SENSEX
NIFTY
GOLD
USD/INR

Weather

23    C
... ...View News by News Source

ಸುಳ್ಯ | ದೇವಸ್ಥಾನದ ಮುಂಭಾಗ ಆಯೋಜನೆಯಾಗಿದ್ದ ದಫ್ ಪ್ರದರ್ಶನ ರದ್ದು

ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರು

ವಾರ್ತಾ ಭಾರತಿ 11 Dec 2025 11:23 am

Goa ನೈಟ್‌ಕ್ಲಬ್ ದುರಂತ | ಶನಿವಾರ ರಾತ್ರಿ 11:45ಕ್ಕೆ ಬೆಂಕಿ ಬಿದ್ದ ಮಾಹಿತಿ; ರವಿವಾರ ಮಧ್ಯರಾತ್ರಿ 1:17ರ ಫುಕೆಟ್ ಗೆ ಟಿಕೆಟ್!

ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ಯೋಜನೆ ರೂಪಿಸಿದ್ದ ಲುತ್ರಾ ಸಹೋದರರು

ವಾರ್ತಾ ಭಾರತಿ 11 Dec 2025 11:22 am

ಆರ್ ಸಿ ಬಿ ದುರಂತದ ಎಫೆಕ್ಟ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಿಗುತ್ತಾ ಅವಕಾಶ? ಸಂಪುಟಲ್ಲಿ ಮಹತ್ವದ ಚರ್ಚೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ಧಾರ ಕುತೂಹಲ ಮೂಡಿಸಿದೆ.

ವಿಜಯ ಕರ್ನಾಟಕ 11 Dec 2025 11:21 am

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿನಿ - ಪುರಾತನ ‘ಗಾಂಧಾರಿ ಕಲೆ’ಯ ಪ್ರಯೋಜನಗಳನ್ನು ಜಗತ್ತಿಗೆ ಸಾರಿದ ಹಿಮಾಬಿಂದು!

ಬಳ್ಳಾರಿಯ ಹಿಮಾಬಿಂದು ಎಂಬ ವಿದ್ಯಾರ್ಥಿನಿ ಗಾಂಧಾರಿ ಕಲೆ ಕರಗತ ಮಾಡಿಕೊಂಡಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ, ಶಬ್ದದಿಂದ ವಸ್ತುಗಳನ್ನು ಗುರುತಿಸುವ ಈ ಕಲೆ ಆನ್‌ಲೈನ್ ಮೂಲಕ ಕಲಿತಿದ್ದಾಳೆ. 8ನೇ ತರಗತಿಯ ಎಫ್‌ಎ4 ಪರೀಕ್ಷೆಯನ್ನು ಇದೇ ರೀತಿ ಬರೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಈ ಕಲೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 11:18 am

ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ವಾರ್ತಾ ಭಾರತಿ 11 Dec 2025 11:14 am

ಊಬರ್‌ನಿಂದ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್‌ ಬುಕಿಂಗ್‌ ಹಾಗೂ ಸರಕು ಸಾಗಣೆ ಸೇವೆ ಆರಂಭ; ಸೇವೆ ಪಡೆಯುವುದು ಹೇಗೆ?

ಊಬರ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಮಹತ್ವದ ಹೊಸ ಸೇವೆಗಳನ್ನು ಆರಂಭಿಸಿದೆ. 'ಊಬರ್ ಡೈರೆಕ್ಟ್' ಎಂಬುದು ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಸೇವೆಯಾಗಿದೆ. ಇದರೊಂದಿಗೆ, ಊಬರ್ ಆ್ಯಪ್ ಮೂಲಕ ಬೆಂಗಳೂರು ಮೆಟ್ರೋ ಟಿಕೆಟ್‌ಗಳನ್ನು ಕ್ಯೂಆರ್ ಆಧಾರಿತವಾಗಿ ಖರೀದಿಸಬಹುದು. ಈ ಸೇವೆಗಳು 2026ರ ವೇಳೆಗೆ ದೇಶದ ಹೆಚ್ಚಿನ ನಗರಗಳಿಗೆ ವಿಸ್ತರಿಸಲಿವೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಊಬರ್‌ನ ಬದ್ಧತೆಯನ್ನು ತೋರಿಸುತ್ತದೆ.

ವಿಜಯ ಕರ್ನಾಟಕ 11 Dec 2025 11:07 am

ಕಾರ್ಮಿಕರು, ಬಾಡಿಗೆದಾರರು, ಮನೆ ಮಾಲಿಕರ ಕೆಲ ನಿಯಮಗಳು ಬದಲಾಗಿವೆ, ಏನದು?

ಔಷಧ ಕಲಬೆರಕೆಗೆ ಜೀವಾವಧಿ ಶಿಕ್ಷೆ, ಬಾಡಿಗೆ ವಿವಾದಗಳಿಗೆ ದಂಡ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗೆ ಇ-ಬ್ಯಾಂಕಿಂಗ್ ಪರಿಚಯ ಸೇರಿದಂತೆ 12 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಚಂದ್ರಗುತ್ತಿ, ಮಲೈಮಹದೇಶ್ವರ, ಚಾಮುಂಡೇಶ್ವರಿ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ತಿದ್ದುಪಡಿಗಳೂ ಸೇರಿವೆ.

ವಿಜಯ ಕರ್ನಾಟಕ 11 Dec 2025 10:59 am

ರೈತರಿಗೆ ಭೂಸ್ವಾಧೀನಕ್ಕಾಗಿ 8.38 ಕೋಟಿ ಬಿಡುಗಡೆ: ಮಾಹಿತಿ ಕೊಟ್ಟ ಹೆಚ್.ಕೆ. ಪಾಟೀಲ್

ಬೆಳಗಾವಿ, ಡಿಸೆಂಬರ್‌ 11: ವಿವಿಧ ಜಿಲ್ಲೆಗಳ ರೈತರ ಕೃಷಿ ಭೂಮಿಗೆ ನೀರುಣಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ರೈತರಿಗೆ ಭೂಸ್ವಾಧೀನದ ಹಣ ಪಾವತಿಸಲು ಅಗತ್ಯವಿರುವ 8.38 ಕೋಟಿ ರೂ. ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.

ಒನ್ ಇ೦ಡಿಯ 11 Dec 2025 10:57 am

Explained: ಯುಎಸ್‌ ಗೋಲ್ಡ್‌ ಕಾರ್ಡ್‌ ಅನಾವರಣ; ಡೊನಾಲ್ಡ್‌ ಟ್ರಂಪ್‌ ಉದ್ದೇಶ ಶ್ರೀಮಂತರ ಸಮಾಜ ನಿರ್ಮಾಣ

ಅಮೆರಿಕನ್‌ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಬಯಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. H-1B ವೀಸಾ ಕಾರ್ಯಕ್ರಮದಡಿ ಬರುವ ಸಾಮಾಮನ್ಯ ವಿದೇಶಿ ವಲಸಿಗರೆಂದರೆ ಮೂಗು ಮುರಿಯುವ ಟ್ರಂಪ್‌, ವಿದೇಶಗಳಲ್ಲಿರುವ ಶ್ರೀಮಂತರಿಗೆ ಅಮೆರಿಕನ್‌ ವ್ಯವಸ್ಥೆಯೊಳಗೆ ಪ್ರವೇಶ ನೀಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಯುಎಸ್‌ ಗೋಲ್ಡ್‌ ಕಾರ್ಡ್‌ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿರುವ ಟ್ರಂಪ್‌, ವಿದೇಶಿ ಶ್ರೀಮಂತ ವಲಸಿಗರನ್ನು ಅಮೆರಿಕ ಬಾಚಿ ತಬ್ಬಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 11 Dec 2025 10:49 am

ಯಾದಗಿರಿ | ವಸತಿ ನಿಲಯದಲ್ಲಿ ಊಟ ಸೇವಿಸಿದ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ರಾತ್ರಿ 7.30ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥತಗೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಒಟ್ಟು 150 ವಿದ್ಯಾರ್ಥಿಗಳಲ್ಲಿ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿಂದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ. ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯತ್‌ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಶೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

ವಾರ್ತಾ ಭಾರತಿ 11 Dec 2025 10:49 am

ಬೆಂಗಳೂರು | ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಮೂವರು ಮೃತ್ಯು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ನಿವಾಸಿಗಳಾದ ಮೋಹನ್ ಕುಮಾರ್ (33), ಸುಮನ್ (28), ಸಾಗರ್ (23) ಎಂದು ಗುರುತಿಸಲಾಗಿದೆ.  ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಕಡೆಗೆ ಬರುತ್ತಿದ್ದ KA 50 MA 0789 ಸಂಖ್ಯೆಯ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಿಂದ ಕಾರನ್ನು ಹೊರತೆಗೆಯುವ ಕಾರ್ಯ ಪೂರ್ಣಗೊಂಡಿದ್ದು, ಸಂಚಾರ ದಟ್ಟಣೆ ನಿಧಾನವಾಗಿ ಕಡಿಮೆಯಾಗುತ್ತಿದೆ. 

ವಾರ್ತಾ ಭಾರತಿ 11 Dec 2025 10:30 am

ಮಹಿಳೆಯ ಅಪರೂಪದ ಕಾಯಿಲೆ ಪರಿಹರಿಸಿದ ಬೆಂಗಳೂರಿನ ವೈದ್ಯರು- ಏನಿದು ರೋಗ? ನಿಮ್ಮಲ್ಲೂ ಈ ಲಕ್ಷಣವಿದೆಯೇ ಪರೀಕ್ಷಿಸಿಕೊಳ್ಳಿ!

ಬೆಂಗಳೂರಿನ ಸ್ವರ್ಶ್‌ ಆಸ್ಪತ್ರೆಯ ವೈದ್ಯರು, ಮಹಿಳೆಯೊಬ್ಬರ ಅಪರೂಪದ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಸಾಮಾನ್ಯ ನಿಮೋನಿಯಾ ಎಂದು ತಪ್ಪು ತಿಳಿಯಲಾದ ಅಪರೂಪದ ಶ್ವಾಸಕೋಶದ ಕಾಯಿಲೆ 'ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌' (ಪಿಎಪಿ) ನಿಂದ ಬಳಲುತ್ತಿದ್ದ 39 ವರ್ಷದ ಮಹಿಳೆಯನ್ನು ಯಶಸ್ವಿಯಾಗಿ ಗುಣಪಡಿಸಿದ್ದಾರೆ. ಸುಮಾರು 17 ಲೀಟರ್‌ ಉಪ್ಪಿನ ದ್ರಾವಣ ಬಳಸಿ ಶ್ವಾಸಕೋಶವನ್ನು ಸಂಪೂರ್ಣವಾಗಿ ತೊಳೆದು, ರೋಗಿಯನ್ನು ಗುಣಮುಖರಾಗಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 10:23 am

ಮಟ್ಟೂರು ತಾಂಡದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ | ಪ್ರತಿದೂರಿಗೆ ಸ್ಪಂದನೆ ಇಲ್ಲ: ಆರೋಪ

ರಾಯಚೂರು: ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿ ಮಟ್ಟೂರು ತಾಂಡದಲ್ಲಿ ರಾಮಪ್ಪ ಮತ್ತು ಸಕ್ಕುಬಾಯಿ ಇವರ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಪಿಎಸ್‍ಐ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಈಶ್ವರ ಜಾಧವ ಆರೋಪಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಪ್ರಕರಣದಲ್ಲಿ ಹಳೆ ದ್ವೇಷಕ್ಕೆ ಸಂಬಂದಿಸಿದಂತೆ ರೈಲ್ವೆ ಪೊಲೀಸ್ ಪೇದೆ ರಾಘವೇಂದ್ರ ಇವರು ಪೊಲೀಸ್‍ರೊಂದಿಗೆ ಹೊಂದಿರುವ ಸ್ನೇಹದಿಂದ ಸುಳ್ಳು ಆರೋಪಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ದಾಖಲಿಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯಿಂದ ಪ್ರತಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಡಿವೈಎಸ್ಪಿ ಇವರಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ. ಪೊಲೀಸ್ ಇಲಾಖೆಯಿಂದ ನ್ಯಾಯಸಮತ ನಡೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಮುದುಗಲ್ ಪಿಎಸ್‍ಐ ತನ್ನ ಸ್ನೇಹಿತ ರಾಘವೇಂದ್ರ ಇವರನ್ನು ರಕ್ಷಿಸಲು ಆರೋಪಿಗಳನ್ನು ಬಂಧಿಸದೇ ಸಹಕರಿಸುತ್ತಿದ್ದಾರೆ. ಈಗಾಗಲೇ ರಾಮಪ್ಪ ಮತ್ತು ಸಕ್ಕುಬಾಯಿ ಇವರನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಗುಂಪಿನವರನ್ನು ಬಂಧಿಸದೇ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ನ್ಯಾಯಾಂಗಮೊರೆ ಹೋಗುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಲಾಲಮ್ಮ, ಶಿಲ್ಪಾ ಇದ್ದರು.

ವಾರ್ತಾ ಭಾರತಿ 11 Dec 2025 10:20 am

Goa ನೈಟ್‌ಕ್ಲಬ್ ದುರಂತ | ಶನಿವಾರ ರಾತ್ರಿ 11:45ಕ್ಕೆ ಬೆಂಕಿ ಬಿದ್ದ ಮಾಹಿತಿ; ರವಿವಾರ ಮಧ್ಯರಾತ್ರಿ 1:17ಕ್ಕೆ ಫುಕೆಟ್ ಗೆ ಟಿಕೆಟ್!

ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ರೂಪಿಸಿದ್ದ ಲುಥ್ರಾ ಸಹೋದರರು

ವಾರ್ತಾ ಭಾರತಿ 11 Dec 2025 10:17 am

ಅಮೆರಿಕನ್‌ ಸಮಾಜದಲ್ಲಿ ವಲಸಿಗ ಭಾರತೀಯರ ಸಂಘರ್ಷಗಳು; ನನಸಾಗಲಿ ಭಯ ಮುಕ್ತ ಜೀವನದ ಕನಸುಗಳು

ಅದೊಂದು ಕಾಲವಿತ್ತು. ಭಾರತೀಯ ಕೌಶಲ್ಯಪೂರ್ಣ ಕಾರ್ಮಿಕರನ್ನು ಅಮೆರಿಕ ಬಿಗಿದಪ್ಪಿಕೊಳ್ಳುತ್ತಿತ್ತು. ಭಾರತದ ವಿದ್ವತ್ತಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅಮೆರಿಕ, H-1B ವೀಸಾ ಕಾರ್ಯಕ್ರಮದಡಿಯಲ್ಲಿ ಯುಎಸ್‌ಗೆ ಬರುವ ಭಾರತೀಯರನ್ನು ತೆರೆದ ಹೃದಯದಿಂದ ಸ್ವಾಗತ ನೀಡುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಅಮೆರಿಕದ ಆಡಳಿತದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಮೆರಿಕಕ್ಕೆ ವಿದೇಶುಯರ ವಲಸೆಯನ್ನು ಅತ್ಯುಗ್ರವಾಗಿ ವಿರೋಧಿಸುತ್ತಾರೆ. ಟ್ರಂಪ್‌ ಆಡಳಿತದ ಕಠಿಣ ವಲಸೆ ನೀತಿ, ಅಮೆರಿಕನ್‌ ಸಮಾಜದಲ್ಲಿ ವಲಸಿಗರ ವಿರುದ್ಧ ದ್ವೇಷ ಭಾವನೆ ಕೆರಳಿಸುವಲ್ಲಿ ನಿಧಾನವಾಗಿ ಯಶಸ್ವಿಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದಲ್ಲಿ ವಲಸಿಗ ಭಾರತೀಯರ ಹೋರಾಟಗಳ ರೋಚಕ ಕಥೆ ಇಲ್ಲಿದೆ.

ವಿಜಯ ಕರ್ನಾಟಕ 11 Dec 2025 10:00 am

ಇಂಡಿಗೋ ಬಿಕ್ಕಟ್ಟು: ಸ್ಪಷ್ಟನೆ ನೀಡಿ, ತೊಂದರೆಗೆ ಕ್ಷಮೆಯಾಚಿಸಿದ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ

ಇಂಡಿಗೋ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಇತ್ತೀಚೆಗೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ನೀಡಿದ ವಿಮಾನ ರದ್ದತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ್ನು ಸೃಷ್ಟಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳು ಹೊಣೆಗಾರಿಕೆ ಮತ್ತು ಪ್ರಯಾಣಿಕರ ಪರಿಹಾರಕ್ಕಾಗಿ ಒತ್ತಾಯಿಸುತ್ತಿವೆ.

ವಿಜಯ ಕರ್ನಾಟಕ 11 Dec 2025 9:51 am

ಸಿರವಾರ | ಭತ್ತದ ಬೆಳೆ ಕಳ್ಳತನದ ಆರೋಪ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಸಿರವಾರ ತಾಲೂಕಿನ ಜಾಗಟಕಲ್ ಸೀಮಾಂತರದಲ್ಲಿ ರಾಜಗೋಪಾಲ ಎಂಬುವವರಿಗೆ ಸೇರಿದ ಜಮೀನಲ್ಲಿ ಬೆಳೆದಿದ್ದ ಭತ್ತವನ್ನು ಅತಿಕ್ರಮಣ ಮಾಡಿ ಭತ್ತ ಕೊಯ್ದುಕೊಂಡು ಕಳ್ಳತನ ಮಾಡಿರುವರ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಿ ವಿಜಯರಾಣಿ ಸಿರವಾರ ಆಗ್ರಹಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸರ್ವೆ 84/2, 84/3 ಹಾಗೂ 84/2 ರಲ್ಲಿರುವ ಏಳು ಎಕರೆ ಭೂಮಿಯನ್ನು ಬಸ್ಸಮ್ಮ ಇವರಿಂದ ರಾಜಗೋಪಾಲರಾವ್ ಮತ್ತು ಶೇಷಾದ್ರಿ ಇವರು ಕಾನೂನು ಬದ್ದವಾಗಿ ಖರೀದಿ ಮಾಡಿದ್ದಾರೆ. ರಾಚಪ್ಪ ಎಂಬುವವರು ಮ್ಯುಟೇಷನ್ ಮಾಡಲು ಆರಕೇರಾ ನಾಡಕಚೇರಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ನೊಂದಣಿ ಬಾಕಿಯಿದೆ. ಆದರೆ ನ.30 ರಂದು ರಾತ್ರಿ ರಾಚಪ್ಪ, ಕಾಸಲಯ್ಯ, ಶಿವಪ್ಪ, ಸಣ್ಣ ಶಿವಪ್ಪ, ಮೂಕಪ್ಪ ಮತ್ತು ಮಲ್ಲಪ್ಪ ಸೇರಿ ಭತ್ತ ಕೊಯ್ಯುವ ಯಂತ್ರದೊಂದಿಗೆ ಬಂದು ಬೆಳೆದು ನಿಂತಿದ್ದ ಭತ್ತವನ್ನುಕೊಯ್ದುಕೊಂಡು ಕಳ್ಳತನ ಮಾಡಿದ್ದಾರೆ.   ಜಮೀನು ಲೀಜುದಾರರಾದ ಶ್ರೀನಿವಾಸ, ಮೌನೇಶ ಇವರನ್ನು ಬೆದರಿಸಿದ್ದಾರೆ. ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭತ್ತ ಕಳ್ಳತನ ಮಾಡಿರುವರನ್ನು ಬಂಧಿಸಿಲ್ಲ.ಕೂಡಲೇ ಆರೋಪಿಗಳನ್ನು ಬಂಧಿಸಿ ಕಳವು ಮಾಡಿರುವ ಭತ್ತವನ್ನು ಮರಳಿಸಬೇಕೆಂದು ಒತ್ತಾಯಿಸಿದರು. ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, ರಾಜಗೋಪಾಲ ಎಂಬುವವರ ಖರೀದಿ ಭೂಮಿಯಲ್ಲಿ ಅತಿಕ್ರಮಣ ಮಾಡಿ ರಾಚಪ್ಪ ಹಾಗೂ ಇತರರು ದೌರ್ಜನ್ಯ ಎಸಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಸ್ಮಮ್ಮ, ಲಕ್ಷ್ಮೀ, ರಾಜಗೋಪಾಲ, ಸಾಜೀದ್, ಮಾರತಿ ಚಿಕ್ಕಸೂಗೂರು, ಕೃಷ್ಣ ಮಚರ್ಲಾ ಜೀವನ ಸಹಿತ ಹಲವರಿದ್ದರು.

ವಾರ್ತಾ ಭಾರತಿ 11 Dec 2025 9:46 am

ಕಾಸರಗೋಡು | 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ; ಮತದಾನ ಆರಂಭ

ಡಿ.13 ರಂದು ಮತ ಎಣಿಕೆ

ವಾರ್ತಾ ಭಾರತಿ 11 Dec 2025 9:35 am

ಡಿಸೆಂಬರ್ 11ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 11) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ

ಒನ್ ಇ೦ಡಿಯ 11 Dec 2025 9:28 am

IPS, IAS Officers Transfer: ರಾಜ್ಯದಲ್ಲಿ ಐಪಿಎಸ್‌, ಐಎಎಸ್‌ ಅಧಿಕಾರಿಗಳ ದಿಢೀರ್ ವರ್ಗಾವಣೆ: ಇಲ್ಲಿದೆ ಮಾಹಿತಿ

IPS, IAS Officers Transfer: ರಾಜ್ಯ ಸರ್ಕಾರವು ಆಗಾಗ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್ ಕುಮಾರ್, ಎಡಿಜಿಪಿ ಬಿ. ದಯಾನಂದ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಮೂರು ಮಂದಿ ಐಎಎಸ್‌ ಅಧಿಕಾರಿಗನ್ನು ಸಹ ವರ್ಗಾವಣೆ ಮಾಡಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ

ಒನ್ ಇ೦ಡಿಯ 11 Dec 2025 9:25 am

ಇದು ಯಾರ ದುಡ್ಡು? ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಹಣ ತೋರಿಸಿದ್ದೇ ತಡ ಓಡೊಡಿ ಬಂದ 12 ಸಂಸದರು!

ಇದು ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದಾದರೂ ಅನ್ನಿ ಅಥವಾ ಪಾಕಿಸ್ತಾನದ ಸಂಸದರ ಹಾಸ್ಯಪ್ರಜ್ಞೆ ಎಂದಾದರೂ ಅನ್ನಿ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊರೆತ ನೋಟಿನ ಕಂತೆಗಾಗಿ 12 ಸಂಸದರು ಹಕ್ಕು ಪ್ರತಿಪಾದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಸ್ಪೀಕರ್‌ ಅಯಾಜ್‌ ಸಾದಿಕ್‌ ಅವರು ಅಸೆಂಬ್ಲಿಯಲ್ಲಿ ದೊರೆತ ಹಣ ಯಾರದ್ದೆಂದು ಕೇಳಿದಾಗ, 12 ಸಂಸದರು ಆ ಹಣದ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 11 Dec 2025 9:15 am

Indian Railways: ಭಾರತೀಯ ರೈಲ್ವೆ ಟಿಕೆಟ್ ದರ ತೀರಾ ಅಗ್ಗ: ದೈನಂದಿನ ರೈಲು ಸೇವೆ 11,740 ಕ್ಕೆ ಹೆಚ್ಚಳ..

ನವದೆಹಲಿ, ಡಿಸೆಂಬರ್ 11: ಭಾರತೀಯ ರೈಲ್ವೆಯ ದೈನಂದಿನ ಸೇವೆಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಜೊತೆಗೆ 2020ರ ಮೊದಲಿನ ವರ್ಷಗಳಿಗೆ ಹೋಲಿಸಿದರೆ ಸೇವೆಯನ್ನು ಇಲಾಖೆ ಹೆಚ್ಚಿಸಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರದಲ್ಲಿ ರೈಲ್ವೆ ಟಿಕೆಟ್ ದರ ಅಗ್ಗವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು. ಸಂಸತ್ ಚಳಿಗಾಲ ಅಧಿವೇಶನದಲ್ಲಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ

ಒನ್ ಇ೦ಡಿಯ 11 Dec 2025 9:09 am

Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಹಳೆ ಪಿಂಚಣಿ ಯೋಜನೆ ಜಾರಿ ಬಗ್ಗೆ ಸದನದಲ್ಲಿ ಚರ್ಚೆಯಾಗಿದ್ದೇನು?

