ಕಂಪ್ಲಿ | ಹೊಸಗೇರಪ್ಪ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಕಂಪ್ಲಿ: ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾದ ಸಮಾರಂಭದಲ್ಲಿ, ಕಂಪ್ಲಿ–ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹೊಸಗೇರಪ್ಪ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೊಸಗೇರಪ್ಪ ಅವರು, “ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮನೋಭಾವದೊಂದಿಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ, ಅವರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಾ ಬಂದಿದ್ದೇನೆ. ನಮ್ಮ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಮತ್ತಷ್ಟು ಉತ್ಸಾಹ ಮತ್ತು ಸಂತೋಷವನ್ನು ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸೇವೆ ಸಲ್ಲಿಸುವೆ” ಎಂದರು. ಸನ್ಮಾನ ಕಾರ್ಯಕ್ರಮ : ಶುಕ್ರವಾರ ಕಂಪ್ಲಿ–ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಶಸ್ತಿ ಪುರಸ್ಕೃತ ಹೊಸಗೇರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯಗುರು ಬಿ. ಜಿಲಾನಸಾಬ್ ಮಾತನಾಡಿದರು. ಈ ವೇಳೆ ಹಿರಿಯ ಶಿಕ್ಷಕ ಚಂದ್ರಶೇಖರ, ಮುಖಂಡ ಹುಸೇನ್ ಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
112 ಕೋಟಿ ರೂ. ಲಂಚದ ಜಾಲದಲ್ಲಿ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ನವನೀತ್ ಸೆಹಗಲ್ ಹೆಸರು!
Newslaundry ತನಿಖಾ ವರದಿ
ಪರ್ಲೋಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ.ಕಾಸಿಂ ಹಾಜಿ ಆಯ್ಕೆ
ಬಂಟ್ವಾಳ : ಮಾಣಿ ಸಮೀಪದ ಪರ್ಲೋಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಕೆ.ಬಿ.ಕಾಸಿಂ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಸೀದಿಯ ಗೌರವಾಧ್ಯಕ್ಷ ಹಾಜ ಪಿ.ಕೆ. ಆದಂ ದಾರಿಮಿ ಅವರ ನೇತೃತ್ವದಲ್ಲಿ ಮಸೀದಿಯಲ್ಲಿ ಶುಕ್ರವಾರ ನಡೆದ ಮಸೀದಿ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ಸಂದರ್ಭ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ, ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಉಪಾಧ್ಯಕ್ಷ ಸಿದ್ದೀಕ್ ಪರ್ಲೊಟ್ಟು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಅಮ್ಮಿ, ಪರ್ಲೊಟ್ಟು ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ಸಿದ್ದೀಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್ ಪಿ.ಕೆ, ಕೋಶಾಧಿಕಾರಿಯಾಗಿ ಹೈದರ್ ಬೋಳಿಯಾರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ರಫೀಕ್ ಹಾಜಿ ನೇರಳಕಟ್ಟೆ, ಶಾಹುಲ್ ಹಮೀದ್ (ಅಮ್ಮಿ) ಪರ್ಲೊಟ್ಟು , ಫಾರೂಕ್ ಹನೀಫಿ, ಪಿ.ಕೆ. ರಶೀದ್, ಪಿ.ಕೆ. ಝುಬೈರ್, ಸಲೀಂ, ಆಶಿಕ್ ಹಾಗೂ ಮಸೂದ್ ಪರ್ಲೊಟ್ಟು ಅವರನ್ನು ಆರಿಸಲಾಯಿತು. ಸಿದ್ದೀಕ್ ಪರ್ಲೊಟ್ಟು ಸ್ವಾಗತಿಸಿ, ವಂದಿಸಿದರು.
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು: ಕೇಂದ್ರ ರೈಲ್ವೇ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ
ಮಂಗಳೂರು: ಮಂಗಳೂರು-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವಂತೆ ಕೇಂದ್ರ ರೇಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಮಂಗಳೂರು ವಿದ್ಯಾಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ನಗರವಾಗಿದ್ದು ಬೆಂಗಳೂರಿನ ಅನಂತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ
ಸಂಪಾದಕೀಯ | ಕ್ರಿಸ್ಮಸ್ ಮೇಲೆ ದಾಳಿ: ಭಾರತದ ವರ್ಚಸ್ಸಿಗೆ ಧಕ್ಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಮೆರಿಕಾ ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟ ಘೋಷಿಸಿದ ಬೆನ್ನಲ್ಲೇ, ಚೀನಾ ಅಮೆರಿಕಾದ 20 ರಕ್ಷಣಾ ಕಂಪನಿಗಳು ಮತ್ತು 10 ಉನ್ನತ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಚೀನಾದಲ್ಲಿ ಅವರ ಆಸ್ತಿಗಳನ್ನು ಸ್ಥಗಿತಗೊಳಿಸುವುದಲ್ಲದೆ, ವ್ಯವಹಾರ ನಡೆಸುವುದನ್ನು ನಿಷೇಧಿಸುತ್ತದೆ. ತೈವಾನ್ ಚೀನಾದ ಭೂಭಾಗ ಎಂದು ಪುನರುಚ್ಚರಿಸಿರುವ ಚೀನಾ, ಅಮೆರಿಕಾಗೆ ಎಚ್ಚರಿಕೆ ನೀಡಿದೆ.
ಮಂಗಳೂರು : ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ (ರಿ) ಮಂಗಳೂರು ಇದರ 2025-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರು ಮಾಜಿ ರಾಜ್ಯ ಸಭಾ ಸದಸ್ಯರಾದ ಬಿ. ಇಬ್ರಾಹಿಂ ಆಯ್ಕೆಯಾಗಿದ್ದಾರೆ. ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ (ರಿ) ಮಂಗಳೂರು ಇದರ 2025-2027 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮಂಗಳೂರಿನ ಇಹ್ಸಾನ್ ಸಭಾಂಗಣ ದಲ್ಲಿ ಡಿ. 20 ರಂದು ನಡೆಯಿತು. ಪ್ರಸತ್ತುತ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಹಿರಿಯ ವಕೀಲರು, ಮಾಜಿ ರಾಜ್ಯ ಸಭಾ ಸದಸ್ಯರಾದ ಬಿ. ಇಬ್ರಾಹಿಂ, ಉಪಾಧ್ಯಕ್ಷರಾಗಿ ಕರ್ನಾಟಕ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ. ಎ. ಮುಹಮ್ಮದ್ ಹನೀಫ್, ಹಿರಿಯ ವಕೀಲರಾದ ಅಬ್ದುಲ್ ಅಝೀಝ್, ಹೈಕೋರ್ಟ್ ವಕೀಲರಾದ ಮುಜಾಫರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪಿ. ಶುಕೂರ್, ಕೋಶಾಧಿಕಾರಿಯಾಗಿ ಸರ್ಫರಾಜ್, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ನೆಲ್ಯಾಡಿ, ಅಶ್ರಫ್ ಅಗ್ನಾಡಿ, ಬಿ ಮುಕ್ತಾರ್ ಅಹಮ್ಮದ್, ಕಬೀರ್ ಕೆಮ್ಮಾರ, ಜೀಶಾನ್ ಅಲಿ, ಮುಹಮ್ಮದ್ ಅಸ್ಗರ್ ಮುಡಿಪು, ಕಾರ್ಯಕ್ರಮ ಸಂಯೋಜಕರಾಗಿ ಶೇಕ್ ಇಶಾಕ್, ಇಮ್ತಿಯಾಜ್ ಬಂಟ್ವಾಳ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಪ್ರದಾನ ಕಾರ್ಯದರ್ಶಿ ಕೆ. ಪಿ. ಶುಕೂರ್ ವರದಿ ವಾಚಿಸಿದರು. ಲೆಕ್ಕ ಮಂಡನೆ ಹಾಗೂ ಸ್ವಾಗತವನ್ನು ಸರ್ಫರಾಜ್ ರವರು ನೆರವೇರಿಸಿದರು.
ಗೋವು ಕಳ್ಳತನ, ಅಕ್ರಮ ಗೋಹತ್ಯೆ ವಿರುದ್ಧ ಕ್ರಮ : ರಾಜ್ಯದಲ್ಲಿ 2 ವರ್ಷಗಳಲ್ಲಿ 1300 ಪ್ರಕರಣ ದಾಖಲು
ಕೈಗಾರೀಕರಣ ನಗರೀಕರಣ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಜಾನುವಾರು ಸಾಕಾಣಿಕೆಯಲ್ಲಿ ಯುವ ಜನಾಂಗ ಆಸಕ್ತಿ ತೋರಿಸುತ್ತಿಲ್ಲ. ದಿನದಿಂದ ಮಾಂಸಕ್ಕೆ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಸಣ್ಣ ಪ್ರಾಣಿಗಳಾದ ಕುರಿ ಮತ್ತು ಮೇಕೆಗಳ ಸಾಕಾಣಿಕೆ ಹೆಚ್ಚು ಲಾಭದಾಯಕವಾಗಿರುವುದರಿಂದ ರೈತರು ಗೋವುಗಳನ್ನು ಸಾಕಲು ಆಸಕ್ತಿಯನ್ನು ತೋರಿಸುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಯಲ್ಲಿರುವುದರಿಂದ ಗೋವು ಕಳ್ಳತನ, ಅಕ್ರಮ ಗೋಹತ್ಯೆ ಸಂಬಂಧಿಸಿ ಕಳೆದ 2 ವರ್ಷಗಳಲ್ಲಿ 1300 ಪ್ರಕರಣ ದಾಖಲು ಮಾಡಲಾಗಿದೆ.
ಪಾಕ್’ಗೆ ಬಂದಿಳಿದ ಅರಬ್ ದೇಶದ ಅಧ್ಯಕ್ಷರು : ಮತ್ತೆ ಸಾಲಕ್ಕೆ ತಟ್ಟೆ ಹಿಡಿದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು
UAE President In Pakistan : ಗಲ್ಫ್ ಗಣರಾಜ್ಯದ ಅಧ್ಯಕ್ಷರು ಮೊದಲ ಅಧಿಕೃತ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದಾರೆ. ಉಭಯ ದೇಶಗಳು ತಮ್ಮತಮ್ಮ ದೇಶಗಳ ಹಿತಾಸಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಯುಎಇ ಅಧ್ಯಕ್ಷರ ಭೇಟಿಗೆ ಟ್ವಿಟ್ಟರ್ ನಲ್ಲಿ ಹಲವು ವ್ಯಂಗ್ಯ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಚಳಿಗಾಲ, ಹಿಮಪಾತದ ಪ್ರಭಾವ - ಅಮೆರಿಕದಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದು!
ಅಮೆರಿಕಾದಲ್ಲಿ ಕ್ರಿಸ್ಮಸ್ ಪ್ರಯಾಣಕ್ಕೆ ತೀವ್ರ ಹಿಮಪಾತ ಅಡ್ಡಿಯಾಗಿದೆ. ಮಧ್ಯಪಶ್ಚಿಮ ಮತ್ತು ಈಶಾನ್ಯ ಭಾಗಗಳಲ್ಲಿ ಬಿರುಗಾಳಿ ಮತ್ತು ಭಾರೀ ಹಿಮಪಾತದಿಂದಾಗಿ 1,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ನ್ಯೂಯಾರ್ಕ್ ಮತ್ತು ಚಿಕಾಗೋ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ವಿಳಂಬ ಮತ್ತು ರದ್ದತಿಗಳು ಸಂಭವಿಸಿವೆ. ರಸ್ತೆಗಳೂ ಅಪಾಯಕಾರಿಯಾಗಿರಲಿವೆ ಎಂದು ಎಚ್ಚರಿಕೆ ನೀಡಲಾಗಿದೆ. ವಾರಾಂತ್ಯದವರೆಗೂ ಈ ಪರಿಸ್ಥಿತಿ ಮುಂದುವರೆಯುವ ನಿರೀಕ್ಷೆಯಿದೆ.
90 ದಿನಗಳಲ್ಲಿ ಈ ಸಿಮ್ಗಳು ಬಂದ್ ಆಗಲಿವೆ! ನಿಮ್ಮ ಸಿಮ್ ಸೇಫ್ ಇದೆಯೇ?
ಭಾರತದಲ್ಲಿ ಸ್ಮಾರ್ಟ್ಫೋನ್ ಬಳಸುವ ಬಹುತೇಕರು ಎರಡು ಸಿಮ್ ಕಾರ್ಡ್ಗಳನ್ನು (Dual SIM) ಹೊಂದಿರುತ್ತಾರೆ. ಒಂದನ್ನು ಪ್ರೈಮರಿ ನಂಬರ್ ಆಗಿ ದಿನನಿತ್ಯದ ಕರೆಗಳಿಗೆ ಬಳಸಿದರೆ, ಮತ್ತೊಂದನ್ನು ಕೇವಲ ಇನ್ಕಮಿಂಗ್ ಕರೆಗಳಿಗಾಗಿ (Incoming Calls) ಅಥವಾ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿರುವುದರಿಂದ ಹಾಗೆಯೇ ಫೋನ್ನಲ್ಲಿ ಬಿಟ್ಟಿರುತ್ತಾರೆ. ನೀವು ಕೂಡ ಇದೇ ರೀತಿ ಎರಡನೇ ಸಿಮ್ ಬಳಸುತ್ತಿದ್ದೀರಾ? ಅದರಲ್ಲಿ ಮೇನ್ ಬ್ಯಾಲೆನ್ಸ್ (Talktime) ಇದೆ ಎಂದು ನಿಶ್ಚಿಂತೆಯಿಂದ ಇದ್ದೀರಾ? ಹಾಗಾದರೆ ನೀವೊಮ್ಮೆ ನಿಮ್ಮ ಬ್ಯಾಲೆನ್ಸ್ ಮತ್ತು ಸಿಮ್ ಸ್ಥಿತಿಯನ್ನು ಪರಿಶೀಲಿಸುವುದು ಅನಿವಾರ್ಯ. ... Read more The post 90 ದಿನಗಳಲ್ಲಿ ಈ ಸಿಮ್ಗಳು ಬಂದ್ ಆಗಲಿವೆ! ನಿಮ್ಮ ಸಿಮ್ ಸೇಫ್ ಇದೆಯೇ? appeared first on Karnataka Times .
IMD Weather: ತೀವ್ರಗೊಂಡ ಶೀತ ಗಾಳಿ, ಈ ರಾಜ್ಯಗಳಲ್ಲಿ ಡಿ.31ರವರೆಗೆ ಮೈಕೊರೆಯುವ ಚಳಿ ಎಚ್ಚರಿಕೆ
ಡಿಸೆಂಬರ್ 27ರಿಂದ 31ರವರೆಗೆ ಪೂರ್ವ ಉತ್ತರ ಪ್ರದೇಶದ ಕೆಲವು ಸ್ಥಳಗಳಲ್ಲಿ ತೀವ್ರ ಶೀತ ದಿನ ಎದುರಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಪ್ರತ್ಯೇಕ ಪ್ರದೇಶಗಳಲ್ಲಿ, ಬಿಹಾರ, ಉತ್ತರಾಖಂಡ, ಅಸ್ಸಾಂ ಮತ್ತು ಮೇಘಾಲಯ, ಬಿಹಾರ, ಒಡಿಶಾ, ಉತ್ತರ ಪ್ರದೇಶ, ಹರಿಯಾಣ ಮತ್ತು ಚಂಡೀಗಢ ಮತ್ತು ಪಂಜಾಬ್ನಲ್ಲಿ ರಾತ್ರಿ, ಬೆಳಗ್ಗೆ ದಟ್ಟವಾದ ಮಂಜಿನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜಾರ್ಖಂಡ್ನಲ್ಲಿ
ನಕಲಿ ಸುದ್ದಿ ಹಾಕಿ ಸಿಕ್ಕಿಬಿದ್ದ ’ಸ್ವಯಂ ಘೋಷಿತ ಪ್ರತಿಪಾದಕ’ ಪ್ರಿಯಾಂಕ್ ಖರ್ಗೆ: ಶಿಕ್ಷೆ ಏನು ಎಂದ ಬಿಜೆಪಿ
AI Image shared by Priyank Kharge : ಬಿಜೆಪಿ ನೇತೃತ್ವದ ಸುಧಾರಣೆಗಳ ಫಲಿತಾಂಶಗಳನ್ನು ಪ್ರಶ್ನಿಸುವುದು ಕಾಂಗ್ರೆಸ್ನ ಹತಾಶೆಯನ್ನು ತೋರಿಸುತ್ತದೆ. ಆದರೆ, ವಾಸ್ತವದಲ್ಲಿ ಭಾರತದ ಉತ್ಪಾದಕ, ಆರ್ಥಿಕತೆ ನಿರ್ಣಾಯಕ ನಾಯಕತ್ವದ ಪ್ರತಿಫಲವೇ ಹೊರತು ಎರವಲು ಪಡೆದ ನಿರೂಪಣೆಗಳಲ್ಲ. AI ಇಮೇಜ್ ಶೇರ್ ಮಾಡಿಕೊಂಡ ಪ್ರಿಯಾಂಕ್ ಖರ್ಗೆ ಏನು ಪ್ರಶ್ನೆ ಎಂದು ಬಿಜೆಪಿ ಪ್ರಶ್ನಿಸಿದೆ.
Vaibhav Suryavanshi: ಭಾರತೀಯ 14 ವರ್ಷದ ಯುವ ಸ್ಟಾರ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರು ವಿಜಯ್ ಹಜಾರೆ ಟ್ರೋಫಿಯ ಮುಂದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಹಾಗಾದ್ರೆ ಅದೇನು ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವೈಭವ್ ಸೂರ್ಯವಂಶಿ ಅವರು ಕ್ರಿಕೆಟ್ನಲ್ಲಿ ವಯಸ್ಸಿಗೂ ಮೀರಿ ದಾಖಲೆಗಳನ್ನು ಮಾಡುತ್ತಲಿದ್ದಾರೆ.
ಉಕ್ರೇನ್ ರಾಜಧಾನಿಯಲ್ಲಿ ಹಲವು ಸ್ಫೋಟ - ಟ್ರಂಪ್ ಕಾಲಿಡುವ ಮುನ್ನ ಅಮೆರಿಕಕ್ಕಿದು ಎಚ್ಚರಿಕೆ?
ಉಕ್ರೇನ್ ರಾಜಧಾನಿ ಕೀವ್ನಲ್ಲಿ ಶನಿವಾರ ಭಾರಿ ಸ್ಫೋಟಗಳು ಸಂಭವಿಸಿವೆ. ದೇಶದ ವಾಯು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಡ್ರೋನ್ಗಳು ಮತ್ತು ಕ್ಷಿಪಣಿಗಳು ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಚಲಿಸುತ್ತಿವೆ. ಈ ಘಟನೆಗಳು ಉಕ್ರೇನ್ ಅಧ್ಯಕ್ಷರು ಅಮೆರಿಕಾದಲ್ಲಿ ಭೇಟಿ ನೀಡಲಿರುವ ಸಂದರ್ಭದಲ್ಲಿ ನಡೆದಿವೆ. ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾವಿತ ಯೋಜನೆಯ ಬಗ್ಗೆ ಚರ್ಚೆ ನಡೆಯಲಿದೆ.
ಮಾಲಿನ್ಯ ನಿಯಂತ್ರಣ ಎಂಬ ಜೋಕ್; ಅದಕ್ಕಿನ್ನು ಥರ್ಡ್ ಪಾರ್ಟಿ ಜೋಕರ್ಗಳು
ಪೂರ್ಣ ಪ್ರಮಾಣದ ‘ಆನಿಪರ’ ಸರಕಾರವೊಂದು ಉದಾರೀಕರಣದ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ ಮಾಲಿನ್ಯಕಾರಕ ಕೈಗಾರಿಕೆಗಳನ್ನು ದೇಶದ ಮೇಲೆ ಹೇರುತ್ತಿರುವುದರ ಜೊತೆಗೇ, ಈ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾದ ತನ್ನ ಸಾಂವಿಧಾನಿಕ, ನೈತಿಕ ಜವಾಬ್ದಾರಿಯನ್ನೂ ಕೂಡ ಖಾಸಗಿ ಹಿತಾಸಕ್ತಿಗಳೊಂದಿಗೆ ಹಂಚಿಕೊಳ್ಳಲು ಹೊರಟಿರುವುದು ಬಹಳ ಆತಂಕಕಾರಿ ವಿದ್ಯಮಾನ. ನೇರವಾಗಿ ಭಾರತ ಸರಕಾರದ ಕಾಲ ಬುಡದಲ್ಲೇ, ರಾಜಧಾನಿ ದಿಲ್ಲಿಯಲ್ಲಿ ಈ ನವೆಂಬರ್ನಿಂದೀಚೆಗೆ ನಾಗರಿಕರು ಪ್ರತಿದಿನ 18-20 ಸಿಗರೇಟುಗಳ ಧಂ ಎಳೆದದ್ದಕ್ಕೆ ಸಮನಾದಷ್ಟು ಪ್ರಮಾಣದಲ್ಲಿ ಹೊಗೆ-ಧೂಳು ನುಂಗುತ್ತಿದ್ದಾರೆ. ವಾತಾವರಣದ ವಾಯು ಗುಣಮಟ್ಟ ಸೂಚ್ಯಂಕ AQI) ಸಹ್ಯ ಪ್ರಮಾಣದಲ್ಲಿ ಇರುವುದು ಎಂದರೆ 0 (ಅತ್ಯುತ್ತಮ)-100 (ಸಮಾಧಾನಕರ)ರ ನಡುವೆ ಇರುವುದು. ಆದರೆ ದಿಲ್ಲಿಯಲ್ಲಿ ಈಗ ಅದು 400 (ಗಂಭೀರ) ರಿಂದ 700 (ವಿಷಕಾರಿ)ರ ಮಟ್ಟದಲ್ಲಿದೆ. ದಿಲ್ಲಿ ರಾಜ್ಯ ಸರಕಾರವಾಗಲೀ, ಭಾರತ ಸರಕಾರವಾಗಲೀ ಅಥವಾ ಆ ಎರಡೂ ಸರಕಾರಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಾಗಲೀ, ಈ ಗಂಭೀರ ಸನ್ನಿವೇಶವನ್ನು ನಿಯಂತ್ರಣಕ್ಕೆ ತರುವುದು ತಮ್ಮ ಕೆಲಸವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ವಾಹನಗಳು ಹೊರಸೂಸುವ ಮಾಲಿನ್ಯ, ಹುಲ್ಲಿನ ಬಣವೆ ಸುಡುವಿಕೆ, ಪಟಾಕಿಗಳು -ಎಲ್ಲ ಸೇರಿ ಎದ್ದಿರುವ ಹೊಗೆ/ಧೂಳು ಚದುರಿ ಹೋಗದಂತೆ ಶೀತಗಾಳಿ ತಡೆಯುತ್ತಿದೆ ಎಂಬ ವಿವರಣೆಯನ್ನು, ರಾಜಕೀಯ ಮೇಲಾಟಗಳ ಜೊತೆ ಪದೇಪದೇ ನೀಡಲಾಗುತ್ತಿದೆ. ನೂರಕ್ಕೆ ನೂರು ನೀತ್ಯಾತ್ಮಕ ವೈಫಲ್ಯದ ಫಲ ಇದು. ತನ್ನ ಕಾಲಡಿಯಲ್ಲೇ ನಡೆದಿರುವ ಈ ವಿದ್ಯಮಾನವನ್ನು ತನ್ನದೇ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯ ಮೂಲಕ ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಭಾರತ ಸರಕಾರ, ಈಗ ದೇಶದಾದ್ಯಂತ ಮಾಲಿನ್ಯ ನಿಯಂತ್ರಣಕ್ಕೆ ಖಾಸಗಿ ಥರ್ಡ್ ಪಾರ್ಟಿ ಪರಿಸರ ಮಾಲಿನ್ಯ ಆಡಿಟರ್ಗಳನ್ನು ನೋಂದಾಯಿಸಿಕೊಳ್ಳಲು ಹೊರಟಿದೆ. ಪೂರ್ಣ ಪ್ರಮಾಣದ ‘ಆನಿಪರ’ ಸರಕಾರವೊಂದು ಉದಾರೀಕರಣದ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ ಮಾಲಿನ್ಯಕಾರಕ ಕೈಗಾರಿಕೆಗಳನ್ನು ದೇಶದ ಮೇಲೆ ಹೇರುತ್ತಿರುವುದರ ಜೊತೆಗೇ, ಈ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾದ ತನ್ನ ಸಾಂವಿಧಾನಿಕ, ನೈತಿಕ ಜವಾಬ್ದಾರಿಯನ್ನೂ ಕೂಡ ಖಾಸಗಿ ಹಿತಾಸಕ್ತಿಗಳೊಂದಿಗೆ ಹಂಚಿಕೊಳ್ಳಲು ಹೊರಟಿರುವುದು ಬಹಳ ಆತಂಕಕಾರಿ ವಿದ್ಯಮಾನ. ಇದೇ ಆಗಸ್ಟ್ 29ರಂದು ಭಾರತ ಸರಕಾರವು ಒಂದು ಗಜೆಟ್ ಪ್ರಕಟಣೆಯ ಮೂಲಕ, [S.O. 3973 (E)]; ಖಾಸಗಿ ಪರಿಸರ ಆಡಿಟರ್ಗಳನ್ನು ನೋಂದಾಯಿಸಿಕೊಂಡು, ಅವರ ಮೂಲಕ ಪರಿಸರ ಆಡಿಟ್ಗಳನ್ನು