SENSEX
NIFTY
GOLD
USD/INR

Weather

14    C
... ...View News by News Source

ಶಾಲಾ ಪ್ರವಾಸ: ಮೈಸೂರು ಕೆಎಸ್‌ಆರ್‌ಟಿಸಿಯ ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ

ಶಾಲಾ ಪ್ರವಾಸದ ಬಸ್ ಅಪಘಾತದಲ್ಲಿ ಬಾಲಕನ ಮರಣದ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಪ್ರವಾಸ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ಸಾರಿಗೆ ಬಸ್‌ಗಳ ಬೇಡಿಕೆ ಹೆಚ್ಚಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಪ್ರವಾಸಗಳನ್ನು ಮುಗಿಸಬೇಕಿರುವುದರಿಂದ ಸರಕಾರಿ ಬಸ್‌ಗಳ ಪೂರೈಕೆ ಸವಾಲಾಗಿದೆ.

ವಿಜಯ ಕರ್ನಾಟಕ 15 Dec 2025 5:43 am

Australia | ಬೋಂಡಿ ಬೀಚ್ ನಲ್ಲಿ ಗುಂಡಿನ ದಾಳಿ: ದಾಳಿಕೋರನೆಡೆಗೆ ನುಗ್ಗಿ ಆತನನ್ನು ನಿಶ್ಯಸ್ತ್ರಗೊಳಿಸಿದ ಅಹ್ಮದ್ ಧೈರ್ಯಕ್ಕೆ ಮೆಚ್ಚುಗೆಯ ಸುರಿಮಳೆ

ಅವರು ನಿಜವಾದ ಹೀರೋ...ಅವರ ಧೈರ್ಯ ಹಲವಾರು ಜೀವಗಳನ್ನು ಉಳಿಸಿದೆ ಎಂದ ಪ್ರಧಾನಿ ಆಂಥೋನಿ ಅಲ್ಬನೀಸ್

ವಾರ್ತಾ ಭಾರತಿ 15 Dec 2025 12:10 am

ಕುಂದಾಪುರ | ತಂದೆ ಹಾಕಿದ ಕೇಸು ವಾಪಾಸ್ ಪಡೆಯುವಂತೆ ಬಾಲಕನಿಗೆ ಹಲ್ಲೆ; ಪ್ರಕರಣ ದಾಖಲು

ಕುಂದಾಪುರ: ತಂದೆ ಹಾಕಿದ ಕೇಸು ವಾಪಾಸ್ಸು ಪಡೆಯುವಂತೆ ಬಾಲಕನಿಗೆ ಹಲ್ಲೆ ನಡೆಸಿರುವ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲ್ಲೂರು ಗ್ರಾಮ ಪವನ್(13) ಎಂಬವರು ಡಿ.5ರಂದು ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದು, ಈ ವೇಳೆ ಮೈದಾನದ ಹತ್ತಿರ ತಮ್ಮಯ್ಯ ಎಂಬವರು ಬಾಲಕನನ್ನು ಅಡ್ಡಗಟ್ಟಿ, ತಲೆಗೆ ಮತ್ತು ಕೆನ್ನೆಗೆ ಕೈಯಿಂದ ಹೊಡೆದು ನಿನ್ನ ಅಪ್ಪನಿಗೆ ಹೋಗಿ ಹೇಳು ಮೊದಲಿನ ಕೇಸು ವಾಪಾಸ್ಸು ತೆಗೆಯಬೇಕು ಇಲ್ಲದಿದ್ದರೆ ನಿನ್ನ ಅಪ್ಪನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿದ್ದಾನೆ ಎಂದು ದೂರಲಾಗಿದೆ.

ವಾರ್ತಾ ಭಾರತಿ 15 Dec 2025 12:10 am

ಶಿರ್ವ | ಹಿರಿಯರೆಡೆಗೆ ಸಾಹಿತ್ಯದ ನಡಿಗೆ: ವಿಷ್ಣುಮೂರ್ತಿ ಮಧ್ಯಸ್ಥರಿಗೆ ಗೌರವ

ಶಿರ್ವ: ದೇವರ ನಾಮ ಸಂಕೀರ್ತನೆಗಳು ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕಾದರೆ ಭಗವಂತನ ಸಾಕ್ಷಾತ್ಕಾರ ಆಗಬೇಕು. ಧಾರ್ಮಿಕ ಕ್ಷೇತ್ರದಿಂದ ಯುವ ಪೀಳಿಗೆ ವಿಚಲಿತರಾಗುತ್ತಿರುವ ಪ್ರಸ್ತಕ ಸನ್ನಿವೇಶದಲ್ಲಿ ಭಕ್ತಿ ಸಂಕೀರ್ತನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮನೆ ಮನಗಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಸಂಕೀರ್ತನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಂಕೀರ್ತನಾ ಗುರು, ಕಲಾವಿದ ಮಟ್ಟು ವಿಷ್ಣುಮೂರ್ತಿ ಮಧ್ಯಸ್ಥ ಹೇಳಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಮಟ್ಟು ಮಧ್ಯಸ್ಥರ ಮನೆಯಲ್ಲಿ ಶನಿವಾರ ಏರ್ಪಡಿಸಿದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತು ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹಿರಿಯರ ಜೀವನ, ಸಾಧನೆಗಳು ಅಪೂರ್ವವಾಗಿದ್ದು, ಭವಿಷ್ಯದ ಪೀಳಿಗೆಗೆ ಜ್ಞಾನದೀಗೆಯಾಗಿ ಉಳಿಸುವ ನಿಟ್ಟಿನಲ್ಲಿ ಪುಸ್ತಕಗಳ ರೂಪದಲ್ಲಿ ದಾಖಲಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡಲಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಎಂ.ಗೋಪಾಲಕೃಷ್ಣ ರಾವ್ ಮಟ್ಟು ಮಾತನಾಡಿದರು. ನಿವೃತ್ತ ಪ್ರಾಂಶುಪಾಲೆ ಎ.ಲಕ್ಷ್ಮೀ ಬಾ ತಮ್ಮ ಅನುಭವ ಹಂಚಿಕೊಂಡರು. ಉಡುಪಿ ಜಿಲ್ಲಾ ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ರಾವ್, ಭಾಸ್ಕರ ಕಾಮತ್, ಬಿಳಿಯಾರು ಭಾಸ್ಕರ್ ಆಚಾರ್ಯ, ಪುಷ್ಪಾ ಮಧ್ಯಸ್ಥ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ, ತಾಲೂಕು ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಪರಿಚಯಿಸಿದರು. ಕಾರ್ಯದರ್ಶಿ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 15 Dec 2025 12:04 am

Kerala | ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ | ಸಂಚುಕೋರನಿಗೆ ಇನ್ನೂ ಶಿಕ್ಷೆಯಾಗಿಲ್ಲ, ನ್ಯಾಯ ಇನ್ನೂ ಅಪೂರ್ಣ: ನಟಿ Manju Warrier

ಕೊಚ್ಚಿ: 2017ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಸಂತ್ರಸ್ತೆಗೆ ಇನ್ನೂ ಸಂಪೂರ್ಣ ನ್ಯಾಯ ದೊರೆತಿಲ್ಲ ಎಂದು ಮಲಯಾಳಂ ನಟಿ ಮಂಜು ವಾರಿಯರ್ ಹೇಳಿದ್ದಾರೆ. ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಅಪರಾಧವನ್ನು ಯೋಜಿಸಿ ಕಾರ್ಯಗತಗೊಳಿಸಿದ ಮನಸ್ಸು ಇನ್ನೂ ಮುಕ್ತವಾಗಿ ತಿರುಗಾಡುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. “ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೂ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ಅಪರಾಧ ಎಸಗಿದವರಿಗೆ ಮಾತ್ರ ಶಿಕ್ಷೆಯಾಗಿದೆ,” ಎಂದು ಮಂಜು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಪರಾಧದ ಹಿಂದಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ನ್ಯಾಯ ಪೂರ್ಣಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದು ಕೇವಲ ಒಬ್ಬ ಸಂತ್ರಸ್ತೆಯ ಪ್ರಶ್ನೆಯಲ್ಲ. ಪ್ರತಿಯೊಬ್ಬ ಹುಡುಗಿ, ಪ್ರತಿಯೊಬ್ಬ ಮಹಿಳೆ ಹಾಗೂ ಪ್ರತಿಯೊಬ್ಬ ಮನುಷ್ಯರು ಭಯವಿಲ್ಲದೆ ಕೆಲಸದ ಸ್ಥಳಗಳಲ್ಲಿ, ಬೀದಿಗಳಲ್ಲಿ ಹಾಗೂ ತಮ್ಮ ಜೀವನದಲ್ಲಿ ತಲೆಯೆತ್ತಿ ನಡೆಯುವ ಹಕ್ಕಿನ ವಿಷಯವಾಗಿದೆ ಎಂದು ಮಂಜು ವಾರಿಯರ್ ಅಭಿಪ್ರಾಯಪಟ್ಟಿದ್ದಾರೆ. ಅಪರಾಧ ನಡೆದ ಸುಮಾರು ಎಂಟು ವರ್ಷ ಒಂಬತ್ತು ತಿಂಗಳ ಬಳಿಕ, ಡಿಸೆಂಬರ್‌ 8ರಂದು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಆರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾಗಿದ್ದ ನಟ ದಿಲೀಪ್ ಅವರನ್ನು ಮಾತ್ರ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಸುಮಾರು 1,500 ಪುಟಗಳ ತೀರ್ಪಿನಲ್ಲಿ, ಅಪರಾಧದ ಹಿಂದಿನ ಪಿತೂರಿಯಲ್ಲಿ ದಿಲೀಪ್ ಅವರ ಪಾತ್ರ ಸಾಬೀತಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪಿತೂರಿಯಲ್ಲಿ ಮೊದಲ ಹಾಗೂ ಎರಡನೇ ಆರೋಪಿಗಳಾದ ಪಲ್ಸರ್ ಸುನಿ ಮತ್ತು ಮಾರ್ಟಿನ್ ಆಂಟನಿ ಮಾತ್ರ ಭಾಗಿಯಾಗಿದ್ದರು ಎಂದು ನ್ಯಾಯಾಲಯ ಹೇಳಿದೆ.

ವಾರ್ತಾ ಭಾರತಿ 14 Dec 2025 11:59 pm

ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಮೋದಿ ಕಣ್ಣು; ಪೊಂಗಲ್‌ ವೇಳೆ ​​ರಾಮೇಶ್ವರಂ ಸೇರಿ ಹಲವು ಜಿಲ್ಲೆ ಪ್ರವಾಸ?

2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜನವರಿಯಲ್ಲಿ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗ್ರಾಮೀಣ ಮತದಾರರನ್ನು ಸೆಳೆಯಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ತಮಿಳುನಾಡಿನ ರೈತರೊಂದಿಗೆ ಸುಗ್ಗಿ ಹಬ್ಬವಾದ ಪೊಂಗಲ್ ಆಚರಿಸುವ ಸಾಧ್ಯತೆಯಿದೆ. ಈ ಭೇಟಿಯ ವೇಳೆ ಎನ್‌ಡಿಎ ಮೈತ್ರಿಕೂಟದ ಅಂತಿಮ ರೂಪುರೇಷೆಗಳು ನಿರ್ಧಾರವಾಗುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 14 Dec 2025 11:49 pm

ಹಿರಾ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

ಮಂಗಳೂರು: ಹಿರಾ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಅತ್ಯಂತ ಉತ್ಸಾಹ ಹಾಗೂ ಶಿಸ್ತಿನಿಂದ ಆಯೋಜಿಸಲಾಯಿತು. ಅಂತರ್‌ರಾಷ್ಟ್ರೀಯ ಕ್ರೀಡಾಪಟು ಅಬ್ದುಲ್ ರೆಹಮಾನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಶಾಂತಿ ಎಜುಕೇಶನಲ್ ಟ್ರಸ್ಟಿನ ಉಪಾಧ್ಯಕ್ಷ ಕೆ. ಎಂ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಮಾರ್ಚ್ ಫಾಸ್ಟ್ ನೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಯು.ಟಿ. ಇಶಾನ್ ಸ್ವಾಗತಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಸಮೂಹ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು. ವಿದ್ಯಾರ್ಥಿನಿ ಖತಿಜ ಅಮ್ನ ಪ್ರತಿಜ್ಞಾವಚನವನ್ನು ನೆರವೇರಿಸಿದರು. ವಿದ್ಯಾರ್ಥಿನಿ ಮೈಮುನ ನುಝ ವಂದಿಸಿದರು. ವಿದ್ಯಾರ್ಥಿನಿ ಇಶಾಲ್ ತಮನ್ನ ಕಾರ್ಯಕ್ರಮವನ್ನು ನಿರೂಪಿಸಿದರು.

ವಾರ್ತಾ ಭಾರತಿ 14 Dec 2025 11:35 pm

ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆ ದಾವಣಗೆರೆ ಜಿಲ್ಲೆ ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ

ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಇದೀಗ ಕರ್ನಾಟಕ ರಾಜಕೀಯ ಕ್ಷೇತ್ರ ಸೇರಿ ಇಡೀ ರಾಜ್ಯದಲ್ಲಿ ನೋವಿನ ಛಾಯೆ ಮೂಡುವಂತೆ ಮಾಡಿದೆ. ಇಡೀ ದೇಶದಲ್ಲೇ ಅತ್ಯಂತ ಹಿರಿಯ ಶಾಸಕರು ಎಂಬ ದಾಖಲೆ ಬರೆದಿದ್ದ, ಮಧ್ಯ ಕರ್ನಾಟಕ ರಾಜಕೀಯದಲ್ಲಿ ಬಿಗಿಯಾದ ಹಿಡಿತವನ್ನು ಹೊಂದಿದ್ದ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ

ಒನ್ ಇ೦ಡಿಯ 14 Dec 2025 11:34 pm

ರಾಯಚೂರು: ಸಿಂಧನೂರಿನಲ್ಲಿ ಅನುಗ್ರಹ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ರಾಯಚೂರು: ಸಿಂಧನೂರು ಅನುಗ್ರಹ ಸೌಹಾರ್ದ ಸಹಕಾರಿ ಸಂಘ ಶನಿವಾರ ಸಿಂಧನೂರಿನ ಕಾಟಿಬೇಸ್ ನಲ್ಲಿ ಉದ್ಘಾಟನೆಗೊಂಡಿತು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಯೂಸೂಫ್ ಕನ್ನಿ ಉದ್ಘಾಟನೆ ಮಾಡಿದರು. ನಂತರ ಪಟೇಲವಾಡಿ ರಸ್ತೆಯಲ್ಲಿರುವ ಮಸ್ಜಿದ್-ಎ-ಹುದಾದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ಅನುಗ್ರಹ ಸೌಹಾರ್ದ ಸಹಕಾರಿ ಸಿಂಧನೂರಿನ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿದೆ. ಬಡ್ಡಿ ರಹಿತ, ಆಡಳಿತ ಉತ್ತಮ ಹೆಜ್ಜೆ ಇಟ್ಟಿದೆ ಎಂದರು. ಮುಹಮ್ಮದ್ ಯೂಸೂಫ್ ಕನ್ನಿ ಮಾತನಾಡಿ, ಮನುಷ್ಯರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.  ಬಡ್ಡಿ ಕೊಡುವವನು ಬಡ್ಡಿ ತೆಗೆದುಕೊಳ್ಳುವನು ಬಡ್ಡಿಯ ಲೆಕ್ಕ ಬರೆಯುವನು ಬಡ್ಡಿಯ ಸಾಕ್ಷಿಯ ಮೇಲೂ ಶಾಪವಿದೆ ಎಂದು ಕುರ್ ಆನ್ ಹೇಳುತ್ತದೆ, ಬಡ್ಡಿರಹಿತವಾಗಿ ನಡೆಸುವ ಇಂತಹ ಸಂಘಗಳು ಕರ್ನಾಟಕದಲ್ಲಿ 15 ಸಂಸ್ಥೆಗಳಿವೆ ಎಂದು ಹೇಳಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, 40 ವರ್ಷಗಳಿಂದ ನಾನು ಸಹಕಾರಿ ಗಳಲ್ಲಿ ಇದ್ದೇನೆ. ಅದರೆ ಬಡ್ಡಿ ರಹಿತ ಸಹಕಾರಿ ಕಾರ್ಯಕ್ರಮ ಮೂದಲ ಬಾರಿಗೆ ನೋಡುತ್ತಿದ್ದೇನೆ. ಮೀಟರ್ ಬಡ್ಡಿ ವ್ಯವಹಾರ ದೇವರು ಮೆಚ್ಚುವುದಿಲ್ಲ. ಸಂಸ್ಥೆ ನಮ್ಮದು ಎಂದು ಬೆಳೆಸಬೇಕು ಎಂದರು. ಇಮ್ತಿಯಾಝ್ ಬೇಗ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮೈಕ್ರೋ ಫೈನಾನ್ಸ್ ಸಹುಲತ್ ಸೊಸೈಟೀಸ್ ನ ಸಿಇಒ ಒಸಾಮಾ ಖಾನ್ ಮಾತನಾಡಿ, ‌ಅನುಗ್ರಹದ ಸಂಸ್ಥೆಯ ಮುಖ್ಯ ಉದ್ದೇಶ ಸಮಾಜದಲ್ಲಿ ದುರ್ಬಲ ವರ್ಗದ ಜನರನ್ನು ಮೇಲೆತ್ತುವದು. ಸಮಾಜದಲ್ಲಿ ಬಡ್ಡಿಯ ಕೆಡಕುಗಳು ವೇಗವಾಗಿ ಹರಡುತ್ತಿವೆ. ಈ ಕೆಡುಕನ್ನು ದೂರಿಕರಿಸುವುದೇ ಮುಖ್ಯವಾಗಿದೆ. ಇಸ್ಲಾಂ ಸರ್ವರಿಗೂ ಸಮಾನವಾದ ಹಕ್ಕುಗಳನ್ನು ಕೊಡುತ್ತದೆ. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಸಂಪತ್ತು ಮತ್ತು ಹಣ ಕೆಲವರ ಕೈಯಲ್ಲಿ ಮಾತ್ರ ಇದೆ ಎಂದರು. ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಟರಾಜ, ಮೌಲಾನಾ ಮುಹಮ್ಮದ್ ತಾಜೀಮುದ್ದೀನ್ ಇಮಾಮ್ -ಓ-ಖತೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಗ್ರಹ ಸೌ.ಸ.ಸಂ.ನಿ, ಸಿಂಧನೂರು ಅಧ್ಯಕ್ಷರಾದ ಹುಸೇನಸಾಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಾಬರ ಪಾಷ, ಮಿಲಾಪ್ ಶಾದಿ ಮಹಲ್ ಅಧ್ಯಕ್ಷರಾದ ಖಾಜಿ ಜಿಲಾನಿ ಪಾಷಾ, ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಮಹೆಬೂಬ ಆರ್, ಮೌಲಾನಾ ಸೈಯ್ಯದ್ ಬೈಸರ್ ಖಾದ್ರಿ, ಸೈಯದ್ ಹಾರೂನ್ ಪಾಷ, ಅಲ್ತಾಫ್ ಸಾಬ್ ಸಾಹುಕಾರ ಮುಳ್ಳೂರು, ಅನ್ವರ್ ಪಾಶಾ ಉಮರಿ ಉಪಸ್ಥಿತರಿದ್ದರು. ರಾಜಹುಸೇನ್ ಕಿರಾಅತ್‌ ಪಠಿಸಿದರು. ಯಾಖೂಬ ಅಲಿ ಸ್ವಾಗತಿಸಿದರು. ಡಾ ಬಸವರಾಜ ನಾಯಕ್ ನಿರೂಪಿಸಿದರು.  

ವಾರ್ತಾ ಭಾರತಿ 14 Dec 2025 11:28 pm

ಜ.24ಕ್ಕೆ ಕಲಬುರಗಿಯಲ್ಲಿ ಹೊಸ ಪಕ್ಷ ಘೋಷಣೆ: ಮಾಜಿ ಸಚಿವ ಸಿ.ಎಂ ಇಬ್ರಾಹಿಂ

ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು 2026ರ ಜನವರಿ 24ರಂದು ಕಲಬುರಗಿಯಲ್ಲಿ ಹೊಸ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್, ಜೆಡಿಎಸ್‌ಗೆ ಸೇರಿ ಬಿಜೆಪಿಗೆ ಪರ್ಯಾಯವಾಗಿ ರಚಿಸಲಾಗುವುದು ಎಂದರು. ದಲಿತ ಮತ್ತು ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವ ಧೈರ್ಯ ಕಾಂಗ್ರೆಸ್, ಬಿಜೆಪಿಗೆ ಇಲ್ಲ, ನಾನು ಹೊಸದಾಗಿ ಕಟ್ಟುವ ಪಕ್ಷದಿಂದಲೇ ಇದು ಸಾಧ್ಯ ಆಗುವುದು ಎಂದು ಇಬ್ರಾಹಿಂ ಅವರು ಹೇಳಿದರು.

ವಿಜಯ ಕರ್ನಾಟಕ 14 Dec 2025 11:21 pm

ಕಾಂಗ್ರೆಸ್‌ನ ‘ವೋಟ್ ಚೋರಿ’ ರ್‍ಯಾಲಿಗೆ ಮುನ್ನ ವಿವಾದಾತ್ಮಕ ಘೋಷಣೆಗಳನ್ನು ಟೀಕಿಸಿದ ಬಿಜೆಪಿ

ಹೊಸದಿಲ್ಲಿ,ಡಿ.14: ದಿಲ್ಲಿಯಲ್ಲಿ ಇಂದು ಮತಕಳ್ಳತನ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಕಾಂಗ್ರೆಸ್‌ ನ ಬೃಹತ್ ರ್ಯಾಲಿಯ ಸ್ಥಳದಲ್ಲಿ ಅದರ ಕೆಲವು ಕಾರ್ಯಕರ್ತರು ವಿವಾದಾತ್ಮಕ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದ ಬಳಿಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದು ಕಾಂಗ್ರೆಸ್‌ ನ ನಿಜವಾದ ಉದ್ದೇಶವಾಗಿದೆ ಎಂದು ಆರೋಪಿಸಿದೆ. ಸುದ್ದಿಸಂಸ್ಥೆಯು ಹಂಚಿಕೊಂಡಿರುವ ದೃಶ್ಯಗಳು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ಮತ್ತು ಅವರ ಆಡಳಿತವು ಅಂತ್ಯಗೊಳ್ಳಲಿದೆ ಎಂದು ಅಬ್ಬರಿಸುತ್ತಿರುವುದನ್ನು ತೋರಿಸಿವೆ. ‘ಹೀಗಾಗಿ ಕಾಂಗ್ರೆಸ್‌ನ ಅಜೆಂಡಾ ಸ್ಪಷ್ಟವಾಗಿದೆ. ಅದು ಎಸ್‌ಐಆರ್ ಕುರಿತು ಅಲ್ಲ. ಅದು ಎಸ್‌ಐಆರ್ ಹೆಸರಿನಲ್ಲಿ ಸಂವಿಧಾನದ ವಿರುದ್ಧ ಯುದ್ಧದ ಕುರಿತಾಗಿದೆ. ಎಸ್‌ಐಆರ್ ಹೆಸರಿನಲ್ಲಿ ಮೋದಿಯವರನ್ನು ಮುಗಿಸಲು ಅವರು ಬಯಸುತ್ತಿದ್ದಾರೆಯೇ? ಇತ್ತೀಚಿಗೆ ರಾಹುಲ್ ಗಾಂಧಿಯವರು ಚುನಾವಣಾ ಆಯೋಗಕ್ಕೂ ಬೆದರಿಕೆ ಹಾಕಿದ್ದಾರೆ. ಈವರೆಗೆ ಕಾಂಗ್ರೆಸ್ ಪ್ರಧಾನಿಯವರನ್ನು 150ಕ್ಕೂ ಹೆಚ್ಚು ಸಲ ನಿಂದಿಸಿದೆ’ ಎಂದು ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಎಕ್ಸ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು,‘‘ಜನರು ತಮ್ಮ ‘ನೆಚ್ಚಿನ ನಾಯಕ’ನಿಗೆ ಈ ಅಗೌರವವನ್ನು ‘ಸಹಿಸುವುದಿಲ್ಲ’. ನಾನು ಈ ಘೋಷಣೆಯನ್ನು ಖುದ್ದಾಗಿ ಆಲಿಸಿಲ್ಲ,ಆದರೆ ನಾನು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೇನೆ. ಇಂತಹ ಘೋಷಣೆಗಳನ್ನು ನಿಜಕ್ಕೂ ಕೂಗಿದ್ದರೆ ಅದು ಸಾರ್ವಜನಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಈಗಲೂ ವಿಫಲಗೊಂಡಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಪ್ರಧಾನಿ ಮೋದಿ ಅಥವಾ ಅವರ ಕುಟುಂಬದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದಾಗೆಲ್ಲ ಜನರು ಅವರನ್ನು ತಿರಸ್ಕರಿಸಿದ್ದಾರೆ ’’ ಎಂದು ಹೇಳಿದರು. ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಅವರು, ಅವುಗಳನ್ನು ‘ಸುಳ್ಳು ಸುದ್ದಿ’ ಎಂದು ಬಣ್ಣಿಸಿದರು. ಮತ ವಂಚನೆ ಆರೋಪದ ಕುರಿತು ಸಂಸತ್ತು ಚರ್ಚಿಸಿದ ಬಳಿಕ ಕಾಂಗ್ರೆಸ್ ಈ ರ್ಯಾಲಿಯನ್ನು ನಡೆಸಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ ಪಾತ್ರಾ,ಸದನದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಮತ್ತು ಕೇಂದ್ರ ಗೃಹಸಚಿವರೂ ಅವರಿಗೆ ಉತ್ತರಿಸಿದ್ದರು. ಅವರು ಇಡೀ ಕಥೆಯನ್ನು ಕಟ್ಟಿದ್ದರು ಮತ್ತು ಗೃಹಸಚಿವರು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದರು. ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಅವರು ಗೆದ್ದಾಗ ಮತ ಕಳ್ಳತನ ನಡೆದಿರಲಿಲ್ಲ,ಆದರೆ ಬಿಜೆಪಿ ಗೆದ್ದಾಗ ಮತ ಕಳ್ಳತನ ನಡೆದಿದೆ. ಗೃಹಸಚಿವರು ನುಸುಳುಕೋರರ ಬಗ್ಗೆ ಪ್ರಸ್ತಾವಿಸಿದಾಗ ಅವರು ಸಭಾತ್ಯಾಗ ಮಾಡಿದ್ದರು.ಎಸ್‌ಐಆರ್ ವಿರುದ್ಧ ರ್ಯಾಲಿಯು ನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ಪ್ರಯತ್ನವಾಗಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.

ವಾರ್ತಾ ಭಾರತಿ 14 Dec 2025 11:17 pm

Assam | CAA ಅಡಿ ಭಾರತೀಯ ಪೌರತ್ವ ಪಡೆದ ಇನ್ನೂ ಇಬ್ಬರು ಬಾಂಗ್ಲಾದೇಶಿಗಳು

ಗುವಾಹಟಿ,ಡಿ.14: ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ CAA ಅಡಿ ಭಾರತೀಯ ಪೌರತ್ವವನ್ನು ಮಂಜೂರು ಮಾಲಾಗಿದ್ದು, ಇದರೊಂದಿಗೆ ಈ ಕಾಯ್ದೆಯಡಿ ಅಸ್ಸಾಮಿನಲ್ಲಿ ಪೌರತ್ವ ಪಡೆದವರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಅಸ್ಸಾಮಿನಲ್ಲಿ ಈ ಕಾಯ್ದೆಯಡಿ ಓರ್ವ ಮಹಿಳೆಗೆ ಪೌರತ್ವವನ್ನು ಮಂಜೂರು ಮಾಡಲಾಗಿದೆ ಎಂದು ಸಿಲ್ಚಾರ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯ ಸದಸ್ಯರೂ ಆಗಿರುವ ಹಿರಿಯ ವಕೀಲ ಧರ್ಮಾನಂದ ದೇಬ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. 40ರ ಹರೆಯದ ಮಹಿಳೆ 2007ರಲ್ಲಿ ಬಾಂಗ್ಲಾದೇಶದಿಂದ ಭಾರತವನ್ನು ಪ್ರವೇಶಿಸಿ ಶ್ರೀಭೂಮಿಯಲ್ಲಿ ವಾಸವಾಗಿದ್ದರೆ,61ರ ಹರೆಯದ ಪುರುಷ 1975ರಲ್ಲಿ ಭಾರತಕ್ಕೆ ಆಗಮಿಸಿದ್ದು, ಕಾಚಾರ್‌ನಲ್ಲಿ ವಾಸವಾಗಿದ್ದ ಎಂದರು. ಗೃಹ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಮಾಣ ಪತ್ರಗಳನ್ನು ವಿತರಿಸಿದ್ದು,ಅವರು ಭಾರತವನ್ನು ಪ್ರವೇಶಿಸಿದ ದಿನದಿಂದಲೇ ಪೌರತ್ವ ಜಾರಿಗೆ ಬಂದಿದೆ ಎಂದು ಪರಿಗಣಿಸಲಾಗಿದೆ ಎಂದು ದೇಬ್ ತಿಳಿಸಿದರು. ಸಾಮಾಜಿಕ ಕಿರುಕುಳದ ಸಾಧ್ಯತೆಯನ್ನು ಉಲ್ಲೇಖಿಸಿ ಅವರ ಹೆಸರುಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದರು. ಬಾಂಗಾದೇಶದ ಚಿತ್ತಗಾಂಗ್ ಮೂಲದ ಮಹಿಳೆ ತನ್ನ ಕುಟುಂಬ ಸದಸ್ಯರೋರ್ವರ ಜೊತೆಗೆ ಚಿಕಿತ್ಸೆಗಾಗಿ ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಂದಿದ್ದಳು. ಶ್ರೀಭೂಮಿಯಲ್ಲಿ ವ್ಯಕ್ತಿಯೋರ್ವನನ್ನು ಭೇಟಿಯಾಗಿದ್ದ ಆಕೆ ಆತನನ್ನು ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಗಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು. ಕಳೆದ ವರ್ಷ ಸಿಎಎ ನಿಯಮಗಳನ್ನು ಅಧಿಸೂಚಿಸಿದ ಬಳಿಕ ಆಕೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಳು ಎಂದು ದೇಬ್ ತಿಳಿಸಿದರು. ಇನ್ನೋರ್ವ ವ್ಯಕ್ತಿ ತನ್ನ 11ನೇ ವಯಸ್ಸಿನಲ್ಲಿ ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯಿಂದ ಭಾರತಕ್ಕೆ ಆಗಮಿಸಿದ್ದು,ಬಳಿಕ ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಇಲ್ಲಿಯೇ ಸಂಸಾರವನ್ನು ಹೊಂದಿದ್ದಾನೆ ಎಂದರು.

ವಾರ್ತಾ ಭಾರತಿ 14 Dec 2025 11:12 pm

ಬಿಹಾರ | ಬಟ್ಟೆ ವ್ಯಾಪಾರಿಯ ಥಳಿಸಿ ಗುಂಪು ಹತ್ಯೆ

ಮೈಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ!

ವಾರ್ತಾ ಭಾರತಿ 14 Dec 2025 11:11 pm

ಮುಂಬೈಗೆ ಆಗಮಿಸಿದ ಲಿಯೊನೆಲ್ ಮೆಸ್ಸಿಗೆ ಭವ್ಯ ಸ್ವಾಗತ

ಮುಂಬೈ, ಡಿ.14: ‘GOAT ಟೂರ್ ಆಫ್ ಇಂಡಿಯಾ’ ಪ್ರವಾಸದ ಭಾಗವಾಗಿ ಮೂರು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ರವಿವಾರ ಮುಂಬೈಗೆ ಆಗಮಿಸಿದ್ದಾರೆ. ಮೊದಲ ದಿನವಾದ ಶನಿವಾರ ಕೋಲ್ಕತಾ ಹಾಗೂ ಹೈದರಾಬಾದ್‌ ಗೆ ಭೇಟಿ ನೀಡಿದ್ದರು. ಜಾಗತಿಕ ಫುಟ್ಬಾಲ್ ಐಕಾನ್ ಮೆಸ್ಸಿ ಅವರನ್ನು ಬಿಗಿ ಭದ್ರತೆಯ ನಡುವೆ ಸ್ವಾಗತಿಸಲಾಯಿತು. ಮೆಸ್ಸಿ ಅವರ ನಿಗದಿತ ಪ್ರದರ್ಶನಗಳಿಗಾಗಿ ಕಾತರದಿಂದ ಕಾಯುತ್ತಿದ್ದ ಫುಟ್ಬಾಲ್ ಅಭಿಮಾನಿಗಳು ತಮ್ಮ ಮೊಬೈಲ್‌ ಗಳಲ್ಲಿ ಅಪರೂಪದ ಕ್ಷಣಗಳನ್ನು ಸೆರೆ ಹಿಡಿದರು. ಮೆಸ್ಸಿ ಭೇಟಿಯು ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಅಪರೂಪದ ಹಾಗೂ ಸ್ಮರಣೀಯ ಕ್ಷಣವಾಗಲಿದೆ. ಮೆಸ್ಸಿಯನ್ನು ನೋಡಲು ವಾಂಖೆಡೆ ಸ್ಟೇಡಿಯಂನಲ್ಲಿ ಫುಟ್ಬಾಲ್ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಮೆಸ್ಸಿ ಆಗಮನಕ್ಕೆ ಮೊದಲೇ ಅಭಿಮಾನಿಗಳು ‘ಮೆಸ್ಸಿ, ಮೆಸ್ಸಿ’ಎಂದು ಘೋಷಣೆ ಕೂಗಲಾರಂಭಿಸಿದರು. ಭಾರತದ ಫುಟ್ಬಾಲ್ ಲೆಜೆಂಡರ್ ಸುನೀಲ್ ಚೆಟ್ರಿ ಅವರು ತಮ್ಮ ಅಚ್ಚುಮೆಚ್ಚಿನ ಆಟಗಾರ ಮೆಸ್ಸಿ ಅವರನ್ನು ಭೇಟಿಯಾದರು. ಮೆಸ್ಸಿ ಅವರು ಚೆಟ್ರಿಗೆ ತನ್ನ ಅರ್ಜೆಂಟೀನದ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಮಿತ್ರಾ ಸ್ಟಾರ್ ತಂಡದ ಪರ ಆಟವಾಡಿರುವ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಗಮನಸೆಳೆದರು. ಪಂದ್ಯಕ್ಕೂ ಮುನ್ನ ಮೆಸ್ಸಿ ಜೊತೆ ಮೈದಾನದಲ್ಲಿ ಮಾತುಕತೆಯನ್ನು ಕೂಡ ನಡೆಸಿದ್ದಾರೆ. ಭಾರತದ ಫುಟ್ಬಾಲ್ ವಲಯದಲ್ಲಿ ಜನಪ್ರಿಯರಾಗಿರುವ ಸುನೀಲ್ ಚೆಟ್ರಿ ಅವರು ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಲಿಯೊನೆಲ್ ಮೆಸ್ಸಿ ಅವರನ್ನು ಭೇಟಿಯಾಗಲು ಸುನೀಲ್ ಚೆಟ್ರಿ ನಿರಾಕರಿಸಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರು ತಮ್ಮ 2011ರ ವಿಶ್ವಕಪ್ ವಿಜೇತ ಜೆರ್ಸಿಯನ್ನು ಲಿಯೊನೆಲ್ ಮೆಸ್ಸಿಗೆ ಪ್ರದಾನಿಸಿದರು. ಸೌಹಾರ್ದ ಪ್ರದರ್ಶನ ಪಂದ್ಯದ ಆಟಗಾರರೊಂದಿಗೆ ಮೆಸ್ಸಿ, ಸುವಾರೆಝ್ ಹಾಗೂ ಡಿ ಪಾಲ್ ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡರು. ರೋಂಡೋದಲ್ಲಿ ಆಡಿದ ಮಹತ್ವಾಕಾಂಕ್ಷಿ ಫುಟ್ಬಾಲ್ ಆಟಗಾರರು ಮೆಸ್ಸಿ, ಸುವರೆಝ್ ಹಾಗೂ ಡಿ ಪಾಲ್ ಅವರಿಂದ ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದಾರೆ.

