ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ನೇಮಕ
ಉಡುಪಿ, ಜ.31: ಪೋಪ್ ಲಿಯೋ ಗಿಐ್ಖ ಅವರು ವಂ| ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರು ಪ್ರಸ್ತುತ ಶಿರ್ವದ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿಯನ್ನು ಶನಿವಾರ, ಜನವರಿ 31, 2026ರಂದು ರೋಮ್ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಸಮಯ ಸಂಜೆ 4.30ಕ್ಕೆ) ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಅದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಪ್ರಕಟಿಸಲಾಯಿತು. ವಂದನೀಯ ರೆವ. ಫಾ. (ಡಾ.) ಲೆಸ್ಲಿ ಕ್ಲಿಫರ್ಡ್ ಅವರು 1962ರ ಆಗಸ್ಟ್ 19ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಉಚ್ಚಿಲ (ಎರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿಗಳ ಪುತ್ರರಾಗಿ ಜನಿಸಿದರು. ದೈವಿಕ ಕ್ರೈಸ್ತ ಪರಂಪರೆಯ ಕುಟುಂಬದಲ್ಲಿ ಬೆಳೆದ ಅವರು, ಎಂಟು ಸಹೋದರ-ಸಹೋದರಿಯರ ದೊಡ್ಡ ಕುಟುಂಬಕ್ಕೆ ಸೇರಿದವರು. ಕುಟುಂಬದ ನಂಬಿಕೆ ಮತ್ತು ಮೌಲ್ಯಗಳು ಅವರ ಧಾರ್ಮಿಕ ಜೀವನಕ್ಕೆ ಮಹತ್ವದ ಪ್ರೇರಣೆಯಾಗಿವೆ. ಅವರ ಹಿರಿಯ ಸಹೋದರಿಯರಾದ ದಿವಂಗತ ವೆರೋನಿಕಾ ಡಿಸೋಜಾ ಹಾಗೂ ದಿವಂಗತ ಕ್ರಿಸ್ಟಿನ್ ಡಿಸೋಜಾ ನಿಧನರಾಗಿದ್ದು ಉಳಿದ ಸಹೋದರ-ಸಹೋದರಿಯರು ಪ್ರಾರ್ಥನೆಗಳ ಮೂಲಕ ಅವರನ್ನು ಸದಾ ಬೆಂಬಲಿಸುತ್ತಿದ್ದಾರೆ. ಅವರ ಪ್ರಾಥಮಿಕ ಶಿಕ್ಷಣ ಉಚ್ಚಿಲದ ಸರಸ್ವತಿ ಮಂದಿರ ಹೈರ್ಯ ಪ್ರೈಮರಿ ಶಾಲೆಯಲ್ಲಿ (1969-1976) ಆರಂಭಗೊಂಡಿತು. ಬಳಿಕ ಎರ್ಮಾಳಿನ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ (1976-1979) ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಅದಮಾರಿನ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ (1979-1981) ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಪಡೆದರು. ದೇವರ ಕರೆಗೆ ಸ್ಪಂದಿಸಿದ ಫಾ. ಲೆಸ್ಲಿ ಅವರು ಯಾಜಕ ತರಬೇತಿಯೊಂದಿಗೆ ಉನ್ನತ ಶಿಕ್ಷಣ ಮುಂದುವರಿಸಿದರು. ಮಂಗಳೂರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವಾಗ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ (1982-1985) ಪಡೆದರು. ನಂತರ ರೋಮ್ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುರ್ಲ ಪದವಿ (1986-1990) ಪಡೆದರು. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. (1991-1993), ಬೆಂಗಳೂರು ಮನೋವಿಜ್ಞಾನ ಮತ್ತು ತರಬೇತಿ ಸಂಸ್ಥೆಯಿಂದ ಡೆಪ್ತ್ ಸೈಕಾಲಜಿ ಮತ್ತು ಫಾರ್ಮೇಷನ್ ಡಿಪ್ಲೊಮಾ (1993-1995) ಪಡೆದಿದ್ದಾರೆ. ಬಳಿಕ ಬೆಲ್ಜಿಯಂನ ಲುವೇನ್ನ ಕ್ಯಾಥೊಲಿಕ್ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಲಿಸೆನ್ಸಿಯೇಟ್ (1997-1999) ಹಾಗೂ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ (1999-2003) ಪಡೆದಿದ್ದಾರೆ. ಫಾ. ಲೆಸ್ಲಿ ಅವರು 1990ರ ಮೇ 10ರಂದು ಮಂಗಳೂರು ಧರ್ಮಪ್ರಾಂತ್ಯಕ್ಕೆ ಯಾಜಕರಾಗಿ ಅಭಿಷೇಕಗೊಂಡರು. ಅವರ ಯಾಜಕ ಸೇವೆ ಕುಂದಾಪುರದ ಹೋಲಿ ರೋಸರಿ ದೇವಾಲಯದಲ್ಲಿ ಸಹಾಯಕ ಧರ್ಮಗುರುವಾಗಿ (1990-1992) ಹಾಗೂ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ದೇವಾಲಯದಲ್ಲಿ (1992-1995) ಆರಂಭ ವಾಯಿತು. ಅವರು ಮಂಗಳೂರಿನ ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮ ಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಮತ್ತು ತರಬೇತಿದಾರರಾಗಿಯೂ (1995-1997) ಸೇವೆ ಸಲ್ಲಿಸಿದ್ದು, 2013ರವರೆಗೆ ಅತಿಥಿ ಪ್ರಾಧ್ಯಾಪಕರಾಗಿ ಮುಂದುವರಿಸಿದರು. ಪಾಂಗ್ಲಾ/ಶಂಕರಪುರದ ಸಂತ ಜಾನ್ ದಿ ಎವಾಂಜೆಲಿಸ್ಟ್ ದೇವಾಲಯದ ಧರ್ಮಗುರುಗಳಾಗಿ (2010-2017) ಹಾಗೂ ನಂತರ ಕಲ್ಯಾಣಪುರ-ಸಂತೆಕಟ್ಟೆಯ ಮೌಂಟ್ ರೋಸರಿ ದೇವಾಲಯದ ಧರ್ಮಗುರುಗಳಾಗಿ (2017-2022) ಸೇವೆ ಸಲ್ಲಿಸುವ ಮೂಲಕ ಅವರು ತಮ್ಮ ಧಾರ್ಮಿಕ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಈ ಅವಧಿಯಲ್ಲಿ ಅವರು ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜೂನ್ 2022ರಿಂದ ಫಾ. ಲೆಸ್ಲಿ ಅವರು ಶಿರ್ವದ ಶೋಕಮಾತಾ ದೇವಾಲಯದ ಧರ್ಮಗುರುಗಳಾಗಿಯೂ, ಡಾನ್ ಬಾಸ್ಕೋ ಹಾಗೂ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಉಡುಪಿ ಧರ್ಮಪ್ರಾಂತ್ಯದ ಆಡಳಿತ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 2022 ರಿಂದ 2025ರವರೆಗೆ ಯಾಜಕರ ಮಂಡಳಿಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಶಿರ್ವ ವಲಯದ ಪ್ರಧಾನ ಧರ್ಮ ಗುರುಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲ ಹಾಗೂ ಸಲಹೆಗಾರರ ಮಂಡಳಿಯ ಸದಸ್ಯರಾಗಿಯೂ (2023ರಿಂದ ಇಂದಿನವರೆಗೆ) ಸೇವೆ ಸಲ್ಲಿಸುತ್ತಿದ್ದಾರೆ.
ಮರ್ಕಝುಲ್ ಹುದಾ ಒಮಾನ್ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಒಮಾನ್ ರಾಷ್ಟೀಯ ಸಮಿತಿಯ ಮಹಾ ಸಭೆಯು ಬರ್ಕಾ ಫಾಮ್ ಹೌಸ್ ನಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್ ಝೈನಿ ಕಾಮಿಲ್ ಅವರ ನೇತೃತ್ವದಲ್ಲಿ ಇತ್ತೀಚಿಗೆ ನಡೆಯಿತು. ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿಯ ಸಂಚಾಲಕ ಎಂ ಎಸ್ ಉಬೈದುಲ್ಲಾ ಸಖಾಫಿ ಮಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಉದ್ಘಾಟನೆ ಮಾಡಿದರು. ಈ ಸಂದರ್ಭ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಸೈಯದ್ ಝೈನುಲ್ ಆಬಿದ್ ಅಲ್ ಐದರೂಸ್ ಎಮ್ಮೆಮಾಡು, ಇಬ್ರಾಹಿಂ ಹಾಜಿ ಆತ್ರಾಡಿ, ಡಾ.ಇಕ್ಬಾಲ್ ಹಾಜಿ ಬರ್ಕಾ, ಅಯ್ಯೂಬ್ ಕೋಡಿ ಕುಂದಾಪುರ, ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್, ಆರಿಫ್ ಕೋಡಿ ಕುಂದಾಪುರ, ಹಂಝ ಹಾಜಿ ಕಣ್ಣಂಗಾರ್, ಫರಿಯಾಝ್ ಹಾಜಿ ಬರ್ಕಾ, ಡಾ. ಅಬ್ದುಲ್ ರಝ್ಝಾಖ್ ಹಾಜಿ ಉಡುಪಿ, ಆಬಿದ್ ಪಾಷಾ ಬಾಳೆಹೊನ್ನೂರು, ಫಾಝಿಲ್ ಕಂಕನಾಡಿ, ಮೊಯ್ದೀನ್ ಸಾಹೇಬ್ ಸಾಸ್ತಾನ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ ಇ ಉಮರ್ ಸಖಾಫಿ ಎಡಪ್ಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಮಾಂಬ್ಳಿ ಸೊಹಾರ್, ಕೋಶಾಧಿಕಾರಿಯಾಗಿ ಸ್ವಾದಿಕ್ ಹಾಜಿ ಸುಳ್ಯ, ಉಪಾಧ್ಯಕ್ಷರಾಗಿ ಉಮರುಲ್ ಫಾರೂಕ್ ಕುಕ್ಕಾಜೆ ಸೋಹಾರ್, ನಾಸಿರುದ್ದೀನ್ ನಂದಾವರ ಸಲಾಲ, ಕಾರ್ಯದರ್ಶಿಯಾಗಿ ಹನೀಫ್ ಮಣ್ಣಾಪು, ಅಬ್ದುಲ್ ರಹ್ಮಾನ್ ಸುವೈಕ್ ಕರುವೇಲ್ ಮತ್ತು ಸದಸ್ಯರುಗಳಾಗಿ ಆದಂ ಮದನಿ ಆತೂರ್, ಝುಬೈರ್ ಸಅದಿ ಪಾಟ್ರಕೋಡಿ, ಶಂಸುದ್ದೀನ್ ಪಾಲತ್ತಡ್ಕ, ಸಲೀಂ ರಝಾ ಶಿವಮೊಗ್ಗ, ಅಬ್ಬಾಸ್ ಮರಕ್ಕಡ, ಅಬ್ದುಲ್ ಖಾದರ್ ಮಣ್ಣಾಪು ಸಲಾಲ, ಯೂಸುಫ್ ಹೈದರ್ ಕಣ್ಣಂಗಾರ್, ಸಲೀಂ ಶಾ ಚಿಕ್ಕಮಗಳೂರು, ಅಬ್ದುಲ್ ಅಝೀಝ್ ಬಾಳೆಹೊನ್ನೂರು, ರಿಯಾಝ್ ಮಂಜನಾಡಿ, ಮುಹಮ್ಮದ್ ನಿಟ್ಟೆ, ಅಬ್ದುಲ್ಲತೀಫ್ ಮಂಜೇಶ್ವರ, ಖಲಂದರ್ ಭಾಷಾ ತೀರ್ಥಹಳ್ಳಿ, ಇಬ್ರಾಹಿಂ ಹಾಜಿ ಮಣಿಪುರ, ಇಕ್ಬಾಲ್ ಎರ್ಮಾಲ್, ಹುಸೈನ್ ತೀರ್ಥಹಳ್ಳಿ, ಬದ್ರುದ್ದೀನ್ ಶಾಕಿರ್ ಕರುವೇಲ್, ಜಸೀಮ್ ಕೊಪ್ಪ, ಶಾಹುಲ್ ಹಮೀದ್ ಗುರುಪುರ, ಮುಝಮ್ಮಿಲ್ ಅಳಕೆಮಜಲು, ಬಶೀರ್ ಚೆಂಬುಗುಡ್ಡೆ, ಇಸ್ಮಾಯಿಲ್ ಭವಾನ್ ಮೊಂಟೆಪದವು, ಇರ್ಫಾನ್ ಕೂರ್ನಡ್ಕ, ಅಬ್ದುಲ್ ರಝ್ಝಾಖ್ ಪುಂಜಾಲಕಟ್ಟೆ, ಅಬ್ದುಲ್ ಕರೀಂ ಸುರಿಬೈಲ್, ಹಾರಿಸ್ ಕೊಳಕೇರಿ, ನಿಝಾರ್ ಖಾನ್ ಕಡಬ, ರಿಝ್ವಾನ್ ಕಬಕ, ಅಬ್ದುಲ್ ಅಝೀಝ್ ಶೇಖ್ ಅಹ್ಮದ್ ಬೋಳಾರ್, ಹಾಫಿಲ್ ಅಬ್ದುಲ್ ರಶೀದ್ ಮಲ್ಲೂರು, ಸದಖತುಲ್ಲಾಹ್ ಸಂಸೆ ಸಲಾಲ ಅವರನ್ನು ನೇಮಿಸಲಾಯಿತು.
ಆಸ್ಟ್ರೇಲಿಯನ್ ಓಪನ್ ನಲ್ಲಿ ಅಚ್ಚರಿ: ನಂಬರ್ 1 ಅರಿನಾ ಸಬಲೆಂಕಾಗೆ ಕಝಕಿಸ್ತಾನದ ಎಲೆನಾ ರೈಬಾಕಿನಾ ಶಾಕ್!
ವಿಶ್ವದ ನಾಲ್ಕು ಪ್ರತಿಷ್ಠಿತ ಗ್ಲಾನ್ ಸ್ಲಾಂಗಳಲ್ಲಿ ಒಂದಾಗಿರುವ ಟೆನಿಸ್ ನ ಮಹಿಳಾ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ವಿಶ್ವದ ನಂಬರ್ ಒನ್ ಮಹಿಳಾ ಆಟಗಾರ್ತಿಯಾಗಿರುವ ಬೆಲಾರಸ್ ನ ಅರಿನಾ ಸಬಲೆಂಕಾ ಅವರಿಗೆ ಕಝಕಿಸ್ತಾನದ ಎಲೆನಾ ರೈಬಕಿನಾ ಅವರು ಆಘಾತ ನೀಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎಲೆನಾ ಅವರು ಅರಿನಾ ಅವರನ್ನು 6-4, 4-6, 6-4 ಸೆಟ್ಗಳ ಅಂತರದಿಂದ ಸೋಲಿಸುವ ಮೂಲಕ 3 ವರ್ಷಗಳ ಹಿಂದಿನ ಸೋಲಿಗೆ ತಿರುಗೇಟು ನೀಡಿದರು. 2023ರ ಇದೇ ಟೂರ್ನಿಯ ಫೈನಲ್ ನಲ್ಲಿ ಎಲೆನಾ ಅವರು ಅರಿನಾ ಅವರ ವಿರುದ್ಧ ಸೋಲನುಭವಿಸಿದ್ದರು. ಆದರೆ ಈ ಬಾರಿ ಎಲೆನಾ ಗೆಲುವನ್ನು ತಡೆಯಲು ಸಬಲೆಂಕಾಗೆ ಸಾಧ್ಯವಾಗಲಿಲ್ಲ. ಇದು ವಿಶ್ವದ 5ನೇ ಶ್ರೇಯಾಕಿತೆಯಾಗಿರುವ ಕಝಕಿಸ್ತಾನದ ಆಟಗಾರ್ತಿ ಗಳಿಸಿರುವ 2ನೇ ಗ್ರಾನ್ ಸ್ಲಾಂ ಪ್ರಶಸ್ತಿಯಾಗಿದೆ. ಈ ಹಿಂದೆ 2022ರಲ್ಲಿ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಮೊದಲನೇ ಸೆಟ್ ಅನ್ನು ಎಲೆನಾ ರೈಬಕಿನಾ ಅವರು 6-4 ಅಂತರದಿಂದ ಮೊದಲನೇ ಸೆಟ್ ಅನ್ನು ಗೆದ್ದುಕೊಂಡರು. ಆದರೆ 2ನೇ ಸೆಟ್ ನಲ್ಲಿ ತಿರುಗೇಟು ನೀಡಿದ ಸಬಲೆಂಕಾ ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿ 4-6 ಅಂತರದಿಂದ ಗೆಲ್ಲುವ ಮೂಲಕ ಸಮಬಲ ಸ್ಥಾಪಿಸಿದರು. ಹೀಗಾಗಿ 3ನೇ ಸೆಟ್ ತೀವ್ರ ಕುತೂಹಲ ಕೆರಳಿಸತ್ತು. ಆದರೆ ಅದನ್ನು ಆರಾಮವಾಗಿ ಗೆದ್ದುಕೊಂಡ ಎಲೆನಾ ಅವರು ಪ್ರಶಸ್ತಿ ಮೇಲೆ ಹಕ್ಕು ಸ್ಥಾಪಿಸಿದರು.
ಅಪೆಕ್ಷ್ ಬ್ಯಾಂಕ್ ಚುನಾವಣೆ ಮುಂದೂಡಲ್ಪಟ್ಟಿದ್ದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಪೆಕ್ಷ್ ಬ್ಯಾಂಕ್ ಮತ್ತು ಕೆ ಎಂ ಎಫ್ ಆಡಳಿತದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ನಾನಾ ಕಾರಣಗಳು ಇವೆ. ಈಗಾಗಲೇ ಅಪೆಕ್ಷ್ ಬ್ಯಾಂಕ್ ಗೆ ಎಸ್ ರವಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ. ಅದೇ ರೀತಿಯಲ್ಲಿ ಕೆಎಂಎಫ್ ಗೆ ತಮ್ಮ ಸಹೋದರ ಸುರೇಶ್ ಕುಮಾರ್ ಗೆ ಅಧ್ಯಕ್ಷ ಗಾದಿ ನೀಡುವುದು ತಂತ್ರಗಾರಿಕೆಯಾಗಿದೆ. ಆದರೆ ಇದರಲ್ಲಿ ಡಿಕೆ ಶಿವಕುಮಾರ್ ಯಶಸ್ವಿ ಆಗುತ್ತಾರಾ?
ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ
ಮುಂಬೈ : ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಎನ್ಸಿಪಿ ಮುಖಂಡರಾದ ಪ್ರಫುಲ್ ಪಟೇಲ್ ಸಹಿತ ಹಲವರು ಉಪಸ್ಥಿತರಿದ್ದರು.
ವಿಬಿ ಜಿ ರಾಮ್ ಜಿಯಲ್ಲಿ ರಾಮನ ಹೆಸರು ಇರೋದು ಕಾಂಗ್ರೆಸ್ ಸಹಿಸಲಾಗುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ ಆರೋಪ
ಈ ಸರ್ಕಾರದ ಭ್ರಷ್ಟಾಚಾರ ದಿನಾ ಒಂದೊಂದು ಹೊರ ಬರುತ್ತಿದೆ. ಅಬಕಾರಿ ಸಚಿವರು ನಿನ್ನೆ ಉತ್ತರ ಕೊಟ್ಟಿದ್ದಾರೆ. ಈಗಾಗಲೇ 25 ಲಕ್ಷ ಹಣವನ್ನು ಲೋಕಾಯುಕ್ತದವರು ಹಿಡಿದಿದ್ದು, ಆಡಿಯೋದಲ್ಲಿ ಮಂತ್ರಿ ಹೆಸರು, ಅವರ ಮಗನ ಹೆಸರಿದೆ. ಅಧಿಕಾರಿಗಳೂ ಜೈಲುಪಾಲಾಗಿ ಜಾಮೀನಿನಡಿ ಹೊರಬಂದಿದ್ದಾರೆ. ಇಷ್ಟೆಲ್ಲ ಸಾಕ್ಷಿ ಇದ್ದರೂ ಸಾಕ್ಷಿ ಕೊಡಿ; ರಾಜೀನಾಮೆ ಕೊಡುವೆ ಎನ್ನುತ್ತಾರೆ ಎಂದು ಟೀಕಿಸಿದರು. ಅಧಿಕಾರ ಸ್ಥಾನ, ಭ್ರಷ್ಟಾಚಾರಕ್ಕೆ ಜಾತಿ ಇಲ್ಲ; ಸಚಿವರ ದಲಿತ ಕಾರ್ಡ್ ಬಳಕೆ ಡಾ. ಅಂಬೇಡ್ಕರರು, ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಆಗ್ರಹ
ಬೆಂಗಳೂರು: ಕರ್ನಾಟಕ ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರನ್ನು ಡ್ರಗ್ಸ್ (ಮಾದಕವಸ್ತು) ನಗರವಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ತಿಳಿಸಿದ್ದಾರೆ. ರಾಜ್ಯದ ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ಸುಳ್ಳು ಮಾಹಿತಿ ಕೊಟ್ಟ ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಅಮಾನತು ಮಾಡಬೇಕು. ಕರ್ನಾಟಕವನ್ನು ಮಾದಕವಸ್ತುಮುಕ್ತ ರಾಜ್ಯವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಎಂ.ಜಿ.ಮಹೇಶ್
ವಿಜಯನಗರ : ಕೊಟ್ಟೂರು ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಅವರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳಿಗೆ ಪ್ರತಿಕ್ರಿಯಿಸದ ಅವರು, ಆರೋಪಿ ಅಕ್ಷಯ್ ಕುಮಾರ್ ತನ್ನ ತಂದೆ, ತಾಯಿ ಹಾಗೂ ತಂಗಿ ನಾಪತ್ತೆಯಾಗಿದ್ದಾರೆ ಎಂದು ಆರಂಭದಲ್ಲಿ ದೂರು ನೀಡಿದ್ದನು. ಆದರೆ ಆತನ ವರ್ತನೆಯಲ್ಲಿ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ತಿಲಕ್ನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ಮೂವರನ್ನೂ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಶನಿವಾರ ಆರೋಪಿಯನ್ನು ಕೊಟ್ಟೂರಿಗೆ ಕರೆತಂದು ಮಹಜರು ನಡೆಸಿ, ಮನೆಯೊಳಗೆ ಹೂತಿಟ್ಟಿದ್ದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ವಿವರಿಸಿದರು. ಸದ್ಯ ಈ ಪ್ರಕರಣದ ತನಿಖೆಯನ್ನು ತಿಲಕ್ನಗರ ಪೊಲೀಸ್ ಠಾಣೆಯವರೇ ನಡೆಸುತ್ತಿದ್ದಾರೆ. ಅವರು ಪ್ರಕರಣವನ್ನು ಅಧಿಕೃತವಾಗಿ ಹಸ್ತಾಂತರಿಸಿದ ನಂತರ ವಿಜಯನಗರ ಪೊಲೀಸರು ಮುಂದಿನ ತನಿಖೆ ಆರಂಭಿಸಲಿದ್ದಾರೆ ಎಂದು ಎಸ್ಪಿ ಜಾಹ್ನವಿ ಸ್ಪಷ್ಟಪಡಿಸಿದರು. ‘ಕೊಲೆ ಯಾವಾಗ ನಡೆದಿದೆ, ಹೇಗೆ ನಡೆದಿದೆ, ಕೊಲೆಯ ಉದ್ದೇಶ ಹಾಗೂ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಈ ಎಲ್ಲಾ ಅಂಶಗಳ ಕುರಿತು ಸದ್ಯ ತನಿಖೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.
ಮಂಗಳೂರು : ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ 25 ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಶನಿವಾರ ಅಡ್ಯಾರ್ ಯಶಸ್ವಿ ಹಾಲ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು, “ಭಾರತೀಯ ಸಂಸ್ಕೃತಿಯ ಮೂಲ ತಳಹದಿ ಇರುವುದು ನಾವು ಮಾಡುವ ದಾನ ಧರ್ಮದಲ್ಲಿ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲಾ ಧರ್ಮದಲ್ಲೂ ದಾನದ ಕುರಿತು ಸ್ಪಷ್ಟ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ಸಂಸ್ಥೆಯೊಂದು ಗ್ರಾಮ ಪಂಚಾಯತ್ ಜೊತೆ ಸೇರಿಕೊಂಡು ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ“ ಎಂದರು. ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಮೆನೇಜರ್ ಜಗದೀಶ್ ಕಾಮತ್ ಮಾತಾಡಿ, ”ಗ್ರಾಮದ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮವನ್ನು ಮುಂದೆ ನಿಂತು ನೆರವೇರಿಸಿದ ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಹೊಲಿಗೆ ಯಂತ್ರ ಕೇವಲ ಒಂದು ಯಂತ್ರವಲ್ಲ, ಇದು ಸ್ವ ಉದ್ಯೋಗ ನಡೆಸಲು ಸ್ಫೂರ್ತಿ ತುಂಬುವ ಸಾಧನ, ಗ್ರಾಮದ ಜನರಿಗೆ ಸಿಗುವ ಉತ್ತಮ ಅವಕಾಶ ಇದಾಗಿದ್ದು ಇದರಿಂದ ಹಲವರ ಬದುಕು ಬದಲಾಗಬಹುದು. ನೀವು ಈ ಯಂತ್ರದಿಂದ ಹೆಚ್ಚಿನ ಅಭಿವೃದ್ಧಿಯಾಗಬೇಕು. ನಿಮ್ಮ ಭವಿಷ್ಯದಲ್ಲಿ ಇನ್ನಷ್ಟು ಮಂದಿಗೆ ಕೆಲಸ ನೀಡಬೇಕು“ ಎಂದರು. ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮಾತಾಡಿ, “ಅಡ್ಯಾರ್ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನದಲ್ಲಿ ಯಾರ ಹಂಗು ಕೂಡ ಇಲ್ಲದೆ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಲ್ಯಾಂಡ್ ಫ್ಲೇವರ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ಕೂಡಲೇ ಇದಕ್ಕೆ ಸ್ಪಂದಿಸಿದ್ದಾರೆ. ನಮ್ಮ ಊರಿನ 150ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುವ ಅವರು ನಮ್ಮ ಗ್ರಾಮಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಎಲ್ಲವನ್ನು ಸರಕಾರಗಳಿಂದ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಉತ್ತಮ ಕೆಲಸಕ್ಕಾಗಿ ಇಂತಹ ಉದ್ಯಮಿಗಳು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ತಾವು ಮಾತ್ರ ಬೆಳೆದರೆ ಸಾಲದು ತಮ್ಮ ಜೊತೆಗೆ ಸಮಾಜವೂ ಅಭಿವೃದ್ಧಿಯಾಗಬೇಕು ಎಂದು ಬಯಸುವ ಇಂತಹ ದಾನಿಗಳಿಂದ ಇನ್ನಷ್ಟು ಮಂದಿ ಸ್ಫೂರ್ತಿಯನ್ನು ಪಡೆದುಕೊಳ್ಳಬೇಕು. ಇಂದು ಇಲ್ಲಿ ಕೊಡುತ್ತಿರುವ ಹೊಲಿಗೆ ಯಂತ್ರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಿ“ ಎಂದು ಹೇಳಿದರು. ವೇದಿಕೆಯಲ್ಲಿ ಲ್ಯಾಂಡ್ ಫ್ಲೇವರ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸತೀಶ್ ತಲ್ಗೂರು, ಮಿನರ್ವ ಸಂಸ್ಥೆಯ ನಿರ್ದೇಶಕ ವಿನೋದ್ ಡಿಸೋಜ, ಸತೀಶ್, ಜುಮಾ ಮಸೀದಿ ಅಧ್ಯಕ್ಷ ಅಸ್ಲಾಂ, ಬದ್ರಿಯಾ ಮದ್ರಸಾ ಅಧ್ಯಕ್ಷ ಅಬ್ಬಾಸ್, ಸೇವಾಂಜಲಿ ಟ್ರಸ್ಟ್ ನ ಕೃಷ್ಣಕುಮಾರ್ ಪೂಂಜಾ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ನ ಜೋಹಾರ, ಪಿಡಿಓ ಅಸಫ್, ಅಸ್ಲಾಂ ಮತ್ತಿತರರು ಉಪಸ್ಥಿತರಿದ್ದರು.