ನಿಭಾಯಿಸುವ ಅವಕಾಶ ಕಲ್ಪಿಸಿದೆ. ದೇಶದ ಎಲ್ಲೆಡೆ ಕೈಗಾರಿಕೆಗಳು, ಉತ್ಪಾದನಾ ಪ್ರಕ್ರಿಯೆಗಳು ಮತ್ತು ಚಟುವಟಿಕೆಗಳು ಪರಿಸರ ಕಾನೂನುಗಳಿಗೆ ಅನುಗುಣವಾಗಿ ನಡೆಯುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ಆಡಿಟರ್ಗಳ ಜವಾಬ್ದಾರಿ ಆಗಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 11ರಂದು ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಕ್ಲೈಮೇಟ್ ಚೇಂಜ್ ಇಲಾಖೆಯು ಪ್ರಸ್ತಾಪದ ಬಿಡ್ಗಳನ್ನು ಆಹ್ವಾನಿಸಿದೆ. (F. No. TA-J-11014/3/2021-IA-LPt.1) ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಹೆಸರಿನಲ್ಲಿ, ಮಾಡಲಾಗಿರುವ ಈ ಪರಿಸರ ಆಡಿಟ್ ನಿಯಮಗಳಲ್ಲಿನ ಬದಲಾವಣೆಯನ್ನು ಸರಕಾರವು ನಂಬಿಕೆ ಆಧರಿತ ಆಡಳಿತದ ತತ್ವಗಳನ್ನಾಧರಿಸಿ ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ ಮತ್ತು ಕೇಂದ್ರ, ರಾಜ್ಯ ಮತ್ತು ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಗಳ ಜವಾಬ್ದಾರಿಗಳಿಗೆ, ಈ ನೋಂದಾಯಿತ ಆಡಿಟರ್ಗಳು ಪೂರಕವಾಗಿ ಕಾರ್ಯಾಚರಿಸಲಿದ್ದಾರೆ ಎಂದು ಹೇಳಿಕೊಂಡಿದೆ. ಭಾರತ ಸರಕಾರವು ಪರಿಸರ ಮಾಲಿನ್ಯವನ್ನು 2070ರ ಹೊತ್ತಿಗೆ ಶೂನ್ಯಕ್ಕೆ ಇಳಿಸಿಕೊಳ್ಳುವ ಅಂತರ್ರಾಷ್ಟ್ರೀಯ ಒಪ್ಪಂದಗಳ ಭಾಗೀದಾರ ಆಗಿರುವ ಹಿನ್ನೆಲೆಯಲ್ಲಿ, ಇಎಸ್ಜಿ ಫ್ರೇಮ್ ವರ್ಕ್, ಗ್ರೀನ್ ಫೈನಾನ್ಸ್, ಗ್ರೀನ್ ಕ್ರೆಡಿಟ್ ನಿಯಮಗಳು... ಇತ್ಯಾದಿ ಹಸಿರು ಆರ್ಥಿಕತೆಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಈಗಾಗಲೇ ಸೊರಗಿ ಕುಳಿತಿರುವ ಹಾಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗೆ ಈ ಎಲ್ಲ ಹೆಚ್ಚುವರಿ ಹೊರೆಗಳನ್ನು ಹೊರುವುದು ಸಾಧ್ಯ ಆಗುವುದಿಲ್ಲ ಎಂಬ ಕಾರಣಕ್ಕೆ ಸರಕಾರ ಈ ಹೊಸ ಹಾದಿಯನ್ನು ಕಂಡುಕೊಂಡಂತೆ ಮೇಲುನೋಟಕ್ಕೆ ಕಾಣಿಸುತ್ತಿದೆ. ನಮ್ಮ ಹಾಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬುದನ್ನು ಸರಕಾರ ಸಂಸತ್ತಿನ ಈ ಚಳಿಗಾಲದ ಅಧಿವೇಶನದಲ್ಲೇ ಬೆತ್ತಲು ಮಾಡಿಕೊಂಡಿದೆ. (ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 1355, ದಿನಾಂಕ 8-12-2025) ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ, ತಳ ಮಟ್ಟದಲ್ಲಿ ಕೆಲಸ ಮಾಡಲು ಅಗತ್ಯ ಇರುವ, ವೈಜ್ಞಾನಿಕ-ತಾಂತ್ರಿಕ ಹುದ್ದೆಗಳಲ್ಲಿ ಇರುವ ಕೊರತೆಯ ಬಗ್ಗೆ ಸಂಸದ ಆರ್. ಸಚ್ಚಿದಾನಂದಂ ಅವರಿಗೆ ಉತ್ತರಿಸಿದ ಪರಿಸರ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ. 16.28 ಹುದ್ದೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ(ಎಸ್ಪಿಸಿಬಿ) ಶೇ. 47.59 ಹುದ್ದೆಗಳು ಹಾಗೂ ಮಾಲಿನ್ಯ ನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) ಶೇ. 43.78 ಹುದ್ದೆಗಳು ಖಾಲಿ ಇವೆ. ಹೀಗೆ, ಒಟ್ಟು 6,932 ಮಂಜೂರಾದ ಹುದ್ದೆಗಳಲ್ಲಿ, 3,161 ಹುದ್ದೆಗಳು ಖಾಲಿ ಇವೆ ಎಂದು ಉತ್ತರಿಸಿದ್ದಾರೆ. ಈಗ ಈ ಪರಿಸರ ಆಡಿಟರ್ಗಳ ಅರ್ಹತೆ, ಸ್ಕ್ರೀನಿಂಗ್, ಸರ್ಟಿಫಿಕೇಷನ್, ನೋಂದಣಿ, ಸಾಮರ್ಥ್ಯ ವೃದ್ಧಿ, ಮಾರ್ಗದರ್ಶಿ ಸೂತ್ರಗಳನ್ನೆಲ್ಲ ರೂಪಿಸಲು ಪರಿಸರ ಆಡಿಟ್ ಡೆಸಿಗ್ನೇಟೆಡ್ ಏಜನ್ಸಿ (ಇಎಡಿಎ)ಗಳಿಂದ ಪ್ರಸ್ತಾವವನ್ನು ಆಹ್ವಾನಿಸಲಾಗಿದ್ದು, ಆ ಸಂಸ್ಥೆ ಲಾಭಾಸಕ್ತವಲ್ಲದ ಸ್ವಾಯತ್ತ ಸಂಸ್ಥೆ ಆಗಿರಲಿದೆ ಎಂದು ಸರಕಾರ ತನ್ನ ಬಿಡ್ಡಿಂಗ್ ಆಹ್ವಾನ ಡಾಕ್ಯುಮೆಂಟಿನಲ್ಲಿ ಹೇಳಿಕೊಂಡಿದೆ. ಇದು ಕಾರ್ಯಯೋಗ್ಯವೆ? ದೇಶದಲ್ಲಿ ಇಲ್ಲಿಯ ತನಕದ ಪರಿಸರ ಅನುಭವಗಳನ್ನಾಧರಿಸಿ ಹೇಳಬೇಕೆಂದರೆ, ‘ಪರಿಸರ ರಕ್ಷಣೆ’ ಎಂಬುದು ‘ಅಭಿವೃದ್ಧಿ’ಗೆ ವಿರೋಧ ಪದ ಎಂಬ ಕಲ್ಪನೆ ನಮ್ಮ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಜಗತ್ತು ಎರಡರಲ್ಲೂ ಇದೆ. ಉದಾರೀಕರಣದ ಆರಂಭದ ಹಂತದಲ್ಲಿ (30 ವರ್ಷ ಹಿಂದೆ), ಕಾರ್ಖಾನೆಗಳನ್ನು ಆರಂಭಿಸುವ ಮೊದಲು ಆ ಪರಿಸರದ ಧಾರಣ ಶಕ್ತಿ ಅಧ್ಯಯನ ಎಂದೆಲ್ಲ ಚರ್ಚೆ ನಡೆಯುತ್ತಿತ್ತು. ಈಗ ಅವೆಲ್ಲ ಕಸದ ಬುಟ್ಟಿ ಸೇರಿವೆ. ಪ್ರತೀ ಕೈಗಾರಿಕೆಯೂ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡಾಗ, ಅಲ್ಲಿ ಪರಿಸರ ರಕ್ಷಣೆ, ಸ್ಥಳೀಯರಿಗೆ ಉದ್ಯೋಗಾವಕಾಶ ಎಂದೆಲ್ಲ ಮೊಣಕೈಗೆ ಬೆಲ್ಲ ಹಚ್ಚಿಯೇ ಕೆಲಸ ಆರಂಭಿಸಿರುತ್ತದೆ. ಆದರೆ ದುರದೃಷ್ಟವಶಾತ್ ಅವು, ಪರಿಸರ ಸಂರಕ್ಷಣೆಯನ್ನು ಕೇವಲ ಸರಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳಿಗೆ ಸೀಮಿತಗೊಳಿಸಿ, ಯದ್ವಾತದ್ವಾ ಪರಿಸರ ಹಾನಿಗೆ ಕಾರಣ ಆಗುತ್ತಿವೆ. ನೆಲದ ಕಾನೂನಿಗೂ ಅವರು ಅತೀತರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗಂತೂ ಸ್ವತಃ ಸರಕಾರವೇ ಈ ‘ಆನಿ’ ಕಾರ್ಪೊರೇಟ್ಗಳ ಬೆಂಗಾವಲಿಗೆ ನಿಂತಿರುವುದರಿಂದ, ಪರಿಸರ ರಕ್ಷಣೆ ಎಂಬುದು ಅರಣ್ಯರೋದನ ಆಗಿ ಉಳಿದಿದೆ. ದೇಶದಾದ್ಯಂತ ನೆಲ-ಜಲ- ವಾಯು-ಪರಿಸರಗಳು ಮನುಷ್ಯ ರೂಪಿತ ವಿನಾಶಕ್ಕೆ ತುತ್ತಾಗುತ್ತಿವೆ. ಈ ಮಾಲಿನ್ಯಕಾರಕ ಕೈಗಾರಿಕೆಗಳ ಆಸುಪಾಸು ವಾಸಿಸುತ್ತಿರುವ ಬಡಪಾಯಿಗಳು ಬರಬಾರದ ಕಾಯಿಲೆಗಳಿಂದ ಪಡಬಾರದ ಪಾಡು ಪಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಕೈಗಾರಿಕೆಗಳ ಪರಿಸರ ಮಾಲಿನ್ಯ ಆಡಿಟ್ಅನ್ನು ಖಾಸಗಿಯವರ ಕೈಗೆ ನೀಡುವುದು ಎಂದರೆ, ಮೀನು ಕಾಯುವ ಕೆಲಸ ಬೆಕ್ಕಿನ ಕೈಗೆ ಕೊಟ್ಟಂತೆ. ನಾಳೆ ಬರಲಿರುವ ಪರಿಸರ ವೃತ್ತಿಪರರು ಒಂದಿಲ್ಲೊಂದು ರೀತಿಯಲ್ಲಿ ವ್ಯವಹಾರ ಹಿತಾಸಕ್ತಿಗಳ ಪರವಾಗಿಯೇ ವರ್ತಿಸಲಿದ್ದಾರೆ ಮತ್ತು ಅವರಿಂದ ನಾಗರಿಕರು ನ್ಯಾಯಕ್ಕಾಗಿ ನಿರೀಕ್ಷಿಸುವುದು ಮೂರ್ಖತನ. ಬೇರೆ ವೃತ್ತಿಪರ ಸನ್ನಿವೇಶಗಳಲ್ಲೂ ಇಂತಹದೇ ಸನ್ನಿವೇಶ ಇರುವುದರಿಂದ, ಪರಿಸರ ವೃತ್ತಿಪರರು ಅದಕ್ಕಿಂತ ಬೇರೆ ರೀತಿಯಲ್ಲಿ ವ್ಯವಹರಿಸಬಹುದೆಂಬ ನಿರೀಕ್ಷೆ ಇರಲು ಸಾಧ್ಯ ಇಲ್ಲ. ಪರಿಸರ (ಸಂರಕ್ಷಣೆ) ಕಾಯ್ದೆ 1986 ಮತ್ತು ಅದನ್ನನುಸರಿಸಿ ಬಂದ ಗಾಳಿ, ನೀರು, ವನ ಸಂರಕ್ಷಣಾ ಕಾಯ್ದೆಗಳನ್ನು 40 ವರ್ಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವುದಕ್ಕೆ ಭಾರತ ಸರಕಾರಕ್ಕೆ ಸಾಧ್ಯ ಆಗಿಲ್ಲ. ಕಾಯ್ದೆಯನ್ನು ನನೆಗುದಿಗೆ ಹಾಕಿಟ್ಟುಕೊಂಡೇ ಪಶ್ಚಿಮ ಘಟ್ಟಗಳಂತಹ ಪರಿಸರ ಶ್ರೀಮಂತಿಕೆಯ ತಾಣಗಳನ್ನು ಇಂಚಿಂಚಾಗಿ ನಾಶಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸದ್ಯ ಆಗುತ್ತಿರುವ ಹೊಸ ಬೆಳವಣಿಗೆಗಳನ್ನು ಹೇಗೆ ನೋಡಬೇಕೆಂದರೆ: ರೇರ್ ಅರ್ಥ್ ಮಿನರಲ್ಸ್ ಹೆಸರಿನಲ್ಲಿ ದೇಶದಾದ್ಯಂತ ನೆಲ ಬಗೆಯಲು ಸಮೀಕ್ಷೆಗಳು ನಡೆಯುತ್ತಿವೆ, ಆಳ ಸಮುದ್ರ ಗಣಿಗಾರಿಕೆಯ ಹೆಸರಲ್ಲಿ ಸಮುದ್ರದ ಒಡಲು ತೋಡುವ ಕೆಲಸಕ್ಕೆ ಸಿದ್ಧತೆಗಳು ಆಗುತ್ತಿವೆ; ದೇಶದಾದ್ಯಂತ ಯಾರದ್ದೋ ಡೇಟಾ ಸಂಗ್ರಹಿಸಿಡಲಿರುವ ಡೇಟಾ ಸೆಂಟರ್ಗಳಿಗೆ ವಿದ್ಯುತ್ ಪೂರೈಸುವುದಕ್ಕಾಗಿ ಎಲ್ಲೆಂದರಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳು ಬರಲಿವೆ... ಇನ್ನು ಆನಿಗಳಂತೂ ದಿನ ಬೆಳಗಾದರೆ ಲಕ್ಷಾಂತರ ಕೋಟಿ ರೂ.ಗಳ ಹೊಸಹೊಸ ಯೋಜನೆಗಳನ್ನು ಪ್ರಕಟಿಸುತ್ತಿವೆ. ಇವಕ್ಕೆಲ್ಲ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಘೋಷಣೆಯಡಿ ಫಟಾಫಟ್ ಅನುಮತಿ ನೀಡಬೇಕೆಂದರೆ, ಸಹಜವಾಗಿಯೇ ಸರಕಾರಕ್ಕೆ ತನ್ನ ಕೆಲಸಗಳನ್ನು ‘ಔಟ್ಸೋರ್ಸ್’ ಮಾಡಿಕೊಳ್ಳಬೇಕಾದದ್ದು ಅನಿವಾರ್ಯ. ಒಟ್ಟಿನಲ್ಲಿ ಇದು, ಸರಕಾರ ತನಗೆ ಗೊತ್ತಿದ್ದೂ ಮಾಡಬೇಕಾಗಿರುವ ಅನಿವಾರ್ಯ ಅವಾಂತರಗಳಿಗೆ ತಾನೇ ನೇರ ಹೊಣೆ ಹೊರುವ ಬದಲು, ಬೇರೊಬ್ಬರಿಗೆ ಅದನ್ನು ಔಟ್ಸೋರ್ಸ್ ಮಾಡಿ, ಕೇವಲ ಅಂತಿಮ ಒಪ್ಪಿಗೆಯ ಸಹಿ ಮಾಡಿದ ಪಾಪದ ಹೊರೆಯನ್ನು ತಾನು ಹೊತ್ತುಕೊಳ್ಳುವ, ಯಾವತ್ತೂ ಚಾಲ್ತಿಯಲ್ಲಿರುವ ಆಟ ಅಷ್ಟೇ.
ಚಿತ್ರ: ವೃಷಭ ನಿರ್ದೇಶನ: ನಂದ ಕಿಶೋರ್ ನಿರ್ಮಾಣ: ಕನೆಕ್ಟ್ ಮೀಡಿಯಾ, ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೊ ತಾರಾಗಣ: ಮೋಹನ್ ಲಾಲ್, ಸಮರ್ ಜಿತ್ ಲಂಕೇಶ್, ರಾಗಿಣಿ ಮುಂತಾದವರು. ಶತಮಾನಗಳ ಹಿಂದಿನ ಕಥೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ಅದೊಂದು ಶಿವಭಕ್ತ ರಾಜ ವಂಶ. ಆ ವಂಶದ ಹೆಸರೇ ವೃಷಭ. ದೇವನಗರಿ ಎನ್ನುವ ಅವರ ಊರಿನಲ್ಲಿರುವ ಸ್ಫಟಿಕ ಲಿಂಗ ತುಂಬ ಅಪರೂಪದ ಶಕ್ತಿಯನ್ನು ಹೊಂದಿದೆ. ಅದರ ರಕ್ಷಣೆಯಲ್ಲಿ ನಿರತನಾದವನು ವೃಷಭ ವಂಶದ ರಾಜ ವಿಜಯೇಂದ್ರ. ಆದರೆ ಒಮ್ಮೆ ಸ್ಫಟಿಕ ಲಿಂಗ ದೋಚಲು ಬಂದವರತ್ತ ಬಿಟ್ಟ ಬಾಣ ಮುನಿಪತ್ನಿಯ ಮಗುವನ್ನು ಬಲಿ ಪಡೆಯುತ್ತದೆ. ಪುಟ್ಟ ಕಂದನ ಸಾವಿನಿಂದ ನೊಂದು, ಬೆಂದ ಆ ತಾಯಿ ವಿಜಯೇಂದ್ರ ರಾಜನಿಗೆ ಶಾಪ ನೀಡುತ್ತಾಳೆ. ಅದರ ಪ್ರಕಾರ ರಾಜನಿಗೆ ಆತನಿಗೆ ಹುಟ್ಟುವ ಪುತ್ರನ ಕೈಗಳಿಂದಲೇ ಸಾವು ಸಂಭವಿಸಬೇಕಿರುತ್ತದೆ. ರಾಜನಿಗೆ ಹುಟ್ಟಿದ ಗಂಡು ಮಗು ಏನಾಗುತ್ತದೆ? ರಾಜ ಮತ್ತೆ ಆಧುನಿಕ ಜಗತ್ತಿಗೆ ಮರುಜನ್ಮ ಎತ್ತಿ ಬರುವುದೇಕೆ? ಮೊದಲಾದ ಪ್ರಶ್ನೆಗಳಿಗೆ ಸಿನೆಮಾ ನೋಡಿ ಉತ್ತರ ಪಡೆಯಬಹುದಾಗಿದೆ. ರಾಜ ವಿಜಯೇಂದ್ರನಾಗಿ ಮಲಯಾಳಂನ ದಿಗ್ಗಜ ನಟ ಮೋಹನ್ ಲಾಲ್ ಅಭಿನಯಿಸಿದ್ದಾರೆ. ವಿಜಯೇಂದ್ರನಿಗೆ ಎರಡು ಜನ್ಮಗಳು. ಆ ಎರಡೂ ಸಂದರ್ಭಗಳಲ್ಲಿ ತಂದೆಗೆ ತಕ್ಕ ಮಗನಾಗಿ ಕನ್ನಡದ ಯುವ ನಟ ಸಮರ್ ಜಿತ್ ಲಂಕೇಶ್ ನಟಿಸಿದ್ದಾರೆ. ಮೋಹನ್ ಲಾಲ್ರಂಥ ಅಭಿನಯ ಪ್ರತಿಭೆಯ ಮುಂದೆ ಪ್ರತಿಭೆ ಇದ್ದರಷ್ಟೇ ಮತ್ತೋರ್ವ ಕಲಾವಿದ ಕಾಣಿಸಿಕೊಳ್ಳಲು ಸಾಧ್ಯ. ಆದರೆ ಇವರಿಬ್ಬರು ಜತೆಯಾಗಿರುವ ದೃಶ್ಯಗಳಲ್ಲಿ ಉತ್ತಮ ಕೆಮಿಸ್ಟ್ರಿ ಕಾಣಿಸಿದೆ. ನಿಜ ಹೇಳಬೇಕೆಂದರೆ ಮೋಹನ್ ಲಾಲ್ಗಿಂತಲೂ ತುಸು ಹೆಚ್ಚೇ ನಟನಾ ಪ್ರಾಧಾನ್ಯತೆ ಇದೆ. ತಂದೆಯ ಮೇಲಿನ ಪ್ರೀತಿ, ದ್ವೇಷ, ಸ್ನೇಹಿತೆಯೊಂದಿಗಿನ ಅಕ್ಕರೆ ಎಲ್ಲವನ್ನೂ ಹದವಾಗಿ ತೋರಿಸಿದ್ದಾರೆ. ನೃತ್ಯ ಮತ್ತು ಸಾಹಸ ದೃಶ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಥೆಯ ವಿಚಾರಕ್ಕೆ ಬಂದರೆ ಇದೊಂದು ಚಂದಮಾಮ ಕಥೆಯ ಹಾಗಿದೆ. ಆದರೆ ಇಂಥ ಕಥೆಯನ್ನೇ ರಾಜಮೌಳಿ ಇಂಡಸ್ಟ್ರಿ ಹಿಟ್ ‘ಬಾಹುಬಲಿ’ಯನ್ನಾಗಿಸಿದ್ದರು. ನಿರ್ದೇಶಕ ನಂದ ಕಿಶೋರ್ ಕೂಡ ಅಂಥದ್ದೇ ಪ್ರಯತ್ನ ಮಾಡಿದ್ದಾರೆ. ಆದರೆ ಮಧ್ಯಂತರದ ಸಮಯದಲ್ಲೊಂದು ತಿರುವು ಬಿಟ್ಟರೆ ಇಡೀ ಚಿತ್ರದಲ್ಲಿ ಊಹೆಗೆ ಮೀರಿದ ಏನೂ ನಡೆಯುವುದಿಲ್ಲ. ರಾಮಾಯಣದಲ್ಲಿ ದಶರಥ ಪಡೆದ ಶಾಪದ ಕಥೆಗಿಂತ ಇದೇನೂ ವಿಭಿನ್ನವಲ್ಲ. ಹೀಗಾಗಿಯೇ ಕಥೆಯಲ್ಲಿ ಹೊಸತನ ಕಾಣುವುದಿಲ್ಲ. ಇನ್ನು ಮೇಕಿಂಗ್ ವಿಚಾರಕ್ಕೆ ಬಂದರೆ ಎಐ ಬಳಕೆ ಮಾಡಿರುವುದು, ವಿಎಫ್ಎಕ್ಸ್ನಲ್ಲಿನ ಕುಂದು ಚಿತ್ರದ ಗುಣಮಟ್ಟಕ್ಕೆ ಕುಂದು ಉಂಟುಮಾಡಿದೆ. ವೃಷಭ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಚಿತ್ರ. ಹೀಗಾಗಿಯೇ ತೆಲುಗು ಅದ್ದೂರಿತನ ಮತ್ತು ಮಲಯಾಳಂನ ಕಥಾ ಸಾಮರ್ಥ್ಯ ಎರಡರ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಈ ಎರಡು ನಿರೀಕ್ಷೆಗಳೇ ಪ್ರೇಕ್ಷಕರಿಗೆ ನಿರಾಶೆ ನೀಡಲು ಮೊದಲ ಕಾರಣವಾಗಿದೆ. ಚಿತ್ರದಲ್ಲಿ ಮೋಹನ್ ಲಾಲ್ ನಂಥ ಅದ್ಭುತ ಕಲಾವಿದ ಪ್ರಧಾನ ಪಾತ್ರದಲ್ಲಿರುವ ಕಾರಣ ಪಾತ್ರದ ಕುರಿತಾದ ನಿರೀಕ್ಷೆಗಳು ಹೆಚ್ಚುವುದು ಸಹಜ. ಆದರೆ ಯುದ್ಧಕ್ಕೆಂದು ಎಂಟ್ರಿಯಾಗುವ ಮೊದಲ ದೃಶ್ಯವೇ ಪರಿಣಾಮಕಾರಿಯಾಗಿಲ್ಲ. ಕುದುರೆ ಸವಾರಿಯ ದೃಶ್ಯಗಳು ತೀರ ಡಮ್ಮಿಯಾಗಿ ಕಾಣಿಸಿವೆ. ಇಷ್ಟೆಲ್ಲ ಕೊರತೆಗಳ ನಡುವೆಯೂ ಹೆಚ್ಚು ಕನ್ನಡದ ಕಲಾವಿದರನ್ನು ಬಳಸುವ ಮೂಲಕ ನಂದಕಿಶೋರ್ ಉತ್ತಮ ಪ್ರಯತ್ನ ನಡೆಸಿದ್ದಾರೆ. ಮೋಹನ್ ಲಾಲ್ ಜೋಡಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ. ಖಳನಾಗಿ ಗರುಡ ರಾಮ್, ಮನಶಾಸ್ತ್ರಜ್ಞನಾಗಿ ಕಿಶೋರ್, ಮುನಿಪತ್ನಿಯಾಗಿ ಪಾವನಾ ಗೌಡ.. ಹೀಗೆ ಕನ್ನಡದ ಕಲಾವಿದರಿದ್ದಾರೆ. ಸಮರಜಿತ್ಗೆ ಜೋಡಿಯಾಗಿ ಮರಾಠಿ ನಟಿ ನಯನ್ ಸಾರಿಕಾ ಇದ್ದಾರೆ. ಟಾಲಿವುಡ್ ನಟ ಅಲಿ ಕೂಡ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಇದ್ದು ಏನೋ ಕೊರತೆ ಎನ್ನುವ ಶಾಪ ಚಿತ್ರಕ್ಕೆ ಕಾಡಿರುವುದು ಸುಳ್ಳಲ್ಲ.
ಸೂರ್ಯ ಸೇನ್ ಎಂಬ ಕ್ರಾಂತಿಯ ಧ್ರುವ ತಾರೆ
► ಇವರಾರೂ ಕ್ಷಮೆ ಯಾಚಿಸಲಿಲ್ಲ!► ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!► ಭಾಗ - 16
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ: ಹೆಚ್ ಡಿ ದೇವೇಗೌಡ
ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ, ಮೈತ್ರಿ ಇಲ್ಲ. ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದೆ. ಎಂದು ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಘೋಷಿಸಿದ್ದಾರೆ. ಈ ಕುರಿತು ಪಕ್ಷದ ರಾಜ್ಯ ಕಚೇರಿಗೆ ಶುಕ್ರವಾರ ಮಾಧ್ಯಮಗಳ ಜೊತೆಗೆ ಹೆಚ್ ಡಿ ದೇವೇಗೌಡ
ವಿಶ್ವಾದ್ಯಂತ ಸಾವಿರ ಕೋಟಿ ಗಳಿಕೆಯ ಮೈಲುಗಲ್ಲು ದಾಟಿದ 'ಧುರಂದರ್'
ಮುಂಬೈ: ಆದಿತ್ಯ ಧರ್ ನಿರ್ದೇಶನದಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಧುರಂಧರ್' ಚಿತ್ರದ ಗಳಿಕೆ ವಿಶ್ವಾದ್ಯಂತ 1000 ಕೋಟಿ ರೂಪಾಯಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ಚಲನಚಿತ್ರ ಬಿಡುಗಡೆಯಾಗಿ ನಾಲ್ಕನೇ ವಾರದಲ್ಲೇ ಈ ಐತಿಹಾಸಿಕ ಮೈಲುಗಲ್ಲು ದಾಟಿರುವುದು ಗಮನಾರ್ಹ. ಡಿಸೆಂಬರ್ 5ರಂದು ಬಿಡುಗಡೆಯಗಿದ್ದ ಚಿತ್ರ ಭಾರತೀಯ ಸಿನಿಮಾ ಜಗತ್ತಿನ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿರುವ ಚಿತ್ರ 22ನೇ ದಿನ ಸುಮಾರು 15 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಸ್ಕ್ಯಾನ್ಲಿಕ್ ಅಂದಾಜಿಸಿದೆ. ನಾಲ್ಕನೇ ವಾರಾಂತ್ಯದಲ್ಲಿ ಯಾವುದೇ ಚಿತ್ರಕ್ಕೆ ಇದು ಅತ್ಯುತ್ತಮ ಸಂಗ್ರಹ ಎಂದು ವಿಶ್ಲೇಷಿಸಿದೆ. ಮೊದಲ ವಾರ 207.25 ಕೋಟಿ ರೂಪಾಯಿ ಗಳಿಸಿದ್ದ 'ಧುರಂಧರ್' ಎರಡನೇ ವಾರದಲ್ಲಿ 253.25 ಕೋಟಿ, ಮೂರನೇ ವಾರ 173 ಕೋಟಿ ರೂಪಾಯಿ ಗಳಿಸಿದೆ. ಶುಕ್ರವಾರದ ಗಳಿಕೆಯೊಂದಿಗೆ ಚಿತ್ರದ ಗಳಿಕೆ 648.50 ಕೋಟಿ ರೂಪಾಯಿ ತಲುಪಿದೆ. ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕ 778 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಕೂಡಾ ಸದ್ದು ಮಾಡಿರುವ 'ಧುರಂಧರ್'ನ ಗಳಿಕೆ ಹೊರದೇಶಗಳಲ್ಲಿ 225 ಕೋಟಿ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿರುವ ಚಿತ್ರಗಳ ಸಾಲಿನಲ್ಲಿ 'ಧುರಂಧರ್' ಅಗ್ರಗಣ್ಯ ಎಂದು ಹೇಳಲಾಗುತ್ತಿದೆ. ವಿಶ್ವಾದ್ಯಂತ 'ಧುರಂಧರ್' ಗಳಿಕೆ 1003 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೇವಲ 22 ದಿನಗಳಲ್ಲಿ 1000 ಕೋಟಿ ರೂಪಾಯಿ ಮೈಲುಗಲ್ಲು ದಾಟಿರುವ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಧುರಂಧರ್ ಪಾತ್ರವಾಗಿದೆ. 2023ರಲ್ಲಿ ಶಾರೂಖ್ ಖಾನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಜವಾನ್' ಚಿತ್ರ ಕೇವಲ 18 ದಿನಗಳಲ್ಲಿ ಈ ಮೈಲಗಲ್ಲು ದಾಟಿತ್ತು. ಆದರೆ 'ಧುರಂಧರ್' ಚಿತ್ರ ಎ ರೇಟಿಂಗ್ ಪಡೆದಿರುವುದರಿಂದ ಕೇವಲ ವಯಸ್ಕರಿಗೆ ಮಾತ್ರ ಸೀಮಿತವಾಗಿರುವುದು ಗಮನಾರ್ಹ.