ಬೆಂಗಳೂರು, ಡಿಸೆಂಬರ್‌ 11: ಕರ್ನಾಟಕ ಸರಕಾರಿ ನೌಕರರ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನೀಡದ ಭರವಸೆಯಂತೆ ಹೊಸ ಪಿಂಚಣಿ ಯೋಜನೆಯನ್ನ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. 2006ರ ಎಪ್ರಿಲ್‌ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ

ಒನ್ ಇ೦ಡಿಯ 11 Dec 2025 9:00 am

ಕಾಂಗ್ರೆಸ್ ನಾಯಕತ್ವವೇ ಪಕ್ಷದ ಸೋಲಿಗೆ ಕಾರಣ: ಅಮಿತ್ ಶಾ ತಿರುಗೇಟು

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸೋಲಿಗೆ ಮತದಾನ ಅಕ್ರಮಗಳು ಕಾರಣವಲ್ಲ; ಬದಲಾಗಿ ನಾಯಕತ್ವದ ವೈಫಲ್ಯ ಮುಖ್ಯ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಿನ ಚಾಟಿ ಬೀಸಿದ್ದಾರೆ. ವಿರೋಧ ಪಕ್ಷಗಳ ವೋಟ್ ಚೋರಿ ಆರೋಪಗಳನ್ನು ಬಲವಾಗಿ ನಿರಾಕರಿಸಿದ ಅವರು, ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಮತಗಳ್ಳತನದ ಸುಳ್ಳು ಆರೋಪವನ್ನು ಹರಡುತ್ತಿದೆ ಎಂದು ಹೇಳಿದರು. ಮುಂದೊಂದು ದಿನ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕತ್ವವನ್ನು ಪ್ರಶ್ನಿಸಲಿದ್ದಾರೆ ಎಂದು ಚುನಾವಣಾ ಸುಧಾರಣೆಗಳ ಬಗೆಗಿನ ಲೋಕಸಭಾ ಚರ್ಚೆಯ ವೇಳೆ ಅಭಿಪ್ರಾಯಪಟ್ಟರು. ಆರೆಸ್ಸೆಸ್ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆರೆಸ್ಸೆಸ್ ಸಿದ್ಧಾಂತದ ವ್ಯಕ್ತಿಗಳು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದುವುದನ್ನುನಿಷೇಧಿಸುವ ಕಾನೂನು ದೇಶದಲ್ಲಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. ಪ್ರಧಾನಿ ಆರೆಸ್ಸೆಸ್ ನವರು ಅಂತೆಯೇ ಗೃಹಸಚಿವರು ಕೂಡಾ ಎಂದು ಸಮರ್ಥಿಸಿಕೊಂಡರು. ರಾಷ್ಟ್ರಕ್ಕಾಗಿ ಬದುಕುವುದು ಮತ್ತು ರಾಷ್ಟ್ರಕ್ಕಾಗಿ ಸಾಯುವುದೇ ಆರೆಸ್ಸೆಸ್ ಸಿದ್ಧಾಂತ. ಭಾರತವನ್ನು ಮತ್ತಷ್ಟು ಸದೃಢ ಮತ್ತು ಸಮೃದ್ಧಗೊಳಿಸುವುದೇ ಅದರ ಉದ್ದೇಶ ಎಂದ ಅವರು, ನಾನು 10 ವರ್ಷದವನಿದ್ದಾಗಲೇ  ಅಸ್ಸಾಂ ಕಿ ಗಲಿಯಾನ್ ಸುನಿ ಹೇ, ಇಂದಿರಾ ಗಾಂಧಿ ಖೂನಿ ಹೇ ಎಂಬ ಘೋಷಣೆ ಕೂಗಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಂಡರು. ವಿರೋಧ ಪಕ್ಷಗಳು ಹಿನ್ನಡೆ ಅನುಭವಿಸಿದಾಗಲೆಲ್ಲ ಬೇರೆಯವರನ್ನು ದೂಷಿಸುತ್ತವೆ ಎಂದು ತಿರುಗೇಟು ನೀಡಿದರು.

ವಾರ್ತಾ ಭಾರತಿ 11 Dec 2025 8:43 am

ಸೋಷಿಯಲ್ ಮೀಡಿಯಾದಲ್ಲಿ ಬರುವ ವೈದ್ಯಕೀಯ ತಪ್ಪು ಮಾಹಿತಿಯ ಬಗ್ಗೆ ಬೆಂಗಳೂರು ವೈದ್ಯರ ಎಚ್ಚರಿಕೆ

ಇತ್ತೀಚೆಗೆ, ಬೆಂಗಳೂರಿನಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಮೂತ್ರಪಿಂಡದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕ್ರಿಯೇಟಿನೈನ್ ಮಟ್ಟ 4.5ರಷ್ಟಿತ್ತು, ಇದು ಸಾಮಾನ್ಯ ಮಟ್ಟಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿತ್ತು. ತನಿಖೆ ನಡೆಸಿದಾಗ, ಅವರು ಸಾಮಾಜಿಕ ಜಾಲತಾಣದ ಪ್ರಭಾವಿ ಹೇಳಿದ ಡಿಟಾಕ್ಸ್ ಥೆರಪಿಯನ್ನು ಅನುಸರಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

ವಿಜಯ ಕರ್ನಾಟಕ 11 Dec 2025 8:41 am

ಡಿಸೆಂಬರ್ 10ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 10) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ

ಒನ್ ಇ೦ಡಿಯ 11 Dec 2025 8:41 am

ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರದ ಸ್ಪಂದನೆ : MSP ಯೋಜನೆಯಡಿ 9.67 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅಸ್ತು

Tur Purchase : ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಸಂಬಂಧ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ ಜೋಶಿ ಮಾತುಕತೆ ಯಶಸ್ವಿಯಾಗಿದೆ. ತೊಗರಿ ಖರೀದಿಗೆ ಕೇಂದ್ರ ಅಸ್ತು ಎಂದಿದೆ. ನಾಡಿನ ಅನ್ನದಾತರ ಸಂಕಷ್ಟ ಅರಿತು ತಡ ಮಾಡದೆ ಸ್ಪಂದಿಸಿದ ಮೋದಿ ಸರ್ಕಾರದ ರೈತ ಪರ ಕಾಳಜಿ, ಬದ್ಧತೆ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಆರ್. ಅಶೋಕ ಹೇಳಿದ್ದಾರೆ.

ವಿಜಯ ಕರ್ನಾಟಕ 11 Dec 2025 8:32 am

ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ ಕಾರಿನಲ್ಲಿದ್ದ ಮೂವರ ದುರ್ಮರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿರುವ ಲಾಲಗೊಂಡನಹಳ್ಳಿ ಗೇಟ್‌ ಬಳಿ, ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಿಯಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದ, ಆ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದೆ. ಪರಿಣಾಮಗಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಅಪಘಾತದಿಂದಾಗಿ ದೇವನಹಳ್ಳಿ ಹೈವೇ ಬಳಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Dec 2025 8:22 am

10 ವರ್ಷದ ಬಳಿಕ ಆರ್ ಟಿ ಐ ಅರ್ಜಿಯ ಮೇಲ್ಮನವಿ ವಿಚಾರಣೆ; ದೂರುದಾರನ ಅಸಮಾಧಾನ

ರಾಯಚೂರು: ಕಳೆದ ಹತ್ತು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಆಯೋಗದ ಮೇಲ್ಮನವಿಯನ್ನು ಈಗ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಅಳ್ಳಪ್ಪ ಅಮರಾಪುರು ದೂರಿದ್ದಾರೆ. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, 2015 ಜನವರಿ 23 ರಂದು ದೇವದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರು ಸರ್ಕಾರಿ ಜಮೀನಿಗಳ ಮಾಹಿತಿ ಕೇಳಿ ಅರ್ಜಿ ಸಲ್ಲಿಸಲಾಗಿತ್ತು. ಮಾಹಿತಿ ನೀಡದೇ ಇರುವುದರಿಂದ ರಾಯಚೂರು ಸಹಾಯಕ ಆಯುಕ್ತರಿಗೆ ಮೊದಲ ಮೇಲ್ಮನವಿ ಸಲ್ಲಿಸಿದ್ದರೂ ಉತ್ತರ ಬಾರದೇ ಇರುವುದರಿಂದ ಬೆಂಗಳೂರು ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದವರಿಗೆ 30 ದಿನಗಳಲ್ಲಿ ಉತ್ತರಿಸಬೇಕೆನ್ನುವ ನಿಯಮವಿದ್ದರೂ ಯಾವೊಬ್ಬ ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. 10 ವರ್ಷಗಳಿಂದ ಬಾಕಿಯಿದ್ದ ಮೇಲ್ಮನವಿಯ ವಿಚಾರಣೆಯನ್ನು ಕಲ್ಬುರ್ಗಿ ಮಾಹಿತಿ ಹಕ್ಕು ಆಯೋಗ ಡಿ.11 ರಂದು ನಿಗದಿಪಡಿಸಿದೆ. ಆಯೋಗ ಕಾರ್ಯವೈಖರಿಗೆ ಇದೊಂದು ನಿದರ್ಶನವಾಗಿದೆ. ಆಯೋಗವೇ ಸಕಾಲದಲ್ಲಿ ವಿಚಾರಣೆ ನಡೆಸದೇ ಇರುವದರಿಂದ ಆರ್ ಟಿಐ ಅರ್ಥಕಳೆದುಕೊಂಡಂತಾಗಿದೆ ಎಂದರು.

ವಾರ್ತಾ ಭಾರತಿ 11 Dec 2025 7:54 am

ವೈದ್ಯೆಯರೊಂದಿಗೆ ಅಶ್ಲೀಲ ವರ್ತನೆ ಆರೋಪ: ಭಾರತ ಮೂಲದ ವ್ಯಕ್ತಿ ಕೆನಡಾದಲ್ಲಿ ಬಂಧನ

ಒಟ್ಟಾವ: ಕೆನಡಾದ ಮಿಸ್ಸಿಸೌಗಾ ಆಸ್ಪತ್ರೆಗಳಲ್ಲಿ ವೈದ್ಯೆಯರು ಸೇರಿದಂತೆ ಮಹಿಳಾ ಉದ್ಯೋಗಿಗಳ ಜತೆ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸಿದ ಆರೋಪದಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವೈಭವ್ ಎಂದು ಗುರುತಿಸಲಾಗಿದ್ದು, ವೈದ್ಯಕೀಯ ಸಮಸ್ಯೆಗಳಿವೆ ಎಂಬ ನೆಪದಲ್ಲಿ ಪದೇ ಪದೇ ಕ್ಲಿನಿಕ್ ಗಳಿಗೆ ಭೇಟಿ ನೀಡಿ, ಮಹಿಳಾ ವೈದ್ಯರಿಂದ ಅಸಭ್ಯ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 2025ರ ಹಲವು ತಿಂಗಳಲ್ಲಿ ಹಲವು ಕಡೆಗಳಲ್ಲಿ ಇಂಥ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ. ಅಸಭ್ಯ ವರ್ತನೆಗಾಗಿ ಬ್ರಾಂಪ್ಟನ್ ನ ವ್ಯಕ್ತಿಯನ್ನು 12 ಡಿವಿಷನ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೊ ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕೆಲ ಪ್ರಕರಣಗಳಲ್ಲಿ ಮಹಿಳಾ ಕ್ಲಿನಿಕ್ ಸಿಬ್ಬಂದಿಯ ಬಳಿಗೂ ತೆರಳಿದ್ದ ಎಂದು ಪೊಲೀಸರು ಹೇಳಿದ್ದು, ವೈದ್ಯರ ಬಳಿ ಮಾತನಾಡುವಾಗ ಸುಳ್ಳು ಗುರುತು ಹೇಳುತ್ತಿದ್ದ. ಅಸ್ವಸ್ಥತೆಯ ಬಗ್ಗೆ ಸುಳ್ಳು ಮಾಹಿತಿ ನೀಡಿ, ವೈದ್ಯೆಯರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಬೇಕು ಎಂದು ಬಯಸುತ್ತಿದ್ದ. ಕೆಲ ಪ್ರಕರಣಗಳಲ್ಲಿ ಆಕಾಶ್ದೀಪ್ ಸಿಂಗ್ ಎಂದು ಹೇಳಿಕೊಂಡಿದ್ದಾಗಿ ಪ್ರಕಟಣೆ ವಿರಿಸಿದೆ. ಡಿಸೆಂಬರ್ 4ರಂದು ಈತನನ್ನು ಬಂಧಿಸಲಾಗಿದ್ದು, ಈತನ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈತನ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ, ಪ್ರಯೋಜನ ಪಡೆಯುವ ಸಲುವಾಗಿ ವಂಚನೆ, ಐಡೆಂಟಿಟಿ ಕಳ್ಳತನದ ಆರೋಪವಿದೆ.

ವಾರ್ತಾ ಭಾರತಿ 11 Dec 2025 7:44 am

Karnataka Cold Wave: ರಾಜ್ಯಾದ್ಯಂತ ಭಾರೀ ಥಂಡೀ..! 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ತಾಪಮಾನ 9 ಡಿ.ಸೆ.ಗೆ ಕುಸಿತ

Karnataka Temperature Drop: ಕರ್ನಾಟಕದಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕನಿಷ್ಠ ತಾಪಮಾನ ಕುಸಿಯುತ್ತಿದೆ. ಅಲ್ಲದೇ ಬೆಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಆವರಿಸುತ್ತಿದೆ. ಈ ವಾತಾವರಣ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಬರೋಬ್ಬರಿ 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಬೀದರ್‌ನಲ್ಲಿ ರಾಜ್ಯದ ಅತೀ

ಒನ್ ಇ೦ಡಿಯ 11 Dec 2025 7:03 am

ವಿಜಯನಗರ ಕ್ರಸ್ವ್‌ಗೇಟ್‌ ಅಳವಡಿಕೆ ಸವಾಲು; ಬೇಸಿಗೆಗೂ ಮೊದಲೇ ಪ್ರಕ್ರಿಯೆ ಪೂರ್ಣ ಕಷ್ಟಸಾಧ್ಯ

ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ಪ್ರಕ್ರಿಯಯೆಗೆ ಚಾಲನೆ ನೀಡಲಾಗಿದ್ದು, ಟಿಬಿ ಮಂಡಳಿಯ ನೇತೃತ್ವದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಅಂದಾಜು 52 ಕೋಟಿ ರೂ. ವೆಚ್ಚದಲ್ಲಿ33 ಕ್ರಸ್ವ್‌ ಗೇಟ್‌ಗಳನ್ನು ತೆರವುಗೊಳಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆದಷ್ಟು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಬೆಳವಣಿಗೆಗಳು ಈ ಭಾಗದ ಅನ್ನದಾತನ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಗುಜರಾತ್‌ನ ಅಹಮದಾಬಾದ್‌ ಮೂಲದ ಕಂಪನಿಗೆ ಕ್ರಸ್ಟ್‌ಗೇಟ್‌ ಅಳವಡಿಸುವ ಗುತ್ತಿಗೆ ನೀಡಲಾಗಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Dec 2025 7:00 am

ಹೆರಿಟೇಜ್‌ ಟೂರಿಸಂಗೆ ಹೊಸ ಶಕೆ; ಮೈಸೂರಿನ ಟಾಂಗಾ ಸವಾರಿಯ ಗತವೈಭವ ಮರಳಿಸಲು ಕೇಂದ್ರದ ಯೋಜನೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ತುಸು ಹಿಂದುಳಿದಿದೆ. ಆದರೆ ಈ ಕೊರತೆಯನ್ನು ದೂರ ಮಾಡಲು ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರ, ಜಿಲ್ಲೆಗೆ ಹೆರಿಟೇಜ್‌ ಟೂರಿಸಂನ ಕೊಡುಗೆ ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ, ಮೈಸೂರಿನ ಪಾರಂಪರಿಕ ಟಾಂಗಾ ಸವಾರಿ ಮರುಚಾಲನೆ, ಇಕಾಲಾಜಿಕಲ್‌ ಎಕ್ಸ್‌ಪೀರಿಯನ್ಸ್‌ ಜೋನ್‌ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿದೆ. ಮೈಸೂರಿಗೆ ಭೇಟಿ ನೀಡುವವರು ಇನ್ಮುಂದೆ ಟಾಂಗಾ ಸವಾರಿಯ ಗತವೈಭವದ ದಿನಗಳಿಗೆ ಮರಳಬಹುದಾಗಿದೆ.

ವಿಜಯ ಕರ್ನಾಟಕ 11 Dec 2025 6:29 am

ಮುಸ್ಲಿಂ ಬಹುಸಂಖ್ಯಾತ ವಯನಾಡಿನಲ್ಲಿ ಮುಸ್ಲಿಮೇತರರನ್ನು ಆಯ್ಕೆ ಮಾಡಬಹುದಾದರೆ, ರಾಯ್ ಬರೇಲಿಯಲ್ಲಿ ಮುಸ್ಲಿಮರನ್ನು ಆಯ್ಕೆ ಮಾಡಬಹುದು: ಸಂಸದ ಉವೈಸಿ

ಹೊಸದಿಲ್ಲಿ, ಡಿ.10: ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಅತಿ ಕಡಿಮೆ ಪ್ರತಿನಿಧಿತ್ವದ ವಿಚಾರ ಗಂಭೀರವಾಗಿದೆ ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಬುಧವಾರ ಕಳವಳ ವ್ಯಕ್ತಪಡಿಸಿದರು. ಮುಸ್ಲಿಂ ಬಹುಸಂಖ್ಯಾತರಿರುವ ವಯನಾಡು ಕ್ಷೇತ್ರವೇ ಮುಸ್ಲಿಮೇತರ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾದಂತಹ ದೀರ್ಘಕಾಲದ ರಾಜಕೀಯ ಭದ್ರ ಕೋಟೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಏಕೆ ಅವಕಾಶ ನಿರಾಕರಣೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಅವರ ರಾಜಕೀಯ ತತ್ವಗಳನ್ನು ಉಲ್ಲೇಖಿಸಿದ ಉವೈಸಿ, “ಅಂಚಿನಲ್ಲಿರುವ ಸಮುದಾಯಗಳಿಗೆ ರಾಜಕೀಯ ಶಕ್ತಿ ದೊರಕದೆ ದೇಶ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಇದನ್ನು ಪದೇಪದೇ ಒತ್ತಿ ಹೇಳಿದ್ದಾರೆ,” ಎಂದು ಸ್ಮರಿಸಿದರು. ಲೋಕಸಭೆಯಲ್ಲಿ ಕೇವಲ ನಾಲ್ಕು ಪ್ರತಿಶತ ಮುಸ್ಲಿಂ ಸಂಸದರು ಮಾತ್ರ ಇರುವುದನ್ನು ಅವರು ಆಕ್ಷೇಪಿಸಿ, “ಆಡಳಿತ ಪಕ್ಷದಲ್ಲಿ ಒಬ್ಬರೂ ಮುಸ್ಲಿಂ ಸದಸ್ಯರಿಲ್ಲ. ಜಾತ್ಯತೀತ ಎಂದೇ ಹೇಳಿಸಿಕೊಳ್ಳುವ ಪಕ್ಷಗಳಲ್ಲಿಯೂ ಪ್ರತಿನಿಧಿತ್ವ ಕುಗ್ಗುತ್ತಿದೆ. ಇದು ಗಂಭೀರ ಸೂಚನೆ,” ಎಂದು ಎಚ್ಚರಿಕೆ ನೀಡಿದರು. ವಯನಾಡಿನಂತಹ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವು ಮುಸ್ಲಿಮೇತರರನ್ನು ಆಯ್ಕೆ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಇದು ಮತದಾರರ ವಿಸ್ತೃತ ಮನೋಭಾವವನ್ನು ತೋರಿಸುತ್ತದೆ. ಹೀಗಿರುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಯಸಬಾರದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ,” ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳತ್ತ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ (ವಯನಾಡು) ಮತ್ತು ರಾಹುಲ್ ಗಾಂಧಿ (ರಾಯ್‌ಬರೇಲಿ) ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೇಥಿ–ರಾಯ್‌ಬರೇಲಿ ದೀರ್ಘಕಾಲದಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು ಇಟಾವಾ ಸಮಾಜವಾದಿ ಪಕ್ಷದ ಪರಂಪರೆಯ ನೆಲೆಯಾಗಿದೆ.

ವಾರ್ತಾ ಭಾರತಿ 11 Dec 2025 6:21 am

ಮುಸ್ಲಿಂ ಬಹುಸಂಖ್ಯಾತ ವಯನಾಡಿನಲ್ಲಿ ಮುಸ್ಲಿಮೇತರರನ್ನು ಆಯ್ಕೆ ಮಾಡಬಹುದಾದರೆ, ರಾಯ್ ಬರೇಲಿಯಲ್ಲಿಯೂ ಮುಸ್ಲಿಮರನ್ನು ಆಯ್ಕೆ ಮಾಡಬಹುದು: ಸಂಸದ ಉವೈಸಿ

ಹೊಸದಿಲ್ಲಿ, ಡಿ.10: ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಅತಿ ಕಡಿಮೆ ಪ್ರತಿನಿಧಿತ್ವದ ವಿಚಾರ ಗಂಭೀರವಾಗಿದೆ ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಬುಧವಾರ ಕಳವಳ ವ್ಯಕ್ತಪಡಿಸಿದರು. ಮುಸ್ಲಿಂ ಬಹುಸಂಖ್ಯಾತರಿರುವ ವಯನಾಡು ಕ್ಷೇತ್ರವೇ ಮುಸ್ಲಿಮೇತರ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾಂತಹ ದೀರ್ಘಕಾಲದ ರಾಜಕೀಯ ಭದ್ರ ಕೋಟೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಏಕೆ ಅವಕಾಶ ನಿರಾಕರಣೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಅವರ ರಾಜಕೀಯ ತತ್ವಗಳನ್ನು ಉಲ್ಲೇಖಿಸಿದ ಉವೈಸಿ, “ಅಂಚಿನಲ್ಲಿರುವ ಸಮುದಾಯಗಳಿಗೆ ರಾಜಕೀಯ ಶಕ್ತಿ ದೊರಕದೆ ದೇಶ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಇದನ್ನು ಪದೇಪದೇ ಒತ್ತಿ ಹೇಳಿದ್ದಾರೆ,” ಎಂದು ಸ್ಮರಿಸಿದರು. ಲೋಕಸಭೆಯಲ್ಲಿ ಕೇವಲ ನಾಲ್ಕು ಪ್ರತಿಶತ ಮುಸ್ಲಿಂ ಸಂಸದರು ಮಾತ್ರ ಇರುವುದನ್ನು ಅವರು ಆಕ್ಷೇಪಿಸಿ, “ಆಡಳಿತ ಪಕ್ಷದಲ್ಲಿ ಒಬ್ಬರೂ ಮುಸ್ಲಿಂ ಸದಸ್ಯರಿಲ್ಲ. ಜಾತ್ಯತೀತ ಎಂದೇ ಹೇಳಿಸಿಕೊಳ್ಳುವ ಪಕ್ಷಗಳಲ್ಲಿಯೂ ಪ್ರತಿನಿಧಿತ್ವ ಕುಗ್ಗುತ್ತಿದೆ. ಇದು ಗಂಭೀರ ಸೂಚನೆ,” ಎಂದು ಎಚ್ಚರಿಕೆ ನೀಡಿದರು. ವಯನಾಡಿನಂತಹ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವು ಮುಸ್ಲಿಮೇತರರನ್ನು ಆಯ್ಕೆ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಇದು ಮತದಾರರ ವಿಸ್ತೃತ ಮನೋಭಾವವನ್ನು ತೋರಿಸುತ್ತದೆ. ಹೀಗಿರುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಯಸಬಾರದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ,” ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳತ್ತ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ (ವಯನಾಡು) ಮತ್ತು ರಾಹುಲ್ ಗಾಂಧಿ (ರಾಯ್‌ಬರೇಲಿ) ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೇಥಿ–ರಾಯ್‌ಬರೇಲಿ ದೀರ್ಘಕಾಲದಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು ಇಟಾವಾ ಸಮಾಜವಾದಿ ಪಕ್ಷದ ಪರಂಪರೆಯ ನೆಲೆಯಾಗಿದೆ.

ವಾರ್ತಾ ಭಾರತಿ 11 Dec 2025 6:21 am

ಬಳ್ಳಾರಿಯಲ್ಲಿ ಟೇಕ್ ಆಫ್‌ ಆಗದ ವಿಮಾನ ನಿಲ್ದಾಣ: ಕಾಮಗಾರಿ ಪೂರ್ಣವಾಗದೇ ವಿಮಾನ ನಾಮಕಾರಣ

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಒಂದೂವರೆ ದಶಕದಿಂದ ನನಸಾಗಿಲ್ಲ. 2009ರಲ್ಲಿ 900 ಎಕರೆ ಭೂಸ್ವಾಧೀನಗೊಂಡಿದ್ದರೂ, ರೈತರ ಪ್ರತಿಭಟನೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. 2024ರಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡರೂ, ಅದು ನೆನಪಿನ ಕೂಗಾಗಿದೆ. ಪ್ರಸ್ತುತ ಖಾಸಗಿ ವಿಮಾನ ನಿಲ್ದಾಣವನ್ನೇ ಅವಲಂಬಿಸಬೇಕಾಗಿದೆ.

