ಕಲಬುರಗಿ : ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾಗಿದ್ದ ಸುಮಾರು 12.5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ನಗರದ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದ ನಾಗೇಶ್ ರಾಜಪ್ಪ ಹಲಗೆನೂರ ಹಾಗೂ ಜೇವರ್ಗಿ ತಾಲೂಕಿನ ರಾಮಪುರ ಗ್ರಾಮದ ಗೌಡಪ್ಪ ಶರಣಪ್ಪ ಕಕ್ಕಸಗೇರಾ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಹೆಬ್ಬಾಳ ಗ್ರಾಮದ ಬಸವರಾಜ ಅಂಕಲಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ಕಾಳಗಿ ಪಿಎಸ್ಐ ತಿಮ್ಮಯ್ಯ ಹಾಗೂ ಇತರ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡ ರಚಿಸಿ, ಆರೋಪಿಗಳನ್ನು ವಶಕ್ಕೆ ಪಡೆದು, 14 ಬೈಕ್ ಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು. ಬಂಧಿತ ಆರೋಪಿಗಳು, ಜಾತ್ರೆ, ಹೆಚ್ಚಿನ ಪಾರ್ಕಿಂಗ್ ವುಳ್ಳ ಸ್ಥಳಗಳನ್ನು ಗುರಿಯಾಗಿಸಿ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು. ಈ ಕುರಿತು ವಿಚಾರಿಸಿದಾಗ ಆರೋಪಿಗಳಿಬ್ಬರೂ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ, ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್ಐ ಗೌತಮ, ಸಿದ್ಧಲಿಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ರ ಅಧಿಕಾರಿಗಳು ಉಪಸ್ಥಿತರಿದ್ದರು.
“ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ”: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಳಲು
“ಅಪರಾಧಿಯ ಬೆಂಬಲಕ್ಕೆ ನಿಲ್ಲುವ ಬದಲು ನ್ಯಾಯದ ಹೋರಾಟದಲ್ಲಿ ಕೈಜೋಡಿಸಿ”
ಮೂಡುಬಿದಿರೆ | ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮೂಡುಬಿದಿರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2026- 28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಮಾಧ್ಯಮಗಳಲ್ಲಿ ವರದಿಗಾರಿಕೆ ನಡೆಸುವುದರೊಂದಿಗೆ ಸಂಘಟಿತರಾಗಿ ತಮ್ಮ ಏಳಿಗೆಗೆ ಬದ್ಧರಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆಗಳಿಗೆ ಜಿಲ್ಲಾ ಸಂಘ ನಿರಂತರ ಬೆಂಬಲ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಭೆಯಲ್ಲಿ ಭಾಗವಹಿಸಿ ಹಾರೈಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ್ ಆಚಾರ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೈಸನ್ ತಾಕೋಡೆ ಧನ್ಯವಾದವಿತ್ತರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
`ಹೀಗಾದ್ರೆ ಟಿ20 ವಿಶ್ವಕಪ್ ಯಾರೂ ನೋಡೊಲ್ಲ!': ಐಸಿಸಿಗೆ ಆರ್ ಅಶ್ವಿನ್ ಅಚ್ಚರಿಯ ಎಚ್ಚರಿಕೆ ನೀಡಿದ್ಯಾಕೆ?
Ravichandran Ashwin On ICC Events- ವಿಶ್ವ ಕ್ರಿಕೆಟ್ನಲ್ಲಿ ಐಸಿಸಿ ಟೂರ್ನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರ. ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೂ ಗುಣಮಟ್ಟದ ಕಡಿಮೆ ಮಾಡುತ್ತಿದೆ. ಆರಂಭಿಕ ಸುತ್ತಿನ ಪಂದ್ಯಗಳ ಮೇಲೆ ಜನ ಆಸಕ್ತಿ ಕಳೆದುಕೊಳ್ಳಲಿದ್ದಾರೆ. ಇದೇ ರೀತಿ ಮುಂದುವರಿದರೆ ಈ ಬಾರಿ ಟಿ20 ವಿಶ್ವಕಪ್ ಅನ್ನು ನೋಡಲೂ ಜನ ಇಷ್ಟಪಡಲಾರರು ಎಂದು ರವಿಚಂದ್ರನ್ ಅಶ್ವಿನ್ ಐಸಿಸಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು | ಜ.4ರಂದು ‘ಕುಂಭ ಕಲಾವಳಿ- ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮ
ಮಂಗಳೂರು, ಜ.2: ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ. ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ ಸಹಯೋಗದಲ್ಲಿ ಜ.4ರಂದು ‘ಕುಂಭ ಕಲಾವಳಿ- ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮ ನಡೆಯಲಿದೆ. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಅಶಕ್ತರಿಗೆ ನೆರವು ಮೊದಲಾದ ಸಾಮಾಜಿಕ ಚಟುವಟಿಕೆಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ತಿಳಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಸುಮಾರು 3000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 8.30ಕ್ಕೆ ವೈಷ್ಣವಿ ಕ್ಷೇತ್ರ ಮುಳಿಯದ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದ್ದು, ಬಳಿಕ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಸಾಂಸ್ಕೃತಿಕ ಸ್ಪರ್ಧೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಚಾಲನೆ ನೀಡಲಿದ್ದಾರೆ. ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯ್ರಮ, ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಅನಿಲ್ದಾಸ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿ ಸಾಧಕರಿಗೆ ಕುಲಾಲ ಸಿಂಧೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ನ ಸಹಯೋಗದಲ್ಲಿ ಸೇವಾಂಜಲಿ ಹೆಸರಿನಲ್ಲಿ ಫಲಾನುಭವಿಗಳಿಗೆ ಸಹಾಯ ಹಸ್ತ, ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಪ್ರೋತ್ಸಾಹ ಧನ , ವೈದ್ಯಕೀಯ ನೆರವು, ಅಶಕ್ತರಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಹೇಳಿದರು. ಅವಿಭಜಿತ ದ.ಕ. ಜಿಲ್ಲೆಯ ಕುಲಾಲ ಸಂಘಗಳ ಯುವ ವೇದಿಕೆಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ವಿಜೇತ ತಂಡಕ್ಕೆ ಪ್ರಥಮ 51,001 ರೂ., ದ್ವಿತೀಯ 31001 ರೂ., ತೃತೀಯ 21001 ರೂ. ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ಸುಧಾಕರ ಸಾಲ್ಯಾನ್, ವಿಭಾಗೀಯ ಅಧ್ಯಕ್ಷ ಸುಕುಮಾರ ಬಂಟ್ವಾಳ, ಕಾರ್ಯಕ್ರಮ ಸಂಯೋಜಕ ರಾಧಾಕೃಷ್ಣ ಬಂಟ್ವಾಳ, ಸಮಿತಿ ಸಂಚಾಲಕ ಜಯರಾಜ್ ಪ್ರಕಾಶ್, ಜಯಂತ್ ಉಪಸ್ಥಿತರಿದ್ದರು.
ಲಿಂಗಸುಗೂರು | ಮರ್ಯಾದೆ ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಆಗ್ರಹಿಸಿ ಪತ್ರ ಚಳವಳಿ
ಲಿಂಗಸುಗೂರು : ರಾಜ್ಯದಲ್ಲಿ ಮರ್ಯಾದೆ ಹತ್ಯೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶದಿಂದ ವಿಶೇಷ ಕಾಯ್ದೆ ರಚಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿಯಿಂದ ಹಟ್ಟಿ ಪಟ್ಟಣದಲ್ಲಿ ಪತ್ರ ಚಳವಳಿ ನಡೆಸಲಾಯಿತು. ತಾಲೂಕಿನ ಹಟ್ಟಿ ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣದ ಸಮೀಪದ ಅಂಚೆ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ರಮೇಶ ವೀರಾಪೂರು ಮಾತನಾಡಿ, ಮುಂದಿನ ಬಜೆಟ್ ಅಧಿವೇಶನದಲ್ಲೇ ಮರ್ಯಾದೆ ಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಸುರಕ್ಷಿತ ವಾತಾವರಣ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು. ಮಹಿಳೆಯರು ಸಮಾಜದಲ್ಲಿ ನಿರ್ಭೀತಿಯಿಂದ ಬದುಕಲು ಸುರಕ್ಷಿತ ಪರಿಸರ ನಿರ್ಮಾಣ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಹಕ್ಕುಗಳಿದ್ದರೂ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಉಪಾಧ್ಯಕ್ಷೆ ಕೆ.ಎಸ್. ಶಾಂತಾ, ಸಾಹೀರಾ ಖಾನ್, ರಜಿಯಾಬೇಗಂ, ದುರುಗಮ್ಮ, ದೇವಮ್ಮ, ಅಂಬಮ್ಮ, ಲಕ್ಷ್ಮೀ, ಜಯಮ್ಮ, ವಾಯಿದಾ, ಹುಸೇನಬೀ, ಸಮಂಗಲಾ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆ ಕೆಪಿಆರ್ಎಸ್ ಮುಖಂಡ ಮಹಾಂತೇಶ ಹಾಗೂ ಸಿಐಟಿಯು ಮುಖಂಡರಾದ ಅಲ್ಲಾಭಕ್ಷ ಹಾಜಿಬಾಬು ಕಟ್ಟಿಮನಿ, ನಾಗರಾಜ್ ಕಮತೂರು ಸೇರಿದಂತೆ ಇತರರು ಭಾಗವಹಿಸಿದ್ದರು.
ಇರಾನ್ ನಲ್ಲಿನ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಿದರೆ ಅಮೆರಿಕ ಮಧ್ಯಪ್ರವೇಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ಇರಾನ್ ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ಹಿಂಸಾತ್ಮಕವಾಗಿ ಹತ್ತಿಕ್ಕಿದರೆ, ಅವರ ರಕ್ಷಣೆಗೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಇರಾನ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ಗಂಭೀರವಾದರೆ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇರಾನ್ ನಲ್ಲಿ ಕಂಡುಬಂದ ಅತಿದೊಡ್ಡ ಪ್ರತಿಭಟನೆಗಳು ಹಲವು ಪ್ರಾಂತ್ಯಗಳಲ್ಲಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ. ಈ ಪ್ರತಿಭಟನೆಗಳಲ್ಲಿ ಹಲವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇರಾನ್ ಕರೆನ್ಸಿ ಇರಾನ್ ರಿಯಾಲ್ ತೀವ್ರ ಕುಸಿತ ಕಂಡಿದೆ. ದಿನೇದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ವಿರೋಧಿಸಿ, ಅಂಗಡಿ ಮಾಲೀಕರು ರವಿವಾರದಿಂದ ಪ್ರತಿಭಟನೆ ಆರಂಭಿಸಿದ್ದರು. ನಂತರ ಈ ಅದು ದೇಶದ ಹಲವು ಭಾಗಗಳಿಗೆ ವಿಸ್ತರಿಸಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಹೆಚ್ಚಾಗಿವೆ. ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂತರರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿಸಿದ ಬಳಿಕ, 2018ರಲ್ಲಿ ಇರಾನ್ ಮೇಲೆ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದಾಗಿ ಇರಾನ್ನ ಆರ್ಥಿಕತೆ ಹಲವು ವರ್ಷಗಳಿಂದ ಮೇಲೇಳಲು ಒದ್ದಾಡುತ್ತಿದೆ ಎಂದು ವರದಿಯಾಗಿದೆ.
ಲಿಂಗಸುಗೂರು ಪಟ್ಟಣದ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಲಿಂಗಸುಗೂರು : ಪಟ್ಟಣದ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಟ್ಟಣದ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ ಕಚೇರಿ, ಉಪ ನೋಂದಾಣಿ ಅಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಾರ್ಯಾಲಯದ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹಾಗೂ ಲಂಚದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ನಲ್ಲಿ FD ಇಟ್ಟ ಹಿರಿಯ ನಾಗರೀಕರಿಗೆ 2026 ರಿಂದ 3 ನಿಯಮ
ನೀವು ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಇಟ್ಟಿದ್ದೀರಾ? ಅದರಲ್ಲೂ ನೀವು ಹಿರಿಯ ನಾಗರಿಕರಾಗಿದ್ದರೆ (Senior Citizens), ಈ ವರ್ಷ ಅಂದರೆ 2026ರಲ್ಲಿ ನಿಮ್ಮ ಹೂಡಿಕೆಯ ಮೇಲೆ ಕೆಲವು ಮಹತ್ವದ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿ ಅನ್ವಯವಾಗಲಿವೆ. ಬ್ಯಾಂಕ್ಗಳು ಆರ್ಬಿಐ (RBI) ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಇದು ನೇರವಾಗಿ ನಿಮ್ಮ ಕೈಸೇರುವ ಹಣದ ಮೇಲೆ ಪರಿಣಾಮ ಬೀರಬಹುದು. ಹಣ ಸುರಕ್ಷಿತವಾಗಿರಲಿ ಮತ್ತು ಬಡ್ಡಿ ಸರಿಯಾದ ಸಮಯಕ್ಕೆ ಸಿಗಲಿ ಎಂದು ಬಯಸುವ ಪ್ರತಿಯೊಬ್ಬರೂ ಈ ಮೂರು ... Read more The post ಬ್ಯಾಂಕ್ ನಲ್ಲಿ FD ಇಟ್ಟ ಹಿರಿಯ ನಾಗರೀಕರಿಗೆ 2026 ರಿಂದ 3 ನಿಯಮ appeared first on Karnataka Times .
ಮಂಗಳೂರು ವಿಮಾನ ನಿಲ್ದಾಣ |ಆ್ಯಪ್ ಆಧರಿತ ಟ್ಯಾಕ್ಸಿಗಳನ್ನು ಫಾಸ್ಟ್ಟ್ಯಾಗ್ಗೆ ಒಳಪಡಿಸಲು ಆಗ್ರಹ
ಮಂಗಳೂರು, ಜ.2: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿಗಳನ್ನು ಫಾಸ್ಟ್ಟ್ಯಾಗ್ ಒಳಪಡಿಸಬೇಕು. ೧೦೦ರೂ.ಗಳ ಪಾರ್ಕಿಂಗ್ ಹಣವನ್ನು ಕನಿಷ್ಟ ೨೦ ರೂ.ಗಳಿಗೆ ಇಳಿಕೆ ಮಾಡಬೇಕು. ವಾಹನಗಳ ನಿಲುಗಡೆಯ ಕಾಲಾವಕಾಶವನ್ನು ೧೫ ನಿಮಿಷಗಳಿಗೆ ಏರಿಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಆಗ್ರಹಿಸಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್, ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ನಿರ್ವಹಣೆಗೆ ನೀಡಿದ ಮೇಲೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು. ನಗರದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಯಲ್ಲಿ ದುಡಿಯುವ ವಾಹನಗಳು 250ಕ್ಕೂ ಅಧಿಕವಿದ್ದರೂ, 10 ವಾಹನಗಳಿಗೆ ಮಾತ್ರವೇ ವಿಮಾನ ನಿಲ್ದಾಣದಲ್ಲಿ ಅವಕಾಶ ನೀಡಲಾಗಿದೆ. 10ಕ್ಕೂ ಹೆಚ್ಚಿನ ವಾಹನ ಬಂದಾಗ ವಾಪಾಸು ಹೋಗಬೇಕು. ಇಲ್ಲವಾದರೆ ದುಪ್ಪಟ್ಟು ಹಣ ನೀಡಿ ಪಾರ್ಕಿಂಗ್ ಮಾಡಬೇಕು. ಇದರಿಂದ ಚಾಲಕರಿಗೆ ಸರಿಯಾಗಿದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಕನಿಷ್ಟ 50 ವಾಹನಗಳಿಗೆ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರೂ ಸಮಸ್ಯೆ ಬಗೆಹರಿಸಲಾಗಿಲ್ಲ. ವಾಣಿಜ್ಯ ವಾಹನಗಳು ಪಾರ್ಕಿಂಗ್ ಮಾಡದೇ ಗ್ರಾಹಕರನ್ನು ಪಿಕ್ಅಪ್ ಮಾಡಿ 10 ನಿಮಿಷಗಳಲ್ಲಿ ಕೂಡಲೇ ಹೊರ ಹೋದರೂ 100 ರೂ. ಪಾರ್ಕಿಂಗ್ ಹಣ ಪಾವತಿಸಬೇಕಾಗುತ್ತದೆ. ಇದು ತುಂಬಾ ತೊಂದರೆಯಾಗುತ್ತಿದೆ. ಆ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ವಾಹನಗಳಿಗೆ ಗ್ರಾಹಕರನ್ನು ಪಿಕಪ್ ಮಾಡಲು 2ನೇ ಲೈನಿನಲ್ಲಿ ಮಾತ್ರ ಅವಕಾಶನೀಡಲಾಗಿದೆ. ಇದರಿಂದ ಮಳೆ ಬಂದಾಗ 2ನೆ ಲೈನ್ಗೆ ಗ್ರಾಹಕರು ಒದ್ದೆಯಾಗಿ ಬರಬೇಕಾಗಿದೆ. ಹಿರಿಯ ನಾಗರಿಕರಿಗೆ ಅಲ್ಲಿವರೆಗೆ ಬರಲು ಕಷ್ಟವಾಗುತ್ತೆ. ಆ್ಯಪ್ ಆಧರಿತ ಟ್ಯಾಕ್ಸಿಯವರು ತಮ್ಮ ವೈಯಕ್ತಿಕ ಬಾಡಿಗೆ ಇದ್ದರೂ ಅದನ್ನು 2ನೇ ಲೈನಲ್ಲಿ ಪಿಕಪ್ ಮಾಡಬೇಕಾದ ನಿಯಮ ಇರುವುದರಿಂದ ಗ್ರಾಹಕರು ಅಸಮಾಧಾನ ಪಡುತ್ತಾರೆ. ಇದರಿಂದ ಬಾಡಿಗೆ ಕಡಿಮೆಯಾಗಿದೆ ಎಂದು ಅವರು ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ವಿವರ ನೀಡಿದರು. ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಓಲಾ, ಉಬರ್ ಪಾರ್ಕಿಂಗ್ ಹತ್ತಿರ ಚಾಲಕರಿಗೆ ಕುಳಿತುಕೊಳ್ಳಲು ಯಾವುದೇ ಸರಿಯಾದ ಸೌಕರ್ಯಗಳಿಲ್ಲ. ಮಳೆ, ಬಿಸಿಲಿಗೆ ವಾಹನದೊಳಗೆ ಇರಬೇಕಾಗುತ್ತದೆ. ಇದರಿಂದ ದೈಹಿಕ ಸಮಸ್ಯೆ ಕಾಡುತ್ತಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ವಿಮಾನಗಳು ಒಮ್ಮೆಗೇ ಬಂದಾಗ 2ರಿಂದ 3 ನಿಮಿಷ ವಾಹನಗಳು ಬ್ಲಾಕ್ ಆಗಿ ಗ್ರಾಹಕರನ್ನು ಡ್ರಾಪ್ ಮಾಡಲುಬಂದ ವಾಹನಗಳು 10 ನಿಮಿಷ ದಾಟಿದರೆ 100 ರೂ. ಕಟ್ಟಿಯೇ ಹೋಗಬೇಕಾಗಿದೆ. ಗೇಟಿನಲ್ಲಿ ಬ್ಲಾಕ್ ಆದಾಗ ಈ ರೀತಿ ಚಾಲಕರಿಂದ ಹಣ ಪಡೆಯುವುದು ತೀರಾ ಅನ್ಯಾಯ. ಟ್ಯಾಕ್ಸಿ ಚಾಲಕರ ಸಮಸ್ಯೆ ಬಗೆಹರಿಸಲು ನಿರಾಸಕ್ತಿ ವಹಿಸಿರುವ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು. ಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಝೀಝ್, ಮುಖಂಡರಾದ ರಮೇಶ್ ನಾಯಕ್, ಇಮತಿಯಾಝಂ, ಕಮಾಲಾಕ್ಷ ಬಜಾಲ್ ಉಪಸ್ಥಿತರಿದ್ದರು.
ಬಳ್ಳಾರಿ ಬ್ಯಾನರ್ ಘರ್ಷಣೆ; ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುಗೆ ಪ್ರಾಣಾಪಾಯ ಇದೆ: ಆರ್ ಅಶೋಕ್
ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯ ಇದೆ. ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ. ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್ ಅವರು, ಮಾಜಿ ಸಚಿವ ಮತ್ತು
ಎಲ್ಲಾ ಅಧಿಕಾರಿಗಳು ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ
ಬಡವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಿ ಅಧಿಕಾರಿಗಳಿಗೆ ಸಿಎಂ ಕಿವಿಮಾತು
ಕೆಟ್ಟ ನೆರೆಹೊರೆ ಹೊಂದಿರುವುದು ನಮ್ಮ ದುರದೃಷ್ಟ; ಭಾರತ ಪ್ರತಿಕ್ರಿಯೆಯ ಹಕ್ಕು ಕಾಯ್ದಿರಿಸಿದೆ ಎಂದ ಜೈಶಂಕರ್!
ನೆರೆ ರಾಷ್ಟ್ರ ಪಾಕಿಸ್ತಾನವನ್ನು ಕೆಟ್ಟ ನೆರೆಹೊರೆ ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯ ಡಾ.ಎಸ್. ಜೈಶಂಕರ್, ಪಾಕಿಸ್ತಾನದ ಭಯೋತ್ಪಾದಕ ಕುತಂತ್ರಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕನ್ನು ಭಾರತ ಕಾಯ್ದಿರಿಸಿದೆ ಎಂದು ಹೇಳಿದ್ದಾರೆ. ಭಾರತದ ಪ್ರತಿಕ್ರಿಯೆ ನೀಡುವ ಸಾರ್ವಭೌಮ ಹಕ್ಕನ್ನೂ ಯಾರು ಪ್ರಶ್ನಿಸುವಂತಿಲ್ಲ ಎಂದು ಜೈಶಂಕರ್ ಇದೇ ವೇಳೆ ಕೆಲವು ರಾಷ್ಟ್ರಗಳಿಗೆ ಪರೋಕ್ಷ ಸಂದೇಶವನ್ನು ರವಾನಿಸಿದ್ಧಾರೆ. ಭಾರತಕ್ಕೆ ತನ್ನ ಜನರ ರಕ್ಷಣೆಗಾಗಿ ನ್ಯಾಯಸಮ್ಮತ ತೀರ್ಮಾನಗಳನ್ನು ಕೈಗೊಳ್ಳುವ ಸಾಮರ್ಥ್ಯವಿದೆ ಎಂಬ ವಿದೇಶಾಂಗ ಸಚಿವರ ಹೇಳಿಕೆ ಗಮನ ಸೆಳೆದಿದೆ.
