ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೇನು ಗೊತ್ತು ಅದರ ಮಹತ್ವ?: ಡಾ.ಅಂಜಲಿ ನಿಂಬಾಳ್ಕರ್
ಸಿದ್ದಾಪುರ: ಹುಟ್ಟಿದ್ದೀನಿ ತಾಯಿ ಹೊಟ್ಟೆಯಲ್ಲಿ, ಬದುಕುತ್ತಿದ್ದೀನಿ ಕನ್ನಡ ನಾಡಿನಲ್ಲಿ, ಹಿಂದೂ ಧರ್ಮದಿಂದ ಮಂಗಳಸೂತ್ರ ಹಾಕಿದ್ದೇನೆ. ದೇಶಕ್ಕಾಗಿ ಸೋನಿಯಾ ಗಾಂಧಿ ಮಂಗಳಸೂತ್ರವನ್ನೇ ಬಲಿದಾನ ನೀಡಿದರು. ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಗೆ ಏನು ಗೊತ್ತು ಅದರ ಮಹತ್ವ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ. ಹೊಸುರ ಜನತಾ ಕಾಲೋನಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ಎಂಬ ಅಭಿಮಾನ ಇದೆ. ಆದರೆ ಇವರ ಹೇಳಿಕೆಯಿಂದ ನೋವಾಗುತ್ತಿದೆ. ರಾಜೀವ್ ಗಾಂಧಿ, ಇಂದಿರಾಗಾಂಧಿ, ನರಸಿಂಹ ರಾವ್, ಮನಮೋಹನ್ ಸಿಂಗ್ ರಂಥ ಪ್ರಧಾನಿಗಳನ್ನ ನೋಡಿದ್ದೇವೆ. ಇವರ ವಾಟ್ಸಪ್ ಯೂನಿವರ್ಸಿಟಿಗೆ ಬಳಸೋ ಮೊಬೈಲ್ ಕೊಟ್ಟಿದ್ದು ನಮ್ಮ ರಾಜೀವ್ ಗಾಂಧಿ. ಗರೀಬಿ ಹಠಾವೋ ಘೋಷಣೆಯನ್ನ ಇಂದಿರಾಗಾಂಧಿ ಅವತ್ತೇ ಕೊಟ್ಟಿದ್ದಕ್ಕೇ ಈಗ ಎಲ್ಲರೂ ಹಾಫ್ ಚಡ್ಡಿಯಿಂದ ಫುಲ್ ಚಡ್ಡಿಗೆ ಬಂದಿದ್ದಾರೆ ಎಂದರು. ಹತ್ತು ವರ್ಷದಿಂದ ಕೇವಲ ನಾನೇ ನಾನೇ ಎಂಬುದು ದೇಶದಲ್ಲಿ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂದು ಸುಪ್ರೀಂ ಕೋರ್ಟ್ನಿಂದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲೇ ತೀರ್ಪು ಬಂದಿತ್ತು. ಅಂದು ಗಲಾಟೆಗಳು ನಡೆದು ಈಗ ಸುಪ್ರೀಂ ಮರು ತೀರ್ಪು ನೀಡಿ ಅಲ್ಲಿ ರಾಮ ಮಂದಿರವೂ ಆಗಬೇಕು, ಸ್ವಲ್ಪ ಜಾಗ ಮುಸ್ಲಿಮರಿಗೂ ಕೊಡಬೇಕು ಎಂದಿತು. ನನಗಿನ್ನೂ ನೆನಪಿದೆ, ಎಲ್.ಕೆ.ಅಡ್ವಾಣಿ ಕರೆ ಕೊಟ್ಟಾಗ ಖಾನಾಪುರದಿಂದ ಇಟ್ಟಿಗೆ ತೆಗೆದುಕೊಂಡು ನಮ್ಮ ಜನ ಅಯೋಧ್ಯೆಗೆ ಹೋಗಿದ್ದರು. ಆದರೆ ಪ್ರಧಾನಿ ಮಂದಿರ ಕಟ್ಟಿದ್ದು ನಾನೇ ಎನ್ನುತ್ತಾರೆ ಎಂದು ಕಿಡಿಕಾರಿದರು. ಚುನಾವಣೆಗಾಗಿ ಅರ್ಧಂಬರ್ಧ ಮಂದಿರ ತೆರೆದಿದ್ದಾರೆಂದು ಹೋಗಿ ಬಂದವರು ಹೇಳುತ್ತಿದ್ದಾರೆ. ಪೋಸ್ಟರ್ಗಳಲ್ಲಿ ಪ್ರಧಾನಿಯದ್ದು ದೊಡ್ಡ ಫೋಟೊ, ರಾಮನದ್ದು ಚಿಕ್ಕ ಫೋಟೊ. ಕೇಳಿದರೆ ರಾಮಲಲ್ಲಾ ಎನ್ನುತ್ತಾರೆ. ನಮ್ಮ ಪೂರ್ವಜರು ಹೇಳಿಕೊಟ್ಟಂತೆ ಸಂಪ್ರದಾಯ ಪಾಲಿಸುತ್ತಿದ್ದೇವೆ. ಯಾವ ರಾಮ ಮಂದಿರಕ್ಕೆ ಹೋದರೂ ರಾಮನ ಮೂರ್ತಿ ಒಂಟಿಯಾಗಿದ್ದನ್ನ ನಾನು ಯಾವತ್ತೂ ನೋಡಿಲ್ಲ. ಯಾವತ್ತೂ ರಾಮ- ಸೀತಾ- ಲಕ್ಷ್ಮಣ ಜೊತೆಯಾಗಿ ಹನುಮಾನ್ ಇದ್ದೇ ಇರುತ್ತಾನೆ. ಆದರೆ ಬಿಜೆಪಿಗರದ್ದು ಏನಿದು ಹೊಸ ಸಂಪ್ರದಾಯ? ಬಿಜೆಪಿಗರೇ ಹೇಳಿದ್ದು ಸತ್ಯ, ಮಾಡಿದ್ದೇ ಇತಿಹಾಸ ಎನ್ನುವುದಾದರೆ ವೇದ- ಪುರಾಣ, ನಮ್ಮ ಪೂರ್ವಜರು ಹೇಳಿಕೊಟ್ಟ ಇತಿಹಾಸ ಏನಾಯಿತು? ಈಗ ಬಿಜೆಪಿಗರ ಹೊಸ ಇತಿಹಾಸ ಕೇಳಬೇಕಾ? ಎಂದು ಪ್ರಶ್ನಿಸಿದ ಅವರು, ಯಾವ ದೇವರಿಗೆ ಹೇಗೆ ಪೂಜೆ ಮಾಡಬೇಕೆಂಬುದು ಇವರು ಹೇಳಬೇಕಾ? ನಮಗೆ ನಮ್ಮ ತಾಯಿ ಹೇಳಿಕೊಟ್ಟಿದ್ದಾಳೆ ಹೇಗೆ ಪೂಜೆ ಮಾಡಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಕಂಬಕ್ಕೆ ವಾಹನ ಢಿಕ್ಕಿ: ಓರ್ವ ಮೃತ್ಯು, ಆರು ಮಂದಿಗೆ ಗಾಯ
ಬೈಂದೂರು, ಎ.28: ವಾಹನವೊಂದು ರಸ್ತೆಯ ಡಿವೈಡರ್ ಮಧ್ಯೆ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಎ.27ರಂದು ಸಂಜೆ ವೇಳೆ ಕಿರಿಮಂಜೇಶ್ವರ ಬಳಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂಲದ ರಾಮಣ್ಣ ಎಂದು ಗುರುತಿಸಲಾಗಿದೆ. ಚಾಲಕ ನಿರಂಜನ, ಹನಮಂತ, ಪ್ರಜ್ವಲ್, ಶಿವಕ್ಕ, ರೇಷ್ಮಾ, ಕಾವ್ಯ ಎಂಬವರು ಗಾಯಗೊಂಡಿದ್ದಾರೆ. ಬಾಗಲಕೋಟೆ ಮೂಲದ ಇವರು ಸಂಬಂಧಿಕರ ಮದುವೆಯ ಪ್ರಯುಕ್ತ ಉಡುಪಿಯಿಂದ ಬೊಲೇರೋ ವಾಹನದಲ್ಲಿ ಬಾದಾಮಿಗೆ ಹೊರಟಿದ್ದರು. ಮದುವೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ಸುಮಾರು 50 ಅಡಿ ದೂರದ ತನಕ ಹೋಗಿ ಡಿವೈಡರ್ ಮದ್ಯದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಮಣ್ಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಢಿಕ್ಕಿ: ರಸ್ತೆ ದಾಟುತ್ತಿದ್ದ ಟ್ಯಾಂಕರ್ ಚಾಲಕ ಮೃತ್ಯು
ಪಡುಬಿದ್ರಿ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಟ್ಯಾಂಕರ್ ಚಾಲಕರೊಬ್ಬರು ಮೃತಪಟ್ಟ ಘಟನೆ ತೆಂಕ ಎರ್ಮಾಳು ಗ್ರಾಮದ ಲಕ್ಷ್ಮೀ ಜನಾರ್ದನ ಹೊಟೇಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎ.27ರಂದು ರಾತ್ರಿ ನಡೆದಿದೆ. ಮೃತರನ್ನು ದ.ಕ. ಜಿಲ್ಲೆಯ ಬಿ.ಸಂಜೀವ(58) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನಿಂದ ಉಡುಪಿ ಕಡೆಗೆ ಟ್ಯಾಂಕರ್ ಚಲಾಯಿಸಿಕೊಂಡು ಬಂದು ಹೊಟೇಲ್ಗೆ ಹೋಗಲು ತೆಂಕ ಎರ್ಮಾಳು ಬಳಿ ನಿಲ್ಲಿಸಿದರು. ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಹೊಟೇಲ್ಗೆ ಹೋಗಲು ರಸ್ತೆಯನ್ನು ದಾಟಲು ರಸ್ತೆಯ ಬದಿ ನಿಂತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ಬೈಕ್, ಸಂಜೀವ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪರಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಪೂರ್ಣಪ್ರಜ್ಞ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕೆಲವು ಚೆಕ್ಪೋಸ್ಟ್ಗಳ ತೆರವು: ಗಡಿಭಾಗದಲ್ಲಿ ಕಟ್ಟೆಚ್ಚರ
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳ ಪೈಕಿ ಕೆಲವು ಚೆಕ್ ಪೋಸ್ಟ್ಗಳನ್ನು ಮೊದಲ ಹಂತದ ಮತದಾನ ಮುಗಿದ ಹಿನ್ನೆಲೆಯಲ್ಲಿ ತೆರವು ಗೊಳಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣ, ಮದ್ಯ ಸಹಿತ ಇತರ ವಸ್ತು ಗಳನ್ನು ಸಾಗಾಟ ಮಾಡದಂತೆ ಕಟ್ಟೆಚ್ಚರ ವಹಿ ಸಲು ಒಟ್ಟು 18 ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿತ್ತು. ಇದೀಗ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರದ ಮತದಾನ ಮುಗಿದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗ ಸಹಿತ ವಿವಿಧೆಡೆ ಅಳವಡಿಸಲಾಗಿದ್ದ ಚೆಕ್ಪೋಸ್ಟ್ ಯಥಾಸ್ಥಿತಿ ಮುಂದುವರಿಸಲಾಗಿದೆ. ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಾರಣ ಅಲ್ಲಿ ಹಾಕಲಾ ಗಿರುವ ಚೆಕ್ಪೋಸ್ಟ್ಗಳನ್ನು ಮೇ 8ರವರೆಗೂ ಮುಂದುವರಿಸಲಾಗುತ್ತದೆ. ಕೆಲವು ಭಾಗದಲ್ಲಿ ಈಗಾಗಲೇ ಚೆಕ್ಪೋಸ್ಟ್ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಶಿರೂರು, ದಳಿ, ಹೊಸಂಗಡಿ, ಸೋಮೇಶ್ವರ ಭಾಗದಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ಹೆಚ್ಚುವರಿ ಎಫ್ಎಸ್ಟಿ, ಎಸ್ಎಸ್ಟಿ, ಪೊಲೀಸ್, ಅಬಕಾರಿ ತಂಡಗಳು ಈ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ʼಬೇಟಿ ಬಚಾವೋʼ ಎಂದು ಘೋಷಣೆ ಬದಲಿಸಬೇಕಿದೆ : ಸುರ್ಜೇವಾಲ
ಕಲಬುರಗಿ: 'ಬೇಟಿ ಬಚಾವೋ ಬೇಟಿ ಪಡಾವೋ' ಎನ್ನುವುದು ಮೋದಿ ಅವರ ಘೋಷಣೆಯಾಗಿತ್ತು. ಆದರೆ, ಈಗ ಅದೇ ಘೋಷಣೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಬೇಟಿ ಬಚಾವೋ ಎಂದು ಬದಲಿಸಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದರು. ನಗರದ ಕೆಬಿಎನ್ ಆಡಿಟೋರಿಯಂನಲ್ಲಿ ನಡೆದ ಪ್ರಗತಿಪರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಮಹಿಳೆಯರ ಕುರಿತ ಮೋದಿ ಅವರ ಘೋಷಣೆಯನ್ನು ಈಗ ಬಿಜೆಪಿ ಔರ್ ಜೆಡಿಎಸ್ ಸೇ ಬೇಟಿ ಬಚಾವೊ ಎಂದು ಬದಲಾಯಿಸಬೇಕಿದೆ ಎಂದರು. ಹತ್ತು ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿದ ಸುರ್ಜೇವಾಲ ಅವರು ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ತಾವು ಅಡುವ ಮಾತಿನಂತೆ ನಡೆದುಕೊಳ್ಳಬೇಕು ಅಂದಾಗ ಮಾತ್ರ ಅವರ ನಾಲಿಗೆಗೆ ಹಾಗೂ ಮಾತುಗಳಿಗೆ ಬೆಲೆ ಇರುತ್ತದೆ. 2014 ರಲ್ಲಿ ಮಹಾನುಭಾವರೊಬ್ಬರು ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದರು. ಭಾರತೀಯರಿಗೆ ತಲಾ 15 ಲಕ್ಷ ರೂ. ಹಂಚುವುದಾಗಿ ಹೇಳಿದ್ದರು. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈ ಯಾವ ಭರವಸೆಗಳನ್ನೂ ಹತ್ತು ವರ್ಷಗಳ ಅವಧಿಯಲ್ಲಿ ಈಡೇರಿಸಲಿಲ್ಲ. ಹೀಗಿದಾರೆ ಅವರ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಬೆಲೆ ಸಿಗುವುದಿಲ್ಲ ಎಂದರು. ಮೋದಿ ಅವರಿಗೆ ಮಾತನಾಡಲು ಯಾವುದೇ ವಿಷಯಗಳು ಇಲ್ಲದಿರುವಾಗ ಕಾಂಗ್ರೆಸ್ ಪಕ್ಷವನ್ನು, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಟು ಶಬ್ದಗಳಿಂದ ಟೀಕಿಸುತ್ತಾರೆ. ಚುನಾವಣೆ ಈ ಸಂದರ್ಭದಲ್ಲಿ ಧರ್ಮಗಳ ಆಧಾರದ ಮೇಲೆ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು. ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಜನಪರ ಆಡಳಿತ ನೀಡಲು ಸಹಕರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಫರಾಜ್ ಉಲ್ ಇಸ್ಲಾಂ, ಜಗದೇವ್ ಗುತ್ತೇದಾರ ಸೇರಿದಂತೆ ಇತರರು ಇದ್ದರು.
ಬಾಂಗ್ಲಾದಲ್ಲಿ ಉಷ್ಣಮಾರುತ ಉಲ್ಬಣದ ನಡುವೆಯೂ ಶಾಲಾ ಕಾಲೇಜುಗಳು ಪುನಾರಂಭ
ಢಾಕಾ: ತೀವ್ರವಾದ ಬಿಸಿಲತಾ ಮುಂದುವರಿದಿದ್ದರೂ, ಬಾಂಗ್ಲಾದೇಶದಲ್ಲಿ ರವಿವಾರ ಶಾಲಾತರಗತಿಗಳು ಪುನಾರಂಭಗೊಂಡಿದ್ದು,ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿದ್ದಾರೆ. ತೀವ್ರ ಉಷ್ಣ ಮಾರುತದ ಹಿನ್ನೆಲೆಯಲ್ಲಿ ಕಳೆದ ವಾರ ಬಾಂಗ್ಲಾದ್ಯಂತ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರಾಜಧಾನಿ ಢಾಕದಲ್ಲಿ ಕಳೆದ ವಾರ ಗರಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ (7.2-9 ಡಿಗಿ ಫ್ಯಾರನ್ಹೀಟ್) ಆಗಿದ್ದು, ಇದು ಈ ಅವಧಿಯಲ್ಲಿ ಕಳೆದ 30 ವರ್ಷಗಳಲ್ಲೇ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ದೇಶದಲ್ಲಿ ಉಷ್ಣಮಾರುತದ ಪರಿಸ್ಥಿತಿ ಇನ್ನೂ ಹಲವಾರು ದಿನಗಳ ಕಾಲ ಮುಂದುವರಿಯಲಿದೆ ಎಂದು ವರದಿ ಮಾಡಿದೆ. ಬಾಂಗ್ಲಾದ ನಾಲ್ಕನೇ ಮೂರು ಭಾಗದಷ್ಟು ಭೂಪ್ರದೇಶದ ಮೇಲೆ ಉಷ್ಣ ಮಾರುತ ತೀವ್ರವಾದ ಪರಿಣಾಮ ಬೀರಿದೆಯೆಂದು ಹವಾಮಾನ ತಜ್ಞ ಮುಹಮ್ಮದ್ ಅಬ್ದುಲ್ ಕಲಾಂ ಮಲ್ಲಿಕ್ ತಿಳಿಸಿದ್ದಾರೆ.
ಇರಾಕ್ನಲ್ಲಿ ಸಲಿಂಗ ಸಂಬಂಧ ಕ್ರಿಮಿನಲ್ ಅಪರಾಧ | ಸಂಸತ್ನಲ್ಲಿ ವಿಧೇಯಕ ಅಂಗೀಕಾರ
ಬಾಗ್ದಾದ್: ಇರಾಕ್ ಸಂಸತ್ ಸಲಿಂಗ ಸಂಬಂಧವನ್ನು ಕ್ರಿಮಿನಲೀಕರಣಗೊಳಿಸುವ ವಿಧೇಯಕವನ್ನು ಶನಿವಾರ ಅಂಗೀಕರಿಸಿದ್ದು, 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಸರಕಾರದ ಈ ನಡೆಯನ್ನು ಹಲವಾರು ಸಾಮಾಜಿಕ ಹೋರಾಟ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಮಾನವಹಕ್ಕುಗಳ ಮೇಲೆ ನಡೆದ ದಾಳಿ ಇದಾಗಿದೆಯೆಂದು ಬಣ್ಣಿಸಿವೆ. 1988ರ ವೇಶ್ಯಾವಾಟಿಕೆ ವಿರೋಧಿ ಕಾನೂನಿಗೆ ತಿದ್ದುಪಡಿಗಳನ್ನು ಮಾಡಲಾಗಿದ್ದು, ಲಿಂಗಪರಿವರ್ತನೆಗೊಂಡವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಇರಾಕ್ ಸಂಸತ್ನಲ್ಲಿ ಇಂದು ವಿಧೇಯಕವನ್ನು ಅಂಗೀಕರಿಸಲಾಗಿತು. ಆಗ ಸದನದಲ್ಲಿ 329 ಸಂಸದರ ಪೈಕಿ 170 ಮಂದಿ ಮಾತ್ರ ಉಪಸ್ಥಿತರಿದ್ದರು. ನೂತನ ತಿದ್ದುಪಡಿಗಳಿಂದಾಗಿ ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ 10ರಿಂದ 15 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇರಾಕ್ನಲ್ಲಿ ಸಲಿಂಗಿಗಳು ಹಾಗೂ ಲಿಂಗಾಂತರಿ ವ್ಯಕ್ತಿಗಳು ಆಗಾಗ್ಗೆ ದಾಳಿಗೊಳಗಾಗುತ್ತಿದ್ದಾರೆ ಹಾಗೂ ಸಾಮಾಜಿಕ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಸಲಿಂಗ ಸಂಬಂಧವನ್ನು ಉತ್ತೇಜಿಸುವವಿಗೂ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಉದ್ದೇಶಪೂರ್ವಕವಾಗಿ ಸ್ತ್ರೀಯಂತೆ ವರ್ತಿಸುವ ಪುರುಷರಿಗೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆ ವಿಧಿಸಹುದಾಗಿದೆ. ಎಲ್ಜಿಬಿಟಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡಿರುವುದು ಮೂಲಭೂತ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಈಗಾಗಲೇ ಪ್ರತಿದಿನವೂ ದಾಳಿಯ ಭೀತಿಯನ್ನು ಎದುರಿಸುತ್ತಿಇರುವ ಹಲವಾರು ಇರಾಕಿಯರ ಪ್ರಾಣಗಳನ್ನು ಈ ವಿಧೇಯಕವು ಅಪಾಯಕ್ಕೊಡ್ಡಿದೆ’ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ನ ಇರಾಕ್ ಸಂಶೋಧಕ ರಝಾವೆ ಸಾಲಿಹಿ ತಿಳಿಸಿದ್ದಾರೆ.
ಬಜ್ಪೆ: ‘ಫಾರ್ಚೂನ್ ಗ್ಯಾಲಕ್ಸಿ’ ವಸತಿ, ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ
ಬಜ್ಪೆ, ಎ.28: ಮೂಡುಬಿದಿರೆಯ ಪ್ರತಿಷ್ಠಿತ ಫಾರ್ಚೂನ್ ಪ್ರಮೋಟರ್ಸ್ ಬಜ್ಪೆಯ ಪ್ರೊಪೆಲ್ ಆಟೊ ಎಲ್ಪಿಜಿ ಸ್ಟೇಷನ್ ಸಮೀಪ ನಿರ್ಮಿಸಲಿರುವ ವಸತಿ ಮತ್ತು ವಾಣಿಜ್ಯ ಸಂಕೀರ್ಣ ‘ಫಾರ್ಚೂನ್ ಗ್ಯಾಲಕ್ಸಿ’ಗೆ ರವಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಶಿಲಾನ್ಯಾಸದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಜ್ಪೆ ನಗರ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ನಿರ್ಮಾಣದ ಎಲ್ಲ ಕಾನೂನಾತ್ಮಕ ಸುಭದ್ರ ಕಟ್ಟಡಗಳನ್ನು ನೀಡುತ್ತಿರುವ ಕೀರ್ತಿ ಫಾರ್ಚೂನ್ ಪ್ರಮೋಟರ್ಸ್ಗೆ ಸಲ್ಲುತ್ತದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಸಭಾಧ್ಯಕ್ಷ ಯು.ಟಿ.ಖಾದರ್, ಫಾರ್ಚೂನ್ ಪ್ರಮೋಟರ್ಸ್ನ ಬ್ರೋಚರ್ ಬಿಡುಗಡೆಗೊಳಿಸಿ ಮಾತನಾಡಿ, ಫಾರ್ಚೂನ್ ಗ್ಯಾಲಕ್ಸಿ ತಲೆ ಎತ್ತಿದ ಬಳಿಕ ಬಜ್ಪೆಯ ಪ್ರಕೃತಿಯ ಸೌದರ್ಯ ಹೆಚ್ಚಾಗಲಿದೆ. ಕಟ್ಟಡ ಹೆಚ್ಚಾದಂತೆ ಅದರ ಸಮೀಪದ ನಿವೇಶನಗಳ ದರವೂ ಹೆಚ್ಚಳವಾಗುತ್ತದೆ ಎಂದರು. ಎಲ್ಲರಿಗೂ ನಿವೇಶನ, ಮನೆ ನೀಡಲು ಸರಕಾರದಿಂದ ಸಾಧ್ಯವಿಲ್ಲ. ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಕಳೆದ 10 ವರ್ಷಗಳಿಂದ ನೀಡುತ್ತಿರುವ ಫಾರ್ಚೂನ್ ಪ್ರಮೋಟರರ್ಸ್ ಅವರದ್ದೂ ಸಾಮಾಜಿಕ ಕಾರ್ಯ ಎಂದು ಸಂಸ್ಥೆಯನ್ನು ಅಭಿನಂಧಿಸಿ, ಶುಭಹಾರೈಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಫಾರ್ಚೂನ್ ಪ್ರಮೋಟರ್ಸ್ ನಾಲ್ಕು ಬಲಿಷ್ಠ ಕಂಬಗಳಿಂದ ನಿಂತಿದೆ. ಸರಕಾರಿ ಮಟ್ಟದ ಎಲ್ಲಾ ದಾಖಲೆ ಪತ್ರಗಳನ್ನು ಪಡೆದುಕೊಂಡೆ ಅವರು ಸಮುಚ್ಚಯಗಳನ್ನು ನಿರ್ಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಂಸ್ಥೆ 10ವರ್ಷಗಳ ಅನುಭವಗಳನ್ನು ಹೊಂದಿದೆ. ಗ್ರಾಹಕರು ಧೈರ್ಯದಿಂದ ಮನೆ, ಅಂಗಡಿಗಳನ್ನು ಖರೀದಿಸಬಹುದು ಎಂದರು. ಮಂಗಳೂರು ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೋ ಶುಭಹಾರೈಸಿದರು. ಸಮಾರಂಭದಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ಫಾರ್ಚೂನ್ ಪ್ರಮೋಟರರ್ಸ್ ಪಾಲುದಾರರಾದ ಅಬುಲ್ ಅಲಾ ಪುತ್ತಿಗೆ, ರೋನಿ ಫೆರ್ನಾಂಡಿಸ್, ಡೆನಿಸ್ ಪೆರೇರಾ, ಮಹೇಂದ್ರ ವರ್ಮಾ, ಫಾರ್ಚೂನ್ ಗ್ಯಾಲಕ್ಸಿ ಯೋಜನೆಯ ಕೊ ಪ್ರಮೋಟರ್ ಹಸನ್ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು. ಸಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.