ವಿಜಯ ಕರ್ನಾಟಕ 11 Dec 2025 6:03 am

ಕಲ್ಯಾಣ ಕರ್ನಾಟಕಕ್ಕೆ ಬರಲಿ ಉದ್ಯಮ; ನಾಲ್ವರು ಸಚಿವರಿಗೆ ಇದೆ ಇತಿಹಾಸ ನಿರ್ಮಿಸುವ ಅಪೂರ್ವ ಅವಕಾಶ

ರಾಜಕಾರಣದಲ್ಲಿ ಅಪರೂಪಕ್ಕೊಮ್ಮೆ ಅಪರೂಪದ ಸಾಧನೆ ಮಾಡುವ ಅವಕಾಶಗಳು ಸಿಗುತ್ತವೆ. ಇಂತದ್ದೇ ಒಂದು ಅವಕಾಶ ಉತ್ತರ ಕರ್ನಾಟಕದ ನಾಲ್ವರು ಸಚಿವರಿಗೆ ದೊರೆತಿದೆ. ಕೈಗಾರಿಕೆ, ಐಟಿಬಿಟಿ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಪ್ರಮುಖ ಖಾತೆಗಳು ಈ ಭಾಗದ ಸಚಿವರಿಗೆ ಲಭಿಸಿದ್ದು, ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮಗಳ ಸ್ಥಾಪನೆಯ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇಲ್ಲಿರುವ ಕೈಗಾರಿಕೆಗಳ ಸಂಖ್ಯೆ ವೃದ್ಧಿಗೆ ಸಚಿವರುಗಳು ಮನಸ್ಸು ಮಾಡುವರೇ ಎಂಬುದು ಈಗ ಎಲ್ಲರ ಪ್ರಶ್ನೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Dec 2025 5:59 am

ತೊಗರಿಗೆ ದರ ಇಳಿಕೆ ಬಿಸಿ : ಅತಿವೃಷ್ಟಿಯಿಂದ ಅಳಿದುಳಿದ ಬೆಳೆ ಕಟಾವು, ಗ್ರಾಹಕರಿಗೆ ಲಾಭ

ಅತಿವೃಷ್ಟಿಯಿಂದ ಹಾನಿಗೊಳಗಾದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರೈತರ ನೆರವಿಗಾಗಿ ಸರ್ಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಆರಂಭಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಖರೀದಿ ಕೇಂದ್ರಗಳು ಆರಂಭವಾಗದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ವಿಜಯ ಕರ್ನಾಟಕ 11 Dec 2025 5:42 am

Bengaluru | ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಗೆ ವಂಚನೆ ಪ್ರಕರಣ: ನಕಲಿ ಗುರೂಜಿಯ ಸಹಚರರ ಬಂಧನ

ಬೆಂಗಳೂರು: ಇತ್ತೀಚೆಗೆ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಐಟಿ ಉದ್ಯೋಗಿ ತೇಜಸ್ ಅವರಿಗೆ 48 ಲಕ್ಷ ರೂ. ವಂಚಿಸಿದ ನಕಲಿ ಗುರೂಜಿ ವಿಜಯ್ ಎಂಬಾತನನ್ನು ಬಂಧಿಸಿದ್ದ ಜ್ಞಾನಭಾರತಿ ಪೊಲೀಸರು, ಇದೀಗ ಆತನ ಇಬ್ಬರು ಸಹಚರನನ್ನೂ ಬಂಧಿಸಿದ್ದಾರೆ. ವಿಜಯ್ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ನನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರರನ್ನು ತೆಲಂಗಾಣದ ಸೈಬರಬಾದ್‍ನಲ್ಲಿ ಸೆರೆಹಿಡಿಯಲಾಗಿದೆ. ಪೊಲೀಸರು ಬಂಧಿತರಿಂದ 19.50 ಲಕ್ಷ ರೂ. ಹಣ ಮತ್ತು ಒಂದು ಟಿ.ಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್‍ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪಿಗಳು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 11 Dec 2025 12:24 am

ಉಪ್ಪಿನಂಗಡಿ | ಆನ್‌ಲೈನ್‌ನಲ್ಲಿ ಪಾವತಿಸಿದ ಹಣ ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ : ಹಣ ಹಿಂದಿರುಗಿಸದವನ ಮೇಲೆ ದೂರು

ಉಪ್ಪಿನಂಗಡಿ, ಡಿ.10: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತನ್ನ ಸಂಬಂಧಿಕರಿಗೆ ತುರ್ತು ಅಗತ್ಯದ ನೆಲೆಯಲ್ಲಿ ಪೋನ್ ಪೇ ಮೂಲಕ ಕಳುಹಿಸಲಾದ ಹಣ ಕಣ್ತಪ್ಪಿನಿಂದಾಗಿ ಇನ್ನೊಬ್ಬರ ಖಾತೆಗೆ ಹೋದ ಪ್ರಕರಣದಲ್ಲಿ ಹಣ ಮರುಪಾವತಿಸಲು ನಿರಾಕರಿಸಿದ ಉಜಿರೆಯ ಉದ್ಯಮಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿಯ ಮಠ ಎಂಬಲ್ಲಿ ಗ್ರಾನೈಟ್ ಉದ್ಯಮ ನಡೆಸಿಕೊಂಡಿರುವ ಹರಿರಾವ್ ಎಂಬವರು ದೂರು ನೀಡಿದ್ದು, ತನ್ನ ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಎಂಬವರಿಗೆ ಕಳುಹಿಸಬೇಕಾದ 19,000 ರೂ. ಕಣ್ತಪ್ಪಿನಿಂದಾಗಿ ಉಜಿರೆಯ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿದ್ದು, ಈ ಮೊತ್ತದಲ್ಲಿ 10,000 ರೂ. ವನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 11 Dec 2025 12:08 am

ಕೋಟ | ಇಂಜಿನಿಯರ್‌ಗೆ ಆನ್‌ಲೈನ್ ವಂಚನೆ

ಕೋಟ, ಡಿ.10: ಆನ್‌ಲೈನ್ ಮೂಲಕ ಸಾಲ ಪಡೆದಿದ್ದ ಇಂಜಿನಿಯರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಸ್ತಾನದ ರಂಜನ್ ಶೆಟ್ಟಿಗಾರ್(33) ಎಂಬವರು ಬೆಂಗಳೂರಿನಲ್ಲಿ ಆಟೊ ಮೊಬೈಲ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ಸುಮಾರು ಒಂದು ತಿಂಗಳ ಹಿಂದೆ ಹಣದ ಅವಶ್ಯ ಇರುವುದರಿಂದ ಮೊಬೈಲ್‌ನಲ್ಲಿ ಆನ್‌ಲೈನ್ ಲೋನ್‌ಗೆ ಅಪ್ಲೇ ಮಾಡಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಸೆಲ್ಫಿ ಫೋಟೊ, ಮೊಬೈಲ್ ಲೋಕೇಶನ್, ಮೊಬೈಲ್ ಕಾಂಟಕ್ಟ್ ಡಿಟೈಲ್ಸ್‌ನ್ನು ಹಾಕಿ 12,000 ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. 6 ದಿನದ ಒಳಗೆ ಸಾಲವಾಗಿ ಪಡೆದ 12,000 ರೂ.ವನ್ನು ವಾಪಸ್ಸು ಪಾವತಿಸಿದ್ದರು. ಬಳಿಕ ಅವರ ಹೆಸರಲ್ಲಿ ಇನ್ನಷ್ಟು ಲೋನ್ ಪಡೆದು, ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಮ್ ಆ್ಯಪ್ ಮೂಲಕ ಅಪರಿಚಿತರು ಕರೆ ಮಾಡಿ ಹಣ ಹಾಕದಿದ್ದರೆ ಮೊಬೈಲ್ ಡಾಟಾವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದರು. ಅದರಂತೆ ರಂಜನ್ ಹಂತಹಂತವಾಗಿ ಆ್ಯಪ್ ಮೂಲಕ 4,37,253 ರೂ.ವನ್ನು ಹಾಕಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 11 Dec 2025 12:05 am

ಮುಲ್ಕಿ | ಮೂರುಕಾವೇರಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಮುಲ್ಕಿ, ಡಿ.10: ಕಿನ್ನಿಗೋಳಿ ಸಮೀಪದ ಮೂರುಕಾವೇರಿಯಲ್ಲಿ ಚಿರತೆಯೊಂದು ರಸ್ತೆ ದಾಟುತ್ತಿರುವುದನ್ನು ವಾಹನ ಚಾಲಕರು ನೋಡಿದ್ದಾರೆ. ಮೂರು ಕಾವೇರಿಯಿಂದ ದಾಮಸ್ ಕಟ್ಟೆ ಸಂಚರಿಸುವ ರಸ್ತೆಯ ಪಾಂಪೈ ಕಾಲೇಜು ಸಮೀಪದಲ್ಲಿ ಬುಧವಾರ ಸಂಜೆ ಸುಮಾರು 7ಕ್ಕೆ ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜಾ ಕಾರಿನಲ್ಲಿ ಸಂಚರಿಸುವ ಸಂದರ್ಭ ಚಿರತೆಯೊಂದು ರಸ್ತೆ ದಾಟುದನ್ನು ನೋಡಿದ್ದು, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಹೇಳಿದ್ದಾರೆ. ಕಿನ್ನಿಗೋಳಿ ಐಕಳ, ಕೊಲ್ಲೂರು ಪದವು ಭಾಗದಲ್ಲಿ ಹಲವು ಬಾರಿ ಹಲವು ಕಡೆಗಳಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಸ್ಥಳೀಯರಲ್ಲಿ ಮತ್ತೆ ಭಯಭೀತ ವಾತಾವರಣ ಸೃಷ್ಟಿಯಾಗಿದೆ.

ವಾರ್ತಾ ಭಾರತಿ 11 Dec 2025 12:04 am

ಕಟೀಲು | ಮರವೇರಿದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಕಟೀಲು, ಡಿ.10: ತೆಂಗಿನಕಾಯಿ ಕೀಳಲು ಏರಿದ ವ್ಯಕ್ತಿಯೊಬ್ಬರು ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ. ಸುರತ್ಕಲ್‌ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ. ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಮತ್ತು ಬಜ್ಪೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರ ಸಹಾಯದಿಂದ ಜಯರಾಮ ಶೆಟ್ಟಿಯವರ ಮೃತ ದೇಹವನ್ನು ಕೆಳಗೆ ಇಳಿಸಲಾಗಿದೆ. ಜಯರಾಮ ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Dec 2025 12:01 am

ಮೂಡುಬಿದಿರೆ | ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಢಿಕ್ಕಿ ಹೊಡೆದ ಲಾರಿ

ಮೂಡುಬಿದಿರೆ, ಡಿ.10: ಚಾಲಕನ ನಿಯಂತ್ರಣ ತಪ್ಪಿದಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಬುಧವಾರ ಮುಂಜಾನೆ ನಡೆದಿದೆ. ಗೂಗಲ್ ಮ್ಯಾಪ್ ಹೇಳಿಕೊಟ್ಟ ದಾರಿಯಲ್ಲಿ ಸರಕು ತುಂಬಿಸಿಕೊಂಡು ಹೋದ ಚಾಲಕ ರಾತ್ರಿ ಎರಡು ಗಂಟೆ ವೇಳೆ ಕಡಂದಲೆ ಇಳಿಜಾರು ಪ್ರದೇಶದ ತಿರುವಿನಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಹೊಸ ರಸ್ತೆಯಾಗಿರುವುದರಿಂದ ಗೊಂದಲ ಉಂಟಾಗಿದ್ದಲ್ಲದೆ, ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಗೋಡೆಗೆ ಢಿಕ್ಕಿಯಾಗಿದೆ. ಈ ಕುರಿತು ಚಾಲಕ ಮಾಹಿತಿ ನೀಡಿದ್ದು, ನಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಪೇಪರ್ ಮಿಲ್‌ಗೆ ಹೋಗಬೇಕಿದ್ದು, ಗೂಗಲ್ ಮ್ಯಾಪ್ ಅನುಸರಿಸಿ, ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Dec 2025 11:57 pm

ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಮೇಲೆ ಮೇಲ್ಮನೆಯಲ್ಲಿ ವಿಶೇಷ ಚರ್ಚೆ

ಬೆಳಗಾವಿ(ಸುವರ್ಣವಿಧಾನಸೌಧ): ಚಳಿಗಾಲದ ಅಧಿವೇಶನ ಆರಂಭಗೊಂಡ ಮೂರನೇ ದಿನವಾದ ಬುಧವಾರ (ಡಿ.10) ಮೇಲ್ಮನೆಯಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಊಟದ ವಿರಾಮದ ನಂತರ ಮಧ್ಯಾಹ್ನ 3.15ಕ್ಕೆ ಪುನಾರಂಭಗೊಂಡ ಕಲಾಪದಲ್ಲಿ ಸಭಾಪತಿಗಳು, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯ ಭೂಮಿ ಅತಿಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಾಗಿರುವ ಕ್ರಿಯಾ ಯೋಜನೆಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ, ಕೈಗಾರಿಕೆಗಳ ಸ್ಥಾಪನೆ ಕುರಿತು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಹಾಗೂ ಕನ್ನಡ ಶಾಲೆಗಳ ಪುನರ್ ನಿರ್ಮಾಣ ಸೇರಿದಂತೆ ನಾನಾ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಿದರು. ಪರಿಷತ್ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ವಿಷಯಗಳಿಗೆ ಹೆಚ್ಚಿನ ಸಮಯ ಚರ್ಚಿಸಲು ಅವಕಾಶ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ವಿಧಾನಸೌಧದ ಹಿನ್ನೆಲೆಯನ್ನು ನಾವು ಅರ್ಥೈಸಿಕೊಳ್ಳಬೇಕು. ಈ ಭಾಗದ ಬಗ್ಗೆ ಅಧ್ಯಯನ ಮಾಡಿ ಡಾ.ನಂಜುಂಡಪ್ಪ ಅವರು ವರದಿ ನೀಡಿ 20 ವರ್ಷಗಳಾದರೂ ಉ.ಕ. ಭಾಗ ಸಂಪೂರ್ಣ ಅಭಿವೃದ್ಧಿಯಾಗದೇ ಇರುವುದು ವಿಷಾದದ ಸಂಗತಿ ಎಂದರು. ಡಾ.ನಂಜುಂಡಪ್ಪ ಅವರು 2002-03ರಲ್ಲಿ ಈ ಭಾಗದಲ್ಲಿನ ಅಸಮತೋಲನ ತೊಲಗಿಸಲು 18,000 ಕೋಟಿ ರೂ.ಖರ್ಚು ಮಾಡಬೇಕು ಎಂದು ತಿಳಿಸಿದ್ದರು. ಆದರೆ, ಇದುವರೆಗೆ ಖರ್ಚು ಮಾಡಿದ್ದು ಕೇವಲ 12,000 ಕೋಟಿ ರೂ. ಮಾತ್ರ. 2002-03ರ ಅವಧಿಯಲ್ಲಿಯೇ ಖರ್ಚಿನ ವಿವರವನ್ನು 18 ಸಾವಿರಕ್ಕೆ ನಿಗದಿಪಡಿಸಿದರೆ ಪ್ರಸ್ತುತ 2025ರ ಈ ಹೊತ್ತಿನಲ್ಲಿ ಆಗುವ ಖರ್ಚಿಗೆ ಮೀಸಡಲಿಡಬೇಕಾದ ಅನುದಾನದ ಗಾತ್ರ ಬಹುದೊಡ್ಡದಾಗಲಿದೆ. ಹಾಗಾಗಿ ಪ್ರತಿ ಬಜೆಟ್ ನಲ್ಲಿ ಈ ಭಾಗಕ್ಕೆ ಕನಿಷ್ಟ 25,000 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯವಾಗಬೇಕು ಎಂದು ನಿರಾಣಿ ಹನುಮಂತಪ್ಪ ಹೇಳಿದರು. ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳ ಭಾಗದ ಸಾಮಾನ್ಯ ಜನರ ಭಾವನೆಗಳು ಕೆರಳುವ ಮೊದಲು ಈ ಭಾಗದ ಅಭಿವೃದ್ದಿಗೆ ಕ್ರಮವಹಿಸಿ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕಾರ್ಯವಾಗಬೇಕು. ಅಪೂರ್ಣಗೊಂಡ ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಪುನಾರಂಭಿಸಬೇಕು. 9 ಇಲಾಖೆಗಳನ್ನು ಈ ಭಾಗಕ್ಕೆ ಸ್ಥಳಾಂತರಿಸುವ ಕಾರ್ಯವಾಗಬೇಕು. ಅಭಿವೃದ್ಧಿ ಕೆಲಸಗಳಿಗೆ ಸದನ ನಿರ್ಣಯ ಮಾಡಬೇಕು. ಕೃಷಿಗೆ ಉತ್ತೇಜನ ನೀಡಬೇಕು. ಉ.ಕ. ಭಾಗದ ಎಲ್ಲ ಭೂಮಿಯನ್ನು ನೀರಾವರಿಗೊಳಪಡಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆಯಡಿ 173 ಪುನರ್ವಸತಿ ಕೇಂದ್ರಗಳಲ್ಲಿನ ಸಂತ್ರಸ್ಥರಿಗೆ ಸ್ಪಂದಿಸಬೇಕು. ಈ ಭಾಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಕಾಳಿ ನದಿ ನೀರನ್ನು ಎತ್ತಿನ ಹೊಳೆ ಯೋಜನೆಯ ಮಾದರಿಯಲ್ಲಿ ನೀರೆತ್ತುವ ಕಾರ್ಯವಾಗಬೇಕು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಆಗಬೇಕು. ವಿಜಯಪುರ ಮಹಿಳಾ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ನಿರಾಣಿ ಹನುಮಂತಪ್ಪ ಸಲಹೆ ಮಾಡಿದರು. ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಅಕ್ಷರ, ಆರೋಗ್ಯ ಮತ್ತು ನೀರು ಇಲ್ಲದೇ ಇದ್ದರೆ ಅದನ್ನು ನಾಡು ಅನ್ನಲಾಗದು. ಈ ನಿಟ್ಟಿನಲ್ಲಿ ಯೋಚಿಸಿ, ಯೋಜಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಮತ್ತು ಪ್ರಗತಿಗೆ ಒತ್ತು ಕೊಡಬೇಕು. ಮುಖ್ಯವಾಗಿ ದುಡಿಯುವವರ ಕೈಗೆ ಉದ್ಯೋಗ ನೀಡುವ ಕಾರ್ಯವಾಗಬೇಕು. ಯಾವುದೇ ಯೋಜನೆಗಳನ್ನು ವಿವೇಚನೆ, ವಿವೇಕದಿಂದ ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಮೇಲ್ಮನೆಯ ನೂತನ ಸದಸ್ಯ ಶಿವಕುಮಾರ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು ನಿಗದಿಪಡಿಸಿ ಪತ್ರಿಕೋದ್ಯಮಕ್ಕೆ ಬಲ ತುಂಬಬೇಕು ಎಂದು ಸಲಹೆ ಮಾಡಿದರು. ಸದಸ್ಯ ಶಶಿಲ್ ಜಿ. ನಮೋಶಿ ಮಾತನಾಡಿ, ಈ ಭಾಗದಲ್ಲಿನ ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು. ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್.ಬೋಸರಾಜು, ಪರಿಷತ್ತಿನ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಇನ್ನಿತರರು ಚರ್ಚೆಯಲ್ಲಿ ಭಾಗಿಯಾದರು.

ವಾರ್ತಾ ಭಾರತಿ 10 Dec 2025 11:52 pm

Rice: ಭಾರತಕ್ಕೆ \ಅಕ್ಕಿ\ ವಿಚಾರದಲ್ಲಿ ಶಾಕ್ ನೀಡಲು ಮುಂದಾದ ಟ್ರಂಪ್: ಅಕ್ಕಿ ಬೆಲೆ ಏರಿಕೆ ಸಾಧ್ಯತೆ!

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹುಚ್ಚಾಟ ಮುಂದುವರಿದಿದ್ದು, ಇದೀಗ ಟ್ರಂಪ್ ಅವರ ಕಣ್ಣು ಭಾರತದ ಅಕ್ಕಿಯ ಮೇಲೆ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಕ್ಕಿ ಬೆಲೆ ಹೆಚ್ಚಾಗಬಹುದೇ ಎನ್ನುವ ಆತಂಕವೂ ಸಹ ಶುರುವಾಗಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತದ ವಿವಿಧ ವಸ್ತುಗಳ ಮೇಲೆ ಈಗಾಗಲೇ ಭಾರೀ ಸುಂಕ ವಿಧಿಸಿ ಆಗಿದೆ. ಇದೀಗ ಅಕ್ಕಿಯನ್ನು

ಒನ್ ಇ೦ಡಿಯ 10 Dec 2025 11:49 pm

ಮಂಡ್ಯ: ಹತಾಶ ಅವಿವಾಹಿತ ಯುವಕರಿಂದ ಮಠಕ್ಕಾಗಿ ಗ್ರಾ.ಪಂ.ಗೆ ಬೇಡಿಕೆ!

ಮಂಡ್ಯ: ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಯುವಕರ ತಂಡವೊಂದು ಮಠ ಕಟ್ಟಿಕೊಂಡು ಜೀವನ ಕಳೆಯಲು ತೀರ್ಮಾನಿಸಿದ್ದು, ಮಠ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‍ಗೆ ಬೇಡಿಕೆ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಮದ್ದೂರು ತಾಲೂಕಿನ ಮರಳಿಗ ಗ್ರಾಮ ಪಂಚಾಯತ್‍ನ ಗ್ರಾಮಸಭೆಯಲ್ಲಿ 30 ಯುವಕರ ತಂಡ, ಪಂಚಾಯತ್ ವತಿಯಿಂದ ತಮಗೆ ಮಠ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಸಲ್ಲಿಸುವ ಮೂಲಕ ಆಶ್ಚರ್ಯ ಮೂಡಿಸಿದರು. ಸಾರ್ವಜನಿಕರು ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ಮಂಡಿಸುತ್ತಿರುವಾಗ ಪ್ರತ್ಯಕ್ಷರಾದ ಯುವಕರು, ಎಷ್ಟೇ ಪ್ರಯತ್ನಪಟ್ಟರೂ ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಜೀವನ ಬೇಸರ ತಂದಿದೆ. ಮಠವೊಂದನ್ನು ಕಟ್ಟಿಸಿಕೊಡಿ ದೇವರ ಭಜನೆ ಮಾಡಿಕೊಂಡು ಜೀವನ ಕಳೆಯುತ್ತೇವೆಂದು ಸಹಿ ಮಾಡಿದ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಯುವಕರ ವಿಚಿತ್ರ ಬೇಡಿಕೆಗೆ ದಂಗಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಯುವಕರ ಹತಾಷೆಗೆ ಮರುಕಪಟ್ಟರು ಎಂದು ವರದಿಯಾಗಿದೆ. ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಜಿಲ್ಲೆಯ ಯುವಕರ ತಂಡವು ತಮಗೆ ವಧು ದೊರಕಿಸಿಕೊಡುವಂತೆ ವರ್ಷದ ಹಿಂದೆ ಕೆ.ಎಂ.ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದರು.

ವಾರ್ತಾ ಭಾರತಿ 10 Dec 2025 11:28 pm

ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಕೇಸ್‌: ಪೊಲೀಸರಿಗೇ ಯಾಮಾರಿಸಿದ್ರಾ ಧನ್ವೀರ್‌? ಯಾಕೆ ಈ ಅನುಮಾನ?

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ನಟ ಧನ್ವೀರ್‌ ಪೊಲೀಸರಿಗೆ ಯಾಮಾರಿಸಿರುವ ಅನುಮಾನ ಮೂಡಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್‌ ಮೊಬೈಲ್‌ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ಹೊಸ ಮೊಬೈಲ್‌ ನೀಡಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಶಂಕಿಸಲಾಗಿದೆ. ಎಫ್‌ಎಸ್‌ಎಲ್‌ ವರದಿಗೆ ಪೊಲೀಸರು ಕಾಯುತ್ತಿದ್ದು, ಇದಾದ ಬಳಿಕ ಸಾಕ್ಷ್ಯ ನಾಶದಡಿ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ವಿಜಯ ಕರ್ನಾಟಕ 10 Dec 2025 11:26 pm

ವಿರಾಜಪೇಟೆ | ನಾಲ್ವರನ್ನು ಹತ್ಯೆಗೈದ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

ಮಡಿಕೇರಿ: ಪತ್ನಿ, ಮಲ ಮಗಳು, ಪತ್ನಿಯ ಅಜ್ಜ ಹಾಗೂ ಅಜ್ಜಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ವ್ಯಕ್ತಿಗೆ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಮಾ.27ರ ರಾತ್ರಿ ನಾಲ್ವರ ಹತ್ಯೆ ನಡೆದಿತ್ತು. ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಕೇರಳ ಮೂಲದ ಗಿರೀಶ್ (35) ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಗಿರೀಶ್‌ನ ಭೀಕರ ಕೃತ್ಯಕ್ಕೆ ಪತ್ನಿ ನಾಗಿ(30), ಮಲ ಮಗಳು ಕಾವೇರಿ(5) ಪತ್ನಿಯ ಅಜ್ಜ ಜೇನು ಕುರುಬರ ಕರಿಯ(75) ಹಾಗೂ ಅಜ್ಜಿ ಗೌರಿ(70) ಹತ್ಯೆಗೀಡಾಗಿದ್ದರು. ನಾಗಿ ಎಂಬಾಕೆ ಮೊದಲ ಪತಿಯನ್ನು ತೊರೆದು 2024ರಲ್ಲಿ ಕೇರಳ ಮೂಲದ ಗಿರೀಶ್ ಎಂಬಾತನ ಜೊತೆ ವಿವಾಹವಾಗಿದ್ದಳು. ಗಿರೀಶ್ ಕೂಡ ವಿವಾಹಿತನಾಗಿದ್ದು, ಪತ್ನಿಯನ್ನು ತೊರೆದು ನಾಗಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ನಾಗಿ ಮೊದಲ ಪತಿಗೆ ಜನಿಸಿದ್ದ ಕಾವೇರಿಯೊಂದಿಗೆ ಬೇಗೂರಿನಲ್ಲಿದ್ದ ಅಜ್ಜ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. 2ನೇ ಪತಿ ಗಿರೀಶ್ ನಾಗಿ ಇದ್ದ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. 2025ರ ಮಾರ್ಚ್ 27ರಂದು ರಾತ್ರಿ ಬಂದ ಗಿರೀಶ್ ಪತ್ನಿ ನಾಗಿಯ ಶೀಲ ಶಂಕಿಸಿ ಜಗಳವಾಡಿದ್ದಾನೆ. ಅಲ್ಲದೆ ಕತ್ತಿಯಿಂದ ಕಡಿದು ಮೊದಲು ನಾಗಿಯನ್ನು ಹತ್ಯೆ ಮಾಡಿದ್ದಾನೆ. ಈ ವೇಳೆ ನಾಗಿಯ ಕಂಕುಳಲ್ಲಿದ್ದ ಮಗು ಕಾವೇರಿಯ ತಲೆಯ ಭಾಗಕ್ಕೆ ಕತ್ತಿ ಏಟು ತಗಲಿ ಆಕೆಯೂ ಸ್ಥಳದಲ್ಲೇ ಮೃತಪಟ್ಟಳು ಎಂದು ಹೇಳಲಾಗಿದೆ. ಜಗಳವನ್ನು ಬಿಡಿಸಲು ಬಂದ ಅಜ್ಜ ಕರಿಯ ಹಾಗೂ ಅಜ್ಜಿ ಗೌರಿ ಕೂಡ ಕತ್ತಿಯಿಂದ ಹಲ್ಲೆಗೊಳಗಾಗಿ ಮೃತಪಟ್ಟರು ಎಂದು ದೂರು ದಾಖಲಾಗಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಂದಿನ ಅಡಿಷನಲ್ ಎಸ್ಪಿ ಸುಂದರ್ ರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಲ್ವರನ್ನು ಭೀಕರವಾಗಿ ಹತ್ಯೆಗೈದು ಕೇರಳದಲ್ಲ್ ತಲೆಮರೆಸಿಕೊಂಡಿದ್ದ. ಗಿರೀಶ್‌ನನ್ನು ಕೊಡಗು ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಕೊಲೆ ಪ್ರಕರಣದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜ ಅವರು ಕಲಂ 103(1), 238 ಬಿಎನ್‌ಎಸ್ ಅಡಿಯಲ್ಲಿ ಆರೋಪಿ ಗಿರೀಶ್ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಕುರಿತು ಸರಕಾರಿ ಅಭಿಯೋಜಕ ಯಾಸೀನ್ ಅಹ್ಮದ್ ಅವರು ಸರಕಾರದ ಪರವಾಗಿ ವಾದ ಮಂಡಿಸಿದರು.