ಇತರರಿಗೆ ನೋವಾಗದಂತೆ ತಮ್ಮ ಆದರ್ಶಗಳನ್ನು ಪ್ರಚಾರ ಮಾಡಲು ಎಲ್ಲಾ ಧರ್ಮದವರಿಗೂ ಹಕ್ಕಿದೆ: ಎ.ಪಿ. ಉಸ್ತಾದ್
ಕಾಸರಗೋಡು: ಕೇರಳ ಮುಸ್ಲಿಂ ನವೋದಯವನ್ನು ನಿರ್ಧರಿಸಿರುವುದು ಸಮಸ್ತ ಎಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು. ಕೇರಳ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ಆರಂಭವಾದ ‘ಕೇರಳ ಯಾತ್ರೆ’ಗೆ ಚೆರ್ಕಳದ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ನಗರದಲ್ಲಿ ನೀಡಲಾದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ನೈಜ ದಿಕ್ಕಿನಲ್ಲಿ ಮುಸ್ಲಿಮರನ್ನು ಸಂಘಟಿತ ಸಮುದಾಯವಾಗಿ ಮುನ್ನಡೆಸಿದ ಸಮಸ್ತದ ಕರ್ಮಫಲಗಳನ್ನು ಇತರ ಸಮುದಾಯಗಳು ವಿವಿಧ ರೀತಿಯಲ್ಲಿ ಅನುಭವಿಸಲು ಸಾಧ್ಯವಾಯಿತು. ಈ ಸಾಧನೆಗಳು ಮತ್ತು ಪ್ರಗತಿಯನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಕಾರ್ಯಚಟುವಟಿಕೆಗಳು ಅನಿವಾರ್ಯವಾಗಿವೆ. ಸಮಸ್ತ ಮತ್ತು ಅದರ ಪೂರ್ವ ಮಾದರಿಗಳ ಕಾರ್ಯಚಟುವಟಿಕೆಗಳ ಮೂಲಕವೇ ಕೇರಳೀಯರು ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಂಡು ಸ್ವೀಕರಿಸಿದರು. ಅರೇಬಿಯಾದಿಂದ ಬಂದ ಮಾಲಿಕ್ ಇಬ್ನ್ ದೀನಾರ್ ಮತ್ತು ಅವರ ತಂಡವು ಪ್ರಾಮಾಣಿಕರು ಮತ್ತು ಸದಾಚಾರಿಗಳಾಗಿದ್ದರು. ಇಲ್ಲಿನ ಆಡಳಿತಗಾರರು ಅವರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸಿದ್ದರು. ಕಾಸರಗೋಡಿನ ಇತಿಹಾಸವು ಆ ಸ್ಮರಣೆಗಳನ್ನು ಒಳಗೊಂಡಿದೆ ಎಂದರು. ಇಸ್ಲಾಂ ಎಂದರೆ ಪ್ರೀತಿ. ಜಗತ್ತಿನಲ್ಲಿ ಎಲ್ಲಾ ಧರ್ಮದವರಿಗೂ ಬದುಕಲು ಮತ್ತು ಇತರರಿಗೆ ನೋವಾಗದಂತೆ ತಮ್ಮ ಆದರ್ಶಗಳನ್ನು ಪ್ರಚಾರ ಮಾಡಲು ಹಕ್ಕಿದೆ. ಎಲ್ಲರೊಂದಿಗೂ ಒಳಿತಿನಿಂದ ವರ್ತಿಸುವುದೇ ಇಸ್ಲಾಂನ ಬೋಧನೆಯಾಗಿದೆ. ನಾವೆಲ್ಲರೂ ಮನುಷ್ಯರು ಎಂಬ ಪರಿಗಣನೆಯನ್ನು ಕೈಬಿಡಬಾರದು. ಶಾಂತಿಯುತ ಜೀವನ ಪ್ರತಿಯೊಬ್ಬರ ಹಕ್ಕು. ಒಂದು ನಾಡಿಗೆ ಅತ್ಯಂತ ಅಗತ್ಯವಿರುವುದು ಪ್ರಗತಿ ಮತ್ತು ಶಾಂತಿ. ಶಾಂತಿಯ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಬಡವರನ್ನು ಅಪ್ಪಿಕೊಳ್ಳಲು ಪ್ರವಾದಿಯವರು ಕಲಿಸಿದ್ದಾರೆ. ಸಮಸ್ತದ ಶತಮಾನೋತ್ಸವವನ್ನು ಸ್ಮರಣೀಯವಾಗಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಸ್ಲಾಮಿಕ್ ಜ್ಞಾನ ಮತ್ತು ಆಧುನಿಕ ಶಿಕ್ಷಣವನ್ನು ಸಮನ್ವಯಗೊಳಿಸುವ ಇಸ್ಲಾಮಿಕ್ ವಿಶ್ವವಿದ್ಯಾಲಯ ‘ಜಾಮಿಅತುಲ್ ಹಿಂದ್’ ಸೇರಿದಂತೆ ಹಲವು ಯೋಜನೆಗಳನ್ನು ಸಮಸ್ತದ ಅಡಿಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ. ಸಾಮಾಜಿಕ ಕ್ಷೇತ್ರದಲ್ಲೂ ಸಮಸ್ತ ಗಮನಾರ್ಹ ಕಾರ್ಯಗಳನ್ನು ಮಾಡುತ್ತಿದೆ ಎಂದು ಕಾಂತಪುರಂ ಉಸ್ತಾದ್ ಹೇಳಿದರು. ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್ ವಹಿಸಿದ್ದರು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು. ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕರಾದ ಎಂ. ರಾಜಗೋಪಾಲನ್, ಎನ್.ಎ. ನೆಲ್ಲಿಕುನ್ನು, ಅಡ್ವಕೇಟ್ ಸಿ.ಎಚ್. ಕುಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ. ಅಶ್ರಫ್, ಚಿನ್ಮಯ ಮಿಷನ್ ಕೇರಳ ಘಟಕದ ಅಧ್ಯಕ್ಷ ವಿವೇಕಾನಂದ ಸರಸ್ವತಿ, ಫಾದರ್ ಮ್ಯಾಥ್ಯೂ ಬೇಬಿ ಮಾರ್ತೋಮ, ಎಂ. ಅಬ್ದುಲ್ ರಹಿಮಾನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಅಜೀಜ್ ಕಡಪ್ಪುರಂ ಮುಂತಾದವರು ಉಪಸ್ಥಿತರಿದ್ದರು. ಸಿ. ಮುಹಮ್ಮದ್ ಫೈಝಿ, ರಹಮತುಲ್ಲಾ ಸಖಾಫಿ ಎಳಮರಂ ವಿಷಯ ಮಂಡಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು ಮತ್ತು ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ ವಂದಿಸಿದರು. ಯಾತ್ರೆಯ ವೇಳಾಪಟ್ಟಿ: ಜನವರಿ 2: ಕಣ್ಣೂರು ಕಲೆಕ್ಟರೇಟ್ ಮೈದಾನ ಜನವರಿ 3: ನಾದಾಪುರಂ ಜನವರಿ 4: ಕೋಝಿಕ್ಕೋಡ್ ಮುದಲಕ್ಕುಳಂ ಜನವರಿ 5: ಕಲ್ಪೆಟ್ಟಾ ಜನವರಿ 6: ಗೂಡಲ್ಲೂರು ಜನವರಿ 7: ಅರೀಕ್ಕೋಡ್ ಜನವರಿ 8: ತಿರೂರ್ ಜನವರಿ 9: ಒಟ್ಟಪ್ಪಾಲಂ ಜನವರಿ 10: ಚಾವಕ್ಕಾಡ್ ಜನವರಿ 11: ಎರ್ನಾಕುಲಂ ಮರೈನ್ ಡ್ರೈವ್ ಜನವರಿ 12: ತೊಡುಪುಝ ಜನವರಿ 13: ಕೋಟ್ಟಯಂ ಜನವರಿ 14: ಬೆಳಿಗ್ಗೆ 10 ಕ್ಕೆ ಪತ್ತನಂತಿಟ್ಟ, ಸಂಜೆ 5 ಕ್ಕೆ ಕಾಯಂಕುಳಂ ಜನವರಿ 15: ಕೊಲ್ಲಂ ಜನವರಿ 16: ಸಂಜೆ 5 ಗಂಟೆಗೆ ತಿರುವನಂತಪುರದ ಪುತ್ತರಿಕ್ಕಂಡಂ ಮೈದಾನದಲ್ಲಿ ಸಮಾರೋಪ
ಎ. 23, 24ರಂದು ಸಿಇಟಿ ಪರೀಕ್ಷೆ; ಜ.17 ರಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ
ಬೆಂಗಳೂರು: ಸಿಇಟಿ ಪರೀಕ್ಷೆ ದಿನಾಂಕವು ಪ್ರಕಟಗೊಂಡಿದ್ದು, ಎಪ್ರಿಲ್ 23 ಮತ್ತು 24ರಂದು ಪರೀಕ್ಷೆಗಳು ನಡೆಯಲಿವೆ. ಜನವರಿ 17 ರಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಎ.23ರ ಬೆಳಿಗ್ಗೆ 10:30 ರಿಂದ 11:50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2:30ರಿಂದ 3:50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಎ. 24ರ ಬೆಳಗ್ಗೆ 10:30 ರಿಂದ 11:50ರವರೆಗೆ ಗಣಿತಶಾಸ್ತ್ರ ಮಧ್ಯಾಹ್ನ 2:30ರಿಂದ 3:50 ರವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಎ.22ರಂದು ಬೆಳಿಗ್ಗೆ 10:30 ರಿಂದ 11:30ರವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
400 ವರ್ಷ ಹಳೆಯದಾದ ಅಂಚೆ ಸೇವೆ ನಿಲ್ಲಿಸಿದೆ ಈ ದೇಶ, 1,500 ಜನರ ಉದ್ಯೋಗ ಕಟ್
ಅಂಚೆ ಎಂಬುದು ನೂರಾರು ವರ್ಷಗಳ ಹಿಂದಿನಿಂದಲೇ ಮನುಷ್ಯರ ನಡುವೆ ಸಂವಹನ ನಡೆಸಲು ಇದ್ದ ಫೋನ್ಗಳಂತೆ. ಈಗೆಲ್ಲಾ ಸ್ಮಾರ್ಟ್ ಫೋನ್ ಕೈಲಿಡಿದು ಎಲ್ಲಾ ವಿಚಾರವನ್ನ ಕ್ಷಣಮಾತ್ರದಲ್ಲಿ ಬೇಕಾದವರಿಗೆ ತಲುಪಿಸಲು ಅವಕಾಶ ಇದೆ. ಆದರೆ ಕೇವಲ ಹತ್ತಾರು ವರ್ಷಗಳ ಹಿಂದೆ ಪರಿಸ್ಥಿತಿ ಭಿನ್ನವಾಗಿತ್ತು. ಆಗೆಲ್ಲಾ ಅಂಚೆ ಸೇವೆ ಎಂಬುದು ಮನುಷ್ಯರ ಸಂವಹನಕ್ಕೆ ಕೊಂಡಿಯ ರೀತಿಯಲ್ಲಿ ಕಾರ್ಯನಿರ್ವಹಿಸಿವೆ, ಆದರೆ ಈಗ ಅದೇ
ಹಾಸನದ ಯುವಕ ಗೋವಾದಲ್ಲಿ ಹೃದಯಾಘಾತದಿಂದ ಮೃತ್ಯು
ಹಾಸನ: ಆಲೂರು ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಯುವಕ ರಕ್ಷಿತ್ (26) ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಡಿ. 31ರಂದು ಸಂಬಂಧಿಕರಾದ ಚಿದಂಬರಂ ಹಾಗೂ ಪ್ರವೀಣ್ ಅವರೊಂದಿಗೆ ರಕ್ಷಿತ್ ಗೋವಾಗೆ ತೆರಳಿದ್ದ. ನ್ಯೂ ಇಯರ್ ಆಚರಣೆ ಮುಗಿದ ಬಳಿಕ ಮೂವರು ಜ.1ರಂದು ತಿಂಡಿ ಸೇವಿಸಿ ಗೋವಾದಲ್ಲಿ ತಿರುಗಾಡುತ್ತಿದ್ದ ವೇಳೆ, ರಕ್ಷಿತ್ಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ರಕ್ಷಿತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ನಂತರ ಜೊತೆಯಲ್ಲಿದ್ದ ಪ್ರವೀಣ್ ಮತ್ತು ಚಿದಂಬರಂ ಸೇರಿದಂತೆ ಕುಟುಂಬಸ್ಥರು ಮೃತದೇಹವನ್ನು ಗೋವಾದಿಂದ ಸ್ವಗ್ರಾಮಕ್ಕೆ ತರಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರವು ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ನೀಡಿದೆ. ಫಾಸ್ಟ್ ಟ್ಯಾಗ್ಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿವೆ. ಕೆಲವೊಂದು ಬದಲಾವಣೆಗಳಿಂದ ವಾಹನ ಸವಾರರಿಗೆ ಸಮಸ್ಯೆ ಸಹ ಆಗುತ್ತಿದೆ. ಇದೀಗ ಈ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು
ಬಳ್ಳಾರಿಯಲ್ಲಿ ರೆಡ್ಡಿಗಳ ಕದನ : ಪ್ರತಿಷ್ಠೆಯ ರಾಜಕೀಯ ಘರ್ಷಣೆಗೆ ಇದೇ 2 ಕಾರಣಗಳು?
Ballari Reddy's Clash : ಬಳ್ಳಾರಿಯಲ್ಲಿ ಹೊಸವರ್ಷದ ದಿನದಂದು ನಡೆದ ಘರ್ಷಣೆಯ ಹಿಂದೆ ಎರಡು ಕಾರಣಗಳಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದರು. ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಈ ಗಲಾಟೆ ನಡೆದಿದೆ.
`ಪಾಕ್ ಮೂಲದವ ಆಸೀಸ್ ಪರ ಆಡಲಸಾಧ್ಯ ಎಂದಿದ್ರು!': ನಿವೃತ್ತಿ ಹೊಸ್ತಿಲಲ್ಲಿ ಉಸ್ಮಾನ್ ಖವಾಜಾ ಮಾರ್ಮಿಕ ಮಾತು!
Usman Khawaja Farewell Match- ಆಸ್ಟ್ರೇಲಿಯಾದ ಅನುಭವಿ ಟೆಸ್ಟ್ ಬ್ಯಾಟರ್ ಉಸ್ಮಾನ್ ಖವಾಜಾ ಅವರು ತಮ್ಮ ಸುದೀರ್ಘ 15 ವರ್ಷಗಳ ಕ್ರಿಕೆಟ್ ಬದುಕಿಗೆ ಇದೀಗ ವಿದಾಯ ಹೇಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ತವರು ಮೈದಾನ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯ ಅವರ ಕೊನೆಯ ಪಂದ್ಯವಾಗಲಿದೆ.ಪಂದ್ಯಕ್ಕೂ ಮುನ್ನ ತಮ್ಮ ಹೆತ್ತವರು, ಪತ್ನಿ, ಮಕ್ಕಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು ಪಾಕಿಸ್ತಾನ ಮೂಲದವರಾದ ತಮ್ಮ ಕ್ರಿಕೆಟ್ ಬದುಕಿನ ನೋವು ನಲಿವುಗಳನ್ನು ನೆನೆದು ಭಾವುಕರಾದರು.
ಬಳ್ಳಾರಿ ಘಟನೆ ಬಗ್ಗೆ ಸಿದ್ದರಾಮಯ್ಯ ಸಿಟ್ಟು, ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಜಮೀರ್ ಅಹ್ಮದ್ ಖಾನ್
ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಚಾರ ದೊಡ್ಡದಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪದವಿಗೂ ಮುನ್ನವೇ ಐಐಟಿ ಹೈದರಾಬಾದ್ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ 2.5 ಕೋಟಿ ರೂ.ಗಳ ಭಾರಿ ಪ್ಯಾಕೇಜ್ ಪಡೆದಿದ್ದಾರೆ. ಇದು ಐಐಟಿ ಹೈದರಾಬಾದ್ನ ಇತಿಹಾಸದಲ್ಲೇ ಅತ್ಯಧಿಕ ಸಂಬಳದ ಆಫರ್ ಆಗಿದೆ. ನೆದರ್ಲ್ಯಾಂಡ್ಸ್ನ ಆಪ್ಟಿವರ್ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಪೂರ್ಣಗೊಳಿಸಿ, ಪೂರ್ವ-ನೇಮಕಾತಿ ಪ್ರಕ್ರಿಯೆಯ ಮೂಲಕ ಈ ಸಾಧನೆ ಮಾಡಿದ್ದಾರೆ. ಶೈಕ್ಷಣಿಕ ಸಾಧನೆ, ನಾಯಕತ್ವ ಗುಣಗಳಿಂದ ಎಡ್ವರ್ಡ್ ಈ ಯಶಸ್ಸು ಪಡೆದಿದ್ದಾರೆ. ಪದವಿಗೂ ಮುನ್ನವೇ ಎಡ್ವರ್ಡ್ ಈ ಸಾಧನೆ ಮಾಡಿದ್ದೇಗೆ ಸಂಪೂರ್ಣ ವಿವಿರ ಇಲ್ಲಿದೆ ನೋಡಿ...
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಆಪತ್ತು ಎದುರಾಗಿದೆ. ಅಕ್ರಮ ಗಣಿ ಸುಳಿಯಲ್ಲಿ ಸಿಲುಕಿ ಪರದಾಡಿದ್ದ ಬಿಜೆಪಿ ನಾಯಕನಿಗೆ ಕೆಲವು ದಿನಗಳ ಹಿಂದಷ್ಟೇ ರಿಲೀಫ್ ಸಿಕ್ಕಿತ್ತು. ಆದರೆ ಇದೀಗ ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದಿರುವ ಬ್ಯಾನರ್ ಗಲಾಟೆ ವಿಚಾರ ಹಲ್ಚಲ್ ಎಬ್ಬಿಸಿದೆ. ಹಾಗೇ ಇದರ ಜೊತೆಗೆ ರಾಜಕೀಯ ಚದುರಂಗದಾಟ ಕೂಡ ಶುರುವಾಗಿದ್ದು,
ಜನಾರ್ದನ್ ರೆಡ್ಡಿ ಗುರಿಯಾಗಿಸಿಯೇ ಫೈರಿಂಗ್; ಯುಪಿ, ಬಿಹಾರದಿಂದ ಬಂದ ಗನ್ ಮ್ಯಾನ್: ಶ್ರೀರಾಮುಲು ಹೊಸ ಬಾಂಬ್
ಬಳ್ಳಾರಿ: ಬಳ್ಳಾರಿ ನಗರದಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಗೋಲಿಬಾರ್ ಪ್ರಕರಣ ಇದೀಗ ರಾಜಕೀಯವಾಗಿ ಭಾರಿ ತಿರುವು ಪಡೆದುಕೊಂಡಿದೆ. ಫೈರಿಂಗ್ ನಿಂದ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ನಂತರ ಬಳ್ಳಾರಿ ರಣರಂಗ ಆಗಿದ್ದು, ಇದರ ಬೆನ್ನಲ್ಲೇ ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ
Bullet Train: ದೇಶದ ಮೊದಲ ಬುಲೆಟ್ ಟ್ರೈನ್ ನಿರ್ಮಾಣದಲ್ಲಿ ಮಹತ್ವದ ಬೆಳವಣಿಗೆ: ಅಶ್ವಿನಿ ವೈಷ್ಣವ್ ಅಪ್ಡೇಟ್ಸ್
ನವದೆಹಲಿ: ಕೇಂದ್ರ ರೈಲ್ವೆ ಇಲಾಖೆಯು ಬುಲೆಟ್ ಟ್ರೈನ್ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಕೊಟ್ಟಿದೆ. ಗುರುವಾರವಷ್ಟೇ ದೇಶದ ಬಹು ನಿರೀಕ್ಷಿತ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿನ ಬಗ್ಗೆ ಮಹತ್ವದ ಅಪ್ಡೇಟ್ಸ್ ಕೊಡಲಾಗಿತ್ತು. ಇದೀಗ ದೇಶದ ಪ್ರಮುಖ ಬುಲೆಟ್ ಟ್ರೈನ್ನ ಬಗ್ಗೆ ಅಪ್ಡೇಟ್ಸ್ ಕೊಡಲಾಗಿದೆ. ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್ನ ಅಹಮದಾಬಾದ್ ಬುಲೆಟ್ ರೈಲಿನ ಇತ್ತೀಚಿನ
ಇಂದೋರ್ ದುರಂತ| ಶೌಚಾಲಯದ ಕೆಳಗೆ ನೀರಿನ ಪೈಪ್ಲೈನ್ ಸೋರಿಕೆಯಾಗಿ ನೀರು ಕಲುಷಿತಗೊಂಡಿದೆ: ವರದಿ
ಇಂದೋರ್: ಅಧಿಕೃತ ಪ್ರಯೋಗಾಲಯ ಪರೀಕ್ಷೆಯಲ್ಲಿ ಇಂದೋರ್ನ ಭಗೀರಥಪುರದಲ್ಲಿ ಜನರಲ್ಲಿ ಅತಿಸಾರ ಕಂಡು ಬಂದಿರುವುದಕ್ಕೆ ಕಲುಷಿತ ನೀರು ಕುಡಿದಿರುವುದೇ ಕಾರಣ ಎಂದು ದೃಢಪಟ್ಟಿದೆ. ಇಂದೋರ್ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ ನಾಲ್ವರು ಮೃತಪಟ್ಟು, 1,400ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರವೆಂದು ಸ್ಥಾನ ಪಡೆದಿರುವ ಮಧ್ಯಪ್ರದೇಶದ ಇಂದೋರ್ ನಗರದ ಕೆಲವು ಭಾಗಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಭಗೀರಥಪುರ ಪೊಲೀಸ್ ಹೊರಠಾಣೆ ಬಳಿ ಕುಡಿಯುವ ನೀರಿನ ಮುಖ್ಯ ಸರಬರಾಜು ಪೈಪ್ಲೈನ್ನಲ್ಲಿ ಸೋರಿಕೆ ಕಂಡುಬಂದಿದೆ. ಕುಡಿಯುವ ನೀರಿನ ಪೈಪ್ಲೈನ್ಗೆ ಶೌಚಾಲಯದ ತ್ಯಾಜ್ಯ ನೀರು ಮಿಶ್ರಣವಾಗಿದೆ. ಪೈಪ್ ಲೈನ್ನಲ್ಲಿ ಸೋರಿಕೆಯಿಂದಾಗಿ ಆ ಪ್ರದೇಶದಲ್ಲಿ ನೀರು ಸರಬರಾಜು ಕಲುಷಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದೋರ್ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಮಾಧವ್ ಪ್ರಸಾದ್ ಹಸಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಯೋಗಾಲಯದ ವರದಿಯು ಭಾಗೀರಥಪುರ ಪ್ರದೇಶದಲ್ಲಿ ಪೈಪ್ಲೈನ್ನಲ್ಲಿ ಸೋರಿಕೆಯಿಂದಾಗಿ ಕುಡಿಯುವ ನೀರು ಕಲುಷಿತವಾಗಿದೆ ಎಂದು ದೃಢಪಡಿಸಿದೆ ಎಂದು ಹೇಳಿದರು. ಬೇರೆಡೆ ಏನಾದರೂ ಸೋರಿಕೆಯಾಗಿದೆಯೇ ಎಂದು ಕಂಡುಹಿಡಿಯಲು ನಾವು ಭಾಗೀರಥಪುರದಲ್ಲಿ ಕುಡಿಯುವ ನೀರು ಸರಬರಾಜು ಪೈಪ್ಲೈನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದೇವೆ. ನಾವು ಈ ನೀರಿನ ಮಾದರಿಗಳನ್ನು ಸಹ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ದುಬೆ ಹೇಳಿದ್ದಾರೆ.
