾರ್ಯಕರ್ತರು ಪಡುವ ಪರಿಶ್ರಮ ಅನನ್ಯ ಎಂದರು. ದಾನಿಗಳಾದ ಎ. ಭಾಸ್ಕರ ಭಟ್ ಮಾತನಾಡಿ ಕಲಾರಂಗದ ಸದಸ್ಯನಾಗಿ, ರುಚಿಶುದ್ಧಿ ಯಕ್ಷಗಾನ ಸಂಯೋಜಿ ಸುತ್ತಾ ಬಂದ ಸಂಸ್ಥೆ ಈಗ ಸಮಾಜ ಮತ್ತು ಶಿಕ್ಷಣಕ್ಕಾಗಿ ಮಾಡುತ್ತಿರುವ ಕೆಲಸ ಕಂಡು ಬೆರಗಾಗಿದ್ದೇನೆ. ಮನೆ ನಿರ್ಮಿಸಿ ಕೊಡುವ ಅವಕಾಶ ಕಲ್ಪಿಸಿ ನನ್ನ ಸಂಕಲ್ಪ ಈಡೇರಿಸಿದ್ದಕ್ಕಾಗಿ ಸಂಸ್ಥೆಗೆ ಕೃತಜ್ಞ ಎಂದರು. ವಿದ್ಯಾಸಮುದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡು ಬಿ. ಅಮೀನ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಕೆ. ಸೀತಾರಾಮ ಭಟ್, ಅನಂತರಾಜ ಉಪಾಧ್ಯಾಯ, ವಿಜಯಕುಮಾರ್ ಮುದ್ರಾಡಿ, ಜಯರಾಮ ಪಡಿಯಾರ್, ಕಿಶೋರ ಸಿ.ಉದ್ಯಾವರ, ಮಂಜುನಾಥ ಹೆಬ್ಬಾರ, ಎಚ್. ಸುಜಯೀಂದ್ರ ಹಂದೆ ಮುಂತಾದವರು ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.  

