ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ : ಪರೀಕ್ಷೆ ನಡೆಸಲು ಒತ್ತಾಯ
ಬೆಂಗಳೂರು : ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜ.17 ಮತ್ತು ಜ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಮಂಗಳವಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಕಟನೆ ಹೊರಡಿಸಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯವು 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ 2023ರ ಅ.18ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಈ 75 ಹುದ್ದೆಗಳಲ್ಲಿ ಹೊಸ ಮೀಸಲಾತಿ ರೋಸ್ಟರ್ ಬಿಂದುಗಳ ಅನುಗುಣವಾಗಿ, ಮೊದಲ ರೋಸ್ಟರ್ ಬಿಂದು ಪರಿಶಿಷ್ಟ ಜಾತಿಗೆ ಮತ್ತು ಮೂರನೇ ರೋಸ್ಟರ್ ಬಿಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಧಿಸೂಚನೆಯಲ್ಲಿ ವಿಷಯವಾರು ಹುದ್ದೆಗಳನ್ನು ವಿಂಗಡಿಸಿರುವುದರಿಂದ, ಪ್ರತಿ ವಿಷಯದ ಮೊದಲ ಮತ್ತು ಮೂರನೇ ಸ್ಥಾನಗಳು ಕ್ರಮವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಈ ರೀತಿ ಒಟ್ಟು 75 ಹುದ್ದೆಗಳಲ್ಲಿ 24 ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ 10 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಒಟ್ಟಾರೆ 34 ಹುದ್ದೆಗಳು ದಲಿತ ಸಮುದಾಯಕ್ಕೆ ಲಭಿಸುತ್ತಿವೆ ಎಂದು ತಿಳಿಸಿದ್ದಾರೆ. ಈ ನೇಮಕಾತಿ ಅಧಿಸೂಚನೆ ಪ್ರಕಟವಾದ ದಿನದಿಂದಲೂ, 75 ಹುದ್ದೆಗಳಲ್ಲಿ 34 ಹುದ್ದೆಗಳು ದಲಿತರಿಗೆ ಮೀಸಲಾಗಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿವಿಧ ರೀತಿಯ ಷಡ್ಯಂತ್ರಗಳ ಮೂಲಕ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು 2025ರ ಫೆ.22ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಪರೀಕ್ಷೆಗೆ ಕೇವಲ ಒಂದು ವಾರ ಬಾಕಿಯಿದ್ದಾಗಲೇ ಮುಂದೂಡಲಾಯಿತು. ನಂತರ ಪರೀಕ್ಷೆಯನ್ನು 2025ರ ಮಾ.5 ಮರುನಿಗದಿಪಡಿಸಲಾಯಿತು. ಆದರೆ ಪರೀಕ್ಷೆಗೆ ಕೇವಲ 12 ಗಂಟೆಗಳು ಉಳಿದಿದ್ದಾಗ ಯಾವುದೇ ಸಮಂಜಸ ಕಾರಣವಿಲ್ಲದೆ ಮತ್ತೆ ಪರೀಕ್ಷೆಯನ್ನು ಮುಂದೂಡಲಾಯಿತು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೈಕೋರ್ಟ್ ಈ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಪರೀಕ್ಷಾ ಪ್ರಕ್ರಿಯೆಗೆ ತಡೆ ನೀಡಿತು. ನಂತರ ವಾದ–ವಿವಾದಗಳನ್ನು ಆಲಿಸಿ 2025 ಆ.4ರಂದು ಅರ್ಜಿಯನ್ನು ವಜಾಗೊಳಿಸಿತು. ಅಧಿಸೂಚನೆ ಹಾಗೂ ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮಗಳ ಪ್ರಕಾರ ಸರಿಯಾಗಿದೆ ಎಂದು ಸ್ಪಷ್ಟ ತೀರ್ಪು ನೀಡಿತು ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಈ ತೀರ್ಪಿನ ವಿರುದ್ಧ ಕಲಬುರಗಿ ಹೈಕೋರ್ಟ್ನ ದ್ವಿ ಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ದ್ವಿ ಸದಸ್ಯ ಪೀಠವೂ ಏಕ ಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದು, ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮಾನುಸಾರವೇ ಇದೆ ಎಂದು ಸ್ಪಷ್ಟಪಡಿಸಿತು ಎಂದು ಅಭ್ಯರ್ಥಿಗಳು ಮಾಹಿತಿ ನೀಡಿದ್ದಾರೆ. ಈ ಎಲ್ಲ ಅಡೆತಡೆಗಳನ್ನು ಎದುರಿಸಿ, ನೇಮಕಾತಿ ಪರೀಕ್ಷೆಯ ದಿನಾಂಕವನ್ನು ಜ.17 ಮತ್ತು ಜ.18ರಂದು ನಿಗದಿಪಡಿಸಲಾಗಿದೆ. ಆದರೂ, ಇಲ್ಲಸಲ್ಲದ ಆರೋಪ ಹಾಗೂ ಸಂಚುಗಳ ಮೂಲಕ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಮತ್ತೆ ಅಡ್ಡಿಪಡಿಸಲು ಪ್ರಯತ್ನಗಳು ಮುಂದುವರಿದಿದ್ದು, ವಿಶ್ವವಿದ್ಯಾಲಯವು ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಕಾನೂನು ತೀರ್ಪುಗಳನ್ನು ಮರೆಮಾಚಿ, ಆಧಾರರಹಿತ ಆರೋಪಗಳನ್ನು ಮಾಡುತ್ತಾ ಪರೀಕ್ಷಾ ಪ್ರಕ್ರಿಯೆ ಹಾಗೂ ನೇಮಕಾತಿಯನ್ನು ವಿಳಂಬಗೊಳಿಸುವ ಉದ್ದೇಶದಿಂದ ನಿರಂತರವಾಗಿ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. 75 ಹುದ್ದೆಗಳಲ್ಲಿ 34 ಹುದ್ದೆಗಳು ದಲಿತರಿಗೆ ಮೀಸಲಾಗಿರುವುದೇ ಈ ಅಡೆತಡೆಗಳ ಮೂಲ ಕಾರಣವಾಗಿದ್ದು, ಅಧಿಸೂಚನೆ ಹೊರಡಿಸಿ ಈಗಾಗಲೇ ಎರಡು ವರ್ಷಗಳು ಕಳೆದರೂ ನೇಮಕಾತಿ ಪೂರ್ಣಗೊಳ್ಳದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆರೋಪಿಸಿದ್ದಾರೆ.
Saudi Arabia | ಲಕ್ನೊ ಮಹಿಳೆ ಸಂಶಯಾಸ್ಪದವಾಗಿ ಮೃತ್ಯು; ವರದಕ್ಷಿಣೆ ಕಿರುಕುಳ ಆರೋಪಿಸಿದ ಕುಟುಂಬ
ಲಕ್ನೊ/ಜೆದ್ದಾ (ಸೌದಿ ಅರೇಬಿಯಾ): ಲಕ್ನೊ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಯುವತಿ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಪತಿ ಹಾಗೂ ಅತ್ತೆಮಾವಂದಿರು ವರದಕ್ಷಿಣೆಗಾಗಿ ಸುದೀರ್ಘ ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ತಂದೆ ಶೇರ್ ಅಲಿ ಖಾನ್ ಲಕ್ನೊದಲ್ಲಿನ ಚಿನ್ಹಾಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನ್ನ ಅಳಿಯ ಮುಹಮ್ಮದ್ ಆಮೀರ್ ಖಾನ್ ಹಾಗೂ ಆತನ ಕುಟುಂಬದ ಸದಸ್ಯರು ತನ್ನ ಪುತ್ರಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನ ಪ್ರಕಾರ, ಏಪ್ರಿಲ್ 10, 2025ರಂದು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವೀಧರೆ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಐಮನ್ ಖಾನ್ ಅವರು ಲಕ್ನೊದ ಹೋಟೆಲ್ ಒಂದರಲ್ಲಿ ಮುಹಮ್ಮದ್ ಆಮೀರ್ ಖಾನ್ ಅವರನ್ನು ವಿವಾಹವಾಗಿದ್ದರು. ವಿವಾಹವಾದ ಕೂಡಲೇ ಆಮೀರ್ ಖಾನ್ ಇನೋವಾ ಕಾರಿನ ಬೇಡಿಕೆ ಇಟ್ಟಿದ್ದು, ತನ್ನ ಹೆಸರಿನಲ್ಲಿ ಕಿಯಾ ಸೆಲ್ಟೋಸ್ ಕಾರನ್ನು ನೋಂದಾಯಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಐಮನ್ ಅವರ ಮೊಬೈಲ್ ಫೋನ್ ಒಡೆದು ಹಾಕಿ, ಆಕೆಯನ್ನು ನಿಂದಿಸಿದ್ದಾನೆ ಎಂದೂ ಆರೋಪಿಸಲಾಗಿದೆ. ವಿವಾಹದ ಬಳಿಕ ಆಮೀರ್ ಖಾನ್ ಸೌದಿ ಅರೇಬಿಯಾಗೆ ತೆರಳಿದ್ದು, ಜೂನ್ 2025ರಲ್ಲಿ ಐಮನ್ ಅವರನ್ನು ಜೆದ್ದಾಗೆ ಕರೆಸಿಕೊಳ್ಳಲಾಗಿದೆ. ಅಲ್ಲಿಗೆ ತೆರಳಿದ ನಂತರ ಐಮನ್ ಅವರಿಗೆ ಪತಿ, ಪತಿಯ ಸಹೋದರ ಹಾಗೂ ಇನ್ನಿಬ್ಬರು ಸಂಬಂಧಿಕರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇದಲ್ಲದೆ, “ನಿಮ್ಮ ಪೋಷಕರ ಮನೆಯಿಂದ 20 ಲಕ್ಷ ರೂ. ಹಣ ತಂದುಕೊಡಬೇಕು. ಬೇಡಿಕೆಯನ್ನು ಈಡೇರಿಸದಿದ್ದರೆ ನಿನ್ನನ್ನು ಕೊಲೆ ಮಾಡಲಾಗುತ್ತದೆ” ಎಂದು ಐಮನ್ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 2025ರಲ್ಲಿ ಭಾರತಕ್ಕೆ ಮರಳಿದ್ದ ಐಮನ್ ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಕುರಿತು ಕುಟುಂಬದವರಿಗೆ ಮಾಹಿತಿ ನೀಡಿದ್ದರು. ನಂತರ ಐಮನ್ ಅವರ ತಂದೆ ಆರೋಪಿಗಳೊಂದಿಗೆ ಮಾತನಾಡಿ ಹಣದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ, ಮುಂದಿನ ದಿನಗಳಲ್ಲಿ ಕಿರುಕುಳ ನೀಡುವುದಿಲ್ಲ ಎಂದು ಆರೋಪಿಗಳು ಭರವಸೆ ನೀಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಭರವಸೆಯ ಮೇರೆಗೆ ಅಕ್ಟೋಬರ್ 19, 2025ರಂದು ಐಮನ್ ಜೆದ್ದಾಗೆ ಮರಳಿದ್ದರು. ಆದರೆ ವಾಪಸ್ಸಾದ ತಕ್ಷಣವೇ ಆಕೆಯ ಮೇಲಿನ ಕಿರುಕುಳ ಪುನಾರಂಭಗೊಂಡಿತ್ತು ಎಂದು ಆರೋಪಿಸಲಾಗಿದೆ. ಕುಟುಂಬದ ಸದಸ್ಯರ ಪ್ರಕಾರ, ಸಂಶಯಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಐಮನ್ ಗರ್ಭಿಣಿಯಾಗಿದ್ದರು. ಆಕೆಯ ಸಾವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಆರೋಪಿಗಳು ನೇಣು ಬಿಗಿದ ಸ್ಥಿತಿಯನ್ನೇ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಐಮನ್ ಅವರ ಮೃತದೇಹವನ್ನು ಸೌದಿ ಅರೇಬಿಯಾದಿಂದ ಲಕ್ನೊಗೆ ತರಲಾಗಿದ್ದು, ತಮ್ಮ ಪುತ್ರಿಯ ಮರಣೋತ್ತರ ಪರೀಕ್ಷೆ ನಡೆಸಬೇಕು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಂದೆ ಶೇರ್ ಅಲಿ ಖಾನ್ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಚಿನ್ಹಾಟ್ ಪೊಲೀಸ್ ಠಾಣಾಧಿಕಾರಿ ದಿನೇಶ್ ಮಿಶ್ರಾ, “ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ವಿರಾಜಪೇಟೆ | ಗುಂಡು ಹೊಡೆದುಕೊಂಡು ಚಾಲಕ ಆತ್ಮಹತ್ಯೆ
ಮಡಿಕೇರಿ: ಕಾರು ಚಾಲಕರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾ.ಪಂ ವ್ಯಾಪ್ತಿಯ ಅರಮೇರಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಡಾಲು ನಂಜಪ್ಪ (64) ಮೃತಪಟ್ಟವರು. ಗದ್ದೆಯಲ್ಲಿ ಒಂಟಿ ನಳಿಕೆ ಕೋವಿ ಮತ್ತು ಮೃತದೇಹ ಪತ್ತೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವಿರಾಜಪೇಟೆ ಠಾಣಾಧಿಕಾರಿ ಎನ್.ಜಿ.ಲತಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚ್ಛೇದನ ಪಡೆದು ಪತ್ನಿ ಹಾಗೂ ಪುತ್ರಿಯಿಂದ ದೂರವಿದ್ದ ಡಾಲು ನಂಜಪ್ಪ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಅನಾರೋಗ್ಯವೂ ಅವರನ್ನು ಕಾಡುತ್ತಿತ್ತು ಎಂದು ಹೇಳಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ನ್ಯಾಯಾಲಯದ ಆದೇಶಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಗಿರಲಿಲ್ಲ. ಮುಂದಿನ ನಾಲ್ಕೈದು ತಿಂಗಳಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿನ್ನೆ ಸುಪ್ರೀಂ ಕೋರ್ಟ್ ಕೂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿರುವ ಪಾಲಿಕೆಗಳ ಚುನಾವಣೆ ನಡೆಸುವ ಸಂಬಂಧ ಆದೇಶ ನೀಡಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ನಮ್ಮ ಸರಕಾರ ಬದ್ಧವಾಗಿದೆ. ಮೀಸಲಾತಿ ವಿಚಾರ ಹಾಗೂ ಇತರೆ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದು ಶಿವಕುಮಾರ್ ಕರೆ ನೀಡಿದರು. ನಮ್ಮ ಭವಿಷ್ಯ ತೀರ್ಮಾನಿಸುವ ಎಸ್ಐಆರ್ ಬಗ್ಗೆ ಎಚ್ಚರವಾಗಿರಿ: ನಮ್ಮ ರಾಜ್ಯಕ್ಕೆ ಎಸ್ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೆ ಕೆಲಸ ಮಾಡುತ್ತಿದ್ದಾರೆ. ಬೂತ್ ಮಟ್ಟದ ಏಜೆಂಟ್(ಬಿಎಲ್ಎ) ವಿಚಾರದಲ್ಲಿ ಯಾವುದೆ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೆ ಎಸ್ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್ಎಗಳು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಶಿವಕುಮಾರ್ ತಿಳಿಸಿದರು. ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ ವೋಟ್ ಚೋರಿ ಅಭಿಯಾನ ಆರಂಭವಾಗಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇನ್ನು ವೋಟ್ ಚೋರಿ(ಮತಗಳ್ಳತನ) ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ 1.41 ಕೋಟಿ ಸಹಿ ಸಂಗ್ರಹಿಸಿದ ಎಲ್ಲ ಜಿಲ್ಲಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ಉಳಿದರೆ ನಾವು ನೀವುಗಳು, ಪಕ್ಷವಿಲ್ಲವೆಂದರೆ ನಾವುಗಳು ಇರುವುದಿಲ್ಲ ಎಂದು ಶಿವಕುಮಾರ್ ಎಚ್ಚರಿಸಿದರು. ನಮ್ಮ ಸರಕಾರ ಆರನೆ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ, ಏಳನೆ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ ಎಲ್ಲವನ್ನು ಜಮೆ ಮಾಡಲಾಗುವುದು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು. ಫೆ.13ರಂದು ದೊಡ್ಡ ಕಾರ್ಯಕ್ರಮ ಮಾಡಲು ಚರ್ಚೆ ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಪ್ರತಿ ತಾಲೂಕು, ಪಂಚಾಯಿತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಕರೆಕೊಟ್ಟರು. ನಾವು ರಾಜ್ಯಕ್ಕೆ ನೀಡಿರುವ ಗ್ಯಾರಂಟಿ ಯೋಜನೆಗಳು, ಮಾಡಿರುವ ಕೆಲಸ ಜನರನ್ನು ತಲುಪಿದೆ. ನಾವು ಗ್ಯಾರಂಟಿ ಸಮಿತಿ, ಸ್ಥಳೀಯ ಮಟ್ಟದಲ್ಲಿ ನಾಮನಿರ್ದೇಶನ ಸೇರಿದಂತೆ ಕಾರ್ಯಕರ್ತರಿಗೆ ಈಗಾಗಲೇ ಅಧಿಕಾರ ನೀಡಿದ್ದೇವೆ. 600 ಜನ ರಾಜ್ಯ ಮಟ್ಟದ ನಾಮನಿರ್ದೇಶನ ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಪಟ್ಟಿಯೂ ಅಂತಿಮವಾಗಿದ್ದು, ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಮಾತ್ರ ಬಾಕಿ ಇದೆ. ಇದುವರೆಗೂ ನಾವು 20 ಡಿಸಿಸಿ ಅಧ್ಯಕ್ಷರು, 25 ಪದಾಧಿಕಾರಿಗಳಿಗೆ, 47 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಟಿಕೆಟ್ ವಂಚಿತ ಕಾರ್ಯಕರ್ತರ ಪೈಕಿ 19 ಜನರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳಿಗೆ ತೆರಿಗೆ ಆಘಾತ ನೀಡಿದ ಅಮೆರಿಕ ಅಧ್ಯಕ್ಷ!
ಅಮೆರಿಕ ಅಧ್ಯಕ್ಷ ಮತ್ತೊಮ್ಮೆ ಇರಾನ್ ವಿರುದ್ದ ರೊಚ್ಚಿಗೆದ್ದು, ಕಠಿಣ ಕ್ರಮ ಜಾರಿಗೆ ತರಲು ಇದೀಗ ಮುಂದಾಗಿದ್ದಾರೆ. ಆದರೆ ಈ ಬಾರಿ ನೇರವಾಗಿ ಇರಾನ್ ವಿರುದ್ಧ ಕ್ರಮ ಕೈಗೊಳ್ಳದೆ, ಇರಾನ್ ಜೊತೆ ಯಾರು ವ್ಯಾಪಾರ ನಡೆಸುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಇದೀಗ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಕಲಬುರಗಿ | ಎಸ್ಐಆರ್ ಮ್ಯಾಪಿಂಗ್ ಮಾಡಲು ಬಿಎಲ್ಓಗಳಿಗೆ ಮಾಹಿತಿ ನೀಡಿ : ಆಯುಕ್ತ ಅವಿನಾಶ್ ಶಿಂಧೆ
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಭಾಗವಾಗಿ 2002ರಲ್ಲಿದ್ದ ಮತದಾರರನ್ನು ಪ್ರಸ್ತುತ ಗುರುತಿಸಿ ಮತದಾರರ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ಪೂರ್ಣಗೊಳಿಸಬೇಕಾಗಿರುವುದರಿಂದ ಜ.16 ಮತ್ತು 17 ರಂದು ಮತಗಟ್ಟೆ ಹಂತದ ಅಧಿಕಾರಿಗಳು(ಬಿ.ಎಲ್.ಒ.) ಮನೆಗೆ ಬೇಟಿ ನೀಡಿದಾಗ ಅಗತ್ಯ ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಿ.ಎಲ್.ಓ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಹಿಂದೆ 2002ರಲ್ಲಿ ತಾವು ಮತದಾನ ಮಾಡಿರುವ ಕುರಿತು ಮತದಾರರ ಗುರುತಿನ ಚೀಟಿ, ಮತದಾನ ಕೇಂದ್ರ ಹೆಸರು ಮತ್ತು ಮತದಾನ ಮಾಡಿದ ಸ್ಥಳದ ಮಾಹಿತಿ ನೀಡಬೇಕೆಂದು ಅವರು ಕೋರಿದ್ದಾರೆ.
Chamarajanagar | ಬೈಕ್ - ಬಸ್ ನಡುವೆ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಮೃತ್ಯು
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮಾರ್ಗದ ಕೋಣನಕೆರೆ ಗ್ರಾಮ ಬಳಿಯ ಮಾಕಳ್ಳಿ ಮಾರಮ್ಮನ ದೇಗುಲದ ತಿರುವಿನಲ್ಲಿ ಮಂಗಳವಾರ ಸಂಜೆ ಬೈಕ್ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಹನೂರು ತಾಲೂಕಿನ ಪೊನ್ನಾಚಿ ಸಮೀಪದ ರಾಮೇಗೌಡನಹಳ್ಳಿಯ ಶಿವಪ್ಪ (21) ಹಾಗೂ ಸತೀಶ್ (24) ಮೃತಪಟ್ಟವರು. ಸಂಜೆ 5 ರಲ್ಲಿ ಬೈಕ್ನಲ್ಲಿ ಗ್ರಾಮಕ್ಕೆ ಹಿಂತಿರುಗುವಾಗ ಕೋಣನಕೆರೆ ಗ್ರಾಮದ ಮಾಕಳ್ಳಿ ಮಾರಮ್ಮನ ದೇಗುಲ ಬಳಿಯ ತಿರುವಿನಲ್ಲಿ ಹೊಗೇನಕಲ್ ಫಾಲ್ಸ್ ನಿಂದ ಎದುರು ಬಂದ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ರಾಮಾಪುರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.
ಮಂಗಳೂರು, ಜ.13: ನಗರದ ಕೊಡಿಯಾಲಬೈಲ್ ಬಳಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಶೋಕನಗರ ನಿವಾಸಿ ಅಥರ್ವ ನಾಯ್ಕ್ (21) ಮತ್ತು ಮಣ್ಣಗುಡ್ಡೆ ನಿವಾಸಿ ಪ್ರಥಮ್ ಪಿ. ಶೆಣೈ (22) ಬಂಧಿತ ಆರೋಪಿಗಳು. ಕೊಡಿಯಾಲಬೈಲು ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಯಿತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೇವನೆ ಮಾಡಿರು ವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳಸಿದೆಯೇ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಸಂಬಂಧ?; ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮಹತ್ವದ ಹೇಳಿಕೆ
Rohit Sharma, Virat Kohli's rift with Gautam Gambhir- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಬ್ಬರು ಅನುಭವಿ ಆಟಗಾರರು ತಂಡದ ಭವಿಷ್ಯದ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ, ವಿಶೇಷವಾಗಿ ಮುಂದಿನ ಏಕದಿನ ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸುವ ಮೂಲಕ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.
ಕಲಬುರಗಿ | ಜ.14 ರಿಂದ ‘ರೈಲ್ವೆ ಒನ್’ ಆಪ್ ಮೂಲಕ ಅನ್ರಿಸರ್ವ್ಡ್ ಟಿಕೆಟ್ಗಳಿಗೆ ಶೇ.3ರಷ್ಟು ರಿಯಾಯಿತಿ
ಕಲಬುರಗಿ: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ರೈಲ್ವೆ ಒನ್’ ಸೂಪರ್ ಆಪ್ ಮೂಲಕ ಅನ್ರಿಸರ್ವ್ಡ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಶೇ.3 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಸೋಲಾಪುರ ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಯೋಗೇಶ್ ಪಾಟೀಲ್ ತಿಳಿಸಿದ್ದಾರೆ. ರೈಲ್ವೆ ವ್ಯವಸ್ಥೆಯಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಹಾಗೂ ಪ್ರಯಾಣಿಕರಿಗೆ ಸರಳ ಮತ್ತು ಪಾರದರ್ಶಕ ಟಿಕೆಟ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ‘ರೈಲ್ವೆ ಒನ್’ ಆಪ್ನ ಆರ್–ವಾಲೆಟ್ (R-Wallet) ಮೂಲಕ ಹಣ ಪಾವತಿಸುವವರಿಗೆ ಮಾತ್ರ ಶೇ.3 ಕ್ಯಾಶ್ಬ್ಯಾಕ್ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ವಾಲೆಟ್ ಹೊರತುಪಡಿಸಿ ಆಪ್ನಲ್ಲಿ ಲಭ್ಯವಿರುವ ಯುಪಿಐ ಸೇರಿದಂತೆ ಇತರ ಯಾವುದೇ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿದರೂ ಶೇ.3ರಷ್ಟು ನೇರ ರಿಯಾಯಿತಿ ಸಿಗಲಿದೆ. ಈ ವಿಶೇಷ ಡಿಜಿಟಲ್ ಪ್ರೋತ್ಸಾಹ ಯೋಜನೆಯು 2026ರ ಜ.14 ರಿಂದ ಜು.14 ರವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ಕಾಲ ಪ್ರಯಾಣಿಕರು ಈ ರಿಯಾಯಿತಿಯ ಪ್ರಯೋಜನ ಪಡೆಯಬಹುದಾಗಿದೆ ಎಂದು ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕ ನಿರೀಕ್ಷಕ ಎಸ್. ವಿಕ್ರಮ್ ಎ.ಕೆ. ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಶಿರೂರು ಸ್ವಾಮೀಜಿಗೆ ಅಲೆವೂರಿನಲ್ಲಿ ಹುಟ್ಟೂರ ಸನ್ಮಾನ
ಉಡುಪಿ, ಜ.13: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಭಾವೀ ಪರ್ಯಾಯ ಶೀರೂರು ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿ ಅವರಿಗೆ ಹುಟ್ಟೂರ ಸನ್ಮಾನ ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಮಂಗಳವಾರ ನಡೆಯಿತು. ಸ್ವಾಮೀಜಿ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಗೆ ಗೌರವದ ಅಭಿನಂದನೆ ಸಲ್ಲಿಸಲಾಯಿತು. ನಂತರ ಸಂಕಲ್ಪ ಸಭಾಂಗಣದಿಂದ ಸ್ವಾಮೀಜಿ ಅವರಿಗೆ ವಿವಿಧ ಭಜನಾ ತಂಡಗಳು, ಕೊಂಬು, ವಾದ್ಯ, ಚೆಂಡೆ, ಬ್ಯಾಂಡ್ ಹಾಗೂ ಇನ್ನಿತರ ವೇಷಭೂಷಣದೊಂದಿಗೆ ರಜತ ವಾಹನದಲ್ಲಿ ಅಲೆವೂರು ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಮರನಾಥ್ ಶೆಟ್ಟಿ, ಊರ ನಾಗರಿಕರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪೊಲೀಸರ ವೇಷ, ನಕಲಿ ಕೋರ್ಟ್ ವಿಚಾರಣೆ: ಡಿಜಿಟಲ್ ಅರೆಸ್ಟ್ Scamಗೆ ನೂರಾರು ದಾರಿ
ಎಚ್ಚರ... ಇದು 'ಡಿಜಿಟಲ್ ಕ್ರೈಂ' ಕಥನ..
Explained: ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಯುಎಸ್ ಸುಂಕ; ಭಾರತದ ಮೇಲೆ ಏನು ಪರಿಣಾಮ?
ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ನ ಖಮೇನಿ ಆಡಳಿತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಅಮೆರಿಕದ ಈ ನಿರ್ಧಾರ ಸಹಜವಾಗಿ ಇರಾನ್ನ ವ್ಯಾಪಾರ ಪಾಲುದಾರರಿಗೆ ನಷ್ಟವನ್ನುಂಟು ಮಾಡಲಿದೆ. ಭಾರತ ಕೂಡ ಇರಾನ್ ಜೊತೆ ಗಮನಾರ್ಹ ವ್ಯಾಪಾರ ಮಾಡುತ್ತಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ದ್ವೇಷ ಭಾಷಣ ಮಸೂದೆ ಅಭಿವ್ಯಕ್ತ ಸ್ವಾತಂತ್ರ್ಯದ ಹರಣ: ಹೊದಿಗೆರೆ
ಉಡುಪಿ, ಜ.13: ದ್ವೇಷ ಭಾಷಣ ಮಸೂದೆಯನ್ನು ಯಾವುದೇ ಚರ್ಚೆಗೆ ಅವಕಾಶ ನೀಡದೇ ತರಾತುರಿಯಲ್ಲಿ ಅಂಗೀಕರಿಸಿ ರಾಜ್ಯಪಾಲರಿಗೆ ಒಪ್ಪಿಸಿದ್ದು, ಇದು ಅಭಿವ್ಯಕ್ತ ಸ್ವಾತಂತ್ರ್ಯದ ಹರಣ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಟ್ಲರ್ ಆಡಳಿತ ನಡೆಯು ತ್ತಿದೆ. ಹೀಗಾಗಿ ವಿಧಾನಸಭೆ ಅಥವಾ ಕಾನೂನು ತಜ್ಞರೊಂದಿಗೆ ಯಾವುದೇ ಚರ್ಚೆ ನಡೆಸದೇ ಕಾಂಗ್ರೆಸ್ ಸರಕಾರ ದ್ವೇಷ ಭಾಷಣ-ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಜಾರಿಗೊಳಿಸುವುದಕ್ಕೆ ಹೊರಟಿದೆ. ಈ ಮೂಲಕ ತನ್ನನ್ನು ಟೀಕಿಸುವವರನ್ನು ಹೆದರಿಸಿ, ತಮ್ಮ ಮತದಾರರನ್ನು ಓಲೈಸುವ ಹುನ್ನಾರ ನಡೆಸಿದೆ ಎಂದರು. ಈ ವಿಧೇಯಕ ಅನೇಕ ಗೊಂದಲಗಳಿಂದ ಕೂಡಿದೆ. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಎಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಯಾವುದು ದ್ವೇಷ ಭಾಷಣ ಎಂಬುದನ್ನು ನಿರ್ಧಾರಿಸುವ ಅಧಿಕಾರ ಯಾರದ್ದು ಎಂಬುದು ತಿಳಿಸಿಲ್ಲ. ಸರಕಾರ ತನಗಾಗದವರ ಮೇಲೆ ಈ ವಿಧೇಯಕವನ್ನು ಬಳಸುವ ಅಪಾಯವಿದೆ ಎಂದು ಅವರು ಆರೋಪಿಸಿದರು. ಸರಕಾರ ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿ, ಅದನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಕಳಹಿಸಿದೆ. ಆದರೆ ಅದಕ್ಕೆ ಸಹಿ ಹಾಕದಂತೆ ಬಿಜೆಪಿ ಈಗಾಗಲೇ ರಾಜ್ಯಪಾಲರನ್ನು ಒತ್ತಾಯಿಸಿದೆ. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರ ದಿವಾಕರ್ ಶೆಟ್ಟಿ ಕೆ. ಉಪಸ್ಥಿತರಿದ್ದರು.
ದಾರುಲ್ ಉಲೂಮ್ ಸಬೀಲುರ್ರಶಾದ್ ನೂತನ ಮುಖ್ಯಸ್ಥರಾಗಿ ಮೌಲಾನಾ ಮುಫ್ತಿ ಅಹ್ಮದ್ ಸಿಮಾಲ್ ರಶಾದಿ ನೇಮಕ
ಬೆಂಗಳೂರು: ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನ ನೂತನ ಮುಖ್ಯಸ್ಥರಾಗಿ ಮೌಲಾನಾ ಮುಫ್ತಿ ಅಹ್ಮದ್ ಸಿಮಾಲ್ ರಶಾದಿ ಅವರನ್ನು ಆಯ್ಕೆ ಮಾಡಲಾಗಿದೆ. ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಮೌಲಾನಾ ಅಹ್ಮದ್ ಸಿಮಾಲ್ ರಶಾದಿ ಅವರು ರಾಜ್ಯದ ದ್ವಿತೀಯ ಅಮೀರೆ ಶರೀಅತ್ ಆಗಿದ್ದ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರ ಕಿರಿಯ ಪುತ್ರರಾಗಿದ್ದಾರೆ. ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರ ನಿಧನದ ನಂತರ ಮೌಲಾನಾ ಸಗೀರ್ ಅಹ್ಮದ್ ಖಾನ್ ಅವರನ್ನು ಸಬೀಲುರ್ರಶಾದ್ ನ ಮೊಹತಮೀಮ್(ಪ್ರಾಂಶುಪಾಲ/ಮುಖ್ಯಸ್ಥ) ರನ್ನಾಗಿ ಹಾಗೂ ಮುಫ್ತಿ ಅಹ್ಮದ್ ಸಿಮಾಲ್ ಅವರನ್ನು ಉಪ ಮುಖಸ್ಥರನ್ನಾಗಿ ನಿಯೋಜಿಸಲಾಗಿತ್ತು. ಇದೀಗ ಮೌಲಾನಾ ಸಗೀರ್ ಅಹ್ಮದ್ ಅವರ ನಿಧನದ ಬಳಿಕ ಮುಫ್ತಿ ಅಹ್ಮದ್ ಸಿಮಾಲ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.
ಬೈಂದೂರು, ಜ.13: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜ.12ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಬೈಂದೂರಿನ ಹರೀಶ್ ಚಂದನ್ ಎಂಬವರ ಪತ್ನಿ ನಾಗರತ್ನ(48) ಎಂದು ಗುರುತಿಸಲಾಗಿದೆ. ಇವರು ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿ ಬಂದಿದ್ದು, ಬಳಿಕ ಮನೆಯಿಂದ ಹೊರಗಡೆ ಹೋದವರು ನಾಪತ್ತೆಯಾದರು. ಹುಡುಕಾಡಿದಾಗ ನೆರೆಮನೆಯ ಬಾವಿಯ ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ | ಮಲ್ಚಿಂಗ್, ವಿಡ್ಮೇಟ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ಅನುಕೂಲ: ಶಶಿಕಾಂತ್ ಕೋಟಿಮನಿ
ಬಳ್ಳಾರಿ : ರೈತರು ಆಧುನಿಕ ಕೃಷಿ ಪದ್ಧತಿಗಳಾದ ಮಲ್ಚಿಂಗ್, ವಿಡ್ಮೇಟ್ ಹಾಗೂ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಹೇಳಿದರು. ತೋಟಗಾರಿಕೆ ಇಲಾಖೆ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಬಿಳುಬಾವಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಹೋಬಳಿ ಮಟ್ಟದ ಮೆಣಸಿನಕಾಯಿ ಕ್ಷೇತ್ರೋತ್ಸವ ಹಾಗೂ ತಾಂತ್ರಿಕ ಸಲಹೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ವಿಜ್ಞಾನಿ ಡಾ. ಪಾಲಯ್ಯ ಮಾತನಾಡಿ, ಸಮಗ್ರ ಕೀಟ ನಿರ್ವಹಣೆಗಾಗಿ ಹೊಲದ ಬದಿಗಳಲ್ಲಿ ಬಾರ್ಡರ್ ಬೆಳೆಗಳಾದ ಅಲಸಂದಿ, ಮೆಕ್ಕೆಜೋಳ, ಸಜ್ಜೆ ಹಾಗೂ ಅಲ್ಲಲ್ಲಿ ಚೆಂಡು ಹೂವು ನೆಡುವುದರಿಂದ ನೈಸರ್ಗಿಕವಾಗಿ ಕೀಟಗಳನ್ನು ಹತೋಟಿಗೆ ತರಬಹುದು ಎಂದು ಮಾಹಿತಿ ನೀಡಿದರು. ನಾಟಿ ಮಾಡಿದ 30 ದಿನಗಳ ನಂತರ ಎಕರೆಗೆ 10-15 ಅಂಟು ಬಲೆಗಳನ್ನು ಅಳವಡಿಸಲು ಅವರು ಸೂಚಿಸಿದರು. ಮಣ್ಣು ವಿಜ್ಞಾನಿ ಡಾ. ರವಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ಬಳಸಬೇಕು. ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಿದರೆ ಮೂರು ವರ್ಷಗಳವರೆಗೆ ವೈಜ್ಞಾನಿಕವಾಗಿ ಗೊಬ್ಬರ ನಿರ್ವಹಣೆ ಮಾಡಲು ಸಾಧ್ಯ ಎಂದರು. ಡಾ. ಗೋವಿಂದಪ್ಪ ಅವರು ರೋಗ ಮತ್ತು ಕೀಟಗಳನ್ನು ನರ್ಸರಿ ಹಂತದಿಂದಲೇ ಗುರುತಿಸಿ, ಬಯೋ ಜೀವಿಗಳಾದ ಸುಡೋಮೋನಾಸ್ ಮತ್ತು ಟ್ರೈಕೋಡರ್ಮ ಬಳಸುವಂತೆ ವಿವರಿಸಿದರು. ತಾಲೂಕು ತೋಟಗಾರಿಕೆ ನಿರ್ದೇಶಕ ಜಾಡ್ರ ಶಂಕ್ರಪ್ಪ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಾಘವೇಂದ್ರ ಕೆ., ಪ್ರವೀಣ್ ಕುಮಾರ್ ಎನ್. ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.