ಸಿದ್ದಿ, ಮುಸ್ಲಿಮರು ಮತ್ತು ಅರಬಿ ಸಮುದ್ರ
ಅರಬಿ ಸಮುದ್ರದ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಆಗ್ರಹಿಸಿದ್ದಾರೆ. ಸಿದ್ದಿ ಸಮುದಾಯದಂತಹ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯವೊಂದರ ಅಭಿವೃದ್ಧಿಗೆ ಇನ್ನೂ ಐವತ್ತು ವರ್ಷಗಳ ರಾಜಕೀಯ ಅವಕಾಶ ಸಿಕ್ಕಿದರೂ ಸಾಲದು ಎಂಬ ಪರಿಸ್ಥಿತಿ ಇದೆ. ಹಾಗಾಗಿ ಸಿಕ್ಕಿದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಸಮುದಾಯ ಅಭಿವೃದ್ಧಿ ಮಾಡುವ ಬದಲು ಕೆಲಸಕ್ಕೆ ಬಾರದ ‘ಕೋಮು ಅಜೆಂಡಾ’ ಜಾರಿಗಾಗಿ ಸಮುದ್ರದ ಹೆಸರು ಬದಲಾವಣೆಯ ಪ್ರಸ್ತಾಪವನ್ನು ಶಾಂತರಾಮ ಸಿದ್ದಿ ಮಾಡಿದ್ದಾರೆ. ಇಷ್ಟಕ್ಕೂ ಸಮುದ್ರಗಳ ಹೆಸರನ್ನು ಬದಲಾವಣೆ ಮಾಡುವ ಅಧಿಕಾರ ಯಾವುದೇ ದೇಶಗಳಿಗೆ ಇಲ್ಲ ಎಂಬುದನ್ನು ಚಿಂತಕರ ಚಾವಡಿ ಎಂದು ಜನರು ಅಂದುಕೊಂಡಿರುವ ವಿಧಾನಪರಿಷತ್ ಸದಸ್ಯರೊಬ್ಬರಿಗೆ ಕನಿಷ್ಠ ಜ್ಞಾನ ಇರಬೇಕು. ಉದಾಹರಣೆಗೆ ಸರಳವಾಗಿ ಹೇಳುವುದಾದರೆ; ಒಂದು ವೇಳೆ ಶಾಂತರಾಮ ಸಿದ್ದಿಯವರ ಬೇಡಿಕೆಗೆ ಒಪ್ಪಿ ಪ್ರಧಾನಿ ನರೇಂದ್ರ ಮೋದಿಯವರು ಅರಬಿ ಸಮುದ್ರದ ಹೆಸರನ್ನು ಶಾಂತರಾಮ ಸಿದ್ದಿ ಸಾಗರ ಎಂದು ಬದಲಿಸಿದರೂ ದಾಖಲೆಗಳಲ್ಲಿ ಅದನ್ನು ಬದಲಿಸಲು ಸಾಧ್ಯವಿಲ್ಲ. ಅಂತರ್ರಾಷ್ಟ್ರೀಯ ದಾಖಲೆಗಳಲ್ಲಿ ಮತ್ತು ನಕಾಶೆಗಳಲ್ಲಿ ಅರಬಿ ಸಮುದ್ರ ಎಂಬ ಹೆಸರು ಬದಲಿಸಲು ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಅಂತರ್ರಾಷ್ಟ್ರೀಯ ವ್ಯವಹಾರಕ್ಕೆ ಕರ್ನಾಟಕದ ಕರಾವಳಿ ಸಮುದ್ರವನ್ನು ಬಳಸಿದ್ದರಿಂದ ಅರಬಿ ಸಮುದ್ರ ಎಂಬ ಹೆಸರು ಬಂತೇ ವಿನಹ ಅದು ಧರ್ಮಸೂಚಕವಲ್ಲ. ಈಗ ಸಿದ್ದಿಗಳಿಗೂ ಅರಬಿ ಸಮುದ್ರಕ್ಕೂ, ಮುಸ್ಲಿಮರಿಗೂ ಇರುವ ಸಂಬಂಧವನ್ನು ನೋಡೋಣ. ಸಿದ್ದಿಗಳು ಕರ್ನಾಟಕದ ಮೂಲನಿವಾಸಿ ಬುಡಕಟ್ಟುಗಳಲ್ಲ. ಪೋರ್ಚುಗೀಸರು ಮತ್ತು ಅರಬರು ಆಫ್ರಿಕಾದ ಸಿದ್ದಿಗಳನ್ನು ಕರ್ನಾಟಕ, ಗೋವಾ ಸೇರಿದಂತೆ ಹಲವೆಡೆ ಕರೆ ತಂದರು ಎಂದು ಇತಿಹಾಸ ಹೇಳುತ್ತದೆ. ಈ ಸಮುದಾಯಕ್ಕೆ ಸಿದ್ದಿ ಎಂಬ ಹೆಸರು ಹೇಗೆ ಬಂತು ಎಂದರೆ, ಅರಬ್ ಮೂಲದ ಸಿದ್ಧೀಕಿ, ಸಯ್ಯಿದಿ ಮೂಲದಿಂದ ಸಿದ್ದಿ ಎಂಬ ಹೆಸರು ಬಂತು. ಅರಬಿ ಸಮುದ್ರದ ಹೆಸರಿನಲ್ಲಿ ‘ಅರಬ್’ ಪದ ಇರುವುದಕ್ಕಾಗಿ ಹೆಸರು ಬದಲು ಮಾಡಬೇಕು ಎಂದು ಹೇಳುವ ಬಿಜೆಪಿ ಪರಿಷತ್ ಸದಸ್ಯ ಶಾಂತರಾಮ ಸಿದ್ದಿಯವರು ತಮ್ಮ ಹೆಸರಿನಲ್ಲಿರುವ ಅರಬ್ ಮೂಲದ ಸಿದ್ದಿ ಹೆಸರನ್ನು ಬದಲಿಸಲು ಸಾಧ್ಯವಾಗುತ್ತದೆಯೇ? ಸಿದ್ದಿಗಳು ಜನಾಂಗೀಯ ಇತಿಹಾಸದ ಪ್ರಕಾರ ಹಿಂದೂ ಧರ್ಮಕ್ಕೆ ಸೇರಿದವರಲ್ಲ. ಸಿದ್ದಿಗಳ ಮಾನವ ಅಭಿವೃದ್ಧಿಯ ಕಾರಣಕ್ಕಾಗಿ ಭಾರತ ಸರಕಾರವು ಅವರನ್ನು ಬುಡಕಟ್ಟುಗಳು ಎಂದು ಗುರುತಿಸಿದೆ. ವಾಸ್ತವವಾಗಿ ಸಿದ್ದಿಗಳು ಇಂತಹದ್ದೇ ಧರ್ಮಕ್ಕೆ ಸೇರಿದವರು ಎಂಬ ಸ್ಪಷ್ಟತೆಗೆ ಬರಲು ಸಾಧ್ಯವಿಲ್ಲ. ಸಿದ್ದಿಗಳಲ್ಲಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮ್ ಧರ್ಮಕ್ಕೆ ಸೇರಿದವರೂ ಇದ್ದಾರೆ. ಧರ್ಮವೇ ಇಲ್ಲದ ಆಫ್ರಿಕಾ ಬುಡಕಟ್ಟುಗಳನ್ನು ಯಾರು ಯಾವಾಗ ಭಾರತಕ್ಕೆ ಕರೆತಂದರು? ಅವರನ್ನು ಹೇಗೆ ನಡೆಸಿಕೊಂಡರು ಎಂಬ ಆಧಾರದ ಮೇಲೆ ಅವರು ಆಯಾ ಧರ್ಮವನ್ನು ಅನುಸರಿಸಿರುವ ಸಾಧ್ಯತೆ ಇದೆ. ಸಿದ್ದಿ ಜನಾಂಗ ಎನ್ನುವುದು ಅತ್ಯದ್ಭುತವಾದ ಸಮುದಾಯ. ಅದಾಗಲೇ ಹೇಳಿದಂತೆ ಸಿದ್ದಿಗಳಲ್ಲಿ ಹಿಂದೂ-ಕ್ರಿಶ್ಚಿಯನ್-ಮುಸ್ಲಿಮ್ ಧರ್ಮೀಯರಿದ್ದಾರೆ. ಆದರೆ ಸಹಬಾಳ್ವೆಗೆ ಈ ಧರ್ಮಗಳ ಆಯ್ಕೆಗಳು ಯಾವತ್ತೂ ಅಡ್ಡಿಯಾಗಿದ್ದಿಲ್ಲ. ಸಿದ್ದಿ ಸಮುದಾಯದೊಳಗಿನ ವಿವಾಹ ಸಂಬಂಧಗಳಿಗೆ ಹಿಂದೂ ಸಿದ್ದಿ, ಕ್ರಿಶ್ಚಿಯನ್ ಸಿದ್ದಿ, ಮುಸ್ಲಿಮ್ ಸಿದ್ದಿ ಎಂಬ ತಾರತಮ್ಯದ ಸಂಘರ್ಷ ಎದುರಾಗುವುದಿಲ್ಲ. ಇಂತಹ ಸಾಮರಸ್ಯ, ವೈವಿಧ್ಯತೆಯ ಸಮುದಾಯಗಳನ್ನೇ ಆರೆಸ್ಸೆಸ್ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತದೆ. ವನವಾಸಿ ಕಲ್ಯಾಣದ ಮೂಲಕ ಆದಿವಾಸಿ-ಬುಡಕಟ್ಟು ಸಮುದಾಯವನ್ನು ‘ಹಿಂದುತ್ವ’ವಾದಿಗಳನ್ನಾಗಿಸುತ್ತದೆ. ಆರೆಸ್ಸೆಸ್ನ ವನವಾಸಿ ಕಲ್ಯಾಣದ ಗುರಿ ಬುಡಕಟ್ಟುಗಳನ್ನು ಕೋಮುವಾದದ ಕಾಲಾಳುಗಳನ್ನಾಗಿಸುವುದೇ ವಿನಹ ಅವರ ಅಭಿವೃದ್ಧಿಯಲ್ಲ. ಹಾಗಾಗಿ ಶಾಂತರಾಮ ಸಿದ್ದಿಯವರಂತಹ ಸಿದ್ದಿಗಳನ್ನು ಆರೆಸ್ಸೆಸ್/ಬಿಜೆಪಿ ಪರಿಷತ್ ಶಾಸಕತ್ವಕ್ಕೆ ಆಯ್ಕೆ ಮಾಡಿದರೂ, ಅವರಿಂದ ಮತೀಯ ಸಂಬಂಧಿ ಕೆಲಸಗಳನ್ನೇ ಮಾಡಿಸುತ್ತದೆ. ಶಾಂತರಾಮ ಸಿದ್ದಿಯವರು ಅರಬಿ ಸಮುದ್ರದ ಅಲೆಗಳನ್ನೊಮ್ಮೆ ಮೌನವಾಗಿ ಆಲಿಸಬೇಕು. ಆ ಅಲೆಗಳು ಸಿದ್ದಿಗಳ ದುರಂತ ಕತೆಗಳನ್ನೂ, ಬದುಕು ಕಟ್ಟಿಕೊಂಡ ಸಾಹಸದ ಕತೆಗಳನ್ನೂ ಹೇಳುತ್ತವೆ. ಅದೇ ಅಲೆಗಳ ನಡುವಿನಿಂದ ಶಾಂತರಾಮ ಸಿದ್ದಿಯವರ ಪೂರ್ವಜರನ್ನು ಹೊತ್ತುಕೊಂಡ ಹಡಗುಗಳು ಕರ್ನಾಟಕದ ಕರಾವಳಿ ತೀರಕ್ಕೆ ಬಂದಿದ್ದವು. ಪೋರ್ಚುಗೀಸರು ಸಿದ್ದಿಗಳನ್ನು ಹಡಗಿನಲ್ಲಿ ಕರೆತರುವಾಗ ತೀರಾ ಅಮಾನವೀಯವಾಗಿ ನಡೆಸಿಕೊಂಡಿದ್ದರಂತೆ. ಅರಬರು ಸಿದ್ದಿಗಳನ್ನು ಭಾರತಕ್ಕೆ ಕರೆತರುವಾಗ ಮಾನವೀಯವಾಗಿ ನಡೆಸಿಕೊಂಡಿದ್ದರಂತೆ. ಹಾಗಾಗಿಯೇ ಭಾರತದ ಅನೇಕ ಧರ್ಮವೇ ಇಲ್ಲದ ಸಿದ್ದಿಗಳು ಇಸ್ಲಾಮ್ ಧರ್ಮ ಅನುಸರಿಸಿದ್ದು ಮಾತ್ರವಲ್ಲದೆ, ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡರಂತೆ. ಈ ರೀತಿ ‘ಸಿದ್ದಿಗಳ ಭಾರತ ಚರಿತ್ರೆ’ ಆರಂಭವಾಗುವುದೇ ಅರಬರು ಮತ್ತು ಅರಬಿ ಸಮುದ್ರದ ಮೂಲಕ! ಶಾಂತರಾಮ ಸಿದ್ದಿಯವರು ಹೇಳಿದ ತಕ್ಷಣ ಅರಬ್ಬಿ ಸಮುದ್ರದ ಹೆಸರು ಬದಲಾಗುವುದಿಲ್ಲ. ಬದಲಾದರೂ ಅದು ಕರಾವಳಿ, ಕರ್ನಾಟಕ, ದೇಶದ ಮೇಲೋ, ಮುಸ್ಲಿಮರ ಮೇಲೋ ಯಾವ ಪರಿಣಾಮವೂ ಬೀರುವುದಿಲ್ಲ. ಆದರೆ ಶಾಂತರಾಮ ಸಿದ್ದಿಯವರ ಮನಸ್ಥಿತಿ ಯಾವ ತೆರನಾದುದು? ಹಾಗಾಗಿ ಅರಬರನ್ನೂ, ಅರಬಿ ಸಮುದ್ರವನ್ನು ಆರೆಸ್ಸೆಸ್ನ ಮುಸ್ಲಿಮ್ ದ್ವೇಷದ ಅಜೆಂಡಾದ ಕಾರಣಕ್ಕಾಗಿ ಶಾಂತರಾಮ ಸಿದ್ದಿಯವರು ವಿರೋಧಿಸುವುದು ಸಿದ್ದಿ ಸಮುದಾಯದ ಇತಿಹಾಸಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸಿದ್ದಿ ಸಮುದಾಯ ಅರಿತುಕೊಳ್ಳಬೇಕಿದೆ.
ಕೆಟ್ಟ ಸಾರಿಗೆ ವ್ಯವಸ್ಥೆಗೆ ಅಮಾಯಕರ ಬಲಿ
ಕರ್ನಾಟಕ ಸರಕಾರ ತನ್ನ ಸಾರಿಗೆ ಸಂಸ್ಥೆಗಳಲ್ಲಿ ಆಡಳಿತದ ಶಿಸ್ತು ಮತ್ತು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಕಲ್ಪಿಸಿದರೆ ಜನ ಬೇರೆಡೆಗೆ ಕಣ್ಣು ಹಾಯಿಸುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಭೂತ ಸೌಕರ್ಯಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿ ಹೊಂದಿರುವ ಖಾಸಗಿ ಸಾರಿಗೆ ಸಂಸ್ಥೆ ಮಾತ್ರ ಉಳಿದುಕೊಳ್ಳುತ್ತದೆ. ಕರ್ನಾಟಕ ಸರಕಾರ ಚಿತ್ರದುರ್ಗದ ಭೀಕರ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮೃತರ ಗೌರವಾರ್ಥ ಕರ್ನಾಟಕ ಸಾರಿಗೆ ಸಂಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಬೇಕು. ಮೊಸಳೆ ಕಣ್ಣೀರು ಸುರಿಸುವುದರಿಂದ ಯಾರಿಗೂ ಒಳಿತಾಗುವುದಿಲ್ಲ. ಬುಧವಾರ ತಡರಾತ್ರಿ ಚಿತ್ರದುರ್ಗ-ಹಿರಿಯೂರು ರಾಷ್ಟ್ರೀಯ ಹೆದ್ದಾರಿಯ ಜವೆಗೊಂಡನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿಯೊಂದು, ಸೀ ಬರ್ಡ್ ಸ್ಲೀಪರ್ ಕೋಚ್ ಬಸ್ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ ಧಗಧಗನೇ ಉರಿದು ಅದರೊಳಗಿದ್ದ ಆರು ಜನ ಸಜೀವ ದಹನಗೊಂಡಿದ್ದಾರೆ. ಒಟ್ಟು 33 ಜನ ಪ್ರಯಾಣಿಕರಲ್ಲಿ ಬಹುತೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಇದಾಗಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ನೆರೆ ಬಂದಾಗಲೂ ಸ್ಪಂದಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ಐವತ್ತು ಸಾವಿರ ರೂ. ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ., ಗಾಯಗೊಂಡವರಿಗೆ ರೂ. ಐವತ್ತು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಸತ್ತವರನ್ನು ತಂದು ಕೊಡುವ ಕೆಲಸ ಯಾರೂ ಮಾಡಲಾರರು. ಪ್ರತೀ ಬಾರಿ ಭೀಕರ ರಸ್ತೆ ಅಪಘಾತ ಸಂಭವಿಸಿದಾಗಲೆಲ್ಲ ಪರಿಹಾರ ಘೋಷಣೆ ಮತ್ತು ಸಂತಾಪ ಸೂಚಿಸುವುದು ಒಂದು ವಿಧಿಕ್ರಿಯೆಯಂತೆ ಅನುಚಾನವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲಿಯವರೆಗೆ ಭೀಕರ ರಸ್ತೆ ಅಪಘಾತದಿಂದ ಸರಕಾರ ಮತ್ತು ಸಮಾಜ ಪಾಠ ಕಲಿತ ನಿದರ್ಶನ ದೊರೆಯುವುದಿಲ್ಲ. ಸರಕಾರವಂತೂ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಗೋಜಿಗೂ ಹೋಗುವುದಿಲ್ಲ. ಈ ಹಿಂದೆ ಖಾಸಗಿ ಬಸ್ಗಳು ಭೀಕರ ರಸ್ತೆ ಅಪಘಾತದಲ್ಲಿ ಹಲವು ಬಾರಿ ಪ್ರಯಾಣಿಕರ ಜೀವ ತೆಗೆದುಕೊಂಡಿವೆ. ಯಾವೊಬ್ಬ ಖಾಸಗಿ ಬಸ್ ಮಾಲಕರ ಮೇಲೆ ಕ್ರಮ ಜರುಗಿಸಿದ ಉದಾಹರಣೆ ಸಿಗುವುದಿಲ್ಲ. ಖಾಸಗಿ ಬಸ್ ಮಾಲಕರು ಅಪಘಾತ ಸಂಭವಿಸಿದಾಗ ಒಮ್ಮೆಯೂ ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ನಿದರ್ಶನವೂ ಇಲ್ಲ. ಖಾಸಗಿ ಬಸ್ ಮಾಲಕರು ಲಾಭ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ಮೊದಲು ಹುಮನಾಬಾದ ಬಳಿ ನ್ಯಾಷನಲ್ ಟ್ರಾವೆಲ್ಗೆ ಸೇರಿದ ಬಸ್ ಧಗಧಗನೆ ಉರಿದು ಹಲವು ಜನ ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಚಿತ್ರದುರ್ಗ ರಸ್ತೆಯಲ್ಲೇ ಒಮ್ಮೆ ಕರ್ನಾಟಕ ರಸ್ತೆ ಸಾರಿಗೆ ಬಸ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿತ್ತು. ಸರಕಾರಿ ಮತ್ತು ಖಾಸಗಿ ಬಸ್ಗಳು ಹಲವು ಬಾರಿ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಕಿತ್ತುಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸರಕಾರ ಮಾತ್ರ ಕಾಟಾಚಾರದ ಕ್ರಮದ ಆಚೆ ಗಂಭೀರವಾಗಿ ಚಿಂತಿಸುತ್ತಿಲ್ಲ. ಒಂದು ಕಾಲದಲ್ಲಿ ನಮ್ಮ ಜನ ಪ್ರತಿನಿಧಿಗಳು ಕರ್ನಾಟಕ ರಸ್ತೆ ಸಾರಿಗೆಯ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಹಾಗೆ ನೋಡಿದರೆ ಆಗ ಈಗಿನಷ್ಟು ಅತ್ಯುತ್ತಮ ರಸ್ತೆಗಳು ಇರಲಿಲ್ಲ. ಸ್ಟೇಟ್ ಹೈವೇ, ರಾಷ್ಟ್ರೀಯ ಹೈವೇಗಳ ಸಂಖ್ಯೆ ಹೆಚ್ಚಾಗಿವೆ. ಎಲ್ಲೆಡೆ ಗುಣಮಟ್ಟದ ರಸ್ತೆಗಳು ರಾರಾಜಿಸುತ್ತಿವೆ. ಮೂರು ದಶಕಗಳ ಹಿಂದೆ ಅಂಬಸಡಾರ್, ಪದ್ಮಿನಿ ಸೇರಿದಂತೆ ಮೂರು ನಾಲ್ಕು ಮಾದರಿ ಕಾರುಗಳು ಮಾತ್ರ ಲಭ್ಯ ಇದ್ದವು. ಅವುಗಳ ವೇಗ ಬಹಳ ಕಡಿಮೆ ಇರುತ್ತಿತ್ತು. ಈಗ ವೇಗ ಹೆಚ್ಚಾಗಿದೆ. ಅಪಘಾತದ ಪ್ರಮಾಣ ಮತ್ತು ಸಾವಿನ ಸಂಖ್ಯೆ ನೂರಾರು ಪಟ್ಟು ಹೆಚ್ಚಾಗಿದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಅಪಘಾತದ ಪ್ರಮಾಣ ತಗ್ಗಿಸುವ ಸಾಧನಗಳು ಹೆಚ್ಚಾಗಬೇಕಿತ್ತು. ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲೇ ಜೀವ ಕಳೆದುಕೊಂಡರು. ರಸ್ತೆ ಅಪಘಾತದಲ್ಲಿ ಜನಸಾಮಾನ್ಯರು ಮಾತ್ರವಲ್ಲ ನಟ ನಟಿಯರು, ಶಾಸಕ ಮಂತ್ರಿಗಳು ಜೀವ ಕಳೆದುಕೊಂಡಿದ್ದಾರೆ. ಆದರೆ ಸರಕಾರ ಮತ್ತು ಅದರ ಭಾಗವಾಗಿರುವ ಅಧಿಕಾರಿಗಳು ಅದರಲ್ಲೂ ಪೊಲೀಸ್ ಅಧಿಕಾರಿಗಳು ಅಪಘಾತದ ಪ್ರಮಾಣ ತಪ್ಪಿಸಲು ವಿಶೇಷ ಯೋಜನೆ ರೂಪಿಸಿದಂತೆ ಕಾಣುತ್ತಿಲ್ಲ. ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆ ಕಾರ್ಯಕ್ರಮಗಳಲ್ಲಿ ಹೊಸತನ ಇರುವುದಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಏನೆಲ್ಲಾ ಕಸರತ್ತು ಮಾಡಿದರೂ ರಸ್ತೆ ಜನದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಿಶೇಷವಾಗಿ ಸಾರಿಗೆ ಮತ್ತು ಗೃಹ ಇಲಾಖೆಯ ಮಂತ್ರಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದರೆ ಮಾತ್ರ ಹೊಸ ಸಾಧನಗಳು ಲಭ್ಯವಾಗುತ್ತವೆ. ಚೀನಾ, ಜಪಾನ್, ಇಂಗ್ಲೆಂಡ್, ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿವೆ. ಅತಿ ವೇಗದ ಕಾರುಗಳು ಅದರಲ್ಲೂ ಚಾಲಕ ರಹಿತ ಕಾರುಗಳು ಬಳಕೆಗೆ ಬಂದಿವೆ. ಭಾರತಕ್ಕೆ ಹೋಲಿಸಿದರೆ ಕಡಿಮೆ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಕರ್ನಾಟಕದಲ್ಲಿ ಎರಡು ಮೂರು ದಶಕಗಳ ಹಿಂದೆ ನಿರ್ಮಾಣವಾಗಿರುವ ಕಿರಿದಾದ ರಸ್ತೆಗಳು ಇವೆ. ಆದರೆ ಪ್ರತೀ ದಿನ ಹೊಸ ವಾಹನಗಳು ರಸ್ತೆಗೆ ಬರುತ್ತಲೇ ಇವೆ. ಒಂದೊಂದು ಮನೆಯಲ್ಲಿ ಮೂರ್ನಾಲ್ಕು ಕಾರುಗಳಿವೆ. ಸಾರಿಗೆ ಇಲಾಖೆ ಕಾರುಗಳ ಸಂಖ್ಯೆ ನಿಯಂತ್ರಿಸಲು ಇಲ್ಲಿಯವರೆಗೆ ಕಾನೂನು ರೂಪಿಸಿಲ್ಲ. ಕಾನೂನು ರೂಪಿಸುವುದು ಒಂದು ಭಾಗ, ಕಾನೂನುಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿಗಾ ವಹಿಸುವುದು ಪ್ರಮುಖ ಭಾಗ. ಬೆಂಗಳೂರಿನಲ್ಲಿ ರಸ್ತೆ ನಿಯಮ ಪಾಲಿಸಲು ಗುಣಮಟ್ಟದ ರಸ್ತೆಗಳೇ ಇಲ್ಲ. ಬೆಂಗಳೂರಿನ ಎಷ್ಟೋ ಬಡಾವಣೆಗಳಲ್ಲಿ ಅದರಲ್ಲೂ ಕಮರ್ಷಿಯಲ್ ಏರಿಯಾದಲ್ಲಿ ವಾಹನಗಳ ನಿಲುಗಡೆಗೆ ಸ್ಥಳವೇ ಇಲ್ಲ. ಬೇಕಾಬಿಟ್ಟಿ ವಾಹನ ನಿಲ್ಲಿಸಿ ಕಾನೂನು ಉಲ್ಲಂಘನೆ ಮಾಡುತ್ತಾರೆ. ಕರ್ನಾಟಕ ಸರಕಾರ ತನ್ನದೇಯಾದ ಸಾರಿಗೆ ವ್ಯವಸ್ಥೆ ಹೊಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಪೂರ್ಣ ಪ್ರಮಾಣದ ಮೂಲಭೂತ ಸೌಕರ್ಯಗಳು ಹೊಂದಿವೆ. ತಾಲೂಕು ಹೋಬಳಿ ಕೇಂದ್ರಗಳಲ್ಲೂ ಸ್ವಂತ ಕಟ್ಟಡ ಮತ್ತು ಸ್ಥಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಹೊಂದಿವೆ. ಬೆಂಗಳೂರು ಮತ್ತು ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ವಿಶಾಲ ಜಾಗದಲ್ಲಿ ಅತ್ಯುತ್ತಮ ಬಸ್ ನಿಲ್ದಾಣಗಳು ನಿರ್ಮಾಣವಾಗಿವೆ. ಅಷ್ಟು ಮಾತ್ರವಲ್ಲ ಪ್ರತೀ ಜಿಲ್ಲಾ ಮತ್ತು ದೊಡ್ಡ ಪಟ್ಟಣಗಳಲ್ಲಿ ಬಸ್ ಡಿಪೋಗಳನ್ನು ನಿರ್ಮಾಣ ಮಾಡಲಾಗಿದೆ. ಅತ್ಯುತ್ತಮ ಸಂಬಳ ಪಡೆಯುವ ಲಕ್ಷ ಲಕ್ಷ ಡ್ರೈವರ್, ಕಂಡಕ್ಟರ್ ಮತ್ತು ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ ಮತ್ತು ಇನ್ನೆರಡು ಸಾರಿಗೆ ಸಂಸ್ಥೆಗಳು ಕೋಟಿ ಕೋಟಿ ರೂ. ಬೆಲೆ ಬಾಳುವ ಚಿರಾಸ್ತಿ ಹೊಂದಿವೆ. ಲಭ್ಯ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕರ್ನಾಟಕದ ಸಾರಿಗೆ ಸಂಸ್ಥೆಗಳೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಬಹು ದೊಡ್ಡ ಆರ್ಥಿಕ ಸಂಪನ್ಮೂಲ ಒದಗಿಸುವ ಶಕ್ತಿ ಪಡೆದಿವೆ. ಕರ್ನಾಟಕ ಸರಕಾರದ ಅಧೀನ ಸಂಸ್ಥೆಗಳಾಗಿರುವ ಸಾರಿಗೆ ಸಂಸ್ಥೆಗಳು ಒಂದು ಕಾಲದಲ್ಲಿ ಸಾಕಷ್ಟು ಲಾಭ ತಂದು ಕೊಡುವ ಕಾಮಧೇನುವಾಗಿದ್ದವು. ಕರ್ನಾಟಕ ಸಾರಿಗೆ ಸಂಸ್ಥೆಗಳು ಲಾಭ ಮಾಡಿದರೆ, ರಸ್ತೆ ಅಪಘಾತ ತಡೆಗೆ ವಿನೂತನ ತಂತ್ರ ಜ್ಞಾನ ಬಳಸಬಹುದು. ಹಾಗೆ ನೋಡಿದರೆ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಬಸ್ಗಳನ್ನು ಹೊಂದಿವೆ. ಇಂತಹ ದುಬಾರಿ ಮತ್ತು ಹೈಟೆಕ್ ಬಸ್ಗಳು ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಹೊಂದಿಲ್ಲ. ಇಷ್ಟಾಗಿಯೂ ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳು ನಿರಂತರ ನಷ್ಟ ಅನುಭವಿಸುತ್ತಿವೆ. ಕನಿಷ್ಠ ಮೂಲಭೂತ ಸೌಕರ್ಯ ಹೊಂದದ, ಅತ್ಯಂತ ಕಳಪೆ ಬಸ್ಗಳನ್ನು ಹೊಂದಿರುವ ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯಧಿಕ ಲಾಭ ಮಾಡಿಕೊಳ್ಳುತ್ತಿವೆ. ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ರಸ್ತೆ ಸಾರಿಗೆ ಸಂಸ್ಥೆಗಳು ಹೊಂದಿರುವ ಸವಲತ್ತುಗಳು, ಅತ್ಯಾಧುನಿಕ ಬಸ್ ಗಳು ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. ಕರ್ನಾಟಕದಲ್ಲಿ ವಿಆರ್ಎಲ್, ಎಸ್ಆರ್ಎಸ್ನಂತಹ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಹೊಂದಿವೆ. ಆದರೆ ಮೂಲಭೂತ ಸೌಕರ್ಯಗಳೇ ಹೊಂದಿಲ್ಲ. ವಿಆರ್ಎಲ್ ಮತ್ತು ಎಸ್ಆರ್ಎಸ್ನಂತಹ ಖಾಸಗಿ ಸಾರಿಗೆ ಸಂಸ್ಥೆಗಳು ಆನಂದ್ ರಾವ್ ವೃತ್ತದಲ್ಲಿ ಅತ್ಯಂತ ಚಿಕ್ಕ ಮತ್ತು ಇಕ್ಕಟ್ಟಿನ ಸ್ಥಳದಲ್ಲಿ ಬಸ್ ನಿಲ್ದಾಣ ಹೊಂದಿವೆ. ಉಳಿದಂತೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳಿಗೆ ಸಾರ್ವಜನಿಕ ರಸ್ತೆಗಳೇ ನಿಲ್ದಾಣಗಳಾಗಿವೆ. ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಿ ಸಾರ್ವಜನಿಕ ರಸ್ತೆಗಳನ್ನು ಬಳಸಿಕೊಳ್ಳುತ್ತಾರೆ. ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಸ್ಥಳಗಳು ಸಾರ್ವಜನಿಕ ರಸ್ತೆಗಳೇ ಆಗಿರುತ್ತವೆ. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳು ಪ್ರಯಾಣಿಕರಿಗೆ ರಸ್ತೆ ಬದಿಯಲ್ಲಿ ಕಾಯಲು ಹೇಳುತ್ತವೆ. ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳು ಬೆಳಗ್ಗೆ ಬಂದು ತಲುಪಿದಾಗ ಸಾರ್ವಜನಿಕ ರಸ್ತೆ ಅಕ್ಷರಶಃ ಜನದಟ್ಟಣೆಯಿಂದ ಕೂಡಿರುತ್ತದೆ. ರಾತ್ರಿ ಆ ಬಸ್ ಗಳು ತೆರಳುವಾಗಲೂ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಆಗಲೂ ಆ ರಸ್ತೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಅದರಿಂದ ಜನಸಾಮಾನ್ಯರಿಗೆ ಎಷ್ಟೇ ತೊಂದರೆಯಾದರೂ ಟ್ರಾಫಿಕ್ ಪೊಲೀಸರು ಲಂಚದ ಆಸೆಗೆ ಬಾಯಿ ಮುಚ್ಚಿಕೊಂಡು ಕೂತಿರುತ್ತಾರೆ. ರಾತ್ರಿ ಒಂಭತ್ತು ಗಂಟೆಯ ನಂತರ ಬೆಂಗಳೂರಿಂದ ಹೊರಡುವ ಎಂಟು ದಿಕ್ಕುಗಳಲ್ಲಿ ಇರುವ ಎಲ್ಲ ಮುಖ್ಯ ರಸ್ತೆಗಳು ಈ ಖಾಸಗಿ ಸಾರಿಗೆ ಸಂಸ್ಥೆಯ ಬಸ್ಗಳಿಂದ ಕಿಕ್ಕಿರಿದು ಜನದಟ್ಟಣೆಯಾಗಿರುತ್ತವೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ರಸ್ತೆ, ಹೈದರಾಬಾದ್ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆಗಳು ರಾತ್ರಿ ಒಂಭತ್ತರಿಂದ ಹನ್ನೊಂದರವರೆಗೆ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ ನಿಲುಗಡೆಯಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಿಸ ಬೇಕಾಗುತ್ತದೆ. ಕನಿಷ್ಠ ನಿಲುಗಡೆ ಸ್ಥಳವನ್ನು ಹೊಂದದ ಈ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳು ಪ್ರತೀ ದಿನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳೊಂದಿಗೆ ಸ್ಪರ್ಧೆ ಮಾಡುತ್ತಿರುತ್ತವೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನೇ ಕಸಿದುಕೊಳ್ಳುತ್ತಿರುತ್ತವೆ. ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಹೋಗುವ ಪ್ರಯಾಣಿಕರನ್ನು ವಿಆರ್ಎಲ್ ಖಾಸಗಿ ಸಾರಿಗೆ ಸಂಸ್ಥೆ ಕಸಿದುಕೊಳ್ಳುತ್ತದೆ. ಬೆಂಗಳೂರಿಂದ ಹೊರಡುವ ಎಲ್ಲ ವಿಆರ್ಎಲ್ ಬಸ್ಗಳು ಭರ್ತಿಯಾಗಿರುತ್ತವೆ. ಎಸ್ಆರ್ಎಸ್ ಬಸ್ಗಳು ಎರಡನೇ ಆದ್ಯತೆ ಪಡೆದುಕೊಂಡಿರುತ್ತವೆ. ದುರಂತವೆಂದರೆ, ಅತ್ಯಂತ ಸುಸಜ್ಜಿತ ಕೇಂದ್ರ ಬಸ್ ನಿಲ್ದಾಣ ಹೊಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸ್ಲೀಪರ್ ಕೋಚ್ ಎಸಿ ಮತ್ತು ನಾನ್ ಎಸಿ ಬಸ್ಗಳು ಅರ್ಧ ಭರ್ತಿಯಾಗಿರುತ್ತವೆ. ಉಳಿದಂತೆ ರಾಜಹಂಸ, ಐರಾವತದಂತಹ ಹೈಟೆಕ್ ಬಸ್ಗಳು ಕೆಲವೇ ಪ್ರಯಾಣಿಕರನ್ನು ಹೊತ್ತು ಅರ್ಧ ಖಾಲಿಯಾಗಿಯೇ ಪ್ರಯಾಣ ಮಾಡುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಗಲು ಪ್ರಯಾಣಿಸುವ ಬಸ್ ಗಳು ಅದರಲ್ಲೂ ಕೆಂಪು ವೇಗದೂತ ಬಸ್ಗಳು ತುಂಬಿ ತುಳುಕುತ್ತವೆ. ಯಾಕೆಂದರೆ, ಖಾಸಗಿ ಸಾರಿಗೆ ಸಂಸ್ಥೆಯ ಬಸ್ಗಳು ಹಗಲು ಪ್ರಯಾಣ ಮಾಡುವುದಿಲ್ಲ. ರಾತ್ರಿ ಪ್ರಯಾಣ ಹೊರಡುವ ಖಾಸಗಿ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ವಿಆರ್ಎಲ್ ಮಾತ್ರ ಕನಿಷ್ಠ ಸೌಲಭ್ಯ ನೀಡುತ್ತದೆ. ಸಿಸಿಟಿವಿ, ಸ್ವಚ್ಛವಾದ ಕ್ಯಾಬಿನ್, ಇದ್ದುದರಲ್ಲೇ ಉತ್ತಮವಾದ ಬಸ್ಗಳನ್ನು ಒದಗಿಸಿರುತ್ತಾರೆ. ಕಲಬುರಗಿ, ಬೀದರ್ ಕಡೆ ಪ್ರಯಾಣಿಸುವ ವಿಆರ್ಎಲ್ ಬಸ್ಗಳು ಅತ್ಯಂತ ಕಳಪೆ ಗುಣಮಟ್ಟ ಹೊಂದಿರುತ್ತವೆ. ಯಾವುದೇ ಸಮಯದಲ್ಲಿ ಕೆಟ್ಟು ನಿಲ್ಲಬಹುದಾದ ಸ್ಥಿತಿಯಲ್ಲಿ ಇರುತ್ತವೆ. ಆದರೂ ವಿಆರ್ಎಲ್ ಸಂಸ್ಥೆಯ ಎಲ್ಲಾ ಬಸ್ಗಳು ಭರ್ತಿಯಾಗಿರುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇನ್ನಿತರ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಹೋಲಿಸಿದರೆ ವಿಆರ್ಎಲ್ ಸಾರಿಗೆ ಸಂಸ್ಥೆಯ ಪ್ರಯಾಣ ದರ ದುಬಾರಿಯಾಗಿರುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅತ್ಯುತ್ತಮ ಬಸ್ಗಳು, ಅತ್ಯುತ್ತಮ ಬಸ್ ನಿಲ್ದಾಣ ಹೊಂದಿಯೂ ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದಕ್ಕೆ ಮುಖ್ಯ ಕಾರಣ, ಅಪಪ್ರಚಾರ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ರಾತ್ರಿ ಪ್ರಯಾಣ ಸುರಕ್ಷಿತವಲ್ಲ ಎಂಬುದನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಈ ಮಾತಿಗೆ ಪೂರಕವೆನ್ನುವಂತೆ ಕೆಲವು ಸಲ ಕರ್ನಾಟಕ ರಸ್ತೆ ಸಾರಿಗೆ ಬಸ್ಗಳು ಅಪಘಾತಕ್ಕೀಡಾಗಿ ಪ್ರಯಾಣಿಕರ ಜೀವ ತೆಗೆದುಕೊಂಡಿವೆ. ವಿಆರ್ಎಲ್ ಹೊರತು ಪಡಿಸಿದರೆ ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಹಲವು ಬಾರಿ ಅಪಘಾತಕ್ಕೀಡಾಗಿ ಹಲವರ ಜೀವ ತೆಗೆದುಕೊಂಡ ನಿದರ್ಶನಗಳಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲೂ ಸುರಕ್ಷಿತವಾಗಿ ರಾತ್ರಿ ಪ್ರಯಾಣ ಮಾಡಬಹುದು ಎಂಬುದು ನಂಬಿಕೆಯಾಗಿ ನೆಲೆ ನಿಲ್ಲಬೇಕೆಂದರೆ ಮಂತ್ರಿ, ಶಾಸಕರು ಆ ಬಸ್ಗಳಲ್ಲಿ ಪ್ರಯಾಣ ಮಾಡಬೇಕು. ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕರ್ನಾಟಕ ಸರಕಾರದ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡಿ ಎಲ್ಲರೂ ಪ್ರಯಾಣ ಮಾಡಬಹುದು ಎಂದು ಕರೆ ಕೊಟ್ಟಿದ್ದರು. ಇದು ಎಲ್ಲ ಕಡೆ ಮಾದರಿಯಾಗಿ ಅನುಸರಿಸಬೇಕು. ಈಗ ಚಿತ್ರದುರ್ಗ -ಹಿರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ಹಲವು ಜನರ ಜೀವ ಕಿತ್ತುಕೊಂಡ ಸೀಬರ್ಡ್ ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲ ಖಾಸಗಿ ಸಾರಿಗೆ ಸಂಸ್ಥೆಯ ಬಸ್ಗಳ ಮೇಲೆ ತೀವ್ರ ನಿಗಾ ಇಡಬೇಕು. ಖಾಸಗಿ ಸಾರಿಗೆ ಸಂಸ್ಥೆಯ ಬಸ್ಗಳ ಗುಣಮಟ್ಟವನ್ನು ತೀವ್ರ ತಪಾಸಣೆಗೆ ಒಳಪಡಿಸಬೇಕು. ಕರ್ನಾಟಕ ಸರಕಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭ ಮಾಡಲೇಬೇಕು ಎಂಬ ಇರಾದೆ ಇದ್ದಿದ್ದರೆ ಈ ಕೂಡಲೇ ಅದರ ವಿಶ್ವಾಸಾರ್ಹತೆ ಹೆಚ್ಚಿಸಲು ಮುಂದಾಗಬೇಕು. ಅತ್ಯುತ್ತಮ ಬಸ್ಗಳು ಎಲ್ಲ ಮೂಲಭೂತ ಸೌಕರ್ಯ ಹೊಂದಿರುವ ನಿಲ್ದಾಣ ಮತ್ತು ವ್ಯವಸ್ಥಿತ ಡಿಪೋಗಳನ್ನು ಹೊಂದಿರುವ ಕರ್ನಾಟಕ ಸರಕಾರದ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಮ್ಯಾನೇಜ್ ಮೆಂಟ್ ಅಳವಡಿಸಿಕೊಂಡರೆ ಲಾಭವೂ ಮಾಡಬಹುದು. ಹಾಗೆಯೇ ಸುರಕ್ಷಿತ ಪ್ರಯಾಣದ ಭರವಸೆ ಸಾಕಾರ ಮಾಡಿ ಪ್ರಯಾಣಿಕರ ಜೀವ ಉಳಿಸಬಹುದು. ಸೀಬರ್ಡ್ ಖಾಸಗಿ ಸಾರಿಗೆ ಸಂಸ್ಥೆ ಸೇರಿ ಎಲ್ಲ ಖಾಸಗಿ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಮೂಲಭೂತ ಸೌಕರ್ಯ ಹೊಂದಿದ ಬಸ್ ನಿಲ್ದಾಣ ಹೊಂದಲು ಕಡ್ಡಾಯ ಮಾಡಲು, ಯಾವ ಖಾಸಗಿ ಸಾರಿಗೆ ಸಂಸ್ಥೆ ಗುಣಮಟ್ಟದ ಬಸ್, ಉತ್ತಮ ಸೌಕರ್ಯದ ನಿಲ್ದಾಣ ಮತ್ತು ಸುರಕ್ಷಿತ ಪ್ರಯಾಣ ಖಾತ್ರಿ ಪಡಿಸುತ್ತದೆಯೋ ಅಂಥ ಸಂಸ್ಥೆಗಳಿಗೆ ಮಾತ್ರ ಸರಕಾರ ಅನುಮತಿ ನೀಡಬೇಕು. ಸಾರ್ವಜನಿಕ ರಸ್ತೆಗಳನ್ನೇ ಬಸ್ ನಿಲ್ದಾಣವನ್ನಾಗಿ ಮಾಡಿಕೊಳ್ಳುವ ಮತ್ತು ಟ್ರಾಫಿಕ್ ಜನದಟ್ಟಣೆಗೆ ಕಾರಣವಾಗುವ ಎಲ್ಲಾ ಖಾಸಗಿ ಸಾರಿಗೆ ಸಂಸ್ಥೆಗಳ ಪರವಾನಿಗೆ ರದ್ದು ಪಡಿಸಬೇಕು. ಭೀಕರ ಅಪಘಾತ ಮಾಡಿ ಜನರ ಜೀವ ತೆಗೆಯುವ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ ಸೇವೆ ಸ್ಥಗಿತಗೊಳಿಸಬೇಕು. ಕರ್ನಾಟಕ ಸರಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಮುಂದಾಗದ ಹೊರತು ಅಪಘಾತಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ ಅಪಘಾತ ಮಾಡಿ ಜನರ ಜೀವ ತೆಗೆದರೆ ಸಂಬಂಧ ಪಟ್ಟ ಡಿಪೋ ಮ್ಯಾನೇಜರ್ ಅವರನ್ನು ಹೊಣೆಗಾರರನ್ನಾಗಿ ಕ್ರಮ ಜರುಗಿಸಬೇಕು. ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅತ್ಯಂತ ಅನುಭವಿ ರಾಜಕಾರಣಿ. ಗೃಹ ಖಾತೆ ನಿಭಾಯಿಸಿದವರು. ಅವರು ಮನಸ್ಸು ಮಾಡಿದರೆ ಕರ್ನಾಟಕ ಸಾರಿಗೆ ಇಲಾಖೆಗೆ ಹೊಸ ರೂಪ ಕೊಡಬಲ್ಲರು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲ ಮುಖ್ಯಸ್ಥರ ಆಯ್ಕೆಯಲ್ಲಿ ತುಸು ನಿಗಾ ವಹಿಸಿ ಅವರಿಗೆ ಟಾರ್ಗೆಟ್ ಕೊಟ್ಟರೆ ಖಂಡಿತಾ ಲಾಭ ಮಾಡಬಹುದು. ಅಷ್ಟು ಮಾತ್ರವಲ್ಲ ಸುರಕ್ಷಿತ ಪ್ರಯಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅನಿವಾರ್ಯ ಎಂಬ ವಾತಾವರಣ ಮೂಡಿಸಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮತ್ತು ಸರಕಾರದ ಅಧೀನದಲ್ಲಿರುವ ಇನ್ನಿತರ ಸಾರಿಗೆ ಸಂಸ್ಥೆಗಳು ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಿ ವಿಶ್ವಾಸ ಗಳಿಸಿದರೆ ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮಷ್ಟಕ್ಕೆ ಬಾಗಿಲು ಮುಚ್ಚಿಕೊಂಡು ಹೋಗುತ್ತವೆ. ಒಂದೆರಡು ಖಾಸಗಿ ಸಾರಿಗೆ ಸಂಸ್ಥೆಗಳನ್ನು ಹೊರತು ಪಡಿಸಿದರೆ, ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳು ಅಸುರಕ್ಷಿತ ಪ್ರಯಾಣಕ್ಕೆ ಖ್ಯಾತಿ ಪಡೆದಿವೆ. ಅತ್ಯಂತ ಕಳಪೆ ಗುಣಮಟ್ಟದ ಬಸ್ಗಳನ್ನು ಬಳಸುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಗಿಂತಲೂ ಹೆಚ್ಚು ಹಣವನ್ನು ಪೀಕುತ್ತವೆ. ಹಬ್ಬ ಹರಿದಿನದ ಸಂದರ್ಭದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಸುಲಿಗೆ ಮಾಡುತ್ತವೆ. ಭೀಕರ ರಸ್ತೆ ಅಪಘಾತ ಸಂಭವಿಸಿದಾಗ ಸ್ಪಂದಿಸಿ ಮತ್ತೆ ಅದೇ ನಿರ್ಲಕ್ಷ್ಯ ತೋರಿದರೆ ಜನ ಸರಕಾರದ ಮೇಲಿನ ಭರವಸೆ ಕಳೆದುಕೊಳ್ಳುತ್ತಾರೆ. ಖಾಸಗಿ ಸಾರಿಗೆ ಸಂಸ್ಥೆಯ ರಾತ್ರಿ ಬಸ್ ಸೇವೆ ಈ ಕೂಡಲೇ ನಿಲ್ಲಿಸಿದರೆ ಉತ್ತಮ. ಅದು ಸಾಧ್ಯವಾಗದಿದ್ದರೆ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದು. ಆ ಷರತ್ತುಗಳಲ್ಲಿ ಸುರಕ್ಷತೆ ಮತ್ತು ಸ್ವಂತ ಬಸ್ ನಿಲ್ದಾಣ ಹೊಂದುವುದನ್ನು ಕಡ್ಡಾಯಗೊಳಿಸಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವೈಫಲ್ಯವನ್ನೇ ಖಾಸಗಿ ಸಾರಿಗೆ ಸಂಸ್ಥೆಗಳು ಬಂಡವಾಳ ಮಾಡಿಕೊಂಡು ಲಾಭ ಮಾಡುತ್ತಿವೆ. ಕರ್ನಾಟಕ ಸರಕಾರ ತನ್ನ ಸಾರಿಗೆ ಸಂಸ್ಥೆಗಳಲ್ಲಿ ಆಡಳಿತದ ಶಿಸ್ತು ಮತ್ತು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಕಲ್ಪಿಸಿದರೆ ಜನ ಬೇರೆಡೆಗೆ ಕಣ್ಣು ಹಾಯಿಸುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಭೂತ ಸೌಕರ್ಯಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿ ಹೊಂದಿರುವ ಖಾಸಗಿ ಸಾರಿಗೆ ಸಂಸ್ಥೆ ಮಾತ್ರ ಉಳಿದುಕೊಳ್ಳುತ್ತದೆ. ಕರ್ನಾಟಕ ಸರಕಾರ ಚಿತ್ರದುರ್ಗದ ಭೀಕರ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮೃತರ ಗೌರವಾರ್ಥ ಕರ್ನಾಟಕ ಸಾರಿಗೆ ಸಂಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಬೇಕು. ಮೊಸಳೆ ಕಣ್ಣೀರು ಸುರಿಸುವುದರಿಂದ ಯಾರಿಗೂ ಒಳಿತಾಗುವುದಿಲ್ಲ.
ಡಿಸೆಂಬರ್ 27ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 27) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ದಿಲ್ಲಿ : ಮತ್ತೆ ಅತ್ಯಂತ ಕಳಪೆ ಶ್ರೇಣಿಗೆ ಕುಸಿದ ವಾಯುಗುಣಮಟ್ಟ
ಹೊಸದಿಲ್ಲಿ,ಡಿ.26: ಅಲ್ಪ ಕಾಲದ ಬಿಡುವಿನ ಬಳಿಕ ದಿಲ್ಲಿಯಲ್ಲಿ ವಾಯುಗುಣಮಟ್ಟ ಶುಕ್ರವಾರ ಮತ್ತೆ ಹದಗೆಟ್ಟಿದ್ದು, ಅತ್ಯಂತ ಕಳಪೆ ಶ್ರೇಣಿಗೆ ಕುಸಿದಿದೆ. ರಾಜಧಾನಿಯಲ್ಲಿ ಗಾಳಿ ಬೀಸುವ ವೇಗ ಮತ್ತೆ ಕ್ಷೀಣವಾಗಿದ್ದು, ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್ಗೆ ಸಾಧಾರಣ ಏರಿಕೆಯಾಗಿದೆ. ಗುರುವಾರ ತಾಪಮಾನವು 6.5 ಡಿಗ್ರಿ ಸೆಂಟಿಗ್ರೇಡ್ಗೆ ಇಳಿಕೆಯಾಗಿತ್ತು. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಾಳಿಯ ವೇಗವು ಕುಂಠಿತವಾಗುತ್ತಿದ್ದಂತೆಯೇ ಅತ್ಯಂತ ದಟ್ಟವಾದ ಮಂಜು ಆವರಿಸಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ವೇಳೆಗೆ 24 ತಾಸುಗಳ ಸರಾಸರಿ ವಾಯು ಮಾಲಿನ್ಯ ಸೂಚ್ಯಂಕ (ಎಕ್ಯೂಐ)ವು 305 (ಅತ್ಯಂತ ಕಳಪೆ) ಆಗಿತ್ತು. ಇದಕ್ಕೆ ಹೋಲಿಸಿದರೆ ಗುರುವಾರ ಸಂಜೆ 4 ಗಂಟೆಯ ವೇಳೆಗೆ ಎಕ್ಯೂಐ ಮಟ್ಟವು 234 (ಕಳಪೆ ಶ್ರೇಣಿ), ಬುಧವಾರ 271 (ಕಳಪೆ) ಮತ್ತು ಮಂಗಳವಾರ 412 (ತೀವ್ರ)ಆಗಿತ್ತು. ತಾಸಿಗೆ 20 ಕಿ.ಮೀ.ವೇಗದಲ್ಲಿ ಬೀಸಿದ ಗಾಳಿಯು ಈ ವಾರದ ದಿಲ್ಲಿ ಎಕ್ಯೂಐ ಮಟ್ಟವು ಸುಧಾರಣೆಗೊಳ್ಳಲು ನೆರವಾಗಿತ್ತು.
ತ್ಯಾಜ್ಯ ಕೊಂಪೆಯಾದ ಕೃಷಿಗೆ ನೀರು ಒದಗಿಸುವ ಜೀವನದಿಗಳು: ತಾಜ್ಯ ವಿಲೇವಾರಿಯಿಲ್ಲದೆ ಹೂಳು, ನೀರು ಸಂಗ್ರಹದ್ದೇ ಚಿಂತೆ!
ಬೇಸಿಗೆಯಲ್ಲಿ ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಹೂಳು ತೆರವುಗೊಳಿಸುವುದು ದೊಡ್ಡ ಸವಾಲಾಗಿದೆ. ನದಿಗಳಲ್ಲಿ ಪ್ಲಾಸ್ಟಿಕ್, ಆಹಾರ ತ್ಯಾಜ್ಯ ಮತ್ತು ಪ್ರಾಣಿಗಳ ಕಳೇಬರಗಳು ಕಂಡುಬರುತ್ತಿದ್ದು, ನೀರು ಮಲಿನಗೊಂಡು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಮರಳು ನೀತಿಯಿಂದಾಗಿ ಹೂಳು ತೆರವುಗೊಳಿಸಲು ಅಡ್ಡಿಯಾಗುತ್ತಿದೆ.
Gold Price Dec 27: ವಾರವಿಡೀ ಏರಿಕೆ ಕಂಡ ಚಿನ್ನದ ದರ, ಇಂದು ಎಷ್ಟಿದೆ?
ಚಿನ್ನ ಹಾಗೂ ಬೆಳ್ಳಿ ಖರೀದಿದಾರರು ಈ ವಾರವಿಡೀ ಬೆಲೆ ಏರಿಕೆ ಶಾಕ್ನಲ್ಲಿದ್ದಾರೆ. ಚಿನ್ನದ ದರಗಳು ಸೋಮವಾರದಿಂದಲೂ ನಿರಂತರವಾಗಿ ಏರಿಕೆ ಕಾಣುವ ಮೂಲಕ ಬೆಚ್ಚಿಬೀಳಿಸಿವೆ. ಅನೇಕರು ಹೊಸ ವರ್ಷದ ಅಂಗವಾಗಿ ಚಿನ್ನದ ಆಭರಣಗಳನ್ನು ಖರೀದಿಸುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ದುಬಾರಿ ದರಗಳಿಂದ ಚಿನ್ನ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ನಿನ್ನೆ ಕೂಡ ಚಿನ್ನ ಗ್ರಾಂ ಮೇಲೆ 77 ರೂಪಾಯಿವರೆಗೆ
ಕಡಲಾಮೆಗಳು ಬರುವ ಮುನ್ನವೇ ಕರಾವಳಿಯಲ್ಲಿ ರಕ್ಷಣಾ ವಲಯ: 24 ವಿಶಿಷ್ಟ ಗೂಡುಗಳ ಸಿದ್ಧತೆ
ಕರಾವಳಿಯಲ್ಲಿ ಕಡಲಾಮೆಗಳ ಮೊಟ್ಟೆ ಮತ್ತು ಸಂತತಿ ರಕ್ಷಣೆಗೆ ಅರಣ್ಯ ಇಲಾಖೆ ಮುಂಚಿತ ಯೋಜನೆ ಜಾರಿಗೆ ತಂದಿದೆ. ಸಸಿಹಿತ್ಲು, ಇಡ್ಯಾ, ಬೆಂಗ್ರೆ ತೀರಗಳಲ್ಲಿ ವಿಶೇಷ ಸಂರಕ್ಷಣಾ ಗೂಡುಗಳನ್ನು ಸಿದ್ಧಪಡಿಸಲಾಗಿದೆ. ಮೀನುಗಾರರು ಮತ್ತು ಅರಣ್ಯ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ, ಮೊಟ್ಟೆಗಳನ್ನು ಗೂಡುಗಳಿಗೆ ಸ್ಥಳಾಂತರಿಸಿ, ಮರಿಗಳು ಹೊರ ಬರುವವರೆಗೆ ಕಾವಲು ಒದಗಿಸಲಾಗುತ್ತದೆ. ಮರಿಗಳನ್ನು ಸಮುದ್ರಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಮೂಲಕ ನಿಗಾ ಇಡಲಾಗುತ್ತಿದೆ.
ಕ್ರಿಸ್ಮಸ್ ಮೇಲೆ ದಾಳಿ: ಭಾರತದ ವರ್ಚಸ್ಸಿಗೆ ಧಕ್ಕೆ
ವಿಶ್ವಾದ್ಯಂತ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜೀಸಸ್ ವಿಶ್ವಕ್ಕೆ ಹರಡಿ ಹೋದ ತ್ಯಾಗ, ಶಾಂತಿಯ ಸಂದೇಶಗಳನ್ನು ನೆನೆಯಲಾಗುತ್ತದೆ. ಪ್ರಭುತ್ವದ ಕ್ರೌರ್ಯಗಳಿಗೆ ಸೆಡ್ಡು ಹೊಡೆದು ಜನ ಸಾಮಾನ್ಯರ ಧ್ವನಿಯಾದ ಜೀಸಸ್ ತತ್ವ ಆದರ್ಶಗಳು ಇಂದಿಗೂ ಜಗತ್ತನ್ನು ಪೊರೆಯುತ್ತಿವೆೆ. ಕ್ರೈಸ್ತ ಧರ್ಮದ ಸರ್ವೋಚ್ಚ ನಾಯಕ ಪೋಪ್ ಲಿಯೋ ಅವರು ಕ್ರಿಸ್ಮಸ್ ಸಂದೇಶವನ್ನು ಜಗತ್ತಿಗೆ ನೀಡಿದ್ದು, ಈ ಸಂದರ್ಭದಲ್ಲಿ ಇಸ್ರೇಲ್ನ ದೌರ್ಜನ್ಯಗಳಿಗೆ ಬಲಿಯಾಗಿರುವ ಫೆಲೆಸ್ತೀನ್ನ್ನು ನೆನೆದುಕೊಂಡಿದ್ದಾರೆ. ಗಾಝಾದಲ್ಲಿ ಅತಂತ್ರ ಬದುಕನ್ನು ಕಳೆಯುತ್ತಿರುವ ಸಾವಿರಾರು ಜನರ ಪರಿಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಸ್ಮಸ್ ಆಚರಣೆಯೆಂದರೆ ಕುಣಿತ, ಕುಡಿತವಲ್ಲ. ದಮನಿತರ ಪರವಾಗಿ ಧ್ವನಿಯೆತ್ತುವ ಮೂಲಕ, ಶೋಷಿತರ ಸಂಕಟಗಳಿಗೆ ಸ್ಪಂದಿಸುವ ಮೂಲಕ ಕ್ರಿಸ್ಮಸ್ ದಿನವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಅವರು ಪರೋಕ್ಷವಾಗಿ ಜಗತ್ತಿಗೆ ಕರೆ ನೀಡಿದ್ದಾರೆ. ಭಾರತದಲ್ಲೂ ಕ್ರಿಸ್ಮಸ್ ಸಂಭ್ರಮ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ. ಭಾರತದಲ್ಲಿ ತಮ್ಮ ಸೇವೆಯ ಮೂಲಕವೇ ಕ್ರಿಶ್ಚಿಯನ್ ಮಿಷನರಿಗಳು ಕ್ರೈಸ್ತ ಧರ್ಮವನ್ನು ಹರಡಿದರು. ಬಡವರು, ರೋಗಿಗಳು, ದಲಿತರ ಸೇವೆಯನ್ನು ಧಾರ್ಮಿಕ ಮೌಲ್ಯಗಳಾಗಿ ಹರಡಿದ ಹೆಗ್ಗಳಿಕೆ ಕ್ರೈಸ್ತರಿಗೆ ಸೇರಬೇಕು. ಇವರ ಸೇವೆ ಮುಂದೆ ಎಲ್ಲ ಧರ್ಮೀಯರಿಗೂ ಮಾದರಿಯಾಯಿತು. ಇಂದು ಕ್ರೈಸ್ತ ಧರ್ಮೀಯರ ಸಂಭ್ರಮದಲ್ಲಿ ಪ್ರಧಾನಿ ಮೋದಿಯವರೂ ಭಾಗಿಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ಗುರುವಾರ ಕ್ಯಾಥೆಡ್ರಲ್ ಚರ್ಚೊಂದರಲ್ಲಿ ಪ್ರಧಾನಿ ಮೋದಿಯವರು ಪ್ರಾರ್ಥನಾ ಸಭೆಯಲ್ಲಿ ಪಾಲುಗೊಂಡು, ಕ್ರಿಸ್ತನ ಸ್ತುತಿಗೀತೆಗಳಿಗೆ ಧ್ವನಿ ಸೇರಿಸಿದ್ದಾರೆ. ಪ್ರಾರ್ಥನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿಯವರು ‘‘ದಿಲ್ಲಿಯ ಕ್ಯಾಥೆಡ್ರಲ್ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಸಾರುತ್ತದೆ. ಕ್ರಿಸ್ಮಸ್ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಉತ್ತೇಜಿಸಲಿ’’ ಎಂದು ಆಶಿಸಿದರು. ಆದರೆ ಇವರ ಸಂದೇಶವನ್ನು ಅಣಕಿಸುವಂತೆ, ದೇಶಾದ್ಯಂತ ಸಂಘಪರಿವಾರ ಕಾರ್ಯಕರ್ತರೆಂದು ಗುರುತಿಸಿಕೊಂಡ ಕೆಲವು ದುಷ್ಕರ್ಮಿಗಳು ಕ್ರಿಸ್ಮಸ್ ಆಚರಣೆಯ ವೇಳೆ ಕ್ರೈಸ್ತರ ವಿರುದ್ಧ ದಾಳಿ ಸಂಘಟಿಸಿದ್ದಾರೆ. ನೆರೆಯ ಕೇರಳವೂ ಸೇರಿದಂತೆ ದೇಶಾದ್ಯಂತ ಈ ದಾಳಿಗಳು ನಡೆದಿದ್ದು, ಪ್ರಧಾನಿ ಇವುಗಳ ವಿರುದ್ಧ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನಾಗಲಿ, ಖಂಡನಾ ಹೇಳಿಕೆಯನ್ನಾಗಲಿ ನೀಡಿಲ್ಲ. ಕೇರಳದಲ್ಲಿ 15 ವರ್ಷದ ಮಕ್ಕಳ ಕ್ಯಾರೊಲ್ ಗುಂಪಿನ ಮೇಲೆ ಸಂಘಪರಿವಾರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯ ಮುಖಂಡ ಸಿ. ಕೃಷ್ಣಕುಮಾರ್ ಎಂಬಾತ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘‘ಕ್ಯಾರೊಲ್ ತಂಡ ಅಪರಾಧಿಗಳ ಗುಂಪಾಗಿದ್ದು ಸದಸ್ಯರು ಪಾನಮತ್ತರಾಗಿದ್ದರು’’ ಎಂದು ಅವರು ಆರೋಪಿಸಿದ್ದಾರೆ. ಆದರೆ ತಂಡದಲ್ಲಿದ್ದವರೆಲ್ಲರೂ ಬಾಲಕರು ಮತ್ತು ಅಪ್ರಾಪ್ತ ವಯಸ್ಸಿನ ಯುವಕರಾಗಿದ್ದರು. ಅವರು ಸಾರ್ವಜನಿಕವಾಗಿ ಯಾವುದೇ ದಾಂಧಲೆಗಳನ್ನು ಮಾಡಿದ ಬಗ್ಗೆ ದೂರುಗಳು ಇದ್ದಿರಲಿಲ್ಲ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಅವರು ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಆ ಮೆರವಣಿಗೆಯಲ್ಲಿ ಯಾವುದೇ ಹಿಂದೂ ವಿರೋಧಿ ಘೋಷಣೆಗಳು ಇರಲಿಲ್ಲ. ಬದಲಿಗೆ, ಕ್ರಿಸ್ತನ ಸಂದೇಶಗಳ ಹಾಡುಗಳನ್ನು ಅವರು ಹಾಡುತ್ತಿದ್ದರು. ಇಷ್ಟಾದರೂ ಇವರ ಮೇಲೆ ದಾಳಿಗಳನ್ನು ನಡೆಸಲಾಯಿತು. ಕ್ರಿಸ್ಮಸ್ ಆಚರಣೆ ನಡೆಸುತ್ತಿದ್ದ ವೇಳೆ ಕೇರಳದ ಹಲವೆಡೆ ಈ ದಾಳಿ ನಡೆದಿದ್ದು, ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕ್ರಿಸ್ಮಸ್ ವಿರುದ್ಧದ ಅಸಹನೆಯ ನೇತೃತ್ವವನ್ನು ಅಲ್ಲಿನ ಸರಕಾರವೇ ಹೊತ್ತುಕೊಂಡಿದೆ. ಸರಕಾರವು ಶಾಲೆಗಳ ಕ್ರಿಸ್ಮಸ್ ರಜೆಯನ್ನು ರದ್ದುಗೊಳಿಸಿದ್ದು ಅದೇ ದಿನ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಆಚರಿಸುವಂತೆ ಹಾಗೂ ಹಾಜರಾತಿ ಕಡ್ಡಾಯಗೊಳಿಸುವಂತೆ ಆದೇಶ ನೀಡಿದೆ. ಛತ್ತೀಸ್ಗಡದ ರಾಯಪುರದಲ್ಲಿ ಸಂಘಪರಿವಾರದ ದೊಡ್ಡ ಗುಂಪೊಂದು ಶಾಪಿಂಗ್ ಮಾಲ್ಗೆ ನುಗ್ಗಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮಾಡಿದ ಅಲಂಕಾರಗಳನ್ನು ಧ್ವಂಸ ಮಾಡಿದೆ. ಸಾಂತಕ್ಲಾಸ್ ಪ್ರತಿಮೆಗೂ ಹಾನಿ ಮಾಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಕ್ರಿಸ್ಮಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಚರ್ಚ್ ಮುಂಭಾಗ ಹನುಮಾನ್ ಚಾಲೀಸ ಪಠಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಂಧ ಕ್ರಿಶ್ಚಿಯನ್ ಮಹಿಳೆಯ ಮೇಲೆಯೇ ಬಿಜೆಪಿ ನಾಯಕಿಯೊಬ್ಬಳು ದೌರ್ಜನ್ಯ ಎಸಗಿದ್ದಾಳೆ. ಅಸ್ಸಾಮಿನಲ್ಲೂ ಕ್ರಿಶ್ಚಿಯನ್ನರ ಮೇಲೆ ದಾಳಿಗಳು ನಡೆದಿವೆ. ವಿಪರ್ಯಾಸವೆಂದರೆ, ಬೀದಿ ಬದಿಯಲ್ಲಿ ಕ್ರಿಸ್ಮಸ್ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಮೇಲೂ ಹಲ್ಲೆಗಳು ನಡೆದಿವೆ. ಅವರು ವ್ಯಾಪಾರ ಮಾಡದಂತೆ ಗುಂಪುಗಳು ತಡೆದಿವೆ. ಈ ವ್ಯಾಪಾರಿಗಳೇನೂ ಕ್ರಿಶ್ಚಿಯನ್ನರಾಗಿರಲಿಲ್ಲ. ಯಾವುದೇ ಹಬ್ಬಗಳು ಬರಲಿ, ವ್ಯಾಪಾರಿಗಳು ಧರ್ಮವನ್ನು ನೋಡದೆಯೇ ಆಯಾ ಹಬ್ಬಗಳಿಗೆ ಸಂಬಂಧಿಸಿದ ಸಲಕರಣೆಗಳನ್ನು ಮಾರುತ್ತಾರೆ. ದುಷ್ಕರ್ಮಿಗಳ ಪುಂಡಾಟಗಳಿಂದಾಗಿ ವ್ಯಾಪಾರ ಉದ್ದಿಮೆಗಳಿಗೂ ಭಾರೀ ಧಕ್ಕೆ ಉಂಟಾಗಿದೆ. ಕ್ರಿಶ್ಚಿಯನ್ನರು ಆಮಿಶಗಳನ್ನು ಒಡ್ಡಿ ಮತಾಂತರ ಮಾಡುತ್ತಾರೆ ಎಂದು ಈವರೆಗೆ ಸಂಘಪರಿವಾರ ಆರೋಪಿಸುತ್ತಿತ್ತು. ಇದೀಗ ಅವರು ತಮ್ಮ ಧರ್ಮದ ಹಬ್ಬ ಆಚರಣೆ ಮಾಡುವುದರಿಂದ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ರೀತಿಯಲ್ಲಿ ಕ್ಯಾತೆ ತೆಗೆಯ ತೊಡಗಿದೆ. ಒಂದು ವೇಳೆ ಕ್ರಿಸ್ಮಸ್ ಆಚರಣೆಯಿಂದ ಹಿಂದೂಧರ್ಮಕ್ಕೆ ತೊಂದರೆಯಾಗುತ್ತದೆಯಾದರೆ ಸಂಘಪರಿವಾರ ಸಂಘಟನೆಗಳು ಮೊದಲು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಳ್ಳಬೇಕು. ಯಾಕೆಂದರೆ, ಸ್ವತಃ ಪ್ರಧಾನಿ ಮೋದಿಯವರೇ ಕ್ರಿಸ್ಮಸ್ನಲ್ಲಿ ಭಾಗವಹಿಸಿ ಏಸುವಿನ ಸ್ತುತಿಗೀತೆಯನ್ನು ಹಾಡಿದ್ದಾರೆ. ಈ ಹಿಂದೆ ಗಣೇಶೋತ್ಸವ ಆಚರಣೆಯ ಹೆಸರಿನಲ್ಲಿ ಹಲವೆಡೆ ಕೋಮು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ‘ಮೆರವಣಿಗೆಯ ಮೇಲೆ ಅನ್ಯಧರ್ಮೀಯರು ಕಲ್ಲು ತೂರಾಟ ಮಾಡಿದ್ದಾರೆ’ ಎಂದು ಆರೋಪಿಸಿ ಬಡವರ ಮನೆ, ಅಂಗಡಿ, ಮುಂಗಟ್ಟುಗಳಿಗೆ ಸಂಘಪರಿವಾರ ಕಾರ್ಯಕರ್ತರು ಹಾನಿ ಉಂಟು ಮಾಡಿದ್ದರು. ಸ್ವತಃ ಹಿಂದೂ ಧರ್ಮದ ಹಬ್ಬಗಳನ್ನು ತಮ್ಮ ದ್ವೇಷ ರಾಜಕಾರಣಗಳಿಗೆ ದುರ್ಬಳಕೆ ಮಾಡುತ್ತಾ ಬಂದ ಸಂಘಪರಿವಾರ ಕಾರ್ಯಕರ್ತರು ಇದೀಗ ಇತರ ಧರ್ಮೀಯರ ಹಬ್ಬ ಆಚರಣೆಗಳ ಮೇಲೂ ದಾಳಿ ನಡೆಸಿ ಸ್ವತಃ ಹಿಂದೂ ಧರ್ಮಕ್ಕೆ ಇನ್ನಷ್ಟು ಕಳಂಕಗಳನ್ನು ಬಳಿಯುತ್ತಿದ್ದಾರೆ. ಸಂಘಪರಿವಾರ ಕಾರ್ಯಕರ್ತರ ಈ ದಾಂಧಲೆಗಳಿಂದ ಕ್ರೈಸ್ತ ಧರ್ಮಕ್ಕೆ ಯಾವ ಹಾನಿಯೂ ಉಂಟಾಗುವುದಿಲ್ಲ. ಬದಲಿಗೆ ಹಿಂದೂ ಧರ್ಮದ ಬಗ್ಗೆ ಜಾಗತಿಕವಾಗಿ ತಪ್ಪು ಕಲ್ಪನೆಗಳು ಹೆಚ್ಚುತ್ತವೆ. ಒಂದೆಡೆ ಭಾರತದಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗುತ್ತಿದೆ. ದಲಿತ ಯುವಕನನ್ನು ವರಿಸಿದ ತಪ್ಪಿಗೆ ಮೇಲ್ಜಾತಿಯ ಮಹಿಳೆಯನ್ನು ಕುಟುಂಬಸ್ಥರೇ ಕೊಂದು ಹಾಕುತ್ತಾರೆ ಮತ್ತು ಸಾರ್ವಜನಿಕವಾಗಿ ಅದನ್ನು ಸಮರ್ಥಿಸಲಾಗುತ್ತದೆ. ಇಂತಹ ಕೃತ್ಯಗಳಿಂದಾಗಿ ಶೋಷಿತ ಸಮುದಾಯ ಹಿಂದೂ ಧರ್ಮದ ಬಗ್ಗೆ ಭ್ರಮನಿರಸನಗೊಳ್ಳುತ್ತಿದೆ. ಹಿಂದೂ ಧರ್ಮದೊಳಗಿರುವ ಮುಖಂಡರು ಈ ಕುಂದುಕೊರತೆಗಳನ್ನು ಸರಿಪಡಿಸಬೇಕು. ಹಿಂದೂ ಧರ್ಮದೊಳಗೆ ನಡೆಯುವ ಇಂತಹ ಹೀನ ಕೃತ್ಯಗಳನ್ನು ಖಂಡಿಸಬೇಕು. ಇತ್ತೀಚೆಗೆ ಬಾಂಗ್ಲಾದಲ್ಲಿ ದಂಗೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿತ್ತು. ಆದರೆ, ಭಾರತದಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ಮುಸ್ಲಿಮರು, ದಲಿತರು ಮತ್ತು ಕ್ರೈಸ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಂತಹ ದಾಳಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದರೆ, ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅಥವಾ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ವ್ಯಕ್ತಪಡಿಸುವ ಕಳವಳವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಾರರು.