ವಾರ್ತಾ ಭಾರತಿ 4 Feb 2026 10:01 pm

Mumbai | ಲಿಫ್ಟ್‌ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ

ಮುಂಬೈ, ಫೆ. 4: ಮುಂಬೈನ ಗೋರೆಗಾಂವ್ ಉಪನಗರದ ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಗ್ಯಾಸ್ ತುಂಬಿದ ಬಲೂನ್‌ ಗಳು ಸ್ಫೋಟಗೊಂಡು ಇಬ್ಬರಿಗೆ ಸುಟ್ಟ ಗಾಯಗಳಾದ ಘಟನೆ ಒಳಗಾದ ಘಟನೆ ನಡೆದಿದೆ. ಈ ಕುರಿತ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಮಹಿಳೆಯೊಬ್ಬರು ಮೊದಲು ಲಿಫ್ಟ್‌ಗೆ ಪ್ರವೇಶಿಸಿ ತಮ್ಮ ಟ್ರಾಲಿಯೊಂದಿಗೆ ಒಳಗೆ ನಿಂತಿದ್ದಾರೆ. ಬಳಿಕ ದೊಡ್ಡ ಪಾಲಿಥಿನ್ ಚೀಲದಲ್ಲಿ ಹಲವಾರು ಬಲೂನ್‌ ಗಳನ್ನು ಹೊತ್ತ ವ್ಯಕ್ತಿ ಲಿಫ್ಟ್‌ ಒಳಬಂದಿದ್ದು, ಆತನಿಗೆ ಜಾಗ ಮಾಡಿಕೊಡಲಾಗಿದೆ. ಅದಾದ ಬಳಿಕ ಮತ್ತೊಬ್ಬ ವ್ಯಕ್ತಿ ಲಿಫ್ಟ್‌ ಗೆ ಪ್ರವೇಶಿಸುವ ಸಂದರ್ಭದಲ್ಲೇ ಬಲೂನ್‌ ಗಳು ಏಕಾಏಕಿ ಭಾರೀ ಜ್ವಾಲೆಯೊಂದಿಗೆ ಸ್ಫೋಟಗೊಂಡಿವೆ. ಸ್ಫೋಟದ ಪರಿಣಾಮ ಲಿಫ್ಟ್ ಒಳಭಾಗ ಕೆಲ ಕ್ಷಣಗಳ ಕಾಲ ಜ್ವಾಲೆಯಿಂದ ಆವರಿಸಿಕೊಂಡಿದ್ದು, ನಂತರ ಮೂವರು ಆತಂಕದಿಂದ ಹೊರಗೆ ಓಡಿಬಂದಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಬಲೂನ್‌ ಗಳನ್ನು ತಂದ ವ್ಯಕ್ತಿ ಸಮತೋಲನ ಕಳೆದುಕೊಂಡು ನೆಲಕ್ಕುರುಳಿದ ದೃಶ್ಯವೂ ದಾಖಲಾಗಿದೆ. ಘಟನೆಯಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲೂನ್‌ ಗಳನ್ನು ತಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಲೂನ್‌ ಗಳಿಗೆ ಬಳಸಿದ ಅನಿಲದ ಸ್ವರೂಪ ಕುರಿತು ತನಿಖೆ ಮುಂದುವರೆದಿದೆ. ತಜ್ಞರ ಪ್ರಕಾರ, ಹೀಲಿಯಂ ಅನಿಲದಿಂದ ತುಂಬಿದ ಬಲೂನ್‌ ಗಳು ಸಾಮಾನ್ಯವಾಗಿ ದಹನಶೀಲವಾಗಿರುವುದಿಲ್ಲ. ಆದರೆ ಹೈಡ್ರೋಜನ್ ಅನಿಲದಿಂದ ತುಂಬಿದ ಬಲೂನ್‌ ಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ಸಂಭವ ಹೆಚ್ಚಿರುವುದರಿಂದ ಅಪಾಯಕಾರಿಯಾಗಿವೆ.

ವಾರ್ತಾ ಭಾರತಿ 4 Feb 2026 9:59 pm

ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ಬಸ್ ಪ್ರಾರಂಭ : ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಚಾಲನೆ

ಅಫಜಲಪುರ: ಸುಮಾರು ವರ್ಷಗಳಿಂದ ಅಫಜಲಪುರ ಪಟ್ಟಣದಿಂದ ಬೆಂಗಳೂರಿಗೆ ಸಿಲ್ಪರ್ ಬಸ್ ಸೇವೆ ಪ್ರಾರಂಭ ಮಾಡಬೇಕೆಂದು ಸ್ಥಳೀಯರ ಬೇಡಿಕೆಯಂತೆ ಪಕ್ಕದ ಸಿಂದಗಿ ಶಾಸಕರ ಜತೆ ಚರ್ಚಿಸಿ ಅಲ್ಲಿಂದ ಅಫಜಲಪುರ ಪಟ್ಟಣದವರಿಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗಕ್ಕೆ-2 ವ್ಯಾಪ್ತಿಯಲ್ಲಿ ಬರುವ ಅಫಜಲಪುರ ಘಟಕದಿಂದ ಬೆಂಗಳೂರಿಗೆ ತೆರಳುವ ಅಮೋಘವರ್ಷ ನಾನ್ ಎ.ಸಿ.ಸ್ಲೀಪರ್ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಬೇಕು. ಅಂದಾಗ ಮಾತ್ರ ಇಂತಹ ಹತ್ತಾರು ಹೊಸ ಮಾರ್ಗಗಳು ಪ್ರಾರಂಭ ಮಾಡಲು ಅನುಕೂಲವಾಗಲಿದೆ ಎಂದರು. ಅಲ್ಲದೇ ಖಾಸಗಿ ವಾಹನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಬೆಲೆ ಏರಳಿತ ಮಾಡುತ್ತಾರೆ. ಆದರೆ ಸರ್ಕಾರಿ ಬಸ್ ಗಳಲ್ಲಿ ಯಾವತ್ತು ಕೂಡ ಒಂದೇ ದರ ನಿಗದಿಪಡಿಸಿರುತ್ತಾರೆ. ಇನ್ನೂ 4 ತಿಂಗಳಲ್ಲಿ ಹೊಸದಾಗಿ 56 ಬಸ್ ಗಳು ಬರಲಿವೆ. ಆ ಸಂದರ್ಭದಲ್ಲೂ ಅಫಜಲಪುರಕ್ಕೆ ಹೊಸ ಬಸ್ ನೀಡಲಾಗುವುದು. ಅದಲ್ಲದೇ ಪಟ್ಟಣದಿಂದ ಉಜ್ಜಯನಿಗೆ ಹೊಸದಾಗಿ ಶೀಘ್ರವೇ ಬಸ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಕೆಕೆಆರ್ ಟಿಸಿ ಅಧ್ಯಕ್ಷರಾಗಿ ಅರುಣಕುಮಾರ ಪಾಟೀಲ್ ಅಧಿಕಾರ ವಹಿಸಿಕೊಂಡ ನಂತರ ಅಫಜಲಪುರದಿಂದ ಶ್ರೀಶೈಲ್, ಎರಡು ಗ್ರಾಮೀಣ ಬಸ್ ಸಂಚಾರ, ಈಗ ಅಮೋಘವರ್ಷ ಬಸ್ ಅಫಜಲಪುರದಿಂದ ಬೆಂಗಳೂರಿಗೆ ಪ್ರಾರಂಭ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಫಕ್ರೂದ್ದಿನ್, ಸಾರಿಗೆ ಘಟಕ ವ್ಯವಸ್ಥಾಪಕ ಎ.ವಿ.ಭೋವಿ, ಮುಖಂಡರಾದ ಸಂಗ್ರಾಮಗೌಡ ಪಾಟೀಲ್, ಶರಣು ಕುಂಬಾರ, ಚಂದ್ರಶೇಖರ ಕರಜಗಿ, ಎಸ್.ಎಸ್.ಪಾಟೀಲ್, ಕಲ್ಯಾಣಿ ಸಿಂದಗೇರಿ, ಬಸಣ್ಣ ಗುಣಾರಿ, ಮಹಾನಿಂಗ ಅಂಗಡಿ, ಪ್ರೀತಮ್ ಚೌವ್ಹಾಣ್, ಗೌತಮ್ಮ ಸಕ್ಕರಗಿ, ಬಸವರಾಜ ಜಮಾದಾರ, ಇರ್ಫಾನ್ ಜಮಾದಾರ, ಶಕೀಲ್ ವಡಾಳೆ,ಬಿಸ್ಮಿಲ್ ಶೇಖ, ಅಂಬರೀಶ ಬುರಲಿ, ವಿಶ್ವನಾಥ ಮಲಘಾಣ, ಶಾಂತು ಪಾಟೀಲ್ ಸೊನ್ನ,ಸಂತೋಷ ಮನ್ಮಿ,ನಾಗೇಶ ಬಿಲ್ಲಾಡ, ಅಜರ ಮಣೂರ, ಬಸಯ್ಯ ನಂದಿಕೋಲ ಹಾಗೂ ಸಾರಿಗೆ ನಿಗಮ ಸಿಬ್ಬಂದಿಗಳಾದ, ಶಾರದಾ, ಬೈಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Feb 2026 9:57 pm