ಉಡುಪಿ | ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಅಧ್ಯಕ್ಷ ಸಿರಾಜ್ ನಿಧನ
ಉಡುಪಿ, ಜ.2: ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆಯ ಅಧ್ಯಕ್ಷ ಸಿರಾಜ್ ಮಲ್ಪೆ(55) ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹೃದಯ ಸಂಬಂಧಿ ಸಮಸ್ಯೆಯಿಂದ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಚಿಕಿತ್ಸೆ ಮಧ್ಯೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಮಾಜ ಸೇವಕರು, ಉತ್ತಮ ಸಂಘಟಕರು ಆಗಿದ್ದ ಇವರು, ತನ್ನನ್ನು ಸಮುದಾಯ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಓದು, ಬರಹದ ಅಭಿರುಚಿ ಹೊಂದಿದ್ದ ಅವರು ತಮ್ಮ ಆಸಕ್ತಿ ವಿಷಯಗಳ ಕುರಿತು ಬರಹಗಳನ್ನು ಆಗಾಗ ನಿಯತಕಾಲಿಕಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದರು. ಸಮಾಜ ಸೇವಾ ಉದ್ದೇಶದ ಅನುಗ್ರಹ ಟ್ರಸ್ಟ್ ಉಡುಪಿ ಇದರ ಸದಸ್ಯರೂ ಆಗಿದ್ದರು. ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಮತ್ತು ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಹಿತೈಷಿಯಾಗಿದ್ದರು. ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಡಾ.ಅಬ್ದುಲ್ ಅಝೀಝ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಂಧ್ರದ ರಕ್ತ ಚರಿತ್ರೆ ಕರ್ನಾಟಕಕ್ಕೆ: ಜನಾರ್ದನ ರೆಡ್ಡಿ ಕೊಲೆ ಮಾಡಲು ಪ್ಲ್ಯಾನ್ ನ್ಯಾಯಾಂಗ ತನಿಖೆಗೆ ಆರ್ ಅಶೋಕ್ ಆಗ್ರಹ
ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ವಾಲ್ಮೀಕಿ ವೃತ್ತದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದ ಬ್ಯಾನರ್ ಅಳವಡಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (25) ಮೃತಪಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಅವರ ಖಾಲಿ ನಿವೇಶನದಲ್ಲಿ ಬ್ಯಾನರ್ ಅಳವಡಿಸಿದ್ದೇ ಘಟನೆಗೆ ಕಾರಣವಾಯಿತು. ಈ ಸಂಬಂಧ ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಮೀಕ್ಷೆಯಲ್ಲಿ ಇವಿಎಂಗೆ ಬಹುಮತ; ರಾಹುಲ್ ಗಾಂಧಿ ವೋಟ್ ಚೋರಿ ಆರೋಪಕ್ಕೆ ಬಿಜೆಪಿ ತಿರುಗೇಟು
ಇತ್ತೀಚಿನ ಸಮೀಕ್ಷೆಯೊಂದು ಲೋಕಸಭಾ ಚುನಾವಣೆ 2024 ರಲ್ಲಿ ಇವಿಎಂಗಳ ಮೇಲಿನ ಜನರ ವಿಶ್ವಾಸವನ್ನು ಬಲವಾಗಿ ತೋರಿಸಿದೆ. 83.61% ರಷ್ಟು ಜನರು ಇವಿಎಂಗಳನ್ನು ನಂಬುವುದಾಗಿ ಹೇಳಿದ್ದಾರೆ. ಈ ಫಲಿತಾಂಶಗಳು ರಾಹುಲ್ ಗಾಂಧಿಯವರ ಇವಿಎಂ ಳ ಮೇಲಿನ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಲು ಕಾರಣವಾಗಿವೆ.
ಬೆಂಗಳೂರಿನ ಹೊಸ ಕಸದ ಟೆಂಡರ್ನಲ್ಲಿ ಪ್ರಮುಖ 6 ಬದಲಾವಣೆ: ಗುತ್ತಿಗೆದಾರರಿಗೆ ಕಾದಿದೆ ಭಾರಿ ದಂಡ
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸುಧಾರಿಸಲು ಬಿಎಸ್ಡಬ್ಲ್ಯೂಎಂಎಲ್ 33 ಹೊಸ ಟೆಂಡರ್ಗಳನ್ನು ಹೊರಡಿಸಿದೆ. ಗುತ್ತಿಗೆದಾರರ ಮೇಲೆ ಕಠಿಣ ದಂಡ ವಿಧಿಸಲಾಗಿದ್ದು, ಮಾರುಕಟ್ಟೆ ಸ್ವಚ್ಛತೆ, ಕಸದ ರಾಶಿ, ಕಾರ್ಮಿಕರ ಹಾಜರಾತಿ, ಮತ್ತು ದುರ್ವರ್ತನೆಗಳಿಗೆ ದಂಡ ಅನ್ವಯಿಸುತ್ತದೆ. ಶೇ. 20 ರಷ್ಟು ಹಣವನ್ನು ತಡೆಹಿಡಿದು ದಂಡ ಕಡಿತಗೊಳಿಸಲಾಗುತ್ತದೆ.
ಹಣಕ್ಕೆ ಬೇಡಿಕೆ ಇಟ್ಟು ಸಂಘಪರಿವಾರ ಕಾರ್ಯಕರ್ತರಿಂದ ಕೃಷಿಕನ ಮೇಲೆ ದಾಳಿ: ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲು
ಮುಲ್ಕಿ: ಕೃಷಿಕರೊಬ್ಬರಿಂದ ಸಂಘಪರಿವಾರದ ಕಾರ್ಯಕರ್ತರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಅಂಗಾರಗುಡ್ಡೆಯಲ್ಲಿ ಬುಧವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಸಂಘಪರಿವಾರದ ಕಾರ್ಯಕರ್ತರು ಹಣ ಸುಲಿಗೆ ಮಾಡುವ ಉದ್ದೇಶದಿಂದ ಕೈಯಿಂದ ಹಲ್ಲೆಗೈದು, ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶ್ಯಾಮಸುಂದರ್ ಶೆಟ್ಟಿ, ಅಕ್ಷಯ ಪೂಜಾರಿ, ಸುವಿನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಅವರು ತಮ್ಮ ಜಾನುವಾರುಗಳನ್ನು ನೆರೆ ಮನೆಯ ಜಗ್ಗು ಶೆಟ್ಟಿರವರಿಗೆ ಸಂಬಂಧಿಸಿದ ಕೊಟ್ಟಿಗೆಯಲ್ಲಿ ಸಾಕುತ್ತಿದ್ದರು. ಇದರಲ್ಲಿ ಕೆಲವು ಕಂಬಳದ ಕೋಣಗಳಿದ್ದು, ಮುಲ್ಕಿ ಪಡುಪಣಂಬೂರು ಅರಸು ಕಂಬಳದಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದವು. ಗುರುವಾರ 11 ಗಂಟೆಗೆ ಕಾರಿನಲ್ಲಿ ಬಂದ ಆರೋಪಿಗಳು ಕೊಟ್ಟಿಗೆಯಲ್ಲಿರುವ ಜಾನುವಾರುಗಳ ಪೋಟೋ ಮತ್ತು ವಿಡಿಯೋ ತೆಗೆದು ಅಲ್ಲಿಂದ ಹೋಗಿದ್ದರು. ಬಳಿಕ ಸಂಜೆ ಸಹಾಬುದ್ದೀನ್ ಹಾಗೂ ಅವರ ತಂದೆ ಸಂಶುದ್ದೀನ್ ಅವರು ಕಂಬಳದ ಕೋಣಗಳಿಗೆ ಎಣ್ಣೆಯಿಂದ ಮಾಲೀಶ್ ಮಾಡುತ್ತಿದ್ದ ಸಮಯ ಶ್ಯಾಮ್ ಸುಂದರ್ ಶೆಟ್ಟಿ ಮತ್ತು ಅಕ್ಷಯ ಪೂಜಾರಿ ಹಾಗೂ ಸುವೀನ್ ಎಂಬವರು ಕಾರಿನಲ್ಲಿ ಬಂದು ಕಬ್ಬಿಣದ ರಾಡ್ ಹಿಡಿದುಕೊಂಡು ಜಾನುವಾರು ಸಾಕುವ ಕೊಟ್ಟಿಗೆಯ ಬಳಿಯ ಮನೆಯ ಎದುರು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಂಬಳದ ಕೋಣಗಳ ಬಗ್ಗೆ ವಿಚಾರಿಸಿ ನಂತರ 50 ಸಾವಿರ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಹಾಬುದ್ದೀನ್ ಅವರು ಯಾಕೆ ನಿಮಗೆ ಹಣ ಕೊಡಬೇಕು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಬೈಯಲು ಪ್ರಾರಂಭಿಸಿದಾಗ ಜಗಳವಾಗಿದ್ದು, ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ ಸಂತ್ರಸ್ತರ ತಲೆಗೆ ಕೈಯಿಂದ ಹೊಡೆದು ಕೋಣಗಳನ್ನು ಕಡಿಯಲು ತಂದಿದ್ದೀಯಾ ಎಂದು ಅವಾಚ್ಯವಾಗಿ ಬೈದಿದ್ದಾನೆ. ಈ ವೇಳೆ ಮತ್ತೋರ್ವ ಆರೋಪಿ ಅಕ್ಷಯ ಪೂಜಾರಿ ಕೈಯಿಂದ ಎದೆಗೆ ಗುದ್ದಿ ಹಣಕ್ಕಾಗಿ ಬೇಡಿಕೆ ಇಟ್ಟರು. ಇದರಿಂದ ವಿಚಲಿತರಾದ ಸಹಾಬುದ್ದೀನ್ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಆರಂಭಿಸಿದಾಗ ಆರೋಪಿ ಸುವೀನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕಬ್ಬಿಣದ ರಾಡ್ ನಿಂದ ಸಹಾಬುದ್ದೀನ್ ಅವರ ತಲೆಗೆ ಬೀಸಿದ್ದು, ಅವರು ತಪ್ಪಿಸಿಕೊಂಡಿದ್ದಾರೆ. ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ ಶಂಸು ಸಾಹೇಬ್ ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಂದೆಯನ್ನು ರಕ್ಷಿಸುವ ಸಲುವಾಗಿ ಸಹಾಬುದ್ದೀನ್ ಅವರು ಆರೋಪಿಗಳನ್ನು ತಳ್ಳಿದ್ದಾರೆ. ಈ ವೇಳೆ ಸ್ಥಳೀಯರು ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಣ ಸುಲಿಗೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಸಾಕುತ್ತಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡ್ಡಗಟ್ಟಿ ಕೈಯಿಂದ ಹಲ್ಲೆ ಮಾಡಿ, ರಾಡ್ ನಿಂದ ಬೀಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ ಕಲಂ 329,126(2), 308(4), 115(2) 351(3),3(5)ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಧಾರವಾಡ | ಗ್ಯಾಸ್ ಸಿಲಿಂಡರ್ ಸ್ಪೋಟ : 3 ಮಕ್ಕಳ ಸಹಿತ 6 ಮಂದಿಗೆ ಗಾಯ
ಧಾರವಾಡ : ಧಾರವಾಡದ ಹೊಸಯಲ್ಲಾಪುರ ಸುಣ್ಣದ ಬಟ್ಟಿ ಓಣಿಯಲ್ಲಿ ಇಸ್ಮಾಯಿಲ್ ಹೊರಕೇರಿ ಎಂಬುವವರ ಮನೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರಲ್ಲಿ ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಇನಾಯಾ (3), ಕೈಫ್ (7), ಅಮಿನಾ (26), ಇಸ್ಮಾಯಿಲ್ (35), ಜರಿನಾ (65) ಮಹಿರಾನ್ (13) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಲಿಂಡರ್ ಸ್ಪೋಟದ ತೀವ್ರತೆಗೆ ಮನೆಯ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತೀವ್ರ ಚಿಕಿತ್ಸೆ ನೀಡುತ್ತಿದ್ದಾರೆ.
Trust on EVM : ಕರ್ನಾಟಕ ಸರ್ಕಾರದ ಆಂತರಿಕ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ - 'Tight Slap' ಎಂದ ಬಿಜೆಪಿ
Vote Theft Allegation of Rahul Gandhi : ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಇವಿಎಂ / ಕೇಂದ್ರ ಚುನಾವಣಾ ಆಯೋಗದ ವಿರುದ್ದ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಆದರೆ, ಕಾಂಗ್ರೆಸ್ ಪಾರ್ಟಿಯ ಸರ್ಕಾರವಿರುವ ಕರ್ನಾಟಕದಲ್ಲಿ ಈ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಇದು, ಕಾಂಗ್ರೆಸ್ಸಿಗೆ ಆದ ಕಪಾಳಮೋಕ್ಷ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ.
WPL 2026: ಹೀಗಿದೆ RCB ಮಹಿಳಾ ತಂಡದ ಸಂಪೂರ್ಣ ವೇಳಾಪಟ್ಟಿ; ಪಂದ್ಯಗಳು ಯಾವಾಗ? ಯಾವುದರಲ್ಲಿ ನೇರಪ್ರವಾಸ?
Royal Challengers Bengaluru Women's Team- ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಜನವರಿ 9ರಂದು ನವಿ ಮುಂಬೈನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ಮುಖಾಮುಖಿ ಆಗಲಿವೆ, ಈ ಬಾರಿ ಎಲ್ಲಾ ಪಂದ್ಯಗಳೂ ನವಿ ಮಂಬೈ ಮತ್ತು ವಡೋದರಗಳಲ್ಲಿ ನಡೆಯಲಿವೆ. ಆರ್ ಸಿಬಿ ಮಹಿಳಾ ತಂಡದ ಸಂಪೂರ್ಣ ವೇಳಾಪಟ್ಟಿ, ಸಮಯ ಮೊದಲಾದ ಮಾಹಿತಿಗಳು ಇಲ್ಲಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ
ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ನಡೆದ ಘರ್ಷಣೆಯನ್ನು, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಇಂದು (ಜ.2-ಶುಕ್ರವಾರ) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿ.ಶ್ರೀರಾಮುಲು, ಪ್ರಕರಣದಲ್ಲಿ ಓರ್ವ ವ್ಯಕ್ತಿಯ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದಾಂಧಲೆ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ಜ.15 ರೊಳಗೆ 2.17 ಲಕ್ಷ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಿಸುವ ಸವಾಲು
5 ವರ್ಷ ದಾಟಿದ ಮಕ್ಕಳ ಆಧಾರ್ ಅಪ್ಡೇಟ್ ವಿಳಂಬದಿಂದಾಗಿ ಶಿಷ್ಯವೇತನ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳ ಹೊರತಾಗಿಯೂ, ಜಿಲ್ಲೆಯಲ್ಲಿ ಅಕ್ಟೋಬರ್ನಿಂದಷ್ಟೇ ಕಾರ್ಯ ಆರಂಭವಾಗಿದ್ದು, ತಾಂತ್ರಿಕ ದೋಷಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಒಟ್ಟಾರೆ 2,17,326 ವಿದ್ಯಾರ್ಥಿಗಳ ಆಧಾರ್ ಅಪ್ಡೇಟ್ ಬಾಕಿ ಉಳಿದಿದೆ.
ತೈವಾನ್ ತನ್ನದು ಎಂದು ಹೇಳಿಕೊಳ್ಳುತ್ತಿರುವ ಡ್ರ್ಯಾಗನ್ ತೈವಾನ್ ಪರ ಯಾರೇ ಏನೇ ಹೇಳಿಕೆ ನೀಡಿದರೂ ಸಹ ಕೆರಳುತ್ತಿದ್ದು, ಬೆಂಕಿಯುಗುಳುತ್ತಿದೆ. ಆದ್ರೆ ಅದರ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ತೈವಾನ್ಗೆ. ಹೀಗಿರುವಾಲೇ ಇತ್ತಿಚೆಗೆ ತೈವಾನ್ ಗೆ ಅಮೆರಿಕಾ ಮತ್ತು ಜಪಾನ್ ಬೆಂಬಲದಿಂದ ಕೆರಳಿದ ಚೀನಾ, 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಸೇನಾ ಸಮರಾಭ್ಯಾಸ ನಡೆಸುತ್ತಿದ್ದು, ತೈವಾನ್ ಜಲಸಂಧಿಯಲ್ಲಿ ಯುದ್ಧದ ಕಾರ್ಮೋಡ ಮೂಡಿದೆ. ಈಗ ಅಮೆರಿಕಾ ಇದನ್ನು ಖಂಡಿಸಿದ್ದು, ಚೀನಾ ಈ ಮಿಲಿಟರಿ ಡ್ರಿಲ್ಗಳಿಂದ ಜಲಸಂಧಿಯಲ್ಲಿ ಅನಗತ್ಯವಾಗಿ ಉದ್ವಿಗ್ನತೆ ಹೆಚ್ಚಿಸುವುದನ್ನು ನಿಲ್ಲಿಸಿ, ಮಾತುಕತೆಗೆ ಮುಂದಾಗುವಂತೆ ಚೀನಾಕ್ಕೆ ಸೂಚಿಸಿದೆ. ಆದರೆ, ಇತ್ತ ಉಭಯ ದೇಶಗಳು ನಾ ತಗ್ಗೋದೆ ಇಲ್ಲ ಎಂಬಂತೆ ಯುದ್ದಸನ್ನದ್ದವಾಗಿ ನಿಂತಿದ್ದು, ಮುಂದೆ ಮಹಾಯುದ್ದ ಕಾದಿದ್ಯಾ ಎಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಮೂಡುವಂತೆ ಮಾಡಿದೆ.
Gold Rate Rise: ಹೊಸ ವರ್ಷದಲ್ಲೂ ಶುರುವಾಯ್ತು ಚಿನ್ನದ ಬೆಲೆಯ ಓಟ: ಒಂದೇ ದಿನಕ್ಕೆ ಭರ್ಜರಿ 1140 ರೂ ಏರಿಕೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳ್ಳಿ ಬೆಲೆಯೂ ಚಿನ್ನದ ಬೆನ್ನತ್ತಿ ಏರತೊಡಗಿದೆ. ಜನಸಾಮಾನ್ಯರಿಗೆ ಚಿನ್ನ ಬೆಳ್ಳಿ ಗಗನಕುಸುಮವಾಗುತ್ತಿದೆ. ಪ್ರತಿನಿತ್ಯದ ಚಿನ್ನದ ಬೆಲೆಗಳು ಹಾಗೂ ಏರಿಕೆ-ಇಳಿಕೆಯಾಗುವ ಸಾಧ್ಯತೆ ಬಗ್ಗೆ ತಿಳಿಸುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ.
IMD Weather Forecast: ವಿಪರೀತ ಚಳಿ ನಡುವೆ ಈ ಭಾಗಗಳಲ್ಲಿ ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಈ ನಡುವೆಯೇ ಹಲವೆವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಭೀಕರ
ಬಳ್ಳಾರಿ ಬ್ಯಾನರ್ ಘರ್ಷಣೆ; ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಸೂಕ್ತ ಭದ್ರತೆಗೆ ಬಿ ವೈ ವಿಜಯೇಂದ್ರ ಆಗ್ರಹ
ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ನಿನ್ನೆಯ ಘಟನೆ ಕಾಂಗ್ರೆಸ್ ಗೂಂಡಾಗಳು ನಡೆಸಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯವಾಗಿದೆ, ಸದರಿ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಈ ಕೂಡಲೇ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಅವರು
ಮಸ್ಕಿ | ಬೈಕ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಯದ್ದಲದಿನ್ನಿ ಗ್ರಾಮದಲ್ಲಿ ಜ.2ರಂದು ಹೊಸ ವರ್ಷದ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಯದ್ದಲದಿನ್ನಿ ಗ್ರಾಮದ ಮಹೇಶ್ ಅವರಿಗೆ ಸೇರಿದ ಎಚ್ಎಫ್ ಡಿಲಕ್ಸ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೇ ವೇಳೆ ವೀರೇಂದ್ರ ಗೌಡ ಎಂಬುವರ ಬೈಕ್ಗೆ ಸಹ ಬೆಂಕಿ ಹಚ್ಚಲು ಯತ್ನಿಸಲಾಗಿದ್ದು, ಮನೆಯವರು ತಕ್ಷಣ ಗಮನಿಸಿ ಬೆಂಕಿಯನ್ನು ಆರಿಸಿದ್ದಾರೆ. ಇದಲ್ಲದೇ, ಕಳೆದ ತಿಂಗಳೂ ಗ್ರಾಮದ ರೈತರೊಬ್ಬರ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು. ಮೇಲಿಂದ ಮೇಲೆ ಇಂತಹ ದುಷ್ಕೃತ್ಯಗಳು ನಡೆಯುತ್ತಿರುವುದರಿಂದ ಯದ್ದಲದಿನ್ನಿ ಗ್ರಾಮಸ್ಥರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ತಕ್ಷಣ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಘಟನೆಗಳು ನಡೆಯುತ್ತಿದ್ದರೂ, ಹಾಲಾಪೂರ ಗ್ರಾಮ ಪಂಚಾಯಿತಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಯಪ್ಪಗೌಡ ಮತ್ತು ಶಿವಶಂಕರಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ | ಕಲುಷಿತ ನೀರಿನಲ್ಲಿ ಕಂಡ ಸ್ವಚ್ಛ ನಗರದ ಅಸಲಿ ಮುಖ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೀನಿನ ಚರ್ಮದಿಂದ ಮೌಲ್ಯವರ್ಧಿತ ಉತ್ಪನ್ನ
►ವಿಜ್ಞಾನಿಗಳ ತಂಡದಿಂದ ಸಂಶೋಧನೆ ►ಪ್ರಾಣಿಗಳ ಚರ್ಮದ ಬಳಕೆ ಶೇ.30ರಷ್ಟು ಕಡಿಮೆ ಮಾಡಲು ಸಾಧ್ಯ
ಹೊಸ ವರ್ಷಕ್ಕೆ ಹೊಸ ಸಂಕಲ್ಪ, ಮುಖ್ಯಮಂತ್ರಿ ಯಾರೆಂದು ಕೇಳಂಗಿಲ್ಲಪ್ಪ; ಮೈಕೊಡವಿ ಮೇಲೆದ್ದ ಕೆಪಿಸಿಸಿ
2025 ಕರ್ನಾಟಕ ಕಾಂಗ್ರೆಸ್ ಪಾಲಿಗೆ ಬಣ ಬಡಿದಾಟದ ವರ್ಷವಾಗಿತ್ತು. ವರ್ಷವೀಡಿ ನಾಯಕತ್ವ ಬದಲಾವಣೆ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ, ಹೀಗೆ 2025ರಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಅನೇಕ ಸವಾಲುಗಳನ್ನು ಎದುರಿಸಿದೆ. ಆದರೆ ಹೊಸ ವರ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿರುವ ಕಾಂಗ್ರೆಸ್, ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಶಪಥ ಮಾಡಿದೆ. ಈ ಕುರಿತ ಕಾಂಗ್ರೆಸ್ ಎಕ್ಸ್ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ.
ಜನಾರ್ಧನ ರೆಡ್ಡಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲು ಸುಧಾಕರ ರೆಡ್ಡಿ ಆಗ್ರಹ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಶಾಸಕ ಜನಾರ್ಧನ ರೆಡ್ಡಿಯವರಿಗೆ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿಯಾಗಿರುವ ಸುಧಾಕರ ರೆಡ್ಡಿ ಅವರು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಜನಾರ್ಧನ ರೆಡ್ಡಿಯವರ ಮೇಲೆ ನಡೆದ ಹಲ್ಲೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಮಾದಕವಸ್ತು (ಡ್ರಗ್) ಮಾಫಿಯ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕರ್ನಾಟಕದಲ್ಲಿ ಗೂಂಡಾರಾಜ್ಯ ತಾಂಡವವಾಡುತ್ತಿದೆ. ಕಾಂಗ್ರೆಸ್ ಪ್ರೇರಿತ ಗೂಂಡಾ ವ್ಯವಸ್ಥೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರೇ ಪೊಲೀಸ್ ಠಾಣೆಗೆ ತೆರಳಿ ಬೆದರಿಸಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಹಲ್ಲೆ ಆರೋಪಿಗಳನ್ನು ಮತ್ತು ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಆಗ್ರಹಿಸಿದ್ದಾರೆ.
ಶ್ರೀಗವಿಸಿದ್ಧೇಶ್ವರ ಜಾತ್ರೆ ಸಂಭ್ರಮ, ಕೊಪ್ಪಳಕ್ಕೆ ಬರುತ್ತಿರುವ ಭಕ್ತಸಾಗರ
ಕನ್ನಡ ನಾಡಿನ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಸ್ವಾಮಿ ಜಾತ್ರೆ ಅಂದ್ರೆ ಜಗತ್ತಿಗೇ ಗೊತ್ತು, ಅದ್ಧೂರಿ ಮತ್ತು ಸಂಭ್ರಮದ ನಡುವೆ ಭಕ್ತಸಾಗರ ಮಿಂದು ಖುಷಿಯಾಗುತ್ತದೆ. ಇದೀಗ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆ ಜನವರಿ 1 ರಿಂದ ಹಲವು ಕಾರ್ಯಕ್ರಮಗಳು ಶುರುವಾಗಿದ್ದು, ಈಗಾಗಲೇ ಸವಪಟ ಹಾಗು ಕರ್ತೃ ಗದ್ದುಗೆ ಶಿಖರಕ್ಕೆ ಕಳಸಾರೋಹಣ ಅದ್ಧೂರಿಯಾಗಿ ನೆರವೇರಿದೆ. ಇಂದು ಸಂಜೆ 5 ಗಂಟೆಗೆ ಅನ್ನಪೂರ್ಣೇಶ್ವರಿ ದೇವಿಗೆ
ಪ್ರಜಾಪ್ರಭುತ್ವ ಸದ್ದಿಲ್ಲದೆ ದುರ್ಬಲಗೊಂಡಾಗ...