ವಾರ್ತಾ ಭಾರತಿ 10 Dec 2025 11:11 pm

ಥಾಯ್ಲೆಂಡ್‌-ಕಾಂಬೊಡಿಯಾ ಗಡಿಯಲ್ಲಿ ಘರ್ಷಣೆ; ಕರೆ ಮಾಡಿ ಯುದ್ಧ ನಿಲ್ಲಿಸುವೆ ಎಂದ ಟ್ರಂಪ್‌

ಡಿಸೆಂಬರ್‌ 8ರಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ 5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವಾಸ ಸ್ಥಾನ ತೊರೆದು ಸುರಕ್ಷಿತ ಜಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈನಲ್ಲಿ ನಡೆದಿದ್ದ ಸಂಘರ್ಷದ ನಂತರ ಟ್ರಂಪ್ ಅವರು ಕದನ ವಿರಾಮಕ್ಕೆ ಒತ್ತಾಯಿಸಿದ್ದರುಆದರೆ, ಸೋಮವಾರ ಮತ್ತೆ ಸಂಘರ್ಷ ಉಂಟಾಗಿದೆ. ಶಾಂತಿ ಒಪ್ಪಂದ ಮುರಿದುಬಿದ್ದಿದೆ.

ವಿಜಯ ಕರ್ನಾಟಕ 10 Dec 2025 11:11 pm

'ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?' ಪುಸ್ತಕ ಬಿಡುಗಡೆ, ಸರಕಾರಕ್ಕೆ ಮಹತ್ವದ ಆಗ್ರಹ

ಧರ್ಮಸ್ಥಳದಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು 'ಕೊಂದವರು ಯಾರು?' ತಂಡ ಒತ್ತಾಯಿಸಿದೆ. 20 ಸಾವಿರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.

ವಿಜಯ ಕರ್ನಾಟಕ 10 Dec 2025 11:03 pm

`ಕ್ರಿಕೆಟ್ ಬಿಟ್ರೆ ಬೇರೇನೂ ಇಷ್ಟವಿಲ್ಲ': ವಿವಾಹ ರದ್ದಾದ ಬಳಿಕ ಮೊದಲ ಬಾರಿ ಸ್ಮೃತಿ ಮಂದಾನ ಮುಕ್ತಮಾತು!

Smriti Mandhana Statement- ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗಿನ ಮದುವೆ ರದ್ದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ಕ್ರಿಕೆಟ್ ಮತ್ತಿತರ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣಗಳವನ್ನು ಮೆಲುಕು ಹಾಕಿದರು.

ವಿಜಯ ಕರ್ನಾಟಕ 10 Dec 2025 11:01 pm

ಸರಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ ನೀಡುವುದು ನಿಷೇಧ

ಬೆಂಗಳೂರು: ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ಹೀಗಾಗಿ ಸರಕಾರಿ ಪ್ರಾಯೋಜಿತ ಅಥವಾ ಅನುದಾನಿತ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಮರಣಿಕೆ, ಟ್ರೋಫಿ ಮತ್ತು ಅಂತಹ ವಸ್ತು ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ಪರಿಸರ ಕಾಳಜಿ, ಆರ್ಥಿಕತೆ, ಸರಳತೆ, ಸಂಪನ್ಮೂಲ ಸಂರಕ್ಷಣೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯ ಮನವರಿಕೆಯನ್ನು ಒತ್ತಿಹೇಳುವ ಸಾಮಾಜಿಕ ಮತ್ತು ಆಡಳಿತಾತ್ಮಕ ಮೌಲ್ಯಗಳಿಗೆ ಸ್ಮರಣಿಕೆ, ಟ್ರೋಫಿ ನೀಡುವ ಪದ್ಧತಿಯು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದೆ. ಸಸಿಗಳು, ಪುಸ್ತಕಗಳು, ಕೈ ಮಗ್ಗ ಉತ್ಪನ್ನಗಳು ಅಥವಾ ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆಗಳಂತಹ ಸಾಂಕೇತಿಕ ಪರ್ಯಾಯಗಳು ಸುಸ್ಥಿರ ಆಡಳಿತ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗೆ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುವಲ್ಲಿ ಉತ್ತಮ ಆಯ್ಕೆಯಾಗಿರುತ್ತವೆ ಎಂದು ಸರಕಾರ ಹೇಳಿದೆ. ಹೀಗಾಗಿ ಎಲ್ಲ ಇಲಾಖೆ, ನಿಗಮ ಮತ್ತು ಮಂಡಳಿ ಹಾಗೂ ಜಿಲ್ಲಾಡಳಿತಗಳಿಗೆ ಸೂಚಿಸಿದೆ ಹಾಗೂ ಅವುಗಳ ಬದಲಿಗೆ ಗಣ್ಯರು/ಅತಿಥಿಗಳಿಗೆ ಪರಿಸರ ಪ್ರಜ್ಞೆಯ ತತ್ತ್ವಗಳಿಗೆ ಅನುಗುಣವಾಗಿ ಸದ್ಭಾವನೆ ಮತ್ತು ಸುಸ್ಥಿರತೆಯನ್ನು ಪ್ರೋತ್ಸಾಹಿಸುವಂತಹ ಪರಿಸರ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದು ಉದ್ಘಾಟನೆಗಳು, ಶಿಲಾನ್ಯಾಸಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಸನ್ಮಾನ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ ಮತ್ತು ಸಮಾರಂಭಗಳು ಮತ್ತು ರಾಜ್ಯ ಭೇಟಿಗಳಂತಹ ಎಲ್ಲ ಅಧಿಕೃತ ಚಟುವಟಿಕೆಗಳಿಗೆ ಅನ್ವಯಿಸುತ್ತದೆ. ಆದರೆ ಅಧಿಕೃತ ರಾಜ್ಯ ಕ್ರೀಡಾ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಟ್ರೋಫಿಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದೆ.

ವಾರ್ತಾ ಭಾರತಿ 10 Dec 2025 10:29 pm

2030ರ ವೇಳೆಗೆ ಭಾರತದಲ್ಲಿ 35 ಶತಕೋಟಿ ಡಾಲರ್ ಹೂಡಿಕೆ ಮಾಡಲಿರುವ Amazon

ಹೊಸದಿಲ್ಲಿ,ಡಿ.10: ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ ತನ್ನ ಎಲ್ಲ ವ್ಯವಹಾರಗಳಲ್ಲಿ 35 ಶತಕೋಟಿ ಡಾ.ಗೂ(ಸುಮಾರು 3.15 ಲ.ಕೋ.ರೂ.) ಹೆಚ್ಚಿನ ಹೂಡಿಕೆಯನ್ನು ಮಾಡುವ ತನ್ನ ಯೋಜನೆಯನ್ನು ಬುಧವಾರ ಪ್ರಕಟಿಸಿದೆ. ತನ್ಮೂಲಕ ದೇಶದ ಡಿಜಿಟಲ್ ಆರ್ಥಿಕತೆ,ಕೃತಕ ಬುದ್ಧಿಮತ್ತೆ (ಎಐ) ನೇತೃತ್ವದ ರೂಪಾಂತರ ಮತ್ತು ಉದ್ಯೋಗ ಸೃಷ್ಟಿಗೆ ತನ್ನ ದೀರ್ಘಕಾಲೀನ ಬದ್ಧತೆಯನ್ನು ಹೆಚ್ಚಿಸುವುದಾಗಿ ಅದು ತಿಳಿಸಿದೆ. ಅಮೆಜಾನ್ ಈಗಾಗಲೇ ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 40 ಶತಕೋಟಿ ಡಾ.ಗಳನ್ನು(ಸುಮಾರು 3.60 ಲ.ಕೋ.ರೂ.) ಹೂಡಿಕೆ ಮಾಡಿದೆ. ದಿಲ್ಲಿಯಲ್ಲಿ ಬುಧವಾರ ನಡೆದ ಆರನೇ ಅಮೆಜಾನ್ ಸಂಭವ್ ಶೃಂಗಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದ್ದು,ಇದೇ ವೇಳೆ ಸಲಹಾ ಸಂಸ್ಥೆ ಕೀಸ್ಟೋನ್ ಸಟ್ಯೆಾಟಜಿಯ ಆರ್ಥಿಕ ಪರಿಣಾಮಗಳ ವರದಿಯನ್ನೂ ಬಿಡುಗಡೆಗೊಳಿಸಲಾಯಿತು. ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗಿ ಪರಿಹಾರ ಸೇರಿದಂತೆ ಅಮೆಜಾನ್‌ನ ಸಂಚಿತ ಹೂಡಿಕೆಗಳು ಅದನ್ನು ಭಾರತದ ಅತಿ ದೊಡ್ಡ ವಿದೇಶಿ ಹೂಡಿಕೆದಾರ,ಇ-ವಾಣಿಜ್ಯ ರಫ್ತುಗಳ ಅತ್ಯಂತ ದೊಡ್ಡ ಪ್ರೋತ್ಸಾಹಕನನ್ನಾಗಿ ಮಾಡಿದ್ದು,ದೇಶದ ಉನ್ನತ ಉದ್ಯೋಗ ಸೃಷ್ಟಿಕರ್ತರಲ್ಲಿ ಒಂದಾಗಿಸಿದೆ ಎಂದು ವರದಿಯು ಹೇಳಿದೆ. ತನ್ನ ಭವಿಷ್ಯದ ಹೂಡಿಕೆಯು ಭಾರತದ ವಿಶಾಲ ಡಿಜಿಟಲ್ ಮತ್ತು ಆರ್ಥಿಕ ಆದ್ಯತೆಗಳಿಗೆ ಅನುಗುಣವಾಗಿ ಎಐ-ಚಾಲಿತ ಡಿಜಿಟಲೀಕರಣ,ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಕೇಂದ್ರೀಕರಿಸಲಿವೆ ಎಂದು ಕಂಪನಿಯು ಹೇಳಿದೆ. ಪೂರೈಕೆ ಕೇಂದ್ರಗಳು,ಸಾಗಾಟ ಜಾಲ,ಡೇಟಾ ಸೆಂಟರ್‌ಗಳು, ಡಿಜಿಟಲ್ ಪಾವತಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ವೇದಿಕೆಗಳು ಸೇರಿದಂತೆ ಭಾರತದಾದ್ಯಂತ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿ ತಾನು ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಿರುವುದಾಗಿ ಅಮೆಜಾನ್ ತಿಳಿಸಿದೆ. ಕೀಸ್ಟೋನ್ ವರದಿಯ ಪ್ರಕಾರ ಅಮೆಜಾನ್ ಈವರೆಗೆ 1.2 ಕೋಟಿಗೂ ಹೆಚ್ಚಿನ ಸಣ್ಣ ಉದ್ಯಮಗಳನ್ನು ಡಿಜಿಟಲೀಕರಿಸಿದೆ,20 ಬಿಲಿಯನ್ ಡಾ.ಗಳ (ಸುಮಾರು 1.80 ಲ.ಕೋ.ರೂ.) ಸಂಚಿತ ಇ-ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸಿದೆ ಮತ್ತು ಸುಮಾರು 28 ಲಕ್ಷ ನೇರ,ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸಿದೆ. ಈ ಉದ್ಯೋಗಗಳು ತಂತ್ರಜ್ಞಾನ, ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಬೆಂಬಲ ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದು,ಸ್ಪರ್ಧಾತ್ಮಕ ವೇತನ,ಆರೋಗ್ಯ ರಕ್ಷಣೆ ಮತ್ತು ಔಪಚಾರಿಕ ತರಬೇತಿಯಂತಹ ಪ್ರಯೋಜನಗಳನ್ನು ಒಳಗೊಂಡಿವೆ. 2030ರ ವೇಳೆಗೆ ಭಾರತದಲ್ಲಿ ಹೆಚ್ಚುವರಿಯಾಗಿ 10 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ತಾನು ಯೋಜಿಸಿರುವುದಾಗಿ ಅಮೆಜಾನ್ ತಿಳಿಸಿದೆ.

ವಾರ್ತಾ ಭಾರತಿ 10 Dec 2025 10:23 pm

ಬೆಂಗಳೂರಿನಲ್ಲಿ ಬೀದಿ ನಾಯಿ ಸಮೀಕ್ಷೆ: 2680 ಸಂಸ್ಥೆಗಳಿಂದ 3500 ನಾಯಿಗಳ ಬಗ್ಗೆ ಮಾಹಿತಿ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮಾಹಿತಿ ನೀಡಲು 8 ಸಾವಿರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಕೇವಲ 2,680 ಸಂಸ್ಥೆಗಳು 3,500 ನಾಯಿಗಳ ಬಗ್ಗೆ ಮಾಹಿತಿ ನೀಡಿವೆ. 5320 ಸಂಸ್ಥೆಗಳಿಂದ ಇನ್ನೂ ಮಾಹಿತಿ ಬರಬೇಕಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಾಯಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾತ್ಕಾಲಿಕ ಆಶ್ರಯ ತಾಣಗಳನ್ನು ಗುರುತಿಸಲಾಗಿದೆ.

ವಿಜಯ ಕರ್ನಾಟಕ 10 Dec 2025 10:22 pm

ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು? ಮಗನ ನಿರ್ಧಾರದ ವಿರುದ್ಧವೇ ರಾಜಮಾತೆ... Mysuru Kingdom

ಮೈಸೂರು ಸಂಸ್ಥಾನ ಕರ್ನಾಟಕ &ಕನ್ನಡಿಗರ ಪಾಲಿಗೆ ಹೆಮ್ಮೆ... ಮೈಸೂರು ಸಂಸ್ಥಾನ ಇಲ್ಲದೇ ಹೋಗಿದ್ದರೆ ಕರ್ನಾಟಕದಲ್ಲಿ ಕನ್ನಡವೇ ಇರುತ್ತಿರಲಿಲ್ಲ, ಯಾಕಂದ್ರೆ ಒಂದು ಕಡೆ ಮರಾಠರು ಮತ್ತು ಇನ್ನೊಂದು ಕಡೆ ಹೈದರಾಬಾದ್ ಸಂಸ್ಥಾನದ ಆಡಳಿತದಲ್ಲಿ ಕನ್ನಡ ಕಣ್ಮರೆ ಆಗಿರುತ್ತಿತ್ತು ಅಂತಾ ಕನ್ನಡಿಗರು ಹೆಮ್ಮೆಯಿಂದ ಮೈಸೂರು ಸಂಸ್ಥಾನದ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ ಇಂದಿಗೂ ಮೈಸೂರು ಸಂಸ್ಥಾನಕ್ಕೆ ಅಷ್ಟೇ ಗೌರವ ಕೊಟ್ಟು

ಒನ್ ಇ೦ಡಿಯ 10 Dec 2025 10:21 pm

ಇಂಡಿಗೊ ಬಿಕ್ಕಟ್ಟು | ಬೆಂಗಳೂರಿನಿಂದ 61 ವಿಮಾನ ಯಾನಗಳು ರದ್ದು

ಹೊಸದಿಲ್ಲಿ,ಡಿ.10: ಕಾರ್ಯಾಚರಣೆಗಳು ಹಳಿಗೆ ಮರಳಿವೆ ಎಂದು ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರು ಮಂಗಳವಾರ ಹೇಳಿಕೊಂಡಿದ್ದರೂ ಸತತ 10ನೇ ದಿನವಾದ ಬುಧವಾರವೂ ಇಂಡಿಗೊ ಬಿಕ್ಕಟ್ಟು ಮುಂದುವರಿದಿದೆ. ಇಂದು ಸಹ ಇಂಡಿಗೊ ಯಾನಗಳು ರದ್ದುಗೊಂಡಿದ್ದು,ಬೆಂಗಳೂರು ಮತ್ತು ಅಹ್ಮದಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹಲವಾರು ಪ್ರಯಾಣಿಕರು ಅತಂತ್ರರಾಗಿದ್ದರು. ಇಂಡಿಗೊ ಬುಧವಾರ ಬೆಂಗಳೂರಿನಲ್ಲಿ 35 ಆಗಮನಗಳು ಮತ್ತು 26 ನಿರ್ಗಮನಗಳು ಸೇರಿದಂತೆ 61 ವಿಮಾನ ಯಾನಗಳನ್ನು ರದ್ದುಗೊಳಿಸಿದೆ. ವರದಿಗಳ ಪ್ರಕಾರ ಇಂಡಿಗೊ ಅಹ್ಮದಾಬಾದ್‌ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 10 ಯಾನಗಳನ್ನೂ ರದ್ದುಗೊಳಿಸಿದೆ. ಮಂಗಳವಾರ ಸರಕಾರವು ತನ್ನ ವಿಮಾನಯಾನಗಳ ಸಂಖ್ಯೆಯನ್ನು ಶೇ.10ರಷ್ಟು ಕಡಿತಗೊಳಿಸುವಂತೆ ಇಂಡಿಗೊ ಸಂಸ್ಥೆಗೆ ಆದೇಶಿತ್ತು. ವ್ಯತ್ಯಯಗಳು ಮುಂದುವರಿದಿರುವುದರಿಂದ ವಾಯುಯಾನ ಸಂಸ್ಥೆಯ ಕಾರ್ಯಾಚರಣೆಗಳಲ್ಲಿ ಸ್ಥಿರತೆಯನ್ನು ತರುವುದು ಈ ಕ್ರಮದ ಉದ್ದೇಶವಾಗಿದೆ ಎಂದು ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ ನಾಯ್ಡು ಹೇಳಿದ್ದರು.

ವಾರ್ತಾ ಭಾರತಿ 10 Dec 2025 10:16 pm

ಪ್ರಶಸ್ತಿ, ಪುರಸ್ಕಾರಗಳಿಗಾಗಿ ಬರೆಯುವುದು ವೃತ್ತಿಗೆ ಮಾಡಿದ ಅವಮಾನ ಎಂದು ಲೇಖಕರು ತಿಳಿದುಕೊಳ್ಳಬೇಕು: ದೀಪಾ ಭಾಸ್ತಿ

ಕಲಬುರಗಿ: ಪ್ರಶಸ್ತಿಗಾಗಿ ಬರೆಯುವವರು ಹೆಚ್ಚಾಗಿದ್ದಾರೆಂಬ ಮಾತು ಕೇಳಿಬರುತ್ತಿದೆ, ಆದರೆ ಪ್ರಶಸ್ತಿ, ಪುರಸ್ಕಾರಗಳಿಗೆ ಬರೆಯುವುದು ವೃತ್ತಿಗೆ ಮಾಡಿದ ಅವಮಾನ ಎಂಬುದುನ್ನು ಲೇಖಕರು ತಿಳಿದುಕೊಳ್ಳಬೇಕು ಎಂದು ಅನುವಾದ ಸಾಹಿತ್ಯದಲ್ಲಿ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅಭಿಪ್ರಾಯಪಟ್ಟರು. ಬುಧವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಿಂದ ಆಯೋಜಿಸಿದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ದೀಪಾ ಭಾಸ್ತಿ,  ಶರಣ, ದಾಸ, ಸೂಫಿ-ಸಂತರ ನಾಡಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಕಲೆ, ಸಾಹಿತ್ಯದಲ್ಲಿ ಅಪಾರ ಶ್ರೀಮಂತಿಕೆ ಹೊಂದಿದ್ದು, ಇದನ್ನು ಗುರುತಿಸುವ ಕೆಲಸ ಸ್ಥಳೀಯ ಲೇಖಕರು ಅನುವಾದದ ಮೂಲಕವೂ ಮಾಡಬೇಕಿದೆ ಎಂದು ಹೇಳಿದರು.  ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮದ್ರಾಸ್ ಕರ್ನಾಟಕ, ಮೈಸೂರು ಕರ್ನಾಟಕ ಹೀಗೆ ಕನ್ನಡ ಭಾಷೆ ಪ್ರಾಂತ್ಯಕ್ಕನುಗುಣವಾಗಿ ವಿಶಿಷ್ಟ ಸಾಹಿತ್ಯ ಹೊಂದಿದ್ದು, ಇಂತಹ ಪ್ರಾದೇಶಿಕ ಸಾಹಿತ್ಯವನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ದೀಪಾ ಭಾಸ್ತಿ ಹೇಳಿದರು. ಪ್ರದೇಶದ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಲು ಅನುವಾದ ಅಗತ್ಯವಾಗಿದ್ದು, ಇದನ್ನು ಸ್ಥಳೀಯ ಬರಹಗಾರರೆ ಮಾಡಿದಲ್ಲಿ ಒಳ್ಳೆಯದು. ಸ್ಥಳೀಯ ಸೊಗಡನ್ನು ತಮ್ಮದೇ ದೃಷಿಕೋನದಲ್ಲಿ ಬಿಂಬಿಸುವ ಅನುವಾದ ಮಾಡಿದಾಗ ಮಾತ್ರ ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ, ಭಾಷೆ, ಭೂಷಣ, ಉಡುಗೆ-ತೊಡುಗೆ ಎಲ್ಲವು ಚಿರಪರಿಚಿತವಾಗಲು ಸಾಧ್ಯ ಎಂದು ಹೇಳಿದರು.   ಈ ಪ್ರದೇಶದ ಕಲೆ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಗುಲ್ಬರ್ಗಾ ವಿವಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಸಂಪ್ರದಾಯವಾಗಿದೆ. ಬಹಮಾನ ಪಡೆದವರೆಲ್ಲ ಬಹುಮಾನ್ಯರಲ್ಲ ಎಂಬ ಕೆ.ಎಸ್.ನಿಸಾರ್‌ ಅಹ್ಮದ್‌ ಅವರ ಮಾತು ನೆನೆಪಿಸಿಕೊಂಡ ಅವರು, ಬದಲಾಗಿ ಸಮಾಜಕ್ಕೆ ಕೊಡುಗೆ ನೀಡಲು ನಿಮ್ಮ ಜವಾಬ್ದಾರಿ ಇಂದಿನಿಂದ ಮತ್ತಷ್ಟು ಹೆಚ್ಚಾಗಿದೆ ಎಂದು ಸಾಧಕರನ್ನುದ್ದೇಶಿಸಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಮರ್ಶಕ, ಸಾಹಿತಿ ಎಸ್.ಆರ್.ವಿಜಯಶಂಕರ ಮಾತನಾಡಿ, ಕರ್ನಾಟಕದ ಪ್ರತಿ ಪ್ರಾಂತ್ಯದಲ್ಲಿ ವಿಭಿನ್ನ ಸಂಸ್ಕೃತಿ, ಭಾಷೆ, ಕಲೆ, ಸಾಹಿತ್ಯ ಕಾಣಬಹುದಾಗಿದೆ. ಎಲ್ಲಾ ಕನ್ನಡ ಒಂದೇ ಎಂದು ಹೇಳಲು ಅಸಾಧ್ಯ. ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲಾ ಭಾಷೆಗಳನ್ನು ಪರಸ್ಪರ ಗೌರವಿಸಬೇಕಿದೆ. ಹಿಂದಿ ಭಾಷೆ ಹೇರಿಕೆ ಒಪ್ಪುವುದಿಲ್ಲ ಎಂದ ಅವರು, ಬಹುತ್ವದ ಭಾರತಕ್ಕೆ ಕನ್ನಡವೇ ಸಾಕ್ಷಿಯಾಗಿದೆ. ಜಗತ್ತಿನ ಎಲ್ಲಾ ಜ್ಞಾನ ಹೀರಿಕೊಳ್ಳುವ ಮತ್ತು ವಿಶ್ವಕ್ಕೆ ಜ್ಞಾನ ನೀಡುವ ಶಕ್ತಿ ಕನ್ನಡಕ್ಕೆ ಮತ್ತು ಕನ್ನಡಿಗರಿಗಿದೆ ಎಂದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ, ಸಿರಿವಂತಿಕೆಯ ತವರೂರಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಕಲೆ, ಸಾಹಿತ್ಯ ಪಸರಿಸಲು ಅನುವಾದ ಅಗತ್ಯವಾಗಿದ್ದು, ಗುಲ್ಬರ್ಗಾ ವಿ.ವಿ. ಅನುವಾದ ವಿಭಾಗ ಆರಂಭಿಸಬೇಕು. ಖಾಯಂ ಪ್ರಾಧ್ಯಾಪಕರಿಲ್ಲದೆ ವಿ.ವಿ. ನರಳುತ್ತಿದ್ದು, ಬೋಧಕ-ಬೋಧಕೇತರ ಹುದ್ದೆಗಳನ್ನು ಸರಕಾರ ತುಂಬುವ ಮೂಲಕ ವಿಶ್ವವಿದ್ಯಾಲಯವನ್ನು ಉಳಿಸಬೇಕು ಮತ್ತು ಕೆಕೆಆರ್ ಡಿಬಿ ಮೂಲಕ ಮೂಲಸೌಕರ್ಯ ಭದ್ರಪಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುಲ್ಬರ್ಗಾ ವಿ.ವಿ. ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಕನ್ನಡ ನಾಡು ನುಡಿಗೆ ಶ್ರಮಿಸಿದ್ದವರನ್ನು ಗುರುತಿಸುತ್ತಾ ಗುಲಬರ್ಗಾ ವಿ.ವಿ. ಪ್ರಸಾರಾಂಗವು ಕಳೆದ 4 ದಶಕಗಳಿಂದಲೂ ಮಹನೀಯರು ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ವರ್ಷದಿಂದ ಸಂಘ-ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ವಿ.ವಿ.ಯ ಪ್ರಸಾರಾಂಗ ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಎಂದು ತಿಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಸೃಜನಶೀಲ ಬರವಣಿಗೆಯಲ್ಲಿ ಡಾ.ರಾಜಶೇಖರ ಹಳೆಮನಿ, ಬಿ.ಜೆ.ಪಾರ್ವತಿ ಸೋನಾರೆ, ಡಾ. ಪರ್ವೀನ್ ಸುಲ್ತಾನಾ, ಧರ್ಮಣ್ಣ ಎಚ್. ಧನ್ನಿ, ರೇವಣಸಿದ್ದಪ್ಪ ದುಕಾನ್, ಸುಧೀರ್ ಎಸ್. ಬಿರಾದಾರ ಹಾಗೂ ಸೃಜನೇತರ ಸಾಹಿತ್ಯದಲ್ಲಿ ಪ್ರಭುಲಿಂಗ ನೀಲೂರೆ, ಶ್ರೀನಿವಾಸ ಸಿರನೂರಕರ್, ಡಾ.ಕರುಣಾ ಜಮದರಖಾನಿ, ಡಾ.ಪ್ರಕಾಶ ಎಚ್. ಸಂಗಮ, ಡಾ.ಗೋವಿಂದ, ವಚನ ಸಾಹಿತ್ಯದಲ್ಲಿ ಡಾ.ಹಣಮಂತ ಬಿ.ಮೇಲಿಕೇರಿ, ಜಾನಪದ ವಿಭಾಗದಲ್ಲಿ ಸಂಗಮೇಶ ಬಾದವಾಡಗಿ, ಸಮಾಜ ವಿಜ್ಞಾನ ವಿಭಾಗದಲ್ಲಿ ಡಾ.ಚಿನ್ನ ಆಶಪ್ಪ, ಇಂಗ್ಲೀಷ್ ಸಾಹಿತ್ಯದಲ್ಲಿ ಡಾ.ಶಿವಾನಂದ ಶಂಕರ್, ಉರ್ದು ಸಾಹಿತ್ಯದಲ್ಲಿ ಡಾ.ಖಮೀರುನ್ನಿಸಾ, ಜಾನಪದ ಕಲೆ ವಿಭಾಗದಲ್ಲಿ ಸೂರ್ಯಕಾಂತ ಬಿ. ಪೂಜಾರಿ ಮತ್ತು ಕಸ್ತೂರಿ, ಶಿಲ್ಪಕಲೆ ವಿಭಾಗದಲ್ಲಿ ರಾಜಶೇಖರ ಬಡಿಗೇರ್ ಅವರಿಗೆ ಫಲಕ, ನಗದು ಬಹುಮಾನ ನೀಡಿ ಗೌರವಿಸಲಾಯಿತು.  ಅದೇ ರೀತಿ ರಾಜ್ಯ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಡಾ.ಸಿ.ನಾಗರಾಜ, ವಿಜ್ಞಾನ ಪುಸ್ತಕ ವಿಭಾಗದಲ್ಲಿ ಡಾ.ಹಾ.ಮ.ನಾಗಾರ್ಜುನ ಹಾಗೂ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಪಾತ್ರರಾದ ಡಾ.ಪಿ.ನಂದಕುಮಾರ್‌, ಬೆಳ್ಳಿ ಪದಕಕ್ಕೆ ಭಾಜನರಾದ ಶಶಿಕುಮಾರ್‌ ತರಿಕೇರೆ, ಕಂಚಿನ ಪದಕಕ್ಕೆ ಆಯ್ಕೆಯಾದ ಡಾ.ಶುಲಾಬಾಯಿ ಹಿತವಂತ ಮತ್ತು ರಜನಿಕಾಂತ ವಿ. ಬರೂಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶ್ರೀದೇವಿ ಎಸ್.ಕಟ್ಟಿಮನಿ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ಪ್ರೊ. ಸಿ.ಸುಲೋಚನಾ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ. ರಮೇಶ್‌ ಲಂಡನಕರ್ ಸೇರಿದಂತೆ ವಿ.ವಿ.ಯ ಬೋಧಕ, ಬೋಧಕೇತರ ವೃಂದದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ.ಎಚ್.ಟಿ.ಪೋತೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾರ್ತಾ ಭಾರತಿ 10 Dec 2025 10:15 pm