ಹತ್ತು ವರ್ಷಗಳಲ್ಲಿ ದುಬೈಗೆ ಅತ್ಯಾಧುನಿಕ ಅಂತಾರಾಷ್ಟ್ರೀಯ ವಿಮಾನನಿಲ್ದಾಣ
ಅಬುದಾಭಿ: ಜಗತ್ತಿನ ಅತ್ಯಂತ ಸಂಚಾರದಟ್ಟಣೆಯ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾಗದಲ್ಲಿರುವ ಮರುಭೂಮಿ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದು ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ರವಿವಾರ ಪ್ರಕಟಿಸಿದ್ದಾರೆ. ಕೊರೋನಾ ವೈರಸ್ ಹಾವಳಿಯ ಬಳಿಕ ಕಳೆಗುಂದಿದ ದುಬೈನ ಅಂತಾರಾಷ್ಟ್ರೀಯ ವಿಮಾನಯಾನ ಉದ್ಯಮಕ್ಕೆ ಪುನಶ್ಚೇತನ ನೀಡುವ ತನ್ನ ಯೋಜನೆಯ ಭಾಗವಾಗಿ ಯುಎಇ ಬೃಹತ್ ವಿಮಾನನಿಲ್ದಾಣವನ್ನು ನಿರ್ಮಿಸಲಿದೆ. ಡಿಎಕ್ಸ್ಬಿ ಎಂದೇ ಜನಪ್ರಿಯವಾದ ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ದುಬೈ ವರ್ಲ್ಡ್ ಸೆಂಟ್ರಲ್ ಪ್ರದೇಶದಲ್ಲಿರುವ ಅಲ್ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಹಮ್ಮಿಕೊಳ್ಳಲಾಗಿತ್ತು. ಆದರೆ 2009ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಆ ಯೋಜನೆ ನೆನೆಗುದಿಯಲ್ಲಿತ್ತು. ‘‘ ಮುಂದಿನ ತಲೆಮಾರಿಗಾಗಿ ನಾವು ಹೊಸ ಯೋಜನೆಯೊಂದನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳಿಗಾಗಿ ಹಾಗೂ ತರುವಾಯ ಅವರ ಮಕ್ಕಳಿಗಾಗಿ ನಿರಂತರ ಹಾಗೂ ಸ್ಥಿರವಾದ ಅಭಿವೃದ್ಧಿಯನ್ನು ಖಾತರಿಪಡಿಸುತ್ತಿದ್ದೇವೆ’’ ಎಂದು ಶೇಖ್ ಮೊಹಮ್ಮದ್ ಅವರು ಆನ್ಲೈನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ದುಬೈ ನೂತನ ಜಾಗತಿಕ ಕೇಂಂದ್ರವಾಗಿ ಮೂಡಿಬರಲಿದೆ. ನೂತನ ವಿಮಾನನಿಲ್ದಾಣವು ವಿಮಾನಗಳ ಸಂಚಾರವನ್ನು ನಿಯಂತ್ರಿಸುವ ಅತ್ಯಾಧುನಿಕ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿವೆ. ಅರೇಬಿಯದ ಪಾರಂಪರಿಕ ಬೆಡೊಯಿನ್ ಜನರ ಶಿಬಿರಗಳನ್ನು ನೆನಪಿಸುವ ಬಿಳಿ ಬಣ್ಣದ ಟರ್ಮಿನಲ್, ಐದು ಪರ್ಯಾಯ ರನ್ವೇಗಳು ಹಾಗೂ 400 ಏರ್ಕ್ರಾಫ್ಟ್ ಗೇಟ್ಗಳನ್ನು ಹೊಂದಿರುವುದಾಗಿ ಪ್ರಕಟಣೆ ತಿಳಿಸಿದೆ. ಹಾಲಿ ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಡಿಎಕ್ಸ್ಬಿ)ದ ಮೂಲಕ 2019ರಲ್ಲಿ 8.63 ಕೋಟಿ ಮಂದಿ ಪ್ರಯಾಣಿಸಿದ್ದು, ಕೋವಿಡ್ ಹಾವಳಿಗೆ ಮುನ್ನ ಅತ್ಯಂತ ಜನಸಂಚಾರ ನಿಬಿಡ ವಿಮಾನ ನಿಲ್ದಾಣವೆನಿಸಿತ್ತು. ಕೊರೋನಾ ಸಾಂಕ್ರಾಮಿಕದ ಹಾವಳಿಯ ಈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯುಂಟಾಗಿದೆ. 2022ರಲ್ಲಿ 6.60 ಕೋಟಿ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದರು. BREAKING: Dubai is building a new $35-billion Al Maktoum International Airport with 5 parallel runways and 400 aircraft gates. It will be the world's largest airport, 5 times the size of the current Dubai International Airport, according to the emirate's ruler. Remember,… pic.twitter.com/jiE31yYDlI — vanrobbin1 (@vanrobbin11) April 28, 2024
ಪಾಕ್ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ನೇಮಕ
ಇಸ್ಲಾಮಾಬಾದ್ : ಪಾಕಿಸ್ತಾನದ ಉಪಪ್ರಧಾನಿಯಾಗಿ ವಿದೇಶಾಂಗ ಸಚಿವ ಇಶಾಕ್ ಧರ್ ಅವರನ್ನು ಪ್ರಧಾನಿ ಶಹಬಾಝ್ ಶರೀಫ್ ಅವರು ರವಿವಾರ ನೇಮಕಗೊಳಿಸಿದ್ದಾರೆ. ಸಂಪುಟ ಸಭೆಯ ಬಿಡುಗಡೆಗೊಳಿಸಿದ ಅಧಿಸೂಚನೆಯ ಮೂಲಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ಹಠಾತ್ ನೇಮಕವನ್ನು ಸರಕಾರ ನಾಯಕತ್ವ ಶ್ರೇಣಿಯೊಳಗಿನ ವ್ಯೂಹಾತ್ಮಕ ನಡೆಯಾಗಿದೆಯಂದು ಪಾಕ್ ಮಾಧ್ಯಮಗಳು ಬಣ್ಣಿಸಿವೆ. ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್)ನ ನಾಯಕನಾದ ಇಶಾಕ್ ಧರ್ ಪ್ರಸಕ್ತ ಪಾಕ್ ವಿದೇಶಾಂಗ ಸಚಿವನಾಗಿರುವ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಸಾಮಾನ್ಯ ಹಿತಾಸಕ್ತಿಗಳ ಮಂಡಳಿ(ಸಿಸಿಐ)ಗೂ ಸೇರ್ಪಡೆಗೊಳಿಸಲಾಗಿದೆ. ಸಿಸಿಐ ಪಾಕಿಸ್ತಾನದ ಪ್ರಮುಖ ನೀತಿ ನಿರ್ಧಾರಕ ಸಂಸ್ಥೆಯಾಗಿದ್ದು, ಗಣನೀಯವಾದ ಅಧಿಕಾರವನ್ನು ಹೊಂದಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಪ್ರಧಾನಿ ಶಹಬಾಝ್ ಶರೀಫ್ ಅವರು ಸಾಮಾನ್ಯ ಹಿತಾಸಕ್ತಿಗಳ ಮಂಡಳಿ (ಸಿಸಿಐ)ಯನ್ನು ಪುನಾರಚನೆಗೊಳಿಸಿದ್ದರು. ವಿತ್ತ ಸಚಿವರ ಬದಲಿಗೆ ವಿದೇಶಾಂಗ ಸಚಿವರನ್ನು ಅದರಲ್ಲಿ ಸೇರ್ಪಡೆಗೊಳಿಸಿದ್ದರು. ರಕ್ಷಣಾ ಸಚಿವ ಖ್ವಾಝಾ ಆಸೀಫ್ ಹಾಗೂ ಕೇಸರಿ ಸಚಿವ ಅಮೀರ್ ಮುಖಾಂ ಅವರನ್ನೂ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆಯೆಂದು ಅಧಿಸೂಚನೆ ತಿಳಿಸಿದೆ.
ಬಂಧನ ವಿರುದ್ಧ ಅರವಿಂದ ಕೇಜ್ರಿವಾಲ್ ಅರ್ಜಿ | ಸೋಮವಾರ(ಎ.29) ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ
ಹೊಸದಿಲ್ಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ತನ್ನ ‘‘ಅಕ್ರಮ ಬಂಧನ’’ ‘‘ಮುಕ್ತ ಹಾಗೂ ನ್ಯಾಯಯುತ ಚುನಾವಣೆ’’ ಹಾಗೂ ‘‘ಒಕ್ಕೂಟ ವ್ಯವಸ್ಥೆ’’ ಆಧರಿತ ಪ್ರಜಾಪ್ರಭುತ್ವದ ತತ್ವಗಳ ಮೇಲಿನ ಅಭೂತಪೂರ್ವ ಆಕ್ರಮಣವಾಗಿದೆ ಎಂದು ಕೇಜ್ರಿವಾಲ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು. ಈ ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮೇಲೆ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಅಫಿಡಾವಿಟ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಲೋಕಸಭಾ ಚುನಾವಣೆ ಮುನ್ನ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಸಂದರ್ಭ ತನ್ನನ್ನು ಬಂಧಿಸಿರುವ ವಿಧಾನ ಹಾಗೂ ಸಮಯ ತನಿಖಾ ಸಂಸ್ಥೆಯ ನಿರಂಕುಶಾಧಿಕಾರವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ ಹಾಗೂ ಅದರ ನಾಯಕರನ್ನು ದಮನಿಸಲು ಜಾರಿ ನಿರ್ದೇಶನಾಲಯ ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತನಗಿರುವ ವ್ಯಾಪಕ ಅಧಿಕಾರವನ್ನು ಕೇಂದ್ರ ಸರಕಾರ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಅನಧಿಕೃತ ಒಳಚರಂಡಿ ಸಂಪರ್ಕ | ಮೇ .7 ರೊಳಗಾಗಿ ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಿ : ಜಲಮಂಡಳಿ
ಬೆಂಗಳೂರು : ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದರೆ, ಮೇ 7 ರೊಳಗಾಗಿ ಅಧಿಕೃತ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ. ರವಿವಾರ ಪ್ರಕಟಣೆ ಹೊರಡಿಸಿರುವ ಅವರು, ಜಲಮಂಡಳಿ ಕಾಯ್ದೆಯ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದಲ್ಲಿ ಕೂಡಲೇ ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಗಣಿಸಿ ಅನಧಿಕೃತ ಸಂಪರ್ಕವನ್ನು ಮಂಡಳಿಯ ನಿಯಮಾನುಸಾರ ಅಧಿಕೃತ ಮಾಡಿಕೊಳ್ಳಲಾಗುತ್ತದೆ ತಿಳಿಸಿದ್ದಾರೆ. ಒಂದು ವೇಳೆ ಮೇ 7ರ ನಂತರ ಒಳಚರಂಡಿ ನೀರನ್ನು ಅನಧಿಕೃತವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 65 ಮತ್ತು 72 ರನ್ವಯ ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ನಗರದ ನಾಗರೀಕರು ತಮ್ಮ ಕಟ್ಟಡದ ಒಳಚರಂಡಿ ನೀರನ್ನು ಕಡ್ಡಾಯವಾಗಿ ಬೆಂಗಳೂರು ಜಲಮಂಡಳಿಯಿಂದ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಪಡೆದು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹರಿಸಬೇಕಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. ಇನ್ನು ಎಲ್ಲಾ ಮಾದರಿಯ ದೊಡ್ಡಗಾತ್ರದ ಕಟ್ಟಡದವರು ನಿಯಮಾನುಸಾರ ಎಸ್ಟಿಪಿ ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ತಮ್ಮ ಕಟ್ಟಡದಲ್ಲಿ ಗೃಹ ಬಳಕೆಗೆ ಹೊರತುಪಡಿಸಿ ಇನ್ನಿತರೆ ಅನ್ಯ ಉದ್ದೇಶಗಳಿಗೆ ಬಳಸಬೇಕಾಗಿರುತ್ತದೆ. ಕೆಲವರು ಈ ಕ್ರಮವನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವುವರ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶ್ವೇತಭವನದ ಪತ್ರಕರ್ತರ ಭೋಜನಕೂಟದ ಸ್ಥಳದಲ್ಲಿ ಫೆಲೆಸ್ತೀನ್ ಪರ ಘೋಷಣೆ
ವಾಶಿಂಗ್ಟನ್: ಶ್ವೇತಭವನದ ವರದಿಗಾರರಿಗಾಗಿ ಶನಿವಾರ ವಾರ್ಷಿಕ ಭೋಜನ ಕೂಟವನ್ನು ಏರ್ಪಡಿಸಲಾಗಿದ್ದ ಹೊಟೇಲ್ನ ಹೊರಭಾಗದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಕಾರರು ಗಾಝಾ ಮೇಲೆ ಇಸ್ರೇಲ್ ದಾಳಿಯನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗಿದರು. ಅಲ್ಲದೆ ಪಾಶ್ಚಾತ್ಯ ಸುದ್ದಿಮಾಧ್ಯಮಗಳು ಗಾಝಾ ಸಂಘರ್ಷದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದನ್ನು ಖಂಡಿಸಿದರು. ಭೋಜನಕೂಟದಲ್ಲಿ ಪಾಲ್ಗೊಂಡ ಅಧ್ಯಕ್ಷ ಬೈಡೆನ್ ಅವರು ಪತ್ರಕರ್ತರನ್ನುದ್ದೇಶಿಸಿ ಹತ್ತು ನಿಮಿಷ ಭಾಷಣ ಮಾಡಿದರು. ಆದರೆ ಅವರು ತನ್ನ ಭಾಷಣದಲ್ಲಿ ಗಾಝಾ ಸಂಘರ್ಷದ ಕುರಿತಾಗಲಿ ಅಥವಾ ಅಲ್ಲಿ ಭುಗಿಲೆದ್ದಿರುವ ಮಾನವೀಯ ಬಿಕ್ಕಟ್ಟಿನ ಕುರಿತಾಗಲಿ ಯಾವುದೇ ಪ್ರಸ್ತಾವವನ್ನು ಮಾಡಲಿಲ್ಲ. ಶ್ವೇತಭವನದಿಂದ ಭೋಜನ ಕೂಟ ಆಯೋಜಿಸಲಾಗಿದ್ದ ವಾಶಿಂಗ್ಟನ್ ಹಿಲ್ಟನ್ ಹೊಟೇಲ್ಗೆ ಬೈಡನ್ ಅವರು ಬೆಂಗಾವಲು ವಾಹನಗಳೊಂದಿಗೆ ಆಗಮಿಸಿದಾಗ ಆವರಣದಲ್ಲಿ ಜಮಾಯಿಸಿದ್ದ ನೂರಕ್ಕೂ ಅಧಿಕ ಪ್ರತಿಭಟನಕಾರರು ಫೆಲೆಸ್ತೀನ್ ಧ್ವಜಗಳನ್ನು ಬೀಸಿದರು. ಹೊಟೇಲ್ನೊಳಗೆ ತೆರಳುತ್ತಿದ್ದ ಅತಿಥಿಗಳನ್ನು ಉದ್ದೇಶಿಸಿ ‘ನಿಮಗೆ ನಾಚಿಕೆಯಾಗಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಪಾಶ್ಚಾತ್ಯ ಮಾಧ್ಯಮಗಳು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಎಲ್ಲಾ ಭಯಾನಕ ಕೃತ್ಯಗಳನ್ನು ಮುಚ್ಚಿಹಾಕುತ್ತಿವೆಯೆಂದು ಅವರು ಘೋಷಣೆಗಳನ್ನು ಕೂಗಿದರು. ಈ ಮಧ್ಯೆ ವಾಶಿಂಗ್ಟನ್ ಹಿಲ್ಟನ್ ಬೊಟೇಲ್ನಲ್ಲಿ ತಂಗಿದ್ದವರೊಬ್ಬರು ಹೊಟೇಲ್ನ ತುತ್ತತುದಿಯ ಕೊಠಡಿಯ ಕಿಟಕಿಯೊಂದರಿಂದ ಫೆಲೆಸ್ತೀನ್ ಧ್ವಜವನ್ನು ಅರಳಿಸಿದಾಗ ಪ್ರತಿಭಟನಕಾರರು ಹರ್ಷೋದ್ಘಾರ ಮಾಡಿದರು. ಕಳೆದ ವರ್ಷದ ಆಕ್ಟೋಬರ್ನಲ್ಲಿ ಗಾಝಾ ಯುದ್ದ ಆರಂಭಗೊಂಡ ಬಳಿಕ , ಇಸ್ರೇಲ್ ಸೇನೆಯು ಅಲ್ಲಿ 142 ಮಾಧ್ಯಮ ಮಂದಿಯನ್ನು ಹತ್ಯೆಗೈದಿದೆ ಹಾಗೂ ಕನಿಷ್ಠ 40 ಫೆಲೆಸ್ತೀನ್ ಪತ್ರಕರ್ತರನ್ನು ಬಂಧಿಸಿದೆ ಎಂದು ಗಾಝಾದಲ್ಲಿನ ಸರಕಾರಿ ಮಾಧ್ಯಮ ಕಾರ್ಯಾಲಯ ವರದಿ ಮಾಡಿದೆ.
ಪ್ರಮಾದವಶಾತ್ ಭಾರತ ಭೂಭಾಗ ಪ್ರವೇಶ | ಪಾಕಿಸ್ತಾನ ಪ್ರಜೆಯನ್ನು ರೇಂಜರ್ಗಳಿಗೆ ಹಸ್ತಾಂತರಿಸಿದ ಭಾರತ
ಪಝಿಲ್ಕಾ (ಪಂಜಾಬ್) : ಅಜಾಗರೂಕತೆಯಿಂದ ಭಾರತದ ಭೂಪ್ರದೇಶ ಪ್ರವೇಶಿಸಿದ ಬಳಿಕ ಬಂಧಿತನಾದ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ರೇಂಜರ್ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ರವಿವಾರ ತಿಳಿಸಿದ್ದಾರೆ. ಪಂಜಾಬ್ನ ಫಝಿಲ್ಕಾ ಜಿಲ್ಲೆಯ ಗಡಿ ಬೇಲಿ ಸಮೀಪ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆಯ ತಂಡ ಶನಿವಾರ ವಶಕ್ಕೆ ತೆಗೆದುಕೊಂಡಿತು ಎಂದು ವಕ್ತಾರರು ತಿಳಿಸಿದ್ದಾರೆ. ವಿಚಾರಣೆ ಸಂದರ್ಭ ಆತನಿಗೆ ಅಂತರರಾಷ್ಟ್ರೀಯ ಗಡಿ ಜೋಡಣೆಯ ಬಗ್ಗೆ ತಿಳಿದಿರಲಿಲ್ಲ; ಆದುದರಿಂದ ಆತ ಪ್ರಮಾದವಶಾತ್ ಭಾರತೀಯ ಭೂ ಭಾಗ ಪ್ರವೇಶಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ಸಂದರ್ಭ ಆತನಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನಿ ಪ್ರಜೆಗಳ ಅನಗತ್ಯ ಚಲನವಲನಕ್ಕೆ ನಿರ್ಬಂಧ ವಿಧಿಸುವ ಕುರಿತಂತೆ ಕಳವಳ ವ್ಯಕ್ತಪಡಿಸಲು ಪಾಕಿಸ್ತಾನದ ರೇಂಜರ್ಗಳೊಂದಿಗೆ ಧ್ವಜ ಮೆರವಣಿಗೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆ | 47 ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದ ಕಾಂಗ್ರೆಸ್
ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ 47 ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಅರಭಾವಿ-ಶಾಸಕ ಕೆ.ಸಿ.ವೀರೇಂದ್ರ, ಔರಾದ್-ಶಾಸಕ ಪಿ.ರವಿಕುಮಾರ್, ಬಸವಕಲ್ಯಾಣ-ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಬೆಳಗಾವಿ ದಕ್ಷಿಣ-ಶಾಸಕಿ ನಯನಾ ಜ್ಯೋತಿ ಝಾವರ್, ಬಳ್ಳಾರಿ-ಶಾಸಕ ಎಚ್.ವಿ.ವೆಂಕಟೇಶ್, ಭದ್ರಾವತಿ-ಶಾಸಕ ಕೆ.ಎಂ.ಶಿವಲಿಂಗೇಗೌಡ, ಬೀದರ್ ದಕ್ಷಿಣ-ಶಾಸಕ ಇಕ್ಬಾಲ್ ಹುಸೇನ್, ಬಿಜಾಪುರ ನಗರ-ಶಾಸಕ ರಿಝ್ವಾನ್ ಅರ್ಶದ್, ಬ್ಯಾಡಗಿ-ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಬೈಂದೂರು-ಶಾಸಕ ಅಶೋಕ್ ಕುಮಾರ್ ರೈ. ಚಿಕ್ಕೋಡಿ-ಶಾಸಕ ಎಚ್.ಡಿ.ತಮ್ಮಯ್ಯ, ಚಿಂಚೋಳಿ-ಶಾಸಕ ಕೆ.ಎಂ.ಉದಯ್, ದೇವದುರ್ಗ-ಶಾಸಕ ಸಿ.ಅನಿಲ್ ಕುಮಾರ್, ದೇವರಹಿಪ್ಪರಗಿ-ಶಾಸಕರಾದ ಎನ್.ಶ್ರೀನಿವಾಸ್ ಹಾಗೂ ಎಚ್.ಎಂ.ಗಣೇಶ್ ಪ್ರಸಾದ್, ಗದಗ-ಮನ್ಸೂರ್ ರಹ್ಮಾನ್ ಖಾನ್, ಗಂಗಾವತಿ-ಶಾಸಕ ಕೆ.ಹರೀಶ್ ಗೌಡ, ಗೋಕಾಕ್-ಶಾಸಕ ಕೆ.ಸಿ.ವೀರೇಂದ್ರ, ಗುಲ್ಬರ್ಗ ಗ್ರಾಮೀಣ-ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಗುರುಮಿಠ್ಕಲ್-ಶಾಸಕ ಪ್ರಿಯಾ ಕೃಷ್ಣ. ಹಗರಿಬೊಮ್ಮನಹಳ್ಳಿ-ಶಾಸಕ ಬಿ.ಶಿವಣ್ಣ, ಹರಪ್ಪನಹಳ್ಳಿ-ಶಾಸಕ ಪ್ರದೀಪ್ ಈಶ್ವರ್, ಹರಿಹರ-ಶಾಸಕ ಬಿ.ಜಿ.ಗೋವಿಂದಪ್ಪ, ಹಿರೇಕೆರೂರು-ಶಾಸಕ ಕೆ.ಎಸ್.ಆನಂದ್, ಹೊಸಪೇಟೆ-ಶಾಸಕ ಎನ್.ಎ.ಹಾರಿಸ್, ಹೂವಿನಹಡಗಲಿ-ಶಾಸಕ ಎನ್.ವೈ.ಗೋಪಾಲಕೃಷ್ಣ, ಹುಬ್ಬಳ್ಳಿ ಧಾರವಾಡ ಕೇಂದ್ರ-ರಕ್ಷಾ ರಾಮಯ್ಯ, ಹುಬ್ಬಳ್ಳಿ ಧಾರವಾಡ ಪಶ್ಚಿಮ-ಶಾಸಕ ಎಂ.ಕೃಷ್ಣಪ್ಪ, ಹುಕ್ಕೇರಿ-ಶಾಸಕ ಪಿ.ಪುಟ್ಟರಂಗ ಶೆಟ್ಟಿ ಹಾಗೂ ಹುಮ್ನಾಬಾದ್-ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿ. ಖಾನಾಪುರ-ಶಾಸಕಿ ರೂಪಕಲಾ, ಕೊಪ್ಪಳ-ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕುಮಟ-ಶಾಸಕ ಕೆ.ವೈ.ನಂಜೇಗೌಡ, ಕುಂದಗೋಳ-ವಿಧಾನಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಕುಷ್ಟಗಿ-ಶಾಸಕ ದರ್ಶನ್ ಧೃವನಾರಾಯಣ್, ಕಾನೂನು ಚಟುವಟಿಕೆಗಳು-ಶಾಸಕ ಎ.ಎಸ್.ಪೊನ್ನಣ್ಣ, ಲಿಂಗಸುಗೂರು-ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಿಪ್ಪಾಣಿ-ಶಾಸಕ ಡಿ.ರವಿಶಂಕರ್, ರಾಯಭಾಗ-ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ರಾಯಚೂರು-ಶಾಸಕ ಡಾ.ಮಂಥರ್ ಗೌಡ. ರಾಣೆಬೆನ್ನೂರು-ಶಾಸಕ ಟಿ.ರಘುಮೂರ್ತಿ, ಶಿಗ್ಗಾಂವ್-ಶಾಸಕ ರಮೇಶ್ ಬಂಡಿಸಿದ್ದೇಗೌಡ, ಶಿಕಾರಿಪುರ-ಶಾಸಕ ಕೆ.ಷಡಕ್ಷರಿ, ಶಿವಮೊಗ್ಗ-ಶಾಸಕ ಜಿ.ಎಚ್.ಶ್ರೀನಿವಾಸ್, ಶಿವಮೊಗ್ಗ ಗ್ರಾಮಾಂತರ-ಶಾಸಕ ಟಿ.ಬಿ.ಜಯಚಂದ್ರ, ಶಿರಹಟ್ಟಿ-ಶಾಸಕ ಎ.ಸಿ.ಶ್ರೀನಿವಾಸ್, ಸುರಪುರ ಉಪ ಚುನಾವಣೆ-ಶಾಸಕ ಶರತ್ ಕುಮಾರ್ ಬಚ್ಚೇಗೌಡ, ತೀರ್ಥಹಳ್ಳಿ-ಶಾಸಕ ಟಿ.ಡಿ.ರಾಜೇಗೌಡ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
IPL | ಜಾಕ್ಸ್ ಸ್ಪೋಟಕ ಶೈಲಿಯ ಬ್ಯಾಟಿಂಗ್
ಹೊಸದಿಲ್ಲಿ :ಆರ್ಸಿಬಿ ಬ್ಯಾಟಿಂಗ್ ಸರದಿಗೆ ಹೊಸ ಸೇರ್ಪಡೆಯಾಗಿರುವ ಇಂಗ್ಲೆಂಡ್ ಬ್ಯಾಟರ್ ವಿಲ್ ಜಾಕ್ಸ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಬೌಲರ್ಗಳಿಗೆ ದುಸ್ವಪ್ನರಾಗಿದ್ದಾರೆ. ಗುಜರಾತ್ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದ ಜಾಕ್ಸ್ ಆರ್ಸಿಬಿಗೆ ಗೆಲುವು ತಂದಿದ್ದಾರೆ. 17 ಎಸೆತಗಳಲ್ಲಿ 17 ರನ್ ಗಳಿಸಿದ್ದ ಜಾಕ್ಸ್ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದು ಅವರ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಮೋಹಿತ್ ಶರ್ಮಾ ಎಸೆದ 15ನೇ ಓವರ್ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಗಳಿಸಿದ್ದ ಜಾಕ್ಸ್ ಅವರು ರಶೀದ್ ಖಾನ್ ಎಸೆದ 16ನೇ ಓವರ್ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಶತಕ ಪೂರೈಸಿದರು. 14ನೇ ಓವರ್ನಲ್ಲಿ ಅರ್ಧಶತಕ ಗಳಿಸಿದ್ದ ಜಾಕ್ಸ್ 16ನೇ ಓವರ್ನ ಕೊನೆಯ ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಅರ್ಧಶತಕ ಗಳಿಸಿದ ನಂತರ ಶತಕ ಪೂರೈಸಲು ಜಾಕ್ಸ್ ಕೇವಲ 10 ಎಸೆತಗಳನ್ನು ಎದುರಿಸಿದ್ದರು. ಜಾಕ್ಸ್ ಇನಿಂಗ್ಸ್ನಲ್ಲಿ 10 ಸಿಕ್ಸರ್ ಸಿಡಿಸಿದ್ದಾರೆ.
