ದೇಶದಲ್ಲೇ ಅತೀ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ; ಉದ್ಯಮದಿಂದ ರಾಜಕೀಯದವರೆಗೆ....
ದಾವಣಗೆರೆ : ದೇಶದ ಅತೀ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಶಾಮನೂರು ಶಿವಶಂಕರಪ್ಪ ಅವರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವರೂ ಆಗಿರುವ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್ ಸೇರಿದಂತೆ ಮೂವರು ಪುತ್ರರು. ನಾಲ್ವರು ಪುತ್ರಿಯರು ಹಾಗೂ ಸಂಸದೆ, ಸೊಸೆ ಡಾ.ಪ್ರಭಾ ಮಲ್ಲಿಕಾಜುನ್ ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶಾಮನೂರು ಕಲ್ಲಪ್ಪ–ಸಾವಿತ್ರಮ್ಮ ದಂಪತಿ ಪುತ್ರರಾಗಿ 1931ರ ಜೂನ್ 16ರಂದು ಜನಿಸಿದ ಶಾಮನೂರು ಶಿವಶಂಕರಪ್ಪ ಮೂಲತಃ ಉದ್ಯಮಿ. ರಾಜಕೀಯ ಕ್ಷೇತ್ರ ಪ್ರವೇಶಿಸಿದ ಅವರು 6 ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ಅವಧಿಗೆ ಕೆಪಿಸಿಸಿ ಖಜಾಂಚಿಯಾಗಿದ್ದರು. 1969ರಲ್ಲಿ ನಗರಸಭೆ ಮೂಲಕ ರಾಜಕೀಯ ಪ್ರವೇಶಿಸಿದ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಆಗ ಅವರಿಗೆ 63 ವರ್ಷ ವಯಸ್ಸಾಗಿತ್ತು. ಶಾಸಕರಾಗಿ, ಸಂಸದರಾಗಿ ನಿರಂತರವಾಗಿ ಆಯ್ಕೆಯಾದ ಅವರು ವಯಸ್ಸಾದಂತೆ ರಾಜಕಾರಣದಲ್ಲಿ ಮೇಲೇರಿದರು. ಶಾಮನೂರು ಶಿವಶಂಕರಪ್ಪ 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ ‘ವೀರಶೈವ–ಲಿಂಗಾಯತ’ ಎರಡೂ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಅವರ ಅವಧಿಯಲ್ಲಿ ವೀರಶೈವ ಮಹಾಸಭಾದ ಹೆಸರು ವೀರಶೈವ–ಲಿಂಗಾಯತ ಮಹಾಸಭಾ ಎಂಬುದಾಗಿ ಪರಿವರ್ತನೆಯಾಯಿತು. ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ಮುಂದಾಗಿದ್ದ ಶಾಮನೂರು ಶಿವಶಂಕರಪ್ಪ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಮೊದಲ ಹೆಜ್ಜೆಯಾಗಿ ಪಂಚಪೀಠ ಮಠಾಧೀಶರ ಸಮ್ಮೇಳವನ್ನು ಆಯೋಜಿಸಿ ಯಶಸ್ಸು ಕಂಡಿದ್ದರು. ವಿರಕ್ತ ಮತ್ತು ಗುರುಪರಂಪರೆ ಒಗ್ಗೂಡಿದರೆ ಸಮಾಜ ಇನ್ನಷ್ಟು ಸಬಲವಾಗುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಫರ್ಧಿಸಿದ 94ರ ಹರೆಯದ ಶಾಮನೂರು ಶಿವಶಂಕರಪ್ಪ ಗೆದ್ದು ಬೀಗಿದ್ದು, ಭಾರತದ ಅತೀ ಹಿರಿಯ ಶಾಸಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಒಟ್ಟು 84,258 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಬಿಜಿ ಅಜಯಕುಮಾರ್ 56,410 ಮತಗಳನ್ನು ಗಳಿಸಿದ್ದರು. 27,888 ಮತಗಳ ಅಂತರದಲ್ಲಿ ಶಾಮನೂರು ಅವರು ಭರ್ಜರಿ ಜಯ ಸಾಧಿಸಿದ್ದರು. ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಕುಟುಂಬ ಮೂಲತಃ ವ್ಯಾಪಾರಸ್ಥರಾಗಿದ್ದರು. ಅದೇ ವ್ಯಾಪಾರದಲ್ಲಿ ಗುಮಾಸ್ತರಾಗಿ ಲಾಭ-ನಷ್ಟದ ಲೆಕ್ಕ ಬರೆಯುತ್ತಿದ್ದ ಶಾಮನೂರು ನಂತರ ತಮ್ಮ ಜಾಣ್ಮೆಯಿಂದ ಸಕ್ಕರೆ ಕಾರ್ಖಾನೆ, ಅಕ್ಕಿ ಮಿಲ್ಗಳನ್ನು ತೆರೆದು ಸ್ವ-ಉದ್ಯಮ ಆರಂಭಿಸಿದರು. ಆ ಮೂಲಕ ನೂರಾರು ಜನರಿಗೆ ಉದ್ಯೋಗದಾತರಾದರು. ಪಾರ್ವತಮ್ಮ ಎಂಬುವವರನ್ನು ಬಾಳಸಂಗಾತಿಯಾಗಿ ಪಡೆದಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಮೂವರು ಗಂಡು ಮತ್ತು ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಪುತ್ರ ಬಕ್ಕೇಶ್ ಮೊದಲಿಗೆ ರಾಜಕೀಯ ಪ್ರವೇಶಿಸಿದರಾದರೂ ಕಾರಣಾಂತರಿಂದ ಹಿಂದೆ ಸರಿದರು. ಇನ್ನೋರ್ವ ಪುತ್ರ ಎಸ್.ಎಸ್.ಗಣೇಶ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮೂರನೇ ಪುತ್ರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ತಂದೆಯಂತೆ ರಾಜಕೀಯದಲ್ಲಿದ್ದಾರೆ. ಶಾಮನೂರು ಶಿವಶಂಕರಪ್ಪ ಮೊದಲು ರಾಜಕೀಯ ಪ್ರವೇಶಿಸಿದ್ದೇ 1969ರಲ್ಲಿ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ನಗರಸಭಾ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅವರು 1972ರಲ್ಲಿ ನಗರಸಭೆ ಅಧ್ಯಕ್ಷರಾದ ನಂತರ ಸುಮಾರು ಎಂಟು ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದರು. 1980 ರಲ್ಲಿ ದೇವರಾಜ್ ಅರಸು ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಎಂದು ಇಬ್ಭಾಗವಾದ ಕಾಲದಲ್ಲಿ ಅರಸು ಅವರಿಗೆ ಪ್ರೇರಿತರಾಗಿದ್ದ ಶಿವಶಂಕರಪ್ಪ ಅರಸು ಕಾಂಗ್ರೆಸ್ಗೆ ಸೇರ್ಪಡೆಯಾಗಿ ಚಿತ್ರದುರ್ಗದ ಲೋಕಸಭಾ ಕ್ಷೇತ್ರ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದರು. ಅದಾದ ಬಳಿಕ ಮತ್ತೆ ರಾಜಕೀಯದಿಂದ ವಿಶ್ರಾಂತಿ ಪಡೆದ ಶಾಮನೂರು 1994 ರಲ್ಲಿದಾವಣಗೆರೆ ಶಾಸಕರಾಗಿ ಗೆಲುವು ಕಂಡು ಅಲ್ಲಿಂದ ಮತ್ತೆ ಹಿಂತಿರುಗಿ ನೋಡದೆ ತಮ್ಮ ರಾಜಕೀಯದ ಯುಗ ಆರಂಭಿಸಿದರು. 1997 ರಲ್ಲಿ ಚಿತ್ರದುರ್ಗದಿಂದ ವಿಭಜಿತಗೊಂಡು ದಾವಣಗೆರೆ ಸ್ವತಂತ್ರ ಜಿಲ್ಲೆಯಾಗಿ ಘೋಷಿಸಲ್ಪಟ್ಟಾಗ ಮತ್ತೆ ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1999ರಲ್ಲಿನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ಶಾಮನೂರು 2004ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ದಾವಣಗೆರೆಯಿಂದ ಗೆದ್ದು ಗೆಲುವನ್ನು ಅಪ್ಪಿಕೊಂಡ ನಂತರ ಅಲ್ಲಿಂದ ಇಲ್ಲಿಯವರೆಗೆ ಸೋಲಿನ ಕಡೆ ತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಪ್ರಾದೇಶಿಕವಾರು ದಾವಣಗೆರೆ ದಕ್ಷಿಣ ಮತ್ತುಉತ್ತರ ಎಂದು ಕ್ಷೇತ್ರ ವಿಂಗಡಣೆಯಾದಾಗ ದಾವಣಗೆರೆ ದಕ್ಷಿಣದಿಂದ ಸತತವಾಗಿ 2023ರ ಇಲ್ಲಿಯವರೆಗೆ 4ನೇ ಬಾರಿ ಶಾಮನೂರು ಶಿವಶಂಕರಪ್ಪ ಗೆಲ್ಲುತ್ತಲೇ ಬಂದಿದ್ದಾರೆ.
Mangaluru | ತಲ್ವಾರ್ ಹಿಡಿದು ನೃತ್ಯದ ವಿಡಿಯೋ ಸಾಮಾಜಿಕ ಜಾಲಾದಲ್ಲಿ ಪೋಸ್ಟ್ ಮಾಡಿದ ಆರೋಪ : ಇಬ್ಬರ ಬಂಧನ
ಮಂಗಳೂರು: ತಲ್ವಾರ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಬಂದರ್ನ ನಿವಾಸಿ ಅಮೀರ್ ಸುಹೇಲ್ ( 28 ), ಕಾವೂರು ಉರುಂದಾಡಿಗುಡ್ಡೆಯ ಸುರೇಶ (29 ) ಬಂಧಿತ ಆರೋಪಿಗಳು. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆಯಲ್ಲಿ ‘‘ Suresh psy ’’ ಎಂಬ ಹೆಸರಿನ ಫೇಸ್ಬುಕ್ ಖಾತೆ ಹೊಂದಿರುವ ಸುರೇಶ ಎಂಬಾತನು ಡಿ.13ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬಾತನ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿ.13 ರಂದು ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ಗಳ ವಶಕ್ಕೆ ಪಡೆಯಲಾಗಿದೆ. ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಇವರೊಂದಿಗ ಕಾವೂರು ಠಾಣಾ ಸಿಬ್ಬಂದಿ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಝ್ ಪಾಲ್ಗೊಂಡಿದ್ದರು.
ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಚಳಿ ಹಿಡಿಸಿದ ಭಾರತ | 117ಕ್ಕೆ ಆಲೌಟ್ ಆದ ಮರ್ಕ್ರಮ್ ಬಳಗ
ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ - ದಕ್ಷಿಣ ಆಫ್ರಿಕಾ ನಡುವಿನ T20 ಸರಣಿಯ ಮೂರನೇ ಪಂದ್ಯದಲ್ಲಿ, ರವಿವಾರ ದಕ್ಷಿಣ ಆಫ್ರಿಕಾವು ಭಾರತಕ್ಕೆ 9 ವಿಕೆಟ್ ಗಳ ನಷ್ಟಕ್ಕೆ 117 ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು ರನ್ ಗಳಿಸಲು ಪರದಾಟ ನಡೆಸಿತು. ಒಂದು ರನ್ ಗಳಿಸುವಷ್ಟರಲ್ಲಿ ತಂಡವು 2 ವಿಕೆಟ್ ಕಳೆದುಕೊಂಡಿತ್ತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ತಂಡದ ನಾಯಕ ಆಡಮ್ ಮರ್ಕ್ರಮ್ ತಂಡವನ್ನು ರಕ್ಷಣಾತ್ಮಕ ಆಟವಾಡಿ ನೂರರ ಗಡಿ ದಾಟಿಸಿದರು. 46 ಎಸೆತಗಳಲ್ಲಿ 2 ಸಿಕ್ಸರ್ 6 ಬೌಂಡರಿ ಗಳ ಮೂಲಕ 61 ರನ್ ಗಳಿಸಿದ ಅವರು ಅರ್ಷದೀಪ್ ಸಿಂಗ್ ಬೌಲಿಂಗ್ ನಲ್ಲಿ ಜಿತೇಶ್ ಶರ್ಮಾ ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ಹಿಡಿದರು.
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ 15 ವರ್ಷದ ಬಾಲಕ ಶೇನ್ ಚಂದಾರಿಯಾ!
Formula 4 Indian Championship- ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಸೂಟ್ ನಲ್ಲಿ ಡಿಸೆಂಬರ್ 14ರಂದು ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಷಿಪ್ನ ಮೂರನೇ ಸೀಸನ್ ರೋಚಕ ಅಂತ್ಯ ಕಂಡಿತು. ಕೆನ್ಯಾದ 15 ವರ್ಷದ ಬಾಲಕ ಶೇನ್ ಚಂದಾರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿ, ಟೂರ್ನಮೆಂಟ್ನ ಅತೀ ಕಿರಿಯ ಚಾಂಪಿಯನ್ ಎಂಬ ಗೌರವಕ್ಕೆ ಪಾತ್ರರಾದರು. ಇದು ಅವರ ವೃತ್ತಿಜೀವನದ ಮೊದಲ ಪ್ರಮುಖ ಕಿರೀಟವಾಗಿದೆ. ಚೆನ್ನೈ ಟರ್ಬೊ ರೈಡರ್ಸ್ ತಂಡವು ತಂಡಗಳ ವಿಭಾಗದಲ್ಲಿ ಚಾಂಪಿಯನ್ಷಿಪ್ ಗೆದ್ದು ಬೀಗಿತು.
ಶಾಮನೂರು ಶಿವಶಂಕರಪ್ಪ: ಓದಿದ್ದು 10ನೇ ಕ್ಲಾಸ್; ಕಟ್ಟಿದ್ದು ಬೃಹತ್ ಸಾಮ್ರಾಜ್ಯ! ಸೋಲಿಲ್ಲದ ಸರದಾರ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ನಿಧನವು ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ.
ಆತೂರು: ಆಯಿಶಾ ವಿದ್ಯಾಲಯದ 17ನೇ ವಾರ್ಷಿಕೋತ್ಸವ
ಆತೂರು: ಆಯಿಶಾ ವಿದ್ಯಾಲಯ, ಆತೂರು ಸಂಸ್ಥೆಯ 17ನೇ ವಾರ್ಷಿಕೋತ್ಸವವು ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮಾ ತಸ್ಕೀನ್ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಜಲೀಲ್ ಮುಕ್ರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಂಶುಪಾಲರು ವಾರ್ಷಿಕ ವರದಿಯನ್ನು ವಾಚಿಸಿ ಶಾಲೆಯ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ಬಹುತ್ವವನ್ನು ಗೌರವಿಸುವ ಹಾಗೂ ಸಮುದಾಯವನ್ನು ಜೋಡಿಸುವ ಮನೋಭಾವ ಶಿಕ್ಷಣ ಸಂಸ್ಥೆಗಳಲ್ಲಿ ರೂಪುಗೊಳ್ಳಬೇಕು ಎಂದು ಹೇಳಿದರು. ಸದುದ್ದೇಶ ಹಾಗೂ ಆಶಯಗಳ ಮೂಲಕ ಆಯಿಶಾ ವಿದ್ಯಾ ಸಂಸ್ಥೆ ಊರಿಗೆ ಹಾಗೂ ಸಮುದಾಯಕ್ಕೆ ಬೆಳಕಾಗಲಿ ಎಂದು ಆಶಿಸಿದರು. ಹಳೆ ವಿದ್ಯಾರ್ಥಿನಿ ರೈಹಾನಾ ಕೆ. ತಮ್ಮ ವಿದ್ಯಾಲಯದ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸರ್ಕಾರಿ ಪಿಯು ಕಾಲೇಜು ಉಪ್ಪಿನಂಗಡಿ ಕಾರ್ಯನಿರ್ವಹಣಾ ಅಧ್ಯಕ್ಷ ಅಝೀಝ್ ಬಸ್ತೀಕಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಾಗೂ ಆಯಿಶಾ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಡಾ. ಅಬ್ದುಲ್ ಮಜೀದ್ ವಹಿಸಿ, ನಮ್ಮೊಳಗಿನ ಪ್ರತಿಭೆಯನ್ನು ಹೊರತಂದು ಅದರಲ್ಲಿ ಸಂತೋಷವನ್ನು ಕಂಡು ಜೀವನವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ಶಾಲಾ ನಾಯಕಿ 10ನೇ ತರಗತಿಯ ಶಾದಾ ರಹ್ಫಾ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿಯರಾದ ರಮ್ಯಾ ಮತ್ತು ನಿಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಕೊರಗ ಬುಡಕಟ್ಟು ಸಮುದಾಯ ಪ್ರಥಮ ವೈದ್ಯೆ!
ಕುಂದಾಪುರ ಉಳ್ತೂರಿನ ಡಾ.ಕೆ.ಸ್ನೇಹಾ ಅವರಿಂದ ಅಪೂರ್ವ ಸಾಧನೆ
ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ : ಡಿ.ಕೆ. ಶಿವಕುಮಾರ್
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ರವಿವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಾವು ಮತಕಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೆವು. ಇದೀಗ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶ ನೀಡಲಾಗುತ್ತಿದೆ. ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಉದಾಹರಣೆಗಳಿವೆ. ರಾಹುಲ್ ಗಾಂಧಿ ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಇನ್ನು ಹಲವು ಬಾರಿ ಮಾಧ್ಯಮಗೋಷ್ಠಿ ಮೂಲಕ ದಾಖಲೆಗಳನ್ನು ಬಹಿರಂಗಗೊಳಿಸಿದ್ದಾರೆ ಎಂದು ಅವರು ಹೇಳಿದರು. ಇಷ್ಟಾದರೂ ಚುನಾವಣಾ ಆಯೋಗದಿಂದ ಸರಿಯಾದ ಉತ್ತರ ಸಿಗುತ್ತಿಲ್ಲ. ಹೀಗಾಗಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನಾವು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. ಸೋಲು, ಗೆಲುವಿಗೆ ಕಾಂಗ್ರೆಸಿಗರು ಯೋಚಿಸುವುದಿಲ್ಲ: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಸಮಾವೇಶ ಮಾಡುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, “ಅವರು ತಮ್ಮ ಖುಷಿಗೆ ಏನು ಬೇಕಾದರೂ ಮಾತನಾಡುತ್ತಾರೆ. ನಾವು ಕಾಂಗ್ರೆಸಿಗರು ಸೋಲು, ಗೆಲುವಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ತಂದು ಕೊಟ್ಟಾಗ ನಮ್ಮ ಹಿರಿಯರು ಸಾಕಷ್ಟು ಪ್ರಾಣತ್ಯಾಗ ಮಾಡಿದ್ದಾರೆ. ಈ ದೇಶದ ಆರ್ಥಿಕ ತಜ್ಞನಿಗೆ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದರು. ಜವಾಹರ್ ಲಾಲ್ ನೆಹರೂ, ಗಾಂಧಿಜಿ ಸೇರಿದಂತೆ ಅನೇಕ ಮಹನೀಯರು ಜೈಲುವಾಸ ಅನುಭವಿಸಿದರು. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದರು. ಇಂದು ಪಕ್ಷ ಕಷ್ಟಕಾಲದಲ್ಲಿರುವಾಗ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದಾರೆ” ಎಂದು ತಿಳಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ; ಸಿಎಂ ಸೇರಿ ಗಣ್ಯರ ಸಂತಾಪ
ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಇಂದು (ಡಿ.14) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಶಂಕಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಇಂದು ಸಂಜೆ ಮೃತಪಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನವಾರ್ತೆ ನೋವುಂಟುಮಾಡಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು, ಸಿಕ್ಕ ಅಧಿಕಾರವನ್ನು ಜನಕಲ್ಯಾಣಕ್ಕಾಗಿಯೇ ಮುಡುಪಿಟ್ಟಿದ್ದ ಮುತ್ಸದ್ದಿ ನಾಯಕನ ಅಗಲಿಕೆಯಿಂದ ಸಮಾಜ ಬಡವಾಗಿದೆ. ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಿದ ಶಿವಶಂಕರಪ್ಪನವರ ಕಾರ್ಯಗಳು ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಮತ್ತವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸಿದ್ದರಾಮಯ್ಯ, ಮುಖ್ಯಮಂತ್ರಿ ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಮಾಜಿ ಸಚಿವರು, ಹಿರಿಯ ಮುಖಂಡರು, ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪನವರು ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಗಲಿದ ಶಿವಶಂಕರಪ್ಪನವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ, ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಆರ್.ಅಶೋಕ್, ವಿಪಕ್ಷ ನಾಯಕ ನಾಡಿನ ಹಿರಿಯ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಉದ್ಯಮಿಗಳು ಆಗಿದ್ದ ಸರಳ ಸಜ್ಜನಿಕೆಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪನವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ವೈಯಕ್ತಿಕವಾಗಿ ನಾನು ಬಹಳ ಗೌರವಿಸುತ್ತಿದ್ದ ನಾಯಕರು ಅವರಾಗಿದ್ದರು. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ನೇರ ನಡೆನುಡಿಯ ಅವರು ಸಚಿವರಾಗಿಯೂ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟು ದುಡಿದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮ ಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಶಾಸಕರು, ಮಾಜಿ ಸಚಿವರಾದ ಶಾಮನೂರು ಶಿವಶಂಕಪ್ಪನವರು ವಿಧಿವಶರಾದ ಸುದ್ದಿ ಅತೀವ ಆಘಾತವನ್ನು ಉಂಟುಮಾಡಿದೆ. ಉದ್ಯಮಿಯಾಗಿ, ಶಾಸಕರಾಗಿ, ಸಚಿವರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರಾಗಿ ಸಮಸ್ತ ಸಮಾಜದ ಏಕತೆ ಮತ್ತು ಏಳಿಗೆಗಾಗಿ ನಿರಂತರ ಶ್ರಮಿಸಿದ್ದ ಇವರ ಅಗಲಿಕೆಯಿಂದ ನಾಡು ಒಬ್ಬ ಹಿರಿಯ ಸಾಧಕ ರಾಜಕಾರಣಿಯನ್ನು, ಸಮುದಾಯ ತನ್ನ ಹಿರಿಯ ಮಾಗದರ್ಶಕರನ್ನು ಕಳೆದುಕೊಂಡಿದೆ. ಶ್ರೀಯುತರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಅವರಿಗೆ ನನ್ನ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಕೋರುತ್ತಾ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ
ದಲಿತರು ಶಾಸನಗಳನ್ನು ಜಾರಿ ಮಾಡುವ ರಾಜಕೀಯ ಶಕ್ತಿಯಾಗಬೇಕು: ಜಯನ್ ಮಲ್ಪೆ
ಉಡುಪಿ: ಒಕ್ಕೂಟದ ವ್ಯವಸ್ಥೆಯಲ್ಲಿ ಹೋರಾಟ, ಚಳವಳಿ ಎಲ್ಲಾ ಮಾಡಿರುವ ಅಂಬೇಡ್ಕರ್ ಈಗ ನಮಗೆ ಸಂವಿಧಾನದ ಮೂಲಕ ಬೇಕಾಗಿರುವುದನ್ನು ಪಡೆಯುವ ಅವಕಾಶ ನೀಡಿದ್ದಾರೆ. ದಲಿತರು ಶಾಸನಗಳನ್ನು ಜಾರಿ ಮಾಡುವ ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸುವ ರಾಜಕೀಯ ಶಕ್ತಿಯಾಗಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರವಿವಾರ ಕುಂದಾಪುರದ ಹಳ್ಳಿಹೊಳೆಯಲ್ಲಿ ಆಯೋಜಿಸಲಾದ ಭೀಮ ಶಕ್ತಿ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್ ಮಾತನಾಡಿ, ಅಂಬೇಡ್ಕರ್ ಒಬ್ಬ ವಿಶ್ವಮಾನವನಾಗಿ ಈ ದೇಶಕ್ಕೆ ಕೊಡಮಾಡಿದ ಸಂವಿಧಾನ ಇವತ್ತು ಜಗತ್ತೇ ಕೊಂಡಾಡಿದೆ. ದಲಿತ ಮಳೆಯರು ತಮ್ಮ ಮಕ್ಕಳನ್ನು ವಿದ್ಯಾಭಾಸ ನೀಡಿ ಬೆಳಸಲು ಶ್ರಮಿಸಬೇಕು ಎಂದರು. ಶಂಕರನಾರಾಯಣ ಪೋಲೀಸ್ ಉಪನಿರೀಕ್ಷಕ ಯೂನುಸ್ ಗಡ್ಡೆಕರ್ ಮಾತನಾಡಿ, ದಲಿತರು ಮೀಸಲಾತಿಯ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಗ್ರಾಪಂ ಮಾಜಿ ಅಧ್ಯಕ್ಷ ರಾಮ ನಾಯ್ಕ ಕೆರ್ಕಾಡು ವಹಿಸಿದ್ದರು. ದಸಂಸ ಜಿಲ್ಲಾ ನಾಯಕ ವಾಸುದೇವ ಮುದೂರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು. ದಲಿತ ಮುಖಂಡ ಪರಮೇಶ್ವರ ಉಪ್ಪೂರು, ಹಳ್ಳಿಹೊಳೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ದಸಂಸ ಜಿಲ್ಲಾ ನಾಯಕ ಚಂದ್ರ ಹಳಗೇರಿ, ಅಂಬೇಡ್ಕರ್ ಯುವಸೇನೆಯ ಗಣೇಶ್ ನೆರ್ಗಿ ಮಾತನಾಡಿದರು. ಲಕ್ಷ್ಮಣ ಬೈಂದೂರು, ಹರೀಶ್ ಸಲ್ಯಾನ್ ಮಲ್ಪೆ, ಗಿರಿಜಾ ಹನ್ಕಿ, ಪ್ರಭಾಕರ ಉಳಾಲುಮಠ, ಭಾಸ್ಕರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕುಮಾರದಾಸ್ ಹಾಲಾಡಿ ಸ್ವಾಗತಿಸಿದರು. ಸುರೇಶ್ ಮೂಡುಬಗೆ ವಂದಿಸಿದರು. ಉದಯ ಹಳ್ಳಿಹೊಳೆ ಕಾರ್ಯಕ್ರಮ ನಿರೂಪಿಸಿದರು.
School Holiday: ಶಾಮನೂರು ಶಿವಶಂಕರಪ್ಪ 94ನೇ ವಯಸ್ಸಿನಲ್ಲಿ ನಿಧನ, ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ...
ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಆಘಾತಕಾರಿ ಘಟನೆಗಳು ನಡೆದಿದ್ದು, ಇನ್ನೇನು ನಾವೆಲ್ಲಾ 2025 ವರ್ಷ ಮುಗಿಸಿ, 2026ನೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೀಗಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಕನ್ನಡಿಗರು ಸಕಲ ಸಿದ್ಧತೆ ನಡೆಸಿದ್ದರು. ಆದರೆ ಇಂತಹ ಸಮಯದಲ್ಲೇ ಈಗ ದಿಢೀರ್ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದ್ದು, ಕನ್ನಡ ನಾಡು ಕಂಡ ಹಿರಿಯ ನಾಯಕ &ರಾಜಕೀಯ ಮುತ್ಸದ್ದಿ
ಮಂಗಳೂರು: ಡಿ. 16 ರಂದು ʼಖುತಬಾ ಸಂಗಮʼ
ಮಂಗಳೂರು: ಎಸ್ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ 'ಮಾದರಿ ಮದುವೆ ಶತದಿನ ಅಭಿಯಾನ'ದ ಭಾಗವಾಗಿ ಎಸ್ವೈಎಸ್ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಖತೀಬರು ಹಾಗೂ ಇಮಾಮರಿಗಾಗಿ ನಡೆಸಲ್ಪಡುವ 'ಖುತಬಾ ಸಂಗಮ'ವು ಡಿಸೆಂಬರ್ 16 ಮಂಗಳವಾರ, ಬೆಳಿಗ್ಗೆ 10:00 ಗಂಟೆಗೆ ಪಂಪ್ವೆಲ್ ಡಿ.ಕೆ.ಸಿ ಹಾಲ್ ನಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸುವರು. ಸ್ವಾಗತ ಸಮಿತಿ ಚೇರ್ಮೇನ್ ಅಬ್ದುರ್ರಹ್ಮಾನ್ ಸಅದಿ ಕಂಕನಾಡಿ, ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ಪದವು ಮುನ್ನುಡಿ ಭಾಷಣ ಮಾಡಲಿದ್ದು, ಪ್ರಸಿದ್ಧ ಚಿಂತಕ, ಸಂಶೋಧಕ ಇಬ್ರಾಹೀಂ ಸಖಾಫಿ ಪುಝಕ್ಕಾಟ್ಟಿರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ಮಂಡಿಸಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Mangaluru | ಅಕ್ರಮ ಗೋಸಾಗಾಟ ಪ್ರಕರಣ : ಜಾನುವಾರು ನೀಡಿದ ವ್ಯಕ್ತಿಯ ಮನೆ, ಕೊಟ್ಟಿಗೆ ಜಪ್ತಿ
ಮಂಗಳೂರು: ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡಿರುವ ಪ್ರಕರಣದಲ್ಲಿ ಜಾನುವಾರು ನೀಡಿದ ವ್ಯಕ್ತಿಯ ಮನೆ ಮತ್ತು ಕೊಟ್ಟಿಗೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ಭೋಜ ಮೂಲ್ಯ ಎಂಬವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಡಿ.13ರಂದು ಗೂಡ್ಸ್ ಅಟೋವನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿತ್ತು. ಈ ಸಂಬಂಧ ವಾಹನದ ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅತನು ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ (56) ಎಂಬುದಾಗಿ ತಿಳಿಸಿದ್ದು, ಆತನು ಬಂಟ್ವಾಳ ಸರಪ್ಪಾಡಿ ಎಂಬಲ್ಲಿನ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಇಲ್ಲದೇ ಎಲ್ಲಿಯೋ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿತ್ತು ಎಂದು ಆರೋಪಿಸಲಾಗಿದೆ. ಜಾನುವಾರು, ಅಟೋ ಹಾಗೂ ಒಂದು ಮೊಬೈಲ್ ಫೋನ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ: ಕ್ರಿಕೆಟ್ ಮತ್ತು ಫುಟ್ಬಾಲ್ ಲೋಕದ ಎರಡು ಮಹಾನ್ ದಂತಕಥೆಗಳು ಒಂದೇ ವೇದಿಕೆಯಲ್ಲಿ ಭೇಟಿಯಾದ ಅಪರೂಪದ ಕ್ಷಣಕ್ಕೆ ರವಿವಾರ ಮುಂಬೈ ಸಾಕ್ಷಿಯಾಯಿತು. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡಿ, ಭಾರತ 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಜಯ ಸಾಧಿಸಿದ ಸಂದರ್ಭದಲ್ಲಿ ಧರಿಸಿದ್ದ ಐತಿಹಾಸಿಕ ಜೆರ್ಸಿಯನ್ನು ಸ್ಮರಣಿಕೆಯಾಗಿ ಉಡುಗೊರೆಯಾಗಿ ನೀಡಿದರು. ವಿಶೇಷ ಕಾರ್ಯಕ್ರಮದ ವೇಳೆ ವೇದಿಕೆಗೆ ಆಗಮಿಸಿದ ಸಚಿನ್, ವಿಶ್ವಕಪ್ ವಿಜಯದ ನೆನಪುಗಳನ್ನು ಪ್ರತಿಬಿಂಬಿಸುವ ಜೆರ್ಸಿಯನ್ನು ಮೆಸ್ಸಿಗೆ ಹಸ್ತಾಂತರಿಸಿದರು. ಭಾರತದ ಕ್ರೀಡಾ ಇತಿಹಾಸದಲ್ಲಿ ಅನನ್ಯ ಸ್ಥಾನ ಪಡೆದಿರುವ ಆ ಕ್ಷಣದ ಸ್ಮರಣಿಕೆ ಮೆಸ್ಸಿಗೆ ನೀಡಿದ್ದು ಕ್ರೀಡಾ ಸ್ನೇಹದ ಸಂಕೇತವಾಗಿ ಮೇಳೈಸಿತು. ಇದಕ್ಕೆ ಪ್ರತಿಯಾಗಿ, ಲಿಯೋನೆಲ್ ಮೆಸ್ಸಿ ಕೂಡ ತಮ್ಮ ವಿಶ್ವಕಪ್ ಪಯಣವನ್ನು ಪ್ರತಿನಿಧಿಸುವ ವಿಶೇಷ ಫುಟ್ಬಾಲ್ ಚೆಂಡನ್ನು ಸಚಿನ್ ಅವರಿಗೆ ಉಡುಗೊರೆಯಾಗಿ ನೀಡಿ ಗೌರವ ವ್ಯಕ್ತಪಡಿಸಿದರು.
Jaggesh: ಮಂತ್ರಾಲಯ ರಾಯರ ಮಠಕ್ಕೆ ಜಾತಿಗಳನ್ನ ತರಬೇಡಿ: ಜಗ್ಗೇಶ್ ಹೀಗಂದಿದ್ದೇಕೆ?