ಹಾವೇರಿ | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪೋಷಕರು, ಸಾರ್ವಜನಿಕರಿಂದ ಶಿಕ್ಷಕನಿಗೆ ಹಲ್ಲೆ

ಹಾವೇರಿ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಷಕರು ಹಾಗೂ ಸಾರ್ವಜನಿಕರು ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಹಲ್ಲೆ ನಡೆಸಿರುವ ಘಟನೆ ಬುಧವಾರ ವರದಿಯಾಗಿದೆ. ಹಲ್ಲೆಗೊಳಗಾದ ಶಿಕ್ಷಕನನ್ನು ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಸರಕಾರಿ ಉರ್ದು ಶಾಲೆಯ ಶಿಕ್ಷಕ ಜಗದೀಶ್ ಎಂದು ಗುರುತಿಸಲಾಗಿದೆ. ಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿ ಬಳಿಕ ಸವಣೂರು ಪೊಲೀಸರಿಗೆ ಒಪ್ಪಿಸಿದ ಪೋಷಕರು, ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 10 Dec 2025 10:14 pm

ಉತ್ತರಾಖಂಡ: ಪ್ರಧಾನಿ ಗುರಿಯಾಗಿರಿಸಿ ಡೀಪ್‌ಫೇಕ್ ಚಿತ್ರ, ವೀಡಿಯೊ

ಸಾಮಾಜಿಕ ಮಾಧ್ಯಮದ 18 ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲು

ವಾರ್ತಾ ಭಾರತಿ 10 Dec 2025 10:10 pm

ಸುಳ್ಯ | ಅನುದಾನ ತಂದರೂ ತಮ್ಮ ವಿರುದ್ದ ರಾಜಕೀಯ ಷಡ್ಯಂತ್ರ : ಟಿ.ಎಂ.ಶಹೀದ್ ತೆಕ್ಕಿಲ್

ಸುಳ್ಯ : ಸಂಪಾಜೆ ಗ್ರಾಮದ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ತಂದಿದ್ದರೂ, ಅನುದಾನ, ಅಭಿವೃದ್ಧಿ ಕಾರ್ಯಗಳನ್ನು ಕತ್ತಲಲ್ಲಿಟ್ಟು ತಮ್ಮ ವಿರುದ್ಧ ಕೆಲವರು ನಿರಂತರ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ಅನುದಾನ ತರುವುದು ತಪ್ಪೇ ಎಂದು ಪ್ರಶ್ನಿಸಿದ ಅವರು ಕಳೆದ 35 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಸಂಪಾಜೆ, ಅರಂತೋಡು ಗ್ರಾಮಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಂದಿದ್ದೇನೆ. ಕೆಲವರು ತನ್ನ ವಿರುದ್ಧ ಹೈಕಮಾಂಡ್ಗೆ ದೂರು ನೀಡುವುದಾಗಿ ಕೆಲವು ಮಾಧ್ಯಮಗಳಲ್ಲಿ ನೋಡಿದೆ, ದೂರು ನೀಡುವವರು ಮೊದಲು ಬ್ಲಾಕ್, ಡಿಸಿಸಿಗೆ ನೀಡಲಿ ಅದು ಬಿಟ್ಟು ಹೈಕಮಾಂಡ್ಗೆ ದೂರು ನೀಡುವ ಕ್ರಮ ಪಕ್ಷದಲ್ಲಿ ಇಲ್ಲ ಎಂದು ಹೇಳಿದರು. ಸಂಪಾಜೆ ಗ್ರಾಮದ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಂಪಾಜೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಪ್ರಳಯ, ಭೂಕಂಪ ಆದ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ದುಡಿದಿದ್ದಾರೆ. ಅಭಿವೃದ್ಧಿ ಯಾರು ಮಾಡಿದರೂ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯೆ ವಿಮಲಾ ಪ್ರಸಾದ್, ಪ್ರಮುಖರಾದ ಸಲೀಂ ಪೆರುಂಗೋಡಿ, ಸಿದ್ದಿಕ್ ಕೊಕ್ಕೊ, ಅಜರುದ್ದೀನ್, ಮುನೀರ್ ದಾರಿಮಿ, ಜುನೈದ್, ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 10:05 pm

ಭಾರತವನ್ನು ಹೊರಗಿಟ್ಟು ದಕ್ಷಿಣ ಏಶ್ಯಾ ಬಣ ಸ್ಥಾಪನೆಗೆ ಪಾಕ್ ಪ್ರಯತ್ನ: ವರದಿ

ದಕ್ಷಿಣ ಏಶ್ಯಾ ಭೌಗೋಳಿಕ ರಾಜಕೀಯದಲ್ಲಿ ಭಾರತದ ಪ್ರಾಬಲ್ಯ ತಗ್ಗಿಸುವ ಉದ್ದೇಶ

ವಾರ್ತಾ ಭಾರತಿ 10 Dec 2025 10:01 pm

ಗುಜರಾತ್‌ನಲ್ಲಿ ನಿರ್ಭಯಾ ಕೇಸ್‌ ಮಾದರಿ ಕೃತ್ಯ; ಬಾಲಕಿ ಖಾಸಗಿ ಭಾಗಕ್ಕೆ ರಾಡ್‌ ಹಾಕಿದ ಪಾಪಿ

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ದುರುಳ, ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಪೊಲೀಸರು ಆರೋಪಿ ರಾಮ್‌ಸಿಂಗ್ ತೇಜ್‌ಸಿಂಗ್‌ನನ್ನು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 10 Dec 2025 10:00 pm

ಡಿ.11ರಂದು ಎರಡನೇ ಟಿ-20: ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ

ನ್ಯೂ ಚಂಡಿಗಡ, ಡಿ.10: ಆಲ್‌ ರೌಂಡ್ ಪ್ರದರ್ಶನದ ಮೂಲಕ ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಗುರುವಾರ ನಡೆಯಲಿರುವ ಎರಡನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಎದುರಿಸಲಿದೆ. ಕುತ್ತಿಗೆ ನೋವಿನಿಂದ ಚೇತರಿಸಿಕೊಂಡು ವಾಪಸಾಗಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ಚುಟುಕು ಮಾದರಿಯ ಕ್ರಿಕೆಟ್‌ ನಲ್ಲಿ ತನ್ನ ಫಾರ್ಮ್ ಕಂಡುಕೊಳ್ಳುವತ್ತ ಗಮನ ಹರಿಸಲಿದ್ದಾರೆ. ಸೆಪ್ಟಂಬರ್‌ನಲ್ಲಿ ನಡೆದ ಏಶ್ಯಕಪ್ ಟೂರ್ನಿಯ ವೇಳೆ ಟಿ-20 ಕ್ರಿಕೆಟಿಗೆ ವಾಪಸಾದ ನಂತರ ಗಿಲ್ ಅವರು ತನ್ನ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾಗೆ ಅವಕಾಶ ನೀಡದೆ ಗಿಲ್ ಅವರನ್ನು ಅಗ್ರ ಸರದಿಯಲ್ಲೇ ಕಣಕ್ಕಿಳಿಸುವ ಮೂಲಕ ಬೆಂಬಲಕ್ಕೆ ನಿಂತಿದೆ. ಎಂಟನೇ ಕ್ರಮಾಂಕದ ತನಕವೂ ಭಾರತದ ಬ್ಯಾಟಿಂಗ್ ಸರದಿ ವಿಸ್ತರಿಸಿದೆ. ತಂಡವು ನಿರ್ಭೀತಿಯಿಂದ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಗಿಲ್ ಇದಕ್ಕೆ ಕ್ಷಿಪ್ರವಾಗಿ ಹೊಂದಿಕೊಳ್ಳುವ ಅಗತ್ಯವಿದೆ. ಕಳೆದ ವರ್ಷ ಟಿ-20 ವಿಶ್ವಕಪ್ ತನಕ ವಿರಾಟ್ ಕೊಹ್ಲಿ ನಿರ್ವಹಿಸುತ್ತಿದ್ದ ಪಾತ್ರವನ್ನು ನಿಭಾಯಿಸುವವರು ಈಗ ತಂಡದಲ್ಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಕಳೆದೊಂದು ವರ್ಷದಿಂದ ಉತ್ತಮ ಫಾರ್ಮ್‌ನಲ್ಲಿಲ್ಲ. ಸ್ವದೇಶದಲ್ಲಿ ನಡೆಯಲಿರುವ 2026ರ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಾದವ್ ಅವರು ಫಾರ್ಮ್ ಅಡಚಣೆಯಾದಂತೆ ಕಂಡುಬಂದಿದೆ. ಭಾರತ ತಂಡವು ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗೆಲುವಿನ ಆಡುವ 11ರ ಬಳಗಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ ಔಟಾಗದೆ 59 ರನ್ ಗಳಿಸಿದ್ದರು. ಮಾತ್ರವಲ್ಲ ಹಿರಿಯ ಬ್ಯಾಟರ್ ಡೇವಿಡ್ ಮಿಲ್ಲರ್ ವಿಕೆಟನ್ನು ಪಡೆದಿದ್ದರು. ಭಾರತ ತಂಡ ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6-2 ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದ್ದರೂ ಟಿ-20 ಕ್ರಿಕೆಟ್‌ನಲ್ಲಿ ಅಚ್ಚರಿ ಫಲಿತಾಂಶ ಬರುವ ಬಗ್ಗೆ ಅರಿವು ಹೊಂದಿದೆ. ವಿಶ್ವಕಪ್‌ಗಿಂತ ಮೊದಲು ಸ್ವದೇಶದಲ್ಲಿ ಆಡಲಿರುವ ಇನ್ನುಳಿದ 9 ಟಿ-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಮುಲ್ಲನ್‌ಪುರದ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿ ಪುರುಷರ ಕ್ರಿಕೆಟ್ ತಂಡದ ಅಂತರ್‌ರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡಗಳು ಈ ವರ್ಷದ ಸೆಪ್ಟಂಬರ್‌ನಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದವು. ಭಾರತದ ಬಹುತೇಕ ಆಟಗಾರರು ಈ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಕಟಕ್‌ನಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ 176 ರನ್ ಚೇಸಿಂಗ್‌ಗೆ ತೊಡಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಇನಿಂಗ್ಸ್‌ ನ ಮೊದಲ ಓವರ್‌ನಲ್ಲೇ ಅರ್ಷದೀಪ್ ಸಿಂಗ್ ಶಾಕ್ ನೀಡಿದ್ದರು. ಅಪಾಯಕಾರಿ ಆಟಗಾರ ಕ್ವಿಂಟನ್ ಡಿಕಾಕ್ ವಿಕೆಟನ್ನು ಮೊದಲ ಓವರ್‌ನಲ್ಲೇ ಉರುಳಿಸಿದ್ದರು. ಪ್ರಮುಖ ಬ್ಯಾಟರ್ ಡಿಕಾಕ್ ವಿಕೆಟ್ ಪತನಗೊಂಡ ನಂತರ ದಕ್ಷಿಣ ಆಫ್ರಿಕಾ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ ಕೇವಲ 74 ರನ್‌ಗೆ ಆಲೌಟಾಯಿತು. ಪಿಚ್ ರಿಪೋರ್ಟ್ ನ್ಯೂ ಚಂಡಿಗಡದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣವು ಬ್ಯಾಟಿಂಗ್ ಹಾಗೂ ಬೌಲಿಂಗ್ ನಡುವಿನ ಸಮತೋಲಿತ ಹಣಾಹಣಿಗೆ ಸಾಕ್ಷಿಯಾಗಲು ಸಜ್ಜಾಗಿದೆ. ಇನಿಂಗ್ಸ್‌ನ ಆರಂಭದಲ್ಲಿ ವೇಗದ ಔಟ್‌ಫೀಲ್ಡ್ ಬ್ಯಾಟರ್‌ಗಳಿಗೆ ನೆರವಾಗಬಹುದು. ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಉಪಯುಕ್ತವಾಗಬಲ್ಲರು. ಒಟ್ಟಾರೆ ಪಿಚ್ ಬೌಲರ್‌ಗಳಿಗಿಂತ ಬ್ಯಾಟರ್‌ಗಳಿಗೆ ಹೆಚ್ಚು ಸಹಕರಿಸುವ ನಿರೀಕ್ಷೆ ಇದೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು 6-5 ದಾಖಲೆ ಹೊಂದಿದ್ದು, 200ಕ್ಕೂ ಅಧಿಕ ರನ್ ಗಳಿಸಿದರೆ ಪಂದ್ಯ ಗೆಲ್ಲಬಹುದು. ಟೀಮ್ ನ್ಯೂಸ್ ಚಂಡಿಗಡದಲ್ಲಿ ಒಂದು ವೇಳೆ ಪಿಚ್ ಒಣಗಿದ್ದರೆ ಕುಲದೀಪ್ ಅವರು ಅರ್ಷದೀಪ್ ಬದಲಿಗೆ ಆಡಬಹುದು. ಟೀಮ್ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಸರದಿಯನ್ನು ಬಲಪಡಿಸುವ ಬಗ್ಗೆ ಯೋಚಿಸಿದರೆ ಹರ್ಷಿತ್ ರಾಣಾ ಅವರು ಅರ್ಷದೀಪ್ ಬದಲಿಗೆ ಆಡಬಹುದು. ಇನ್ನುಳಿದಂತೆ ಯಾವುದೇ ಬದಲಾವಣೆ ಇರಲಾರದು. ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಆಲ್‌ರೌಂಡರ್ ಲುಥೋ ಸಿಪಾಮ್ಲಾ ಬದಲಿಗೆ ಕಾರ್ಬಿನ್ ಬಾಷ್ ಅಥವಾ ಜಾರ್ಜ್ ಲಿಂಡೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಅಂಕಿ-ಅಂಶಗಳು ► ಕೇವಲ ಮೂವರು ಆಟಗಾರರು ಟಿ-20 ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳು ಹಾಗೂ 100 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಝಿಂಬಾಬ್ವೆಯ ಸಿಕಂದರ್ ರಝಾ, ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಹಾಗೂಮಲೇಶ್ಯದ ವೀರಾನ್‌ದೀಪ್ ಸಿಂಗ್ ಅವರನ್ನೊಳಗೊಂಡ ಪಟ್ಟಿಗೆ ಸೇರಲು ಪಾಂಡ್ಯಗೆ ಒಂದು ವಿಕೆಟ್ ಅಗತ್ಯವಿದೆ. ► ಭಾರತ ತಂಡದ ಪರ ಅರ್ಷದೀಪ್ ಅವರು ಪವರ್‌ಪ್ಲೇ ಓವರ್‌ನಲ್ಲಿ ಜಂಟಿಗರಿಷ್ಠ ವಿಕೆಟ್‌ಗಳನ್ನು(47)ಪಡೆದಿದ್ದಾರೆ. ಭುವನೇಶ್ವರ ಕುಮಾರ್ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ► ಜಸ್‌ಪ್ರಿತ್ ಬುಮ್ರಾ ಮೂರು ಅಂತರ್‌ರಾಷ್ಟ್ರೀಯ ಮಾದರಿಗಳ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಉರುಳಿಸಿರುವ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಶಾಕಿಬ್ ಅಲ್ ಹಸನ್, ಲಸಿತ್ ಮಾಲಿಂಗ, ಟಿಮ್ ಸೌಥಿ ಹಾಗೂ ಶಾಹೀನ್ ಶಾ ಅಫ್ರಿದಿ ಈ ಸಾಧನೆ ಮಾಡಿರುವ ಇತರ ಆಟಗಾರರಾಗಿದ್ದಾರೆ. ತಂಡಗಳು ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ಸೂರ್ಯಕುಮಾರ ಯಾದವ್(ನಾಯಕ), 4.ತಿಲಕ್ ವರ್ಮಾ, 5. ಜಿತೇಶ್ ಶರ್ಮಾ(ವಿಕೆಟ್‌ಕೀಪರ್), 6. ಹಾರ್ದಿಕ್ ಪಾಂಡ್ಯ, 7. ಶಿವಂ ದುಬೆ, 8. ಅಕ್ಷರ್ ಪಟೇಲ್, 9. ಅರ್ಷದೀಪ್ ಸಿಂಗ್, 10. ವರುಣ್ ಚಕ್ರವರ್ತಿ, 11. ಜಸ್‌ಪ್ರಿತ್ ಬುಮ್ರಾ. ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಕ್ವಿಂಟನ್ ಡಿಕಾಕ್(ವಿಕೆಟ್‌ಕೀಪರ್), 2. ಏಡೆನ್ ಮರ್ಕ್ರಮ್(ನಾಯಕ), 3.ಟ್ರಿಸ್ಟನ್ ಸ್ಟಬ್ಸ್, 4. ಡೆವಾಲ್ಡ್ ಬ್ರೆವಿಸ್, 5. ಡೇವಿಡ್ ಮಿಲ್ಲರ್, 6.ಡೊನೊವನ್ ಫೆರೇರ, 7. ಮಾರ್ಕೊ ಜಾನ್ಸನ್, 8.ಲುಥೊ ಸಿಪಾಮ್ಲಾ/ಕಾರ್ಬಿನ್ ಬಾಷ್/ಜಾರ್ಜ್ ಲಿಂಡೆ, 9. ಕೇಶವ ಮಹಾರಾಜ್, 10. ಲುಂಗಿ ಗಿಡಿ, 11. ಅನ್ರಿಚ್ ನೋರ್ಟ್ಜೆ. ಪಂದ್ಯ ಆರಂಭದ ಸಮಯ: ರಾತ್ರಿ 7:00

ವಾರ್ತಾ ಭಾರತಿ 10 Dec 2025 9:55 pm

ಅಂಡರ್ 19 ಏಷ್ಯಾಕಪ್ ಟೂರ್ನಿಗೆ ದಿನಗಣನೆ: ಯಾವುದರಲ್ಲಿ ನೇರಪ್ರಸಾರ? ಇಲ್ಲಿದೆ ಸಂಪೂರ್ಣ ವಿವರ

ACC U19 Asia Cup 2025- ಅಂಡರ್ 19 ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಡಿಸೆಂಬರ್ 12 ರಂದು ಯುಎಇಯಲ್ಲಿ ಆರಂಭವಾಗಲಿದೆ. ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್‌ಗೆ ಇದು ಸಿದ್ಧತಾ ಕೂಟ ಸಹ ಆಗಿರುವುದರಿಂದ ಸಹಜವಾಗಿಯೇ ಮಹತ್ವವನ್ನು ಪಡೆದುಕೊಂಡಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು ಡಿಸೆಂಬರ್ 21ರಂದು ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿದೆ ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ ತಂಡಗಳ ಸಂಪೂರ್ಣ ವಿವರ ಮತ್ತು ವೇಳಾಪಟ್ಟಿ.