ಪ್ರಜಾಪ್ರಭುತ್ವ ರಾತ್ರೋರಾತ್ರಿ ಕುಸಿಯುವುದು ಅಪರೂಪ. ಅದು ಸಾಂಸ್ಥಿಕ ದುರ್ಬಲಗೊಳ್ಳುವಿಕೆ, ಕಾರ್ಯವಿಧಾನದ ಕುಶಲತೆ ಮತ್ತು ರಾಜಕೀಯ ಸ್ಪರ್ಧೆಯ ಕಿರಿದಾಗುವಿಕೆಯ ಮೂಲಕ ಕ್ರಮೇಣ ಕ್ಷೀಣಿಸುತ್ತದೆ. ಅದೇ ಸಮಯದಲ್ಲಿ ಚುನಾವಣಾ ರಾಜಕೀಯದ ಪ್ರಕ್ರಿಯೆಯನ್ನು ಜನರ ಭಾಗವಹಿಸುವಿಕೆಯ ಬಾಹ್ಯ ನೋಟವನ್ನು ಉಳಿಸಿಕೊಳ್ಳುತ್ತವೆ. ತುಲನಾತ್ಮಕ ರಾಜಕೀಯ ಸಿದ್ಧಾಂತದಲ್ಲಿ ವ್ಯಾಪಕವಾಗಿ ಚರ್ಚಿಸಲಾದ ಈ ವಿದ್ಯಮಾನವು ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಇತ್ತೀಚಿನ ಚರ್ಚೆಗಳನ್ನು ರೂಪಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರ್ಯ ನಿರ್ವಹಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಪದೇ ಪದೇ ವ್ಯಕ್ತಪಡಿಸಿದ್ದರು. ಅವರು ಪ್ರಜಾಪ್ರಭುತ್ವಕ್ಕೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಾಮಾಜಿಕ ಅಡಿಪಾಯದ ಅಗತ್ಯವಿದೆ ಎಂದು ನಂಬಿದ್ದರಿಂದ ಇದು ಭಾರತೀಯ ಸಮಾಜಕ್ಕೆ ಜಾತಿಯ ಕಾರಣದಿಂದಾಗಿ ಕೊರತೆಯಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಬರಹ ಮತ್ತು ಭಾಷಣಗಳು ಸಂಪುಟ 1ರಲ್ಲಿ ಪ್ರಕಟವಾದ ‘ರಾನಡೆ, ಗಾಂಧಿ ಮತ್ತು ಜಿನ್ನಾ (1943)’ರಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ‘ಟಾಪ್ ಡ್ರೆಸ್ಸಿಂಗ್’ ಎಂದಿದ್ದರು. ಕಾರಣ ಪ್ರಜಾಪ್ರಭುತ್ವದ ಸಾಂವಿಧಾನಿಕ ಮತ್ತು ರಾಜಕೀಯ ರೂಪಗಳನ್ನು ಪರಿಚಯಿಸಬಹುದಾದರೂ, ಸಾಮಾಜಿಕ ರಚನೆಯು ಆಳವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿ ಉಳಿಯಿತು, ಜಾತಿ ಮತ್ತು ಶ್ರೇಣೀಕೃತ ಅಸಮಾನತೆಯಲ್ಲಿ ಬೇರೂರಿದೆ ಎಂದು ಅಂಬೇಡ್ಕರ್ ವಾದಿಸಿದರು. ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ, ರಾಜಕೀಯ ಪ್ರಜಾಪ್ರಭುತ್ವವು ಅಸ್ಥಿರ ಮತ್ತು ದುರ್ಬಲವಾಗಿರುತ್ತದೆ ಎಂದರು. ಈ ಕಳವಳವನ್ನು (ಸಂಪುಟ 13) ನವೆಂಬರ್ 25, 1949ರಂದು ಸಂವಿಧಾನ ಸಭೆಗೆ ನೀಡಿದ ಅಂತಿಮ ಭಾಷಣದಲ್ಲಿ ಅಂಬೇಡ್ಕರ್ ಪ್ರಬಲವಾಗಿ ಪುನರುಚ್ಚರಿಸಿ ‘ಭಾರತವು ಸ್ವಾತಂತ್ರ್ಯಕ್ಕೆ ವಿರೋಧಾಭಾಸದೊಂದಿಗೆ ಪ್ರವೇಶಿಸುತ್ತಿದೆ’ ಎಂದು ಎಚ್ಚರಿಸಿದ್ದರು. ಆಳವಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯೊಂದಿಗೆ ರಾಜಕೀಯ ಸಮಾನತೆ ಸಹಬಾಳ್ವೆ ನಡೆಸುತ್ತಿದೆ. ಅಂತಹ ವಿರೋಧಾಭಾಸ ಎಷ್ಟು ಕಾಲ ಉಳಿಯಬಹುದು ಎಂದು ಪ್ರಶ್ನಿಸಿದ್ದರು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಪರಿಹರಿಸದ ಹೊರತು ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪುವುದಿಲ್ಲ ಎಂದಿದ್ದರು. ಜಾತಿ ನಿರ್ಮೂಲನೆ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸಾಕಾರಗೊಳ್ಳದ ಹೊರತು ಭಾರತದಲ್ಲಿ ಪ್ರಜಾಪ್ರಭುತ್ವವು ನಿಜವಾಗಿಯೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೆಂದರು. ಅಂಬೇಡ್ಕರ್ರವರಿಗೆ, ಪ್ರಜಾಪ್ರಭುತ್ವದ ಯಶಸ್ಸು ಸಾಂವಿಧಾನಿಕ ವಿನ್ಯಾಸವನ್ನು ಮಾತ್ರ ಅವಲಂಬಿಸಿಲ್ಲ, ಬದಲಾಗಿ ಭಾರತೀಯ ಸಮಾಜದ ರೂಪಾಂತರವನ್ನು ಅವಲಂಬಿಸಿತ್ತು. ಇತ್ತೀಚಿನ ಕೆಲ ದಶಕಗಳಲ್ಲಿ, ಪ್ರಜಾಪ್ರಭುತ್ವದ ಕುಸಿತದ ಬಗ್ಗೆ ಜಾಗತಿಕ ಚರ್ಚೆಗಳಲ್ಲಿ ಭಾರತದ ಉಲ್ಲೇಖವಿದೆ. ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಪ್ರಾಜೆಕ್ಟ್ ಮತ್ತು ಫ್ರೀಡಂ ಹೌಸ್ನಂತಹ ಸಂಸ್ಥೆಗಳು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ಸೂಚ್ಯಂಕಗಳು ಭಾರತದ ವರ್ಗೀಕರಣವನ್ನು ಪರಿಷ್ಕರಿಸಿವೆ, ರಾಜಕೀಯ ಸ್ಪರ್ಧೆ, ಮಾಧ್ಯಮ ಸ್ವಾತಂತ್ರ್ಯ ಮತ್ತು ಕಾರ್ಯನಿರ್ವಾಹಕ ಅಧಿಕಾರದ ಕೇಂದ್ರೀಕರಣಕ್ಕೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿವೆ. ಅದನ್ನು ‘ಚುನಾವಣಾ ನಿರಂಕುಶಾಧಿಕಾರ’ ಅಥವಾ ‘ಭಾಗಶಃ ಮುಕ್ತ’ ಎಂದು ವರ್ಗೀಕರಿಸಿವೆ. ಈ ಮೌಲ್ಯಮಾಪನಗಳು ಚುನಾವಣೆಗಳ ಅನುಪಸ್ಥಿತಿಯ ಬಗ್ಗೆ ಹೇಳಿಕೊಳ್ಳುವುದಿಲ್ಲ, ಆದರೆ ಚುನಾವಣಾ ಸ್ಪರ್ಧೆಯು ಅಸಮಾನವಾದ ಕ್ಷೇತ್ರದಲ್ಲಿ ಸಂಭವಿಸುತ್ತದೆ ಎಂದು ವಾದಿಸುತ್ತವೆ, ಅಲ್ಲಿ ಅಧಿಕಾರದಲ್ಲಿರುವವರು ರಚನಾತ್ಮಕ ಪ್ರಯೋಜನಗಳನ್ನು ಪಡೆಯುವುದಲ್ಲದೆ ವಿರೋಧ ಪಕ್ಷದ ಚಟುವಟಿಕೆಯನ್ನು ನಿರ್ಬಂಧಿಸಲಾಗುತ್ತದೆ. ರಾಜಕೀಯ ವಿಜ್ಞಾನಿಗಳಾದ ಸ್ಟೀವನ್ ಲೆವಿಟ್ಸ್ಕಿ ಮತ್ತು ಲುಕನ್ ವೇ ಅಂತಹ ವ್ಯವಸ್ಥೆಗಳನ್ನು ‘ಸ್ಪರ್ಧಾತ್ಮಕ ಸರ್ವಾಧಿಕಾರಿ ಆಡಳಿತಗಳು’ ಎಂದು ವಿವರಿಸುತ್ತಾರೆ. ಚುನಾವಣೆಗಳು ಅಸ್ತಿತ್ವದಲ್ಲಿರುವ, ಆದರೆ ಸಂಸ್ಥೆಗಳ ನಿಯಂತ್ರಣ, ಮಾಧ್ಯಮ ಪ್ರಾಬಲ್ಯ, ಆಯ್ದ ಕಾನೂನು ಜಾರಿ ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ನಿಬರ್ಂಧಗಳ ಮೂಲಕ ರಾಜ್ಯಗಳನ್ನು ವ್ಯವಸ್ಥಿತವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಾರೆ. ಭಾರತವು ಈ ಮಾದರಿಗೆ ಹೆಚ್ಚು ಹೆಚ್ಚು ಹೊಂದಿಕೊಳ್ಳುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ, ಆದರೆ ಸರಕಾರದ ಬೆಂಬಲಿಗರು ಚುನಾವಣಾ ಗೆಲುವುಗಳು ಸಾಂಸ್ಥಿಕ ಪಕ್ಷಪಾತಕ್ಕಿಂತ ಹೆಚ್ಚಾಗಿ ಜನಪ್ರಿಯ ಆದೇಶವನ್ನು ಪ್ರತಿಬಿಂಬಿಸುತ್ತವೆ ಎಂದು ಸಮರ್ಥಿಸುತ್ತಾರೆ. ಇತ್ತೀಚಿನ ವಿವಾದ ಕೇಂದ್ರದಲ್ಲಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ಅನೇಕ ಅನುಮಾನಗಳನ್ನು ಹುಟ್ಟಿಸಿವೆ. ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿರುವ ಭಾರತೀಯ ಚುನಾವಣಾ ಆಯೋಗ, ಹಲವಾರು ರಾಜ್ಯಗಳಲ್ಲಿ ನಡೆಸಲಾದ ಮತದಾರರ ಪಟ್ಟಿ ಪರಿಷ್ಕರಣೆಗಳ ಬಗ್ಗೆ ಟೀಕೆಗಳನ್ನು ಎದುರಿಸಿದೆ. ಈಗ ಈ ಸಂಸ್ಥೆ ರಾಜಿಯಾಗಿದೆಂದು ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವೆ. ಬಿಹಾರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಮುಂತಾದ ರಾಜ್ಯಗಳಲ್ಲಿ 2025ರಲ್ಲಿ ನಡೆದ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ ದೇಶಾದ್ಯಂತ ಎಚ್ಚರಿಕೆ ಮೂಡಿಸಿತು. ಲಕ್ಷಾಂತರ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿಯಾಗಿದೆ. ಮುಸ್ಲಿಮರು, ವಲಸೆ ಕಾರ್ಮಿಕರು, ನಗರಗಳ ಬಡವರು ಮತ್ತು ವಿರೋಧ ಪಕ್ಷಕ್ಕೆ ಒಲವು ತೋರುವ ಕ್ಷೇತ್ರಗಳ ಮೇಲೆ ಅಸಮಾನ ಪರಿಣಾಮ ಬೀರುತ್ತದೆ ಎಂದು ವಿಮರ್ಶಕರು ಗಮನಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಗೊಂದಲದ ವೈಪರೀತ್ಯಗಳನ್ನು ಎತ್ತಿ ತೋರಿಸಿದ್ದಾರೆ, ಸಾಕಷ್ಟು ಪರಿಶೀಲನೆ ಇಲ್ಲದೆ ಸಾಮೂಹಿಕ ಅಳಿಸುವಿಕೆಗಳು, ಆಡಳಿತ ಪಕ್ಷದ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ನಕಲಿ ನಮೂದುಗಳು ಮತ್ತು ವಾಸ್ತವಿಕ ಪೌರತ್ವ ಪರಿಶೀಲನೆಯನ್ನು ಹೋಲುವ ಅಪಾರದರ್ಶಕ ಕಾರ್ಯವಿಧಾನಗಳ ಬಗ್ಗೆ ಅನುಮಾನಗಳಿವೆ. ಮತದಾರರ ಪಟ್ಟಿಗಳು ಸೇರ್ಪಡೆಗಿಂತ ಹೆಚ್ಚಾಗಿ ಹೊರಗಿಡುವ ಸಾಧನಗಳಾದಾಗ, ಚುನಾವಣೆಗಳು ತಮ್ಮ ಪ್ರಜಾಪ್ರಭುತ್ವದ ಅರ್ಥವನ್ನು ಕಳೆದುಕೊಳ್ಳುತ್ತವೆ. ಪ್ರತಿಭಟನೆಗಳ ಹೊರತಾಗಿಯೂ ಈ ಪರಿಷ್ಕರಣೆಗಳ ನಿರಂತರತೆಯು ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ. ಪರಿಷ್ಕರಣೆಗಳು ನಿಯಮಿತ ಆಡಳಿತಾತ್ಮಕ ವ್ಯಾಯಾಮಗಳಾಗಿವೆ ಎಂದು ಹೇಳುವ ಮೂಲಕ ಭಾರತೀಯ ಚುನಾವಣಾ ಆಯೋಗ ತಪ್ಪನ್ನು ನಿರಾಕರಿಸಿದೆ. ‘ಡಿಲಿಗೇಟಿವ್ ಪಾಲಿಟಿಕ್ಸ್’ ಪರಿಕಲ್ಪನೆಯನ್ನು ಪರಿಚಯಿಸಿದ ಗಿಲ್ಲೆರ್ಮೊ ಒ’ಡೊನೆಲ್ ಪ್ರಕಾರ, ಪ್ರಜಾಪ್ರಭುತ್ವವು ಒಳಗಿನಿಂದ ಕೊಳೆಯಬಹುದು, ಅಲ್ಲಿ ನಾಯಕರನ್ನು ಜನಪ್ರಿಯ ಆದೇಶದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದರೆ ನಂತರ ಅವರು ಆಡಳಿತ ನಡೆಸಲು ಅನಿಯಂತ್ರಿತ ಅಧಿಕಾರವನ್ನು ಪಡೆಯುತ್ತಾರೆ. ಅಂತಹ ವ್ಯವಸ್ಥೆಗಳಲ್ಲಿ, ಚುನಾವಣೆಗಳು ಮುಂದುವರಿಯುತ್ತವೆ, ಆದರೆ ಅಧಿಕಾರವನ್ನು ನಿರ್ಬಂಧಿಸಲು ಉದ್ದೇಶಿಸಲಾದ ಸಂಸ್ಥೆಗಳು ಸಂಸತ್ತು, ನ್ಯಾಯಾಂಗ, ನಿಯಂತ್ರಕ ಸಂಸ್ಥೆಗಳು ಮತ್ತು ಮಾಧ್ಯಮ ಕ್ರಮೇಣ ದುರ್ಬಲಗೊಳ್ಳುತ್ತವೆ. ಅಧೀನ ಸ್ಥಾನದಲ್ಲಿರುವ ವ್ಯಕ್ತಿಗಳು ಶ್ರೇಣೀಕೃತ ರಚನೆಯೊಳಗೆ ಉನ್ನತ ಅಧಿಕಾರಕ್ಕೆ ಜವಾಬ್ದಾರರಾಗಿರುತ್ತಾರೆ, ಮತದಾನಕ್ಕೆ ಸೀಮಿತವಾಗುತ್ತದೆ. ಆದರೆ ಸರಕಾರದಲ್ಲಿ ಪರಿಶೀಲನೆ ಮತ್ತು ಸಮತೋಲನ ವ್ಯವಸ್ಥೆಯ ಸ್ಥಗಿತ (ಸಾಮಾನ್ಯವಾಗಿ ಕಾರ್ಯಾಂಗ) ಅನಿಯಂತ್ರಿತ ಅಧಿಕಾರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹೊಣೆಗಾರಿಕೆಯ ಈ ಸವೆತವು ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಕುಸಿತಕ್ಕೆ ರಾಜ್ಯದ ವೈಫಲ್ಯಕ್ಕೆ ಕಾರಣವಾಗುತ್ತದೆ. ಇತಿಹಾಸದುದ್ದಕ್ಕೂ, ಸಾಮಾಜಿಕ ಬದಲಾವಣೆಯನ್ನು ಹೆಚ್ಚಾಗಿ ಹಿಂಸಾತ್ಮಕ ಮುಖಾಮುಖಿಯ ಫಲಿತಾಂಶವೆಂದು ಕಲ್ಪಿಸಿಕೊಳ್ಳಲಾಗುತ್ತದೆ. ಆದರೂ, ಆಧುನಿಕ ಸಂಶೋಧನೆ ಮತ್ತು ಭಾರತದ ಸಾಮಾಜಿಕ ಸುಧಾರಣಾ ಸಂಪ್ರದಾಯಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಇದರಲ್ಲಿ ಅಹಿಂಸಾತ್ಮಕ, ಸಂಘಟಿತ, ಸಾಮೂಹಿಕ ಕ್ರಿಯೆಯು ರೂಪಾಂತರಕ್ಕೆ ಅತ್ಯಂತ ಪರಿಣಾಮಕಾರಿ ಶಕ್ತಿಯಾಗಿದೆ. ಸಮಕಾಲೀನ ರಾಜಕೀಯ ವಿಜ್ಞಾನಿಗಳಾದ ಎರಿಕಾ ಚೆನೊವೆತ್ ಮತ್ತು ಮಾರಿಯಾ ಜೆ. ಸ್ಟೀಫನ್, ತಮ್ಮ ಜಾಗತಿಕ ಅಧ್ಯಯನ ‘ವೈ ಸಿವಿಲ್ ರೆಸಿಸ್ಟೆನ್ಸ್ ವರ್ಕ್ಸ್’ನಲ್ಲಿ, ‘ಅಹಿಂಸಾತ್ಮಕ ಚಳವಳಿಗಳು ಹಿಂಸಾತ್ಮಕ ಚಳವಳಿಗಳಿಗಿಂತ ಹೆಚ್ಚಾಗಿ ಯಶಸ್ವಿಯಾಗುತ್ತವೆ’ ಎಂದು ಪ್ರತಿಪಾದಿಸಿದ್ದಾರೆ. ವಿಶ್ವಾದ್ಯಂತ ನೂರಾರು ಹೋರಾಟಗಳನ್ನು ವಿಶ್ಲೇಷಿಸುವ ಮೂಲಕ, ಶಾಂತಿಯುತ ಅಭಿಯಾನಗಳು ಹೆಚ್ಚಿನ ಭಾಗವಹಿಸುವಿಕೆಯನ್ನು ಸಜ್ಜುಗೊಳಿಸುತ್ತವೆ, ನೈತಿಕ ನ್ಯಾಯಸಮ್ಮತತೆಯನ್ನು ಪಡೆಯುತ್ತವೆ ಮತ್ತು ಪ್ರಜಾಪ್ರಭುತ್ವ ಮತ್ತು ಶಾಶ್ವತ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಹೆಚ್ಚು ಎಂದು ವಾದಿಸುತ್ತಾರೆ. ಅಂತಹ ಸಂಶೋಧನೆ ಅಸ್ತಿತ್ವದಲ್ಲಿರುವುದಕ್ಕೆ ಬಹಳ ಹಿಂದೆಯೇ, ಭಾರತೀಯ ಸುಧಾರಕರು ಮತ್ತು ನಾಯಕರು ಈ ತತ್ವಗಳನ್ನು ನೆಲದ ಮೇಲೆ ಅಭ್ಯಾಸ ಮಾಡಿದರು. ಮಹಾತ್ಮಾ ಗಾಂಧಿಯವರು ಅಹಿಂಸೆ ಮತ್ತು ನಾಗರಿಕ ಅಸಹಕಾರದ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಸಾಮೂಹಿಕ ಚಳವಳಿಯನ್ನಾಗಿ ಪರಿವರ್ತಿಸಿದರು. ಅಹಿಂಸೆಯು ಲಕ್ಷಾಂತರ ಸಾಮಾನ್ಯ ಜನರು ಭಾಗವಹಿಸಲು ಅನುವು ಮಾಡಿಕೊಟ್ಟಿತು, ವಸಾಹತುಶಾಹಿ ಅಧಿಕಾರವನ್ನು ದುರ್ಬಲಗೊಳಿಸಿತು ಮತ್ತು ಸಾಮ್ರಾಜ್ಯಶಾಹಿ ಆಳ್ವಿಕೆಯ ನೈತಿಕ ದಿವಾಳಿತನವನ್ನು ಬಹಿರಂಗಪಡಿಸಿತು. ಡಾ.ಬಿ.ಆರ್. ಅಂಬೇಡ್ಕರ್ ಜಾತಿ ದಬ್ಬಾಳಿಕೆಯ ವಿರುದ್ಧ ಶಿಸ್ತುಬದ್ಧ, ಅಹಿಂಸಾತ್ಮಕ ಹೋರಾಟಗಳನ್ನು ನಡೆಸಿದರು. ಮಹಾಡ್ ಸತ್ಯಾಗ್ರಹದಂತಹ ಚಳವಳಿಗಳು ಪ್ರತೀಕಾರಕ್ಕಿಂತ ಹೆಚ್ಚಾಗಿ ಸಾಮೂಹಿಕ ಕ್ರಿಯೆಯ ಮೂಲಕ ಸಾಮಾಜಿಕ ಹೊರಗಿಡುವಿಕೆಯನ್ನು ಪ್ರಶ್ನಿಸಿದವು. ಅಂಬೇಡ್ಕರ್ ಅವರ ಶಾಶ್ವತ ಸಾಧನೆ ಭಾರತದ ಸಂವಿಧಾನ ಅಹಿಂಸಾತ್ಮಕ ಹೋರಾಟವು ಆಳವಾದ ರಚನಾತ್ಮಕ ಬದಲಾವಣೆಯನ್ನು ಉಂಟುಮಾಡುತ್ತದೆ ಎಂಬುದಕ್ಕೆ ಪುರಾವೆಯಾಗಿ ನಿಂತಿದೆ. ಪೆರಿಯಾರ್ ಇ.