Hosapete | 13 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪಿಂಚಣಿದಾರರಿಂದ ಮನವಿ
ಹೊಸಪೇಟೆ / ವಿಜಯನಗರ: ಅಖಿಲ ಭಾರತ ರಾಜ್ಯ ಸರ್ಕಾರಿ ಪಿಂಚಣಿದಾರರ ಫೆಡರೇಶನ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟದ ಸದಸ್ಯರು ಹೊಸಪೇಟೆಯ ತಹಶೀಲ್ದಾರರ ಮುಖಾಂತರ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು. ಪಿಂಚಣಿದಾರರ ಹಿತಾಸಕ್ತಿಗಾಗಿ ಒಟ್ಟು 13 ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ ಹಣಕಾಸು ಮಸೂದೆ (ಮಾನ್ಯತಾ ಕಾಯಿದೆ) 2025 ರದ್ದುಪಡಿಸುವುದು ಹಾಗೂ ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಲಾಗಿದೆ. ಇದರ ಜೊತೆಗೆ ಎಲ್ಲಾ ರಾಜ್ಯಗಳಲ್ಲಿ ತುಟ್ಟಿಭತ್ತೆ (ಡಿಎ) ಯನ್ನು ಕೇಂದ್ರ ಪಿಂಚಣಿದಾರರ ಮಟ್ಟಕ್ಕೆ ಏರಿಸುವುದು, 31 ಡಿಸೆಂಬರ್ 2025ರೊಳಗೆ ನಿವೃತ್ತರಾದವರಿಗೆ ಎಂಟನೇ ವೇತನ ಆಯೋಗದ ಸೌಲಭ್ಯ ವಿಸ್ತರಿಸುವುದು, ಪಿಂಚಣಿ ಕಮ್ಯುಟೇಶನ್ ಕಡಿತಾವಧಿಯನ್ನು 11 ವರ್ಷಗಳಿಗೆ ಸೀಮಿತಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲಾಗಿದೆ. ಕೋವಿಡ್-19 ಅವಧಿಯ 18 ತಿಂಗಳ ಡಿಎ ಬಾಕಿಯನ್ನು ಬಡ್ಡಿಯೊಂದಿಗೆ ಪಾವತಿಸುವುದು, ನ್ಯಾಯಾಲಯ ತೀರ್ಪುಗಳನ್ನು ಎಲ್ಲಾ ನೌಕರರಿಗೆ ಅನ್ವಯಿಸುವುದು, ರೈಲು, ವಿಮಾನ, ವೋಲ್ವೋ ಹಾಗೂ ಎಸಿ ಬಸ್ಗಳಲ್ಲಿ ಪ್ರಯಾಣ ರಿಯಾಯಿತಿಗಳನ್ನು ಮರುಸ್ಥಾಪಿಸುವುದು, ಪಿಂಚಣಿದಾರರಿಗೆ ಸಮಗ್ರ ಆರೋಗ್ಯ ವಿಮೆ ನೀಡುವಂತೆ ಕೂಡ ಮನವಿ ಮಾಡಲಾಗಿದೆ. ವಯಸ್ಸಿನ ಆಧಾರದ ಮೇಲೆ ಪಿಂಚಣಿಯಲ್ಲಿ ಹಂತ ಹಂತವಾಗಿ ಹೆಚ್ಚಳ ನೀಡುವಂತೆ, 65 ವರ್ಷಗಳ ನಂತರ 10%ರಿಂದ 95 ವರ್ಷಗಳ ನಂತರ ಶೇ.100ರವರೆಗೆ ಹೆಚ್ಚಳ ನೀಡಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸುವುದು ಹಾಗೂ ಹೊಸ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುವಂತೆ ಕೂಡ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಅಧ್ಯಕ್ಷ ಬಿಸಾಟಿ ತಾಯಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಪತ್ತಾರ್ ಸೇರಿದಂತೆ ಹನುಮಂತಪ್ಪ ಗೌಳಿ, ಪಿ.ಲೀಲಾ, ನೀಲಂ ಹಾಗೂ ಇತರರು ಉಪಸ್ಥಿತರಿದ್ದರು. ಪಿಂಚಣಿದಾರರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.
ಕೇರಳ| ತ್ರಿಶೂರ್ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಕನಿಷ್ಠ ಐವರು ಮೃತ್ಯು, 40ಕ್ಕೂ ಅಧಿಕ ಜನರಿಗೆ ಗಾಯ
ತ್ರಿಶೂರ್: ತ್ರಿಶೂರ್ನ ಮುಂಡತಿಕ್ಕೋಡುವಿನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತ್ರಿಶೂರ್ ಪೂರಂ ಹಬ್ಬಕ್ಕಾಗಿ ಪಟಾಕಿ ತಯಾರಿಸುತ್ತಿದ್ದಾಗ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಕಾರ್ಮಿಕರಾಗಿದ್ದಾರೆ. ಗಾಯಾಳುಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಣಿಪ್ಪಾಡಿ ಕನ್ಸ್ಟ್ರಕ್ಷನ್ ಮಾಲಕ ಎ.ಆರ್.ಎಸ್. ಮಾಣಿಪ್ಪಾಡಿ ನಿಧನ
ಮಂಗಳೂರು: ಮಾಣಿಪ್ಪಾಡಿ ಕನ್ಸ್ಟ್ರಕ್ಷನ್ನ ಮಾಲಕ, ಹಿರಿಯ ಇಂಜಿಜಿನಿಯರ್ ಹಾಗೂ ಗುತ್ತಿಗೆದಾರರಾಗಿದ್ದ ಎ.ಆರ್.ಎಸ್. ಮಾಣಿಪ್ಪಾಡಿ (89) ಎ.19ರಂದು ನಿಧನ ಹೊಂದಿದರು. ಪತ್ನಿ ಹಾಗೂ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಶಾನವಾಝ್ ಮಾಣಿಪ್ಪಾಡಿ ಮತ್ತು ಉದ್ಯಮಿ ಜಹೀರ್ ಶಾ ಮಾಣಿಪ್ಪಾಡಿ ಅವರನ್ನು ಮೃತರು ಅಗಲಿದ್ದಾರೆ. ಕಣ್ಣೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಅವರು ಮಂಗಳೂರು ಹಾರ್ಬರ್ ಪ್ರಾಜೆಕ್ಟ್ ಹಾಗೂ ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದಲ್ಲಿ ಸೇವೆ ಒದಗಿಸಿದ್ದರು. ದ.ಕ.ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮತ್ತು 18 ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಸಮಾಜ ಸೇವಕರೂ ಆಗಿದ್ದ ಮಾಣಿಪ್ಪಾಡಿ ಹಲವು ಸಂಘ ಸಂಸ್ಥೆಗಳಿಗೆ ನೆರವು ನೀಡುತ್ತಾ, ಯುವಕರಿಗೆ ಮಾರ್ಗದರ್ಶಿಯಾಗಿದ್ದರು.
► ಗುಂಡ್ಲುಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ
ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್ ಗೆ ವಿರೋಧ:ಸಿಎಂ ಸಿದ್ದರಾಮಯ್ಯ ಸಷ್ಟನೆ
[…] The post ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್ ಗೆ ವಿರೋಧ:ಸಿಎಂ ಸಿದ್ದರಾಮಯ್ಯ ಸಷ್ಟನೆ first appeared on Vistara News .
ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
[…] The post ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ first appeared on Vistara News .
ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಖರ್ಗೆ; ಕ್ಷಮೆ ಯಾಚನೆಗೆ ಯಡಿಯೂರಪ್ಪ ಆಗ್ರಹ
[…] The post ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಖರ್ಗೆ; ಕ್ಷಮೆ ಯಾಚನೆಗೆ ಯಡಿಯೂರಪ್ಪ ಆಗ್ರಹ first appeared on Vistara News .
ಅಫಜಲಪುರ | ವಕೀಲರ ಸಂಘದ ಅಧ್ಯಕ್ಷರಾಗಿ ಅರ್ಜುನ ಕೇರೂರ ಆಯ್ಕೆ
ಅಫಜಲಪುರ: ತಾಲೂಕು ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅರ್ಜುನ್ ಕೇರೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್.ಹಿರೇಮಠ ಘೋಷಣೆ ಮಾಡಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಒಂದು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅರ್ಜುನ್ ಕೇರೂರ ಅವಿರೋಧವಾಗಿ ಆಯ್ಕೆಗೊಂಡರು. ಘೋಷಣೆ ಆಗುತ್ತಿದಂತೆ ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅರ್ಜುನ್ ಕೇರೂರ ಮಾತನಾಡಿ, ನನ್ನ ಮೇಲೆ ಭರವಸೆ ಇಟ್ಟು ಹಿರಿಯರು ಮತ್ತು ಯುವಕರು ಒಂದಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಚಿರಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ವಕೀಲರ ಸಂರಕ್ಷಣೆ ಮತ್ತು ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ವಕೀಲರಾದ ಕೆ.ಜಿ.ಪೂಜಾರಿ, ವಾಸೀಮ್ ಜಾಗಿರದಾರ, ನಾಗೇಶ್ ಕೊಳ್ಳಿ, ಎಸ್.ಜಿ.ಹುಲ್ಲೂರ, ಮಂಜುನಾಥ್ ಕೊಳ್ಳಿ, ಬಿ.ಎಚ್.ದಾನಮಗುಡಿ, ಎಸ್.ಟಿ.ರಾಠೋಡ, ಎಸ್.ಜೆ.ಗುತ್ತೇದಾರ, ರಾಜೇಂದ್ರ ಸರ್ದಾರ್, ಎಂ.ಕೆ.ಪಟೇಲ್, ಅನೀತಾ ದೊಡ್ಮನಿ, ಪಿ.ಬಿ.ಪಾಟೀಲ್, ಅನೀಲ ಜಮಾದಾರ, ದತ್ತು ಪೂಜಾರಿ, ಎಂ.ಎಂ.ಸುತಾರ, ಸಂತೋಷ ಸುಜುಳೆ, ಡಿ.ಎಸ್.ಕುಂಬಾರ, ಗುರುದೇವ ಪೂಜಾರಿ, ಗೊಲ್ಲಾಳ್ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Kalaburagi | ಎ.22 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯ ಕರುಣೇಶ್ವರ ನಗರ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎ.22ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿರ್ವಹಣಾ ಕಾರ್ಯಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರುಣೇಶ್ವರ ನಗರ ಫೀಡರ್ : ಸದಾಶಿವನಗರ, ನವಜೀವನ ಸೊಸೈಟಿ, ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರ ನಗರ, ದೇವಾನಗರ, ಪಿ&ಟಿ ಕಾಲೋನಿ, ಎಸ್ಬಿಐ ಕಾಲೋನಿ, ಗಣೇಶ ನರ್ಸಿಂಗ್ ಹೋಮ್ ಏರಿಯಾ, ಯರಗೋಳ ಕಲ್ಯಾಣ ಮಂಟಪ್, ಕರುಣೇಶ್ವರ ನಗರ ರಾಜ್ ಮಹಲ್ ಲೇಔಟ್, ಶ್ರೀಹರಿ ನಗರ, ಮಾನ್ಕರ ಲೇಔಟ್, ಸಾಯಿ ಮಂದಿರ ಏರಿಯಾ ಆನಂದೇಶ್ವರ ಕಾಲೋನಿ ಡಾಮಿನಂಟ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Chittapur | ಸಮಾಜ ಸೇವೆಯಿಂದಲೇ ಜೀವನ ಸಾರ್ಥಕ : ನಾಗಯ್ಯಸ್ವಾಮಿ ಹಿರೇಮಠ
ಶಂಕರಾಚಾರ್ಯರ ಜಯಂತಿ ಆಚರಣೆ
ದಲಿತರಿಗೆ ಒಳ ಮೀಸಲಾತಿ: ಏ.24ರಂದು ವಿಶೇಷ ಸಂಪುಟ ಸಭೆ
[…] The post ದಲಿತರಿಗೆ ಒಳ ಮೀಸಲಾತಿ: ಏ.24ರಂದು ವಿಶೇಷ ಸಂಪುಟ ಸಭೆ first appeared on Vistara News .
Kalaburagi | ಪುಸ್ತಕ ಆಯ್ಕೆ ಸಮಿತಿಗೆ ಪ್ರೊ.ಅರುಣ್ ಜೋಳದಕೂಡ್ಲಿಗಿ ನೇಮಕ
ಕಲಬುರಗಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಅಯ್ಕೆ ಸಮಿತಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಅಂಕಣಕಾರ ಪ್ರೊ.ಅರುಣ್ ಜೋಳದಕೂಡ್ಲಿಗಿ ಅವರನ್ನು ನೇಮಕ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ. ಜಾನಪದ ತಜ್ಞರಾಗಿರುವ ಅರುಣ್ ಜೋಳದಕೂಡ್ಲಿಗಿ ಅವರು ಹಲವು ಕೃತಿಗಳನ್ನು ರಚಿಸಿದ್ದು, ಕಲಬುರಗಿ ಕಂದಾಯ ವಿಭಾಗದಿಂದ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಈ ನೂತನ ಸಮಿತಿಯ ಕಾಲಾವಧಿಯು ಎರಡು ವರ್ಷ ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವ ತನಕ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Yadgiri | ಸಿಇಟಿ-2026 ಪರೀಕ್ಷೆ : ನಿಷೇಧಾಜ್ಞೆ ಜಾರಿ
ಯಾದಗಿರಿ: ಜಿಲ್ಲೆಯಲ್ಲಿ 2026ರ ಎ.23 ಮತ್ತು 24ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)-2026 ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ. ದಂಡ ಪ್ರಕ್ರಿಯೆ ಸಂಹಿತೆ (ಬಿಎನ್ಎಸ್ಎಸ್) 2023ರ ಕಲಂ 163 ಅನ್ವಯ ಈ ಆದೇಶ ಜಾರಿಯಾಗಿದ್ದು, ಉಕ್ತ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಯಾದಗಿರಿ ತಾಲೂಕಿನ ಒಟ್ಟು 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಪ್ರತಿಯೊಂದು ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಎಸ್ಟಿಡಿ, ಮೊಬೈಲ್ ಸೇವೆಗಳು, ಪೇಜರ್, ಜೆರಾಕ್ಸ್, ಟೈಪಿಂಗ್ ಸೆಂಟರ್, ಪುಸ್ತಕ ಮಳಿಗೆಗಳು ಸೇರಿದಂತೆ ಯಾವುದೇ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿಪಡಿಸಿದ ಅಧಿಕಾರಿಗಳು ಮತ್ತು ಶಿಕ್ಷಕರನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಅದೇ ರೀತಿ 200 ಮೀಟರ್ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳನ್ನು ಹೊತ್ತು ಸಂಚರಿಸುವುದಕ್ಕೂ ನಿಷೇಧ ವಿಧಿಸಲಾಗಿದೆ. ಆದರೆ ಮದುವೆ, ಶವ ಸಂಸ್ಕಾರ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜವಾರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರವು ಬಾಲಾಜಿ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ಹಿನ್ನೆಲೆ, ಉಕ್ತ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಯಾವುದೇ ಸಭೆ, ಸಮಾರಂಭ ಹಾಗೂ ಧ್ವನಿವರ್ಧಕ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಿ ನುಡಿದಂತೆ ನಡೆದಿದ್ದೇವೆ : ಡಿ.ಕೆ.ಶಿವಕುಮಾರ್
► 10 ದಿನದಲ್ಲಿ ಮೇಕೆದಾಟು ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ► ಗುಂಡ್ಲುಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ
“ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್ ಪ್ಲಾನ್: ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ
[…] The post “ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್ ಪ್ಲಾನ್: ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ first appeared on Vistara News .
ಭಾರತದಲ್ಲಿ ಆರ್ದ್ರತೆಯ ಹವೆ ಶಾಖದ ಅಲೆಗಳಿಗಿಂತಲೂ ಹೆಚ್ಚು ಅಪಾಯಕಾರಿ ಏಕೆ?
ಭಾರತದಲ್ಲಿ ಶಾಖದ ಬಗ್ಗೆ ಹೇಳುವಾಗ ಆರ್ದ್ರತೆಯ ಅಂಶವನ್ನು ಹೆಚ್ಚು ಗಮನಿಸಬೇಕಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ 2026ರ ಬೇಸಗೆ ಆರಂಭವಾಗುತ್ತಿದ್ದಂತೆ ಎಪ್ರಿಲ್ ಮತ್ತು ಜೂನ್ ನಡುವೆ ಪೂರ್ವ, ಮಧ್ಯ ಮತ್ತು ಪರ್ಯಾಯ ದ್ವೀಪ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳ ದಿನಗಳ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಶಾಖದ ಹೊಸ ದಾಖಲೆಗಳನ್ನು ಎದುರಿಸಲು ಸಿದ್ಧರಾಗಬೇಕಿದೆ. ಮಧ್ಯ ಭಾರತದಲ್ಲಿ ಈಗಾಗಲೇ 42-45 ಡಿಗ್ರಿ ಸೆಲ್ಷಿಯಸ್ ತಲುಪಿರುವ ಬಗ್ಗೆ ಸುದ್ದಿಯಾಗುತ್ತಿದೆ. ಆದರೆ ಭಾರತದಲ್ಲಿ ಶಾಖದ ಬಗ್ಗೆ ಹೇಳುವಾಗ ಆರ್ದ್ರತೆಯ ಅಂಶವನ್ನು ಹೆಚ್ಚು ಗಮನಿಸಬೇಕಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಶಾಖಕ್ಕಿಂತ ಆರ್ದ್ರತೆ ಏಕೆ ಹೆಚ್ಚು ಅಪಾಯಕಾರಿ? ಮಾನವ ದೇಹವು ಶಾಖದ ವಿರುದ್ಧ ಇರುವ ಪ್ರಾಥಮಿಕ ಅಸ್ತ್ರವೆಂದರೆ ಬೆವರು. ಚರ್ಮದಿಂದ ಬೆವರು ಆವಿಯಾದಾಗ ತನ್ನೊಂದಿಗೆ ಶಾಖವನ್ನು ಒಯ್ಯುತ್ತದೆ ಮತ್ತು ಮಾನವ ದೇಹವನ್ನು ತಂಪಾಗಿಸುತ್ತದೆ. ದಿಲ್ಲಿ ಮತ್ತು ರಾಜಸ್ಥಾನದಗಳಲ್ಲಿ ಎದುರಿಸುವ ಶುಷ್ಕ ಶಾಖದಲ್ಲಿ ಈ ವ್ಯವಸ್ಥೆ ಹಚ್ಚು ನಿಯಮಿತವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಲಕ್ಷಾಂತರ ಮಂದಿ ತಾಪಮಾನದ ವಿರುದ್ಧ ಬದುಕಲು ಸಾಧ್ಯವಾಗುತ್ತದೆ. ಆದರೆ ಹವಾಮಾನ ಹೆಚ್ಚಯ ಆರ್ದ್ರವಾದಾಗ ಪರಿಸ್ಥಿತಿ ಹೆಚ್ಚು ಜಟಿಲವಾಗುತ್ತದೆ. ಗಾಳಿಯಲ್ಲಿ ಈಗಾಗಲೇ ತೇವಾಂಶ ತುಂಬಿದ್ದರೆ, ಬೆವರು ಆವಿಯಾಗುವುದಿಲ್ಲ. ಹೀಗಾಗಿ ತಂಪಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹೃದಯ ಬಡಿತ, ಅಧಿಕ ರಕ್ತದೊತ್ತಡ ಮತ್ತು ಕೆಲವು ವಿಪರೀತ ಸಂದರ್ಭಗಳಲ್ಲಿ ಅಂಗಾಂಗ ವೈಫಲ್ಯ ಮತ್ತು ಸಾವೂ ಸಂಭವಿಸಬಹುದು. ಇಂತಹ ಹವಾಮಾನದ ಬೆದರಿಕೆಯನ್ನು ವೆಟ್-ಬಲ್ಬ್ ತಾಪಮಾನ (WBT) ಬಳಸಿ ಅಳೆಯಲಾಗುತ್ತದೆ. ಇದು ಗಾಳಿಯ ಉಷ್ಣತೆಯ ಜೊತೆಗೆ ತೇವಾಂಶವನ್ನೂ ಲೆಕ್ಕ ಹಾಕುತ್ತದೆ. ದಶಕಗಳಿಂದ 35 ಡಿಗ್ರಿ ಸೆಲ್ಸಿಯಸ್ WBT ಇದ್ದರೆ ಬದುಕಬಹುದು ಎಂದು ಊಹಿಸಲಾಗಿತ್ತು. ಆದರೆ ಅದಿ ನೈಜ ದತ್ತಾಂಶವಲ್ಲ. ಆದರೆ ಪೆನ್ ಸ್ಟೇಟ್ ಹ್ಯೂಮನ್ ಎನ್ವಿರಾನ್ಮೆಂಟಲ್ ಏಜ್ ಥ್ರೆಶಶಹೋಲ್ಡ್ ಪ್ರಾಜೆಕ್ಟ್ ಅಧ್ಯಯನ ಆರ್ದ್ರತೆಯ ನಿಜವಾದ ಸಮಸ್ಯೆಯನ್ನು ಜನರ ಮುಂದಿಟ್ಟಿದೆ. ಈ ಅಧ್ಯಯನದಲ್ಲಿ ಮಾನವ ಸ್ವಯಂಸೇವಕರು ಪರಿಸರ ಚೇಂಬರ್ಗಳಲ್ಲಿ ಸಣ್ಣ ತಾಪಮಾನ ಟ್ರ್ಯಾಕಿಂಗ್ ಸೆನ್ಸರ್ ನುಂಗುವಂತೆ ಮಾಡಿ ನಡೆಸಿದ ಅಧ್ಯಯನದಲ್ಲಿ ಬೇರೆಯೇ ವಿವರ ತಿಳಿದುಬಂತು. ಸ್ವಯಂಸೇವಕರು ನಡಿಗೆ ಅಥವಾ ಸೈಕ್ಲಿಂಗ್ ನಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಫಲಿತಾಂಶ ಬಹಳ ಆತಂಕಕಾರಿಯಾಗಿದ್ದವು. ಯುವ, ಫಿಟ್, ಆರೋಗ್ಯವಂತ ವಯಸ್ಕರು ಸಹ ದೇಹದ ಪ್ರಮುಖ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕೇವಲ 31 ಡಿಗ್ರಿ ಸೆಲ್ಸಿಯಸ್ WBT ನಲ್ಲಿ ಕಳೆದುಕೊಳ್ಳಲು ಪ್ರಾರಂಭಿಸಿದರು. ಇದು ಹಿಂದೆ ಊಹಿಸಲಾದ ಸುರಕ್ಷತಾ ಮಿತಿಗಿಂತ ಕಡಿಮೆ. ಅಂದರೆ 38 ಡಿಗ್ರಿ ಸೆಲ್ಸಿಯಸ್ ಜೊತೆಗೆ ಶರ 60ರಷ್ಟು ಆರ್ದ್ರತೆಯು ಮಾನವ ದೇಹವನ್ನು ಅಪಾಯಕ್ಕೆ ತಳ್ಳಬಹುದು. ವಯಸ್ಸಾದವರಿಗೆ, ಔಷಧಿ ಸೇವಿಸುವವವರಿಗೆ ಅಥವಾ ಆರೋಗ್ಯ ಸಮಸ್ಯೆಗಳಿರುವ ಯಾರಿಗೇ ಆದರೂ ಅಪಾಯದ ಮಿತಿ ಇನ್ನೂ ಕಡಿಮೆ. ನಮಗೆ ಗರಿಷ್ಠ ತಾಪಮಾನ ಮತ್ತು ಆರ್ದ್ರತೆಯ ಮಿತಿ ಗೊತ್ತಿದ್ದರೆ ಶಾಖದ ಅಲೆಗಳಿಗೆ ಜನರನ್ನು ಸಿದ್ಧಗೊಳಿಸಬಹುದು ಅಂದು ಅಧ್ಯಯನ ಹೇಳಿದೆ. “ಭಾರತದ ಕರಾವಳಿಗಳ ವಿಷಯಕ್ಕೆ ಬಂದರೆ ಮುಂಗಾರು ಪೂರ್ವ ತಿಂಗಳುಗಳಲ್ಲಿ ಸಂಯೋಜನೆಯು ಅಪೂಪವಲ್ಲ. ಕ್ಲೈಮೇಟ್ ಡೈನಾಮಿಕ್ಸ್ನಲ್ಲಿ ಪ್ರಕಟವಾದ ರೀಡಿಂಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ತಿಳಿಸಿರುವ ಪ್ರಕಾರ ತೇವಾಂಶವುಳ್ಳ ಶಾಖದ ಅಲೆಗಳಿ ಭಾರತವನ್ನು ಹೇಗೆ ಹೊಡೆಯುತ್ತವೆ ಎಂಬುದನ್ನು ವಿವರಿಸಲು 80 ವರ್ಷಗಳಿಗೂ ಹೆಚ್ಚಿನ ಹವಾಮಾನ ದತ್ತಾಂಶ ಬಳಸಲಾಗಿದೆ. “ಭಾರತದ ಬೇಸಗೆಯ ಋತು ಗಮನಿಸಿದರೆ ಒಣ ಶಾಖದ ಅಲೆಗಳ ಬಗ್ಗೆ ಜನರು ಹೆಚ್ಚು ತಿಳಿದಿರುವುದನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ತೇವಾಂಶವುಳ್ಳ ಶಾಖವು ಕಡಿಮೆ ಪರಿಚಿತವಾಗಿದೆ. ಆದ್ದರಿಂದ ಹೆಚ್ಚು ಅಪಾಯಕಾರಿ” ಎಂದು ಅಧ್ಯಯನ ನೇತೃತ್ವ ವಹಿಸಿದ ಅಕ್ಷಯ್ ದಿಯೋರಾಸ್ ಹೇಳಿದ್ದಾರೆ. 1981ರಿಂದ 2020ವರೆಗಿನ ದತ್ತಾಂಶ ವಿಶ್ಲೇಷಿಸಿರುವ ಐಎಂಡಿ (ಭಾರತೀಯ ಹವಾಮಾನ ಇಲಾಖೆ) ನೇತೃತ್ವದ ಅಧ್ಯಯನದ ಪ್ರಕಾರ ಕರಾವಳಿಯಲ್ಲಿ ಎಲ್ಲಾ ಋತುಗಳಲ್ಲೂ ಆರ್ದ್ರತೆ-ತಾಪಮಾನ ಹೆಚ್ಚಾಗಿದೆ. ಪರಿಹಾರದ ಮೂಲವೆಂದು ತಿಳಿಯಲಾದ ಮುಂಗಾರು ಮಳೆಯೇ ಅಪಾಯದ ಪ್ರಮುಖ ಚಾಲಕವಾಗಿದೆ. ಮುಂಗಾರು ಸಕ್ರಿಯವಾಗಿರುವಾಗ ಉತ್ತರ ಭಾರತದಲ್ಲಿ ತೇವಾಂಶವುಳ್ಳ ಶಾಖದ ಅಪಾಯವು ಸಾಮಾನ್ಯ ಮಟ್ಟಕ್ಕಿಂತ ಶೇ 125ರಷ್ಟು ಹೆಚ್ಚಾಗುತ್ತದೆ. ಮುಂಗಾರು ವಿರಮಿಸಿದಾ ಅಪಾಯ ದಕ್ಷಿಣಕ್ಕೆ ಬದಲಾಗುತ್ತದೆ. ಮೋಡದ ಹೊದಿಕೆ ತೆಳುವಾಗಿ ತೇವಾಂಶ ಮುಂದುವರಿದು ಕೇರಳ ಸೇರಿದಂತೆ ದಕ್ಷಿಣದ ಭಾಗಗಳು ಹೆಚ್ಚು ಬಳಲಬಹುದು. ಅಧ್ಯಯನದ ಪ್ರಕಾರ ಶತಮಾನದ ಅಂತ್ಯದ ವೇಳೆಗೆ ಸುಮಾರು ಶೇ 70ರಷ್ಟು ಭಾರತೀಯರು 32 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ಆರ್ದ್ರತೆ-ತಾಪಮಾನಕ್ಕೆ ಒಡ್ಡಿಕೊಳ್ಳಬಹುದು. ಆ ಸನ್ನಿವೇಶದಲ್ಲಿ ಜನಸಂಖ್ಯೆಯ ಶೇ 2ರಷ್ಟು ಮಂದಿ 35 ಡಿಗ್ರಿ ಸೆಲ್ಸಿಯಸ್ ಮಿತಿ ದಾಟಬಹುದು ಮತ್ತು ಅದು ಬಹುತೇಕ ಮಾರಕವೆಂದು ಪರಿಗಣಿಸಲಾಗಿದೆ. ಈಗಾಗಲೇ ಐಎಂಡಿ ಏಪ್ರಿಲ್ನಿಂದ ಜೂನ್ವರೆಗೆ ಪೂರ್ವ, ಮಧ್ಯ, ವಾಯುವ್ಯ ಮತ್ತು ಆಗ್ನೇಯ ಪರ್ಯಾಯ ದ್ವೀಪಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳ ಮುನ್ಸೂಚನೆ ನೀಡಿದೆ. ಈ ಬಾರಿ 2024ರ ದಾಖಲೆ ಬೇಸಗೆಗಿಂತ ಹೆಚ್ಚು ಬಿಸಿಯಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ ಜಲಾಶಯದ ನಾಲೆಗಳ ಆಧುನಿಕರಣ ಕಾಮಗಾರಿ ಕುರಿತು ಜಿಲ್ಲಾ ಕಾಂಗ್ರೆಸ್ನ ಕೆಲ ಸ್ಥಳೀಯ ಮುಖಂಡರು ಸತ್ಯಾಸತ್ಯತೆ ತಿಳಿದುಕೊಂಡು ಹೇಳಿಕೆ ನೀಡುವುದು ಒಳಿತು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಾಂಗ್ರೆಸ್ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಹೇಳಿಕೆ ನೀಡುತ್ತಿರುವುದು ಜಿಲ್ಲೆಯ ಜನರನ್ನು ದಾರಿ ತಪ್ಪಿಸುವಂತಿದೆ ಎಂದು ಆರೋಪಿಸಿದರು. ಹತ್ತಿಕುಣಿ ಜಲಾಶಯ ವ್ಯಾಪ್ತಿಯ ರೈತರ ಬಹುದಿನಗಳ ಬೇಡಿಕೆಯ ಮೇರೆಗೆ ಶಾಸಕ ಶರಣಗೌಡ ಕಂದಕೂರ ಅವರು ಕೇಂದ್ರ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ಕೇಂದ್ರ ಸರ್ಕಾರದಿಂದ 72 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಮಹತ್ವದ ಕಾರ್ಯಕ್ಕೆ ಇವರಿಬ್ಬರೇ ಪ್ರಮುಖ ಕಾರಣರಾಗಿದ್ದಾರೆ ಎಂದು ಕಟಕಟಿ ಹೇಳಿದರು. ಕೇಂದ್ರದಿಂದ ಅನುದಾನ ಮಂಜೂರಾದ ಬಳಿಕ ಅದನ್ನು ಜಾರಿಗೆ ತರುವುದು ರಾಜ್ಯ ಸರ್ಕಾರದ ಕರ್ತವ್ಯ. ಅದರಂತೆ ಹತ್ತಿಕುಣಿ ಜಲಾಶಯದ ನಾಲೆಗಳ ಆಧುನಿಕರಣಕ್ಕೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕಾರ್ಯದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರ ಪಾತ್ರವನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಈ ಕಾಮಗಾರಿಗೆ ಸಂಬಂಧವಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಕೆಲವರು ಉಲ್ಲೇಖಿಸುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಿಂದ ಸಮರ್ಪಕ ಅನುದಾನ ನೀಡಲಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಬೊರ್ವೆಲ್ ಕಾಮಗಾರಿಗಳ ಬಿಲ್ಗಳೂ ಪಾವತಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸತ್ಯವನ್ನು ಮರೆಮಾಚಿ ಸುಳ್ಳು ಪ್ರಚಾರ ಮಾಡುವುದು ತಪ್ಪು ಎಂದು ಅವರು ಆರೋಪಿಸಿ, ತಪ್ಪು ಮಾಹಿತಿ ಹರಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜ್ಞಾನವು ಒಂದು ಕಿವಿಯಿಂದ ಒಳಹೋಗಿ ಮತ್ತೊಂದು ಕಿವಿಯಿಂದ ಹೊರಗೆ ಹೋಗಿರುವಂತಿದೆ ಎಂದು ವ್ಯಂಗ್ಯವಾಡಿದ ಅಖಿಲೇಶ್ ಯಾದವ್
ಗೆಲುವಿನ ಗೆರೆ ದಾಟುವ ಮುನ್ನವೇ ಸಂಭ್ರಮಿಸಬಾರದು ಎಂಬುದಕ್ಕೆ ಅಮೆರಿಕದ ಡೆಲಾವರ್ ಮ್ಯಾರಥಾನ್ ಸ್ಪರ್ಧೆಯ ಕ್ಷಣಗಳು ಸಾಕ್ಷಿಯಾಗಿದೆ. ಅಂತಿಮ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಓಟಗಾರನೊಬ್ಬ ವೇಗ ತಗ್ಗಿಸಿ ಸಂಭ್ರಮಿಸುತ್ತಿದ್ದಾಗ, ಮಿಂಚಿನ ವೇಗದಲ್ಲಿ ಆತನನ್ನು ದಾಟಿದ ಸಹಸ್ಪರ್ಧಿ ಅಂತಿಮ ಸೆಕೆಂಡಿನಲ್ಲಿ ಜಯ ಕಸಿದುಕೊಂಡಿದ್ದಾನೆ. ಎರಡನೇ ಸ್ಥಾನಿ ತನ್ನ ಮೂರ್ಖತನಕ್ಕಾಗಿ ನಿರಾಸೆಗೊಂಡಿದ್ದಾನೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಕ್ರೀಡೆಯಲ್ಲಿ ಅಂತಿಮ ಕ್ಷಣದವರೆಗಿನ ಏಕಾಗ್ರತೆ ಇಕಬೇಕು ಮತ್ತು ಸಹಸ್ಪರ್ಧಿಯನ್ನು ಕಡಿಮೆ ಅಂದಾಜಿಸಬಾರದು ಎಂಬ ದೊಡ್ಡ ಪಾಠವನ್ನು ಕಲಿಸಿದೆ.
ಜೆಡಿಎಸ್ ಗೆ ಮರಳುತ್ತೀರಾ?; ಸಚಿವ ಜಮೀರ್ ಅಹಮದ್ ಕೊಟ್ಟ ಉತ್ತರ ಏನು?
[…] The post ಜೆಡಿಎಸ್ ಗೆ ಮರಳುತ್ತೀರಾ?; ಸಚಿವ ಜಮೀರ್ ಅಹಮದ್ ಕೊಟ್ಟ ಉತ್ತರ ಏನು? first appeared on Vistara News .
ಮನೆ ನೆನಪಾಗಲಿಲ್ವಾ?, ಮೊದಲು ಹೋಗಿ ಹೇರ್ ಕಟ್ ಮಾಡಿಸ್ಕೋ; ಸಿರಾಜ್-ಬುಮ್ರಾ ತಮಾಷೆಯ ಸಂಭಾಷಣೆ ಭಾರಿ ವೈರಲ್
IPL 2026: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 20) ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ನಡುವೆ ನಡೆದ ತಮಾಷೆ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್
ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್ ಎಸ್ ಭೋಸರಾಜು
[…] The post ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್ ಎಸ್ ಭೋಸರಾಜು first appeared on Vistara News .