81 ದೇಶಗಳಿಂದ 24,600 ಭಾರತೀಯರು ಗಡೀಪಾರು; ಅಗ್ರಸ್ಥಾನದಲ್ಲಿ ಸೌದಿ ಅರೇಬಿಯಾ
ಹೈದರಾಬಾದ್: ವಿಶ್ವಾದ್ಯಂತ 81 ದೇಶಗಳು 2025ರಲ್ಲಿ 24,600 ಮಂದಿ ಭಾರತೀಯರನ್ನು ಗಡೀಪಾರು ಮಾಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯಸಭೆಯಲ್ಲಿ ಇತ್ತೀಚೆಗೆ ನೀಡಿದ ಮಾಹಿತಿಯಿಂದ ತಿಳಿದುಬಂದಿವೆ. ಕಳೆದ ಹನ್ನೆರಡು ತಿಂಗಳಲ್ಲಿ 11 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಗಡೀಪಾರು ಮಾಡಿರುವ ಸೌದಿಅರೇಬಿಯಾ ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿದೆ. ಅಮೆರಿಕದಿಂದ ಭಾರತೀಯರ ಗಡೀಪಾರು ದೊಡ್ಡ ಸುದ್ದಿಯಾಗಿತ್ತು. ಆದರೆ ಸೌದಿ ಅರೇಬಿಯಾದಿಂದ ಗಡೀಪಾರಾದವರ ಸಂಖ್ಯೆಗೆ ಹೋಲಿಸಿದರೆ, ಅಮೆರಿಕದಿಂದ 2025ರಲ್ಲಿ 3800 ಮಂದಿ ಭಾರತೀಯರು ಗಡೀಪಾರಾಗಿದ್ದಾರೆ. ಇವರಲ್ಲಿ ಖಾಸಗಿ ಉದ್ಯೋಗಿಗಳೇ ಅಧಿಕ. ಕಳೆದ ಐದು ವರ್ಷದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿ ಹೇಳಿದೆ. ಟ್ರಂಪ್ ಆಡಳಿತದಿಂದ ಅಕ್ರಮ ವಲಸೆ ವಿರುದ್ಧ ಕಾರ್ಯಾಚರಣೆ, ದಾಖಲೆಗಳ ಪರಿಶೀಲನೆ ಹೆಚ್ಚಳ, ವೀಸಾ ಸ್ಥಿತಿಗತಿ, ಉದ್ಯೋಗ ದೃಢೀಕರಣ, ಅವಧಿ ಮೀರಿ ವಾಸವಿರುವುದು ಇದಕ್ಕೆ ಮುಖ್ಯ ಕಾರಣ ಎಂದ ತಜ್ಞರು ಹೇಳಿದ್ದಾರೆ.
'ಗಡಿ ತೆರೆಯಿರಿ, ನಮ್ಮನ್ನು ಭಾರತಕ್ಕೆ ಬರಲು ಬಿಡಿ': ಬಾಂಗ್ಲಾ ಹಿಂದೂಗಳಿಂದ ಮೋದಿ ಸರ್ಕಾರಕ್ಕೆ ಕಳಕಳಿಯ ಮನವಿ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಹತ್ಯೆಗಳಿಂದಾಗಿ, ಅಲ್ಲಿನ ಅಲ್ಪಸಂಖ್ಯಾತರು ಭಾರತದ ಗಡಿ ತೆರೆಯುವಂತೆ ಮನವಿ ಮಾಡುತ್ತಿದ್ದಾರೆ. ಇಸ್ಲಾಮಿಕ್ ಗುಂಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇದು ಅವರ ಏಕೈಕ ಮಾರ್ಗವಾಗಿದೆ. ರಾಜಕೀಯ ಬದಲಾವಣೆಗಳ ಭೀತಿಯೂ ಅವರ ಆತಂಕವನ್ನು ಹೆಚ್ಚಿಸಿದೆ. ಭಾರತದಲ್ಲಿರುವ ಹಿಂದೂ ನಿರಾಶ್ರಿತರು ಕೂಡ ಈ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಡಿ ತೆರೆಯುವ ಮೂಲಕ ಹಿಂಸಾಚಾರದಿಂದ ರಕ್ಷಣೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಸಹೋದ್ಯೋಗಿ ವಜಾ ವಿರುದ್ಧ ಆಕ್ರೋಶ: ಹಿಮಾಚಲ ವೈದ್ಯರ ಅನಿರ್ದಿಷ್ಟ ಮುಷ್ಕರ
ಶಿಮ್ಲಾ: ರೋಗಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸರ್ಕಾರಿ ವೈದ್ಯರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರತಿಭಟಿಸಿ, ಶನಿವಾರ ಬೆಳಿಗ್ಗೆ 9.30ರಿಂದ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಲು ಹಿಮಾಚಲ ಪ್ರದೇಶದ ಇಂದಿರಾಗಾಂಧಿ ಮೆಡಿಕಲ್ ಕಾಲೇಜು ಸನಿವಾಸ ವೈದ್ಯರ ಸಂಘ ನಿರ್ಧರಿಸಿದೆ. ಡಿ.22ರಂದು ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಲ್ಲಿಕೆಯಾಗಿದ್ದ ವರದಿಯ ಶಿಫಾರಸ್ಸಿನಂತೆ ವಜಾಗೊಂಡಿರುವ ಡಾ.ರಾಘವ್ ನಿರೂಲಾ ಅವರನ್ನು ತಕ್ಷಣ ಸೇವೆಗೆ ನಿಯೋಜಿಸಿಕೊಳ್ಳಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ. ಹಿಮಾಚಲ ಪ್ರದೇಶ ವೈದ್ಯಕೀಯ ಅಧಿಕಾರಿಗಳ ಸಂಘ ಮತ್ತು ಇತರ ಕಾಲೇಜುಗಳ ವೈದ್ಯರ ಸಂಘಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ರಾಜ್ಯಾದ್ಯಂತ ಎಲ್ಲ ಸರ್ಕಾರಿ ವೈದ್ಯರು ಪ್ರತಿಭಟನೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಎಲ್ಲ ಸಾಮಾನ್ಯ ಸೇವೆಗಳು ಅಂದರೆ ಹೊರರೋಗಿ ವಿಭಾಗಗಳು ಮತ್ತು ಆಯ್ದ ಆಪರೇಷನ್ ಥಿಯೇಟರ್ಗಳು ಮುಚ್ಚಿರುತ್ತವೆ; ಆದರೆ ತುರ್ತು ಸೇವೆಗಳು ಕಾರ್ಯ ನಿರ್ವಹಿಸಲಿವೆ ಎಂದು ಐಜಿಎಂಸಿ ಆರ್ಡಿಎ ಶುಕ್ರವಾರ ಪ್ರಕಟಿಸಿದೆ. ಹೊಸದಾಗಿ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಭರವಸೆ ನೀಡಿದ್ದರೂ ವೈದ್ಯರು ಮಣಿದಿಲ್ಲ. ನರೂಲಾ ಅವರನ್ನು ವಜಾಗೊಳಿಸಿರುವುದು ಗುಂಪು ವಿಚಾರಣೆಯ ಹಿನ್ನೆಲೆಯಲ್ಲಿ ಎಂದು ವೈದ್ಯರು ಆಪಾದಿಸಿದ್ದಾರೆ. ನರೂಲಾ ಅವರು ರೋಗಿಯೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ಮತ್ತು ಬೆಡ್ ಮೇಲೆ ಮಲಗಿದ್ದ ರೋಗಿಯನ್ನು ಒದೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆದರೆ ನರೂಲಾ ಅವರ ಅಭಿಪ್ರಾಯವನ್ನು ತನಿಖಾಧಿಕಾರಿಗಳು ಪರಿಗಣಿಸಿಲ್ಲ ಹಾಗೂ ಸೇವೆಯಿಂದ ವಜಾಗೊಳಿಸಿರುವುದು ನ್ಯಾಯಸಮ್ಮತವಲ್ಲ ಎನ್ನುವುದು ವೈದ್ಯರ ವಾದ. ತುರ್ತು ಹಾಗೂ ಅತಿಗಣ್ಯರ ಕರ್ತವ್ಯ ಹೊರತುಪಡಿಸಿ ಸರ್ಕಾರಿ ವೈದ್ಯರು ಈಗಾಗಲೇ ಸಾಂದರ್ಭಿಕ ರಜೆಯಲ್ಲಿ ತೆರಳಿದ್ದು, ನಾಗರಿಕರಿಗೆ ಮುಷ್ಕರದ ಬಿಸಿ ತಟ್ಟಿದೆ. ಕುಲು, ಧರ್ಮಶಾಲಾ, ಉನಾ ಮತ್ತು ಮಂಡಿ ಪ್ರಾದೇಶಿಕ ಮತ್ತು ವಿಭಾಗೀಯ ಆಸ್ಪತ್ರೆಗಳ ಓಪಿಡಿ ಕೇಂದ್ರಗಳ ಮುಂದೆ ದೊಡ್ಡ ಸರದಿ ಸಾಲುಗಳು ಕಂಡುಬರುತ್ತಿವೆ.
ಮದುವೆ ಮಾಡಿಕೊಟ್ಟ ಹೆಣ್ಣಿಗೆ ಆಸ್ತಿ ಕೊಡದಂತೆ ಕೋರ್ಟ್ ಆದೇಶ! ಹೊಸ ರೂಲ್ಸ್? –ಯಾರಿಗೆ ಅನ್ವಯ?
ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ (Ancestral Property) ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣು ಮಕ್ಕಳಿಗೂ ಹಕ್ಕಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯು ಈ ಹಕ್ಕನ್ನು ಬಲಪಡಿಸಿದೆ. ಆದರೆ, ಇತ್ತೀಚೆಗೆ ನಡೆದ 4 ಎಕರೆ ಜಮೀನಿನ ವಿವಾದವೊಂದರಲ್ಲಿ ಹೈಕೋರ್ಟ್, “ಈ ಪ್ರಕರಣದಲ್ಲಿ ವಿವಾಹಿತ ಮಗಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ” ಎಂದು ಮಹತ್ವದ ತೀರ್ಪು ನೀಡಿದೆ. ಹಾಗಾದರೆ, ಈ ಪ್ರಕರಣದಲ್ಲಿ ಮಗಳಿಗೆ ಆಸ್ತಿ ನಿರಾಕರಿಸಲು ಕಾರಣವೇನು? ಕಾನೂನು ಏನು ಹೇಳುತ್ತದೆ? ಈ ತೀರ್ಪು ... Read more The post ಮದುವೆ ಮಾಡಿಕೊಟ್ಟ ಹೆಣ್ಣಿಗೆ ಆಸ್ತಿ ಕೊಡದಂತೆ ಕೋರ್ಟ್ ಆದೇಶ! ಹೊಸ ರೂಲ್ಸ್? – ಯಾರಿಗೆ ಅನ್ವಯ? appeared first on Karnataka Times .
Karnataka Weather: ಕರ್ನಾಟಕದ 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಕನಿಷ್ಠ ತಾಪಮಾನ ದಾಖಲು
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿಯುತ್ತಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಹಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಕ್ರಮೇಣ ಏರಿಕೆ ಕಾಣಲಿದೆ. ರಾಜ್ಯದ ಬಯಲು ಪ್ರದೇಶಗಳ ಪೈಕಿ ವಿಜಯಪುರದಲ್ಲಿ 9.5 ಡಿಗ್ರಿ
ವರನಟ ಡಾ. ರಾಜ್ ಕುಮಾರ್ ಪ್ರೇರಣೆ - ಮೈಸೂರಿನ ಈ ದೇಗುಲದಲ್ಲಿ ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆ ಗುರಿ
ಮೈಸೂರು ನಗರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧವಾಗಿದೆ. ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನವು 2 ಲಕ್ಷ ಲಡ್ಡುಗಳನ್ನು ತಯಾರಿಸುತ್ತಿದೆ. 1994ರಲ್ಲಿ ಡಾ.ರಾಜ್ಕುಮಾರ್ ಅವರ ಪ್ರೇರಣೆಯಿಂದ ಆರಂಭವಾದ ಈ ಸೇವೆ ಈಗ ವಿಸ್ತರಿಸಿದೆ. ಹೊಸ ವರ್ಷದಂದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು. ಲೋಕ ಕಲ್ಯಾಣಕ್ಕಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಹೊಸ ಪಕ್ಷ ಸ್ಥಾಪನೆ: ಚುನಾವಣಾ ಕಣಕ್ಕೆ ಧುಮುಕಿದ ಬಿಎಂಜೆಪಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಮೈನಾರಿಟಿ ಜಂತಾ ಪಾರ್ಟಿ (BMJP) ಎಂಬ ಹೊಸ ಪಕ್ಷವು ಫೆಬ್ರವರಿ ಚುನಾವಣೆಯಲ್ಲಿ 91 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಲು ಸಿದ್ಧವಾಗಿದೆ. ಪಕ್ಷವು 40-45 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ ಮತ್ತು ಹಿಂದೂಗಳು ಭಯವಿಲ್ಲದೆ ಮತ ಚಲಾಯಿಸಲು ಸುರಕ್ಷಿತ ವಾತಾವರಣವನ್ನು ಕೋರಿದೆ.
2025ರಲ್ಲಿ 81 ದೇಶಗಳಿಂದ 25 ಸಾವಿರ ಭಾರತೀಯರ ಗಡೀಪಾರು! ಅಮೆರಿಕಕ್ಕಿಂತ ಸೌದಿಯಿಂದಲೇ ಹೆಚ್ಚು ಬಹಿಷ್ಕಾರ!
2025 ರಲ್ಲಿ 81 ದೇಶಗಳಿಂದ 24,600 ಕ್ಕೂ ಹೆಚ್ಚು ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಸೌದಿ ಅರೇಬಿಯಾದಿಂದ 11,000 ಕ್ಕೂ ಹೆಚ್ಚು ಭಾರತೀಯರನ್ನು ಹೊರಹಾಕಲಾಗಿದೆ. ಅಮೆರಿಕಾದಿಂದ 3,800 ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ವೀಸಾ ಅವಧಿ ಮೀರುವುದು, ದಾಖಲೆಗಳ ಪರಿಶೀಲನೆ, ಕೆಲಸದ ಪರವಾನಗಿ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಮ್ಯಾನ್ಮಾರ್, ಯುಎಇ, ಬಹರೇನ್, ಮಲೇಷ್ಯಾ, ಥೈಲ್ಯಾಂಡ್, ಕಾಂಬೋಡಿಯಾ ದೇಶಗಳಿಂದಲೂ ಗಡಿಪಾರು ನಡೆದಿದೆ. ಸೈಬರ್ ಗುಲಾಮಗಿರಿಯೂ ಒಂದು ಕಾರಣವಾಗಿದೆ.
ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ - ಬೆಂಗಳೂರು ಫಸ್ಟ್, ಮಂಗಳೂರು ಮೈಸೂರು ಸೆಕೆಂಡ್
ಬೆಂಗಳೂರು ಮಾದಕ ದ್ರವ್ಯಗಳ ಕೇಂದ್ರವಾಗಿದ್ದು, ಈ ವರ್ಷ 5930 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿಯೇ 1099 ಪ್ರಕರಣಗಳು ವರದಿಯಾಗಿವೆ. ಹೊರ ರಾಜ್ಯ, ದೇಶಗಳಿಂದಲೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿದೆ. ಗ್ರಾಮೀಣ ಭಾಗಕ್ಕೂ ಇದು ವ್ಯಾಪಿಸಿದ್ದು, ಯುವಕರು ಇದರ ದಾಸರಾಗುತ್ತಿದ್ದಾರೆ. ಕಠಿಣ ಶಿಕ್ಷೆ ಮತ್ತು ಮೂಲದ ಮೇಲೆ ದಾಳಿ ಅಗತ್ಯವಿದೆ.
ಭೂಮಾಲೀಕರಿಗೆ ಪಾವತಿಯಾಗದ ಪರಿಹಾರ; 17 ವರ್ಷಗಳ ಹಿಂದಿನ ಭೂಸ್ವಾಧೀನ ಅಧಿಸೂಚನೆ ರದ್ದು
ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ (ಬಿಎಂಐಸಿಪಿ) 17 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣದ ತಲಘಟ್ಟಪುರದಲ್ಲಿ 1 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಂಗಳೂರಿನ ಯಲಚೇನಹಳ್ಳಿಯ ರತ್ನಾ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಭೂಮಿಯ ಸರ್ವೇ ಸಂಖ್ಯೆಗೆ ಸೀಮಿತವಾಗಿ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿದೆ. ಅಂತಿಮ ಅಧಿಸೂಚನೆಯಾಗಿ 17 ವರ್ಷಗಳಾದರೂ ಪರಿಹಾರ ಪಾವತಿಸಿಲ್ಲ. ಪ್ರತಿವಾದಿಗಳು ಇದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಇಂಥ ಅಸಾಧಾರಣ ನಿಷ್ಕ್ರಿಯತೆಯು ಕಾನೂನನ್ನು ವಿಫಲಗೊಳಿಸುವುದರ ಜತೆಗೆ ಸ್ವಾಧೀನವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅರ್ಜಿದಾರರ ವಾದದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿದಾರರ ಭೂಮಿ ಸ್ವಾಧೀನಕ್ಕೆ ಹೊರಡಿಸಲಾಗಿದ್ದ ಅಧಿಸೂಚನೆ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ವಾದ ಮಂಡಿಸಿದ್ದ ರತ್ನಾ ರೆಡ್ಡಿ ಪರ ಹಿರಿಯ ವಕೀಲ ಎಚ್.ಎನ್. ಶಶಿಧರ ಅವರು, 2008ರಲ್ಲೇ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದ್ದರೂ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆದಿಲ್ಲ ಮತ್ತು ಪರಿಹಾರವನ್ನೂ ಪಾವತಿಸಿಲ್ಲ. ಇದರಿಂದ ಭೂಸ್ವಾಧೀನ ಪ್ರಕ್ರಿಯೆಯು ಸಿಂಧುವಾಗುವುದಿಲ್ಲ. ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರತ್ನಾ ರೆಡ್ಡಿಯವರಿಂದ ಪಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಭೂಮಿ ಇಂದಿಗೂ ಅವರ ಬಳಿಯೇ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಬಿಎಂಐಸಿಪಿಯು ನಿಯಮಕ್ಕೆ ವಿರುದ್ಧವಾಗಿ ಹಿಂಬರಹ ನೀಡಿದ್ದು, ನಂದಿ ಮೂಲಸೌಕರ್ಯ ಕಾರಿಡಾರ್ ಸಂಸ್ಥೆಯು (ನೈಸ್) ವಿವಾದಿತ ಭೂಮಿ ಬೇರೊಂದು ಕಾರಣಕ್ಕೆ ಬೇಕು ಎಂದು ಹೇಳಲಾಗದು. ನೈಸ್ ಸಂಸ್ಥೆಯು ರಿಯಾಯಿತಿದಾರ ಮಾತ್ರ, ಬಿಎಂಐಸಿಪಿಯ ತಾಂತ್ರಿಕ ನಿರ್ಣಯವನ್ನು ನೈಸ್ ಅತಿಕ್ರಮಿಸಲಾಗದು ಎಂದು ಆಕ್ಷೇಪಿಸಿದ್ದರಲ್ಲದೆ, 554 ಎಕರೆ ಹೆಚ್ಚುವರಿ ಭೂಮಿಯನ್ನು ವರ್ಗಾಯಿಸಲಾಗಿದ್ದು, ಮುಂದೆ ಯಾವುದೇ ಭೂಮಿಯನ್ನು ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಪ್ರತಿವಾದಿಗಳಾದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ನೈಸ್ ಮತ್ತು ಇತರ ರಾಜ್ಯ ಸಂಸ್ಥೆಗಳ ಪರ ವಕೀಲರು, ಸುಮಾರು 2 ದಶಕಗಳ ಹಿಂದೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅರ್ಜಿದಾರರು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಮಾನ್ಯ ಮಾಡಬಾರದೆಂದು ಕೋರಿದ್ದರು. ನೈಸ್ ಪರ ವಕೀಲರು, ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸಲು (ಎನ್ಎಚ್ 209) ಅನ್ನು ಬಿಎಂಐಸಿಪಿಯ ಬಾಹ್ಯ ರಸ್ತೆಯೊಂದಿಗೆ ಸಂಪರ್ಕಿಸುವ ರ್ಯಾಂಪ್ ನಿರ್ಮಿಸಲು ಭೂಮಿ ಅಗತ್ಯವಿದೆ. ಅರ್ಜಿದಾರರು ಭೂಮಿ ಹಸ್ತಾಂತರಿಸಲು ನಿರಾಕರಿಸಿದ್ದರಿಂದ ತಾತ್ಕಾಲಿಕ ರ್ಯಾಂಪ್ ಅನ್ನು ಬೇರೆಡೆ ಸ್ಥಾಪಿಸಲಾಗಿದೆ ಎಂದು ವಾದಿಸಿದ್ದರು.