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಹಾಗೂ ಹಾಲಿ ಬಿಜೆಪಿ ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿಯ ಅಪ್ಪಟ ಭಕ್ತರು. ಬಿಡುವು ಸಿಕ್ಕಾಗಲೆಲ್ಲ ತಪ್ಪದೇ ಅವರು ರಾಯರ ಮಠಕ್ಕೆ ತೆರಳಿ, ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ರಾಯರ ಫೋಟೋಗಳನ್ನು ಹಂಚಿಕೊಳ್ಳುತ್ತಾ ನಮಿಸುತ್ತಿರುತ್ತಾರೆ. ಆದರೆ, ಜಗ್ಗೇಶ್ ಅವರು ಮಂತ್ರಾಲಯಕ್ಕೆ ಹೋಗುವ
ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ : ಸಿಎಂ ಸಿದ್ದರಾಮಯ್ಯ
ಹೊಸದಿಲ್ಲಿ : ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒಂದು ರಾಷ್ಟ್ರವಾಗಿ, ಒಂದು ಪ್ರಜಾಪ್ರಭುತ್ವವಾಗಿ ಎಲ್ಲರೂ ಮತಗಳ್ಳತನದ ವಿರುದ್ದ ನಿಲ್ಲೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ರವಿವಾರ ದಿಲ್ಲಿಯಲ್ಲಿ ಆಯೋಜಿಸಿದ್ದ ಮತಗಳ್ಳತನದ ವಿರುದ್ದದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಮ್ಮ ಗಣರಾಜ್ಯದ ಹೃದಯ ಭಾಗದಲ್ಲಿ ನಾವು ಸೇರಿದ್ದು, ಕೇವಲ ಕಾಂಗ್ರೆಸ್ ಕಾರ್ಯಕರ್ತರಾಗಿ ಅಥವಾ ಮತದಾರರಾಗಿ ಇಲ್ಲಿಗೆ ಬಂದಿಲ್ಲ. ನಾವು ಭಾರತೀಯ ಪ್ರಜಾಪ್ರಭುತ್ವದ ರಕ್ಷಕರಾಗಿ ಬಂದಿದ್ದೇವೆ ಎಂದರು. ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಅತ್ಯಂತ ಪವಿತ್ರ ಹಕ್ಕು – ‘ಮತದಾನದ ಹಕ್ಕನ್ನು’ ರಕ್ಷಿಸಲು ಬಂದಿದ್ದೇವೆ. ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ಒಬ್ಬ ರೈತ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು, ಒಬ್ಬ ಕಾರ್ಮಿಕ ತನ್ನ ಘನತೆಯನ್ನು ಕಾಯ್ದುಕೊಳ್ಳಲು, ಒಬ್ಬ ಯುವಕ ತನ್ನ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಒಂದು ರಾಷ್ಟ್ರ ತನ್ನ ಸಾಮೂಹಿಕ ಇಚ್ಛೆಯನ್ನು ಘೋಷಿಸಲು ಇರುವ ಸಾಧನವೇ ಮತದಾನ ಎಂದು ಅವರು ನುಡಿದರು. ಇಂದು ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ದುರುಪಯೋಗ ಸೇರಿದಂತೆ ವಿವಿಧ 'ಮತಗಳ್ಳತನ' ದ ವಿಧಾನಗಳ ಮೂಲಕ ಈ ಪವಿತ್ರ ಶಕ್ತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ. ಇಂದು ಆ ಶಕ್ತಿಯನ್ನು ಕದಿಯಲಾಗುತ್ತಿದೆ. ಒಂದು ಬಾರಿಯಲ್ಲ, ಎರಡಲ್ಲ, ಪದೇ ಪದೇ ಕದಿಯಲಾಗುತ್ತಿದೆ ಎಂದರು. ಇತಿಹಾಸ ನಮಗೆ ಕಲಿಸಿದ ಪಾಠವೆಂದರೆ, ಸರ್ವಾಧಿಕಾರವು ಬೀದಿಗಳಲ್ಲಿ ಬಂದೂಕುಗಳಿಂದ ಪ್ರಾರಂಭವಾಗುವುದಿಲ್ಲ. ಅದು ಸಂಸ್ಥೆಗಳ ದುರ್ಬಳಕೆ ಹಾಗೂ ನಿಧಾನವಾಗಿ ವ್ಯವಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಮತ್ತು ಅಂತಿಮವಾಗಿ, ಚುನಾವಣೆಗಳ ಕಳ್ಳತನದಿಂದ ಪ್ರಾರಂಭವಾಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಂತೆ ನಟಿಸುತ್ತಲೇ, ಅದನ್ನು ಬುಡಮೇಲು ಮಾಡುವುದನ್ನೇ ಪ್ರಪಂಚದಾದ್ಯಂತದ ಸರ್ವಾಧಿಕಾರಿ ಆಡಳಿತಗಳು ಮೂಲ ತಂತ್ರವನ್ನಾಗಿಸಿದೆ. ಇಂದು ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಟೀಕಿಸಿದರು. ಅವರು ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಅವರು ಚುನಾವಣಾ ಯಂತ್ರೋಪಕರಣಗಳನ್ನು ಬೆದರಿಸುತ್ತಾರೆ. ಅವರು ಮತದಾರರ ಪಟ್ಟಿಗಳನ್ನು ವಿರೂಪಗೊಳಿಸುತ್ತಾರೆ. ಅವರು ವಿಪಕ್ಷಗಳು ಗೆಲುವಿನ ಸಾಧ್ಯತೆಯ ಪ್ರದೇಶಗಳಲ್ಲಿ ಮತದಾನದ ಪ್ರಮಾಣವನ್ನು ದಮನಿಸುತ್ತಾರೆ. ಹಣ ಮತ್ತು ಅಧಿಕಾರದ ಮೂಲಕ ಸಮಾನ ಅವಕಾಶದ ಸಾಧ್ಯತೆಯನ್ನು ಉಲ್ಲಂಘಿಸುತ್ತಾರೆ. ಇದು ಕೇವಲ ದುರಾಡಳಿತವಲ್ಲ. ಈ 'ಮತಗಳ್ಳತನ'ವು ಭಾರತದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ ಎಂದು ಅವರು ತಿಳಿಸಿದರು. ಕದ್ದ ಮತಗಳಿಂದ ಅಧಿಕಾರಕ್ಕೆ ಬಂದ ಸರಕಾರವು ಪ್ರಜಾಸತ್ತಾತ್ಮಕ ಸರಕಾರವಲ್ಲ ಎಂಬುದು ಸುಸ್ಪಷ್ಟ. ಅದು ಜನರನ್ನು ಹೆದರಿಸುವ, ಜನಾದೇಶವನ್ನು ತಿರುಚುವ, ಮತ್ತು ವಂಚನೆಯ ಮೂಲಕ ಮಾತ್ರ ಬದುಕುಳಿಯುವ ಸರ್ಕಾರ. ಇದು, ಪ್ರಜಾಪ್ರಭುತ್ವಗಳು ಚುನಾವಣಾ ದೌರ್ಜನ್ಯಗಳ ಮಟ್ಟಕ್ಕೆ ಇಳಿಯುವ ರೀತಿಯಾಗಿದೆ. ಇಂದು ಬಿಜೆಪಿಯ 'ಮತಗಳ್ಳತನ'ವು ಸ್ವಾತಂತ್ರ್ಯಾನಂತರದ ನಮ್ಮ ಗಣರಾಜ್ಯಕ್ಕೆ ಎದುರಾದ ಅತಿದೊಡ್ಡ ಬೆದರಿಕೆಯಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ , ಅಸಾಧಾರಣ ಧೈರ್ಯದಿಂದ ನಿಂತಿರುವ ಏಕೈಕ ನಾಯಕ ರಾಹುಲ್ ಗಾಂಧಿಯವರು ಎಂದು ಅವರು ಹೇಳಿದರು. ರಾಹುಲ್ ಗಾಂಧಿಯವರು ಹೊಂದಿಕೆಯಾಗದ ಮತದಾರರ ಪಟ್ಟಿಗಳನ್ನು, ಬೂತ್ ಮಟ್ಟದಲ್ಲಿ ತಿರುಚಿದ ಅಂಶಗಳನ್ನು ಮತ್ತು ವ್ಯವಸ್ಥಿತ, ಸಂಘಟಿತ ಮತಗಳ್ಳತನ'ವನ್ನು ತನಿಖೆಯ ಮೂಲಕ ಬಯಲು ಮಾಡಿದರು. ಮಹದೇವಪುರದಿಂದ ಆಳಂದವರೆಗೆ, ಹರಿಯಾಣದಿಂದ ಬಿಹಾರದವರೆಗೆ, ಹೀಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ, ವಿಶೇಷವಾಗಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಬಲಹೊಂದಿರುವ ಪ್ರದೇಶಗಳಲ್ಲಿ ಮತಗಳನ್ನು ಯಾವ ರೀತಿಯಲ್ಲಿ ದಮನ ಮಾಡಲಾಗಿದೆ, ವರ್ಗಾಯಿಸಲಾಗಿದೆ ಅಥವಾ ದುರ್ಬಲಗೊಳಿಸಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದರು. ಕರ್ನಾಟಕದ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಲ್ಲಿ, 'ವೋಟ್ ಚೋರಿ' ಕೇವಲ ಆರೋಪವಾಗಿರದೇ, ಜೀವಂತ ವಾಸ್ತವ ಎಂದು ರಾಹುಲ್ ಗಾಂಧಿಯವರು ಗಂಭೀರ ಅಕ್ರಮಗಳನ್ನು ಉದಾಹರಣೆಗಳಾಗಿ ಎತ್ತಿ ತೋರಿಸಿದ್ದಾರೆ. ಮಹದೇವಪುರದಲ್ಲಿ ಸಾವಿರಾರು ನಕಲಿ ಅಥವಾ ಮೋಸದ ಮತದಾರರ ನಮೂದುಗಳು ಮತ್ತು ಚುನಾವಣಾ ಪಟ್ಟಿಗಳಲ್ಲಿನ ವ್ಯತ್ಯಾಸಗಳು ಕ್ಷೇತ್ರದಲ್ಲಿ ಬಿಜೆಪಿಯ ಅಲ್ಪ ವ್ಯತ್ಯಾಸದಲ್ಲಿ ಗೆದ್ದಿರುವುದಕ್ಕೆ ಪರಸ್ಪರ ಸಂಬಂಧ ಹೊಂದಿದೆ ಎಂದು ಪುರಾವೆಗಳನ್ನು ಒದಗಿಸುತ್ತದೆ ಎಂದು ಅವರು ವಿವರ ನೀಡಿದರು. ಆಳಂದದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿ ಹಾಕಲು ಪ್ರಯತ್ನಿಸಿದ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಪಟ್ಟಿಯಲ್ಲಿನ ಹೆಸರುಗಳನ್ನು ತೆಗೆಯಲು ಕೋರಿ ಸಲ್ಲಿಸಿದ 6,018 ಅರ್ಜಿಗಳ ಬಗ್ಗೆ ಎಫ್ಐಆರ್ ಮತ್ತು ಎಸ್ಐಟಿ ತನಿಖೆಯನ್ನು ಕೈಗೊಳ್ಳಲು ಇದು ಕಾರಣವಾಯಿತು ಎಂದು ಅವರು ಉಲ್ಲೇಖಿಸಿದರು. ನಿನ್ನೆ, ಒಂದು ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಬಿಜೆಪಿ ಮಾಜಿ ಶಾಸಕರು ಮತ್ತು ಅವರ ಪುತ್ರ ಸೇರಿದಂತೆ ಏಳು ವ್ಯಕ್ತಿಗಳು ಆಳಂದ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಆರೋಪವಿದೆ. ಇದು ಮತಗಳತನ' ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾನೂನು ಹೆಜ್ಜೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇದನ್ನು ಬಹಿರಂಗಪಡಿಸಿರುವುದರಿಂದ ರಾಹುಲ್ ಗಾಂಧಿಯವರು ಈ ಗಣರಾಜ್ಯದ ನೈತಿಕ ದಿಕ್ಸೂಚಿಯಾಗಿರುವುದಲ್ಲದೆ ಮತಗಳ್ಳತನದ ವಿರುದ್ಧದ ಹೋರಾಟಗಾರರಾಗಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಹೋರಾಟ ಸಾಂವಿಧಾನಿಕ ನೈತಿಕತೆಯಲ್ಲಿ ಅಡಕವಾಗಿದ್ದು, ಅಂಬೇಡ್ಕರ್ ವಾದಿ ಚಿಂತನೆಯಾಗಿದೆ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ. ಸಾರ್ವಭೌಮತ್ವ ಜನರಿಗೆ ಸೇರಿದ್ದು , ಯಾವುದೇ ಒಂದು ಪಕ್ಷ, ಒಂದು ಆಳ್ವಿಕೆ ಹಾಗೂ ಚುನಾವಣೆಗಳನ್ನು ಕದಿಯಲಿಚ್ಚಿಸುವವರದ್ದು ಖಂಡಿತಾ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಅಭಿಮಾನಿಗಳ ಕಂಬನಿ... Shamanuru Shivashankarappa
ಕನ್ನಡ ನಾಡಿನಲ್ಲಿ ಸಾಲು ಸಾಲು ಆಘಾತಕಾರಿ ಸುದ್ದಿಗಳು ಸಿಗುತ್ತಿದ್ದು, 2025 ವರ್ಷ ಪೂರ್ತಿ ಈ ರೀತಿಯೇ ಸಾಲು ಸಾಲು ಗಣ್ಯರ ಸಾವಿನ ಆಘಾತಕಾರಿ ಸುದ್ದಿ ಅಭಿಮಾನಿಗಳಿಗೆ ನೋವು ನೀಡಿದೆ. ಅದರಲ್ಲೂ ಕನ್ನಡ ಸಿನಿಮಾ ರಂಗದ ಸಾಕಷ್ಟು ನಟ &ನಟಿಯರ ಅಗಲಿಕೆ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗುವಂತೆ ಮಾಡಿದೆ. ಇದರ ಜೊತೆಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಕೂಡ
ಮಂಗಳೂರು: 300 ಕವಿಗಳ 300 ರಚನೆಗಳಿಂದ ಕೂಡಿದ ‘ಕರಾವಳಿ ಕವನಗಳು’ ಕೃತಿ ಬಿಡುಗಡೆ
ಮಂಗಳೂರು: ಬಹು ಓದು ಬಳಗ ಮಂಗಳೂರು ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಸಹಯೋಗದಲ್ಲಿ 300 ಕವಿಗಳ 300 ರಚನೆಗಳಿಂದ ಕೂಡಿದ ‘ಕರಾವಳಿ ಕವನಗಳು’ ಕೃತಿಯನ್ನು ಮೈಸೂರು ಮಾನಸ ಗಂಗೋತ್ರಿ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಡಾ ಚಲಪತಿ ಆರ್. ಬಿಡುಗಡೆಗೊಳಿಸಿದರು. ಸಹೋದಯ ಸಭಾಂಗಣದಲ್ಲಿ ರವಿವಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಗತ್ತು ವ್ಯವಹಾರ, ವ್ಯಾಪಾರ, ರಾಜಕಾರಣ, ಮೇಲು ಕೀಳೆಂಬ ಹೊಡೆದಾಟದಲ್ಲಿ ಮುಳುಗಿರುವಾಗ ಅದೆಲ್ಲವನ್ನೂ ಮೀರಿದ ಬದುಕಿನ ಸಂಭ್ರಮವನ್ನು ಈ ಕೃತಿ ಬಿಡುಗಡೆಯ ಮೂಲಕ ಆಚರಿಸುತ್ತಿರುವುದು ಮೆಚ್ಚುವಂತದ್ದು ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಸಾಮರಸ್ಯದ ಬದುಕಿನ ಮೂಲಕ ಬುದ್ಧಿವಂತರ ಜಿಲ್ಲೆಯಾಗಿ ಗಮನ ಸೆಳೆದಿದ್ದ ಕರಾವಳಿ ಕಳೆದ ಕೆಲ ವರ್ಷಗಳಿಂದೀಚೆಗೆ ಅವೆಲ್ಲದ್ದಕ್ಕೂ ತದ್ವಿರುದ್ಧ ಚುಟುವಟಿಕೆಗಳಿಂದ ಸುದ್ದಿಯಾಗಿದೆ. ಇಂತಹ ಸಮಯದಲ್ಲಿ ಎಲ್ಲಾ ಸಿದ್ಧಾಂತಗಳನ್ನು ಮೀರಿ ಎಲ್ಲರೂ ಒಂದೇ, ಎಲ್ಲರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಈ ಕೃತಿ ಮೂಡಿ ಬಂದಿದೆ ಎಂದು ಅವರು ವಿಶ್ಲೇಷಿಸಿದರು. ಕವನಗಳು ವಿಭಿನ್ನ ಚಿಂತನೆ, ಆಲೋಚನೆ, ಧಾರ್ಮಿಕ ಮನೋಭಾವ, ಸಂಪ್ರದಾಯದ ಜತೆಗೆ ಕರ್ನಾಟಕದ ವಿಭಿನ್ನ ಕನ್ನಡ ಭಾಷೆಗಳನ್ನೂ ಒಳಗೊಂಡಿದೆ. ತುಡಿತ, ಮಿಡಿತ, ಕೌಟುಂಬಿಕ ಸನ್ನಿವೇಶಗಳ ಜತೆಗೆ ಜಾಗತಿಕ ಯುದ್ಧದ ಪರಿಣಾಮಗಳ ಕುರಿತಂತೆಯೂ ಕವನಗಳು ಮೂಡಿಬಂದಿವೆ ಎಂದವರು ಹೇಳಿದರು. ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅಜ್ಜರಕಾಡಿನ ಡಾ.ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ ಪುಸ್ತಕ ವಿಮರ್ಶೆ ಮಾಡಿದರು. ಮುಖ್ಯ ಅತಿಥಿಯಾಗಿ ಸಾಹಿತಿ ಅರವಿಂದ ಚೊಕ್ಕಾಡಿ ಹಾಗೂ ಬಹು ಓದು ಬಳಗದ ಡಾ. ಸತೀಶ್ ಚಿತ್ರಾಪು ವೇದಿಕೆಯಲ್ಲಿದ್ದರು. ಆಕೃತಿ ಆಶಯ ಪಬ್ಲಿಕೇಶನ್ನ ಪ್ರಕಾಶಕ ಕಲ್ಲೂರು ನಾಗೇಶ ಸ್ವಾಗತಿಸಿದರು. ಪುಸ್ತಕದ ಪ್ರಧಾನ ಸಂಪಾದಕರಾದ ಡಾ. ಉಷಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ರಾಘವೇಂದ್ರ ಜಿಗಳೂರ ವಂದಿಸಿದರು. ಜಾ. ಜ್ಯೋತಿಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ವಿನಮ್ರ ಇಡ್ಕಿದು ಆಶಯ ಗೀತೆ ಹಾಡಿದರು. ಪುಸ್ತಕ ಬಿಡುಗಡೆಗೆ ಮುನ್ನ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿನಿ ದಿಯಾ ಉದಯ್ ಡಿ. ಅಧ್ಯಕ್ಷತೆಯಲ್ಲಿ ಯುವ ಕವಿಗಳಿಂದ ಕವಿಗೋಷ್ಟಿ ನಡೆಯಿತು.
ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನ
ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಇಂದು (ಡಿ.14) ನಿಧನರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಶಾಸಕರಾಗಿದ್ದು, ಹಲವು ಮುಖ್ಯಮಂತ್ರಿ ಗಳ ಸಂಪುಟದಲ್ಲಿ ಸಚಿವರಾಗಿದ್ದರು.
Thiruvananthapuram | ಮೇಯರ್ ಹುದ್ದೆಗೆ BJPಯಿಂದ ‘ರೈಡ್ ಶ್ರೀಲೇಖಾ’ ಹೆಸರು ಮುಂಚೂಣಿಯಲ್ಲಿ
ತಿರುವನಂತಪುರಂ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿವೃತ್ತ IPS ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಆರ್. ಶ್ರೀಲೇಖಾ ಅವರು ಎಡಪಂಥೀಯ ಪ್ರತಿಸ್ಪರ್ಧಿಯನ್ನು ಸುಮಾರು 700 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 1987ರ ಬ್ಯಾಚ್ ನ ಕೇರಳ ಕೇಡರ್ IPS ಅಧಿಕಾರಿ ಆಗಿದ್ದ ಅವರು ಶನಿವಾರ ಸಸ್ತಮಂಗಲಂ ವಾರ್ಡ್ನಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಜಯಗಳಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ, ಕೇರಳ ರಾಜಧಾನಿಗೆ ಮೊದಲ ಬಿಜೆಪಿ ಮೇಯರ್ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ‘ರೈಡ್ ಶ್ರೀಲೇಖಾ’ ಎಂದೇ ಪ್ರಸಿದ್ಧರಾದ ಆರ್. ಶ್ರೀಲೇಖಾ ಅವರ ಹೆಸರು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದೆ. 1960ರ ಡಿಸೆಂಬರ್ 25ರಂದು ತಿರುವನಂತಪುರಂನಲ್ಲಿ ಜನಿಸಿದ ಶ್ರೀಲೇಖಾ, ಕಾಟನ್ಹಿಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಹಿಳಾ ಕಾಲೇಜು ಹಾಗೂ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಸೇವೆ ಸಲ್ಲಿಸಿದ್ದರು. ಉತ್ತಮ ಉದ್ಯೋಗದಲ್ಲಿದ್ದರೂ ಅವರು 1987ರಲ್ಲಿ ಪೊಲೀಸ್ ಸೇವೆಯನ್ನು ಆಯ್ದುಕೊಂಡರು. ಕೇರಳದ ಪ್ರಮುಖ ಮಹಿಳಾ IPS ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಶ್ರೀಲೇಖಾ, ಚೆರ್ತಲಾ, ತ್ರಿಶೂರ್, ಪತ್ತನಂತಿಟ್ಟ ಹಾಗೂ ಆಲಪ್ಪುಳ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸಿಬಿಐನಲ್ಲಿ ಡಿಐಜಿ ಆಗಿ ಆರ್ಥಿಕ ಅಪರಾಧಗಳ ತನಿಖೆ ನಡೆಸಿದ ಅವಧಿಯಲ್ಲಿ ದಿಢೀರ್ ದಾಳಿಗಳ ಮೂಲಕ ಅವರು ಹೆಸರು ಗಳಿಸಿದರು. ಈ ಕಾರಣದಿಂದಲೇ ಅವರಿಗೆ ‘ರೈಡ್ ಶ್ರೀಲೇಖಾ’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. 2007ರಲ್ಲಿ ಅವರಿಗೆ ಕೇರಳ ಸರ್ಕಾರದಿಂದ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪೊಲೀಸ್ ಪಡೆಯಲ್ಲಿನ ಮಹಿಳಾ ಪ್ರಾತಿನಿಧ್ಯ ವೃದ್ಧಿಗೆ ಅವರು ನಿರಂತರವಾಗಿ ಶ್ರಮವಹಿಸಿದ್ದರು. ಪಿಎಸ್ಸಿ ನೇಮಕಾತಿಯಲ್ಲಿ ಲಿಂಗಸಮಾನತೆಯ ಬೇಡಿಕೆಯನ್ನು ಮುಂದಿಟ್ಟ ಪರಿಣಾಮ, ಪೊಲೀಸ್ ಪಡೆಯಲ್ಲಿ ಮಹಿಳೆಯರ ಪಾಲು ಶೇ.4ರಿಂದ ಶೇ.9ಕ್ಕಿಂತ ಹೆಚ್ಚಾಗಿದೆ. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಅಪರಾಧ ವಿಭಾಗದ ಮುಖ್ಯಸ್ಥರಾಗಿ, 2013ರ ‘ಆಪರೇಷನ್ ಅನ್ನಪೂರ್ಣ’ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಅವರು ಮುನ್ನಡೆಸಿದರು. 2003ರ ಕಿಲಿರೂರ್ ಲೈಂಗಿಕ ಹಗರಣದ ತನಿಖೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕೇರಳದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಬಳಿಕ, 33 ವರ್ಷಗಳ ಸೇವೆಯ ನಂತರ ಅವರು 2020ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ತಟಸ್ಥ ನಿಲುವು ಕಾಯ್ದುಕೊಂಡಿದ್ದ ಶ್ರೀಲೇಖಾ, ಅಕ್ಟೋಬರ್ 2024ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಡಾl ಐ.ಜೆ. ಮ್ಯಾಗೇರಿ ಅವರ ʼಜೈಲ್ ಡೈರಿʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ
ಮಂಗಳೂರು: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೆಎಎಸ್ ಅಧಿಕಾರಿ, ಸಾಹಿತಿ ಡಾ. ಎ.ಜೆ. ಮ್ಯಾಗೇರಿ ಅವರ ʼಜೈಲ್ ಡೈರಿ (ಕೈದಿಗಳ ನೈಜ ಕಥನ)ʼ ಕೃತಿ ಆಯ್ಕೆಯಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದ ಇಮಾಮಸಾಬ್ ಜೀವನಸಾಬ್ ಮ್ಯಾಗೇರಿ ಧಾರವಾಡದ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಹಂಪಿ ಕನ್ನಡ ವಿವಿಯಲ್ಲಿ ಎಂ.ಫಿಲ್. ಹಾಗೂ 'ವಸಾಹತುಶಾಹಿ ಅನುಭವ ಹಾಗೂ ಕನ್ನಡ ಕಾದಂಬರಿಗಳು' ವಿಷಯದ ಮೇಲೆ ಪಿಎಚ್ಡಿ ಮಾಡಿದ್ದಾರೆ. 2005ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ನಾಟಕ ಕಾರಾಗೃಹಗಳ ಇಲಾಖೆಯ ಸೇವೆಗೆ ಸೇರಿರುವ ಇವರು ಕರ್ನಾಟಕದ ಅನೇಕ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆಯಲ್ಲಿದ್ದಾರೆ. 2014ರಲ್ಲಿ ಭಾರತ ಸರ್ಕಾರದಿಂದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಏಕೈಕ ಅಧಿಕಾರಿಯಾಗಿ ಆಯ್ಕೆಗೊಂಡು ಅಲ್ಲಿಯ ಕಾರಾಗೃಹಗಳ ಸುಧಾರಣೆ ಮತ್ತು ಅಪರಾಧಿಗಳ ಮನಃಪರಿವರ್ತನೆಯ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಬಂಧಿಗಳ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. ಇವರ ಕರ್ತವ್ಯ ನಿಷ್ಠೆ ಮತ್ತು ಕಾರಾಗೃಹ ಆಡಳಿತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಗಾಗಿ 2021ರಲ್ಲಿ ಕರ್ನಾಟಕ ಸರ್ಕಾರದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ. 'ಹಿಂಸಾಕಾರಣ', ಇವರ ಇನ್ನೊಂದು ಪ್ರಕಟಿತ ಕೃತಿ. ಇವರ ಬರಹಗಳು ಬೆಂಗಳೂರು ಮತ್ತು ತುಮಕೂರು ವಿವಿಗಳ ಪದವಿ ತರಗತಿಗೆ ಪಠ್ಯವಾಗಿದೆ. ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 22 ಕೃತಿಗಳು ಬಂದಿದ್ದು, ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಲೇಖಕಿ ಮತ್ತು ಪ್ರಾಧ್ಯಾಪಕಿ ಶಮೀಮಾ ಕುತ್ತಾರ್ ಹಾಗೂ ಪತ್ರಕರ್ತ, ಸಾಹಿತಿ ಹಂಝ ಮಲಾರ್ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 27 ರಂದು ಗಜೇಂದ್ರಗಡದಲ್ಲಿ ನಡೆಯಲಿದೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʻಮರಾಠರು, ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಗಳಲ್ಲʼ: ಸಂತೋಷ್ ಲಾಡ್
ಬೆಳಗಾವಿಯ ಅಥಣಿಯಲ್ಲಿ ಶಿವಾಜಿ ಪ್ರತಿಮೆ ಅನಾವಣ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯತ್ನಾಳ್ ಮತ್ತು ಸಚಿವ ಸಂತೋಷ್ ಲಾಡ್ ಅವರು ಮುಸ್ಲಿಂ ಹಾಗೂ ಶಿವಾಜಿ ಅವರ ಬಗ್ಗೆ ಮಾತನಾಡಿದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು ಲಾಡ್ ಹೇಳಿದರೆ, ಶಿವಾಜಿ ಮಹಾರಾಜರು ಇರದಿದ್ರೆ ಬೇರೆ ಧರ್ಮ ಅನುಸರಿಸಬೇಕಾದ ಪರಿಸ್ಥಿತಿ ಬಂದೊದಗುತ್ತಿತ್ತು ಎಂದು ಯತ್ನಾಳ್ ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರ ಸಚಿವರು ಇದ್ದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು
ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದರು.
ಕೊನೆಗೂ ಇತ್ಯರ್ಥವಾಗದ ವೈದ್ಯರಿಬ್ಬರ ನಡುವಿನ ʼಕೋಳಿʼ ಜಗಳ!
ಬಹಳಷ್ಟು ವೈದ್ಯರು ಸಣ್ಣ ವಿಚಾರಗಳ ಬಗ್ಗೆ ಜನರಲ್ಲಿ ಭಯ ಮೂಡಿಸುತ್ತಾರೆ. ಇಂತಹ ಪ್ರವೃತ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ ಡಾಕ್ಟರ್ ಫಿಲಿಪ್ಸ್. ಇದೀಗ ತಮಿಳುನಾಡಿನ ವೈದ್ಯರನ್ನು ಅವರು ಟೀಕಿಸುತ್ತಿರುವುದೇತಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಸೈದ್ಧಾಂತಿಕವಾಗಿ ಬದಲಾದ ಚರ್ಚೆಯ ಮೂಲವೇನು? ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ಇಬ್ಬರು ವೈದ್ಯರ ನಡುವೆ ಚಿಕನ್ ನಗೆಟ್ಸ್ ಮತ್ತು ಪಾಪ್ಕಾರ್ನ್ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಡಾ. ಪಾಲ್ ಎಂದೇ ಜನಜನಿತರಾಗಿರುವ ಡಾ ಪಳನಿಯಪ್ಪನ್ ಮನಿಕಾಮ್ ಮತ್ತು ಲಿವರ್ ಡಾಕ್ಟರ್ ಎಂದೇ ಪ್ರಸಿದ್ಧಿಪಡೆದ ಡಾ ಸಿರಿಯಾಕ್ ಅಬಿ ಫಿಲಿಪ್ಸ್ ನಡುವೆ ಈ ಚರ್ಚೆ ನಡೆದಿದೆ. ಡಾ. ಪಾಲ್ ತಮ್ಮ ಕುಟುಂಬದ ಜೊತೆಗೆ ಚಿತ್ರಮಂದಿರಕ್ಕೆ ಹೋಗಿದ್ದಾಗ ತೆಗೆದಿದ್ದ ವೀಡಿಯೊ ಒಂದರಲ್ಲಿ “ಪಾಪ್ಕಾರ್ನ್ ಮತ್ತು ಚಿಕನ್ ನಗೆಟ್ಸ್ ಹೇಗೆ ಕರುಳಿನ ಆರೋಗ್ಯಕ್ಕೆ ಅಪಾಯಕಾರಿ” ಎಂದು ಹಾಸ್ಯಮಯವಾಗಿ ತಿಳಿಸಿದ್ದರು. ಲಿವರ್ ಡಾಕ್ಟರ್ ಈ ಕ್ಲಿಪ್ ಅನ್ನು ಹಂಚಿಕೊಂಡು “ಜನರ ನಡುವೆ ಆಹಾರದ ಬಗ್ಗೆ ಭಯ ಹರಡಬೇಡಿ” ಎಂದು ಹೇಳಿದ್ದರು. “ನಿಮ್ಮ ಸುಳ್ಳುಮಾಹಿತಿಯನ್ನು ಇನ್ಸ್ಟಾಗ್ರಾಂನಲ್ಲೇ ಹರಡಿ. ಅಪರೂಪಕ್ಕೊಮ್ಮೆ ಸಿನಿಮಾ ನೋಡಲು ಹೋದಾಗ ಪಾಪ್ಕಾರ್ನ್ ಅಥವಾ ಚಿಕಲ್ ನಗೆಟ್ಸ್ ತಿಂದರೆ ಕರುಳಿಗೆ ಏನೂ ಸಮಸ್ಯೆಯಾಗದು. ಇಂತಹ ಸುಳ್ಳನ್ನು ಹರಡುವುದು ನಿಲ್ಲಿಸಿ” ಎಂದು ಫಿಲಿಪ್ಸ್ ಹೇಳಿದ್ದರು. ಅದಕ್ಕೆ ಉತ್ತಿರಿಸಿದ ಡಾ ಪಾಲ್, “ಫಿಲಿಪ್ಸ್ ಅವರು ನೆಗೆಟಿವಿಟಿ ಹರಡುವ ಬದಲಾಗಿ ಜನರನ್ನು ಶಿಕ್ಷಿತರನ್ನಾಗಿಸಬೇಕು ಎಂದು ಸಲಹೆ ನೀಡಿದರು. ಅವರು ತಮ್ಮ ವೀಡಿಯೊವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿ, “ಸರಳವಾಗಿ ಸಂವಹನ ಮಾಡಲು ಹಾಸ್ಯಮಯ ವೀಡಿಯೋ ಹಾಕಿರುವುದನ್ನು ತಪ್ಪರ್ಥ ಮಾಡಿಕೊಳ್ಳಲಾಗಿದೆ. ಹಾಸ್ಯಮಯ ರೀತಿಯಲ್ಲಿ ಜನರಿಗೆ ಅರ್ಥವಾಗುವಂತೆ ‘ಅತಿ ಸಂಸ್ಕರಿತ ಆಹಾರ ಸೇವಿಸಬಾರದು’ ಎನ್ನುವ ಸಂದೇಶಗಳನ್ನು ಹಾಕುತ್ತೇನೆ. ಇದನ್ನು ಪ್ರಮುಖ ಸಾರ್ವಜನಿಕ- ಆರೋಗ್ಯ ಮಂಡಳಿಗಳೂ ಬೆಂಬಲಿಸಿವೆ. ಲಿವರ್ ವೈದ್ಯರ ಟೀಕೆ ವಿಜ್ಞಾನವನ್ನು ಆಧರಿಸಿ ನೀಡಲಾಗಿಲ್ಲ” ಎಂದು ಬರೆದರು. ತಮ್ಮ ದೀರ್ಘ ಬರಹದಲ್ಲಿ ಡಾ. ಪಾಲ್ ತಮ್ಮ ವೃತ್ತಿಪರ ವಿಶ್ವಾಸಾರ್ಹತೆಯನ್ನು ಸಮರ್ಥಿಸಿಕೊಂಡಿದ್ದಲ್ಲದೆ, “ಎರಡು ದಶಕಗಳ ಕಾಲ ವೈದ್ಯಕೀಯ ವೃತ್ತಿಯಲ್ಲಿರುವೆ. ಸಾಮಾಜಿಕ ಮಾಧ್ಯಮವನ್ನು ಹಣಕ್ಕಾಗಿ ಬಳಸುವುದಿಲ್ಲ, ಆನ್ಲೈನ್ ಅನ್ನು ಕೇವಲ ಜನರನ್ನು ಶಿಕ್ಷಿತರನ್ನಾಗಿಸಲು ಬಳಸುತ್ತೇನೆ” ಎಂದು ಹೇಳಿದ್ದರು. ಅವರು ತಮ್ಮ ಜೀವನಶೈಲಿ-ಆಧರಿತ ಕಾರ್ಯಕ್ರಮ ‘ನ್ಯೂಮಿ’ (Newme) ಬಗ್ಗೆ ಹಂಚಿಕೊಂಡು, “ಪೂರಕ ಔಷಧಿಗಳನ್ನು ನೀಡದೆ ಹವ್ಯಾಸಗಳು, ಪೌಷ್ಠಿಕತೆ, ನಿದ್ರೆ, ಚಲನೆ, ಒತ್ತಡ ಕಡಿಮೆ ಮಾಡುವುದು ಮತ್ತು ಬದ್ಧತೆಯ ಸಾಕ್ಷ್ಯವನ್ನು ಆಧರಿಸಿದ ರೂಪುರೇಷೆ” ಎಂದು ಮುಂದಿಟ್ಟಿದ್ದಾರೆ. “ಬಹಳಷ್ಟು ಮಂದಿ ವೈಜ್ಞಾನಿಕ ವಿವರಣೆಗಳ ಮೇಲೆ ಸರಳವಾಗಿ ಹಾಸ್ಯಮಯವಾಗಿ ತಿಳಿ ಹೇಳಿದಾಗ ಅರ್ಥಮಾಡಿಕೊಳ್ಳುತ್ತಾರೆ. ಇದು ಜನರನ್ನು ಪ್ರಚೋದಿಸುವುದು ಅಲ್ಲ, ಬದಲಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಸಂವಹನ ವಿಧಾನಗಳು” ಎಂದು ಬರೆದುಕೊಂಡಿದ್ದಾರೆ. ಅವರು ಮುಂದುವರಿದು, ಈ ವರ್ಷ ಪ್ರತಿಷ್ಠಿತ ಹಳೆವಿದ್ಯಾರ್ಥಿ ಪ್ರಶಸ್ತಿಯನ್ನು ಗಳಿಸಿರುವುದಾಗಿ ವಿವರ ನೀಡಿ, ಫಿಲಿಪ್ಸ್ ಅವರ ತಂದೆ ಡಾ ಫಿಲಿಪ್ ಆಗಸ್ಟಿನ್ ರಿಂದ ಅದನ್ನು ಪಡೆದುಕೊಂಡಿರುವುದು ತಮ್ಮ ಉತ್ತಮ ಕೆಲಸಕ್ಕೆ ಸಾಕ್ಷಿ. ಈ ಪ್ರಶಸ್ತಿಯೇ ಆನ್ಲೈನ್ ಟೀಕೆಗಿಂತ ಹೆಚ್ಚು ಉತ್ತಮವಾಗಿ ತಮ್ಮ ವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರವಾಗಿ ಫಿಲಿಪ್ಸ್ “ನಾನು ನನ್ನ ಬಗ್ಗೆ ಯಾರಿಗೂ ಏನೂ ಸಾಬೀತುಮಾಡುವ ಅಗತ್ಯವಿಲ್ಲ. ಧರ್ಮಾಂಧತೆ ಅಥವಾ ಧಾರ್ಮಿಕ ತಾರತಮ್ಯವನ್ನು ಯಾವುದೇ ರೂಪದಲ್ಲಿದ್ದರೂ ಬೆಂಬಲಿಸುವುದಿಲ್ಲ. ನಿತ್ಯದ ಆಹಾರದ ಮೇಲೆ ಭಯ ಮೂಡಿಸುವುದು ತಪ್ಪು” ಎನ್ನುವ ತಮ್ಮ ನಿರ್ಧಾರವನ್ನು ಒತ್ತಿ ಹೇಳಿದರು. ಮಾತ್ರವಲ್ಲದೆ, ತಾನು ಆನ್ಲೈನ್ ನಲ್ಲಿ ವೈಯಕ್ತಿಕ ಟೀಕೆ ಅಥವಾ ನೆಗೆಟಿವಿಟಿ ಹರಡುತ್ತಿಲ್ಲ, ಬದಲಾಗಿ ತನ್ನ ಗುರಿ ಸಾರ್ವಜನಿಕ ಆರೋಗ್ಯ. ಜನರ ಗಮನಕ್ಕಾಗಿ ನಡೆಸುವ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ತಮ್ಮ ತಂದೆಯನ್ನು ಚರ್ಚೆಯ ನಡುವೆ ತರಬಾರದು ಎಂದೂ ಸಲಹೆ ನೀಡಿದ ಅವರು, “ನೀವು ಇಂತಹ ನೀಚತನಕ್ಕೆ ಇಳಿಯುತ್ತೀರಿ ಎನ್ನುವ ಅರಿವು ನನಗಿತ್ತು, ನಮ್ಮ ತಂದೆ ಒಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಜಠರಕರುಳಿನ ತಜ್ಞರಾಗಿ ಕಾಲೇಜಿನ ಆಮಂತ್ರಣದಿಂದ ಮುಖ್ಯ ಅತಿಥಿಯಾಗಿ ಹೋಗಿದ್ದಾರೆ. ನಿಮಗೆ ದೊರೆತಿರುವುದು ಉತ್ತಮ ಹಳೇ ವಿದ್ಯಾರ್ಥಿ ಪ್ರಶಸ್ತಿ. ಅವರಿಗೆ ಯಾರು ಪ್ರಶಸ್ತಿ ಸ್ವೀಕರಿಸುತ್ತಾರೆ ಎನ್ನುವ ಅರಿವೂ ಇರಲಿಲ್ಲ. ಜನಪ್ರಿಯತೆ ಹೆಚ್ಚಿಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಕ್ಕೆ ನಾನು ಹೋಗುವುದೂ ಇಲ್ಲ. ನಿಮ್ಮ ಮೆದುಳುರಹಿತ ಬೆಂಬಲಿಗರ ಮುಂದೆ ಸಂತ್ರಸ್ತರೆಂದು ತೋರಿಸಿಕೊಳ್ಳುವ ಬದಲಾಗಿ ನೀವು ಸ್ವಂತಕ್ಕಾಗಿ ಇದನ್ನೆಲ್ಲ ಮಾಡುತ್ತೀರೋ ಅಥವಾ ಸಾರ್ವಜನಿಕರಿಗೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ನಾನು ನಿಮ್ಮಂತೆ ಸುಳ್ಳುಸುದ್ದಿ ಹರಡಿಸುವವರ ವಿರುದ್ಧ ಖಚಿತವಾಗಿ ಹೋರಾಡುತ್ತೇನೆ, ನಾನು ಸಾರ್ವಜನಿಕರ ಪರವಾಗಿ ಮಾತನಾಡುತ್ತೇನೆ ಮತ್ತು ನನ್ನ ರೋಗಿಗಳಿಗಾಗಿ ಕೆಲಸ ಮಾಡುತ್ತೇನೆ. ನೀವು ಜನರ ಸಂಶಯದಿಂದ ಹಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ” ಎಂದು ಉತ್ತರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಯುರ್ವೇದಿಕ್ ಪದ್ಧತಿಯನ್ನು ಟೀಕಿಸಿರುವುದಕ್ಕಾಗಿ ಲಿವರ್ ವೈದ್ಯರ ಮೇಲೆ ಕೆಲವೊಂದು ಪ್ರಕರಣಗಳೂ ಭಾರತದಲ್ಲಿ ದಾಖಲಾಗಿವೆ. ಫಿಲಿಪ್ಸ್ ಈ ಹಿಂದೆ ನಯನ ತಾರ ಅವರು ದಾಸವಾಳ ಚಹಾದ ಬಗ್ಗೆ ಬರೆದುಕೊಂಡಿರುವುದನ್ನೂ ಪ್ರಶ್ನಿಸಿದ್ದರು. ಅವರು ಆನ್ಲೈನ್ನಲ್ಲಿ ಬಿಟ್ಟಿ ಸಲಹೆ ನೀಡುವ ಅನೇಕರ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿರುತ್ತಾರೆ.