ಬಳ್ಳಾರಿ | ಹೆಚ್ಪಿವಿ ಲಸಿಕೆ ಕುರಿತು ಮಾಹಿತಿ ನೀಡಿ : ಡಿಹೆಚ್ಓ ಡಾ.ಯಲ್ಲಾ ರಮೇಶ್ ಬಾಬು
ವೈದ್ಯಾಧಿಕಾರಿಗಳಿಗೆ ಹೆಚ್ಪಿವಿ ಲಸಿಕೆ ತರಬೇತಿ ಕಾರ್ಯಾಗಾರ
‘ನೆರವು ಸಮೀಪಿಸುತ್ತಿದೆ’: ಹೋರಾಟ ಮುಂದುವರಿಸಲು ಇರಾನ್ ಪ್ರತಿಭಟನಕಾರರಿಗೆ ಟ್ರಂಪ್ ಸಂದೇಶ
ಮಿಲಿಟರಿ ಕಾರ್ಯಾಚರಣೆಯ ಸಾಧ್ಯತೆ?
2025ರಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯ ವೀಸಾ ರದ್ದುಪಡಿಸಿದ ಅಮೆರಿಕ
ವಾಶಿಂಗ್ಟನ್, ಜ.13: ಅಧ್ಯಕ್ಷರಾಗಿ 2025ರ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕ ಅಮೆರಿಕವು 1 ಲಕ್ಷಕ್ಕೂ ಅಧಿಕ ಮಂದಿಯ ವೀಸಾಗಳನ್ನು ರದ್ದುಪಡಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ. ವಲಸೆ ವಿರುದ್ಧ ಟ್ರಂಪ್ ಆಡಳಿತ ತಳೆದಿರುವ ಕಠಿಣ ನೀತಿಯ ಪರಿಣಾಮವಾಗಿ ವೀಸಾ ರದ್ದತಿ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. 2024ರಲ್ಲಿ, ಅಂದರೆ ಬೈಡೆನ್ ಆಡಳಿತದ ಕೊನೆಯ ವರ್ಷದಲ್ಲಿ 40 ಸಾವಿರ ವೀಸಾಗಳು ರದ್ದುಗೊಂಡಿದ್ದರೆ, ಅದರ ಎರಡು ಪಟ್ಟು ಅಧಿಕ ವೀಸಾಗಳು ಟ್ರಂಪ್ ದ್ವಿತೀಯಾವಧಿಯ ಮೊದಲ ವರ್ಷದಲ್ಲಿ ರದ್ದಾಗಿವೆ. ಹೀಗೆ ರದ್ದುಗೊಂಡ ಬಹುತೇಕ ವೀಸಾಗಳಲ್ಲಿ ಹೆಚ್ಚಿನವು ನಿಗದಿತ ಅವಧಿಗಿಂತ ಹೆಚ್ಚು ಸಮಯ ಅಮೆರಿಕದಲ್ಲಿ ವಾಸ್ತವ್ಯವಿದ್ದ ಪ್ರವಾಸಿಗರು ಹಾಗೂ ಉದ್ಯಮಿಗಳದ್ದಾಗಿದೆ. ಇದರ ಜೊತೆಗೆ ಕಾನೂನುಬದ್ಧ ಸ್ಥಾನಮಾನವನ್ನು ಕಳೆದುಕೊಂಡ 8 ಸಾವಿರ ವಿದ್ಯಾರ್ಥಿಗಳು ಹಾಗೂ 2,500 ವಿಶೇಷ ಪರಿಣತಿಯ ಕಾರ್ಮಿಕರ ವೀಸಾಗಳನ್ನೂ ರದ್ದುಪಡಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಸುಮಾರು 5 ಸಾವಿರ ವಿದ್ಯಾರ್ಥಿಗಳು ಡ್ರಗ್ಸ್ ಹೊಂದಿದ್ದ ಅಥವಾ ವಿತರಿಸಿದ್ದ ಆರೋಪದಲ್ಲಿ ವೀಸಾಗಳನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರೆನ್ನಲಾದ ನೂರಾರು ವಿದೇಶಿ ಕಾರ್ಮಿಕರು ಕೂಡ ವೀಸಾಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕ್ರಿಮಿನಲ್ ಆರೋಪ ಅಥವಾ ಅಪರಾಧ ಕೃತ್ಯ ಸಾಬೀತಾದ ಕಾರಣ ವೀಸಾ ರದ್ದುಗೊಂಡವರ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮೊಬೈಲ್ ಹ್ಯಾಕ್: ಆನ್ಲೈನ್ ವಂಚನೆ; ಪ್ರಕರಣ ದಾಖಲು
ಉಡುಪಿ, ಜ.13: ಮೊಬೈಲ್ ಹ್ಯಾಕ್ ಮಾಡಿ ಫ್ಲಿಫ್ಕಾರ್ಟ್ ಮೂಲಕ ಮೊಬೈಲ್ ಖರೀದಿಸಿ ಸಾವಿರಾರು ರೂ. ಆನ್ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರು ಅ.16ರಂದು ಜಡ್ಕಲ್ ಸಮೀಪದ ಹಾಲ್ಕಲ್ನ ಜೆಸ್ಟಿನ್ ಜೋಸೆಫ್(29) ಎಂಬವರಿಗೆ ತಿಳಿಯದಂತೆ ಅವರ ಮೊಬೈಲ್ ಹ್ಯಾಕ್ ಮಾಡಿ ಅವರ ಪ್ಲಿಪ್ಕಾರ್ಟ್ ಅಕೌಂಟ್ನಿಂದ 2 ಮೊಬೈಲ್ಗಳನ್ನು ಖರೀದಿ ಮಾಡಿದ್ದು, ಜೆಸ್ಟಿನ್ ಅವರ ಬ್ಯಾಂಕ್ ಖಾತೆಯಿಂದ ಆ್ಯಪ್ ಬಳಸಿಕೊಂಡು 40,156ರೂ. ಲೋನ್ ಮಾಡಿ ಪ್ರತಿ ತಿಂಗಳು 13,000ರೂ.ಗಳಂತೆ 3 ತಿಂಗಳ ಇಎಂಐಗೆ ಕನ್ವರ್ಟ್ ಮಾಡಿದ್ದಾರೆ. ಈ ಮೂಲಕ ಖರೀದಿಸಿದ ಮೊಬೈಲ್ಗಳು ಪಶ್ಚಿಮ ಬಂಗಾಳದ ವಿಳಾಸಕ್ಕೆ ಡೆಲಿವರಿ ಆಗಿದೆ ಎಂದು ದೂರಲಾಗಿದೆ.
ಧಾರ್ಮಿಕ ನಂಬಿಕೆ ನೋವನ್ನು ಗುಣಪಡಿಸುವ ಔಷಧ ಆಗಬೇಕು: ಸ್ಪೀಕರ್ ಯು.ಟಿ. ಖಾದರ್
ಉಡುಪಿ, ಜ.13: ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿ. ಆ ನಂಬಿಕೆ ಹಾಗೂ ವಿಚಾರಗಳು ಇನ್ನೊಬ್ಬರ ದೇಹಕ್ಕೆ ನೋವು, ಗಾಯ ಉಂಟು ಮಾಡುವ ಕತ್ತಿ ಎಂದಿಗೂ ಆಗಬಾರದು. ಅದು ಇನ್ನೊಬ್ಬರ ನೋವು ಮತ್ತು ಗಾಯ ಗುಣಪಡಿಸುವ ಔಷಧ ಆಗಬೇಕು. ಅಂತಹ ಪ್ರೀತಿ ವಿಶ್ವಾಸದ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣಮಠದಲ್ಲಿ ಬುಧವಾರ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ, ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಪ್ರತಿಯೊಬ್ಬರಿಗೂ ಧಾರ್ಮಿಕ ನಂಬಿಕೆಗಳು ಇರಬೇಕು. ಕರಾವಳಿ ಮಣ್ಣು ಸತ್ವ ಸಮೃದ್ಧವಾಗಿದೆ. ಮಠದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಯುವಜನರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡುತ್ತದೆ. ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಜೀವನದ ಕೆಲವು ಅಗತ್ಯತೆ ಗಳನ್ನು ಪಡೆಯುವುದು ದೊಡ್ಡ ಸಾಧನೆಯಲ್ಲ. ಭಗವಂತನ ಚಿಂತನೆ, ಧ್ಯಾನ, ದೇವರ ಅನುಗ್ರಹ ಪಡೆಯಲು ಸಾಧ್ಯ ಮಾಡಿಕೊಳ್ಳುವುದು ಅತಿ ಮುಖ್ಯ. ಇದು ಗರಿಷ್ಠ ಪ್ರಮಾಣದಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಏನಾದರೂ ಒಳ್ಳೆಯದನ್ನು ಸಾಧನೆ ಮಾಡಬೇಕು. ಗೀತೆಯ ಸಂದೇಶವೂ ಇದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಅನುಗ್ರಹಿಸಿದರು. ನಾನಾ ಕ್ಷೇತ್ರದ ಪ್ರಮುಖರಾದ ನಾರಾಯಣ ಬೆಳ್ಳಿರಾಯ, ಭಾರತಿ ಅಜಯ ಪಾಟಂಕರ್, ಸೇತು ಮಾಧವನ್, ನಿತ್ಯಾನಂದ ವಳಕಾಡು, ಪದ್ಮನಾಭ ಆಚಾರ್ಯ, ಸೀತರಾಮ ತೋಳ್ಪಡಿತ್ತಾಯ, ಮಂಜುನಾಥ ಹೆಬ್ಬಾರ್, ನಾರಾಯಣ ಗೋವಿಂದ ಹೆಗಡೆ ಹಾಗೂ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ರಮಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಧಾನಿ ಮೋದಿ ಡಿಗ್ರಿ ಪ್ರಕರಣ | ಪ್ರತ್ಯೇಕ ವಿಚಾರಣೆಗೆ ಆಪ್ ನಾಯಕರ ಅರ್ಜಿ ತಿರಸ್ಕಾರ
ಅಹಮದಾಬಾದ್, ಜ.13: ಗುಜರಾತ್ ವಿಶ್ವವಿದ್ಯಾಲಯ ಮಾನನಷ್ಟ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆಪ್ ನಾಯಕರಾದ ಅರವಿಂದ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಗಳನ್ನು ಗುಜರಾತ್ ಉಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ. ಪ್ರಕರಣವು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತು ಈ ನಾಯಕರ 2023ರ ಹೇಳಿಕೆಗಳಿಗೆ ಸಂಬಂಧಿಸಿದ್ದು, ಹೈಕೋರ್ಟ್ ತೀರ್ಪು ಅವರ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಮಾರ್ಗವನ್ನು ಸುಗಮಗೊಳಿಸಿದೆ. ಕೆಳ ನ್ಯಾಯಾಲಯದ ಆದೇಶಗಳನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಎಂ.ಆರ್. ಮೆಂಗ್ಡೆ, ಪ್ರತ್ಯೇಕ ವಿಚಾರಣೆಗಳನ್ನು ಕೋರಿದ್ದ ಕೇಜ್ರಿವಾಲ್ ಮತ್ತು ಸಿಂಗ್ ಅವರ ಅರ್ಜಿಗಳನ್ನು ತಿರಸ್ಕರಿಸಿದರು. ಕೇಜ್ರಿವಾಲ್ ಮತ್ತು ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಪ್ರಶ್ನಿಸಿ ತೀಕ್ಷ್ಣ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ ಬಳಿಕ, ಏಪ್ರಿಲ್ 2023ರಲ್ಲಿ ಗುಜರಾತ್ ವಿಶ್ವವಿದ್ಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತ್ತು. ಅವರ ಹೇಳಿಕೆಗಳು ಅತ್ಯಂತ ಅವಮಾನಕಾರಿಯಾಗಿದ್ದು, ಸಂಸ್ಥೆಯ ದೀರ್ಘಕಾಲದ ಶೈಕ್ಷಣಿಕ ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿವೆ ಎಂದು ವಿವಿ ಆರೋಪಿಸಿದೆ.
Chennai | ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನ ಮೃತದೇಹ ಪತ್ತೆ
ಕೋಲ್ಕತಾ, ಜ.13: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ವಲಸೆ ಕಾರ್ಮಿಕನೊಬ್ಬರ ಮೃತದೇಹ ಸೋಮವಾರ ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಯಾಗಿದೆ. ಮುರ್ಶಿದಾಬಾದ್ನ ವಲಸೆ ಕಾರ್ಮಿಕನೊಬ್ಬರು ಒಡಿಶಾದಲ್ಲಿ ಹತ್ಯೆಯಾದ ಒಂದು ವಾರದ ಬಳಿಕ ಈ ಘಟನೆ ನಡೆದಿದೆ. ಚೆನ್ನೈನಲ್ಲಿ ಸೋಮವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಲಸೆ ಕಾರ್ಮಿಕನನ್ನು ಮುರ್ಶಿದಾಬಾದ್ ಜಿಲ್ಲೆಯ ಸುತಿ ತಾಲೂಕಿನ ಅಮೈ ಶೇಖ್ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಲುವಾಗಿ ಮುರ್ಶಿದಾಬಾದ್ ಪೊಲೀಸರು ಚೆನ್ನೈನಲ್ಲಿ ಇರುವ ಆತನ ಸಹೋದ್ಯೋಗಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. “ಅಮೈ ಶೇಖ್ ದಿನಗೂಲಿ ಮೇಸ್ತ್ರಿ ಕೆಲಸಕ್ಕಾಗಿ ಚೆನ್ನೈಗೆ ಹೋಗಿದ್ದ. ಅಲ್ಲಿ ಆತನನ್ನು ಯಾರೋ ಹತ್ಯೆ ಮಾಡಿದ್ದಾರೆ” ಎಂದು ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಚೆನ್ನೈನಲ್ಲಿ ಅಮೈ ಜೊತೆಗೆ ಕೆಲಸ ಮಾಡುತ್ತಿದ್ದ ಹಾಗೂ ಮುರ್ಶಿದಾಬಾದ್ ನಿವಾಸಿಗಳಾದ ಸಹೋದ್ಯೋಗಿಗಳು, ಅಮೈ ಮೃತಪಟ್ಟ ವಿಷಯವನ್ನು ಸೋಮವಾರ ರಾತ್ರಿ ಆತನ ಕುಟುಂಬಕ್ಕೆ ತಿಳಿಸಿದ್ದಾರೆ. ಅಮೈ ಪತ್ನಿ, ಮೂವರು ಅಪ್ರಾಪ್ತ ಪುತ್ರರು ಹಾಗೂ ತಾಯಿಗೆ ಏಕೈಕ ಜೀವನಾಧಾರವಾಗಿದ್ದ ಎಂದು ಮೂಲಗಳು ತಿಳಿಸಿವೆ. “ಚೆನ್ನೈನಲ್ಲಿ ಯಾರೋ ಆತನನ್ನು ಕೊಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ನಾವು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದೇವೆ” ಎಂದು ಆತನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
Uttar Pradesh | ತಂದೆಯ ಜೊತೆ ವೀಡಿಯೊ ಕರೆಯಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!
ಲಕ್ನೊ, ಜ.13: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಸೌದಿ ಅರೇಬಿಯಾದಲ್ಲಿರುವ ತನ್ನ ತಂದೆಯೊಂದಿಗೆ ವೀಡಿಯೊ ಕರೆತಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಇನ್ಶಾ ಫಾತಿಮಾ (20) ಎಂದು ಗುರುತಿಸಲಾಗಿದೆ. ಆಕೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯಾಗಿದ್ದಳು. ಅಝಮ್ಗಢ ಜಿಲ್ಲೆಯ ಬಜ್ ಬಹಾದ್ದೂರ್ ಪ್ರದೇಶದ ನಿವಾಸಿಯಾಗಿದ್ದ ಈಕೆ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಳು. ಪೊಲೀಸ್ ಹಾಗೂ ವಿಶ್ವವಿದ್ಯಾನಿಲಯ ಮೂಲಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ನಿರ್ಧಾರವನ್ನು ಇನ್ಶಾ ಮೊದಲು ಅಝಮ್ಗಢದಲ್ಲಿರುವ ತನ್ನ ಸಹೋದರನಿಗೆ ತಿಳಿಸಿದ್ದಳು. ನಂತರ ಸೋಮವಾರ ರಾತ್ರಿ ಸುಮಾರು 7.15ರ ವೇಳೆಗೆ ಸೌದಿ ಅರೇಬಿಯಾದಲ್ಲಿರುವ ತನ್ನ ತಂದೆಗೆ ವೀಡಿಯೊ ಕರೆ ಮಾಡಿ ಮಾತನಾಡುತ್ತಿರುವಾಗಲೇ ಫ್ಯಾನ್ಗೆ ನೇಣು ಬಿಗಿದುಕೊಂಡಳು. ಘಾತಕ್ಕೊಳಗಾದ ಹಾಗೂ ಅಸಹಾಯಕರಾದ ಆಕೆಯ ತಂದೆ, ಆತ್ಮಹತ್ಯೆ ಮಾಡಿಕೊಳ್ಳದಂತೆ ಮಗಳನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಆಕೆ ಅವರ ಮನವಿಗೆ ಪ್ರತಿಕ್ರಿಯಿಸಲಿಲ್ಲ. ಬದಲಾಗಿ ಮೊಬೈಲ್ ಫೋನ್ನ ಕ್ಯಾಮೆರಾವನ್ನು ಆನ್ನಲ್ಲೇ ಇರಿಸಿದ್ದಳು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ತಂದೆ, ಎಎಂಯುನಲ್ಲಿ ಕೆಲಸ ಮಾಡುತ್ತಿರುವ ತನ್ನ ಪರಿಚಯದವರೊಬ್ಬರನ್ನು ಕೂಡಲೇ ಸಂಪರ್ಕಿಸಿ, ತನ್ನ ಪುತ್ರಿಯ ಜೀವ ಉಳಿಸಲು ಹಾಸ್ಟೆಲ್ಗೆ ತೆರಳುವಂತೆ ವಿನಂತಿಸಿದರು. ಎಎಂಯು ಸಿಬ್ಬಂದಿ 10 ನಿಮಿಷಗಳೊಳಗೆ ಹಾಸ್ಟೆಲ್ಗೆ ತಲುಪಿ, ಹಾಸ್ಟೆಲ್ ಆಡಳಿತ ಹಾಗೂ ವಿಶ್ವವಿದ್ಯಾನಿಲಯದ ಶಿಸ್ತು ಮೇಲ್ವಿಚಾರಣಾ ಸಮಿತಿಗೆ ಮಾಹಿತಿ ನೀಡಿದರು. ಸಿವಿಲ್ ಲೈನ್ಸ್ ಪೊಲೀಸರಿಗೆ ಕೂಡ ಮಾಹಿತಿ ನೀಡಲಾಯಿತು. ಪೊಲೀಸರು ಕೊಠಡಿಯ ಬಾಗಿಲನ್ನು ಬಲವಂತವಾಗಿ ಒಡೆದರು. ಕೊಠಡಿಯೊಳಗೆ ಸೀಲಿಂಗ್ ಫ್ಯಾನ್ಗೆ ಇನ್ಶಾ ದೇಹ ನೇತಾಡುತ್ತಿರುವುದನ್ನು ಕಂಡುಬಂದಿತು. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಜವಾಹರ್ಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮೂರು ಗಂಟೆಗಳ ಬಳಿಕ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಭೂ ದಾಳಿಗೆ ನಾವು ರೆಡಿ: ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥರ ಎಚ್ಚರಿಕೆ
ಹೊಸದಿಲ್ಲಿ, ಜ.13: ‘ಆಪರೇಷನ್ ಸಿಂಧೂರ’ ಈಗಲೂ ಮುಂದುವರಿದಿದೆ ಎಂದು ಮಂಗಳವಾರ ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರು, ಭವಿಷ್ಯದಲ್ಲಿ ಯಾವುದೇ ದುಸ್ಸಾಹಸ ನಡೆದರೆ ಅದನ್ನು ದೃಢವಾಗಿ ಎದುರಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ‘ನಿಯಂತ್ರಣ ರೇಖೆಯಾಚೆ (ಎಲ್ಒಸಿ) ಕನಿಷ್ಠ ಆರು ಮತ್ತು ಅಂತರರಾಷ್ಟ್ರೀಯ ಗಡಿಯಾಚೆ ಎರಡು ಭಯೋತ್ಪಾದಕ ಶಿಬಿರಗಳು ಈಗಲೂ ಸಕ್ರಿಯವಾಗಿವೆ. ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ನಾವು ತಕ್ಕ ಉತ್ತರ ನೀಡುತ್ತೇವೆ’ ಎಂದು ಅವರು ಪಾಕಿಸ್ತಾನ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ರವಾನಿಸಿದರು. ಸೇನಾ ದಿನದ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಉನ್ನತ ಮಟ್ಟದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಅತ್ಯಂತ ನಿಖರವಾಗಿ ರೂಪಿಸಿ ಕಾರ್ಯಗತಗೊಳಿಸಲಾಗಿತ್ತು ಎಂದರು. ‘ಆಪರೇಷನ್ ಸಿಂಧೂರ’ವನ್ನು ಜಂಟಿ ಕಾರ್ಯಾಚರಣೆಗಳಲ್ಲೊಂದು ಮೈಲಿಗಲ್ಲು ಎಂದು ಬಣ್ಣಿಸಿದ ಅವರು, ಸ್ಪಷ್ಟ ರಾಜಕೀಯ ನಿರ್ದೇಶನ ಮತ್ತು ಪ್ರತಿಕ್ರಿಯಿಸಲು ಸಂಪೂರ್ಣ ಸ್ವಾತಂತ್ರ್ಯದಡಿ ಮೂರೂ ಸಶಸ್ತ್ರ ಪಡೆಗಳ ಸಮನ್ವಯಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.
ಭಯೋತ್ಪಾದಕರೊಂದಿಗೆ ನಂಟು | ಜಮ್ಮು–ಕಾಶ್ಮೀರದ ಐವರು ಸರಕಾರಿ ನೌಕರರ ವಜಾ
ಶ್ರೀನಗರ, ಜ.13: ಜಮ್ಮು–ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ಸಂಘಟನೆಗಳೊಂದಿಗೆ ಶಂಕಿತ ನಂಟು ಹೊಂದಿದ್ದ ಆರೋಪದ ಮೇಲೆ ಮಂಗಳವಾರ ಇನ್ನೂ ಐವರು ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಸಿನ್ಹಾ ನೇತೃತ್ವದ ಜಮ್ಮು–ಕಾಶ್ಮೀರ ಆಡಳಿತವು ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ 2020ರಿಂದ ಇದುವರೆಗೆ 85 ಸರಕಾರಿ ನೌಕರರನ್ನು ವಜಾಗೊಳಿಸಿದೆ. ಮಂಗಳವಾರ ವಜಾಗೊಂಡವರಲ್ಲಿ ಶಿಕ್ಷಕ ಮುಹಮ್ಮದ್ ಇಷ್ಫಾಕ್, ಪ್ರಯೋಗಾಲಯ ತಂತ್ರಜ್ಞ ತಾರಿಕ್ ಅಹ್ಮದ್ ಶಾ, ಸಹಾಯಕ ಲೈನ್ಮ್ಯಾನ್ ಬಶೀರ್ ಅಹ್ಮದ್ ಮಿರ್, ಅರಣ್ಯ ಇಲಾಖೆಯ ಫಾರೂಕ್ ಅಹ್ಮದ್ ಭಟ್ ಮತ್ತು ಆರೋಗ್ಯ ಇಲಾಖೆಯ ಚಾಲಕ ಮುಹಮ್ಮದ್ ಯೂಸುಫ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಫಾಕ್ ಮತ್ತು ಮಿರ್ ಲಷ್ಕರ್-ಎ-ತೈಬಾ (ಎಲ್ಇಟಿ) ಹಾಗೂ ಶಾ, ಯೂಸುಫ್ ಮತ್ತು ಭಟ್ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎಂದು ಅವರು ಹೇಳಿದ್ದಾರೆ.
ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆ ನಾಪತ್ತೆ
ಉಡುಪಿ, ಜ.13: ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ, ಜನವರಿ 9ರಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ವೇತ (21) ಎಂಬ ಮಹಿಳೆ ಅದೇ ದಿನ ಅಪರಾಹ್ನ 12:15ರ ಬಳಿಕ ನಾಪತ್ತೆಯಾಗಿದ್ದಾರೆ. 5 ಅಡಿ 4 ಇಂಚು ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಸಪೂರ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡು ತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಜ.17, 18ರಂದು ಪರ್ಯಾಯ ಮಹೋತ್ಸವ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
ಉಡುಪಿ, ಜ.13: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಜನವರಿ 17ರ ಅಪರಾಹ್ನ 2 ಗಂಟೆಯಿಂದ ಜ.18ರ ಬೆಳಗ್ಗೆ 7 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ ಹಾಗೂ ಪಾರ್ಕಿಂಗ್ ನಿಷೇಧದ ಬಗ್ಗೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಈ ಕೆಳಗಿನಂತೆ ಅಧಿಸೂಚನೆ ಹೊರಡಿಸಿದ್ದಾರೆ. ಮಂಗಳೂರಿಂದ ಉಡುಪಿ, ಮಣಿಪಾಲಕ್ಕೆ ಬರುವ ವಾಹನಗಳು: ಜ.17 ರಂದು ಅಪರಾಹ್ನ 2 ರಿಂದ ಜ.18ರ ಬೆಳಗ್ಗೆ 7 ರವರೆಗೆ ನೇರವಾಗಿ ರಾ.ಹೆ 66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ನಂತರ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಮುಂದುವರಿದು ಮಣಿಪಾಲಕ್ಕೆ ಹೋಗಬೇಕು. ಉಡುಪಿ ನಗರಕ್ಕೆ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7 ಗಂಟೆ ವರೆಗೆ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು ಕಡೆಗೆ ರಾ.ಹೆ 66ರಲ್ಲಿ ಅಂಬಲಪಾಡಿ, ಬಲಾಯಿಪಾದೆ ಮೂಲಕ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ನಿಂದ ಮುಂದಕ್ಕೆ ಸಾಗಿ ಅಂಬಾಗಿಲು ಮೂಲಕ ಪೆರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು. ಕುಂದಾಪುರದಿಂದ ಉಡುಪಿ, ಮಣಿಪಾಲ ಕಡೆಗೆ: ಜ. 17ರಂದು ಸಂಜೆ 7 ಗಂಟೆಯ ತನಕ ಕುಂದಾಪುರ-ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಾಗಿಲು ಮೂಲಕ ರಾ.ಹೆ.66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7 ಗಂಟೆಯಿಂದ ಬೆಳಗ್ಗೆ 7ರವರೆಗೆ ಕುಂದಾಪುರದಿಂದ ಉಡುಪಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಸಂಜೆ 7:00ರಿಂದ ಬೆಳಗ್ಗೆ 7:00ರವರೆಗೆ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆ ಯಾಗಿದ್ದು, ಕರಾವಳಿ ಜಂಕ್ಷನ್ನಲ್ಲಿ ಪುಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಮೂಲಕ ಕುಂದಾಪುರ ಕಡೆಗೆ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು ಮೂಲಕ ಪೆರಂಪಳ್ಳಿ ರಸ್ತೆಯಲ್ಲಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು. ಉಡುಪಿಗೆ ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗೆ ಹೋಗಿ ಬರುವ ವಾಹನಗಳು: ಜ.17ರ ಸಂಜೆ 7 ಗಂಟೆಯ ತನಕ ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವ ವಾಹನಗಳು ಚಿಟ್ಪಾಡಿ, ಬೀಡಿನಗುಡ್ಡೆ, ಶಾರದ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7:00ರಿಂದ ಬೆಳಗ್ಗೆ 7:00ರವರೆಗೆ ಎಲ್ಲಾ ವಾಹನ ಗಳು ಪ್ರವೇಶಿಸುವುದನ್ನು ನಿಷೇಧಿಸಲಾ ಗಿದೆ. ಸಂಜೆ 7:00ರಿಂದ ಬೆಳಗ್ಗೆ 7:00 ರವರೆಗೆ ಬೀಡಿನಗುಡ್ಡೆ, ಚಿಟ್ಪಾಡಿ ಮುಖಾಂತರ ಮಿಷನ್ ಕಂಪೌಂಡ್ ರಸ್ತೆ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ವಾಪಾಸು ಹಿಂದಿರುಗಬೇಕು. ಕಾರ್ಕಳ-ಮಣಿಪಾಲದಿಂದ ಉಡುಪಿಗೆ: ಜ.17ರಂದು ಸಂಜೆ 7:00ರ ವರೆಗೆ ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7:00ರಿಂದ ಬೆಳಗ್ಗೆ 7:00ರ ತನಕ ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಕಾಯಿನ್ ಸರ್ಕಲ್, ಪೆರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್ಗೆ ಆಗಮಿಸಬೇಕು. ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂ ದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು. ಮಂಗಳೂರಿನಿಂದ ಮುಂಬೈಗೆ-ಬೆಂಗಳೂರಿಗೆ: ಜ.17ರಂದು ಸಂಜೆ ಮಂಗಳೂರಿನಿಂದ ಮುಂಬೈ, ಹುಬ್ಬಳ್ಳಿ ಕಡೆಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆಎಎಸ್ಸಾರ್ಟಿಸಿ ಬಸ್ಸುಗಳು ಪ್ರಯಾಣಿಕರನ್ನು ಬಲೈಪಾದೆ ಬಳಿ ಹತ್ತಿಸಿಕೊಂಡು ಹೋಗಬೇಕು. ಬೆಂಗಳೂರು ಕಡೆಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಪ್ರಯಾಣಿಕರನ್ನು ಮಣಿಪಾಲ ಇನ್ ಬಳಿ ಹತ್ತಿಸಿಕೊಂಡು ಹೋಗಬೇಕು. ಜ.17ರಂದು ಸಂಜೆ 7 ಗಂಟೆಯ ತನಕ ಮಂಗಳೂರಿನಿಂದ ಮುಂಬೈ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಬಲೈಪಾದೆ, ಅಂಬಲಪಾಡಿ, ಕರಾವಳಿ ಜಂಕ್ಷನ್, ಬನ್ನಂಜೆ, ಸಿಟಿ ಬಸ್ಸುನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ಸು ನಿಲ್ಯಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಅದೇ ಮಾರ್ಗವಾಗಿ ಪ್ರಯಾಣವನ್ನು ಮುಂದುವರಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶವನ್ನು ನಿಷೇಧಿಸಿದೆ. ಸಂಜೆ 7 ಗಂಟೆುಂದ ಬೆಳಗ್ಗೆ 7ರತನಕ ಮುಂಬೈ / ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಕರಾವಳಿ ಜಂಕ್ಷನ್ನಲ್ಲೇ ನಿಂತು ಅಲ್ಲಿಯೇ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮುಂಬೈ, ಬೆಂಗಳೂರಿಗೆ ಪ್ರಯಾಣ ಬೆಳೆಸೂಏಕು. ಮಲ್ಪೆ ಕಡೆಯಿಂದ ಉಡುಪಿಗೆ: ಜ.17ರಂದು ಸಂಜೆ 6 ಗಂಟೆಯ ತನಕ ಮಲ್ಪೆಯಿಂದ ಬರುವ ಎಲ್ಲಾ ಬಸ್ಸುಗಳು, ಆದಿಉಡುಪಿ, ಕರಾವಳಿ ಜಂಕ್ಷನ್, ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮಲ್ಪೆ ಕಡೆಯಿಂದ ಬರುವ ಎಲ್ಲಾ ವಾಹನಗಳು ಆದಿ ಉಡುಪಿ ಜಂಕ್ಷನ್ ತನಕ ಬಂದು ನಂತರ ವಾಪಾಸು ಅದೇ ಮಾರ್ಗದಲ್ಲಿ ಮಲ್ಪೆ ಕಡೆಗೆ ಹಿಂದಿರುಗಬೇಕು. ಮಂಗಳೂರು, ಕುಂದಾಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮೂಲಕ ಹಾದು ಹೋಗಬೇಕು. ವಾಹನ ನಿಲುಗಡೆ ನಿಷೇಧ ಮಾಡಿರುವ ಸ್ಥಳಗಳು ಜ.17ರ ಅಪರಾಹ್ನ 2:00ರಿಂದ ಜ.18ರ ಬೆಳಗ್ಗೆ 7:00ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. *ಅಂಬಲಪಾಡಿಯಿಂದ ಜೋಡುಕಟ್ಟೆಯವರೆಗೆ ಎರಡೂ ಬದಿಯಲ್ಲಿ. ಬ್ರಹ್ಮಗಿರಿಯಿಂದ ಬನ್ನಂಜೆವರೆಗೆ, ಲಯನ್ ಸರ್ಕಲ್ನಿಂದ ಮಿಷನ್ ಕಂಪೌಂಡ್ವರೆಗೆ. ಬೇತಲ್ ಚರ್ಚ್ನಿಂದ ಸಿಂಡಿಕೇಟ್ ಸರ್ಕಲ್ವರೆಗೆ, ಸಿಂಡಿಕೇಟ್ ಸರ್ಕಲ್ನಿಂದ ತ್ರಿವೇಣಿ ಜಂಕ್ಷನ್ ತನಕ. *ಹನುಮಾನ್ ಜಂಕ್ಷನ್ನಿಂದ (ತ್ರಿವೇಣಿ ಜಂಕ್ಷನ್)ನಿಂದ ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್ ತನಕ. ಸಿಟಿ ಸೆಂಟರ್ನಿಂದ, ಚಿತ್ರರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆಯ ತನಕ. ಐಡಿಯಲ್ ಜಂಕ್ಷನ್, ಎಲ್.ವಿ.ಟಿ ತೆಂಕಪೇಟೆ ದೇವಸ್ಥಾನ, ಪಿಪಿಸಿ ಕಾಲೇಜ್ ತನಕ. ಐಡಿಯಲ್ ಜಂಕ್ಷನ್ನಿಂದ ಹರಿಶ್ಚಂದ್ರ ಮಾರ್ಗ, ವಿದ್ಯೋದಯ ಶಾಲೆಯವರೆಗೆ. ಕಲ್ಸಂಕದಿಂದ ರಾಜಾಂಗಣ ಪಾಕಿರ್ಂಗ್ ಸ್ಥಳದವರೆಗೆ. ಓಷಿಯನ್ ಪರ್ಲ್ ಹೊಟೇಲ್ನಿಂದ, ಕಟ್ಟೆ ಆಚಾರ್ಯ ಮಾರ್ಗ, ಮಥುರಾ ಹೊಟೇಲ್ವರೆಗೆ. *ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಿದೆ. ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್ಲ್ಯಾಂಡ್ ಹೋಟೇಲ್ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ. ಪುರಪ್ರವೇಶ ಹಾಗೂ ಹೊರಕಾಣಿಕೆಯ ದಿನದಂದು ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಲಿರುವುದರಿಂದ ಸುಗಮ ಸಂಚಾರದ ಬಗ್ಗೆ ತ್ರಿವೇಣಿ ಜಂಕ್ಷನ್ನಿಂದ, ಸಂಸ್ಕೃತ ಕಾಲೇಜ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್ ತನಕ ಜ.10ರಿಂದ 18ರ ಸಂಜೆ ತನಕ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ. ಜ.17ರಂದು ಬೆಳಗ್ಗೆ 9 ಗಂಟೆಯಿಂದ ಜ.18ರ ಬೆಳಗ್ಗೆ 7 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅಮೆರಿಕದಲ್ಲಿ ಪಾಲಕ್ ಪನೀರ್ ಬಿಸಿ ಮಾಡುವಾಗ ನಡೆದ ಗಲಾಟೆ - ಇಬ್ಬರು ಭಾರತೀಯರಿಗೆ ಬಂತು 1.65 ಕೋಟಿ ರೂ. ಪರಿಹಾರ!
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದಾರೆ. ಪಲಕ್ ಪನೀರ್ ವಾಸನೆಗೆ ಸಂಬಂಧಿಸಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಇದರಿಂದಾಗಿ ಇಬ್ಬರು ವಿದ್ಯಾರ್ಥಿಗಳು ಅಮೆರಿಕ ತೊರೆದರು. ವಿಶ್ವವಿದ್ಯಾಲಯವು ೨೦೦,೦೦೦ ಡಾಲರ್ ಪರಿಹಾರ ನೀಡಿದೆ. ಈ ಘಟನೆಗಳು ಭಾರತೀಯ ವಿದ್ಯಾರ್ಥಿಗಳ ಅನುಭವಗಳನ್ನು ಎತ್ತಿ ತೋರಿಸುತ್ತವೆ.
ಆಸ್ಟ್ರೇಲಿಯ ನಾಯಕಿ ಹೀಲಿ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ
ಮೆಲ್ಬರ್ನ್, ಜ.13: ಸ್ವದೇಶದಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿಯ ನಂತರ ಮಾರ್ಚ್ ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸಾ ಹೀಲಿ ಮಂಗಳವಾರ ಘೋಷಿಸಿದ್ದಾರೆ. 35 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಹೀಲಿ 15 ವರ್ಷಗಳ ಕಾಲ ಆಸ್ಟ್ರೇಲಿಯ ಪರ ಆಡಿದ್ದಾರೆ. ಎಲ್ಲ ಮಾದರಿಗಳಲ್ಲಿ ಸುಮಾರು 300 ಪಂದ್ಯಗಳನ್ನು ಆಡಿರುವ ಅವರು 7,000ಕ್ಕೂ ಅಧಿಕ ರನ್ ಗಳಿಸಿ 275 ವಿಕೆಟ್ಗಳನ್ನು ಪಡೆದಿದ್ದಾರೆ. “ಭಾರತ ವಿರುದ್ಧದ ಮುಂಬರುವ ಸರಣಿಯೇ ಆಸ್ಟ್ರೇಲಿಯ ಪರ ನನ್ನ ಕೊನೆಯ ಸರಣಿ. ಇನ್ನೂ ತಂಡದ ಪರ ಆಡಬೇಕೆಂಬ ಉತ್ಸಾಹ ಇದೆ. ನನ್ನ ದೇಶವನ್ನು ಪ್ರತಿನಿಧಿಸಿರುವುದು ಅಪಾರ ಗೌರವ,” ಎಂದು ಹೀಲಿ ಹೇಳಿದ್ದಾರೆ. 2023ರಲ್ಲಿ ಮೆಗ್ ಲ್ಯಾನ್ನಿಂಗ್ ಅವರಿಂದ ಪೂರ್ಣಕಾಲಿಕ ನಾಯಕತ್ವವನ್ನು ವಹಿಸಿಕೊಂಡ ಹೀಲಿ, ಇಂಗ್ಲೆಂಡ್ ವಿರುದ್ಧ ಐತಿಹಾಸಿಕ 16–0 ವೈಟ್ವಾಶ್ಗೆ ನಾಯಕತ್ವ ವಹಿಸಿದ್ದರು. ಆಕ್ರಮಣಕಾರಿ ಬ್ಯಾಟರ್ ಹಾಗೂ ನಿಪುಣ ವಿಕೆಟ್ಕೀಪರ್ ಆಗಿರುವ ಹೀಲಿ ಎಂಟು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೆಬ್ರವರಿ–ಮಾರ್ಚ್ನಲ್ಲಿ ಭಾರತ ವಿರುದ್ಧ ನಡೆಯುವ ಸರಣಿಯಲ್ಲಿ ಮೂರು ಟಿ-20, ಎರಡು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ ನಡೆಯಲಿದ್ದು, ಹೀಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ.
ವಾಹನ ಸವಾರರೇ ಎಚ್ಚರ: ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ಮಾತ್ರವಲ್ಲ; ಎಫ್ಐಆರ್ ದಾಖಲಾಗುತ್ತೆ!
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ದಂಡದ ಜೊತೆಗೆ ಎಫ್ಐಆರ್ ದಾಖಲಿಸುವ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸಿಗ್ನಲ್ ಜಂಪ್, ತಪ್ಪಾದ ದಿಕ್ಕಿನಲ್ಲಿ ಚಾಲನೆ ಮುಂತಾದ ಸಣ್ಣ ಉಲ್ಲಂಘನೆಗಳಿಗೂ ಎಫ್ಐಆರ್ ದಾಖಲಿಸಿ, ವಾಹನಗಳನ್ನು ಸ್ಥಳದಲ್ಲೇ ಜಪ್ತಿ ಮಾಡಲಾಗುತ್ತಿದೆ. ಈ ಕ್ರಮದಿಂದ ಸಂಚಾರ ಶಿಸ್ತು ಸುಧಾರಿಸುವ ನಿರೀಕ್ಷೆಯಿದೆ.
Delhi | ಜಿಮ್ ನತ್ತ ಗುಂಡಿನ ದಾಳಿ, ಹೊಣೆ ಹೊತ್ತುಕೊಂಡ ಬಿಷ್ಣೋಯಿ ಗ್ಯಾಂಗ್
ಹೊಸದಿಲ್ಲಿ, ಜ.13: ಅಪರಿಚಿತ ದುಷ್ಕರ್ಮಿಗಳು ಜಿಮ್ವೊಂದರತ್ತ ಗುಂಡುಗಳನ್ನು ಹಾರಿಸಿದ ಘಟನೆ ದಿಲ್ಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಪಶ್ಚಿಮ ವಿಹಾರದ ಔಟರ್ ರಿಂಗ್ ರೋಡ್ನಲ್ಲಿರುವ ‘ಆರ್ಕೆ ಫಿಟ್ನೆಸ್’ ಜಿಮ್ ನ ಹೊರಗೆ ಗಾಳಿಯಲ್ಲಿ ಎರಡು ಸುತ್ತು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ಗುಂಡು ಹಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೋಲಿಸರು ಹೇಳಿದರು. ಈ ನಡುವೆ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ದಾಳಿಯ ಹೊಣೆಯನ್ನು ವಹಿಸಿಕೊಂಡಿದ್ದು, ಅದನ್ನು ದಿಲ್ಲಿ ಪೋಲಿಸರು ಪರಿಶೀಲಿಸುತ್ತಿದ್ದಾರೆ. ‘ನಾನು ಮತ್ತು ಅನಿಲ್ ಪಂಡಿತ್ (ಅಮೆರಿಕಾ) ಆರ್ಕೆ ಜಿಮ್ ಮೇಲೆ ದಾಳಿಯನ್ನು ರೂಪಿಸಿದ್ದೆವು. ನಾನು ಜಿಮ್ ಮಾಲಿಕ ರೋಹಿತ್ ಖತ್ರಿಗೆ ಕರೆ ಮಾಡಿದ್ದೆ, ಆದರೆ ಆತ ಅದನ್ನು ನಿರ್ಲಕ್ಷಿಸಿದ್ದ. ಮುಂದಿನ ಸಲ ಕರೆ ಸ್ವೀಕರಿಸದಿದ್ದರೆ ಆತ ಈ ಭೂಮಿಯ ಮೇಲೆ ಇರುವುದಿಲ್ಲ. ಲಾರೆನ್ಸ್ ಭಾಯಿಯ ಯಾವುದೇ ವೈರಿಯು ತನ್ನ ಜೀವಕ್ಕೂ ವೈರಿಯಾಗಿರುತ್ತಾನೆ. ನಾನು ನನ್ನ ಭಾಯಿಗಾಗಿ ಬದುಕಿದ್ದೇನೆ. ನಾನು ಮಾತುಗಳ ಬದಲು ಕೃತ್ಯಗಳ ಮೂಲಕ ತೋರಿಸುವುದರಲ್ಲಿ ನಂಬಿಕೆಯಿಟ್ಟಿದ್ದೇನೆ’ ಎಂದು ರಣ್ ದೀಪ್ ಮಲ್ಲಿಕ್ ಎಂದು ಹೇಳಿಕೊಂಡಿರುವ ವ್ಯಕ್ತಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾನೆ.
Iran ಅಶಾಂತಿ: ಬಾಸ್ಮತಿ ಅಕ್ಕಿ ರಫ್ತಿಗೆ ಹೊಡೆತ; ಬೆಲೆಗಳಲ್ಲಿ ತೀವ್ರ ಕುಸಿತ
ಹೊಸದಿಲ್ಲಿ, ಜ.13: ಇರಾನಿನಲ್ಲಿ ಉಂಟಾಗಿರುವ ನಾಗರಿಕ ಅಶಾಂತಿ, ಆ ದೇಶಕ್ಕೆ ಭಾರತದಿಂದ ನಡೆಯುವ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಪರಿಣಾಮ ಬೀರುತ್ತಿದ್ದು, ದೇಶೀಯ ಬೆಲೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ರಫ್ತುದಾರರು ಪಾವತಿ ವಿಳಂಬಗಳು ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ (ಐಆರ್ಇಎಫ್) ಮಂಗಳವಾರ ತಿಳಿಸಿದೆ. ಇರಾನಿಗೆ ರಫ್ತು ಒಪ್ಪಂದಗಳಿಗೆ ಸಂಬಂಧಿಸಿದ ಅಪಾಯಗಳನ್ನು ಮರುಮೌಲ್ಯಮಾಪನ ಮಾಡುವಂತೆ ಹಾಗೂ ಸುರಕ್ಷಿತ ಪಾವತಿ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಐಆರ್ಇಎಫ್ ರಫ್ತುದಾರರಿಗೆ ಆಗ್ರಹಿಸಿದೆ. ಜೊತೆಗೆ ಇರಾನ್ ಮಾರುಕಟ್ಟೆಗಾಗಿ ಅತಿಯಾದ ದಾಸ್ತಾನು ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಭಾರತವು ವಿತ್ತವರ್ಷ 2025–26ರ ಎಪ್ರಿಲ್ನಿಂದ ನವೆಂಬರ್ವರೆಗೆ ಇರಾನಿಗೆ 468.10 ಮಿ.ಡಾ. ಮೌಲ್ಯದ 5.99 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದೆ.
ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ| ನೂತನ ಅಧ್ಯಕ್ಷರಾಗಿ ಡಾ. ರಿಝ್ವಾನ್ ಕಾರ್ಕಳ ಆಯ್ಕೆ
ಉಡುಪಿ, ಜ.13: ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿ ಅಧ್ಯಕ್ಷ ಮುಹಮ್ಮದ್ ಸಲೀಂ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಾಲಿನ ಅಧ್ಯಕ್ಷರಾಗಿ ಡಾ.ರಿಝ್ವಾನ್ ಕಾರ್ಕಳ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹುಸೈನ್ ಹೈಕಾಡಿ, ಸಲೀಂ ಬಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಮೌಲಾನಾ ಝಮೀರ್ ಅಹಮದ್ ರಶಾದಿ, ಜೊತೆ ಕಾರ್ಯದರ್ಶಿಯಾಗಿ ಶೇಖ್ ಇಸಾಕ್ ಅಡ್ವೊಕೇಟ್, ಕೋಶಾಧಿಕಾರಿಯಾಗಿ ಫೀರ್ ಸಾಹೇಬ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಸಮಿ ಬೈಂದೂರು ಆಯ್ಕೆಯಾದರು.
ʻಸಹಾಯʼ ದಾರಿ ಮಧ್ಯ ಇದೆ, ಪ್ರತಿಭಟನೆ ಮುಂದುರೆಸಿ; ಇರಾನಿಯನ್ನರಿಗೆ ಡೊನಾಲ್ಡ್ ಟ್ರಂಪ್ ಬಿಗ್ ಮೆಸೆಜ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಸಾವಿ ರ ನ್ಯೂನ್ಯತೆಗಳಿವೆ. ಆದರೆ ತಮಗೆ ಸರಿ ಎನಿಸಿದ್ದನ್ನು ಮಾಡುವ ಅವರ ಎದೆಗಾರಿಕೆಯನ್ನು ಎಲ್ಲರೂ ಮೆಚ್ಚಲೇಬೇಕು. ಇರಾನ್ ಪ್ರತಿಭಟನೆಗಳಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿರುವ ಡೊನಾಲ್ಡ್ ಟ್ರಂಪ್, ಪ್ರತಿಭಟನೆಯನ್ನು ಮುಂದುವರೆಸುವಂತೆ ಇರಾನಿಯನ್ನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಅಮೆರಿಕದ ಬೆಂಬಲ ಮಾರ್ಗ ಮಧ್ಯದಲ್ಲಿದ್ದು, ಖಮೇನಿ ಆಡಳಿತದ ಕೊರಳುಪಟ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಟ್ಟುಕೊಳ್ಳುವಂತೆ ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ಟ್ರಂಪ್ ಅವರ ಈ ಸಂದೇಶ ಇರಾನ್ನಲ್ಲಿ ಮಿಂಚಿನ ಸಂಚಾರ ನಡೆಸಿದೆ.
ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರಕಾರ ಕೊಂದಿದೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಕೇಂದ್ರ ಬಿಜೆಪಿ ಸರಕಾರ ಕೊಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು ಎಂದು ಅವರು ಹೇಳಿದರು. ಹೊಸ ಕಾಯ್ದೆ ಜಾರಿ ಅಸಾಧ್ಯ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಇದೆಲ್ಲದಕ್ಕೂ ಕುತ್ತು ಬಂದಿದೆ. ಈ ಹೊಸ ಕಾಯ್ದೆಯಲ್ಲಿ ಗ್ರಾಮಗಳಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಪಂಚಾಯಿತಿಗಳು ತೀರ್ಮಾನಿಸಲು ಆಗುವುದಿಲ್ಲ. ದಿಲ್ಲಿಯಲ್ಲಿ ಕೂತಿರುವ ಕೇಂದ್ರ ಸರಕಾರ ತೀರ್ಮಾನ ಮಾಡಲಿದೆ ಎಂದು ಅವರು ಹೇಳಿದರು. ಇನ್ನು ಈ ಯೋಜನೆಯಲ್ಲಿದ್ದ ಶೇ.90:10 ಅನುಪಾತದ ಅನುದಾನವನ್ನು, ಶೇ.60:40 ಅನುಪಾತಕ್ಕೆ ಬದಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುದಾನ ಹಂಚಿಕೊಳ್ಳಬೇಕಾಗಿದೆ. ಇದರಿಂದ ರಾಜ್ಯ ಸರಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕೇಂದ್ರ ಸರಕಾರ ಎಷ್ಟೇ ಪ್ರಯೋಗ ಮಾಡಿದರೂ ಈ ನೂತನ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಜಾರಿಗೆ ತರಲು ಸಾಧ್ಯವಿಲ್ಲ. ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಅವರು ತಿಳಿಸಿದರು. ಹೋರಾಟಕ್ಕೆ ಆಸಕ್ತಿ ತೋರದವರನ್ನು ಕಿತ್ತು ಹಾಕಲಾಗುವುದು: ಎಐಸಿಸಿಯವರು ಕಾರ್ಯಕಾರಿ ಸಮಿತಿ ಸಭೆ ಮಾಡಿ, ಈ ವಿಚಾರವಾಗಿ ಪಕ್ಷದ ವತಿಯಿಂದ ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ತಾಲೂಕು ಮಟ್ಟಗಳಲ್ಲಿ ನೀವುಗಳು ಮಾಧ್ಯಮಗೋಷ್ಠಿ ಮಾಡಬೇಕು. ಪರಿಷತ್ ಸದಸ್ಯರು, ಸಂಸದರನ್ನು ಶಾಸಕರಿಲ್ಲದ ಕ್ಷೇತ್ರಗಳಿಗೆ ವೀಕ್ಷಕರಾಗಿ ನೇಮಕ ಮಾಡಿದ್ದು, ಎಲ್ಲರೂ ಮಾಧ್ಯಮಗೋಷ್ಠಿ ಮಾಡಬೇಕು ಎಂದು ಅವರು ಸೂಚಿಸಿದರು. ಎಐಸಿಸಿ ನಿರ್ದೇಶನ ನೀಡಿರುವ ಎಲ್ಲ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಇದನ್ನು ಪಾಲಿಸದ ವೀಕ್ಷಕರು, ಪದಾಧಿಕಾರಿಗಳ ಬಗ್ಗೆ ವರದಿ ನೀಡಿ ಎಂದು ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದ್ದು, ಇದರಲ್ಲಿ ಆಸಕ್ತಿ ತೋರದವರನ್ನು ಕಿತ್ತುಹಾಕಲಾಗುವುದು. ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಹೊರ ರಾಜ್ಯದಿಂದ ತಂಡ ಆಗಮಿಸುತ್ತಿದೆ. ಈ ಸಮಿತಿ ಅನೇಕ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಿದೆ ಎಂದು ಅವರು ನುಡಿದರು. ಸಚಿವ ಸಂಪುಟದಲ್ಲಿ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ: ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ ಮಾಡಲಾಗುವುದು. ಈ ಅಧಿವೇಶನದಲ್ಲಿ ಮನರೇಗಾ ಯೋಜನೆ ಮರುಜಾರಿಯ ಮಹತ್ವ ಹಾಗೂ ಕೇಂದ್ರ ಸರಕಾರದ ನೂತನ ಕಾಯ್ದೆಯ ಅನಾನುಕೂಲಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು. ನಂತರ ಸರಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಜ.26ರಿಂದ ಫೆ.7ರವರೆಗೆ ಎಲ್ಲ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5-10 ಕಿ.ಮೀ ಪಾದಯಾತ್ರೆ ಮಾಡಬೇಕು. ಇದರಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು, ನಮ್ಮ ನಾಯಕರು, ಶಾಸಕರು ಹಾಗೂ ಸಚಿವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕು. ನಂತರ ಮನರೇಗಾ ಮರುಜಾರಿಗೆ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಬೇಕು. ಪ್ರಮುಖವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಬಂದೆ ಬರುತ್ತೇನೆ. ಎಲ್ಲಿ ನಮ್ಮ ಶಾಸಕರಿಲ್ಲವೊ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು. ಪಕ್ಷದ ಕಚೇರಿ ಕಟ್ಟಣ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಿ: ನೂತನ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದಿನಾಂಕ ನೀಡಿದ ಬಳಿಕ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ. ಅದೇ ದಿನ ನಿಮ್ಮ ಕ್ಷೇತ್ರಗಳಲ್ಲೂ ಶಂಕುಸ್ಥಾಪನೆ ಮಾಡಬೇಕು. ವರ್ಚುವಲ್ ಮೂಲಕ ಬೆಂಗಳೂರಿನ ಕಾರ್ಯಕ್ರಮದ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ಅವರು ತಿಳಿಸಿದರು. ಈ ಹಿಂದೆ ಪಕ್ಷದ ಆಸ್ತಿಯಾಗಿ 19 ನಿವೇಶನ, 45 ಸ್ವಂತ ಕಟ್ಟಡ ಇದ್ದವು. ನಾನು ಇದರ ಜವಾಬ್ದಾರಿ ಪಡೆದ ನಂತರ 64 ನಿವೇಶನಗಳ ನೋಂದಣಿಯಾಗಿದೆ. ಇನ್ನು 58 ಆಸ್ತಿಗಳ ನೋಂದಣಿ ಕಾರ್ಯ ಪ್ರಕ್ರಿಯೆ ಹಂತದಲ್ಲಿದೆ. ಒಟ್ಟು 122 ಆಸ್ತಿಗಳಾಗಿದ್ದು, 186 ಆಸ್ತಿಗಳನ್ನು ಮಾಡಬೇಕಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು. ಕೆಲವರು ತಮ್ಮ ಸ್ವಂತ ಆಸ್ತಿಯನ್ನು ಪಕ್ಷಕ್ಕೆ ಬರೆದುಕೊಟ್ಟಿದ್ದಾರೆ. ಕೋನರೆಡ್ಡಿ, ಶರಣಪ್ರಕಾಶ್ ಪಾಟೀಲ್, ಸುಧಾಕರ್, ಉದಯ್, ಸಿರಗುಪ್ಪ ನಾಗರಾಜ್ ಸೇರಿದಂತೆ 22 ಮಂದಿ ತಮ್ಮ ಆಸ್ತಿಯನ್ನು ಪಕ್ಷಕ್ಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಾವುದಾದರೂ ಜಾಗ ಇದ್ದರೆ ಹೇಳಿ, ಬಿಡಿಎ ಅಥವಾ ಪಾಲಿಕೆಯಿಂದ ಮಂಜೂರು ಮಾಡಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಸಕಲ ಸರಕಾರಿ ಗೌರವಗಳೊಂದಿಗೆ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಂತ್ಯಕ್ರಿಯೆ
ಬೆಂಗಳೂರು: ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು) ಮುಖ್ಯಸ್ಥ, ಅಮೀರೆ ಶರೀಅತ್ ಕರ್ನಾಟಕ ಶೇಕುಲ್ ಹದೀಸ್ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ(75)ರವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮಂಗಳವಾರ ದಾರುಲ್ ಉಲೂಮ್ ಸಬೀಲುರ್ರಶಾದ್ ಆವರಣದಲ್ಲಿ ಸಗೀರ್ ಅಹ್ಮದ್ ಖಾನ್ ರವರ ಜನಾಝ ನಮಾಝ್ ನೇತೃತ್ವವನ್ನು ಅವರ ಹಿರಿಯ ಪುತ್ರ ಖಾರಿ ಮೌಲಾನಾ ಝುಬೇರ್ ಅಹ್ಮದ್ ಖಾನ್ ರಶಾದಿ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸಿ ಅಮೀರೆ ಶರೀಅತ್ ಅವರ ಅಂತಿಮ ದರ್ಶನ ಪಡೆದರು. ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಝಮೀರ್ ಅಹ್ಮದ್ ಖಾನ್, ಕೆ.ಜೆ. ಜಾರ್ಜ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಂತಿಮ ನಮನ ಸಲ್ಲಿಸಿದರು. ಜನಾಝ ನಮಾಝ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರಿಂದ ಯಾವುದೆ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಿನ್ನೆಯಿಂದ ಸಬೀಲುರ್ರಶಾದ್ ಆವರಣದಲ್ಲಿ ಅಂತ್ಯಕ್ರಿಯೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೇ, ನಾಗವಾರ ಮುಖ್ಯರಸ್ತೆ, ಎಚ್.ಬಿ.ಆರ್.ಲೇಔಟ್, ಗೋವಿಂದಪುರ, ಟ್ಯಾನರಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಶಾಸಕ ರಿಝ್ವಾನ್ ಅರ್ಶದ್, ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ವೈ.ಸಯೀದ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಅನೇಕ ಗಣ್ಯರು ಜನಾಝ ನಮಾಝ್ನಲ್ಲಿ ಪಾಲ್ಗೊಂಡಿದ್ದರು. ‘ಮೌಲಾನಾ ಸಗೀರ್ ಅಹ್ಮದ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದಾಗ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಸಂಜ್ಞೆ ಮೂಲಕ ಅವರು ಮಾತನಾಡುತ್ತಿದ್ದರು. ಅವರ ಅಗಲಿಕೆ ತುಂಬಾ ದುಃಖದ ವಿಚಾರ. 10 ವರ್ಷವಿದ್ದಾಗ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ದಾಖಲಾದ ಅವರು, 65 ವರ್ಷಗಳ ಕಾಲ ಈ ಸಂಸ್ಥೆಯ ಜೊತೆ ಇದ್ದರು. ತುಂಬಾ ಸರಳ ವ್ಯಕ್ತಿತ್ವ, ಮಿತ ಭಾಷಿಕರು. ಸರ್ವ ಧರ್ಮೀಯರಿಂದ ಗೌರವಿಸಲ್ಪಡುತ್ತಿದ್ದ ಮಾರ್ಗದರ್ಶಕರನ್ನು ಸಮುದಾಯ ಕಳೆದುಕೊಂಡಿದೆ. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಇಲ್ಲಿ ನೆರೆದಿರುವ ಜನಸಾಗರವೇ ಸಾಕ್ಷಿ’ -ಝಮೀರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ‘ದಾರುಲ್ ಉಲೂಮ್ ಸಬೀಲುರ್ರಶಾದ್ ನಾನು ಪ್ರತಿನಿಧಿಸುವ ಸರ್ವಜ್ಞ ನಗರ ಕ್ಷೇತ್ರದಲ್ಲಿದೆ. ಗುರುಗಳಾದ ಮೌಲಾನಾ ಸಗೀರ್ ಅಹ್ಮದ್ ಸಮಾಜಕ್ಕೆ ಮಾದರಿಯಾಗಿದ್ದರು. ನನಗೂ ಹಲವಾರು ಬಾರಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿತ್ತು. ಪ್ರತಿಯೊಂದು ಚುನಾವಣೆ ಸಂದರ್ಭದಲ್ಲೂ ನಾನು ಇಲ್ಲಿನ ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದೆ. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವು ನಡೆಯೋಣ. ಜಾತ್ಯತೀತ ತತ್ವದಲ್ಲಿ ನಂಬಿಕೆಯಿಟ್ಟಿರುವವರಿಗೆ ಇದೊಂದು ಭಾವೈಕ್ಯತೆಯ ಕೇಂದ್ರವಾಗಿದೆ. ಇಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣವಿದೆ’ -ಕೆ.ಜೆ.ಜಾರ್ಜ್, ಇಂಧನ ಸಚಿವ ‘ನನ್ನ ಹಾಗೂ ಮೌಲಾನಾ ಸಗೀರ್ ಅಹ್ಮದ್ ಖಾನ್ ಅವರ ಸಂಬಂಧ ಸುಮಾರು 25 ವರ್ಷದಿಂದ ಹಳೆಯದು. 2001ರಲ್ಲಿ ನಾನು ಮೊದಲ ಬಾರಿಗೆ ಪವಿತ್ರ ಹಜ್ ಯಾತ್ರೆ ಕೈಗೊಂಡಾಗ ಅವರೊಂದಿಗೆ ಹೋಗಿದ್ದೆ. ತುಂಬಾ ಸರಳ, ಮೃದು ಸ್ವಭಾವದ ವ್ಯಕ್ತಿ. ಅವರ ನಿಧನದಿಂದಾಗಿ ಸಮಾಜವು ಒಬ್ಬ ಒಳ್ಳೆಯ ಮಾರ್ಗದರ್ಶಕನನ್ನು ಕಳೆದುಕೊಂಡಿದೆ’ -ತನ್ವೀರ್ ಸೇಠ್, ಶಾಸಕ
ನಮ್ಮ ಮೆಟ್ರೋ ಪ್ರಯಾಣಿಕರಿಗೆ ʼಗುಡ್ ನ್ಯೂಸ್ʼ | ಮೊಬೈಲ್ ಕ್ಯೂಆರ್ ಆಧಾರಿತ ಪಾಸ್ ಪರಿಚಯಿಸಿದ BMRCL
ಬೆಂಗಳೂರು: ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಜ.15ನೇರಿಂದ ಮೊಬೈಲ್ ಕ್ಯೂಆರ್ ಆಧಾರಿತ 1 ದಿನ, 3 ದಿನ ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್ಗಳನ್ನು ಪರಿಚಯಿಸಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್ಗಳು, ಕೇವಲ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ಗಳ ಮೂಲಕವೇ ಲಭ್ಯವಾಗುತ್ತಿದ್ದು, 50 ರೂ. ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಪಾಸ್ಗಳ ಪರಿಚಯದೊಂದಿಗೆ, ಕ್ಯೂಆರ್ ಪಾಸ್ಗಳು ಮೊಬೈಲ್ ಫೋನ್ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ. ಪಾಸ್ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು. ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ ಗೇಟ್ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು. ಒಂದು ದಿನದ ಕ್ಯೂಆರ್ ಪಾಸ್ಗೆ 250 ರೂ., ಮೂರು ದಿನದ ಕ್ಯೂಆರ್ ಪಾಸ್ಗೆ 550 ರೂ., ಐದು ದಿನಗಳ ಕ್ಯೂಆರ್ ಪಾಸ್ಗೆ 850 ರೂ. ದರ ನಿಗದಿ ಮಾಡಲಾಗಿದ್ದು, ಕ್ಯೂಆರ್ ಪಾಸ್ ಪಡೆದವರು ಪಾಸ್ ಎಷ್ಟು ದಿನಕ್ಕೆ ಪಡೆದಿರುತ್ತಾರೋ, ಅಷ್ಟು ದಿನ ಅನಿಯಮಿತ ಪ್ರಯಾಣ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
ಪಾಕ್ ಮೂಲದ ಅಮೆರಿಕ ಕ್ರಿಕೆಟರ್ ಅಲಿ ಖಾನ್ ಗೆ ಭಾರತದ ವೀಸಾ ನಿರಾಕರಣೆ; ಟಿ20 ವಿಶ್ವಕಪ್ ನಲ್ಲಿ ಆಡೋದು ಅನುಮಾನ
Ali Khan Statement On Indian Visa- ಪಾಕಿಸ್ತಾನ ಮೂಲದ ಅಮೆರಿಕ ಕ್ರಿಕೆಟ್ ತಂಡದ ಪ್ರಮುಖ ಮಧ್ಯಮ ವೇಗದ ಬೌಲರ್ ಅಲಿ ಖಾನ್ಗೆ ಭಾರತ ಪ್ರವೇಶಿಸಲು ವೀಸಾ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರ ಆಟದ ಬಗ್ಗೆ ಗೊಂದಲ ಉಂಟಾಗಿದೆ. ಅಲಿ ಖಾನ್ಗೆ ವೀಸಾ ನಿರಾಕರಿಸಿದ ಕಾರಣ ತಿಳಿದುಬಂದಿಲ್ಲ. ಇದು ನಿಜವಾದರೆ ನುರಿತ ವೇಗದ ಬೌಲರ್ ನ ಅನುಪಸ್ಥಿತಿಯಲ್ಲಿ ಅಮೆರಿಕ ತಂಡಕ್ಕೆ ಭಾರತದಲ್ಲಿ ಆಡುವುದು ಕಠಿಣ ಆಗಲಿದೆ.
ಬಳ್ಳಾರಿ | ಸಾರ್ವಜನಿಕರಿಗೆ ಸಂಚಾರಿ ನಿಯಮ ಪಾಲಿಸಲು ಜಾಗೃತಿ ಮೂಡಿಸಿ : ಡಿಸಿ ನಾಗೇಂದ್ರ ಪ್ರಸಾದ್ ಕೆ.
ಬಳ್ಳಾರಿ, ಜ. 13: ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಿ, ಅಪಘಾತ ವಲಯಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ನಗರದಲ್ಲಿ ಫುಟ್ಪಾತ್ಗಳನ್ನು ಅತಿಕ್ರಮಿಸಿಕೊಂಡಿರುವುದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಒಂದು ಕಾಲಮಿತಿಯೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಸಿದರು. ನಗರದ ಹೊರಭಾಗದ ಸರ್ವೀಸ್ ರಸ್ತೆಗಳ ದುರಸ್ತಿ ಕಾರ್ಯ ತಕ್ಷಣವೇ ಆಗಬೇಕು. ಗುರುತಿಸಲಾದ ರಸ್ತೆಗಳ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ವಿವಿಧೆಡೆ ಪೊಲೀಸ್ ಇಲಾಖೆಯ ಬೇಡಿಕೆಯಂತೆ 'ಬಸ್ ಬೇ' ನಿರ್ಮಿಸಲು ಮತ್ತು ಶಾಲೆ-ಆಸ್ಪತ್ರೆಗಳ ಮುಂಭಾಗ ವೇಗಮಿತಿ ಫಲಕಗಳನ್ನು ಅಳವಡಿಸಲು ಸ್ಥಳ ಗುರುತಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ನಗರದೊಳಗೆ ಭಾರಿ ಗಾತ್ರದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಟೋ ಚಾಲಕರು ಮನಬಂದಂತೆ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ಆಟೋ ಚಾಲಕರ ಸಂಘದೊಂದಿಗೆ ಸಭೆ ನಡೆಸಿ, ನಿಗದಿತ ಪಾರ್ಕಿಂಗ್ ಸ್ಥಳಗಳ ಬಗ್ಗೆ ಸ್ಪಷ್ಟ ಸೂಚನೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು. ರಸ್ತೆ ಬದಿ ವಿದ್ಯುತ್ ಕಂಬ ಅಳವಡಿಸಲು ಅಥವಾ ಗಿಡ ನೆಡಲು ರಸ್ತೆ ಅಗೆಯುವ ಮುನ್ನ ಲೋಕೋಪಯೋಗಿ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಖಲೀಲ್ ಸಾಬ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಮೀರೆ ಶರೀಅತ್ ಅಗಲಿಕೆ ಕುರಿತು ಕರವೇ ನಾರಾಯಣಗೌಡರ ಭಾವನಾತ್ಮಕ ಪತ್ರ
ಬೆಂಗಳೂರು: ಅಮೀರೆ ಶರೀಅತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ಅಗಲಿಕೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಏನಿದೆ?: ‘ಈ ಸಾಲುಗಳನ್ನು ಬರೆಯುವಾಗ ಮನಸ್ಸು ತುಂಬಾ ಭಾರವಾಗಿದೆ. ಇಂದು ನಮ್ಮ ನಡುವೆ ಇಲ್ಲದ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ನಿಧನದ ಸುದ್ದಿ ನನಗೆ ಆಳವಾದ ನೋವನ್ನು ತಂದಿದೆ. ಇದು ಕೇವಲ ಒಬ್ಬ ಧರ್ಮಗುರುವಿನ ಅಗಲಿಕೆ ಅಲ್ಲ. ಸಮಾಜದೊಳಗಿನ ಅಂತರಗಳನ್ನು ಸಂವಾದದಿಂದ ಕಡಿಮೆ ಮಾಡಬಹುದೆಂದು ನಂಬಿದ್ದ, ಅದನ್ನು ಬದುಕಿನಲ್ಲಿ ಅನುಸರಿಸಿದ್ದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡ ದುಃಖ ಇದು’ ಎಂದು ನಾರಾಯಣ ಗೌಡ ತಿಳಿಸಿದ್ದಾರೆ. ‘ಅವರನ್ನು ನಾನು ಭೇಟಿಯಾದ ದಿನಗಳು ಈಗ ನೆನಪಾಗಿ ಕಾಡುತ್ತಿವೆ. ಆ ಭೇಟಿಗಳು ಯಾವುದೇ ಔಪಚಾರಿಕತೆಯ ಭಾಗವಾಗಿರಲಿಲ್ಲ. ಕರ್ನಾಟಕದ ಬಗ್ಗೆ, ಇಲ್ಲಿ ನೆಲೆಸಿರುವ ಸಮುದಾಯಗಳ ಸಹಬಾಳ್ವೆಯ ಬಗ್ಗೆ, ವಿಶೇಷವಾಗಿ ಮುಸ್ಲಿಮ್ ಸಮುದಾಯ ಕನ್ನಡದ ನೆಲದೊಂದಿಗೆ ಇನ್ನಷ್ಟು ಬೇರೂರಬೇಕು ಎಂಬ ಕಾಳಜಿಯೆ ನಮ್ಮ ಮಾತುಕತೆಯ ಕೇಂದ್ರವಾಗಿತ್ತು. ಭಾಷೆ ಎನ್ನುವುದು ಒತ್ತಾಯದಿಂದ ಕಲಿಸಬೇಕಾದ ವಿಷಯವಲ್ಲ, ಅದು ಬದುಕಿನ ಭಾಗವಾಗಬೇಕು ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿ ಕಾಣುತ್ತಿತ್ತು’ ಎಂದು ಅವರು ಸ್ಮರಿಸಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡವೆ ಆಡಳಿತದ ಭಾಷೆ, ನೆಲದ ಭಾಷೆ ಎಂದು ಅವರು ಹೇಳಿದಾಗ ಅದರಲ್ಲಿ ಒತ್ತಡ ಇರಲಿಲ್ಲ, ಹಠ ಇರಲಿಲ್ಲ. ಅದು ಈ ಮಣ್ಣಿನ ಸತ್ಯವನ್ನು ಒಪ್ಪಿಕೊಂಡ ಧ್ವನಿ. ಧರ್ಮವನ್ನು ಉಳಿಸಿಕೊಂಡೆ ಸಮಾಜದ ಜೊತೆ ಬದುಕಬೇಕು, ಸಮಾಜದಿಂದ ದೂರವಾದ ಧರ್ಮ ಸಮುದಾಯವನ್ನು ಬಲಿಷ್ಠಗೊಳಿಸಲಾರದು ಎಂಬ ಸಮತೋಲನದ ಚಿಂತನೆ ಅವರಿಗೆ ಸಹಜವಾಗಿತ್ತು’ ಎಂದು ಅಮೀರೆ ಶರೀಅತ್ ಕುರಿತು ಅವರು ನುಡಿದಿದ್ದಾರೆ. ‘ಯುವಕರು ಶಿಕ್ಷಣದತ್ತ ಸಾಗಬೇಕು, ಆಡಳಿತ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳಬೇಕು, ನಾಡಿನ ಸೇವೆಯಲ್ಲಿ ತೊಡಗಬೇಕು ಎಂಬ ಅವರ ಕಾಳಜಿ ಕೇವಲ ಸಮುದಾಯದೊಳಗೆ ಸೀಮಿತವಾಗಿರಲಿಲ್ಲ, ಅದು ಕರ್ನಾಟಕದ ಭವಿಷ್ಯಕ್ಕೆ ಸಂಬಂಧಪಟ್ಟ ಚಿಂತನೆಯಾಗಿತ್ತು. ಇಂದು ಅವರ ಅಗಲಿಕೆಯಿಂದ ನನ್ನೊಳಗೆ ಒಂದು ನಂಬಿಕೆಯ ಜಾಗ ಖಾಲಿಯಾಗಿದೆ. ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು, ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಗೌರವ ಉಳಿಸಬಹುದು ಎಂಬ ನಂಬಿಕೆಗೆ ಅವರು ಜೀವಂತ ಉದಾಹರಣೆಯಾಗಿದ್ದರು. ಆ ಧ್ವನಿ ಇಂದು ಮೌನವಾಗಿಬಿಟ್ಟಿದೆ ಅನ್ನೋದೇ ಮನಸ್ಸನ್ನು ಇನ್ನಷ್ಟು ನೋಯಿಸುತ್ತದೆ’ ಎಂದು ನಾರಾಯಣ ಗೌಡ ಕಂಬನಿ ಮಿಡಿದಿದ್ದಾರೆ. ‘ಅವರ ಜೊತೆ ನಡೆದ ಸಂಭಾಷಣೆಗಳಲ್ಲಿ ನಾನು ಕಂಡದ್ದು ದ್ವೇಷವಲ್ಲ, ಅಸಹನೆ ಅಲ್ಲ. ಅಲ್ಲಿ ಇತ್ತು ಸಮಾಜದ ಬಗ್ಗೆ ಇರುವ ಆತಂಕ, ಮುಂದಿನ ತಲೆಮಾರಿನ ಬಗ್ಗೆ ಇರುವ ಕಾಳಜಿ ಮತ್ತು ಕರ್ನಾಟಕದ ನೆಲದ ಮೇಲೆ ಇರುವ ಆಳವಾದ ಪ್ರೀತಿ. ಇಂತಹ ವ್ಯಕ್ತಿಗಳು ಹೆಚ್ಚು ಕಾಲ ಬದುಕಬೇಕು, ಹೆಚ್ಚು ಮಾತನಾಡಬೇಕು ಅನ್ನಿಸುವ ಹೊತ್ತಲ್ಲೆ ಅವರು ನಮ್ಮನ್ನು ಬಿಟ್ಟುಹೋಗಿರುವುದು ತುಂಬಲಾರದ ಖಾಲಿತನವನ್ನು ಬಿಟ್ಟಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನು ಇಂದು ವೈಯಕ್ತಿಕವಾಗಿಯೂ, ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿಯೂ ಒಂದು ಅಮೂಲ್ಯ ಕೊಂಡಿಯನ್ನು ಕಳೆದುಕೊಂಡಿದ್ದೇನೆ ಅನ್ನಿಸುವ ಭಾವನೆ ಕಾಡುತ್ತಿದೆ. ದೂರ ನಿಂತು ದೂಷಿಸುವ ಕಾಲದಲ್ಲಿ ಹತ್ತಿರ ಬಂದು ಮಾತನಾಡಿದ ವ್ಯಕ್ತಿಯನ್ನು ಕಳೆದುಕೊಳ್ಳುವುದು ಸಣ್ಣ ನಷ್ಟವಲ್ಲ. ಇದು ಸಹಬಾಳ್ವೆಯ ದಾರಿಯಲ್ಲಿ ಸಾಗುತ್ತಿದ್ದ ಒಂದು ಹೆಜ್ಜೆ ಅಚಾನಕ್ ನಿಂತಂತಾಗಿದೆ’ ಎಂದು ನಾರಾಯಣ ಗೌಡ ದುಃಖ ವ್ಯಕ್ತಪಡಿಸಿದ್ದಾರೆ. ‘ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರವಾದ ಮನಸ್ಸಿನಿಂದ ಪ್ರಾರ್ಥಿಸುತ್ತೇನೆ. ಅವರು ಬಿಟ್ಟುಹೋದ ಮಾತುಗಳು, ಅವರು ತೋರಿಸಿದ ಸಂವಾದದ ದಾರಿ ಮರೆಯಾಗಬಾರದು. ಅವರು ಇಲ್ಲ… ಆದರೆ ಅವರು ನಂಬಿದ್ದ ಸಹಬಾಳ್ವೆಯ ಚಿಂತನೆ ಜೀವಂತವಾಗಿರಬೇಕು. ಅದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ’ ಎಂದು ಸಮಸ್ತ ಕರವೇ ಕಟುಂಬದ ಪರವಾಗಿ ನಾರಾಯಣ ಗೌಡ ಪ್ರಾರ್ಥಿಸಿದ್ದಾರೆ.
ಪುಸ್ತಕ ಸಂಸ್ಕೃತಿ ಮನೆಮನಕ್ಕೆ ತಲುಪಲಿ: ಹೊಸಪೇಟೆಯಲ್ಲಿ 'ಮನೆಗೊಂದು ಗ್ರಂಥಾಲಯ' ಅಭಿಯಾನಕ್ಕೆ ಚಾಲನೆ
ಹೊಸಪೇಟೆ (ವಿಜಯನಗರ): ಪುಸ್ತಕ ಓದುವ ಸಂಸ್ಕೃತಿಯನ್ನು ಮನೆಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಮಾನಸ ನುಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಗರದ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆಗೊಂದು ಗ್ರಂಥಾಲಯ ಸದಸ್ಯರ ನೇಮಕ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಪ್ರಾಧಿಕಾರದ ಈ ಯೋಜನೆ ಅತ್ಯಂತ ಸ್ತುತ್ಯರ್ಹವಾಗಿದೆ. ಇದರ ಮೂಲಕ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿ, ಎಂದರು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಮಾತನಾಡಿ, ಪುಸ್ತಕ ಸಂಸ್ಕೃತಿಯು ಮಾನವ ಸಮಾಜದ ನಿರಂತರ ಬೆಳವಣಿಗೆಯ ಸಂಕೇತವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರನ್ನಾಗಿ ಎಂ. ಉಮಾಮಹೇಶ್ವರ ಹಾಗೂ ಸದಸ್ಯರನ್ನಾಗಿ ಹುಲಿಯಪ್ಪನವರ ಬಸವರಾಜ (ಹರಪನಹಳ್ಳಿ), ವೀರಮ್ಮ ಹಿರೇಮಠ (ಹೊಸಪೇಟೆ), ಎಲ್. ಹಾಲ್ಯಾನಾಯಕ, ಬಿ. ಕಿರಣ್ ಕುಮಾರ್, ಎಸ್.ಎಂ. ರಿಯಾಜ್ ಪಾಷಾ (ಕೂಡ್ಲಿಗಿ), ಗಣೇಶ ಹವಾಲ್ದಾರ್ (ಹಗರಿಬೊಮ್ಮನಹಳ್ಳಿ), ಬಿ.ಎಚ್. ಶರಣಪ್ಪ (ಕೊಟ್ಟೂರು) ಹಾಗೂ ಬಿ.ಕೆ. ಮುರಳೀಧರ ಅವರನ್ನು ನೇಮಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಡಾ. ಗುಂಡಿ ಮಾರುತಿ, ಹಿರಿಯ ಸಾಹಿತಿ ಟಿ. ಯಮನಪ್ಪ ಹಾಗೂ ಶೋಭಾ ಶಂಕರಾನಂದ ಉಪಸ್ಥಿತರಿದ್ದರು. ಶ್ರೀನಿವಾಸ ಪುರೋಹಿತ ಪ್ರಾರ್ಥಿಸಿದರು, ಎಲ್. ಹಾಲ್ಯಾನಾಯಕ ಸ್ವಾಗತಿಸಿದರು, ವೀರಮ್ಮ ಹಿರೇಮಠ ನಿರೂಪಿಸಿದರೆ, ಉಮಾಮಹೇಶ್ವರ ವಂದಿಸಿದರು.
ಐಎಸ್ಪಿಆರ್ಎಲ್ ಭೂಸ್ವಾಧೀನಕ್ಕೆ ಶೀಘ್ರವೇ ಪರಿಹಾರ ಹಣ ಪಾವತಿಸಿ: ಕೆಐಡಿಬಿ ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ
ಉಡುಪಿ, ಜ.13: ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಕೇಂದ್ರ ಸರಕಾರದ ಕಚ್ಛಾ ತೈಲ ಸಂಗ್ರಹಣಾ ಘಟಕ (ಇಂಡಿಯನ್ ಸ್ಟ್ರೆಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್- ಐಎಸ್ಪಿಆರ್ಎಲ್) ಅಭಿವೃದ್ಧಿಗೆ ಅಗತ್ಯವಿರುವ ಭೂಮಿಯನ್ನು ಸಾರ್ವಜನಿಕರಿಂದ ಈಗಾಗಲೇ ಭೂಸ್ವಾಧೀನ ಪಡಿಸಿ ಕೊಳ್ಳಲಾಗಿದೆ. ಆದರೆ ಕೆಲವರಿಗೆ ಪರಿಹಾ ಹಣವನ್ನು ನೀಡಿಲ್ಲ ಎಂಬ ಮಾಹಿತಿ ಇದ್ದು, ಈ ಘಟಕಕ್ಕೆ ಭೂಮಿ ನೀಡಿರುವ ಎಲ್ಲಾ ಭೂಮಾಲಕರಿಗೆ ಶೀಘ್ರದಲ್ಲೇ ಪರಿಹಾರ ಹಣವನ್ನು ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಕಚ್ಛಾತೈಲ ಸಂಗ್ರಹಣೆ ಘಟಕದ ಎರಡನೇ ಹಂತದ ವಿಸ್ತರಣಾ ಕಾಮಗಾರಿ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪಾದೂರು ಗ್ರಾಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯೋಜನೆಯ ಎರಡನೇ ಹಂತದ ಕಚ್ಛಾತೈಲ ಸಂಗ್ರಹಣೆ ಕಾಮಗಾರಿಯನ್ನು ಕೈಗೊಳ್ಳುವಾಗ ಸ್ಥಳೀಯ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತೆಯನ್ನು ಕೈಗೊಳ್ಳಬೇಕು ಎಂದೂ ಅವರು ನಿರ್ದೇಶನ ನೀಡಿದರು. ಎರಡನೇ ಹಂತದ ಕಚ್ಚಾತೈಲ ಸಂಗ್ರಹಣಾ ಘಟಕದ ಕಾಮಗಾರಿಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಸುತ್ತಮುತ್ತ ಪ್ರದೇಶಗಳ ಎಲ್ಲಾ ಮನೆಗಳ ವೀಡಿಯೋ ಚಿತ್ರೀಕರಣವನ್ನು ಕೈಗೊಳ್ಳಬೇಕು. ಕಾಮಗಾರಿ ಕೈಗೊಳ್ಳುವಾಗ ಬಂಡೆಗಳ ಸ್ಫೋಟ ಸಂದರ್ಭದಲ್ಲಿ ಯಾವುದೇ ರೀತಿಯ ಹಾನಿಗಳು ಮನೆಗಳಿಗೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದವರು ತಿಳಿಸಿದರು. ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಪರಿಹಾರದ ಹಣವನ್ನು ಮಾಲಕರಿಗೆ ಒದಗಿಸುವ ಸಂಬಂಧ ನೈಜ ಭೂಮಾಲಕರ ಕುರಿತು ಇರುವ ಗೊಂದಲವನ್ನು ಸ್ಥಳೀಯ ಕಂದಾಯ, ಸರ್ವೇ ಹಾಗೂ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಪರಿಶೀಲಿಸಿ ಬಗೆಹರಿಸಿಕೊಳ್ಳಬೇಕು ಎಂದ ಅವರು, ಕಾಮಗಾರಿಯ ಸಂದರ್ಭದಲ್ಲಿ ಪಾರಂಪರಿಕ ತಾಣಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಚ್ಛಾ ತೈಲ ಸಂಗ್ರಹಣಾ ಘಟಕದ ಕಾಮಗಾರಿ ಸಂದರ್ಭದಲ್ಲಿ ಬಂಡೆ ಕಲ್ಲುಗಳನ್ನು ಸ್ಫೋಟಿಸುವುದರಿಂದ ಸ್ಥಳೀಯ ಬಾವಿಗಳ ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸ ವಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು. ಕಾಮಗಾರಿ ಕೈಗೊಳ್ಳುವಾಗ ಉದ್ಯೋಗದಲ್ಲಿ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದಂತಹ ಕಾರ್ಮಿಕರಿಗೆ ಪ್ರತ್ಯೇಕ ಕಾಲೋನಿ ಗಳನ್ನು ನಿರ್ಮಿಸಿ, ಅಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದ ಗುರ್ಮೆ, ಕಾಮಗಾರಿ ಸಂಬಂಧ ವಾಹನಗಳ ಸಂಚಾರದ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು. ಇದರಿಂದ ಸಾರ್ವಜನಿಕ ರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಭಾಗವಹಿಸಿದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು, ಮೊದಲನೇ ಹಂತದ ಕಾಮಗಾರಿ ಯನ್ನು ಕೈಗೊಂಡಾಗ ಅನೇಕ ರೀತಿಯ ಸಮಸ್ಯೆಗಳು ಈ ಭಾಗದ ಜನರಿಗೆ ಉಂಟಾಗಿದ್ದು, ಈ ಬಾರಿಯೂ ಅವು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿ, ತಮ್ಮ ಸಮಸ್ಯೆಗಳ ಕುರಿತು ಸಭೆಯ ಗಮನ ಸೆಳೆದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ, ಕೆಐಎಡಿಬಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಭೂ ಒತ್ತುವರಿ ಆರೋಪ: ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಸರ್ಕಾರಿ ಜಮೀನು ಮತ್ತು ಕೆರೆ ಒತ್ತುವರಿ ಆರೋಪ ಪ್ರಕರಣದಲ್ಲಿ ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಂಟಿಎಫ್ಗೆ ಜನವರಿ 21ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದು, ಅರ್ಜಿದಾರರ ವಿರುದ್ಧ ದಾಖಲೆಗಳಿದ್ದರೆ ಹಾಜರುಪಡಿಸಲು ಆದೇಶಿಸಿದೆ. ವಿಚಾರಣೆ ಜನವರಿ 21ಕ್ಕೆ ಮುಂದೂಡಲಾಗಿದೆ.
ವಿಜಯನಗರ | ‘ವಾರ್ತಾಭಾರತಿ’ ವರದಿ ಫಲಶ್ರುತಿ : ಎಂ.ಪಿ.ಪ್ರಕಾಶ ಕಲಾ ಮಂದಿರದ ಸ್ವಚ್ಛತೆಗೆ ಡಿಸಿ ಆದೇಶ
ವಿಜಯನಗರ : ಹೊಸಪೇಟೆ ನಗರಸಭೆ ಆವರಣದಲ್ಲಿರುವ ಎಂ.ಪಿ.ಪ್ರಕಾಶ ಕಲಾಮಂದಿರವನ್ನು ಗೋದಾಮಾಗಿ ಉಪಯೋಗಿಸುತ್ತಿದ್ದಲ್ಲಿ ಕೂಡಲೆ ಸ್ವಚ್ಛಗೊಳಿಸಿ ಕಲಾವಿದರಿಗೆ ಉಪಯೋಗಿಸಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹಂಪಿ ಉತ್ಸವಕ್ಕೆ ಬರುವ ಕಲಾವಿದರು ಕಲಾಮಂದಿರದಲ್ಲಿ ವಾಸ್ತವ್ಯ ಹೂಡಿ ನಾಟಕ, ನೃತ್ಯ ಅಭ್ಯಾಸ ಮಾಡುತ್ತಿದ್ದರು. ಆದರೆ ಸೂಕ್ತ ನಿರ್ವಹಣೆಯ ಕೊರತೆ, ನಗರಸಭೆಯ ನಿರ್ಲಕ್ಷ್ಯದಿಂದ ಕಲಾಮಂದಿರ ಗೋದಾಮಾಗಿ ಪರಿವರ್ತನೆಗೊಂಡಿದೆ ಎಂದು ಡಿ.31ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Google Trends: ಯಾರಿಗೆ ಬೇಕು ನಿಮ್ಮ ಒಪ್ಪಂದ? ಶಕ್ಸ್ಗಮ್ ಜೊತೆ ಕಳಚದು ಭಾರತದ ಅನುಬಂಧ; ಜ. ಉಪೇಂದ್ರ ದ್ವಿವೇದಿ!
ಭಾರತದೊಂದಿಗಿನ ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿರುವ ಚೀನಾ, ಶಕ್ಸಗಮ್ ಕಣಿವೆಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನುಆರಂಭಿಸಿದೆ. ಚೀನಾ ಈ ನಡೆಯನ್ನು ಭಾರತ ವಿರೋಧಿಸಿದ್ದು, ಈ ಭೂಭಾಗವನ್ನು ತನ್ನ ಅವಿಭಾಜ್ಯ ಅಂಗ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದೆ. ಆದರೆ ಚೀನಾ ಕೂಡ ಶಕ್ಸ್ಗಮ್ ಕಣಿವೆ ತನ್ನದೆಂದು ಪ್ರತಿಪಾದಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪ್ರತಿಕ್ರಿಯಿಸಿದ್ದು, ಶಕ್ಸ್ಗಮ್ ಕಣಿವೆಯಲ್ಲಿ ಚೀನಾದ ಯಾವುದೇ ಚಟುವಟಿಕೆಯನ್ನು ಕಾನೂನುಬಾಹಿರ ಎಂದು ಪರಿಗಣಿಸುವುದಾಗಿ ಎಚ್ಚರಿಸಿದ್ದಾರೆ.
ಕೊಪ್ಪಳ | ಕಾರ್ಖಾನೆ ವಿರೋಧಿ ಹೋರಾಟಕ್ಕೆ 75 ದಿನ: ಧರಣಿ ನಿರತರಿಗೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಬೆಂಬಲ
ಕೊಪ್ಪಳ : ನಾನು ಹಳ್ಳಿಯ ರೈತನಾಗಿ ಬೆಳೆದವನು. ರೈತರು ಬೂದಿ ಮತ್ತು ಹೊಗೆಯ ನಡುವೆ ಬದುಕುವುದು ಅಸಾಧ್ಯದ ಮಾತು. ಈ ಗಂಭೀರ ಸಮಸ್ಯೆಯನ್ನು ಇಡೀ ರಾಜ್ಯಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಕರೆ ನೀಡಿದರು. ನಗರಸಭೆಯ ಎದುರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪರಿಸರ ಮಾರಕ ಕಾರ್ಖಾನೆಗಳ ವಿರೋಧಿ ಅನಿರ್ದಿಷ್ಟಾವಧಿ ಧರಣಿಯ 75ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರಣಿಯಲ್ಲಿ ಭಾಗವಹಿಸಿದ ನಂತರ ಭಗವಾನ್ ಅವರು ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ ಹಾಗೂ ಹಾಲವರ್ತಿ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರು, ವಿದ್ಯಾರ್ಥಿಗಳು ಮತ್ತು ಗೃಹಿಣಿಯರೊಂದಿಗೆ ಸಂವಾದ ನಡೆಸಿದರು. ಇಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈಗಿರುವ ಕಾರ್ಖಾನೆಗಳ ಕಾಟವೇ ತಡೆಯಲಾಗುತ್ತಿಲ್ಲ, ಇನ್ನು ಹೊಸ ಕಾರ್ಖಾನೆಗಳು ಬಂದರೆ ಜನರ ಗತಿಯೇನು? ಮುಖ್ಯಮಂತ್ರಿಗಳು ಜನಪರವಾಗಿದ್ದು, ಈ ಭಾಗಕ್ಕೆ ಭೇಟಿ ನೀಡುವಂತೆ ಹಾಗೂ ವಿಧಾನಸೌಧದಲ್ಲಿ ಈ ಧ್ವನಿ ಕೇಳುವಂತೆ ನಾನು ಅವರ ಮೇಲೆ ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು. ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ ಮಾತನಾಡಿ, ಮೂರು ತಿಂಗಳಿಂದ ಹೋರಾಟ ನಡೆಯುತ್ತಿದ್ದರೂ ಸ್ಥಳೀಯ ಶಾಸಕರು ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಪಲಾಯನವಾದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ವಕೀಲ ರಾಜು ಬಾಕಳೆ ಮಾತನಾಡಿ, ಕಾನೂನು ಹೋರಾಟದಲ್ಲಿ ಹಿನ್ನಡೆಯಾದರೂ, ಜನಸಂಗ್ರಾಮದ ಮೂಲಕ ಈ ಹೋರಾಟ ಗೆಲ್ಲುವ ವಿಶ್ವಾಸವಿದೆ ಎಂದರು. ರೈತ ಮಹಿಳೆ ಗಿರಿಯಮ್ಮ ಹಾಗೂ ಮಾರ್ಕಂಡಯ್ಯ ಹಿರೇಮಠ ಅವರು ಮಾತನಾಡಿ, ವಿಷಪೂರಿತ ಗಾಳಿ ಮತ್ತು ನೀರಿನಿಂದಾಗಿ ಮಕ್ಕಳು ಅಸ್ತಮಾ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನೆ-ಹೊಲ ಮಾರಿ ಊರು ಬಿಡುವ ಸ್ಥಿತಿ ಬಂದಿದೆ ಎಂದು ಭಾವುಕರಾಗಿ ನುಡಿದರು. ದದೇಗಲ್ ಸದ್ಗುರು ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಿಸರ ಉಳಿವಿಗೆ ಎಲ್ಲರೂ ಸಂಘಟಿತರಾಗಬೇಕು ಎಂದರು. ಧರಣಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇg, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ್, ಎ. ಎಂ.ಮದರಿ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ, ರಾಜು ಬಾಕಳೆ, ರಾಜ್ಯ ರೈತ ಸಂಘದ ಮುಖಂಡರಾದ ನಜೀರಸಾಬ್ ಮೂಲಿಮನಿ, ಭೀಮಸೇನ ಕಲಕೇರಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಸಾವಿತ್ರಿ ಮುಜುಮದಾರ, ಖಾಸಗಿ ಶಾಲಾ ಆಡಳಿತ ಮಂಡಳಿ ಕುಸುಮ ಸಂಘಟನೆಯ ಅಧ್ಯಕ್ಷ ಶಾಯೀದ್ ತಹಶೀಲ್ದಾರ, ದಾನಪ್ಪ ಕವಲೂರು, ಅಲೀಮುದ್ದಿನ್, ಸುರೇಶ ಕುಂಬಾರ, ಮುಖಂಡರಾದ ಶುಕರಾಜ ತಾಳಕೇರಿ, ಮಂಜು ಹಾಲವರ್ತಿ, ರಂಗ ಕಲಾವಿದೆ ಎಚ್. ಬಿ. ಸರೋಜಮ್ಮ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಗಡ್ಡಿ, ರವಿ ಕಾಂತನವರ, ಗವಿಸಿದ್ದಪ್ಪ ಹಲಿಗಿ, ಜಿ. ಎಸ್. ಕಡೇಮನಿ, ಮಹಾದೇವಪ್ಪ ಮಾವಿನಮಡು, ಬಸವರಾಜ ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ, ಮಂಜುನಾಥ ಕವಲೂರು, ಸಿ. ಬಿ. ಪಾಟೀಲ್, ಸುಂಕಪ್ಪ ಮೀಸಿ, ಮಲ್ಲಪ್ಪ ಮಾ. ಪಾ., ಗಣೇಸ ವಿಶ್ವಕರ್ಮ, ಸುರೇಶ ಪೂಜಾರ, ಸದಾಶಿವ ಪಾಟೀಲ್ ಸೇರಿ ನೂರಾರು ಜನರು ಪಾಲ್ಗೊಂಡರು.
ಜೋಡಿ ಕೊಲೆ ಪ್ರಕರಣದ ಆರೋಪ ಸಾಬೀತು: ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲಯ
ಮಂಗಳೂರು: ಸುಮಾರು ಐದು ವರ್ಷದ ಹಿಂದೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಆಲ್ಫೋನ್ಸ್ ಸಲ್ದಾನಾ (52) ಎಂಬಾತನ ಮೇಲಿನ ಆರೋಪ ಸಾಬೀತಾಗಿದೆ. ನ್ಯಾಯಾಲಯವು ಜ.14ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಆಲ್ಫೋನ್ಸ್ ಸಲ್ದಾನ ಮತ್ತು ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮಧ್ಯೆ ವೈಮನಸ್ಸು ಇತ್ತೆನ್ನಲಾಗಿದೆ. ಅಂದರೆ ವಿನ್ಸಿಯ ಮನೆಯ ಜಾಗಕ್ಕೆ, ಮನೆಯ ಛಾವಣಿಗೆ ಆಲ್ಫೋನ್ಸ್ನ ಜಾಗದಲ್ಲಿರುವ ಮರದ ಕೊಂಬೆಗಳು ಬೀಳುವ ಬಗ್ಗೆ ತಕರಾರು ಇತ್ತು. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ಸಲುವಾಗಿ 2020ರ ಎ.29ರಂದು ಮುಖಾಮುಖಿಯಾಗಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆಲ್ಫೋನ್ಸ್ ಮರದ ಕೊಂಬೆ ಗಳನ್ನು ತೆಗೆಯುವುದಿಲ್ಲ, ನೀನು ಏನು ಬೇಕಾದರೂ ಮಾಡು ಎಂದು ಸವಾಲು ಹಾಕಿದ್ದಲ್ಲದೆ ಚೂರಿಯಿಂದ ವಿನ್ಸೆಂಟ್ ಡಿಸೋಜಗೆ ತಿವಿದಿದ್ದ. ಅದನ್ನು ಗಮನಿಸಿದ ವಿನ್ಸೆಂಟ್ ಡಿಸೋಜರ ಪತ್ನಿ ಹೆಲೆನ್ ಡಿಸೋಜ (43) ಪತಿಯ ರಕ್ಷಣೆಗೆ ಧಾವಿಸಿದಾಗ ಆಕೆಗೂ ಅಲ್ಫೋನ್ಸ್ ಸಲ್ದಾನ ಚೂರಿಯಿಂದ ತಿವಿದಿದ್ದ. ಆವಾಗ ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ಬೆದರಿಕೆ ಹಾಕಿದ್ದ. ಚೂರಿ ಇರಿತದಿಂದ ಗಂಭೀರ ಗಾಯಗೊಂಡ ವಿನ್ಸೆಂಟ್ ಡಿಸೋಜ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರ ಗಾಯ ಗೊಂಡಿದ್ದ ಹೆಲೆನ್ ಡಿಸೋಜ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಆಗಿನ ಇನ್ಸ್ಪೆಕ್ಟರ್ ಜಯರಾಮ ಡಿ. ಗೌಡ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು 24 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ 46 ದಾಖಲೆಗಳನ್ನು ಗುರುತಿಸಿದ್ದರು. ಬಳಿಕ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ/ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಅಲ್ಲಿನ ನ್ಯಾಯಾಧೀಶ ಜಗದೀಶ ವಿ.ಎನ್. ವಾದ ಆಲಿಸಿ ಆರೋಪಿ ಆಲ್ಫೋನ್ಸ್ ಸಲ್ದಾನನ ವಿರುದ್ಧ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು, ಭಾ.ದಂ.ಸಂ. ಕಲಂ. 506, 341, 302ರಡಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕಿ ಜುಡಿತ್ ಒಲ್ಲಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿ ವಾದ ಮಂಡಿಸಿದ್ದರು. *ದಂಪತಿಯ ಕೊಲೆಯಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಘಟನೆ ವೇಳೆ ದಂಪತಿಯ ಪುತ್ರಿ 10ನೇ ತರಗತಿ ಮತ್ತು ಪುತ್ರ 5ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಮೃತಪಟ್ಟ ಮಹಿಳೆಯ ಸಹೋದರಿ ಮಕ್ಕಳನ್ನು ಇದೀಗ ನೋಡಿಕೊಳ್ಳುತ್ತಿದ್ದು, ಆಕೆಗೂ ಯಾವುದೇ ಆದಾಯದ ಮೂಲವಿಲ್ಲ. ಹಾಗಾಗಿ ಮಕ್ಕಳಿಗೆ ಹೆಚ್ಚಿನ ಪರಿಹಾರ ಮೊತ್ತ ವನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಸರಕಾರಿ ಅಭಿಯೋಜಕರು ಮನವರಿಕೆ ಮಾಡಿದ್ದಾರೆ. *ಪ್ರಕರಣದ ವಿಚಾರಣೆಗೆ ವೇಳೆ ಆಲ್ಫೋನ್ಸ್ ಸಲ್ದಾನಾ ತಾನು ಮಾನಸಿಕ ಅಸ್ವಸ್ಥ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ. 2000- 2002ರಲ್ಲಿ ಮುಂಬೈಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಹಳೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ. ಆದರೆ ನ್ಯಾಯಾಧೀಶರು ಅರ್ಜಿಯನ್ನು ವಜಾ ಮಾಡಿದ್ದರು. ಪುನಃ ಹೈಕೋರ್ಟ್ನಲ್ಲೂ ಎರಡು ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಅಲ್ಲೂ ಅರ್ಜಿ ವಜಾ ಗೊಂಡಿತ್ತು.
ಶಿರೂರು ಪರ್ಯಾಯಕ್ಕೆ ಸಜ್ಜಾಗಿದೆ ಉಡುಪಿ: ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಪಟ್ಟಕ್ಕೆ
ಉಡುಪಿ: ಕೃಷ್ಣನ ನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ..ಪರ್ಯಾಯ ಎಂಬ ಶಬ್ದವೇ ಹೇಳುತ್ತದೆ. ಒಬ್ಬರದ್ದೇ ಅಲ್ಲ. ಇನ್ನೊಬ್ಬರಿದ್ದಾರೆ ಎಂದರ್ಥ. ಪರ್ಯಾಯವು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿ ಎರಡು ವರ್ಷಕೊಮ್ಮೆ ನಡೆಯುವ ಧಾರ್ಮಿಕ ಆಚರಣೆಯಾಗಿದೆ. ಕೃಷ್ಣ ಮಠದ ಪೂಜೆ ಮತ್ತು ಆಡಳಿತವನ್ನು ದ್ವೈತ ತತ್ವಜ್ಞಾನಿ
ಬೆಂಗಳೂರು: ಧರ್ಮಸ್ಥಳದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯದ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ನಿಲುವು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಕುಸುಮಾವತಿ ಪರವಾಗಿ ವಾದ ಮಂಡಿಸಿದ ವಕೀಲ ಎಸ್. ಬಾಲನ್ ಅವರು, ಧರ್ಮಸ್ಥಳ ಪೋಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಆದರೆ, ಎಸ್ಐಟಿ ಕೇವಲ ಒಂದು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಉಳಿದ ನಾಪತ್ತೆ, ಸಾವು, ಕೊಲೆ ಪ್ರಕರಣಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದರು. ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು, ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಲ್ಲ. ಅರ್ಜಿಯ ಪ್ರತಿ, ಸಂಬಂಧಿಸಿದ ದಾಖಲೆಗಳನ್ನೂ ನಮಗೆ ಒದಗಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ನ್ಯಾಯಪೀಠ, ಇಂದೇ ಅರ್ಜಿಯ ಪ್ರತಿಯನ್ನು ಸರ್ಕಾರದ ಪರ ವಕೀಲರಿಗೆ ಒದಗಿಸುವಂತೆ ವಕೀಲ ಬಾಲನ್ ಅವರಿಗೆ ಸೂಚಿಸಿತಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳ ಕುರಿತು ಸರ್ಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ನಿಲುವು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು. ಅರ್ಜಿಯಲ್ಲೇನಿದೆ? ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವಿನ 31 ವರ್ಷಗಳಲ್ಲಿ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ (ಯುಡಿಆರ್) ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸುವಂತೆ ಕೋರಿ ಅರ್ಜಿದಾರರು ಹಾಗೂ ಇತರ ಬಾಧಿತ ಕುಟುಂಬಗಳ ವತಿಯಿಂದ 2025ರ ಅಕ್ಟೋಬರ್ 11ರಂದು ಎಸ್ಐಟಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು. ಎಲ್ಲ 74 ಪ್ರಕರಣಗಳಿಗೆ ಸಂಬಂಧಿಸಿದ ದಿನಾಂಕ, ಸ್ಥಳ, ಯುಡಿಆರ್ ಸಂಖ್ಯೆ, ಸಮಾಧಿಯ ಸ್ಥಳಗಳು ಇನ್ನಿತರ ಮಾಹಿತಿಯೊಳಗೊಂಡ ಸಂಪೂರ್ಣ ವಿವರಗಳನ್ನು ಒದಗಿಸಲಾಗಿತ್ತು. ಆದರೆ, ಆ ಮನವಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಿಐಎಲ್ನಲ್ಲಿ ಆಕ್ಷೇಪಿಸಲಾಗಿದೆ. ವಿಶೇಷ ತನಿಖಾ ತಂಡದ ಕೆಲಸವನ್ನು ಪ್ರಶ್ನಿಸಲು, ಟೀಕಿಸಲು ಅಥವಾ ಅದರಲ್ಲಿ ಹಸ್ತಕ್ಷೇಪ ಮಾಡಲು ಈ ಪಿಐಎಲ್ ಸಲ್ಲಿಸಲಾಗಿಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ ಅಥವಾ ಬಾಹ್ಯ ಒತ್ತಡಗಳಿಂದ ಮುಕ್ತವಾಗಿ, ಪರಿಣಾಮಕಾರಿ ಮತ್ತು ವ್ಯವಸ್ಥಿತವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಸ್ಐಟಿಗೆ ನ್ಯಾಯಾಲಯ ನಿರ್ದೇಶಿಸಬೇಕು. ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದರೆ ತನಿಖೆಯಲ್ಲಿ ಲೋಪಗಳಾಗದಂತೆ ಹಾಗೂ ಮತ್ತೆ ತನಿಖೆ ಹಳಿತಪ್ಪದಂತೆ ನೋಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಪಿಐಎಲ್ನಲ್ಲಿ ವಿವರಿಸಲಾಗಿದೆ. ಮನವಿ ಏನು? ► ಅರ್ಜಿದಾರರು ಅಕ್ಟೋಬರ್ 11ರಂದು ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾದ ಎಲ್ಲ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಪ್ರತಿವಾದಿ ಎಸ್ಐಟಿಗೆ ನಿರ್ದೇಶಿಸಬೇಕು. ► ಪ್ರತಿ ಎಫ್ಐಆರ್ಗೂ ಪ್ರತ್ಯೇಕ ಎಫ್ಐಆರ್ ಸಂಖ್ಯೆ ಹಾಗೂ ಕೇಸ್ ಸಂಖ್ಯೆ ನಿಗದಿಪಡಿಸಬೇಕು ಹಾಗೂ ಪ್ರತಿ ನಿರ್ದಿಷ್ಟ ಪ್ರಕರಣದ ತನಿಖೆಗೂ ವೈಯಕ್ತಿಕ ಜವಾಬ್ದಾರಿ ಹೊಂದಿರುವ ತನಿಖಾಧಿಕಾರಿಯನ್ನು ನಿಯೋಜಿಸಲು ಆದೇಶಿಸಬೇಕು. ► ಭೂಮಿ ಒಳಹೊಕ್ಕುವ ರೇಡಾರ್ನಂತಹ ಆಧುನಿಕ ಸಾಧನಗಳನ್ನು ಬಳಸಿ ಸಮಾಧಿ ಸ್ಥಳವನ್ನು ಪತ್ತೆಹಚ್ಚಿ, ವಿಧಿವಿಜ್ಞಾನ ಪರೀಕ್ಷೆಗಾಗಿ ಅವಶೇಷಗಳನ್ನು ಹೊರತೆಗೆಯುವಂತೆ ಹಾಗೂ ಡಿಎನ್ಎ, ದೈಹಿಕ ಚಹರೆ, ಕಾಣೆಯಾದ ವ್ಯಕ್ತಿಗಳ ವರದಿಗಳೊಂದಿಗೆ ಹೊಂದಾಣಿಕೆ ಮಾಡಿ ಸಂತ್ರಸ್ತರನ್ನು ಪತ್ತೆ ಹಚ್ಚಲು, ವಿಧಿವಿಜ್ಞಾನ ರೋಗಶಾಸ್ತ್ರದ ಮೂಲಕ ಅವರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲು, ಸಾಕ್ಷಿಗಳನ್ನು ಗುರುತಿಸಿ ಅವರ ಹೇಳಿಕೆಗಳನ್ನು ದಾಖಲಿಸಲು ಹಾಗೂ ಅಪರಾಧಿಗಳನ್ನು ಗುರುತಿಸಿ, ವಿಚಾರಣೆಗೆ ಒಳಪಡಿಸಲು ಎಸ್ಐಟಿಗೆ ನಿರ್ದೇಶಿಸಬೇಕು. ► ಎಲ್ಲ 74 ಸಂತ್ರಸ್ತರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾಣೆಯಾದವರನ್ನು ಹುಡುಕುತ್ತಿರುವ ಕುಟುಂಬಗಳಿಗೆ ಮಾಹಿತಿ ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳಲು ಎಸ್ಐಟಿಗೆ ನಿರ್ದೇಶಿಸಬೇಕು. ಶವಗಳು ದೊರೆತ ದಿನಾಂಕ, ಸ್ಥಳ, ಲಿಂಗ, ವಯಸ್ಸು ಇನ್ನಿತರ ಮಾಹಿತಿಗಳು ಸೇರಿ ಎಲ್ಲ 74 ಪ್ರಕರಣಗಳ ವಿವರಗಳನ್ನು ವ್ಯಾಪಕವಾಗಿ ವಿತರಣೆಯಾಗುವ ಕನಿಷ್ಠ ಮೂರು ಪತ್ರಿಕೆಗಳಲ್ಲಿ (ಕನ್ನಡ, ಇಂಗ್ಲಿಷ್) ಹಾಗೂ ಸಾರ್ವಜನಿಕ ವೆಬ್ಸೈಟ್ನಲ್ಲಿ ಪ್ರಕಟಿಸಲು ಆದೇಶಿಸಬೇಕು. ► ಸಾರ್ವಜನಿಕ ಪ್ರಕಟಣೆಯಲ್ಲಿ ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು ಸೂಕ್ತ ಮಾಹಿತಿಯೊಂದಿಗೆ ಎಸ್ಐಟಿಯನ್ನು ಸಂಪರ್ಕಿಸಲು ಸ್ಪಷ್ಟ ಸೂಚನೆ ನೀಡಲು ಹಾಗೂ ನಿಯೋಜಿತ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು. ► ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವಸ್ತುಸ್ಥಿತಿ ವರದಿಯನ್ನು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್ಐಟಿಗೆ ನಿರ್ದೇಶಿಸಬೇಕು.
ಮಂಗಳೂರು| ನಿಟ್ಟೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಿನಯ ಹೆಗ್ಡೆಗೆ ಶ್ರದ್ಧಾಂಜಲಿ
ಮಂಗಳೂರು: ನಿಟ್ಟೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಿನಯ ಹೆಗ್ಡೆ ಅವರಿಗೆ ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ ಇಂದು ನಿಟ್ಟೆ ಗುತ್ತು ಕುಟುಂಬದ ವತಿಯಿಂದ ನಡೆದ ಉತ್ತರಕ್ರೀಯೆ ಮತ್ತು ಶ್ರದ್ಧಾಂಜಲಿ ಕಾರ್ಯ ಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿನಯ ಹೆಗ್ಡೆಯವರ ಸಹೋದರ ವಿಶ್ರಾಂತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹಾಗೂ ಭಾರತೀಯ ರೆಡ್ ಕ್ರಾಸ್ ನ ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ.ಶಾಂತಾರಾಮ ಶೆಟ್ಟಿಯವರು ಸದ್ಗತಿಯ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್, ಶಾಸಕರು, ಮಾಜಿ ಸಚಿವರು , ಸಂಸದರು, ಮಾಜಿ ಸಂಸದರು, ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ್ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾ ನಿಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ, ಗಣೇಶ್ ಕಾರ್ನಿಕ್ , ನಿಟ್ಟೆ ಗುತ್ತು ಕುಟುಂಬದ ಸದಸ್ಯರಾದ ಕ್ಯಾ.ಪ್ರಸನ್ನ ಹೆಗ್ಡೆ, ನಿರ್ಮಲಾ ಅಡ್ಯಂತಾಯ, ಅಶಾ ಅಜಿಲ, ಸುಜಾತಾ ವಿನಯ ಹೆಗ್ಡೆ, ಅಶ್ವಿತ, ರೋಹಿತ್ ಪೂಂಜ, ವಿಶಾಲ್ ರೂಪಾ ಹೆಗ್ಡೆ, ಆವಿಷ್ಕಾ, ವೀರೆನ್, ವೈಷ್ಣವಿ ಹಾಗೂ ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಬೃಹತ್ ಸಂಖ್ಯೆಯ ಜನಸ್ತೋಮ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿದರು.
ರಾಯಚೂರು | ಗುತ್ತಿಗೆ ಕಂಪನಿಗೆ ಬಿಲ್ ಬಾಕಿ : ಸಮಾಜ ಕಲ್ಯಾಣ ಇಲಾಖೆಯ ಪೀಠೋಪಕರಣಗಳು ಜಪ್ತಿ
ರಾಯಚೂರು: ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆ ಸಂಸ್ಥೆಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ, ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾದ ಅಪರೂಪದ ಘಟನೆ ನಡೆದಿದೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆಯನ್ನು 'ಪದ್ಮಾವತಿ ಎಂಟರ್ಪ್ರೈಸ್' ಸಂಸ್ಥೆ ಪಡೆದಿತ್ತು. ನಿಯಮಾನುಸಾರ ಇಲಾಖೆಯು ಗುತ್ತಿಗೆದಾರರಿಗೆ ಒಟ್ಟು 32.52 ಲಕ್ಷ ರೂ. ಹಣ ಪಾವತಿ ಮಾಡಬೇಕಿತ್ತು. ಆದರೆ, ಇಲಾಖೆಯು ಹಣ ಪಾವತಿಸಲು ವಿಳಂಬ ಮಾಡಿದ್ದರಿಂದ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾ ಸತ್ರ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಇಲಾಖೆಯು ಈ ಹಿಂದೆ 16.14 ಲಕ್ಷ ರೂ. ಪಾವತಿಸಿತ್ತು. ಆದರೆ, ಬಾಕಿ ಉಳಿದಿದ್ದ 16.91 ಲಕ್ಷ ರೂ. ಹಣವನ್ನು ನೀಡಲು ಮತ್ತೆ ವಿಳಂಬ ಧೋರಣೆ ಅನುಸರಿಸಿದಾಗ, ಗುತ್ತಿಗೆದಾರರು ಪುನಃ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಸಮೇತ ಬಾಕಿ ಹಣವನ್ನು ಪಾವತಿಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶವನ್ನೂ ಪಾಲಿಸಲು ಇಲಾಖೆ ವಿಫಲವಾದ ಕಾರಣ, ಅಧಿಕಾರಿಗಳ ಸೂಚನೆಯಂತೆ ಇಂದು ಕಚೇರಿಯ ಪೀಠೋಪಕರಣಗಳು ಹಾಗೂ ಇತರ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಸರ್ಕಾರದ ಇಲಾಖೆಯೊಂದರ ಕಚೇರಿ ಸಾಮಗ್ರಿಗಳೇ ಜಪ್ತಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಂಸದರ ನಿಧಿ ಬಳಕೆ: ಪಾರದರ್ಶಕತೆಯೇ ಅಥವಾ ರಾಜಕೀಯ ನಿಯಂತ್ರಣವೇ?
ಪಶ್ಚಿಮ ಬಂಗಾಳ ರಾಜಕೀಯ ಸಂಘರ್ಷದ ನಡುವೆ ಗರಿಗೆದರಿದ MPLADS ಕುರಿತ ಚರ್ಚೆ
ಬೆಂಗಳೂರು ರೈಲ್ವೆ ಹಳಿ ವಿದ್ಯುದ್ದೀಕರಣ ಶೇಕಡಾ 99ರಷ್ಟು ಪೂರ್ಣ! ರೈಲುಗಳು ಡೀಸೆಲ್ನಿಂದ ಮುಕ್ತಿ
ನೈರುತ್ಯ ರೈಲ್ವೆಯು ಡೀಸೆಲ್ ರೈಲುಗಳನ್ನು ವಿದ್ಯುತ್ ರೈಲುಗಳಾಗಿ ಪರಿವರ್ತಿಸುವ ಕೆಲಸವನ್ನು ವೇಗಗೊಳಿಸಿದೆ. ಬೆಂಗಳೂರು ವಿಭಾಗದಲ್ಲಿ ಶೇಕಡಾ 99ರಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ದೇಶದ ರೈಲ್ವೆ ಜಾಲವನ್ನು 2030ರೊಳಗೆ ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ಗುರಿ ಇದೆ. ಇದರಿಂದ ಡೀಸೆಲ್ ಅವಲಂಬನೆ, ವೆಚ್ಚ ಮತ್ತು ಮಾಲಿನ್ಯ ಕಡಿಮೆಯಾಗಲಿದೆ. ರೈಲುಗಳ ವೇಗ, ಸಾಮರ್ಥ್ಯ ಹೆಚ್ಚಲಿದ್ದು, ಪ್ರಯಾಣದ ಅವಧಿಯೂ ತಗ್ಗಲಿದೆ.
‘ವಿಬಿ ಜಿ ರಾಮ್ ಜಿ’ ಕುರಿತು ಜಾಗೃತಿಗೆ ನಿರ್ಧಾರ: ಬಿ.ವೈ. ವಿಜಯೇಂದ್ರ
ಜ.17ಕ್ಕೆ ಬಳ್ಳಾರಿಯಲ್ಲಿ ಹೋರಾಟಕ್ಕೆ ಕರೆ
PSLV-C62 ವೈಫಲ್ಯದ ನಡುವೆಯೂ ಬಾಹ್ಯಾಕಾಶದಿಂದ ದತ್ತಾಂಶವನ್ನು ರವಾನಿಸಿದ ಏಕೈಕ ಜೀವಂತ ಸ್ಪಾನಿಶ್ ಉಪಗ್ರಹ!
ಹೊಸದಿಲ್ಲಿ: ಇಸ್ರೊದ ಪಿಎಸ್ಎಲ್ವಿ-ಸಿ62 ರಾಕೆಟ್ ವೈಫಲ್ಯಕ್ಕೆ ತಿರುವೊಂದು ದೊರೆತಿದ್ದು, ಸ್ಪೇನ್ನ ನವೋದ್ಯಮ ಸಂಸ್ಥೆ ಆರ್ಬಿಟಲ್ ಪ್ಯಾರಾಡಿಗ್ಮ್ ತನ್ನ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ (KID) ಉಪಗ್ರಹವು ಚಮತ್ಕಾರಕವಾಗಿ ಉಳಿದಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಉಪಗ್ರಹವು ವಿಭಜನೆ ಹಾಗೂ ಅತೀವ ಮರುಪ್ರವೇಶ ವಾತಾವರಣದ ನಡುವೆಯೂ ಜೀವಂತವಾಗುಳಿದು, ಮಹತ್ವದ ದತ್ತಾಂಶವನ್ನು ಭೂಮಿಗೆ ರವಾನಿಸಿದೆ ಎಂದು ಕಂಪನಿ ತಿಳಿಸಿದೆ. ಪ್ರೋಟೋಟೈಪ್ ಮಾದರಿಯ 25 ಕೆಜಿ ತೂಕದ ಫುಟ್ಬಾಲ್ನಂತಹ ಈ ಉಪಗ್ರಹವು, ಜನವರಿ 12ರಂದು ವಿಫಲಗೊಂಡ ಪಿಎಸ್ಎಲ್ವಿ-ಸಿ62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ಕಾಣಿಸಿಕೊಂಡ ವೈಫಲ್ಯದ ನಡುವೆಯೂ, ನಾಲ್ಕನೇ ಹಂತದಲ್ಲಿ ಯಶಸ್ವಿಯಾಗಿ ವಿಭಜನೆಗೊಂಡು ತನ್ನ ಕಕ್ಷೆಯನ್ನು ಸೇರಿದೆ ಎಂದು ಹೇಳಲಾಗಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್ಬಿಟಲ್ ಪ್ಯಾರಾಡಿಗ್ಮ್, “ಪಿಎಸ್ಎಲ್ವಿ-ಸಿ62 ಮೂಲಕ ಉಡಾವಣೆಗೊಂಡಿದ್ದ ನಮ್ಮ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ ಉಪಗ್ರಹವು ಸ್ವಿಚ್ ಆನ್ ಆಗಿದ್ದು, ಮೂರಕ್ಕಿಂತ ಹೆಚ್ಚು ನಿಮಿಷಗಳ ಕಾಲ ದತ್ತಾಂಶವನ್ನು ರವಾನಿಸಿದೆ. ನಾವು ಉಪಗ್ರಹದ ಪಥವನ್ನು ಮರುನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಉಪಗ್ರಹವು ಗರಿಷ್ಠ ಪ್ರಮಾಣದ ಉಷ್ಣಾಂಶ ಹಾಗೂ ಗರಿಷ್ಠ ಪ್ರಮಾಣದ ಜಿ-ಹೊರೆಯನ್ನು (28ಜಿ ದಾಖಲಾಗಿದೆ) ತಾಳಿಕೊಂಡಿದ್ದು, ಉಪಗ್ರಹದ ಒಳಭಾಗದಲ್ಲಿ ಉಷ್ಣತೆ ಉಳಿದಿದೆ. ಸಂಪೂರ್ಣ ವರದಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದೆ.
Uttar Pradesh | ಶಾಸಕ ಅಬ್ಬಾಸ್ ಅನ್ಸಾರಿಗೆ ಮಧ್ಯಂತರ ಜಾಮೀನು ಮಂಜೂರು ದೃಢಪಡಿಸಿದ 'ಸುಪ್ರೀಂ'
ಹೊಸದಿಲ್ಲಿ, ಜ. 13: ಉತ್ತರಪ್ರದೇಶದ ಗ್ಯಾಂಗ್ಸ್ಟರ್ಸ್ ಕಾಯ್ದೆ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ದಾಖಲಾದ ಪ್ರಕರಣದಲ್ಲಿ ದಿವಂಗತ ಗ್ಯಾಂಗ್ಸ್ಟರ್ ಮುಖ್ತರ್ ಅನ್ಸಾರಿ ಪುತ್ರ, ಉತ್ತರಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿಗೆ ಈ ಹಿಂದೆ ಮಂಜೂರು ಮಾಡಿದ ಮಧ್ಯಂತರ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ದೃಢಪಡಿಸಿದೆ. ಸುಲಿಗೆ ಹಾಗೂ ಹಲ್ಲೆ ಆರೋಪದಲ್ಲಿ ಅನ್ಸಾರಿ ಹಾಗೂ ಇತರರ ವಿರುದ್ಧ ಉತ್ತರಪ್ರದೇಶ ಗ್ಯಾಂಗ್ಸ್ಟರ್ಸ್ ಹಾಗೂ ಸಮಾಜವಿರೋಧಿ ಚಟುವಟಿಕೆ (ತಡೆ) ಕಾಯ್ದೆ, 1986ರ ಅಡಿಯಲ್ಲಿ ಚಿತ್ರಕೂಟ ಜಿಲ್ಲೆಯ ಕೊಟ್ವಾಲಿ ಕಾರ್ವಿ ಪೊಲೀಸ್ ಠಾಣೆಯಲ್ಲಿ 2024ರ ಆಗಸ್ಟ್ 31ರಂದು ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಕಳೆದ ವರ್ಷ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಅನ್ಸಾರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಮಂಗಳವಾರ ಅನ್ಸಾರಿ ಪರ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹಾಗೂ ನ್ಯಾಯವಾದಿ ನಿಝಾಮ್ ಪಾಶಾ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡು, ಪ್ರಕರಣದಲ್ಲಿ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಕ್ರಮಬದ್ಧಗೊಳಿಸಿತು. ಮಾರ್ಚ್ 25ರಂದು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನು ಅನ್ಸಾರಿ ಕಸ್ಗಂಜ್ ಕಾರಾಗೃಹದಿಂದ ಬಿಡುಗಡೆಯಾಗಲು ದಾರಿ ಮಾಡಿಕೊಟ್ಟಿದೆ.
ಔರಾದ್ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯ ಶಾಲಾ ಬ್ಯಾಗ್ ಕಳ್ಳತನ : ಕ್ರಮಕ್ಕಾಗಿ ಆಗ್ರಹ
ಔರಾದ್: ಪಟ್ಟಣದ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿರುವ ಪರಿಣಾಮ, ಸೋಮವಾರ ಹಾಡುಹಗಲೇ ವಿದ್ಯಾರ್ಥಿನಿಯೊಬ್ಬರ ಶಾಲಾ ಬ್ಯಾಗ್ ಕಳ್ಳತನವಾಗಿದೆ. ಈ ಭದ್ರತಾ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಕೋಳ್ಳೂರು ಗ್ರಾಮದ ವಿದ್ಯಾರ್ಥಿನಿ ನಂದಿನಿ ಎಂಬುವವರ ಬ್ಯಾಗ್ ಕಳ್ಳತನವಾಗಿದೆ. ಬ್ಯಾಗ್ನಲ್ಲಿ ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು ಹಾಗೂ ಪಠ್ಯಪುಸ್ತಕಗಳಿದ್ದವು ಎನ್ನಲಾಗಿದೆ. ಬ್ಯಾಗ್ ಕಳೆದುಕೊಂಡ ಬಗ್ಗೆ ದೂರು ನೀಡಲು ಮುಂದಾದಾಗ ಬಸ್ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳು ಹಲವು ದಿನಗಳಿಂದ ದುರಸ್ತಿಯಲ್ಲಿರುವುದು ಕಳ್ಳರಿಗೆ ವರದಾನವಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಸರಿಪಡಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿಸಿಟಿವಿ ಕಾರ್ಯನಿರ್ವಹಿಸಿದ್ದರೆ ಕಳ್ಳನನ್ನು ಪತ್ತೆಹಚ್ಚಲು ಸುಲಭವಾಗುತ್ತಿತ್ತು. ತಕ್ಷಣವೇ ಕ್ಯಾಮೆರಾಗಳನ್ನು ದುರಸ್ತಿ ಮಾಡಬೇಕು ಮತ್ತು ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಚಂದು ಡಿಕೆ, ದತ್ತಾತ್ರಿ ಬಾಪೂರೆ, ಮಹೇಶ್ ಸ್ವಾಮಿ, ರತ್ನಾದೀಪ್ ಕಸ್ತೂರೆ, ಸಂದೀಪ್ ಪಾಟೀಲ್, ಮಲಗೊಂಡ್ ಹಾಗೂ ರೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
KID Capsule Satellite: ಇಸ್ರೋ PSLV-C62 ಕಾರ್ಯಾಚರಣೆಯಲ್ಲಿ ಅಚ್ಚರಿ ಬೆಳವಣಿಗೆ: ಬದುಕುಳಿದ ಉಪಗ್ರಹ
ಬೆಂಗಳೂರು: ಈ ವರ್ಷ 2026ರಲ್ಲಿ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಭೂ ಸರ್ವೇಕ್ಷಣ ಉಪಗ್ರಹ ಒಳಗೊಂಡಂತೆ 14 ಉಪಗ್ರಹ ಹೊತ್ತ ಮೊದಲ 'ಪಿಎಸ್ಎಲ್ವಿ-ಸಿ62' ಮಿಷನ್ ಕಕ್ಷೆಗೆ ಸೇರುತ್ತಿದ್ದಂತೆ ವಿಫಲಗೊಂಡಿತು. ಇದಾಗಿ ಮರುದಿನವೇ ಮಹತ್ವದ ಬೆಳವಣಿಗೆ ನಡೆದಿದ್ದು, ಅದರಲ್ಲಿನ ಉಪಗ್ರಹವೊಂದು ಬದುಕುಳಿದಿದ್ದು ಇಸ್ರೋ ಗೆ ಮಾಹಿತಿ ರವಾನಿಸಿದೆ ಎಂದು ಆಬಿಟೈಲ್ ಪ್ಯಾರಾಡೈಮ್ ತಿಳಿಸಿದೆ. ರಾಕೇಟ್ ಉಡಾವಣೆ ವೈಫಲ್ಯವಾದಾಗ ಅದರಲ್ಲಿನ
I-PAC ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದ ಮೇಲೆ ದಾಳಿ; ED ಅಧಿಕಾರಿಗಳ ಗುರುತು ಪತ್ತೆಗೆ ಪೊಲೀಸರ ಶೋಧ
ಕೋಲ್ಕತಾ, ಜ. 13: ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ನ ಕಚೇರಿ ಹಾಗೂ ಅದರ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಗುರುತನ್ನು ಕೋಲ್ಕತಾ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತೀಕ್ ಜೈನ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ಶೋಧ ಕಾರ್ಯಾಚರಣೆಯನ್ನು ಅವರು ನೋಡಿದ್ದಾರೆಯೇ ಅಥವಾ ಇಲ್ಲಿನ ಲಂಡನ್ ಸ್ಟ್ರೀಟ್ನಲ್ಲಿರುವ ಅವರ ನಿವಾಸವನ್ನು ಪ್ರವೇಶಿಸಿದ ರೀತಿಯನ್ನು ಖಚಿತಪಡಿಸಿಕೊಳ್ಳಲು ಜೈನ್ ಅವರ ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿ ಹಲವು ನಿವಾಸಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. “ಬೆಳಗ್ಗೆ ನಿವಾಸಿಗಳು ಹಾಗೂ ನೆರೆಹೊರೆಯವರು ಏನು ನೋಡಿದ್ದಾರೆ ಎಂಬುದನ್ನು ನಾವು ತಿಳಿಯಲು ಬಯಸಿದ್ದೇವೆ. ಘಟನೆಯ ಅನುಕ್ರಮವನ್ನು ತಿಳಿಯಲು ಅವರ ಹೇಳಿಕೆಗಳು ನಿರ್ಣಾಯಕ” ಎಂದು ಅವರು ಸೋಮವಾರ ತಿಳಿಸಿದ್ದಾರೆ. “ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಹೆಸರುಗಳು ವಸತಿ ಸಂಕೀರ್ಣದ ಭದ್ರತಾ ನೋಂದಣಿಯಲ್ಲಿ ಕಂಡು ಬಂದಿಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮಾಣಿತ ಪ್ರವೇಶ ಕಾರ್ಯವಿಧಾನವನ್ನು ಅನುಸರಿಸದೆ, ಭದ್ರತಾ ಸಿಬ್ಬಂದಿಯನ್ನು ದೂಡಿಕೊಂಡು ವಸತಿ ಸಂಕೀರ್ಣದ ಆವರಣ ಪ್ರವೇಶಿಸಿದ್ದಾರೆ” ಎಂದು ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್ಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
Indore ದುರಂತ | ಮತ್ತಿಬ್ಬರು ಮೃತ್ಯು; 23ಕ್ಕೆ ಏರಿದ ಮೃತರ ಸಂಖ್ಯೆ
ಇಂದೋರ್, ಜ. 13: ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಬಾಧಿಸಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಇಂದೋರ್ನ ಬಾಂಬೆ ಆಸ್ಪತ್ರೆಯಲ್ಲಿ ಸುಮಾರು 10 ದಿನಗಳಿಂದ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಗವಾನ್ದಾಸ್ ಭಾರ್ನೆ (64) ಮೃತಪಟ್ಟಿದ್ದಾರೆ. ಅತಿಸಾರದ ಲಕ್ಷಣಗಳ ಹಿನ್ನೆಲೆಯಲ್ಲಿ ಅವರನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಅನಂತರ 10 ದಿನಗಳ ಹಿಂದೆ ಅವರನ್ನು ಬಾಂಬೆ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಬಾಂಬೆ ಆಸ್ಪತ್ರೆಯ ಅಧಿಕೃತ ಮೂಲಗಳ ಪ್ರಕಾರ, ವೆಂಟಿಲೇಟರ್ ಬೆಂಬಲದಲ್ಲಿದ್ದ ಭಗವಾನ್ದಾಸ್ ಅವರು ಮಧುಮೇಹ ಪೀಡಿತ ಪಾದ, ಗ್ಯಾಂಗ್ರಿನ್, ಬಹು ಅಂಗಾಂಗ ವೈಫಲ್ಯ ಸೇರಿದಂತೆ ಹಲವು ಸಹವ್ಯಾಧಿಗಳಿಂದ ಬಳಲುತ್ತಿದ್ದರು. ತುರ್ತು ನಿಗಾ ಘಟಕದಲ್ಲಿ ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲಿಲ್ಲ. ಅವರು ಸೋಮವಾರ ಮೃತಪಟ್ಟರು. ಭಗವಾನ್ ದಾಸ್ ಸಾವನ್ನಪ್ಪಿದ ಬಳಿಕ ಬಾಂಬೆ ಆಸ್ಪತ್ರೆಯಲ್ಲಿ ಪ್ರಸಕ್ತ 9 ರೋಗಿಗಳು ದಾಖಲಾಗಿದ್ದಾರೆ. ಅವರಲ್ಲಿ ಮೂವರು ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದಾರೆ. “ವೈದ್ಯರ ತಂಡದ ಚಿಕಿತ್ಸೆಗೆ ನಾಲ್ಕರಿಂದ ಐದು ರೋಗಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಗಮನಾರ್ಹ ಚೇತರಿಕೆಯ ಹಿನ್ನೆಲೆಯಲ್ಲಿ ಅವರನ್ನು ವಾರ್ಡ್ಗಳಿಗೆ ವರ್ಗಾಯಿಸಲಾಗಿದೆ” ಎಂದು ಬಾಂಬೆ ಆಸ್ಪತ್ರೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಭಗವಾನ್ದಾಸ್ ಅವರು ಸಾವನ್ನಪ್ಪುವುದಕ್ಕಿಂತ ಮೊದಲು, ಜನವರಿ 5–6ರಂದು ಅತಿಸಾರ ಹಾಗೂ ವಾಂತಿ ಬಾಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮೈ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾ ಭಾಯಿ (59) ಎಂಬವರು ಜನವರಿ 9ರಂದು ಮೃತಪಟ್ಟಿದ್ದಾರೆ. ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಅತಿಸಾರ ಬಾಧಿಸಿ ಹಲವು ಸಾವುಗಳು ಸಂಭವಿಸಿದ ಬಳಿಕ ಈ ಸಾವುಗಳು ವರದಿಯಾಗಿವೆ. ಆದರೆ, ಇಂದೋರ್ ಅಧಿಕಾರಿಗಳು ಈ ಸಾವುಗಳನ್ನು ಇನ್ನೂ ದೃಢಪಡಿಸಿಲ್ಲ.
ಅಂತರ್ಯುದ್ಧದ ನಡುವೆಯೇ ಮ್ಯಾನ್ಮಾರ್ ನಲ್ಲಿ ಯಾಕಾಗಿ ಚುನಾವಣೆ: ಹೇಗೆ ನಡೆದಿದೆ ಮತದಾನ?
ಮ್ಯಾನ್ಮಾರ್ ನಲ್ಲಿ ಐದು ವರ್ಷಗಳ ಬಳಿಕ ಸೇನೆಯ ಉಸ್ತುವಾರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಮ್ಯಾನ್ಮಾರ್ ನ ಪ್ರಮುಖ ಮಿಲಿಟರಿ ಪರ ರಾಜಕೀಯ ಪಕ್ಷ ಕೆಳಮನೆಯಲ್ಲಿ ಚುನಾಯಿತ ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವುದಾಗಿ ಹೇಳಿಕೊಂಡಿದೆ. ಈ ಬೆಳವಣಿಗೆಯು ಸಶಸ್ತ್ರ ಪಡೆಗಳ ಅಧಿಕಾರದ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಪ್ರಜಾಪ್ರಭುತ್ವದ ಪ್ರತಿಪಾದಕರು ಎಚ್ಚರಿಸಿದ್ದಾರೆ. ಸ್ವಾತಂತ್ರ್ಯಾನಂತರದ ಇತಿಹಾಸದ ಬಹುಪಾಲು ಕಾಲ ದೇಶದ ಮಿಲಿಟರಿ ಮ್ಯಾನ್ಮಾರ್ ನ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದೆ. 2021ರಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರ ವಹಿಸಿಕೊಂಡಿತ್ತು. ಇದು ಜನಾಕ್ರೋಶಕ್ಕೆ ಕಾರಣವಾಗಿದ್ದು, ನಂತರ ಅದು ಅಂತರ್ಯುದ್ಧವಾಗಿ ಬೆಳೆಯಿತು. ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಚುನಾವಣೆ ನಡೆಸುತ್ತಿದ್ದೇವೆ ಎಂದು ಸೇನೆ ಹೇಳಿದ್ದರೂ, ಚುನಾವಣೆಗೂ ಮುನ್ನ ಪ್ರಮುಖ ವಿರೋಧ ಪಕ್ಷಗಳನ್ನು ನಿಷೇಧಿಸಿತ್ತು. ಮ್ಯಾನ್ಮಾರ್ ಚುನಾವಣೆ 2021ರ ಫೆಬ್ರುವರಿಯಲ್ಲಿ ಚುನಾವಣಾ ಗೆಲುವಿನ ನಂತರ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ತಯಾರಿ ನಡೆಸುತ್ತಿದ್ದಾಗ, ನೊಬೆಲ್ ಪ್ರಶಸ್ತಿ ವಿಜೇತ ಆಂಗ್ ಸಾನ್ ಸೂ ಕಿ ಅವರ ಚುನಾಯಿತ ಸರ್ಕಾರವನ್ನು ರದ್ದುಪಡಿಸಿ ಮಿಲಿಟರಿ ಅಧಿಕಾರ ವಹಿಸಿಕೊಂಡಿತ್ತು. ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದಾಗಿ ಜನರಲ್ ಗಳು ಭರವಸೆ ನೀಡಿದ್ದಾರೆ. ಸೂ ಕಿ ಮತ್ತು ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ವಿರುದ್ಧ ಮಿಲಿಟರಿ ಪಡೆ ಚುನಾವಣಾ ವಂಚನೆಯ ಆರೋಪ ಮಾಡಿತ್ತು. ಈ ಆರೋಪವನ್ನು ಸೂ ಕಿ ತಿರಸ್ಕರಿಸಿದ್ದರು. ಅಂತರರಾಷ್ಟ್ರೀಯ ಚುನಾವಣಾ ವೀಕ್ಷಕರು ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಹೇಳಿದ್ದರು. ತರುವಾಯ ಸೂ ಕಿ ಹಾಗೂ ಎನ್ಎಲ್ಡಿ ಕಾರ್ಯಕರ್ತರನ್ನು ಸೇರಿಸಿ ಸಾವಿರಾರು ಜುಂಟಾ ವಿರೋಧಿಗಳನ್ನು ಬಂಧಿಸಲಾಯಿತು. ಕಳೆದ ಆರು ದಶಕಗಳಲ್ಲಿ ಹೆಚ್ಚಿನ ಕಾಲ ಮ್ಯಾನ್ಮಾರ್ ಅನ್ನು ಆಳಿರುವ ಮಿಲಿಟರಿಗೆ, ಕಾರ್ಯಸಾಧ್ಯವಾದ ರಾಜಕೀಯ ವಿರೋಧದ ಅನುಪಸ್ಥಿತಿಯಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಲು ಮತ್ತು ದೇಶದೊಳಗೂ ವಿದೇಶಗಳಲ್ಲೂ ನ್ಯಾಯಸಮ್ಮತತೆಯನ್ನು ಗಳಿಸಲು ಚುನಾವಣೆ ಒಂದು ಮಾರ್ಗವೆಂದು ಹೆಚ್ಚಿನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 2023ರೊಳಗೆ ಚುನಾವಣೆಯನ್ನು ನಡೆಸುವುದಾಗಿ ಮಿಲಿಟರಿ ಪ್ರತಿಜ್ಞೆ ಮಾಡಿತ್ತು. ಆದರೆ ಜನಾಂಗೀಯ ಅಲ್ಪಸಂಖ್ಯಾತ ಬಂಡುಕೋರರು ಮತ್ತು ಜುಂಟಾ ವಿರೋಧಿಗಳೊಂದಿಗೆ ನಡೆಯುತ್ತಿರುವ ಯುದ್ಧಗಳಲ್ಲಿ ದೇಶದ ಕೆಲವು ಭಾಗಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಕಾರಣ ದಿನಾಂಕವನ್ನು ಮುಂದೂಡಿತು. ಚುನಾವಣೆಗೆ ನೋಂದಾಯಿಸಲು ವಿಫಲವಾದ ಹಾಗೂ ಬಂಡುಕೋರರು ಭಾಗವಹಿಸಲು ನಿರಾಕರಿಸಿದ ಕಾರಣ ವಿಸರ್ಜಿಸಲಾದ ಡಜನ್ಗಟ್ಟಲೆ ಪಕ್ಷಗಳಲ್ಲಿ ಎನ್ಎಲ್ಡಿ ಕೂಡ ಸೇರಿತ್ತು. ಮೂರು ಹಂತಗಳಲ್ಲಿ ಮತದಾನ 2025ರ ಡಿಸೆಂಬರ್ 28 ಮತ್ತು 2026ರ ಜನವರಿ 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 2026ರ ಜನವರಿ 25ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಮ್ಯಾನ್ಮಾರ್ನ 330 ಪಟ್ಟಣಗಳಲ್ಲಿ 265 ಪಟ್ಟಣಗಳಲ್ಲಿ ಮತದಾನ ನಡೆಯುತ್ತಿದ್ದು, ಜುಂಟಾ ಸಂಪೂರ್ಣ ನಿಯಂತ್ರಣ ಹೊಂದಿರದ ಪ್ರದೇಶಗಳೂ ಇದರಲ್ಲಿ ಸೇರಿವೆ. ಸಂಘರ್ಷದ ಕಾರಣ ದೇಶಾದ್ಯಂತ ಮತದಾನ ನಡೆಯುತ್ತಿಲ್ಲ. ಅಂತಿಮ ಫಲಿತಾಂಶಗಳನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮತ ಎಣಿಕೆಯನ್ನು ವೇಗಗೊಳಿಸಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಸ್ಥಾನಗಳನ್ನು ‘ಮೊದಲು ಅತಿ ಹೆಚ್ಚು ಮತಗಳಿಸಿದವರಿಗೆ’ ವಿಧಾನ, ಅನುಪಾತದ ಪ್ರಾತಿನಿಧ್ಯ ಹಾಗೂ ಮಿಶ್ರ-ಸದಸ್ಯ ಅನುಪಾತದ ವ್ಯವಸ್ಥೆಗಳ ಮೂಲಕ ನಿರ್ಧರಿಸಲಾಗುತ್ತದೆ. ಹಿಂದಿನ ಚುನಾವಣೆಗಳು ಬಹುಮತ ವ್ಯವಸ್ಥೆಯನ್ನು ಬಳಸಿದ್ದವು. ಸೇನೆ ಕರಡುಗೊಳಿಸಿದ 2008ರ ಸಂವಿಧಾನಕ್ಕೆ ಅನುಗುಣವಾಗಿ, ಮೇಲ್ಮನೆ ಮತ್ತು ಕೆಳಮನೆ ಸ್ಥಾನಗಳಲ್ಲಿ 25% ಸಶಸ್ತ್ರ ಪಡೆಗಳ ಮುಖ್ಯಸ್ಥರು ಆಯ್ಕೆ ಮಾಡಿದ ಸೇವೆ ಸಲ್ಲಿಸುವ ಮಿಲಿಟರಿ ಅಧಿಕಾರಿಗಳಿಗೆ ಮೀಸಲಾಗಿವೆ. ಚುನಾವಣಾ ಕಣದಲ್ಲಿ ಯಾರೆಲ್ಲ ಇದ್ದಾರೆ? ಕಳೆದ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅನೇಕ ಪಕ್ಷಗಳು ವಿಸರ್ಜಿಸಲ್ಪಟ್ಟಿರುವುದರಿಂದ, ಕೇವಲ ಆರು ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿವೆ. 51 ಪಕ್ಷಗಳು ಒಂದೇ ಪ್ರದೇಶ ಅಥವಾ ರಾಜ್ಯದೊಳಗೆ ಸ್ಪರ್ಧಿಸುತ್ತಿವೆ. 2010ರಲ್ಲಿ ಜುಂಟಾ ನಡೆಸಿದ ಕೊನೆಯ ಚುನಾವಣೆಯಲ್ಲಿ ಗೆದ್ದ ಮಿಲಿಟರಿಯ ಪ್ರಾಕ್ಸಿ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್ಮೆಂಟ್ ಪಾರ್ಟಿ (USDP) ಸೇರಿದಂತೆ ಜುಂಟಾ-ಅನುಮೋದಿತ ಪಕ್ಷಗಳು ಮಾತ್ರ ಉಳಿದಿವೆ. ಯುಎಸ್ಡಿಪಿ 1,018 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇದು ಒಟ್ಟು ನೋಂದಾಯಿತ ಅಭ್ಯರ್ಥಿಗಳಲ್ಲಿ ಐದನೇ ಒಂದು ಭಾಗವಾಗಿದೆ. ಮಾಜಿ ಜನರಲ್ಗಳ ನೇತೃತ್ವದ ಯುಎಸ್ಡಿಪಿಯನ್ನು 2015 ಮತ್ತು 2020ರ ಚುನಾವಣೆಗಳಲ್ಲಿ ಎನ್ಎಲ್ಡಿ ಭಾರಿ ಅಂತರದಲ್ಲಿ ಸೋಲಿಸಿತ್ತು. 2010ರಂತೆಯೇ ಸಶಸ್ತ್ರ ಪಡೆಗಳು ಶಾಸಕಾಂಗದ 25% ಅನ್ನು ನಿಯಂತ್ರಿಸುತ್ತಿವೆ. ಇದೇ ವೇಳೆ ಯುಎಸ್ಡಿಪಿ ಮಿತ್ರಪಕ್ಷಗಳು ಅನೇಕ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿರುವುದರಿಂದ, ಮಿಲಿಟರಿ ಅಧ್ಯಕ್ಷರ ಆಯ್ಕೆ ಹಾಗೂ ಸರ್ಕಾರ ರಚನೆಯ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಏನೇನಾಗಿದೆ? ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದ 102 ಕೆಳಮನೆ ಸ್ಥಾನಗಳಲ್ಲಿ 90 (ಅಥವಾ 88.2%) ಸ್ಥಾನಗಳನ್ನು ಯುಎಸ್ಡಿಪಿ ಗೆದ್ದುಕೊಂಡಿತು. 13 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. 31 ಮೇಲ್ಮನೆ ಸ್ಥಾನಗಳಲ್ಲಿ ಯುಎಸ್ಡಿಪಿ 21 ಸ್ಥಾನಗಳನ್ನು ಗಳಿಸಿದೆ. ಎರಡನೇ ಸುತ್ತಿನ ಮತದಾನದ ಫಲಿತಾಂಶಗಳು ಇನ್ನೂ ಪ್ರಕಟವಾಗಿಲ್ಲ. ಮೊದಲ ಹಂತದ ಮತದಾನದಲ್ಲಿ ಮತದಾರರ ಹಾಜರಾತಿ 52.13% ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಇದು ಸುಮಾರು 70% ಇತ್ತು. ಕಡಿಮೆ ಮತದಾನದ ಪ್ರಮಾಣವನ್ನು ಮರೆಮಾಡಲು ಜುಂಟಾ ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಇದು ಕೇವಲ ಸರ್ಕಾರದ ವಿಜಯವಲ್ಲ, ಜನರ ವಿಜಯ; ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಬಯಸುವವರಿಗೆ ದೊರೆತ ಸಾಧನೆ ಎಂದು ವಕ್ತಾರ ಜಾವ್ ಮಿನ್ ಟುನ್ ಹೇಳಿದ್ದಾರೆ. ಅಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಚುನಾವಣೆ ಪ್ರಾರಂಭವಾದ 90 ದಿನಗಳೊಳಗೆ ಸಂಸತ್ತು ಸಭೆ ಸೇರಬೇಕು. ಇದು ಬಹುಶಃ ಮಾರ್ಚ್ನಲ್ಲಿ ನಡೆಯಲಿದೆ ಎಂದು ಜುಂಟಾ ಹೇಳಿದೆ. ಸ್ಪೀಕರ್ಗಳ ಆಯ್ಕೆಯ ನಂತರ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತದೆ. ಅಧ್ಯಕ್ಷರನ್ನು ಆಯ್ಕೆ ಮಾಡಲು, ಮೇಲ್ಮನೆ ಮತ್ತು ಕೆಳಮನೆ ಸದಸ್ಯರನ್ನು ಒಳಗೊಂಡ ಮೂರು ಚುನಾವಣಾ ಕಾಲೇಜುಗಳನ್ನು ರಚಿಸಲಾಗುತ್ತದೆ. ಪ್ರತಿಯೊಂದು ಕಾಲೇಜೂ ಒಬ್ಬೊಬ್ಬ ಅಧ್ಯಕ್ಷೀಯ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುತ್ತದೆ. ಎರಡು ಕಾಲೇಜುಗಳು ಚುನಾಯಿತ ಶಾಸಕರಾಗಿದ್ದರೆ, ಮೂರನೇದು ಮಿಲಿಟರಿ-ನೇಮಿತ ಶಾಸಕರನ್ನು ಮಾತ್ರ ಒಳಗೊಂಡಿರುತ್ತದೆ. ಸಂಯೋಜಿತ ಸದನಗಳಲ್ಲಿ ನಡೆಯುವ ಸಮಗ್ರ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯೇ ಅಧ್ಯಕ್ಷರಾಗುತ್ತಾರೆ. ರನ್ನರ್-ಅಪ್ ಉಪಾಧ್ಯಕ್ಷರಾಗಿರುತ್ತಾರೆ. ನಂತರ ಅಧ್ಯಕ್ಷರು ಸಚಿವ ಸಂಪುಟವನ್ನು ನೇಮಿಸುತ್ತಾರೆ. ಏಪ್ರಿಲ್ನಲ್ಲಿ ಸರ್ಕಾರ ಜಾರಿಯಲ್ಲಿರಬೇಕು ಎಂದು ಜುಂಟಾ ಹೇಳಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆ ಏನು? ವಿಶ್ವಸಂಸ್ಥೆ, ಅನೇಕ ಪಾಶ್ಚಿಮಾತ್ಯ ದೇಶಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಈ ಚುನಾವಣೆಯನ್ನು ನೆಪಮಾತ್ರ ಎಂದು ಕರೆದಿವೆ. ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ನಡೆದ ಈ ಚುನಾವಣೆ ಮುಕ್ತವೂ, ನ್ಯಾಯಯುತವೂ, ವಿಶ್ವಾಸಾರ್ಹವೂ ಅಲ್ಲ ಎಂದು ಅವುಗಳು ಅಭಿಪ್ರಾಯಪಟ್ಟಿವೆ. ಮ್ಯಾನ್ಮಾರ್ ಸದಸ್ಯರಾಗಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯನ್) ನ್ಯಾಯಯುತ ಹಾಗೂ ಎಲ್ಲರನ್ನು ಒಳಗೊಂಡ ಚುನಾವಣೆಗೆ ಕರೆ ನೀಡಿದೆ. ಆದಾಗ್ಯೂ, ಮಿನ್ ಆಂಗ್ ಹ್ಲೈಂಗ್ ಚುನಾವಣೆಗೆ ಬೆಂಬಲ ಗಳಿಸಲು ಪ್ರಮುಖ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಭಾರತದಂತೆ ಪ್ರಮುಖ ಮಿತ್ರ ರಾಷ್ಟ್ರಗಳಾದ ಚೀನಾ ಮತ್ತು ರಷ್ಯಾಕ್ಕೆ ತಲಾ ಎರಡು ಬಾರಿ ಭೇಟಿ ನೀಡಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಅಂತರರಾಷ್ಟ್ರೀಯ ಟೀಕೆಗಳನ್ನು ತಿರಸ್ಕರಿಸಿರುವ ಮಿಲಿಟರಿ, ಇಲ್ಲಿ ಯಾವುದೇ ಬಲವಂತವಿಲ್ಲ ಮತ್ತು ಚುನಾವಣೆಗೆ ಸಾರ್ವಜನಿಕ ಬೆಂಬಲವಿದೆ ಎಂದು ಹೇಳಿದೆ. ಇದೇ ವೇಳೆ ಹೊಸ ಆಡಳಿತದೊಂದಿಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆ, ಅಂತರರಾಷ್ಟ್ರೀಯ ಮನ್ನಣೆ ಹಾಗೂ ನಿರ್ಬಂಧಗಳ ಸಡಿಲಿಕೆಯನ್ನು ನಿರೀಕ್ಷಿಸುತ್ತಿರುವುದಾಗಿ ಅದರ ವಕ್ತಾರರು ತಿಳಿಸಿದ್ದಾರೆ.
ಔರಾದ್ | ಅಂಗಡಿಗಳಿಗೆ ಬೆಂಕಿ : ಸರಕಾರದಿಂದ ಪರಿಹಾರದ ಭರವಸೆ ನೀಡಿದ ಡಾ. ಭೀಮಸೇನರಾವ್ ಶಿಂಧೆ
ಔರಾದ್: ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಅಂಗಡಿಗಳಿಗೆ ನಿವೃತ್ತ ಅಪರ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ್ ಶಿಂಧೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಾಂಡೆ ಅಂಗಡಿ, ಫರ್ನಿಚರ್, ಚಪ್ಪಲಿ, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಸೇರಿದಂತೆ ಒಟ್ಟು 11 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂದರ್ಭದಲ್ಲಿ ಮಾತನಾಡಿದ ಶಿಂಧೆ ಅವರು, ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರದ ವತಿಯಿಂದ ಆದಷ್ಟು ಬೇಗ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಗ್ನಿಶಾಮಕ ದಳದಲ್ಲಿ ಕೇವಲ ಒಂದು ವಾಹನ ಇದ್ದ ಕಾರಣ ಬೆಂಕಿ ನಂದಿಸಲು ವಿಳಂಬವಾಯಿತು ಮತ್ತು ಹಾನಿಯ ಪ್ರಮಾಣ ಹೆಚ್ಚಾಯಿತು ಎಂದು ಮಾಲೀಕರು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಾ. ಶಿಂಧೆ, ಔರಾದ್ ಮತ್ತು ಕಮಲನಗರ ತಾಲೂಕುಗಳಿಗೆ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಲಕ್ಷಾಂತರ ರೂಪಾಯಿ ಮೌಲ್ಯದ ಸರಕು-ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ವ್ಯಾಪಾರವನ್ನೇ ನಂಬಿದ್ದ ನಮ್ಮ ಕುಟುಂಬಗಳು ಈಗ ಬೀದಿಗೆ ಬಂದಿವೆ. ಕೂಡಲೇ ಸರ್ಕಾರ ನಮಗೆ ಆರ್ಥಿಕ ನೆರವು ನೀಡಬೇಕು ಎಂದು ಸಂತ್ರಸ್ತ ಮಾಲಕರು ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚನ್ನಪ್ಪ ಉಪ್ಪೆ, ಮುಖಂಡ ರಾಮಣ್ಣ ವಡಿಯಾರ್, ಪ.ಪಂ ಮಾಜಿ ಅಧ್ಯಕ್ಷ ಸುನಿಲಕುಮಾರ್ ದೇಶಮುಖ, ತಾ.ಪಂ ಮಾಜಿ ಅಧ್ಯಕ್ಷ ನೇಹರು ಪಾಟೀಲ್, ಸೂರ್ಯಕಾಂತ್ ಮಾಲೆ, ತುಕಾರಾಮ್ ಹಸನ್ಮುಖಿ ಹಾಗೂ ಸೂರ್ಯಕಾಂತ್ ಮಮದಾಪೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತನಗೆ ಕಚ್ಚಿದ ಹಾವನ್ನು ಜೇಬಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕ!
ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕ
ಉಡುಪಿ| ಅಂತರಾಜ್ಯ ಬೈಕ್ ಕಳವು ಆರೋಪಿಗಳ ಬಂಧನ
ಉಡುಪಿ, ಜ.13: ಉಡುಪಿ ಕರಾವಳಿ ಬೈಪಾಸ್ ಬಳಿ ಕೆಲ ದಿನಗಳ ಹಿಂದೆ ನಡೆದ ಬೈಕ್ ಕಳ್ಳತನಕ್ಕೆ ಸಂಬಂಧಿಸಿ ಇಬ್ಬರು ಅಂತರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರು ಜ.4ರಂದು ಕೇರಳ ರಾಜ್ಯದ ಕೋಯಿಕ್ಕೋಡು ಜಿಲ್ಲೆ ಮುಕ್ಕಂ ಎಂಬಲ್ಲಿ ಬಂಧಿಸಿದ್ದಾರೆ. ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಆಶಿಕ್ ಅನ್ಸಾರ್(19) ಹಾಗೂ ಅಲ್ತಾಫ್(23) ಬಂಧಿತ ಆರೋಪಿಗಳು. ಇವರಿಂದ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಮೂಡನಿಡಂಬೂರು ಗ್ರಾಮದ ನಾಗಚಂದ್ರ ಎಂಬವರು ಡಿ.28ರಂದು ರಾತ್ರಿ ಕರಾವಳಿ ಬೈಪಾಸ್ ಬಳಿ ನಿಲ್ಲಿಸಿದ್ದ 70,000ರೂ. ಮೌಲ್ಯದ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಉಡುಪಿ ಡಿವೈಎಸ್ಪಿ ಡಿಟಿ ಪ್ರಭು ನಿರ್ದೇಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ, ಗೋಪಾಲಕೃಷ್ಣ ಜೋಗಿ ನೇತೃತ್ವದಲ್ಲಿ ಪ್ರಸನ್ನ ಸಿ., ಸಂತೋಷ್ ರಾತೋಡ್, ಮಲ್ಲಯ್ಯ ಹಿರೇಮಠ್, ಶಿವಕುಮಾರ್ ಅವರನ್ನೊಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು. ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಒಂದು ಮನೆಕಳ್ಳತನ ಪ್ರಕರಣ, ಇನ್ನೊಂದು ಗಾಂಜಾ ಸೇವನೆ ಪ್ರಕರಣಗಳಾಗಿವೆ. ಅಲ್ತಾಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 3 ಕಳ್ಳತನ ಪ್ರಕರಣಗಳು, 2 ಗಾಂಜಾ ಸೇವನೆ ಪ್ರಕರಣ ಪ್ರಕರಣಗಳಾಗಿವೆ.
ಮೈಸೂರಿನಲ್ಲಿ ರಾಹುಲ್ ಗಾಂಧಿ ಬರಮಾಡಿಕೊಂಡೆ ಎಂದ ಸಿಎಂ: ಗೋಲ್ಡನ್ ಚಾನ್ಸ್ ಮಿಸ್ ಎಂದ R ಅಶೋಕ್
German Chancellor in Bengaluru : ಜರ್ಮನ್ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಆ ವೇಳೆ, ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಇರಲಿಲ್ಲ ಎನ್ನುವ ಕಾರಣಕ್ಕಾಗಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಿಎಂ ಸಿದ್ದರಾಮಯ್ಯನವರ ನಡೆಯನ್ನು ಟೀಕಿಸಿದ್ದಾರೆ. ರಾಜ್ಯದ ಹಿತಕ್ಕಿಂತ, ಹೈಕಮಾಂಡ್ ಓಲೈಕೆ ಹೆಚ್ಚಾಯಿತೇ ಎಂದು ಅಶೋಕ, ಪ್ರಶ್ನಿಸಿದ್ದಾರೆ.
ರಾಜ್ಯದ ಶಾಲೆ, ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಜ.14 ರಜೆಯೇ ಅಥವಾ ಜ.15 ರಜೆಯೇ?
ಸಂಕ್ರಾಂತಿ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಮನೆಮಾಡಿದೆ. ಎಳ್ಳು-ಬೆಲ್ಲ ಬೀರುವ ಸಂಪ್ರದಾಯದೊಂದಿಗೆ ಹೊಸ ವರ್ಷದ ಮೊದಲ ಹಬ್ಬವನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಹಬ್ಬದ ದಿನಾಂಕ ಮತ್ತು ಶಾಲಾ ರಜೆಯ ವಿಷಯದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಕ್ಯಾಲೆಂಡರ್ನಲ್ಲಿ ಒಂದು ದಿನಾಂಕವಿದ್ದರೆ, ಸರ್ಕಾರಿ ಆದೇಶದಲ್ಲಿ ಮತ್ತೊಂದು ದಿನಾಂಕವಿರುವುದು ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾದರೆ ಶಾಲೆಗಳಿಗೆ ನಿಜವಾಗಿಯೂ ರಜೆ ಯಾವಾಗ? ಇಲ್ಲಿದೆ ಸಂಪೂರ್ಣ ವಿವರ. ಪ್ರತಿ ವರ್ಷದಂತಲ್ಲ ಈ ಬಾರಿ: ಏನಿದು ದಿನಾಂಕದ ... Read more The post ರಾಜ್ಯದ ಶಾಲೆ, ಕಾಲೇಜು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಜ.14 ರಜೆಯೇ ಅಥವಾ ಜ.15 ರಜೆಯೇ? appeared first on Karnataka Times .
ಹುಣಸಗಿ | ತಂಬಾಕು ಸೇವನೆ ಸಾವಿಗೆ ಆಹ್ವಾನ : ಬಸವರಾಜ ಸಜ್ಜನ ಕರೆ
ಹುಣಸಗಿ: ಮನುಷ್ಯನನ್ನು ನಿಧಾನವಾಗಿ ಸಾವಿನತ್ತ ದೂಡುವ ತಂಬಾಕು ಸೇವನೆಯಿಂದ ದೂರವಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ (CDC) ಸದಸ್ಯ ಬಸವರಾಜ ಸಜ್ಜನ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಸೇವನೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂಬಾಕು ಉತ್ಪನ್ನಗಳ ಮೇಲೆ 'ಕ್ಯಾನ್ಸರ್ಗೆ ಮೂಲ' ಎಂದು ಎಚ್ಚರಿಕೆ ನೀಡಿದ್ದರೂ, ಇಂದಿನ ಯುವ ಪೀಳಿಗೆ ಅದನ್ನು ನಿರ್ಲಕ್ಷಿಸುತ್ತಿದೆ. ಗುಟ್ಕಾ ಮತ್ತು ತಂಬಾಕು ಸೇವನೆಯನ್ನು ಆಧುನಿಕತೆಯ ಸಂಕೇತವೆಂದು (Latest style) ಭಾವಿಸಿರುವುದು ವಿಷಾದನೀಯ. ಇವುಗಳಿಂದ ಹೃದಯ ಸಮಸ್ಯೆ, ಉಸಿರಾಟದ ತೊಂದರೆ, ಬಂಜೆತನ, ದೃಷ್ಟಿಹೀನತೆ, ದಂತ ಕಾಯಿಲೆ ಹಾಗೂ ಪಾರ್ಶ್ವವಾಯುವಿನಂತಹ ಅಪಾಯಕಾರಿ ರೋಗಗಳು ಆವರಿಸುತ್ತವೆ ಎಂದು ಸಜ್ಜನ ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಾಬಣ್ಣ ಭಜಂತ್ರಿ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಪ್ಪಣ್ಣ ಗೋಗಿ, ದೇವಮ್ಮ ಬಡಿಗೇರ, ಸರಸ್ವತಿ ಭೀಮಶಂಕರ್ ಹಾಗೂ ಕಾಲೇಜಿನ ಬೋಧಕ ಮತ್ತು
Mysuru | ಸಿಎಂ, ಡಿಸಿಎಂ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ರಾಹುಲ್ ಗಾಂಧಿ!
ಮೈಸೂರು: ತಮಿಳುನಾಡು ಕಾರ್ಯಕ್ರಮವನ್ನು ಮುಗಿಸಿ ದೆಹಲಿಗೆ ತೆರಳಲು ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಕೆಲಕಾಲ ಚರ್ಚಿಸಿದರು. ತಮಿಳುನಾಡಿನ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಮಂಗಳವಾರ ಮಧ್ಯಾಹ್ನ ವಿಮಾನ ಬದಲಾವಣೆಗೆ ಮೈಸೂರಿನ ಏರ್ ಪೋರ್ಟ್ ಗೆ ಆಗಮಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನ ಸ್ವಾಗತಿಸಿದ್ದರು. ತಮಿಳುನಾಡು ಗೂಡ್ಲೂರು ಕಾರ್ಯಕ್ರಮವನ್ನು ಮುಗಿಸಿ ವಾಪಸ್ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಕೆಲ ಕಾಲ ಚರ್ಚಿಸಿದರು. ನಾಯಕತ್ವ ಬದಲಾವಣೆ ಚರ್ಚೆ ಸುದ್ದಿಯಾಗಿರುವ ವೇಳೆ ಪ್ರತ್ಯೇಕ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿದೆ.
ಯಾದಗಿರಿಯಲ್ಲಿ ಅತಿವೃಷ್ಟಿ–ಪ್ರವಾಹ ಹಾನಿ ಸಮೀಕ್ಷೆ: ಕೇಂದ್ರ ಅಂತರ ಸಚಿವಾಲಯ ತಂಡದಿಂದ ಪರಿಶೀಲನೆ
ಯಾದಗಿರಿ : ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಮಹೇಶ್ ಕುಮಾರ್ ಅವರ ನೇತೃತ್ವದ ಕೇಂದ್ರ ಅಂತರ ಸಚಿವಾಲಯದ ತಂಡವು ಮಂಗಳವಾರ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಭವಿಸಿದ ಬೆಳೆ ಮತ್ತು ಮೂಲಸೌಕರ್ಯ ಹಾನಿ ಕುರಿತು ಸಮೀಕ್ಷೆ ನಡೆಸಿತು. ಈ ತಂಡದಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ಹೊನ್ನಂಬಾ ಎಸ್. ಹಾಗೂ ಇಸ್ರೋ ಬಾಹ್ಯಾಕಾಶ ಇಲಾಖೆಯ ವಿಜ್ಞಾನಿ ಆಕಾಶ ಮೋಹನ್ ಸಹ ಭಾಗವಹಿಸಿದ್ದರು. ಸಮೀಕ್ಷೆಗೆ ಮೊದಲು ಜಿಲ್ಲಾಡಳಿತವು 2025ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಭಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಬೆಳೆ ಮತ್ತು ಮೂಲಸೌಕರ್ಯ ಹಾನಿ ಕುರಿತು ತಂಡಕ್ಕೆ ಪೂರ್ವಭಾವಿ ಮಾಹಿತಿ ನೀಡಿತು. ನಂತರ ತಂಡವು ಭೀಮಾ ನದಿ ಸೇತುವೆ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಭತ್ತದ ಬೆಳೆಗಳನ್ನು ಪರಿಶೀಲಿಸಿತು. ಅಲ್ಲದೇ ನಾಯ್ಕಲ್ ಪ್ರದೇಶದಲ್ಲಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಉಂಟಾದ ಹಾನಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ಭೀಮಾ ನದಿ ತೀರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಟ್ರಾನ್ಸ್ಫಾರ್ಮರ್ಗಳು, ವಿದ್ಯುತ್ ಕಂಬಗಳು ಹಾಗೂ ಇತರೆ ವಿದ್ಯುತ್ ಉಪಕರಣಗಳ ಹಾನಿ ಮತ್ತು ಬದಲಾವಣೆ ಕುರಿತು ಪರಿಶೀಲನೆ ನಡೆಸಲಾಯಿತು. ಜೊತೆಗೆ ಒಡಗೇರಾ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಹಾಗೂ ಭೀಮಾ ನದಿಯ ಮೇಲಿರುವ ಸೇತುವೆಯ ರಸ್ತೆ ಹಾಳಾದ ಕುರಿತು ಮತ್ತು ಕೈಗೊಳ್ಳಲಾದ ದುರಸ್ತಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ್ ಸುಗೂರ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕೇಂದ್ರ ತಂಡಕ್ಕೆ ಜಿಲ್ಲಾಡಳಿತದಿಂದ ವರದಿ ಸಲ್ಲಿಕೆ : ಕಳೆದ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಭಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಬೆಳೆ ಮತ್ತು ಮೂಲಭೂತ ಸೌಕರ್ಯ ಹಾನಿಯ ಕುರಿತು ಅಧ್ಯಯನ ನಡೆಸಲು ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಅಂತರ ಸಚಿವಾಲಯದ ತಂಡಕ್ಕೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ವಿವರವಾದ ವರದಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಜಂಟಿ ನಿರ್ದೇಶಕ ಮಹೇಶ್ ಕುಮಾರ್, ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್ಆರ್ಎಸ್ಸಿ), ಇಸ್ರೋ ವಿಜ್ಞಾನಿ ಆಕಾಶ ಮೋಹನ್ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಮತ್ತು ಸಾಮಾಜಿಕ ಭದ್ರತೆ, ಪಿಂಚಣಿ ಆಯುಕ್ತಾಲಯ ಹಾಗೂ ಕಂದಾಯ ಇಲಾಖೆಯ ಆಯುಕ್ತರಾದ ಹೊನ್ನಂಬಾ ಎಸ್. ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಹಾನಿಗೊಳಗಾದ ಪ್ರದೇಶಗಳ ಛಾಯಾಚಿತ್ರಗಳು, ಪತ್ರಿಕಾ ವರದಿಗಳು ಹಾಗೂ ಅಂಕಿ-ಅಂಶಗಳೊಂದಿಗೆ ಹಾನಿಯ ತೀವ್ರತೆಯನ್ನು ತಂಡದ ಗಮನಕ್ಕೆ ತರಲಾಯಿತು. 2025ರ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆ ಹಾಗೂ ಭೀಮಾ ನದಿಗೆ ಒಳಹರಿವು–ಹೊರಹರಿವು ಸಂಭವಿಸಿದ್ದರಿಂದ ಜಲಾಶಯಗಳು, ಕೆರೆಗಳು, ಹಳ್ಳ-ಕೊಳ್ಳಗಳು ತುಂಬಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಭಾರೀ ಹಾನಿಯಾಗಿದೆ ಎಂದು ವಿವರಿಸಲಾಯಿತು. ಜಿಲ್ಲೆಯಲ್ಲಿ ಶೇ. 34.63 ರಷ್ಟು ಬೆಳೆ ಹಾನಿ ಸಂಭವಿಸಿದ್ದು, ಒಟ್ಟು 1.12 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಇದರಿಂದ 1.22 ಲಕ್ಷ ರೈತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮಾರ್ಗಸೂಚಿಯಂತೆ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಸೇರಿ ಒಟ್ಟು ರೂ. 219.61 ಕೋಟಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಮಳೆಯಿಂದ 498 ಮನೆಗಳು ಹಾನಿಗೊಳಗಾಗಿದ್ದು, ಪರಿಹಾರ ವಿತರಿಸಲಾಗಿದೆ. ಅಲ್ಲದೇ ರಸ್ತೆ, ಸೇತುವೆ, ಅಂಗನವಾಡಿ, ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಮೂಲ, ವಿದ್ಯುತ್ ವ್ಯವಸ್ಥೆ, ಕೆರೆ, ಶಾಲೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಒಟ್ಟು ರೂ. 102 ಕೋಟಿಗಳಷ್ಟು ಹಾನಿಯಾಗಿದೆ ಎಂದು ತಂಡಕ್ಕೆ ತಿಳಿಸಲಾಯಿತು. ಬೆಳೆ ಹಾನಿಯ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುವುದಾಗಿ ಹಾಗೂ ಪರಿಹಾರವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ವಿವರಿಸಲಾಯಿತು. ಜಿಲ್ಲೆಯಲ್ಲಿ ಈ ವರ್ಷ ದಾಖಲೆ ಪ್ರಮಾಣದ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ವರದಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡುವಂತೆ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ಮನವಿ ಮಾಡಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಎಐಯು ದಕ್ಷಿಣ-ಪೂರ್ವ ವಲಯ ಅಂತರ್ ವಿವಿ ಫುಟ್ಬಾಲ್ ಟೂರ್ನಮೆಂಟ್; ಯೆನೆಪೋಯ ವಿವಿ ಚಾಂಪಿಯನ್
ಮಂಗಳೂರು, ಜ.13: ವಾಕ್ಸೆನ್ ವಿಶ್ವವಿದ್ಯಾನಿಲಯ ಹೈದರಾಬಾದ್ ಆಶ್ರಯದಲ್ಲಿ ಜ.10ರಂದು ಹೈದರಾಬಾದ್ ನಲ್ಲಿ ನಡೆದ ಎಐಯು ದಕ್ಷಿಣ-ಪೂರ್ವ ವಲಯ ಅಂತರ್ ವಿವಿ ಫುಟ್ಬಾಲ್ ಟೂರ್ನಮೆಂಟ್ನಲ್ಲಿ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಯೆನೆಪೋಯ ವಿಶ್ವವಿದ್ಯಾಲಯವು ಜನವರಿ 30ರಿಂದ ಫೆಬ್ರವರಿ 8, 2026ರವರೆಗೆ ಕೊಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದೆ. 2022-23ರಿಂದ ಎಐಯು ಫುಟ್ಬಾಲ್ ಸ್ಪರ್ಧೆಯನ್ನು ನಾಲ್ಕು ವಲಯಗಳಿಂದ ಎಂಟು ವಲಯಗಳಾಗಿ ವಿಸ್ತರಿಸಿದ ನಂತರ ಯೆನೆಪೋಯಾ ವಿಶ್ವವಿದ್ಯಾಲಯವು ನಿರಂತರವಾಗಿ ವಲಯ ಚಾಂಪಿಯನ್ ಆಗಿ ಅಖಿಲ ಭಾರತ ಮಟ್ಟಕ್ಕೆ ಅರ್ಹತೆ ಪಡೆಯುತ್ತಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ ತಂಡವನ್ನು 3-0 ಗೋಲುಗಳಿಂದ ಮಣಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು. ಲೀಗ್ ಪಂದ್ಯಗಳಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಭರ್ಜರಿ ಪ್ರದರ್ಶನ ನೀಡಿತು: ತೆಲಂಗಾಣದ ಒಸ್ಮಾನಿಯಾ ವಿಶ್ವವಿದ್ಯಾಲಯ ವಿರುದ್ಧ 5-1 ಗೋಲುಗಳ ಗೆಲುವು, ಛತ್ತೀಸ್ಗಢ್ ಹೇಮಚಂದ್ ಯಾದವ್ ವಿಶ್ವವಿದ್ಯಾನಿಲಯ ವಿರುದ್ಧ 2-0 ಗೆಲುವು ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ ವಿರುದ್ಧ 12-0 ಭರ್ಜರಿ ಗೆಲುವಿನೊಂದಿಗೆ ಮೂರು ಪಂದ್ಯಗಳಲ್ಲಿ 9 ಅಂಕಗಳನ್ನು ಪಡೆದ ಯೆನೆಪೋಯಾ ವಿಶ್ವವಿದ್ಯಾನಿಲಯ ಲೀಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಹೇಮಚಂದ್ ಯಾದವ್ ವಿಶ್ವವಿದ್ಯಾನಿಲಯ ಎರಡನೇ ಸ್ಥಾನವನ್ನು , ಒಸ್ಮಾನಿಯಾ ವಿಶ್ವವಿದ್ಯಾನಿಲಯ ಮೂರನೇ ಸ್ಥಾನ ಮತ್ತು ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾನಿಲಯ ನಾಲ್ಕನೇ ಸ್ಥಾನ ಗಳಿಸಿದೆ. ಎಲ್ಲ ನಾಲ್ಕು ತಂಡಗಳು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿವೆ. ಯೆನೆಪೋಯ ವಿಶ್ವವಿದ್ಯಾನಿಲಯದ ತಂಡಕ್ಕೆ ಮುಖ್ಯ ಕೋಚ್ ಬಿ.ಬಿ ಥಾಮಸ್ ಮತ್ತು ಫಿಸಿಯೋಥೆರಪಿಸ್ಟ್ ನಿತಿನ್ ಮಾರ್ಗದರ್ಶನ ನೀಡಿದ್ದರು. ಯೆನೆಪೋಯ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ವಿಭಾಗಾಧ್ಯಕ್ಷ ಸುಜಿತ್ ಕೆ.ವಿ. ಅವರು ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಏಳು ದಿನಗಳ ಕಾಲ ನಡೆದ ಈ ಚಾಂಪಿಯನ್ಶಿಪ್ 2026ರ ಜನವರಿ 10ರಂದು ಹೈದರಾಬಾದ್ನ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಎವೈಐಎಂಯುಎಂ ಸಮ್ಮೇಳನ: ಗೀತಾಂಜಲಿಗೆ ಬೆಸ್ಟ್ ಡೆಲಿಗೇಟ್ ಪ್ರಶಸ್ತಿ
ಕುಂದಾಪುರ, ಜ.13: ಕುಂದಾಪುರ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಶಿವಗೊಂಡ ಚೌಗಲಾ ಮಲೇಷ್ಯಾದ ಕೌಲಾಲಂಪುರ ನಗರದಲ್ಲಿ ನಡೆದ ಅತಿ ದೊಡ್ಡ ಯುವ ನಾಯಕತ್ವ ಸಮ್ಮೇಳನಗಳಲ್ಲಿ ಒಂದಾದ ಎವೈಐಎಂಯುಎಂ-2025ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಸಮ್ಮೇಳನಕ್ಕೆ ಭಾರತದಿಂದ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಆಯ್ಕೆಗೊಂಡಿದ್ದು, ಅವರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಗೌರವ ಗೀತಾಂಜಲಿಗೆ ದೊರಕಿದೆ. ಅವರ ಆಯ್ಕೆ ಶೈಕ್ಷಣಿಕ ಸಾಮರ್ಥ್ಯ ಹಾಗೂ ಸಂಶೋಧನಾ ಲೇಖನ ಆಧಾರದ ಮೇಲೆ ನಡೆಯಿತು. ಸಮ್ಮೇಳನದಲ್ಲಿ ಇವರು, ಜಾಗತಿಕ ಆರ್ಥಿಕತೆ, ತಾಂತ್ರಿಕ ಅಭಿವೃದ್ಧಿ ಹಾಗೂ ವಿಜ್ಞಾನ-ಆಧಾರಿತ ಸಂಶೋಧನೆಯ ಪ್ರಾಮುಖ್ಯತೆ ಕುರಿತ ವಿಚಾರಗಳನ್ನು ವಿಶ್ಲೇಷಣೆ ಮಾಡಿ ಮಂಡಿಸಿದರು. ಈ ಮಂಡಳಿಯ ಚರ್ಚೆಯಲ್ಲಿ ಅತ್ಯುತ್ತಮ ಪ್ರಸ್ತುತಿ ಹಾಗೂ ವಾದ-ವಿವಾದದ ಕೌಶಲ್ಯ ಪ್ರದರ್ಶಿಸಿದಕ್ಕಾಗಿ ಅವರಿಗೆ ಬೆಸ್ಟ್ ಡೆಲಿಗೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರುಮಠಕಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಆಕರ್ಷಕ ರಂಗೋಲಿ ಸ್ಪರ್ಧೆ
ಗುರುಮಠಕಲ್ : ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ಹಬ್ಬದ ಸಂಪ್ರದಾಯಗಳನ್ನು ಉಳಿಸುವ ಹಾಗೂ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರಹಾಕುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಆವರಣವು ವಿದ್ಯಾರ್ಥಿನಿಯರು ಬಿಡಿಸಿದ ಬಣ್ಣಬಣ್ಣದ ವೈವಿಧ್ಯಮಯ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ವಿಜಯಕುಮಾರ್ ನಿರೆಟಿ ಅವರು, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರಂಗೋಲಿ ಸ್ಪರ್ಧೆಯ ಮೂಲಕ ಕಲೆ ಮತ್ತು ಸಂಪ್ರದಾಯವನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು. ವಿದ್ಯಾರ್ಥಿನಿಯರು ತಮ್ಮ ರಂಗೋಲಿಗಳಲ್ಲಿ ಸಂಕ್ರಾಂತಿಯ ಸಂಕೇತಗಳಾದ ಎಳ್ಳು-ಬೆಲ್ಲ, ಕುಂಭ, ಸೂರ್ಯ ಹಾಗೂ ಗ್ರಾಮೀಣ ಸೊಗಡನ್ನು ಬಿಂಬಿಸುವ ಚಿತ್ರಗಳನ್ನು ಅದ್ಭುತವಾಗಿ ಮೂಡಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಜಯಕುಮಾರ್ ನಿರೆಟಿ ಅವರ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ರಾಧಿಕಾ , ದ್ವಿತೀಯ ಬಹುಮಾನ ಲಕ್ಷ್ಮಿ ರಾಠೋಡ್, ತೃತೀಯ ಬಹುಮಾನ ಉಮಾ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಿಪಿಐ ವೀರಣ್ಣ ದೊಡ್ಡಮನಿ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ, ನಿತ್ಯಾನಂದ ಬೂದಿ, ಪಾಶಾಪ್ಯಾರೆ ಹಾಗೂ ಉಪನ್ಯಾಸಕರಾದ ವೆಂಕಟರೆಡ್ಡಿ, ಪದ್ಮಮ್ಮ, ನಂದಿಕಿಶೋರ್, ರಾಮುಲು, ಪರಶುರಾಮ, ರಮೇಶ್ ಹಡಪದ ಮತ್ತು ಕಾಶಪ್ಪ ಉಪಸ್ಥಿತರಿದ್ದು ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿನಿಯರು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಬ್ರಹ್ಮಾವರ: ಹೆಗ್ಗುಂಜೆ ಮನೆ ತೆರವು ಪ್ರಕರಣ; ಪ್ರತಿಭಟನೆ
ಬ್ರಹ್ಮಾವರ, ಜ.13: ಕುಡುಬಿ ಸಮಾಜ ಕಷ್ಟದಿಂದ ಬದುಕು ಸಾಗಿಸುವ ಮುಗ್ಧ ಸಮಾಜ. ಅವರು ನಿರ್ಮಿಸಿಕೊಂಡ ಮನೆಯನ್ನು ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿದ್ದು ಖೇಧಕರ. ಶಾಸಕಾಂಗ ಮತ್ತು ಕಾರ್ಯಾಂಗ ಸಮನ್ವಯತೆಯಿಂದ ಸಾಗಬೇಕು ಎಂದು ಸ್ಥಳೀಯ ತಹಶೀಲ್ದಾರ್ಗೆಗೆ ಹಲವು ಬಾರಿ ಹೇಳಿದ್ದರೂ ಅವರು ಸುಧಾರಣೆಯಾಗುತ್ತಿಲ್ಲ. ಜನರಿಗೆ ತೊಂದರೆ ಕೊಡುವ ತಹಶೀಲ್ದಾರ್ ವಿರುದ್ಧ ಮುಂದೆಯೂ ಹೋರಾಟ ಮಾಡುವುದಾಗಿ ಕುಂದಾಪುರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಹೇಳಿದ್ದಾರೆ. ಹೆಗ್ಗುಂಜೆ ಗ್ರಾಮದ ಸರಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ್ತವ್ಯವಿದ್ದ ಐದು ಬಡ ಕುಟುಂಬಗಳ ಮನೆ ತೆರವು ಮಾಡಿದ ಬ್ರಹ್ಮಾವರ ತಹಶೀಲ್ದಾರ್ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ಬ್ರಹ್ಮಾವರ ತಾಲೂಕು ಆಡಳಿತ ಕೇಂದ್ರದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಜಾಗ ಒದಗಿಸಿಕೊಟ್ಟು,ಮನೆ ಮಂಜೂರು ಮಾಡುವ ಮೂಲಕ ಸರಕಾರ ನ್ಯಾಯ ಒದಗಿಸಬೇಕು. ಜನರಿಗೆ ಅನುಕೂಲ ವಾಗುವ ಕೆಲಸ ಇವರು ಮಾಡುತ್ತಿಲ್ಲ. ಎಷ್ಟೋ ವರ್ಷಗಳ ಹಿಂದಿನ ಅಕ್ರಮ-ಸಕ್ರಮ ಕಡತಗಳಿಗೆ ತೊಂದರೆ ಕೊಡುತಿದ್ದಾರೆ ಎಂದು ತಾಲೂಕು ಕಚೇರಿಯ ಕೆಲ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರಿಗೆ ಅನುಕೂಲ ವಾಗಲು ಕಲ್ಪಿಸಿದ ತಾಲೂಕು ಕಚೇರಿ ಎದುರಿಗೆ ಜನರಿಗಾದ ಸಂಕಷ್ಟದ ಬಗ್ಗೆ ಜನಪ್ರತಿನಿಧಿಗಳು ಧರಣಿ ಕೂರಬೇಕಾದ ದುಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ 48 ಸಾವಿರ ಮಂದಿ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು 94ಸಿ, 94 ಸಿಸಿ ಅಡಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ 9 ಸಾವಿರ ಮಂದಿಗೆ ಮಾತ್ರವೇ ಹಕ್ಕುಪತ್ರ ಸಿಕ್ಕಿದೆ. ಉಳಿದವರ ಕಥೆಯೇನು? ಎಂದು ಪ್ರಶ್ನಿಸಿದರು. ತಾಲೂಕು ಕಚೇರಿಇರುವುದು ಕಾನೂನುಬದ್ಧವಾಗಿ ಹಕ್ಕುಪತ್ರ ನೀಡುವುದಕ್ಕೆ ಹೊರತು ಜೆಸಿಬಿ ಮೂಲಕ ಮನೆ ಒಡೆದು ಹಾಕುವುದಕ್ಕಲ್ಲ. ಹೆಗ್ಗುಂಜೆ ಗ್ರಾಮದ ಕುಡುಬಿ ಸಮುದಾಯದ ಪರಿಸ್ಥಿತಿ ಬಗ್ಗೆ ಸಂಬಂದಪಟ್ಟ ಸಚಿವರು, ಡಿಸಿ, ತಹಶೀಲ್ದಾರ್ಗೆ ತಿಳಿಸಿ ಕಾಲವಕಾಶ ಕೋರಲಾಗಿತ್ತು. ಆದರೆ ಬೆಳ್ಳಂಬೆಳಿಗ್ಗೆ ಮನೆ ಒಡೆಯುವ ಕೆಟ್ಟ ಕೆಲಸ ಮಾಡಲಾಗಿದ್ದು ಇದಕ್ಕೆ ಯಾರು ಹೊಣೆ? ಎಂದು ಸಂಸದ ಕೋಟ ಪ್ರಶ್ನಿಸಿದರು. ಡೀಮ್ಡ್, ಕುಮ್ಕಿ ಸಮಸ್ಯೆ ಪರಿಹಾರವಾಗಿಲ್ಲ. ಬಸವವಸತಿ ಯೋಜನೆಯಡಿ ಮನೆ ನೀಡುತ್ತಿಲ್ಲ. ಬಡವರ ಮನೆ ಒಡೆದರೆ ಯಾರಿಗೂ ಗೌರವವಲ್ಲ. ಮನೆ ಕಟ್ಟಿಸಿ ಕೊಟ್ಟರೆ ಸರಕಾರಕ್ಕೆ ಗೌರವ ಎಂಬುದನ್ನು ಕಂದಾಯ ಮಂತ್ರಿಗಳು ಗಮನಿಸಬೇಕು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮವಾಗಬೇಕು ಎಂದು ಆಗ್ರಹಿಸಿದರು. ಕುಡುಬಿ ಸಮಾಜದ ಜಿಲ್ಲಾಧ್ಯಕ್ಷ ಪ್ರಭಾಕರ ನಾಯ್ಕ್ ಮಾತನಾಡಿ, ಬಡ ಮನೆಯವರ ಪರಿಸ್ಥಿತಿ ಲೆಕ್ಕಿಸದೆ ಕಾರ್ಯಾಂಗ ವ್ಯವಸ್ಥೆಯು ನಡೆಸಿದ ದಬ್ಬಾಳಿಕೆ ಸರಿಯಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಸರಕಾರಿ ಧೋರಣೆಯ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಕುಡುಬಿ ಸಮಾಜ ಸಿದ್ಧವಿದೆ ಎಂದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟೆಹೊಳೆ, ಸಂತ್ರಸ್ತೆ ದೇವಕಿ ನಾಯ್ಕ್, ಜಿಲ್ಲಾ ಬಿಜೆಪಿ ನಾಯಕರಾದ ಕಾಡೂರು ಸುರೇಶ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಆರೂರು ರಾಜೀವ ಕುಲಾಲ್, ದೇವಾನಂದ ನಾಯಕ್, ಬಿರ್ತಿ ರಾಜೇಶ್ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಪ್ರತಾಪ್ ಹೆಗ್ಡೆ ಮಾರಾಳಿ, ವಿಠಲ್ ಪೂಜಾರಿ, ಕುಡುಬಿ ಯುವ ಸಂಘದ ವಿಘ್ನೇಶ್ ನಾಯ್ಕ್, ಉಮೇಶ್ ನಾಯ್ಕ್, ಹೆಗ್ಗುಂಜೆ ಗುರುಪ್ರಸಾದ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮನವಿ ಸಲ್ಲಿಕೆ: ಸಂಜೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದು ಕೊಳ್ಳಲಾಯಿತು. ಮನವಿಯಲ್ಲಿ ತಹಶೀಲ್ದಾರ್ ಸೇರಿದಂತೆ ತಪ್ಪಿತಸ್ಥರ ಅಧಿಕಾರಿಗಳ ಅಮಾನತು, ಸಂತ್ರಸ್ಥರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಆಗ್ರಹ ಹಾಗೂ ಕಳೆದ ಗುರುವಾರ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಮೂವರ ವಿರುದ್ಧ ಬ್ರಹ್ಮಾವರ ಠಾಣೆಯಲಿಲ ದಾಖಲಿಸಿದ ಮೊಕದ್ದಮೆಯನ್ನು ವಾಪಾಸು ಪಡೆಯುವಂತೆ ತಿಳಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಎಡಿಸಿ ಭರವಸೆ ನೀಡಿದರು. ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ಕೋಟ ನಿರೂಪಿಸಿದರು.
ಯಾದಗಿರಿ | ಶಿಕ್ಷಕಿಯಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ : ಪೋಷಕರ ಆಕ್ರೋಶ
ಯಾದಗಿರಿ: ನಗರದ ಅಂಬೇಡ್ಕರ್ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಮೌನೇಶ ಎಂಬ ವಿದ್ಯಾರ್ಥಿ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ವಿವರ : ಸೋಮವಾರ ಮೌನೇಶ ಶಾಲೆಯ ಅನುಮತಿ ಪಡೆಯದೆ ಹೊರಗೆ ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಶಿಕ್ಷಕಿ ರೂಪಾ ಅವರು ಏಕಾಏಕಿ ಕೋಪಗೊಂಡು ವಿದ್ಯಾರ್ಥಿಯ ಕೈಗೆ ಬಲವಾಗಿ ಹೊಡೆದಿದ್ದಾರೆ. ಶಿಕ್ಷಕಿಯ ಹೊಡೆತದ ತೀವ್ರತೆಗೆ ವಿದ್ಯಾರ್ಥಿಯ ಕೈ ಬಾತುಕೊಂಡಿದ್ದು (ಬಾವು), ಬಾಲಕ ರಾತ್ರಿಯಿಡೀ ಅತೀವ ನೋವಿನಿಂದ ಬಳಲಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಶಾಲೆಯತ್ತ ಧಾವಿಸಿದ ಪೋಷಕರು ಶಿಕ್ಷಕಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗು ತಪ್ಪು ಮಾಡಿದ್ದರೆ ಬುದ್ಧಿವಾದ ಹೇಳಬೇಕಿತ್ತು ಅಥವಾ ಪೋಷಕರಿಗೆ ತಿಳಿಸಬೇಕಿತ್ತು. ಅದನ್ನು ಬಿಟ್ಟು ಕೈ ಬಾವು ಬರುವಂತೆ ಈ ರೀತಿ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪೋಷಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ಹಲ್ಲೆ ನಡೆಸಿದ ಶಿಕ್ಷಕಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
IND Vs NZ- ರಾಜಕೋಟ್ ಪಿಚ್ ನಲ್ಲಿ ಭಾರತದ ಗೇಮ್ ಪ್ಲಾನ್ ಚೇಂಜ್! ಹೀಗಿದೆ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
India Vs New Zealand 2nd ODI- ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸ್ಥಾಪಿಸಿರುವ ಭಾರತ ತಂಡ ಇದೀಗ ಏರಡನೇ ಪಂದ್ಚವನ್ನೂ ಗೆಲ್ಲುವ ಉತ್ಸಾಹದಲ್ಲಿದೆ.ರಾಜ್ ಕೋಟ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಾಶಿಂಗ್ಟನ್ ಸುಂದರ್ ಅವರ ಬದಲಿಗೆ ಆಯ್ಕೆ ಆಗಿರುವ ಆಯುಷ್ ಬದೋನಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಟಿಂಗ್ ನೊಂದಿಗೆ ಅಗತ್ಯ ಸಂದರ್ಭದಲ್ಲಿ ಬೌಲಿಂಗ್ ಮಾಡುವ ಛಾತಿಯನ್ನು ಸಿದ್ಧಿಸಿಕೊಂಡಿರುವುದು ಇದಕ್ಕೆ ಕಾರಣ. ಒಂದು ವೇಳೆ ತಂಡದ ಮ್ಯಾನೇಜ್ ಮೆಂಟ್ ಬ್ಯಾಟಿಂಗ್ ಕ್ರಮಾಂಕ ಬಲಪಡಿಸಲು ನಿರ್ಧಿರಿಸಿದಲ್ಲಿ ಧ್ರುವ್ ಜ್ಯುರೆಲ್ ಆಡುವ ಸಾಧ್ಯತೆಗಳು ಇಲ್ಲದಿಲ್ಲ.
Iran Protest; 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಯಾರು ಹೆತ್ತ ಮಕ್ಕಳೋ? ಖಮೇನಿ ಆಡಳಿತದ ಹೃದಯ ಕಠೋರ!
ಇರಾನ್ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇರಾನ್ ರಕ್ತ ಕ್ರಾಂತಿಯ ಹೊಸ್ತಿಲಿಗೆ ಬಂದು ನಿಂತಿದ್ದು, ಖಮೇನಿ ಆಡಳಿತ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭದ್ರತಾ ಸಿಬ್ಬಂದಿಯೂ ಸೇರಿದಂತೆ ಕನಿಷ್ಠ 2 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಈ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿದ್ದು, ಇರಾನ್ನಲ್ಲಿ ಶಾಂತಿ ಸ್ಥಾಪನೆಗಾಗಿ ಅಂತಾರಾಷ್ಟ್ರೀಯ ಸಮುದಾಯ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
Iran ನ ವ್ಯಾಪಾರ ಪಾಲುದಾರರ ಮೇಲೆ 25% ಸುಂಕ ವಿಧಿಸಿದ ಟ್ರಂಪ್; ಭಾರತದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ?
ಇರಾನ್ ಅಥವಾ ಉಕ್ರೇನ್—ಎಲ್ಲೇ ಬಿಕ್ಕಟ್ಟು ಉಂಟಾದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವಾಗಲೂ ಭಾರತವನ್ನು ಗುರಿಯಾಗಿಸಲು ಒಂದು ಕಾರಣವನ್ನು ಕಂಡುಕೊಳ್ಳುತ್ತಾರೆ. ಅಮೆರಿಕದ ಪಾಲಿಗೆ ಭಾರತಕ್ಕಿಂತ ಮುಖ್ಯವಾದ ದೇಶ ಇನ್ನೊಂದಿಲ್ಲ. ಎರಡೂ ದೇಶಗಳು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಇದರ ಬೆನ್ನಲ್ಲೇ, ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇರಾನ್ ನ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದು. ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದ ಆಮದುಗಳ ಮೇಲಿನ ಒಟ್ಟು ಸುಂಕ ದರವು ಶೇಕಡಾ 75ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ತಕ್ಷಣದಿಂದ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕದೊಂದಿಗೆ ಮಾಡುವ ಎಲ್ಲಾ ವ್ಯವಹಾರಗಳ ಮೇಲೆ ಶೇಕಡಾ 25ರಷ್ಟು ಸುಂಕವನ್ನು ಪಾವತಿಸಬೇಕು. ಈ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿದೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವಿಲ್ಲದೆ ಭಾರತೀಯ ಸರಕುಗಳು ಈಗಾಗಲೇ ಅಮೆರಿಕದ ಅತ್ಯಧಿಕ ಶೇಕಡಾ 50ರಷ್ಟು ಸುಂಕ ದರವನ್ನು ಎದುರಿಸುತ್ತಿವೆ. ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಟ್ರಂಪ್ ಭಾರತ ಮೇಲೆ ಹೆಚ್ಚುವರಿಯಾಗಿ ಶೇಕಡಾ 25ರಷ್ಟು ಸುಂಕ ವಿಧಿಸಿದ್ದಾರೆ. ಇನ್ನೂ ಶೇಕಡಾ 25ರಷ್ಟು ಸುಂಕ ಜಾರಿಯಾದರೆ, ಅಮೆರಿಕಕ್ಕೆ ಭಾರತೀಯ ಆಮದುಗಳ ಮೇಲಿನ ಒಟ್ಟು ಸುಂಕ ಶೇಕಡಾ 75ಕ್ಕೆ ತಲುಪಲಿದೆ. ನಿರ್ಬಂಧಗಳ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಶೇಕಡಾ 500ರಷ್ಟು ಸುಂಕ ವಿಧಿಸುವ ಮಸೂದೆಗೆ ಸಂಬಂಧಿಸಿದ ಭೀತಿಯೂ ಇದೆ. ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ದೇಶಗಳನ್ನು ಗುರಿಯಾಗಿಸಿಕೊಂಡ ಈ ಮಸೂದೆಯನ್ನು ಟ್ರಂಪ್ ಈಗಾಗಲೇ ಅನುಮೋದಿಸಿದ್ದಾರೆ. ಭಾರತವು ಟೆಹ್ರಾನ್ ನೊಂದಿಗೆ ದೀರ್ಘಕಾಲದ ವ್ಯಾಪಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದೆ. ಇದರಲ್ಲಿ ಇಂಧನ ಆಮದುಗಳು ಹಾಗೂ ಪಾಕಿಸ್ತಾನವನ್ನು ಬೈಪಾಸ್ ಮಾಡುವ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಬಾಗಿಲು ಎಂದು ಪರಿಗಣಿಸಲಾದ ಕಾರ್ಯತಂತ್ರದ ಪ್ರಮುಖ ಯೋಜನೆಯಾದ ಚಬಹಾರ್ ಬಂದರಿನ ಅಭಿವೃದ್ಧಿಯೂ ಸೇರಿವೆ. ಚೀನಾ ಇರಾನ್ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದರೂ, ಟ್ರಂಪ್ ಅವರ ಈ ನಡೆ ವ್ಯಾಪಾರವನ್ನು ಮೀರಿ ಭಾರತಕ್ಕೂ ಪರಿಣಾಮಗಳನ್ನು ಬೀರುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ವ್ಯಾಪಾರ ಒಪ್ಪಂದದ ಕುರಿತು ಭಾರತ ಮತ್ತು ಅಮೆರಿಕ ಅಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆಗೆ ಕುಳಿತುಕೊಳ್ಳುವ ಕೆಲವೇ ಗಂಟೆಗಳ ಮೊದಲು ಟ್ರಂಪ್ ಈ ಘೋಷಣೆಗಳನ್ನು ಮಾಡಿದ್ದಾರೆ. ಈ ನಡುವೆ, ಹೊಸ ಸುಂಕ ಘೋಷಣೆಯನ್ನು ಭಾರತವು ವ್ಯಾಪಾರ ಒಪ್ಪಂದದ ಕುರಿತ ಅಮೆರಿಕದ ನಿಯಮಗಳಿಗೆ ಒಪ್ಪಿಗೆ ನೀಡುವಂತೆ ಮಾಡುವ ಮತ್ತೊಂದು ಒತ್ತಡ ತಂತ್ರವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ–ಇರಾನ್ ವ್ಯಾಪಾರ ಸಂಬಂಧ ಇರಾನ್-ಸಂಬಂಧಿತ ಸುಂಕವು ಭಾರತದ ಮೇಲೆ ಈಗಾಗಲೇ ಇರುವ ವ್ಯಾಪಾರ ಒತ್ತಡಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಮೊದಲೇ ಹೇಳಿದಂತೆ, ಭಾರತವು ಇರಾನ್ ನ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಸರ್ಕಾರಿ ಮಾಹಿತಿಯ ಪ್ರಕಾರ, 2024–25ರಲ್ಲಿ ಭಾರತ ಮತ್ತು ಇರಾನ್ ನಡುವಿನ ಒಟ್ಟು ವ್ಯಾಪಾರ 1.68 ಬಿಲಿಯನ್ ಡಾಲರ್ (ಸುಮಾರು 14,000 ಕೋಟಿ ರೂ.) ಆಗಿತ್ತು. ಭಾರತವು 1.24 ಬಿಲಿಯನ್ ಡಾಲರ್ (10,000 ಕೋಟಿ ರೂ.) ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದರೆ, 440 ಮಿಲಿಯನ್ ಡಾಲರ್ (3,700 ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು. ಆದರೆ, ಟ್ರಂಪ್ ಆಡಳಿತದ ನಿರ್ಬಂಧಗಳ ಹಿನ್ನೆಲೆಯಲ್ಲಿ 2019ರಲ್ಲಿ ಭಾರತ ಇರಾನ್ ನಿಂದ ತೈಲ ಆಮದು ನಿಲ್ಲಿಸಿದ ನಂತರ, ಭಾರತ–ಇರಾನ್ ವ್ಯಾಪಾರವು ತೀವ್ರವಾಗಿ ಕುಸಿದಿದೆ. 2019ರಿಂದ ಟೆಹ್ರಾನ್ನೊಂದಿಗಿನ ಭಾರತದ ವ್ಯಾಪಾರ ಶೇಕಡಾ 87ರಷ್ಟು ಇಳಿಕೆಯಾಗಿದ್ದು, 17.6 ಬಿಲಿಯನ್ ಡಾಲರ್ (ಸುಮಾರು 1.5 ಲಕ್ಷ ಕೋಟಿ ರೂ.) ಇಂದ 2024ರಲ್ಲಿ 2.3 ಬಿಲಿಯನ್ ಡಾಲರ್ (19,100 ಕೋಟಿ ರೂ.) ಗೆ ಕುಸಿದಿದೆ. ಭಾರತವು ಇರಾನ್ ಗೆ ರಫ್ತು ಮಾಡುವ ಪ್ರಮುಖ ವಸ್ತುಗಳಲ್ಲಿ ಸಾವಯವ ರಾಸಾಯನಿಕಗಳು, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧೀಯ ವಸ್ತುಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಮಾಂಸ ಉತ್ಪನ್ನಗಳು ಸೇರಿವೆ. ಇರಾನ್ ಭಾರತೀಯ ಬಾಸ್ಮತಿ ಅಕ್ಕಿಗೆ ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೊಸ ಸುಂಕಗಳು ಬಾಸ್ಮತಿ ರಫ್ತಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪ್ರಮುಖ ಆಮದುಗಳಲ್ಲಿ ಮೆಥನಾಲ್, ಪೆಟ್ರೋಲಿಯಂ ಬಿಟುಮೆನ್, ದ್ರವೀಕೃತ ಪ್ರೊಪೇನ್, ಸೇಬುಗಳು, ಖರ್ಜೂರ ಮತ್ತು ರಾಸಾಯನಿಕಗಳು ಸೇರಿವೆ. ಟ್ರೇಡಿಂಗ್ ಎಕನಾಮಿಕ್ಸ್ ವರದಿಯ ಪ್ರಕಾರ, 2024ರಲ್ಲಿ ಭಾರತವು ಇರಾನ್ಗೆ ಮಾಡಿದ ರಫ್ತಿನಲ್ಲಿ ಧಾನ್ಯಗಳು 698.51 ಮಿಲಿಯನ್ ಡಾಲರ್ನಷ್ಟು ದೊಡ್ಡ ಪಾಲು ಹೊಂದಿದ್ದವು. ಟೆಹ್ರಾನ್ನಿಂದ ಭಾರತದ ಆಮದಿನಲ್ಲಿ ಸಾವಯವ ರಾಸಾಯನಿಕಗಳು 512.92 ಮಿಲಿಯನ್ ಡಾಲರ್ನಷ್ಟು ಪ್ರಮುಖ ಪಾಲನ್ನು ಹೊಂದಿದ್ದವು. ಇತರ ಪ್ರಮುಖ ರಫ್ತುಗಳಲ್ಲಿ ಆಹಾರ ಉದ್ಯಮದ ತ್ಯಾಜ್ಯ ಮತ್ತು ಪಶುಮೇವು (149.49 ಮಿಲಿಯನ್ ಡಾಲರ್), ಕಾಫಿ, ಚಹಾ ಮತ್ತು ಮಸಾಲೆಗಳು (73.93 ಮಿಲಿಯನ್ ಡಾಲರ್), ಹಣ್ಣುಗಳು, ಬೀಜಗಳು, ಸಿಟ್ರಸ್ ಹಣ್ಣಿನ ಸಿಪ್ಪೆಗಳು ಮತ್ತು ಕಲ್ಲಂಗಡಿ (66.12 ಮಿಲಿಯನ್ ಡಾಲರ್), ಹಾಗೂ ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್ಗಳು ಮತ್ತು ಬಾಯ್ಲರ್ಗಳು (32.65 ಮಿಲಿಯನ್ ಡಾಲರ್) ಸೇರಿವೆ. ಯುಎಸ್ ಸುಂಕದ ನಿರಂತರ ಜಾರಿಯು ಭಾರತೀಯ ಕಂಪೆನಿಗಳನ್ನು ಅಮೆರಿಕ ಮಾರುಕಟ್ಟೆಗೆ ಪ್ರವೇಶವನ್ನು ಉಳಿಸಿಕೊಳ್ಳಲು ಇರಾನ್ನೊಂದಿಗಿನ ವ್ಯವಹಾರಗಳನ್ನು ಕಡಿಮೆ ಮಾಡಲು ಒತ್ತಾಯಿಸಬಹುದು. ಇದರಿಂದ ರಾಸಾಯನಿಕ, ಕೃಷಿ ಮತ್ತು ಔಷಧೀಯ ಉತ್ಪನ್ನಗಳ ರಫ್ತುದಾರರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಇದು ಚಬಹಾರ್ ಬಂದರಿನ ಮೇಲೆ ಪರಿಣಾಮ ಬೀರುತ್ತದೆಯೇ? ಭಾರತ–ಇರಾನ್ ಸಂಬಂಧಗಳ ಪ್ರಮುಖ ಕೇಂದ್ರವೇ ಚಬಹಾರ್ ಬಂದರು. ಇಲ್ಲಿ ಭಾರತ ಶಾಹಿದ್ ಬೆಹೆಶ್ತಿ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸದ್ಯಕ್ಕೆ, ಅಮೆರಿಕದ ಹೊಸ ಸುಂಕವು ಬಂದರಿನ ಅಭಿವೃದ್ಧಿಯ ಮೇಲೆ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆ ಕಾಣಿಸುವುದಿಲ್ಲ. ಕಳೆದ ವರ್ಷ ಇರಾನ್ನ ಚಬಹಾರ್ ಬಂದರಿನ ವಿರುದ್ಧ ಅಮೆರಿಕ ಹೇರಿದ್ದ ನಿರ್ಬಂಧಗಳಿಂದ ಆರು ತಿಂಗಳ ವಿನಾಯಿತಿಯನ್ನು ಭಾರತ ಪಡೆಯಲು ಯಶಸ್ವಿಯಾಗಿತ್ತು. ಈ ವಿನಾಯಿತಿ ಏಪ್ರಿಲ್ 29ರಂದು ಮುಕ್ತಾಯಗೊಳ್ಳಲಿದೆ. ಟ್ರಂಪ್ ಆಡಳಿತವು 2018ರಲ್ಲಿ ಮೊದಲು ನೀಡಿದ್ದ ವಿನಾಯಿತಿಯನ್ನು ರದ್ದುಪಡಿಸಿದ ನಂತರ, ಈ ವಿನಾಯಿತಿಯನ್ನು ಸೆಪ್ಟೆಂಬರ್ 2025ರಲ್ಲಿ ಹಿಂತೆಗೆದುಕೊಳ್ಳಲಾಯಿತು. ಚಬಹಾರ್ ಬಂದರು ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಅತಿ ದೊಡ್ಡ ಮತ್ತು ಭಾರವಾದ ಹಡಗುಗಳನ್ನು ನಿರ್ವಹಿಸಬಲ್ಲ ಈ ಆಳವಾದ ನೀರಿನ ಬಂದರು ಓಮನ್ ಕೊಲ್ಲಿಯ ಸಮೀಪದಲ್ಲಿದ್ದು, ಮಧ್ಯಪ್ರಾಚ್ಯವನ್ನು ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮುಖಭಾಗದಲ್ಲಿದೆ. ನಿರ್ಣಾಯಕವಾಗಿ, ಈ ಬಂದರು ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ಮಾರುಕಟ್ಟೆಗಳನ್ನು ಪ್ರವೇಶಿಸಲು ಭಾರತಕ್ಕೆ ಸಹಕಾರ ನೀಡುತ್ತದೆ. ಜೊತೆಗೆ, ಪಾಕಿಸ್ತಾನದ ಗ್ವಾದರ್ ಬಂದರಿಗೆ ಭಾರತದ ಪ್ರತಿಯಾಗಿ ಚಬಹಾರ್ ಬಂದರನ್ನು ನೋಡಲಾಗುತ್ತದೆ. ಅಲ್ಲಿ ಚೀನಾ ಭಾರೀ ಹೂಡಿಕೆ ಮಾಡಿ ಅರೇಬಿಯನ್ ಸಮುದ್ರಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದೆ. ಚಬಹಾರ್ ಮೂಲಕ ಪರ್ಷಿಯನ್ ಕೊಲ್ಲಿಯಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಭಾರತ ನಿಗಾ ವಹಿಸಬಹುದು. ಇರಾನ್ ನಲ್ಲಿ ಪ್ರತಿಭಟನೆ ತೀವ್ರ ಸರ್ಕಾರ ಇಂಟರ್ನೆಟ್ ಮತ್ತು ದೂರವಾಣಿ ಜಾಲಗಳನ್ನು ಸ್ಥಗಿತಗೊಳಿಸಿದ್ದರೂ, ದುರ್ಬಲ ಆರ್ಥಿಕತೆಯಿಂದ ಪ್ರಚೋದಿತ ಹಿಂಸಾತ್ಮಕ ಪ್ರತಿಭಟನೆಗಳು ಇರಾನ್ ನಲ್ಲಿ ಮುಂದುವರಿದಿವೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಇರಾನ್ನ ಪರಮಾಣು ಕಾರ್ಯಕ್ರಮದ ಮೇಲೆ ವಿಶ್ವಸಂಸ್ಥೆ ಮತ್ತೆ ನಿರ್ಬಂಧಗಳನ್ನು ಹೇರಿದ ನಂತರ ಆರ್ಥಿಕ ಒತ್ತಡ ತೀವ್ರಗೊಂಡಿದ್ದು, ದೇಶದ ಕರೆನ್ಸಿ ರಿಯಾಲ್ ಕುಸಿತಕ್ಕೊಳಗಾಗಿದೆ. ಈ ಪ್ರತಿಭಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ ಕನಿಷ್ಠ 646 ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಹಿಂಸಾಚಾರದ ನಿಖರ ಮಾಹಿತಿಯನ್ನು ವರದಿ ಮಾಡುವ ಯುಎಸ್ ಮೂಲದ HRANA ಸಂಸ್ಥೆ, ಇರಾನ್ನಲ್ಲಿರುವ ತನ್ನ ಬೆಂಬಲಿಗರ ಮಾಹಿತಿಯನ್ನು ಆಧರಿಸಿ ಈ ಅಂಕಿಅಂಶಗಳನ್ನು ನೀಡಿದೆ. ಸಾವಿಗೀಡಾದವರಲ್ಲಿ 512 ಮಂದಿ ಪ್ರತಿಭಟನಾಕಾರರು ಹಾಗೂ 132 ಮಂದಿ ಭದ್ರತಾ ಪಡೆ ಸದಸ್ಯರು ಎಂದು ಅದು ಹೇಳಿದೆ. ಕಳೆದ ಎರಡು ವಾರಗಳಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿ 10,700ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.
ರಶ್ಯದಿಂದ ಕಚ್ಚಾ ತೈಲ ಆಮದು: ಡಿಸೆಂಬರ್ ತಿಂಗಳಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಭಾರತ
ರಶ್ಯ ಕಚ್ಚಾ ತೈಲ ಆಮದನ್ನು ಕಡಿತಗೊಳಿಸಿದ ರಿಲಯನ್ಸ್ ಸಮೂಹ
ಕಲಬುರಗಿ | ವಿವೇಕಾನಂದರು ಭಾರತದ ಆತ್ಮವಿದ್ದಂತೆ : ಸತ್ಯಂಪೇಟೆ
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ
ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ಕಾರ್ಮಿಕ ಇಲಾಖೆ ಕಳವಳ: 10 ನಿಮಿಷದ ಡೆಲಿವರಿ ಭರವಸೆಯನ್ನು ಕೈಬಿಟ್ಟ Blinkit
ಹೊಸದಿಲ್ಲಿ: ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಎಲ್ಲ ವೇದಿಕೆಗಳಿಂದ ಕೇವಲ 10 ನಿಮಿಷಗಳಲ್ಲಿ ಉತ್ಪನ್ನಗಳನ್ನು ಪೂರೈಸಲಾಗುತ್ತದೆ ಎಂದು ನೀಡಿದ್ದ ತನ್ನ ಭರವಸೆಯನ್ನು ತ್ವರಿತವಾಗಿ ತಲುಪಿಸುವ ವಾಣಿಜ್ಯ ಸಂಸ್ಥೆ ಬ್ಲಿಂಕಿಟ್ ಕೈಬಿಟ್ಟಿದೆ. ಪೂರೈಕೆ ಗಡುವಿನ ಕುರಿತು ವ್ಯಕ್ತವಾಗಿರುವ ಕಳವಳದ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಬ್ಲಿಂಕಿಟ್, ಝೆಪ್ಟೊ, ಝೊಮ್ಯಾಟೊ ಹಾಗೂ ಸ್ವಿಗ್ಗಿ ಸೇರಿದಂತೆ ವಿವಿಧ ವೇದಿಕೆಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ತ್ವರಿತ ವಾಣಿಜ್ಯ ಸಂಸ್ಥೆಗಳೂ ಬ್ಲಿಂಕಿಟ್ ಮಾದರಿಯನ್ನು ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸಂಬಂಧ ಈಗಾಗಲೇ ಕ್ರಮ ಕೈಗೊಂಡಿರುವ ಎಟರ್ನಲ್ ಗ್ರೂಪ್ ಮಾಲಕತ್ವದ ಬ್ಲಿಂಕಿಟ್, 10 ನಿಮಿಷದ ಪೂರೈಕೆಯ ಭರವಸೆಯನ್ನು ತನ್ನ ಪ್ರಚಾರಗಳಿಂದ ಹಿಂಪಡೆದಿದೆ. ಗಿಗ್ ಕಾರ್ಮಿಕರಿಗೆ ಉನ್ನತ ಸುರಕ್ಷತೆ, ಭದ್ರತೆ ಹಾಗೂ ಸುಧಾರಿತ ಕೆಲಸದ ವಾತಾವರಣವನ್ನು ಸೃಷ್ಟಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ, 10,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ ಎಂದು ಬ್ಲಿಂಕಿಟ್ ತನ್ನ ಜಾಹೀರಾತು ಸಂದೇಶಗಳಲ್ಲಿ ಪ್ರಚಾರ ಮಾಡಿತ್ತು. ಇದು ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ತೀವ್ರ ಕಳವಳಕ್ಕೆ ಕಾರಣವಾಗಿತ್ತು.
ಜ.14: ಶ್ರೀ ಕ್ಷೇತ್ರ ಕದ್ರಿಯಲ್ಲಿ ವರ್ಷಾವಧಿ ಜಾತ್ರೆ
ಮಂಗಳೂರು , ಜ.13: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ವರ್ಷಾವಧಿ ಜಾತ್ರೆ ಜ.14ರಂದು ಆರಂಭವಾಗಲಿದೆ. ಮುಂಜಾನೆ ತೀರ್ಥ ಸ್ನಾನ ಪ್ರಾರಂಭಗೊಳ್ಳಲಿದ್ದು, 8:30ಕ್ಕೆ ಕದ್ರಿ ಶ್ರೀಮಠಾಧಿಪತಿಯವರ ತೀರ್ಥ ಸ್ನಾನ ನಡೆಯು ವುದು. ಸಂಜೆ 6ಕ್ಕೆ ಏಳು ಪಟ್ಟಣ ಮೊಗವೀರ ಮಹಾಸಭಾ ದೇವರಿಂದ ‘ಧ್ವಜಸ್ತಂಭ ಆರೋಹಣ ’ವಾಗುವುದು, ಬಳಿಕ ಶ್ರೀ ಮಲರಾಯ ದೈವದ ಭಂಡಾರ ಆಗಮನ, ರಾತ್ರಿ ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣದ ಬಳಿಕ ಉತ್ಸವ ಬಲಿ,ದೀಪದ ಬಲಿ, ಸಣ್ಣ ರಥೋತ್ಸವ ಜರಗಲಿದೆ. ಪ್ರತಿನಿತ್ಯ ದೇವರ ಉತ್ಸವ ಬಲಿ ನಡೆಯಲಿದ್ದು, ಶುಕ್ರವಾರ ಬಿಕರ್ನಕಟ್ಟೆ ಸವಾರಿ, ಶನಿವಾರ ಮಲ್ಲಿಕಟ್ಟೆ ಸವಾರಿ, ಆದಿತ್ಯವಾರ ಮುಂಡಾಣಕಟ್ಟೆ ಸವಾರಿ, ಸೋಮವಾರ ಕೊಂಚಾಡಿ ಸವಾರಿ ನಡೆಯಲಿದ್ದು, ಜ20ರಂದು ಏಳನೇ ದೀಪೋತ್ಸವ ಹಾಗೂ ಅಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಜ.21 ಸಂಜೆ 6ಕ್ಕೆ ಶ್ರೀ ಮನ್ಮಹಾರಥೋತ್ಸವ - ಬೆಳ್ಳಿ ರಥೋತ್ಸವ , ಜ.22 ಬೆಳಗ್ಗೆ ಮಂಜುನಾಥ ದೇವರ ಕವಾಟೋದ್ಘಾಟನೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ ಕೊಳ್ಳುವುದು. ಜ.24 ರಾತ್ರಿ ಶ್ರೀ ಮಲರಾಯ, ಶ್ರೀ ಜಾರಂದಾಯ, ಶ್ರೀ ವೈದ್ಯನಾಥ ಮತ್ತು ಶ್ರೀ ಪಿಲಿಚಾಮುಂಡಿ ದೈವಗಳ ನೇಮದೊಂದಿಗೆ ವಾರ್ಷಿಕ ಜಾತ್ರೆ ಸಮಾಪನಗೊಳ್ಳುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ
AI ಬಳಕೆಯಲ್ಲಿ 64ನೇ ಸ್ಥಾನದಲ್ಲಿ ಭಾರತ; AI ಕುರಿತ ಮೈಕ್ರೋಸಾಫ್ಟ್ ವರದಿಯಲ್ಲಿ ಏನಿದೆ?
ವರದಿಯ ಪ್ರಕಾರ 2025ರ ಎರಡನೇ ಅರ್ಧಭಾಗದಲ್ಲಿ ಚೀನಾ, ಬ್ರೆಝಿಲ್, ಜರ್ಮನಿ, ಜಪಾನ್ ಮತ್ತು ಅಮೆರಿಕಗಳಿಗೆ ಹೋಲಿಸಿದಲ್ಲಿ ಭಾರತ ಹಿಂದೆ ಬಿದ್ದಿರುವುದು ಮುಂದುವರಿದಿದೆ. ಜಾಗತಿಕವಾಗಿ ಕೃತಕಬುದ್ಧಿಮತ್ತೆ (AI) ಅಳವಡಿಸಿಕೊಳ್ಳುವುದು ವೇಗವಾಗಿ ಸಾಗುತ್ತಿರುವಾಗ ಭಾರತದಲ್ಲಿ ನಿಧಾನಗತಿಯ ಅಳವಡಿಕೆ ಕಂಡುಬರುತ್ತಿದೆ ಎಂದು ಮೈಕ್ರೋಸಾಫ್ಟ್ ವರದಿಯೊಂದು ಹೇಳಿದೆ. ವರದಿಯ ಪ್ರಕಾರ 2025ರ ಎರಡನೇ ಅರ್ಧಭಾಗದಲ್ಲಿ ಚೀನಾ, ಬ್ರೆಝಿಲ್, ಜರ್ಮನಿ, ಜಪಾನ್ ಮತ್ತು ಅಮೆರಿಕಗಳಿಗೆ ಹೋಲಿಸಿದಲ್ಲಿ ಭಾರತ ಹಿಂದೆ ಬಿದ್ದಿರುವುದು ಮುಂದುವರಿದಿದೆ. ದೇಶದಲ್ಲಿ AI ಚದುರುವಿಕೆಯು 2025ರ ಮೊದಲನೇ ಅರ್ಧಭಾಗಕ್ಕೆ ಹೋಲಿಸಿದಲ್ಲಿ ಎರಡನೇ ಅರ್ಧಭಾಗದಲ್ಲಿ ಶೇ 1.4ರಷ್ಟು ಏರಿಕೆಯಾಗಿದೆ. ಅಂದರೆ ಶೇ 14.2ರಿಂದ ಶೇ. 15.7ರಷ್ಟು ಏರಿಕೆಯಾಗಿದೆ. ಜನವರಿ 8ರಂದು ಮೈಕ್ರೋಸಾಫ್ಟ್ನ AI ಇಕಾನಮಿ ಇನ್ಸ್ಟಿಟ್ಯೂಟ್ (ಎಐಇಐ) ಪ್ರಕಟಿಸಿದ ‘ಅಐ ಡಿಫ್ಯೂಶನ್ ರಿಪೋರ್ಟ್’ ಎನ್ನುವ ವರದಿಯಲ್ಲಿ ಈ ವಿವರಗಳಿವೆ. ವರದಿಯ ಪ್ರಕಾರ 2025ರ ಎರಡನೇ ಅವಧಿಯಲ್ಲಿ ಜಾಗತಿಕವಾಗಿ ಎಐ ಬಳಕೆಯು ಶೇ 1.2ರಷ್ಟು ಏರಿಕೆಯಾಗಿ ಶೇ 16.3ರಷ್ಟಾಗಿದೆ. ಮೊದಲನೇ ಅವಧಿಯಲ್ಲಿ AI ಬಳಕೆಯು ಶೇ 15.1ರಷ್ಟಿತ್ತು. ಪ್ರಸ್ತುತ ಜಾಗತಿಕವಾಗಿ ಆರು ಮಂದಿಯಲ್ಲಿ ಒಬ್ಬ ವ್ಯಕ್ತಿ ಎಐ ಟೂಲ್ಗಳನ್ನು ಬಳಸುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರ ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನರು AI ಬಳಸುತ್ತಿದ್ದಾರೆ. ಆ ನಂತರದ ಸ್ಥಾನದಲ್ಲಿ ನಾರ್ವೆ, ಐರ್ಲ್ಯಾಂಡ್, ಫ್ರಾನ್ಸ್ ಮತ್ತು ಸ್ಪೇನ್ ರಾಷ್ಟ್ರಗಳಿವೆ. 64ನೇ ಸ್ಥಾನದಲ್ಲಿರುವ ಭಾರತ ಆದರೆ 1.45 ಶತಕೋಟಿ ಜನಸಂಖ್ಯೆ ಇರುವ ಭಾರತ ಪ್ರಸ್ತುತ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ. ದೇಶದಲ್ಲಿ AI ದೈತ್ಯರಾದ OpenAI, ಆಂತ್ರೋಪಿಕ್, ಗೂಗಲ್ ಮತ್ತು ಪರ್ಪ್ಲೆಕ್ಸಿಟಿಗಳಿಗೆ ಪ್ರಮುಖ ಬಳಕೆದಾರ ಪ್ರಗತಿ ಮಾರುಕಟ್ಟೆಯನ್ನು ಗುರುತಿಸಿರುವ ಸಂದರ್ಭದಲ್ಲಿ ಈ ವರದಿ ಬಂದಿದೆ. ಸುಮಾರು 730 ದಶಲಕ್ಷ ಮೊಬೈಲ್ ಸಾಧನಗಳನ್ನು ಬಳಸುವ ಭಾರತ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರ್ಕೆಟ್ ಆಗಿರುತ್ತದೆ. ಹೀಗಾಗಿ ಸರಾಸರಿ ಭಾರತೀಯರು ಮಾಸಿಕ 21 ಗಿಗಾಬೈಟ್ಗಳಷ್ಟು ದತ್ತಾಂಶವನ್ನು ಬಳಸುತ್ತಾರೆ. ಪ್ರತಿ ಗಿಗಾಬೈಟ್ಗೆ 9.2 ಸೆಂಟ್ಗಳಷ್ಟು ಪಾವತಿಸುತ್ತಾರೆ. ಇದು ಜಾಗತಿಕವಾಗಿ ಅತಿ ಕಡಿಮೆ ದತ್ತಾಂಶ ದರವಾಗಿದೆ. ದಕ್ಷಿಣಕ್ಕೂ ಉತ್ತರಕ್ಕೂ ದೊಡ್ಡ ಅಂತರ ಮೈಕ್ರೋಸಾಫ್ಟ್ ವರದಿಯಲ್ಲಿ ಉಲ್ಲೇಖಿಸಲಾದ ಮತ್ತೊಂದು ವಿವರವೆಂದರೆ, ಜಾಗತಿಕವಾಗಿ ಉತ್ತರ ಭಾಗದಲ್ಲಿ ದಕ್ಷಿಣಕ್ಕೆ ಹೋಲಿಸಿದರೆ ದುಪ್ಪಟ್ಟು ವೇಗದಲ್ಲಿ AI ಬಳಕೆ ಆರಂಭವಾಗಿದೆ. ಜಾಗತಿಕ ಉತ್ತರ ಭಾಗದಲ್ಲಿ ಸುಮಾರು ಶೇ 24.7ರಷ್ಟು ಪ್ರಮಾಣದಲ್ಲಿ AI ಬಳಕೆಯಾಗುತ್ತಿದೆ. ಆದರೆ ಜಾಗತಿಕ ದಕ್ಷಿಣ ಭಾಗದಲ್ಲಿ ಶೇ 14.1ರಷ್ಟು ಮಾತ್ರವೇ ಬಳಕೆಯಾಗುತ್ತಿದೆ. ಅತಿ ಹೆಚ್ಚು AI ಬಳಕೆ ಮಾಡುವ ದೇಶಗಳು ಅತ್ಯಧಿಕ ಆದಾಯವಿರುವ ಅರ್ಥವ್ಯವಸ್ಥೆಗಳಾಗಿರುತ್ತವೆ. ಒಟ್ಟಿನಲ್ಲಿ ಜಗತ್ತು AI ಅನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದರೆ ಭಾರತ ಮತ್ತು ದಕ್ಷಿಣದ ಭಾಗ ಹಿಂದೆ ಬೀಳುತ್ತಿದೆ. ಈ ಅನ್ವೇಷಣೆಯ ಅಲೆಯಲ್ಲಿ ಹೆಚ್ಚು ಮಂದಿಗೆ ತಲುಪಿಸುವ ಸವಾಲು ಮುಂದೆ ಇದೆ ಎಂದು ವರದಿ ಹೇಳಿದೆ. AI ಮೂಲಸೌಕರ್ಯದಲ್ಲಿ ಹೂಡಿಕೆ ಡಿಜಿಟಲ್ ಮೂಲಸೌಕರ್ಯದಲ್ಲಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಿರುವ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಸಿಂಗಾಪೂರ್, ನಾರ್ವೆ, ಐರ್ಲ್ಯಾಂಡ್, ಫ್ರಾನ್ಸ್ ಮತ್ತು ಸ್ಪೇನ್ಗಳು ಎಐ ಕೌಶಲ್ಯ ಮತ್ತು ಅಳವಡಿಕೆಯಲ್ಲಿ ಮುಂಚೂಣಿಯಲ್ಲಿವೆ. 2025ರ ಅಂತ್ಯಭಾಗದಲ್ಲಿ ಯುಎಇಯ ಶೇ 64ರಷ್ಟು ಮಂದಿ ಎಐ ಬಳಸುತ್ತಿದೆ. ಅದೇ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಶೇ 60.0ರಷ್ಟು ಎಐ ಬಳಕೆಯಾಗುತ್ತಿದೆ. ಅನ್ವೇಷಣೆ ಎಂದರೆ ಅಳವಡಿಕೆಯಲ್ಲ ಎಐ ಮೂಲಸೌಕರ್ಯ ಮತ್ತು ಫ್ರಂಟಿಯರ್ ಮಾಡೆಲ್ ಅಭಿವೃದ್ಧಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದರೂ ಎಐ ಬಳಕೆಯಲ್ಲಿ ಹಿಂದಿದೆ. 23ರಿಂದ 24ನೇ ಸ್ಥಾನದಲ್ಲಿದೆ. ದೇಶದಲ್ಲಿ ಶೇ 28.3ರಷ್ಟು ಮಾತ್ರ ಎಐ ಬಳಕೆಯಾಗುತ್ತಿದೆ. ದಕ್ಷಿಣ ಕೊರಿಯ ವೇಗವಾಗಿ ಎಐ ಅಳವಡಿಸಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದಕ್ಷಿಣ ಕೊರಿಯ 2025ರ ಆರಂಭದಲ್ಲಿ 25ನೇ ಸ್ಥಾನದಲ್ಲಿದ್ದರೆ, ಅಂತ್ಯಕ್ಕಾಗುವಾಗ 18ನೇ ಸ್ಥಾನಕ್ಕೇರಿದೆ. ಈ ದೇಶದಲ್ಲಿ ಶೇ 26ರಿಂದ 30ರಷ್ಟು ಮಂದಿ ಎಐ ಬಳಸುತ್ತಿದ್ದಾರೆ. ದಕ್ಷಿಣ ಕೊರಿಯದಲ್ಲಿ ರಾಷ್ಟ್ರೀಯ ನೀತಿಗಳು ಮತ್ತು ಕೊರಿಯನ್ ಭಾಷೆಯಲ್ಲಿ ಫ್ರಂಟಿಯರ್ ಮಾಡೆಲ್ಗಳು ಬಂದಿರುವುದು, ಗ್ರಾಹಕಮುಖಿ ವೈಶಿಷ್ಟ್ಯಗಳು ಬಳಕೆ ಏರಲು ಕಾರಣವಾಗಿದೆ. ಮತ್ತೊಂದು ಮುಖ್ಯ ಕಾರಣವೆಂದರೆ ಜನರೇಟಿವ್ ಎಐ ಅನ್ನು ಸದ್ಯ ಶಾಲೆಗಳು, ಕಾರ್ಯಸ್ಥಳಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿ ದಕ್ಷಿಣ ಕೊರಿಯ ಚಾಟ್ಜಿಪಿಟಿಯ ಅತಿ ವೇಗವಾಗಿ ಬೆಳೆಯುವ ಮಾರುಕಟ್ಟೆಯಾಗಿದೆ. ಎಐ ಉತ್ಪಾದಿತ ಗಿಬ್ಲಿ ಸ್ಟೈಲ್ ಚಿತ್ರಗಳು ದಕ್ಷಿಣ ಕೊರಿಯದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ಚೀನಾ ಮೂಲದ ಡೀಪ್ ಸೀಕ್ ರಷ್ಯಾ, ಇರಾನ್, ಕ್ಯೂಬಾ ಮತ್ತು ಬೆಲಾರಸ್ಗಳಲ್ಲಿ ಜನಪ್ರಿಯತೆ ಪಡೆದಿದೆ.
ಕಲಬುರಗಿ | ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿ : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಮತ್ತು ಸಂಘರ್ಷ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು. ಅವರು ನಗರದ ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಮಕೃಷ್ಣ ವಿವೇಕಾನಂದ್ ಆಶ್ರಮ ವತಿಯಿಂದ ಏರ್ಪಡಿಸಿದ ಸ್ವಾಮಿ ವಿವೇಕಾನಂದ ಅವರ ಜಯಂತಿಯ ಕುರಿತಾದ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ರಾಮಕೃಷ್ಣ ಆಶ್ರಮದ ಮಹೇಶ್ವರನಂದ ಸ್ವಾಮೀಜಿ ಮಾತನಾಡಿ, ವಿವೇಕಾನಂದರ ಬದಕು ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು. ಸ್ವಾಮಿ ವಿವೇಕಾನಂದರು ಅವರು ಬಾಲ್ಯದಿಂದಲೂ ಆಧ್ಯಾತ್ಮಿಕದ ಕಡೆಗೆ ಮುಖಮಾಡಿ ಯುವಜನಾಂಗಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೆ ನಿಲ್ಲದಿರಿ ಎಂಬಂತಹ ಮಾತುಗಳು ಯುವಜನಾಂಗದ ಬದುಕನ್ನು ಬದಲಾಯಿಸಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ, ಸ್ವಾಮಿ ವಿವೇಕಾನಂದರು ಯುವಕರಿಗೆ ಒಳ್ಳೆಯ ದಾರಿಯಲ್ಲಿ ನಡೆಯಲು ಅನೇಕ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ಇಂದಿನ ಯುವಕರಿಗೆ ಐಕಾನ್ ಆಗಿದ್ದಾರೆ ಎಂದು ಹೇಳಿದರು. ನಿವೃತ್ತ ಪ್ರಚಾರ್ಯರಾದ ನರೇಂದ್ರ ಬಡಶೇಷಿಯವರು ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸವನು ನೀಡಿದರು. ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಜಯ ಬಾಣದ, ಪ್ರವೀಣ್ ಪುಣೆ, ರಾಜು ಚವಾಣ್, ದೇವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
ವಿಶ್ವದ ಟಾಪ್ 100 ರ್ಯಾಂಕಿಂಗ್ ಪಟ್ಟಿಯಲ್ಲಿ IIT ಗೆ ಇಲ್ಲ ಸ್ಥಾನ!
ಭಾರತದ ವಿಶ್ವವಿದ್ಯಾಲಯಗಳು ಹಿಂದುಳಿಯುತ್ತಿರುವುದೇಕೆ?
ಕಲಬುರಗಿ | ಕನ್ನಡ ಮಾಧ್ಯಮ ಭವಿಷ್ಯ ರೂಪಿಸುತ್ತದೆ: ಬಸವರಾಜ ದೇಶಮುಖ
ಕಲಬುರಗಿ: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ಉನ್ನತ ಹುದ್ದೆಗೇರಿದ್ದಾರೆ, ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು, ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು. ನಗರದ ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವರ್ಷದ ವಿಜ್ಞಾನ ಚಟುವಟಿಕೆಗಳ ಸಮಾರೋಪ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನಿಲಕುಮಾರ ಬಿಡುವೆ ಮಾತನಾಡಿ, ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ, ಒಂದು ಕಾಲದಲ್ಲಿ ಉತ್ತೀರ್ಣರಾಗಿದ್ದೀರಾ ? ಎಂದು ಮಾತ್ರ ಕೇಳುತ್ತಿದ್ದರು. ಆದರೆ ಇಂದು ಪ್ರತಿಶತ ಎಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದೀರಾ ಎಂದು ಕೇಳುತ್ತಿದ್ದಾರೆ. ಪಾಸಾಗುವುದು ಮುಖ್ಯವಲ್ಲ, ಏನನ್ನಾದರೂ ಸಾಧಿಸುವುದು ಮುಖ್ಯವಾಗಿದೆ ಎಂದರು. ಇನ್ನೋರ್ವ ಅತಿಥಿಗಳಾದ ನಿವೃತ ಪ್ರಾಚಾರ್ಯ ನರೇಂದ್ರ ಬಡಶೇಶಿ, ಡಾ.ಮುಕೇಶ ಚೌಹಾಣ್ ಮಾತನಾಡಿದರು. ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ, ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು . ಪ್ರಾಚಾರ್ಯರಾದ ವಿನೋದಕುಮಾರ್ ಪತಂಗೆಯವರು ಸ್ವಾಗತಿಸಿ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಏರ್ಪಡಿಸಿದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅತ್ಯುತ್ತಮ ಮಾದರಿಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸೇಡಂ | ಹೆಸರು ಖರೀದಿ ಸ್ಥಗಿತಕ್ಕೆ ಆಕ್ರೋಶ; ಶೀಘ್ರ ಆರಂಭಿಸದಿದ್ದರೆ ರಸ್ತೆ ತಡೆ ಪ್ರತಿಭಟನೆಯ ಎಚ್ಚರಿಕೆ
ರೈತರಿಗೆ ತಪ್ಪದ ಖರೀದಿ ಕೇಂದ್ರಗಳ ಅಲೆದಾಟ: ವಿಶೇಷ ಪ್ಯಾಕೇಜ್ಗೆ ಶಾಂತಕುಮಾರ ಚನ್ನಕ್ಕಿ ಒತ್ತಾಯ
ವಾಡಿ | ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ
ವಾಡಿ, ಜ.13: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಧ್ಯಾನ, ಯೋಗ ಹಾಗೂ ಪ್ರಾಣಾಯಾಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸ್ವಾಮಿ, ವಿವೇಕಾನಂದರು ಆಧ್ಯಾತ್ಮಿಕತೆಗೆ ಹೊಸ ಭಾಷೆಯಯನ್ನು ಬರೆದುಕೊಟ್ಟ ಮಹಾನ್ ಸಂತ. ಅವರು ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದರು. ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಕೇಂದ್ರದ ಮುಖ್ಯಸ್ಥರಾದ ಬಿ.ಕೆ. ಮಹಾನಂದ ಮಾತನಾಡಿದರು. ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ಆರ್ಜನ ಕಾಳೆಕರ್, ಕಿಶನ ಜಾಧವ, ವಿಶ್ವರಾಧ್ಯ ತಳವಾರ, ಪ್ರಕಾಶ ಪವಾರ, ಸುಭಾಷ ಬಳಚಡ್ಡಿ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕಲಬುರಗಿ | ಕಮಲಾಪುರದಲ್ಲಿ ಬೆಳೆ ಹಾನಿ ವೀಕ್ಷಿಸಿದ ಕೇಂದ್ರ ನೆರೆ ಹಾನಿ ತಂಡ
ಕಲಬುರಗಿ : ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭೀಕರ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಹಾಗೂ ಮೂಲಸೌಕರ್ಯ ನಷ್ಟದ ಅಧ್ಯಯನಕ್ಕೆ ಕೇಂದ್ರ ತಂಡ ಮಂಗಳವಾರ ಭೇಟಿ ನೀಡಿತು. ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ ಹಾಗೂ ಕಮಲಾಪುರ ಗ್ರಾಮಗಳಲ್ಲಿ ತಂಡವು ಹಾನಿಗೊಳಗಾದ ಬೆಳೆಗಳು, ರಸ್ತೆ ಮತ್ತು ಸೇತುವೆಗಳನ್ನು ವೀಕ್ಷಿಸಿತು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ. ಪೊನ್ನುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರನ್ನೊಳಗೊಂಡ ತಂಡವು ರೈತರ ಅಳಲನ್ನು ಆಲಿಸಿತು. ಡೊಂಗರಗಾಂವ ಗ್ರಾಮದ ರೈತ ಅಭಿಷೇಕ್ ಅವರ ಹೊಲಕ್ಕೆ ಭೇಟಿ ನೀಡಿದಾಗ, ಅವರು ತಮ್ಮ 4.32 ಎಕರೆ ಪ್ರದೇಶದ ತೊಗರಿ ಬೆಳೆ ಹಾನಿಯಾಗಿರುವುದನ್ನು ವಿವರಿಸಿದರು. ಪ್ರತಿ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದೆವು, ಆದರೆ ಮಳೆಯಿಂದಾಗಿ ಬಿತ್ತಿದ ಬೀಜದಷ್ಟು ಫಸಲು ಬರುವ ಸ್ಥಿತಿಯಲ್ಲಿಲ್ಲ ಎಂದು ರೈತ ತನ್ನ ನೋವನ್ನು ತೋಡಿಕೊಂಡರು. ಕಮಲಾಪುರದ ರೈತ ಪ್ರಶಾಂತ್ ಸಹ ಮಳೆಯಿಂದಾಗಿ ಬೆಳೆ ಕೊಚ್ಚಿ ಹೋಗಿರುವುದು ಮತ್ತು ಮರು ಬಿತ್ತನೆ ಮಾಡಿದ ಕುಸುಬೆ ಬೆಳೆಯ ಇಳುವರಿ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಬೆಳೆಗಳಲ್ಲದೆ ಶಾಲೆಗಳು, ಅಂಗನವಾಡಿಗಳು, ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದೆ. ಈಗಾಗಲೇ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಹಾಗೂ ರಾಜ್ಯ ಸರ್ಕಾರದಿಂದಲೂ ಪರಿಹಾರ ವಿತರಿಸಲಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಿದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಮಲಾಪುರ ತಾಲೂಕಿನಲ್ಲಿ ಬಿತ್ತನೆಯಾದ 7,892 ಹೆಕ್ಟೇರ್ ತೊಗರಿ ಪೈಕಿ ಶೇ. 80ರಷ್ಟು ಹಾನಿಯಾಗಿದೆ. ಮಣ್ಣಿನಲ್ಲಿ ಅತಿಯಾದ ತೇವಾಂಶ ಇರುವುದರಿಂದ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಬೆಳೆ ಹಾನಿಯ ಜೊತೆಗೆ ತಂಡವು ಕಿಣ್ಣಿಸಡಕ್-ಡೋರ ಜಂಬಗಾ ನಡುವಿನ ಸೇತುವೆ ಹಾಗೂ ಭೀಮನಾಳ ಗ್ರಾಮದ ರಸ್ತೆಗಳ ಹಾನಿಯನ್ನು ವೀಕ್ಷಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ತಹಶೀಲ್ದಾರ್ ಮೊಹಮ್ಮದ್ ಮೋಹಸೀನ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

20 C