ಏಷ್ಯನ್ ಯೂತ್ ಪ್ಯಾರಾ ಒಲಿಂಪಿಕ್ಸ್ 2025 | ರಾಜ್ಯದ ಯುವ ಪ್ಯಾರಾ ಕ್ರೀಡಾಪಟುಗಳಿಗೆ 3 ಚಿನ್ನ, 2 ಬೆಳ್ಳಿ ಪದಕ
ಬೆಂಗಳೂರು : ದುಬೈನಲ್ಲಿ ನಡೆದ ಏಷ್ಯನ್ ಯೂತ್ ಪ್ಯಾರಾ ಒಲಿಂಪಿಕ್ಸ್ 2025ರಲ್ಲಿ ಕರ್ನಾಟಕದ ಯುವ ಪ್ಯಾರಾ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಕ್ಕೂ ದೇಶಕ್ಕೂ ಅಪಾರ ಹೆಮ್ಮೆ ತಂದಿದ್ದಾರೆ. ನೆಲಮಂಗಲದ ಮೋಹಿತ್ ಪಾಲ್ ಈ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುವಾಗಿ ಹೊರಹೊಮ್ಮಿದರು. ಭಾಗಶಃ ದೃಷ್ಟಿಹೀನ ವಿಭಾಗದಲ್ಲಿ ಸ್ಪರ್ಧಿಸಿದ ಅವರು 100 ಮೀಟರ್ ಹಾಗೂ 200 ಮೀಟರ್ ಓಟಗಳಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸರಳ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮೋಹಿತ್ ಅವರ ಸಾಧನೆ ಶ್ರಮ, ಶಿಸ್ತು ಮತ್ತು ದೃಢ ಸಂಕಲ್ಪದ ಪ್ರತಿಫಲವಾಗಿದೆ. ಅವರ ತಂದೆ ಚಾಲಕರಾಗಿದ್ದು, ತಾಯಿ ಗೃಹಿಣಿ. ಕಳೆದ ಎರಡು ವರ್ಷಗಳಿಂದ ನಿರಂತರ ಕಠಿಣ ತರಬೇತಿ ಪಡೆದು ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯನ್ನು ಬೆಳೆಸಿಕೊಂಡಿರುವುದು ಏಷ್ಯನ್ ಮಟ್ಟದಲ್ಲಿ ಅವರ ಯಶಸ್ಸಿಗೆ ಕಾರಣವಾಯಿತು. ಚಾಮರಾಜನಗರದ ಸೌಮ್ಯಾ ಅವರು ಸಹ ಭಾಗಶಃ ದೃಷ್ಟಿಹೀನ ವಿಭಾಗದಲ್ಲಿ ಸ್ಪರ್ಧಿಸಿ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಮತ್ತೊಂದು ಸುವರ್ಣ ಕ್ಷಣ ಒದಗಿಸಿದರು. ಉತ್ತಮ ಸಹನಶಕ್ತಿ, ತಂತ್ರಬದ್ಧ ಓಟ ಹಾಗೂ ಆತ್ಮವಿಶ್ವಾಸದಿಂದ ಅವರು ದೂರದ ಓಟದ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಮೈಸೂರು ಮೂಲದ ಭಾರತಿ ಭರತೇಶ್ ಅವರು ಸೆರಿಬ್ರಲ್ ಪಾಲ್ಸಿ ವಿಭಾಗದಲ್ಲಿ ಸ್ಪರ್ಧಿಸಿ ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ. ಈ ಸಾಧನೆಯ ಹಿಂದೆ ಬೆಂಗಳೂರಿನ ಜಯನಗರದಲ್ಲಿರುವ ಇಂಡಿಯನ್ ಅಥ್ಲೆಟಿಕ್ ಅಕಾಡೆಮಿಯ ಶ್ರಮ ಪ್ರಮುಖವಾಗಿದೆ. ಅಂತರ್ರಾಷ್ಟ್ರೀಯ ಅಥ್ಲೀಟ್ ಹಾಗೂ ಕೋಚ್ ರೋಷನ್ ಬಚ್ಚನ್ ಅವರ ನೇತೃತ್ವದಲ್ಲಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ್ದ ಕೋಚ್ ವಿಕ್ರಮ್ ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ. ಸರಿಯಾದ ಮಾರ್ಗದರ್ಶನ, ಶಿಸ್ತುಬದ್ಧ ತರಬೇತಿ ಮತ್ತು ನಿರಂತರ ಬೆಂಬಲ ದೊರೆತರೆ ಪ್ಯಾರಾ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು. ಈ ಮಕ್ಕಳು ಮುಂದಿನ ದಿನಗಳಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾಂಡ್ ಪ್ರಿ, ಹಿರಿಯರ ಏಷ್ಯನ್ ಒಲಿಂಪಿಕ್ಸ್ ಹಾಗೂ ಒಲಿಂಪಿಕ್ಸ್ ಮಟ್ಟದ ಸ್ಪರ್ಧೆಗಳಿಗೆ ಸಿದ್ಧರಾಗುತ್ತಿದ್ದಾರೆ. ಇವರಿಗೆ ಸರಕಾರ, ಸಂಸ್ಥೆಗಳು ಹಾಗೂ ಸಮಾಜದ ನಿರಂತರ ಬೆಂಬಲ ಅಗತ್ಯವಿದೆ. ರೋಷನ್ ಬಚ್ಚನ್, ಅಥ್ಲೀಟ್
ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ : ಶಿವಸುಂದರ್
ಗುಡಿಬಂಡೆ : ನಮ್ಮ ದೇಶದ ಪ್ರಜೆಗಳ ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವಂತಹ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಚಿಂತಕ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಸಂವಿಧಾನ ಸಂರಕ್ಷಣಾ ಪಡೆ- ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಅಳಿವು ಉಳಿವು ಸಂರಕ್ಷಣೆ’ಯ ಒಂದು ದಿನದ ಕಾರ್ಯಾಗಾರ ಚಿಂತನ ಮಂಥನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರಾಜ ರಾಣಿಯ ಹೊಟ್ಟೆಯಲ್ಲಿ ಹುಟ್ಟುತ್ತಿದ್ದರು. ಈಗ ರಾಜ ಮತದಾರರ ಪಟ್ಟಿಯಲ್ಲಿ ಹುಟ್ಟುತ್ತಿದ್ದಾನೆ. ಇದು ಈ ದೇಶಕ್ಕೆ ಸಂವಿಧಾನ ಜಾರಿಯಾದಾಗಿನಿಂದ ಮಾತ್ರ. ಈ ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕನು ಸಹ ಘನತೆಯಿಂದ ಬದುಕುವಂತಹ ಹಕ್ಕನ್ನು ನೀಡಿದೆ. 18 ವರ್ಷ ತುಂಬಿದ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡುವುದು ಚುನಾವಣಾ ಆಯೋಗದ ಕರ್ತವ್ಯವೂ ಆಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ಮತದಾನದ ಹಕ್ಕನ್ನು ಪ್ರತಿಪಾದಿಸಿದ್ದು ಡಾ .ಬಿ. ಅಂಬೇಡ್ಕರ್ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆಗಳಿಗೆ ಬಿಎಲ್ಒ ರವರು ಬಂದು ಅರ್ಜಿಯನ್ನು ನೀಡುತ್ತಾರೆ. ಆ ಅರ್ಜಿಯನ್ನು ಭರ್ತಿ ಮಾಡಿ ಚುನಾವಣಾ ಕಚೇರಿಗೆ ತಲುಪಿಸಬೇಕು. ಇಲ್ಲವಾದರೆ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಲ್ಲ. ಮೊದಲು ಬಿಎಲ್ಒ ಅವರು ಮನೆಗಳಗೆ ಭೇಟಿ ನೀಡಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವುದು ಅಥವಾ ತೆಗೆಯುವುದನ್ನು ಮಾಡುತ್ತಿದ್ದರು. ಈಗ ಈ ರೀತಿಯಲ್ಲಿ ಮತದಾರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹೊರಟಿದ್ದಾರೆ. ಇದು ತುಂಬಾ ಅಪಾಯದ ನಡೆ. ಜನರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಡಿಎಸ್ಎಸ್ ಹಿರಿಯ ಮುಖಂಡ ಎನ್.ವೆಂಕಟೇಶ್, ಜೀವಿಕಾ ಸಂಘಟನೆಯ ರಾಜ್ಯ ಸಂಚಾಲಕ ಕಿರಣ್ ಕಮಾಲ್ ಪ್ರಸಾದ್, ಎಲ್.ಲಕ್ಷ್ಮೀನಾರಾಯಣರೆಡ್ಡಿ, ಮುಹಮ್ಮದ್ ನೂರ್ವುಲ್ಲಾ, ಕೆಡಿಪಿ ಸದಸ್ಯ ಎಚ್.ಪಿ.ಲಕ್ಷ್ಮೀನಾರಾಯಣ, ಮಂಜುನಾಥ್ ರೆಡ್ಡಿ, ಸೌಭಾಗ್ಯಮ್ಮ, ಸೈದ್ ಬಾಷ್, ರಿಝ್ವ್ವಾನ್, ಎದ್ದೇಳು ಕರ್ನಾಟಕದ ಸಮೀರ್, ಶ್ರೀರಂಗಾಚಾರಿ, ಜೀವಿಕಾ ನಾರಾಯಣಸ್ವಾಮಿ, ಚನ್ನರಾಯಪ್ಪ, ಇನ್ನಿತರರು ಉಪಸ್ಥಿತರಿದ್ದರು. ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಸಾಮಾನ್ಯ. ಆದರೆ ಜನರಿಗೆ ಅರ್ಥವಾಗದ ರೀತಿಯಲ್ಲಿ ಪರಿಷ್ಕರಣೆ ಮಾಡುವುದನ್ನು ದೇಶದ ಜನ ಮನವರಿಕೆ ಮಾಡಿಕೊಳ್ಳಬೇಕು. ದೇಶದ ನಿವಾಸಿಗಳ ಮೇಲೆ ಕೇಂದ್ರ ಸರಕಾರ ಅನುಮಾನದಿಂದ ನೋಡುತ್ತಿದೆ. -ಶಿವಸುಂದರ್, ಚಿಂತಕ
ಬಿಷಪ್ ಹೌಸ್ನಲ್ಲಿ ವಾರ್ಷಿಕ ‘ಬಂಧುತ್ವ’ ಕ್ರಿಸ್ಮಸ್ ಸಂಭ್ರಮಾಚರಣೆ
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ‘ಬಂಧುತ್ವ’ ಕ್ರಿಸ್ಮಸ್ ಸಂದೇಶ
ಬೆಂಗಳೂರು : ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ ಸೆಂಗಾರ್ನ AI-ರಚಿತ ಚಿತ್ರವನ್ನು ಹಂಚಿಕೊಂಡು ನ್ಯಾಯಾಲಯದ ಆದೇಶದ ಕುರಿತು ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕರ್ನಾಟಕ ಘಟಕವು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕರ್ನಾಟಕ ಘಟಕವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತನ್ನ ಅಧಿಕೃತ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, ಪ್ರಿಯಾಂಕ್ ಖರ್ಗೆ ಅವರನ್ನು ‘ಸ್ವಯಂ ಘೋಷಿತ fact checker ’ ಎಂದು ಉಲ್ಲೇಖಿಸಿ, ನಕಲಿ ಸುದ್ದಿ ಹರಡುವಾಗ ಅವರು ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದೆ. ಐಟಿ ಮತ್ತು ಬಿಟಿ ಖಾತೆ ಹೊಂದಿರುವ ಸಚಿವರಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ನಡೆಸುವ ಉದ್ದೇಶದಿಂದ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಕುರಿತು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯಲು ದುರುದ್ದೇಶಪೂರಿತವಾಗಿ AI ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಭಾರತದ ಪುತ್ರಿಯರ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಯಾದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಅರ್ಥವನ್ನು ಸುಳ್ಳುಗಳ ಮೂಲಕ ವ್ಯಂಗ್ಯವಾಡಿ, ಅಗ್ಗದ ರಾಜಕೀಯಕ್ಕೆ ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸೆಂಗಾರ್ ಜೀವಾವಧಿ ಶಿಕ್ಷೆ ರದ್ದು ಸರಕಾರದ ನಿರ್ಧಾರವಲ್ಲ; ಅದು ನ್ಯಾಯಾಲಯದ ಆದೇಶವಾಗಿದ್ದು, ಆ ಆದೇಶವನ್ನು ಸಿಬಿಐ ಪ್ರಶ್ನಿಸಲಿದೆ. ಅಲ್ಲದೆ, ಪ್ರಿಯಾಂಕ್ ಖರ್ಗೆ ಹಂಚಿಕೊಂಡಿರುವ ಪೋಸ್ಟ್ ಅವರದೇ ಸರಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ವಿರೋಧಿ ಮಸೂದೆಯ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಅಣಕಿಸುವ ಕೋಮು ದೃಶ್ಯಾವಳಿಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ತಪ್ಪು ಮಾಹಿತಿಗೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದಕ್ಕೂ ಮೊದಲು, ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ AI ಯಿಂದ ರಚಿಸಲಾಗಿದೆ ಎನ್ನಲಾದ ಚಿತ್ರವಿದ್ದು, ಸರಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯನ್ನು ವ್ಯಂಗ್ಯಾತ್ಮಕವಾಗಿ ಟೀಕಿಸಲಾಗಿತ್ತು. ಆ ಚಿತ್ರದಲ್ಲಿ ದಿಲ್ಲಿಯ ತಿಹಾರ್ ಜೈಲು ಹೊರಗೆ ಶಿಕ್ಷೆಗೊಳಗಾದ ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗಾರ್ ಗೆ ಜನರು ಹಾರ ಹಾಕುತ್ತಿರುವಂತೆ ತೋರಿಸುವ ಡೀಪ್ಫೇಕ್ ದೃಶ್ಯವಿದೆ ಎಂದು ಬಿಜೆಪಿ ಹೇಳಿದೆ. ಈ ಕುರಿತು ಬಿಜೆಪಿ ಸ್ಪಷ್ಟಪಡಿಸಿದ್ದು, ಸೆಂಗಾರ್ಗೆ ಒಂದೇ ಪ್ರಕರಣದಲ್ಲಿ ಜಾಮೀನು ದೊರೆತಿದ್ದು, ಆ ಜಾಮೀನನ್ನು ಸಿಬಿಐ ಪ್ರಶ್ನಿಸಿದೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಸೆಂಗಾರ್ ಇನ್ನೂ ಜೈಲಿನಲ್ಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಆ ಬಳಿಕ ಮತ್ತೊಂದು ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ತಾವು ಹಂಚಿಕೊಂಡಿದ್ದ ಚಿತ್ರವು AI ಯಿಂದ ರಚಿಸಲ್ಪಟ್ಟಿರಬಹುದು ಹಾಗೂ ಅದು ಕಣ್ತಪ್ಪಿ ಪೋಸ್ಟ್ ಆಗಿರಬಹುದೆಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಕರ್ನಾಟಕ ಘಟಕದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಹಿಂದಿನ ಪೋಸ್ಟ್ನಲ್ಲಿರುವ ಚಿತ್ರವು AI ರಚಿತವಾಗಿರಬಹುದು ಹಾಗೂ ಹಂಚಿಕೊಂಡಿರಬಹುದು. ಆದರೆ ನಿಮ್ಮ ಖ್ಯಾತಿಯು ನಿಮ್ಮ ಮುಂದೆಯೇ ಇದೆ” ಎಂದು ಗುಜರಾತ್ನ ಬಿಲ್ಕೀಸ್ ಬಾನೊ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ ಸಂದರ್ಭದ ಚಿತ್ರವನ್ನು ಲಗತ್ತಿಸಿದ್ದಾರೆ. ಅದೇ ವೇಳೆ ಅವರು, “ಮುಖ್ಯ ಪ್ರಶ್ನೆ ಇನ್ನೂ ಉಳಿದಿದೆ. ಬಿಜೆಪಿ ಅಪರಾಧಿಗಳನ್ನು ಗೌರವಿಸುವುದನ್ನೂ ರಕ್ಷಿಸುವುದನ್ನೂ ಮುಂದುವರಿಸಿದೆ. ಕರ್ನಾಟಕದಲ್ಲಿ POCSO ಆರೋಪಿಗಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಮತ್ತು ಈ ನಾಯಕನನ್ನು ಇನ್ನೂ ನಿಮ್ಮ ಪಕ್ಷದ ‘ಮಾರ್ಗದರ್ಶಕ’ ಹಾಗೂ ‘ಮಾರ್ಗದರ್ಶಿ ಬೆಳಕು’ ಎಂದು ಏಕೆ ಬಿಂಬಿಸಲಾಗುತ್ತಿದೆಯಲ್ಲವೇ?” ಎಂದು ಪ್ರಶ್ನಿಸಿದ್ದಾರೆ. “ನಾನು ಇದನ್ನು ನಿಮಗಾಗಿ Fact check ಮಾಡಿ ಪರಿಶೀಲಿಸಬೇಕೆಂದು ನೀವು ಬಯಸುತ್ತೀರಾ?” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಜನಾಡಿ ಉರೂಸ್ಗೆ ಹಿಂದೂಗಳಿಂದ ಹೊರೆಕಾಣಿಕೆ
ಮಂಜನಾಡಿ: ನಿತ್ಯಾನಂದ ಸೇವಾ ಸಮಿತಿ ನಿತ್ಯಾನಂದ ನಗರ, ಹನುಮಾನ್ ಫ್ರೆಂಡ್ಸ್ ಹಿಂದೂಪುರ ಅಸೈಗೋಳಿ, ಟೀಮ್ ಅಸೈಗೋಳಿ, ಶಕ್ತಿ ಫ್ರೆಂಡ್ಸ್ ಆಕಾಶಭವನ ಮಂಗಳೂರು, ಸ್ನೇಹ ಬಳಗ ಮಂಗಳೂರು, ಓಂ ಶಕ್ತಿ ಮಂಗಳೂರು, ಬರ್ಕೆ ಫ್ರೆಂಡ್ಸ್ ಕುದ್ರೋಳಿ, ಬ್ರದರ್ಸ್ ಕೊಲ್ಯ, ಸಾಯಿ ಫ್ರೆಂಡ್ಸ್ ಅಸೈಗೋಳಿ ಆಶ್ರಯದಲ್ಲಿ ಮಂಜನಾಡಿ ಉರೂಸ್ಗೆ ಅಸೈಗೋಳಿ ಜಂಕ್ಷನ್ನಿಂದ ಮಂಜನಾಡಿ ಕೇಂದ್ರ ಮಸೀದಿ ತನಕ ಗುರುವಾರ ರಾತ್ರಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಸುನೀಲ್ ಪೂಜಾರಿ ಮಾತನಾಡಿ, ನಾವೆಲ್ಲರೂ ಒಂದಾಗಿ ಸೌಹಾರ್ದದಂದ ಇರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಿದ್ದೇವೆ. ಈ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವು ಜತೆಯಾಗಿ ಶ್ರಮಿಸೋಣ ಎಂದರು. ಗಣೇಶ್ ಅಸೈಗೋಳಿ ಮಾತನಾಡಿ, ಮಂಜನಾಡಿ ಉರೂಸ್ ಕಾರ್ಯಕ್ರಮಕ್ಕೆ ನಾವು ಹೊರೆಕಾಣಿಕೆಯನ್ನು ನೀಡಿದ್ದೇವೆ. ದೇವರು ನಮ್ಮನ್ನು ಹೀಗೆಯೇ ಸೌಹಾರ್ದದಿಂದ ಮುಂದುವರಿಯಲು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಮಂಜನಾಡಿ ಜುಮಾ ಮಸೀದಿಯ ಅಧ್ಯಕ್ಷ ಮೈಸೂರು ಬಾವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಹೊರೆ ಕಾಣಿಕೆ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಪ್ರದೀಪ್ ಅಸೈಗೋಳಿ, ಶ್ರೀಕಾಂತ್, ಅಶ್ರಫ್, ಶೌಕತ್ ಅಲಿ ಅಸೈಗೋಳಿ, ಪ್ರವೀಣ್ ಮುನ್ನ, ಹರೀಶ್ ಪೂಜಾರಿ, ಕೆ.ಮಂಜುನಾಥ್, ವಿಕ್ಕಿ ಪೂಜಾರಿ ಮಂಗಳೂರು, ನಾಗರಾಜ್ ಶೆಟ್ಟಿ ಮಾಣಿ, ಪ್ರೀತಂ ಶೆಟ್ಟಿ ಆಲಾಡಿ, ಇಕ್ಬಾಲ್ ಬರುವ ಮತ್ತಿತರರು ಉಪಸ್ಥಿತರಿದ್ದರು. ಡಿ.27 ಉರೂಸ್ ಸಮಾರೋಪ ಡಿ.17ರಂದು ಆರಂಭಗೊಂಡ ಮಂಜನಾಡಿ ಉರೂಸ್ನ ಸಮಾರೋಪ ಸಮಾರಂಭ ಡಿ.27ರಂದು ನಡೆಯಲಿದೆ. ಶನಿವಾರ ಮಗ್ರಿಬ್ ನಮಾಝ್ ಬಳಿಕ ಭಾವೈಕ್ಯ ಸಂಗಮ, ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಸ್ಸೈಯದ್ ಇಬ್ರಾಹೀಂ ಖಲೀಲ್ ತಂಳ್ ಕಡಲುಂಡಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Belagavi | ಕಾಲುವೆಯಲ್ಲಿ ಈಜಲು ತೆರಳಿ ದುರಂತ; ಇಬ್ಬರು ಬಾಲಕರು ನೀರುಪಾಲು
ಬೆಳಗಾವಿ : ಈಜಲು ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ದುರ್ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕರನ್ನು ಹಣಮಂತ ದುರ್ಗಪ್ಪ ಹಗೇದ (10) ಮತ್ತು ಬಸವರಾಜ ರಮೇಶ ಸೋಮಣ್ಣವರ (10) ಎಂದು ಗುರುತಿಸಲಾಗಿದೆ. ತಂದೆಯೊಂದಿಗೆ ಕುರಿ ಕಾಯಲು ತೆರಳಿದ್ದ ಸಂದರ್ಭದಲ್ಲಿ, ಸಮೀಪದ ಕಾಲುವೆಯಲ್ಲಿ ಈಜಲು ಮಕ್ಕಳು ಇಳಿದಿದ್ದಾರೆ. ಬಳಿಕ ಸಾಕಷ್ಟು ಸಮಯ ಕಳೆದರೂ ಮಕ್ಕಳು ಕಾಣಿಸದೇ ಇದ್ದುದರಿಂದ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ಮೃತದೇಹಗಳು ಕಾಲುವೆಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಘಟನೆಯ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಶೋಕ ವಾತಾವರಣ ಆವರಿಸಿದೆ.
ಭಟ್ಕಳ: ಏಕಾಏಕಿ ಹಸುವೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ನಾಲ್ಕು ವಾಹನಗಳು ಪರಸ್ಪರ ಢಿಕ್ಕಿ ಹೊಡೆದ ಘಟನೆ ತಾಲೂಕಿನ ಶೆಟ್ಟಿ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ಹಸು ಅಡ್ಡ ಬಂದಿದ್ದು, ಅದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ವಾಹನವನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಕಾರು ಮೊದಲು ಗೂಡ್ಸ್ ಆಟೊ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ನಂತರ ಹೊಸದಾಗಿ ಖರೀದಿಸಿದ ಬೊಲೆರೊ ಪಿಕ್ಅಪ್, ನಂತರ ದುರಸ್ತಿ ಮುಗಿಸಿ ಗ್ಯಾರೇಜ್ನಿದ ಹೊರಬಂದ ಇನ್ನೊಂದು ಪಿಕ್ಅಪ್ಗೆ ಢಿಕ್ಕಿ ಹೊಡೆದಿದೆ. ಬಳಿಕ ವಾಹನಗಳ ವೇಗ ಸೂಚಿಸುವ ಸೈನ್ ಬೋರ್ಡ್ ಕಂಬಕ್ಕೂ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಎಲ್ಲ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಕೇರಳದ ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಗೂಡ್ಸ್ ಆಟೊ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ವಾಹನಗಳನ್ನು ಇಳಿಜಾರಿನಿಂದ ಮೇಲಕ್ಕೆತ್ತಲು ಕ್ರೇನ್ನ ನೆರವು ಪಡೆಯಲಾಗಿತ್ತು.ಈ ವೇಳೆ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ ಸ್ಥಳೀಯರು, ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೀದಿ ಪ್ರಾಣಿಗಳು ರಸ್ತೆ ಮೇಲೆ ಬರದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ರಸ್ತೆಗಳಲ್ಲಿ ಸಂಚರಿಸುವ ಪ್ರಾಣಿಗಳನ್ನು ವಶಕ್ಕೆ ಪಡೆಯುವಂತೆ ನಗರಸಭೆ ಮತ್ತು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಹೊಸಪೇಟೆ | ಗುಡ್ಡ ಹತ್ತುವಾಗ ಕುಸಿದು ಬಿದ್ದು ಫ್ರಾನ್ಸ್ ಪ್ರವಾಸಿಗನಿಗೆ ಗಾಯ
ಹೊಸಪೇಟೆ : ಹಂಪಿಯ ಪ್ರಸಿದ್ಧ ಅಷ್ಟಭುಜ ಸ್ನಾನದ ಕೊಳದ ಸಮೀಪ ಗುಡ್ಡದ ಹತ್ತಲು ಯತ್ನಿಸುತ್ತಿರುವ ವೇಳೆ ಕಾಲು ಜಾರಿ ಬಿದ್ದ ಫ್ರಾನ್ಸ್ನ ಪ್ರವಾಸಿಗನೊಬ್ಬರನ್ನು ಸ್ಥಳೀಯರು ಎರಡು ದಿನಗಳ ಬಳಿಕ ಕಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯು ಕೆಲ ದಿನಗಳ ಹಿಂದೆ ನಡೆದಿದೆ. ಪ್ರಾಥಮಿಕವಾಗಿ ಪ್ರವಾಸಿಗನು ಗುಡ್ಡದಿಂದ ಬೀಳುವ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಮತ್ತು ಪೋಲೀಸರು ಈ ಬಗ್ಗೆ ತಕ್ಷಣ ಮಾಹಿತಿ ಪಡೆದರೂ, ಗಾಯಗೊಂಡ ವ್ಯಕ್ತಿಯನ್ನು ಪತ್ತೆಹಚ್ಚಲು ಎರಡು ದಿನಗಳ ಕಾಲ ಪ್ರಯತ್ನಗಳು ನಡೆದಿವೆ. ಆಸ್ಪತ್ರೆಗೆ ದಾಖಲಿಸಿದ ನಂತರ ಪ್ರವಾಸಿಗನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪ್ರವಾಸಿಗನು ಹಂಪಿಯ ಪ್ರವಾಸ ಕೈಗೊಂಡು ಸ್ಥಳೀಯ ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಭದ್ರತೆ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.
ಔರಾದ್ | ಮಹಾರಾಜವಾಡಿಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ
ಔರಾದ್ : ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ನಂಬಿಕೆ ಬಲಪಡಿಸುವುದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಸಂತಪುರ್ ಪೊಲೀಸ್ ಠಾಣೆ ಪಿಎಸ್ಐ ದಿನೇಶ್ ಅವರು ಹೇಳಿದರು. ತಾಲೂಕಿನ ಮಹಾರಾಜವಾಡಿ ಗ್ರಾಮದಲ್ಲಿ ಸಂತಪುರ್ ಪೊಲೀಸ್ ಇಲಾಖೆ ವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕ್ರಮದಡಿ ಪೊಲೀಸ್ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಕಾನೂನು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದರು. ಈ ವೇಳೆ ಮಹಿಳೆಯರ ಸುರಕ್ಷತೆ, ಸೈಬರ್ ಅಪರಾಧಗಳ ಕುರಿತು ಎಚ್ಚರಿಕೆ, ಸಂಚಾರ ನಿಯಮಗಳ ಪಾಲನೆ, ಮಾದಕ ವಸ್ತು ವಿರೋಧಿ ಜಾಗೃತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಮಾಹಿತಿ ನೀಡಿದ ಅವರು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಭಗವನರಾವ್ ಪಾಟೀಲ್, ಮಾಜಿ ತಾ.ಪಂ ಸದಸ್ಯ ದಿಗಂಬರ್ ಮಾಲೇಕರ್, ಸಂದೀಪ್ ಪಾಟೀಲ್, ನಾಗಗೊಂಡ, ಇಸ್ಮಾಯಿಲ್ ಸಾಬ್ ಹಾಗೂ ಮಕ್ಸುದ್ ಸೇರಿದಂತೆ ಇತರ ಗ್ರಾಮಸ್ಥರು ಇದ್ದರು.
ಕಲಬುರಗಿ | ದೇಶದ ಸ್ವಾತಂತ್ರ್ಯ, ನವನಿರ್ಮಾಣದಲ್ಲಿ ಮುಸ್ಲಿಮರ ಪಾತ್ರ ದೊಡ್ದದು : ಕೋರಣೇಶ್ವರ ಮಹಾಸ್ವಾಮೀಜಿ
ಜಲ್ಸಾ ರಹ್ಮತುಲ್ ಲಿಲ್ ಆಲಮೀನ್ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಸಂದೇಶ
ರಾಜ್ಯದಲ್ಲಿ 11 ಮಂದಿ ನಕಲಿ ಆಯುರ್ವೇದ ವೈದ್ಯರ ಪತ್ತೆ
ಬೆಂಗಳೂರು : ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು ವೈದ್ಯರ ನೋಂದಣಿ ಪ್ರಮಾಣ ಪತ್ರಗಳು ಇಲ್ಲದ 11 ಮಂದಿ ಆಯುರ್ವೇದ ಮತ್ತು ಯುನಾನಿ ವೈದ್ಯರನ್ನು ಪತ್ತೆ ಮಾಡಿದ್ದು, ಇವರನ್ನು ನಕಲಿ ವೈದ್ಯರೆಂದು ಗುರುತಿಸಿದೆ. ಧಾರವಾಡ ಜಿಲ್ಲೆಯ ನಾಗಯ್ಯ ಮಠ, ರಾಜಶೇಖರ ತೊರಗಲ್ಲು, ಅಬ್ದುಲ್ ಅಜೀಮ್ ಮುಲ್ಲಾ, ಬಳ್ಳಾರಿ ಜಿಲ್ಲೆಯ ಶೀಲವೇರಿ ದಿವಾಕರ್, ಲಕ್ಷ್ಮೀ ನಾರಾಯಣರೆಡ್ಡಿ, ತುಮಕೂರು ಜಿಲ್ಲೆಯ ರಾಮಾಂಜನೇಯ ಲಿಖಿತ್ ರಾಮ್ ಕ್ಲಿನಿಕ್, ಚೌಡಪ್ಪ, ಯೋಗಾನಂದ, ದಿನೇಶ್ ಕೆ.ಎಸ್., ಚಿತ್ರದುರ್ಗ ಜಿಲ್ಲೆಯ ಎಂ.ವಿ.ನಾಗರಾಜು, ಗದಗ ಜಿಲ್ಲೆಯ ಸೋಮೇಶ್ವರ ಕದಡಿ ಅವರನ್ನು ನಕಲಿ ವೈದ್ಯರೆಂದು ಗುರುತಿಸಲಾಗಿದೆ. 11 ಜನರಿಗೆ ವೈದ್ಯರ ನೋಂದಣಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗಾಗಿ ಹಾಜರಾಗಲು ಈಗಾಗಲೇ ಮೂರು ಬಾರಿ ಸೂಚನಾ ಪತ್ರಗಳನ್ನು ನೀಡಲಾಗಿತ್ತು. ಆದರೂ ಮಂಡಳಿಗೆ ಯಾವುದೇ ಮೂಲ ದಾಖಲಾತಿಗಳನ್ನು ಹಾಜರುಪಡಿಸಿಲ್ಲ. ಅಲ್ಲದೇ ಈ ವೈದ್ಯರು ವೈದ್ಯ ವೃತ್ತಿ ಕೈಗೊಳ್ಳಲು ಮಂಡಳಿಯಲ್ಲಿ ನೋಂದಣಿಗೊಂಡಿರುವುದಿಲ್ಲ. ಹೀಗಾಗಿ 11 ಜನ ವೈದ್ಯರುಗಳು ನಕಲಿ ವೈದ್ಯರೆಂದು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುಷ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು ಪ್ರಕಟನೆಯಲ್ಲಿ ತಿಳೀಸಿದೆ.
ಧರ್ಮಸ್ಥಳ ಪ್ರಕರಣ: ಜಯಂತ್ ಕೈಸೇರಿದ ಎಸ್ಐಟಿ ವರದಿಯ ಪ್ರತಿ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಶುಕ್ರವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರತಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ಕೈ ಸೇರಿದೆ. ಎಸ್ಐಟಿ 3,923 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿ 1,100 ಪುಟಗಳ ಪ್ರತಿಯನ್ನು ನ್ಯಾಯಾಲಯವು ಜಯಂತ್ರಿಗೆ ನೀಡಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ನ.20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಎಸ್ಐಟಿ ಅವಕಾಶ ಕೋರಿತ್ತು. ಅಲ್ಲದೇ ಈ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯವನ್ನು ಕೋರಿತ್ತು. ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಈ ವರದಿಯ ಪ್ರತಿ ಪಡೆಯಲು ಜಯಂತ್ ಟಿ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಎಸ್ಐಟಿ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಬಳಿಕ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಲಯವು ಎಸ್ಐಟಿ ವರದಿಯ ಪ್ರತಿ ನೀಡಲು ಸಮ್ಮತಿ ಸೂಚಿಸಿತ್ತು. ಅದರಂತೆ ನ್ಯಾಯಾಲಯವು ಜಯಂತ್ರಿಗೆ ಎಸ್ಐಟಿ ವರದಿಯ ಕೆಲ ಭಾಗಗಳನ್ನು ಶುಕ್ರವಾರ ನೀಡಿದೆ. ಲಭ್ಯ ಮಾಹಿತಿಯಂತೆ ನ್ಯಾಯಾಲಯ ನೀಡಿರುವುದು ಜಯಂತ್ ಹಾಗೂ ಇತರರ ಹೇಳಿಕೆಗಳೇ ಆಗಿವೆ. ಚಿನ್ನಯ್ಯ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆ ಹಾಗೂ ಎಸ್ಐಟಿ ವರದಿಯಲ್ಲಿರುವ ಇತರ ಮಹತ್ವದ ವಿಚಾರಗಳನ್ನು ನ್ಯಾಯಾಲಯ ನೀಡಿಲ್ಲ ಎಂದು ತಿಳಿದುಬಂದಿದೆ.
