ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಅಲಹಾಬಾದ್ ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ರಾಜೀನಾಮೆ
ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ ದೆಹಲಿಯ ಅವರ ನಿವಾಸದಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದ ಇವರು, ಇತ್ತೀಚೆಗೆ ತಮ್ಮ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರಿನಂದಾ (15) ಶವವಾಗಿ ಪತ್ತೆಯಾಗಿದ್ದಾಳೆ. ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧಾರ ಪ್ರದೇಶದ ಸಮೀಪ ಸುಮಾರು 2 ಸಾವಿರ ಅಡಿಗಳಷ್ಟು ಆಳದ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರವಾಸಕ್ಕೆ ಬಂದಿದ್ದಾಗಲೇ ಬಾಲಕಿ ನಾಪತ್ತೆಯಾಗಿದ್ದ ಹಿನ್ನೆಲೆ, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿ ಪ್ರಪಾತಕ್ಕೆ ಬಿದ್ದ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
PUC ಅಂಕಪಟ್ಟಿ ಇನ್ನು ಡಿಜಿಟಲ್: ಮುಂದಿನ ವರ್ಷದಿಂದ ಸಿಗಲ್ಲ ಭೌತಿಕ ಅಂಕಪಟ್ಟಿ , ಡಿಜಿಲಾಕರ್ನಲ್ಲಿ ಮಾತ್ರ ಲಭ್ಯ
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ನೀಡುವ ದಶಕಗಳ ಹಳೆಯ ಪದ್ಧತಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಗುಡ್ ಬೈ ಹೇಳಲು ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಕೇವಲ ಡಿಜಿಟಲ್ ಅಂಕಪಟ್ಟಿ ಮಾತ್ರ ಲಭ್ಯವಾಗಲಿದ್ದು, ಭೌತಿಕ ಪ್ರತಿಯನ್ನು ಮುದ್ರಿಸಿ ನೀಡುವ ವ್ಯವಸ್ಥೆ ಇತಿಹಾಸದ ಪುಟ ಸೇರಲಿದೆ. ಈ ವರ್ಷ
ರಾಜ್ಯದಲ್ಲಿ ಮುಂದಿನ 5 ದಿನ ಬಿಸಿಲ ಜತೆಗೆ ಮಳೆಯೂ ಇರಲಿದೆ. ದಕ್ಷಿಣ ಒಳನಾಡು, ಕರಾವಳಿಯ ಜಿಲ್ಲೆಗಳ ಕೆಲವೆಡೆ ಏಪ್ರಿಲ್ 10 ರಿಂದ 14ವರೆಗೂ ಮಳೆಯಾಗಲಿದೆ. ಬಿಸಿಲ ಧಗೆಯು 1 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗಲಿದೆ. ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಅಥವಾ ಶನಿವಾರ ಮಳೆಯಾಗಲಿದೆ. ಸಂಪೂರ್ಣ ಹವಾಮಾನ ವರದಿ ಇಲ್ಲಿದೆ.
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ
RBI New Rule: ದೇಶದಲ್ಲಿ ಆನ್ಲೈನ್ ವಹಿವಾಟಿನಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI - ಆರ್ಬಿಐ) ಮಹತ್ವದ ಕಾನೂನು ರೂಪಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಹಿರಿಯ ನಾಗರಿಕರು ಮತ್ತು ವಿಕಲಚೇತನರರು ಸೇರಿದಂತೆ ಕೆಲವು ನಿರ್ದಿಷ್ಟ ಸಮೂಹವನ್ನು ರಕ್ಷಿಸುವ / ಹಣ ವಂಚನೆಗೆ ಒಳಗಾಗದಂತೆ ತಡೆಯುವ ಉದ್ದೇಶದಿಂದ ಆರ್ಬಿಐ 50,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ
ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಆರೋಪ ತಪ್ಪು : ರಿಝ್ವಾನ್ ಅರ್ಷದ್
ಬೆಂಗಳೂರು : ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಎಲ್ಲಾ ಜಾತಿ-ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದಾರೆ ಎಂದು ರಿಝ್ವಾನ್ ಅರ್ಷದ್ ಹೇಳಿದರು. ಉಪಚುನಾವಣೆಯ ಬಳಿಕ ಮುಸ್ಲಿಂ ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿರೋಧ ಪಕ್ಷಗಳಿಂದ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಬಿಜೆಪಿ, ಎಸ್ಡಿಪಿಐ ಹಾಗೂ ಕೆಲ ಪಕ್ಷೇತರರು ಈ ರೀತಿಯ ಅಭಿಯಾನ ನಡೆಸಿದರೂ, ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದು ನಿಜ. ಪಕ್ಷವು ಅದನ್ನು ಗಂಭೀರವಾಗಿ ಪರಿಗಣಿಸಿತ್ತು. ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡುವ ಕುರಿತು ಒತ್ತಡವೂ ಇತ್ತು ಎಂದರು. ಸಭೆಯಲ್ಲಿ ಎಲ್ಲಾ ಮುಸ್ಲಿಂ ಶಾಸಕರು ಹಾಗೂ ಸಚಿವರು ಭಾಗವಹಿಸಿ, ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ಕೇಳೋಣ ಎಂಬ ನಿರ್ಧಾರ ಕೈಗೊಂಡಿದ್ದರು. ಆದರೆ ಅವರ ವಿರುದ್ಧವೂ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹಲವು ಹೆಸರುಗಳನ್ನು ಮುಂದಿರಿಸಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಹೇಳಿದರು. ಎಸ್.ಎಸ್. ಮಲ್ಲಿಕಾರ್ಜುನ್ ಅವರು ಶಾಮನೂರು ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ನಮಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮವಾಗಿ ಅಭ್ಯರ್ಥಿಗೆ ಒಪ್ಪಿಗೆ ನೀಡಲಾಗಿತ್ತು ಎಂದರು. ನಂತರ ಎಲ್ಲರೂ ಸೇರಿ ಪ್ರಚಾರ ಮಾಡಿದ್ದೇವೆ. ಕೆಲವರು ಪ್ರಚಾರದಲ್ಲಿ ಭಾಗವಹಿಸಿಲ್ಲ. ವಿರೋಧ ಪಕ್ಷಗಳು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ ಎಂದು ತಪ್ಪು ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ಧ ಅಭಿಯಾನ ಮಾಡಿವೆ ಎಂದು ಆರೋಪಿಸಿದರು. ಮುಸ್ಲಿಂ ಶಾಸಕರು ಸಮರ್ಥ್ ಪರವಾಗಿ ಕೆಲಸ ಮಾಡಿದರೂ, ಕೆಲವರನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಸಮುದಾಯದ ದ್ರೋಹಿಗಳು’ ಎಂದು ಬಿಂಬಿಸಲಾಗಿದೆ. ಸಭೆಯೊಳಗೆ ಒಪ್ಪಿಗೆ ನೀಡಿದ ಬಳಿಕ ಹೊರಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಹಿಂದಿರುಗಬಹುದು ಎಂದಿದ್ದ ನಿರೀಕ್ಷೆ ಹುಸಿಯಾಗಿದ್ದು, ಬಾಲಕಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಮೃತದೇಹ ಡ್ರೋನ್ ನಲ್ಲಿ ಪತ್ತೆ ಮಾಡಲಾಗಿದ್ದು, ಪ್ರಪಾತದಿಂದ ಮೇಲಕ್ಕೆತ್ತಲು ಪ್ರಯತ್ನ ನಡೆದಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕಿಸ್ತಾನದಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ಮಾತುಕತೆಗೆ ಸಿದ್ದತೆ ನಡೆಯುತ್ತಿರುವ ವೇಳೆ ಇಸ್ರೇಲ್ ವಿರುದ್ದ ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಆಸಿಫ್ ವಗ್ದಾಳಿ ನಡೆಸಿದ್ದು, ಇಸ್ರೇಲ್ ದುಷ್ಟ ಮತ್ತು ಮಾನವೀಯತೆಗೆ ಶಾಪವಾಗಿದ್ದು, ಈ ಕ್ಯಾನ್ಸರ್ ದೇಶ ನರಕದಲ್ಲಿ ಸುಡಲ್ಪಡಬೇಕು ಎಂದು ವಿನಾಶದ ಕುರಿತ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ಇಸ್ರೇಲ್ ಪ್ರತಿಕ್ರಿಯೆ ನೀಡಿದ್ದು, ಶಾಂತಿಗೆ ಮಧ್ಯಸ್ಥಿಕೆ ವಹಿಸುವ ದೇಶಗಳಿಂದ ಇಂತಹ ಹೇಳಿಕೆಗಳು ಸಹಿಸಲಾಗದು ಎಂದು ಟೀಕೆ ಮಾಡಿದ ಬೆನ್ನಲ್ಲೇ, ಇದೀಗ ಖವಜಾ ಆಸಿಫ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ..
ದಾವಣಗೆರೆ ದಕ್ಷಿಣ ಬಂಡಾಯ: ಪ್ರಚಾರಕ್ಕೆ ಗೈರಾದ ಕೈ ನಾಯಕರ ವಿರುದ್ಧ ಹೈಕಮಾಂಡ್ ಗೆ ಸಲ್ಲಿಕೆಯಾಗುತ್ತಾ ವರದಿ?
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯು ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣೆ ಮುಗಿದಿದ್ದರೂ, ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತು ಮುಸ್ಲಿಂ ಸಮುದಾಯದ ನಾಯಕರ ನಡೆ ಈಗಲೂ ಸದ್ದು ಮಾಡುತ್ತಿದೆ.
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರಿನಂದಾ (15) ಶವವಾಗಿ ಪತ್ತೆಯಾಗಿದ್ದಾಳೆ. ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧಾರಾದಿಂದ ಸುಮಾರು 2 ಸಾವಿರ ಅಡಿಗಳಷ್ಟು ಆಳದ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
2nd PUC Result 2026 | ಬರಕಃ ಪಿಯು ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಮಂಗಳೂರು: ಬರಕಃ ಇಂಟರ್ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್ನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಈ ಪೈಕಿ ಫಾತಿಮಾ ತಾಲಿಯಾ 98% ಅಂಕಗಳನ್ನು ಪಡೆದು ಅಗ್ರಸ್ಥಾನ ಗಳಿಸಿದ್ದು, ಮರ್ಯಮ್ ಲಮ್ಯಾ, ಮರ್ವಾ ಸಹಾರ್ ಮತ್ತು ಫಾತಿಮಾ ರಿಲಾ ತಲಾ 97% ಅಂಕಗಳನ್ನು ಪಡೆದಿದ್ದಾರೆ. ಆಯಿಶಾ ಸಾನಿಯಾ, ರಿನ್ಶಾ ಫಾತಿಮಾ ಹಾಗೂ ಹಲೀಮಾ ಶೌಮಾ ತಲಾ 96% ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಇದಲ್ಲದೆ, ಇತರ ಹಲವು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದು, ಒಟ್ಟು 51 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 86 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್ಥಿಕಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಆರು ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ. ಸಂಸ್ಥೆಯು NEET ಇಂಟಿಗ್ರೇಟೆಡ್ ಕೋರ್ಸ್ ಹಾಗೂ ಪುನರಾವರ್ತನೆ ಮಾಡುವವರಿಗೆ ದೀರ್ಘಾವಧಿ NEET ಕೋರ್ಸ್ಗಳನ್ನು ಒದಗಿಸುತ್ತಿದ್ದು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿದೆ. ಇದುವರೆಗೆ ಅನೇಕ ವಿದ್ಯಾರ್ಥಿಗಳು ಸಂಸ್ಥೆಯ ತರಬೇತಿ ಮತ್ತು ಕೋಚಿಂಗ್ ಮೂಲಕ ಉಚಿತ ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್ ಸೀಟುಗಳನ್ನು ಪಡೆದಿದ್ದಾರೆ. ಬರಕಃ ಇಂಟರ್ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್ ಪ್ರೀ-ಕೆಜಿ ಯಿಂದ ಡಿಗ್ರಿ ಮಟ್ಟದವರೆಗೆ ಸಮಗ್ರ ಶಿಕ್ಷಣ ನೀಡುತ್ತಿದ್ದು, ಶೈಕ್ಷಣಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ದಾಖಲಿಸುತ್ತಿದೆ. ಹೊಸ ಶೈಕ್ಷಣಿಕ ವರ್ಷದ ಪ್ರವೇಶ ಮತ್ತು ಹೆಚ್ಚಿನ ಮಾಹಿತಿಗಾಗಿ: 9611903137 / 9108243155 / 9108243154 ಇಮೇಲ್: info@bismangalore.com
ಕನಸು ಎಂದರೆ ನಿದ್ದೆಯಲ್ಲಿ ಕಾಣುವುದಲ್ಲ, ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದೇ ನಿಜವಾದ ಕನಸು, ಎಂದಿದ್ದರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಹೌದು, ಇವರಿಗೆ ಅಂಕಗಳು ನಿದ್ರೆ ಮಾಡಲು ಬಿಡಲಿಲ್ಲ. ಈ ಕನಸಿನ ಗುರಿ ಮುಟ್ಟಲು ಎದುರಾದ ಅಡೆತಡೆಗಳನ್ನೆಲ್ಲ ಮೆಟ್ಟಿ ನಿಂತು ಸಾಧಿಸಿದವರು ಇವರು. ಈ ಕಾರಣಕ್ಕಾಗಿಯೇ ಇವರ ಯಶಸ್ಸು ಕೇವಲ ಅಂಕಗಳಲ್ಲ; ಹಠ ಮತ್ತು ಪರಿಶ್ರಮದ ಸಂಕೇತ.
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ
Gold Rate April 10: ಚಿನ್ನದ ಬೆಲೆಯು ಏಪ್ರಿಲ್ 10ರ ಶುಕ್ರವಾರ ಮತ್ತೆ ಭಾರೀ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಇದೀಗ ಶುಕ್ರವಾರ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. ಅಕ್ಷಯ ತೃತೀಯಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಚಿನ್ನದ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿರುವುದು ಚಿನ್ನ ಪ್ರಿಯರಲ್ಲಿ ನಿರಾಸೆಯನ್ನುಂಟು ಮಾಡಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದಲ್ಲಿ
ಚುನಾವಣೆಗೆ ಹೊಸ ಟ್ವಿಸ್ಟ್ : ವಿಜಯ್ ’ಜನನಾಯಗನ್’ ಸಿನಿಮಾದ HD ಪ್ರಿಂಟ್ ಲೀಕ್ - ಹಿಂದಿದೆಯಾ ದೊಡ್ಡ ಸಂಚು?
Thalapathy Vijay's Jana Nayagan : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ದಳಪತಿ ವಿಜಯ್ ಅಭಿನಯದ ಜನನಾಯಗನ್ ಸಿನಿಮಾದ HD ಕಾಪಿ, ಪೈರೇಟೆಡ್ ವೆಬ್ಸೈಟ್ ನಲ್ಲಿ ಲೀಕ್ ಆಗಿದೆ. ಈ ಸಿನಿಮಾಗೆ ಇನ್ನೂ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ, ಈ ವಿದ್ಯಮಾನ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಆರ್ಸಿಬಿ-ಆರ್ಆರ್ ಪಂದ್ಯ ಮಳೆಯಿಂದ ರದ್ದಾದ್ರೆ ಮುಂದಿನ ನಿಲುವೇನು? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?
RCB Vs RR Match Weather Report: ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 10) ನಡೆಯಲಿರುವ ಐಪಿಎಲ್ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ. ಈಗಾಗಲೇ ಇಲ್ಲಿ ನಡೆದ ಕಳೆದ ಎರಡು ಪಂದ್ಯಗಳಿಗೆ ಮಳೆ ಅಡ್ಡಿಯಾಗಿದ್ದು, ಇಂದು ಕೂಡ ವರುಣನ ಭೀತಿ ಎದುರಾಗಿದೆ. ಹಾಗಾದ್ರೆ, ಹವಾಮಾನ
ಪಶ್ಚಿಮ ಬಂಗಾಳ| ಹುಮಾಯೂನ್ ಕಬೀರ್ ಪಕ್ಷದೊಂದಿಗೆ ಮೈತ್ರಿ ಕೊನೆಗೊಳಿಸಿದ ಎಐಎಂಐಎಂ
ಹೊಸ ದಿಲ್ಲಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹುಮಾಯೂನ್ ಕಬೀರ್ ಆಡಿರುವ ಮಾತುಗಳನ್ನು ಉಲ್ಲೇಖಿಸಿ ಅವರ ಪಕ್ಷ ಆಮ್ ಜನತಾ ಉನ್ನಾಯನ್ ಜೊತೆಗಿನ ಮೈತ್ರಿಯನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕೊನೆಗೊಳಿಸಿದ್ದಾರೆ. ಶುಕ್ರವಾರ ಕಠಿಣ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಐಎಂಐಎಂ, “ಮುಸ್ಲಿಮರ ಸಮಗ್ರತೆಯನ್ನು ಪ್ರಶ್ನಿಸುವವರ ಜೊತೆ ಗುರುತಿಸಿಕೊಳ್ಳಲು ಸಾಧ್ಯವಿಲ್ಲ, ತಕ್ಷಣದಿಂದಲೇ ಹುಮಾಯೂನ್ ಕಬೀರ್ ಪಕ್ಷದೊಂದಿಗಿನ ಸಂಬಂಧ ಅಂತ್ಯಗೊಂಡಿದೆ ಎಂದು ದೃಢಪಡಿಸಿದೆ. “ಕಬೀರ್ ಅವರ ಮಾತುಗಳು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಪರಿಸ್ಥಿತಿ ಎಷ್ಟು ದುರ್ಬಲವಾಗಿದೆ ಎಂಬುದನ್ನು ಸೂಚಿಸುತ್ತಿದೆ” ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ. ಇದರ ಬೆನ್ನಿಗೇ, ತನ್ನ ಕಾರ್ಯತಂತ್ರವನ್ನು ಪುನರುಚ್ಚರಿಸಿರುವ ಎಐಎಂಐಎಂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಮುಂಬೈನಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಇಂಜಿನ್ ಒಂದು ಸ್ಥಗಿತಗೊಂಡ ಹಿನ್ನಲೆಯಲ್ಲಿ ಪೈಲಟ್ ಪ್ಯಾನ್-ಪ್ಯಾನ್ ಎಂದು ಘೋಷಿಸಿದ್ದು ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿಸಲಾಗಿದೆ. ಇನ್ನು, ಈ ಘಟನೆ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರ ಶಂಕಿತ ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಮರಳಿಸಲಾಗಿದ್ದು, ಈ ಕುರಿತು ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಹಾರಾಟದ ವೇಳೆ ಘೋಷಿಸಲಾದ ಈ ಪ್ಯಾನ್-ಪ್ಯಾನ್ ಎಂಬ ಸಂದೇಶದ ಅರ್ಥವೇನು ಎಂಬ ಮಾಹಿತಿ ಇಲ್ಲಿದೆ...