Kanakagiri | ಜ್ಞಾನವೇ ಮುಕ್ತಿಯ ಮಾರ್ಗ : ಕನಕಪ್ಪ ನಾಯಕ
ಶಂಕರಾಚಾರ್ಯರ ಜಯಂತಿ ಆಚರಣೆ
ಕಿಯೋನಿಕ್ಸ್ನಲ್ಲಿ ಉದ್ಯೋಗವಕಾಶ; ಅರ್ಜಿ ಆಹ್ವಾನ
ಇಂಜಿನಿಯರಿಂಗ್, ಎಂಸಿಎ ಹಾಗೂ ಎಂಬಿಎ ಮುಗಿಸಿ, ಸರ್ಕಾರಿ ಯೋಜನೆಗಳ ಖರೀದಿ ಮತ್ತು ಸಂಗ್ರಹಣಾ ವಿಭಾಗದಲ್ಲಿ ದಶಕದ ಅನುಭವ ಹೊಂದಿರುವ ವೃತ್ತಿಪರರಿಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ‘ಕಿಯೋನಿಕ್ಸ್’ ಉದ್ಯೋಗಾವಕಾಶ ಒದಗಿಸಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತವು (ಕಿಯೋನಿಕ್ಸ್) ತನ್ನ ಸಂಗ್ರಹಣಾ ವಿಭಾಗವನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ‘ಸಂಗ್ರಹಣೆ ಸಲಹೆಗಾರ”ರ ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಮೇ 4ರೊಳಗೆ ಇಮೇಲ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಇಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು: info@keonics.com ಹುದ್ದೆಯ ವಿವರ * ಹುದ್ದೆ: ಸಂಗ್ರಹಣಾ ಸಲಹೆಗಾರರು – 02 ಹುದ್ದೆಗಳು. * ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ * ವೇತನ ಶ್ರೇಣಿ: ಸಂಸ್ಥೆಯ ಮಾನದಂಡಗಳ ಪ್ರಕಾರ * ಹುದ್ದೆಗಳ ಸಂಖ್ಯೆ: 02 * ಉದ್ಯೋಗ ಸ್ಥಳ: ಬೆಂಗಳೂರು ಶೈಕ್ಷಣಿಕ ಅರ್ಹತೆ ಹಾಗೂ ಅನುಭವ: ವಿದ್ಯಾರ್ಹತೆ ಅಭ್ಯರ್ಥಿಗಳು ಬಿ.ಎಸ್ಸಿ, ಬಿ.ಇ, ಬಿ.ಟೆಕ್, ಎಂ.ಟೆಕ್, ಎಂ.ಸಿ.ಎ, ಎಂ.ಬಿ.ಎ ಅಥವಾ ಎಂ.ಕಾಂ ಪದವಿ ಮುಗಿಸಿರಬೇಕು. ಇದರ ಜೊತೆಗೆ ಪಬ್ಲಿಕ್ ಪ್ರೊಕ್ಯೂರ್ಮೆಂಟ್ (Public Procurement) ವಿಷಯದಲ್ಲಿ ಪದವಿ, ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಅನ್ನು ಕಡ್ಡಾಯವಾಗಿ ಮಾಡಿರಬೇಕು. ವೃತ್ತಿ ಅನುಭವ ಒಟ್ಟು 10 ವರ್ಷಗಳ ವೃತ್ತಿ ಅನುಭವವಿರಬೇಕು. ಅದರಲ್ಲಿ ಕನಿಷ್ಠ 5 ವರ್ಷಗಳ ಕಾಲ ಸರ್ಕಾರಿ ಇಲಾಖೆ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ (PSU) ಸಾರ್ವಜನಿಕ ಸಂಗ್ರಹಣಾ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರಲೇಬೇಕು. ವಿಶೇಷ ಕೌಶಲ್ಯ ಕೆಟಿಪಿಪಿ (KTPP) ಕಾಯ್ದೆ ಮತ್ತು ನಿಯಮಗಳು ಹಾಗೂ ಕರ್ನಾಟಕ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಿರ್ವಹಣೆಯ ಬಗ್ಗೆ ಆಳವಾದ ಜ್ಞಾನವಿರಬೇಕು. ವೇತನ ಶ್ರೇಣಿ ಪ್ರಕಟಣೆಯಲ್ಲಿ ನಿಖರವಾದ ವೇತನವನ್ನು ತಿಳಿಸಿಲ್ಲ. ಆದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಸಂಸ್ಥೆಯ ಮಾನದಂಡಗಳ ಪ್ರಕಾರ ವೇತನ ಅಥವಾ ಗೌರವ ಧನವನ್ನು ನೀಡಲಾಗುತ್ತದೆ. ವಯೋಮಿತಿ ಕಿಯೋನಿಕ್ಸ್ ಸಂಸ್ಥೆಯ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಆನ್ಲೈನ್ (ಇ-ಮೇಲ್) ಪ್ರಕ್ರಿಯೆಯಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು: info@keonics.com . ಅರ್ಹ ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮ್ (Curriculum Vitae), ಸಹಿ ಮಾಡಿದ ಅರ್ಜಿಯ ಜೊತೆಗೆ ಸ್ವಯಂ ದೃಢೀಕೃತ ವಿದ್ಯಾರ್ಹತೆಯ ನಕಲು ಪ್ರತಿಗಳು ಹಾಗೂ ಅನುಭವದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ PDF ಸ್ವರೂಪದಲ್ಲಿ ಕ್ರೋಡೀಕರಿಸಿ, ಕಿಯೋನಿಕ್ಸ್ನ ಅಧಿಕೃತ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.
Kalaburagi | ವಿಜಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗೆ ಅಕ್ಕಮಹಾದೇವಿ ಮಹಿಳಾ ವಿವಿಯಿಂದ ಚಿನ್ನದ ಪದಕ
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ನಗರದ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಹೇಝಲ್ ಠಕ್ಕರ್ ಅವರು 2024–25ನೇ ಸಾಲಿನ ಬಿ.ಎ. 6ನೇ ಸೆಮಿಸ್ಟರ್ನಲ್ಲಿ ಮನೋವಿಜ್ಞಾನ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನೀಡುವ ಡಾ. ಪಿ. ಎಸ್. ಹಲ್ಯಾಳ ಅವರ ಹೆಸರಿನ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ವಿಜಯಪುರದಲ್ಲಿ ಮಂಗಳವಾರ ನಡೆದ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ ಗೇಹ್ಲೋಟ್ ಅವರು ಹೇಝಲ್ ಠಕ್ಕರ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು. ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಭೀ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್, ಸಂಚಾಲಕರಾದ ನಾಗಣ್ಣ ಘಂಟಿ, ಅರುಣಕುಮಾರ ಪಾಟೀಲ್, ಅನಿಲಕುಮಾರ ಮರಗೋಳ ಸೇರಿದಂತೆ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇದಲ್ಲದೆ, ಕಾಲೇಜಿನ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಛಾಯಾ ಪಾಟೀಲ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿದ್ದಾರೆ.
ಮೋಸ್ಟ್ ವಾಂಟೆಂಡ್ ಬ್ಯಾಂಕ್ ವಂಚಕನನ್ನು US ಉಪಾಧ್ಯಕ್ಷರಿಗೆ ಪರಿಚಯಿಸಿದ ಪಾಕ್ : ಮುಂದುವರಿದ ನರಿಬುದ್ದಿ
Norwegian Bank Fraudster Umar Farooq Zahoor : ಬ್ಯಾಂಕ್’ಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ ಆರೋಪವನ್ನು ಹೊಂದಿರುವ ಉದ್ಯಮಿಯೊಬ್ಬನನ್ನು, ಪಾಕಿಸ್ತಾನ ಸರ್ಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್’ಗೆ ಪಾಕಿಸ್ತಾನ ಪರಿಚಯಿಸಿದ್ದ ವಿದ್ಯಮಾನವೊಂದು ತಡವಾಗಿ ಬೆಳಕಿಗೆ ಬಂದಿದೆ. ದುಬೈನಲ್ಲಿ ನೆಲೆಸಿರುವ ಈ ಉದ್ಯಮಿಗೆ, ಪಾಕಿಸ್ತಾನ ಪ್ರಶಸ್ತಿ ಘೋಷಿಸಲು ಸಿದ್ದತೆಯನ್ನು ಮಾಡಿಕೊಂಡಿದೆ.
ಗುಜರಾತ್ ನಲ್ಲಿ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ
[…] The post ಗುಜರಾತ್ ನಲ್ಲಿ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ first appeared on Vistara News .
Kalaburagi | ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ: ನೋಂದಣಿಗೆ ಸೂಚನೆ
ಕಲಬುರಗಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನಡೆಸಲಿರುವ ರಾಜ್ಯಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟ್ರಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (ಜೆಆರ್ಎಫ್) ಅರ್ಹತಾ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನೀಡಲು ನಿರ್ಧರಿಸಲಾಗಿದೆ. ಆಸಕ್ತರು 2026ರ ಎ.24 ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2515944 ಗೆ ಸಂಪರ್ಕಿಸಬೇಕೆಂದು ಕುಲಸಚಿವ ಪ್ರೊ. ನವೀನ ಕುಮಾರ್ ಎಸ್.ಕೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವನ್ನು ಪ್ರಿಯಾಂಕಾ ಮುನ್ನಡೆಸಬಹುದು ಹೊರತು ರಾಹುಲ್ ಗಾಂಧಿಗೆ ಸಾಧ್ಯವಿಲ್ಲ: ತೇಜ್ ಪ್ರತಾಪ್ ಯಾದವ್
ಪಾಟ್ನಾ: ಇಂಡಿಯಾ ಮೈತ್ರಿಕೂಟವನ್ನು ಪ್ರಿಯಾಂಕಾ ಗಾಂಧಿ ಮುನ್ನಡೆಸಬಲ್ಲರು ಎಂದು ಮಂಗಳವಾರ ಬಹಿರಂಗವಾಗಿ ಹೇಳಿರುವ ಜನಶಕ್ತಿ ಜನತಾ ದಳ ಸಂಸ್ಥಾಪಕ ತೇಜ್ ಪ್ರತಾಪ್ ಯಾದವ್, ಇದೇ ವೇಳೆ ಅವರ ಸಹೋದರ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜ್ ಪ್ರತಾಪ್ ಯಾದವ್, “ಪ್ರಿಯಾಂಕಾ ಗಾಂಧಿ ಮಾತ್ರ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬಲ್ಲರು. ಅವರು ಇಂದಿರಾ ಗಾಂಧಿಯಂತಿದ್ದಾರೆ. ಆದರೆ, ರಾಹುಲ್ ಗಾಂಧಿಗೆ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ಸಾಧ್ಯವಿಲ್ಲ” ಎಂದು ಹೇಳಿದರು. “ಕೇವಲ ಪ್ರಿಯಾಂಕಾ ಗಾಂಧಿಯಿಂದ ಮಾತ್ರ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ಸಾಧ್ಯ. ರಾಹುಲ್ ಗಾಂಧಿ ಯಾತ್ರೆಗೆ ಹೋಗುವುದು, ಬುಲೆಟ್ ಮೇಲೆ ಕೂರುವುದರಿಂದಷ್ಟೇ ಇಂಡಿಯಾ ಮೈತ್ರಿಕೂಟವನ್ನು ಮುನ್ನೆಸಲು ಸಾಧ್ಯವಿಲ್ಲ. ನಿತೀಶ್ ಕುಮಾರ್ ಮೈತ್ರಿಕೂಟವನ್ನು ತೊರೆದರು. ಬೇರೆ ಯಾರೋ ಮುಖ್ಯಮಂತ್ರಿಯಾದರು. ಅವರ ಉದ್ದೇಶವಾದರೂ ಏನು?” ಎಂದು ಅವರು ಪ್ರಶ್ನಿಸಿದರು. ಸಂಯುಕ್ತ ಜನತಾ ದಳ ಮುಖ್ಯಸ್ಥರಾದ ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯ ರಾಜಕಾರಣದಿಂದ ನಿರ್ಗಮಿಸಿದ ಬಳಿಕ, “ನಿತೀಶ್ ಕುಮಾರ್ ಅವರು ರಾಜಿಯಾಗಿದ್ದಾರೆ” ಎಂಬ ರಾಹುಲ್ ಗಾಂಧಿಯ ಆರೋಪದ ಬೆನ್ನಿಗೇ ತೇಜ್ ಪ್ರತಾಪ್ ಯಾದವ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ. “ಸದ್ಯ ರಾಹುಲ್ ಗಾಂಧಿಯವರು ನಿತೀಶ್ ಕುಮಾರ್ ಕುರಿತು ಮಾತನಾಡುತ್ತಿದ್ದಾರೆ. ಅವರು ತಮ್ಮದೇ ಹುದ್ದೆಯನ್ನು ತೊರೆದರು ಹಾಗೂ ಬೇರೊಬ್ಬರು ಮುಖ್ಯಮಂತ್ರಿಯಾದರು. ಅವರು ಬೇರೆ ರಾಜ್ಯದವರಾಗಿದ್ದರೂ, ಬಿಹಾರ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಯಾಕೆ ಅಷ್ಟೊಂದು ದುರಾಸೆ ಹೊಂದಿದ್ದಾರೆ?” ಎಂದು ಅವರು ಪ್ರಶ್ನಿಸಿದರು. ರಾಹುಲ್ ಗಾಂಧಿ ಕುರಿತ ತೇಜ್ ಪ್ರತಾಪ್ ಯಾದವ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, “ತೇಜ್ ಪ್ರತಾಪ್ ಯಾದವ್ ಹೇಳಿಕೆ ಅಪ್ರಬುದ್ಧವಾಗಿದ್ದು, ಅವರು ಬಾಯಿಗೆ ಬಂದಿದ್ದು ಬಡಬಡಿಸುವ ಬದಲು ತಮ್ಮ ಕೆಲಸದತ್ತ ಗಮನ ಹರಿಸಬೇಕು” ಎಂದು ತಾಕೀತು ಮಾಡಿದ್ದಾರೆ.
Aland | ಕಿಣ್ಣಿಸುಲ್ತಾನ ಬಸವೇಶ್ವರ ಜಾತ್ರೆ : ಅದ್ಧೂರಿ ರಥೋತ್ಸವ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಬಳಿಕ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಶಾಂತಲಿಂಗೇಶ್ವರ ಹಿರೇಮಠದ ಶ್ರೀ ಶಿವಶಾಂತಲಿoಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸೋಮವಾರ ಬೆಳಗಿನ ಜಾವ ಪಲ್ಲಕ್ಕಿ ಮೆರವಣಿಗೆ ಬಳಿಕ ಅಗ್ನಿ ಪ್ರವೇಶ ಮಧ್ಯಾಹ್ನ ಬಸವೇಶ್ವರ ದೇವಾಲಯದಲ್ಲಿ ನಡೆದ ವೇಳೆ ಅನೇಕ ತಾಯಂದಿರು, ಭಕ್ತಾದಿಗಳ ಪಾಲ್ಗೊಂಡು ತೋಟಿಲು ಕಾರ್ಯಕ್ರಮದ ವಿಧಿ ವಿಧಾನವ ನಡೆಸಿಕೊಟ್ಟರು. ಬಳಿಕ ಸಂಜೆ ಕಡಗಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಮತ್ತು ಗ್ರಾಮದ ಶಿವಶಾಂತಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಗ್ರಾಮ ಸೇರಿದಂತೆ ನೆರೆಹೊರೆಯ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಈ ಮುನ್ನದಿನ ನಂದಿಕೋಲ ಮೆರವಣಿಗೆ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಕಮೀಟಿ ಅಧ್ಯಕ್ಷ ಶಂಕರಯ್ಯಾ ಸ್ವಾಮಿ, ಶಿವಾನಂದ ದೇಸಾಯಿ, ಮಾಣಿಕ ಕಾಸರ, ಬಸವರಾಜ ಹಂಗರಗೆ ಬಸವಂತರಾಯ ಧೂಳೆ, ಶಿವಂಕರ ಮುನ್ನೊಳ್ಳಿ ಸರ್ವ ಭಕ್ತಾಧಿಕಾರಿಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು. ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಜಂಗಿ ಫೈಲ್ವಾನರ ಕುಸ್ತಿ ಹಾಗೂ ವಿಜೇತರಿಗೆ ನಗದು ಬಹುಮಾನ ವಿತರಣೆ ನಡೆಯಿತು. ರಾತ್ರಿ ಆಡಮುಟ ಮಾವ ಎಡವಟು ಅಳಿಯ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಜಾತ್ರೆಯ ಮದ್ದು ಸುಡಲು ಭಕ್ತ ಸೇವೆಯನ್ನು ಸಿದ್ಧರಾಮ ಅಮೃತ ದೇಸಾಯಿ ಕೈಗೊಂಡರೆ, ಎರಡು ದಿನಗಳ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಗ್ರಾಮದ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಕೈಗೊಂಡಿದ್ದರು. ಕುಸ್ತಿ ಪಟುಗಳಿಗೆ ಬಹುಮಾನ ಗ್ರಾಮದ ರೈತ ಬಳಗದಿಂದ ಹಾಗೂ ರಥಕ್ಕೆ ಪುಷ್ಪಾಲಂಕಾರವನ್ನು ಶ್ರೀಶೈಲ ಎಸ್. ದಮ್ಮುರೆ, ಬಸವ ಮೂರ್ತಿ ಕಾಣಿಕೆಯನ್ನು ಗುರುಲಿಂಗಪ್ಪಾ ಕೆ. ಮುಲಗೆ ಕೈಗೊಂಡರು ಅಲ್ಲದೆ, ಜಾತ್ರಾ ವಾಲ್ಪೋಸ್ಟ್ರ ಸೇವೆಯನ್ನು ಮಲ್ಲಿಕಾರ್ಜುನ ಕೊರಳ್ಳಿ, ಹರಕೆಯನ್ನು ಶಾಂತಪ್ಪ ಧೂಳೆ ಸೇರಿದಂತೆ ಇಡೀ ಗ್ರಾಮಸ್ಥರು ಹಾಗೂ ದೇವಸ್ಥಾನ ಕಮೀಟಿ ಸರ್ವರು ಕೂಡಿ ಜಾತ್ರಾ ಉತ್ಸವ ಯಶಸ್ವಿಗೆ ಶ್ರಮಿಸಿ ಭಕ್ತಿಯನ್ನು ಸಮರ್ಪಿಸಿದರು.
ಕಲಬುರಗಿ ಸರಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ಪ್ರವೇಶಾತಿ ಪ್ರಾರಂಭ
ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಕಲಬುರಗಿಯ ಸರ್ಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ 1 ರಿಂದ 8ನೇ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಕಲಬುರಗಿಯ ಸರ್ಕಾರಿ ಕಿವುಡ ಮಕ್ಕಳ ಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ. ಈ ಶಾಲೆಯಲ್ಲಿ 6 ರಿಂದ 14 ವರ್ಷದೊಳಗಿನ ಶ್ರವಣದೋಷವುಳ್ಳ ಬಾಲಕರು ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶ ಪಡೆದ ಬಾಲಕರಿಗೆ ಶಿಕ್ಷಣ, ಕಂಪ್ಯೂಟರ್, ಇತ್ಯಾದಿ ತರಬೇತಿ ಜೊತೆಗೆ ಮಕ್ಕಳಿಗೆ ಉಚಿತ ವಸತಿ, ಊಟ ಮತ್ತು ಸಮವಸ್ತ್ರ ಒದಗಿಸಲಾಗುತ್ತದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಸಂತೋಷ-9741953333, ಮಹಾಂತೇಶ-743234892 ಹಾಗೂ ವೈಶಾಲಿ-9611364257 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Karnataka Weather: ಬಿಸಿಲಿನ ಆಘಾತಕ್ಕೆ ಈ ವರ್ಷದ ಮೊದಲ ಸಾವು; ಕರ್ನಾಟಕದಲ್ಲಿ ಸೆಖೆಯೋ ಸೆಖೆ, ಬೀಸುತ್ತಿದೆ ಬಿಸಿಗಾಳಿ
ಬೀದರ್: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಬಿಸಿಲ ಧಗೆ ಏರುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್ ಜಿಲ್ಲೆಗಳು ಗರಿಷ್ಠ ತಾಪಮಾನದ ದಾಖಲೆಗಳನ್ನೂ ಸಹ ಬರೆಯುತ್ತಿವೆ. ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ ಭಾನುವಾರ ತರಕಾರಿ ತರಲೆಂದು ಮಾರುಕಟ್ಟೆಗೆ ಹೋಗಿದ್ದ 20 ವರ್ಷದ ಯುವಕನೊಬ್ಬ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಸಾವಿಗೆ ತೀವ್ರವಾದ
ಇರಾನ್ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಏಕಿಷ್ಟು ಮಹತ್ವ ನೀಡುತ್ತಿದೆ ಎಂಬುದು ಜಗತ್ತಿಗೆ ಈಗಲೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಮತ್ತು ಇರಾನ್ ನಡುವೆ ಮೊದಲ ಸುತ್ತಿನ ಇಸ್ಲಾಮಾಬಾದ್ ಟಾಕ್ಸ್ ಪೂರ್ಣಗೊಂಡಿದ್ದು, ಎರಡನೇ ಸುತ್ತಿನ ಮಾತುಕತೆಗೂ ಈ ಎರಡೂ ರಾಷ್ಟ್ರಗಳು ಪಾಕಿಸ್ತಾನವನ್ನು ಆಯ್ದುಕೊಂಡಿವೆ. ಈ ಮಧ್ಯೆ ಈ ಬಾರಿಯ ಮಾತುಕತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸಲಿದ್ದು, ನೇರವಾಗಿ ಇಸ್ಲಾಮಾಬಾದ್ ಪ್ರವಾಸ ಅಥವಾ ವರ್ಚುವಲ್ ಹಾಜರಿ ಮೂಲಕ ಮಾತುಕತೆಯ ಭಾಗವಾಗಲಿದ್ದಾರೆ ಎಂದು ಅಮೆರಿಕನ್ ಮಾಧ್ಯಮಗಳು ತಿಳಿಸಿವೆ.
ಯಾರ್ಯಾರು ಪಕ್ಷದ ವಿರುದ್ದ ಕೆಲಸ ಮಾಡಿದ್ದಾರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕೆಲವು ವ್ಯಕ್ತಿಗಳ ಬೆಂಬಲಿಗರು ಪದಾಧಿಕಾರಿಗಳು ದಾವಣೆಗೆರೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ದ ಕೂಡ ಕ್ರಮ ಆಗಬೇಕು ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಅಗ್ರಹಿಸಿದ್ದಾರೆ. ದಾವಣಗೆರೆಯಲ್ಲಿ ಟಿಕೆಟ್ ಕೊಡದೆ ಇದ್ದಿದ್ದನ್ನು ಒಂದು ಸಮುದಾಯಕ್ಕೆ ಆದ ಅನ್ಯಾಯ ಎಂದು ಬಿಂಬಿಸುವುದು ಸರಿಯಲ್ಲ. ಯಾವ ನಾಯಕ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದರೂ ಪಕ್ಷಕ್ಕೆ ಏನು ನಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ.
ಇರಾನ್ ಸಂಘರ್ಷದಿಂದ ಇತಿಹಾಸದಲ್ಲಿಯೇ ದೊಡ್ಡ ಭಾರೀ ಇಂಧನ ಬಿಕ್ಕಟ್ಟು: ಐಇಎ ಎಚ್ಚರಿಕೆ
ಪ್ಯಾರಿಸ್: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ನಡೆಯುತ್ತಿರುವ ಸಂಘರ್ಷವು ಜಗತ್ತಿನ ಮಟ್ಟದಲ್ಲಿ ದೊಡ್ಡ ಇಂಧನ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಮುಖ್ಯಸ್ಥ ಫಾತಿಹ್ ಬಿರೋಲ್ ತಿಳಿಸಿದ್ದಾರೆ. ಫ್ರಾನ್ಸ್ ಇಂಟರ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು, “ಇದು ಇತಿಹಾಸದಲ್ಲಿಯೇ ಅತಿದೊಡ್ಡ ಬಿಕ್ಕಟ್ಟು ಆಗಬಹುದು. ಈಗಾಗಲೇ ಪೆಟ್ರೋಲ್ ಮತ್ತು ಅನಿಲದ ಕೊರತೆ ಸಮಸ್ಯೆಗಳಿವೆ. ಅದಕ್ಕೆ ರಷ್ಯಾ ಸಂಬಂಧಿತ ಸಮಸ್ಯೆಗಳು ಸೇರಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ” ಎಂದು ಹೇಳಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಸಾಗಣೆಗೆ ಅಡಚಣೆ ಉಂಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿ ಸಮುದ್ರದಲ್ಲಿನ ಸರಕು ಸಾಗಣೆಗೆ ತೊಂದರೆಯಾಗಿದೆ. ಜಗತ್ತಿನ ತೈಲ ಮತ್ತು ಎಲ್ಎನ್ಜಿ ಸಾಗಣೆಯ ದೊಡ್ಡ ಭಾಗ ಇದೇ ಮಾರ್ಗದ ಮೂಲಕ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ, ರಷ್ಯಾ–ಉಕ್ರೇನ್ ಯುದ್ಧದಿಂದ ಯುರೋಪ್ಗೆ ರಷ್ಯಾದ ಅನಿಲ ಸರಬರಾಜು ಕಡಿಮೆಯಾಗಿರುವುದರಿಂದ ಇಂಧನ ಮಾರುಕಟ್ಟೆ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ. ಈ ತಿಂಗಳ ಆರಂಭದಲ್ಲೇ ಬಿರೋಲ್ ಅವರು ಪ್ರಸ್ತುತ ಪರಿಸ್ಥಿತಿಯನ್ನು 1973, 1979 ಮತ್ತು 2022ರ ಇಂಧನ ಬಿಕ್ಕಟ್ಟುಗಳಿಗಿಂತಲೂ ಗಂಭೀರ ಎಂದು ಹೇಳಿದ್ದಾರೆ. ಮಾರ್ಚ್ನಲ್ಲಿ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಐಇಎ ಸದಸ್ಯ ರಾಷ್ಟ್ರಗಳು ತಮ್ಮ ದಾಸ್ತಾನುಗಳಿಂದ 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಈ ಬೆಳವಣಿಗೆಗಳಿಂದ ಜಾಗತಿಕ ಇಂಧನ ಪೂರೈಕೆ, ಬೆಲೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ.
ಏಪ್ರಿಲ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 21) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಎ.25, 26 |ಸೂರಿಕುಮೇರು: ನವೀಕೃತ ಬದ್ರಿಯಾ ಜುಮಾ ಮಸ್ಜಿದ್ ಉದ್ಘಾಟನೆ
ಬಂಟ್ವಾಳ : ಸೂರಿಕುಮೇರು ನವೀಕೃತ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಸಮಾರಂಭ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಎ.25 ಮತ್ತು 26 ರಂದು ನಡೆಯಲಿದೆ, ಎ.15ರಂದು ಮಗ್ರಿಬ್ ಬಳಿಕ ಹಂಝ ಮಿಸ್ಬಾಹಿ ಓಟ್ಟಪದವು ಧಾರ್ಮಿಕ ಪ್ರವಚನ ನೀಡುವರು. ಎ.26ರಂದು ಮಗ್ರಿಬ್ ಬಳಿಕ ನವೀಕೃತ ಮಸೀದಿ ಉದ್ಘಾಟನೆ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ಸೈಯದ್ ಇಬ್ರಾಹೀಂ ಬಾದುಷಾ ತಂಙಳ್ ಬುಖಾರಿ ಅಲ್-ಅಝ್ಹರಿ ಆನೆಕಲ್ ನೇತೃತ್ವ ನೀಡುವರು, ಉಡುಪಿ-ಚಿಕ್ಕಮಗಳೂರು, ಹಾಸನ ಮತ್ತು ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಬದ್ರುದ್ದೀನ್ ಮಾಣಿ ಭಾಗವಹಿಸುವರು. ಸೂರಿಕುಮೇರು ಮಸೀದಿ ಎಸ್.ಎ.ಇಸ್ಮಾಯೀಲ್ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಕಲಂದರ್ ಶಾಫಿ ಮದನಿ ಉದ್ಘಾಟಿಸುವರು ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಯುರ್ವೇದದ ಬಗ್ಗೆ ಪರ-ವಿರೋಧ ಚರ್ಚೆಗೆ ಕಾರಣವಾದ ಮಲಯಾಳಂ ಸಿನಿಮಾ
ಆಯುರ್ವೇದ ವೈದ್ಯರ ಸಮೂಹವು ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿ ವಿರುದ್ಧ ಅಪಪ್ರಚಾರದ ಭಾಗವಾಗಿ ಸಿನಿಮಾ ತಯಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಲಯಾಳಂ ಭಾಷೆಯ ಬ್ಲಾಕ್ ಬಸ್ಟರ್ ಸಿನಿಮಾ ‘Vaazha 2: Biopic of a Billion Bros’ನಲ್ಲಿ ಒಂದು ಪಾತ್ರದ ಚಿತ್ರಣವು ಆಯುರ್ವೇದ ಔಷಧಿಗಳ ದುಷ್ಪರಿಣಾಮಗಳ ಕುರಿತು ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ. ಈ ಚಿತ್ರದ ಪಾತ್ರವೊಂದು ‘ಅರಿಷ್ಠಂ’ ಎಂಬ ಹುದುಗಿಸಿದ ಗಿಡಮೂಲಿಕೆ ಕಷಾಯದ ಮಿತಿ ಮೀರಿದ ಸೇವನೆಯ ನಂತರ ಲಿವರ್ ಸಿರೋಸಿಸ್ನಿಂದ ಸಾವನ್ನಪ್ಪುತ್ತದೆ. ನಟ ಬಿಜುಕ್ಕುಟ್ಟನ್ ನಟಿಸಿದ ಈ ಸಿನಿಮಾದ ಪಾತ್ರ ದೀರ್ಘಕಾಲದವರೆಗೆ ಕಷಾಯವನ್ನು ಸೇವಿಸಿ ಸಾವನ್ನಪ್ಪಿರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದೀಗ ಆಯುರ್ವೇದ ವೈದ್ಯರ ಸಮೂಹವು ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿ ವಿರುದ್ಧ ಅಪಪ್ರಚಾರದ ಭಾಗ ಈ ಸಿನಿಮಾ ಎಂದು ಹೇಳಿದ್ದಾರೆ. ಆಯುರ್ವೇದ ವೈದ್ಯಕೀಯ ಸಂಘದ (AMAI) ಕೆಲವು ಕಾರ್ಯಕರ್ತರು ಇತ್ತೀಚೆಗೆ ಈ ಸಿನಿಮಾದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. “ಸಿನಿಮಾದಲ್ಲಿ ಕಷಾಯ ಸೇವಿಸಿ ಸಾವನ್ನಪ್ಪುವ ಪಾತ್ರದ ನಿರ್ವಹಣೆಯನ್ನು ಮತ್ತು ಅಪಪ್ರಚಾರವನ್ನು ತೆಗೆದು ಹಾಕಬೇಕು” ಎಂದು ಸಂಘ ಹೇಳಿದೆ. ಆದರೆ AMAIನ ಕೇರಳ ರಾಜ್ಯದ ಅಧ್ಯಕ್ಷ ವಿಷ್ಣು ನಂಬೂದಿರಿ ಸೋಮವಾರ ಈ ನಿಟ್ಟಿನಲ್ಲಿ ಇನ್ನೂ ಅಧಿಕೃತವಾಗಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. Dear Friends, please help this message reach the makers of the malayalam movie Vazha 2. It is long, but very important.A recent malayalam movie, called Vazha 2 portrayed a character who keeps consuming ayurvedic medicine -(arishtam, a herbal liquor, with 10-15% alcohol, which… pic.twitter.com/9kbBKm6w9b — TheLiverDoc™ (@theliverdoc) April 18, 2026 ಎಕ್ಸ್ ನಲ್ಲಿ ʼಲಿವರ್ ಡಾಕ್ʼ ಎಂದೇ ಪ್ರಸಿದ್ಧರಾಗಿರುವ ಡಾ. ಸಿರಿಯಾಕ್ ಅಬಿ ಫಿಲಿಪ್ಸ್ ಈ ಬಗ್ಗೆ ಎಕ್ಸ್ ನಲ್ಲಿ ದೀರ್ಘವಾದ ಪೋಸ್ಟ್ ಒಂದು ಹಾಕಿದ್ದು ಪರ-ವಿರೋಧ ಚರ್ಚೆಗೆ ಕಾರಣರಾಗಿದ್ದಾರೆ. ಆದರೆ ವಿಷ್ಣು ನಂಬೂದಿರಿ ಪ್ರಕಾರ, “ಸಿನಿಮಾದಲ್ಲಿ ತೋರಿಸಲಾಗಿರುವ ಪಾತ್ರವು ದೀರ್ಘಕಾಲ ವೈದ್ಯರ ರೋಗಪರಿಶೀಲನೆಯ ಚೀಟಿಯಿಲ್ಲದೇ ಅರಿಷ್ಠಂ ಸೇವಿಸಿರುವ ಕಾರಣದಿಂದ ಸಾವನ್ನಪ್ಪಿದ್ದಾರೆ. ಇದು ಜನರ ನಡುವೆ ವೈದ್ಯರ ಸೂಚನೆಯ ವಿನಃ ಅರಿಷ್ಠಂ ಸೇವಿಸಬಾರದು ಎನ್ನುವ ಮಾಹಿತಿಯನ್ನೂ ಕೊಡುತ್ತದೆ!” ಅವರ ಪ್ರಕಾರ, ಆಯುರ್ವೇದ ಔಷಧಿಗಳನ್ನು ಎಷ್ಟು ದೀರ್ಘಕಾಲ ಸೇವಿಸುತ್ತೀರಿ ಮತ್ತು ಎಷ್ಟು ಸೇವಿಸುವಿರಿ ಎನ್ನುವುದೂ ಮುಖ್ಯವಾಗುತ್ತದೆ. ಆದರೆ ಸಿನಿಮಾವನ್ನು ಬಳಸಿ ಆಯುರ್ವೇದ ವಿರೋಧಿಗಳು ಆಯುರ್ವೇದದ ವಿರುದ್ಧ “ನಕಾರಾತ್ಮಕ ಪ್ರಚಾರ” ಮಾಡುತ್ತಿದ್ದಾರೆ. ವೈದ್ಯಕೀಯ ಕಂಪನಿಗಳ ಏಕಸ್ವಾಮ್ಯದ ಪ್ರಯತ್ನದಿಂದ ಇಂತಹ ಅಪಪ್ರಚಾರ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಚಿತ್ರದ ನಿರ್ದೇಶಕ ಸವಿನ್ ಎಸ್ ಎ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಗತ್ಯವಿದ್ದರೆ ನಿರ್ಮಾಪಕರು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದಾರೆ. “ವಾಝಾ ಬಯೋಪಿಕ್ ಆಫ್ ಎ ಬಿಲಿಯನ್ ಬಾಯ್ಸ್’ ಚಿತ್ರದ ಮುಂದುವರಿದ ಭಾಗವಾಗಿರುವ ಸಿನಿಮಾ ಎಪ್ರಿಲ್ 2ರಂದು ಬಿಡುಗಡೆಯಾದಂದಿನಿಂದ ವಿಶ್ವಾದ್ಯಂತ 200 ಕೋಟಿ ರೂಳಗೂ ಮಿಗಿಲಾಗಿ ಲಾಭ ಗಳಿಸಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳ ಮೂಲಕ ಆಯುರ್ವೇದ ಔಷಧಿಗಳ ಪರಿಣಾಮವನ್ನು ಸದಾ ಪ್ರಶ್ನಿಸುತ್ತಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಸಿನಿಮಾವನ್ನು ಬೆಂಬಲಿಸಿದ್ದಾರೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಪೋಸ್ಟ್ನಲ್ಲಿ ನಿರ್ಮಾಪಕರಿಗೆ ಸಂಪೂರ್ಣ ಮತ್ತು ಅತ್ಯುನ್ನತ ಮಟ್ಟದ ಶೈಕ್ಷಣಿಕ ಪರಿಣತಿಯಿದೆ ಎಂದು ಬೆಂಬಲ ಸೂಚಿಸಿದ್ದಾರೆ. “ಇತ್ತೀಚೆಗಿನ ಮಲಯಾಳಂ ಸಿನಿಮಾವಾದ “ವಾಝಾ 2 ಆಯುರ್ವೇದ ಔಷಧವನ್ನು ಸೇವಿಸುತ್ತಲೇ ಇರುವ ಪಾತ್ರವನ್ನು ಚಿತ್ರಿಸಿದೆ. (ಅರಿಷ್ಟ, ಗಿಡಮೂಲಿಕೆ ಮದ್ಯ, ಶೇ 10-15 ಆಲ್ಕೋಹಾಲ್. ಆಯುರ್ವೇದ ವೈದ್ಯರು ಕುರುಡಾಗಿ ಅರಿಷ್ಟದಲ್ಲಿ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಹೇಳುತ್ತಾರೆ) ಗಂಭೀರ ಮಾರಕ ಯಕೃತ್ತಿನ ಕಾಯಿಲೆಯಿಂದ ಪಾತ್ರ ಮರಣ ಹೊಂದುವಲ್ಲಿ ಸಿನಿಮಾ ಕೊನೆಗೊಳ್ಳುತ್ತದೆ. ಸಿನಿಮಾ ಮಾಡಿದ ಜನರು ಬುದ್ಧಿವಂತರು ಮತ್ತು ಉತ್ತಮ ಮಾಹಿತಿ ಹೊಂದಿದ್ದಾರೆ. ದಶಕಗಳಿಂದ ಆಯುರ್ವೇದ ಸಮುದಾಐವು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಗಿಡಮೂಲಿಕೆ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳುತ್ತಿದೆ. ಆದರೆ ಔಷಧಿಗಳಲ್ಲಿ ವಿಷಮಯ ಸಸ್ಯಶಾಸ್ತ್ರ ಮತ್ತು ಆಲ್ಕೋಹಾಲ್ ಹೆಚ್ಚಿರುತ್ತದೆ. ಅದು ಯಕೃತ್ತಿಗೆ ಅತ್ಯಂತ ವಿಷಕಾರಿಯಾಗಬಹುದು. ಹೀಗಾಗಿ ಲಿವರ್ ಕಸಿ ಅಥವಾ ಸಾವು ಸಂಭವಿಸಬಹುದು. ಸಮಂಜಸವಾದ ಪುರಾವೆಗಳಿಲ್ಲದೆ ಇದನ್ನು ನೀಡಲಾಗುತ್ತಿದೆ. ಸಿನಿಮಾ ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದೆ” ಎಂದು ಅವರು ಬರೆದಿದ್ದಾರೆ. ಫಿಲಿಪ್ ಅವರು, “ಆಯುರ್ವೇದ ಗಿಡಮೂಲಿಕೆಗಳು, ಶಾಸ್ತ್ರೀಯ ಸೂತ್ರೀಕರಣಗಳು, ಸ್ವಾಮ್ಯದ ಗಿಡಮೂಲಿಕೆಗಳು ಮತ್ತು ಸಾಂಪ್ರದಾಯಿವಾಗಿ ತಯಾರಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಅವು ಆಲ್ಕೋಹಾಲ್, ಯಕೃತ್ತಿಗೆ ವಿಷವಾಗಿರುವ ಸಸ್ಯಶಾಸ್ತ್ರ, ಭಾರ ಲೋಹಗಳು ಮತ್ತು ಅಂಗಗಳಿಗೆ ಹಾನಿ ಮಾಡುವ ಕಲಬೆರಕೆಗಳನ್ನು ಹೊಂದಿವೆ” ಎಂದು ತೋರಿಸಲು ಅನೇಕ ಅಧ್ಯಯನಗಳನ್ನು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಜೋಡಿಸಿದ್ದಾರೆ.