ವಿಜಯ ಕರ್ನಾಟಕ 10 Dec 2025 9:52 pm

ಅಜೆಕಾರು | ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಅಜೆಕಾರು, ಡಿ.10: ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ಮಧ್ಯಾಹ್ನ ವೇಳೆ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕೆರ್ವಾಶೆ ಗ್ರಾಮದ ಮುಗ್ಗೆರಕಳ ನಿವಾಸಿ ನಾರಾಯಣ ಆರ್. ಎಂದು ಗುರುತಿಸಲಾಗಿದೆ. ಇವರು ಶಿರ್ಲಾಲು ಗ್ರಾಮದ ಜಯಪ್ರಕಾಶ್ ಅರಿಗ ಎಂಬವರ ತೋಟಕ್ಕೆ ಅಡಿಕೆ ಕೊಯ್ಯಲು ಹೋಗಿದ್ದು ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದ ನಾರಾಯಣ, ಆಕಸ್ಮಿಕವಾಗಿ ಮರದಿಂದ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟಞ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Dec 2025 9:51 pm

ಐಪಿಎಲ್ 2026: ಜಾಕ್‌ ಪಾಟ್ ನಿರೀಕ್ಷೆಯಲ್ಲಿ ಭಾರತದ ಐವರು ಯುವ ಕ್ರಿಕೆಟಿಗರು

ಹೊಸದಿಲ್ಲಿ, ಡಿ.10: ಐಪಿಎಲ್-2026ರ ಮಿನಿ ಹರಾಜು ಕಾರ್ಯಕ್ರಮ ಡಿ.16ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಭಾರತದ ಹಲವು ಹೊಸ ಕ್ರಿಕೆಟಿಗರು ಎಲ್ಲರ ಗಮನ ಸೆಳೆಯಲಾರಂಭಿಸಿದ್ದಾರೆ. ಮಿನಿ ಹರಾಜು ಕೋಟ್ಯಧೀಶರನ್ನು ಸೃಷ್ಟಿಸಲಿದೆ. ಮಿನಿ ಹರಾಜಿಗಿಂತ ಮೊದಲು 2025-26ರ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(ಎಸ್‌ಎಂಎಟಿ)ಕ್ರಿಕೆಟ್ ಟೂರ್ನಿಯು ನಡೆದಿದ್ದು, ದೇಶೀಯ ಕ್ರಿಕೆಟಿಗರಿಗೆ ಐಪಿಎಲ್ ಫ್ರಾಂಚೈಸಿಗಳ ಮೇಲೆ ಪ್ರಭಾವಬೀರಲು ಇದು ಸರಿಯಾದ ವೇದಿಕೆಯಾಗಿದೆ. ಎಸ್‌ಎಂಎಟಿಯಲ್ಲಿನ ಪ್ರದರ್ಶನವನ್ನು ಆಧರಿಸಿ ಐವರು ಯುವ ಅಟಗಾರರು ಹರಾಜಿನಲ್ಲಿ ಭಾರೀ ಬಿಡ್ ಆಕರ್ಷಿಸುವ ಭರವಸೆ ಮೂಡಿಸಿದ್ದಾರೆ. ► ಆಕಿಬ್ ನಬಿ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಆಟಗಾರನ ಪೈಕಿ ಒಬ್ಬರಾಗಿದ್ದಾರೆ. 29ರ ವಯಸ್ಸಿನ ನಬಿ ಎಲೈಟ್ ‘ಬಿ’ ಗುಂಪಿನಲ್ಲಿ 7.41ರ ಎಕಾನಮಿ ರೇಟ್‌ನಲ್ಲಿ ಏಳು ಪಂದ್ಯಗಳಲ್ಲಿ ಒಟ್ಟು 15 ವಿಕೆಟ್‌ ಗಳನ್ನು ಉರುಳಿಸಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿರುವ ನಬಿ ಅವರನ್ನು ಹಲವು ಐಪಿಎಲ್ ಫ್ರಾಂಚೈಸಿಗಳು ಟ್ರಯಲ್ಸ್‌ಗಾಗಿ ಬುಲಾವ್ ನೀಡಿವೆ. ಗುಣಮಟ್ಟದ ಭಾರತೀಯ ವೇಗಿಗಳ ಹುಡುಕಾಟದಲ್ಲಿರುವ ಫ್ರಾಂಚೈಸಿಗಳನ್ನು ನಬಿ ಆಕರ್ಷಿಸಬಹುದು. ► ಕಾರ್ತಿಕ್ ಶರ್ಮಾ(ರಾಜಸ್ಥಾನ): ರಾಜಸ್ಥಾನ ತಂಡ ಈ ವರ್ಷದ ಎಸ್‌ಎಂಎಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ‘ಡಿ’ ಗುಂಪಿನಲ್ಲಿ ಪ್ರಮುಖ ದೇಶೀಯ ತಂಡಗಳಾದ ದಿಲ್ಲಿ, ತಮಿಳುನಾಡು ಹಾಗೂ ಕರ್ನಾಟಕವನ್ನು ಹಿಂದಿಕ್ಕಿ ನಾಕೌಟ್‌ ಗೆ ತೇರ್ಗಡೆಯಾಗಿದೆ. 19ರ ವಯಸ್ಸಿನ ಕಾರ್ತಿಕ್ ಶರ್ಮಾ ಅವರು ರಾಜಸ್ಥಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಧ್ಯಮ ಸರದಿಯಲ್ಲಿ ಪ್ರಮುಖ ಕೊಡುಗೆ ನೀಡಿರುವ ಕಾರ್ತಿಕ್ ಐದು ಪಂದ್ಯಗಳಲ್ಲಿ 160ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ ನಲ್ಲಿ ಒಟ್ಟು 133 ರನ್ ಗಳಿಸಿದ್ದಾರೆ. ವಿಕೆಟ್‌ಕೀಪಿಂಗ್ ಹಾಗೂ ಪಂದ್ಯಕ್ಕೆ ಅಂತ್ಯ ಹಾಡುವ ಶರ್ಮಾ ಅವರ ಸಾಮರ್ಥ್ಯವು ಐಪಿಎಲ್ ತಂಡಗಳಿಗೆ ಪ್ರಯೋಜನಕಾರಿಯಾಗಬಹುದು. ► ತುಷಾರ್ ರಹೇಜಾ(ತಮಿಳುನಾಡು) : ತಮಿಳುನಾಡಿನ ತುಷಾರ್ ರಹೇಜಾ ಕೂಡ ಎಲ್ಲರ ಗಮನ ಸೆಳೆಯುತ್ತಿರುವ ಇನ್ನೋರ್ವ ಹೊಸ ವಿಕೆಟ್‌ಕೀಪರ್-ಬ್ಯಾಟರ್ ಆಗಿದ್ದಾರೆ. ಈ ವರ್ಷದ ಎಸ್‌ಎಂಎಟಿಯಲ್ಲಿ ಇನಿಂಗ್ಸ್ ಅರಂಭಿಸಿರುವ ಎಡಗೈ ಬ್ಯಾಟರ್ ಏಳು ಪಂದ್ಯಗಳಲ್ಲಿ 164ರ ಸ್ಟ್ರೈಕ್‌ರೇಟ್‌ ನಲ್ಲಿ 151 ರನ್ ಗಳಿಸಿದ್ದಾರೆ. 2025ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಮಿಂಚಿದ್ದು, 185ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಾವಳಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದರು. ಈ ವರ್ಷ ಸ್ಫೋಟಕ ಶೈಲಿಯ ಭಾರತೀಯ ವಿಕೆಟ್‌ಕೀಪರ್‌ಗಳ ಕೊರತೆ ಇರುವ ಕಾರಣ ರಹೇಜಾ ಹಲವು ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ► ಅನ್ಮೋಲ್‌ಪ್ರೀತ್ ಸಿಂಗ್(ಪಂಜಾಬ್): 27ರ ವಯಸ್ಸಿನ ಅನ್ಮೋಲ್ ಪ್ರೀತ್ ಸಿಂಗ್ ಪಂಜಾಬ್ ಪರ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರು ಸಹ ಆಟಗಾರರಾದ ಅಭಿಷೇಕ್ ಶರ್ಮಾ, ಪ್ರಭ್‌ಸಿಮ್ರನ್ ಸಿಂಗ್, ನೇಹಾಲ್ ವಧೇರ ಅಥವಾ ರಮನ್‌ದೀಪ್ ಸಿಂಗ್ ಅವರಷ್ಟು ಪ್ರಚಾರ ಪಡೆಯಲಿಲ್ಲ. ಅನ್ಮೋಲ್‌ಪ್ರೀತ್ ಏಳು ಪಂದ್ಯಗಳಲ್ಲಿ 172ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 241 ರನ್ ಗಳಿಸಿದ್ದಾರೆ. ಪಂಜಾಬ್‌ನ ರನ್ ಸ್ಕೋರರ್‌ಗಳ ಪೈಕಿ ವಿಶ್ವದ ನಂ.1 ಬ್ಯಾಟರ್ ಅಭಿಷೇಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳ ಪರ ಸ್ವಲ್ಪ ಸಮಯ ಆಡಿದ್ದರು. 2026ರ ಐಪಿಎಲ್ ಹರಾಜಿಗೆ ಭರ್ಜರಿ ಫಾರ್ಮ್‌ನಲ್ಲಿರುವ ಹೊಸ ಭಾರತೀಯ ಬ್ಯಾಟರ್ ಆಗಿ ಪ್ರವೇಶ ಪಡೆಯಲಿದ್ದಾರೆ. ► ಅಶೋಕ್ ಶರ್ಮಾ(ರಾಜಸ್ಥಾನ ): ರಾಜಸ್ಥಾನದ 23ರ ವಯಸ್ಸಿನ ವೇಗದ ಬೌಲರ್ ಅಶೋಕ್ ಶರ್ಮಾ 2025-26ರ ಸಾಲಿನ ಎಸ್‌ಎಂಎಟಿಯ ಲೀಗ್ ಹಂತದಲ್ಲಿ ಏಳು ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಉರುಳಿಸಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅಶೋಕ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಅಶೋಕ್ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಆಯ್ಕೆಯಾಗಿದ್ದರು. ಈ ಬಾರಿ ಮತ್ತೊಮ್ಮೆ ಫ್ರಾಂಚೈಸಿಯೊಂದಿಗೆ ಸಹಿ ಹಾಕುವ ಹೆಚ್ಚಿನ ಅವಕಾಶ ಹೊಂದಿದ್ದಾರೆ.

ವಾರ್ತಾ ಭಾರತಿ 10 Dec 2025 9:50 pm

ಅಮಾಸೆಬೈಲು | ವಿಷದ ಹಾವು ಕಡಿತ: ಮಹಿಳೆ ಮೃತ್ಯು

ಅಮಾಸೆಬೈಲು, ಡಿ.10: ವಿಷದ ಹಾವು ಕಡಿತಕ್ಕೆ ಒಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ಮಧ್ಯಾಹ್ನ ವೇಳೆ ಮಡಾಮಕ್ಕಿ ಗ್ರಾಮದ ಮಾಂಡಿಮೂರಕೈ ಬಳಿ ನಡೆದಿದೆ. ಮೃತರನ್ನು ಮಾಂಡಿಮೂರಕೈ ನಿವಾಸಿ ಜಲಜಾಕ್ಷಿ ಶೆಡ್ತಿ(76) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ತಲೆಕೂದಲಿಗೆ ಹಾಕುವ ಚೌರಿ ತೆಗೆಯಲು ಚೀಲಕ್ಕೆ ಕೈ ಹಾಕಿದಾಗ ಚೀಲದೊಳಗಿದ್ದ ವಿಷದ ಹಾವು ಬಲಗೈಯ ಬೆರಳಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Dec 2025 9:49 pm

ಐಸಿಸಿ ಏಕದಿನ ರ‍್ಯಾಂಕಿಂಗ್ಸ್: ಅಗ್ರ ಎರಡು ಸ್ಥಾನದಲ್ಲಿ ರೋಹಿತ್-ವಿರಾಟ್

ಹೊಸದಿಲ್ಲಿ, ಡಿ.10: ಐಸಿಸಿ ರ‍್ಯಾಂಕಿಂಗ್‌ ನಲ್ಲಿ ಭಾರತದ ಕ್ರಿಕೆಟ್ ಸ್ಟಾರ್‌ಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ರೋಹಿತ್ ಶರ್ಮಾ ನಂ.1 ಬ್ಯಾಟರ್ ಆಗಿ ಮುಂದುವರಿದರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಭಡ್ತಿ ಪಡೆಯುವ ಮೂಲಕ ರೋಹಿತ್‌ ಗೆ ಪೈಪೋಟಿ ಒಡ್ಡುತ್ತಿದ್ದಾರೆ. 37ರ ವಯಸ್ಸಿನ ಕೊಹ್ಲಿ 2021ರ ಏಪ್ರಿಲ್‌ ನಿಂದ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ ನಲ್ಲಿ ನಂ.1 ಸ್ಥಾನ ಪಡೆದಿಲ್ಲ. ಆದರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಶತಕ ಹಾಗೂ ಒಂದು ಅರ್ಧಶತಕ ಗಳಿಸಿದ ಪರಿಣಾಮ ರ‍್ಯಾಂಕಿಂಗ್‌ ನಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದಾರೆ. ಸರಣಿಯಲ್ಲಿ ಒಟ್ಟು 146 ರನ್ ಗಳಿಸಿದ್ದ ರೋಹಿತ್‌ಗಿಂತ ಕೇವಲ 8 ರೇಟಿಂಗ್ ಪಾಯಿಂಟ್ಸ್‌ ನಿಂದ ಕೊಹ್ಲಿ ಹಿಂದಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 302 ರನ್ ಕಲೆ ಹಾಕಿದ್ದ ಕೊಹ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದರು. ಭಾರತ ತಂಡವು ಜನವರಿ 11ರಿಂದ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸ್ವದೇಶದಲ್ಲಿ ಆಡಲಿದೆ. ರೋಹಿತ್ ಹಾಗೂ ವಿರಾಟ್‌ಗೆ ರ‍್ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಸರಣಿಯು ನೆರವಾಗಬಹುದು. ಕೆ.ಎಲ್.ರಾಹುಲ್ ಎರಡು ಸ್ಥಾನ ಮೇಲಕ್ಕೇರಿ ಏಕದಿನ ಬ್ಯಾಟರ್‌ ಗಳ ಪೈಕಿ 12ನೇ ಸ್ಥಾನ ಪಡೆದಿದ್ದಾರೆ. ಏಕದಿನ ಬೌಲಿಂಗ್ ರ‍್ಯಾಂಕಿಂಗ್ಸ್‌ ನಲ್ಲಿ ಕುಲದೀಪ ಯಾದವ್ ಮೂರು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ಏಡೆನ್ ಮರ್ಕ್ರಮ್ ಹಾಗೂ ಟೆಂಬಾ ಬವುಮಾ ಸರಣಿಯನ್ನು 1-2ರಿಂದ ಸೋತಿದ್ದರೂ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಕಟಕ್‌ ನಲ್ಲಿ ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯವನ್ನು ಭಾರತ ತಂಡವು 101 ರನ್‌ಗಳಿಂದ ಗೆದ್ದ ನಂತರ ಟಿ-20 ರ‍್ಯಾಂಕಿಂಗ್‌ನಲ್ಲಿ ಭಾರತದ ಅಕ್ಷರ್ ಪಟೇಲ್ (13ನೇ ಸ್ಥಾನ), ಅರ್ಷದೀಪ್ ಸಿಂಗ್ (20ನೇ) ಹಾಗೂ ಜಸ್‌ಪ್ರಿತ್ ಬುಮ್ರಾ (25ನೇ ಸ್ಥಾನ) ಮೇಲಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಟಿ-20 ಕ್ರಿಕೆಟಿನ ಟಾಪ್-10 ಬ್ಯಾಟರ್ ಎನಿಸಿಕೊಂಡಿದ್ದಾರೆ. ಮೊದಲೆರಡು ಆ್ಯಶಸ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದಿರುವ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ನ್ಯೂಝಿಲ್ಯಾಂಡ್‌ ನ ರಚಿನ್ ರವೀಂದ್ರ 9 ಸ್ಥಾನ ಭಡ್ತಿ ಪಡೆದು 15ನೇ ರ‍್ಯಾಂಕಿಗೆ ತಲುಪಿದ್ದಾರೆ. ನ್ಯೂಝಿಲ್ಯಾಂಡ್‌ನ ನಾಯಕ ಟಾಮ್ ಲ್ಯಾಥಮ್, ವೆಸ್ಟ್‌ಇಂಡೀಸ್‌ನ ಶಾಯ್ ಹೋಪ್ ಹಾಗೂ ಜಸ್ಟಿನ್ ಗ್ರೀವ್ಸ್ ಪ್ರಗತಿ ಸಾಧಿಸಿದ್ದಾರೆ.

ವಾರ್ತಾ ಭಾರತಿ 10 Dec 2025 9:49 pm

ಬೈಂದೂರು | ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಬೈಂದೂರು, ಡಿ.10: ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಡುವರಿ ಗ್ರಾಮದ ದೊಂಬೆಯ ನರಸಿಂಹ ಪೂಜಾರಿ(62) ಎಂಬವರು ಡಿ.7ರಂದು ಪಡುವರಿ ಗ್ರಾಮದ ಚೌಕಿಮನೆ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ: ತಲೆನೋವು ಮತ್ತು ಬ್ಯಾಂಕ್ ಹಾಗೂ ಸಂಘಗಳಲ್ಲಿ ಮಾಡಿರುವ ಸಾಲದ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡ ಗಂಗೊಳ್ಳಿ ಖಾರ್ವಿಕೇರಿ ನಿವಾಸಿ ಬಸವ ಖಾರ್ವಿ ಎಂಬವರ ಪತ್ನಿ ಭಾರತಿ(42) ಎಂಬವರು ಡಿ.9ರಂದು ಮಧ್ಯಾಹ್ನ ಮನೆಯ ರೂಮಿನ ಮರದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 10 Dec 2025 9:45 pm

ದಯಾನಂದ ಶೆಟ್ಟಿಗಾರ್

ಉಡುಪಿ, ಡಿ.10: ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್(65) ಹೃದಯಾಘಾತದಿಂದ ಡಿ.9ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ವಾರ್ತಾ ಭಾರತಿ 10 Dec 2025 9:42 pm

ಬೆಳಗಾವಿ ಸದನದಲ್ಲಿ ಬೈಂದೂರು ರೈತರ ಹೋರಾಟದ ಪರ ಧ್ವನಿ

ಬೈಂದೂರು, ಡಿ.10: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಬೈಂದೂರಿನ ರೈತರ ಹೋರಾಟದ ಬಗ್ಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಬೈಂದೂರು ಗ್ರಾಮೀಣ ಭಾಗದ ರೈತರಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿ ಸೇರ್ಪಡೆಯಿಂದಾಗಿ ತೊಂದರೆ ಹಾಗೂ ಕಳೆದ 81 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆ ಕುರಿತು ವಿವರವಾಗಿ ಅವರು ಬೆಳಕು ಚೆಲ್ಲಿದರು. ಪ್ರಸ್ತುತ ಪಟ್ಟಣ ಪಂಚಾಯತ್ 54.4 ಕಿ.ಮೀ ವ್ಯಾಪ್ತಿ ಹೊಂದಿದೆ. ಗ್ರಾಮೀಣ ಪ್ರದೇಶವನ್ನು ಕೈಬಿಡುವಂತೆ ಪ್ರತಿಭಟಿಸುತ್ತಿದ್ದಾರೆ. ಪ್ರಸ್ತುತ ಈ ಭಾಗಕ್ಕೆ ಸವಲತ್ತು ನೀಡಲು ಅಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು 5 ವಾರ್ಡ್ಗಳನ್ನು ಕೈಬಿಟ್ಟು ಪರಿಷ್ಕ್ರತ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಸರಕಾರ ಈ ಪ್ರಸ್ತಾವನೆ ಕುರಿತು ಶೀಘ್ರ ರೈತರಿಗೆ ನ್ಯಾಯ ಒದಗಿಸಬೇಕೆಂದು ಅವರು ಪೌರಾಡಳಿತ ಸಚಿವರನ್ನು ಒತ್ತಾಯಿಸಿದರು. ಗ್ರಾಮ ಪಂಚಾಯತ್ ಆಗಿರುವ ಬೈಂದೂರನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿರುವುದು ಅತ್ಯಂತ ಆವೈಜ್ಞಾನಿಕ ನಿಲುವು ಎನ್ನುವುದು ಹೋರಾಟಗಾರರ ವಾದ. ಇದರಲ್ಲಿ ಪಟ್ಟಣಕ್ಕಿಂತ ಹಳ್ಳಿ ಭಾಗವೇ ಹೆಚ್ಚಾಗಿದೆ. ಜತೆಗೆ ಅರಣ್ಯ ವ್ಯಾಪ್ತಿಯನ್ನೂ ಸೇರಿಸಿರುವುದರಿಂದ ತಾಂತ್ರಿಕ ಸಮಸ್ಯೆಯೂ ಎದುರಾಗಲಿದ್ದು, ರೈತರ ಹಿತದೃಷ್ಟಿಯಿಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಾನ್ಯ ಪೌರಾಡಳಿತ ಮಂತ್ರಿಗಳನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 10 Dec 2025 9:41 pm

ಉಡುಪಿ | ಡಿ.15ರಂದು ಪ್ರಧಾನಮಂತ್ರಿ ರಾ. ಶಿಶಿಕ್ಷು ಮೇಳ

ಉಡುಪಿ, ಡಿ.10: ಉಡುಪಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳವನ್ನು ಡಿಸೆಂಬರ್ 15ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಮೇಳದಲ್ಲಿ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. - https://www.apprenticeshipindia.gov.in/candidate -login-ವೆಬ್ಸೈಟ್ ಲಿಂಕ್ ಮೂಲಕ ಹಾಗೂ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಇಚ್ಛಿಸುವ ಕಂಪನಿಗಳು ಹಾಗೂ ಕೈಗಾರಿಕೆಗಳು ಮೇಳದಲ್ಲಿ ಭಾಗವಸಹಿಲು - https://www.apprenticeshipindia.gov.in/establishment-registration - ಲಿಂಕ್ ಮೂಲಕ ಅಥವಾ ಶಿಶಿಕ್ಷು ಮೇಳ ನಡೆಯುವ ದಿನದಂದು ಸಂಸ್ಥೆಯಲ್ಲಿಯೇ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:9980305173 ಮತ್ತು 9900329668ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 10 Dec 2025 9:38 pm

ಋುತುಚಕ್ರ ರಜೆ ಪ್ರಗತಿಪರ ನಿರ್ಧಾರ: ಹೈಕೋರ್ಟ್‌ನಲ್ಲಿ ಸರಕಾರದಿಂದ ಸಮರ್ಥನೆ

ಋುತುಚಕ್ರದ ಸಮಯದಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದಡಿ ಈ ಆದೇಶಕ್ಕೆ ಅವಕಾಶವಿದ್ದು, ಪ್ರಪಂಚದ ಹಲವು ದೇಶಗಳಲ್ಲಿ ಈ ಸೌಲಭ್ಯವಿದೆ ಎಂದು ಸರಕಾರ ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಬರುವ ಜನವರಿ 20ಕ್ಕೆ ಮುಂದೂಡಿದೆ.

ವಿಜಯ ಕರ್ನಾಟಕ 10 Dec 2025 9:38 pm

ಅಪ್ರೆಂಟಿಶಿಪ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

ಉಡುಪಿ, ಡಿ.10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 12 ತಿಂಗಳ ಅಪ್ರೆಂಟಿಸ್ ತರಬೇತಿಗೆ ಅರ್ಹ ಪತ್ರಿಕೋದ್ಯಮ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿ ಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಉಡುಪಿ ಜಿಲ್ಲಾ ಕಚೇರಿಗೆ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾ ಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್ಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ 15 ಸಾವಿರ ರೂ.ಗಳ ಸ್ಟೈಪಂಡ್ ನೀಡಲಾಗುವುದು. ತರಬೇತಿಯು 2026ರ ಜನವರಿ ತಿಂಗಳಿನಿಂದ ಪ್ರಾರಂಭಗೊಂಡು ಡಿಸೆಂಬರ್ಗೆ ಕೊನೆ ಗೊಳ್ಳಲಿದೆ. ಅಭ್ಯರ್ಥಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು 35 ವಷರ್ದೊಳಗಿರಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 22 ಕೊನೆಯ ದಿನ. ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ನಾಯರ್ಕೆರೆ, ಬ್ರಹ್ಮಗಿರಿ, ಉಡುಪಿ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 9:34 pm

ಡಿ.12, 13ರಂದು ಮಣಿಪಾಲದಲ್ಲಿ ಅಖಿಲ ಭಾರತ ಮುದ್ರಣ ಸಮಾವೇಶ-2025

ಉಡುಪಿ, ಡಿ.10: ಉಡುಪಿ ಜಿಲ್ಲಾ ಮುದ್ರಾಲಯಗಳ ಮಾಲಕರ ಸಂಘದ ಆಶ್ರಯದಲ್ಲಿ ಡಿ.12 ಮತ್ತು 13ರಂದು ಮಣಿಪಾಲದ ಡಾ.ಟಿ.ಎಂ. ಎ.ಪೈ ಪಾಲಿಟೆಕ್ನಿಕ್ ನಲ್ಲಿ ಅಖಿಲ ಭಾರತ ಮುದ್ರಣ ಸಮಾವೇಶ-2025 (ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-25) ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಯು.ಮೋಹನ ಉಪಾಧ್ಯ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘ, ಡಾ.ಟಿಎಂಎಪೈ ಪಾಲಿಟೆಕ್ನಿಕ್ ಹಾಗೂ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇವುಗಳ ಸಹಯೋಗದಲ್ಲಿ ಎರಡು ದಿನಗಳ ಸಮಾವೇಶ ನಡೆಯಲಿದೆ ಎಂದರು. ಮುದ್ರಣ ಉದ್ಯಮ ರಂಗಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನ, ಸೆಮಿನಾರ್ ಹಾಗೂ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದ ಮೋಹನ ಉಪಾಧ್ಯ, ಸಮ್ಮೇಳನದಲ್ಲಿ ಮುದ್ರಣಾಲಯಗಳು ಎದುರಿಸುತ್ತಿರುವ ಕೆಲವೊಂದು ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. 18 ಜಿಲ್ಲೆಗಳ ಮುದ್ರಕರು ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಸುಮಾರು 400 ಮಂದಿ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಉಡುಪಿ ಜಿಲ್ಲೆಯಲ್ಲಿ 180 ಮುದ್ರಣಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಮುದ್ರಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಮಣಿಪಾಲದ ಸತೀಶ್ ಯು.ಪೈ ಹಾಗೂ ಮೋಹನ್ ಉಪಾಧ್ಯ ರನ್ನು ಸನ್ಮಾನಿಸಲಾಗುವುದು. ಮಣಿಪಾಲ ಮೀಡಿಯ ನೆಟ್ವರ್ಕ್ ನ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು.ಪೈ ಅವರು ಸಮಾವೇಶವನ್ನು ಡಿ.12ರ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಡಿ.13ರ ಅಪರಾಹ್ನ 12:00ಗಂಟೆಗೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಂ.ಮಹೇಶ್ ಕುಮಾರ್, ಸಹ ಸಂಚಾಲಕ ಅಶೋಕ್ ಶೆಟ್ಟಿ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಮೇಶ್ ತಿಂಗಳಾಯ, ಸಂಘದ ಉಪಾಧ್ಯಕ್ಷ ಹಾಗೂ ಪ್ರಚಾರ ಸಮಿತಿ ಸಂಚಾಲಕ ಜಿ.ಎಂ.ಶರೀಫ್, ಮುದ್ರಕರ ಸೌಹಾರ್ದ ಸಹಕಾರಿ ಬಿ.ಜಿ.ಸುಬ್ಬರಾವ್, ಉಪಾಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 9:32 pm

ಕೊಲೆ ಪ್ರಕರಣಗಳಲ್ಲಿ ಮೃತರ 'ರಕ್ತದ ಮಾದರಿ' ಸಂಗ್ರಹ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ

ಕೊಲೆ ಪ್ರಕರಣಗಳಲ್ಲಿ ಮೃತಪಟ್ಟವರ ರಕ್ತದ ಮಾದರಿ ಸಂಗ್ರಹ ಕಡ್ಡಾಯಗೊಳಿಸಲು ಹೈಕೋರ್ಟ್ ಆದೇಶಿಸಿದೆ. ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳೊಂದಿಗೆ ರಕ್ತದ ಗುಂಪು ವರದಿ ಸಲ್ಲಿಸಬೇಕು. ಲೋಪ ಎಸಗಿದರೆ ತನಿಖೆಯೇ ವಿಫಲವಾಗಲಿದೆ ಎಂದು ನ್ಯಾಯಾಲಯ ಹೇಳಿದೆ. ಗದಗ ಜಿಲ್ಲೆಯ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಮಹತ್ವದ ಸೂಚನೆ ನೀಡಲಾಗಿದೆ. ಗದಗ ಮೂಲದ ಭೀಮಪ್ಪ ಎಂಬುವರ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ವೇಳೆ, ತನಿಖಾಧಿಕಾರಿಗಳು ರಕ್ತಸಿಕ್ತ ವಸ್ತುಗಳನ್ನು ವಶಪಡಿಸಿಕೊಂಡಿದ್ದರೂ, ಅದು ಮೃತರ ರಕ್ತವೇ ಎಂದು ಸಾಬೀತುಪಡಿಸಲು ರಕ್ತದ ಗುಂಪಿನ ವರದಿ ನೀಡದ ಲೋಪವನ್ನು ನ್ಯಾಯಪೀಠ ಎತ್ತಿ ತೋರಿಸಿದೆ.