ವಾರ್ತಾ ಭಾರತಿ 14 Dec 2025 11:01 pm

ಶರಣಬಸವ ವಿಶ್ವವಿದ್ಯಾಲಯ 7ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಪ್ರತಿಷ್ಠಿತ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು ಹಾಗೂ ಮುತ್ಯಾನ ಬಬಲಾದನ ಶ್ರೀ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಶಶೀಲ ಜಿ. ನಮೋಶಿ ಅವರನ್ನು ಕಲಬುರಗಿ ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ರವಿವಾರ ನಡೆದ ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು. ಗೌರವ ಡಾಕ್ಟರೇಟ್‍ನ ಮೂರನೇ ಪುರಸ್ಕೃತರಾದ ಖಾಜಾ ಬಂದಾ ನವಾಜ್ ದರ್ಗಾದ ಸಜ್ಜದಾ ನಶೀನ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರಿಗೆ ಗೈರುಹಾಜರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೊದಲ ಬಾರಿಗೆ, ವಿಶ್ವವಿದ್ಯಾಲಯವು ಪುರುಷ ಮತ್ತು ಮಹಿಳಾ ಪದವೀಧರರಲ್ಲಿ ವಿಶ್ವವಿದ್ಯಾಲಯದ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಎರಡು ನಗದು ಪ್ರಶಸ್ತಿಗಳು ಮತ್ತು ಡಾ. ಶರಣಬಸವಪ್ಪ ಅಪ್ಪಾಜಿ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಚಿನ್ನದ ಪದಕವನ್ನು ನೀಡಿತು. 7ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ ಗಣಿತದಲ್ಲಿ ಪ್ರಥಮ ಸ್ಥಾನ ಪಡೆದ ಕು. ಸಿಮ್ರಾ ನಿಶಾತ್ ಬಂದೇನವಾಜ್ ಕಲಕೇರಿ ಅವರು 9.95 ಸಿಜಿಪಿಎ ಅಂಕಗಳೊಂದಿಗೆ ಪದವಿ ಪಡೆದ ಮಹಿಳಾ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದರು ಮತ್ತು ಬಿ.ಟೆಕ್ ಮೆಕ್ಯಾನಿಕಲ್‍ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ರಾಹುಲ್ ಅವರು 9.76 ಸಿಜಿಪಿಎ ಅಂಕಗಳೊಂದಿಗೆ ಪುರುಷರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಬ್ಬರಿಗೆ ತಲಾ 21,000 ರೂ. ನಗದು ಬಹುಮಾನ, ಚಿನ್ನದ ಪದಕ ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಡಾ. ಅವ್ವಾಜಿ ಅವರು, ಆಯಾ ಕೋರ್ಸ್‍ಗಳಲ್ಲಿ ರ್ಯಾಂಕ್ ಪಡೆದ 199 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಚಿನ್ನದ ಪದಕಗಳನ್ನು ಪಡೆದ 45 ವಿದ್ಯಾರ್ಥಿಗಳಿಗೆ, ಚಿನ್ನದ ಪದಕಗಳು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಡಾ. ಅವ್ವಾಜಿ ಮತ್ತು ಘಟಿಕೋತ್ಸವದ ಇತರ ಗೌರವಾನ್ವಿತ ಅತಿಥಿಗಳು, ಯುಜಿ ಮತ್ತು ಪಿಜಿ ಕೋರ್ಸ್‍ಗಳಲ್ಲಿ ಚಿನ್ನದ ಪದಕ ಗೆದ್ದ ಎಲ್ಲಾ 44 ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳ ಜೊತೆಗೆ ಪ್ರದಾನ ಮಾಡಲಾಯಿತು. ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸ್ಥಾಪಿಸಲಾದ ನಗದು ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಿದರು. ಅದೇ ರೀತಿ ಡಾ. ಅವ್ವಾಜಿ ಅವರು 21 ಪ್ರತಿಭಾನ್ವಿತ ವಿದ್ವಾಂಸರಿಗೆ ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಿದರು. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ, ವಿವಿಧ ಗಣ್ಯವ್ಯಕ್ತಿಗಳು ತಮ್ಮ ಆತ್ಮೀಯರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳ ಜೊತೆಗೆ, ಐದು ನಗದು ಪ್ರಶಸ್ತಿಗಳನ್ನು ನೀಡಲಾಯಿತು. ಲಿಂಗೈಕ್ಯ ಶ್ರೀಮತಿ ಚನ್ನಬಸಮ್ಮ ಸಿದ್ಧರಾಮಪ್ಪ ದೇಶಮುಖ ಅವರ ಹೆಸರಿನಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಶ್ರೀ ಬಸವರಾಜ ದೇಶಮುಖ ಮತ್ತು ಶ್ರೀಮತಿ ಕೊಪ್ಪಳದ ವಿಜಯಲಕ್ಷ್ಮಿ ಮುದಗಲ್ ಅವರು ವ್ಯವಹಾರ ಅಧ್ಯಯನ ನಿಕಾಯದ ಬಿಬಿಎ (ಮಹಿಳಾ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 11,000 ನಗದು ಬಹುಮಾನ ನೀಡಿ ಗೌರವಿಸಿದರು. ಲಿಂಗೈಕ್ಯ ಮಹಾದೇವಿ ಚಂದ್ರಶೇಖರ್ ನರಕೆ ಅವರ ಸ್ಮರಣಾರ್ಥ ಸ್ಥಾಪಿಸಲಾದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಮಹಿಳಾ ಟಾಪರ್‍ಗೆ ಚಂದ್ರಶೇಖರ ಶರಣಪ್ಪ ನರಕೆ ಅವರು 10,000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಿದರು. ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಅವರು ದಿವಂಗತ ಪ್ರೊ. ಬಿ. ಬಿ. ಪಾಟೀಲ್ ಅವರ ಸ್ಮರಣಾರ್ಥ ಸ್ಥಾಪಿಸಿರುವ ಮೂರನೇ 5000 ರೂ. ನಗದು ಬಹುಮಾನವನ್ನು ವ್ಯವಹಾರ ಅಧ್ಯಯನ ವಿಭಾಗದಲ್ಲಿ ಎಂಬಿಎ (ಸಹ-ಶಿಕ್ಷಣ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಪ್ರದಾನ ಮಾಡಲಾಯಿತು. ಉಳಿದೆರಡು ಬಹುಮಾನಗಳನ್ನು ಶ್ರೀ ಬಸವರಾಜಪ್ಪ ಅಪ್ಪಾ ಅವರ ಸ್ಮರಣಾರ್ಥ ಲಲಿತಕಲೆ ಮತ್ತು ಸಂಗೀತ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ತಲಾ 12,000 ರೂ. ನಗದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಡಾ. ಅವ್ವಾಜಿ ತಮ್ಮ ಭಾವನಾತ್ಮಕ ಅಧ್ಯಕ್ಷೀಯ ಭಾಷಣದಲ್ಲಿ, ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು, ಶಿಕ್ಷಣದ ಗುಣಮಟ್ಟವನ್ನು ತನ್ನ ವಿಶಿಷ್ಟ ಗುಣಲಕ್ಷಣವಾಗಿಟ್ಟುಕೊಂಡು, ಶಿಕ್ಷಣ ಸಂಸ್ಥೆಗಳ ಸರಪಳಿಯನ್ನು ಪ್ರಾರಂಭಿಸುವ ಮೂಲಕ ಅವರ ಜೀವಮಾನದ ಕನಸಾಗಿದ್ದ ಶರಣಬಸವ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಿ ಈ ಪ್ರದೇಶದ ಶೈಕ್ಷಣಿಕ ಸಬಲೀಕರಣದಲ್ಲಿ ಮಾಡಿದ ಪ್ರಯತ್ನಗಳನ್ನು ಸ್ಮರಿಸಿದರು. ಘಟಿಕೋತ್ಸವದಲ್ಲಿ ಪ್ರಮಾಣಪತ್ರಗಳನ್ನು ಪಡೆದ ಎಲ್ಲಾ ಪದವೀಧರರನ್ನು ಅಭಿನಂದಿಸಿದ ಡಾ. ಅವ್ವಾಜಿ, ತಮ್ಮ ವೃತ್ತಿಪರ ಮತ್ತು ಶೈಕ್ಷಣಿಕ ಜೀವನದಲ್ಲಿ ನಿಜವಾದ ಪ್ರಯಾಣವು ಈಗ ಪ್ರಾರಂಭವಾಗುತ್ತದೆ ಮತ್ತು ಎಲ್ಲರೂ ತಮ್ಮ ತಮ್ಮ ವೃತ್ತಿ ಮತ್ತು ಶೈಕ್ಷಣಿಕ ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು ಶ್ರಮಿಸಬೇಕು ಹಾಗೂ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಡಾ. ಅವ್ವಾಜಿ ಅವರು, ಶರಣಬಸವ ವಿಶ್ವವಿದ್ಯಾಲಯವು ಮಹಿಳಾ ಕೇಂದ್ರಿತ ಮತ್ತು ಮಹಿಳಾ ಸ್ನೇಹಿಯಾಗಿರುವ ದೇಶದ ಅತ್ಯಂತ ವಿರಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ ಎಂದು ಹೆಮ್ಮೆಯಿಂದ ಹೇಳಿದರು. ಹೆಚ್ಚಿನ ಸಂಖ್ಯೆಯ ರ್ಯಾಂಕಗಳನ್ನು ಮತ್ತು ಚಿನ್ನದ ಪದಕಗಳನ್ನು ಪಡೆಯುವಲ್ಲಿ ಮಹಿಳಾ ವಿದ್ಯಾರ್ಥಿಗಳು, ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದು ಸಂತೋಷವಾಯಿತು ಎಂದರು. ಘಟಿಕೋತ್ಸವದಲ್ಲಿ ಪ್ರಮಾಣಪತ್ರಗಳನ್ನು ಪಡೆದ 21 ಪಿಎಚ್.ಡಿ. ಪದವೀಧರರನ್ನು ಡಾ. ಅವ್ವಾಜಿ ಅಭಿನಂದಿಸಿದರು. ಪ್ರೊ. ಚಂದ್ರಶೇಖರ್ ಎಸ್. ನರಕೆ, ವಿವಿಯ ಬಿಒಜಿ ಸದಸ್ಯೆ ಡಾ. ಉಮಾ ದೇಶಮುಖ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಚ್‍ಕೆಇ ಸೊಸೈಟಿಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಡಾ. ಅಲ್ಲಮಪ್ರಭು ದೇಶಮುಖ, ವಿವಿಯ ನಿರ್ದೇಶಕ ಡಾ. ವಿ. ಡಿ. ಮೈತ್ರಿ, ಕುಲಸಚಿವ ಮೌಲ್ಯಮಾಪನ ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ಎಲ್ಲಾ ಅಧ್ಯಾಪಕ ಡೀನರು ಈ ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಸಮಾರಂಭದಲ್ಲಿ ಸ್ವಾಗತಿಸಿದರು ಮತ್ತು ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್ ವಂದಿಸಿದರು.

ವಾರ್ತಾ ಭಾರತಿ 14 Dec 2025 10:52 pm

ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ ನಿಧನ

ಮಂಗಳೂರು: ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಇರಾ ನಿವಾಸಿ, ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ (68 ) ಅಲ್ಪ ಕಾಲದ ಅಸೌಖ್ಯದಿಂದ ಡಿ.14ರಂದು ನಿಧನ ಹೊಂದಿದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವ ರೈ ಅಗಲಿದ್ದಾರೆ. ಶ್ರೀಧರ ರೈ ಅವರು ಪುಂಡು ವೇಷ, ರಾಜ್ ವೇಷ, ಬಣ್ಣದ ವೇಷಧಾರಿಯಾಗಿ ಕೊಲ್ಲೂರು ಮೇಳ, ಸುಂಕದಕಟ್ಟೆ ಮೇಳ, ಭಗವತೀ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ವಾರ್ತಾ ಭಾರತಿ 14 Dec 2025 10:45 pm

ಧರ್ಮ, ಜಾತಿ, ಹಣ ಎಲ್ಲವನ್ನು ಮೀರಿದ ಆತ್ಮತೃಪ್ತಿಯ ರಾಜಕಾರಣ ಬೇಕಿದೆ : ದಿನೇಶ್ ಅಮೀನ್ ಮಟ್ಟು

ಮೈಸೂರು : ಧರ್ಮ, ಜಾತಿ, ಹಣ ಇಲ್ಲದೆ ಇವತ್ತು ರಾಜಕೀಯ ಮಾಡಲು ಸಾಧ್ಯವೇ? ಅದೆಲ್ಲವನ್ನು ಮೀರಿದ ಆತ್ಮತೃಪ್ತಿಯ ರಾಜಕಾರಣ ಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ. ಬನವಾಸಿ ತೋಟದಲ್ಲಿ ರವಿವಾರ ಪ್ರಸ್ತುತ ರಾಜಕೀಯ: ನಮ್ಮ ನಿಲುವು ವಿಚಾರ ಮಂಡನೆ ಮಾಡಿ ಅವರು ಮಾತನಾಡಿದರು. ದೇಶದ ಕಷ್ಟ ನೋಡಿ ತಮ್ಮ ತಮ್ಮ ಕರಳು ಕಲಕಿದರೆ, ಆ ಕಷ್ಟಕ್ಕೆ ಪರಿಹಾರ ನೀಡುತ್ತೇನೆ ಎಂದು ಅನಿಸಿದರೇ ರಾಜಕೀಯಕ್ಕೆ ಬನ್ನಿ. ಇಲ್ಲ ಅಂದ್ರೆ ರಾಜಕಾರಣಕ್ಕೆ ಬರುವ ಅವಶ್ಯಕತೆ ಯಾರಿಗೂ ಬೇಡ ಎಂದು ಹೇಳಿದರು. ದಲಿತರ ಮೇಲೆ ನಿಮಿಷಕ್ಕೆ ಹಲ್ಲೆಗಳು ನಡೆಯುತ್ತಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕಷ್ಟಗಳು ಅರ್ಥಮಾಡಿಕೊಳ್ಳುವ ರಾಜಕೀಯ ಮನಸ್ಸು ಬೇಕಾಗಿದೆ. ರಾಜಕೀಯಕ್ಕೆ ಪ್ರವೇಶ ಮಾಡುವವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು. ಕೇಂದ್ರದಲ್ಲಿ ಜವಹರಲಾಲ್ ನೆಹರೂ, ರಾಜ್ಯದಲ್ಲಿ ದೇವರಾಜು ಅರಸು ಸರಕಾರ ಈಗ ಇದ್ದರೇ ಹೇಗಿರುತ್ತೆ? ಅಂತ ನೆನೆದಾಗ ಬಹಳ ಖುಷಿಯಾಗುತ್ತದೆ. ಭಾರತವನ್ನು ನೈತಿಕವಾಗಿ ನೆಹರೂ ತುತ್ತ ತುದಿಗೆ ತಂದು ನಿಲ್ಲಿಸುತ್ತಿದ್ದರು ಎಂದು ಹೇಳಿದರು. ಮಂಡಲ್ ಕಮಿಷನ್, ಹೊಸ ಆರ್ಥಿಕ ನೀತಿ, ಬಾಬ್ರಿ ಮಸೀದಿ ಧ್ವಂಸ ಇವುಗಳು ಒಂದರ ನಂತರ ಒಂದು ಬಂದವು. ಇವು ಒಂದರ ಕೈ ಒಂದು ಹಿಡಿದುಕೊಂಡೆ ಬಂದವು. ಇವು ದೇಶಕ್ಕೆ ಮಾರಕ ಆಗಿಬಿಟ್ಟವು. ಬ್ರಾಹ್ಮಣವಾದ, ಬಂಡವಾಳವಾದ, ಕೋಮುವಾದ ಇವು ಅವುಗಳ ಮುಖ್ಯ ಅಜೆಂಡ ಆದವು. ಸಾಂಸ್ಕೃತಿಕ ಬದುಕನ್ನು ನುಚ್ಚುನೂರು ಮಾಡಿದವು ಎಂದರು. ಸಮಾಜ ಸೇವಕ ಅಹಿಂದ ಜವರಪ್ಪಅವರು ಪ್ರತಿಕ್ರಿಯೆ ನೀಡಿ ಮಾತನಾಡಿದರು. ಸಂವಿಧಾನ ಇದ್ದಾಗೇ ಇದೆ. ಅದರ ಅಸ್ಥಿಪಂಜರದ ರಕ್ತ ಮಾಂಸವನ್ನು ಕಿತ್ತು ತಿನ್ನುತ್ತಿದ್ದಾರೆ. ಇದು ರಾಜಕಾರಣದ ಹೆಸರಲ್ಲಿ ನಡೆಯುತ್ತಿದೆ. 175 ಮಂದಿ ಪಾರ್ಲಿಮೆಂಟ್ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣವಿದೆ. ಇದನ್ನು ಯಾವ ರಾಜಕಾರಣ ಎಂದು ಹೇಳೋಣ. ಇಂದು ಮಾಧ್ಯಮವನ್ನು ಗುಂಡಿಗೆ ತಳ್ಳಿಬಿಟ್ಟಿದ್ದಾರೆ. ಸರಕಾರಗಳ ಜಾಹೀರಾತು ಇಲ್ಲದೆ ಮಾಧ್ಯಮಗಳು ಬದುಕುವುದೇ ಕಷ್ಟ. ಮಾಧ್ಯಮಗಳ ಸ್ಥಿತಿ ಈ ಮಟ್ಟಿಗೆ ತಲುಪಿವೆ. ಚಳವಳಿಗಳು ಶಕ್ತಿಗೊಂಡರೇ ರಾಜಕಾರಣವನ್ನು ನೈತಿಕವಾಗಿ ಬದಲಾಯಿಸಬಹುದು. ಚಳವಳಿಗಳ ದ್ವನಿ ಅಡಗಿ ಹೋದರೇ ಯಾವ ಸಣ್ಣ ಬದಲಾವಣೆಯೂ ಆಗುವುದಿಲ್ಲ. - ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ

ವಾರ್ತಾ ಭಾರತಿ 14 Dec 2025 10:38 pm

ಆಮದುಗಳ ಮೇಲೆ ಮೆಕ್ಸಿಕೋದ ಸುಂಕ ಹೆಚ್ಚಳಕ್ಕೆ ತಿರುಗೇಟು ನೀಡಲು ಭಾರತ ಸಜ್ಜು

ಹೊಸದಿಲ್ಲಿ,ಡಿ.14: ಆಮದಾಗುವ ಆಯ್ದ ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿಕೆಯನ್ನು ಮೆಕ್ಸಿಕೋ ಅನುಮೋದಿಸಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಭಾರತೀಯ ರಫ್ತುದಾರರ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತವು ಕಾಯ್ದಿರಿಸಿದೆ ಮತ್ತು ಇದೇ ವೇಳೆ ರಚನಾತ್ಮಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಂದುವರಿಸಿದೆ ಎಂದು ಅವರು ಹೇಳಿದರು. ಸುಂಕ ಹೆಚ್ಚಳ ಮಸೂದೆಯ ಆರಂಭಿಕ ಮಂಡನೆ ಸಂದರ್ಭದಲ್ಲಿ ಭಾರತವು ಮೆಕ್ಸಿಕೋ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿತ್ತು ಎಂದರು. ಜಾಗತಿಕ ವ್ಯಾಪಾರ ನಿಯಮಗಳಿಗೆ ಅನುಗುಣವಾಗಿ ಪರಸ್ಪರ ಲಾಭದಾಯಕ ಪರಿಹಾರವನ್ನು ಕಂಡುಕೊಳ್ಳಲು ವಾಣಿಜ್ಯ ಇಲಾಖೆಯು ಮೆಕ್ಸಿಕೋದ ಆರ್ಥಿಕ ಸಚಿವಾಲಯದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಎಂದೂ ಅಧಿಕಾರಿ ತಿಳಿಸಿದರು. ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ಮತ್ತು ಮೆಕ್ಸಿಕೋದ ಉಪ ಆರ್ಥಿಕ ಸಚಿವ ಲೂಯಿಸ್ ರೊಸೆಂಡೊ ನಡುವೆ ಉನ್ನತ ಮಟ್ಟ ಸಭೆ ನಡೆದಿದ್ದು,ಅನುಸರಣಾ ಸಭೆಗಳನ್ನು ನಿರೀಕ್ಷಿಸಲಾಗಿದೆ. ಭಾರತವು ಮೆಕ್ಸಿಕೋ ಜೊತೆ ತನ್ನ ಪಾಲುದಾರಿಕೆಯನ್ನು ಗೌರವಿಸುತ್ತದೆ ಹಾಗೂ ಉಭಯ ದೇಶಗಳ ಉದ್ಯಮಗಳು ಮತ್ತು ಗ್ರಾಹಕರಿಗೆ ಪ್ರಯೋಜನಕಾರಿಯಾದ ಸ್ಥಿರ ಮತ್ತು ಸಮತೋಲಿತ ವ್ಯಾಪಾರ ವಾತಾವರಣಕ್ಕಾಗಿ ಸಹಯೋಗದಿಂದ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧಿಕಾರಿ ಹೇಳಿದರು. ವಾಹನ ಬಿಡಿಭಾಗಗಳು, ಲಘು ಕಾರುಗಳು,ಬಟ್ಟೆ, ಪ್ಲಾಸ್ಟಿಕ್, ಉಕ್ಕು, ಗೃಹೋಪಯೋಗಿ ಉಪಕರಣಗಳು, ಆಟಿಕೆಗಳು, ಪೀಠೋಪಕರಣಗಳು,ಪಾದರಕ್ಷೆ,ಚರ್ಮದ ಸರಕುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟರ್‌ಸೈಕಲ್‌ ಗಳು, ಅಲ್ಯುಮಿನಿಯಂ,ಟ್ರೇಲರ್‌ ಗಳು, ಗಾಜು, ಸಾಬೂನು, ಸುಗಂಧ ದ್ರವ್ಯ ಮತ್ತು ಸೌಂದರ್ಯ ವರ್ಧಕಗಳಂತಹ ಸರಕುಗಳ ಮೇಲೆ ಆಮದು ಸುಂಕವನ್ನು ಮೆಕ್ಸಿಕೋ ಹೇರಿದೆ. ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮೇಲೆ ಸುಂಕ ಹೆಚ್ಚಳವು ಪರಿಣಾಮವನ್ನು ಬೀರಲಿದೆ. ಭಾರತ ಮತ್ತು ಮೆಕ್ಸಿಕೋ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಆರಂಭಿಸಲೂ ಬಯಸಿದ್ದು,ಇದು ಈ ಸುಂಕಗಳ ವಿರುದ್ಧ ಭಾರತೀಯ ಕಂಪನಿಗಳಿಗೆ ರಕ್ಷಣೆ ಒದಗಿಸುವಲ್ಲಿ ನೆರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವಾರ್ತಾ ಭಾರತಿ 14 Dec 2025 10:37 pm

Mangaluru | ಡ್ರಗ್ ಪೆಡ್ಲರ್‌ಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪ: ಮೂವರ ಬಂಧನ

ಮಂಗಳೂರು ಸಿಸಿಬಿ ಘಟಕದ ಪೊಲೀಸರ ಕಾರ್ಯಾಚರಣೆ

ವಾರ್ತಾ ಭಾರತಿ 14 Dec 2025 10:37 pm

ತಂತ್ರಜ್ಞಾನವು ಮಾನವ ತೀರ್ಪನ್ನು ವರ್ಧಿಸಬೇಕು, ಅದನ್ನು ಬದಲಿಸಬಾರದು: ಸಿಜೆಐ ಸೂರ್ಯಕಾಂತ್

ಕಟಕ್ (ಒಡಿಶಾ),ಡಿ.14: ತಂತ್ರಜ್ಞಾನವು ಮಾನವ ತೀರ್ಪನ್ನು ಇನ್ನಷ್ಟು ಬಲಗೊಳಿಸಬೇಕೇ ಹೊರತು ಅದನ್ನು ಬದಲಿಸಬಾರದು ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ ಅವರು ರವಿವಾರ ಇಲ್ಲಿ ಹೇಳಿದರು. ‘ಸಾಮಾನ್ಯ ಜನರಿಗೆ ನ್ಯಾಯವನ್ನು ಖಚಿತಪಡಿಸುವುದು: ಮೊಕದ್ದಮೆ ವೆಚ್ಚಗಳು ಮತ್ತು ವಿಳಂಬಗಳನ್ನು ತಗ್ಗಿಸಲು ಕಾರ್ಯತಂತ್ರಗಳು’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಜೆಐ, ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳು ವಿಚಾರಣಾ ನ್ಯಾಯಾಲಯದಿಂದ ಸಾಂವಿಧಾನಿಕ ನ್ಯಾಯಾಲಯದವರೆಗೆ ನ್ಯಾಯಾಂಗ ವ್ಯವಸ್ಥೆಯ ಪ್ರತಿಯೊಂದೂ ಹಂತದಲ್ಲಿಯೂ ಅಡ್ಡಿಯನ್ನುಂಟು ಮಾಡುತ್ತವೆ. ಮೇಲ್‌ಸ್ತರದಲ್ಲಿ ಅಡಚಣೆ ಉಂಟಾದಾಗ ಕೆಳಸ್ತರದಲ್ಲಿ ಒತ್ತಡವು ತೀವ್ರಗೊಳ್ಳುತ್ತದೆ ಎಂದು ಹೇಳಿದರು. ಬಾಕಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು,ಏಕೆಂದರೆ ಸಾಕಷ್ಟು ನ್ಯಾಯಾಲಯಗಳಿಲ್ಲದೆ ಅತ್ಯಂತ ಪ್ರಾಮಾಣಿಕ ನ್ಯಾಯಾಂಗ ವ್ಯವಸ್ಥೆಯೂ ಲಾಜಿಸ್ಟಿಕ್ ವ್ಯವಸ್ಥೆಯ ಮೇಲಿನ ಒತ್ತಡದಡಿ ಕುಸಿಯುತ್ತದೆ ಎಂದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂತ್ರಜ್ಞಾನವು ತುಂಬ ಉಪಯುಕ್ತವಾಗಿತ್ತು ಎಂದು ಅವರು ಹೇಳಿದ ಅವರು,‘ಆದರೂ ತಂತ್ರಜ್ಞಾನವು ತನ್ನದೇ ಆದ ನೆರಳುಗಳನ್ನು ಹೊಂದಿದೆ ಎನ್ನುವುದನ್ನು ಮರೆಯಬಾರದು. ಡೀಪ್ ಫೇಕ್‌ ಗಳು ಮತ್ತು ಡಿಜಿಟಲ್ ಬಂಧನಗಳ ಯುಗದಲ್ಲಿ ನ್ಯಾಯಾಲಯಗಳು ವಾಸ್ತವವನ್ನು ಪರಿಗಣಿಸದ ಆಶಾವಾದವನ್ನು ಹೊಂದಿರಲು ಸಾಧ್ಯವಿಲ್ಲ. ಬಡವರು,ವೃದ್ಧರು ಮತ್ತು ಡಿಜಿಟಲ್ ಮಾಹಿತಿ ಇಲ್ಲದವರನ್ನು ಹೊರಗಿರಿಸುವ ಸುಧಾರಣೆಯು ಸುಧಾರಣೆಯೇ ಅಲ್ಲ,ಅದು ಹಿಮ್ಮೆಟ್ಟುವಿಕೆಯಾಗಿದೆ. ಇದೇ ಕಾರಣಕ್ಕಾಗಿ ತಂತ್ರಜ್ಞಾನವು ನ್ಯಾಯದ ಸೇವಕನಾಗಿ ಉಳಿಯಬೇಕು,ಅದರ ಬದಲಿಯಾಗಿ ಅಲ್ಲ ಎಂದು ನಾನು ಯಾವಾಗಲೂ ಪ್ರತಿಪಾದಿಸಿದ್ದೇನೆ. ಅದು ಮಾನವ ತೀರ್ಪನ್ನು ವರ್ಧಿಸಬೇಕೇ ಹೊರತು ಅದನ್ನು ಬದಲಿಸಬಾರದು’ ಎಂದು ಹೇಳಿದರು.

ವಾರ್ತಾ ಭಾರತಿ 14 Dec 2025 10:36 pm

ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮರಣದಂಡನೆ | ಆರೋಪಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ಹೊಸದಿಲ್ಲಿ,ಡಿ.15: ಮಹಾರಾಷ್ಟ್ರದಲ್ಲಿ 2012ರಲ್ಲಿ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಮರಣದಂಡನೆಗೆ ಘೋಷಿಸಲ್ಪಟ್ಟ ವ್ಯಕ್ತಿಯ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. ರಾಷ್ಟ್ರಪತಿಯಾಗಿ 2022ರ ಜುಲೈ 25ರಂದು ಅಧಿಕಾರ ಸ್ವೀಕರಿಸಿದ ಬಳಿಕ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮಾದಾನದ ಅರ್ಜಿ ಇದಾಗಿದೆ. ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಸುಪ್ರೀಂಕೋರ್ಟ್ 2019ರ ಆಕ್ಟೋಬರ್ 3ರಂದು ರವಿ ಅಶೋಕ್ ಘುಮಾರೆಗೆ ಮರಣದಂಡನೆಯನ್ನು ಘೋಷಿಸಿತ್ತು. ‘‘ಇನ್ನಷ್ಟೇ ಅರಳಬೇಕಾಗಿದ್ದ ಜೀವವೊಂದನ್ನು ನಿರ್ದಯವಾಗಿ ಆರೋಪಿಯು ಅಂತ್ಯಗೊಳಿಸಿದ್ದಾನೆ. ಎರಡು ವರ್ಷದ ಮಗುವಿನ ಮೇಲೂ ಈ ಅಸಹಜವಾದ ಕೃತ್ಯವನ್ನು ಎಸಗಿರುವುದು ಆತನ ಕೊಳಕು ಹಾಗೂ ವಿಕೃತ ಮನಸ್ಥಿತಿಯನ್ನು ತೋರಿಸಿದೆ ಮತ್ತು ಬರ್ಬರತೆಯ ಭಯಾನಕ ಕಥೆಯನ್ನು ತೆರೆದಿಟ್ಟಿದೆ’’ ಎಂದು ಆಗಿನ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ 2:1ರ ಬಹುಮತದ ತೀರ್ಪು ನೀಡಿತ್ತು. ಘುಮಾರೆಯ ಕ್ಷಮಾದಾನ ಕೋರಿಕೆಯ ಅರ್ಜಿಯನ್ನು ರಾಷ್ಟ್ರಪತಿಯವರು 2025ರ ನವೆಂಬರ್ 6ರಂದು ತಿರಸ್ಕರಿಸಿದ್ದಾರೆಂದು ರಾಷ್ಟ್ರಪತಿ ಭವನವು ರವಿವಾರ ಬಹಿರಂಗಪಡಿಸಿದೆ.

ವಾರ್ತಾ ಭಾರತಿ 14 Dec 2025 10:35 pm

ಆಕ್ರೋಶಕ್ಕೆ ಕಾರಣವಾದ ಮಧ್ಯಪ್ರದೇಶ ಸಚಿವರ ಲಾಡಲಿ ಬಹನಾ ಫಲಾನುಭವಿಗಳ ಕುರಿತ ಹೇಳಿಕೆ

ಭೋಪಾಲ,ಡಿ.14: ರಾಜ್ಯ ಸರಕಾರದ ಮುಂಚೂಣಿಯ ಲಾಡಲಿ ಬಹನಾ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸಂಪುಟ ಸಚಿವ ವಿಜಯ ಶಾ ಅವರ ಹೇಳಿಕೆಯು ಅವರನ್ನು ವಿವಾದದಲ್ಲಿ ಸಿಲುಕಿಸಿದೆ. ಇದೊಂದು ಬಲವಂತದ ಮತ್ತು ಬೆದರಿಕೆಯ ಹೇಳಿಕೆಯಾಗಿದೆ ಎಂಬ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಹಿಂದೆ ಕರ್ನಲ್ ಸೋಫಿಯಾ ಕುರೇಶಿ ಅವರ ಕುರಿತು ಹೇಳಿಕೆಗಳಿಂದಾಗಿ ಶಾ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಶಾ ಉಸ್ತುವಾರಿ ಸಚಿವರಾಗಿರುವ ರತ್ಲಾಂ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ಸರಕಾರವು ಲಾಡಲಿ ಬಹನಾ ಯೋಜನೆಯಡಿ ಕೋಟ್ಯಂತರ ರೂ.ಗಳನ್ನು ವಿತರಿಸುತ್ತಿರುವುದರಿಂದ ಫಲಾನುಭವಿಗಳು ಮುಖ್ಯಮಂತ್ರಿಗಳಿಗೆ ಗೌರವ ತೋರಿಸಲು ಮುಂದೆ ಬರಬೇಕು,ಇದಕ್ಕೆ ವಿಫಲರಾದವರ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ ಎಂದು ಶಾ ಹೇಳಿದ್ದರು. ಜಿಲ್ಲೆಯಲ್ಲಿನ ಲಾಡಲಿ ಬಹನಾ ಫಲಾನುಭವಿಗಳ ಸಂಖ್ಯೆ ಕುರಿತು ಶಾ ಅವರ ಪ್ರಶ್ನೆಗೆ ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸುಮಾರು 2.5 ಲಕ್ಷ ಎಂದು ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಎರಡು ವರ್ಷಗಳನ್ನು ಪೂರೈಸಿರುವುದರಿಂದ 2.5 ಲಕ್ಷ ಫಲಾನುಭವಿಗಳ ಪೈಕಿ ಕನಿಷ್ಠ 50,000 ಮಹಿಳೆಯರು ಅವರಿಗೆ ಗೌರವ ತೋರಿಸಲು ಮಂದೆ ಬರಬೇಕು ಎಂದು ಹೇಳಿದ್ದರು. ‘ಪ್ರತಿ ಮಹಿಳೆಗೆ ಮಾಸಿಕ 1,500 ರೂ.ಗಳಂತೆ ಸರಕಾರವು ಕೋಟ್ಯಂತರ ರೂ.ಗಳನ್ನು ನೀಡುತ್ತಿದೆ. ಹೀಗಾಗಿ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ಧನ್ಯವಾದ ಹೇಳುವುದು ಅಗತ್ಯ. ನಾವು ಆಹಾರದ ವ್ಯವಸ್ಥೆಯನ್ನು ಮಾಡುತ್ತೇವೆ. ಬರದವರಿಗೆ ಏನಾಗುತ್ತದೆ ನೋಡೋಣ’ ಎಂದು ಶಾ ಹೇಳಿದ್ದರು. ನಂತರ ಇನ್ನಷ್ಟು ವಿವಾದಾತ್ಮಕ ಹೇಳಿಕೆಯನ್ನು ಅವರು ನೀಡಿದ್ದರು. ಪಾವತಿಯನ್ನು 250 ರೂ.ಗಳಷ್ಟು ಹೆಚ್ಚಿಸಲಾಗಿರುವ ಫಲಾನುಭವಿಗಳ ಕುರಿತು ತನಿಖೆ ನಡೆಸಲಾಗುವುದು. ಯಾರಾದರೂ ಆಧಾರ್‌ನ್ನು ಲಿಂಕ್ ಮಾಡಿರದಿದ್ದರೆ ಅವರ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ. ಅಂದರೆ ಅದು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಆಗ ಎಲ್ಲರೂ ಬರುತ್ತಾರೆ ಎಂದು ಹೇಳಿದ್ದರು. ಸಚಿವರ ಹೇಳಿಕೆಯಿಂದ ಸಭೆಯಲ್ಲಿದ್ದ ಹಲವಾರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಅಸಮಾಧಾನಗೊಂಡಂತೆ ಗೋಚರವಾಗಿತ್ತು. ಶಾ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅದನ್ನು ಅಸಾಂವಿಧಾನಿಕ ಮತ್ತು ಬೆದರಿಕೆ ಎಂದು ಬಣ್ಣಿಸಿದೆ.