ಕನ್ನಡ ರಂಗಭೂಮಿ ಕಂಡ ಅಪರೂಪದ ರಂಗಕರ್ಮಿ ಪ್ರಸನ್ನರೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ (ಮಾರ್ಚ್ 27) ನಡೆಸಿದ ಮಾತುಕತೆಯ ಮೂರನೇ ಭಾಗ ಇಲ್ಲಿದೆ. ಭಾಗ-3 * ರಂಗಭೂಮಿಯ ಇಂದಿನ ದುಃಸ್ಥಿತಿಗೆ ಒಳಗಿನ ಕಾರಣಗಳೂ ಇರಬಹುದಲ್ಲವೆ? ಅವುಗಳ ಬಗ್ಗೆ ಮಾತನಾಡಬಹುದೇ? ಖಂಡಿತ. ಒಳಗಿನ ಕಾರಣಗಳೂ ಇದ್ದಾವೆ. ಮಾತ್ರವಲ್ಲ, ಒಳಗಿನ ಕಾರಣಗಳು ಸಹ ಹೊರಗಿನ ಕಾರಣವಾದಷ್ಟೇ ಮುಖ್ಯವಾದದ್ದು. ರಂಗಭೂಮಿ ಒಂದು ಆಟ. ಹೇಗೆ ಫುಟ್ಬಾಲ್, ಕ್ರಿಕೆಟ್ ಇತ್ಯಾದಿಗಳು ಆಟಗಳೋ ಹಾಗೆಯೇ ಇದು ಕೂಡ ಒಂದು ಆಟ. ರಂಗ ಮಾಧ್ಯಮದ ಸೋಲುಗೆಲುವುಗಳು ನಿರ್ಣಯವಾಗುವುದು ಈ ಆಟವನ್ನು ನಾವು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂಬ ಸಂಗತಿಯ ಮೇಲೆ. ನಾವು ಆಟ ಮರೆತಿದ್ದೇವೆ, ಆಟದ ಶಿಸ್ತು ಮರೆತಿದ್ದೇವೆ. ಸಿನೆಮಾ, ಸೀರಿಯಲ್ ಇತ್ಯಾದಿಗಳಿಗೆ ಪೂರಕವಾಗುವಂತೆ ಈ ಮಹಾನ್ ಆಟವನ್ನು ಜಗ್ಗಾಡುತ್ತಿದ್ದೇವೆ. * ರಂಗಭೂಮಿ ಕೇವಲ ಒಂದು ಆಟ ಎಂದಾದರೆ ರಂಗಭೂಮಿಗೆ ಸಾಮಾಜಿಕ ಬದ್ಧತೆಯಿಲ್ಲವೆ? ಇದೆ. ಆದರೆ, ಫುಟ್ಬಾಲ್ ಕ್ರಿಕೆಟ್ಗಳಿಗೂ ಅದು ಇದೆ, ಇರಬೇಕು. ರಂಗಭೂಮಿಯು ಇತರ ಆಟಗಳಿಗಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಹೆಚ್ಚು ಬದ್ಧವೂ ಅಲ್ಲ, ಕಡಿಮೆ ಬದ್ಧವೂ ಅಲ್ಲ. * ಅಂದರೆ, ನೀವು ಹೇಳುವುದು ಆಟ ಹಾಳಾಗಿದೆ ಎಂದೇ? ಹೌದು, ಹಾಳಾಗಿದೆ. ಹೇಗೆ ಕ್ರಿಕೆಟ್ ಎಂಬ ಆಟ ದುಡ್ಡಿನ ಆಟವಾಗಿದೆಯೋ, ಜಾಹೀರಾತಿನ ಗುಲಾಮನಾಗಿ ದೆಯೋ, ಹೇಗೆ ಅಲ್ಲಿ ಆಟಗಾರರಿಗಿಂತ ಸ್ಟಾರುಗಳು ಹೆಚ್ಚು ಪ್ರಮುಖರಾಗಿದ್ದಾರೆಯೋ, ಹೇಗೆ ಅಲ್ಲಿ ಹಣ ಹರಿಯುತ್ತಿದೆ ಎಂಬ ಕಾರಣಕ್ಕಾಗಿ ಕೊಳಕು ರಾಜಕಾರಣವು ಒಳಗೆ ಪ್ರವೇಶಿಸಿದೆಯೋ, ಹಾಗೆಯೇ ಇಲ್ಲಿಯೂ ಆಗಿದೆ. ಇಲ್ಲಿ ಅದು ಸಿನೆಮಾ, ಸೀರಿಯಲ್ಗಳ ರೂಪ ಪಡೆದು ಆಗಿದೆ. ಸಾಮಾನ್ಯ ಜನತೆಗೆ ಸಿನೆಮಾನೇ ರಂಗಭೂಮಿ ಎಂದೆನ್ನಿಸತೊಡಗಿದೆ, ಸೀರಿಯಲೆೇ ಸಾಮಾಜಿಕ ಪ್ರಜ್ಞೆಯ ವಾರಸುದಾರ ಎಂದೆನ್ನಿಸತೊಡಗಿದೆ. ಇದೆಲ್ಲದರ ದುಷ್ಪರಿಣಾಮ ನಮ್ಮ ಮೇಲಾಗಿದೆ. ನಟರುಗಳ ಮೇಲಾಗಿದೆ. ನಟರು ಕೂಡಾ ಹಾಗೆಯೇ ತಿಳಿಯತೊಡಗಿದ್ದಾರೆ. ನಟನೆ ಭ್ರಷ್ಟವಾಗಿದೆ. * ಹೇಗೆ ಭ್ರಷ್ಟವಾಗಿದೆ, ಕೊಂಚ ವಿವರಿಸಬಹುದೇ? ರಂಗಭೂಮಿ ಎಂದು ನಾವು ಕರೆಯುವ ಈ ಆಟದಲ್ಲಿ ಮೂರು ಸಂಗತಿಗಳು ಮುಖ್ಯವಾಗುತ್ತವೆ. ಅವುಗಳೇ ನಿರ್ಣಾಯಕವಾದ ಸಂಗತಿಗಳು. ನಟ, ನಾಟಕ, ರಸಿಕ ಪ್ರೇಕ್ಷಕ. ಒಳ್ಳೆಯ ನಾಟಕ ನಡೆಯಲಿಕ್ಕೆ ಒಳ್ಳೆಯ ನಟ ಬೇಕೇ ಬೇಕು, ಒಳ್ಳೆಯ ನಾಟಕ ಬೇಕೇ ಬೇಕು. ರಸಿಕ ಪ್ರೇಕ್ಷಕರು ಬೇಕೇ ಬೇಕು. ಹೌದು ತಾನೆ? ಇವುಗಳನ್ನೇ ದುರ್ಬಲಗೊಳಿಸಲಾಗಿದೆ. ಮಿಕ್ಕೆಲ್ಲ ಗೌಣ ಸಂಗತಿಗಳನ್ನು ತಲೆಯ ಮೇಲೆ ಏರಿಸಿ ಕುಳಿಸಲಾಗಿದೆ. ಮಿಕ್ಕವರು ಇಲ್ಲಿ ಗೌಣ. ನಿರ್ದೇಶಕನಿಲ್ಲದೆಯೂ ನಾಟಕ ನಡೆಯಬಲ್ಲದು ತಾನೆ? ಪಾರಂಪರಿಕ ನಾಟಕಗಳು ನಿರ್ದೇಶಕನಿಲ್ಲದೆ ನಡೆದಿದ್ದವು ತಾನೆ? ಇದೇ ರೀತಿ, ನಾಟಕಕಾರ, ವಿನ್ಯಾಸಕಾರ, ತಂಡದ ಮ್ಯಾನೇಜರ್ ಇತ್ಯಾದಿ. ಎಲ್ಲರೂ ಪೂರಕ ಸಂಗತಿಗಳು ಮಾತ್ರ. ಪೂರಕವಾಗಿಯೇ ಉಳಿಯಬೇಕು ಅವರು. ಫುಟ್ಬಾಲ್ನಲ್ಲಿ ಕೋಚುಗಳಿರುವಂತೆ ಇರಬೇಕು, ರೆಫರಿಗಳಿರುವಂತೆ ಇರಬೇಕು. ಹೇಗೆ ಅಲ್ಲಿ ಆಡುವವನು ಪೀಲೆಯೋ ಮೆಸ್ಸಿಯೋ ಹಾಗೆಯೇ ಇಲ್ಲಿ ಕೂಡಾ. ಇನ್ನು, ನಾಟಕ. ಏನಿದು ನಾಟಕವೆಂದರೆ? ನಾಟಕವೆಂದರೆ ಒಂದು ಸೆಣಸಾಟ, ಒಂದು ಮ್ಯಾಚ್. ಹೇಗೆ ಫುಟ್ಬಾಲ್ ಆಟವು ಎರಡು ತಂಡಗಳ ನಡುವಿನ ಸೋಲುಗೆಲುವುಗಳ ಸೆಣಸಾಟದ ಮೇಲೆ ನಿಂತಿದೆಯೋ ಹಾಗೆಯೇ ರಂಗಭೂಮಿಯು ಒಳಿತುಕೆಡುಕುಗಳ ಸೆಣಸಾಟದ ಮೇಲೆ ನಿಂತಿದೆ. * ಸೆಣಸಾಟ? ಅರ್ಥವಾಗಲಿಲ್ಲ ಸರ್... ಹೌದು, ನಾಟಕವೆಂಬುದು ಸೆಟಸಾಟವೇ ಸರಿ. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಹೀರೋ ಮತ್ತು ವಿಲನ್ಗಳ ನಡುವಿನ ಸೆಣಸಾಟ ನಾಟಕ. ಪ್ರೇಮಕಥೆಯಾಗಿಸಿ ಹೇಳಿದರೆ ಹೆಣ್ಣುಗಂಡಿನ ನಡುವಿನ ಪ್ರೇಮವೆಂಬ ಆಕರ್ಷಣೆ ಅಥವಾ ಅಪಕರ್ಷಣೆಯೆಂಬ ನಾಟಕ. ಎಲ್ಲ ಆಟಗಳಲ್ಲಿ ಸಂಘರ್ಷವಿದೆ ಹಾಗೂ ಆ ಎಲ್ಲ ಸಂಘರ್ಷಗಳೂ ರೂಪಕಗಳು. ಪ್ರೇಕ್ಷಕರಿಗೆ ಅರಿವು ಮೂಡಲಿ ಎಂದು ಕಟ್ಟಿದ ಒಂದು ಸಾಂಕೇತಿಕ ಸಂಘರ್ಷವೇ ನಾಟಕ. * ಅಂದರೆ, ಸಂಘರ್ಷವಿಲ್ಲದೆ ನಾಟಕವಿಲ್ಲವೇ? ಇಲ್ಲ. ಸಂಘರ್ಷವೇ ನಾಟಕೀಯವಾದದ್ದು. ಜಗಳ, ಯುದ್ಧ, ಗಲಾಟೆ, ಕೂಗಾಟ, ಕಿರುಚಾಟ ಎಲ್ಲವೂ ನಾಟಕೀಯವೇ ತಾನೆ? ಸಮುದ್ರ ಕೆರಳಿದಾಗ, ಅದು ನಾಟಕೀಯವಾಗುತ್ತದೆ ತಾನೆ? ಅದೇ ಸಮುದ್ರ ಮಲಗಿರುವಾಗ ಶಾಂತವಾಗಿರುತ್ತದೆ ತಾನೆ? ದುರಂತವೆಂದರೆ, ನಾವಿಂದು ಶಾಂತಸಮುದ್ರ ಬೋರು ಎಂದು ತಿಳಿದು, ಕೆರಳಿದ ಸಮುದ್ರವನ್ನು ಮಾತ್ರವೇ ನಾಟಕದ ಹೆಸರಿನಲ್ಲಿ ತೋರಿಸತೊಡಗಿದ್ದೇವೆ. ಹಾಗಾಗಿ ಕೆರಳುವುದೇ ಎಂಬಂತೆ ಬಿಂಬಿಸುತ್ತಿದ್ದೇವೆ. ಈಗಾಗಲೇ ಕೆರಳಿರುವ ಜನತೆಯನ್ನು ನಮ್ಮ ನಾಟಕ, ಸಿನೆಮಾಗಳ ಮೂಲಕ ಮತ್ತಷ್ಟು ಕೆರಳಿಸುತ್ತಿದ್ದೇವೆ. ಹಾಗಂತ, ಒಳಿತು ಗೆಲ್ಲಬೇಕು ಕೆಡುಕು ಸೋಲಬೇಕು ಎಂದರೆ ಒಳಿತನ್ನು ಬಲವಂತವಾಗಿ ಗೆಲ್ಲಿಸಬೇಕು, ವೈಚಾರಿಕವಾಗಿ ಗೆಲ್ಲಿಸಬೇಕು ಎಂದಲ್ಲ. ಒಂದು ಆಟದಲ್ಲಿ ಒಳಿತು ಗೆಲ್ಲಬೇಕು ಅಂದರೆ ಒಳ್ಳೆಯ ಆಟಗಾರ ಗೆಲ್ಲಬೇಕು ಎಂದರ್ಥ. ನಾಟಕದಲ್ಲಿ ಒಳಿತು ಗೆಲ್ಲಬೇಕು ಅಂದರೆ ಒಳ್ಳೆಯ ಕೌಶಲ್ಯ ಗೆಲ್ಲಬೇಕು ಎಂದರ್ಥ. ನಟನೆಯ ಕೌಶಲ್ಯ ಗೆಲ್ಲಬೇಕು ಎಂದರ್ಥ. ಶಿಸ್ತಿನಿಂದ ಆಡುವ ಆಟ, ಸಂಯಮದಿಂದ ಆಡುವ ಆಟ, ಸಮನ್ವಯದಿಂದ ಆಡುವ ಆಟ ಗೆಲ್ಲಬೇಕು ಎಂದರ್ಥ. ಈ ಮಾತು ಎಲ್ಲರಿಗೂ ಸಲ್ಲುತ್ತದೆ, ನಾಟಕಕ್ಕೂ ಸಲ್ಲುತ್ತದೆ, ನಾಟಕದ ಹೂರಣಕ್ಕೂ ಸಲ್ಲುತ್ತದೆ. ಅದೇ ರೀತಿ, ಕೆಟ್ಟದ್ದು ಸೋಲಬೇಕು ಅಂದರೆ ಕೆಟ್ಟ ಆಟಗಾರ, ಅಶಿಸ್ತು, ಅಹಂಕಾರ ಸಮನ್ವಯದ ಕೊರತೆ ಸೋಲಬೇಕು ಎಂದರ್ಥ. ನಾಟಕವೆಂದರೆ ಇಷ್ಟೇ ಸರಿ. ಅದು ರಾಮಾಯಣವಾದರೂ ಇಷ್ಟೇ, ಮಹಾಭಾರತವಾದರೂ ಇಷ್ಟೇ. ಯಕ್ಷಗಾನ ಬಯಲಾಟ, ಷೇಕ್ಸ್ಪಿಯರನ ನಾಟಕ, ಕಾಳಿದಾಸನ ಶಾಕುಂತಲ ಎಲ್ಲವೂ ಇಷ್ಟೇ. * ರಂಗಭೂಮಿಯ ಇಂದಿನ ದುಃಸ್ಥಿತಿಗೆ ಇದೇ ಕಾರಣ ಹಾಗಿದ್ದರೆ? ಹೌದು, ವಾಸ್ತವತೆಯೇ ಸತ್ಯ ಎಂದು ತಿಳಿಯತೊಡಗಿದ್ದೇವೆ. ಹಿಂಸೆಯೇ ಹೋರಾಟ ಎಂದು ತಿಳಿಯತೊಡಗಿದ್ದೇವೆ. ನಮ್ಮ ಇಂದಿನ ಅವಸರ ಪ್ರವೃತ್ತಿಗೆ ಹೊಂದಿಸಿ ಯಾವುದೋ ಒಂದು ವಾಸ್ತವಿಕ ಸಂಗತಿಯನ್ನು ಅದು ಜಾತಿ ಸಮಸ್ಯೆ ಇದ್ದೀತು, ವರ್ಗ ಸಂಘರ್ಷವಿದ್ದೀತು, ಹಿಂದುತ್ವವಿದ್ದೀತು, ಸಂಕೇತವಾಗಿಸಿ ನಮ್ಮ ವಾಸ್ತವಿಕ ವಿರೋಧಿಗಳನ್ನು ಬೈದು, ಅವಸರವಸರವಾಗಿ ನಾಟಕ ಕಟ್ಟಿ, ಸತ್ಯ ನುಡಿದೆವು ಎಂದು ಬೀಗತೊಡಗಿದ್ದೇವೆ. ರಂಗಭೂಮಿ ಸೋತಿದೆಯೆಂದರೆ ರಂಗಭೂಮಿಯೆಂಬ ಆಟ ಸೋತಿದೆ ಎಂದೇ ಅರ್ಥ. ನಟ ಸೋತಿದ್ದಾನೆ ಎಂದೇ ಅರ್ಥ, ನಾಟಕ ಸೋತಿದೆ ಎಂದೇ ಅರ್ಥ. ದುರಂತವೆಂದರೆ, ನಾವಿಂದು ಶಾಂತಸಮುದ್ರ ಬೋರು ಎಂದು ತಿಳಿದು, ಕೆರಳಿದ ಸಮುದ್ರವನ್ನು ಮಾತ್ರವೇ ನಾಟಕದ ಹೆಸರಿನಲ್ಲಿ ತೋರಿಸತೊಡಗಿದ್ದೇವೆ. ಹಾಗಾಗಿ ಕೆರಳುವುದೇ ಎಂಬಂತೆ ಬಿಂಬಿಸುತ್ತಿದ್ದೇವೆ. ಈಗಾಗಲೇ ಕೆರಳಿರುವ ಜನತೆಯನ್ನು ನಮ್ಮ ನಾಟಕ, ಸಿನೆಮಾಗಳ ಮೂಲಕ ಮತ್ತಷ್ಟು ಕೆರಳಿಸುತ್ತಿದ್ದೇವೆ. ಹಾಗಂತ, ಒಳಿತು ಗೆಲ್ಲಬೇಕು ಕೆಡುಕು ಸೋಲಬೇಕು ಎಂದರೆ ಒಳಿತನ್ನು ಬಲವಂತವಾಗಿ ಗೆಲ್ಲಿಸಬೇಕು, ವೈಚಾರಿಕವಾಗಿ ಗೆಲ್ಲಿಸಬೇಕು ಎಂದಲ್ಲ. ಒಂದು ಆಟದಲ್ಲಿ ಒಳಿತು ಗೆಲ್ಲಬೇಕು ಅಂದರೆ ಒಳ್ಳೆಯ ಆಟಗಾರ ಗೆಲ್ಲಬೇಕು ಎಂದರ್ಥ. * ಹೌದು, ನಟ ಧೈರ್ಯ ಕಳೆದುಕೊಂಡಿದ್ದಾನೆ. ಇಂದಿನ ರಂಗಭೂಮಿಯಲ್ಲಿ ನಾಟಕಕ್ಕಿಂತ ವೈಚಾರಿಕತೆ ಮುಖ್ಯವಾಗಿದೆ. ಭಾವಾಭಿವ್ಯಕ್ತಿಗಿಂತ ಭಾಷಾಭಿವ್ಯಕ್ತಿ ಮುಖ್ಯವಾಗಿದೆ. ನಟನಿಗಿಂತ ನಿರ್ದೇಶಕ ಮುಖ್ಯವಾಗಿದ್ದಾನೆ. ರೋಸಿಹೋದ ಪ್ರೇಕ್ಷಕರು ನಾಟಕಗಳಿಂದ ದೂರ ಉಳಿದಿದ್ದಾರೆ. ಶಿಸ್ತು, ಸಂಯಮ, ಸಮನ್ವಯಗಳು ಮಾಯವಾಗಿ ಕನ್ನಡ ರಂಗಭೂಮಿಯೆಂಬುದು ಸಂತೆಗೆ ಮೂರು ಮೊಳ ನೇಯುವ ಅಡ್ಡಕಸುಬಿಗಳ ತಾಣವಾಗಿದೆ. ಮೊಬೈಲಿನಲ್ಲಿ ತಾಲೀಮು ನಡೆಸುತ್ತೇವೆ, ಸೀರಿಯಲ್ ಶೂಟಿಂಗಿಗಾಗಿ ಕಾಯುತ್ತ ತಾಲೀಮು ನಡೆಸುತ್ತೇವೆ. ನಾಯಕನಾಗಬೇಕಿದ್ದ ನಟ ಗುಲಾಮನಾಗಿದ್ದಾನೆ. ಹ್ಯಾಮ್ಲೆಟ್ಟನ ಪಾತ್ರ ಮಾಡುವ ಬದಲು ತಾನೇ ಹ್ಯಾಮ್ಲೆಟ್ ಆಗಿದ್ದಾನೆ. * ಇಲ್ಲಿ ಗುಲಾಮನಾಗಿರುವ ನಟ ಅಲ್ಲಿಗೆ ಅಂದರೆ ಸಿನೆಮಾ, ಸೀರಿಯಲ್ಗಳಿಗೆ ಓಡುತ್ತಿದ್ದಾನೆ ಎಂದೇ ನಿಮ್ಮರ್ಥ? ಹೌದು. ಬಾಣಲೆಯಿಂದ ಬೆಂಕಿಗೆ ಜಿಗಿಯುತ್ತಿದ್ದಾನೆ. ಅಲ್ಲಿ, ಇನ್ನೂ ದೊಡ್ಡ ಗುಲಾಮನಾಗುತ್ತಿದ್ದಾನೆ. ಸ್ಟಾರ್ಗಳಾಗುವ ಭ್ರಮೆಯಲ್ಲಿ ತೆರಳುವ ನಟರು ಬಹಳವಾಗಿ ಟಾರ್ಗಳಾಗುವುದೇ ಹೆಚ್ಚು ಅಲ್ಲಿ. ಇದೊಂದು ದುರಂತವೇ ಸರಿ. * ಸಾಹಿತ್ಯದ್ದೂ ಇದೇ ಪರಿಸ್ಥಿತಿ ಅಲ್ಲವೇ? ಹೌದು. ಅಲ್ಲಿಯದೂ ಇದೇ ಪರಿಸ್ಥಿತಿ. ಇಂದಿನ ಸಾಹಿತಿಗಳಿಗೆ ಬೇಂದ್ರೆ, ಕುವೆಂಪು, ಕಾರಂತ ಆಗುವ ತಾಳ್ಮೆಯೂ ಇಲ್ಲ. ತಾಳಿಕೆಯೂ ಇಲ್ಲ. ಪ್ರತಿಭೆಯಿದೆ ನಿಜ. ಆದರೆ ಪ್ರತಿಭೆ ಮಾತ್ರದಿಂದಲೇ ಬೇಂದ್ರೆ, ಕಾರಂತ, ಕುವೆಂಪು ಆಗಲಿಕ್ಕಾಗದು. ಅದಕ್ಕೊಂದು ಗಟ್ಟಿ ವ್ಯಕ್ತಿತ್ವ ಬೇಕು. ಬದುಕಿನ ಗಟ್ಟಿ ಪರಿಚಯ ಬೇಕು. ಸಾಹಿತ್ಯ ರಚನೆಯೂ ಒಂದು ಆಟವೇ ತಾನೆ? ಅದೂ ಒಂದು ಕಸುಬುದಾರಿಕೆಯೇ ತಾನೆ? ಬೆಂಗಳೂರಿನಲ್ಲಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸಾಹಿತ್ಯ ಬರೆದರೆ ಸಾಲದು. ಷೇಕ್ಸ್ಪಿಯರ್ ಸಾಹಿತಿಯಾಗಿರಲಿಲ್ಲ, ನಟನಾಗಿದ್ದ. ಆತನ ಸಾಹಿತ್ಯವು ಸಾಹಿತ್ಯವಾದದ್ದು ಕಸುಬುದಾರಿಕೆಯ ಮೂಲಕ. ಮೋಲಿಯರ್ ನಟನಾಗಿದ್ದ. ರವೀಂದ್ರನಾಥ ಠಾಗೂರರು ನಟರಾಗಿ ವೃತ್ತಿಜೀವನ ಆರಂಭಿಸಿದರು. ಇವರೆಲ್ಲರೂ ನಾಟಕದೊಟ್ಟಿಗೆಯೂ ಗುದ್ಡಾಡಿದರು, ಬದುಕಿನೊಟ್ಟಿಗೆಯೂ ಗುದ್ದಾಡಿದರು. ಕಾವ್ಯ, ಕಾದಂಬರಿಯೊಟ್ಟಿಗೆಯೂ ಗುದ್ದಾಡಿದರು. * ಮತ್ತೊಮ್ಮೆ ವಿಷಯಾಂತರ ಮಾಡುತ್ತೇನೆ. ಸಿನೆಮಾದ ಯಶಸ್ಸಿಗೆ ಕಾರಣವೇನು? ಸಿನೆಮಾ ಜನಪ್ರಿಯ ಪರಂಪರೆಯಾಗಿ ಜನಿಸಿತು. ಅದೇ ಅದರ ಯಶಸ್ಸು. ರಾಜ್ಕುಮಾರ್ ನಟರಾದದ್ದು ಜನಪ್ರಿಯ ರಂಗಭೂಮಿಯಲ್ಲಿ. ಅಲ್ಲಿ ಕಲಿತ ಕಸುಬುದಾರಿಕೆಯನ್ನು ಅವರು ಸಿನೆಮಾ ಮಾಧ್ಯಮಕ್ಕೆ ನೀಡಿ ಅದನ್ನು ಬೆಳೆಸಿದರು. ರಾಜ್ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಪಂಡರಿಬಾಯಿ ಇತ್ಯಾದಿ ಎಲ್ಲರೂ ಜನಪ್ರಿಯ ರಂಗಭೂಮಿಯಿಂದ ಬಂದು ಜನಪ್ರಿಯ ಸಿನೆಮಾವನ್ನು ಬೆಳೆಸಿದರು. ಕ್ರಮೇಣ, ಸಿನೆಮಾ ಕಮರ್ಷಿಯಲ್ ಆಯಿತು. ದುಡ್ಡಿನ ಧಾವಂತ ಹೆಚ್ಚಾಯಿತು. ದುಡ್ಡು ಮಾಡಲೆಂದೇ ಒಳಬಂದ ಪುಂಡುಪೋಕರಿಗಳ ತಾಣವಾಯಿತು ಆ ಮಾಧ್ಯಮ. ಹೌದು, ಪುಂಡುಪೋಕರಿಗಳು ಬೆಳೆಸಿದರು ಸ್ಟಾರ್ ಸಿಸ್ಟಮ್ ಅನ್ನು. ಐಟಂ ಸಾಂಗುಗಳನ್ನು. ಹಾಡುತ್ತ ಬೆತ್ತಲಾಗುವ ಹೆಂಗಸಿನ ಪಾತ್ರವನ್ನು. ಇಂದಿನ ಸಿನೆಮಾ ಪುಂಡುಪೋಕರಿಗಳ ಮಾಧ್ಯಮವೇ ಹೊರತು ಜನಪ್ರಿಯ ಮಾಧ್ಯಮ ಖಂಡಿತಾ ಅಲ್ಲ. ಜನಪ್ರಿಯ ಮಾಧ್ಯಮಕ್ಕೂ ಶುದ್ಧ ಕಮರ್ಷಿಯಲ್ ಮಾಧ್ಯಮಕ್ಕೂ ಅಪಾರ ಅಂತರವಿದೆ. * ಗುಬ್ಬಿ ವೀರಣ್ಣನವರು ಕಮರ್ಷಿಯಲ್ ಅಲ್ಲವೇ ಹಾಗಿದ್ದರೆ? ಖಂಡಿತಾ ಅಲ್ಲ. ರಂಗಭೂಮಿಯನ್ನು ಜನಪ್ರಿಯ ಉದ್ದಿಮೆಯಾಗಿ ಬೆಳೆಸಿದವರು ಅವರು. ನಟರನ್ನು ಬೆಳೆಸಿದವರು ಅವರು, ನಾಟಕ ಬೆಳೆಸಿದವರು ಅವರು, ಗ್ರಾಮೀಣ ಪ್ರೇಕ್ಷಕರನ್ನು ಬೆಳೆಸಿದವರು ಅವರು. ಜನರು ನೀಡಿದ ನಾಲ್ಕಾಣೆಯಲ್ಲಿ ತಾನೂ ಬದುಕಿ ರಂಗಭೂಮಿಯನ್ನೂ ಬದುಕಿಸಿದರು. ಗುಬ್ಬಿ ವೀರಣ್ಣನವರು, ಪೀರ್ ಸಾಹೇಬರು ಇತ್ಯಾದಿ ಯಾರೂ ಕಮರ್ಷಿಯಲ್ ಅಲ್ಲ. ಅವರಾರ ಬಳಿಯೂ ಕಪ್ಪುಹಣವಿರಲಿಲ್ಲ. * ಹಾಗಿದ್ದರೆ, ನಟನಿಗೆ ಮತ್ತೊಮ್ಮೆ ಪ್ರಾಮುಖ್ಯತೆ ಬರಬೇಕು ಎನ್ನುತ್ತೀರಾ ನೀವು? ಹೌದು. ಆದರೆ ಅದು ಬರಬೇಕಾದದ್ದು ಗುಬ್ಬಿ ವೀರಣ್ಣನವರಿಗೆ ಅಥವಾ ಷೇಕ್ಸ್ಪಿಯರನಿಗೆ ಬಂದ ರೀತಿಯಲ್ಲಿ ನಾಯಕತ್ವದ ಗುಣವಾಗಿ ಬರಬೇಕು. ಇಂದಿನ ನಟನಿಗೆ ಪ್ರತಿಭೆಯಿದೆ. ಪ್ರಾಯಶಃ ಗುಬ್ಬಿ ವೀರಣ್ಣನವರಿಗಿದ್ದ ಪ್ರತಿಭೆಗಿಂತ ಹೆಚ್ಚಿನ ಪ್ರತಿಭೆಯಿದೆ. ಆದರೆ ನಾಯಕತ್ವದ ಗುಣವಿದೆಯೇ? ಗಟ್ಟಿ ವ್ಯಕ್ತಿತ್ವವಿದೆಯೇ? ಬದ್ಧತೆಯಿದೆಯೇ? ತನ್ನ ಸೋಲಿಗೆ ತಾನೇ ಕಾರಣವಾಗಿದ್ದಾನೆ ಇಂದಿನ ನಟ. ನಟರಿಗೆ ಮಹತ್ವ ಬರಬೇಕು ಅಂದೆ. ಹೇಗೆ ಬರಬೇಕು? ರಿಸರ್ವೇಶನ್ ಮೂಲಕವೇ? ನಿರ್ದೇಶಕರನ್ನು ಬಯ್ಯುವ ಮೂಲಕವೇ? ಕ್ಷಮಿಸಿ, ಇಂದಿನ ನಟ ಗುಲಾಮಪ್ರಜ್ಞೆ ರೂಢಿಸಿಕೊಂಡಿದ್ದಾನೆ. ಅದನ್ನು ಮುಚ್ಚಿಕೊಳ್ಳಲಿಕ್ಕೆಂದು ಸುಳ್ಳೇ ಬೀಗುತ್ತಿದ್ದಾನೆ. ಗುಬ್ಬಿ ವೀರಣ್ಣ ನಾಯಕರೂ ಆಗಿದ್ದರು ಎಂಬ ಸಂಗತಿಯನ್ನು ನಾವು ಮರೆಯಬಾರದು. ಅವರೆಲ್ಲ, ತಾವೇ ತಂಡ ಕಟ್ಟಿದರು, ತಾವೇ ನಿರ್ದೇಶನ ಮಾಡಿದರು, ತಾವೇ ಕಿರಿಯರಿಗೆ ಮಾರ್ಗದರ್ಶನ ಮಾಡಿದರು. ನಾಲ್ಕು ಕಾಸು ದುಡಿದು, ಬಡತನ ಹಂಚಿಕೊಂಡು, ಬಡತನದಲ್ಲಿಯೇ ಬಾಳಿ ದೊಡ್ಡವರಾದರು ಅವರು. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂದು ಹಲುಬಲಿಲ್ಲ ಅವರು. ಇಲ್ಲಿಯೇ ಇರುವುದು ಅವರಿಗೆ ಅನಿವಾರ್ಯವಾಗಿತ್ತು. ಹಾಗಾಗಿ ಅವರು ಹ್ಯಾಮ್ಲೆಟ್ ಮನಸ್ಥಿತಿಗೆ ಸಿಕ್ಕಿಕೊಳ್ಳಲಿಲ್ಲ. ಹಾಗಾಗಿ ಗೆದ್ದರು. ರಂಗಭೂಮಿಯೆಂಬುದು ಸಮಯ ಸಾಧಕರ ತಾಣವಾಗಿದೆ ಇಂದು. ಸಿನೆಮಾದತ್ತ ಏರಲಿಕ್ಕೆಂದು ಹಾಕಿಕೊಂಡಿರುವ ತಾತ್ಕಾಲಿಕ ಏಣಿಯಾಗಿದೆ ರಂಗಭೂಮಿ. ಮೊಬೈಲ್ ಫೋನಿನಲ್ಲಿ ರಿಹರ್ಸಲ್ ಮಾಡುತ್ತೇವೆ, ಸಂತೆಗೆ ಮೂರು ಮೊಳ ನೇಯುತ್ತೇವೆ. ಆದರೆ ಬಡಿವಾರ ಮಾತ್ರ ಅತಿಯಾಗಿ ಮಾಡುತ್ತೇವೆ. * ಹಾಗೆಂದೇ, ನೀವು ರಂಗನಿರ್ದೇಶನವನ್ನು ಬಿಟ್ಟಿರಾ? ಗೊತ್ತಿಲ್ಲ. ನನ್ನದೂ ಬಡಿವಾರವೇ ಇದ್ದೀತು. ರಂಗಭೂಮಿಯಿಂದ ಮತ್ತೇನನ್ನೂ ಕಲಿಯದೇ ಹೋದರೂ ನಾವೆಲ್ಲ ಬಡಿವಾರ ಮಾಡುವುದನ್ನಂತೂ ಕಲಿತಿದ್ದೇವೆ ತಾನೆ? ಪ್ರತಿಭಟನೆಯೆಂಬ ಬಡಿವಾರ, ಪ್ರಗತಿಯ ಬಡಿವಾರ, ಬದ್ಧತೆಯೆಂಬ ಬಡಿವಾರ. ಅನೇಕರಿಗೆ ನನ್ನ ಬಗ್ಗೆಯೂ ಇಂತಹ ಅನುಮಾನಗಳಿವೆ. ಅದನ್ನು ಗಟ್ಟಿಯಾಗಿ ಅಲ್ಲಗಳೆಯುವ ಧೈರ್ಯ ನನಗಿಲ್ಲ. ಕುವೆಂಪು ಹೇಳಿದರಲ್ಲ; ‘ಕೀರ್ತಿಶನಿ ತೊಲಗಾಚೆ ದೂರ’ ಅಂತ. ಹಾಗೆಯೇ ನಾನು ಸಹ ಬಡಿವಾರ ಶನಿಯೇ ತೊಲಗಾಚೆ ದೂರ ಎಂದು ಆಗಾಗ ಹೇಳಿಕೊಳ್ಳುತ್ತಿರುತ್ತೇನೆ. ಆದರೆ ಶನಿಯಿಂದ ಮುಕ್ತವಾಗುವುದು ಹೇಳುವಷ್ಟು ಸುಲಭದ ಕೆಲಸವಲ್ಲ.
ಚಿಕ್ಕಮಗಳೂರು: ದತ್ತಪೀಠದ ಮಾಣಿಕ್ಯಾಧಾರ ತಪ್ಪಲಿನಲ್ಲಿ ಕೇರಳ ಮೂಲದ ಬಾಲಕಿ ಶ್ರೀ ನಂದಾ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಶೋಧ ಕಾರ್ಯ ತೀವ್ರಗೊಂಡಿದೆ. ಬಾಲಕಿಯನ್ನು ಅಪಹರಿಸಲಾಗಿದೆ ಎಂಬ ತಾಯಿಯ ಹೇಳಿಕೆ ನಡುವೆ ಜಿಲ್ಲಾಡಳಿತ ಶೋಧ ಕಾರ್ಯವನ್ನು ಮತ್ತೊಂದು ಆಯಾಮದಲ್ಲಿ ಮುಂದುವರೆಸಿದೆ. ನಿನ್ನೆ ಸುಮಾರು 100 ಸಿಬ್ಬಂದಿಯಿಂದ ಶೋಧ ನಡೆಸಲಾಗಿದ್ದು, ಇಂದು ಇನ್ನಷ್ಟು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಸೇರಿಸಲಾಗಿದೆ. ಮೂರು ದಿನಗಳಿಂದ ಮೇಲ್ಭಾಗದಿಂದ ನಡೆಯುತ್ತಿದ್ದ ಶೋಧ ಕಾರ್ಯವನ್ನು ಇಂದು ಕೆಳಭಾಗಕ್ಕೆ ಶಿಫ್ಟ್ ಮಾಡಲಾಗಿದೆ. ಮೇಲ್ಭಾಗದಿಂದ ಕೆಳಕ್ಕೆ ಹಾಗೂ ಕೆಳಭಾಗದಿಂದ ಮೇಲಕ್ಕೆ ಸಾಗುವ ಮಾರ್ಗಗಳಲ್ಲಿ ಸಮಗ್ರ ಶೋಧ ನಡೆಯುತ್ತಿದೆ. ಮಲ್ಲೇನಹಳ್ಳಿ ಮತ್ತು ಅರಿಶಿನಗುಪ್ಪೆ ಭಾಗಗಳಿಂದ ಬೆಟ್ಟ ಏರುವ ಮಾರ್ಗದಲ್ಲೂ ಶೋಧ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಪ್ರಕರಣದ ತನಿಖೆಗೆ ಕೇರಳದಿಂದ ನಾಲ್ವರು ಪೊಲೀಸರು ಆಗಮಿಸಿದ್ದು, ಸ್ಥಳೀಯ ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎಸ್ಡಿಆರ್ಎಫ್ ತಂಡಗಳು ಸಂಯುಕ್ತವಾಗಿ ಶೋಧ ಕಾರ್ಯ ಕೈಗೊಂಡಿವೆ. ಇಂದೂ ಕೂಡ ಥರ್ಮಲ್ ಡ್ರೋನ್ ಹಾಗೂ ಡಾಗ್ ಸ್ಕ್ವಾಡ್ ಬಳಸಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಮೀಸಲು ಕಾಯಿದೆಯ ತಿದ್ದುಪಡಿ :ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿಂದು ಚರ್ಚೆ
ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ಕ್ರಮ, ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಇಂದು ಶುಕ್ರವಾರ ತನ್ನ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
Shivamogga | ಹುಲಿಕಲ್ ಘಾಟ್ನಲ್ಲಿ ಭೂಕುಸಿತ : ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹ ಪತ್ತೆ
ಶಿವಮೊಗ್ಗ: ಜಿಲ್ಲೆಯ ಹುಲಿಕಲ್ (ಬಾಳೇಬರೆ) ಘಾಟ್ನ ಹೇರ್ಪಿನ್ ಕ್ರಾಸ್ನಲ್ಲಿ ಕಾಂಕ್ರೀಟ್ ವಾಲ್ ಕಾಮಗಾರಿ ವೇಳೆ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಹೊಸನಗರ ಹೋಬಳಿಯ ಚಕ್ಕಾರು ಗ್ರಾಮದ ರಾಘವೇಂದ್ರ, ಹಾವೇರಿ ಜಿಲ್ಲೆಯ ಶಬ್ಬೀರ್ (40) ಹಾಗೂ ರಾಜು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಎರಡು ಮೃತದೇಹಗಳು ಪತ್ತೆಯಾಗಿದ್ದರೆ, ಇಂದು ಬೆಳಗ್ಗೆ ಸುಮಾರು 3 ಗಂಟೆ ಸುಮಾರಿಗೆ ಶಬ್ಬೀರ್ ಅವರ ಮೃತದೇಹ ಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಆರಗ ಭೇಟಿ : ಘಟನಾ ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಡೆಯಬಾರದ ಘಟನೆ ನಡೆದಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ. ಅವರ ಜೊತೆ ನಾವು ಇರುತ್ತೇವೆ” ಎಂದು ಸಾಂತ್ವನ ಹೇಳಿದರು. ಹುಲಿಕಲ್ ಘಾಟ್ ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ : ಭೂ ಕುಸಿತ ಸಂಭವಿಸಿದ ಬೆನ್ನಲ್ಲೇ ರಾಜ್ಯ ಹೆದ್ದಾರಿ-52 ರ ಹುಲಿಕಲ್ ಘಾಟ್ ನಲ್ಲಿ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದೆ. ಶಿವಮೊಗ್ಗ- ತೀರ್ಥಹಳ್ಳಿ- ನಗರ- ಹುಲಿಕಲ್ ಘಾಟ್- ಕುಂದಾಪುರ ಸಂಪರ್ಕಿಸುವ ರಸ್ತೆ ಇದಾಗಿದ್ದು, ಭಾರೀ ಪ್ರಮಾಣದಲ್ಲಿ ಭೂ ಕುಸಿತ ಆಗಿರುವ ಹಿನ್ನೆಲೆ- ಸಂಚಾರ ನಿಷೇಧ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಹುಲಿಕಲ್ ಘಾಟಿಯಲ್ಲಿ ಸಂಚಾರ ರದ್ದು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಬಳಿಯ ಹುಲಿಕಲ್ ಘಾಟ್ ಕರಾವಳಿ ಮತ್ತು ಮಧ್ಯ ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಿತ್ತು. ತೀರ್ಥ ಹಳ್ಳಿಯ ಆಗುಂಬೆ ಘಾಟ್ ಮತ್ತು ಹೊಸನಗರ ತಾಲೂಕಿನ ನಿಟ್ಟೂರು ನಾಗೋಡಿ ಘಾಟ್ ನಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.
ಇನೋಳಿ | ಬ್ಯಾರೀಸ್ ಪದವಿ ಪೂರ್ವ ಕಾಲೇಜು : ದ್ವಿತೀಯ ಪಿಯುಸಿಯಲ್ಲಿ 96% ಫಲಿತಾಂಶ
ಮಂಗಳೂರು : ಇನೋಳಿಯ ಬ್ಯಾರಿಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ದಾಖಲಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 89 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 85 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಉಳಿದವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮೊಹಮ್ಮದ್ ಶಾಕಿರ್ 580 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ಪ್ರತ್ಯುಷ್ 553 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶುಭಾಶಯಗಳನ್ನು ಕೋರಿದೆ.
ಕದನ ವಿರಾಮ ಘೋಷಣೆಯಾಗಿ 6 ತಿಂಗಳು ಕಳೆದರೂ ಗಾಝಾಗೆ ವೈದ್ಯಕೀಯ ನೆರವು ಸರಬರಾಜು ತಡೆಯುತ್ತಿರುವ ಇಸ್ರೇಲ್
ಗಾಝಾ,ಎ.10: ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದರೂ, ಗಾಝಾ ಪಟ್ಟಿಯ ಫೆಲೆಸ್ತೀನ್ ಜನತೆಗೆ ತಲುಪಬೇಕಾದ ಜೀವ ರಕ್ಷಕ ವೈದ್ಯಕೀಯ ಹಾಗೂ ಮಾನವೀಯ ನೆರವು ಇನ್ನೂ ತಡೆಯಲ್ಪಡುತ್ತಿದೆ ಎಂದು ‘ಮೆಡಿಕಲ್ ಏಯ್ಡ್ ಫಾರ್ ಫೆಲೆಸ್ತೀನಿಯನ್ಸ್’ (MAP) ಸಂಸ್ಥೆ ತಿಳಿಸಿದೆ. ಲಂಡನ್ ಮೂಲದ ಈ ನೆರವು ಸಂಸ್ಥೆಯ ಪ್ರಕಾರ, ಇಸ್ರೇಲ್ ವಿಧಿಸಿರುವ ದಿಗ್ಬಂಧನದ ಪರಿಣಾಮವಾಗಿ ಗಾಝಾದಲ್ಲಿನ ಆಸ್ಪತ್ರೆಗಳು ಹಾಗೂ ಆರೋಗ್ಯ ಚಿಕಿತ್ಸಾಲಯಗಳು ತೀವ್ರ ಸರಬರಾಜು ಕೊರತೆಯ ನಡುವೆ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಔಷಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಪೂರ್ಣವಾಗಿ ಸ್ಟಾಕ್ ನಲ್ಲಿಲ್ಲದಂತಾಗಿದ್ದು, ಶೇಕಡಾ 64 ರಷ್ಟು ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿಲ್ಲ. ಗಾಝಾದಲ್ಲಿನ ಸುಮಾರು ಅರ್ಧದಷ್ಟು ಆಸ್ಪತ್ರೆಗಳು ಇನ್ನೂ ಸೇವೆಗಳನ್ನು ಮತ್ತೆ ಪ್ರಾರಂಭಿಸಿಲ್ಲ. ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಆಸ್ಪತ್ರೆಗಳಿಲ್ಲ ಎಂದು MAP ತಿಳಿಸಿದೆ. ಬಿಡಿಭಾಗಗಳು ಹಾಗೂ ಇಂಧನದ ಸರಬರಾಜು ನಿರ್ಬಂಧಿತವಾಗಿರುವುದರಿಂದ 90 ಆಸ್ಪತ್ರೆಗಳ ಜನರೇಟರ್ಗಳು ಸೇವೆಯಿಂದ ಹೊರಗುಳಿದಿವೆ ಎಂದು ಸಂಸ್ಥೆ ಹೇಳಿದೆ. ಸುಮಾರು 4,000 ಮಕ್ಕಳು ಸೇರಿದಂತೆ 18,500ಕ್ಕೂ ಹೆಚ್ಚು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇನ್ನೂ ತುರ್ತು ವೈದ್ಯಕೀಯ ಸ್ಥಳಾಂತರ ಅಗತ್ಯವಿದೆ. ಆದರೆ ಈ ಪ್ರಕ್ರಿಯೆಯೂ ತೀವ್ರವಾಗಿ ನಿರ್ಬಂಧಿತವಾಗಿದೆ ಎಂದು MAP ತಿಳಿಸಿದೆ.
2nd PUC Result-2026 | ವಿಜ್ಞಾನ ವಿಭಾಗದಲ್ಲಿ ಆಯಿಶಾ ಹಸೀನಾಳಿಗೆ 571 ಅಂಕ
ಸುರತ್ಕಲ್: ನಗರದ ಕೆನರಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಶಾ ಹಸೀನಾ ಅವರು 571 (ಶೇ. 95.17) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುರತ್ಕಲ್ ಮುಂಚೂರು ನಿವಾಸಿ ಬಶೀರ್ ಅಹ್ಮದ್ ಮತ್ತು ರೆಹನಾ ದಂಪತಿಯ ಪುತ್ರಿ.
ಅಸ್ಸಾಂ: ಮಾಘ್ ಬಿಹು ಬಳಿಕ ಸರಕಾರ ರಚಿಸುವವರು ಯಾರು?
ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು-ಪರಿಶಿಷ್ಟ ವರ್ಗಕ್ಕೆ ಆರು ಸಮುದಾಯಗಳ ಸೇರ್ಪಡೆ ಪ್ರಸ್ತಾವ. ರಾಜ್ಯದಲ್ಲಿ 14 ಬುಡಕಟ್ಟುಗಳಿದ್ದು, ಒಟ್ಟು ಜನಸಂಖ್ಯೆ 40 ಲಕ್ಷ. ಬಯಲು ಮತ್ತು ಬೆಟ್ಟ ಪ್ರದೇಶದ ಪರಿಶಿಷ್ಟ ವರ್ಗಗಳ ಗುಂಪಿಗೆ ಆರು ಸಮುದಾಯಗಳನ್ನು ಒಳಗೊಂಡ ಕಣಿವೆ ವರ್ಗದ ಸೇರ್ಪಡೆ ಪ್ರಸ್ತಾವ ವಿವಾದ ಸೃಷ್ಟಿಸಿದೆ. 8 ಸಮುದಾಯಗಳು ಎಸ್ಟಿ ಪಟ್ಟಿಯ ವಿಸ್ತರಣೆಯನ್ನು ವಿರೋಧಿಸುತ್ತಿವೆ. ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್(ಎಬಿಎಸ್ಯು) ಬೋಡೋಲ್ಯಾಂಡ್ನಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಪೂರ್ವ, ಉತ್ತರ ಮತ್ತು ದಕ್ಷಿಣ ಅಸ್ಸಾಮಿನ 9 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಚಹಾ ತೋಟಗಳ ಮತದಾರರು 35 ಕ್ಷೇತ್ರಗಳಲ್ಲಿ ನಿರ್ಣಾಯಕ ಹಾಗೂ 10 ಕ್ಷೇತ್ರಗಳಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾರೆ. ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳ 789 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ಸಂಗ್ರಹವಾಗಿದೆ. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಹೊಸ ವರ್ಷವನ್ನು ಸ್ವಾಗತಿಸಲು ನಡೆಯುವ ಮಾಘ್ ಬಿಹು ಎಪ್ರಿಲ್ 15ರಿಂದ ಆರಂಭವಾಗಲಿದ್ದು, ಹಬ್ಬ ಮುಗಿದ ಬಳಿಕ ಹೊಸ ಸರಕಾರ ರಚನೆ ಯಾಗಲಿದೆ. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ಬಿಜೆಪಿ ನೇತೃತ್ವದ ಎನ್ಡಿಎಯನ್ನು ಹಣಿಯುವುದೇ? ರಾಜ್ಯದ 35 ಜಿಲ್ಲೆಗಳನ್ನು 5 ವಿಭಾಗವಾಗಿ ವಿಭಜಿಸಲಾಗಿದೆ; ಕೆಳ ಅಸ್ಸಾಂ, ಉತ್ತರ ಅಸ್ಸಾಂ, ಮೇಲಣ ಅಸ್ಸಾಂ, ಕೇಂದ್ರ ಅಸ್ಸಾಂ ಮತ್ತು ಬರಾಕ್ ಕಣಿವೆ. ಮೇಲಣ ಅಸ್ಸಾಂ 56 ಹಾಗೂ ಕೆಳ ಅಸ್ಸಾಂ 50 ಕ್ಷೇತ್ರಗಳನ್ನು ಒಳಗೊಂಡಿದೆ. ಬಿಜೆಪಿ ಮೇಲಣ/ಕೇಂದ್ರ ಅಸ್ಸಾಂ, ನಗರ ಕೇಂದ್ರಗಳು, ಚಹಾ ಬುಡಕಟ್ಟು ಪಟ್ಟಿ(ಟೀ ಟ್ರೈಬ್ ಬೆಲ್ಟ್) ಮತ್ತು ಮೂಲವಾಸಿ ಸಮುದಾಯಗಳಿರುವ ಪ್ರದೇಶಗಳು ಮತ್ತು ಸ್ವಾಯತ್ತ ಪರ್ವತ ಜಿಲ್ಲೆಗಳಲ್ಲಿ ಹಾಗೂ ಕಾಂಗ್ರೆಸ್/ಎಐಯುಡಿಎಫ್ ಕೆಳ ಅಸ್ಸಾಂ ಮತ್ತು ಬರಾಕ್ ಕಣಿವೆಯಲ್ಲಿ ಹಿಡಿತ ಹೊಂದಿವೆ. 2021ರಲ್ಲಿ ಎನ್ಡಿಎ 75(ಬಿಜೆಪಿ 60, ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಯುಪಿಪಿಎಲ್ 6) ಹಾಗೂ ಮಹಾಜೋತ್ 51(ಕಾಂಗ್ರೆಸ್ 29, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಐಯುಡಿಎಫ್ 16, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 4, ಸಿಪಿಐಎಂ ಹಾಗೂ ಪಕ್ಷೇತರರು 1) ಸ್ಥಾನ ಗಳಿಸಿತ್ತು; ಬಿಜೆಪಿ ಶೇ.33.21, ಕಾಂಗ್ರೆಸ್ ಶೇ.29. 57, ಎಐಡಿಯುಎಫ್ ಶೇ.9.29, ಎಜಿಪಿ ಶೇ.7.91 ಹಾಗೂ ಯುಪಿಪಿಎಲ್ ಶೇ.3.39 ಮತ ಗಳಿಸಿದ್ದವು. ಕಾಂಗ್ರೆಸ್ 2016ಕ್ಕೆ ಹೋಲಿಸಿದರೆ 3 ಸ್ಥಾನ ಹೆಚ್ಚು ಗಳಿಸಿತು. ಹಾಲಿ ಚುನಾವಣೆಯಲ್ಲಿ ಮಹಾಜೋತ್ನಿಂದ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಹೊರನಡೆದು, ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ, ಸಂಸದ ಪ್ರದ್ಯುತ್ ಬೋರ್ದೋ ಹಾಗೂ ಮೂವರು ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ. ಎನ್ಡಿಎ ಜೊತೆಗೆ ತಂಕೇಶ್ವರ ರಬಾ ನೇತೃತ್ವದ ರಬಾ ಹಸಾಂಗ್ ಜೌತ ಮಂಚ್ ಕೈ ಜೋಡಿಸಿದೆ. ಮಹಾಜೋತ್ನಲ್ಲಿ ಕಾಂಗ್ರೆಸ್, ಅಸ್ಸಾಂ ಜಾತೀಯ ಪರಿಷತ್, ಸಿಪಿಐ(ಮಾರ್ಕ್ಸಿಸ್ಟ್, ಮಾರ್ಕ್ಸಿಸ್ಟ್ -ಲೆನಿನಿಷ್ಟ್) ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫೆರೆನ್ಸ್ ಇವೆ. ಶಾಸಕ ಅಖಿಲ್ ಗೊಗೊಯಿ ನೇತೃತ್ವದ ರೈಜೋರ್ ದಳ 2021ರಲ್ಲಿ ಬಿಜೆಪಿಗೆ ನೆರವಾಗುವ ಮೂಲಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಗಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವಾಗದೆ ಜಾರ್ಖಂಡ್ ಮುಕ್ತಿ ಮೋರ್ಚಾ, ಜೈ ಭಾರತ್ ಪಕ್ಷದ ಬೆಂಬಲದಲ್ಲಿ 18 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿಯ 9 ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಸನಾತನಿ ಹಿಂದೂಗಳು ಮತ್ತು ಆದಿವಾಸಿಗಳಿಗೆ ರಕ್ಷಣೆ ಹಾಗೂ ಕಾಂಗ್ರೆಸ್ ‘ಬೊರ್ ಅಹೋಮ್’(ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ಅಸ್ಸಾಂ) ಆಶ್ವಾಸನೆ ನೀಡಿವೆ. 48 ಕ್ಷೇತ್ರಗಳಲ್ಲಿ ಮಹಿಳೆಯರು ನಿರ್ಧಾರಕ ಪ್ರಮಾಣದಲ್ಲಿ ಇರುವುದರಿಂದ ಎರಡೂ ಪಕ್ಷಗಳು ಅವರನ್ನು ಸೆಳೆಯಲು ಪ್ರಯತ್ನಿಸಿವೆ. ನಾಗರಿಕತ್ವ ತಿದ್ದುಪಡಿ ಕಾಯ್ದೆ ಭೀತಿ ಬಿಜೆಪಿಯ ಸರ್ಬಾನಂದ ಸೋನೋವಾಲ್ ತಮ್ಮ 2 ಅವಧಿ ಆಡಳಿತದಲ್ಲಿ ಮೂಲವಾಸಿಗಳನ್ನು ಹಾಗೂ ಆನಂತರ ಚುಕ್ಕಾಣಿ ಹಿಡಿದ ಹಿಮಂತ ಬಿಸ್ಸಾ ಶರ್ಮಾ, ಹಿಂದುಳಿದ ಮತದಾರರನ್ನು ಕ್ರೋಡೀಕರಿಸಿದರು. ಆಡಳಿತಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ. ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸೆಗಾರರಿಗೆ ನಾಗರಿಕತ್ವ ನೀಡಲು 2019ರಲ್ಲಿ ಸಿಎಎ ಜಾರಿಗೊಳಿಸಲಾಯಿತು. ರಾಜ್ಯದಲ್ಲಿ ಸಿಎಎ ವಿರೋಧಿಸಿ ಉಗ್ರ ಹೋರಾಟ ನಡೆದಿತ್ತು; ಗೋಲಿಬಾರ್ನಲ್ಲಿ ಐವರು ಮೃತಪಟ್ಟಿದ್ದರು. ಬಿಜೆಪಿಯ ವೋಟ್ಬ್ಯಾಂಕ್ ಆದ ಹಿಂದೂ ಬಂಗಾಳಿಗಳಲ್ಲಿ ಹೆಚ್ಚಿನವರು ತಾವು 1971ಕ್ಕಿಂತ ಮೊದಲೇ ಬಂದಿದ್ದೇವೆ ಎನ್ನುತ್ತಿದ್ದಾರೆ. 1971ರ ಬಳಿಕ ಬಂದವರಿಗೆ ನಾಗರಿಕತ್ವ ನೀಡಿದರೆ, ತಾವು ಅಲ್ಪಸಂಖ್ಯಾತರಾಗುತ್ತೇವೆ ಎಂದು ಅಸ್ಸಾಮಿಯರು ಹಾಗೂ ಇತರ ಮೂಲವಾಸಿ ಸಮುದಾಯಗಳು ಆತಂಕಗೊಂಡಿದ್ದು ಸಿಎಎಯನ್ನು ವಿರೋಧಿಸುತ್ತಿವೆ. ಅಸ್ಸಾಂ ಗಣ ಪರಿಷತ್ ದ್ವಂದ್ವ 1979ರಲ್ಲಿ ರಾಜ್ಯದಿಂದ ವಲಸಿಗರನ್ನು ಹೊರಹಾಕಬೇಕೆಂದು ಆಂದೋಲನ ಆರಂಭವಾಯಿತು. 1980ರ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಮೇತರರು ನಾಮಪತ್ರ ಸಲ್ಲಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಕೆಳ ಅಸ್ಸಾಮಿನ ಬರ್ಪೆಟಾದಲ್ಲಿ ಖರ್ಗೇಶ್ವರ್ ತಾಲೂಕ್ದಾರ್ ಮೇಲೆ ಪೊಲೀಸರು ಹಲ್ಲೆ ನಡೆಸಿದರು. ಅವರ ಶವ ರಸ್ತೆ ಬದಿ ಪತ್ತೆಯಾಯಿತು. ಈ ಸಾವು ಚಳವಳಿಯ ದಿಕ್ಕು ಬದಲಿಸಿತು; ಆಗಸ್ಟ್ 1985ರಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಗೋಲಾಘಾಟ್ ರಾಷ್ಟ್ರೀಯ ಸಮಾವೇಶ ದಲ್ಲಿ ರಚನೆಯಾದ ಅಸ್ಸಾಂ ಗಣ ಪರಿಷತ್(ಎಜಿಪಿ)ನ ಮುಖ್ಯಸ್ಥರಾಗಿ ಆಯ್ಕೆಯಾದವರು-ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘಟನೆ(ಎಎಎಸ್ಯು) ಮುಖ್ಯಸ್ಥ ಪ್ರಫುಲ್ಲಕುಮಾರ್ ಮಹಂತ. ಆನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಜಿಪಿ 92 ಸ್ಥಾನ ಗೆದ್ದಿತು. ವಿದ್ಯಾರ್ಥಿ ಚಳವಳಿಯೊಂದು ರಾತ್ರೋರಾತ್ರಿ ಸರಕಾರ ರಚನೆ ಮಾಡಿದ್ದು, ಜಗತ್ತಿನೆಲ್ಲೆಡೆ ಸುದ್ದಿಯಾಯಿತು. ಸರಕಾರಕ್ಕೆ ರಾಜ್ಯದ ಅತ್ಯಂತ ದೊಡ್ಡ ಬಂಡುಕೋರ ಗುಂಪು, ಪರೇಶ್ ಬರುವಾ ನೇತೃತ್ವದ ಉಲ್ಫಾ(ಯುನೈಟೆಡ್ ಲಿಬರೇಷನ್ ಫ್ರಂಟ್)ದ ಸವಾಲು ಎದುರಾಯಿತು. ಆನಂತರ 1996ರಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಿತು. ಮೊದಲು ನ್ಯಾಷನಲ್ ಫ್ರಂಟ್ ಮತ್ತು ಯುಪಿಎ ಭಾಗವಾಗಿದ್ದ ಎಜಿಪಿ, 1998ರಲ್ಲಿ ಎನ್ಡಿಎ ಮೈತ್ರಿಕೂಟವನ್ನು ಸೇರಿಕೊಂಡಿತು. ಅಧಿಕಾರ ಮುಖ್ಯ; ಸಿದ್ಧಾಂತವಲ್ಲ ಎಂಬುದಕ್ಕೆ ಎಜಿಪಿ ಒಂದು ಉದಾಹರಣೆ. ವಲಸಿಗರ ವಿರೋಧವನ್ನು ಗುರಿಯಾಗಿಸಿಕೊಂಡಿದ್ದ ಪಕ್ಷ ಹಾಲಿ ಚುನಾವಣೆಯಲ್ಲಿ ಕಣಕ್ಕೆ ಇಳಿಸಿರುವ 26 ಅಭ್ಯರ್ಥಿಗಳಲ್ಲಿ 13 ಮಂದಿ ಬಂಗಾಳಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು! ಸರ್ಬಾನಂದ ಸೋನೋವಾಲ್ ಎಜಿಪಿ ಮೂಲಕ ರಾಜಕೀಯ ಪ್ರವೇಶಿಸಿದರು. ‘‘ಅಸ್ಸಾಂ ಆಂದೋಲನಕ್ಕೆ 855 ಮಂದಿ ಜೀವ ತೆತ್ತಿದ್ದಾರೆ. ಎಜಿಪಿ ಅವರ ತ್ಯಾಗವನ್ನು ಗುರುತಿಸುವಲ್ಲಿ ವಿಫಲವಾಗಿದೆ’’ ಎಂದು ಪಕ್ಷ ತೊರೆದು, 2011ರಲ್ಲಿ ಬಿಜೆಪಿ ಸೇರಿದರು. ಬಿಜೆಪಿಯ ಬಳಸಿ ಎಸೆಯುವ ಪ್ರವೃತ್ತಿಗೆ ಮಹಂತ ಮತ್ತು ಸೋನೋವಾಲ್ ಉತ್ತಮ ನಿದರ್ಶನ. ಮಹಂತ ಅವರಿಗೆ 2021ರಲ್ಲಿ ಸೀಟು ನಿರಾಕರಿಸಲಾಯಿತು. ಸೋನೋವಾಲ್ ಅವರದ್ದೂ ಇದೇ ಕತೆ. 2015ರಲ್ಲಿ ಅವರನ್ನು ಬದಿಗೆ ಸರಿಸಿ, ಕಾಂಗ್ರೆಸ್ನಿಂದ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಬೋಡೋಲ್ಯಾಂಡ್ ಬಿಕ್ಕಟ್ಟು ರಾಜ್ಯದ ವಾಯವ್ಯ ಭಾಗದಲ್ಲಿರುವ ಬೋಡೋ ಪ್ರಾದೇಶಿಕ ಪ್ರಾಂತ(ಬೋಡೊ ಟೆರಿಟೋರಿಯಲ್ ರೀಜನ್, ಬಿಟಿಆರ್)ದ ವ್ಯಾಪ್ತಿಯಲ್ಲಿ 15 ಕ್ಷೇತ್ರಗಳಿವೆ. ಎನ್ಡಿಎ ಭಾಗವಾಗಿರುವ ಬೋಡೋ ಪೀಪಲ್ಸ್ ಫ್ರಂಟ್ 11 ಹಾಗೂ ಬಿಜೆಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಎಲ್ಲ 15 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 13, ರೈಜೋರ್ ದಳ(ಮಾನಸ್) ಮತ್ತು ತೃಣಮೂಲ ಕಾಂಗ್ರೆಸ್ (ಘೋರೇಶ್ವರ) ತಲಾ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿದಿವೆ. ಸೆಪ್ಟಂಬರ್ 22, 2025ರಂದು ನಡೆದ ಬೋಡೊ ಟೆರಿಟೋರಿಯಲ್ ಕಮಿಟಿ(ಬಿಟಿಸಿ) ಚುನಾವಣೆಯಲ್ಲಿ 2005-2020ರವರೆಗೆ ಅಧಿಕಾರದಲ್ಲಿದ್ದ ಯುಪಿಪಿಎಲ್ ಪರಾಭವಗೊಂಡಿತು; ಚುನಾವಣೆಗೆ ಒಂದು ತಿಂಗಳು ಮೊದಲು ಬಿಜೆಪಿ ಮತ್ತು ಯುಪಿಪಿಎಲ್ ಬೇರೆಯಾದವು. ಯುಪಿಪಿಎಲ್ನ ಪ್ರಮೋದ್ ಬೋರೋ ಬಿಟಿಸಿ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದು, ಬಿಪಿಎಫ್ನ ಹಂಗ್ರಾಮ ಲೊಹಿರಿ ಗದ್ದುಗೆ ಏರಿದರು. ಬೋರೊ ಅವರನ್ನು 2026ರಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಬೋಡೋ ಪ್ರಾಂತದಲ್ಲಿ ಬಿಜೆಪಿಯ ಯಶಸ್ಸು ಬಿಪಿಎಫ್ನ್ನು ಆಧರಿಸಿದೆ. ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು-ಪರಿಶಿಷ್ಟ ವರ್ಗಕ್ಕೆ ಆರು ಸಮುದಾಯಗಳ ಸೇರ್ಪಡೆ ಪ್ರಸ್ತಾವ. ರಾಜ್ಯದಲ್ಲಿ 14 ಬುಡಕಟ್ಟುಗಳಿದ್ದು, ಒಟ್ಟು ಜನಸಂಖ್ಯೆ 40 ಲಕ್ಷ. ಬಯಲು ಮತ್ತು ಬೆಟ್ಟ ಪ್ರದೇಶದ ಪರಿಶಿಷ್ಟ ವರ್ಗಗಳ ಗುಂಪಿಗೆ ಆರು ಸಮುದಾಯಗಳನ್ನು ಒಳಗೊಂಡ ಕಣಿವೆ ವರ್ಗದ ಸೇರ್ಪಡೆ ಪ್ರಸ್ತಾವ ವಿವಾದ ಸೃಷ್ಟಿಸಿದೆ. 8 ಸಮುದಾಯಗಳು ಎಸ್ಟಿ ಪಟ್ಟಿಯ ವಿಸ್ತರಣೆಯನ್ನು ವಿರೋಧಿಸುತ್ತಿವೆ. ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್(ಎಬಿಎಸ್ಯು) ಬೋಡೋಲ್ಯಾಂಡ್ನಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಪೂರ್ವ, ಉತ್ತರ ಮತ್ತು ದಕ್ಷಿಣ ಅಸ್ಸಾಮಿನ 9 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಚಹಾ ತೋಟಗಳ ಮತದಾರರು 35 ಕ್ಷೇತ್ರಗಳಲ್ಲಿ ನಿರ್ಣಾಯಕ ಹಾಗೂ 10 ಕ್ಷೇತ್ರಗಳಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾರೆ. ಪ್ರಧಾನಿ ಮಾರ್ಚ್ 13, 2026ರಂದು ಪೂರ್ವ ಮತ್ತು ಉತ್ತರ ಅಸ್ಸಾಮಿನ 28,000 ಕಾರ್ಮಿಕ ಕುಟುಂಬಗಳಿಗೆ ಡಿಜಿಟಲ್ ಪಟ್ಟಾ ವಿತರಿಸಿದರು. ಬಿಜೆಪಿ ಪ್ರಣಾಳಿಕೆಯಲ್ಲಿ 3.5 ಲಕ್ಷ ಕುಟುಂಬಗಳಿಗೆ ಭೂಮಿ ಹಕ್ಕು ಹಾಗೂ ಕಾರ್ಮಿಕರ ಕೂಲಿಯನ್ನು 500 ರೂ.ಗೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದೆ. ಆದರೆ, ಪ್ರಮುಖ ಬೇಡಿಕೆಯಾದ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಬಗ್ಗೆ ಮಾತನ್ನಾಡಿಲ್ಲ. ಆದರೆ, ರಾಹುಲ್ ಗಾಂಧಿ ಎಸ್ಟಿ ಪಟ್ಟಿಗೆ ಸೇರ್ಪಡೆಯ ಆಶ್ವಾಸನೆ ನೀಡಿದ್ದಾರೆ. ಈ ಸಮುದಾಯಗಳು ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್ಗಡ ಹಾಗೂ ಒಡಿಶಾದಲ್ಲಿ ಎಸ್ಟಿ ಪಟ್ಟಿಯಲ್ಲಿದ್ದು, ಅಸ್ಸಾಮಿನಲ್ಲಿ ಇತರ ಹಿಂದುಳಿದ ಜಾತಿ(ಒಬಿಸಿ) ಪಟ್ಟಿಯಲ್ಲಿವೆ. ಮೇಲಣ ಅಸ್ಸಾಂ ಮತ್ತು ಬರಾಕ್ ಕಣಿವೆ ಪ್ರದೇಶದಲ್ಲಿ ಗೊಗೊಯಿ ಕುಟುಂಬ, ಶರ್ಮಾ-ಸೋನೋವಾಲ್ ನಡುವಿನ ವೈಮನಸ್ಸು ಹಾಗೂ ಗಾಯಕ ಜುಬೀನ್ ಪ್ರಕರಣ ಬಿಜೆಪಿ ಮೇಲೆ ವಿಪರಿಣಾಮ ಬೀರಬಹುದು. ಅಖಿಲ್ ಗೊಗೊಯಿ ಅವರ ರೈಜೋರ್ ದಳ ಮತ್ತು ಉರಿನ್ಜ್ಯೋತಿ ಅವರ ಅಸ್ಸಾಂ ಜಾತೀಯ ಪರಿಷತ್(ಎಜಿಪಿ) ಮೇಲಣ ಅಸ್ಸಾಮಿನಲ್ಲಿ ಪ್ರಭಾವ ಹೊಂದಿವೆ. ಇವರಿಬ್ಬರೂ ಅಹೋಂ ಸಮುದಾಯಕ್ಕೆ ಸೇರಿದ್ದಾರೆ. ಅಖಿಲ್ 2021ರಲ್ಲಿ ಶಾಸನಸಭೆಗೆ ಆಯ್ಕೆಯಾಗಿದ್ದು, ಎಜೆಪಿ ಚುನಾವಣೆಯಲ್ಲಿ ಇನ್ನೂ ಯಶಸ್ಸು ಸಾಧಿಸಿಲ್ಲ. 2021ರಲ್ಲಿ ಸೋನೋವಾಲ್ ಅವರನ್ನು ಬದಲಿಸಿ ಕೆಳ ಅಸ್ಸಾಂ ಮೂಲದ ಶರ್ಮಾ ಅವರನ್ನು ಆಯ್ಕೆ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಬರಾಕ್ ಕಣಿವೆಯದು ಬೇರೆಯದೇ ಕತೆ. ದಕ್ಷಿಣ ಅಸ್ಸಾಮಿನಲ್ಲಿ ಅಸ್ಸಾಮಿ ಭಾಷೆ ನಗಣ್ಯ; ಬಂಗಾಳಿಗೆ ಆದ್ಯತೆ. ಮೇ 11, 1961ರಲ್ಲಿ ಅಸ್ಸಾಮಿ ಹೇರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ನಿಂದ 11 ಮಂದಿ ಮೃತಪಟ್ಟಿದ್ದರು. ಆನಂತರ ಬಂಗಾಳಿಯನ್ನು ಅಧಿಕೃತ ಭಾಷೆ ಎಂದು ಪರಿಗಣಿಸಲಾಯಿತು. ಕಣಿವೆಯ ಕಛಾರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳ ಒಟ್ಟು ಜನಸಂಖ್ಯೆ 45 ಲಕ್ಷ. ಇವರಲ್ಲಿ ಶೇ.90ರಷ್ಟು ಮಂದಿ ಬಂಗಾಳಿ ಭಾಷಿಕರು. ಸರಕಾರ ಇತ್ತೀಚೆಗೆ ಮುಸ್ಲಿಮರು ಗಮನಾರ್ಹ ಸಂಖ್ಯೆಯಲ್ಲಿರುವ ಕರೀಂಗಂಜ್ ಹೆಸರನ್ನು ಶ್ರೀಭೂಮಿ ಎಂದು ಬದಲಿಸಿತು. ಬಿಜೆಪಿ 2021ರಲ್ಲಿ ಇಲ್ಲಿರುವ 15 ಕ್ಷೇತ್ರಗಳಲ್ಲಿ 6ರಲ್ಲಿ ಗೆದ್ದಿದೆ; 2023ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆಯಿಂದ ಕ್ಷೇತ್ರಗಳ ಸಂಖ್ಯೆ 13ಕ್ಕೆ ಕುಸಿದಿದೆ. ಇದು ಬಂಗಾಳಿಗಳನ್ನು ದುರ್ಬಲಗೊಳಿಸಲು ನಡೆಸಿದ ತಂತ್ರ ಎಂದು ದೂರಲಾಗುತ್ತಿದೆ. ಎಚ್ಚೆತ್ತುಕೊಳ್ಳದ ಕಾಂಗ್ರೆಸ್ 2001ರಿಂದ 3 ಬಾರಿ ಕಾಂಗ್ರೆಸ್ನ ತರುಣ್ ಗೊಗೊಯಿ ಮುಖ್ಯಮಂತ್ರಿ ಆಗಿದ್ದರು. ಆನಂತರ ಪಕ್ಷ ಕುಸಿಯತೊಡಗಿತು. 2021ರಲ್ಲಿ ಕಾಂಗ್ರೆಸ್ನ 29 ಸ್ಥಾನಗಳು 13 ಜಿಲ್ಲೆಗಳಿಂದ ಬಂದಿದ್ದವು; ಉಳಿದ 22 ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. 2014ರಿಂದ ನಿರಂತರ ಸೋಲುಣ್ಣುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಆಂತರಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಬಿಕ್ಕಷ್ಟು ಬಗೆಹರಿಸಲು ಸಂಸದ ಗೌರವ್ ಗೊಗೊಯಿ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿತು. ಲೋಕಸಭೆ ಚುನಾವಣೆಯಲ್ಲಿ 3 ಸ್ಥಾನ ಗಳಿಸಿತು; ಉಳಿದ 11 ಎನ್ಡಿಎ ಪಾಲಾಯಿತು. ಚುನಾವಣೆ ಘೋಷಣೆಯಾದರೂ ಸುಮ್ಮನಿದ್ದು, ಕೊನೆ ಗಳಿಗೆಯಲ್ಲಿ ಮೈತ್ರಿಗೆ ಮುಂದಾಯಿತು. ಬಿಜೆಪಿಗೆ ಆರ್ಥಿಕ-ಮಾನವ ಸಂಪನ್ಮೂಲವಲ್ಲದೆ, ಚುನಾವಣೆ ಆಯೋಗ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತಿತರ ಕೇಂದ್ರೀಯ ಸಂಸ್ಥೆಗಳ ಬೆಂಬಲವಿದೆ; ಆರೆಸ್ಸೆಸ್ ಕಾರ್ಯಕರ್ತರ ವಿಸ್ತೃತ ಜಾಲವಿದೆ. ಇದನ್ನು ಸರಿಗಟ್ಟಲು ಕಾಂಗ್ರೆಸ್ಗೆ ಆಗುತ್ತಿಲ್ಲ. ಪಕ್ಷದ ಸಂಘಟನೆ ತೀರ ದುರ್ಬಲವಾಗಿದೆ. ಸುಪ್ರೀಂ ಕೋರ್ಟ್ ವಲಸಿಗರ ಪರ ಕಾಯ್ದೆಯನ್ನು ವಜಾಗೊಳಿಸಿದ ಬಳಿಕ 2005ರಲ್ಲಿ ಎಐಯುಡಿಎಫ್ ಸ್ಥಾಪನೆಯಾಯಿತು. ಸುಗಂಧ ದ್ರವ್ಯಗಳ ಉತ್ಪಾದಕ ಮುಹಮ್ಮದ್ ಅಜ್ಮಲ್ ಬದ್ರುದ್ದೀನ್ ಪಕ್ಷದ ಸಂಸ್ಥಾಪಕ. ಇಂಥದ್ದೇ ಇನ್ನೊಂದು ಪಕ್ಷ ಯುನೈಟೆಡ್ ಮೈನಾರಿಟೀಸ್ ಫ್ರಂಟ್(ಯುಎಂಎಫ್) ಈಗ ನಿಸ್ಸತ್ವವಾಗಿದೆ. ಎಐಯುಡಿಎಫ್ ಬಲ 2006ರಲ್ಲಿದ್ದ 10ರಿಂದ 2011ರಲ್ಲಿ 18ಕ್ಕೆ ಹಾಗೂ ಕಾಂಗ್ರೆಸ್ ಬಲ 25ರಿಂದ 78ಕ್ಕೆ ಹೆಚ್ಚಿತು. ತರುಣ್ ಗೊಗೋಯಿ ತಮ್ಮ ಪುತ್ರ ಗೌರವ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಯತ್ನಿಸಿದ್ದರಿಂದ ಬಂಡೆದ್ದ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ಸೇರಿದರು. 2011ರಲ್ಲಿ ಐವರು ಶಾಸಕರನ್ನು ಹೊಂದಿದ್ದ ಬಿಜೆಪಿ, 2016ರಲ್ಲಿ 60 ಕ್ಷೇತ್ರಗಳಲ್ಲಿ ಗೆದ್ದಿತು. 2021ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಎಐಯುಡಿಎಫ್, ಆನಂತರ ಪ್ರತ್ಯೇಕಗೊಂಡಿತು. 2024ರ ಲೋಕಸಭೆ ಚುನಾವಣೆಯಲ್ಲಿ ಮೂರು ಸಂಸದ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಒಟ್ಟು ಜನಸಂಖ್ಯೆ 3.12 ಕೋಟಿಯಲ್ಲಿ ಮುಸ್ಲಿಮರ ಪಾಲು ಶೇ.34. ಕ್ಷೇತ್ರ ಮರುವಿಂಗಡಣೆ ಬಳಿಕ ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳು 35ರಿಂದ 22ಕ್ಕೆ ಕುಸಿದಿವೆ. ಅಂತೆಯೇ, ಅಹೋಂಗಳ ಪ್ರಾಬಲ್ಯ ಇದ್ದ ಕ್ಷೇತ್ರಗಳು ಕೂಡ ಕಡಿಮೆಯಾಗಿವೆ. 2010ರವರೆಗೆ ಮುಸ್ಲಿಮರು ಹಾಗೂ ‘ಚಹಾ ಬುಡಕಟ್ಟು’ಗಳು ಕಾಂಗ್ರೆಸ್ ಪರ ಇದ್ದವು. ಆನಂತರ ಆದಿವಾಸಿಗಳು ಬಿಜೆಪಿ ಪರ ವಾಲಿದರು. ಕಣದಲ್ಲಿ ಎಐಯುಡಿಎಫ್ ಉಪಸ್ಥಿತಿಯು ಕಾಂಗ್ರೆಸ್ಗೆ ಹಾನಿಯುಂಟು ಮಾಡಲಿದೆ. ಚಾರಿತ್ರ್ಯ ಹನನ ಈಶಾನ್ಯ ಭಾರತದಲ್ಲಿ ಬಿಜೆಪಿ ನೆಲೆಯೂರಲು ಕಾರಣರಾದ ಶರ್ಮಾ ಮೇಲೆ ಪಕ್ಷವನ್ನು ಗೆಲ್ಲಿಸಲೇಬೇಕಾದ ಜವಾಬ್ದಾರಿ ಇದೆ. ಅದಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. 2021ರಲ್ಲಿ ಗುವಾಹಟಿ ನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು. ಮಹಾಜೋತ್ ಈ ಬಾರಿ ಕುಂಕಿ ಚೌಧುರಿ ಅವರನ್ನು ಗುವಾಹಟಿ ಕೇಂದ್ರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಚೌಧುರಿ ಜೆನ್ ಝಿ ಪೀಳಿಗೆಯ ಏಕೈಕ ಅಭ್ಯರ್ಥಿ ಮತ್ತು ಇಂಗ್ಲೆಂಡ್ನಲ್ಲಿ ಉನ್ನತ ಶಿಕ್ಷಣ ಪಡೆದವರು. ಅವರನ್ನು ಹಣಿಯಲು ಶರ್ಮಾ ಬಳಸಿದ್ದು-‘‘ಅವರ ತಾಯಿ ಸುಜಾತಾ ಗುರುಂಗ್ ಗೋಮಾಂಸ ತಿನ್ನುತ್ತಾರೆ. ಆದ್ದರಿಂದ ಮತ ನೀಡಬೇಡಿ’’. ಶರ್ಮಾ ಅಪಸವ್ಯ ಇಷ್ಟಕ್ಕೇ ನಿಲ್ಲಲಿಲ್ಲ. ‘‘ಸುಜಾತಾ ಗುರುಂಗ್ ದಿಲ್ಲಿ ದೊಂಬಿ ಪ್ರಕರಣದ ಆರೋಪಿಗಳಾದ ಶರ್ಜೀಲ್ ಇಮಾಮ್ ಹಾಗೂ ಉಮರ್ ಖಾಲಿದ್ ಅವರನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದರು’’ ಎಂದು ದೂರಿದರು. ಸಂಸದ ಗೌರವ್ ಗೊಗೊಯಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ಪತ್ನಿ ಎಲಿಝಬೆತ್ ಕೋಲ್ಬರ್ಟ್ ಅವರು ಪಾಕಿಸ್ತಾನದ ಪರಿಸರ ಸಂಘಟನೆಯೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದು ಶರ್ಮಾ ಅವರ ಇನ್ನೊಂದು ದೂರು. ತಮಾಷೆ ಏನೆಂದರೆ, ಶರ್ಮಾ ಪೂರ್ವೇತಿಹಾಸ ವರ್ಣರಂಜಿತವಾಗಿದೆ; ಶಾರದಾ ಚಿಟ್ ಫಂಡ್ ಹಗರಣದಲ್ಲಿ ನವೆಂಬರ್ 2014ರಲ್ಲಿ ಅವರನ್ನು ಸಿಬಿಐ ಕೋಲ್ಕತಾದಲ್ಲಿ ಪ್ರಶ್ನಿಸಿತ್ತು. ಗುವಾಹಟಿ ನಗರಕ್ಕೆ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕ ಮೂಲದ ಲೂಯಿಸ್ ಬರ್ಗರ್ನಿಂದ ಹಣ ಪಡೆದಿದ್ದಾರೆ ಎಂದು ದೂರಿದ್ದ ಬಿಜೆಪಿ, ‘ವಾಟರ್ ಸ್ಕ್ಯಾಮ್’ ಎಂಬ ಕಿರುಹೊತ್ತಗೆ ಪ್ರಕಟಿಸಿತ್ತು! ಅವರು 2015ರಲ್ಲಿ ಬಿಜೆಪಿ ಸೇರಿದ ಬಳಿಕ ಶುಭ್ರಚರಿತ್ರರಾದರು! ಬಿಜೆಪಿ ಬಂಗಾಳಿ ಮೂಲದ ಮುಸ್ಲಿಮ್ ಸಮುದಾಯವನ್ನು ‘ಮಿಯಾ’ ಎಂದು ಹಂಗಿಸಿ, ಅವರ ಸುತ್ತ ಭೂಮಿ ಅತಿಕ್ರಮಣ, ಜನಸಂಖ್ಯೆ ಹೆಚ್ಚಳದ ನರೇಟಿವ್ ಕಟ್ಟಿದೆ; ಆಮೂಲಕ ಅಸ್ಸಾಮಿ ಭಾಷಿಕ ಹಿಂದೂಗಳು ಹಾಗೂ ಮೂಲವಾಸಿಗಳ ಮತಗಳ ಕ್ರೋಡೀಕರಣ ನಡೆಸಿದೆ ಮತ್ತು ಅದರಲ್ಲಿ ಯಶಸ್ವಿಯಾಗಿದೆ. ಆರು ಸಮುದಾಯಗಳಿಗೆ ಪರಿಶಿಷ್ಟ ವರ್ಗ ಸ್ಥಾನಮಾನ ನೀಡುವಲ್ಲಿ ಬಿಜೆಪಿ ವೈಫಲ್ಯವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಶೇ.40ರಷ್ಟು ವಲಸಿಗರಿದ್ದಾರೆ (2011ರ ಜನಗಣತಿ ಪ್ರಕಾರ, ರಾಜ್ಯದ ಜನಸಂಖ್ಯೆ 3.12 ಕೋಟಿ). ಆದರೆ, ಈವರೆಗೆ 30,000 ಮಂದಿಯನ್ನು ಮಾತ್ರ ಗಡಿಪಾರು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರ ದಲ್ಲಿರುವ ಎನ್ಡಿಎ ಏನು ಮಾಡುತ್ತಿದೆ? ಈ ಪ್ರಶ್ನೆಗೆ ಎನ್ಡಿಎ ಉತ್ತರ ಕೊಡುವುದಿಲ್ಲ; ಅದು ಬೈನರಿಗಳ ಮೂಲಕ ಚುನಾವಣೆ ಗೆಲ್ಲುತ್ತದೆ. ಜನ ತಕ್ಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಆಶಿಸಬೇಕಷ್ಟೇ.
2nd PUC Result-2026 | ಮುಹಮ್ಮದ್ ಸುಹೈಬ್ಗೆ ಶೇ.97 ಅಂಕ
ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಸುಹೈಬ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 582 (ಶೇ.97) ಅಂಕ ಗಳಿಸಿದ್ದಾರೆ. ಇವರು ಮಲಾರ್ ಅರಸ್ತಾನದ ಐಎಸ್ ಅಬ್ದುಲ್ ಹಮೀದ್-ಮುನೀರಾ ದಂಪತಿಯ ಪುತ್ರ.
ಕಾಟಿಪಳ್ಳ | ಮಿಸ್ಬಾಹ್ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಅತ್ಯುತ್ತಮ ಅಂಕಗಳು
ಸುರತ್ಕಲ್: ಇಲ್ಲಿನ ಕಾಟಿಪಳ್ಳದ ಮಿಸ್ಬಾಹ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಶಿಯ 546 (ಶೇ. 91) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದು, ಫಾತಿಮಾ ಸಫಾ 543 (ಶೇ. 90.5) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಮುಫೀದಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ PUC ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ನಿನ್ನೆ ಅಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆ-1 ರಲ್ಲಿ ವಿಫಲರಾದವರು, ಉತ್ತೀರ್ಣರಾಗಲು ಮತ್ತು ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಈ ಎರಡನೇ ಅವಕಾಶವಾದ ಪರೀಕ್ಷೆ-2ರನ್ನು ಬರೆಯಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಧಿಕೃತ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಪರೀಕ್ಷೆ-2 ಏಪ್ರಿಲ್ 30 ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ.
ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದು ಸಾಮಾನ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮೈಸೂರು: ಚುನಾವಣೆ ಸಂದರ್ಭದಲ್ಲಿ ಹಣ ಹಂಚುವುದು ಸರ್ವೇ ಸಾಮಾನ್ಯವಾಗಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಕುಟುಂಬ ಸಮೇತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು, ಬಳಿಕ ನಂಜನಗೂಡಿಗೆ ತೆರಳಿ ಶ್ರೀಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಾಗಲಕೋಟೆ ಉಪಚುನಾವಣೆಯಲ್ಲಿ ಹಣ ಹಂಚಲಾಗಿರುವ ವಿಡಿಯೋ ವೈರಲ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು. ದೇವರ ಮೇಲೆ ಭಕ್ತಿ ಇರುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಭಕ್ತಿ ಎಂದು ತಿಳಿಸಿದ ಅವರು, ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಎರಡು ಕಾಲು ಕಳೆದುಕೊಂಡು ಸಂಕಷ್ಟದಲ್ಲಿರುವ ಮಹಿಳೆಗೆ ತಮ್ಮಿಂದಾದ ಸಹಾಯ ಮಾಡುತ್ತಿರುವುದಾಗಿ ಹೇಳಿದರು. ನಾಡಿಗೆ ಒಳ್ಳೆಯದು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.
ಇಸ್ರೇಲ್ ದುಷ್ಟ ದೇಶ ಎಂದು ಪೋಸ್ಟ್ ಹಾಕಿದ ಪಾಕಿಸ್ತಾನದ ಸಚಿವ ಖ್ವಾಜಾ ಆಸಿಫ್ : ನೆತನ್ಯಾಹು ಕಚೇರಿಯಿಂದ ಖಂಡನೆ
ವಿವಾದದ ಬೆನ್ನಲ್ಲೆ ಪೋಸ್ಟ್ ಡಿಲೀಟ್
Gold Rate Rise: ಅಮೆರಿಕ ಡಾಲರ್ ಮೌಲ್ಯ ಇಳಿಕೆಯಿಂದಾಗಿ ಏರಿದ ಚಿನ್ನ- ಬೆಳ್ಳಿ ದರ
ಕದನ ವಿರಾಮ ಘೋಷಣೆಯಾಗಿದ್ದರೂ ಇರಾನ್ ಮೇಲಿನ ದಾಳಿ ಮುಂದುವರಿದಿದೆ. ನಾಳೆಯ ಪಾಕಿಸ್ತಾನದಲ್ಲಿ ನಡೆಯಲಿರುವ ಸಂಧಾನ ಸಭೆಯ ಬಗ್ಗೆಯೂ ಅನಿಶ್ಚಿತತೆ ಇರುವುದರಂದ ಜನರು ಸುರಕ್ಷತೆ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ.
Madhya Pradesh| ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬದ್ನಾಗರ್ ತೆಹ್ಸಿಲ್ನ ಝಲಾರಿಯಾ ಗ್ರಾಮದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕನನ್ನು ಭಗೀರಥ್ ಎಂದು ಗುರುತಿಸಲಾಗಿದೆ. ಈತ ಪ್ರವೀಣ್ ದೇವಸಿ ಎಂಬ ಕುರಿಗಾಹಿಯ ಪುತ್ರನಾಗಿದ್ದಾನೆ. ಪ್ರವೀಣ್ ದೇವಸಿ ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ಪಾಳಿಯಿಂದ 3 ದಿನಗಳ ಹಿಂದೆ ಈ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ. ಘಟನೆ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಬದ್ನಾಗರ್ ಠಾಣಾಧಿಕಾರಿ ಅಶೋಕ್ ಪಾಟೀದಾರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬಾವಿಯೊಳಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಮಧ್ಯಪ್ರಾಚ್ಯದಲ್ಲಿ ಕದನವಿರಾಮದ ಬಳಿಕ ಪಾಕಿಸ್ತಾನದಲ್ಲಿನ ಮಾತುಕತೆಗೂ ಮುನ್ನವೇ ಇರಾನ್ ವಿರುದ್ದ ಟ್ರಂಪ್ ಕಿಡಿಕಾರಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಕಳಪೆ ಪ್ರದರ್ಶನ ನೀಡುತ್ತಿದ್ದು, ಟೋಲ್ ಸಂಗ್ರಹಮಾಡಬಾರದು ಎಂದಿದ್ದಾರೆ. ಅಲ್ಲದೆ, ಹೊರ್ಮುಜ್ ನಲ್ಲಿ ಇರಾನ್ ಸಹಾಯವಿದ್ದರೂ ಇರದಿದ್ದರೂ ಸಹ ಜಲಸಂಧಿಯಿಂದ ತೈಲ ಸಾಗಾಟವಾಗಲಿದೆ ಎಂದು ತಿಳಿಸಿದ್ದಾರೆ. ಹೀಗೆ ಕದನವಿರಾಮದ ಸಮಯದಲ್ಲಿ ಇರಾನ್ ವಿರುದ್ದ ಹೊಂದಿದ್ದ ಸಕರಾತ್ಮಕ ನಿಲುವಿನಿಂದ ಇದೀಗ ಯೂಟರ್ನ್ ತೆಗೆದುಕೊಳ್ಳುತ್ತಿದ್ದು, ಇದು ಮಾತುಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Tamil Nadu Election : ನಟ ವಿಜಯ್ ಯಾಕೋ ಕಾಂಗ್ರೆಸ್ ಬೆಂಬಲದ ಭ್ರಮೆಯಲ್ಲಿದ್ದಾರೆ, ಮೆಚ್ಯೂರಿಟಿ ಕೊರತೆ - ಡಿಕೆಶಿ
Tamil Nadu Election 2026: ದೇಶವೆಲ್ಲಾ ಕುತೂಹಲದಿಂದ ಕಾಯುತ್ತಿರುವ ವಿಧಾನಸಭಾ ಚುನಾವಣೆಗಳ ಪೈಕಿ ತಮಿಳುನಾಡು ಕೂಡಾ ಒಂದು. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟವು ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ಚೆನ್ನೈ ಪ್ರವಾಸದಲ್ಲಿದ್ದರು. ಅಲ್ಲಿ, ಟಿವಿಕೆಯ ವಿಜಯ್’ಗೆ ಪ್ರಬುದ್ದತೆಯೇ ಇಲ್ಲ ಎಂದು ಹೇಳಿದ್ದಾರೆ.
Nuclear Bomb: ಆಗ ಜಪಾನ್ಗೆ ಆದ ಗತಿ ಈಗ ಇರಾನ್ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿ: ರಂಗಸ್ವಾಮಿ ಮೂಕನಹಳ್ಳಿ
ಆಗ ಜಪಾನ್ಗೆ ಆದ ಗತಿ ಈಗ ಇರಾನ್ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿಯ ಬಗ್ಗೆ ಲೇಖಕ ಮತ್ತು ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಬಹಳ ಅಗ್ರೆಷನ್ ತೋರಿಸುತಿತ್ತು.ಅಮೆರಿಕಾದ ಬೆದರಿಕೆಗಳಿಗೆ ಎಳ್ಳು ಕಾಳಿನ ಬೆಲೆ ನೀಡುತ್ತಿರಲಿಲ್ಲ.ಪುಟಾಣಿ ಜಪಾನ್ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತದ್ದು ಎಲ್ಲರಿಗೂ ಗೊತ್ತಿರುವ ವಿಚಾರ.ಆಮೇಲೇನಾಯ್ತು
14 ಲಕ್ಷ ಅನರ್ಹ ಬಿಪಿಎಲ್ ರದ್ದತಿ ಚುರುಕು: ಮುನಿಯಪ್ಪ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಮಾನದಂಡಗಳನ್ನು ಮೀರಿ ಕಾರ್ಡ್ ಪಡೆದಿರುವ ಸುಮಾರು 14 ಲಕ್ಷ ಅನರ್ಹರನ್ನು ಪತ್ತೆಹಚ್ಚಿ, ಅವುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ವೇಗಗೊಂಡಿದೆ. ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ, ಅಂತಹ ಕುಟುಂಬಗಳಿಗೆ ಎಪಿಎಲ್ ಕಾರ್ಡ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
KKR vs LSG : ಸೋತೆವು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದ ಮಾಲೀಕನ ಮುಖದಲ್ಲಿ ನಗು ತರಿಸಿದ ಮುಕುಲ್ ’ಮ್ಯಾಜಿಕ್’
LSG Last ball thriller win : ಇನ್ನೇನು ಕೋಲ್ಕತ್ತ ವಿರುದ್ದ ಪಂದ್ಯ ಸೋತೆವು ಎಂದು ಲಖನೌ ತಂಡದವರು ಕೂತಿದ್ದಾಗ, ಆಡಲು ಬಂದ ಮುಕುಲ್ ಚೌಧುರಿ, ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೊನೇ ಬಾಲ್’ನಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟ ಮುಕುಲ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದು. ಆ ಮೂಲಕ, ಕೋಲ್ಕತ್ತ, ಟೂರ್ನಿಯಲ್ಲಿ ಮತ್ತೆ ಸೋಲು ಅನುಭವಿಸಿತು.
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ
ಬೆಂಗಳೂರು: ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ ಅವರ ನಿಕಟ ಒಡನಾಡಿಯಾಗಿದ್ದ ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಶುಕ್ರವಾರ (ಏ 10) ಮುಂಜಾನೆ ನಗರದಲ್ಲಿ ನಿಧನರಾಗಿದರು. ಸಂಘ ಪರಿವಾರದ ಅಂಗಸಂಸ್ಥೆ ರಾಷ್ಟ್ರೋತ್ಥಾನದ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದ ರಾಮಸ್ವಾಮಿ ಪ್ರಸ್ತುತ ಉತ್ಥಾನ ಮಾಸ ಪತ್ರಿಕೆಯ ಸಂಪಾದಕರಾಗಿ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದು ಸಾಹಿತ್ಯ ಸೇವೆ ಮಾಡಿದವರು. ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಇಂದು ಬೆಳಿಗ್ಗೆ 12
ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ದಾಖಲೆಯ ಫಲಿತಾಂಶ ಹೊರಬಿದ್ದಿದ್ದು, ಎಲ್ಲಾ ವಿಭಾಗದಲ್ಲೂ ಉತ್ತಮ ಫಲಿತಾಂಶ ಕಂಡುಬಂದಿದೆ. ಅದರಲ್ಲೂ ಪ್ರಮುಖವಾಗಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಪಿಯು ಪರೀಕ್ಷೆ ಎದುರಿಸಿದ 3,53,742 ವಿದ್ಯಾರ್ಥಿನಿಯರ ಪೈಕಿ 3,13,770 ಜನ ಪಾಸಾಗಿದ್ದು, ಶೇ.88.70ರಷ್ಟು ಫಲಿತಾಂಶ ದಾಖಲಾಗಿದೆ. ಇನ್ನು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ, ಹಾಗೂ ಮರುಮೌಲ್ಯಮಾಪನಕ್ಕೆ ದಿನಾಂಕ ಸಹ ಬಿಡುಗಡೆಯಾಗಿದೆ. ಇದರ ಜೊತೆಗೆಪಿಯುಸಿ ಪರೀಕ್ಷೆ-2ಕ್ಕೆ ನೊಂದಣಿಗೂ ಏ.17ರವರೆಗೂ ಸಮಯ ನೀಡಿದ್ದಾರೆ. ಈ ಎಲ್ಲಾದರ ಕುರಿತ ಮಾಹಿತಿ ಇಲ್ಲಿದೆ..
ಮಾಣಿಕ್ಯಧಾರಾ ಬಳಿ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ; 48 ಗಂಟೆ ಕಳೆದರೂ ಸಿಕ್ಕಿಲ್ಲ ಸುಳಿವು
ಕೇರಳದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಬಳಿ ಮಂಗಳವಾರ ನಾಪತ್ತೆಯಾಗಿದ್ದಾಳೆ. ಎಸ್ಡಿಆರ್ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ ಐದು ತಂಡಗಳು ಗುರುವಾರವೂ ತೀವ್ರ ಹುಡುಕಾಟ ನಡೆಸಿವೆ. ಕಾರ್ಯಾಚರಣೆ ವಿಧಾನ: ದತ್ತಪೀಠ ಮತ್ತು ದೇವಿರಮ್ಮನ ಬೆಟ್ಟದ ಕಂದಕಗಳಲ್ಲಿ ರೋಪ್ಗಳ ಸಹಾಯದಿಂದ ಹಾಗೂ ನಾಲ್ಕು ಡ್ರೋನ್ಗಳನ್ನು ಬಳಸಿ ಪತ್ತೆ ಕಾರ್ಯ ನಡೆಸಲಾಯಿತು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಬಾಲಕಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ.
Tamilnadu Election 2026: ಮಹಿಳೆಯರಿಗೆ 2 ಸಾವಿರ: ತಮಿಳುನಾಡಿನ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಿಡುಗಡೆ
Tamilnadu Election 2026: ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ತಮಿಳುನಾಡಿನಲ್ಲೂ ಪರಿಚಯಿಸಲು ಕಾಂಗ್ರೆಸ್ ಮುಂದಾಗಿದೆ. ತಮಿಳುನಾಡಿನ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಮಹಿಳೆಯರಿಗೆ 2 ಸಾವಿರ, 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂ ರಹಿತ ರೈತರಿಗೆ ವಾರ್ಷಿಕ 6
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು ಹಾಗೂ ಒಣಹವೆ ಮುಂದುವರಿದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತಾದರೂ, ಮಳೆ ಕೊರತೆ ಎದುರಾಗಿದೆ. ಕರ್ನಾಟಕದಲ್ಲಿ ಏಪ್ರಿಲ್ 10ರಂದು ಸಹ ಬೆಂಗಳೂರು ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಒಣಹವೆ ಮುಂದುವರಿದಿದೆ. ಆದರೆ, ಕರ್ನಾಟಕದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ
IPL 2026: ಇಂದು (ಏ.10) ರಾಯಲ್ಸ್ಗೆ 'ರಾಯಲ್' ಚಾಲೆಂಜ್: ಸತತ 3ನೇ ಜಯದ ನಿರೀಕ್ಷೆಯಲ್ಲಿ ರಜತ್ ಪಾಟೀದಾರ್ ಬಳಗ
2 ಪಂದ್ಯಗಳನ್ನು ತವರಲ್ಲಿ ಆಡಿ ಗೆದ್ದಿರುವ ಆರ್ಸಿಬಿ ಮೊದಲ ಬಾರಿಗೆ ತವರಿನಾಚೆಯ ಪಂದ್ಯಕ್ಕೆ ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಎಲ್ಲಾ ಯುವ ಪ್ರತಿಭೆಗಳ ಜೊತೆ ಟಫ್ ಫೈಟ್ ಕೊಡಲು ಸಜ್ಜಾಗಿದೆ. ವೈಭವ ಸೂರ್ಯವಂಶಿ ಆಟದ ಮೇಲೆ ನಿರೀಕ್ಷೆ ಹೆಚ್ಚು ಇದೆ.
Madhya pradesh | ನದಿ ಜೋಡಣೆಗೆ ವಿರೋಧ: ಚಿತೆಯಲ್ಲಿ ಮಲಗಿ ನೂರಾರು ಬುಡಕಟ್ಟು ಮಹಿಳೆಯರ ಪ್ರತಿಭಟನೆ
ಭೋಪಾಲ್: ನೂರಾರು ಮಂದಿ ಬುಡಕಟ್ಟು ಜನಾಂಗದ ಮಹಿಳೆಯರು ಮಧ್ಯಪ್ರದೇಶದ ಛಾತರ್ಪುರ ಜಿಲ್ಲೆಯಲ್ಲಿ ಗುರುವಾರ ಅಣಕು ಚಿತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರಸ್ತಾವಿತ ಕೆನ್-ಬೆಟ್ವಾ ನದಿ ಜೋಡಣೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಿದ ರೈತ ಮಹಿಳೆಯರು ಕೊನೆಯುಸಿರು ಇರುವವರೆಗೂ ಯೋಜನೆಯನ್ನು ವಿರೋಧಿಸುವುದಾಗಿ ಎಚ್ಚರಿಕೆ ನೀಡಿದರು. ಪುಟ್ಟ ಮಕ್ಕಳನ್ನು ಹಿಡಿದ ನೂರಾರು ಮಹಿಳೆಯರು ಚಿತೆಯಲ್ಲಿ ಮಲಗಿರುವ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತಾ ಆಂದೋಲನದಲ್ಲಿ ಮಹಿಳೆಯರು ನ್ಯಾಯ ಅಥವಾ ಸಾವನ್ನು ಆಗ್ರಹಿಸಿದರು. ಅವರನ್ನು ಚದುರಿಸಲು ಪೊಲೀಸರು ಪ್ರಯತ್ನ ನಡೆಸಿದಾಗ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಯಿತು. ಕೊನೆಗೆ ಪೊಲೀಸರು ಹಿಂದಡಿ ಇಡಬೇಕಾಯಿತು. ಆಡಳಿತ ಯಂತ್ರ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದೆ ಎಂದು ಆಪಾದಿಸಿದ ಮಹಿಳೆಯರು, ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಪ್ರಸ್ತಾವಿತ ಯೋಜನೆಯಡಿ ಕೆನ್ ನದಿ ಪಾತ್ರದ ನೀರನ್ನು ಜಲಕ್ಷಾಮ ಇರುವ ಬೆಟ್ವಾ ನದಿ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ದೌಧಾನ್ ಅಣೆಕಟ್ಟು ನಿರ್ಮಾಣ ಮಾಡಿ, 200 ಕಿಲೋಮೀಟರ್ ಉದ್ದದ ನಾಲೆಯ ಮೂಲಕ ನೀರು ಹರಿಸಲಾಗುತ್ತದೆ. ಜತೆಗೆ ಸಂಬಂಧಿತ ನೀರಾವರಿ ಹಾಗೂ ವಿದ್ಯುತ್ ಮೂಲಸೌಕರ್ಯಗಳೂ ನಿರ್ಮಾಣವಾಗಲಿವೆ. ಈ ಯೋಜನೆಯಿಂದ 10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗುತ್ತದೆ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ. 62 ಲಕ್ಷ ಮಂದಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಹೇಳುತ್ತಾರೆ. ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಉದ್ದೇಶಿಸಿದ್ದು, ಹಲವು ವರ್ಷಗಳಲ್ಲಿ ಹಂತ ಹಂತವಾಗಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ಭೂಮಿ ಹಾಗೂ ಅರಣ್ಯದ ಹಕ್ಕಿಗೆ ಸಂಬಂಧಿಸಿದ ಆತಂಕವನ್ನು ಹಾಗೂ ಸ್ಥಳಾಂತರ ಭೀತಿಯ ಆತಂಕವನ್ನು ಅಧಿಕಾರಿಗಳು ನಿವಾರಿಸಿಲ್ಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಬಿಹಾರ | ಪಿಕಪ್ ಚಾಲಕನ ಭೀಕರ ಹತ್ಯೆ ; ಆರೋಪಿಯನ್ನು ಥಳಿಸಿ ಕೊಂದ ಸ್ಥಳೀಯರು
ಪಾಟ್ನಾ: ಸುಮಾರು 42 ವರ್ಷ ವಯಸ್ಸಿನ ಪಿಕಪ್ ವ್ಯಾನ್ ಚಾಲಕನನ್ನು ರಸ್ತೆಬದಿ ವ್ಯಾಪಾರಿಯೊಬ್ಬ ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಆರೋಪಿ ವ್ಯಾಪಾರಿಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಇದರಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಘಟನಾವಳಿಯಲ್ಲಿ ಎರಡು ಕೋಮುಗಳಿಗೆ ಸೇರಿದ ವ್ಯಕ್ತಿಗಳು ಮೃತರಾಗಿರುವುದು ಉದ್ವಿಗ್ನತೆಗೆ ಕಾರಣ. ಗುರುವಾರ ಬೆಳಿಗ್ಗೆ ನಬಿ ಹುಸೇನ್ ಎಂಬ ಪಿಕಪ್ ಚಾಲಕ ಮತ್ತು ರವಿ ಚೌಹಾಣ್ (30) ಎಂಬ ರಸ್ತೆಬದಿ ವ್ಯಾಪಾರಿಯ ನಡುವೆ ಜಗಳವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹಿಟ್ಟು ಮಾರುತ್ತಿದ್ದ ರವಿ ಜಗಳದ ವೇಳೆ ಹುಸೇನ್ ಮೇಲೆ ಕತ್ತಿಯಿಂದ ಹೊಡೆದು ಶಿರಚ್ಛೇದ ಮಾಡಿದ್ದಾಗಿ ಘಟನೆ ನಡೆದ ಫೋರ್ಬ್ ಗಂಜ್ನಲ್ಲಿ ಠಿಕಾಣಿ ಹೂಡಿರುವ ಎಸ್ಪಿ ಜಿತೇಂದ್ರ ಕುಮಾರ್ ವಿವರಿಸಿದ್ದಾರೆ. ಹುಸೇನ್ನ ಶಿರಚ್ಛೇದ ಮಾಡಿದ ರವಿ ರಸ್ತೆ ಮಧ್ಯದಲ್ಲೇ ಶವವನ್ನು ಬಿಟ್ಟು ಪರಾರಿಯಾಗಲು ಮುಂದಾದ. ಘಟನೆಯ ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಪೊಲೀಸರು ಆತನನ್ನು ರಕ್ಷಿಸುವ ವರೆಗೂ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಗಾಯಗಳಿಂದ ಆತ ಮೃತಪಟ್ಟ ಎಂದು ಅವರು ಹೇಳಿದ್ದಾರೆ. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. ಪಾರ್ಕಿಂಗ್ ವ್ಯಾಜ್ಯ ಸೇರಿದಂತೆ ಘಟನೆಗೆ ಕಾರಣವಾದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ ಡಿಪಿಓ ಮುಕೇಶ್ ಕುಮಾರ್ ಸಹಾ ವಿವರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಗಿದೆ. ಎರಡು ಭಿನ್ನ ಕೋಮುಗಳ ವ್ಯಕ್ತಿಗಳನ್ನು ಒಳಗೊಂಡಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ಹೀಟ್ ವೇವ್ (ಉಷ್ಣಗಾಳಿ) ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ತಾಪಮಾನ: ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿತ್ರದುರ್ಗ: ರಾಜ್ಯದ 2 ನೇ ಅತಿದೊಡ್ಡ ಕೆರೆ ರಾಣಿಕೆರೆ ಒತ್ತುವರಿ ತೆರವು ಶುರು
ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ವ್ಯಾಪ್ತಿಯಲ್ಲಿರುವ, ರಾಜ್ಯದ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ರಾಣಿಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಯಶಸ್ವಿಯಾಗಿ ನಡೆಸಿದೆ. ಒತ್ತುವರಿ ತೆರವು: ಕಳೆದ ಅನೇಕ ವರ್ಷಗಳಿಂದ ರಾಣೀಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅಕ್ರಮ ತೋಟಗಳನ್ನು ಗುರುವಾರ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
3 States Assembly Elections: ಅಸ್ಸಾಂ, ಪುದುಚೇರಿಯಲ್ಲಿ ಸಾರ್ವಕಾಲಿಕ ದಾಖಲೆಯ ಮತದಾನ, ಕೇರಳಂನಲ್ಲಿ ಎಷ್ಟಾಗಿದೆ
3 States Assembly Elections: ದೇಶದ ಮೂರು ರಾಜ್ಯಗಳಲ್ಲಿ ನಡೆದ 2026ರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಕರ್ನಾಟಕದ ಎರಡು ವಿಧಾಸಭಾ ಕ್ಷೇತ್ರಗಳಲ್ಲೂ ದಾಖಲೆಯ ಮತದಾನವಾಗಿದೆ. ಅಸ್ಸಾಂ, ಕೇರಳಂ ಹಾಗೂ ಪುದುಚೇರಿಯಲ್ಲಿ ದಾಖಲೆಯ ಮತದಾನವಾಗಿದೆ. ಮೂರು ರಾಜ್ಯಗಳಲ್ಲೂ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಏಪ್ರಿಲ್ 9ರ ಗುರುವಾರ ಕೇರಳಂ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಮತದಾನ ನಡೆಯಿತು. ಅಸ್ಸಾಂನಲ್ಲಿ
ಬೆಂಗಳೂರಿಗೆ ಪರ್ಯಾಯವಾಗಿ ಮೈಊರು ತುಮಕೂರಲ್ಲಿ ರೈಲ್ವೆ ಯೋಜನೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಪಿಯು ಫಲಿತಾಂಶ: ಸತತ ಅಗ್ರಸ್ಥಾನ ಕಾಯ್ದುಕೊಂಡ ಉಡುಪಿ, ದ.ಕ ಅಗ್ರಜ: ಖಾಸಗಿ ಪಿಯು ಮಾತ್ರವಲ್ಲ ಸರಕಾರಿಯಲ್ಲೂ ಟಾಪರ್
ಸಂಪೂರ್ಣ ಪಿಯು ಫಲಿತಾಂಶದಲ್ಲಿ ಉಡುಪಿ ಪ್ರಥಮವಾಗಿ, ದಕ್ಷಿಣ ಕನ್ನಡ ದ್ವಿತೀಯವಾಗಿದ್ದರೆ, ಕೇವಲ ಸರಕಾರಿ ಪಿಯು ಕಾಲೇಜುಗಳ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಹಾಗೂ ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ವಿಜ್ಞಾನ-ವಾಣಿಜ್ಯ ವಿಭಾಗದ ಟಾಪರ್ಗಳು ಕೂಡಾ ಕರಾವಳಿ ಜಿಲ್ಲೆಗಳಿಂದಲೇ ಅಧಿಕ ವಿದ್ಯಾರ್ಥಿಗಳು ಇದ್ದಾರೆ.
2nd PUC Result-2026 | ಫಾತಿಮತ್ ಫಂಸೀನಾಗೆ ವಾಣಿಜ್ಯ ವಿಭಾಗದಲ್ಲಿ 551 ಅಂಕ
ಮಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ KPS ಪದವಿ ಪೂರ್ವ ಕಾಲೇಜು ಬೆಳ್ಳಾರೆ ಇದರ ವಿದ್ಯಾರ್ಥಿನಿ ಫಾತಿಮತ್ ಫಂಸೀನಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 551 (92%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಡಬ ತಾಲೂಕು, ಪಾಲ್ತಾಡಿಯ ಅಂಕತಡ್ಕ ನಿವಾಸಿ ಎ.ಎಸ್ ರಝಾಕ್ ಮತ್ತು ಕಲಂದರ್ ಬೀಬಿ ದಂಪತಿಯ ಪುತ್ರಿ.
ಸಾಂಸ್ಕೃತಿಕವಲ್ಲದ ಮನಸ್ಸುಗಳು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಆ ಕ್ಷೇತ್ರ ಬರಡಾಗುತ್ತದೆ: ಪ್ರೊ.ಸಿದ್ದರಾಮಯ್ಯ
ಲೇಖಕಿಯರ ಸಂಘದ ವತಿಯಿಂದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ, ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ
‘ಇವ ನಮ್ಮವ ಇವ ನಮ್ಮವ’ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ: ಮರ್ಯಾದೆಗೇಡು ಹತ್ಯೆ ವಿರೋಧಿ ಸಮಿತಿ
ಬೆಂಗಳೂರು : ಮರ್ಯಾದಾ ಹತ್ಯೆಗಳ ವಿರುದ್ಧ ಕಾನೂನು ರೂಪಿಸುವಲ್ಲಿ ಕರ್ನಾಟಕ ವಿಧಾನಸಭೆಯು ‘ಇವ ನಮ್ಮವ ಇವ ನಮ್ಮವ’ ಕಾನೂನು-2026 ಅನ್ನು ಅಂಗೀಕರಿಸಿರುವುದು ಮಹತ್ವದ ಮತ್ತು ಅಗತ್ಯವಾದ ಹೆಜ್ಜೆಯಾಗಿದ್ದು, ಸರಕಾರ ಕೂಡಲೇ ಇದನ್ನು ಕಟ್ಟುನಿಟ್ಟಾಗಿ, ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಮರ್ಯಾದೆಗೇಡು ಹತ್ಯೆ ವಿರೋಧಿ ಸಮಿತಿ ಒತ್ತಾಯಿಸಿದೆ. ಗುರುವಾರ ನಗರದ ಪ್ರೆಸ್ ಕ್ಲಬ್ನಲ್ಲಿ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ವಕೀಲರಾದ ಮೈತ್ರೇಯಿ ಕೃಷ್ಣನ್, ವಿನಯ್ ಶ್ರೀನಿವಾಸ್, ಪ್ರಾಧ್ಯಾಪಕ ಡಾ.ಹುಲಿಕುಂಟೆ ಮೂರ್ತಿ, ಹೋರಾಟಗಾರರಾದ ಚಂದ್ರಮ್ಮ, ಮೊಹಮ್ಮದ್ ಪೀರ್, ಲೇಖಾ, ಅಶ್ವಿನಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಜಾತಿ, ಸಮುದಾಯ, ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಯು ತಾವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುವ ಸಮಾನ, ಅವಿಭಾಜ್ಯ ಹಕ್ಕನ್ನು ಹೊಂದಿದ್ದಾರೆಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ಕಾನೂನು ಡಾ.ಅಂಬೇಡ್ಕರ್ ಅವರ ಜಾತಿ ತಿಳಿವಳಿಕೆಯನ್ನು ಗುರುತಿಸುತ್ತದೆ. ಅಂದರೆ ಜಾತಿ ವ್ಯವಸ್ಥೆಯ ಸಂರಕ್ಷಣೆಯಲ್ಲಿ (ಎಂಡೋಗಮಿ) ಒಂದೇ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಮತ್ತು ಸಮುದಾಯಗಳ ನಡುವಿನ ಮದುವೆಗಳನ್ನು ರಕ್ಷಿಸುವ, ಸಕ್ರಿಯಗೊಳಿಸುವ ಮೂಲಕ ಈ ಕಾನೂನು ಸಮಾನತೆ, ಭ್ರಾತೃತ್ವದ ಸಂವಿಧಾನಾತ್ಮಕ ದೃಷ್ಟಿಕೋನವನ್ನು ಅಳವಡಿಸುವಲ್ಲಿ ಒಂದು ಹೆಜ್ಜೆಯಾಗಿದೆ ಎಂದರು. ಈ ಶಾಸನವನ್ನು ಸ್ವಾಗತಿಸುವಾಗ ಮರ್ಯಾದಾ ಹತ್ಯೆಗಳಿಗೆ ಕನಿಷ್ಠ ಐದು ವರ್ಷಗಳ ಶಿಕ್ಷೆಯನ್ನು ವಿಧಿಸುವ ನಿಬಂಧನೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ. ಇದು ಭಾರತೀಯ ನ್ಯಾಯ ಸಂಹಿತೆಯ ಕೊಲೆಗೆ ಜೀವಾವಧಿ ಅಥವಾ ಮರಣದಂಡನೆಯನ್ನು ವಿಧಿಸುವುದಕ್ಕೆ ವಿರುದ್ಧವಾಗಿದೆ. ಮರ್ಯಾದಾ ಹತ್ಯೆಗಳನ್ನು ಸಾಮಾನ್ಯ ಕೊಲೆಗಳಿಗಿಂತ ಕಡಿಮೆ ಗಂಭೀರವಾಗಿ ಪರಿಗಣಿಸಲು ಯಾವುದೇ ಸಮರ್ಥನೆ ಇಲ್ಲ ಮತ್ತು ಈ ಅಸಂಗತತೆಯನ್ನು ತುರ್ತಾಗಿ ಸರಿಪಡಿಸಬೇಕು ಎಂದು ಹೋರಾಟಗಾರರು ತಿಳಿಸಿದರು. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳ ಹಿನ್ನೆಲೆಯಲ್ಲಿ ಈ ಕಾನೂನು ಅತ್ಯಂತ ಮಹತ್ವದ್ದಾಗಿದೆ. ಇದು ವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯ, ಘನತೆ ಮತ್ತು ಮೂಲಭೂತ ಹಕ್ಕುಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಧೇಯಕವು ಪ್ರಮುಖ ಸಾಮಾಜಿಕ ಶಾಸನವಾಗಿದ್ದು, ರಾಜ್ಯಪಾಲರು ಇದಕ್ಕೆ ಅನುಮೋದನೆ ನೀಡದಿರುವುದು ದುರದೃಷ್ಟಕರ. ರಾಜ್ಯಪಾಲರ ನಿರಂತರ ನಿಷ್ಕ್ರಿಯತೆ ಸ್ವೀಕಾರಾರ್ಹವಲ್ಲ. ಕೂಡಲೇ ಅವರು ಇದಕ್ಕೆ ಅನುಮೋದನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಈ ಕಾನೂನಿನ ಅಂಗೀಕಾರವು ಒಂದು ಆರಂಭವಷ್ಟೇ, ಅಂತಿಮ ಗುರಿಯಲ್ಲ. ಸರಕಾರವು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜಾತಿ ಮತ್ತು ಸಮುದಾಯಗಳ ನಡುವಿನ ಮದುವೆಗಳನ್ನು ಉತ್ತೇಜಿಸಲು ಯೋಜನೆಗಳು ಮತ್ತು ಪ್ರೋತ್ಸಾಹಗಳನ್ನು ಒದಗಿಸಬೇಕು. ಇದರಲ್ಲಿ ಜಾತಿ ಮತ್ತು ಸಮುದಾಯಗಳ ನಡುವಿನ ದಂಪತಿಗಳಿಗೆ ಮೀಸಲಾತಿ ಒದಗಿಸುವುದು ಸೇರಿದೆ, ಇದು ತಕ್ಷಣದ ಗಮನಕ್ಕೆ ಅರ್ಹವಾದ ದೀರ್ಘಕಾಲದ ಮತ್ತು ನ್ಯಾಯಯುತ ಬೇಡಿಕೆಯಾಗಿದೆ ಎಂದು ಹೋರಾಟಗಾರರು ತಿಳಿಸಿದರು.
ಅಂತರ ನಿಗಮ ವರ್ಗಾವಣೆ: ಆಕ್ಷೇಪಣೆ ಸಲ್ಲಿಸಲು ಅವಕಾಶ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ದರ್ಜೆ-3ರ ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, ಸಂಭವನೀಯ ಪಟ್ಟಿಯನ್ನು ಎ.9ರಂದು ಪ್ರಕಟಿಸಿದ್ದು, ಎ.16ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2026ರ ಜನವರಿ 1ರ ಬೆಳಗ್ಗೆ 11 ಗಂಟೆಯಿಂದ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, ಪ್ರಾರಂಭವಾಗಿದ್ದು, ಫೆಬ್ರವರಿ 28ರ ಸಂಜೆ 5:30ರ ವರೆಗೆ ಆನ್ಲೈನ್ ಮೂಲಕ www.ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4ರ ನೌಕರರು ಪರಸ್ಪರ/ಸಾಮಾನ್ಯ(ಪತಿ-ಪತ್ನಿ/ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ ಪ್ರಕರಣಗಳು) ಸಂಭವನೀಯ ಪಟ್ಟಿಯನ್ನು ksrtc.karnataka.gov.in ವೆಬ್ಸೈಟ್ನಲ್ಲಿ ಎ.9ರಂದು ಪ್ರಕಟಿಸಲಾಗಿದೆ. ಸದರಿ ಪಟ್ಟಿಗೆ ಎ.16ರ ಸಂಜೆ 5.30ರ ವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶವನ್ನು ನೀಡಲಾಗಿದೆ. ನೌಕರರು ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು. ನೌಕರರು ವೈಯಕ್ತಿಕವಾಗಿ ಅಥವಾ ಅಂಚೆಯ ಮೂಲಕ ಕೇಂದ್ರ ಕಛೇರಿಗೆ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಣೆ ನೀಡಿದೆ.
Haveri | ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ: ಅವಳಿ-ಜವಳಿ ಮಕ್ಕಳು ಮೃತ್ಯು
ಹಾವೇರಿ : ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪೂರ ಗ್ರಾಮದಲ್ಲಿ ಗರ್ಭಿಣಿಯೊಬ್ಬರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಟ್ಟೆಯಲ್ಲಿದ್ದ ಅವಳಿ-ಜವಳಿ ಮಕ್ಕಳು ಅವಧಿಪೂರ್ವದಲ್ಲಿ ಜನಿಸಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಾ.28ರಂದು ಕ್ಷುಲ್ಲಕ ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಪವಿತ್ರಾ ಲಮಾಣಿ ಅವಳಿ-ಜವಳಿ ಮಕ್ಕಳು, ಎ.7ರಂದು ಅವಧಿಪೂರ್ವವಾಗಿ ಜನಿಸಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ತಾಯಿ ಹಾಲವ್ವ ಶಾಂತಪ್ಪ ಲಮಾಣಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿದ ಆರೋಪದಲ್ಲಿ ಅಲ್ಲಿಪೂರ ಗ್ರಾಮದ ಸುರೇಶ ಹಾಲಪ್ಪ ಲಮಾಣಿ, ಪರಶುರಾಮ ಹಾಲಪ್ಪ ಲಮಾಣಿ, ಮಹೇಶ ಸೋಮಲೆಪ್ಪ ಲಮಾಣಿ ಹಾಗೂ ಸಕ್ಕುಬಾಯಿ ಸುರೇಶ ಲಮಾಣಿ ವಿರುದ್ಧ ಪ್ರಕರಣ ದಾಖಲಾಗಿದೆ
ಮನುಕುಲದ ಒಳಿತಿಗೆ ಯುದ್ಧ ಕೊನೆಗೊಳ್ಳಲಿ : ದಿನೇಶ್ ಗುಂಡೂರಾವ್
ವಿಶ್ವಶಾಂತಿಗಾಗಿ ವಿಶ್ವ ನವಕರ ಮಹಾಮಂತ್ರ ದಿನ ಆಚರಣೆ
2nd PUC Result-2026 | ರಾಜ್ಯಕ್ಕೆ ದ್ವಿತೀಯ ರ್ಯಾಂಕ್: ಅಂಕಿತ್ ಕಾರತಗಿ ಸಾಧನೆ
ಬೆಳಗಾವಿ : ಹುಕ್ಕೇರಿ ತಾಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಅವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮೂಲತಃ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದ ಅಂಕಿತ್ ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಹಾಗೂ ಕನ್ನಡ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದು, ಇಂಗ್ಲಿಷ್ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ. ಅಂಕಿತ್ ಅವರ ತಂದೆ ಭೀಮಪ್ಪ ಅವರು ಚಿಕ್ಕೋಡಿಯಲ್ಲಿ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸುನೀತಾ ಗೃಹಿಣಿಯಾಗಿದ್ದಾರೆ. ವಸತಿ ಕಾಲೇಜಿನಲ್ಲಿ ಇದ್ದು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ ಅಂಕಿತ್ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
Bengaluru | 13 ವಿದ್ಯಾರ್ಥಿಗಳು 590ಕ್ಕೂ ಅಧಿಕ ಅಂಕಗಳಿಸಿ ಸಾಧನೆ
ಬೆಂಗಳೂರು : ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೈತನ್ಯ ಪಿಯು ಕಾಲೇಜಿನ 13 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗೆ 590ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸುಚಿತಾ ಎಂ. ಅವರು 600ಕ್ಕೆ (596), ಯಶ್ಮಿತಾ ಬಿ. (595), ತಲಸಿಲಾ ಸಿರಿ (594), ಪ್ರೇಕ್ಷಾ ದಿವಾಕರ್(594), ಆಶಿಕಾ ಮಡಿಸೆಟ್ಟಿ (594), ತನ್ಮಯಿ ಎಂ. (592), ದಕ್ಷತ್ ಆರ್. (592), ಮಯೂರ್ ಎಂ. ಹೆಗ್ಡೆ (591), ತನುಶ್ರೀ ಪಿ. (591), ಬಾಲಚಂದ್ರ ಎಂ.(590), ವೈದೇಹಿ (590), ಮೇಘನಾ ಎಂ.ಎಸ್. (590), ಮತ್ತು ಪುಷ್ಪಕವಿ ಎ. (590) ಅವರು ಒಟ್ಟಾರೆ ಶೇ.97ರಷ್ಟು ಅಂಕಗಳನ್ನು ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ ಎಂದು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೊಪ್ಪಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರಕಾರ ಸಹಕರಿಸುತ್ತಿಲ್ಲ : ವಿ.ಸೋಮಣ್ಣ
ಮೈಸೂರು : ರಾಜ್ಯದ ಕಾಂಗ್ರೆಸ್ ಸರಕಾರ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಸಹಕಾರ ತೋರುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ. ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಗುರುವಾರ ಬೆಂಗಳೂರಿಂದ ವಿಶೇಷ ರೈಲಿನಲ್ಲಿ ಪ್ರಯಾಣ ನಡೆಸಿ ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ, ನಾಗರಿಕರಿಂದ ಅಹವಾಲು ಸ್ವೀಕರಿಸಿ ಮೈಸೂರಿನ ಡಿಆರ್ಎಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೆ ಕೇಂದ್ರ-ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿತ್ತು. ರಾಜ್ಯ ಸರಕಾರ ಭೂ ಸ್ವಾಧೀನಪಡಿಸಿಕೊಟ್ಟರೆ ಕೇಂದ್ರ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸುತ್ತಿತ್ತು. ಈಗಿನ ಸರಕಾರ ಸಹಕಾರವನ್ನೇ ಕೊಡುತ್ತಿಲ್ಲ ಎಂದರು. ಬೆಂಗಳೂರು-ಚಾಮರಾಜನಗರ ರೈಲ್ವೆ ಯೋಜನೆ ನಮ್ಮಿಂದ ಆಗುವುದಿಲ್ಲ ಎಂದು ರಾಜ್ಯ ಸರಕಾರ ಪತ್ರ ಬರೆದಿದೆ. ಮೈಸೂರು-ಕುಶಾಲನಗರ ಯೋಜನೆಗೂ ಬೆಂಬಲ ನೀಡುತ್ತಿಲ್ಲ. ರಾಜ್ಯ ಸರಕಾರ ಸಹಕಾರ ನೀಡಿದರೆ ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಬದ್ಧವಾಗಿರುವುದಾಗಿ ಸೋಮಣ್ಣ ಹೇಳಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಡಿಆರ್ಎಂ ಮುದಿತ್ ಮುದ್ಗಲ್,ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ಅಶ್ವಿನ್ಕುಮಾರ್, ಡಿ.ಸಿ.ತಮ್ಮಣ್ಣ, ಮಾಜಿ ಮೇಯರ್ ರವಿಕುಮಾರ್ ಇತರರು ಉಪಸ್ಥಿತರಿದ್ದರು.
ದಲಿತ ಉದ್ದಿಮೆದಾರರ ಸಂಖ್ಯೆ 5 ಸಾವಿರಕ್ಕೇರಲು ಸಿ.ಜಿ.ಶ್ರೀನಿವಾಸನ್ ಪರಿಶ್ರಮ ಕಾರಣ : ಬೊಮ್ಮಾಯಿ
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಲಿತ ಉದ್ದಿಮೆದಾರರ ಸಂಖ್ಯೆ ಇಂದು ಐದು ಸಾವಿರ ಆಗಿದೆ ಎಂದರೇ ಅದಕ್ಕೆ ಸಿ.ಜಿ.ಶ್ರೀನಿವಾಸನ್ ಪರಿಶ್ರಮ, ಹೋರಾಟವೂ ಕಾರಣ. ಈ ಸಂಖ್ಯೆ 10 ಸಾವಿರ ಆಗಬೇಕು. ಇದಕ್ಕಾಗಿ ನಿಮ್ಮ ಹಕ್ಕುಗಳನ್ನು ಸರಕಾರದ ಬಳಿ ಕೇಳಿ ಪಡೆಯಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ದಲಿತ ಉದ್ದಿಮೆದಾರರ ಆಶಾಕಿರಣ ಸಿ.ಜಿ. ಶ್ರೀನಿವಾಸನ್ ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ಮಾತ್ರ ಯಾವುದೇ ಪ್ರಭಾವಿ ಸ್ಥಾನಗಳಲ್ಲಿ ಇರದಿದ್ದರೂ, ಶಕ್ತಿಶಾಲಿ ಮತ್ತು ಪ್ರಭಾವಿಯಾಗಿರುತ್ತಾರೆ. ಅಂತಹವರಲ್ಲಿ ಸಿ.ಜಿ.ಶ್ರೀನಿವಾಸನ್ ಅವರೂ ಇದ್ದಾರೆ ಎಂದರು. ಸಿ.ಜಿ.ಶ್ರೀನಿವಾಸನ್ ಅವರು ಕೈಗಾರಿಕಾ ಇಲಾಖೆಯಲ್ಲಿ ನಿರ್ವಹಿಸುತ್ತಿದ್ದ ಮುಖ್ಯ ವ್ಯವಸ್ಥಾಪಕರ ಹುದ್ದೆಗೆ ಸ್ವಯಂ ನಿವೃತ್ತಿ ತೆಗೆದುಕೊಂಡು ದಲಿತ ಉದ್ದಿಮೆದಾರರ ಸಂಘಟನೆ ಮಾಡಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಭಾವಿ ಹುದ್ದೆಯಿಲ್ಲದೆ ಪವರ್ಫುಲ್ ಮ್ಯಾನ್ ಆಗಿದ್ದಾರೆ. ಇದಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ, ಯಾವುದಕ್ಕೂ ರಾಜಿಯಾಗದೆ ತಮ್ಮ ಸಮಾಜ ಪರ ಅವರು ಮಾಡಿರುವ ಹೋರಾಟ, ಕೆಲಸಗಳೇ ಕಾರಣ ಎಂದು ಬೊಮ್ಮಾಯಿ ಹೇಳಿದರು. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದಾರೆ. ಪ.ಜಾ. ಮತ್ತು ಪ.ಪಂಗಡಕ್ಕೆ ವ್ಯವಸ್ಥೆಯಲ್ಲಿ ಅನ್ಯಾಯವಾದಾಗ ಅವರ ರಕ್ಷಣೆಗೆ ಕವಚವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ನಮ್ಮದು ಜೀವಂತ ಸಂವಿಧಾನ. ಸಾಮಾಜಿಕ, ಆರ್ಥಿಕವಾಗಿ ದೇಶ, ಸಮಾಜ ಬದಲಾದಂತೆ, ಇದಕ್ಕೆ ಅನುಗುಣವಾಗಿ ಬದಲಾವಣೆಗೂ ಅವಕಾಶ ನೀಡಲಾಗಿದೆ. ಹೀಗಾಗಿ ಹಕ್ಕುಗಳೂ ಬದಲಾಗುತ್ತವೆ. ಮೊದಲು ಶಿಕ್ಷಣ, ನಂತರ ಉದ್ಯೋಗಕ್ಕೆ ಬೇಡಿಕೆ ಶುರುವಾಯಿತು. 90ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣದಿಂದ ಸರಕಾರಿ ನೌಕರಿ ಕಡಿಮೆ ಆಗಿವೆ. ಆದರೂ, ಇನ್ನು ನಾವೆಲ್ಲರೂ ಅದರ ಬೆನ್ನು ಬಿದ್ದಿದ್ದೇವೆ ಎಂದರು. ಕೈಗಾರಿಕೋದ್ಯಮಕ್ಕೆ ಪರಿಶಿಷ್ಟ ಜಾತಿ, ಪಂಗಡ ಜನರು ಹೆಚ್ಚು ಬರಬೇಕು. ಉದ್ಯೋಗದ ಬದಲು ಉದ್ಯಮ ಮಾಡಿದರೆ ಬೇರೆಯವರಿಗೆ ಉದ್ಯೊಗ ಕೊಡಬಹುದು. ಇಂದು ಶ್ರೀನಿವಾಸನ್ ಅವರ ಹೋರಾಟದ ಪರಿಣಾಮ 5 ಸಾವಿರ ದಲಿತ ಉದ್ಯಮಿಗಳಿದ್ದಾರೆ. ಇದು 10 ಸಾವಿರ ಆಗಲಿ. ಈ ಸರಕಾರದ ಬಳಿಯೂ ನಿಮ್ಮ ಹಕ್ಕು ಕೇಳಿ ಪಡೆಯಿರಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದಲ್ಲಿ ನಮ್ಮ ಅವಧಿಯಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಪರಿಣಾಮ, 4 ಸಾವಿರಕ್ಕೂ ಹೆಚ್ಚು ಇಂಜಿನಿಯರ್ಗಳು, 400ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಈ ಸಮುದಾಯಗಳಿಗೆ ಸಿಗುತ್ತಿವೆ. ಪ್ರತಿ ಜಿಲ್ಲೆಯಲ್ಲೂ ಯಶಸ್ವಿ ಉದ್ದಿಮೆದಾರ ಸೃಷ್ಟಿಸುವ ಕೆಲಸ ಸಂಘ ಮಾಡಲಿ. ದಲಿತ ಉದ್ದಿಮೆ ಕಾರ್ಯವೈಖರಿ ಇಲ್ಲಿಗೆ ಸೀಮಿತವಾಗದೆ, ಕೇಂದ್ರ ಸರಕಾರದ ಮಟ್ಟಕ್ಕೂ ತಿಳಿಯುವಂತೆ ಆಗಬೇಕು. ನಿಮ್ಮ ಜತೆಗೆ ನಾವಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಸಂಸದರಾದ ಜಗದೀಶ್ ಶೆಟ್ಟರ್, ಕುಮಾರನಾಯ್ಕ್, ಮಲ್ಲೇಶ್ ಬಾಬು, ಶಾಸಕರಾದ ಎ.ಸಿ.ಶ್ರೀನಿವಾಸ್, ವೆಂಕಟೇಶ್, ಪರಿಷತ್ ಸದಸ್ಯ ಸುಧಾಮ್ ದಾಸ್, ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಇ.ವೆಂಕಟಯ್ಯ ಇತರರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಂದರೆ, ಭಾರತದ ದಲಿತ ಉದ್ದಿಮೆದಾರರ ಸಂಘವನ್ನು ರಚನೆ ಮಾಡುವ ಕನಸು ಕಟ್ಟಿದ್ದೇನೆ. ಇದಕ್ಕಾಗಿ ಕರ್ನಾಟಕದಿಂದ ದಿಲ್ಲಿಗೆ ಹೋಗಿರುವ ಕೇಂದ್ರ ಸಚಿವರು, ಸಂಸದರ ಸಹಕಾರ ಬೇಕಾಗಿದೆ. ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕನಸಾಗಿತ್ತು. ಆದರೆ, ಇಂದು ಜಾತಿ ಸಹಿತ ಸಮಾಜವಾಗುತ್ತಿರುವುದು ದುರಂತ. ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಬಲ್ಕ್ ಅಲಾಟ್ಮೆಂಟ್ನಲ್ಲಿ ಶೇ.24.1ಮೀಸಲಾತಿಯನ್ನು ಸರಕಾರ ನೀಡಬೇಕು ಎಂದು ರಾಜ್ಯ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್ ಮನವಿ ಮಾಡಿದರು.
ಪೊಲೀಸ್ ಠಾಣೆಯೊಳಗೆ ರಾಜಿ ಪಂಚಾಯಿತಿ ನಡೆಸುವಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಯಾವ ಪೊಲೀಸ್ ಅಧಿಕಾರಿಯೂ ಠಾಣೆಗಳಲ್ಲಿ ಯಾವುದೇ ರಾಜಿ ಪಂಚಾಯಿತಿ ನಡೆಸಬಾರದು. ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ಕೈಜೋಡಿಸಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ. ಗುರುವಾರ ಇಲ್ಲಿನ ಚಿಕ್ಕಬಾಣವಾರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ, ಆವತಿಯಲ್ಲಿ ಭಾರತೀಯ ಮೀಸಲು ಪಡೆಯ ಶಂಕುಸ್ಥಾಪನೆ ಹಾಗೂ ವಾಯವ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕ ಬಾಣಾವರ ಪೊಲೀಸ್ ಠಾಣೆಯ ನೂತನ ಕಚೇರಿ, ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಯ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ದೇವನಹಳ್ಳಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕು. ಆದರೆ, ಯಾವ ಅಧಿಕಾರಿಯೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು. ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಯಬಾರದು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಪೊಲೀಸ್ ಠಾಣೆಗೆ ಬಂದವರನ್ನು ಸರಿಯಾದ ರೀತಿಯಲ್ಲಿ ಗೌರವದಿಂದ ವರ್ತಿಸಬೇಕು ಎಂದು ಅವರು ಸೂಚನೆ ನೀಡಿದರು. ಪೊಲೀಸ್ ಇಲಾಖೆ ಶಿಸ್ತುಬದ್ಧಿನ ಇಲಾಖೆ. ಇಡೀ ದೇಶದಲ್ಲಿ ಶಿಸ್ತು, ಸಂಯಮದಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸರಕಾರವು ಪೊಲೀಸ್ ಇಲಾಖೆಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದಿದೆ. ಕರ್ನಾಟಕ ಪೊಲೀಸ್ ನ್ಯಾಯ ಒದಗಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ ಎಂದ ಅವರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಲ್ಲ ರೀತಿಯ ಸವಲತ್ತು ನಮ್ಮ ಸರಕಾರ ಒದಗಿಸಿದೆ. ಪೊಲೀಸ್ ಗೃಹ ಯೋಜನೆಯಡಿ 38 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ವಸತಿ ನಿರ್ಮಿಸಲಾಗುತ್ತಿದೆ. ಈವರೆಗೆ ಸಿಬ್ಬಂದಿಗಳಿಗೆ ಶೇ.40ರಷ್ಟು ವಸತಿಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋಥ್ ಸೇರಿದಂತೆ ಪ್ರಮುಖರಿದ್ದರು.
ಭಟ್ಕಳ: ಅಂಜುಮನ್ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ಮೈಮುನಾ ಅಜೈಬ್ ಗೆ ಶೇ. 99 ಅಂಕ
ಭಟ್ಕಳ: ಅಂಜುಮನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೈಮುನಾ ಅಜೈಬ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಭಟ್ಕಳ ತಾಲೂಕಿನಲ್ಲೇ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ ಯಾಗಿ ಹೊರಹೊಮ್ಮಿದ್ದಾರೆ. ಅವರ ಈ ಸಾಧನೆ ಭಟ್ಕಳ ಪಿಯುಸಿ ಇತಿಹಾಸದಲ್ಲಿಯೇ ಉನ್ನತ ಸಾಧನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿದೆ. ಮೈಮುನಾ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಪರಿಶ್ರಮ, ಶಿಸ್ತು ಮತ್ತು ಏಕಾಗ್ರತೆಯ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸಲಾಗಿದೆ.
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿ.ಕೆ.ಶಿವಕುಮಾರ್
‘ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 3 ಲಕ್ಷ ಸರಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು’
ಎ.12: ಬಂಟ ಸಾಧಕರಿಗೆ ಬಂಟರ ಸಂಘದಿಂದ ಸನ್ಮಾನ, ಪ್ರಶಸ್ತಿ ಪ್ರದಾನ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ಬಹಿರಂಗ ಅಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 12 ರವಿವಾರ ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಧಿವೇಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕೆ. ಮೋಹನದೇವ್ ಆತ್ಮ,ಡಾ. ಎಂ.ಕೆ. ಶೈಲಜಾ ಆಳ್ವ ಅವರ ಉಪಸ್ಥಿತಿಯಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಕೆ. ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ಅವರ ಸ್ಮರಣಾ ರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತ ಸ್ವೀಕರಿಸುವವರು: ವೈದ್ಯಕೀಯ ಕ್ಷೇತ್ರ: ಡಾ. ಸತೀಶ್ ಭಂಡಾರಿ, ಶಿಕ್ಷಣ ಕ್ಷೇತ್ರ: ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್, ಸಾಹಿತ್ಯ: ಕೆ. ಉಷಾ ಪಿ. ರೈ, ಸಂಗೀತ: ಗುರುಕಿರಣ್ ಶೆಟ್ಟಿ, ನೃತ್ಯ: ನಯನ ವಿ. ರೈ ಕುಧ್ಯಾಡಿ, ದೇಶ ಸೇವೆ: ಲೆಫ್ಟಿನೆಂಟ್ ಕರ್ನಲ್ ಅಜಿತ್ ಕುಮಾರ್ ಶೆಟ್ಟಿ,ಕ್ರೀಡೆ: ಪ್ರಶಾಂತ್ ರೈ (ಕಬಡ್ಡಿ), ಚಿಂತನ್ ಎಸ್. ಶೆಟ್ಟಿ (ಈಜು). ಸನ್ಮಾನಿಸಲ್ಪಡುವವರು: ಕೈಗಾರಿಕೆ: ವಿವೇಕ್ ಶೆಟ್ಟಿ ಬೊಳ್ಯಗುತ್ತುಸಾಂಸ್ಕೃತಿಕ ಕ್ಷೇತ್ರ: ಪ್ರಕಾಶ್ ಭಂಡಾರಿಧಾರ್ಮಿಕ ಕ್ಷೇತ್ರ: ಕೆ.ಕೆ. ಶೆಟ್ಟಿ ಕುತ್ತಿಕಾರ್ಕೈಗಾರಿಕಾ ಕ್ಷೇತ್ರ: ಕರುಣಾಕರ ಎಂ. ಶೆಟ್ಟಿಸಹಕಾರಿ ಕ್ಷೇತ್ರ: ಡಾ. ದೇವಿಪ್ರಸಾದ್ ಶೆಟ್ಟಿ,ಅತಿಥ್ಯ ಉದ್ಯಮ: ವೇಣುಗೋಪಾಲ್ ಎಲ್. ಶೆಟ್ಟಿ,ನಿರ್ಮಾಣ ಕ್ಷೇತ್ರ: ಮುಗೋಡಿ ಸುಧಾಕರ ಶೆಟ್ಟಿ, ಸಂಶೋಧನೆ: ಡಾ. ನವೀನ್ಚಂದ್ರ ಶೆಟ್ಟಿ, ದೈವಾರಾಧನೆ: ಡಾ. ಅಶೋಕ್ ಆಳ್ವ, ಸಮಾಜ ಸೇವೆ: ಕೆಂಚನೂರು ಸೋಮಶೇಖರ ಶೆಟ್ಟಿ,ಶಿಕ್ಷಣ ಕ್ಷೇತ್ರ: ದಿನೇಶ್ ಆಳ್ವ,ಕೃಷಿ ಕ್ಷೇತ್ರ: ಸದಾಶಿವ ಶೆಟ್ಟಿ ,ಕೃಷಿ ಅಭಿವೃದ್ಧಿ: ಡಾ. ಸರಿತಾ ಹೆಗ್ಡೆ,ಉತ್ಪಾದನಾ ಕ್ಷೇತ್ರ: ರವೀಂದ್ರನಾಥ ಮಾರ್ಲ,ವಿಶೇಷ ಸನ್ಮಾನ :ಕೊಡಿಯಾಲ್ಗುತ್ತು ಭಾಸ್ಕರ ರೈ ಸ್ಮರಣಾ ರ್ಥವಾಗಿ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಪಿ. ಕಿಶನ್ ಹೆಗ್ಡೆ (ಯಕ್ಷಗಾನ ಸಂಚಾಲಕರು) ಅವರಿಗೆ ಸನ್ಮಾನ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ .ರಾಮ್ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಎಸ್ .ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪಿಯುಸಿ ಫಲಿತಾಂಶ: ಮುಹಮ್ಮದ್ ಶಾಕೀರ್ಗೆ ವಿಜ್ಞಾನ ವಿಭಾಗದಲ್ಲಿ 580 ಅಂಕ
ಹರೇಕಳ: ಬ್ಯಾರೀಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಶಾಕೀರ್ ಅವರು 580 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ಹರೇಕಳ ನಿವಾಸಿ ಹಮೀದ್ ಹಾಗೂ ಸೆಕೀನಾ ದಂಪತಿಯ ಪುತ್ರ.
ಇಳಕಲ್ ನಗರದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಒತ್ತಾಯ
ಇಳಕಲ್ : ಪಟ್ಟಣದ ಪಾರ್ಕ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದು, ತಕ್ಷಣ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಜಿಲ್ಲಾಡಳಿತ ಉದ್ಯಾನಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇಳಕಲ್ ನಗರ ಅಧ್ಯಕ್ಷ ಹಬೀಬುಲ್ಲಾ ತಾವರಗೇರಿ ಒತ್ತಾಯಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳಕಲ್ ನಗರದಲ್ಲಿನ ಸಾರ್ವಜನಿಕ ಉದ್ಯಾನಗಳ ದುರಸ್ಥಿ ಕುರಿತು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇಳಕಲ್ ನಗರ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನೆವಾಗಿಲ್ಲ. ಕೂಡಲೇ ಬಾಗಲಕೋಟೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಿರಿಯ ನಾಗರಿಕರಿಗೆ ಸೌಲಭ್ಯಗಳು, ಉತ್ತಮ ವಾಕಿಂಗ್ ಟ್ರ್ಯಾಕ್ಗಳು, ಕುಳಿತುಕೊಳ್ಳುವ ವ್ಯವಸ್ಥೆ, ಮಹಿಳೆಯರಿಗೆ ಸುರಕ್ಷಿತ ವಾಕಿಂಗ್ ಪ್ರದೇಶ, ಮಕ್ಕಳಿಗೆ ಆಧುನಿಕ ಆಟೋಪಕರಣಗಳು ಹಾಗೂ ಯುವಕರಿಗೆ ಓಪನ್ ಜಿಮ್ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡಿದೆ. ಜೊತೆಗೆ ಪರಿಸರ ಸಂರಕ್ಷಣೆಗಾಗಿ ದೊಡ್ಡ ಮಟ್ಟದಲ್ಲಿ ಮರ ನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಚಿವರಾದ ರಹೀಮ್ ಖಾನ್ ಅವರ ಗಮನಕ್ಕೂ ಈ ವಿಷಯವನ್ನು ತರಲಾಗಿದೆ. ಅಧಿಕಾರಿಗಳು ತಕ್ಷಣ ಪಾರ್ಕ್ಗಳ ಸಮೀಕ್ಷೆ ನಡೆಸಿ, ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿ, ನವೀಕರಣ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಎಲ್.ಎ.ಭಂಡಾರಿ, ಮುಹಮ್ಮದ್ ಸಿರಾಜ್ ಹುಣಚಗಿ ಮುಂತಾದವರು ಇದ್ದರು.
ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇ. 98 ಫಲಿತಾಂಶ
ಬಂಟ್ವಾಳ : 2025-26 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 98 ಫಲಿತಾಂಶದ ದಾಖಲಿರಿಸುತ್ತದೆ. ಈ ಪೈಕಿ 22 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ, 60 ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ರಹಿಷಾ ಫಾತಿಮಾ 510 ಅಂಕ, ವಾಣಿಜ್ಯ ವಿಭಾಗದ ಫಾತಿಮತ್ ಸುರಯ್ಯ 580 ಅಂಕ ಹಾಗೂ ವಿಜ್ಞಾನ ವಿಭಾಗದ ಆಯಿಷಾ 527 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಗಳಾಗಿರುತ್ತಾರೆ.
ಮುಕುಲ್ ಚೌಧರಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಲಕ್ನೋಗೆ 3 ವಿಕೆಟ್ಗಳ ರೋಚಕ ಜಯ
IPL 2026 KKR VS LSG: ಈಡನ್ ಗಾರ್ಡನ್ಸ್ನಲ್ಲಿ ಗುರುವಾರ (ಏಪ್ರಿಲ್ 9) ನಡೆದ ಐಪಿಎಲ್ 2026ರ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಹರಾಜಿನಲ್ಲಿ 2.6 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಲಾಗಿದ್ದ ಅನ್ಕ್ಯಾಪ್ಡ್ ಆಟಗಾರ ಮುಕುಲ್ ಚೌಧರಿ, ಅಸಾಧ್ಯವೆನಿಸಿದ್ದ ಪಂದ್ಯವನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಶೋಕ್ ಕುಮಾರ್, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ. 80.16 ಅಂಕ ಗಳಿಸಿ ಗಮನಸೆಳೆದಿದ್ದಾರೆ. ಜೈಲು ಅಧಿಕಾರಿಗಳ ಪ್ರೋತ್ಸಾಹದಿಂದ ಸ್ವಯಂ ಅಧ್ಯಯನ ನಡೆಸಿರುವ ಅವರು, ಮುಂದೆ ಪದವಿ ಶಿಕ್ಷಣ ಪಡೆಯುವ ಹಂಬಲ ಹೊಂದಿದ್ದಾರೆ. ಶಿಕ್ಷೆಯ ನಡುವೆಯೂ ಇವರು ತೋರಿದ ಶೈಕ್ಷಣಿಕ ಸಾಧನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಭಟ್ಕಳ ವಿದ್ಯಾರ್ಥಿಗಳ ಉತ್ತಮ ಸಾಧನೆ: ಜಿಲ್ಲೆಯಲ್ಲಿ ಮೂವರು ವಿಭಾಗಗಳಲ್ಲೂ ಅಗ್ರ ಸ್ಥಾನ
ಭಟ್ಕಳ: ಕರಾವಳಿ ಪಟ್ಟಣ ಭಟ್ಕಳಕ್ಕೆ ಹೆಮ್ಮೆಯ ಕ್ಷಣ ಒದಗಿಸುವಂತೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ವಿಭಾಗಗಳಲ್ಲೂ ಅಗ್ರ ಸ್ಥಾನಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಕಲಾ ವಿಭಾಗದಲ್ಲಿ ಅಂಜುಮನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಿಫಾ ಅನಂ (ಅಮೀರ್ ಹಮ್ಜಾ ಅವರ ಪುತ್ರಿ) 591 ಅಂಕಗಳು (98.50%) ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅದೇ ಕಾಲೇಜಿನ ಮೈಮುನಾ ಅಜೈಬ್ (ಮೊಹಮ್ಮದ್ ಅಮೀನ್ ಅಜೈಬ್ ಅವರ ಪುತ್ರಿ) 594 ಅಂಕಗಳು (99.00%) ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಸಂಜನಾ ನಾಗಪ್ಪ ನಾಯ್ಕ್ 593 ಅಂಕಗಳು (98.83%) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇದಲ್ಲದೆ, ಭಟ್ಕಳ ತಾಲೂಕಿನ ಶಿರಾಳಿಯ ಸಿದ್ಧಾರ್ಥ ಸಂಯುಕ್ತ ಪಿಯು ಕಾಲೇಜು ಹಾಗೂ ಮುರುಡೇಶ್ವರದ ಬೀನಾ ವೈದ್ಯ ಪಿಯು ಕಾಲೇಜು ಶೇಕಡಾ 100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದು ತಾಲೂಕಿನ ಶಿಕ್ಷಣ ಮಟ್ಟ ಮತ್ತು ಶಿಸ್ತುಪಾಲನೆಯನ್ನೂ ತೋರಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕಲಾ ವಿಭಾಗದಲ್ಲಿ ಕುಮಟಾದ ಹಿರೇಗುತ್ತಿ ಸರ್ಕಾರಿ ಪಿಯು ಕಾಲೇಜಿನ ಜಾಹ್ನವಿ ಮಸ್ತಿ ಗೌಡ 587 ಅಂಕಗಳು (97.83%) ಪಡೆದು ದ್ವಿತೀಯ ಸ್ಥಾನ ಪಡೆದರೆ, ಕಾರವಾರದ ಸರ್ಕಾರಿ ಪಿಯು ಕಾಲೇಜಿನ ಸಾಕ್ಷಿ ವಿನೋದ ನಾಯ್ಕ್ 585 ಅಂಕಗಳು (97.50%) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹೊನ್ನಾವರದ ಎಸ್ಡಿಎಂ ಪಿಯು ಕಾಲೇಜಿನ ಚಿನ್ಮಯಿ ಮಂಜುನಾಥ ಶೆಟ್ಟಿ 596 ಅಂಕಗಳು (99.33%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಸಿರಸಿಯ ಎಂಇಎಸ್ ಪಿಯು ಕಾಲೇಜಿನ ಪ್ರಣವ್ ಎನ್. ಭಟ್ 594 ಅಂಕಗಳು (99%) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಿರಸಿಯ ಎಂಇಎಸ್ ಪಿಯು ಕಾಲೇಜಿನ ಚೈತನ್ಯ ಜಿ. ಹೆಗಡೆ 595 ಅಂಕಗಳು (99.16%) ಪಡೆದು ಪ್ರಥಮ ಸ್ಥಾನ ಪಡೆದರೆ, ಸಿದ್ದಾಪುರದ ಚೇತನ ಪಿಯು ಕಾಲೇಜಿನ ರಘು ಶರಶ್ಚಂದ್ರ ಹೆಗಡೆ 593 ಅಂಕಗಳು (98.83%) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಭಟ್ಕಳ ವಿದ್ಯಾರ್ಥಿಗಳ ಈ ಸಮಗ್ರ ಸಾಧನೆ ಹಾಗೂ ಪ್ರಮುಖ ಕಾಲೇಜುಗಳ ಶೇಕಡಾ 100 ಫಲಿತಾಂಶವು ತಾಲೂಕಿನ ಶಿಕ್ಷಣ ಕ್ಷೇತ್ರವನ್ನು ಮತ್ತೊಮ್ಮೆ ಜಿಲ್ಲೆಯಲ್ಲಿ ಮೆರಗುಗೊಳಿಸಿದೆ.
ಎಚ್ಡಿಕೆ-ಎಂ.ಚಂದ್ರಶೇಖರ್ ಪ್ರಕರಣ; ಮಧ್ಯಸ್ಥಿಕೆಗೆ ನಿವೃತ್ತ ನ್ಯಾ.ಎ.ಎಸ್.ಓಕ್ ಹೆಸರು ಪ್ರಸ್ತಾಪಿಸಿದ ಹೈಕೋರ್ಟ್
ಬೆಂಗಳೂರು : ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ಹೆಸರನ್ನು ಹೈಕೋರ್ಟ್ ಪ್ರಸ್ತಾಪಿಸಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆಗೆ ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ನ್ಯಾಯಪೀಠ, ಅರ್ಜಿದಾರರು ಹಾಗೂ ದೂರುದಾರರರ ನಡುವಿನ ಪ್ರಕರಣವನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಉಭಯ ಪಕ್ಷಕಾರರಿಗೆ ಒಪ್ಪಿಗೆಯಾದರೆ ತಿಳಿಸಿ, ನ್ಯಾಯಮೂರ್ತಿ ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನು ನೇಮಕ ಮಾಡಲಾಗುವುದು. ಒಂದೊಮ್ಮೆ ಬೇರೊಬ್ಬರನ್ನು ನೇಮಿಸಲು ನೀವು (ಎಚ್ಡಿಕೆ ಹಾಗೂ ಚಂದ್ರಶೇಖರ್) ಬಯಸಿದರೆ, ಅವರ ಹೆಸರನ್ನೂ ಸೂಚಿಸಬಹುದು ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Hubballi | ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ; ಯುವಕ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ
ಮುಸ್ಲಿಮರು ಎಂದು ಮೊದಲು ಹಲ್ಲೆ ನಡೆಸಿ, ನಂತರ ಜಾತಿನಿಂದನೆ : ಸಂತ್ರಸ್ತರ ಆರೋಪ
ಪಿಯುಸಿ ಫಲಿತಾಂಶ: ರಂಸಿಮ್ಗೆ ವಿಜ್ಞಾನ ವಿಭಾಗದಲ್ಲಿ 567 ಅಂಕ
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ರಂಸಿಮ್ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 567 (94.5%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಈಕೆ ನೆಹರು ನಗರ ಸಾಗರ ನಿವಾಸಿ ಮುಜಿಬುಲ್ಲ ರೆಹಮಾನ್ ಮತ್ತು ಸಲ್ಮಾ ಬೇಗಂ ದಂಪತಿಯ ಪುತ್ರಿ.
Hardik Pandya: ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕೇವಲ ರನ್ಗಳ ಸುರಿಮಳೆಯಾಗಲಿಲ್ಲ, ಬದಲಿಗೆ ಕ್ರೀಡಾ ಸ್ಫೂರ್ತಿಯ ಅದ್ಭುತ ದೃಶ್ಯವೂ ಕಂಡುಬಂದಿತು. ಮುಂಬೈ ಇಂಡಿಯನ್ಸ್ ತಂಡವು ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ನಾಯಕ ಹಾರ್ದಿಕ್ ಪಾಂಡ್ಯ ಅವರು ತೋರಿದ ಒಂದು ಸಣ್ಣ ನಡೆ ಈಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 15 ವರ್ಷದ ವೈಭವ್ ಸೂರ್ಯವಂಶಿ
ಪಿಯುಸಿ ಫಲಿತಾಂಶ: ಗುಲ್ಶನ್ಗೆ ವಾಣಿಜ್ಯ ವಿಭಾಗದಲ್ಲಿ 587 ಅಂಕ
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಾಗರ ಇದರ ವಿದ್ಯಾರ್ಥಿನಿ ಗುಲ್ಶನ್ ಎ ಎಸ್ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 587 (97.83%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಈಕೆ ಸಾಗರ ನಿವಾಸಿ ಅಬ್ದುಲ್ ಅತೀಕ್ ಮತ್ತು ಫಾತಿಮ ದಂಪತಿಯ ಪುತ್ರಿ.
ಪಿಯುಸಿ ಫಲಿತಾಂಶ: ಸನಾಝ್ಗೆ ವಿಜ್ಞಾನ ವಿಭಾಗದಲ್ಲಿ 546 ಅಂಕ
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೋಲಿ ರಿಡೀಮರ್ ಸಂಯುಕ್ತ ಪಿಯು ಕಾಲೇಜು ಹೊಸನಗರ ಇದರ ವಿದ್ಯಾರ್ಥಿನಿ ಸನಾಝ್ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 546 (91%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಈಕೆ ನೂಲಿಗ್ಗೇರಿ ನಗರ ಹೊಸನಗರ ನಿವಾಸಿ ಮುಹಮ್ಮದ್ ರಫಿ ಮತ್ತು ರೇಷ್ಮಾ ಭಾನು ದಂಪತಿಯ ಪುತ್ರಿ.
2nd PUC Result-2026 | ಬಳ್ಳಾರಿ, ವಿಜಯನಗರ ಜಿಲ್ಲೆಗೆ ಒಟ್ಟು ಶೇ.78.92 ಫಲಿತಾಂಶ
ವಿಜಯನಗರ/ಬಳ್ಳಾರಿ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಫಲಿತಾಂಶ ಒಟ್ಟು ಶೇ.78.92 ದಾಖಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇ.79.30 ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶೇ.78.52 ಫಲಿತಾಂಶ ಕಂಡುಬಂದಿದೆ. ಒಟ್ಟು 25,664 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 25,308 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 19,975 ಮಂದಿ ಉತ್ತೀರ್ಣರಾಗಿದ್ದಾರೆ. ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗ ಶೇ.87.61ರೊಂದಿಗೆ ಮೊದಲ ಸ್ಥಾನದಲ್ಲಿದ್ದು, ವಾಣಿಜ್ಯ ವಿಭಾಗ ಶೇ.81.68 ಹಾಗೂ ಕಲಾ ವಿಭಾಗ ಶೇ.66.35 ಫಲಿತಾಂಶ ದಾಖಲಿಸಿವೆ. ಈ ಬಾರಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ತೋರಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿವೆ. ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ಉತ್ತರ ಸಿಕ್ಕಿಮ್ನಲ್ಲಿ ಭೂಕುಸಿತ:ಸೇನೆಯಿಂದ 135 ಪ್ರವಾಸಿಗಳ ರಕ್ಷಣೆ,1,000 ಜನರು ಈಗಲೂ ಬಾಕಿ
ಗ್ಯಾಂಗ್ಟಕ್, ಎ. 9: ಉತ್ತರ ಸಿಕ್ಕಿಮ್ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು, ಲ್ಯಾಚೆನ್ ಮತ್ತು ಚುಂಗ್ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 135 ಪ್ರವಾಸಿಗಳನ್ನು ರಕ್ಷಿಸಿದ್ದು, ಈಗಲೂ ಸುಮಾರು 1,000 ಪ್ರವಾಸಿಗಳು ಅತಂತ್ರರಾಗಿದ್ದಾರೆ. ಅವರ ರಕ್ಷಣೆಗಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಭಾರೀ ಹಿಮಪಾತದ ನಡುವೆಯೇ ಈಸ್ಟರ್ನ್ ಕಮಾಂಡ್ ನ ತ್ರಿಶಕ್ತಿ ಕಾರ್ಪ್ಸ್ ‘ಆಪರೇಷನ್ ಹಿಮ ಸೇತು’ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಅವರು ಹೇಳಿದರು. ಈವರೆಗೆ ಒಟ್ಟು 32 ಲಘು ವಾಹನಗಳು ಮತ್ತು 10 ಬೈಕ್ ಗಳನ್ನು ಸ್ಥಳಾಂತರಿಸಲಾಗಿದ್ದು, ಕಡಿದಾದ ಹಿಮಾವೃತ ರಸ್ತೆಗಳಲ್ಲಿ ನಾಗರಿಕ ವಾಹನಗಳನ್ನು ಎಳೆದೊಯ್ಯಲು ಮಿಲಿಟರಿ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲಾಗಿದ್ದು, ತಕ್ಷಣದ ನೆರವು ಅಗತ್ಯವಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಗಡಿ ರಸ್ತೆಗಳ ಸಂಸ್ಥೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯೊಂದಿಗೆ ಸಹಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿಗೆ 100% ಫಲಿತಾಂಶ
ಮಂಗಳೂರು: ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಕಾಲೇಜಿನಿಂದ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 38 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿನಿ ಇಶಾನ 586 (97.66%) ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗು ಫಾತಿಮತುಲ್ ರಿಶಾನ 554 (92.33%) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೆಯೇ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 26 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಸಂಸ್ಥೆಯು ಕಳೆದ 10 ವರ್ಷಗಳಿಂದ ನಿರಂತರವಾಗಿ ಶೇಕಡಾ 100 ಫಲಿತಾಂಶ ವನ್ನು ದಾಖಲಿಸಿಕೊಂಡು ಬಂದಿರುತ್ತದೆ.
ಕಂಬಳದಲ್ಲಿ ಶರತ್ತು ಉಲ್ಲಂಘನೆಯಾಗಬಾರದು: ದೇವಿಪ್ರಸಾದ್ ಶೆಟ್ಟಿ
ಪಡುಬಿದ್ರಿಯಲ್ಲಿ ಕಂಬಳ ಅಸೋಸಿಯೇಶನ್ ಸಭೆ
ಶಿವಮೊಗ್ಗ ಹುಲಿಕಲ್ ಘಾಟ್ ಗುಡ್ಡ ಕುಸಿತ; ಕರಾವಳಿ ಮಲೆನಾಡು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್!
ಶಿವಮೊಗ್ಗದ ಹುಲಿಕಲ್ ಘಾಟ್ನಲ್ಲಿ ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ ಸಂಭವಿಸಿ, ಮೇಲ್ವಿಚಾರಕ ರಾಘವೇಂದ್ರ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಆತಂಕವಿದೆ. ಘಟನೆಯಿಂದಾಗಿ ಮಲೆನಾಡು-ಕರಾವಳಿ ಸಂಪರ್ಕಿಸುವ ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ವಾಹನಗಳನ್ನು ನಾಗೋಡಿ-ಕೊಲ್ಲೂರು ಮಾರ್ಗದ ಮೂಲಕ ಕಳುಹಿಸಲಾಗುತ್ತಿದೆ. ಹುಲಿಕಲ್ ಘಾಟ್ ಪ್ರಮುಖ ಸಂಪರ್ಕ ಕೊಂಡಿಯಾದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹಝ್ರತ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ
ಉಳ್ಳಾಲ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಝ್ರತ್ ಸೈಯದ್ ಮದನಿ ಮಹಿಳಾ ಪದವಿ ಪೂರ್ವ ಕಾಲೇಜು, ಉಳ್ಳಾಲ ಶೇಕಡಾ 100 ಫಲಿತಾಂಶ ಸಾಧಿಸಿ ಶ್ಲಾಘನೀಯ ಸಾಧನೆ ಮೆರೆದಿದೆ. ಕಾಲೇಜಿನ ವಾಣಿಜ್ಯ ವಿಭಾಗದ ನಫೀಸತುಲ್ ಮಿಸ್ರಿಯ್ಯಾ ಅವರು 577 ಅಂಕಗಳು (96%) ಪಡೆದು ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಒಟ್ಟು 62 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 22 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 33 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 7 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕಾಲೇಜು ಶೇಕಡಾ 100 ಫಲಿತಾಂಶ ದಾಖಲಿಸಿ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಪಿಯುಸಿ ಫಲಿತಾಂಶ: ಹಿರಾ ಕಾಲೇಜಿಗೆ ಶೇ. 92.5 ಫಲಿತಾಂಶ
ಉಳ್ಳಾಲ: ಹಿರಾ ವಿಮೆನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಬಬ್ಬುಕಟ್ಟೆ, 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮುತುವೀಯ ಬಿನ್ತ್ ಅಹ್ಮದ್ ಎಸ್.ಎಮ್.ರವರು ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 594 (99%)ಅಂಕಗಳನ್ನು ಪಡೆದು ರಾಜ್ಯಕ್ಕೆ ಏಳನೇ ರಾಂಕ್ ಪಡೆದಿದ್ದಾರೆ . ಹಾಜಿರಾ ಆಬಿದ್ ಮನ್ನಾ ರವರು ಕಲಾ ವಿಭಾಗದಲ್ಲಿ 576 (96%) ಮತ್ತು ವಿಜ್ಞಾನ ವಿಭಾಗದಲ್ಲಿ ಮರಿಯಮ್ ರವರು 576 (96%) ಅಂಕಗಳನ್ನು ಪಡೆದಿದ್ದಾರೆ. ಹಾಜರಾದ ಒಟ್ಟು 107 ವಿದ್ಯಾರ್ಥಿನಿಯರಲ್ಲಿ 38 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 57 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇಕಡಾ 92.5% ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 42 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,25 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 16 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶೇಕಡಾ 97.6% ಫಲಿತಾಂಶ ದಾಖಲಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 9 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 34 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶೇಕಡಾ 88.4 ಫಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದಲ್ಲಿ 13 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,4 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 7 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶೇಕಡಾ 92.3% ಫಲಿತಾಂಶ ದಾಖಲಿಸಿದ್ದಾರೆ.
ಶಮ್ಸ್ ಪಿಯು ಕಾಲೇಜಿಗೆ ಶೇ. 93 ಫಲಿತಾಂಶ
ಭಟ್ಕಳ: ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಮ್ಸ್ ಪದವಿಪೂರ್ವ ಕಾಲೇಜು (SHAMS PU College) 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93 ಫಲಿತಾಂಶ ದಾಖಲಿಸಿ ಗಮನಸೆಳೆದಿದೆ. ಈ ವರ್ಷ ಪರೀಕ್ಷೆಗೆ ಹಾಜರಾದ ಒಟ್ಟು 29 ವಿದ್ಯಾರ್ಥಿಗಳಲ್ಲಿ 27 ಮಂದಿ ಉತ್ತೀರ್ಣರಾಗಿದ್ದು, 15 ಮಂದಿ ಡಿಸ್ಟಿಂಕ್ಷನ್ ಹಾಗೂ 12 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಅತ್ಫಾ ಸಿದ್ದೀಕ್ 588 ಅಂಕಗಳು (ಶೇ.98) ಪಡೆದು ಪ್ರಥಮ ಸ್ಥಾನ ಗಳಿಸಿದ್ದು, ರುಕಿಯಾ ಇಫ್ಲಾಹ (580 ಅಂಕ, ಶೇ.96.66) ದ್ವಿತೀಯ ಹಾಗೂ ಮರಿಯಂ ಸಫಾ (574 ಅಂಕ, ಶೇ.95.66) ತೃತೀಯ ಸ್ಥಾನ ಪಡೆದಿದ್ದಾರೆ. ಇತರ ವಿದ್ಯಾರ್ಥಿಗಳಾದ ಅಮನ್ ಇಕ್ಕೇರಿ (565), ಇಸ್ಮಾಯಿಲ್ ಇಬ್ಬು (564), ಮರ್ವಾ (561), ಅಫ್ಹಾಮ್ ಮುಸ್ಬಾ (557), ಫಾತಿಮಾ ಅಸ್ರಾ (538), ಹನಾನ್ ಅಬ್ದುಲ್ ಅಝೀಮ್ (531) ಹಾಗೂ ಮೊಹಮ್ಮದ್ ಜಯ್ಯಾನ್ (528) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನವೇ ಈ ಉತ್ತಮ ಫಲಿತಾಂಶಕ್ಕೆ ಕಾರಣವೆಂದು ತಿಳಿಸಿದ್ದಾರೆ.
ಅಹ್ಮದಾಬಾದ್: ಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವಿಸಿದ 96 ಗ್ರಾಮಸ್ಥರು ಅಸ್ವಸ್ಥ
ಅಹ್ಮದಾಬಾದ್, ಎ. 9: ಅಹ್ಮದಾಬಾದ್ ಜಿಲ್ಲೆಯ ದೆತ್ರೋಜ್ ತಾಲೂಕಿನ ರಾಜಪುರ ಗ್ರಾಮದಲ್ಲಿ ಶಂಕಿತ ವಿಷಾಹಾರ ಪ್ರಕರಣದಲ್ಲಿ, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಿತರಿಸಲಾದ ಆಹಾರವನ್ನು ಸೇವಿಸಿದ ಬಳಿಕ 96 ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ‘ಸೇವ್-ಖಮನಿ’ (ಗುಜರಾತಿ ಖಾದ್ಯ) ಸೇವಿಸಿ ಅಸ್ವಸ್ಥಗೊಂಡವರು ವಾಂತಿ, ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರು. ಅವರನ್ನು ಗುರುವಾರ ನಸುಕಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. 38 ಜನರು ಈಗಲೂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ. ಇತರರನ್ನು ಚಿಕಿತ್ಸೆಯ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಖಾದ್ಯವನ್ನು ಸೇವಿಸಿದ್ದ ಇತರ 214 ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಶಂಕಿತ ವಿಷಾಹಾರದ ಕಾರಣವನ್ನು ನಿರ್ಧರಿಸಲು ಆಹಾರ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನ್ ಲೈನ್ ಷೇರು ವ್ಯವಹಾರ ಹಗರಣ | ಪುಣೆಯ 75 ವರ್ಷದ ವೈದ್ಯರಿಗೆ 12.31 ಕೋಟಿ ರೂ. ವಂಚನೆ
ಪುಣೆ, ಎ. 9: ಆನ್ ಲೈನ್ ಷೇರು ವ್ಯವಹಾರ ಹಗರಣದಲ್ಲಿ ಪುಣೆಯ 75 ವರ್ಷದ ವೃದ್ಧರೋರ್ವರಿಗೆ 12.31 ಕೋ.ರೂ. ವಂಚಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ ಕೊನೆಯ ವಾರದಲ್ಲಿ ಅಪರಿಚಿತ ಸಂಖ್ಯೆಯಿಂದ ವೈದ್ಯರು ಸಂದೇಶವನ್ನು ಸ್ವೀಕರಿಸಿದ್ದರು. ಈ ಸಂದೇಶದಲ್ಲಿ ಲಿಂಕ್ ನೊಂದಿಗೆ ಶಿಫಾರಸು ಮಾಡಲಾದ ಷೇರುಗಳ ಪಟ್ಟಿ ಇತ್ತು. ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರನ್ನು ಒಂದು ವಾಟ್ಸ್ ಆ್ಯಪ್ ಗುಂಪಿಗೆ ಸೇರಿಸಲಾಯಿತು. ಆ ಗುಂಪಿನ ನಿರ್ವಾಹಕರು ತಾವು ಜಾಗತಿಕ ಹಣಕಾಸು ನಿರ್ವಹಣಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಅವರಲ್ಲಿ ಒಬ್ಬನು ಷೇರು ಮಾರುಕಟ್ಟೆಯ ಚಲನಶೀಲತೆ ಕುರಿತು ಪುಸ್ತಕ ಬರೆದ ಲೇಖಕ ಎಂದು ಕೂಡ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವಾಸಾರ್ಹತೆ ಗಳಿಸಲು ಈ ಗುಂಪನ್ನು ಬಳಸಲಾಗುತ್ತಿತ್ತು. ಜಾಲದ ಭಾಗವೆಂದು ಹೇಳಲಾದ ಸದಸ್ಯರು ಹೂಡಿಕೆಗಳಿಂದ ಹೆಚ್ಚಿನ ಲಾಭ ಪಡೆದಿರುವುದಾಗಿ ತೋರಿಸುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆಸಕ್ತಿ ತೋರಿಸಿದ ಬಳಿಕ ವೈದ್ಯರನ್ನು ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯ ಹೆಸರನ್ನು ಹೋಲುವ ನಕಲಿ ವ್ಯವಹಾರ ಆ್ಯಪ್ ಗೆ ಸೇರಿಸಲಾಯಿತು. ಬಳಿಕ, ವೈಯಕ್ತಿಕ ಹಾಗೂ ಹಣಕಾಸು ವಿವರಗಳನ್ನು ಹಂಚಿಕೊಳ್ಳುವಂತೆ ಸೂಚಿಸಿ, ನಂತರ ಹಲವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಗಾಯಿಸಿದ ಹಣವನ್ನು ನಕಲಿ ವಾಟ್ಸ್ಆ್ಯಪ್ ಗುಂಪಿನಲ್ಲಿ ಹೂಡಿಕೆಗಳಾಗಿ ತೋರಿಸಲಾಗುತ್ತಿತ್ತು. ಅಲ್ಲದೆ, ಕೃತಕ ಲಾಭಗಳನ್ನೂ ಪ್ರದರ್ಶಿಸಲಾಗುತ್ತಿತ್ತು. ಮಾರ್ಚ್ 7 ರಿಂದ ಮಾರ್ಚ್ 18ರ ನಡುವೆ ಅವರು ಒಟ್ಟು 12.31 ಕೋಟಿ ರೂ.ಗಳ ಎಂಟು ವಹಿವಾಟುಗಳನ್ನು ನಡೆಸಿದ್ದಾರೆ. ಅವರು ಹೆಚ್ಚಿನ ಹೂಡಿಕೆಗೆ ಹಿಂಜರಿದಾಗ, ಆರೋಪಿಗಳು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಿ, ಹಣ ವರ್ಗಾಯಿಸುವುದನ್ನು ಮುಂದುವರಿಸಲು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ವಾಟ್ಸ್ಆ್ಯಪ್ ನಲ್ಲಿ 54 ಕೋಟಿ ರೂ.ಗಳ ಕಲ್ಪಿತ ಲಾಭವನ್ನು ತೋರಿಸಲಾಗಿದೆ. ಆದರೆ ವೈದ್ಯರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಮತ್ತೆ ಬೆದರಿಕೆ ಹಾಕಲಾಗಿದೆ. ಆಗ ಅವರಿಗೆ ಮೋಸವಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳು ಹಾಗೂ ಹಣದ ಜಾಡನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 2: ಪುತ್ತೂರಿನಲ್ಲಿ ಎಸ್ವೈಎಸ್ ಮಾದರಿ ಮದುವೆ ಅಭಿಯಾನದ ಸಮಾರೋಪ
► ಸ್ವಾಗತ ಸಮಿತಿ ರಚನೆ ►ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವ
ಲಾರಾ ಸ್ಟೈಲ್, ಸಚಿನ್ ಟೈಮಿಂಗ್, ದ್ರಾವಿಡ್ ಶಿಸ್ತು: ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ವೈಭವ್ ಸೂರ್ಯವಂಶಿ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ, ಕೇವಲ ಒಬ್ಬ ಆಟಗಾರನಾಗಿ ಕಾಣಿಸುತ್ತಿಲ್ಲ. ಬದಲಿಗೆ ಕ್ರಿಕೆಟ್ ಲೋಕದ ಭವಿಷ್ಯದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಇವರ ಆಟದ ಶೈಲಿಯನ್ನು ನೋಡುತ್ತಿರುವ ದಿಗ್ಗಜರು, ಇವರಲ್ಲಿ ಅಂದು ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್ ಅವರಲ್ಲಿದ್ದ ಕಿಚ್ಚನ್ನು ಕಾಣುತ್ತಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
T20ಯಲ್ಲಿ 9 ವಿಕೆಟ್ ಗಳನ್ನು ಉರುಳಿಸಿದ ಬ್ರೆಝಿಲ್ ಮಹಿಳಾ ಬೌಲರ್
ಬ್ರೆಸೀಲಿಯ, ಎ. 9: ಬ್ರೆಝಿಲ್ ಮಹಿಳಾ ಕ್ರಿಕೆಟ್ ತಂಡದ ವೇಗಿ ಲಾರಾ ಕಾರ್ಡೋಸೊ ಅವರು ಅಂತರ್ರಾಷ್ಟ್ರೀಯ ಟಿ20 ಇನಿಂಗ್ಸೊಂದರಲ್ಲಿ ಒಂಭತ್ತು ವಿಕೆಟ್ ಗಳನ್ನು ಉರುಳಿಸಿದ ಮೊದಲ ಕ್ರಿಕೆಟ್ ಆಟಗಾರ್ತಿಯಾಗಿ (ಪುರುಷ ಅಥವಾ ಮಹಿಳೆ) ಇತಿಹಾಸ ನಿರ್ಮಿಸಿದ್ದಾರೆ. ಬೋಟ್ಸ್ ವಾನಾ ರಾಜಧಾನಿ ಗಬೊರೋನ್ ನ ಬೋಟ್ಸ್ವಾನ ಕ್ರಿಕೆಟ್ ಅಸೋಸಿಯೇಶನ್ ಓವಲ್ 2 ಮೈದಾನದಲ್ಲಿ ನಡೆದ ಪಂದ್ಯದಲ್ಲಿ, 21 ವರ್ಷದ ಆಲ್ ರೌಂಡರ್ ಲಾರಾ ಲೆಸೊತೊ ತಂಡದ ಬ್ಯಾಟಿಂಗ್ ಸರದಿಯ ಮೇಲೆ ಪ್ರಭುತ್ವ ಸಾಧಿಸಿದರು. ಅವರು ಮೂರು ಓವರ್ಗಳಲ್ಲಿ ಕೇವಲ ನಾಲ್ಕು ರನ್ಗಳನ್ನು ನೀಡಿ 9 ವಿಕೆಟ್ ಗಳನ್ನು ಪಡೆದರು. ಇದರಲ್ಲಿ ಎರಡು ಮೇಡನ್ ಓವರ್ಗಳೂ ಸೇರಿವೆ. ಹಿಂದಿನ ದಾಖಲೆ ಇಂಡೋನೇಶ್ಯ ಮಹಿಳಾ ತಂಡದ ಆರ್. ರೊಹ್ಮಾಲಿಯ ಹೆಸರಿನಲ್ಲಿತ್ತು. ಅವರು 2024ರಲ್ಲಿ ಮಂಗೋಲಿಯ ವಿರುದ್ಧದ ಪಂದ್ಯದಲ್ಲಿ ಯಾವುದೇ ರನ್ ನೀಡದೆ ಏಳು ವಿಕೆಟ್ಗಳನ್ನು ಪಡೆದಿದ್ದರು. ಪುರುಷರ ಕ್ರಿಕೆಟ್ನಲ್ಲಿ, 2025ರಲ್ಲಿ ಭೂತಾನ್ನ ಸೋನಮ್ ಯೆಶಿ ಮ್ಯಾನ್ಮಾರ್ ವಿರುದ್ಧದ ಪಂದ್ಯದಲ್ಲಿ ಏಳು ರನ್ ನೀಡಿ ಎಂಟು ವಿಕೆಟ್ಗಳನ್ನು ಪಡೆದಿದ್ದರು. ಬ್ರೆಝಿಲ್ ತಂಡವು 202 ರನ್ ಗಳನ್ನು ಕಲೆ ಹಾಕಿತು. ಲೆಸೊತೊ ತಂಡವು ಕೇವಲ 6.2 ಓವರ್ ಗಳಲ್ಲಿ 13 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಬ್ರೆಝಿಲ್ 189 ರನ್ಗಳ ಭರ್ಜರಿ ಜಯ ಸಾಧಿಸಿತು. ಕಾರ್ಡೋಸೊ ಅವರು ಬ್ರೆಝಿಲ್ ಪರವಾಗಿ 48 ಟಿ20 ಪಂದ್ಯಗಳನ್ನು ಆಡಿದ್ದು, 55 ವಿಕೆಟ್ಗಳನ್ನು ಪಡೆದಿದ್ದಾರೆ
ಪೆಟ್ ಶಾಪ್ಗಳ ನೋಂದಣಿ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು : ಜೀವಂತ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್ಗಳು ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ದ.ಕ.ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 20 ಪೆಟ್ ಶಾಪ್ಗಳಿವೆ. ಈ ಪೈಕಿ ಕೇವಲ 2 ಪೆಟ್ ಶಾಪ್ಗಳು ಮಾತ್ರ ಕಾಯ್ದೆಯಡಿ ನೋಂದಣಿ ಮಾಡಿದೆ. ಕಾಯ್ದೆಯಡಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಬೇಕು. ಮಹಾ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು, ಪೆಟ್ ಶಾಪ್ಗಳಿಗೆ ಟ್ರೇಡ್ ಲೈಸನ್ಸ್ ನೀಡುವ ಮುನ್ನ ಈ ಕಾಯ್ದೆಯಡಿ ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಕೆಲವು ಪೆಟ್ ಶಾಪ್ಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ಕ್ರೂರವಾಗಿ ಇಡಲಾಗುತ್ತಿದ್ದು ಯಾವುದೇ ರೀತಿಯ ಅಗತ್ಯ ಸೌಕರ್ಯಗಳನ್ನು ಒದಗಿಸುವುದಿಲ್ಲ. ರಾತ್ರಿ ವೇಳೆ ಅಂಗಡಿಗಳ ಬಾಗಿಲು ಮುಚ್ಚಿ ಹೋಗುವುದರಿಂದ ಅವುಗಳಿಗೆ ಸೂಕ್ತ ಗಾಳಿ ಬೆಳಕು ದೊರಕುವುದಿಲ್ಲ ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಮಂಗಳೂರು ತಾಲೂಕಿನ ಬೊಂಡಂತಿಲದಲ್ಲಿ ಪ್ರಾಣಿ ಮಿತ್ರ ಆಸ್ಪತ್ರೆ ಸ್ಥಾಪನೆ ಸಂಬಂಧ ಈ ಜಾಗದ ಅತಿಕ್ರಮಣ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ಸಂತಾನಹರಣ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ 11 ಖಾಸಗಿ ಗೋಶಾಲೆಗಳಿಗೆ ಸರಕಾರದಿಂದ 22 ಲಕ್ಷ ರೂ.ಮೊತ್ತವನ್ನು ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ನಗರದ ನಂದಿಗುಡ್ಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪ್ರಾಣಿಗಳ ಶವಗಾರವನ್ನು ಸಾರ್ವಜನಿಕರ ವಿರೋಧದಿಂದ ಕೈ ಬಿಡಲಾಗಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಶುಸಂಗೋಪನೆ ಉಪನಿರ್ದೇಶಕ (ಪಾಲಿ ಕ್ಲಿನಿಕ್) ಗೋಪಾಲಕೃಷ್ಣ ಭಟ್, ಪ್ರಾಣಿ ದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

35 C