SENSEX
NIFTY
GOLD
USD/INR

Weather

24    C
...

ಅಂಬೇಡ್ಕರ್ ಜಯಂತಿ, ವಿನೂತನ ಆಚರಣೆ

ಬಿಜಾಪುರ ಮಾತ್ರವಲ್ಲ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮ. ಅಂಬೇಡ್ಕರ್ ಜಯಂತಿಯ ದಿನ ಪುಸ್ತಕ ಮೇಳ ಏರ್ಪಡಿಸಿರುವುದು ಹೊಸ ಪರಂಪರೆಯ ಆರಂಭಕ್ಕೆ ನಾಂದಿಯಾಯಿತು. 41 ಡಿಗ್ರಿ ಉರಿ ಬಿಸಿಲಿನಲ್ಲಿ ಐದೂ ದಿನ ಪುಸ್ತಕ ಮೇಳಕ್ಕೆ ಜನ ಬರುತ್ತಲೇ ಇದ್ದರು. ಇದರ ಜೊತೆಗೆ ವೇದಿಕೆಯಲ್ಲಿ ವಿಚಾರ ಮಂಡನೆ, ಸಂವಾದ,ಉಪನ್ಯಾಸ, ಹಾಡು ಇವೆಲ್ಲ ಸೇರಿ ಹೊಸ ವಾತಾವರಣ ನಿರ್ಮಾಣವಾಗಿತ್ತು. ಬಾಬಾಸಾಹೇಬರು ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತರಾಗುತ್ತಿರುವ ದಿನಗಳಿವು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗಳಿಲ್ಲದ ಊರಿಲ್ಲ. ಪ್ರತಿವರ್ಷ ಅವರ ಜಯಂತಿಯನ್ನು ಆಚರಿಸದ ತಾಣ ಇಲ್ಲ. ಅವರವರಿಗೆ ತೋಚಿದಂತೆ ಮತ್ತೆ ಮತ್ತೆ ಈ ಭಾರತ ಭಾಗ್ಯವಿಧಾತನನ್ನು ಸ್ಮರಿಸಿಕೊಳ್ಳುತ್ತಾರೆೆ. ಕೆಲವು ಹಳ್ಳಿಗಳಲ್ಲಿ ಮುಗ್ಧ್ದ ಜನ ತೊಟ್ಟಿಲಲ್ಲಿ ತೂಗಿ ಗೌರವಿಸುತ್ತಾರೆ. ಆದರೆ ಅವರ ಜನ್ಮದಿನವನ್ನು ಹೇಗೆ ಆಚರಿಸಬೇಕೆಂಬುದನ್ನು ಬಿಜಾಪುರದ ಗೆಳೆಯರು ಈ ಸಲ ತೋರಿಸಿಕೊಟ್ಟರು. ಆದರೆ ನಿಜವಾಗಿ ಅಂಬೇಡ್ಕರ್ ಅವರ ಜಯಂತಿಯನ್ನು ಹೇಗೆ ಆಚರಿಸಬೇಕು? ‘ನಾನು ಪ್ರತಿಮೆಗಳಲ್ಲಿ ಇಲ್ಲ, ಪುಸ್ತಕಗಳಲ್ಲಿ ಇದ್ದೇನೆ’ ಎಂಬ ಅವರ ಈ ಮಾತನ್ನು ಸಂಕೇತಿಸುವ ಬಾಬಾಸಾಹೇಬರ ಜನ್ಮದಿನವನ್ನು ಈ ಬಾರಿ ಬಿಜಾಪುರದ ಮಿತ್ರರು ಆಚರಿಸಿದರು. ಬಿಜಾಪುರದ ಮೇ ಸಾಹಿತ್ಯ ಬಳಗ ಹಾಗೂ ಸ್ಥಳೀಯ ಪ್ರಗತಿಪರ ಸಂಘಟನೆಗಳು ಸೇರಿ ಎಪ್ರಿಲ್ 10ರಿಂದ 14ರವರೆಗೆ ಬುದ್ಧ್ದ, ಬಸವ, ಬಾಬಾಸಾಹೇಬರ ಪುಸ್ತಕ ಮೇಳವನ್ನು ಏರ್ಪಡಿಸಿದ್ದರು. ಮನ ಮತ್ತು ಮನೆಯ ತುಂಬೆಲ್ಲ ಅಂಬೇಡ್ಕರ್ ಅವರನ್ನೇ ತುಂಬಿ ಕೊಂಡು ಉಸಿರಾಡುವ ಅನಿಲ ಹೊಸಮನಿಯವರು ಮತ್ತು ಉತ್ತರ ಕರ್ನಾಟಕದಲ್ಲಿ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ವಿರುದ್ಧ ನಿರಂತರ ಸಂಘರ್ಷವನ್ನು ನಡೆಸುತ್ತಿರುವ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಅವರು ಮಹಾ ನಾಯಕನ ಜಯಂತಿಯ ಸಂದರ್ಭದಲ್ಲಿ ಪುಸ್ತಕೋತ್ಸವವನ್ನು ಏರ್ಪಡಿಸುವ ವಿಷಯ ಮುಂದಿಟ್ಟರು. ಅನಿಲ ಹೊಸಮನಿ ಸೇರಿದಂತೆ ಬಿಜಾಪುರದ ಗೆಳೆಯರು ವಿನೂತನವಾಗಿ ಆಚರಿಸಲು ಒಪ್ಪಿಕೊಂಡರು. ಬುದ್ಧ, ಬಸವ, ಬಾಬಾಸಾಹೇಬರ ಸಾಹಿತ್ಯವನ್ನು ಜನರಿಗೆ ತಲುಪಿಸಲು ಹಮ್ಮಿಕೊಂಡ ಕಾರ್ಯಕ್ರಮವಿದು. ಬಾಬಾಸಾಹೇಬರು ಉಳಿದೆಲ್ಲವುಗಳಿಗಿಂತ ಪುಸ್ತಕಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ವ್ಯಾಸಂಗ ಮಾಡಲು ಇಂಗ್ಲೆಂಡ್‌ಗೆ ಹೋಗಿ ವಾಪಸ್ ಬರುವಾಗ ಹಡಗಿನಲ್ಲಿ ಸಾವಿರಾರು ಪುಸ್ತಕಗಳನ್ನು ಹೊತ್ತು ತಂದರು. ಮುಂಬೈನಲ್ಲಿ ಅವರು ಕಟ್ಟಿಸಿರುವ ಮನೆ ರಾಜಗೃಹ ಸುಮಾರು 50 ಸಾವಿರ ಪುಸ್ತಕಗಳಿಗೆ ಆಸರೆಯಾಗಿತ್ತು. ಈ ಎಲ್ಲ ಪುಸ್ತಕಗಳನ್ನು ಅವರು ಚಂದಕ್ಕೆ ಇಟ್ಟಿರಲಿಲ್ಲ. ಎಲ್ಲ ಪುಸ್ತಕಗಳನ್ನು ಓದಿ ಮನದೊಳಗೆ ಇಳಿಸಿಕೊಂಡಿದ್ದರು.ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಾಹಿತ್ಯ, ಕಲೆ, ವಿಜ್ಞಾನ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡ ಪುಸ್ತಕಗಳು ಅವರ ಬಳಿ ಇದ್ದವು. ಇಡೀ ಜಗತ್ತಿನ ಕೆಲವೇ ಕೆಲವು ಬಹುದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಅಂಬೇಡ್ಕರ್ ಮನೆಯಲ್ಲಿನ ಗ್ರಂಥಾಲಯವೂ ಒಂದಾಗಿತ್ತು.ಈ ಐವತ್ತು ಸಾವಿರ ಪುಸ್ತಕಗಳಲ್ಲಿ ಯಾವುದು, ಎಲ್ಲಿದೆ ಎಂಬುದು ಬಾಬಾಸಾಹೇಬರಿಗೆ ಗೊತ್ತಿರುತ್ತಿತ್ತು.ಅವಿಭಜಿತ ಬಿಜಾಪುರ (ಈಗ ವಿಜಯಪುರ) ನನ್ನ ಜಿಲ್ಲೆ. ಅದು ಒಂದಾಗಿ ಇದ್ದಾಗ 1974ರಲ್ಲಿ ಐವತ್ತು ವರ್ಷಗಳ ಹಿಂದೆ ನಾನು ಊರು ಬಿಟ್ಟು ಹುಬ್ಬಳ್ಳಿ ನಂತರ ಬೆಂಗಳೂರನ್ನು ಸೇರಿದವನು. ಸರಕಾರ ಏನೇ ಹೆಸರು ಬದಲಿಸಲಿ ನನಗದು ಈಗಲೂ ಬಿಜಾಪುರ ಜಿಲ್ಲೆ. ನನ್ನ ಮನದಾಳದಲ್ಲಿ ಇಂದಿಗೂ ಬಿಜಾಪುರದಂತೆ ಯಾವ ಊರೂ ಉಳಿದಿಲ್ಲ. ಅಂತಲೇ ಅಲ್ಲಿ ಹೋಗುವ ಯಾವ ಅವಕಾಶವನ್ನೂ ನಾನು ಕಳೆದುಕೊಳ್ಳುವುದಿಲ್ಲ. ಆದರೆ ಬೇಸಿಗೆಯ ಬಿಸಿಲಿನಲ್ಲಿ ಹೋಗುವದು ತುಂಬಾ ವಿರಳ. ಬಿಸಿಲೆಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸದಿರಲಾಗುವುದಿಲ್ಲ. ಅಂತಲೇ 41 ಡಿಗ್ರಿ ಉರಿ ಬಿಸಿಲಿನಲ್ಲಿ ಮೇ ಸಾಹಿತ್ಯ ಮೇಳದ ಪುಸ್ತಕೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲು ಹಿಂಜರಿಕೆಯಾಯಿತು. ಆದರೆ ಆದದ್ದಾಗಲಿ ಎಂದು ಬಿಜಾಪುರಕ್ಕೆ ಹೊರಟೆ. ಹುಬ್ಬಳ್ಳಿಯಲ್ಲಿ 10:30ಕ್ಕೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕುಳಿತು ಮಧ್ಯಾಹ್ನ 2_:30 ಕ್ಕೆ ಬಿಜಾಪುರ ತಲುಪಿದಾಗ ದೇಹಕ್ಕೆ ಕೆಂಡದಂಥ ಬಿಸಿಲು. ಆದರೂ ಮನಸ್ಸಿಗೆ ಬೆಳದಿಂಗಳು.ಅಲ್ಲಿ ಇದ್ದ ಮೂರು ದಿನವೂ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಬಿಜಾಪುರ ಮಾತ್ರವಲ್ಲ ಕರ್ನಾಟಕದ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮ. ಅಂಬೇಡ್ಕರ್ ಜಯಂತಿಯ ದಿನ ಪುಸ್ತಕ ಮೇಳ ಏರ್ಪಡಿಸಿರುವುದು ಹೊಸ ಪರಂಪರೆಯ ಆರಂಭಕ್ಕೆ ನಾಂದಿಯಾಯಿತು.41 ಡಿಗ್ರಿ ಉರಿ ಬಿಸಿಲಿನಲ್ಲಿ ಐದೂ ದಿನ ಪುಸ್ತಕ ಮೇಳಕ್ಕೆ ಜನ ಬರುತ್ತಲೇ ಇದ್ದರು.ಇದರ ಜೊತೆಗೆ ವೇದಿಕೆಯಲ್ಲಿ ವಿಚಾರ ಮಂಡನೆ,ಸಂವಾದ,ಉಪನ್ಯಾಸ, ಹಾಡು ಇವೆಲ್ಲ ಸೇರಿ ಹೊಸ ವಾತಾವರಣ ನಿರ್ಮಾಣವಾಗಿತ್ತು.ಪುಸ್ತಕ ಮೇಳಕ್ಕೆ 15ಕ್ಕೂ ಹೆಚ್ಚು ಪುಸ್ತಕ ಅಂಗಡಿಗಳು ಬಂದಿದ್ದವು. ಒಂದೇ ಜಾಗದಲ್ಲಿ ಬುದ್ಧ್ದ, ಬಸವಣ್ಣ ಮತ್ತು ಬಾಬಾಸಾಹೇಬರು ಸಿಗುತ್ತಿದ್ದರು. ಹಾಗೆ ನೋಡಿದರೆ ಸಾಹಿತ್ಯ ಕೃತಿಗಳನ್ನು ಮಾರಾಟ ಮಾಡುವ ಪುಸ್ತಕದ ಅಂಗಡಿ ಬಿಜಾಪುರದಲ್ಲಿ ಇಲ್ಲ. ಆದರೆ ಜನರಿಗೆ ಓದುವ ಹಸಿವು ಇದೆ ಎಂಬುದಕ್ಕೆ ಈ ಪುಸ್ತಕ ಮೇಳ ಸಾಕ್ಷಿಯಾಗಿತ್ತು. ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಮುನ್ನ ಮುಂಬೈ ಪ್ರಾಂತಕ್ಕೆ ಸೇರಿದ್ದ ಬಿಜಾಪುರ, ಧಾರವಾಡ, ಬೆಳಗಾವಿ, ಕಾರವಾರ, ಮೊದಲಾದ ಜಿಲ್ಲೆಗಳನ್ನು ಮುಂಬೈ ಕರ್ನಾಟಕ ಎಂದು ಜನ ಕರೆಯುತ್ತ ಬಂದಿದ್ದಾರೆ. ಸರಕಾರ ಅದಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಛೋಟಾ ಮುಂಬೈ ಎಂದು ಕರೆಯಲ್ಪಡುವ ಹುಬ್ಬಳ್ಳಿ ಈ ಉತ್ತರ ಕರ್ನಾಟಕದ ಭಾಗವಾದ ಕಿತ್ತೂರು ಕರ್ನಾಟಕದ ಕೇಂದ್ರ. ಹಿಂದೆ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟಗಳ ಕೇಂದ್ರವಾಗಿದ್ದ ಹುಬ್ಬಳ್ಳಿ ಈಗ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ಕೇಂದ್ರ ವಾಗಿದೆ.ಹುಬ್ಬಳ್ಳಿ ಮಾತ್ರವಲ್ಲ ಮುಂಬೈ ಕರ್ನಾಟಕದ ಬಹುತೇಕ ಭಾಗದಲ್ಲಿ ಬಿಜೆಪಿ ನೆಲೆಯೂರಿದೆ. ಈ ಕೋಮು ಶಕ್ತಿಗಳಿಗೆ ಪ್ರತಿರೋಧವೇ ಇಲ್ಲದ ಪರಿಸ್ಥಿತಿ ಇಲ್ಲಿದೆ. ಕಾಂಗ್ರೆಸ್ ರಾಜಕೀಯವಾಗಿ ಸೋಲು, ಗೆಲುವು ಗಳನ್ನು ಅನುಭವಿಸುತ್ತ ಬಂದಿದೆ. ಆದರೆ ಸೈದ್ಧಾಂತಿಕವಾಗಿ ಕೋಮುವಾದಿಗಳನ್ನು ಎದುರಿಸಿ ಹೋರಾಡುತ್ತಿರುವುದು ಮೇ ಸಾಹಿತ್ಯ ಬಳಗ. ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿ ಪುಟ್ಟದಾಗಿ ಆರಂಭವಾದ ಮೇ ಬಳಗ ಈಗ ವ್ಯಾಪಕವಾಗಿ ಬೆಳೆದಿದೆ. ಈ ಸಲ ಹುಬ್ಬಳ್ಳಿಯಲ್ಲಿ ಮೇ 16,17 ರಂದು ಮೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗ ಓದುವ ಸಂಸ್ಕೃತಿ ಮಾಯವಾಗಿದೆ. ಮೊಬೈಲ್, ಇಂಟರ್ನೆಟ್, ಫೇಸ್ಬುಕ್, ವ್ಯಾಟ್ಸ್ ಆ್ಯಪ್, ಇಮೇಲ್‌ಗಳ ಅಬ್ಬರದ ಕಾಲ ಇದು. ಈಗ ಯಾವುದೇ ಊರಿಗೆ ಹೋದರೂ ಎಲ್ಲೂ ನಿಮಗೆ ದಿನಪತ್ರಿಕೆ ಮತ್ತು ವಾರಪತ್ರಿಕೆ ಗಳನ್ನು ಮಾರಾಟ ಮಾಡುವ ಅಂಗಡಿಗಳು ಸಿಗುವುದಿಲ್ಲ. ಈಗಿನ ಹುಡುಗರು ಪತ್ರಿಕೆ ಓದುವುದು ಕಡಿಮೆ. ಮೊಬೈಲ್‌ನಲ್ಲೇ ಎಲ್ಲವನ್ನೂ ನೋಡುತ್ತಾರೆ ಎಂದು ಮುಚ್ಚಿದ ಪತ್ರಿಕೆಗಳ ಅಂಗಡಿಯವರು ಹೇಳುತ್ತಾರೆ. ಇದರಲ್ಲಿ ಒಂದಿಷ್ಟು ನಿಜವೂ ಇದೆ. ಈಗ ಯೂ ಟ್ಯೂಬ್ ಚಾನೆಲ್‌ಗಳೇ ಮಾಧ್ಯಮಗಳಾಗಿವೆ. ಆದರೂ ಕನ್ನಡ ಪುಸ್ತಕಗಳು ಮಾರಾಟವಾಗುತ್ತಲೇ ಇವೆ. ಆದರೆ ಮೇ ಸಾಹಿತ್ಯ ಬಳಗದದಂತೆ ಪುಸ್ತಕಗಳನ್ನು ಜನರ ಬಳಿ ಕೊಂಡೊಯ್ಯಬೇಕು. ಬಿಜಾಪುರದ ಪುಸ್ತಕ ಮೇಳ ಅಂಥದೊಂದು ಪ್ರಯೋಗ ಅಂದರೆ ಅತಿಶಯೋಕ್ತಿಯಲ್ಲ. ಬಾಬಾಸಾಹೇಬರ ಜಯಂತಿ ಅಂದರೆ ಅಬ್ಬರದ ಮೆರವಣಿಗೆ, ಡಿಜೆ ಹಾಕಿ ಕುಣಿದಾಡುವುದು ಈಗ ಸಾಮಾನ್ಯವಾಗಿದೆ. ಆದರೆ ಇಂಥದಕ್ಕೆ ಪರ್ಯಾಯವಾಗಿ ಬಾಬಾಸಾಹೇಬರ ಸಿದ್ಧಾಂತ ಹಾಗೂ ವಿಚಾರಗಳನ್ನು ಜನರ ಬಳಿ ಅದರಲ್ಲೂ ಯುವಕರ ಬಳಿ ತೆಗೆದುಕೊಂಡು ಹೋಗುವ ಕಾರ್ಯಕ್ರಮ ವಿಭಿನ್ನ. ಪ್ರತಿವರ್ಷ ಡಿಸೆಂಬರ್ 6ನೇ ತಾರೀಕು ಅವರ ಪರಿನಿರ್ವಾಣ ದಿನ ಮುಂಬೈನ ಆಝದ್ ಮೈದಾನದಲ್ಲಿ ದೇಶದ ನಾನಾ ಕಡೆಗಳಿಂದ ಬಂದ ಐದು ನೂರಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿರುತ್ತವೆ. ಆದರೆ ಬಿಜಾಪುರದ್ದು ಆ ರೀತಿ ಅಲ್ಲ. ಬಿಜಾಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದದ್ದು ಪುಸ್ತಕೋತ್ಸವ. ಇದು ಬಿಜಾಪುರದ ಜನತೆಗೆ ಹೊಸದು. ಬಿಜಾಪುರ ನಗರದ ಮಾತ್ರವಲ್ಲ, ಕೆಲವು ತಾಲೂಕುಗಳಿಂದಲೂ ಪತ್ರಿಕೆಗಳಲ್ಲಿ ಸುದ್ದಿ ಓದಿ ಈ ಮೇಳಕ್ಕೆ ಜನರು ಬಂದಿದ್ದರು. ಪುಸ್ತಕ ಮಾರಾಟದ ಜೊತೆಗೆ ಏರ್ಪಡಿಸಿದ ಗೋಷ್ಠಿಗಳು ತುಂಬಾ ಚೆನ್ನಾಗಿದ್ದವು. ಬಿಜಾಪುರ ಅಂದಾಗ ಇನ್ನೊಂದು ಮಹತ್ವದ ಸಂಗತಿ ನೆನಪಿಗೆ ಬರುತ್ತದೆ. ಬಾಬಾಸಾಹೇಬರು ಮುಂಬೈನಲ್ಲಿ ವಕೀಲ ವೃತ್ತಿ ಮಾಡುವಾಗ ಪ್ರಕರಣವೊಂದರ ವಕಾಲತ್‌ಗಾಗಿ ಬಿಜಾಪುರಕ್ಕೆ ಬಂದಿದ್ದರು. ಬಹುಶಃ 1936 ಇರಬಹುದು. ಬೀಳಗಿ ತಾಲೂಕಿನ ಸಂಗನಗೌಡ ಪಾಟೀಲ್ ಎಂಬವರು ಕೊಲೆ ಪ್ರಕರಣವೊಂದರಲ್ಲಿ ಸಿಕ್ಕ್ಕಿಗ ಹಾಕಿಕೊಂಡ ಬಿಜಾಪುರ ಕೋರ್ಟ್ ನಲ್ಲಿ ಅವರ ಪರವಾಗಿ ವಕಾಲತ್ತು ವಹಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಆಗಿನ ಬಿಜಾಪುರದ ಪ್ರಸಿದ್ಧ್ದ ವಕೀಲರಾದ ಅಂಗಡಿಯವರು ಸಂಗನಗೌಡರನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಂಬೇಡ್ಕರ್ ಅವರನ್ನು ಒಪ್ಪಿಸಿ ಕರೆದುಕೊಂಡು ಬಂದಿದ್ದರು. ಆ ಪ್ರಕರಣದಲ್ಲಿ ಸಂಗನಗೌಡರ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಐದು ದಿನ ನಾಡಿನ ಹಲವಾರು ಚಿಂತಕರು ಬಂದು ಉಪನ್ಯಾಸ ಮಾಡಿದರು.ಭಾರತದ ಸ್ವಾತಂತ್ರ್ಯದ ಕ್ಕಿಂತ ಮೊದಲು ಮತ್ತು ನಂತರ. ಹೆಸರಾಂತ ಗಾಂಧಿವಾದಿ ಕಾಕಾ ಕಾರ್ಖಾನಿಸ್ ಅವರು ಬಿಜಾಪುರಕ್ಕೆ ಬಂದು ದಲಿತ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಮಾಡಿದ್ದರು. ಅವರದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರ ಬಗ್ಗೆ ಖ್ಯಾತ ಸಂಶೋಧಕ, ಕೃಷ್ಣ ಕೊಲ್ಹಾರ ಕುಲಕರ್ಣಿ ಕೊನೆಯ ದಿನ ತುಂಬಾ ಚೆನ್ನಾಗಿ ಮಾತಾಡಿದರು. ಉಳಿದಂತೆ ಲೇಖಕಿ ಡಾ.ಎಚ್.ಎಸ್.ಅನುಪಮಾ, ಶಿವಸುಂದರ್, ಪತ್ರಕರ್ತ ರಿಷಿಕೇಶ ಬಹದ್ದೂರ್ ದೇಸಾಯಿ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನೀಡಿದರು.

ವಾರ್ತಾ ಭಾರತಿ 20 Apr 2026 12:03 am

ಹ್ಯಾಟ್ರಿಕ್ ಗೆಲುವಿನ ಉತ್ಸಾಹದಿಂದ ಪುಟಿಯುತ್ತಿರುವ ಗುಜರಾತ್ ಜೈಂಟ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು

IPL 2026 ಏಪ್ರಿಲ್ 20ರಂದು ಐಪಿಎಲ್ 2026ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಹ್ಯಾಟ್ರಿಕ್ ಗೆಲುವಿನಿಂದ ಗುಜರಾತ್ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಸತತ ನಾಲ್ಕು ಸೋಲುಗಳಿಂದ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಅಹಮದಾಬಾದ್‌ನ ಹೈ-ಸ್ಕೋರಿಂಗ್ ಪಿಚ್‌ನಲ್ಲಿ ಇಬ್ಬನಿ ಪ್ರಭಾವ ಇರುವುದರಿಂದ ಟಾಸ್ ನಿರ್ಣಾಯಕವಾಗಲಿದೆ. ಶುಭಮನ್ ಗಿಲ್ ನೇತೃತ್ವದ ಸಮತೋಲಿತ ಗುಜರಾತ್ ತಂಡಕ್ಕೆ ಸೂರ್ಯಕುಮಾರ್ ಹಾಗೂ ಬುಮ್ರಾ ಒಳಗೊಂಡ ಮುಂಬೈ ತಂಡ ಸವಾಲು ನೀಡಲಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.

ವಿಜಯ ಕರ್ನಾಟಕ 19 Apr 2026 11:52 pm

ದೇವೇಗೌಡ ಮತ್ತು ಸಿದ್ದರಾಮಯ್ಯ ಏಕೆ ಹೀಗಾದರು?

ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣಗಳನ್ನು ಮಾಡುವುದು ಹೇಗೆ? ನಮ್ಮ ಸಾಂಸ್ಕೃತಿಕ ನಾಯಕರನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ? ಎಂಬ ಬಗ್ಗೆ ತಮಿಳುನಾಡಿನ ರಾಜಕಾರಣಿಗಳಿಂದ ‘ನಮ್ಮವರು’ ಕಲಿಯಬೇಕಿರುವುದು ಬಹಳಷ್ಟಿದೆ. ಕೇಸರಿ ರಾಜಕಾರಣಕ್ಕೆ ಶರಣಾಗಿರುವ ಉತ್ತರದ ರಾಜ್ಯಗಳಿಗೆ ಬೆಣ್ಣೆಯೂಟ ಮತ್ತು ಕೇಸರಿ ರಾಜಕಾರಣವನ್ನು ಈಗಲೂ ಅನುಮಾನದಿಂದ ನೋಡುವ ದಕ್ಷಿಣದ ರಾಜ್ಯಗಳಿಗೆ ದೊಣ್ಣೆಯೇಟು ಕೊಡಲೆಂದೇ ಮಾಡಲುಹೊರಟಿದ್ದ ಕ್ಷೇತ್ರ ಪುನರ್‌ವಿಂಗಡಣೆಯನ್ನು ತಮಿಳುನಾಡು ಅತ್ಯಂತ ಪ್ರಬಲವಾಗಿ ಮತ್ತು ಪ್ರಬುದ್ಧವಾಗಿ ವಿರೋಧಿಸಿದೆ. ಹಳ್ಳಿಯಿಂದ ಸಂಸತ್ತಿನವರೆಗೆ ತಮಿಳು ಜನ ಮತ್ತು ರಾಜಕಾರಣಿಗಳು ಕಪ್ಪು ಬಟ್ಟೆ ಧರಿಸಿ ಪ್ರತಿರೋಧ ತೋರಿದರು. ಸದಾ ಬಿಳಿ ಅಂಗಿ ಬಿಳಿ ಪಂಚೆಯನ್ನೇ ತೊಡುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕ್ಷೇತ್ರಪುನರ್ ವಿಂಗಡಣೆ ವಿರೋಧಿ ಪ್ರತಿಭಟನೆಗೆ ಬಂದದ್ದು ಕಪ್ಪು ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿ. ಸ್ಟಾಲಿನ್ ಮಾತ್ರವಲ್ಲ, ತಮಿಳುನಾಡಿನಾದ್ಯಂತ ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ನಡೆಸಲಾಯಿತು. ಡಿಎಂಕೆ ಸಚಿವರು, ಮುಖಂಡರು ಮತ್ತು ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಯಿತು. ಎಲ್ಲೆಡೆ ಕಪ್ಪು ಬಾವುಟಗಳು ಕಂಗೊಳಿಸಿದವು. ಡಿಎಂಕೆಯ ಮೈತ್ರಿಪಕ್ಷಗಳಾದ ಕಮಲ್ ಹಾಸನ್ ಅವರ ಎಂಎನ್‌ಎಂ ಮತ್ತು ವೈಕೋ ಅವರ ಎಂಡಿಎಂಕೆ ಕಚೇರಿಗಳಲ್ಲೂ ಕಪ್ಪು ಬಾವುಟ ಪಟಪಟಿಸಿದವು. ಡಿಎಂಕೆ ಸಂಸದರು ಸಂಸತ್ತಿನಲ್ಲಿಯೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಕಪ್ಪು ಬಣ್ಣವನ್ನು ಈ ಪ್ರತಿಭಟನೆಗೆ ಆಯ್ದುಕೊಂಡದ್ದೇಕೆ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯೂ ಆದ ಸಂಸದೆ ಕನಿಮೊಳಿ ಸಂಸತ್ತಿನೆಲ್ಲೇ ಉತ್ತರ ನೀಡಿದರು. ಇದು ಮಹಿಳೆಯರ ಸ್ವಾಭಿಮಾನ ಮತ್ತು ಸನ್ಮಾನಗಳಿಗೆ ಹೋರಾಡಿದ ಕಾಳಿ ದೇವತೆ ಧರಿಸುತ್ತಿದ್ದ ಬಟ್ಟೆಯ ಬಣ್ಣ ಎಂದು ಬಣ್ಣಿಸಿದರು. ಅದೇ ವೇಳೆ ಅಂಬೇಡ್ಕರ್ ತಮ್ಮ ಪಕ್ಷದ ಧ್ವಜಕ್ಕೆ ನೀಲಿ ಬಣ್ಣ ಆಯ್ದುಕೊಂಡದ್ದನ್ನು ಉಲ್ಲೇಖಿಸಿದರು. ನಮ್ಮ ಬೌದ್ಧಿಕ ನಾಯಕ ಪೆರಿಯಾರ್ ಸ್ವಾಭಿಮಾನ ಮತ್ತು ಹೋರಾಟವನ್ನು ಕಲಿಸಿದ್ದಾರೆ. ನಾವು ಮಸೂದೆ ವಿರುದ್ಧ ಹೋರಾಡುತ್ತೇವೆ ಎಂದು ತಮಿಳರ ಹೋರಾಟದ ಕಿಚ್ಚಿನ ರುಚಿ ತೋರಿಸಿದರು. ಇನ್ನೊಂದೆಡೆ ಸ್ಟಾಲಿನ್ ಖುದ್ದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಸುಟ್ಟರು. 1960ರಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ಹೊತ್ತಿದ ಬೆಂಕಿಯ ಬಿಸಿ ದಿಲ್ಲಿಗೆ ತಟ್ಟಿತ್ತು. ಈಗ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಸುಡುವ ಮೂಲಕ ಮತ್ತೊಮ್ಮೆ ಅಂಥದ್ದೇ ಕಿಡಿ ಹೊತ್ತಿಸುತ್ತಿದ್ದೇನೆ ಎಂದು ಕೇಂದ್ರ ಸರಕಾರವನ್ನು ಎಚ್ಚರಿಸಿದರು. ಮುಂದಿನ 25 ವರ್ಷ 1971ರ ಜನಗಣತಿ ಆಧಾರದಲ್ಲೇ ಲೋಕಸಭಾ ಸ್ಥಾನಗಳನ್ನು ನಿಗದಿಪಡಿಸುವ ಬಗ್ಗೆ ಪ್ರಧಾನಿ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಎಲ್ಲಾ ಆಗಿ ಸಂಸತ್ತಿನಲ್ಲಿ ಸಂವಿಧಾನದ 131ನೇ ತಿದ್ದುಪಡಿಗಾಗಿ ಮಂಡಿಸಿದ್ದ ಮಸೂದೆ ಪಾಸ್ ಆಗದಿದ್ದಾಗ ‘ತಮಿಳುನಾಡು ದಿಲ್ಲಿಯನ್ನು ಮಣಿಸಿದೆ’ ಎಂದು ಗೆಲುವಿನ ಶ್ರೇಯವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡಿದರು. ಜೊತೆಜೊತೆಗೆ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಗೆಲುವನ್ನು ಖಾತರಿಪಡಿಸಿಕೊಂಡರು. ಕರ್ನಾಟಕ ಒಂದು ರಾಜ್ಯವಾಗಿ ಇಷ್ಟು ತೀವ್ರವಾದ ವಿರೋಧ ಮಾಡಲಿಲ್ಲ. ರಾಜ್ಯದ ಒಬ್ಬನೇ ಒಬ್ಬ ರಾಜಕಾರಣಿ ಹೀಗೆ ಮಾತನಾಡಿಲ್ಲ. ತಮಿಳುನಾಡಿನ ರಾಜಕಾರಣಿಗಳಿಗೆ ಚುನಾವಣಾ ಮುನ್ನ ತಮ್ಮ ನಿಲುವನ್ನು ಬಲವಾಗಿ ಪ್ರದರ್ಶಿಸಬೇಕಾದ ದರ್ದಿತ್ತು. ಅದಕ್ಕಾಗಿಯೇ ಮಾಡಿದರು ಎಂದುಕೊಂಡರೂ ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆಯಿಂದ ಆಗಬಹುದಾದ ಅಪಾಯಗಳ ದೃಷ್ಟಿಯಿಂದಲಾದರೂ ಕರ್ನಾಟಕದ ನಾಯಕರು ದನಿ ಎತ್ತಬೇಕಾಗಿತ್ತು. ಆ ಕೆಲಸ ರಾಜ್ಯದ ಮುಂಚೂಣಿ ನಾಯಕರಿಂದ ಆಗಲಿಲ್ಲ. ಇಲ್ಲಿನ ಬಿಜೆಪಿ ಸಂಸದರಿಗೆ ರಾಜ್ಯಕ್ಕಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ಮೋದಿ ಮುಖ್ಯ. ಮೋದಿಯನ್ನು ಮೆಚ್ಚಿಸಲು ತೇಜಸ್ವಿ ಸೂರ್ಯ ನಾಡದ್ರೋಹಿಯಾಗುವುದಕ್ಕೂ ಹಿಂಜರಿಯಲಿಲ್ಲ. ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುವ ಛಾತಿ ಇಲ್ಲ. ಬೇರೆ ಎಲ್ಲರನ್ನು ಬಿಡಿ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಷ್ಟ್ರಮಟ್ಟದ ಮುಂಚೂಣಿ ನಾಯಕರಲ್ಲೊಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯಕ್ಕಾಗುವ ಅನ್ಯಾಯ ಮತ್ತು ಅಪಾಯಗಳ ಬಗ್ಗೆ ಮಾತನಾಡಬೇಕಿತ್ತು. ಈ ಪೈಕಿ ಮಲ್ಲಿಕಾರ್ಜುನ ಖರ್ಗೆ ಪರವಾಗಿಲ್ಲ. ಲೋಕಸಭೆಯಲ್ಲಿ ಮಸೂದೆಯನ್ನು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸೋಲಿಸತ್ತೇವೆ ಎಂದು ಮೊದಲೇ ಹೇಳಿದ್ದರು. ಸೋಲಿಸಲು ಇಂಡಿಯಾ ಮೈತ್ರಿಕೂಟದ ನಾಯಕರ ಮನವೊಲಿಸುವುದಕ್ಕೂ ಶ್ರಮಪಟ್ಟಿದ್ದರು. ಆದರೆ ದೇವೇಗೌಡ ಮತ್ತು ಸಿದ್ದರಾಮಯ್ಯ ಜನ ಇಟ್ಟಿದ್ದ ಬೆಟ್ಟದಷ್ಟು ನಿರೀಕ್ಷೆಗಳನ್ನು ನಿರ್ಲಜ್ಜವಾಗಿ ಹುಸಿಗೊಳಿಸಿದ್ದಾರೆ. ದೇವೇಗೌಡ ನೇತೃತ್ವ ವಹಿಸಬೇಕಿತ್ತು! ಕರ್ನಾಟಕದಿಂದ ಸಾಧ್ಯವಾಗದಿದ್ದರೆ ಮಹಾರಾಷ್ಟ್ರದಿಂದಲಾದರೂ ರಾಜ್ಯಸಭೆಗೆ ಹೋಗಬೇಕೆಂದು ಶತಪ್ರಯತ್ನ ಮಾಡುತ್ತಿರುವ ದೇವೇಗೌಡ ಅರೆಗಳಿಗೆಯಾದರೂ ನಾನು ಈ ನಾಡಿನ ಮಣ್ಣಿನ ಮಗ ಎಂದು ನೆನಪಿಸಿಕೊಳ್ಳಬೇಕಿತ್ತು. ಹೆಸರಿನಲ್ಲೇ ಜಾತ್ಯತೀತ ಎಂಬ ಪದವಿದ್ದರೂ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂದು ಕನಸು ಕಾಣುತ್ತಿದ್ದಾರೆ. ಮೂರು ಸಲ ಸೋತಿರುವ ಮೊಮ್ಮಗನಿಗೆ ಗೆಲುವಿನ ಸಿಹಿ ತಿನಿಸಬೇಕೆಂದು ಬಿಜೆಪಿ ಜೊತೆ ಇನ್ನಿಲ್ಲದಂತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅದೇನಾದರೂ ಆಗಲಿ, ಕ್ಷೇತ್ರಪುನರ್ ವಿಂಗಡಣೆ ಬಗ್ಗೆ ತಳೆದ ಮೌನ ಮಾತ್ರ ಅವರಿಗವರೇ ಮಾಡಿಕೊಂಡ ಅಪಮಾನ. ಶಾಸನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡಬೇಕೆಂಬ ಯೋಚನೆ ಮೊಳಕೆಯೊಡೆದದ್ದೇ ದೇವೇಗೌಡ ಪ್ರಧಾನ ಮಂತ್ರಿ ಆಗಿದ್ದಾಗ. ಆಗ ಲಾಲು ಪ್ರಸಾದ್ ಯಾದವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮಹಿಳಾ ಮೀಸಲಾತಿಯಲ್ಲಿ ಒಳ ಮೀಸಲಾತಿ ಅಳವಡಿಸಿ, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಪ್ರತ್ಯೇಕ ಕ್ಷೇತ್ರ ನಿಗದಿ ಮಾಡಬೇಕು. ಪ್ರತ್ಯೇಕ ಕ್ಷೇತ್ರ ನಿಗದಿಯಾಗದಿದ್ದರೆ ಮತ್ತೆ ಮೇಲ್ವರ್ಗದ ಮಹಿಳೆಯರೇ ಸಂಸದರಾಗುವ ಸಾಧ್ಯತೆ ಇರುತ್ತದೆ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುತ್ತದೆ’ ಎಂದು ಹೇಳಿದ್ದರು. ಇದನ್ನೇ ನೆಪ ಮಾಡಿಕೊಂಡು ದೇವೇಗೌಡ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮುಟ್ಟಿ ನೋಡಲಿಲ್ಲ. ಈಗ ನೇರವಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲುಹೊರಟರೆ ತೀವ್ರವಾದ ವಿರೋಧ ವ್ಯಕ್ತವಾಗುತ್ತದೆಂದು ಅರಿತಿದ್ದ ಮೋದಿ ಸರಕಾರ ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಮಹಿಳಾ ಮೀಸಲಾತಿ ವಿಷಯವನ್ನು ಜೋಡಿಸಿತ್ತು. ಮಹಿಳಾ ಮತದಾರರಿಗೆ ಹೆದರಿ ವಿರೋಧ ಪಕ್ಷಗಳು ಮಸೂದೆ ಪರ ನಿಲ್ಲುತ್ತವೆ ಎಂದು ಭ್ರಮಿಸಿತ್ತು. ದೇವೇಗೌಡ ಬಿಜೆಪಿಯ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಲಾರದಷ್ಟು ದಡ್ಡರಲ್ಲ. ಆದರೂ ಮೌನವಾಗಿ ಸಮ್ಮತಿ ಸೂಚಿಸಿದ್ದರು. ಸದ್ಯ ಮಸೂದೆ ಸಂಸತ್‌ನಲ್ಲಿ ಪಾಸ್ ಆಗಿಲ್ಲ. ಅದರಿಂದ ಸಮಸ್ಯೆ ಇಲ್ಲ. ಒಂದೊಮ್ಮೆ ಪಾಸ್ ಆಗಿದ್ದರೆ ದಕ್ಷಿಣದ ರಾಜ್ಯಗಳ ಪಾಲಿಗೆ ಅದು ಮರಣಶಾಸನವಾಗುತ್ತಿತ್ತು. ಇದರ ಬಗ್ಗೆ ದೇವೇಗೌಡ ಮಾತನಾಡಬೇಕಿತ್ತು. ಮಾತನಾಡುವುದಕ್ಕಿಂತ ಮಿಗಿಲಾಗಿ ಹಿಂದೆ ಕಾವೇರಿ ವಿಷಯದಲ್ಲಿ ಮಾಡಿದಂತೆ ರಾಜ್ಯ ಸರಕಾರದ ಜೊತೆ ಕೈಜೋಡಿಸಬೇಕಿತ್ತು. ಹೋರಾಟದ ಮುಂಚೂಣಿಗೆ ಬಂದು ನಿಲ್ಲಬೇಕಾಗಿತ್ತು. ದೇಶ 75 ವರ್ಷದಲ್ಲಿ 15 ಪ್ರಧಾನಿಗಳನ್ನು ಕಂಡಿದೆ. ಅದರಲ್ಲಿ ದೇವೇಗೌಡ ಮತ್ತು ಪಿ.ವಿ. ನರಸಿಂಹರಾವ್ ಮಾತ್ರ ದಕ್ಷಿಣದವರು. ಮೋದಿ ಸರಕಾರ ಬಯಸಿದಂತೆ ಕ್ಷೇತ್ರ ಪುನರ್‌ವಿಂಗಡಣೆ ಆಗಿದ್ದರೆ ಇನ್ನು 150 ವರ್ಷ ಕಳೆದರೂ ಮತ್ತು 30 ಮಂದಿ ಪ್ರಧಾನಿಯಾದರೂ ದಕ್ಷಿಣದಿಂದ ಒಬ್ಬನೇ ಒಬ್ಬನಿಗೂ ಅಂಥ ಅವಕಾಶ ಬರುತ್ತಿರಲಿಲ್ಲ. ಆದರೂ ದೇವೇಗೌಡ ಏಕೆ ಮಾತನಾಡಲಿಲ್ಲ? ಈ ಪರಿಸ್ಥಿತಿಯಲ್ಲಿ ದೇವೇಗೌಡರೇ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಪಕ್ಷಗಳು, ಪ್ರಾದೇಶಿಕ ನಾಯಕರು ಮತ್ತು ಮುಖ್ಯಮಂತ್ರಿಗಳ ಸಭೆ ಕರೆಯಬೇಕಿತ್ತು. ದಕ್ಷಿಣ ರಾಜ್ಯಗಳ ಎಲ್ಲಾ ನಾಯಕರನ್ನು ಒಗ್ಗೂಡಿಸಿ, ಸಮಾಲೋಚಿಸಿ ಕ್ಷೇತ್ರ ಪುನರ್‌ವಿಂಗಡಣೆಯ ಮಸೂದೆ ರದ್ದುಪಡಿಸಲು ನೇತೃತ್ವ ವಹಿಸಬೇಕಿತ್ತು. ಸಂಸತ್‌ನಲ್ಲಿ ಕಡತಕ್ಕೆ ಹೋಗಲು ಭಾಷಣ ಮಾಡುವುದಲ್ಲ, ಸಮರ್ಥ ಹೋರಾಟವನ್ನು ರೂಪಿಸಿ ಕೇಂದ್ರ ಸರಕಾರವನ್ನು ಮಣಿಸಲು ಮುಂದಾಗಬೇಕಿತ್ತು. ಸೀಮಿತರಾದ ಸಿದ್ದರಾಮಯ್ಯ! ನಾಯಕತ್ವ ಬದಲಾವಣೆ ಚರ್ಚೆಯಿಂದ ಬಸವಳಿದಂತೆ ಕಾಣುತ್ತಿರುವ ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡಣೆ ವಿಚಾರವನ್ನೇ ಸಂಜೀವಿನಿಯಂತೆ ಮಾಡಿಕೊಳ್ಳಬಹುದಿತ್ತು. ಬಿಜೆಪಿಯ ಕೇಸರಿ ರಾಜಕಾರಣಕ್ಕೆ ತಮಿಳುನಾಡು ಕಪ್ಪು ಬಣ್ಣದ ಹೊಡೆತ ಕೊಟ್ಟಂತೆ ಕರ್ನಾಟಕ ಹಳದಿ ಮತ್ತು ಕೆಂಪು ಬಣ್ಣಗಳಿಂದ ದೇಶದ ಗಮನ ಸೆಳೆಯುವಂತೆ ಮಾಡಬಹುದಿತ್ತು. ಸಿದ್ದರಾಮಯ್ಯ ಅವರನ್ನು ಕನ್ನಡರಾಮಯ್ಯ ಎಂದು ಕೂಡ ಕರೆಯಲಾಗುತ್ತದೆ. ಕನ್ನಡ ವ್ಯಾಕರಣದ ಭಾಷಣ ಮಾಡುವುದಲ್ಲ, ಕನ್ನಡ ನಾಡಿನ ಕೂಗನ್ನು ದಿಲ್ಲಿಗೆ ಮುಟ್ಟಿಸುವ ಮೂಲಕ ನಿಜವಾದ ಕರುನಾಡರಾಮಯ್ಯ ಎಂದು ಸಾಬೀತು ಪಡಿಸಬೇಕಾಗಿತ್ತು. ಸ್ಟಾಲಿನ್ ರೀತಿ ಮೈಕೊಡವಿ ನಿಂತಿದ್ದರೆ ಸಹಜವಾಗಿ ಸಿದ್ದರಾಮಯ್ಯ ಅವರಿಗೂ ಜನ ಬೆಂಬಲ ಸಿಕ್ಕಿರುತ್ತಿತ್ತು. ಸ್ಟಾಲಿನ್ ರೀತಿಯಲ್ಲೇ ‘ಕರ್ನಾಟಕದ ಎದುರು ದಿಲ್ಲಿ ಸೋತಿದೆ’ ಎಂದು ಸಿದ್ದರಾಮಯ್ಯ ಕೂಡ ಅಬ್ಬರಿಸಬಹುದಿತ್ತು. ಇದೇ ವಿಷಯ ಸ್ಟಾಲಿನ್ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗುತ್ತಿರುವಂತೆ ನಾಯಕತ್ವ ಬದಲಾವಣೆ ವಿಷಯದಲ್ಲಿ ಸಿದ್ದರಾಮಯ್ಯರಿಗೂ ಫಸಲು ಕೊಡುತ್ತಿತ್ತು. ದೇವೇಗೌಡ ಮಾಡಿಲ್ಲದಿದ್ದರೇನಂತೆ, ಸಿದ್ದರಾಮಯ್ಯನವರಾದರೂ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮತ್ತಿತರ ಸಾಂಸ್ಕೃತಿಕ ನಾಯಕರ ಸಭೆ ಕರೆಯಬೇಕಿತ್ತು. ದಕ್ಷಿಣ ರಾಜ್ಯಗಳ ಜನ ನಾಯಕರನ್ನು ಒಗ್ಗೂಡಿಸಲು ಮುಂದಾಗಬೇಕಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಹೈಕಮಾಂಡಿನ ತಕರಾರು ಇರುತ್ತಿತ್ತಾದರೂ ರಾಹುಲ್ ಗಾಂಧಿ ತುಸು ಭಿನ್ನವಾಗಿ ಯೋಚನೆ ಮಾಡಿ ಸಿದ್ದರಾಮಯ್ಯನವರ ಬೆನ್ನುತಟ್ಟುವ ಸಾಧ್ಯತೆ ಇತ್ತು. ಸದ್ಯ ಕ್ಷೇತ್ರ ಪುನರ್ ವಿಂಗಡಣೆಗಿರುವ ಮಸೂದೆ ಪಾಸ್ ಆಗಿಲ್ಲ. ಅದರಿಂದ ತಕ್ಷಣಕ್ಕೆ ಯೋಚನೆ ಮಾಡುವ ಅಗತ್ಯ ಇಲ್ಲ. ಹಾಗಂತ ಸಿದ್ದರಾಮಯ್ಯ ವರ್ತನೆಯನ್ನು ಜನ ಮರೆಯುವುದಿಲ್ಲ. ಮೇಲೆ ಹೇಳಿದ ಹಲವು ಕೆಲಸಗಳನ್ನು, ಅದರಾಚೆಗೂ ಕೆಲವನ್ನು ಅವರು ಮಾಡಬೇಕಿತ್ತು. ಕಡೆಯ ಪಕ್ಷ ಕ್ಷೇತ್ರ ಪುನರ್ ವಿಂಗಡಣೆ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಪತ್ರಿಕಾಗೋಷ್ಠಿ ಕರೆದಿಲ್ಲ. ಮೋದಿ ಕರ್ನಾಟಕಕ್ಕೆ ಬಂದಿದ್ದಾಗ ಮನವಿ ಪತ್ರ ಕೊಟ್ಟಿದ್ದಾರೆ. ಟಿ.ವಿ. ಮಾಧ್ಯಮದವರು ಅವರಾಗಿಯೇ ಕೇಳಿದಾಗ ಒಂದು ಬೈಟ್ ಕೊಟ್ಟು, ಖಡಕ್ ಆದ ಒಂದು ಟ್ವೀಟ್ ಮಾಡಿದ್ದಾರೆ. ಹೆಚ್ಚೆಂದರೆ ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ. ಇಷ್ಟಕ್ಕೇ ಅವರನ್ನವರು ಸೀಮಿತ ಮಾಡಿಕೊಂಡಿದ್ದಾರೆ. ದೇವೇಗೌಡ ಮತ್ತು ಸಿದ್ದರಾಮಯ್ಯ ಏಕೆ ಹೀಗಾದರು? ಆಫ್ ದಿ ರೆಕಾರ್ಡ್ ಬೆಂಗಳೂರಿನ ರಸ್ತೆ ಕಿತ್ತುಹೋದಾಗ ಆಕಾಶವೇ ಬಿದ್ದುಹೋಗಿದೆ ಎಂದು ಬಾಯಿಬಿಡುವ ಮೋಹನ್ ದಾಸ್ ಪೈ, ಕಿರಣ್ ಮಜುಮ್ದಾರ್-ಷಾ, ಪ್ರಭಾವಶಾಲಿಗಳು ಎಂದು ಬೀಗಿಕೊಳ್ಳುವ ಸುದೀಪ್, ಯಶ್ ಮತ್ತಿತರ ನಟರು ಕೂಡ ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ದನಿ ಎತ್ತಿಲ್ಲ ಎನ್ನುವುದು ನಿಜ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗಬಾರದ ಅನ್ಯಾಯ ಆಗುತ್ತಿದ್ದರೂ ನೋಡಿಕೊಂಡು ಮೌನವಾಗಿರುವ ಇವರಿಗೆಲ್ಲಾ ಬುದ್ಧಿ ಕಲಿಸುವವರು ಯಾರು?

ವಾರ್ತಾ ಭಾರತಿ 19 Apr 2026 11:45 pm

IPL 2026- ಮುಂದುವರಿದ ಪಂಜಾಬ್ ಕಿಂಗ್ಸ್ ಅಜೇಯ ಸವಾರಿ ; ಲಖನೌ ಸೂಪರ್ ಜೈಂಟ್ಸ್ ಗೆ ಹ್ಯಾಟ್ರಿಕ್ ಸೋಲಿನ ಬರೆ

ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಜೇಯ ದಂಡಯಾತ್ರೆ ಮುಂದುವರಿದಿದೆ. ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನಲ್ಲಿ ಅವರ ಹೊಡೆಬಡಿಯ ಅರ್ಧಶತಕ ಮತ್ತು ಮಾರ್ಕೋ ಯಾನ್ಸನ್ ಅವರ ಮಾರಕ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 54 ರನ್ ಗಳಿಂದ ಸೋಲಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕಗಳೊಂದಿಗೆ ಯಲ್ಲಿ ಅಗ್ರಸ್ಥಾನಿಯಾಗಿಯೇ ಮುಂದುವರಿದಿದೆ. ನವ ಚಂಡೀಗಢದಲ್ಲಿ ಏಪ್ರಿಲ್ 19 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 254 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ ಅವರು ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಗಳಿಸಲಷ್ಟೇ ಸಾಧ್ಯವಾಯಿತು. ()

ವಿಜಯ ಕರ್ನಾಟಕ 19 Apr 2026 11:43 pm

Women’s Reservation: ಮಹಿಳಾ ಮೀಸಲಾತಿ - ಕ್ಷೇತ್ರ ಮರು ವಿಂಗಡಣೆ ವಿವಾದ: ಬಿಜೆಪಿ ಟ್ವೀಟ್‌ಗಳಿಗೆ ಕನ್ನಡಿಗರಿಂದ ಕ್ಲಾಸ್‌

Women's Reservation - Delimitation: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಈ ಮರು ವಿಂಗಡಣೆಯ ಆಧಾರದ ಮೇಲೆ ಮಹಿಳಾ ಮೀಸಲಾತಿ ಮಂಡನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡನೆ ಮಾಡಲಾಗಿರುವ ಮಸೂದೆಗಳಿಗೆ ಸೋಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ವಿರುದ್ಧ ಕೆಂಡಕಾರಿದ್ದು, ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದರ ನಡುವೆ ಕರ್ನಾಟಕ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್

ಒನ್ ಇ೦ಡಿಯ 19 Apr 2026 11:32 pm

ಅಕ್ರಮವಾಗಿ ಐಪಿಎಲ್ ಟಿಕೆಟ್‍ಗಳ ಮಾರಾಟ ಪ್ರಕರಣ: ಡಿಎನ್‍ಎ ಸಂಸ್ಥೆಗೆ ಸಿಸಿಬಿ ನೋಟಿಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಐಪಿಎಲ್ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‍ಸಿಎ) ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್‍ಐಆರ್ ದಾಖಲಾದ ಬೆನ್ನಲ್ಲೇ, RCB ಟಿಕೆಟ್ ನಿರ್ವಹಣೆ ಮಾಡುವ ಡಿಎನ್‍ಎ ಎಂಟರ್‍ಟೈನ್‍ಮೆಂಟ್ ನೆಟ್‍ವರ್ಕ್ಸ್ ಸಂಸ್ಥೆಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ. ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದಾಗ ವಿಚಾರಣೆ ವೇಳೆ ಆತ ಕೆಎಸ್‍ಸಿಎ ಸದಸ್ಯ ಹರಿಕೇಶ್ ಹೆಸರನ್ನು ಬಹಿರಂಗಪಡಿಸಿದ್ದ. ಆರೋಪಿ ಚಂದ್ರಶೇಖರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯಾಂಟೀನ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಅವನ ಮೂಲಕವೇ ಟಿಕೆಟ್‍ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಹರಿಕೇಶ್ ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್ ಹಾಗೂ ಧರಣಿ ಕಂಪ್ಯೂಟರ್ಸ್ ಎಂಬ ಎರಡು ಖಾಸಗಿ ಕಂಪೆನಿಗಳ ಹೆಸರಿನಲ್ಲಿ ಆನ್‍ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಐಪಿಎಲ್ ಟಿಕೆಟ್‍ಗಳನ್ನು ಖರೀದಿಸುತ್ತಿದ್ದನು ಎಂದು ತಿಳಿದುಬಂದಿದೆ. ಈ ಕಂಪೆನಿಗಳ ಮೂಲಕ ಟಿಕೆಟ್‍ಗಳನ್ನು ಪಡೆಯುತ್ತಿದ್ದ ಗಣೇಶ್, ಬಳಿಕ ಅವುಗಳನ್ನು ಚಂದ್ರಶೇಖರ್ ನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸದ್ಯ, ಇದೆಲ್ಲದರ ನಡುವೆ RCB ಟಿಕೆಟ್ ನಿರ್ವಹಣೆಯನ್ನು ಹೊತ್ತಿರುವ ಡಿಎನ್‍ಎ ಎಂಟರ್‍ಟೈನ್‍ಮೆಂಟ್ ನೆಟ್‍ವರ್ಕ್ಸ್ ಸಂಸ್ಥೆಯ ಮೇಲೂ ಸಿಸಿಬಿಗೆ ಅನುಮಾನ ವ್ಯಕ್ತವಾಗಿದ್ದು, ಸಂಸ್ಥೆಗೆ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಾರ್ತಾ ಭಾರತಿ 19 Apr 2026 11:28 pm

Islamabad talks | ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ: ಇರಾನ್ ಸ್ಪಷ್ಟನೆ

ಟೆಹರಾನ್, ಎ.19: ನಾಳೆ ನಡೆಯಲಿದೆ ಎಂದು ಅಮೆರಿಕ ಹೇಳಿರುವ ಎರಡನೇ ಸುತ್ತಿನ ಶಾಂತಿ ಮಾತುಕತೆ ಕುರಿತು ಇರಾನ್ ಗೊಂದಲ ನಿವಾರಣೆ ಮಾಡಿದ್ದು, ಆ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ಅವಾಸ್ತವಿಕ ನಿರೀಕ್ಷೆಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಇರಾನ್ ಆರೋಪಿಸಿದೆ ಎಂದು Aljazeera ವರದಿ ಮಾಡಿದೆ. ಇರಾನಿನ ಅಧಿಕೃತ ಸುದ್ದಿ ಸಂಸ್ಥೆ IRNAದ ಪ್ರಕಾರ, ಅಮೆರಿಕ ತನ್ನ ನಿಲುವನ್ನು ಪದೇಪದೇ ಬದಲಾಯಿಸುತ್ತಿದ್ದು, ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದೆ. ಜೊತೆಗೆ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತಿರುವುದು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಟೀಕಿಸಿದೆ. ಇಸ್ಲಾಮಾಬಾದ್‌ ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನೂ IRNA ತಳ್ಳಿಹಾಕಿದೆ. ಅಮೆರಿಕ ನೀಡಿರುವ ಹೇಳಿಕೆಗಳು ಮಾಧ್ಯಮಗಳ ಮೂಲಕ ಒತ್ತಡ ಹೇರುವ ಪ್ರಯತ್ನವಾಗಿದ್ದು, ಇರಾನ್ ವಿರುದ್ಧ ಆರೋಪಗಳನ್ನು ಹರಡುವ ಯತ್ನವಾಗಿದೆ ಎಂದು ಆರೋಪಿಸಲಾಗಿದೆ.

ವಾರ್ತಾ ಭಾರತಿ 19 Apr 2026 11:21 pm

Women’s Reservation: ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ.. ಆದರೆ ಈ ವಿಚಾರಕ್ಕೆ ಒಪ್ಪಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ

Women's Reservation: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ

ಒನ್ ಇ೦ಡಿಯ 19 Apr 2026 11:07 pm

ಶ್ರವಣ ತೊಂದರೆ ಇರುವವರಿಗೆ ಉಚಿತ ಸಾಧನ ವಿತರಣೆ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಜನ್ಮದಿನಕ್ಕೆ ವಿಶೇಷ ಕಾರ್ಯಕ್ರಮ

ಸೇಡಂ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರ 59ನೇ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದಿಂದ ಶ್ರವಣ ತೊಂದರೆಯಿರುವವರಿಗೆ ಉಚಿತ ಶ್ರವಣ ಸಾಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 20ರಂದು ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನುರಿತ ತಜ್ಞರಿಂದ ಶ್ರವಣ ತಪಾಸಣೆ ನಡೆಸಿ ಬಳಿಕ ಸಾಧನಗಳನ್ನು ವಿತರಿಸಲಾಗುವುದು ಎಂದು ಬಳಗದ ಪ್ರಮುಖರು ತಿಳಿಸಿದ್ದಾರೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ 24 ಮಂದಿ ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ. ಬಡವರು ಹಾಗೂ ಶೋಷಿತರಿಗಾಗಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.