ಆನೇಕಲ್ ಬಳಿ ಬಸ್ಸನ್ನು ಕದಿಯಲು ಪ್ರಯತ್ನಿಸಿ ಅನಾಹುತ
ಬೆಂಗಳೂರು : ಕಳ್ಳರು ಬಸ್ ಕದಿಯಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿರುವ ಘಟನೆ ಶನಿವಾರ ರಾತ್ರಿ ನಗರದ ಹೊರ ವಲಯದಲ್ಲಿರುವ ಆನೇಕಲ್ನಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ ಮುಂಭಾಗ ಜಖಂಗೊಂಡಿದೆ. ಪ್ರಕರಣ ಸಂಬಂಧ ಸಾರ್ವಜನಿಕರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಎಂದಿನಂತೆ ಆನೇಕಲ್ನ ಥಳಿ ರಸ್ತೆ ಬದಿ ಬಸ್ ಪಾರ್ಕ್ ಮಾಡಿ ಚಾಲಕ ಹೋಗಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ನಿಯಂತ್ರಣ ಕಳೆದುಕೊಂಡ ಬಸ್ ಎರಡು ವಿದ್ಯುತ್ ಕಂಬಗಳಿಗೆ ಗುದ್ದಿದೆ. ಕೂಡಲೇ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಹೊಸದಿಲ್ಲಿ,ಡಿ.14: ಭಾರತದ ಹಲವಾರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಸುಸಂಘಟಿತ ಅಂತರರಾಷ್ಟ್ರೀಯ ಸೈಬರ್ ಜಾಲವನ್ನು ಭೇದಿಸಿರುವ ಸಿಬಿಐ ನಾಲ್ವರು ಚೀನಿ ಪ್ರಜೆಗಳು ಸೇರಿದಂತೆ 17ಆರೋಪಿಗಳು ಮತ್ತು 58 ಸಂಸ್ಥೆಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಸಿಬಿಐ ಝೌ ಯಿ,ಹುವಾನ್ ಲಿಯು, ವೀಜಿಯಾನ್ ಲಿಯು ಮತ್ತು ಗುವಾನುವಾ ವಾಂಗ್ ಅವರನ್ನು ವಿದೇಶಿ ನಿರ್ವಾಹಕರೆಂದು ಗುರುತಿಸಿದ್ದು, ಅವರ ಸೂಚನೆಯ ಮೇರೆಗೆ 2020ರಿಂದ ಭಾರತದಲ್ಲಿ ಶೆಲ್ ಅಥವಾ ನಾಮಮಾತ್ರ ಕಂಪೆನಿಗಳನ್ನು ಸ್ಥಾಪಿಸಲಾಗಿತ್ತು. ಅಕ್ಟೋಬರ್ 2025ರಲ್ಲಿ ಮೂವರು ಪ್ರಮುಖ ಭಾರತೀಯ ಆರೋಪಿಗಳ ಬಂಧನದೊಂದಿಗೆ ಈ ವಂಚಕ ಜಾಲದ ಬಗ್ಗೆ ಮಹತ್ವದ ಸುಳಿವು ಲಭಿಸಿತ್ತು. ದಾರಿ ತಪ್ಪಿಸುವ ಲೋನ್ ಆ್ಯಪ್ಗಳು,ನಕಲಿ ಹೂಡಿಕೆ ಯೋಜನೆಗಳು,ಪೊಂಝಿ ಮತ್ತು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಸ್ಕೀಮ್ ಗಳು,ನಕಲಿ ಅರೆಕಾಲಿಕ ಉದ್ಯೋಗಗಳ ಕೊಡುಗೆಗಳು ಮತ್ತು ವಂಚಕ ಆನ್ಲೈನ್ ಗೇಮಿಂಗ್ ಪ್ಲ್ಯಾಟ್ ಫಾರ್ಮ್ ಗಳ ಮೂಲಕ ಸಾವಿರಾರು ಅಮಾಯಕ ನಾಗರಿಕರನ್ನು ವಂಚಿಸಲು ಸಂಘಟಿತ ಮಾಫಿಯಾವೊಂದು ವ್ಯಾಪಕ ಡಿಜಿಟಲ್ ಮತ್ತು ಹಣಕಾಸು ಮೂಲಸೌಕರ್ಯವನ್ನು ಸೃಷ್ಟಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿದೆ. ಗೃಹ ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಿಂದ ಸ್ವೀಕರಿಸಲಾಗಿದ್ದ ಮಾಹಿತಿಗಳ ಆಧಾರದಲ್ಲಿ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಆನ್ಲೈನ್ ಹೂಡಿಕೆ ಮತ್ತು ಉದ್ಯೋಗ ಯೋಜನೆಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರನ್ನು ವಂಚಿಸಲಾಗುತ್ತಿದೆ ಎಂದು ಈ ಮಾಹಿತಿಗಳು ಸೂಚಿಸಿದ್ದವು. ಆರಂಭದಲ್ಲಿ ಪ್ರತ್ಯೇಕ ದೂರುಗಳಾಗಿ ಕಂಡು ಬಂದಿದ್ದರೂ ವಿವರವಾದ ವಿಶ್ಲೇಷಣೆಯು ಬಳಕೆಯಾಗಿದ್ದ ಅಪ್ಲಿಕೇಷನ್ ಗಳು, ನಿಧಿ ಹರಿವಿನ ಮಾದರಿಗಳು,ಪೇಮೆಂಟ್ ಗೇಟ್ ವೇ ಗಳು ಮತ್ತು ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಗಮನಾರ್ಹ ಹೋಲಿಕೆಗಳನ್ನು ಬಹಿರಂಗಗೊಳಿಸಿತ್ತು. ಇದು ಸಾಮಾನ್ಯ ಸಂಘಟಿತ ಪಿತೂರಿಯತ್ತ ಬೆಟ್ಟು ಮಾಡಿತ್ತು ಎಂದು ಸಿಬಿಐ ಹೇಳಿದೆ. ಸಿಬಿಐ ತನಿಖೆಯ ಸಂದರ್ಭದಲ್ಲಿ ನಕಲಿ ನಿರ್ದೇಶಕರು, ಫೋರ್ಜರಿ ದಾಖಲೆಗಳು, ನಕಲಿ ವಿಳಾಸಗಳು ಮತ್ತು ವ್ಯವಹಾರ ಉದ್ದೇಶಗಳ ಸುಳ್ಳು ಹೇಳಿಕೆಗಳನ್ನು ಬಳಸಿಕೊಂಡು ಸ್ಥಾಪಿಸಲಾಗಿದ್ದ 111 ಶೆಲ್ ಕಂಪೆನಿಗಳ ಜಾಲವನ್ನು ಬಯಲಿಗೆಳೆದಿತ್ತು. ಈ ಶೆಲ್ ಕಂಪೆನಿಗಳನ್ನು ವಿವಿಧ ಪಾವತಿ ಗೇಟ್ ವೇ ಗಳೊಂದಿಗೆ ಬ್ಯಾಂಕ್ ಖಾತೆಗಳು ಮತ್ತು ವ್ಯಾಪಾರ ಖಾತೆಗಳನ್ನು ತೆರೆಯಲು ಬಳಸಲಾಗುತ್ತಿತ್ತು. ಇದು ಅಪರಾಧದ ಆದಾಯವನ್ನು ತ್ವರಿತವಾಗಿ ಹಲವಾರು ಹಂತಗಳಲ್ಲಿ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲು ಅನುಕೂಲವನ್ನು ಕಲ್ಪಿಸಿತ್ತು. ನೂರಾರು ಬ್ಯಾಂಕ್ ಖಾತೆಗಳ ವಿಶ್ಲೇಷಣೆಯು ಅವುಗಳ ಮೂಲಕ 1,000 ಕೋ.ರೂ.ಗೂ ಅಧಿಕ ಹಣವನ್ನು ರವಾನಿಸಿದ್ದನ್ನು ಬಹಿರಂಗಗೊಳಿಸಿದೆ. ಒಂದು ಖಾತೆಯು ಅಲ್ಪಾವಧಿಯಲ್ಲಿ 152 ಕೋ.ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿತ್ತು ಎಂದು ಸಿಬಿಐ ತಿಳಿಸಿದೆ. ಇದಕ್ಕೂ ಮುನ್ನ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು,ಕೇರಳ,ಆಂಧ್ರಪ್ರದೇಶ,ಜಾರ್ಖಂಡ್ ಮತ್ತು ಹರ್ಯಾಣಾದಾದ್ಯಂತ 27ಸ್ಥಳಗಳಲ್ಲಿ ಶೋಧಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಡಿಜಿಟಲ್ ಸಾಧನಗಳು,ದಾಖಲೆಗಳು ಮತ್ತು ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ತಜ್ಞರ ಪರಿಶೀಲನೆಗೆ ಒಪ್ಪಿಸಲಾಗಿತ್ತು. ವಿದೇಶಿ ಪ್ರಜೆಗಳು ವ್ಯಾಪಕ ಸಂವಹನ ಸಂಪರ್ಕಗಳನ್ನು ಬಳಸಿಕೊಂಡು ಈ ವಂಚಕ ಜಾಲವನ್ನು ನಿರ್ದೇಶಿಸುತ್ತಿದ್ದಾರೆ ಎನ್ನುವುದನ್ನು ಸಿಬಿಐ ಪತ್ತೆ ಹಚ್ಚಿತ್ತು.
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ `ಕಿಂಗ್' ಹರ್ಷಿತ್ ರಾಣಾ ! ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲಣ್ಣ!
ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಭಾರತ ತಂಡದಲ್ಲಿ ಸದಾ ಸ್ಥಾನ ಪಡೆಯುವ ಹರ್ಷಿತ್ ರಾಣಾಗೆ ಸರಣಿಯ ಒಂದು ಪಂದ್ಯದಲ್ಲಾದರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂಬುದು ಇದೀಗ ಮತ್ತೊಮ್ಮೆ ನಿಜವಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕಿಳಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಗೊಳಗಾಗಿದೆ. ತಂಡದ ಮತ್ತು ಹರ್ಷಿತ್ ರಾಣಾ ಅವರ ಚಿತ್ರಗಳನ್ನು ಹಾಕಿ ನೆಟ್ಟಿಗರು ವಿಪರೀತ ಹಾಸ್ಯ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಧರ್ಮಶಾಲಾದಲ್ಲಿ ಭಾನುವಾರ ನಡೆಯುತ್ತಿರುವ ದಲ್ಲಿ ಟಾಸ್ ಗೆದ್ದಿರುವ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಪಂದ್ಯದಲ್ಲಿ ಟಾಸ್ ಸೋತಿದ್ದ ಟೀಂ ಇಂಡಿಯಾ ನಾಯಕ ಇದೀಗ ನಿರಂತರ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ. ಪ್ಲೇಯಿಂಗ್ ಇಲೆವೆನ್ ನಲ್ಲಿ 2 ಬದಲಾವಣೆ ಮಾಡಲಾಗಿದೆ. ಸ್ಪಿನ್ನ್ ಆಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಅವರು ಕಣಕ್ಕಿಳಿದಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರು ಸತತ 3ನೇ ಪಂದ್ಯದಲ್ಲೂ ಬೆಂಚು ಕಾಯಿಸಬೇಕಾಗಿದೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), 8 ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಐಡೆನ್ ಮಾರ್ಕಂ(ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೊನೊವನ್ ಫೆರೀರಾ, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ
ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವವರಿಗೆ Alzheimer ರೋಗದ ಅಪಾಯ ಶೇ. 47ರಷ್ಟು ಕಡಿಮೆ
ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಈ ಎಸಿಟೈಲ್ಕೊಲೀನ್ ಬಿಡುಗಡೆಯಲ್ಲಿ ಮೊಟ್ಟೆಯಲ್ಲಿ ಸಿಗುವ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ. ಸಮೃದ್ಧ ಪ್ರೊಟೀನ್ ಮತ್ತು ಪೌಷ್ಠಿಕಾಂಶವಿರುವ ಅಗ್ಗದ ಆಹಾರವೆಂದೇ ಪರಿಗಣಿಸಲಾಗಿರುವ ಮೊಟ್ಟೆಯಿಂದ ಮಾನವನ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ಬಹಳಷ್ಟು ಚರ್ಚೆಗಳಿವೆ. ಮೊಟ್ಟೆಯನ್ನು ಹೆಚ್ಚು ಸೇವಿಸಿದಲ್ಲಿ ಕೊಬ್ಬಿನಂಶ ಹೆಚ್ಚಾಗಲಿದೆ ಎನ್ನುವುದು ಅಂತಹ ಒಂದು ನಂಬಿಕೆಯಾಗಿದೆ. ಆದರೆ ಜರ್ನಲ್ ಆಫ್ ನ್ಯೂಟ್ರಿಷನ್ ಹೆಲ್ತ್ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನವೊಂದರ ಪ್ರಕಾರ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಉತ್ತಮ ಎಂದು ಕಂಡುಬಂದಿದೆ. ►ಮರೆಗುಳಿತನದ ಅಪಾಯ ಶೇ 47ರಷ್ಟು ಕಡಿಮೆ ಅಧ್ಯಯನದ ಪ್ರಕಾರ, ಮೊಟ್ಟೆಯನ್ನೇ ತಿನ್ನದಿರುವವರಿಗೆ/ ಅಪರೂಪಕ್ಕೆ ಮೊಟ್ಟೆ ತಿನ್ನುವವರಿಗೆ ಹೋಲಿಸಿದರೆ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಮಾಡುವ ವಯಸ್ಕರಲ್ಲಿ alzheimerಗೆ ಸಂಬಂಧಿಸಿದ ಬುದ್ಧಿಮಾಂದ್ಯ/ ಮರೆಗುಳಿತನದ ರೋಗ ಬರುವ ಸಾಧ್ಯತೆ ಶೇ 47ರಷ್ಟು ಕಡಿಮೆಯಿದೆ. ಸಂಶೋಧನೆಯಲ್ಲಿ 1,024 ವಯಸ್ಕರನ್ನು (ಸರಾಸರಿ ವಯಸ್ಸು ಶೇ 81.4 ವರ್ಷಗಳು) ಅಮೆರಿಕದ ಇಲಿನೊಯಿಸ್ ನ ವಸತಿ ಸೌಲಭ್ಯಗಳಲ್ಲಿ ಸರಾಸರಿ 6.7 ವರ್ಷಗಳ ಕಾಲ ಅಧ್ಯಯನ ಮಾಡಿ ಈ ಸಂಶೋಧನೆಯನ್ನು ನಡೆಸಲಾಗಿದೆ. ಅಧ್ಯಯನ ಹೇಳುವ ಪ್ರಕಾರ, ಮುಖ್ಯವಾಗಿ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೋಲೀನ್ ನ ಪರಿಣಾಮವಾಗಿ ಇಂತಹ ರಕ್ಷಣಾತ್ಮಕ ಪರಿಣಾಮವಾಗುತ್ತದೆ. ಕೋಲೀನ್ ಎನ್ನುವುದು ಜೀವಿಗಳ ಮೂಲಪದಾರ್ಥಗಳಲ್ಲಿ ದೊರೆಯುವ, ಮೇದಸ್ಸಿನ ಚಯಾಪಚಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ‘ಬಿ’ ಸಮೂಹಕ್ಕೆ ಸೇರಿದ ಒಂದು ವಿಟಮಿನ್. ಎಸಿಟೈಲ್ಕೊಲೀನ್ ಎನ್ನುವುದು ಸ್ವತಂತ್ರ ನರಗಳ ತುದಿಗಳಲ್ಲಿ ಬಿಡುಗಡೆಯಾಗುವ, ನರಗಳ ತಂತುಗಳಿಂದ ಪ್ರೇರಣೆಗಳನ್ನು ವರ್ಗಾಯಿಸುವ ಕೋಲೀನಿನ ಅಸೀಟಿಕ್ ಆಮ್ಲದ ಒಂದು ಎಸ್ಟರ್ ಆಗಿರುತ್ತದೆ. ಎಸ್ಟರು ಎಂದರೆ ಯಾವುದೇ ಆಮ್ಲದಲ್ಲಿನ ಹೈಡ್ರೊಜನ್ ಪರಮಾಣುಗಳ ಸ್ಥಾನವನ್ನು ಆಲ್ಕೈಲ್, ಆರೈಲ್, ಮೊದಲಾದ ಕಾರ್ಬನಿಕ ರ್ಯಾಡಿಕಲ್ ಗಳು ಆಕ್ರಮಿಸಿಕೊಳ್ಳುವುದರಿಂದ ರೂಪುಗೊಳ್ಳುವ ಸಂಯುಕ್ತ. ►ಎಸಿಟೈಲ್ ಕೊಲೀನ್ ನ ಕೊರತೆ ಈ ಎಸಿಟೈಲ್ ಕೊಲೀನ್ ಬಿಡುಗಡೆಯಲ್ಲಿ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ. ನೆನಪುಶಕ್ತಿ ಮತ್ತು ಕಲಿಕೆಗೆ ಈ ನರಪ್ರೇಕ್ಷಕವಾದ ಎಸಿಟೈಲ್ ಕೊಲೀನ್ ಅತಿಮುಖ್ಯವಾಗಿರುತ್ತದೆ. ನರಪ್ರೇಕ್ಷಕವೆಂದರೆ ಒಂದು ನರದಿಂದ ಇನ್ನೊಂದು ನರಕ್ಕೆ ಅಥವಾ ಸ್ನಾಯುವಿಗೆ ಚೋದನೆಯನ್ನು ರವಾನಿಸಲು ನೆರವಿಗೆ ಬರುವ, ನರತಂತುವಿನಿಂದ ಒಸರುವ ರಾಸಾಯನಿಕ ವಸ್ತು. ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಆಹಾರದಲ್ಲಿ ಕೊಲೀನ್ ಸೇವನೆ ಹೆಚ್ಚಾಗಿರುವುದು ಮೊಟ್ಟೆ ಸೇವನೆಗೆ ಸಂಬಂಧಿತ ರಕ್ಷಣಾತ್ಮಕ ಅಂಶದ ಶೇ 39ರಷ್ಟು ಪರಿಣಾಮ ಬೀರಿದೆ. ►ವಿಷಕಾರಿ ಪ್ರೊಟೀನ್ಗಳ ಸಂಗ್ರಹ ಕಡಿಮೆ ಮೃತಪಟ್ಟ ವ್ಯಕ್ತಿಗಳ ಮೇಲೆ ಸಂಶೋಧಕರು ನಡೆಸಿರುವ ಮೆದುಳಿನ ಮಹಜರುಗಳಲ್ಲಿ ಕಂಡುಬಂದಿರುವ ಪ್ರಕಾರ ಮೊಟ್ಟೆಯನ್ನು ನಿಯಮಿತವಾಗಿ ಸೇವನೆ ಮಾಡಿರುವವರಲ್ಲಿ Alzheimer ರೋಗಕ್ಕೆ ಸಂಬಂಧಿಸಿದ ವಿಷಕಾರಿ ಪ್ರೊಟೀನ್ ಗಳಾದ ಅಮಿಲಾಯ್ಡ್ ಪದರಗಳು ಮತ್ತು ಟಾವು ಟ್ಯಾಂಗಲ್ ಗಳ (ಮೆದುಳಿನ ಜೀವಕೋಶಗಳ /ನ್ಯೂರಾನ್ ಗಳ ಒಳಗೆ ರೂಪುಗೊಳ್ಳುವ ಟೌ ಪ್ರೋಟೀನ್ನ ಅಸಹಜ ಗುಂಪುಗಳು ಅವುಗಳ ಕಾರ್ಯವನ್ನು ಅಡ್ಡಿಪಡಿಸುತ್ತವೆ ಮತ್ತು ಜೀವಕೋಶದ ಸಾವಿಗೆ ಕಾರಣವಾಗುತ್ತವೆ) ಸಂಗ್ರಹ ಕಡಿಮೆ ಇತ್ತು. ಮೊಟ್ಟೆಗಳು ಮೆದುಳಿನ ಆರೋಗ್ಯಕ್ಕೆ ಬೆಂಬಲಿಸುವ ಇತರ ಪೌಷ್ಠಿಕಾಂಶಗಳಾಗಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು, ಲ್ಯುಟೀನ್, ವಿಟಮಿನ್ B12 ಮತ್ತು ಫೊಲೇಟ್ ಗಳನ್ನು ಹೊಂದಿರುತ್ತವೆ. ಇವುಗಳು ಜೊತೆಗೂಡಿ ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
ಗ್ರೇಟರ್ ತುಮಕೂರು ಘೋಷಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ : ಜಿ.ಪರಮೇಶ್ವರ್
ತುಮಕೂರು : ಗ್ರೇಟರ್ ತುಮಕೂರು ಘೋಷಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಇ-ಖಾತಾ(ನಮೂನೆ 2) ವಿತರಣಾ ಕಾರ್ಯಕ್ರಮ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಗ್ರೇಟರ್ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ತುಮಕೂರು, ಮೈಸೂರು, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಗ್ರಾಮಗಳಲ್ಲಿ ಜೀವನ ಸಾಗಿಸಲು ಎದುರಾಗುವ ಸಮಸ್ಯೆಗಳ ಕಾರಣದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರಗಳಲ್ಲಿ ಬದುಕು ಸಹ ಸುಲಭವಲ್ಲ. ಕೆಲ ವಾರ್ಡ್ಗಳಲ್ಲಿ ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಶೇ.40ರಷ್ಟು ಜನರು ಪಟ್ಟಣಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ವಲಸೆ ಬಂದು ಜೀವನ ಸಾಗಿಸುವವರಿಗೆ ಸರಕಾರದಿಂದ ವಸತಿ ಸೌಲಭ್ಯ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಾದಾಗ ಜನಸಾಮಾನ್ಯರ ಜೀವನ ಮಟ್ಟ ಬದಲಾಗುತ್ತದೆ ಎಂದು ಹೇಳಿದರು. ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 18 ಪಾರ್ಕ್ಗಳನ್ನು ನವೀಕರಿಸಲಾಗುತ್ತಿದೆ. ಪೌರಕಾರ್ಮಿಕರ ಬದುಕು ಸುಧಾರಣೆಗೆ ಅವರಿಗೆ ಖಾಯಂ ಉದ್ಯೋಗ ಹಾಗೂ ವಸತಿ ಸೌಲಭ್ಯ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಿಬ್ಬೂರು ವ್ಯಾಪ್ತಿಯಲ್ಲಿ 64 ಕೊಠಡಿಗಳ ಅಪಾರ್ಟ್ಮೆಂಟ್ ನಿರ್ಮಿಸಿ ಕೊಡುವ ಕಾರ್ಯಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿದೆ . ತುಮಕೂರು ಅಭಿವೃದ್ಧಿ ಯಾದರೆ ನಾಗರಿಕರ ಸಮಗ್ರ ಅಭಿವೃದ್ಧಿ ಸಾಧ್ಯವೆಂಬ ದೃಷ್ಟಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಜಿಲ್ಲೆಗೆ 120 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು. ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಆಯುಕ್ತ ಯೋಗಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತ್ಮೌರ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಬೆಂಗಳೂರಿನ ಪೊಲೀಸರು ಎಚ್ಚರ ವಹಿಸುತ್ತಿದ್ದು, ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ್ದಾರೆ. ಶನಿವಾರ ತಡರಾತ್ರಿ ನಗರದಾದ್ಯಂತ ಪಬ್, ರೆಸ್ಟೋರೆಂಟ್ಗಳನ್ನು ಪರಿಶೀಲನೆ ನಡೆಸಿದರು. ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಅಕ್ರಮಗಳಿಗೆ ತಡೆ ಹಾಕುವ ಉದ್ದೇಶದಿಂದ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಪಬ್, ರೆಸ್ಟೋರೆಂಟ್ಗಳಿಗೆ ತೆರಳಿ ಹೊಸ ವರ್ಷಾಚರಣೆಯ ತಯಾರಿಗಳ ಕುರಿತು ಮಾಹಿತಿ ಕಲೆಹಾಕಿ ಅಗತ್ಯ ಸೂಚನೆಗಳನ್ನು ನೀಡಿದರು. ಹಿರಿಯ ಅಧಿಕಾರಿಗಳೇ ಖುದ್ದು ತೆರಳಿ ಪರಿಶೀಲನೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಈ ವೇಳೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್ ನೇಮಗೌಡ ಮಾತನಾಡಿ, ನಗರದಲ್ಲಿ ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಲಾಗಿದೆ. ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಪ್ಪಿಸಲು ಹಾಗೂ ಅಕ್ರಮಗಳನ್ನು ನಿಯಂತ್ರಿಸಲು ನಗರದ ವಿವಿಧೆಡೆ ತಪಾಸಣೆ ನಡೆಸಲಾಗಿದೆ. ಪಬ್, ರೆಸ್ಟೋರೆಂಟ್ಗಳಲ್ಲಿ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಾಗಿದೆ. ಎಷ್ಟು ಜನರಿಗೆ ಆಸನ ವ್ಯವಸ್ಥೆಯಿದೆ, ಜನಸಂದಣಿ ನಿರ್ವಹಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.
\ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲ\ ಎಂದ ನಟ ಕಿಶೋರ್!
ಜೈ ಶ್ರೀ ರಾಮ್ ನಿಂದ ವಂದೇ ಮಾತರಂ ವರೆಗೆ .. ಎನ್ನುವ ಶೀರ್ಷಿಕೆಯೊಂದಿಗೆ ನಟ ಕಿಶೋರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬರಹವು ಇದೀಗ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ನಟ ಕಿಶೋರ್ ಅವರು ಈ ಟ್ವೀಟ್ ಮಾಡಿದ್ದಾರೆ. ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ
ಬೇರೊಬ್ಬ ಯುವತಿಗೆ ತಾಳಿ ಕಟ್ತಿಂದ್ದಂತೆ ಮಂಟಪಕ್ಕೆ ಪ್ರೇಯಸಿ ಎಂಟ್ರಿ; ಚಿಕ್ಕಮಗಳೂರು ಛತ್ರದಲ್ಲಿ ಹೈಡ್ರಾಮಾ
ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ತನಗೆ ಮೋಸ ಮಾಡಿದೆ ಎಂದು ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆದ ಘಟನೆ ಬೆಳಕಿಗೆ ಬಂದಿತ್ತು. ಮದುವೆ ನಿಲ್ಲಿಸಲೆಂದು ಆಕೆ ಬಂದಿದ್ದಳು. ಆದರೆ ಇಲ್ಲಿ ಪ್ರೇಯಿಸಿ ಬರುವಷ್ಟರಲ್ಲೇ ಪ್ರಿಯಕರ ತಾಳಿ ಕಟ್ಟಿಯಾಗಿದ್ದು, ರೊಚ್ಚಿಗೆದ್ದ ಯುವತಿ ಕಲ್ಯಾಣ ಮಂಟಪದಲ್ಲೇ ರಂಪಾಟ ನಡೆಸಿದ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ಪ್ರದೀಪ್ ಆರ್.
ಕಾರ್ಕಳ: ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ಜಗತ್ತಿನಾದ್ಯಾಂತ ಹಲವಾರು ಗಣ್ಯ ವ್ಯಕ್ತಿಗಳನ್ನು ನೀಡಿದೆ. ಕರಾವಳಿಯ ವಿದ್ಯಾರ್ಥಿಗಳು ಐ.ಎ.ಎಸ್, ಕೆ.ಎ. ಎಸ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಯಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳಾಗಬೇಕು ಎಂದು ಕಾರ್ಕಳದ ತಹಶೀಲ್ದಾರ್ ಪ್ರದೀಪ್. ಆರ್. ಅಭಿಪ್ರಾಯಪಟ್ಟರು. ಅವರು ಕಾರ್ಕಳ ಕುಕ್ಕುಂದೂರು ಕೆ.ಎಮ್. ಇ. ಎಸ್ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಪಿ.ಆರ್. ಒ. ಜ್ಯೋತಿ ಪದ್ಮನಾಭ ಭಂಡಿಯವರು ಮಾತನಾಡುತ್ತಾ ಈ ಸಂಸ್ಥೆಯಲ್ಲಿ ತಾನು ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡರು. ಸ್ಥಳೀಯ ಶಿರ್ಡಿ ಸಾಯಿ ಬಾಬಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆಶೀಶ್ ಶೆಟ್ಟಿಯವರು ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆ ತನ್ನ ವೈಯಕ್ತಿಕ ಬೆಳವಣಿಗೆಯನ್ನು ಯಾವ ರೀತಿ ಉಂಟು ಮಾಡಲು ಸಹಕರಿಸಿತು ಎಂಬುದರ ಬಗ್ಗೆ ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿ ಮತ್ತು ಸಂಸ್ಥೆಯ ಪೂರ್ವ ವಿದ್ಯಾರ್ಥಿನಿ ಡಾ. ಆಶಿತಾ ಕೃಷ್ಣರವರು ಸಂಸ್ಥೆಯಲ್ಲಿ ತಾನು ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿಯವರು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃ ಷ್ಣ ರಾವ್ ರವರು ವರದಿ ವಾಚನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಪ್ರಾಸ್ತವಿಕ ಭಾಷಣ ಮಾಡಿದರು. ಅಂತರಾಷ್ಟ್ರೀಯ ಮಟ್ಟದ ಟೊಕ್ಟೆಂಡೋ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ವಿದ್ಯಾರ್ಥಿ ಸನ್ಪಿತ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಇಪ್ಪತ್ತೈದು ವರ್ಷ ಸೇವೆಗೈದ ಶಿಕ್ಷಕಿ ಹೀಲ್ಡಾ ಡಿ' ಸೋಜ, ಕಾಲೇಜಿನ ಪರಿಚಾರಿಕೆ ಲೀಲಾವತಿ ಮೊದಲಾದವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೊಹಮ್ಮದ್ ನವಾಲ್ ರವರು ಧನ್ಯವಾದಗೈದರು. ಶಿಕ್ಷಕಿ ನಳಿನಿ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.
RCB Year Ender 2025: ಈ ವರ್ಷ ಐಪಿಎಲ್ನಲ್ಲಿ ಮರೆಯಲಾಗದ ಆರ್ಸಿಬಿ ಸಾಧನೆಗಳು ಹಾಗೂ ದುಃಖಕರ ಘಟನೆಗಳು
RCB Year Ender 2025: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ಬಗ್ಗುಬಡಿದು ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸವನ್ನೇ ಬರೆಯಿತು. ಇನ್ನೂ ಈ ವರ್ಷ ತಂಡದಲ್ಲಿ ಮರೆಯಲಾಗದಂತಹ ಸಂತೋಷಕರ ಹಾಗೂ ದುಃಖದ ಸಂಗತಿಗಳು ಕೂಡ ನಡೆದುಹೋದವು. ಹಾಗಾದ್ರೆ ಅವುಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಹೊಸ ವರ್ಷ 2026ರ ಎಂಟ್ರಿಗೆ
ಮಂಗಳೂರು | ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರ ವಶಕ್ಕೆ
ಮಂಗಳೂರು: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹನಮನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಮತ್ತು ಗೂಡಿನ ಬಳಿ ನಿವಾಸಿ ಮುಹಮ್ಮದ್ ಅಸೀಫ್ (35) ಬಂಧಿತ ಆರೋಪಿಗಳು. ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದ ಬಗ್ಗೆ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಟಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಕಾರು ಮತ್ತು ಆಟೋ ರಿಕ್ಷಾದ ಬಳಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಅವರನ್ನು ಹಿಡಿದು ಪೊಲೀಸರು ವಿಚಾರಿಸಿದಾಗ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಪಾಸಣೆ ನಡೆಸಿದಾಗ ಕಾರಿನಲ್ಲಿ 450 ಗ್ರಾಂ. ಗಾಂಜಾಹಾಗೂ ರಿಕ್ಷಾದಲ್ಲಿ 360 ಗ್ರಾಂ ಗಾಂಜಾ ಪತ್ತೆಯಾಗಿದೆೆ. ಒಟ್ಟು 810 ಗ್ರಾಂ ಗಾಂಜಾವನ್ನು ವಾಹನಗಳ ಸಮೇತ ಸ್ವಾಧೀನಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
IPL 2026- ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡ್ತಾರೋ ಇಲ್ವೋ ಡೌಟು; ಇದು ಮ್ಯಾನೇಜರ್ ಕಡೆಯಿಂದಾದ ಎಡವಟ್ಟು!
IPL Auction 2026- ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಕಣ್ಣಿರುವುದು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ. ಆದರೆ ಹರಾಜು ಪಟ್ಟಿಯಲ್ಲಿ ಅವರ ಹೆಸರು ಆಲ್ರೌಂಡರ್ ಗೆ ಬದಲಾಗಿ ಕೇವಲ ಬ್ಯಾಟರ್ ಎಂದು ನಮೂದಿಸಲ್ಪಟ್ಟಿದೆ. ಹೀಗಾಗಿ ಅವರು ಈ ಬಾರಿ ಬೌಲಿಂಗ್ ಮಾಡ್ತಾರೋ ಇಲ್ಲವೋ ಎಂಬ ಬಗ್ಗೆಯೇ ಗೊಂದಲ. ಮ್ಯಾನೇಜರ್ ತಪ್ಪು ತಿಳುವಳಿಕೆಯಿಂದಾಗಿ ಹೀಗಾಗಿದೆ ಎಂದು ಕ್ಯಾಮರೂನ್ ಗ್ರೀನ್ ಅವರು ಇದೀಗ ಸ್ಪಷ್ಟಪಡಿಸಿದ್ದಾರೆ. ಅವರು ಇದೀಗ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗುವ ಎಲ್ಲಾ ಸಾಧ್ಯತೆಗಳಿವೆ.
ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕ ಧೈರ್ಯದಿಂದ ಬಂದೂಕುಧಾರಿಯನ್ನು ಹಿಮ್ಮೆಟ್ಟಿಸಿ ಹಲವರ ಜೀವ ಉಳಿಸಿದ್ದಾನೆ. ಈ ಘಟನೆ ಯಹೂದಿ ಹಬ್ಬ ಹನುಕ್ಕಾ ಸಂದರ್ಭದಲ್ಲಿ ನಡೆದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
Hanur | ಮಲೆ ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ
ಚಾಮರಾಜನಗರ : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ಭಾಗ್ಯ(40) ಬಂಧಿತ ಆರೋಪಿ. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವವರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ, ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಭಾಗ್ಯ ಸಂಗ್ರಹಿಸಿಟ್ಟಿದ್ದ 230 ಗ್ರಾಂ ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಜಯರಾಮ, ಸಿಬ್ಬಂದಿಗಳಾದ ಸಿದ್ದರಾಮಯ್ಯ, ರಮೇಶ್, ಮಹೇಶ್, ಶಿವಮೂರ್ತಿ ಪಾಲ್ಗೊಂಡಿದ್ದರು.
ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಎದುರಿಸಿ: ಬಿಜೆಪಿಗೆ ಸವಾಲೆಸೆದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: “ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲು ಬಿಜೆಪಿಗೆ ನಾನು ಸವಾಲು ಹಾಕುತ್ತೇನೆ. ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧಿಸಿದರೆ ಅವರು ಎಂದಿಗೂ ಗೆಲ್ಲಲಾರರು ಎಂಬುದು ಅವರಿಗೆ ತಿಳಿದಿದೆ,” ಎಂದು ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಗೆ ಸವಾಲೆಸಿದಿದ್ದಾರೆ. ರಾಮ್ ಲೀಲಾ ಮೈದಾನದಲ್ಲಿ ರವಿವಾರ ನಡೆದ ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್, ಗಡ್ಡಿ ಛೋಡ್’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ವಯನಾಡ್ ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ, “ದೇಶದ ಸಂಸ್ಥೆಗಳನ್ನು ಸರ್ಕಾರದ ಮುಂದೆ ತಲೆ ಬಾಗಿಸಲಾಗುತ್ತಿದೆ. 10 ಸಾವಿರ ರೂ. ಪಾವತಿ ಪ್ರಕರಣದ ಮೇಲೆ ಚುನಾವಣಾ ಆಯೋಗ ಕಣ್ಣು ಮುಚ್ಚಿರುವುದು ಮತ ಕಳ್ಳತನಕ್ಕೆ ಸಾಕ್ಷಿಯಾಗಿದೆ,” ಎಂದು ಹೇಳಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಉಮಾ ಅವರಿಗೆ ಹೆರಿಗೆ ರಜೆ ನೀಡುವ ಮುನ್ನ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಿಬ್ಬಂದಿಗಳು ಉಮಾ ಅವರಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಇದು ಪೊಲೀಸ್ ಇಲಾಖೆಯ ಮಾನವೀಯ ಸ್ಪರ್ಶವನ್ನು ತೋರಿಸಿದೆ.
2026ರ ಅವಧಿಗೆ ಎಸ್ಐಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಬೆಂಗ್ರೆ ಅವಿರೋಧ ಆಯ್ಕೆ
ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಘಟಕ ಇದರ 2026ನೇ ಅವಧಿಗೆ ಮುಸ್ತಫಾ ಬೆಂಗ್ರೆ ಅವರು ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸುಫಿಯಾನ್ ಝೈನ್ ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಾಂಸ್ಥಿಕ ಪ್ರಕ್ರಿಯೆಯ ಮೂಲಕ ಈ ಚುನಾವಣೆ ನಡೆಸಲಾಯಿತು. ಮುಸ್ತಫಾ ಬೆಂಗ್ರೆ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಬಿಬಿಎ ಪದವಿಯನ್ನು ಪಡೆದಿದ್ದು, ಮಂಗಳೂರಿನ ಕಸ್ಬಾ ಬೆಂಗ್ರೆ ನಿವಾಸಿಯಾಗಿದ್ದಾರೆ. ಈ ಹಿಂದೆ ಅವರು ಎಸ್ಐಒ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮತ್ತು ಎಸ್ಐಒ ಮಂಗಳೂರು ನಗರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಫೇಸ್ಬುಕ್ ಪ್ರೇಯಸಿ ನಂಬಿ ಮಡಿಕೇರಿಗೆ ಬಂದ ಮಂಡ್ಯ ಹೈದ!; ಅರೆ ಬೆತ್ತಲಾಗಿ ರಸ್ತೆಗೆ ಓಡಿ ಬಂದವನು ಹೇಳಿದ್ದಿಷ್ಟು
ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯ ಮಾತಿಗೆ ಮರುಳಾಗಿ ಮಂಡ್ಯದಿಂದ ಮಡಿಕೇರಿಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿನಡೆಸಿ, ಅಮೂಲ್ಯ ವಸ್ತು ದೋಚಿದ ಘಟನೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಆತನನ್ನು ರೂಮಿನಲ್ಲಿ ಕೂಡಿಹಾಕಿದ್ದರು. ಸದ್ಯ ಅವರಿಂದ ತಪ್ಪಿಸಿಕೊಂಡು ಬಂದ ಆತ ಮಡಿಕೇರಿ ಠಾಣೆಗೆ ದೂರು ನೀಡಿದ್ದಾನೆ. ತಲೆಮರೆಸಿಕೊಂಡಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದಾಳಿಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸತ್ಯ–ಅಹಿಂಸೆಯೊಂದಿಗೆ ಮೋದಿ–RSS ಸರ್ಕಾರದ ವಿರುದ್ಧ ಹೋರಾಟ: ರಾಹುಲ್ ಗಾಂಧಿ
ಮತಗಳ್ಳತನ ವಿರೋಧಿಸಿ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ರ್ಯಾಲಿ
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ನ ನಿಜವಾದ ಉದ್ದೇಶ ಪ್ರಧಾನಿ ಮೋದಿಯವರನ್ನು ಮುಗಿಸುವುದೇ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದೆ.
LPG: ಕೇವಲ 300 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಘೋಷಿಸಿದ ಸರ್ಕಾರ
ಕೇಂದ್ರ ಸರ್ಕಾರವು ಸಬ್ಸಿಡಿ ಮೂಲಕ ಎಲ್ಪಿಜಿ ಸಿಲಿಂಡರ್ ಅನ್ನು ಮನೆಬಾಗಿಲಿಗೆ ತಲುಪಿಸುತ್ತಿದೆ. ಡಿಸೆಂಬರ್ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್ ದರ ಇಳಿಸುವ ಮೂಲಕ ಗುಡ್ನ್ಯೂಸ್ ಕೊಟ್ಟಿದೆ. ಆದರೆ ದಿನಬಳಕೆ ಸಿಲಿಂಡರ್ ದರ ಯತಾಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ ದಿನಬಳಕೆ ಎಲ್ಪಿಜಿ ದರ ₹855.50 ಇದೆ. ಆದರೆ ಅಸ್ಸಾಂ ಸರ್ಕಾರ ಕೇವಲ ₹300ಗೆ ಎಲ್ಪಿಜಿ ಸಿಲಿಂಡರ್ ಲಭ್ಯವಾಗುವಂತೆ ಪ್ರಮುಖ ಸಬ್ಸಿಡಿಯನ್ನು ಘೋಷಿಸಿದೆ.
ಅಕ್ಟೋಬರ್ 7ರ ದಾಳಿಯ ಪ್ರತೀಕಾರವಾಗಿ ಹಮಾಸ್ ಕಮಾಂಡರ್ ಹತ್ಯೆಮಾಡಿದ ಇಸ್ರೇಲ್ ; ಹಮಾಸ್ ಹೇಳಿದ್ದೇನು?
ಇಸ್ರೇಲ್ ಹಮಾಸ್ನ ಪ್ರಮುಖ ಕಮಾಂಡರ್ ರʼಆದ್ ಸಾದ್ ಅವರನ್ನು ಹತ್ಯೆ ಮಾಡಿದೆ. ಅಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ ಸಾದ್, ರಶೀದ್ ಕರಾವಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆಸಿದ್ದು, ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಮತ್ತು ಭದ್ರತಾ ಸಂಸ್ಥೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಈ ಹತ್ಯೆಯಿಂದ ಹಮಾಸ್ನ ಸಾಮರ್ಥ್ಯ ಕುಗ್ಗಲಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಸಹ ಈ ಸಾವಿನ ಬಗ್ಗೆ ದೃಢಪಡಿಸಿದೆ.
ಗೋವಾದಲ್ಲಿ ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಕ್ಕೆ ಕೊಕ್; ನೈಟ್ಕ್ಲಬ್ಗಳ ಮೇಲೆ ಕಠಿಣ ಕ್ರಮ
ಗೋವಾದಲ್ಲಿ 25 ಜೀವಗಳನ್ನು ಬಲಿ ಪಡೆದ ಅಗ್ನಿ ಅವಘಡದ ಬಳಿಕ, ರಾತ್ರಿ ಕ್ಲಬ್ಗಳ ಮೇಲೆ ಕಠಿಣ ಕ್ರಮ ಜಾರಿಯಾಗಿದೆ. ಕ್ರಿಸ್ಮಸ್-ಹೊಸ ವರ್ಷದ ಸಂಭ್ರಮಕ್ಕೆ ಮುನ್ನ, ನಿಯಮ ಉಲ್ಲಂಘಿಸಿದ ಹಲವು ಕ್ಲಬ್ಗಳನ್ನು ಮುಚ್ಚಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಪರವಾನಗಿ ಹಾಗೂ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ.
Ration: ರಾಜ್ಯದಲ್ಲಿ ಸದ್ಯ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿದೆ. ಈ ನಡುವೆಯೇ ಇದೀಗ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಭರ್ಜರಿ ಗುಡ್ ನ್ಯೂಸ್ವೊಂದನ್ನು ನೀಡಿದ್ದಾರೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಶ್ರೀಮಂತರು ಸಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು.
ಇಂದು ಭಾರತವು ಯುವ ದೇಶವೆಂದು ಹೆಮ್ಮೆಪಡುತ್ತದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ನಮ್ಮದು. ಆದರೆ ಈ ಯುವ ಶಕ್ತಿಯೇ ಇಂದು ತೀವ್ರ ಮಾನಸಿಕ ಸಂಕಟದಲ್ಲಿ ಮುಳುಗುತ್ತಿರುವುದು ದೊಡ್ಡ ಆತಂಕದ ಸಂಗತಿಯೂ ಹೌದು. ರಾಷ್ಟ್ರೀಯ ಅಪರಾಧ ದಾಖಲೆ ಕಚೇರಿ (ಎನ್ಸಿಆರ್ಬಿ)ಯ 2023ರ ವರದಿ ಪ್ರಕಾರ, ದೇಶದಲ್ಲಿ ಒಟ್ಟು 1,71,418 ಆತ್ಮಹತ್ಯೆಗಳ ಪ್ರಕರಣಗಳನ್ನು ದಾಖಲು ಮಾಡಿದೆ. ಇದರಲ್ಲಿ ಶೇ. 8.1 ಪ್ರಕರಣಗಳು, ಅಂದರೆ 13,892 ಆತ್ಮಹತ್ಯೆಗಳು ವಿದ್ಯಾರ್ಥಿಗಳದ್ದು. ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗಳು ಶೇ.65ರಷ್ಟು ಹೆಚ್ಚಾಗಿವೆ. 2013ರಲ್ಲಿ 8,423ರಿಂದ 2023ರಲ್ಲಿ 13,892ಕ್ಕೆ ಏರಿಕೆಯಾಗಿದೆ. ಇದು ರಾಷ್ಟ್ರೀಯ ಆತ್ಮಹತ್ಯೆ ದರದ ಶೇ.27.2 ಬೆಳವಣಿಗೆಗಿಂತಲೂ ಹೆಚ್ಚು. ಪ್ರತಿದಿನ ಸರಾಸರಿ 38 ವಿದ್ಯಾರ್ಥಿಗಳು ಆತ್ಮಹತ್ಯೆಯ ಜಾಲಕ್ಕೆ ಸಿಲುಕಿ ತಮ್ಮ ಉಸಿರು ನಿಲ್ಲಿಸುತ್ತಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಯುವಜನರ ಭವಿಷ್ಯಕ್ಕೆ ಮರಣ ಶಾಸನದಂತೆ ಭಾಸವಾಗುತ್ತಿದೆ. ಇಂದಿನ ಯುವ ಪೀಳಿಗೆಯ ಮೇಲೆ ಬೀಳುತ್ತಿರುವ ಒತ್ತಡವು ಅಪಾರ. ಶಿಕ್ಷಣ ಸಂಸ್ಥೆಗಳು ಜ್ಞಾನದ ದೀಕ್ಷೆ ನೀಡಬೇಕಾದ ಕೇಂದ್ರಗಳಾಗುವ ಬದಲು ಯುವಜನರನ್ನು ಪಣಕ್ಕಿಟ್ಟು ಸ್ಪರ್ಧೆ ನಡೆಸುವ ಬಯಲು ಭೂಮಿಯಾಗಿದೆ. ಹತ್ತನೇ ತರಗತಿ, ದ್ವಿತೀಯ ಪಿಯುಸಿ, ನೀಟ್, ಜೆಇಇ, ಸಿಇಟಿ ಇವೆಲ್ಲ ಯುವ ಮನಸ್ಸುಗಳಿಗೆ ಒಂದು ಯುದ್ಧದಂತೆ ಭಾಸವಾಗ ತೊಡಗಿದೆ. ಒಂದು ಅಂಕ ಕಡಿಮೆ ಬಂದರೆ ಮನೆಯಲ್ಲಿ ಗದರಿಕೆ, ಗೆಳೆಯರ ಮಧ್ಯೆ ಅವಮಾನ, ಶಿಕ್ಷಕರ ಕಣ್ಣಲ್ಲಿ ‘ದಡ್ಡಿ’ ಅಥವಾ ‘ದಡ್ಡ’ ಎಂಬ ಮುದ್ರೆ ಒತ್ತುವುದು ಇವೆಲ್ಲ ಯುವ ಜನರ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎನ್ಸಿಆರ್ಬಿ ದತ್ತಾಂಶಗಳ ಪ್ರಕಾರ, 2023ರಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿ ಆತ್ಮಹತ್ಯೆಗಳು ಪರೀಕ್ಷಾ ವಿಫಲತೆಯಿಂದ ಸಂಬಂಧಿಸಿವೆ. ಶೈಕ್ಷಣಿಕ ವಿಫಲತೆಯ ಭಯ, ಭವಿಷ್ಯದ ಅನಿಶ್ಚಿತತೆ, ಇವು ಅವರ ಮನಸ್ಸನ್ನು ಒಡೆಯುತ್ತಿದೆ. ಅನೇಕ ಶಾಲಾ-ಕಾಲೇಜುಗಳಲ್ಲಿ ಮನೋವೈದ್ಯರ ಸಹಾಯ, ಕೌನ್ಸೆಲಿಂಗ್ ಕೊಠಡಿಗಳು ಇಲ್ಲ. ಒಂದು ವೇಳೆ ಇದ್ದರೂ ಅದು ಕಾಗದದ ಮೇಲೆ ಮಾತ್ರ. ವಿದ್ಯಾರ್ಥಿಯೊಬ್ಬರು ಒತ್ತಡದಲ್ಲಿ ಇದ್ದರೆ ಅವನನ್ನು ‘ಮಾನಸಿಕ ರೋಗಿ’ ಎಂದು ಗುರುತು ಹಾಕಿ ಹೊರಗಿಡಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶದಂತಹ ರಾಜ್ಯಗಳು ಈ ಸಮಸ್ಯೆಯಲ್ಲಿ ಮುಂದಿವೆ, ಒಟ್ಟು ಮೂರನೇ ಒಂದು ಭಾಗ ಪ್ರಕರಣಗಳನ್ನು ಹೊಂದಿವೆ. ನಿರುದ್ಯೋಗ ಕೂಡ ಯುವಜನರನ್ನು ಕಾಡುತ್ತಿದೆ. ಲಕ್ಷಾಂತರ ಯುವಜನರು ಉತ್ತಮ ಶಿಕ್ಷಣ ಪಡೆದರೂ ಕೆಲಸ ಸಿಗದೆ ತತ್ತರಿಸುತ್ತಿದ್ದಾರೆ. 18ರಿಂದ 29 ವರ್ಷದ ಗುಂಪಿನಲ್ಲಿ ಒಟ್ಟು ಶೇ.17.1 ಆತ್ಮಹತ್ಯೆ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಶೇ.8.3 ಆತ್ಮಹತ್ಯೆಗಳು ನಿರುದ್ಯೋಗ ಸಮಸ್ಯೆಯಿಂದ ನಡೆದಿದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಒಂದು ಸಣ್ಣ ಕೆಲಸಕ್ಕೆ ಸಾವಿರಾರು ಅರ್ಜಿಗಳು ಬರುತ್ತವೆ. ಇದು ಯುವಜನರ ಆತ್ಮವಿಶ್ವಾಸವನ್ನು ಎಷ್ಟರ ಮಟ್ಟಿಗೆ ಕುಗ್ಗಿಸಿದೆ ಮತ್ತು ಬದುಕಿನ ಅಭದ್ರತೆ ಎಷ್ಟರ ಮಟ್ಟಿಗೆ ಯುವಜನರನ್ನು ಕಾಡುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ. ಇನ್ನು ಉದ್ಯೋಗ ಸಿಗದಿರುವುದು ಅಥವಾ ಸಣ್ಣ ಉದ್ಯೋಗಗಳನ್ನು ಪಡೆದುಕೊಂಡರೆ ಕುಟುಂಬದಲ್ಲಿ ಅವಮಾನಕ್ಕೆ ಒಳಗಾಗುವಂತೆ ಮಾಡುವುದಲ್ಲದೆ, ಹಣಕಾಸಿನ ಕೊರತೆ, ಕುಟುಂಬದ ಜಗಳಗಳು, ಪ್ರೇಮ ವೈಫಲ್ಯ, ಭವಿಷ್ಯದ ಭಯ ಇವೆಲ್ಲ ಸೇರಿ ಯುವ ಮನಸ್ಸನ್ನು ಕತ್ತಲೆಯ ಗುಹೆಗೆ ತಳ್ಳುತ್ತಿದೆ. ಎನ್ಸಿಆರ್ಬಿ ವರದಿಯ ಪ್ರಕಾರ, ಕುಟುಂಬ ಸಮಸ್ಯೆಗಳು ಕೂಡ ಶೇ. 31.9 ಆತ್ಮಹತ್ಯೆಗಳಿಗೆ ಕಾರಣವಾಗಿವೆ. ಕೆಲವೊಂದು ವರದಿಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಮಹಿಳಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ.61ರಷ್ಟು ಹಾಗೂ ಪುರುಷ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣ ಶೇ.50ರಷ್ಟು ಹೆಚ್ಚಾಗಿದೆ. ಮಹಿಳೆಯರ ಮೇಲಿನ ಒತ್ತಡ, ಮಹಿಳೆಯರ ಮೇಲಿನ ದೌರ್ಜನ್ಯದ ಕಾರಣದಿಂದ ಮಹಿಳಾ ಆತ್ಮಹತ್ಯಾ ಪ್ರಕರಣ ಹೆಚ್ಚಾಗಿದೆ ಎನ್ನಲಾಗುತ್ತಿದೆಯಾದರೂ, ಯುವತಿಯರಿಗೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವಿಧಿಸಲಾಗಿರುವ ಹೀನ ಕಟ್ಟುಪಾಡುಗಳು ಮತ್ತು ಯುವತಿಯರ ಸ್ವಾತಂತ್ರ್ಯ ದಮನವು ಕೂಡ ಅವರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುವಂತೆ ಮಾಡಿದೆ ಎನ್ನಲಾಗಿದೆ. ಯುವ ಜನರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರವೇ ಇಲ್ಲ ಎಂದಲ್ಲ, ಪರಿಹಾರ ಇದೆ. ಆದರೆ ಆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸರಕಾರಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಅನ್ನು ಕಡ್ಡಾಯಗೊಳಿಸಬೇಕು. ಮನೋವೈದ್ಯರನ್ನು ನೇಮಿಸಬೇಕು. ಮನಸ್ಸಿನ ಆರೋಗ್ಯದ ಬಗ್ಗೆ ತೆರೆದ ಚರ್ಚೆ ನಡೆಸಬೇಕು. ಪೋಷಕರು ಮಕ್ಕಳ ಶಿಕ್ಷಣದ ಗುಣಮಟ್ಟದ ಜೊತೆಗೆ ಬದುಕಿನ ಮೌಲ್ಯಗಳಿಗೆ ಮಹತ್ವ ಕೊಡಬೇಕು. ಸರಕಾರ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಸಮಾಜದಲ್ಲಿ‘‘ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವುದು ದೌರ್ಬಲ್ಯವಲ್ಲ’’ ಎಂಬ ಚಿಂತನೆಯನ್ನು ಬೆಳೆಸಬೇಕು. ಈ ಮೂಲಕ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಯುವಜನರು ಯಾವುದೇ ದೇಶದ ಒಂದು ಅತ್ಯಮೂಲ್ಯವಾದ ಮಾನವ ಸಂಪನ್ಮೂಲರಾಗಿದ್ದಾರೆ. ಅವರ ಸಂರಕ್ಷಣೆ ಮುಂದಿನ ಪೀಳಿಗೆಯ ಸಂರಕ್ಷಣೆಯೇ ಆಗಿದೆ. ಯುವ ಮನಸ್ಸುಗಳು ಸೂಕ್ಷ್ಮತೆಯಿಂದ, ಯೌವನದ ಶಕ್ತಿಯಿಂದ ತುಂಬಿರುತ್ತದೆ. ಇಂತಹ ಮನಸ್ಸುಗಳು ಆತ್ಮಹತ್ಯೆಗೆ ಸಿಲುಕಿ ಕೊಳ್ಳುತ್ತಿರುವ ಪ್ರಕರಣಗಳು ನಿಜಕ್ಕೂ ಆಘಾತಕಾರಿ ಎನಿಸಿಕೊಳ್ಳುತ್ತದೆ. ಹೀಗಾಗಿ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನಹರಿಸಬೇಕು, ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಬೇಕಾಗಿದೆ.
ನಕಲಿ ಬಳಕೆದಾರರ ಐಡಿಗಳ ಹಾವಳಿ ತಡೆಯಲು ರೈಲ್ವೆ ಇಲಾಖೆ ಕಠಿಣ ಕ್ರಮ
ರೈಲ್ವೇ ಇಲಾಖೆ ನಕಲಿ ಐಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ 3.03 ಕೋಟಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪ್ರತಿದಿನ ಸುಮಾರು 5,000 ಹೊಸ ಬಳಕೆದಾರರ ಐಡಿಗಳು ಸೇರುತ್ತಿವೆ. ಇ-ಟಿಕೆಟಿಂಗ್ ಮೂಲಕ ಶೇ.87 ಕ್ಕಿಂತ ಹೆಚ್ಚು ಟಿಕೆಟ್ ಬುಕ್ ಆಗುತ್ತಿವೆ. ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತಾಗಿದೆ. ವ್ಯವಸ್ಥೆ ಪಾರದರ್ಶಕವಾಗುತ್ತಿದೆ.
ಅಡಿಕೆಗೆ ಯಾರಿಟ್ಟರು ಈ ಚುಕ್ಕಿ? ಕಪ್ಪು ಚುಕ್ಕಿ!
ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ. ಅಂತೂ ಇಂತೂ ಅಲ್ಪಸ್ವಲ್ಪ ಬೆಳೆವಿಮೆ ರೈತರ ಖಾತೆಗೆ ಜಮಾ ಆಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೊತ್ತ ತುಂಬಾ ಕಡಿಮೆಯೇ. ರೈತರ ನಿರೀಕ್ಷೆ ಮತ್ತು ಕಾತರ ಮಾತ್ರ ಬೇರೆ ವರ್ಷಗಳಿಗಿಂತ ಜಾಸ್ತಿಯೇ ಇತ್ತು. ಇದಕ್ಕೆ ಬಲವಾದ ಕಾರಣ ಈ ವರ್ಷದ ಅತಿವೃಷ್ಟಿ. ದೀರ್ಘಾವಧಿ ಬೀಸು ಮಳೆ ಬಯಲು ಸೀಮೆಯೂ ಸೇರಿ ಎಲ್ಲೆಡೆಯ ರೈತರನ್ನು ಹೈರಾಣಮಾಡಿದೆ. ಅಲ್ಪಕಾಲೀನ ಬೆಳೆಗಳಿಗಿಂತ ಈ ಬಾರಿ ಹೆಚ್ಚು ಪೆಟ್ಟು ತಿಂದವರು ಬಹುವಾರ್ಷಿಕ ಬೆಳೆಗಾರರು. ಬಹು ಮುಖ್ಯವಾಗಿ ಕರಾವಳಿ- ಮಲೆನಾಡಿನ ಅಡಿಕೆ ಕೃಷಿಕರು. ಕಳೆದ ಒಂದೆರಡು ವರ್ಷಗಳಿಂದ ಎಲೆಚುಕ್ಕಿ, ಹಳದಿ, ಬೇರು ಹುಳ, ಚಂಡೆ, ಮುಂಡುಸಿರಿ ಮುಂತಾದ ಅನೇಕ ಕಾಯಿಲೆಗಳಿಂದ ಈ ಭಾಗದ ರೈತರು ಉತ್ಪಾದನೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದ್ದಾರೆ. ಆದಾಯ ಕುಂಠಿತಗೊಂಡು ಬಹಳಷ್ಟು ರೈತರಿಗೆ ಕಾಲಿಗೆಳೆದರೆ ತಲೆಗಿಲ್ಲದಂತಹ ಸ್ಥಿತಿ. ಕಳೆದೊಂದು ಶತಮಾನದಿಂದ ಈ ಭೂಭಾಗದ ನೆಲದವರ ಮಾನ ಕಾಪಾಡಿದ, ಕಿಸೆಗೆ ಒಂದಷ್ಟು ಕಾಸು ತುರುಕಿಸಿದ ಅಡಿಕೆ ಅವರ ಅನೇಕ ಸಂಕಷ್ಟಗಳಿಗೆ ನೆರವಾಗಿದೆ. ಮನೆ, ಕಾರು, ಮಕ್ಕಳ ಓದು, ಮದುವೆ, ಉದ್ಯಮ, ರಾಜಕಾರಣ, ದೇವರ ಅಭಿವೃದ್ಧಿ ಹೀಗೆ ಎಲ್ಲದಕ್ಕೂ ಅಡಿಕೆ ನೆರವಿಗೆ ನಿಂತಿದೆ. ಮಲೆನಾಡಿನ ಎಷ್ಟೋ ಬಡವರ ಮಕ್ಕಳು, ಡಾಕ್ಟರ್ ಆಗುವುದಕ್ಕೆ ಇಂಜಿನಿಯರ್ ಓದುವುದಕ್ಕೆ, ಸ್ಥಳೀಯ ಶಾಲಾ-ಕಾಲೇಜುಗಳಲ್ಲೇ ಓದಿ ಮುಂದೆ ಮಹಾನಗರಗಳಿಗೆ ಸೇರಿಕೊಳ್ಳುವುದಕ್ಕೆ ಅಡಿಕೆ ಹೆದ್ದಾರಿಯಾಗಿತ್ತು. ಈ ಭಾಗದ ದೇವಸ್ಥಾನ, ನಾಗಮಂಡಲ, ಬ್ರಹ್ಮಕಲಶ, ಭೂತ ದೈವಸ್ಥಾನಗಳ ಅಭಿವೃದ್ಧಿಗೆ ಈ ನೆಲದ ಅಡಿಕೆ ಸಹಾಯಹಸ್ತ ಚಾಚಿದೆ. ಯಕ್ಷಗಾನ, ರಂಗಭೂಮಿ, ಶಾಲಾ ವಾರ್ಷಿಕೋತ್ಸವದವರೆಗೂ ಅಡಿಕೆಯ ದುಡ್ಡು ಬುನಾದಿಯಾಗಿದೆ. ಅಡಿಕೆ ಸುಸ್ಥಿರವಾಗಿ ನಿಂತ ಕಾರಣಕ್ಕೆ ಸಾವಿನ ನಕ್ಷೆಯಲ್ಲಿ ಈ ಭಾಗದ ರೈತರ ಆತ್ಮಹತ್ಯೆಯ ಸಂಖ್ಯೆ ತುಂಬಾ ಕಡಿಮೆ. ಪ್ರಭುತ್ವದ ವಿರುದ್ಧ ರೈತ ಹೋರಾಟ ಬಂಡಾಯ, ಹಕ್ಕೊತ್ತಾಯ, ಪ್ರತಿಭಟನೆಗಳೂ ಕಡಿಮೆಯೇ. ಉತ್ತರ ಭಾರತದ ಸಾವಿರಾರು ವಲಸೆ ಕಾರ್ಮಿಕರಿಗೆ ಇಲ್ಲಿಯ ಅಡಿಕೆ ತೋಟಗಳು ದುಡಿಮೆಗೆ ದಾರಿಯಾಗಿ ಆಶ್ರಯ ನೀಡಿವೆ. ತೆರಿಗೆ ಇಲ್ಲದ ಅಡಿಕೆ ದೊಡ್ಡ ಕೃಷಿಕರಿಗೆ ಕೈ ತುಂಬಾ ಕಾಸು ತುಂಬಿ ಕೌಟುಂಬಿಕ ಮೂಲ ಸರಳತೆ ಮರೆಯಾಗಿ ಆ ಜಾಗದಲ್ಲಿ ಪ್ರತಿಷ್ಠೆ, ವೈಭವ, ಆಡಂಬರ, ವೈಭೋಗಗಳು ಪ್ರತಿನಿತ್ಯಮೆರೆದದ್ದೂ ಹೌದು. ಹಳ್ಳಿಯ ದುಡ್ಡು ನಗರಕ್ಕೂ ರಾಚಿದೆ. ಎಷ್ಟೋ ರೈತರು ಮಹಾನಗರದ ನಡುವೆ ಮನೆ, ಸೈಟ್, ಅಂಗಡಿ ಖರೀದಿಸಿದ್ದಾರೆ. ಗ್ರಾಮದ ಮನೆ ಅಂಗಳದಲ್ಲಿ ಮುಗಿಯಬೇಕಾದ ಕುಟುಂಬದ ಸರಳ ಕೂಡುಕಾರ್ಯಕ್ರಮಗಳು ದುಡ್ಡಿನ ದಾರಿಯಲ್ಲಿ ಪೇಟೆಗೂ ನುಸುಳಿಕೊಂಡು ಬಣ್ಣ ಪಡೆದು ಕೊಂಡಿವೆ. ಸಹಜ ಸಂಪ್ರದಾಯಗಳನ್ನೆಲ್ಲ ಅಡಿಕೆಯ ದುಡ್ಡು ಕಬಳಿಸಿ ಪೇಟೆಯ ಮಾಲ್-ಹಾಲ್ಗಳಲ್ಲಿ ರಂಗೋಲಿ ಇಟ್ಟಿದೆ. ಹೀಗೆ ಕರಾವಳಿ-ಮಲೆನಾಡಿನ ಲಕ್ಷಾಂತರ ರೈತರ ಬದುಕನ್ನು ಲೆಕ್ಕಕ್ಕಿಂತ ಹೆಚ್ಚು ಬೆಳಗಿದ ಅಡಿಕೆಗೆ ಈಗ ಈ ಶತಮಾನದಲ್ಲೇ ಕೇಳರಿಯದ ರೋಗಗಳು ಒಮ್ಮೆಲೇ ಬಂದು ಅಪ್ಪಳಿಸಿದೆ. ವಿಪರೀತ ಮಳೆಗೆ ಅಡಿಕೆ ಕೊಳೆರೋಗಕ್ಕೆ ಕರಗಿ ಹೋಗುವುದನ್ನು ಬಿಟ್ಟರೆ ಈ ಹಿಂದೆ ಬೇರೆ ಮಹಾಮಾರಿಗಳು ಈ ಪ್ರಮಾಣದಲ್ಲಿ ವಕ್ಕರಿಸಿದ ದೃಷ್ಟಾಂತಗಳು ಬಹಳ ಕಡಿಮೆ. ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ. ಕಾಸರಗೋಡಿನ ಬದಿಯಡ್ಕದಿಂದ ಶೃಂಗೇರಿ ಕೊಪ್ಪದ ದಾರಿಯಲ್ಲಿ ಬಾಳೆಹೊನ್ನೂರುವರೆಗೆ ಹೆದ್ದಾರಿ ಗುಂಟ ಸಾಗಿದರೆ ಅಲ್ಲಲ್ಲಿ ಇಕ್ಕಡೆಯ ಅಡಿಕೆ ತೋಟಗಳು ಸಹಜ ಬಣ್ಣ ಕಳೆದುಕೊಂಡು ವಿಕಾರವಾಗಿ ನಿಂತ ದೃಶ್ಯ ಕಂಗಡಿಸುತ್ತದೆ. ಈ ಹೊತ್ತಿಗೆ ನಾಲ್ಕೈದು ಗೊನೆದೂಗಿ ಕೊಯ್ಲು ಶುರು ಮಾಡುವ ರೈತಾಪಿಗಳಿಗೆ ಧನ್ಯತೆಯ ಭಾವ ಸೃಷ್ಟಿಸಬೇಕಾದ ಕಂಗುಗಳು ಇದ್ದಗೊನೆಗಳಿಗೂ ತೂಕವಿಲ್ಲದೆ ಬಸವಳಿದು, ಸೋಗೆಗಳೆಲ್ಲ ಕರಟಿ ಕೊನೆಚಿಗುರೊಂದು ಮಾತ್ರ ಹಸಿರಾಗಿ ಭೂತದ ಹಾಗೆ ಭಯ ಹುಟ್ಟಿಸುತ್ತಾ ನಿಂತದ್ದನ್ನು ಕಾಣಬಹುದು. ‘‘ಹಳ್ಳಿ ಮನೆಯ ನಮ್ಮ ತೋಟಕ್ಕೆ ಮುಂದೆ ವಾರುಸುದಾರರಿಲ್ಲ, ಗ್ರಾಮಗಳೆಲ್ಲ ವೃದ್ಧಾಶ್ರಮವಾಗುತ್ತಿದೆ, ಹೊಸ ತಲೆಮಾರು ಪಟ್ಟಣಕ್ಕೆ ದಾಂಗುಡಿ ಇಡುತ್ತಿದೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ನಾವು ಕೆಟ್ಟೆವು. ವಯಸ್ಸಾಗಿ ನಡೆಯಲಾರದ ಹೊತ್ತು ಪೊರೆಯುವ ಮಕ್ಕಳು ಮನೆಯಲ್ಲಿ ಇಲ್ಲ, ಜೊತೆಗಿಲ್ಲ’’ ಎಂದು ಕುರುಬುವ ತೋಟದ ಮಾಲಕರೆಲ್ಲ ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ‘‘ನಮ್ಮ ಮಕ್ಕಳಿನ್ನು ಊರಿಗೆ ಬರುವುದೇ ಬೇಡ. ನಾವೇ ಬೆಂಗಳೂರಿಗೆ ಹೊರಡುತ್ತೇವೆ. ಕಾರಣ ನಮಗಿಲ್ಲಿ ಏನೂ ಉಳಿದಿಲ್ಲ’’ ಎನ್ನುವ ಹತಾಶೆ ಸಂಕಟ ಬಾಳೆಹೊನ್ನೂರಿನ ರಾಘವೇಂದ್ರ ಅವರದು. ಶೃಂಗೇರಿ ಕೊಪ್ಪದ ಕಡೆ ಶತಶತಮಾನಗಳಿಂದ ಲಕ್ಷಾಂತರ ರೈತರನ್ನು ಪೋಷಿಸಿದ ಅಡಿಕೆ ಮಕಾಡೆ ಮಲಗಿದೆ. ರಾಜ್ಯ ರಸ್ತೆಯ ಹಾದಿ ಬದಿಯ ತೋಟಗಳೆಲ್ಲ ಈಗಾಗಲೇ ರಿಯಲ್ ಎಸ್ಟೇಟ್ ಆಗಿ ಬದಲಾಗುತ್ತಿವೆ. ನಾಗರಿಕ ಜಗತ್ತಿನಿಂದ ದೂರದ ಹಳ್ಳಿಯ ರೈತರಿಗೆ ಪರ್ಯಾಯಗಳೇ ಇಲ್ಲ. ತಲೆತಲಾಂತರದಿಂದ ದುಡಿದು ಬದುಕಿದ ಮನೆ ತೋಟ ಎಲ್ಲವನ್ನು ಕಳಚಿ ಕೊಂಡು ಹೊರಗಡೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೊಪ್ಪ ತಾಲೂಕಿನ ಲಕ್ಷ್ಮೀನಾರಾಯಣ ಕಡಮನೆಯವರು ಕಳೆದ ಎರಡು ವರ್ಷಗಳಿಂದ ಎಲೆ ಚುಕ್ಕಿಯ ಗಂಭೀರ ಸಮಸ್ಯೆಗೆ ಒಳಗಾದವರು. ತೋಟದೊಳಗಡೆ ಕಳೆದ 40 ವರ್ಷಗಳಿಂದ ಹಳದಿ ಎಲೆ ಕಾಯಿಲೆ ಇದ್ದರೂ ಎಲೆ ಚುಕ್ಕಿ ವಕ್ಕರಿಸಿದ್ದು ಎರಡು ವರ್ಷಗಳಿಂದ. ಗಂಭೀರ ಪರಿಣಾಮದಿಂದಾಗಿ ಈಗಾಗಲೇ 2,000ದಷ್ಟು ಅಡಿಕೆ ಮರಗಳನ್ನು ಕಡಿದುರುಳಿಸಿದ್ದಾರೆ. ಅಡಿಕೆಯ ತಲೆಗೂ ಬುಡಕ್ಕೂ ಬಹುವಿಷಗಳನ್ನು ಸಿಂಪಡಿಸಿ ಸುರಿದು ಸುರಿದು ಸಾಕಾಗಿದೆ. ಔಷಧಿ ಉತ್ಪಾದಿಸುವವನಿಗೂ, ಮಾರುವವನಿಗೂ ಇನ್ನೂ ಎಲೆಚುಕ್ಕಿಗೆ ಖಚಿತ ಮದ್ದು ಯಾವುದೆಂದು ಗೊತ್ತಿಲ್ಲ. ದಿನಾ ಹೊಸ ವಿಷಗಳು ಸೇರಿಕೊಳ್ಳುತ್ತವೆ. ಪರಿಣಾಮ ಮಾತ್ರ ಸೊನ್ನೆ! ರೈತರು ಗೊಬ್ಬರದಂಗಡಿಯವರು ಕೊಡುವುದನ್ನೆಲ್ಲ ಆಸೆಯಿಂದ ತಂದು ಸಿಂಪಡಿಸುತ್ತಿದ್ದಾರೆ. ಇಲ್ಲೆಲ್ಲಾ ತೋಟಗಳಿಗೂ ಬಂದು ಇಂಥ ಕ್ರಿಮಿನಾಶಕಗಳನ್ನು ಮಾರುವವರು ಇದ್ದಾರೆ. ‘‘ಭೂಮಿ, ಮರ, ನೀರು, ಕೆಲಸದಾಳುಗಳು ಎಲ್ಲವೂ ನನ್ನವೇ. ಮೆಡಿಸಿನ್ ನಿಮ್ಮದು. ನೀವಿಲ್ಲಿ ಯಾವುದೇ ಪ್ರಯೋಗ ಮಾಡಿ. ನನಗೆ ಎಲೆಚುಕ್ಕಿ ವಾಸಿಯಾಗಬೇಕು, ನನ್ನ ತೋಟ ಹಿಂದಿನಂತಾಗಬೇಕು, ಕಾಯಿಲೆವಾಸಿಯಾದ ಮೇಲೆ ನೀವು ಬಯಸಿದಷ್ಟು ಫೀಸು ಕೊಡುವೆ ಎಂದ ಮೇಲೆ ಈಗ ಔಷಧಿ ವ್ಯಾಪಾರಿಗಳು ನನ್ನ ಕಡೆ ಸುಳಿಯುವುದೇ ಇಲ್ಲ’’ ಎನ್ನುತ್ತಾರೆ ಲಕ್ಷ್ಮೀನಾರಾಯಣ ಕಡಮನೆಯವರು ‘‘ಇಷ್ಟಾದರೂ ನಾನಿನ್ನೂ ಭರವಸೆ ಕಳೆದುಕೊಂಡಿಲ್ಲ. ಸತ್ತ ಮರ ತೆಗೆದು ಸ್ವಲ್ಪ ಭಾಗದಲ್ಲಾದರೂ ಹೊಸ ಗಿಡ ನೆಟ್ಟು ಬೆಳೆಯಬೇಕೆಂದಿದ್ದೇನೆ. ಅಡಿಕೆ ನಮ್ಮ ರಕ್ತದಲ್ಲೇ ಇದೆ, ಪರಂಪರೆಯಿಂದ ಬಂದಿದೆ. ನೂರಾರು ವರ್ಷಗಳ ಇತಿಹಾಸವಿದೆ. ನಾವು ಅದನ್ನು ಸಾಕಿದ್ದೇವೆ, ಅದು ನಮ್ಮನ್ನು ಪೋಷಿಸಿದೆ. ಇಲ್ಲೆಲ್ಲ ಅಡಿಕೆ ನಾಶ ಆದ ಜಾಗದಲ್ಲೆಲ್ಲಾ ಕಾಫಿ ಬೆಳೆಯುವ ಪರ್ಯಾಯ ಕೃಷಿ ಆರಂಭವಾಗಿದೆ. ಆದರೆ ಆರ್ಥಿಕವಾಗಿ ಸಮಗಟ್ಟಬೇಕಾದರೆ ಅಡಿಕೆಯ ಒಂದು ಎಕರೆ ಜಾಗದಲ್ಲಿ 6 ಎಕರೆ ಕಾಫಿ ಬೆಳೆ ಬೇಕಾಗುತ್ತದೆ! ನಿರ್ವಹಣೆ ಕಾರ್ಮಿಕರ ಲಭ್ಯತೆ ಇವೆಲ್ಲ ಇವತ್ತಿಗೆ ತುಂಬಾ ದುಬಾರಿಯಾದದ್ದು’’ ಎನ್ನುತ್ತಾರೆ ಕಡಮನೆಯವರು ಬೆಳ್ತಂಗಡಿ - ಮೂಡಿಗೆರೆ ತಾಲೂಕುಗಳ ಗಡಿಭಾಗದ ಎಳೆನೀರು ಪ್ರದೇಶದಲ್ಲಿರುವ ರಾಜೇಂದ್ರ ಬಡಮನೆ ಸುಮಾರು 18 ಎಕರೆ ಅಡಿಕೆ ತೋಟದ ಮಾಲಕರು. ಒಂದು ಕಾಲದಲ್ಲಿ 45 ಟನ್ ಹಸಿ ಅಡಿಕೆ ಆಗುತ್ತಿದ್ದ ತೋಟದಲ್ಲಿ ಈಗ ಕೇವಲ ಒಂದೂವರೆ ಟನ್ ಮಾತ್ರ ಸಿಗುತ್ತಿದೆ. ‘‘ರೋಗಪೀಡಿತ ಹಳೆಮರಗಳನ್ನು ತೆಗೆದು ಹೊಸ ಗಿಡ ನೆಡುವುದರಲ್ಲೂ ನನಗೆ ನಂಬಿಕೆ ಇಲ್ಲ. ಕೇವಲ ಒಂದು ವರ್ಷದ ನರ್ಸರಿ ಗಿಡಗಳಿಗೆ ಎಲೆಚುಕ್ಕಿ ವಕ್ಕರಿಸುತ್ತಿದೆ ಎಂದರೆ ಯಾವ ಪ್ರಮಾಣದಲ್ಲಿ ಈ ರೋಗದ ಭೀಕರತೆ ಇದೆ ಎಂದು ನೀವೇ ಊಹಿಸಿ’’ ಎನ್ನುತ್ತಾರೆ ರಾಜೇಂದ್ರ. ಕೃಷಿತಜ್ಞರಿಗೆ ವಿಜ್ಞಾನಿಗಳಿಗೆ ಸಂಶೋಧನಾಲಯ ಕೃಷಿ ವಿಶ್ವವಿದ್ಯಾನಿಲಯ ಎಲ್ಲದಕ್ಕೂ ಈ ಕಾಲ ಅತ್ಯಂತ ಸವಾಲಿನದ್ದು. ಯಾರಿಗೂ ನಿಖರವಾಗಿ ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಡಿಕೆಗಾಗಿ ಹುಟ್ಟಿಕೊಂಡ ಸಂಸ್ಥೆಗಳು ಕೂಡ ನಿಸ್ತೇಜಗೊಂಡಂತಿದೆ. ‘‘ವಿಜ್ಞಾನಿಗಳು ತೋಟದಂಚಿನ ಪೇಟೆಗಳಲ್ಲಿ ಸಮುದಾಯ ಭವನಗಳಲ್ಲಿ ರೋಟರಿ ಹಾಲಲ್ಲಿ ರೈತರನ್ನು ಸೇರಿಸಿ ಸಭೆ ಮಾಡುತ್ತಿದ್ದಾರೆ. ನಿಜವಾಗಿ ಅವರು ಪ್ರಯೋಗಗಳನ್ನು ಮಾಡಬೇಕಾದದ್ದು ತೋಟದೊಳಗಡೆ. ಬನ್ನಿ, ಒಂದು ಎಕರೆ ಜಾಗ ನಿಮ್ಮ ಟ್ರಯಲ್ಗಾಗಿಯೇ ಕೊಡುತ್ತೇನೆ, ಅದಕ್ಕೆ ಬೇಕಾಗುವ ಇತರ ಸೌಲಭ್ಯವನ್ನು ಒದಗಿಸುವೆ ಎಂದರೂ ವಿಜ್ಞಾನಿಗಳು ನನ್ನ ತೋಟಕ್ಕೆ ಇಳಿಯುವುದಿಲ್ಲ. ನನ್ನ ಪ್ರಕಾರ ಖಂಡಿತ ಅಡಿಕೆಗೆ ಉಳಿಗಾಲ ಇಲ್ಲ’’ ಎನ್ನುತ್ತಾರೆ ಬಡಮನೆ. ಶಿವಮೊಗ್ಗ ಮೂಲದ ‘ಪುಸ್ತಕಮನೆ’ಯ ಸುಂದರರಿಗೆ ಕೊಪ್ಪದಲ್ಲಿ ಒಂದಷ್ಟು ತೋಟ ಇದೆ. ಫಲ ಬಿಡುವ ಹೊಸ ಗಿಡಗಳು ವಿಸ್ತರಿಸುತ್ತಾ ಹೋದ ಹಾಗೆಯೇ ಒಟ್ಟು ಆದಾಯದಲ್ಲಿ ಖೋತಾವೇ. ‘‘ಈಗೀಗ ತೋಟದೊಳಗಡೆ ಅಡಿಕೆ ಇದ್ದರೂ ಫಸಲು ಗೇಣಿಗೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಅಡಿಕೆ ತೂಕದಲ್ಲಿ ವಿಪರೀತ ತೇಮಾನು. ಎಲೆಚುಕ್ಕೆ, ಹಳದಿ ಎಲೆ, ಇವೆಲ್ಲ ಮರವನ್ನಷ್ಟೇ ಅಲ್ಲ ಅಡಿಕೆಯ ತೂಕವನ್ನು ಸಾಯಿಸುತ್ತಿದೆ’’ ಎನ್ನುತ್ತಾರೆ ಸುಂದರ್. ‘‘ಹಳದಿ ಎಲೆಯಾಗಲೀ ಎಲೆ ಚುಕ್ಕಿಯಾಗಲೀ ಅಧಿಕ ಗೊಬ್ಬರ-ಪೋಷಕಾಂಶಗಳಿಂದ ಮತ್ತೆ ಸುಸ್ಥಿತಿಗೆ ಬರುವುದಿಲ್ಲ ಎಂಬುವುದು ನನ್ನ ಅನುಭವ. ಅದು ಮತ್ತೆ ಇನ್ನೇನನ್ನು ಬಯಸುತ್ತಿದೆ. ಆ ‘ಇನ್ನೇನು’ ಎಂಬುವುದು ರೈತರ ಸುಪರ್ದಿಯಲ್ಲಿ ಈಗ ಇಲ್ಲ. ಅದನ್ನು ವಿಜ್ಞಾನಿಗಳು ಕೂಲಂಕಶವಾಗಿ ಅಧ್ಯಯನ ಮಾಡಬೇಕಾಗಿದೆ. ಅದು ಶಿಲೀಂಧ್ರದಿಂದ ಬರಬಹುದು ಅಥವಾ ಬೇರೆ ಬ್ಯಾಕ್ಟೀರಿಯಾ, ಬೇರೆ ವೈರಸ್ಗಳಿರಬಹುದು ಎಂಬ ಕಲ್ಪನೆಯ ಆಧಾರದಲ್ಲಿ ಅನೇಕ ಪರೀಕ್ಷೆಗಳು ನಡೆಯುತ್ತಲೇ ಇವೆ. ಆದರೆ ಇದರಿಂದ ಸಿಗುವ ಉತ್ತರಕ್ಕಿಂತ ಮತ್ತೆ ಹೊಸ ಹೊಸ ಪ್ರಶ್ನೆಗಳೇ ಹೆಚ್ಚುತ್ತಾ ಹೋಗುತ್ತವೆ. ಸಮಸ್ಯೆಯನ್ನು ಜಟಿಲಗೊಳಿಸುತ್ತಿವೆ. ವಿಶೇಷವೆಂದರೆ ಯಾವ ರೋಗಪೀಡಿತ ಅಡಿಕೆ ತೋಟ ಇದೆಯೋ ಅದರ ಮಧ್ಯೆಯೇ ಒಂದೆರಡು ಸದೃಢ ಯಾವುದೇ ಕಾಯಿಲೆ ಇಲ್ಲದ ಗಿಡಗಳು ಇರುವುದು! ಈಗ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಉತ್ತರವಾಗಬೇಕಾದ ಗಿಡಗಳು ಇವೇ ಆಗಿವೆ. ಇಂಥ ಗಿಡಗಳಿಂದಲೇ ಹೊಸ ಗಿಡಗಳ ತಳಿ ಅಭಿವೃದ್ಧಿ ಆಗಬೇಕು.ಟಿಶ್ಯೂ ಕಲ್ಚರ್ ಅಥವಾ ಕೃತಕ ಪರಾಗಸ್ಪರ್ಶದ ಮೂಲಕ ಇಂಥ ಸದೃಢ ಗಿಡಮೂಲಗಳಿಂದ ಹೊಸ ರೋಗನಿರೋಧಕ ಸಸಿಗಳನ್ನು ಅಭಿವೃದ್ಧಿಪಡಿಸಬೇಕು. ಈ ಸಾಧ್ಯತೆಯ ಬಗ್ಗೆ ಸಂಶೋಧನೆ ಆಗುತ್ತಿದೆ ಎಂಬುವುದು ಸಂತೋಷದ ಸಂಗತಿ. ಮುಂದೊಂದು ದಿನ ಇಂತಹ ರೋಗನಿರೋಧಕ ಗಿಡಗಳಿಂದಲೇ ಹೊಸ ಅಡಿಕೆ ತೋಟ ನಿರ್ಮಾಣವಾಗಬೇಕಾಗಿದೆ. ಸದ್ಯಪೂರ್ತಿ ಭರವಸೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಯಬೇಕಾದ ಒಂದು ಕಾಲದ ಮತ್ತು ಅಂತರದ ಅಗತ್ಯವಿದೆ’’ ಎನ್ನುತ್ತಾರೆ ಕಳೆದ ಅನೇಕ ವರ್ಷಗಳಿಂದ ಹಳದಿ ಎಲೆ ಮತ್ತು ಇತ್ತೀಚೆಗೆ ಎಲೆ ಚುಕ್ಕಿ ರೋಗಕ್ಕೆ ಬಾಧಿತರಾದ ಕೃಷಿಕ ರಮೇಶ್ ದೇಲಂಪಾಡಿ ಅವರು. ಸುಮಾರು 40 ವರ್ಷಗಳ ಹಿಂದೆ ತೆಂಗಿಗೆ ನುಸಿ ಪೀಡೆ ವಕ್ಕರಿಸಿತು. ಇವತ್ತಿಗೂ ನಮ್ಮ ತೆಂಗು ಮೊದಲಿನ ಆಕಾರ ಗಾತ್ರ ಸೌಂದರ್ಯವನ್ನು ಮತ್ತೆ ಪಡೆದಿಲ್ಲ. ಇವತ್ತಿಗೂ ಬಹುಪಾಲು ರೈತರಿಗೆ ಇರುವ ಅನುಮಾನ ಪ್ರಕೃತಿಗಿಂತಲೂ ಇದು ಮನುಷ್ಯನೇ ಸೃಷ್ಟಿಸಿದ, ಯಾವುದೋ ವಿದೇಶೀ ಹುನ್ನಾರದಿಂದ ಆದ ವಿಕೃತಿಯೆಂದು. ಅಡಿಕೆಯ ದಾರಿಯಲ್ಲೂ ಇದನ್ನು ಅಲ್ಲಗಳೆಯುವಂತಿಲ್ಲ. ಅಡಿಕೆ ಸದಾ ಹಸಿರಾಗಿರುವವರೆಗೆ ಈ ನೆಲದ ಜನರ ಬದುಕು ಕೂಡ ಹಸನಾಗಿರುತ್ತದೆ. ಅಡಿಕೆಗೆ ಬೆಲೆ ಇರುವ ತನಕ ಭೂಮಿಗೂ ಬೆಲೆ ಇರುತ್ತದೆ. ಬೆಳೆ ಕುಲಕೆಡಿಸಿಕೊಂಡ ಮೇಲೆ ರೈತರು ಕೊನೆಗೆ ಉಳಿಸಿಕೊಳ್ಳುವ ತುಂಡು ತುಂಡು ಭೂಮಿಯಾದರೂ ಯಾರಿಗೆ ಬೇಕು, ಯಾಕೆ ಬೇಕು?
ಸಿಡ್ನಿ, ಡಿ. 14: ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್ ನಲ್ಲಿ ಯಹೂದಿ ಸಮುದಾಯದ ಎಂಟು ದಿನಗಳ ಹಬ್ಬವಾದ ಹನುಕ್ಕಾ ಆಚರಣೆ ಆರಂಭವಾಗುತ್ತಿದ್ದ ವೇಳೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನ ಸಂಜೆ 6.30ರ ನಂತರ ಬೀಚ್ ಪ್ರದೇಶದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹನುಕ್ಕಾ ಹಬ್ಬದ ಮೊದಲ ರಾತ್ರಿ ಆಚರಣೆಗೆ ಸಂಬಂಧಿಸಿದ ‘ಚಾನುಕಾ ಬೈ ದಿ ಸೀ’ ಕಾರ್ಯಕ್ರಮಕ್ಕಾಗಿ ನೂರಾರು ಜನರು ಬೀಚ್ ನಲ್ಲಿ ಸೇರಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ವೇಳೆ ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿ ಸುಮಾರು 50 ಗುಂಡುಗಳು ಹಾರಿಸಲಾಗಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಾರ್ವಜನಿಕರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಭಾರತೀಯ ಕಾಲಮಾನ ಮಧ್ಯಾಹ್ನ 2.17ರ ಸುಮಾರಿಗೆ ನ್ಯೂ ಸೌತ್ ವೇಲ್ಸ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬೋಂಡಿ ಬೀಚ್ ನಲ್ಲಿ ಗುಂಡಿನ ದಾಳಿಯ ಬಗ್ಗೆ ತಿಳಿಸಿ, ಸ್ಥಳದಲ್ಲಿರುವವರು ಸುರಕ್ಷಿತ ಆಶ್ರಯ ಪಡೆಯುವಂತೆ ಎಚ್ಚರಿಕೆ ನೀಡಿದ್ದರು. ಬಳಿಕ ಪೊಲೀಸರು ಇಬ್ಬರು ಶೂಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಬೋಂಡಿಯಲ್ಲಿನ ದೃಶ್ಯಗಳು ಅತ್ಯಂತ ಆಘಾತಕಾರಿಯಾಗಿದೆ. ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ,” ಎಂದು ಹೇಳಿದ್ದಾರೆ. NSW ಸರ್ಕಾರ ಮತ್ತು ಫೆಡರಲ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕಿ ಸುಸಾನ್ ಲೇ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಾವೆಲ್ಲರೂ ಪ್ರೀತಿಸುವ ಬೋಂಡಿಯಂತಹ ಸ್ಥಳದಲ್ಲಿ ದ್ವೇಷಪೂರಿತ ಹಿಂಸಾಚಾರ ನಡೆದಿದೆ. ಶಾಂತಿ ಮತ್ತು ಭರವಸೆಯ ಸಂಕೇತವಾಗಿದ್ದ ಹನುಕ್ಕಾ ಆಚರಣೆಯ ವೇಳೆ ಈ ದಾಳಿ ಸಂಭವಿಸಿರುವುದು ಆತಂತಕಾರಿಯಾಗಿದೆ,” ಎಂದು ಹೇಳಿದ್ದಾರೆ.
ರೈತ ಉತ್ಪಾದಕರ ಸಂಸ್ಥೆಗಳ ಕೇಂದ್ರ ಪ್ರಾಯೋಜಿತ ಯೋಜನೆಯನ್ನು 2026 ರಿಂದ 2031ರ ವರೆಗೆ ಐದು ವರ್ಷಗಳ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ವಿಸ್ತರಣೆಯು ಯೋಜನೆ ಅನುಷ್ಠಾನದಲ್ಲಿನ ಅಡೆತಡೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಸುಮಾರು 10,000 ಎಫ್ಪಿಓಗಳು ಈಗಾಗಲೇ ರೂಪುಗೊಂಡಿದ್ದು, ಅವುಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲಾಗುವುದು. ಬಂಡವಾಳ ಮಿತಿಯನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಮತ್ತು ನಿಯಮಗಳ ಅನುಸರಣೆಗೆ ನೆರವು ನೀಡಲಾಗುವುದು ಎಂದು ಕೃಷಿ ಕಾರ್ಯದರ್ಶಿ ದೇವೇಷ ಚತುರ್ವೇದಿ ತಿಳಸಿದ್ದಾರೆ.
ಸಿಡ್ನಿಯ ಪ್ರಸಿದ್ಧ ಬೊಂಡಿ ಬೀಚ್ನಲ್ಲಿ ಗುಂಡಿನ ದಾಳಿ; ಹತ್ತು ಜನ ಸಾವು, ಇಬ್ಬರು ಶೂಟರ್ಗಳು ಅರೆಸ್ಟ್
ಆಸ್ಟ್ರೇಲಿಯಾದಬೊಂಡಿ ಬೀಚ್ನಲ್ಲಿ ಹನುಕ್ಕಾ ಎಂಬ ಹಬ್ಬ ಆಚರಣೆ ಮುಂದಾಗಿದ್ದ ಜನರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಭಯಾನಕ ದಾಳಿಯಿಂದಾಗಿ ಹತ್ತು ಜನರು ಮೃತಪಟ್ಟಿದ್ದು, ಇಬ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂದೂಕುಧಾರಿಗಳು ಮನಬಂದಂತೆ 50 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.. ಘಟನೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪ್ರಧಾನಿ ಆಘಾತ ವ್ಯಕ್ತಪಡಿಸಿದ್ದಾರೆ.
ಅಂಡರ್ 19 ಏಷ್ಯಾ ಕಪ್ ನಲ್ಲೂ `ನೋ ಹ್ಯಾಂಡ್ ಶೇಕ್!; ಪಾಕಿಸ್ತಾನದ ಜೊತೆ ಬಿಲ್ ಕುಲ್ ಇಲ್ಲ ಫ್ರೆಂಡ್ ಶಿಪ್
U 19 Asia Cup Ind Vs Pak Match- ಟೀಂ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಶುರುಮಾಡಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನ ಇದೀಗ ಅಂಡರ್ 19 ಕ್ರಿಕೆಟ್ ನಲ್ಲೂ ಕಾಣಿಸಿಕೊಂಡಿದೆ. ಭಾನುವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಭಾರತ ಅಂಡರ್ 19 ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಟಾಸ್ ವೇಳಿ ಪಾಕಿಸ್ತಾನ ತಂಡದ ನಾಯಕನ ಜೊತೆ ಕೈಕುಲುಕಲು ಮುಂದಾಗಲಿಲ್ಲ. ಅಷ್ಟೇ ಏಕ ಪರಸ್ಪರ ಮುಖ ಸಹ ನೋಡಲಿಲ್ಲ.
Year Ender 2025: ದೇಶದ ಶಿಕ್ಷಣ ಕ್ಷೇತ್ರ ಕಂಡ ಸಿಹಿ- ಕಹಿ ಕ್ಷಣಗಳು
Indian Education 2025: ಪ್ರಸಕ್ತ 2025ನೇ ವರ್ಷ ಪೂರ್ಣಗೊಳ್ಳಲು 15 ದಿನ ಮಾತ್ರ ಇದೇ. ಈ ಹೊಸ ವರ್ಷದಲ್ಲಿ ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಒಂದಷ್ಟು ಬೆಳವಣಿಗೆ ಆಗಿವೆ. ಈ ಬದಲಾವಣೆಗೆ ಸರ್ಕಾರಗಳು ಕಾರಣವಾಗಿವೆ. ಈ ವರ್ಷ ಭಾರತಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಕರ್ಷಕ ಪ್ರಗತಿ ಮತ್ತು ಗಮನಾರ್ಹ ಸವಾಲುಗಳನ್ನು ತಂದೊಡ್ಡಿದೆ. 2026ನೇ ಹೊಸ ವರ್ಷದ
ಚಳಿಗೆ ನಡುಗಿದ ಬಿಸಿಲುನಾಡು: ರಾಯಚೂರಿನಲ್ಲಿ ದಾಖಲೆಯ ಕನಿಷ್ಠ ತಾಪಮಾನ, ಜನಜೀವನ ತತ್ತರ
ರಾಯಚೂರು: ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಚಳಿಗೆ ನಡುಗುತ್ತಿರುವ ಜನರು ಬೆಳಗಿನ ಜಾವ ಹಾಗೂ ಸಂಜೆಯ ನಂತರ ಹೊರಗೆ ಬಾರಲು ಭಯ ಪಡುವಂತಾಗಿದೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಂದು ವಾರದಿಂದ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ರಾತ್ರಿ ಕನಿಷ್ಠ ತಾಪಮಾನ 14ರಿಂದ 11ರ ವರೆಗೂ ಕುಸಿಯುತ್ತಿದೆ. ಡಿಸೆಂಬರ್ 10ರಂದು ಸಹ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗಲೂ ಸಂಜೆ 5.30ರ ವೇಳೆಗೆ ಚಳಿ ಆವರಿಸತೊಡಗಿದೆ. ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ಚಳಿಗೆ ಜನ, ಜಾನುವಾರು ಹಾಗೂ ಬೆಳೆಗಳಿಗೂ ಸಂಕಷ್ಟ ತಂದೊಡ್ಡಿದೆ. ಜಾನುವಾರುಗಳು ಮೇಯಲು ಹಾಗೂ ರೈತರು ಹೊಲಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಅಲ್ಲದೇ ಕೂಲಿ ಕಾರ್ಮಿಕರು, ಹಾಲು,ಪೇಪರ್ ಹಾಕುವ ಹುಡುಗರು, ಬೀದಿ ವ್ಯಾಪಾ ರಿಗಳು ತತ್ತರಿಸಿದ್ದಾರೆ. ಚಳಿಗೆ ಹೆದರಿ ಅನೇಕರು ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುವುದನ್ನು ಕೈಬಿಟ್ಟಿದ್ದಾರೆ. ಚಳಿಗೆ ಅನೇಕರು ನೆಗಡಿ,ಕೆಮ್ಮಿನಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳು,ವಯೋವೃದ್ಧರು ಹೆಚ್ಚು ಹೊರಗೆ ತಿರುಗಾಡದಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಚಳಿಗೆ ತತ್ತರಿಸಿದ ರಾಯಚೂರಿನ ಜನ ಕಸ,ಚಿಕ್ಕ ಗಾತ್ರದ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ ಮೈ ಬೆಚ್ಚಗೆ ಮಾಡಿಕೊಳ್ಳುವ ದೃಶ್ಯಗಳು ಅಲ್ಲಲ್ಲಿಕಾಣಿಸುತ್ತಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಗ್ರಾಮೀಣ ಹವಾಮಾನ ಸೇವಾ ಘಟಕದ ಅಧಿಕಾರಿಗಳ ಪ್ರಕಾರ ಮುಂದಿನ ಐದು ದಿನಗಳವರೆಗೆ ರಾತ್ರಿಯ ತಾವಾನದಲ್ಲಿ ಸಾಮಾನ್ಯ ತಾಪಮಾನಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಶೀತದಿಂದ ಬೆಳೆಗಳನ್ನು ರಕ್ಷಿಸಲು ಸಂಜೆಯ ಸಮಯದಲ್ಲಿ ಲಘುವಾಗಿ ಆಗಾಗ ನೀರು ಹಾಯಿಸಬೇಕು. ಎಳೆಯ ಹಣ್ಣಿನ ಗಿಡಗಳನ್ನು ಒಣ ಹುಲ್ಲಿನ ಅಥವಾ ಪಾಲಿಥಿನ್ ಹಾಳೆಗಳು ಅಥವಾ ಗೋಣಿ ಚೀಲಗಳಿಂದ ರಕ್ಷಿಸಬೆಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು 0.25 ಮಿ.ಲೀ ನ್ಯಾಪ್ತಲಿನ್ ಎಸಿಟಿಕ್ ಎಸಿಡ್ (ಪ್ಲಾನೊಫಿಕ್ಸ್) ಮತ್ತು ಶೇಕಡ 1% ರಷ್ಟು 19:19:19 (10 ಗ್ರಾಂ. ಪ್ರತಿ ಲೀಟರ್ ನೀರಿಗೆ) ಬೆರಸಿ ಸಿಂಪಡಿಸಬೆಕು ಎಂದು ಸಲಹೆ ನೀಡಿದ್ದಾರೆ. ರಾತ್ರಿ ತಾಪಮಾನ ಇಳಿಕೆಯಾಗುತ್ತಿರುವ ಕಾರಣ ಜಾನುವಾರುಗಳನ್ನು ಬೆಚ್ಚಗಿನ ಕೊಟ್ಟಿಗೆಯಲ್ಲಿ ಕಟ್ಟಬೇಕು. ದನಗಳಿಗೆ ಕಾಲು, ಬಾಯಿ ರೋಗ ಬರುವ ಸಾಧ್ಯತೆ ಇರುವುದರಿಂದ ಚುಚ್ಚುಮದ್ದು ಹಾಕಿಸಬೇಕು. ಒಣಮೇವನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಚೀಲದಲ್ಲಿ ತುಂಬಿಡಬೇಕು. ಬೆಳಗಿನ ವೇಳೆಯಲ್ಲಿ ದನಗಳನ್ನು ಮೇಯಲು ಬಿಡಬಾರದು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ. ಬೆಳಗಿನ ಸಮಯದಲ್ಲಿ ಮಂಜು ಬೀಳುವುದರಿಂದ ಬೆಳೆಯಲ್ಲಿ ರೋಗಗಳ ಬಾಧೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ. ರೈತರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳ ಬೇಕು. ಶೀತ ವಾತಾವರಣದಲ್ಲಿ ಕಳಪೆ ಬೇರಿನ ಚಟುವಟಿಕೆಯಿಂದಾಗಿ ಸಸ್ಯವು ಪೋಷ ಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ಪೋಷಕಾಂಶಗಳನ್ನು ಸಿಂಪಡಣೆಯ ಮೂಲಕ ಕೊಡಬೇಕು. - ತಿಮ್ಮಣ್ಣ ನಾಯಕ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ. ಚಳಿಗೆ ಹೊರಗೆ ಬಾರಲು ಆಗುತ್ತಿಲ್ಲ, ಬೆಳಗ್ಗೆ 6 ಗಂಟೆಗೆ ಏಳುತ್ತಿದ್ದೆ. ಈಗ 8 ಗಂಟೆಗೆ ಏಳುವಂತಾಗಿದೆ, ಮಧ್ಯಾಹ್ನ ಬಿಸಿಲು ಇದ್ದರೂ ಗಾಳಿ ಬೀಸುತ್ತಿದ್ದು ಶೀತವಾಗುತ್ತಿದೆ. -ಮಲ್ಲಪ್ಪ, ರಾಯಚೂರು ನಿವಾಸಿ
ದೀಪಾ ಭಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ ನಡೆ ಖಂಡನೀಯ: ಮೀನಾಕ್ಷಿ ಬಾಳಿ
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಆಗಿದ್ದಾರೆ. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ 'ಹಾರ್ಟ್ ಲೈಟ್' ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತಿದ್ದರಲ್ಲದೆ ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿದಲ್ಲಿದ್ದರು. ಆದರೆ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲ ಕಾರಸ್ಥಾನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ ಎಂದರು. ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿಗಳೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ ಎಂದು ಹೇಳಿದರು. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನವನ್ನು ಖಂಡಿಸುತ್ತೇವೆ. ವಿವಿಯ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕೆಂದು ಪ್ರೊ.ಆರ್.ಕೆ ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ ದತ್ತಾ ಇಕ್ಕಳಕಿ, ಡಾ.ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ, ಭೀಮಾಶಂಕರ ಬಿರಾದಾರ ಸೇರಿದಂತೆ ಹಲವರು ವಿಚಾರವಾದಿಗಳು ಆಗ್ರಹಿಸಿದ್ದಾರೆ.
ದೀಪಾ ಬಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ ನಡೆ ಖಂಡನೀಯ: ಮೀನಾಕ್ಷಿ ಬಾಳಿ
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಆಗಿದ್ದಾರೆ. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ 'ಹಾರ್ಟ್ ಲೈಟ್' ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತಿದ್ದರಲ್ಲದೆ ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿದಲ್ಲಿದ್ದರು. ಆದರೆ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲ ಕಾರಸ್ಥಾನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ ಎಂದರು. ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿಗಳೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ ಎಂದು ಹೇಳಿದರು. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನವನ್ನು ಖಂಡಿಸುತ್ತೇವೆ. ವಿವಿಯ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕೆಂದು ಪ್ರೊ.ಆರ್.ಕೆ ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ ದತ್ತಾ ಇಕ್ಕಳಕಿ, ಡಾ.ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ, ಭೀಮಾಶಂಕರ ಬಿರಾದಾರ ಸೇರಿದಂತೆ ಹಲವರು ವಿಚಾರವಾದಿಗಳು ಆಗ್ರಹಿಸಿದ್ದಾರೆ.
ಪತ್ನಿ ಕೊಂದ ಆರೋಪದಡಿ ಭಾರತೀಯ ಮೂಲದ ವ್ಯಕ್ತಿಗೆ ಕುವೈತ್ನಲ್ಲಿ ಗಲ್ಲು ಶಿಕ್ಷೆ ಪ್ರಕಟ
ಕುವೈತ್ನಲ್ಲಿ ವೈವಾಹಿಕ ಕಲಹದಲ್ಲಿ ಪತ್ನಿಯನ್ನು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಲ್ಮಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಆರೋಪಿ ಪತ್ನಿಯ ತಲೆಗೆ ಮಾರಕಾಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆ. ಹೀಗಾಗಿ ಗಲ್ಲು ಶಿಕ್ಷೆ ಪ್ರಕಡ ಮಾಡಿದೆ. ಈ ಹಿಂದೆಯೂ ಯುಎಇನಲ್ಲಿ ಮಗು ಕೊಲೆಗೈದ ಭಾರತೀಯ ಮಹಿಳೆಗೂ ಗಲ್ಲುಶಿಕ್ಷೆಯಾಗಿತ್ತು. ಇದು ವಿದೇಶಗಳಲ್ಲಿ ಕಾನೂನು ಪಾಲನೆ ಅತ್ಯಗತ್ಯ ಎಂಬುದನ್ನು ತಿಳಿಸುವಂತೆ ಮಾಡುತ್ತವೆ.
Goa ಕರಾವಳಿಯಲ್ಲಿ ಉಕ್ರೇನಿನ ಪ್ರಜೆಗೆ ಹೃದಯಾಘಾತ: ಕೋಸ್ಟ್ ಗಾರ್ಡ್ನಿಂದ ರಕ್ಷಣೆ
ಹೊಸದಿಲ್ಲಿ: ಗೋವಾ ಕರಾವಳಿಯಲ್ಲಿ ಸಾಗುತ್ತಿದ್ದ ಮರ್ಚೆಂಟ್ ಹಡಗಿನಲ್ಲಿ ಹೃದಯಾಘಾತಕ್ಕೊಳಗಾದ 62 ವರ್ಷದ ಉಕ್ರೇನಿನ ಪ್ರಜೆಯನ್ನು ಭಾರತೀಯ ಕೋಸ್ಟ್ ಗಾರ್ಡ್ (ICG) ಶನಿವಾರ ತುರ್ತು ವೈದ್ಯಕೀಯ ನೆರವು ನೀಡುವ ಮೂಲಕ ಸ್ಥಳಾಂತರ ಮಾಡಿ ರಕ್ಷಿಸಿದೆ. ಮಾಲ್ಟಾದ ಧ್ವಜ ಹೊಂದಿದ್ದ ಎಂವಿ ಇಂಟರ್ಯಾಸಿಯಾ ಆಂಪ್ಲಿಫೈ ಹಡಗಿನಿಂದ ಬಂದ ತುರ್ತು ಕರೆ ಸ್ವೀಕರಿಸಿದ ತಕ್ಷಣ ಕೋಸ್ಟ್ ಗಾರ್ಡ್ ಶಿಪ್ ಸಿ–420 ಕಾರ್ಯಾಚರಣೆಗೆ ಇಳಿಯಿತು. ಹಡಗಿನಲ್ಲಿ ಪ್ರಾಥಮಿಕ ವೈದ್ಯಕೀಯ ತಪಾಸಣೆ ನಡೆಸಿ, ರೋಗಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಅಗತ್ಯ ಚಿಕಿತ್ಸೆಗೆ ಕರೆದೊಯ್ಯಲಾಯಿತು ಎಂದು ICG ಪ್ರಕಟನೆಯಲ್ಲಿ ತಿಳಿಸಿದೆ. ಸಮುದ್ರದಲ್ಲಿ ತುರ್ತು ಪರಿಸ್ಥಿತಿಗಳಿಗೆ ಕ್ಷಣಾರ್ಧದಲ್ಲೇ ಪ್ರತಿಕ್ರಿಯಿಸುವ ಕೋಸ್ಟ್ ಗಾರ್ಡ್ನ ಸಿದ್ಧತೆಯನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ದೃಢಪಡಿಸಿದೆ. ‘ಸಮುದ್ರದಲ್ಲಿ ಜೀವ ರಕ್ಷಿಸುವುದು ನಮ್ಮ ಧ್ಯೇಯ’ ಎಂದು ICG ಹೇಳಿದೆ.
VITTAL | ಬಸ್-ಕಾರು ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು, ಇಬ್ಬರು ಗಂಭೀರ
ವಿಟ್ಲ: ಕೆಎಸ್ಸಾರ್ಟಿಸಿ ಬಸ್ ಮತ್ತು ಓಮ್ನಿ ಕಾರೊಂದರ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ ರವಿವಾರ ಸಂಭವಿಸಿದೆ. ಮೃತರನ್ನು ಓಮ್ನಿ ಕಾರು ಚಾಲಕ, ಮೈರ ನಿವಾಸಿ ಮೋನಪ್ಪ ಕುಲಾಲ್ ಎಂದು ಗುರುತಿಸಲಾಗಿದೆ. ಮೋನಪ್ಪರ ಪತ್ನಿ ಲಲಿತಾ ಮತ್ತು ಜೊತೆಗಿದ್ದ ರಮಣಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಳಿಯ ಎಂಬಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಓಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದರು. ಈ ಪೈಕಿ ಮೋನಪ್ಪ ಕುಲಾಲ್ ಮೃತಪಟ್ಟಿದ್ದಾರೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವುದೇ ಕುರ್ ಆನ್ ಆಶಯ: ಮುಹಮ್ಮದ್ ಕುಂಞಿ
ಬಸವ ಕಲ್ಯಾಣದಲ್ಲಿ ಕುರ್ ಆನ್ ಪ್ರವಚನದ ದಶಮಾನೋತ್ಸವಕ್ಕೆ ಚಾಲನೆ
ರೆಸ್ಲಿಂಗ್ ಗೆ ವಿದಾಯ ಹೇಳಿದ 17 ಬಾರಿಯ WWE ಚಾಂಪಿಯನ್ ಜಾನ್ ಸೀನಾ
ಹೊಸದಿಲ್ಲಿ: ಸುಮಾರು 20 ವರ್ಷಗಳಿಗೂ ಸುದೀರ್ಘ WWE ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದ ಜಾನ್ ಸೀನಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜಾನ್ ಸೀನಾ 17 ಬಾರಿ ರೆಸ್ಲಿಂಗ್ ಚಾಂಪಿಯನ್ ಶಿಪ್ ಗೆದ್ದುಕೊಂಡವರು. ‘ದಿ ರಾಕ್’, ಟ್ರಿಪಲ್ ಎಚ್’, ರಾಂಡಿ ಓರ್ಟನ್ನಂತಹ ಖ್ಯಾತ ರೆಸ್ಲರ್ ಗಳ ವಿರುದ್ಧ ಗೆಲುವು ಸಾಧಿಸಿದ ಖ್ಯಾತಿ ಹೊಂದಿದ್ದಾರೆ. ಶನಿವಾರ ರಾತ್ರಿ ಗುಂಥರ್ ವಿರುದ್ಧ ನಡೆದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ 23 ವರ್ಷಗಳ ಅದ್ಭುತ ಕುಸ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿದಾಯ ಪಂದ್ಯದಲ್ಲಿ ಗೆದ್ದು ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಅವರು ವಿದಾಯ ಪಂದ್ಯವನ್ನು ಗುಂಥರ್ ವಿರುದ್ಧ ಸೋತಿದ್ದಾರೆ. WWE ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ದಂತಕತೆಯಾಗಿರುವವರು ಜಾನ್ ಸೀನಾ. ಪ್ರಸ್ತುತ ಅವರಿಗೆ 47 ವರ್ಷ ವಯಸ್ಸಾಗಿದೆ. ಹಾಲಿವುಡ್ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇದೀಗ ಸಿನಿಮಾ ಕಡೆಗೆ ಸಂಪೂರ್ಣ ಗಮನಹರಿಸಲು ಪಂದ್ಯಾವಳಿಗಳಿಂದ ನಿವೃತ್ತರಾಗುತ್ತಿದ್ದಾರೆ. ಟೊರಾಂಟೊದಲ್ಲಿ ನಡೆದ ‘ಮನಿ ಇನ್ ಬ್ಯಾಂಕ್’ ಪ್ರೀಮಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ ಸೀನಾ ಈ ಘೋಷಣೆ ಮಾಡಿದ್ದು, 'ದಿ ಲಾಸ್ಟ್ ಟೈಮ್ ಈಸ್ ನೌ' ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ರೆಸ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದರು. ಜಾನ್ ಸೀನಾ ‘ರಾ’ ಮೊದಲ ಸಂಚಿಕೆಯಲ್ಲಿ ನಟಿಸುತ್ತಿದ್ದು, ಇದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ. 2024ರಲ್ಲಿ ನಡೆದ ಲಾಸ್ ಏಂಜಲೀಸ್ ನ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್’ ಪ್ರಶಸ್ತಿ ವೇಳೆಗೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದರು. ಸಾಮಾಜಿಕ ಮಾಧ್ಯಮದಲ್ಲೂ ಜಾನ್ ಸೀನಾ ತಮ್ಮ ವಿಲಕ್ಷಣ ಪೋಸ್ಟ್ ಗಳಿಗೆ ಖ್ಯಾತನಾಮರು.
ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ವಂದೇ ಭಾರತ್ ರೈಲು ಓಡಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲ್ವೆ ವಿದ್ಯುತ್ ಮಾರ್ಗ ಬಹುತೇಕ ಪೂರ್ಣಗೊಂಡಿದೆ. ಈ ಹೊಸ ರೈಲು ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಇದು ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬಿಲ್ ವಿಚಾರಕ್ಕೆ ಶಿಲ್ಪಾ ಶೆಟ್ಟಿ ಒಡೆತನದ ಪಬ್ನಲ್ಲಿ ತಡರಾತ್ರಿ ಗಲಾಟೆ: ಉದ್ಯಮಿ ಸತ್ಯ ನಾಯ್ಡು ಭಾಗಿ, ವಿಡಿಯೋ ವೈರಲ್
ಬೆಂಗಳೂರಿನ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ನಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ಬಿಲ್ ಪಾವತಿಸುವ ವಿಚಾರದಲ್ಲಿ ಉದ್ಯಮಿ ಸತ್ಯ ನಾಯ್ಡು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.ಈ ಘಟನೆ ಕುರಿತು ಸತ್ಯ ನಾಯ್ಡು ಯಾವುದೇ ದೈಹಿಕ ಗಲಾಟೆ ನಡೆದಿಲ್ಲ ಎಂದು ತಮ್ಮ ವಿರುದ್ದದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ದೆಹಲಿ-ಎನ್ಸಿಆರ್ನಲ್ಲಿ ವಿಷಕಾರಿ ಹೊಗೆ, ತೀವ್ರ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ ಸೂಚ್ಯಂಕ
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯು ಮಾಲಿನ್ಯವು ಭಾನುವಾರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ವಿಷಕಾರಿ ಹೊಗೆಯ ದಟ್ಟ ಪದರವು ನಗರವನ್ನು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಗ್ಗಿದೆ. GRAP ಹಂತ-IV ರ ಕ್ರಮಗಳನ್ನು ಜಾರಿಗೊಳಿಸಲಾಗಿದೆ, ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ... BMTC Bus
ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಹೋರಾಟ &ಪ್ರತಿಭಟನೆಗಳು ನಡೆಯುತ್ತಿರುವ ಕಾರಣಕ್ಕೆ ಜನರಿಗೆ ಕೂಡ ಸವಾಲು ಎದುರಾಗುತ್ತಿದೆ. ಅದರಲ್ಲೂ 2025 ವರ್ಷ ಪೂರ್ತಿ ಸಾಲು ಸಾಲು ಬಂದ್ ಹಾಗೂ ಹೋರಾಟ ನಡೆದ ಕಾರಣಕ್ಕೆ ರಜೆಗಳು ಕೂಡ ಸಾಕಷ್ಟು ಸಿಕ್ಕಿದ್ದವು. ಈಗ ಮತ್ತೊಮ್ಮೆ ಈ ರೀತಿ ಇಡೀ ಕರ್ನಾಟಕದಲ್ಲೇ ಬೃಹತ್ ಹೋರಾಟಕ್ಕೆ ಈಗ ತಯಾರಿ ನಡೆದಿದೆ. ಅಂದಹಾಗೆ ಈ
ನಾನ್ಯಾರು ಎಂದು ಕೇಳುತ್ತಿರುವ ಡಿಕೆಶಿ ಅವರೇ ನೀವೀಗ 'ಆ ದಿನಗಳ ಕೊತ್ವಾಲ್ ಶಿಷ್ಯ' ಅಲ್ಲ; ಬಿಜೆಪಿ ವಾಗ್ದಾಳಿ!
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ 2025 ಕುರಿತು, ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಸಭೆಯಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರಕ್ಕೆ ಓರ್ವ ವ್ಯಕ್ತಿ ಬರೆದಿದ್ದ ಪತ್ರದ ಧಾಟಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪ್ರತಿಪಕ್ಷ ಬಿಜೆಪಿ ಕೂಡ, ಸಭೆಯಲ್ಲಿ ಡಿಕೆ ಶಿವಕುಮಾರ್ ಆಡಿರುವ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದ ಪ್ರಮುಖ ನಗರಗಳಲ್ಲಿ ರಸ್ತೆ ಸಂಚಾರದಿಂದ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ನೈಟ್ರೋಜನ್ ಆಕ್ಸೈಡ್ಗಳು ಮತ್ತು ಇಂಗಾಲದ ಮಾನಾಕ್ಸೈಡ್ ಪ್ರಮಾಣ ಹೆಚ್ಚಿದೆ. ಈ ಮಾಲಿನ್ಯವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚಂಡೀಗಢ, ಚೆನ್ನೈ, ಪುಣೆ ಮತ್ತು ಬೆಂಗಳೂರು ಸಹ ಅಧಿಕ ವಾಹನ ಸಾಂದ್ರತೆ ಮತ್ತು ಹೊರಸೂಸುವಿಕೆಯ ವರ್ಗದಲ್ಲಿವೆ. ಈ ಸಮಸ್ಯೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.
ತಾಪಮಾನ ಕುಸಿತ–ಗೋಚರತೆ ಶೂನ್ಯ: ಹರಿಯಾಣ ಹೆದ್ದಾರಿಯಲ್ಲಿ ಒಂದೇ ದಿನ 3 ಕಡೆ ಸರಣಿ ಅಪಘಾತ
ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದೆ. ಇದರಿಂದಾಗಿ ವಾಯುಗುಣಮಟ್ಟ ಕುಸಿದಿದೆ. ದಟ್ಟ ಮಂಜು ಕವಿದಿದೆ. ಗೋಚರತೆ ಕಡಿಮೆಯಾಗಿದೆ. ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿವೆ. ಹರಿಯಾಣದ ಹೆದ್ದಾರಿ ರಸ್ತೆಗಳಲ್ಲಿ ಒಂದೇ ದಿನ ಹಲವು ಕಡೆ ಬರೊಬ್ಬರಿ 3 ಸರಣಿ ಅಪಘಾತಗಳು ನಡೆದಿವೆ.ಇದರಿಂದ ಕಂಗಾಲಾಗಿರುವ ಅಲ್ಲಿನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತವಂತಹ ಪರಿಸ್ಥಿತಿ ಎದುರಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ | ಕಲಬುರಗಿಯಲ್ಲಿ 105 ಪ್ರಕರಣ ಇತ್ಯರ್ಥ: 2.50 ಕೋಟಿ ರೂ. ಪರಿಹಾರ ವಿತರಣೆ
ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಕರ್ನಾಟಕ ರಾಜ್ಯ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಸುಮಾರು 105 ಪ್ರಕರಣಗಳನ್ನು ಇತ್ಯರ್ಥ ಮಾಡಿ ಸಂತ್ರಸ್ತರಿಗೆ ಒಟ್ಟು 2,50,42,000 ರೂ. ಪರಿಹಾರ ವಿತರಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶಿಸಿದೆ. ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಅಯೋಜಿಸಿದ ಜನತಾ ಅದಾಲತ್ ನಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರು ವಿವಿಧ ಮೋಟರ್ ವಾಹನ, ಸಿವಿಲ್ ಹಾಗೂ ಕೌಟುಂಬಿಕ ಕಲಹ ಪ್ರಕರಣಗಳನ್ನು ಕೈಗೆತ್ತಿಕೊಂಡು ವಾದಿ-ಪ್ರತಿವಾದಿ ಹಾಗೂ ನ್ಯಾಯವಾದಿಗಳ ಸಮಕ್ಷಮ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.
ಲಾಲ್ ಸಲಾಂ ಕೂಗುತ್ತಿದ್ದ ಕಡೆ ಭಾರತ್ ಮಾತಾ ಕಿ ಜೈ ಘೋಷಣೆ ಕೇಳಿಬರುತ್ತಿದೆ : ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್ಗೆ ಭೇಟಿ ನೀಡಿ, ಈ ಪ್ರದೇಶವು ನಕ್ಸಲರು ಮುಕ್ತವಾಗುವ ಅಂಚಿನಲ್ಲಿದೆ ಎಂದು ಘೋಷಿಸಿದರು. 'ಲಾಲ್ ಸಲಾಂ' ಬದಲಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆಗಳು ಕೇಳಿ ಬರುತ್ತಿವೆ ಎಂದರು. ಮುಂದಿನ ಐದು ವರ್ಷಗಳಲ್ಲಿ ಬಸ್ತಾರ್ನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರದೇಶವನ್ನಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿದರು. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಒಲಿಂಪಿಕ್ಸ್ಗೆ ಸಿದ್ಧಪಡಿಸಲಾಗುವುದು ಎಂದರು.
ದಿಲ್ಲಿಯ ಆಗಸ ರಕ್ಷಣೆಗೆ ಬಂದ ದೇಸಿ ಎಸ್-400
ಪ್ರಾಜೆಕ್ಟ್ ಕುಶವನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ. ಭಾರತ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್ಆರ್ಸಿ) ಕ್ಷಿಪಣಿಗಳು, ಡ್ರೋನ್ಗಳು ಮತ್ತು ವೇಗವಾಗಿ ಚಲಿಸುವ ವೈಮಾನಿಕ ಆಯುಧಗಳಿಂದ ರಕ್ಷಿಸುವ ಸಲುವಾಗಿ ದೇಶೀಯವಾಗಿ ನಿರ್ಮಿಸಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಸಜ್ಜಾಗುತ್ತಿದೆ. ಇದು ರಾಜಧಾನಿಯ ರಕ್ಷಣೆಯ ದೃಷ್ಟಿಯಿಂದ ಭಾರತದ ಮಹತ್ವದ ಹೆಜ್ಜೆಯಾಗಬಹುದು. ರಕ್ಷಣಾ ವಲಯದ ಹಿರಿಯ ಮೂಲಗಳ ಪ್ರಕಾರ, ನೂತನವಾಗಿ ಅಭಿವೃದ್ಧಿಪಡಿಸಿರುವ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ಹಲವು ಪದರಗಳ ರಕ್ಷಣೆಯನ್ನು ಒದಗಿಸಲಿದೆ. ಇದು ಭಾರತದ ಸ್ವಂತ ನಿರ್ಮಾಣದ ಕ್ವಿಕ್ ರಿಯಾಕ್ಷನ್ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು ಮತ್ತು ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ಗಳು ಮತ್ತು ಇತರ ಬೆಂಬಲ ನೀಡುವ ವ್ಯವಸ್ಥೆಗಳನ್ನು ಒಳಗೊಳ್ಳಲಿದೆ. ಇವೆಲ್ಲವೂ ಜೊತೆಯಾಗಿ ಕಾರ್ಯಾಚರಿಸಿ, ದಿಲ್ಲಿ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಡೆಲ್ಲಿ ಎನ್ಸಿಆರ್) ಅನ್ನು ಯಾವುದೇ ರೀತಿಯ ವೈಮಾನಿಕ ಅಪಾಯಗಳಿಂದ ರಕ್ಷಿಸಲಿವೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಭಾರತದ ರಾಜಧಾನಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಇಂತಹ ಗಂಭೀರ ಸಮಯದಲ್ಲಿ ರಕ್ಷಣಾ ಸಚಿವಾಲಯ ಈ ಮಹತ್ವದ ಯೋಜನೆಯನ್ನು ಮುಂದುವರಿಸುತ್ತಿರುವುದು ಗಮನಾರ್ಹ ವಿಚಾರ. ಭಾರತ ತನ್ನ ರಾಜಧಾನಿಯ ರಕ್ಷಣೆಗೆ ದೇಶೀಯ ನಿರ್ಮಾಣದ ಆಯುಧ ವ್ಯವಸ್ಥೆಯನ್ನು ಅಳವಡಿಸಲು ಯೋಜನೆ ರೂಪಿಸಿರುವುದು ಭಾರತದ ಸ್ವಂತ ರಕ್ಷಣಾ ತಂತ್ರಜ್ಞಾನಕ್ಕೆ ಭಾರೀ ಉತ್ತೇಜನವನ್ನೇ ನೀಡಿದೆ. ಗಮನಾರ್ಹ ವಿಚಾರವೆಂದರೆ, ಇದಕ್ಕೂ ಮುನ್ನ ಭಾರತ ತನ್ನ ರಾಜ ಧಾನಿಯ ರಕ್ಷಣಾ ಉದ್ದೇಶಕ್ಕಾಗಿ ಅಮೆರಿಕ ನಿರ್ಮಿತ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್-2 (ಎನ್ಎಎಸ್ಎಎಂಎಸ್-2) ಬಳಸುವ ಉದ್ದೇಶ ಹೊಂದಿತ್ತು. ಉಭಯ ದೇಶಗಳು ಈ ಅಮೆರಿಕನ್ ವ್ಯವಸ್ಥೆಯನ್ನು ಖರೀದಿಸುವ ಕುರಿತು ಮಾತುಕತೆಯನ್ನೂ ಆರಂಭಿಸಿದ್ದವು. ವಾಶಿಂಗ್ಟನ್ ಡಿಸಿ ಮತ್ತು ಶ್ವೇತ ಭವನದ ರಕ್ಷಣೆಗೂ ಇದೇ ಅಮೆರಿಕನ್ ಆಯುಧ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಮೂಲಗಳ ಪ್ರಕಾರ, ಅಮೆರಿಕನ್ನರು ಈ ಆಯುಧ ವ್ಯವಸ್ಥೆಗೆ ಅತಿಯಾದ ಬೆಲೆ ಕೇಳುತ್ತಿದ್ದುದರಿಂದ ಭಾರತ ಈ ಒಪ್ಪಂದವನ್ನು ಜಾರಿಗೊಳಿಸುವ ಪ್ರಯತ್ನವನ್ನೇ ಕೈ ಬಿಟ್ಟಿತು. ಇನ್ನು ಮುಂದೆ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ದಿಲ್ಲಿ ಪ್ರದೇಶದ ಪ್ರಮುಖ ಸ್ಥಳಗಳು ಮತ್ತು ಕಟ್ಟಡಗಳನ್ನು ರಕ್ಷಿಸಲಿದೆ. ಈ ಜವಾಬ್ದಾರಿಯನ್ನು ಭಾರತೀಯ ವಾಯು ಸೇನೆ ನಿರ್ವಹಿಸಲಿದೆ. ಈ ಸಂಕೀರ್ಣ ವಾಯು ರಕ್ಷಣಾ ವ್ಯವಸ್ಥೆಯ ನಿರ್ಮಾಣಕ್ಕೆ ಬೇಕಾದ ನೆಟ್ವರ್ಕಿಂಗ್ ವ್ಯವಸ್ಥೆ ಮತ್ತು ಕಮಾಂಡ್ ಆಂಡ್ ಕಂಟ್ರೋಲ್ ವ್ಯವಸ್ಥೆಗಳನ್ನು ನಿರ್ಮಿಸುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇತರ ಉತ್ಪಾದನಾ ಸಂಸ್ಥೆಗಳೊಡನೆ ಕೈ ಜೋಡಿಸಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ಹೇಳಿವೆ. ಡಿಆರ್ಡಿಒ ಈಗಾಗಲೇ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್ಎಎಂ) ಮತ್ತು ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಂಆರ್ - ಎಸ್ಎಎಂ) ಸೇರಿದಂತೆ ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಡಿಆರ್ಡಿಒ ಈಗ ‘ಪ್ರಾಜೆಕ್ಟ್ ಕುಶ’ ಎಂಬ ಯೋಜನೆಯಡಿಯಲ್ಲಿ ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಲ್ಆರ್ - ಎಸ್ಎಎಂ) ಕ್ಷಿಪಣಿಯನ್ನೂ ಅಭಿವೃದ್ಧಿ ಪಡಿಸುತ್ತಿದೆ. ಭಾರತ ಇನ್ನೂ ಸ್ವೀಕರಿಸಲು ಬಾಕಿಯಾಗಿರುವ ಎಸ್-400 ಸುದರ್ಶನ ವಾಯು ರಕ್ಷಣಾ ವ್ಯವಸ್ಥೆಯ ಎರಡು ಸ್ಕ್ವಾಡ್ರನ್ಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇದೇ ವೇಳೆ, ರಶ್ಯ ಇನ್ನಷ್ಟು ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಒದಗಿಸಲು ಮುಂದೆ ಬಂದಿದ್ದು, ಭಾರತ ಈ ಒಪ್ಪಂದದ ಕುರಿತು ಅಧ್ಯಯನ ನಡೆಸುತ್ತಿದೆ. ಇದರೊಡನೆ, ಭಾರತ ನೂತನ ಎಸ್-500 ವ್ಯವಸ್ಥೆಯನ್ನು ಖರೀದಿಸುವ ಕುರಿತೂ ಆಲೋಚಿಸುವ ಸಾಧ್ಯತೆಗಳಿವೆ. ಕುಶದ ಬತ್ತಳಿಕೆಯಲ್ಲೇನಿದೆ? ► ಈ ವ್ಯವಸ್ಥೆ ಬಹು ಹಂತಗಳ ಇಂಟರ್ಸೆಪ್ಟರ್ ಕ್ಷಿಪಣಿಗಳನ್ನು ಹೊಂದಿದೆ. ಎಂ1 ಇಂಟರ್ಸೆಪ್ಟರ್: 150 ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಅಪಾಯಗಳನ್ನು ನಾಶಪಡಿಸುತ್ತದೆ. ಎಂ2 ಇಂಟರ್ಸೆಪ್ಟರ್: 250 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುತ್ತದೆ. ಎಂ3 ಇಂಟರ್ಸೆಪ್ಟರ್: 350ರಿಂದ 400 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಾಶಪಡಿಸಬಲ್ಲದು. ► ಇದು ಆಧುನಿಕ ದೀರ್ಘ ವ್ಯಾಪ್ತಿಯ ರೇಡಾರ್ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಬಹಳಷ್ಟು ಗುರಿಗಳನ್ನು ಗುರುತಿಸಿ, ಹಿಂಬಾಲಿಸಬಲ್ಲದು. ► ಪ್ರಾಜೆಕ್ಟ್ ಕುಶ ಭಾರತೀಯ ವಾಯುಪಡೆಯ ಇಂಟಿಗ್ರೇಟೆಡ್ ಏರ್ ಕಮಾಂಡ್ ಆಂಡ್ ಕಂಟ್ರೋಲ್ ಸಿಸ್ಟಮ್ನ (ಐಎಸಿಸಿಎಸ್) ಭಾಗವಾಗಿದೆ. ಪ್ರಾಜೆಕ್ಟ್ ಕುಶಕ್ಕೆ 2022ರ ಮೇ ತಿಂಗಳಲ್ಲಿ ನಡೆದ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಪ್ರಾಜೆಕ್ಟ್ ಕುಶ ಬರಾಕ್ - 8 ವ್ಯವಸ್ಥೆ (80 ಕಿಲೋಮೀಟರ್ವ್ಯಾಪ್ತಿಯ ತನಕ ರಕ್ಷಣೆ ಒದಗಿಸುತ್ತದೆ) ಮತ್ತು ಎಸ್-400ರಂತಹ ದೀರ್ಘ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳ ನಡುವಿನ ಅಂತರವನ್ನು ತುಂಬಿ, ಆ ಮೂಲಕ ಭಾರತಕ್ಕೆ ವಿದೇಶೀ ವಾಯು ರಕ್ಷಣಾ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನೆರವಾಗಲಿದೆ. ಪ್ರಾಜೆಕ್ಟ್ ಕುಶ ಕುಶ ವಾಯು ರಕ್ಷಣಾ ವ್ಯವಸ್ಥೆ ಅಥವಾ ಪ್ರಾಜೆಕ್ಟ್ ಕುಶ ಎನ್ನುವುದು ಸ್ವಂತವಾಗಿ ದೀರ್ಘ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ (ಎಲ್ಆರ್-ಎಸ್ಎಎಂ) ವ್ಯವಸ್ಥೆಯನ್ನು ನಿರ್ಮಿಸುವ ಡಿಆರ್ಡಿಒದ ಯೋಜನೆಯಾಗಿದೆ. ಇದನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ. ಎಸ್-400 ಎನ್ನುವುದು ರಶ್ಯನ್ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ಭಾರತ ಇದನ್ನು ಯಶಸ್ವಿಯಾಗಿ ಬಳಸಿತ್ತು. ಪ್ರಾಜೆಕ್ಟ್ ಕುಶ ಯೋಜನೆಯಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಡಿಆರ್ಡಿಒ ಜೊತೆ ಪ್ರಮುಖ ಅಭಿವೃದ್ಧಿ ಸಹಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರದಿಗಳ ಪ್ರಕಾರ, ಪ್ರಾಜೆಕ್ಟ್ ಕುಶದಲ್ಲಿ ಕಾರ್ಯಾಚರಿಸಲು ಬಿಇಎಲ್ಗೆ ಗರಿಷ್ಠ 40,000 ಕೋಟಿ ರೂಪಾಯಿ ಮೌಲ್ಯದ ಆದೇಶ ಲಭಿಸುವ ನಿರೀಕ್ಷೆಗಳಿವೆ. ಬಿಇಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮನೋಜ್ ಜೈನ್ ಅವರು ತಮ್ಮ ಸಂಸ್ಥೆ ಪ್ರಾಜೆಕ್ಟ್ ಕುಶದ ಸಾಕಷ್ಟು ಬಿಡಿಭಾಗಗಳನ್ನು ತಯಾರಿಸಲು, ಅದರಲ್ಲೂ ವಿವಿಧ ರಾಡಾರ್ಗಳು ಮತ್ತು ನಿಯಂತ್ರಣ ವ್ಯವಸ್ಥೆಗಳ ನಿರ್ಮಾಣಕ್ಕಾಗಿ ಡಿಆರ್ಡಿಒ ಜೊತೆ ಕಾರ್ಯಾಚರಿಸುತ್ತಿದೆ ಎಂದಿದ್ದಾರೆ. ಮನೋಜ್ ಜೈನ್ ಅವರ ಪ್ರಕಾರ, ಬಿಇಎಲ್ ಈಗ ಅವಶ್ಯಕ ಉತ್ಪನ್ನಗಳ ನಿರ್ಮಾಣದತ್ತ ಗಮನ ಹರಿಸಿದ್ದು, ವ್ಯವಸ್ಥೆಯ ಸಿದ್ಧತೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸುವ ಉದ್ದೇಶ ಹೊಂದಿದೆ. ಇದರ ಮೂಲ ಮಾದರಿ ಮುಂದಿನ 12ರಿಂದ 18 ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಗಳಿದ್ದು, ಬಳಕೆದಾರರ ಪರೀಕ್ಷೆಗೆ ಇನ್ನೂ 12ರಿಂದ 36 ತಿಂಗಳುಗಳು ತಗಲಬಹುದು. ವರದಿಗಳ ಪ್ರಕಾರ, ಬಿಇಎಲ್ಗೆ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್ಎಎಂ) ನಿರ್ಮಾಣಕ್ಕಾಗಿ ಇನ್ನೂ 30,000 ಕೋಟಿ ರೂಪಾಯಿಯ ಇನ್ನೊಂದು ಖರೀದಿ ಆದೇಶ ಲಭಿಸುವ ಸಾಧ್ಯತೆಗಳಿವೆ.
ವಿಮಾನದಲ್ಲಿ ವಿದೇಶಿ ಮಹಿಳೆಗೆ ತುರ್ತು ವೈದ್ಯಕೀಯ ನೆರವು ನೀಡಿದ ಡಾ.ಅಂಜಲಿ ನಿಂಬಾಳ್ಕರ್ ಗೆ ಮುಖ್ಯಮಂತ್ರಿ ಶ್ಲಾಘನೆ
ಬೆಂಗಳೂರು: ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಅನಾರೋಗ್ಯಕ್ಕೀಡಾದ ಅಮರಿಕದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ನೀಡಿ ಸಮಯಪ್ರಜ್ಞೆ ಮೆರೆದ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ. ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ… pic.twitter.com/mXicw43NOg — Siddaramaiah (@siddaramaiah) December 14, 2025 Heading Content Area ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮರಿಕದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ ಎಂದು ಸಿಎಂ ಹೇಳಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂಥವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) ಮಹತ್ವದ ಸುಧಾರಣೆಗಳು ಬರಲಿವೆ. ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಏರಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಅಲ್ಲದೆ, ಯೋಜನೆಯ ಹೆಸರನ್ನು 'ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ' ಎಂದು ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ. ಗ್ರಾಮೀಣ ಕುಟುಂಬಗಳಿಗೆ ಇನ್ನಷ್ಟು ಉದ್ಯೋಗ ಭದ್ರತೆ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
Kerala | ಪತ್ತನಂತಿಟ್ಟದಲ್ಲಿ LDFಗೆ ಹಿನ್ನಡೆ: ಮೀಸೆ ಬೋಳಿಸಿ ಕೊಟ್ಟ ಮಾತು ಉಳಿಸಿಕೊಂಡ ಕಾರ್ಯಕರ್ತ!
ಪತ್ತನಂತಿಟ್ಟ, ಡಿ.14: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (LDF) ಭಾರೀ ಹಿನ್ನಡೆ ಎದುರಾಗಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ರಾಜಕೀಯ ಹಿನ್ನಡೆಯ ಮಧ್ಯೆ, LDF ಕಾರ್ಯಕರ್ತರೊಬ್ಬರು ಕೊಟ್ಟ ಮಾತು ಉಳಿಸಿಕೊಂಡು ಗಮನ ಸೆಳೆದಿದ್ದಾರೆ. ಚುನಾವಣೆಗೆ ಮುನ್ನ ‘LDF ಪುರಸಭೆಯನ್ನು ಕಳೆದುಕೊಂಡರೆ ನನ್ನ ಮೀಸೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ಬಾಬು ವರ್ಗೀಸ್, ಫಲಿತಾಂಶ ಪ್ರಕಟವಾದ ಬಳಿಕ ತಮ್ಮ ಮಾತಿನಂತೆ ಮೀಸೆ ಬೋಳಿಸಿಕೊಂಡರು. ಪತ್ತನಂತಿಟ್ಟ ಪುರಸಭೆಯನ್ನು LDF ಕಳೆದುಕೊಂಡಿರುವುದು ಸ್ಥಳೀಯ ಮಟ್ಟದಲ್ಲಿ ಎಡಪಕ್ಷಗಳಿಗೆ ತೀವ್ರ ಆಘಾತವಾಗಿ ಪರಿಣಮಿಸಿದೆ. ಪತ್ತನಂತಿಟ್ಟ ಜಿಲ್ಲಾ ಪಂಚಾಯತ್ನ 16 ಸ್ಥಾನಗಳಲ್ಲಿ ಯುಡಿಎಫ್ 12 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. ಹಿಂದಿನ ಚುನಾವಣೆಯಲ್ಲಿ 12 ಸ್ಥಾನಗಳನ್ನು ಪಡೆದಿದ್ದ LDF ಈ ಬಾರಿ ಐದು ಸ್ಥಾನಗಳಿಗೆ ಕುಸಿದಿದೆ. ಇದಲ್ಲದೆ, ಯುಡಿಎಫ್ 34 ಗ್ರಾಮ ಪಂಚಾಯತ್ ಗಳು ಮತ್ತು ಏಳು ಬ್ಲಾಕ್ ಪಂಚಾಯತ್ಗಳಲ್ಲಿ ಬಹುಮತ ಪಡೆದಿದೆ. ಪುರಸಭೆ ಚುನಾವಣೆಯಲ್ಲಿಯೂ ಮೂರು ಪುರಸಭೆಗಳಲ್ಲಿ ಜಯ ಗಳಿಸಿದ್ದು, ಅವುಗಳಲ್ಲಿ ಎರಡು ಹಿಂದೆ ಎಡಪಕ್ಷಗಳ ಹಿಡಿತದಲ್ಲಿದ್ದವು.
ಈಗಾಗಲೇ ಟ್ರಂಪ್ ಸುಂಕದಿಂದ ನಲುಗುತ್ತಿರುವ ಭಾರತೀಯ ರಫ್ತುದಾರರ ಮೇಲೆ ಅಮೆರಿಕಾದ ನೆರೆಯ ರಾಷ್ಟ್ರದ ಕಣ್ಣುಬಿದ್ದಿದೆ. ಮೆಕ್ಸಿಕೋ ಭಾರತ ಸೇರಿದಂತೆ ವ್ಯಾಪಾರ ಒಪ್ಪಂದ ಹೊಂದಿರದ ರಾಷ್ಟ್ರಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ. ಈ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನ ಹಿತಾಸಕ್ತಿ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಜಾಗತಿಕ ವ್ಯಾಪಾರ ನಿಯಮಗಳಿಗೆ ಅನುಗುಣವಾಗಿ ಪರಿಹಾರ ಕಂಡುಕೊಳ್ಳಲು ಭಾರತ ಮೆಕ್ಸಿಕೋ ಜೊತೆ ಮಾತುಕತೆ ನಡೆಸುತ್ತಿದೆ.
ದಟ್ಟ ಮಂಜು: ಹರಿಯಾಣದಲ್ಲಿ ಸರಣಿ ಅಪಘಾತ; ಬಸ್, ಕಾರು, ಟ್ರಕ್ ಗಳಿಗೆ ಭಾರೀ ಹಾನಿ
ಹೊಸದಿಲ್ಲಿ: ಹರಿಯಾಣದಲ್ಲಿ ರವಿವಾರ ಮುಂಜಾನೆ ದಟ್ಟ ಮಂಜಿನಿಂದಾಗಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿ ಬಸ್ಗಳು, ಟ್ರಕ್ ಗಳು ಹಾಗೂ ಕಾರುಗಳಿಗೆ ಭಾರೀ ಹಾನಿಯಾಗಿದೆ. ರಸ್ತೆಗಳಲ್ಲಿ ಕಡಿಮೆ ಗೋಚರತೆಯಿಂದಾಗಿ ಅಪಘಾತಗಳು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಸ್ಸಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–52ರ ಧಿಕ್ತಾನಾ ಮೋಡಾದಲ್ಲಿ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ಕೈತಾಲ್ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಒಂದು ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬಸ್, ಕಾರು ಮತ್ತು ಮೋಟಾರ್ಸೈಕಲ್ ಸೇರಿ ವಾಹನಗಳ ಒಂದಕ್ಕೊಂದು ಸರಣಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರರೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಅಪಘಾತ ರೇವಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–352ರಲ್ಲಿ ಸಂಭವಿಸಿದೆ. ಕಡಿಮೆ ಗೋಚರತೆಯಿಂದಾಗಿ ಮೂರರಿಂದ ನಾಲ್ಕು ಬಸ್ಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಶೀತಗಾಳಿ ಬೀಸುತ್ತಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 4ರಿಂದ 6 ಡಿಗ್ರಿ ಸೆಲ್ಸಿಯಸ್ವರೆಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಶೀತಗಾಳಿ ಎಚ್ಚರಿಕೆ ನೀಡಿದ್ದು, ಮಂಜಿನ ವೇಳೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಫಾಗ್ ಹೆಡ್ಲೈಟ್ ಬಳಕೆ, ವೇಗ ನಿಯಂತ್ರಣ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಇದಕ್ಕೂ ಮುನ್ನ ದಿಲ್ಲಿ–ಎನ್ಸಿಆರ್ ಪ್ರದೇಶದಲ್ಲೂ ದಟ್ಟ ಮಂಜಿನಿಂದಾಗಿ ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ಡಝನ್ಗೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳೀಯಾಡಳಿತ ಚುನಾವಣೆ | ಪುತ್ತಿಗೆ, ಬೇಕಲ ಡಿವಿಜನ್ ಮರು ಮತಎಣಿಕೆಯಲ್ಲಿ ಯುಡಿಎಫ್, ಎಲ್.ಡಿ.ಎಫ್.ಗೆ ಗೆಲುವು
ಕಾಸರಗೋಡು: ಜಿಲ್ಲಾ ಪಂಚಾಯತ್ ನ ಪುತ್ತಿಗೆ ಮತ್ತು ಬೇಕಲ ಡಿವಿಜನ್ ನ ಮರುಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತಿಗೆಯಲ್ಲಿ ಯುಡಿಎಫ್ ಅಭ್ಯರ್ಥಿ ಜಯಿಸಿದ್ದರೆ, ಬೇಕಲ ದಿಂದ ಎಲ್ ಡಿ ಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಪುತ್ರಿಗೆಯಿಂದ ಯುಡಿಎಫ್ ನ ಜೆ.ಎಸ್.ಸೋಮಶೇಖರ್ ಹಾಗೂ ಬೇಕಲದಿಂದ ಎಲ್.ಡಿ.ಎಫ್.ನ ಟಿ.ವಿ. ರಾಧಿಕಾ ಗೆಲುವು ಸಾಧಿಸಿದ್ದಾರೆ. ಶನಿವಾರ ಮತ ಎಣಿಕೆ ಸಂದರ್ಭ ತೀವ್ರ ಪೈಪೋಟಿಗೆ ಈ ಎರಡು ಡಿವಿಜನ್ ಗಳು ಕಾರಣವಾಗಿದ್ದು, ಅಂತಿಮ ಕ್ಷಣದಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋಮಶೇಖರ್ ಮತ್ತು ರಾಧಿಕಾ ಜಯಿಸಿದ್ದರು.. ಇವರ ಆಯ್ಕೆಯನ್ನು ಪ್ರಶ್ನಿಸಿ ಸೋಮಶೇಖರ್ ರ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರೈ ಹಾಗೂ ರಾಧಿಕಾರ ಪ್ರತಿಸ್ಪರ್ಧಿ ಯು ಡಿ ಎಫ್ ನ ಶಾಹಿದಾ ರಶೀದ್ ಮರು ಎಣಿಕೆಗೆ ಚುನಾವಣಾಧಿಕಾರಿ ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮರು ಮತ ಎಣಿಕೆ ನಡೆಯಿತು. ಇದರೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ನ 18 ಡಿವಿಜನ್ ನಲ್ಲಿ ಒಂಭತ್ತು ಸ್ಥಾನಗಳನ್ನು ಗಳಿಸಿರುವ ಎಲ್ ಡಿ ಎಫ್ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 8 ಮತ್ತು ಬಿಜೆಪಿ ಒಂದು ಸ್ಥಾನ ಗಳಿಸಿದೆ.
ಲಿಬಿಯಾದಲ್ಲಿ ಗುಜರಾತಿ ಕುಟುಂಬ ಅಪಹರಣ: 2 ಕೋಟಿ ರೂ.ಗೆ ಬೇಡಿಕೆ
ಪೋರ್ಚುಗಲ್ಗೆ ತೆರಳಲು ಯತ್ನಿಸುತ್ತಿದ್ದ ಗುಜರಾತ್ನ ಮೆಹಸಾನಾ ಜಿಲ್ಲೆಯ ದಂಪತಿ ಹಾಗೂ ಅವರ ಮಗಳನ್ನು ಲಿಬಿಯಾದಲ್ಲಿ ಅಪಹರಣ ಮಾಡಲಾಗಿದೆ. ಅಪಹರಣಕಾರರು 2 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದು, ಕುಟುಂಬದ ಸುರಕ್ಷತೆಗಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಘಟನೆ ವಲಸೆ ಹೋಗುವವರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ಬಿಹಾರ ರೈಲಿನಲ್ಲಿ ಜನಸಂದಣಿಯಿಂದ ಶೌಚಾಲಯದಲ್ಲಿ ಸಿಲುಕಿದ ಮಹಿಳೆ; RPF ನಿಂದ ರಕ್ಷಣೆ
ಕತಿಹಾರ್ (ಬಿಹಾರ), ಡಿ.14: ಬಿಹಾರ ದ ಕತಿಹಾರ್ ಜಂಕ್ಷನ್ನಲ್ಲಿ ನಿಂತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಬೋಗಿಯೊಳಗೆ ಏಕಾಏಕಿ ಉಂಟಾದ ಜನಸಂದಣಿಯಿಂದ ಶೌಚಾಲಯದಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿದ ಬಳಿಕ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ. ನಿಲ್ದಾಣದಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ಮಹಿಳೆ ಶೌಚಾಲಯ ಬಳಸುತ್ತಿದ್ದಾಗ, 30ರಿಂದ 40 ಮಂದಿ ಯುವಕರು ಕೂಗುತ್ತಾ ಹಾಗೂ ಪರಸ್ಪರ ತಳ್ಳಿಕೊಂಡು ಬೋಗಿಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಬಾಗಿಲಿನ ಬಳಿ ಜನಸಂದಣಿ ತುಂಬಿಕೊಂಡ ಕಾರಣ ಮಹಿಳೆಗೆ ಹೊರಬರಲು ಸಾಧ್ಯವಾಗದೆ ಶೌಚಾಲಯದೊಳಗೇ ಉಳಿಯಬೇಕಾಯಿತು. ಪರಿಸ್ಥಿತಿ ಅಸುರಕ್ಷಿತವಾಗಿದ್ದರಿಂದ ಅವರು ಶೌಚಾಲಯದ ಬಾಗಿಲು ಮುಚ್ಚಿಕೊಂಡು ನೆರವಿಗಾಗಿ ಕಾಯುತ್ತಿದ್ದರು. ಅದಾಗಲೇ ಮಹಿಳೆ ತಮ್ಮ ಮೊಬೈಲ್ ಮೂಲಕ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಆರ್ಪಿಎಫ್ ಸಿಬ್ಬಂದಿ, ಬೋಗಿಯೊಳಗಿನ ಜನಸಮೂಹವನ್ನು ಚದುರಿಸಿ, ಮಹಿಳೆಯನ್ನು ಶೌಚಾಲಯದಿಂದ ಹೊರಬರಲು ಅನುವುಮಾಡಿಕೊಟ್ಟು ಸುರಕ್ಷಿತವಾಗಿ ತನ್ನ ಆಸನಕ್ಕೆ ಮರಳಲು ನೆರವಾದರು ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಮಹಿಳೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ. ಅನೇಕರು ಅವರ ಸಮಯೋಚಿತ ನಿರ್ಧಾರವನ್ನು ಶ್ಲಾಘಿಸಿದ್ದು, ಆರ್ಪಿಎಫ್ನ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಆದ್ಯತೆಗಳನ್ನು ಅಥವಾ ಪ್ರಾಮುಖ್ಯತೆಗಳನ್ನು ಗುರುತಿಸುವುದು; ಈ ಎರಡೂ ನಮ್ಮ ಜೀವನ ರೂಪಿಸುವ ಮಹತ್ವದ ಕೌಶಲ್ಯಗಳು. ಜೀವನದಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಒಂದು ದಿಕ್ಕು ತೋರಿಸುವ ಸೂಚಕದಂತೆ ಮತ್ತು ಮಾರ್ಗದರ್ಶಿಯಂತೆ. ಸರಿಯಾದ ನಿರ್ಧಾರ ಸಾಮರ್ಥ್ಯವಿಲ್ಲದೆ ಹೋದರೆ ನಮ್ಮ ಬದುಕಿಗೆ ಅಗತ್ಯವಿರುವ ಅವಕಾಶಗಳು ಕೈ ತಪ್ಪುತ್ತವೆ, ಶಕ್ತಿ ನಷ್ಟವಾಗುತ್ತದೆ ಮತ್ತು ಅನಗತ್ಯ ಒತ್ತಡ ಹುಟ್ಟುತ್ತದೆ. ಉತ್ತಮ ನಿರ್ಧಾರ ಸಾಮರ್ಥ್ಯವಿರುವವರು ಪರಿಸ್ಥಿತಿಯನ್ನು ವಾಸ್ತವವಾಗಿ ನೋಡುವರು, ಉತ್ತಮ ಪ್ರತಿಫಲ ಮತ್ತು ಸಾಧ್ಯತೆ ಬಾಧ್ಯತೆಗಳನ್ನು ತೂಗಿ ನೋಡಿ, ತಮ್ಮ ವೌಲ್ಯಗಳಿಗೆ ಸರಿಹೊಂದುತ್ತಿರುವ ಆಯ್ಕೆಯನ್ನು ಮಾಡುವರು. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಜೀವನದ ಮೇಲೆ ನಿಯಂತ್ರಣದ ಭಾವನೆಯನ್ನೂ ಕೊಡುತ್ತದೆ. ಅದರಂತೆಯೇ ಆದ್ಯತೆ ಮತ್ತು ಪ್ರಾಮುಖ್ಯತೆ ಗುರುತಿಸುವಿಕೆಯೂ ಕೂಡಾ ದಿನನಿತ್ಯದ ಕಾರ್ಯಕ್ಷಮತೆಯ ಹೃದಯ. ಎಲ್ಲ ಕೆಲಸಗಳೂ ಸಮಾನವಾಗಿರುವುದಿಲ್ಲ; ಯಾವುದು ತುರ್ತು, ಯಾವುದು ಮುಖ್ಯ, ಯಾವುದು ಬಿಡಬಹುದಾದುದು ಎಂಬ ಅರಿವು ಇಲ್ಲದಿದ್ದರೆ ಜೀವನ ಗೊಂದಲದಿಂದ ತುಂಬುತ್ತದೆ. ಸ್ಪಷ್ಟ ಆದ್ಯತೆ ಕೊಡುವವರು ಸಮಯವನ್ನು ಉಳಿಸುವರು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವರು ಮತ್ತು ತಮ್ಮ ಗುರಿಗಳತ್ತ ವೇಗವಾಗಿ ಮತ್ತು ಸರಾಗವಾಗಿ ಸಾಗುವರು. ಆದರೆ ಬಹಳಷ್ಟು ಜನರಿಗೆ ನಿರ್ಧಾರಗಳಲ್ಲಿ ಗೊಂದಲ ಉಂಟಾಗುವುದು ಮತ್ತು ಪ್ರಾಮುಖ್ಯತೆ ಗುರುತಿಸಲು ಆಗದಿರುವುದು ಏಕೆಂದು ಮನೋವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸಬೇಕು. ಯಾವುದೇ ವ್ಯಕ್ತಿಗೆ ನಿರ್ಧಾರ ತೆಗೆದುಕೊಳ್ಳುವುದು, ಕೆಲಸಗಳನ್ನು ಆದ್ಯತೆಯ ಪ್ರಕಾರ ಮಾಡುವುದು, ಜೀವನದಲ್ಲಿ ಯಾವುದು ಮೊದಲು ಮತ್ತು ಯಾವುದು ನಂತರ ಎಂಬುದನ್ನು ಗುರುತಿಸುವುದು ಮತ್ತೊಮ್ಮೆ ಕಷ್ಟವಾಗುತ್ತಿದ್ದರೆ ಅದೇನು ಮಾನಸಿಕ ಸಮಸ್ಯೆ ಎಂದೇನೂ ಪರಿಗಣಿಸಲಾಗದು. ಆದರೆ ನಾನಾ ಕಾರಣಗಳಿಂದ ಉಂಟಾಗುವ ಮನಸ್ಸಿನ ಕಾರ್ಯವೈಕಲ್ಯಗಳೊಂದರ ಸಂಕೇತವಾಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯ ಮೂಲದಲ್ಲಿ ಎಕ್ಸಿಕ್ಯೂಟಿವ್ ಫಂಕ್ಷನ್ ಎಂದು ಕರೆಯುವ ಮೆದುಳಿನ ಸಾಮರ್ಥ್ಯ ಕುಂದಿರುವುದು ಕಾಣಬಹುದು. ಯೋಜನೆ, ಕ್ರಮಬದ್ಧತೆ, ಸಮಯ ನಿರ್ವಹಣೆ, ಆಯ್ಕೆ ಪ್ರಕ್ರಿಯೆ - ಇವುಗಳಲ್ಲಿ ವ್ಯತ್ಯಯವಾದಾಗ ವ್ಯಕ್ತಿಗಳು ಗೊಂದಲಕ್ಕೆ ಸಿಲುಕುತ್ತಾರೆ. ಹಲವು ಸಂದರ್ಭಗಳಲ್ಲಿ ಇದು ಸ್ವತಂತ್ರವಾಗಿ ಕಾಣಿಸಬಹುದು, ಮತ್ತೆ ಕೆಲವು ಸಂದರ್ಭಗಳಲ್ಲಿ ಇತರ ಮನೋವೈಜ್ಞಾನಿಕ ಸ್ಥಿತಿಗಳೊಂದಿಗೆ ಕೂಡ ಬರುತ್ತದೆ. ಇದರಲ್ಲೇ ಪ್ರಮುಖವಾದುದು ಎಡಿಎಚ್ಡಿ - ವಿಶೇಷವಾಗಿ ಇನಟೆಂಟಿವ್ ಟೈಪ್. ಈ ಸ್ಥಿತಿಯಲ್ಲಿರುವವರು ಎಲ್ಲಾ ಕೆಲಸಗಳೂ ಒಂದೇ ತರಹ ತುರ್ತು ಅಥವಾ ಆತುರವಿಲ್ಲದಂತೆ ಕಾಣುವುದರಿಂದ ಆದ್ಯತೆ ಗುರುತಿಸಲು ಕಷ್ಟಪಡುವುದು ಸಾಮಾನ್ಯ. ಅವರ ಮೆದುಳಿನ ಡೋಪಮಿನ್ ವ್ಯವಸ್ಥೆಯ ವೈಶಿಷ್ಟ್ಯವೇ ಈ ಗೊಂದಲಕ್ಕೆ ಕಾರಣವಾಗಬಹುದು. ಮತ್ತೊಂದು ಪ್ರಮುಖ ಕಾರಣ ಆತಂಕ (Anxiety Disorders). ಆತಂಕ ಹೆಚ್ಚಾದಾಗ ‘‘ತಪ್ಪಾದ ನಿರ್ಧಾರ ಮಾಡಿದರೆ?’’ ಎಂಬ ಭಯ ಮನಸ್ಸನ್ನು ಹಿಡಿದಿಡುತ್ತದೆ. ಪರಿಣಾಮವಾಗಿ ನಿರ್ಧಾರದಾಳ್ವಿಕೆ ನಿಧಾನವಾಗುತ್ತದೆ, ಕೆಲವೊಮ್ಮೆ ನಿಲ್ಲುತ್ತದೆ. ಇದನ್ನು Decision Paralysis'$ ಎಂದು ಕರೆಯುತ್ತಾರೆ. ಖಿನ್ನತೆ ಕೂಡ ನಿರ್ಧಾರ ಸಾಮರ್ಥ್ಯವನ್ನು ಕಡಿಮೆ ಮಾಡಿ, ಎಲ್ಲ ಕೆಲಸಗಳೂ ಭಾರವಾಗಿರುವಂತೆ ತೋರ್ಪಡಿಸುತ್ತದೆ. ಏನು ಮಾಡಬೇಕು, ಏನು ಬಿಡಬೇಕು ಎಂಬುದನ್ನು ತಿಳಿಯುವುದೇ ಕಷ್ಟವಾಗುತ್ತದೆ. ಕೆಲವರಲ್ಲಿ ಒಸಿಡಿ ಲಕ್ಷಣಗಳು ಇದ್ದರೆ ನಿರಂತರ ಅನುಮಾನಗಳು, ಮರುಪರಿಶೀಲನೆಗಳು ನಿರ್ಧಾರ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಮತ್ತೊಂದು ಗುಂಪಿನವರು ಬಾಲ್ಯದಿಂದ ಬಂದಿರುವ ಅತಿಯಾದ ಅನುಸರಣೆ ಅಥವಾ ತಾಳ್ಮೆಯ ವ್ಯಕ್ತಿತ್ವದಿಂದ ಇತರರ ಅಭಿಪ್ರಾಯಗಳ ಮೇಲೇ ನಿಂತು ನಿರ್ಧಾರ ಮಾಡುವುದಕ್ಕೆ ಅಭ್ಯಾಸವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಕೆಲವರು ವಿಶ್ಲೇಷಣಾ ಗೊಂದಲ (Analysis Paralysis) ಎಂಬ ಸ್ಥಿತಿಯಲ್ಲಿ ಸಿಲುಕುತ್ತಾರೆ. ಹೆಚ್ಚು ಮಾಹಿತಿಯೂ, ಹೆಚ್ಚು ಆಯ್ಕೆಗಳೂ ಇರುವ ಕಾಲದಲ್ಲಿ ಮೆದುಳು ತಾನೇ ಆಯ್ಕೆ ಮಾಡಲು ತಯಾರಾಗುವುದಿಲ್ಲ. ಒಟ್ಟಾರೆ ನಿರ್ಧಾರ ತೆಗೆದುಕೊಳ್ಳಲು ಆಗದಿರುವುದು ಮನಸ್ಸಿನ ಕಾರ್ಯವಿಧಾನ, ಭಾವಸ್ಥಿತಿ, ಮನೋವೈಜ್ಞಾನಿಕ ಒತ್ತಡಗಳು ಮತ್ತು ವ್ಯಕ್ತಿತ್ವ ಶೈಲಿಗಳ ಸಮೂಹ ಪರಿಣಾಮಗಳ ಮೇಲೆ ಅವಲಂಬಿತವಾಗಿರುತ್ತದೆ. ಸಹಾನುಭೂತಿಯಿಂದ, ಅರಿವಿನಿಂದ ಮತ್ತು ಸೂಕ್ತ ಮಾರ್ಗದರ್ಶನದಿಂದ ಈ ಸವಾಲನ್ನು ಸುಗಮವಾಗಿ ನಿಭಾಯಿಸಬಹುದು. ಸುಧಾರಣೆಗೆ ಕೆಲವು ಪರಿಣಾಮಕಾರಿ ಸಲಹೆಗಳೆಂದರೆ; 1. ಮೂರು ಪ್ರಶ್ನೆಗಳ ವಿಧಾನ: ‘‘ಇದು ನನಗೆ ಏಕೆ ಮುಖ್ಯ?’’, ‘‘ಪರಿಣಾಮವೇನು?’’, ‘‘ಇದನ್ನು ಈಗಲೇ ಮಾಡಬೇಕೆ?’’ ಈ ಮೂರು ಪ್ರಶ್ನೆಗಳು ನಿರ್ಧಾರಕ್ಕೆ ತಕ್ಷಣ ಸ್ಪಷ್ಟತೆ ತರುತ್ತವೆ. 2. ಟಾಪ್-3 ಎಂಬ ದಿನನಿತ್ಯ ನಿಯಮ: ಪ್ರತಿದಿನ ಅತ್ಯಂತ ಮುಖ್ಯವಾದ ಮೂರು ಕೆಲಸಗಳನ್ನು ಗುರುತು ಮಾಡಿ. ಉಳಿದವು ಪೂರಕ. 3. ಸನ್ಹೋವರ್ ಆದ್ಯತೆಗಳ ಚೌಕಟ್ಟು: ಇದರಲ್ಲಿ ಕೆಲಸಗಳನ್ನು ನಾಲ್ಕು ವಿಭಾಗಗಳಿಗೆ ಹಂಚಿಕೊಳ್ಳಬೇಕು: ತುರ್ತು ಮತ್ತು ಮುಖ್ಯ, ಮುಖ್ಯ ಆದರೆ ತುರ್ತು ಅಲ್ಲ, ತುರ್ತು ಆದರೆ ಮುಖ್ಯ ಅಲ್ಲ, ತುರ್ತು ಅಲ್ಲ ಮತ್ತು ಮುಖ್ಯವೂ ಅಲ್ಲ. ಇದರಿಂದ ಕೆಲಸಗಳ ಗೊಂದಲ ಮಾಯವಾಗುತ್ತದೆ. 4. ಎರಡು ನಿಮಿಷ ನಿಯಮ: ಎರಡು ನಿಮಿಷಗಳಲ್ಲಿ ಮಾಡುವ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ. ಇದು ನಿರ್ಧಾರ ಭಾರವನ್ನು ಕಡಿಮೆ ಮಾಡುತ್ತದೆ. 5. ಮನಶ್ಶಾಂತಿ ಅಭ್ಯಾಸಗಳು: ಆಳವಾದ ಉಸಿರಾಟ, ಚಿಕ್ಕ ನಡಿಗೆ, 60 ಸೆಕೆಂಡ್ ವೌನ - ಇವು ನಿರ್ಧಾರ ಗುಣಮಟ್ಟವನ್ನು ತಕ್ಷಣ ಸುಧಾರಿಸುತ್ತವೆ. ಸರಿಯಾದ ನಿರ್ಧಾರ ಮತ್ತು ಆದ್ಯತೆಯ ಗುರುತಿಸುವ ಕೌಶಲ್ಯ ಯಶಸ್ಸು, ಸಮಾಧಾನ ಮತ್ತು ಸದೃಢ ಜೀವನಕ್ಕಾಗಿ ಅಗತ್ಯವಾದ ಎರಡು ಶಕ್ತಿಗಳು.