ಕಲಬುರಗಿ | ಫೆ. 26ರಿಂದ ರಸ್ತೆ ಸಂಚಾರ ಗಣತಿ ಪ್ರಾರಂಭ : ಶರಣಪ್ಪಾ ಸುಲಗಂಟೆ

ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರ ಗಣತಿಯನ್ನು ನಡೆಸಲಾಗುತ್ತಿದ್ದು, 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಫೆ.26ರಂದು ಬೆಳಿಗ್ಗೆ 6 ಗಂಟೆಯಿಂದ ಫೆ.27ರಂದು ಬೆಳಗ್ಗೆ 6 ಗಂಟೆಯವರೆಗೆ ಸತತವಾಗಿ ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಪರ್ಕ ಮತ್ತು ಕಟ್ಟಡಗಳು ಈಶಾನ್ಯ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಶರಣಪ್ಪಾ ಸುಲಗಂಟೆ ತಿಳಿಸಿದ್ದಾರೆ. ಈ ಸಂಚಾರ ಗಣತಿಗಾಗಿ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 370 ಗಣತಿ ಕೇಂದ್ರಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 692 ಗಣತಿ ಕೇಂದ್ರಗಳನ್ನು ಸೇರಿಸಿ ಒಟ್ಟು 1,062 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿ ರಸ್ತೆಯಲ್ಲಿನ ವಾಹನ ಸಂಚಾರದ ತೀವ್ರತೆಯನ್ನು ಅಳೆಯುವುದು, ಹಾಲಿ ರಸ್ತೆಗಳ ದುರಸ್ತಿ, ರಸ್ತೆಗಳ ಅಗಲಿಕರಣ, ಮೇಲ್ದರ್ಜೆಗೇರಿಕೆ ಹಾಗೂ ಹೊಸ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಈ ಗಣತಿ ವರದಿ ಅತ್ಯಂತ ಪ್ರಮುಖವಾಗಿರುತ್ತದೆ. ಜೊತೆಗೆ, ವಾಹನ ಅಪಘಾತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸಹ ಈ ಸಂಚಾರ ಗಣತಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆ ಸಂಚಾರ ಗಣತಿಯಿಂದ ಯಾವ ರಸ್ತೆಯಲ್ಲಿ ಯಾವ ರೀತಿಯ ವಾಹನ ಸಂಚಾರ ಅಧಿಕವಾಗಿದೆ ಎಂಬುದು ಸ್ಪಷ್ಟವಾಗುವುದರಿಂದ, ಸರ್ಕಾರ ಮಟ್ಟದಲ್ಲಿ ಹಲವಾರು ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಚಾರ ಗಣತಿ ಯಶಸ್ವಿಗೊಳಿಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಶರಣಪ್ಪಾ ಸುಲಗಂಟೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಾರ್ತಾ ಭಾರತಿ 4 Feb 2026 9:55 pm

ಹೆಜಮಾಡಿ ಟೋಲ್‌ನಲ್ಲಿ ಪುಂಡಾಟ: ಪ್ರಕರಣ ದಾಖಲು

ಪಡುಬಿದ್ರೆ, ಫೆ.4: ಹೆಜಮಾಡಿ ಟೋಲ್‌ಗೇಟ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಪುಂಡಾಟಿಕೆ ಮೆರೆದ ಬಗ್ಗೆ ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.3ರಂದು ರಾತ್ರಿ ಹೆಜಮಾಡಿ ಟೋಲ್ ಗೇಟ್ ಬಳಿ ಮಂಗಳೂರು ಕಡೆಯಿಂದ -ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯದಲ್ಲಿ ಬಸ್ಸನ್ನು ನಿಲ್ಲಿಸಿದ್ದು, ಅದರಲ್ಲಿದ್ದವರು ಕೆಳಗೆ ರಸ್ತೆಗೆ ಇಳಿದು ರಸ್ತೆಯಲ್ಲಿ ಬೆಂಕಿ ಉಗುಳುವ ಪಟಾಕಿಯನ್ನು ಸಿಡಿಸಿ, ಕುಣಿದು ಕುಪ್ಪಳಿಸಿದ್ದರು. ಈ ಮೂಲಕ ಆ ರಸ್ತೆಯಲ್ಲಿ ಹೋಗುವ ವಾಹನದ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರೆಂದು ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಬಸ್‌ನ ಮಾಹಿತಿ ಸಂಗ್ರಹಿಸಿ, ಬಸ್ಸಿನ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 4 Feb 2026 9:55 pm

SSLC Exam Results 2026: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 'ಟಿವಿ–ಮೊಬೈಲ್ ಸ್ವಿಚ್ ಆಫ್' ಟಾಸ್ಕ್

SSLC Exam Results 2026: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದೀಗ ಹೊಸ ರೀತಿಯ ಟಾಸ್ಕ್‌ ಒಂದನ್ನು ಪರಿಚಯಿಸಿದೆ. ವಿದ್ಯಾರ್ಥಿಗಳ ಗಮನವನ್ನು ಓದಿನತ್ತ ಕೇಂದ್ರೀಕರಿಸಲು 'ಟಿವಿ ಮತ್ತು ಮೊಬೈಲ್ ಸ್ವಿಚ್ ಆಫ್' ಎಂಬ ಅಭಿಯಾನಕ್ಕೆ ಚಾಲನೆ ನೀಡಲು ಇಲಾಖೆ ಮುಂದಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿರುವ

ಒನ್ ಇ೦ಡಿಯ 4 Feb 2026 9:55 pm

ಬೆಳಗಾವಿ| ಅಪ್ರಾಪ್ತ ಬಾಲಕಿಗೆ ಕಿರುಕುಳ ಪ್ರಕರಣ: ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಬೆಳಗಾವಿ : ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರ ಡಿಸೆಂಬರ್ 2ರಂದು ಈ ಘಟನೆ ನಡೆದಿತ್ತು. ಬೆಳಗಾವಿ ಭಾರತನಗರದ ಬಾಕ್ಸೈಟ್ ರಸ್ತೆಯ ನಿವಾಸಿಗಳಾದ ಸಚಿನ್‌ ರಾಮಸಿಂಗ್‌ ಸಹಾನೆ (22), ಬಿಬಿಸರ ಪ್ರಸಾದ ಸಹಾನೆ (26) ಹಾಗೂ ಶುಭಂ ಶ್ರವಣ ಯಾದವ್‌ (23) ವಿರುದ್ಧ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಬಾಲಕಿಯ ಪೋಷಕರು ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.   ಈ ಕುರಿತು ಅಂದಿನ ಠಾಣಾಧಿಕಾರಿ ಎಸ್.ಎಸ್. ಮುತ್ತತ್ತಿ ಅವರು ಪ್ರಕರಣ ದಾಖಲಿಸಿಕೊಂಡು  ಪೊಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಿ.ಎಂ. ಪುಷ್ಪಲತಾ ಅವರು ಐದು ಸಾಕ್ಷಿಗಳ ಹೇಳಿಕೆಗಳು ಹಾಗೂ 20 ದಾಖಲೆಗಳ ಆಧಾರದ ಮೇಲೆ ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಆರೋಪಿಗಳಿಗೆ ತಲಾ ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು 10ರೂ. ಸಾವಿರ ದಂಡ ವಿಧಿಸಿದರು. ಇದಲ್ಲದೆ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ 1 ಲಕ್ಷ ರೂ. ಪರಿಹಾರ ಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಎಲ್.ವಿ. ಪಾಟೀಲ್‌ ವಾದ ಮಂಡಿಸಿದರು.