ವಾರ್ತಾ ಭಾರತಿ 14 Dec 2025 10:34 pm

IND Vs SA- ಇದಪ್ಪಾ ತಿರುಗೇಟು ಅಂದ್ರೆ! ಟ್ರೋಲ್ ಗೊಳಗಾದ ಇಬ್ಬರೇ ಧರ್ಮಶಾಲಾದಲ್ಲಿ ಹರಿಣಗಳನ್ನು ಕಟ್ಟಿ ಹಾಕಿದ್ರು!

India Beat South Africa In 3rd T20I Match- ಬೌಲರ್ ಗಳ ಸಾಂಘಿಕ ಪ್ರದರ್ಶನದ ಫಲವಾಗಿ ಭಾರತ ತಂಡ ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿದೆ. ಕಳೆದ ಪಂದ್ಯದಲ್ಲಿ ವೈಡ್ ಎಸೆದು ಟೀಕೆಗೊಳಗಾಗಿದ್ದ ಅರ್ಶದೀಪ್ ಸಿಂಗ್ ಮತ್ತು ಸದಾ ಟ್ರೋಲ್ ಗೆ ಒಳಗಾಗುತ್ತಿರುವ ಹರ್ಷಿತ್ ರಾಣಾ ಅವರು ಆರಂಭದಲ್ಲೇ ವಿಕೆಟ್ ಗಳನ್ನು ಕಿತ್ತಿದ್ದು ಹರಿಣಗಳಿಗೆ ಮುಳುವಾಯಿತು. ಈ ಹೊಡೆತದಿಂದ ಪ್ರವಾಸಿ ತಂಡ ಕೊನೇವರೆಗೂ ಚೇತರಿಸಿಕೊಳ್ಳಲೇ ಇಲ್ಲ.

ವಿಜಯ ಕರ್ನಾಟಕ 14 Dec 2025 10:30 pm

ಓದಿದ್ದು 10ನೇ ತರಗತಿ, ಕಟ್ಟಿದ್ದು 10,00,00,00,000 ರೂಪಾಯಿ ಮೀರಿದ ಸಾಮ್ರಾಜ್ಯ... Shamanuru Shivashankarappa

ಕನ್ನಡ ನಾಡಿನ ರಾಜಕೀಯದಲ್ಲಿ ಹಾಗೂ ಉದ್ದಿಮೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹೆಸರು ಕೇಳದೆ ಇರುವ ವ್ಯಕ್ತಿ ಇಲ್ಲ ಎನ್ನಬಹುದು. ಒಂದು ಕಡೆ ತಮ್ಮ ರಾಜಕೀಯ ಸಾಧನೆಗಳ ಜೊತೆಗೆ ಮತ್ತೊಂದು ಕಡೆ ಉದ್ದಿಮೆಗಳನ್ನೂ ಬೆಳೆಸಿ ಹೆಸರು ಮಾಡಿದ್ದು ಶಾಮನೂರು ಶಿವಶಂಕರಪ್ಪ ಅವರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ಪ್ರಬಲವಾಗಿ ಬೆಳೆದು ನಿಲ್ಲಲು &ಕಾಂಗ್ರೆಸ್ ಪಕ್ಷಕ್ಕೆ

ಒನ್ ಇ೦ಡಿಯ 14 Dec 2025 10:27 pm

ಬೆಂಗಳೂರಿನಲ್ಲಿ ನಿರ್ಮಾಣವಾದ 449 ಕೋಟಿ ರೂ. ವೆಚ್ಚದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಈಗ ವಾಕಿಂಗ್‌ ತಾಣ!

ಬೆಂಗಳೂರಿನಲ್ಲಿ ನಿರ್ಮಿಸಲಾದ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ವಾಹನ ಸಂಚಾರಕ್ಕೆ ತೆರೆಯುವ ಮುನ್ನವೇ ರನ್ನಿಂಗ್ ಮತ್ತು ಜಾಗಿಂಗ್ ಟ್ರ್ಯಾಕ್ ಆಗಿ ಬಳಕೆಯಾಗುತ್ತಿದೆ. 449 ಕೋಟಿ ರೂ. ವೆಚ್ಚದ ಈ 5 ಕಿ.ಮೀ ಉದ್ದದ ಫ್ಲೈಓವರ್‌ನ ಒಂದು ಭಾಗವು ಜುಲೈ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಭಾಗದ ವಿಳಂಬದಿಂದ ಸ್ಥಳೀಯರು ಇದನ್ನು ತಮ್ಮ ವಾಯು ವಿಹಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ವಿಜಯ ಕರ್ನಾಟಕ 14 Dec 2025 10:24 pm

ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧರ್ಮಗಳು ಕಲಿಸಿಕೊಟ್ಟ ಜೀವನ ಕ್ರಮ ಅನುಸರಿಸಬೇಕು : ಮುಹಮ್ಮದ್ ಕುಂಞಿ

ಬಸವಕಲ್ಯಾಣದಲ್ಲಿ ಕುರ್‌ಆನ್ ಪ್ರವಚನ ಕಾರ್ಯಕ್ರಮ

ವಾರ್ತಾ ಭಾರತಿ 14 Dec 2025 10:15 pm

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ: 369 ವಾರ್ಡ್‌ಗಳ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಅರ್ಜಿ ಸ್ವೀಕಾರ ಆರಂಭ

ಜಿಬಿಎ ಚುನಾವಣೆಗೆ ಡಿಸೆಂಬರ್ 15 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಮೀಸಲಾತಿ ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಶುಲ್ಕವನ್ನು ಪಕ್ಷದ ನಿಧಿಗೆ ಬಳಸಲು ನಿರ್ಧರಿಸಲಾಗಿದೆ. ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ. ಜನರ ಉತ್ಸಾಹ ಮುಂದಿನ ಚುನಾವಣೆಗಳಿಗೆ ನಾಂದಿ ಹಾಡಿದೆ.

ವಿಜಯ ಕರ್ನಾಟಕ 14 Dec 2025 10:14 pm

ಹೊಸ ವರ್ಷಾಚರಣೆಗೆ ದಿನಗಣನೆ: ಕೋರಮಂಗಲ, ಎಂ.ಜಿ ರಸ್ತೆ ಸೇರಿ ಹಲವು ಕಡೆ ಕಟ್ಟೆಚ್ಚರ

ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಗರದೆಲ್ಲೆಡೆ ಗಸ್ತು ಹಾಗೂ ವಾಹನ ತಪಾಸಣೆ ತೀವ್ರಗೊಳಿಸಿದ್ದಾರೆ. ದೆಹಲಿ ಕಾರು ಸ್ಫೋಟ, ಗೋವಾ ಅಗ್ನಿ ದುರಂತದ ಭಯಾನಕ ಘಟನೆ ನಡೆದ ಹಿನ್ನೆಲೆಯಲ್ಲಿ ಪಬ್, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ಭದ್ರತಾ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಲಾಗಿದೆ.

ವಿಜಯ ಕರ್ನಾಟಕ 14 Dec 2025 10:13 pm

ದಿಲ್ಲಿ | ಇನ್ನಷ್ಟು ಹದಗೆಟ್ಟ ವಾಯುಮಾಲಿನ್ಯ

ಹೊಸದಿಲ್ಲಿ,ಡಿ.14: ರಾಷ್ಟ್ರ ರಾಜಧಾನಿ ದಿಲ್ಲಿ ರವಿವಾರ ಬೆಳಿಗ್ಗೆ ಹೊಗೆಮಂಜಿನ ದಪ್ಪ ಹೊದಿಕೆಯೊಂದಿಗೆ ಎಚ್ಚೆತ್ತಿದ್ದು,ವಾಯು ಗುಣಮಟ್ಟ ತೀವ್ರ ಕಳಪೆಗೆ ಕುಸಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಬೆಳಿಗ್ಗೆ ಆರು ಗಂಟೆಗೆ 462ರ ವಾಯು ಗುಣಮಟ್ಟ ಸೂಚ್ಯಂಕವನ್ನು(ಎಕ್ಯೂಐ) ದಾಖಲಿಸಿತ್ತು. ದಿಲ್ಲಿಯಲ್ಲಿನ ಎಲ್ಲ 40 ಮೇಲ್ವಿಚಾರಣೆ ಕೇಂದ್ರಗಳು ಎಕ್ಯೂಐ ಅನ್ನು ತೀವ್ರ ಕಳಪೆ ಮಟ್ಟದಲ್ಲಿ ವರದಿ ಮಾಡಿವೆ. ದಿಲ್ಲಿಯ ಹಲವಾರು ಪ್ರದೇಶಗಳಲ್ಲಿ ಹೊಗೆಯಿಂದ ಕೂಡಿದ ಮಂಜಿನಿಂದಾಗಿ ಗೋಚರತೆ ಕುಸಿದಿತ್ತು.

ವಾರ್ತಾ ಭಾರತಿ 14 Dec 2025 10:06 pm

ಬಂಧನದಲ್ಲಿರುವ ವಾಂಗ್‌ ಚುಕ್‌ ರ ಲಡಾಕ್ ಶಿಕ್ಷಣ ಸಂಸ್ಥೆಯ ಸಾಧನೆಗೆ ಸಂಸದಿಯ ಸಮಿತಿ ಪ್ರಶಂಸೆ

ಶಿಕ್ಷಣ ಸಂಸ್ಥೆಗೆ ಯುಜಿಸಿ ಮಾನ್ಯತೆಯನ್ನು ನೀಡದಿರುವುದಕ್ಕೆ ಕಳವಳ

ವಾರ್ತಾ ಭಾರತಿ 14 Dec 2025 10:03 pm

'ಶಿವಾಜಿ ಮಹಾರಾಜರು ಮುಸ್ಲಿಮರ ವಿರೋಧಿಯಲ್ಲ; ಸುಳ್ಳು ಹೇಳಬಾರದು' : ವೇದಿಕೆಯಲ್ಲಿಯೇ ಯತ್ನಾಳ್‌ಗೆ ಸಚಿವ ಸಂತೋಷ್ ಲಾಡ್ ತಿರುಗೇಟು

ಬೆಳಗಾವಿ : ಶಿವಾಜಿ ಮಹಾರಾಜರನ್ನು ಯಾರೂ ಮುಸ್ಲಿಮ್ ವಿರೋಧಿ ಎಂದು ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ ಪ್ರಸಂಗ ಜರುಗಿತು. ರವಿವಾರ ಶಿವಾಜಿ ವೃತ್ತದಲ್ಲಿ ಶಿವಪ್ರತಿಷ್ಠಾನ ಹಿಂದೂಸ್ತಾನ ಘಟಕ ಅಥಣಿ ಹಾಗೂ ಅಥಣಿ ತಾಲೂಕು 'ಏಕಛತ್ರ ಮರಾಠ ಸಮಾಜ ಸಂಘ'ದ ಸಂಯುಕ್ತಾಶ್ರಯದಲ್ಲಿ ನಡೆದ ನಡೆದ ಧ್ವಜಸ್ತಂಭ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಲೋಕಾರ್ಪಣೆಗೊಳಿಸಿ, ಬಳಿಕ ಭೋಜರಾಜ ಮೈದಾನದಲ್ಲಿನಡೆದ ಸಾರ್ವಜನಿಕ ಸಮಾವೇಶಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ವಾಸ್ತವದಲ್ಲಿ ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಮರ ವಿರೋಧಿಗಳಾಗಿರಲಿಲ್ಲ ಎಂದು ಅವರು ತಿಳಿಸಿದರು. ಅಲ್ಲದೆ, ಶಿವಾಜಿ ಮಹಾರಾಜರನ್ನು ಯಾರೂ ಮುಸ್ಲಿಮ್ ವಿರೋಧಿ ಎಂದು ಹೇಳಬಾರದು. ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದು ಸಚಿವರು ಹೇಳಿದರು. ಇದಕ್ಕೂ ಮೊದಲು ವೇದಿಕೆಯಲ್ಲಿ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿವಾಜಿ ಮಹಾರಾಜರು ಅಂದಿನ ಕಾಲದಲ್ಲಿ ಹಿಂದೂ ಸಮಾಜ ರಕ್ಷಣೆ ಮಾಡದೆ ಹೋಗಿದ್ದರೆ ಇಂದು ನಾವೆಲ್ಲರೂ ಅನಿವಾರ್ಯವಾಗಿ ಬೇರೆ ಧರ್ಮ ಅನುಸರಿಸಬೇಕಾಗಿತ್ತು ಎಂದಿದ್ದರು.  ಟಿಕೆಟ್‌ ಕೊಡಲ್ಲ ಯಾಕೆ? ಎಲ್ಲರೂ ಮರಾಠರ ಬಗ್ಗೆ ಮಾತನಾಡುತ್ತಾರೆ. ಆದರೆ ಯಾರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಬೇರೆ ಯಾವುದೇ ಸ್ಥಾನಕ್ಕೆ ಟಿಕೆಟ್ ಕೊಡುವುದಿಲ್ಲ ಎಂದು ಸಂತೋಷ್‌ ಲಾಡ್‌ ಅಸಮಾಧಾನ ಹೊರಹಾಕಿದರು.

ವಾರ್ತಾ ಭಾರತಿ 14 Dec 2025 9:55 pm

ಜಿಬಿಎ ಚುನಾವಣೆ; ನಾಳೆಯಿಂದ 369 ವಾರ್ಡ್‌ಗಳ ಆಕಾಂಕ್ಷಿಗಳ ಅರ್ಜಿ ಸ್ವೀಕಾರ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ನಾಳೆಯಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ನಿನ್ನೆ ಸಚಿವರ ಜೊತೆ ಚರ್ಚಿಸಿ ಈ ಅರ್ಜಿ ಜೊತೆಗೆ ಪಡೆಯುವ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ತೀರ್ಮಾನಿಸಿದ್ದು, ಸಾಮಾನ್ಯವರ್ಗಕ್ಕೆ 50 ಸಾವಿರ ಹಾಗೂ ಮಹಿಳೆಯರು ಹಾಗೂ ಪರಿಶಿಷ್ಟ ಸಮುದಾಯದವರಿಗೆ 25 ಸಾವಿರ ರೂ. ನಿಗದಿಪಡಿಸಲಾಗಿದೆ. ಆನ್ಲೈನ್ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ: ಮತ ಕಳ್ಳತನ ವಿರುದ್ಧದ ಹೋರಾಟ ಇಲ್ಲಿಗೆ ಮುಗಿಯುವುದೇ ಎಂದು ಕೇಳಿದಾಗ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ ಕಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು. ಇವರು ನಮ್ಮ ಕಾರ್ಯಕರ್ತರಿಗೆ ಕಾನೂನು ಸಲಹೆ ನೀಡಲಾಗುವುದು. ಜಿ.ಸಿ.ಚಂದ್ರಶೇಖರ್ ಅವರು ಬಿಎಲ್‌ ಎ ಗುರುತಿನ ಚೀಟಿ ನೀಡಲು ತಯಾರು ಮಾಡಿಕೊಂಡಿದ್ದಾರೆ. ಎಐಸಿಸಿಯಿಂದ ಒಪ್ಪಿಗೆ ಪಡೆಯಲು ತೆಗೆದುಕೊಂಡು ಹೋಗಲಾಗುವುದು. ನಾವು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಹಿ ಸಂಗ್ರಹ ಮಾಡಿದ್ದೇವೆ ಎಂದರು. ಜನರ ಉತ್ಸಾಹ ಮುಂದಿನ ಚುನಾವಣೆಗಳಿಗೆ ನಾಂದಿ: ಇಂದಿನ ಪ್ರತಿಭಟನೆಯಲ್ಲಿ ಜನರಲ್ಲಿ ಇದ್ದ ಉತ್ಸಾಹ 2028 ಹಾಗೂ 2029ರ ಚುನಾವಣೆಗೆ ನಾಂದಿಯಾಡಿದೆ. ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ ಎಂದು ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಇದರಿಂದ ಸಂತೋಷವಾಗಿದೆ, ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅಧಿಕಾರ ಸಿಗದ ಕಾರ್ಯಕರ್ತರು ಕೂಡ ತಮ್ಮ ಹಣದಲ್ಲಿ ಈ ಪ್ರತಿಭಟನೆಗೆ ಆಗಮಿಸಿದ್ದಾರೆ ಎಂದರು. ನನ್ನನ್ನು ನೋಡಿದರೆ ನಮ್ಮ ನಾಯಕರು ಕುಶಲೋಪರಿ ವಿಚಾರಿಸುತ್ತಾರೆ : ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ನಮ್ಮ ನಾಯಕರಿಗೆ ನನ್ನನ್ನು ನೋಡಿದ ತಕ್ಷಣ ಅರ್ಥವಾಗುತ್ತದೆ. ನನ್ನ ಕುಶಲೋಪರಿ ವಿಚಾರಿಸುತ್ತಾರೆ. ಇದು ಸೌಹಾರ್ದಯುತ ಭೇಟಿ, ವೈಯಕ್ತಿಕ ಭೇಟಿ ಅಲ್ಲ. ಇದರ ಹೊರತಾಗಿ ಬೇರೆ ವಿಚಾರಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಆಗುವುದಿಲ್ಲ. ಅದರ ಅವಶ್ಯಕತೆ ಇಲ್ಲ ಎಂದರು.

ವಾರ್ತಾ ಭಾರತಿ 14 Dec 2025 9:52 pm

ಶಾಮನೂರು ಶಿವಶಂಕರಪ್ಪ ನಿಧನ: ಡಿ.15 ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ, ದಾವಣಗೆರೆ ನಗರ ವ್ಯಾಪ್ತಿಯ ಶಾಲೆಗಳಿಗೆ ಡಿಸೆಂಬರ್ 15 ರಂದು ರಜೆ ಘೋಷಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ವಿಜಯ ಕರ್ನಾಟಕ 14 Dec 2025 9:44 pm

ಬೆಂಗಳೂರಿನಂತೆ ದಾಬಸ್‌ಪೇಟೆಯಲ್ಲಿ ಟ್ರಾಫಿಕ್‌ ಹೆಚ್ಚಳ; ಪಾದಾಚಾರಿಗಳು, ವಾಹನ ಸವಾರರಿಗೆ ಸುಸ್ತೋಸುಸ್ತು

ದಾಬಸ್‌ಪೇಟೆಯಲ್ಲಿ ಬೆಂಗಳೂರಿನ ಐಟಿ ಕಾರಿಡಾರ್‌ಗೆ ಸಮಾನವಾದ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕೈಗಾರಿಕಾ ವಲಯದ ಬೆಳವಣಿಗೆ, ಸಮೂಹ ಸಾರಿಗೆ ಕೊರತೆ, ರಸ್ತೆ ಕಾಮಗಾರಿಗಳು ಮತ್ತು ವಾಹನಗಳ ಅತಿಯಾದ ದಟ್ಟಣೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಪಾದಚಾರಿಗಳು ರಸ್ತೆ ದಾಟುವುದೇ ದುಸ್ತರವಾಗಿದ್ದು, ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುತ್ತಿದ್ದಾರೆ.

ವಿಜಯ ಕರ್ನಾಟಕ 14 Dec 2025 9:43 pm

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಐತಿಹಾಸಿಕ ಕ್ಷಣ; PCIನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಂಗೀತಾ ಬರೂಹಾ ಪಿಶಾರೋಟಿ ಆಯ್ಕೆ

ಹೊಸದಿಲ್ಲಿ, ಡಿ.14: ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತೆ ಸಂಗೀತಾ ಬರೂಹಾ ಪಿಶಾರೋಟಿ ಅವರು ಡಿಸೆಂಬರ್ 13ರಂದು ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಕ್ಲಬ್‌ನ ಮೊದಲ ಮಹಿಳಾ ಅಧ್ಯಕ್ಷೆಯಾದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಪಿಶಾರೋಟಿ ಅವರು 1,019 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದರು. ಅವರ ಪ್ರತಿಸ್ಪರ್ಧಿಗಳಾದ ಅತುಲ್ ಮಿಶ್ರಾ ಅವರಿಗೆ 129 ಹಾಗೂ ಅರುಣ್ ಶರ್ಮಾ ಅವರಿಗೆ 89 ಮತಗಳು ಲಭಿಸಿವೆ. ಪಿಶಾರೋಟಿ ನೇತೃತ್ವದ ತಂಡವು ಎಲ್ಲಾ ಪದಾಧಿಕಾರಿಗಳ ಸ್ಥಾನಗಳು ಹಾಗೂ 16 ಸದಸ್ಯರನ್ನೊಳಗೊಂಡ ವ್ಯವಸ್ಥಾಪಕ ಸಮಿತಿಯ ಸ್ಥಾನಗಳನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಫ್ಝಲ್ ಇಮಾಮ್ 948 ಮತಗಳೊಂದಿಗೆ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಜತಿನ್ ಗಾಂಧಿ 1,029 ಮತಗಳನ್ನು ಪಡೆದು ಭಾರಿ ಅಂತರದ ಜಯ ದಾಖಲಿಸಿದರು. ಖಜಾಂಚಿ ಹುದ್ದೆಗೆ ಅದಿತಿ ರಜಪೂತ್ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಪಿ.ಆರ್. ಸುನಿಲ್ ಅವಿರೋಧವಾಗಿ ಆಯ್ಕೆಯಾದರು. ವ್ಯವಸ್ಥಾಪಕ ಸಮಿತಿಯ ಚುನಾವಣೆಯಲ್ಲಿ ನೀರಜ್ ಕುಮಾರ್ 932 ಮತಗಳೊಂದಿಗೆ ಅಗ್ರಸ್ಥಾನ ಪಡೆದರು. ಅವರೊಂದಿಗೆ ಅಭಿಷೇಕ್ ಕುಮಾರ್ ಸಿಂಗ್, ಜಹಾನ್ವಿ ಸೇನ್, ಅಶೋಕ್ ಕೌಶಿಕ್, ಕಲ್ಲೋಲ್ ಭಟ್ಟಾಚಾರ್ಜಿ, ಪ್ರವೀಣ್ ಜೈನ್ ಸೇರಿದಂತೆ ಇನ್ನಿತರ 15 ಮಂದಿ ಆಯ್ಕೆಯಾದರು. ಪಿಸಿಐನ ಮುಖ್ಯ ಚುನಾವಣಾ ಆಯುಕ್ತ ಎಂ.ಎಂ.ಸಿ. ಶರ್ಮಾ ರವಿವಾರ ಸಂಜೆ ಪಿಸಿಐ ಲಾನ್ಸ್‌ ನಲ್ಲಿ ಫಲಿತಾಂಶ ಘೋಷಿಸಿದರು. ಫಲಿತಾಂಶದ ಬಳಿಕ ಮಾತನಾಡಿದ ಪಿಶಾರೋಟಿ, “ಮುಕ್ತ, ನ್ಯಾಯಸಮ್ಮತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡುವ ನಮ್ಮ ಬದ್ಧತೆಯ ಮೇಲೆ ಸದಸ್ಯರು ವ್ಯಕ್ತಪಡಿಸಿದ ವಿಶ್ವಾಸವೇ ಈ ಗೆಲುವು,” ಎಂದು ಹೇಳಿದರು. ನಿರ್ಗಮಿತ ಅಧ್ಯಕ್ಷ ಗೌತಮ್ ಲಹಿರಿ ಅವರು ಪಿಸಿಐ ಸದಸ್ಯರಿಗೆ ಧನ್ಯವಾದ ಸಲ್ಲಿಸಿ, ನೂತನ ತಂಡವು ಕ್ಲಬ್ ಅನ್ನು ಇನ್ನಷ್ಟು ಸ್ಪಂದನಶೀಲ ಸಂಸ್ಥೆಯಾಗಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ನೀರಜ್ ಠಾಕೂರ್ ಅವರು, “ಪಿಸಿಐಗೆ ಮೊದಲ ಮಹಿಳಾ ಅಧ್ಯಕ್ಷೆಯ ಆಯ್ಕೆಯು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳತ್ತ ಕ್ಲಬ್‌ ನ ಬದ್ಧತೆಯ ಮಹತ್ವದ ಸಂಕೇತ,” ಎಂದು ಅಭಿಪ್ರಾಯಪಟ್ಟರು.

ವಾರ್ತಾ ಭಾರತಿ 14 Dec 2025 9:43 pm

Bengaluru | ಮನೆಗೆ ನುಗ್ಗಿ ಬೆದರಿಕೆ, ಹಣ ವಸೂಲಿ; ನಕಲಿ ಪಿಎಸ್‍ಐ ಸೇರಿ ನಾಲ್ವರ ಬಂಧನ

ಬೆಂಗಳೂರು : ಪೊಲೀಸ್ ಸಮವಸ್ತ್ರ ಧರಿಸಿ, ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‍ಐ ಸೇರಿ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ, ಪ್ರಮೋದ್,ವಿನಯ್, ಹೃತ್ವಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಸಂಚು ರೂಪಿಸಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆಯೇ ವ್ಯಕ್ತಿಗೆ ಬೆದರಿಸಿ ಹಣ ಲೂಟಿ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪಿಎಸ್‍ಐ ಆಗಬೇಕು ಎಂದು ಮಲ್ಲಿಕಾರ್ಜುನ ಎರಡು ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದನು, ಆದರೂ ಪರೀಕ್ಷೆ ಉತ್ತೀರ್ಣ ಮಾಡಿ ಪಿಎಸ್‍ಐ ಆಗಿದ್ದೇನೆ ಎಂದು ಊರಿನಲ್ಲಿ ಬಿಂಬಿಸಿಕೊಂಡಿದ್ದನು. ಪೊಲೀಸ್ ಸಮವಸ್ತ್ರ, ಲಾಠಿ, ಟೋಪಿ, ಶೂ ಧರಿಸಿ ಫೊಟೋ ಶೂಟ್ ಮಾಡಿಸಿ ಸ್ವಗ್ರಾಮ ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್‍ಐ ಆಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ. ಡಿ.7ರಂದು ನಾಲ್ವರು ಆರೋಪಿಗಳು ನವೀನ್ ಎಂಬುವವರ ಮನೆಗೆ ತೆರಳಿ, ‘ನೀನು ಗಾಂಜಾ ಮಾರಾಟ ಮಾಡುತ್ತಿರುವೆ, ಮನೆ ಶೋಧ ನಡೆಸಬೇಕು ಎಂದು ಬೆದರಿಕೆ ಹಾಕಿ, ನವೀನ್ ಮೇಲೆ ಲಾಠಿ, ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದರು. ಬಂಧನ ಮಾಡಬಾರದು ಎಂದರೆ ಹಣ ಕೊಡಬೇಕು’ ಎಂದು ಖಾತೆಯಲ್ಲಿದ್ದ 87 ಸಾವಿರ ರೂ. ಬೀರುವನಲ್ಲಿದ್ದ 53 ಸಾವಿರ ರೂ. ಪರ್ಸ್‍ನಲ್ಲಿದ್ದ 2 ಸಾವಿರ ರೂ. ಕಸಿದು ಪರಾರಿಯಾಗಿದ್ದರು ಎಂ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿ ನಕಲಿ ಪಿಎಸ್‍ಐ ಸೇರಿ ನಾಲ್ವರನ್ನು ಬಂಧಿಸಿ 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿರುವ ವಿದ್ಯಾರಣ್ಯಪುರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ವಾರ್ತಾ ಭಾರತಿ 14 Dec 2025 9:39 pm

ಬೆಂಗಳೂರು | ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ; ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಬೆಂಗಳೂರು : ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿರುವ ಘಟನೆ ನಗರದ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕಾರ್ತಿಕ್(26) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆ ವೇಳೆ ಬಿಡಿಸಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.  ಮಹಿಳೆ ಜೊತೆಯಲ್ಲಿ ಕಾರ್ತಿಕ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ಈ ಹಿಂದೆ ಜಗಳ ನಡೆದಿತ್ತು. ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಆ ವೇಳೆ ಪೊಲೀಸರು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಈ ನಡುವೆ ಮಹಿಳೆಯೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಘಟನೆ ವೇಳೆ ಗ್ರಾಮಸ್ಥರ ಮಧ್ಯ ಪ್ರವೇಶದಿಂದಾಗಿ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವಿಗೆ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 14 Dec 2025 9:26 pm

ದೇಶದಲ್ಲೇ ಅತೀ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ; ಉದ್ಯಮದಿಂದ ರಾಜಕೀಯದವರೆಗೆ....

ದಾವಣಗೆರೆ : ದೇಶದ ಅತೀ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಶಾಮನೂರು ಶಿವಶಂಕರಪ್ಪ ಅವರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವರೂ ಆಗಿರುವ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್ ಸೇರಿದಂತೆ ಮೂವರು ಪುತ್ರರು. ನಾಲ್ವರು ಪುತ್ರಿಯರು ಹಾಗೂ ಸಂಸದೆ, ಸೊಸೆ ಡಾ.ಪ್ರಭಾ ಮಲ್ಲಿಕಾಜುನ್ ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶಾಮನೂರು ಕಲ್ಲಪ್ಪ–ಸಾವಿತ್ರಮ್ಮ ದಂಪತಿ ಪುತ್ರರಾಗಿ 1931ರ ಜೂನ್ 16ರಂದು ಜನಿಸಿದ ಶಾಮನೂರು ಶಿವಶಂಕರಪ್ಪ ಮೂಲತಃ ಉದ್ಯಮಿ. ರಾಜಕೀಯ ಕ್ಷೇತ್ರ ಪ್ರವೇಶಿಸಿದ ಅವರು 6 ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ಅವಧಿಗೆ ಕೆಪಿಸಿಸಿ ಖಜಾಂಚಿಯಾಗಿದ್ದರು. 1969ರಲ್ಲಿ ನಗರಸಭೆ ಮೂಲಕ ರಾಜಕೀಯ ಪ್ರವೇಶಿಸಿದ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಆಗ ಅವರಿಗೆ 63 ವರ್ಷ ವಯಸ್ಸಾಗಿತ್ತು. ಶಾಸಕರಾಗಿ, ಸಂಸದರಾಗಿ ನಿರಂತರವಾಗಿ ಆಯ್ಕೆಯಾದ ಅವರು ವಯಸ್ಸಾದಂತೆ ರಾಜಕಾರಣದಲ್ಲಿ ಮೇಲೇರಿದರು. ಶಾಮನೂರು ಶಿವಶಂಕರಪ್ಪ 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ ‘ವೀರಶೈವ–ಲಿಂಗಾಯತ’ ಎರಡೂ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಅವರ ಅವಧಿಯಲ್ಲಿ ವೀರಶೈವ ಮಹಾಸಭಾದ ಹೆಸರು ವೀರಶೈವ–ಲಿಂಗಾಯತ ಮಹಾಸಭಾ ಎಂಬುದಾಗಿ ಪರಿವರ್ತನೆಯಾಯಿತು. ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ಮುಂದಾಗಿದ್ದ ಶಾಮನೂರು ಶಿವಶಂಕರಪ್ಪ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಮೊದಲ ಹೆಜ್ಜೆಯಾಗಿ ಪಂಚಪೀಠ ಮಠಾಧೀಶರ ಸಮ್ಮೇಳವನ್ನು ಆಯೋಜಿಸಿ ಯಶಸ್ಸು ಕಂಡಿದ್ದರು. ವಿರಕ್ತ ಮತ್ತು ಗುರುಪರಂಪರೆ ಒಗ್ಗೂಡಿದರೆ ಸಮಾಜ ಇನ್ನಷ್ಟು ಸಬಲವಾಗುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಫರ್ಧಿಸಿದ 94ರ ಹರೆಯದ ಶಾಮನೂರು ಶಿವಶಂಕರಪ್ಪ ಗೆದ್ದು ಬೀಗಿದ್ದು, ಭಾರತದ ಅತೀ ಹಿರಿಯ ಶಾಸಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಒಟ್ಟು 84,258 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಬಿಜಿ ಅಜಯಕುಮಾರ್ 56,410 ಮತಗಳನ್ನು ಗಳಿಸಿದ್ದರು. 27,888 ಮತಗಳ ಅಂತರದಲ್ಲಿ ಶಾಮನೂರು ಅವರು ಭರ್ಜರಿ ಜಯ ಸಾಧಿಸಿದ್ದರು. ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಕುಟುಂಬ ಮೂಲತಃ ವ್ಯಾಪಾರಸ್ಥರಾಗಿದ್ದರು. ಅದೇ ವ್ಯಾಪಾರದಲ್ಲಿ ಗುಮಾಸ್ತರಾಗಿ ಲಾಭ-ನಷ್ಟದ ಲೆಕ್ಕ ಬರೆಯುತ್ತಿದ್ದ ಶಾಮನೂರು ನಂತರ ತಮ್ಮ ಜಾಣ್ಮೆಯಿಂದ ಸಕ್ಕರೆ ಕಾರ್ಖಾನೆ, ಅಕ್ಕಿ ಮಿಲ್‍ಗಳನ್ನು ತೆರೆದು ಸ್ವ-ಉದ್ಯಮ ಆರಂಭಿಸಿದರು. ಆ ಮೂಲಕ ನೂರಾರು ಜನರಿಗೆ ಉದ್ಯೋಗದಾತರಾದರು. ಪಾರ್ವತಮ್ಮ ಎಂಬುವವರನ್ನು ಬಾಳಸಂಗಾತಿಯಾಗಿ ಪಡೆದಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಮೂವರು ಗಂಡು ಮತ್ತು ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಪುತ್ರ ಬಕ್ಕೇಶ್ ಮೊದಲಿಗೆ ರಾಜಕೀಯ ಪ್ರವೇಶಿಸಿದರಾದರೂ ಕಾರಣಾಂತರಿಂದ ಹಿಂದೆ ಸರಿದರು. ಇನ್ನೋರ್ವ ಪುತ್ರ ಎಸ್.ಎಸ್.ಗಣೇಶ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮೂರನೇ ಪುತ್ರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ತಂದೆಯಂತೆ ರಾಜಕೀಯದಲ್ಲಿದ್ದಾರೆ. ಶಾಮನೂರು ಶಿವಶಂಕರಪ್ಪ ಮೊದಲು ರಾಜಕೀಯ ಪ್ರವೇಶಿಸಿದ್ದೇ 1969ರಲ್ಲಿ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ನಗರಸಭಾ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅವರು 1972ರಲ್ಲಿ ನಗರಸಭೆ ಅಧ್ಯಕ್ಷರಾದ ನಂತರ ಸುಮಾರು ಎಂಟು ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದರು. 1980 ರಲ್ಲಿ ದೇವರಾಜ್ ಅರಸು ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಎಂದು ಇಬ್ಭಾಗವಾದ ಕಾಲದಲ್ಲಿ ಅರಸು ಅವರಿಗೆ ಪ್ರೇರಿತರಾಗಿದ್ದ ಶಿವಶಂಕರಪ್ಪ ಅರಸು ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಚಿತ್ರದುರ್ಗದ ಲೋಕಸಭಾ ಕ್ಷೇತ್ರ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದರು. ಅದಾದ ಬಳಿಕ ಮತ್ತೆ ರಾಜಕೀಯದಿಂದ ವಿಶ್ರಾಂತಿ ಪಡೆದ ಶಾಮನೂರು 1994 ರಲ್ಲಿದಾವಣಗೆರೆ ಶಾಸಕರಾಗಿ ಗೆಲುವು ಕಂಡು ಅಲ್ಲಿಂದ ಮತ್ತೆ ಹಿಂತಿರುಗಿ ನೋಡದೆ ತಮ್ಮ ರಾಜಕೀಯದ ಯುಗ ಆರಂಭಿಸಿದರು. 1997 ರಲ್ಲಿ ಚಿತ್ರದುರ್ಗದಿಂದ ವಿಭಜಿತಗೊಂಡು ದಾವಣಗೆರೆ ಸ್ವತಂತ್ರ ಜಿಲ್ಲೆಯಾಗಿ ಘೋಷಿಸಲ್ಪಟ್ಟಾಗ ಮತ್ತೆ ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1999ರಲ್ಲಿನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ಶಾಮನೂರು 2004ರಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ದಾವಣಗೆರೆಯಿಂದ ಗೆದ್ದು ಗೆಲುವನ್ನು ಅಪ್ಪಿಕೊಂಡ ನಂತರ ಅಲ್ಲಿಂದ ಇಲ್ಲಿಯವರೆಗೆ ಸೋಲಿನ ಕಡೆ ತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಪ್ರಾದೇಶಿಕವಾರು ದಾವಣಗೆರೆ ದಕ್ಷಿಣ ಮತ್ತುಉತ್ತರ ಎಂದು ಕ್ಷೇತ್ರ ವಿಂಗಡಣೆಯಾದಾಗ ದಾವಣಗೆರೆ ದಕ್ಷಿಣದಿಂದ ಸತತವಾಗಿ 2023ರ ಇಲ್ಲಿಯವರೆಗೆ 4ನೇ ಬಾರಿ ಶಾಮನೂರು ಶಿವಶಂಕರಪ್ಪ ಗೆಲ್ಲುತ್ತಲೇ ಬಂದಿದ್ದಾರೆ.