ವಾರ್ತಾ ಭಾರತಿ 19 Apr 2026 11:01 pm

Karnataka Rain: ಕರ್ನಾಟಕದಲ್ಲಿ ಈ ಬಾರಿ ಮಳೆ ಕೊರತೆ ಮುನ್ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು

Karnataka Rain: ಈ ಬಾರಿ ಕರ್ನಾಟಕದಲ್ಲಿ ಮಳೆ ಕೊರತೆಯಾಗಲಿದೆ ಎಂಬ ಮುನ್ಸೂಚನೆ ಇದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ

ಒನ್ ಇ೦ಡಿಯ 19 Apr 2026 10:44 pm

ಈ ಬಾರಿ ಒಪ್ಪಂದ ಮೂಡದಿದ್ದರೆ ಇರಾನ್‌ ಧ್ವಂಸ: ಮೃದು ಧೋರಣೆ ತೋರಲ್ಲ ಎಂದು ಟ್ರಂಪ್‌ ಗುಡುಗು

ವಾಷಿಂಗ್ಟನ್‌/ಟೆಹ್ರಾನ್‌: ಮಧ್ಯಪ್ರಾಚ್ಯದಲ್ಲಿ ಜಾರಿಯಲ್ಲಿರುವ 10 ದಿನಗಳ ಕದನ ವಿರಾಮ ಅಂತ್ಯಗೊಳ್ಳಲು ಇನ್ನೆರೆಡು ದಿನ ಬಾಕಿ ಉಳಿದಿರುವಾಗಲೇ ಎರಡನೇ ಸುತ್ತಿಗೆ ಸಂಧಾನ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸಿದೆ. ಇದರ ನಡುವೆಯೇ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ''ಸಂಘರ್ಷ ಕೊನೆಗಾಣಿಸಲು ಸಮಂಜಸ ಒಪ್ಪಂದಕ್ಕೆ (ಫೇರ್‌ ಡೀಲ್‌) ಬಾರದಿದ್ದರೆ ಇರಾನ್‌ನ ಪ್ರತಿಯೊಂದು ವಿದ್ಯುತ್‌ ಸ್ಥಾವರ, ಸೇತುವೆಗಳು ಧ್ವಂಸಗೊಳ್ಳಲಿವೆ. ಇನ್ನು ಮೃದು ಧೋರಣೆ ತೋರುವ ಮಾತೇ ಇಲ್ಲ,'' ಎಂದು ಸಾಮಾಜಿಕ ಜಾಲತಾಣ ಟ್ರುಥ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.''ಪಾಕಿಸ್ತಾನದಲ್ಲಿ ಎರಡನೇ ಹಂತದ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ. ನಮ್ಮ ಪ್ರತಿನಿಧಿಗಳು ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳಸಲಿದ್ದಾರೆ. ಏಪ್ರಿಲ್ 20ರ ಸೋಮವಾರ ಸಂಜೆಯೊಳಗೆ ಇರಾನ್‌ ನಿಯೋಗ ಆಗಮಿಸಬೇಕು. ಅಮೆರಿಕ ತುಂಬ ಸಮಂಜಸ ಹಾಗೂ ನ್ಯಾಯಯುತ ಒಪ್ಪಂದದ ಆಹ್ವಾನ ನೀಡಿದೆ. ಯುದ್ಧ ಅಂತ್ಯಗೊಳಿಸುವ ಸಂಬಂಧ ಇರಾನ್‌ ಸೂಕ್ತ ಒಪ್ಪಂದಕ್ಕೆ ಬರಲೇಬೇಕು. ಶಾಂತಿ ಒಪ್ಪಂದ ಮೂಡದಿದ್ದರೆ ಇರಾನ್‌ ಧ್ವಂಸವಾಗಲಿದೆ,'' ಎಂದು ಟ್ರಂಪ್‌ ಗುಡುಗಿದ್ದಾರೆ. ಇದರ ನಡುವೆ ಇರಾನ್‌ ರಾಷ್ಟ್ರೀಯ ಭದ್ರತಾ ಮಂಡಳಿ, ದೇಶದ ಹಿತಾಸಕ್ತಿ ಕಡೆಗಣಿಸಿ ಯಾವುದೇ ಕಾರಣಕ್ಕೆ ವಾಷಿಂಗ್ಟನ್‌ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಹೀಗಾಗಿ ಎರಡನೇ ಸುತ್ತಿನ ಮಾತುಕತೆ ಮೇಲೆ ವಿಶ್ವದ ಗಮನ ನೆಟ್ಟಿದೆ.ವ್ಯಾನ್ಸ್‌ ಇಲ್ಲ: ಸಂಧಾನ ಮಾತುಕತೆಯಲ್ಲಿ ಅಮೆರಿಕ ಪ್ರತಿನಿಧಿಗಳಾಗಿ ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌, ಟ್ರಂಪ್‌ ಸಲಹೆಗಾರ ಹಾಗೂ ಅಳಿಯ ಜೇರೆಡ್‌ ಕುಶ್ನರ್‌ ಭಾಗಿಯಾಗಲಿದ್ದಾರೆ. ಮೊದಲ ಸುತ್ತಿನ ಮಾತುಕತೆ ನೇತೃತ್ವ ವಹಿಸಿದ್ದ ಉಪಧ್ಯಕ್ಷ ಜೆ.ಡಿ.ವ್ಯಾನ್ಸ್‌ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ವ್ಯಾನ್ಸ್‌ ತೆರಳಲಿದ್ದಾರೆ ಎಂಬ ವರದಿಗಳು ಈ ಮೊದಲು ಮಾಧ್ಯಮಗಳಲ್ಲಿ ಹರಿದಾಡಿತ್ತು. ಇರಾನ್‌ ವಿನಾಶ ಖಚಿತ ಸಂಘರ್ಷ ಕೊನೆಗಾಣಿಸಲು ಅಮೆರಿಕ ನೀಡಿರುವ ಸಂಧಾನ ಸೂತ್ರವನ್ನು ಇರಾನ್‌ ಸ್ವೀಕರಿಸುವ ವಿಶ್ವಾಸವಿದೆ. ನಮ್ಮ ನಿರೀಕ್ಷೆಯಂತೆ ಒಪ್ಪಂದ ಮೂಡದಿದ್ದರೆ ಇರಾನ್‌ ವಿನಾಶಕ್ಕೆ ಮುಹೂರ್ತ ನಿಗದಿಯಾಗಲಿದೆ. ಕಳೆದ 47 ವರ್ಷಗಳಿಂದ ಯಾವ ಅಧ್ಯಕ್ಷರು ಮಾಡದ ಕೆಲಸವನ್ನು ನಾನು ಮಾಡುವೆ. 'ಇರಾನ್‌ನ ಕಿಲ್ಲಿಂಗ್‌ ಮಷಿನ್‌'ಗೆ ಅಂತ್ಯ ಹಾಡುವೆ.-ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ---------- ಹರ್ಮುಜ್‌ ದಾಟಿದ ಭಾರತದ ಟ್ಯಾಂಕರ್‌ ಶನಿವಾರದ ಗುಂಡಿನ ದಾಳಿ ಬಳಿಕ ಕಚ್ಚಾ ತೈಲ ಹೊತ್ತ ಭಾರತದ 'ದೇಶ್‌ ಗರೀಮಾ' ಟ್ಯಾಂಕರ್‌ ಶಿಪ್‌ ಹರ್ಮುಜ್‌ ಜಲಸಂಧಿ ದಾಟಿದೆ. ಭಾರತದ ತೀವ್ರ ಆಕ್ರೋಶದ ಬಳಿಕ ಸುರಕ್ಷಿತವಾಗಿ ತೈಲ ಹಡಗನ್ನು ಜಲಮಾರ್ಗ ದಾಟಿಸಲಾಗಿದೆ. ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಅಡಿಯಲ್ಲಿಕಾರ್ಯ ನಿರ್ವಹಿಸುವ 'ದೇಶ್‌ ಗರೀಮಾ' ತೈಲ ಟ್ಯಾಂಕರ್‌ ಏ.18ರ ರಾತ್ರಿ ಜಲಸಂಧಿ ದಾಟಿದೆ. ಏ.22 ರಂದು ಮುಂಬಯಿ ಬಂದರಿಗೆ ಆಗಮಿಸುವ ನಿರೀಕ್ಷೆ ಇದೆ. ಫೆ.28 ರಂದು ಸಂಘರ್ಷ ಆರಂಭದ ಬಳಿಕ ಭಾರತದ 10ನೇ ಹಡಗು ಜಲಮಾರ್ಗ ದಾಟಿ ಬಂದಿದೆ. ಕಚ್ಚಾ ತೈಲ ಹೊತ್ತ 'ದೇಶ್‌ ವೈಭವ್‌', 'ದೇಶ್‌ ವಿಭೋರ್‌' ಹಡಗುಗಳು ಪರ್ಶಿಯನ್‌ ಕೊಲ್ಲಿಯಲ್ಲಿದ್ದು, ಜಲಸಂಧಿ ದಾಟಲು ಗ್ರೀನ್‌ ಸಿಗ್ನಲ್‌ ನಿರೀಕ್ಷೆಯಲ್ಲಿವೆ. ಇನ್ನೂ 14 ಭಾರತೀಯ ಹಡಗುಗಳ ಜಲಮಾರ್ಗದಲ್ಲಿಉಳಿದುಕೊಂಡಿವೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಯುದ್ಧದಲ್ಲಿ ಗೆದ್ದಿದ್ದು ನಾವೇ: ಟೆಹ್ರಾನ್‌ ಎರಡ್ಮೂರು ದಿನಗಳಲ್ಲಿ ಇರಾನ್‌ನನ್ನು ಸೋಲಿಸುತ್ತೇವೆಂದು ಅಮೆರಿಕ ನಂಬಿತ್ತು. ಆದರೆ, 40 ದಿನಗಳ ಸಂಘರ್ಷ ನಂತರವೂ ಟೆಹ್ರಾನ್‌ ಅಚಲವಾಗಿ ಹೋರಾಡುತ್ತಿದೆ. ಎಫ್‌-35 ವಿಮಾನ ಹೊಡೆದುರುಳಿಸಿದ್ದು ಸಣ್ಣ ಸಂಗತಿಯಲ್ಲ. ಯುದ್ಧದಲ್ಲಿ ಗೆದ್ದಿದ್ದು ನಾವೇ ಎಂದು ಇರಾನ್‌ ಹೇಳಿದೆ.

ವಿಜಯ ಕರ್ನಾಟಕ 19 Apr 2026 10:40 pm

ಹಾರ್ಮುಝ್ ಮೇಲೆ ನಿಯಂತ್ರಣ ಬಿಗಿಗೊಳಿಸಿದ IRGC; ಜಲಸಂಧಿಗೆ ಪ್ರವೇಶಿಸುವ ಹಡಗುಗಳಿಗೆ ದಾಳಿ ಎಚ್ಚರಿಕೆ

ಟೆಹರಾನ್, ಎ.10: ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಇರಾನ್ ಮತ್ತೆ ಬಿಗಿಗೊಳಿಸಿದೆ. ಮುಚ್ಚಲ್ಪಟ್ಟಿರುವ ಜಲಸಂಧಿ ಪ್ರದೇಶವನ್ನು ಪ್ರವೇಶಿಸಲು ಯತ್ನಿಸುವ ಯಾವುದೇ ಹಡಗನ್ನು ಶತ್ರುವೆಂದು ಪರಿಗಣಿಸಿ ದಾಳಿ ನಡೆಸಲಾಗುವುದೆಂದು ಇರಾನ್ ನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ (IRGC) ನೌಕಾದಳ ರವಿವಾರ ಎಚ್ಚರಿಕೆ ನೀಡಿದೆ. ಇರಾನ್ ಬಂದರುಗಳಿಗೆ ಪ್ರಯಾಣಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ನೌಕೆಗಳಿಗೆ, ಅಮೆರಿಕದ ದಿಗ್ಬಂಧನ ತೆರವುಗೊಳ್ಳುವವರೆಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಅದು ಹೇಳಿದೆ. ಹಾರ್ಮುಝ್ ಜಲಸಂಧಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಯಾವುದೇ ಸಿಂಧುತ್ವವಿಲ್ಲ ಎಂದು IRGC ಹೇಳಿದೆ. ಹಡಗುಗಳ ಮಾಲಕರು IRGC ನೀಡುವ ಸೂಚನೆಗಳನ್ನು ಮಾತ್ರ ಅನುಸರಿಸುವಂತೆ ಸೂಚಿಸಲಾಗಿದೆ. ಭಾರತದ ತೈಲ ಸಾಗಾಟ ಟ್ಯಾಂಕರ್ ಹಡಗುಗಳಾದ ‘ಜಗ ಅರ್ನವ್’ ಹಾಗೂ ‘ಸನ್ಮಾರ್ ಹೆರಾಲ್ಡ್’ ಮೇಲೆ ಹಾರ್ಮುಝ್ ಜಲಸಂಧಿಯ ಸಮೀಪ ಇರಾನ್ ಪಡೆಗಳು ಶನಿವಾರ ಗುಂಡು ಹಾರಿಸಿದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ.

ವಾರ್ತಾ ಭಾರತಿ 19 Apr 2026 10:31 pm

Saudi Arabia ಮೃತಪಟ್ಟವರ ಹೆಸರಿನ ವಾಹನ ಓಡಿಸಿದರೆ 900 ರಿಯಾಲ್ ದಂಡ

ರಿಯಾದ್, ಎ.19: ಮೃತಪಟ್ಟ ವ್ಯಕ್ತಿಗಳ ಮಾಲಕತ್ವದ ವಾಹನಗಳನ್ನು ಕಾನೂನು ಅನುಮತಿಯಿಲ್ಲದೆ ಇತರರು ಚಾಲನೆ ಮಾಡುವುದನ್ನು ತಡೆಯಲು ಸೌದಿ ಅರೇಬಿಯಾದ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಕಠಿಣ ಕಾನೂನು ತಿದ್ದುಪಡಿ ಪ್ರಸ್ತಾಪಿಸಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿರುವ ವಾಹನವನ್ನು ಕಾನೂನುಬದ್ಧವಾಗಿ ವರ್ಗಾಯಿಸದೆ ಅಥವಾ ಅದರ ಮೇಲೆ ಅಧಿಕಾರವಿಲ್ಲದೆ ಚಾಲನೆ ಮಾಡಿದರೆ 900 ರಿಯಾಲ್ ಗಳವರೆಗೆ (ಸುಮಾರು 21,000 ರೂ.) ದಂಡ ವಿಧಿಸುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ. ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ‘ಇಸ್ತಿತ್ಲಾ’(Istitlaa) ವೆಬ್ ಪೋರ್ಟಲ್‌ ನಲ್ಲಿ ಪ್ರಕಟಿಸಲಾಗಿದೆ. ಅನುಮೋದನೆ ದೊರೆತರೆ, ಇದು ಹಾಲಿ ಸಂಚಾರ ಕಾನೂನಿನ ಭಾಗವಾಗಲಿದೆ. ಹೊಸ ತಿದ್ದುಪಡಿ ಸಂಚಾರ ಕಾನೂನಿನ 68ನೇ ಕಲಮಿನ ನಾಲ್ಕನೇ ಉಪವಿಧಿಯಲ್ಲಿ ಸೇರಿಸಲಾಗುತ್ತದೆ. ಕರಡು ಪ್ರಸ್ತಾವನೆಯ ಪ್ರಕಾರ ದಂಡದ ಮೊತ್ತ 500 ರಿಂದ 900 ರಿಯಾಲ್ ಗಳವರೆಗೆ ಇರಲಿದೆ. ಅಲ್ಲದೆ, ವಾಹನದ ಮಾಲಕತ್ವ ದಾಖಲೆಗಳನ್ನು ಸರಿಪಡಿಸುವವರೆಗೆ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 19 Apr 2026 10:27 pm

ನೌಕಾ ದಿಗ್ಬಂಧನ ತೆರವುಗೊಳಿಸದಿದ್ದರೆ ಮಾತುಕತೆ ಇಲ್ಲ: ಇರಾನ್ ಪಟ್ಟು

ಟೆಹರಾನ್, ಎ.19: ಅಮೆರಿಕದೊಂದಿಗೆ ಎರಡನೇ ಹಂತದ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲವೆಂದು ಇರಾನ್ ತಿಳಿಸಿದೆ. ಹಾರ್ಮುಝ್ ಜಲಸಂಧಿಯಲ್ಲಿ ತನ್ನ ನೌಕೆಗಳ ಸಂಚಾರಕ್ಕೆ ಅಮೆರಿಕ ವಿಧಿಸಿರುವ ದಿಗ್ಬಂಧನ ತೆರವುಗೊಳ್ಳುವವರೆಗೆ ಮಾತುಕತೆ ನಡೆಯುವುದಿಲ್ಲ ಎಂದು IRGC ಪರವಾದ ತಾಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕ–ಇರಾನ್ ಮೊದಲ ಹಂತದ ಮಾತುಕತೆ ಮುರಿದು ಬಿದ್ದ ನಂತರವೂ ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸುತ್ತಿದ್ದು, ಎರಡೂ ದೇಶಗಳ ನಡುವೆ ಸಂದೇಶ ವಿನಿಮಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 19 Apr 2026 10:25 pm

ಭಟ್ಕಳ| ಗುಣಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ: ಸಚಿವ ಮಂಕಾಳ ಎಸ್‌

ಭಟ್ಕಳ: “ನಿಮ್ಮ ಸೇವಕನಾಗಿ ನಾನು ಮಾಡುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯಬೇಕು. ಜನರು ಸದಾ ನೆನಪಿಸಿಕೊಳ್ಳುವಂತಹ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ,” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ಹೇಳಿದರು. ಅವರು ರವಿವಾರ ಮುರ್ಡೇಶ್ವರದ ಕಾಯ್ಕಿಣಿ ಪ್ರದೇಶದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ 2024–25ನೇ ಸಾಲಿನ ‘4702 ಪಶ್ಚಿಮ ವಾಹಿನಿ ಯೋಜನೆ’ ಅಡಿಯಲ್ಲಿ ಮಂಜೂರಾದ ಒಟ್ಟು ರೂ.19 ಕೋಟಿ ವೆಚ್ಚದ ಎಡದಂಡೆ ಹಾಗೂ ಬಲದಂಡೆ ಖಾರಲ್ಯಾಂಡ್ ಕಾಮಗಾರಿಗಳ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. “ಈ ಭಾಗದಿಂದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಭಟ್ಕಳ ಬಸ್ ನಿಲ್ದಾಣ, ಮಿನಿ ವಿಧಾನಸೌಧ ಸೇರಿದಂತೆ ಅನೇಕ ಜನಪರ ಯೋಜನೆಗಳು ನನ್ನ ಅವಧಿಯಲ್ಲಿ ಜಾರಿಯಾಗಿವೆ. ಬಸ್ ನಿಲ್ದಾಣದ ಬಳಿಯ ಜಾಗವನ್ನು ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡದೇ ಇದ್ದಿದ್ದರೆ, ಅಲ್ಲಿ ಭವ್ಯ ಸೂಪರ್ ಮಾರ್ಕೆಟ್ ನಿರ್ಮಾಣವಾಗು ತ್ತಿತ್ತು,” ಎಂದು ಹೇಳಿದರು. ಚುನಾವಣಾ ವೇಳೆ ನೀಡಿದ ಭರವಸೆಗಳಂತೆ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. “ನಿಮ್ಮ ಮತದ ಬೆಂಬಲದಿಂದ ನಾನು ಆಯ್ಕೆಯಾಗಿದ್ದೇನೆ. ನೀವು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ,” ಎಂದು ಹೇಳಿದರು. ಖಾರಲ್ಯಾಂಡ್ ಯೋಜನೆ ಕುರಿತು ಮಾತನಾಡಿದ ಅವರು, “810 ಮೀಟರ್ ಉದ್ದದ ಈ ಯೋಜನೆಯನ್ನು ಗುಣ ಮಟ್ಟದಿಂದ ಪೂರ್ಣಗೊಳಿಸಲು ಹಠದಿಂದ ಮುಂದಾಗಿದ್ದೇವೆ. ಇದರ ಫಲವಾಗಿ ಈ ಭಾಗದ ರೈತರ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಗೆ ಅಗತ್ಯವಾದ ಹಣವಿದೆ. ಜನರಿಂದ ಬಂದ ಮನವಿ ಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ,” ಎಂದರು. ರಸ್ತೆ, ಸೇತುವೆ, ಸಮುದಾಯ ಭವನ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾಯ್ಕಿಣಿ ಪಂಚಾಯತ್ ವ್ಯಾಪ್ತಿಯಲ್ಲಿ ಪಿಯು ಕಾಲೇಜು ಮಂಜೂರಾಗಿದೆ. “ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವವರು ಜನಸೇವೆಗೆ ಮುಂದಾಗಲಿ. ನನ್ನ ಬಗ್ಗೆ ನಿಂದನೆ ಮಾಡುವವರ ಮಾತನ್ನು ಜನರು ನಂಬುವುದಿಲ್ಲ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿದರು. ವೆಂಕಟ್ರಮಣ ನಾಯ್ಕ ಸ್ವಾಗತಿಸಿದರು. ವೆಂಕಟೇಶ ನಾಯ್ಕ ದುಗ್ಗೆಮನೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತರ ಎಂ. ನಾಗರಾಜ, ಮಾಸ್ತಪ್ಪ ಜಟ್ಟಾ ನಾಯ್ಕ, ಕೊಲ್ಕರ ಕುಪ್ಪಯ್ಯ ನಾಯ್ಕ, ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಗೊಯ್ದಪ್ಪ ನಾಯ್ಕ, ಮಾಜಿ ಗ್ಯಾರಂಟಿ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ ಮಹೇಶ ನಾಯ್ಕ, ಸಿಂಧೂ ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ ಬಿದ್ರಮನೆ, ತಿಮ್ಮಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 10:15 pm

ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐಯಿಂದ AI ಚಾಟ್ ಬಾಟ್

ಹೊಸದಿಲ್ಲಿ, ಎ. 19: ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ಅಧಿಕೃತ ನೋಟಿಸ್ ಗಳ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ನೆರವಾಗಲು ಸಿಬಿಐ ಕೃತಕ ಬುದ್ಧಿಮತ್ತೆಯ ಚಾಟ್‌ ಬಾಟ್ ಅನ್ನು ಸೋಮವಾರ ಪ್ರಾರಂಭಿಸಲಿದೆ. ಸಿಬಿಐ ತನ್ನ ಸ್ಥಾಪಕ ನಿರ್ದೇಶಕರ ಗೌರವಾರ್ಥ ಆಯೋಜಿಸಿರುವ 22ನೇ ಡಿ.ಪಿ. ಕೊಹ್ಲಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ‘ಅಭಯ್’ ಎಂಬ ಚಾಟ್‌ ಬಾಟ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಜೆಐ ‘‘ಸೈಬರ್ ಅಪರಾಧದ ಸವಾಲುಗಳು – ಪೊಲೀಸ್ ಹಾಗೂ ನ್ಯಾಯಾಂಗದ ಪಾತ್ರ’’ ಕುರಿತು ಉಪನ್ಯಾಸ ನೀಡಲಿದ್ದಾರೆ. ಅವರು ಶ್ರೇಷ್ಠ ಸೇವೆಗಾಗಿ 24 ಪದಕಗಳನ್ನು ಕೂಡ ಪ್ರಧಾನ ಮಾಡಲಿದ್ದಾರೆ. AI ಆಧಾರಿತ ನೋಟಿಸ್ ಪರಿಶೀಲನಾ ಚಾಟ್‌ ಬಾಟ್ ‘ಅಭಯ್’ ಸಿಬಿಐ ಜಾರಿಗೊಳಿಸಿದೆ ಎಂದು ಹೇಳಲಾದ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಿದೆ. ಡಿಜಿಟಲ್ ಅರೆಸ್ಟ್ ವಂಚನೆಗಳ ಸಂದರ್ಭ ಇದು ನಾಗರಿಕರಿಗೆ ಅತ್ಯಂತ ಅಗತ್ಯವಾದ ಸಾಧನವಾಗಲಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ವಂಚಕರು ಸಿಬಿಐ ಅಧಿಕಾರಿಗಳಂತೆ ನಟಿಸಿ, ಸಂಸ್ಥೆಯಿಂದ ನೀಡಿರುವುದೆಂದು ಹೇಳಲಾದ ಅಸ್ತಿತ್ವದಲ್ಲಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದ ನಕಲಿ ನೋಟಿಸ್ ಗಳನ್ನು ತೋರಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ, ನಿಯಂತ್ರಣದಲ್ಲಿಟ್ಟುಕೊಂಡು ನಂತರ ಅವರಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 10:12 pm

ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಭಾಷಣ | ನೀತಿ ಸಂಹಿತೆ ಉಲ್ಲಂಘನೆ: ECಗೆ ಸಿಪಿಎಂ, ಸಿಪಿಐ ದೂರು

ಹೊಸದಿಲ್ಲಿ, ಎ.19: ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬಳಿಕ, ಮಸೂದೆ ಕುರಿತು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಪಿಎಂ ಮತ್ತು ಸಿಪಿಐ ರವಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ. ಪ್ರಧಾನಿಯವರ ಹೇಳಿಕೆಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಉಭಯ ಪಕ್ಷಗಳು ಆರೋಪಿಸಿವೆ. ಸರಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಭಾಷಣವನ್ನು ಪ್ರಸಾರ ಮಾಡಿದ್ದನ್ನೂ ಅವು ಆಕ್ಷೇಪಿಸಿವೆ. ಭಾಷಣದ ವಿಷಯ, ಧಾಟಿ ಮತ್ತು ಸಂದೇಶವನ್ನು ಯಾವುದೇ ರೀತಿಯಲ್ಲಿಯೂ ಸರಕಾರಿ ಸಂವಹನ ಎಂದು ಕರೆಯಲು ಸಾಧ್ಯವಿಲ್ಲ. ಅದು ಸ್ಪಷ್ಟವಾಗಿ ರಾಜಕೀಯವಾಗಿದ್ದು, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿತ್ತು; ಹಲವಾರು ಪಕ್ಷಗಳನ್ನು ಹೆಸರಿಸಲಾಗಿತ್ತು ಹಾಗೂ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತದಾರರು ಸೇರಿದಂತೆ ಜನಾಭಿಪ್ರಾಯದ ಮೇಲೆ ಆಡಳಿತ ಪಕ್ಷದ ಪರವಾಗಿ ಪ್ರಭಾವ ಬೀರಲು ಯತ್ನಿಸಿತ್ತು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಮುಖ್ಯ ಚುನಾವಣಾ ಆಯುಕ್ತ (ಸಿEC) ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪ್ರತ್ಯೇಕವಾಗಿ ಸಿಪಿಐ ನಾಯಕ ಸಂತೋಷ ಕುಮಾರ ಅವರು ಕೂಡ ಸಿECಗೆ ಪತ್ರ ಬರೆದಿದ್ದು, ಪ್ರಧಾನಿಯವರ ಭಾಷಣವನ್ನು ‘ಪಕ್ಷಪಾತಪೂರ್ಣ’ ಮತ್ತು ‘ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ನೇರ ಪ್ರಯತ್ನ’ ಎಂದು ಬಣ್ಣಿಸಿದ್ದಾರೆ. ಇನ್ನೂ ಕಳವಳಕಾರಿ ವಿಷಯವೆಂದರೆ, ಈ ಭಾಷಣವನ್ನು ದೂರದರ್ಶನ ಮತ್ತು ಸಂಸದ್ ಟಿವಿಯಂತಹ ಸರಕಾರಿ ಪ್ರಸಾರ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿದೆ. ಮೂಲಭೂತವಾಗಿ ರಾಜಕೀಯ ಭಾಷಣವನ್ನು ಪ್ರಸಾರ ಮಾಡಲು ಸರಕಾರಿ ಸಂಪನ್ಮೂಲಗಳು ಹಾಗೂ ಸರಕಾರಿ ಅನುದಾನಿತ ವೇದಿಕೆಗಳ ಬಳಕೆ ಚುನಾವಣಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಚುನಾವಣಾ ಆಯೋಗವು ಎತ್ತಿಹಿಡಿಯಲು ಸಾಂವಿಧಾನಿಕವಾಗಿ ಬದ್ಧವಾಗಿರುವ ಸಮಾನ ಸ್ಪರ್ಧಾ ಅವಕಾಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದು ‘ಸಾಂಸ್ಥಿಕ ಶಾಮೀಲಾತಿ’ಯನ್ನು ಸೂಚಿಸುತ್ತದೆ ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದೂ ಕುಮಾರ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರು ರಾಜಕೀಯ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ತಮ್ಮ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 10:10 pm

West Bengal | “ಭಾಯ್, ನನಗೆ ನಿಮ್ಮ ಝಲ್ ಮುರಿ ತಿನ್ನಿಸಿ”; ಚುನಾವಣಾ ಪ್ರಚಾರದ ನಡುವೆ ಬೀದಿಬದಿ ಆಹಾರ ಸವಿದ ಪ್ರಧಾನಿ ನರೇಂದ್ರ ಮೋದಿ

“ನೀವು ಈರುಳ್ಳಿ ತಿನ್ನುತ್ತೀರಾ?” ಎಂದು ಪ್ರಶ್ನಿಸಿದ ವರ್ತಕ; ‘ಈರುಳ್ಳಿ ತಿನ್ನುತ್ತೇನೆ, ತಲೆ ತಿನ್ನಲ್ಲ’ ಎಂದ ಮೋದಿ!

ವಾರ್ತಾ ಭಾರತಿ 19 Apr 2026 10:06 pm

ಮಂಗಳೂರು| ಮಾದಕ ವಸ್ತು ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಎ.19: ನಗರದ ಜೆಪ್ಪಿನಮೊಗರು ಬಳಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರವಿವಾರ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ಮನೆಯ ಫರ್ವೇಝ್ ಯಾನೆ ದಾವೂದ್ ಫರ್ವೇಝ್ (40) ಮತ್ತು ಪಿಲಾರಿನ ನಝರತ್ ಅಲಿ (37) ಎಂದು ಗುರುತಿಸಲಾಗಿದೆ. ಆರೋಪಿಗಳು ಬೈಕ್‌ನಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 46,50,000 ರೂ. ಮೌಲ್ಯದ 465.8 ಗ್ರಾಂ ತೂಕದ ಎಂಡಿಎಂಎ ವಸ್ತುವನ್ನು ವಶಪಡಿಸಿಕೊಂಡರು ಎಂದು ತಿಳಿದುಬಂದಿದೆ. ಫರ್ವೇಝ್ ಎಂಬಾತನು ಯುವ ಸಮೂಹ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಎಂಡಿಎಂಎ ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಫರ್ವೇಝ್ ವಿರುದ್ಧ ಪಾಂಡೇಶ್ವರ, ವಾಮಂಜೂರು, ಬಂದರು, ಬೆಂಗಳೂರಿನ ಅಮೃತಹಳ್ಳಿ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಈತನು ಡ್ರಗ್ ಪೆಡ್ಲರ್ ಆಗಿದ್ದು, ಈತನ ಸ್ನೇಹಿತ ನಝರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 10:05 pm

ಉಡುಪಿ| ಭಾರತ, ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ ಡಾ. ಲಿಯೋ ಪೋಲ್ಡೊ ಗಿರೆಲ್ಲಿಗೆ ಸ್ವಾಗತ

ಉಡುಪಿ: ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭದಲ್ಲಿ ಭಾಗವಹಿಸಿಲು ಆಗಮಿಸಿದ ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ. ಲಿಯೋ ಪೋಲ್ಡೊ ಗಿರೆಲ್ಲಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಆತ್ಮೀಯ ಸ್ವಾಗತ ಕೋರಲಾಯಿತು. ಧರ್ಮಪ್ರಾಂತ್ಯದ ಪರವಾಗಿ ಕುಲಪತಿ ವಂ|ಸ್ಟೀಫನ್ ಡಿಸೋಜಾ ಡಾ. ಲಿಯೋ ಪೋಲ್ಡೊ ಗಿರೆಲ್ಲಿ ಅವರನ್ನು ಸ್ವಾಗತಿಸಿದರು. ಈ ವೇಳೆ ಧರ್ಮಪ್ರಾಂತ್ಯದ ಜುಡಿಶಿಯಲ್ ವಿಕಾರ್ ವಂ|ಡಾ|ರೋಶನ್ ಡಿಸೋಜಾ, ಧರ್ಮಗುರು ವಂ|ಜಾನ್ಸಿಲ್ ಆಳ್ವಾ, ವಿಮಾನ ನಿಲ್ಡಾಣದ ಕಸ್ಟಮ್ಸ್ ವಿಭಾಗದ ಸಹಾಯಕ ಕಮೀಷನರ್ ಶುಭ ರೊಡ್ರಿಗಸ್, ಹಾಗೂ ಓಸ್ವಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 9:45 pm

ಗಂಗೊಳ್ಳಿ| ಜಾತ್ರೆಯಲ್ಲಿ ದಲಿತ ಸಹೋದರರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಗಂಗೊಳ್ಳಿ, ಎ.19: ದಲಿತ ಸಹೋದರರಿಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಹಕ್ಲಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ಮುಖಮಂಟಪದ ಬಳಿ ಎ.19ರಂದು ನಸುಕಿನ ವೇಳೆ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಕುಂದಬಾರಂದಾಡಿ ಗ್ರಾಮದ ಕೋಳೂರು ಕ್ರಾಸ್ ನಿವಾಸಿ ಬಾನುಪ್ರಕಾಶ ಎಂಬವರು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಯಕ್ಷಗಾನ ಕಾರ್ಯಕ್ರಮ ನೋಡಿಕೊಂಡು ಮನೆಗೆ ಬೈಕಿನಲ್ಲಿ ತನ್ನ ತಮ್ಮನೊಂದಿಗೆ ಹೊರಟಿದ್ದರು. ಈ ವೇಳೆ ಎರಡು ಬೈಕಿನಲ್ಲಿ ಬಂದ ದೀಪಕ್ ಪೂಜಾರಿ, ರಾಮ ಪೂಜಾರಿ ಮತ್ತು ಇಬ್ಬರು ಬಾನುಪ್ರಕಾಶ್ ಅವರ ಬೈಕ್‌ನ್ನು ತಡೆದು ನಿಲ್ಲಿಸಿ, ಜಾತಿನಿಂದನೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದನ್ನು ತಡೆಯಲು ಬಂದ ಬಾನುಪ್ರಕಾಶ್ ಅವರ ತಮ್ಮ ಸುದರ್ಶನ್ ಅವರಿಗೂ ಆರೋಪಿಗಳು ಹಲ್ಲೆ ಮಾಡಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Apr 2026 9:43 pm

ಅಣುಶಕ್ತಿ ಒಪ್ಪಂದ ವಿಫಲವಾದಲ್ಲಿ‘ಸಜ್ಜನ’ನಾಗಿ ಇರಲಾರೆ: ಇರಾನ್‌ ಗೆ ಟ್ರಂಪ್ ಬೆದರಿಕೆ

ವಾಶಿಂಗ್ಟನ್, ಎ. 19: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಒಂದು ವೇಳೆ ಇರಾನ್ ತನ್ನೊಂದಿಗೆ ಅಣುಶಕ್ತಿ ಒಪ್ಪಂದಕ್ಕೆ ಬರದಿದ್ದಲ್ಲಿ, ಇರಾನ್ ನ ಪ್ರತಿಯೊಂದು ವಿದ್ಯುತ್ ಸ್ಥಾವರ ಹಾಗೂ ಸೇತುವೆಯನ್ನು ಧ್ವಂಸಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ತಾನು ‘ಸಜ್ಜನ’ನಾಗಿ ಇರುವುದಿಲ್ಲವೆಂದೂ ಅವರು ಗುಡುಗಿದ್ದಾರೆ. ಈ ಬಗ್ಗೆ ಟ್ರೂತ್ ಸೋಶಿಯಲ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹಾರ್ಮುಝ್ ಜಲಸಂಧಿಯಲ್ಲಿ ಗುಂಡುಗಳನ್ನು ಹಾರಿಸಲು ಇರಾನ್ ನಿನ್ನೆ ನಿರ್ಧರಿಸಿದೆ. ಇದು ಕದನವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ. ದಾಳಿ ಫ್ರೆಂಚ್ ಹಡಗು ಹಾಗೂ ಬ್ರಿಟನ್ ನ ಸರಕು ಸಾಗಣೆ ನೌಕೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ. ಇದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ. ►‘ಶಾಂತಿ ಮಾತುಕತೆಯಲ್ಲಿ ಅಮೆರಿಕ ಭಾಗವಹಿಸಲಿದೆ’ ಹಾರ್ಮುಝ್ ಜಲಸಂಧಿಯಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಇರಾನ್ ಕದನವಿರಾಮವನ್ನು ಉಲ್ಲಂಘಿಸಿದರೂ, ಅಮೆರಿಕ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗವಹಿಸುವುದಿಲ್ಲವೆಂದೂ ಅವರು ಹೇಳಿದ್ದಾರೆ. ಸೋಮವಾರ ಅಮೆರಿಕ ನಿಯೋಗ ಇಸ್ಲಾಮಾಬಾದ್ ತಲುಪಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 9:37 pm

BILL C-12 | 9,000ಕ್ಕೂ ಅಧಿಕ ಪಂಜಾಬಿಗಳು ಕೆನಡಾದಿಂದ ಗಡಿಪಾರುಗೊಳ್ಳುವ ಸಾಧ್ಯತೆ!