ಎಚ್ 1ಬಿ ವೀಸಾ ವಿಳಂಬ ಶೀಘ್ರ ಇತ್ಯರ್ಥ: ಭಾರತೀಯ ಟೆಕ್ಕಿಗಳಿಗೆ ಕೇಂದ್ರದಿಂದ ಭರವಸೆ
ಎಚ್-1ಬಿ ವೀಸಾ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರಕಾರ ಅಮೆರಿಕದ ಮುಂದೆ ಪ್ರಸ್ತಾಪಿಸಿದೆ. ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನೀತಿಯಿಂದಾಗಿ ವೀಸಾ ಸಂದರ್ಶನಗಳು ಮುಂದೂಡಲ್ಪಟ್ಟಿದ್ದು, ಉದ್ಯೋಗಿಗಳು ಅಮೆರಿಕಕ್ಕೆ ಮರಳಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಭಾರತ ಸರಕಾರ ಅಮೆರಿಕದೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಕಲಬುರಗಿ | ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಗೆ ʼಮೌಲಾನಾ ಅಬುಲ್ ಕಲಾಂ ಆಜಾದ್ ಅಲಂಬರ್ದರ್ʼ ಪ್ರಶಸ್ತಿ
ಕಲಬುರಗಿ: ಕಲಬುರಗಿಯ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ ಅವರನ್ನು ಹೈದರಾಬಾದಿನ ರಾಜ್ಯಮಟ್ಟದ “ಮೌಲಾನಾ ಅಬುಲ್ ಕಲಾಂ ಆಜಾದ್ ಅಲಂಬರ್ದರ್ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಏಕೈಕ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮ ವ್ಯಕ್ತಿಯಾಗಿ ಅಜೀಜುಲ್ಲಾ ಸರ್ಮಸ್ತ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಉಳಿದ ಎಲ್ಲಾ ಪ್ರಶಸ್ತಿ ಪುರಸ್ಕೃತರು ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಡಿ.27 ರಂದು ಶನಿವಾರ ಸಂಜೆ 7 ಗಂಟೆಗೆ ಹೈದರಾಬಾದಿನ ಉರ್ದು ಘರ್ ಮುಘಲ್ಪುರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹೈದರಾಬಾದ್ ನ ಬಜ್ಮ ಇಲ್ಮ್ ಹಾಗೂ ಅದಬ್ ನ ವತಿಯಿಂದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಡಾ.ನಾದರ್ ಅಲ್-ಮಸ್ದೋಸಿ ಅವರು ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಹೈದ್ರಾಬಾದಿನ ಉಸ್ಮಾನಿಯಾ ಯುವರ್ಸಿಟಿ ಉರ್ದು ವಿಭಾಗದ ಮಾಜಿ ಅಧ್ಯಕ್ಷ ಪ್ರೊಫೆಸರ್ ಮಜೀದ್ ಬೇದಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Bengaluru | ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
ಬೆಂಗಳೂರು : ಲಿಂಗಾಯತ ಯುವತಿ ಮಾನ್ಯ ಹಾಗೂ ದಲಿತ ಯುವಕ ವಿವೇಕಾನಂದ ಮದುವೆಯಾಗಿರುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ಸಮಾನ ಮನಸ್ಕ-ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಹೋರಾಟಗಾರ್ತಿ ಕೆ.ಎಸ್.ವಿಮಲಾ, ನಮಗೆ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗಿ ಬದುಕುವ ಸ್ವಾತಂತ್ರ್ಯ ಕೂಡ ಇಲ್ಲದಿರುವಂತಹ ಸ್ವತಂತ್ರ ಭಾರತದಲ್ಲಿ ನಾವು ಇದ್ದೇವೆ. ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಯಾವ ಜಾತಿ, ಲಿಂಗ, ಧರ್ಮ ಯಾವುದೇ ತಾರತಮ್ಯ ಇಲ್ಲದ ಸಮಾನವಾದ ಘನತೆಯ ಬದುಕುವ ಅಧಿಕಾರವನ್ನು ಖಚಿತಪಡಿಸಿದೆ. ಆದರೆ ಇವತ್ತು ಆಗುತ್ತಿರುವುದು ಏನು? ಎಂದು ಪ್ರಶ್ನಿಸಿದರು. ಶ್ರೇಣೀಕೃತ ವ್ಯವಸ್ಥೆಯನ್ನು ಬೇಡ ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ, ಬ್ರಾಹ್ಮಣ್ಯವನ್ನು ಕಾಲಲ್ಲಿ ಒದ್ದು, ಅದರಿಂದ ಹೊರಗೆ ಬಸವಣ್ಣ ಮಾಡಿರುವ ಲಿಂಗಾಯತ ಧರ್ಮಿಯರು ಎಂದು ತಾವು ಹೇಳಿಕೊಂಡು ಬಸವಣ್ಣ ಅವರಿಗೆ ಅವಮಾನ ಮಾಡುವ ಕೆಲಸ ಮಾಡಲಾಗಿದೆ. ಯುವತಿ ಮಾನ್ಯ ಹಾಗೂ ಗರ್ಭದಲ್ಲಿರುವ ಮಗುವಿನ ಜೀವ ತೆಗೆದಿರುವುದು ಲಿಂಗಾಯತ ಧರ್ಮಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ನೂರು ವರ್ಷ ತುಂಬಿರುವ ನೋಂದಣಿ ಇಲ್ಲದ ಸಂಸ್ಥೆ ದೇಶವನ್ನು ಗುತ್ತಿಗೆ ಹಿಡಿದಿದೆ. ಹಿಂದೂ ಧರ್ಮದಲ್ಲಿರುವ ಹೆಣ್ಣುಮಕ್ಕಳು ಅದರಲ್ಲಿನ ಕಟ್ಟುಪಾಡುಗಳಿಂದ ಹೊರ ಬರಬಾರದು ಎಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಈ ರೀತಿಯ ಎಚ್ಚರಿಕೆಯನ್ನು ಅವರು ಆಗಾಗ ಕೊಡುತ್ತಿದ್ದಾರೆ. ಒಟ್ಟಾರೆ ಈ ದೇಶದಲ್ಲಿ ಹಿಂದೆ ಸೀತೆಯನ್ನು ಸುಟ್ಟು ಹಾಕಿದಂತೆ, ಬಹಿರಂಗವಾಗಿ ದ್ರೌಪದಿಯ ವಸ್ತ್ರಾಪಹರಣ ಮಾಡಿದಂತೆ ಇವತ್ತು ಬೇರೆ ಬೇರೆ ಸ್ವರೂಪಗಳಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಮಹಿಳಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಮಾತನಾಡಿ, ಜಾತಿ- ಧರ್ಮದ ಹೆಸರಿನಲ್ಲಿ ನಮ್ಮ ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿರುವುದು ಖಂಡನೀಯ. ನಾವು ಯಾರೂ ಯಾವುದೇ ಧರ್ಮ, ಜಾತಿ, ಲಿಂಗದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಈ ರೀತಿಯ ಮರ್ಯಾದೆಗೇಡು ಹತ್ಯೆ ಘಟನೆಗಳು ಮುಂದೆ ಆಗಬಾರದು. ಪರಿಹಾರ ನೀಡಿದರೆ ಜೀವ ಹಿಂದೆ ಬರುವುದಿಲ್ಲ ಎಂದು ಹೇಳಿದರು. ಹೋರಾಟವನ್ನು ನಾವು ಮುಂದುವರಿಸೋಣ. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ರಾಜ್ಯದಲ್ಲಿ ಒಂದು ಕಾನೂನು ತರಬೇಕು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಬಸವರಾಜ ಕೌತಾಳ್, ಹುಲಿಕುಂಟೆ ಮೂರ್ತಿ, ಲೇಖಕಿ ದು.ಸರಸ್ವತಿ, ಆರ್.ಸುನಂದಮ್ಮ, ಉಮಾದೇವಿ, ವಕೀಲ ವಿನಯ್ ಶ್ರೀನಿವಾಸ್, ಮೈತ್ರೇಯಿ, ಕೆ.ವೈ.ನಾರಾಯಣಸ್ವಾಮಿ, ನಾಗವೇಣಿ ಮತ್ತಿತರರು ಹಾಜರಿದ್ದರು. ಮರ್ಯಾದೆಗೇಡು ಹತ್ಯೆ ತಡೆಗೆ ಕಾಯ್ದೆ ರೂಪಿಸುವಂತೆ ಆಗ್ರಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಮೇಣದಬತ್ತಿ ಹಚ್ಚಿ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ರಾಜ್ಯ ಸರಕಾರ ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸಮಗ್ರ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖ ಹಕ್ಕೊತ್ತಾಯಗಳು : ಮಾನ್ಯ ಹಾಗೂ ವಿವೇಕಾನಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ವಿವೇಕಾನಂದ ಮತ್ತು ಅವರ ಕುಟುಂಬಕ್ಕೆ ಭದ್ರತೆ, ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಪಡಿಸಲು ರಕ್ಷಣೆ ಒದಗಿಸಬೇಕು. ವಿವೇಕಾನಂದ ಅವರಿಗೆ ಸರಕಾರಿ ಉದ್ಯೋಗ ಒದಗಿಸಬೇಕು. ಸರಕಾರ ಪ್ರಾಮಾಣಿಕವಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಹತ್ಯೆಯನ್ನು ಯೋಜಿಸಿದ, ಅದರಲ್ಲಿ ಭಾಗಿಯಾದ ಅಥವಾ ಅದಕ್ಕೆ ನೆರವಾದವರೂ ಸೇರಿದಂತೆ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರವು ಸಮಗ್ರ ಕಾಯಿದೆಯನ್ನು ರೂಪಿಸಲು, ಸಾರ್ವಜನಿಕ ಸಂವಾದಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾನಿರತರು ಹಕ್ಕೊತ್ತಾಯ ಮಂಡಿಸಿದರು.
ಜೇವರ್ಗಿ | ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನ
ಕಲಬುರಗಿ: ಜೇವರ್ಗಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ ನೇಮಕೊಂಡಿರುವ ಬಸವರಾಜ ದೇವದುರ್ಗ ಹಾಗೂ ರಾಜು ಗುತ್ತೇದಾರ್, ಸಂತೋಷ್ ಜೈನಾಪುರ ಅವರನ್ನು ಆಂದೋಲ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆಂದೋಲ ಗ್ರಾಮದ ಕಾಂಗ್ರೆಸ್ ಯುವ ಮುಖಂಡರಾದ ಭಾಗರೆಡ್ಡಿ ಹೋತಿನಮಡು, ಶರಣಯ್ಯ ಹಿರೇಮಠ, ಘನನಿಂಗಯ್ಯ ಗದ್ದಗಿ, ಶಾಂತಪ್ಪ ಸಾಹು ಅಂಗಡಿ, ಗೋವಿಂದ ರೆಡ್ಡಿ, ನಬಿ ಕುಕನೂರ, ಶಿವಶರಣಪ್ಪ ಬಳಬಟ್ಟಿ, ಅಯ್ಯಣ್ಣ ಶಹಾಪೂರ, ಹುಸೇನಪ್ಪ ಗುಂಡಳಿ ಮತ್ತಿತರರು ಇದ್ದರು.
ಕೆಪಿಸಿಎಲ್: 622 ಹುದ್ದೆಗೆ ಮರು ಪರೀಕ್ಷೆ
ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್) ಒಟ್ಟು 622 ಹುದ್ದೆಗಳ ನೇಮಕಾತಿಗೆ ಡಿ.27 ಮತ್ತು 28ರಂದು ಮರು ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ. ಶುಕ್ರವಾರ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಕೆಮಿಕಲ್ ಸೂಪರ್ ವೈಸರ್, ವಿವಿಧ ವಿಭಾಗಗಳ ಸಹಾಯಕ ಎಂಜಿನಿಯರ್ಗಳ ನೇಮಕಕ್ಕೆ ಡಿ.27ರಂದು ನಗರದ 17 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಒಟ್ಟು 8,622 ಮಂದಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ. ಡಿ.28ರಂದು ಕೆಮಿಸ್ಟ್, ವಿವಿಧ ವಿಭಾಗಗಳ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 10,136 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಹಾಗೆಯೇ ಡಿ.28ರಂದು ಕನ್ನಡ ಭಾಷಾ ಪರೀಕ್ಷೆಯೂ ನಡೆಯಲಿದೆ ಎಂದು ಅವರು ಹೇಳಿದರು.
ಕಲಬುರಗಿ | ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ರಾಜ್ಯಮಟ್ಟದಲ್ಲಿ ಮೆರೆಸಲಿ : ಕುಲಪತಿ ಡಾ.ಎಂ.ಹನುಮಂತಪ್ಪ
ಕಲಬುರಗಿ: ಯುವಜನೋತ್ಸವವು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಯಾಗಿದೆ. ಪಠ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ಶ್ರಮಿಸಬೇಕು ಎಂದು ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಕರೆ ನೀಡಿದರು. ಶುಕ್ರವಾರ ಕೃಷಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ಆಯೋಜಿಸಲಾದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ, ರಾಯಚೂರು 16ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 2025–26 ‘ಕಲಾ ಸಂಗಮ್’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಯುವಜನೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ, ನಾಯಕತ್ವ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಪ್ರತಿಯೊಂದು ತಂಡದಿoದ 22 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ತೀರ್ಪುಗಾರರು ನಿಜವಾದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು. ಈ ಯುವಜನೋತ್ಸವದಲ್ಲಿ ಏಳು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ದೇಶಭಕ್ತಿ ಗೀತೆ, ಸುಗಮ ಸಂಗೀತ, ಸಮೂಹ ಗಾಯನ, ಏಕಾಂಕ ನಾಟಕ, ಭಿತ್ತಿ ಚಿತ್ರ, ವ್ಯಂಗ್ಯಚಿತ್ರ ರಚನೆ, ಚರ್ಚಾ ಸ್ಪರ್ಧೆ, ಆಶುಭಾಷಣ, ಏಕಪಾತ್ರಾಭಿನಯ, ಸ್ಥಳದಲ್ಲೇ ಚಿತ್ರ ಬಿಡಿಸುವುದು ಹಾಗೂ ಮಣ್ಣಿನಿಂದ ಆಕೃತಿ ರಚನೆ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಹಾಸ್ಯ ಕಲಾವಿದ ವೈಜನಾಥ ಬಿರಾದರ ಅವರು ಡೊಳ್ಳು ಭಾರಿಸುವ ಮೂಲಕ ಯುವಜನೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಡಾ. ಸಂದೀಪ್ ಬಿ.ಮಾಳಗಿ, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಡಾ. ಯು. ಸತೀಶಕುಮಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಶಿವಶರಣಪ್ಪ ಬಿ.ಗೌಡ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಘನವೈರಾಗ್ಯ ಚಕ್ರವರ್ತಿ ಘನಮಠ ಶಿವಯೋಗಿಗಳಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವೇದಿಕೆ ಮೇಲೆ ಮಲ್ಲಿಕಾರ್ಜುನ ಡಿ.ಮಲ್ಲೇಶ ಕೋಲಿಮಿ, ರಾಯಚೂರು ಗೌರವಾನ್ವಿತ ಸದಸ್ಯರುಗಳಾದ ವ್ಯವಸ್ಥಾಪನಾ ಮಂಡಳಿ ಕೃಷಿ ವಿಶ್ವವಿದ್ಯಾಲಯ ಸಹ ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ, ಸಂಶೋಧನಾ ನಿರ್ದೇಶಕರ ಡಾ.ಎ.ಅಮರೇಗೌಡ, ಡಾ.ಶ್ಯಾಮರಾವ ಜಹಾಗೀರದಾರ, ಕೃಷಿ ಮಹಾವಿದ್ಯಾಲಯ ಹಗರಿ ಡಾ.ರವಿಶಂಕರ, ರಾಯಚೂರು ಆಡಳಿತಾಧಿಕಾರಿ ಡಾ.ಬಿ.ದೇಶಮಾನ್ಯ, ಡಾ.ಶಿವಶರಣಪ್ಪ ಬಿ.ಗೌಡಪ್ಪ, ಸೇರಿದಂತೆ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Udupi | ಕೊರಗರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ
ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 12ನೇ ದಿನಕ್ಕೆ
ಬಡ ಕುಟುಂಬಗಳಿಗೆ ಸರಕಾರ ತಕ್ಷಣ ಪುನರ್ವಸತಿ ಕಲ್ಪಿಸಬೇಕು : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್
ಯಲಹಂಕದಲ್ಲಿ ತೆರವು ಕಾರ್ಯಾಚರಣೆಗೆ ಕಳವಳ ವ್ಯಕ್ತಪಡಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಉಡುಪಿ ಜಿಲ್ಲೆಯಾದ್ಯಂತ ಪ್ರವಾಸಿಗರ ದಂಡು!
ಮಲ್ಪೆ ಸಹಿತ ವಿವಿಧ ಬೀಚ್ಗಳು, ಶ್ರೀಕೃಷ್ಣ ಮಠದಲ್ಲಿ ಪಾರ್ಕಿಂಗ್ ಸಮಸ್ಯೆ
ರಾಜ್ಯದಲ್ಲಿ 64 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪಲ್ಸ್ ಪೋಲಿಯೋ ವಿತರಣೆ
ಬೆಂಗಳೂರು : ರಾಜ್ಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು, ರಾಜ್ಯಾದ್ಯಂತ 64,25,399 ಅರ್ಹ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಲಾಗಿದೆ. ರಾಜ್ಯ ಸರಕಾರವು ರಾಜ್ಯದಲ್ಲಿ 62,40,114 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡುವ ಗುರಿ ಇಟ್ಟುಕೊಂಡಿತ್ತು. ಈ ಮೂಲಕ ಶೇ.103ರಷ್ಟು ಗುರಿ ಸಾಧಿಸಲಾಗಿದೆ. ಶುಕ್ರವಾರದಂದು ಆರೋಗ್ಯ ಇಲಾಖೆಯು ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, ಬಾಗಲಕೋಟೆ 2,25,795 ಬಳ್ಳಾರಿ 2,00,968 ಗ್ರೇಟರ್ ಬೆಂಗಳೂರು ಪ್ರಾಧಿಕಾರ 11,65,169 ಬೆಳಗಾವಿ 5,02,921, ಬೆಂಗಳೂರು ಗ್ರಾಮಾಂತರ 1,11,469 ಬೆಂಗಳೂರು ನಗರ ಜಿಲ್ಲೆಯಲ್ಲಿ 2,12,669 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ ಎಂದು ಮಾಹಿತಿ ನೀಡಿದೆ. ಬೀದರ್ 2,13,213 ಚಾಮರಾಜನಗರ 60,221, ಚಿಕ್ಕಬಳ್ಳಾಪುರ 1,05,980, ಚಿಕ್ಕಮಗಳೂರು 76,034, ಚಿತ್ರದುರ್ಗ 1,33,567 ದಕ್ಷಿಣ ಕನ್ನಡ 1,46,605 ದಾವಣಗೆರೆ 1,40,756 ಧಾರವಾಡ ಜಿಲ್ಲೆಯಲ್ಲಿ 2,09,564 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ. ಗದಗ 1,16,284, ಹಾಸನ 1,11,205, ಹಾವೇರಿ 1,50,842, ಕಲಬುರಗಿ 3,55,011, ಕೊಡಗು 39,601, ಕೋಲಾರ 1,66,380, ಕೊಪ್ಪಳ 1,84,628, ಮಂಡ್ಯ 1,06,100, ಮೈಸೂರು 2,33,484, ರಾಯಚೂರು 2,60,053, ರಾಮನಗರ ಜಿಲ್ಲೆಯಲ್ಲಿ 78,376 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ. ಶಿವಮೊಗ್ಗ 1,39,919, ತುಮಕೂರು 1,94,888, ಉಡುಪಿ 65,343, ಉತ್ತರ ಕನ್ನಡ 98,135, ವಿಜಯಪುರ 2,99,564 ವಿಜಯನಗರ 1,34,895 ಯಾದಗಿರಿ ಜಿಲ್ಲೆಯಲ್ಲಿ 1,67,647 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.
ಹಂಪಿಯಲ್ಲಿ ಬೆಟ್ಟ ಏರುವಾಗ ಕೆಳಗೆ ಬಿದ್ದ ವಿದೇಶಿ ಪ್ರವಾಸಿ; 2 ದಿನ ಅಲ್ಲೇ ವಾಸ, ಸಾವಿನ ದವಡೆಯಿಂದ ಪಾರಾಗಿದ್ದೇ ಪವಾಡ
ಹಂಪಿಯ ಅಷ್ಟಭುಜ ಸ್ನಾನದ ಕೊಳದ ಸಮೀಪ ಗುಡ್ಡ ಹತ್ತಲು ಹೋಗಿ ಫ್ರಾನ್ಸ್ ಪ್ರವಾಸಿಗರೊಬ್ಬರು ಕಾಲು ಜಾರಿ ಬಿದ್ದಿದ್ದ ಘಟನೆ ಬೆಳಕಿಗೆ ಬಂದಿದೆ. ನಿರ್ಜನ ಪ್ರದೇಶದಲ್ಲಿ ಸತತ ಎರಡು ದಿನಗಳ ಕಾಲ ನರಳಾಡಿ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಲಿಗೆ ತೀವ್ರ ಪೆಟ್ಟಾಗಿ ಕದಲಲಾಗದ ಸ್ಥಿತಿಯಲ್ಲಿದ್ದ ಇವರು, ಎರಡು ದಿನಗಳ ನಂತರ ತೆವಳುತ್ತಾ ಬಾಳೆ ತೋಟಕ್ಕೆ ಬಂದಾಗ ರೈತರು ಇವರನ್ನು ಗಮನಿಸಿ ರಕ್ಷಿಸಿದ್ದಾರೆ ಎನ್ನಲಾಗಿದೆ.
Mangaluru | ಡಿ.28ರಂದು ಅಡ್ಯಾರ್ನಲ್ಲಿ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ
ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ
ಅರಾವಳಿ ಪರ್ವತ ಶ್ರೇಣಿ: ನಿಲ್ಲದ ಅಕ್ರಮ ಗಣಿಗಾರಿಕೆ, ಕಾಂಗ್ರೆಸ್ - ಬಿಜೆಪಿ ಯಾವ ಅವಧಿಯಲ್ಲಿ ಹೆಚ್ಚು
ರಾಜಸ್ಥಾನ: ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ವಿಚಾರವು ಇದೀಗ ಹಲವು ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾತವಾಗಿ ನಡೆದಿದೆ ಎನ್ನುವ ವಿಚಾರವು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನದಲ್ಲಿ ಕಳೆದ ಏಳು ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆ, ಸಾಗಣೆ, ದಾಸ್ತಾನು ಇತ್ಯಾದಿಗಳಿಗೆ ಸಂಬಂಧಿಸಿದಂತೆ 7,173 ಎಫ್ಐಆರ್ಗಳು ವರದಿಯಾಗಿವೆ. ಅವುಗಳಲ್ಲಿ 4,181 ಅರಾವಳಿ
ಮಹಾರಾಷ್ಟ್ರದಲ್ಲಿ ಸ್ಥಳೀಯ ಚುನಾವಣೆ: ಜೆಡಿಎಸ್ ಪಕ್ಷದ ಐವರು ಅಭ್ಯರ್ಥಿಗಳು ಜಯ
ಬೆಂಗಳೂರು : ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ನ ಐವರು ಅಭ್ಯರ್ಥಿಗಳು(ಕೌನ್ಸಿಲರ್ ಸ್ಥಾನ) ಚುನಾಯಿತರಾಗಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರದ ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀನಾಥ ಹರಿಬಾಹು ಶೇವಾಲೆ ಅವರಿಗೆ ಪತ್ರ ಬರೆದಿರುವ ಎಚ್.ಡಿ.ದೇವೇಗೌಡ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಆಯ್ಕೆಯಾಗಿರುವ ಐದು ಮಂದಿ ಕೌನ್ಸಿಲರ್ಗಳನ್ನು ಅಭಿನಂದಿಸಿದ್ದಾರೆ. ಕೊಲ್ಲಾಪುರ ಜಿಲ್ಲೆಯ ಗಧಿಂಗ್ಲಾಜ್ ಪರಿಷತ್ನಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಂಜಯ್ ರೋಟೆ, ಸ್ವಾತಿ ತೈಕೋರಿ, ನಿತಿನ್ ದೇಸಾಯಿ ಹಾಗೂ ಪೂರ್ಣಾ ಪರಿಷತ್ನಲ್ಲಿ ಸ್ಪರ್ಧಿಸಿದ್ದ ಪ್ರಕಾಶ್ ಕಾಂಬ್ಳೆ, ರೇಖಾ ಖಾರ್ಗ್ಖರಾತಿ ಅವರು ಚುನಾಯಿತರಾಗಿದ್ದಾರೆ. ಇದು ಪಕ್ಷ ಮಹಾರಾಷ್ಟ್ರದಲ್ಲಿ ಬಲಗೊಳ್ಳುತ್ತಿರುವುದರ ಸೂಚನೆಯಾಗಿದ್ದು, ಈ ಗೆಲುವು ಒಂದು ಮೈಲಿಗಲ್ಲಾಗಿದೆ. ಮುಂಬರುವ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಹಾಗೂ ಭವಿಷ್ಯದ ಚುನಾವಣೆಗಳಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಗಳಿಸುವ ವಿಶ್ವಾಸವಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸುವಂತೆ ಒತ್ತಾಯಿಸಿ ಸಿಎಂಗೆ ಹೋರಾಟಗಾರರು, ಸಾಹಿತಿಗಳಿಂದ ಪತ್ರ
ಬೆಂಗಳೂರು : ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ‘ಘೋರ ಅಪರಾಧ’ ಎಂದು ಪರಿಗಣಿಸಬೇಕು ಮತ್ತು ಇಂತಹ ಅಪರಾಧಗಳನ್ನು ನಿಗ್ರಹಿಸಲು ಸರಕಾರ ಕಠಿಣ ಕಾನೂನ್ನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮ್ಯಯಗೆ ಪತ್ರ ಬರೆದಿದ್ದಾರೆ. ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ, ಸನತ್ ಕುಮಾರ್ ಬೆಳಗಲಿ, ಎಂ.ಎನ್.ಅಹೋಬಳಪತಿ, ರಘೋತ್ತಮ ಹೊ.ಬ, ಸುಭಾಸ್ ಹೂಗಾರ್, ಎನ್.ರವಿಕುಮಾರ್, ಸಾಹಿತಿಗಳಾದ ಬಸವರಾಜ ಸೂಳಿಬಾವಿ, ವಿಕಾಸ್ ಮೌರ್ಯ, ನಳಿನ ಚಿಕ್ಕಮಗಳೂರು, ಹೋರಾಟಗಾರರಾದ ಮಹಾಂತೇಶ್ ಕೆ., ಜ್ಯೋತಿ ಅನಂತಸುಬ್ಬರಾವ್, ಅನಂತನಾಯಕ್, ವಿ.ಎಲ್.ನರಸಿಂಹ ಮೂರ್ತಿ, ಕಲಾವಿದರಾದ ಡಾ.ಎಂ.ಗಣೇಶ್, ಹಾದಿಮನಿ, ವಕೀಲ ಕೆ.ಪಿ.ಶ್ರೀಪಾಲ್ ಸೇರಿದಂತೆ ನೂರಾರು ಸಾಮಾಜಿಕ ಕಾರ್ಯಕರ್ತರು ಪತ್ರದಲ್ಲಿ ಸಹಿ ಹಾಕಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ. ಇದೊಂದು ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾನ್ ಮಾನವತಾವಾದಿಗಳಾದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ. ಇದು ಸಮಸಮಾಜ ನಿರ್ಮಾಣದ ಎಲ್ಲ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ. ಇಂತಹ ಮನೋಸ್ಥಿತಿ ಎಷ್ಟೊಂ ದು ಕ್ರೌರ್ಯವನ್ನು ಮೆರೆಯುತ್ತಿದೆ ಎಂದರೆ, ಅಂತರ್ ಜಾತಿ ವಿವಾಹಗಳಾದ ಮಕ್ಕಳನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿದ್ದಾರೆ. ಇದಕ್ಕೆ ‘ಮರ್ಯಾದ ಹತ್ಯೆ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ, ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ. ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ‘ಘೋರ ಅಪರಾಧ’ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ ಜಾರಿಗೆ ತರಬೇಕು. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ಬಲಿಯಾದ ‘ಮಾನ್ಯ’ಳ ಹೆಸರಲ್ಲಿ ಉಗ್ರ ಶಿಕ್ಷೆಯ ಕಾನೂನು ರೂಪಿಸಬೇಕಾಗಿದೆ. ಈ ಉಗ್ರ ಶಿಕ್ಷೆಯ ಕಾಯ್ದೆಗೆ ‘ಮಾನ್ಯ’ ಹೆಸರಿಡುವುದು ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದ ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ ಎಂದು ಸಾಹಿತಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಅಹಿಂದ ನಾಯಕ ಆಗಿದ್ದರೆ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಿತ್ತು : ಎಚ್.ಡಿ.ದೇವೇಗೌಡ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಆಗಿದ್ದರೆ, ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಿತ್ತು. ಆದರೆ, ನಿಮ್ಮ ಮಗ ಬಿಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾಯಿತು ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಜ.25ಕ್ಕೆ ಅಹಿಂದ ಸಮಾವೇಶ ನಡೆಸುವ ವಿಚಾರ ಗೊತ್ತಾಗಿದೆ. ಆದರೆ, ನೀವು(ಸಿದ್ದರಾಮಯ್ಯ) ಅಹಿಂದ ನಾಯಕ ಎಂದಾದರೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದಿತ್ತು. ಏಕೆ ನೀವು ನಿಮ್ಮ ಮಗನನ್ನು ಖಾಲಿ ಮಾಡಿಸಲಾಯಿತು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದು ನಾನು ಎಂದು ಹೇಳಲ್ಲ, ಅವರೇ ಹೇಳಲಿ. ನನ್ನ ಬಗ್ಗೆ ಕಠಿಣವಾಗಿ ಏನು ಬೇಕಾದರೂ ಅವರು ಮಾತಾಡಲಿ. ಅವರ ಮಗ ಸಾವನ್ನಪ್ಪಿದಾಗ ಅವರ ಮನೆಗೆ ಹೋಗಿದ್ದೆ. ಎರಡನೆ ಮಗನ ರಾಜಕೀಯಕ್ಕೆ ಬರಬೇಕೆಂದು ಹೇಳಿದ್ದೆ. ಅವರು ಬಾದಾಮಿಯಲ್ಲಿ ನಿಂತರು. ಕೋಲಾರ, ಮೈಸೂರು, ಬಾದಾಮಿಯಿಂದಲೂ ಸ್ಪರ್ಧೆ ಮಾಡಲಾಗುತ್ತದೆ ಎಂದು ಚರ್ಚೆ ಆಯಿತು. ನೀವು ಅಹಿಂದ ನಾಯಕರು. ಆದರೂ ಒಂದು ಕ್ಷೇತ್ರಕ್ಕೆ ಹುಡುಕಾಟ ನಡೆಸಲಾಯಿತು ಎಂದು ಅವರು ಉಲ್ಲೇಖಿಸಿದರು.
IND Vs NZ- ಕಿವೀಸ್ ವಿರುದ್ಧ ಏಕದಿನ ಸರಣಿಗೆ ಹೀಗಿದೆ ಸಂಭಾವ್ಯ ಭಾರತ ತಂಡ; ಇದ್ದವರೊಳಗೆ ಉತ್ತಮರಾರು?
India Likely ODI Team- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ ಬಾಲ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು ಉಪನಾಯಕ ಶ್ರೇಯಸ್ ಅಯ್ಯರ್ ಲಭ್ಯತೆ ಈವರೆಗೂ ಸ್ಪಷ್ಟವಾಗಿಲ್ಲ. ಹಿರಿಯ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಉಳಿದಂತೆ ತಂಡ ಈ ರೀತಿ ಇರುವ ಸಾಧ್ಯತೆ ಇದೆ.
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರೊಂದಿಗೆ ಸಭೆ ನಡೆಸಿ, ರಾತ್ರಿ 1 ಗಂಟೆಯವರೆಗೆ ಮಾತ್ರ ವಹಿವಾಟು ನಡೆಸುವಂತೆ ಸೂಚನೆ ನೀಡಲಾಗಿದೆ. ಮಹಿಳೆಯರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಬಿಡಬ್ಲ್ಯುಎಫ್ ಅತ್ಲೀಟ್ ಗಳ ಆಯೋಗದ ಅಧ್ಯಕ್ಷೆಯಾಗಿ ಪಿ.ವಿ. ಸಿಂಧು ಆಯ್ಕೆ
ಹೊಸದಿಲ್ಲಿ, ಡಿ. 26: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 2026-29ರ ಅವಧಿಗೆ ಬಿಡಬ್ಲ್ಯುಎಫ್ ಅತ್ಲೀಟ್ ಗಳ ಆಯೋಗದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ತನ್ನ ಈ ಹುದ್ದೆಯ ಆಧಾರದಲ್ಲಿ ಸಿಂಧು ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ (ಬಿಡಬ್ಲ್ಯುಎಫ್) ಕೌನ್ಸಿಲ್ ನ ಸದಸ್ಯೆಯಾಗಿಯೂ ಅವರು ಸೇವೆ ಸಲ್ಲಿಸಲಿದ್ದಾರೆ. ಈ ಮೂಲಕ ಅವರು ಕ್ರೀಡೆಯ ಜಾಗತಿಕ ಆಡಳಿತದಲ್ಲಿ ಆಟಗಾರರ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ. ತನ್ನನ್ನು ಈ ಹುದ್ದೆಗೆ ಆರಿಸಿರುವುದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿನ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವುದಕ್ಕಾಗಿ ಇಂಡೋನೇಶ್ಯದ ಗ್ರೇಸಿಯಾ ಪೋಲಿಯಿ ಅವರನ್ನು ಅಭಿನಂದಿಸಿದ್ದಾರೆ. “ಈ ಹುದ್ದೆಗೆ ನನ್ನನ್ನು ಸಹ ಆಟಗಾರರು ಆರಿಸಿರುವುದು ನನಗೆ ಸಿಕ್ಕ ಗೌರವವಾಗಿದೆ. ಇದನ್ನು ನಾನು ವಿನಯ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಇದೇ ಸಂದರ್ಭದಲ್ಲಿ, ಹಿಂದಿನ ಅವಧಿಯಲ್ಲಿ ಗ್ರೇಸಿಯಾ ಪೋಲಿಯಿ ಸಲ್ಲಿಸಿದ ಅಮೋಘ ಸೇವೆಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ’’ ಎಂದು ಸಿಂಧು ಹೇಳಿದ್ದಾರೆ. ನೆದರ್ಲ್ಯಾಂಡ್ಸ್ ನ ದೆಬೋರಾ ಜಿಲಿ ಆಯೋಗದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಆಯೋಗದಲ್ಲಿರುವ ಇತರ ಆಟಗಾರರ ಪ್ರತಿನಿಧಿಗಳೆಂದರೆ- ಹಾಲಿ ಒಲಿಂಪಿಕ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ದಕ್ಷಿಣ ಕೊರಿಯದ ಆನ್ ಸೆ ಯಂಗ್, ಆರು ಬಾರಿಯ ಆಫ್ರಿಕನ್ ಗೇಮ್ಸ್ ಪದಕ ವಿಜೇತೆ ಈಜಿಪ್ಟ್ನ ದೋಹಾ ಹನಿ ಮತ್ತು ಪ್ಯಾರಿಸ್ ಒಲಿಂಪಿಕ್ಸ್ 2024ರ ಡಬಲ್ಸ್ ಚಿನ್ನ ವಿಜೇತೆ ಚೀನಾದ ಜಿಯಾ ಯಿಫಾನ್.