ವಾರ್ತಾ ಭಾರತಿ 14 Dec 2025 9:02 pm

ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಚಳಿ ಹಿಡಿಸಿದ ಭಾರತ | 117ಕ್ಕೆ ಆಲೌಟ್ ಆದ ಮರ್ಕ್ರಮ್ ಬಳಗ

ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ - ದಕ್ಷಿಣ ಆಫ್ರಿಕಾ ನಡುವಿನ T20 ಸರಣಿಯ ಮೂರನೇ ಪಂದ್ಯದಲ್ಲಿ, ರವಿವಾರ ದಕ್ಷಿಣ ಆಫ್ರಿಕಾವು ಭಾರತಕ್ಕೆ 9 ವಿಕೆಟ್ ಗಳ ನಷ್ಟಕ್ಕೆ 117 ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು ರನ್ ಗಳಿಸಲು ಪರದಾಟ ನಡೆಸಿತು. ಒಂದು ರನ್ ಗಳಿಸುವಷ್ಟರಲ್ಲಿ ತಂಡವು 2 ವಿಕೆಟ್ ಕಳೆದುಕೊಂಡಿತ್ತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ತಂಡದ ನಾಯಕ ಆಡಮ್ ಮರ್ಕ್ರಮ್ ತಂಡವನ್ನು ರಕ್ಷಣಾತ್ಮಕ ಆಟವಾಡಿ ನೂರರ ಗಡಿ ದಾಟಿಸಿದರು. 46 ಎಸೆತಗಳಲ್ಲಿ 2 ಸಿಕ್ಸರ್ 6 ಬೌಂಡರಿ ಗಳ ಮೂಲಕ 61 ರನ್ ಗಳಿಸಿದ ಅವರು ಅರ್ಷದೀಪ್ ಸಿಂಗ್ ಬೌಲಿಂಗ್ ನಲ್ಲಿ ಜಿತೇಶ್ ಶರ್ಮಾ ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ಹಿಡಿದರು.

ವಾರ್ತಾ ಭಾರತಿ 14 Dec 2025 8:52 pm

ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಫಿನಾಲೆ; ಕಿರೀಟ ಮುಡಿಗೇರಿಸಿಕೊಂಡ 15 ವರ್ಷದ ಬಾಲಕ ಶೇನ್ ಚಂದಾರಿಯಾ!

Formula 4 Indian Championship- ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಸೂಟ್ ನಲ್ಲಿ ಡಿಸೆಂಬರ್ 14ರಂದು ನಡೆದ FIA ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್‌ನ ಮೂರನೇ ಸೀಸನ್ ರೋಚಕ ಅಂತ್ಯ ಕಂಡಿತು. ಕೆನ್ಯಾದ 15 ವರ್ಷದ ಬಾಲಕ ಶೇನ್ ಚಂದಾರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿ, ಟೂರ್ನಮೆಂಟ್‌ನ ಅತೀ ಕಿರಿಯ ಚಾಂಪಿಯನ್ ಎಂಬ ಗೌರವಕ್ಕೆ ಪಾತ್ರರಾದರು. ಇದು ಅವರ ವೃತ್ತಿಜೀವನದ ಮೊದಲ ಪ್ರಮುಖ ಕಿರೀಟವಾಗಿದೆ. ಚೆನ್ನೈ ಟರ್ಬೊ ರೈಡರ್ಸ್ ತಂಡವು ತಂಡಗಳ ವಿಭಾಗದಲ್ಲಿ ಚಾಂಪಿಯನ್‌ಷಿಪ್ ಗೆದ್ದು ಬೀಗಿತು.

ವಿಜಯ ಕರ್ನಾಟಕ 14 Dec 2025 8:51 pm

ಶಾಮನೂರು ಶಿವಶಂಕರಪ್ಪ: ಓದಿದ್ದು 10ನೇ ಕ್ಲಾಸ್‌; ಕಟ್ಟಿದ್ದು ಬೃಹತ್‌ ಸಾಮ್ರಾಜ್ಯ! ಸೋಲಿಲ್ಲದ ಸರದಾರ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ರಾಜಕೀಯದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ನಿಧನವು ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ.

ವಿಜಯ ಕರ್ನಾಟಕ 14 Dec 2025 8:48 pm

ಆತೂರು: ಆಯಿಶಾ ವಿದ್ಯಾಲಯದ 17ನೇ ವಾರ್ಷಿಕೋತ್ಸವ

ಆತೂರು: ಆಯಿಶಾ ವಿದ್ಯಾಲಯ, ಆತೂರು ಸಂಸ್ಥೆಯ 17ನೇ ವಾರ್ಷಿಕೋತ್ಸವವು ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮಾ ತಸ್ಕೀನ್ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಜಲೀಲ್ ಮುಕ್ರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಂಶುಪಾಲರು ವಾರ್ಷಿಕ ವರದಿಯನ್ನು ವಾಚಿಸಿ ಶಾಲೆಯ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ಬಹುತ್ವವನ್ನು ಗೌರವಿಸುವ ಹಾಗೂ ಸಮುದಾಯವನ್ನು ಜೋಡಿಸುವ ಮನೋಭಾವ ಶಿಕ್ಷಣ ಸಂಸ್ಥೆಗಳಲ್ಲಿ ರೂಪುಗೊಳ್ಳಬೇಕು ಎಂದು ಹೇಳಿದರು. ಸದುದ್ದೇಶ ಹಾಗೂ ಆಶಯಗಳ ಮೂಲಕ ಆಯಿಶಾ ವಿದ್ಯಾ ಸಂಸ್ಥೆ ಊರಿಗೆ ಹಾಗೂ ಸಮುದಾಯಕ್ಕೆ ಬೆಳಕಾಗಲಿ ಎಂದು ಆಶಿಸಿದರು. ಹಳೆ ವಿದ್ಯಾರ್ಥಿನಿ ರೈಹಾನಾ ಕೆ. ತಮ್ಮ ವಿದ್ಯಾಲಯದ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸರ್ಕಾರಿ ಪಿಯು ಕಾಲೇಜು ಉಪ್ಪಿನಂಗಡಿ ಕಾರ್ಯನಿರ್ವಹಣಾ ಅಧ್ಯಕ್ಷ ಅಝೀಝ್ ಬಸ್ತೀಕಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಾಗೂ ಆಯಿಶಾ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಡಾ. ಅಬ್ದುಲ್ ಮಜೀದ್ ವಹಿಸಿ, ನಮ್ಮೊಳಗಿನ ಪ್ರತಿಭೆಯನ್ನು ಹೊರತಂದು ಅದರಲ್ಲಿ ಸಂತೋಷವನ್ನು ಕಂಡು ಜೀವನವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ಶಾಲಾ ನಾಯಕಿ 10ನೇ ತರಗತಿಯ ಶಾದಾ ರಹ್ಫಾ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿಯರಾದ ರಮ್ಯಾ ಮತ್ತು ನಿಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

ವಾರ್ತಾ ಭಾರತಿ 14 Dec 2025 8:37 pm

ಶ್ಯಾಮನೂರು ಶಿವಶಂಕರಪ್ಪ ನಿಧನ; ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸೇರಿ ರಾಜಕೀಯ ನಾಯಕರಿಂದ ಸಂತಾಪ

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. 94 ವರ್ಷದ ಅವರ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕಾರಣ, ಶಿಕ್ಷಣ, ಉದ್ಯಮ, ಸಮಾಜಸೇವೆಗಳಲ್ಲಿ ಅವರು ಸಾಧನೆ ಮಾಡಿದ್ದರು. ಅವರ ನಿಧನ ನಾಡಿಗೆ ದೊಡ್ಡ ನಷ್ಟ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಶಿವಶಂಕರಪ್ಪನವರ ಆತ್ಮಕ್ಕೆ ಸದ್ಗತಿ ಕೋರಲಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸಲಾಗಿದೆ.

ವಿಜಯ ಕರ್ನಾಟಕ 14 Dec 2025 8:33 pm

ಕೊರಗ ಬುಡಕಟ್ಟು ಸಮುದಾಯ ಪ್ರಥಮ ವೈದ್ಯೆ!

ಕುಂದಾಪುರ ಉಳ್ತೂರಿನ ಡಾ.ಕೆ.ಸ್ನೇಹಾ ಅವರಿಂದ ಅಪೂರ್ವ ಸಾಧನೆ

ವಾರ್ತಾ ಭಾರತಿ 14 Dec 2025 8:28 pm

ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ಹೋರಾಟ : ಡಿ.ಕೆ. ಶಿವಕುಮಾರ್

ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ರವಿವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಾವು ಮತಕಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೆವು. ಇದೀಗ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶ ನೀಡಲಾಗುತ್ತಿದೆ. ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಉದಾಹರಣೆಗಳಿವೆ. ರಾಹುಲ್ ಗಾಂಧಿ ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಇನ್ನು ಹಲವು ಬಾರಿ ಮಾಧ್ಯಮಗೋಷ್ಠಿ ಮೂಲಕ ದಾಖಲೆಗಳನ್ನು ಬಹಿರಂಗಗೊಳಿಸಿದ್ದಾರೆ ಎಂದು ಅವರು ಹೇಳಿದರು. ಇಷ್ಟಾದರೂ ಚುನಾವಣಾ ಆಯೋಗದಿಂದ ಸರಿಯಾದ ಉತ್ತರ ಸಿಗುತ್ತಿಲ್ಲ. ಹೀಗಾಗಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನಾವು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. ಸೋಲು, ಗೆಲುವಿಗೆ ಕಾಂಗ್ರೆಸಿಗರು ಯೋಚಿಸುವುದಿಲ್ಲ: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಸಮಾವೇಶ ಮಾಡುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, “ಅವರು ತಮ್ಮ ಖುಷಿಗೆ ಏನು ಬೇಕಾದರೂ ಮಾತನಾಡುತ್ತಾರೆ. ನಾವು ಕಾಂಗ್ರೆಸಿಗರು ಸೋಲು, ಗೆಲುವಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನ ತಂದು ಕೊಟ್ಟಾಗ ನಮ್ಮ ಹಿರಿಯರು ಸಾಕಷ್ಟು ಪ್ರಾಣತ್ಯಾಗ ಮಾಡಿದ್ದಾರೆ. ಈ ದೇಶದ ಆರ್ಥಿಕ ತಜ್ಞನಿಗೆ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದರು. ಜವಾಹರ್ ಲಾಲ್ ನೆಹರೂ, ಗಾಂಧಿಜಿ ಸೇರಿದಂತೆ ಅನೇಕ ಮಹನೀಯರು ಜೈಲುವಾಸ ಅನುಭವಿಸಿದರು. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದರು. ಇಂದು ಪಕ್ಷ ಕಷ್ಟಕಾಲದಲ್ಲಿರುವಾಗ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದಾರೆ” ಎಂದು ತಿಳಿಸಿದರು.

ವಾರ್ತಾ ಭಾರತಿ 14 Dec 2025 8:27 pm

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ; ಸಿಎಂ ಸೇರಿ ಗಣ್ಯರ ಸಂತಾಪ

ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಇಂದು (ಡಿ.14) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಶಂಕಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಇಂದು ಸಂಜೆ ಮೃತಪಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಆರ್‌.ಅಶೋಕ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನವಾರ್ತೆ ನೋವುಂಟುಮಾಡಿದೆ.  ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು, ಸಿಕ್ಕ ಅಧಿಕಾರವನ್ನು ಜನಕಲ್ಯಾಣಕ್ಕಾಗಿಯೇ ಮುಡುಪಿಟ್ಟಿದ್ದ ಮುತ್ಸದ್ದಿ ನಾಯಕನ ಅಗಲಿಕೆಯಿಂದ ಸಮಾಜ ಬಡವಾಗಿದೆ.  ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಿದ ಶಿವಶಂಕರಪ್ಪನವರ ಕಾರ್ಯಗಳು ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಲಿದೆ.  ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಮತ್ತವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸಿದ್ದರಾಮಯ್ಯ, ಮುಖ್ಯಮಂತ್ರಿ ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ ಮಾಜಿ ಸಚಿವರು, ಹಿರಿಯ ಮುಖಂಡರು, ವೀರಶೈವ ಮಹಾಸಭೆಯ ಅಧ್ಯಕ್ಷರಾದ  ಶಾಮನೂರು ಶಿವಶಂಕರಪ್ಪನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.  ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪನವರು ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.  ಅಗಲಿದ ಶಿವಶಂಕರಪ್ಪನವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ, ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಆರ್‌.ಅಶೋಕ್‌, ವಿಪಕ್ಷ ನಾಯಕ ನಾಡಿನ ಹಿರಿಯ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಉದ್ಯಮಿಗಳು ಆಗಿದ್ದ ಸರಳ ಸಜ್ಜನಿಕೆಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪನವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ವೈಯಕ್ತಿಕವಾಗಿ ನಾನು ಬಹಳ ಗೌರವಿಸುತ್ತಿದ್ದ ನಾಯಕರು ಅವರಾಗಿದ್ದರು. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ನೇರ ನಡೆನುಡಿಯ ಅವರು ಸಚಿವರಾಗಿಯೂ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟು ದುಡಿದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮ ಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಶಾಸಕರು, ಮಾಜಿ ಸಚಿವರಾದ  ಶಾಮನೂರು ಶಿವಶಂಕಪ್ಪನವರು ವಿಧಿವಶರಾದ ಸುದ್ದಿ ಅತೀವ ಆಘಾತವನ್ನು ಉಂಟುಮಾಡಿದೆ. ಉದ್ಯಮಿಯಾಗಿ, ಶಾಸಕರಾಗಿ, ಸಚಿವರಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರಾಗಿ ಸಮಸ್ತ ಸಮಾಜದ ಏಕತೆ ಮತ್ತು ಏಳಿಗೆಗಾಗಿ ನಿರಂತರ ಶ್ರಮಿಸಿದ್ದ ಇವರ ಅಗಲಿಕೆಯಿಂದ ನಾಡು ಒಬ್ಬ ಹಿರಿಯ ಸಾಧಕ ರಾಜಕಾರಣಿಯನ್ನು, ಸಮುದಾಯ ತನ್ನ ಹಿರಿಯ ಮಾಗದರ್ಶಕರನ್ನು ಕಳೆದುಕೊಂಡಿದೆ. ಶ್ರೀಯುತರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಅವರಿಗೆ ನನ್ನ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಕೋರುತ್ತಾ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ

ವಾರ್ತಾ ಭಾರತಿ 14 Dec 2025 8:21 pm

School Holiday: ಶಾಮನೂರು ಶಿವಶಂಕರಪ್ಪ 94ನೇ ವಯಸ್ಸಿನಲ್ಲಿ ನಿಧನ, ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಆಘಾತಕಾರಿ ಘಟನೆಗಳು ನಡೆದಿದ್ದು, ಇನ್ನೇನು ನಾವೆಲ್ಲಾ 2025 ವರ್ಷ ಮುಗಿಸಿ, 2026ನೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೀಗಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಕನ್ನಡಿಗರು ಸಕಲ ಸಿದ್ಧತೆ ನಡೆಸಿದ್ದರು. ಆದರೆ ಇಂತಹ ಸಮಯದಲ್ಲೇ ಈಗ ದಿಢೀರ್ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದ್ದು, ಕನ್ನಡ ನಾಡು ಕಂಡ ಹಿರಿಯ ನಾಯಕ &ರಾಜಕೀಯ ಮುತ್ಸದ್ದಿ

ಒನ್ ಇ೦ಡಿಯ 14 Dec 2025 8:15 pm

ಮಂಗಳೂರು: ಡಿ. 16 ರಂದು ʼಖುತಬಾ ಸಂಗಮʼ

ಮಂಗಳೂರು: ಎಸ್‌ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ 'ಮಾದರಿ ಮದುವೆ ಶತದಿನ ಅಭಿಯಾನ'ದ ಭಾಗವಾಗಿ ಎಸ್‌ವೈಎಸ್ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಖತೀಬರು ಹಾಗೂ ಇಮಾಮರಿಗಾಗಿ ನಡೆಸಲ್ಪಡುವ 'ಖುತಬಾ ಸಂಗಮ'ವು ಡಿಸೆಂಬರ್ 16 ಮಂಗಳವಾರ, ಬೆಳಿಗ್ಗೆ 10:00 ಗಂಟೆಗೆ ಪಂಪ್‌ವೆಲ್ ಡಿ.ಕೆ.ಸಿ ಹಾಲ್ ನಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸುವರು. ಸ್ವಾಗತ ಸಮಿತಿ ಚೇರ್ಮೇನ್ ಅಬ್ದುರ್ರಹ್ಮಾನ್ ಸ‌ಅದಿ ಕಂಕನಾಡಿ, ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್‌ಪದವು ಮುನ್ನುಡಿ ಭಾಷಣ ಮಾಡಲಿದ್ದು, ಪ್ರಸಿದ್ಧ ಚಿಂತಕ, ಸಂಶೋಧಕ ಇಬ್ರಾಹೀಂ ಸಖಾಫಿ ಪುಝಕ್ಕಾಟ್ಟಿರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ಮಂಡಿಸಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 14 Dec 2025 8:10 pm

Mangaluru | ಅಕ್ರಮ ಗೋಸಾಗಾಟ ಪ್ರಕರಣ : ಜಾನುವಾರು ನೀಡಿದ ವ್ಯಕ್ತಿಯ ಮನೆ, ಕೊಟ್ಟಿಗೆ ಜಪ್ತಿ

ಮಂಗಳೂರು: ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡಿರುವ ಪ್ರಕರಣದಲ್ಲಿ ಜಾನುವಾರು ನೀಡಿದ ವ್ಯಕ್ತಿಯ ಮನೆ ಮತ್ತು ಕೊಟ್ಟಿಗೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ಭೋಜ ಮೂಲ್ಯ ಎಂಬವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಡಿ.13ರಂದು ಗೂಡ್ಸ್ ಅಟೋವನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿತ್ತು. ಈ ಸಂಬಂಧ ವಾಹನದ ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅತನು ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ (56) ಎಂಬುದಾಗಿ ತಿಳಿಸಿದ್ದು, ಆತನು ಬಂಟ್ವಾಳ ಸರಪ್ಪಾಡಿ ಎಂಬಲ್ಲಿನ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಇಲ್ಲದೇ ಎಲ್ಲಿಯೋ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿತ್ತು ಎಂದು ಆರೋಪಿಸಲಾಗಿದೆ. ಜಾನುವಾರು, ಅಟೋ ಹಾಗೂ ಒಂದು ಮೊಬೈಲ್ ಫೋನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 14 Dec 2025 8:06 pm

GOAT Tour 2025 | ಸಚಿನ್–ಮೆಸ್ಸಿ ಭೇಟಿಯ ಅಪರೂಪದ ಕ್ಷಣ; 2011ರ ವಿಶ್ವಕಪ್‌ ಫೈನಲ್ ನ ಜೆರ್ಸಿ ಉಡುಗೊರೆಯಾಗಿ ನೀಡಿದ ತೆಂಡೂಲ್ಕರ್

ಮುಂಬೈ: ಕ್ರಿಕೆಟ್ ಮತ್ತು ಫುಟ್‌ಬಾಲ್‌ ಲೋಕದ ಎರಡು ಮಹಾನ್ ದಂತಕಥೆಗಳು ಒಂದೇ ವೇದಿಕೆಯಲ್ಲಿ ಭೇಟಿಯಾದ ಅಪರೂಪದ ಕ್ಷಣಕ್ಕೆ ರವಿವಾರ ಮುಂಬೈ ಸಾಕ್ಷಿಯಾಯಿತು. ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಫುಟ್‌ಬಾಲ್‌ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡಿ, ಭಾರತ 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಜಯ ಸಾಧಿಸಿದ ಸಂದರ್ಭದಲ್ಲಿ ಧರಿಸಿದ್ದ ಐತಿಹಾಸಿಕ ಜೆರ್ಸಿಯನ್ನು ಸ್ಮರಣಿಕೆಯಾಗಿ ಉಡುಗೊರೆಯಾಗಿ ನೀಡಿದರು. ವಿಶೇಷ ಕಾರ್ಯಕ್ರಮದ ವೇಳೆ ವೇದಿಕೆಗೆ ಆಗಮಿಸಿದ ಸಚಿನ್, ವಿಶ್ವಕಪ್‌ ವಿಜಯದ ನೆನಪುಗಳನ್ನು ಪ್ರತಿಬಿಂಬಿಸುವ ಜೆರ್ಸಿಯನ್ನು ಮೆಸ್ಸಿಗೆ ಹಸ್ತಾಂತರಿಸಿದರು. ಭಾರತದ ಕ್ರೀಡಾ ಇತಿಹಾಸದಲ್ಲಿ ಅನನ್ಯ ಸ್ಥಾನ ಪಡೆದಿರುವ ಆ ಕ್ಷಣದ ಸ್ಮರಣಿಕೆ ಮೆಸ್ಸಿಗೆ ನೀಡಿದ್ದು ಕ್ರೀಡಾ ಸ್ನೇಹದ ಸಂಕೇತವಾಗಿ ಮೇಳೈಸಿತು. ಇದಕ್ಕೆ ಪ್ರತಿಯಾಗಿ, ಲಿಯೋನೆಲ್ ಮೆಸ್ಸಿ ಕೂಡ ತಮ್ಮ ವಿಶ್ವಕಪ್‌ ಪಯಣವನ್ನು ಪ್ರತಿನಿಧಿಸುವ ವಿಶೇಷ ಫುಟ್‌ಬಾಲ್‌ ಚೆಂಡನ್ನು ಸಚಿನ್ ಅವರಿಗೆ ಉಡುಗೊರೆಯಾಗಿ ನೀಡಿ ಗೌರವ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 14 Dec 2025 8:01 pm

ಆಸ್ಟ್ರೇಲಿಯಾದಲ್ಲಿ ಗುಂಡಿನ ದಾಳಿ; ಬೆಂಗಳೂರು, ದೆಹಲಿ ಸೇರಿ ಹಲವೆಡೆ ಹೈ ಅಲರ್ಟ್

ಯಹೂದಿಗಳ ಹಬ್ಬವಾದ ಹನುಕ್ಕಾ ಆಚರಣೆ ವೇಳೆ ಸಿಡ್ನಿ ಬೀಚ್‌ವೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಹನ್ನೆರಡು ಜನರು ಮೃತಪಟ್ಟಿದ್ದರು. ಈ ಘಟನೆ ಬೆಳಕಿಗೆ ಬರುತ್ತಲೇ ಭಾರತದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಉಗ್ರಗಾಮಿಗಳು ಭಾರತದಲ್ಲಿರುವ ಯಹೂದಿಗಳ ಕಚೇರಿ, ಸಂಸ್ಥೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ, ಬೆಂಗಳೂರು, ಮುಂಬೈನ ಸೇರಿದಂತೆ ಹಲವು ಕಡೆ ಬಿಗಿಭದ್ರತೆ ಇದೆ.

ವಿಜಯ ಕರ್ನಾಟಕ 14 Dec 2025 7:58 pm

Jaggesh: ಮಂತ್ರಾಲಯ ರಾಯರ ಮಠಕ್ಕೆ ಜಾತಿಗಳನ್ನ ತರಬೇಡಿ: ಜಗ್ಗೇಶ್‌ ಹೀಗಂದಿದ್ದೇಕೆ?

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಹಾಗೂ ಹಾಲಿ ಬಿಜೆಪಿ ರಾಜ್ಯಸಭಾ ಸಂಸದ ಜಗ್ಗೇಶ್‌ ಅವರು ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿಯ ಅಪ್ಪಟ ಭಕ್ತರು. ಬಿಡುವು ಸಿಕ್ಕಾಗಲೆಲ್ಲ ತಪ್ಪದೇ ಅವರು ರಾಯರ ಮಠಕ್ಕೆ ತೆರಳಿ, ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ರಾಯರ ಫೋಟೋಗಳನ್ನು ಹಂಚಿಕೊಳ್ಳುತ್ತಾ ನಮಿಸುತ್ತಿರುತ್ತಾರೆ. ಆದರೆ, ಜಗ್ಗೇಶ್‌ ಅವರು ಮಂತ್ರಾಲಯಕ್ಕೆ ಹೋಗುವ

ಒನ್ ಇ೦ಡಿಯ 14 Dec 2025 7:54 pm

ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ : ಸಿಎಂ ಸಿದ್ದರಾಮಯ್ಯ

ಹೊಸದಿಲ್ಲಿ : ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒಂದು ರಾಷ್ಟ್ರವಾಗಿ, ಒಂದು ಪ್ರಜಾಪ್ರಭುತ್ವವಾಗಿ ಎಲ್ಲರೂ ಮತಗಳ್ಳತನದ ವಿರುದ್ದ ನಿಲ್ಲೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ರವಿವಾರ ದಿಲ್ಲಿಯಲ್ಲಿ ಆಯೋಜಿಸಿದ್ದ ಮತಗಳ್ಳತನದ ವಿರುದ್ದದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಮ್ಮ ಗಣರಾಜ್ಯದ ಹೃದಯ ಭಾಗದಲ್ಲಿ ನಾವು ಸೇರಿದ್ದು, ಕೇವಲ ಕಾಂಗ್ರೆಸ್ ಕಾರ್ಯಕರ್ತರಾಗಿ ಅಥವಾ ಮತದಾರರಾಗಿ ಇಲ್ಲಿಗೆ ಬಂದಿಲ್ಲ. ನಾವು ಭಾರತೀಯ ಪ್ರಜಾಪ್ರಭುತ್ವದ ರಕ್ಷಕರಾಗಿ ಬಂದಿದ್ದೇವೆ ಎಂದರು. ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಅತ್ಯಂತ ಪವಿತ್ರ ಹಕ್ಕು – ‘ಮತದಾನದ ಹಕ್ಕನ್ನು’ ರಕ್ಷಿಸಲು ಬಂದಿದ್ದೇವೆ. ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ಒಬ್ಬ ರೈತ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು, ಒಬ್ಬ ಕಾರ್ಮಿಕ ತನ್ನ ಘನತೆಯನ್ನು ಕಾಯ್ದುಕೊಳ್ಳಲು, ಒಬ್ಬ ಯುವಕ ತನ್ನ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಒಂದು ರಾಷ್ಟ್ರ ತನ್ನ ಸಾಮೂಹಿಕ ಇಚ್ಛೆಯನ್ನು ಘೋಷಿಸಲು ಇರುವ ಸಾಧನವೇ ಮತದಾನ ಎಂದು ಅವರು ನುಡಿದರು. ಇಂದು ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ದುರುಪಯೋಗ ಸೇರಿದಂತೆ ವಿವಿಧ 'ಮತಗಳ್ಳತನ' ದ ವಿಧಾನಗಳ ಮೂಲಕ ಈ ಪವಿತ್ರ ಶಕ್ತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ. ಇಂದು ಆ ಶಕ್ತಿಯನ್ನು ಕದಿಯಲಾಗುತ್ತಿದೆ. ಒಂದು ಬಾರಿಯಲ್ಲ, ಎರಡಲ್ಲ, ಪದೇ ಪದೇ ಕದಿಯಲಾಗುತ್ತಿದೆ ಎಂದರು. ಇತಿಹಾಸ ನಮಗೆ ಕಲಿಸಿದ ಪಾಠವೆಂದರೆ, ಸರ್ವಾಧಿಕಾರವು ಬೀದಿಗಳಲ್ಲಿ ಬಂದೂಕುಗಳಿಂದ ಪ್ರಾರಂಭವಾಗುವುದಿಲ್ಲ. ಅದು ಸಂಸ್ಥೆಗಳ ದುರ್ಬಳಕೆ ಹಾಗೂ ನಿಧಾನವಾಗಿ ವ್ಯವಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಮತ್ತು ಅಂತಿಮವಾಗಿ, ಚುನಾವಣೆಗಳ ಕಳ್ಳತನದಿಂದ ಪ್ರಾರಂಭವಾಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಂತೆ ನಟಿಸುತ್ತಲೇ, ಅದನ್ನು ಬುಡಮೇಲು ಮಾಡುವುದನ್ನೇ ಪ್ರಪಂಚದಾದ್ಯಂತದ ಸರ್ವಾಧಿಕಾರಿ ಆಡಳಿತಗಳು ಮೂಲ ತಂತ್ರವನ್ನಾಗಿಸಿದೆ. ಇಂದು ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಟೀಕಿಸಿದರು. ಅವರು ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಅವರು ಚುನಾವಣಾ ಯಂತ್ರೋಪಕರಣಗಳನ್ನು ಬೆದರಿಸುತ್ತಾರೆ. ಅವರು ಮತದಾರರ ಪಟ್ಟಿಗಳನ್ನು ವಿರೂಪಗೊಳಿಸುತ್ತಾರೆ. ಅವರು ವಿಪಕ್ಷಗಳು ಗೆಲುವಿನ ಸಾಧ್ಯತೆಯ ಪ್ರದೇಶಗಳಲ್ಲಿ ಮತದಾನದ ಪ್ರಮಾಣವನ್ನು ದಮನಿಸುತ್ತಾರೆ. ಹಣ ಮತ್ತು ಅಧಿಕಾರದ ಮೂಲಕ ಸಮಾನ ಅವಕಾಶದ ಸಾಧ್ಯತೆಯನ್ನು ಉಲ್ಲಂಘಿಸುತ್ತಾರೆ. ಇದು ಕೇವಲ ದುರಾಡಳಿತವಲ್ಲ. ಈ 'ಮತಗಳ್ಳತನ'ವು ಭಾರತದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ ಎಂದು ಅವರು ತಿಳಿಸಿದರು. ಕದ್ದ ಮತಗಳಿಂದ ಅಧಿಕಾರಕ್ಕೆ ಬಂದ ಸರಕಾರವು ಪ್ರಜಾಸತ್ತಾತ್ಮಕ ಸರಕಾರವಲ್ಲ ಎಂಬುದು ಸುಸ್ಪಷ್ಟ. ಅದು ಜನರನ್ನು ಹೆದರಿಸುವ, ಜನಾದೇಶವನ್ನು ತಿರುಚುವ, ಮತ್ತು ವಂಚನೆಯ ಮೂಲಕ ಮಾತ್ರ ಬದುಕುಳಿಯುವ ಸರ್ಕಾರ. ಇದು, ಪ್ರಜಾಪ್ರಭುತ್ವಗಳು ಚುನಾವಣಾ ದೌರ್ಜನ್ಯಗಳ ಮಟ್ಟಕ್ಕೆ ಇಳಿಯುವ ರೀತಿಯಾಗಿದೆ. ಇಂದು ಬಿಜೆಪಿಯ 'ಮತಗಳ್ಳತನ'ವು ಸ್ವಾತಂತ್ರ್ಯಾನಂತರದ ನಮ್ಮ ಗಣರಾಜ್ಯಕ್ಕೆ ಎದುರಾದ ಅತಿದೊಡ್ಡ ಬೆದರಿಕೆಯಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ , ಅಸಾಧಾರಣ ಧೈರ್ಯದಿಂದ ನಿಂತಿರುವ ಏಕೈಕ ನಾಯಕ ರಾಹುಲ್ ಗಾಂಧಿಯವರು ಎಂದು ಅವರು ಹೇಳಿದರು. ರಾಹುಲ್ ಗಾಂಧಿಯವರು ಹೊಂದಿಕೆಯಾಗದ ಮತದಾರರ ಪಟ್ಟಿಗಳನ್ನು, ಬೂತ್ ಮಟ್ಟದಲ್ಲಿ ತಿರುಚಿದ ಅಂಶಗಳನ್ನು ಮತ್ತು ವ್ಯವಸ್ಥಿತ, ಸಂಘಟಿತ ಮತಗಳ್ಳತನ'ವನ್ನು ತನಿಖೆಯ ಮೂಲಕ ಬಯಲು ಮಾಡಿದರು. ಮಹದೇವಪುರದಿಂದ ಆಳಂದವರೆಗೆ, ಹರಿಯಾಣದಿಂದ ಬಿಹಾರದವರೆಗೆ, ಹೀಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ, ವಿಶೇಷವಾಗಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಬಲಹೊಂದಿರುವ ಪ್ರದೇಶಗಳಲ್ಲಿ ಮತಗಳನ್ನು ಯಾವ ರೀತಿಯಲ್ಲಿ ದಮನ ಮಾಡಲಾಗಿದೆ, ವರ್ಗಾಯಿಸಲಾಗಿದೆ ಅಥವಾ ದುರ್ಬಲಗೊಳಿಸಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದರು. ಕರ್ನಾಟಕದ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಲ್ಲಿ, 'ವೋಟ್ ಚೋರಿ' ಕೇವಲ ಆರೋಪವಾಗಿರದೇ, ಜೀವಂತ ವಾಸ್ತವ ಎಂದು ರಾಹುಲ್ ಗಾಂಧಿಯವರು ಗಂಭೀರ ಅಕ್ರಮಗಳನ್ನು ಉದಾಹರಣೆಗಳಾಗಿ ಎತ್ತಿ ತೋರಿಸಿದ್ದಾರೆ. ಮಹದೇವಪುರದಲ್ಲಿ ಸಾವಿರಾರು ನಕಲಿ ಅಥವಾ ಮೋಸದ ಮತದಾರರ ನಮೂದುಗಳು ಮತ್ತು ಚುನಾವಣಾ ಪಟ್ಟಿಗಳಲ್ಲಿನ ವ್ಯತ್ಯಾಸಗಳು ಕ್ಷೇತ್ರದಲ್ಲಿ ಬಿಜೆಪಿಯ ಅಲ್ಪ ವ್ಯತ್ಯಾಸದಲ್ಲಿ ಗೆದ್ದಿರುವುದಕ್ಕೆ ಪರಸ್ಪರ ಸಂಬಂಧ ಹೊಂದಿದೆ ಎಂದು ಪುರಾವೆಗಳನ್ನು ಒದಗಿಸುತ್ತದೆ ಎಂದು ಅವರು ವಿವರ ನೀಡಿದರು. ಆಳಂದದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿ ಹಾಕಲು ಪ್ರಯತ್ನಿಸಿದ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಪಟ್ಟಿಯಲ್ಲಿನ ಹೆಸರುಗಳನ್ನು ತೆಗೆಯಲು ಕೋರಿ ಸಲ್ಲಿಸಿದ 6,018 ಅರ್ಜಿಗಳ ಬಗ್ಗೆ ಎಫ್‌ಐಆರ್ ಮತ್ತು ಎಸ್‌ಐಟಿ ತನಿಖೆಯನ್ನು ಕೈಗೊಳ್ಳಲು ಇದು ಕಾರಣವಾಯಿತು ಎಂದು ಅವರು ಉಲ್ಲೇಖಿಸಿದರು. ನಿನ್ನೆ, ಒಂದು ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಬಿಜೆಪಿ ಮಾಜಿ ಶಾಸಕರು ಮತ್ತು ಅವರ ಪುತ್ರ ಸೇರಿದಂತೆ ಏಳು ವ್ಯಕ್ತಿಗಳು ಆಳಂದ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಆರೋಪವಿದೆ. ಇದು ಮತಗಳತನ' ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾನೂನು ಹೆಜ್ಜೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇದನ್ನು ಬಹಿರಂಗಪಡಿಸಿರುವುದರಿಂದ ರಾಹುಲ್ ಗಾಂಧಿಯವರು ಈ ಗಣರಾಜ್ಯದ ನೈತಿಕ ದಿಕ್ಸೂಚಿಯಾಗಿರುವುದಲ್ಲದೆ ಮತಗಳ್ಳತನದ ವಿರುದ್ಧದ ಹೋರಾಟಗಾರರಾಗಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಹೋರಾಟ ಸಾಂವಿಧಾನಿಕ ನೈತಿಕತೆಯಲ್ಲಿ ಅಡಕವಾಗಿದ್ದು, ಅಂಬೇಡ್ಕರ್ ವಾದಿ ಚಿಂತನೆಯಾಗಿದೆ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ. ಸಾರ್ವಭೌಮತ್ವ ಜನರಿಗೆ ಸೇರಿದ್ದು , ಯಾವುದೇ ಒಂದು ಪಕ್ಷ, ಒಂದು ಆಳ್ವಿಕೆ ಹಾಗೂ ಚುನಾವಣೆಗಳನ್ನು ಕದಿಯಲಿಚ್ಚಿಸುವವರದ್ದು ಖಂಡಿತಾ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ವಾರ್ತಾ ಭಾರತಿ 14 Dec 2025 7:53 pm

ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಅಭಿಮಾನಿಗಳ ಕಂಬನಿ... Shamanuru Shivashankarappa

ಕನ್ನಡ ನಾಡಿನಲ್ಲಿ ಸಾಲು ಸಾಲು ಆಘಾತಕಾರಿ ಸುದ್ದಿಗಳು ಸಿಗುತ್ತಿದ್ದು, 2025 ವರ್ಷ ಪೂರ್ತಿ ಈ ರೀತಿಯೇ ಸಾಲು ಸಾಲು ಗಣ್ಯರ ಸಾವಿನ ಆಘಾತಕಾರಿ ಸುದ್ದಿ ಅಭಿಮಾನಿಗಳಿಗೆ ನೋವು ನೀಡಿದೆ. ಅದರಲ್ಲೂ ಕನ್ನಡ ಸಿನಿಮಾ ರಂಗದ ಸಾಕಷ್ಟು ನಟ &ನಟಿಯರ ಅಗಲಿಕೆ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗುವಂತೆ ಮಾಡಿದೆ. ಇದರ ಜೊತೆಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಕೂಡ

ಒನ್ ಇ೦ಡಿಯ 14 Dec 2025 7:52 pm

ಕಾಂಗ್ರೆಸ್​​​​​ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನ

ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ಇಂದು (ಡಿ.14) ನಿಧನರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಶಾಸಕರಾಗಿದ್ದು, ಹಲವು ಮುಖ್ಯಮಂತ್ರಿ ಗಳ ಸಂಪುಟದಲ್ಲಿ ಸಚಿವರಾಗಿದ್ದರು.

ವಾರ್ತಾ ಭಾರತಿ 14 Dec 2025 7:25 pm

Thiruvananthapuram | ಮೇಯರ್ ಹುದ್ದೆಗೆ BJPಯಿಂದ ‘ರೈಡ್ ಶ್ರೀಲೇಖಾ’ ಹೆಸರು ಮುಂಚೂಣಿಯಲ್ಲಿ

ತಿರುವನಂತಪುರಂ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿವೃತ್ತ IPS ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಆರ್. ಶ್ರೀಲೇಖಾ ಅವರು ಎಡಪಂಥೀಯ ಪ್ರತಿಸ್ಪರ್ಧಿಯನ್ನು ಸುಮಾರು 700 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 1987ರ ಬ್ಯಾಚ್‌ ನ ಕೇರಳ ಕೇಡರ್‌ IPS ಅಧಿಕಾರಿ ಆಗಿದ್ದ ಅವರು ಶನಿವಾರ ಸಸ್ತಮಂಗಲಂ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಜಯಗಳಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ, ಕೇರಳ ರಾಜಧಾನಿಗೆ ಮೊದಲ ಬಿಜೆಪಿ ಮೇಯರ್ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ‘ರೈಡ್ ಶ್ರೀಲೇಖಾ’ ಎಂದೇ ಪ್ರಸಿದ್ಧರಾದ ಆರ್. ಶ್ರೀಲೇಖಾ ಅವರ ಹೆಸರು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದೆ. 1960ರ ಡಿಸೆಂಬರ್‌ 25ರಂದು ತಿರುವನಂತಪುರಂನಲ್ಲಿ ಜನಿಸಿದ ಶ್ರೀಲೇಖಾ, ಕಾಟನ್‌ಹಿಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಹಿಳಾ ಕಾಲೇಜು ಹಾಗೂ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಸೇವೆ ಸಲ್ಲಿಸಿದ್ದರು. ಉತ್ತಮ ಉದ್ಯೋಗದಲ್ಲಿದ್ದರೂ ಅವರು 1987ರಲ್ಲಿ ಪೊಲೀಸ್ ಸೇವೆಯನ್ನು ಆಯ್ದುಕೊಂಡರು. ಕೇರಳದ ಪ್ರಮುಖ ಮಹಿಳಾ IPS ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಶ್ರೀಲೇಖಾ, ಚೆರ್ತಲಾ, ತ್ರಿಶೂರ್, ಪತ್ತನಂತಿಟ್ಟ ಹಾಗೂ ಆಲಪ್ಪುಳ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸಿಬಿಐನಲ್ಲಿ ಡಿಐಜಿ ಆಗಿ ಆರ್ಥಿಕ ಅಪರಾಧಗಳ ತನಿಖೆ ನಡೆಸಿದ ಅವಧಿಯಲ್ಲಿ ದಿಢೀರ್ ದಾಳಿಗಳ ಮೂಲಕ ಅವರು ಹೆಸರು ಗಳಿಸಿದರು. ಈ ಕಾರಣದಿಂದಲೇ ಅವರಿಗೆ ‘ರೈಡ್ ಶ್ರೀಲೇಖಾ’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. 2007ರಲ್ಲಿ ಅವರಿಗೆ ಕೇರಳ ಸರ್ಕಾರದಿಂದ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪೊಲೀಸ್ ಪಡೆಯಲ್ಲಿನ ಮಹಿಳಾ ಪ್ರಾತಿನಿಧ್ಯ ವೃದ್ಧಿಗೆ ಅವರು ನಿರಂತರವಾಗಿ ಶ್ರಮವಹಿಸಿದ್ದರು. ಪಿಎಸ್‌ಸಿ ನೇಮಕಾತಿಯಲ್ಲಿ ಲಿಂಗಸಮಾನತೆಯ ಬೇಡಿಕೆಯನ್ನು ಮುಂದಿಟ್ಟ ಪರಿಣಾಮ, ಪೊಲೀಸ್ ಪಡೆಯಲ್ಲಿ ಮಹಿಳೆಯರ ಪಾಲು ಶೇ.4ರಿಂದ ಶೇ.9ಕ್ಕಿಂತ ಹೆಚ್ಚಾಗಿದೆ. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಅಪರಾಧ ವಿಭಾಗದ ಮುಖ್ಯಸ್ಥರಾಗಿ, 2013ರ ‘ಆಪರೇಷನ್ ಅನ್ನಪೂರ್ಣ’ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಅವರು ಮುನ್ನಡೆಸಿದರು. 2003ರ ಕಿಲಿರೂರ್ ಲೈಂಗಿಕ ಹಗರಣದ ತನಿಖೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕೇರಳದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಬಳಿಕ, 33 ವರ್ಷಗಳ ಸೇವೆಯ ನಂತರ ಅವರು 2020ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ತಟಸ್ಥ ನಿಲುವು ಕಾಯ್ದುಕೊಂಡಿದ್ದ ಶ್ರೀಲೇಖಾ, ಅಕ್ಟೋಬರ್‌ 2024ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 14 Dec 2025 7:18 pm

ಡಾl ಐ.ಜೆ. ಮ್ಯಾಗೇರಿ ಅವರ ʼಜೈಲ್‌ ಡೈರಿʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಮಂಗಳೂರು: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೆಎಎಸ್‌ ಅಧಿಕಾರಿ, ಸಾಹಿತಿ ಡಾ. ಎ.ಜೆ. ಮ್ಯಾಗೇರಿ ಅವರ ʼಜೈಲ್‌ ಡೈರಿ (ಕೈದಿಗಳ ನೈಜ ಕಥನ)ʼ ಕೃತಿ ಆಯ್ಕೆಯಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದ ಇಮಾಮಸಾಬ್‌ ಜೀವನಸಾಬ್‌ ಮ್ಯಾಗೇರಿ ಧಾರವಾಡದ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಹಂಪಿ ಕನ್ನಡ ವಿವಿಯಲ್ಲಿ ಎಂ.ಫಿಲ್. ಹಾಗೂ 'ವಸಾಹತುಶಾಹಿ ಅನುಭವ ಹಾಗೂ ಕನ್ನಡ ಕಾದಂಬರಿಗಳು' ವಿಷಯದ ಮೇಲೆ ಪಿಎಚ್‌ಡಿ ಮಾಡಿದ್ದಾರೆ. 2005ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ನಾಟಕ ಕಾರಾಗೃಹಗಳ ಇಲಾಖೆಯ ಸೇವೆಗೆ ಸೇರಿರುವ ಇವರು ಕರ್ನಾಟಕದ ಅನೇಕ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆಯಲ್ಲಿದ್ದಾರೆ. 2014ರಲ್ಲಿ ಭಾರತ ಸರ್ಕಾರದಿಂದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಏಕೈಕ ಅಧಿಕಾರಿಯಾಗಿ ಆಯ್ಕೆಗೊಂಡು ಅಲ್ಲಿಯ ಕಾರಾಗೃಹಗಳ ಸುಧಾರಣೆ ಮತ್ತು ಅಪರಾಧಿಗಳ ಮನಃಪರಿವರ್ತನೆಯ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಬಂಧಿಗಳ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. ಇವರ ಕರ್ತವ್ಯ ನಿಷ್ಠೆ ಮತ್ತು ಕಾರಾಗೃಹ ಆಡಳಿತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಗಾಗಿ 2021ರಲ್ಲಿ ಕರ್ನಾಟಕ ಸರ್ಕಾರದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ. 'ಹಿಂಸಾಕಾರಣ', ಇವರ ಇನ್ನೊಂದು ಪ್ರಕಟಿತ ಕೃತಿ. ಇವರ ಬರಹಗಳು ಬೆಂಗಳೂರು ಮತ್ತು ತುಮಕೂರು ವಿವಿಗಳ ಪದವಿ ತರಗತಿಗೆ ಪಠ್ಯವಾಗಿದೆ. ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 22 ಕೃತಿಗಳು ಬಂದಿದ್ದು, ಸಾಹಿತಿ ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು, ಲೇಖಕಿ ಮತ್ತು ಪ್ರಾಧ್ಯಾಪಕಿ ಶಮೀಮಾ ಕುತ್ತಾರ್‌ ಹಾಗೂ ಪತ್ರಕರ್ತ, ಸಾಹಿತಿ ಹಂಝ ಮಲಾರ್ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 27 ರಂದು ಗಜೇಂದ್ರಗಡದಲ್ಲಿ ನಡೆಯಲಿದೆ ಎಂದು ಮುಸ್ಲಿಮ್‌ ಲೇಖಕರ ಸಂಘದ ಅಧ್ಯಕ್ಷ ಉಮರ್‌ ಯು. ಎಚ್.‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 14 Dec 2025 7:17 pm

ʻಮರಾಠರು, ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಗಳಲ್ಲʼ: ಸಂತೋಷ್‌ ಲಾಡ್

ಬೆಳಗಾವಿಯ ಅಥಣಿಯಲ್ಲಿ ಶಿವಾಜಿ ಪ್ರತಿಮೆ ಅನಾವಣ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯತ್ನಾಳ್‌ ಮತ್ತು ಸಚಿವ ಸಂತೋಷ್‌ ಲಾಡ್‌ ಅವರು ಮುಸ್ಲಿಂ ಹಾಗೂ ಶಿವಾಜಿ ಅವರ ಬಗ್ಗೆ ಮಾತನಾಡಿದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಎಂದು ಲಾಡ್‌ ಹೇಳಿದರೆ, ಶಿವಾಜಿ ಮಹಾರಾಜರು ಇರದಿದ್ರೆ ಬೇರೆ ಧರ್ಮ ಅನುಸರಿಸಬೇಕಾದ ಪರಿಸ್ಥಿತಿ ಬಂದೊದಗುತ್ತಿತ್ತು ಎಂದು ಯತ್ನಾಳ್‌ ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಕೇಂದ್ರ ಸಚಿವರು ಇದ್ದರು.

ವಿಜಯ ಕರ್ನಾಟಕ 14 Dec 2025 7:16 pm

USA | ಚೂರಾದ ಅಮೆರಿಕದ ಕನಸು; ಭಾರತೀಯರನ್ನು ಅಮೆರಿಕದಿಂದ ಹೊರಗೆ ಹಾಕಬೇಕೆನ್ನುವ ಕೂಗು ಏಕೆ ಕೇಳಿಬರುತ್ತಿದೆ?

ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ ತೆರೆಯುವುದಾಗಿ ಘೋಷಿಸಿದ್ದಾರೆ! ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇಂತಹ ಸಂದಿಗ್ಧ ಘಟ್ಟದಲ್ಲಿರುವಾಗ ಅಮೆರಿಕದಲ್ಲಿರುವ ಭಾರತೀಯರು ಏನು ಹೇಳುತ್ತಾರೆ? ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರು ಮತ್ತು ಭಾರತದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಭಾರತೀಯರು ಪರಿಣತ ತಂತ್ರಜ್ಞರು ಮತ್ತು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸದೆ ನೆಲೆಸಿರುವ ಸಮುದಾಯ ಎಂದು ಒಂದು ವರ್ಗ ಪ್ರಶಂಸಿಸುತ್ತಿದೆ. ಮತ್ತೊಂದು ವರ್ಗ ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತದ ಉತ್ಪನ್ನಗಳ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಅದನ್ನು ತಡೆಯಬೇಕು ಎಂದು ಕೂಗೆಬ್ಬಿಸುತ್ತಿದೆ. ಏನಿದು ಭಾರತ ಕುರಿತ ಚರ್ಚೆ? ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಭಾರತೀಯರನ್ನು ಮತ್ತು ಏಷ್ಯಾ ಮೂಲದವರನ್ನು ಅಮೆರಿಕದಿಂದ ಹೊರಗಿಡಲು ಅನೇಕ ಕಾನೂನುಗಳನ್ನು ತರಲಾಗುತ್ತಿದೆ. ಎಚ್1ಬಿ ವೀಸಾದಲ್ಲಿ ಅಮೆರಿಕದಲ್ಲಿ ಉದ್ಯೋಗ ಪಡೆಯಬೇಕೆಂದರೆ 1 ಲಕ್ಷ ಡಾಲರ್ ಪಾವತಿಸಬೇಕು ಎನ್ನುವ ಹೊಸ ನಿಯಮ ತರಲಾಗಿದೆ. ಜೊತೆಗೆ ವೀಸಾಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಜನರ ಸಾಮಾಜಿಕ ಜಾಲತಾಣಗಳನ್ನು ‘ಗೌಪ್ಯ’ವಾಗಿ ಇಡುವಂತಿಲ್ಲ ಎನ್ನುವ ಹೊಸ ನಿಯಮವನ್ನು ತರಲಾಗುತ್ತಿದೆ. ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಲಾಗಿದೆ. ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ ತೆರೆಯುವುದಾಗಿ ಘೋಷಿಸಿದ್ದಾರೆ! ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇಂತಹ ಸಂದಿಗ್ಧ ಘಟ್ಟದಲ್ಲಿರುವಾಗ ಅಮೆರಿಕದಲ್ಲಿರುವ ಭಾರತೀಯರು ಏನು ಹೇಳುತ್ತಾರೆ? ►ಚೂರಾದ ಅಮೆರಿಕ ಕನಸು ಹೈದರಾಬಾದಿನ ಜವಾಹರಲಾಲ್ ನೆಹರು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 17 ವರ್ಷದ ಸಾಯಿ ಜಾಗೃತಿ ನ್ಯೂಯಾರ್ಕ್ಟೈಮ್ಸ್ನಲ್ಲಿ ಲೇಖನದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಭಾರತದ ಮಧ್ಯಮವರ್ಗದ ಕುಟುಂಬದ ಸಾಯಿ ಜಾಗೃತಿಗೆ ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಅಲ್ಲೇ ನೆಲೆ ಕಂಡುಕೊಳ್ಳುವುದು ಕನಸಾಗಿತ್ತು. “ಉತ್ತಮ ಜೀವನಕ್ಕಾಗಿ ಅಮೆರಿಕಕ್ಕೆ ಹೋಗುವೆ” ಎಂದು ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದರು. ಆದರೆ ಇದೀಗ ಟ್ರಂಪ್ ಸರ್ಕಾರ H1B ವೀಸಾಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಕೆಯ ಕನಸನ್ನು ನುಚ್ಚುನೂರು ಮಾಡಿದೆ. “ಅಷ್ಟೊಂದು ಬೃಹತ್ ಪ್ರಮಾಣದ ಶುಲ್ಕ ತೆರಲು ಸಾಧ್ಯವಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ. ಅದೇ ಕಾಲೇಜಿನ ಮತ್ತೊಬ್ಬ ಹುಡುಗ ನಾಸಾದಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ. ಆ ಕನಸೂ ಇದೀಗ ಚೂರಾಗಿದೆ. ►ಏನಿದು H1B ವೀಸಾ ಸಮಸ್ಯೆ? ಭಾರತೀಯರ “ಅಮೆರಿಕದ ಉತ್ತಮ ಜೀವನದ ಕನಸು” ಇಂದಿನದಲ್ಲ. ಹಲವಾರು ದಶಕಗಳಿಂದ ಭಾರತದಿಂದ ಪ್ರತಿಭಾ ವಲಸೆಯ ಬಗ್ಗೆ ಪದೇಪದೇ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಅದು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಭಾರತದಲ್ಲಿ ಗೋಲ್ಡ್ ಮೆಡಲ್ ಪಡೆದ ಮುಕ್ಕಾಲುಪಾಲು ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಥವಾ ವಿದೇಶಗಳಲ್ಲಿ ಹೆಚ್ಚಿನ ಓದು ಮತ್ತು ಕೆಲಸದ ಕನಸು ಕಾಣುತ್ತಾರೆ. H1B ವೀಸಾ ಎನ್ನುವುದು ವಿಶೇಷ ಪರಿಣತಿ ಹೊಂದಿದ ತಂತ್ರಜ್ಞರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ನೀಡಲಾಗುವ ವೀಸಾ. ಸಾಮಾನ್ಯವಾಗಿ F1B ವೀಸಾ ಪಡೆದು ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆ ಹೋದವರು ನಂತರ H1B ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರುತ್ತಾರೆ. ಕೆಲವೊಮ್ಮೆ ತಂತ್ರಜ್ಞಾನ ಕಂಪೆನಿಗಳು ನೇರವಾಗಿ ಭಾರತದಿಂದಲೇ H1B ವೀಸಾದ ಅಡಿಯಲ್ಲಿ ನುರಿತ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಾರೆ. ಕೆಲವು ಪ್ರಕರಣಗಳಲ್ಲಿ H1B ವೀಸಾ ಪಡೆದ ತಂತ್ರಜ್ಞರು ಭಾರತದ ಹುಡುಗಿಯನ್ನು ಮದುವೆಯಾಗಿ H4 ವೀಸಾದಡಿ ಅಮೆರಿಕಕ್ಕೆ ಕರೆದೊಯ್ಯುತ್ತಾರೆ. ಭಾರತದಲ್ಲಿ ಉದ್ಯೋಗದ ಅನುಭವ ಇರುವ ಹುಡುಗಿಯರು ಈ ವೀಸಾದಡಿ ಅಮೆರಿಕದಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ. ಇಂತಹ ಹಲವಾರು ರೀತಿಯ ವೀಸಾಗಳಿಂದ ಜನರು ಅಮೆರಿಕದಲ್ಲಿ ಉದ್ಯೋಗ ಮತ್ತು ವಸತಿ ಕಂಡುಕೊಳ್ಳುತ್ತಾರೆ. 90ರ ದಶಕದಲ್ಲಿ H1B ವೀಸಾ ಪಡೆದ ಪತಿಯೊಂದಿಗೆ ಅಮೆರಿಕಕ್ಕೆ ಹೋಗಿ ಈಗ ಅಲ್ಲೇ ನೆಲೆಸಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು ಹೇಳಿರುವ ಪ್ರಕಾರ, “ನಾನು H4 ವೀಸಾದ ಜೊತೆಗೆ ಪತಿಯೊಂದಿಗೆ ಇಲ್ಲಿಗೆ ಬಂದಿದ್ದೆ. 90ರ ದಶಕದಲ್ಲಿ ನಾವು ಬಂದಿದ್ದೆವು. ನಮಗೆ Green Card ಇದೆ. ಆದರೆ ಪೌರತ್ವ ಸ್ವೀಕರಿಸಿರಲಿಲ್ಲ. ನಮ್ಮ ಮಕ್ಕಳು ಇಲ್ಲೇ ಜನಿಸಿದ ಕಾರಣ ಅವರಿಗೆ ಪೌರತ್ವವಿದೆ. ಈ ಮೊದಲು Green Card ಎಂದರೆ ಪೌರತ್ವವಾಗಿತ್ತು. ಹೀಗಾಗಿ ನಮಗೆ ಅದರ ಅಗತ್ಯ ಕಂಡುಬಂದಿರಲಿಲ್ಲ. ಆದರೆ ಇದೀಗ ಪೌರತ್ವ ಪಡೆಯಬೇಕೆಂದರೆ ಬಹಳ ಕಠಿಣ ನಿಯಮಗಳು ಮತ್ತು ಪರಿಶೀಲನೆಯನ್ನು ಅನುಸರಿಸಬೇಕಿದೆ. ಇನ್ನು ಮುಂದೆ ಇಲ್ಲಿ ಜನಿಸಿದ ವಲಸಿಗರ ಮಕ್ಕಳಿಗೂ ಪೌರತ್ವ ಸಿಗುವುದಿಲ್ಲ. ಆದರೆ ನಮ್ಮ ಮಕ್ಕಳಿಗೇನೂ ಸಮಸ್ಯೆ ಇಲ್ಲ” ಎಂದು ಅಭಿಪ್ರಾಯಪಟ್ಟರು. ►ಭಾರತೀಯ ಸಂಜಾತರು ಹೆಚ್ಚಿರುವ ಪ್ರದೇಶಗಳು H1B ವೀಸಾದ ಮೇಲೆ ಅಮೆರಿಕಕ್ಕೆ ಹೋಗಿ ನಂತರ Green Card ಪಡೆದು ಅಮೆರಿಕದ ಪೌರತ್ವ ಪಡೆದು ಟೆಕ್ಸಾಸ್ ನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ಐಟಿ ವೃತ್ತಿಪರರಾದ ಅನಿತಾ (ಹೆಸರು ಬದಲಿಸಲಾಗಿದೆ) ಪ್ರಕಾರ, “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ತಮ್ಮ ಪ್ರಜೆಗಳ ಹಿತಾಸಕ್ತಿಯನ್ನು ಗಮನಿಸುತ್ತಿದ್ದಾರೆಯೋ, ಅದೇ ರೀತಿ ಇಲ್ಲಿಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಳೀಯರ ಹಿತಾಸಕ್ತಿ ಗಮನಿಸುತ್ತಿದ್ದಾರೆ. H1B ವೀಸಾವನ್ನು ವಿಶೇಷ ಪರಿಣತ ತಂತ್ರಜ್ಞರನ್ನು ನೇಮಿಸಿಕೊಳ್ಳಲೆಂದು ನೀಡಲಾಗುತ್ತಿದೆ. ಆದರೆ ಕೆಲವು ರಾಜ್ಯಗಳ ಕನ್ಸಲ್ಟನ್ಸಿಗಳು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ H1B ವೀಸಾದ ಮೂಲಕ ವಿಭಿನ್ನ ವೃತ್ತಿಪರರನ್ನು ಕರೆತರುತ್ತಿದ್ದಾರೆ. ಅವರು ಇಲ್ಲಿ ರೆಸ್ಟೊರೆಂಟ್, ಹೊಟೇಲ್ ಮತ್ತಿತರ ಕಡೆ ಕೆಲಸಗಳಲ್ಲಿ ತೊಡಗಿದ್ದಾರೆ. ನಾನಿರುವ ಸ್ಥಳದಲ್ಲಿ ಭಾರತೀಯರೇ ತುಂಬಿದ್ದಾರೆ. ನನ್ನ ಮಗಳು ಹೋಗುವ ಶಾಲೆಯಲ್ಲಿ ಒಬ್ಬ ಸ್ಥಳೀಯ ಬಾಲಕ ಹೊರತುಪಡಿಸಿದರೆ ಉಳಿದವರೆಲ್ಲರೂ ಭಾರತೀಯರು! ಇದು ಒಂದು ಪ್ರದೇಶಕ್ಕೆ ಸೀಮಿತವಾಗಿರುವ ಸಮಸ್ಯೆಯಾಗಿರಬಹುದು. ಆದರೆ, ಈ ಸಮಸ್ಯೆಯನ್ನು ಸರಿಪಡಿಸಲು ಇಲ್ಲಿನ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.” ಅವರ ಪ್ರಕಾರ, H1B ವೀಸಾಗೆ ಮಾತ್ರ ನಿಯಂತ್ರಣ ಹೇರಲಾಗುತ್ತಿದೆ. ಉಳಿದಂತೆ ಶಿಕ್ಷಣ, ಪ್ರಯಾಣ ಮತ್ತಿತರ ಉದ್ದೇಶಗಳಿಗೆ ನೀಡುವ F1B, ಎಲ್1, H4 ಮೊದಲಾದ ವೀಸಾಗಳಿಗೆ ಏನೂ ಸಮಸ್ಯೆಯಾಗಿಲ್ಲ. ವಲಸಿಗರು ಹೆಚ್ಚಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ವೀಸಾದ ಬೆಲೆಯನ್ನು ಗಗನಕ್ಕೇರಿಸಿದೆ.” ಆದರೆ, ಅಕ್ಕ (ಅಮೆರಿಕದ ಕನ್ನಡ ಕೂಟ) ಸಂಘಟನೆಯ ಅಮರನಾಥ್ ಗೌಡ ಅವರು ಹೇಳುವ ಪ್ರಕಾರ ಹೀಗೆ ನಕಲಿ H1B ವೀಸಾ ಪಡೆದವರು ಬೇರೆ ಮೂಲದಿಂದ ಬಂದಿರಬಹುದು. ಆದರೆ ನೇರವಾಗಿ ಭಾರತದಿಂದ ಬರುವ ಸಾಧ್ಯತೆ ಕಡಿಮೆಯಿದೆ. “ನಾನು ವಲಸಿಗರ ವಕೀಲನಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾಗ ಅಂತಹ ಪ್ರಕರಣಗಳಿಗೆ ಅವಕಾಶ ಕೊಡುವುದಿಲ್ಲ. ವೀಸಾ ಕೊಡುವ ಮೊದಲು ಆಂಟಿ ಫ್ರಾಡ್ ಯುನಿಟ್ (ವಂಚನೆ ನಿಗಾ ಘಟಕ) ಮನೆ-ಮನೆಗೆ ಹೋಗಿ ಮೂಲದಲ್ಲಿಯೇ ಪರಿಶೀಲಿಸುತ್ತಾರೆ. ಹೀಗಾಗಿ ವ್ಯಾಪಕವಾಗಿ ಇಂತಹ ಸಮಸ್ಯೆ ಇರಲು ಸಾಧ್ಯವಿಲ್ಲ.” “ಇಲ್ಲಿನ ವಲಸಿಗ ಅಧಿಕಾರಿಗಳು ಟೀಕಿಸಿರುವುದನ್ನು ನಾನೂ ಕೇಳಿದ್ದೇನೆ. ಆದರೆ H1B ವೀಸಾದ ಮೇಲೆ ಎರಡು ರೀತಿಯಲ್ಲಿ ಭಾರತೀಯರು ಅಮೆರಿಕಕ್ಕೆ ಬರುತ್ತಾರೆ. ಮೊದಲನೆಯದಾಗಿ ವಿದೇಶಗಳಿಂದ ಬರುವವರು. ಅವರನ್ನು ಎರಡು ಭಾರತೀಯ ರಾಯಭಾರ ಕಚೇರಿ ಮತ್ತು ಅಮೆರಿಕದ ರಾಯಭಾರ ಕಚೇರಿ ಇಬ್ಬರೂ ಪರಿಶೀಲಿಸುತ್ತಾರೆ. ಉಳಿದಂತೆ F1B ವೀಸಾದಲ್ಲಿ ವಿದ್ಯಾರ್ಥಿಗಳಾಗಿ ಬಂದವರಿಗೆ H1B ವೀಸಾ ನೀಡಿ ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅವರೇ 85,000 ವೀಸಾದಲ್ಲಿ ಸುಮಾರು 20,000 ವೀಸಾ ಪಡೆಯುತ್ತಾರೆ. ಹೀಗಾಗಿ ನಕಲಿ ವೀಸಾ ಪಡೆದು ಬರುವವರ ಸಂಖ್ಯೆ ಕಡಿಮೆಯೇ ಇರಬಹುದು.” ಇದೀಗ ಟ್ರಂಪ್ ಸರ್ಕಾರ ವೀಸಾದಲ್ಲಿ ನೆಲೆಸಿರುವವರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲನೆ ಮಾಡುವುದಾಗಿ ಹೇಳಿರುವುದರಿಂದ ಪರಿಣಾಮ ಬೀರಲಿದೆಯೇ ಎನ್ನುವ ಕಳವಳಕ್ಕೆ ಉತ್ತರಿಸಿದ ಅಮರನಾಥ್ ಅವರು, “ಖಂಡಿತಾ ಪರಿಣಾಮವಾಗಲಿದೆ, ವಿದ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಬಹಳಷ್ಟು ಮಂದಿ ವಿದ್ಯಾರ್ಥಿಗಳಾಗಿ ಬಂದವರು ಹಕ್ಕುಗಳ ಪ್ರತಿಭಟನೆಗಳಲ್ಲಿ ತೊಡಗಿರುವುದು ಸ್ಥಳೀಯ ಸರ್ಕಾರಗಳಿಗೆ ಸಮ್ಮತವಿಲ್ಲ. ಅದು ದೇಶದ ಸಹಜ ಪ್ರಕ್ರಿಯೆ”, ಎಂದು ಪ್ರತಿಕ್ರಿಯಿಸಿದರು.

ವಾರ್ತಾ ಭಾರತಿ 14 Dec 2025 7:14 pm

ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರು 95ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೊನೆಯುಸಿರೆಳೆದರು.

ವಿಜಯ ಕರ್ನಾಟಕ 14 Dec 2025 7:14 pm

ಕೊನೆಗೂ ಇತ್ಯರ್ಥವಾಗದ ವೈದ್ಯರಿಬ್ಬರ ನಡುವಿನ ʼಕೋಳಿʼ ಜಗಳ!

ಬಹಳಷ್ಟು ವೈದ್ಯರು ಸಣ್ಣ ವಿಚಾರಗಳ ಬಗ್ಗೆ ಜನರಲ್ಲಿ ಭಯ ಮೂಡಿಸುತ್ತಾರೆ. ಇಂತಹ ಪ್ರವೃತ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ ಡಾಕ್ಟರ್ ಫಿಲಿಪ್ಸ್. ಇದೀಗ ತಮಿಳುನಾಡಿನ ವೈದ್ಯರನ್ನು ಅವರು ಟೀಕಿಸುತ್ತಿರುವುದೇತಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಸೈದ್ಧಾಂತಿಕವಾಗಿ ಬದಲಾದ ಚರ್ಚೆಯ ಮೂಲವೇನು? ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ಇಬ್ಬರು ವೈದ್ಯರ ನಡುವೆ ಚಿಕನ್ ನಗೆಟ್ಸ್ ಮತ್ತು ಪಾಪ್ಕಾರ್ನ್ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಡಾ. ಪಾಲ್ ಎಂದೇ ಜನಜನಿತರಾಗಿರುವ ಡಾ ಪಳನಿಯಪ್ಪನ್ ಮನಿಕಾಮ್ ಮತ್ತು ಲಿವರ್ ಡಾಕ್ಟರ್ ಎಂದೇ ಪ್ರಸಿದ್ಧಿಪಡೆದ ಡಾ ಸಿರಿಯಾಕ್ ಅಬಿ ಫಿಲಿಪ್ಸ್ ನಡುವೆ ಈ ಚರ್ಚೆ ನಡೆದಿದೆ. ಡಾ. ಪಾಲ್ ತಮ್ಮ ಕುಟುಂಬದ ಜೊತೆಗೆ ಚಿತ್ರಮಂದಿರಕ್ಕೆ ಹೋಗಿದ್ದಾಗ ತೆಗೆದಿದ್ದ ವೀಡಿಯೊ ಒಂದರಲ್ಲಿ “ಪಾಪ್ಕಾರ್ನ್ ಮತ್ತು ಚಿಕನ್ ನಗೆಟ್ಸ್ ಹೇಗೆ ಕರುಳಿನ ಆರೋಗ್ಯಕ್ಕೆ ಅಪಾಯಕಾರಿ” ಎಂದು ಹಾಸ್ಯಮಯವಾಗಿ ತಿಳಿಸಿದ್ದರು. ಲಿವರ್ ಡಾಕ್ಟರ್ ಈ ಕ್ಲಿಪ್ ಅನ್ನು ಹಂಚಿಕೊಂಡು “ಜನರ ನಡುವೆ ಆಹಾರದ ಬಗ್ಗೆ ಭಯ ಹರಡಬೇಡಿ” ಎಂದು ಹೇಳಿದ್ದರು. “ನಿಮ್ಮ ಸುಳ್ಳುಮಾಹಿತಿಯನ್ನು ಇನ್ಸ್ಟಾಗ್ರಾಂನಲ್ಲೇ ಹರಡಿ. ಅಪರೂಪಕ್ಕೊಮ್ಮೆ ಸಿನಿಮಾ ನೋಡಲು ಹೋದಾಗ ಪಾಪ್ಕಾರ್ನ್ ಅಥವಾ ಚಿಕಲ್ ನಗೆಟ್ಸ್ ತಿಂದರೆ ಕರುಳಿಗೆ ಏನೂ ಸಮಸ್ಯೆಯಾಗದು. ಇಂತಹ ಸುಳ್ಳನ್ನು ಹರಡುವುದು ನಿಲ್ಲಿಸಿ” ಎಂದು ಫಿಲಿಪ್ಸ್ ಹೇಳಿದ್ದರು. ಅದಕ್ಕೆ ಉತ್ತಿರಿಸಿದ ಡಾ ಪಾಲ್, “ಫಿಲಿಪ್ಸ್ ಅವರು ನೆಗೆಟಿವಿಟಿ ಹರಡುವ ಬದಲಾಗಿ ಜನರನ್ನು ಶಿಕ್ಷಿತರನ್ನಾಗಿಸಬೇಕು ಎಂದು ಸಲಹೆ ನೀಡಿದರು. ಅವರು ತಮ್ಮ ವೀಡಿಯೊವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿ, “ಸರಳವಾಗಿ ಸಂವಹನ ಮಾಡಲು ಹಾಸ್ಯಮಯ ವೀಡಿಯೋ ಹಾಕಿರುವುದನ್ನು ತಪ್ಪರ್ಥ ಮಾಡಿಕೊಳ್ಳಲಾಗಿದೆ. ಹಾಸ್ಯಮಯ ರೀತಿಯಲ್ಲಿ ಜನರಿಗೆ ಅರ್ಥವಾಗುವಂತೆ ‘ಅತಿ ಸಂಸ್ಕರಿತ ಆಹಾರ ಸೇವಿಸಬಾರದು’ ಎನ್ನುವ ಸಂದೇಶಗಳನ್ನು ಹಾಕುತ್ತೇನೆ. ಇದನ್ನು ಪ್ರಮುಖ ಸಾರ್ವಜನಿಕ- ಆರೋಗ್ಯ ಮಂಡಳಿಗಳೂ ಬೆಂಬಲಿಸಿವೆ. ಲಿವರ್ ವೈದ್ಯರ ಟೀಕೆ ವಿಜ್ಞಾನವನ್ನು ಆಧರಿಸಿ ನೀಡಲಾಗಿಲ್ಲ” ಎಂದು ಬರೆದರು. ತಮ್ಮ ದೀರ್ಘ ಬರಹದಲ್ಲಿ ಡಾ. ಪಾಲ್ ತಮ್ಮ ವೃತ್ತಿಪರ ವಿಶ್ವಾಸಾರ್ಹತೆಯನ್ನು ಸಮರ್ಥಿಸಿಕೊಂಡಿದ್ದಲ್ಲದೆ, “ಎರಡು ದಶಕಗಳ ಕಾಲ ವೈದ್ಯಕೀಯ ವೃತ್ತಿಯಲ್ಲಿರುವೆ. ಸಾಮಾಜಿಕ ಮಾಧ್ಯಮವನ್ನು ಹಣಕ್ಕಾಗಿ ಬಳಸುವುದಿಲ್ಲ, ಆನ್ಲೈನ್ ಅನ್ನು ಕೇವಲ ಜನರನ್ನು ಶಿಕ್ಷಿತರನ್ನಾಗಿಸಲು ಬಳಸುತ್ತೇನೆ” ಎಂದು ಹೇಳಿದ್ದರು. ಅವರು ತಮ್ಮ ಜೀವನಶೈಲಿ-ಆಧರಿತ ಕಾರ್ಯಕ್ರಮ ‘ನ್ಯೂಮಿ’ (Newme) ಬಗ್ಗೆ ಹಂಚಿಕೊಂಡು, “ಪೂರಕ ಔಷಧಿಗಳನ್ನು ನೀಡದೆ ಹವ್ಯಾಸಗಳು, ಪೌಷ್ಠಿಕತೆ, ನಿದ್ರೆ, ಚಲನೆ, ಒತ್ತಡ ಕಡಿಮೆ ಮಾಡುವುದು ಮತ್ತು ಬದ್ಧತೆಯ ಸಾಕ್ಷ್ಯವನ್ನು ಆಧರಿಸಿದ ರೂಪುರೇಷೆ” ಎಂದು ಮುಂದಿಟ್ಟಿದ್ದಾರೆ. “ಬಹಳಷ್ಟು ಮಂದಿ ವೈಜ್ಞಾನಿಕ ವಿವರಣೆಗಳ ಮೇಲೆ ಸರಳವಾಗಿ ಹಾಸ್ಯಮಯವಾಗಿ ತಿಳಿ ಹೇಳಿದಾಗ ಅರ್ಥಮಾಡಿಕೊಳ್ಳುತ್ತಾರೆ. ಇದು ಜನರನ್ನು ಪ್ರಚೋದಿಸುವುದು ಅಲ್ಲ, ಬದಲಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಸಂವಹನ ವಿಧಾನಗಳು” ಎಂದು ಬರೆದುಕೊಂಡಿದ್ದಾರೆ. ಅವರು ಮುಂದುವರಿದು, ಈ ವರ್ಷ ಪ್ರತಿಷ್ಠಿತ ಹಳೆವಿದ್ಯಾರ್ಥಿ ಪ್ರಶಸ್ತಿಯನ್ನು ಗಳಿಸಿರುವುದಾಗಿ ವಿವರ ನೀಡಿ, ಫಿಲಿಪ್ಸ್ ಅವರ ತಂದೆ ಡಾ ಫಿಲಿಪ್ ಆಗಸ್ಟಿನ್ ರಿಂದ ಅದನ್ನು ಪಡೆದುಕೊಂಡಿರುವುದು ತಮ್ಮ ಉತ್ತಮ ಕೆಲಸಕ್ಕೆ ಸಾಕ್ಷಿ. ಈ ಪ್ರಶಸ್ತಿಯೇ ಆನ್ಲೈನ್ ಟೀಕೆಗಿಂತ ಹೆಚ್ಚು ಉತ್ತಮವಾಗಿ ತಮ್ಮ ವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರವಾಗಿ ಫಿಲಿಪ್ಸ್ “ನಾನು ನನ್ನ ಬಗ್ಗೆ ಯಾರಿಗೂ ಏನೂ ಸಾಬೀತುಮಾಡುವ ಅಗತ್ಯವಿಲ್ಲ. ಧರ್ಮಾಂಧತೆ ಅಥವಾ ಧಾರ್ಮಿಕ ತಾರತಮ್ಯವನ್ನು ಯಾವುದೇ ರೂಪದಲ್ಲಿದ್ದರೂ ಬೆಂಬಲಿಸುವುದಿಲ್ಲ. ನಿತ್ಯದ ಆಹಾರದ ಮೇಲೆ ಭಯ ಮೂಡಿಸುವುದು ತಪ್ಪು” ಎನ್ನುವ ತಮ್ಮ ನಿರ್ಧಾರವನ್ನು ಒತ್ತಿ ಹೇಳಿದರು. ಮಾತ್ರವಲ್ಲದೆ, ತಾನು ಆನ್ಲೈನ್ ನಲ್ಲಿ ವೈಯಕ್ತಿಕ ಟೀಕೆ ಅಥವಾ ನೆಗೆಟಿವಿಟಿ ಹರಡುತ್ತಿಲ್ಲ, ಬದಲಾಗಿ ತನ್ನ ಗುರಿ ಸಾರ್ವಜನಿಕ ಆರೋಗ್ಯ. ಜನರ ಗಮನಕ್ಕಾಗಿ ನಡೆಸುವ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ತಮ್ಮ ತಂದೆಯನ್ನು ಚರ್ಚೆಯ ನಡುವೆ ತರಬಾರದು ಎಂದೂ ಸಲಹೆ ನೀಡಿದ ಅವರು, “ನೀವು ಇಂತಹ ನೀಚತನಕ್ಕೆ ಇಳಿಯುತ್ತೀರಿ ಎನ್ನುವ ಅರಿವು ನನಗಿತ್ತು, ನಮ್ಮ ತಂದೆ ಒಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಜಠರಕರುಳಿನ ತಜ್ಞರಾಗಿ ಕಾಲೇಜಿನ ಆಮಂತ್ರಣದಿಂದ ಮುಖ್ಯ ಅತಿಥಿಯಾಗಿ ಹೋಗಿದ್ದಾರೆ. ನಿಮಗೆ ದೊರೆತಿರುವುದು ಉತ್ತಮ ಹಳೇ ವಿದ್ಯಾರ್ಥಿ ಪ್ರಶಸ್ತಿ. ಅವರಿಗೆ ಯಾರು ಪ್ರಶಸ್ತಿ ಸ್ವೀಕರಿಸುತ್ತಾರೆ ಎನ್ನುವ ಅರಿವೂ ಇರಲಿಲ್ಲ. ಜನಪ್ರಿಯತೆ ಹೆಚ್ಚಿಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಕ್ಕೆ ನಾನು ಹೋಗುವುದೂ ಇಲ್ಲ. ನಿಮ್ಮ ಮೆದುಳುರಹಿತ ಬೆಂಬಲಿಗರ ಮುಂದೆ ಸಂತ್ರಸ್ತರೆಂದು ತೋರಿಸಿಕೊಳ್ಳುವ ಬದಲಾಗಿ ನೀವು ಸ್ವಂತಕ್ಕಾಗಿ ಇದನ್ನೆಲ್ಲ ಮಾಡುತ್ತೀರೋ ಅಥವಾ ಸಾರ್ವಜನಿಕರಿಗೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ನಾನು ನಿಮ್ಮಂತೆ ಸುಳ್ಳುಸುದ್ದಿ ಹರಡಿಸುವವರ ವಿರುದ್ಧ ಖಚಿತವಾಗಿ ಹೋರಾಡುತ್ತೇನೆ, ನಾನು ಸಾರ್ವಜನಿಕರ ಪರವಾಗಿ ಮಾತನಾಡುತ್ತೇನೆ ಮತ್ತು ನನ್ನ ರೋಗಿಗಳಿಗಾಗಿ ಕೆಲಸ ಮಾಡುತ್ತೇನೆ. ನೀವು ಜನರ ಸಂಶಯದಿಂದ ಹಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ” ಎಂದು ಉತ್ತರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಯುರ್ವೇದಿಕ್ ಪದ್ಧತಿಯನ್ನು ಟೀಕಿಸಿರುವುದಕ್ಕಾಗಿ ಲಿವರ್ ವೈದ್ಯರ ಮೇಲೆ ಕೆಲವೊಂದು ಪ್ರಕರಣಗಳೂ ಭಾರತದಲ್ಲಿ ದಾಖಲಾಗಿವೆ. ಫಿಲಿಪ್ಸ್ ಈ ಹಿಂದೆ ನಯನ ತಾರ ಅವರು ದಾಸವಾಳ ಚಹಾದ ಬಗ್ಗೆ ಬರೆದುಕೊಂಡಿರುವುದನ್ನೂ ಪ್ರಶ್ನಿಸಿದ್ದರು. ಅವರು ಆನ್ಲೈನ್ನಲ್ಲಿ ಬಿಟ್ಟಿ ಸಲಹೆ ನೀಡುವ ಅನೇಕರ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿರುತ್ತಾರೆ.

ವಾರ್ತಾ ಭಾರತಿ 14 Dec 2025 7:11 pm

ಆನೇಕಲ್ ಬಳಿ ಬಸ್ಸನ್ನು ಕದಿಯಲು ಪ್ರಯತ್ನಿಸಿ ಅನಾಹುತ

ಬೆಂಗಳೂರು : ಕಳ್ಳರು ಬಸ್ ಕದಿಯಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿರುವ ಘಟನೆ ಶನಿವಾರ ರಾತ್ರಿ ನಗರದ ಹೊರ ವಲಯದಲ್ಲಿರುವ ಆನೇಕಲ್‍ನಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ ಮುಂಭಾಗ ಜಖಂಗೊಂಡಿದೆ. ಪ್ರಕರಣ ಸಂಬಂಧ ಸಾರ್ವಜನಿಕರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಎಂದಿನಂತೆ ಆನೇಕಲ್‍ನ ಥಳಿ ರಸ್ತೆ ಬದಿ ಬಸ್ ಪಾರ್ಕ್ ಮಾಡಿ ಚಾಲಕ ಹೋಗಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ನಿಯಂತ್ರಣ ಕಳೆದುಕೊಂಡ ಬಸ್ ಎರಡು ವಿದ್ಯುತ್ ಕಂಬಗಳಿಗೆ ಗುದ್ದಿದೆ. ಕೂಡಲೇ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಾರ್ತಾ ಭಾರತಿ 14 Dec 2025 7:05 pm

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ `ಕಿಂಗ್' ಹರ್ಷಿತ್ ರಾಣಾ ! ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲಣ್ಣ!

ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ ಭಾರತ ತಂಡದಲ್ಲಿ ಸದಾ ಸ್ಥಾನ ಪಡೆಯುವ ಹರ್ಷಿತ್ ರಾಣಾಗೆ ಸರಣಿಯ ಒಂದು ಪಂದ್ಯದಲ್ಲಾದರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂಬುದು ಇದೀಗ ಮತ್ತೊಮ್ಮೆ ನಿಜವಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಕಣಕ್ಕಿಳಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಗೊಳಗಾಗಿದೆ. ತಂಡದ ಮತ್ತು ಹರ್ಷಿತ್ ರಾಣಾ ಅವರ ಚಿತ್ರಗಳನ್ನು ಹಾಕಿ ನೆಟ್ಟಿಗರು ವಿಪರೀತ ಹಾಸ್ಯ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಧರ್ಮಶಾಲಾದಲ್ಲಿ ಭಾನುವಾರ ನಡೆಯುತ್ತಿರುವ ದಲ್ಲಿ ಟಾಸ್ ಗೆದ್ದಿರುವ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಪಂದ್ಯದಲ್ಲಿ ಟಾಸ್ ಸೋತಿದ್ದ ಟೀಂ ಇಂಡಿಯಾ ನಾಯಕ ಇದೀಗ ನಿರಂತರ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ. ಪ್ಲೇಯಿಂಗ್ ಇಲೆವೆನ್ ನಲ್ಲಿ 2 ಬದಲಾವಣೆ ಮಾಡಲಾಗಿದೆ. ಸ್ಪಿನ್ನ್ ಆಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಅವರು ಕಣಕ್ಕಿಳಿದಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರು ಸತತ 3ನೇ ಪಂದ್ಯದಲ್ಲೂ ಬೆಂಚು ಕಾಯಿಸಬೇಕಾಗಿದೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), 8 ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಐಡೆನ್ ಮಾರ್ಕಂ(ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೊನೊವನ್ ಫೆರೀರಾ, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ

ವಿಜಯ ಕರ್ನಾಟಕ 14 Dec 2025 7:04 pm

ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವವರಿಗೆ Alzheimer ರೋಗದ ಅಪಾಯ ಶೇ. 47ರಷ್ಟು ಕಡಿಮೆ

ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಈ ಎಸಿಟೈಲ್ಕೊಲೀನ್ ಬಿಡುಗಡೆಯಲ್ಲಿ ಮೊಟ್ಟೆಯಲ್ಲಿ ಸಿಗುವ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ. ಸಮೃದ್ಧ ಪ್ರೊಟೀನ್ ಮತ್ತು ಪೌಷ್ಠಿಕಾಂಶವಿರುವ ಅಗ್ಗದ ಆಹಾರವೆಂದೇ ಪರಿಗಣಿಸಲಾಗಿರುವ ಮೊಟ್ಟೆಯಿಂದ ಮಾನವನ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ಬಹಳಷ್ಟು ಚರ್ಚೆಗಳಿವೆ. ಮೊಟ್ಟೆಯನ್ನು ಹೆಚ್ಚು ಸೇವಿಸಿದಲ್ಲಿ ಕೊಬ್ಬಿನಂಶ ಹೆಚ್ಚಾಗಲಿದೆ ಎನ್ನುವುದು ಅಂತಹ ಒಂದು ನಂಬಿಕೆಯಾಗಿದೆ. ಆದರೆ ಜರ್ನಲ್ ಆಫ್ ನ್ಯೂಟ್ರಿಷನ್ ಹೆಲ್ತ್ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನವೊಂದರ ಪ್ರಕಾರ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಉತ್ತಮ ಎಂದು ಕಂಡುಬಂದಿದೆ. ►ಮರೆಗುಳಿತನದ ಅಪಾಯ ಶೇ 47ರಷ್ಟು ಕಡಿಮೆ ಅಧ್ಯಯನದ ಪ್ರಕಾರ, ಮೊಟ್ಟೆಯನ್ನೇ ತಿನ್ನದಿರುವವರಿಗೆ/ ಅಪರೂಪಕ್ಕೆ ಮೊಟ್ಟೆ ತಿನ್ನುವವರಿಗೆ ಹೋಲಿಸಿದರೆ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಮಾಡುವ ವಯಸ್ಕರಲ್ಲಿ alzheimerಗೆ ಸಂಬಂಧಿಸಿದ ಬುದ್ಧಿಮಾಂದ್ಯ/ ಮರೆಗುಳಿತನದ ರೋಗ ಬರುವ ಸಾಧ್ಯತೆ ಶೇ 47ರಷ್ಟು ಕಡಿಮೆಯಿದೆ. ಸಂಶೋಧನೆಯಲ್ಲಿ 1,024 ವಯಸ್ಕರನ್ನು (ಸರಾಸರಿ ವಯಸ್ಸು ಶೇ 81.4 ವರ್ಷಗಳು) ಅಮೆರಿಕದ ಇಲಿನೊಯಿಸ್ ನ ವಸತಿ ಸೌಲಭ್ಯಗಳಲ್ಲಿ ಸರಾಸರಿ 6.7 ವರ್ಷಗಳ ಕಾಲ ಅಧ್ಯಯನ ಮಾಡಿ ಈ ಸಂಶೋಧನೆಯನ್ನು ನಡೆಸಲಾಗಿದೆ. ಅಧ್ಯಯನ ಹೇಳುವ ಪ್ರಕಾರ, ಮುಖ್ಯವಾಗಿ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೋಲೀನ್ ನ ಪರಿಣಾಮವಾಗಿ ಇಂತಹ ರಕ್ಷಣಾತ್ಮಕ ಪರಿಣಾಮವಾಗುತ್ತದೆ. ಕೋಲೀನ್‍ ಎನ್ನುವುದು ಜೀವಿಗಳ ಮೂಲಪದಾರ್ಥಗಳಲ್ಲಿ ದೊರೆಯುವ, ಮೇದಸ್ಸಿನ ಚಯಾಪಚಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ‘ಬಿ’ ಸಮೂಹಕ್ಕೆ ಸೇರಿದ ಒಂದು ವಿಟಮಿನ್‍. ಎಸಿಟೈಲ್ಕೊಲೀನ್ ಎನ್ನುವುದು ಸ್ವತಂತ್ರ ನರಗಳ ತುದಿಗಳಲ್ಲಿ ಬಿಡುಗಡೆಯಾಗುವ, ನರಗಳ ತಂತುಗಳಿಂದ ಪ್ರೇರಣೆಗಳನ್ನು ವರ್ಗಾಯಿಸುವ ಕೋಲೀನಿನ ಅಸೀಟಿಕ್‍ ಆಮ್ಲದ ಒಂದು ಎಸ್ಟರ್ ಆಗಿರುತ್ತದೆ. ಎಸ್ಟರು ಎಂದರೆ ಯಾವುದೇ ಆಮ್ಲದಲ್ಲಿನ ಹೈಡ್ರೊಜನ್‍ ಪರಮಾಣುಗಳ ಸ್ಥಾನವನ್ನು ಆಲ್ಕೈಲ್‍, ಆರೈಲ್‍, ಮೊದಲಾದ ಕಾರ್ಬನಿಕ ರ್‍ಯಾಡಿಕಲ್‍ ಗಳು ಆಕ್ರಮಿಸಿಕೊಳ್ಳುವುದರಿಂದ ರೂಪುಗೊಳ್ಳುವ ಸಂಯುಕ್ತ. ►ಎಸಿಟೈಲ್ ಕೊಲೀನ್ ನ ಕೊರತೆ ಈ ಎಸಿಟೈಲ್ ಕೊಲೀನ್ ಬಿಡುಗಡೆಯಲ್ಲಿ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ. ನೆನಪುಶಕ್ತಿ ಮತ್ತು ಕಲಿಕೆಗೆ ಈ ನರಪ್ರೇಕ್ಷಕವಾದ ಎಸಿಟೈಲ್ ಕೊಲೀನ್ ಅತಿಮುಖ್ಯವಾಗಿರುತ್ತದೆ. ನರಪ್ರೇಕ್ಷಕವೆಂದರೆ ಒಂದು ನರದಿಂದ ಇನ್ನೊಂದು ನರಕ್ಕೆ ಅಥವಾ ಸ್ನಾಯುವಿಗೆ ಚೋದನೆಯನ್ನು ರವಾನಿಸಲು ನೆರವಿಗೆ ಬರುವ, ನರತಂತುವಿನಿಂದ ಒಸರುವ ರಾಸಾಯನಿಕ ವಸ್ತು. ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಆಹಾರದಲ್ಲಿ ಕೊಲೀನ್ ಸೇವನೆ ಹೆಚ್ಚಾಗಿರುವುದು ಮೊಟ್ಟೆ ಸೇವನೆಗೆ ಸಂಬಂಧಿತ ರಕ್ಷಣಾತ್ಮಕ ಅಂಶದ ಶೇ 39ರಷ್ಟು ಪರಿಣಾಮ ಬೀರಿದೆ. ►ವಿಷಕಾರಿ ಪ್ರೊಟೀನ್ಗಳ ಸಂಗ್ರಹ ಕಡಿಮೆ ಮೃತಪಟ್ಟ ವ್ಯಕ್ತಿಗಳ ಮೇಲೆ ಸಂಶೋಧಕರು ನಡೆಸಿರುವ ಮೆದುಳಿನ ಮಹಜರುಗಳಲ್ಲಿ ಕಂಡುಬಂದಿರುವ ಪ್ರಕಾರ ಮೊಟ್ಟೆಯನ್ನು ನಿಯಮಿತವಾಗಿ ಸೇವನೆ ಮಾಡಿರುವವರಲ್ಲಿ Alzheimer ರೋಗಕ್ಕೆ ಸಂಬಂಧಿಸಿದ ವಿಷಕಾರಿ ಪ್ರೊಟೀನ್ ಗಳಾದ ಅಮಿಲಾಯ್ಡ್ ಪದರಗಳು ಮತ್ತು ಟಾವು ಟ್ಯಾಂಗಲ್ ಗಳ (ಮೆದುಳಿನ ಜೀವಕೋಶಗಳ /ನ್ಯೂರಾನ್ ಗಳ ಒಳಗೆ ರೂಪುಗೊಳ್ಳುವ ಟೌ ಪ್ರೋಟೀನ್‌ನ ಅಸಹಜ ಗುಂಪುಗಳು ಅವುಗಳ ಕಾರ್ಯವನ್ನು ಅಡ್ಡಿಪಡಿಸುತ್ತವೆ ಮತ್ತು ಜೀವಕೋಶದ ಸಾವಿಗೆ ಕಾರಣವಾಗುತ್ತವೆ) ಸಂಗ್ರಹ ಕಡಿಮೆ ಇತ್ತು. ಮೊಟ್ಟೆಗಳು ಮೆದುಳಿನ ಆರೋಗ್ಯಕ್ಕೆ ಬೆಂಬಲಿಸುವ ಇತರ ಪೌಷ್ಠಿಕಾಂಶಗಳಾಗಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು, ಲ್ಯುಟೀನ್, ವಿಟಮಿನ್ B12 ಮತ್ತು ಫೊಲೇಟ್ ಗಳನ್ನು ಹೊಂದಿರುತ್ತವೆ. ಇವುಗಳು ಜೊತೆಗೂಡಿ ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

ವಾರ್ತಾ ಭಾರತಿ 14 Dec 2025 6:59 pm

ಗ್ರೇಟರ್ ತುಮಕೂರು ಘೋಷಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ : ಜಿ.ಪರಮೇಶ್ವರ್‌

ತುಮಕೂರು : ಗ್ರೇಟರ್ ತುಮಕೂರು ಘೋಷಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಇ-ಖಾತಾ(ನಮೂನೆ 2) ವಿತರಣಾ ಕಾರ್ಯಕ್ರಮ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಗ್ರೇಟರ್ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ತುಮಕೂರು, ಮೈಸೂರು, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಗ್ರಾಮಗಳಲ್ಲಿ ಜೀವನ ಸಾಗಿಸಲು ಎದುರಾಗುವ ಸಮಸ್ಯೆಗಳ ಕಾರಣದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರಗಳಲ್ಲಿ ಬದುಕು ಸಹ ಸುಲಭವಲ್ಲ. ಕೆಲ ವಾರ್ಡ್‍ಗಳಲ್ಲಿ ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಶೇ.40ರಷ್ಟು ಜನರು ಪಟ್ಟಣಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ವಲಸೆ ಬಂದು ಜೀವನ ಸಾಗಿಸುವವರಿಗೆ ಸರಕಾರದಿಂದ ವಸತಿ ಸೌಲಭ್ಯ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಾದಾಗ ಜನಸಾಮಾನ್ಯರ ಜೀವನ ಮಟ್ಟ ಬದಲಾಗುತ್ತದೆ ಎಂದು ಹೇಳಿದರು. ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 18 ಪಾರ್ಕ್‍ಗಳನ್ನು ನವೀಕರಿಸಲಾಗುತ್ತಿದೆ. ಪೌರಕಾರ್ಮಿಕರ ಬದುಕು ಸುಧಾರಣೆಗೆ ಅವರಿಗೆ ಖಾಯಂ ಉದ್ಯೋಗ ಹಾಗೂ ವಸತಿ ಸೌಲಭ್ಯ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಿಬ್ಬೂರು ವ್ಯಾಪ್ತಿಯಲ್ಲಿ 64 ಕೊಠಡಿಗಳ ಅಪಾರ್ಟ್‍ಮೆಂಟ್ ನಿರ್ಮಿಸಿ ಕೊಡುವ ಕಾರ್ಯಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿದೆ . ತುಮಕೂರು ಅಭಿವೃದ್ಧಿ ಯಾದರೆ ನಾಗರಿಕರ ಸಮಗ್ರ ಅಭಿವೃದ್ಧಿ ಸಾಧ್ಯವೆಂಬ ದೃಷ್ಟಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಜಿಲ್ಲೆಗೆ 120 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು. ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಆಯುಕ್ತ ಯೋಗಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತ್‍ಮೌರ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ವಾರ್ತಾ ಭಾರತಿ 14 Dec 2025 6:54 pm

ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಬೆಂಗಳೂರಿನ ಪೊಲೀಸರು ಎಚ್ಚರ ವಹಿಸುತ್ತಿದ್ದು, ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಿದ್ದಾರೆ. ಶನಿವಾರ ತಡರಾತ್ರಿ ನಗರದಾದ್ಯಂತ ಪಬ್, ರೆಸ್ಟೋರೆಂಟ್‍ಗಳನ್ನು ಪರಿಶೀಲನೆ ನಡೆಸಿದರು. ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಅಕ್ರಮಗಳಿಗೆ ತಡೆ ಹಾಕುವ ಉದ್ದೇಶದಿಂದ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಪಬ್, ರೆಸ್ಟೋರೆಂಟ್‍ಗಳಿಗೆ ತೆರಳಿ ಹೊಸ ವರ್ಷಾಚರಣೆಯ ತಯಾರಿಗಳ ಕುರಿತು ಮಾಹಿತಿ ಕಲೆಹಾಕಿ ಅಗತ್ಯ ಸೂಚನೆಗಳನ್ನು ನೀಡಿದರು. ಹಿರಿಯ ಅಧಿಕಾರಿಗಳೇ ಖುದ್ದು ತೆರಳಿ ಪರಿಶೀಲನೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಈ ವೇಳೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್ ನೇಮಗೌಡ ಮಾತನಾಡಿ, ನಗರದಲ್ಲಿ ಹೊಸ ವರ್ಷಾಚರಣೆಗೆ ಪೂರ್ವಭಾವಿ ತಪಾಸಣೆ ಆರಂಭಿಸಲಾಗಿದೆ. ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಪ್ಪಿಸಲು ಹಾಗೂ ಅಕ್ರಮಗಳನ್ನು ನಿಯಂತ್ರಿಸಲು ನಗರದ ವಿವಿಧೆಡೆ ತಪಾಸಣೆ ನಡೆಸಲಾಗಿದೆ. ಪಬ್, ರೆಸ್ಟೋರೆಂಟ್‍ಗಳಲ್ಲಿ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಾಗಿದೆ. ಎಷ್ಟು ಜನರಿಗೆ ಆಸನ ವ್ಯವಸ್ಥೆಯಿದೆ, ಜನಸಂದಣಿ ನಿರ್ವಹಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.

ವಾರ್ತಾ ಭಾರತಿ 14 Dec 2025 6:46 pm

ಕಾನಿಷ್ಕ್ ಚೌಹಾನ್ ಆಲ್ರೌಂಡ್ ಆಟ; ಅಂಡರ್ 19 ಏಷ್ಯಾ ಕಪ್ ನಲ್ಲೂ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಭಾರತ!

ಏಷ್ಯಾ ಕಪ್ ನ ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ಇದೀಗ ಅಂಡರ್ 19 ಏಷ್ಯಾ ಕಪ್ ಟೂರ್ನಿಯಲ್ಲೂ ಜಯಭೇರಿ ಭಾರಿಸಿದೆ. ಬೇಗನೇ ಔಟಾದರೂ ಆ್ಯರನ್ ಜಾರ್ಜ್ ಅವರ ಸಮಯೋಚಿತ ಅರ್ಧಶತಕ ಮತ್ತ ಆ ಬಳಿಕ ಬೌಲರ್ ಗಳು ನಡೆಸಿದ ಸಂಘಟಿತ ದಾಳಿಯಿಂದಾಗಿ ಭಾರತ ಅಂತಿಮವಾಗಿ ಜಯದ ನಗು ಬೀರಿತು. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಪಾಕಿಸ್ತಾನ ತಂಡದ ಬಿಗು ಬೌಲಿಂಗ್ ದಾಳಿಯಿಂದಾಗಿ 46.1 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 41.2 ಓವರ್ ಗಳಲ್ಲಿ 150 ರನ್ ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಹುಸೈಫಾ ಅಹ್ಸಾನ್(83 ಎಸೆತದಲ್ಲಿ 70 ರನ್) ಅವರನ್ನು ಹೊರತುಪಡಿಸಿದರೆ ಮತ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಮಧ್ಯಮವೇಗಿ ದೀಪೇಶ್ ದೇವೇಂದ್ರನ್ ಮತ್ತು ಸ್ಪಿನ್ನರ್ ಕಾನಿಷ್ಕ್ ಚೌಹಾನ್ ಅವರು ತಲಾ 3 ವಿಕೆಟ್ ಕಬಳಿಸಿದರು. ವೈಭವ್ ಸೂರ್ಯವಂಶಿ ಅವರು ಬ್ಯಾಟಿಂಗ್ ನಲ್ಲಿ ವಿಫಲರಾದರೂ ಬೌಲಿಂಗ್ ನಲ್ಲಿ 1 ವಿಕೆಟ್ ಗಳಿಸಿದರು. ಆ್ಯರನ್ ಜಾರ್ಜ್ ಅರ್ಧಶತಕ ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ಆದರೆ ನಾಯಕ ಆಯುಷ್ ಮ್ಹಾತ್ರೆ(25 ಎಸೆತಗಳಲ್ಲಿ 38) ಮತ್ತು 3ನೇ ಕ್ರಮಾಂಕದ ಬ್ಯಾಟರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆ್ಯರನ್ ಅವರು 88 ಎಸೆತಗಳಲ್ಲಿ 12 ಬೌಂಡರಿ ಮತು 1 ಸಿಕ್ಸರ್ ಗಳಿದ್ದ 85 ರನ್ ಗಳಿಸಿದರು. ಆದರೆ ಅಂತಿಮ ಹಂತದಲ್ಲಿ ಕಾನಿಷ್ಕ್ ಚೌಹಾನ್(46 ಎಸತೆದಲ್ಲಿ 46) ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್ ಗಳು ವಿಫಲರಾಗಿದ್ದರಿಂದ ತಂಡ ದೊಡ್ಡ ಮೊತ್ತ ಗಳಿಸಲು ವಿಫಲ ಆಯಿತು. ಕಳೆದ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಶುರುವಾದ ಈ ಟೂರ್ನಿಯಲ್ಲೂ ಮುಂದುವರಿದಿದೆ. ಟಾಸ್ ವೇಳೆ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಪಾಕಿಸ್ತಾನ ತಂಡದ ನಾಯಕನಿಗೆ ಹಸ್ತಲಾಘವ ಮಾಡಲಿಲ್ಲ. ಸಂಕ್ಷಿಪ್ತ ಸ್ಕೋರ್ ಭಾರತ ಅಂಡರ್ 19 ತಂಡ 46.1 ಓವರ್ ಗಳಲ್ಲಿ 240ಕ್ಕೆ ಆಲೌಟ್, ಪಾಕಿಸ್ತಾನ ಅಂಡರ್ 19 42.2 ಓವರ್ ಗಳಲ್ಲಿ 150ಕ್ಕೆ ಆಲೌಟ್

ವಿಜಯ ಕರ್ನಾಟಕ 14 Dec 2025 6:36 pm

\ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲ\ ಎಂದ ನಟ ಕಿಶೋರ್!

ಜೈ ಶ್ರೀ ರಾಮ್ ನಿಂದ ವಂದೇ ಮಾತರಂ ವರೆಗೆ .. ಎನ್ನುವ ಶೀರ್ಷಿಕೆಯೊಂದಿಗೆ ನಟ ಕಿಶೋರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬರಹವು ಇದೀಗ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ನಟ ಕಿಶೋರ್ ಅವರು ಈ ಟ್ವೀಟ್ ಮಾಡಿದ್ದಾರೆ. ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ

ಒನ್ ಇ೦ಡಿಯ 14 Dec 2025 6:30 pm

ಬೇರೊಬ್ಬ ಯುವತಿಗೆ ತಾಳಿ ಕಟ್ತಿಂದ್ದಂತೆ ಮಂಟಪಕ್ಕೆ ಪ್ರೇಯಸಿ ಎಂಟ್ರಿ; ಚಿಕ್ಕಮಗಳೂರು ಛತ್ರದಲ್ಲಿ ಹೈಡ್ರಾಮಾ

ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ತನಗೆ ಮೋಸ ಮಾಡಿದೆ ಎಂದು ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆದ ಘಟನೆ ಬೆಳಕಿಗೆ ಬಂದಿತ್ತು. ಮದುವೆ ನಿಲ್ಲಿಸಲೆಂದು ಆಕೆ ಬಂದಿದ್ದಳು. ಆದರೆ ಇಲ್ಲಿ ಪ್ರೇಯಿಸಿ ಬರುವಷ್ಟರಲ್ಲೇ ಪ್ರಿಯಕರ ತಾಳಿ ಕಟ್ಟಿಯಾಗಿದ್ದು, ರೊಚ್ಚಿಗೆದ್ದ ಯುವತಿ ಕಲ್ಯಾಣ ಮಂಟಪದಲ್ಲೇ ರಂಪಾಟ ನಡೆಸಿದ ಘಟನೆ ನಡೆದಿದೆ.

ವಿಜಯ ಕರ್ನಾಟಕ 14 Dec 2025 6:06 pm

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ಪ್ರದೀಪ್ ಆರ್.