ಚಂಡಿಗಡ, ಎ. 19: ಕೆನಡಾದಲ್ಲಿ ನೂತನ ವಲಸೆ ಕಾನೂನು BILL C-12 ಜಾರಿಗೊಂಡ ಬಳಿಕ ಆ ದೇಶದಲ್ಲಿನ ಸುಮಾರು 30,000 ವಲಸಿಗರು ನೋಟಿಸ್ ಗಳನ್ನು ಪಡೆಯಲಿದ್ದು, ಗಡಿಪಾರುಗೊಳ್ಳುವ ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ. ಈ 30,000 ವಲಸಿಗರ ಪೈಕಿ ಪಂಜಾಬಿನ 9,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಶ್ರಯ ಕೋರಿ ಅರ್ಜಿ ಸಲ್ಲಿಸಿದವರು ಸೇರಿದ್ದಾರೆ. ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ (IRCC) ಇಲಾಖೆಯು ಈ ಪೈಕಿ ಕೆಲವರಿಗೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚಿಸುತ್ತಿದೆ. ಕೆನಡಾ ಮಾಧ್ಯಮಗಳ ಪ್ರಕಾರ, IRCC ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು 30,000 ಜನರಿಗೆ ನೋಟಿಸ್ ಗಳನ್ನು ಹೊರಡಿಸಿದ್ದು, ಅವರ ಹಕ್ಕು ಕೋರಿಕೆಗಳು ಇನ್ನು ಮುಂದೆ ಅರ್ಹವಾಗದಿರಬಹುದು ಎಂದು ತಿಳಿಸಿದೆ. ಸ್ವಯಂ ಪ್ರೇರಿತರಾಗಿ ಕೆನಡಾ ತೊರೆಯುವಂತೆ ಅಥವಾ ಕಾನೂನು ಕ್ರಮವನ್ನು ಎದುರಿಸುವಂತೆ ಅವರಿಗೆ ಸೂಚಿಸಲಾಗಿದೆ. ಈ ನೋಟಿಸ್ ಗಳು ಅಂತಿಮ ಗಡಿಪಾರು ಆದೇಶಗಳಲ್ಲ ಎಂದು ಸ್ಪಷ್ಟಪಡಿಸಿರುವ IRCC, ಹೆಚ್ಚುವರಿ ಮಾಹಿತಿಗಳನ್ನು ಸಲ್ಲಿಸಲು ಅವರಿಗೆ ಸುಮಾರು 21 ದಿನಗಳ ಕಾಲಾವಕಾಶ ನೀಡಿದೆ. ಇದರಲ್ಲಿ ವಿಫಲವಾದರೆ ಗಡಿಪಾರು ಪ್ರಕ್ರಿಯೆಗೆ ಕಾರಣವಾಗಬಹುದು. ಒಂದು ವರ್ಷಕ್ಕೂ ಹೆಚ್ಚು ಕಾಲ ಕೆನಡಾದಲ್ಲಿ ವಾಸವಿದ್ದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಪಂಜಾಬಿನ ಹಲವಾರು ಮಾಜಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರಲ್ಲಿ ಹೆಚ್ಚಿನವರು ತಮ್ಮ ವಾಸ್ತವ್ಯವನ್ನು ವಿಸ್ತರಿಸಿಕೊಳ್ಳಲು ಆಶ್ರಯ ಕೋರುವ ಮಾರ್ಗವನ್ನು ಅನುಸರಿಸಿದ್ದಾರೆ ಎನ್ನಲಾಗಿದೆ. ಕಟ್ಟುನಿಟ್ಟಿನ ಅಧ್ಯಯನ ಅನುಮತಿ ನಿಯಮಗಳು ಮತ್ತು ಶಾಶ್ವತ ವಾಸಕ್ಕೆ ಸೀಮಿತ ಮಾರ್ಗಗಳು ಇದಕ್ಕೆ ಕಾರಣವಾಗಿವೆ. ಗಮನಾರ್ಹವಾಗಿ, BILL C-12 ಜೂನ್ 24, 2020ರಿಂದ ಪೂರ್ವಾನ್ವಯವಾಗಿದ್ದು, ಜೂನ್ 3, 2025ರಂದು ಅಥವಾ ನಂತರ ಸಲ್ಲಿಸಲಾದ ಹಕ್ಕು ಕೋರಿಕೆಗಳಿಗೆ ಅನ್ವಯಿಸುತ್ತದೆ. ಈ ನೋಟಿಸ್ ಗಳು ಪೀಡಿತ ಸಮುದಾಯಗಳಲ್ಲಿ ಆತಂಕವನ್ನು ಸೃಷ್ಟಿಸಿವೆ. ಗಮನಾರ್ಹ ಸಂಖ್ಯೆಯ ಪಂಜಾಬಿಗಳು ಅಧ್ಯಯನ ಪರವಾನಿಗೆಯಡಿ ಕೆನಡಾಕ್ಕೆ ತೆರಳಿ, ತಮ್ಮ ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಆಶ್ರಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ‘ಕೆನಡಾ ವಲಸೆ ವ್ಯವಸ್ಥೆ ಮತ್ತು ಗಡಿಗಳನ್ನು ಬಲಗೊಳಿಸುವ ಕಾಯ್ದೆ’ ಎಂದು ಔಪಚಾರಿಕವಾಗಿ ಕರೆಯಲಾಗುವ ಈ ಕಾನೂನು ಮಾ. 26ರಂದು ರಾಯಲ್ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ತನ್ಮೂಲಕ ಆಶ್ರಯ ಕೋರುವ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ. ನೂತನ ನಿಬಂಧನೆಗಳಡಿ, ಕೆನಡಾಕ್ಕೆ ಬಂದ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸುವ ವ್ಯಕ್ತಿಗಳನ್ನು ವಲಸೆ ಮತ್ತು ನಿರಾಶ್ರಿತರ ಮಂಡಳಿಯ ಮುಂದೆ ಪೂರ್ಣ ವಿಚಾರಣೆಗೆ ಅನರ್ಹರೆಂದು ಪರಿಗಣಿಸಲಾಗುತ್ತದೆ.

ವಾರ್ತಾ ಭಾರತಿ 19 Apr 2026 9:35 pm

ಆಲ್ಕೋಹಾಲ್‌ ಪ್ರಮಾಣ ಆಧರಿಸಿ ಮದ್ಯ ದರ ನಿಗದಿಗೆ ಕರ್ನಾಟಕ ಸರ್ಕಾರ ಕರಡು ಅಧಿಸೂಚನೆ; ಇದು ದೇಶದಲ್ಲೇ ಮೊದಲು!

ಪಾನೀಯಗಳಲ್ಲಿರುವ ಮದ್ಯಸಾರದ ಪ್ರಮಾಣ ಆಧರಿಸಿ ಸುಂಕ ವಿಧಿಸುವ 'ಆಲ್ಕೋಹಾಲ್ ಇನ್ ಬಿವರೇಜ್' (AIB) ಪದ್ಧತಿಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಚಾಲ್ತಿಯಲ್ಲಿರುವ ಈ 'ಗೋಲ್ಡ್ ಸ್ಟ್ಯಾಂಡರ್ಡ್' ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವ ಭಾರತದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಅಬಕಾರಿ ಆದಾಯ ಹೆಚ್ಚಳ ಮತ್ತು ಉದ್ಯಮ ಬಲವರ್ಧನೆ ಇದರ ಗುರಿಯಾಗಿದೆ. ಬಿಯರ್, ವೈನ್ ಮತ್ತು ಸ್ಪಿರಿಟ್ಸ್‌ಗಳಲ್ಲಿನ ABV (ಮದ್ಯಸಾರದ ಪ್ರಮಾಣ) ಆಧಾರದ ಮೇಲೆ ತೆರಿಗೆ ನಿಗದಿಯಾಗಲಿದ್ದು, ಸಾರ್ವಜನಿಕರ ಆಕ್ಷೇಪಣೆಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.

ವಿಜಯ ಕರ್ನಾಟಕ 19 Apr 2026 9:31 pm

ವಿನಯ್ ಕುಲಕರ್ಣಿ ಖೈದಿ ನಂ. 16110

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ಸಂಖ್ಯೆಯನ್ನು ನೀಡಲಾಗಿದೆ. ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳನ್ನು ಶುಕ್ರವಾರ(ಎ.17) ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ವೇಳೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ ಯುಟಿಪಿ ನಂಬರ್ (ವಿಚಾರಣಾಧೀನ ಖೈದಿ) ನೀಡಿದ್ದರು. ಆದರೆ, ಈಗ ಕೆಲವು ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿಗೆ ಸಜಾ ಬಂಧಿ ಖೈದಿ ಸಂಖ್ಯೆ 16110 ನೀಡಲಾಗಿದೆ. ಜೊತೆಗೆ ಎಲ್ಲ ಅಪರಾಧಿಗಳಿಗೆ ಸಜಾ ಬಂಧಿ ಖೈದಿ ಸಂಖ್ಯೆಗಳನ್ನು ಅಧಿಕೃತವಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿನಯ್ ಕುಲಕರ್ಣಿ ಹಾಗೂ ಈ ಪ್ರಕರಣದ ಇತರ 17 ಅಪರಾಧಿಗಳನ್ನು ಪ್ರಸ್ತುತ ಡಿ ಬ್ಯಾರಕ್‍ನ ಕ್ವಾರಂಟೈನ್ ಸೆಲ್‍ಗೆ ಕಳುಹಿಸಲಾಗಿದೆ. ಅಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಇತರ ಮೂವರು ಅಪರಾಧಿಗಳನ್ನು ಒಂದು ಬ್ಯಾರಕ್‍ನಲ್ಲಿ ಇರಿಸಿದರೆ, ಇತರ ಅಪರಾಧಿಗಳನ್ನು ಪಕ್ಕದ ಬ್ಯಾರಕ್‍ನಲ್ಲಿ ಇರಿಸಲಾಗಿದೆ. ಮುಂದಿನ 10 ದಿನಗಳ ಕಾಲ ಎಲ್ಲರೂ ಇಲ್ಲೇ ಇರಲಿದ್ದಾರೆ. ನಂತರ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 17 ಅಪರಾಧಿಗಳ ಸಜಾ ಬಂಧಿ ಖೈದಿ ಸಂಖ್ಯೆಗಳು..! 1) ವಿಕ್ರಂ ಬಳ್ಳಾರಿ - 16097 2) ಕೀರ್ತಿ ಕುಮಾರ್ ಬೆಳ್ಳಟ್ಟಿ - 16098 3) ಸಂದೀಪ್ ಸವದತ್ತಿ - 16099 4) ವಿನಾಯಕ ಕಟಗಿ - 16100 5) ಮಹಾಬಲೇಶ್ವರ ಹೊಂಗಳೇ - 16101 6) ಸಂತೋಷ ಸವದತ್ತಿ - 16102 7) ದಿನೇಶ್ -16103 8) ಅಶ್ವಥ್ - 16104 9) ಸುನಿಲ್ - 16105 10) ನಜೀರ್ ಅಹ್ಮದ್ - 16106 11) ಶನವಾಜ್ - 16107 12) ನೂತನ್ - 16108 13) ಹರ್ಷೀತ್ - 16109 14) ವಿನಯ್ ಕುಲಕರ್ಣಿ -16110 15) ಚಂದ್ರಶೇಖರ್ ಇಂಡಿ -16111 16) ವಿಕಾಸ್ ಕಲಬುರ್ಗಿ - 16112 17) ಚನ್ನಕೇಶವ ಟಿಂಗರಿಕರ್ - 16113

ವಾರ್ತಾ ಭಾರತಿ 19 Apr 2026 9:28 pm

Tamil Nadu | ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ

ಚೆನ್ನೈ, ಎ. 19: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟನಾರ್ ಪಟ್ಟಿ ಗ್ರಾಮದ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 22 ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇತರ 6 ಮಂದಿ ಗಾಯಗೊಂಡಿದ್ದಾರೆ. ವಚಕರಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಕಟ್ಟನಾರ್ಪಟ್ಟಿಯಲ್ಲಿರುವ ಮುತ್ತುಮಾಣಿಕ್ಕಂ ಎಂಬವರ ಮಾಲಕತ್ವದ ‘ವನಜ’ ಪಟಾಕಿ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಸಂದರ್ಭ ಕಾರ್ಖಾನೆಯಲ್ಲಿ ಸುಮಾರು 30 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗಾಯಗೊಂಡ ಆರು ಮಂದಿಯ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ವಿರುಧುನಗರ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಹಾಗೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟಕ ನಾಗಪುರ ಪೆಟ್ರೋಲಿಯಂ ಹಾಗೂ ಸ್ಪೋಟಕ ಸುರಕ್ಷಾ ಸಂಘಟನೆ (ಪಿಇಎಸ್ಒ)ಯಿಂದ ಪರವಾನಿಗೆ ಪಡೆದುಕೊಂಡಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಕಾರ್ಖಾನೆ ರವಿವಾರ ಕೂಡ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಮಿಕರು ಕಚ್ಚಾ ವಸ್ತುಗಳನ್ನು ನಿರ್ವಹಿಸುವ ಹಾಗೂ ಪಟಾಕಿ ತಯಾರಿಸುವ ಅಂತಿಮ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕಾರ್ಖಾನೆಯ ಮುಂಭಾಗದ ವರಾಂಡದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕನಿಷ್ಠ ಮೂರು ಕೊಠಡಿಗಳು ಹಾಗೂ ಸಮೀಪದ ನಿರ್ಮಾಣಗಳು ಸಂಪೂರ್ಣ ನೆಲಸಮಗೊಂಡಿವೆ. ಸ್ಫೋಟದ ಸದ್ದು ಸುಮಾರು 10 ಕಿ.ಮೀ. ದೂರದವರೆಗೆ ಕೇಳಿಸಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹಲವು ಗಂಟೆಗಳ ಕಾಲ ಸೆಣಸಾಡಿತು. ಆರಂಭಿಕ ಸ್ಫೋಟದ ನಂತರವೂ ಪಟಾಕಿಗಳು ಆಗಾಗ ಸಿಡಿಯುತ್ತಿದ್ದುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಕಾರ್ಮಿಕರ ಮೃತದೇಹಗಳು ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ‘‘ನಾವು ಇದುವರೆಗೆ 19 ಮೃತದೇಹಗಳನ್ನು ಪತ್ತೆ ಹಚ್ಚಿದ್ದೇವೆ. ಅವರಲ್ಲಿ ಹಲವರ ಮೃತದೇಹಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ವಿರುಧುನಗರ ಜಿಲ್ಲೆಯ ಕಟ್ಟನಾರ್ ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಜೀವ ಕಳೆದುಕೊಂಡ ಸುದ್ದಿ ಅಪಾರ ನೋವು ತಂದಿದೆ ಎಂದು ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಕೂಡಲೇ ನೆರವು ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 19 Apr 2026 9:28 pm

ಇಂಡೋ- ನಾರ್ಡಿಕ್ ಶೃಂಗಸಭೆಯ ಬಳಿಕ ಪ್ರಧಾನಿ ಮೋದಿಯಿಂದ ಇಟಲಿ ಭೇಟಿ: ಏನು ಉದ್ದೇಶ?

PM Modi Italy Visit- ಮುಂದಿನ ತಿಂಗಳು ಓಸ್ಲೋದಲ್ಲಿ ನಡೆಯಲಿರುವ ಇಂಡೋ-ನಾರ್ಡಿಕ್ ಶೃಂಗಸಭೆಯ ನಂತರ ಪ್ರಧಾನಿ ಮೋದಿ ರೋಮ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ನಾರ್ಡಿಕ್ ನಾಯಕರೊಂದಿಗೆ ಹಸಿರು ತಂತ್ರಜ್ಞಾನದ ಕುರಿತು ಚರ್ಚಿಸಿದ ಬಳಿಕ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಸಹಕಾರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಜೂನ್‌ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಫ್ರಾನ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಪ್ರವಾಸಗಳು ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ.

ವಿಜಯ ಕರ್ನಾಟಕ 19 Apr 2026 9:26 pm

Maharashtra | ಮುಂಬೈ ಸಂಗೀತ ಗೋಷ್ಠಿಯಲ್ಲಿ ಓವರ್‌ ಡೋಸ್ ಮಾದಕ ದ್ರವ್ಯ ಸೇವನೆಯಿಂದ ಮೃತ್ಯು: ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಪ್ರವೇಶ ನೀಡಿದ್ದ ಬೌನ್ಸರ್ ಸೆರೆ

ಮುಂಬೈ: ಮುಂಬೈನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಓವರ್‌ ಡೋಸ್ ಮಾದಕ ದ್ರವ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಸಂಗೀತ ಗೋಷ್ಠಿಗೆ ಪ್ರವೇಶಿಸಲು ಅವಕಾಶ ನೀಡಿ, ಅವರು ಮಾದಕ ದ್ರವ್ಯ ಹಂಚಲು ನೆರವಾದ ಬೌನ್ಸರ್ ಒಬ್ಬನನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎಪ್ರಿಲ್ 11ರಂದು ಮೆಟ್ರೊಪೊಲಿಸ್ ನ ಭಾಗವಾದ ವಾಯುವ್ಯ ಗೋರೆಗಾಂವ್ ನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಮದ್ಯ ಹಾಗೂ ಮತ್ತೇರಿಸುವ ಮಾತ್ರೆಗಳನ್ನು ಸೇವಿಸಿದ ಬಳಿಕ ಓವರ್‌ ಡೋಸ್ ನಿಂದ ಓರ್ವ ಎಂಬಿಎ ವಿದ್ಯಾರ್ಥಿ ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರಿಬ್ಬರೂ ಎಪ್ರಿಲ್ 12ರಂದು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿಗೆ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಗೀತ ಗೋಷ್ಠಿಯ ಭದ್ರತಾ ತಂಡದ ಭಾಗವಾಗಿದ್ದ ಪ್ರದೀಪ್ ಅರವಿಂದ್ ಗುಪ್ತ ಎಂಬ ಬೌನ್ಸರ್, ಮಾದಕ ದ್ರವ್ಯದ ಪೆಡ್ಲರ್ ಗಳಾದ ಆಯುಷ್ ಸಾಹಿತ್ಯ ಮತ್ತು ವಿನೀತ್ ಗರ್ಲಾನಿ ಅವರಿಗೆ ಟಿಕೆಟ್ ಇಲ್ಲದಿದ್ದರೂ ಸಂಗೀತ ಗೋಷ್ಠಿ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದ ಎಂದು ವನ್ರಾಯಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. “ಇಬ್ಬರಿಂದಲೂ ತಲಾ 1,000 ರೂ. ಪಡೆದಿದ್ದ ಪ್ರದೀಪ್ ಅರವಿಂದ್ ಗುಪ್ತ, ಅವರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದ. ಆತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವವರ ಸಂಖ್ಯೆ 10ಕ್ಕೆ ತಲುಪಿದೆ. ಉಳಿದ ಒಂಭತ್ತು ಬಂಧಿತರ ಪೈಕಿ ಆರು ಮಂದಿ ಮಾದಕ ದ್ರವ್ಯ ಪೂರೈಕೆದಾರರಾಗಿದ್ದು, ಉಳಿದ ಮೂವರು ಸಂಗೀತ ಗೋಷ್ಠಿಯನ್ನು ಸಂಘಟಿಸಿದ್ದ ಸಂಸ್ಥೆಗೆ ಸೇರಿದವರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ. ಆಯುಷ್ ಸಾಹಿತ್ಯ, ಪ್ರತೀಕ್ ಪಾಂಡ್ಯ, ರೌನಾಕ್ ಖಂಡೇಲ್ವಾಲ್, ಆನಂದ್ ಪಟೇಲ್, ವಿನೀತ್ ಗರ್ಲಾನಿ, ಶುಭ್ ಅಗರ್ವಾಲ್, ಆಕಾಶ್ ಸನಲ್, ಸನ್ನಿ ಜೈನ್, ಬಾಲಕೃಷ್ಣ ಕುರುಪ್ ಹಾಗೂ ಪ್ರದೀಪ್ ಗುಪ್ತ ಬಂಧಿತ 10 ಮಂದಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಸಂಗೀತ ಗೋಷ್ಠಿಗೆ ಹಾಜರಾಗಿದ್ದ 20–22 ಮಂದಿ ವಿದ್ಯಾರ್ಥಿಗಳ ತಂಡದ ಭಾಗವಾಗಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ವನ್ರಾಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Apr 2026 9:24 pm

Uttar Pradesh | ಘಾಝಿಯಾಬಾದ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನ: ಮುಖ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಘಾಝಿಯಾಬಾದ್: ದುಷ್ಕರ್ಮಿಗಳು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ ಘಟನೆ ರವಿವಾರ ಘಾಝಿಯಾಬಾದ್ ನ ಇಂದ್ರಪುರಿ ಕಾಲನಿಯಲ್ಲಿ ನಡೆದಿದ್ದು, ಈ ಕೃತ್ಯದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಾವಿರಾರು ಸ್ಥಳೀಯರು ಹಾಗೂ ಅಂಬೇಡ್ಕರ್ ಬೆಂಬಲಿಗರು ಘಟನಾ ಸ್ಥಳದಲ್ಲಿ ಜಮಾಯಿಸಿ ಧರಣಿ ನಡೆಸಿದರು ಹಾಗೂ ದಿಲ್ಲಿ–ಸಹರಣ್ಪುರ್ ಹೆದ್ದಾರಿಯನ್ನು ಬಂದ್ ಮಾಡಿದರು. ಇದರಿಂದ ಈ ಭಾಗದಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಒಂದು ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು. ಆದರೆ, ಪ್ರತಿಭಟನಾಕಾರರು ಮತ್ತೊಂದು ಪಥವನ್ನು ಆಕ್ರಮಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಧಾವಿಸಿತು. ಪರಿಶೀಲನೆಯ ಬಳಿಕ ರಸ್ತೆ ಬದಿಯ ಪ್ರತಿಮೆ ಭಗ್ನಗೊಂಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ತಂಡವೊಂದನ್ನು ರಚಿಸಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯಲ್ಲಿ ವಿಶೇಷ ಶಸ್ತ್ರಾಸ್ತ್ರ ಹಾಗೂ ತಾಂತ್ರಿಕ ತಂಡಗಳನ್ನು ಕೂಡ ಸೇರಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಇದುವರೆಗೆ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಲೋನಿ ಶಾಸಕ ನಂದ್ ಕಿಶೋರ್ ಗುರ್ಜಾರ್ ಸ್ಥಳಕ್ಕೆ ಭೇಟಿ ನೀಡಿ, ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲೋನಿ ನಗರ ಪಾಲಿಕೆ ಅಧ್ಯಕ್ಷೆ ರಂಜಿತಾ ಧಾಮಾ ಕೂಡ ಈ ಕೃತ್ಯವನ್ನು ಖಂಡಿಸಿದ್ದು, ಇದು ಈ ಪ್ರದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ಧತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಪಡೆ ನಿಯೋಜಿಸಲಾಗಿದೆ ಮತ್ತು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ರಸ್ತೆ ಬಂದ್ ಮಾಡಿರುವ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಅಲ್ಲಿಂದ ಚದುರಲು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಸಹಜ ಸ್ಥಿತಿಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಮುಂದುವರಿದಿದ್ದರೂ, ಸ್ಥಳದಲ್ಲಿ ಉದ್ವಿಗ್ನತೆ ಮನೆಮಾಡಿದೆ.

ವಾರ್ತಾ ಭಾರತಿ 19 Apr 2026 9:22 pm

ಐದು ದಿನಗಳ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಬಿಸಿ ಗಾಳಿ’; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಎ.20ರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಿಸಿ ಗಾಳಿಯ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಎ.20ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.21ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.22ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಹಾಸನ, ಬೆಳಗಾವಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಗದಗ, ದಕ್ಷಿಣ ಒಳನಾಡಿನ ದಾವಣಗೆರೆ, ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.23 ಮತ್ತು ಎ.24ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಗದಗ, ಹಾವೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಉಷ್ಣಾಂಶ: ರವಿವಾರದಂದು ಕಲಬುರಗಿಯಲ್ಲಿ ಅತ್ಯಾಧಿಕ ಉಷ್ಣಾಂಶ ದಾಖಲಾಗಿದ್ದು, 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಮೂದಾಗಿದೆ. ವಿಜಯಪುರದಲ್ಲಿ 39.6, ರಾಯಚೂರು 41.1, ಕೊಪ್ಪಳ 39.9, ಬೀದರ್ 41.2, ಬಾಗಲಕೋಟೆ 39.2, ಗದಗ 39.2, ಬೆಂಗಳೂರು 36.4, ಮಂಗಳೂರು 34.7, ಕಾರವಾರ 34.6, ಹೊನ್ನಾವರ 33.7, ಚಿತ್ರದುರ್ಗ 38, ಹಾಸನ 34.3, ಮೈಸೂರು 37, ಬೆಳಗಾವಿ 37.6, ಧಾರವಾಡ 36.6, ಹಾವೇರಿ 38.2, ಮಂಡ್ಯ 36.1, ಚಿಂತಾಮಣಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ವಾರ್ತಾ ಭಾರತಿ 19 Apr 2026 9:18 pm

ಅಣುಶಕ್ತಿಯನ್ನು ಹೊಂದುವ ಇರಾನ್ ಹಕ್ಕನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ: ಪೆಝೆಶ್ಕಿಯಾನ್ ಘೋಷಣೆ

ಯುದ್ಧಕ್ಕೆ ಘನತೆಯ ಅಂತ್ಯ ಹಾಡಲು ಬಯಸುವುದಾಗಿ ಹೇಳಿಕೆ

ವಾರ್ತಾ ಭಾರತಿ 19 Apr 2026 9:16 pm

ಕಾಂಗ್ರೆಸ್ ಮುಖಂಡ ಗೋಪಾಲ್ ಆಚಾರ್ಯ ನಿಧನ

ಉಡುಪಿ, ಎ.19: ಪರ್ಕಳ ಕಾಂಗ್ರೆಸ್‌ನ ಹಿರಿಯ ಮುಖಂಡ, ಸ್ವರ್ಣೋದ್ಯಮಿ ಪರ್ಕಳ ಗೋಪಾಲ ಆಚಾರ್ಯ(74) ಎ.18ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಪರ್ಕಳ ಪಡಿತರ ಗ್ರಾಹಕರ ವಿವಿಧೋದ್ದೇಶ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದ ಇವರು, ಪರ್ಕಳ ರೋಟರಿ ಸಂಘದ ಅಧ್ಯಕ್ಷರಾಗಿದ್ದರು. ಪರ್ಕಳ ಹೆರ್ಗ ವಿಶ್ವಕರ್ಮ ಸಮಾಜದ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಉಡುಪಿ ಬ್ಲಾಕ್ ಕಾಂಗ್ರೆಸ್ ಸದಸ್ಯ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಸ್ಥಳೀಯ ಮುಖಂಡ ದಿನಕರ್ ಶೆಟ್ಟಿ ಹೆರ್ಗ ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 19 Apr 2026 9:13 pm

Islamabad Talks | ಅಮೆರಿಕ–ಇರಾನ್ ಶಾಂತಿ ಮಾತುಕತೆ 2.0 ಸನ್ನಿಹಿತ?