CSKಗೆ ದೊಡ್ಡ ಆಘಾತ; ಭರ್ಜರಿ ಫಾರ್ಮ್ ನಲ್ಲಿರುವ ಆಯುಷ್ ಮ್ಹಾತ್ರೆಗೆ ಗಾಯ; ಈಗ ಸೀಸನ್ ನಿಂದಲೇ ಔಟ್!
Ayush Mhatre Injury- ಎಂ.ಎಸ್. ಧೋನಿ ಅಲಭ್ಯತೆಯ ತಲೆಬಿಸಿಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ. ಭರ್ಜರಿ ಫಾರ್ಮ್ನಲ್ಲಿದ್ದ ಭರವಸೆಯ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಸ್ನಾಯು ಸೆಳೆತದ (Hamstring Injury) ಕಾರಣ ಐಪಿಎಲ್ 2026ರಿಂದ ಹೊರಬಿದ್ದಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರಿಗೆ 8-12 ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ಈ ಸೀಸನ್ನ 6 ಪಂದ್ಯಗಳಲ್ಲಿ 201 ರನ್ ಗಳಿಸಿ ತಂಡದ ಬೆನ್ನೆಲುಬಾಗಿದ್ದ ಮ್ಹಾತ್ರೆ ಅಲಭ್ಯತೆ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಕರ್ನಾಟಕ ಸಾರಿಗೆ ಅಭಿವೃದ್ಧಿಗೆ ಬಿಜೆಪಿಯಿಂದ ಹಿನ್ನಡೆ: ಶೂನ್ಯ ಸಾಧನೆ ಪಟ್ಟಿ ಕೊಟ್ಟ ರಾಮಲಿಂಗಾ ರೆಡ್ಡಿ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ 'ಶಕ್ತಿ ಯೋಜನೆ'ಯಿಂದ ರಾಜ್ಯ ನಾಲ್ಕು ಸಾರಿಗೆ ನಿಗಮಗಳ ಶಕ್ತಿ ಕುಂದಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಆರೋಪ ಮುಂದುವರಿಸಿರುವ ಬಿಜೆಪಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. 'ರಾಜ್ಯದ ಸಾರಿಗೆಯನ್ನು ಕೋಮಾಗೆ ತಳ್ಳಿದ ತಮ್ಮ
ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಬಂಟ್ವಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್, ಬಂಟ್ವಾಳ ಇದರ ಸಹಯೋಗದಲ್ಲಿ ಮೇ 12ರಂದು ಪಾಣೆಮಂಗಳೂರು ಸಮೀಪದ ಎಸ್.ಎಸ್. ಹಾಲ್ ನಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಬಿ.ಸಿ.ರೋಡಿನ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಸಮ್ಮೇಳನದ ರೂಪುರೇಷೆ ಹಾಗೂ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು. ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ.ರಹೀಂ, ಕೋಶಾಧಿಕಾರಿ ಮುಹಮ್ಮದ್ ಸಾಗರ್, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ.ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಮತ್ತಿತರರು ಭಾಗವಹಿಸಿದ್ದರು. ಬ್ಯಾರಿ ಪ್ರಮುಖರಾದ ಯೂಸುಫ್ ಕರಂದಾಡಿ, ಮೂನಿಷ್ ಅಲಿ ಬಂಟ್ವಾಳ, ಹನೀಫ್ ಬಗ್ಗುಮೂಲೆ, ಅಬ್ದುಲ್ ಮಜೀದ್ ಕಡೆಗೋಳಿ, ಮುಹಮ್ಮದ್ ನಂದಾವರ, ಇಬ್ರಾಹೀಂ ಕೈಲಾರ್, ಅಬೂಬಕರ್ ಅಮ್ಮುಂಜೆ, ಚಿಕ್ ಖಲೀಲ್ ಬಂಟ್ವಾಳ, ಪಿ.ಮುಹಮ್ಮದ್ ಪಾಣೆಮಂಗಳೂರು, ಅಲ್ತಾಫ್ ಡೈಮಂಡ್, ಉಮರ್ ಮಂಚಿ, ಮುಹಮ್ಮದ್ ಸುರಿಬೈಲು, ಯು.ಮುಸ್ತಫಾ ಆಲಡ್ಕ, ಹನೀಫ್ ನಂದರಬೆಟ್ಟು ಮೊದಲಾದವರು ವಿವಿಧ ಸಲಹೆಗಳನ್ನು ನೀಡಿದರು. ಬ್ಯಾರಿ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ವಂದಿಸಿದರು.
ಸ್ಥಿರವಾಗಿ ನಿಂತ ಚಿನ್ನ, ಕುಸಿದ ಬೆಳ್ಳಿ; ಇಂದಿನ ದರವೆಷ್ಟು?
ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಯ ಆಶಾವಾದದ ನಡುವೆ ಚಿನ್ನದ ಬೆಲೆಗಳು ಅಲ್ಪ ಮಟ್ಟಿಗೆ ಏರಿದ್ದವು. ಆದರೆ ಶುಕ್ರವಾರ ಮಾರುಕಟ್ಟೆ ಮುಚ್ಚುವ ಕ್ಷಣದಲ್ಲಿ ಚಿನ್ನದ ಬೆಲೆಗಳು ಸ್ವಲ್ಪ ಕುಸಿದಿದ್ದವು. ನಂತರ ಶನಿವಾರ ಅಲ್ಪ ಮಟ್ಟಿಗೆ ಏರಿಕೆ ಕಂಡಿವೆ. ಸೋಮವಾರ ಮಾರುಕಟ್ಟೆ ದುರ್ಬಲವಾಗಿ ಪ್ರಾರಂಭವಾಯಿತು. ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕದನ ವಿರಾಮದ ಆಶಾವಾದ ಕಡಿಮೆಯಾಗಿದೆ. ಹೀಗಾಗಿ ಡಾಲರ್ ಸೂಚ್ಯಂಕ ಬಲಗೊಂಡಿದೆ. ಅಮೆರಿಕನ್ ಡಾಲರ್ ಬಲವಾಗಿ ಪ್ರಾರಂಭವಾದ ಕಾರಣ ಚಿನ್ನ-ಬೆಳ್ಳಿಯ ಬೆಲೆ ಕುಸಿದಿವೆ. ಆದರೆ ಇದೀಗ ಮಂಗಳವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಬೆಳ್ಳಿಯ ಬೆಲೆಯಲ್ಲಿ ಮಾತ್ರ ಕುಸಿತ ಕಂಡು ಬಂದಿದೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 21ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಹತ್ತು ಗ್ರಾಂಗೆ 1,55,290 ರೂ. ಗೆ ಸ್ಥಿರವಾಗಿ ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಹತ್ತು ಗ್ರಾಂಗೆ 1,42,350 ರೂ. ಮತ್ತು 18 ಕ್ಯಾರೆಟ್ ಚಿನ್ನವು ಹತ್ತು ಗ್ರಾಂಗೆ 1,16,470 ರೂ. ಗೆ ಸ್ಥಿರವಾಗಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 21ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,529 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,235 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,647 ರೂ. ಬೆಲೆಗೆ ಸ್ಥಿರವಾಗಿ ನಿಂತಿದೆ. ಬೆಳ್ಳಿಯ ದರದಲ್ಲಿ ಕುಸಿತ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಎಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಕಳೆದ ಶನಿವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,75,000 ಕ್ಕೆ ಬಂದು ತಲುಪಿದೆ. ಸೋಮವಾರವೂ ಅದೇ ದರದಲ್ಲಿ ಸ್ಥಿರವಾಗಿದೆ. ಇದೀಗ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಮತ್ತೆ ಪ್ರತಿ ಕೆಜಿಗೆ 2,65,000 ಕ್ಕೆ ಬಂದು ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,544 ರೂ., 22 ಕ್ಯಾರೆಟ್ ಚಿನ್ನದ ದರ 14,250 ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,529 ರೂ., 22 ಕ್ಯಾರೆಟ್ ಚಿನ್ನದ ದರ 14,235 ರೂ ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,534 ರೂ., 22 ಕ್ಯಾರೆಟ್ ಚಿನ್ನದ ದರ 14,240 ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,600 ರೂ., 22 ಕ್ಯಾರೆಟ್ ಚಿನ್ನದ ದರ 14,300 ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,529 ರೂ., 22 ಕ್ಯಾರೆಟ್ ಚಿನ್ನದ ದರ 14,235 ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,529 ರೂ., 22 ಕ್ಯಾರೆಟ್ ಚಿನ್ನದ ದರ 14,235 ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,544 ರೂ., 22 ಕ್ಯಾರೆಟ್ ಚಿನ್ನದ ದರ 14,250 ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,544 ರೂ., 22 ಕ್ಯಾರೆಟ್ ಚಿನ್ನದ ದರ 14,250 ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,544 ರೂ., 22 ಕ್ಯಾರೆಟ್ ಚಿನ್ನದ ದರ 14,250 ರೂ.
ನೀರಿನ ಸದ್ಬಳಕೆ ಬಗ್ಗೆ ಜಾಗೃತಿ : ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ 'ಜಲ ಸಂಭ್ರಮ' ಹಬ್ಬಕ್ಕೆ ಚಾಲನೆ
ನೀರಿನ ಸಂರಕ್ಷಣೆ, ಮರುಬಳಕೆ ಮತ್ತು ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರಥಿ ಕಮ್ಯುನಿಕೇಶನ್ ಹಾಗೂ ಬೆಂಗಳೂರು ಜಲಮಂಡಳಿ ಜಂಟಿಯಾಗಿ ಆಯೋಜಿಸಿರುವ 'ಜಲ ಸಂಭ್ರಮ - ವಾಟರ್ ಹಬ್ಬ' ಇಂದಿನಿಂದ ಏಪ್ರಿಲ್ 23 ರವರೆಗೆ ನಗರದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿದೆ.
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿ.ಕೆ.ಶಿವಕುಮಾರ್
ತಮಿಳುನಾಡು, ಎ.20: ''ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ. ಇದನ್ನು ಅರಿತೇ ಪನ್ನೀರ್ ಸೆಲ್ವಂ ಅವರು ಡಿಎಂಕೆ ಸೇರಿದ್ದಾರೆ'' ಎಂದು ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆಲ್ಲಕುಮಾರ್ ಪರ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಸೋಮವಾರ ರಾತ್ರಿ ರೋಡ್ ಶೋ ನಡೆಸಿ, ಪ್ರಚಾರ ಭಾಷಣ ಮಾಡಿದರು. “ಅಣ್ಣಾಮಲೈಗೆ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಇನ್ನು ಅಣ್ಣಾ ಡಿಎಂಕೆಯನ್ನು ಅವರು ಬಿಡುತ್ತಾರೆಯೇ? ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ಬಲಿ ಪಡೆದು ಬಿಜೆಪಿಯವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಕಾಂಗ್ರೆಸ್. ಈ ದೇಶದ ಉಸಿರಿನಲ್ಲಿ ಕಾಂಗ್ರೆಸ್ ಪಕ್ಷವಿದೆ, ಅಭಿವೃದ್ದಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್ ಪಕ್ಷ ತನ್ನ ತ್ಯಾಗ ಬಲಿದಾನದಿಂದ ಈ ದೇಶವನ್ನು ತಳಮಟ್ಟದಿಂದ ಕಟ್ಟಿದೆ” ಎಂದರು. *ದಕ್ಷಿಣ ಭಾರತದ ಅಸ್ಮಿತೆ ಉಳಿಸುವ ತುರ್ತು ನಮ್ಮ ಮುಂದಿದೆ “ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಅನೇಕ ವೈವಿಧ್ಯ ದಕ್ಷಿಣ ಭಾರತ ಹೊಂದಿದೆ. ನಮ್ಮ ದಕ್ಷಿಣ ಭಾರತದ ಅಸ್ಮಿತೆ ಉಳಿಸುವ ತುರ್ತು ಈ ದೇಶದಲ್ಲಿ ನಮ್ಮ ಮುಂದೆ ಎದುರಾಗಿದೆ. ಇದಕ್ಕಾಗಿ ನೀವು ಡಿಎಂಕೆ, ಕಾಂಗ್ರೆಸ್, ಮಿತ್ರಪಕ್ಷಗಳಿಗೆ ಜನ ಆಶೀರ್ವಾದ ಮಾಡಬೇಕು” ಎಂದರು. “ನಮ್ಮ ಪಾಲಿನ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದಕ್ಕೆ ನ್ಯಾಯ ಒದಗಿಸಬೇಕು. ಇಡೀ ದೇಶ ನಮ್ಮ ಕಡೆ ನೋಡುತ್ತಿದೆ. ನಾವು ನ್ಯಾಯ, ಸತ್ಯದ ಪರವಾಗಿದ್ದೇವೆ ಎಂದು ಇಡೀ ದೇಶಕ್ಕೆ ಸಂದೇಶ ನೀಡಬೇಕು. ತಮಿಳುನಾಡಿನ ಅಸ್ತಿತ್ವ, ಸ್ವಾತಂತ್ರ್ಯ ನಿಮ್ಮ ಅಸ್ಮಿತೆಯನ್ನು ಉಳಿಸಲು ಸ್ಟಾಲಿನ್ ಬಿಜೆಪಿ ಹಾಗೂ ಮೋದಿಯವರ ವಿರುದ್ಧ 20 ಮಿತ್ರ ಪಕ್ಷಗಳನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ”ಎಂದರು. *ಸ್ಟಾಲಿನ್ ನೇತೃತ್ವದಲ್ಲಿ ಮತ್ತೊಮ್ಮೆ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ “ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು ಎಲ್ಲರೂ ನಮ್ಮ ಬದುಕಿಗೆ ಶಕ್ತಿಯಾಗಿ ನಿಂತ ಡಿಎಂಕೆ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ ಚಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲಿದೆ”ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. “ತಮಿಳುನಾಡಿನಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಅದರಂತೆ ನಾವು ಸಹ ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಕ್ರಾಂತಿ ಮಾಡಿದ್ದೇವೆ. ಮಹಿಳೆಯರಿಗೆ ಉಚಿತ ಬಸ್, ತಿಂಗಳಿಗೆ ಎರಡು ಸಾವಿರ ರೂ., ಯುವಕರಿಗೆ ಪ್ರೋತ್ಸಾಹಧನ, ಉಚಿತ ವಿದ್ಯುತ್ ನೀಡುತ್ತಿದ್ದೇವೆ. 1.36 ಕೋಟಿ ಮಹಿಳೆಯರಿಗೆ ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಎರಡು ಸಾವಿರ ರೂ. ನೀಡಲಾಗುವುದು” ಎಂದರು. “ಕಾಂಗ್ರೆಸ್, ಡಿಎಂಕೆ ಪಕ್ಷ ಜನರ ಸ್ವಾಭಿಮಾನ ಉಳಿಸಲು ಬದ್ಧವಾಗಿವೆ. ಅತಿ ಹೆಚ್ಚು ತೆರಿಗೆ ನೀಡುವ ನಮ್ಮನ್ನು ಕಡೆಗಣಿಸಲಾಗಿದೆ. ಲೋಕಸಭಾ ಕ್ಷೇತ್ರಗಳನ್ನು ಕಡಿಮೆ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಈ ಸಂಚಿನ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಜನರೂ ಸಹ ಇದಕ್ಕೆ ಕೈ ಜೋಡಿಸಬೇಕು” ಎಂದರು. “ಹಿಂದೂ ಧರ್ಮದಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದೆ. ಕೃಷ್ಣ ಎಲ್ಲಾ ರಂಗದಲ್ಲೂ ಚಾಣಾಕ್ಷ. ಇಂತಹ ಕೃಷ್ಣನ ಹೆಸರನ್ನು ಹೊಂದಿರುವ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಿಗೆ ವರವಿದ್ದಂತೆ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಬೇಕು” ಎಂದರು. ಪಕ್ಷದ ಹಿರಿಯ ಕಾರ್ಯಕರ್ತ ಚೆಲ್ಲಕುಮಾರ್ ಸಂಸದರಾಗಿ ನಿಮ್ಮ ಸೇವೆ ಮಾಡಿದ್ದವರು. ಈಗ ಶಾಸಕರಾಗಿ ನಿಮ್ಮ ಸೇವೆಗೆ ಅವಕಾಶ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಈ ಸ್ಥಾನವನ್ನು ಚೆಲ್ಲಕುಮಾರ್ ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಕೋಟಿ ಕೋಟಿ ವಂದನೆಗಳನ್ನು ತಿಳಿಸುತ್ತೇನೆ. ಇಂತಹ ಅನುಭವಿ, ದಕ್ಷ ಅಭ್ಯರ್ಥಿ ಬೇರೆ ಯಾವುದೇ ಪಕ್ಷದಿಂದಲೂ ಸಿಗಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನಿಮ್ಮ ಮಡಿಲಿಗೆ ಹಾಕಿದ್ದಾರೆ”ಎಂದು ಹೇಳಿದರು. ಸಿನೆಮಾ ಡೈಲಾಗ್ ತೆರೆ ಮೇಲೆ ನೋಡಲು ಚೆಂದ “ಕೆಲವರು ಸಿನೆಮಾ ಡೈಲಾಗ್ ಹೊಡೆದು ಎಂಜಿಆರ್ ರೀತಿ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಸಿನೆಮಾ ಡೈಲಾಗ್ ತೆರೆ ಮೇಲೆ ನೋಡಲು ಚೆಂದ. ವಾಸ್ತವದಲ್ಲಿ ಅವು ಕಾರ್ಯಗತವಾಗುವುದಿಲ್ಲ. ಜನರ ಬದುಕಿಗೆ ಬದಲಾವಣೆ ತರಲು ಜನಪರ ಕಾರ್ಯಕ್ರಮ ತರುವ ಸರ್ಕಾರ ಬರಬೇಕು” ಎಂದು ಡಿಕೆಶಿ ಹೇಳಿದರು.
ಕೇಂದ್ರದ ದಾಳಿಗಳು ಕಾಂಗ್ರೆಸ್ ನಾಯಕರ ಮೇಲೆಯೇ: ಸಿಎಂ ಸಿದ್ದರಾಮಯ್ಯ ಆರೋಪ
ಚಾಮರಾಜನಗರ ಏಪ್ರಿಲ್ -21: ಚಾಮರಾಜನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಕ್ರಮಗಳು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಗ್ಯಾರಂಟಿ ಯೋಜನೆಗಳು ಹಾಗೂ ವಿವಿಧ ಆಡಳಿತಾತ್ಮಕ ವಿಷಯಗಳ ಕುರಿತು ಸ್ಪಷ್ಟನೆ ನೀಡಿದರು. ಶಾಸಕ ಹ್ಯಾರೀಸ್ ಅವರ ಪುತ್ರ ನಲಪಾಡ್ ಅವರ ಮನೆ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿಗೆ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗುತ್ತಿವೆ. ಗುಜರಾತಿಗಳು ಅನಕ್ಷರಸ್ಥರು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಸಿನಿಯರ್ ಖರ್ಗೆ, ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದು ಮತ್ತೊಂದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಟೆರರಿಸ್ಟ್ ಪ್ರಧಾನಿ ಮೋದಿ ಅವರೊಂದಿಗೆ ಎಐಎಡಿಎಂಕೆ ಕೈಜೋಡಿಸಿರುವುದು ನಿಜಕ್ಕೂ ವಿಷಾದನೀಯ ಎಂದು ಹೇಳಿದರು. ಇಲ್ಲಿದೆ ಹೆಚ್ಚಿನ ಮಾಹಿತಿ.
Monsoon Rain 2026: ಏಪ್ರಿಲ್ ಸೇರಿ ಜೂನ್-ಸೆಪ್ಟಂಬರ್ ಅವಧಿಯಲ್ಲಿ ಮುಂಗಾರು ಮಳೆ ಕೊರತೆ: ಬರಗಾಲದ ಎಚ್ಚರಿಕೆ
ನವದೆಹಲಿ: ದೇಶದಲ್ಲಿ ಎರಡು ವರ್ಷಗಳಲ್ಲಿ ನಿರೀಕ್ಷೆಯಂತೆ ಉತ್ತಮ ಮುಂಗಾರು ಮಳೆ ದಾಖಲಾದ ಬೆನ್ನಲ್ಲೇ ಈ ವರ್ಷ 2026ರ ಮುಂಗಾರು ಅವಧಿಯಲ್ಲಿ (ಜೂನ್-ಸೆಪ್ಟಂಬರ್) ಮಳೆ ಕೊರತೆ ಆಗಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ದೇಶದಲ್ಲಿ ಇದೇ ಏಪ್ರಿಲ್ ತಿಂಗಳಲ್ಲೇ ಶೇ.08ರಷ್ಟು ಮಳೆ ಕೊರತೆ ಉಂಟಾಗಲಿದೆ. ಇದು ಭವಿಷ್ಯದಲ್ಲಿ ಮಳೆಯ ಅಭಾವ ಎದುರಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಫೆಸಿಪಿಕ್
ಶಾಲೆಗೆ ಹೋಗಲು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಪರದಾಟ: ದಾರಿಗೆ ಮುಳ್ಳುತಂತಿ ಬೇಲಿ ಹಾಕಿದ ಇಸ್ರೇಲ್ ಪಡೆ
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಸಣ್ಣ ಹಳ್ಳಿಯೊಂದರಲ್ಲಿ ಪ್ಯಾಲೇಸ್ಟಿನಿಯನ್ ಮಕ್ಕಳು ಶಾಲೆಗೆ ಹೋಗದಂತೆ ಮುಳ್ಳುತಂತಿ ಬೇಲಿ ಅಳವಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಹತ್ತಾರು ವಿದ್ಯಾರ್ಥಿಗಳು ಈ ವಾರ ಶಾಲೆಗೆ ಹಾಜರಾಗಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹೆಬ್ರಾನ್ ನಗರದ ಸಮೀಪವಿರುವ ಉಮ್ ಅಲ್-ಖೈರ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣದ
ಒಡಿಶಾ ಮತದಾರರ ಪಟ್ಟಿಯಿಂದ 9.8 ಲಕ್ಷ ಹೆಸರುಗಳು ಡಿಲೀಟ್ : ಮರುಪರಿಶೀಲನೆಗೆ ಚುನಾವಣಾ ಆಯೋಗ ಆದೇಶ
ಒಡಿಶಾದಲ್ಲಿ ಸುಮಾರು 9.8 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ದೊಡ್ಡ ವಿವಾದಕ್ಕೆ ಆಸ್ಪದವಾಗಿದೆ. ವಿಶೇಷ ಪರಿಷ್ಕರಣೆಗೂ ಮುನ್ನ ನಡೆದ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಈ ಹೆಸರುಗಳನ್ನು ತೆಗೆದುಹಾಕಲಾಗಿದ್ದರೂ, ಇದರಲ್ಲಿ ಅರ್ಹ ಮತದಾರರ ಹೆಸರುಗಳೂ ಸೇರಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ.
ಮುಸ್ಲಿಂ ದಂಪತಿಯ ಗುರುತು ಪ್ರಶ್ನಿಸಿ ಕಿರುಕುಳ ನೀಡಿದ ವ್ಯಕ್ತಿಯನ್ನು ಎದುರಿಸಿದ ಮಹಿಳೆ; ಆರೋಪಿಯ ಬಂಧನ
ʼಗುರುತು ಕೇಳಬೇಡಿʼ ಎಂದ ಮಹಿಳೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ
ಕಾಂಗ್ರೆಸ್, ಇಂಡಿಯಾ ಕೂಟದ ವಿರುದ್ಧ ಹೋರಾಟ: ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ
ಬೆಂಗಳೂರು : ಮಹಿಳಾ ವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ವಿರುದ್ಧ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎ.25ರಂದು ಆಕ್ರೋಶ ಯಾತ್ರೆ ಮತ್ತು ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ.ಮಂಜುಳಾ ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.27ರಿಂದ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ 300 ಸಂಘಟನಾತ್ಮಕ ಮಂಡಲಗಳಲ್ಲಿ ಹೋರಾಟವೂ ನಡೆಯಲಿದೆ. ಬಳಿಕ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ರ್ಯಾಲಿಯನ್ನು ಸಂಘಟಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು. ಇಂದಿನಿಂದ ಕೇಂದ್ರ ಸಚಿವರು, ಸಂಸದರು ವಿಭಾಗ ಕೇಂದ್ರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮಂಗಳೂರಿನಲ್ಲಿ ಸಂಸದ ಬ್ರಿಜೇಶ್ ಚೌಟ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾಳೆ ಮತ್ತು ನಾಡಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್- ಬೆಳಗಾವಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ, ಕೇಂದ್ರ ಸಚಿವ ಸೋಮಣ್ಣ 23ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳ ಮಹಿಳಾ ವಿರೋಧಿ ನೀತಿಯ ಕುರಿತು ತಿಳಿಸಲಿದ್ದಾರೆ ಎಂದು ಹೇಳಿದರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮಾತ್ರ ಮಹಿಳೆಯರು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಸಾಮಾನ್ಯ ಮಹಿಳೆಯರಿಗೆ ಸಿಗುವ ಅವಕಾಶಗಳನ್ನು ಅದು ಕಿತ್ತುಕೊಂಡಿದೆ ಎಂದು ಆಕ್ಷೇಪಿಸಿದರು.
‘ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು!’: ರಾಜಕೀಯ ಸಂಚಲನ ಮೂಡಿಸಿದ ಕೆ.ಎನ್. ರಾಜಣ್ಣ ಹೇಳಿಕೆ
ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದೇನೆ ಎಂದೂ ತಿಳಿಸಿದ್ದಾರೆ. ಆಪ್ತರ ವಿರುದ್ಧ ಸರಣಿ ಕ್ರಮ ಕೈಗೊಂಡರೂ ಸಿದ್ದರಾಮಯ್ಯ ಮೌನದ ಬಗ್ಗೆ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ನೀಡುತ್ತಾ ಈ ವಿಚಾರ ಹಂಚಿಕೊಂಡಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬುವುದರ ಬಗ್ಗೆ ಮತ್ತಷ್ಟು ವಿವರ ಇಲ್ಲಿದೆ.
ಮೈಸೂರಿನ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ
ಮೈಸೂರು,ಎ.21: ಮುಖ್ಯಂತ್ರಿ ಸಿದ್ಧರಾಮಯ್ಯ ಅವರು ಮಂಗಳವಾರ ಮೈಸೂರಿನ ತಮ್ಮನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪ್ರವಾಸಕ್ಕೂ ತೆರಳಯವ ಮುನ್ನ ನಗರದ ಟಿ.ಕೆ.ಲೇಔಟ್ ನಲ್ಲಿರುವ ತಮ್ಮ ನಿವಾಸದ ಬಳಿ ಜಮಾಯಿಸಿದ್ದ ಸಾರ್ವಜನಿಕರ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ನೀಡಿದರು. ದೂರದ ಊರುಗಳಿಂದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಆಗಿಮಿಸಿದ್ದ ಸಾರ್ವಜನಿಕರಿಗೆ ನಿರಾಸೆಯುಂಟು ಮಾಡದೆ ಎಲ್ಲರ ಅರ್ಜಿಗಳನ್ನು ಸ್ವೀಕರಿಸಿದರು. ನಿಮ್ಮ ಅಹವಾಲನ್ನು ಗಮನಿಸಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀಕೃಷ್ಣನ ಮುಂದೆ ಚಿಕನ್ ಖಾದ್ಯ: ಪೋಸ್ಟರ್ ವಿವಾದದ ಬಳಿಕ ಕ್ಷಮೆಯಾಚಿಸಿದ ಕೇರಳದ ರೆಸ್ಟೋರೆಂಟ್
ಕೇರಳದ ರೆಸ್ಟೋರೆಂಟ್ವೊಂದು ವಿಷು ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ ಪೋಸ್ಟರ್ ವಿವಾದ ಸೃಷ್ಟಿಸಿದೆ. ಶ್ರೀಕೃಷ್ಣನ ಫೋಟೋವನ್ನು ಚಿಕನ್ ಖಾದ್ಯದೊಂದಿಗೆ ತೋರಿಸಿರುವ ಪೋಸ್ಟರ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ಕೇರಳದ ಚೆರ್ತಲಾದಲ್ಲಿ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಸೋಷಿಯಲ್ ಮೀಡಿಯಾ ಟ್ರೆಂಡ್ಗಳು ಕೆಲವೊಮ್ಮೆ ಅಂದುಕೊಳ್ಳದ ರೀತಿಯಲ್ಲಿ ವಿವಾದಕ್ಕೆ ಸಿಲುಕುತ್ತವೆ. ಇದಕ್ಕೆ
ನೋಟಿಸ್ ನೀಡಿ ಬಳಿಕ ಕ್ರಮ ಕೈಗೊಳ್ಳಬೇಕಿತ್ತು: ನಸೀರ್ ಅಹ್ಮದ್ ವಿರುದ್ಧ ಕ್ರಮಕ್ಕೆ ಝಮೀರ್ ಅಹ್ಮದ್ ಪ್ರತಿಕ್ರಿಯೆ
ಬೆಂಗಳೂರು, ಏ.21: ಮುಸ್ಲಿಂ ಗುರುಗಳು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಝಮೀರ್ ಅಹಮದ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪತ್ರವನ್ನು ನೋಡಿದ್ದೇನೆ.15–16 ಜನ ಗುರುಗಳು ರಾಹುಲ್ ಗಾಂಧಿಗೆ ಪತ್ರ ಬರೆದಿರುವುದನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿ, ಡಿಸಿಎಂ ಹಾಗೂ ಮಲ್ಲಿಕಾರ್ಜುನ ಖರ್ಗೆಗೂ ಪತ್ರ ಬರೆದಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರ ಅಭಿಪ್ರಾಯವನ್ನು ತಿಳಿಯಬೇಕಾದರೆ ಅವರನ್ನೇ ಕೇಳಬೇಕು; ನಾನು ಹೇಳಲು ಸಾಧ್ಯವಿಲ್ಲ” ಎಂದರು. “ಪತ್ರ ಬರೆದವರು ಗುರುಗಳೇ ಆಗಿರುವುದರಿಂದ ಈ ಪ್ರಶ್ನೆಯನ್ನು ಅವರನ್ನೇ ಕೇಳಬೇಕು. ಯಾವ ಕಾರಣಕ್ಕೆ ಪತ್ರ ಬರೆದಿದ್ದಾರೆ ಎನ್ನುವುದನ್ನು ಅವರಿಂದಲೇ ತಿಳಿದುಕೊಳ್ಳಬೇಕು. ಯಾವುದೇ ತಾರತಮ್ಯವಾಗಿಲ್ಲ; ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ” ಎಂದು ಹೇಳಿದರು. “ಒಬ್ಬೊಬ್ಬರು ಒಬ್ಬೊಬ್ಬರ ಪರ ಮಾತನಾಡುತ್ತಾರೆ. ಒಬ್ಬರು ನನ್ನ ಪರ ಮಾತನಾಡಿದರೆ, ಇನ್ನೊಬ್ಬರು ಮತ್ತೊಬ್ಬರ ಪರ ಮಾತನಾಡುತ್ತಾರೆ. ಅದನ್ನೆಲ್ಲ ಪರಿಗಣಿಸುವ ಅಗತ್ಯವಿಲ್ಲ. ಜಬ್ಬಾರ್ ವಿಚಾರವಾಗಿರಲಿ, ನಸೀರ್ ಅಹಮದ್ ವಿಚಾರವಾಗಿರಲಿ ಎಲ್ಲರಿಗೂ ತಮ್ಮದೇ ಅಭಿಪ್ರಾಯಗಳಿವೆ” ಎಂದು ಹೇಳಿದರು. ನಸೀರ್ ಅಹಮದ್ ವಿಚಾರವಾಗಿ ಮಾತನಾಡಿದ ಅವರು, “ನಸೀರ್ ಅಹಮದ್ ಅತ್ಯಂತ ಹಿರಿಯ ನಾಯಕರು. ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರೆ ಅದಕ್ಕೆ ಒಂದು ಪ್ರಕ್ರಿಯೆ ಇದೆ. ಮೊದಲಿಗೆ ನೋಟಿಸ್ ನೀಡಿ, ಅವರಿಂದ ಉತ್ತರ ಪಡೆದು ನಂತರ ಕ್ರಮ ಕೈಗೊಳ್ಳಬೇಕಾಗಿತ್ತು ಎಂಬ ಅಭಿಪ್ರಾಯ ಇದೆ” ಎಂದರು. ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ರೆ, ಅವರನ್ನು ತೆಗೆದಿದ್ದು ತಪ್ಪು ಅಂತ ನಾನು ಹೇಳಲ್ಲ. ಪಕ್ಷ ಏನಾದ್ರೂ ತೀರ್ಮಾನ ಮಾಡಿದ್ರೆ ಯೋಚನೆ ಮಾಡಿ ಮಾಡಿರುತ್ತೆ ಒಂದು ನೋಟಿಸ್ ಕೊಟ್ಟು ಅವರ ರಿಪ್ಲೈ ಪಡೆದು ಆನಂತರ ತೀರ್ಮಾನ ತೆಗೆದು ಕೊಳ್ಳಬೇಕಾಗಿತ್ತು. ಇದು ಸತೀಶ್ ಜಾರಕಿಹೊಳಿ ಅವರ ಅಭಿಪ್ರಾಯವಾಗಿದ್ದು, ಹಲವರ ಅಭಿಪ್ರಾಯವೂ ಇದೇ ಆಗಿದೆ” ಎಂದು ಹೇಳಿದರು. ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮದ್ ವಿರುದ್ಧದ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ಅಡಾಗುಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ” ಎಂದರು. ಪತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂಬ ಉಲ್ಲೇಖದ ಕುರಿತು ಮಾತನಾಡಿದ ಅವರು, “ರಾಜಕೀಯ ಹಾಗೂ ಧಾರ್ಮಿಕ ಗುರುಗಳು ಅಸಮಾಧಾನಗೊಂಡಿರುವುದು ನಿಜ. ನಾವು ಮಾತನಾಡಿ ಎಲ್ಲವನ್ನೂ ಸರಿಪಡಿಸುತ್ತೇವೆ. ಯಾರು ಪತ್ರ ಬರೆದಿದ್ದಾರೆ ಅವರಿಗೆ ತಾನೇ ಕೇಳಬೇಕು” ಎಂದು ಹೇಳಿದರು.
ಭಾರತ ಈಗ ‘ವಿಶ್ವಗುರು’ಅಲ್ಲ, ಆ ಪದ ಬಳಸಬೇಡಿ: ಮುರಳಿ ಮನೋಹರ ಜೋಶಿ ಪ್ರತಿಪಾದನೆ
[…] The post ಭಾರತ ಈಗ ‘ವಿಶ್ವಗುರು’ ಅಲ್ಲ, ಆ ಪದ ಬಳಸಬೇಡಿ: ಮುರಳಿ ಮನೋಹರ ಜೋಶಿ ಪ್ರತಿಪಾದನೆ first appeared on Vistara News .