ಅಮೆರಿಕ ವಿವಿಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ ಇಸ್ರೇಲ್ ವಿರೋಧಿ ಪ್ರತಿಭಟನೆ
ಹೊಸದಿಲ್ಲಿ : ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ವಿರೋಧಿಸಿ ಅಮೆರಿಕಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ನಡೆಸುತ್ತಿರುವ ಪ್ರತಿಭಟನೆ ಶನಿವಾರ ತೀವ್ರಗೊಂಡಿದೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ. ಅಮೆರಿಕಾದ್ಯಂತ ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿದ್ದರೂ, ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾನಿಲಯದ ಆವರಣಗಳಲ್ಲಿ ಪೊಲೀಸರು, ವಿದ್ಯಾರ್ಥಿ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾಗೂ ರಬ್ಬರ್ ಗುಂಡುಗಳನ್ನು ಸಿಡಿಸಿದ್ದಾರೆ. ಮಿಡ್ವೆಸ್ಟ್ನ ಬ್ಲೂಮಿಂಗ್ಟನ್ನ ಇಂಡಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಆವರಣದಲ್ಲಿ ಟೆಂಟ್ ಸ್ಥಾಪಿಸಿ ಧರಣಿ ನಡೆಸುತ್ತಿದ್ದ 23 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರಿರೆನಾ ರಾಜ್ಯ ವಿವಿಯ ಆವರಣದಲ್ಲಿಯೂ ಸ್ಥಾಪಿಸಲಾಗಿದ್ದ ಅನಧಿಕೃತ ಶಿಬಿರವೊಂದನ್ನು ಪೊಲೀಸರು ತೆರವುಗೊಳಿಸಿದ್ದು, ಅತಿಕ್ರಮ ಪ್ರವೇಶದ ಆರೋಪದಲ್ಲಿ 69 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ವಿವಿಯ ವಿದ್ಯಾರ್ಥಿಗಳಾಗಲಿ, ಬೋಧಕವರ್ಗ ಅಥವಾ ಸಿಬ್ಬಂದಿಯಾಗಲಿ ಅಲ್ಲವೆಂದು ಅರಿರೆನಾ ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ಅರಿರೆನಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ನಡೆಸಲು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸೈಂಟ್ ಲೂಯಿಸ್ನಲ್ಲಿರುವ ವಾಶಿಂಗ್ಟನ್ ವಿವಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೆಯಿನ್ ಹಾಗೂ ಆಕೆಯ ಪ್ರಚಾರ ಮ್ಯಾನೇಜರ್ ಸೇರಿದಂತೆ ಕನಿಷ್ಠ 80 ಮಂದಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗವನ್ನು ವಜಾಗೊಳಿಸಕೂಡದು ಅಥವಾ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಕಳೆದ ವಾರ ನ್ಯೂಯಾರ್ಕ್ನ ಕೊಲಂಬಿಯಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ 100ಕ್ಕೂ ಅಧಿಕ ವಿದ್ಯಾರ್ಥಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಯೇಲ್ ವಿವಿ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿ , ವ್ಯಾಂಡರ್ಬಿಟ್ ವಿವಿ ಹಾಗೂ ಮಿನ್ನೆಸೊಟಾ ವಿವಿ ಸೇರಿದಂತೆ ಗಾಝಾ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಅಥವಾ ಅವರನ್ನು ನಿಗಾವಣೆಯಲ್ಲಿರಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ಉಚ್ಚಾಟಿಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಫೆಲೆಸ್ತೀನ್ ಪರ ಪ್ರತಿಭಟನೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ವಿಶ್ವವಿದ್ಯಾನಿಲಯಗಳು ಪದವಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ವಿದ್ಚಾರ್ಥಿಗಳು ಭಾರೀ ಬೆಲೆಯನ್ನು ತೆರಬೇಕಾಗಿ ಬರಬಹುದು ಎಂದು ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿವಿಯಿಂದ ವರದಿ ಮಾಡುತ್ತಿರುವ ಅಲ್ಜಝೀರಾ ಪತ್ರಕರ್ತ ಜಾನ್ ಹೆಂಡ್ರೆನ್ ಕಳವಳ ವ್ಯಕ್ತಪಡಿಸಿದ್ದಾರೆ. ವಾರ್ಷಿಕವಾಗಿ 50 ಸಾವಿರ ಡಾಲರ್ ಬೋಧನಾ ಶುಲ್ಕವನ್ನು ವಿಧಿಸಲಾಗುವ ಪ್ರಿನ್ಸ್ಟನ್ ವಿವಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಉಚ್ಚಾಟನೆಗೊಳಿಸಬಹುದಾಗಿದೆ. ವಿವಿ ಕ್ಯಾಂಪಸ್ನಲ್ಲಿ ತಾತ್ಕಾಲಿಕ ಶಿಬಿರವನ್ನು ಸ್ಥಾಪಿಸಿದ್ದ ನ್ಯೂಯಾರ್ಕ್ನ ಕೊರ್ನೆಲ್ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಈ ಮಧ್ಯೆ ಗಾಝಾದಲ್ಲಿ ಇಸ್ರೇಲ್ ಸೇನೆಯಿಂದ ಫೆಲೆಸ್ತೀನ್ ಪ್ರಜೆಗಳ ಮಾರಣಹೋಮವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಕೆನಡ, ಯುರೋಪ್ ಹಾಗೂ ಆಸ್ಟ್ರೇಲಿಯಗಳಲ್ಲಿ ಶಾಲೆಗಳಿಗೂ ವಿಸ್ತರಿಸಿದೆ. ಕೆನಡಾದ ಮಾಂಟ್ರಿಯಲ್ನಲ್ಲಿರುವ ಮ್ಯಾಕ್ ಗಿಲ್ ವಿವಿಯಲ್ಲಿ ಫೆಲೆಸ್ತೀನ್ ಪರ ವಿದ್ಯಾರ್ಥಿಗಳು ಪ್ರತಿಭಟನಾ ಶಿಬಿರವೊಂದನ್ನು ಸ್ಥಾಪಿಸಿದ್ದಾರೆ. ಇಸ್ರೇಲ್ನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಜೊತೆ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಶಾರೂಕ್ ಖಾನ್
ಅಹ್ಮದಾಬಾದ್ : ಆರ್ಸಿಬಿ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಶಾರೂಕ್ ಖಾನ್ 30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಾರೂಕ್ ಐಪಿಎಲ್ನಲ್ಲಿ ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು. ಟಿ20 ಲೀಗ್ನಲ್ಲಿ ಮೊದಲ ಬಾರಿ 50ಕ್ಕೂ ಅಧಿಕ ರನ್ ಗಳಿಸಲು 36 ಇನಿಂಗ್ಸ್ಗಳನ್ನು ತೆಗೆದುಕೊಂಡರು. ಈ ಮೂಲಕ ಐಪಿಎಲ್ನಲ್ಲಿ ಮೊದಲ ಬಾರಿ 50 ಪ್ಲಸ್ ಸ್ಕೋರ್ ಗಳಿಸಲು ದೀರ್ಘ ಸಮಯ ತೆಗೆದುಕೊಂಡ ಸ್ಪೆಷಲಿಸ್ಟ್ ಬ್ಯಾಟರ್ ಅಥವಾ ಆಲ್ರೌಂಡರ್ ಎನಿಸಿಕೊಂಡಿದ್ದಾರೆ. ಶಾರೂಕ್ಗಿಂತ ಮೊದಲು ಆಸ್ಟ್ರೇಲಿಯದ ಬ್ಯಾಟರ್ ಸ್ಟೀವ್ ಸ್ಮಿತ್ ಹೆಸರಲ್ಲಿ ಈ ಅನಪೇಕ್ಷಿತ ದಾಖಲೆ ಇತ್ತು. ಸ್ಮಿತ್ ಐಪಿಎಲ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಲು 31 ಇನಿಂಗ್ಸ್ಗಳು ಬೇಕಾಗಿತ್ತು. ಕೇವಲ ಐವರು ಬ್ಯಾಟರ್ಗಳಾದ (ಬೌಲಿಂಗ್ ಆಲ್ರೌಂಡರ್ಗಳು) ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್.ಅಶ್ವಿನ್, ಹರ್ಭಜನ್ ಸಿಂಗ್ ಹಾಗೂ ರಶೀದ್ ಖಾನ್ ತಮ್ಮ ಚೊಚ್ಚಲ ಐಪಿಎಲ್ ಅರ್ಧಶತಕ ಗಳಿಸಲು ದೀರ್ಘ ಸಮಯ ತೆಗೆದುಕೊಂಡಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನ ವೇಳೆ ಶಾರೂಕ್ರನ್ನು ಗುಜರಾತ್ ತಂಡ 7.4 ಕೋಟಿ ರೂ. ನೀಡಿ ಖರೀದಿಸಿತ್ತು. ಇದಕ್ಕೂ ಮೊದಲು ಶಾರೂಕ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು 2021ರಿಂದ 23ರ ತನಕ ಪ್ರತಿನಿಧಿಸಿದ್ದರು.
’ ನಿಮಗೆ ಸ್ಥಳೀಯ ಸಂಸದರು ಬೇಕಾ, ಹೊರಗಿನವರು ಬೇಕಾ? ಮನೆಯ ಮಗ ಬೇಕಾ, ಬೀಗರು ಬೇಕಾ ’?
DK Shivakumar Election Speech : ನಿಮ್ಮ ಊರಿನ ವಿದ್ಯಾವಂತ, ಪ್ರಜ್ಞಾವಂತ ಯುವಕ ನಿಮ್ಮ ಸೇವೆಗೆ ಮುಂದಾಗಿದ್ದಾನೆ. ಬೀಗರು ಮನೆಗೆ ಬಂದು ಹೋಗುವವರು. ಹೀಗಾಗಿ ನೀವು ನಿಮ್ಮ ಮನೆ ಮಗ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಆಶೀರ್ವಾದ ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಈ ವರ್ಷದ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಕೊಹ್ಲಿ
ಹೊಸದಿಲ್ಲಿ : ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ ಅಹ್ಮದಾಬಾದ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿಗೆ ಇಂದು ಈ ಸಾಧನೆ ಮಾಡಲು 70 ರನ್ ಅಗತ್ಯವಿತ್ತು. ಕೊಹ್ಲಿ 44 ಎಸೆತಗಳಲ್ಲಿ 70 ರನ್ ಗಳಿಸಿ ಈ ಋತುವಿನಲ್ಲಿ ಆರ್ಸಿಬಿಗೆ 3ನೇ ಗೆಲುವು ತಂದುಕೊಟ್ಟರು. ಈ ವರ್ಷ 500 ರನ್ ಗಳಿಸಿದ ಆರ್ಸಿಬಿಯ ಆರಂಭಿಕ ಆಟಗಾರ ಕೊಹ್ಲಿ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ಬಾರಿ 500 ಪ್ಲಸ್ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ರನ್ನು ಸೇರಿಕೊಂಡರು. ಕೊಹ್ಲಿ ಹಾಗೂ ವಾರ್ನರ್ ತಲಾ 7 ಬಾರಿ ಒಂದೇ ಋತುವಿನಲ್ಲಿ 500 ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ತಲಾ 5 ಬಾರಿ 500 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ. ರನ್ ಯಂತ್ರ ಕೊಹ್ಲಿ ಐಪಿಎಲ್-2024ರಲ್ಲಿ 71.43ರ ಸರಾಸರಿಯಲ್ಲಿ 4 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಕೊಹ್ಲಿ ಬರೋಬ್ಬರಿ 500 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್(428 ರನ್)ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ನ ಸಂಜು ಸ್ಯಾಮ್ಸನ್(385 ರನ್), ಲಕ್ನೊ ಸೂಪರ್ ಜಯಂಟ್ಸ್ನ ಕೆ.ಎಲ್.ರಾಹುಲ್(378 ರನ್) ಹಾಗೂ ಡೆಲ್ಲಿ ನಾಯಕ ರಿಷಭ್ ಪಂತ್ (371) ಆ ನಂತರದ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ಯುವತಿಗೆ ಚೆನ್ನೈನಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ
ಚೆನ್ನೈ: ಪಾಕಿಸ್ತಾನದ 19 ವರ್ಷದ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಯು ಹೊಸ ಜೀವನ ನೀಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಿದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯ ಹೃದಯ ತಮಗೆ ಸರಿ ಹೊಂದುತ್ತದೆ ಎಂಬ ಮಾಹಿತಿಯಂತೆ ಭಾರತಕ್ಕೆ ಬಂದ ಆಯೆಶಾ ರಶಾನ್ ಹೊಸ ಜೀವನ ಪಡೆದಿದ್ದಾರೆ. ಜನವರಿಯಲ್ಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಎಪ್ರಿಲ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2014ರಲ್ಲಿ ಆಯೆಶಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಆಗ ಅವರ ಹೃದಯ ಕಳಪೆ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿತ್ತು ಎಂದು ಹೃದಯ ವಿಜ್ಞಾನ ಮತ್ತು ಶ್ವಾಸಕೋಶ ಕಸಿ ಹಾಗೂ ಮೆಕಾನಿಕ್ ಸರ್ಕ್ಯುಲೇಟರಿ ಸಪೋರ್ಟ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್. ಬಾಲಕೃಷ್ಣನ್ ಹೇಳಿದ್ದಾರೆ. 'ಯುವತಿ ಇಲ್ಲಿಗೆ ಬಂದಾಗ ಹೃದಯಾಘಾತದಿಂದ ತೀವ್ರ ಅಸ್ವಸ್ಥರಾಗಿದ್ದರು. ರಕ್ತದ ಪರಿಚಲನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ತಾತ್ಕಾಲಿಕ ಹೃದಯದ ಪಂಪ್ ಅಳವಡಿಸಿದ್ದೆವು. ಬಳಿಕ ಆಕೆ ಚೇತರಿಸಿಕೊಂಡು ವಾಪಸ್ ತೆರಳಿದ್ದರು. ಕೆಲ ವರ್ಷಗಳ ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟು ಹೃದಯಾಘಾತವಾಗಿತ್ತು. ಬಳಿಕ, ಸೋಂಕು ತಗುಲಿ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ. ‘ವೀಸಾ ಪಡೆಯುವುದೂ ಬಹಳ ಕಷ್ಟವಾಯಿತು. ಆಕೆಗೆ ತಾಯಿ ಮಾತ್ರವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಆಸ್ಪತ್ರೆ ದಾಖಲಾತಿ ಸೇರಿದಂತೆ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳಬೇಕಾಯಿತು’ ಎಂದು ಬಾಲಕೃಷ್ಣನ್ ಹೇಳಿದ್ದಾರೆ. “ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಹಣ ಹೊಂದಿಸುವುದೇ ಸವಾಲಾಗಿತ್ತು. ಟ್ರಸ್ಟ್, ದಾನಿಗಳ ಸಹಾಯ, ನಮ್ಮ ಕೈಲಿದ್ದ ಹಣವನ್ನೂ ಹಾಕಿದೆವು. ಇದೊಂದು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಏನು ಬೇಕಾದರೂ ಆಗಬಹುದಿತ್ತು’ ಎಂದರು. ಫ್ಯಾಶನ್ ಡಿಸೈನರ್ ಆಗ ಬಯಸುವ ಆಯೆಶಾ, ವೀಸಾ ಕೊಟ್ಟು ಚಿಕಿತ್ಸೆಗೆ ಸ್ಪಂದಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪಾಕಿಸ್ತಾನದಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಭಾರತದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಆಯೆಶಾ ತಾಯಿ ಹೇಳಿದ್ದಾರೆ.
ಮಂಗಳೂರು: ಚಿನ್ನ ಸಾಗಾಟಕ್ಕೆ ಯತ್ನ; ಆರೋಪಿ ಸೆರೆ
ಮಂಗಳೂರು: ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ಕ್ಯಾರಟ್ನ 750 ಗ್ರಾಂ. ತೂಕದ 54.30 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಎ.27ರಂದು ದಮಾಮ್ನಿಂದ ವಿಮಾನದಲ್ಲಿ ಬಂದಿಳಿದ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆತನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಗುದನಾಳದಲ್ಲಿ 3 ಅಂಡಾಕಾರದ ವಸ್ತುಗಳು ಪತ್ತೆಯಾಗಿದ್ದು, ಅದರಲ್ಲಿ ಚಿನ್ನ ವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1931 ರ ಬಳಿಕ 2ನೇ ಅತಿ ಹೆಚ್ಚು ತಾಪಮಾನ ಭಾನುವಾರ ದಾಖಲು! ಜನ ಫುಲ್ ಸುಸ್ತು; ಎಷ್ಟು ಡಿಗ್ರಿ ಇತ್ತು?
Bengaluru Recorded Highest Temperature : ಬೆಂಗಳೂರಿನಲ್ಲಿ ಕಳೆ 94 ವರ್ಷಗಳಲ್ಲಿಯೇ 2ನೇ ಅತಿ ಹೆಚ್ಚು ತಾಪಮಾನ ದಾಖಲೆಯಾಗಿದೆ. ಜನ ಬಿಸಿಲ ಧಗೆಗೆ ಹೈರಾಣಾಗಿದ್ದಾರೆ. 1931 ರಲ್ಲಿ ಎಷ್ಟಿತ್ತು ತಾಪಮಾನ? ಕಳೆದ ಒಂದು ವಾರದಿಂದ ಎಷ್ಟಿದೆ ತಾಪಮಾನ? ಇಲ್ಲಿದೆ ಬೆಂಗಳೂರಿನ ಹವಾಮಾನ ವರದಿ.