ಇಸ್ಲಾಮಾಬಾದ್ ನಲ್ಲಿ ಬಿಗಿಭದ್ರತೆ

ವಾರ್ತಾ ಭಾರತಿ 19 Apr 2026 9:13 pm

ಸಂಸದ ಸುಧಾಕರ್‌ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ: ಬಿಜೆಪಿ ಜಿಲ್ಲಾಧ್ಯಕ್ಷರ ವಾರ್ನಿಂಗ್‌

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್‌ ರಾಮಚಂದ್ರಗೌಡ ಅವರು ಎನ್‌ಡಿಎ ಮೈತ್ರಿಯ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಮೈತ್ರಿಕೂಟವು ಒಂದು ಮನೆಯಿದ್ದಂತೆ ಇರಬೇಕು ಮತ್ತು ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಜಯ ಕರ್ನಾಟಕ 19 Apr 2026 8:56 pm

ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ: ಎಚ್.ಡಿ. ಕುಮಾರಸ್ವಾಮಿ

‘ಕ್ಷೇತ್ರ ಮರುವಿಂಗಡಣೆಯಿಂದ ಐದು ರಾಜ್ಯಗಳಿಗೆ ಅನ್ಯಾಯವಾಗುತ್ತಿರಲಿಲ್ಲ’

ವಾರ್ತಾ ಭಾರತಿ 19 Apr 2026 8:53 pm

Ameesha Patel: ಲಿಜ್‌ಲಾಜ್ ಇನ್‌ಸ್ಟಾ ಪೋಸ್ಟ್‌ಗೆ ಕೊಹ್ಲಿ ಲೈಕ್‌; ವಿರಾಟ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟಿ ಅಮೀಷಾ ಪಟೇಲ್

Ameesha Patel: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್ ಲಿಜ್‌ಲಾಜ್ ಹಾಕಿ ಪೋಸ್ಟ್‌ಗೆ ಲೈಕ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಿ, ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಕೊಹ್ಲಿಯನ್ನು ಟ್ರೋಲ್ ಮಾಡಲು ಆರಂಭಿಸಿದರು. ಆದರೆ, ಇದೀಗ ಬಾಲಿವುಡ್ ನಟಿ ಅಮೀಷಾ ಪಟೇಲ್ ಅವರು ಕೊಹ್ಲಿ

ಒನ್ ಇ೦ಡಿಯ 19 Apr 2026 8:51 pm

Gold Good News: ಭಾರತದ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್: ದಕ್ಷಿಣ ಭಾರತದ ಈ ಭಾಗದಲ್ಲಿ ಖನಿಜ ನಿಕ್ಷೇಪ ಪತ್ತೆ, ಹೇಗೆ ಲಾಭ

Gold Good News: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿಯ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ - ಏರಿಕೆಯ ಹಾವು - ಏಣಿ ಆಟವು ಮುಂದುವರಿದಿದೆ. ಅಮೆರಿಕ - ಇಸ್ರೇಲ್ Vs ಇರಾನ್ ದೇಶಗಳ ನಡುವೆ ಯುದ್ಧ ಪ್ರಾರಂಭವಾದ ಮೇಲೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹಲವು ಏರಿಳಿತ ವರದಿಯಾಗಿದೆ. ಆದರೆ

ಒನ್ ಇ೦ಡಿಯ 19 Apr 2026 8:39 pm

ಕಲಿಕೆ ನಿರಂತರ ಪ್ರಕ್ರಿಯೆ: ಗೋಕುಲ್‌ದಾಸ್ ನಾಯಕ್

ಉಡುಪಿ: ನಿಜವಾದ ಕಲಿಕೆ ಪದವಿಯೊಂದಿಗೆ ಅಂತ್ಯ ವಾಗುವುದಿಲ್ಲ. ಅದು ಜೀವನ ಪರ್ಯಂತರ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹಾಗಾಗಿ ಹೊಸತನ್ನು ಕಲಿಯಲು, ಸದಾ ಕಲಿಯುವ ಮನಸ್ಥಿತಿ ಹೊಂದಿರುವುದನ್ನು ರೂಢಿಸಿ ಕೊಳ್ಳಬೇಕು ಎಂದು ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಹೇಳಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತಿದ್ದರು. ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಶ್ರೀಧರ ಆರ್.ಪೈ ವಹಿಸಿದ್ದರು. ಕಾಲೇಜಿನ ಪ್ರಾಂಶು ಪಾಲೆ ಪ್ರೊ.ವನಿತ ಮಯ್ಯ, ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ್ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಾಲತಿ ದೇವಿ, ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ ಎಚ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ಸಹ ಕ್ಷೇಮಪಾಲನಾಧಿಕಾರಿ ಪ್ರೊ.ಅನಿಲ್ ಕುಮಾರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾ ಯಿತು. ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಸಂಘದ ಅಧ್ಯಕ್ಷ ನಂದನ್ ಕುಂದರ್ ಸ್ವಾಗತಿಸಿದರು. ಎಂ.ಎಸ್ಸಿ ಪ್ರತಿನಿಧಿ ಆಶಿಶ್ ಶೆಟ್ಟಿಗಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಸಮ್ರಾ ಹಾಗೂ ದೃಶ್ಯ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 19 Apr 2026 8:38 pm

ಅಂತಿಮ ಪದವಿ ವಿದ್ಯಾರ್ಥಿಗಳ ಸನಿವಾಸ ಶಿಬಿರ ಉದ್ಘಾಟನೆ

ಉಡುಪಿ: ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ವಿದ್ಯಾಪೋಷಕ್‌ನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಶೈಕ್ಷಣಿಕ ಕಾರ್ಯಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ಡಾ.ಚಂದ್ರಶೇಖರ ಶೆಟ್ಟಿ ರವಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತರಾಗದೆ, ತಮ್ಮ ಜ್ಞಾನ ವಿಕಾಸಕ್ಕೆ ಪೂರಕವಾಗುವ ಪುಸ್ತಕಗಳ ಓದುವುದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್ ಮಾತನಾಡಿ, ಮೂಲ ಜ್ಞಾನಕ್ಕೆ ಒತ್ತು ಕೊಡುವ ಅವಶ್ಯಕತೆ ಇದೆ. ಯಾವುದೇ ಪದವಿಯನ್ನು ಮಾಡಿದರೂ ಅದರಲ್ಲಿ ಪಡೆಯುವ ಮೂಲ ಜ್ಞಾನ ನಾವು ಮಾಡುವ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ. ಯಾವ ಉದ್ಯೋಗವನ್ನೇ ಮಾಡಿದರೂ ಶ್ರದ್ಧೆಯಿಂದ ಅದರಲ್ಲಿ ಪೂರ್ಣತೆಯನ್ನು ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಪ್ರೈಮ್ ಸಂಸ್ಥೆಯ ವರಿಷ್ಠ ರತ್ನ ಕುಮಾರ್, ಸಂಸ್ಥೆಯ ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್, ಹಿರಿಯರಾದ ಯು.ವಿಶ್ವನಾಥ ಶೆಣೈ, ಶಿಬಿರದ ನಿರ್ದೇಶಕ, ಮೈಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ್ ಗುಡಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಅನಂತರಾಜ ಉಪಾಧ್ಯಾಯ, ಅಶೋಕ್ ಎಂ. ಹಾಗೂ ಡಾ.ಪ್ರತಿಮಾ ಜೆ.ಆಚಾರ್ಯ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸೂರ್ಯನಾರಾಯಣ ಅಡಿಗ ಸಂವಹನ ಕೌಶಲ, ತಂಡದಲ್ಲಿ ಕೆಲಸ ಮಾಡುವ ಕೌಶಲ, ಸಮಸ್ಯೆ ಪರಿಹಾರ, ಮಾಹಿತಿ ಸಂಗ್ರಹ, ನಾಯಕತ್ವಗುಣ, ಸಮಯ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ವಾರ್ತಾ ಭಾರತಿ 19 Apr 2026 8:35 pm

ಕಪೋಲಕಲ್ಪಿತ ಕಥೆಗಳಿಂದ ಸಮಾಜದ ದಾರಿ ತಪ್ಪಿಸುವ ನಡೆ ಆತಂಕಕಾರಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್

‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆ

ವಾರ್ತಾ ಭಾರತಿ 19 Apr 2026 8:30 pm

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಸಚಿವ ಕೆ.ಜೆ.ಜಾರ್ಜ್

‘ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ-2047 ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ’

ವಾರ್ತಾ ಭಾರತಿ 19 Apr 2026 8:27 pm

ಕೇಂದ್ರ ಸರಕಾರದ ನೀತಿಯ ವಿರುದ್ಧ ಜನಂದೋಲನಕ್ಕೆ ಕಾರ್ಯಕರ್ತರು ಸಜ್ಜಾಗಬೇಕು: ಮಿಥುನ್ ರೈ

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ

ವಾರ್ತಾ ಭಾರತಿ 19 Apr 2026 8:23 pm

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ನಡುವೆ ರಸ್ತೆ ಬದಿ ಮಂಡಕ್ಕಿ ಸವಿದ ಮೋದಿ; ವೈರಲ್ ಆಗಿದೆ ವಿಡಿಯೋ

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಜಾರ್‌ಗ್ರಾಮ್‌ನಲ್ಲಿ ರಸ್ತೆ ಬದಿಯ ಅಂಗಡಿಯೊಂದರಲ್ಲಿ 'ಜಾಲ್ಮುರಿ' ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭದ್ರತಾ ಶಿಷ್ಟಾಚಾರಗಳನ್ನು ಮೀರಿ ಸಾಮಾನ್ಯರಂತೆ ವ್ಯಾಪಾರಿಯೊಂದಿಗೆ ಬೆರೆತು ತಿಂಡಿ ಸವಿದ ಅವರ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ಚುನಾವಣಾ ರ‍್ಯಾಲಿಗಳಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದರು. ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಜಯ ಕರ್ನಾಟಕ 19 Apr 2026 8:22 pm

ಸಿ.ಜಿ.ಲಕ್ಷ್ಮೀಪತಿ ನಿವೃತ್ತರಾದ ಮೇಲೆ ರಾಜಕೀಯ ಪಕ್ಷ ಕಟ್ಟಲಿ: ಕೋಟಿಗಾನಹಳ್ಳಿ ರಾಮಯ್ಯ

‘ಕ್ಯಾಸ್ಟ್ ಪಾಲಿಟಿಕ್ಸ್’ ಕೃತಿ ಲೋಕಾರ್ಪಣೆ

ವಾರ್ತಾ ಭಾರತಿ 19 Apr 2026 8:19 pm

ಪ್ರೇರಣಾ ಶಾಲೆಯ ಶತಮಾನೋತ್ಸವ| ವಿದ್ಯಾಥಿ೯ಗಳು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಿ: ರಾಜ್ಯಪಾಲ ಅಬ್ದುಲ್ ನಝೀರ್

ಮೂಡುಬಿದಿರೆ: ವಿದ್ಯೆ ಮನುಷ್ಯನ ಅತ್ಯುತ್ತಮ ಆಭರಣ, ಇದನ್ನು ಯಾರೂ ಕದಿಯಲಾರರು. ತಪ್ಪುಗಳು ನಿಮ್ಮ ಭವಿಷ್ಯವನ್ನು ನಿಧ೯ರಿಸುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಮೂಡುವ ಸಂಶಯಗಳನ್ನು ಅಡಗಿಸಿಡುವ ಬದಲು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ಶಾಲೆಯ ಹಳೆಯ ವಿದ್ಯಾರ್ಥಿ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ವಿದ್ಯಾಥಿ೯ಗಳಿಗೆ ಕರೆಕೊಟ್ಟರು. ಅವರು ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎಲ್ಲಾ ಶಿಕ್ಷಕರ ಶಿಕ್ಷಕ. ಆದ್ದರಿಂದ ತಪ್ಪು ಮಾಡುವ ಬಗ್ಗೆ ಭಯಪಡಬೇಡಿ ಕಲಿಕೆ, ಅಭ್ಯಾಸ ಮತ್ತು ತಾಳ್ಮೆಯ ಮೂಲಕ ಬೆಳೆಯಿರಿ ನಾವು ಪ್ರಗತಿಯ ಬಗ್ಗೆ ಗಮನಕೊಡಬೇಕು ಹೊರತು ಪರಿಪೂಣ೯ತೆಯ ಬಗ್ಗೆ ಅಲ್ಲ ಎಂದ ಅವರು ದಾನಿಗಳ ಸಹಕಾರದಿಂದ ಆಥಿ೯ಕವಾಗಿ ಹಿಂದುಳಿದಿರುವ ವಿದ್ಯಾಥಿ೯ಗಳಿಗೆ ಶಿಕ್ಷಣ ನೀಡುತ್ತಿರುವ ಬಗ್ಗೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಸ್ಥೆಯು ನೂರರ ಸಂಭ್ರಮಾಚರಣೆ ನಡೆಯುತ್ತಿದ್ದರೂ ಆಥಿ೯ಕವಾಗಿ ನಿತ್ರಣದಲ್ಲಿದೆ. ಮಕ್ಕಳಿಗೆ ಸಂಸ್ಕಾರ ನೀಡಲು ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದೆ. ಸಮಾಜದ ಜನರಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ಕಾಯಾ೯ಲಯವನ್ನು ತೆರೆಯಲು ಉದ್ದೇಶಿಸಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ಆರ್‌ಎಸ್‌ಎಸ್‌ನ ಪ್ರಾಂತಸಹಕಾರ್‍ಯವಾಹ ಪ್ರಕಾಶ್ ಪಿ. ಎಸ್ ಶುಭಾಸಂಸನೆಗೈದು ಜೀವನದ ಸವ೯ತೋಮುಖ ಬೆಳವಣಿಗೆಗೆ ಶಿಕ್ಷಣ ಮುಖ್ಯ. ದೇಶ ಸೇವೆ, ಸಮಾಜ ಸೇವೆ ಮತ್ತು ತಮ್ಮ ಏಳಿಗೆಗೆ ಸಮಸ್ಥಿತವಾದ ಚಿಂತನೆಯನ್ನು ಮಾಡಲು ಶಿಕ್ಷಣ ನೀಡಬೇಕಾದುದು ಸಮಾಜದ ಕತ೯ವ್ಯ. ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ಶಿಕ್ಷಣ ನೀಡುತ್ತಿದೆ ಎಂದರು. ಶಾಲಾ ಸಂಚಾಲಕ ಶಾಂತಾರಾಮ ಕುಡ್ವ ಅಧ್ಯಕ್ಷತೆ ವಹಿಸಲಿದ್ದರು. ಸನ್ಮಾನ : ಶಾಲೆಯ ಹಳೆಯ ವಿದ್ಯಾರ್ಥಿ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂಆರ್‌ಜಿ ಗ್ರೂಫ್‌ನ ಡಾ. ಪ್ರಕಾಶ್ ಶೆಟ್ಟಿ, ಉದ್ಯಮಿ, ಶಂಕರ್ ಎಲೆಕ್ಟ್ರಿಕಲ್ಸ್ ಕಂ ಪ್ರೈವೇಟ್ ಲಿ. ನ ರಾಜೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗೌರವ : ಶಾಲಾ ಸಂಸ್ಥಾಪಕರ ಪರವಾಗಿ ಮೇರಿ ಡಿ'ಸೋಜ, ನಿವೃತ್ತ ಮುಖ್ಯ ಶಿಕ್ಷಕರಾದ ಆಂಡ್ರೂ ಸೆರಾವೋ, ಜಯರಾಜ್ ಜೈನ್, ಜಯರಾಮ್ ರಾವ್ ಅವರನ್ನು ಗೌರವಿಸಲಾಯಿತು. ಸಾಧಕರಿಗೆ ಸನ್ಮಾನ : ರಾಷ್ಟ್ರೀಯ ಕ್ರೀಡಾಪಟು ಪ್ರೀತಿ, ಭಗವದ್ಗೀತೆ ಕಂಠಪಾಠದಲ್ಲಿ ರಾಜ್ಯಮಟ್ಟದಲ್ಲಿ ಸ್ಪಧಿ೯ಸಿರುವ ಪ್ರಧಾನ್ ಆರ್. ಭಂಡಾರಿ ಮತ್ತು ಮನಸ್ವಿ ಶಮ೯ ಅವರನ್ನು ಸನ್ಮಾನಿಸಲಾಯಿತು. ದಾನಿಗಳಿಗೆ ಸನ್ಮಾನ : ಉದ್ಯಮಿ, ಶ್ರೀ ವೆಂಕಟರಮಣ ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ ಮತ್ತು ಗೀತಾ ವಿಜಯ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಕೇಶವ ಹೆಗ್ಡೆ, ಕೋಶಾಧಿಕಾರಿ ಎಸ್ ಎನ್ ಬೋರ್ಕರ್ ಮತ್ತಿತರರು ಈ ಸಂದಭ೯ದಲ್ಲಿದ್ದರು. ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಎಂ. ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಹನ್ ಅತಿಕಾರಬೆಟ್ಟು ಕಾಯ೯ಕ್ರಮ ನಿರೂಪಿಸಿದರು.ಶಿಕ್ಷಕಿ ವತ್ಸಲಾ ರಾಜೇಶ್ ವಂದಿಸಿದರು.

ವಾರ್ತಾ ಭಾರತಿ 19 Apr 2026 8:18 pm

ಉತ್ತಮ ಬದುಕಿಗೆ ಶಿಕ್ಷಣವೇ ಅಡಿಪಾಯ: ಸ್ಪೀಕರ್‌ ಯು.ಟಿ. ಖಾದರ್

ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ ಸಂಭ್ರಮಾಚರಣೆ

ವಾರ್ತಾ ಭಾರತಿ 19 Apr 2026 8:13 pm

Bidar | ಮಹಿಳಾ ಮೀಸಲಾತಿ ವಿಧೇಯಕ ವಿರೋಧಿಸಿದ ಕಾಂಗ್ರೆಸ್‌ಗೆ ನಾರಿ ಶಕ್ತಿಯ ಶಾಪ ತಟ್ಟಲಿದೆ: ಭಗವಂತ್ ಖೂಬಾ

ಬೀದರ್: ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದರಿಂದ ಅದು ಜಾರಿಯಾಗದೇ ಇರಲು ಕಾರಣವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಆರೋಪಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಬಸವಣ್ಣ ಅವರ ಕಾಲದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ದೊರಕಿತ್ತು. ಅಕ್ಕಮಹಾದೇವಿ, ಅಕ್ಕ ನಾಗಮ್ಮ ಸೇರಿದಂತೆ ಹಲವು ಶಿವಶರಣೆಯರು ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂತಹ ಪರಂಪರೆ ಇರುವ ದೇಶದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಷಯದಲ್ಲಿ ವಿರೋಧ ವ್ಯಕ್ತಪಡಿಸಿರುವುದು ಮಹಿಳಾ ಲೋಕಕ್ಕೆ ಅವಮಾನವಾಗಿದೆ ಎಂದು ಕಿಡಿಕಾರಿದರು. ಮಹಿಳಾ ಮೀಸಲಾತಿ ವಿಧೇಯಕ ಜಾರಿಯಾದರೆ ದಕ್ಷಿಣ ರಾಜ್ಯಗಳಿಗೆ ಯಾವುದೇ ಹಾನಿಯಿಲ್ಲ. ಬದಲಿಗೆ ಕ್ಷೇತ್ರ ಪುನರ್‌ವಿಂಗಡಣೆಯಿಂದ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಹೆಚ್ಚಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರತಿನಿಧಿತ್ವ ಸಿಗುತ್ತಿತ್ತು ಎಂದು ಹೇಳಿದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಉಲ್ಲಾಸಿನಿ ಮುದಾಳೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸದಾ ನಾರಿಶಕ್ತಿಯನ್ನು ಗೌರವಿಸುತ್ತಾರೆ. ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ತರಲು ಬಿಜೆಪಿ ಪ್ರಯತ್ನಿಸಿದರೂ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವಿರೋಧಿಸುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಿವೆ ಎಂದು ದೂರಿದರು. ಮುಂಬರುವ ದಿನಗಳಲ್ಲಿ ಮಹಿಳಾ ಸಮೂಹ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಗುರುನಾಥ್ ಜ್ಯಾಂತಿಕರ್, ಮಹಾನಗರ ಪಾಲಿಕೆ ಸದಸ್ಯ ಶಶಿಧರ್ ಹೊಸಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಕೌಟಗೆ, ಕಾರ್ಯದರ್ಶಿ ಲುಂಬಿಣಿ ಗೌತಮ್, ಶ್ರೀನಿವಾಸ್ ಚೌಧರಿ ಹಾಗೂ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಬಾವಗೆ ಇದ್ದರು.

ವಾರ್ತಾ ಭಾರತಿ 19 Apr 2026 8:13 pm

ಮಧ್ಯಪ್ರಾಚ್ಯ ಸಂಘರ್ಷ | ಇಸ್ರೇಲ್–ಲೆಬನಾನ್ ಕದನ ವಿರಾಮವು ಭರವಸೆ ಮೂಡಿಸಿದೆ: ಪೋಪ್ ಲಿಯೋ

ಲುವಾಂಡಾ, ಎ. 19: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವು ಭರವಸೆ ಮೂಡಿಸಿದೆ ಎಂದು ಪೋಪ್ ಲಿಯೋ ಹೇಳಿದ್ದಾರೆ. ಅಂಗೋಲಾದ ರಾಜಧಾನಿ ಲುವಾಂಡಾದ ಹೊರವಲಯದಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಗುರುವಾರದಿಂದ ಜಾರಿಗೆ ಬಂದಿರುವ 10 ದಿನಗಳ ಕದನ ವಿರಾಮವು ಪ್ರದೇಶದಲ್ಲಿ ಶಾಂತಿಯತ್ತ ಒಂದು ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಕಳೆದ ವಾರ ಪೋಪ್ ಲಿಯೋ ವಿಶ್ವ ನಾಯಕರಿಗೆ ಯುದ್ಧವನ್ನು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಸಾಧನವಾಗಿ ಬಳಸಬಾರದು ಎಂದು ಕರೆ ನೀಡಿದ್ದರು. ಜಾಗತಿಕ ಮಟ್ಟದಲ್ಲಿ ಶಾಂತಿಗೆ ಬದ್ಧತೆಯನ್ನು ತೋರಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದರು.

ವಾರ್ತಾ ಭಾರತಿ 19 Apr 2026 8:12 pm

Arunachal Pradesh | ಸಿಘಾಟ್ ನಗರವನ್ನು ಚೀನಾ ಪ್ರಾಂತ್ಯ ಎಂದು ತೋರಿಸಿದ ಜನಗಣತಿ ಪೋರ್ಟಲ್!

ಹೊಸದಿಲ್ಲಿ: ಜನಗಣತಿಯ ಪೋರ್ಟಲ್ ಅರುಣಾಚಲ ಪ್ರದೇಶದ ಪಸಿಘಾಟ್ ನಗರವನ್ನು ಚೀನಾದ ಮೆಡೋಗ್ ಪ್ರಾಂತ್ಯ ಎಂದು ತೋರಿಸುತ್ತಿದೆ ಎಂದು ಸ್ಥಳೀಯರೊಬ್ಬರು ಗಂಭೀರ ಲೋಪದತ್ತ ಗಮನ ಸೆಳೆದ ಬಳಿಕ, ಅಧಿಕಾರಿಗಳು ನಕ್ಷೆಯನ್ನು ಸರಿಪಡಿಸಿರುವ ಘಟನೆ ನಡೆದಿದೆ. ಈ ಘಟನೆ ಮುಂಬರುವ ಡಿಜಿಟಲ್ ಜನಗಣತಿಗೆ ಎದುರಾಗಲಿರುವ ಸವಾಲನ್ನು ಎತ್ತಿ ತೋರಿಸುತ್ತಿದೆ. ಪಸಿಘಾಟ್ ನಿವಾಸಿಯಾದ ನಿವೃತ್ತ ಕ್ಯಾಪ್ಟನ್ ಮೊಹೊಂತೊ ಪ್ಯಾಂಗಿಂಗ್ ಅವರು ಜನಗಣತಿಯ ಅಧಿಕೃತ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಲು ಪ್ರಯತ್ನಿಸಿದಾಗ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದಿದೆ. ಈ ಜಾಲತಾಣದ ಇಂಟರ್ ಫೇಸ್ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿರುವ ಅವರ ನಗರವನ್ನು ಚೀನಾ ಗಡಿಯಲ್ಲಿರುವ ಮೆಡೋಗ್ ಎಂದು ತಪ್ಪಾಗಿ ತೋರಿಸಿದೆ. ಈ ಲೋಪವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ಯಾಂಗಿಂಗ್, “ಮೆಡೋಗ್ ಚೀನಾದಲ್ಲಿನ ಒಂದು ಪಟ್ಟಣವಾಗಿದೆ. ಗೂಗಲ್ ನ ಸಿಇಒ ಸುಂದರ್ ಪಿಚ್ಚೈ ಭಾರತೀಯರಾಗಿದ್ದಾರೆ! ಸರ್ಕಾರದ ಅಧಿಕೃತ ಪೋರ್ಟಲ್ ಗಳೂ ಕೂಡ ನಮ್ಮ ಪ್ರಾಂತ್ಯವನ್ನು ತಪ್ಪಾಗಿ ತೋರಿಸುತ್ತಿವೆ! ಈ ಬಗ್ಗೆ ಕ್ಷಿಪ್ರ ಕ್ರಮದ ಅಗತ್ಯವಿದೆ” ಎಂದು ಆಗ್ರಹಿಸಿದ್ದರು. ಇದರ ಬೆನ್ನಿಗೇ, ಜನಗಣತಿ ಪೋರ್ಟಲ್ ನಲ್ಲಿ ಕಂಡು ಬಂದಿದ್ದ ಲೋಪವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ.

ವಾರ್ತಾ ಭಾರತಿ 19 Apr 2026 8:09 pm

Bidar | ಬಹುಜನರು ಆಳುವ ವರ್ಗವಾಗಬೇಕು ಎನ್ನುವುದೇ ಅಂಬೇಡ್ಕರ್ ಅವರ ಆಶಯವಾಗಿತ್ತು : ಮಹೇಶ್ ಗೋರನಾಳಕರ್

ಬೀದರ್: ಬಹುಜನರು ರಾಜಕೀಯವಾಗಿ ಸಬಲಗೊಂಡು ಆಳುವ ವರ್ಗವಾಗಬೇಕು ಎನ್ನುವುದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಹೇಳಿದರು. ಭಾಲ್ಕಿ ತಾಲೂಕಿನ ಕಪಲಾಪೂರ್ (ಕೆ) ಗ್ರಾಮದಲ್ಲಿ ಶನಿವಾರ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಬಹುಜನರು ರಾಜಕೀಯ ಅಧಿಕಾರ ಪಡೆದು ಆಡಳಿತದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಜಯಂತಿ ಆಚರಣೆಗಳು ಕೇವಲ ಡಿಜೆ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅಂಬೇಡ್ಕರ್ ಅವರ ಆಶಯದಂತೆ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದಾಗ ಮಾತ್ರ ಅವರ ಕನಸು ಸಾಕಾರವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ಗೌತಮ್ ಬಗದಲ್ಕರ್, ದಸಂಸ ಹುಲಸೂರ ತಾಲೂಕಾಧ್ಯಕ್ಷ ದೇವಾನಂದ್ ತೊಳೆ, ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ್ ಮುಕಿಂದೆ, ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಲೋಕೇಶ್ ಕಾಂಬ್ಳೆ, ವೈಡಿಎಸ್ಎಸ್ ಸಂಘಟನೆಯ ಸಂಸ್ಥಾಪಕ ಪ್ರದೀಪ್ ಭಾವಿಕಟ್ಟಿ, ಭೀಮ್ ಆರ್ಮಿ ತಾಲೂಕಾಧ್ಯಕ್ಷ ಸಿದ್ದಾರ್ಥ ಪ್ಯಾಗೆ, ಸುವಾಸ್ ಶಿಂಧೆ, ಸುರೇಶ್ ಭಾವಿಕಟ್ಟಿ, ಅಜಯ್ ಮದಾಳೆ, ಲಖನ್ ಸಿಂಗಾರೆ, ಸಿದ್ಧಾರ್ಥ್ ಬೇಂದ್ರೆ, ರವಿ ಕಾಂಬ್ಳೆ, ಆಕಾಶ್ ಕಾಂಬ್ಳೆ ಹಾಗೂ ವಿಕಾಸ್ ಕಾಂಬ್ಳೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.

ವಾರ್ತಾ ಭಾರತಿ 19 Apr 2026 8:08 pm

ಬೀದರ್ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ

ಬೀದರ್: ಜಿಲ್ಲೆಯ ವಿವಿಧೆಡೆ ರವಿವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಉಷ್ಣತೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ದಿನಪೂರ್ತಿ ತೀವ್ರ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಮಳೆ ತಂಪೆರಗಿದೆ. ಮುಂಜಾನೆಯಿಂದಲೇ ಸುಮಾರು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಂಜೆ ವೇಳೆ ಮಳೆ ಆರಂಭವಾಯಿತು. ಬೀದರ್ ನಗರದಲ್ಲಿ ತುಸು ಮಳೆಯಾದರೆ, ಹುಲಸೂರ್ ತಾಲೂಕಿನ ಸೋಲದಾಬಕಾ, ಹಾಲಹಳ್ಳಿ, ತೋಗಲೂರ್, ಕೇಸರ ಜವಳಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೋರಾಗಿ ಮಳೆಯಾಯಿತು. ಬಸವಕಲ್ಯಾಣ ನಗರದಲ್ಲಿಯೂ ಸಾಧಾರಣ ಮಳೆಯಾಗಿದೆ. ಹುಮನಾಬಾದ್ ಪಟ್ಟಣದಲ್ಲಿ ಗುಡುಗು-ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೆಲ ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಮೊಳಕೇರಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಹ ಮಳೆಯಾಗಿದೆ. ಈ ಮಳೆಯಿಂದ ಜನರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದ್ದರೂ, ಮಾವಿನ ಬೆಳೆಗಳಿಗೆ ಹಾನಿಯಾಗುವ ಭೀತಿಯಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 19 Apr 2026 8:05 pm

ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಪಡಿಸಲು EU ಗೆ ಸ್ಪೇನ್ ಒತ್ತಾಯ

ಮ್ಯಾಡ್ರಿಡ್: ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಕೊನೆಗೊಳಿಸುವಂತೆ ಯುರೋಪಿಯನ್ ಒಕ್ಕೂಟ (EU)ವನ್ನು ಸ್ಪೇನ್ ಒತ್ತಾಯಿಸಿದೆ ಎಂದು aljazeera ವರದಿ ಮಾಡಿದೆ. ಆಂಡಲೂಸಿಯಾದಲ್ಲಿ ನಡೆದ ರಾಜಕೀಯ ರ್ಯಾ ಲಿಯಲ್ಲಿ ಮಾತನಾಡಿದ ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್, “ಮಂಗಳವಾರ ಸ್ಪೇನ್ ಸರ್ಕಾರವು ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಮುರಿಯುವಂತೆ ಯುರೋಪಿಯನ್ ಒಕ್ಕೂಟಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ” ಎಂದು ತಿಳಿಸಿದ್ದಾರೆ. ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದ್ದು, “ಅಂತಹ ದೇಶವು ಯುರೋಪಿಯನ್ ಒಕ್ಕೂಟದ ಪಾಲುದಾರನಾಗಲು ಸಾಧ್ಯವಿಲ್ಲ... ಅದು ಅಷ್ಟು ಸರಳವಾಗಿದೆ” ಎಂದು ಅವರು ಹೇಳಿದ್ದಾರೆ. ಲೆಬನಾನ್ ಮೇಲಿನ ದಾಳಿಗಳನ್ನೂ ಸ್ಯಾಂಚೆಜ್ ಟೀಕಿಸಿದ್ದಾರೆ. ಇದಕ್ಕೂ ಮೊದಲು, ಸ್ಪೇನ್, ಐರ್ಲೆಂಡ್ ಮತ್ತು ಸ್ಲೊವೇನಿಯಾ ದೇಶಗಳು ಯುರೋಪಿಯನ್ ಆಯೋಗಕ್ಕೆ ಪತ್ರ ಬರೆದು, ಇಸ್ರೇಲ್ ಜೊತೆಗಿನ ಒಪ್ಪಂದವನ್ನು ಮುಂದಿನ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿವೆ. ಜೂನ್ 2000ರಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಇಸ್ರೇಲ್ ನಡುವಿನ ಸಂಬಂಧ ಒಪ್ಪಂದದಲ್ಲಿ ಮಾನವ ಹಕ್ಕುಗಳಿಗೆ ಗೌರವ ನೀಡುವ ಷರತ್ತು ಸೇರಿಸಲಾಗಿದೆ. ಗಾಝಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದ ನಡುವೆಯೇ, ಸ್ಪೇನ್ ಮತ್ತು ಐರ್ಲೆಂಡ್ ದೇಶಗಳು 2024ರಲ್ಲಿ ಈ ಒಪ್ಪಂದದ ಮರುಪರಿಶೀಲನೆಗೆ ಮೊದಲ ಬಾರಿಗೆ ಕರೆ ನೀಡಿದ್ದವು. 2024ರಲ್ಲಿ ಸ್ಪೇನ್‌ ದೇಶವು ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡಿದ ಕ್ರಮಕ್ಕೆ ಇಸ್ರೇಲ್ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ನಂತರದಿಂದ ಸ್ಯಾಂಚೆಜ್, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಟೀಕೆಗಳನ್ನು ಮುಂದುವರೆಸಿದ್ದಾರೆ.