ವಿ. ರಾಮಸಾಮಿ ಜಾತಿ ಶ್ರೇಣಿ ಮತ್ತು ಧಾರ್ಮಿಕ ಸಾಂಪ್ರದಾಯಿಕತೆಯ ಮೇಲೆ ದಾಳಿ ಮಾಡಲು ಆಮೂಲಾಗ್ರ ವೈಚಾರಿಕತೆ ಮತ್ತು ಸ್ವಾಭಿಮಾನ ಅಭಿಯಾನಗಳನ್ನು ಅಳವಡಿಸಿಕೊಂಡರು. ಚಿಂತನೆಯಲ್ಲಿ ಮುಖಾಮುಖಿಯಾಗಿದ್ದರೂ, ಅವರ ವಿಧಾನಗಳು ಬ್ರಾಹ್ಮಣ ಪ್ರಾಬಲ್ಯವನ್ನು ಕೆಡವಲು ದೈಹಿಕ ಹಿಂಸೆಯಲ್ಲ, ಸಾಮೂಹಿಕ ಸಜ್ಜುಗೊಳಿಸುವಿಕೆ, ಸಾರ್ವಜನಿಕ ಚರ್ಚೆ ಮತ್ತು ಸಾಮಾಜಿಕ ಜಾಗೃತಿಯನ್ನು ಅವಲಂಬಿಸಿವೆ. ಇದಕ್ಕೂ ಮೊದಲು, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಶಿಕ್ಷಣ, ಸಂಘಟನೆ ಮತ್ತು ಪ್ರತಿಭಟನೆಯ ಮೂಲಕ ಸಾಮಾಜಿಕ ಸುಧಾರಣೆಯನ್ನು ಪ್ರಾರಂಭಿಸಿದರು. ಮಹಿಳೆಯರು ಮತ್ತು ದಮನಿತ ಜಾತಿಗಳಿಗೆ ಶಾಲೆಗಳನ್ನು ತೆರೆಯುವ ಮೂಲಕ, ಧಾರ್ಮಿಕ ಅಧಿಕಾರವನ್ನು ಪ್ರಶ್ನಿಸುವ ಮೂಲಕ ಮತ್ತು ಅಂಚಿನಲ್ಲಿರುವವರನ್ನು ಸಜ್ಜುಗೊಳಿಸುವ ಮೂಲಕ, ಅವರು ದೈನಂದಿನ ಜೀವನದಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಪ್ರಬಲ ಅಹಿಂಸಾತ್ಮಕ ಹೋರಾಟವನ್ನು ನಡೆಸಿದರು. ಭಾರತದ ಸ್ವಂತ ಇತಿಹಾಸವು ಮಿಶ್ರ ಪಾಠಗಳನ್ನು ನಮಗೆ ಕಲಿಸಿದೆ. ತುರ್ತು ಪರಿಸ್ಥಿತಿಗೆ ಪ್ರತಿರೋಧ (1975-77) ಪ್ರಜಾಪ್ರಭುತ್ವದ ಮಾನದಂಡಗಳನ್ನು ಪುನಃಸ್ಥಾಪಿಸಲು ನಾಗರಿಕ ಸಮಾಜ ಮತ್ತು ವಿರೋಧ ಪಕ್ಷದ ಏಕತೆಯ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇತ್ತೀಚೆಗೆ, ರೈತರ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ನಿರಂತರ ಸಜ್ಜುಗೊಳಿಸುವಿಕೆಯು ನೀತಿ ಫಲಿತಾಂಶಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತೋರಿಸಿದೆ. ಅದೇ ಸಮಯದಲ್ಲಿ, ನಿರಂತರ ಸಜ್ಜುಗೊಳಿಸುವಿಕೆಯು ಸಾಂವಿಧಾನಿಕ ಮಾನದಂಡಗಳಲ್ಲಿ ನೆಲೆಗೊಂಡಿಲ್ಲದಿದ್ದರೆ, ಮತ್ತಷ್ಟು ಧ್ರುವೀಕರಣದ ಅಪಾಯವನ್ನುಂಟುಮಾಡುತ್ತದೆ ಎಂದು ವಿದ್ವಾಂಸರು ಎಚ್ಚರಿಸಿದ್ದಾರೆ. ಈ ಅಧಿಕಾರವು ಒಪ್ಪಿಗೆಯ ಮೇಲೆ ಉಳಿಯುತ್ತದೆ. ಸಾಮೂಹಿಕ, ನೈತಿಕ ಮತ್ತು ಸಂಘಟಿತ ಕ್ರಿಯೆಯ ಮೂಲಕ ಜನರು ಆ ಒಪ್ಪಿಗೆಯನ್ನು ಹಿಂದೆಗೆದುಕೊಂಡಾಗ, ಅತ್ಯಂತ ಆಳವಾಗಿ ಬೇರೂರಿರುವ ವ್ಯವಸ್ಥೆಗಳು ಸಹ ಕುಸಿಯಲು ಪ್ರಾರಂಭಿಸುತ್ತವೆ. ಚೆನೊವೆತ್ ಮತ್ತು ಸ್ಟೀಫನ್ ಅವರ ಸಂಶೋಧನೆಯು ಈ ಒಳನೋಟಕ್ಕೆ ಪ್ರಾಯೋಗಿಕ ತೂಕವನ್ನು ನೀಡುತ್ತದೆ. ದಬ್ಬಾಳಿಕೆ ಮಾಡುವವರು ಮಾನವೀಯರಾಗಿರುವುದರಿಂದ ಅಹಿಂಸೆ ಕೆಲಸ ಮಾಡುವುದಿಲ್ಲ, ಬದಲಾಗಿ ಅದು ಅನ್ಯಾಯದ ವ್ಯವಸ್ಥೆಗಳನ್ನು ಅಡ್ಡಿಪಡಿಸುತ್ತದೆ, ಭಾಗವಹಿಸುವಿಕೆಯನ್ನು ವಿಸ್ತರಿಸುತ್ತದೆ, ಜನರ ಬೆಂಬಲವನ್ನು ಮುರಿಯುತ್ತದೆ ಮತ್ತು ನ್ಯಾಯಸಮ್ಮತತೆಯನ್ನು ನಿರ್ಮಿಸುತ್ತದೆ. ಧ್ರುವೀಕರಣ ಮತ್ತು ಸಾಮಾಜಿಕ ಅಶಾಂತಿಯಿಂದ ಗುರುತಿಸಲ್ಪಟ್ಟ ಯುಗದಲ್ಲಿ, ಫುಲೆಯಿಂದ ಪೆರಿಯಾರ್ವರೆಗೆ, ಅಂಬೇಡ್ಕರ್ರಿಂದ ಗಾಂಧಿಯವರೆಗೆ ಮತ್ತು ಜೀವಂತ ಅನುಭವದಿಂದ ಆಧುನಿಕ ವಿದ್ವತ್ಪೂರ್ಣತೆಯವರೆಗೆ ಈ ಸಂಯೋಜಿತ ಪರಂಪರೆಯು ಬಲವಾದ ಪಾಠವನ್ನು ಕಲಿಸುತ್ತದೆ. ಶಾಶ್ವತ ಸಾಮಾಜಿಕ ಬದಲಾವಣೆಯನ್ನು ವಿನಾಶದ ಮೂಲಕ ಸಾಧಿಸಲಾಗುವುದಿಲ್ಲ, ಆದರೆ ನ್ಯಾಯ ಮತ್ತು ಘನತೆಯ ಆಧಾರದ ಮೇಲೆ ಸಂಘಟಿತ ಅಹಿಂಸಾತ್ಮಕ ಪ್ರತಿರೋಧದ ಮೂಲಕ ಸಾಧಿಸಲಾಗುತ್ತದೆ. ಭಾರತವು ನಿರ್ಣಾಯಕ ರಾಜಕೀಯ ಘಟ್ಟವನ್ನು ಸಮೀಪಿಸುತ್ತಿರುವಾಗ, ಚರ್ಚೆಯು ಇನ್ನು ಮುಂದೆ ಚುನಾವಣೆಗಳನ್ನು ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಅಧಿಕಾರವನ್ನು ಹೇಗೆ ಚಲಾಯಿಸಲಾಗುತ್ತದೆ, ನಿರ್ಬಂಧಿಸಲಾಗುತ್ತದೆ ಮತ್ತು ಸ್ಪರ್ಧಿಸಲಾಗುತ್ತದೆ ಎಂಬುದರ ಬಗ್ಗೆ. ಆದರೂ, ಅಂತಹ ಚಳವಳಿಗಳು ವಿಶಾಲ-ಆಧಾರಿತ, ನಿರಂತರ ಮತ್ತು ಶಿಸ್ತುಬದ್ಧವಾಗಿದ್ದಾಗ ಮತ್ತು ಅವು ವಿಘಟನೆ ಅಥವಾ ಹಿಂಸಾಚಾರವನ್ನು ತಪ್ಪಿಸಿದಾಗ ಮಾತ್ರ ಯಶಸ್ವಿಯಾಗುತ್ತವೆ ಎಂದು ಅವರು ಎಚ್ಚರಿಸುತ್ತಾರೆ.
IND Vs NZ- ಭಾರತ ಏಕದಿನ ತಂಡದಲ್ಲಿ ಭಾರೀ ಬದಲಾವಣೆ ಸಾಧ್ಯತೆ: ಇಶಾನ್ ಕಿಶನ್ ಸೇರಿ ಐವರಿಗೆ ಕಂಬ್ಯಾಕ್ ಭಾಗ್ಯ?
India Vs New Zealand- ಜನವರಿ 11ರಂದು ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 3ರಂದು ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. 2027ರ ಏಕದಿನ ವಿಶ್ವಕಪ್ ಗೆ ಈಗಿನಿಂದಲೇ ತಂಡವನ್ನು ಕಟ್ಟಬೇಕಾಗಿರುವುದರಿಂದ ಈ ಬಾರಿ ಏಕದಿನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಬಹುದೆಂಬ ನಿರೀಕ್ಷೆ ಇದೆ. ನಾಯಕ ಶುಭಮನ್ ಗಿಲ್, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ವೇಗಿ ಮೊಹಮ್ಮದ್ ಶಮಿಯೂ ಸೇರಿದತೆ ಒಟ್ಟು 5 ಮಂದಿ ಏಕದಿನ ಕಂಬ್ಯಾಕ್ ಮಾಡುವ ನಿರೀಕ್ಷೆ ಇದೆ. ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ.
ನನ್ನ ಹತ್ಯೆಗೆ ಆ ಮೂವರಿಂದ ಸಂಚು ನಡೆದಿದೆ: ಜನಾರ್ದನ ರೆಡ್ಡಿ ಗಂಭೀರ ಆರೋಪ
ಬಳ್ಳಾರಿ: ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿತೆಗೆದುಕೊಂಡಿದೆ. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದ್ದು, ಈ ಘರ್ಷಣೆಯು ಕಲ್ಲು ತೂರಾಟ, ದೊಣ್ಣೆ ಮತ್ತು ಖಾರದ ಪುಡಿ ಎರಚಾಟ
ಕೇರಳ ಬಿಜೆಪಿ ಮುಖವಾಣಿ Janmabhumi ಯಲ್ಲಿ ಮುಸ್ಲಿಂ ಲೀಗ್ನ ʼಚಂದ್ರಿಕಾʼ ಪತ್ರಿಕೆಯ ಸಂಪಾದಕೀಯ ಪುಟ ಪ್ರಕಟ!
ತಿರುವನಂತಪುರಂ: ಕೇರಳ ಬಿಜೆಪಿ ಮುಖವಾಣಿ ಜನ್ಮಭೂಮಿ(Janmabhumi) ಹೊಸ ವರ್ಷದ ದಿನವೇ ದೊಡ್ಡ ಲೋಪವೊಂದನ್ನು ಮಾಡಿದೆ. ಜನ್ಮಭೂಮಿಯ ಸಂಪಾದಕೀಯ ಪುಟದಲ್ಲಿ ತಪ್ಪಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಚಂದ್ರಿಕಾ(Chandrika) ಪತ್ರಿಕೆಯ ಪುಟ ಪ್ರಕಟವಾಗಿದೆ. ಹೊಸ ವರ್ಷದ ದಿನದ ಬೆಳಿಗ್ಗೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML) ರಾಜ್ಯಾಧ್ಯಕ್ಷರಾಗಿರುವ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್ ಅವರಿಗೆ ಕಣ್ಣೂರಿನ ಪಕ್ಷದ ಕಾರ್ಯಕರ್ತರೋರ್ವರು ಕರೆ ಮಾಡಿ ಜನ್ಮಭೂಮಿಯಲ್ಲಿ ಲೇಖನ ಪ್ರಕಟವಾಗಿರುವ ಬಗ್ಗೆ ತಿಳಿಸಿದ್ದರು. ತಂಙಳ್ ಆರಂಭದಲ್ಲಿ ಇದು ತಮಾಷೆಯಾಗಿರಬಹುದು ಎಂದುಕೊಂಡಿದ್ದರೂ, ಇದು ನಿಜ ಎನ್ನುವುದು ಬಳಿಕ ಅವರ ಅರಿವಿಗೆ ಬಂದಿತ್ತು. ಕಣ್ಣೂರು ಮತ್ತು ಕಾಸರಗೋಡಿನ ಜನ್ಮಭೂಮಿ ಓದುಗರಿಗೆ ಹೊಸ ವರ್ಷದ ದಿನವೇ ಇದು ಅಚ್ಚರಿ ಮೂಡಿಸಿತ್ತು. ಆದರೆ ಪತ್ರಕರ್ತರಿಗೆ ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುವ ಒಂದು ಲೋಪವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೆ ಪ್ರತಿಕ್ರಿಯಿಸಿದ Janmabhumi ಕಣ್ಣೂರು ಬ್ಯೂರೋ ಮುಖ್ಯಸ್ಥ ಗಣೇಶ್ ಮೋಹನ್, ಮುದ್ರಣ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿರುವುದರಿಂದ ಈ ಲೋಪ ಸಂಭವಿಸಿದೆ ಎಂದು ಹೇಳಿದ್ದಾರೆ. ಖಾಸಗಿ ಸಿಟಿಪಿ ಕೇಂದ್ರದಲ್ಲಿ ಈ ಗೊಂದಲ ಸಂಭವಿಸಿದೆ. ಅಲ್ಲಿ ಡಿಜಿಟಲ್ ವೃತ್ತಪತ್ರಿಕೆ ಪುಟ ಫೈಲ್ಗಳನ್ನು ಫಿಲ್ಮ್ ಬಳಸದೆ ನೇರವಾಗಿ ಮುದ್ರಣ ಫಲಕಗಳಿಗೆ ವರ್ಗಾಯಿಸಲಾಗುತ್ತದೆ. ಜನ್ಮಭೂಮಿ ಮತ್ತು ಚಂದ್ರಿಕಾ ಪತ್ರಿಕೆಗಳಿಗೆ ಪ್ಲೇಟ್(plate)ಗಳನ್ನು ಸಿದ್ಧಪಡಿಸುವ ಕಣ್ಣೂರು ಸಿಟಿಪಿ ಕೇಂದ್ರದಲ್ಲಿ, ಚಂದ್ರಿಕಾದ ಸಂಪಾದಕೀಯ ಪುಟದ plate ಅನ್ನು ಜನ್ಮಭೂಮಿ plate ಳೊಂದಿಗೆ ತಪ್ಪಾಗಿ ಕಳುಹಿಸಿಕೊಡಲಾಗಿತ್ತು. “ಮಾಧ್ಯಮ, ಸುಪ್ರಭಾತ ಮತ್ತು ಜನ್ಮಭೂಮಿಯಂತಹ ಪತ್ರಿಕೆಗಳನ್ನು ಮುದ್ರಿಸುವ ಪ್ರತೀಕ್ಷಾ ಪ್ರಿಂಟರ್ಸ್ನಲ್ಲಿ ಈ ಪ್ರಮಾದ ಗಮನಕ್ಕೆ ಬಂದಿಲ್ಲ. ಅದೃಷ್ಟವಶಾತ್, ಆ ದಿನ ಚಂದ್ರಿಕಾ ಸಂಪಾದಕೀಯ ಪುಟದಲ್ಲಿ ಬಿಜೆಪಿಯನ್ನು ನೇರವಾಗಿ ಗುರಿಯಾಗಿಸಿಕೊಂಡು ಏನೂ ಇರಲಿಲ್ಲ” ಎಂದು ಕಾಸರಗೋಡಿನ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುತ್ತಾ ಹೇಳಿದರು. ಜನ್ಮ ಭೂಮಿಯ ಪುಟ 4ರಲ್ಲಿ ಚಂದ್ರಿಕಾ ಪತ್ರಿಕೆಯ masthead ಹಾಗೂ ಇಂಪ್ರಿಂಟ್ ಲೈನ್ ಜೊತೆಗೆ ಎಡ ಪ್ರಜಾಸತ್ತಾತ್ಮಕ ರಂಗದ ಹಿನ್ನೆಡೆ ಕುರಿತಾದ ಸಂಪಾದಕೀಯ ಮತ್ತು ಸಾದಿಕಲಿ ಶಿಹಾಬ್ ತಂಙಳ್, ಎಂ.ಕೆ. ಮುನೀರ್ ಮತ್ತು ಮುಹಮ್ಮದ್ ಶಾ ಅವರ ಮೂರು ಅಭಿಪ್ರಾಯ ಲೇಖನಗಳು ಪ್ರಕಟವಾಗಿದ್ದವು. ಅವು ಕ್ರಮವಾಗಿ 2025ಕ್ಕೆ ವಿದಾಯ ಹೇಳುವ ಬಗ್ಗೆ ಕೇಂದ್ರೀಕರಿಸಿತ್ತು. ಬಂಕಿಮ್ ಚಂದ್ರ ಚಟರ್ಜಿ ಅವರ ಕೃತಿಗಳ ಕುರಿತು ಚಿಂತನೆ ಹಾಗೂ ಯಲಹಂಕ ಘಟನೆಗೆ ಸಂಬಂಧಿಸಿದ ವಾಸ್ತವಾಂಶಗಳ ಬಗ್ಗೆಯೂ ಕೇಂದ್ರೀಕೃತವಾಗಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್, ಹೆಚ್ಚು ಓದುಗರಿಗೆ ತಲುಪುದಕ್ಕಿಂತ ಬೇರೆ ವರ್ಗದ ಓದುಗರೊಂದಿಗೆ ಸಂಪರ್ಕ ಸಾಧಿಸಿರುವುದು ನನಗೆ ಸಂತೋಷವಾಗಿದೆ. ಇದು ನಿಜವಾಗಿಯೂ ಹೊಸ ವರ್ಷದ ಅಚ್ಚರಿ. ಮುಂದಿನ ವರ್ಷವೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರು. ಚಂದ್ರಿಕಾ ಸಂಪಾದಕ ಕಮಲ್ ವರದೂರು ಅವರ ದೃಷ್ಟಿಯಲ್ಲಿ, ಇದು ಪ್ರತಿಸ್ಪರ್ಧಿ ಪತ್ರಿಕೆಯಿಂದ ಬಂದ ಅನಿರೀಕ್ಷಿತ ಪ್ರಚಾರವಾಗಿತ್ತು. ಹೊಸ ವರ್ಷದ ದಿನ ನಮ್ಮ ಸಂಪಾದಕೀಯ ಪುಟ ಹೆಚ್ಚಿನ ಓದುಗರನ್ನು ತಲುಪಿದ್ದು ಶುಭದ ಸಂಕೇತ. ಮುಂದಿನ ದಿನಗಳು ಶುಭವಾಗಲಿದೆ ಎಂದು ಅವರು ನಗುತ್ತಾ ಹೇಳಿದರು. ಮಾಧ್ಯಮಗಳಲ್ಲಿ, ವಿಶೇಷವಾಗಿ ಪತ್ರಿಕೆಗಳಲ್ಲಿ, ತಪ್ಪುಗಳು ಮತ್ತು ಗೊಂದಲಗಳು ಅಪರೂಪವಲ್ಲ. ಆದರೆ ಒಂದು ಪಕ್ಷದ ಮುಖವಾಣಿ ಮತ್ತೊಂದು ಪಕ್ಷದ ಪತ್ರಿಕೆಯ ಸಂಪಾದಕೀಯ ಪುಟವನ್ನೇ ಪ್ರಕಟಿಸಿರುವುದು ಪತ್ರಿಕೋದ್ಯಮ ವಲಯದಲ್ಲಿ ಅಪರೂಪದ ಯಡವಟ್ಟಾಗಿದೆ.
ಫೆಬ್ರವರಿ 16 ಕ್ಕೆ ಮತ್ತೊಂದು ಸಿದ್ದರಾಮೋತ್ಸವ? ಕೈ ಸರ್ಕಾರದ ಸಾವಿರ ದಿನಗಳ ಸಂಭ್ರಮ ಆಚರಣೆಗೆ ಸಿದ್ಧತೆ
ಜನವರಿ 6ರ ಸಿದ್ದರಾಮಯ್ಯ ಪಾಲಿಗೆ ಮೈಲಿಗಲ್ಲಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗುವ ಸನಿಹದಲ್ಲಿದ್ದಾರೆ.ಇದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳಾಗುತ್ತಿದ್ದು, ಇದರ ಸಾಧನೆಯನ್ನು ಫೆಬ್ರವರಿ 16 ರಂದು ಸಂಭ್ರಮಾಚರಣೆ ಮೂಲಕ ಆಚರಿಸಲು ಮಾಡಲು ಸಿದ್ದತೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ, ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮೋತ್ಸವದ ಮಾದರಿಯಲ್ಲೇ ಈ ಸಂಭ್ರಮವನ್ನು ಸಿದ್ದುಗಾಗಿ ಮುಡಿಪಾಗಿಟ್ಟು, ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವದ ಅಗತ್ಯತೆಯನ್ನು ಜನರಿಗೆ ತಿಳಿಸುವ ತಂತ್ರಗಾರಿಕೆಯನ್ನು ಸದ್ದಿಲ್ಲದೆ ನಡೆಸುವ ತಯಾರಿಯಲ್ಲಿ ಸಿದ್ದು ಬಣವಿದೆ.
ಬಳ್ಳಾರಿ ಘರ್ಷಣೆ : ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ : ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿ ನಗರದ ಅವ್ವಂಬಾವಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರು ಆಧರಿಸಿ ಜನಾರ್ಧನ ರೆಡ್ಡಿ ಅವರನ್ನು ಎ1 ಆರೋಪಿ ಮಾಡಲಾಗಿದೆ. ಸೋಮಶೇಖರ ರೆಡ್ಡಿ ಎ2, ಶ್ರೀರಾಮುಲು ಎ3, ಪಾಲಿಕೆ ವಿರೋಧ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ ಅವರನ್ನು ಎ4 ಮಾಡಲಾಗಿದ್ದು, ಒಟ್ಟು 11 ಮಂದಿ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಒಂದೇ ದಿನ ಎರಡು ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಅವ್ವಂಬಾವಿಯ ನಿವಾಸದ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ವಿವರ : ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ ಘಟನೆ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಜ.3ರಂದು ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಜನಾರ್ಧನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ಧನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬ್ಯಾನರ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅವಂಬಾವಿ ಏರಿಯಾದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ.
ಬಾಘಾ ಜತಿನ್ ಎಂಬ ಕ್ರಾಂತಿ ಪಥದ ರೂವಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!
ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಬಾವುಟ ಅಂಟಿಸಿಕೊಂಡು ಬ್ಯಾಟಿಂಗ್ ಮಾಡಿದ ಕ್ರಿಕೆಟಿಗ - ಸಮನ್ಸ್ ದೂರು
ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಫರ್ಖಾನ್ ಭಟ್ ಹೆಲ್ಮೆಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಅಂಟಿಸಿಕೊಂಡು ಆಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಟಗಾರನಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಈ ಟೂರ್ನಿಯನ್ನು ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಳ್ಳಾರಿ ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ದೂರು ದಾಖಲು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇಳೆ ಬ್ಯಾನರ್ ತೆರವು ವಿಚಾರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಈ ಘಟನೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳುಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ: ಶಾಸಕ ಸುರೇಶ್ಕುಮಾರ್ಗೆ ಪ್ರಧಾನಿ ಮೋದಿ ಕರೆ, ಅಭಿನಂದನೆ
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಈ ಸಾಹಸ ಮಾಡಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ. ಈ ಯಾತ್ರೆ ಫಿಟ್ನೆಸ್ ಸಂದೇಶವನ್ನು ನೀಡಿದೆ.
ಕಾರ್ಕಳ : ಆಸಿಯಾ ಎಂ. ಯೂಸುಫ್ ನಿಧನ
ಮಂಗಳೂರು : ಹೆಸರಾಂತ ಬಿಲ್ಡರ್, ಇನ್ - ಲ್ಯಾಂಡ್ ಬಿಲ್ಡರ್ಸ್ ನ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಸಿರಾಜ್ ಅಹಮದ್ ಅವರ ತಾಯಿ ಆಸಿಯಾ ಎಂ.ಯೂಸುಫ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಗುರುವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಇವರು ದಿವಂಗತ ಗಂಜಿಮಠ ಮುಹಮ್ಮದ್ ಯೂಸುಫ್ ಅವರ ಪತ್ನಿ. ಮೃತರು ಆರು ಮಂದಿ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶುಕ್ರವಾರ ಜುಮಾ ನಮಾಝ್ ನ ಬಳಿಕ ಕಾರ್ಕಳದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆಸಿಯಾ ಎಂ. ಯೂಸುಫ್ ಅವರ ನಿಧನಕ್ಕೆ ಮಾಧ್ಯಮ ಕಮ್ಯುನಿಕೇಷನ್ಸ್ ನ ಅಧ್ಯಕ್ಷ ಎಚ್ ಎಂ ಅಫ್ರೋಜ್ಹ್ ಅಸಾದಿ, ಖ್ಯಾತ ವೈದ್ಯ ಡಾ. ಮೊಹಮ್ಮದ್ ಇಸ್ಮಾಯಿಲ್ ಎಚ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಸ್ವಿಟ್ಜರ್ಲೆಂಡ್ನ ಕ್ರ್ಯಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷಾಚರಣೆ ವೇಳೆ ಭೀಕರ ಅಗ್ನಿ ದುರಂತ ಸಂಭವಿಸಿ 47 ಮಂದಿ ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿಯ ಅನುಮಾನ ತಳ್ಳಿಹಾಕಿರುವ ಅಧಿಕಾರಿಗಳು, ಬೆಂಕಿಯಿಂದ ಅವಘಡ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದೇಶಾದ್ಯಂತ 5 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಜರ್ಮನಿ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಢ; ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್ ರೆಡ್ಡಿ ಸಾವು!
ವಿದೇಶಗಳಲ್ಲಿ ವಿವಿಧ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳ ಸಾವು ಮುಂದುವರೆದಿದ್ದು, ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಅವಘಢದಲ್ಲಿ ತೆಲಂಗಾಣ ಮೂಲದ ಹೃತಿಕ್ ರೆಡ್ಡಿ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಬೆಂಕಿಯಿಂದ ಪಾರಾಗಲು 25 ವರ್ಷದ ಹೃತಿಕ್ ಅಪಾರ್ಟ್ಮೆಂಟ್ ಮಹಡಿಯಿಂದ ಜಿಗಿದಿದ್ದರಿಂದ, ತಲೆಗೆ ಪೆಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣ ವಿದ್ಯಾರ್ಥಿಯ ಮೃತದೇಹವನ್ನು ಭಾರತಕ್ಕೆ ಕರೆತರಲು, ಪೋಷಕರು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಇಲ್ಲಿದೆ ಮಾಹಿತಿ.
ಭದ್ರೆ ಬಂದರೂ ರೈತರಿಗಿಲ್ಲ ನೀರು ; ಹೆಚ್ಚುವರಿ ನೀರು ವೇದಾವತಿಗೆ ಚೆಲ್ಲುವ ಅನಿವಾರ್ಯ
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸ ವರ್ಷದಲ್ಲಿ ಹರಿಯುವ ಭರವಸೆ ನೀಡಲಾಗಿದೆ. ಆದರೆ, ಅಬ್ಬಿನ ಹೊಳಲು ಬಳಿ ಬಾಕಿ ಕಾಮಗಾರಿ, ಗೋನೂರು ಅಕ್ವಾಡಕ್ಟ್ ನಿರ್ಮಾಣ, ಪೈಪ್ಲೈನ್ ಅಳವಡಿಕೆ, ಪಂಪ್ ಹೌಸ್ಗಳ ನಿರ್ಮಾಣ ಸೇರಿದಂತೆ ಹಲವು ಪೂರಕ ಕಾಮಗಾರಿಗಳು ಪೂರ್ಣಗೊಳ್ಳದ ಕಾರಣ ರೈತರಿಗೆ ಪ್ರಯೋಜನವಾಗುತ್ತಿಲ್ಲ.
ಕೋಗಿಲು ಅಕ್ರಮದಲ್ಲಿ ನೆಲೆ ಕಳೆದುಕೊಂಡವರಿಗೆ ಮನೆ: ಬಿಜೆಪಿಯಿಂದ ಜ.5 ರಂದು ಬೃಹತ್ ಪ್ರತಿಭಟನೆ
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ತೆರವು ವಿವಾಧ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದ್ದು, ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು. ಯಾರು ಅರ್ಹರು ಇದ್ದಾರೋ ಅವರಿಗೆ ವ್ಯವಸ್ಥೆ ಮಾಡಲಾಗುವುದು. 11.20 ಲಕ್ಷ ಮೌಲ್ಯದಲ್ಲಿ ಮನೆ ನಿರ್ಮಿಸಿಕೊಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಸರ್ಕಾರದ
ಸಿಂಧನೂರು | ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ: ಭವ್ಯ ಪಥಸಂಚಲನ
ಸಿಂಧನೂರು : ಭೀಮಾ ಕೋರೆಗಾಂವ್ ಯುದ್ಧದ 208ನೇ ವಿಜಯೋತ್ಸವದ ಅಂಗವಾಗಿ, ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿಯ ವತಿಯಿಂದ ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ, ಪಿಡಬ್ಲ್ಯೂಡಿ ಕ್ಯಾಂಪ್ನ ಅಂಬೇಡ್ಕರ್ ವೃತ್ತದವರೆಗೆ ಗುರುವಾರ ಜೈಭೀಮ್ ರೆಜಿಮೆಂಟ್ ಪಥಸಂಚಲನವನ್ನು ಹಮ್ಮಿಕೊಳ್ಳಲಾಯಿತು. ನೂರಾರು ಕಾರ್ಯಕರ್ತರು ಜೈಭೀಮ್ ಘೋಷವಾಕ್ಯ ಅಂಕಿತಗೊಂಡ ನೀಲಿ ಧ್ವಜಗಳನ್ನು ಹಿಡಿದು, ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರ ಘೋಷಣೆಗಳನ್ನು ಕೂಗುತ್ತ ಪಥಸಂಚಲನ ನಡೆಸಿದರು. ಪಥಸಂಚಲನವು ಗಾಂಧಿ ಸರ್ಕಲ್, ಕನಕದಾಸ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಹಾಗೂ ಯಲ್ಲಮ್ಮ ಗುಡಿಯ ಮುಂಭಾಗದ ಹೆದ್ದಾರಿ ಮೂಲಕ ಪಿಡಬ್ಲ್ಯೂಡಿ ಕ್ಯಾಂಪ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂತ್ಯಗೊಂಡಿತು. ಮಕ್ಕಳ ತಜ್ಞ ವೈದ್ಯ ಡಾ.ಕೆ.ಶಿವರಾಜ್ ಚಾಲನೆ ನೀಡಿ ಮಾತನಾಡಿ, ದಲಿತ ಸಂಘಟನೆಗಳು ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದು ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಬೃಹತ್ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು. ಆಚರಣಾ ಸಮಿತಿಯ ಸಂಚಾಲಕ ಎಂ.ಗಂಗಾಧರ್, ಹಿರಿಯ ಹೋರಾಟಗಾರ ಡಿ.ಎಚ್.ಪೂಜಾರ್, ಚಲವಾದಿ ಮಹಾಸಭಾದ ಅಧ್ಯಕ್ಷ ಡಾ.ರಾಮಣ್ಣ ಗೋನವಾರ ಹಾಗೂ ಉಪನ್ಯಾಸಕ ನಾರಾಯಣ ಬೆಳಗುರ್ಕಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪಥಸಂಚಲನದಲ್ಲಿ ಮುಖಂಡರಾದ ಸೈಯದ್ ಹಾರೂನ್ ಸಾಹೇಬ್ ಜಾಹಗೀರ್ ದಾರ್, ಎಂ.ಮರಿಯಪ್ಪ, ಅಮರೇಶ ಗಿರಿಜಾಲಿ, ಮೌನೇಶ ಜಾಲವಾಡಗಿ, ಪ್ರವೀಣ ಧುಮತಿ, ಡಾ.ನಾಗವೇಣಿ ಪಾಟೀಲ್, ಬಸವರಾಜ ಬಾದರ್ಲಿ, ಶಂಕರ ಗುರಿಕಾರ, ನಿರುಪಾದಿ ಸಾಸಲಮರಿ, ಹೊನ್ನೂರು ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಂದಕಾಲತ್ತಿಲ್ ರಾಹುಲ್ ದ್ರಾವಿಡ್ ತನಗೆ ನೀಡಿದ್ದ ಸಲಹೆಯನ್ನು ಈಗ ಶುಭಮನ್ ಗಿಲ್ ಗೆ ನೆನಪಿಸಿದ ಇರ್ಫಾನ್ ಪಠಾಣ್!
Irfan Pathan Advice To Shubman Gill- ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ತಾವು ಟೀಂ ಇಂಡಿಯಾಗೆ ಆಯ್ಕೆ ಆದ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗರಾಗಿದ್ದ ರಾಹುಲ್ ದ್ರಾವಿಡ್ ಅವರು ಹೇಳಿದ್ದ ಕಿವಿಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಶುಭಮನ್ ಗಿಲ್ ಅವರೂ ಅದನ್ನು ಪಾಲಿಸುವಂತೆ ತಿಳಿಸಿದ್ದಾರೆ. ಮಾತ್ರವಲ್ಲದೆ ನಮ್ಮ ಕಣ್ಣೆದುರೇ ಮಹಾನ್ ಆಟಗಾರನಾಗಿ ಬೆಳೆದಿರುವ ವಿರಾಟ್ ಕೊಹ್ಲಿ ಅವರ ಹಾದಿಯನ್ನು ಅನುಸರಿಸುವಂತೆ ತಿಳಿಸಿದ್ದಾರೆ.
ಶಾಮನೂರು ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಾ ಕಮಲ? ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿಯ ಸಂಭಾವ್ಯ 4 ಅಭ್ಯರ್ಥಿಗಳು?
Davanagere South By Election : ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಲಿಂಗಾಯತ ಸಮುದಾಯದ ಲೀಡರ್ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ, ದಾವಣಗರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಆಗಲೇ, ಬಿಜೆಪಿ ಟಿಕೆಟಿಗಾಗಿ ಲಾಬಿ ಆರಂಭವಾಗಿದೆ. ಆದರೆ, ಸಾಕಷ್ಟು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದ್ದರೂ, ಒಬ್ಬರ ಹೆಸರು ಮಂಚೂಣಿಯಲ್ಲಿದೆ.
ಕಲುಷಿತ ನೀರಿನಲ್ಲಿ ಕಂಡ ಸ್ವಚ್ಛ ನಗರದ ಅಸಲಿ ಮುಖ
ಹೊಸ ವರ್ಷದ ಆಗಮನದ ಹೊತ್ತಿಗೆ ಮದ್ಯದ ಹೊಳೆ ಹರಿಯುವುದು ಸಾಮಾನ್ಯ. ಮದ್ಯ ಸೇವಿಸಿ ಸಂಭವಿಸುವ ಅವಘಡಗಳು ಮಾಧ್ಯಮಗಳಲ್ಲಿ ಪ್ರತೀ ವರ್ಷವ ಕೊನೆಯಲ್ಲಿ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿರುತ್ತವೆ. ಆದರೆ ಈ ಬಾರಿ ಮಾಧ್ಯಮಗಳಲ್ಲಿ ಹೊಸ ವರ್ಷದ ದಿನ ‘ನೀರು ಕುಡಿದು ಸತ್ತವರು’ ಸುದ್ದಿಯಾದರು. ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಸತತ ಎಂಟು ವರ್ಷಗಳಿಂದ ಗುರುತಿಸಲ್ಪಡುತ್ತಿದೆ. ಆದರೆ ಈ ಸ್ವಚ್ಛ ನಗರದ ಅಸಲಿ ಮುಖ ಇದೀಗ ಬಹಿರಂಗವಾಗಿದೆ. ಇಂದೋರ್ನ ಭಗೀರಥ ಪುರ ಪ್ರದೇಶದಲ್ಲಿ ಕಲುಷಿತ ನೀರನ್ನು ಕುಡಿದು 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ ಹೆಚ್ಚಿದೆ, ಆದರೆ ಸರಕಾರ ಮುಚ್ಚಿಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನೀರು ಕುಡಿದು ಆಸ್ಪತ್ರೆಯಲ್ಲಿ ನೂರಾರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಗೆ ದಾಖಲಾಗದ ಅಸ್ವಸ್ಥರ ಸಂಖ್ಯೆಯೂ ದೊಡ್ಡದಿದೆ. ಅವರ ಲೆಕ್ಕ ಅಧಿಕೃತವಾಗಿ ಇನ್ನೂ ಸರಕಾರಕ್ಕೆ ಸಿಕ್ಕಿಲ್ಲ. ಯಾವುದೇ ಕಳ್ಳಭಟ್ಟಿ ಸಾರಾಯಿ ಕುಡಿದಾಗ ಸಂಭವಿಸಬಹುದಾದ ದುರಂತ ಇಂದೋರ್ನಲ್ಲಿ ನೀರು ಕುಡಿದು ಸಂಭವಿಸಿದೆ. ಭಾರತದ ಅತ್ಯಂತ ಸ್ವಚ್ಛ ನಗರದ ಸ್ಥಿತಿಯೇ ಈ ರೀತಿಯಾದರೆ ಇನ್ನು ಉಳಿದ ನಗರಗಳ ಗತಿಯೇನು? ಎಂದು ಜನರು ಕೇಳುವಂತಾಗಿದೆ. ಕಾಕತಾಳೀಯ ಎಂಬಂತೆ ದುರಂತ ಸಂಭವಿಸಿದ ಪ್ರದೇಶದ ಹೆಸರೇ ಭಗೀರಥ ಪುರ. ಅತ್ಯಂತ ಪವಿತ್ರ ನದಿಯಾದ ಗಂಗೆಯನ್ನು ಭೂಮಿಗೆ ತಂದವನೇ ಭಗೀರಥ ಮುನಿ ಎನ್ನುವ ನಂಬಿಕೆ ಭಾರತದಲ್ಲಿದೆ. ಪುರಾಣದ ಕತೆಯ ಪ್ರಕಾರ, ನೀರಿನ ಹಾಹಾಕಾರ ಎದ್ದಾಗ ಸ್ವರ್ಗದಲ್ಲಿದ್ದ ಗಂಗೆಯನ್ನು ಶತ ಪ್ರಯತ್ನದಿಂದ ಭೂಮಿಗೆ ತಂದವನು ಭಗೀ ರಥ ಮುನಿ. ಅಂತಹ ಭಗೀರಥನ ಹೆಸರನ್ನು ಹೊಂದಿದ ಪ್ರದೇಶದಲ್ಲಿ ನೀರನ್ನು ಕುಡಿದು ಸಾವಿರಾರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನುವುದು ಭಾರತದ ಇಂದಿನ ಸ್ಥಿತಿಗೆ ಒಂದು ವಿಕಟ ರೂಪಕವೇ ಸರಿ. ನಿಜಕ್ಕೂ ಎಷ್ಟು ಸಾವುಗಳು ಸಂಭವಿಸಿವೆ ಎನ್ನುವುದನ್ನು ಜಿಲ್ಲಾಡಳಿತ ಬಹಿರಂಗ ಪಡಿಸುತ್ತಿಲ್ಲ. ಮುಖ್ಯಮಂತ್ರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದ್ದರೆ, ಮೇಯರ್ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ. ಸ್ಥಳೀಯರು ಮಾತ್ರ 13ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಜನರು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವ ಕೈಲಾಸ್ ವಿಜಯ ವರ್ಗೀಯ ಅವರು ಈ ಸಾವಿನ ಹಿಂದಿನ ಕಾರಣಗಳನ್ನು ಚರ್ಚಿಸುವುದಕ್ಕೆ ಸಿದ್ಧರಿಲ್ಲ. ‘‘ತಪ್ಪು ನಡೆದಿದೆ ಹೌದು. ಆದರೆ ಅದನ್ನೇ ಚರ್ಚಿಸುವ ಬದಲು ಮೊದಲು ರೋಗಿಗಳು ಚೇತರಿಸಿಕೊಳ್ಳುವುದರ ಕಡೆಗೆ ಗಮನ ನೀಡಬೇಕು’’ ಎಂದು ಜಾರಿಕೊಳ್ಳುತ್ತಿದ್ದಾರೆ. ಕನಿಷ್ಠ ರೋಗಿಗಳ ಚಿಕಿತ್ಸೆಯ ಕಡೆಗಾದರೂ ಸರಕಾರ ಗಮನವನ್ನು ನೀಡಿದೆಯೇ ಎಂದರೆ ಅದೂ ಇಲ್ಲ. ನೀರು ಕುಡಿದು ಅಸ್ವಸ್ಥರಾಗಿರುವ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅಲ್ಲಿನ ದುಬಾರಿ ಬಿಲ್ನಿಂದಾಗಿ ಅವರು ತತ್ತರಿಸಿದ್ದಾರೆ. ಸರಕಾರ ಚಿಕಿತ್ಸೆಗೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದ್ದರೂ, ವೈದ್ಯಕೀಯ ವೆಚ್ಚಗಳ ಮರುಪಾವತಿ ಇನ್ನೂ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಬೇಕಾಗಿದ್ದ ಸಚಿವರು, ಪತ್ರಕರ್ತರ ಮೇಲೆಯೇ ಎರಗಿ ಬಿದ್ದಿದ್ದಾರೆ. ಕೆಟ್ಟ ಪದವನ್ನು ಬಳಸಿ ಪತ್ರಕರ್ತರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಚಿಕಿತ್ಸೆ ನೀಡುವುದು ಮಾತ್ರವಲ್ಲ, ಜನರಿಗೆ ಪರ್ಯಾಯ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸರಕಾರ ಮಾಡಬೇಕು. ಅದರಲ್ಲೂ ಸಚಿವರು ವಿಫಲರಾಗಿದ್ದಾರೆ. ಮೃತರ ಕುಟುಂಬವನ್ನು ಭೇಟಿ ಮಾಡುವ ಹೊಣೆಗಾರಿಕೆಯಿಂದ ಸ್ಥಳೀಯ ಶಾಸಕರು ನುಣುಚಿಕೊಳ್ಳುತ್ತಿದ್ದಾರೆ. ಜನರನ್ನು ಎದುರುಗೊಳ್ಳಲು ಶಾಸಕರು, ಸಚಿವರು ಹಿಂಜರಿಯುತ್ತಿದ್ದಾರೆ. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ. ಆದುದರಿಂದ ಸಂತ್ರಸ್ತರ ಭೇಟಿಗೆ ಸಿದ್ಧರಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದ ಈ ಭಾಗದಲ್ಲಿ ಹಲವರು ಈ ಹಿಂದೆ ಅಸ್ವಸ್ಥರಾದಾಗಲೆಲ್ಲ ಆ ಪ್ರಕರಣವನ್ನು ನಿರ್ಲಕ್ಷಿಸಲಾಗಿದೆ. ‘‘ಅವರು ಅಸ್ವಸ್ಥರಾಗಿರುವುದು ಬೇರೆಯೇ ಕಾರಣಕ್ಕಾಗಿ’’ ಎಂದು ಜನರನ್ನು ಬಾಯಿ ಮುಚ್ಚಿಸಲಾಗಿದೆ. ಏಕಾಏಕಿ ನೂರಾರು ಪ್ರಕರಣಗಳು ಬಹಿರಂಗವಾಗುತ್ತಿದ್ದಂತೆಯೇ ಸರಕಾರ ಎಚ್ಚೆತ್ತುಕೊಂಡಿದೆ. ಇಂದೋರ್ನ ದುರಂತ ಈ ದೇಶ ಭವಿಷ್ಯದಲ್ಲಿ ಎದುರಿಸಲಿರುವ ಇನ್ನೊಂದು ಆಪತ್ತನ್ನು ಮುನ್ನೆಲೆಗೆ ತಂದಿದೆ. ದೇಶದಲ್ಲೀಗ ಚರ್ಚೆಯಲ್ಲಿರುವುದು ವಾಯು ಮಾಲಿನ್ಯ. ದಿಲ್ಲಿ, ಮುಂಬೈ, ಕೋಲ್ಕತಾದಂತಹ ನಗರಗಳು ಉಸಿರಾಡುವುದಕ್ಕೆ ಒದ್ದಾಡುತ್ತಿವೆ. ದಿಲ್ಲಿಯ ಸ್ಥಿತಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದೇಶದ ವಾಯುಮಾಲಿನ್ಯ ಕಳಪೆಯಾಗಿರುವುದನ್ನು, ಸೂಚ್ಯಂಕ ಪಾತಾಳ ತಲುಪಿರುವುದನ್ನು ಈಗಾಗಲೇ ವಿಶ್ವಸಂಸ್ಥೆ ಬಹಿರಂಗಗೊಳಿಸಿದೆ. ವಾಯುಮಾಲಿನ್ಯದಿಂದಾಗಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ. ಅಸ್ತಮಾ ಉಲ್ಬಣಿಸುತ್ತಿದೆ. ಆದರೆ ಸರಕಾರ ಇದನ್ನು ಮುಚ್ಚಿ ಡುವ, ವರದಿಗಳನ್ನು ಅಲ್ಲಗಳೆಯುವ ಮೂಲಕ ತನ್ನ ಮಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಭಾರತದಲ್ಲಿ ವಾಯುಮಾಲಿನ್ಯದಷ್ಟೇ ಅಪಾಯಕಾರಿಯಾಗಿದೆ ಕಲುಷಿತ ಕುಡಿಯುವ ನೀರಿನ ಸಮಸ್ಯೆ. ಈ ದೇಶದಲ್ಲಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳೆಲ್ಲ ದೊಡ್ಡ ಮಟ್ಟದಲ್ಲಿ ಕಲುಷಿತಗೊಂಡಿವೆ. ಗಂಗಾ, ಯಮುನಾ ನದಿಗಳಷ್ಟೇ ಅಲ್ಲ, ಕರ್ನಾಟಕದಲ್ಲೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ನೀರಿನ ಪರೀಕ್ಷೆಯಲ್ಲಿ ಬಹುತೇಕ ನದಿಗಳು ಅನುತ್ತೀರ್ಣಗೊಂಡಿವೆ. ರಾಜ್ಯದ ಸುಮಾರು 12 ನದಿಗಳ ಪೈಕಿ ಯಾವ ನದಿಗಳ ನೀರೂ ನೇರವಾಗಿ ಕುಡಿಯುವುದಕ್ಕೆ ಯೋಗ್ಯವಲ್ಲ ಎನ್ನುವ ವರದಿ ಹೊರಬಿದ್ದಿದೆ. ನೇರವಾಗಿ ಕುಡಿಯುವುದಕ್ಕೆ ಯೋಗ್ಯವಾಗಿರುವ ನದಿಯ ನೀರನ್ನು ಎ ದರ್ಜೆಗೆ ಸೇರಿಸಲಾಗುತ್ತದೆ. ರಾಜ್ಯದ ಯಾವೊಂದು ನದಿಯೂ ಎ ದರ್ಜೆಯೊಳಗಿಲ್ಲ. ಶುದ್ಧೀಕರಿಸಿ ಕುಡಿಯಬಹುದಾದ ಬಿ ದರ್ಜೆಯ ನದಿಯಾಗಿ ನೇತ್ರಾವತಿಯನ್ನು ಮಾತ್ರ ಗುರುತಿಸಲಾಗಿದೆ. ಜೀವನದಿ ಎಂದು ಕರೆಯುವ ಕಾವೇರಿ ಸೇರಿದಂತೆ ತುಂಗಾ, ಭದ್ರಾ, ಕೃಷ್ಣಾ ಈ ಎಲ್ಲಾ ನದಿಗಳು ಸಿ ದರ್ಜೆಗೆ ಸೇರಿವೆ. ಡಿ ದರ್ಜೆಗೆ ಸೇರಿರುವ ಭೀಮಾ, ಅರ್ಕಾವತಿ ನದಿಗಳ ನೀರನ್ನು ಸಂಸ್ಕರಿಸಿ ಬಳಸುವುದೂ ಸಾಧ್ಯವಿಲ್ಲ. ಭಾರತದ ಶೇ. 70ರಷ್ಟು ನದಿ ನೀರು ಕುಡಿಯುವುದಕ್ಕೆ ಅನರ್ಹ ವಾಗಿದೆ. ಭಾರತವು ಜಲಗುಣಮಟ್ಟ ಸೂಚ್ಯಂಕದಲ್ಲಿ 122 ದೇಶಗಳಲ್ಲಿ 120ನೇ ಸ್ಥಾನವನ್ನು ಹೊಂದಿದೆ. ನದಿಗಳನ್ನು ದೇವತೆಗಳೆಂದು ಪೂಜಿಸುವ ಭಾರತಕ್ಕೆ ಇದು ಭಾರೀ ಅವಮಾನವೇ ಸರಿ. ಇಂದೋರ್ ದುರಂತ ಒಂದು ಸಣ್ಣ ಸೂಚನೆ ಮಾತ್ರ. ಭವಿಷ್ಯದಲ್ಲಿ ಇಂತಹ ದುರಂತಗಳಿಗೆ ಎಲ್ಲ ನಗರಗಳೂ ಸಾಕ್ಷಿಯಾಗಲಿವೆ. ಪ್ರತಿ ದಿನ ಪತ್ರಿಕೆಗಳ ಮುಖಪುಟದಲ್ಲಿ ‘ಕಲುಷಿತ ಕುಡಿಯುವ ನೀರಿಗೆ ಬಲಿ’ಯಾದವರ ಅಂಕಿಗಳು ರಾರಾಜಿಸಲಿವೆ. ಈ ಕಲುಷಿತ ನೀರು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲಿದೆ. ಉಸಿರಾಡುವ ಗಾಳಿಯ ಜೊತೆಗೆ ಕುಡಿಯುವ ನೀರೂ ವಿಷವಾದರೆ ಈ ದೇಶದ ಗತಿಯೇನು? ಪರಿಸ್ಥಿತಿ ಕೈಮೀರುವ ಮೊದಲು ಸರಕಾರ ಮಾತ್ರವಲ್ಲ ಜನರೂ ಎಚ್ಚೆತ್ತುಕೊಳ್ಳಬೇಕಾಗಿದೆ.
ಹಾಲಿ ಸಚಿವರಿಗೆ ಗೇಟ್ಪಾಸ್, ಶೇ. 50 ರಷ್ಟು ಹೊಸ ಮುಖಗಳಿಗೆ ಅವಕಾಶ: ಸಂಪುಟ ಪುನರ್ ರಚನೆಗೆ ಮೊದಲು ಭಾರಿ ಡಿಮ್ಯಾಂಡ್!
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಚಾರ ದೇಶದ ಗಮನ ಸೆಳೆಯುತ್ತಿದೆ, ಕಾರಣ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿರುವ ಕೆಲವೇ ಕೆಲವು ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದು. ಹೀಗಿದ್ದಾಗ ಕಾಂಗ್ರೆಸ್ ನಾಯಕರಿಗೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಕುರಿತು ದೊಡ್ಡ ತಲೆನೋವು ಶುರುವಾಗಿದೆ. ಅದ್ರಲ್ಲೂ ಸ್ವಲ್ಪ ಎಡವಟ್ಟು ಮಾಡಿಕೊಂಡರೂ ಭವಿಷ್ಯದಲ್ಲಿ ಇದೆಲ್ಲಾ ಸರ್ಕಾರದ ಉಳಿವಿಗೆ
ಮಲೆನಾಡಿನಲ್ಲಿ ಬಾಂಗ್ಲಾ ವಲಸಿಗರು ; ಗಡಿಪಾರಿಗೆ ಸಂಘಟನೆಗಳ ಒತ್ತಾಯ
ಸಕಲೇಶಪುರ ಭಾಗದ ಪಶ್ಚಿಮ ಘಟ್ಟದ ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 30 ಸಾವಿರ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಕಡಿಮೆ ಕೂಲಿಗೆ ಲಭ್ಯರಾಗುವ ಕಾರಣಕ್ಕೆ ಇವರನ್ನು ಅಕ್ರಮವಾಗಿ ನೇಮಿಸಿಕೊಳ್ಳಲಾಗುತ್ತಿದ್ದು, ನಕಲಿ ಆಧಾರ್ ದಂಧೆಯೂ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
SSLC Preparatory Exam: ಎಸ್ ಎಸ್ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ 2026 ರ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು: ಕರ್ನಾಟಕ ರಾಜ್ಯದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-1 ಅನ್ನು ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ನಡೆಸಲು ಮಂಡಳಿ ಆದೇಶಿಸಿದೆ. ಈ ಪರೀಕ್ಷೆ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ತಯಾರಾಗಲು ಅತ್ಯಂತ ಮಹತ್ವದ ಮಾರ್ಗದರ್ಶಕವಾಗಿರುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ಪರೀಕ್ಷೆಗಳು
ನಾಸ್ಟ್ರಾಡಾಮಸ್ನ 2026ರ ಭವಿಷ್ಯವಾಣಿ; ಒಂದು ಈಗಾಗಲೇ ಸತ್ಯವಾಗಿದೆ, ಏಳು ತಿಂಗಳ ಯುದ್ಧ ಆರಂಭವಾಗಲಿದೆ? ನಂಬಲಸಾಧ್ಯ!
ಭವಿಷ್ಯವಾಣಿಗಳನ್ನು ನಂಬುವ ಅಥವಾ ಆ ಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗೆ ನಾಸ್ಟ್ರಾಡಾಮಸ್ನ ಪರಿಚಯ ಇದ್ದೇ ಇರುತ್ತದೆ. 16ನೇ ಶತಮಾನದ ಜನಪ್ರಿಯ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್, ತನ್ನ ಪದ್ಯಗಳ ಮೂಲಕ ನುಡಿದಿರುವ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ ಎಂದು ಆತನ ಅಭಿಮಾನಿಗಳು ನಂಬುತ್ತಾರೆ. ಅದೇ ರೀತಿ 2026ರ ಹೊಸ ವರ್ಷದ ಬಗ್ಗೆಯೂ ನಾಸ್ಟ್ರಾಡಾಮಸ್ ಕೆಲವು ಭವಿಷ್ಯವಾಣಿಗಳನ್ನು ನುಡಿದಿದ್ದು, ಆತನ ಪದ್ಯರೂಪದ ಭವಿಷ್ಯವಾಣಿಗಳನ್ನು ಅನುಯಾಯಿಗಳು ವಿವಿಧ ಜಾಗತಿಕ ವಿದ್ಯಮಾನಗಳೊಂದಿಗೆ ಹೋಲಿಕೆ ಮಾಡಲಾರಂಭಿಸಿದ್ದಾರೆ. ಇಲ್ಲಿದೆ ಮಾಹಿತಿ.
ಕೊನೆಗೂ 'ಸಕಾಲ' ದಲ್ಲಿ ಜಿಗಿತ ಕಂಡ ಮೈಸೂರು
ವಿಜಯ ಕರ್ನಾಟಕ ವರದಿಯ ನಂತರ ಮೈಸೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸಕಾಲ ಯೋಜನೆಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 96.94% ಅರ್ಜಿಗಳನ್ನು ವಿಲೇವಾರಿ ಮಾಡಿ 4ನೇ ಸ್ಥಾನಕ್ಕೇರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಸಾಧನೆ ಸುಧಾರಿಸಿದೆ. ಅಧಿಕಾರಿಗಳ ನಿರಂತರ ಸಭೆ ಮತ್ತು ವಾಟ್ಸಾಪ್ ಗ್ರೂಪ್ ಮೂಲಕ ಅರ್ಜಿ ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಡಿಸೆಂಬರ್ನಲ್ಲಿ 1.52 ಲಕ್ಷ ಅರ್ಜಿಗಳು ಬಂದಿದ್ದು, ಬಹುತೇಕ ಅರ್ಜಿಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಿವೆ.
ಸಾಮಾಜಿಕ ಭದ್ರತೆಗಾಗಿ ಗಿಗ್ ಕಾರ್ಮಿಕರಿಗೆ 90 ದಿನಗಳ ಉದ್ಯೋಗ ಕಡ್ಡಾಯ: ಸರ್ಕಾರ ಪ್ರಸ್ತಾವನೆ
ಹೊಸದಿಲ್ಲಿ: ಹೊಸ ಸಾಮಾಜಿಕ ಭದ್ರತಾ ಸಂಹಿತೆಯಡಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಗಿಗ್ ಹಾಗೂ ಪ್ಲಾಟ್ಫಾರಂ ಕಾರ್ಮಿಕರು ಒಂದು ಹಣಕಾಸು ವರ್ಷದಲ್ಲಿ ಒಬ್ಬ ಗುತ್ತಿಗೆದಾರನ ಜತೆ ಕನಿಷ್ಠ 90 ದಿನ ಕೆಲಸ ಮಾಡುವುದನ್ನು ಕಡ್ಡಾಯಪಡಿಸುವ ಕರಡು ನಿಯಮಾವಳಿಯನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಲವು ಗುತ್ತಿಗೆದಾರರಡಿ ಕೆಲಸ ಮಾಡುವವರು ಕನಿಷ್ಠ 120 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಈ ನಿಯಮಾವಳಿಯಡಿ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡು ಎಷ್ಟೇ ಪ್ರಮಾಣದ ಆದಾಯ ಗಳಿಸಿದರೂ, ಆದಾಯ ಗಳಿಸಲು ಆರಂಭಿಸಿದ ದಿನದಿಂದಲೇ ಅವರನ್ನು ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಬೇರೆ ಬೇಗೆ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ದಿನಗಳನ್ನು ಎಲ್ಲ ಪ್ಲಾಟ್ಫಾರಂಗಳಡಿಯೂ ಕ್ರೋಢೀಕೃತವಾಗಿ ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ ಒಬ್ಬ ಗಿಗ್ ಅಥವಾ ಪ್ಲಾಟ್ಫಾರಂ ಕಾರ್ಮಿಕ ಮೂವರು ಗುತ್ತಿಗೆದಾರರಡಿ ಒಂದೇ ದಿನ ಕಾರ್ಯ ನಿರ್ವಹಿಸಿದಲ್ಲಿ ಇದನ್ನು ಮೂರು ಕೆಲಸದ ದಿನ ಎಂದು ಪರಿಗಣಿಸಲಾಗುತ್ತದೆ. ಅರ್ಹ ಗಿಗ್ ಅಥವಾ ಪ್ಲಾಟ್ಫಾರಂ ಕಾರ್ಮಿಕರನ್ನು ಗುತ್ತಿಗೆದಾರರು ನೇರವಾಗಿ ನೇಮಿಸಿಕೊಂಡರೆ ಅಥವಾ ಸಹ ಕಂಪನಿ, ಉಪಕಂಪನಿ ಅಥವಾ ಎಲ್ಎಲ್ಪಿ ಇಲ್ಲವೇ ಇತರರ ಮೂಲಕ ನೇಮಕ ಮಾಡಿಕೊಂಡರು ಕೂಡಾ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೊಸ ಕಾರ್ಮಿಕ ಸಂಹಿತೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ, ಜೀವವಿಮೆ ಹಾಗೂ ವೈಯಕ್ತಿಕ ಅಪಘಾತ ವಿಮೆ ಕಡ್ಡಾಯ ಹಾಗೂ ಸರ್ಕಾರ ವ್ಯವಸ್ಥೆ ಮಾಡುವ ಇತರ ಸಾಮಾಜಿಕ ಭದ್ರತಾ ಕ್ರಮಗಳು ಕಡ್ಡಾಯ. ಕಾರ್ಮಿಕ ಸಚಿವಾಲಯ ಈಗಾಗಲೇ ಗಿಗ್ ಕಾರ್ಮಿಕರನ್ನು ಆಯುಷ್ಮಾನ್ ಭಾರತದ ಭಾಗವಾಗಿ ಇ-ಶ್ರಮ್ ಪೋರ್ಟೆಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಆರಂಭಿಸಿದೆ.
India Vs Pakistan-ಕ್ರಿಕೆಟ್ ನ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ 2026ರಲ್ಲಿ ಎಷ್ಟು ಬಾರಿ?
Indo Pak Cricket Rivalry- ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಮಜಾವೇ ಬೇರೆ. 2026ರಲ್ಲಿ ಇತ್ತಂಡಗಳು ಎದುರಾದಾಗಲೆಲ್ಲಾ ಭಾರತದ್ದೇ ಮೇಲುಗೈ ಆಗಿತ್ತು. ಅಂಡರ್ 19 ಕ್ರಿಕಟ್ ನಲ್ಲಿ ಮಾತ್ರ ಪಾಕಿಸ್ತಾನ ಗೆಲುವಿನ ನಗೆ ಬೀರಿತ್ತು. ಇತ್ತಂಡಗಳು 2026 ರಲ್ಲೂ ಮೂರು ಐಸಿಸಿ ಟೂರ್ವಿಗಳಲ್ಲಿ ಮುಖಾಮುಖಿಯಾಗಲಿವೆ. ಪುರುಷರ ಟಿ20 ವಿಶ್ವಕಪ್, ಮಹಿಳಾ ಟಿ20 ವಿಶ್ವಕಪ್ ಮತ್ತು ಅಂಡರ್ 19 ಪುರುಷರ ವಿಶ್ವಕಪ್ಗಳಲ್ಲಿ ಪರಸ್ಪರ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿವೆ.
ಸರಕಾರಿ ಸೇವೆಗೆ ನೇಮಕಗೊಂಡ ಬಳಿಕ ಜನ್ಮ ದಿನಾಂಕ ಬದಲಿಸುವಂತಿಲ್ಲ
ನೌಕರರ ವಯಸ್ಸನು್ನ ಖಚಿತಪಡಿಸಿಕೊಳ್ಳುವ ವಿಧೇಯಕ-2026 ಸಿದ್ಧ
ಜನವರಿ 2ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 2) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಹಾವು ಏಣಿ ಆಟದಲ್ಲಿ ಕಾಫಿ ದರ : ಬೆಳೆಗಾರರ ನಿದ್ದೆಗೆಡಿಸಿದ ಬ್ರೆಜಿಲ್, ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು
ಚಿಕ್ಕಮಗಳೂರು ಮತ್ತು ಶೃಂಗೇರಿ ಭಾಗದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ಧಾರಣೆ ಏರಿಳಿತದಿಂದಾಗಿ ಅವರ ನಿದ್ದೆಗೆಡಿಸಿದೆ. ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳ ಅಧಿಕ ಇಳುವರಿ ಫಸಲು ಭಾರತೀಯ ಕಾಫಿ ದರ ಕುಸಿತಕ್ಕೆ ಕಾರಣವಾಗಿದೆ. ಆದರೂ ತಜ್ಞರು ಏನಂತಾರೆ ನೋಡಿ
ಪಾನಮತ್ತ ಪೈಲಟ್ ವಿರುದ್ಧ ಜ.26ರೊಳಗೆ ಕ್ರಮ ಕೈಗೊಳ್ಳಿ: ಏರ್ ಇಂಡಿಯಾಗೆ ಕೆನಡಾ ಸೂಚನೆ
ಹೊಸದಿಲ್ಲಿ: ದೇಶದ ಕಾನೂನನ್ನು ಉಲ್ಲಂಘಿಸಿ 2025ರ ಡಿಸೆಂಬರ್ 23ರಂದು ವಿಮಾನ ಚಲಾವಣೆಗೆ ಮುನ್ನ ಮದ್ಯಪಾನ ಮಾಡಿದ್ದ ಪೈಲಟ್ ವಿರುದ್ಧ ಈ ತಿಂಗಳ 26ರೊಳಗೆ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಕೆನಡಾ ಸರ್ಕಾರ ಏರ್ ಇಂಡಿಯಾಗೆ ಸೂಚನೆ ನೀಡಿದೆ. ಉಸಿರಾಟ ವಿಶ್ಲೇಷಕ ( breathalyser) ಪರೀಕ್ಷೆಯಲ್ಲಿ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಮರುದಿನವೇ ಟ್ರಾನ್ಸ್ ಪೋರ್ಟ್ ಕೆನಡಾ ಈ ಬಗ್ಗೆ ಏರ್ ಇಂಡಿಯಾಗೆ ಮಾಹಿತಿ ನೀಡಿದ್ದು, ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಇಲಾಖೆಯ ಸುರಕ್ಷಾ ನಿರ್ವಹಣಾ ವ್ಯವಸ್ಥೆಯಡಿ ಪರಿಹಾರಾತ್ಮಕ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ಪರೀಕ್ಷೆಯಲ್ಲಿ ಪತ್ತೆಯಾದ ಆಲ್ಕೋಹಾಲ್ ಮಟ್ಟ ಸೇರಿದಂತೆ ಕೆನಡಾದಿಂದ ಬ್ರೀಥಲೈಸರ್ ಪರೀಕ್ಷೆಯ ವಿವರಗಳನ್ನು ಕೋರಿದೆ ಎಂದು ಡಿಜಿಸಿಎಗೆ ತಿಳಿಸಿದೆ. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ನೀಡಿದ ಮಾಹಿತಿಯಂತೆ ಕ್ಯಾಪ್ಟನ್ ಅವರು ಏರ್ ಇಂಡಿಯಾ ವಿಮಾನ ಎಐ 186ಗೆ ಡಿಸೆಂಬರ್ 23ರಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದ್ದು, ಕರ್ತವ್ಯಕ್ಕೆ ಸೂಕ್ತವಲ್ಲ ಎಂದು ನಿರ್ಧರಿಸಲಾಗಿತ್ತು. ವ್ಯಾಂಕೋವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದು, ವಿಮಾನದಿಂದ ಹೊರ ತೆರಳುವಂತೆ ಸೂಚಿಸಲಾಗಿತ್ತು. ಇದು ಕೆನಡಾದ ವೈಮಾನಿಕ ನಿಬಂಧನೆಗಳಿಗೆ ವಿರುದ್ಧ ಎಂದು ನಿರ್ಧರಿಸಲಾಗಿದ್ದು, ಇದು ಟಿಸಿಸಿಎ ನೀಡುವ ಏರ್ ಇಂಡಿಯಾದ ವಿದೇಶಿ ವಿಮಾನ ಆಪರೇಟರ್ ಸರ್ಟಿಫಿಕೆಟ್ ಗೆ ಕೂಡಾ ವಿರುದ್ಧ ಎಂದು ನಿರ್ಧರಿಸಲಾಗಿದೆ ಎಂದು ಏರ್ ಇಂಡಿಯಾಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.
Karnataka Weather: ಶೀತಗಾಳಿ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಉತ್ತಮ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಚಳಿ ಮುಂದುವರೆದಿದ್ದು, ಕೆಲವೆಡೆ ಶೀತಗಾಳಿ ಪ್ರಮಾಣ ಕಡಿಮೆಯಾಗುತ್ತಿದೆ. ಈ ನಡುವೆ ಕೆಲವೇ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು
ಕಠಿಣ ವಲಸೆ ನಿಯಮಗಳನ್ನು ಜಾರಿಗೆ ತರುತ್ತಿರುವ ಟ್ರಂಪ್ ಆಡಳಿತ, ಗ್ರೀನ್ ಕಾರ್ಡ್ ಶಾಶ್ವತ ನಿವಾಸಿ ಕಾರ್ಯಕ್ರಮದಲ್ಲಿ ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಕೇವಲ ಗ್ರೀನ್ ಕಾರ್ಡ್ ಪಡೆಯುವ ಉದ್ದೇಶದಿಂದ ವಿದೇಶಿ ಪ್ರಜೆಗಳು ಅಮೆರಿಕನ್ನರನ್ನು ಮದುವೆಯಾಗುವುದನ್ನು ತಡೆಯಲು, ಯುಎಸ್ ವಲಸೆ ಅಧಿಕಾರಿಗಳು ದಂಪತಿಗಳು ಒಟ್ಟಾಗಿ ವಾಸಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಒಂದು ವೇಳೆ ದಂಪತಿ ಯಾವುದೇ ಕಾರಣಕ್ಕೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರೆ ಅಂತಹವರ ಗ್ರೀನ್ ಕಾರ್ಡ್ ರದ್ದುಪಡಿಸಲಾಗುತ್ತಿದೆ ಎಂದು ಯುಎಸ್ ವಲಸೆ ಅಟಾರ್ನಿ ಬ್ರಾಡ್ ಬರ್ನ್ಸ್ಟೈನ್ ಎಚ್ಚರಿಸಿದ್ದಾರೆ.
ಕಾಪು: ಸೇತುವೆಗೆ ಬೈಕ್ ಢಿಕ್ಕಿ; ಸವಾರ ಮೃತ್ಯು
ಕಾಪು: ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ವೇಳೆ 2:30ರ ಸುಮಾರಿಗೆ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೈಕ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಉಚ್ಚಿಲದ ಎಸ್ಡಿಪಿಐ ಆಂಬುಲೆನ್ಸ್ ನಲ್ಲಿ ಕೆಎಂ ಸಿರಾಜ್, ಜಲಾಲುದ್ದೀನ್ ಅಜ್ಜರಕಾಡು ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದರು.
ಎಲ್ಲೆಲ್ಲಿ ನೋಡಲಿ, ಜನವನ್ನೇ ಕಾಣುವೆ! ಹೊಸ ವರುಷ ಬಂತೆಂದರೆ... ದೊಂಬಿಯಲಿ ಭಯಗೊಳ್ಳುವೆ!
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇದೀಗ ಹೊಸ ವರ್ಷದ ಸಂಭ್ರಮಾಚರಣೆಗೆ ಜನಸಾಗರ ಎಲ್ಲೆಡೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಕೆಕೆಆರ್ಗೆ ಬಾಂಗ್ಲಾದೇಶ ಆಟಗಾರ ಸೇರಿಸಿಕೊಂಡ ಶಾರೂಖ್ ಖಾನ್ ʻಗದ್ದಾರ್ʼ ಎಂದ ಬಿಜೆಪಿ ನಾಯಕ ಸಂಗೀತ್ ಸೋಮ್!
ಕೊನೆಗೂ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಭಾರತ ವಿರೋಧಿ ಪ್ರತಿಭಟನೆಗಳು, ಐಪಿಎಲ್ ಪಂದ್ಯಾವಳಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿದ ಕೆಕೆಆರ್ ಮಾಲೀಕ ಶಾರೂಖ್ ಖಾನ್ ವಿರುದ್ಧ ಬಿಜೆಪಿ ನಾಯಕರೊಬ್ಬರು ಗುಡುಗಿದಾರೆ. ಕೆಕೆಆರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಖರೀದಿಸಿದ್ದಕ್ಕೆ, ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಶಾರೂಖ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಸಂಗೀತ್ ಸೋಮ್ ಅವರ ಹೇಳಿಕೆಗೆ ಇದೀಗ ದೇಶಾದ್ಯಂತ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಶಿಕ್ಷಣ ಸಂಸ್ಥೆಗಳನ್ನು, ಆರೋಗ್ಯ ಕೇಂದ್ರಗಳನ್ನು ಕಟ್ಟಿ ಬಡ ಜನರ ಬಾಳು ಬೆಳಗಿಸಿದ ಉದ್ಯಮಿ ಎನ್.ವಿನಯ ಹೆಗ್ಡೆ
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಎನ್. ವಿನಯ ಹೆಗ್ಡೆ (86) ಗುರುವಾರ ನಿಧನರಾದರು. ತಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ನಿಟ್ಟೆಯಲ್ಲಿ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ಅವರ ಅಂತ್ಯಸಂಸ್ಕಾರ ನಿಟ್ಟೆಯಲ್ಲಿ ನಡೆಯಿತು.