ಉಷ್ಣ ಮಾರುತದ ಹಿಡಿತದಲ್ಲಿ ಭಾರತ | ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು
ಹೊಸದಿಲ್ಲಿ : ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕೇರಳದಂತಹ ರಾಜ್ಯಗಳ ತಾಪಮಾನ ದಾಖಲಾರ್ಹ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಭಾರತ ತೀವ್ರ ಉಷ್ಣ ಮಾರುತದ ಹಿಡಿತದಲ್ಲಿ ಸಿಲುಕಿಕೊಂಡಿದೆ. ಬಿಸಿಲಿನ ತಾಪಮಾನದಿಂದಾಗಿ ನಾಗರಿಕರು ಏದುಸಿರು ಬಿಡುತ್ತಿದ್ದಾರೆ. ಅಧಿಕಾರಿಗಳು ಬಿಸಿಲಿನ ಝಳವನ್ನು ಕಡಿಮೆ ಮಾಡಲು ಹರಸಾಹಸಪಡುತ್ತಿದ್ದಾರೆ. ಒಡಿಶಾದ ರಾಜಧಾನಿ ನಗರ ಭುವನೇಶ್ವರದಲ್ಲಿ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದರೊಂದಿಗೆ ಈ ಋತುಮಾನದ ಅತ್ಯಂತ ಉಷ್ಣದ ದಿನವೆಂದು ಹೇಳಲಾಗಿದೆ. ತಾಪಮಾನದಿಂದಾಗಿ ಇಲ್ಲಿನ ನಿವಾಸಿಗಳು ಬೆವರಿ ಬಸವಳಿಯುತ್ತಿದ್ದಾರೆ. ಭುವನೇಶ್ವರದ ಜನತೆಗೆ ಉಷ್ಣಾಂಶದ ಬೇಸಗೆ ಹೊಸತೇನಲ್ಲ. ಆದರೆ, ಈ ವರ್ಷದ ಬೇಸಿಗೆ ಉಷ್ಣಾಂಶ ಈ ಹಿಂದಿನದಕ್ಕಿಂತ ತೀವ್ರವಾಗಿದೆ. ಪೂರ್ವ ಮುಂಗಾರು ಕೊರತೆಯಿಂದ ಉಷ್ಣಾಂಶ ಉಲ್ಭಣಗೊಂಡಿದೆ. ಸಾಮಾನ್ಯವಾಗಿ ಪೂರ್ವ ಮುಂಗಾರು ಮಳೆ ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ. ಒಡಿಶಾ ರಾಜ್ಯ ಸರಕಾರ ಉಷ್ಣ ಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಉಷ್ಣಾಘಾತ ಹಾಗೂ ನಿರ್ಜಲೀಕರಣದ ಬಗ್ಗೆ ಸೂಚನೆಗಳನ್ನೂ ನೀಡಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಆಂಧ್ರಪ್ರದೇಶ ಇತ್ತೀಚೆಗಿನ ವರ್ಷಗಳಲ್ಲಿ ಅತಿ ತೀವ್ರ ಉಷ್ಣ ಮಾರುತದ ಅನುಭವ ಪಡೆಯುತ್ತಿದೆ. ಈಗ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಈ ಉಷ್ಣ ಮಾರುತವನ್ನು 58 ಮಂಡಲ (ಆಡಳಿತಾತ್ಮಕ ವಿಭಾಗಗಳಲ್ಲಿ ‘‘ಗಂಭೀರ ವರ್ಗ’’)ಎಂದು ಘೋಷಿಸಲಾಗಿದೆ. ಸಂತ್ರಸ್ತರಿಗೆ ಆಶ್ರಯ ಹಾಗೂ ವೈದ್ಯಕೀಯ ನೆರವು ನೀಡಲು ರಾಜ್ಯ ಸರಕಾರ ವಿಶೇಷ ಉಷ್ಣ ಮಾರುತ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಉಷ್ಣ ಮಾರುತದಿಂದ ಸುಡುತ್ತಿರುವ ಇನ್ನೊಂದು ರಾಜ್ಯ ಕರ್ನಾಟಕ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ವರ್ಷದಲ್ಲೇ ಅತ್ಯಧಿಕ. ನಗರದ ಜನತೆ ತಮ್ಮ ಅಸ್ವಸ್ಥತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿಸುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ಜಾಮ್ ಸಮಸ್ಯೆ ಅಸಹನೀಯವಾಗಿದೆ. ಟ್ರಾಫಿಕ್ ಜಾಮ್ ಸಂದರ್ಭ ತಮ್ಮ ಕಾರಿನಲ್ಲಿ ಸಿಲುಕಿಕೊಂಡ ಪ್ರಯಾಣಿಕರು ಉಷ್ಣಾಂಶದಿಂದಾಗಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೇರಳದಲ್ಲಿ ಅತ್ಯಂತ ಉಷ್ಣಾಂಶದ ಸ್ಥಳ ಪಾಲಕ್ಕಾಡ್ ಜಿಲ್ಲೆ. ಇಲ್ಲಿ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಮುಂದಿನ 24 ಗಂಟೆಗಳ ಕಾಲ ನಿರ್ದಿಷ್ಟ ಸ್ಥಳಗಳಲ್ಲಿ ಹವಾಮಾನ ಮೌಲ್ಯ ಶೇ. 95 ಅನ್ನು ಮೀರುವುದರಿಂದ ಬೆಟ್ಟ ಪ್ರದೇಶಗಳನ್ನು ಹೊರತುಪಡಿಸಿ ಕೇರಳದಾದ್ಯಂತ ಉಷ್ಣಾಂಶದ ಹಾಗೂ ಅಹಿತಕರ ಹವಾಮಾನ ಕಂಡು ಬರಲಿದೆ. ಪಾಲಕ್ಕಾಡ್ ಹೊರತುಪಡಿಸಿ ಕೋಝಿಕ್ಕೋಡ್, ಮಲಪ್ಪುರಂ, ತ್ರಿಶೂರು, ಕೊಲ್ಲಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಶೇ. 2ರಿಂದ 5.5ಕ್ಕೆ ಏರಿಕೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಷ್ಣ ಮಾರುತ ಮುಂದುವರಿಯುವ ಸಾಧ್ಯತೆ ಇದೆ. ಈ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮಂಗಳೂರು: ಲಾರಿಗಳ ನಡುವೆ ಅಪಘಾತ: ಚಾಲಕನಿಗೆ ಗಂಭೀರ ಗಾಯ
ಸುರತ್ಕಲ್: ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಮಾರ್ಬಲ್ ಅಂಗಡಿವೊಂದಕ್ಕೆ ಢಿಕ್ಕಿ ಹೊಡೆರುವ ಘಟನೆ ಬೈಕಂಪಾಡಿ ಧ್ವಾರ ಹೋಟೆಲ್ ಬಳಿ ರವಿವಾರ ವರದಿಯಾಗಿದೆ. ಅಪಘಾತದಲ್ಲಿ ಮೀನು ಸಾಗಾಟದ ಲಾರಿಯ ಚಾಲಕ ನೌಫಲ್ ಎಂಬವರಿಗೆ ಗಾಯಗಳಾಗಿದ್ದು, ಲಾರಿಯಲ್ಲಿ ಸಿಲುಕಿದ್ದ ಆತನನ್ನು ಸಾರ್ವಜನಿಕರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ಕಡೆಯಿಂದ ಉಡುಪಿಗೆ ಸಂಚರಿಸುತ್ತಿದ್ದ ಲಾರಿಗೆ ಮೀನು ಸಾಗಾಟ ಮಾಡುತ್ತಿದ್ದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ಲಾರಿಯು ರಸ್ತೆ ಪಕ್ಕದ ಗಣೇಶ್ ಮಾರ್ಬಲ್ ಅಂಗಡಿಗೆ ಗುದ್ದಿದ್ದು, ಲಕ್ಷಾಂತರ ರೂ.ಮೌಲ್ಯದ ಮಾರ್ಬಲ್ ಗಳು ತುಂಡಾಗಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನ | ಮಸೀದಿ ಧರ್ಮಗುರುವನ್ನು ಥಳಿಸಿ ಹತ್ಯೆ
ಜೈಪುರ : ಮಸೀದಿಯ ಧರ್ಮಗುರುವೊಬ್ಬರನ್ನು ಮೂವರು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನ ಅಜ್ಮೀರ್ನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತು ಹಚ್ಚಲು ಹಾಗೂ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಮಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚನ್ ನಗರ್ನಲ್ಲಿರುವ ಮಸೀದಿಯಲ್ಲಿ ಶನಿವಾರ ಸುಮಾರು ಮುಂಜಾನೆ 2 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿಗಳು ಮಸೀದಿಗೆ ಪ್ರವೇಶಿಸಿ ಧರ್ಮಗುರು ಮುಹಮ್ಮದ್ ತಾಹಿರ್ (30) ಅವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ತಾಹಿರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆಯುವ ಸಂದರ್ಭ ಮಸೀದಿಯ ಒಳಗೆ 6 ಮಕ್ಕಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ಘಟನೆಯನ್ನು ಬಹಿರಂಗಪಡಿಸದಂತೆ ಮಕ್ಕಳಿಗೆ ಬೆದರಿಕೆ ಒಡ್ಡಿ, ಅವರ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದುದರಿಂದ ಮಕ್ಕಳು ನೆರವಿಗಾಗಿ ಯಾರೊಬ್ಬರಿಗೂ ಕರೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾದ ಬಳಿಕ ಮಕ್ಕಳು ಮಸೀದಿಯಿಂದ ಹೊರಗೆ ಬಂದು ಘಟನೆಯ ಕುರಿತು ಜನರಿಗೆ ಮಾಹಿತಿ ನೀಡಿದ್ದಾರೆ. ತಾಹಿರ್ ಅವರು ಮಸೀದಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. Maulana Mahir, imam at Mohammadi masjid in Ajmer City of Rajasthan beaten to death inside mosque pic.twitter.com/3NDYquDKq5 — Gabbar (@Gabbar0099) April 27, 2024 ತಾಹಿರ್ ಅವರ ಮೃತದೇಹ ಉತ್ತರಪ್ರದೇಶದ ರಾಮ್ಪುರದಲ್ಲಿರುವ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ರಾಮಗಂಜ್ ಎಸ್ಎಚ್ಒ ರವೀಂದ್ರ ಸಿಂಗ್ ಹೇಳಿದ್ದಾರೆ. ಘಟನೆ ಕುರಿತಂತೆ ಅನಾಮಿಕ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ದುಷ್ಕರ್ಮಿಗಳನ್ನು ಗುರುತು ಪತ್ತೆ ಹಚ್ಚಲು ಹಾಗೂ ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಮುಂದುವರಿದ ಕಾಡ್ಗಿಚ್ಚು| ಕಾರ್ಯಾಚರಣೆಗೆ ಹೆಲಿಕಾಪ್ಟರ್ ಬಳಕೆ
ಡೆಹ್ರಾಡೂನ್: ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಹಬ್ಬಿರುವ ಕಾಡ್ಗಿಚ್ಚನ್ನು ವಾಯುಪಡೆಯ ಹೆಲಿಕಾಪ್ಟರ್ ನೆರವಿನಿಂದ ನಂದಿಸುವ ಕಾರ್ಯಾಚರಣೆಯು ಎರಡನೇ ದಿನವಾದ ರವಿವಾರವೂ ಮುಂದುವರಿದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನೈನಿತಾಲ್, ಹಲ್ದ್ವಾನಿ ಮತ್ತು ರಾಮನಗರ ಅರಣ್ಯ ವಿಭಾಗಗಳಲ್ಲಿ ಕಾಡ್ಗಿಚ್ಚು ತೀವ್ರವಾಗಿದ್ದು, ನಂದಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಪ್ಟರ್ ನಿಯೋಜಿಸಿದ ಬಳಿಕ ನೈನಿತಾಲ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಅನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ. ಬೆಂಕಿ ಹಬ್ಬಿರುವ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ನೆರವಿನಿಂದ ನೀರು ಸಿಂಪಡಿಸಲಾಗುತ್ತಿದೆ. ಕಾಡ್ಗಿಚ್ಚಿನಿಂದ 33.34 ಹೆಕ್ಟರ್ ಅರಣ್ಯಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. With a forest fire building up in vicinity of an Air Force Station near Nainital, #IAF activated its aerial fire fighting capability, employing a Mi-17 V5 helicopter for undertaking Bambi Bucket Ops. pic.twitter.com/2wLbTjW5m8 — Indian Air Force (@IAF_MCC) April 27, 2024
ಪ್ರಧಾನಿ ನರೇಂದ್ರ ಮೋದಿ ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದಾರೆ : ರಾಹುಲ್ ಗಾಂಧಿ
ಕಟಕ್: ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದರೆ ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಆಯ್ದ ಕೆಲವರಿಗಾಗಿ ಕೆಲಸ ಮಾಡುವ ಸರಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ಆರೋಪಿಸಿದರು. ಇಲ್ಲಿಯ ಸಾಲೇಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಬಿಜೆಡಿ ಮತ್ತು ಬಿಜೆಪಿ ಚುನಾವಣೆಗಳಲ್ಲಿ ಪರಸ್ಪರರ ವಿರುದ್ಧ ಕಾದಾಡುತ್ತಿವೆಯಾದರೂ ವಾಸ್ತವದಲ್ಲಿ ಅವು ಪರಸ್ಪರ ಕೈಜೋಡಿಸಿವೆ. ಇದನ್ನು ಪಾಲುದಾರಿಕೆ ಅಥವಾ ಮದುವೆ ಎಂದು ಬೇಕಾದರೂ ಕರೆಯಿರಿ, ಬಿಜೆಡಿ ಮತ್ತು ಬಿಜೆಪಿ ಒಂದಾಗಿವೆ ಎಂದು ಹೇಳಿದರು. ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಅವರ ಆಪ್ತ ವಿ.ಕೆ.ಪಾಂಡಿಯನ್ ಸರಕಾರವನ್ನು ನಡೆಸುತ್ತಿದ್ದಾರೆ ಎಂದರು. ಬಿಜೆಡಿ ಮತ್ತು ಬಿಜೆಪಿ ಒಡಿಶಾದ ಸಂಪತ್ತನ್ನು ಲೂಟಿ ಮಾಡಿವೆ ಎಂದು ಅವರು ಆರೋಪಿಸಿದರು.
ನಾಳೆಯಿಂದ(ಎ.29) ಎರಡನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಬೆಂಗಳೂರು : ರಾಜ್ಯಾದ್ಯಂತ 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2(ಎರಡನೆ ಹಂತದ ಪರೀಕ್ಷೆ) ನಾಳೆಯಿಂದಎ.29) ನಡೆಯಲಿದ್ದು, 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು 301 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ನೋಂದಣಿಯಾದ 1,49,300 ವಿದ್ಯಾರ್ಥಿಗಳ ಪೈಕಿ, 84,933 ಬಾಲಕರು, 64,367 ಬಾಲಕಿಯರಿದ್ದಾರೆ. ಕಲಾ ವಿಭಾಗದಲ್ಲಿ 52,492, ವಾಣಿಜ್ಯ ವಿಭಾಗದಲ್ಲಿ 39,427, ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 32,848 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ತೆಗೆದ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ತೆಗೆಯಲು ನೋಂದಣಿ ಮಾಡಿಕೊಂಡಿದ್ದಾರೆ. 27,092 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಪಿಯುಸಿ ಪರೀಕ್ಷೆ-1ರಲ್ಲಿ ಪಾಸಾಗಲು ಬೇಕಾಗಿದ್ದ ಅಂಕಗಳನ್ನು ತೆಗೆಯದಿರುವ 89,221 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಶೇ.75ರಷ್ಟು ಹಾಜರಾತಿ ಇಲ್ಲದೆ 17 ವರ್ಷ ತುಂಬಿದ 139 ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ವೇಳಾಪಟ್ಟಿ: ಎ.29ರಂದು ಕನ್ನಡ, ಅರೇಬಿಕ್, ಎ.30ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆಗಳು, ಮೇ 2ರಂದು ಇಂಗ್ಲೀಷ್, ಮೇ 3ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮೇ 4 ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ ಪರೀಕ್ಷೆಗಳು ನಡೆಯಲಿವೆ. ಮೇ 9ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಗೃಹವಿಜ್ಞಾನ ಮತ್ತು ಶಿಕ್ಷಣ ಶಾಸ್ತ್ರ ಪರೀಕ್ಷೆಗಳು, ಮೇ 11 ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಮೇ 13ರಂದು ಅರ್ಥಶಾಸ್ತ್ರ, ಮೇ 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಹಾಗೂ ಮೇ 15ರಂದು ಹಿಂದಿ, ಮೇ 16ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್ ಪರೀಕ್ಷೆಗಳು ನಡೆಯಲಿವೆ.
ಎನ್ ಡಿ ಎ ಸರಕಾರ ರಚನೆಯಾದರೆ ಹಜ್ ಯಾತ್ರೆಗೆ 1 ಲಕ್ಷ ನೆರವು : ಚಂದ್ರಬಾಬು ನಾಯ್ಡು
ಅಮರಾವತಿ: ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನೆಯ ಎನ್ಡಿಎ ಸರ್ಕಾರ ರಚನೆಯಾದ ಕೂಡಲೇ ಮೆಕ್ಕಾಗೆ ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ರವಿವಾರ ಭರವಸೆ ನೀಡಿದ್ದಾರೆ. ನೆಲ್ಲೂರಿನಲ್ಲಿ ಮುಸ್ಲಿಂ ಸಮುದಾಯದೊಂದಿಗಿನ ಸಂವಾದದಲ್ಲಿ ಮಾತನಾಡಿದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಟಿಡಿಪಿ ಎನ್ಡಿಎ ಭಾಗವಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನಾಯ್ಡು ಹೇಳಿದ್ದಾರೆ. ವೈಎಸ್ಆರ್ಸಿಪಿ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಮಸೀದಿಯನ್ನು ನಿರ್ಮಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ ಅವರು, ಟಿಡಿಪಿ ಹೈದರಾಬಾದ್ನಲ್ಲಿ ಉರ್ದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ ಎಂದರು.
ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ : ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್
ಹೈದರಾಬಾದ್ : ಕೆಲವು ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರವಿವಾರ ಇಲ್ಲಿ ಹೇಳಿದರು. ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅಗತ್ಯವಿರುವವರೆಗೂ ಮೀಸಲಾತಿಗಳನ್ನು ಮುಂದುವರಿಸಬೇಕು ಎನ್ನುವುದು ಸಂಘದ ಅಭಿಪ್ರಾಯವಾಗಿದೆ ಎಂದರು. ಮೀಸಲಾತಿಗಳ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವ್ಯಾಗ್ಯುದ್ಧದ ನಡುವೆಯೇ ಭಾಗವತ್ ಅವರ ಈ ಹೇಳಿಕೆ ಹೊರಬಿದ್ದಿದೆ. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿಗಳು ಮುಂದುವರಿಯಬೇಕು ಎಂದು ಕಳೆದ ವರ್ಷ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಭಾಗವತ್, ಅಗೋಚರವಾಗಿದ್ದರೂ ತಾರತಮ್ಯ ಸಮಾಜದಲ್ಲಿ ಅಸ್ತಿತ್ವದಲ್ಲಿದೆ ಎಂದಿದ್ದರು.
2014ರ ಬಳಿಕ ದಿಲ್ಲಿಯಲ್ಲಿ ದಲ್ಲಾಳಿಗಳ ದುಕಾನ್ ಬಂದ್: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಲೇವಡಿ
PM Modi Slams Congress: ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ನೀವೂ ಗಳಿಸಿ, ನಾವೂ ಗಳಿಸುತ್ತೇವೆ ಅಂತ ಲೆಕ್ಕಾ ಹಾಕಿದೆ. ಆದರೆ, ಬಿಜೆಪಿಯ ಧೃಡ ಸರಕಾರ ಇಂತಹ ಜನರಿಗೆ ದೊಡ್ಡ ಸಂದೇಶ ನೀಡುತ್ತಿದೆ. ಕಾಂಗ್ರೆಸ್ ನವರಿಗೆ ಈ ಸರಕಾರ ಬಾಗುವುದಿಲ್ಲ ಅಂತ ಚಿಂತೆಯಾಗಿದೆ. ಈ ಸರಕಾರವನ್ನು ಯಾರೂ ಮಣಿಸಲು ಆಗಲ್ಲ ಅಂತ ಗೊತ್ತಾಗಿದೆ. ಕಾಂಗ್ರೆಸ್ ನವರು ಏನೇ ಮಾಡಿದ್ರೂ ಭಾರತ ಮತ್ತು ಕರ್ನಾಟಕ ವಿಕಸಿತ ಆಗುತ್ತದೆ. ಕಲ್ಯಾಣ ಕರ್ನಾಟಕದ ವಿಕಾಸವನ್ನು ಬಿಜೆಪಿ ತನ್ನ ಜವಾಬ್ದಾರಿಯಾಗಿ ತೆಗೆದುಕೊಂಡಿದೆ ಎಂದರು.
ಬೆಂಗಳೂರು | ಯುವತಿಯನ್ನು ಬೆದರಿಸಿ ನಗ್ನ ಫೋಟೋ ಪಡೆಯುತ್ತಿದ್ದ ಆರೋಪ : ಎಫ್ಐಆರ್ ದಾಖಲು
ಬೆಂಗಳೂರು : ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಮಗಳಿಗೆ ಕಳುಹಿಸಿ ಬೆದರಿಕೆ ಹಾಕಿ ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಆರೋಪದಡಿ ಇಲ್ಲಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ 18 ವರ್ಷ ವಯಸ್ಸಿನ ನೊಂದ ಯುವತಿ ನೀಡಿರುವ ದೂರಿನನ್ವಯ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. 2023ರ ಸೆಪ್ಟೆಂಬರ್ ನಲ್ಲಿ ಇನ್ಸ್ಟಾಗ್ರಾಂ ಖಾತೆಯೊಂದರಿಂದ ಅಶ್ಲೀಲವಾಗಿ ಎಡಿಟ್ ಮಾಡಲಾಗಿದ್ದ ನನ್ನ ತಾಯಿಯ ಫೊಟೋವನ್ನು ವಂಚಕ ಕಳುಹಿಸಿದ್ದ. ಬಳಿಕ ಬೆದರಿಕೆ ಹಾಕಿ, ನಿನ್ನ ನಗ್ನ ಫೋಟೋ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದ. ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಅಂಜಿ ನನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದೆ. ನಂತರ ಅದೇ ಫೋಟೋವನ್ನು ಆರೋಪಿ ನನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಆರು ತಿಂಗಳುಗಳಿಂದ ಅಪರಿಚಿತ ವಂಚಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರುದಾರಳ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಯುವತಿಯ ಕೆಲ ಪರಿಚಿತರು, ಸ್ನೇಹಿತರ ವಿಚಾರಣೆ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
Gruha Jyothi: ರಾಜ್ಯದ ಯಾವುದೇ ಮೂಲೆಯಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುವ ಫಲಾನುಭವಿಗಳಿಗೆ ಬಿಗ್ ಸುದ್ದಿ
ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಮೂಲಕ ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡ್ತಾ ಇದ್ದು ಈ ಯೋಜನೆಗೆ ಇನ್ನು ಕೂಡ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಅದರೆ ಹೆಚ್ಚುವರಿ ಬಿಲ್ ಅನ್ನು ಫಲಾನುಭವಿಗಳೇ ಪಾವತಿ ಮಾಡಬೇಕಾಗುತ್ತದೆ. The post Gruha Jyothi: ರಾಜ್ಯದ ಯಾವುದೇ ಮೂಲೆಯಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುವ ಫಲಾನುಭವಿಗಳಿಗೆ ಬಿಗ್ ಸುದ್ದಿ appeared first on Karnataka Times .