Gold: ದಾಖಲೆ ಮಟ್ಟಕ್ಕೆ ಏರಿದ ಬೆಲೆ; ಈ ವರ್ಷ ಚಿನ್ನದ ಬೇಡಿಕೆ ಕುಸಿಯುವ ಸಾಧ್ಯತೆ
ಭಾರತದಲ್ಲಿ ಚಿನ್ನದ ಬೆಲೆಗಳು ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಇದೇ ಪ್ರವೃತ್ತಿ ಮುಂದುವರಿದರೆ 2026ರಲ್ಲಿ ಚಿನ್ನದ ಒಟ್ಟು ಬೇಡಿಕೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ಎಚ್ಚರಿಕೆ ನೀಡಿದೆ. ಈಗಾಗಲೇ 2025ರಲ್ಲಿ ಚಿನ್ನದ ಬೇಡಿಕೆ ಶೇ.11ರಷ್ಟು ಇಳಿಕೆಯಾಗಿದೆ. ಮುಂದಿನ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಒಟ್ಟು ಬೇಡಿಕೆ 600ರಿಂದ 700 ಮೆಟ್ರಿಕ್
ವಿಜಯನಗರ | ಮಗನಿಂದಲೇ ತಂದೆ-ತಾಯಿ, ಸಹೋದರಿಯ ಹತ್ಯೆ ಪ್ರಕರಣ : ಮನೆಯೊಳಗೆ ಹೂತಿದ್ದ ಮೂರು ಮೃತದೇಹಗಳು ಹೊರಕ್ಕೆ
ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರು ಸದಸ್ಯರ ಹತ್ಯೆ ಪ್ರಕರಣವು ಶನಿವಾರ ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ಬಯಲಾಗಿದ್ದು, ಆರೋಪಿ ತನ್ನ ಮನೆಯೊಳಗೆ ಹೂತಿದ್ದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಆರೋಪಿ ಅಕ್ಷಯ್ ಕುಮಾರ್ ಮನೆಯೊಳಗೆ ಸುಮಾರು ನಾಲ್ಕಡಿ ಆಳದ ಗುಂಡಿ ತೋಡಿ, ಮೊದಲಿಗೆ ತಾಯಿಯ ಮೃತದೇಹ, ಅದರ ಮೇಲೆ ತಂಗಿಯ ಮೃತದೇಹ ಹಾಗೂ ಕೊನೆಯಲ್ಲಿ ತಂದೆಯ ಮೃತದೇಹವನ್ನು ಹಾಕಿ ಟೈಲ್ಸ್ನಿಂದ ಮುಚ್ಚಿರುವುದು ತನಿಖೆಯಿಂದ ತಿಳಿದು ಬಂದಿದೆ. ಶನಿವಾರ ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ನಂತರ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಸಮ್ಮುಖದಲ್ಲಿ ಮಹಜರು ನಡೆಸಲಾಯಿತು. ಈ ವೇಳೆ ಮನೆಯೊಳಗೆ ಹೂತಿಟ್ಟಿದ್ದ ಮೂರು ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣವೇ ಅವುಗಳನ್ನು ಹೊರತೆಗೆದು ಸ್ಥಳೀಯ ಕೊಟ್ಟೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಘಟನಾ ಸ್ಥಳ ಹಾಗೂ ಆಸ್ಪತ್ರೆ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಂದ್? ಕರ್ನಾಟಕ ಸರ್ಕಾರದಿಂದ ಮಹತ್ವದ ಚಿಂತನೆ
ಬೆಂಗಳೂರು: ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು
Gold Price Cut: ಬಂಗಾರದ ದರದಲ್ಲಿ ದಾಖಲೆಯ ಭರ್ಜರಿ ಇಳಿಕೆ: ಯಾವ ನಗರದಲ್ಲಿ ಬೆಲೆ ಎಷ್ಟಿದೆ ತಿಳಿಯಿರಿ
Gold Price Cut: ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದ ಬಂಗಾರ, ಬೆಳ್ಳಿ ದರ ಇದೀಗ ದಿಢೀರ್ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಕುಸಿತವಾಗಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ರಿಲೀಫ್ ಸಿಕ್ಕಂತಾಗಿದೆ. ಒಂದೇ ವಹಿವಾಟಿನ ದಿನದಲ್ಲಿ ಚಿನ್ನದ ದರ 10 ಗ್ರಾಂಗೆ 33,000 ರೂಪಾಯಿಗೂ ಹೆಚ್ಚು ಇಳಿಕೆಯಾಗಿದ್ದರೆ,
ಎಪ್ಸ್ಟೀನ್ ಫೈಲ್ಸ್ನಲ್ಲಿ ಮೀರಾ ನಾಯರ್ ಹೆಸರು: ವರದಿ
ವಾಷಿಂಗ್ಟನ್: ಅಮೆರಿಕ ನ್ಯಾಯ ಇಲಾಖೆ ಹೊಸದಾಗಿ ಬಹಿರಂಗಗೊಳಿಸಿರುವ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳಲ್ಲಿ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರ ತಾಯಿ, ಭಾರತೀಯ-ಅಮೇರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಿಸ್ಲೇನ್ ಮ್ಯಾಕ್ಸ್ವೆಲ್ಗೆ ಸಂಬಂಧಿಸಿದ 2009ರ ಸಾಮಾಜಿಕ ಕಾರ್ಯಕ್ರಮದ ಕುರಿತ ಇಮೇಲ್ನಲ್ಲಿ ಮೀರಾ ನಾಯರ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ತನಿಖಾ ಸಂಗತಿಗಳು ಸಾರ್ವಜನಿಕವಾಗಿ ಭಾರಿ ಪ್ರಮಾಣದಲ್ಲಿ ಬಹಿರಂಗವಾಗುತ್ತಿರುವ ಭಾಗವಾಗಿ ಈ ದಾಖಲೆಗಳು ಹೊರ ಬಿದ್ದಿವೆ. ಎಪ್ಸ್ಟೀನ್ ಹಾಗೂ ಆತನ ಜಾಲದ ಕುರಿತು ಪಾರದರ್ಶಕ ಕಾಯ್ದೆಯಡಿ ಸರಕಾರ ಬಹಿರಂಗಪಡಿಸಬೇಕಿದ್ದು, ಮೂರು ದಶಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳು, ಅದರೊಂದಿಗೆ ಸಾವಿರಾರು ವಿಡಿಯೊ ಮತ್ತು ಭಾವಚಿತ್ರಗಳನ್ನು ಈವರೆಗೆ ಸಾರ್ವಜನಿಕಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ದಾಖಲೆ ಬಹಿರಂಗಗಳು ಅಪೂರ್ಣ ಎಂಬ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಈ ಹೊಸ ದಾಖಲೆಗಳನ್ನು ಬಹಿರಂಗಗೊಳಿಸಲಾಗಿದೆ. 2009 ರಲ್ಲಿ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಸಿನಿಮಾ ಪಾರ್ಟಿಯಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅತಿಥಿಯಾಗಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಲಾಗಿದೆ, ಇದರಲ್ಲಿ ಬಿಲ್ ಕ್ಲಿಂಟನ್ ಮತ್ತು ಜೆಫ್ ಬೆಜೋಸ್ ಕೂಡ ಭಾಗವಹಿಸಿದ್ದರು. ಪ್ರಚಾರಕಿ ಪೆಗ್ಗಿ ಸೀಗಲ್ ಎಪ್ಸ್ಟೀನ್ಗೆ ಕಳುಹಿಸಿರುವ ಇಮೇಲ್ ಪ್ರಕಾರ, ಈ ಕಾರ್ಯಕ್ರಮವು ಮೀರಾ ನಾಯರ್ ಅವರ ಚಲನಚಿತ್ರ ಅಮೆಲಿಯಾ ನಂತರದ ಪಾರ್ಟಿಯಾಗಿತ್ತು.
CJ Roy Death: ಪ್ಲೀಸ್ ದಾಳಿಗಳಿಂದ ತೆರಿದಾರರನ್ನ ಕಾಪಾಡಿ! PM ಮೋದಿ, ವಿತ್ತ ಸಚಿವೆಗೆ ಮೋಹನ್ ದಾಸ್ ಪೈ ಮನವಿ
ಕಾನ್ಫಿಡೆಂಟ್ ಗ್ರೂಪ್ನ ಸಿಜೆ ರಾಯ್ ಅವರ ಅಕಾಲಿಕ ನಿಧನ ಉದ್ಯಮ ಲೋಕಕ್ಕೆ ಆಘಾತ ನೀಡಿದೆ. ಈ ಬೆನ್ನಲ್ಲೇ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಸಾವಿಗೆ ತೆರಿಗೆ ದಾಳಿಗಳೇ ಕಾರಣ ಎಂದು ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ. ತೆರಿಗೆ ಅಧಿಕಾರಿಗಳ ದಾಳಿಗಳಿಂದ ತೆರಿಗೆದಾರರನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.
Siddaramaiah: 16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ಬೇಡಿಕೆ ಮುಂದಿಟ್ಟ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕದ ಸಮಸ್ತ ಜನತೆಯ ಪರವಾಗಿ ರಾಜ್ಯ ಸರ್ಕಾರವು 16ನೇ ಹಣಕಾಸು ಆಯೋಗದ ಮುಂದೆ ಕೆಲವು ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಬೇಡಿಕೆಗಳನ್ನು ಮಂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ, ವಿಶೇಷ ಅನುದಾನ ನೀಡುವುದು ಸೇರಿದಂತೆ ಸಮಾನ ಹಂಚಿಕೆಯ ಮೂಲಕ ಸದೃಢ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎನ್ನುವುದು ಕರ್ನಾಟಕದ
ಮಂಗಳೂರಿನ ಡಾ. ಹಾರೂನ್ ಹುಸೇನ್ ಅವರಿಗೆ ಪ್ರತಿಷ್ಠಿತ FICP ಫೆಲೋಶಿಪ್
APICON-26 ರಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ವಿಶೇಷ ಉಪನ್ಯಾಸ
WPL 2026: ನಮ್ಮ RCB ಚಾಂಪಿಯನ್ ಆಗಲಿನ್ನು ಒಂದೇ ಮೆಟ್ಟಿಲು! ಹೀಗಿದೆ ಉಳಿದ ತಂಡಗಳ ಪ್ಲೇ ಆಫ್ ಲೆಕ್ಕಾಚಾರ
ಮಹಿಳಾ ಪ್ರೀಮಿಯರ್ ಲೀಗ್ 2026ರ ಇದೀಗ ಕುತೂಹಲದ ಘಟ್ಟಕ್ಕೆ ತಲುಪಿದೆ. ಆರ್ ಸಿಬಿ ನೇರವಾಗಿ ಫೈನಲ್ ಗೆ ತಲುಪಿದ್ದರೆ, ಗುಜರಾತ್ ಜೈಂಟ್ಸ್ ದ್ವಿತೀಯ ಸ್ಥಾನಿಯಾಗಿ ಪ್ಲೇ ಆಫ್ ಗೆ ಪ್ರವೇಶಿಸಿದೆ. ಇದೀಗ 3ನೇ ಸ್ಥಾನಿಯಾಗಿ ಯಾವ ತಂಡ ಪ್ಲೇ ಆಫ್ ತಲುಪಲಿದೆ ಎಂಬುದನ್ನು ಭಾನುವಾರದಂದು ದಿಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾಪಿಯರ್ಸ್ ನಡುವಿನ ಅಂತಿಮ ಲೀಗ್ ಪಂದ್ಯ ನಿರ್ಧರಿಸಲಿದೆ. ಹೀಗಾಗಿ ಈ ಪಂದ್ಯಕ್ಕೆ ಇದೀಗ ಕ್ವಾರ್ಟರ್ ಫೈನಲ್ ಪಂದ್ಯದ ಮಹತ್ವ ಬಂದು ಬಿಟ್ಟಿದೆ.
ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವಿನ ಹೊಸ ವಾಣಿಜ್ಯ ಒಪ್ಪಂದವು ಪಾಕಿಸ್ತಾನದ ಜವಳಿ ಉದ್ಯಮಕ್ಕೆ ಆಘಾತ ನೀಡಿದೆ. ಈ ಒಪ್ಪಂದದಿಂದಾಗಿ ಭಾರತದ ಜವಳಿ ಉತ್ಪನ್ನಗಳು ಐರೋಪ್ಯ ಮಾರುಕಟ್ಟೆಗೆ ತೆರಿಗೆ ರಹಿತವಾಗಿ ಪ್ರವೇಶಿಸಲಿವೆ. ಇದು ಪಾಕಿಸ್ತಾನದ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಏಕೆಂದರೆ, ಇದುವರೆಗೆ ಐರೋಪ್ಯ ಒಕ್ಕೂಟಕ್ಕೆ ಅತಿ ಹೆಚ್ಚು ಜವಳಿಯನ್ನು ರಫ್ತು ಮಾಡುತ್ತಿರುವುದು ಪಾಕಿಸ್ತಾನವೇ. ಈಗ ಭಾರತ - ಇಯು ಒಪ್ಪಂದದ ನಂತರ, ಈ ಚಿತ್ರಣ ಬದಲಾಗಲಿದ್ದು ಪಾಕಿಸ್ತಾನದ ನಂ. 1 ಸ್ಥಾನವನ್ನು ಭಾರತ ಆಕ್ರಮಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
Uttar Pradesh | ಗ್ಯಾಂಗ್ ಸ್ಟರ್ ರವಿ ಕಾನಾ ನ್ಯಾಯಾಲಯದ ಆದೇಶವಿಲ್ಲದೆ ಜೈಲಿನಿಂದ ಬಿಡುಗಡೆ!
ನೊಯ್ಡಾ: ಗುಜರಿ ಉದ್ಯಮಿ, ಗ್ಯಾಂಗ್ ಸ್ಟರ್ ರವಿ ಕಾನಾನನ್ನು ನ್ಯಾಯಾಲಯದ ಯಾವುದೇ ಆದೇಶವಿಲ್ಲದೆ ಬಂದಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಲಿಗೆ ಸೇರಿದಂತೆ ಅಕ್ರಮ ಮಾರ್ಗಗಳ ಮೂಲಕ ಸಾಮ್ರಾಜ್ಯ ನಿರ್ಮಿಸಿದ್ದಾನೆ ಎಂದು ಉದ್ಯಮಿ ರವಿ ಕಾನಾ ವಿರುದ್ಧ ಆರೋಪಿಸಲಾಗಿತ್ತು. ರವಿ ಕಾನಾ ವಿರುದ್ಧ ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2024ರಲ್ಲಿ ಬಂಧನಕ್ಕೊಳಗಾಗಿದ್ದ ರವಿ ಕಾನಾ ಇದೀಗ ಬಂಧನದಿಂದ ಮುಕ್ತನಾಗಿದ್ದಾನೆ. ಆತನನ್ನು ನ್ಯಾಯಾಲಯ ಪ್ರಕರಣದಲ್ಲಿ ಖುಲಾಸೆಗೊಳಿಸಿಲ್ಲ. ನ್ಯಾಯಾಲಯದ ಆದೇಶವಿಲ್ಲದೆ ಆತ ಬಂಧನದಲ್ಲಿದ್ದ ಬಂದಾ ಜಿಲ್ಲೆಯ ಜೈಲು ಈ ತಿಂಗಳ ಆರಂಭದಲ್ಲೇ ಆತನನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ರವಿ ಕಾನಾನನ್ನು ಬಿಡುಗಡೆಗೊಳಿಸಲಾಗಿದೆ ಎಂಬ ಸಂಗತಿಯನ್ನು ನೊಯ್ಡಾದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಗಮನಕ್ಕೆ ತಂದ ಬಳಿಕ, ನ್ಯಾಯಾಲಯವು ಬಾಂದಾ ಜೈಲು ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. “ನ್ಯಾಯಾಲಯದ ಗಮನಕ್ಕೇ ತಾರದೆ ಇನ್ನೊಂದು ಪ್ರಕರಣದಲ್ಲಿ ನಿಮ್ಮ ಜೈಲಿನಲ್ಲಿರುವ ಆರೋಪಿಯನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಆಧಾರದಲ್ಲಿ ಬಿಡುಗಡೆ ಮಾಡಿದಿರಿ?” ಎಂದು ಬಾಂದಾ ಜೈಲು ಅಧೀಕ್ಷಕರನ್ನು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜೀವ್ ಕುಮಾರ್ ತ್ರಿಪಾಠಿ ಪ್ರಶ್ನಿಸಿದ್ದಾರೆ. ಕ್ರಿಮಿನಲ್ ಒಬ್ಬನನ್ನು ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿರುವ ಅಧಿಕಾರಿಯ ವಿರುದ್ಧ ಯಾಕೆ ಪ್ರಕರಣವೊಂದನ್ನು ದಾಖಲಿಸಬಾರದು ಎಂದೂ ನ್ಯಾಯಾಲಯ ಪ್ರಶ್ನಿಸಿದೆ. ಜಿ.ಬಿ.ನಗರದ ದಂಕೌರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದ್ದ ರವಿ ಕಾನಾನನ್ನು ತನ್ನೆದುರು ಹಾಜರುಪಡಿಸಲು ನ್ಯಾಯಾಲಯವು ಈಗಾಗಲೇ ಮತ್ತೊಂದು ಕಾನೂನು ವಿಚಾರಣೆಯಲ್ಲಿ ಜೈಲಿನಲ್ಲಿರುವ ವ್ಯಕ್ತಿಯನ್ನು ಸ್ಥಳಾಂತರಿಸಲು ಹೊರಡಿಸುವ ಬಿ ವಾರಂಟ್ ಅನ್ನು ಹೊರಡಿಸಿತ್ತು. ಮತ್ತೊಂದು ಪ್ರಕರಣದಲ್ಲಿ ಗೌತಮ್ ಬುದ್ಧ್ ನಗರ್ ಜೈಲಿನಲ್ಲಿದ್ದ ರವಿ ಕಾನಾನನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಆಗಸ್ಟ್ 2024ರಲ್ಲಿ ಬಾಂದಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಹೀಗಿದ್ದೂ, ವಿಡಿಯೊ ಕಾನ್ಫರೆನ್ಸ್ ಮೂಲಕ ರವಿ ಕಾನಾನನ್ನು ಗುರುವಾರ ಬಾಂದಾ ಜೈಲಿನಿಂದ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆದರೆ, ಸಂಜೆ ಆತನನ್ನು ಬಿಡುಗಡೆಗೊಳಿಸಲಾಗಿತ್ತು. ನೊಯ್ಡಾ ನ್ಯಾಯಾಲಯಕ್ಕೆ ಪತ್ರವೊಂದನ್ನು ಬರೆದಿದ್ದ ಜೈಲು ಅಧೀಕ್ಷಕರು, ಪೊಲೀಸ್ ಕಾವಲುಗಾರನ ಅಲಭ್ಯತೆಯಿಂದಾಗಿ ಕಾನಾನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರುಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ರವಿ ಕಾನಾನನ್ನು ಯಾಕೆ ಜೈಲಿನಿಂದ ಬಿಡುಗಡೆ ಮಾಡಬೇಕಾಯಿತು ಎಂಬ ಕುರಿತು ತಿರುಚಿದ ವಿವರಣೆಯನ್ನೂ ಅವರು ನೀಡಿದ್ದಾರೆ. ವಿಚಾರಣಾಧೀನ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ನಾವು ಎಲ್ಲ ಕಸ್ಟಡಿ ವಾರಂಟ್ ಗಳನ್ನು ಸ್ವೀಕರಿಸಿದ್ದೇವೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ. ಆದರೆ, ರವಿ ಕಾನಾ ಬೇರೊಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಎಂದು ಹೇಳಲಾಗಿದೆ. ಆದರೆ, ಈ ವಿವರಣೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ, ರವಿ ಕಾನಾ ಬಿ ವಾರಂಟ್ ಅಡಿ ಇರುವುದು ಹಾಗೂ ಆತನನ್ನು ಕಸ್ಟಡಿಗೆ ಪಡೆಯಲು ತನಿಖಾಧಿಕಾರಿಯು ಸಲ್ಲಿಸಿದ ಅರ್ಜಿಯನ್ನು ಆಧರಿಸಿ, ಆತನಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು ಎಂಬ ಸಂಗತಿಯ ಕುರಿತು ಜೈಲು ಅಧೀಕ್ಷಕರಿಗೆ ತಿಳಿದಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ. “ಆತನನ್ನು ಬಿಡುಗಡೆ ಮಾಡಬಾರದಿತ್ತು” ಎಂದೂ ನ್ಯಾಯಾಲಯ ಆಕ್ಷೇಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ನೊಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್, “ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ಬಳಿಕ, ರವಿ ಕಾನಾನನ್ನು ಬಂಧಿಸಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಅಡಗುತಾಣಗಳ ಮೇಲೆ ನಾವು ಹಲವು ದಾಳಿಗಳನ್ನು ನಡೆಸಿದೆವು. ಆದರೆ, ಆತ ಅಲ್ಲಿರಲಿಲ್ಲ” ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ, ತನಿಖೆಗೆ ಆದೇಶ ನೀಡಿದ್ದಾರೆ. ಕೂಡಲೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮತ್ತು ಚಿಕಿತ್ಸಾವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿರುವ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ.
ಯಾರೋ ಟ್ರೋಲ್ ಮಾಡ್ತಾರೆ ಅಂತ ನಮ್ಮ ಹಕ್ಕುಗಳನ್ನು ಪಡ್ಕೊಳ್ಳದೇ ಇರೋಕಾಗಲ್ಲ: ದುನಿಯಾ ವಿಜಯ್ | Duniya Vijay Landlord
ಕೆಲವರು 'ಲ್ಯಾಂಡ್ ಲಾರ್ಡ್' ಸಿನಿಮಾ ನೋಡಿಯೇ ನೋಡಬಾರದು ಅಂತ ಬರೆಯುತ್ತಿದ್ದಾರೆ : ಜಡೇಶ್ ಕುಮಾರ್ ಹಂಪಿ ► ಇತ್ತೀಚೆಗೆ ನಡೆದ ಘಟನೆಗಳನ್ನು ಇಟ್ಕೊಂಡೇ 'ಲ್ಯಾಂಡ್ ಲಾರ್ಡ್' ಸಿನಿಮಾ ಮಾಡಿದ್ದೇವೆ ► ನೀಲಿ ಶಾಲನ್ನು ನಾವು ಮನಸ್ಸಿನೊಳಗೆ ಹಾಕೊಂಡು ಬಿಟ್ಟಿದ್ದೇವೆ ► ಓಂಕಾರದಂತೆಯೇ ಜೈಭೀಮ್ ಅನ್ನುವಾಗ ನಮ್ಮೊಳಗೆ ಹೊಸ ಸಂಚಲನ ಮೂಡುತ್ತೆ ►► ವಾರ್ತಾಭಾರತಿ ವಿಶೇಷ ಸಂದರ್ಶನ ದುನಿಯಾ ವಿಜಯ್ ಖ್ಯಾತ ನಟ, ನಿರ್ದೇಶಕರು ಜಡೇಶ್ ಕುಮಾರ್ ಹಂಪಿ ನಿರ್ದೇಶಕರು
ನೂರಾರು ಕೋಟಿಯ ಒಡೆಯ ಕಚೇರಿಯಲ್ಲೇ ಗುಂಡಿಕ್ಕಿಕೊಂಡು ಸಾವಿಗೆ ಶರಣಾಗಿದ್ದು ಏಕೆ? | CJ Roy Mystery | ನೇರಮಾತು
VG Siddhartha ಬಳಿಕ ಮತ್ತೊಬ್ಬ ಉದ್ಯಮಿ : CJ Roy ಆತ್ಮಹತ್ಯೆ ಹಿಂದಿನ ಸತ್ಯವೇನು? ► ಸಾಲವೂ ಇಲ್ಲ, ವೈರಿಗಳೂ ಇಲ್ಲ… ಆದರೂ ಆತ್ಮಹತ್ಯೆ ಯಾಕೆ?
ಜಾಗತಿಕ ವಾಣಿಜ್ಯವನ್ನೇ ಮರುರೂಪಿಸಲಿದೆ ಭಾರತ - ಯುರೋಪ್ ಒಪ್ಪಂದ: ಯಾವ ಕ್ಷೇತ್ರದ ಮೇಲೆ ಏನು ಪರಿಣಾಮ?
ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಕಾರುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಒಪ್ಪಂದವು ಜಾಗತಿಕ ಆರ್ಥಿಕತೆಯ 25% ರಷ್ಟು ವ್ಯಾಪ್ತಿಯನ್ನು ಹೊಂದಿದೆ, ಇದು ಎರಡೂ ಪ್ರದೇಶಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿನ ವ್ಯವಹಾರಗಳಲ್ಲಿ ಬಹುದೊಡ್ಡ ಬದಲಾವಣೆಯ ಸುನಾಮಿಯನ್ನೇ ಎಬ್ಬಿಸಲಿದೆ. ಈ ಕುರಿತಂತೆ ಗಿರೀಶ್ ಲಿಂಗಣ್ಣ ಅವರು ಬರೆದ ವಿಸ್ತೃತ ಲೇಖನ ಇಲ್ಲಿದೆ..
Mangaluru | ಪಿಲಿಕುಳ ಗಾಲ್ಫ್ ಕ್ಲಬ್ನಲ್ಲಿ ಫ್ಲಡ್ಲೈಟ್ ಟೂರ್ನಮೆಂಟ್; ವಿಶ್ವದರ್ಜೆಯ ಪ್ರೊ- ಆ್ಯಮ್ ಆಟಗಾರರ ಸಮಾಗಮ
ಮಂಗಳೂರು : ಪಿಲಿಕುಳದ ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಲಾಗಿರುವ (ಪ್ರೊಫೆಶನಲ್ ಅಮೆಚೂರ್) ಗಾಲ್ಫ್ ಟೂರ್ನಮೆಂಟ್ಗಾಗಿ ಮಂಗಳೂರಿಗೆ ದೇಶದ ವಿವಿಧ ಭಾಗಗಳಿಂದ ವಿಶ್ವದರ್ಜೆಯ ವೃತ್ತಿಪರ ಗಾಲ್ಫ್ ಆಟಗಾರರು ಆಗಮಿಸಿದ್ದಾರೆ ಎಂದು ಕ್ಲಬ್ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು. ಪಿಲಿಕುಳ ಗಾಲ್ಫ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವದರ್ಜೆಯ ವೃತ್ತಿಪರ ಆಟಗಾರರಾದ ಅಮನ್ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಧರ್ಮ, ಅಲಾಪ್ ಐ.ಎಲ್., ಯಶಸ್ ಚಂದ್ರ ಎಂ.ಎಸ್., ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹಾ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್. ಮತ್ತು ಸಮರ್ಥ್ ದ್ವಿವೇದಿ ಮಂಗಳೂರಿನ ಗಾಲ್ಫ್ ಕ್ಲಬ್ಗೆ ಆಗಮಿಸುವ ಮೂಲಕ ಅಮೆಚೂರ್ ಆಟಗಾರರಿಗೆ ಹೊಸ ಹುರುಪು ದೊರಕಿದೆ ಎಂದರು. ವಿಶ್ವದರ್ಜೆಯ ಈಜುಕೊಳ, ಬ್ಯಾಡ್ಮಿಂಟನ್ ಕ್ರೀಡಾಂಗಣದ ಜತೆಗೆ ಇದೀಗ ಮಂಗಳೂರಿನಲ್ಲಿ ವಿಶ್ವದರ್ಜೆಯ ಫ್ಲೆಡ್ಲೈಟ್ ವ್ಯವಸ್ಥೆಯ ಗಾಲ್ಫ್ ಕ್ಲಬ್ ಮೂಲಕ ಮಂಗಳೂರು ಕ್ರೀಡಾ ಕ್ಷೇತ್ರದಲ್ಲಿಯೂ ದಾಪುಗಲಿಡುತ್ತಿದೆ ಎಂದವರು ಹೇಳಿದರು. ವಿಶ್ವದರ್ಜೆಯ ಆಟಗಾರರಿಗೆ ಪೂರಕವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಗಾಲ್ಫ್ ಮೈದಾನದಲ್ಲಿ ಕಲ್ಪಿಸಲಾಗಿದೆ. ದೇಶದ ನಾಲ್ಕು ಕಡೆಗಳಲ್ಲಿ ಮಾತ್ರವೇ ಫ್ಲಡ್ಲೈಟ್ ಗಾಲ್ಫ್ ಕ್ಲಬ್ ವ್ಯವಸ್ಥೆ ಇದ್ದು, ದಕ್ಷಿಣ ಭಾರತದಲ್ಲಿ ಮಂಗಳೂರಿನಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. ವಿಶ್ವದರ್ಜೆಯ ವೃತ್ತಿಪರ ಅಮೆಚೂರ್ ಆಟಗಾರರಾದ ಚಿಕ್ಕರಂಗಪ್ಪ ಮಾತನಾಡಿ, ಮಂಗಳೂರಿನಲ್ಲಿ ಗಾಲ್ಫ್ ಕ್ರೀಡೆ ಬೆಳವಣಿಗೆಯಲ್ಲಿ ಈ ಅತ್ಯಾಧುನಿಕ ಸೌಲಭ್ಯದ ಪಿಲಿಕುಳ ಗಾಲ್ಫ್ ಕ್ರೀಡಾಂಗಣ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ ಎಂದರು. ಶಾಲಾ ಮಕ್ಕಳನ್ನು ಈ ಕ್ರೀಡೆಯತ್ತ ಆಕರ್ಷಿಸಲು ಹೆಚ್ಚಿನ ಉತ್ತೇಜನ ನೀಡುವಲ್ಲಿ ಹೊನಲು ಬೆಳಕಿನ ವ್ಯವಸ್ಥೆಯ ಈ ಕ್ರೀಡಾಂಗಣ ನೆರವಾಗಬೇಕು ಎಂದು ಅಲಾಪ್ ಅವರು ಅಭಿಪ್ರಾಯಪಟ್ಟರು. ಗೋಷ್ಟಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ ಗಾಲ್ಫ್ ಆಟಗಾರರ ಜತೆಗೆ ಗಿರೀಶ್ ರಾವ್, ನಿತಿನ್ ಶೆಟ್ಟಿ, ಗೌತಮ್ ಪಡಿವಾಳ ಮೊದಲಾದವರು ಉಪಸ್ಥಿತರಿದ್ದರು. ಮಾರ್ಚ್ 31ರೊಳಗೆ ಗಾಲ್ಫ್ ಅಕಾಡೆಮಿ ಸಿದ್ಧ ಪಿಲಿಕುಳ ಗಾಲ್ಫ್ ಕ್ಲಬ್ನ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ನಿರ್ದೇಶನದ ಮೇರೆಗೆ ಕರಾವಳಿ ಉತ್ಸವದ ಸಮಾರೋಪದ ಭಾಗವಾಗಿ ಶನಿವಾರ (ಜ. 31)ದಂದು ಹೊನಲು ಬೆಳಕಿನ ಗಾಲ್ಫ್ ಪಂದ್ಯಾಟ ನಡೆಯಲಿದೆ. ಇದೇ ವೇಳೆ ಗಾಲ್ಫ್ ಕೋರ್ಸ್ನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ ಮತ್ತು ಫ್ಯಾಮಿಲಿ ಪ್ರಾಯೋಜಿತ ಗಾಲ್ಫ್ ಅಕಾಡೆಮಿ ನಿರ್ಮಾಣವಾಗುತ್ತಿದ್ದು ಮಾರ್ಚ್ 31ಕ್ಕೆ ಪೂರ್ಣಗೊಳ್ಳಲಿದೆ. ಗಾಲ್ಫ್ ಕ್ರೀಡೆಯ ತರಬೇತಿಗಾಗಿ ದೇಶದ ವಿವಿಧ ಭಾಗಗಳ ನುರಿತ ಗಾಲ್ಫ್ ಅಕಾಡೆಮಿಗಳ ಪ್ರಮುಖರ ಸಹಕಾರದಲ್ಲಿ ರೂಪುರೇಷೆಯನ್ನು ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ. ಇದು ಕೇವಲ ತರಬೇತಿ ಕೇಂದ್ರ ಮಾತ್ರ ಆಗಿರದೆ, ಗಾಲ್ಫ್ ಎಕ್ಸೆಲೆನ್ಸ್ ಅಕಾಡೆಮಿಯಾಗಿ ರೂಪುಗೊಳ್ಳಲಿದೆ ಎಂದು ಪಿಲಿಕುಳ ಗಾಲ್ಫ್ ಕ್ಲಬ್ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು. ‘ವೈಯಕ್ತಿಕ ಕ್ರೀಡೆಯಾಗಿರುವ ಗಾಲ್ಫ್ ನಲ್ಲಿಯೂ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೊಂದು ಆಕರ್ಷಕ ಆಟ’ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ ಗಾಲ್ಫ್ ಆಟಗಾರ್ತಿ, ಬೆಂಗಳೂರು ಮೂಲದ ಅವನಿ ಪ್ರಶಾಂತ್ ಅಭಿಪ್ರಾಯಪಟ್ಟರು. ‘ನನ್ನ ತಂದೆ ಗಾಲ್ಫ್ ಕ್ರೀಡಾಪಟುವಾಗಿದ್ದು, ಪ್ರಸಕ್ತ ಕೋಚ್ ಆಗಿದ್ದಾರೆ. ನಾನು ಸಣ್ಣದರಿಂದಲೇ ಗಾಲ್ಫ್ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಕ್ರಿಕೆಟ್ನಂತೆ ಗಾಲ್ಫ್ ಕೂಡಾ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಆಟವಾಗಿ ರೂಪುಗೊಳ್ಳುತ್ತಿದೆ’ ಎನ್ನುತ್ತಾರೆ ಹೈದರಾಬಾದ್ನ ಪದವಿ ವಿದ್ಯಾರ್ಥಿನಿ ಹಾಗೂ ಪ್ರೊ ಗಾಲ್ಫ್ ಆಟಗಾರ್ತಿ ಆಗಿರುವ ಸ್ನೇಹಾ ಸಿಂಗ್.
ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ಗಣನೀಯ ಪ್ರಮಾಣದ ದಾಖಲೆಗಳನ್ನು(Epstein files) ಬಿಡುಗಡೆ ಮಾಡಿದೆ. ಬಿಡುಗಡೆಯಾದ ದಾಖಲೆಗಳು ಮೂರು ಮಿಲಿಯನ್ ಪುಟಗಳನ್ನು ಮೀರಿದೆ ಎಂದು ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಹೇಳಿದ್ದಾರೆ. ಈ ಕಡತಗಳು 2,000 ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಸರಿಸುಮಾರು 180,000 ಚಿತ್ರಗಳನ್ನು ಒಳಗೊಂಡಿದೆ. ಈ ದತ್ತಾಂಶದ ಸಂಕಲನ ಮತ್ತು ಪರಿಶೀಲನೆಗೆ 500 ಕ್ಕೂ ಹೆಚ್ಚು ವಕೀಲರು ಮತ್ತು ಕಾನೂನು ವಿಮರ್ಶಕರ ಸಮನ್ವಯದ ಅಗತ್ಯವಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಇತ್ತೀಚಿನ ದಾಖಲೆಯಲ್ಲಿ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಕೇಳಿ ಬಂದಿದ್ದು, ಇದು ಪ್ರಕರಣದ ಸುತ್ತಲಿನ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಉಲ್ಲೇಖಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಬಿಲ್ ಗೇಟ್ಸ್ , ಎಲಾನ್ ಮಸ್ಕ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಇದೆ. ಆದಾಗ್ಯೂ ಈ ಪಟ್ಟಿಯಲ್ಲಿ ಸಾರ್ವಜನಿಕರು ಊಹಿಸದೇ ಇರುವಂಥ ಕೆಲವು ಹೆಸರುಗಳೂ ಇವೆ. ಸಂದರ್ಶಕರು ಮತ್ತು ಆಹ್ವಾನಿತರ ಪಟ್ಟಿಯಲ್ಲಿ ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಮತ್ತು ಪ್ರಸಿದ್ಧ ಭಾರತೀಯ-ಅಮೇರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಹೆಸರು ಇದೆ. ಜೆಫ್ರಿ ಎಪ್ಸ್ಟೀನ್ ಯಾರು? ಏನಿದು ಎಪ್ಸ್ಟೀನ್ ಫೈಲ್ಸ್? ಜೆಫ್ರೀ ಎಪ್ಸ್ಟೀನ್ ಹುಟ್ಟಿದ್ದು 1953 ಜನವರಿ 20ರಂದು ನ್ಯೂಯಾರ್ಕ್ ನಲ್ಲಿ. ಈತ 1980 ರ ದಶಕದಲ್ಲಿ ಬ್ಯಾಂಕರ್ ಆಗಿ ತೊಡಗಿಸಿಕೊಳ್ಳುವ ಮುನ್ನ ಅಮೆರಿಕದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆಮೇಲೆ ವಾಲ್ ಸ್ಟ್ರೀಟ್ ನಲ್ಲಿ ಹೂಡಿಕೆದಾರನಾಗಿ ತನ್ನ ವೃತ್ತಿ ಜೀವನವನ್ನು ಬದಲಿಸಿಕೊಂಡಿದ್ದ. 1990 ರ ಹೊತ್ತಿಗೆ ಅಮೆರಿಕದ ಶ್ರೀಮಂತರ ಜತೆ ಒಡನಾಟವಿರಿಸಿಕೊಂಡಿದ್ದ ಆತನ ಸ್ನೇಹಿತರ ಪಟ್ಟಿಯಲ್ಲಿ ಶ್ರೀಮಂತರು, ಪ್ರಭಾವಿ ರಾಜಕಾರಣಿಗಳು, ರಾಜಮನೆತನಕ್ಕೆ ಸೇರಿದವರೂ ಇದ್ದರು. ಕೆರಿಬಿಯನ್ ಪ್ರದೇಶದಲ್ಲಿ ಖಾಸಗಿ ದ್ವೀಪ ಸೇರಿದಂತೆ ಎಪ್ಸ್ಟೀನ್ ಹಲವಾರು ದೇಶಗಳಲ್ಲಿ ಎಸ್ಟೇಟ್ಗಳು ಮತ್ತು ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದ. ‘ಲೊಲಿಟಾ ಎಕ್ಸ್ ಪ್ರೆಸ್’ ಎಂಬ ಅಡ್ಡನಾಮವಿರುವ ಬೋಯಿಂಗ್ ವಿಮಾನ ಸೇರಿದಂತೆ ಸುಮಾರು 600 ಮಿಲಿಯನ್ ಡಾಲರ್ ಬೆಲೆ ಬಾಳುವ ಆಸ್ತಿಗಳ ಒಡೆತನವನ್ನು ಎಪ್ಸ್ಟೀನ್ ಹೊಂದಿದ್ದ. 2005 ರಲ್ಲಿ ಫ್ಲೋರಿಡಾದಲ್ಲಿನ ಆತನ ಪಾಮ್ ಬೀಚ್ ಮ್ಯಾನ್ಷನ್ ನಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಈ ಪ್ರಕರಣದ ತನಿಖೆ ನಡೆಸಿದಾಗ 36ಕ್ಕೂ ಅಧಿಕ ಬಾಲಕಿಯರನ್ನು ಎಪ್ಸ್ಟೀನ್ ಲೈಂಗಿಕವಾಗಿ ದುರುಪಯೋಗಪಡಿಸಿದ್ದು ಬಯಲಾಗಿತ್ತು. 2006ರ ಜುಲೈನಲ್ಲಿ ಆತನನ್ನು ಬಂಧಿಸಲಾಯಿತು. 2007-08 ರಲ್ಲಿ ಎಪ್ಸ್ಟೀನ್ ವಕೀಲರು ಅಂದಿನ ಯು.ಎಸ್. ಅಟಾರ್ನಿ ಅಲೆಕ್ಸ್ ಅಕೋಸ್ಟಾ ಅವರ ಕಚೇರಿಯೊಂದಿಗೆ ರಹಸ್ಯವಾಗಿ ಒಪ್ಪಂದವನ್ನು ಮಾಡಿಕೊಂಡು ಆತನನ್ನು ಗಂಭೀರ ಪ್ರಕರಣಗಳಿಂದ ಬಚಾವ್ ಮಾಡಿದ್ದರು. ಇದರಿಂದಾಗಿ, ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದ್ದ ಪ್ರಕರಣದಲ್ಲಿ ಆತನಿಗೆ ಕೇವಲ 18 ತಿಂಗಳುಗಳ ಶಿಕ್ಷೆ ವಿಧಿಸಲಾಯಿತು. 2008 ರಲ್ಲಿ ನಡೆದ ರಹಸ್ಯ ಒಪ್ಪಂದದ ಬಗ್ಗೆ 2017ರಲ್ಲಿ ʼಮಿಯಾಮಿ ಹೆರಾಲ್ಡ್ʼ ಪತ್ರಿಕೆ ವರದಿ ಮಾಡಿತು. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, 2019 ಜುಲೈನಲ್ಲಿ ಎಪ್ಸ್ಟೀನ್ ನನ್ನು ಮತ್ತೆ ಬಂಧಿಸಲಾಯಿತು. ಎಪ್ಸ್ಟೀನ್ ನ ಗ್ರಾಹಕರಲ್ಲಿ ಹಲವು ದೇಶಗಳ ರಾಜಕಾರಣಿಗಳು, ಉದ್ಯಮಿಗಳು, ಉನ್ನತ ನಾಯಕರು ಇದ್ದರು. ವಿಚಾರಣೆಯಿಂದ ಹಲವು ಗಣ್ಯರ ಹೆಸರು ಬಹಿರಂಗವಾಗುವ ನಿರೀಕ್ಷೆ ಇತ್ತು. ಆದರೆ, ಇನ್ನೇನು ವಿಚಾರಣೆ ಆರಂಭವಾಗಬೇಕು ಅನ್ನುವ ಹೊತ್ತಿಗೆ ನ್ಯೂಯಾರ್ಕ್ ಜೈಲಿನಲ್ಲಿ ಎಪ್ಸ್ಟೀನ್ ಸಾವಿಗೀಡಾಗಿರುವ ಸುದ್ದಿ ಬಂತು. ಅಧಿಕಾರಿಗಳು ಇದೊಂದು ಆತ್ಮಹತ್ಯೆ ಎಂದು ಪ್ರಕರಣವನ್ನು ಮುಚ್ಚಿದ್ದರು. ಎಪ್ಸ್ಟೀನ್ ಸಾವಿನ ಕುರಿತು ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ ಎಪ್ಸ್ಟೀನ್ ಲೈಂಗಿಕ ಹಗರಣದ ಸಂಪೂರ್ಣ ಕಡತವನ್ನು ಬಿಡುಗಡೆಗೊಳಿಸಬೇಕೆಂಬ ಕೂಗು ಅಮೆರಿಕದಲ್ಲಿ ಬಹು ಕಾಲದಿಂದ ಕೇಳಿ ಬಂದಿತ್ತು. ಇದೀಗ ಬಿಡುಗಡೆಯಾದ ಎಪ್ಸ್ಟೀನ್ ಕಡತಗಳಲ್ಲಿ ಹಲವಾರು ಗಣ್ಯರ ಹೆಸರು ಇದೆ. ► ಡೊನಾಲ್ಡ್ ಟ್ರಂಪ್ ಹೊಸದಾಗಿ ಬಿಡುಗಡೆಯಾದ ಕಡತಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಇದೆ. ಆದಾಗ್ಯೂ, ಈ ಫೈಲ್ಗಳಲ್ಲಿ ಹೆಸರಿನ ಉಪಸ್ಥಿತಿಯು ಕ್ರಿಮಿನಲ್ ತಪ್ಪುಗಳ ಆರೋಪವಲ್ಲ ಎಂದು ಅಧಿಕಾರಿಗಳು ಒತ್ತಿಹೇಳುತ್ತಾರೆ. ದಾಖಲೆಗಳು ಎಫ್ಬಿಐ ಸಂಗ್ರಹಿಸಿದ ಲೈಂಗಿಕ ದೌರ್ಜನ್ಯದ ಆರೋಪಗಳ ಪಟ್ಟಿಯನ್ನು ಒಳಗೊಂಡಿವೆ. ಈ ಮಾಹಿತಿಯು ಹೆಚ್ಚಾಗಿ ಅನಾಮಧೇಯ ಫೋನ್ ಕರೆಗಳು ಮತ್ತು ರಾಷ್ಟ್ರೀಯ ಬೆದರಿಕೆ ಕಾರ್ಯಾಚರಣೆ ಕೇಂದ್ರಕ್ಕೆ ಕಳುಹಿಸಲಾದ ಆನ್ಲೈನ್ ಸಲಹೆಗಳಿಂದ ಬಂದಿದೆ. ಫೈಲ್ಗಳ ವಿಶ್ಲೇಷಣೆ ನಡೆಯುತ್ತಿರುವಾಗ, ಕೆಲವು ಸಲಹೆಗಳನ್ನು ವಿಶ್ವಾಸಾರ್ಹವಲ್ಲ ಎಂದು ಪರಿಗಣಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯ ಇಲಾಖೆ ತನ್ನ ಹೇಳಿಕೆಯಲ್ಲಿ, ಹಕ್ಕುಗಳನ್ನು ಸುಳ್ಳು ಮತ್ತು ಸಂವೇದನಾಶೀಲ ಎಂದು ಹೇಳಿದೆ. ಕೆಲವು ದಾಖಲೆಗಳು ಅಧ್ಯಕ್ಷ ಟ್ರಂಪ್ ವಿರುದ್ಧ 2020 ರ ಚುನಾವಣೆಗೆ ಮುನ್ನ ಎಫ್ಬಿಐಗೆ ಸಲ್ಲಿಸಲಾದ ಸುಳ್ಳು ಮತ್ತು ಸಂವೇದನಾಶೀಲ ಹಕ್ಕುಗಳನ್ನು ಹೊಂದಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಹಕ್ಕುಗಳು ಆಧಾರರಹಿತ ಮತ್ತು ಸುಳ್ಳು ಎಂದಿದೆ ಟ್ರಂಪ್ ತಂಡ. ► ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಕ್ತಾರರು ಇತ್ತೀಚಿನ ಎಪ್ಸ್ಟೀನ್ ಫೈಲ್ಗಳಲ್ಲಿ ಉಲ್ಲೇಖಿಸಲಾದ ಆರೋಪಗಳನ್ನು ತಿರಸ್ಕರಿಸಿದ್ದು, ಅವು ಸಂಪೂರ್ಣ ಅಸಂಬದ್ಧ ಮತ್ತು ಸುಳ್ಳು ಎಂದಿದ್ದಾರೆ. ಜುಲೈ 18, 2013 ರಂದು ಸಹಿ ಮಾಡದ ಎರಡು ಇಮೇಲ್ಗಳಲ್ಲಿ ಈ ಹಕ್ಕುಗಳು ಕಂಡುಬರುತ್ತವೆ, ಇವುಗಳನ್ನು ಜೆಫ್ರಿ ಎಪ್ಸ್ಟೀನ್ ಅವರ ಇಮೇಲ್ ಖಾತೆಯಿಂದ ರಚಿಸಲಾಗಿದ್ದು ಅದೇ ಖಾತೆಗೆ ಹಿಂತಿರುಗಿಸಲಾಗಿದೆ. ಅವುಗಳನ್ನು ಗೇಟ್ಸ್ ಗೆ ಕಳುಹಿಸಿಲ್ಲ ಅಥವಾ ಸ್ವೀಕರಿಸಿಲ್ಲ. ಇಮೇಲ್ಗಳು ಗೇಟ್ಸ್ ಅವರ ಆರೋಗ್ಯ ಮತ್ತು ವೈಯಕ್ತಿಕ ಜೀವನದ ಬಗ್ಗೆ ಆರೋಪಗಳನ್ನು ಮಾಡುತ್ತವೆ, ಇದರಲ್ಲಿ ಲೈಂಗಿಕವಾಗಿ ಹರಡುವ ಸೋಂಕಿನ ಉಲ್ಲೇಖಗಳು ಸೇರಿವೆ. ಎಪ್ಸ್ಟೀನ್ ಒಬ್ಬ ಅತೃಪ್ತ ಸುಳ್ಳುಗಾರ, ಗೇಟ್ಸ್ ಅವರನ್ನು ಬಲೆಗೆ ಬೀಳಿಸಲು ಮತ್ತು ಅವರ ಸಂಬಂಧ ಕೊನೆಗೊಂಡಿದ್ದರಿಂದ ಅವರನ್ನು ಮುಜುಗರಕ್ಕೀಡು ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ದಾಖಲೆಗಳಿಗೆ ಪ್ರತಿಕ್ರಿಯಿಸಿದ ಗೇಟ್ಸ್ ನ ವಕ್ತಾರರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. ► ಮೆಲಾನಿಯಾ ಟ್ರಂಪ್ ಈ ಕಡತಗಳಲ್ಲಿ ಎಪ್ಸ್ಟೀನ್ ಸಹವರ್ತಿ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರನ್ನು ಉದ್ದೇಶಿಸಿ ಲವ್, ಮೆಲಾನಿಯಾ ಎಂದು ಸಹಿ ಮಾಡಿರುವ 2002 ರ ಇಮೇಲ್ ಇದೆ. ಈ ಇಮೇಲ್ನ ಕಳುಹಿಸಿದವರ ಮತ್ತು ಸ್ವೀಕರಿಸಿದವರ ವಿಳಾಸವನ್ನು ಅಳಿಸಲಾಗಿದೆ. 2002 ಅಕ್ಟೋಬರ್ 23, ಬುಧವಾರ ಸಂಜೆ HI! ಎಂಬ ವಿಷಯ (Subject line) ಎಂದು ಕಳುಹಿಸಲಾದ ಮೊದಲ ಇಮೇಲ್ Dear G! ಎಂದು ಪ್ರಾರಂಭವಾಗುತ್ತದೆ. ನೀವು ಹೇಗಿದ್ದೀರಿ? ನ್ಯೂಯಾರ್ಕ್ ಮ್ಯಾಗ್ನಲ್ಲಿ ಜೆಇ ಬಗ್ಗೆ ಒಳ್ಳೆಯ ಕಥೆ. ಚಿತ್ರದಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ನೀವು ಪ್ರಪಂಚದಾದ್ಯಂತ ವಿಮಾನ ಪ್ರಯಾಣ ಮಾಡುವಲ್ಲಿ ಬ್ಯುಸಿ ಆಗಿದ್ದೀರಿ ಎಂದು ನನಗೆ ತಿಳಿದಿದೆ. ಪಾಮ್ ಬೀಚ್ ಹೇಗಿತ್ತು? ನಾನು ಪ್ರಯಾಣಿಸಲು ಕಾತುರಳಾಗಿದ್ದೇನೆ. ನೀವು ನ್ಯೂಯಾರ್ಕ್ಗೆ ಹಿಂತಿರುಗಿದಾಗ ನನಗೆ ಕರೆ ಮಾಡಿ. ಉತ್ತಮ ಸಮಯವನ್ನು ಕಳೆಯಿರಿ! ಲವ್, ಮೆಲಾನಿಯಾ ಇಮೇಲ್ನಲ್ಲಿ ಯುಎಸ್ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಉಲ್ಲೇಖಿಸುವ ಹೆಸರನ್ನು ಹೊಂದಿದ್ದರೂ, ಅವರು ಅದನ್ನು ಬರೆದಿದ್ದಾರೆಯೇ ಅಥವಾ ಕಳುಹಿಸಿದ್ದಾರೆಯೇ ಎಂಬುದು ಇನ್ನೂ ಪರಿಶೀಲಿಸಲಾಗಿಲ್ಲ. ► ಎಲಾನ್ ಮಸ್ಕ್ ಎಲಾನ್ ಮಸ್ಕ್ ದ್ವೀಪಕ್ಕೆ ಭೇಟಿ ನೀಡಲು ಯೋಚಿಸಿದ್ದರು ಎಂದು ಫೈಲ್ಗಳು ತೋರಿಸುತ್ತವೆ. ನವೆಂಬರ್ 2012 ರ ಇಮೇಲ್ ವಿನಿಮಯದಲ್ಲಿ ಮಸ್ಕ್ ಮತ್ತು ಎಪ್ಸ್ಟೀನ್ ನಡುವಿನ ಸಂಭಾಷಣೆಯನ್ನು ಗುರುತಿಸಲಾಗಿದೆ. ಮಸ್ಕ್ ಎಪ್ಸ್ಟೀನ್ ಅವರಲ್ಲಿ ದ್ವೀಪದಲ್ಲಿ wildest night ಯಾವಾಗ ನಡೆಯಲಿದೆ ಎಂದು ಕೇಳಿದರು. ಎಪ್ಸ್ಟೀನ್ ಮಸ್ಕ್ಗೆ ನೀಡಿದ ಸಂದೇಶದಲ್ಲಿ, ನೀವು ದ್ವೀಪಕ್ಕೆ ಹೆಲಿಕಾಪ್ಟರ್ ನಲ್ಲಿ ಬರಲು ಎಷ್ಟು ಜನರಿರುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ಮಸ್ಕ್ ಉತ್ತರಿಸುತ್ತಾ, ಬಹುಶಃ ತಾಲುಲಾ ಮತ್ತು ನಾನು ಮಾತ್ರ. ನಿಮ್ಮ ದ್ವೀಪದಲ್ಲಿ ಯಾವಾಗ ಹಗಲು/ರಾತ್ರಿ ಭರ್ಜರಿ ಪಾರ್ಟಿ ಇರುತ್ತದೆ ? ಎಂದು ಕೇಳಿದ್ದಾರೆ . ► ಬಿಲ್ ಕ್ಲಿಂಟನ್ ಈ ಕಡತಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಉಲ್ಲೇಖವೂ ಇದೆ. ದಾಖಲೆಗಳಲ್ಲಿ ಎಫ್ಬಿಐಗೆ ಸಲ್ಲಿಸಲಾದ ಆರೋಪಗಳು ಮತ್ತು ಎಪ್ಸ್ಟೀನ್ ಅವರ ಹಿಂದಿನ ಸಂಬಂಧಗಳ ಉಲ್ಲೇಖಗಳು ಸೇರಿವೆ. ಕ್ಲಿಂಟನ್ ಈ ಹಿಂದೆ ಎಪ್ಸ್ಟೀನ್ ಅವರನ್ನು ತನಗೆ ಬಗ್ಗೆ ಗೊತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದನ್ನು ಅವರು ನಿರಾಕರಿಸಿದ್ದಾರೆ. ಬಿಡುಗಡೆಯಾದ ದಾಖಲೆಗಳಲ್ಲಿ ಯಾವುದೇ ಹೊಸ ಆರೋಪಗಳು ಇಲ್ಲ. ► ಗಿಸ್ಲೇನ್ ಮ್ಯಾಕ್ಸ್ವೆಲ್ ಈ ಕಡತಗಳಲ್ಲಿ ತನಿಖಾ ದಾಖಲೆಗಳು ಮತ್ತು 2021 ರಲ್ಲಿ ಎಪ್ಸ್ಟೀನ್ಗೆ ಅಪ್ರಾಪ್ತ ವಯಸ್ಸಿನ ಹುಡುಗಿಯರ ಸಾಗಣೆಗೆ ಸಹಾಯ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾದ ಗಿಸ್ಲೇನ್ ಮ್ಯಾಕ್ಸ್ವೆಲ್ಗೆ ಸಂಬಂಧಿಸಿದ ಎಫ್ಬಿಐ ಮೆಮೊಗಳು ಸೇರಿವೆ. ಆಂತರಿಕ ಎಫ್ಬಿಐ ಟಿಪ್ಪಣಿಗಳಲ್ಲಿ ಮ್ಯಾಕ್ಸ್ವೆಲ್ ವಿಚಾರಣೆಯ ಮೊದಲು ನಡೆಸಿದ ಸಂತ್ರಸ್ತರ ಸಂದರ್ಶನಗಳು ಸೇರಿವೆ. ಒಂದು FBI ಮೆಮೊ ಮ್ಯಾಕ್ಸ್ವೆಲ್, ಎಪ್ಸ್ಟೀನ್ ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಪಾರ್ಟಿಗಳಿಗೆ ಹಾಜರಾಗುವ ಬಗ್ಗೆ ಸಂತ್ರಸ್ತೆಯ ಕಥೆಯನ್ನು ವಿವರಿಸುತ್ತದೆ. ► ಪ್ರಿನ್ಸ್ ಆಂಡ್ರ್ಯೂ ಮತ್ತು ಯುಕೆ ವ್ಯಕ್ತಿಗಳು ದಾಖಲೆಗಳಲ್ಲಿ ಪ್ರಿನ್ಸ್ ಆಂಡ್ರ್ಯೂ ಎಂದು ನಂಬಲಾದ ದಿ ಡ್ಯೂಕ್ ಅನ್ನು ಉಲ್ಲೇಖಿಸುವ ಇಮೇಲ್ಗಳು ಸೇರಿವೆ. ಇವರು ಸಭೆಗಳು ಮತ್ತು ಪರಿಚಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಇಮೇಲ್ಗಳು ಅಪರಾಧ ಚಟುವಟಿಕೆಯನ್ನು ಆರೋಪಿಸುವುದಿಲ್ಲ. ಸಾರಾ ಫರ್ಗುಸನ್ ಮತ್ತು ಲಾರ್ಡ್ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಒಳಗೊಂಡ ಇಮೇಲ್ಗಳು ಸಹ ಇವೆ. ಮ್ಯಾಂಡೆಲ್ಸನ್ ಈ ಹಿಂದೆ ಎಪ್ಸ್ಟೀನ್ ಜೊತೆಗಿನ ಸಂಬಂಧಕ್ಕೆ ವಿಷಾದ ವ್ಯಕ್ತಪಡಿಸಿದ್ದು ಯಾವುದೇ ಅಪರಾಧಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ► ಮೀರಾ ನಾಯರ್ ಜೆಫ್ರಿ ಎಪ್ಸ್ಟೀನ್ ಫೈಲ್ಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಡುಗಡೆಯಾದ ದಾಖಲೆಗಳಲ್ಲಿ ಭಾರತೀಯ ಮೂಲದ ಚಲನಚಿತ್ರ ನಿರ್ಮಾಪಕಿ ಮತ್ತು ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಅವರ ತಾಯಿ ಮೀರಾ ನಾಯರ್ ಹೆಸರು ಕೂಡಾ ಇದೆ. 2009 ರಲ್ಲಿ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಸಿನಿಮಾ ಪಾರ್ಟಿಯಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅತಿಥಿಯಾಗಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಲಾಗಿದೆ, ಇದರಲ್ಲಿ ಬಿಲ್ ಕ್ಲಿಂಟನ್ ಮತ್ತು ಜೆಫ್ ಬೆಜೋಸ್ ಕೂಡ ಭಾಗವಹಿಸಿದ್ದರು. ಪ್ರಚಾರಕಿ ಪೆಗ್ಗಿ ಸೀಗಲ್ ಎಪ್ಸ್ಟೀನ್ಗೆ ಕಳುಹಿಸಿರುವ ಇಮೇಲ್ ಪ್ರಕಾರ, ಈ ಕಾರ್ಯಕ್ರಮವು ಮೀರಾ ನಾಯರ್ ಅವರ ಚಲನಚಿತ್ರ ಅಮೆಲಿಯಾ ನಂತರದ ಪಾರ್ಟಿಯಾಗಿತ್ತು. ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತರು ಪಾರದರ್ಶಕತೆಯತ್ತ ಒಂದು ಹೆಜ್ಜೆಯಾಗಿ ಕಡತ ಬಿಡುಗಡೆ ಮಾಡಿದ್ದರೂ, ಎಪ್ಸ್ಟೀನ್ ಸಂತ್ರಸ್ತರು ಇದನ್ನು ಟೀಕೆ ಮಾಡಿದ್ದಾರೆ. ಹೆಸರುಗಳನ್ನು ಬಹಿರಂಗ ಪಡಿಸಿದ ರೀತಿ ತಮ್ಮ ಗುರುತನ್ನು ಮರೆಮಾಚುವಲ್ಲಿ ತಪ್ಪು ಮಾಡಿದೆ. ಇದು ಅಪರಾಧಗಳನ್ನು ಮಾಡಿರಬಹುದಾದ ಜನರನ್ನು ರಕ್ಷಿಸಲು ಸಹಾಯ ಮಾಡಿದೆ ಎಂದು ಸಂತ್ರಸ್ತರು ಹೇಳಿದ್ದಾರೆ. ಜೆಫ್ರಿ ಎಪ್ಸ್ಟೀನ್ ಫೈಲ್ಗಳ ಈ ಇತ್ತೀಚಿನ ಬಿಡುಗಡೆಯನ್ನು ಪಾರದರ್ಶಕತೆ ಎಂದು ಮಾರಾಟ ಮಾಡಲಾಗುತ್ತಿದೆ, ಆದರೆ ಅದು ವಾಸ್ತವವಾಗಿ ಸಂತ್ರಸ್ತರ ಮಾಹಿತಿಯನ್ನು ಬಹಿರಂಗಪಡಿಸುತ್ತಿದೆ. ಆದರೆ ನಮ್ಮ ಮೇಲೆ ದೌರ್ಜನ್ಯವೆಸಗಿದ ಪುರುಷರ ಮಾಹಿತಿ ಮರೆಮಾಡಿ ಅವರನ್ನು ರಕ್ಷಿಸಲಾಗಿದೆ. ಪ್ರಸ್ತುತ ಬಹಿರಂಗಪಡಿಸುವಿಕೆಯ ವಿಧಾನವು ಆಘಾತವನ್ನು ಉಂಟುಮಾಡುತ್ತದೆ. ಎಪ್ಸ್ಟೀನ್ ಕಡತಗಳನ್ನು ಬಹಿರಂಗಗೊಳಿಸಿ ಗೌಪ್ಯತೆಯಿಂದ ಪ್ರಯೋಜನ ಪಡೆಯುತ್ತಿರುವಾಗ ನಮ್ಮ ಹೆಸರು ಬಹಿರಂಗಗೊಳಿಸಬಾರದು. ಈ ರೀತಿ ಮಾಡುವುದು ದ್ರೋಹ ಎಂದು ಸಂತ್ರಸ್ತರು ಹೇಳಿರುವುದಾಗಿ ʼದಿ ಗಾರ್ಡಿಯನ್ʼ ವರದಿ ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಅವರು ನೀಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಪುತ್ತೂರು ಸಹಾಯಕ ಕಮಿಷನರ್ ಅವರ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಸಹಾಯಕ ಕಮಿಷನರ್ ನೀಡಿರುವ ಆದೇಶ ಸಮರ್ಪಕವಾಗಿಲ್ಲ ಎಂದು 21 ದಿನದೊಳಗೆ ಪ್ರಕರಣದ ಮರು ವಿಚಾರಣೆ ನಡೆಸಿ ಆದೇಶ ನೀಡುವಂತೆ ನ್ಯಾಯಾಲಯ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಸೂಚಿಸಿದೆ.
ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆಯಲ್ಲಿ ಹಲವು ಅಂಶ ಬಹಿರಂಗ! ತಲೆಯ ಬದಲು ಎದೆಗೆ ಗುರಿ ಇಟ್ಟುಕೊಂಡಿದ್ದೇಕೆ?
ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಾನ್ಫಿಟೆಂಡ್ ಗ್ರೂಪ್ನ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹಲವು ಅನುಮಾನಗಳು ಮೂಡಿವೆ. ತಲೆಗೆ ಬದಲಾಗಿ ಎದೆಗೆ ಗುಂಡು ಹಾರಿಸಿಕೊಂಡಿರುವುದು, ಪಿಸ್ತೂಲ್ ದೇಹಕ್ಕೆ ಹತ್ತಿರದಲ್ಲಿಟ್ಟು ಫೈರ್ ಮಾಡಿರುವುದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಘಟನಾ ಸ್ಥಳದಲ್ಲಿ ಕೇವಲ ಒಂದು ಗುಂಡಿನ ಗುರುತು ಪತ್ತೆಯಾಗಿದೆ.