1000 ಕೋಟಿ ಕ್ಲಬ್ ಗೆ ಪ್ರವೇಶಿಸಿದ ‘ಧುರಂಧರ್’ ಚಿತ್ರ
ಈ ಮೈಲಿಗಲ್ಲನ್ನು ದಾಟಿದ ಸಿನಿಮಾಗಳು ಯಾವುವು?
Bihar: ನಿರ್ಮಾಣ ಹಂತದ ರೋಪ್ ವೇ ಕುಸಿತ
ಪಾಟ್ನಾ, ಡಿ. 26: ಬಿಹಾರದ ರೋಹ್ತಾಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೋಪ್ ವೇ ಶುಕ್ರವಾರ ಕುಸಿದು ಬಿದ್ದಿದೆ. ಇದರಿಂದಾಗಿ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ರೋಪ್ ವೇಯನ್ನು ಜನವರಿ 1ರಂದು ಪ್ರವಾಸಿಗರಿಗಾಗಿ ತೆರೆಯಲು ನಿರ್ಧರಿಸಲಾಗಿತ್ತು. ಈ ಘಟನೆಯಲ್ಲಿ ರೋಪ್ ವೇಯ ಕಂಬಗಳು ಹಾಗೂ ಟ್ರಾಲಿಗಳಿಗೆ ಹಾನಿ ಉಂಟಾಗಿದೆ. ಆದರೆ, ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಬಿಹಾರದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾದ ರೋಹ್ತಾಸ್ಗಢ ಎಂದು ಜನಪ್ರಿಯವಾಗಿರುವ ರೋಹ್ತಾಸ್ ಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ರೋಪ್ ವೇ ನಿರ್ಮಿಸಲಾಗುತ್ತಿತ್ತು. ರೋಹ್ತಾಸ್ ಕೋಟೆ ಸಮುದ್ರ ಮಟ್ಟದಿಂದ ಸುಮಾರು 1,400 ಅಡಿ ಎತ್ತರದಲ್ಲಿದೆ. ಈ ಯೋಜನೆ ಅಂತಿಮ ಹಂತದಲ್ಲಿತ್ತು. ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿರುವಾಗ ದುರಂತ ಸಂಭವಿಸಿದೆ. ‘‘ನಿರ್ಮಾಣ ಹಂತದಲ್ಲಿರುವ ರೋಪ್ವೇ ಯ ತಾಂತ್ರಿಕ ದೋಷಕ್ಕೆ ಕಾರಣವನ್ನು ಕಂಡು ಹಿಡಿಯಲಾಗುತ್ತಿದೆ’’ ಎಂದು ರೋಹ್ತಾಸ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಲೆ ಏರಿಕೆ, ಉದ್ಯೋಗಿಗಳ ವೇತನದಲ್ಲಿಅಲ್ಪ ಪ್ರಗತಿ; ದೇಶದ 7 ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇ.14ರಷ್ಟು ಕಡಿಮೆ
ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ ಶೇ.14ರಷ್ಟು ಕುಸಿದಿದೆ. ಆದರೂ, ಹಣಕಾಸಿನ ಮೌಲ್ಯದಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, 6 ಲಕ್ಷ ಕೋಟಿ ರೂ. ತಲುಪಿದೆ. ವಸತಿ ಆಸ್ತಿಗಳ ಬೆಲೆ ಶೇ.8ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಬೆಲೆ ಏರಿಕೆಯೇ ಮಾರಾಟ ಕುಸಿತಕ್ಕೆ ಕಾರಣ ಎಂದು ವರದಿ ತಿಳಿಸಿದೆ.
Air Pollution: ಸದ್ದೇ ಇಲ್ಲದೆ ಜೀವ ತೆಗೆಯುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ ಸಂದೇಶ!
ಭಾರತದಲ್ಲಿ ವಾಯು ಮಾಲಿನ್ಯ ಎಂಬುದು ದೊಡ್ಡ ಪಿಡುಗಾಗಿ ಪರಿಣಮಿಸಿದೆ, ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ವಾಯು ಮಾಲಿನ್ಯ ಪರಿಣಾಮ ಈಗ ದೆಹಲಿ ಜನ ಊರು ಬಿಡುವಂತೆ ಆಗಿದ್ದು, ಸಾವಿರಾರು ಜನ ಉಸಿರಾಡಲು ಪರದಾಡುತ್ತಾ ಆಸ್ಪತ್ರೆ ಸೇರಿದ್ದಾರೆ. ಇಂತಹ ಹೊತ್ತಲ್ಲೇ ದೂರದ ಲಂಡನ್ನಿಂದ ಭವಿಷ್ಯದ ಬಗ್ಗೆ ಭಯಾನಕ ಸುದ್ದಿಯು ಹೊರಬಿದ್ದಿದ್ದು, ಭಾರತೀಯರಿಗೆ ತಜ್ಞರು
ಹೆಜಮಾಡಿ ನೇಮೋತ್ಸವದಲ್ಲಿ ಸರ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
ಪಡುಬಿದ್ರೆ: ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸದಲ್ಲಿ ವೃದ್ಧೆಯ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ(40) ಬಂಧಿತ ಆರೋಪಿಗಳು. ಹೆಜಮಾಡಿಯ ಕಮಲ(78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸಕ್ಕೆ ಹೋಗಿದ್ದರು. ದೈವದ ದರ್ಶನ ಮಾಡಿ ನಂತರ ಅಲ್ಲಿಗೆ ಬಂದ ತನ್ನ ಶಾರದಾ ಪೂಜಾರಿ ಎಂಬವರು ಕಮಲ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೆ ಇರುವ ಬಗ್ಗೆ ತಿಳಿಸಿದರು. ಡಿ.25ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಕಮಲ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಹೆಚ್ಟಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.
H1B ವೀಸಾ ಸಂದರ್ಶನ ಮುಂದೂಡಿಕೆ | ಅಮೆರಿಕಕ್ಕೆ ಮರಳಲಾಗದೆ ಅನೇಕ ಅರ್ಜಿದಾರರು ಸಂಕಷ್ಟದಲ್ಲಿ: ಭಾರತ ಕಳವಳ
ಹೊಸದಿಲ್ಲಿ, ಡಿ.26: ಭಾರೀ ಸಂಖ್ಯೆಯ ಭಾರತೀಯ ಅರ್ಜಿದಾರರ ಎಚ್1ಬಿ ವೀಸಾ ಸಂದರ್ಶನಗಳನ್ನು ಅಮೆರಿಕವು ರದ್ದುಪಡಿಸಿರುವ ಬಗ್ಗೆ ಭಾರತವು ಶುಕ್ರವಾರ ತನ್ನ ಕಳವಳ ವ್ಯಕ್ತಪಡಿಸಿದೆ. ಈ ವಿಷಯವಾಗಿ ಉಭಯದೇಶಗಳೂ ಮಾತುಕತೆಯನ್ನು ನಡೆಸುತ್ತಿವೆ ಎಂದು ಅದು ಹೇಳಿದೆ. ತಮ್ಮ ಎಚ್-1ಬಿ ವೀಸಾ ಸಂದರ್ಶಗಳ ದಿನಾಂಕವನ್ನು ಮುಂದೂಡಿಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಆನೇಕ ಮಂದಿ ಭಾರತೀಯ ಪ್ರಜೆಗಳಿಂದ ಭಾರತ ಸರಕಾರಕ್ಕೆ ಅಹವಾಲುಗಳು ಬಂದಿವೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತನ್ನ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವೀಸಾ ಸಂಬಂಧಿತ ವಿಚಾರಗಳು ಆಯಾ ದೇಶದ ಸಾರ್ವಭೌಮ ಅಧಿಕಾರವ್ಯಾಪ್ತಿಗೆ ಸೇರಿದ್ದಾಗಿದೆ. ಆದಾಗ್ಯೂ ಈ ವಿಚಾರವಾಗಿ ಭಾರತವು ತನ್ನ ಕಳವಳವನ್ನು ಹೊಸದಿಲ್ಲಿ ಹಾಗೂ ವಾಶಿಂಗ್ಟನ್ ನಲ್ಲಿರುವ ಸಂಬಂಧಪಟ್ಟ ಅಮೆರಿಕನ್ ರಾಜತಾಂತ್ರಿಕರಿಗೆ ತಿಳಿಸಿದೆ ಎಂದರು. ಎಚ್-1ಬಿ ವೀಸಾ ಸಂದರ್ಶನ ಮುಂದೂಡಿಕೆಯಿಂದಾಗಿ ಹಲವಾರು ಭಾರತೀಯರು ಅಮೆರಿಕಕ್ಕೆ ವಾಪಸ್ ಹೋಗಲಾಗದೆ, ಅವರು ಭಾರತದಲ್ಲೇ ತಮ್ಮ ವಾಸ್ತವ್ಯದ ಅವಧಿಯನ್ನು ವಿಸ್ತರಿಸಬೇಕಾಗಿ ಬಂದಿದೆ. ಇದರಿಂದಾಗಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸಾಕಷ್ಟು ಸಂಕಷ್ಟ ಉಂಟಾಗಿದೆ ಎಂದು ಜೈಸ್ವಾಲ್ ತಿಳಿಸಿದರು. ನಮ್ಮ ಪ್ರಜೆಗಳಿಗೆ ಉಂಟಾಗಿರುವ ಅಡಚಣೆಗಳನ್ನು ಕನಿಷ್ಠಗೊಳಿಸಲು ಭಾರ ಸರಕಾರವು ಅಮೆರಿಕದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದು ಜೈಸ್ವಾಲ್ ತಿಳಿಸಿದರು.. ಭಾರತದಲ್ಲಿ ಈ ತಿಂಗಳ ಮಧ್ಯಾವಧಿಯಲ್ಲಿ ನಿಗದಿಯಾಗಿದ್ದ ಸಾವಿರಾರು ಎಚ್-1ಬಿ ವೀಸಾ ಅರ್ಜಿ ಸಂದರ್ಶನಗಳನ್ನು ಹಲವಾರು ತಿಂಗಳುಗಳ ಕಾಲ ಅಮೆರಿಕವು ದಿಢೀರನೇ ಮುಂದೂಡಿತ್ತು. ಅರ್ಜಿದಾರರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಗಳನ್ನು ಹಾಗೂ ಅವರ ಆನ್ ಲೈನ್ ಪ್ರೊಫೈಲ್ಗಳ ಪರಿಶೋಧನೆ ನಡೆಸುವುದಕ್ಕಾಗಿ ತಾನು ಈ ಕ್ರಮವನ್ನು ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ. ಇದರಿಂದಾಗಿ ಎಚ್1ಬಿ ವೀಸಾ ಅರ್ಜಿದಾರರಿಗೆ ಅಮೆರಿಕಕ್ಕೆ ಹಿಂತಿರುಗಲು ವಿಳಂಬವುಂಟಾಗಿದೆ.
ದ್ವೇಷ ಭಾಷಣ ನಿಷೇಧ ಕಾಯ್ದೆ: ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆಗೆ ಶಿಕ್ಷೆಯಾಗುತ್ತದೆಯೇ: ಸಿ.ಟಿ ರವಿ ಪ್ರಶ್ನೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಟ್ವೀಟ್ವೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಕರ್ನಾಟಕ ಬಿಜೆಪಿ ಖಾತೆ ಹಾಗೂ ವಿವಿಧ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ದ್ವೇಷ ಭಾಷಣ ನಿಷೇಧ ಕಾಯ್ದೆಯಡಿ ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆ ಅವರಿಗೆ ಶಿಕ್ಷೆಯಾಗುತ್ತದೆಯೇ ಎಂದು ಪ್ರಶ್ನೆ ಮಾಡಲಾಗಿದೆ. ಈ ಸಂಬಂಧ ಮಾತನಾಡಿರುವ
ವಾರ್ಷಿಕ ಆಸ್ತಿ ವಿವರಗಳನ್ನು ಸಲ್ಲಿಸದಿದ್ದರೆ ಕ್ರಮ: ಕೇಂದ್ರ ಎಚ್ಚರಿಕೆ
ಹೊಸದಿಲ್ಲಿ, ಡಿ. 26: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳು ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಸಕಾಲದಲ್ಲಿ ಸಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ವಿಳಂಬ ಮಾಡಿದರೆ ಬಡ್ತಿ ನಿರಾಕರಣೆ ಸೇರಿದಂತೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ. ಸೇವಾ ನಿಯಮಗಳ ಪ್ರಕಾರ ಐಎಎಸ್ ಅಧಿಕಾರಿಗಳು ಮುಂದಿನ ವರ್ಷದ ಜನವರಿ 31ರ ಒಳಗೆ ತಮ್ಮ ಸ್ಥಿರ ಆಸ್ತಿ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಇದನ್ನು ಪಾಲಿಸಲು ವಿಫಲವಾದರೆ ಗಂಭೀರ ಲೋಪವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯದ ಸಿಬ್ಬಂದಿ ಹೇಳಿದ್ದಾರೆ. ಮುಂದಿನ ವೇತನ ಶ್ರೇಣಿಗೆ ನೌಕರರನ್ನು ಪರಿಗಣಿಸಬೇಕಾದರೆ ಸ್ಥಿರಾಸ್ಥಿಗಳ ವಿವರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವೆಂಕಟೇಶ್ ಅಯ್ಯರ್ ಸ್ಥಾನದ ಬಗ್ಗೆ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ! ಹಾಗಿದ್ರೆ RCB ಅಷ್ಟೊಂದು ಖರ್ಚು ಮಾಡಿದ್ಯಾಕೆ?
Anil Kumble On Venkatesh Iyer- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಬಳಗದಲ್ಲಿ ವೆಂಕಟೇಶ್ ಅಯ್ಯರ್ ಅವರು ಆರಂಭದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಅಷ್ಟೊಂದು ಹಣ ತೆತ್ತು ಫ್ರಾಂಚೈಸಿ ಅವರನ್ನು ಖರೀದಿಸಿದ್ದು ಯಾಕೆ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ಇದಕ್ಕೆ ಅನಿಲ್ ಕುಂಬ್ಳೆ ಅವರು ನೀಡುವ ಉತ್ತರವೂ ಸಮಂಜಸವಾಗಿದೆ. ಹಾಲಿ ಚಾಂಪಿಯನ್ ತಂಡ ಸದ್ಯ ಸ್ಥಿರವಾಗಿದ್ದು ಇದರಲ್ಲಿ ಬದಲಾವಣೆ ತರುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕಷ್ಟ : ಎಚ್.ಡಿ.ದೇವೇಗೌಡ
ಬೆಂಗಳೂರು : ನಗರ, ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಜತೆಗಿನ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಶುಕ್ರವಾರ ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಕಷ್ಟವಾಗಲಿದೆ. ನಮ್ಮ ಶಕ್ತಿ ಇರುವ ಕಡೆ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಉಲ್ಲೇಖಿಸಿದರು. ನಗರ ಸ್ಥಳೀಯ ಸಂಸ್ಥೆಗಳ ಹೊಂದಾಣಿಕೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಲು ಸಾಧ್ಯವೇ?, ಈ ವಿಚಾರದಲ್ಲಿ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಅವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.
ಉಡುಪಿ : ಉಪವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ
ಉಡುಪಿ: ಉಡುಪಿ ಜಿಲ್ಲೆ ಉಪವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಸಂಭ್ರಮ, ನೂತನತ ವರ್ಷದ ಡೈರಿ ಬಿಡುಗಡೆ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ರಕ್ತದಾನಿಗಳಿಗೆ ಗೌರವ, ಪ್ರತಿಭಾ ಪುರಸ್ಕಾರ ಸಮಾರಂಭ ಮುಂದಿನ ವರ್ಷದ ಜ.4ರಂದು ಬೆಳಗ್ಗೆ 9:30ಕ್ಕೆ ಉಡುಪಿಯ ಕಿದಿಯೂರು ಹೊಟೇಲಿನ ಶೇಷಶಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಸಾಲಿನಲ್ಲಿ ಪ್ರಾರಂಭಗೊಂಡ ನಮ್ಮ ಸಂಘವನ್ನು ಪ್ರಾರಂಭದಲ್ಲಿ ವನಪಾಲಕರ ಸಂಘ, ಅರಣ್ಯಪಾಲಕರ ಸಂಘ ಎಂದು ಕರೆಸಿಕೊಳ್ಳುತಿದ್ದು, ಇದೀಗ ಉಪವಲಯ ಅರಣ್ಯಾಧಿಕಾರಿಗಳ ಸಂಘ ಎಂದು ನಾಮಾಂಕಿತ ಗೊಂಡಿದೆ ಎಂದರು. ನಮ್ಮ ಸಂಘದ ಪ್ರಮುಖ ಕಾರ್ಯಕ್ರಮ ಪ್ರತಿವರ್ಷ ನಡೆಯುವ ರಕ್ತದಾನ ಶಿಬಿರ. ಅರಣ್ಯ ಹುತಾತ್ಮರ ದಿನದಂಗವಾಗಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ನೂರಾರು ಯುನಿಟ್ ರಕ್ತೆವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. 2025ರಲ್ಲಿ 155 ಯುನಿಟ್ ರಕ್ತವನ್ನು ದಾನ ಮಾಡಿದ್ದೇವೆ ಎಂದು ನಾಗೇಶ್ ಬಿಲ್ಲವ ತಿಳಿಸಿದರು. ಅಲ್ಲದೇ ಪ್ರತಿವರ್ಷ ಜಿಲ್ಲಾಮಟ್ಟದಲ್ಲಿ, ಅಂತರಜಿಲ್ಲಾ ಮಟ್ಟದಲ್ಲಿ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಕುರಿತು ನಡೆಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತಿದ್ದಾರೆ ಎಂದ ಅವರು ಈ ಬಾರಿ ರಜತ ಮಹೋತ್ಸವದ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ ಹಾಗೂ ಅನಾಥಾಶ್ರಮದವರಿಗೆ ಧನ ಸಹಾಯ ಮಾಡಲಾಗುವುದು ಎಂದರು. ಈ ಬಾರಿಯ ಕಾರ್ಯಕ್ರಮವನ್ನು ಅದಾನಿ ಪವರ್ನ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ. ಶಾಸಕರಾದ ಯಶಪಾಲ ಸುವರ್ಣ, ಉಮಾನಾಥ ಕೋಟ್ಯಾನ್ ಅಲ್ಲದೇ ವಿನಯಕುಮಾರ್ ಸೊರಕೆ, ಕೆ.ರಘುಪತಿ ಭಟ್, ಡಿಸಿ ಸ್ವರೂಪ ಟಿ.ಕೆ. ಭಾಗವಹಿಸಲಿದ್ದಾರೆ. ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಲನ್, ಕುಂದಾಪುರ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾದಿಕಾರಿ ಗಣಪತಿ ಕೆ., ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ ಬಾಬು, ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ರವೀಂದ್ರ ಕುಮಾರ್ ಡಿ.ಎನ್.ಉಪಸ್ಥಿತರಿರುವರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿ, ಖಜಾಂಚಿ ಗೋವಿಂದ ಎಂ.ಪಟಗಾರ್, ಜೊತೆ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.
ಉಡುಪಿ: 15 ದಿನಗಳಲ್ಲಿ ಸೂಲಡ್ಪು-ಮಡಿವಾಳ ಸಾಲು ಹೊಳೆ ಹೂಳೆತ್ತಲು ಆಗ್ರಹ
ತಪ್ಪಿದರೆ ಬ್ರಹ್ಮಾವರ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ;ರೈತ ಸಂಘಟನೆಗಳಿಂದ ಎಚ್ಚರಿಕೆ
ಕೊನೆಗೂ ಬಂಧನ ಭೀತಿಯಿಂದ ಪಾರಾದ ಬೈರತಿ ಬಸವರಾಜ್, ಮಧ್ಯಂತರ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ರೌಡಿ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನದಿಂದ ಪಾರಾಗಿದ್ದಾರೆ. ತನಿಖೆಗೆ ಸಹಕರಿಸುವಂತೆ ನ್ಯಾ.ಜಿ. ಬಸವರಾಜು ಅವರಿದ್ದ ರಜಾಕಾಲದ ನ್ಯಾಯಪೀಠ ಶುಕ್ರವಾರ ಆದೇಶಿಸಿದೆ.
ಡಿ.27, 28 ಹಾಗೂ 29ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೋಳ್ಳುತ್ತಿರುವ ಹಿನ್ನೆಲೆ. ಡಿಸೆಂಬರ್ 27, 28 ಹಾಗೂ 29ರಂದು ವಿದ್ಯುತ್ ವ್ಯತ್ಯಯ ಉಂಡಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಡಿಸೆಂಬರ್ 27 ರಂದು ಮುಂಜಾನೆಯಿಂದ ಸಂಜೆ 5 ರವರೆಗೂ ಕರೆಂಟ್ ಕಟ್ ಆದರೆ, ಡಿ. 28 ಹಾಗೂ 29ರಂದು ಮಧ್ಯಾಹ್ನದವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನಲಾಗಿದೆ. ಹೆಬ್ಬಾಳ, ಆರ್ಟಿ ನಗರ, ವಿದ್ಯಾನಗರ, ಅಶೋಕನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
Bangladesh | ಇನ್ನೋರ್ವ ವ್ಯಕ್ತಿಯ ಹತ್ಯೆಗೆ ಭಾರತ ಖಂಡನೆ
ಅಲ್ಪಸಂಖ್ಯಾತರ ಮೇಲಿನ ದಾಳಿಗಳು ‘ಆತಂಕಕಾರಿ’: ವಿದೇಶಾಂಗ ಸಚಿವಾಲಯ
Kundapura | ನೈತಿಕ ಮೌಲ್ಯಗಳನ್ನು ಅಳವಡಿಸಿ, ಉತ್ತಮ ಮನುಷ್ಯರಾಗಲು ಶ್ರಮಿಸಿ: ಡಾ.ಎಚ್. ದೇವೇಂದ್ರಪ್ಪ
ಬ್ಯಾರಿಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಪತ್ನಿಯನ್ನು ಜೀವಂತವಾಗಿ ದಹಿಸಿ ಹತ್ಯೆ: ಮಕ್ಕಳ ಮುಂದೆಯೇ ಘೋರ ಕೃತ್ಯವೆಸಗಿದ ಪತಿ ಪರಾರಿ
ಹೊಸದಿಲ್ಲಿ,ಡಿ.26: ಹೈದರಾಬಾದ್ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಮಕ್ಕಳ ಮುಂದೆಯೇ ಜೀವಂತವಾಗಿ ದಹಿಸಿದ ಭೀಭತ್ಸ ಘಟನೆ ಹೈದರಾಬಾದ್ನಲ್ಲಿ ಶುಕ್ರವಾರ ವರದಿಯಾಗಿದೆ. ಆತ ತನ್ನ ಪುತ್ರಿಯನ್ನು ಕೂಡಾ ಬೆಂಕಿಯ ಜ್ವಾಲೆಗೆ ದೂಡಿ ಪರಾರಿಯಾಗಿದ್ದಾನೆ. ನಗರದ ನಲ್ಲಕುಂಟಾ ಪ್ರದೇಶದಲ್ಲಿ ಬುಧವಾರ ಈ ಘೋರ ಘಟನೆ ನಡೆದಿದೆ. ವೆಂಕಟೇಶ್ ಈ ಪಾತಕ ಕೃತ್ಯವನ್ನು ಎಸಗಿದ ಆರೋಪಿಯಾಗಿದ್ದು, ಆತ ತನ್ನ ಪತ್ನಿ ತ್ರಿವೇಣಿಯ ಚಾರಿತ್ರದ ಬಗ್ಗೆ ಶಂಕೆಗೊಂಡಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 24ರಂದು , ತನ್ನ ಮಕ್ಕಳ ಮುಂದೆಯೇ ವೆಂಕಟೇಶ್ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದ. ಆನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಗ ಅವರ ಪುತ್ರಿಯು ತಾಯಿಯನ್ನು ರಕ್ಷಿಸಲು ಯತ್ನಿಸಿದಾಗ, ಆಕೆಯನ್ನು ಬೆಂಕಿಯ ಜ್ವಾಲೆಗೆ ದೂಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಸ್ಥಳದಲ್ಲಿ ಆಕ್ರಂದನವನ್ನು ಕೇಳಿದ ನೆರೆಹೊರೆಯವರು ಸ್ಥಳಕ್ಕೆಧಾವಿಸಿದ್ದರು. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದರು. ದಂಪತಿಯ ಆರು ವರ್ಷದ ಪುತ್ರಿ ಸಣ್ಣಪುಟ್ಟ ಸುಟ್ಟಗಾಯಗಳೊಂದಿಗೆ ಪಾರಾಗಿದ್ದಾಳೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೆಂಕಟೇಶ್ ಹಾಗೂ ತ್ರಿವೇಣಿ ಪ್ರೇಮವಿವಾಹವಾಗಿದ್ದು, ಅವರಿಗೆ ಓರ್ವ ಪುತ್ರಿ ಹಾಗೂ ಪುತ್ರನಿದ್ದಾರೆ. ತನ್ನ ಪತ್ನಿಯ ಬಗ್ಗೆ ಸಂದೇಹವನ್ನು ಬೆಳೆಸಿಕೊಂಡ ವೆಂಕಟೇಶ್, ಆಕೆಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಆತನ ದೌರ್ಜನ್ಯವನ್ನು ಸಹಿಸಲು ಸಾಧ್ಯವಾಗದೆ ತ್ರಿವೇಣಿ, ಆಕೆಯ ಪಾಲಕರ ಮನೆಗೆ ತೆರಳಿದ್ದಳು. ಆದಾಗ್ಯೂ ವೆಂಕಟೇಶ್ ಕ್ಷಮೆಯಾಚಿಸಿದ್ದ ಮತ್ತು ಹಿರಿಯರ ಮಧ್ಯಸ್ಥಿಕೆಯಿಂದ ವಿವಾದವನ್ನು ಬಗೆಹರಿಸಿದ್ದರು. ಬಳಿಕ ವೆಂಕಟೇಶ್ ಮನೆಯನ್ನು ತೊರೆದಿದ್ದರೆ, ಜೀವನೋಪಾಯಕ್ಕಾಗಿ ತ್ರಿವೇಣಿ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳುಗಳ ಬಳಿಕ ವೆಂಕಟೇಶ್ ಮನೆಗೆ ವಾಪಸಾಗಿದ್ದು,ಆತನ ಬಗ್ಗೆ ಎಚ್ಚರಿಕೆಯಿಂದಿರುವಂತೆಯೂ ತಾವು ತ್ರಿವೇಣಿಗೆ ಹೇಳಿದ್ದಾಗಿ ಲಕ್ಷ್ಮಿ ತಿಳಿಸಿದರು. ಕೆಲವು ಸಮಯದ ಹಿಂದೆ ತ್ರಿವೇಣಿಯು ತನ್ನ ಪತಿಗೆ ಲಕ್ಷ ರೂ.ಮೌಲ್ಯದ ಬೈಕ್ ಕೊಡಿಸಿದ್ದಳು. ಮದ್ಯಪಾನ ವ್ಯಸನಿಯಾಗಿದ್ದ ಆತ ಅದನ್ನು ಕೇವಲ 15 ಸಾವಿರ ರೂ.ಗೆ ಮಾರಾಟ ಮಾಡಿದ್ದನೆಂದು ಅವರು ಹೇಳಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ವೆಂಕಟೇಶ್ನನ್ನು ಸೆರೆಹಿಡಿಯಲು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣ: ಗಾಯಾಳು ಮಹಿಳೆ ಮೃತ್ಯು
ನಾಲ್ವರಿಗೆ ಮುಂದುವರೆದ ಚಿಕಿತ್ಸೆ
ಬಾಲ ಪುರಸ್ಕಾರ ದೇಶದ ಎಲ್ಲಾ ಮಕ್ಕಳಿಗೂ ಸಾಧನೆಗೆ ಪ್ರೇರಣೆಯಾಗಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು
20 ಮಂದಿ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ
ಕೇರಳ| 6 ನಗರಪಾಲಿಕೆಗೆ ನೂತನ ಮೇಯರ್ಗಳ ಆಯ್ಕೆ
► ಕೊಚ್ಚಿ, ಕಣ್ಣೂರು, ತ್ರಿಶೂರ್,ಕೊಲ್ಲಂನಲ್ಲಿ ಯುಡಿಎಫ್► ಕೋಝಿಕ್ಕೋಡ್ನಲ್ಲಿ ಎಲ್ಡಿಎಫ್, ತಿರುವನಂತಪುರದಲ್ಲಿ ಬಿಜೆಪಿ
ಆಧುನೀಕರಣಗೊಳ್ಳುತ್ತಿರುವ ರಾಮನಗರ ರೈಲು ನಿಲ್ದಾಣ ಉದ್ಘಾಟನೆ ಯಾವಾಗ? ಅಪ್ಡೇಟ್ ನೀಡಿದ ಸಚಿವ ವಿ ಸೋಮಣ್ಣ
ರಾಮನಗರ ರೈಲು ನಿಲ್ದಾಣ 21 ಕೋಟಿ ರೂ. ವೆಚ್ಚದಲ್ಲಿ ಶೇ.90ರಷ್ಟು ಆಧುನೀಕರಣಗೊಂಡಿದ್ದು, ಒಂದೂವರೆ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳೊಂದಿಗೆ, ಒಡೆಯರ್ ಮತ್ತು ಮೈಲಾಡ ತೊರೈ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೂ ಕ್ರಮ ಕೈಗೊಳ್ಳಲಾಗುವುದು. ಬಿಡದಿ, ಚನ್ನಪಟ್ಟಣ ನಿಲ್ದಾಣಗಳೂ ಮೇಲ್ದರ್ಜೆಗೇರಲಿವೆ ಎಂದು ಅವರು ಮಾಹಿತಿ ನೀಡಿದರು.

23 C