ಬೆಂಗಳೂರು | ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತು ಹೆಚ್ಚಳ : ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು: ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಹಾಗೂ ಅಗತ್ಯತೆ ಇರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗುವುದು ಎಂದು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ರವಿವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರನಲ್ಲಿ ಏರ್ಪಡಿಸಿದ್ದ ಮಾಸಿಕ ಜನಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸಂತನಗರದಲ್ಲಿ ಮಹಿಳಾ ಪಿಜಿಗಳು ಹೆಚ್ಚಾಗಿರುವುದರಿಂದ ಕೆಲಸ ಮುಗಿಸಿ ತಡರಾತ್ರಿ ಪಿಜಿಗೆ ಬರುವ ಮಹಿಳೆಯರನ್ನು ಕೆಲವು ಯುವಕರು ಚುಡಾಯಿಸುತ್ತಾರೆ ಎನ್ನುವ ದೂರುಗಳು ಕೇಳಿಬಂದಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಎಂದರು. ನಗರದ ಪ್ಯಾಲೆಸ್ ಗುಟ್ಟಹಳ್ಳಿಯ ವಿನಾಯಕ ಸರ್ಕಲ್ನ ಎರಡೂ ಕಡೆಗಳಲ್ಲಿ ವಾಹನಗಳನ್ನು ಪಾಕಿರ್ಂಗ್ ಮಾಡುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿಕೊಂಡರು. ಇದೇ ವೇಳೆ ಆಯುಕ್ತ ಬಿ.ದಯಾನಂದ್ ಅವರು ಸಂಚಾರ ವಿಭಾಗದ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್., ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಹಾಗೂ ಕೇಂದ್ರ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ಮೆಟ್ರೋ ಕಾಮಗಾರಿಯಿಂದ 5 ವರ್ಷ ಬಂದ್ ಆಗಿದ್ದ ಕಾಮರಾಜ ರಸ್ತೆಯ ಒಂದು ಬದಿ ಸಂಚಾರಕ್ಕೆ ಶೀಘ್ರ ಮುಕ್ತ
Bengaluru Kamaraj Road Open Soon For Traffic : ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿಯಿಂದ ಎಂಜಿ ರಸ್ತೆಯ ಪಕ್ಕದ ಕಾಮರಾಜ ರಸ್ತೆಯಲ್ಲಿ ಕಳೆದ 5 ವರ್ಷ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಈ ಮಾರ್ಗದ ಒಂದು ಬದಿಯನ್ನು ತೆರೆಯಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು : ಭವ್ಯ ನರಸಿಂಹಮೂರ್ತಿ
ಬೆಂಗಳೂರು: ಭಾರತದ ಇತಿಹಾಸದಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ಅತ್ಯಂತ ಕ್ರೌರ್ಯದ ಘಟನೆ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರಾಗಿದ್ದು, ಕರ್ನಾಟಕದಲ್ಲಿರುವ ಪ್ರಧಾನಿ ಮೋದಿಯವರು ಈ ದೌರ್ಜನ್ಯದ ಬಗ್ಗೆ ಮಾತನಾಡಿಲ್ಲ. ಪ್ರಜ್ವಲ್ ರೇವಣ್ಣ ಮುಸ್ಲಿಮ್ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೃತ್ಯದ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು. ಒಬ್ಬ ಬಿಜೆಪಿ ನಾಯಕಿಯು ಈ ಬಗ್ಗೆ ಒಂದೂ ಮಾತನ್ನೇ ಆಡಿಲ್ಲ. ನಾಯಕರು ಬಾಯಿ ಬಿಟ್ಟಿಲ್ಲ. ತನ್ನ ಅಧಿಕಾರದ ದರ್ಪ ಬಳಸಿಕೊಂಡು ಹೀನ ಕೃತ್ಯ ಎಸಗಿರುವ ಈ ವ್ಯಕ್ತಿ ವಿರುದ್ಧ ಮೊದಲು ಮಾತನಾಡಬೇಕಿರುವುದು ಈ ದೇಶದ ಗೃಹ ಸಚಿವ ಅಮಿತ್ ಶಾ ಎಂದು ಹೇಳಿದರು. ಹೆಣ್ಣಿಗೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ನಾವು ಹೆಣ್ಣುಮಕ್ಕಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಂತೆ ಕೇವಲ ಪಕ್ಷಪಾತಿಗಳಾಗಿ ಮಾತನಾಡುವುದಿಲ್ಲ. ನಮಗೆ ನೇಹಾ, ರುಕ್ಷನಾ ಹಾಗೂ ಈ ನೀಚ ಸಂಸದನಿಂದ ಶೋಷಣೆಗೆ ಒಳಗಾಗಿರುವ ಎಲ್ಲ ಹೆಣ್ಣುಮಕ್ಕಳ ಪರವಾಗಿ ನಮ್ಮದು ಒಂದೇ ಹೋರಾಟದ ದನಿ ಎಂದು ಅವರು ತಿಳಿಸಿದರು. ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ಇಡೀ ದೇಶದಲ್ಲೇ ಯಾವ ಜನಪ್ರತಿನಿಧಿಯೂ ನಡೆಸದ ಕೃತ್ಯ. ಶೋಷಣೆಗೆ ಒಳಗಾಗಿರುವ ಮಹಿಳೆಯರು ದನಿ ಇಲ್ಲದ ಮಹಿಳೆಯರು. ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದರೆ ಮಾಧ್ಯಮಗಳ ಸಹಕಾರ ಬೇಕು. ದೇಶದ ಯಾವುದೇ ರಾಜಕಾರಣಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಕೃತ್ಯ ಈ ಘಟನೆಯಿಂದ ಹೋಗಬೇಕು. ಇಂದೇ ನಾವೆಲ್ಲ ದೊಡ್ಡ ಹೋರಾಟಕ್ಕೆ ನಾಂದಿ ಹಾಡಬೇಕು. ಇತಿಹಾಸ ಸೃಷ್ಟಿ ಮಾಡಬೇಕು ಭವ್ಯ ನರಸಿಂಹಮೂರ್ತಿ ಹೇಳಿದರು. ಅತ್ಯಾಚಾರಿಗಳ ವಿರುದ್ಧ ಮೋದಿ ಒಂದು ಸಲವು ಮಾತನಾಡಿಲ್ಲ. ಬಿಜೆಪಿ ಮುಖಂಡ ದೇವರಾಜೇಗೌಡ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಡಿ ಲೈಂಗಿಕ ಹಗರಣದ ವಿಡಿಯೋಗಳು ಇವೆ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೂ, ಮೈತ್ರಿ ಮಾಡಿ ಕೊಂಡಿದ್ದು ಏಕೆ?, ಹೆಣ್ಣುಮಕ್ಕಳ ಗೌರವವನ್ನು ಲೆಕ್ಕ ಹಾಕದೆ ನೀಚ ಮನುಷ್ಯನಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ. ಅಶ್ಲೀಲ ವಿಡಿಯೋದಲ್ಲಿ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಮನೆಕೆಲಸದ ಮಹಿಳೆ ಇದ್ದಾರೆ. ಇಲ್ಲಿ ರಕ್ಷಕನೆ ಭಕ್ಷಕನಾಗಿದ್ದಾನೆ ಎಂದು ಭವ್ಯ ನರಸಿಂಹಮೂರ್ತಿ ಕಿಡಿಕಾರಿದರು. ಕಾಂಗ್ರೆಸ್ ವಕ್ತಾರೆ ಕವಿತಾರೆಡ್ಡಿ ಮಾತನಾಡಿ, ಮಾಜಿ ಪ್ರಧಾನಿ ಕುಟುಂಬದ ಸದಸ್ಯ ಪ್ರಜ್ವಲ್ ರೇವಣ್ಣ ಮಾಡಿರುವ ಈ ಹೀನ ಕೃತ್ಯ ಖಂಡನಿಯ. ಇಂತಹ ಕುಟುಂಬದ ಸದಸ್ಯ ಯಾವುದೇ ಕಾನೂನಿನ ಭಯ ಇಲ್ಲದೆ ಜರ್ಮನಿಗೆ ಹಾರಿ ಹೋಗಿದ್ದಾರೆ. ಇವರಿಂದ ಶೋಷಣೆಗೆ ಒಳಗಾದ ಮಹಿಳೆಯರನ್ನು ಹೇಗೆ ರಕ್ಷಣೆ ಮಾಡುವುದು ಎನ್ನುವುದೇ ಚಿಂತೆಯಾಗಿದೆ ಎಂದರು. ಸಣ್ಣ ವಿಚಾರಕ್ಕೂ ಮಾತನಾಡುವ ಪ್ರಧಾನಿ ಮೋದಿಯವರು ತಮ್ಮ ಮಿತ್ರ ಪಕ್ಷದ ಲೋಕಸಭಾ ಅಭ್ಯರ್ಥಿಯ ಕೃತ್ಯದ ಬಗ್ಗೆ ಮಾತನಾಡಬೇಕು. ರಾಜ್ಯಕ್ಕೆ ಬರುತ್ತಿರುವ ಮೋದಿ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಸ್ವಯಂ ಘೋಷಿತ ವಿರೋಧ ಪಕ್ಷದ ನಾಯಕ ಯತ್ನಾಳ್, ಆರ್.ಅಶೋಕ್ ಈಗ ಎಲ್ಲಿ ಹೋಗಿದ್ದಾರೆ. ಇದು ರಾಜಕೀಯ ವಿಚಾರವಲ್ಲ ದೇಶದ ಮರ್ಯಾದೆಯ ವಿಚಾರ. ನಮ್ಮ ಹೆಣ್ಣುಮಕ್ಕಳ ವಿಚಾರ. ಮಹಿಳೆಯ ಪರವಾಗಿ ದನಿ ಎತ್ತಲು ನಿಮಗೆ ಏನಾಗಿದೆ ಎಂದು ಕವಿತಾರೆಡ್ಡಿ ಪ್ರಶ್ನಿಸಿದರು.
Banana Plantation: ಕಡಿಮೆ ಜಾಗದಲ್ಲಿ ಬಾಳೆ ಸಸಿ ನೆಟ್ಟು ಆದಾಯ ಗಳಿಸಲು ಈ ಕ್ರಮ ಅನುಸರಿಸಿ
ಬೋನ್ಸೈ ಗಿಡ ನೆಡುವಂತೆ ಮನೆಯಲ್ಲಿಯೇ ಕುಂಡದಲ್ಲಿ ಬಾಳೆ ಸಸಿಯನ್ನು ನೆಡಬಹುದು. ಅದಕ್ಕಾಗಿ ಮೊದಲು ನೀವು ಯಾವ ತಳಿಯನ್ನು ನೆಡಬೇಕು ಎಂಬುದು ನಿಶ್ಚಯಿಸಿರಿ. ಅದಕ್ಕೆ ಬಾಳೆ ಗಿಡ ಗೆಡ್ಡೆ ಯನ್ನು ಮಾರುಕಟ್ಟೆಯಿಂದ ಖರೀದಿ ಮಾಡಿ ಬಳಿಕ ಎರಡು ದಿನ ನೆನೆಸಿ ಇಡಬೇಕು. ಬಳಿಕ ಕುಂಡದಲ್ಲಿ ಮಣ್ಣು ತುಂಬಿ ಬಾಳೆಯ ಗೆಡ್ಡೆ ಬೀಜ ಅದಕ್ಕೆ ಹಾಕಬೇಕು. ಕಾಲು ಇಂಚಿನಂತೆ ಆಳದಲ್ಲಿ ಉತ್ತಮ ಗೊಬ್ಬರವನ್ನು ಸೇರಿಸಬೇಕು. The post Banana Plantation: ಕಡಿಮೆ ಜಾಗದಲ್ಲಿ ಬಾಳೆ ಸಸಿ ನೆಟ್ಟು ಆದಾಯ ಗಳಿಸಲು ಈ ಕ್ರಮ ಅನುಸರಿಸಿ appeared first on Karnataka Times .
ಮಂಗಳೂರು: ಮೇ 4ರಂದು ಹಜ್ ತರಬೇತಿ ಶಿಬಿರ
ಮಂಗಳೂರು, ಎ.28: ಹಜ್ ತರಬೇತಿ ಶಿಬಿರ ಮೇ 4ರಂದು ಬಂದರಿನ ಯತೀಂ ಖಾನದ ಸಭಾಂಗಣದಲ್ಲಿ ನಡೆಯಲಿದೆ. ಎ.30ರಂದು ನಡೆಯಬೇಕಿದ್ದ ಹಜ್ ತರಬೇತಿ ಶಿಬಿರವನ್ನು ಮೇ 4ಕ್ಕೆ ಮುಂದೂಡಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯಿಂದ 2024ನೇ ಸಾಲಿನ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಎ.30ರಂದು ಬೆಳಗ್ಗೆ 9:30 ರಿಂದ ಸಂಜೆ 5 ಗಂಟೆಯ ವರೆಗೆ ಜಪ್ಪಿನ ಮುಗೇರು ಯೆನೆಪೋಯ ಶಾಲಾ ವಠಾರದಲ್ಲಿ ಲಸಿಕೆಯನ್ನು ನೀಡಲಾಗುವುದು. ಹಜ್ ಯಾತ್ರಾರ್ಥಿಗಳು ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕಾಗಿದೆ. ಹಜ್ಗೆ ಯಾತ್ರಾರ್ಥಿಗಳು ಲಸಿಕೆಗೆ ಬರುವಾಗ ಹಜ್ ಕಮಿಟಿಗೆ ಸಲ್ಲಿಸಿದ ಮೆಡಿಕಲ್ ಸರ್ಟಿಫಿಕೇಟ್ನ ಪ್ರತಿಯನ್ನು ತರುವುದು ಕಡ್ಡಾಯವಾಗಿದೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣ ಕೂಡಿಟ್ಟು ಮೊಬೈಲ್ ಖರೀದಿಸಿದ ಮಹಿಳೆ; ಸ್ಕ್ರೀನ್ನಲ್ಲಿ ಸಿಎಂ ಪೋಟೋ- ಸಾರ್ಥಕವಾಯ್ತೆಂದ ಸಿದ್ದರಾಮಯ್ಯ
Woman Bought Mobile In Gruhalakshmi Money : ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಮಹಿಳೆಯೊಬ್ಬರು ಹೊಸ ಮೊಬೈಲ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಯು ಹಲವು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ದಾರುನ್ನೂರ್ ಎಜುಕೇಷನ್ ಸೆಂಟರ್ ಮಂಗಳೂರು ವಲಯ ಕಚೇರಿ ಉದ್ಘಾಟನೆ
ಮಂಗಳೂರು, ಎ.28: ದಾರುನ್ನೂರ್ ಎಜುಕೇಷನ್ ಸೆಂಟರ್ ಇದರ ಮಂಗಳೂರು ವಲಯದ ನೂತನ ಕಚೇರಿ ಬಂದರಿನ ರೀಗಲ್ ಫ್ಲಾಝಾದಲ್ಲಿ ರವಿವಾರ ಕಾರ್ಯಾರಂಭಗೊಂಡಿತು. ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರು ಮಂಗಳೂರು ವಲಯದ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಹಾಜಿ ಶರೀಫ್ ವೈಟ್ ಸ್ಟೋನ್ ಇವರು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಜಿ ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಯೆನೆಪೊಯ ಸಂಸ್ಥೆಯ ಜಾವೀದ್ ಯೆನೇಪೊಯ, ಡಾ. ಮೊಹಮ್ಮದ್ ಆರೀಫ್ ಮಸೂದ್, ಮಂಗಳೂರು ವಲಯದ ಉಪಾಧ್ಯಕ್ಷರಾದ ಸ್ವಾಲಿಹ್ ತಂಙಳ್, ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ತಂಙಳ್, ಕೋಶಾಧಿಕಾರಿ ಅದ್ದು ಹಾಜಿ, ಜೊತೆ ಕಾರ್ಯದರ್ಶಿ ಎಫ್. ಅಬ್ದುಲ್ ಜಲೀಲ್, ಸದಸ್ಯರಾದ ಹಾಜಿ ರಶೀದ್, ಹಾಜಿ ಇಬ್ರಾಹೀಂ, ಪಕೀರಬ್ಬ ಮಾಸ್ಟರ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್, ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ರಹ್ಮಾನ್ ಆಸ್ಕೊ, ಲೆಕ್ಕ ಪರಿಶೋಧಕರಾದ ಹಾಜಿ ಅಬೂಸ್ವಾಲಿಹ್, ಸದಸ್ಯರಾದ ಹಾಜಿ ಪಿ.ಬಿ. ಅಬ್ದುಲ್ ಹಮೀದ್ ಯು ಎ ಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಸುದ್ದೀನ್ ಸೂರಲ್ಪಾಡಿ, ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ನ ಅಧ್ಯಕ್ಷ ಹಾಜಿ ರಿಯಾಝುದ್ದೀನ್, ಕಿನ್ಯ ರೇಂಜ್ನ ಇಬ್ರಾಹೀಂ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಪಾಕ್ ದೋಣಿಯಲ್ಲಿ ಭಾರತಕ್ಕೆ ತರುತ್ತಿದ್ದ 600 ಕೋಟಿ ರೂ. ಮೌಲ್ಯದ 86 ಕೆಜಿ ಡ್ರಗ್ಸ್ ವಶ!
Drugs Seized In Pakistan Boat: ಖಚಿತ ಬೇಹುಗಾರಿಕಾ ಮಾಹಿತಿ ಲಭ್ಯವಾದ ಕೂಡಲೇ ಕರಾವಳಿ ರಕ್ಷಣಾ ಪಡೆ ತನ್ನ ಹಲವು ಯುದ್ಧ ನೌಕೆಗಳು, ಹಡಗುಗಳು ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಅಖಾಡಕ್ಕೆ ಇಳಿಸಿತ್ತು. ಸಮುದ್ರದಲ್ಲಿ ಸಮಗ್ರ ಶೋಧ ಕಾರ್ಯ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಕರಾವಳಿ ರಕ್ಷಣಾ ಪಡೆಯ ಹಡಗು ರಾಜರತನ್ ಪ್ರಮುಖ ಪಾತ್ರ ವಹಿಸಿತು ಎಂದು ಮಾಹಿತಿ ಸಿಕ್ಕಿದೆ. ಈ ಹಡಗನಲ್ಲಿ ಭಯೋತ್ಪಾದನಾ ನಿಗ್ರಹ ದಳ ಹಾಗೂ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳೂ ಇದ್ದರು.
FACT CHEK | ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೋ ವೈರಲ್ ; ವಾಸ್ತವ ಏನು?
ಹೊಸದಿಲ್ಲಿ : ಗುಜರಾತ್ನ ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೊವೊಂದನ್ನು ಹಂಚಿಕೊಂಡು, ಅರಬ್ ದೇಶಗಳಿಗೆ ರಫ್ತಾಗಲಿರುವ ಗೋವುಗಳು ಎಂದು ವ್ಯಾಪಕವಾಗಿ ಶೀರ್ಷಿಕೆ ನೀಡಲಾಗಿದೆ. ವಾಸ್ತವವಾಗಿ ವೀಡಿಯೊ ತಪ್ಪುದಾರಿಗೆಳೆಯುತ್ತಿದೆ ಎಂದು groundreport.in ವರದಿ ಮಾಡಿದೆ. ಗುಜರಾತ್ನ ಅದಾನಿ ಬಂದರಿನ ಮೂಲಕ ಸಾವಿರಾರು ಗೋವುಗಳನ್ನು ಮಾಂಸಕ್ಕಾಗಿ ಅರಬ್ ದೇಶಗಳಿಗೆ ಸಾಗಿಸಲಾಗುತ್ತಿದೆ ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಆರಂಭದಲ್ಲಿ ಸಂದೀಪ್ ವರ್ಮಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ, ನಂತರ ಇದನ್ನು ಸೂರ್ಯ ರಾಜ್ ನಾಗವಂಶಿ ಸೇರಿದಂತೆ ಅನೇಕ ಬಳಕೆದಾರರು ಮರುಹಂಚಿಕೊಂಡಿದ್ದಾರೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 1 ಮಿಲಿಯನ್ ಜನರು ಈ ವೀಡಿಯೊ ವೀಕ್ಷಣೆ ಮಾಡಿದ್ದಾರೆ. 10,000 ಕ್ಕೂ ಜನರು ಅದನ್ನು ಹಂಚಿಕೆಕೊಂಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲೂ ಈ ವೀಡಿಯೊ ಸಾಕಷ್ಟು ಹರಿದಾಡಿದೆ. ವಾಸ್ತವವೇನು? ಗೂಗಲ್ ಮೂಲಕ ವೀಡಿಯೊ ಮೂಲವನ್ನು ಪತ್ತೆಹಚ್ಚಿದಾಗ, ಸುಮಾರು ಐದು ದಿನಗಳ ಹಿಂದೆ ಟಿಕ್ಟಾಕ್ನಲ್ಲಿ ಹಂಚಿಕೊಂಡ ಈಜಿಪ್ಟ್ ನ ವೀಡಿಯೊ ತುಣುಕು ಇದಾಗಿದೆ ಎಂದು ತಿಳಿದುಬಂದಿದೆ. ಟಿಕ್ಟಾಕ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರ Instagram ಮತ್ತು Facebook ಖಾತೆಗಳನ್ನು ನೋಡಿದಾಗ ಇದೇ ರೀತಿಯ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿರುವುದನ್ನು ಗಮನಿಸಬಹುದು. ಈ ಕುರಿತು ಇಂಟರ್ ನೆಟ್ ನಲ್ಲಿ ಜಾಲಾಡಿದಾಗ, سوق اللحوم (ಮಾಂಸದ ಮಾರುಕಟ್ಟೆ) ಸೇರಿದಂತೆ ಹಲವಾರು ಈಜಿಪ್ಟಿನ ಫೇಸ್ಬುಕ್ ಪುಟಗಳು ಜಾನುವಾರುಗಳ ಸಾಗಣೆಯನ್ನು ಚಿತ್ರಿಸುವ ಇದೇ ರೀತಿಯ ವೀಡಿಯೊಗಳನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಈ ಪುಟದಲ್ಲಿನ ವೀಡಿಯೊದ ಶೀರ್ಷಿಕೆಯು ಇಂಗ್ಲಿಷ್ನಲ್ಲಿ ಈದ್ ಅಲ್ ಅದಾಗೆ ತಯಾರಿ ಎಂದು ಹೇಳಿದೆ. ದೃಶ್ಯಾವಳಿಯು ಸಾಮಾನ್ಯವಾಗಿ ತ್ಯಾಗದ ಹಬ್ಬ ಎಂದು ಕರೆಯಲ್ಪಡುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಈ ವೀಡಿಯೊ ಈಜಿಪ್ಟ್ನಲ್ಲಿನ ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈಜಿಪ್ಟ್ ನಲ್ಲಿ ಮಾಂಸದ ಸಗಟು ವ್ಯಾಪಾರಿ ಎಂದು ಗುರುತಿಸಲಾದ ಬಳಕೆದಾರರು ಮಾಂಸದ ಉತ್ಪನ್ನಗಳ ಚಿತ್ರಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ಆ ಮೂಲಕ ಈಜಿಪ್ಟ್ನಲ್ಲಿ ಮಾಂಸದ ಉದ್ಯಮದ ಮಾರುಕಟ್ಟೆಯ ಜೊತೆ ನಿಕಟ ಸಂಪರ್ಕವಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಫ್ಯಾಕ್ಟ್ ಚೆಕ್ ಮಾಡಿದ ನಂತರ, ವೀಡಿಯೊದ ಮೂಲವು ಈಜಿಪ್ಟ್ನ ದಮಿಯೆಟ್ಟಾ ಮೂಲದ ಮಾಂಸದ ಸಗಟು ವ್ಯಾಪಾರಿ ಹಮೇದ್ ಎಲ್ಹಗರಿ ಅವರದ್ದು ಎಂದು ತಿಳಿದುಬಂದಿದೆ. ಎಲ್ಹಗರಿ ಅವರು ಏಪ್ರಿಲ್ 19, 2024 ರಂದು ಈಜಿಪ್ಟ್ನ ರಾಸ್ ಎಲ್-ಬಾರ್, ದುಮ್ಯತ್, ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್ನಲ್ಲಿ ಇದೇ ರೀತಿಯ ವೀಡಿಯೊಗಳ ಸರಣಿಗಳಿವೆ. ಇಂತಹ ಇನ್ನೊಂದು ವೀಡಿಯೊವನ್ನು ಏಪ್ರಿಲ್ 22 ರಂದು ಟಿಕ್ಟಾಕ್ನಲ್ಲೂ ಅವರು ಪೋಸ್ಟ್ ಮಾಡಿದ್ದಾರೆ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ, ಹಮೇದ್ ಅವರು ವೀಡಿಯೊವನ್ನು ಹಂಚಿಕೊಂಡು ಅರೇಬಿಕ್ನಲ್ಲಿ, “ಸರಕುಗಳ ಜೊತೆ ಮಲಗಿ ಅವುಗಳ ವಿಲೇವಾರಿಗೆ ಕಾಯುವವನು. ಇವು ಮೊದಲ 25000 ತಲೆಗಳು” ಎಂದು ಬರೆದಿದ್ದಾರೆ. ಈ ವೀಡಿಯೊ ಜಾನುವಾರು ಸಾಗಣೆಗೆ ಸಂಬಂಧಿಸಿದ್ದಾಗಿದೆ. ಎಲ್ಲೂ ವೀಡಿಯೊದಲ್ಲಿ ಮಾಂಸಕ್ಕಾಗಿ ಅರಬ್ ದೇಶಗಳಿಗೆ ರಫ್ತು ಮಾಡುವ ವಿಚಾರವನ್ನು ಅವರು ಉಲ್ಲೇಖಿಸಿಲ್ಲ. ವೀಡಿಯೊ ದೃಶ್ಯಗಳನ್ನು ಸರಿಯಾಗಿ ಗಮನಿದರೆ, ಇದು ಭಾರತ ವೀಡಿಯೊದಂತೆ ಎಲ್ಲೂ ಕಾಣುವುದಿಲ್ಲ. ವೀಡಿಯೊದಲ್ಲಿ ಕಂಡುಬರುವ ಟ್ರಕ್ ಭಾರತೀಯ ಸಾರಿಗೆ ವಾಹನಗಳನ್ನು ಹೋಲುವುದಿಲ್ಲ. ಬದಲಾಗಿ, ಇದು ಈಜಿಪ್ಟ್ನಲ್ಲಿ ಸಾಮಾನ್ಯವಾಗಿ ಬಳಸುವಂತಹ ವಾಹನದಂತಿದೆ. ಫ್ಯಾಕ್ಟ್ ಚೆಕ್ ಪ್ರಕ್ರಿಯೆಯ ಮೂಲಕ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ, ವೀಡಿಯೋ ಗುಜರಾತಿನ ಅದಾನಿ ಬಂದರಿನಿಂದ ಅರಬ್ ದೇಶಗಳಿಗೆ ಮಾಂಸಕ್ಕಾಗಿ ಗೋವುಗಳನ್ನು ರಫ್ತು ಮಾಡುತ್ತಿರುವುದನ್ನು ಚಿತ್ರಿಸಿಲ್ಲ. ಬದಲಾಗಿ, ಇದು ಈಜಿಪ್ಟ್ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವುದನ್ನು ತೋರಿಸುತ್ತದೆ.
Prajwal Revanna sex scandal: ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಹಾಸನದಲ್ಲಿ ಸದ್ದು ಮಾಡಿದ್ದು, ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾದ ನಂತರ ಪ್ರಕರಣದ ಬಗ್ಗೆ ಮತ್ತಷ್ಟು ಚರ್ಚೆ ಶುರುವಾಗಿದ್ದು, ಸಂತ್ರಸ್ತರಿಂದ ದೂರು ದಾಖಲಾಗಿವೆ. ಹೊಳೆನರಸೀಪುರದಲ್ಲಿ ಸಂತ್ರಸ್ತೆಯೊಬ್ಬರು ಪೊಲೀಸ್ ಠಾಣೆಗೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಜ್ವಲ್ ಅವರ ತಂದೆ ಶಾಸಕ ಎಚ್ಡಿ ರೇವಣ್ಣ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ.