ಪೊಲೀಸ್ ಕರ್ತವ್ಯ ಲೋಪ ಕಾರಣ, ಸರಕಾರಕ್ಕೆ 4.56 ಕೋಟಿ ರೂ. ನಷ್ಟ
2024-2025ರಲ್ಲಿ ಗಣೇಶ ಹಬ್ಬ ಸಂದರ್ಭಗಳಲ್ಲಿ ಗಲಭೆ
ನಾನು ಬಹು ರೀತಿಯ ಸವಲತ್ತುಗಳೊಂದಿಗೆ ಹುಟ್ಟಿದ್ದೇನೆ - ಹಿಂದೂಗಳು ಪ್ರಾಬಲ್ಯ ಹೊಂದಿರುವ ಮತ್ತು ನಡೆಸುವ ದೇಶದಲ್ಲಿ ವಾಸಿಸುವ ಹಿಂದೂವಾಗಿ, ಜಾತಿ ಪೂರ್ವಾಗ್ರಹದಲ್ಲಿ ಮುಳುಗಿರುವ ಸಂಸ್ಕೃತಿಯಲ್ಲಿ ಬ್ರಾಹ್ಮಣನಾಗಿ, ಪಿತೃಪ್ರಭುತ್ವದಿಂದ ವಿರೂಪಗೊಂಡ ಸಮಾಜದಲ್ಲಿ ಮನುಷ್ಯನಾಗಿ, ಆ ಭಾಷೆ ಅನೇಕ ಬಾಗಿಲುಗಳನ್ನು ತೆರೆಯುವ ರಾಷ್ಟ್ರದಲ್ಲಿ ನಿರರ್ಗಳ ಇಂಗ್ಲಿಷ್ ಮಾತನಾಡುವವನಾಗಿ. ಈ ಗಳಿಸದ ಅನುಕೂಲಗಳು ನನ್ನ ಜೀವನ ಪ್ರಯಾಣವನ್ನು ಅವಿಲ್ಲದಿದ್ದರೆ ಇರಬಹುದಾಗಿದ್ದಕ್ಕಿಂತ ಹೆಚ್ಚು ಆರಾಮದಾಯಕವಾಗಿಸಿವೆ. ಆದರೂ ನನ್ನ ಹೆತ್ತವರ ಉದಾಹರಣೆಯು ಇತರ ಭಾರತೀಯರು ಎಷ್ಟು ಕಡಿಮೆ ಸವಲತ್ತು ಹೊಂದಿದ್ದಾರೆಂದು ನನಗೆ ಅರಿವು ಮೂಡಿಸಲು ಸಹಾಯ ಮಾಡಿತು. ಈ ಅಂಕಣವನ್ನು ನಾನು ನನ್ನ ಕುಟುಂಬವನ್ನು ಉಲ್ಲೇಖಿಸುವುದರಿಂದ ದೂರವಿರಿಸಿಕೊಂಡೇ ಬಂದಿದ್ದೇನೆ. ಆದರೆ ಈ ಸಲ ಅದಕ್ಕೆ ಒಂದು ಅಪವಾದವಿದೆ. ಏಕೆಂದರೆ ನನ್ನ ತಂದೆ ನಿಧನರಾದ ಹನ್ನೆರಡು ವರ್ಷಗಳ ನಂತರ, ಕಳೆದ ವಾರ ನನ್ನ ತಾಯಿ ನಿಧನರಾದರು. ಅವರೆಂದಿಗೂ ಪ್ರಸಿದ್ಧರಾಗಿರಲಿಲ್ಲ, ಅವರಿಬ್ಬರೂ ಅನುಕರಣೀಯ ಪೋಷಕರಾಗಿದ್ದರು ಮತ್ತು ಅವರನ್ನು ನೆನಪಿಸಿಕೊಳ್ಳಲು ಇತರ ಕೆಲವು ವಿಷಯಗಳಿರಬಹುದು. ನನ್ನ ಪೋಷಕರು ಒರಟಾದ ಬಡಾಯಿಗಿಂತ ಶಾಂತ ಸೇವೆಯ ಮೂಲಕ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ ಪೀಳಿಗೆಗೆ ಸೇರಿದವರು. ನಾನು ಇಲ್ಲಿ ಅವರ ಬಗ್ಗೆ ಬರೆಯುವ ವಿಷಯದಲ್ಲಿ, ಓದುಗರು ತಾವು ಸ್ವತಃ ತಿಳಿದಿದ್ದ ಜನರೊಂದಿಗೆ, ಅವರು ಪೋಷಕರು, ಚಿಕ್ಕಪ್ಪ, ಚಿಕ್ಕಮ್ಮ, ಶಿಕ್ಷಕರು ಅಥವಾ ವೈದ್ಯರು ಎಂದು ಗುರುತಿಸಿಕೊಳ್ಳುತ್ತಾರೆ. ಅವರು ಇಂದು ನೆಲದಲ್ಲಿ ವಿರಳವಾಗಿ ಕಂಡುಬರುವ ಸಭ್ಯತೆ ಮತ್ತು ನೈತಿಕ ನಿಷ್ಠೆಯನ್ನು ಸಾಕಾರಗೊಳಿಸಿದ್ದಾರೆ. ನನ್ನ ತಂದೆ ಸುಬ್ರಮಣಿಯಂ ರಾಮದಾಸ್ ಗುಹಾ, 1924ರಲ್ಲಿ, ಒಂದು ಕಾಲದಲ್ಲಿ ಊಟಿ(ಉದಕಮಂಡಲ) ಎಂದು ಕರೆಯಲಾಗುವ ಪಟ್ಟಣದಲ್ಲಿ ಜನಿಸಿದರು. ಇಪ್ಪತ್ಮೂರು ವರ್ಷಗಳ ನಂತರ, ಅವರು ಹುಟ್ಟಿದ ಸ್ಥಳಕ್ಕೆ ಭೇಟಿ ನೀಡಿದಾಗ, ವಿಶಾಲಾಕ್ಷಿ ನಾರಾಯಣಮೂರ್ತಿ ಎಂಬ ಯುವತಿಯನ್ನು ಭೇಟಿಯಾಗಿ, ಪ್ರೀತಿಯಲ್ಲಿ ಬಿದ್ದರು. ಆಗ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ, ಮಹಾನ್ ಭೌತಶಾಸ್ತ್ರಜ್ಞ ಜಿ.ಎನ್. ರಾಮಚಂದ್ರನ್ ಅವರಂತೆಯೇ ವಿದ್ಯಾರ್ಥಿ ಸಮೂಹದಲ್ಲಿ ಪಿಎಚ್ಡಿ ಪದವಿ ಪಡೆಯುತ್ತಿದ್ದರು. ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಪೋಸ್ಟ್ ಡಾಕ್ಟರಲ್ ವಿದ್ಯಾರ್ಥಿವೇತನವು ಅವರು ಬಯಸಿದಂತೆಯೇ ಸಿಕ್ಕಿತ್ತು, ಆದರೆ ಮನಸ್ಸಿನ ಮಾತಿನ ಪ್ರಕಾರ ಅವರು ವಿಶಾಲಾಕ್ಷಿಯ ತಂದೆ ಕೆಲಸ ಮಾಡುತ್ತಿದ್ದ ಡೆಹ್ರಾಡೂನ್ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ (ಎಫ್ಆರ್ಐ) ಉದ್ಯೋಗಕ್ಕೆ ಸೇರಿದರು. ನನ್ನ ತಂದೆ 1948ರಲ್ಲಿ ಎಫ್ಆರ್ಐ ಸೇರಿದರು. ಮತ್ತು ಮೂರು ವರ್ಷಗಳ ನಂತರ ನನ್ನ ತಾಯಿಯನ್ನು ವಿವಾಹವಾದರು. ಅವರು ನಿವೃತ್ತಿಯಾಗುವವರೆಗೂ ಅದೇ ಕೆಲಸದಲ್ಲಿಯೇ ಇದ್ದರು. ನನ್ನ ತಂದೆ ಸರಕಾರಿ ಉದ್ಯೋಗಿಗಳ ಕುಟುಂಬಕ್ಕೆ ಸೇರಿದವರು. ಒಬ್ಬ ಸಹೋದರ ವಾಯುಪಡೆಯಲ್ಲಿದ್ದರು, ಒಬ್ಬ ಸಹೋದರಿ ಸೇನಾ ನರ್ಸಿಂಗ್ ಸೇವೆಯಲ್ಲಿದ್ದರು. ಚಿಕ್ಕಪ್ಪ ಮತ್ತು ಸೋದರ ಮಾವ ಅವರಂತೆಯೇ, ಸಾರ್ವಜನಿಕ ಉದ್ದೇಶಗಳಿಗಾಗಿ ತಮ್ಮ ಸಂಶೋಧನೆಯನ್ನು ಕೇಂದ್ರೀಕರಿಸುವ ವಿಜ್ಞಾನಿಗಳಾಗಿದ್ದರು. ನನ್ನ ತಂದೆ ಸ್ವತಃ ಭಾರತ ಸರಕಾರ ಎಂಬ ಪದಗಳನ್ನು ನಿಜವಾದ ಮತ್ತು ಸಂಪೂರ್ಣ ಗೌರವವನ್ನು ಸೂಚಿಸುವ ಧಾಟಿಯಲ್ಲಿ ಬಳಸುತ್ತಿದ್ದರು. ಸರಕಾರದ ಆಸ್ತಿಯನ್ನು ಎಂದಿಗೂ ಖಾಸಗಿ ಉದ್ದೇಶಗಳಿಗಾಗಿ ಬಳಸಬಾರದು ಎಂದು ಅವರು ನಂಬಿದ್ದರು. ಅವರು ಅಧಿಕೃತ ಕಾರಿನ ಬಳಕೆಯನ್ನು ತಿರಸ್ಕರಿಸಿದರು. ಪ್ರತಿದಿನ ತಮ್ಮ ಪ್ರಯೋಗಾಲಯಕ್ಕೆ ಸೈಕಲ್ನಲ್ಲಿ ಹೋಗಿ ಬರುತ್ತಿದ್ದರು. ಸಾರ್ವಜನಿಕ ಸೇವೆಯ ಬಗೆಗಿನ ಈ ಬದ್ಧತೆಯ ಜೊತೆಗೆ, ನನ್ನ ತಂದೆಗೆ ಸಾಮಾಜಿಕ ಪೂರ್ವಾಗ್ರಹದ ಬಗ್ಗೆಯೂ ನಿರ್ಲಕ್ಷ್ಯವಿತ್ತು. ಆ ಸಮಯದಲ್ಲಿ ಇತರ ಭಾರತೀಯ ಸಂಸ್ಥೆಗಳಂತೆ, ಎಫ್ಆರ್ಐನ ವೈಜ್ಞಾನಿಕ ಕೇಡರ್ನಲ್ಲಿ ಬ್ರಾಹ್ಮಣರು ಪ್ರಾಬಲ್ಯ ಹೊಂದಿದ್ದರು. ಅವರ ಮಕ್ಕಳು ತಮ್ಮ ವಂಶಾವಳಿಯ ಬಗ್ಗೆ, ಅವರ ತಂದೆ ಮತ್ತು ತಾವು ಪ್ರತೀ ವರ್ಷ ತಮ್ಮ ಜನಿವಾರಗಳನ್ನು ಹೇಗೆ ಒಟ್ಟಿಗೆ ಬದಲಾಯಿಸುತ್ತಿದ್ದರು ಎಂಬುದರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಹಾಗಿದ್ದರೂ, ನನ್ನ ತಂದೆ ತಮ್ಮ ಉನ್ನತ ಜಾತಿಯನ್ನು ಗುರುತಿಸುವ ಆ ಜನಿವಾರವನ್ನು ಧರಿಸಲು ನಿರಾಕರಿಸಿದರು ಮತ್ತು ನಾನು ಕೂಡ ಧರಿಸಲಿ ಎಂದು ಅವರು ಬಯಸಲಿಲ್ಲ. ಜಾತಿ ಶ್ರೇಣಿಗಳ ಬಗ್ಗೆ ನನ್ನ ತಂದೆಯ ತಿರಸ್ಕಾರವು ಅವರ ಕುಟುಂಬದ ಹಿನ್ನೆಲೆಯಿಂದ ಬಂದಿತ್ತು. ಅವರ ತಂದೆಯ ಸಹೋದರ ಆರ್. ಗೋಪಾಲಸ್ವಾಮಿ ಅಯ್ಯರ್ (1878-1943) ಮೈಸೂರು ರಾಜ್ಯದಲ್ಲಿ ಅಸ್ಪಶ್ಯರ ವಿಮೋಚನೆಗಾಗಿ ಚಳವಳಿಯನ್ನು ಮುನ್ನಡೆಸಿದ ಪ್ರವರ್ತಕ ಸಾಮಾಜಿಕ ಸುಧಾರಕರಾಗಿದ್ದರು. ಬೆಂಗಳೂರಿನ ಚಾಮರಾಜಪೇಟೆ ಪ್ರದೇಶದಲ್ಲಿ ಅವರ ಕೂಡುಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದ ನನ್ನ ತಂದೆ, ತಮ್ಮ ಚಿಕ್ಕಪ್ಪ ಬೆಳಗ್ಗೆ ಬೇಗನೆ ಎದ್ದು ತಮ್ಮ ಸೈಕಲ್ ಹತ್ತಿ ಬೆಂಗಳೂರು ನಗರ ಮತ್ತು ಸುತ್ತಮುತ್ತ ನಡೆಸಲಾಗುತ್ತಿದ್ದ ದಲಿತ ಮಕ್ಕಳ ಹಲವಾರು ಹಾಸ್ಟೆಲ್ಗಳಿಗೆ ಭೇಟಿ ನೀಡುವುದನ್ನು ನೋಡುತ್ತಿದ್ದರು. ನನ್ನ ತಾಯಿ ಹೆಚ್ಚು ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಿಂದ ಬಂದವರು. ಆದರೆ ಮದ್ರಾಸ್ ಮತ್ತು ದಿಲ್ಲಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದದ್ದು ಮತ್ತು ಡೆಹ್ರಾಡೂನ್ನ ಅನ್ಯಪಂಗಡದ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ, ಅದೇ ರೀತಿ ಒಬ್ಬ ವ್ಯಕ್ತಿಯ ವೌಲ್ಯವನ್ನು ಅವರ ಆದಾಯ ಅಥವಾ ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ನಿರ್ಣಯಿಸದಂತೆ ಅವರನ್ನು ರೂಪಿಸಿತ್ತು. ನನ್ನ ಪೋಷಕರು ಎಂದಿಗೂ ತಮ್ಮ ಜಾತ್ಯತೀತ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿಲ್ಲ. ಅವರು ಹೇಗೆ ವರ್ತಿಸಿದರು ಎಂಬುದರಲ್ಲಿ ಇವು ಸ್ಪಷ್ಟವಾಗಿ ಕಂಡುಬಂದವು. ಡೆಹ್ರಾಡೂನ್ನಲ್ಲಿ ಅವರು ಹೆಚ್ಚು ಆತ್ಮೀಯರಾಗಿದ್ದ ಮೂರು ಕುಟುಂಬಗಳು ಕ್ರಮವಾಗಿ ಸಿಖ್, ಕಾಯಸ್ಥ ಮತ್ತು ತಮಿಳು ಕ್ರಿಶ್ಚಿಯನ್. ಬ್ರಾಹ್ಮಣ ಮನೆಗಳಲ್ಲಿ ಅಡುಗೆಯವರನ್ನು ನೇಮಿಸಿಕೊಳ್ಳಲು ಅವಕಾಶವಿತ್ತು, ಆದರೆ ಅವರು ಸಾಮಾನ್ಯವಾಗಿ ಪುರುಷರಾಗಿದ್ದರು ಮತ್ತು ಉದ್ಯೋಗದಾತರಂತೆಯೇ ಅದೇ ಉಪಜಾತಿಗೆ ಸೇರಿದವರಾಗಿದ್ದರು, ಆದ್ದರಿಂದ ಅವರು ತಿನ್ನುವ ಆಹಾರವು ಧಾರ್ಮಿಕವಾಗಿ ‘ಶುದ್ಧ’ವಾಗಿತ್ತು. ಹಾಗಿದ್ದರೂ, ನನ್ನ ಹೆತ್ತವರು ಅಡುಗೆಯವರನ್ನು ಪಡೆಯಲು ಸಾಧ್ಯವಾದರೂ, ನನ್ನ ಯೌವನದಿಂದಲೂ ನನಗೆ ನೆನಪಿರುವ ಇಬ್ಬರು ಗರ್ವಾಲ್ ಹಿಮಾಲಯದ ಬ್ರಾಹ್ಮಣೇತರರು. ನಂತರ, ಜಾತಿ ಮಾನದಂಡಗಳ ಇನ್ನೂ ಗಮನಾರ್ಹ ಉಲ್ಲಂಘನೆಯಲ್ಲಿ, ನನ್ನ ಹೆತ್ತವರು ಮುಸ್ಲಿಮ್ ಅಡುಗೆಯವರನ್ನು ಹೊಂದಿದ್ದರು. ನನ್ನ ತಂದೆಯವರ ಮಾನವೀಯತೆಯು ಸೌಮ್ಯವಾದ ಮೋಜಿನ ಭಾವನೆಯಿಂದ ತುಂಬಿತ್ತು. ಹೀಗಾಗಿ ಅದನ್ನು ಪವಿತ್ರವೆಂದು ನೋಡುವ ಪ್ರಮೇಯ ಬರಲಿಲ್ಲ. ಅವರ ಮೂವತ್ತಕ್ಕೂ ಹೆಚ್ಚು ಪಿಎಚ್ಡಿ ವಿದ್ಯಾರ್ಥಿಗಳಲ್ಲಿ ಮೊದಲನೆಯವರು ವಿ.ಎನ್. ಮುಖರ್ಜಿ ಎಂಬವರು. ನನ್ನ ತಂದೆ ಆಗ್ರಾ ವಿಶ್ವವಿದ್ಯಾನಿಲಯದಿಂದ ತಮ್ಮ ವಿದ್ಯಾರ್ಥಿ ವೈವಾ ಪಾಸಾದ ಸುದ್ದಿ ಕೇಳಿದ ಮರುದಿನ, ಕೆಲಸಕ್ಕೆ ಹೋಗುವ ಮೊದಲು ಬೆಳಗ್ಗೆ ನಮ್ಮ ಮನೆಗೆ ಬರಲು ಹೇಳಿದರು. ವಿ.ಎನ್. ಮುಖರ್ಜಿ ನಮ್ಮ ಮನೆಯ ಕರೆಗಂಟೆ ಬಾರಿಸಿದಾಗ, ನನ್ನ ಸಹೋದರಿ ವಾಣಿ ಮತ್ತು ನಾನು - ಆಗ ಕ್ರಮವಾಗಿ ಹನ್ನೆರಡು ಮತ್ತು ಹತ್ತು ವರ್ಷ ವಯಸ್ಸಿನವರು - ಬಾಗಿಲು ತೆರೆದೆವು. ನಮ್ಮ ತಂದೆಯವರ ಸೂಚನೆಯಂತೆ, ನಾವು ಅವರನ್ನು ‘‘ಗುಡ್ ಮಾರ್ನಿಂಗ್ ಡಾ. ಮುಖರ್ಜಿ!’’ ಎಂದು ಸ್ವಾಗತಿಸಿದೆವು. ಸಹಜವಾಗಿಯೇ ಹಿಂದಿನ ಸಂಜೆಯವರೆಗೆ ಅವರು ಕೇವಲ ‘ಶ್ರೀ ಮುಖರ್ಜಿ’ ಆಗಿದ್ದರು. ಅವರ ಮುಖದಲ್ಲಿ ಸಂತೋಷ ಮತ್ತು ಆನಂದದ ನೋಟ ನೋಡಲು ಅದ್ಭುತವಾಗಿತ್ತು. ಶಾಲಾ ಶಿಕ್ಷಕಿಯಾಗಿ, ನನ್ನ ತಾಯಿ ನನ್ನ ತಂದೆಗಿಂತ ಹೆಚ್ಚಿನ ಜನರ ಜೀವನವನ್ನು ಮುಟ್ಟಿದರು. ಎರಡು ದಶಕಗಳಿಗೂ ಹೆಚ್ಚು ಕಾಲ, ಅವರು ಡೆಹ್ರಾಡೂನ್ ಕಂಟೋನ್ಮೆಂಟ್ನಲ್ಲಿರುವ ಕ್ಯಾಂಬ್ರಿಯನ್ ಹಾಲ್ ಎಂಬ ಶಾಲೆಯಲ್ಲಿ ಹಿಂದಿ, ಇಂಗ್ಲಿಷ್, ಅರ್ಥಶಾಸ್ತ್ರ ಮತ್ತು ಭೂಗೋಳಶಾಸ್ತ್ರವನ್ನು ಕಲಿಸಿದರು. ಜಾತಿ, ವರ್ಗ, ಧರ್ಮ ಅಥವಾ - ಬಹುಶಃ ಅತ್ಯಂತ ಮುಖ್ಯವಾದ - ಕಲಿಕೆಯ ಸಾಮರ್ಥ್ಯದ ಆಧಾರದ ಮೇಲೆ ತನ್ನ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಲು ಅವರು ನಿರಾಕರಿಸಿದರು. ಅವರ ವಿದ್ಯಾರ್ಥಿಗಳು ಅವರನ್ನು ತುಂಬಾ ಪ್ರೀತಿಸುತ್ತಿದ್ದರು, ಅವರು ಮೆಟ್ರಿಕ್ಯುಲೇಷನ್ ಮುಗಿದ ನಂತರ ವರ್ಷಗಳ ಕಾಲ ಅವರೊಂದಿಗೆ ಸಂಪರ್ಕದಲ್ಲಿದ್ದರು. ಪ್ರತೀ ಶಿಕ್ಷಕರ ದಿನದಂದು ಅವರಿಗೆ ಹಲವಾರು ಫೋನ್ ಕರೆಗಳು ಬರುತ್ತಿದ್ದವು, ಜೊತೆಗೆ ಈಗ ಐವತ್ತು ಅಥವಾ ಅರವತ್ತರ ಹರೆಯದ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ‘ಮೇಡಂ ಗುಹಾ’ಗಾಗಿ ಹೂವಿನ ಪುಷ್ಪಗುಚ್ಛದೊಂದಿಗೆ ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದರು. 2001ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದಾಗ, ನಮ್ಮ ಹೈಕಮಿಷನ್ಗೆ ನೇಮಕಗೊಂಡ ಭಾರತೀಯ ಪೊಲೀಸ್ ಅಧಿಕಾರಿಯನ್ನು ನಾನು ಭೇಟಿಯಾದೆ. ನನ್ನ ಹಿನ್ನೆಲೆಯನ್ನು ತಿಳಿದುಕೊಂಡ ಅವರು, ‘‘ನಾನು ಮೇಡಂ ಗುಹಾ ಅವರ ನೆಚ್ಚಿನ ವಿದ್ಯಾರ್ಥಿ’’ ಎಂದು ಹೇಳಿದರು. ಅವರ ಬಾಸ್ ತಕ್ಷಣ ಅವರನ್ನು ಸರಿಪಡಿಸಿ, ‘‘ಅವರ ನೆಚ್ಚಿನ ವಿದ್ಯಾರ್ಥಿ ಯಾರು ಎಂದು ಹೇಳಬೇಕಿರುವುದು ಅವರು’’ ಎಂದು ಹೇಳಿದರು. ಆ ಕಿರಿಯ ಅಧಿಕಾರಿಯ ಬಗ್ಗೆ ನನಗೆ ವಿಷಾದವಾಯಿತು. ಏಕೆಂದರೆ ಬಹುಶಃ ನನ್ನ ತಾಯಿಯ ಗುಣ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನನ್ನು ತಾನು ಅವರ ನೆಚ್ಚಿನವನು ಎಂದು ಭಾವಿಸುವಂತೆ ಮಾಡುತ್ತಿತ್ತು. ಹದಿನೈದು ವರ್ಷಗಳ ನಂತರವೂ, ನಾನು ದಿಲ್ಲಿಯ ರೆಸ್ಟೋರೆಂಟ್ನಲ್ಲಿ ಸಂಪಾದಕರೊಂದಿಗೆ ಊಟ ಮಾಡುತ್ತಿದ್ದಾಗ, ವೈಟರ್ ಮತ್ತೊಂದು ಮೇಜಿನ ಕಡೆಯ ಒಬ್ಬ ಯುವಕನಿಂದ ಒಂದು ಚೀಟಿಯನ್ನು ತಂದನು. ‘ನಿಸ್ಸಂದೇಹವಾಗಿ ನಿಮ್ಮ ಅಭಿಮಾನಿಗಳಲ್ಲಿ ಒಬ್ಬರು’ ಎಂದು ಸಂಪಾದಕರು ಹೇಳಿದರು. ವಾಸ್ತವವಾಗಿ, ಈಗ ಪುಣೆಯಲ್ಲಿ ನೆಲೆಸಿರುವ ಆ ಯುವಕನ ತಾಯಿ ಡೆಹ್ರಾಡೂನ್ನಲ್ಲಿ ನನ್ನ ತಾಯಿಯ ವಿದ್ಯಾರ್ಥಿನಿಯಾಗಿದ್ದರು ಮತ್ತು ಈಗಲೂ ಅವರ ಬಗ್ಗೆ ಪ್ರೀತಿ ಮತ್ತು ಗೌರವದಿಂದ ಮಾತನಾಡುತ್ತಾರೆ ಎಂದು ಆ ಚೀಟಿಯಲ್ಲಿ ಬರೆಯಲಾಗಿತ್ತು. ನನ್ನ ತಾಯಿಯ ಮರಣದ ನಂತರ, ಬೋಧನೆ - ಮತ್ತು ವಿಶೇಷವಾಗಿ ಶಾಲಾ ಬೋಧನೆ- ಹೇಗೆ ಅತ್ಯಂತ ಉದಾತ್ತ ವೃತ್ತಿಯಾಗಿರಬಹುದು ಎಂಬುದನ್ನು ನಾನು ಮತ್ತೆ ಅರಿತುಕೊಂಡಿದ್ದೇನೆ. ಶಿಕ್ಷಕರು ಇತರ, ಹೆಚ್ಚು ಸ್ವಾರ್ಥಿ ವೃತ್ತಿಗಳಲ್ಲಿ ಅಪರೂಪಕ್ಕೆ-ಮತ್ತು ಹೆಚ್ಚಾಗಿ ಗೈರುಹಾಜರಾಗಿ - ತಮ್ಮನ್ನು ತಾವು ಹಂಚಿಕೊಳ್ಳುತ್ತಾರೆ ಮತ್ತು ಕೊಟ್ಟುಕೊಳ್ಳುತ್ತಾರೆ. ಅವರು ನಲುವತ್ತೊಂದು ವರ್ಷಗಳ ಹಿಂದೆ ನಿವೃತ್ತರಾಗಿದ್ದರೂ, ನನ್ನ ತಾಯಿ ಕಲಿಸಿದವರಿಂದ ನನಗೆ ನಿರಂತರ ಸಂದೇಶಗಳು ಬರುತ್ತಿವೆ. ಅವರು ಸ್ವತಃ ಯಶಸ್ವಿ ಶಿಕ್ಷಣ ತಜ್ಞರು, ನಟರು, ಸೇನಾಧಿಕಾರಿಗಳು, ಯುದ್ಧ ಪೈಲಟ್ಗಳು, ಲೇಖಕರು, ವೈದ್ಯರು, ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಶಿಕ್ಷಕರು ಆಗಿದ್ದಾರೆ. ನನ್ನ ತಂದೆ 2012ರ ಕ್ರಿಸ್ಮಸ್ ದಿನ ಎಂಭತ್ತೆಂಟನೇ ವಯಸ್ಸಿನಲ್ಲಿ ನಿಧನರಾದರು. ಅವರ ಕೊನೆಯ ಅನಾರೋಗ್ಯದ ಹೊತ್ತಲ್ಲಿ ಅವರನ್ನು ಸ್ನೇಹಿತರಾಗಿದ್ದ ಇಬ್ಬರು ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದರು. ಅವರ ಹೆಸರು ಅಬ್ಬಾಸ್ ಮತ್ತು ರಾಧಾಕೃಷ್ಣ. ನನ್ನ ತಾಯಿ ಈಗ ಬೆಂಗಳೂರಿನ ಕೋರಮಂಗಲದಲ್ಲಿರುವ ಮನೆಯಿಂದ ಹೊರಬಂದು, ಅಂದಿನಿಂದ ನನ್ನ ಸಹೋದರಿ ಮತ್ತು ನನ್ನೊಂದಿಗೆ ಪರ್ಯಾಯವಾಗಿ ವಾಸಿಸುತ್ತಿದ್ದರು. ಅವರಿಗೆ ವೃದ್ಧಾಪ್ಯದ ಸಾಮಾನ್ಯ ದೌರ್ಬಲ್ಯಗಳಿದ್ದವು. ಆದರೆ ಕುಟುಂಬ, ಸ್ನೇಹಿತರು ಮತ್ತು ಹಳೆಯ ವಿದ್ಯಾರ್ಥಿಗಳ ಸಹವಾಸದಲ್ಲಿರಲು ಸಂತೋಷಪಡುತ್ತಿದ್ದರು. ಎಂದಿಗೂ ಬಹಿರಂಗವಾಗಿ ರಾಜಕೀಯ ವ್ಯಕ್ತಿಯಾಗಿಲ್ಲದಿದ್ದರೂ, ಹಿಂದುತ್ವದ ಮತಾಂಧತೆಯ ಏರುತ್ತಿರುವ ಅಲೆಯು ಅವರನ್ನು ನಿರಾಶೆಗೊಳಿಸಿದೆ ಎಂಬುದನ್ನು ಅವರು ಹೇಳಿದ್ದರು. ನೆಹರೂ ಯುಗದ ಬಹುತ್ವವಾದಿ, ಎಲ್ಲರನ್ನೂ ಒಳಗೊಳ್ಳುವ ವಾತಾವರಣದಿಂದ ರೂಪುಗೊಂಡ ಒಬ್ಬ ವ್ಯಕ್ತಿಗೆ, ತನ್ನ ಸಹ ಹಿಂದೂಗಳಿಗೆ ಮಾತ್ರ ಈ ಭೂಮಿಯ ಮೇಲೆ ಪೂರ್ವ ಮತ್ತು ಸ್ವಾಮ್ಯದ ಹಕ್ಕಿದೆ ಎಂಬ ಕಲ್ಪನೆಯು ಅಸಹ್ಯಕರವಾಗಿತ್ತು. ನನಗೆ ಈಗ ಭಾವಪೂರ್ಣವಾಗಿ ನೆನಪಿರುವಂತೆ, ಡೆಹ್ರಾಡೂನ್ನಲ್ಲಿ ಇಬ್ಬರು ಬೋಧನಾ ಸಹೋದ್ಯೋಗಿಗಳು ಅವರ ಸಲಹೆಯನ್ನು ವಿಶೇಷವಾಗಿ ಗೌರವಿಸುತ್ತಿದ್ದರು. ಅವರ ಹೆಸರು ಡೈಸಿ ಬಟ್ಲರ್ವೈಟ್ ಮತ್ತು ನಿಘತ್ ರೆಹಮಾನ್. ಅವರ ಬೆಂಗಳೂರಿನ ವರ್ಷಗಳ ಆತ್ಮೀಯ ಸ್ನೇಹಿತರಲ್ಲಿ ಲೈಕ್ ಮತ್ತು ಜಾಫರ್ ಫುಟೆಹಲ್ಲಿ ಎಂಬ ದಂಪತಿ ಇದ್ದರು. ನಾನು ಬಹು ರೀತಿಯ ಸವಲತ್ತುಗಳೊಂದಿಗೆ ಹುಟ್ಟಿದ್ದೇನೆ - ಹಿಂದೂಗಳು ಪ್ರಾಬಲ್ಯ ಹೊಂದಿರುವ ಮತ್ತು ನಡೆಸುವ ದೇಶದಲ್ಲಿ ವಾಸಿಸುವ ಹಿಂದೂವಾಗಿ, ಜಾತಿ ಪೂರ್ವಾಗ್ರಹದಲ್ಲಿ ಮುಳುಗಿರುವ ಸಂಸ್ಕೃತಿಯಲ್ಲಿ ಬ್ರಾಹ್ಮಣನಾಗಿ, ಪಿತೃಪ್ರಭುತ್ವದಿಂದ ವಿರೂಪಗೊಂಡ ಸಮಾಜದಲ್ಲಿ ಮನುಷ್ಯನಾಗಿ, ಆ ಭಾಷೆ ಅನೇಕ ಬಾಗಿಲುಗಳನ್ನು ತೆರೆಯುವ ರಾಷ್ಟ್ರದಲ್ಲಿ ನಿರರ್ಗಳ ಇಂಗ್ಲಿಷ್ ಮಾತನಾಡುವವನಾಗಿ. ಈ ಗಳಿಸದ ಅನುಕೂಲಗಳು ನನ್ನ ಜೀವನ ಪ್ರಯಾಣವನ್ನು ಅವಿಲ್ಲದಿದ್ದರೆ ಇರಬಹುದಾಗಿದ್ದಕ್ಕಿಂತ ಹೆಚ್ಚು ಆರಾಮದಾಯಕವಾಗಿಸಿವೆ. ಆದರೂ ನನ್ನ ಹೆತ್ತವರ ಉದಾಹರಣೆಯು ಇತರ ಭಾರತೀಯರು ಎಷ್ಟು ಕಡಿಮೆ ಸವಲತ್ತು ಹೊಂದಿದ್ದಾರೆಂದು ನನಗೆ ಅರಿವು ಮೂಡಿಸಲು ಸಹಾಯ ಮಾಡಿತು. ನಾನು ಅವರ ಜೀವನವನ್ನು ಹಿಂದಿರುಗಿ ನೋಡಿದಾಗ, ಚಿಕ್ಕಂದಿಗಿಂತ ಈಗ ಹೆಚ್ಚು ಸ್ಪಷ್ಟವಾಗಿ, ನನ್ನ ಹೆತ್ತವರು ಸೈದ್ಧಾಂತಿಕವಾಗಿ ಅಲ್ಲ, ಆಚರಣೆಯಲ್ಲಿ ವೌನವಾಗಿ ಮತ್ತು ನಿಸ್ವಾರ್ಥವಾಗಿ ಪೌರತ್ವದ ಹೃದಯಭಾಗದಲ್ಲಿರುವ ಭ್ರಾತೃತ್ವ ಮತ್ತು ತಾರತಮ್ಯರಹಿತ ಮನೋಭಾವವನ್ನು ಹೇಗೆ ದೃಢಪಡಿಸಿದರು ಎಂಬುದನ್ನು ನಾನು ನೋಡಬಹುದು. ramachandraguha@yahoo.in
ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ತಡೆಗೆ 29 ಚೆಕ್ ಪೋಸ್ಟ್ ಗಳ ಸ್ಥಾಪನೆ: ಎಸ್ಪಿ ಹರಿರಾಂ ಶಂಕರ್
'ವಾರದಲ್ಲಿ 11 ವಾಹನಗಳ ವಿರುದ್ಧ ಕ್ರಮ '
ಅಪಾರ್ಟ್ಮೆಂಟ್ ಮಾಲೀಕತ್ವ ಕಾಯಿದೆಗೆ ಹೊಸ ರೂಪ: ಏನಿದು ಅಪಾರ್ಟ್ಮೆಂಟ್ ಮಸೂದೆ 2025? ಮಾಲೀಕರಿಗೆ ಪ್ರಯೋಜನಗಳೇನು?
ರಾಜ್ಯದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಭದ್ರತೆ ಮತ್ತು ಸ್ಪಷ್ಟತೆ ನೀಡುವ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಶೀಘ್ರದಲ್ಲೇ ಜಾರಿಗೆ ಬರಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಈ ಮಸೂದೆಯು ಅಪಾರ್ಟ್ಮೆಂಟ್ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಹೊಸ ಕಾನೂನು ಮಾರ್ಗಸೂಚಿಗಳನ್ನು ಒದಗಿಸಲಿದೆ. ನಿವಾಸಿಗಳ ಕಲ್ಯಾಣ ಸಂಘಗಳ ಬಲವರ್ಧನೆ, ಸಾಮಾನ್ಯ ಪ್ರದೇಶಗಳ ಸುಗಮ ನಿರ್ವಹಣೆ ಮತ್ತು ವಿವಾದಗಳ ಪರಿಹಾರಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಫಲಿತಾಂಶದ ನಂತರ ಈ ಮಸೂದೆಯ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.
ಕರ್ನಾಟಕ ದ್ವೇಷ ಭಾಷಣ ವಿಧೇಯಕ: ಇದು ಜನರ ಧ್ವನಿ ಹತ್ತಿಕ್ಕುವ ಕಾಯ್ದೆ: ಕರವೇ ತೀವ್ರ ವಿರೋಧ
Karnataka Hate Speech Bill 2025: ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳು, ರೈತರು, ವಿಪಕ್ಷ ನಾಯಕರ ಪ್ರತಿಭಟನೆ ಎದುರಿಸಿತ್ತು. ಇದೀಗ ಕನ್ನಡ ಪರ ಚಳವಳಿಗಾರರ ಪ್ರತಿಭಟನೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಈ ಕಾನೂನು ಅನ್ನು ಕರ್ನಾಟಕ ರಕ್ಷಣಾ
VIJAYAPURA | ರೋಗಿ ಮೃತ್ಯು: ತಾಳಿಕೋಟೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ
ಮೃತರ ಕುಟುಂಬಸ್ಥರಿಂದ ಆಸ್ಪತ್ರೆ ಎದುರು ಪ್ರತಿಭಟನೆ
ಮಮತಾ ಬ್ಯಾನರ್ಜಿ ಬಂಧಿಸಿದರೆ 'ಮೆಸ್ಸಿ ಮೆಸ್' ಸತ್ಯ ಹೊರಬರುತ್ತದೆ ಎಂದ ಅಸ್ಸಾಂ ಸಿಎಂ ಹೀಮಂತ ಬಿಸ್ವಾ ಶರ್ಮಾ!
GOAT ಇಂಡಿಯಾ ಟೂರ್ ಕಾರ್ಯಕ್ರಮದಡಿ ಜಾಗತಿಕ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಮೆಸ್ಸಿ ಅಭಿಮಾನಿಗಳ ಪ್ರತಿಭಟನೆ ಇದೀಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ವಿಚಾರಣೆಗೆ ಗುರಿಡಪಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಒತ್ತಾಯಿಸಿದ್ದಾರೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

19 C