ಕೋಗಿಲು ಘೋಷಣೆ ಕಗ್ಗಂಟು:ನಿಲ್ಲದ ಬಿಜೆಪಿ ಆಕ್ರೋಶ, 5ಕ್ಕೆ ಬೆಂಗಳೂರಲ್ಲಿ ಪ್ರತಿಭಟನೆ
ಬೈಯಪ್ಪನಹಳ್ಳಿ ಫ್ಲ್ಯಾಟ್ಗಳ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕೋಗಿಲು ಬಡಾವಣೆಯ 167 ಕುಟುಂಬಗಳಿಗೆ ಮನೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕೇವಲ 80-90 ಕುಟುಂಬಗಳಿಗೆ ಮಾತ್ರ ಮನೆ ಸಿಗಲಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಫಲಾನುಭವಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕುಸಿದ ಆರ್ಥಿಕತೆ, ಬೀದಿಗಿಳಿದ ಜನತೆ | Iran ನಲ್ಲಿ ಏನಾಗುತ್ತಿದೆ?
ಇರಾನ್ನಲ್ಲಿ ಆರ್ಥಿಕತೆ ಕುಸಿತದಿಂದಾಗಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದ್ದು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಡಿ.28ರಂದು ಆರಂಭವಾಗಿದ್ದ ಜನರ ಪ್ರತಿಭಟನೆ ಈಗ ಮತ್ತಷ್ಟು ತೀವ್ರಗೊಂಡಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಸೇವೆಗಳ ನಡುವೆ ಸಂಘರ್ಘವೇರ್ಪಟ್ಟಿದ್ದು ಇರಾನ್ ಸೇನೆಯ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಸರ್ಕಾರವು ಕರೆನ್ಸಿ ಕುಸಿತವನ್ನು ನಿರ್ವಹಿಸಿದ ರೀತಿ ಮತ್ತು ವೇಗವಾಗಿ ಏರುತ್ತಿರುವ ಬೆಲೆಗಳ ವಿರುದ್ಧ ಅಂಗಡಿ ಮಾಲೀಕರು ಭಾನುವಾರ ಪ್ರತಿಭಟನೆ ಆರಂಭಿಸಿದ್ದು, ಹಲವು ನಗರಗಳಲ್ಲಿ ಹಿಂಸಾಚಾರ ವರದಿಯಾಗಿದೆ. 2025 ರಲ್ಲಿ ಇರಾನ್ನ ಕರೆನ್ಸಿಯು ಯುಎಸ್ ಡಾಲರ್ ವಿರುದ್ಧ ತನ್ನ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿದ್ದು ಇದು ಆರ್ಥಿಕ ಸಂಕಷ್ಟವನ್ನು ಇನ್ನಷ್ಟು ಹದಗೆಡಿಸಿದೆ ಎಂದು Alhazeera ವರದಿ ಮಾಡಿದೆ. ಅಧಿಕಾರಿಗಳು ಹಠಾತ್ ಸಾರ್ವಜನಿಕ ರಜೆ ಘೋಷಿಸಿದ ನಂತರ, ಟೆಹ್ರಾನ್ ಸೇರಿದಂತೆ ಇರಾನ್ ನ 31 ಪ್ರಾಂತ್ಯಗಳಲ್ಲಿ 21 ರಲ್ಲಿ ವ್ಯವಹಾರಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಟೆಹ್ರಾನ್, ಶಿರಾಜ್, ಇಸ್ಫಹಾನ್, ಕೆರ್ಮಾನ್ಶಾ ಮತ್ತು ಫಾಸಾ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸುವಾಗ ಖಮೇನಿ ವಿರುದ್ಧ ಘೋಷಣೆ ಕೂಗುತ್ತಿರುವುದು ವಿಡಿಯೋಗಳಲ್ಲಿದೆ. ► ಪ್ರತಿಭಟನೆಗೆ ಕಾರಣವೇನು? ರವಿವಾರ ಟೆಹ್ರಾನ್ ನ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಇರಾನಿನ ಕರೆನ್ಸಿ ಇರಾನ್ ರಿಯಾಲ್ ನ ತೀವ್ರ ಕುಸಿತ, ಬೆಲೆ ಏರಿಕೆ ಮತ್ತು ಹದಗೆಡುತ್ತಿರುವ ಜೀವನಮಟ್ಟವನ್ನು ಪ್ರತಿಭಟಿಸಿ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಮುಚ್ಚಿ ಬೀದಿಗಿಳಿದಿದ್ದರು. ಕಳೆದ ವರ್ಷ ಇರಾನ್ನ ಕರೆನ್ಸಿ ಗಣನೀಯ ಮೌಲ್ಯವನ್ನು ಕಳೆದುಕೊಂಡಿದೆ. ಇದು ಆಮದು ವೆಚ್ಚಗಳನ್ನು ಮತ್ತು ಹಣದುಬ್ಬರವನ್ನು ಹೆಚ್ಚಿಸಿದೆ. ಮಂಗಳವಾರದ ವೇಳೆಗೆ ದೇಶಾದ್ಯಂತದ ನಗರಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇತರ ಗುಂಪುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನಾಕಾರರು ನಿರುದ್ಯೋಗ, ನೀರಿನ ಕೊರತೆ ಮತ್ತು ದೇಶದ ಆಡಳಿತ ಸಮಸ್ಯೆಗಳ ಬಗ್ಗೆಯೂ ದನಿಯೆತ್ತಿದ್ದಾರೆ. ► ಹಲವಾರು ನಗರಗಳಲ್ಲಿ ಸಂಘರ್ಷ ಶಿರಾಜ್, ಇಸ್ಫಹಾನ್ ಮತ್ತು ಕೆರ್ಮನ್ಶಾದಂತಹ ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ತೀವ್ರ ಘರ್ಷಣೆಗಳ ದೃಶ್ಯಗಳು ಆನ್ಲೈನ್ ನಲ್ಲಿ ಪ್ರಸಾರವಾಗುತ್ತಿವೆ. ಕೆಲವು ವಿಡಿಯೊಗಳಲ್ಲಿ, ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ಅಶ್ರುವಾಯು ಪ್ರಯೋಗಿಸಿರುವುದು ದೃಶ್ಯಗಳಲ್ಲಿದೆ. ದಕ್ಷಿಣ ಪ್ರಾಂತ್ಯದ ಫಾರ್ಸ್ ನ ಫಾಸಾ ನಗರದಲ್ಲಿ ಜನರ ಗುಂಪೊಂದು ಗವರ್ನರ್ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳ ಗೇಟ್ಗಳನ್ನು ಭೇದಿಸುವುದನ್ನು ವೀಡಿಯೊಗಳು ತೋರಿಸಿವೆ ಎಂದು ರಾಜ್ಯ ಮಾಧ್ಯಮ IRNA ವರದಿ ಮಾಡಿದೆ. ಈ ವೇಳೆ ಗವರ್ನರ್ ಕಚೇರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ ಸಂಘರ್ಷದಲ್ಲಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ. ನಗರದ ಕೆಲವು ಭಾಗಗಳ ಮೇಲೆ ಮಿಲಿಟರಿ ಹೆಲಿಕಾಪ್ಟರ್ ಗಳು ಹಾರುತ್ತಿರುವುದು ಕಂಡುಬಂದಿದೆ. ಇದು ನಿವಾಸಿಗಳನ್ನು ಬೆದರಿಸುವ ಮತ್ತು ಪ್ರತಿಭಟನೆಗಳು ಹರಡದಂತೆ ತಡೆಯುವ ಗುರಿಯನ್ನು ಹೊಂದಿದೆ ಎಂದು ವಿರೋಧ ಗುಂಪುಗಳು ತಿಳಿಸಿವೆ. ► ಮಾರುಕಟ್ಟೆ ಬಂದ್ ಬುಧವಾರ ಟೆಹ್ರಾನ್, ಇಸ್ಫಹಾನ್ ಮತ್ತು ಕೆರ್ಮನ್ಶಾ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಮಾರುಕಟ್ಟೆಗಳನ್ನು ಮುಚ್ಚಿ ವ್ಯಾಪಾರಿಗಳು ಸಂಘಟಿತ ಮುಷ್ಕರ ನಡೆಸಿದ್ದಾರೆ. ಟೆಹ್ರಾನ್ನಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ತಬ್ರಿಜ್, ಶಿರಾಜ್, ಹಮದಾನ್ ಮತ್ತು ಯಾಜ್ದ್ನಂತಹ ನಗರಗಳಲ್ಲಿ ಇದೇ ರೀತಿಯಲ್ಲಿ ಮಾರುಕಟ್ಟೆ ಬಂದ್ ಆಗಿತ್ತು. ► ಗಗನಕ್ಕೇರಿದ ಆಹಾರ ವಸ್ತುಗಳ ಬೆಲೆ ಪೆಜೆಶ್ಕಿಯನ್ ಭಾನುವಾರ ರಾಜ್ಯ ಕಾರ್ಮಿಕರಿಗೆ 20% ವೇತನ ಹೆಚ್ಚಳವನ್ನು ಪ್ರಸ್ತಾಪಿಸುವ ಬಜೆಟ್ ಶಾಸನವನ್ನು ಮಂಡಿಸಲು ಯೋಜಿಸಿದ್ದರು. ಹಿಂದಿನ 12 ತಿಂಗಳುಗಳಲ್ಲಿ ಗ್ರಾಹಕ ವೆಚ್ಚಗಳು 52% ರಷ್ಟು ಏರಿಕೆಯಾಗಿವೆ ಎಂದು ಅಧಿಕೃತ ದತ್ತಾಂಶಗಳು ತೋರಿಸಿವೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಡಿಸೆಂಬರ್ನಲ್ಲಿ ಆಹಾರದ ಬೆಲೆಗಳು ಹಿಂದಿನ ವರ್ಷಕ್ಕಿಂತ 72% ಹೆಚ್ಚಾಗಿದೆ. ವೈದ್ಯಕೀಯ ಸರಬರಾಜು ಮತ್ತು ಸೇವೆಗಳು 50% ಹೆಚ್ಚಾಗಿದೆ. ಒಟ್ಟಾರೆ ಹಣದುಬ್ಬರವು 42.2% ನಷ್ಟಿತ್ತು. ವಿನಿಮಯ ದರಗಳು ಸ್ಥಿರವಾಗುವವರೆಗೆ ವ್ಯಾಪಾರಿಗಳು ಮತ್ತು ಗ್ರಾಹಕರು ವಹಿವಾಟುಗಳನ್ನು ವಿಳಂಬಗೊಳಿಸಿದ್ದರಿಂದ ಅಸ್ಥಿರ ವಿನಿಮಯ ದರಗಳು ವಾಣಿಜ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿದವು. ► ಸರ್ಕಾರದ ಪ್ರತಿಕ್ರಿಯೆ ಮತ್ತು ನಾಯಕತ್ವ ಬದಲಾವಣೆಗಳು ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಾರ್ವಜನಿಕ ಆಕ್ರೋಶವನ್ನು ಒಪ್ಪಿಕೊಂಡಿದ್ದು, ಸರ್ಕಾರ ಪ್ರತಿಭಟನಾಕಾರರ ಕಾನೂನುಬದ್ಧ ಬೇಡಿಕೆಗಳನ್ನು ಆಲಿಸುತ್ತದೆ ಎಂದು ಹೇಳಿದ್ದಾರೆ. ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಮೊವಾಹೆದಿ-ಆಜಾದ್ ಅವರು ಆರ್ಥಿಕ ಪ್ರತಿಭಟನೆಗಳು ನ್ಯಾಯಸಮ್ಮತವೆಂದು ಹೇಳಿದ್ದು,ಸಾರ್ವಜನಿಕ ಆಸ್ತಿಗೆ ಹಾನಿ ಅಥವಾ ಭದ್ರತಾ ಬೆದರಿಕೆಗಳು ನಿರ್ಣಾಯಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮೊಹಮ್ಮದ್ ರೆಜಾ ಫರ್ಜಿನ್ ಕೇಂದ್ರ ಬ್ಯಾಂಕಿನ ಗವರ್ನರ್ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ ನಂತರ ಪೆಜೆಶ್ಕಿಯನ್ ಮಾಜಿ ಆರ್ಥಿಕ ಸಚಿವ ಅಬ್ದುಲ್ನಾಸರ್ ಹೆಮ್ಮತಿಯನ್ನು ಇರಾನ್ ನ ಕೇಂದ್ರ ಬ್ಯಾಂಕಿನ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. *ಇರಾನ್ ನಾಯಕತ್ವಕ್ಕೆ ಈ ನಿರ್ಣಾಯಕ ಕ್ಷಣ ಏಕೆ? ಇರಾನ್ನ ಪಾದ್ರಿ ಆಡಳಿತಗಾರರಿಗೆ ವಿಶೇಷವಾಗಿ ಅಸ್ಥಿರ ಸಮಯದಲ್ಲಿ ಈ ಅಶಾಂತಿ ಬಂದಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಆರ್ಥಿಕತೆಯ ಮೇಲೆ ಭಾರಿ ಹೊರೆ ಬೀರುತ್ತಿವೆ. ಆದರೆ ಹಣದುಬ್ಬರವು ತೀವ್ರ ಹೆಚ್ಚಾಗಿದೆ. ಜೂನ್ನಲ್ಲಿ ಇಸ್ರೇಲ್ ಮತ್ತು ಯುಎಸ್ ವೈಮಾನಿಕ ದಾಳಿಗಳು ಇರಾನ್ನ ಪರಮಾಣು ಮೂಲಸೌಕರ್ಯ ಮತ್ತು ಮಿಲಿಟರಿ ನಾಯಕತ್ವವನ್ನು ಗುರಿಯಾಗಿಸಿಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜೂನ್ನಲ್ಲಿ ಇರಾನ್ ಇಸ್ರೇಲ್ನೊಂದಿಗೆ 12 ದಿನಗಳ ವೈಮಾನಿಕ ಯುದ್ಧದಲ್ಲಿ ಭಾಗಿಯಾಗಿತ್ತು, ಇದು ಸರ್ಕಾರದ ಖಜಾನೆಗೆ ಹೊರೆಯಾಗಿದ್ದು, ಸಾರ್ವಜನಿಕ ಕೋಪವನ್ನು ಹೆಚ್ಚಿಸಿತು. ► ಇರಾನ್ ಸರ್ಕಾರದ ಪ್ರತಿಕ್ರಿಯೆ ಏನು? ಹೆಚ್ಚಿನ ವಿವರಗಳನ್ನು ಒದಗಿಸಲಾಗಿಲ್ಲವಾದರೂ, ಅಧಿಕಾರಿಗಳು ಟ್ರೇಡ್ ಯೂನಿಯನ್ಗಳ ಪ್ರತಿನಿಧಿಗಳು ಮತ್ತು ವ್ಯಾಪಾರಿಗಳೊಂದಿಗೆ ನೇರ ಸಂವಾದ ನಡೆಸುತ್ತಾರೆ ಎಂದು ಸರ್ಕಾರಿ ವಕ್ತಾರೆ ಫಾತಿಮೆಹ್ ಮೊಹಜೆರಾನಿ ಗುರುವಾರ ಹೇಳಿದ್ದಾರೆ. ಅದೇ ಸಮಯದಲ್ಲಿ, ಭದ್ರತಾ ಪಡೆಗಳು ಬೀದಿಗಳಲ್ಲಿ ನಿಯೋಜಿಸಲ್ಪಟ್ಟಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಿಷ್ಠರಾಗಿರುವ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನೊಂದಿಗೆ ಸಂಯೋಜಿತವಾಗಿರುವ ಸ್ವಯಂಸೇವಕ ಅರೆಸೈನಿಕ ಪಡೆಯಾದ ಬಸಿಜ್ ಪ್ರತಿಭಟನಾಕಾರರನ್ನು ಎದುರಿಸುವಲ್ಲಿ ತೊಡಗಿಸಿಕೊಂಡಿದೆ. ಸರ್ಕಾರವು ಬುಧವಾರ ಶೀತ ಹವಾಮಾನದ ಕಾರಣದಿಂದಾಗಿ ಸಾರ್ವಜನಿಕ ರಜೆಯನ್ನು ಘೋಷಿಸಿದ್ದರೂ ಜನರು ಬೀದಿಗಳಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ► ಇರಾನ್ ನಲ್ಲಿ ಪ್ರತಿಭಟನೆ ಹೊಸತಲ್ಲ ಇತ್ತೀಚಿನ ವರ್ಷಗಳಲ್ಲಿ ಇರಾನಿನ ಅಧಿಕಾರಿಗಳು ಪದೇ ಪದೇ ಪ್ರತಿಭಟನೆಗಳನ್ನು ಎದುರಿಸಿದ್ದಾರೆ, ಬೆಲೆ ಏರಿಕೆ, ನೀರಿನ ಕೊರತೆ, ಮಹಿಳಾ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯ ವಿಷಯಗಳಿಗೂ ಇಲ್ಲಿ ಪ್ರತಿಭಟನೆ ನಡೆದಿವೆ. ಈ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕಿತ್ತು. 2022 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ 22 ವರ್ಷದ ಮಹ್ಸಾ ಅಮಿನಿಯ ಸಾವು ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾದ ನಂತರ ಇರಾನ್ ನಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ ಅತ್ಯಂತ ದೊಡ್ಡದಾಗಿದೆ. ಆದಾಗ್ಯೂ, ಪ್ರತಿಭಟನೆಗಳು ಇನ್ನೂ ದೇಶಾದ್ಯಂತ ಹರಡಿಲ್ಲ.
ಪರಮಾಣು ಸ್ಥಾವರಗಳ ಮಾಹಿತಿ ವಿನಿಮಯ ಮಾಡಿಕೊಂಡ ಭಾರತ &ಪಾಕಿಸ್ತಾನ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲವೂ ಸರಿಯಾಗಿಲ್ಲ, ಒಂದು ಕಡೆ ಪಾಕಿಸ್ತಾನ ಮಾಡುವ ಕಿತಾಪತಿ ಪರಿಣಾಮ ಪದೇ ಪದೇ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಿದೆ. ಅತ್ತ ಉಗ್ರರ ಪೋಷಣೆ ಮಾಡುತ್ತಾ, ಹಾವಿಗೆ ಹಾಲೆರೆದು ಸಾಕುವ ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಸೇನೆ ಭಾರತದ ವಿರುದ್ಧ ಕುತಂತ್ರ ಮಾಡುತ್ತಲೇ ಇರುತ್ತದೆ. ಇದೇ ರೀತಿಯಾಗಿ ಮಾಡಿ, ಕೆಲ ತಿಂಗಳ
ಯಾದಗಿರಿ | ನಿವೃತ್ತ ಸರಕಾರಿ ನೌಕರಿಗೆ ಸನ್ಮಾನ
ಯಾದಗಿರಿ : ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾದ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಸಾಮೂಹಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಡಪ್ಪ ಆಕಳ ಮಾತನಾಡಿ, ಸೇವೆಯಲ್ಲಿದ್ದಾಗ ಶಿಸ್ತು, ಪ್ರಮಾಣಿಕತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ನೌಕರರು ನಿವೃತ್ತಿಯ ನಂತರವೂ ಸಮಾಜದ ಹಿತಕ್ಕಾಗಿ ಕಾರ್ಯಶೀಲರಾಗಿರುವುದು ಅಪೂರ್ವ ಸಾಧನೆಯಾಗಿದೆ. ಹಿರಿಯ ಅನುಭವಿಗಳ ಶಕ್ತಿಯನ್ನು ಒಗ್ಗೂಡಿಸಿ ಸಾಮಾಜಿಕ ನ್ಯಾಯ, ನೌಕರರ ಹಕ್ಕುಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಿವೃತ್ತ ನೌಕರರ ಕಾರ್ಯಶೀಲತೆ ಪ್ರಶಂಸನೀಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ. ಹಫೀಸ್ ಪಟೇಲ್, ಸಂಘದ ಸದಸ್ಯ ನಾಗೇಂದ್ರಪ್ಪ ಕೆ. ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತರಾದ ಅಜಾಜುಲ್ ಹಕ್, ಮಲ್ಲಿಕಾರ್ಜುನ್, ಶಂಕರ್ ರಾಥೋಡ್, ಇಸ್ಮಾಯಿಲ್ ಪಟೇಲ್, ಮಹಮ್ಮದ್ ಖಾಸಿಂಸಾಬ್ ಹಾಗೂ ಲಕ್ಷ್ಮಣ್ ಜಿಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಲಿಂಗಪ್ಪ, ಮಲ್ಲಿಕಾರ್ಜುನ್ ಪಾಟೀಲ್, ಈರಣ್ಣ ಗೌಡ, ನಾಗೇಂದ್ರಪ್ಪ, ಶಿವಕುಮಾರ್, ರೇಖಾದೇವಿ, ನಂದಾ ರೆಡ್ಡಿ, ಮಲ್ಲರೆಡ್ಡಿ, ನೆಹರು ಮೈಲಿ, ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಂಕರ್ ಸೋಲಾರ್ ಸ್ವಾಗತಿಸಿದರು, ಚಂದ್ರಪ್ಪ ಗೊಂಜನೂರ್ ನಿರೂಪಿಸಿದರು ಹಾಗೂ ಅಲಿ ಸಾಬ್ ವಂದಿಸಿದರು.
ಇದು ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಕ್ರೇಝ್ !: ವಡೋದರ ODI ಟಿಕೆಟ್ ಎಂಟೇ ನಿಮಿಷದಲ್ಲಿ ಸೋಲ್ಡ್ ಔಟ್!
RoKo Mania In India- ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜನವರಿ 11ರಂದು ಚಾಲನೆ ಸಿಗಲಿದೆ. ವಡೋದರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯವನ್ನು ನೋಡಲು ಭಾರತದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಬ್ಬರೂ ಭರ್ಜರಿ ಫಾರ್ಮ್ ನಲ್ಲಿ ಇರುವುದೇ ಕ್ರಿಕೆಟ್ ಪ್ರೇಮಿಗಳ ಕುತೂಹಲ ಮುಗಿಲು ಮುಟ್ಟಿದೆ. ಈ ಪಂದ್ಯದ ಟಿಕೆಟ್ ಗಳು ಕೇವಲ ಎಂಟು ನಿಮಿಷಗಳಲ್ಲಿ ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿ.
GST: ಭಾರತದ ಜಿಎಸ್ಟಿ ಸಂಗ್ರಹದಲ್ಲಿ ಶೇ.6ರಷ್ಟು ಹೆಚ್ಚಳ: ಕರ್ನಾಟಕದಿಂದ ಸಂಗ್ರಹವಾಗಿದ್ದೆಷ್ಟು?
ನವದೆಹಲಿ: ಭಾರತ ಸರ್ಕಾರ ಎಲ್ಲ ರಾಜ್ಯಗಳಿಂದ 2025 ಡಿಸೆಂಬರ್ ತಿಂಗಳಿನ ಸರಕು ಸೇವಾ ತೆರಿಗೆ (GST) ಸಂಗ್ರಹಿಸಿದ್ದ ಮಾಹಿತಿ ಹೊರ ಬಿದ್ದಿದೆ. ಇದರಲ್ಲಿ ಅತ್ಯಧಿಕ ತೆರಿಗೆಯನ್ನು ಕೇಂದ್ರಕ್ಕೆ ನೀಡುವ ಪೈಕಿ ಕರ್ನಾಟಕ ಎಂದಿನಂತೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಪ್ರಥಮ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ಕರ್ನಾಟಕ ಸೇರಿದಂತೆ ಹಾಗಾದರೆ ಯಾವೆಲ್ಲ ರಾಜ್ಯಗಳಿಂದ ಎಷ್ಟೆಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಯಾಗಿದೆ ಎಂಬ

27 C