ವಿಲ್ ಜಾಕ್ಸ್ ಶತಕ, ಕೊಹ್ಲಿ ಅರ್ಧಶತಕ | ಆರ್ಸಿಬಿ ವಿರುದ್ಧ ಪಲ್ಟಿ ಹೊಡೆದ ಗುಜರಾತ್ ಟೈಟಾನ್ಸ್
ಅಹ್ಮದಾಬಾದ್ : ವಿಲ್ ಜಾಕ್ಸ್(ಔಟಾಗದೆ 100, 41 ಎಸೆತ, 5 ಬೌಂಡರಿ, 10 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 70, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 9 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ತಾನಾಡಿದ 10ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿದೆ. ಐಪಿಎಲ್ನ 45ನೇ ಪಂದ್ಯದಲ್ಲಿ ಗೆಲ್ಲಲು 201 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 16 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಗೆಲುವಿನ ನಗೆ ಬೀರಿತು. ರಶೀದ್ ಖಾನ್ ಎಸೆದ 16ನೇ ಓವರ್ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 29 ರನ್ ಗಳಿಸಿದ ವಿಲ್ ಜಾಕ್ಸ್ ಶತಕ ಪೂರೈಸಿ ಸುಲಭ ಗೆಲುವು ತಂದುಕೊಟ್ಟರು. ಆರಂಭಿಕ ಬ್ಯಾಟರ್ಗಳಾದ ಕೊಹ್ಲಿ ಹಾಗೂ ಎಫ್ ಡು ಪ್ಲೆಸಿಸ್ 3.5 ಓವರ್ಗಳಲ್ಲಿ 40 ರನ್ ಗಳಿಸಿ ಬಿರುಸಿನ ಆರಂಭ ನೀಡಿದರು. ಪ್ಲೆಸಿಸ್ ವಿಕೆಟನ್ನು ಉರುಳಿಸಿದ ಸಾಯಿ ಕಿಶೋರ್ ಆರ್ಸಿಬಿಗೆ ಆರಂಭಿಕ ಆಘಾತ ನೀಡಿದರು. ಈ ವೇಳೆ ಜೊತೆಯಾದ ಕೊಹ್ಲಿ ಹಾಗೂ ಜಾಕ್ಸ್ 2ನೇವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 74 ಎಸೆತಗಳಲ್ಲಿ 166 ರನ್ ಸೇರಿಸಿ ಇನ್ನೂ 24 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಜಾಕ್ಸ್ ಕೇವಲ 41 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿ ಆರ್ಸಿಬಿಯ ಗೆಲುವಿನ ಹಾದಿ ಸುಲಭಗೊಳಿಸಿದರು. ಹಿರಿಯ ಬ್ಯಾಟರ್ ಕೊಹ್ಲಿ 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರೈಸಿದರು. *ಸುದರ್ಶನ್, ಶಾರೂಕ್ ಖಾನ್ ಅರ್ಧಶತಕ, ಗುಜರಾತ್ ಟೈಟಾನ್ಸ್ 200/3 ಟಾಸ್ ಸೋತು ಆರ್ಸಿಬಿಯಿಂದ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ತಂಡ ಅಗ್ರ ಸರದಿಯ ಬ್ಯಾಟರ್ಗಳಾದ ಸಾಯಿ ಸುದರ್ಶನ್(ಔಟಾಗದೆ 84, 49 ಎಸೆತ)ಹಾಗೂ ಶಾರೂಕ್ ಖಾನ್(58 ರನ್, 30 ಎಸೆತ) ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ವೃದ್ದಿಮಾನ್ ಸಹಾ(5 ರನ್) ಹಾಗೂ ಶುಭಮನ್ ಗಿಲ್(16 ರನ್)ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಈ ಇಬ್ಬರು ಆಟಗಾರರು ಬೇಗನೆ ಔಟಾದರು. ಸಹಾ ಮೊದಲ ಓವರ್ನಲ್ಲಿಯೇ ವಿಕೆಟ್ ಕೈಚೆಲ್ಲಿದರು. ಸ್ವಪ್ನಿಲ್ ಸಿಂಗ್ ಅವರು ಮೊದಲ ಓವರ್ನ ಕೊನೆಯ ಎಸೆತದಲ್ಲಿ ಸಹಾಗೆ ಪೆವಿಲಿಯನ್ ಹಾದಿ ತೋರಿಸಿದರು. ನಾಯಕ ಗಿಲ್ ಅಲ್ಪ ಮೊತ್ತಕ್ಕೆ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ಆಗ ಗುಜರಾತ್ 45 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ ಹಾಗೂ ಶಾರೂಕ್ ಖಾನ್ 3ನೇ ವಿಕೆಟ್ಗೆ 86 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. 4ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಶಾರೂಕ್ ಖಾನ್ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡ 58 ರನ್ ಗಳಿಸಿ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು. ಶಾರೂಕ್ ಖಾನ್ ಔಟಾದ ನಂತರ ಡೇವಿಡ್ ಮಿಲ್ಲರ್(ಔಟಾಗದೆ 26, 19 ಎಸೆತ) ಜೊತೆಗೂಡಿದ ಸುದರ್ಶನ್ 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 36 ಎಸೆತಗಳಲ್ಲಿ 69 ರನ್ ಸೇರಿಸಿ ತಂಡದ ಮೊತ್ತವನ್ನು 200ಕ್ಕೆ ತಲುಪಿಸಿದರು. ಸಾಯಿ ಸುದರ್ಶನ್ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರ್ಪಡಿಸಿದ್ದು ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಔಟಾಗದೆ 84 ರನ್ ಗಳಿಸಿದರು. ಮಿಲ್ಲರ್ ಕೇವಲ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಔಟಾಗದೆ 26 ರನ್ ಗಳಿಸಿದರು. ಬೆಂಗಳೂರು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದು, ಮಧ್ಯಮ ಓವರ್ನಲ್ಲಿ ತನ್ನ ಲಯ ಕಳೆದುಕೊಂಡಿತು. ಮುಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ ಒಂದು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಗುಜರಾತ್ ಟೈಟಾನ್ಸ್: 20 ಓವರ್ಗಳಲ್ಲಿ 200/3 (ಸಾಯಿ ಸುದರ್ಶನ್ ಔಟಾಗದೆ 84, ಶಾರೂಕ್ ಖಾನ್ 58, ಡೇವಿಡ್ ಮಿಲ್ಲರ್ ಔಟಾಗದೆ 26, ಸ್ವಪ್ನಿಲ್ ಸಿಂಗ್ 1-23, ಮ್ಯಾಕ್ಸ್ವೆಲ್ 1-28, ಮುಹಮ್ಮದ್ ಸಿರಾಜ್ 1-34) ರಾಯಲ್ ಚಾಲೆಂಜರ್ಸ್ ಬೆಂಗಳೂರು: 16 ಓವರ್ಗಳಲ್ಲಿ 206/1 (ವಿಲ್ ಜಾಕ್ಸ್ ಔಟಾಗದೆ 100, ವಿರಾಟ್ ಕೊಹ್ಲಿ ಔಟಾಗದೆ 70, ಪ್ಲೆಸಿಸ್ 24, ಸಾಯಿ ಕಿಶೋರ್ 1-30)
ಟಿ20 ವಿಶ್ವಕಪ್ಗೆ ತಮ್ಮ ಆಯ್ಕೆಯ ಬಲಿಷ್ಠ ಭಾರತ ತಂಡ ಕಟ್ಟಿದ ವಸೀಮ್ ಜಾಫರ್!
Wasim Jaffer Names India T20 World Cup Squad: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜನೆ ಆಗಲಿದೆ. ಜೂನ್ 1ರಿಂದ 29ರವರೆಗೆ ಬಹುನಿರೀಕ್ಷಿತ ಟೂರ್ನಿ ನಡೆಯಲಿದ್ದು, ಈ ಸಲುವಾಗಿ ಬಲಿಷ್ಠ ತಂಡ ರಚನೆ ಮಾಡಲು ಟೀಮ್ ಇಂಡಿಯಾ ಸೆಲೆಕ್ಟರ್ಸ್ ಏಪ್ರಿಲ್ 30ರಂದು ಸಭೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಕಟ್ಟುವ ಕೆಲಸ ಮಾಡಿದ್ದು, ಮಾಜಿ ಓಪನರ್ ವಸೀಮ್ ಜಾಫರ್ ಕೂಡ ತಮ್ಮ ಆಯ್ಕೆಯ ತಂಡ ಹೆಸರಿಸಿದ್ದಾರೆ.
ಎಸ್ಸಿಎಸ್ಟಿಗೆ ಮೀಸಲಿಟ್ಟಿರುವ ಹಣ ಗ್ಯಾರಂಟಿ ಯೋಜನೆಗೆ ಬಳಕೆ: ಶಾಸಕಿ ಭಾಗೀರಥಿ ಮುರುಳ್ಯ ಆರೋಪ
ಬೈಂದೂರು, ಎ.28: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮನೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಕಾಲೋನಿಗಳ ರಸ್ತೆ, ಚರಂಡಿ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಬಳಸಿ ನಮಗೆ ವಾಪಾಸ್ ನೀಡುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದ್ದಾರೆ. ಕಿರಿಮಂಜೇಶ್ವರದಲ್ಲಿ ರವಿವಾರ ನಡೆದ ಬೈಂದೂರು ಮಂಡಲ ಬಿಜೆಪಿ ಎಸ್ಸಿ ಮೋರ್ಚಾದ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು. ಎಸ್ಟಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿರುವ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳಲಾಗಿದೆ. ಹೀಗಾಗಿ ಸರಕಾರ ನೀಡಿರುವ ಉಚಿತ ಪಡೆಯಲು ಯಾವುದೇ ಅಂಜಿಕೆ ಬೇಡ. ಮತದಾನ ಮಾತ್ರ ಯೋಚಿಸಿ ದೇಶದ ಅಭಿವೃದ್ಧಿ, ಸಮರ್ಥ ನಾಯಕತ್ವಕ್ಕೆ ನೀಡಬೇಕು ಎಂದರು. ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಯವರ 10 ವರ್ಷಗಳ ಆಡಳಿತದ ಬಲ, ಸಮರ್ಥ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿರ ಲಿದೆ ಎಂದು ಹೇಳಿದರು. ಶಾಸಕರಾದ ಗುರುರಾಜ ಗಂಟಿಹೊಳೆ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಮೋದಿಯಿಂದ ಸಂವಿಧಾನ ನಾಶ ಮಾಡುವ ಸಂಚು: ಜಯನ್ ಮಲ್ಪೆ
ಉಡುಪಿ, ಎ.28: ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಮೋದಿ ಅವರು ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾವನ್ನು ನಾಶ ಮಾಡುವ ಸಂಚು ರೂಪಿಸಿದ್ದಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ. ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಜೈಭೀಮ್ ಬಳಗ ವತಿಯಿಂದ ರವಿವಾರ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ರವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಮೋದಿ ಎಷ್ಟು ದೊಡ್ಡ ಹಗರಣ ಮಾಡಿದರೂ ಅವರನ್ನೇ ದೇವರು ಅನ್ನೋ ಜನ ನಮ್ಮ ದಲಿತ ಸಮಾಜದಲ್ಲೂ ಇದ್ದಾರೆ. ಮೋದಿ ಭ್ರಷ್ಟಾಚಾರ ಮಾಡಿ, ಬಡಜನರ ದುಡ್ಡನ್ನು ನುಂಗಿ ನೀರು ಕುಡಿಯುತ್ತ, ಬಡವರ ರಕ್ತ ಹೀರಿ ಅದನ್ನು ಉದ್ಯಮಿಗಳಿಗೆ ಅಭಿಷೇಕ ಮಾಡುತ್ತಿದ್ದಾರೆ. ದಲಿತ ವಿದ್ಯಾವಂತರು ಕೂಡ ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧ ಭಕ್ತರಂತೆ ವರ್ತಿಸುವುದು ಅಂಬೇಡ್ಕರ್ಗೆ ಬಗೆದ ದ್ರೋಹ ಎಂದು ಅವರು ದೂರಿದರು. ಮುಖ್ಯ ಅತಿಥಿಯಾಗಿ ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿ, ಅಂಬೇಡ್ಕರ್ರನ್ನು ಸ್ವಾರ್ಥಕ್ಕೆ ಬಳಸುವವರು ದೇಶದ್ರೋಹಕ್ಕೆ ಸಮ. ನಿಜವಾದ ದಲಿತ ನಾಯಕರು ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು. ಮೌಢ್ಯಕ್ಕೆ ಬಲಿಯಾಗದೆ ಧಮ್ಮ ಮಾರ್ಗದಲ್ಲಿ ನಡೆದರೆ ಮಾತ್ರ ದಲಿತರು ಅಭಿವೃದ್ಧಿಹೊಂದಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಉಡುಪಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸೌರಭ ಬಳ್ಳಾಲ್ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯವನ್ನು ಉಳಿಸುವುದು ಇಂದು ಪ್ರತಿಯೊಬ್ಬರ ಕರ್ತವ್ಯ. ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಕೆಲಸ ಮಾಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಗ್ರಾ.ಪಂ. ಸದಸ್ಯೆ ಸುಲೋಚನಾ ಸುಧಾಕರ್, ಜೈಭೀಮ್ ಬಳಗದ ಅಧ್ಯಕ್ಷ ಅಣ್ಣಪ್ಪ ಗೆದ್ದೆಮನೆ, ಗಣೇಶ್ ಹಂಗಾಕಟ್ಟೆ ಉಪಸ್ಥಿತರಿದ್ದರು. ಸಂತೋಷ್ ಸ್ವಾಗತಿಸಿದರು. ರಂಗ ಹಂಗಾರಕಟ್ಟೆ ವಂದಿಸಿದರು. ಸದಾನಂದ ಕಾರ್ಯಕ್ರಮ ನಿರೂಪಿಸಿದರು.
’ಸ್ವಚ್ಛ ಕಡಲ ತೀರ - ಹಸಿರು ಕೋಡಿ’ 30ನೇ ಅಭಿಯಾನ
ಕುಂದಾಪುರ, ಎ.28: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 30ನೇ ’ಸ್ವಚ್ಛ ಕಡಲ ತೀರ- ಹಸಿರು ಕೋಡಿ’ ಅಭಿಯಾನ ಯಶಸ್ವಿಯಾಗಿ ಜರುಗಿತು. ಅಭಿಯಾನಕ್ಕೆ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುರ್ರಹ್ಮಾನ್ ಅವರು ಚಾಲನೆ ನೀಡಿದರು. ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸಿಫ್ ಬ್ಯಾರಿ, ಸಲಹಾ ಮಂಡಳಿಯ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಕೋಡಿ ಊರಿನ ಮುಖಂಡರು ಹಾಗೂ ನಾಗರಿಕರು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸ್ವಚ್ಛತಾ ಅಭಿಯಾನಕ್ಕೆ ಕುಂದಾಪುರ ಪುರಸಭೆಯ ಅಧ್ಯಕ್ಷರು, ಮುಖ್ಯಾಧಿಕಾರಿಗಳು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.
ಮೋದಿ ಸರಕಾರದಿಂದ ಅತ್ಯಧಿಕ ಬರ ಪರಿಹಾರ ಬಿಡುಗಡೆ : ಆರ್.ಅಶೋಕ್
ಬೆಂಗಳೂರು : ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್ ಬರ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಚಿಪ್ಪು ನೀಡಿದೆ. ಆದರೆ, ಮೋದಿ ನೇತೃತ್ವದ ಸರಕಾರ ಭರಪೂರ ಪರಿಹಾರ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ರವಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಿಗೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಈ ಮೊದಲು ಮಾರ್ಗಸೂಚಿ ಪ್ರಕಾರ, 4,860ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿ ಈಗ ಕೇಂದ್ರ ಸರಕಾರ 3,454 ಕೋಟಿ ರೂ.ನೀಡಿದ ನಂತರ 18,172 ಕೋಟಿ ರೂ.ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದೂರಿದರು. ಹೆಚ್ಚು ಹಣ ಬಿಡುಗಡೆ: ಸದಾ ನಿದ್ದೆ ಮಾಡುವ ಸಿದ್ದರಾಮಯ್ಯನವರಿಗೆ ಮೋದಿ ಸರಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. 2020-21ರಲ್ಲಿ 2242.48 ಕೋಟಿ ರೂ.ಕೇಳಿದ್ದು, 1480 ಕೋಟಿ ರೂ.ಅಂದರೆ ಶೇ.66ರಷ್ಟು ನೀಡಲಾಗಿದೆ. 2021-22ರಲ್ಲಿ 2122.85 ಕೋಟಿ ರೂ.ಕೇಳಿದ್ದು, 2255ಕೋಟಿ ರೂ. ಅಂದರೆ ಶೇ.106ರಷ್ಟು ನೀಡಲಾಗಿದೆ. 2022-23ರಲ್ಲಿ 1944 ಕೋಟಿ ರೂ.ಕೇಳಿದ್ದು, 1603 ಕೋಟಿ ರೂ. ಅಂದರೆ ಶೇ.82.46ರಷ್ಟು ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದಿಂದ ಹಣ ನೀಡಿ: ಪ್ರಧಾನಿ ಮೋದಿ ಯಾವುದೇ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಿ ಬೇರೆ ರಾಜ್ಯಗಳಿಗೆ ಕಳುಹಿಸಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಫ್ರೂಟ್ ತಂತ್ರಜ್ಞಾನ ಬಳಸದೆ ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು ಕೇಂದ್ರ ಸರಕಾರದಂತೆಯೇ ರಾಜ್ಯ ಸರಕಾರವು 3,454 ಕೋಟಿ ರೂ.ಹಣ ನೀಡಬೇಕು. ಬಿಜೆಪಿ ಸರಕಾರ ದುಪ್ಪಟ್ಟು ಪರಿಹಾರ ನೀಡಿದಂತೆ ರಾಜ್ಯ ಸರಕಾರವು ಬರ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲವಾದರೆ ಪಾಪರ್ ಸರಕಾರ ಎಂದು ನಾನೇ ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ ಎಂದು ಅಶೋಕ್ ಇದೇ ವೇಳೆ ಎಚ್ಚರಿಸಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ - ಶಾಸಕ ಯತ್ನಾಳ್
MLA Yatnal On Congress : ಕಾಂಗ್ರೆಸ್ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ. ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಹೋಗುತ್ತಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹೊಸಂಗಡಿ: ಮೇ 1ರಂದು ಮಳ್ಹರ್ ವಿದ್ಯಾ ಸಂಸ್ಥೆಯ ವತಿಯಿಂದ ಹಜ್, ಉಮ್ರಾ ತರಬೇತಿ
ಮಂಜೇಶ್ವರ: ಹೊಸಂಗಡಿ ಮಳ್ಹರ್ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಪವಿತ್ರ ಹಜ್ ಯಾತ್ರಿಕರಿಗೆ ತರಬೇತಿ ಶಿಬಿರವು ಮೇ 1ರಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಖ್ಯಾತ ವಿದ್ವಾಂಸ ಡಾ. ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್ ತರಬೇತಿ ನೀಡಲಿದ್ದಾರೆ. ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಹಜ್ ಕಮಿಟಿ ಸದಸ್ಯರಾದ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಪ್ರಾರ್ಥನೆ ನಡೆಸುವರು. ಹಿರಿಯ ವಿದ್ವಾಂಸ ಸ್ವಾಲಿಹ್ ಸಅದಿ ತಳಿಪ್ಪರಂಬ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಕರ್ನಾಟಕ ರಾಜ್ಯ ಹಜ್ ಕಮಿಟಿಯ ಮಾಜಿ ಸದಸ್ಯ ಕೆ ಎಂ ಅಬೂಬಕರ್ ಸಿದ್ದೀಖ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಳ್ಹರ್ ವಿದ್ಯಾ ಸಂಸ್ಥೆಯ ಮ್ಯಾನೇಜರ್ ಅಡ್ವೊಕೇಟ್ ಹಸನ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ | ಪ್ರಜ್ವಲ್ ಬಳಿಕ ಎಚ್.ಡಿ.ರೇವಣ್ಣ ಮೇಲೂ ಎಫ್ಐಆರ್
ಹಾಸನ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ.ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆಯ ದೂರು ಆಧರಿಸಿ ಪೊಲೀಸರು ಎಚ್.ಡಿ.ರೇವಣ್ಣ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಎಚ್.ಡಿ.ರೇವಣ್ಣ ಎ.1, ಪ್ರಜ್ವಲ್ ರೇವಣ್ಣ ಎ.2 ಎಂದು ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ಕೇಸ್ ದಾಖಲಿಸಲಾಗಿದೆ. ಭವಾನಿ ರೇವಣ್ಣ ಇಲ್ಲದ ಸಮಯದಲ್ಲಿ, ಕೊಠಡಿಯಲ್ಲಿದ್ದಾಗ ಎಚ್.ಡಿ ರೇವಣ್ಣ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಪ್ರಜ್ವಲ್ ರೇವಣ್ಣ ಕೂಡ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದರು. ನಂತರ ಕೆಲಸ ಬಿಟ್ಟಿದ್ದೆ. ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಆತಂಕಗೊಂಡು ದೂರು ನೀಡಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಳ್ಳಾಲ: ತಾಜುಲ್ ಫುಖಹಾಅ್' ಮದ್ರಸ ಉದ್ಘಾಟನೆ
ಉಳ್ಳಾಲ: ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಕಿನ್ಯ ವತಿಯಿಂದ ಕೂಡಾರ ಗೌಸಿಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ತಾಜುಲ್ ಫುಖಹಾಅ್ ಮದ್ರಸ ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧಾರ್ಮಿಕ ಲೌಕಿಕ ಶಿಕ್ಷಣವು ಮುಸ್ಲಿಮರ ಬದುಕಿಗೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಮತ್ತು ನಾನು ಬಹಳಷ್ಟು ಅನ್ಯೋನ್ಯತೆ, ಸ್ನೇಹದ ಬಾಂಧವ್ಯ ದಿಂದ ಬದುಕಿದವರು. ಆದ್ದರಿಂದ ತಾಜುಲ್ ಫುಖಹಾಅ್ ರವರ ನಾಮಧೇಯದ ಮದ್ರಸ ಉದ್ಘಾಟನೆ ಮಾಡಿರುವುದನ್ನು ಮುಕ್ತ ಕಂಠದಿಂದ ಕೊಂಡಾಡಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ, ಕಣ್ಣಂಗಾರ್ ಹಾಜಿ ಎಚ್.ಬಿ ಮುಹಮ್ಮದ್, ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಹಾಜಿ ಕೆ.ಸಿ ಇಸ್ಮಾಈಲ್, ಪನೀರ್ ಜುಮುಅ ಮಸ್ಜಿದ್ ಅಧ್ಯಕ್ಷ ಹುಸೈನ್ ಹಾಜಿ,ಕೆ.ಎಂ ಮೂಸ ಹಾಜಿ ಖುತುಬಿ ನಗರ, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಎಲಿಮಲೆ ಅಬ್ಬಾಸ್ ಹಾಜಿ, ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ, ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕೋಶಾಧಿಕಾರಿ ಅಶ್ರಫ್ ಸಖಾಫಿ, ನಾಯಕರಾದ ಇಝ್ಝುದ್ದೀನ್ ಅಹ್ಸನಿ,ವಿ.ಎ ಮುಹಮ್ಮದ್ ಮುಸ್ಲಿಯಾರ್, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆ.ಎಂ ಮುಸ್ತಫಾ ನಯೀಮಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಪರಮಾಂಡ ಇಸ್ಮಾಈಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್, ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ, ಎಸ್,ವೈ,ಎಸ್ ರಾಜ್ಯ ಸಮಿತಿ ಇಸಾಬ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್,ದ.ಕ ಕೆಡಿಪಿ ಸದಸ್ಯ ಅಬ್ದುಲ್ ಹಮೀದ್ ಪಾಲಡಿ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಈಲ್ ಫಯಾಝ್ ಕಿನ್ಯ, ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬೂಬಕರ್ ಸಿದ್ದೀಕ್ ಫಾಳಿಲಿ, ನೂರುಲ್ ಉಲಮಾ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಅದಿ, ಸ್ಥಳೀಯ ಇಮಾಂ ಸಲೀಖ್ ಸಖಾಫಿ,ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್, ವಯನಾಡ್ ಉಸ್ತಾದ್, ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಅಧ್ಯಕ್ಷ ಆಲಿ ಕುಂಞಿ ಪಾರೆ, ಆದಂ ಲತೀಫಿ ಎಸ್,ವೈ,ಎಸ್ ದೇರಳಕಟ್ಟೆ ಝೋನ್ ಕೋಶಾಧಿಕಾರಿ ಉಸ್ಮಾನ್ ಝುಹ್ರಿ ಕುರಿಯ ಮತ್ತಿತರರು ಉಪಸ್ಥಿತರಿದ್ದರು. ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಕಿನ್ಯ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಿದರು.
ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ | ನಟ ಸಾಹಿಲ್ ಖಾನ್ ಬಂಧನ
ಮುಂಬೈ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಅವರನ್ನು ಛತ್ತೀಸ್ಗಢದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್ಗಢದಲ್ಲಿ ಮುಂಬೈ ಸೈಬರ್ ಸೆಲ್ನ ವಿಶೇಷ ತನಿಖಾ ತಂಡ (ಎಸ್ಐಟಿ) ಅವರನ್ನು ಬಂಧಿಸಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ. 2023 ರಲ್ಲಿ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಪರಾಧ ವಿಭಾಗವು ಡಿಸೆಂಬರ್ 15 ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಾಹಿಲ್ ಖಾನ್ ಮತ್ತು ಇತರ ಮೂವರಿಗೆ ಸಮನ್ಸ್ ನೀಡಿತ್ತು ಎಂದು ವರದಿಯಾಗಿದೆ. ಆದರೆ, ಖಾನ್ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಲಿಲ್ಲ
Student Scholarship: ಕಾರ್ಮಿಕರ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್! 11 ಸಾವಿರ ರೂ ನೇರವಾಗಿ ಖಾತೆಗೆ
ಈ ವಿದ್ಯಾರ್ಥಿ ವೇತನವು ಎಲ್ಲ ಕಾರ್ಮಿಕರ ಮಕ್ಕಳಿಗೆ ಸಿಗಲಾರದು ಬದಲಿಗೆ ಕಾರ್ಮಿಕರ ಕಾರ್ಡ್ ಹೊಂದಿದ್ದ ಪೋಷಕರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ (Student Scholarship) ಅಪ್ಲೈ ಮಾಡಬಹುದು. ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಕಾರ್ಮಿಕರ ಕಾರ್ಡ್ (Labour Card) ಅಗತ್ಯ ವಾಗಿ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಾರ್ಷಿಕ 1100 ನಿಂದ 11,000 ದ ವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ. The post Student Scholarship: ಕಾರ್ಮಿಕರ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್! 11 ಸಾವಿರ ರೂ ನೇರವಾಗಿ ಖಾತೆಗೆ appeared first on Karnataka Times .
ಶಾಹಿದ್ ಅಫ್ರಿದಿ ಮಾದರಿ ಭಾರತೀಯ ಬ್ಯಾಟರ್ ಹೆಸರಿಸಿದ ನವಜೋತ್ ಸಿಂಗ್ ಸಿಧು!
Indian Premier League: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹಲವು ಯುವ ಆಟಗಾರರ ಉದಯವಾಗಿದೆ. ಅದರಲ್ಲೂ ಟೂರ್ನಿಯಲ್ಲಿ ಈ ಬಾರಿ ಹೊಸ ಮ್ಯಾಚ್ ಫಿನಿಷರ್ಗಳು ಮೂಡಿಬಂದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮಾ ಭವಿಷ್ಯದ ಸೂಪರ್ ಸ್ಟಾರ್ ಫಿನಿಷರ್ಸ್ ಆಗಿ ಹೊರಹೊಮ್ಮಿದರೆ, ಗುಜರಾತ್ ಟೈಟನ್ಸ್ ತಂಡದಲ್ಲಿ ಇದೇ ಮಾದರಿ ಸಾಮರ್ಥ್ಯ ಹೊಂದಿರುವ ಆಲ್ರೌಂಡರ್ ಶಾರುಖ್ ಖಾನ್ ಮೊದಲ ಅರ್ಧಶಶತಕ ಬಾರಿಸಿದ್ದು, ಈ ಬಗ್ಗೆ ಭಾರಿ ಮೆಚ್ಚುಗೆ ಸಂಪಾದಿಸಿದ್ದಾರೆ.
ಪ್ರಚಾರದ ಹಾಡಿಗೆ ಚುನಾವಣಾ ಆಯೋಗದಿಂದ ನಿಷೇಧ: ಎಎಪಿ ಆರೋಪ
ಹೊಸದಿಲ್ಲಿ: ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷವು ರವಿವಾರ ಆರೋಪಿಸಿದೆ. ಇತ್ತೀಚೆಗಷ್ಟೇ 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಎಂಬ ಚುನಾವಣಾ ಪ್ರಚಾರ ಹಾಡನ್ನು ಆಮ್ ಆದ್ಮಿ ಪಕ್ಷವು ಬಿಡುಗಡೆಗೊಳಿಸಿತ್ತು. ಈ ಹಾಡು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂದು ಚುನಾವಣಾ ಆಯೋಗ ನಿಷೇಧ ಹೇರಿರುವುದಾಗಿ ಆಮ್ ಆದ್ಮಿ ಪಕ್ಷವು ಹೇಳಿಕೊಂಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ನಾಯಕಿ ಅತಿಶಿ, “ಇದೇ ಮೊದಲ ಬಾರಿಗೆ ಪಕ್ಷವೊಂದರ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಹಾಡಿನಲ್ಲಿ ಬಿಜೆಪಿ ಅಥವಾ ಮಾದರಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನೂ ಉಲ್ಲಂಘಿಸಿಲ್ಲ. ವಿಡಿಯೊ ಮತ್ತು ಘಟನೆಗಳನ್ನು ಮಾತ್ರ ಆಧರಿಸಿವೆ” ಎಂದು ಅವರು ಹೇಳಿದ್ದಾರೆ. 'ಬಿಜೆಪಿ ಸರ್ವಾಧಿಕಾರಯಾದ್ದರಿಂದ ಏನು ಮಾಡಿದರೂ ಅದು ಸರಿ. ಯಾರೇ ಅದರ ವಿರುದ್ಧ ಮಾತನಾಡಿದರೆ ಅದು ತಪ್ಪು. ಇದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತೋರಿಸುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ” ಎಂದು ಅವರು ಮನವಿ ಮಾಡಿದ್ದಾರೆ. ಎರಡು ನಿಮಿಷಗಳ ಆಮ್ ಆದ್ಮಿ ಪಕ್ಷದ ಪ್ರಚಾರದ ಹಾಡನ್ನು ಎಎಪಿ ಶಾಸಕ ದಿಲೀಪ್ ಪಾಂಡೆ ಹಾಡಿದ್ದಾರೆ. ಗುರುವಾರ ಇದನ್ನು ಬಿಡುಗಡೆಗೊಳಿಸಲಾಗಿತ್ತು. ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಾಕಿಸ್ತಾನದ ಬೋಟ್ನಿಂದ 600 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಡಿಸಿಕೊಂಡ ಕೋಸ್ಟಲ್ ಗಾರ್ಡ್ | 14 ಮಂದಿಯ ಬಂಧನ
ಪೋರ್ ಬಂದರ್ : ಇಂಡಿಯನ್ ಕೋಸ್ಟಲ್ ಗಾರ್ಡ್, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೋಟ್ನಿಂದ ಸುಮಾರು 600 ಕೋಟಿ ರೂ. ಮೌಲ್ಯದ ಡಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 14 ಪಾಕಿಸ್ತಾನದ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಇಂಡಿಯನ್ ಕೋಸ್ಟಲ್ ಗಾರ್ಡ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಗುಪ್ತಚರ ಮಾಹಿತಿಯಂತೆ ಅರಬ್ಬಿ ಸಮುದ್ರದಲ್ಲಿ ಪೋರ್ಬಂದರ್ನಿಂದ ಪಶ್ಚಿಮಕ್ಕೆ 86 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಮೌಲ್ಯ 600 ಕೋಟಿ ರೂ. ಎಂದು ಹೇಳಿದೆ.
ಗಂಗಾವತಿ: ಖಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ 'ಪ್ರಹಾಪ್ರಭು', ನಮಗೆ ಬೇಕಿದೆ ಕಾಯಕ ಕಲ್ಯಾಣ- ನಟ ಪ್ರಕಾಶ್ ರೈ
Prakash Raj in Gangavathi: ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರೆ. ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಟ ಪ್ರಕಾಶ್ ರೈ ಗಂಗಾವತಿಯಲ್ಲಿ ಹೇಳಿದರು. ಮೋದಿ ಅವರು ಕಾಯಕದ ಕಲ್ಯಾಣವನ್ನು ರೂಪಿಸುವ ಬದಲು ಖಾವಿ ಕಲ್ಯಾಣವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಯುವಕರು ಎಚ್ಚರವಹಿಸಬೇಕಿದೆ. ಲಡಾಕ್ನಲ್ಲಿನ ಪರಿಸ್ಥಿತಿ, ಅಲ್ಲಿನ ಜನರ ಸ್ಥಿತಿ ಹಾಗೂ ಚೀನಾದಿಂದ ಭಾರತದ ಭೂಭಾಗವು ಅತಿಕ್ರಮಣ ಆಗಿರುವ ಬಗ್ಗೆ ಮಾತನಾಡಿದರು. ಗಂಗಾವತಿಯಲ್ಲಿ ದೇಶಪ್ರೇಮಿ ವಿದ್ಯಾರ್ಥಿ ಯುವಜನರ ಸಮಾವೇಶದಲ್ಲಿ ಪ್ರಕಾಶ್ ರೈ ಮಾತನಾಡಿದರು.
Tata Sumo: ಎರ್ಟಿಗಾ ಕಾರನ್ನು ಮೀರಿಸಲಿದೆ ಲೆಜೆಂಡರಿ ಟಾಟಾ ಸುಮೋ! ಬೆಲೆ ಹಾಗೂ ಫೀಚರ್ಸ್ ಲೀಕ್
ಟಾಟಾ ಕಂಪನಿಯು ಅತಿ ಕಡಿಮೆ ಬೆಲೆಗೆ ಗ್ರಾಹಕರ ಕೈಗೆಟಕುವ ವೆಚ್ಚದಲ್ಲಿ, ಹೊಸ ಅವತಾರದ ಟಾಟಾ ಸುಮೋ ಗಾಡಿ (Tata Sumo Vehicle) ಯನ್ನು ನೀಡಲು ನಿರ್ಧರಿಸಿದ್ದು, ಇದರಿಂದಾಗಿ ಗಾಡಿಯ ಆಕರ್ಷಣೆ ಮತ್ತಷ್ಟು ಹೆಚ್ಚಾದೆ. ಹೌದು ಗೆಳೆಯರೇ ಕೇವಲ ಎಂಟು ಲಕ್ಷದಿಂದ ಪ್ರಾರಂಭವಾಗುವ ಟಾಟಾ ಸುಮೋ 2024ರ ಟಾಪ್ ಮಾಡೆಲ್ಗಳು (Top Models) 11 ಲಕ್ಷದ ರೇಂಜ್ನಲ್ಲಿ ಲಭ್ಯವಿದೆ. The post Tata Sumo: ಎರ್ಟಿಗಾ ಕಾರನ್ನು ಮೀರಿಸಲಿದೆ ಲೆಜೆಂಡರಿ ಟಾಟಾ ಸುಮೋ! ಬೆಲೆ ಹಾಗೂ ಫೀಚರ್ಸ್ ಲೀಕ್ appeared first on Karnataka Times .
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಕಾಣದ ಕೈಗಳ ಕೃತ್ಯ: ಮಾಜಿ ಶಾಸಕ ನರೇಂದ್ರ
Congress Reaction On Poll Booth Vandalised: ಚಾಮರಾಜನಗರದ ಕಾಡಂಚಿನ ಕುಗ್ರಾಮದ ಜನರು ಮೂಲ ಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೂಂಡು ಬಂದಿದ್ದಾರೆ. ಇಲ್ಲಿನ ಜನರಿಗೆ ಇದೀಗ ತಾನೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಗ್ರಾಮದಲ್ಲಿ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಹಾಗೆಯೇ ಉಳಿದು ಹೋಗಿದೆ. ಇದರ ಜೊತೆಗೆ ಅರಣ್ಯ ಇಲಾಖೆ ನಾಗಮಲೆಗೆ ತೆರಳುವ ಪಾದಯಾತ್ರಿಗಳಿಗೆ ನಿರ್ಬಂಧ ತಂದಿದೆ ಎನ್ನಲಾಗಿದೆ. ಜೀಪ್ ಬಿಡದ ಕಾರಣ ಗ್ರಾಮದ ನಿರ್ವಹಣೆಗೂ ತೊಂದರೆ ಎದುರಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Gas Subsidy: ಗ್ಯಾಸ್ ಸಬ್ಸಿಡಿಯ ಹೊಸ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಕೇಂದ್ರ ಜಾರಿಗೆ ತಂದಿದ್ದು ಲಕ್ಷಾಂತರ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಅದರ ಜೊತೆ ಸಬ್ಸಿಡಿ (Gas Subsidy) ಮೊತ್ತವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. The post Gas Subsidy: ಗ್ಯಾಸ್ ಸಬ್ಸಿಡಿಯ ಹೊಸ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ! appeared first on Karnataka Times .
ಬಾಬಾ ಬುಡನ್ಗಿರಿ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ | ಒಂದೇ ಕುಟುಂಬದ 30ಕ್ಕೂ ಹೆಚ್ಚು ಮಂದಿಗೆ ಗಾಯ : ಓರ್ವ ಮೃತ್ಯು
ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾ ಬುಡನ್ಗಿರಿಗೆ ಮಿನಿ ಬಸ್ನಲ್ಲಿ ಪ್ರವಾಸಕ್ಕೆ ಬಂದಿದ್ದ ಬಸ್ ವೊಂದು ಪಲ್ಟಿಯಾಗಿ ಬಾಲಕನೋರ್ವ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಬಾ ಬುಡನ್ಗಿರಿ ಸಮೀಪದ ಮಾಣಿಕ್ಯಧಾರ ಎಂಬಲ್ಲಿ ರವಿವಾರ ನಡೆದಿದೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಆದಿವಾಲ ಗ್ರಾಮದವರು ಎಂದು ತಿಳಿದು ಬಂದಿದ್ದು, ಗಾಯಗೊಂಡವರಲ್ಲಿ ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಆದಿವಾಲ ಗ್ರಾಮದವರಾದ ಒಂದೇ ಕುಟುಂಬದ 30ಕ್ಕೂ ಹೆಚ್ಚು ಮಂದಿ ಮಿನಿ ಬಸ್ ಮೂಲಕ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್ಗಿರಿ ಪ್ರವಾಸಕ್ಕೆ ರವಿವಾರ ಬಂದಿದ್ದರು. ಈ ಪ್ರವಾಸಿಗರು ಬಾಬಾ ಬುಡನ್ಗಿರಿ ಮಾರ್ಗದಲ್ಲಿರುವ ಮಾಣಿಕ್ಯಧಾರ ಪ್ರವಾಸ ಮುಗಿಸಿಕೊಂಡು ಬಾಬಾ ಬುಡನ್ಗಿರಿಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಸಣ್ಣ ಕಂದಕ್ಕೆ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು, ಪೊಲೀಸರು ಹಾಗೂ ಪ್ರವಾಸಕ್ಕೆ ಬಂದಿದ್ದವರು ಬಸ್ನಿಂದ ಹೊರ ತೆಗೆದಿದ್ದಾರೆ. ನಂತರ ಹಲವು ಆಂಬುಲೆನ್ಸ್ ಗಳ ಮೂಲಕ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಾಂಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Score | GT vs RCB : ಆರ್ಸಿಬಿಗೆ 201 ರನ್ಗಳ ಗುರಿ!
Gujarat Titans (GT) vs Royal Challengers Bengaluru (RCB) Match Live Scorecard: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್ ಟಿಕೆಟ್ ಪಡೆಯಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುವ ಸ್ಥಿತಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಆತಿಥೇಯ ಗುಜರಾತ್ ಟೈಟನ್ಸ್ ಎದುರು ಪೈಪೋಟಿ ನಡೆಸುತ್ತಿದೆ. 2022ರ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಮೂಲಕ ಆರ್ಸಿಬಿಗೆ 201 ರನ್ಗಳ ಕಠಿಣ ಗುರಿ ನೀಡಿತು.
Fact Check: ಪ್ರಧಾನಿಯಾಗಿ ರಾಹುಲ್ ಗಾಂಧಿ ಪ್ರಮಾಣವಚನ! ವೈರಲ್ ವಿಡಿಯೋ ಅಸಲಿಯತ್ತೇನು?
Fact Check On Rahul Gandhi Viral Video: ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಅನ್ನೋದೇ ಗೊತ್ತಾಗಲ್ಲ. ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಜೊತೆಯಲ್ಲೇ ಜೂನ್ 4 ರಂದು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿ ಎಂದು ಬರೆದುಕೊಳ್ಳಲಾಗಿತ್ತು. ಆದರೆ ಪರಿಶೀಲನೆ ವೇಳೆ ಈ ಆಡಿಯೋ ಎಐ ತಂತ್ರಜ್ಞಾನ ಬಳಸಿ ತಿರುಚಲಾದ ಆಡಿಯೋ ಅನ್ನೋದು ದೃಢ ಪಟ್ಟಿದೆ.
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಷ್ಟೇ ಅನುದಾನ ಬಿಡುಗಡೆ ಮಾಡಲಿ: ಬೊಮ್ಮಾಯಿ ಸವಾಲು
ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರ ಕಡಿಮೆ ಆಯಿತು ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದಿದ್ದೇ ಆದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಷ್ಟೇ ತನ್ನ ಪಾಲಿನ ಪರಿಹಾರವನ್ನೂ ತಕ್ಷಣವೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಇದೇ ವೇಳೆ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ ಅನುದಾನವೆಷ್ಟು ಎಂದು ಬಹಿರಂಗಪಡಿಸಲಿ ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ಶಿರಸಿ: ‘500 ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಿಕ್ಕಿದ ಮರುದಿನವೇ ನಿರ್ಣಯ ಕೈಗೊಳ್ಳ ಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ನಿರ್ಧಾರ ಕೈಗೊಳ್ಳಲು 56 ಇಂಚಿನ ಎದೆ ಬೇಕಾಗಿತ್ತು’ ಎಂದು ಪ್ರಧಾನಿ ಮೋದಿ ಹೇಳಿದರು. ರವಿವಾರ ಶಿರಸಿಯಲ್ಲಿ ಬಿಜೆಪಿ ವತಿಯಿಂದ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ಸಾಧ್ಯವಾಯಿತು. ರಾಮ ಮಂದಿರ ಪುಣ್ಯ, ಪವಿತ್ರ ಕಾರ್ಯ. ಪುಣ್ಯದ ಹಕ್ಕುದಾರ ಯಾರು? ಮತ ನೀಡಿ ಶಕ್ತಿಯುತ ಸರ್ಕಾರ ನೀಡಿದ ನೀವೇ ಪುಣ್ಯವಂತರು’ ಎಂದರು. ಮಂದಿರ ನಿರ್ಮಾಣವಾಗದಂತೆ ವಿಕೃತ ಮನಸ್ಥಿತಿಯವರೆಲ್ಲ ಒಂದಾಗಿದ್ದರು. ಕಾಂಗ್ರೆಸ್ ಮತ್ತು ಎಲ್ಲ ಮಿತ್ರ ಪಕ್ಷಗಳು ಮಂದಿರ ನಿರ್ಮಾಣದ ವಿರುದ್ಧ ಕೋರ್ಟ್ ನಲ್ಲೂ ಹೋರಾಟ ನಡೆಸಿದರು. ಎಲ್ಲವನ್ನೂ ಮರೆತು ಆಮಂತ್ರಣ ನೀಡಿದರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ರಾಮಲಲ್ಲಾನಿಗೆ ಅವಮಾನ ಮಾಡಿದರು. ಅವರನ್ನು ನೀವು ಬಹಿಷ್ಕರಿಸಿ ಎಂದು ಹೇಳಿದರು. ‘ರಾಮ ಮಂದಿರದ ವಿರುದ್ಧ ತಲೆಮಾರುಗಳಿಂದ ಹೋರಾಟ ನಡೆಸಿದ್ದ ಅನ್ಸಾರಿ ಕುಟುಂಬಕ್ಕೂ ಆಮಂತ್ರಣ ನೀಡಲಾಗಿತ್ತು. ಮುಸಲ್ಮಾನರಾದರೂ ಅವರು ಕೂಡ ಎಲ್ಲವನ್ನು ಮರೆತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು’ ಪ್ರಧಾನಿ ಮೋದಿ ಹೇಳಿದರು.
High Court: ರಾಜ್ಯದಲ್ಲಿ ಜಾರಿಯಲ್ಲಿರುವ 5 ಗ್ಯಾರಂಟಿಗಳ ಬಗ್ಗೆ ಹೈ ಕೋರ್ಟ್ ಹೊಸ ಸುತ್ತೋಲೆ! ಇಲ್ಲಿದೆ ಟ್ವಿಸ್ಟ್
ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರೆಂಟಿ ಯೋಜನೆ ಬಗ್ಗೆ ಜನರಿಗೆ ತಿಳಿಸಿ ಅವೆಲ್ಲ ವಾಸ್ತವಿಕವಾಗಿ ಸಾಧ್ಯವೇ ಎಂಬುದು ಅನುಮಾನವಾಗಿತ್ತು. ಆದರೆ ನುಡಿದಂತೆ ಕಾಂಗ್ರೆಸ್ ಸರಕಾರ ನಡೆಯುತಲಿದೆ. ಸದ್ಯ ಇದೆ ಪಂಚಗ್ಯಾರೆಂಟಿ ಅಂಶಗಳು ಕೋರ್ಟ್ (High Court) ಮೆಟ್ಟಿಲೇರಿದ್ದು ಹೈಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. The post High Court: ರಾಜ್ಯದಲ್ಲಿ ಜಾರಿಯಲ್ಲಿರುವ 5 ಗ್ಯಾರಂಟಿಗಳ ಬಗ್ಗೆ ಹೈ ಕೋರ್ಟ್ ಹೊಸ ಸುತ್ತೋಲೆ! ಇಲ್ಲಿದೆ ಟ್ವಿಸ್ಟ್ appeared first on Karnataka Times .