ಬೆಂಗಳೂರು ಸುತ್ತ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. 2007 ರಲ್ಲಿ ಪ್ರಸ್ತಾಪಿಸಿದ್ದ ಇಂಟರ್ಮೀಡಿಯೇಟ್ ರಿಂಗ್ ರೋಡ್ ಯೋಜನೆಗೆ ಮತ್ತೆ ಜೀವಬಂದಿದೆ. 210 ಕಿ ಮೀ ಉದ್ದದ ಈ ಕಾರಿಡಾರ್ ಇದಾಗಿದ್ದು, ಬೆಂಗಳೂರು ಸುತ್ತಲ 12 ಉಪನಗರಗಳನ್ನು ಸಂಪರ್ಕಿಸಲಿದೆ. ಯಾವೆಲ್ಲಾ ನಗರಗಳು? ಭೂಸ್ವಾಧೀನ ಹೇಗೆ? ಈ ಬಗ್ಗೆ ವಿವರ ಇಲ್ಲಿದೆ.
ನಾನು ಜೆಡಿಎಸ್ ಸೇರ್ಪಡೆ ಸುಳ್ಳು ಸುದ್ದಿ, ಸಿದ್ದರಾಮಯ್ಯ ಮಾತನಾಡಿದ್ರೆ ಬೇರೆ ತರ ಸೌಂಡ್ ಆಗುತ್ತೆ: ಜಮೀರ್ ಅಹ್ಮದ್ ಖಾನ್
ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ರೀತಿಯ ಸ್ಥಾನಮಾನ ನೀಡಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಯಾರಾದರೂ ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ರೆ ಅವರ ಬಗ್ಗೆ ದಾಖಲೆ ನೀಡಲಿ ಎಂದು ಸವಾಲು ಹಾಕಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮೌನದ ಕುರಿತಾದ ಪ್ರಶ್ನೆಗೆ, ಸಿದ್ದರಾಮಯ್ಯ ಮಾತನಾಡಿದ್ರೆ ಬೇರೆ ತರ ಸೌಂಡ್ ಆಗುತ್ತೆ ಎಂದು ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದರು.
ಭಾರತಕ್ಕೆ ಬೇಕಾಗಿರುವ ಲಷ್ಕರ್-ಎ-ತೈಬಾ ಸಂಘಟನೆಯ ಅತ್ಯಂತ ಅಪಾಯಕಾರಿ ಉಗ್ರ ಹಬೀಬುಲ್ಲಾ ಅಲಿಯಾಸ್ ಸೈಫುಲ್ಲಾ ಸಾಜಿದ್ ಜಟ್ ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಈತನ ನೇರ ಕೈವಾಡವಿರುವುದು ಗುಪ್ತಚರ ಮಾಹಿತಿ ಹಾಗೂ ವಿಧಿವಿಜ್ಞಾನ ಪುರಾವೆಗಳಿಂದ ದೃಢಪಟ್ಟಿದೆ ಎಂದು ವರದಿಯಾಗಿದೆ. ಪಹಲ್ಗಾಮ್
ನವದೆಹಲಿ: 2026-27ನೇ ಶೈಕ್ಷಣಿಕ ಸಾಲಿನಿಂದ, 9ನೇ ತರಗತಿಯ ಸಿಬಿಎಸ್ಇ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಂತಹ ಪ್ರಮುಖ ವಿಷಯಗಳನ್ನು 'ಸ್ಟ್ಯಾಂಡರ್ಡ್' ಮತ್ತು 'ಅಡ್ವಾನ್ಸ್ಡ್' (Advanced) ಎಂಬ ಎರಡು ವಿಭಿನ್ನ ಹಂತಗಳಲ್ಲಿ ಕಲಿಯಲಿದ್ದಾರೆ. ಮಂಡಳಿಯು 2026-27ರ ಶೈಕ್ಷಣಿಕ ವರ್ಷದಿಂದ 9ನೇ ತರಗತಿಗೆ ಈ ಎರಡು ಹಂತದ ವ್ಯವಸ್ಥೆಯನ್ನು ಅಧಿಕೃತವಾಗಿ ಪರಿಚಯಿಸಿದೆ. ಹಾಗಾದರೆ, ವಿದ್ಯಾರ್ಥಿಗಳಿಗೆ ಇದರ ಲಾಭವೇನು? ಇದರ ಸಂಪೂರ್ಣ ಮಾಹಿತಿ
SSLC Results: ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬೇಡ, ಅಂಕ ನೀಡಿ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ 2025-26 ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಹಿನ್ನಡೆ ಆಗಿದೆ. ಸರ್ಕಾರದ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ತೃತೀಯ ಭಾಷೆ ಹಿಂದಿಗೆ ಅಂಕ ಪರಿಗಣಿಸುವಂತೆ ಆದೇಶ ಮಂಗಳವಾರ ಹೊರಡಿಸಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಕ್ಷಿಣದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆ ಹೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಡಿಸಿಎಂ ಈ ಆರೋಪಗಳಿಗೆ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, ದೇಶದ್ಯಾಂತ ಹಿಂದಿ ಭಾಷೆಯನ್ನು ಹೇರಿದ್ದೇ ಪಂಡಿತ್ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಗುಡುಗಿದೆ. ಹಾಗಿದ್ದರೆ ಹಿಂದಿ ಹೇರಿಕೆ ವಿಚಾರದಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ?
ಶಿರಸಿ ವೈದ್ಯನ ಹತ್ಯೆ ಪ್ರಕರಣ : 6 ಗಂಟೆಗಳಲ್ಲಿ ಆರೋಪಿ ಬಂಧನ
ಧಾರವಾಡ ಮೂಲದ ವೈದ್ಯ ಡಾ. ರಮೇಶ್ ಕಲಘುಟಕರ್ ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಂಜುನಾಥ ನಾಯ್ಕ ಎಂಬ ಆರೋಪಿಯನ್ನು ಕೇವಲ 6 ಗಂಟೆಗಳ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ನಗರದ ಬಸ್ ಡಿಪೋ ಎದುರು ಕ್ಲಿನಿಕ್ ನಡೆಸುತ್ತಿದ್ದ ವೈದ್ಯರಿಗೂ ಹಾಗೂ ಆರೋಪಿಗೂ ಮೊದಲೇ ಪರಿಚಯವಿದ್ದು, ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ಆತನನ್ನು ಪಿಎಸ್ಐ ಬಸವರಾಜ ಕನಶೆಟ್ಟಿ ನೇತೃತ್ವದ ತಂಡ ಶಿವಮೊಗ್ಗದಲ್ಲಿ ಪತ್ತೆ ಹಚ್ಚಿದೆ.
ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್-ಡಿಎಂಕೆ ಅಭ್ಯರ್ಥಿಗಳ ಪರ ಸಚಿವ ಈಶ್ವರ ಖಂಡ್ರೆ ಪ್ರಚಾರ
[…] The post ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್-ಡಿಎಂಕೆ ಅಭ್ಯರ್ಥಿಗಳ ಪರ ಸಚಿವ ಈಶ್ವರ ಖಂಡ್ರೆ ಪ್ರಚಾರ first appeared on Vistara News .
Explained: ಗ್ರೇಟರ್ ಇಸ್ರೇಲ್, ಲೆಬನಾನ್ಗೆ ಬೇಲಿ ಹಾಕಲು ಇಸ್ರೇಲ್ ಏಕೆ ಹವಣಿಸುತ್ತಿದೆ?
ಯಹೂದಿ ಜನರ ಸ್ವಂತ ರಾಷ್ಟ್ರದ ಕನಸಿನಿಂದ ಹುಟ್ಟಿಕೊಂಡ ಪುಟ್ಟ ರಾಷ್ಟ್ರವೇ ಇಸ್ರೇಲ್. ಹುಟ್ಟಿನಿಂದ ಇಂದಿನ ವರೆಗೂ ಇಸ್ರೇಲ್ಗೆ ಸಂಘರ್ಷಗಳು ತಪ್ಪಿಲ್ಲ. ಇಸ್ರೇಲ್ ಸ್ವತಂತ್ರ ದೇಶದ ಸ್ಥಾಪನೆಯ ರೂವಾರಿ ಡೇವಿಡ್ ಬೆನ್ ಗುರಿಯಾನ್ ಅಂದೇ `ಗ್ರೇಟರ್ ಇಸ್ರೇಲ್' ಕನಸು ಕಂಡರು. ಇಸ್ರೇಲ್ನ ಈ ಕನಸು ಇಂದಿಗೂ ಜೀವಂತ. ಲೆಬನಾನ್ನನ್ನು ನಿದ್ರಿಸಲು ಬಿಡದಿರುವ ಕಾರಣದ ಹಿಂದಿರುವುದೂ ಗ್ರೇಟರ್ ಇಸ್ರೇಲ್ನ ಕನಸೇ ಆಗಿದೆ.
ನಮಾಝ್ ನಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತ ರೀಲ್ ಗೆ ಟ್ರೋಲ್; ಉದ್ಯಮಿ ನಮಿತಾ ಥಾಪರ್ ತಿರುಗೇಟು
ಹೊಸದಿಲ್ಲಿ: ನಮಾಝ್ ನಿಂದ ಸಿಗುವ ಆರೋಗ್ಯ ಪ್ರಯೋಜನಗಳ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ರೀಲ್ ಗೆ ಬಂದ ತೀವ್ರ ಟೀಕೆ ಹಾಗೂ ಟ್ರೋಲ್ ಗಳಿಗೆ ಉದ್ಯಮಿ ನಮಿತಾ ಥಾಪರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಜನಪ್ರಿಯ ಟಿವಿ ಕಾರ್ಯಕ್ರಮ ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ಯಾನೆಲ್ ಸದಸ್ಯೆಯಾಗಿರುವ ನಮಿತಾ ಥಾಪರ್, ಮಾರ್ಚ್ 25ರಂದು ಈದ್ ಹಬ್ಬದ ಬಳಿಕ ರೀಲ್ ಹಂಚಿಕೊಂಡಿದ್ದರು. ತಮ್ಮ ಹೊಸ ವೀಡಿಯೊದಲ್ಲಿ, ಕಳೆದ ಮೂರು ವಾರಗಳಿಂದ ಸಾಮಾಜಿಕ ಜಾಲತಾಣಗಳ ಕೆಲವರು ಆ ರೀಲ್ ಹಿನ್ನೆಲೆಯಲ್ಲಿ ತನಗೆ ಹಾಗೂ ತನ್ನ ತಾಯಿಗೆ ನಿರಂತರ ಅವಹೇಳನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆ ರೀಲ್ ನಲ್ಲಿ, ಈದ್ ಅನ್ನು “ಕೃತಜ್ಞತೆ, ದಾನ, ಒಗ್ಗಟ್ಟು ಮತ್ತು ಏಕತೆ” ಎಂದು ಬಣ್ಣಿಸಿದ್ದ ಅವರು, ನಮಾಝ್ ನ ಆರೋಗ್ಯ ಪ್ರಯೋಜನಗಳನ್ನು ವಿವರಿಸಿದ್ದಕ್ಕಾಗಿ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದರು. ತಮ್ಮ ಸ್ನೇಹಿತರೊಬ್ಬರು ನಮಾಝ್ ನ ಆರೋಗ್ಯ ಪ್ರಯೋಜನಗಳ ಬಗ್ಗೆ ಕೇಳಿದ ಪ್ರಶ್ನೆಯನ್ನು ಉಲ್ಲೇಖಿಸಿ, ಅದನ್ನು “ನಿಜವಾಗಿಯೂ ನಂಬಲಾಗದ ಪ್ರಯೋಜನಕಾರಿ” ಎಂದು ಅವರು ಹೇಳಿದ್ದಾರೆ. ನಮಾಝ್ ದೇಹದ ಲವಲವಿಕೆ ಹೆಚ್ಚಿಸುವ ಮೂಲಕ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುವ ಪೂರ್ಣ ದೇಹದ ವ್ಯಾಯಾಮದ ಒಂದು ರೂಪವಾಗಬಹುದು ಎಂದು ಅವರು ವಿವರಿಸಿದ್ದರು. ಹೊಸ ವೀಡಿಯೊದಲ್ಲಿ ಟೀಕೆಗಳಿಗೆ ಪ್ರತಿಕ್ರಿಯಿಸಿದ ಥಾಪರ್, ತಾನು ಆರೋಗ್ಯ ವೃತ್ತಿಪರರಾಗಿರುವುದನ್ನು ಉಲ್ಲೇಖಿಸಿ, ಯಾವುದೇ ವಿವಾದವಿಲ್ಲದೆ ವಿವಿಧ ಧರ್ಮಗಳ ಆಚರಣೆಗಳ ಬಗ್ಗೆ ಕಂಟೆಂಟ್ ಗಳನ್ನು ರಚಿಸಿದ್ದೇನೆ ಎಂದು ಹೇಳಿದರು. “ನಾನು ಹಿಂದೂ ಧರ್ಮದ ಆಚರಣೆಗಳು ಹಾಗೂ ಅವುಗಳ ಆರೋಗ್ಯ ಪ್ರಯೋಜನಗಳ ಕುರಿತು ಹಲವು ರೀಲ್ಗಳನ್ನು ಮಾಡಿದ್ದೇನೆ. ಪ್ರತಿ ಯೋಗ ದಿನದಂದು ಆಸನಗಳು, ವಿಶೇಷವಾಗಿ ಸೂರ್ಯ ನಮಸ್ಕಾರ ಕುರಿತ ವೀಡಿಯೊಗಳನ್ನು ಹಂಚಿಕೊಳ್ಳುತ್ತೇನೆ. ಆದರೆ ಆಗ ಯಾರೂ ಏನನ್ನೂ ಹೇಳಲಿಲ್ಲ,” ಎಂದು ಅವರು ಹೇಳಿದ್ದಾರೆ. ಧರ್ಮಗಳ ನಡುವಿನ ಪರಸ್ಪರ ಗೌರವದ ಅಗತ್ಯತೆಯನ್ನು ಒತ್ತಿಹೇಳಿದ ಅವರು, “ನನಗೆ ‘ಆರ್ ಫಾರ್ ರಿಲಿಜನ್’ ಅಂದರೆ ‘ಆರ್ ಫಾರ್ ರೆಸ್ಪೆಕ್ಟ್’ ಎಂದು ಕಲಿಸಲಾಗಿದೆ. ವಿಶೇಷವಾಗಿ ಇಬ್ಬರು ಮಹಿಳೆಯರ ಬಗ್ಗೆ ನೀವು ಇದೇ ರೀತಿಯ ಗೌರವವನ್ನು ತೋರಿಸುತ್ತೀರಾ? ” ಎಂದು ಪ್ರಶ್ನಿಸಿದರು. ಮಹಿಳಾ ಮೀಸಲಾತಿ ಮಸೂದೆ ವಿಚಾರವನ್ನು ಉಲ್ಲೇಖಿಸಿದ ಥಾಪರ್, ಮಹಿಳೆಯರ ಮೇಲಿನ ಆನ್ ಲೈನ್ ದೌರ್ಜನ್ಯ ವಿಚಾರದಲ್ಲಿ ಮೌನ ಯಾಕೆ ಎಂಬುದನ್ನೂ ಪ್ರಶ್ನಿಸಿದರು. “ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿದ್ದಾಗ ಎಲ್ಲರೂ ಮಾತನಾಡುತ್ತಾರೆ. ಆದರೆ ಇಬ್ಬರು ಮಹಿಳೆಯರನ್ನು ಈ ರೀತಿಯಾಗಿ ಅವಹೇಳನ ಮಾಡಿದಾಗ ಮೌನ ಯಾಕೆ?” ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. “ಯಾರೂ ನಿಮ್ಮ ಪರವಾಗಿ ಮಾತನಾಡುವುದಿಲ್ಲ. ನೀವು ನಿಮ್ಮ ಪರವಾಗಿ ಮಾತನಾಡಬೇಕು,” ಎಂದು ಹೇಳಿದ ಥಾಪರ್, ಹಿಂದೂ ಧರ್ಮದ ಕರ್ಮ ತತ್ತ್ವವನ್ನು ಉಲ್ಲೇಖಿಸಿ, “ದೇವರು ನೋಡುತ್ತಿದ್ದಾನೆ” ಎಂದು ಎಚ್ಚರಿಸಿದ್ದಾರೆ. ಎಲ್ಲಾ ಧರ್ಮಗಳ ನಡುವೆಯೂ ಗೌರವವನ್ನು ನಂಬುವವರು ನಕಾರಾತ್ಮಕ ವಿಷಯವನ್ನು ಹರಡುವುದಕ್ಕಿಂತ ತಮ್ಮ ಸಂದೇಶವನ್ನು ಬಲಪಡಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. “ನನ್ನ ಬಗ್ಗೆ ನಕಾರಾತ್ಮಕ ರೀಲ್ ಗಳು ವೈರಲ್ ಆಗಿವೆ. ಈಗ ಈ ಸಂದೇಶವನ್ನೂ ವೈರಲ್ ಮಾಡಿ,” ಎಂದು ನಮಿತಾ ಹೇಳಿದರು. ‘ನಮಾಝ್ನ ಆರೋಗ್ಯ ಪ್ರಯೋಜನಗಳು’ ಕುರಿತ ಅವರ ರೀಲ್ ಗೆ ಕೆಲವರು ವ್ಯಂಗ್ಯಾತ್ಮಕವಾಗಿ ಹಾಗೂ ಟೀಕಿಸುವ ಕಮೆಂಟ್ ಗಳನ್ನು ಮಾಡಿದ್ದಾರೆ. “ನಾನು ಅವರನ್ನು ಎಂದಿಗೂ ಫಾಲೋ ಮಾಡಲಿಲ್ಲ ಎಂಬುದಕ್ಕೆ ಸಂತೋಷವಾಗಿದೆ,” ಎಂದು ಒಬ್ಬರು ಹೇಳಿದರೆ, “ಸೂರ್ಯ ನಮಸ್ಕಾರ ಬಗ್ಗೆ ನಿಮಗೆ ಗೊತ್ತಿದೆಯೇ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರ, “ನೀವು ಹಿಜಾಬ್ ಮತ್ತು ಬುರ್ಖಾ ಧರಿಸಲು ಪ್ರಾರಂಭಿಸಬೇಕು. ಅದರ ಆರೋಗ್ಯಕಾರಿ ಪ್ರಯೋಜನಗಳನ್ನು ಕಳೆದುಕೊಳ್ಳಬೇಡಿ,” ಎಂದು ಕಮೆಂಟ್ ಮಾಡಿದ್ದಾರೆ. ನಮಿತಾ ಥಾಪರ್ ಎಮ್ಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದು, ದೇಶದ ಆರೋಗ್ಯ ಹಾಗೂ ಸ್ಟಾರ್ಟ್ಅಪ್ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. I left for bombay at 6.30 am like the hard working professional that I am & stopped the car at 7 am to make this reel as I’ve long realised that silence is not a virtue & one must speak up when they are disrespected. Yes if wrong things happen at any workplace that are against… pic.twitter.com/rvMSu0wXz0 — Namita (@namitathapar) April 20, 2026 View this post on Instagram A post shared by Namita Thapar (@namitathapar)
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್ಯದಲ್ಲಿ 17 ಕಡೆ ದಾಳಿ ನಡೆಸಿದ್ದಾರೆ. ಅಶೋಕ್ ನಗರದಲ್ಲಿರುವ ಶಾಸಕ ಎನ್ ಎ ಹ್ಯಾರಿಸ್ ನಿವಾಸ ಹಾಗೂ ಮುಹಮ್ಮದ್ ನಲಪಾಡ್ ನಿವಾಸದಲ್ಲಿ 21 ಗಂಟೆಗಳ ಕಾಲ ಶೋಧ ನಡೆಸಲಾಗಿದೆ. ಇಡಿ ಅಧಿಕಾರಿಗಳು ನಲಪಾಡ್ ಮನೆಯಲ್ಲಿ ಕೆಲವೊಂದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ 37 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಇನ್ನು ಹ್ಯಾಕರ್ ಶ್ರೀ ಕೃಷ್ಣ ಯಾನೆ ಶ್ರೀಕಿ ಮನೆಯಲ್ಲಿ ಶೋಧ ಮುಂದುವರಿದಿದೆ.
Kaveri 2.0: ಕಾವೇರಿ 2.0: ಜಗತ್ತಿನಲ್ಲೇ ಅತ್ಯಂತ ಕೆಟ್ಟ ತಂತ್ರಾಂಶ ಎಂದು ಆಸ್ತಿದಾರರು ದೂರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರವಾದ ಚರ್ಚೆ ಶುರುವಾಗಿದೆ. ಹಲವು ಆಸ್ತಿದಾರರು ಕಾವೇರಿ 2.0 ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಟ್ಯಾಗ್ ಮಾಡಿ ಪ್ರಶ್ನೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಆಸ್ತಿದಾರರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರವು ಕಾವೇರಿ
ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕವನ್ನೇ ನೀಡಿ; ಸರಕಾರಕ್ಕೆ ಹೈಕೋರ್ಟ್ ಮತ್ತೊಮ್ಮೆ ಆದೇಶ
ಬೆಂಗಳೂರು: ಪ್ರಸಕ್ತ ಸಾಲಿನ (2025-2026) ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಹೈಕೋರ್ಟ್ ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ನಿರ್ದೇಶಿಸಿ ಎ.15ರಂದು ಹೊರಡಿಸಿರುವ ಆದೇಶ ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರ ವಾದ ಆಲಿಸಿದ ನ್ಯಾಯಪೀಠ, ಎಸೆಸೆಲ್ಸಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸುವ ಮುನ್ನವೇ ನಿಯಮ ಮಾಡಬೇಕಿತ್ತು. ಪರೀಕ್ಷಾ ಅಧಿಸೂಚನೆಯಲ್ಲಿಲ್ಲದ ಗ್ರೇಡ್ ಪದ್ದತಿಯನ್ನು ಈಗ ಅನುಷ್ಠಾನಗೊಳಿಸಲಾಗುತ್ತಿದೆ. ನಿಯಮ ರೂಪಿಸಿದ ಬಳಿಕ ಸರಕಾರ ಸೂಕ್ತವೆನಿಸಿದ ಕ್ರಮ ಕೈಗೊಳ್ಳಬಹುದು. ಈಗ ಪರೀಕ್ಷೆಯ ಅಂಕ ಪದ್ಧತಿ ಬದಲಾವಣೆ ಸೂಕ್ತವಲ್ಲ. ಆದ್ದರಿಂದ, 2025-2026ನೇ ಸಾಲಿಗೆ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳನ್ನೇ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ಮರುಪರಿಶೀಲನಾ ಅರ್ಜಿ ಇತ್ಯರ್ಥಪಡಿಸಿತು.
ಹೊರ್ಮುಜ್ನಲ್ಲಿ US ಸೆರೆಹಿಡಿದ ಇರಾನಿ ಹಡಗಿನಲ್ಲಿ ಚೀನಾದ ಕ್ಷಿಪಣಿ ರಾಸಾಯನಿಕ ಸಾಗಾಟ: ನಿಕ್ಕಿ ಹ್ಯಾಲಿ ಗಂಭೀರ ಆರೋಪ!
ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್ ಗೆ ಚೀನಾದ ಮಿಲಿಟರಿ ಬೆಂಬಲವಿದೆ ಎಂಬ ಆರೋಪಗಳ ನಡುವೆ ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸದಸ್ಯೆ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಇತ್ತೀಚೆಗೆ ಹೊರ್ಮುಜ್ ನಲ್ಲಿ US ನೌಕಾಪಡೆ ಸೆರೆಹಿಡಿದಿರುವ ಇರಾನ್ ಹಡಗಿನಲ್ಲಿ ಚೀನಾದಿಂದ ಟೆಹ್ರಾನ್ ಗೆ ಕ್ಷಿಪಣಿ ರಾಸಾಯನಿಕಗಳನ್ನು ಸಾಗಿಸಲಾಗುತ್ತಿತ್ತು ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈಗಾಗಲೇ ಚೀನಾ ಹಲವು ಸಂದರ್ಭಗಳಲ್ಲಿ ಇಂತಹ ಆರೋಪಗಳನ್ನು ತಳ್ಳಿಹಾಕಿದೆ. ಆದಾಗ್ಯೂ, ಇದು ಸದ್ಯ ಭಾರಿ ಚರ್ಚಗೆ ಗ್ರಾಸವಾಗಿದ್ದು, ಈ ಕುರಿತಂತೆ ಚೀನಾ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಕಾದುನೋಡಬೇಕಿದೆ.
ಬಿರು ಬೇಸಿಗೆಯಲ್ಲಿ ಕಣ್ಮನ ಸೆಳೆಯುತ್ತಿರುವ ‘ಗುಲ್ಮೊಹರ್’
ಕನಕಗಿರಿ: ಬೇಸಿಗೆ ಬಿಸಿಲ ಝಳದಲ್ಲಿ ಬೇರೆ ಹೂಗಳು ಮಂಕಾದರೆ, ಗುಲ್ ಮೊಹರ್ ಗಿಡಗಳ ಹೂವಿನ ಅಂದ ಮಾತ್ರ ಕಮರುವುದಿಲ್ಲ, ಬದಲಾಗಿ ನಳನಳಿಸುತ್ತದೆ. ದಾರಿಹೋಕರು, ವಾಹನ ಸವಾರರನ್ನು ಹೂಗಳ ಸೊಬಗು ಕೈ ಬೀಸಿ ಕರೆಯುವಂತಿದ್ದು, ಹೂಗಳು ಉದುರಿ ಬಿದ್ದರಂತೂ ರಸ್ತೆಯುದ್ದಕ್ಕೂ ಹೂವಿನ ಹಾಸಿಗೆಯೇ ಸರಿ. ಕನಕಗಿರಿಯ ಪರೀವಿಕ್ಷಾಣ ಮಂದಿರದಲ್ಲಿ ಇರುವ ಬಸರಿಹಾಳ, ಸೋಮಸಾಗರ, ಬೈಲಕುಂಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಎರಡು ಬದಿಯ ಅಲ್ಲಲ್ಲಿ ಗುಲ್ ಮೊಹರ್ ಮರಗಳಲ್ಲಿ ಕೆಂಪು ಹೂಗಳು ಅರಳಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ. ಮೂಲಸ್ಥಳ ಮಡಗಾಸ್ಕರ್ ಆಗಿದ್ದು, ಸುಮಾರು 100-125 ವರ್ಷಗಳ ಹಿಂದೆ ಭಾರತಕ್ಕೆ ಪರಿಚಯವಾಯಿತು ಎನ್ನಲಾಗಿದೆ. ಉಷ್ಣವಲಯ ವಾತಾವರಣ ಹೊಂದಿರುವ ಪ್ರದೇಶಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಬಯಲು ನಾಡಿನ ಬಿಸಿಲು ಪ್ರದೇಶದ ಗ್ರಾಮೀಣ ಭಾಗದ ರಸ್ತೆಯ ಬದಿಯಲ್ಲಿ ಈ ಗಿಡಗಳಲ್ಲಿ ಹೂ ಬಿಟ್ಟು ಪ್ರಕೃತಿಯ ಸೌಂದರ್ಯ ಹೆಚ್ಚಿಸುವ ಜತೆಗೆ ರಸ್ತೆಗೆ ಮೆರಗು ತಂದಿದೆ. ಗುಲ್ ಮೊಹರ್ ಗಿಡಗಳು ನಾಲ್ಕಾರು ವರ್ಷಗಳಲ್ಲಿ ಬೆಳೆದು ನಿಲ್ಲುತ್ತವೆ. ಗುಲ್ಮೊಹರ್ ಫಬಿಯೇಸೆ ಕುಟುಂಬಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಆeಟoಟಿix ಡಿegiಚಿ. ಕನ್ನಡದಲ್ಲಿ ಕತ್ತಿಕಾಯಿ ಮರ, ಕೆನ್ನಕೇಸರಿ ಎಂಬ ಹೆಸರಿನಿಂದಲೂ ಪರಿಚಿತ. ಸ್ಥಳೀಯವಾಗಿ ಸೀಮೆಸಂಕೇಶ್ವರ, ಕೆಂಪುತುರಾಯಿ, ದೊಡ್ಡ ರತ್ನಗಂಧಿ ಮುಂತಾದ ಹೆಸರುಗಳೂ ಇವೆ. ಯುವಕರು ತಮ್ಮ ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಈ ಗಿಡದ ಕೆಳಗೆ-ಮೇಲೆ ಹತ್ತಿ ಫೋಟೋ ಶೂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಗುಲ್ ಮೊಹರ ಗಿಡಗಳು ಫೋಟೋ ಶೂಟಿಗೆ ಹೇಳಿ ಮಾಡಿಸಿದಂತಿವೆ ಎಂದು ಫೋಟೋ ಪ್ರಿಯರು ಹೇಳುತ್ತಾರೆ. ಒಟ್ಟಿನಲ್ಲಿ, ಗುಲ್ಮೊಹರ್ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ನೆರಳು ಮತ್ತು ಮನಶಾಂತಿಯನ್ನು ನೀಡುವ ಪ್ರಮುಖ ಅಲಂಕಾರಿಕ ಸಸ್ಯವಾಗಿದೆ. ಕನಕಗಿಯ ಪರಿವೀಕ್ಷಾಣ ಮಂದಿರ ಹಾಗೂ ಇಲ್ಲಿನ ಎಪಿಎಂಸಿ, ಕಲ್ಮಾಠ ಶಾಲೆ ಕೆಲವು ರಸ್ತೆಯಲ್ಲಿ ಏನೋ ಒಂದು ತೆರನಾದ ಸಂತೋಷವಾಗುತ್ತದೆ. ಹೂಗಳೆಲ್ಲ ಅರಳಿ ನಿಂತು ಸ್ವಾಗತಿಸುವಂತೆ ಭಾಸವಾಗುತ್ತದೆ. ಕೆಲ ಯುವಕರು ಹೂ ಬಿಟ್ಟ ಗಿಡಗಳ ಹತ್ತಿರ ನಿಂತುಕೊಂಡು ಪೋಟೊ ಶೂಟ್ ಮಾಡುತ್ತಾರೆ. -ಹನುಮೇಶ ವಾಲೇಕಾರ್, ಕಾಂಗ್ರೆಸ್ ಯುವ ಮುಖಂಡ
ವಿಜಯ್ ಆಸ್ತಿ ಅಫಿಡವಿಟ್’ನಲ್ಲಿ ’100 ಕೋಟಿ ಬಿಗ್ ಮಿಸ್ಸಿಂಗ್’ : ಮದ್ರಾಸ್ ಹೈಕೋರ್ಟ್ ಚಾಟಿ, ಸಂಕಷ್ಟದಲ್ಲಿ ದಳಪತಿ
100 Crore Missing : ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ನಟ ವಿಜಯ್ ಅವರು, ನೂರು ಕೋಟಿ ಆಸ್ತಿಯನ್ನು ಮುಚ್ಚಿಟ್ಟಿದ್ದಾರೆ ಎನ್ನುವ ದೂರು, ಮದ್ರಾಸ್ ಕೋರ್ಟ್’ನಲ್ಲಿ ದಾಖಲಾಗಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಆಸ್ತಿಮೌಲ್ಯವನ್ನು ವಿಜಯ್ ಹಾಕಿಕೊಂಡಿದ್ದಾರೆ. ಈ ಸಂಬಂಧ, ಮದ್ರಾಸ್ ಕೋರ್ಟ್ ನೋಟಿಸ್ ನೀಡಿದೆ.
Hubballi | ಎ.26ರಂದು 'ಅಹಿಂದ-25: ಹೋರಾಟ ಸಾಧನೆ, ಸಂಕಲ್ಪ' ರಾಜ್ಯಮಟ್ಟದ ವಿಚಾರ ಸಂಕಿರಣ
ಹುಬ್ಬಳ್ಳಿ: ಅಹಿಂದ ಕರ್ನಾಟಕ ಹೋರಾಟಕ್ಕೆ 25 ವರ್ಷ ಸಂದ ಹಿನ್ನೆಲೆಯಲ್ಲಿ 'ಅಹಿಂದ-25: ಹೋರಾಟ ಸಾಧನೆ, ಸಂಕಲ್ಪ' ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಎ.26ರಂದು ಬೆಳಗ್ಗೆ 10ಕ್ಕೆ ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ರಾಯಲ್ ರೀಟಿಜ್ ಹೊಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಮುಖ್ಯಸ್ಥ ಗುರುನಾಥ ಉಳ್ಳಿಕಾಶಿ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 25 ವರ್ಷಗಳ ಹಿಂದೆ ಪ್ರಥಮ ಅಹಿಂದ ಸಮಾವೇಶ ನಡೆದಿತ್ತು, ಅದರ ಸವಿನೆನಪಿಗಾಗಿ ಎಲ್ಲ ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಾಗಾರದಲ್ಲಿ ಸಂಘಟನೆ, ನಾಯಕತ್ವ ಗುಣಗಳನ್ನು ಬೆಳೆಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಇದಲ್ಲದೇ ಚಿಂತಕರಾದ ನಾಗಮೋಹನದಾಸ್, ರವಿವರ್ಮ, ಬಂದೇ ನವಾಝ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಅಹಿಂದ ಸಂಘಟನೆಗಳ 1,500ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಪ್ರಸಾದ್ ಅಬ್ಬಯ್ಯ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಾನಪ್ಪ ಕಬ್ಬೇರ, ಚಂದ್ರಶೇಖರ್ ಜುಟ್ಟಲ, ಅನ್ವರ್ ಮುಧೋಳ, ಶಿವಾನಂದ ಮುತ್ತಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷಾ ಜ್ಞಾನ ಕಡ್ಡಾಯ ಪ್ರಸ್ತಾವನೆ: ಆಟೋ ಸಂಘಟನೆಗಳ ವಿರೋಧ
ರಾಜ್ಯದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಬೇಕೆಂಬ ಕೆಪಿಸಿಸಿ ವಕ್ತಾರರ ಸಲಹೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಟೋ ಚಾಲಕರ ಸಂಘಟನೆಗಳು ಇದನ್ನು ತರ್ಕಹೀನ ಹಾಗೂ ಅನಗತ್ಯವೆಂದು ತಿರಸ್ಕರಿಸಿವೆ. ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂವಹನ ಕೊರತೆಯನ್ನು ನೀಗಿಸಲು ಪ್ರಾದೇಶಿಕ ಭಾಷೆ ಅಗತ್ಯವೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯಗಳಿಂದ ಜನರ ಬವಣೆಗಳಿಗೆ ಕೊನೆಯೇ ಇಲ್ಲದಂತಾಗಿದೆ: ಬಿ.ವೈ ವಿಜಯೇಂದ್ರ
ಬೆಂಗಳೂರು : ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸತತ ವೈಫಲ್ಯಗಳಿಂದ ಜನರ ಬವಣೆಗಳಿಗೆ ಕೊನೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ʼXʼ ನಲ್ಲಿ ಪೋಸ್ಟ್ ಮಾಡಿರುವ ಅವರು, ವಿದ್ಯುತ್ ಬೆಲೆ ಏರಿಕೆ ಬರೆ ಬೆನ್ನಲ್ಲೇ ಈಗ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಾಗದ ಈ ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ತೊಂದರೆಯುಂಟಾಗಲಿದೆ. ಜನರ 2024ರ ವೇತನ ಪರಿಷ್ಕರಣೆಯನ್ನು 2026ಕ್ಕೆ ಮುಂದೂಡುವುದೂ ಸೇರಿದಂತೆ ರಾಜ್ಯದ ಶ್ರಮಜೀವಿಗಳ ಬೇಡಿಕೆ ಇತ್ಯರ್ಥಗೊಳಿಸದೆ, ಮುಂದು ಹಾಕುತ್ತಲೇ ಬಂದಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಲೇ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಬಗ್ಗೆ ಪ್ರಚಾರದಲ್ಲಿ ನಿರತವಾಗಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ , ಆ ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಬಸ್ ವ್ಯವಸ್ಥೆಯನ್ನಾಗಲಿ, ಶಿಸ್ತಿನ ಸೇವೆಯನ್ನಾಗಲಿ ಖಚಿತಪಡಿಸಿಕೊಳ್ಳುವ ದಾಯಿತ್ವ ಇಲ್ಲದಂತಾಗಿರುವುದು ದುರಂತ ಎಂದು ಟೀಕಿಸಿದ್ದಾರೆ. ಸಾರಿಗೆ ಸ್ತಬ್ಧಗೊಂಡರೆ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾಮಾನ್ಯ ಪ್ರಯಾಣಿಕರು ಅನುಭವಿಸುವ ಕಷ್ಟಕ್ಕೆ ನೇರ ಹೊಣೆ ಈ 'ನಿಷ್ಕ್ರಿಯ ಕಾಂಗ್ರೆಸ್ ಸರ್ಕಾರ'! ಸಮಸ್ಯೆಗಳನ್ನು ಬಗೆಹರಿಸುವ ಬದಲು ಮುಂದೂಡುವುದನ್ನೇ ಸಾಧನೆ ಎಂದು ನಂಬಿರುವ ರಾಜ್ಯ ಸರ್ಕಾರಕ್ಕೆ ಜನರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ. ರಾಜ್ಯ ಸರ್ಕಾರ ಹಠಮಾರಿ ಧೋರಣೆ ಬಿಟ್ಟು, ಕೂಡಲೇ ಸಾರಿಗೆ ನೌಕರರೊಂದಿಗೆ ಮಾತನಾಡಿ, ಮೊದಲು ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ಹಾಗೂ ನೌಕರರ ಬದುಕು ಅತಂತ್ರಗೊಳ್ಳದಂತೆ ನೋಡಿಕೊಳ್ಳಬೇಕು. ಸಮಸ್ಯೆ ಬಗೆಹರಿಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Raichuru: ಯುವತಿಗೆ ಚುಡಾಯಿಸಿದ ಆರೋಪದಲ್ಲಿ ಯುವಕನನ್ನು ಅಪಹರಿಸಿ ಕೂಡಿ ಹಾಕಿ ಹಲ್ಲೆ
ರಾಯಚೂರು: ಯುವತಿಗೆ ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದ್ದು, ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರದ ಯರಮರಸ್ ಕ್ಯಾಂಪ್ ನಿವಾಸಿಯಾಗಿರುವ ಮೆಹಬೂಬ್ ಎಂಬ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಕಚೇರಿ ಸಹಾಯಕ(ವಾರ್ಡ್ ಬಾಯ್) ಆಗಿ ಕೆಲಸ ಮಾಡುತ್ತಿದ್ದು ಅದೇ ಆಸ್ಪತ್ರೆಗೆ ಬಂದ ಯುವತಿಯೊಬ್ಬಳಿಗೆ ಚುಡಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಮೆಹಬೂಬ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಕುಟುಂಬಸ್ಥರು, ಕೆಲ ಸ್ನೇಹಿತರು ತಡೆದು ಅಪಹರಿಸಿದ್ದರೆನ್ನಲಾಗಿದೆ. ಮೆಹಬೂಬ್ ನನ್ನು ಐಡಿಎಸ್ ಎಂಟಿ ಲೇಔಟ್ ನಲ್ಲಿರುವ ಮನೆಯೊಂದರಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿದ್ದಾರೆ. ಇದರ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಮಹಿಳೆಯೊಬ್ಬಳು ಮೆಹಬೂಬ್ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣಿಸುತ್ತದೆ. ಈ ಬಗ್ಗೆ ಬಜಾರ್ ಠಾಣಾ ಪೊಲೀಸರನ್ನು ಸಂಪರ್ಕಿಸಿದಾಗ, ಯುವಕನ ಮೇಲಿನ ಹಲ್ಲೆಯ ವೈರಲ್ ವೀಡಿಯೋ ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್ ಆರೋಪ: ಮಧು ಕಿಶ್ವರ್ ವಿರುದ್ಧ ಪ್ರಕರಣ
ಚಂಡೀಗಢ: ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಹಾಗೂ ತಪ್ಪುದಾರಿಗೆಳೆಯುವ ಸರಣಿ ಪೋಸ್ಟ್ ಮಾಡಿದ ಆರೋಪದಲ್ಲಿ ಶಿಕ್ಷಣ ತಜ್ಞೆ ಮಧು ಕಿಶ್ವರ್ ವಿರುದ್ಧ ಚಂಡೀಗಢದಲ್ಲಿ ಪ್ರಕರಣ ದಾಖಲಾಗಿದೆ. ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಮಧು ಕಿಶ್ವರ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮ, ಜನಾಂಗ, ಭಾಷೆ ಆಧಾರವಾಗಿ ದ್ವೇಷ ಉಂಟುಮಾಡುವುದು), 336(1) (ಸುಳ್ಳು ಮಾಹಿತಿ), 356 (ಮಾನನಷ್ಟ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚಂಡೀಗಢ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಎಪ್ರಿಲ್ 19ರಂದು ದೂರುದಾರರು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಶ್ಲೀಲ ವಿಚಾರಗಳನ್ನು ಒಳಗೊಂಡ ತಪ್ಪುದಾರಿಗೆಳೆಯುವ ಪೋಸ್ಟ್ ಗಳು ಮತ್ತು ವೀಡಿಯೊಗಳನ್ನು ಹಂಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಈ ಪೋಸ್ಟ್ ಗಳು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜನರನ್ನು ತಪ್ಪುದಾರಿಗೆಳೆಯುವಂತಿವೆ. ಹಾನಿ ಉಂಟುಮಾಡುವ ಉದ್ದೇಶವೂ ಇದರಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ಸಾಂವಿಧಾನಿಕ ಪ್ರಾಧಿಕಾರದ ಖ್ಯಾತಿಗೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವೀಡಿಯೊದಲ್ಲಿರುವ ವ್ಯಕ್ತಿ ಟ್ರಾವೆಲ್ ವ್ಲಾಗರ್ ಆಗಿದ್ದು, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಾರೆ. ಮೂಲ ವೀಡಿಯೊವು ಅವರ ಖಾತೆಯಿಂದಲೇ ಹಂಚಿಕೆಯಾಗಿದೆ ಎಂದು ತಿಳಿಸಲಾಗಿದೆ. “ಮಹಿಳೆಯ ಹೇಳಿಕೆಯ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಅವರ ಪತಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪತಿ ಹಾಗೂ ವೀಡಿಯೊದಲ್ಲಿರುವ ಮತ್ತೊಬ್ಬ ಮಹಿಳೆಯ ಹೇಳಿಕೆಗಳನ್ನು ದಾಖಲಿಸಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ, ಕಿಶ್ವರ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ, ಸೋಮವಾರ ತಡರಾತ್ರಿ ಪೊಲೀಸರು ನೋಟಿಸ್ ನೀಡಲು ಮನೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ. “ಕಾನೂನು ಪ್ರಕಾರ ರಾತ್ರಿ ವೇಳೆ ಮಹಿಳೆಯರನ್ನು ಭೇಟಿ ಮಾಡುವುದಕ್ಕೆ ನಿರ್ಬಂಧ ಇರುವುದರಿಂದ, ಬೆಳಿಗ್ಗೆ ಬರಲು ತಿಳಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಅರ್ಧಕ್ಕೆ ನಿಂತ ಕಾಮಗಾರಿ; ಸಾರ್ವಜನಿಕರ ಪರದಾಟ
ರಸ್ತೆ ಮಧ್ಯೆಯೇ ಹರಿಯುತ್ತಿರುವ ಚರಂಡಿ ನೀರು: ರೋಗದ ಭೀತಿ
SSLC Result: ಹಿಂದಿ ಭಾಷೆಗೆ ಗ್ರೇಡ್ ಬದಲು ಈ ವರ್ಷ ಅಂಕವೇ ಕೊಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ, ಫಲಿತಾಂಶ ಯಾವಾಗ?
ಕಡೆಗೂ ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಮೌಲ್ಯಮಾಪನ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಈ ವರ್ಷ ಗ್ರೇಡ್ ಬದಲು, ಹಿಂದಿಗೆ ಅಂಕವನ್ನೇ ಕೊಡಲಾಗುತ್ತದೆ.
ಐತಿಹಾಸಿಕ ಕನಕಗಿರಿ ಉತ್ಸವದ ಕನಸಿಗೆ ಗರಿ
ಕನಕಗಿರಿ: ಐತಿಹಾಸಿಕ ಪ್ರಸಿದ್ಧಿಯ ಕನಕಗಿರಿಯ ಉತ್ಸವ ಮೇ 9 ಹಾಗೂ 10ರಂದು ನಡೆಸಲು ಜಿಲ್ಲಾಡಳಿತ ಯೋಜಿಸಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ಮೌರ್ಯರ ಅಶೋಕನ ಕಾಲದಿಂದಲೂ ಪ್ರಖ್ಯಾತವಾಗಿರುವ ಪಟ್ಟಣದಲ್ಲಿ ನೂರಾರು ದೇಗುಲ, ಬಾವಿಗಳು ಇವೆ. ದೇಗುಲಗಳ ನಗರ ಎಂದೆ ಈಗ ಕರೆಯಲಾಗುತ್ತಿದೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಕನಕಗಿರಿ ಉತ್ಸವವನ್ನು 2010ರಲ್ಲಿ ಆರಂಭಿಸಲಾಯಿತು. ಆ ನಂತರ 2013 ಹಾಗೂ 2015ರಲ್ಲಿ ಉತ್ಸವ ನಡೆಯಿತು. 2018-2023ರ ವರೆಗೆ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರೂ, ಕೊರೊನಾ ಸೇರಿದಂತೆ ಇತರೆ ಕಾರಣಗಳಿಂದ ಉತ್ಸವ ನಡೆಯಲಿಲ್ಲ. ಆದರೆ ಉತ್ಸವ ಆಚರಿಸಬೇಕೆಂಬ ಕೂಗು ಕಡಿಮೆಯಾಗಿರಲಿಲ್ಲ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಆಯ್ಕೆಯಾದರು. 2015ರ ನಂತರ 9 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕನಕಗಿರಿ ಉತ್ಸವಕ್ಕೆ 2024ರಲ್ಲಿ ಮತ್ತೆ ಚಾಲನೆ ದೊರೆಯಿತು. ಸಚಿವ ಶಿವರಾಜ ತಂಗಡಗಿ ಅವರು ಅದ್ದೂರಿ ಉತ್ಸವ ಆಚರಿಸಿ ಗಮನ ಸೆಳೆದರು. 2025ರಲ್ಲಿ ಕನಕಗಿರಿ ಕನಕಾಚಲಪತಿ ಮಹಾ ರಥೋತ್ಸವದ ಜತೆಗೆ ಉತ್ಸವ ಆಚರಣೆ ಮಾಡುವ ಇಂಗಿತವನ್ನು ಸಚಿವ ತಂಗಡಗಿ ಅವರು ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿ, ಜಾತ್ರೆಯಲ್ಲಿ ಉತ್ಸವ ಆಚರಿಸಿದರೆ ಐತಿಹಾಸಿಕ ಲಾಭದ ಕುರಿತು ತಂಗಡಗಿ ಮನವರಿಕೆ ಮಾಡಿದರು. ಈ ಸಮಯದಲ್ಲಿ ಒಂದಿಬ್ಬರು ಮಾತ್ರ ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಬಹುತೇಕರು ಮೌನವಾಗಿ ಸಮ್ಮತಿ ಸೂಚಿಸಿದ್ದರು. ಜಾತ್ರೆಯ ಸಮಯದಲ್ಲಿ ಉತ್ಸವ ಬೇಡ ಎಂಬ ಕೂಗು ರಾಜಕೀಯ ಸ್ವರೂಪ ಪಡೆದುಕೊಂಡಿತು. ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡ ಬಿಜೆಪಿಯ ಪ್ರಮುಖರು ಜಾತ್ರೆಯಲ್ಲಿ ಉತ್ಸವ ಆಚರಿಸಿದರೆ ಕನಕಗಿರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ರಾಜಕೀಯ ಪ್ರಹಸನವು ಸಚಿವ ತಂಗಡಗಿ ಅವರಿಗೆ ಹಿನ್ನಡೆಯಾಗಿತ್ತು. ಈ ಕುರಿತು ಮತ್ತೊಂದು ಸಭೆ ನಡೆದಾಗ ಜನರ ವಿರೋಧ ಕಟ್ಟಿಕೊಂಡು ಉತ್ಸವ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮುಖ ಸಪ್ಪೆ ಮುಖ ಮಾಡಿಕೊಂಡು ಮಾತನಾಡಿದರು. ಹೀಗಾಗಿ ಉತ್ಸವ ಆಚರಣೆಗೆ ಕೊಕ್ಕೆ ಬಿದ್ದಿತ್ತು. 2026ರ ಮಾ. 11ರಂದು ನಡೆದ ಜಾತ್ರಾ ಪೂರ್ವ ಭಾವಿಯಲ್ಲಿಯೂ ಉತ್ಸವ ಆಚರಣೆ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಇದು ಉತ್ಸವದ ಸಭೆಯಲ್ಲ, ಜಾತ್ರೆಯ ಸಿದ್ದತೆ ಎಂದು ಜಾಣತನದ ಉತ್ತರ ನೀಡುವ ಕೆಲಸ ಮಾಡಿದ್ದರು. ಸಭೆ ಮುಗಿದಾಗ ಕನ್ನಡಪರ ಸಂಘಟನೆಯ ಕೆಲವರು ಜಾತ್ರೆಯಲ್ಲಿಯಾದರೂ ಪರವಾಗಿಲ್ಲ, ಉತ್ಸವ ಮಾಡಿ ಎಂದು ಮನವಿ ಸಲ್ಲಿಸಿದ್ದು, ಉತ್ಸವದ ಕನಸಿಗೆ ಮತ್ತೆ ಜೀವ ತುಂಬಿತು. ಕಳೆದ ಎರಡು ವರ್ಷಗಳಿಂದಲೂ ಉತ್ಸವ ನಡೆಯದ ಕಾರಣ ಉತ್ಸವ ಯಾವಾಗ ಎಂಬ ಗ್ರಾಮಸ್ಥರು ಹಾಗೂ ಪತ್ರಕರ್ತರು ಪ್ರಶ್ನಿಸಿದಾಗ ಕಾಲ ಕೂಡಿ ಬರಲಿ ಎಂದು ತಂಗಡಗಿ ಉತ್ತರಿಸುತ್ತಿದ್ದರು. ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಎ.21, ಸಂಜೆ 6 ಗಂಟೆಗೆ ಕನಕಾಚಲಪತಿ ದೇಗುಲದಲ್ಲಿ ಸಭೆ ಕರೆದಿದ್ದು ಉತ್ಸವ ಆಚರಣೆ ಕನಸಿಗೆ ರೆಕ್ಕೆ ಬಂದಂತಾಗಿದೆ. ಅಲ್ಲದೆ ದಿನಾಂಕ ಕೂಡ ಪ್ರಕಟಿಸಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದೆ.
ಅಮೀರ್ ಖುಸ್ರೋ ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರು, ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಗದ್ದುಗೆಯೇರಿದ್ದಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಖುಸ್ರೋ 1275ರಿಂದ 1325ರ ವರೆಗಿನ ಭಾರತದ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧಿಕೃತ ವಕ್ತಾರ. ಕಳೆದ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ‘ಕಲಬುರಗಿ ನೆಕ್ಸ್ಟ್ ಟ್ರಸ್ಟ್’ ವತಿಯಿಂದ ಜಿಲ್ಲಾಡಳಿತ ಮತ್ತು ರಂಗಶಂಕರ ಜಂಟಿಯಾಗಿ ಆಯೋಜಿಸಿದ ನಾಟಕೋತ್ಸವ ನಡೆಯಿತು. ಈ ನಾಟಕೋತ್ಸವದಲ್ಲಿ ಮುಂಬೈನ ಅಜಿತೇಶ್ ಗುಪ್ತಾ ರಚನೆಯ ಮತ್ತು ಮೋಹಿತ್ ಅಗರ್ವಾಲ್ ಅವರ ಜತೆಗೂಡಿ ನಿರ್ದೇಶನ ಮಾಡಿದ ‘ಜೋ ದೂ ಬಾ ಸೋ ಪಾರ್’ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಈ ನಾಟಕ ಅಮೀರ್ ಖುಸ್ರೋ ಅವರ ಬದುಕಿನ ಪಯಣದ ಕಥನ. ಖುಸ್ರೋ ಅವರ ಗುರು ಹಝ್ರತ್ ನಿಝಾಮುದ್ದೀನ್ ಔಲಿಯಾ ಅವರೊಂದಿಗಿನ ಪ್ರೇಮದ ಆಖ್ಯಾನವನ್ನು ಎಳೆಎಳೆಯಾಗಿ ಕಟ್ಟಿಕೊಡುತ್ತದೆ. ಖವ್ವಾಲಿ ಗಾಯನದೊಂದಿಗೆ ದಾಸ್ತಾನ್ನಲ್ಲಿ ಹೆಣೆಯಲಾದ ಆಸಕ್ತಿದಾಯಕ ವ್ಯಾಖ್ಯಾನಗಳು ಮತ್ತು ಪುಟ್ಟ ಪುಟ್ಟ ಕಥೆಗಳು ಬೆರಗು ಮೂಡಿಸಿದವು. ಸೂಫಿಸಂನ ಸಾರ ಮತ್ತು ಮಾನವಕುಲದಲ್ಲಿ ಶಾಶ್ವತವಾಗಿ ಪ್ರಸ್ತುತವಾಗುವ ಪ್ರೀತಿಯ ಸಂದೇಶದ ಎಲ್ಲರ ಒಳಗನ್ನು ತಾಕಿತು. ಈ ನಾಟಕವನ್ನು ನಾನು ನೋಡಿದೆ ಎನ್ನುವುದಕ್ಕಿಂತ ತನ್ಮಯತೆಯಿಂದ ಅನುಭವಿಸಿದೆ ಎನ್ನುವುದೇ ಸರಿ. ಈ ನಾಟಕ ಅಮೀರ್ ಖುಸ್ರೋ ಅವರ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಮೂಡಿಸಿತು. ಆ ತಕ್ಷಣಕ್ಕೆ ನೆನಪಾದವರು ಕಲಬುರಗಿಯ ಹಿರಿಯ ಅನುವಾದಕರಾದ ರಿಯಾಝ್ ಅಹಮದ್ ಬೋಡೆ ಅವರು. ಕಾರಣ ಅವರ ಕೃತಿ ‘ಅಮೀರ್ ಖುಸ್ರೋ ಕಾವ್ಯಲೋಕ’ ವನ್ನು ಓದಬೇಕನ್ನಿಸಿತು. ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಕಟಿಸಿದ ಈ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿದಾಗ ಖುಸ್ರೋ ಕಾವ್ಯವು ಮನದೊಳಗೆ ಆವರಿಸಿತು. ಅಂತೆಯೇ ಖುಸ್ರೋನ ಬಗ್ಗೆ ಮತ್ತಷ್ಟು ತಿಳಿಯುವ ಹಸಿವನ್ನು ಹೆಚ್ಚಿಸಿತು. ಅಮೀರ್ ಖುಸ್ರೋ ಕನ್ನಡದ ವಚನ ಪರಂಪರೆಯ ಸಮಕಾಲೀನರು. ಬಸವಣ್ಣನ ನಂತರದವರು. ವಚನಕಾರರು ಕಾಯಕದ ಮಹತ್ವ ಹೇಳಿದಂತೆ ಖುಸ್ರೋ ಕೂಡ ‘ಕಾಯಕ’ ದ ಮೂಲಕವೇ ವ್ಯಕ್ತಿಗಳನ್ನು ಗುರುತಿಸುವ ಗುಣ ಹೊಂದಿದ್ದರು. ವಚನಕಾರ ಬಸವಣ್ಣನ ಜತೆ ಖುಸ್ರೋರ ಸಾಮ್ಯತೆಯೂ ಇದೆ. ಬಸವಣ್ಣ ರಾಜಶಾಹಿಯ ಜತೆಗಿದ್ದೂ ಮಾನವತೆಯ ಬಗ್ಗೆ ಹಂಬಲಿಸಿ ಸಮತೆಯ ಕನಸು ಕಂಡರು. ಅಂತೆಯೇ ಖುಸ್ರೋ ಕೂಡ ಸುಲ್ತಾನರ ಜತೆಗಿದ್ದೂ ‘ನಿನ್ನ ನೆನಹು ಮನದಲ್ಲಿ ಸುಳಿದೊಡೆ ಅದೆಂಥಾ ವಿನಾಶವು/ ಸುಲ್ತಾನನೆ ದಬ್ಬಾಳಿಕೆ ನಡೆಸಿದರೆ ಸಮೃದ್ಧಿಯು ಎಲ್ಲಿಹುದು’ ಎಂದು ಬರೆಯಬಲ್ಲವರಾಗಿದ್ದರು. ಕೆಲವು ಕವಿಗಳು ನಿರಂತರವಾದ ಬರಹ ಮತ್ತು ಕಾಣ್ಕೆಗಳ ಮೂಲಕ ಒಂದು ಪರಂಪರೆಯನ್ನೇ ಸೃಷ್ಟಿಸುತ್ತಾರೆ. ಹಾಗೆಯೇ ಅಮೀರ್ ಖುಸ್ರೋ ಕೇವಲ ಒಬ್ಬ ಕವಿ-ಇತಿಹಾಸಕಾರ ಮಾತ್ರವಲ್ಲ ಆತ ಹಲವು ಧಾರೆಗಳ ಒಂದು ಪರಂಪರೆಯನ್ನು ಹುಟ್ಟುಹಾಕಿದವರು. ಖುಸ್ರೋ ಕುರಿತು ಜಗತ್ತಿನ ಹಲವು ದೇಶಗಳು ಅಧ್ಯಯನ ಮಾಡುತ್ತಿವೆ. ಅಫ್ಘಾನಿಸ್ತಾನದ ಸರಕಾರವು ಡಾ. ರಾವನ್ ಫರ್ಹದಿ ಸಂಪಾದಕತ್ವದಲ್ಲಿ 1975ರಲ್ಲಿ ಖುಸ್ರೋ ಜೀವನ ಕೃತಿಗಳ ನಾಲ್ಕು ಸಂಪುಟಗಳನ್ನು ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಇಕ್ಬಾಲ್ ಸಲಾಹುದ್ದೀನ್ ಮತ್ತು ವಝೀರ್ ಉಲ್ ಹಸನ್ ಅವರ ಜಂಟಿ ಪ್ರಯತ್ನದಿಂದ 1972-75ರ ಅವಧಿಯಲ್ಲಿ ಖುಸ್ರೋ ಅವರ ಗಝಲ್ಗಳ ನಾಲ್ಕು ಸಂಪುಟಗಳನ್ನು ತರಲಾಗಿದೆ. ಖುಸ್ರೋರ ಕೃತಿಗಳು ತಾಷ್ಕೆಂಟ್, ಲೆನಿನ್ ಗ್ರಾಡ್, ಇಸ್ತಾಂಬುಲ್, ಬರ್ಲಿನ್, ಆಕ್ಸಫರ್ಡ್, ಲಂಡನ್, ದಿಲ್ಲಿ, ಮದ್ರಾಸ್ ಕರ್ನಾಟಕದ ಬಿಜಾಪುರ ಇಲ್ಲೆಲ್ಲಾ ಸಂರಕ್ಷಿಸಲ್ಪಟ್ಟಿವೆ. ಈಗಲೂ ಅಧ್ಯಯನಕ್ಕೆ ಒಳಗಾಗುತ್ತಿವೆ. ಹೀಗೆ ಖಸ್ರೋ ಕಾವ್ಯದ ಹರಿವು ಜಾಗತಿಕವಾಗಿ ಹಬ್ಬಿದೆ. ಕನ್ನಡದಲ್ಲಿ ದಿಲ್ಲಿ ಸುಲ್ತಾನರ ಇತಿಹಾಸದ ಪಾಠಗಳಲ್ಲಿ, ಬಿಡಿ ಬಿಡಿ ಕವಿತೆಗಳ ಅನುವಾದದಲ್ಲಿ ಖುಸ್ರೋ ಪರಿಚಯವಾಗಿದ್ದರು. ಹೀಗಿರುವಾಗ ಇಂತಹ ಮಹತ್ವದ ಜಾಗತಿಕ ಕವಿಯ ಆಯ್ದ ಗಝಲ್ ಮತ್ತು ಕವಿತೆಗಳನ್ನು ಅನುವಾದಿಸಿ ಆಪ್ತ ಪರಿಚಯದೊಂದಿಗೆ ರಿಯಾಝ್ ಅಹಮದ್ ಬೋಡೆ ಅವರು ಕನ್ನಡಿಗರಿಗೆ ಕೊಟ್ಟಿದ್ದಾರೆ. ಹೀಗಾಗಿ ಅವರು ಅಭಿನಂದನಾರ್ಹರು. ಇಂತಹದ್ದೊಂದು ಕೃತಿಯನ್ನು ಪ್ರಕಟಿಸಿದ ಕುವೆಂಪು ಭಾಷಾ ಭಾರತಿ ಕೂಡ ಮೆಚ್ಚುಗೆಗೆ ಅರ್ಹವಾದುದು. ಖುಸ್ರೋ ತಾನು ದೀರ್ಘಕಾಲ ಬದುಕಿದ ನಿರರ್ಥಕತೆಯ ಬಗ್ಗೆ ತನ್ನನ್ನು ತಾನೇ ಟೀಕಿಸಿಕೊಂಡಿದ್ದಾರೆ. ‘ದೀರ್ಘ ಆಯುಷ್ಯದ ಬಯಕೆಯಿಂದ ಏನು ಲಾಭ ದೊರೆಯಿತು/ ಬದುಕಿನ ಒಂದು ಕ್ಷಣವೂ ಸಂತಸದಿ ಎಂದೂ ಕಳೆಯಲಿಲ್ಲ’ ಎನ್ನುತ್ತಾರೆ. ಸುಲ್ತಾನರ ನಿರಂತರ ಸಂಘರ್ಷಗಳನ್ನು ಕಂಡ ಕವಿ ‘ದುರ್ದೈವಿ ಹೃದಯವು ಸಂತಸದಿ ಎಂದೂ ಇರಲಿಲ್ಲ/ ದುಗುಡ ದುಮ್ಮಾನದಿಂದ ಮುಕ್ತವಾಗಿ ಎಂದೂ ಇರಲಿಲ್ಲ’ ಎನ್ನುತ್ತಾರೆ. ಅಮೆರಿಕದ ಇತಿಹಾಸಕಾರ ರಿಚರ್ಡ್ ಎಂ. ಈಟನ್ ತನ್ನ ‘ಇಂಡಿಯಾ ಇನ್ ದ ಪರ್ಶಿಯನೇಟ್ ಏಜ್-1000-1765’ ಕೃತಿಯಲ್ಲಿ ಖುಸ್ರೋ ಬಗ್ಗೆ ಬರೆಯುತ್ತಾ ‘ಆ ಕಾಲದಲ್ಲಿ ಭಾರತದಲ್ಲಿ ಪ್ರಸಿದ್ಧ ಕವಿಗಳಾಗಿದ್ದ ಅಮೀರ್ ಹಸನ್, ಚರಿತ್ರೆಕಾರ ಝಿಯಾವುದ್ದೀನ್ ಬರನಿ ಮತ್ತು ಅಮೀರ್ ಖುಸ್ರೋ ಇವರೆಲ್ಲಾ ನಿಝಾಮುದ್ದೀನ್ ಔಲಿಯಾರ ಪ್ರಮುಖ ಶಿಷ್ಯರಾಗಿದ್ದರು. ಇವರ ಕೃತಿಗಳು ವ್ಯಾಪಕವಾಗಿ ಪ್ರಚಾರದಲ್ಲಿದ್ದ ಕಾರಣ ಮೂವರೂ ಶೇಕ್ ನಿಝಾಮುದ್ದೀನ್ ಮತ್ತವರ ಪಂಥದ ಹಾಗೂ ಆಶ್ರಯದಾತರಾದ ಸುಲ್ತಾನತ್ನ ನಿಲುವು, ಆದರ್ಶ, ಲೋಕದೃಷ್ಟಿಗಳ ರಾಯಭಾರಿಗಳೇ ಆಗಿದ್ದರು’ ಎನ್ನುತ್ತಾರೆ. ಹದಿಮೂರನೇ ಶತಮಾನದಲ್ಲಿ, ಚೆಂಗೇಸ್ ಖಾನ್ ಆಳ್ವಿಕೆಯಲ್ಲಿ ಮೊಗಲರ ದಬ್ಬಾಳಿಕೆಯಿಂದ ಬೇಸತ್ತು, ತುರ್ಕಿಯದ ಲಾಚಿನ್ ಪಂಗಡದ ಸರದಾರ ಅಮೀರ್ ಸೈಫುದ್ದೀನ್ ಮುಹಮ್ಮದ್ ಭಾರತಕ್ಕೆ ಬರುತ್ತಾರೆ. ಉತ್ತರ ಪ್ರದೇಶದ ಈಟಾ ಜಿಲ್ಲೆಯ ಪಟಿಯಾಲಿ ಎಂಬ ಸ್ಥಳದಲ್ಲಿ ನೆಲೆಸಿ, ಸುಲ್ತಾನ್ ಶಂಸುದ್ದೀನ್ ಅಲ್ತಮಷ್ನ ದರ್ಬಾರ್ನಲ್ಲಿ ಸೈನಿಕನಾಗಿ ಸೇರುತ್ತಾರೆ. ಇಮಾದುಲ್ ಮುಲ್ಕರ ಪುತ್ರಿಯ ಜೊತೆ ಇವರ ವಿವಾಹವಾಯಿತು. ಈ ದಂಪತಿಗೆ ಕ್ರಿ.ಶ. 1253 (ಹಿ.653)ರಲ್ಲಿ ಹುಟ್ಟಿದ ಮಗುವೇ ಅಬುಲ್ ಹಸನ್ (ಅಮೀರ್ ಖುಸ್ರೋ). ಖುಸ್ರೋ ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ತಂದೆಯ ಜೊತೆ ದಿಲ್ಲಿಗೆ ಬಂದು, ಖಾಜಿ ಅಸದುದ್ದೀನ್ ಮುಹಮ್ಮದರ ಶಿಷ್ಯತ್ವದಲ್ಲಿ ಶಿಕ್ಷಣ ಆರಂಭಿಸಿದರು. ತಂದೆಯವರು ವಿದ್ಯಾರ್ಜನೆಗಾಗಿ ಪ್ರಸಿದ್ಧ ಸೂಫಿ ಸಂತರಾದ ಹಝ್ರತ್ ಖ್ವಾಜಾ ನಿಝಾಮುದ್ದೀನ್ರವರ ಶಿಷ್ಯ (ಮುರೀದ್)ನನ್ನಾಗಿ ಸೇರಿಸಿದರು. ಖುಸ್ರೋ ಎಂಟು ವರ್ಷದವನಿದ್ದಾಗಲೇ ತಂದೆ ಯುದ್ಧದಲ್ಲಿ ಮಡಿದರು. ಮುಂದೆ ಅಜ್ಜ ವಯೋವೃದ್ಧ ಇಮಾದುಲ್ ಮುಲ್ಕ್ ಬಳಿ ಹಲವು ವಿದ್ಯೆಗಳನ್ನು ಕಲಿಯುತ್ತಾರೆೆ. ಮನೆಯ ಭಾಷೆ ಹಿಂದಿ(ಹಿಂದುವಿ) ಆಗಿತ್ತು. ಹಿಂದಿಯ ಜೊತೆಗೆ ಸಂಸ್ಕೃತ, ಅರಬಿ, ಫಾರ್ಸಿ, ತುರ್ಕಿ ಹಾಗೂ ಭಾರತೀಯ ಇನ್ನಿತರ ಪ್ರಾಂತೀಯ ಭಾಷೆಗಳನ್ನೂ ಕಲಿಯುತ್ತಾರೆ. ಖುಸ್ರೋ ಹನ್ನೆರಡನೇ ವಯಸ್ಸಿನಲ್ಲಿ ಕವಿತೆ ಮತ್ತು ರುಬಾಯಿ ರಚನೆ ಮಾಡುವ ಪ್ರತಿಭಾವಂತರಾಗಿದ್ದರು. ಖುಸ್ರೋ 17 ವರ್ಷದ ಚಿಕ್ಕ ವಯಸ್ಸಿನಲ್ಲಿ ಒಬ್ಬ ಕವಿಯಾಗಿ, ಕವಿಗೋಷ್ಠಿಗಳ ಕಣ್ಮಣಿಯಾಗಿದ್ದರು. ಖುಸ್ರೋರವರು ಗಝಲ್ ಕ್ಷೇತ್ರದಲ್ಲಿ ಸಾದಿಯವರಿಂದ, ಮಸ್ನವಿ ಕ್ಷೇತ್ರದಲ್ಲಿ ನಿಝಾಮಿಯವರಿಂದ, ಸೂಫಿ ಕಾವ್ಯಕ್ಷೇತ್ರದಲ್ಲಿ ಕಾಖಾನಿ ಹಾಗೂ ಸನಾಯಿ ಮತ್ತು ಖಸೀದಾ ಕ್ಷೇತ್ರದಲ್ಲಿ ಕಮಾಲ್ ಇಸ್ಮಾಯೀಲ್ರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಖುಸ್ರೋರವರು ಏಕಕಾಲಕ್ಕೆ ಕವಿ, ಗದ್ಯಲೇಖಕ, ಕಲಾಕಾರ, ಸಂಗೀತಜ್ಞ, ಸಾಹಸಿ ಸೈನಿಕ ಹಾಗೂ ಸಂತ ಹೀಗೆ ಹಲವು ವೈಶಿಷ್ಟ್ಯಗಳ ಸಂಗಮವಾಗಿದ್ದರು. ಇಂತಹ ವಿಭಿನ್ನ ಸಾಹಿತ್ಯ ಸಿದ್ಧಿಗಳ ಕವಿ-ಲೇಖಕ ಭಾರತ ಮತ್ತು ಇರಾನ್ನಲ್ಲಿ ಮತ್ತೊಬ್ಬರಿಲ್ಲ ಎನ್ನುವುದು ವಿದ್ವಾಂಸರ ಅಭಿಮತ. ಅಮೀರ್ ಖುಸ್ರೋ ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರು, ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಗದ್ದುಗೆಯೇರಿದ್ದಕ್ಕೆ ಸಾಕ್ಷಿಯಾಗಿದ್ದರು. ಅಂತೆಯೇ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಖುಸ್ರೋ 1275ರಿಂದ 1325ರವರೆಗಿನ ಭಾರತದ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧಿಕೃತ ವಕ್ತಾರ. ಅಮೀರ್ ಖುಸ್ರೋ ಯಾವುದೇ ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ ಪೂರ್ವಾಗ್ರಹಗಳನ್ನು ಹೊಂದಿರಲಿಲ್ಲ. ತನ್ನ ಸಮಕಾಲೀನ ಇತಿಹಾಸಕಾರ ಬರಾನಿ, ಎಲ್ಲಾ ಶ್ರೇಷ್ಠಗುಣಗಳನ್ನು ಉನ್ನತ ಜಾತಿಯವರಿಗೂ, ಪ್ರತಿಯೊಂದು ದುರ್ಗುಣವನ್ನು ಕೆಳ ಜಾತಿಯವರಿಗೆ ಆರೋಪಿಸುವುದನ್ನು ಖುಸ್ರೋ ತೀವ್ರವಾಗಿ ಖಂಡಿಸುತ್ತಾರೆ. ಸಮಾಜದಲ್ಲಿ ಮನುಷ್ಯನ ಸ್ಥಾನವನ್ನು ಅವನ ಹುಟ್ಟು ಅಥವಾ ಕುಟುಂಬದ ಆಧಾರದ ಮೇಲೆ ನಿರ್ಧರಿಸುವ ನೀತಿಶಾಸ್ತ್ರವನ್ನು ದಿಕ್ಕರಿಸಿ ಮನುಷ್ಯನನ್ನು ಆತನ ಭಕ್ತಿ ಮತ್ತು ಕಾಯಕನಿಷ್ಠೆಯ ಆಧಾರದ ಮೇಲೆ ನಿರ್ಧರಿಸಬೇಕು ಎನ್ನುತಾರೆ. ಕಷ್ಟಪಟ್ಟು ದುಡಿಯುವ ಶ್ರಮಜೀವಿಗಳೇ ಶ್ರೇಷ್ಠಕುಲದವರು ಎನ್ನುತ್ತಾರೆ. ಮುಸ್ಲಿಮರಲ್ಲಿ ಉನ್ನತ ಸ್ಥಾನ ಪಡೆದಿದ್ದ ಉಲೆಮಾಗಳು ಸಾಮಾನ್ಯ ಜನರಿಗಿಂತ ಹೆಚ್ಚಿನವರೇನಲ್ಲ ಎಂದು ಹೇಳುತ್ತಾರೆ. ವ್ಯಕ್ತಿಯು ನ್ಯಾಯಸಮ್ಮತವಾದ ದುಡಿಮೆಯಿಂದ ಶ್ರೀಮಂತನಾಗಬೇಕೇ ವಿನಃ ಅನ್ಯಾಯದ ಮಾರ್ಗದಿಂದಲ್ಲ ಎನ್ನುವುದು ಖುಸ್ರೋ ನೀತಿಯಾಗಿತ್ತು. ಸಂಪತ್ತು ಇರುವುದು ಇಲ್ಲದವರಿಗೆ ಹಂಚುವುದಕ್ಕೇ ವಿನಃ ಸಂಗ್ರಹಿಸಿ ಕೂಡಿಡುವುದಕ್ಕಲ್ಲ ಎನ್ನುತ್ತಾರೆ. ಇದರಂತೆಯೇ ಗುರು ನಿಝಾಮುದ್ದೀನ್ ಔಲಿಯಾ ತೀರಿದ ನಂತರ ತನ್ನೆಲ್ಲಾ ಸಂಪತ್ತನ್ನು ಬಡಬಗ್ಗರಿಗೆ ಹಂಚಿ ಕಪ್ಪುಬಟ್ಟೆ ಧರಿಸಿ ಗುರುವಿನ ಸಮಾಧಿಯ ಬಳಿ ಧ್ಯಾನದಲ್ಲಿದ್ದು ಕೊನೆಯುಸಿರೆಳೆಯುತ್ತಾರೆ. ಭಾರತಕ್ಕೆ ವಲಸೆ ಬಂದ ಆರಂಭಿಕ ಮುಸ್ಲಿಮ್ ವಲಸಿಗರಲ್ಲಿ ಶ್ರೇಷ್ಠ ಮುಸ್ಲಿಮರ ಪೂರ್ವಜರು ಭಾರತದ ಹೊರಗಡೆಯವರಾಗಿರಬೇಕಿತ್ತು. ಭಾರತದೊಳಗೆ ಪೋಷಕರಿದ್ದರೆ ಅಂತಹವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಹೀಗಾಗಿಯೇ ಬಲ್ಬನ್ ಭಾರತೀಯ ಮೂಲದವನೆಂದು ರಾಜ ಮನೆತನದಿಂದ ವಜಾಗೊಳಿಸಿದರು. ವಸ್ತುಸ್ಥಿತಿ ಹೀಗಿದ್ದರೂ ತಾಯಿಯ ಕಡೆಯಿಂದ ಶುದ್ಧ ಭಾರತೀಯರಾಗಿದ್ದ ಖುಸ್ರೋ ತಾನೊಬ್ಬ ‘ಭಾರತೀಯ’ ಎಂದು ಹೇಳಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಬದಲಾಗಿ ಭಾರತ ನನ್ನ ‘ಜನ್ಮಸ್ಥಳ’ ಅದು ನನ್ನ ‘ತಾಯ್ನಾಡು’ ಎಂದು ಹೆಮ್ಮೆಪಡುತ್ತಿದ್ದರು. ನಾನೊಬ್ಬ ‘ಭಾರತೀಯ ಟರ್ಕಿಶ್’ ಅಥವಾ ‘ಟರ್ಕ್-ಹಿಂದುಸ್ಥಾನಿ’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಖುಸ್ರೋ ಭಾರತೀಯ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ ಪರ್ಷಿಯನ್ ಮತ್ತು ಭಾರತೀಯ ಸಂಗೀತವನ್ನು ಸಂಯೋಜಿಸಲು ಪ್ರಯತ್ನಿಸಿದರು. ಹೀಗೆ ಎರಡರ ಲಯ ಮೌಲ್ಯಗಳನ್ನು ಪ್ರಸ್ತುತಪಡಿಸುವ ಮಧುರ ಸಂಗೀತವನ್ನು ವಿಕಾಸಗೊಳಿಸಿದರು. ಹೀಗಾಗಿ ಖುಸ್ರೋಗೆ ಭಾರತದ ಸಂಗೀತ ಲೋಕ ಋಣಿಯಾಗಿದೆೆ. ಖುಸ್ರೋ ‘ಖವ್ವಾಲಿಯ ಜನಕ’. ಭಾರತ ಪಾಕಿಸ್ತಾನ ಹಾಗೂ ಇರಾನ್ ದೇಶಗಳಲ್ಲಿ ಗಝಲ್ ಶೈಲಿಯನ್ನು ಜನಪ್ರಿಯಗೊಳಿಸಿದರು. ಅಲ್ಲದೇ ಪರ್ಷಿಯನ್, ಅರೇಬಿಕ್ ಹಾಗೂ ಟರ್ಕಿಶ್ ಅಂಶಗಳನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಬೆಸೆದರು. ‘ಖಾಯಲ್ ಹಾಗೂ ತಾರಾನಾ’ ಶೈಲಿಯ ಸಂಗೀತಕ್ಕೂ ಜನಕರಾಗಿದ್ದಾರೆ. ಹೀಗಾಗಿಯೇ ಅಮೀರ್ ಖುಸ್ರೋರವರನ್ನು ಭಾರತದ ಗಿಳಿ ಎಂದೇ ಕರೆಯಲಾಗುತ್ತದೆ. ಖುಸ್ರೋ ತಮ್ಮ ಇಸ್ಲಾಮಿಕ್ ಮತ್ತು ಭಾರತೀಯ ಪರಂಪರೆಗಳ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಲೇ ಈ ಎರಡರ ನಡುವಿನ ಅಂತರವನ್ನು ಪ್ರಜ್ಞಾಪೂರ್ವಕವಾಗಿ ತಗ್ಗಿಸಲು ಯತ್ನಿಸಿದ ಪ್ರವರ್ತಕರಾಗಿದ್ದರು. ಈ ಪ್ರಯತ್ನಗಳು ತಕ್ಷಣಕ್ಕೆ ಫಲ ನೀಡದಿದ್ದರೂ ಭವಿಷ್ಯದ ಪೀಳಿಗೆಗಳನ್ನು ಗಾಢವಾಗಿ ಪ್ರಭಾವಿಸಿದವು. ಅಮೀರ್ ಖುಸ್ರೋ ಅವರ ಭಕ್ತಿಗೀತೆ ಮತ್ತು ಹಾಡುಗಳ ಗಾಢ ಪ್ರಭಾವವು ಖುಸ್ರೋ ನಂತರದ ಭಾರತದ ಕೆಲವು ಮಹಾನ್ ಆಧ್ಯಾತ್ಮಿಕ ನಾಯಕರುಗಳಾದ ಗುರುನಾನಕ್, ಕಬೀರ್, ಸಂತ ನಾಮ್ ದೇವ್, ವಾರಿಸ್ ಶಾ ಮತ್ತು ಅಬ್ದುಲ್ ಲತೀಫ್ ಮೊದಲಾದವರ ಅರಿವು ಮತ್ತು ಮಾತುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಅವರು ಭಾರತೀಯ ಹೊಸ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ವಿವಿಧ ಧರ್ಮಗಳ ಜನರನ್ನು ಆಧ್ಯಾತ್ಮಿಕವಾಗಿ ಬೆಸೆಯಲು ಕಾರಣವಾಗಿದ್ದಾರೆ.
ನಾಗರಿಕರ ಅಸಡ್ಡೆ: ಪ್ಲಾಸ್ಟಿಕ್ ತಿನ್ನುತ್ತಿರುವ ಜಾನುವಾರುಗಳು
ಯಡ್ರಾಮಿ: ಪುಟ್ಟ ಮಗು ಚಾಕ್ಲೆಟ್ಟೋ, ಐಸ್ಕ್ರೀಮೋ ತಿನ್ನುತ್ತ ಬಾಯಿಗೆ ಸ್ವಲ್ಪ ಕಾಗದ ಅಥವಾ ಪ್ಲಾಸ್ಟಿಕ್ ಹೋದರೆ ಪ್ರಳಯವಾದಂತೆ ವರ್ತಿಸುವ ಮನುಷ್ಯನ ಈ ಸೂಕ್ಷ್ಮತೆ ರಸ್ತೆ ಪಕ್ಕ ಪ್ಲಾಸ್ಟಿಕ್ನಲ್ಲಿ ಆಹಾರ ಸುತ್ತಿ ಬಿಸಾಡುವಾಗ ಅದೆಲ್ಲಿ ಅಡಗಿರುತ್ತದೋ ಗೊತ್ತಿಲ್ಲ. ಸಗರ ನಾಡು ಎಂದೇ ಖ್ಯಾತಿ ಪಡೆದಿರುವ ಯಡ್ರಾಮಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಚೀಲ, ಬಾಟಲ್ಗಳು ಕಣ್ಣಿಗೆ ರಾಚುತ್ತಿವೆ. ಸ್ವಚ್ಛಂದವಾಗಿ ಹುಲ್ಲುಗಾವಲಿನಲ್ಲಿ ತಿರುಗಾಡಿಕೊಂಡಿದ್ದ ನಾಯಿ, ಹಂದಿ, ಹಸುಗಳ ಹೊಟ್ಟೆಯಲ್ಲೂ ಈಗೀಗ ಮೂಟೆಗಟ್ಟಲೇ ಪ್ಲಾಸ್ಟಿಕ್ ಪತ್ತೆಯಾಗುತ್ತಿದೆ. ಆದರೆ, ಇದಕ್ಕೆ ದೂಷಿಸಬೇಕಾದುದು ಪ್ಲಾಸ್ಟಿಕ್ ನ್ನು ಅಲ್ಲ. ಬದಲಾಗಿ, ಅದನ್ನು ವೈಜ್ಞಾನಿಕವಾಗಿ ನಿರ್ವಹಿಸದೇ ಎಲ್ಲೆಂದರಲ್ಲಿ ಬಿಸಾಡುವ ನಾಗರಿಕರ ಅಸಡೆಯನ್ನು. ಮನೆಯಲ್ಲಿ ಉಳಿದ ಆಹಾರ, ಕೊಳೆತ ತರಕಾರಿ, ಹಾಳಾದ ಹಣ್ಣುಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ರಸ್ತೆ ಪಕ್ಕ ಎಸೆಯುವ ಜನರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ. ಜಾನುವಾರುಗಳು ಆಹಾರವನ್ನು ತಿನ್ನುವ ಧಾವಂತದಲ್ಲಿ ಪ್ಲಾಸ್ಟಿಕ್ ಕೂಡಾ ಅವುಗಳ ಹೊಟ್ಟೆ ಸೇರುತ್ತಿವೆ. ಜೀರ್ಣವಾಗಿ ಹೊರ ಹೋಗದೆ, ಆ ಪ್ಲಾಸ್ಟಿಕ್ ಗಳು ಹೊಟ್ಟೆಯಲ್ಲಿಯೇ ಉಳಿದುಕೊಳ್ಳುತ್ತದೆ. ಪ್ರಾಣಿಗಳ ಹೊಟ್ಟೆಯಲ್ಲಿ ಶೇ.75ರಷ್ಟು ಪ್ಯಾಸ್ಟಿಕ್ ತುಂಬುವವರೆಗೆ ಗೊತ್ತಾಗುವುದಿಲ್ಲ. ಯಾವುದೇ ಲಕ್ಷಣಗಳು ಸಹ ಗೋಚರಿಸುವುದಿಲ್ಲ ಜಾನುವಾರುಗಳಲ್ಲಿ ನಾಲ್ಕು ಉದರಗಳಿದ್ದು ಅದರಲ್ಲಿ ತುಂಬ ದೊಡ್ಡದಾದ ರುಮೇನ್ನಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ದೊಡ್ಡ ಜಾನುವಾರುಗಳ ದೊಡ್ಡ ಹೊಟ್ಟೆಯು 150 ಕೆ.ಜಿ.ವರೆಗೆ ಇದ್ದು ಇದರ ಬಹುಭಾಗ ಪ್ಲಾಸ್ಟಿಕ್ ಆಕ್ರಮಿಸಿಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆಯ ಮೂಲಕ 40 ರಿಂದ 80 ಕೆ.ಜಿವರೆಗೆ ದನಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ಹೊರತೆಗೆದ ಉದಾಹರಣೆಗಳೂ ಇವೆ. ನಿರಂತರವಾಗಿ ಆಹಾರದ ಮುಖಾಂತರ ಪ್ಲಾಸ್ಟಿಕ್ ಹೊಟ್ಟೆ ಸೇರುವುದರಿಂದ ನಿಧಾನವಾಗಿ ಲಿವರ್ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಲಕ್ಷಣಗಳು ಗೋಚರವಾಗುತ್ತವೆ. ಅಲ್ಲಿಯವರೆಗೆ ಆರೋಗ್ಯದಲ್ಲೇನೂ ಸಮಸ್ಯೆ ಉಂಟಾಗುವುದಿಲ್ಲ. ದನ-ಕರುಗಳಿಗೆ ಚಿಕಿತ್ಸೆ ನೀಡಿ ಹೊಟ್ಟೆಯಿಂದ ಪ್ಲಾಸ್ಟಿಕ್ ತೆಗೆಯಬಹುದು. ಆದರೆ ವನ್ಯಜೀವಿಗಳಿಗೆ ಈ ಅದೃಷ್ಟ ಕಡಿಮೆ. ಅವುಗಳಲ್ಲಿ ಯಾವುದೇ ರೋಗ ಕಾಣಿಸಿಕೊಂಡರೂ ಗೊತ್ತಾಗುವುದಿಲ್ಲ. ಹೀಗಾಗಿ ಸಾವೊಂದೇ ಅವುಗಳ ಮುಂದಿರುವ ಆಯ್ಕೆ. ಅಪ್ಪಿತಪ್ಪಿ ಸತ್ತಿದ್ದು ಗಮನಕ್ಕೆ ಬಂದಾಗ ಪರೀಕ್ಷೆ ವೇಳೆ ಅವುಗಳ ಹೊಟ್ಟೆಯಲ್ಲೂ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ ಎನ್ನುತ್ತಾರೆ ಹಿರಿಯ ಪಶುವೈದ್ಯರು. ಪ್ಲಾಸ್ಟಿಕ್ ಸಮಸ್ಯೆಯಲ್ಲ. ಅದನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದರಿಂದ ಸಮಸ್ಯೆಗಳಾಗುತ್ತಿವೆ. ಅದರಲ್ಲೂ ಪ್ಲಾಸ್ಟಿಕ್ನಲ್ಲಿ ಆಹಾರ ಪದಾರ್ಥಗಳನ್ನು ಸುತ್ತಿ ಬಿಸಾಡುವುದರಿಂದ ಅವುಗಳನ್ನು ಸೇವಿಸುವ ಪ್ರಾಣಿಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿ ಆರೋಗ್ಯದ ಸಮಸ್ಯೆ ಆಗುತ್ತಿದೆ. ಪೌಷ್ಟಿಕಾಂಶ ಕೊರತೆಯಿಂದ ಜಾನುವಾರುಗಳು ಪ್ಲಾಸ್ಟಿಕ್, ಬಟ್ಟೆ, ಹಗ್ಗ ಇತ್ಯಾದಿಗಳನ್ನು ತಿನ್ನುತ್ತವೆ. ರೈತರು ಪಟ್ಟಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಬಿಡಾಡಿಯಾಗಿ ಬಿಡದೇ ಮನೆಯಲ್ಲಿ ಪೋಷಿಸಬೇಕು. ಜಾನುವಾರು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು. <ಡಾ. ಪ್ರಭು ಕಲ್ಲೂರ, ಮುಖ್ಯ ಪಶು ವೈದ್ಯಾಧಿಕಾರಿ, ಆಡಳಿತ ಪಶು ಆಸ್ಪತ್ರೆ, ಯಡ್ರಾಮಿ
ಯುದ್ಧ ಯಾರೇ ಪ್ರಾರಂಭ ಮಾಡಿರಲಿ ಸಾವು-ನೋವುಗಳು ಮಾತ್ರ ಎಲ್ಲೆಡೆ ತಪ್ಪಿದ್ದಲ್ಲ. ಯುದ್ಧದಿಂದ ಪಡೆಯುವುದಾರೂ ಏನು? ಲಕ್ಷಾಂತರ ವಿಧವೆಯರು, ಅಸಂಖ್ಯ ಅನಾಥರು, ಸಾವಿರಾರು ಕಂದಮ್ಮಗಳ ಅನುಪಸ್ಥಿತಿ, ಊಹಿಸದಷ್ಟು ಅಂಗವಿಕಲರು, ಬುದ್ಧಿ ಮಾಂದ್ಯರು, ಕಂಡು ಕೇಳರಿಯದ ವ್ಯಾಧಿಗಳು, ಇಡೀ ವಾತಾವರಣ ವಿಷಾನಿಲಪೂರಿತವಾಗುವುದು ಹೀಗೆ ಸಂಕಟಗಳ ಸರಮಾಲೆಯೇ ಯುದ್ಧದಿಂದ ಪಡೆಯಬಹುದಾದ ಫಲಿತಗಳು. ಎರಡು ಮಹಾಯುದ್ಧಗಳಲ್ಲಿ ಈ ಎಲ್ಲ ಅನಿಷ್ಟಗಳನ್ನು ಕಂಡಿದ್ದೇವಷ್ಟೆ. ಆದರೂ ಮನುಷ್ಯರು ಪಾಠ ಕಲಿಯುತ್ತಿಲ್ಲವೆಂದಾದರೆ ಇದರ ಮರ್ಮವೇನು? ಯುದ್ಧ ಜಗತ್ತಿನ ಯಾವ ಮೂಲೆಯಲ್ಲಿಯೇ ಸಂಭವಿಸಲಿ, ಅದರ ಪರಿಣಾಮ ಮಾತ್ರ ಇಡೀ ವಿಶ್ವ ಅನುಭವಿಸಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ಗಳಿಗಾಗಿ ಜನ ಎಲ್ಲೆಲ್ಲೂ ಒದ್ದಾಡುತ್ತಿರುವುದೇ ಸಾಕ್ಷಿ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಒಂದು ಕಡೆ (ಎರಡನೇ ಮಹಾಯುದ್ಧದ ಸಂದರ್ಭವೆಂದು ತೋರುತ್ತದೆ) ಹೀಗೆ ಹೇಳುತ್ತಾರೆ. ‘ಎಲ್ಲಿಯೋ ನಡೆದ ಯುದ್ಧವೊಂದು ಭಾರತದ ಯಕಶ್ಚಿತ್ ಹಳ್ಳಿಯೊಂದರ ಕೂಡು ಕುಟುಂಬವೊಂದನ್ನು ಒಡೆದು ಹಾಕಿ ಇನ್ನು ಮುಂದೆಂದೂ ಕೂಡದಂತೆ ಮಾಡಿತು’ ಎಂದು ಬರೆಯುತ್ತಾರೆ. ಅದು ಹೇಗೆಂದರೆ ಮಲೆನಾಡು ಅಡಿಕೆ, ತೆಂಗು, ಬಾಳೆ, ಮೆಣಸು, ಗೋಡಂಬಿ ಇತ್ಯಾದಿ ವಾಣಿಜ್ಯ ಬೆಳೆಗಳ ನಾಡಲ್ಲವೆ? ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ವೆಂಕಟಪ್ಪಗೌಡರದು ಕೃಷಿಕ ಮನೆತನ. ದೊಡ್ಡ ಕೂಡು ಕುಟುಂಬ. ಮನೆತುಂಬ ಮಕ್ಕಳು, ಮೊಮ್ಮಕ್ಕಳು. ಕುವೆಂಪು ಅವರ ಮಲೆನಾಡಿನ ಚಿತ್ರಗಳು ಅಥವಾ ಅವರ ಆತ್ಮಚರಿತ್ರೆ ‘ನೆನಪಿನ ದೋಣಿಯಲಿ’ ಓದಿದ ಯಾರಿಗಾದರೂ ಅವರ ಕುಟುಂಬದ ಚಿತ್ರಣ ಕಣ್ಮುಂದೆ ಸುಳಿಯದಿರದು. ತುಂಬಾ ಖರ್ಚು ಮಾಡಿ ಬೆಳೆದ ಅಡಿಕೆ ಮೂಟೆಗಳನ್ನು ಮಾರಾಟ ಮಾಡಲೆಂದು ಕಳಿಸುತ್ತಾರೆ. ವಿದೇಶಗಳಿಗೆ ರಫ್ತಾಗುವ ಉತ್ತಮ ತಳಿಯ ಅಡಿಕೆ ಅದು. ಮೂಟೆಗಳೇನೋ ಹಡಗುಗಳಿಗೆ ತುಂಬಿಸಲಾಯಿತು. ಅಷ್ಟರಲ್ಲಿ ಯುದ್ಧ ಪ್ರಾರಂಭವಾಗಿ ಅಡಿಕೆ ಮೂಟೆ ಹೊತ್ತ ಹಡಗುಗಳು ಮದ್ರಾಸ್ನ ಬಂದರುಗಳಲ್ಲಿ ತಿಂಗಳುಗಟ್ಟಲೆ ಕೊಳೆಯತೊಡಗಿದವು. ಸಗಟು ವ್ಯಾಪಾರಿಗಳು ಕೈ ಚೆಲ್ಲಿ ಕುಳಿತರು. ಮಾಲು ನಿಗದಿತ ಸ್ಥಳಕ್ಕೆ ಮುಟ್ಟದೆ ಸಗಟು ವ್ಯಾಪಾರಿಗಳಿಗೆ ಹಣ ಬಟವಾಡೆಯಾಗದು. ತತ್ಪರಿಣಾಮ ರೈತರ ಕೈಗಳಿಗೆ ಹಣ ದಕ್ಕುವಂತೆಯೇ ಇಲ್ಲ. ಈ ಕಡೆ ಬೆಳೆದ ಮಾಲು ಮನೆಯಲ್ಲಿಯೂ ಇಲ್ಲ. ಆ ಕಡೆ ವಿದೇಶಗಳಿಗೆ ತಲುಪುವಂತೆಯೂ ಇಲ್ಲ. ಹಡಗಿನಲ್ಲಿ ದಾಸ್ತಾನಾದ ಅಡಿಕೆ ಸಮುದ್ರದ ಉಪ್ಪು ಹವೆಯಲ್ಲಿ ಬೂಸ್ಟು ಹಿಡಿಯುವುದು ಗ್ಯಾರಂಟಿ. ವೆಂಕಟಪ್ಪಗೌಡರು ಬೆಳೆಗಾಗಿ ಮಾಡಿದ ಸಾಲದ ಬಡ್ಡಿ ಏರುತ್ತಲೇ ನಡೆಯಿತು. ಸಾಲಗಾರರ ತಗಾದೆ, ಮನೆ ಖರ್ಚು ನಿಭಾಯಿಸಲಾಗದ ಒದ್ದಾಟ. ಬೇಡವೆಂದರೂ ದೊಡ್ಡ ವ್ಯಾಪಾರಕ್ಕೆ ಕೈ ಹಾಕಿದ ಕುವೆಂಪು ಅವರ ತಂದೆಗೂ ದೊಡ್ಡಪ್ಪನಿಗೂ ಮನಸ್ತಾಪ ಸುರುವಾಯಿತಂತೆ. ಬೆಳೆಯುತ್ತಿರುವ ಸಾಲದ ಹೊರೆಗಂಜಿ ದೊಡ್ಡಪ್ಪ ತಾವು ಬೇರೆ ಆಗುವುದಾಗಿ ಹಟ ಹಿಡಿದರಂತೆ. ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ಆರ್ಥಿಕ ಸಂಕಟವು ಅವರ ಕುಟುಂಬವನ್ನು ಒಗ್ಗಟ್ಟಾಗಿ ನಿಲ್ಲಿಸದೆ ಹೋಯಿತು. ಹೀಗೆಂದು ತುಂಬಾ ವಿಷಾದದಿಂದ ಕವಿ ಕುವೆಂಪು ಯುದ್ಧದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಗೆ ನೋಡಿದರೆ ಆ ಕಾಲಕ್ಕೆ ವೆಂಕಟಪ್ಪಗೌಡರದು ಅನುಕೂಲಸ್ಥ ಮನೆತನವೇ. ಉಂಡುಟ್ಟು ಸಮೃದ್ಧವಾಗಿ ಇದ್ದ ಕುಟುಂಬ. ಇಂಥವರ ಮನೆತನಗಳೇ ಯುದ್ಧದ ಕರಾಳತೆಗೆ ಸಿಲುಕಿ ನೆಲಕಚ್ಚಿರಬೇಕಾದರೆ ಕೂಲಿ ಕಾರ್ಮಿಕರ, ದುಡಿಯುವ ತಳಸಮುದಾಯಗಳ ಬದುಕು ಅದೆಷ್ಟು ದುರ್ಭರವಾಗಿರಬಹುದು ಎಂಬುದನ್ನು ಊಹಿಸಲಾದೀತೆ? ಯುದ್ಧ ಕಾಲದಲ್ಲಿ ಮಾಮೂಲಿ ಚಿಮಣಿ ಎಣ್ಣೆಗಾಗಿ ಬಡಿದಾಡುವ ಬಡ ಕುಟುಂಬವೊಂದರ ದಾರುಣ ಚಿತ್ರವನ್ನು ಕಾದಂಬರಿಕಾರ ನಿರಂಜನರು ತಮ್ಮ ‘ಎಣ್ಣೆ! ಚಿಮಣಿ ಎಣ್ಣೆ!’ ಕಥೆಯಲ್ಲಿ ಮನೋಜ್ಞವಾಗಿ ಹಿಡಿದಿಟ್ಟಿದ್ದನ್ನು ಗಮನಿಸಬಹುದು. ಅಂದು ಕಥೆಗಳಾಗಿ ಓದಿದ ಪ್ರಸಂಗಗಳು ಇಂದು ಎಲ್ಲರೂ ಹಾಯಬೇಕಾದ ಅನುಭವಗಳಾಗಿ ಇದಿರಾಗುತ್ತಿವೆ. ಯುದ್ಧ ನಡೆದಿರುವುದು ಇಸ್ರೇಲ್, ಅಮೆರಿಕ ಮತ್ತು ಇರಾನ್ಗಳ ನಡುವೆ ಮಾತ್ರವಲ್ಲ. ಜಗತ್ತಿನ ಎಲ್ಲ ದೇಶಗಳಲ್ಲಿ ಬಾಂಬ್ ದಾಳಿಯಿಲ್ಲದ ಆದರೆ ಅದಕ್ಕಿಂತ ಭೀಕರವಾದ ಆರ್ಥಿಕ ಹಿಂಜರಿತದ ಯುದ್ಧಗಳು ಸುರುವಾಗಿವೆ. ಈಗಾಗಲೇ ನಮ್ಮಲ್ಲಿ ಸಣ್ಣ-ಪುಟ್ಟ ಹೋಟೆಲ್, ಚಹಾದ ಬಂಡಿ, ಮೆಸ್ಗಳು, ಹಾಸ್ಟೆಲ್ಗಳು ಮುಚ್ಚಿವೆ. ಹೆಚ್ಚಿನ ಹೋಟೆಲ್ಗಳಲ್ಲಿ ಎಲ್ಲ ತಿಂಡಿಗಳ ಬೆಲೆ ದುಪ್ಪಟ್ಟು ಏರಿದೆ. ಸರಕು ಸಾಗಣೆಗಳ ಬೆಲೆಯಂತೂ ಯಾರ ಅಂಕೆಗೂ ಸಿಗದಂತೆ ಗಗನಕ್ಕೆ ಏರಿ ಆಗಿದೆ. ಉಪ್ಪಿನಿಂದ ಹಿಡಿದು ಉಳ್ಳಾಗಡ್ಡಿವರೆಗೂ ಎಲ್ಲವೂ ದುಬಾರಿಯಾಗಿವೆ. ಬಡವರಂತೂ ಹೈರಾಣಾಗಿದ್ದಾರೆ. ಆದರೆ ಮಧ್ಯಮ, ಮೇಲ್ಮಧ್ಯಮ ವರ್ಗದವರು ಕೂಡ ಮುಗಿಲಿಗೆ ಬಾಯಿ ತೆರೆಯುತ್ತಿದ್ದಾರೆ. ದೇಶದಲ್ಲಿ ಗ್ಯಾಸ್ ಸಿಲಿಂಡರ್ಗಾಗಿ ಹಾಹಾಕಾರ ನಡೆಯುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ‘‘ದೇಶದಲ್ಲಿ ಯಾವುದೇ ರೀತಿಯ ತೈಲ, ಅಡುಗೆ ಅನಿಲಕ್ಕೆ ಕೊರತೆ ಇಲ್ಲ. ಯುದ್ಧದಿಂದ ಭಾರತದ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ’’ ಎಂದು ನಿರ್ಲಜ್ಜೆಯಿಂದ ಸುಳ್ಳು ಹೇಳುತ್ತಿದೆ. ಅಂಧ ಭಕ್ತರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹತಾಶೆಯಿಂದ ಆಗಾಗ ಪ್ರಧಾನಿಗಳನ್ನು ಸಮರ್ಥಿಸಿಕೊಳ್ಳುವ ಬೇಗುದಿಗೆ ಬಲಿಯಾಗುತ್ತಿದ್ದಾರೆ. ಈ ನಡುವೆ ಯುದ್ಧ ಸಂಬಂಧಿ ತರಹೆವಾರಿ ವಾದ ವರಸೆಗಳು ಹುಟ್ಟಿಕೊಳ್ಳುತ್ತಿವೆ. ಮೊನ್ನೆ ಆಟೋದಲ್ಲಿ ತೆರಳತ್ತಿರುವಾಗ ರೇಟು ಏರಿಸಿದ್ದರ ಕುರಿತು ಚೌಕಾಸಿಗೆ ಇಳಿದರೆ ಆತ ಹೇಳುವ ಮಾತುಗಳು ದಿಗ್ಮೂಢಳನ್ನಾಗಿ ಮಾಡಿದವು. ಯುದ್ಧ ಕುರಿತು ಆತ ತನ್ನ ನಿತ್ಯ ಬದುಕಿನ ನಿಗಿ ನಿಗಿ ಕೆಂಡದಂಥ ಸತ್ಯಗಳನ್ನು ಬಿಚ್ಚಿಡುವುದರೊಂದಿಗೆ ಕೆಲವು ಸ್ವಾರಸ್ಯಕರ ಊಹೆಗಳನ್ನು ಮುಂದಿಟ್ಟನು. ಹಿಟ್ಲರ್ ಯಹೂದಿಗಳನ್ನು ಬೆನ್ನಟ್ಟಿ ಹೊಡೆಯುತ್ತಿರುವಾಗ ಜರ್ಮಿನಿಯಿಂದ ತಪ್ಪಿಸಿಕೊಂಡು ಬಂದ ಕೆಲವರು ಫೆಲೆಸ್ತೀನ್ನಲ್ಲಿ ಆಶ್ರಯ ಪಡೆದುಕೊಂಡು ಇಸ್ರೇಲ್ ಎಂಬ ದೇಶ ಕಟ್ಟಿಕೊಂಡರಷ್ಟೆ. ಇಸ್ರೇಲ್ ಹುಟ್ಟಿದ್ದರ ಕುರಿತು ಆಟೋಚಾಲಕನ ವರಸೆ ಏನೆಂದರೆ ಯಹೂದಿಗಳ ಒಂದು ಚಿಕ್ಕ ಮಗುವು ಹಿಟ್ಲರ್ನ ಹದ್ದುಗಣ್ಣಿನಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿರಲಿಲ್ಲವಂತೆ. ಹೀಗಾಗಿ ಹಿಟ್ಲರ್ನೇ ತಿಳಿದರೂ ತಿಳಿಯದಂತೆ ಕೆಲವೊಬ್ಬರು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟನಂತೆ. ಏಕೆಂದರೆ ಯಹೂದಿಗಳನ್ನು ಸಂಹಾರ ಮಾಡಿದ್ದಕ್ಕಾಗಿ ಜಗತ್ತು ತನ್ನನ್ನು ಹಳಿಯುತ್ತಿರಬಹುದು. ಆದರೆ ಮುಂದೊಂದು ದಿನ ಈ ಯಹೂದಿಗಳು ಯಾರು? ಅವರೆಷ್ಟು ದುಷ್ಟರು ಎಂಬುದು ಜಗತ್ತಿಗೆ ಅರ್ಥವಾಗುತ್ತದೆ. ಹೀಗೆ ಅರ್ಥವಾಗಲೆಂದೇ ಕೆಲವೊಬ್ಬರನ್ನು ಉಳಿಸಿದ್ದಾನಂತೆ. ಇನ್ನೊಬ್ಬ ಹೇಳಿದ್ದೇನೆಂದರೆ ಅಲ್ಪ-ಸ್ವಲ್ಪ ಯಹೂದಿಗಳನ್ನು ಹಿಟ್ಲರ್ ಉಳಿಸಬಾರದಾಗಿತ್ತಂತೆ ಹೀಗೆ ಉಳಿಸಿದ್ದೇ ಹಿಟ್ಲರ್ ಮಾಡಿದ ತಪ್ಪಾಗಿದೆಯಂತೆ. ಅಂದರೆ ಹಿಟ್ಲರ್ ನಡೆಸಿದ ಮಾರಣ ಹೋಮವನ್ನು ಅವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳುವಂಥ ಸ್ಥಿತಿಗೆ ಮನುಷ್ಯರು ತಲುಪಿದ್ದಾರೆ ಎಂದರೆ ಈಗ ನಡೆಯುತ್ತಿರುವ ಯುದ್ಧ ಅದೆಷ್ಟು ಅಮಾನವೀಯವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಕುವೆಂಪು ತಮ್ಮ ಬೆರಳ್ಗೆ ಕೊರಳ್ ನಾಟಕದಲ್ಲಿ ಒಂದೆಡೆ ‘ಹಿಂಸೆಗೆ ಹಿಂಸೆ ಉತ್ತರವಲ್ಲ ವತ್ಸಾ’ ಎಂದು ಉದ್ಗಾರ ತೆಗೆಯುತ್ತಾರೆ. ಇಂದು ಹಿಂಸೆಯನ್ನು ಹಿಂಸೆಯಿಂದಲೇ ದಮನಿಸಬಹುದೆಂಬ ನಂಬಿಕೆಯತ್ತ ಜನಸಮುದಾಯಗಳು ವಾಲುತ್ತಿರುವುದು ಮಾನವ ಜಗತ್ತಿನ ಅಂತ್ಯದತ್ತ ಸೂಚನೆ ನೀಡುವಂತಿದೆ. ಹಿಂಸೆಗಾಗಿ ಹಿಂಸೆ ತಪ್ಪು ಎನ್ನುತ್ತಲೇ ಹಿಂಸೆಯಿಂದ ತಪ್ಪಿಸಿಕೊಳ್ಳಲು ಹಿಂಸೆ ಅನಿವಾರ್ಯವೆಂಬ ವಾದವೊಂದು ಮುನ್ನೆಲೆಗೆ ಬರುತ್ತಿದೆ. ತನಗೆ ಬೇಕಾದುದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯು ತರ್ಕಬದ್ಧವಾಗುತ್ತಿದೆ. ಯುದ್ಧ ಯಾರೇ ಪ್ರಾರಂಭ ಮಾಡಿರಲಿ ಸಾವು-ನೋವುಗಳು ಮಾತ್ರ ಎಲ್ಲೆಡೆ ತಪ್ಪಿದ್ದಲ್ಲ. ಯುದ್ಧದಿಂದ ಪಡೆಯುವುದಾರೂ ಏನು? ಲಕ್ಷಾಂತರ ವಿಧವೆಯರು, ಅಸಂಖ್ಯ ಅನಾಥರು, ಸಾವಿರಾರು ಕಂದಮ್ಮಗಳ ಅನುಪಸ್ಥಿತಿ, ಊಹಿಸದಷ್ಟು ಅಂಗವಿಕಲರು, ಬುದ್ಧಿ ಮಾಂದ್ಯರು, ಕಂಡು ಕೇಳರಿಯದ ವ್ಯಾಧಿಗಳು, ಇಡೀ ವಾತಾವರಣ ವಿಷಾನಿಲಪೂರಿತವಾಗುವುದು ಹೀಗೆ ಸಂಕಟಗಳ ಸರಮಾಲೆಯೇ ಯುದ್ಧದಿಂದ ಪಡೆಯಬಹುದಾದ ಫಲಿತಗಳು. ಎರಡು ಮಹಾಯುದ್ಧಗಳಲ್ಲಿ ಈ ಎಲ್ಲ ಅನಿಷ್ಟಗಳನ್ನು ಕಂಡಿದ್ದೇವಷ್ಟೆ. ಆದರೂ ಮನುಷ್ಯರು ಪಾಠ ಕಲೆಯುತ್ತಿಲ್ಲವೆಂದಾದರೆ ಇದರ ಮರ್ಮವೇನು? ಯುದ್ಧ ಅಥವಾ ಹಿಂಸೆಯು ಮನುಷ್ಯರ ಸ್ವಭಾವಜನ್ಯ ಪ್ರವೃತ್ತಿಯೇ? ಅಥವಾ ಇದನ್ನು ಮನುಷ್ಯರ ಮನ ಮಸ್ತಕಗಳಲ್ಲಿ ಉದ್ದೇಶ ಪೂರ್ವಕವಾಗಿ ಕಸಿ ಮಾಡಲಾಗುತ್ತದೆಯೆ? ಈ ಕುರಿತು ಜಗತ್ತಿನಾದ್ಯಂತ ಸಮಾಜ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಬರುತ್ತಿರುವರಾದರೂ ಇದುವರೆಗೂ ಇದಕ್ಕೆ ಸೂಕ್ತ ಉತ್ತರ ದೊರೆತಂತಿಲ್ಲ. ಯುದ್ಧಗಳನ್ನು ಅನಿವಾರ್ಯವಾಗಿಸುತ್ತಿರುವ ಆಳುವವರ ಮನೋಸ್ಥಿತಿ ಏನೇ ಇರಲಿ. ಅದರ ಹಿಂದಿನ ಧನದಾಹ ಮಾತ್ರ ಕಣ್ಣಿಗೆ ಎದ್ದು ಕಾಣಿಸುತ್ತಿದೆ. ರಾಜಕೀಯ ಅರ್ಥಶಾಸ್ತ್ರದ ನಡೆಗಳನ್ನು ತಿಳಿದುಕೊಳ್ಳಲು ದೊಡ್ಡ ಸಂಶೋಧನೆಗಳೇನು ಬೇಕಿಲ್ಲ. ಇರಾನ್ ಮೇಲೆ ಇಸ್ರೇಲ್ ಮೂಲಕ ದಾಳಿ ಮಾಡುತ್ತಿರುವ ಅಮೆರಿಕದ ಧನ ದಾಹ ಅರಿಯದ್ದೇನಲ್ಲ. ಮಧ್ಯ ಏಶ್ಯದ ಅರಬ್ ದೇಶಗಳಲ್ಲಿ ಹರಡಿಕೊಂಡಿರುವ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕಕ್ಕೆ ಯಾವತ್ತಿನಿಂದಲೂ ಕಣ್ಣಿದೆಯಷ್ಟೇ. ಈ ಹಿಂದೆ 1953-54ಕ್ಕಿಂತ ಮೊದಲು ಇರಾನ್ನ ತೈಲಬಾವಿಗಳನ್ನು ಅಮೆರಿಕದಲ್ಲಿನ ಬ್ರಿಟಿಷ್ ಕಂಪೆನಿಗಳು ನಿಯಂತ್ರಿಸುತ್ತಿದ್ದವು. ಆಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಾ ಸರಕಾರ ಉರುಳಿಸಿ ರೆಝಾ ಷಾ ಪಹ್ಲವಿ ಆಳ್ವಿಕೆಯನ್ನು ತಂದಿತು. ಅಮೆರಿಕ ತೈಲ ನಿಕ್ಷೇಪವಿರುವ ದೇಶಗಳಲ್ಲಿ ತನ್ನ ಕೈಗೊಂಬೆಯಾಗುವ ಸರಕಾರಗಳನ್ನೇ ವಿಶೇಷವಾಗಿ ರಾಜಮನೆತನಗಳ ಆಳ್ವಿಕೆಯನ್ನು ತರಲು ಮುಂದಾಗುತ್ತದೆ. ರೆಝಾ ಷಾ ಪಹ್ಲವಿ ಸರಕಾರ ಬಂದೊಡನೆ ಮತ್ತೆ ಅಮೆರಿಕದ ತೈಲ ಲೂಟಿ ಎಗ್ಗಿಲ್ಲದೆ ಮುಂದುವರಿಯಿತು. ಕೈಗೊಂಬೆ ಸರಕಾರದ ದುರಾಡಳಿತದಿಂದ ಬೇಸತ್ತು ಇರಾನ್ನ ಜನತೆ ದೊಡ್ಡ ಮಟ್ಟದಲ್ಲಿ ದಂಗೆ ಎದ್ದು 1979ರಲ್ಲಿ ರೆಝಾ ಷಾ ಪಹ್ಲವಿ ಸರಕಾರವನ್ನು ಪತನಗೊಳಿಸಿದರು. ಅಮೆರಿಕ ಮತ್ತೆ ತೈಲ ನಿಕ್ಷೇಪದಿಂದ ದೂರ ಸರಿಯುವಂತಾಯಿತು. ಆಯತುಲ್ಲಾ ರೂಹುಲ್ಲಾ ಖೊಮೇನಿ ನೇತೃತ್ವದ ಸರಕಾರ ಸ್ಥಾಪಿತವಾಗಿ ಧರ್ಮಾಧಾರಿತ ಆಡಳಿತ ನಡೆಸುತ್ತ ಬಂದಿತು. ಖೊಮೇನಿ ಆಡಳಿತ ಹಲವು ಅಪಸವ್ಯಗಳಿಗೆ ದಾರಿ ಮಾಡಿಕೊಟ್ಟಿತ್ತಾದರೂ ತಮ್ಮ ತೈಲಬಾವಿಗಳ ಮೇಲೆ ನಿಯಂತ್ರಣ ಸಾಧಿಸಿತ್ತು. ಅಮೆರಿಕಕ್ಕೆ ಇದುವೇ ನುಂಗಲಾರದ ತುತ್ತಾಗಿತ್ತು. ಹೇಗಾದರೂ ಮಾಡಿ ಈಗಿನ ಖಾಮಿನೈ ಆಡಳಿತವನ್ನು ಕಿತ್ತೆಸೆದು ಅಮೆರಿಕದಲ್ಲಿರುವ ರೆಝಾ ಷಾ ಪಹ್ಲವಿ ಮಗನಿಗೆ ಅಧಿಕಾರ ವರ್ಗಾಯಿಸುವ ಹುನ್ನಾರ ಮಾಡುತ್ತಿದೆ. ರೆಝಾ ಷಾ ಪಹ್ಲವಿ ಪುತ್ರನ ಆಡಳಿತ ಚಲಾವಣೆಗೊಂಡರೆ ತನ್ನ ತೈಲ ಲೂಟಿ ದಂಧೆಯನ್ನು ನಡೆಸಬಹುದೆಂಬ ಇರಾದೆ ಅಮೆರಿಕದ್ದು. ತನ್ನ ಕುಟಿಲ ಕಾರಸ್ಥಾನಗಳಿಗೆ ತಕ್ಕುದಾದ ಅಭಿಪ್ರಾಯಗಳನ್ನು ವಿಶ್ವದಾದ್ಯಂತ ಹರಿಬಿಡುತ್ತಿದೆ. ಇರಾನ್ ಒಂದು ದುಷ್ಟರಾಷ್ಟ್ರವೆಂಬ ಅಭಿಪ್ರಾಯವನ್ನು ಬಿತ್ತಿ ಬೆಳೆಯುತ್ತಿದೆ. ಅಲ್ಲಿ ಪ್ರಜಾಪ್ರಭುತ್ವವಿಲ್ಲ. ಜನರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಮಹಿಳೆಯರನ್ನು ಎಲ್ಲದರಲ್ಲಿಯೂ ಹತ್ತಿಕ್ಕಲಾಗುತ್ತಿದೆ ಎಂಬ ಅಂಶಗಳು ವಿಶ್ವದಾದ್ಯಂತ ಬಿತ್ತಲಾಗುತ್ತಿದೆ. ಇದರಲ್ಲಿ ಹುರುಳಿಲ್ಲದಿಲ್ಲ. ಇರಾನ್ನಲ್ಲಿ ಧರ್ಮಾಧಾರಿತ ಆಳ್ವಿಕೆ ನಡೆಸಬೇಕೆಂಬ ದುರ್ಭಾವವೊಂದು ಮನೆ ಮಾಡಿಕೊಂಡಿದ್ದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಅಮೆರಿಕ ಇರಾನನ್ನು ವಿರೋಧಿಸುತ್ತಿರುವ ಕಾರಣ ಇದಲ್ಲ. ಈ ಎಲ್ಲ ಅಂಶಗಳು ಜಾಗತಿಕ ಮಟ್ಟದಲ್ಲಿ ಇರಾನನ್ನು ದುಷ್ಟರಾಷ್ಟ್ರವೆಂದು ಬಿಂಬಿಸಲು ಒದಗಿ ಬಂದಿರುವ ಮುಖವಾಡಗಳು. ಅಸಲಿಗೆ ಇರಾನ್ನಲ್ಲಿರುವ ಅಗಾಧ ತೈಲಬಾವಿಗಳ ಮೇಲೆ ನಿಯಂತ್ರಣ ಸಾಧಿಸುವುದೇ ಅಮೆರಿಕದ ಗುರಿ ಎಂಬುದು ಈಗ ಜಗತ್ತಿಗೆ ಮನವರಿಕೆಯಾಗಿದೆ. ಆದರೆ ಭಾರತ ಮಾತ್ರ ತನಗೇನೂ ಗೊತ್ತಿರದಂತೆ ಮುಗುಮ್ಮಾಗಿ ವರ್ತಿಸುವುತ್ತಿರುವುದಕ್ಕೆ ಬೇರೆಯದೇ ಕಾರಣಗಳಿವೆ. ದೇಶದಲ್ಲಿ ಮುಸ್ಲಿಮ್ ವಿರೋಧಿ ಭಾವನೆಯನ್ನು ಇನ್ನಷ್ಟು ಹುರಿಗಟ್ಟಿಸಬೇಕೆಂಬ ದುಷ್ಟ ಹುನ್ನಾರದ ಭಾಗವಾಗಿ ಅಮೆರಿಕವನ್ನು ಓಲೈಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಬಹುದೆಂದು ಭಾವಿಸಿದ ಆರೆಸ್ಸೆಸ್, ಬಿಜೆಪಿಗಳಿಗೆ ಅಧಿಕಾರ ಮುಖ್ಯವೇ ಹೊರತು ತನ್ನ ಪ್ರಜೆಗಳ ಯೋಗಕ್ಷೇಮವಲ್ಲ. ಹೀಗಾಗಿಯೇ ಭಾರತ ಅಮೆರಿಕಕ್ಕೆ ಡೊಗ್ಗು ಸಲಾಮು ಹೊಡೆಯುವುದಷ್ಟೇ ಅಲ್ಲ. ಅದರ ಧಮಕಿಗೆ ಅಂಜಿ ಕುಸಿಯುತ್ತಿದೆ. ಅಮೆರಿಕ ಭಾರತದ ಮೇಲೆ ಹೇರಿದ ಟ್ಯಾರಿಫ್, ಭಾರತೀಯರನ್ನು ಟ್ರಂಪ್ ಕೈ ಕೋಳ ಹಾಕಿ ಹೆಡೆಮುರಿ ಕಟ್ಟಿ ವಾಪಸ್ ಕಳಿಸಿದ್ದು, ರಶ್ಯ, ಇರಾನ್ಗಳಿಂದ ತೈಲ ಖರೀದಿಸದಂತೆ ದಿಗ್ಬಂಧನ ವಿಧಿಸಿದ್ದು, ಪಾಕಿಸ್ತಾನದ ಮೇಲಿನ ದಾಳಿಯನ್ನು ಟ್ರಂಪ್ ತಾನೇ ನಿಲ್ಲಿಸಿದ್ದಾಗಿ ಹೇಳಿದ್ದು. ಹೀಗೆ ಅಮೆರಿಕ ಭಾರತವನ್ನು ಹೆಜ್ಜೆ ಹೆಜ್ಜೆಗೂ ನಿಯಂತ್ರಿಸುತ್ತಿರುವುದು ಅರಿಯದ್ದೇನಲ್ಲ. ಇದೆಲ್ಲವೂ ದೇಶದ ಹಿತಕ್ಕಾಗಿಯೇ ಎಂದು ನಂಬಿಕೊಂಡು ಬರುತ್ತಿರುವ ಮಬ್ಭಕ್ತರ ಭಜನೆಯಲ್ಲಿ ದೇಶ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗುವುದಂತೂ ಖಚಿತ. ವಚನಕಾರ ಅಲ್ಲಮನ ಕ್ಷಮೆ ಕೋರಿ ಹೇಳುವುದಾದರೆ ಹೊನ್ನಿಗಾಗಿ ಸತ್ತವರು ಕೋಟಿ ಕೋಟಿ, ಹೆಣ್ಣಿಗಾಗಿ ಸತ್ತವರು ಕೋಟಿ ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ. ಈಗ ಎಣ್ಣೆಗಾಗಿ ಸಾಯಿಸಲ್ಪಡುತ್ತಿರುವವರು ಕೋಟ್ಯಾನು ಕೋಟಿ ಎಂಬ ಹೊಸ ಸಾಲೊಂದನ್ನು ಸೇರಿಸಿ ನೋಡಬೇಕೆನಿಸುತ್ತದೆ. ಅಮೆರಿಕ, ಇಸ್ರೇಲ್ ದೇಶಗಳು ಇರಾನ್ನ ಜನತೆಯನ್ನು ಮಾತ್ರ ಕೊಲ್ಲುತ್ತಿಲ್ಲ. ಅದು ತನ್ನ ದೇಶದ ನಾಗರಿಕರನ್ನು ಸಾವಿನ ದವಡೆಗೆ ನೂಕುತ್ತಿದೆ. ಬಸವಣ್ಣನವರ ‘ಕೊಂದವರುಳಿವರೆ ಕೂಡಲಸಂಗಮದೇವಾ’ ಎಂಬ ಮಾತೀಗ ಅನುರಣಿತವಾಗುತ್ತಿದೆ.
Bagalakote | ಯುವಕನನ್ನು ಕೊಲೆಗೈದು ಕಾರಿನ ಜೊತೆ ಸುಟ್ಟು ಹಾಕಿದ ದುಷ್ಕರ್ಮಿಗಳು
ಬಾಗಲಕೋಟೆ: ಯುವಕನೋರ್ವನನ್ನು ಕೊಲೆಗೈದು ಮೃತದೇಹವನ್ನು ಆತನದ್ದೇ ಕಾರಿನಲ್ಲಿರಿಸಿ ಸುಟ್ಟು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಬಳಿ ಸೋಮವಾರ ಸಂಜೆ ನಡೆದಿದೆ. ಸೋಮಲಿಂಗ ಪಡಸಲಗಿ (36) ಕೊಲೆಯಾದ ಯುವಕ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯಿಂದಲೇ ಸೋಮಲಿಂಗ ಅವರ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೃತರ ಸೋದರ ಸಂಬಂಧಿ ಸದಾಶಿವ ಪಡಸಲಗಿ, ರವಿ ಪಾಟೀಲ ಹಾಗೂ ನವಿ ಎಂಬವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ. ಘಟನೆ ವಿವರ: ಸೋಮಲಿಂಗ ಪಡಸಲಗಿ ಸೋಮವಾರ ಸಂಜೆ ಹೊಸ ಕಾರು ಖರೀದಿಸಿ ಪೂಜೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೊಲೆ ನಡೆದಿದೆ. ಸಾವಳಗಿ ಜಂಕ್ಷನ್ ಬಳಿ ಕಾಯ್ದು ಕುಳಿತಿದ್ದ ಸೋಮಲಿಂಗ ಅವರ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಹಾಗೂ ಇತರರು ಸೋಮಲಿಂಗ ಅವರ ಕಾರನ್ನು ಅಡ್ಡಗಟ್ಟಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ಇರಿದು ಸೋಮಲಿಂಗರನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರಿನಲ್ಲಿರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಡ್ಯ: ಮತ್ತೆ ಭ್ರೂಣಲಿಂಗ ಪರೀಕ್ಷೆ ಬಯಲು
ಮಂಡ್ಯ : ಜಿಲ್ಲೆಯ ಹಲವೆಡೆ ನಿಯಮ ಉಲ್ಲಂಘಿಸಿ ಹೆಣ್ಣುಭ್ರೂಣ ಪತ್ತೆ ನಡೆಸಿರುವುದು ಲೋಕಾಯುಕ್ತ ಪೊಲೀಸರು ಕಳೆದ ಶುಕ್ರವಾರ ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಬಯಲಾಗಿದ್ದ ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಂದ ಜಿಲ್ಲೆಗೆ ಕಳಂಕ ಮೆತ್ತಿಕೊಂಡಿತ್ತು. ಆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದರೂ, ಮತ್ತೆ ಮರುಕಳಿಸಿರುವುದು ಆತಂಕ ಮೂಡಿಸಿದೆ. ಕೆ.ಆರ್.ಪೇಟೆ ತಾಲೂಕು ಕುಪ್ಪಹಳ್ಳಿ ಗ್ರಾಮದ ಕೆ.ಎನ್.ಮಂಜುನಾಥ ಅವರು ಕೆ.ಆರ್.ಪೇಟೆ ಪಟ್ಟಣದ ನಾವಿ ಡಯಾಗೋಸ್ಟಿಕ್ ಸೆಂಟರ್ ಮತ್ತು ಕುಶಾಲ್ ಡಾಂಗೋಸ್ಟಿಕ್ ಸೆಂಟರ್ಗಳಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದರ ಬಗ್ಗೆ ರಾಜ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಧ ನಡೆಸಿ ವರದಿ ನೀಡುವಂತೆ ಉಪಲೋಕಾಯುಕ್ತ ಬಿ.ವೀರಪ್ಪ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು. ಉಪಲೋಕಾಯುಕ್ತರ ಆದೇಶದಂತೆ ಜಿಲ್ಲಾಸ್ಪತ್ರೆ ಮತ್ತು ಎಲ್ಲಾ ತಾಲೂಕು ಸರಕಾರಿ ಆಸ್ಪತ್ರೆಗಳು ಒಳಗೊಂಡಂತೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ, ಅಕ್ರಮವಾಗಿ ಹೆಣ್ಣುಭ್ರೂಣ ಪತ್ತೆ ಕಾರ್ಯ ನಡೆಸಿರುವುದು ಬಹಿರಂಗಗೊಂಡಿದೆ. ಈ ಸಂಬಂಧ ಹಲವು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಗಳ ಮಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. 31 ಬಾಲಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆ: ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್ಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ 31 ಬಾಲಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ನಾವಿ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 2024ನೇ ಸಾಲಿನಲ್ಲಿ 19 ಮತ್ತು 2025ನೇ ಸಾಲಿನಲ್ಲಿ 5 ಒಟ್ಟು 24 ಬಾಲ ಗರ್ಭಿಣಿಯರಿಗೆ ಹಾಗೂ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 7 ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ 2018ನೇ ಸಾಲಿನಿಂದ ಈವರೆಗೆ 10,101 ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿದ್ದು, ಈ ಪೈಕಿ ಕೇವಲ 3,629 ಪ್ರಕರಣಗಳ ಮಾಹಿತಿಯನ್ನು ಮಾತ್ರ ರಿಜಿಸ್ಟರ್ನಲ್ಲಿ ನಮೂದಿಸಲಾಗಿದೆ. ಉಳಿದ 6,472 ಸ್ಕ್ಯಾನಿಂಗ್ ವಿವರಗಳನ್ನು ನಮೂದಿಸಿಲ್ಲ. 18 ವರ್ಷದೊಳಗಿನ (ಅಪ್ರಾಪ್ತ ವಯಸ್ಸಿನ) ಹೆಣ್ಣು ಮಕ್ಕಳು ಸ್ಕ್ಯಾನಿಂಗ್ಗೆ ಬಂದರೆ ಪೋಕ್ಸೊ ಕಾಯ್ದೆ ಪ್ರಕಾರ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರಬೇಕು. ಆದರೆ, ಸ್ಕ್ಯಾನಿಂಗ್ ಸೆಂಟರ್ನವರು ಇದನ್ನು ಉಲ್ಲಂಘಿಸಿ ಸ್ಕ್ಯಾನಿಂಗ್ ಮಾಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಎಚ್.ಡಿ.ಸುನಿಲ್ಕುಮಾರ್, ಮೈಸೂರಿನ ಡಿವೈಎಸ್ಪಿ ವೆಂಕಟೇಶ್, ಬೆಂಗಳೂರು ದಕ್ಷಿಣ ಜಿಲ್ಲೆಯ ಡಿವೈಎಸ್ಪಿ ಶಿವಪ್ರಸಾದ್, ಮಂಡ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಬಿ.ಪಿ.ಬ್ಯಾಟರಾಯಗೌಡ, ಲೇಪಾಕ್ಷಮೂರ್ತಿ, ಇತರೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ಯಂತ್ರವಿದ್ದರೂ ತಜ್ಞರಿಲ್ಲ ಮಂಡ್ಯ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ, ನಿರ್ವಹಣೆಗೆ ರೇಡಿಯಾಲಜಿಸ್ಟ್ಗಳು ಇಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಕ್ರಮವಹಿಸಿಲ್ಲ. ಇದನ್ನೇ ನೆಪಮಾಡಿಕೊಂಡು ಸರಕಾರಿ ಆಸ್ಪತ್ರೆ ವೈದ್ಯರು ಗರ್ಭಿಣಿಯರನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಶಿಫಾರಸು ಮಾಡುತ್ತಿದ್ದಾರೆ ಎಂಬುದಾಗಿ ಲೋಕಾಯುಕ್ತ ಪೊಲೀಸರು ವರದಿಯಲ್ಲಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನೀವು ಕೊಡುವ ಫ್ರೀಬೀಸೂ ಬೇಕು, ಕೆಲಸವೂ ಬೇಕು, ತಮಿಳು ಅಸ್ಮಿತೆಯೂ ಬೇಕು : ಯುವ ಸಮುದಾಯದ ಮನಸ್ಥಿತಿ
ದ್ರಾವಿಡ ಸಂಸ್ಕೃತಿಯ ಶ್ರೀಮಂತ ಹರವು ಹೊಂದಿರುವ ತಮಿಳುನಾಡಿನ ರಾಜಕೀಯ ಚಿತ್ರಣವು ದೇಶದ ಇತರ ಭಾಗಗಳಿಗಿಂತ ವಿಭಿನ್ನ ಹಾಗೂ ಸಂಕೀರ್ಣವಾಗಿದೆ. ಇಲ್ಲಿ ಕೇವಲ ಚೆನ್ನೈ ಮಾತ್ರವಲ್ಲದೆ ಕೊಯಮತ್ತೂರು, ಮದುರೈ ಮತ್ತು ಕಾಂಚಿಪುರಂನಂತಹ ನಗರಗಳು ಕೈಗಾರಿಕಾ ಕೇಂದ್ರಗಳಾಗಿ ಬೆಳೆದಿರುವುದು ರಾಜ್ಯದ ಆರ್ಥಿಕ ಶಕ್ತಿಯನ್ನು ಸಾಬೀತುಪಡಿಸುತ್ತದೆ. ಈ ಬೆಳವಣಿಗೆಯ ಹಿಂದೆ ಸ್ಥಳೀಯರ ಕಾಯಕ ನಿಷ್ಠೆ ಮತ್ತು ಶ್ರಮದ ದೊಡ್ಡ ಪಾಲಿದೆ.
ಕೋಲಾರದಲ್ಲಿ 'ಆರೋಗ್ಯ ಕವಚ'ಕ್ಕೆ ಅನಾರೋಗ್ಯ: ಕೆಟ್ಟು ನಿಂತ ಆಂಬ್ಯುಲೆನ್ಸ್ಗಳು, ಸಿಬ್ಬಂದಿಯಿಲ್ಲದೆ ರೋಗಿಗಳ ಪರದಾಟ!
ಕೋಲಾರದಲ್ಲಿ ಆರೋಗ್ಯ ಕವಚವಾಗಿರಬೇಕಾದ ಆಂಬ್ಯುಲೆನ್ಸ್ ಗಳು ಕೆಟ್ಟು ನಿಂತಿದ್ದು,ಸಿಬ್ಬಂದಿ ಕೊರತೆ ಹಾಗೂ ಸಮರ್ಪಕ ಸೇವೆಯ ಕೊರತೆಯಿಂದಾಗಿ ರೋಗಿಗಳು ಹಾಗೂ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣದ ಬಳಿಕ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಸೂಕ್ತ ಆಂಬ್ಯುಲೆನ್ಸ್ ಸೇವೆಯಿಲ್ಲದೆ, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಾಗುವಂತಹ ದಯನೀಯ ಸ್ಥಿತಿಯಿದ್ದು, ಕೆಲವೊಮ್ಮೆ ಪ್ರಥಮ ಚಿಕಿತ್ಸೆ ಲಭಿಸದೆ ಗಾಯಾಳುಗಳು ಸಾವನ್ನಪ್ಪಿರುವ ಘಟನೆ ನಡೆಯುತ್ತಿವೆ. ಈ ಕುರಿತು ಮಾಹಿತಿ ಇಲ್ಲಿದೆ..
ನದಿ, ಕೆರೆಗಳಲ್ಲಿ ಮಕ್ಕಳು ಈಜಲು ಹೋಗದಂತೆ ಪೋಷಕರ ಕಟ್ಟೆಚ್ಚರ ಅಗತ್ಯ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹವಮಾನಕ್ಕೆ ಹೊಂದಿರುವ ವೈಶಿಷ್ಟ ಜಿಲ್ಲೆ ಚಾಮರಾಜನಗರ ಜಿಲ್ಲೆ. ಇದೀಗ ಈ ಜಿಲ್ಲೆಯಲ್ಲಿ ಮಿತಿ ಮೀರಿದ ತಾಪಮಾನ ಅಧಿಕಾವಾಗಿದ್ದು, ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಬಳಕೆ ಮಾಡಿಕೊಳ್ಳುವ ಸಮಯವಿದು. ಬಿಸಿಲಿನ ತಾಪಮಾನದಿಂದ ಪಾರಾಗಲು ನೀರಿಗಿಳಿದು ಜಲಕ್ರೀಡೆಯಲ್ಲಿ ತೊಡಗುವವರೇ ಹೆಚ್ಚು. ಇದೀಗ ಶಾಲೆಗಳಿಗೆ ಬೇಸಿಗೆ ರಜೆ ಇದೆ, ಪ್ರಸ್ತುತ ಶಾಲೆಯಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಬೇಸಿಗೆ ರಜೆಗೆಂದು ಸಂಬಂಧಿಕರ ಮತ್ತು ನೆಂಟರಿಷ್ಟರ ಮನೆಗೆ ತೆರಳುವುದು ವಾಡಿಕೆ . ಅದರಲ್ಲೂ ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚಾಗಿ ಮಕ್ಕಳು ಬೇಸಿಗೆಯಲ್ಲಿ ಸಮಯ ಕಳೆಯುವುದುಂಟು. ಆವೇಳೆಯಲ್ಲಿ ಮಕ್ಕಳು ಮೋಜಿಗಾಗಿ ನೀರಿಗಿಳಿಯುವುದುಂಟು. ಅದೆಷ್ಟೋ ಮಕ್ಕಳಿಗೆ ಈಜು ಬಾರದೆ ನೀರು ಪಾಲಾಗಿರುವ ಘಟನೆಗಳು ನಡೆದಿದೆ. ಜಿಲ್ಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳು ಪ್ರತಿ ವರ್ಷ ವರದಿಯಾಗುತ್ತಲೇ ಇವೆ. ಬಿಸಿಲುಗಾಲ ಸೃಷ್ಟಿಸುತ್ತಿರುವ ಸಾವಿನ ಬಲೆಯೇ ಈಜು-ಮೋಜು. ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2025ರಲ್ಲಿ 31 ಜನರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತೆರೆದ ಬಾವಿ, ಕೆರೆ, ನದಿ, ಕೃಷಿ ಕೆರೆ ನೀರಿನಲ್ಲಿ ಹುಡುಗರು ಈಜಾಡಲು ಇಳಿಯುತ್ತಿರುವುದು. ಹೊಂಡಗಳಿಗೆ ಇಳಿದು ಈಜಲು ಹೋದವರು ನೀರುಪಾಲಾಗಿದ್ದಾರೆ. ಕಾಲು ಜಾರಿ ಅಥವಾ ಜಾನುವಾರುಗಳನ್ನು ತೊಳೆಯುವಾಗ ಅಚಾನಕ್ ಆಗಿ ನೀರಿಗೆ ಬಿದ್ದು ಜೀವ ಕಳೆದುಕೊಂಡವರೂ ಇದರಲ್ಲಿ ಸೇರಿಕೊಂಡಿದ್ದಾರೆ. ನೀರಿಗಿಳಿದು ಮೃತಪಟ್ಟವರು: 2024ರ ಎ.5ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ಒಗೆಯಲುಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದರು. ಪುದೂರಿನ ಮೀನಾ(34) ಮತ್ತು ಇವರ ಮಕ್ಕಳಾದ ಪವಿತ್ರಾ(14), ಕೀರ್ತಿ(11) ಮೃತಪಟ್ಟರು. ಇವರೊಂದಿಗೆ ಹೋಗಿದ್ದ ಮತ್ತೊಬ್ಬ ಮಗ ಸುರೇಂದ್ರನಿಂದ ತಾಯಿ ಮತ್ತು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಆಕಸ್ಮಿಕ ಸಾವಿಗೆ ಉದಾಹರಣೆಯಾಗಿದೆ. ಇನ್ನು ಈಜಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳಲ್ಲಿ ಕಳೆದ ವರ್ಷ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮೇದನಿ ಗ್ರಾಮದ ಕಾವೇರಿ ನದಿಯಲ್ಲಿ ಕೊಳ್ಳೇಗಾಲದ ದೇವಾಂಗಪೇಟೆಯ ಭರತ್(17) ಮತ್ತು ಲಿಖಿತ್ (17) ಈಜಲು ಹೋಗಿ ನೀರು ಪಾಲಾದರು. ಕೊಳ್ಳೇಗಾಲದ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ಈಜಲು ಹೋಗಿ ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಶಾಹಿಲ್ ಪಾಷಾ(23) ನೀರಿನಲ್ಲಿ ಮುಳುಗಿ ಮೃತಪಟ್ಟ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯಲ್ಲಿ ಅಭಯ್ ಗೌಡ (13), ಕೃಷ್ಣಾಪುರದ ವೃಷಭೇಂದ್ರ (14) ಮೃತರಾದರು. ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ತಮ್ಮಡಹಳ್ಳಿ ಕೆರೆಯಲ್ಲೂ ಕಳೆದ ಕೆಲವು ವರ್ಷಗಳ ಹಿಂದೆ ನೀರಿಗಿಳಿದು ನಾಲ್ಕು ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೃಷಿ ಹೊಂಡ ಮೃತ್ಯುಕೂಪ: ಸುಡು ಬಿಸಿಲಿನಲ್ಲಿ ತಣ್ಣನೆಯ ಅನುಭವ ಪಡೆಯಲು ಕೃಷಿ ಹೊಂಡಕ್ಕೆ ಇಳಿದವರು ಮೃತ್ಯುಕೂಪದಲ್ಲಿ ಸಿಲುಕಿ ಪ್ರಾಣ ಬಿಟ್ಟಿರುವ ಅನೇಕ ಉದಾರಹಣೆಗಳು ಜಿಲ್ಲೆಯಲ್ಲಿ ಇವೆ. 2025ರ ಜೂನ್ನಲ್ಲಿ ಚಾಮರಾಜನಗರ ಜಿಲ್ಲೆಯ ಹನೂರಿನ ಆನೆಗುಂದಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಪಿ.ಜಿ.ಪಾಳ್ಯದ ಚಾಮರಾಜು(25), ಆಕಾಶ್(22) ಮೃತಪಟ್ಟಿದ್ದರು. ಇದಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ನೀರುಪಾಲಾದ ದುರ್ಘಟನೆ ನಡೆದಿತ್ತು. ಜಲಕ್ರೀಡೆಗೂ ಮುನ್ನ ಜಾಗೃತಿ ವಹಿಸಿ: ಸುಡುವ ಬೇಸಿಗೆ ನೀರಿಗೆ ಇಳಿಯುವಂತೆ ಪ್ರೇರೇಪಿಸುತ್ತಿದೆ. ಬೇಸಿಗೆ ರಜೆಯ ಆರಂಭವನ್ನು ಮಜವಾಗಿ ಕಳೆಯಲು ಶುರು ಮಾಡಿರುವ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ನೀರಿಗೆ ಇಳಿಯುವ ಮುನ್ನ ಎಚ್ಚರವಹಿಸಬೇಕಾಗಿದೆ. ನೀರಿನ ಆಳ, ಸುಳಿಯ ಬಗ್ಗೆ ತಿಳಿಯದೆ ಸ್ನೇಹಿತರೊಂದಿಗೆ ಆಟವಾಡುತ್ತಾ ಜೀವಕ್ಕೆ ಅಪಾಯ ತಂದುಕೊಳ್ಳುವ ಭೀತಿ ಇದೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಪಾಲಕರು ಮಕ್ಕಳನ್ನು ಸ್ನೇಹಿತರೊಂದಿಗೆ ಹೊರಗೆ ಕಳುಹಿಸುವ ಮುನ್ನ ಎಚ್ಚರವಹಿಸುವ ಅಗತ್ಯವಿದೆ. ಕಳೆದ ವರ್ಷ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ 31 ಇದ್ದು, 2026ರ ಜನವರಿಯಿಂದ ಈವರೆಗೆ ಅದಾಗಲೇ ನೀರಿನಲ್ಲಿ ಮುಳುಗಿ ಸತ್ತವರ ಸಂಖ್ಯೆ 4ಕ್ಕೇರಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೇನಕಲ್ ಫಾಲ್ಸ್ಗೆ ಕುಟುಂಬ ಸಮೇತ ಹೋಗಿದ್ದ ಯಳಂದೂರಿನ ಗುಂಬಳ್ಳಿ ಗ್ರಾಮದ ನಿವಾಸಿ ಲಿಂಗರಾಜು(42) ಈಜಲು ನೀರಿಗೆ ಇಳಿದು ಸುಳಿಗೆ ಸಿಲುಕಿ ಮೃತಪಟ್ಟರು. ಜಿಲ್ಲೆಯ ಕೆರೆಗಳು, ನದಿಯಲ್ಲಿ ನೀರುಪಾಲಾಗುತ್ತಿರುವವರು ಸಾಲಿನಲ್ಲಿ ಮತ್ಯಾವ ಕುಟುಂಬದ ಕುಡಿ ಇದೆಯೋ ಜವರಾಯನೇ ಬಲ್ಲ. ಬೇಸಿಗೆ ಸಮಯದಲ್ಲಿ ಮಕ್ಕಳು ಮೋಜಿಗಾಗಿ ಈಜಲು ಕೆರೆ, ಕಟ್ಟೆ, ನದಿ, ತೆರೆದ ಬಾವಿಗಳಿಗೆ ಹೋಗುತ್ತಾರೆ. ಅಲ್ಲಿ ಯಾವುದೇ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಿಲ್ಲ. ಈಜು ಬಾರದೆ ಇದ್ದರೂ ನೀರಿಗಿಳಿಯುವ ದುಸ್ಸಾಹಸ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಅವಘಡ ಸಂಭವಿಸುತ್ತದೆ. ಇದರ ಬದಲು ಈಜು ತರಬೇತಿ ಪಡೆಯಲು ಸೇರಿಕೊಳ್ಳುವುದು ಉತ್ತಮ. -ಹರೀಶ್ ಕುಮಾರ್, ಪ್ರಭಾರ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ, ಚಾಮರಾಜನಗರ ಮಕ್ಕಳ ಮೇಲೆ ಪಾಲಕರು ಭವಿಷ್ಯದ ಭರವಸೆ ಇಟ್ಟುಕೊಂಡಿರುತ್ತಾರೆ. ಈಜಾಟದ ಮೋಜು, ಮನರಂಜನೆಗಾಗಿ ಜೀವ ಬಲಿಯಾಗಬಾರದು. ಸುಡು ಸುಡು ಬಿಸಿಲಿನ ತಾಪ ಪರಿಹಾರದ ನಿಟ್ಟಿನಲ್ಲಿ ತಣ್ಣಗೆ ನೀರಿಗಿಳಿದು ಈಜುವ ಮೋಜು ಖುಷಿ ಕೊಡುತ್ತದೆ. ಜತೆಗೆ ಗೊತ್ತಿಲ್ಲದಂತೆ ಪ್ರಾಣವನ್ನೂ ಬಲಿ ಪಡೆದುಕೊಳ್ಳುತ್ತಿದೆ. ಬೇಸಿಗೆ ರಜೆಯಲ್ಲಿ ನೀರಿನಲ್ಲಿ ಇಳಿದು ಈಜಾಡುವುದೊಂದೇ ಆಟವಲ್ಲ. ಮಕ್ಕಳು ಕಾಲ ಕಳೆಯಲು ಹಲವು ಆಟಗಳಿವೆ. ಈಜಲು ಹೋಗಿ ಆಗಿರುವ ದುರಂತಗಳಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿಕೊಡಬೇಕು. -ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ, ಚಾಮರಾಜನಗರ
ಇರಾನ್ ದಾಳಿಯ ಕುರಿತ ವರದಿಗೆ ಟ್ರಂಪ್ ಅಸಮಾಧಾನ; ಮಾಧ್ಯಮಗಳ ವಿರುದ್ಧ ವಾಗ್ದಾಳಿ
ವಾಷಿಂಗ್ಟನ್: ಇರಾನ್ ನ ಪರಮಾಣು ತಾಣಗಳ ಮೇಲೆ ಕಳೆದ ವರ್ಷ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಸಂಬಂಧಿಸಿದ ವರದಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಪ್ರಮುಖ ಮಾಧ್ಯಮಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ‘ಟ್ರೂತ್ ಸೋಶಿಯಲ್’ನಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷ ನಡೆದ ‘ಆಪರೇಷನ್ ಮಿಡ್ನೈಟ್ ಹ್ಯಾಮರ್’ ಮೂಲಕ ಇರಾನ್ ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ. “ಆ ದಾಳಿಯ ಹಾನಿಯನ್ನು ಸರಿಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಸಿಎನ್ಎನ್ ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಮೆರಿಕದ ವಿಮಾನದ ಪೈಲಟ್ ಗಳ ಸಾಧನೆಯನ್ನು ಸರಿಯಾಗಿ ಗುರುತಿಸಿಲ್ಲ ಎಂದು ಆರೋಪಿಸಿದ ಟ್ರಂಪ್, “ನಕಲಿ ಸುದ್ದಿ ಮಾಧ್ಯಮಗಳು ನಮ್ಮ ಪೈಲಟ್ಗಳ ಸಾಧನೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಗೆಲ್ಲುತ್ತಿದೆ ಎಂದು ಅವರು ಹೇಳಿದ್ದರು. ಆದರೆ ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ವರದಿಗಳು ಅಮೆರಿಕ ಹಿನ್ನಡೆಯಲ್ಲಿದೆ ಎಂಬ ಭಾವನೆ ಮೂಡಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ವರದಿಗಳು ಶತ್ರುಗಳಿಗೂ ತಲುಪುತ್ತಿವೆ. ಅಮೆರಿಕ ವಿರೋಧಿ ನಕಲಿ ಸುದ್ದಿ ಮಾಧ್ಯಮಗಳು ಇರಾನ್ ಗೆಲುವು ಸಾಧಿಸಬೇಕೆಂದು ಬಯಸುತ್ತಿವೆ. ಆದರೆ ಅದು ಸಾಧ್ಯವಾಗುವುದಿಲ್ಲ; ನಾನು ಉಸ್ತುವಾರಿಯಲ್ಲಿದ್ದೇನೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಬಸವಲಿಂಗಪ್ಪ 102: ಕನ್ನಡದ ನೆಲದಲ್ಲಿ ಚಳವಳಿಯ ಬೇರು