ವಾರ್ತಾ ಭಾರತಿ 19 Apr 2026 8:04 pm

TET 2026 | ಭೋಪಾಲ್ ನಲ್ಲಿ ಶಿಕ್ಷಕರ ಪ್ರತಿಭಟನೆ: ಪರೀಕ್ಷೆ ರದ್ದತಿಗೆ ಆಗ್ರಹ

ಭೋಪಾಲ್: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಮಧ್ಯಪ್ರದೇಶದ ಸಾವಿರಾರು ಶಿಕ್ಷಕರು ಭೋಪಾಲ್ ನ BHEL ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲ ಸೇವಾನಿರತ ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಹಾಗೂ ಭಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಈ ನಿರ್ದೇಶನದ ಪ್ರಕಾರ, ಐದು ವರ್ಷಕ್ಕಿಂತ ಹೆಚ್ಚು ಸೇವಾವಧಿ ಹೊಂದಿರುವ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಆದರೆ, ಐದು ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಶಿಕ್ಷಕರಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದ್ದರೂ, ಅವರಿಗೆ ಭಡ್ತಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶಕ್ಕೆ ಸೇವಾನಿರತ ಶಿಕ್ಷಕರಿಂದ ವ್ಯಾಪಕ ಕಳವಳ ವ್ಯಕ್ತವಾಗಿದ್ದು, ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಿಗೆ ಈ ನಿಯಮ ಅನ್ವಯಿಸಬಾರದು ಎಂದು ಒತ್ತಾಯಿಸಿದ್ದಾರೆ. ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 19 Apr 2026 7:57 pm

ವೇದಾಂತ ವಿದ್ಯುತ್ ಘಟಕ ಸ್ಫೋಟ | ಮೃತರ ಸಂಖ್ಯೆ 24ಕ್ಕೆ ಏರಿಕೆ

ರಾಯಪುರ, ಎ. 19: ಛತ್ತೀಸ್ಗಢ ದ ಶಕ್ತಿಯಲ್ಲಿರುವ ವೇದಾಂತ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೃತ ಕಾರ್ಮಿಕ ಛತ್ತೀಸ್ಗಢದ ನಿವಾಸಿ. ದುರಂತದಲ್ಲಿ ಗಾಯಗೊಂಡ ಆರು ದಿನಗಳ ಬಳಿಕ ಈತ ರಾಜಗಢ ವೈದ್ಯಕೀಯ ಕಾಲೇಜಿನಲ್ಲಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇತರ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಕಾರ್ಮಿಕರು ಶನಿವಾರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರನ್ನು ಸುಬ್ರತಾ ಕುಮಾರ್ ಜನ ಎಂದು ಗುರುತಿಸಲಾಗಿದೆ. ಈತ ರಾಯಗಢ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ. ಇನ್ನೊಬ್ಬರನ್ನು ಉಪೇಂದ್ರ ಶಾ ಎಂದು ಗುರುತಿಸಲಾಗಿದೆ. ಈತ ರಾಯಪುರದ ಕಾಲ್ಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜನ ಪಶ್ಚಿಮ ಬಂಗಾಳದ ಮೇಧಿನಿಪುರ ಹಾಗೂ ಶಾ ಜಾರ್ಖಂಡ್ನ ಗರವಾ ನಿವಾಸಿಗಳು. ಘಟನೆಯಲ್ಲಿ ಇಬ್ಬರಿಗೂ ಸುಮಾರು ಶೇ. 90ರಷ್ಟು ಗಾಯಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 7:52 pm

Aland | ಸಿಯುಕೆಯಲ್ಲಿ ‘ಉತ್ತರ ಪೂರ್ವ ರಾಜ್ಯಗಳ ಉತ್ಸವ–2026’ ವೈಭವ

ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಆಯೋಜಿಸಲಾದ “ಉತ್ತರ ಪೂರ್ವ ರಾಜ್ಯಗಳ ಉತ್ಸವ–2026” ಕಾರ್ಯಕ್ರಮವು ವೈವಿಧ್ಯತೆಯೊಳಗಿನ ಏಕತೆಯನ್ನು ಸಾರುವ ವಿಶಿಷ್ಟ ವೇದಿಕೆಯಾಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಎಡಿಜಿಪಿ (ಆಡಳಿತ) ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್, ಐಪಿಎಸ್ ಮಾತನಾಡಿ, ಉತ್ತರ ಪೂರ್ವ ರಾಜ್ಯಗಳ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಹೇಳಿದರು. ಈ ಭಾಗದ ಜನರು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡು, ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಸಿಯುಕೆ ವೈವಿಧ್ಯತೆಯೊಳಗಿನ ಏಕತೆಯ ಪ್ರತಿರೂಪವಾಗಿದ್ದು, ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. “ಸಿಯುಕೆ ನಿಜಕ್ಕೂ ಮಿನಿ ಭಾರತ,” ಎಂದು ಹೇಳಿದರು. ಭಾರತದ ಬಹುಮುಖ ಸಮಾಜದ ಪ್ರತಿಬಿಂಬವಾಗಿರುವ ಈ ವಿಶ್ವವಿದ್ಯಾಲಯದಲ್ಲಿ ವಿವಿಧ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಒಟ್ಟಾಗಿ ಕಲಿಯುತ್ತಾ ಬೆಳೆದು ಬರುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಉತ್ತರ ಪೂರ್ವ ವಿದ್ಯಾರ್ಥಿ ಸಮುದಾಯದ ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಯನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಪೂರ್ವ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ನೃತ್ಯ, ವೇಷಭೂಷಣ ಹಾಗೂ ಪರಂಪರೆಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಪ್ರಭಾರ ಕುಲಸಚಿವರಾದ ಪ್ರೊ. ಚನ್ನವೀರ ಆರ್. ಎಂ., ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಕುಬಕಡ್ಡಿ, ಕಾರ್ಯಕ್ರಮ ಸಂಯೋಜಕ ಡಾ. ಜೋಮಿಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 7:51 pm

Uttar Pradesh | ಕಾನ್ಪುರದಲ್ಲಿ ಅವಳಿ ಪುತ್ರಿಯರ ಕತ್ತು ಕೊಯ್ದು ಹತ್ಯೆಗೈದ ತಂದೆ

ಲಕ್ನೋ, ಎ. 19: ನೌಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ನಗರದಲ್ಲಿರುವ ತ್ರಿಮೂರ್ತಿ ಅಪಾರ್ಟ್ಮೆಂಟ್ನಲ್ಲಿ ವೈದ್ಯಕೀಯ ಪ್ರತಿನಿಧಿ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಆರೋಪಿ ಶಶಿ ರಂಜನ್ ಮಿಶ್ರಾ ತನ್ನ ಪತ್ನಿ ರೇಷ್ಮಾ ಕ್ಷೇತ್ರಿ ಹಾಗೂ ಮೂವರು ಮಕ್ಕಳಾದ 11 ವರ್ಷದ ಅವಳಿ ಪುತ್ರಿಯರಾದ ರಿದ್ಧಿ ಮತ್ತು ಸಿದ್ಧಿ, 6 ವರ್ಷದ ಪುತ್ರ ಗನ್ನುನೊಂದಿಗೆ ಇಲ್ಲಿ ವಾಸಿಸುತ್ತಿದ್ದರು ಎಂದು ದಕ್ಷಿಣ ಡಿಸಿಪಿ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ. ಪೊಲೀಸರು ತುರ್ತು ಸಂಖ್ಯೆ 112ರಿಂದ ಕರೆ ಸ್ವೀಕರಿಸಿದ್ದರು. ಅವಳಿ ಮಕ್ಕಳನ್ನು ಹತ್ಯೆಗೈದ ಬಗ್ಗೆ ಸ್ವತಃ ಶಶಿ ರಂಜನ್ ಮಿಶ್ರಾ ಕರೆಯಲ್ಲಿ ಮಾಹಿತಿ ನೀಡಿದ್ದ. ಪೊಲೀಸರು ಫ್ಲ್ಯಾಟ್ ಗೆ ಧಾವಿಸಿದಾಗ ಇಬ್ಬರು ಬಾಲಕಿಯರ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು. ಕೊಠಡಿ ರಕ್ತದಿಂದ ತುಂಬಿತ್ತು. ಸಮೀಪದಲ್ಲೇ ಚಾಕು ಬಿದ್ದಿತ್ತು. ಆರೋಪಿ ಮೃತದೇಹಗಳ ಪಕ್ಕದಲ್ಲೇ ಕುಳಿತಿದ್ದ. ಆತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಹತ್ಯೆಯ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಿಶ್ರಾ ಕುಡಿದ ಮತ್ತಿನಲ್ಲಿ ತನಗೆ ದಿನನಿತ್ಯ ಹೊಡೆಯುತ್ತಿದ್ದ ಎಂದು ಪತ್ನಿ ರೇಷ್ಮಾ ಕ್ಷೇತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಫ್ಲ್ಯಾಟ್ ನಲ್ಲಿ ಪ್ರವೇಶ ದ್ವಾರದಿಂದ ಹಿಡಿದು ಮಲಗುವ ಕೋಣೆವರೆಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂದು ಅವರು ತಿಳಿಸಿದ್ದಾರೆ. ರೇಷ್ಮಾ ಪಶ್ಚಿಮ ಬಂಗಾಳದ ಸಿಲಿಗುರಿಯ ನಿವಾಸಿ ಹಾಗೂ ಆರೋಪಿ ಶಶಿ ರಂಜನ್ ಮಿಶ್ರಾ ಬಿಹಾರದ ನಿವಾಸಿ. ಇವರು 2014ರಲ್ಲಿ ವಿವಾಹವಾಗಿದ್ದರು.

ವಾರ್ತಾ ಭಾರತಿ 19 Apr 2026 7:49 pm

ಕಲಬುರಗಿಯಲ್ಲಿ ಬಸವ ಜಯಂತಿ ಅಂಗವಾಗಿ ಕಾರ್ ರ್‍ಯಾಲಿ

ಕಲಬುರಗಿ: ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಲ ಹಮ್ಮಿಕೊಂಡಿದ್ದ 12ನೇ ವರ್ಷದ ಬೃಹತ್ ಕಾರ್ ರ್‍ಯಾಲಿ ನಗರದಲ್ಲಿ ವೈಭವದಿಂದ ಜರುಗಿತು. ಮಂಡಲದ ಜಗದೀಶ್ ದೇಶಮುಖ ಅವರ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ದೊಡ್ಡಪ್ಪ ಅಪ್ಪ ಚಾಲನೆ ನೀಡಿ ಆಶೀರ್ವದಿಸಿದರು. ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಈ ಮೆರವಣಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಅನ್ನಪೂರ್ಣ ಕ್ರಾಸ್ ಮೂಲಕ ಸಾಗುತ್ತಾ ಜಗತ್ ವೃತ್ತ ತಲುಪಿತು. ಬಳಿಕ ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಸಮಾಪ್ತಿಯಾಯಿತು. ಸುಮಾರು 1000ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಬಸವ ಭಕ್ತರು ಭಾಗವಹಿಸಿ ನಗರಾದ್ಯಂತ ಬಸವಣ್ಣನವರ ಜಯಘೋಷ ಮೊಳಗಿಸಿದರು. ರ್ಯಾಲಿಯುದ್ದಕ್ಕೂ ಯುವ ಸಮೂಹದ ಉತ್ಸಾಹ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಂ.ವೈ. ಪಾಟೀಲ್, ಡಾ. ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ್ ರೇವೂರ್, ಶಶೀಲ್ ನಮೋಶಿ, ಮಾಜಿ ಸಂಸದ ಡಾ. ಉಮೇಶ್ ಜಾಧವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇಷ್ಟಲಿಂಗ ಪೂಜೆ, ದೀಕ್ಷಾ ಸಮಾರಂಭ : ಬಸವ ಜಯಂತಿ ಅಂಗವಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಸಮಾರಂಭ ಭಕ್ತಿಭಾವದಿಂದ ನಡೆಯಿತು. ಇಳಕಲದ ಮಹಾಂತೇಶ್ವರ ಮಠದ ಗುರು ಮಹಾಂತ ಮಹಾಶಿವಯೋಗಿಗಳು ಹಾಗೂ ಪ್ರಭುಶ್ರೀ ಮಾತಾಜಿ ಅವರ ಮಾರ್ಗದರ್ಶನದಲ್ಲಿ ಪೂಜೆ ಕೈಂಕರ್ಯಗಳು ನಡೆದವು. ಈ ಸಂದರ್ಭದಲ್ಲಿ ಬಸವಣ್ಣ ಅವರ ಕಾಯಕ-ದಾಸೋಹ ತತ್ವಗಳು, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸುಮಾರು 1000ಕ್ಕೂ ಅಧಿಕ ಭಕ್ತರು ಏಕಕಾಲದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಶರಣ ಸಂಸ್ಕೃತಿಯ ಮಹತ್ವವನ್ನು ಮೆರೆದರು. ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ್, ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ್ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೆ, ಬಸವರಾಜ್ ದೇಶಮುಖ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರವೀಂದ್ರ ಶಾಬಾದಿ, ಆರ್.ಜಿ. ಶೆಟ್ಗರ್, ಡಾ. ಭಾಗ್ಯಶ್ರೀ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.      

ವಾರ್ತಾ ಭಾರತಿ 19 Apr 2026 7:43 pm

ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಹತ್ತು ಪ್ರಾಣಿಗಳ ಬಗ್ಗೆ ಗೊತ್ತೇ?

ಕೆಲವು ಅಪರೂಪದ, ಅಳಿವಿನಂಚಿನಲ್ಲಿರುವ ಪ್ರಭೇದಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಹಿಮಾಲಯಕ್ಕಿಂತಲೂ ಹಳೆಯದಾದ ಈ ಕಾಡುಗಳು ಭೂಮಿಯ ಮೇಲೆ ಎಲ್ಲೂ ಸಿಗದ ಕೆಲವು ಪ್ರಭೇದಗಳನ್ನು ಹೊಂದಿವೆ. ಸೂರ್ಯನ ಬೆಳಕು ನೆಲಕ್ಕೆ ಬೀಳದಂತಹ ದಟ್ಟ ಕಾಡುಗಳು, ಮಂಜಿನ ಬೆಟ್ಟಗಳು ಮತ್ತು ನದಿ ಕಣಿವೆಗಳಲ್ಲಿ ಅಡಗಿರುವ ಪ್ರಾಣಿಗಳು ಅಲ್ಲಿನ ಪರಿಸರದಷ್ಟೇ ವಿಶಿಷ್ಟವಾಗಿವೆ. ಸಿಂಹ-ಬಾಲದ ಮಕಾಕ್ (Lion-tailed macaque) ಬೆಳ್ಳಿಯ ನೀಳಗಡ್ಡೆಯ ಮುಖದ ರೋಮಗಳು ಮತ್ತು ಕುಚ್ಚು ಕೂದಲಿನ ಬಾಲ ಹೊಂದಿರುವ ಈ ಪುರಾತನ ಜೀವಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಸಣ್ಣ ಗುಂಪುಗಳಲ್ಲಿ ಕಂಡುಬರುವ ಇವುಗಳು ತಮ್ಮ ಜೀವನದ ಬಹುಪಾಲನ್ನು ದಟ್ಟ ಕಾಡಿನ ಮರಗಳ ಮೇಲೆಯೇ ಕಳೆಯುತ್ತವೆ. ಅಪರೂಪಕ್ಕೆ ಮಾತ್ರ ನೆಲಕ್ಕೆ ಇಳಿಯುತ್ತವೆ. ನೀಲಗಿರಿ ತಹರ್ (Nilgiri tahr) ಎತ್ತರದ ಹುಲ್ಲುಗಾವಲುಗಳಲ್ಲಿ ಹೆಚ್ಚು ಕಂಡುಬರುವ ಈ ದೃಢ ಗೊರಸುಳ್ಳ ಪ್ರಾಣಿ ಸಾಮಾನ್ಯವಾಗಿ ಕಲ್ಲಿನ ಬಂಡೆಗಳ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ಒಮ್ಮೆ ಅಳಿವಿನಂಚಿನಲ್ಲಿದ್ದ ಈ ಪ್ರಾಣಿಗಳ ಸಂರಕ್ಷಣಾ ಪ್ರಯತ್ನಗಳು ಅದರ ಸಂಖ್ಯೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿವೆ. ಮಲಬಾರ್ ದೈತ್ಯ ಅಳಿಲು (Malabar giant squirrel) ಭಾರತೀಯ ದೈತ್ಯ ಅಳಿಲು ಎಂದೇ ಕರೆಯಲಾಗುವ ಈ ಬಹುಬಣ್ಣದ ಜೀವಿ ಮರಗಳ ಮೇಲೆ ಚುರುಕಾಗಿ ಜಿಗಿಯುತ್ತದೆ. ಬಣ್ಣಬಣ್ಣದ ಚರ್ಮವುಳ್ಳ ಈ ಅಳಿಲುಗಳು ಭಾರತದ ಅತ್ಯಂತ ಆಕರ್ಷಕ ಸಸ್ತನಿಗಳಲ್ಲಿ ಒಂದಾಗಿದೆ. ನೇರಳೆ ಕಪ್ಪೆ (Purple frog) ಭೂಮಿಯ ಅತ್ಯಂತ ವಿಚಿತ್ರ ಉಭಯಚರಗಳಲ್ಲಿ ಒಂದಾದ ಈ ನೇರಳೆ ಕಪ್ಪೆ ತನ್ನ ಜೀವನದ ಬಹುಪಾಲನ್ನು ನೆಲದಡಿಯಲ್ಲೇ ಕಳೆಯುತ್ತದೆ. ಮುಂಗಾರು ಸಮಯದಲ್ಲಿ ಸಂತಾನೋತ್ಪತ್ತಿಗಾಗಿ ಕೆಲಕಾಲ ಹೊರಗೆ ಬರುತ್ತದೆ. ಇದನ್ನು “ಲಿವಿಂಗ್ ಫಾಸಿಲ್” ಎಂದೂ ಕರೆಯಲಾಗುತ್ತದೆ. ನೀಲಗಿರಿ ಲಂಗೂರ್ (Nilgiri langur) ಹೊಳಪುಳ್ಳ ಕಪ್ಪು ಚರ್ಮ ಮತ್ತು ಚಿನ್ನದ-ಕಂದು ಬಣ್ಣದ ತಲೆಯಿಂದ ಗುರುತಿಸಬಹುದಾದ ಈ ನಾಚಿಕೆ ಸ್ವಭಾವದ ಸಸ್ತನಿ ಪ್ರಾಣಿ ಮುಖ್ಯವಾಗಿ ಎಲೆಗಳು, ಹಣ್ಣುಗಳು ಮತ್ತು ಹೂವುಗಳನ್ನು ತಿನ್ನುತ್ತದೆ. ಮಲಬಾರ್ ಸಿವೆಟ್ (Malabar civet) ಅತ್ಯಂತ ಅಪರೂಪದ ಈ ಸಸ್ತನಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಆವಾಸಸ್ಥಾನದ ನಷ್ಟದಿಂದಾಗಿ ಅಳಿವಿನಂಚಿಗೆ ತಳ್ಳಲ್ಪಟ್ಟಿದೆ. ಇದನ್ನು ಕಾಣುವುದು ಅತ್ಯಂತ ವಿರಳ. ಭಾರತೀಯ ಹಾರುವ ಹಲ್ಲಿ (Indian flying lizard) ಈ ಗಮನಾರ್ಹ ಸರೀಸೃಪವು ನಿಜವಾಗಿ ಹಾರುವುದಿಲ್ಲ. ಆದರೆ ರೆಕ್ಕೆಯಂತಿರುವ ಪೊರೆಗಳನ್ನು ಬಳಸಿಕೊಂಡು ಮರಗಳ ನಡುವೆ ಜಾರುತ್ತದೆ. ಮರದ ತೊಗಟೆಗಳ ಮೇಲೆ ಮರೆಯಾಗಿದ್ದರೆ ಕಾಣುವುದೇ ಕಷ್ಟ. ಮಲಬಾರ್ ಗ್ರೇ ಹಾರ್ನ್ಬಿಲ್ (Malabar grey hornbill) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಈ ಹಣ್ಣು ತಿನ್ನುವ ಪಕ್ಷಿ ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ದೊಡ್ಡ ಬಾಗಿದ ಕೊಕ್ಕು ಮತ್ತು ಜೋರಾದ ಕೂಗಿನಿಂದ ಸುಲಭವಾಗಿ ಗುರುತಿಸಬಹುದು. ತಿರುವಾಂಕೂರು ಆಮೆ (Travancore tortoise) ಅರಣ್ಯದಲ್ಲಿ ವಾಸಿಸುವ ಈ ಅಪರೂಪದ ಆಮೆ ಎಲೆಗಳ ಕಸ ಮತ್ತು ದಟ್ಟ ಪೊದೆಗಳಲ್ಲಿ ಬದುಕುತ್ತದೆ. ಗಾತ್ರದ ಹೊರತಾಗಿಯೂ ಇದನ್ನು ಗುರುತಿಸುವುದು ಕಷ್ಟ. ನೀಲಗಿರಿ ಮಾರ್ಟೆನ್ (Nilgiri marten) ಭಾರತದ ಏಕೈಕ ಮಾರ್ಟೆನ್ ಪ್ರಭೇದವಾದ ಈ ಮಾಂಸಾಹಾರಿ ಪ್ರಾಣಿ ವಿರಳವಾಗಿ ಕಂಡುಬರುತ್ತದೆ. ದೇಶದಲ್ಲಿ ಅತಿ ಕಡಿಮೆ ಅಧ್ಯಯನಗೊಂಡ ಸಸ್ತನಿಗಳಲ್ಲಿ ಒಂದಾಗಿದೆ. ಕೃಪೆ: Indian Express

ವಾರ್ತಾ ಭಾರತಿ 19 Apr 2026 7:39 pm

ಉಳ್ಳಾಲ: ಅಬ್ಬಕ್ಕ@500 ಉಪನ್ಯಾಸ ಕಾರ್ಯಕ್ರಮದ ಸಮಾರೋಪ

ಉಳ್ಳಾಲ: ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿದ್ದ ವೀರರಾಣಿ ಅಬ್ಬಕ್ಕಳು ಈಗಲೂ ನಮಗೆ ಅಪರಿಚಿತಲಾಗಿದ್ದು,ಇತಿಹಾಸದ ಪುಟಗಳಲ್ಲಿ ಆಕೆಗೆ ಸಿಗುವ ಸ್ಥಾನ ಮಾನ ಇನ್ನೂ ಸಿಕ್ಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಜಿ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದೊಂದಿಗೆ ಉಳ್ಳಾಲ ಶಾರದನಿಕೇತನ ಸಭಾಂಗಣದಲ್ಲಿ ನಡೆದ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮ‌ ಉದ್ಘಾಟಿಸಿದ ಧರ್ಮಸ್ಥಳದ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ ಕಳೆದ ಒಂದು ವರುಷದಿಂದ ಅಬ್ಬಕ್ಕ@500 ಸರಣಿ ಕಾರ್ಯಕ್ರಮದಡಿ ಅಬ್ಬಕ್ಕಳ ನೆನಪುಗಳನ್ನ ಮೆಲುಕು ಹಾಕಿ ಅವಳ ಶೌರ್ಯ ಸಾಧನೆಯ ಬಗ್ಗೆ ಜಗತ್ತಿಗೆ ತಿಳಿಯಪಡಿಸುವ ಕಾರ್ಯವನ್ನು ನಡೆಸಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ವೇದಿಕೆಯಲ್ಲಿ ಅಬ್ಬಕ್ಕ @500 ರ ಸಂಭ್ರಮದಲ್ಲಿ ನೆನಪಿನೈಸಿರಿ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ.ತುಕಾರಾಮ ಪೂಜಾರಿ ಮತ್ತು ಡಾ.ಆಶಾಲತಾ ಎಸ್. ಸುವರ್ಣ ದಂಪತಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಕೊಲ್ಯ ನಾಟ್ಯನಿಕೇತನದ ರಾಜಶ್ರೀ ಉಳ್ಳಾಲ್ ಅವರ ಶಿಷ್ಯ ವೃಂದದಿಂದ ನೃತ್ಯ ಮೋಹನ ಹಾಗೂ ವೀರರಾಣಿ ಅಬ್ಬಕ್ಕ ಕಿರು ನೃತ್ಯ ರೂಪಕ ಪ್ರದರ್ಶನ ನಡೆಯಿತು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ.ಸಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ,ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕರಾದ ಪಿ.ಎಸ್.ಪ್ರಕಾಶ್, ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಡಾ.ಗುರುನಾಥ ಬಡಿಗೇರ್,ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ್ ಬೂದಿಹಾಳ್, ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥರಾದ ಕೆ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 7:38 pm

Kalaburagi | ಎ.22ರಂದು ಸಿ.ಯು‌.ಕೆ 10ನೇ ಘಟಿಕೋತ್ಸವ; 769 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಪ್ರೊ.ಬಟ್ಟು ಸತ್ಯನಾರಾಯಣ

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿ

ವಾರ್ತಾ ಭಾರತಿ 19 Apr 2026 7:38 pm

ಹೊಸದಾಗಿ ಗಿರಣಿಯಿಂದ ತಂದ ಬಾಸ್ಮತಿಗಿಂತ ಹಳೇ ಬಾಸ್ಮತಿ ಏಕೆ ಉತ್ತಮ?

ಸಾಮಾನ್ಯ ನಂಬಿಕೆಗಳ ಹೊರತಾಗಿಯೂ ಹಳೇ ಬಾಸ್ಮತಿ ಅಕ್ಕಿಯಲ್ಲಿ ಪೋಷಕಾಂಶಗಳು ಹೆಚ್ಚು ಇರುವುದಿಲ್ಲ! ಭಾರತೀಯ ಅಡುಗೆಮನೆಗಳಲ್ಲಿ ಹಳೆಯ ಬಾಸ್ಮತಿ ಅಕ್ಕಿಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅಕ್ಕಿ ಹಳೆಯದಾದಷ್ಟು ಪೋಷಕಾಂಶ ಹೆಚ್ಚಿರುತ್ತದೆ ಎನ್ನುವ ಸಾಮಾನ್ಯ ನಂಬಿಕೆ ಇದೆ. ಅಕ್ಕಿಯ ಸುವಾಸನೆ ಮತ್ತು ನಯವಾದ ವಿನ್ಯಾಸಕ್ಕಾಗಿ ಮಾತ್ರವಲ್ಲದೆ, ಅದರ ಆರೋಗ್ಯ ಪ್ರಯೋಜನಗಳಿಗಾಗಿಯೂ ಬಾಸ್ಮತಿ ಬಹಳ ಆದ್ಯತೆಯ ಅಕ್ಕಿಯಾಗಿದೆ. ಆದರೆ ಹೊಸದಾಗಿ ಗಿರಣಿಗೆ ಕೊಟ್ಟು ತಂದ ಅಕ್ಕಿಗಿಂತ ಹಳೇ ಬಾಸ್ಮತಿ ಆರೋಗ್ಯಕರವೆ? ಆಕಾಶ್ ಹೆಲ್ತ್ ಕೇರ್ ನ ಪ್ರಮುಖ ಆಹಾರ ತಜ್ಞರಾಗಿರುವ ಗಿನ್ನಿ ಕಾರ್ಲಾ ಈ ಕುರಿತ ಗೊಂದಲವನ್ನು ನಿವಾರಿಸಿದ್ದಾರೆ. ►ಹಳೆಯ ಬಾಸ್ಮತಿ ಅಕ್ಕಿಯನ್ನು ಭಿನ್ನವಾಗಿಸುವುದೇನು? ಗಿನ್ನಿ ಕಾರ್ಲಾ ಪ್ರಕಾರ, “ಹೊಸ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯನ್ನು ಹೋಲಿಸಿದರೆ ಪ್ರಮುಖ ವ್ಯತ್ಯಾಸ ಅದರ ಹಳೆಯತನದಲ್ಲಿದೆ. ಬಾಸ್ಮತಿ ಅಕ್ಕಿ ಹಳೆಯದಾದಷ್ಟು ಅದರ ತೇವಾಂಶವು ಕಡಿಮೆಯಾಗುತ್ತದೆ ಮತ್ತು ಸ್ಟಾರ್ಚ್ ರಚನೆ ಬದಲಾಗುತ್ತದೆ. ಹೀಗಾಗಿ ಬೇಯಿಸಿದ ನಂತರ ಹೆಚ್ಚು ಜಿಗುಟಿಲ್ಲದ ಹಾಗೂ ಪ್ರತ್ಯೇಕ ಧಾನ್ಯಗಳಿಗೆ ಕಾರಣವಾಗುತ್ತದೆ. ಇದರಿಂದ ರಚನೆ ಮತ್ತು ಜೀರ್ಣಸಾಧ್ಯತೆ ಎರಡೂ ಸುಧಾರಿಸುತ್ತವೆ. ಈ ರಚನಾತ್ಮಕ ಬದಲಾವಣೆಯೇ ಹಳೆಯ ಬಾಸ್ಮತಿಯನ್ನು ಹೊಸದಾಗಿ ಅರೆದ ಅಕ್ಕಿಯಿಂದ ಪ್ರತ್ಯೇಕಿಸುತ್ತದೆ. ಇದು ಬೇಯಿಸಿದಾಗ ಮೃದುವಾಗುವುದರ ಜೊತೆಗೆ ಧಾನ್ಯಗಳು ಪ್ರತ್ಯೇಕವಾಗಿಯೇ ಇರುತ್ತವೆ.” ►ಹಳತಾದಂತೆ ಪೌಷ್ಠಿಕಾಂಶ ಬದಲಾಗುತ್ತದೆಯೆ? “ಸಾಮಾನ್ಯ ನಂಬಿಕೆಯ ಹೊರತಾಗಿಯೂ ಹಳತಾಗಿರುವುದರಿಂದ ಪೋಷಕಾಂಶಗಳ ಮೌಲ್ಯ ಹೆಚ್ಚಾಗುವುದಿಲ್ಲ. ಹಳತಾಗುವುದರಿಂದ ಅಕ್ಕಿಯಲ್ಲಿರುವ ಪ್ರಮುಖ ಪೋಷಕಾಂಶಗಳು ಬದಲಾಗುವುದಿಲ್ಲ. ಮುಖ್ಯವಾಗಿ ಕಡಿಮೆ ತೇವಾಂಶ ಮತ್ತು ಪುನರ್ರಚನೆಯಾದ ಪಿಷ್ಟದಿಂದ ದೇಹವು ಅದನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎನ್ನುತ್ತಾರೆ ಗಿನ್ನಿ ಕಾರ್ಲಾ. “ಅಂದರೆ ಸೂಕ್ಷ್ಮ ಚಯಾಪಚಯ ಪ್ರಯೋಜನಗಳು ಇರಬಹುದು. ವಿಶೇಷವಾಗಿ ದೇಹವು ಕಾರ್ಬೋಹೈಡ್ರೇಟ್ ಗಳನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಮತ್ತು ಹೀರಿಕೊಳ್ಳುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎಂದು ಅವರು ವಿವರಿಸುತ್ತಾರೆ. ►ಹಳೇ ಬಾಸ್ಮತಿಯನ್ನು ಜೀರ್ಣಿಸುವುದು ಸುಲಭವೆ? ಕಾರ್ಲಾ ಅವರ ಪ್ರಕಾರ, ಹೊಸದಾಗಿ ಅರೆದ ಅಕ್ಕಿಗೆ ಹೋಲಿಸಿದರೆ ವಯಸ್ಸಾದ ಬಾಸ್ಮತಿ ಅಕ್ಕಿಯನ್ನು ಜೀರ್ಣಿಸಿಕೊಳ್ಳುವುದು ಸುಲಭ. ಏಕೆಂದರೆ ಅದಕ್ಕೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಧಾನವಾಗಿ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಯಸುವವರು ಅಥವಾ ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಆದರೂ ಅದನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ►ಬಾಸ್ಮತಿಯಿಂದ ಅನನುಕೂಲತೆ ಇದೆಯೆ? ಪ್ರಯೋಜನಗಳ ಹೊರತಾಗಿಯೂ ಹಳೆಯ ಬಾಸ್ಮತಿ ಅಕ್ಕಿಯ ಬಗ್ಗೆ ಜಾಗರೂಕತೆ ವಹಿಸಬೇಕು. ಎಷ್ಟೇ ಆದರೂ ಅದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿರುತ್ತದೆ. “ಮಧುಮೇಹ ಇರುವವರು ಸೇವನೆಯ ಪ್ರಮಾಣದಲ್ಲಿ ನಿಯಂತ್ರಣ ವಹಿಸುವುದು ಅತ್ಯಗತ್ಯ. ಏಕೆಂದರೆ ಅತಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಕಾರ್ಲಾ. “ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ತರಕಾರಿಗಳು ಮತ್ತು ನಾರಿನಂಶ ಇಲ್ಲದೆ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚು ಅವಲಂಬಿಸಿದ್ದರೆ, ಅದು ಒಟ್ಟು ಪೋಷಕಾಂಶದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 19 Apr 2026 7:34 pm