ಕಾರ್ಕಳ: ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ಜಗತ್ತಿನಾದ್ಯಾಂತ ಹಲವಾರು ಗಣ್ಯ ವ್ಯಕ್ತಿಗಳನ್ನು ನೀಡಿದೆ. ಕರಾವಳಿಯ ವಿದ್ಯಾರ್ಥಿಗಳು ಐ.ಎ.ಎಸ್, ಕೆ.ಎ. ಎಸ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಯಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳಾಗಬೇಕು ಎಂದು ಕಾರ್ಕಳದ ತಹಶೀಲ್ದಾರ್ ಪ್ರದೀಪ್. ಆರ್.  ಅಭಿಪ್ರಾಯಪಟ್ಟರು. ಅವರು ಕಾರ್ಕಳ ಕುಕ್ಕುಂದೂರು ಕೆ.ಎಮ್. ಇ. ಎಸ್ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಪಿ.ಆರ್. ಒ. ಜ್ಯೋತಿ ಪದ್ಮನಾಭ ಭಂಡಿಯವರು ಮಾತನಾಡುತ್ತಾ ಈ ಸಂಸ್ಥೆಯಲ್ಲಿ ತಾನು ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡರು. ಸ್ಥಳೀಯ ಶಿರ್ಡಿ ಸಾಯಿ ಬಾಬಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಆಶೀಶ್ ಶೆಟ್ಟಿಯವರು ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆ ತನ್ನ ವೈಯಕ್ತಿಕ ಬೆಳವಣಿಗೆಯನ್ನು ಯಾವ ರೀತಿ ಉಂಟು ಮಾಡಲು ಸಹಕರಿಸಿತು ಎಂಬುದರ ಬಗ್ಗೆ ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿ ಮತ್ತು ಸಂಸ್ಥೆಯ ಪೂರ್ವ ವಿದ್ಯಾರ್ಥಿನಿ ಡಾ. ಆಶಿತಾ ಕೃಷ್ಣರವರು ಸಂಸ್ಥೆಯಲ್ಲಿ ತಾನು ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿಯವರು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃ ಷ್ಣ ರಾವ್ ರವರು ವರದಿ ವಾಚನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರು ಪ್ರಾಸ್ತವಿಕ ಭಾಷಣ ಮಾಡಿದರು. ಅಂತರಾಷ್ಟ್ರೀಯ ಮಟ್ಟದ ಟೊಕ್ಟೆಂಡೋ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ವಿದ್ಯಾರ್ಥಿ ಸನ್ಪಿತ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಇಪ್ಪತ್ತೈದು ವರ್ಷ ಸೇವೆಗೈದ ಶಿಕ್ಷಕಿ ಹೀಲ್ಡಾ ಡಿ' ಸೋಜ, ಕಾಲೇಜಿನ ಪರಿಚಾರಿಕೆ ಲೀಲಾವತಿ ಮೊದಲಾದವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೊಹಮ್ಮದ್ ನವಾಲ್ ರವರು ಧನ್ಯವಾದಗೈದರು. ಶಿಕ್ಷಕಿ ನಳಿನಿ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ವಾರ್ತಾ ಭಾರತಿ 14 Dec 2025 6:03 pm

ಮಂಗಳೂರು | ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರ ವಶಕ್ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹನಮನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಮತ್ತು ಗೂಡಿನ ಬಳಿ ನಿವಾಸಿ ಮುಹಮ್ಮದ್ ಅಸೀಫ್ (35) ಬ‍ಂಧಿತ ಆರೋಪಿಗಳು. ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದ ಬಗ್ಗೆ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಟಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಕಾರು ಮತ್ತು ಆಟೋ ರಿಕ್ಷಾದ ಬಳಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಅವರನ್ನು ಹಿಡಿದು ಪೊಲೀಸರು ವಿಚಾರಿಸಿದಾಗ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಪಾಸಣೆ ನಡೆಸಿದಾಗ ಕಾರಿನಲ್ಲಿ 450 ಗ್ರಾಂ. ಗಾಂಜಾಹಾಗೂ ರಿಕ್ಷಾದಲ್ಲಿ 360 ಗ್ರಾಂ ಗಾಂಜಾ ಪತ್ತೆಯಾಗಿದೆೆ. ಒಟ್ಟು 810 ಗ್ರಾಂ ಗಾಂಜಾವನ್ನು ವಾಹನಗಳ ಸಮೇತ ಸ್ವಾಧೀನಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 14 Dec 2025 5:42 pm

IPL 2026- ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡ್ತಾರೋ ಇಲ್ವೋ ಡೌಟು; ಇದು ಮ್ಯಾನೇಜರ್ ಕಡೆಯಿಂದಾದ ಎಡವಟ್ಟು!

IPL Auction 2026- ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಕಣ್ಣಿರುವುದು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ. ಆದರೆ ಹರಾಜು ಪಟ್ಟಿಯಲ್ಲಿ ಅವರ ಹೆಸರು ಆಲ್ರೌಂಡರ್ ಗೆ ಬದಲಾಗಿ ಕೇವಲ ಬ್ಯಾಟರ್ ಎಂದು ನಮೂದಿಸಲ್ಪಟ್ಟಿದೆ. ಹೀಗಾಗಿ ಅವರು ಈ ಬಾರಿ ಬೌಲಿಂಗ್ ಮಾಡ್ತಾರೋ ಇಲ್ಲವೋ ಎಂಬ ಬಗ್ಗೆಯೇ ಗೊಂದಲ. ಮ್ಯಾನೇಜರ್ ತಪ್ಪು ತಿಳುವಳಿಕೆಯಿಂದಾಗಿ ಹೀಗಾಗಿದೆ ಎಂದು ಕ್ಯಾಮರೂನ್ ಗ್ರೀನ್ ಅವರು ಇದೀಗ ಸ್ಪಷ್ಟಪಡಿಸಿದ್ದಾರೆ. ಅವರು ಇದೀಗ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗುವ ಎಲ್ಲಾ ಸಾಧ್ಯತೆಗಳಿವೆ.

ವಿಜಯ ಕರ್ನಾಟಕ 14 Dec 2025 5:41 pm

ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ: ಬಂದೂಕುಧಾರಿಯನ್ನು ಬರಿಗೈಯಲ್ಲಿ ಮಣಿಸಿದ ಸಾರ್ವಜನಿಕ ವ್ಯಕ್ತಿ; ಭಾರೀ ಮೆಚ್ಚುಗೆ

ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕ ಧೈರ್ಯದಿಂದ ಬಂದೂಕುಧಾರಿಯನ್ನು ಹಿಮ್ಮೆಟ್ಟಿಸಿ ಹಲವರ ಜೀವ ಉಳಿಸಿದ್ದಾನೆ. ಈ ಘಟನೆ ಯಹೂದಿ ಹಬ್ಬ ಹನುಕ್ಕಾ ಸಂದರ್ಭದಲ್ಲಿ ನಡೆದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಧಾನಿ ಸಂತಾಪ ಸೂಚಿಸಿದ್ದಾರೆ.

ವಿಜಯ ಕರ್ನಾಟಕ 14 Dec 2025 5:39 pm

Hanur | ಮಲೆ ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ

ಚಾಮರಾಜನಗರ : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ಭಾಗ್ಯ(40) ಬಂಧಿತ ಆರೋಪಿ. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವವರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ, ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಭಾಗ್ಯ ಸಂಗ್ರಹಿಸಿಟ್ಟಿದ್ದ 230 ಗ್ರಾಂ ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಜಯರಾಮ, ಸಿಬ್ಬಂದಿಗಳಾದ ಸಿದ್ದರಾಮಯ್ಯ, ರಮೇಶ್, ಮಹೇಶ್, ಶಿವಮೂರ್ತಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 14 Dec 2025 5:34 pm

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 121 KM ಹೊಸ ಮಾರ್ಗ ನಿರ್ಮಾಣ ಆಗುತ್ತಿದೆ: ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಮಾಹಿತಿ; ಎಲ್ಲೆಲ್ಲಿ?

ಬೆಂಗಳೂರು ದಕ್ಷಿಣ ಭಾರತದ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ, 96 ಕಿ.ಮೀ ಕಾರ್ಯಾಚರಣೆಯಲ್ಲಿದ್ದು, 121 ಕಿ.ಮೀ ನಿರ್ಮಾಣ ಹಂತದಲ್ಲಿದೆ. ದೇಶಾದ್ಯಂತ ಮೆಟ್ರೋ ಜಾಲ ವಿಸ್ತರಿಸುತ್ತಿದ್ದು, ಕರ್ನಾಟಕವು 121.16 ಕಿ.ಮೀ. ಹೊಸ ಮಾರ್ಗಗಳೊಂದಿಗೆ ಮುಂಚೂಣಿಯಲ್ಲಿದೆ. ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಸುಧಾರಿಸಲು ಕೇಂದ್ರ ಸರ್ಕಾರವು ಇ-ಬಸ್ ಯೋಜನೆಗೂ ಚಾಲನೆ ನೀಡಿದೆ.

ವಿಜಯ ಕರ್ನಾಟಕ 14 Dec 2025 5:33 pm

ಬ್ಯಾಲೆಟ್ ಪೇಪರ್‌ ನಲ್ಲಿ ಚುನಾವಣೆ ಎದುರಿಸಿ: ಬಿಜೆಪಿಗೆ ಸವಾಲೆಸೆದ ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ: “ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲು ಬಿಜೆಪಿಗೆ ನಾನು ಸವಾಲು ಹಾಕುತ್ತೇನೆ. ಬ್ಯಾಲೆಟ್‌ ಪೇಪರ್ ನಲ್ಲಿ ಸ್ಪರ್ಧಿಸಿದರೆ ಅವರು ಎಂದಿಗೂ ಗೆಲ್ಲಲಾರರು ಎಂಬುದು ಅವರಿಗೆ ತಿಳಿದಿದೆ,” ಎಂದು ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಗೆ ಸವಾಲೆಸಿದಿದ್ದಾರೆ. ರಾಮ್‌ ಲೀಲಾ ಮೈದಾನದಲ್ಲಿ ರವಿವಾರ ನಡೆದ ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್, ಗಡ್ಡಿ ಛೋಡ್’ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ವಯನಾಡ್‌ ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ, “ದೇಶದ ಸಂಸ್ಥೆಗಳನ್ನು ಸರ್ಕಾರದ ಮುಂದೆ ತಲೆ ಬಾಗಿಸಲಾಗುತ್ತಿದೆ. 10 ಸಾವಿರ ರೂ. ಪಾವತಿ ಪ್ರಕರಣದ ಮೇಲೆ ಚುನಾವಣಾ ಆಯೋಗ ಕಣ್ಣು ಮುಚ್ಚಿರುವುದು ಮತ ಕಳ್ಳತನಕ್ಕೆ ಸಾಕ್ಷಿಯಾಗಿದೆ,” ಎಂದು ಹೇಳಿದರು.

ವಾರ್ತಾ ಭಾರತಿ 14 Dec 2025 5:23 pm

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರ; ಹೆರಿಗೆ ರಜೆ ನೀಡುವ ಮುನ್ನ ವಿಶೇಷ ಕಾರ್ಯಕ್ರಮ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಉಮಾ ಅವರಿಗೆ ಹೆರಿಗೆ ರಜೆ ನೀಡುವ ಮುನ್ನ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಿಬ್ಬಂದಿಗಳು ಉಮಾ ಅವರಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಇದು ಪೊಲೀಸ್ ಇಲಾಖೆಯ ಮಾನವೀಯ ಸ್ಪರ್ಶವನ್ನು ತೋರಿಸಿದೆ.

ವಿಜಯ ಕರ್ನಾಟಕ 14 Dec 2025 5:16 pm

2026ರ ಅವಧಿಗೆ ಎಸ್‌ಐಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಬೆಂಗ್ರೆ ಅವಿರೋಧ ಆಯ್ಕೆ

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಘಟಕ ಇದರ 2026ನೇ ಅವಧಿಗೆ ಮುಸ್ತಫಾ ಬೆಂಗ್ರೆ ಅವರು ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸುಫಿಯಾನ್ ಝೈನ್ ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಾಂಸ್ಥಿಕ ಪ್ರಕ್ರಿಯೆಯ ಮೂಲಕ ಈ ಚುನಾವಣೆ ನಡೆಸಲಾಯಿತು. ​ಮುಸ್ತಫಾ ಬೆಂಗ್ರೆ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಬಿಬಿಎ ಪದವಿಯನ್ನು ಪಡೆದಿದ್ದು, ಮಂಗಳೂರಿನ ಕಸ್ಬಾ ಬೆಂಗ್ರೆ ನಿವಾಸಿಯಾಗಿದ್ದಾರೆ.  ಈ ಹಿಂದೆ ಅವರು ಎಸ್‌ಐಒ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮತ್ತು ಎಸ್‌ಐಒ ಮಂಗಳೂರು ನಗರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 

ವಾರ್ತಾ ಭಾರತಿ 14 Dec 2025 5:13 pm

ಸತ್ಯ–ಅಹಿಂಸೆಯೊಂದಿಗೆ ಮೋದಿ–RSS ಸರ್ಕಾರದ ವಿರುದ್ಧ ಹೋರಾಟ: ರಾಹುಲ್ ಗಾಂಧಿ

ಮತಗಳ್ಳತನ ವಿರೋಧಿಸಿ ದಿಲ್ಲಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ರ‍್ಯಾಲಿ

ವಾರ್ತಾ ಭಾರತಿ 14 Dec 2025 5:07 pm

ಕಾಂಗ್ರೆಸ್ ರ‍್ಯಾಲಿಯಲ್ಲಿ 'ಮೋದಿ ಸಮಾಧಿ' ಘೋಷಣೆ ವಿವಾದ; ಪ್ರಧಾನಿಯನ್ನು 'ಮುಗಿಸುವುದು' ಕಾಂಗ್ರೆಸ್ ಅಜೆಂಡಾ: ಬಿಜೆಪಿ ತೀವ್ರ ಆಕ್ರೋಶ

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ನಿಜವಾದ ಉದ್ದೇಶ ಪ್ರಧಾನಿ ಮೋದಿಯವರನ್ನು ಮುಗಿಸುವುದೇ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದೆ.

ವಿಜಯ ಕರ್ನಾಟಕ 14 Dec 2025 4:52 pm

LPG: ಕೇವಲ 300 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌ ಘೋಷಿಸಿದ ಸರ್ಕಾರ

ಕೇಂದ್ರ ಸರ್ಕಾರವು ಸಬ್ಸಿಡಿ ಮೂಲಕ ಎಲ್‌ಪಿಜಿ ಸಿಲಿಂಡರ್‌ ಅನ್ನು ಮನೆಬಾಗಿಲಿಗೆ ತಲುಪಿಸುತ್ತಿದೆ. ಡಿಸೆಂಬರ್‌ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್‌ ದರ ಇಳಿಸುವ ಮೂಲಕ ಗುಡ್‌ನ್ಯೂಸ್‌ ಕೊಟ್ಟಿದೆ. ಆದರೆ ದಿನಬಳಕೆ ಸಿಲಿಂಡರ್‌ ದರ ಯತಾಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ ದಿನಬಳಕೆ ಎಲ್‌ಪಿಜಿ ದರ ₹855.50 ಇದೆ. ಆದರೆ ಅಸ್ಸಾಂ ಸರ್ಕಾರ ಕೇವಲ ₹300ಗೆ ಎಲ್‌ಪಿಜಿ ಸಿಲಿಂಡರ್‌ ಲಭ್ಯವಾಗುವಂತೆ ಪ್ರಮುಖ ಸಬ್ಸಿಡಿಯನ್ನು ಘೋಷಿಸಿದೆ.

ಒನ್ ಇ೦ಡಿಯ 14 Dec 2025 4:50 pm

ಅಕ್ಟೋಬರ್‌ 7ರ ದಾಳಿಯ ಪ್ರತೀಕಾರವಾಗಿ ಹಮಾಸ್‌ ಕಮಾಂಡರ್‌ ಹತ್ಯೆಮಾಡಿದ ಇಸ್ರೇಲ್‌ ; ಹಮಾಸ್‌ ಹೇಳಿದ್ದೇನು?

ಇಸ್ರೇಲ್ ಹಮಾಸ್‌ನ ಪ್ರಮುಖ ಕಮಾಂಡರ್ ರʼಆದ್‌ ಸಾದ್ ಅವರನ್ನು ಹತ್ಯೆ ಮಾಡಿದೆ. ಅಕ್ಟೋಬರ್ 7ರ ದಾಳಿಯ ರೂವಾರಿಯಾಗಿದ್ದ ಸಾದ್, ರಶೀದ್ ಕರಾವಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆಸಿದ್ದು, ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಮತ್ತು ಭದ್ರತಾ ಸಂಸ್ಥೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಈ ಹತ್ಯೆಯಿಂದ ಹಮಾಸ್‌ನ ಸಾಮರ್ಥ್ಯ ಕುಗ್ಗಲಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಸಹ ಈ ಸಾವಿನ ಬಗ್ಗೆ ದೃಢಪಡಿಸಿದೆ.

ವಿಜಯ ಕರ್ನಾಟಕ 14 Dec 2025 4:37 pm

ಬಿಸಿಸಿಐ ಆಯ್ಕೆದಾರರ ಗಮನಕ್ಕೆ! ಟಿ20 ಓಪನರ್ ಆಗಿ ಠುಸ್ ಶುಭಮನ್ ಗಿಲ್; ಆರ್ಭಟಿಸಿದ್ದಾರೆ ಯಶಸ್ವಿ ಜೈಸ್ವಾಲ್

SMAT 2025 Mumbai Vs Haryana- ಭಾರತ ಟಿ20 ತಂಡಕ್ಕೆ ಆಯ್ಕೆ ಆಗದ ಯಶಸ್ವಿ ಜೈಸ್ವಾಲ್ ಅವರು ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿ(SMAT 2025) ಟೂರ್ನಿಯಲ್ಲಿ ಮಿಂಚಿದ್ದಾರೆ. ಮುಂಬೈ ಪರ ಅಜಿಂಕ್ಯ ರಹಾನೆ ಅವರೊಂದಿಗೆ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಅವರು ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 48 ಎಸೆತಗಳಲ್ಲಿ ಶತಕ ಗಳಿಸಿದರು. ಟಿ20 ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ವಿಫಲರಾಗುತ್ತಿರುವ ಹೊತ್ತಲ್ಲೇ ಅವರಿಂದ ಈ ಶತಕ ಬಂದಿದೆ.

ವಿಜಯ ಕರ್ನಾಟಕ 14 Dec 2025 4:18 pm

ಗೋವಾದಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಸಂಭ್ರಮಕ್ಕೆ ಕೊಕ್; ನೈಟ್‌ಕ್ಲಬ್‌ಗಳ ಮೇಲೆ ಕಠಿಣ ಕ್ರಮ

ಗೋವಾದಲ್ಲಿ 25 ಜೀವಗಳನ್ನು ಬಲಿ ಪಡೆದ ಅಗ್ನಿ ಅವಘಡದ ಬಳಿಕ, ರಾತ್ರಿ ಕ್ಲಬ್‌ಗಳ ಮೇಲೆ ಕಠಿಣ ಕ್ರಮ ಜಾರಿಯಾಗಿದೆ. ಕ್ರಿಸ್‌ಮಸ್-ಹೊಸ ವರ್ಷದ ಸಂಭ್ರಮಕ್ಕೆ ಮುನ್ನ, ನಿಯಮ ಉಲ್ಲಂಘಿಸಿದ ಹಲವು ಕ್ಲಬ್‌ಗಳನ್ನು ಮುಚ್ಚಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಪರವಾನಗಿ ಹಾಗೂ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ.

ವಿಜಯ ಕರ್ನಾಟಕ 14 Dec 2025 4:16 pm

Ration: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್ ರದ್ದು ನಡುವೆಯೇ ಮತ್ತೊಂದು ಗುಡ್‌ ನ್ಯೂಸ್‌ ಕೊಟ್ಟ ಆಹಾರ ಸಚಿವ ಕೆ.ಎಚ್.ಮುನಿಯಪ್ಪ

Ration: ರಾಜ್ಯದಲ್ಲಿ ಸದ್ಯ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿದೆ. ಈ ನಡುವೆಯೇ ಇದೀಗ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಭರ್ಜರಿ ಗುಡ್‌ ನ್ಯೂಸ್‌ವೊಂದನ್ನು ನೀಡಿದ್ದಾರೆ. ಹಾಗಾದ್ರೆ, ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಶ್ರೀಮಂತರು ಸಹ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು.

ಒನ್ ಇ೦ಡಿಯ 14 Dec 2025 4:09 pm

ಯುವಜನರ ಆತ್ಮಹತ್ಯೆಗೆ ಕಾರಣ ಯಾರು?

ಇಂದು ಭಾರತವು ಯುವ ದೇಶವೆಂದು ಹೆಮ್ಮೆಪಡುತ್ತದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ನಮ್ಮದು. ಆದರೆ ಈ ಯುವ ಶಕ್ತಿಯೇ ಇಂದು ತೀವ್ರ ಮಾನಸಿಕ ಸಂಕಟದಲ್ಲಿ ಮುಳುಗುತ್ತಿರುವುದು ದೊಡ್ಡ ಆತಂಕದ ಸಂಗತಿಯೂ ಹೌದು. ರಾಷ್ಟ್ರೀಯ ಅಪರಾಧ ದಾಖಲೆ ಕಚೇರಿ (ಎನ್‌ಸಿಆರ್‌ಬಿ)ಯ 2023ರ ವರದಿ ಪ್ರಕಾರ, ದೇಶದಲ್ಲಿ ಒಟ್ಟು 1,71,418 ಆತ್ಮಹತ್ಯೆಗಳ ಪ್ರಕರಣಗಳನ್ನು ದಾಖಲು ಮಾಡಿದೆ. ಇದರಲ್ಲಿ ಶೇ. 8.1 ಪ್ರಕರಣಗಳು, ಅಂದರೆ 13,892 ಆತ್ಮಹತ್ಯೆಗಳು ವಿದ್ಯಾರ್ಥಿಗಳದ್ದು. ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗಳು ಶೇ.65ರಷ್ಟು ಹೆಚ್ಚಾಗಿವೆ. 2013ರಲ್ಲಿ 8,423ರಿಂದ 2023ರಲ್ಲಿ 13,892ಕ್ಕೆ ಏರಿಕೆಯಾಗಿದೆ. ಇದು ರಾಷ್ಟ್ರೀಯ ಆತ್ಮಹತ್ಯೆ ದರದ ಶೇ.27.2 ಬೆಳವಣಿಗೆಗಿಂತಲೂ ಹೆಚ್ಚು. ಪ್ರತಿದಿನ ಸರಾಸರಿ 38 ವಿದ್ಯಾರ್ಥಿಗಳು ಆತ್ಮಹತ್ಯೆಯ ಜಾಲಕ್ಕೆ ಸಿಲುಕಿ ತಮ್ಮ ಉಸಿರು ನಿಲ್ಲಿಸುತ್ತಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಯುವಜನರ ಭವಿಷ್ಯಕ್ಕೆ ಮರಣ ಶಾಸನದಂತೆ ಭಾಸವಾಗುತ್ತಿದೆ. ಇಂದಿನ ಯುವ ಪೀಳಿಗೆಯ ಮೇಲೆ ಬೀಳುತ್ತಿರುವ ಒತ್ತಡವು ಅಪಾರ. ಶಿಕ್ಷಣ ಸಂಸ್ಥೆಗಳು ಜ್ಞಾನದ ದೀಕ್ಷೆ ನೀಡಬೇಕಾದ ಕೇಂದ್ರಗಳಾಗುವ ಬದಲು ಯುವಜನರನ್ನು ಪಣಕ್ಕಿಟ್ಟು ಸ್ಪರ್ಧೆ ನಡೆಸುವ ಬಯಲು ಭೂಮಿಯಾಗಿದೆ. ಹತ್ತನೇ ತರಗತಿ, ದ್ವಿತೀಯ ಪಿಯುಸಿ, ನೀಟ್, ಜೆಇಇ, ಸಿಇಟಿ ಇವೆಲ್ಲ ಯುವ ಮನಸ್ಸುಗಳಿಗೆ ಒಂದು ಯುದ್ಧದಂತೆ ಭಾಸವಾಗ ತೊಡಗಿದೆ. ಒಂದು ಅಂಕ ಕಡಿಮೆ ಬಂದರೆ ಮನೆಯಲ್ಲಿ ಗದರಿಕೆ, ಗೆಳೆಯರ ಮಧ್ಯೆ ಅವಮಾನ, ಶಿಕ್ಷಕರ ಕಣ್ಣಲ್ಲಿ ‘ದಡ್ಡಿ’ ಅಥವಾ ‘ದಡ್ಡ’ ಎಂಬ ಮುದ್ರೆ ಒತ್ತುವುದು ಇವೆಲ್ಲ ಯುವ ಜನರ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ, 2023ರಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿ ಆತ್ಮಹತ್ಯೆಗಳು ಪರೀಕ್ಷಾ ವಿಫಲತೆಯಿಂದ ಸಂಬಂಧಿಸಿವೆ. ಶೈಕ್ಷಣಿಕ ವಿಫಲತೆಯ ಭಯ, ಭವಿಷ್ಯದ ಅನಿಶ್ಚಿತತೆ, ಇವು ಅವರ ಮನಸ್ಸನ್ನು ಒಡೆಯುತ್ತಿದೆ. ಅನೇಕ ಶಾಲಾ-ಕಾಲೇಜುಗಳಲ್ಲಿ ಮನೋವೈದ್ಯರ ಸಹಾಯ, ಕೌನ್ಸೆಲಿಂಗ್ ಕೊಠಡಿಗಳು ಇಲ್ಲ. ಒಂದು ವೇಳೆ ಇದ್ದರೂ ಅದು ಕಾಗದದ ಮೇಲೆ ಮಾತ್ರ. ವಿದ್ಯಾರ್ಥಿಯೊಬ್ಬರು ಒತ್ತಡದಲ್ಲಿ ಇದ್ದರೆ ಅವನನ್ನು ‘ಮಾನಸಿಕ ರೋಗಿ’ ಎಂದು ಗುರುತು ಹಾಕಿ ಹೊರಗಿಡಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶದಂತಹ ರಾಜ್ಯಗಳು ಈ ಸಮಸ್ಯೆಯಲ್ಲಿ ಮುಂದಿವೆ, ಒಟ್ಟು ಮೂರನೇ ಒಂದು ಭಾಗ ಪ್ರಕರಣಗಳನ್ನು ಹೊಂದಿವೆ. ನಿರುದ್ಯೋಗ ಕೂಡ ಯುವಜನರನ್ನು ಕಾಡುತ್ತಿದೆ. ಲಕ್ಷಾಂತರ ಯುವಜನರು ಉತ್ತಮ ಶಿಕ್ಷಣ ಪಡೆದರೂ ಕೆಲಸ ಸಿಗದೆ ತತ್ತರಿಸುತ್ತಿದ್ದಾರೆ. 18ರಿಂದ 29 ವರ್ಷದ ಗುಂಪಿನಲ್ಲಿ ಒಟ್ಟು ಶೇ.17.1 ಆತ್ಮಹತ್ಯೆ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಶೇ.8.3 ಆತ್ಮಹತ್ಯೆಗಳು ನಿರುದ್ಯೋಗ ಸಮಸ್ಯೆಯಿಂದ ನಡೆದಿದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಒಂದು ಸಣ್ಣ ಕೆಲಸಕ್ಕೆ ಸಾವಿರಾರು ಅರ್ಜಿಗಳು ಬರುತ್ತವೆ. ಇದು ಯುವಜನರ ಆತ್ಮವಿಶ್ವಾಸವನ್ನು ಎಷ್ಟರ ಮಟ್ಟಿಗೆ ಕುಗ್ಗಿಸಿದೆ ಮತ್ತು ಬದುಕಿನ ಅಭದ್ರತೆ ಎಷ್ಟರ ಮಟ್ಟಿಗೆ ಯುವಜನರನ್ನು ಕಾಡುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ. ಇನ್ನು ಉದ್ಯೋಗ ಸಿಗದಿರುವುದು ಅಥವಾ ಸಣ್ಣ ಉದ್ಯೋಗಗಳನ್ನು ಪಡೆದುಕೊಂಡರೆ ಕುಟುಂಬದಲ್ಲಿ ಅವಮಾನಕ್ಕೆ ಒಳಗಾಗುವಂತೆ ಮಾಡುವುದಲ್ಲದೆ, ಹಣಕಾಸಿನ ಕೊರತೆ, ಕುಟುಂಬದ ಜಗಳಗಳು, ಪ್ರೇಮ ವೈಫಲ್ಯ, ಭವಿಷ್ಯದ ಭಯ ಇವೆಲ್ಲ ಸೇರಿ ಯುವ ಮನಸ್ಸನ್ನು ಕತ್ತಲೆಯ ಗುಹೆಗೆ ತಳ್ಳುತ್ತಿದೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಕುಟುಂಬ ಸಮಸ್ಯೆಗಳು ಕೂಡ ಶೇ. 31.9 ಆತ್ಮಹತ್ಯೆಗಳಿಗೆ ಕಾರಣವಾಗಿವೆ. ಕೆಲವೊಂದು ವರದಿಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಮಹಿಳಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ.61ರಷ್ಟು ಹಾಗೂ ಪುರುಷ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣ ಶೇ.50ರಷ್ಟು ಹೆಚ್ಚಾಗಿದೆ. ಮಹಿಳೆಯರ ಮೇಲಿನ ಒತ್ತಡ, ಮಹಿಳೆಯರ ಮೇಲಿನ ದೌರ್ಜನ್ಯದ ಕಾರಣದಿಂದ ಮಹಿಳಾ ಆತ್ಮಹತ್ಯಾ ಪ್ರಕರಣ ಹೆಚ್ಚಾಗಿದೆ ಎನ್ನಲಾಗುತ್ತಿದೆಯಾದರೂ, ಯುವತಿಯರಿಗೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವಿಧಿಸಲಾಗಿರುವ ಹೀನ ಕಟ್ಟುಪಾಡುಗಳು ಮತ್ತು ಯುವತಿಯರ ಸ್ವಾತಂತ್ರ್ಯ ದಮನವು ಕೂಡ ಅವರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುವಂತೆ ಮಾಡಿದೆ ಎನ್ನಲಾಗಿದೆ. ಯುವ ಜನರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರವೇ ಇಲ್ಲ ಎಂದಲ್ಲ, ಪರಿಹಾರ ಇದೆ. ಆದರೆ ಆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸರಕಾರಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಅನ್ನು ಕಡ್ಡಾಯಗೊಳಿಸಬೇಕು. ಮನೋವೈದ್ಯರನ್ನು ನೇಮಿಸಬೇಕು. ಮನಸ್ಸಿನ ಆರೋಗ್ಯದ ಬಗ್ಗೆ ತೆರೆದ ಚರ್ಚೆ ನಡೆಸಬೇಕು. ಪೋಷಕರು ಮಕ್ಕಳ ಶಿಕ್ಷಣದ ಗುಣಮಟ್ಟದ ಜೊತೆಗೆ ಬದುಕಿನ ಮೌಲ್ಯಗಳಿಗೆ ಮಹತ್ವ ಕೊಡಬೇಕು. ಸರಕಾರ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಸಮಾಜದಲ್ಲಿ‘‘ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವುದು ದೌರ್ಬಲ್ಯವಲ್ಲ’’ ಎಂಬ ಚಿಂತನೆಯನ್ನು ಬೆಳೆಸಬೇಕು. ಈ ಮೂಲಕ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಯುವಜನರು ಯಾವುದೇ ದೇಶದ ಒಂದು ಅತ್ಯಮೂಲ್ಯವಾದ ಮಾನವ ಸಂಪನ್ಮೂಲರಾಗಿದ್ದಾರೆ. ಅವರ ಸಂರಕ್ಷಣೆ ಮುಂದಿನ ಪೀಳಿಗೆಯ ಸಂರಕ್ಷಣೆಯೇ ಆಗಿದೆ. ಯುವ ಮನಸ್ಸುಗಳು ಸೂಕ್ಷ್ಮತೆಯಿಂದ, ಯೌವನದ ಶಕ್ತಿಯಿಂದ ತುಂಬಿರುತ್ತದೆ. ಇಂತಹ ಮನಸ್ಸುಗಳು ಆತ್ಮಹತ್ಯೆಗೆ ಸಿಲುಕಿ ಕೊಳ್ಳುತ್ತಿರುವ ಪ್ರಕರಣಗಳು ನಿಜಕ್ಕೂ ಆಘಾತಕಾರಿ ಎನಿಸಿಕೊಳ್ಳುತ್ತದೆ. ಹೀಗಾಗಿ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನಹರಿಸಬೇಕು, ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಬೇಕಾಗಿದೆ.

ವಾರ್ತಾ ಭಾರತಿ 14 Dec 2025 4:04 pm

ನಕಲಿ ಬಳಕೆದಾರರ ಐಡಿಗಳ ಹಾವಳಿ ತಡೆಯಲು ರೈಲ್ವೆ ಇಲಾಖೆ ಕಠಿಣ ಕ್ರಮ

ರೈಲ್ವೇ ಇಲಾಖೆ ನಕಲಿ ಐಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ 3.03 ಕೋಟಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪ್ರತಿದಿನ ಸುಮಾರು 5,000 ಹೊಸ ಬಳಕೆದಾರರ ಐಡಿಗಳು ಸೇರುತ್ತಿವೆ. ಇ-ಟಿಕೆಟಿಂಗ್ ಮೂಲಕ ಶೇ.87 ಕ್ಕಿಂತ ಹೆಚ್ಚು ಟಿಕೆಟ್ ಬುಕ್ ಆಗುತ್ತಿವೆ. ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತಾಗಿದೆ. ವ್ಯವಸ್ಥೆ ಪಾರದರ್ಶಕವಾಗುತ್ತಿದೆ.

ವಿಜಯ ಕರ್ನಾಟಕ 14 Dec 2025 3:50 pm

ಅಡಿಕೆಗೆ ಯಾರಿಟ್ಟರು ಈ ಚುಕ್ಕಿ? ಕಪ್ಪು ಚುಕ್ಕಿ!

ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ. ಅಂತೂ ಇಂತೂ ಅಲ್ಪಸ್ವಲ್ಪ ಬೆಳೆವಿಮೆ ರೈತರ ಖಾತೆಗೆ ಜಮಾ ಆಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೊತ್ತ ತುಂಬಾ ಕಡಿಮೆಯೇ. ರೈತರ ನಿರೀಕ್ಷೆ ಮತ್ತು ಕಾತರ ಮಾತ್ರ ಬೇರೆ ವರ್ಷಗಳಿಗಿಂತ ಜಾಸ್ತಿಯೇ ಇತ್ತು. ಇದಕ್ಕೆ ಬಲವಾದ ಕಾರಣ ಈ ವರ್ಷದ ಅತಿವೃಷ್ಟಿ. ದೀರ್ಘಾವಧಿ ಬೀಸು ಮಳೆ ಬಯಲು ಸೀಮೆಯೂ ಸೇರಿ ಎಲ್ಲೆಡೆಯ ರೈತರನ್ನು ಹೈರಾಣಮಾಡಿದೆ. ಅಲ್ಪಕಾಲೀನ ಬೆಳೆಗಳಿಗಿಂತ ಈ ಬಾರಿ ಹೆಚ್ಚು ಪೆಟ್ಟು ತಿಂದವರು ಬಹುವಾರ್ಷಿಕ ಬೆಳೆಗಾರರು. ಬಹು ಮುಖ್ಯವಾಗಿ ಕರಾವಳಿ- ಮಲೆನಾಡಿನ ಅಡಿಕೆ ಕೃಷಿಕರು. ಕಳೆದ ಒಂದೆರಡು ವರ್ಷಗಳಿಂದ ಎಲೆಚುಕ್ಕಿ, ಹಳದಿ, ಬೇರು ಹುಳ, ಚಂಡೆ, ಮುಂಡುಸಿರಿ ಮುಂತಾದ ಅನೇಕ ಕಾಯಿಲೆಗಳಿಂದ ಈ ಭಾಗದ ರೈತರು ಉತ್ಪಾದನೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದ್ದಾರೆ. ಆದಾಯ ಕುಂಠಿತಗೊಂಡು ಬಹಳಷ್ಟು ರೈತರಿಗೆ ಕಾಲಿಗೆಳೆದರೆ ತಲೆಗಿಲ್ಲದಂತಹ ಸ್ಥಿತಿ. ಕಳೆದೊಂದು ಶತಮಾನದಿಂದ ಈ ಭೂಭಾಗದ ನೆಲದವರ ಮಾನ ಕಾಪಾಡಿದ, ಕಿಸೆಗೆ ಒಂದಷ್ಟು ಕಾಸು ತುರುಕಿಸಿದ ಅಡಿಕೆ ಅವರ ಅನೇಕ ಸಂಕಷ್ಟಗಳಿಗೆ ನೆರವಾಗಿದೆ. ಮನೆ, ಕಾರು, ಮಕ್ಕಳ ಓದು, ಮದುವೆ, ಉದ್ಯಮ, ರಾಜಕಾರಣ, ದೇವರ ಅಭಿವೃದ್ಧಿ ಹೀಗೆ ಎಲ್ಲದಕ್ಕೂ ಅಡಿಕೆ ನೆರವಿಗೆ ನಿಂತಿದೆ. ಮಲೆನಾಡಿನ ಎಷ್ಟೋ ಬಡವರ ಮಕ್ಕಳು, ಡಾಕ್ಟರ್ ಆಗುವುದಕ್ಕೆ ಇಂಜಿನಿಯರ್ ಓದುವುದಕ್ಕೆ, ಸ್ಥಳೀಯ ಶಾಲಾ-ಕಾಲೇಜುಗಳಲ್ಲೇ ಓದಿ ಮುಂದೆ ಮಹಾನಗರಗಳಿಗೆ ಸೇರಿಕೊಳ್ಳುವುದಕ್ಕೆ ಅಡಿಕೆ ಹೆದ್ದಾರಿಯಾಗಿತ್ತು. ಈ ಭಾಗದ ದೇವಸ್ಥಾನ, ನಾಗಮಂಡಲ, ಬ್ರಹ್ಮಕಲಶ, ಭೂತ ದೈವಸ್ಥಾನಗಳ ಅಭಿವೃದ್ಧಿಗೆ ಈ ನೆಲದ ಅಡಿಕೆ ಸಹಾಯಹಸ್ತ ಚಾಚಿದೆ. ಯಕ್ಷಗಾನ, ರಂಗಭೂಮಿ, ಶಾಲಾ ವಾರ್ಷಿಕೋತ್ಸವದವರೆಗೂ ಅಡಿಕೆಯ ದುಡ್ಡು ಬುನಾದಿಯಾಗಿದೆ. ಅಡಿಕೆ ಸುಸ್ಥಿರವಾಗಿ ನಿಂತ ಕಾರಣಕ್ಕೆ ಸಾವಿನ ನಕ್ಷೆಯಲ್ಲಿ ಈ ಭಾಗದ ರೈತರ ಆತ್ಮಹತ್ಯೆಯ ಸಂಖ್ಯೆ ತುಂಬಾ ಕಡಿಮೆ. ಪ್ರಭುತ್ವದ ವಿರುದ್ಧ ರೈತ ಹೋರಾಟ ಬಂಡಾಯ, ಹಕ್ಕೊತ್ತಾಯ, ಪ್ರತಿಭಟನೆಗಳೂ ಕಡಿಮೆಯೇ. ಉತ್ತರ ಭಾರತದ ಸಾವಿರಾರು ವಲಸೆ ಕಾರ್ಮಿಕರಿಗೆ ಇಲ್ಲಿಯ ಅಡಿಕೆ ತೋಟಗಳು ದುಡಿಮೆಗೆ ದಾರಿಯಾಗಿ ಆಶ್ರಯ ನೀಡಿವೆ. ತೆರಿಗೆ ಇಲ್ಲದ ಅಡಿಕೆ ದೊಡ್ಡ ಕೃಷಿಕರಿಗೆ ಕೈ ತುಂಬಾ ಕಾಸು ತುಂಬಿ ಕೌಟುಂಬಿಕ ಮೂಲ ಸರಳತೆ ಮರೆಯಾಗಿ ಆ ಜಾಗದಲ್ಲಿ ಪ್ರತಿಷ್ಠೆ, ವೈಭವ, ಆಡಂಬರ, ವೈಭೋಗಗಳು ಪ್ರತಿನಿತ್ಯಮೆರೆದದ್ದೂ ಹೌದು. ಹಳ್ಳಿಯ ದುಡ್ಡು ನಗರಕ್ಕೂ ರಾಚಿದೆ. ಎಷ್ಟೋ ರೈತರು ಮಹಾನಗರದ ನಡುವೆ ಮನೆ, ಸೈಟ್, ಅಂಗಡಿ ಖರೀದಿಸಿದ್ದಾರೆ. ಗ್ರಾಮದ ಮನೆ ಅಂಗಳದಲ್ಲಿ ಮುಗಿಯಬೇಕಾದ ಕುಟುಂಬದ ಸರಳ ಕೂಡುಕಾರ್ಯಕ್ರಮಗಳು ದುಡ್ಡಿನ ದಾರಿಯಲ್ಲಿ ಪೇಟೆಗೂ ನುಸುಳಿಕೊಂಡು ಬಣ್ಣ ಪಡೆದು ಕೊಂಡಿವೆ. ಸಹಜ ಸಂಪ್ರದಾಯಗಳನ್ನೆಲ್ಲ ಅಡಿಕೆಯ ದುಡ್ಡು ಕಬಳಿಸಿ ಪೇಟೆಯ ಮಾಲ್-ಹಾಲ್‌ಗಳಲ್ಲಿ ರಂಗೋಲಿ ಇಟ್ಟಿದೆ. ಹೀಗೆ ಕರಾವಳಿ-ಮಲೆನಾಡಿನ ಲಕ್ಷಾಂತರ ರೈತರ ಬದುಕನ್ನು ಲೆಕ್ಕಕ್ಕಿಂತ ಹೆಚ್ಚು ಬೆಳಗಿದ ಅಡಿಕೆಗೆ ಈಗ ಈ ಶತಮಾನದಲ್ಲೇ ಕೇಳರಿಯದ ರೋಗಗಳು ಒಮ್ಮೆಲೇ ಬಂದು ಅಪ್ಪಳಿಸಿದೆ. ವಿಪರೀತ ಮಳೆಗೆ ಅಡಿಕೆ ಕೊಳೆರೋಗಕ್ಕೆ ಕರಗಿ ಹೋಗುವುದನ್ನು ಬಿಟ್ಟರೆ ಈ ಹಿಂದೆ ಬೇರೆ ಮಹಾಮಾರಿಗಳು ಈ ಪ್ರಮಾಣದಲ್ಲಿ ವಕ್ಕರಿಸಿದ ದೃಷ್ಟಾಂತಗಳು ಬಹಳ ಕಡಿಮೆ. ಅಡಿಕೆಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಇಲ್ಲಿಯ ನೆಲಮೂಲ ರೈತ ಶೋಧನೆಗಳೇ ಮದ್ದು ಕಂಡುಹಿಡಿದಿವೆ. ವರ್ಷಕ್ಕೊಮ್ಮೆ ಅಗತ್ತೆ ಮಾಡಿ, ಬುಡ ಬಿಡಿಸಿ ಹಟ್ಟಿಯ ಬುಟ್ಟಿ ಗೊಬ್ಬರ, ಒಲೆಯ ಬೂದಿ, ಸುಡು ಮಣ್ಣು ಕೊಟ್ಟು ಕುಬೆಯ ಸಿಂಗಾರದ ಹರಳು ಕಾಯಿಗೆ ಎರಡು ಬಾರಿ ಮೈಲುತುತ್ತು, ಸುಣ್ಣ ಸಿಂಪಡಿಸಿದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ ಏಕ್ದಂ ಬಂದೆರಗಿದ ಮಾರಿಗಳು ರೈತ ಜ್ಞಾನಿಗಳನ್ನು ಬಿಡಿ, ವಿಶ್ವವಿದ್ಯಾನಿಲಯಗಳ ವಿಜ್ಞಾನಿಯ ಕೈ ನಿಯಂತ್ರಣಕ್ಕೂ ಸಿಗದೆ ಅಪಾಯದ ಹಂತವನ್ನು ದಾಟಿ ಮುನ್ನುಗ್ಗುತ್ತಿದೆ. ಕಾಸರಗೋಡಿನ ಬದಿಯಡ್ಕದಿಂದ ಶೃಂಗೇರಿ ಕೊಪ್ಪದ ದಾರಿಯಲ್ಲಿ ಬಾಳೆಹೊನ್ನೂರುವರೆಗೆ ಹೆದ್ದಾರಿ ಗುಂಟ ಸಾಗಿದರೆ ಅಲ್ಲಲ್ಲಿ ಇಕ್ಕಡೆಯ ಅಡಿಕೆ ತೋಟಗಳು ಸಹಜ ಬಣ್ಣ ಕಳೆದುಕೊಂಡು ವಿಕಾರವಾಗಿ ನಿಂತ ದೃಶ್ಯ ಕಂಗಡಿಸುತ್ತದೆ. ಈ ಹೊತ್ತಿಗೆ ನಾಲ್ಕೈದು ಗೊನೆದೂಗಿ ಕೊಯ್ಲು ಶುರು ಮಾಡುವ ರೈತಾಪಿಗಳಿಗೆ ಧನ್ಯತೆಯ ಭಾವ ಸೃಷ್ಟಿಸಬೇಕಾದ ಕಂಗುಗಳು ಇದ್ದಗೊನೆಗಳಿಗೂ ತೂಕವಿಲ್ಲದೆ ಬಸವಳಿದು, ಸೋಗೆಗಳೆಲ್ಲ ಕರಟಿ ಕೊನೆಚಿಗುರೊಂದು ಮಾತ್ರ ಹಸಿರಾಗಿ ಭೂತದ ಹಾಗೆ ಭಯ ಹುಟ್ಟಿಸುತ್ತಾ ನಿಂತದ್ದನ್ನು ಕಾಣಬಹುದು. ‘‘ಹಳ್ಳಿ ಮನೆಯ ನಮ್ಮ ತೋಟಕ್ಕೆ ಮುಂದೆ ವಾರುಸುದಾರರಿಲ್ಲ, ಗ್ರಾಮಗಳೆಲ್ಲ ವೃದ್ಧಾಶ್ರಮವಾಗುತ್ತಿದೆ, ಹೊಸ ತಲೆಮಾರು ಪಟ್ಟಣಕ್ಕೆ ದಾಂಗುಡಿ ಇಡುತ್ತಿದೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ನಾವು ಕೆಟ್ಟೆವು. ವಯಸ್ಸಾಗಿ ನಡೆಯಲಾರದ ಹೊತ್ತು ಪೊರೆಯುವ ಮಕ್ಕಳು ಮನೆಯಲ್ಲಿ ಇಲ್ಲ, ಜೊತೆಗಿಲ್ಲ’’ ಎಂದು ಕುರುಬುವ ತೋಟದ ಮಾಲಕರೆಲ್ಲ ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ‘‘ನಮ್ಮ ಮಕ್ಕಳಿನ್ನು ಊರಿಗೆ ಬರುವುದೇ ಬೇಡ. ನಾವೇ ಬೆಂಗಳೂರಿಗೆ ಹೊರಡುತ್ತೇವೆ. ಕಾರಣ ನಮಗಿಲ್ಲಿ ಏನೂ ಉಳಿದಿಲ್ಲ’’ ಎನ್ನುವ ಹತಾಶೆ ಸಂಕಟ ಬಾಳೆಹೊನ್ನೂರಿನ ರಾಘವೇಂದ್ರ ಅವರದು. ಶೃಂಗೇರಿ ಕೊಪ್ಪದ ಕಡೆ ಶತಶತಮಾನಗಳಿಂದ ಲಕ್ಷಾಂತರ ರೈತರನ್ನು ಪೋಷಿಸಿದ ಅಡಿಕೆ ಮಕಾಡೆ ಮಲಗಿದೆ. ರಾಜ್ಯ ರಸ್ತೆಯ ಹಾದಿ ಬದಿಯ ತೋಟಗಳೆಲ್ಲ ಈಗಾಗಲೇ ರಿಯಲ್ ಎಸ್ಟೇಟ್ ಆಗಿ ಬದಲಾಗುತ್ತಿವೆ. ನಾಗರಿಕ ಜಗತ್ತಿನಿಂದ ದೂರದ ಹಳ್ಳಿಯ ರೈತರಿಗೆ ಪರ್ಯಾಯಗಳೇ ಇಲ್ಲ. ತಲೆತಲಾಂತರದಿಂದ ದುಡಿದು ಬದುಕಿದ ಮನೆ ತೋಟ ಎಲ್ಲವನ್ನು ಕಳಚಿ ಕೊಂಡು ಹೊರಗಡೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೊಪ್ಪ ತಾಲೂಕಿನ ಲಕ್ಷ್ಮೀನಾರಾಯಣ ಕಡಮನೆಯವರು ಕಳೆದ ಎರಡು ವರ್ಷಗಳಿಂದ ಎಲೆ ಚುಕ್ಕಿಯ ಗಂಭೀರ ಸಮಸ್ಯೆಗೆ ಒಳಗಾದವರು. ತೋಟದೊಳಗಡೆ ಕಳೆದ 40 ವರ್ಷಗಳಿಂದ ಹಳದಿ ಎಲೆ ಕಾಯಿಲೆ ಇದ್ದರೂ ಎಲೆ ಚುಕ್ಕಿ ವಕ್ಕರಿಸಿದ್ದು ಎರಡು ವರ್ಷಗಳಿಂದ. ಗಂಭೀರ ಪರಿಣಾಮದಿಂದಾಗಿ ಈಗಾಗಲೇ 2,000ದಷ್ಟು ಅಡಿಕೆ ಮರಗಳನ್ನು ಕಡಿದುರುಳಿಸಿದ್ದಾರೆ. ಅಡಿಕೆಯ ತಲೆಗೂ ಬುಡಕ್ಕೂ ಬಹುವಿಷಗಳನ್ನು ಸಿಂಪಡಿಸಿ ಸುರಿದು ಸುರಿದು ಸಾಕಾಗಿದೆ. ಔಷಧಿ ಉತ್ಪಾದಿಸುವವನಿಗೂ, ಮಾರುವವನಿಗೂ ಇನ್ನೂ ಎಲೆಚುಕ್ಕಿಗೆ ಖಚಿತ ಮದ್ದು ಯಾವುದೆಂದು ಗೊತ್ತಿಲ್ಲ. ದಿನಾ ಹೊಸ ವಿಷಗಳು ಸೇರಿಕೊಳ್ಳುತ್ತವೆ. ಪರಿಣಾಮ ಮಾತ್ರ ಸೊನ್ನೆ! ರೈತರು ಗೊಬ್ಬರದಂಗಡಿಯವರು ಕೊಡುವುದನ್ನೆಲ್ಲ ಆಸೆಯಿಂದ ತಂದು ಸಿಂಪಡಿಸುತ್ತಿದ್ದಾರೆ. ಇಲ್ಲೆಲ್ಲಾ ತೋಟಗಳಿಗೂ ಬಂದು ಇಂಥ ಕ್ರಿಮಿನಾಶಕಗಳನ್ನು ಮಾರುವವರು ಇದ್ದಾರೆ. ‘‘ಭೂಮಿ, ಮರ, ನೀರು, ಕೆಲಸದಾಳುಗಳು ಎಲ್ಲವೂ ನನ್ನವೇ. ಮೆಡಿಸಿನ್ ನಿಮ್ಮದು. ನೀವಿಲ್ಲಿ ಯಾವುದೇ ಪ್ರಯೋಗ ಮಾಡಿ. ನನಗೆ ಎಲೆಚುಕ್ಕಿ ವಾಸಿಯಾಗಬೇಕು, ನನ್ನ ತೋಟ ಹಿಂದಿನಂತಾಗಬೇಕು, ಕಾಯಿಲೆವಾಸಿಯಾದ ಮೇಲೆ ನೀವು ಬಯಸಿದಷ್ಟು ಫೀಸು ಕೊಡುವೆ ಎಂದ ಮೇಲೆ ಈಗ ಔಷಧಿ ವ್ಯಾಪಾರಿಗಳು ನನ್ನ ಕಡೆ ಸುಳಿಯುವುದೇ ಇಲ್ಲ’’ ಎನ್ನುತ್ತಾರೆ ಲಕ್ಷ್ಮೀನಾರಾಯಣ ಕಡಮನೆಯವರು ‘‘ಇಷ್ಟಾದರೂ ನಾನಿನ್ನೂ ಭರವಸೆ ಕಳೆದುಕೊಂಡಿಲ್ಲ. ಸತ್ತ ಮರ ತೆಗೆದು ಸ್ವಲ್ಪ ಭಾಗದಲ್ಲಾದರೂ ಹೊಸ ಗಿಡ ನೆಟ್ಟು ಬೆಳೆಯಬೇಕೆಂದಿದ್ದೇನೆ. ಅಡಿಕೆ ನಮ್ಮ ರಕ್ತದಲ್ಲೇ ಇದೆ, ಪರಂಪರೆಯಿಂದ ಬಂದಿದೆ. ನೂರಾರು ವರ್ಷಗಳ ಇತಿಹಾಸವಿದೆ. ನಾವು ಅದನ್ನು ಸಾಕಿದ್ದೇವೆ, ಅದು ನಮ್ಮನ್ನು ಪೋಷಿಸಿದೆ. ಇಲ್ಲೆಲ್ಲ ಅಡಿಕೆ ನಾಶ ಆದ ಜಾಗದಲ್ಲೆಲ್ಲಾ ಕಾಫಿ ಬೆಳೆಯುವ ಪರ್ಯಾಯ ಕೃಷಿ ಆರಂಭವಾಗಿದೆ. ಆದರೆ ಆರ್ಥಿಕವಾಗಿ ಸಮಗಟ್ಟಬೇಕಾದರೆ ಅಡಿಕೆಯ ಒಂದು ಎಕರೆ ಜಾಗದಲ್ಲಿ 6 ಎಕರೆ ಕಾಫಿ ಬೆಳೆ ಬೇಕಾಗುತ್ತದೆ! ನಿರ್ವಹಣೆ ಕಾರ್ಮಿಕರ ಲಭ್ಯತೆ ಇವೆಲ್ಲ ಇವತ್ತಿಗೆ ತುಂಬಾ ದುಬಾರಿಯಾದದ್ದು’’ ಎನ್ನುತ್ತಾರೆ ಕಡಮನೆಯವರು ಬೆಳ್ತಂಗಡಿ - ಮೂಡಿಗೆರೆ ತಾಲೂಕುಗಳ ಗಡಿಭಾಗದ ಎಳೆನೀರು ಪ್ರದೇಶದಲ್ಲಿರುವ ರಾಜೇಂದ್ರ ಬಡಮನೆ ಸುಮಾರು 18 ಎಕರೆ ಅಡಿಕೆ ತೋಟದ ಮಾಲಕರು. ಒಂದು ಕಾಲದಲ್ಲಿ 45 ಟನ್ ಹಸಿ ಅಡಿಕೆ ಆಗುತ್ತಿದ್ದ ತೋಟದಲ್ಲಿ ಈಗ ಕೇವಲ ಒಂದೂವರೆ ಟನ್ ಮಾತ್ರ ಸಿಗುತ್ತಿದೆ. ‘‘ರೋಗಪೀಡಿತ ಹಳೆಮರಗಳನ್ನು ತೆಗೆದು ಹೊಸ ಗಿಡ ನೆಡುವುದರಲ್ಲೂ ನನಗೆ ನಂಬಿಕೆ ಇಲ್ಲ. ಕೇವಲ ಒಂದು ವರ್ಷದ ನರ್ಸರಿ ಗಿಡಗಳಿಗೆ ಎಲೆಚುಕ್ಕಿ ವಕ್ಕರಿಸುತ್ತಿದೆ ಎಂದರೆ ಯಾವ ಪ್ರಮಾಣದಲ್ಲಿ ಈ ರೋಗದ ಭೀಕರತೆ ಇದೆ ಎಂದು ನೀವೇ ಊಹಿಸಿ’’ ಎನ್ನುತ್ತಾರೆ ರಾಜೇಂದ್ರ. ಕೃಷಿತಜ್ಞರಿಗೆ ವಿಜ್ಞಾನಿಗಳಿಗೆ ಸಂಶೋಧನಾಲಯ ಕೃಷಿ ವಿಶ್ವವಿದ್ಯಾನಿಲಯ ಎಲ್ಲದಕ್ಕೂ ಈ ಕಾಲ ಅತ್ಯಂತ ಸವಾಲಿನದ್ದು. ಯಾರಿಗೂ ನಿಖರವಾಗಿ ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಡಿಕೆಗಾಗಿ ಹುಟ್ಟಿಕೊಂಡ ಸಂಸ್ಥೆಗಳು ಕೂಡ ನಿಸ್ತೇಜಗೊಂಡಂತಿದೆ. ‘‘ವಿಜ್ಞಾನಿಗಳು ತೋಟದಂಚಿನ ಪೇಟೆಗಳಲ್ಲಿ ಸಮುದಾಯ ಭವನಗಳಲ್ಲಿ ರೋಟರಿ ಹಾಲಲ್ಲಿ ರೈತರನ್ನು ಸೇರಿಸಿ ಸಭೆ ಮಾಡುತ್ತಿದ್ದಾರೆ. ನಿಜವಾಗಿ ಅವರು ಪ್ರಯೋಗಗಳನ್ನು ಮಾಡಬೇಕಾದದ್ದು ತೋಟದೊಳಗಡೆ. ಬನ್ನಿ, ಒಂದು ಎಕರೆ ಜಾಗ ನಿಮ್ಮ ಟ್ರಯಲ್‌ಗಾಗಿಯೇ ಕೊಡುತ್ತೇನೆ, ಅದಕ್ಕೆ ಬೇಕಾಗುವ ಇತರ ಸೌಲಭ್ಯವನ್ನು ಒದಗಿಸುವೆ ಎಂದರೂ ವಿಜ್ಞಾನಿಗಳು ನನ್ನ ತೋಟಕ್ಕೆ ಇಳಿಯುವುದಿಲ್ಲ. ನನ್ನ ಪ್ರಕಾರ ಖಂಡಿತ ಅಡಿಕೆಗೆ ಉಳಿಗಾಲ ಇಲ್ಲ’’ ಎನ್ನುತ್ತಾರೆ ಬಡಮನೆ. ಶಿವಮೊಗ್ಗ ಮೂಲದ ‘ಪುಸ್ತಕಮನೆ’ಯ ಸುಂದರರಿಗೆ ಕೊಪ್ಪದಲ್ಲಿ ಒಂದಷ್ಟು ತೋಟ ಇದೆ. ಫಲ ಬಿಡುವ ಹೊಸ ಗಿಡಗಳು ವಿಸ್ತರಿಸುತ್ತಾ ಹೋದ ಹಾಗೆಯೇ ಒಟ್ಟು ಆದಾಯದಲ್ಲಿ ಖೋತಾವೇ. ‘‘ಈಗೀಗ ತೋಟದೊಳಗಡೆ ಅಡಿಕೆ ಇದ್ದರೂ ಫಸಲು ಗೇಣಿಗೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಅಡಿಕೆ ತೂಕದಲ್ಲಿ ವಿಪರೀತ ತೇಮಾನು. ಎಲೆಚುಕ್ಕೆ, ಹಳದಿ ಎಲೆ, ಇವೆಲ್ಲ ಮರವನ್ನಷ್ಟೇ ಅಲ್ಲ ಅಡಿಕೆಯ ತೂಕವನ್ನು ಸಾಯಿಸುತ್ತಿದೆ’’ ಎನ್ನುತ್ತಾರೆ ಸುಂದರ್. ‘‘ಹಳದಿ ಎಲೆಯಾಗಲೀ ಎಲೆ ಚುಕ್ಕಿಯಾಗಲೀ ಅಧಿಕ ಗೊಬ್ಬರ-ಪೋಷಕಾಂಶಗಳಿಂದ ಮತ್ತೆ ಸುಸ್ಥಿತಿಗೆ ಬರುವುದಿಲ್ಲ ಎಂಬುವುದು ನನ್ನ ಅನುಭವ. ಅದು ಮತ್ತೆ ಇನ್ನೇನನ್ನು ಬಯಸುತ್ತಿದೆ. ಆ ‘ಇನ್ನೇನು’ ಎಂಬುವುದು ರೈತರ ಸುಪರ್ದಿಯಲ್ಲಿ ಈಗ ಇಲ್ಲ. ಅದನ್ನು ವಿಜ್ಞಾನಿಗಳು ಕೂಲಂಕಶವಾಗಿ ಅಧ್ಯಯನ ಮಾಡಬೇಕಾಗಿದೆ. ಅದು ಶಿಲೀಂಧ್ರದಿಂದ ಬರಬಹುದು ಅಥವಾ ಬೇರೆ ಬ್ಯಾಕ್ಟೀರಿಯಾ, ಬೇರೆ ವೈರಸ್‌ಗಳಿರಬಹುದು ಎಂಬ ಕಲ್ಪನೆಯ ಆಧಾರದಲ್ಲಿ ಅನೇಕ ಪರೀಕ್ಷೆಗಳು ನಡೆಯುತ್ತಲೇ ಇವೆ. ಆದರೆ ಇದರಿಂದ ಸಿಗುವ ಉತ್ತರಕ್ಕಿಂತ ಮತ್ತೆ ಹೊಸ ಹೊಸ ಪ್ರಶ್ನೆಗಳೇ ಹೆಚ್ಚುತ್ತಾ ಹೋಗುತ್ತವೆ. ಸಮಸ್ಯೆಯನ್ನು ಜಟಿಲಗೊಳಿಸುತ್ತಿವೆ. ವಿಶೇಷವೆಂದರೆ ಯಾವ ರೋಗಪೀಡಿತ ಅಡಿಕೆ ತೋಟ ಇದೆಯೋ ಅದರ ಮಧ್ಯೆಯೇ ಒಂದೆರಡು ಸದೃಢ ಯಾವುದೇ ಕಾಯಿಲೆ ಇಲ್ಲದ ಗಿಡಗಳು ಇರುವುದು! ಈಗ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಉತ್ತರವಾಗಬೇಕಾದ ಗಿಡಗಳು ಇವೇ ಆಗಿವೆ. ಇಂಥ ಗಿಡಗಳಿಂದಲೇ ಹೊಸ ಗಿಡಗಳ ತಳಿ ಅಭಿವೃದ್ಧಿ ಆಗಬೇಕು.ಟಿಶ್ಯೂ ಕಲ್ಚರ್ ಅಥವಾ ಕೃತಕ ಪರಾಗಸ್ಪರ್ಶದ ಮೂಲಕ ಇಂಥ ಸದೃಢ ಗಿಡಮೂಲಗಳಿಂದ ಹೊಸ ರೋಗನಿರೋಧಕ ಸಸಿಗಳನ್ನು ಅಭಿವೃದ್ಧಿಪಡಿಸಬೇಕು. ಈ ಸಾಧ್ಯತೆಯ ಬಗ್ಗೆ ಸಂಶೋಧನೆ ಆಗುತ್ತಿದೆ ಎಂಬುವುದು ಸಂತೋಷದ ಸಂಗತಿ. ಮುಂದೊಂದು ದಿನ ಇಂತಹ ರೋಗನಿರೋಧಕ ಗಿಡಗಳಿಂದಲೇ ಹೊಸ ಅಡಿಕೆ ತೋಟ ನಿರ್ಮಾಣವಾಗಬೇಕಾಗಿದೆ. ಸದ್ಯಪೂರ್ತಿ ಭರವಸೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಯಬೇಕಾದ ಒಂದು ಕಾಲದ ಮತ್ತು ಅಂತರದ ಅಗತ್ಯವಿದೆ’’ ಎನ್ನುತ್ತಾರೆ ಕಳೆದ ಅನೇಕ ವರ್ಷಗಳಿಂದ ಹಳದಿ ಎಲೆ ಮತ್ತು ಇತ್ತೀಚೆಗೆ ಎಲೆ ಚುಕ್ಕಿ ರೋಗಕ್ಕೆ ಬಾಧಿತರಾದ ಕೃಷಿಕ ರಮೇಶ್ ದೇಲಂಪಾಡಿ ಅವರು. ಸುಮಾರು 40 ವರ್ಷಗಳ ಹಿಂದೆ ತೆಂಗಿಗೆ ನುಸಿ ಪೀಡೆ ವಕ್ಕರಿಸಿತು. ಇವತ್ತಿಗೂ ನಮ್ಮ ತೆಂಗು ಮೊದಲಿನ ಆಕಾರ ಗಾತ್ರ ಸೌಂದರ್ಯವನ್ನು ಮತ್ತೆ ಪಡೆದಿಲ್ಲ. ಇವತ್ತಿಗೂ ಬಹುಪಾಲು ರೈತರಿಗೆ ಇರುವ ಅನುಮಾನ ಪ್ರಕೃತಿಗಿಂತಲೂ ಇದು ಮನುಷ್ಯನೇ ಸೃಷ್ಟಿಸಿದ, ಯಾವುದೋ ವಿದೇಶೀ ಹುನ್ನಾರದಿಂದ ಆದ ವಿಕೃತಿಯೆಂದು. ಅಡಿಕೆಯ ದಾರಿಯಲ್ಲೂ ಇದನ್ನು ಅಲ್ಲಗಳೆಯುವಂತಿಲ್ಲ. ಅಡಿಕೆ ಸದಾ ಹಸಿರಾಗಿರುವವರೆಗೆ ಈ ನೆಲದ ಜನರ ಬದುಕು ಕೂಡ ಹಸನಾಗಿರುತ್ತದೆ. ಅಡಿಕೆಗೆ ಬೆಲೆ ಇರುವ ತನಕ ಭೂಮಿಗೂ ಬೆಲೆ ಇರುತ್ತದೆ. ಬೆಳೆ ಕುಲಕೆಡಿಸಿಕೊಂಡ ಮೇಲೆ ರೈತರು ಕೊನೆಗೆ ಉಳಿಸಿಕೊಳ್ಳುವ ತುಂಡು ತುಂಡು ಭೂಮಿಯಾದರೂ ಯಾರಿಗೆ ಬೇಕು, ಯಾಕೆ ಬೇಕು?

ವಾರ್ತಾ ಭಾರತಿ 14 Dec 2025 3:48 pm

Australia | ಯಹೂದಿ ಹಬ್ಬ ಹನುಕ್ಕಾ ಆಚರಣೆ ವೇಳೆ ಸಿಡ್ನಿಯ ಬೋಂಡಿ ಬೀಚ್‌ ನಲ್ಲಿ ಭೀಕರ ಗುಂಡಿನ ದಾಳಿ; ಕನಿಷ್ಠ 10 ಮಂದಿ ಮೃತ್ಯು, ಇಬ್ಬರು ಶೂಟರ್‌ ಗಳು ವಶಕ್ಕೆ

ಸಿಡ್ನಿ, ಡಿ. 14: ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ ನಲ್ಲಿ ಯಹೂದಿ ಸಮುದಾಯದ ಎಂಟು ದಿನಗಳ ಹಬ್ಬವಾದ ಹನುಕ್ಕಾ ಆಚರಣೆ ಆರಂಭವಾಗುತ್ತಿದ್ದ ವೇಳೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನ ಸಂಜೆ 6.30ರ ನಂತರ ಬೀಚ್ ಪ್ರದೇಶದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹನುಕ್ಕಾ ಹಬ್ಬದ ಮೊದಲ ರಾತ್ರಿ ಆಚರಣೆಗೆ ಸಂಬಂಧಿಸಿದ ‘ಚಾನುಕಾ ಬೈ ದಿ ಸೀ’ ಕಾರ್ಯಕ್ರಮಕ್ಕಾಗಿ ನೂರಾರು ಜನರು ಬೀಚ್‌ ನಲ್ಲಿ ಸೇರಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ವೇಳೆ ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿ ಸುಮಾರು 50 ಗುಂಡುಗಳು ಹಾರಿಸಲಾಗಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಾರ್ವಜನಿಕರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಭಾರತೀಯ ಕಾಲಮಾನ ಮಧ್ಯಾಹ್ನ 2.17ರ ಸುಮಾರಿಗೆ ನ್ಯೂ ಸೌತ್ ವೇಲ್ಸ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬೋಂಡಿ ಬೀಚ್‌ ನಲ್ಲಿ ಗುಂಡಿನ ದಾಳಿಯ ಬಗ್ಗೆ ತಿಳಿಸಿ, ಸ್ಥಳದಲ್ಲಿರುವವರು ಸುರಕ್ಷಿತ ಆಶ್ರಯ ಪಡೆಯುವಂತೆ ಎಚ್ಚರಿಕೆ ನೀಡಿದ್ದರು. ಬಳಿಕ ಪೊಲೀಸರು ಇಬ್ಬರು ಶೂಟರ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ಆ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಬೋಂಡಿಯಲ್ಲಿನ ದೃಶ್ಯಗಳು ಅತ್ಯಂತ ಆಘಾತಕಾರಿಯಾಗಿದೆ. ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ,” ಎಂದು ಹೇಳಿದ್ದಾರೆ. NSW ಸರ್ಕಾರ ಮತ್ತು ಫೆಡರಲ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕಿ ಸುಸಾನ್ ಲೇ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಾವೆಲ್ಲರೂ ಪ್ರೀತಿಸುವ ಬೋಂಡಿಯಂತಹ ಸ್ಥಳದಲ್ಲಿ ದ್ವೇಷಪೂರಿತ ಹಿಂಸಾಚಾರ ನಡೆದಿದೆ. ಶಾಂತಿ ಮತ್ತು ಭರವಸೆಯ ಸಂಕೇತವಾಗಿದ್ದ ಹನುಕ್ಕಾ ಆಚರಣೆಯ ವೇಳೆ ಈ ದಾಳಿ ಸಂಭವಿಸಿರುವುದು ಆತಂತಕಾರಿಯಾಗಿದೆ,” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 14 Dec 2025 3:45 pm

ರೈತ ಉತ್ಪಾದಕರ ಸಂಸ್ಥೆ ಯೋಜನೆ 2031 ರವರೆಗೆ ವಿಸ್ತರಣೆ: ಅನುದಾನ ಮಿತಿ 1 ಕೋಟಿ ರೂ.ಗಳಿಗೆ ಏರಿಕೆ; ನಿಯಮಗಳ ಸಡಿಲಿಕೆಗೆ ಚಿಂತನೆ

ರೈತ ಉತ್ಪಾದಕರ ಸಂಸ್ಥೆಗಳ ಕೇಂದ್ರ ಪ್ರಾಯೋಜಿತ ಯೋಜನೆಯನ್ನು 2026 ರಿಂದ 2031ರ ವರೆಗೆ ಐದು ವರ್ಷಗಳ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ವಿಸ್ತರಣೆಯು ಯೋಜನೆ ಅನುಷ್ಠಾನದಲ್ಲಿನ ಅಡೆತಡೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಸುಮಾರು 10,000 ಎಫ್‌ಪಿಓಗಳು ಈಗಾಗಲೇ ರೂಪುಗೊಂಡಿದ್ದು, ಅವುಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲಾಗುವುದು. ಬಂಡವಾಳ ಮಿತಿಯನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಮತ್ತು ನಿಯಮಗಳ ಅನುಸರಣೆಗೆ ನೆರವು ನೀಡಲಾಗುವುದು ಎಂದು ಕೃಷಿ ಕಾರ್ಯದರ್ಶಿ ದೇವೇಷ ಚತುರ್ವೇದಿ ತಿಳಸಿದ್ದಾರೆ.

ವಿಜಯ ಕರ್ನಾಟಕ 14 Dec 2025 3:44 pm