ಬಿ.ಬಸವಲಿಂಗಪ್ಪನವರು ಕೈಗೊಂಡ ಸುಧಾರಣಾಕ್ರಮಗಳು ಮೇಲ್ವರ್ಗದ ಹಿಂದೂಗಳ ಮನಸ್ಸಿನಲ್ಲಿ ಅವರನ್ನು ವಿರೋಧಿಸುವ ಮನೋಭಾವವನ್ನು ಬೆಳೆಸಿತು. ಇವರನ್ನು ಹೀಗೆ ಬಿಟ್ಟರೆ ತಮಗೆ ಉಳಿಗಾಲವಿಲ್ಲ ಎಂದು ತಿಳಿದು ಬೂಸಾ ಚಳವಳಿಯಲ್ಲಿ ಬಸವಲಿಂಗಪ್ಪ ಅವರನ್ನು ಬಲಿ ತೆಗೆದುಕೊಂಡರು. ಒಂದು ಕಡೆ ಇದರಿಂದ ದಲಿತರಿಗೆ ನಷ್ಟ ಉಂಟಾದರೂ ಆನಂತರದ ದಿನಗಳಲ್ಲಿ ಜಾಗೃತಿ ಮೂಡಿಸಿದಂತಾಯಿತು. ಕನ್ನಡ ನಾಡಿನಲ್ಲಿ ನಡೆದಿರುವ ಪ್ರಗತಿಪರ ಚಳವಳಿಗಳಲ್ಲಿ ಬೂಸಾ ಪ್ರಮುಖವಾದದ್ದು. 1970ರ ದಶಕದಲ್ಲಿ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿದ ಚಳವಳಿ ಇದಾಗಿದೆ. ಈ ಚಳವಳಿಯ ಕೇಂದ್ರ ಬಿಂದು ಬಿ.ಬಸವಲಿಂಗಪ್ಪ. ಇವರು ದಲಿತ ಸಮುದಾಯದಲ್ಲಿ ಹುಟ್ಟಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ನಿರ್ದಿಷ್ಟ ಛಾಪನ್ನು ಮೂಡಿಸಿರುವವರಾಗಿದ್ದಾರೆ. ಕರ್ನಾಟಕ ರಾಜ್ಯದ ಸಚಿವರಾಗಿ ಅನೇಕ ಜವಾಬ್ದಾರಿಯುತ ಖಾತೆಗಳನ್ನು ನಿರ್ವಹಿಸಿ ಜನಪರವಾದ ಸೇವೆ ಸಲ್ಲಿಸಿ ಅಭಿವೃದ್ಧಿಗಾಗಿ ದುಡಿದಿದ್ದಾರೆ. 1957ರಲ್ಲಿ ಶಾಸನ ಸಭೆಯನ್ನು ಪ್ರವೇಶಿಸಿ 1958ರಲ್ಲಿ ಉಪಗೃಹಮಂತ್ರಿಯಾಗಿ ದಕ್ಷತೆಯಿಂದ ದಲಿತ ನಾಯಕತ್ವಕ್ಕೆ ಬುನಾದಿ ಹಾಕಿದರು. 1972ರಲ್ಲಿ ಡಿ.ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಪೌರಾಡಳಿತ ಮತ್ತು ವಸತಿ ಸಚಿವರಾಗಿ ಬಿ.ಬಸವಲಿಂಗಪ್ಪ ಅವರು ನೇಮಕಗೊಂಡು ದೇಶದಲ್ಲೇ ಪ್ರಥಮ ಬಾರಿಗೆ ದಲಿತರು ತಲೆ-ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಅಮಾನವೀಯ ಪದ್ಧತಿಯನ್ನು ರದ್ದುಮಾಡಿ ಇಡೀ ದೇಶದ ಗಮನ ಸೆಳೆದವರು. ನವೆಂಬರ್ 19, 1973 ರಂದು ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಸಂಸ್ಥೆ ಏರ್ಪಡಿಸಿದ್ದ ‘ಹೊಸ ಅಲೆಗಳು’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾಗ ಮೊದಲಿಗೆ ಲಾಯರ್ ಸಂಜೀವಯ್ಯ ಅವರು ಇಂಗ್ಲಿಷ್ನಲ್ಲಿ ಭಾಷಣ ಮಾಡಲು ತೊಡಗಿದರಂತೆ, ನೆರದಿದ್ದ ಸಭಿಕರಲ್ಲಿ ಕೆಲವರು ಸಂಜೀವಯ್ಯ ಅವರ ವಿರುದ್ಧ ‘ಕನ್ನಡ... ಕನ್ನಡ...’ ಎಂದು ಕೂಗುತ್ತಿದ್ದರಂತೆ. ಅದಕ್ಕೆ ಸಂಜೀವಯ್ಯ ಅವರು ಇಂಗ್ಲಿಷ್ನಲ್ಲೇ ಭಾಷಣ ಮುಂದುವರಿಸಿದರಂತೆ. ಅವರ ಮನಸ್ಸಿನಲ್ಲಿ ಏನಿತ್ತೊ? ಎಸ್ಸಿ/ಎಸ್ಟಿಗಳೂ ಕೂಡ ಇಂಗ್ಲಿಷ್ನಲ್ಲಿ ವಿದ್ವತ್ ಪೂರ್ಣವಾಗಿ ಮಾತನಾಡಬಲ್ಲರೆಂಬ ಮಾದರಿಗೆ ಸಂಕೇತವೆಂಬಂತೆ ಮಾತನಾಡಿದರೋ?. ನಂತರದ ಭಾಷಣವನ್ನು ಬಿ. ಬಸವಲಿಂಗಪ್ಪ ಅವರು ಮಾತಿಗೆ ತೊಡಗಿದ ಕೊಂಚ ಸಮಯದಲ್ಲಿ ಸಂಜೀವಯ್ಯನವರು ಮಾಡಿದ ಇಂಗ್ಲಿಷ್ ಭಾಷಣ ಹಾಗೂ ಅದಕ್ಕೆ ಅಡ್ಡಿಪಡಿಸಿದ ಕನ್ನಡಾಭಿಮಾನಿಗಳ ವರಸೆ ಎಲ್ಲವನ್ನು ಗ್ರಹಿಕೆಗೆ ತಂದುಕೊಂಡು ಏರಿದ ದನಿಯಲ್ಲಿ ‘‘ಕನ್ನಡದಲ್ಲೇನಿದೆ.. ಅದರಲ್ಲಿ ಬಹುಪಾಲು ಬೂಸಾ...’’ ಎಂದು ಮಾತನಾಡಿದರು. ಇದು ಬಸವಲಿಂಗಪ್ಪ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ನಂತರ ನಡೆದದ್ದು ಇತಿಹಾಸ. ರಾಜಕೀಯ ಕುತಂತ್ರ ಹಾಗೂ ಸಂಪ್ರದಾಯವಾದಿಗಳ ದಲಿತ ವಿರೋಧಿ ಧೋರಣೆಯಿಂದಾಗಿ ಆ ಮಾತಿನ ಅರ್ಥ ಬೇರೆಯದೆ ಸ್ವರೂಪ ಪಡೆದುಕೊಂಡಿತು. ರಾಜ್ಯಾದ್ಯಂತ ಈ ಕುರಿತು ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡವು. ನವೆಂಬರ್ 20, 1973ರ ಬೆಳಗಾಗುವುದರೊಳಗೆ ಈ ವಿಷಯ ಪತ್ರಿಕೆಗಳಲ್ಲಿ ವಿಭಿನ್ನವಾದ, ಜನರನ್ನು ರೊಚ್ಚಿಗೇಳಿಸುವ ಶೈಲಿಯಲ್ಲಿ ‘ಕನ್ನಡ ಪುಸ್ತಕ ಓದುವುದರಿಂದ ವಿಚಾರ ಶಕ್ತಿ, ದೇಶಪ್ರೇಮ ಬರದು’ ಎಂಬ ಶೀರ್ಷಿಕೆಯಲ್ಲಿ ‘‘ಕನ್ನಡ ಪುಸ್ತಕವನ್ನು ಓದುವುದರಿಂದ ದೇಶಪ್ರೇಮ, ಸ್ವಾತಂತ್ರ್ಯ, ವಿಚಾರಶಕ್ತಿ, ಧೈರ್ಯ, ಸೇವಾ ಭಾವನೆಗಳು ಬರುವುದಿಲ್ಲ’’ ಎಂಬುದು ಬಿ.ಬಸವಲಿಂಗಪ್ಪ ಅವರ ಖಚಿತ ಅಭಿಪ್ರಾಯ ಎಂದು ಸಂಪ್ರದಾಯವಾದಿಗಳ ಪತ್ರಿಕೆ ಬರೆಯಿತು. ಈ ಮೂಲಕ ಕೆಲವು ಮೂಲಭೂತವಾದಿಗಳು ಅವರ ವಿರುದ್ಧವಾಗಿಯೇ ಕೆಲಸ ಶುರುಮಾಡಿದರು. ಇಡೀ ರಾಜ್ಯದ ಜನತೆ ಎರಡು ಗುಂಪುಗಳಾದವು. ಬಸವಲಿಂಗಪ್ಪನವರ ಬೆಂಬಲಕ್ಕೆ ಒಂದು ಗುಂಪು, ಅವರನ್ನು ವಿರೋಧಿಸುವ ಮತ್ತೊಂದು ಗುಂಪು ಸೃಷ್ಟಿಗೊಂಡವು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 27, 1973ರಂದು ಬಸವಲಿಂಗಪ್ಪನವರ ಹೇಳಿಕೆ ಕುರಿತಂತೆ ಪರ-ವಿರೋಧ ಪ್ರತಿಭಟನಾ ಮೆರವಣಿಗೆಗಳು ಪ್ರಾರಂಭವಾದವು. ಕೆ.ಆರ್. ಸರ್ಕಲ್ ಬಳಿ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದರು. ರಂಗಾಚಾರ್ಲು ಪುರಭವನದ ಬಳಿ ಒಂದು ಗುಂಪಿನ ಮೆರವಣಿಗೆ ಬಂದಾಗ, ಪ್ರತಿ ಗುಂಪಿನ ಮೆರವಣಿಗೆ ಸಮೀಪಿಸುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಕಲ್ಲು ತೂರಿಸಿದರಲ್ಲದೆ ಕೈ ಮಾಡುವ ದೃಷ್ಟಿಯಿಂದ ಮುನ್ನುಗ್ಗಿದಾಗ ಇದ್ದ ಪೊಲೀಸರು ಲಾಠಿ ಪ್ರಹಾರ ಮಾಡಿ ಒಂದು ಗುಂಪನ್ನು ಚದುರಿಸಿದರು. ದಲಿತರ ನಾಯಕ ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಎಷ್ಟೋ ಜನ ದೌರ್ಜನ್ಯಕ್ಕೆ ಒಳಗಾದರು. ದೈಹಿಕವಾಗಿ ಹಲ್ಲೆಗೊಳಗಾದ ಜನ ಒಳಗೊಳಗೆ ಮರುಕ ಪಟ್ಟರು. ಕನ್ನಡ ಸಿರಿಭರಿತ ಪರಂಪರೆ ಮತ್ತು ಮೌಲ್ಯ ಸಾಹಿತ್ಯಗಳ ಪರಿಚಯವೂ ಇಲ್ಲದೆ ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪನವರು ಕನ್ನಡವನ್ನು ಅವಹೇಳನ ಮಾಡಿದ್ದಾರೆಂದು ಅವರನ್ನು ಮಂತ್ರಿ ಪದವಿಯಿಂದ ತೆಗೆಯುವವರೆಗೂ ಹೋರಾಟ ನಡೆಸಲು ಕ್ರಿಯಾ ಸಮಿತಿಯೊಂದನ್ನು ರಚಿಸಬೇಕೆಂದು ಕನ್ನಡ ಚಳವಳಿಗಾರರ ಕೇಂದ್ರ ಕಾರ್ಯ ಸಮಿತಿಯು ನಿರ್ಧರಿಸಿತು. ಬಿ.ಬಸವಲಿಂಗಪ್ಪ ವಿರೋಧಿಗಳು ಆವರನ್ನು ತಮ್ಮ ಊರ ಒಳಗಡೆ ಪ್ರವೇಶಿಸದಂತೆ ನಿರ್ಬಂಧಿಸಿ, ಅವಕಾಶ ಕೊಡಕೂಡದೆಂದು ಪ್ರತಿಭಟಿಸಿದರು. ಆದರೆ ಬಸವಲಿಂಗಪ್ಪ ಅವರು ಕರ್ನಾಟಕ ಏಕೀಕರಣ ಚಳವಳಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 1956ರಲ್ಲಿ ಕರ್ನಾಟಕ ರಾಜ್ಯ ರಚನೆಯಾಗುವ ತನಕ ಈ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಚೆಲುವ ಕನ್ನಡ ನಾಡಿನ ಉದಯಕ್ಕಾಗಿ ದುಡಿದವರು. ಹೀಗೆ ಕನ್ನಡ ಅಭಿವೃದ್ಧಿಗಾಗಿ ದುಡಿದ ಬಿ.ಬಸವಲಿಂಗಪ್ಪ ಅವರ ವಿರುದ್ಧವೇ ಕನ್ನಡ ಚಳವಳಿಗಾರರು ಪ್ರತಿಭಟಿಸುವ ಮೂಲಕ ಹಾಗೆಯೇ ಬೆಂಗಳೂರನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದರು. ಇಂತಹ ಮಹಾನ್ ಕನ್ನಡ ಅಭಿಮಾನಿ ಹಾಗೂ ಹೋರಾಟಗಾರ ಬಿ. ಬಸವಲಿಂಗಪ್ಪ ಅವರು ಡಿಸೆಂಬರ್ 03, 1973ರಂದು ವಿಷಯ ಸಂಬಂಧಿಸಿದಂತೆ ಸ್ವತಃ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾರೆ. ಬಸವಲಿಂಗಪ್ಪ ಅವರ ಸ್ಪಷ್ಟನೆ: ‘‘ಕನ್ನಡ ಭಾಷೆ ವಿರುದ್ಧ ನಾನು ಎಂದೂ ಮಾತಾಡಿಲ್ಲ. ಆದರೆ ಕೆಲವು ಕನ್ನಡ ಪುಸ್ತಕಗಳ ಬಗ್ಗೆ ಮಾತ್ರವೆಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ ಮತ್ತು ಆ ಬಗ್ಗೆ ತುಂಬಾ ಗೌರವ ಹೊಂದಿರುವವನಾಗಿದ್ದೇನೆ. ನನ್ನ ಭಾಷೆ ಈ ವಿಚಾರವನ್ನು ತಿಳಿಯದಿದ್ದಲ್ಲಿ ಆ ರೀತಿಯಲ್ಲಿ ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳು ಎಲ್ಲಾ ವರ್ಗಗಳನ್ನು ಕೋರಿಕೊಳ್ಳುತ್ತೇನೆ’’ ಎಂದು ಮನಪೂರ್ವಕವಾಗಿ ಬಸವಲಿಂಗಪ್ಪ ಅವರು ರಾಜ್ಯದ ಜನತೆಯನ್ನು ವಿನಂತಿಸಿದರು. ಹಾಗೆಯೇ ಅಂದು ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ‘‘ಬಿ. ಬಸವಲಿಂಗಪ್ಪ ಅವರು ಮಾತನಾಡಿದರೆನ್ನಲಾದ ಟೀಕೆಗೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ಪರ ಹಾಗೂ ವಿರೋಧಿ ಚಳವಳಿಯಿಂದ ನಾನು ತೀವ್ರ ಮನನೊಂದಿದ್ದೇನೆ. ಬಸವಲಿಂಗಪ್ಪನವರ ಸ್ಪಷ್ಟೀಕರಣ ವಿವಾದವನ್ನು ಕೊನೆಗೊಳಿಸುವುದೆಂದು ನಾನು ನಿರೀಕ್ಷಿಸಿದೆ. ದುರದೃಷ್ಟವಶಾತ್ ಚಳವಳಿ ಹಾಗೂ ಪ್ರತಿ ಚಳವಳಿ ಮುಂದುವರಿಯುತ್ತಿವೆ’’ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ ಯಾರೇ ವಿನಂತಿಸಿದರೂ ಬೂಸಾ ಚಳವಳಿ ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಆನಂತರ ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಇಡೀ ಶೋಷಿತ ಸಮುದಾಯ ಪ್ರತಿ ಹೋರಾಟಕ್ಕೆ ನಿಂತವು. ಡಾ. ಸಿದ್ದಲಿಂಗಯ್ಯ ಅವರೂ ಸೇರಿ ಬಹುತೇಕರು ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರ ಬೆಂಬಲಕ್ಕೆ ನಿಂತರು. ಅದರೆ ಬಸವಲಿಂಗಪ್ಪ ಅವರನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಮಂತ್ರಿ ಸಂಪುಟದಿಂದ ತೆಗೆದುಹಾಕಬೇಕೆಂಬ ಒತ್ತಡ ವಿಪರೀತವಾಯಿತು. ಡಿಸೆಂಬರ್ 14, 1973ರಂದು ಬಿ. ಬಸವಲಿಂಗಪ್ಪ ಅವರು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ದಿಲ್ಲಿಯಿಂದಲೇ ರಾಜೀನಾಮೆ ಪತ್ರ ಕಳುಹಿಸಿಕೊಟ್ಟರು. ಡಾ. ಸಿದ್ದಲಿಂಗಯ್ಯ ಅವರು ಹೇಳುವಂತೆ ‘‘ನಮ್ಮ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಮೊದಲ ಹಲ್ಲೆ ಇದಾಗಿತ್ತು. ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ಅದರಲ್ಲೂ ದಲಿತರಿಗೆ ಇಲ್ಲ ಅನ್ನುವುದು ಬಹಳ ಚಿಂತಾಜನಕವಾದ ವಿಚಾರ. ಯಾರು ಏನು ಬೇಕಾದರೂ ಹೇಳಬಹುದು. ಆದರೆ ಒಬ್ಬ ದಲಿತ ಹೇಳಿದಾಗ ಜನ ಹುಷಾರಾಗಿ ಬಿಡುತ್ತಿದ್ದರು. ಅದರಲ್ಲೂ ಬಸವಲಿಂಗಪ್ಪ ಹೇಳಿದರೆ ಇನ್ನೂ ಹುಷಾರಾಗಿ ಬಿಡುತ್ತಿದ್ದರು.’’ ಇದು ಸಂಪ್ರದಾಯವಾದಿಗಳ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ರಾಜೀನಾಮೆ ನೀಡಿದ ನಂತರದ ದಿನದಲ್ಲಿ ರಾಷ್ಟ್ರಕವಿ ಕುವೆಂಪು ‘‘ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ. ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೆ. ದನ, ಎಮ್ಮೆ ಸಾಕುವವರಿಗೆ ಗೊತ್ತು ಬೂಸಾವೇ ಮುಖ್ಯ, ಪ್ರಧಾನವಾದ ಆಹಾರ’’ ಅಂತ ಹೇಳಿ ಬಿ. ಬಸವಲಿಂಗಪ್ಪ ಅವರ ಬೂಸಾದ ಮಾತಿನ ಹಿನ್ನೆಲೆಯನ್ನು ಸಮರ್ಥಿಸಿದರು. ‘‘ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಾಗ ಹಾಗೇಕೆ ಕರೆದರೆಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಬೇಕು. ನಮ್ಮ ಮತ ಧರ್ಮಗಳಿಂದ ಮೊದಲಿನಿಂದಲೂ ವಂಚಿತರಾಗಿ ಹೊರಗುಳಿದ ಪಂಚಮರಿಗೆ ಮತೀಯ ಸಾಹಿತ್ಯದಿಂದ ತುಂಬಿದ ಕನ್ನಡ ಸಾಹಿತ್ಯ ಅರ್ಥಹೀನವಾಗಿ ಕಂಡರೆ ಅದರಲ್ಲೇನು ಆಶ್ವರ್ಯವಿದೆ? ಅಲ್ಲದೆ ಪಂಚಮರು ಕನ್ನಡ ಸಾಹಿತ್ಯದ ಇಂಥ ಮತೀಯ ಪರಂಪರೆಯನ್ನು ಉದ್ವಿಗ್ನತೆಯಲ್ಲಿ ತ್ಯಜಿಸಲಾದಾಗ ಮಹಾರಾಷ್ಟ್ರದ ಮಹರ್ ಜನಾಂಗದ ಲೇಖಕರಂತೆ (ದಲಿತ ಪ್ಯಾಂಥರ್ಸ್) ಇವರು ಕನ್ನಡಕ್ಕೆ ನಿಜವಾಗಿಯೂ ಹೊಸದಾದದ್ದನ್ನು ಸೇರಿಸಲು ಸಾಧ್ಯತೆಯಿಲ್ಲವೇ?’’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು.ಆರ್.ಅನಂತಮೂರ್ತಿ ಅವರು ಬಿ.ಬಸವಲಿಂಗಪ್ಪ ಅವರನ್ನು ಬೆಂಬಲಿಸಿ ಪತ್ರಿಕೆಗೆ ಲೇಖನ ಬರೆಯುತ್ತಾರೆ. ಹೀಗೆ ಬಸವಲಿಂಗಪ್ಪನವರ ಪರವಾಗಿ ದಲಿತೇತರ ಪ್ರಗತಿಪರರಾದ ಅಗ್ರಹಾರ ಕೃಷ್ಣಮೂರ್ತಿ, ಕಾಳೇಗೌಡ ನಾಗವಾರ, ಕರಿಗೌಡ ಬೀಚನಹಳ್ಳಿ, ಶೂದ್ರ ಶ್ರೀನಿವಾಸ್ ಅವರು ಬೆಂಬಲಿಸಿ ಆ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಗೆ ಬಯಸಿದರು. ಹಾಗೆಯೇ ಈ ಬೂಸಾ ಪ್ರಕರಣವಂತೂ ದಲಿತರಲ್ಲಿ ಜಾಗೃತಿ ಮೂಡಿಸಿದಂತಹ ಚಳವಳಿಯಾಗಿದೆ. ಆ ದಿನಗಳಲ್ಲಿ ಇದು ಕಷ್ಟಕರವಾದ ಪರಿಸ್ಥಿತಿಗಳನ್ನು ಹುಟ್ಟುಹಾಕಿದರೂ ಆನಂತರದ ದಿನಗಳಲ್ಲಿ ಅದರಿಂದ ಒಳ್ಳೆಯ ಫಲ ಸಿಕ್ಕಿತು. ಇದರ ಪ್ರತಿಫಲವಾಗಿ ದಲಿತರೆಲ್ಲರು ಒಗ್ಗೂಡಿ ಸ್ವಾಭಿಮಾನ, ಆತ್ಮಗೌರವ, ಸಂಘರ್ಷ ಮತ್ತು ಪರಿವರ್ತನೆ ಎಂಬ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು 1974 ಡಿಸೆಂಬರ್ 28, 29 ಮತ್ತು 30 ರಂದು ಭದ್ರಾವತಿಯಲ್ಲಿ ದಲಿತ ಲೇಖಕರ ಮತ್ತು ಕಲಾವಿದರ ಬಳಗ ಎನ್ನುವ ಹೆಸರಿನಲ್ಲಿ ಪ್ರಥಮ ಸಮಾವೇಶವನ್ನು ನಡೆಸಲಾಯಿತು. ಈ ಸಮಾವೇಶವನ್ನು ಬಿ. ಬಸವಲಿಂಗಪ್ಪ ಅವರೇ ಉದ್ಘಾಟಿಸಿ ಮಾತನಾಡುತ್ತಾ ‘‘ಈ ಕ್ರಾಂತಿಯ ಸಂಕೇತ ಏನು? ಬಸವಣ್ಣ ತನ್ನ ಕಾಲದಲ್ಲಿ ಏನು ಬಸವ ಕಲ್ಯಾಣದಲ್ಲಿ ಪ್ರಾರಂಭ ಮಾಡಿದನೋ ಅದು ಈ ಹೊತ್ತು ಪ್ರಾರಂಭವಾಯಿತು ಅಂತ ನನಗನ್ನಿಸುತ್ತದೆ. ಜಾತಿ ಭೇದವಿಲ್ಲದೆ, ಮತ ಭೇದವಿಲ್ಲದೆ, ಇಪ್ಪತ್ತು ಮೂವತ್ತು ಸಾವಿರ ಜನ, ಈ ಸಮೂಹ ಒಂದು ಕಡೆ ಸೇರಿ ಯಾವೊಬ್ಬ ಮನುಷ್ಯ ಸಂಕೇತ ರೂಪವಾಗಿ ಒಂದು ಸಮಾಜದಲ್ಲಿ ಬದಲಾವಣೆಯಾಗಬೇಕು, ವಿಚಾರಶಕ್ತಿ ಬದಲಾವಣೆಯಾಗಬೇಕು ಅಂತ ಹೇಳಿಬಿಟ್ಟು ಸಂಕಲ್ಪಮಾಡಿದ್ದೀರಿ. ಈ ಸಮಾಜದ ವ್ಯವಸ್ಥೆಯನ್ನು ವಿಚಾರ ಸರಣಿಯನ್ನು ಬದಲಾವಣೆ ಮಾಡಬೇಕು. ನೀವು ಇಂತಹ ಕೆಲಸ ಮಾಡುತ್ತೀರೆಂದು ನನಗೆ ಆಸೆ ಮೂಡಿದೆ. ನೀವೆಲ್ಲರೂ ಬಸವಣ್ಣನವರ ಅನುಭವ ಮಂಟಪದಂತೆ ಒಂದು ಮಾನವೀಯತೆಯ ಸಮಾಜವನ್ನು ಸೃಷ್ಟಿ ಮಾಡಬೇಕು ಅಂತ ಹೇಳಿ ಆತ ಪ್ರಾರಂಭ ಮಾಡಿದ ಈ ಹೊತ್ತು ನಾವು ಪುನಃ ಅದನ್ನು ಪ್ರಾರಂಭ ಮಾಡಿದರೆ ನನಗನ್ನಿಸುತ್ತದೆ ಖಂಡಿತವಾಗಿಯೂ ನಮಗೆ ಯಶಸ್ಸು ದೊರಕುತ್ತದೆ’’ ಎಂದು ಹೇಳಿ ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು. ಒಂದು ರೀತಿಯಲ್ಲಿ ದಲಿತರ ಸಾಮೂಹಿಕ ಸಂಘಟನೆಯನ್ನು ಹುಟ್ಟುಹಾಕಿದರು. ಕೇವಲ ಪ್ರಾದೇಶಿಕವಾಗಿದ್ದ ದಲಿತ ಸಂಘರ್ಷ ಸಮಿತಿ, ದಲಿತ ಕ್ರಿಯಾ ಸಮಿತಿಗಳು ಬಲಿಷ್ಠವಾಗಿ ಒಂದೆಡೆ ಐಕ್ಯಗೊಂಡು ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂದು ನಾಮಕರಣವಾಯಿತು. ನಂತರದ ದಿನದಲ್ಲಿ ದಲಿತ ಸಾಹಿತಿಗಳು ಹೋರಾಟಗಾರರು ಒಗ್ಗೂಡಿ ಪಂಚಮ ಪತ್ರಿಕೆ ತಂದರು. ನಂತರ ಸುದ್ಧಿ ಸಂಗಾತಿ ಹುಟ್ಟುಹಾಕಿದರು. ದಲಿತ ಚಳವಳಿಗೆ ಪೂರಕವಾಗಿ ಮುಂಗಾರು, ಮಾನವ, ರುಜುವಾತು, ಶೂದ್ರ, ಸಂಕ್ರಮಣ, ಲಂಕೇಶ್ ಪತ್ರಿಕೆಗಳು ಬೆಂಬಲವಾಗಿ ನಿಂತವು. ಸಮಾಜ ಸುಧಾರಕರಾಗಿ... 1972ರಲ್ಲಿ ದೇವರಾಜ ಅರಸು ನಾಯಕತ್ವದಲ್ಲಿ ಪೌರಾಡಳಿತ ಸಚಿವಾಗಿ ದಲಿತರು ತಲೆ ತಲಾಂತರಗಳಿಂದ ಊರವರು ಮಾಡಿದ ಮಲ-ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಹಾಕುವ ಅಮಾನೀಯ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ರದ್ದುಗೊಳಿಸಿದರು. ಮತ್ತೊಬ್ಬರ ಮಲ-ಮೂತ್ರಗಳನ್ನು ಒಂದೇ ಒಂದು ಜನಾಂಗ ಕಾಲಾನುಕಾಲದಿಂದ ತಲೆ ಮೇಲೆ ಹೊತ್ತು ಸಾಗಿಸುವಂತಹದ್ದು ನಾಚಿಗೇಡಿನ ಪದ್ಧತಿ ಎಂದು ತಿಳಿದು ವಿರೋಧಿಸಿದರು ಹಾಗೆಯೇ ರದ್ದುಗೊಳಿಸಿದರು ಇದು ಬಸವಲಿಂಗಪ್ಪ ಅವರ ಅತ್ಯಂತ ಕ್ರಾಂತಿಕಾರಕ ಸಾಧನೆಯಾಗಿದೆ. ದಲಿತರು ಮಲ ಹೊರುವುದನ್ನು ಅದೆಷ್ಟು ನಿಶ್ಚಿತವಾದ ಕಾರ್ಯಕ್ರಮ ಮಾಡಿಕೊಂಡು ಅವರು ನಿಲ್ಲಿಸಿದರು. ಆಗ ಬಂದ ವಾಗ್ವಾದಗಳು, ಜನ ಕೋರ್ಟಿಗೆ ಹೋಗಿದ್ದು ಮತ್ತು ದಿಲ್ಲಿಯಿಂದ ಇಂದಿರಾ ಗಾಂಧಿ ಸರಕಾರದಿಂದ ಒಬ್ಬರು ಬಂದು ಸದ್ಯಕ್ಕೆ ಇದಾಗದೆ ಇದ್ದರೆ ಕೊನೆ ಪಕ್ಷ ಒಂದು ಗಂಟೆಯಾದರೂ ಮಲ ತೆಗೆದುಕೊಂಡು ಹೋಗುವುದಕ್ಕೆ ಒಪ್ಪಬಹುದಲ್ಲ ಅಂತ ಅಂದಾಗ ಅದಕ್ಕೂ ಒಪ್ಪದೆ ಬಸಲಿಂಗಪ್ಪನವರು ಅದನ್ನು ಸಾಧಿಸಿದ್ದು ನಮ್ಮ ಕಾಲದ ಒಂದು ದೊಡ್ಡ ಮಡಿವಂತಿಕೆಯ ಸಮಾಜವನ್ನು ದಿಗ್ಭ್ರಮೆಗೊಳಿಸಿತು. ವಸತಿ ಸಚಿವರಾಗಿ ಗೃಹಮಂಡಳಿ ವತಿಯಿಂದ ಮನೆಗಳನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಗಳಿಗೆ ಮೀಸಲಿಡುವುದಕ್ಕೆ ಕಾರಣಕರ್ತರಾದರು. ಗ್ರಾಮಾಂತರ ಪ್ರದೇಶದಲ್ಲಿ ಜನತಾಗೃಹ ಯೋಜನೆಯನ್ನು ಆರಂಭಿಸಿದರು. ಮನೆ ನಿರ್ಮಿಸಲು ಅಸಮರ್ಥರಾದ ಸಮಾಜದ ವಸತಿ ರಹಿತ ದುರ್ಬಲ ವರ್ಗದವರಿಗಾಗಿ ಸ್ವಾಯತ್ತ ಮಂಡಳಿಗಳಲ್ಲಿ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಲೆವಿ ಎಂದು ನಿಧಿಯನ್ನು ಪ್ರಾರಂಭಿಸಿದರು. ಹೊಸದಾಗಿ ರಚನೆಗೊಂಡ ಬಡಾವಣೆಗಳಲ್ಲಿ ಶೇ. 18ರಷ್ಟು ನಿವೇಶನಗಳನ್ನು ದಲಿತರಿಗಾಗಿ ಮೀಸಲಿಟ್ಟರು. ದೇವದಾಸಿ ಪದ್ಧತಿಯ ಅಮಾನೀಯ ಮಹಿಳಾ ಶೋಷಣೆಯನ್ನು ಕಟುವಾಗಿ ಅಲ್ಲಗೆಳೆದು ಬದುಕಿಗೆ ಸೂಕ್ತ ಬದಲಾವಣೆಗಳನ್ನು ತರುವಲ್ಲಿ ಮುಂದಾದರು. ಹಾಗೆಯೇ ಕರ್ನಾಟಕ ರಾಜ್ಯ ಸೇವೆಯಲ್ಲಿ ಪರಿಶಿಷ್ಟರ ಮೀಸಲಾತಿಯ ಕಡ್ಡಾಯ, ಭಡ್ತಿ, ನೇಮಕಾತಿಯಲ್ಲಿ ಮೀಸಲು, ರೋಸ್ಟರ್ ಹೀಗೆ ದಲಿತರ ನಿಯಮವನ್ನು ಜಾರಿಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದವರು ಬಿ. ಬಸವಲಿಂಗಪ್ಪ. ಇವೆಲ್ಲವೂ ಮೇಲ್ವರ್ಗದ ಹಿಂದೂಗಳ ಮನಸ್ಸಿನಲ್ಲಿ ಬಿ. ಬಸವಲಿಂಗಪ್ಪ ಅವರನ್ನು ವಿರೋಧಿಸುವ ಮನೋಭಾವವನ್ನು ಬೆಳೆಸಿತು. ಇವರನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿದು ಬೂಸಾ ಚಳವಳಿಯಲ್ಲಿ ಬಸವಲಿಂಗಪ್ಪ ಅವರನ್ನು ಬಲಿ ತೆಗೆದುಕೊಂಡರು. ಒಂದು ಕಡೆ ಇದರಿಂದ ದಲಿತರಿಗೆ ನಷ್ಟ ಉಂಟಾದರೂ ಆನಂತರದ ದಿನಗಳಲ್ಲಿ ಜಾಗೃತಿ ಮೂಡಿಸಿದಂತಾಯಿತು. ಒಂದು ದೃಷ್ಟಿಯಲ್ಲಿ ಚಾರಿತ್ರಿಕವಾಗಿ ಇದು ಕರ್ನಾಟಕದ ನೆಲದಲ್ಲಿ ದಲಿತ ಸಂಘಟನೆಗೆ ಮೂಲ ಪ್ರೇರಕ ಶಕ್ತಿಯೂ ಆಗಿದೆ.

35 C