ವಿಜಯ ಕರ್ನಾಟಕ 10 Dec 2025 9:32 pm

ಅತ್ಯಂತ ಹೆಚ್ಚಿನ ಅಸಮಾನತೆಯ ದೇಶಗಳ ಸಾಲಿನಲ್ಲಿ ಭಾರತ: ವರದಿ

ಶೇ.1ರಷ್ಟು ಶ್ರೀಮಂತರ ಬಳಿ ಶೇ.40 ಸಂಪತ್ತು

ವಾರ್ತಾ ಭಾರತಿ 10 Dec 2025 9:22 pm

ಡಿಜಿಸಿಎಯಿಂದ ಇಂಡಿಗೋ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಮನ್ಸ್

ಹೊಸದಿಲ್ಲಿ, ಡಿ. 10: ಇಂಡಿಗೊ ವಿಮಾನಯಾನ ಸಂಸ್ಥೆಯ ಇತ್ತೀಚಿನ ಕಾರ್ಯಾಚರಣಾ ಕುಸಿತಕ್ಕೆ ವಿವರವಾದ ವಿವರಣೆಯನ್ನು ನೀಡಲು ತನ್ನ ಪ್ರಧಾನ ಕಚೇರಿಗೆ ಗುರುವಾರ ಅಪರಾಹ್ನ 3 ಗಂಟೆಗೆ ಬರುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಇಂಡಿಗೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್‌ರಿಗೆ ಬುಧವಾರ ಸಮನ್ಸ್ ನೀಡಿದೆ. ವಿಮಾನಯಾನಗಳನ್ನು ಮರುಸ್ಥಾಪಿಸಲು ನಡೆಸಿದ ಪ್ರಯತ್ನಗಳು, ಪೈಲಟ್ ಮತ್ತು ವಿಮಾನ ಸಿಬ್ಬಂದಿಯ ಲಭ್ಯತೆ, ಸಿಬ್ಬಂದಿ ನೇಮಕಾತಿ ಯೋಜನೆಗಳು, ವಿಮಾನ ರದ್ದತಿಗಳು ಹಾಗೂ ಮರುಪಾವತಿಗಳಿಗೆ ಸಂಬಂಧಿಸಿದ ಸಮಗ್ರ ಅಂಕಿಸಂಖ್ಯೆಗಳನ್ನು ಎಲ್ಬರ್ಸ್ ಹಾಗೂ ಪ್ರಮುಖ ವಿಭಾಗೀಯ ಮುಖ್ಯಸ್ಥರು ಡಿಜಿಸಿಎ ಮುಂದಿಡಬೇಕಾಗಿದೆ. ಇಂಡಿಗೊ ವಿಮಾನ ಯಾನಗಳಲ್ಲಿನ ಭಾರೀ ಪ್ರಮಾಣದ ಅಸ್ತವ್ಯಸ್ತತೆಯ ಹಿನ್ನೆಲೆಯಲ್ಲಿ ಡಿಜಿಸಿಎ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹಲವು ದಿನಗಳಿಂದ ಇಂಡಿಗೊ ವಿಮಾನಗಳ ಸಾವಿರಾರು ಯಾನಗಳು ರದ್ದುಗೊಂಡಿವೆ, ವಿಳಂಬವಾಗಿವೆ ಅಥವಾ ಮರುನಿಗದಿಯಾಗಿವೆ. ಈ ಹಾಹಾಕಾರದ ಮೂಲ ಕಾರಣವನ್ನು ಪತ್ತೆಹಚ್ಚಲು ಡಿಜಿಸಿಎ ನಾಲ್ವರು ಸದಸ್ಯರ ತನಿಖಾ ಸಮಿತಿಯೊಂದನ್ನು ರಚಿಸಿದೆ. ಪೈಲಟ್‌ ಗಳ ವಾರದ ವಿಶ್ರಾಂತಿ ಅವಧಿಯನ್ನು ಡಿಜಿಸಿಎ ಹೆಚ್ಚಿಸಿತ್ತು ಹಾಗೂ ಹೆಚ್ಚುವರಿ ಪೈಲಟ್‌ಗಳ ನೇಮಕಾತಿಗೆ ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗಿತ್ತು. ಆದರೆ, ಇಂಡಿಗೋ ಪೈಲಟ್‌ ಗಳ ಸಂಖ್ಯೆಯನ್ನು ಹೆಚ್ಚಿಸದೆ ಲಕ್ಷಾಂತರ ಪ್ರಯಾಣಿಕರ ಮೇಲೆ ಸವಾರಿ ಮಾಡಿದೆ.

ವಾರ್ತಾ ಭಾರತಿ 10 Dec 2025 9:15 pm

ಮಹಾರಾಷ್ಟ್ರದ ಗಡ್ಚಿರೋಳಿಯಲ್ಲಿ 11 ಮಾವೋವಾದಿಗಳು ಶರಣು

ಮುಂಬೈ, ಡಿ. 10: ಹನ್ನೊಂದು ಮಾವೋವಾದಿ ಕಮಾಂಡರ್‌ಗಳು ಮತ್ತು ಸದಸ್ಯರು ಬುಧವಾರ ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥೆ ರಶ್ಮಿ ಶುಕ್ಲಾ ಸಮ್ಮುಖದಲ್ಲಿ ರಾಜ್ಯದ ಗಡ್ಚಿರೋಳಿಯಲ್ಲಿ ಶರಣಾಗಿದ್ದಾರೆ. ಅವರ ಬಂಧನಕ್ಕೆ ಸಹಾಯವಾಗುವ ಮಾಹಿತಿಗಳನ್ನು ನೀಡಿದವರಿಗೆ ಒಟ್ಟು 82 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಶರಣಾಗತರಾದ ನಕ್ಸಲೀಯರ ಪೈಕಿ ನಾಲ್ವರು ಸಮವಸ್ತ್ರ ಧರಿಸಿ ಶಸ್ತ್ರಧಾರಿಗಳಾಗಿದ್ದರು. ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯರಾದ ರಮೇಶ್ ಯಾನೆ ಬಾಜು ಲೇಕಮಿ ಮತ್ತು ಭೀಮ ಯಾನೆ ಕಿರಣ್ ಹಿದ್ಮ ಕೊವಾಸಿ ಶರಣಾದವರಲ್ಲಿ ಸೇರಿದ್ದಾರೆ. ಅವರ ಶರಣಾಗತಿಯು ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ತೆಲಂಗಾಣವನ್ನು ಆವರಿಸಿರುವ ದಂಡಕಾರಣ್ಯದ ಮಾವೋವಾದಿಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಅಕ್ಟೋಬರ್ 15ರಂದು ಮಾವೋವಾದಿ ಪಾಲಿಟ್‌ಬ್ಯೂರೋ ಸದಸ್ಯ ಭೂಪತಿ ಯಾನೆ ಮಲ್ಲೊಜುಲ ವೇಣುಗೋಪಾಲ್ ರಾವ್ ತನ್ನ 60 ಸಂಗಡಿಗರೊಂದಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ಶರಣಾದ ಬಳಿಕ ಗಡ್ಚಿರೋಳಿ ಪೊಲೀಸರಿಗೆ ಸಿಕ್ಕಿದ ದೊಡ್ಡ ಯಶಸ್ಸು ಇದಾಗಿದೆ. ಈ ಶರಣಾಗತಿಯು ಗಡ್ಚಿರೋಳಿಯಲ್ಲಿ ಮಾವೋವಾದದ ಕೊನೆಯ ಆರಂಭವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮುಖ್ಯಸ್ಥೆ ಶುಕ್ಲಾ ಹೇಳಿದರು. ‘‘ಮಾವೋವಾದವನ್ನು ಭಾರತದಿಂದ ನಿರ್ಮೂಲಗೊಳಿಸಲು ಕೇಂದ್ರ ಸರಕಾರ ವಿಧಿಸಿರುವ 2026 ಮಾರ್ಚ್ 31ರ ಗಡುವಿಗೆ ನಾವು ಬದ್ಧರಾಗಿದ್ದೇವೆ’’ ಎಂದು ಅವರು ಹೇಳಿದರು. ಈ ವರ್ಷ ಗಡ್ಚಿರೋಳಿಯಲ್ಲಿ 100ಕ್ಕೂ ಅಧಿಕ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 10 Dec 2025 9:12 pm

ಇಂಡಿಗೋ ಬಿಕ್ಕಟ್ಟು: 11 ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಡಿಜಿಸಿಎ ಆದೇಶ

ಹೊಸದಿಲ್ಲಿ, ಡಿ. 10: ಇಂಡಿಗೊ ವಿಮಾನಗಳ ಯಾನಗಳಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಅಸ್ತವ್ಯಸ್ತತೆಯ ಹಿನ್ನೆಲೆಯಲ್ಲಿ, ದೇಶಾದ್ಯಂತವಿರುವ 11 ವಿಮಾನ ನಿಲ್ದಾಣಗಳಲ್ಲಿ ತಕ್ಷಣ ತಪಾಸಣೆ ನಡೆಸುವಂತೆ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನ್ನ ಅಧಿಕಾರಿಗಳಿಗೆ ಬುಧವಾರ ಆದೇಶಿಸಿದೆ. ವಿಮಾನ ನಿಲ್ದಾಣಗಳಿಗೆ ಎರಡು- ಮೂರು ದಿನಗಳಲ್ಲಿ ಭೇಟಿ ನೀಡಬೇಕು ಹಾಗೂ ತಪಾಸಣೆ ಮುಗಿಸಿದ ಬಳಿಕ 24 ಗಂಟೆಗಳಲ್ಲಿ ತನಗೆ ವರದಿ ಸಲ್ಲಿಸಬೇಕು ಎಂದು ಡಿಜಿಸಿಎ ಅಧಿಕಾರಿಗಳಿಗೆ ಸೂಚಿಸಿದೆ. ತಪಾಸಣೆ ನಡೆಯುವ ವಿಮಾನ ನಿಲ್ದಾಣಗಳೆಂದರೆ- ನಾಗಪುರ, ಜೈಪುರ, ಭೋಪಾಲ್, ಸೂರತ್, ತಿರುಪತಿ, ವಿಜಯವಾಡ, ಶಿರ್ಡಿ, ಕೊಚ್ಚಿ, ಲಕ್ನೋ, ಅಮೃತಸರ ಮತ್ತು ಡೆಹ್ರಾಡೂನ್. ಈ ವಿಮಾನ ನಿಲ್ದಾಣಗಳ ಸುರಕ್ಷತಾ ಸಿದ್ಧತೆ, ಕಾರ್ಯನಿರ್ವಹಣಾ ತಯಾರಿ, ಪ್ರಯಾಣಿಕರ ಸೌಕರ್ಯಗಳ ಗುಣಮಟ್ಟ ಮತ್ತು ಹಾಲಿ ವಿಮಾನ ಸಂಚಾರ ಅಸ್ಯವ್ಯಸ್ತತೆಯನ್ನು ಇಂಡಿಗೋ ನಿಭಾಯಿಸಿದ ರೀತಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ವಿಮಾನಯಾನಗಳ ವಿಳಂಬ ಮತ್ತು ರದ್ದತಿಗಳು, ವಿಮಾನ ನಿಲ್ದಾಣಗಳಲ್ಲಿನ ಜನಸಂದಣಿ, ವಿಮಾನಗಳಿಗೆ ಪ್ರವೇಶ ನೀಡುವ ಕೌಂಟರ್‌ ಗಳಲ್ಲಿ ಜನರ ಸಾಲುಗಳ ನಿರ್ವಹಣೆ, ಭದ್ರತಾ ಸ್ಥಳಗಳು ಮತ್ತು ವಿಮನ ಹತ್ತುವ ದ್ವಾರಗಳು ಹಾಗೂ ಇಂಡಿಗೋ ಮತ್ತು ವಿಮಾನ ನಿಲ್ದಾಣವು ನಿಯೋಜಿಸಿದ ಸಿಬ್ಬಂದಿಯು ಪ್ರಯಾಣಿಕರನ್ನು ನಿಭಾಯಿಸಲು ಸಾಕಾಗುವಷ್ಟಿತ್ತೇ ಎಂಬ ವಿಷಯಗಳನ್ನು ಅಧಿಕಾರಿಗಳು ನಿಕಟವಾಗಿ ಪರಿಶೀಲಿಸಲಿದ್ದಾರೆ.

ವಾರ್ತಾ ಭಾರತಿ 10 Dec 2025 9:11 pm

ನೈಟ್‌ಕ್ಲಬ್ ಮಾಲೀಕರಿಗೆ ತಕ್ಷಣ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ನಕಾರ

ಹೊಸದಿಲ್ಲಿ, ಡಿ. 10: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಸಹೋದರರಿಗೆ ತಕ್ಷಣ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ದಿಲ್ಲಿಯ ನ್ಯಾಯಾಲಯವೊಂದು ಬುಧವಾರ ನಿರಾಕರಿಸಿದೆ. ಈ ನೈಟ್‌ಕ್ಲಬ್‌ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ. ಪ್ರಯಾಣದ ವೇಳೆ ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಬೆಂಕಿ ಅವಘಡ ಪ್ರಕರಣದ ಆರೋಪಿಗಳಾದ ಲೂತ್ರಾ ಸಹೋದರರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಗೆ ನೀಡುವಂತೆ ದಿಲ್ಲಿಯ ರೋಹಿಣಿ ನ್ಯಾಯಾಲಯ ಗೋವಾ ಸರಕಾರಕ್ಕೆ ನೋಟಿಸ್ ನೀಡಿತು. ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ತಾವು ಭಾರತಕ್ಕೆ ಮರಳಿ ನಿರೀಕ್ಷಣಾ ಜಾಮೀನು ಪಡೆಯಲು ಗೋವಾದ ನ್ಯಾಯಾಲಯಗಳಿಗೆ ಹೋಗಲು ಬಯಸಿದ್ದೇವೆ ಎಂಬುದಾಗಿ ಲೂತ್ರಾ ಸಹೋದರರು ತಮ್ಮ ವಕೀಲರಾದ ಸಿದ್ಧಾರ್ಥ ಲೂತ್ರಾ ಮತ್ತು ತನ್ವೀರ್ ಅಹ್ಮದ್ ಮಿರ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ತಾವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಭಾರತಕ್ಕೆ ಬಂದು ಗೋವಾದ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಾಗುವಂತಾಗಲು ತಮಗೆ ಬಂಧನದಿಂದ ರಕ್ಷಣೆ ಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಘಟನೆಯ ಹೊಣೆಯನ್ನು ತಮ್ಮ ಮೇಲೆ ಹೊರಿಸುವಂತಿಲ್ಲ ಎಂದು ವಾದಿಸಿರುವ ಅವರು, ಕ್ಲಬ್‌ನ ಸ್ಥಳೀಯ ಮ್ಯಾನೇಜರ್‌ ಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ತಾವು ಈ ಕ್ಲಬ್‌ನ ಮಾಲೀಕರಲ್ಲ, ಪರವಾನಿಗೆದಾರರು ಮಾತ್ರ ಎಂದಿರುವ ಅವರು, ಸರಕಾರವು ತಮ್ಮನ್ನು ‘‘ಬೇಟಿಯಾಡುತ್ತಿದೆ’’ ಎಂದು ಹೇಳಿಕೊಂಡಿದ್ದಾರೆ. ಸೌರಭ್ ಮತ್ತು ಗೌರವ್ ಲೂತ್ರಾ ಈಗ ಥಾಯ್ಲೆಂಡ್‌ ನ ಫುಕೆಟ್ ನಗರದಲ್ಲಿದ್ದಾರೆ. ಶನಿವಾರ ರಾತ್ರಿ ಬೆಂಕಿ ದುರಂತ ನಡೆದ ಬೆನ್ನಿಗೇ ರವಿವಾರ ಮುಂಜಾನೆ ಅವರು ವಿದೇಶಕ್ಕೆ ಪಲಾಯನಗೈದಿದ್ದಾರೆ. ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸುವುದಕ್ಕಾಗಿ ಭಾರತೀಯ ಅಧಿಕಾರಿಗಳು ಥಾಯ್ಲೆಂಡ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. *ಬೆಂಕಿ ಸುರಕ್ಷತಾ ಕ್ರಮ ಅನುಸರಿಸದಿದ್ದರೆ ಪರವಾನಿಗೆ ರದ್ದು: ಗೋವಾ ಮುಖ್ಯಮಂತ್ರಿ ಬೆಂಕಿ ಅಪಘಾತ ತಡೆ ನಿಯಮಗಳನ್ನು ಅನುಸರಿಸದ ಗೋವಾದ ಪ್ರವಾಸಿ ಕಟ್ಟಡಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ. ಸರಕಾರವು ನೇಮಿಸಿರುವ ಬೆಂಕಿ ಸುರಕ್ಷತೆ ಪರಿಶೋಧನಾ ಸಮಿತಿಯು ರಾಜ್ಯದ ಪ್ರವಾಸಿ ಕಟ್ಟಡಗಳಿಗೆ ಭೇಟಿ ನೀಡಲು ಆರಂಭಿಸಿದ್ದು, ತಪಾಸಣೆಗಳನ್ನು ಮುಗಿಸಿದ ಬಳಿಕ ವರದಿ ಸಲ್ಲಿಸಲಿದೆ ಎಂದು ಸಾವಂತ್ ಹೇಳಿದರು. ‘‘ಯಾವುದೇ ಕಟ್ಟಡವು ಬೆಂಕಿ ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದು ಸಮಿತಿಯ ಗಮನಕ್ಕೆ ಬಂದರೆ, ಅವುಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಮತ್ತು ಅವುಗಳ ಕಟ್ಟಡಗಳಿಗೆ ಬೀಗ ಹಾಕಲಾಗುವುದು ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ವಾರ್ತಾ ಭಾರತಿ 10 Dec 2025 9:09 pm

‘ಧುರಂಧರ್’ ಕುರಿತ ಅನುಮಪಾ ಚೋಪ್ರಾ ವಿಮರ್ಶೆ ವೀಡಿಯೋ ಕಣ್ಮರೆ

ಹಾಲಿವುಡ್ ರಿಪೋರ್ಟರ್ ಇಂಡಿಯಾದ ಸಂಪಾದಕಿ ಅನುಪಮಾ ಚೋಪ್ರಾ ಅವರ ‘ಧುರಂಧರ್’ ವಿಮರ್ಶೆಯ ವೀಡಿಯೋವನ್ನು ತೆಗೆದು ಹಾಕಲಾಗಿದೆ, ಆದರೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ. ರಣ್ವೀರ್ ಸಿಂಗ್ ನಟನೆಯ ಕಳೆದ ವಾರ ಬಿಡುಗಡೆಯಾದ ‘ಧುರಂಧರ್’ ಸಿನಿಮಾದ ಕುರಿತು ‘ದ ಹಾಲಿವುಡ್ ರಿಪೋರ್ಟರ್ ಇಂಡಿಯಾ’ದ ಸಂಪಾದಕಿ ಅನುಪಮಾ ಚೋಪ್ರ ಬರೆದ ವಿಮರ್ಶೆಯನ್ನು ತೆಗೆದು ಹಾಕಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ವಿಮರ್ಶೆಯ ವೀಡಿಯೊ ಹುಡುಕಿದರೆ ಅದು ಮೌನವಾಗಿ ಗೌಪ್ಯ ಮೋಡ್ ಗೆ ಹೋಗಿದೆ. ಯಾವುದೇ ವಿವರಣೆಯಿಲ್ಲ, ಟಿಪ್ಪಣಿಯಿಲ್ಲ. ಆದರೆ ವೀಡಿಯೋ ಇದ್ದ ಸಾಕ್ಷ್ಯ ಮಾತ್ರ ಇದೆ. ನಕಾರಾತ್ಮಕ ಎಂದ ಅಭಿಮಾನಿಗಳು “ಅನುಪಮಾ ಚೋಪ್ರಾ ಅವರು ‘ಎ ಟಫ್ ಸಿಟ್’ ಎನ್ನುವ ಶೀರ್ಷಿಕೆಯಲ್ಲಿ ಅವರು ವಿಮರ್ಶೆಯನ್ನು ಮೃದುವಾಗಿ ಟೀಕಿಸಿದ್ದರು ಸಿನಿಮಾದ ಶೈಲಿ ಮತ್ತು ಸತತ ಸಾಹಸ ದೃಶ್ಯಗಳನ್ನು ಅವರು ಟೀಕಿಸಿದ್ದರು. ‘ಧುರಂದರ್’ನಲ್ಲಿ ರಣ್ವೀರ್ ಸಿಂಗ್ ಅವರ ಗೂಢಾಚಾರನ ಪಾತ್ರ ಬಹಳ ಮಾರಕ ವ್ಯಕ್ತಿಯ ಶೈಲಿಯಲ್ಲಿದೆ. ಅದಕ್ಕೆ ರಾಷ್ಟ್ರವಾದದ ಬಣ್ಣ ಬಳಿಯಲಾಗಿದೆ. ಪಾಕಿಸ್ತಾನಿ ವಿರೋಧಿ ಅಬ್ಬರದ ಡೋಸ್ ಕೊಡಲಾಗಿದೆ” ಎಂದು ವಿಮರ್ಶಿಸಿದ್ದರು. ಆದರೂ ಅನುಪಮಾ ಅವರು ಸಿನಿಮಾವನ್ನು ಒಟ್ಟಾಗಿ ತೆಗಳಿರಲಿಲ್ಲ. ಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣದ ಶೈಲಿ ಮತ್ತು ಒಟ್ಟು ಸಿನಿಮಾವನ್ನು ಅವರು ಪ್ರಶಂಸಿಸಿದ್ದಾರೆ. ಅನುಪಮಾ ತಮ್ಮ ವಿಮರ್ಶೆಯ ವೀಡಿಯೋವನ್ನು ತೆಗೆದಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿರುವಂತೆ ಅಭಿಮಾನಿಗಳು ಮತ್ತು ವರ್ಷದ ರಾಷ್ಟ್ರವಾದಿ ಸಿನಿಮಾ ಎಂದು ಹೆಗ್ಗಳಿಕೆ ಪಡೆದ ಈ ಸಿನಿಮಾದ ಪರ ಅಭಿಮಾನ ವ್ಯಕ್ತಪಡಿಸುವವರು ಈ ‘ನಕಾರಾತ್ಮಕ’ ಅಭಿಪ್ರಾಯವನ್ನು ಟೀಕಿಸಿದ್ದಾರೆ. ಹಾಗೆ ನೋಡಿದರೆ ರಾಹುಲ್ ದೇಸಾಯಿ ಅವರ ವಿಮರ್ಶೆಯೂ ಚಿತ್ರವನ್ನು ಪ್ರಶಂಸಿಸಿರಲಿಲ್ಲ. ಪಠ್ಯರೂಪದಲ್ಲಿ ಸಿನಿಮಾವನ್ನು ಟೀಕಿಸುವುದು ಸುರಕ್ಷಿತ ಎಂದು ಅನಿಸುತ್ತದೆ. ಆ ಬಗ್ಗೆ ಯಾವುದೇ ಟೀಕೆ ವ್ಯಕ್ತವಾಗಲಿಲ್ಲ. ಇತ್ತೀಚೆಗೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಒಂದು ‘ಆರ್ಪಿಎಸ್ಜಿ ಲೈಫ್ಸ್ಟೈಲ್’ ಮಾಧ್ಯಮವನ್ನು ಆರಂಭಿಸಿದೆ. ಇದು ಆರ್ಪಿ- ಸಂಜೀವ್ ಗೋಯೆಂಕಾ ಸಮೂಹದ ಭಾಗವಾಗಿದೆ. ಈ ಸಮೂಹವೇ ಸಾರೆಗಮದ ಮಾಲೀಕರು. ಸಾರೆಗಾಮ ಕಂಪನಿ ‘ಧುರಂಧರ್’ನ ಸಂಗೀತ ಪ್ರಾಯೋಜಕರು. ಹೀಗಾಗಿ ವಿಮರ್ಶೆ ತೆಗೆದಿರುವ ಬಗ್ಗೆ ಊಹಿಸಬಹುದು. ಆದರೆ ಇದೊಂದು ಔದ್ಯಮಿಕ ನಿರ್ಧಾರವೇ ಅಥವಾ ಸಂಪಾದಕೀಯ ನಿರ್ಧಾರವೇ ಎನ್ನುವುದು ಖಚಿತವಾಗಿಲ್ಲ. ವೀಡಿಯೋ ಮಾತ್ರ ಕಣ್ಮರೆಯಾಗಿದೆ. ಕೃಪೆ: ನ್ಯೂಸ್ಲಾಂಡ್ರಿ

ವಾರ್ತಾ ಭಾರತಿ 10 Dec 2025 9:08 pm

ಸಂಸ್ಕರಿಸಿದ ಎಣ್ಣೆಯಿಂದಷ್ಟೇ ಬೊಜ್ಜು ಬರುವುದಿಲ್ಲ!

ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಎರಡು ಮಾತುಗಳನ್ನು ಹೇಳಿದ್ದಾರೆ. ಒಂದು ಭಾರತದಲ್ಲಿ ಅನರ್ಹ ಆಹಾರ ತಜ್ಞರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಎರಡನೆಯದು 1970- 80ರ ದಶಕದಲ್ಲಿ ಸಂಸ್ಕರಿತ ಎಣ್ಣೆಗಳನ್ನು ಅನಿಯಂತ್ರಿತವಾಗಿ ಬಳಸಲು ಅವಕಾಶ ಮಾಡಿಕೊಟ್ಟಿರುವುದು ಭಾರತದಲ್ಲಿ ಬೊಜ್ಜಿನ ಸಮಸ್ಯೆ ಬೆಳೆಯಲು ಕಾರಣವಾಗಿದೆ. ಈ ಬಗ್ಗೆ ಆಹಾರ ತಜ್ಞರು ಹೇಳುವುದೇನು? ಭಾರತದ ಮೂಲೆ ಮೂಲೆಯಲ್ಲಿ ಆಹಾರ ತಜ್ಞರಿದ್ದಾರೆ. ಆದರೆ ಅವರು ಅರ್ಹ ತಜ್ಞರೆ ಎನ್ನುವುದನ್ನು ಪರೀಕ್ಷಿಸುವ ವ್ಯವಸ್ಥೆಯಿಲ್ಲ. ಹೀಗಾಗಿ ತಪ್ಪು ಸುದ್ದಿಗಳು ಹರಡುತ್ತಿವೆ ಮತ್ತು ಅದರಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. “ಅನರ್ಹ ಸ್ವಯಂ ಘೋಷಿತ ಆಹಾರ ತಜ್ಞರು ತಪ್ಪು ಮಾಹಿತಿಯ ಮೂಲಕ ಭಾರತದ ಬೊಜ್ಜಿನ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ. ಇಂತಹ ತಪ್ಪು ದಾರಿಗೆಳೆಯುವ ಮಾಹಿತಿಯಿಂದ ಜನರನ್ನು ರಕ್ಷಿಸುವ ಅಗತ್ಯವಿದೆ. ಅದಕ್ಕಾಗಿ ಒಂದು ಮೆಕಾನಿಸಂ ವಿನ್ಯಾಸಗೊಳಿಸುವಂತೆ ಕಾನೂನು ರಚಿಸುವವರನ್ನು ಅವರು ಒತ್ತಾಯಿಸಿದ್ದಾರೆ. ಜಿಎಲ್ಪಿ-ಆಧಾರಿತ (ಗ್ಲುಕಗೋನ್ ರೀತಿಯ ಪೆಪ್ಟೈಡ್ 1 ಅಗೊನಿಸ್ಟ್ಗಳು) ಔಷಧಿಗಳನ್ನು ತೆಗೆದುಕೊಳ್ಳುವುದು ವ್ಯಾಪಕವಾಗಿ ಫ್ಯಾಷನೇಬಲ್ ಆಗಿದೆ. ಇದರಿಂದಾಗಿ ದೀರ್ಘಕಾಲೀನ ಸಮಸ್ಯೆಗಳು ಆಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಈ ಹಿಂದೆ 1970 ಮತ್ತು 80ರ ದಶಕದಲ್ಲಿ ಸಂಸ್ಕರಿತ ಎಣ್ಣೆಗಳನ್ನು ಅನಿಯಂತ್ರಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಇದು ಸಾರ್ವಜನಿಕ ಆರೋಗ್ಯದ ತಪ್ಪು ನಿರ್ದೇಶನವಾಗಿತ್ತು ಎಂದೂ ಹೇಳಿದ್ದಾರೆ. ಆಹಾರ ತಜ್ಞರು ಹೇಳುವುದೇನು? ಗುಜರಾತ್ ಮೂಲದ ಆಹಾರ ತಜ್ಞೆ ದಿವ್ಯಾ ಅವರ ಪ್ರಕಾರ, “ಮೊದಲನೆಯದು ನೂರಕ್ಕೆ ನೂರರಷ್ಟು ನಿಜ. ಈಗ ನಕಲಿ ಆಹಾರ ತಜ್ಞರು ಬೆಳೆದಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿ ಜನರನ್ನು ನಂಬಿಸಲಾಗುತ್ತಿದೆ. ಆದರೆ ಸಂಸ್ಕರಿತ ಎಣ್ಣೆಯಿಂದಾಗಿಯೇ ಬೊಜ್ಜುತನ ಸೃಷ್ಟಿಯಾಗಿದೆ ಎನ್ನುವುದನ್ನು ಶೇ 100ರಷ್ಟು ನಿಜವೆಂದು ನಂಬಲಾಗದು. ನನ್ನ ಪ್ರ್ಯಾಕ್ಟಿಸ್ನಲ್ಲಿ ನಾನು ಕಂಡುಕೊಂಡಿರುವ ಪ್ರಕಾರ ಜೀವನಶೈಲಿ ಸಮಸ್ಯೆಯಿಂದಲೇ ಬೊಜ್ಜು ಬೆಳೆಯುತ್ತಿದೆ. ಸಮತೋಲಿತ ಆಹಾರ ಮತ್ತು ವ್ಯಾಯಾಮದ ಕೊರತೆಯೇ ಮುಖ್ಯ ಕಾರಣವೆಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಸಂಸ್ಕರಿತ ಎಣ್ಣೆ ಸಂಪೂರ್ಣ ಕಾರಣ ಎನ್ನಲು ಸಾಧ್ಯವಿಲ್ಲ.” ವಿಷಯವನ್ನು ಸಾಮಾನ್ಯೀಕರಿಸುವುದು ಸರಿಯಲ್ಲ! ಉದ್ಯಮಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಜ್ಞರಾಗಿರುವ ಬೆಂಗಳೂರಿನ ಸವಿತಾ ಭರಮಗೌಡ್ರ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಅವರ ಪ್ರಕಾರ, “ಸಲಹೆ ನೀಡುವವವರು ಅನರ್ಹರು ಅಥವಾ ಅರ್ಹರು ಎನ್ನುವುದನ್ನು ಹೊರತುಪಡಿಸಿ ನೋಡಿದರೆ ಒಬ್ಬರ ಸಲಹೆಯಿಂದ ಬೊಜ್ಜು ಬರಲು ಸಾಧ್ಯವಿಲ್ಲ. ಪ್ರತಿ ವ್ಯಕ್ತಿಯ ಜೀವನಶೈಲಿ, ಆಹಾರ ಕ್ರಮ, ಚಟಗಳು, ಆರೋಗ್ಯದ ಸಮಸ್ಯೆಗಳು ಇತ್ಯಾದಿ ಭಿನ್ನವಾಗಿರುತ್ತದೆ. ಸಾಮಾನ್ಯೀಕರಿಸಿ ಹೇಳುವ ಮಾಹಿತಿ ಪೂರ್ತಿ ಸರಿಯಾಗಿ ಇರದೆ ಇರಬಹುದು ಮತ್ತು ಸಲಹೆಗಳು ಎಲ್ಲಾ ವರ್ಗದವರಿಗೂ ಸೂಕ್ತವಾಗಿರಲ್ಲದೆ ಇರಬಹುದು.” ಅವರ ಪ್ರಕಾರ ಸಂಸ್ಕರಿತ ಎಣ್ಣೆಗಳು ಆಹಾರದಲ್ಲಿ ಹೆಚ್ಚಿಗೆ ಬಳಕೆಯಾದಾಗ ಮಾತ್ರ ಬೊಜ್ಜಿಗೆ ಕಾರಣವಾಗಬಹುದು. “ಸಂಸ್ಕರಿತ ಎಣ್ಣೆಗಳು ಆಹಾರ ಕಾನೂನಿನ ಅಡಿಯಲ್ಲಿ ನಿಯಂತ್ರಿಸಲ್ಪಟ್ಟರೂ ಕೂಡ ಅದು ಸರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನಬಹುದು. ಯಾವುದೇ ವಿಧದ ಕೊಬ್ಬು ಉತ್ತಮ ಕೊಬ್ಬುಗಳನ್ನು ಸಹ ಸೇರಿಸಿ, ಯಾವುದೇ ವಿಧಾನ ಅಥವಾ ಆಹಾರದಲ್ಲಿ ಹೆಚ್ಚಾಗಿ ಬಳಕೆಯಾದಾಗ ಅದು ಬೊಜ್ಜಿಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮಗಳಿಂದ ಸಿಗುವ ಮಾಹಿತಿ ಅಥವಾ ತಪ್ಪು ಮಾಹಿತಿ ಇಂದ ಬೊಜ್ಜು ಹೆಚ್ಚಾಗುವುದಿಲ್ಲ ಅದರಿಂದ ಬೇರೆ ಸಮಸ್ಯೆಗಳು ಉಂಟಾಗಬಹುದೇನೋ, ಆದರೆ ನಮ್ಮ ಬೊಜ್ಜಿಗೆ ನಾವೇ ಕಾರಣ” ಎಂದು ಅವರು ಅಭಿಪ್ರಾಯಪಟ್ಟರು. ಸವಿತಾ ಅವರ ಪ್ರಕಾರ, “ಜನರು ತಮ್ಮ ಹಿನ್ನೆಲೆ, ಶಿಕ್ಷಣ ಮತ್ತು ಸ್ಥಾನಮಾನಗಳ ಹೊರತಾಗಿಯೂ ಕೂಡ ಆಹಾರದ ಬಗ್ಗೆ ಬಹಳ ಕಡಿಮೆ ತಿಳಿವಳಿಕೆ ಹೊಂದಿರುತ್ತಾರೆ. ಮುಖ್ಯವಾಗಿ ಆಹಾರ ಗುಣಮಟ್ಟ ಮತ್ತು ಸಂಬಂಧಪಟ್ಟ ಕಾನೂನಿನ ಬಗ್ಗೆ ಸಮಾಜದಲ್ಲಿ ಬಹಳಷ್ಟು ಗೊಂದಲಗಳಿವೆ. ಬಹಳ ತಪ್ಪು ಮಾಹಿತಿ ಸಹ ಹರಡುತ್ತಿದೆ. ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಸ್ಥಳೀಯ ಆಹಾರ, ಆಯಾ ಜನರ ಜೀವನಶೈಲಿ, ಹಬ್ಬಗಳು, ಋತುಗಳು ಮತ್ತು ವಾತಾವರಣವನ್ನು ಅನುಸರಿಸಿ ಬೆಳೆದಿವೆ. ಅದರಲ್ಲಿ ಅಪಾರ ಜಾಣ್ಮೆ ಮತ್ತು ವಿಜ್ಞಾನ ಕೂಡ ಅಡಗಿದೆ.”

ವಾರ್ತಾ ಭಾರತಿ 10 Dec 2025 9:04 pm

Vote Theft : ’ದೇಶದಲ್ಲಿ ಆಮೇಲೆ, ಮೊದಲು ಚುನಾವಣಾ ಆಯೋಗ ಕಾಂಗ್ರೆಸ್ ನಲ್ಲೇ SIR ನಡೆಸಲಿ’

Vote Chori : ಕಾಂಗ್ರೆಸ್ಸಿನವರದ್ದು ಗೆದ್ದಾಗ ಒಂದು, ಸೋತಾಗ ಇನ್ನೊಂದು. ಗೆದ್ದಾಗ ಇವರಿಗೆ ಇವಿಎಂ ಮೇಲೆ ಸಂಶಯ ಬರುವುದಿಲ್ಲ, ಸೋತಾಗ ಕೇಂದ್ರ ಚುನಾವಣಾ ಆಯೋಗವನ್ನು ದೂರುವ ಪರಿಪಾಠ ಇವರದ್ದು ಸರಿಯಲ್ಲ. ಸಂಸತ್ ಅಧಿವೇಶನ ನಡೆಯುತ್ತಿದ್ದಾಗ, ವಿದೇಶಕ್ಕೆ ಹೋಗುವ ರಾಹುಲ್ ಗಾಂಧಿ, ಆಮೇಲೆ ಮೋದಿ ಸರ್ಕಾರ ಮಾತನಾಡಲು ಅವಕಾಶ ನೀಡುವುದಿಲ್ಲ ಎನ್ನುವ ನಾಟಕವನ್ನು ಮಾಡುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ, ವ್ಯಂಗ್ಯವಾಡಿದ್ದಾರೆ.

ವಿಜಯ ಕರ್ನಾಟಕ 10 Dec 2025 9:04 pm

ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಕೂಡಲೇ ಶ್ವೇತಪತ್ರ ಹೊರಡಿಸಬೇಕು: ಪ್ರತಿಪಕ್ಷ ನಾಯಕ ಆರ್.ಅಶೋಕ್

ಬೆಳಗಾವಿ (ಸುವರ್ಣ ವಿಧಾನಸೌಧ): ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ, ಕಾಂಗ್ರೆಸ್ ಸರಕಾರ ರೈತರಿಗೆ ಪರಿಹಾರ ನೀಡಿಲ್ಲ, ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯ ಮೇಲೆ ಸುದೀರ್ಘವಾಗಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರಕಾರ ಕೂಡಲೇ ಪರಿಹಾರ ನೀಡಬೇಕಿತ್ತು. ಆದರೆ, ಸರಕಾರ ವಿಳಂಬ ಮಾಡಿ ಪರಿಹಾರ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ʼಮಂಡಿ ಉದ್ದ ಕಬ್ಬು ಎದೆಮಟ್ಟ ಸಾಲ’ ಎಂಬ ಮಾತಿನಂತೆ ಕಬ್ಬು ಬೆಳೆಗಾರರ ಸ್ಥಿತಿ ಇದೆ. ರಾಜ್ಯದಲ್ಲಿ 41ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿದ್ದು, 9.81ಲಕ್ಷ ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತಿದೆ. 81 ಸಕ್ಕರೆ ಕಾರ್ಖಾನೆಗಳಿದ್ದು ಎಲ್ಲವೂ ನಷ್ಟದಲ್ಲಿವೆ ಎನ್ನುತ್ತಿದ್ದಾರೆ. ಹೊಸದಾಗಿ 31 ಕಾರ್ಖಾನೆ ಆರಂಭಕ್ಕೆ ಅರ್ಜಿ ಬಂದಿದೆ. ತೂಕ ಯಂತ್ರದಲ್ಲಿ ಮೋಸವಾಗುತ್ತಿದ್ದು, ಶೇ.50ರಷ್ಟು ಮಾತ್ರ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರ ಕಟಾವಿನಲ್ಲಿ ಶೇ.6ರಷ್ಟು ಕಡಿತವಾಗುತ್ತಿದೆ. ಹಳೆ ಮಾದರಿ ಆರ್‍ಎಸ್‍ಪಿ, ಎಸ್‍ಎಪಿ ಕಡೆ ಸರಕಾರ ಗಮನ ಕೊಡಬೇಕಿದೆ ಎಂದರು. ಮುಧೋಳದಲ್ಲಿ 240 ಟ್ರಾಕ್ಟರ್‍ಗಳಿಗೆ ಬೆಂಕಿ ಬಿದ್ದು 1,033ಟನ್ ಕಬ್ಬು ಭಸ್ಮ ಆಗಿತ್ತು. ಪೊಲೀಸ್ ಇಲಾಖೆಯ ಭಯವಿದ್ದಿದ್ದರೆ ಇಷ್ಟೆಲ್ಲ ಆಗಲು ಸಾಧ್ಯವಿತ್ತೇ? 32 ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಭಾಗದ ರೈತ ಲಕ್ಕಪ್ಪ ಗುಣಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಯಾವುದೇ ಸಚಿವರು ಭೇಟಿ ಮಾಡಲಿಲ್ಲ ಎಂದು ಅವರು ತಿಳಿಸಿದರು. ತುಂಗಭದ್ರಾ ಜಲಾಶಯದ ಗೇಟ್‍ನಿಂದ ನೀರು ಹರಿದು ಆಂಧ್ರಪ್ರದೇಶಕ್ಕೆ ಹೋಗಿದೆ. 33 ಗೇಟ್ ಅಳವಡಿಸದೇ ಇದ್ದಿದ್ದರಿಂದ ಈ ಸಮಸ್ಯೆಯಾಗಿದೆ. ನಾನು ಭೇಟಿ ನೀಡಿದ್ದಾಗ 12ಕೋಟಿ ರೂ.ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದರು. ಪಾದಯಾತ್ರೆ, ಬಂದ್ ಆಗುತ್ತಲೇ ಇದ್ದರೂ ಸರ್ಕಾರ ಕ್ರಮ ವಹಿಸಲಿಲ್ಲ. ಇದರಿಂದಾಗಿ ಎರಡು ಬೆಳೆ ನಷ್ಟವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 25ಸಾವಿರ ರೂ.ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಶೂನ್ಯ ಫಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ 2024-25ರಲ್ಲಿ 53 ಪದವಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿದೆ. 21ಸಾವಿರ ಶಿಕ್ಷಕ ಹುದ್ದೆ ಭರ್ತಿ ಮಾಡುತ್ತೇನೆಂದು ಸಿಎಂ ಹೇಳಿದ್ದರೂ, ಅದು ಆಗಿಲ್ಲ. ಈ ಭಾಗದಲ್ಲಿ 50,244 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ತಲಾ ಆದಾಯ 7 ಲಕ್ಷ ರೂ. ಇದ್ದರೆ, ಕಲಬುರ್ಗಿಯಲ್ಲಿ 1.43 ಲಕ್ಷ ರೂ.ಇದೆ ಎಂದು ಅವರು ತಿಳಿಸಿದರು. ನಾಯಕತ್ವ ಇಲ್ಲ: ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ’ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಹೇಳಿದರೆ, ಮತ್ತೊಬ್ಬ ಶಾಸಕರು ‘ಡಿಕೆಶಿಗೆ ಕೂಲಿ ಕೊಡಿ’ ಎಂದು ಕೇಳುತ್ತಾರೆ. ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯಲ್ಲ. ಹಾದಿ-ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು. ಮಂಗಳಮುಖಿಯರಿಗೆ ಮೀಸಲಾತಿ ನೀಡಿ: ಮಂಗಳಮುಖಿಯರು ರಸ್ತೆ ಸಿಗ್ನಲ್‍ಗಳಲ್ಲಿ ನಿಲ್ಲುತ್ತಾರೆ. ಸಮಾಜ ಅವರನ್ನು ಕೀಳಾಗಿ ನೋಡುತ್ತಿದೆ. ಆದ್ದರಿಂದ ಮಂಗಳಮುಖಿಯರಿಗೆ ಶೇ.0.5ರಷ್ಟಾದರೂ ಮೀಸಲಾತಿ ನೀಡುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಲಿ ಎಂದು ಅವರು ಸಲಹೆ ನೀಡಿದರು.

ವಾರ್ತಾ ಭಾರತಿ 10 Dec 2025 9:00 pm

ಸಾಗರ್‌ಮಾಲಾ ಯೋಜನೆಯಡಿ ಹಂಗಾರಕಟ್ಟೆ ಕಿರುಬಂದರು ಅಭಿವೃದ್ಧಿ

ಉಡುಪಿ, ಡಿ.10: ಜಿಲ್ಲೆಯ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಯೋಜನೆಗೆ ಸಾಗರ್‌ಮಾಲಾ ಯೋಜನೆಯಡಿ 78.28 ಕೋಟಿ ರೂ. ಮಂಜೂರಾತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ್ ಸೋನೊವಾಲ್ ಅವರು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿಸಿದ್ದಾರೆ. ಕೋಟ ಅವರ ಲಿಖಿತ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು ಇದನ್ನು ತಿಳಿಸಿದ್ದಾರೆ. ಹಳೆಯ ಮಂಗಳೂರು ಬಂದರಿನಲ್ಲಿ ಸರಕು ಮತ್ತು ಕ್ರೂಸ್ ಟರ್ಮಿನಲ್, ಲಕ್ಷದ್ವೀಪ ಜಟ್ಟಿ ನಿರ್ಮಾಣದ ಅಭಿವೃದ್ಧಿಗೆ 75.75 ಕೋಟಿ ರೂ, ಮಲ್ಪೆ ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸಲು 12.50 ಕೋಟಿ ಅಲ್ಲದೆ, ಮಲ್ಪೆ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯಗಳ ಬಹು ಮಹಡಿ ಪಾರ್ಕಿಂಗ್ ಸೌಲಭ್ಯದ ಅಭಿವೃದ್ಧಿಗೂ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಗಳ ತಂಗುದಾಣಕ್ಕಾಗಿ ಹೆಚ್ಚುವರಿ ಜಟ್ಟಿ, ಯಾಂತ್ರಿಕ ದೋಣಿಗಳ ಸಂಚಾರ ಸುಗಮಗೊಳಿಸಲು ಹೂಳೆತ್ತುವುದು ಸೇರಿದಂತೆ ಹಲವು ಪ್ರಸ್ತಾವನೆಗಳು ಮಂಜೂರಾತಿ ಹಂತದಲ್ಲಿವೆ ಎಂದೂ ಕೇಂದ್ರ ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಚಿವರ ಉತ್ತರದಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ಕಾರವಾರ ಬಂದರು ಅಭಿವೃದ್ಧಿ 73 ಕೋಟಿ, ಹಳೆಯ ಮಂಗಳೂರು ಬಂದರು ಅಭಿವೃದ್ಧಿಗೆ 65 ಕೋಟಿ, ಗಂಗೊಳ್ಳಿ ಬಂದರು ಅಭಿವೃದ್ಧಿಗೆ 95 ಕೋಟಿ ಕಾರವಾರದ ಬಂದರಿನ ಬ್ರೇಕ್ ವಾಟರ್ಗೆ ರೂ.249 ಕೋಟಿ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರ, ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಖೇಣಿ ಬಂದರು, ಮಾವಿನಕುರ್ವೆ ಬಂದರು, ಹೊನ್ನಾವರ ಬಂದರು, ಮಂಕಿ ಬಂದರು ಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದೆ ಎಂದು ಸಚಿವ ಸೋನೊವಾಲಾ ಸಂಸದ ಕೋಟ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 8:53 pm

ದೇಶದ 8.4 ಲಕ್ಷ ಸಹಕಾರಿ ಸಂಘಗಳ ಸಬಲೀಕರಣ ಕೇಂದ್ರದ ಗುರಿ : ಸಂಸದ ಕೋಟ ಪ್ರಶ್ನೆಗೆ ಅಮಿತ್ ಶಾ ಉತ್ತರ

ಉಡುಪಿ, ಡಿ.10: ರಾಷ್ಟ್ರೀಯ ಸಹಕಾರಿ ದತ್ತಾಂಶದ ಪ್ರಕಾರ ದೇಶದಲ್ಲಿ 8.4 ಲಕ್ಷ ಸಹಕಾರಿ ಸಂಘಗಳಿದ್ದು, 2021ರಲ್ಲಿ ಆರಂಭವಾದ ನೂತನ ಸಹಕಾರಿ ಕಾಯ್ದೆಯಂತೆ ಸಹಕಾರ್-ಸೇ ಸಮೃದ್ಧಿ ದೃಷ್ಟಿಕೋನವನ್ನು ಅನುಷ್ಠಾನ ಮಾಡಿ ದೇಶದಾದ್ಯಂತ ಸಹಕಾರಿ ಸಂಘಗಳನ್ನು ಬಲಪಡಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ಮುಂದೆ ಪ್ರಾಥಮಿಕ ಸಹಕಾರಿ ಸಂಘಗಳನ್ನು ಆರ್ಥಿಕವಾಗಿ ಗಟ್ಟಿಗೊಳಿಸುವುದು ಮತ್ತು ಪಾರದರ್ಶಕ ಆಡಳಿತ ನಡೆಸುವಂತೆ ನೋಡಿಕೊಳ್ಳುವುದು, ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್ ಗಳನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸುವುದು, ಆದಾಯ ತೆರಿಗೆ ಕಾಯ್ದೆಯಲ್ಲಿ ಸಹಕಾರಿ ಸಂಘಗಳಿಗೆ ಪರಿಹಾರ, ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನರ್ ಚೇತನ, ರಾಷ್ಟ್ರಮಟ್ಟದಲ್ಲಿ ಮೂರು ಬಹು ರಾಜ್ಯಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಸ್ಥಾಪನೆ, ವ್ಯವಹಾರ ಸುಲಭಗೊಳಿಸಲು ಏಕರೀತಿಯ ಮಾಹಿತಿ ತಂತ್ರಜ್ಞಾನ ಬಳಕೆ, ರಾಷ್ಟ್ರೀಯ ಸಹಕಾರಿ ನೀತಿ ರಚನೆ ದೇಶದಲ್ಲಿ ಮೊದಲ ಬಾರಿಗೆ ತ್ರಿಭುವನ್ ಸಹಕಾರಿ ಯುನಿವರ್ಸಿಟಿ ನಿರ್ಮಾಣ ಮುಂತಾದ ಕ್ರಾಂತಿಕಾರಿ ಯೋಜನೆಯನ್ನು ನೂತನ ಕಾಯ್ದೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ತ್ರಿಭುವನ್ ಯುನಿವರ್ಸಿಟಿಯ ಮೂಲಕ ನಾಲ್ಕು ಸ್ನಾತಕೋತ್ತರ ಪದವಿಗಳಿಗೆ ಅವಕಾಶ ನೀಡಿದ್ದು, ಐ.ಆರ್.ಎಮ್.ಎ ಮೂಲಕ ಗ್ರಾಮೀಣ ಸಹಕಾರಿ ಎಂಬಿಎ, ಕೃಷಿ ನಿರ್ವಹಣಾ ವ್ಯವಹಾರ ಎಂ.ಬಿ.ಎ, ಸಹಕಾರಿ ಬ್ಯಾಂಕಿಂಗ್ ಹಣಕಾಸು ನಿರ್ವಹಣೆಯ ಎಂ.ಬಿ.ಎ ಮುಂತಾದ ಕೋರ್ಸ್ಗಳ ಮೂಲಕ ಭವಿಷ್ಯದ ಸಹಕಾರಿ ಕ್ಷೇತ್ರಕ್ಕೆ ಅಗತ್ಯ ಮಾನವ ಶಕ್ತಿ ಒದಗಿಸುವುದು. ಸಹಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ತರಬೇತಿ, ಶಿಕ್ಷಣ, ಸಾಮರ್ಥ್ಯ ಒದಗಿಸುವುದು ನೂತನ ಸಹಕಾರಿ ಕಾಯ್ದೆ ಮತ್ತು ತ್ರಿಭುವನ್ ಯೂನಿವರ್ಸಿಟಿಯ ಗುರಿ ಎಂದು ಸಹಕಾರಿ ಸಚಿವ ಅಮಿತ್ ಶಾ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ

ವಾರ್ತಾ ಭಾರತಿ 10 Dec 2025 8:47 pm

ರಸ್ತೆ ಬದಿ ಲೈಂಗಿಕ ಸಮಸ್ಯೆಗೆ ಪರಿಹಾರ ಕೊಡೋರನ್ನ ನಂಬುವ ಮುನ್ನ ಹುಷಾರ್; ಹಿಮಾಲಯ, ಹರಿದ್ವಾರದ ದಿವ್ಯಔಷಧಿ ಎಂದು ಪಂಗನಾಮ

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಯೊಬ್ಬರಿಂದ 41 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ನಕಲಿ ಗುರೂಜಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳು ಕಳಪೆ ಗುಣಮಟ್ಟದ ಆಯುರ್ವೇದಿಕ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ವಿಜಯ ಕರ್ನಾಟಕ 10 Dec 2025 8:47 pm