ವಾರ್ತಾ ಭಾರತಿ 4 Feb 2026 9:54 pm

ಕ್ರೆಡಿಟ್ ಕಾರ್ಡ್‌ನಿಂದ 2 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಫೆ.4: ಕ್ರೆಡಿಟ್ ಕಾರ್ಡ್‌ನ ಒಟಿಪಿಯನ್ನು ಪಡೆದು ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಸತೀಶ(41) ಎಂಬವರು 2025ರ ನ.10ರಂದು ಪಡೆದ ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸದೇ ಇಟ್ಟುಕೊಂಡಿದ್ದು, ಡಿ.20ರಂದು ಬ್ಯಾಂಕಿಗೆ ಹೋದಾಗ ಅವರ ಕ್ರೆಡಿಟ್ ಕಾರ್ಡ್‌ನಿಂದ 2ಲಕ್ಷ ರೂ. ಬಳಸಿರುವುದು ತಿಳಿದುಬಂತು. ಇವರು ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸದೇ ಹಾಗೂ ಕಾರ್ಡಿನ ಪಿನ್ ಜನರೇಟ್ ಮಾಡದೇ ಹಾಗೇ ಇಟ್ಟಿದ್ದರೂ ಆರೋಪಿಗಳು, ಆನ್‌ಲೈನ್ ಮೂಲಕ ಸತೀಶ್ ಅವರಿಗೆ ಗೊತ್ತಾಗದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್‌ನ ಒಟಿಪಿಯನ್ನು ಪಡೆದು 2 ಲಕ್ಷ ರೂ. ವಂಚಿಸಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 4 Feb 2026 9:51 pm

ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಕೋಟ, ಫೆ.4: ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಎಂಬಲ್ಲಿ ಫೆ.3ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಮಣೂರು ಗ್ರಾಮದ ಆನಂದ ಎಂಬವರ ಮಗ ನಟರಾಜ್ (36) ಎಂದು ಗುರುತಿಸಲಾಗಿದೆ. ಈಶ್ವರಿ ಎಂಬ ಬೋಟಿನಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಇವರು, ಮೀನುಗಾರಿಕೆ ನಿಮಿತ್ತ ಇತರ ಕೆಲಸಗಾರ ರೊಂದಿಗೆ ಬೋಟಿನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಊಟ ಮಾಡಿ ಕೈ ತೊಳೆಯುವಾಗ ನಟರಾಜ್ ಆಯತಪ್ಪಿ ನೀರಿ ಬಿದ್ದು ನಾಪತ್ತೆಯಾಗ್ದಿದ್ದು ಬೆಳಗ್ಗೆ ಇವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 4 Feb 2026 9:50 pm

ಸಾಲದ ಬಗ್ಗೆ ಪತ್ರ ಬರೆದಿಟ್ಟು ಯುವಕ ನಾಪತ್ತೆ

ಕಾರ್ಕಳ, ಫೆ.4: ಪ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಯಜ್ಞೇಶ್ ಮಾಧವ ಆಚಾರ್ಯ (39) ಎಂಬವರು ಫೆ.1ರಂದು ಸಂಜೆ ವೇಳೆ ಸಾಲದ ಬಗ್ಗೆ ಪತ್ರ ಬರೆದಿಟ್ಟು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 4 Feb 2026 9:49 pm

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಗಂಗೊಳ್ಳಿ, ಫೆ.4: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.3ರಂದು ಸಂಜೆ ವೇಳೆ ಸೇನಾಪುರ ಗ್ರಾಮದ ಬೆಳ್ಳಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಸೇನಾಪುರ ಗ್ರಾಮದ ಬೆಳ್ಳಾಡಿ ನಿವಾಸಿ ರಾಜೀವ ಶೆಟ್ಟಿ (58) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ತೆಂಗಿನ ಮರವನ್ನು ಹತ್ತಿ ಕಾಯಿಯನ್ನು ಕೀಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇರಿಂದ ಗಂಭೀರವಾಗಿ ಗಾಯಗೊಂಡ ಅವರು, ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 4 Feb 2026 9:39 pm

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘನೆ: 1 ವರ್ಷದಲ್ಲಿ 5 ಲಕ್ಷ ಕೇಸ್‌ ದಾಖಲು; 40 ಕೋಟಿ ರೂ ದಂಡ!

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2025 ರಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಕೇಸ್‌ಗಳು 5 ಲಕ್ಷಕ್ಕೂ ಅಧಿಕ ದಾಖಲಾಗಿವೆ. 2024 ರಲ್ಲಿ ಬರೋಬ್ಬರಿ 13 ಲಕ್ಷ ದಾಖಲಾಗಿದ್ದವು. ಈ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವರು ಸ್ಥಳೀಯ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಎಷ್ಟು ಸಂಗ್ರಹವಾಗಿದೆ? ಎಷ್ಟು ಬಾಕಿ ಇದೆ? ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 4 Feb 2026 9:34 pm

ಇರಾನ್ ಡ್ರೋನ್ ಉಡಾಯಿಸಿದ ಅಮೆರಿಕ ಸೇನೆ, ಶಾಂತಿ ಮಾತುಕತೆಗೆ ಅಂತಿಮ ಹಂತದ ಸಿದ್ಧತೆ | USA Military

ಅಮೆರಿಕ ಮತ್ತು ಇರಾನ್ ನಡುವೆ ಏನೂ ಸರಿ ಇಲ್ಲ ಎಂಬುದು ಪದೇ ಪದೇ ಗೊತ್ತಾಗುತ್ತಿದ್ದು, ಈ ಎರಡೂ ದೇಶಗಳು ಯಾವ ಕ್ಷಣದಲ್ಲಿ ಬೇಕಾದರೂ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ಯುದ್ಧ ಆರಂಭ ಮಾಡಬಹುದು. ಒಂದು ಕಡೆ ಅಮೆರಿಕ ತನ್ನ ದೊಡ್ಡ ಪ್ರಮಾಣದ ಸೇನೆಯನ್ನು ಇರಾನ್ ಜಲಗಡಿ ಸಮೀಪಕ್ಕೆ ನುಗ್ಗಿಸಿದೆ, ಇನ್ನೊಂದು ಕಡೆ ಇರಾನ್ ಕೂಡ ಈ ವಿಚಾರದಲ್ಲಿ

ಒನ್ ಇ೦ಡಿಯ 4 Feb 2026 9:34 pm

ವಿವಾದದ ಕೇಂದ್ರ ಬಿಂದುವಾಗುತ್ತಿರುವ ಉಪ್ಪೂರು ಬೀದಿ ನಾಯಿ ಶೆಲ್ಟರ್

ಸುಪ್ರೀಂ ಕೋರ್ಟಿನ ಕಟ್ಟುನಿಟ್ಟಿನ ಆದೇಶ ಜಾರಿಗೆ ಮುಂದಾದ ಉಡುಪಿ ಜಿಲ್ಲಾಡಳಿತ

ವಾರ್ತಾ ಭಾರತಿ 4 Feb 2026 9:27 pm

ಬೆಂಗಳೂರು–ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್: ಮಧ್ಯ ಹಾಗೂ ಉತ್ತರ ಕರ್ನಾಟಕಕ್ಕೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು, ಫೆಬ್ರವರಿ 4: ಇತ್ತೀಚೆಗಷ್ಟೇ ಕೇಂದ್ರ ಬಜೆಟ್‌ ಮಂಡನೆಯಾಗಿದ್ದು, ದೇಶಾದ್ಯಂತ 7 ಹೈ ಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ ಮಾಡಲಾಯಿತು. ಇನ್ನೂ ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಮಾರ್ಗ ದೊರಕುವ ಸೂಚನೆ ಸಿಕ್ಕಿದೆ. ಇದು ಬಂದ್ರೆ, ಯಾವೆಲ್ಲಾ ಜಿಲ್ಲೆಗಳಿಗೆ ಅನುಕೂಲ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬೆಂಗಳೂರು ಮತ್ತು ಪುಣೆ ನಡುವೆ

ಒನ್ ಇ೦ಡಿಯ 4 Feb 2026 9:22 pm