2027ರ ಫೆ.18ರಿಂದ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಡಾ.ರಾಜೇಂದ್ರ ಕುಮಾರ್

ಕಾರ್ಕಳ: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕವು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್ 2027ರ ಫೆ.18 ರಿಂದ ಫೆ.28 ರವರಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯಲಿರುವುದು ಎಂದು ಘೋಷಿಸಿದರು. ದಿನಾಂಕ ಘೋಷಿಸಿ ಮಾತನಾಡಿದ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ ಇದೊಂದು ಅತ್ಯಮೋಘವಾದ ಕಾರ್ಕಳವಲ್ಲದೆ ನಾಡಿನ ಸಮಸ್ತ ಬಂದುಗಳು ಜಾತಿ ಮತ ಬೇದವಿಲ್ಲದೆ ನಡೆಸುವ ಮೂಲಕ ನಾವು ಮಾತ್ರ ಬೆಳೆಯುವುದಲ್ಲ, ಸಮಾಜ ಕೂಡ ಬೆಳೆಯಬೇಕು ಎಂದರು ಮಸ್ತಕಾಭಿಷೇಕಕ್ಕೆ ಇನ್ನು 305 ದಿನಗಳು ಬಾಕಿ ಇವೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಕಳ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ರವಿವಾರ ಮಹಾಮಸ್ತಕಾಭಿಷೇಕ ಕಾರ್ಯಾಲಯದ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ ಕಾರ್ಯಕ್ರಮ ನಡೆಯಿತು.  ಧರ್ಮಸ್ಥಳದ ಹರ್ಶೆಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಜೀವಿತಾವಧಿಯಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೋಮಟೇಶ್ವರನ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ನಮ್ಮ ಸೌಭಾಗ್ಯ, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು ಕಾರ್ಕಳ ಜೈನ ಮಠದ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಹಾಮಸ್ತಕಾಭಿಷೇಕ ಧಾರ್ಮಿಕ ವಿಧಿ ವಿಧಾನದ ಜತೆಗೆ ಜಗತ್ತಿಗೆ ಒಳಿತಾಗಲಿ ಎನ್ನುವ ಮಹೋನ್ನತ ದೃಷ್ಟಿಕೋನದ ಮಹೋತ್ಸವ ಆಗಿದೆ . ಈ ಪವಿತ್ರ ಕಾರ್ಯದ ಹಿಂದೆ ಭಾರತೀಯ ಸಂಸ್ಕೃತಿ, ಶ್ರದ್ದೆ, ಭಕ್ತಿಯ ಶಕ್ತಿಯ ಸಂದೇಶವಿದೆ ಭಕ್ತರ ಮನಸ್ಸು ಸದಾ ಭಗವಂತನ ಸಾನ್ನಿಧ್ಯದಲ್ಲಿ ನೆಲೆಸಿರಬೇಕು. ಭಗವಾನ್ ಬಾಹುಬಲಿಯ ತ್ಯಾಗ ಮತ್ತು ವೈರಾಗ್ಯದ ಜೀವನ ನಮ್ಮ ಜೀವನಕ್ಕೆ ದಾರಿದೀಪವಾಗಲಿ, ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಮೋಹನ್ ಆಳ್ವ, ಅಧಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವ ಅಭಯಚಂದ್ರ ಜೈನ್ ಶುಭ ಹಾರೈಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆ ನೀಡಿದರು ಸಮಿತಿಯ ಉಪಾಧ್ಯಕ್ಷ ಕೆ ಪಿ ಜಗದೀಶ್ ಅಧಿಕಾರಿ ಕಾರ್ಕಳ ಡಿ ವೈ ಎಸ್ ಪಿ ವಿಜಯ ಪ್ರಸಾದ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿ ಮುಖ್ಯಸ್ಥರುಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಜಿ. ಪಂ. ಸಿಇಒ ಪ್ರತೀಕ್ ಬಯಾಲ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಉಪಸ್ಥಿತರಿದ್ದರು. ಪುಷ್ಪರಾಜ್ ಜೈನ್ ಮಂಗಳೂರು ಸ್ವಾಗತಿಸಿ, ಮೋಹನ್ ಪಡಿವಾಳ್ ವಂದಿಸಿ ,ಅಜಿತ್ ಕೊಕ್ರಾಡಿ ನಿರೂಪಿಸಿದರು.

ವಾರ್ತಾ ಭಾರತಿ 19 Apr 2026 7:33 pm

ಮೈಸೂರು : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರು ಪಾಲು

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಅರ್ಕೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಆರು ಮಂದಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉರೂಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಊಟಿಯಿಂದ ಆಗಮಿಸಿದ್ದ ಎಂಟು ಜನರ ತಂಡವೊಂದು ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಈ ದಾರುಣ ಘಟನೆ ಸಂಭವಿಸಿದೆ.

ವಿಜಯ ಕರ್ನಾಟಕ 19 Apr 2026 7:31 pm

Uttar Pradesh | ಹಲ್ಲೆ, ಜಾತಿ ನಿಂದನೆ ಆರೋಪ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ದಲಿತ ಯುವಕ

ಮುಝಫ್ಫರ್ ನಗರ: ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವಮಾನಗೊಂಡ ದಲಿತ ಯುವಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಘಟನೆ ಮುಝಫ್ಫರ್ ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ರವಿವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಹಚ್ಚಿಕೊಂಡ ದಲಿತ ಯುವಕನನ್ನು ಹಿಮಾಂಶು (25) ಎಂದು ಗುರುತಿಸಲಾಗಿದ್ದು, ಆತ ಯಾವುದೋ ಕೆಲಸ ಮಾಡಲು ನಿರಾಕರಿಸಿದ್ದರಿಂದ ಟಿಂಕು ಅಲಿಯಾಸ್ ಗೌರವ್ (28) ಎಂಬ ವ್ಯಕ್ತಿ ಆತನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಶನಿವಾರ ಮುಝಫ್ಫರ್ ನಗರ ಜಿಲ್ಲೆಯ ಖತೌಲಿ ತೆಹಸಿಲ್ ನ ಗಾಂಧಾರಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಮಾನದಿಂದ ಮನನೊಂದ ಹಿಮಾಂಶು, ಆತ್ಮಹತ್ಯೆ ಪ್ರಯತ್ನದ ಭಾಗವಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಆತನ ದೇಹದ ಶೇ. 30ರಷ್ಟು ಭಾಗ ಸುಟ್ಟು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಂಕು ಅಲಿಯಾಸ್ ಗೌರವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದು ರವಿವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಿಮಾಂಶು ದೇಹದ ಶೇ. 30ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಹಿಮಾಂಶು ಕೆಲಸ ಮಾಡಲು ನಿರಾಕರಿಸಿದ್ದರಿಂದ, ಆತನ ಕೆನ್ನೆಗೆ ಹೊಡೆದ ಟಿಂಕು ಅಲಿಯಾಸ್ ಗೌರವ್, ಆತನಿಗೆ ಜಾತಿ ನಿಂದನೆ ಮಾಡಿದನು ಎಂದು ಹಿಮಾಂಶು ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ವಾರ್ತಾ ಭಾರತಿ 19 Apr 2026 7:31 pm

Good News: ಗುತ್ತಿಗೆದಾರರಿಗೆ ಸಿಹಿ ಸುದ್ದಿ: 300 ಕೋಟಿ ರೂಪಾಯಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು, ಏಪ್ರಿಲ್‌ 19: ದೀರ್ಘಕಾಲದ ಹೋರಾಟ ಮತ್ತು ಸತತ ಪ್ರತಿಭಟನೆಗಳ ಫಲವಾಗಿ ರಾಜ್ಯದ ಸಣ್ಣ ಗುತ್ತಿಗೆದಾರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸುತ್ತಿದ್ದ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

ಒನ್ ಇ೦ಡಿಯ 19 Apr 2026 7:30 pm

ವರುಣ್ ಚಕ್ರವರ್ತಿ ಕೈಚಳಕದ ಬಳಿಕ ರಿಂಕು ಸಿಂಗ್ ಸಾಹಸ; ಕೊನೆಗೂ ಕೋಲ್ಕತಾ ತೆರೆಯಿತು ಗೆಲುವಿನ ಖಾತೆ!

ಆರು ಪಂದ್ಯಗಳನ್ನಾಡಿಯೂ ಈ ಸೀಸನ್ ನಲ್ಲಿ ಗೆಲುವು ಕಾಣದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ ಅವರ ಬಿಗು ಬೌಲಿಂಗ್ ದಾಳಿ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ ಅಜೇಯ ಅರ್ಧಶತಕದ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಯಲ್ಲಿ ಕೊನೇ ಸ್ಥಾನದಿಂದ ಒಂದು ಸ್ಥಾನ ಮೇಲೇರಿದೆ. ಇದೇವೇಳೆ ರಾಜಸ್ಥಾನ ರಾಯಲ್ಸ್ ಈ ಪಂದ್ಯದ ಸೋಲಿನ ಬಳಿಕ 3ನೇ ಸ್ಥಾನದಲ್ಲಿದೆ. ()

ವಿಜಯ ಕರ್ನಾಟಕ 19 Apr 2026 7:28 pm

ಅಫಜಲಪುರ | ಎ.22ರಂದು ಉಚಿತ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮ

ಅಫಜಲಪುರ: ಪಟ್ಟಣದಲ್ಲಿ ಎ.22ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭವ್ಯವಾಗಿ ನಡೆಯಲಿವೆ ಎಂದು ಆಶ್ರಮದ ಪೀಠಾಧಿಪತಿ ಹಝರತ್‌ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೀರದಾರ ಫಂಕ್ಷನ್ ಹಾಲ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಜೋಡಿಗಳು ಇದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ದಿವ್ಯ ಸಾನಿಧ್ಯವಿದ್ದು, ವಿವಿಧ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ಅವರ ಶ್ರೀಕಂಠ ಶಿವಾಚಾರ್ಯರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು, ಸರ್ಕಾರಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಲ್.ಪಟೇಲ್ ಬಳೂಂಡಗಿ, ವಾಸಿಮ್ ಅಬ್ದುಲ್ ಜಾಗೀರದಾರ, ಬಾಬುಮಿಯಾ ಪುಲಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 7:22 pm

ಬೆಲೆ ಏರಿಕೆಯಿಂದಾಗಿ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಸ್ಮಾರ್ಟ್‌ಫೋನ್ ಮಾರಾಟ

80ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಸರಾಸರಿ ಶೇ 15ರಷ್ಟು ಬೆಲೆ ಏರಿಕೆ ಕಂಡಿರುವುದು ಮಾರಾಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ತಿಳಿಸಿರುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ 2026ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಸಾಗಣೆಗಳು ಶೇ 3ರಷ್ಟು ಕುಸಿದಿದ್ದು, ಆರು ವರ್ಷಗಳಲ್ಲಿ ಅತ್ಯಂತ ದುರ್ಬಲ ತ್ರೈಮಾಸಿಕ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ವೆಚ್ಚದ ಒತ್ತಡಗಳು, ಬೆಲೆ ಏರಿಕೆ ಮತ್ತು ಬೇಡಿಕೆ ಕಡಿಮೆಯಾಗಿರುವುದು ಮಾರಾಟದ ಮೇಲೆ ಪರಿಣಾಮ ಬೀರಿವೆ. ಸ್ಮಾರ್ಟ್‌ಫೋನ್ ಗಳ ಮಾರಾಟ ಕುಸಿತ 80ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಮಾದರಿಗಳು ಸರಾಸರಿ ಶೇ 15ರಷ್ಟು ಬೆಲೆ ಏರಿಕೆ ಕಂಡಿವೆ. ಎರಡನೇ ತ್ರೈಮಾಸಿಕದಲ್ಲಿ ಇನ್ನೂ ಶೇ 15–20ರಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ. “ಮಾರುಕಟ್ಟೆ ಸ್ಪಷ್ಟವಾದ ಕೈಗೆಟಕುವಿಕೆಯ ಒತ್ತಡವನ್ನು ಎದುರಿಸುತ್ತಿದೆ. ಮೆಮೊರಿ ಕೊರತೆಯಿಂದ ಉಂಟಾದ ವೆಚ್ಚ ಏರಿಕೆ ಹಾಗೂ ಕರೆನ್ಸಿ ಒತ್ತಡಗಳಿಂದ ಮೂಲ ಉಪಕರಣ ತಯಾರಿಕಾ ಕಂಪನಿಗಳು ಪ್ರಮುಖ ಮಾಡೆಲ್ಗಳ ಬೆಲೆಗಳನ್ನು ಏರಿಸಲು ಒತ್ತಡಕ್ಕೆ ಒಳಗಾಗಿವೆ,” ಎಂದು ಹಿರಿಯ ಮಾರುಕಟ್ಟೆ ತಜ್ಞ ಪ್ರಚೀರ್ ಸಿಂಗ್ ತಿಳಿಸಿದ್ದಾರೆ. ಮೆಮೊರಿ ಚಿಪ್ ಗಳ ಕೊರತೆ AI ಡೇಟಾ ಕೇಂದ್ರಗಳಿಗೆ ಮೆಮೊರಿಯ ಸ್ಫೋಟಕ ಬೇಡಿಕೆಯ ಪರಿಣಾಮವಾಗಿ ಜಾಗತಿಕವಾಗಿ ಮೆಮೊರಿ ಚಿಪ್ ಗಳ ತೀವ್ರ ಕೊರತೆ ಎದುರಾಗಿದೆ. ಇದು ತಂತ್ರಜ್ಞಾನ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಮೆಮೊರಿ ಚಿಪ್ಗಳ ಬೆಲೆ 2025ರ ಕೊನೆಯ ತ್ರೈಮಾಸಿಕದಲ್ಲಿ ಶೇ 50ರಷ್ಟು ಹೆಚ್ಚಾಗಿದೆ. 2026ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ 40ರಿಂದ ಶೇ 50ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಡೇಟಾ ಸೆಂಟರ್ ಗಳು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಬೇಡಿಕೆ ಹೆಚ್ಚಾಗಿರುವುದು ಮತ್ತು ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಈ ಕೊರತೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್ ಮಾರಾಟ ಹಾಗೂ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಎರಡನೇ ತ್ರೈಮಾಸಿಕದಲ್ಲೂ ಕುಸಿತ ಸಾಧ್ಯತೆ ಹೀಗಾಗಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಲ್ಪಾವಧಿಗೆ ಒತ್ತಡ ಮುಂದುವರಿಯುವ ನಿರೀಕ್ಷೆಯಿದೆ. 2026ರ ಎರಡನೇ ತ್ರೈಮಾಸಿಕದಲ್ಲಿ ಎರಡಂಕಿಯ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ. ವಿವೋ ಶೇ 21ರಷ್ಟು ಪಾಲನ್ನು ಹೊಂದಿದ್ದು, ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ನಂತರ ಸ್ಯಾಮ್ಸಂಗ್ ಮತ್ತು ಒಪ್ಪೋ ಬರುತ್ತವೆ. ಐಫೋನ್ 17 ಸರಣಿಗೆ ಇರುವ ನಿರಂತರ ಬೇಡಿಕೆಯ ಪರಿಣಾಮವಾಗಿ ಆಪಲ್ ಕಂಪನಿಯ ಮಾರುಕಟ್ಟೆ ಪಾಲು ಶೇ 9ರಷ್ಟಿದೆ. ಗೂಗಲ್ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಅದರ ಮಾರಾಟ ಶೇ 39ರಷ್ಟು ಏರಿಕೆಯಾಗಿದೆ. AI ಸಂಬಂಧಿತ ಫೀಚರ್ ಗಳು ಗೂಗಲ್ ಮಾರುಕಟ್ಟೆ ಬೆಳವಣಿಗೆಗೆ ನೆರವಾಗಿವೆ.

ವಾರ್ತಾ ಭಾರತಿ 19 Apr 2026 7:20 pm

ಎಲ್ಲದಕ್ಕೂ ಬಳಕೆಯಾಗುವ ಮೈದಾ ಬದಲಿಗೆ ಏನನ್ನು ಬಳಸಬಹುದು?

ಮೈದಾವನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಎಲ್ಲಾ ಅಡುಗೆ ಮನೆಗಳಲ್ಲಿ ಮೈದಾ ಇದ್ದೇ ಇರುತ್ತದೆ. ಹುಟ್ಟುಹಬ್ಬದ ಕೇಕ್‌ಗಳಿಂದ ಹಿಡಿದು ಬೇಕರಿ ಶೈಲಿಯ ಬ್ರೆಡ್ ಗಳು, ಪೂರಿಗಳು ಮತ್ತು ಗರಿಗರಿಯಾದ ತಿಂಡಿಗಳವರೆಗೆ ಮೈದಾ ಉಪಯೋಗವಾಗುತ್ತದೆ. ಮೈದಾವನ್ನು ಅನೇಕ ರೀತಿಯ ಅಡುಗೆಗಳಲ್ಲಿ ಬಳಸಬಹುದಾದರೂ, ಇದು ಆರೋಗ್ಯಕರ ಆಯ್ಕೆಯಲ್ಲ. ಹಾಗಿದ್ದರೆ ಅದನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಮೈದಾವನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯುವುದೇಕೆ? ಮೈದಾವನ್ನು ಗೋಧಿಯಿಂದಲೇ ತಯಾರಿಸಲಾಗುತ್ತದೆ. ಆದರೆ ಇದು ಗೋಧಿ ಧಾನ್ಯದ ಹೊರಗಿನ ಹೊಟ್ಟು ಮತ್ತು ಬೀಜಾಣುವನ್ನು ತೆಗೆದುಹಾಕಿ ತಯಾರಿಸಿದ ಸಂಸ್ಕರಿಸಿದ ಹಿಟ್ಟು. ಉಳಿಯುವುದು ಒಳಭಾಗ ಮಾತ್ರ, ಅದನ್ನು ನಯವಾದ ಮೃದುವಾದ ಪುಡಿಯಾಗಿ ಮಾಡಲಾಗುತ್ತದೆ. ಈ ಸಂಸ್ಕರಣಾ ಪ್ರಕ್ರಿಯೆ ಹಿಟ್ಟನ್ನು ಮೃದುವಾಗಿಸಿ, ಮಿಶ್ರಣ ಸುಗಮಗೊಳಿಸುತ್ತದೆ. ಎಣ್ಣೆ ಸಮೃದ್ಧವಾಗಿರುವ ಬೀಜಾಣುವನ್ನು ತೆಗೆದುಹಾಕಿರುವುದರಿಂದ ಮೈದಾವನ್ನು ಹೆಚ್ಚು ದಿನ ಸಂಗ್ರಹಿಸಬಹುದು. ಇದನ್ನು ಹೆಚ್ಚು ವೈವಿಧ್ಯಮಯವಾಗಿಸುವುದು ಅದರಲ್ಲಿರುವ ಗ್ಲುಟನ್ ಅಂಶ. ಇದು ಗಾಳಿಯನ್ನು ಹಿಡಿದಿಡಲು ಮತ್ತು ಹಿಟ್ಟಿಗೆ ಉಬ್ಬುವ ಗುಣ ನೀಡಲು ಸಹಾಯ ಮಾಡುತ್ತದೆ. ಈ ಸಮತೋಲನದಿಂದಲೇ ಇದನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯಲಾಗುತ್ತದೆ. ಹೀಗಾಗಿ ಇದು ಬ್ರೆಡ್‌ಗೂ ಹಾಗೂ ಸೂಕ್ಷ್ಮ ಕೇಕ್‌ಗೂ ಸೂಕ್ತವಾಗುತ್ತದೆ. ಕೇಕ್ ಬೇಯಿಸುವಾಗ ಮೈದಾ ಮೃದುವಾದ, ಹಗುರವಾದ ತುದಿಯನ್ನು ನೀಡುತ್ತದೆ. ಗಾಳಿಯ ಗುಳ್ಳೆಗಳನ್ನು ಹಿಡಿದಿಡುವ ಮೃದು ಗ್ಲುಟನ್ ಜಾಲವನ್ನು ರೂಪಿಸುತ್ತದೆ. ಬ್ರೆಡ್‌ಗಳಲ್ಲಿ ಮೈದಾ ಬಳಸಿದರೆ ಗ್ಲುಟನ್ ಇನ್ನಷ್ಟು ಬೆಳೆಯುತ್ತದೆ ಮತ್ತು ಉತ್ತಮ ರಚನೆ ಹಾಗೂ ಅಗಿಯುವ ಗುಣ ನೀಡುತ್ತದೆ. ಪೂರಿಗಳಲ್ಲಿ ಇದು ಹಿಟ್ಟನ್ನು ಉಬ್ಬುವಂತೆ ಮಾಡುತ್ತದೆ, ಬಿಸಿ ಎಣ್ಣೆಯಲ್ಲಿ ಸುಂದರವಾಗಿ ಉಬ್ಬಲು ಸಹಾಯ ಮಾಡುತ್ತದೆ. ಮೈದಾ ಆರೋಗ್ಯಕರ ಆಯ್ಕೆಯಲ್ಲವೇಕೆ? ಮೈದಾ ಅಡುಗೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಪೌಷ್ಠಿಕಾಂಶದ ದೃಷ್ಟಿಯಿಂದ ಇದು ಕಡಿಮೆ. ಸಂಸ್ಕರಣಾ ಪ್ರಕ್ರಿಯೆಯಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಕಳೆದುಹೋಗುತ್ತವೆ. ಇದರಲ್ಲಿ ಮುಖ್ಯವಾಗಿ ಸರಳ ಕಾರ್ಬೋಹೈಡ್ರೇಟ್‌ಗಳು ಉಳಿಯುತ್ತವೆ. ಇದರಿಂದ ಇದು ಬೇಗ ಜೀರ್ಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಕಾಲ ನೀಡುವುದಿಲ್ಲ. ಮೈದಾವನ್ನು ಸಂಪೂರ್ಣವಾಗಿ ತೊರೆಯಲು ಸಾಧ್ಯವಿಲ್ಲದಿದ್ದರೂ, ಅದರ ಬದಲಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಮೈದಾದ ಬದಲಿಗೆ ಬಳಸಬಹುದಾದ ಕೆಲವು ಹಿಟ್ಟುಗಳು: ಕೇಕ್‌ಗಳಿಗೆ: ಮೃದುತ್ವ ಕಳೆದುಕೊಳ್ಳದ ಆರೋಗ್ಯಕರ ಕೇಕ್‌ಗಳಿಗೆ ಬಾದಾಮಿ ಹಿಟ್ಟು ಉತ್ತಮ ಆಯ್ಕೆ. ಇದು ಸಮೃದ್ಧ ರುಚಿ ಮತ್ತು ತೇವಾಂಶ ನೀಡುತ್ತದೆ. ಆದರೆ ಬಾದಾಮಿ ಹಿಟ್ಟು ಮಾತ್ರ ಬಳಸಿದರೆ ಕೇಕ್ ದಟ್ಟವಾಗಬಹುದು. ಹೀಗಾಗಿ ಸಂಪೂರ್ಣ ಗೋಧಿ ಹಿಟ್ಟಿನೊಂದಿಗೆ ಬೆರೆಸುವುದು ಉತ್ತಮ. ಓಟ್ ಹಿಟ್ಟು ಮತ್ತೊಂದು ಆಯ್ಕೆ; ಇದು ಸ್ವಾಭಾವಿಕವಾಗಿ ಸೌಮ್ಯ ಸಿಹಿತನ ಹೊಂದಿದ್ದು, ಚಹಾ ಕೇಕ್‌ಗಳಿಗೆ ಸೂಕ್ತವಾಗಿದೆ. ಬ್ರೆಡ್‌ಗಳಿಗೆ: ಬ್ರೆಡ್‌ಗೆ ರಚನೆ ಮುಖ್ಯ. ಸಂಪೂರ್ಣ ಗೋಧಿ ಹಿಟ್ಟು ಫೈಬರ್ ಸಮೃದ್ಧವಾಗಿದ್ದು, ದಟ್ಟ ಮತ್ತು ತುಂಬುವ ಬ್ರೆಡ್ ನೀಡುತ್ತದೆ. ಮೃದುವಾದ ತಳಿರು ಬಯಸಿದರೆ ಬಹುಧಾನ್ಯ ಹಿಟ್ಟು ಅಥವಾ ಸ್ವಲ್ಪ ಮೈದಾವನ್ನು ಬೆರೆಸಬಹುದು. ಹೆಚ್ಚು ರಚನೆಗಾಗಿ ಅಧಿಕ ಗ್ಲುಟನ್ ಇರುವ ಬ್ರೆಡ್ ಹಿಟ್ಟನ್ನು ಬಳಸಬಹುದು. ಪೂರಿಗಳಿಗೆ: ಪೂರಿಗಳನ್ನು ತಯಾರಿಸುವಾಗ ಮೈದಾವನ್ನು ಸಂಪೂರ್ಣವಾಗಿ ಬದಲಿಸುವುದು ಕಷ್ಟ. ಆದರೆ ಗೋಧಿ ಮತ್ತು ರವೆಯ ಮಿಶ್ರಣ ಉತ್ತಮ ರಚನೆ ನೀಡುತ್ತದೆ. ಮೊಸರು (ಯೋಗರ್ಟ್) ಸೇರಿಸಿದರೆ ಹಿಟ್ಟು ಮೃದುವಾಗುತ್ತದೆ ಮತ್ತು ಉಬ್ಬುವಿಕೆ ಉತ್ತಮವಾಗುತ್ತದೆ. ತಿನಿಸುಗಳು ಮತ್ತು ಕುಕೀಸ್‌ಗಳಿಗೆ: ಕಡಲೆ ಹಿಟ್ಟು ಖಾರದ ಬೇಕ್ಸ್‌ಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ವಿಶಿಷ್ಟ ರುಚಿ ನೀಡುತ್ತದೆ. ರಾಗಿ ಹಿಟ್ಟು ಪೌಷ್ಠಿಕಾಂಶ ಹೆಚ್ಚಿಸುತ್ತದೆ ಹಾಗೂ ಮಣ್ಣಿನ ಸುವಾಸನೆ ನೀಡುತ್ತದೆ. ಗರಿಗರಿಯಾದ ತಿಂಡಿಗಳಿಗೆ ಅಕ್ಕಿ ಹಿಟ್ಟು ಉತ್ತಮ ಆಯ್ಕೆ. ಹೀಗಾಗಿ ಮುಂದಿನ ಬಾರಿ ಕೇಕ್ ಬೇಯಿಸುವಾಗ, ಹಿಟ್ಟು ಬೆರೆಸುವಾಗ ಅಥವಾ ಪೂರಿ ಮಾಡುವಾಗ ಮೈದಾವಿನ ಬದಲಿಗೆ ಬೇರೆ ಆಯ್ಕೆಗಳನ್ನು ಪ್ರಯತ್ನಿಸಿ. ಮೈದಾ ಸರ್ವಉಪಯೋಗಿಯಾಗಿರಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆಯಲ್ಲ.

ವಾರ್ತಾ ಭಾರತಿ 19 Apr 2026 7:17 pm

ಸಹ್ಯಾದ್ರಿ ಕಾಲೇಜಿನಲ್ಲಿ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಸಹ್ಯಾದ್ರಿ ಕಾರ್ನಿವಲ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಶುಕ್ರವಾರ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜೆವಿ ಗ್ರೂಪ್ ಆಫ್ ಕಂಪನಿಯ ನಿರ್ದೇಶಕಿ ಆತ್ಮಿಕಾ ಅಮೀನ್ ಉದ್ಘಾಟಿಸಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ರಕ್ಷಾ ಚಿಲಿಂಬಿ ಅವರು ಆತ್ಮವಿಶ್ವಾಸ, ಸಂವಹನ ಮತ್ತು ಅನುಭವದ ಕಲಿಕೆಯ ಮಹತ್ವವನ್ನು ಒತ್ತಿ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಅವರು ಸಹ್ಯಾದ್ರಿಯ ಸಂಸ್ಥೆಯು ತ್ವರಿತವಾಗಿ ಬೆಳವಣಿಗೆ ಹೊಂದಿದ್ದು, ಪರಿಗಣಿತ ವಿಶ್ವವಿದ್ಯಾಲಯವಾಗುವ ಹಾದಿಯಲ್ಲಿದೆ. ಬಿಬಿಎ, ಬಿಸಿಎ ಮತ್ತು ಎಂಸಿಎ ನಂತಹ ಹೊಸ ಶೈಕ್ಷಣಿಕ ಪದವಿ ಶಿಕ್ಷಣ ಕೋರ್ಸ್‌ಗಳಿಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದೊಂದಿಗೆ ಸಲಹಾ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಪ್ರಕಟಿಸಿದರು. ವಿಜ್ ಕ್ವಿಜ್, ಮಾರ್ಕೆಟ್‌ವರ್ಸ್ ಮತ್ತು ಸ್ಟೂಡೆಂಟ್ ಕಾರ್ನರ್ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಕಾಲೇಜುಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯನ್ನು ಕ್ವಿಜ್ ಮಾಸ್ಟರ್ ರಕ್ಷಿತ್ ಶೆಟ್ಟಿ ನಡೆಸಿಕೊಟ್ಟರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯ ಕೊನೆಯಲ್ಲಿ, ತಲಾ ಮೂವರು ಸದಸ್ಯರನ್ನು ಒಳಗೊಂಡ ಆರು ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು. ಕಟ್ಪಾಡಿಯ ತ್ರಿಶ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಪ್ರಥಮ ಸ್ಥಾನ, ಉಜಿರೆಯ ಎಸ್‌ಡಿಎಂ ಎರಡನೇ ಸ್ಥಾನ ಮತ್ತು ಮಂಗಳೂರಿನ ಎಂಎಪಿಎಸ್ ಕಾಲೇಜು ಮೂರನೇ ಸ್ಥಾನ ಪಡೆದು ಕ್ರಮವಾಗಿ ರೂ. 25,000, ರೂ. 15,000 ಮತ್ತು ರೂ. 10,000 ನಗದು ಬಹುಮಾನವನ್ನು ಹಂಚಿ ಕೊಂಡವು. ಉಳಿದ ಮೂರು ತಂಡಗಳಿಗೆ ತಲಾ ರೂ. 4,000 ಸಮಾಧಾನಕರ ಬಹುಮಾನಗಳನ್ನು ನೀಡಲಾ ಯಿತು. ವಿದ್ಯಾರ್ಥಿ ಕಾರ್ನರ್ ಬಹುಮಾನವನ್ನು ಜಸ್ಟ್ ಟೈಲ್ಸ್ - ನಿಟ್ಟೆ ಸ್ವರೂಪ್ ಕಾಲೇಜು ಗೆದ್ದುಕೊಂಡಿತು. ಟ್ರಸ್ಟಿ ದೇವದಾಸ್ ಹೆಗ್ಡೆ, ಉಪ ಪ್ರಾಂಶುಪಾಲ ಮತ್ತು ಸಿಒಇ ಡಾ. ಸುಧೀರ್ ಶೆಟ್ಟಿ, ಎಂಬಿಎ ವಿಭಾಗದ ನಿರ್ದೇಶಕ ಡಾ. ವಿಶಾಲ್ ಸಮರ್ಥ, ಡೀನ್ ಸ್ಟ್ರಾಟೆಜಿಕ್ ಪ್ಲಾನಿಂಗ್ ಪ್ರೊ. ರಮೇಶ್ ಕೆ. ಜಿ. ಉಪಸ್ಥಿತರಿದ್ದರು. ಡಾ. ವಿಶಾಲ್ ಸಮರ್ಥ ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕ ಪ್ರೊ. ಅನಿರುದ್ಧ್ ಭಟ್ ಕಾರ್ನಿವಲ್‌ನ ಅವಲೋಕನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಸಂಯೋಜಕ ವಿಶಾಖ ಪೈ ವಂದಿಸಿದರು.

ವಾರ್ತಾ ಭಾರತಿ 19 Apr 2026 7:14 pm

ಆಲ್ದೂರು | ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತ್ಯು

ಆಲ್ದೂರು: ಸಮೀಪದ ಬಿಳಿಗಿರಿ ಎಸ್ಟೇಟ್ ನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ರಮೇಶ್ (27) ಹಾಗೂ ಮಹೇಶ್ (39) ಮೃತಪಟ್ಟ ಕಾರ್ಮಿಕರು. ಕೊಪ್ಪ ತಾಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿಯಾದ ರಮೇಶ್ ಅವರು ಬಿಳಿಗಿರಿ ಎಸ್ಟೇಟ್ ನಲ್ಲಿ ಎರಡುವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡವಂತಿ ಗ್ರಾಮದ ನಿವಾಸಿಯಾಗಿರುವ ಮಹೇಶ್ ಅವರು ಕುಟುಂಬದೊಂದಿಗೆ ಬಿಳಿಗಿರಿ ಎಸ್ಟೇಟ್ ನಲ್ಲಿ ಒಂದೂವರೆ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಲೈನ್ ನಲ್ಲಿ ವಾಸವಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ವಾರ್ತಾ ಭಾರತಿ 19 Apr 2026 7:12 pm

Yadgiri | ಬಂಜಾರ ಸಮಾಜ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ : ದೇವರಾಜ್ ನಾಯಕ್

ಯಾದಗಿರಿ: ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ದೇವರಾಜ್ ನಾಯಕ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಯಿಯಲ್ಲಿ ನಡೆದ ಸಭೆಯಲ್ಲಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಶಂಕರ ಪವಾರ ಅವರು ಹಿಂದಿನ ರಾಜ್ಯ ಘಟಕವನ್ನು ವಿಸರ್ಜಿಸಿ ತಮ್ಮನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದರು. ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಲಾಗುವುದು. ಸುಮಾರು 60 ವರ್ಷಗಳ ಹಿಂದೆ ಆಗಿನ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಿಂದ ಉದ್ಘಾಟನೆಗೊಂಡ ಈ ಸಂಘವು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದರು. ಸಂಘದ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಸಂಘವೇ ಬಂಜಾರ ಸಮುದಾಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಯಾದಗಿರಿಯಲ್ಲಿಯೇ ಶೀಘ್ರದಲ್ಲೇ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಂಕರ ಪವಾರ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರವಿ ರಾಠೋಡ್ ಮುದ್ನಾಳ್, ಬಂಗಾರು ರಾಠೋಡ್, ಮೇಘನಾಥ ಚವ್ಹಾಣ, ಆನಂದ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಾಕ್ಸ್: ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ಹುದ್ದೆಗಳು ಗಿರಿಜಿಲ್ಲೆಯ ಬಂಜಾರ ಸಮುದಾಯಕ್ಕೆ ಲಭಿಸಿರುವುದು ಸಂತೋಷದ ಸಂಗತಿ ಎಂದು ಹಿರಿಯ ಮುಖಂಡ ಜನಾರ್ಧನ ರಾಠೋಡ್ ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 19 Apr 2026 7:09 pm

Mysuru | ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಮೃತ್ಯು

ಮೈಸೂರು: ಕಾವೇರಿ ನದಿಗೆ ಈಜಲು ಹೋಗಿದ್ದ 6 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಮೃತಪಟ್ಟವರನ್ನು ಯಾಸಿನ್ (23), ಫಾತಿಮ್ (30), ಹುಮಾಯೂನ್ (7), ನೇಹಾನ್(19), ಅಲೀಂ(13) ಎಂದು ತಿಳಿದು ಬಂದಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರವಿವಾರ ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಮೃತಪಟ್ಟ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಎಂದು ಹೇಳಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ… — Siddaramaiah (@siddaramaiah) April 19, 2026

ವಾರ್ತಾ ಭಾರತಿ 19 Apr 2026 7:06 pm

Cauvery River: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲು: 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ

Cauvery River: ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾಗಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ

ಒನ್ ಇ೦ಡಿಯ 19 Apr 2026 7:01 pm

Yadgiri | ಎ.26ರಂದು ಹುಬ್ಬಳ್ಳಿಯಲ್ಲಿ ಅಹಿಂದ್ ರಾಜ್ಯಮಟ್ಟದ ವಿಚಾರ ಸಂಕಿರಣ

ಯಾದಗಿರಿ: ಅಹಿಂದ್ ಸಂಘಟನೆಯಿಂದ ಏಪ್ರಿಲ್ 26ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹಣಮೇಗೌಡ ಮರಕಲ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ರಾಯಲ್ ಎರಿಟೆಜ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ ಸೇರಿದಂತೆ ಅಹಿಂದ್ ಸಂಘಟನೆಯ ರಾಜ್ಯ ಮಟ್ಟದ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಅಹಿಂದ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಶಹಾಪುರ ತಾಲೂಕು ಅಧ್ಯಕ್ಷ ಶೇಖರ ದೊರೆ ಉಪಸ್ಥಿತರಿದ್ದರು. ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಅಹಿಂದ್ ಮುಖಂಡರು ಹಾಗೂ ಪದಾಧಿಕಾರಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮುಖಂಡ ಸುದರ್ಶನ ನಾಯಕ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 6:59 pm

2023ರ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತನ್ನಿ: ವೆರೋನಿಕಾ ಕರ್ನೆಲಿಯೋ

ಉಡುಪಿ, ಎ.19: ಮಹಿಳೆಯರನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ಅಜೆಂಡಾ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರಕ್ಕೆ ನಿಜಕ್ಕೂ ಮಹಿಳೆಯರ ಕುರಿತು ಕಾಳಜಿ ಇದ್ದರೆ 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಮಂಡಿಸಲಿ ಎಂದು ಕೆಪಿಸಿಸಿ ವಕ್ತಾರ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ. 2023ರಲ್ಲಿ ಮಹಿಳಾ ಮೀಸಲಾತಿಯ ಮಸೂದೆ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದ್ದರೂ ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅನ್ನು ಜಾರಿಗೆ ತರುವ ಪ್ರಯತ್ನವೇ ಮಾಡಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ಸಂಸತ್ತಿನಲ್ಲಿ ಸೋಲಾಗಿದ್ದು ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗರು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಬಿಜೆಪಿಗರಿಗೆ ನಿಜವಾಗಿ ಮಹಿಳಾ ಮೀಸಲಾತಿ ಜಾರಿಯಾಗಬೇಕೆನಿಸಿದರೆ 2023 ರ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಹಾಗೂ ಈಗಿರುವ ಲೋಕಸಭಾ ಸ್ಥಾನಗಳ ಆಧಾರದಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Apr 2026 6:57 pm

Firecracker factory blast: ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 18ಕ್ಕೂ ಹೆಚ್ಚು ಮಂದಿ ಸಾವು

Tamil Nadu Firecracker factory blast: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ (ಏಪ್ರಿಲ್‌ 19) ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 18ಕ್ಕೂ ಅಧಿಕ ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಒನ್ ಇ೦ಡಿಯ 19 Apr 2026 6:49 pm

ಬಿಎಸ್‌ಆರ್ ಸಲಾಂ

ಮಂಗಳೂರು: ಹರೇಕಳ ನ್ಯೂಪಡ್ಪು ನಿವಾಸಿ, ಸಮಾಜ ಸೇವಕ ಬಿಎಸ್‌ಆರ್ ಸಲಾಂ (54) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಬಿಎಸ್‌ಆರ್ ಸಲಾಂ ಅವರು ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ನ ಹಿರಿಯ ಸದಸ್ಯರಾಗಿದ್ದರು. ಪತ್ನಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ ಬಿಎಸ್‌ಆರ್ ಸಲಾಂ ನಿಧನಕ್ಕೆ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ. 

ವಾರ್ತಾ ಭಾರತಿ 19 Apr 2026 6:47 pm

Bidar | ಬಸವಣ್ಣ ಸಮಾನತೆಯ ಸಂದೇಶ ಜಗತ್ತಿಗೆ ನೀಡಿದ ವಿಶ್ವಗುರು: ಶಾಸಕ ಶೈಲೇಂದ್ರ ಬೆಲ್ದಾಳೆ

ಬೀದರ್: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸಹೋದರರೇ ದಾಯಾದಿಗಳಾಗುತ್ತಿರುವ ಸಂದರ್ಭದಲ್ಲೂ, 9 ಶತಮಾನಗಳ ಹಿಂದೆಯೇ ಪ್ರತಿಯೊಬ್ಬರನ್ನು “ಇವ ನಮ್ಮವ” ಎಂದು ಒಗ್ಗೂಡಿಸುವ ಸಂದೇಶ ನೀಡಿದ ವಿಶ್ವಗುರು ಬಸವಣ್ಣ ಎಂದೇ ಗುರುತಿಸಿಕೊಂಡವರು ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದರು. ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ 700ಕ್ಕೂ ಹೆಚ್ಚು ಶರಣರು ಸಮಾಜದ ವಿಚಾರಗಳನ್ನು ಚರ್ಚಿಸಿ, ವಚನಗಳ ಮೂಲಕ ಶ್ರೇಷ್ಠವಾದ ಸಂದೇಶಗಳನ್ನು ನೀಡಿದ್ದಾರೆ ಎಂದರು. ನಾವು “ನಾನು” ಎಂಬ ಅಹಂ ಬಿಟ್ಟು “ನಾವು” ಎಂಬ ಭಾವನೆ ಬೆಳೆಸಿಕೊಂಡು, ಎಲ್ಲಾ ಜಾತಿ–ಪಂಗಡದವರು ಒಗ್ಗೂಡಿ ಸಾಮರಸ್ಯದ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ಶಿವಶರಣಪ್ಪ ವಾಲಿ ಮಾತನಾಡಿ, ಬಸವಣ್ಣನವರು ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆಯ ಸಂದೇಶ ಸಾರಿದರು. ಆದರೆ ಇಂದಿನ ದಿನಗಳಲ್ಲಿ ಸಮಾಜವನ್ನು ಒಗ್ಗೂಡಿಸಬೇಕಾದವರೇ ವಿಭಜನೆಗೆ ಕಾರಣವಾಗುತ್ತಿರುವುದು ದುಃಖಕರ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಪ್ರೊ.ವೆಂಕಣ್ಣ ದೊಣ್ಣೇಗೌಡ ಉಪನ್ಯಾಸ ನೀಡಿ, ಬಸವಣ್ಣ ಹಾಗೂ ಶರಣರು ಕಂದಾಚಾರ, ಆಡಂಬರ ಮತ್ತು ಮೂಢನಂಬಿಕೆಗಳನ್ನು ತಿರಸ್ಕರಿಸಿ ವೈಜ್ಞಾನಿಕತೆಯನ್ನೇ ಭಕ್ತಿ ಎಂದು ಪ್ರತಿಪಾದಿಸಿದರು. ಕಾಯಕ ಮತ್ತು ದಾಸೋಹವೇ ನಿಜವಾದ ಭಕ್ತಿ ಎಂಬ ತತ್ವವನ್ನು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು. ಜಾತಿ ವ್ಯವಸ್ಥೆ ಬಲವಾಗಿದ್ದ ಕಾಲದಲ್ಲೇ ಶರಣರು ಅದನ್ನು ತೊಡೆದು ಹಾಕಿ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ್ದು, ಭಕ್ತನು ದೇವನಾಗಬಲ್ಲನು ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಾಬಿಕಾ ಅಕ್ಕ, ರಜನೀಶ್ ವಾಲಿ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್ ಹೊಸಳ್ಳಿ, ಸಮಿತಿ ಖಜಾಂಚಿ ಸಿದ್ದು ಸ್ವಾಮಿ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ್ ಧನ್ನೂರ್, ಧನರಾಜ್ ಹಂಗರಗಿ, ಸುರೇಶ್ ಚೆನ್ನಶೆಟ್ಟಿ, ಶಕುಂತಲಾ ಬೆಲ್ದಾಳೆ ಹಾಗೂ ಅನ್ಶುಲ್ ವಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 6:47 pm

ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನ ಹೆಚ್ಚಿಸುವುದು ಬಿಜೆಪಿಯ ಗುಪ್ತ ಅಜೆಂಡಾ: ಡಿ.ಕೆ. ಶಿವಕುಮಾರ್

ಬೆಂಗಳೂರು: ಉತ್ತರ ಭಾರತದ ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡು ದಕ್ಷಿಣದ ಧ್ವನಿ ಕ್ಷೀಣಿಸುವಂತೆ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ವಿವಾದಿತ ಮಸೂದೆಗೆ ಸೋಲು ಆಗಿರುವ ಕುರಿತು ರವಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಒಂದು ಮಾಯಾಜಾಲವಾಗಿದ್ದು, ಇದು ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ರಾಜಕೀಯ ಸರ್ಜಿಕಲ್ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ನಮ್ಮ ಧ್ವನಿ ಕ್ಷೀಣಿಸಿದರೆ ತೆರಿಗೆ ಹಣದ ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗುತ್ತದೆ. ಇದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪುವುದಿಲ್ಲ. ನಾವು ಮಹಿಳಾ ಮೀಸಲಾತಿಯನ್ನು ಸ್ವಾಗತಿಸುತ್ತೇವೆ, ಆದರೆ ಅದರ ಹೆಸರಲ್ಲಿ ನಡೆಯುವ ಪ್ರಾದೇಶಿಕ ಅನ್ಯಾಯವನ್ನು ಬಲವಾಗಿ ವಿರೋಧಿಸುತ್ತೇವೆ. ನಮ್ಮ ರಾಜ್ಯದ ಹಿತಾಸಕ್ತಿ ಬಲಿ ಕೊಡಲು ನಾವು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳಾ ಮೀಸಲಾತಿ ಎಂಬುದು ಮಹಿಳೆಯರ ಹಕ್ಕಾಗಬೇಕೇ ಹೊರತು, ದಕ್ಷಿಣ ಭಾರತವನ್ನು ಹತ್ತಿಕ್ಕುವ ಆಯುಧವಾಗಬಾರದು. ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರವು ತಕ್ಷಣವೇ ಮರುವಿಂಗಡಣೆಯ ಷರತ್ತನ್ನು ಕೈಬಿಟ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ದಕ್ಷಿಣ ಭಾರತದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವನ್ನು ಆಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ರಾಷ್ಟ್ರೀಯ ಹಿತಾಸಕ್ತಿಯಿಂದ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ, ಈಗ ಕೇಂದ್ರ ಸರಕಾರ ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚಿನ ಸಂಸತ್ ಸ್ಥಾನ ನೀಡಿ, ಜನಸಂಖ್ಯೆ ನಿಯಂತ್ರಿಸಿದ ನಮ್ಮಂತಹ ಪ್ರಗತಿಪರ ರಾಜ್ಯಗಳ ಪ್ರಾತಿನಿಧ್ಯ ಕುಗ್ಗಿಸಲು ಹೊರಟಿದೆ. ಇದು ಕನ್ನಡಿಗರ ಹಾಗೂ ಇಡೀ ದಕ್ಷಿಣ ಭಾರತೀಯರ ಸ್ವಾಭಿಮಾನಕ್ಕೆ ಎಸಗುತ್ತಿರುವ ದ್ರೋಹ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರ ಗ್ಯಾರೆಂಟಿ ನೀಡುತ್ತದೆಯೇ?: ಡಿ.ಕೆ.ಶಿವಕುಮಾರ್ ‘ಮಹಿಳಾ ಮೀಸಲಾತಿ ನೀಡಲು ಕ್ಷೇತ್ರ ಮರುವಿಂಗಡಣೆ ಆಗಲೇಬೇಕು ಎಂಬ ಹಠವೇಕೆ? ಈಗಿರುವ 543 ಕ್ಷೇತ್ರಗಳಲ್ಲೇ ಮೀಸಲಾತಿ ನೀಡಲು ನಿಮಗಿರುವ ತಡೆಯೇನು?. ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ ಇಳಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಕಾನೂನಾತ್ಮಕವಾಗಿ ಗ್ಯಾರೆಂಟಿ ನೀಡುತ್ತದೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 19 Apr 2026 6:44 pm

Bidar | ಬಸವಣ್ಣ ಸಮಾನತೆಯ ಸಂದೇಶ ನೀಡಿದ ಮಹಾನ್ ಚಿಂತಕ : ಮಹಾಂತಪ್ರಭು ಮಹಾಸ್ವಾಮಿ

ಬೀದರ್: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು ಸಮಾನತೆ, ಕಾಯಕದ ಮಹತ್ವವನ್ನು ಸಾರಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಸೆಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮಿ ಹೇಳಿದರು. ಭಾಲ್ಕಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದೇವರು ಅವರ 27ನೇ ಸ್ಮರಣೋತ್ಸವ ಹಾಗೂ ನಾಡೋಜ ಬಸವಲಿಂಗ ಪಟ್ಟದೇವರು ಅವರ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ನಡೆದ 75 ಸ್ವಚ್ಛತಾ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪೂಜೆಯೇ ಕಾಯಕ ಮಾಡಿಕೊಂಡ ಸಮಾಜವನ್ನು ಕಾಯಕವೇ ಪೂಜೆ ಎಂಬ ಮೌಲ್ಯಕ್ಕೆ ಪರಿವರ್ತಿಸಿದವರು ಬಸವಣ್ಣ ಎಂದು ಅವರು ಹೇಳಿದರು. ಶರಣರು ಇಂಗ್ಲೆಂಡ್‌ನ ಮ್ಯಾಗ್ನಾಕಾರ್ಟಕ್ಕೂ ಮುಂಚೆಯೇ ಅನುಭವಮಂಟಪದ ಮೂಲಕ ಪ್ರಜಾತಂತ್ರದ ಮೌಲ್ಯಗಳನ್ನು ಬಿತ್ತಿದ್ದರು ಎಂದು ಉಲ್ಲೇಖಿಸಿದರು. ಬಸವಣ್ಣನವರ ತತ್ವಸಿದ್ಧಾಂತಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆ ಮಾಡಿದವರು ಭಾಲ್ಕಿಯ ಶ್ರೀಗಳಾಗಿದ್ದಾರೆ ಎಂದು ಹೇಳಿ, ವಿಶೇಷವಾಗಿ ಬಸವಲಿಂಗ ಪಟ್ಟದೇವರು ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ರಾಜ್ಯದ ಆರ್ಥಿಕ ಇಲಾಖೆಯ ಅಪರ್ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮಾತನಾಡಿ, ಗಡಿಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿದ್ದು, ಅಮೃತ ಮಹೋತ್ಸವವು ವ್ಯಕ್ತಿಗಲ್ಲ, ಅವರ ಜೀವನ ಮೌಲ್ಯಗಳಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರೆ, ಬಸವರಾಜ್ ಪಾಟೀಲ್ ಸೇಡಂ, ರೇವಣಸಿದ್ದಪ್ಪ ಜಲಾದೆ, ಗುರುನಾಥ್ ಕೊಳ್ಳೂರು, ಪ್ರಕಾಶ್ ಟೊಣ್ಣೆ, ವೈಜಿನಾಥ್ ಕಾಮಶೆಟ್ಟಿ, ಸಿದ್ಧಣ್ಣ ಭೂಮಾ, ಜೈರಾಜ್ ಖಂಡ್ರೆ ಹಾಗೂ ವಿಜಯಕುಮಾರ್ ಸೋನಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗೀತಾ ಪಾಟೀಲ್ ನಿರೂಪಿಸಿದರು. ಮಹಾನಂದಾ ದೇಶಮುಖ ಶರಣು ಸಮರ್ಪಣೆ ಮಾಡಿದರು.

ವಾರ್ತಾ ಭಾರತಿ 19 Apr 2026 6:43 pm

ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್

ವಾರ್ತಾ ಭಾರತಿ 19 Apr 2026 6:39 pm

Election: ಉಪ - ಪಂಚರಾಜ್ಯ ಚುನಾವಣೆ: ಸೋಷಿಯಲ್ ಮೀಡಿಯಾ ಮೇಲೆ ECI ಕಣ್ಣಿಟ್ಟು, AI ವಿಷಯಕ್ಕೆ ಕಠಿಣ ಕ್ರಮ - ಈ ತಪ್ಪು ಮಾಡಬೇಡಿ

Election: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶವನ್ನು ಭಾರತೀಯ ಚುನಾವಣಾ ಆಯೋಗ ಹಂಚಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಈ ನಿರ್ದೇಶನ ಇದೆ. ಭಾರತೀಯ ಚುನಾವಣಾ ಆಯೋಗದ ಆದೇಶದಲ್ಲಿ ಏನಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. 2026 ರ ಸಾರ್ವತ್ರಿಕ ಚುನಾವಣೆಗಳು

ಒನ್ ಇ೦ಡಿಯ 19 Apr 2026 6:38 pm

ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ

ರಾಣೇಬೆನ್ನೂರು: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಟ್ಟೂರಿನ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬೀರಲಿಂಗೇಶ್ವರ ದೇವಸ್ಥಾನ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನೊಬ್ಬ ನಾಮ ಹಲವು ಎಂದು ಅರ್ಥೈಸಿಕೊಳ್ಳಬೇಕೆಂದರು. ನಮ್ಮ ನಾಡು, ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ , ಕುವೆಂಪು ಬಯಸಿದ್ದರು. ಅದನ್ನೇ ನಮ್ಮ ಸರ್ಕಾರ ಪಾಲಿಸುತ್ತಿದೆ ಎಂದರು. ಕೇವಲ 13 ಕುರುಬರ ಕುಟುಂಬಗಳಿರುವ ಊರಿನಲ್ಲಿ ಬೀರಲಿಂಗೇಶ್ವರ ದೇವಾಲಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕವಾಗಿದೆ ಎಂದರು. ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ವಿಚಾರಗಳು ಸಂವಿಧಾನದ ಆಧಾರ ಸ್ತಂಭಗಳು. ದೇವರ ಪೂಜೆ ಮಾಡಬೇಕು ಆದರೆ ಮೂಢ ನಂಬಿಕೆಗಳನ್ನು ಇಟ್ಟುಕೊಳ್ಳಬಾರದು. ಬಸವಣ್ಣ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು ಎನ್ನುವುದನ್ನು ಸ್ಮರಿಸಬೇಕು ಎಂದರು. ಅಂಬೇಡ್ಕರ್ ಅವರು ದೇಶದ ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ, ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದಿದ್ದರು. ಸಮಾನತೆಯ ಆಶಯದಿಂದಲೇ ಭಾಗ್ಯಗಳನ್ನು, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಎಂದರು. ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಧರ್ಮಗಳು ಜನರನ್ನು ಪ್ರೀತಿಸಬೇಕೆಂದು ಬೋಧಿಸುತ್ತವೆ. ಇದಾದಾಗ ಮಾತ್ರ ಮಾನವ ಸಮಾಜ ನಿರ್ಮಾಣ ಸಾಧ್ಯ.‌ ಸೈದ್ಧಾಂತಿಕವಾಗಿ ನಮ್ಮ ವಿರೋಧಿಗಳಾದರೂ ಜನರನ್ನು ಪ್ರೀತಿಸಬೇಕು ಎಂದರು. ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ್, ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್, ಯು. ಬಿ.ಬಣಕಾರ್ , ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Apr 2026 6:35 pm

ಹುಲಸೂರ್ | ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು : ಪ್ರಕರಣ ದಾಖಲು

ಹುಲಸೂರ್ : ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಾಕಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಅವಮಾನ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಗೌತಮ್ ಸೂರ್ಯವಂಶಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಎ.13ರಂದು ಗ್ರಾಮದ ಯುವಕರು ಶಿವಾಜಿ ವೃತ್ತದ ಬಳಿ ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿದ್ದರು. ಎ.28ರಂದು ನಡೆಯಲಿರುವ ಜಯಂತಿ ಮೆರವಣಿಗೆ ಹಿನ್ನೆಲೆ ಈ ಬ್ಯಾನರ್ ಹಾಕಲಾಗಿತ್ತು. ಆದರೆ ಎ.18ರ ರಾತ್ರಿ ಕೆಲ ಕಿಡಿಗೇಡಿಗಳು ಬ್ಯಾನರ್ ಅನ್ನು ಉದ್ದೇಶಪೂರ್ವಕವಾಗಿ ಹರಿದು ಅವಮಾನಗೊಳಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರಿನಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅಂಬೇಡ್ಕರ್ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ಉದ್ದೇಶಪೂರ್ವಕವಾಗಿ ಹರಿದು, ಅವಮಾನಗೊಳಿಸಿರುವುದು ಕಂಡು ಬಂದಿದೆ. ಹಾಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 Apr 2026 6:33 pm

ಮೇ 4ರಂದು ಕುಕನೂರಿನಲ್ಲಿ ಬಸವಣ್ಣ, ಅಂಬೇಡ್ಕರ್, ರಾಯಣ್ಣ ಮೂರ್ತಿ ಶಂಕುಸ್ಥಾಪನೆ: ಶಾಸಕ ಬಸವರಾಜ ರಾಯರೆಡ್ಡಿ

ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ

ವಾರ್ತಾ ಭಾರತಿ 19 Apr 2026 6:27 pm

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ಶಿಕ್ಷಣಕ್ಕೆ ಮೀಫ್‌ನಿಂದ ಉಚಿತ ಸೀಟ್

ಮಂಗಳೂರು, ಎ.19: ಪಿಯುಸಿ ಉತ್ತೀರ್ಣಗೊಂಡ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ಕೆಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಉಚಿತ ಸೀಟುಗಳ ಕೊಡುಗೆಯನ್ನು ಮೀಫ್ ಸಂಸ್ಥೆಗೆ ನೀಡಿದ್ದಾರೆ. ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಅಥವಾ ಸರಕಾರಿ ಸಂಸ್ಥೆಗಳಲ್ಲಿ ಕಲಿತ ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮತ್ತು ಅನಾಥ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಗರಿಷ್ಠ ಶೇ 90 ಕ್ಕಿಂತ ಅಧಿಕ ಅಂಕ ಪಡೆದಿರಬೇಕು. ಕೆಲವೊಂದು ಕೋರ್ಸುಗಳಿಗೆ ಶೇ 80ಕ್ಕಿಂತ ಅಧಿಕ ಅಂಕಗಳನ್ನು ಪರಿಗಣಿಸಲಾಗುವುದು. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿ ಆಯಾ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಅರ್ಜಿಯನ್ನು ಪಡೆದು, ಪರಿಶೀಲನೆ ನಡೆಸಿ, ಅವರ ಶಿಪಾರಸ್ಸಿ ನೊಂದಿಗೆ ಮೀಫ್ ಕಚೇರಿಗೆ ತಲುಪಿಸಬೇಕು. ದ.ಕ ಮತ್ತು ಉಡುಪಿ ಜಿಲ್ಲೆಗಳ ಅರ್ಜಿಗಳನ್ನು ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎ.30 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಪರಾಹ್ನ 2 ರಿಂದ 5ರ ವರೆಗೆ ಮೊಬೈಲ್ ಸಂಖ್ಯೆ +91 8792115666, +91 8431990966 ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಮೀಫ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 19 Apr 2026 6:24 pm

ಸಿಎಂ ರಾಣೆಬೆನ್ನೂರು ಭೇಟಿ , ಭದ್ರತಾ ಕ್ರಮಗಳಿಂದ ಸಣ್ಣ ವ್ಯಾಪಾರಿಗಳಿಗೆ ಆಥಿ೯ಕ ಸಂಕಷ್ಟ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಣೇಬೆನ್ನೂರು ಭೇಟಿಯ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಬಿಗಿ ಭದ್ರತಾ ಕ್ರಮಗಳು ಸ್ಥಳೀಯ ಸಣ್ಣ ವ್ಯಾಪಾರಿಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿವೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡ ಕೆರೆಯ ಬಳಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಶನಿವಾರದಿಂದಲೇ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಹೇರಲಾಗಿತ್ತು.

ವಿಜಯ ಕರ್ನಾಟಕ 19 Apr 2026 6:22 pm