ದಾವೋಸ್- 2026 ಸಮಾವೇಶ: ಕರ್ನಾಟಕಕ್ಕೆ ಏನೇನು ಲಾಭ? ಎಂ ಬಿ ಪಾಟೀಲ್ ಕೊಟ್ಟಿದ್ದಾರೆ ಇಂಚಿಂಚು ಮಾಹಿತಿ
* ರಾಜ್ಯದ 2 ಮತ್ತು 3ನೆ ಶ್ರೇಣಿಯ ನಗರಗಳಲ್ಲಿ ಪ್ರಮುಖ ಹೂಡಿಕೆಗಳಿಗೆ ಲಭ್ಯವಿರುವ ಪೂರಕ ವ್ಯವಸ್ಥೆಗಳು, 2ನೆ ಶ್ರೇಣಿಯ ನಗರಗಳನ್ನು ಒಳಗೊಂಡಂತೆ ʼಜಿಸಿಸಿʼ ಗಳ ವಿಸ್ತರಣೆ, ಡೇಟಾ ಕೇಂದ್ರಗಳಿಗೆ ಗ್ರಿಡ್ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ವಿದ್ಯುತ್ ಹಾಗೂ ಸಮೃದ್ಧ ನೀರಿನ ಪೂರೈಕೆ ಮತ್ತು ನೀರಿನ ದಕ್ಷ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆಗಳು ಕೇಂದ್ರೀಕೃತಗೊಂಡಿದ್ದವು. * ಎಲ್ಲ ಸಭೆ- ಸಮಾಲೋಚನೆಗಳಲ್ಲಿ -ರಾಜ್ಯದ ವಿವಿಧ ವಲಯಗಳಲ್ಲಿನ ಕರ್ನಾಟಕ ಸರ್ಕಾರದ ಕೊಡುಗೆಗಳು ಮತ್ತು ಅನುಷ್ಠಾನ ಸಿದ್ಧತೆಯ ವಿವರಗಳನ್ನು ಹಂಚಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿ ಮತ್ತು ಪೂರಕ ಸೌಲಭ್ಯಗಳನ್ನು ಒಳಗೊಂಡಂತೆ ಕೃತಕ ಜಾಣ್ಮೆಯ ಪ್ರತಿಭೆ, ʼಜಿಸಿಸಿʼಗಳು, ಶುದ್ಧ ಉತ್ಪಾದನೆ ಮುಂತಾದವುಗಳಿಗೆ ಕರ್ನಾಟಕವು ಭಾರತದ ಪ್ರಮುಖ ತಾಣವಾಗಿರುವುದನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.
ಜೈಪುರ: ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲ ಪ್ರಕರಣದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಜೈಸಲ್ಮೇರ್ ಜಿಲ್ಲೆಯ ಇ-ಮಿತ್ರ ಅಧಿಕಾರಿಯೋರ್ವನನ್ನು ರಾಜಸ್ಥಾನ ಪೋಲಿಸ್ನ ಗುಪ್ತಚರ ಘಟಕವು ಬಂಧಿಸಿದೆ ಎಂದು ವರದಿಯಾಗಿದೆ. ಪೋಕರನ್ನ ಸಂಕ್ಡಾ ಗ್ರಾಮದ ನಿವಾಸಿ ಝಬರಾರಾಮ್ ಬಂಧಿತ ಆರೋಪಿಯಾಗಿದ್ದು,ಆತ ಸುದೀರ್ಘ ಕಾಲದಿಂದ ಐಎಸ್ಐ ಏಜೆಂಟ್ಗಳ ಜೊತೆ ಸಂಪರ್ಕದಲ್ಲಿದ್ದ ಹಾಗೂ ಗಡಿಯುದ್ದಕ್ಕೂ ಭಾರತೀಯ ಸೇನೆಗೆ ಸಂಬಂಧಿಸಿದ ವ್ಯೂಹಾತ್ಮಕ ಮತ್ತು ಸೂಕ್ಷ್ಮಮಾಹಿತಿಗಳನ್ನು ರವಾನಿಸುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಝಬರಾರಾಮ್ನನ್ನು ಮೊದಲು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸಲಾಗಿತ್ತು ಮತ್ತು ನಂತರ ಆತನೊಂದಿಗೆ ನಿಯಮಿತವಾಗಿ ಸಂವಹನವನ್ನು ನಡೆಸಲಾಗುತ್ತಿತ್ತು. ಬಳಿಕ ಆತನನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸಲಾಗಿತ್ತು ಮತ್ತು ಹಣದ ಆಮಿಷವನ್ನು ಒಡ್ಡಲಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಬೆಳಕಿಗೆ ಬಂದಿದೆ. ಬಂಧನವನ್ನು ದೃಢಪಡಿಸಿದ ಎಡಿಜಿ (ಗುಪ್ತಚರ) ಪ್ರಸನ್ನ ಕುಮಾರ್ ಅವರು, ಆರೋಪಿಯು ಐಎಸ್ಐಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ. ಆತನ ಹಣಕಾಸು ವಹಿವಾಟುಗಳು ಮತ್ತು ಡಿಜಿಟಲ್ ಹೆಜ್ಜೆ ಗುರುತುಗಳು ಸೇರಿದಂತೆ ಹಲವಾರು ಕೋನಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಹಂಚಿಕೊಳ್ಳಲಾದ ಮಾಹಿತಿಯ ಪೂರ್ಣ ವಿವರಗಳು,ಸಂಭಾವ್ಯ ಸ್ಥಳೀಯ ಸಹಾಯಕರು ಮತ್ತು ಇನ್ನಷ್ಟು ಜನರು ಬೇಹುಗಾರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.
Gadag | 14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿಯ ಉತ್ಖನನ ಕಾರ್ಯ; 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯವಸ್ತುಗಳು ಪತ್ತೆ!
ಗದಗ : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ 14ನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಈವರೆಗೂ 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯಾವಶೇಷ ವಸ್ತುಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಲಕ್ಕುಂಡಿಯ ಉತ್ಪನನದ ವೇಳೆ ಸಿಕ್ಕ ಪ್ರಾಚ್ಯವಸ್ತುಗಳ ಕುರಿತು ಮಾತನಾಡಿದ ಐತಿಹಾಸಿಕ ತಜ್ಞ ಷಡಕ್ಷರಯ್ಯಾ, ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಪನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷ ಮತ್ತು ನಾಗ ಮೂರ್ತಿಗಳು ಪತ್ತೆಯಾಗಿವೆ. ಲಕ್ಕುಂಡಿಯ ಸಂಪೂರ್ಣ ಐತಿಹಾಸಿಕ ವಸ್ತುಗಳನ್ನು ಹೊರತೆಗೆಯಲು ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಪನ ಮಾಡಬೇಕು. ಕೆಲವು ಶಿಲೆ, ಧಾರ್ಮಿಕ ವಸ್ತುಗಳು ನೆಲದ ಮೂರು-ನಾಲ್ಕು ಅಡಿ ಕೆಳಗೆ ಸಿಕ್ಕಿದ್ದು, ನಿಧಿ ಹೇಗೆ ಸಿಕ್ಕಿದೆ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಪನನ ಕಾರ್ಯದಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. LKG, UKG ತರಗತಿಗಳ ಮಕ್ಕಳಿಗೆ ಉತ್ಪನನದ ಧೂಳಿನಿಂದ ಕೆಮ್ಮು ನೆಗಡಿ, ವಾಂತಿ ಮತ್ತು ಜ್ವರದ ಸಮಸ್ಯೆಗಳು ಕಾಣಿಸಿಕೊಂಡು, ನರಳಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮವಾಗಿ ಶಾಲೆ ಸುತ್ತ ಮತ್ತು ಉತ್ಖನನ ಆವರಣದಲ್ಲಿ ಟ್ರಾಕ್ಟರ್ ಮೂಲಕ ನೀರು ಹರಿಸಲಾಯಿತು.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಲೂಚ್ ಪ್ರತ್ಯೇಕತಾವಾದಿ ಗುಂಪು (BLA) ಪಾಕ್ ಸೇನೆ ವಿರುದ್ಧ 'ಆಪರೇಷನ್ ಹಿರೋಫ್ 2.0' ಹೆಸರಿನಲ್ಲಿ ಸರಣಿ ದಾಳಿ ನಡೆಸಿದೆ. ಕ್ವೆಟ್ಟಾ, ಪಾಸ್ನಿ, ಮಸ್ತುಂಗ್, ನುಷ್ಕಿ ಮತ್ತು ಗ್ವಾದರ್ ಜಿಲ್ಲೆಗಳಲ್ಲಿ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ದಾಳಿಗಳು ನಡೆದಿವೆ. ಈ ದಾಳಿಗಳಲ್ಲಿ ಹಲವು ಪೊಲೀಸರು ಸಾವನ್ನಪ್ಪಿದ್ದು, ಕೈದಿಗಳು ಪರಾರಿಯಾಗಿದ್ದಾರೆ. ಭಯೋತ್ಪಾದಕ ನಿಗ್ರಹ ದಳದ ಕಚೇರಿಯ ಮೇಲೂ ದಾಳಿ ನಡೆದಿದೆ. ಈ ದಾಳಿಯ ಕುರಿತ ಮಾಹಿತಿ ಇಲ್ಲಿದೆ..
ರಷ್ಯಾ ಹುಡುಗಿಯರ ಜೊತೆ ಸಿಕ್ಕಬಿದ್ದ ಉದ್ಯಮಿ ಬಿಲ್ಗೇಟ್ಸ್ಗೆ STD ರೋಗ! ಜೆಫ್ರಿ ಎಪ್ಸ್ಟೀನ್ ಫೈಲ್ನಲ್ಲಿ ಬಹಿರಂಗ
ಬಿಲ್ ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ರೋಗಕ್ಕೆ ತುತ್ತಾಗಿದ್ದರು ಎಂಬ ಆರೋಪ ಜೆಫ್ರಿ ಎಪ್ಸ್ಟೀನ್ ಅವರ ಬಹಿರಂಗಗೊಂಡ ಕಡತಗಳಲ್ಲಿ ಕಂಡುಬಂದಿದೆ. ಈ ಆರೋಪಗಳನ್ನು ಗೇಟ್ಸ್ ತೀವ್ರವಾಗಿ ನಿರಾಕರಿಸಿದ್ದಾರೆ. ಎಪ್ಸ್ಟೀನ್ ಮತ್ತು ಗೇಟ್ಸ್ ಒಟ್ಟಿಗೆ ಇರುವ ಛಾಯಾಚಿತ್ರಗಳು ಸಹ ದಾಖಲೆಗಳಲ್ಲಿವೆ. ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಅವರ ವಿಚ್ಛೇದನಕ್ಕೆ ಎಪ್ಸ್ಟೀನ್ನೊಂದಿಗಿನ ಸಂಬಂಧವೂ ಕಾರಣ ಎಂದು ವರದಿಯಾಗಿದೆ.
ʻಸಿಜೆ ರಾಯ್ ಆತ್ಮಹತ್ಯೆ, ಐಟಿ ಅಧಿಕಾರಿಗಳ ಬಗ್ಗೆ ಪೊಲೀಸರು ತನಿಖೆ ಮಾಡ್ತಾರೆʼ; ಸಚಿವ ಪರಮೇಶ್ವರ್
ಆದಾಯ ತೆರಿಗೆ ಇಲಾಖೆ ಕೇರಳ ಘಟಕದ ಅಧಿಕಾರಿಗಳು ಮೂರು ದಿನಗಳಿಂದ ಕಾನ್ಫಿಡೆಂಟ್ ಗ್ರೂಪ್ನ ಆರ್ಥಿಕ ವಹಿವಾಟಿನ ಸಂಬಂಧ ದಾಳಿ ನಡೆಸಿದ್ದರು. ಈ ವೇಳೆ ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿ.ಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ. ಇನ್ನು ಪರಮೇಶ್ವರ್ ಅವರು ಮಾತನಾಡಿ, ಡಿಸೆಂಬರ್ನಲ್ಲಿ ಅವರ ಕಂಪನಿ ಮೇಲೆ ದಾಳಿ ಮಾಡಿತ್ತು. ಫೆ.4ಕ್ಕೆ ಗಡುವು ಇತ್ತು ರಾಯ್ ಅವರು ಅಧಿಕಾರಿಗಳಿಗೆ ಸಹಕರಿಸಿದ್ದರು. ಈ ಮಧ್ಯೆ ಸಮಯ ಕೇಳಿ ರೂಮಿಗೆ ಹೋದವರು ಬಾರದಿರುವುದನ್ನು ಕಂಡು ಅಧಿಕಾರಿಗಳು ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
TS EAMCET 2026: ಫೆ.19 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
ಹೈದರಾಬಾದ್: ತೆಲಂಗಾಣದಲ್ಲಿ ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ತೆಲಂಗಾಣ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು (ಟಿಜಿಸಿಹೆಚ್ಇ) ಬಹುನಿರೀಕ್ಷಿತ 2026ನೇ ಸಾಲಿನ ಟಿಎಸ್ ಎಂಸೆಟ್ (TS EAMCET - Telangana State Engineering, Agriculture and Medical Common Entrance Test) ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ
Hoskote | ನಾಲ್ವರು ಕಾರ್ಮಿಕರು ಮಲಗಿದ್ದಲ್ಲೇ ಮೃತ್ಯು; ಗ್ಯಾಸ್ ಸೋರಿಕೆ ಶಂಕೆ
ಹೊಸಕೋಟೆ : ನಾಲ್ವರು ಕಾರ್ಮಿಕರು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿರುವಂತಹ ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಮೃತರನ್ನು ಅಸ್ಸಾಂ ಮೂಲದ ಜಯಂತ್ ಸಿಂಧೆ ಬಿನ್ ಕೋಗೇಶ್ವರ(25), ನೀರೇಂದ್ರನಾಥ್ ಟೈಡ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ತಿಳಿದು ಬಂದಿದೆ. ಮೃತ ಕಾರ್ಮಿಕರು ಮುತ್ಸಂದ್ರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಲೇಬರ್ ಶೆಡ್ನಲ್ಲಿ ಬಾಡಿಗೆಗೆ ವಾಸವಾಗಿದ್ದರು. ಘಟನೆ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಮಿಕರು ಮೇಲ್ನೋಟಕ್ಕೆ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಜೇವರ್ಗಿಯಲ್ಲಿ 26 ‘ಏಕೋಪಾಧ್ಯಾಯ’ ಶಾಲೆಗಳು: ಶಿಕ್ಷಣ ವ್ಯವಸ್ಥೆ ಬಗ್ಗೆ ಆತಂಕ
ಸರಕಾರಿ ಶಾಲಾ ಮಕ್ಕಳಿಗೆ ಶಾಪವಾಯ್ತೇ ಇಲಾಖಾ ನೀತಿ?
CJ Roy: ಅಧಿಕಾರಿಗಳು ಇದ್ದಾಗಲೇ ಸಿಜೆ ರಾಯ್ ಆತ್ಮಹತ್ಯೆ, ಮೈಸೂರಲ್ಲಿ ಡ್ರಗ್ ಪತ್ತೆ: ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು: ಕಾನ್ಫೆಡೆಂಟ್ ಗ್ರೂಪ್ನ ಚೇರ್ಮನ್ ಮತ್ತು ಖ್ಯಾತ ಉದ್ಯಮಿ ಸಿಜೆ ರಾಯ್ (CJ Roy) ಅವರ ಕಂಪನಿ ಮೇಲೆ ಡಿಸೆಂಬರ್ ತಿಂಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾದ ಮೇಲೆ 60 ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವಿದೆ. ಅದನ್ನು ಅಂತಿಮಗೊಳಿಸಲು ರಾಯ್ ಅವರನ್ನು ಅಧಿಕಾರಿಗಳು ಕರೆದಿದ್ದರು ಎಂದು ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್
ಕಂಪ್ಲಿ-ಕೋಟೆ ಸಮೀಪ ಕಿರು ಸೇತುವೆಗೆ ಮುಕ್ತಿ
ಭರದಿಂದ ಸಾಗುತ್ತಿದೆ ಸೇತುವೆ ಪುನರ್ ನಿರ್ಮಾಣ ಕಾಮಗಾರಿ
ಸಾರ್ವಜನಿಕರ ಅಸಡ್ಡೆ: ತಿಪ್ಪೆಗುಂಡಿಯಾದ ‘ಜ್ಞಾನದೇಗುಲ’!
ನವಬಾಗ ಸರಕಾರಿ ಕಾಲೇಜು ಆವರಣದಲ್ಲಿ ಕಸದ ರಾಶಿ: ವಿದ್ಯಾರ್ಥಿಗಳ ಬದುಕು ದುಸ್ಥಿತಿಗೆ
ರಾಯಚೂರು: ಹದಗೆಟ್ಟ ರಸ್ತೆಗೆ ಮರುಕಾಮಗಾರಿ; ಪ್ರಮುಖ ರಸ್ತೆಗಳ ಉಬ್ಬುಗಳಿಗೆ ಬಿಳಿ ಪಟ್ಟಿ ಅಳವಡಿಕೆ
ವಾರ್ತಾ ಭಾರತಿ ವರದಿ ಫಲಶ್ರುತಿ
ವಾಶಿಂಗ್ಟನ್: ಅಮೆರಿಕದ ನ್ಯಾಯಾಂಗ ಇಲಾಖೆ ಹೊಸ ಜೆಫ್ರಿ ಎಪ್ಸ್ಟೀನ್ ಕಡತವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಬಗ್ಗೆ ಸ್ಪೋಟಕ ಅಂಶವನ್ನು ಕೂಡ ಉಲ್ಲೇಖಿಸಲಾಗಿದೆ. ಜೆಫ್ರಿ ಎಪ್ಸ್ಟೀನ್ ಕಡತದಲ್ಲಿ ಬಿಲ್ ಗೇಟ್ಸ್ಗೆ ʼರಷ್ಯನ್ ಹುಡುಗಿಯರಿಂದʼ ಲೈಂಗಿಕವಾಗಿ ಹರಡುವ ರೋಗ ತಗುಲಿತ್ತು ಎಂದು ಉಲ್ಲೇಖಿಸಿರುವ ಇಮೇಲ್ ಎಲ್ಲರ ಗಮನ ಸೆಳೆಯಿತು. ಜೆಫ್ರಿ ಎಪ್ಸ್ಟೀನ್ಗೆ ಸೇರಿವೆ ಎಂದು ಹೇಳಲಾಗುತ್ತಿರುವ 2013ರ ಸ್ವಯಂ-ಇಮೇಲ್ಗಳ ಸ್ಕ್ರೀನ್ಶಾಟ್ಗಳಲ್ಲಿ, ಬಿಲ್ ಗೇಟ್ಸ್ ಅವರಿಗೆ “ರಷ್ಯನ್ ಹುಡುಗಿಯರಿಂದ” ಲೈಂಗಿಕ ರೋಗ ತಗುಲಿದ್ದು, ಇದರಿಂದ ಆಂಟಿಬಯೋಟಿಕ್ಗಳನ್ನು ಪತ್ನಿ ಮೆಲಿಂಡಾಗೆ ಗುಪ್ತವಾಗಿ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕದ ನ್ಯಾಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, 2013ರ ಜುಲೈ 18ರಂದು ಜೆಫ್ರಿ ಎಪ್ಸ್ಟೀನ್ ಒಂದು ದೀರ್ಘ ಸಂದೇಶವನ್ನು ಬರೆದಿದ್ದು, ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಕ್ಕಾಗಿ ಬಿಲ್ ಗೇಟ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ ಮತ್ತು ವೈಯಕ್ತಿಕ ವಿಚಾರಗಳನ್ನು ಮುಚ್ಚಿಹಾಕಲು ನಡೆದ ಪ್ರಯತ್ನಗಳ ಬಗ್ಗೆ ಆರೋಪಿಸಿದ್ದಾನೆ ಎಂದು ವರದಿಯಾಗಿದೆ. ಲೈಂಗಿಕವಾಗಿ ಹರಡುವ ರೋಗ ಎಸ್ಟಿಡಿ ಕುರಿತು ಇರುವ ಇಮೇಲ್ಗಳನ್ನು ದಯವಿಟ್ಟು ಅಳಿಸಿ ಹಾಕುವಂತೆ ನೀವು ನನ್ನನ್ನು ವಿನಂತಿಸಿದ್ದೀರಿ. ನೀವು ಮೆಲಿಂಡಾಗೆ ಗುಪ್ತವಾಗಿ ನೀಡಲು ಆಂಟಿಬಯೋಟಿಕ್ಗಳನ್ನು ಒದಗಿಸಬೇಕು ಎಂದು ವಿನಂತಿ ಮಾಡಿಕೊಂಡಿದ್ದೀರಿ ಎಂದು ಕಡತದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಕುಂದಾಪುರ: ಬಾವಿಯ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿ ನೀರಿಗೆ ಬಿದ್ದು ಮೃತ್ಯು
ಕುಂದಾಪುರ, ಜ.31: ಪಂಪ್ ದುರಸ್ತಿಗಾಗಿ ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ಎಂಬಲ್ಲಿ ಜ.30ರಂದು ಬೆಳಗ್ಗೆ ನಡೆದಿದೆ. ಮೃತರನ್ನು ವಡೇರ ಹೊಬಳಿ ಗ್ರಾಮದ ಬಿ.ಸಿ.ರೋಡ್ ನಿವಾಸಿ ನಾಗರಾಜ (51) ಎಂದು ಗುರುತಿಸಲಾಗಿದೆ. ಇವರು ಮನೆಯ ಬಾವಿಯೊಳಗಿನ ಸಬ್ ಮರ್ಸಿಬಲ್ ಪಂಪ್ನ್ನು ರಿಪೇರಿ ಮಾಡಲು ಇಳಿದಿದ್ದು, ಆಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Donald Trump: ಅಮೆರಿಕದ ಜೊತೆ ರಾಜಿ ಮಾಡಿಕೊಳ್ಳಲು ಮುಂದಾದ ಇರಾನ್, ಟ್ರಂಪ್ ಹೇಳಿಕೆಯಿಂದ ತಲ್ಲಣ
ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಿ, ಮುಂದೆ ಪರಮಾಣು ಅಸ್ತ್ರಗಳ ಬಳಕೆ ಮಾಡುವ ಮಟ್ಟಿಗೆ ಪರಿಸ್ಥಿತಿ ಹಾಳಾಗಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಆದರೆ ಏಕಾಏಕಿ ಅಮೆರಿಕ ಕೂಡ ಇರಾನ್ ವಿರುದ್ಧ ಯುದ್ಧ ಮಾಡದೇ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಶಾಂತಿ ಮಾತುಕತೆ ಮೂಲಕ ರಾಜಿ ಮಾಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಈಗಾಗಲೇ
ಜೈಲಿನಲ್ಲಿ ಹದಗೆಟ್ಟ ಸೋನಂ ವಾಂಗ್ಚುಕ್ ರ ಆರೋಗ್ಯ: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೋಧ್ ಪುರ್ ಏಮ್ಸ್ ಗೆ ದಾಖಲು
ಜೈಪುರ: ಜೈಲಿನಲ್ಲಿರುವ ಲಡಾಖ್ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವೈದ್ಯಕೀಯ ಪರೀಕ್ಷೆಗಾಗಿ ಜೋಧ್ ಪುರ್ ಏಮ್ಸ್ ಗೆ ದಾಖಲಿಸಲಾಗಿದೆ. ಶನಿವಾರ ಬೆಳಗ್ಗೆ ಸುಮಾರು 6.30ಕ್ಕೆ ಪೊಲೀಸರು ಸೋನಂ ವಾಂಗ್ಚುಕ್ ಅವರನ್ನು ಜೋಧ್ ಪುರ್ ಕೇಂದ್ರೀಯ ಕಾರಾಗೃಹದಿಂದ ಏಮ್ಸ್ ನ ತುರ್ತು ಚಿಕಿತ್ಸಾ ವಾರ್ಡ್ ಗೆ ಕರೆ ತಂದರು. ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿತ್ತು. ಏಮ್ಸ್ ಮೂಲಗಳ ಪ್ರಕಾರ, ವಾಂಗ್ಚುಕ್ ಉದರ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದು, ಅವರು ತಮ್ಮ ದೇಹದ ಹಲವು ಭಾಗಗಳಲ್ಲಿ ನೋವಿದೆ ಎಂದೂ ವೈದ್ಯರಿಗೆ ತಿಳಿಸಿದ್ದಾರೆ. ಶುಕ್ರವಾರ ಕೂಡಾ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಏಮ್ಸ್ ಸಂಸ್ಥೆಗೆ ಕರೆದೊಯ್ಯಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ನಂತರ, ಅವರನ್ನು ಮತ್ತೆ ಬಿಗಿ ಭದ್ರತೆಯಲ್ಲಿ ಜೋಧ್ ಪುರ್ ಕೇಂದ್ರೀಯ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಇದಕ್ಕೂ ಮುನ್ನ, ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರು ತಮ್ಮ ಪತಿಯ ಆರೋಗ್ಯ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿ, ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಪತಿಯ ಆರೋಗ್ಯ ಸ್ಥಿತಿ ದಿನೇ ದಿನೇ ವಿಷಮಿಸುತ್ತಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪಾಟ್ರಕೋಡಿ : ಸರಕಾರಿ ಶಾಲೆಗೆ ಸೌಂಡ್ ಬಾಕ್ಸ್, ಮೈಕ್ ಕೊಡುಗೆ
ವಿಟ್ಲ : ಪಾಟ್ರಕೋಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷ, ಸುರಕ್ಷಾ ಕನ್ಸ್ಟ್ರಕ್ಷನ್ ನ ಮಾಲಕ ಸಿದ್ದಿಕ್ ಸೂರ್ಯ ಅವರು ಕೋಡ್ಲೆಸ್ ಸೌಂಡ್ ಬಾಕ್ಸ್ ಹಾಗೂ ಮೈಕ್ ಅನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಮನ್ಸೂರ್ ನೇರಳಕಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಕ್, ಸದಸ್ಯರಾದ ಅಬ್ದುಲ್ ಶರೀಫ್, ಅಬ್ದುಲ್ ಗಫೂರ್, ಮನ್ಸೂರ್, ಜುಬೇರ್ ಟಿ, ಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮಿ, ಸಹ ಶಿಕ್ಷಕರಾದ ಸುಮಯ್ಯ, ಮಮತಾ, ಗುರುರಾಜ ಉಪಸ್ಥಿತರಿದ್ದರು.
ದೇರಳಕಟ್ಟೆ : ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ 19ನೇ ಇಎನ್ಟಿ ಕಾರ್ಯಾಗಾರ
ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮ-2026 ಉದ್ಘಾಟನೆ
ತಮಿಳುನಾಡು ರಾಜಕೀಯದಲ್ಲಿ ಇಂಡಿಯಾ ಬಣದ ಪ್ರಾಬಲ್ಯ, ಹೊಸ ಸಮೀಕ್ಷೆಯಿಂದ ಮತ್ತೊಮ್ಮೆ ಸ್ಪಷ್ಟನೆ
ದಕ್ಷಿಣ ಭಾರತದ ಪ್ರಬಲ ರಾಜ್ಯ ಹಾಗೂ ಹಲವು ವಿಚಾರಗಳಿಂದ ಇಡೀ ದೇಶದಲ್ಲೇ ಹೆಸರನ್ನು ಮಾಡಿರುವ ತಮಿಳುನಾಡು ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ರಾಜಕೀಯ ನಾಯಕರು. ಒಂದು ಕಡೆ ಬಿಜೆಪಿ ನಾಯಕರಿಗೆ ತಮಿಳುನಾಡು ಗೆಲ್ಲುವ ಹಂಬಲ, ಇನ್ನೊಂದು ಕಡೆ ಇಂಡಿಯಾ ಒಕ್ಕೂಟದ ನಾಯಕರಿಗೆ
ಬೀದರ್ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ
ಹುಮನಾಬಾದ್ : ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳ ಸಹಿತ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಆಘಾತ ವ್ಯಕ್ತಪಡಿಸಿ, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಕೂಡಲೇ ಸೂಕ್ತ ಚಿಕಿತ್ಸೆ ಒದಗಿಸುವಂತೆ ಹಾಗೂ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸ್ಫೋಟಕ ಪರೀಕ್ಷಾ ತಜ್ಞರನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಿ, ಸ್ಫೋಟ ಸ್ಥಳದಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು, ಸ್ಫೋಟಕ್ಕೆ ಬಳಸಲಾದ ವಸ್ತು ಯಾವುದು, ಆ ವಸ್ತು ಅಲ್ಲಿಗೆ ಹೇಗೆ ಬಂದಿದೆ ಹಾಗೂ ಯಾವ ಉದ್ದೇಶಕ್ಕಾಗಿ ಅದನ್ನು ಬಳಸಲಾಗಿದೆ ಎಂಬ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಕೂಡ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ.
ಬೀದರ್ : ಮೊಳಕೇರಾ ಗ್ರಾಮದಲ್ಲಿ ನಿಗೂಢ ವಸ್ತು ಸ್ಫೋಟ; ಆರು ಮಂದಿಗೆ ಗಂಭೀರ ಗಾಯ
ಹುಮನಾಬಾದ್: ನಿಗೂಢ ವಸ್ತು ಸ್ಫೋಟಗೊಂಡು ಐದು ವಿದ್ಯಾರ್ಥಿಗಳು ಸೇರಿ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಗಾಯಗೊಂಡವರನ್ನು ಮೊಳಕೇರಾ ಗ್ರಾಮದ ಜಬ್ಬಾರ ಸಾಬ್ (70), ಅನ್ವರ್ (18), ಅರ್ಜಾನ್ (8), ಆರೀಶ್ (6), ಮಸ್ತಾನ್ (8) ಮತ್ತು ಬುಶೇರಾ (3) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ನಿಗೂಢ ವಸ್ತು ಏಕಾಏಕಿ ಸ್ಫೋಟಗೊಂಡಿದ್ದು, ಐದು ವಿದ್ಯಾರ್ಥಿಗಳು ಹಾಗೂ ಒಬ್ಬ ವಯಸ್ಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಕೆಲ ದಿನಗಳ ಹಿಂದೆ ಇದೇ ಮೊಳಕೇರಾ ಗ್ರಾಮದಲ್ಲಿ ನಿಗೂಢ ವಸ್ತು ಸ್ಫೋಟಗೊಂಡು ಬಾಲಕನೊಬ್ಬ ಕಾಲು ಕಳೆದುಕೊಂಡ ಘಟನೆ ನಡೆದಿತ್ತು. ಇದಾದ ಬಳಿಕವೂ ಸುಮಾರು ನಾಲ್ಕು–ಐದು ಬಾರಿ ಇಂತಹ ಸ್ಫೋಟಗಳ ಘಟನೆಗಳು ನಡೆದಿವೆ. ಆದರೆ ಯಾವ ವಸ್ತು ಸ್ಫೋಟಗೊಳ್ಳುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದಿನ ಘಟನೆಗಳ ಸಂದರ್ಭದಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದರೆ ಇಂತಹ ಅವಘಡಗಳು ಮರುಕಳಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತರು, ಹುಮನಾಬಾದ್ ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಗಳೂ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕನ್ ನ್ಯಾಯಂಗ ಇಲಾಖೆ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಭಾವಿಗಳ ಪಟ್ಟಿಯೇ ತುಂಬಿದೆ. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಬಿಲ್ ಗೇಟ್ಸ್ ಸೇರಿದಂತೆ ಹಲವು ಗಣ್ಯರ ಹೆಸರುಗಳು ಸೇರಿವೆ. ಕೆಲವು ದಾಖಲೆಗಳು ಟ್ರಂಪ್ ವಿರುದ್ಧ ಸುಳ್ಳು ಆರೋಪಗಳನ್ನು ಹೊಂದಿವೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.ಆದ್ರೆ, ಬಿಡುಗಡೆಯಾದ ಈ ಫೈಲ್ಸ್ ಅಮೆರಿಕಾದಲ್ಲಿ ಸಂಚಲನ ಮೂಡಿಸಿದ್ದು, ಎಪ್ಸ್ಟೀನ್ ಲೈಂಗಿಕ ಭೂತದ ಸಹವಾಸ ಮಾಡಿದ ಪುರುಷೋತ್ತಮರು ಲಿಸ್ಟ್ ಕುರಿತು ಮಾಹಿತಿ ಇಲ್ಲಿದೆ...
ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ಐಟಿ ದಾಳಿ ಆಗ್ತಿದೆ: ಪ್ರಿಯಾಂಕ್ ಖರ್ಗೆ ಆರೋಪ
ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥನಾಗಿದ್ದ ಕೇರಳ ಮೂಲಕ ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಾಕೊಂಡಿರುವ ಪೊಲೀಸ್ ಅಧಿಕಾರಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿಗಳು ಇಲ್ಲಿವೆ.
ಯಶವಂತಪುರದಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಗೆ 5 ಟ್ರಿಪ್ ವಿಶೇಷ ರೈಲು ಸಂಚಾರ; ಯಾವಾಗ? ವೇಳಾಪಟ್ಟಿ ಏನು?
ಮಾರಿಕಾಂಬಾ ದೇವಿಯ ಜಾತ್ರೆಯ ಪ್ರಯುಕ್ತ, ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಫೆಬ್ರವರಿ 2026 ರಲ್ಲಿ ನಿರ್ದಿಷ್ಟ ದಿನಾಂಕಗಳಲ್ಲಿ ಸಂಚರಿಸಲಿದ್ದು, ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಅನುಕೂಲವಾಗಲಿದೆ.
ಬೀದರ್ನಲ್ಲಿ ಅನುಮಾನಸ್ಪದ ಸ್ಫೋಟ; ಎಂಟು ಜನರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಬೀದರ್ನ ಗ್ರಾಮವೊಂದರಲ್ಲಿ ಅನುಮಾನಸ್ಪದ ಸ್ಫೋಟ ಸಂಭವಿಸಿದ್ದು, ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಸ್ಥಳದಲ್ಲಿ ಸ್ಫೋಟಗೊಂಡ ಮಾದರಿ ಸಂಗ್ರಹಿಸಿದ್ದಾರೆ.
ಕುಂದಾಪುರ: ಬೆಂಕಿ ಆಕಸ್ಮಿಕ; ಸಂಪೂರ್ಣವಾಗಿ ಅಗ್ನಿಗಾಹುತಿಯಾದ ಕಾರು
ಕುಂದಾಪುರ, ಜ.31: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ವ್ಯಾಪಿಸಿ ಸಂಪೂರ್ಣ ಕಾರು ಅಗ್ನಿಗೆ ಆಹುತಿಯಾದ ಘಟನೆ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಘಟನೆ ವಿವರ: ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಿಂದ ಶಬ್ದ ಸಹಿತ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಆದರೆ, ಆಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಸ್ವಲ್ಪ ಹೊತ್ತಿನಲ್ಲೇ ಇಡೀ ಕಾರು ಸುಟ್ಟು ಕರಕಲಾಗಿದೆ. ಭಾಸ್ಕರ್ ಆಚಾರ್ ಸಮಯಕ್ಕೆ ಕಾರಿನಿಂದ ಇಳಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿಯಂತೆ ಶಾರ್ಟ್ ಸರ್ಕ್ಯೂಟ್ನಿಂದಲೇ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ ಹಾಗೂ ಕೊಲ್ಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೀದರ್ನಲ್ಲಿ ನಿಗೂಢ ವಸ್ತು ಸ್ಟೋಟ: ಶಾಲಾ ಮಕ್ಕಳಿಗೆ ಗಂಭೀರ ಗಾಯ
ಬೀದರ್ : ಬೀದರ್ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಅನುಮಾನಾಸ್ಪದ ವಸ್ತುವೊಂದು ಸ್ಪೋಟಗೊಂಡಿದೆ. ನಿಗೂಢ ವಸ್ತು ಸ್ಪೋಟದಿಂದಾಗಿ ಶಾಳೆಗೆ ಹೊರಟಿದ್ದ 6 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೆರ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟಗೊಂಡ ಪರಿಣಾಯ ಶಾಲೆಗೆ ತೆರಳುತ್ತಿದ್ದ ಆರು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿವೆ. ಇನ್ನೂ ಈ ಅನುಮಾನಾಸ್ಪ ವಸ್ತುವಿನ ಸ್ಫೋಟದಿಂದಾಗಿ
ಅಮೆರಿಕದಲ್ಲಿ ವಂಚನೆ ಪ್ರಕರಣ| ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡ ಗೌತಮ್ ಅದಾನಿ : ವರದಿ
ಹೊಸದಿಲ್ಲಿ: ಅಮೆರಿಕದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಿಲಿಯನೇರ್ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ನೀಡುವ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್ನ ಬ್ರೂಕ್ಲಿನ್ನ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ, ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಹಾಗೂ ಗೌತಮ್ ಮತ್ತು ಸಾಗರ್ ಅದಾನಿ ಅವರ ಪರವಾದ ವಕೀಲರು, ನಿಯಂತ್ರಕ ಸಂಸ್ಥೆಯ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜಂಟಿ ಅರ್ಜಿಯನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ನ್ಯಾಯಾಧೀಶರು ಒಪ್ಪಿಗೆ ನೀಡಿದರೆ, ಜಂಟಿ ಅರ್ಜಿಯು ಎಸ್ಇಸಿ (SEC) ಪ್ರಕರಣ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ಅದಾನಿಗೆ ವಜಾ ಅರ್ಜಿ ಅಥವಾ ತಮ್ಮ ಪ್ರತಿವಾದ ಸಲ್ಲಿಸಲು 90 ದಿನಗಳ ಸಮಯ ದೊರೆಯುತ್ತದೆ. ನಂತರ ಎಸ್ಇಸಿ ಇನ್ನೂ 60 ದಿನಗಳೊಳಗೆ ತನ್ನ ವಿರೋಧವನ್ನು ಸಲ್ಲಿಸಬಹುದು. ಆ ವಿರೋಧಕ್ಕೆ ಪ್ರತಿಯಾಗಿ ಪ್ರತಿವಾದಿಗಳು 45 ದಿನಗಳ ಒಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕುರಿತು ಸುಳ್ಳು ಹಾಗೂ ದಾರಿ ತಪ್ಪಿಸುವ ಭರವಸೆಗಳನ್ನು ನೀಡುವ ಮೂಲಕ ಅಮೆರಿಕ ಸೆಕ್ಯುರಿಟೀಸ್ ಕಾನೂನುಗಳನ್ನು ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಉಲ್ಲಂಘಿಸಿದ್ದಾರೆ ಎಂದು 2014ರಲ್ಲಿ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ದಾವೆ ಹೂಡಿತ್ತು. ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ನ ಸಿವಿಲ್ ದಾವೆಯೊಂದಿಗೆ, ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಫೆಡರಲ್ ಪ್ರಾಸಿಕ್ಯೂಟರ್ಗಳು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು 250 ದಶಲಕ್ಷ ಡಾಲರ್ ಲಂಚ ನೀಡುವ ಯೋಜನೆಗೆ ನೆರವು ನೀಡಿದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸಿದ್ದರು.
ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ.ರಾಯ್ ಮೃತ್ಯು: ಆದಾಯ ತೆರಿಗೆ ಅಧಿಕಾರಿಗಳಿಂದ ಕಿರುಕುಳ ಎಂದು ಆರೋಪಿಸಿದ ಸೋದರ
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ.ರಾಯ್ ಸಾವಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರ ಸಹೋದರ ಬಾಬು ಸಿ.ಜೆ., ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರಂತರ ಒತ್ತಡದಿಂದ ನನ್ನ ಸಹೋದರ ತೀವ್ರ ಮಾನಸಿಕ ಖಿನ್ನತೆಗೆ ಗುರಿಯಾಗಿದ್ದ ಎಂದು ದೂರಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬು, ಆದಾಯ ತೆರಿಗೆ ಇಲಾಖೆಯಿಂದ ಸಿ.ಜೆ.ರಾಯ್ ಮೇಲೆ ತೀವ್ರ ಒತ್ತಡವಿತ್ತು. ಶುಕ್ರವಾರ ಬೆಳಗ್ಗೆ 10.40 ರ ವೇಳೆಗೆ ನನಗೆ ಕರೆ ಮಾಡಿದ್ದ ರಾಯ್, ತನ್ನನ್ನು ಯಾವಾಗ ಭೇಟಿಯಾಗುತ್ತೀಯಾ ಎಂದು ಕೇಳಿದ. ನಾನು ಥಾಯ್ಲೆಂಡ್ನಲ್ಲಿದ್ದೇನೆ ಎಂದು ಆತನಿಗೆ ತಿಳಿಸಿದೆ ಹಾಗೂ ಶನಿವಾರ ಬೆಳಗ್ಗೆ 7 ಗಂಟೆಗೆ ನಾವಿಬ್ಬರೂ ಭೇಟಿಯಾಗಲು ಯೋಜನೆ ಹಾಕಿದ್ದೆವು ಎಂದು ತಿಳಿಸಿದರು. ರಾಯ್ ತನ್ನ ಜೀವವನ್ನೇ ಕಳೆದುಕೊಳ್ಳುವಂತೆ ಮಾಡುವ ಯಾವುದೇ ಹಣಕಾಸು ಹೊಣೆಗಾರಿಕೆಯಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ಇರಲಿಲ್ಲ. ಆದರೆ, ಕೊಚ್ಚಿಯ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ರಾಯ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರು. ಆದಾಯ ತೆರಿಗೆ ಇಲಾಖೆ ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ದಾಳಿ ನಡೆಸುತ್ತಿದ್ದು, ಸುಮಾರು ಒಂದು ತಿಂಗಳಿನಿಂದ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದೂ ಅವರು ದೂರಿದರು. ಸಿ.ಜೆ.ರಾಯ್ ಅವರ ಅಂತ್ಯಕ್ರಿಯೆ ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಅವರ ಮೃತದೇಹವನ್ನು ಬೆಳಗ್ಗೆ ಅವರ ನಿವಾಸಕ್ಕೆ ತರಲಾಗುತ್ತದೆ ಹಾಗೂ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಇದಾದ ಬಳಿಕ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈ ಘಟನೆಯ ಕುರಿತು ವಿಸ್ತೃತ ತನಿಖೆಗಾಗಿ ಕರ್ನಾಟಕ ಪೊಲೀಸ್ ಇಲಾಖೆ ಆದೇಶಿಸಿದೆ.
ಚಿನ್ನ, ಬೆಳ್ಳಿ ಖರೀದಿದಾರರಿಗೆ ಇಂದು ಸುದಿನ; ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ, ಬೆಂಗಳೂರಿನಲ್ಲಿ ಎಷ್ಟಿದೆ ದರ?
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿರುವ ಹಿನ್ನೆಲೆ, ಬೆಂಗಳೂರಿನಲ್ಲಿ ಅಪ್ಪಟ ಚಿನ್ನ ಮತ್ತು ಆಭರಣ ತಯಾರಿಸುವ ಚಿನ್ನ ಹಾಗೂ ಬೆಳ್ಳಿಯಲ್ಲೂ ಕೊಂಚ ಇಳಿಕೆ ಕಂಡುಬಂದಿದೆ. 24 ಮತ್ತು 22ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಬೆಳ್ತಂಗಡಿ: ಕಾಮಗಾರಿ ವೇಳೆ ತಡೆಗೋಡೆ ಕುಸಿತ; ಕಾರ್ಮಿಕ ಮೃತ್ಯು
ಬೆಳ್ತಂಗಡಿ: ಉಜಿರೆ–ಸೂರ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ತಡೆಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಬಿಹಾರ ಮೂಲದ ರಾಕೇಶ್ ಕುಮಾರ್ (25) ಮೃತ ಕಾರ್ಮಿಕ. ಬೆಳ್ತಂಗಡಿ ತಾಲೂಕಿನ ಉಜಿರೆ–ಸೂರ್ಯ ರಸ್ತೆಯಲ್ಲಿ ಜ.31ರ ಬೆಳಗ್ಗೆ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿದು ಬಿದ್ದ ಪರಿಣಾಮ ರಾಕೇಶ್ ಕುಮಾರ್ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ ಅವರನ್ನು ಹೊರತೆಗೆದು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Gold Price: ಚಿನ್ನದ ಬೆಲೆ 2ನೇ ದಿನವೂ ದಾಖಲೆಯ ಕುಸಿತ: ಹೂಡಿಕೆದಾರರಿಗೆ ಆಘಾತ, ಗ್ರಾಹಕರಿಗೆ ಹರ್ಷ, ಇಂದಿನ ದರಪಟ್ಟಿ
ಬೆಂಗಳೂರು: ಹಲವಾರು ಕಾರಣಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನ -ಬೆಳ್ಳಿ ದರದಲ್ಲಿ ಸತತ ಎರಡನೇ ದಿನ ಶನಿವಾರವೂ ದಾಖಲೆಯ ಇಳಿಕೆ ಕಂಡು ಬಂದಿದೆ. ಈ ದರ ಇಳಿಕೆಯು ಹೂಡಿಕೆದಾರರಿಗೆ ಆಘಾತ ನೀಡಿವೆ. ಮತ್ತೊಂದೆಡೆ ಚಿನ್ನಾಭರಣ ಗ್ರಾಹಕರಿಗೆ ಖರೀದಿಗೆ ಅವಕಾಶ ನೀಡಿದಂತಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. 2026ರ ಮೊದಲ ತಿಂಗಳ
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕೋಲ್ಟಾನ್ ಗಣಿಯಲ್ಲಿ ಭೂಕುಸಿತ ಸಂಭವಿಸಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮಳೆಗಾಲದಲ್ಲಿ ಹೆಚ್ಚಿದ ತೇವಾಂಶದಿಂದಾಗಿ ಈ ದುರಂತ ಸಂಭವಿಸಿದ್ದು, ಗಣಿಗಾರರು, ಮಕ್ಕಳು ಮತ್ತು ಮಹಿಳೆಯರು ಮೃತಪಟ್ಟಿದ್ದಾರೆ. ರುವಾಂಡ ಬೆಂಬಲಿತ ಬಂಡುಕೋರರು ಈ ಪ್ರದೇಶವನ್ನು ನಿಯಂತ್ರಿಸುತ್ತಿದ್ದು, ಖನಿಜ ಸಂಪತ್ತಿನ ಹೊರತಾಗಿಯೂ ಜನರ ಜೀವನ ಮಟ್ಟ ಸುಧಾರಿಸಿಲ್ಲ. ಇನ್ನು, ಈ ನಡುವೆ ಭುಕುಸಿತ ಪ್ರದೇಶದಲ್ಲಿ ಮಣ್ಣಿನ ಅವಶೇಷಗಳಡಿ ಇನ್ನು, ಹಲವರು ಇರುವ ಶಂಕೆಯಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಮತ್ತೆ ಕುಸಿದ ಚಿನ್ನ; ಇಂದಿನ ದರವೆಷ್ಟು?
ಜನವರಿ ಆರಂಭದಿಂದಲೇ ಏರುಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಶುಕ್ರವಾರ ಮತ್ತು ಶನಿವಾರ ತೀವ್ರ ಕುಸಿತ ಕಂಡಿವೆ. ವಾರದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಮನಾರ್ಹವಾಗಿ ಏರಿಕೆಯ ಹಾದಿಯಲ್ಲಿದ್ದವು. ಆದರೆ ಶುಕ್ರವಾರ ಮತ್ತು ಶನಿವಾರ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ದರ 862 ರೂ. ಇಳಿಕೆ ಕಂಡು 16,058ಕ್ಕೆ ತಲುಪಿದೆ. 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ದರ 790 ರೂ. ಇಳಿಕೆ ಕಂಡು 14,720 ಕ್ಕೆ ಇಳಿದಿದೆ. 18 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ದರ 646 ರೂ. ಇಳಿಕೆ ಕಂಡು 12,044 ಕ್ಕೆ ಕುಸಿದಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶನಿವಾರ ಜನವರಿ 31ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,058 (-862) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,720 (-790) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,044 (-646) ರೂ. ಬೆಲೆಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ ಹೇಗಿದೆ? ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 16,073 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,735 (-790) ರೂ. ಇದೆ. ಮುಂಬೈ 24 ಕ್ಯಾರೆಟ್ ಚಿನ್ನದ ದರ 16,058 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,720 (-790) ರೂ. ಇದೆ. ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 16,063 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,725 (-790) ರೂ. ಇದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 16,255 (–1,036) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,900 (-950) ರೂ. ಇದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 16,058 (- 862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,720 (- 790) ರೂ. ಇದೆ. ಹೈದರಾಬಾದ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 16,058 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,720 (- 790) ರೂ. ಇದೆ. ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 16,073 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,735 (-790) ರೂ. ಇದೆ. ಭೋಪಾಲ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 16,063 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,725 (-790) ರೂ. ಇದೆ. ಲಕ್ನೋದಲ್ಲಿ 24 ಕ್ಯಾರೆಟ್ ಚಿನ್ನದ ದರ 16,073 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,735 (-790) ರೂ. ಇದೆ. ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 16,073 (-862) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,735 (-790) ರೂ. ಇದೆ.
Donald Trump: ಅಮೆರಿಕ ಜೊತೆಗೆ ವೆನಿಜುವೆಲಾ ತಿಕ್ಕಾಟ, ಟ್ರಂಪ್ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ದಕ್ಷಿಣ ಅಮೆರಿಕದ ದೇಶಗಳ ನಡುವೆ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಇದು ಇನ್ನೂ ಹೆಚ್ಚಾಗಿದ್ದು, ವೆನಿಜುವೆಲಾ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲದರ ನಡುವೆ ಕೂಡ ಅಮೆರಿಕ ಮಾತ್ರ ವೆನಿಜುವೆಲಾ ವಿಚಾರದಲ್ಲಿ ಕಿರಿಕ್
ತೆಂಗಿನ ಬೆಳೆಗೆ ಬಿಳಿ ನೊಣ, ಕೀಟಗಳ ನಿಯಂತ್ರಣಕ್ಕೆ ಕ್ರಮ: ಎಸ್.ಎಸ್. ಮಲ್ಲಿಕಾರ್ಜುನ್
ಬೆಂಗಳೂರು: ತೆಂಗು ಬೆಳೆಯಲ್ಲಿ ಕಂಡು ಬರುವ ಕಪ್ಪು ತಲೆಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 23 ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ
ಕುಂಡೇಸಿಯ ಬಾಲ್ಯದ ಗಂಡಾಂತರದ ದಿನಗಳು
ಚಿತ್ರ: ವಲವಾರ ನಿರ್ದೇಶನ: ಸುತನ್ ಗೌಡ ನಿರ್ಮಾಣ: ಗಿರಿಧರ್ ಜಯಕುಮಾರ್, ಅನಿರುದ್ಧ್ ಗೌತಮ್ ತಾರಾಗಣ: ಮಾ. ವೇದಿಕ್ ಕೌಶಲ್, ಮಾ. ಶಯನ್, ಹರ್ಷಿತಾ ಗೌಡ ಮೊದಲಾದವರು. ‘ವಲವಾರ’ ಎನ್ನುವ ಹೆಸರೇ ಚಿತ್ರದ ಬಗ್ಗೆ ಮೊದಲ ಕುತೂಹಲವಾಗಿ ಕಾಡುತ್ತದೆ. ತಾರತಮ್ಯ ಎನ್ನುವ ಅರ್ಥ ನೀಡುವ ಈ ಪದವನ್ನು ರಾಜ್ಯದ ಪಶ್ಚಿಮಘಟ್ಟ ಭಾಗದ ಕನ್ನಡಿಗರು ಬಳಸುವುದಾಗಿ ಚಿತ್ರ ಸೂಚಿಸುತ್ತದೆ. ತಂದೆಯೋರ್ವ ತನ್ನ ಇಬ್ಬರು ಮಕ್ಕಳ ಮಧ್ಯೆ ನಡೆಸುವ ತಾರತಮ್ಯ ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಅದೊಂದು ಹಳ್ಳಿಗಾಡು. ಅಲ್ಲಿ ಬಡ ದಂಪತಿ ತಮ್ಮ ಇಬ್ಬರು ಪುಟ್ಟ ಗಂಡು ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ತಾಯಿ ಇಬ್ಬರಿಗೂ ಮುದ್ದಿನಿಂದ ಅಡ್ಡ ಹೆಸರಿಟ್ಟಿರುತ್ತಾಳೆ. ಕಿರಿಯವನು ಕೋಸುಡಿಯಾದರೆ ಹಿರಿಯವನು ಕುಂಡೇಸಿ. ಇಬ್ಬರ ವಯಸ್ಸಿನ ಮಧ್ಯೆ ಹೆಚ್ಚಿನ ಅಂತರವಿಲ್ಲ. ಆದರೆ ಕಿರಿ ಮಗನನ್ನು ಪ್ರೀತಿಸುವ ತಂದೆ ಹಿರಿ ಮಗನಿಗೆ ಹೊಡೆಯುವುದೇ ಹೆಚ್ಚು. ಇದರಿಂದ ತಂದೆ ಮೇಲೆ ಕಿಚ್ಚು ಮೂಡಿಸಿಕೊಳ್ಳುವ ಹುಡುಗ ಮುಂದೇನು ಮಾಡುತ್ತಾನೆ ಎನ್ನುವುದೇ ಚಿತ್ರದ ಕಥಾ ವಿಷಯ. ಕಿರಿಯ ಪುತ್ರ ಕೋಸುಡಿ ತಂದೆ ತಾಯಿ ಇಬ್ಬರ ಮುದ್ದಿನಿಂದ ಬೆಳೆದವನು. ಹೀಗಾಗಿಯೇ ತಂದೆಯ ಹೆಸರು ಹೇಳಿ ಅಣ್ಣ ಕುಂಡೇಸಿಯನ್ನು ಬೆದರಿಸಬಲ್ಲ. ತಂದೆಗೆ ಅಣ್ಣನ ಮೇಲಿರುವ ದ್ವೇಷವನ್ನೇ ಕೋಸುಡಿ ತನ್ನ ಶಕ್ತಿಯಾಗಿ ಬಳಸುತ್ತಿರುತ್ತಾನೆ. ಇದನ್ನು ಅರ್ಥಮಾಡಿಕೊಂಡ ತಾಯಿ ಸದಾ ಕುಂಡೇಸಿ ಪರವಾಗಿ ಇರುತ್ತಾಳೆ. ಆದರೆ ತಂದೆಯಂತೆ ತನ್ನ ತಾಯಿ ಇಬ್ಬರು ಮಕ್ಕಳ ಮಧ್ಯೆ ವಲವಾರ ಮಾಡುವುದಿಲ್ಲ ಎಂದು ಬಲವಾಗಿ ನಂಬಿರುವವನು ಕುಂಡೇಸಿ. ಈತ ಬಹಳಷ್ಟು ಬಾರಿ ತಪ್ಪೇ ಮಾಡಿರುವುದಿಲ್ಲ. ಆದರೆ ತಮ್ಮನ ಸುಳ್ಳು ಆರೋಪಗಳಿಂದಾಗಿ ತಂದೆಯಿಂದ ಏಟು ತಿನ್ನುತ್ತಿರುತ್ತಾನೆ. ಇಂಥ ಬಡಪಾಯಿ ಒಮ್ಮೆ ನಿಜಕ್ಕೂ ದೊಡ್ಡ ತಪ್ಪನ್ನೇ ಮಾಡುತ್ತಾನೆ. ಮೇಯಿಸಲೆಂದು ಕರೆದೊಯ್ದ ಗಬ್ಬದ ದನ ಗೌರ ಕುಂಡೇಸಿಯದೊಂದು ತಪ್ಪಿನಿಂದಾಗಿ ನಾಪತ್ತೆಯಾಗುತ್ತದೆ. ಆ ಹುಡುಗ ಅದರ ಹುಡುಕಾಟ ಹೇಗೆ ಮಾಡುತ್ತಾನೆ? ದನ ಕಂಡರೂ ಕೈಗೆ ಸಿಗದಂತೆ ಕಾಡುವ ಸಂದರ್ಭ ಬರುವುದು ಯಾಕೆ? ಇಷ್ಟೊಂದು ದೊಡ್ಡ ತಪ್ಪಿನ ನಡುವೆ ತಂದೆಯ ವಲವಾರ ಬದಲಾಗುವ ಸಾಧ್ಯತೆ ಇದೆಯಾ? ಇವೆಲ್ಲವನ್ನು ನಿರ್ದೇಶಕ ಸುತನ್ ಗೌಡ ಆಕರ್ಷಕವಾಗಿ ತೆರೆಗಿಳಿಸಿದ್ದಾರೆ. ಕುಂಡೇಸಿಯಾಗಿ ಬಾಲ ನಟ ವೇದಿಕ್ ಕೌಶಲ್ ನಟನೆ ಆಕರ್ಷಕ. ತಾನು ಎತ್ತಿಟ್ಟ ಹಣವನ್ನು ತಾನಾಗಿಯೇ ತಾಯಿಯ ಕೈಗೆ ನೀಡುವ ದೃಶ್ಯ ಒಂದಿದೆ. ಅದೊಂದರಲ್ಲೇ ನಿರ್ದೇಶಕರು ಈ ಹುಡುಗನನ್ನು ಪ್ರೇಕ್ಷಕರ ಮನದೊಳಗೆ ಸೇರಿಸಿಬಿಡುತ್ತಾರೆ. ಕಿರಿಯ ಹುಡುಗ ಕೋಸುಡಿಯಾಗಿ ನಟಿಸಿರುವ ಶಯನ್ನಿಂದಲೂ ನೈಜ ನಟನೆ ಹೊರ ತೆಗೆಸಿರುವುದನ್ನು ಮೆಚ್ಚಲೇಬೇಕು. ಇಬ್ಬರು ಮಕ್ಕಳ ತಾಯಿಯಾಗಿ, ಗಂಡನನ್ನು ಅನುಸರಿಸುವ ಪತ್ನಿಯಾಗಿ ಹರ್ಷಿತಾ ಗೌಡ ಅಭಿನಯಿಸಿದ್ದಾರೆ.ಕುಂಡೇಸಿಯನ್ನು ಕಂಡರಾಗದು ಎನ್ನುವಂತಾಡುವ ತಂದೆಯಾಗಿ ಮಾಲತೇಶ್ ನಟಿಸಿದ್ದಾರೆ. ಚಿತ್ರದಲ್ಲಿ ಬೆರಳೆಣಿಕೆಯ ಪಾತ್ರಗಳಷ್ಟೇ ಇದ್ದರೂ ಅವುಗಳಲ್ಲೇ ಹಳ್ಳಿಯ ಬೆರಗನ್ನು ಕಟ್ಟಿಕೊಡಲಾಗಿದೆ. ಗಬ್ಬದ ದನ ಗೌರ ಕೂಡ ಒಂದು ಪ್ರಧಾನ ಪಾತ್ರವಾಗಿದೆ. ಕೋಳಿಯಿಂದ ಹಿಡಿದು ನವಜಾತ ಕರುವಿನ ತನಕ ಎಲ್ಲವೂ ಪಾತ್ರವನ್ನು ಅರಿತು ನಟಿಸಿದಂತಿದೆ. ಪೋಲಿ ಹುಡುಗ ಮುದ್ದುಕುಮಾರನ ಪಾತ್ರದಲ್ಲಿ ಅಭಯ್ ಜೀವಿಸಿದ್ದಾರೆ. ಇಂಥದೊಂದು ಪಾತ್ರದಿಂದಲೂ ಕುಂಡೇಸಿಗೆ ಜೀವನ್ಮುಖಿ ಸಂದೇಶಗಳನ್ನು ಕೊಡಿಸಲಾಗಿದೆ. ಪಾತ್ರಧಾರಿಗಳ ವಸ್ತ್ರದಿಂದ ಹಿಡಿದು ಕೋಳಿ ಒಯ್ಯುವ ಚೀಲದ ತನಕ ಪ್ರಸಾಧನ, ಕಲೆ ಸೇರಿದಂತೆ ಬಾಲರಾಜ್ ಗೌಡ ಛಾಯಾಗ್ರಹಣ ಎಲ್ಲವೂ ಅಚ್ಚುಕಟ್ಟು. ಸಿಂಕ್ ಸೌಂಡ್ ತಂತ್ರಜ್ಞಾನ ಸೌಂಡ್ ಮಾಡಿದೆ. ಆದರೆ ಮಕ್ಕಳ ಮೈಗೆ ಕಟ್ಟಿದ ಮೈಕ್ ಒಂದೆರಡು ದೃಶ್ಯಗಳಲ್ಲಿ ಗೋಚರವಾಗಿಬಿಡುತ್ತದೆ. ಮಣಿಕಾಂತ್ ಕದ್ರಿ ಸಂಗೀತ ಮಕ್ಕಳ ಧ್ವನಿಯೇ ಆದಂತಿದೆ. ಮಕ್ಕಳ ಬಗ್ಗೆಯೇ ಸಾಗುವ ಕಥೆಯನ್ನು ಎಲ್ಲರೂ ಆಸಕ್ತಿಯಿಂದ ನೋಡುವ ಚಿತ್ರವಾಗಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು.
ಪದ್ಮ ಪ್ರಶಸ್ತಿಗಳು ಮತ್ತು ಚುನಾವಣಾ ರಾಜಕೀಯ
ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಭಾರತ ರತ್ನವೂ ಸೇರಿದಂತೆ ಎಲ್ಲ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಾಗೆ ನೋಡಿದರೆ, ಈ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಕ್ಷಾತೀತವಾಗಿ ಕೇವಲ ಸಾಧನೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ನೀಡಬೇಕು. ಆಗ ಆ ಪ್ರಶಸ್ತಿಗಳಿಗೂ ಗೌರವ ಮತ್ತು ಪ್ರಶಸ್ತಿ ಸ್ವೀಕರಿಸಿದವರಿಗೂ ಹೆಮ್ಮೆಯ ಭಾವ ಉಂಟಾಗುತ್ತದೆ. ‘ಭಾರತ ರತ್ನ’ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಕೇವಲ ಪ್ರತಿಭೆ ಮತ್ತು ಸಾಧನೆ ಆಧರಿಸಿ ನೀಡುವ ಪರಿಪಾಠ ನೆಹರೂ ಕಾಲದಿಂದಲೂ ಪಾಲಿಸಿಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸುದೀರ್ಘ ಕಾಲ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷವೂ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ನಿಷ್ಪಕ್ಷವಾಗಿ ನಡೆದುಕೊಂಡಿಲ್ಲ. ಆದರೆ ನರೇಂದ್ರ ಮೋದಿಯವರಷ್ಟು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಜಾಣ್ಮೆ ಪ್ರದರ್ಶಿಸಿಲ್ಲ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಜನಪ್ರಿಯ ನಟರೂ ಆಗಿದ್ದ ಎಂ.ಜಿ. ರಾಮಚಂದ್ರನ್ ಅವರಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ‘ಭಾರತ ರತ್ನ’ ನೀಡಲಾಯಿತು. ದುರಂತವೆಂದರೆ, ಅದೇ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡುವ ಜಾಣ್ಮೆ ಮತ್ತು ಔದಾರ್ಯ ತೋರಲಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನೇಕ ಅನರ್ಹರನ್ನು ಜಾತಿಯ ಕಾರಣಕ್ಕೆ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಪದ್ಮ ಪ್ರಶಸ್ತಿಗಳೂ ಅನರ್ಹರ ಪಾಲಾಗಿವೆ. ಸಿನೆಮಾದ ಜನಪ್ರಿಯತೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ‘ಭಾರತ ರತ್ನ’ ನೀಡುವುದಾದರೆ ಎಂ.ಜಿ. ರಾಮಚಂದ್ರನ್ ಅವರಿಗಿಂತ ಮೊದಲು ಎನ್.ಟಿ. ರಾಮರಾವ್, ಡಾ. ರಾಜ್ಕುಮಾರ್ ಮುಂತಾದವರಿಗೆ ಕೊಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಪರಿಗಣಿಸದೆ ಅನೇಕ ಅನರ್ಹರಿಗೆ ನೀಡುವ ಮೂಲಕ ಅದರ ಘನತೆ ಗೌರವ ಕಡಿಮೆ ಮಾಡಿತ್ತು. ವಿ.ಪಿ. ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂದಿನ ಸಮ್ಮಿಶ್ರ ಸರಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತು. ವ್ಯಂಗ್ಯವೆಂದರೆ ಆ ಸಮ್ಮಿಶ್ರ ಸರಕಾರದಲ್ಲಿ ಭಾರತೀಯ ಜನತಾ ಪಕ್ಷವೂ ಪಾಲುದಾರ ಆಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗಲೆಲ್ಲ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಕೇವಲ ಜಾತಿಯ ಕಾರಣಕ್ಕೆ ಅನರ್ಹರಿಗೆ ನೀಡಲಾಗಿದೆ. ಆದರೆ ನರೇಂದ್ರ ಮೋದಿಯವರು ‘ಭಾರತ ರತ್ನ’ ನೀಡುವಾಗಲಂತೂ ಚುನಾವಣಾ ರಾಜಕೀಯದ ಲಾಭ ಹಾನಿಗಳನ್ನು ಪ್ರಧಾನವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಅಸ್ಸಾಂ ಚುನಾವಣೆಯ ಸಂದರ್ಭದಲ್ಲಿ ಆ ರಾಜ್ಯದ ಹಿರಿಯ ಗಾಯಕ ಭೂಪೆನ್ ಹಝಾರಿಕ ಅವರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಲಾಗುತ್ತದೆ. ಭೂಪೆನ್ ಹಝಾರಿಕ ಅವರು ಲತಾ ಮಂಗೇಶ್ಕರ್ ಅವರಿಗೆ ಗುರು ಸಮಾನರು. ಆದರೆ ಲತಾ ಮಂಗೇಶ್ಕರ್ ಅವರಿಗೆ ಮೊದಲೇ ‘ಭಾರತ ರತ್ನ’ ನೀಡಲಾಗಿತ್ತು. ಮಹಾರಾಷ್ಟ್ರ ಚುನಾವಣೆ ಸಮೀಪಸುತ್ತಿದಂತೆ ಮೋದಿಯವರು ಜನಸಂಘದ ಸ್ಥಾಪಕ ನಾನಾಜಿ ದೇಶ್ಮುಖ್ ಅವರಿಗೆ ‘ಭಾರತ ರತ್ನ’ ದಯಪಾಲಿಸುತ್ತಾರೆ. ಬಿಹಾರ ಚುನಾವಣೆಗೂ ಮುಂಚೆ ಹಿರಿಯ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಮೋದಿ ಸರಕಾರ ‘ಭಾರತ ರತ್ನ’ ಪ್ರಕಟಿಸಿತ್ತು. ಲೋಕಸಭಾ ಚುನಾವಣೆಗೂ ಮುಂಚೆ ಹಿರಿಯ ರೈತ ನಾಯಕ ಚೌಧರಿ ಚರಣಸಿಂಗ್ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ಮೋದಿಯವರು ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸಿದರು. ‘ಭಾರತ ರತ್ನ’ ಮಾತ್ರವಲ್ಲ, ಪದ್ಮ ಪ್ರಶಸ್ತಿಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಮಹಾರಾಷ್ಟ್ರ ಚುನಾವಣೆ ಸಮೀಪಿಸಿದಾಗ ಶರದ್ ಪವಾರ್ ಅವರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿದರು. ಪಶ್ಚಿಮ ಬಂಗಾಳ ಚುನಾವಣೆಗೂ ಮುಂಚೆ ಕಮ್ಯುನಿಸ್ಟ್ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಪದ್ಮ ಗೌರವ ನೀಡಲು ಮುಂದಾಗಿದ್ದರು. ಆದರೆ ಬುದ್ಧದೇವ್ ಅವರು ಮೋದಿಯವರು ನೀಡುವ ರಾಜಕೀಯ ಗೌರವವನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ. ಪ್ರತೀ ಬಾರಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸುವಾಗ ಮೋದಿ-ಅಮಿತ್ ಶಾ ಅವರಿಗೆ ರಾಜಕೀಯ ಲಾಭ ಹಾನಿಗಳು ಮುಖ್ಯವಾಗಿರುತ್ತವೆ. ಮೋಹನ್ ಭಾಗವತ್ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರನ್ನು ಮೋದಿ-ಅಮಿತ್ ಶಾ ಜೋಡಿ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಸಂಘದ ಹಿರಿಯ ಮುಖಂಡರನ್ನು ಸಮಾಧಾನಪಡಿಸಲು ಪದ್ಮ ಪ್ರಶಸ್ತಿಗಳನ್ನು ಬಳಸಿಕೊಳ್ಳುತ್ತಾರೆ. ಸಂಘದ ಹಿರಿಯರು ಸೂಚಿಸಿದ ನಾಲ್ಕೆಂಟು ಜನರಿಗೆ ಪದ್ಮ ಪ್ರಶಸ್ತಿ ನೀಡಿದರೆ ಸಾಕು ಆನಂದ ತುಂದಿಲರಾಗುತ್ತಾರೆ. ಸಂಘದ ಹಿರಿಯರಲ್ಲಿ ಕೆಲವರು ತಮ್ಮ ಸಮುದಾಯಕ್ಕೆ ಸೇರಿದ ಸಾಹಿತಿ, ವಿಜ್ಞಾನಿ ಅಥವಾ ಕಲಾವಿದರ ಹೆಸರು ಸೂಚಿಸಿ ಸಮಾಧಾನಪಟ್ಟು ಕೊಳ್ಳುತ್ತಾರೆ. ಹಾಗಾಗಿಯೇ ಕಳೆದ ಹನ್ನೊಂದು ವರ್ಷಗಳಲ್ಲಿ ಸಂಘನಿಷ್ಠ ಕಲಾವಿದರು ಮತ್ತು ಬುದ್ಧಿಜೀವಿಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳು ಸಂದಿವೆ. ಬಿಜೆಪಿ ಪರ ಅಥವಾ ಸಂಘನಿಷ್ಠ ಪತ್ರಕರ್ತರು, ಸಮಾಜ ಸೇವಕರು, ಕಲಾವಿದರು ಪದ್ಮ ಪ್ರಶಸ್ತಿಗೆ ಭಾಜನರಾಗಿರುವುದು ಗಮನಿಸಬಹುದು. ಸಂಘನಿಷ್ಠರನ್ನು ಹೊರತು ಪಡಿಸಿ ಚುನಾವಣಾ ರಾಜಕೀಯ ಲೆಕ್ಕಾಚಾರದಲ್ಲಿ ಹಲವರಿಗೆ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಬಿಹಾರದ ಕರ್ಪೂರಿ ಠಾಕೂರ್ ಹೇಳಿಕೇಳಿ ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕ. ರಾಮಮನೋಹರ್ ಲೋಹಿಯಾ ಅವರ ಶಿಷ್ಯ. ಚುನಾವಣಾ ರಾಜಕೀಯ ಕಾರಣಕ್ಕೆ ಅವರಿಗೆ ‘ಭಾರತ ರತ್ನ’ ನೀಡಲಾಯಿತು. ಬಿಹಾರ ರಾಜ್ಯದಲ್ಲಿ ಕರ್ಪೂರಿ ಠಾಕೂರ್ ಅವರ ಶಿಷ್ಯ ಬಳಗ ಅಪಾರ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ಅವರ ಶಿಷ್ಯ. ಮೇಲ್ನೋಟಕ್ಕೆ ಮೋದಿ ನಡೆ ಗುಣಗ್ರಾಹಿ ಎನಿಸಿಕೊಂಡರೂ ಆಳದಲ್ಲಿ ಅದು ಅವಕಾಶವಾದಿ ಲೆಕ್ಕಾಚಾರ ಹೊಂದಿರುತ್ತದೆ. ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಐದು ಪದ್ಮ ವಿಭೂಷಣ, ಹದಿಮೂರು ಪದ್ಮಭೂಷಣ ಮತ್ತು 113 ಪದ್ಮಶ್ರೀ ಸೇರಿವೆ.ಗಮನಿಸಬೇಕಾದ ಸಂಗತಿಯೆಂದರೆ, ಐದು ಪದ್ಮವಿಭೂಷಣಗಳಲ್ಲಿ ಮೂರು ಕೇರಳ ರಾಜ್ಯದವರಿಗೆ ನೀಡಲಾಗಿದೆ. ಒಂದು ತಮಿಳುನಾಡು ರಾಜ್ಯದವರಿಗೆ ಇನ್ನೊಂದು ಮಹಾರಾಷ್ಟ್ರ ಅಂತ ತೋರಿಸಿದ್ದಾರೆ. ಆದರೆ ಹಿರಿಯ ಚಿತ್ರ ನಟ ಧರ್ಮೇಂದ್ರ ಮೂಲತಃ ಮಹಾರಾಷ್ಟ್ರದವರಲ್ಲ. ಹಿರಿಯ ಸಂಗೀತ ಕಲಾವಿದೆ ಎನ್. ರಾಜಮ್ಮ ಮೂಲತಃ ತಮಿಳುನಾಡಿನವರು. ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರನ್ನು ಉತ್ತರ ಪ್ರದೇಶದವರು ಎಂದು ಗುರುತಿಸಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಅಂದರೆ ಹನ್ನೊಂದು ಪದ್ಮ ಪ್ರಶಸ್ತಿಗಳು ಮಹಾರಾಷ್ಟ್ರ ರಾಜ್ಯದವರ ಪಾಲಾಗಿವೆ. ಆರೆಸ್ಸೆಸ್ ಹೆಡ್ಕ್ವಾರ್ಟರ್ ಇರುವುದು ಮಹಾರಾಷ್ಟ್ರದ ನಾಗಪುರದಲ್ಲಿ. ಸಂಘದ ಹಿರಿಯರು ನೀಡಿದ ಹೆಸರುಗಳನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಹನ್ನೊಂದು ಜನ ಪದ್ಮ ಪುರಸ್ಕೃತರು ಮಹಾರಾಷ್ಟ್ರದವರಿದ್ದಾರೆ. ಪಶ್ಚಿಮ ಬಂಗಾಳದ ಹನ್ನೊಂದು ಜನರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ ರಾಜ್ಯವು ಚುನಾವಣೆ ಎದುರಿಸುವ ಅತ್ಯಂತ ಮಹತ್ವದ ರಾಜ್ಯವಾಗಿದೆ. ಹಿರಿಯ ನಟ ಮಮ್ಮುಟ್ಟಿ ಕೇರಳ ರಾಜ್ಯದವರು. ಅವರನ್ನು ಈ ಬಾರಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಮಮ್ಮುಟ್ಟಿಯವರಿಗೆ ಎಂದೋ ಪದ್ಮವಿಭೂಷಣವೇ ನೀಡಿ ಗೌರವಿಸಬೇಕಿತ್ತು. ಅವರಿಗಿಂತ ಕಿರಿಯರಾದ ಮೋಹನ್ ಲಾಲ್, ಚಿರಂಜೀವಿ, ಕಮಲ್ ಹಾಸನ್ ಅವರಿಗೆ ಬಹಳ ಹಿಂದೆಯೇ ಪದ್ಮ ಭೂಷಣ ನೀಡಲಾಗಿದೆ. ಮಮ್ಮುಟ್ಟಿ ಮೊದಲಿನಿಂದಲೂ ಬಿಜೆಪಿ ಆರಾಧಕರಲ್ಲ. ಸಂಗೀತ ನಿರ್ದೇಶಕ ಇಳಯರಾಜ, ಚಿತ್ರನಟರಾದ ರಜನೀಕಾಂತ್, ಮೋಹನ್ ಲಾಲ್, ಗಾಯಕ ಯೇಸುದಾಸ್ ಮುಂತಾದವರು ಮೋದಿ ಭಕ್ತರು. ಆ ಕಾರಣಕ್ಕೆ ಅವರಿಗೆ ಈ ಹಿಂದೆಯೇ ಪದ್ಮ ಗೌರವ ಮತ್ತು ರಾಜಕೀಯ ಸ್ಥಾನಮಾನ ಸಂದಿವೆ. ಇಳಯರಾಜ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಬಿಜೆಪಿ ಸರಕಾರ ನಾಮಕರಣ ಮಾಡಿದೆ. ಕೇರಳದಲ್ಲಿ ಚುನಾವಣೆ ನಡೆಯುವ ಸಂದರ್ಭ ಎದುರಾಗಿದ್ದರಿಂದ ಅನಿವಾರ್ಯವಾಗಿ ಮಮ್ಮುಟ್ಟಿಯವರಿಗೆ ಪದ್ಮಭೂಷಣ ನೀಡಲಾಗಿದೆ. 2012ರಲ್ಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ದಶಕಗಳೇ ಕಳೆದಿವೆ. ಈಗ ಹಿರಿಯ ಚಿತ್ರ ನಟ ಮಮ್ಮುಟ್ಟಿ ಹೆಸರು ನೆನಪಿಗೆ ಬಂದಿದೆ. ಮಮ್ಮುಟ್ಟಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಮತ್ತು ಸೈದ್ಧಾಂತಿಕವಾಗಿ ಬಿಜೆಪಿಯನ್ನು ಇಷ್ಟಪಡದವರು. ಈ ಬಾರಿ ಕೇರಳದ ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ್ದ ಅಚ್ಯುತಾನಂದನ್ ತಮ್ಮ ಬದುಕಿನುದ್ದಕ್ಕೂ ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ತತ್ವಗಳನ್ನು ವಿರೋಧಿಸಿದವರು. ಮೋದಿ ಮತ್ತು ಅಮಿತ್ ಶಾ ಅವರಿಗೆ ಹೇಗಾದರೂ ಮಾಡಿ ಕೇರಳ ರಾಜ್ಯದಲ್ಲಿ ಕೇಸರಿ ಧ್ವಜ ಹಾರಿಸಬೇಕಿದೆ. ಹಾಗಾಗಿ ಅವರು ಕಮ್ಯುನಿಸ್ಟ್ ಪಕ್ಷವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ವಿಸ್ತಾರವಾಗಿದ್ದೇ ಕಮ್ಯುನಿಸ್ಟ್ ಕೋಟೆ ಛಿದ್ರಗೊಳಿಸಿದ್ದರಿಂದ. ಅಚ್ಯುತಾನಂದನ್ ಕುಟುಂಬವೂ ಪದ್ಮವಿಭೂಷಣ ಪ್ರಶಸ್ತಿ ಒಪ್ಪಿಕೊಂಡಿದೆ. ವಿ.ಎಸ್. ಅಚ್ಯುತಾನಂದನ್ ಕೇರಳದಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಳವ ಸಮುದಾಯಕ್ಕೆ ಸೇರಿದವರು. ಈ ಬಾರಿಯ ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ತದ್ವಿರುದ್ಧ ನಿಲುವು ಅನುಸರಿಸಲಾಗಿದೆ. ಒಂದಕ್ಕೊಂದು ತಾಳಮೇಳವೇ ಇಲ್ಲ. ವಿ. ಎಸ್. ಅಚ್ಯುತಾನಂದನ್ ಕಮ್ಯುನಿಸ್ಟ್ ಸಿದ್ಧಾಂತ ಅಪ್ಪಿಕೊಂಡವರು. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಆರೆಸ್ಸೆಸ್ ಮೂಲದವರು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದಾಗ ರಾತ್ರೊರಾತ್ರಿ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿ ಸರಕಾರ ಅತಂತ್ರಗೊಳಿಸಲು ಯತ್ನಿಸಿದವರು. ಜಾರ್ಖಂಡ್ನ ಹಿರಿಯ ನಾಯಕ ಶಿಬು ಸೊರೇನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಗಿದೆ. ಜೆಎಂಎಂ ಲಂಚ ಪ್ರಕರಣದಲ್ಲಿ ಶಿಬು ಸೂರೇನ್ ಆರೋಪಿಯಾಗಿದ್ದರು. ಶಿಬು ಸೊರೇನ್ ಅವರಿಗೆ ಪದ್ಮ ಗೌರವ ದಯಪಾಲಿಸಿದ್ದು ಮಾತ್ರ ರಾಜಕೀಯ ಕಾರಣಕ್ಕೆ. ದ್ವೇಷ ಭಾಷಣಕ್ಕೆ ಹೆಸರುವಾಸಿಯಾದ ವೆಲ್ಲಪಳ್ಳಿ ನಟೇಶನ್ ಅವರಿಗೆ ಪದ್ಮ ಗೌರವ ನೀಡಿದ್ದಾರೆ. ಒಟ್ಟು ಹದಿನಾಲ್ಕು ಜನರಿಗೆ ಮರಣೋತ್ತರವಾಗಿ ಪದ್ಮ ಗೌರವ ನೀಡಿದ್ದಾರೆ. ಅದರಲ್ಲಿ ಹಿರಿಯ ಚಿತ್ರ ನಟ ಧರ್ಮೇಂದ್ರ, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಪ್ರಮುಖರು. ಬಿಜೆಪಿ ಸಂಸದೆ ಹೇಮಾ ಮಾಲಿನಿಯವರ ಪತಿ ಧರ್ಮೇಂದ್ರ ಅವರಿಗೆ ಬದುಕಿದ್ದಾಗಲೇ ಪದ್ಮಭೂಷಣ ನೀಡಬಹುದಿತ್ತು. ಇನ್ನು ಕರ್ನಾಟಕದ ಎಂಟು ಜನರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶತಾವಧಾನಿ ಗಣೇಶ್ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಗಣೇಶ್ ಅವರಿಗಿಂತ ಹಿರಿಯರು ಹಲವರಿದ್ದಾರೆ. ಆದರೆ ಅವರ್ಯಾರೂ ಆರೆಸ್ಸೆಸ್ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡವರಲ್ಲ. ಜಿ.ಎಸ್. ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲರಂಥ ಹಿರಿಯ ಸಾಹಿತಿಗಳಿಗೆ ಸಿಗದ ಪದ್ಮಭೂಷಣ ಗೌರವ ಶತಾವಧಾನಿ ಗಣೇಶ್ ಅವರಿಗೆ ದೊರೆತಿದೆಯೆಂದರೆ ಅದನ್ನು ಅನುಮಾನದಿಂದಲೇ ನೋಡಬೇಕು. ಗಣೇಶ್ ಆಯ್ಕೆ ಅಪ್ಪಟ ಜಾತಿವಾದಿ ಆರೆಸ್ಸೆಸ್ ಮುಖಂಡರ ಆಯ್ಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಪದ್ಮ ಗೌರವಕ್ಕೆ ಭಾಜನರಾಗಿರುವ ಕರ್ನಾಟಕದ ಒಟ್ಟು ಎಂಟು ಜನರಲ್ಲಿ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಹಿಮೋಫಿಲಿ ವೈದ್ಯ ಡಾ. ಸುರೇಶ್ ಹನಗವಾಡಿ ಹೊರತು ಪಡಿಸಿದರೆ ಉಳಿದ ಆರು ಜನರು ಯಾವ ಮಾನದಂಡದಲ್ಲೂ ಜನ ಮೆಚ್ಚುವ ಸಾಧಕರಲ್ಲ. ಶುಭಾ ವೆಂಕಟೇಶ್ ಅಯ್ಯಂಗಾರ್, ಉದ್ಯಮಿ ಟಿ.ಟಿ. ಜಗನ್ನಾಥ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪದ್ಮ ಗೌರವಕ್ಕೆ ಪಾತ್ರರಾದ ಶಶಿಶೇಖರ ವೆಂಪತಿ ಪಕ್ಕಾ ಆರೆಸ್ಸೆಸ್ ಆಯ್ಕೆ. ಅಂಕೆಗೌಡರ ಬದಲಿಗೆ ಪುಸ್ತಕಮನೆ ಹರಿಹರಪ್ರಿಯರನ್ನು ಪದ್ಮ ಗೌರವಕ್ಕೆ ಆಯ್ಕೆ ಮಾಡಿದ್ದರೂ ಉತ್ತಮ ಆಯ್ಕೆ ಎನಿಸಿಕೊಳ್ಳುತ್ತಿತ್ತು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ ವಿಭಾಗದಲ್ಲಿ ಪದ್ಮಶ್ರೀಗೆ ಆಯ್ಕೆಯಾದ ಪ್ರಭಾಕರ್ ಕೋರೆ ಪದ್ಮ ಗೌರವಕ್ಕೆ ಕಳಂಕ. ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದವರು ಸಪ್ತರ್ಶಿಗಳು. ಎಸ್.ಎಸ್. ಬಸವನಾಳ, ಬಿ.ಬಿ. ಮಮದಾಪುರ, ಎಂ. ಆರ್. ಸಾಖರೆ, ಎಚ್.ಎಫ್. ಕಟ್ಟಿಮನಿ, ಬಿ.ಎಸ್. ಹಂಚಿನಾಳ, ಪಿ.ಆರ್. ಚಿಕೋಡಿ, ವಿ.ವಿ. ಪಾಟೀಲ್ ತ್ಯಾಗದ ಫಲವಾಗಿ ಸಂಸ್ಥೆ ಹುಟ್ಟಿಕೊಂಡಿತ್ತು. ರಾವ್ ಬಹಾದ್ದೂರ್ ಅರಟಾಳ ರುದ್ರಗೌಡರು, ರಾವ್ ಬಹಾದ್ದೂರ್, ವಿ.ಜಿ. ನಾಯಕ ಮತ್ತು ರಾವ್ ಬಹಾದ್ದೂರ್ ವೈಜಪ್ಪ ಅನಿಗೋಳ ಉದಾರವಾಗಿ ದಾನ ಮಾಡಿದ್ದರ ಪರಿಣಾಮವಾಗಿ ಆ ಸಂಸ್ಥೆ ಬೆಳೆದಿದೆ. ಪ್ರಭಾಕರ್ ಕೋರೆ ಲಾಭಕೋರ ಅಷ್ಟೇ. ಸ್ವಂತ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬೆಳೆಸಿದವರಿಗೆ ಈ ಪ್ರಶಸ್ತಿ ನೀಡಿದರೂ ಸಾರ್ಥಕ ಎನಿಸುತ್ತಿತ್ತು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ರಾಜಕೀಯವನ್ನೇ ಉಸಿರಾಡುವವರು. ಅವರಿಗೆ ಸಾಧಕರು ಬೇಕಾಗಿಲ್ಲ. ಎಲ್ಲವೂ ಬಿಕರಿಗೆ ಇಟ್ಟು ಚುನಾವಣೆ ಗೆಲ್ಲಬೇಕಿದೆ. ಪದ್ಮ ಗೌರವಗಳನ್ನು ಲಾಭಕ್ಕಾಗಿ ಹಂಚಿದ್ದಾರೆ. ಸಾಹಿತ್ಯ, ಕಲೆ, ನಿಜವಾದ ಸಮಾಜ ಸೇವೆ ಅವರಿಗೆ ಬೇಕಿಲ್ಲ. ಚುನಾವಣೆಯಲ್ಲಿ ಲಾಭ ತಂದುಕೊಡುವ ಸಾಧಕರಿಗೆ ಮಾತ್ರ ಮನ್ನಣೆ. ನಿಜವಾದ ಸಾಧಕರು ಪದ್ಮ ಗೌರವದಿಂದ ದೂರ ಉಳಿಯುವುದೇ ಲೇಸು.
ಸುನೇತ್ರಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನನಗೆ ತಿಳಿದಿಲ್ಲ: ಶರದ್ ಪವಾರ್
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವರದಿಗಳ ನಡುವೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ತಿಳಿದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನಮ್ಮ ಜೊತೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ಬಗ್ಗೆ ಪತ್ರಿಕೆ ವರದಿಗಳ ಮೂಲಕವೇ ತಿಳಿದುಕೊಂಡೆ ಎಂದು ಶರದ್ ಪವಾರ್ ಹೇಳಿದ್ದಾರೆ. “ಅಜಿತ್ ಪವಾರ್ ಅವರ ನಿಧನದ ನಂತರ, ಎನ್ಸಿಪಿ ಸುನೇತ್ರಾ ಪವಾರ್ ಅವರನ್ನು ತಮ್ಮ ಪಕ್ಷದ ನಾಯಕಿಯಾಗಿ ನೇಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಅವರ ಆಂತರಿಕ ವಿಷಯ. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಟುಂಬವಾಗಿ ನಾವು ಒಟ್ಟಿಗೆ ಇದ್ದೇವೆ. ಆದರೆ, ರಾಜಕೀಯ ಬೇರೆ ಬೇರೆ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು. ಎನ್ಸಿಪಿ ಎರಡೂ ಬಣಗಳ ವಿಲೀನದ ಮಾತುಕತೆ ಕಳೆದ ನಾಲ್ಕು ತಿಂಗಳಿನಿಂದ ಚರ್ಚೆಯಲ್ಲಿತ್ತು ಮತ್ತು ಅದು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂಬುದು ನಿಜ. ವಿಲೀನ ಮಾತುಕತೆಗೆ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಭಾಗಿಯಾಗಿದ್ದರು. ಈಗ ಅಜಿತ್ ಇಲ್ಲ, ಆದ್ದರಿಂದ ಎರಡೂ ಎನ್ಸಿಪಿಗಳ ವಿಲೀನವು ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಡಿಸಿಎಂ ಆಗಿ ಸುನೇತ್ರಾ ಆಯ್ಕೆ, ಸಂಜೆ ಪದಗ್ರಹಣ; ʻನನಗೇನು ಗೊತ್ತೇ ಇಲ್ಲʼ ಎಂದ ಶರದ್ ಪವಾರ್
ಸುನೇತ್ರಾ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಮಹಿಳಾ ಡಿಸಿಎಂ ಆಗಿ ಆಯ್ಕೆಯಾಗಿದ್ದು,ಇಂದು ಸಂಜೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜನವರಿ 28 ರಂದು ನಡೆದ ವಿಮಾನ ದುರಂತದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶರದ್ ಪವಾರ್ ಅವರು ಪದಗ್ರಹಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಎನ್ಸಿಪಿ ಬಣಗಳನ್ನು ಒಟ್ಟುಗೂಡಿಸುವುದು ಅಜಿತ್ ಆಸೆ ಎಂದು ಹೇಳಿದರು.
5 ವರ್ಷಗಳ ಬಳಿಕ ಸತತ 2 ಜನವರಿಯಲ್ಲಿ ಅತ್ಯುತ್ತಮ AQI ಪಡೆದ ದೆಹಲಿ: ಇಂದಿನ ವಾಯು ಗುಣಮಟ್ಟ ಹೇಗಿದೆ?
ದೆಹಲಿಯಲ್ಲಿ 5 ವರ್ಷಗಳ ಬಳಿಕ ಸತತ ಎರಡನೇ ಬಾರಿಗೆ ಜನವರಿ ತಿಂಗಳ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಈ ಜನವರಿಯಲ್ಲಿ 307ರ ಸರಾಸರಿ AQI ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಒಂದು ಕೊಂಚ ಕಡಿಮೆಯಿದ್ದರೂ, ಉತ್ತಮವಾಗಿದೆ. ಅಲ್ಲದೆ, 2025 ಹಾಗೂ 2026 ವರ್ಷದ ಮೊದಲ ತಿಂಗಳಿನಲ್ಲಿ ವಾಯುಗುಣಮಟ್ಟದಲ್ಲಿ ಸುಧಾರಣೆ ಕಾಣುವ ಮೂಲಕ 2022 ಬಳಿಕದ 2 ಉತ್ತಮ ವಾಯುಗುಣಮಟ್ಟ ತಿಂಗಳನ್ನು ಜನವರಿ ದಾಖಲಿಸಿದೆ. ಆದಾಗ್ಯೂ, ಇಂದಿನ ವಾಯುಗುಣ ಮಟ್ಟ ಮತ್ತೆ ಕಳಪೆಗೆ ಜಾರಿದ್ದು, AQI ಎಷ್ಟಿದೆ ನೋಡಿ..
ನಾಯಿಯಿಂದ ಕಚ್ಚಿಸಿಕೊಳ್ಳಬೇಡಿ ಹುಷಾರ್: ರಾಜ್ಯದಲ್ಲಿ ರೇಬಿಸ್ನಿಂದ 2 ವರ್ಷಗಳಲ್ಲಿ 129 ಮಂದಿ ಸಾವು
ರಾಜ್ಯದಲ್ಲಿ ರೇಬಿಸ್ ರೋಗದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆ ಯಾಗಿದೆ. ಕಳೆದ ಎರಡು ವರ್ಷಗಳಲ್ಲಿ 129 ಮಂದಿ ರೇಬಿಸ್ ಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳ ಹಾವಳಿ ಮತ್ತು ನಾಯಿ ಕಡಿತದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಚಾಟಿ ಬೀಸಿತ್ತು. ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಆದರೆ ಪ್ರಾಣಿ ದಯಾ ಸಂಘಗಳು ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡುತ್ತಿದೆ. ಹಾಗಾಗಿ ಇವುಗಳ ನಿಯಂತ್ರಣವೂ ಸವಾಲಾಗಿದೆ.
ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಇಷ್ಟೊಂದು ವಿರೋಧವೇಕೆ?
ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಸಾಮಾನ್ಯ ವರ್ಗದವರಿಂದ ವ್ಯಕ್ತವಾಗುತ್ತಿರುವ ಇಷ್ಟೊಂದು ವಿರೋಧ, ಕೇವಲ ಒಂದು ನಿಯಮಾವಳಿಯ ದೋಷಗಳ ಕುರಿತು ಮಾತ್ರವಲ್ಲ; ಅದು ಭಾರತೀಯ ಸಮಾಜದಲ್ಲಿ ಸಮಾನತೆ ಎಂಬ ಕಲ್ಪನೆಗೆ ಎದುರಾಗುತ್ತಿರುವ ಆಳವಾದ ಪ್ರತಿರೋಧದ ಪ್ರತಿಬಿಂಬವಾಗಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಮುಂದುವರಿದಿರುವ ಜಾತಿ ಆಧಾರಿತ ತಾರತಮ್ಯವನ್ನು ತಡೆಯುವ ಉದ್ದೇಶದಿಂದ ರೂಪುಗೊಂಡಿರುವ ‘University Grants Commission (Promotion of Equity in Higher Education Institutions) 2026’ Regulations’ ಎಂಬ ನಿಯಮಾವಳಿಯು ಅತ್ಯಂತ ಮಹತ್ವದ ಸುಧಾರಣೆಯಾಗಿದೆ. ಆದರೆ ಈ ನೀತಿ ಪ್ರಕಟವಾದ ತಕ್ಷಣವೇ, ಕೆಲವು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದು, ಕೇವಲ ಒಂದು ಆಡಳಿತಾತ್ಮಕ ನಿರ್ಧಾರಕ್ಕೆ ಪ್ರತಿಕ್ರಿಯೆಯಷ್ಟೇ ಅಲ್ಲ. ಅದು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸರ್ವಾಧಿಕಾರದ ಭಾವನೆ, ಅದನ್ನು ಕಳೆದುಕೊಳ್ಳುವ ಭಯ ಮತ್ತು ಸಮಾನತೆಯ ಅರ್ಥದ ಕುರಿತು ಇರುವ ತಪ್ಪುಗ್ರಹಿಕೆಗಳ ಪ್ರತಿಫಲವಾಗಿದೆ. ‘ಸಮಾನತೆ’ ಎಂಬ ಪದವೇ ಕೆಲವರಲ್ಲಿ ಅಸಹನೆ ಮತ್ತು ಆತಂಕವನ್ನು ಹುಟ್ಟುಹಾಕುತ್ತಿರುವುದು, ಈ ವಿರೋಧದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಸೂಚಕವಾಗಿದೆ. ಸಾಮಾನ್ಯ ವರ್ಗದವರ ವಿರೋಧದ ಮೊದಲ ಮತ್ತು ಪ್ರಮುಖ ಕಾರಣವೆಂದರೆ ‘ರಿವರ್ಸ್ ಡಿಸ್ಕ್ರಿಮಿನೇಷನ್’ ಎಂಬ ಭಾವನೆ. ಅಂದರೆ, ಈ ನಿಯಮಾವಳಿ ಜಾರಿಯಾದರೆ ತಮ್ಮ ಮೇಲೆ ಅನ್ಯಾಯ ನಡೆಯುತ್ತದೆ, ತಮ್ಮ ಮಾತುಗಳಿಗೆ ಮಹತ್ವ ಕಡಿಮೆಯಾಗುತ್ತದೆ ಹಾಗೂ ತಮ್ಮ ವಿರುದ್ಧ ಸುಳ್ಳು ದೂರುಗಳು ದಾಖಲಾಗುವ ಸಾಧ್ಯತೆ ಇದೆ ಎಂಬ ಆತಂಕ. ಆದರೆ ಈ ಭಯ ವಾಸ್ತವದ ಮೇಲೆ ಆಧಾರಿತವೇ ಅಥವಾ ದಶಕಗಳಿಂದ ನಿರ್ವಿಘ್ನವಾಗಿ ಅನುಭವಿಸುತ್ತ ಬಂದಿರುವ ಅಧಿಕಾರ ಮತ್ತು ಪ್ರಾಬಲ್ಯಕ್ಕೆ ಬಂದಿರುವ ಸವಾಲಿನ ಪ್ರತಿಕ್ರಿಯೆಯೇ ಎಂಬ ಪ್ರಶ್ನೆಯನ್ನು ಇಲ್ಲಿ ಗಂಭೀರವಾಗಿ ಪರಿಶೀಲಿಸಬೇಕಾಗುತ್ತದೆ. ಯುಜಿಸಿ 2026 ನಿಯಮಾವಳಿ ಯಾವುದೇ ಒಂದು ವರ್ಗದ ವಿರುದ್ಧ ಕ್ರಮಕೈಗೊಳ್ಳಲು ರೂಪಿಸಲ್ಪಟ್ಟದ್ದಲ್ಲ; ಅದು ಜಾತಿ, ಲಿಂಗ, ಅಂಗವಿಕಲತೆ ಮೊದಲಾದ ಆಧಾರಗಳಲ್ಲಿ ನಡೆಯುವ ತಾರತಮ್ಯವನ್ನು ತಡೆಯಲು ಹಾಗೂ ಸಂಸ್ಥೆಗಳೊಳಗೆ ಜವಾಬ್ದಾರಿತನವನ್ನು ಸ್ಥಾಪಿಸಲು ಉದ್ದೇಶಿತವಾದ ಸಾಂಸ್ಥಿಕ ವ್ಯವಸ್ಥೆಯಾಗಿದೆ. ಆದರೂ, ಈ ನೀತಿಯನ್ನು ‘‘ನಮ್ಮ ವಿರುದ್ಧದ ಕಾನೂನು’’ ಎಂದು ಅರ್ಥೈಸಿಕೊಳ್ಳುವ ಮನೋಭಾವವೇ, ಸಮಾನತೆ ಎಂಬ ಸಂವಿಧಾನಾತ್ಮಕ ಮೌಲ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಇನ್ನೂ ಜೀವಂತವಾಗಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಇರುವ ಗಟ್ಟಿಯಾದ ನಿರಾಕರಣೆ. ‘‘ಇಂದಿನ ಕಾಲದಲ್ಲಿ ಜಾತಿಯೇ ಇಲ್ಲ’’, ‘‘ವಿಶ್ವವಿದ್ಯಾನಿಲಯಗಳು ಸಂಪೂರ್ಣ ಸಮಾನತೆಯ ಸ್ಥಳಗಳು’’ ಎಂಬಂತಹ ವಾದಗಳು ಸಾರ್ವಜನಿಕ ಚರ್ಚೆಗಳಲ್ಲಿ ನಿರಂತರವಾಗಿ ಕೇಳಿಬರುತ್ತವೆ. ಆದರೆ ಈ ಹೇಳಿಕೆಗಳ ಹಿಂದೆ ಅಡಗಿರುವ ವಾಸ್ತವವೇನೆಂದರೆ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇತರ ಹಿಂದುಳಿದ ಸಮುದಾಯಗಳ ಅನೇಕ ವಿದ್ಯಾರ್ಥಿಗಳು ದಶಕಗಳಿಂದ ಅವಮಾನ, ನಿರ್ಲಕ್ಷ್ಯ, ಶೈಕ್ಷಣಿಕ ಬಹಿಷ್ಕಾರ ಹಾಗೂ ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ರೋಹಿತ್ ವೇಮುಲಾ ಅವರಂತಹ ಪ್ರಕರಣಗಳು ಕೇವಲ ವೈಯಕ್ತಿಕ ದುರಂತಗಳಲ್ಲ; ಅವು ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಆಳವಾಗಿ ನೆಲೆಯೂರಿರುವ ವ್ಯವಸ್ಥಾತ್ಮಕ ಅಸಮಾನತೆಯ ಕಠಿಣ ಪ್ರತೀಕಗಳಾಗಿವೆ. ಈ ವಾಸ್ತವವನ್ನು ಎದುರಿಸಿ ಒಪ್ಪಿಕೊಳ್ಳುವ ಧೈರ್ಯವಿಲ್ಲದ ಮನಃಸ್ಥಿತಿಯಿಂದಲೇ, ಸಮಸ್ಯೆಯೇ ಇಲ್ಲ ಎಂದು ಹೇಳುವ ಮನೋಭಾವದಿಂದಲೇ ಯುಜಿಸಿ ನೀತಿಗೆ ವಿರೋಧ ಮೂಡುತ್ತಿದೆ. ಸಾಮಾನ್ಯ ವರ್ಗದ ವಿರೋಧದ ಹಿಂದೆ ಮತ್ತೊಂದು ಪ್ರಮುಖ ಅಂಶವೆಂದರೆ ‘ಮೆರಿಟ್’ ಎಂಬ ಪದದ ಬಳಕೆ. ಮೆರಿಟ್ ಅನ್ನು ಕೇವಲ ಅಂಕಗಳು, ರ್ಯಾಂಕ್ಗಳು ಮತ್ತು ಪರೀಕ್ಷಾ ಫಲಿತಾಂಶಗಳಿಗೆ ಸೀಮಿತಗೊಳಿಸಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಗಂಭೀರವಾಗಿ ಪ್ರಶ್ನಿಸಬೇಕಾದುದು ಏನೆಂದರೆ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳ ಮಧ್ಯೆ ಬೆಳೆದ ವಿದ್ಯಾರ್ಥಿಯ ಸಾಧನೆ ಮತ್ತು ಎಲ್ಲಾ ಸೌಲಭ್ಯಗಳು, ಮಾರ್ಗದರ್ಶನ ಹಾಗೂ ಭದ್ರತೆ ಲಭ್ಯವಿದ್ದ ಪರಿಸರದಲ್ಲಿ ಬೆಳೆದ ವಿದ್ಯಾರ್ಥಿಯ ಸಾಧನೆ ಒಂದೇ ತೂಕದ್ದೇ ಎಂಬುದು. ಈ ಮೂಲಭೂತ ಪ್ರಶ್ನೆಯನ್ನು ‘ಮೆರಿಟ್’ ಎಂಬ ಘೋಷಣೆಯ ಹಿಂದೆ ಮರೆಮಾಚಲಾಗುತ್ತಿದೆ. ಯುಜಿಸಿ 2026 ನಿಯಮಾವಳಿ ಮೆರಿಟ್ ಅನ್ನು ರದ್ದುಪಡಿಸುವುದಿಲ್ಲ; ಬದಲಾಗಿ ಮೆರಿಟ್ ಅರಳಲು ಅಡ್ಡಿಯಾಗುವ ತಾರತಮ್ಯ, ಭಯ ಮತ್ತು ಅವಮಾನಗಳ ವಾತಾವರಣವನ್ನು ನಿವಾರಿಸುವುದೇ ಅದರ ನೈಜ ಉದ್ದೇಶ. ಆದರೆ ಈ ಸೂಕ್ಷ್ಮ ಹಾಗೂ ನ್ಯಾಯಸಮ್ಮತ ಅರ್ಥವನ್ನು ಗ್ರಹಿಸದೆ, ಮೆರಿಟ್ಗೆ ಧಕ್ಕೆ ಎಂಬ ಸರಳ ಘೋಷಣೆಯಡಿ ವಿರೋಧವನ್ನು ಸಂಘಟಿಸಲಾಗುತ್ತಿರುವುದು, ಚರ್ಚೆಯನ್ನು ವಾಸ್ತವದಿಂದ ಭಾವನಾತ್ಮಕ ದಿಕ್ಕಿಗೆ ತಳ್ಳುತ್ತಿರುವುದನ್ನು ಸೂಚಿಸುತ್ತದೆ. ಇದಲ್ಲದೆ, ಹೊಸ ನಿಯಮಾವಳಿಯಲ್ಲಿ ದೂರುಗಳಿಗಾಗಿ 24x7 ಹೆಲ್ಪ್ಲೈನ್, ಆನ್ಲೈನ್ ಪೋರ್ಟಲ್, ಇಕ್ವಿಟಿ ಸಮಿತಿಗಳು ಹಾಗೂ ಸಮಯಬದ್ಧ ತನಿಖಾ ವ್ಯವಸ್ಥೆಗಳನ್ನು ಒಳಗೊಂಡಿರುವುದರಿಂದ, ‘ಸುಳ್ಳು ದೂರುಗಳ ಭಯ’ವನ್ನು ಉದ್ದೇಶಪೂರ್ವಕವಾಗಿ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ಸಮರ್ಥನೆಯಂತೆ ಕಾಣಿಸಿದರೂ, ವಾಸ್ತವದಲ್ಲಿ 2012ರ ಹಿಂದಿನ ಯುಜಿಸಿ ಮಾರ್ಗಸೂಚಿಗಳು ಕೇವಲ ಸಲಹಾತ್ಮಕ ಸ್ವರೂಪದಲ್ಲಿದ್ದ ಕಾರಣ, ಅನೇಕ ನಿಜವಾದ ದೂರುಗಳು ದಾಖಲೆಯಾಗದೆ ಅಥವಾ ದಾಖಲಾಗಿದ್ದರೂ ನಿರ್ಲಕ್ಷ್ಯಗೊಳ್ಳುತ್ತಿದ್ದವು ಎಂಬ ಕಠಿಣ ಸತ್ಯವನ್ನು ಮರೆಮಾಚಲಾಗುತ್ತಿದೆ. 2026ರ ನಿಯಮಾವಳಿ ಹೆಚ್ಚು ಕಠಿಣವಾಗಿ ಕಾಣಿಸುವುದಕ್ಕೆ ಮೂಲ ಕಾರಣವೇ ಇಷ್ಟು ವರ್ಷಗಳ ಕಾಲ ಮುಂದುವರಿದ ನಿರ್ಲಕ್ಷ್ಯ, ಹೊಣೆಗಾರಿಕೆಯ ಕೊರತೆ ಮತ್ತು ಶಿಕ್ಷೆಯಿಲ್ಲದ ಸಂಸ್ಕೃತಿ. ಈ ಹಿನ್ನೆಲೆಯನ್ನು ಪರಿಗಣಿಸದೆ, ಹೊಸ ವ್ಯವಸ್ಥೆಯನ್ನು ‘ಅತಿಯಾದ ಕಠಿಣತೆ’ ಎಂದು ಬಣ್ಣಿಸುವುದು, ವಾಸ್ತವದಲ್ಲಿ ನ್ಯಾಯವನ್ನು ವಿಳಂಬಗೊಳಿಸಿದ್ದ ಹಳೆಯ ವ್ಯವಸ್ಥೆಯನ್ನು ರಕ್ಷಿಸಲು ನಡೆಯುತ್ತಿರುವ ಪ್ರಯತ್ನವಾಗಿಯೇ ಕಾಣಿಸುತ್ತದೆ. ಈ ವಿರೋಧದ ಹಿಂದೆ ರಾಜಕೀಯ ಹಾಗೂ ಸಂಘಟನೆಗಳ ಪ್ರಭಾವವೂ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವು ವಿದ್ಯಾರ್ಥಿ ಸಂಘಟನೆಗಳು ಈ ವಿಚಾರವನ್ನು ಸಾಮಾಜಿಕ ನ್ಯಾಯದ ಮೂಲಭೂತ ಚರ್ಚೆಯಿಂದ ಉದ್ದೇಶಪೂರ್ವಕವಾಗಿ ಬೇರ್ಪಡಿಸಿ, ‘ವರ್ಗಾಧಾರಿತ ಆತಂಕ’ ಎಂಬ ಭಾವನೆಯನ್ನು ಬೆಳೆಸುವ ಪ್ರಯತ್ನ ನಡೆಸುತ್ತಿವೆ. ಪರಿಣಾಮವಾಗಿ, ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿ ಒಂದು ಅಗತ್ಯವಾದ ಆಡಳಿತಾತ್ಮಕ ಹಾಗೂ ಸಾಂಸ್ಥಿಕ ವ್ಯವಸ್ಥೆಯ ಸುಧಾರಣೆಯಾಗಿ ಕಾಣಿಸಿಕೊಳ್ಳಬೇಕಿದ್ದದ್ದು, ರಾಜಕೀಯ ಸಂಘರ್ಷ ಮತ್ತು ಧ್ರುವೀಕರಣದ ವಿಷಯವಾಗಿ ರೂಪಾಂತರಗೊಂಡಿದೆ. ವಾಸ್ತವದಲ್ಲಿ ಈ ನಿಯಮಾವಳಿ ಯಾವುದೇ ಒಂದು ವರ್ಗದ ವಿರುದ್ಧವಲ್ಲ; ಅದು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಜವಾಬ್ದಾರಿತನ ಮತ್ತು ಹೊಣೆಗಾರಿಕೆಯನ್ನು ವಿಧಿಸುವ ಉದ್ದೇಶವನ್ನು ಹೊಂದಿದೆ. ಆದರೆ ಚರ್ಚೆಯನ್ನು ನಿರಂತರವಾಗಿ ಭಾವನಾತ್ಮಕ ಮತ್ತು ರಾಜಕೀಯದ ದಿಕ್ಕಿಗೆ ತಳ್ಳುವುದರಿಂದ, ಸಮಸ್ಯೆಯ ಮೂಲವಾದ ಜಾತಿ ಆಧಾರಿತ ತಾರತಮ್ಯ ಹಿನ್ನಲೆಯಲ್ಲಿ ಮರೆತು ಹೋಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗುತ್ತದೆ. ಇನ್ನೊಂದು ಗಂಭೀರ ಅಂಶವೆಂದರೆ, ಅನೇಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತಮ್ಮದೇ ಆದ ಸವಲತ್ತುಗಳನ್ನು ‘ಸಾಮಾನ್ಯ’ ಎಂದು ಪರಿಗಣಿಸಿದ್ದಾರೆ. ಹಾಸ್ಟೆಲ್ಗಳಲ್ಲಿ ಅವಮಾನಿಸಲ್ಪಡದಿರುವುದು, ತರಗತಿಯಲ್ಲಿ ಶಿಕ್ಷಕರಿಂದ ತಿರಸ್ಕಾರಕ್ಕೊಳಗಾಗದಿರುವುದು ಅಥವಾ ಅನುಮಾನಿಸಲ್ಪಡದಿರುವುದು, ಆಡಳಿತ ಮಂಡಳಿಯಿಂದ ಅನುಮಾನಾಸ್ಪದವಾಗಿ ನೋಡಲ್ಪಡದಿರುವುದು, ಇವೆಲ್ಲವೂ ಎಲ್ಲರಿಗೂ ಸಮಾನ ಅವಕಾಶಗಳಂತೆ ಕಾಣಿಸಬಹುದು. ಆದರೆ ವಾಸ್ತವದಲ್ಲಿ, ಇವು ಸವಲತ್ತುಗಳು. ಈ ಸವಲತ್ತುಗಳ ಅಸ್ತಿತ್ವವನ್ನು ಗುರುತಿಸುವ ಅರಿವು ಇಲ್ಲದೆ, ಸಮಾನತೆಯನ್ನು ಸ್ಥಾಪಿಸಲು ತೆಗೆದುಕೊಂಡ ಕ್ರಮಗಳನ್ನು ‘ಹೆಚ್ಚುವರಿ ಸವಲತ್ತುಗಳು’ ಅಥವಾ ‘ಹೆಚ್ಚುವರಿ ಪ್ರಯೋಜನಗಳು’ ಎಂದು ನೋಡಲಾಗುತ್ತಿದೆ. ಯುಜಿಸಿಯ ತಾರತಮ್ಯ ವಿರೋಧಿ ನೀತಿಯ ವಿರುದ್ಧ ವ್ಯಕ್ತಪಡಿಸಲಾದ ಅಸಹನೆ ಮತ್ತು ವಿರೋಧವನ್ನು ಮತ್ತಷ್ಟು ತೀವ್ರಗೊಳಿಸುತ್ತಿರುವುದು ಈ ಮನೋಭಾವವೇ. ವಾಸ್ತವವಾಗಿ ಗಮನಿಸಿದರೆ, ಯುಜಿಸಿ 2026 ನಿಯಮಾವಳಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಮಾನವೀಯ, ಹೆಚ್ಚು ಜವಾಬ್ದಾರಿಯುತ ಮತ್ತು ಹೆಚ್ಚು ಸಂವಿಧಾನಾತ್ಮಕ ದಿಕ್ಕಿನಲ್ಲಿ ರೂಪಿಸುವ ಗಂಭೀರ ಪ್ರಯತ್ನವಾಗಿದೆ. ಇದು ಕೇವಲ ಎಸ್ಸಿ, ಎಸ್ಟಿ ಅಥವಾ ಒಬಿಸಿ ಸಮುದಾಯಗಳಿಗೆ ಮಾತ್ರ ಸೀಮಿತವಾದ ನೀತಿಯಲ್ಲ; ಲಿಂಗ ಅಲ್ಪಸಂಖ್ಯಾತರು, ಅಂಗವಿಕಲರು ಹಾಗೂ ಆನ್ಲೈನ್ ಮತ್ತು ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಸಮಾನ ರಕ್ಷಣೆ ಮತ್ತು ಗೌರವವನ್ನು ಒದಗಿಸುವುದೇ ಇದರ ವ್ಯಾಪ್ತಿ. ಆದರೆ ವಿರೋಧದ ಚರ್ಚೆಗಳಲ್ಲಿ ಈ ಸಮಗ್ರ ಮತ್ತು ಸಮಾವೇಶಾತ್ಮಕ ಸ್ವರೂಪವು ಸಂಪೂರ್ಣವಾಗಿ ಹಿನ್ನೆಲೆಯಲ್ಲಿ ಸರಿದಿದೆ. ಅದರ ಬದಲು, ನೀತಿಯನ್ನು ‘ನಮ್ಮ ವಿರುದ್ಧ’ ಎಂಬ ಸೀಮಿತ ಮತ್ತು ಆತ್ಮರಕ್ಷಣಾತ್ಮಕ ದೃಷ್ಟಿಕೋನದಿಂದಲೇ ನೋಡಲಾಗುತ್ತಿದ್ದು, ಇದು ಸಂವಿಧಾನಾತ್ಮಕ ಸಮಾನತೆಯ ಮೂಲ ಉದ್ದೇಶವನ್ನು ಮರೆಮಾಚುತ್ತಿರುವುದನ್ನು ತೋರಿಸುತ್ತದೆ. ಒಟ್ಟಾರೆ, ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಸಾಮಾನ್ಯ ವರ್ಗದವರಿಂದ ವ್ಯಕ್ತವಾಗುತ್ತಿರುವ ಇಷ್ಟೊಂದು ವಿರೋಧ, ಕೇವಲ ಒಂದು ನಿಯಮಾವಳಿಯ ದೋಷಗಳ ಕುರಿತು ಮಾತ್ರವಲ್ಲ; ಅದು ಭಾರತೀಯ ಸಮಾಜದಲ್ಲಿ ಸಮಾನತೆ ಎಂಬ ಕಲ್ಪನೆಗೆ ಎದುರಾಗುತ್ತಿರುವ ಆಳವಾದ ಪ್ರತಿರೋಧದ ಪ್ರತಿಬಿಂಬವಾಗಿದೆ. ಸಮಾನತೆ ಎಂದರೆ ಅಧಿಕಾರ ಅಥವಾ ಅವಕಾಶಗಳನ್ನು ಕಸಿದುಕೊಳ್ಳುವುದು ಅಲ್ಲ; ಅದು ದಶಕಗಳಿಂದ ಮುಂದುವರಿದಿರುವ ಅಸಮಾನತೆಗಳನ್ನು ಸರಿಪಡಿಸುವ ಸಂವಿಧಾನಾತ್ಮಕ ಪ್ರಕ್ರಿಯೆ. ಈ ಮೂಲ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಯುವ ತನಕ, ಇಂತಹ ನ್ಯಾಯೋಚಿತ ನೀತಿಗಳು ವಿರೋಧವನ್ನು ಎದುರಿಸುತ್ತಲೇ ಇರುತ್ತವೆ. ಆದರೆ ಇತಿಹಾಸವು ಸ್ಪಷ್ಟವಾಗಿ ಹೇಳುವುದೇನೆಂದರೆ, ಸಾಮಾಜಿಕ ನ್ಯಾಯದ ದಾರಿಯಲ್ಲಿ ನಡೆದ ಪ್ರತಿಯೊಂದು ಮಹತ್ವದ ಸುಧಾರಣೆಯೂ ಮೊದಲಿಗೆ ವಿರೋಧವನ್ನೇ ಕಂಡಿದೆ. ಆ ಅರ್ಥದಲ್ಲಿ, ಯುಜಿಸಿ 2026 ನಿಯಮಾವಳಿಯೂ ಅದೇ ಇತಿಹಾಸಾತ್ಮಕ ಹಾದಿಯಲ್ಲಿ ಸಾಗುತ್ತಿದ್ದು, ದೀರ್ಘಾವಧಿಯಲ್ಲಿ ಅದು ಹೆಚ್ಚು ಸಮಾನ, ಮಾನವೀಯ ಮತ್ತು ನ್ಯಾಯಸಮ್ಮತ ಉನ್ನತ ಶಿಕ್ಷಣ ವ್ಯವಸ್ಥೆಗೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ಹೊಂದಿರುವುದನ್ನು ಪ್ರಜ್ಞಾವಂತ ನಾಗರಿಕರು ಮರೆಯಬಾರದು.
ಹೊಸದಿಲ್ಲಿ: ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ಭಾರತೀಯ ಸಚಿವರ ಹೆಸರುಗಳಿವೆಯೇ ಎಂಬ ಬಗ್ಗೆ ಮೋದಿ ಸರಕಾರ ಸ್ಪಷ್ಟನೆಯನ್ನು ನೀಡಬೇಕು ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಅಮೆರಿಕದ ನ್ಯಾಯ ಇಲಾಖೆ ಎಪ್ಸ್ಟೀನ್ ಸಂಬಂಧಿಸಿದ ಮಹತ್ವದ ಕಡತಗಳನ್ನು ಬಿಡುಗಡೆ ಮಾಡಿದೆ. ಈ ಕಡತಗಳಲ್ಲಿ ಯಾವುದೇ ಪ್ರಮುಖ ಭಾರತೀಯ ಸಚಿವರ ಹೆಸರುಗಳ ಬಗ್ಗೆ ಉಲ್ಲೇಖವಿದೆಯೇ? ಅಮೆರಿಕದ ಎಫ್ಬಿಐ (FBI) ಸಾರ್ವಜನಿಕವಾಗಿ ಪ್ರಕಟಿಸಿರುವ ಅಥವಾ ಬಹಿರಂಗಪಡಿಸಿರುವ ಪಟ್ಟಿಯಲ್ಲಿ ಭಾರತೀಯರ ಹೆಸರುಗಳಿದ್ದರೆ, ಯಾರ್ಯಾರ ಹೆಸರುಗಳಿವೆ ಎಂಬುದನ್ನು ಮೋದಿ ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದಾಗ ಈ ಕಡತದ ಬಿಡುಗಡೆ ಭಾರತದಲ್ಲೂ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎಂದು ಈ ಮೊದಲು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು. ಇದು ಭಾರತೀಯ ರಾಜಕಾರಣಿಗಳಿಗೆ ಮತ್ತು ನಮ್ಮ ದೇಶದ ಪ್ರತಿಷ್ಠೆಗೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಬಿಜೆಪಿ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆ ನಡೆಸುವುದು ಮುಖ್ಯವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.
Aadhaar Online: ಆಧಾರ್ ಕಾರ್ಡ್ ತಿದ್ದುಪಡಿ ಈಗ ಮತ್ತಷ್ಟು ಸುಲಭ, ಸರ್ಕಾರದಿಂದ ಗುಡ್ ನ್ಯೂಸ್
ಆಧಾರ್ ಕಾರ್ಡ್ ಭಾರತೀಯರ ಪಾಲಿಗೆ ಒಂದು ದೊಡ್ಡ ಶಕ್ತಿ ಇದ್ದಂತೆ, ಈ ಮೊದಲು ಎಲ್ಲಾ ಗುರುತಿನ ಚೀಟಿ ಹೊತ್ತುಕೊಂಡು ಸಾಗಬೇಕಿತ್ತು. ಆದರೆ ಈಗ ಆಧಾರ್ ಕಾರ್ಡ್ ಒಂದು ಇದ್ದರೆ ಬಹುತೇಕ ಎಲ್ಲಾ ಕೆಲಸಗಳು ಆಗಿಬಿಡುತ್ತದೆ. ಹೀಗಿದ್ದಾಗ ಆಧಾರ್ ಕಾರ್ಡ್ ಸೇವೆಯನ್ನು ಸರ್ಕಾರ ಇನ್ನಷ್ಟು ಉತ್ತಮಗೊಳಿಸಲು ಪ್ಲಾನ್ ಮಾಡುತ್ತಿದೆ, ಈ ಕಾರಣಕ್ಕೆ ಭಾರತ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್
ಕೇರಳ: ಎಲ್ಡಿಎಫ್ ನೇತೃತ್ವದಲ್ಲಿ ಉತ್ತರ ವಲಯ ಅಭಿವೃದ್ಧಿ ಜಾಥಾ ನಾಳೆ ಆರಂಭ
ಕುಂಬಳೆಯಿಂದ ಜಾಥಾ ಪ್ರಾರಂಭ; ಫೆ.1ರಂದು ಸಿಎಂ ಪಿಣರಾಯಿ ವಿಜಯನ್ ಚಾಲನೆ
ಜಂಟಿ ಅಧಿವೇಶನದಲ್ಲಿ ವಿಪಕ್ಷ ಮೇಲುಗೈ? ಸರ್ಕಾರವನ್ನು ಕಟ್ಟಿಹಾಕಲು ಕಮಲ, ದಳ ಆಗಿದ್ಯಾ ಯಶಸ್ವಿ
ಜನವರಿ 22 ರಿಂದ ಜಂಟಿ ಅಧಿವೇಶನ ಆರಂಭಗೊಂಡಿದೆ. ಈ ಬಾರಿಯ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ವೇದಿಕೆಯಾಗುತ್ತಿದೆ. ಈ ಹಿಂದಿನ ಅಧಿವೇಶನದಲ್ಲಿ ಬಿಜೆಪಿ ಅಬ್ಬರ ನಿರೀಕ್ಷೆಯಷ್ಟು ಇರಲಿಲ್ಲವಾದರೂ, ಈ ಬಾರಿ ಸದನದಲ್ಲಿ ತಕ್ಕಮಟ್ಟಿನಲ್ಲಿ ಸದ್ದು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವೂ ಪ್ರತ್ಯುತ್ತರ ನೀಡುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಸದನದಲ್ಲಿ ವಾಕ್ಸಮರ ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ. ಈ ಕುರಿತಾದ ಒಂದಷ್ಟು ವಿವರಗಳು ಇಲ್ಲಿವೆ.
ರಾಯಚೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಅಗತ್ಯ: ನ್ಯಾ. ಮಾರುತಿ ಬಾಗಡೆ
ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ ಸರಕಾರದ್ದೇನು ಉಸಾಬರಿ?
ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ. ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು, ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ. ‘‘ಒಬ್ಬರು ನಿರ್ದಿಷ್ಟ ನ್ಯಾಯಮೂರ್ತಿಗಳ ಅಥವಾ ನ್ಯಾಯಪೀಠದ ಎದುರು ಒಂದು ಪ್ರಕರಣ ಲಿಸ್ಟ್ ಆದ ತಕ್ಷಣ, ಅದರ ತೀರ್ಪು ಹೀಗೇ ಇರಲಿದೆ ಎಂಬ ತೀರ್ಮಾನಕ್ಕೆ ಜನರು ಬರಲು ಸಾಧ್ಯವಾಗುತ್ತದೆ ಎಂದರೆ, ಅದು ನ್ಯಾಯಾಂಗಕ್ಕೆ ಮತ್ತು ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ದುಃಖಕರವಾದ ದಿನ.’’ ‘‘ನಮ್ಮ ನ್ಯಾಯಾಲಯಗಳನ್ನು ಅಪಾಯದಿಂದ ರಕ್ಷಿಸಲು ಅರೆಸೈನಿಕ ಪಡೆಗಳನ್ನು ನೇಮಿಸಬೇಕಾಗಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯ ಇರುವುದು ನ್ಯಾಯಾಂಗದ ಒಳಗಿನಿಂದಲೇ.’’ ‘‘ನ್ಯಾಯಮೂರ್ತಿಯೊಬ್ಬರು ಸರಕಾರಕ್ಕೆ ಅವಗುಣವಾಗಬಲ್ಲ ತೀರ್ಪು ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ, ಆ ನ್ಯಾಯಮೂರ್ತಿಯವರ ವರ್ಗಾವಣೆಯನ್ನು ಒಕ್ಕೂಟ ಸರಕಾರವು ಮರುಪರಿಶೀಲಿಸಲು ಕೋರಿಕೊಂಡ ಮೇರೆಗೆ ಕೊಲೀಜಿಯಂ ಒಂದು ಹೈಕೋರ್ಟ್ನಿಂದ ಇನ್ನೊಂದು ಹೈಕೋರ್ಟ್ಗೆ ಯಾಕೆ ವರ್ಗಾಯಿಸಬೇಕು? ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ?’’ *** ಇಂತಹ ಸಿಡಿಗುಂಡಿನಂತಹ ಪ್ರಶ್ನೆಗಳನ್ನು ಕೇಳಿರುವುದು ಯಾರೋ ಹಾದಿಬೀದಿಯಲ್ಲಿ ನಿಂತು ಕಟ್ಟೆಪಂಚಾಯ್ತಿಕೆ ಮಾಡುತ್ತಿರುವವರಲ್ಲ. ಭಾರತದ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರ ಪ್ರಶ್ನೆಗಳಿವು. ಜನವರಿ 24ರಂದು ಪುಣೆಯ ILS ಕಾನೂನು ಕಾಲೇಜಿನಲ್ಲಿ ‘‘ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾತಾಂತ್ರಿಕ ಆಡಳಿತ’’ ಎಂಬ ವಿಚಾರದಲ್ಲಿ ದತ್ತಿನಿಧಿ ಉಪನ್ಯಾಸದ ವೇಳೆ ಅವರು ಆಡಿದ ಮಾತುಗಳಿವು. ಆರೋಗ್ಯವಂತ ಮಾಧ್ಯಮಗಳಿರುವ ಯಾವುದೇ ನಾಡಿನಲ್ಲಿ ಆದ್ಯತೆಯ ಸುದ್ದಿಯಾಗಿ, ದೇಶದಾದ್ಯಂತ ಚರ್ಚೆ ಆಗಬೇಕಾಗಿದ್ದಂತಹ ಗಂಭೀರ ಸಂಗತಿ ಇದು. ಆದರೆ, ಈ ಸುದ್ದಿಯನ್ನು ಭಕ್ತಿ-ಭುಕ್ತಿಗಳ ಮಹಾರಾಶಿಯಲ್ಲಿ ಹುದುಗಿಸಿಟ್ಟು ‘ಸಬ್ ಚೆಂಗಾಸಿ’ ಎಂದು ಷರಾ ಬರೆಯಲಾಗಿದೆ. ನ್ಯಾ. ಭುಯಾನ್ ಅವರು 34 ನ್ಯಾಯಮೂರ್ತಿಗಳಿರುವ ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಹಿರಿತನದ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿರುವವರು. 2023 ಜುಲೈ 14ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಆಗಿ ನೇಮಕಗೊಂಡಿರುವ ಅವರು, 2029ರ ಆಗಸ್ಟ್ ಒಂದರಂದು ನಿವೃತ್ತರಾಗಲಿದ್ದಾರೆ. ದುರದೃಷ್ಟವಶಾತ್, ಅವರು ಹಿರಿತನದ ಪಟ್ಟಿಯ ಆಧಾರದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಸಾಧ್ಯತೆಗಳು ಇಲ್ಲ. *** 2014ರಿಂದ ಈಚೆಗೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಒಳಗಿನಿಂದ ಸಂವಿಧಾನ ಪರ ಚಡಪಡಿಕೆಗಳು ಹಲವು ಬಾರಿ ತಲೆಯೆತ್ತಿವೆಯಾದರೂ, ಅವು ಯಾವುವೂ ಜನಸಾಮಾನ್ಯರ ಮನಸ್ಸಿಗೆ ನಾಟದಂತೆ ಆರ್ಕೆಸ್ಟ್ರೇಟೆಡ್ ಪ್ರಯತ್ನಗಳ ಮೂಲಕ ಶ್ರಮಿಸಲಾಗಿದೆ. ನ್ಯಾಯಾಧೀಶರ ನೇಮಕದ ಹೊಣೆ ಹೊತ್ತಿರುವ ಕೊಲಿಜಿಯಂ ಅಪಾರದರ್ಶಕವಾಗಿರುವುದು ಮತ್ತು ಅದರ ಮೇಲೆ ರಾಜಕೀಯಸ್ಥರ ಪ್ರಭಾವ ಹೆಚ್ಚುತ್ತಿರುವ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಎದ್ದದ್ದಿದೆ. ಅಂತಹ ಕೆಲವು ಸನ್ನಿವೇಶಗಳನ್ನು ಗಮನಿಸೋಣ. 2014ರಲ್ಲಿ ಭಾರತ ಸರಕಾರವು ಸಂವಿಧಾನಕ್ಕೆ 99ನೇ ತಿದ್ದುಪಡಿ (124 ಎ,ಬಿ,ಸಿ ವಿಧಿಗಳಿಗೆ) ಮಾಡಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಸ್ಥಾಪನೆಗೆ ಮುಂದಾದಾಗ, ಅದನ್ನು ಸುಪ್ರೀಂ ಕೋರ್ಟ್ ‘ಅಸಾಂವಿಧಾನಿಕ’ ಎಂದು ಘೋಷಿಸಿ, 2015ರ ಅಕ್ಟೋಬರ್ 16ರಂದು ವಜಾಗೊಳಿಸಿತ್ತು. ಆ ನ್ಯಾಯಪೀಠದ ಭಾಗವಾಗಿದ್ದ ನ್ಯಾ. ಜುಸ್ತಿ ಚಲಮೇಶ್ವರ ಅವರು, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಡೆಸುವ ಕೊಲಿಜಿಯಂ ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಲಿಖಿತವಾಗಿ ದಾಖಲಿಸದಿದ್ದರೆ, ತಾನು ಆ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. 2018ರಲ್ಲಿ, ನ್ಯಾ. ಮದನ್ ಲೊಕೂರ್ ಅವರು ಕೊಲಿಜಿಯಂ ಸದಸ್ಯರಾಗಿದ್ದಾಗ, ಇಬ್ಬರು ನ್ಯಾಯಮೂರ್ತಿಗಳನ್ನು (ನ್ಯಾ.ಪ್ರದೀಪ್ ನಂದ್ರಜೋಗ್, ನ್ಯಾ. ರಾಜೇಂದ್ರ ಮೆನನ್) ಸುಪ್ರೀಂ ಕೋರ್ಟ್ ಗೆ ನೇಮಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಆ ನಿರ್ಣಯ ಸಾರ್ವಜನಿಕಗೊಳ್ಳದೆ ನನೆಗುದಿಗೆ ಬಿದ್ದಿತ್ತು, ಕಡೆಗೆ ನ್ಯಾ.ಲೊಕೂರ್ ಅವರು ನಿವೃತ್ತರಾದ ಬಳಿಕ, ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿತ್ತು. ನ್ಯಾ. ಲೊಕೂರ್ ಅವರು ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ನ್ಯಾ. ಆರ್.ಎಫ್. ನಾರಿಮನ್ ಅವರು ಕೊಲೀಜಿಯಂ ಸದಸ್ಯರಾಗಿದ್ದಾಗ, ನ್ಯಾ. ಅಖಿಲ್ ಖುರೇಷಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗಳನ್ನು ಹಿರಿತನಕ್ಕೆ ಪರಿಗಣಿಸಿದ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಪ್ರಕರಣದಲ್ಲೂ ಕೊಲಿಜಿಯಂ ಸುದೀರ್ಘ ವಿಳಂಬನೀತಿ ಅನುಸರಿಸಿತ್ತು. ಒಡಿಶಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ನ್ಯಾ. ಎಸ್. ಮುರಳೀಧರ್ ಅವರನ್ನು ಅವರ ಹಿರಿತನದ ಹೊರತಾಗಿಯೂ ಸುಪ್ರೀಂ ಕೋರ್ಟ್ಗೆ ನೇಮಕ ಮಾಡಲು ನಿರ್ಲಕ್ಷ್ಯ ತೋರಲಾಗಿತ್ತು. ಇಂತಹ ಬೆಳಕಿಗೆ ಬಂದ, ಬರದ ಹತ್ತಾರು ಪ್ರಕರಣಗಳಿವೆ. ತೀರಾ ಇತ್ತೀಚೆಗಿನ ಎರಡು ಘಟನೆಗಳು ನ್ಯಾಯಾಂಗದಲ್ಲಿ ಶಾಸಕಾಂಗದ ಸಂವಿಧಾನಬಾಹಿರ ಹಸ್ತಕ್ಷೇಪದ ಸನ್ನಿವೇಶವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಕಳೆದ ವರ್ಷ (2025) ಆಗಸ್ಟ್ 29ರಂದು, ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ. ವಿ.ಎಂ. ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ಗೆ ಅಸಹಜವೆನ್ನಿಸುವಷ್ಟು ವೇಗದಲ್ಲಿ (ನಾಲ್ಕೇ ದಿನಗಳಲ್ಲಿ) ನೇಮಕ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾ. ಬಿ. ಆರ್. ಗವಾಯಿ ಅವರ ಅಧ್ಯಕ್ಷತೆಯ ಕೊಲಿಜಿಯಂನ ಈ ತೀರ್ಮಾನಕ್ಕೆ, ಕರ್ನಾಟಕ ಮೂಲದ ಮತ್ತು ಶೀಘ್ರವೇ ಸ್ವತಃ ಮುಖ್ಯ ನ್ಯಾಯಮೂರ್ತಿ ಆಗಲಿರುವ ನಾ. ಬಿ.ವಿ. ನಾಗರತ್ನ ಅವರು ಭಿನ್ನಮತವನ್ನು ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಅವರ ಈ ಭಿನ್ನಮತ ಸಾರ್ವಜನಿಕವಾಗಿ ಪ್ರಕಟಗೊಂಡಿಲ್ಲವಾದರೂ, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವಿಚಾರಗಳು ಸುಪ್ರೀಂ ಕೋರ್ಟ್ ನ ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕಾಂಗದ ಹಸ್ತಕ್ಷೇಪದ ಬಗ್ಗೆ ಬೊಟ್ಟು ಮಾಡಿವೆ. ಗುಜರಾತ್ ಮೂಲದ ನ್ಯಾಯಮೂರ್ತಿಗಳಿಗೆ (ನ್ಯಾ.ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಎನ್. ವಿ. ಅಂಜಾರಿಯಾ) ಹೆಚ್ಚಿನ ಮಣೆ, ಬೆನ್ನುಬೆನ್ನಿಗೆ ಇಬ್ಬರು ಗುಜರಾತ್ ಮೂಲದ ನ್ಯಾಯಾಧೀಶರೇ ಮುಖ್ಯ ನ್ಯಾಯಮೂರ್ತಿಗಳಾಗಲಿರುವುದು, ಮಹಿಳಾ ನ್ಯಾಯಮೂರ್ತಿಗಳ ಹಿರಿತನ ಕಡೆಗಣಿಸಿರುವುದು ಮತ್ತಿತರ ಐದು ಕಾರಣಗಳನ್ನು ಮುಂದಿಟ್ಟಿವೆ. ಹಾಲಿ ಶಾಸಕಾಂಗದ ಮುಖ್ಯಸ್ಥರ ಗುಜರಾತ್ ಮೂಲವನ್ನು ಗಮನಿಸಿದರೆ, ಈ ಹಸ್ತಕ್ಷೇಪಗಳು ಗಂಭೀರ ಸ್ವರೂಪದವು ಅನ್ನಿಸದಿರುವುದಿಲ್ಲ. ಆದರೆ, ನ್ಯಾ. ನಾಗರತ್ನ ಅವರ ಕಳವಳಗಳಿಗೆ ಉತ್ತರ ದೊರೆತಿಲ್ಲ. (ಆಧಾರ: Supreme Court Observer) ಕಳೆದ ವಾರ ನ್ಯಾ. ಭುಯಾನ್ ಅವರು ಸಾರ್ವಜನಿಕವಾಗಿ ಎತ್ತಿರುವ ಪ್ರಶ್ನೆಯೂ ಗಂಭೀರ ಸ್ವರೂಪದ್ದು. 2025ರ ಆಗಸ್ಟ್ 25-26ರ ಸಭೆಯಲ್ಲಿ ಕೊಲಿಜಿಯಂ, 14 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಯ ಬಗ್ಗೆ ನಿರ್ಣಯವನ್ನು ಪ್ರಕಟಿಸಿತ್ತು. ಅದರಲ್ಲಿ, ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಅತುಲ್ ಶ್ರೀಧರನ್ ಅವರನ್ನು ಮಧ್ಯಪ್ರದೇಶದಿಂದ ಛತ್ತೀಸ್ಗಡಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಈ ಹಿಂದೆ ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದಾಗ, ಕೆಲವು ತೀರ್ಪುಗಳ ಮೂಲಕ ಶಾಸಕಾಂಗದ ಅಸಂತೋಷಕ್ಕೆ ಗುರಿ ಆಗಿದ್ದ ಅವರ ವರ್ಗಾವಣೆಯನ್ನು ಶಾಸಕಾಂಗ ತಡೆಹಿಡಿದಿತ್ತು ಮತ್ತು 2025ರ ಅಕ್ಟೋಬರ್ 14ರಂದು ಕೊಲಿಜಿಯಂ ಸಭೆಯಲ್ಲಿ ಅವರ ವರ್ಗಾವಣೆಯ ನಿರ್ಣಯವನ್ನು ಬದಲಿಸಿ, ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಈ ಕುರಿತ ಪ್ರಕಟಣೆಯಲ್ಲಿ ‘ಸರಕಾರದ ಮರುಪರಿಶೀಲನೆ ಕೋರಿಕೆಯ ಮೇರೆಗೆ’ (On reconsideration sought by the Government) ಎಂದು ದಾಖಲಿಸಲಾಗಿದೆ. ಈ ವಿಚಾರವನ್ನೇ ನ್ಯಾ. ಭುಯಾನ್ ತನ್ನ ಉಪನ್ಯಾಸದಲ್ಲಿ ಎತ್ತಿರುವುದು. ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ (ಚಿತ್ರ ನೋಡಿ). ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ. ನ್ಯಾ. ಭುಯಾನ್ ಅವರು ತಮ್ಮ ಪ್ರಖರ ಮಾತುಗಳಲ್ಲಿ, ‘‘ನ್ಯಾಯಾಧೀಶರಾಗಿ ನಾವು ಯಾವುದೇ ಭಯ, ಪಕ್ಷಪಾತ, ರಾಗ-ದ್ವೇಷಗಳಿಲ್ಲದೆ ಕಾರ್ಯಾಚರಿಸುವ ಪ್ರತಿಜ್ಞೆ ಸ್ವೀಕರಿಸಿರುತ್ತೇವೆ. ಅದನ್ನು ಪಾಲಿಸುವುದು ನಮ್ಮ ಕರ್ತವ್ಯ. ನ್ಯಾಯಾಂಗ ತನ್ನ ನಂಬಿಗಸ್ಥಿಕೆಯನ್ನು ಕಳೆದುಕೊಂಡರೆ, ಪ್ರಜಾತಂತ್ರದಲ್ಲಿ ಏನೂ ಉಳಿದಿರುವುದಿಲ್ಲ. ನ್ಯಾಯಮೂರ್ತಿಗಳು ಉಳಿದುಕೊಂಡಿರಬಹುದು, ತೀರ್ಪುಗಳು ಬರಬಹುದು ಆದರೆ, ನ್ಯಾಯಾಂಗದ ಆತ್ಮವೇ ಉಳಿದಿರುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನವೇ ಪರಮೋಚ್ಚ. ಪಾರ್ಲಿಮೆಂಟು ಸಾರ್ವಭೌಮ ಅಲ್ಲ ಎಂಬ ವಾಸ್ತವವೇ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಮೂಲ ತಿರುಳು. ನಿಯಂತ್ರಣ ಮತ್ತು ಸಂತುಲನಗಳಿದ್ದಾಗ ಮಾತ್ರ ಪ್ರಜಾತಾಂತ್ರಿಕ ಸಂಸ್ಥೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆಯುವುದು ಸಾಧ್ಯವಾಗುತ್ತದೆ. ಸಂಖ್ಯಾಬಲ, ಬಹುಮತ, ಅಧಿಕಾರಗಳ ಬಲದಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಲ್ಡೋಜ್ ಮಾಡಿಕೊಂಡು ಹೋಗುವ ಅಪಾಯ ತಪ್ಪುತ್ತದೆ.’’ ಎಂದು ಪುಣೆಯ ಉಪನ್ಯಾಸದಲ್ಲಿ ಹೇಳಿದ್ದರು. ಆಸಕ್ತರು ಅವರ ಪೂರ್ಣ ಉಪನ್ಯಾಸವನ್ನು ಇಲ್ಲಿ ಕೇಳಬಹುದು: https://www.youtube.com/watch?v=TSvJFZ873Fw
ಅಮೆರಿಕಾದ ಕಠಿಣ ಸುಂಕ ನೀತಿಯಿಂದಾಗಿ ಮಿತ್ರರಾಷ್ಟ್ರಗಳು ಚೀನಾದತ್ತ ಮುಖ ಮಾಡುತ್ತಿರುವುದು ಅಧ್ಯಕ್ಷ ಟ್ರಂಪ್ಗೆ ಚಿಂತೆ ಮೂಡಿಸಿದೆ. 8 ವರ್ಷಗಳ ಬಳಿಕ ಮೊದಲ ಬಾರಿಗೆ ಯುಕೆ ಪ್ರಧಾನಿಯೊಬ್ಬರು ಚೀನಾ ಪ್ರವಾಸ ಬೆಳೆಸಿದ್ದಾರೆ. ಯುಕೆ ಪ್ರಧಾನಿ ಕೀವ್ ಸ್ಟಾರ್ಮರ್ ಚೀನಾದೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.ಅಲ್ಲದೆ, ಕೆನಡಾ ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದರ ಬಗ್ಗೆಯೂ ಸಹ ಟ್ರಂಪ್ ತಮ್ಮ ವಿರೋಧ ವ್ಯಕ್ತಪಡಿಸಿ ಇದು ಸರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಟ್ರಂಪ್ ನ ಈ ಹೇಳಿಕೆಗಳು ಯುಕೆ ಕೆನಡಾಗೆ ಅಪಾಯವೋ ಅಥವಾ ಚೀನಾದೊಂದಿಗೆ ಒಪ್ಪಂದಗಳಿಂದ ಅಮೆರಿಕಾಗೆ ಅಪಾಯವೋ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ, ನಿವೃತ್ತ ನೌಕರರು ಹಾಗೂ ಸಾಧಕರಿಗೆ ಅಭಿನಂದನೆ
ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ 2023–24 ಹಾಗೂ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನಿವೃತ್ತ ಸರ್ಕಾರಿ ನೌಕರರು ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭವು ಫೆಬ್ರವರಿ 1ರಂದು (ರವಿವಾರ) ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ಯು. ರಾಜೇಶ್ ನಾಯಕ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗಣ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್. ಅವರು ಸಾಧಕರನ್ನು ಅಭಿನಂದಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಜಿ. ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ತಾರಾನಾಥ ಸಾಲ್ಯಾನ್ ಪಿ., ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷ ಪಿ. ಲೋಕನಾಥ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ವಿಷಯವನ್ನು ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕುವೆಂಪು ಅವರ ಉದಯ ರವಿ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಕುವೆಂಪು ಅವರ ಕುಟುಂಬವು ಹಣಕಾಸಿನ ಬೇಡಿಕೆ ಮತ್ತು ಷರತ್ತುಗಳನ್ನು ಮುಂದಿಟ್ಟು ಸಹಕರಿಸುತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ನಿಜಲಿಂಗಪ್ಪನವರ ಮನೆ ವಿಚಾರದಲ್ಲಿ ಯಶಸ್ವಿಯಾದಂತೆ, ಕುವೆಂಪು ಅವರ ಮನೆಯ ವಿಚಾರದಲ್ಲೂ ಸರ್ಕಾರ ಬದ್ಧವಾಗಿದೆ.
ರಾಜ್ಯದ ಇಬ್ಬರು IAS ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; KPTCL ಎಂಡಿ ಏಕಾಏಕಿ ಎತ್ತಂಗಡಿ!
ಕರ್ನಾಟಕ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಅವರು ಕೆಪಿಟಿಸಿಎಲ್ ಎಂಡಿ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲಿದ್ದಾರೆ.
IAS Transfer: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ, ಸಿಎಂ ಸಭೆಗೆ ಗೈರಾಗಿದ್ದು ಮುಳುವಾಯಿತೇ?
ಬೆಂಗಳೂರು: ಕರ್ನಾಟಕದಲ್ಲಿ ಇಂಧನ ಸಚಿವರ ರಾಜೀನಾಮೆ ಕುರಿತು ಚರ್ಚೆಗಳು ನಡೆದ ಬೆನ್ನಲ್ಲೆ ರಾಜ್ಯ ಸರ್ಕಾರದಲ್ಲಿ ಒಂದಷ್ಟು ಬೆಳವಣಿಗೆ ನಡೆದಿವೆ. ಆ ಪೈಕಿ ಐಎಎಸ್ ಅಧಿಕಾರಿ ವರ್ಗಾವಣೆಯು ಒಂದು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಜನವರಿ 30ರ ಶುಕ್ರವಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರ ಮುಂದಿನ ಆದೇಶವರೆಗೆ ಕರ್ನಾಟಕ ವಿದ್ಯುತ್
CJ Roy Death: ಉದ್ಯಮಿ ರಾಯ್ ಆತ್ಮಹತ್ಯೆ ಬಗ್ಗೆ ತನಿಖೆ: ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ರಾಮನಗರ: ಐಟಿ ದಾಳಿ ವೇಳೆ ಉದ್ಯಮಿ ಸಿ.ಜೆ. ರಾಯ್ಆ ತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ಗನ್ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕನಕೋತ್ಸವದ ವೇಳೆ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ
ಬಿರಿಯಾನಿ ತಿಂದಕ್ಕೆ ಬಂದ ಭಾರೀ ಟೀಕೆಗೆ ಡಾಲಿ ಧನಂಜಯ ಖಡಕ್ ಉತ್ತರ! ಜಾತಿ, ಊಟದ ಬಗ್ಗೆ ಏನಂದ್ರು ನಟ?
ನಟ ಡಾಲಿ ಧನಂಜಯ ಮಾಂಸಾಹಾರ ಸೇವನೆ ವಿವಾದಕ್ಕೆ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಆಹಾರದ ಆಯ್ಕೆ ವೈಯಕ್ತಿಕ ಎಂದಿದ್ದಾರೆ. ಸ್ನೇಹಿತನ ಹೋಟೆಲ್ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಡವರ ಮಕ್ಕಳ ಬೆಳೆಯಬೇಕು ಎಂಬ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ಹುಣಸೆನಾಡು ಕೂಡ್ಲಗಿಯಲ್ಲಿ ಹುಣಸೆ ಹಂಗಾಮು ಶುರು: ಅಧಿಕ ಇಳುವರಿಯಿಂದ ಹುಣಸೆ ರೈತರ ಮೊಗದಲ್ಲಿ ಮೂಡಿದ ಸಂತಸ
ಹುಣಸೆ ನಾಡು ಕೂಡ್ಲಿಗಿ ತಾಲೂಕಿನಲ್ಲಿ ಹುಣಸೆ ಹಣ್ಣಿನ ಸೀಜನ್ ಆರಂಭವಾಗಿದ್ದು, ಅಧಿಕ ಇಳುವರಿಯಿಂದ ವ್ಯಾಪಾರಿಗಳು, ಮಾಲೀಕರು ಸಂತಸಗೊಂಡಿದ್ದಾರೆ. ಕಾರ್ಮಿಕರು ಮರಗಳಿಂದ ಹಣ್ಣು ಕೀಳುವ ಕಾಯಕದಲ್ಲಿ ನಿರತರಾಗಿದ್ದು, ಬೇಸಿಗೆಯ 3-4 ತಿಂಗಳು ಕೆಲಸ ಸಿಗುವ ಅವಕಾಶವಿದೆ. ಗುಡೇಕೋಟೆಯಲ್ಲಿ ದೇಶದ ಮೊದಲ ಹುಣಸೆ ಸಂಸ್ಕರಣ ಘಟಕ ಸ್ಥಾಪನೆಯಾಗಿರುವುದು ರೈತರಿಗೆ ಅನುಕೂಲವಾಗಿದ್ದು, ಈ ಬಾರಿ ಹುಣಸೆಗೆ ಉತ್ತಮ ಲಾಭ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಉತ್ತರಾಖಂಡ: ಬಲವಂತದ ವಿವಾಹ, ಲಿವ್ಇನ್ ಸಂಬಂಧಕ್ಕೆ 7 ವರ್ಷ ಜೈಲು!
ಡೆಹ್ರಾಡೂನ್: ಕಟ್ಟುನಿಟ್ಟಿನ ದಂಡನಾ ಕ್ರಮಗಳನ್ನು ಒಳಗೊಂಡ ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮವಾಗಿ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್ಇನ್ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿ ಕಾನೂನಿನ ಅನ್ವಯ, ಬಲವಂತ, ಒತ್ತಡ ಅಥವಾ ವಂಚನೆಯ ಮೂಲಕ ವಿವಾಹ ಅಥವಾ ಲಿವ್ಇನ್ ಸಂಬಂಧಕ್ಕೆ ದಬ್ಬಾಳಿಕೆ ಮಾಡಿದರೆ, ಅಂಥ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಿವಾಹಿತ ವ್ಯಕ್ತಿಯೊಬ್ಬನು ಕಾನೂನಾತ್ಮಕ ವಿಚ್ಛೇದನ ಪಡೆಯದೇ ಎರಡನೇ ವಿವಾಹ ಮಾಡಿಕೊಂಡರೆ ಅಥವಾ ಲಿವ್ಇನ್ ಸಂಬಂಧ ಬೆಳೆಸಿದರೆ, ಅದನ್ನು ಅಪರಾಧ ಕೃತ್ಯವೆಂದು ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ. ಅಂತೆಯೇ, ಈಗಾಗಲೇ ಒಂದು ಲಿವ್ಇನ್ ಸಂಬಂಧ ಹೊಂದಿರುವ ವ್ಯಕ್ತಿ ಮತ್ತೊಂದು ಲಿವ್ಇನ್ ಸಂಬಂಧ ಹೊಂದಿರುವುದು ಸಾಬೀತಾದಲ್ಲಿ, ಅವನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನವರೊಂದಿಗೆ ಲಿವ್ಇನ್ ಸಂಬಂಧ ಹೊಂದಿದರೆ, ಆರು ತಿಂಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಶಿಕ್ಷೆಯನ್ನು ಇನ್ನೊಂದು ತಿಂಗಳು ವಿಸ್ತರಿಸಬಹುದು. ವಿವಾಹ ಅಥವಾ ಲಿವ್ಇನ್ ಸಂಬಂಧಕ್ಕಾಗಿ ಸುಳ್ಳು ಮಾಹಿತಿ ನೀಡಿದರೆ ಅಥವಾ ವಾಸ್ತವಾಂಶಗಳನ್ನು ಮುಚ್ಚಿಟ್ಟರೆ, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೆ, ತಿದ್ದುಪಡಿ ಕಾನೂನಿನ ಪ್ರಕಾರ ಅಕ್ರಮ ವಿಧಾನದಲ್ಲಿ ವಿಚ್ಛೇದನ ಪಡೆದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬಾಲ್ಯವಿವಾಹ ನಿರ್ಬಂಧ ಕಾಯ್ದೆ–2006ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ.
ಬೇಸಿಗೆಗೂ ಮುನ್ನವೇ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ ಲಗ್ಗೆ; ನಿರ್ಜಲೀಕರಣ ನೀಗಿಸುವ ಈ ಹಣ್ಣಿನ ಬೆಲೆ ಹೇಗಿದೆ?
ಚನ್ನಪಟ್ಟಣದಲ್ಲಿ ಬೇಸಿಗೆಗೂ ಮೊದಲೇ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಬಂದಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳು ಹಾಗೂ ಹಣ್ಣುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ಪಕ್ಕದ ರಾಜ್ಯಗಳಿಂದ ಕಲ್ಲಂಗಡಿ ತರಿಸುತ್ತಿದ್ದಾರೆ. ಕಲ್ಲಂಗಡಿ ಹಣ್ಣು ದಾಹ ತೀರಿಸುವುದಲ್ಲದೆ, ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಭಾರತ–ಅಮೆರಿಕ ವ್ಯಾಪಾರ ಬಿಕ್ಕಟ್ಟು ಶಮನ ಸನ್ನಿಹಿತ: ಗೋಯಲ್
ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಕಗ್ಗಂಟಾದ ಸಮಸ್ಯೆಗಳು ಇತ್ಯರ್ಥಗೊಂಡಿದ್ದು, ಒಪ್ಪಂದ ಅಂತಿಮ ಹಂತ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಯಶಸ್ವಿಯಾಗಿ ಅಂತಿಮಗೊಂಡ ಬಳಿಕ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಭಾರತದ ವ್ಯಾಪಾರ ಕಾರ್ಯತಂತ್ರದಲ್ಲಿ ನಿರ್ದಿಷ್ಟ ಬದಲಾವಣೆ ಆಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಹಿಂದಿನ ಸಂರಕ್ಷಣಾತ್ಮಕ ಹಿಂಜರಿಕೆಯಿಂದ ಹೊರಬಂದು ಭಾರತ ಭವಿಷ್ಯದಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ವಿಶ್ವದೊಂದಿಗೆ ವ್ಯಾಪಾರ ಒಪ್ಪಂದಗಳು ಐಚ್ಛಿಕವಲ್ಲ; ಪ್ರತ್ಯೇಕವಾಗಿ ಜೀವಿಸಲು ಸಾಧ್ಯವಿಲ್ಲ ಎಂದು ಗೋಯಲ್ ಅಭಿಪ್ರಾಯಪಟ್ಟರು. ಭಾರತ 2022ರಲ್ಲಿ ಸಂಧಾನ ಮಾತುಕತೆಗಳನ್ನು ಆರಂಭಿಸಿದಾಗಿನಿಂದಲೇ ಈ ಒಪ್ಪಂದವನ್ನು ಪ್ರಾಮಾಣಿಕವಾಗಿ ಹಾಗೂ ಗಂಭೀರವಾಗಿ ಪರಿಗಣಿಸಲಾಗಿದೆ. ಭಾರತ ಜತೆ ವ್ಯಾಪಾರ ಮಾಡುವ ಮನಸ್ಥಿತಿಯನ್ನು ನಾವು ಬೆಳೆಸಿಕೊಂಡಿದ್ದೇವೆ ಎಂದು ಅವರು ಹೇಳಿದರು. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಎಲ್ಲ ಸೂಕ್ಷ್ಮ ಅಂಶಗಳನ್ನು ಬದಿಗಿಟ್ಟಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2026ರೊಳಗೆ ವ್ಯಾಪಾರ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಲ ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಲು ಸುಮಾರು ನಾಲ್ಕು ತಿಂಗಳು ಸಮಯ ಬೇಕಾಗಬಹುದು. ಅದರ ಬಳಿಕ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

27 C