ಕೇಂದ್ರದಿಂದ ರಾಜ್ಯದ ರೈತರಿಗೆ ಘೋರ ಅನ್ಯಾಯ : ರಣದೀಪ್ ಸಿಂಗ್ ಸುರ್ಜೇವಾಲ
ಬೀದರ್ : ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಘೋರ ಅನ್ಯಾಯ ಮಾಡಿ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲಿ ಖಾಲಿ ಚೊಂಬನ್ನೇ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಬೀದರ್ ನ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದ್ದು, ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಂಚನೆ ಮಾಡಿ, ರಾಜ್ಯದ ಅನ್ನಧಾತರಿಗೆ ಘೋರ ಅನ್ಯಾಯ ಮಾಡಿದೆ ಎಂದು ಹೇಳಿದರು. ರಾಜ್ಯದಲ್ಲಿ ಮಳೆ ಕೊರತೆಯಿಂದ ಈ ಬಾರಿ ಬರ ಪರಿಸ್ಥಿತಿ ಎದುರಾಗಿದೆ. ರೈತರ ಬೆಳೆ ಹಾನಿ ಪರಿಹಾರ ನೀಡಲು, ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಬರ ಪೀಡಿತ ಜಿಲ್ಲೆಗಳಲ್ಲಿ 90 ದಿನಗಳ ಉದ್ಯೋಗ ನೀಡಲು, ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್. ನಿಯಮಾವಳಿಗಳ ರೀತಿಯ 18 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಳೆದ ಸೆಪ್ಟೆಂಬರ್ ನಲ್ಲಿಯೇ ಮನವಿ ಮಾಡಲಾಗಿತ್ತು. ಆದರೆ ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲಿಲ್ಲ. ಈಗ ನ್ಯಾಯಾಲಯಕ್ಕೆ ಹೋದ ಬಳಿಕ 3400 ಕೋಟಿ ರೂಪಾಯಿ ಘೋಷಿಸಿದೆ ಎಂದರು. ಕರ್ನಾಟಕ ಸರ್ಕಾರ ಕೋರಿದ್ದು 18 ಸಾವಿರ ಕೋಟಿ ಆದರೆ ಕೇಂದ್ರ ಕೊಟ್ಟಿರುವುದು 3400 ಕೋಟಿ ಅಂದರೆ ಕೇವಲ ಶೇ.19ರಷ್ಟು ನೀಡಿದೆ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು. ಮಿಗಿಲಾಗಿ ಜನತಾ ನ್ಯಾಯಾಲಯದಲ್ಲಿ ಈ ವಿಷಯ ಮಂಡಿಸಲಾಗುವುದು ಎಂದರು. 25 ಸಂಸತ್ ಸದಸ್ಯರು ಎಲ್ಲಿ ಹೋಗಿದ್ದರು? ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯಕ್ಕೆ ಪರಿಹಾರ ನೀಡುವಂತೆ 25 ಬಿಜೆಪಿ ಸಂಸದರು ಕೇಳಲೇ ಇಲ್ಲ. ರೈತರ ನೆರವಿಗೆ ಬಾರದೆ ಭಗವಂತ ಖೂಬಾ ಎಲ್ಲಿ ಹೋಗಿದ್ದರು ಎಂದು ಸುರ್ಜೆವಾಲ ಪ್ರಶ್ನಿಸಿದರು. ಯುವ ನಾಯಕ ಸಾಗರ್ ಸಂಸತ್ ನಲ್ಲಿ ಬೀದರ್ ದ್ವನಿ ಆಗ್ತಾರೆ ಯುವ ನಾಯಕ ಸಾಗರ್ ಖಂಡ್ರೆ ಅವರನ್ನು ನೀವು ಗೆಲ್ಲಿಸಿದರೆ, ಅವರು ಸಂಸತ್ ನಲ್ಲಿ ಬೀದರ್ ಮತ್ತು ರಾಜ್ಯದ ಧ್ವನಿಯಾಗುತ್ತಾರೆ ಎಂದು ಸುರ್ಜೇವಾಲ ಭರವಸೆ ನೀಡಿದರು. ಮಹಾದಾಯಿ, ಮೇಕೆದಾಟಿಗೆ ಏಕಿಲ್ಲ ಅನುಮತಿ? ರಾಜ್ಯದಲ್ಲಿ ನೀರಿನ ಸಮಸ್ಯೆ ವಿಪರೀತ ಇದೆ. ಆದರೆ, ಮೇಕೆದಾಟು ಯೋಜನೆ ಇರಲಿ, ಮಹಾದಾಯಿ ಯೋಜನೆ ಇರಲಿ, ಅಥವಾ ಭದ್ರಾ ಯೋಜನೆಯೇ ಇರಲಿ ಇದಾವುದಕ್ಕೂ ಕೇಂದ್ರ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ. ಕರ್ನಾಟಕದ ರೈತರ ಹಿತ ಕಾಯುವ ಬದಲು ಅವರ ಜೀವನದೊಂದಿಗೆ ಆಟವಾಡುತ್ತಿದೆ ಎಂದರು. ಮೋದಿಗೆ ಹೇಳಲು ಏನೂ ಉಳಿದಿಲ್ಲ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಚುನಾವಣೆಯಲ್ಲಿ ಹೇಳಿಕೊಳ್ಳಲು ಏನೂ ಇಲ್ಲವಾಗಿದೆ. ಅಭಿವೃದ್ಧಿ ಮಾಡುತ್ತೇವೆ, ಬದಲಾವಣೆ ತರುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು, ಏನೂ ಮಾಡದಿರುವ ಕಾರಣ ಈಗ ಮೀಸಲಾತಿಯಂತಹ ವಿಚಾರ ಮತ್ತು ಮುಸ್ಲಿಂ ವಿಭಜನೆ ವಿಚಾರ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇಂಡಿ ಮೈತ್ರಿಯಲ್ಲಿ ವರ್ಷಕ್ಕೆ ಒಬ್ಬರಂತೆ ಐವರು ಪ್ರಧಾನಿ ಮಾಡುವ ಬಗ್ಗೆ ಮಾತುಕತೆ ಆಗಿದೆ!: ಮೋದಿ ಆರೋಪ
ಬೆಳಗಾವಿ, ಶಿರಸಿ ಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡಸಿದ್ದ ಪ್ರಧಾನಿ ಮೋದಿ ದಾವಣಗೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಇಂಡಿ ಮೈತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈತ್ರಿ ನಾಯಕರನ್ನು ಮೆಚ್ಚಿಸುವ ಸಲುವಾಗಿ ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿ ಎಂದು ಇಂಡಿ ಮೈತ್ರಿಕೂಟದಲ್ಲಿ ಈಗಾಗಲೇ ಮಾತುಕತೆ ಆಗಿದೆ. ಇಂಥವರಿಗೆ ವೋಟು ನೀಡಿ ವೋಟು ಹಾಳು ಮಾಡಬೇಡಿ ಎಂದು ಹೇಳಿದ್ದಾರೆ. ಇದೇವೇಳೆ ಜೂನ್ 4ರಂದು ಇಡೀ ದೇಶ ಬಿಜೆಪಿಯ ಗೆಲುವಿನ ಸಂಭ್ರಮಾಚಾರಣೆ ನಡೆಸಲಿದೆ. ಆ ದಿನ ದಾವಣಗೆರೆ ಬೆಣ್ಣೆ ದೋಸೆ ಸಿಹಿಯಾಗಿರಲಿದೆ ಎಂದಿದ್ದಾರೆ.
ಮನಮೋಹನ್ ಸಿಂಗ್ ಸರ್ಕಾರಕ್ಕಿಂತಾ ಮೋದಿ ಸರ್ಕಾರ ಅತ್ಯಧಿಕ ಬರ ಪರಿಹಾರ ಕೊಟ್ಟಿದೆ: ಆರ್. ಅಶೋಕ್
R Ashok On Central Drought Relief: ಪ್ರಧಾನಿ ಮೋದಿ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರವೂ 3454 ಕೋಟಿ ರೂ. ಹಣ ನೀಡಬೇಕು. ಕೇಂದ್ರ ದುಪ್ಪಟ್ಟು ಪರಿಹಾರ ನೀಡಿದಂತೆ ರಾಜ್ಯ ಕೂಡ ಪರಿಹಾರ ಕೊಡಬೇಕು. ಇಲ್ಲವಾದರೆ ಪಾಪರ್ ಸರ್ಕಾರ ಎಂದು ನಾನೇ ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.
DK Shivakumar Slams Central Government : ಕೇಂದ್ರ ಸರ್ಕಾರದಿಂದ ರಾಜ್ಯ ಬಿಡುಗಡೆಯಾಗಿರುವ ಬರ ಪರಿಹಾರದ ಬಗ್ಗೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಕೇವಲ 3000 ಕೋಟಿ ರೂ. ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವನು ನೀರು ಕುಡಿಯಲೇ ಬೇಕು! -ಎಚ್ಡಿ ಕುಮಾರಸ್ವಾಮಿ
Prajwal Revanna sex scandal: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರವು ಎಸ್ಐಟಿ ರಚನೆ ಮಾಡಿದೆ. ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ವಿಡಿಯೋಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ. ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಾತನಾಡಿ, ''ನಾನೂ ಮತ್ತು ಎಚ್ಡಿ ದೇವೇಗೌಡ ಅವರು ಮಹಿಳೆಯರಿಗೆ ಯಾವಾಗಲೂ ಗೌರವ ಕೊಟ್ಟಿದ್ದೇವೆ ಹಾಗೂ ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ವರದಿ ಬರಲಿ, ತಪ್ಪು ಮಾಡಿದ್ದವರಿಗೆ ಶಿಕ್ಷೆಯಾಗಲಿ'' ಎಂದು ಹೇಳಿದ್ದಾರೆ.
ಯಪ್ಪಾ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ವಾ?: ಮೋದಿ ಬೆಳಗಾವಿ ಭಾಷಣಕ್ಕೆ ಸಿದ್ದು ಟೀಕೆ
ರಾಜ್ಯದ ಎರಡನೇ ಹಂತದ ಚುನಾವಣೆ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್ಲಿ ಮಾಡಿರುವ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಪ್ರತಿಬಾರಿ ರಾಜ್ಯಕ್ಕೆ ಬಂದು ಭಯಾನಕ ಸುಳ್ಳು ಹೇಳಿ ಹೋಗುತ್ತಿದ್ದಾರೆ. ಹೆಣ್ಣುಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳಲು ನಾಚಿಕೆ ಆಗೋದಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಖರ್ಗೆ ತಾವು ಮಾಡಿದ ಅಭಿವೃದ್ಧಿ ಮೇಲೆ ಮತ ಕೇಳಲಿ, ಬ್ಲ್ಯಾಕ್ ಮೇಲ್ ಮಾಡುವುದು ಬೇಡ: ಪ್ರಹ್ಲಾದ ಜೋಶಿ
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಏಪ್ರಿಲಾ 24ರಂದು ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನೀವು ಕಾಂಗ್ರಸ್ ಗೆ ವೋಟ್ ಹಾಕಲು ಬಾರದಿದ್ದರೆ, ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ ಎಂದು ಹೇಳಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಖರ್ಗೆ ವಿರುದ್ಧ ಈ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ. ಖರ್ಗೆ ತಾವು ಮಾಡಿರುವ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ಮತ ಯಾಚಿಸಲಿ ಎಂದು ಟಾಂಗ್ ನೀಡಿದ್ದಾರೆ.
ಬಿಸಿಲನ್ನು ಲೆಕ್ಕಿಸದೇ ಬೀನ್ಸ್ ಬೆಳೆದು ಗೆದ್ದ ಸಕಲೇಶಪುರದ ಯುವ ರೈತ!
ರಾಜ್ಯದಲ್ಲಿ ಕಳೆದ ಬಾರಿ ಕೈಕೊಟ್ಟ ಮುಂಗಾರಿನಿಂದ ಭೀಕರ ಬರಗಾಲ ಎದುರಾಗಿದೆ. ರೈತರು ಆಕಾಶದತ್ತ ಮುಖ ಮಾಡಿ ಕೂರುವಂತೆ ಮಾಡಿದೆ. ಬೆಳೆ ಬೆಳೆಯಲು ನೀರಿನ ಕೊರತೆ ಒಂದೆಡೆಯಾದರೆ, ಕೈಗೆ ಸಿಕ್ಕ ಬೆಳೆಯನ್ನೂ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಇಲ್ಲೊರ್ವ ರೈತ ಬಿಸಿಲಿನಲ್ಲೂ ಕೂಡ ಬೀನ್ಸ್ ಬೆಳೆದು ಸೈ ಎನಿಸಿಕೊಂಡಿದ್ದಾನೆ. ಕೆರೆಯಿಂದ ನೀರು ಹಾಯಿಸಿ ಬೀನ್ಸ್ ಬೆಳೆದು ಬಂಪರ್ ಬೆಳೆ ಬೆಳೆದಿದ್ದಾರೆ. ಇತರರಿಗೂ ಕೂಡ ಮಾದರಿಯಾಗಿದ್ದಾರೆ.
PM Modi in Sirsi: ಶಿರಸಿಯಲ್ಲಿ ಪ್ರಧಾನಿ ಮೋದಿಗೆ ನವಿಲುಗರಿಯ ಕಿರೀಟ, ಮಾರಿಕಾಂಬಾ ಮೂರ್ತಿಯ ಉಡುಗೊರೆ
Modi campaign in Uttara Kannada: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಮೋದಿ ವೇದಿಕೆಗೆ ಬರುತ್ತಿದ್ದಂತೆ ಮೋದಿ...ಮೋದಿ...ಘೋಷಣೆಗಳು ಮುಗಿಲು ಮುಟ್ಟಿದವು.
ನೀರಿನ ಆಘಾತದಿಂದ ದಾವಣಗೆರೆ ನಗರ ಪಾರು! ಕುಡಿಯುವ ನೀರಿಗಾಗಿ ನಾಲೆಗೆ 4 ದಿನ ಹೆಚ್ಚುವರಿ ನೀರು
Drinking Water In Davanagere: ಕರ್ನಾಟಕ ರಾಜ್ಯದ ಕೇಂದ್ರ ಭಾಗದ ದಾವಣಗೆರೆ ನಗರಕ್ಕೆ ಈ ಬಾರಿ ಬಿರು ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗಿದೆ. ಜೊತೆಯಲ್ಲೇ ಅಲ್ಲಲ್ಲಿ ಒಂದಷ್ಟು ಮಳೆ ಕೂಡಾ ಸುರಿದಿದ್ದು, ತೋಟಗಳಿಗೆ ಸಾಕಷ್ಟು ಅನುಕೂಲವಾಗಿದೆ. ನಾಲೆಗಳ ನೀರಿನ ಮೇಲಿನ ಒತ್ತಡ ಕೂಡಾ ಕಡಿಮೆ ಆಗಿದೆ. ದಾವಣಗೆರೆ ಜಿಲ್ಲಾದ್ಯಂತ ಇನ್ನೊ ಒಂದೆರಡು ಬಾರಿ ಮುಂಗಾರು ಪೂರ್ವ ಮಳೆ ಸುರಿದರೆ ತೋಟಗಾರಿಕೆ ಹಾಗೂ ಕೃಷಿ ಸೇರಿ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗಲಿದೆ.
ರೊಬಸ್ಟಾ ಕಾಫಿಗೆ ದಾಖಲೆ ಬೆಲೆ: ವ್ಯಾಪಾರಿಗಳಿಗೆ ಬಂಪರ್
Robusta Coffee Price: ಜಾಗತಿಕ ಮಟ್ಟದಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ ಕುಸಿತ ಕಂಡಿದೆ. ಇದರಿಂದ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದ ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಈ ವರ್ಷದ ರೊಬಸ್ಟಾ ಕಾಫಿ ಸಾರ್ವಕಾಲಿಕ ದಾಖಲೆ ದರ ತಲುಪಿದೆ. ಇದರ ಲಾಭ ಹೆಚ್ಚಾಗಿ ಸಿಗುತ್ತಿರುವುದು ವ್ಯಾಪಾರಿಗಳಿಗೇ ವಿನಾ ಬೆಳೆಗಾರರಿಗೆ ಅಲ್ಲ.
ನಿಲ್ಲದ ದೌರ್ಜನ್ಯ; ವಸತಿ ಶಾಲೆಗಳಲ್ಲೇ ಹೆಚ್ಚು ಪೋಕ್ಸೊ ಕೇಸ್ ದಾಖಲು
ಪ್ರವೇಶ ಪರೀಕ್ಷೆ ಪಾಸ್ ಮಾಡಿ ವಸತಿ ಶಾಲೆ ಸೇರುವ ಮಕ್ಕಳ ಮೇಲೆ ಕೆಲ ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಹೆಚ್ಚಿನ ಅಂಕ ನೀಡುವುದು, ಪರೀಕ್ಷೆ ಪಾಸ್ ಮಾಡಿಸುವುದು, ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಆಸೆ ತೋರಿಸುವುದು, ಪ್ರತ್ಯೇಕ ಕೊಠಡಿಗಳಲ್ಲಿ ಹೈಸ್ಕೂಲ್ ಹೆಣ್ಣುಮಕ್ಕಳೇ ಊಟ ಬಡಿಸಬೇಕು.. ಹೀಗೆ ಅನೇಕ ಹಂತಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ಎಸಗಲಾಗುತ್ತಿದೆ ಎಂಬ ಆರೋಪಗಳಿವೆ.
Fact Check: EVM ಯಂತ್ರ ಸಕ್ರಿಯಗೊಳಿಸದ ಚುನಾವಣಾಧಿಕಾರಿಗಳು? ವೈರಲ್ ಆಡಿಯೋ ಸತ್ಯಾಂಶವೇನು?
Fact Check On Viral Audo On EVM: ಏಪ್ರಿಲ್ 26 ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದ ವೇಳೆ ಆಡಿಯೋ ಒಂದು ವೈರಲ್ ಆಗಿತ್ತು. ಮತಗಟ್ಟೆ ಅಧಿಕಾರಿಗಳು ಮತ ಯಂತ್ರವನ್ನೇ ಸಕ್ರಿಯ ಮಾಡಿರಲಿಲ್ಲ ಎಂದು ಆರೋಪಿಸಿ ಮಾಡಲಾಗಿದ್ದ ವೈರಲ್ ಆಡಿಯೋ ಅದು. ಈ ಆಡಿಯೋ ಬಗ್ಗೆ ಚುನಾವಣಾ ಆಯೋಗವೇ ಸ್ಪಷ್ಟನೆ ಕೂಡಾ ನೀಡಿದೆ. ಬೆಂಗಳೂರಿನಲ್ಲಿ ಆ ರೀತಿಯ ಘಟನೆ ನಡೆದಿಲ್ಲ ಎಂದೂ ಹೇಳಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಉತ್ತರ ಕೊಡಿ ಮೋದಿ!: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳೇನು?
ಪಿತ್ರಾರ್ಜಿತ ಆಸ್ತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯತ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿ ಉತ್ತರ ಕೊಡಿ ಮೋದಿ ಎಂದು ಸವಾಲು ಹಾಕಿದ್ದಾರೆ.ಸುಳ್ಳಿನ ಸರದಾರ ಮೋದಿ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುಳ್ಳಿನ ಪಾಠ ಕಲಿಯಲು ಪ್ರತಾಪ್ ಸಿಂಹ ಮನೆಗೆ ಹೋಗಿ ಭೇಟಿಯಾಗುವೆ : ಎಂ. ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿ
Pratap Simha Vs M Lakshman : ಚುನಾವಣೆ ಮುಗಿದ ನಂತರವೂ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ನಡುವಿನ ವಾಕ್ಸಮರ ಮುಂದುವರಿದಿದೆ. ಪ್ರತಾಪ್ ಅವರನ್ನು ಭೇಟಿಯಾಗಿ, ಅವರಿಗೊಂದು ಹಾರಹಾಕಿ, ಸುಳ್ಳಿನ ಪಾಠ ಕಲಿಯಲು ಅವರ ಮನೆಗೆ ಹೋಗುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲೇವಡಿ ಮಾಡಿದ್ದಾರೆ.
Centre allows Onion Export: 6 ದೇಶಗಳಿಗೆ ಭಾರತದ ಈರುಳ್ಳಿ, ಮಹಾರಾಷ್ಟ್ರದ ರೈತರಲ್ಲಿ ಮಂದಹಾಸ!
Maharashtra onion cultivators: ಒಂದು ಕಡೆ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಯುತ್ತಿವೆ. ಈ ಮಧ್ಯೆಯ ಬೇಸಿಗೆಯ ಬಿಸಿಯ ಜೊತೆಗೆ ಬರವೂ ಆವರಿಸಿದ್ದು, ಬೆಳೆಯಲ್ಲೂ ಕುಸಿತ ಕಂಡಿದೆ. ತರಕಾರಿ ದರದಲ್ಲಿ ಈಗಾಗಲೇ ಹೆಚ್ಚಳವಾಗಿದೆ. ಕಳೆದ ವರ್ಷವೇ ಭಾರೀ ಏರಿಕೆಯಾಗಿ ಗ್ರಾಹಕರಿಗೆ ಕಣ್ಣೀರು ಹಾಕಿಸಿದ್ದ ಈರುಳ್ಳಿಯನ್ನು ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಕೇಂದ್ರ ಸರಕಾರವು ಅನುಮತಿ ನೀಡಿದೆ. ಇದರಿಂದಾಗಿ ಮಹಾರಾಷ್ಟ್ರದ ರೈತರಲ್ಲಿ ನೆಮ್ಮದಿಯು ತಂದಿದೆ. ನಾಸಿಕ್ನಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ರಫ್ತಾಗುತ್ತದೆ. ಇದರಿಂದಾಗಿ ಸ್ಥಳೀಯ ಎಪಿಎಂಸಿಗಳಲ್ಲಿ ಸಗಣು ಮಾರಾಟ ಈರುಳ್ಳಿ ಧಾರಣೆಯು ಹೆಚ್ಚಳವಾಗಿ ರೈತರಿಗೆ ಲಾಭ ತರುವ ಸಾಧ್ಯತೆ ಇದೆ. ಇದು ಸ್ಥಳೀಯ ಗ್ರಾಹಕರಿಗೂ ಬೆಲೆ ಹೆಚ್ಚಳ ಪರಿಣಾಮ ಬೀರಬಹುದು.
ಬಿಸಿಲಿಗೆ ತತ್ತರ; ದೇವರೇ ಮಳೆ ಸುರಿಸಪ್ಪಾ ಅಂತಿದ್ದಾರೆ ವಿಜಯನಗರ ಮಂದಿ!
ವಿಜಯನಗರದಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಫ್ಯಾನ್, ಎಸಿ, ಕೂಲರ್ ಇಲ್ಲದೇ ಮನೆಯಲ್ಲಿ ಇರುವುದೇ ಅಸಾಧ್ಯ ಎಂಬಂತಾಗಿದೆ. ಬೆಳಗಿನಿಂದ ರಾತ್ರಿವರೆಗೂ ಇವುಗಳ ಅವಶ್ಯಕತೆ ಅತಿ ಮುಖ್ಯವೆನಿಸಿದೆ. ಫ್ಯಾನ್ ಗಾಳಿಯಿಂದ ತಂಪು ಎನಿಸಿದ ಅನೇಕರು ಕೂಲರ್ಗಳ ಮೊರೆ ಹೋಗುತ್ತಿದ್ದಾರೆ. ಪ್ರತಿ ಬೇಸಿಗೆಗಿಂತಲೂ ಈ ಬಾರಿ ಹೆಚ್ಚು ಕೂಲರ್, ಫ್ಯಾನ್ಗಳು ಖರ್ಚಾಗಿರುವುದು ವಿಶೇಷ. ಹೀಗೆ ಆದರೆ ಬೇಸಿಗೆ ಕಳೆಯುವುದು ಹೇಗಪ್ಪಾ ಅನ್ನೋದು ಜನರ ಚಿಂತೆ. ಆದಷ್ಟು ಬೇಗ ಮಳೆ ಸುರಿಸಪ್ಪಾ ಎಂದು ಮಂದಿ ದೇವರಿಗೆ ಮೊರೆ ಇಡುತ್ತಿದ್ದಾರೆ.
ಕಾಂಗ್ರೆಸಿಗರೇ ನಿಮ್ಮಿಂದ ಆಗದಿದ್ದರೆ ಬಿಟ್ಟು ಮನೇಗೆ ನಡೀರಿ: ಪ್ರಧಾನಿ ಮೋದಿ ಹೀಗೆ ಹೇಳಿದ್ದು ಯಾಕೆ?
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಆಸ್ತಿ ಮರುಹಂಚಿಕೆ ಹೇಳಿಕೆಯನ್ನು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೂ ಕೈ ಪಡೆ ವಿರುದ್ಧ ವಾಗ್ದಾಳಿ ನಡಸಿದ್ದಾರೆ. ಬೆಳಗಾವಿಯಲ್ಲಿ ಭಾನುವಾರ ನಡೆದ ಬಿಜೆಪಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಪರಾಕಾಷ್ಟೆ ತಲುಪಿದೆ ಎಂದು ಜರೆದರು. ಇನ್ನು ಹುಬ್ಭಳ್ಳಿಯ ನೇಹಾ ಕೊಲೆ ಪ್ರಕರಣ, ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣಧ ಪ್ರಸ್ತಾಪವನ್ನೂ ಮಾಡಿ ಕಾಂಗ್ರೆಸ್ ಅನ್ನು ನಿಂದಿಸಿದರು.
ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಗೆ ಆಘಾತ: ದಿಲ್ಲಿ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ರಾಜೀನಾಮೆ
Lok Sabha Elections 2024: ಲೋಕಸಭೆ ಚುನಾವಣೆಯಲ್ಲಿ ಎಎಪಿ ಜತೆಗಿನ ಮೈತ್ರಿ ಹಾಗೂ ಪಕ್ಷದ ದಿಲ್ಲಿ ಉಸ್ತುವಾರಿಯ ಹಸ್ತಕ್ಷೇಪಗಳಿಂದ ಅಸಮಾಧಾನಗೊಂಡಿರುವ ದಿಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ದಿಲ್ಲಿಯಲ್ಲಿ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಲವ್ಲಿ ಅವರ ರಾಜೀನಾಮೆ ಪಕ್ಷಕ್ಕೆ ಹಿನ್ನಡೆ ಉಂಟುಮಾಡಿದೆ.
Lok Sabha Election 2024: ಮೈಸೂರಿನಲ್ಲಿ ಮತದಾನ ಹೆಚ್ಚಳವಾಗದಿರಲು ಕಾರಣವೇನು?
ಮೈಸೂರಿನಲ್ಲಿ ಈ ಬಾರಿ ಶೇ.70.62ರಷ್ಟು ಮತದಾನವಾಗಿದೆ. ಮತದಾನ ಹೆಚ್ಚಿಸಲು ಸ್ವೀಪ್ ಸಮಿತಿ ಸಾಕಷ್ಟು ಚಟುವಟಿಕೆಗಳನ್ನು ನಡೆಸಿತ್ತು. ಆದರೆ, ಯಾವುದೂ ಮತದಾರರು ಮತಕೇಂದ್ರಕ್ಕೆ ಬಂದು ವೋಟು ಮಾಡಲು ಸಹಕಾರಿಯಾಗಿಲ್ಲ. ಮುಖ್ಯವಾಗಿ ನಗರ ಪ್ರದೇಶದ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ವಿಫಲವಾಗಿದ್ದು, ಸಾಕ್ಷರತೆ ಪ್ರಮಾಣ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲೇ ಮತಪ್ರಮಾಣ ಹೆಚ್ಚಳವಾಗಿಲ್ಲ ಎಂಬುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದಾಖಲೆ ಸಲ್ಲಿಸಲು ವಿಫಲ : ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
BJP Candidate Nomination Rejected : ನೋ ಡ್ಯೂ ಸರ್ಟಿಫಿಕೇಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿಸಿದೆ.