SENSEX
NIFTY
GOLD
USD/INR

Weather

18    C
... ...View News by News Source

ʻನಿಮ್ಮನ್ನು ಉಳಿಸಲು ಪ್ರತಿಷ್ಠಿತ ಕಂಪನಿ, ಕಾಲೇಜು ಬರೋಲ್ಲ ಪರಿಶ್ರಮ ಮುಖ್ಯʼ; 26 ವರ್ಷದ ಮೈಕ್ರೋಸಾಫ್ಟ್ ಉದ್ಯೋಗಿ ಹೀಗಂದಿದ್ಯಾಕೆ?

ಇಪ್ಪತ್ತರ ಹರೆಯದಲ್ಲೇ ಕೆಲಸದ ಬಗ್ಗೆ ಚಿಂತಿಸಿ, ದುಡಿಯಲು ಶುರು ಮಾಡಿ. ಸಮಾಜ ನಿಮ್ಮ ಬಗ್ಗೆ ಏನು ಯೋಚಿಸುತ್ತೋ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಯಾರಿಗೂ ಯಾವುದರ ಬಗ್ಗೆಯೂ ಮಾತನಾಡುವಷ್ಟು ಸಮಯವಿಲ್ಲ. ಜೀವನದಲ್ಲಿ ಹೊಸತನ್ನು ಕಲಿತು ಮುನ್ನುಗ್ಗಿ ಎಂದು ಇಪ್ಪತ್ತಾರು ವರ್ಷದ ಮೈಕ್ರೋಸಾಫ್ಟ್‌ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅವರ ಈ ಜೀವನದ ಪಾಠಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ವಿಜಯ ಕರ್ನಾಟಕ 30 Jan 2026 9:01 am

ಪಶ್ಚಿಮ ಬಂಗಾಳ ಎಸ್‌ಐಆರ್ | ಸುಪ್ರೀಂ ಕೋರ್ಟ್‌ನ ದಾರಿ ತಪ್ಪಿಸಿದ ಚುನಾವಣಾ ಆಯೋಗ: ವರದಿ

ಪಶ್ಚಿಮ ಬಂಗಾಳದಲ್ಲಿನ ಎಸ್‌ಐಆರ್ ಪ್ರಕ್ರಿಯೆ ನಿಜಕ್ಕೂ ಗೊಂದಲದ ಗೂಡಾಗಿರುವ ಮಧ್ಯೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ಕೋಟ್ಯಂತರ ಜನರಿಗೆ ನೀಡಲಾಗಿರುವ ನೋಟಿಸ್ ಸಂಬಂಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನ ಹಾದಿ ತಪ್ಪಿಸಿದೆ ಎಂದು reporters-collective.in ವರದಿ ಹೇಳಿದೆ. ಒಂದೂವರೆ ಕೊಟಿ ಮತದಾರರಿಗೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೀಡಿರುವ ನೋಟಿಸ್‌ಗಳು ಸ್ವಯಂಚಾಲಿತವಲ್ಲ ಎಂದು ನ್ಯಾಯಾಲಯದೆದುರು ಆಯೋಗ ಹೇಳಿದ್ದರೂ, ದೋಷಪೂರಿತ ಮತ್ತು ಸರಿಯಾಗಿ ಪರಿಶೀಲಿಸದ ಪ್ರಕ್ರಿಯೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅಸೆಂಬ್ಲಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಪೌರತ್ವ, ಗುರುತು, ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ, ಅವುಗಳು ಯಾಂತ್ರೀಕೃತವಾಗಿ ಕಳಿಸಿದ ನೋಟಿಸ್‌ಗಳಾಗಿವೆ ಎಂದು ಆಯುಷಿ ಕರ್ ಅವರ ತನಿಖಾ ವರದಿ ಬಹಿರಂಗಪಡಿಸಿದೆ. ಚುನಾವಣಾ ಆಯೋಗ ಕೇಂದ್ರೀಕೃತ, ದೋಷಪೂರಿತ ಕ್ರಮ ಅನುಸರಿಸಿರುವುದರಿಂದ ಮತ್ತು ನಿಯಮಿತವಾಗಿ ಪರಿಷ್ಕರಿಸದೇ ಇರುವ ಸಾಫ್ಟ್‌ವೇರ್ ಅನ್ನು ಬಳಸಿರುವುದರಿಂದ ಪಶ್ಚಿಮ ಬಂಗಾಳದ ಅಧಿಕಾರಿಗಳು 20 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ 1.5 ಕೋಟಿ ಮತದಾರರ ಪೌರತ್ವ, ಗುರುತು ಮತ್ತು ಮತದಾನದ ಹಕ್ಕುಗಳನ್ನು ನಿರ್ಧರಿಸಲು ಬೇಕಾಬಿಟ್ಟಿ ವಿಚಾರಣೆ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಗದ ಅಧಿಕೃತ ದಾಖಲೆಗಳು ಮತ್ತು ಆಂತರಿಕ ಡೇಟಾವನ್ನು ಪರಿಶೀಲಿಸಿದ್ದಲ್ಲದೆ, ಅದರ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ಕಾರ್ಯನಿರ್ವಹಣೆಯನ್ನು ಗಮನಿಸಿದ ನಂತರ ರಿಪೋರ್ಟರ್ಸ್ ಕಲೆಕ್ಟಿವ್ ಈ ಸತ್ಯವನ್ನು ಕಂಡುಕೊಂಡಿದೆ. ಐದು ವಿಧಾನಸಭಾ ಮಟ್ಟದ ಚುನಾವಣಾಧಿಕಾರಿಗಳು, ಆಯೋಗದ ರಾಜ್ಯ ಕಚೇರಿಯ ಮೂಲ ಮತ್ತು ಹಲವಾರು ಬೂತ್ ಮಟ್ಟದ ಅಧಿಕಾರಿಗಳನ್ನು ಮಾತನಾಡಿಸಿರುವುದಾಗಿ ವರದಿ ಹೆಳಿದೆ. ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಎಲ್ಲವನ್ನೂ ಪರಿಶೀಲಿಸಿ ಸಹಿ ಮಾಡಿ ನೋಟಿಸ್ ಕಳಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದಾಗಿದೆ ಎಂದು ಕಂಡುಕೊಂಡಿದ್ದಾಗಿ ವರದಿ ಹೇಳಿದೆ. ಇಆರ್‌ಒಗಳು ಕ್ಷೇತ್ರ ಮಟ್ಟದ ಅಧಿಕಾರಿಗಳಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿ ಸಿದ್ಧಪಡಿಸುವ, ನವೀಕರಿಸುವ ಮತ್ತು ಪರಿಷ್ಕರಿಸುವ ಅಧಿಕಾರ ಮತ್ತು ಹೊಣೆ ಅವರದ್ದಾಗಿದೆ. ನಿಯಮಗಳ ಆಧಾರದ ಮೇಲೆ ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸುವ ಅಧಿಕಾರ ಇಆರ್‌ಒಗಳದ್ದಾಗಿದೆ. ಸುಪ್ರೀಂ ಕೋರ್ಟ್‌ನ ಮುಂದೆ ಆಯೋಗ ಹೇಳಿರುವುದೇ ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ, ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಕೃತ ಮತ್ತು ಪರೀಕ್ಷಿಸದ ಕ್ರಮದ ಮೂಲಕ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್‌ಗಳನ್ನು ಸಾಮೂಹಿಕವಾಗಿ ರಚಿಸಲಾಗಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ವರದಿ ಹೇಳಿದೆ. ಪ್ರತಿದಿನ ಸಾವಿರಾರು ಪ್ರಕರಣಗಳನ್ನು ಪರಿಶೀಲಿಸಬೇಕಾದ ಒತ್ತಡದ ಹಿನ್ನೆಲೆಯಲ್ಲಿ ಇಆರ್‌ಒಗಳು ಆಯೋಗದ ಅನುಮಾನಾಸ್ಪದ ಸಾಫ್ಟ್ ವೇರ್ ಮೂಲಕ ನೋಟಿಸ್ ರಚಿಸಿದ್ದಾರೆ. ಆಯೋಗ 2002ರ ಮತದಾರರ ಪಟ್ಟಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. ಹೆಚ್ಚಿನ ದಾಖಲೆಗಳು ಬಾಂಗ್ಲಾ(ಬಂಗಳಿ)ದಲ್ಲಿದ್ದವು. ಅವುಗಳನ್ನು ಪರೀಕ್ಷಿಸದ ಸಾಫ್ಟ್‌ವೇರ್ ಮೂಲಕ ಇಂಗ್ಲಿಷ್‌ಗೆ ಅನುವಾದಿಸಲಾಯಿತು. ಇದಾದ ಬಳಿಕ ಸಾಫ್ಟ್‌ವೇರ್ 1.31 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದ ಎಂದು ಗುರುತಿಸಿದೆ ಎಂದು ವರದಿ ಹೇಳಿದೆ. ಪರಿಷ್ಕರಣಾ ಕಾರ್ಯದ ಮಧ್ಯದಲ್ಲಿಯೇ ಸಾಫ್ಟ್‌ವೇರ್ ದೋಷಗಳಿಂದ ತುಂಬಿತ್ತು ಎಂಬುದನ್ನು ಪಶ್ಚಿಮ ಬಂಗಾಳದ ಸಿಇಒ ಕಚೇರಿ ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೊಷಗಳನ್ನು ಕಂಡುಕೊಂಡ ಬಳಿಕ ಪ್ರತಿಯೊಬ್ಬ ಮತದಾರರ ಪ್ರಕರಣವನ್ನೂ ಅಧಿಕಾರಿಗಳು ಸ್ವತಃ ಪರೀಕ್ಷಿಸುವುದು, ದೋಷಗಳನ್ನು ಬಗೆಹರಿಸುವುದು ಅಸಾಧ್ಯದ ಕೆಲಸವಾಗಿತ್ತು. ತಪ್ಪಾಗುವ ರಿಸ್ಕ್ ತೆಗೆದುಕೊಳ್ಳಲು ಬಯಸದ ಮತ್ತು ಕಡಿಮೆ ಗಡುವಿನೊಳಗೆ ಕೆಲಸ ಪೂರೈಸುವ ಒತ್ತಡದಲ್ಲಿದ್ದ ಸ್ಥಳೀಯ ಚುನಾವಣಾಧಿಕಾರಿಗಳು ವಿವೇಚನೆ ಕೈಬಿಟ್ಟರು. ಕ್ಷೇತ್ರ ಮಟ್ಟದ ಅಧಿಕಾರಿಗಳು ನೋಟಿಸ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಲು ಮತ್ತು ನಂತರ ಸಾಮೂಹಿಕವಾಗಿ ಸಹಿ ಮಾಡಲು ಸಾಫ್ಟ್‌ವೇರ್ ಬಳಸಿದರು. ಹೀಗಾಗಿ, ಸಣ್ಣ ದೋಷವಿದ್ದರೂ ಅಂಥವರಿಗೂ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ ಹೋಗಿದೆ ಎಂಬುದನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅವರೆಲ್ಲರೂ ವಿಚಾರಣೆಗಾಗಿ ಹಾಜರಾಗಬೇಕಾದ ಅನಿವಾರ್ಯತೆ ಇದೆ. ಇಆರ್‌ಒಗಳು ಸಣ್ಣ ದೋಷಗಳನ್ನು ಪರಿಶೀಲಿಸುವುದು ಮತ್ತು ಕೈಬಿಡುವುದು ಅಸಾಧ್ಯವಾದ ಕೆಲಸವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. 1.5 ಕೋಟಿಗೂ ಹೆಚ್ಚು ಸಮನ್ಸ್‌ಗಳನ್ನು ಸಿದ್ಧಪಡಿಸಲಾಗಿದ್ದರೂ, ಅಧಿಕಾರಿಗಳು ಕೇವಲ 95.39 ಲಕ್ಷ ಮತದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ ಎಂಬುದನ್ನು ಜನವರಿ 24 ರವರೆಗಿನ ಡೇಟಾ ಹೇಳುತ್ತಿರುವುದಾಗಿ ವರದಿ ಹೇಳಿದೆ. ಜನವರಿ 24ರ ವೇಳೆಗೆ ಕೇವಲ 30 ಲಕ್ಷ ಮತದಾರರು ವಿಚಾರಣೆಗೆ ಹಾಜರಾಗಿದ್ದಾರೆ. ಒಂದು ತಿಂಗಳ ನಂತರ, ಆಯೋಗ ತನ್ನ ಯೋಜಿತ ವಿಚಾರಣೆಗಳಲ್ಲಿ ಕೇವಲ ಶೇ.20 ಅನ್ನು ಪೂರ್ಣಗೊಳಿಸಿದೆ. ಫೆಬ್ರವರಿ 14ರಂದು ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಉಳಿದ ಶೇ.80ರಷ್ಟು, ಅಂದರೆ ಸುಮಾರು 1.2 ಕೋಟಿ ಮತದಾರರ ಪರಿಶೀಲನೆ ನಡೆಸಲು ಮೂರು ವಾರಗಳು ಮಾತ್ರ ಉಳಿದಿವೆ. ಇಲ್ಲಿಯವರೆಗೆ ಪರಿಶೀಲಿಸಲಾದ ಮತದಾರರ ಸಂಖ್ಯೆ ಶೇ.7.24ರಷ್ಟಿದೆ. ಆರಂಭದಲ್ಲಿ 2002-2004ರ ಪಟ್ಟಿಗೆ ಬಹುಪಾಲು ಮತದಾರರನ್ನು ಡಿಜಿಟಲ್ ಲಿಂಕ್ ಮಾಡಲು ಆಯೋಗ ಆಂತರಿಕ ಮ್ಯಾಪಿಂಗ್ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸುತ್ತಿತ್ತು. ಈ ಡಿಜಿಟಲ್ ಪರಿಶೀಲನೆಯಲ್ಲಿ ತೇರ್ಗಡೆಯಾದವರು ಎಣಿಕೆಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎನ್ನಲಾಗಿತ್ತು. ಆದರೆ, ಸರಿಯಾದ ಪರಿಶೀಲನೆಗೆ ಒಳಪಟ್ಟಿರದ ಸಾಫ್ಟ್‌ವೇರ್ ಕಾರಣದಿಂದಾಗಿ ಕೋಟಿಗಟ್ಟಲೆ ಜನರ ಮತದಾನದ ಹಕ್ಕು ಅತಂತ್ರವಾಗುವ ಸ್ಥಿತಿ ಎದುರಾಗಿದೆ. ಡಿಸೆಂಬರ್ 16ರಂದು ಪ್ರಕಟವಾದ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 32 ಲಕ್ಷಕ್ಕೂ ಹೆಚ್ಚು ಮತದಾರರು ಮ್ಯಾಪ್ ಮಾಡದವರಾಗಿದ್ದರು. ಅಂದರೆ, ಅವರಾಗಲಿ ಅಥವಾ ಅವರ ಪೂರ್ವಜರಾಗಲಿ 2002ರ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಆಯೋಗ ಗುರುತಿಸಿತ್ತು. ಆದರೆ, ನಂತರ ಸಾಫ್ಟ್‌ವೇರ್ ಅನ್ನೇ ದೋಷಪೂರಿತ ಎಂದು ಹೇಳಲಾಯಿತು. 2002ರ ಮತದಾರರ ಪಟ್ಟಿಯ ಡಿಜಟಲೀಕರಣದಲ್ಲಿ ದೋಷಗಳಿವೆ ಎಂದು ಡಿಸೆಂಬರ್ 29ರಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಯೋಗದ ಪಶ್ಚಿಮ ಬಂಗಾಳ ಕಚೇರಿ ಒಪ್ಪಿಕೊಂಡಿದ್ದಾಗಿ ವರದಿ ಉಲ್ಲೇಖಿಸಿದೆ. ಪರಿಣಾಮವಾಗಿ, ಮ್ಯಾಪ್ ಮಾಡದ ಮತದಾರರನ್ನು ವೈಯಕ್ತಿಕ ವಿಚಾರಣೆಗೆ ಕರೆಸಲು ಚುನಾವಣಾಧಿಕಾರಿಗಳಿಗೆ ಆಯೋಗ ಅವಕಾಶ ನೀಡಿತು. ಮ್ಯಾಪ್ ಮಾಡದವರು ಎಂದು ಗುರುತಿಸುವ ಮೂಲಕ, ಆಯೋಗ ರಾಜ್ಯದ ಮತದಾರರ ಪಟ್ಟಿಗೆ ಮೋಸದಿಂದ ಸೇರಿಸಲಾದ ಅಕ್ರಮ ವಲಸಿಗರು ಸೇರಿದಂತೆ ಸಂಶಯಾಸ್ಪದ ಮತದಾರರನ್ನು ಗುರುತಿಸುವ ಸಾಧ್ಯತೆ ಇದೆಯಾದರೂ, ಬಂಗಾಳದ ಮತದಾರರಲ್ಲಿ ಕೇವಲ ಶೇ.3 ಮಾತ್ರ ಮ್ಯಾಪ್ ಮಾಡದವರು ಎಂದು ಹೇಳಲಾಗಿದೆ. ಮ್ಯಾಪ್ ಮಾಡಲಾದ ಮತದಾರರಲ್ಲಿ ತಾರ್ಕಿಕ ವ್ಯತ್ಯಾಸಗಳನ್ನು ಕಂಡುಹಿಡಿಯಲು ಈಗ ಅದೇ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ. 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ನಡುವೆ ಕಾಗುಣಿತ ವ್ಯತ್ಯಾಸಗಳಿದ್ದರೆ, ಆರು ಅಥವಾ ಹೆಚ್ಚಿನ ಮತದಾರರು ಒಂದೇ ಪೂರ್ವಜರಿಗೆ ಸಂಬಂಧಿಸಿದ್ದರೆ ಅಥವಾ ಮತದಾರರು ಮತ್ತು ಪೂರ್ವಜರ ನಡುವಿನ ವಯಸ್ಸಿನ ವ್ಯತ್ಯಾಸ ಆಯೋಗದ ಮಾನದಂಡಗಳಿಗೆ ಹೊಂದದಿದ್ದರೆ ಅಂಥವರನ್ನು ತಾರ್ಕಿಕ ವ್ಯತ್ಯಾಸದ ಅಡಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ. ಈಗ 1.31 ಕೋಟಿ ಮತದಾರರು ಇದರ ಅಡಿಯಲ್ಲಿ ಅತಂತ್ರರಾಗಿದ್ದಾರೆ ಮತ್ತು ಇವುಗಳಲ್ಲಿ ಗಂಭೀರ ವ್ಯತ್ಯಾಸಗಳಿಗಿಂತ ಸಣ್ಣಪುಟ್ಟ ದೋಷಗಳಿರುವ ಪ್ರಕರಣಗಳು ಹೆಚ್ಚು ಎಂದು ಬಿಎಲ್‌ಒಗಳು ಒಪ್ಪಿಕೊಂಡಿದ್ದಾಗಿ ವರದಿ ಹೇಳುತ್ತದೆ. ಇದು ಸಾಮಾನ್ಯವಾಗಿ ಬಾಂಗ್ಲಾದಿಂದ ಇಂಗ್ಲಿಷ್‌ಗೆ ಮತದಾರರ ಪಟ್ಟಿಯನ್ನು ಸಾಫ್ಟ್‌ವೇರ್ ಮೂಲಕ ಬದಲಿಸಿರುವಲ್ಲಿ ಆಗಿರುವ ದೋಷ ಎನ್ನಲಾಗಿದೆ. ಈ ನಡುವೆ, ತಾರ್ಕಿಕ ವ್ಯತ್ಯಾಸಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಟಿಎಂಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿರುವ ಆಯೋಗ, ಇಆರ್‌ಒಗಳು ವಿವೇಚನೆ ಬಳಸಿ ನೋಟಿಸ್ ನೀಡಿದ್ದಾಗಿ ಹೇಳಿದೆ. ಆದರೆ ವಾಸ್ತವದಲ್ಲಿ ಸೀಮಿತ ಅವಧಿಯಲ್ಲಿ ಇಷ್ಟೊಂದು ನೋಟಿಸ್ ನೀಡುವುದು ಅಸಾಧ್ಯ ಎಂಬುದು ಟಿಎಂಸಿ ವಾದ. ಸಣ್ಣ ದೋಷಗಳನ್ನು ಆಂತರಿಕವಾಗಿ ಪರಿಹರಿಸಲು ಮತ್ತು ಅವರನ್ನು ವಿಚಾರಣೆಗೆ ಕರೆಯದಿರಲು ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಹಾಗಾಗಿಲ್ಲ. ತಾರ್ಕಿಕ ವ್ಯತ್ಯಾಸ ಎನ್ನಲಾಗಿರುವ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಒಂದೇ ಅಕ್ಷರ ವ್ಯತ್ಯಾಸವಾಗಿದ್ದರೂ, ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದು ಬಿಎಲ್‌ಒಗಳು ಹೇಳಿರುವುದನ್ನು ವರದಿ ಉಲ್ಲೆಖಿಸಿದೆ. ಈ ಪರಿಸ್ಥಿತಿ ಈಗ ಪಶ್ಚಿಮ ಬಂಗಾಳದ 1.5 ಕೋಟಿ ಜನರು ತಮ್ಮ ಅಸ್ತಿತ್ವ ಮತ್ತು ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ವಿಷಯದಲ್ಲಿ ಆಯೋಗ ಸುಪ್ರೀಂ ಕೋರ್ಟ್ ಅನ್ನು ಹಾದಿ ತಪ್ಪಿಸಿರುವುದು ಸ್ಪಷ್ಟ ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 30 Jan 2026 8:39 am

ಗೌಡ್ರನ್ನು ಭೇಟಿಯಾಗಿ ಗ್ರೇಟ್ ಲೀಡರ್ ಎಂದ ಮೋದಿ : ಕಾಮೆಂಟ್ ಬಾಕ್ಸ್‌ನಲ್ಲಿ ಬಂತು 'My President' ರಿಪ್ಲೈ!

PM Modi Meets Deve Gowda : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಅವರೊಬ್ಬರು ಗ್ರೇಟ್ ಲೀಡರ್ ಎಂದು ಮೋದಿ, ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ತರಹೇವಾರಿ ಕಾಮೆಂಟ್’ಗಳು ಬಂದಿದ್ದು, ಅದರಲ್ಲಿ ಒಬ್ಬರು My ರಾಷ್ಟ್ರಪತಿ ಎಂದು ಕಾಮೆಂಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

ವಿಜಯ ಕರ್ನಾಟಕ 30 Jan 2026 8:29 am

ಹಂಪಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ? ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರ ಭೇಟಿಯಿಂದ ಗರಿಗೆದರಿದ ನಿರೀಕ್ಷೆ

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಹಿನ್ನೆಲೆಯಲ್ಲಿ ಹಂಪಿ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಜಾಗತಿಕ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಹಂಪಿಗೆ ಮೂಲಸೌಕರ್ಯ ಕಲ್ಪಿಸಲು, ವಿಮಾನ ನಿಲ್ದಾಣ ವಿಸ್ತರಣೆ, ಸ್ಮಾರಕಗಳ ಪುನಶ್ಚೇತನಕ್ಕೆ ಅನುದಾನದ ನಿರೀಕ್ಷೆ ಹೆಚ್ಚಿದೆ.

ವಿಜಯ ಕರ್ನಾಟಕ 30 Jan 2026 8:25 am

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಎತ್ತಿನಹೊಳೆ ಯೋಜನೆ

►ಸಿಎಜಿ ವರದಿಯಲ್ಲಿ ಬಹಿರಂಗ ►ಅಧಿವೇಶನದಲ್ಲಿ ವರದಿ ಮಂಡನೆ

ವಾರ್ತಾ ಭಾರತಿ 30 Jan 2026 8:20 am

Bangladesh out of U19 World Cup: BCB made a lame excuse!

ಢಾಕಾ: U19 ವಿಶ್ವಕಪ್‌ನಲ್ಲಿ ಬಾಂಗ್ಲಾ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಆದರೆ ತಂಡದ ವೈಫಲ್ಯ ಒಪ್ಪಿಕೊಳ್ಳುವ ಬದಲು ಪಂದ್ಯಗಳ ವೇಳಾಪಟ್ಟಿ ಮತ್ತು ಪ್ರಯಾಣ ವ್ಯವಸ್ಥೆಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೂಷಿಸಿದೆ. ನ್ಯಾಯಸಮ್ಮತವಲ್ಲದ ವೇಳಾಪಟ್ಟಿ ಹಾಗೂ ಪದೇ ಪದೇ ಪ್ರಯಾಣ ಬೆಳೆಸಬೇಕಾದ ಕಾರಣ, ತಂಡದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಬಿಸಿಬಿ ಆಪಾದಿಸಿದೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಭಾರತಕ್ಕೆ ತಂಡ ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿ ಟೂರ್ನಿಯನ್ನು ಬಹಿಷ್ಕರಿಸಿರುವ ನಡುವೆಯೇ ಬಿಸಿಬಿ ಈ ಹೇಳಿಕೆ ನೀಡಿದೆ. ಪುರುಷರ ಟಿ20 ಟೂರ್ನಿಗೆ ಇದೀಗ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಲಭ್ಯವಾಗಿದೆ. ಇದೀಗ ಬಿಸಿಬಿ ಮ್ಯಾಚ್ ಡೆವಲಪ್ಮೆಂಟ್ ಸಂಚಾಲಕ ಹಬೀಬುಲ್ ಹಶೀರ್ ದೇಶದ 19ರ ವಯೋಮಿತಿಯ ತಂಡದ ಪ್ರವಾಸ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಂಡದ ಮನಸ್ಥಿತಿಯ ಬದಲಾಗಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧ ನಮ್ಮ ಲೆಕ್ಕಾಚಾರಗಳು ಕೈಕೊಟ್ಟವು. ನಾನು ನೆಪಗಳನ್ನು ಮುಂದಿಡುತ್ತಿದ್ದೇನೆ ಎಂದು ಜನ ಭಾವಿಸಿದರೂ ಪ್ರಯಾಣದ ವೇಳಾಪಟ್ಟಿಯ ಬಗ್ಗೆ ನಾನು ಹೇಳಲೇಬೇಕು. ಭಾರತ ವಿರುದ್ಧದ ಪಂದ್ಯಗಳ ಮುನ್ನ ನಮ್ಮ ಹುಡುಗರು ಸುಧೀರ್ಘ ಬಸ್ ಪ್ರಯಾಣ ಮಾಡಿ ತೀರಾ ದಣಿಯುವುದನ್ನು ತಪ್ಪಿಸಲು, ನೇರ ವಿಮಾನ ಇಲ್ಲದ ಕಾರಣ ಬಿಸಿಬಿ ಬಸ್ ಪ್ರಯಾಣದ ಬದಲು ದೇಶೀಯ ವಿಮಾನ ಪ್ರಯಾಣಕ್ಕೆ ಪಾವತಿಸಿತ್ತು ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದ ಮುಖ್ಯ ಕೋಚ್ ನವೀದ್ ನವಾಝ್ ಮತ್ತು ಹಲವು ಆಟಗಾರರು ಪಂದ್ಯಗಳ ವೇಳಾಪಟ್ಟಿ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಪಂದ್ಯಕ್ಕೆ ತಂಡ ಹರಾರೆಯಿಂದ ಬುಲವಯೊ ಪಟ್ಟಣಕ್ಕೆ ಮಳೆಗಾಲದಲ್ಲಿ ಒಂಬತ್ತು ಗಂಟೆ ಕಾಲ ಬಸ್ ಪ್ರಯಾಣ ಕೈಗೊಳ್ಳಬೇಕಾಯಿತು. ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಮಹತ್ವದ ಪಂದ್ಯಗಳಿಗಾಗಿ ಬಿಸಿಬಿ ಆಂತರಿಕ ವಿಮಾನ ವ್ಯವಸ್ಥೆ ಮಾಡಿತ್ತು. ಜನವರಿ 23ರಂದು ಹರಾರೆಯಲ್ಲಿ ಅಮೆರಿಕ ವಿರುದ್ಧದ ಪಂದ್ಯಕ್ಕೂ ಬಸ್ಸಿನಲ್ಲಿ ಮರಳುವ ಬದಲು ವಿಮಾನ ಪ್ರಯಾಣಕ್ಕೆ ಬೇಡಿಕೆ ಇತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ಜ.26ರಂದು ನಡೆದ ಸೂಪರ್ ಸಿಕ್ಸ್ ಪಂದ್ಯಕ್ಕೂ ಬುಲವಯೊಗೆ ಪ್ರಯಾಣಿಸಲು ವಿಮಾನದ ಬೇಡಿಕೆ ಇತ್ತು. ವೇಳಾಪಟ್ಟಿಗಳು ನಮಗೆ ನ್ಯಾಯಸಮ್ಮತವಾಗಿರಲಿಲ್ಲ. ಆರಂಭಿಕ ವೇಳಾಪಟ್ಟಿಯಂತೆ ನಾವು ಎರಡು ಅಭ್ಯಾಸ ಪಂದ್ಯಗಳನ್ನು ಮಸ್ವಿಂಗೊ ಮತ್ತು ಬುಲಾವಿಯೊದಲ್ಲಿ ಆಡಬೇಕಿತ್ತು. ಬಳಿಕ ಐಸಿಸಿ ದಿಢೀರನೇ ವೇಳಾಪಟ್ಟಿ ಬದಲಿಸಿ, ಸ್ಥಳಗಳನ್ನು ಬದಲಿಸಿದ್ದರಿಂದ ಹೆಚ್ಚಿನ ಪ್ರಯಾಣ ಮಾಡಬೇಕಾಯಿತು ಎಂದು ಹಶೀರ್ ಹೇಳಿದ್ದಾರೆ.

ವಾರ್ತಾ ಭಾರತಿ 30 Jan 2026 8:11 am

Uttar Pradesh| ವಿಷಪ್ರಾಶನ, ಆತ್ಮಹತ್ಯೆ ಶಂಕೆ: ದಂಪತಿ ಮೃತ್ಯು; ಮೂವರು ಮಕ್ಕಳು ಗಂಭೀರ

ನೋಯ್ಡಾ: ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಘಟನೆಯಲ್ಲಿ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ದಂಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಸಮಸ್ಯೆ ಅಥವಾ ಇತರೆ ಕಾರಣಗಳು ಈ ಕೃತ್ಯಕ್ಕೆ ಕಾರಣವಾಗಿರಬಹುದೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುರುವಾರ ಬೆಳಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತ್ತು. ಮೇಲ್ನೋಟಕ್ಕೆ ಎಲ್ಲರೂ ವಿಷಸೇವಿಸಿದಂತೆ ಕಾಣುತ್ತಿದೆ ಎಂದು ಎಡಿಸಿಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 42 ಹಾಗೂ 38 ವರ್ಷದ ದಂಪತಿ ಮೃತಪಟ್ಟಿದ್ದಾರೆ. 10 ಮತ್ತು 4 ವರ್ಷದ ಇಬ್ಬರು ಪುತ್ರಿಯರು ಹಾಗೂ 8 ವರ್ಷದ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 30 Jan 2026 8:00 am

Uttar Pradesh| ದಂಪತಿ ಮೃತ್ಯು, ಮೂವರು ಮಕ್ಕಳು ಗಂಭೀರ; ವಿಷಪ್ರಾಶನ ಶಂಕೆ

ಗ್ರೇಟರ್ ನೋಯ್ಡಾ, ಜ.30: ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಪತಿ–ಪತ್ನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಪೋಷಕರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ವಿಷಪ್ರಾಶನದಿಂದ ಸಂಭವಿಸಿದ ಪ್ರಕರಣವೇ ಎಂಬುದರ ಜೊತೆಗೆ, ಕೊಲೆ–ಆತ್ಮಹತ್ಯೆ ಯತ್ನದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಹಣಕಾಸು ತೊಂದರೆ ಅಥವಾ ಯಾವುದೇ ತಕ್ಷಣದ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯೊಳಗೆ ಕುಟುಂಬದ ಎಲ್ಲ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತು. ಮೇಲ್ನೋಟಕ್ಕೆ ಐವರಲ್ಲಿಯೂ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, 42 ಮತ್ತು 38 ವರ್ಷದ ಪತಿ–ಪತ್ನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರ 10 ವರ್ಷದ ಪುತ್ರಿ, 8 ವರ್ಷದ ಪುತ್ರ ಮತ್ತು 4 ವರ್ಷದ ಪುತ್ರಿಯನ್ನು ಗಂಭೀರ ಸ್ಥಿತಿಯಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ತನಿಖೆಯಲ್ಲಿದೆ. ಪ್ರಸ್ತುತ ಇದು ಆತ್ಮಹತ್ಯೆಯ ಪ್ರಕರಣವಾಗಿರಬಹುದು ಎಂದು ತೋರುತ್ತಿದೆ,” ಎಂದು ಎಡಿಸಿಪಿ ಸಂತೋಷ್ ಕುಮಾರ್ ಹೇಳಿದ್ದಾರೆ. 10 ವರ್ಷದ ಪುತ್ರಿ ನೀಡಿದ ಮಾಹಿತಿಯಂತೆ, ಕುಟುಂಬದವರು ಕೊನೆಯದಾಗಿ ಬುಧವಾರ ರಾತ್ರಿ ಭೋಜನ ಸೇವಿಸಿದ್ದರು. ಗುರುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಆಕೆ ಎಚ್ಚರಗೊಂಡು, ತನ್ನ ತಾಯಿ–ತಂದೆ ಎಚ್ಚರಗೊಳ್ಳುತ್ತಿಲ್ಲ ಎಂದು ಅಜ್ಜನಿಗೆ ತಿಳಿಸಿದ್ದಾಳೆ. ಭೋಜನದಲ್ಲಿ ವಿಷ ಮಿಶ್ರಣವಾಗಿರಬಹುದೆಂಬ ಶಂಕೆಯಿದ್ದು, ಯಾವ ವಿಧದ ವಿಷ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ಹಾಗೂ ಫೊರೆನ್ಸಿಕ್ ವರದಿಗಳ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.

ವಾರ್ತಾ ಭಾರತಿ 30 Jan 2026 8:00 am

ಯುಜಿಸಿ ನಿಯಮಾವಳಿಗೆ ತಡೆ: ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಹುನ್ನಾರ!

ಎಡಗೈಯಲ್ಲಿ ಕೊಟ್ಟು, ಬಲಗೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದೇ ಇರಬೇಕು. ಸುಪ್ರೀಂಕೋರ್ಟ್‌ನ ಸೂಚನೆಯನ್ವಯ ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿತ್ತು. ಇದೀಗ ಆ ನಿಯಮಾವಳಿಗಳಿಗೆ ಅದೇ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ನಿಯಮಾವಳಿಗಳು ಜನರನ್ನು ವಿಂಗಡಿಸುತ್ತವೆ, ತಾರತಮ್ಯದಿಂದ ಕೂಡಿದೆ ಹಾಗೂ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಯಮಾವಳಿಗಳು ಜಾರಿಗೆ ಬಂದ ದಿನದಿಂದ ಇದರ ವಿರುದ್ಧ ಮೇಲ್‌ಜಾತಿಯ ಕೆಲವು ಗುಂಪುಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿಯೊಳಗಿರುವ ಕೆಲವು ಜನಪ್ರತಿನಿಧಿಗಳು ತಮ್ಮದೇ ಸರಕಾರದ ವಿರುದ್ಧ ಧ್ವನಿಯೆತ್ತ ತೊಡಗಿದ್ದರು. ಭವಿಷ್ಯದಲ್ಲಿ ಮೇಲ್‌ಜಾತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಮೇಲೆ ನಡೆಯಬಹುದಾದ ದೌರ್ಜನ್ಯಗಳನ್ನು ಊಹಿಸಿ ಕೆಲವರು ಈ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ, ದೌರ್ಜನ್ಯಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸಂಘಟನೆಗಳು ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಸಂತ್ರಸ್ತ ಸಮುದಾಯಗಳ ನೋವಿಗೆ ಸುಪ್ರೀಂಕೋರ್ಟ್ ಕಿವಿಯಾಗುವ ಬದಲು, ಆರೋಪಿ ಸ್ಥಾನದಲ್ಲಿ ನಿಂತಿರುವ ಜನರ ಧ್ವನಿಯಾಗಲು ಹೊರಟಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.ನಿಯಮಾವಳಿಗಳಲ್ಲಿ ಇರುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳ ಕಾರಣಕ್ಕಾಗಿ ಮತ್ತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ತಡೆಯಾಜ್ಞೆಯನ್ನು ನೀಡಿರುವುದಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ತಡೆಯಾಜ್ಞೆಯನ್ನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆಡಿರುವ ಮಾತುಗಳು ಬೇರೆಯೇ ಅರ್ಥವನ್ನು, ಸಂದೇಶವನ್ನು ನೀಡುತ್ತದೆ. ‘‘ಜಾತಿ ಆಧಾರಿತ ತಾರತಮ್ಯವನ್ನು ರೂಪಿಸುವ ಕೆಲವು ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರುಪಯೋಗ ಪಡಿಸಿಕೊಳ್ಳಬಹುದಾಗಿದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಡುತ್ತಿದೆ. ಹಾಗೆ ನೋಡಿದರೆ ದುರುಪಯೋಗದ ಮಾತುಗಳು ಕೇವಲ ಯುಜಿಸಿ ನಿಯಮಾವಳಿಗೆ ಮಾತ್ರ ಅನ್ವಯಿಸುತ್ತದೆಯೆ? ಯುಎಪಿಎ ಕಾಯ್ದೆಗಳ ದುರುಪಯೋಗಕ್ಕಾಗಿ ಇಂದು ಭಾರತವು ವಿಶ್ವದಲ್ಲೇ ಕುಖ್ಯಾತವಾಗಿದೆ. ಪ್ರತಿ ನಿತ್ಯ ಗೋಹತ್ಯೆ ನಿಷೇಧ ಕಾಯ್ದೆಗಳು, ಮತಾಂತರ ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಸುಪ್ರೀಂಕೋರ್ಟ್‌ಗೆ ಕಾಣುತ್ತಿಲ್ಲವೆ? ದೇಶದಲ್ಲಿ ಕೆಲವು ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಎಷ್ಟು ನಿಜವೋ, ಇನ್ನು ಕೆಲವು ಕಾಯ್ದೆಗಳನ್ನು ದುರುಪಯೋಗ ಪಡಿಸುವುದಕ್ಕಾಗಿಯೇ ಜಾರಿಗೆ ತರಲಾಗಿದೆ ಎನ್ನುವುದು ಅಷ್ಟೇ ನಿಜ. ಸುಪ್ರೀಂಕೋರ್ಟ್ ಇವೆಲ್ಲದರ ಕುರಿತಂತೆ ಮೌನವಾಗಿದ್ದು, ಯುಜಿಸಿಯ ಈ ನಿಯಮಗಳ ಬಗ್ಗೆ ಮಾತ್ರ ಯಾಕೆ ತಲೆಕೆಡಿಸಿಕೊಳ್ಳುತ್ತಿದೆ? ಈ ದೇಶದಲ್ಲಿ ತಲೆತಲಾಂತರಗಳಿಂದ ಜಾತಿ ತಾರತಮ್ಯ, ಜಾತಿ ದೌರ್ಜನ್ಯಗಳು ಅಸ್ತಿತ್ವದಲ್ಲಿವೆ. ವಿಪರ್ಯಾಸವೆಂದರೆ ಈ ಜಾತಿ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಮೇಲ್‌ಜಾತಿಯ ಜನರು, ಜಾತಿದೌರ್ಜನ್ಯ ವಿರೋಧಿ ಕಾನೂನು ಎಲ್ಲೋ ಒಂದೆರಡು ಬಾರಿ ದುರುಪಯೋಗವಾದಾಕ್ಷಣ, ಆ ಕಾನೂನಿನ ಔಚಿತ್ಯವನ್ನೇ ಪ್ರಶ್ನಿಸತೊಡಗುತ್ತಾರೆ. ಇದೀಗ ಯುಜಿಸಿ ನಿಯಮಗಳನ್ನು ಪ್ರಶ್ನಿಸುತ್ತಿರುವವರೂ ಅದೇ ವರ್ಗದ ಜನರು. ಅವರ ರಾಗಕ್ಕೆ ಸುಪ್ರೀಂಕೋರ್ಟ್ ತಾಳ ಹಾಕಲು ಮುಂದಾಗಿರುವುದು ಕಳವಳಕಾರಿಯಾಗಿದೆ. ‘‘ದೇಶವು ಹಿಂದಕ್ಕೆ ಚಲಿಸುತ್ತಿದೆಯೆ? ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಏನು ಸಾಧಿಸಿದ್ದೇವೆಯೋ ಈಗ ನಾವು ಅದರಿಂದ ಹಿಂದೆ ಹೋಗಬೇಕೆ?’’ ಎಂದೂ ಸುಪ್ರೀಂಕೋರ್ಟ್ ಕೇಳಿದೆ. ಈ ಪ್ರಶ್ನೆಯನ್ನು ನಿಯಮಾವಳಿಯನ್ನು ವಿರೋಧಿಸುತ್ತಿರುವವರೊಂದಿಗೆ ಕೇಳಿದೆಯೋ ಅಥವಾ ಸರಕಾರವನ್ನು ಕೇಳಿದೆಯೋ ಎನ್ನುವ ಗೊಂದಲವಿದೆ. ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಸಂಪೂರ್ಣ ವಿಫಲವಾಗಿದೆ ಎನ್ನುವುದರಲ್ಲಿ ಸುಪ್ರೀಂಕೋರ್ಟ್‌ಗೆ ಅನುಮಾನವಿದೆಯೆ? ನ್ಯಾಯದೇವತೆಯ ಪ್ರತಿಮೆಯ ಕಣ್ಣಿನ ಪಟ್ಟಿ ಬಿಚ್ಚಿದ ಬಳಿಕವೂ ಈ ದೇಶದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳು, ಜಾತಿ ಅಸಮಾನತೆಗಳು ಯಾಕೆ ನ್ಯಾಯಾಲಯಕ್ಕೆ ಕಾಣುತ್ತಿಲ್ಲ? ಯುಜಿಸಿಯ ಈ ನಿಯಮಗಳಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಜಾತಿ ತಾರತಮ್ಯ ಸೃಷ್ಟಿಯಾಗಿದೆ ಎಂದು ಸುಪ್ರೀಂಕೋರ್ಟ್ ಭಾವಿಸುತ್ತದೆಯೆ ? ಯುಜಿಸಿಯು ಕಠಿಣ ಕಾನೂನನ್ನು ಜಾರಿಗೆ ತರಲು ಹೊರಟಿರುವುದೇ ಜಾತಿ ರಹಿತ ಸಮಾಜವನ್ನು ಸಾಧಿಸುವುದಕ್ಕಾಗಿ ಎನ್ನುವುದು ಸುಪ್ರೀಂಕೋರ್ಟ್‌ಗೆ ಯಾಕೆ ಅರ್ಥವಾಗಿಲ್ಲ? ಅಥವಾ ಜಾತಿ ತಾರತಮ್ಯದ ವಿಷಯದಲ್ಲಿ ಸುಪ್ರೀಂಕೋರ್ಟ್ ನಿದ್ರೆಯಲ್ಲಿರುವಂತೆ ನಟಿಸುತ್ತಿದೆಯೆ? ಈ ದೇಶದ ಉನ್ನತ ಶಿಕ್ಷಣದಲ್ಲಿ ಎಲ್ಲ ಜಾತಿ, ಸಮುದಾಯ ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಜಾತಿ ತಾರತಮ್ಯ ಅಳಿಯಬೇಕು. ಅದಕ್ಕಾಗಿ ಕಠಿಣ ಕಾನೂನಿನ ಮಾತ್ರ ಅದನ್ನು ಸಾಧಿಸಬಹುದಾಗಿದೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಕುರಿತಂತೆ ಹಲವು ಸಂಘಟನೆಗಳು ವರದಿಗಳನ್ನು ನೀಡಿವೆ. ಈ ತಾರತಮ್ಯಕ್ಕೆ ಬಲಿಯಾದವರ ಕುರಿತಂತೆ ಸರಕಾರದ ಬಳಿ ಅಧಿಕೃತ ಅಂಕಿಅಂಶಗಳೂ ಇವೆ. ಈ ಹಿನ್ನೆಲೆಯಲ್ಲಿ ಯುಜಿಸಿಗೆ ಇಂತಹದೊಂದು ನಿಯಮಗಳನ್ನು ಜಾರಿಗೆ ತರುವ ಅನಿವಾರ್ಯ ಸೃಷ್ಟಿಯಾಯಿತು. ಇದು ಸುಪ್ರೀಂಕೋರ್ಟ್‌ಗೆ ತಿಳಿಯದಿರುವುದೇನೂ ಅಲ್ಲ. ಇತ್ತ ಬಿಜೆಪಿಯೂ ಅಡ್ಡಗೋಡೆಯಲ್ಲಿ ದೀಪವಿಡುವ ಪ್ರಯತ್ನ ನಡೆಸುತ್ತಿದೆ. ಹಿಂದುಳಿದವರ್ಗಗಳನ್ನು ಒಲಿಸಿಕೊಳ್ಳಲು ನಿಯಮಗಳನ್ನು ಜಾರಿಗೆ ತರುವ ನಟನೆಯನ್ನಷ್ಟೇ ಮಾಡಿ, ಒಳಗಿನಿಂದಲೇ ಅದರ ವಿರುದ್ಧ ಸಂಚುಗಳನ್ನು ನಡೆಸುತ್ತಿದೆ. ಯುಜಿಸಿಯ ನಿಯಮಗಳ ವಿರುದ್ಧ ಆರೆಸ್ಸೆಸ್ ಸಂಘಟನೆಯೂ ಅಸಮಾಧಾನವನ್ನು ಹೊಂದಿದ್ದು ಸರಕಾರದ ಮೇಲೆ ಒತ್ತಡಗಳನ್ನು ಹಾಕತೊಡಗಿದೆ. ಹೇಗೆ ಯಾವ ಹೋರಾಟಗಳೂ ಇಲ್ಲದೆ ಈ ದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10 ಮೀಸಲಾತಿಯನ್ನು ನೀಡಲಾಯಿತೋ, ಅದೇ ರೀತಿಯಲ್ಲಿ ಒಂದು ಸಣ್ಣ ಗುಂಪಿನ ಆಕ್ಷೇಪಗಳನ್ನೇ ಈ ದೇಶದ ಆಕ್ಷೇಪವೆಂಬಂತೆ ಬಿಂಬಿಸಿ ಯುಜಿಸಿ ನಿಯಮಗಳನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರವೇ ಒಳಗಿಂದೊಳಗೆ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ವಾರ್ತಾ ಭಾರತಿ 30 Jan 2026 7:40 am

ಅಜಿತ್ ಪವಾರ್ ಪತ್ನಿಗೆ ಡಿಸಿಎಂ ಪಟ್ಟ, ಮಗನಿಗೆ ಉಪಚುನಾವಣಾ ಟಿಕೆಟ್: ಎನ್‌ಸಿಪಿ ಬೇಡಿಕೆ

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಬೆನ್ನಲ್ಲೇ, ತೆರವಾಗಿರುವ ಡಿಸಿಎಂ ಹುದ್ದೆಯನ್ನು ಪವಾರ್ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಅವರಿಗೆ ನೀಡಬೇಕು ಹಾಗೂ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಿತ್ ಪವಾರ್ ಪುತ್ರ ಜಯ್ ಅವರಿಗೆ ಟಿಕೆಟ್ ನೀಡಬೇಕು ಎಂದು ಎನ್‌ಸಿಪಿ ಬೇಡಿಕೆ ಮುಂದಿಟ್ಟಿದೆ. ಗುರುವಾರ ಸುನೇತ್ರಾ ಪವಾರ್ (62) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪಕ್ಷದ ಪ್ರಮುಖರು, ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೇ ಎನ್‌ಸಿಪಿ ನೇತೃತ್ವ ವಹಿಸಿ ಮಹಾಯುತಿ ಸರ್ಕಾರ ಸೇರಬೇಕು ಎಂಬ ಬೇಡಿಕೆ ಮುಂದಿಟ್ಟರು. ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತತ್ಕರೆ ಮತ್ತು ಸಚಿವ ಛಗನ್ ಭುಜಬಲ್ ನಿಯೋಗದಲ್ಲಿದ್ದರು. ಸಚಿವ ಹಾಗೂ ಅಜಿತ್ ಪವಾರ್ ಅವರ ಕಟ್ಟಾ ಅನುಯಾಯಿ ನರಹರಿ ಝಿರ್ವಾಲ್ ಬಹಿರಂಗವಾಗಿ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ನಾನು ಎಲ್ಲ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದು, ಸುನೇತ್ರಾ ಸಂಪುಟ ಸೇರಬೇಕು ಎಂದು ಬಯಸಿದ್ದಾರೆ. ನಾನು ಇದನ್ನು ಬೆಂಬಲಿಸುತ್ತೇನೆ. ಪಕ್ಷದ ಹಿರಿಯ ಸದಸ್ಯರ ಜತೆಗೆ ಈ ಬಗ್ಗೆ ಚರ್ಚಿಸಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಜಿತ್ ದಾದಾ ತಮ್ಮ ಪುತ್ರ ಜಯ್ ಅವರನ್ನು ಹೆಚ್ಚಿನ ಹೊಣೆಗಾರಿಕೆಗೆ ಸಜ್ಜುಗೊಳಿಸುತ್ತಿದ್ದರು. ಅವರ ನಿಧನದ ಬಳಿಕ ಜಯ್ ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಎಲ್ಲ ಎನ್‌ಸಿಪಿ ಹಿರಿಯ ಮುಖಂಡರು ಇದನ್ನು ಬೆಂಬಲಿಸಿದ್ದಾರೆ ಎಂದು ನರಹರಿ ತಿಳಿಸಿದರು. 

ವಾರ್ತಾ ಭಾರತಿ 30 Jan 2026 7:28 am

Bandipur: ಕರ್ನಾಟಕ - ಕೇರಳ ಬಂಡೀಪುರ ಸಂಚಾರ: ಪ್ರಿಯಾಂಕಾ ಗಾಂಧಿ ಸರ್ಕಸ್; ಸಚಿವ ನಿತಿನ್ ಗಡ್ಕರಿ ಸಾಥ್

ಬಂಡೀಪುರ: ಬಂಡೀಪುರ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರ್ನಾಟಕ ಹಾಗೂ ಕೇರಳಕ್ಕೆ ಪ್ರಮುಖ ಸಂಚಾರ ಮಾರ್ಗ ಕಲ್ಪಿಸುವ ಬಂಡೀಪುರ ಮಾರ್ಗದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೇರಳ ಸರ್ಕಾರವು ಪ್ರಯತ್ನ ಮಾಡುತ್ತಲ್ಲೇ ಇದೆ. ಅಷ್ಟು ಮಾತ್ರವಲ್ಲ ಕೇರಳ ವಾಯನಾಡ್‌ನ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಹ ಸರ್ಕಸ್ ಮಾಡುತ್ತಿದ್ದಾರೆ. ವಯನಾಡ್‌ನ ಲೋಕಸಭೆ ಉಪ

ಒನ್ ಇ೦ಡಿಯ 30 Jan 2026 7:21 am

ಲಕ್ಕುಂಡಿಯಲ್ಲಿ 12ನೇ ದಿನದ ಉತ್ಖನನ: ತ್ರಿಮುಖ ನಾಗಶಿಲೆ ಹಾಗೂ ಕಲ್ಲಿನ ಮುಕುಟ ಮಣಿ ಪತ್ತೆ

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಹನ್ನೆರಡನೇ ದಿನ ನಡೆದ ಕಾರ್ಯದಲ್ಲಿ ತ್ರಿಮುಖ ನಾಗಶಿಲೆ ಸಿಕ್ಕಿದೆ ಎನ್ನಲಾಗಿದೆ. ಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಉತ್ಖನನ ಕಾರ್ಯ ನಡೆಯುತ್ತಲೇ ಒಂದೊಂದು ವಸ್ತುಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಇದನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಮತ್ತು ಶಾಲಾ ವಿದ್ಯಾರ್ಥಿಗಳು ಲಕ್ಕುಂಡಿಗೆ ಆಗಮಿಸುತ್ತಿದ್ದಾರೆ.

ವಿಜಯ ಕರ್ನಾಟಕ 30 Jan 2026 6:33 am

ಬೆಂಗಳೂರಲ್ಲಿ ಕುಡಿದು ವಾಹನ ಚಾಲಾಯಿಸಿದ 19,548 ವಾಹನಗಳ ಡಿಎಲ್‌ ಅಮಾನತಿಗೆ ಪೊಲೀಸರ ಶಿಫಾರಸು

ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, 19,548 ಚಾಲಕರ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ. 2025ರಲ್ಲಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೂ, ಪರವಾನಗಿ ಅಮಾನತು ಪ್ರಕ್ರಿಯೆ ವಿಳಂಬವಾಗುತ್ತಿರುವುದು ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ.

ವಿಜಯ ಕರ್ನಾಟಕ 30 Jan 2026 6:01 am

ಕೊಪ್ಪಳದಲ್ಲಿ ವಿಶ್ವದ ದುಬಾರಿ ಅಣಬೆ ಪ್ರದರ್ಶನ; ​ಬಿಪಿ, ಶುಗರ್‌ ತಡೆಯುವ ಈ ಅಣಬೆಯ ಬೆಲೆಯೆಷ್ಟು, ಎಲ್ಲಿ ಬೆಳೆಯಲಾಗುತ್ತೆ?

ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ಫೆ.12ರಿಂದ ಐದು ದಿನ ಅಣಬೆ ಮೇಳ ನಡೆಯುತ್ತಿತ್ತು. ಪ್ರತಿ ವರ್ಷವೂ ಇಲ್ಲಿನ ತೋಟಗಾರಿಕಾ ಇಲಾಖೆಯೂ ಒಂದೊಂದು ದುಬಾರಿ ಆಹಾರ ಪದಾರ್ಥವನ್ನು ಪ್ರದರ್ಶನಕ್ಕಿಡುತ್ತಾರೆ. ಅಂತೆಯೇ ಈ ಬಾರಿ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನದಲ್ಲಿ ವಿಶ್ವದ ದುಬಾರಿ ಅಣಬೆ 'ಯಾರ್ಸಾ ಗುಂಬಾ' ಪ್ರದರ್ಶನಕ್ಕಿಡಲಾಗುತ್ತಿದೆ. 15 ಲಕ್ಷ ರೂ. ಬೆಲೆ ಬಾಳುವ ಈ ಅಣಬೆಯನ್ನು 2 ಲಕ್ಷ ರೂ. ವೆಚ್ಚದಲ್ಲಿ ಹಿಮಾಲಯದಿಂದ ತರಿಸಲಾಗುತ್ತಿದೆ. ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಮೇಳದ ಉದ್ದೇಶವಾಗಿದೆ.

ವಿಜಯ ಕರ್ನಾಟಕ 30 Jan 2026 5:58 am

ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಇದ್ದವ ಈಗ ಕ್ಯಾಬ್ ಡ್ರೈವಿಂಗ್ ನಿಂದ ದಿನಕ್ಕೆ 4 ಸಾವಿರ ರೂ. ಸಂಪಾದನೆ

ಬೆಂಗಳೂರಿನಲ್ಲಿ 1.5 ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟ್ಯಾಕ್ಸಿ ಚಾಲ vettoreರೊಬ್ಬರು, ಬದುಕಿಗಾಗಿ ರೈಡ್-ಹೇಲಿಂಗ್ ಆ್ಯಪ್‌ಗಳ ಮೊರೆಹೋಗಿದ್ದಾರೆ. ಪ್ರತಿದಿನ 16 ಗಂಟೆ ದುಡಿದರೂ, ಕಾರಿನ ಬಾಡಿಗೆ, ಗ್ಯಾಸ್, ಊಟದ ಖರ್ಚುಗಳ ನಂತರ ದಿನಕ್ಕೆ ಕೇವಲ 1000 ರೂ. ಉಳಿಯುತ್ತಿದ್ದು, ಈ ಕಠಿಣ ಪರಿಸ್ಥಿತಿಯನ್ನು ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆ್ಯಪ್‌ಗಳ ಒತ್ತಡ ಮತ್ತು ಕಡಿಮೆ ಆದಾಯದಿಂದಾಗಿ ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ವಿಜಯ ಕರ್ನಾಟಕ 30 Jan 2026 2:46 am

ಬೆಂಗಳೂರಿನ ಗೋರಿಪಾಳ್ಯ-ಹೊಸಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ಕಡೆಗೂ ಮುಕ್ತಾಯ; ವಿಜಯನಗರ-ಬಿನ್ನಿಪೇಟೆ-ಹೊಸಹಳ್ಳಿ ಸಂಚಾರ ಸುಗಮ

ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಸೇತುವೆಯು ಪೂರ್ವ-ಪಶ್ಚಿಮ ಸಂಚಾರ ಮಾರ್ಗವನ್ನು ಪುನಃಸ್ಥಾಪಿಸಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ.

ವಿಜಯ ಕರ್ನಾಟಕ 30 Jan 2026 2:05 am

ದುರಾದೃಷ್ಟ ಅಂದ್ರೆ ಇದೇನಾ? ಅಜಿತ್ ಪವಾರ್ ವಿಮಾನ ಚಲಾಯಿಸಬೇಕಿದ್ದ ಪೈಲಟ್ ಟ್ರಾಫಿಕ್ ನಲ್ಲಿ! ಆತನ ಬದಲು ವಿಮಾನ ಹತ್ತಿದ್ದ ಕ್ಯಾ. ಸುಮಂತ್!

ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂಕಿ ಮಾಲಿ ಮತ್ತು ಭದ್ರತಾ ಸಿಬ್ಬಂದಿ ವಿದಿಪ್ ಜಾಧವ್ ಮೃತಪಟ್ಟಿದ್ದಾರೆ. ಕಡಿಮೆ ಗೋಚರತೆಯಿಂದ ಲ್ಯಾಂಡಿಂಗ್ ವೇಳೆ ತಪ್ಪು ನಿರ್ಣಯ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ವಿಮಾನ ತಾಂತ್ರಿಕ ದೋಷಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವಿಜಯ ಕರ್ನಾಟಕ 30 Jan 2026 1:40 am

ಇರಾನ್ ಮೇಲೆ ಅಮೆರಿಕದಿಂದ ಯಾವುದೇ ಕ್ಷಣದಲ್ಲಾದರೂ ದಾಳಿ - ಯುದ್ಧದಲ್ಲಿ US ಪ್ರಾಬಲ್ಯ ಹೆಚ್ಚಾದರೆ ಏನೇನಾಗುತ್ತೆ ಗೊತ್ತಾ?

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು ಅಮೆರಿಕದ ನಿಯಂತ್ರಣಕ್ಕೆ ಬರಲಿವೆ. ಜಾಗತಿಕ ಇಸ್ಲಾಂ ರಾಷ್ಟ್ರಗಳ ಪ್ರಾಬಲ್ಯವೂ ಕುಗ್ಗಲಿದೆ. ಇದು ದೇಶದಲ್ಲಿ ಅಂತರ್ಯುದ್ಧಕ್ಕೂ ಕಾರಣವಾಗಬಹುದು.

ವಿಜಯ ಕರ್ನಾಟಕ 30 Jan 2026 1:06 am

ನಿಮಾನ್ಸ್ ಆಸ್ಪತ್ರೆಗೆ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‍ರ ಮೃತದೇಹ ಹಸ್ತಾಂತರ

ಬೆಂಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಸದಸ್ಯರು ಹಾಗೂ ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ಅವರ ಕುಟುಂಬಸ್ಥರು ಹಿರಿಯ ಕಾರ್ಮಿಕ ಮುಖಂಡ ಎಚ್.ವಿ. ಅನಂತಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಇಲ್ಲಿನ ನಿಮಾನ್ಸ್ ಆಸ್ಪತ್ರೆಗೆ ಗುರುವಾರ ಹಸ್ತಾಂತರ ಮಾಡಿದ್ದಾರೆ. ‘ತಾನು ಸತ್ತ ನಂತರ ತಮ್ಮ ಇಡೀ ದೇಹವನ್ನು ದಾನಮಾಡಬೇಕು’ ಎಂದು ಅನಂತ್ ಸುಬ್ಬರಾವ್ ಅವರು ಹೇಳಿದ್ದರು. ಅವರ ಆಶಯದಂತೆ ಮೃತದೇಹವನ್ನು ನಿಮಾನ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೋರಾಟಗಾರ ಅನಂತ್ ಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರ ವರೆಗೆ ವೈಯಾಲಿಕಾವಲ್‍ನ ಜಿಡಿ ಪಾರ್ಕ್ ಬಡಾವಣೆ ಸಿಪಿಐ ರಾಜ್ಯ ಕಚೇರಿ, ಘಾಟಿ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಪ್ರಿಯಕೃಷ್ಣ ಸೇರಿ ಹಲವರು ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ವಾರ್ತಾ ಭಾರತಿ 30 Jan 2026 12:34 am

ರಾಜ್ಯಪಾಲರ ಕುರಿತು ಹೇಳಿಕೆ: ವಿಪಕ್ಷಗಳ ಒತ್ತಾಯ ಮಣಿದು ವಿಷಾದ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್

ಬೆಂಗಳೂರು: ‘ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸುವುದಕ್ಕಾಗುತ್ತಾ?’ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪದಬಳಕೆ ಮಾಡುತ್ತಿದ್ದಂತೆ ವಿಧಾನ ಪರಿಷತ್‍ನಲ್ಲಿ ಗುರುವಾರ ಕೋಲಾಹಲ ಸೃಷ್ಟಿಯಾಗಿ, ಸದನದಿಂದ ಹರಿಪ್ರಸಾದ್‍ರನ್ನು ಅಮಾನತು ಮಾಡಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಗುರುವಾರ ಬೆಳಗ್ಗೆ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ಡಿ.ಎಸ್.ಅರುಣ್ ಮಾತನಾಡಿ, ರಾಜ್ಯಪಾಲರಿಗೆ ಅಡ್ಡಿ ಮಾಡಿ, ಕೈ ಬೆರಳು ತೋರಿಸಿದ ಬಿ.ಕೆ.ಹರಿಪ್ರಸಾದ್ ಅವರೇ ಈ ಸದನದ ಕಲಾಪಕ್ಕೆ ಅಡ್ಡಿಯಾಗಲು ಮೂಲ ಕಾರಣಕರ್ತರು. ಆದ್ದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಸಭಾಪತಿಯವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ರಾಷ್ಟ್ರಗೀತೆಗೆ ಅಗೌರವ ತೋರಿರುವ ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸಕಾಗುತ್ತಾ? ಎಂದು ಪ್ರತ್ಯುತ್ತರಿಸಿದರು. ಈ ಮಾತಿಗೆ ಕೆರಳಿದ ವಿಪಕ್ಷ ಸದಸ್ಯರು ಹರಿಪ್ರಸಾದ್‍ರನ್ನು ಸದನದಿಂದ ಹೊರಹಾಕಬೇಕೆಂದು ಕೋಲಾಹಲ ಸೃಷ್ಟಿಸಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಈ ಹಂತದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಪಕ್ಷ ನಾಯಕರು ಹಾಗೂ ಸದಸ್ಯರು ಬಿ.ಕೆ.ಹರಿಪ್ರಸಾದ್ ಅವರ ವಿರುದ್ಧ ಜ.23, 28, 29 ರಂದು ಅವಾಚ್ಯ ಶಬ್ದಗಳಿಂದ ಮಾತನಾಡಿರುವ ಕುರಿತು ದೂರು ಕೊಟ್ಟಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಹರಿಪ್ರಸಾದ್ ಅವರಿಗೆ ಪ್ರಶ್ನಿಸಿದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನನ್ನ ಬಗ್ಗೆ ಆರೋಪ ಮಾಡಿದಾಗ ಮಾತನಾಡಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಅದನ್ನು ವಾಪಸ್ ಪಡೆಯುತ್ತೇನೆ ಎಂದರು. ಈ ವೇಳೆ ಸಭಾಪತಿ ಮಾತನಾಡಿ, ಸದನದಲ್ಲಿ ಇಂತಹ ಮಾತುಗಳು ಶೋಭೆ ತರುವುದಿಲ್ಲ. ನೀವು ಹಿರಿಯರಿದ್ದೀರಾ, ದೊಡ್ಡ ಮನಸ್ಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದು ಹೇಳಿದರು. ಆಗ ಸಭಾಪತಿ ಮಾತಿಗೆ ಒಪ್ಪಿದ ಬಿ.ಕೆ.ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹರಿಪ್ರಸಾದ್ ವಿರುದ್ಧ ಕ್ರಮವಾಗಬೇಕು, ಅಮಾನತು ಆಗಬೇಕು ಎಂದು ಪಟ್ಟುಹಿಡಿದರು. ಬಳಿಕ ಸಭಾಪತಿ ಹೊರಟ್ಟಿಯವರು, ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಯಾರು ಹೀಗೆ ಮಾತನಾಡಬೇಡಿ. ಸದನಕ್ಕೆ ಇದು ಗೌರವವಲ್ಲ ಎಂದರು. ಸಭಾಪತಿಗಳ ಮಾತಿಗೆ ಒಪ್ಪದ ವಿಪಕ್ಷ ಸದಸ್ಯರು ಹರಿಪ್ರಸಾದ್ ಅಮಾನತು ಮಾಡುವಂತೆ ಘೋಷಣೆ ಕೂಗಿದರು.

ವಾರ್ತಾ ಭಾರತಿ 30 Jan 2026 12:28 am

ಮದುವೆ ಆರತಕ್ಷತೆಗೆ ಹೊರಟಿದ್ದ ಯುವಕನಿಗೆ ಚೂರಿ ಇರಿತ - ನೀನು ಹೋಗ್ಬೇಕಾಗಿರೋದು ಮದ್ವೆಗಲ್ಲ, ಸ್ಮಶಾನಕ್ಕೆ'' ಎನ್ನುತ್ತಾ ಇರಿದರು!

ಕೊಳ್ಳೇಗಾಲದಲ್ಲಿ ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ವರನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಧುವಿನ ಮಾಜಿ ಬಾಯ್‌ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಘಟನೆ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 30 Jan 2026 12:19 am

Davanagere | ಇಡ್ಲಿ ಸಾಂಬಾರಿಗೆ ಬಿದ್ದ ಹುಳು; ತಟ್ಟೆ ಸಮೇತ ಎಡಿಸಿಗೆ ವಿದ್ಯಾರ್ಥಿಗಳಿಂದ ದೂರು

ದಾವಣಗೆರೆ: ನಗರದ ಬೂದಾಳ್ ರಸ್ತೆಯ ಎಸ್‌ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಹುಳ ಬಿದ್ದ ಸಂಬಾರ್, ಇಡ್ಲಿ ತಟ್ಟೆಯ ಸಮೇತವೇ ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ನಿತ್ಯವೂ ಕೂದಲು, ಹರಳು, ಸಣ್ಣ ಕಲ್ಲು, ಕಡ್ಡಿಗಳು, ಹುಳಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಅಡುಗೆ ಸಿಬ್ಬಂದಿಯಾಗಲಿ, ವಾರ್ಡನ್ ಆಗಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಾರ್ಡನ್, ಅಡುಗೆ ಸಿಬ್ಬಂದಿಯ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾನೇ ಶೀಘ್ರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿದ್ದಾರೋ ಇಲ್ಲವೋ, ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಭರವಸೆ ನೀಡಿದರು.

ವಾರ್ತಾ ಭಾರತಿ 30 Jan 2026 12:05 am

European Union: ಇರಾನ್‌ಗೆ ದೊಡ್ಡ ಆಘಾತ ನೀಡಿದ ಯುರೋಪ್ ಒಕ್ಕೂಟ, ಯುದ್ಧಕ್ಕೆ ಮೊದಲೇ ಬಿಗ್ ಶಾಕ್

ಮಧ್ಯಪ್ರಾಚ್ಯದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಪದೇ ಪದೇ ಈ ಭಾಗದಲ್ಲೇ ಯುದ್ಧಗಳು ಆರಂಭ ಆಗುತ್ತಿವೆ. ಒಂದು ಕಡೆ ಇರಾನ್ ಮತ್ತು ಅಮೆರಿಕ ಯಾವುದೇ ಕ್ಷಣದಲ್ಲಿ ಭಾರಿ ರಣಕಾಳಗ ಶುರು ಮಾಡಬಹುದು ಎಂಬ ಆತಂಕ ಆವರಿಸಿದ ಸಮಯದಲ್ಲೇ, ಒಂದೊಂದೇ ದೇಶಗಳು ಇರಾನ್ ಬೆನ್ನಿಗೆ ನಿಲ್ಲುತ್ತಿವೆ. ಇದರ ನಡುವೆ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಇರಾನ್ ವಿರುದ್ಧ

ಒನ್ ಇ೦ಡಿಯ 29 Jan 2026 11:51 pm

`ಪುಕ್ಕಲ ಪಾಕ್ ಗೆ ಅಷ್ಟೊಂದು ಧಮ್ ಇದ್ಯಾ?': ಕಣ್ಣಾಮುಚ್ಚಾಲೆ ಆಡುತ್ತಿರುವ ಪಿಸಿಬಿಗೆ ಅಜಿಂಕ್ಯ ರಹಾನೆ ಮಂಗಳಾರತಿ!

ICC T20 World Cup 2025 - ಪಾಕಿಸ್ತಾನ ನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಮಾತನಾಡುತ್ತಿರುವುದು ಕ್ರಿಕೆಟ್ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕಿಸ್ತಾನವು ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದೆ. ಆದರೆ ಪಾಕಿಸ್ತಾನಕ್ಕೆ ಅಷ್ಟೊಂದು ಧೈರ್ಯ ಇದೆ ಎಂದು ನಾನು ಭಾವಿಸುವುದಿಲ್ಲ ಎಂದು ಭಾರತದ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಕಾಲೆಳೆದಿದ್ದಾರೆ. ಪಾಕಿಸ್ತಾನವು ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ ಕರ್ನಾಟಕ 29 Jan 2026 11:48 pm

ನಾನು ಸಿಎಂ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ: ಡಿಕೆ ಶಿವಕುಮಾರ್

ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ, ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು. ಜಾರ್ಜ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ವಿಪಕ್ಷದವರು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಲೇ ಇರುತ್ತಾರೆ. ಆಗ ಅಧಿಕಾರಿಗಳಿಗೆ ನಾವು ಕೆಲವೊಂದು ಸೂಚನೆ ನೀಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಹಸ್ತಕ್ಷೇಪದ ವಿಚಾರ ನನಗೆ ಗೊತ್ತಿಲ್ಲ ಎಂದರು. ಮನರೇಗಾ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ವಿಚಾರ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ರದ್ದು ಪಡಿಸಿರುವ ವಿಚಾರವನ್ನು ಜಾಹೀರಾತು ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ?. ಮನರೇಗಾ ವಿಚಾರದಲ್ಲಿ ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಅದನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಮನರೇಗಾ ಯೋಜನೆಯಿಂದ ಒಳ್ಳೆಯ ಕೆಲಸ ನಡೆಯುತ್ತಿದೆ. ಹಸಿದವರಿಗೆ ಆಹಾರ ಕೊಡಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಗಾಂಧಿ ಹೆಸರನ್ನು ತೆಗೆದು ಹಾಕಿ, ಅದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್‌ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಡಿಕೆಶಿ, ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಾ ಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ ಎಂದರು. ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ಇದ್ದ ವಾಹನ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಲಿ, ಎಲ್ಲಿತ್ತು ಎಂದು ಹೇಳಲಿ. ಅದು ಕಾಂಗ್ರೆಸ್‌ಗೆ ಸೇರಿದ್ದು ಎಂದು ಹೇಳಿ ಸುಮ್ಮನೆ ನಗೆ ಪಾಟಲಿಗೀಡಾಗುವುದು ಬೇಡ ಎಂದು ತಿರುಗೇಟು ನೀಡಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳಿಗೂ ಶೀಘ್ರದಲ್ಲೇ ಚುನಾವಣೆ ನಡೆಸಲು ಕ್ರಮ ವಹಿಸಲಾಗುವುದು ಎಂದರು. ಐದು ಗ್ಯಾರಂಟಿ ಕುರಿತು ಮನೆಗೊಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು ೭೩ ಸಾವಿರ ಜನ ಇದರಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಮುಸ್ಲಿಮರಿಗೆ ಮೆಹಂದಿ, ಮಕ್ಕಳಿಗೆ ಚಿತ್ರಕಲೆ, ಯೋಗ ಸ್ಪರ್ಧೆ ನಡೆಯುತ್ತಿದೆ ಎಂದು ಡಿಕೆಶಿ ತಿಳಿಸಿದರು.

ವಾರ್ತಾ ಭಾರತಿ 29 Jan 2026 11:41 pm

ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು. ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು. ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಮಂಜೂರು ಆಗಿ ಕೆಲವು ಕಡೆ ಅಭಿವೃದ್ಧಿ ಕಾಮಗಾರಿ ಆಗಿ ಹಣ ಉಳಿಕೆ ಆಗಿದೆ. ಆದರೂ ಕೂಡ ನಾಲ್ಕು ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಆಗಿಲ್ಲ.ಕೆಲಸ ಆಗದ ವಾರ್ಡ್ ಗಳ ಕೆಲಸ ಮಾಡಿಸಿ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು. ಸುಜಿತ್ ಮಾಡೂರು ಅಭಿವೃದ್ಧಿ ಕಾಮಗಾರಿ ಗೆ ಹಣ ಇಡಿ, ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಆಗ್ರಹಿಸಿದರು. ಅಭಿವೃದ್ಧಿ ಯಲ್ಲಿ ತಾರತಮ್ಯ ಆಗಿಲ್ಲ.ಎಲ್ಲದಕ್ಕೂ ದಾಖಲಾತಿ ಇದೆ. ಈ ವಿಚಾರದಲ್ಲಿ ತಪ್ಪು ಸಂದೇಶ ನೀಡುವುದು ಬೇಡ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು. ಪ್ರತಿ ವಾರ್ಡ್ ಗೆ ಐದು ಲಕ್ಷ ಕೊಟ್ಟಿದ್ದೀರಿ.ಬಹಳಷ್ಟು ಕಡೆ ಕೆಲಸ ಆಗಿದೆ.ನಮ್ಮ ವಾರ್ಡ್ ಗೆ ಮೀಸಲಿಟ್ಟು ಹಣ ದ ಟೆಂಡರ್ ಪ್ರಕ್ರಿಯೆ ಯಾಕಾಗಿಲ್ಲ, ಈ ತಾರತಮ್ಯ ಯಾಕೆ ಬೇಕು ಎಂದು ಅಹ್ಮದ್ ಅಜ್ಜಿನಡ್ಕ ಪ್ರಶ್ನಿಸಿದರು. 27 ಲಕ್ಷ ನೀರು ಬಿಲ್ ಬಾಕಿ ಇದೆ ಎಂದು ಚರ್ಚೆ ಆಗಿದೆ. ಈ ಬಗ್ಗೆ ಯಾವ ಕ್ರಮ ಆಗಿದೆ ಎಂಬ ಪ್ರಶ್ನೆಗೆ ಮಾಲಿನಿ ಅವರು ಈಗಾಗಲೇ ಒಂದು ಲಕ್ಷ ವಸೂಲಿ ಆಗಿದೆ.ಉಳಿದ ಮೊತ್ತ ಶೀಘ್ರ ಮಾಡಲಾಗುವುದು ಎಂದರು. ಮೆಸ್ಕಾಂ ಜೆಇ ಮಾರಪ್ಪ ವಿದ್ಯುತ್ ಸಮಸ್ಯೆ ಮತ್ತದರ ಪರಿಹಾರ ಬಗ್ಗೆ ಮಾಹಿತಿ ನೀಡಿದರು. ಕೋಟಿ ಕಾರ್ ವ್ಯಾಪ್ತಿಯಲ್ಲಿ ಗೂಡಂಗಡಿ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ದೂರು ಬಂದಿವೆ. ಮದ್ಯಪಾನ ಮಾಡಿ ಪಾರ್ಕಿಂಗ್ ಮಾಡುತ್ತಾರೆ ಎಂಬ ಸಂಶಯವೂ ಇದೆ. ಈ ರೀತಿ ಪಾರ್ಕಿಂಗ್ ಮಾಡುವುದು ಕಂಡಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಟ್ರಾಫಿಕ್ ಎಎಸ್ಐ ಸಂತೋಷ್ ಪಡೀಲ್ ಮಾಹಿತಿ ನೀಡಿದರು. ಎಚ್ ಪಿಟಿ ಕ್ಯಾನ್ಸರ್ ಇದೆ. ಇದು ವೈರಸ್ ನಿಂದ ಬರುತ್ತದೆ. ಈ ಮಾರಕ ಕಾಯಿಲೆಗೆ ಲಸಿಕೆ ಇದೆ. ಸರ್ಕಾರ ದಿಂದ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆ ಯಲ್ಲಿ ಒಂದು ಡೋಸ್ ಔಷಧಿ ಗೆ 11ಸಾವಿರ ಇದೆ. ವ್ಯಾಕ್ಸಿನ್ ಶೀಘ್ರ ಬರಲಿದೆ. ಈ ವ್ಯಾಕ್ಸಿನ್ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಯಲ್ಲಿ 14 ರಿಂದ 15 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಆರೋಗ್ಯ ಅಧಿಕಾರಿ ತಿಳಿಸಿದರು. ಅನುದಾನ ಕೋರಿ ಪ್ರತಿಭಟನೆ ಪನೀರ್ ನಲ್ಲಿ ಮಳೆ ಬಂದು ಕಾಂಪೌಂಡ್ ಗೋಡೆ ಹೋಗಿದೆ.ಈ ವಾರ್ಡ್ ಗೆ ತುರ್ತು ಕಾಮಗಾರಿಗೆ ಶಾಸಕ ರ ಫಂಡ್ ಸಿಕ್ಕಿಲ್ಲ. ಪಂಚಾಯತ್ ಕೂಡ ನೀಡುವುದಿಲ್ಲ. ಇದರಿಂದ ನನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ ಅಧ್ಯಕ್ಷ ರ ಟೇಬಲ್ ಮುಂದೆ ಕುಳಿತು ಆಡಳಿತದ ವಿರುದ್ಧ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲಾ ವಾರ್ಡ್ ಗೆ ಅನುದಾನ ಇಟ್ಟ ಪಂಚಾಯತ್ ನನ್ನ ವಾರ್ಡ್ ನ್ನು ಕಡೆಗಣನೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 29 Jan 2026 11:33 pm

Gaza Peace: ಗಾಜಾ ಪಟ್ಟಿ ಹಸ್ತಾಂತರ ವಿಚಾರದಲ್ಲಿ ಇಸ್ರೇಲ್ ದಿಟ್ಟ ನಿರ್ಧಾರ, ಹಮಾಸ್ ಸೈಲೆಂಟ್?

ಗಾಜಾ ಪಟ್ಟಿ ಇದೀಗ ಒಂದಷ್ಟು ನೆಮ್ಮದಿ ನೋಡುವ ದಿನಗಳು ಬರುತ್ತಿವೆ, ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ನಂತರ ಇಡೀ ಗಾಜಾ ಪಟ್ಟಿ ಹಿಂಸಾಚಾರದ ಬೆಂಕಿಗೆ ಧಗಧಗಿಸಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುವ ವಾತಾವರಣ ನಿರ್ಮಾಣ ಆಗಿದೆ, ಹತ್ತಾರು ಸಾವಿರ ಜನ ಈ ಯುದ್ಧದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗ ಹಮಾಸ್ ಮೇಲೆ ಹಿಡಿತಕ್ಕೆ

ಒನ್ ಇ೦ಡಿಯ 29 Jan 2026 11:23 pm

WPL 2026- ಯುಪಿ ವಾರಿಯರ್ಸ್ ಗೆ ನೀರು ಕುಡಿಸಿದ ಗ್ರೇಸ್ ಹ್ಯಾರಿಸ್! ರಾಜಾರೋಷವಾಗಿ RCB ಫೈನಲ್ ಪ್ರವೇಶ

RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿ ಅಗ್ರಸ್ಥಾನಿಯಾದ ಆರ್ ಸಿಬಿ ನೇರವಾಗಿ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆಲ್ರೌಂಡ್ ಪ್ರದರ್ಶನ ನೀಡಿ ಗ್ರೇಸ್ ಹ್ಯಾರಿಸ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ವಿಜಯ ಕರ್ನಾಟಕ 29 Jan 2026 11:05 pm

ಏರಿದ ಬಳಿಕ ಇಳಿದ ಚಿನ್ನದ ದರ; ಬೆಳ್ಳಿ ಶೇ.6 ಕುಸಿತ

'ಚಿನ್ನ' ದ ಓಟಕ್ಕೆ ಬಿತ್ತು ಬ್ರೇಕ್!

ವಾರ್ತಾ ಭಾರತಿ 29 Jan 2026 11:00 pm

ಜಗತ್ತಿನ 8ನೇ ಅದ್ಭುತ; ಶಾಂತಿ ಮಾತುಕತೆ ನಡೆಸಲು ಝೆಲೆನ್ಸ್ಕಿ ಅವರನ್ನು ಮಾಸ್ಕೋಗೆ ಕರೆದ ಪುಟಿನ್‌; ಯುದ್ಧ ನಿಲ್ಲುತ್ತೆ?

ಇದು ನಿಜಕ್ಕೂ ಒಂದು ರೀತಿಯಲ್ಲಿ ಜಗತ್ತಿನ ಎಂಟನೇ ಅದ್ಭುತ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಬಂದೂಕುಯ ಗುರಿ ಇಟ್ಟಿರುವ ರಷ್ಯಾ-ಉಕ್ರೇನ್‌, ಕೊನೆಗೂ ಶಾಂತಿಯ ಮಾತುಗಳನ್ನಾಡಲಾರಂಭಿಸಿವೆ. ಇದರ ಮೊದಲ ಹೆಜ್ಜೆಯಾಗಿ ಉಕ್ರೇನ್‌ ಅಧ್ಯಕ್ಷರನ್ನು ಶಾಂತಿ ಮಾತುಕತೆಗಾಗಿ ರಷ್ಯಾ ಮಾಸ್ಕೋಗೆ ಬರುವಂತೆ ಆಹ್ವಾನಿಸಿದೆ. ಆದರೆ ಈ ಆಹ್ವಾನವನ್ನು ವೊಲೊಡಮಿರ್‌ ಝೆಲೆನ್ಸ್ಕಿ ಒಪ್ಪಿಕೊಂಡಿದ್ದರ ಬಗ್ಗೆ ಕೈವ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶಾಂತಿಗಾಗಿ ಕೈಚಾಚಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ವಿಜಯ ಕರ್ನಾಟಕ 29 Jan 2026 10:53 pm

Russia Invites Ukraine: ಉಕ್ರೇನ್ ಜೊತೆ ಸಂಧಾನ ಮಾಡಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ ಮತ್ತು ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ರೀತಿ ಆಗಿ ಹೋಗಿದೆ. ಇಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಷ್ಟೆಲ್ಲಾ ಪ್ರಯತ್ನ ಹಾಕಿ, ಇಬ್ಬರ ನಡುವಿನ ಯುದ್ಧ ನಿಲ್ಲಿಸಲು ಸಂಧಾನ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬಂದೇ ಇಲ್ಲ. ಒಂದು ದಿನ ರಷ್ಯಾ ದಾಳಿ ಮಾಡಿದರೆ, ಮರುದಿನವೇ ಉಕ್ರೇನ್ ದಾಳಿ

ಒನ್ ಇ೦ಡಿಯ 29 Jan 2026 10:53 pm

BJP ಮಾಜಿ ಶಾಸಕ ಅಶ್ವತ್ಥ ನಾರಾಯಣಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ! ಬೆಂಗಳೂರಿನಲ್ಲಿ ಲೇಔಟ್‌ ಅಕ್ರಮ

ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ ಇದಾಗಿದೆ. ಮೈಸೂರಿನ ವೈದ್ಯೆ ಡಾ. ಕಾವ್ಯಶ್ರೀ ಅವರ ದೂರಿನ ಅನ್ವಯ ಈ ಆದೇಶ ಹೊರಡಿಸಲಾಗಿದೆ.

ವಿಜಯ ಕರ್ನಾಟಕ 29 Jan 2026 10:40 pm

ಬೀದಿನಾಯಿಗಳ ತೆರವು ಆದೇಶದಲ್ಲಿ ಬದಲಾವಣೆ ಕೋರಿ ಮನವಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ,ಜ.29: ಬೀದಿನಾಯಿಗಳನ್ನು ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಿಸಿ ತಾನು ಈ ಹಿಂದೆ ನೀಡಿದ್ದ ಆದೇಶಗಳಲ್ಲಿ ಬದಲಾವಣೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಕಾಯ್ದಿರಿಸಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಂಜಾಬ್, ತಮಿಳುನಾಡು, ಉತ್ತರಪ್ರದೇಶ ಹಾಗೂ ರಾಜಸ್ಥಾನದಂತ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಆ್ಯಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಗೌರವ್ ಅಗರ್ವಾಲ್ ಅವರ ಹೇಳಿಕೆಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. ರಾಷ್ಟ್ರೀಯ ಹೆದ್ದಾರಿಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸಲು ಹಾಗೂ ರಸ್ತೆಗಳಿಗೆ ಬೇಲಿ ನಿರ್ಮಿಸಬೇಕೆಂದು ತಾನು 2025ರ ನವೆಂಬರ್ 7ರಂದು ನೀಡಿದ್ದ ಆದೇಶದ ಅನುಸರಣೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ನ್ಯಾಯವಾದಿಯವರ ವಾದವನ್ನು ಕೂಡ ನ್ಯಾಯಪೀಠ ಆಲಿಸಿತು. ಪ್ರಾಣಿಗಳಿಗೆ ಆಶ್ರಯಧಾಮಗಳನ್ನು ನಿರ್ಮಿಸಲು ಹಾಗೂ ಪ್ರಾಣಿಗಳಿಗೆ ಜನನ ನಿಯಂತ್ರಣ ಕೇಂದ್ರಗಳನ್ನು ನಿರ್ಮಿಸಲು ಅನುಮತಿ ಕೋರಿದ ಎನ್‌ಜಿಒಗಳ ಅರ್ಜಿಗಳನ್ನು ಪರಿಷ್ಕರಿಸುವಂತೆಯೂ ನ್ಯಾಯಾಲಯವು ಈ ಸಂದರ್ಭ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಸೂಚಿಸಿದೆ.

ವಾರ್ತಾ ಭಾರತಿ 29 Jan 2026 10:37 pm

WPL 2026 RCB: ಆರ್‌ಸಿಬಿ ವಿರುದ್ಧ ಮಂಡಿಯೂರಿದ ಯುಪಿ ವಾರಿಯರ್ಸ್: ಸ್ಮೃತಿ ಮಂಧಾನ ಬಳಗ ನೇರ ಫೈನಲ್‌ ಪ್ರವೇಶ

WPL 2026 RCB: ಡಬ್ಲ್ಯೂಪಿಎಲ್‌ 2026ರ ಲೀಗ್ ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡು, ಎಲಿಮಿನೇಟರ್ ಹಂತವನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒನ್ ಇ೦ಡಿಯ 29 Jan 2026 10:35 pm

ಬಳ್ಳಾರಿ | ಛಾಯಾಗ್ರಾಹಕರ ಕುಟುಂಬಗಳ ಉತ್ತಮ ಜೀವನಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಲಿ: ವಾಮದೇವ ಶ್ರೀ

ಬಳ್ಳಾರಿ / ಕಂಪ್ಲಿ : ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಜೀವನ ಅತ್ಯಂತ ಸಂಕಷ್ಟದಲ್ಲಿದ್ದು, ಛಾಯಾಗ್ರಾಹಕರ ಹಾಗೂ ಅವರ ಕುಟುಂಬಗಳ ಉತ್ತಮ ಜೀವನಕ್ಕಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರು ಮಹಾಂತರ ಮಠದ ಪೀಠಾಧಿಪತಿಗಳಾದ ಷ.ಬ್ರ. ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ವೀಶೈಭವನದಲ್ಲಿ ಕಂಪ್ಲಿ ತಾಲ್ಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘ ಏರ್ಪಡಿಸಿದ್ದ ತಾಲ್ಲೂಕು ಛಾಯಾ ಸಮ್ಮಿಲನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಹಳೆಯ ಛಾಯಾಗ್ರಾಹಕರು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಆದರೂ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುವುದು ಛಾಯಾಗ್ರಾಹಕರ ಕರ್ತವ್ಯ ಎಂದು ಹೇಳಿದರು. ಸಮಾರಂಭವನ್ನು ಶಾಸಕರ ಪರವಾಗಿ ಉದ್ಘಾಟಿಸಿದ ರಾಜೇಶ್ ಸಿಂಗ್ ಮಾತನಾಡಿ, ಕಂಪ್ಲಿ ಶಾಸಕರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಛಾಯಾಗ್ರಾಹಕರ ಪರವಾಗಿ ಶ್ರಮಿಸಿದ್ದಾರೆ. ಮುಂದೆಯೂ ಛಾಯಾಗ್ರಾಹಕರ ನೆರವಿಗೆ ಸದಾ ಸಿದ್ಧರಿದ್ದಾರೆ ಎಂದು ತಿಳಿಸಿ, ಶಾಸಕರಿಂದ ಸಂಘಕ್ಕೆ ನೀಡಲಾದ 50,000 ರೂ. ದೇಣಿಗೆಯನ್ನು ಹಸ್ತಾಂತರಿಸಿದರು. ಕೆಎಪಿಸಿಎಂಎಸ್ ಅಧ್ಯಕ್ಷ ಹೊಸಕೇಟೆ ಜಗದೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂಪ್ಲಿ ಪಿಐ ಕೆ.ಬಿ. ವಾಸುಕುಮಾರ, ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ವಿಶೇಷ ಆಹ್ವಾನಿತರಾಗಿ ಜಿ. ವೀರಭದ್ರಪ್ಪ ಮತ್ತು ಕುಟುಂಬ, ಆನಂದ ಕಾಗಲ್ಕರ್, ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಛಾಯಾಗ್ರಾಹಕ ಮುಖಂಡರಾದ ಶ್ರೀಧರ್, ನಾಗರಾಜ್, ವಿನಯ್, ಮಲ್ಲಿಕಾರ್ಜುನಗೌಡ, ಷಡಾಕ್ಷರಯ್ಯ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಜಗದೀಶಗೌಡ, ಜಿ. ಸಿದ್ದರಾಮನಗೌಡ, ರಾಘವೇಂದ್ರಶೆಟ್ಟಿ, ಜಿ.ಎಚ್. ಶಶೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಛಾಯಾಗ್ರಾಹಕರ ಸಮ್ಮಿಲನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಕಾರ್ಯಕ್ರಮವನ್ನು ಅತಿಥಿ ಶಿಕ್ಷಕ ಎಸ್. ರಾಮು ನಿರ್ವಹಿಸಿದರು. ಕಾರ್ಯದರ್ಶಿ ಜಿ.ಎಚ್. ಶಶೀಧರ್ ವರದಿ ಮಂಡಿಸಿದರು. ನಂತರ ಛಾಯಾಗ್ರಾಹಕರ ಕುಟುಂಬದ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಾರ್ತಾ ಭಾರತಿ 29 Jan 2026 10:34 pm

ಬಾರಾಮತಿ ವಿಮಾನ ದುರಂತ: ಟೇಬಲ್‌ಟಾಪ್ ರನ್‌ವೇಗಳು ಎಷ್ಟು ಸುರಕ್ಷಿತ?

ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ಲಿಯರ್‌ಜೆಟ್ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು, ಮತ್ತೊಮ್ಮೆ ಟೇಬಲ್‌ಟಾಪ್ ರನ್‌ವೇಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನವರಿ 28ರಂದು ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ಈ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿದ್ದರು. ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು. ಬಾರಾಮತಿ ಏರ್‌ಸ್ಟ್ರಿಪ್ ಚಿಕ್ಕದಾಗಿದ್ದು, ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಸೌಲಭ್ಯಗಳನ್ನು ಹೊಂದಿಲ್ಲ. ಪೈಲಟ್ ಹಸ್ತಚಾಲಿತ ಹಾಗೂ ದೃಶ್ಯ ಲ್ಯಾಂಡಿಂಗ್‌ಗೆ ಪ್ರಯತ್ನಿಸಬೇಕಾಯಿತು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನವು ಟೇಬಲ್‌ಟಾಪ್ ರನ್‌ವೇಯ ಅಂಚಿನ ಬಳಿ ಅಪ್ಪಳಿಸಿತು. ಮುಂಬೈನಿಂದ ಹಾರಿದ್ದ ಲಿಯರ್‌ಜೆಟ್ 45, ಸುಧಾರಿತ ಲ್ಯಾಂಡಿಂಗ್ ಸಾಧನಗಳಿಲ್ಲದೆ, ಸರಾಸರಿ ಸಮುದ್ರ ಮಟ್ಟದಿಂದ 604 ಮೀಟರ್ ಎತ್ತರದಲ್ಲಿರುವ 1,770 ಮೀಟರ್ ರನ್‌ವೇಯಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡಿತು. ಹತ್ತಿರದ ಮೈದಾನಕ್ಕೆ ಡಿಕ್ಕಿ ಹೊಡೆದಾಗ ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಬೈನಿಂದ ಬೆಳಿಗ್ಗೆ 08.10ರ ಸುಮಾರಿಗೆ ಹೊರಟ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇ ತಲುಪುತ್ತಿದ್ದಂತೆ ಬೆಳಿಗ್ಗೆ 08.44ರ ಸುಮಾರಿಗೆ ಅಪಘಾತಕ್ಕೀಡಾಯಿತು. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ತನಿಖೆ ತ್ವರಿತವಾಗಿ ಪ್ರಗತಿಯಲ್ಲಿದೆ. ಅಪಘಾತಕ್ಕೊಳಗಾದ ವಿಮಾನದ ಬ್ಲಾಕ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (MOCA) ತಿಳಿಸಿದ್ದು, AAIB ನಿಯಮಗಳು–2025ರ ನಿಯಮಗಳು 5 ಮತ್ತು 11ರ ಪ್ರಕಾರ ತನಿಖೆಯನ್ನು ಪ್ರಾರಂಭಿಸಲಾಗಿದೆ. ಟೇಬಲ್‌ಟಾಪ್ ರನ್‌ವೇಗಳಲ್ಲಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಾಮಾನ್ಯ ರನ್‌ವೇಗಳಿಗಿಂತ ಹೆಚ್ಚು ಸವಾಲಿನದ್ದು ಎಂದು ತಜ್ಞರು ಹೇಳುತ್ತಾರೆ. ಬಾರಾಮತಿ ವಾಯುನೆಲೆ ಸರಿಸುಮಾರು 2,000 ಅಡಿ ಎತ್ತರದಲ್ಲಿದೆ. ಇಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಇಲ್ಲ. ಆದ್ದರಿಂದ ಪೈಲಟ್‌ಗಳು ಲ್ಯಾಂಡಿಂಗ್‌ಗೆ ಹಸ್ತಚಾಲಿತ ಹಾಗೂ ದೃಶ್ಯ ತಂತ್ರಗಳನ್ನೇ ಅವಲಂಬಿಸಬೇಕಾಗುತ್ತದೆ. ಕೆಲವು ಸಿಸಿಟಿವಿ ದೃಶ್ಯಾವಳಿಗಳು ವಿಮಾನವು ಅಪ್ಪಳಿಸುವ ಮೊದಲು ಸ್ವಲ್ಪ ಓರೆಯಾಗಿ ಬಳಿಕ ಬೆಂಕಿ ಹತ್ತಿಕೊಂಡಿರುವುದನ್ನು ತೋರಿಸಿದ್ದರೂ, ಆರಂಭಿಕ ತನಿಖೆಗಳು ಕಳಪೆ ಗೋಚರತೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸೂಚಿಸಿವೆ. ಡಿಜಿಸಿಎ ಮೂಲಗಳು ಬಾರಾಮತಿ ರನ್‌ವೇಯನ್ನು ಟೇಬಲ್‌ಟಾಪ್ ರನ್‌ವೇ ಎಂದು ಹೇಳಿದ್ದು, ಇಂತಹ ರನ್‌ವೇಗಳು ಎಷ್ಟು ಸುರಕ್ಷಿತ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಟೇಬಲ್‌ಟಾಪ್ ರನ್‌ವೇಗಳು ಎಂದರೆ? ಹೆಸರೇ ಸೂಚಿಸುವಂತೆ, ಗುಡ್ಡಗಾಡು ಮೇಲ್ಮೈ ಮೇಲೆ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಟೇಬಲ್‌ಟಾಪ್ ರನ್‌ವೇ ಎಂದು ಕರೆಯಲಾಗುತ್ತದೆ. ನಿಲ್ದಾಣದ ಎರಡೂ ಬದಿಗಳಲ್ಲಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದನ್ನು ಟೇಬಲ್‌ಟಾಪ್ ರನ್‌ವೇ ಎಂದು ಗುರುತಿಸಲಾಗುತ್ತದೆ. ಗುಡ್ಡಗಳನ್ನು ಕಡಿದು ನಿರ್ಮಿಸಲಾದ ಈ ರನ್‌ವೇಗಳ ಒಂದು ತುದಿಯಲ್ಲಿ ಕಡಿದಾದ ಇಳಿಜಾರು ಇರುತ್ತದೆ. ಭಾರತದಲ್ಲಿ ಟೇಬಲ್‌ಟಾಪ್ ರನ್‌ವೇಗಳೆಂದು ಪರಿಗಣಿಸಲ್ಪಡುವ ವಿಮಾನ ನಿಲ್ದಾಣಗಳಲ್ಲಿ ಲೆಂಗ್‌ಪುಯಿ (ಮಿಜೋರಾಮ್), ಶಿಮ್ಲಾ ಮತ್ತು ಕುಲ್ಲು (ಹಿಮಾಚಲ ಪ್ರದೇಶ), ಪಾಕ್ಯೊಂಗ್ (ಸಿಕ್ಕಿಂ), ಮಂಗಳೂರು (ಕರ್ನಾಟಕ), ಕೋಯಿಕ್ಕೋಡ್ ಮತ್ತು ಕಣ್ಣೂರು (ಕೇರಳ) ಸೇರಿವೆ. ಟೇಬಲ್‌ಟಾಪ್ ರನ್‌ವೇಗಳಲ್ಲಿ ಸಂಭವಿಸಿದ ಅಪಘಾತಗಳು 2010ರ ಮೇ 22ರಂದು ಮಂಗಳೂರಿನಲ್ಲಿ ನಡೆದ ಅಪಘಾತವು ಟೇಬಲ್‌ಟಾಪ್ ರನ್‌ವೇಗಳಲ್ಲಿನ ಅಪಾಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇ 24ರಲ್ಲಿ ಇಳಿಯುವಾಗ ರನ್‌ವೇ ದಾಟಿ ಹೋಗಿತ್ತು. ವಿಮಾನ IX-812 ಆಂಟೆನಾಕ್ಕೆ ಡಿಕ್ಕಿ ಹೊಡೆದು ಬಳಿಕ ಕಡಿದಾದ ಕಣಿವೆಗೆ ಜಾರಿ ಬೆಂಕಿಗಾಹುತಿಯಾಯಿತು. ವಿಮಾನದಲ್ಲಿದ್ದ 160 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳಲ್ಲಿ 158 ಮಂದಿ ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಈ ಘಟನೆ, ಇಂತಹ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಸ್ವರೂಪದ ಮೇಲೆ, ವಿಶೇಷವಾಗಿ ಅವುಗಳ ಚಿಕ್ಕ ರನ್‌ವೇಗಳ ಮೇಲೆ ಗಮನ ಸೆಳೆದಿತ್ತು. 2020ರ ಆಗಸ್ಟ್‌ನಲ್ಲಿ, ಮಾನ್ಸೂನ್ ಮಳೆ ಮತ್ತು ಕಳಪೆ ಗೋಚರತೆಯ ಕಾರಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 ವಿಮಾನವು ಕೋಝಿಕೋಡ್‌ನ ಟೇಬಲ್‌ಟಾಪ್ ರನ್‌ವೇಯನ್ನು ದಾಟಿ 35 ಅಡಿ ಆಳದ ಕಮರಿಗೆ ಉರುಳಿತು. ಈ ಅಪಘಾತದಲ್ಲಿ 21 ಮಂದಿ ಮೃತಪಟ್ಟರು. ಈ ಘಟನೆ ನಂತರ, ವಾಯುಯಾನ ಅಧಿಕಾರಿಗಳು ರನ್‌ವೇ ಕುಶನ್ ವಿಸ್ತರಣೆಗಳು ಹಾಗೂ ವೃದ್ಧಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಶಿಫಾರಸು ಮಾಡಿದರು. ಸವಾಲುಗಳೇನು? ಅತ್ಯುತ್ತಮ ವಾಣಿಜ್ಯ ಪೈಲಟ್‌ಗಳಿಗೂ ಸಹ ಟೇಬಲ್‌ಟಾಪ್ ರನ್‌ವೇಗಳಲ್ಲಿ ವಿಮಾನವನ್ನು ಇಳಿಸುವುದು ಕಷ್ಟಕರವೆಂದು ಹೇಳಲಾಗುತ್ತದೆ. ಕೋಝಿಕೋಡ್ ವಿಮಾನ ನಿಲ್ದಾಣದಂತೆ ಗುಡ್ಡದ ತುದಿಯಲ್ಲಿ ಇರುವ ರನ್‌ವೇಗಳಲ್ಲಿ, ಪೈಲಟ್‌ಗಳು ಸರಿಯಾದ ದೂರದಲ್ಲಿ ವಿಮಾನವನ್ನು ನಿಲ್ಲಿಸಲು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತದೆ. ಪೈಲಟ್‌ಗಳು ಸರಿಯಾದ ಲ್ಯಾಂಡಿಂಗ್ ಬಿಂದುಗಳನ್ನು ಗುರುತಿಸಲು ವಿಫಲರಾದರೆ, ವಿಮಾನವು ರನ್‌ವೇ ಬಿಟ್ಟು ಕೆಳಜಾರುವ ಅಪಾಯ ಉಂಟಾಗುತ್ತದೆ. ಕೆಟ್ಟ ಹವಾಮಾನ ಟೇಬಲ್‌ಟಾಪ್ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದು ಸ್ವತಃ ಕಷ್ಟಕರವಾಗಿದ್ದರೂ, ಮಂಜು ಮತ್ತು ಮಳೆಯಂತಹ ಪ್ರತಿಕೂಲ ಹವಾಮಾನವು ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಎರಡನ್ನೂ ಮತ್ತಷ್ಟು ಅಪಾಯಕಾರಿಯಾಗಿಸುತ್ತದೆ. ವಿಮಾನ ಸಮೀಪಿಸುವಾಗ ವಿಂಡ್‌ಶೀಲ್ಡ್ ಮೇಲೆ ಇರುವ ನೀರಿನಿಂದ ಗೋಚರತೆ ವರದಿಯಾದ ಮಟ್ಟಕ್ಕಿಂತ ಕಡಿಮೆಯಾಗುತ್ತದೆ. ಜೊತೆಗೆ, ನೀರಿನಿಂದ ವಕ್ರೀಭವನ ದೋಷ ಉಂಟಾಗಿ ರನ್‌ವೇ ಕಡಿಮೆಯಾಗಿ ಕಾಣಬಹುದು. ಇತರ ಅಂಶಗಳನ್ನು ಅವಲಂಬಿಸಿ ಈ ದೋಷವು 5 ಡಿಗ್ರಿಗಳವರೆಗೆ ಇರಬಹುದು. ಇದರ ಪರಿಣಾಮವಾಗಿ ಅರ್ಧ ಮೈಲಿ ದೂರದಲ್ಲಿರುವ ರನ್‌ವೇ ಅಥವಾ ಭೂಪ್ರದೇಶದ ವೈಶಿಷ್ಟ್ಯವು ನಿಜಕ್ಕಿಂತ ಸುಮಾರು 250 ಅಡಿಗಳಷ್ಟು ಕಡಿಮೆಯಾಗಿ ಕಾಣುವ ಸಾಧ್ಯತೆ ಇದೆ. ನೀರಿನಿಂದ ಉಂಟಾಗುವ ರನ್‌ವೇ ಘರ್ಷಣಾ ಸಮಸ್ಯೆಯೂ ವಿಮಾನವನ್ನು ನಿಲ್ಲಿಸಲು ಬೇಕಾದ ದೂರವನ್ನು ಹೆಚ್ಚಿಸುತ್ತದೆ. ಆಪ್ಟಿಕಲ್ ಭ್ರಮೆಗಳು ಟೇಬಲ್‌ಟಾಪ್ ರನ್‌ವೇಗಳು ಅಪಾಯಕಾರಿ ದೃಶ್ಯ ಭ್ರಮೆಗಳನ್ನು ಸೃಷ್ಟಿಸಬಹುದು. ರನ್‌ವೇ ಬೆಟ್ಟ ಅಥವಾ ಪ್ರಸ್ಥಭೂಮಿಯ ಮೇಲೆ ಎತ್ತರದಲ್ಲಿರುವುದರಿಂದ ಅದು ಇನ್ನಷ್ಟು ಎತ್ತರವಾಗಿ ಕಾಣುತ್ತದೆ ಮತ್ತು ‘ಇನ್ಫಿನಿಟಿ ಪೂಲ್’ ಪರಿಣಾಮವನ್ನು ಉಂಟುಮಾಡುತ್ತದೆ. ಲ್ಯಾಂಡಿಂಗ್‌ಗೆ ಸಮೀಪಿಸುತ್ತಿರುವ ಪೈಲಟ್‌ಗೆ ರನ್‌ವೇ ನಿಜಕ್ಕಿಂತ ಹೆಚ್ಚು ಹತ್ತಿರವಾಗಿಯೂ ಎತ್ತರವಾಗಿಯೂ ಕಾಣಬಹುದು. ಇದರಿಂದ ಪೈಲಟ್ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗ್ರಹಿಕೆ ಮತ್ತು ವಾಸ್ತವದ ನಡುವಿನ ಈ ಗೊಂದಲದಿಂದ ಕಠಿಣ ಲ್ಯಾಂಡಿಂಗ್, ಮಿತಿಗಿಂತ ಕಡಿಮೆ ಲ್ಯಾಂಡಿಂಗ್ ಅಥವಾ ಅಪಘಾತದ ಅಪಾಯ ಹೆಚ್ಚಾಗುತ್ತದೆ.

ವಾರ್ತಾ ಭಾರತಿ 29 Jan 2026 10:30 pm

ಔರಾದ್ | 2 ಎಕರೆ ಭೂಮಿ, ಮೂಲಸೌಕರ್ಯ ಭರವಸೆ: ಧರಣಿ ಕೈ ಬಿಟ್ಟ ಪ್ರತಿಭಟನಾಕಾರರು

ಔರಾದ್ : ಪಟ್ಟಣದ ಸರ್ಕಾರಿ ಭೂಮಿ ಸರ್ವೆ ನಂಬರ್ 205/* ರಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 2 ಎಕರೆ ಭೂಮಿ ನಿವೇಶನ ಹಾಗೂ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಔರಾದ್ ತಹಶೀಲ್ದಾರ್ ಹಿಂಬರಹ ನೀಡಿದ ಹಿನ್ನೆಲೆಯಲ್ಲಿ, 11 ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ಸಂಜೆ ಪ್ರತಿಭಟನಾಕಾರರು ಹಿಂಪಡೆದಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ–ಅರೆ ಅಲೆಮಾರಿ ಕುಟುಂಬಗಳಿಗೆ ಮುಂದಿನ ಆರು ತಿಂಗಳೊಳಗೆ 2 ಎಕರೆ ಭೂಮಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿ ಹಿಂಬರಹ ಪತ್ರ ನೀಡಿದರು. ಇದರಿಂದಾಗಿ ಅಲೆಮಾರಿ ಸಮುದಾಯದವರು ಶಾಂತಿಯುತವಾಗಿ ತಮ್ಮ ಹೋರಾಟವನ್ನು ಹಿಂಪಡೆದರು. ತಹಸೀಲ್ದಾರ್ ನೀಡಿದ ಹಿಂಬರಹದಲ್ಲಿ, ಬೀದರ್ ಸಹಾಯಕ ಆಯುಕ್ತರು, ಔರಾದ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸಿ, ಪರಿಶಿಷ್ಟ ಜಾತಿ–ಪಂಗಡಗಳ 85 ಕುಟುಂಬಗಳು ಹಾಗೂ ಹಿಂದುಳಿದ ವರ್ಗಗಳ 143 ಕುಟುಂಬಗಳಿಗೆ ಮುಂದಿನ 6 ತಿಂಗಳಲ್ಲಿ ಸರ್ಕಾರದ ಕಾರ್ಯವಿಧಾನ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲೆಮಾರಿ ಸಮುದಾಯಕ್ಕೆ ಭೂಮಿ ಮಂಜೂರಾತಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ಜ.19ರಿಂದ ಅಲೆಮಾರಿ ಸಮುದಾಯ ಹಾಗೂ ಕೆಲ ದಲಿತ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಈ ಹೋರಾಟದ ಫಲವಾಗಿ ಅಲೆಮಾರಿ ಸಮುದಾಯಕ್ಕೆ ಅಲ್ಪ ಜಯ ದೊರೆತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ತಹಸೀಲ್ದಾರ್ ಮಹೇಶ್ ಪಾಟೀಲ್, ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಖಂದಾರೆ, ಸುಭಾಷ್ ಲಾಧಾ, ಪ್ರವೀಣ್ ಕಾರಂಜೆ, ಸಂತೋಷ್ ಸಿಂಧೆ ಹಾಗೂ ಅಲೆಮಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 29 Jan 2026 10:30 pm

ಇಂಗ್ಲೆಂಡ್ ಸಂಸತ್ತಿನಲ್ಲಿ ಅನುಮೋದನೆ ನಿರೀಕ್ಷೆ: ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್

ಭಾರತ-ಯು.ಕೆ. ನಡುವಿನ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದ

ವಾರ್ತಾ ಭಾರತಿ 29 Jan 2026 10:23 pm

ಯಾದಗಿರಿ | ಕಾರಿನಲ್ಲಿದ್ದ ನಗದು–ಬಂಗಾರ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಯಾದಗಿರಿ : ಜ.16ರಂದು ಹಾಡುಹಗಲೇ ಕಾರಿನಲ್ಲಿ ಇಟ್ಟಿದ್ದ ನಗದು ಹಾಗೂ ಬಂಗಾರವನ್ನು ಕಳವು ಮಾಡಿದ್ದ ಕಳ್ಳರಿಬ್ಬರನ್ನು ಯಾದಗಿರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರಣಪ್ಪ ಕೊನೆಮನಿ ಅವರಿಗೆ ಸೇರಿದ 9.50 ಲಕ್ಷ ರೂ. ನಗದು ಹಾಗೂ 29 ಗ್ರಾಂ ಬಂಗಾರವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಸಂದೀಪ್ ಬೋವಿ ಹಾಗೂ ಶಂಕರ ಬೋವಿ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 8.20 ಲಕ್ಷ ರೂ. ನಗದು, ಸುಮಾರು 4.50 ಲಕ್ಷ ರೂ. ಮೌಲ್ಯದ 29 ಗ್ರಾಂ ಬಂಗಾರ ಹಾಗೂ 1 ಲಕ್ಷ ರೂ. ಮೌಲ್ಯದ ಎರಡು ಬೈಕ್‌ಗಳು ಸೇರಿದಂತೆ ಒಟ್ಟು 13.20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಹೆಚ್ಚುವರಿ ಎಸ್‌ಪಿ ಧರಣೇಶ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಸುರೇಶ್ ನಾಯಕ, ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ಮಂಜನಗೌಡ ಅವರ ನೇತೃತ್ವದ ತಂಡ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 29 Jan 2026 10:20 pm

ಅಸ್ಸಾಂ ಎಸ್‌ಐಆರ್| ಬಿಜೆಪಿ ಕಾರ್ಯಕರ್ತರಿಂದ 5 ಲಕ್ಷಕ್ಕೂ ಅಧಿಕ ದೂರು ದಾಖಲು: ಸಿಎಂ ಹಿಮಾಂತ ಬಿಸ್ವಾ ಶರ್ಮಾ

ಹೊಸದಿಲ್ಲಿ, ಜ. 29: ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಸಂದರ್ಭ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಶಂಕಿತ ವಿದೇಶಿಯರ ವಿರುದ್ಧ 5 ಲಕ್ಷಕ್ಕೂ ಅಧಿಕ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಬುಧವಾರ ಹೇಳಿದ್ದಾರೆ. ಶಿವಸಾಗರ್ ಜಿಲ್ಲೆಯ ಡೆಮೊದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಸಂದರ್ಭ ದೂರು ಸಲ್ಲಿಸುವುದು ರಾಷ್ಟ್ರೀಯ ಕರ್ತವ್ಯ ಎಂದರು. ‘‘ಬಾಂಗ್ಲಾದೇಶಿ ಮಿಯಾ ವಲಸಿಗರು ರಾಜ್ಯ ಪ್ರವೇಶಿಸಿರುವುದು ಅಸ್ಸಾಂನ ಪ್ರತಿಯೊಬ್ಬರಿಗೂ ತಿಳಿದಿದೆ. ಎಸ್‌ಐಆರ್ ಅಡಿಯಲ್ಲಿ ಯಾರೊಬ್ಬರೂ ನೋಟಿಸು ಸ್ವೀಕರಿಸದೇ ಇದ್ದರೆ, ಅರ್ಥವೇನು? ಅಸ್ಸಾಂನಲ್ಲಿ ವಿದೇಶಿ ಪ್ರಜೆಗಳು ಇಲ್ಲ ಎಂದರ್ಥವೇ’’ ಎಂದು ಅವರು ಪ್ರಶ್ನಿಸಿದ್ದಾರೆ. ಆದುದರಿಂದಲೇ ನಮ್ಮ ಕಾರ್ಯಕರ್ತರು 5 ಲಕ್ಷಕ್ಕೂ ಅಧಿಕ ದೂರುಗಳನ್ನು ದಾಖಲಿಸಿದ್ದಾರೆ. ಇಲ್ಲದೆ ಇದ್ದರೆ, ಎಲ್ಲರೂ ಕಾನೂನುಬದ್ಧರಾಗುತ್ತಿದ್ದರು ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 29 Jan 2026 10:20 pm

ಮತ್ತೆ ಜನೌಷಧಿ ಕೇಂದ್ರಗಳ ಬೆನ್ನು ಹತ್ತಿದ ರಾಜ್ಯ ಸರ್ಕಾರ - ಈಗೇನು ಹೊಸ ಅಸ್ತ್ರ?

ರಾಜ್ಯ ಸರಕಾರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತನ್ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಜನೌಷಧಿ ಕೇಂದ್ರಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

ವಿಜಯ ಕರ್ನಾಟಕ 29 Jan 2026 10:19 pm

ಅಡ್ಡಬಂದ ನಾಯಿ; ಸ್ಕೂಟರ್ ಮಗುಚಿ ಸಹಸವಾರೆ ಮೃತ್ಯು

ಬ್ರಹ್ಮಾವರ, ಜ.29: ಹಠಾತ್ತನೆ ನಾಯಿಯೊಂದು ರಸ್ತೆಗೆ ಅಡ್ಡಬಂದ ಕಾರಣ ಸ್ಕೂಟರ್‌ಗೆ ಬ್ರೇಕ್ ಹಾಕಿದ್ದರಿಂದ ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾದ ಗಾಯದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ 8ಗಂಟೆ ಸುಮಾರಿಗೆ ಕಾಡೂರು ಗ್ರಾಮದ ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ನಡೆದಿದೆ. ಮೃತ ಮಹಿಳೆಯರನ್ನು ಕರುಣಾಕರ ಶೆಟ್ಟಿ ಎಂಬವರ ಪತ್ನಿ ಸುಮತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಕರುಣಾಕರ ಶೆಟ್ಟಿ ಚಲಾಯಿಸುತಿದ್ದ ಸ್ಕೂಟರ್‌ನಲ್ಲಿ ಹಿಂಬದಿ ಸವಾರೆಯಾಗಿ ಬರುತಿದ್ದಾಗ ಕಾಡೂರು ದೇವಸ್ಥಾನದ ಬಳಿ 8:00ಗಂಟೆ ಸುಮಾರಿಗೆ ಘಟನೆ ನಡೆದಿದೆ. ತಲೆಗೆ ತೀವ್ರವಾಗಿ ಗಾಯಗೊಂಡ ಸುಮತಿ ಅವರನ್ನು ಕೂಡಲೇ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆ ತಂದರೂ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿ ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 29 Jan 2026 10:15 pm

Iran Tension: ಇರಾನ್ ಬೆನ್ನಿಗೆ ನಿಂತ ಚೀನಾ, ಅಮೆರಿಕ ದಾಳಿ ನಡೆಸಿದರೆ ನೇರ ಅಖಾಡಕ್ಕೆ ಡ್ರ್ಯಾಗನ್?

ಇರಾನ್ ವಿರುದ್ಧ ನಾವು ದಾಳಿ ಮಾಡೇ ಮಾಡುತ್ತೇವೆ, ಈ ಬಾರಿ ಇರಾನ್‌ಗೆ ಬುದ್ಧಿ ಕಲಿಸೋದು ಪಕ್ಕಾ ಎಂದು ಅಮೆರಿಕ ಹೇಳುತ್ತಿದೆ. ಇನ್ನೊಂದು ಕಡೆ ಇರಾನ್ ಕೂಡ ನಮ್ಮ ಮೇಲೆ ಒಂದೇ ಒಂದು ಸಣ್ಣ ದಾಳಿ ಆದರೂ ಅದನ್ನು ಯುದ್ಧ ಎಂದು ಘೋಷಣೆ ಮಾಡಿ, ಪೂರ್ಣ ಪ್ರಮಾಣದ ಹೋರಾಟಕ್ಕೆ ನಾವು ಸಿದ್ಧ ಎನ್ನುತ್ತಿದೆ. ಈ ಇಬ್ಬರ ತಿಕ್ಕಾಟ ಕಂಡು

ಒನ್ ಇ೦ಡಿಯ 29 Jan 2026 10:14 pm

ನಿತ್ಯವೂ ಗಾಂಧಿ ತತ್ವ, ಸಿದ್ಧಾಂತದ ಹತ್ಯೆ: ವಿಲ್ಪ್ರೆಡ್ ಡಿಸೋಜ

ಗಾಂಧೀಜಿಯವರ ಗ್ರಾಮೀಣ ಭಾರತ ವಿಚಾರಗೋಷ್ಠಿ

ವಾರ್ತಾ ಭಾರತಿ 29 Jan 2026 10:12 pm

ಕಲಬುರಗಿ | ಕವಿರಾಜಮಾರ್ಗದಲ್ಲಿ ಮನುಷ್ಯ ಪ್ರೀತಿಯ ಸಂದೇಶ : ಪ್ರೊ.ಎಚ್.ಟಿ.ಪೋತೆ

ಕವಿರಾಜಮಾರ್ಗ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ

ವಾರ್ತಾ ಭಾರತಿ 29 Jan 2026 10:11 pm

ದಕ್ಷಿಣ ಆಫ್ರಿಕಾ | ಮಿನಿಬಸ್–ಟ್ರಕ್ ಅಪಘಾತದಲ್ಲಿ 11 ಮಂದಿ ಮೃತ್ಯು: ಒಂದೇ ವಾರದಲ್ಲಿ ಎರಡನೇ ಘಟನೆ

ಕೇಪ್ ಟೌನ್: ಗುರುವಾರ ದಕ್ಷಿಣ ಆಫ್ರಿಕಾದ ಪೂರ್ವ ಕ್ವಾಝುಲು–ನತಾಲ್ ಪ್ರಾಂತ್ಯದಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವೆಗಳು ತಿಳಿಸಿವೆ. ಶಾಲಾ ಮಕ್ಕಳನ್ನು ಒಳಗೊಂಡಿದ್ದ ಮತ್ತೊಂದು ಮಾರಣಾಂತಿಕ ಅಪಘಾತ ಸಂಭವಿಸಿದ ಕೇವಲ ಒಂದೇ ವಾರದ ಅಂತರದಲ್ಲಿ ಈ ಭೀಕರ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲೇ ಶಾಲಾ ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸಾರಿಗೆ ಅಧಿಕಾರಿ ಸಿಬೊನಿಸೊ ಡೂಮಾ ತಿಳಿಸಿದ್ದಾರೆ. ಈ ಅಪಘಾತದಲ್ಲಿ 11 ಮಂದಿ ಮೃತಪಟ್ಟು, ಅವಶೇಷಗಳಡಿ ಸಿಲುಕಿದ್ದ ಮಿನಿಬಸ್‌ನ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಾಸಗಿ ಅರೆವೈದ್ಯಕೀಯ ಸೇವಾ ಸಂಸ್ಥೆ ಎಎಲ್‌ಎಸ್ ಪ್ಯಾರಾಮೆಡಿಕ್ಸ್‌ನ ವಕ್ತಾರ ಗ್ಯಾರಿತ್ ಜಾಮೀಸನ್ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ನೈರುತ್ಯ ಜೊಹಾನ್ಸ್‌ಬರ್ಗ್‌ನಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 14 ಶಾಲಾ ಮಕ್ಕಳು ಮೃತಪಟ್ಟ ಘಟನೆ ನಡೆದಿದ್ದು, ಅದಾದ ನಂತರ ಒಂದೇ ವಾರದೊಳಗೆ ಸಂಭವಿಸಿದ ಎರಡನೇ ರಸ್ತೆ ಅಪಘಾತ ಇದಾಗಿದೆ.

ವಾರ್ತಾ ಭಾರತಿ 29 Jan 2026 10:09 pm

ಕಲಬುರಗಿ | ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ

ಕಲಬುರಗಿ : ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣದ ಪ್ರಮುಖ ಆರೋಪಿ, ಕಿಂಗ್‌ಪಿನ್  ಆರ್.ಡಿ.ಪಾಟೀಲ್ ನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಜೈಲಿನಲ್ಲಿ ಶಿಸ್ತು ಭಂಗ ಉಂಟುಮಾಡುತ್ತಿದ್ದ ಹಿನ್ನೆಲೆ ಹಾಗೂ ಜೈಲಿನ ಒಳಾಂಗಣ ವಾತಾವರಣ ಹಾಳಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ಜೂಜಾಟ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಗೆ ಆರ್.ಡಿ. ಪಾಟೀಲ್ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಅಲ್ಲದೆ, ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧ ಲಂಚದ ಆರೋಪ ಹೊರಿಸಿ, ಪೆನ್‌ಡ್ರೈವ್ ಮೂಲಕ ವಿಡಿಯೋಗಳನ್ನು ಹೊರಗೆ ಹರಿಬಿಟ್ಟಿದ್ದಾನೆ ಎಂಬ ಆರೋಪವೂ ಆತನ ಮೇಲಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಸ್ವತಃ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಸೂಚನೆ ನೀಡಿದ್ದರು. ಜೈಲಿನ ಶಿಸ್ತು ಹಾಗೂ ಆಡಳಿತ ವ್ಯವಸ್ಥೆಗೆ ಆರ್.ಡಿ. ಪಾಟೀಲ್‌ನಿಂದ ನಿರಂತರ ತೊಂದರೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಇಲಾಖೆ, ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ ಎಂದು ಅಧಿಕೃತ ಪೊಲೀಸ್ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 29 Jan 2026 10:08 pm

ಬಿಹಾರ SIR | ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸರಕಾರೇತರ ಸಂಸ್ಥೆ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಬಿಹಾರದಲ್ಲಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಪ್ರಶಾಂತ್ ಭೂಷಣ್ ಹಾಗೂ ಗೋಪಾಲ್ ಶಂಕರ್ ನಾರಾಯಣ್ ಸೇರಿದಂತೆ ವಕೀಲರ ತಂಡ ಮಂಡಿಸಿದ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಚುನಾವಣಾ ಆಯೋಗದ ಪರವಾಗಿ ರಾಕೇಶ್ ದ್ವಿವೇದಿ ಹಾಗೂ ಮಣೀಂದರ್ ಸಿಂಗ್ ವಾದ ಮಂಡಿಸಿದರು. ತೀರ್ಪನ್ನು ಕಾಯ್ದಿರಿಸುವ ಮೊದಲು, ನ್ಯಾಯಾಲಯವು ಅರ್ಜಿದಾರರ ಪರವಾಗಿ ಸಲ್ಲಿಸಲಾದ ತಿದ್ದುಪಡಿ ವಾದಗಳನ್ನು ಆಲಿಸಿತು. ಕಳೆದ ವರ್ಷದ ಆಗಸ್ಟ್ 12ರಂದು ನ್ಯಾಯಾಲಯವು ಪ್ರಕರಣದ ಕೊನೆಯ ಹಂತದ ವಾದ–ಪ್ರತಿವಾದಗಳಿಗೆ ಚಾಲನೆ ನೀಡಿತ್ತು. ಈ ವೇಳೆ, ಮತಪಟ್ಟಿಗಳಲ್ಲಿ ಯಾರದಾದರೂ ಹೆಸರು ಸೇರ್ಪಡೆ ಮಾಡುವ ಅಥವಾ ತೆಗೆದುಹಾಕುವ ಸಾಂವಿಧಾನಿಕ ವ್ಯಾಪ್ತಿ ಚುನಾವಣಾ ಆಯೋಗಕ್ಕೇ ಸೇರಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಸಂದರ್ಭ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಭಾರತೀಯ ಚುನಾವಣಾ ಆಯೋಗ, ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿಯನ್ನು ನಾಗರಿಕತ್ವದ ತೃಪ್ತಿದಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.

ವಾರ್ತಾ ಭಾರತಿ 29 Jan 2026 10:07 pm

ಬಹಿಷ್ಕಾರದ ಕಾರ್ಮೋಡದ ನಡುವೆ ಟಿ-20 ವಿಶ್ವಕಪ್‌ಗೆ ವಿಮಾನದ ಟಿಕೆಟ್ ಕಾಯ್ದಿರಿಸಿದ ಪಾಕಿಸ್ತಾನ ತಂಡ

ಹೊಸದಿಲ್ಲಿ, ಜ.29: ಮುಂದಿನ ತಿಂಗಳು ಆರಂಭವಾಗಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಅನಿಶ್ಚಿತತೆ ಮುಂದುವರಿದಿರುವಂತೆಯೆ ಸೋಮವಾರ ಕೊಲಂಬೊಕ್ಕೆ ತೆರಳಲು ಪಾಕಿಸ್ತಾನದ ಟಿ-20 ಕ್ರಿಕೆಟ್ ತಂಡವು ವಿಮಾನದ ಟಿಕೆಟ್ ಕಾಯ್ದಿರಿಸಿದೆ. 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ. ಪಾಕಿಸ್ತಾನ ತಂಡವು ವಿಮಾನವೇರುವ ಮೊದಲು ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ‘ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ ಪಾಕಿಸ್ತಾನ ಕ್ರಿಕೆಟ್ ತಂಡವು ಲಾಹೋರ್‌ನಿಂದ ಏರ್ ಲಂಕಾ ವಿಮಾನದ ಮೂಲಕ ಕೊಲಂಬೊಗೆ ಪ್ರಯಾಣ ಬೆಳೆಸಲು ಆಸ್ಟ್ರೇಲಿಯ ತಂಡದೊಂದಿಗೆ ಟಿಕೆಟ್ ಬುಕ್ ಮಾಡಿದೆ. ಶುಕ್ರವಾರದ ವೇಳೆಗೆ ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಅವರು ಮೆಗಾ ಸ್ಪರ್ಧೆಯಲ್ಲಿ ಪಾಕ್ ತಂಡದ ಭಾಗವಹಿಸುವಿಕೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ’ ಎಂದು ಟೆಲಿಕಾಂ ಏಶ್ಯಾ ಸ್ಪೋರ್ಟ್‌ಗೆ ಮೂಲಗಳು ತಿಳಿಸಿವೆ. ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ತಿರಸ್ಕರಿಸಿದ ನಂತರ ನಖ್ವಿ ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದರು. ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಹೊರಹಾಕಿದ್ದನ್ನು ಪ್ರತಿಭಟಿಸಿ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರ ನಡೆಯುವ ಸಾಧ್ಯತೆಯಿದೆ ಎಂದು ಪಿಸಿಬಿ ಅಧ್ಯಕ್ಷ ನಖ್ವಿ ಹೇಳಿದ್ದರು. ಈ ವಾರಾರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ಪ್ರಧಾನಿ ಶಹಬಾಝ್ ಶರೀಫ್‌ರನ್ನು ಭೇಟಿಯಾಗಿದ್ದ ನಖ್ವಿ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಬಾಂಗ್ಲಾದೇಶವನ್ನು ಬೆಂಬಲಿಸುವ ಪಾಕಿಸ್ತಾನದ ನಿಲುವನ್ನು ಶರೀಫ್ ಬೆಂಬಲಿಸಿದ್ದರು. ರಾಜಕೀಯ ಹಾಗೂ ಆಡಳಿತಾತ್ಮಕ ಗೊಂದಲದ ನಡುವೆಯೂ ಮೈದಾನದಲ್ಲಿ ಸಿದ್ಧತೆಗಳು ಮುಂದುವರಿದಿವೆ. ಗುರುವಾರ ಲಾಹೋರ್‌ನಲ್ಲಿ ಆರಂಭವಾಗಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯ ತಂಡವನ್ನು ಎದುರಿಸಿದ್ದು, ಆಟಗಾರರಿಗೆ ಈ ಪಂದ್ಯದತ್ತ ಗಮನ ನೀಡಲು ಕೇಳಿಕೊಳ್ಳಲಾಗಿದೆ.

ವಾರ್ತಾ ಭಾರತಿ 29 Jan 2026 10:01 pm

ಹಾಯೋ ರಬ್ಬಾ! ಆಯತೊಲ್ಲಾ ಖಮೇನಿ ಬಳಿಕ ಇರಾನ್‌ ಆಳಲಿದ್ದಾರಾ ಪುತ್ರ ಮೊಜ್ತಾಬಾ? ಅಪ್ಪ ಕರೀತಿದ್ದಾರೆ ಬಾ ಬಾ

ಇರಾನ್‌ನಲ್ಲಿ ಅಮೆರಿಕಕ್ಕೆ ಗುಡ್ಡ ಅಗೆದು ಇಲಿ ಹಿಡಿದ ಅನುಭವ ಆಗುತ್ತಿದ್ದರೆ ಅದಕ್ಕೇನೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಇರಾನ್‌ನಲ್ಲಿ ಆಡಳಿತ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದ ಟ್ರಂಪ್‌ ಆಡಳಿತಕ್ಕೆ, ಆಯತೊಲ್ಲಾ ಖಮೇನಿ ಸರ್ಕಾರ ಚೆಕ್‌ಮೇಟ್‌ ನೀಡಿದಂತಿದೆ. ಇರಾನ್‌-ಯುಎಸ್‌ ಸಂಘರ್ಷದಲ್ಲಿ ಏಕಾಏಕಿ ಖಮೇನಿ ಎರಡನೇ ಪುತ್ರ ಮೊಜ್ತಾಬಾ ಖಮೇನಿ ಎಂಟ್ರಿ ಕೊಟ್ಟಿದ್ದಾರೆ. ಆಯತೊಲ್ಲಾ ಖಮೇನಿ ಕೆಳಗಿಳಿಯಲಿದ್ದಾರೆ ಎಂದು ಇರಾನ್‌ ಹೇಳಿಲ್ಲವಾದರೂ, ಮೊಜ್ತಾಬಾ ಅಧಿಕಾರಕ್ಕೇರಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತತ್ತಿವೆ. ಹಾಗಿದ್ದರೆ ಸತ್ಯ ಏನು? ಅರಿಯೋಣ ಬನ್ನಿ.

ವಿಜಯ ಕರ್ನಾಟಕ 29 Jan 2026 9:57 pm

ಸರ್ಕಾರಿ ನೌಕರರು ಕಡ್ಡಾಯ ಖಾದಿ ಉಡುಪು ಧರಿಸುವ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ; ಯಾವ ದಿನ? ಯಾರಿಗೆಲ್ಲಾ ಅನ್ವಯ?

ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಖಾದಿ ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ರಾಷ್ಟ್ರೀಯ ಭಾವನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಖಾದಿ ನೇಕಾರರಿಗೆ ಇದು ಜೀವನೋಪಾಯ ಒದಗಿಸುತ್ತದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ವಿಜಯ ಕರ್ನಾಟಕ 29 Jan 2026 9:56 pm

ಚಲನಚಿತ್ರೋತ್ಸವದಲ್ಲಿ ‘ಫೆಲೆಸ್ತೀನ್’ ಸಿನೆಮಾಗಳಿಗೆ ನಿರ್ಬಂಧ ವಿಚಾರ: ಕವಿತೆ ವಾಚಿಸುವ ಮೂಲಕ ನಟ ಪ್ರಕಾಶ್ ರಾಜ್ ಪ್ರತಿರೋಧ

ಬೆಂಗಳೂರು: ಹದಿನೇಳನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧ ಹೇರಿರುವುದಕ್ಕೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ತೀವ್ರ ಬೇಸರ ವ್ಯಕ್ತಪಡಿಸಿದ ಚಲನಚಿತ್ರೋತ್ಸವ ರಾಯಭಾರಿಯೂ ಆದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು, ಫೆಲೆಸ್ತೀನ್ ಕವಿತೆ ವಾಚಿಸುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಗುರುವಾರ ವಿಧಾನಸೌಧದ ಮುಂಭಾಗದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. 16 ವರ್ಷದ ಹಿಂದೆಯೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಉದ್ಘಾಟನೆ ಮಾಡಿದ್ದೆ. ಅಂದಿನಿಂದ ಇದುವರೆಗೂ ಸಿನೆಮಾ ಕ್ಷೇತ್ರದ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಆದರೆ, ಇತ್ತೀಚಿಗೆ ಚಲನಚಿತ್ರಗಳು ರಾಜಕೀಯ ಬಲೆಗೆ ಸಿಲುಕಿವೆ. ಅದರಲ್ಲೂ ಕೇಂದ್ರ ಸರಕಾರ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು. ಕರ್ನಾಟಕವು ಶಾಂತಿಯ ತೋಟಕ್ಕೆ ಹೆಸರು ಮಾಡಿದೆ. ಇಲ್ಲಿನ ರಂಗನತಿಟ್ಟು, ವಿಜಯನಗರದ ಅಂಕ ಸಮುದ್ರಕ್ಕೆ ದೇಶ, ವಿದೇಶಗಳಿಂದ ಹಕ್ಕಿಗಳು ಬರುವಂತೆ ನಾವು ಸಹ ಬೇರೆ ದೇಶಗಳ ಸಿನೆಮಾ, ಭಾವನೆಗಳಿಗೆ ಸ್ಪಂದಿಸಬೇಕು. ನಮ್ಮದೇ ಕತೆಗಳಿಗೆ ಬೂಕರ್ ಪ್ರಶಸ್ತಿ ಸಿಕ್ಕಿದಾಗ ಸಂಭ್ರಮಿಸುವ ನಾವು, ಬೇರೆ ಸಿನೆಮಾಗಳಿಗೆ ವಿರೋಧ ಏಕೆ ಎಂದ ಅವರು, ರಾಜ್ಯ ಸರಕಾರ ಕೇರಳ ಮಾದರಿಯಲ್ಲಿಯೇ ಗಟ್ಟಿ ನಿಲುವು ತೆಗೆದುಕೊಂಡು ಫೆಲೆಸ್ತೀನ್ ದೇಶದ ಸಿನೆಮಾಗಳ ಮೇಲಿನ ನಿರ್ಬಂಧ ತೆಗೆಯಲು ಮುಂದಾಗಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು. ಪ್ರಕಾಶ್ ರಾಜ್ ವಾಚಿಸಿದ ‘ಫೆಲೆಸ್ತೀನ್’ ಕವಿತೆ: ‘ಯುದ್ಧಗಳು ಕೊನೆಗೊಳ್ಳುತ್ತವೆ. ನಾಯಕರು ಕೈ ಕುಲುಕಿ ಹೊರಟು ಹೋಗುತ್ತಾರೆ. ಆದರೆ ಎಲ್ಲೋ, ವಯಸ್ಸಾದ ತಾಯಿ ಇನ್ನೂ ತನ್ನ ಮಗನಿಗಾಗಿ ಕಾಯುತ್ತಾಳೆ, ಹೆಂಡತಿ ತನ್ನ ಗಂಡನಿಗಾಗಿ ಕಾಯುತ್ತಾಳೆ ಮತ್ತು ಮಕ್ಕಳು ತಮ್ಮ ತಂದೆಗಾಗಿ ಕಾಯುತ್ತಾರೆ. ಅದು ಸತ್ಯ. ಈ ಭೂಮಿಯನ್ನು ಯಾರು ತ್ಯಜಿಸಿದರು ಎಂಬುದು ನಮಗೆ ತಿಳಿದಿಲ್ಲದಿರಬಹುದು, ಆದರೆ ಅದಕ್ಕೆ ಯಾರು ಬೆಲೆ ತೆರುತ್ತಿದ್ದಾರೆಂದು ನಮಗೆ ತಿಳಿದಿದೆ ಎಂದು 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಕವಿತೆಯನ್ನು ಪ್ರಕಾಶ್ ರಾಜ್ ವಾಚಿಸಿದರು.

ವಾರ್ತಾ ಭಾರತಿ 29 Jan 2026 9:48 pm

ಮತ್ತೆ ಸಿಡಿದೆದ್ದ ಗುತ್ತಿಗೆದಾರರು - ಬಾಕಿಯಿರುವ 37 ಸಾವಿರ ಕೋಟಿ ರೂ. ಮಾ. 5ರೊಳಗೆ ನೀಡುವಂತೆ ಸರ್ಕಾರಕ್ಕೆ ಸವಾಲು

ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್‌ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ಗಡುವು ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಗುತ್ತಿಗೆದಾರರು ಮೂರು ವರ್ಷಗಳಿಂದ ಬಾಕಿ ಬಿಲ್‌ಗಳು ಬಿಡುಗಡೆಯಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆ ಈಡೇರಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ವಿಜಯ ಕರ್ನಾಟಕ 29 Jan 2026 9:42 pm

ನೈರುತ್ಯ ರೈಲ್ವೇಗೆ 6939 ಕೋಟಿ ರೂ. ಆದಾಯ

ಮಂಗಳೂರು: ನೈರುತ್ಯ ರೈಲ್ವೇ (ಸೌತ್ ವೆಸ್ಟರ್ನ್ - ಎಸ್‌ಡಬ್ಲ್ಯುಆರ್)ಯು ಪ್ರಸಕ್ತ ಹಣಕಾಸು ವರ್ಷದಲ್ಲಿ 6,939 ಕೋಟಿ ರೂ. ಆದಾಯ ಗಳಿಸುವ ಮೂಲಕ ಶೇ. 16ರಷ್ಟು ಪ್ರಗತಿ ದಾಖಲಿಸಿದೆ ಎಂದು ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೇ ವತಿಯಿಂದ ನಡೆದ ಗಣರಾಜ್ಯೋತ್ಸವ ಸಂದರ್ಭ, 2025-26ನೇ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ನೈಋತ್ಯ ರೈಲ್ವೆಯ ವಿವಿಧ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ 2,543 ಕೋಟಿ ಆದಾಯ ಗಳಿಸಿದ್ದರೆ, ಸರಕು ವಿಭಾಗದಲ್ಲಿ ಡಿಸೆಂಬರ್ ವರೆಗೆ ದಾಖಳೆಯ 3,976 ಕೋಟಿ ರೂ. ಆದಾಯ ಗಳಿಸಲಾಗಿದೆ. ಪಾರ್ಸೆಲ್ ಮೂಲಕ 129 ಕೋಟಿ ರೂ. ಹಾಗೂ ವಿವಿಧ ಮೂಲಗಳಿಂದ ಶೇ. 21ರಷ್ಟು ಬೆಳವಣಿಗೆ ಆಗಿರುವುದಾಗಿ ಅವರು ತಿಳಿಸಿದ್ದಾರೆ. ಸರಕು ಸಾಗಾಟದಲ್ಲಿ ಅಗ್ರಸ್ಥಾನ ಸರಕು ಸಾಗಣೆ ಕ್ಷೇತ್ರದಲ್ಲಿ ನೈಋತ್ಯ ರೈಲ್ವೆ ಮುಂಚೂಣಿಯಲ್ಲಿದ್ದು, ಶೇ. 18.5ರಷ್ಟು ಬೆಳವಣಿಗೆಯೊಂದಿಗೆ 38 ಮಿಲಿಯನ್ ಟನ್ ಲೋಡಿಂಗ್ ಗುರಿ ಮುಟ್ಟಿದೆ. 2025ರ ಡಿಸೆಂಬರ್‌ನಲ್ಲಿ 5.1 ಮಿಲಿಯನ್ ಟನ್ ಲೋಡಿಂಗ್ ಮಾಡುವ ಮೂಲಕ ಮಾಸಿಕ ದಾಖಲೆ ಬರೆದಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗದ ಪಾಲು ಅತ್ಯಂತ ದೊಡ್ಡದಾಗಿದ್ದು (3.8 ಮಿಲಿಯನ್ ಟನ್). ಮೂಲಸೌಕರ್ಯ ಹಾಗೂ ಸಾಮರ್ಥ್ಯ ವಿಸ್ತರಣೆ ರೈಲ್ವೆ ಜಾಲದ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, 26 ಕಿ.ಮೀ. ಜೋಡಿ ಮಾರ್ಗ ಕಾಮಗಾರಿ ಚಾಲನೆ ಹಾಗೂ 20 ಕಿ.ಮೀ. ಹೊಸ ಮಾರ್ಗಗಳಿಗೆ ಅನುಮೋದನೆ ನೀಡಲಾಗಿದೆ. ತಳಕಲ್ - ಕುಷ್ಟಗಿ ನಡುವಿನ 56 ಕಿ.ಮೀ. ಹೊಸ ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ. 1,107 ಕೋಟಿ ರೂ. ಮೊತ್ತದ 190 ಹೊಸ ಕಾಮಗಾರಿಗಳಿಗೆ ಹಾಗೂ 2,264 ಕೋಟಿ ರೂ. ವೆಚ್ಚದ 109 ಆದ್ಯತಾ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ವಿದ್ಯುದೀಕರಣ ಮತ್ತು ಸುಸ್ಥಿರ ಇಂಧನ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುತ್ತಿರುವ ನೈರುತ್ಯ ರೈಲ್ವೆಯ ಶೇ. 90ರಷ್ಟು ಜಾಲ (3,340 ಕಿ.ಮೀ.) ವಿದ್ಯುದೀಕರಣಗೊಂಡಿದೆ. ಇದರಿಂದ ಸುಮಾರು 39 ಕೋಟಿ ರೂ. ಡೀಸೆಲ್ ವೆಚ್ಚ ಉಳಿತಾಯವಾಗಿದೆ. ಸೌರಶಕ್ತಿ ಬಳಕೆಯಲ್ಲೂ ದಾಪುಗಾಲು ಇಟ್ಟಿದ್ದು, ಒಟ್ಟು ಸೌರ ಸಾಮರ್ಥ್ಯವನ್ನು 7.6 ಎಂಡಬ್ಲ್ಯುಪಿಗೆ ಹೆಚ್ಚಿಸಲಾಗಿದೆ. ಮುಕ್ತ ಪ್ರವೇಶ ವಿದ್ಯುತ್ ಮತ್ತು ಎಚ್‌ಒಜಿ ವ್ಯವಸ್ಥೆಯಿಂದ ಒಟ್ಟಾರೆ 295 ಕೋಟಿ ರೂ. ಇಂಧನ ವೆಚ್ಚ ಉಳಿತಾಯವಾಗಿದೆ. ಪ್ರಯಾಣಿಕರ ಸೇವೆ ಮತ್ತು ಸುರಕ್ಷತೆ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಶೇ. 90ರಷ್ಟು ಸಮಯಪಾಲನೆ ಕಾಯ್ದುಕೊಳ್ಳುವ ಮೂಲಕ ರಾಷ್ಟ್ರಮಟ್ಟ ದಲ್ಲಿ 4ನೇ ಸ್ಥಾನ ಪಡೆದಿದೆ. ಬೇಡಿಕೆಗೆ ತಕ್ಕಂತೆ 481 ವಿಶೇಷ ರೈಲುಗಳು ಹಾಗೂ 614 ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಕವಚ್ ವ್ಯವಸ್ಥೆ: ಸುರಕ್ಷತೆಗಾಗಿ 3,692 ಕಿ.ಮೀ. ವ್ಯಾಪ್ತಿಯಲ್ಲಿ ‘ಕವಚ್’ (ರೈಲು ಡಿಕ್ಕಿ ತಡೆ ವ್ಯವಸ್ಥೆ) ಅಳವಡಿಸಲು ಅನುಮೋದನೆ ನೀಡಲಾಗಿದೆ. 2 ವಂದೇ ಭಾರತ್ ಸೇರಿದಂತೆ 10 ಹೊಸ ರೈಲುಗಳ ಸೇವೆ ಆರಂಭಿಸಲಾಗಿದೆ. ಭದ್ರತೆ ಮತ್ತು ಸಾಮಾಜಿಕ ಹೊಣೆಗಾರಿಕೆ ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್) ‘ಆಪರೇಷನ್ ನನ್ಹೆ ಫರಿಸ್ತೆ’ ಅಡಿಯಲ್ಲಿ 487 ಮಕ್ಕಳು ಮತ್ತು 54 ದುರ್ಬಲರನ್ನು ರಕ್ಷಿಸಿದೆ. ‘ಮೇರಿ ಸಹೇಲಿ’ ಯೋಜನೆಯಡಿ 3.3 ಲಕ್ಷ ಮಹಿಳಾ ಪ್ರಯಾಣಿಕರಿಗೆ ನೆರವು ನೀಡಲಾ ಗಿದೆ. ನಿಗಾ ವ್ಯವಸ್ಥೆಗಾಗಿ 164 ನಿಲ್ದಾಣಗಳಲ್ಲಿ 2,179 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶದ ಸರ್ವತೋಮುಖ ಪ್ರಗತಿಗೆ ಹೆಗಲು ಕೊಡುತ್ತಿರುವ ನೈಋತ್ಯ ರೈಲ್ವೆಯು, ಆಧುನಿಕ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ‘ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ 360 ಟ್ರ್ಯಾಕ್ ಕಿಲೋಮೀಟರ್‌ಗಳಲ್ಲಿ ವಿಭಾಗೀಯ ವೇಗವನ್ನು 110 ಕಿ.ಮೀ.ಗೆೆ ಏರಿಸಲಾಗಿದೆ. ಲೂಪ್ ಲೈನ್ ಹಾಗೂ ಹಾಸನ- ಮಂಗಳೂರು ವಿಭಾಗದ ವೇಗವನ್ನೂ ಹೆಚ್ಚಿಸಲಾಗಿದ್ದು(ಘಾಟ್ ವಿಭಾಗ ಹೊರತುಪಡಿಸಿ ), 240 ಕಿ.ಮೀ. ಹಳಿಯನ್ನು 25-ಟನ್ ಆಕ್ಸಲ್ ಲೋಡ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದೆ.’ ಮುಕುಲ್ ಸರನ್ ಮಾಥುರ್, ಪ್ರಧಾನ ವ್ಯವಸ್ಥಾಪಕರು, ನೈರುತ್ಯ ರೈಲ್ವೇ.

ವಾರ್ತಾ ಭಾರತಿ 29 Jan 2026 9:39 pm

ಮೂಡುಬಿದಿರೆ: ಜ.30ರಿಂದ ಭಾರತೀಯ ಸೇನಾ ನೇಮಕಾತಿ ರ‍್ಯಾಲಿ

ಮೂಡುಬಿದಿರೆ: ಅಗ್ನಿಪಥ್ ಯೋಜನೆಯಡಿ ಜ.30ರಿಂದ ಫೆಬ್ರವರಿ 14ರವರೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿ ರುವ ಭಾರತೀಯ ಸೇನಾ ನೇಮಕಾತಿ ರ‍್ಯಾಲಿ ಗೆ ಮೈದಾನವು ಅಗತ್ಯವಿರುವ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ 3 ಗಂಟೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ರಾಜ್ಯದ 11 ಜಿಲ್ಲೆಗಳಿಂದ ಪ್ರತಿದಿನ ಸುಮಾರು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 10 ದಿನಗಳ ಅವಧಿಯಲ್ಲಿ ಸುಮಾರು 15,000 ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಗ್ನಿಪಥ್ ನ ನೋಡೆಲ್ ಅಧಿಕಾರಿ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ. ರ‍್ಯಾಲಿಯಲ್ಲಿ ಮೊದಲ ಹಂತವಾಗಿ ದೈಹಿಕ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತ ದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದಾರೆ. ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರ‍್ಯಾಲಿಗೆ ಕೈಜೋಡಿಸಿವೆ. ನೇಮಕಾತಿ ರ‍್ಯಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡುತ್ತಿದ್ದು, ವಿದ್ಯಾಗಿರಿ ಆವರಣದಲ್ಲಿ ವಸತಿ ವ್ಯವಸ್ಥೆ, ಸ್ವಯಂಸೇವಕರ ನಿಯೋಜನೆ, ಸಿಂಥೆಟಿಕ್ ಟ್ರ‍್ಯಾಕ್‌ನಲ್ಲಿ ರನ್ನಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಳ್ವಾಸ್ 150 ಮಂದಿ ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, 25 ಸಿಬ್ಬಂದಿಗಳು ರ‍್ಯಾಲಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾಗಿರಿಯಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ, ಸಂಚಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಆಹಾರ ವಸ್ತುಗಳನ್ನು ಸರ್ಕಾರ ಒದಗಿಸಿದ್ದು, ಶುಚಿರುಚಿಯಾಗಿ ಆಳ್ವಾಸ್‌ನ ತಂಡ ತಯಾರಿಸಲಿದೆ ಎಂದು ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 29 Jan 2026 9:34 pm

ಬಾಕಿ ಬಿಡುಗಡೆ ಆಗ್ರಹಿಸಿ ಕಾಮಗಾರಿ ಸ್ಥಗಿತ: ಮಾ.5ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಮುಷ್ಕರ

ಬೆಂಗಳೂರು: ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ 38ಸಾವಿರ ಕೋಟಿ ರೂ.ಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಮುಖ ಹಬ್ಬಗಳಾದ ಗೌರಿ ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗುತ್ತಿಗೆದಾರರಿಗೆ ಯಾವುದೇ ಸರಕಾರವಾದರೂ ಬಾಕಿ ಹಣವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದೆ. ಆದರೆ ಇದುವರೆಗೂ ಕಾಂಗ್ರೆಸ್ ಸರಕಾರದಿಂದ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದರು. ಮೂರು ವರ್ಷದಿಂದ ಬಿಲ್ ಪಾವತಿಯಾಗದ್ದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ನಲ್ಲಿ 2021-22, 2022-23, 2023-24 ರಿಂದ 38ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿ ಉಳಿದಿದೆ ಎಂದು ಅವರು ಮಾಹಿತಿ ನೀಡಿದರು. ಸರಕಾರ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ-ಹಂತವಾಗಿ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ತೋರಬೇಕಿತ್ತು. ಆದರೆ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಹಿಂದಿನ ಸರಕಾರಕ್ಕಿಂತ ಈ ಸರಕಾರದಲ್ಲಿ ಕಮಿಷನ್ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಸಭೆ ಕರೆದರೆ ಎಲ್ಲ ಮಾಹಿತಿಯನ್ನು ದಾಖಲೆ ಸಹಿತ ನೀಡಲಾಗುವುದು. 2025ರ ಎಪ್ರಿಲ್‍ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು, ಅದನ್ನು ಉಳಿಸಿಕೊಂಡಿಲ್ಲ. ನಮ್ಮ ಸಮಸ್ಯೆ ಆಲಿಸಲು ಸಭೆಯನ್ನೂ ಕರೆದಿಲ್ಲ ಎಂದು ಮಂಜುನಾಥ್ ದೂರಿದರು.

ವಾರ್ತಾ ಭಾರತಿ 29 Jan 2026 9:29 pm

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಆರೋಪಿ ರಾಜೀವ್ ಗೌಡ ತಂಗಿದ್ದ ರೆಸಾರ್ಟ್ ನಲ್ಲಿ ಮಹಜರು

ಮಂಗಳೂರು, ಜ.29: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿ ತಲೆ ಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಂಗಿದ್ದ ರೆಸಾರ್ಟ್, ಆತನ ಕಾರು ಪತ್ತೆಯಾಗಿದ್ದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಗುರುವಾರ ಶಿಡ್ಲಘಟ್ಟದ ಪೊಲೀಸರು ಮಹಜರು ನಡೆಸಿದ್ದಾರೆ. ಗುರುವಾರ ಸಂಜೆ ಪೊಲೀಸರು ಪಚ್ಚನಾಡಿಗೆ ತೆರಳಿ ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿ ಪೂರಕ ಸಾಕ್ಷಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ಆರೋಪಿ ವಾಸವಿದ್ದ ಕೊಠಡಿ, ಸೇವನೆ ಮಾಡಿದ ಆಹಾರ ಇತ್ಯಾದಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಮಹಜರು ವೇಳೆ ಫಾರ್ಮ್‌ಹೌಸ್‌ನಲ್ಲಿ ಕೆಲಸದಾಳುಗಳು ಮಾತ್ರ ಇದ್ದರು ಎನ್ನಲಾಗಿದೆ. ಅವರನ್ನೂ ಕೂಡ ವಿಚಾರಣೆ ನಡೆಸಿದ್ದಾರೆ. ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲೂ ಕೂಡ ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 29 Jan 2026 9:28 pm

ಟೆನಿಸ್‌ಗೆ ಮರಳುವ ಕುರಿತು ವದಂತಿ: ಅಸ್ಪಷ್ಟ ಉತ್ತರ ನೀಡಿದ ಸೆರೆನಾ ವಿಲಿಯಮ್ಸ್

ನ್ಯೂಯಾರ್ಕ್, ಜ.29: ಟೆನಿಸ್‌ಗೆ ಮರಳುವ ಸಾಧ್ಯತೆಯ ಬಗೆಗಿನ ವದಂತಿಗೆ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸ್ಪಷ್ಟ ಉತ್ತರ ನೀಡಲಿಲ್ಲ. ‘‘ನನಗೆ ಏನೂ ಗೊತ್ತಿಲ್ಲ, ಏನಾಗುತ್ತದೆ ಎಂದು ನೋಡಲಿದ್ದೇನೆ’’ಎಂದು ಸೆರೆನಾ ಉತ್ತರಿಸಿದ್ದಾರೆ. 23 ಬಾರಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ 44ರ ವಯಸ್ಸಿನ ಎರಡು ಮಕ್ಕಳ ತಾಯಿ ಸೆರೆನಾ ವಿಲಿಯಮ್ಸ್ ಅವರು 2022ರ ಯು.ಎಸ್.ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸೋತ ನಂತರ ಟೆನಿಸ್‌ನಲ್ಲಿ ಸ್ಪರ್ಧಿಸಿಲ್ಲ. ಆದರೆ ಅವರು ಡಿಸೆಂಬರ್‌ನಲ್ಲಿ ಟೆನಿಸ್‌ನ ಡೋಪಿಂಗ್ ವಿರೋಧಿ ಪರೀಕ್ಷಾ ಗುಂಪಿಗೆ ಮರು ಪ್ರವೇಶಿಸಿದ್ದರು. ಇದು ಅವರು ಟೆನಿಸ್‌ಗೆ ಮರಳುವ ವದಂತಿಗೆ ಕಾರಣವಾಗಿತ್ತು. ಬುಧವಾರ ‘ಟುಡೇ ಆನ್ ಟೆಲಿವಿಷನ್ ಶೋ’ನಲ್ಲಿ ಸೆರೆನಾ ಬಳಿ ಟೆನಿಸ್‌ಗೆ ಮರಳುತ್ತೀರಾ? ಎಂದು ಪ್ರಶ್ನಿಸಲಾಯಿತು. ಯಾವುದೇ ಯೋಜನೆಯನ್ನು ದೃಢೀಕರಿಸಲು ನಿರಾಕರಿಸಿದ ಸೆರೆನಾ, ಏನನ್ನೂ ನಿರಾಕರಿಸಲೂ ಇಲ್ಲ. ‘‘ನಾನು ಈಗ ನನ್ನ ಜೀವನವನ್ನು ಆನಂದಿಸುತ್ತಿದ್ದೇನೆ. ಟೆನಿಸ್‌ಗೆ ಮರಳುತ್ತೇನೋ,ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಏನಾಗುತ್ತದೆ ಎಂದು ಕಾದು ನೋಡುವೆ’’ಎಂದು ಸೆರೆನಾ ಹೇಳಿದರು. ಉದ್ದೀಪನ ದ್ರವ್ಯ ಪರೀಕ್ಷಾ ಕಾರ್ಯಕ್ರಮಕ್ಕೆ ಮತ್ತೆ ಏಕೆ ಪ್ರವೇಶಿಸಿದ್ದೀರಿ? ಎಂದು ಕೇಳಿದಾಗ, ನಾನು ಮತ್ತೆ ಪ್ರವೇಶಿಸಿದ್ದೇನೆಯೇ, ನಾನು ಹೊರಗುಳಿದಿದ್ದೇನೆಯೇ? ಎಂದು ನನಗೆ ಗೊತ್ತಿಲ್ಲ.ನಾನು ಇದರ ಬಗ್ಗೆ ಚರ್ಚಿಸಲಾರೆ’’ ಎಂದರು. ಸೆರೆನಾ ಅವರ ಹಿರಿಯ ಸಹೋದರಿ ವೀನಸ್ 45ನೇ ವಯಸ್ಸಿನಲ್ಲಿ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ವೈಲ್ಡ್‌ಕಾರ್ಡ್ ಪಡೆದು ಆಡಿದರು. ಆದರೆ ಅವರು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ್ದರು. ಸುಮಾರು ಎರಡು ವರ್ಷಗಳ ವಿರಾಮದ ನಂತರ ಕಳೆದ ವರ್ಷದ ಜುಲೈನಲ್ಲಿ ಟೆನಿಸ್‌ಗೆ ಮರಳಿದ್ದ ವೀನಸ್ ಅವರು ಆಕ್ಲೆಂಡ್ ಹಾಗೂ ಹೊಬಾರ್ಟ್‌ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲೂ ಸ್ಪರ್ಧಿಸಿದ್ದರು.

ವಾರ್ತಾ ಭಾರತಿ 29 Jan 2026 9:15 pm

ಫೆ.4ರಂದು ವಾಶಿಂಗ್ಟನ್ ಸುಂದರ್‌ಗೆ ಫಿಟ್ನೆಸ್ ಟೆಸ್ಟ್?

ಹೊಸದಿಲ್ಲಿ, ಜ.29: ಟೀಮ್ ಇಂಡಿಯಾವು ಫೆ.7ರಂದು ತನ್ನ ಟಿ-20 ವಿಶ್ವಕಪ್ ಅಭಿಯಾನ ಆರಂಭಿಸುವ ಮೂರು ದಿನಗಳ ಮೊದಲು ಫೆ.4ರಂದು ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಸುಂದರ್ ಸದ್ಯ ಪಂದ್ಯಾವಳಿಗೆ ಲಭ್ಯವಿರುವ ಕುರಿತು ಸಂಶಯ ಕಾಡುತ್ತಿದೆ. ಅವರು ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಸುಂದರ್ ಜ.11ರಂದು ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. ಮುಂದಿನ ಯೋಜನೆಯನ್ನು ರೂಪಿಸುವ ಮೊದಲು ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಸಮಿತಿಯು ಸುಂದರ್ ಅವರು ಅಧಿಕೃತ ವೈದ್ಯಕೀಯ ವರದಿಗಾಗಿ ಕಾಯಲು ಸಿದ್ಧರಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಬದಲಾವಣೆಗಳನ್ನು ಮಾಡಲು ತಂಡಗಳಿಗೆ ಜನವರಿ 30ರ ತನಕ ಅವಕಾಶವಿದೆ. ಪಂದ್ಯಾವಳಿಯ ತಾಂತ್ರಿಕ ಸಮಿತಿಯು ಅನುಮೋದಿಸಿದರೆ ಗಾಯಾಳು ಆಟಗಾರನ ಬದಲಿಗೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಬಹುದು. ಫೆ.4ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುವ ಮೊದಲು ಭಾರತೀಯ ಕ್ರಿಕೆಟ್ ತಂಡವು ಫೆ.3ರಂದು ತನ್ನ ಮೊದಲ ತರಬೇತಿಗಾಗಿ ಮುಂಬೈನಲ್ಲಿ ಒಟ್ಟು ಸೇರಲಿದೆ. ಬುಧವಾರ ತಿಲಕ್ ವರ್ಮಾ ಹಾಗೂ ರಿಯಾನ್ ಪರಾಗ್ ಅವರು ಸಿಒಇನಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ್ದರು. ಆದರೆ ವಾಶಿಂಗ್ಟನ್ ಸುಂದರ್ ಯಾವುದೇ ತೀವ್ರತರದ ಕಸರತ್ತುಗಳನ್ನು ಮಾಡಲಿಲ್ಲ.

ವಾರ್ತಾ ಭಾರತಿ 29 Jan 2026 9:12 pm

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಸತತ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟ ಸಬಲೆಂಕಾ

ಮೆಲ್ಬರ್ನ್, ಜ.29: ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಬಲೆಂಕಾ ಅವರು ಸ್ವಿಟೋಲಿನಾರನ್ನು 6-2, 6-3 ನೇರ ಸೆಟ್‌ಗಳಿಂದ ಸದೆಬಡಿದರು. ಸಬಲೆಂಕಾ ಅವರು ಮೆಲ್ಬರ್ನ್ ಪಾರ್ಕ್‌ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಸಿಂಗಲ್ಸ್ ಕಿರೀಟ ಹಾಗೂ ಒಟ್ಟಾರೆ ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ. 27ರ ಹರೆಯದ ಸಬಲೆಂಕಾ ಅವರು ವೃತ್ತಿಪರ ಟೆನಿಸ್ ಯುಗದಲ್ಲಿ ಸತತ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಮೂರನೇ ಆಟಗಾರ್ತಿಯಾಗಿದ್ದಾರೆ. ಇವೊನ್ ಗೂಲಾಗಾಂಗ್ ಕಾವ್ಲೆ(1971-76)ಹಾಗೂ ಮಾರ್ಟಿನಾ ಹಿಂಗಿಸ್(1997-2002)ಸತತ ಆರು ಬಾರಿ ಫೈನಲ್‌ಗೆ ತಲುಪಿರುವ ಸಾಧನೆ ಮಾಡಿದ್ದಾರೆ. ‘‘ನನಗೆ ಇದು ನಂಬಲಾಗುತ್ತಿಲ್ಲ. ಇದೊಂದು ಅಮೋಘ ಸಾಧನೆ. ಆದರೆ ನನ್ನ ಕೆಲಸ ಇಲ್ಲಿಗೇ ಮುಗಿದಿಲ್ಲ. ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ಸ್ವಿಟೋಲಿನಾ ಕಠಿಣ ಎದುರಾಳಿಯಾಗಿದ್ದರು. ಇಡೀ ವಾರ ಅತ್ಯುತ್ತಮವಾಗಿ ಆಡಿದ್ದರು’’ ಎಂದು ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಹೇಳಿದ್ದಾರೆ. 2022ರಲ್ಲಿ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಶ್ಯ ಹಾಗೂ ಬೆಲಾರುಸ್ ಟೆನಿಸಿಗರಿಗೆ ಗ್ರ್ಯಾನ್‌ಸ್ಲಾಮ್‌ಗಳು ಹಾಗೂ ಟೂರ್ ಸ್ಪರ್ಧೆಗಳಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸುವುದಕ್ಕೆ ನಿಷೇಧ ಹೇರಲಾಗಿತ್ತು. 31ರ ಹರೆಯದ ಸ್ವಿಟೋಲಿನಾ ನೇರ ಸೆಟ್‌ಗಳಿಂದ ಸೋತಿದ್ದರೂ ಆರಂಭದಿಂದ ಅಂತ್ಯದ ತನಕ ಕಠಿಣ ಹೋರಾಟ ನೀಡಿದ್ದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸಬಲೆಂಕಾ ಅವರು ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್‌ನಲ್ಲಿ ಎಡವಿದ ಜೆಸ್ಸಿಕಾ ಪೆಗುಲಾ: ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿ ಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾರನ್ನು ಮಣಿಸಿದ ಕಝಕ್‌ಸ್ತಾನದ ಎಲೆನಾ ರೈಬಾಕಿನಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ಎರಡನೇ ಗ್ರ್ಯಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಐದನೆ ಶ್ರೇಯಾಂಕದ ರೈಬಾಕಿನಾ ಅವರು ರಾಡ್ ಲಾವೆರ್ ಅರೆನಾದಲ್ಲಿ ಒಂದು ಗಂಟೆ-40 ನಿಮಿಷಗಳ ಕಾಲ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಪೆಗುಲಾರನ್ನು 6-3, 7-6(9/7) ಸೆಟ್‌ಗಳ ಅಂತರದಿಂದ ಮಣಿಸಿದರು. ಪಂದ್ಯಾವಳಿಯಲ್ಲಿ ಇನ್ನೂ ಒಂದೂ ಸೆಟ್ ಸೋಲದ ರೈ ಬಾಕಿನಾ ಶನಿವಾರ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರ ಸವಾಲನ್ನು ಎದುರಿಸಲಿದ್ದಾರೆ. ಈ ಇಬ್ಬರು 2023ರ ಫೈನಲ್‌ನಲ್ಲಿ ಕೂಡ ಮುಖಾಮುಖಿಯಾಗಿದ್ದರು. ಮೂರು ವರ್ಷಗಳ ಹಿಂದೆ ಸಬಲೆಂಕಾ ಅವರು ರೈಬಾಕಿನಾರ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದ್ದರು. ಮಾಸ್ಕೊದಲ್ಲಿ ಜನಿಸಿರುವ ರೈ ಬಾಕಿನಾ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್‌ರನ್ನು ಮಣಿಸಿದ್ದರು. 2022ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ರೈಬಾಕಿನಾ ಮೂರೂವರೆ ವರ್ಷಗಳ ನಂತರ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿರುವ ರೈಬಾಕಿನಾ ನವೆಂಬರ್‌ನಲ್ಲಿ ರಿಯಾದ್‌ನಲ್ಲಿ ನಡೆದಿದ್ದ ಡಬ್ಲ್ಯುಟಿಎ ಫೈನಲ್ಸ್ ಟೂರ್ನಿಯಲ್ಲಿ ಸಬಲೆಂಕಾರನ್ನು ಸೋಲಿಸಿದ್ದರು. ಹಿಂದಿನ 20 ಪಂದ್ಯಗಳ ಪೈಕಿ 19ರಲ್ಲಿ ಜಯಶಾಲಿಯಾಗಿದ್ದಾರೆ. ಇದೀಗ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ವಾರ್ತಾ ಭಾರತಿ 29 Jan 2026 9:11 pm

ಟಿ-20 ಕ್ರಿಕೆಟ್| ಮೂರನೇ ಅತಿ ವೇಗದ ಅರ್ಧಶತಕ ಸಿಡಿಸಿದ ಶಿವಂ ದುಬೆ

ವಿಶಾಖಪಟ್ಟಣ, ಜ.29: ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಬುಧವಾರ ನಡೆದ ನಾಲ್ಕನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ವೇಳೆ ಆಲ್‌ರೌಂಡರ್ ಶಿವಂ ದುಬೆ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ವೇಗದ ಬೌಲರ್ ಜೇಕಬ್ ಡಫಿ ಎಸೆದ ಫುಲ್‌ಟಾಸ್ ಅನ್ನು ಸಿಕ್ಸರ್‌ಗೆ ಅಟ್ಟಿದ ದುಬೆ ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು. ಲೆಗ್ ಸ್ಪಿನ್ನರ್ ಇಶ್ ಸೋಧಿ ಓವರ್‌ವೊಂದರಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಿತ 29 ರನ್ ಸಿಡಿಸಿದರು. ಭಾರತೀಯ ಆಟಗಾರರ ಪೈಕಿ ಯುವರಾಜ್ ಸಿಂಗ್(12 ಎಸೆತಗಳು)ಹಾಗೂ ಅಭಿಷೇಕ್ ಶರ್ಮಾ(15 ಎಸೆತಗಳು)ಮಾತ್ರ ದುಬೆಗಿಂತ ವೇಗವಾಗಿ ಅರ್ಧಶತಕ ಗಳಿಸಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು ಭಾರತೀಯ ಆಟಗಾರನ ನಾಲ್ಕನೇ ವೇಗದ ಅರ್ಧಶತಕವಾಗಿದೆ. ಟಿ-20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತೀಯರು ಯುವರಾಜ್ ಸಿಂಗ್-12 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಡರ್ಬನ್(2007) ಅಭಿಷೇಕ್ ಶರ್ಮಾ-14 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ಗುವಾಹಟಿ(2026) ಶಿವಂ ದುಬೆ-15 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ವಿಶಾಖಪಟ್ಟಣ(2026) ಹಾರ್ದಿಕ್ ಪಾಂಡ್ಯ-16 ಎಸೆತಗಳು-ದಕ್ಷಿಣ ಆಫ್ರಿಕಾ ವಿರುದ್ಧ-ಅಹ್ಮದಾಬಾದ್(2025) ಅಭಿಷೇಕ್ ಶರ್ಮಾ-17 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಮುಂಬೈ(2025)

ವಾರ್ತಾ ಭಾರತಿ 29 Jan 2026 9:07 pm

(ನುಡಿನಮನ) ವಾತ್ಸಲ್ಯದ ನಾಯಕ: ಶ್ರೀ ಭೀಮಣ್ಣ ಖಂಡ್ರೆ

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನವೊಂದು ಈ ಲೇಖಕರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶ್ರೀ ಭೀಮಣ್ಣ ಖಂಡ್ರೆಯವರು ಲೇಖಕರನ್ನು ಗುರುತಿಸಿ ಮಹಾಸಭೆಯ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ವಿಶ್ವಾಸ, ನಾಯಕತ್ವ ಮತ್ತು ಮಾನವೀಯತೆ ಲೇಖಕರ ಮೇಲೆ ಗಾಢ ಪರಿಣಾಮ ಬೀರಿತು. ರಾಜಕೀಯ ಅವಕಾಶಗಳು, ಮಹತ್ವದ ಜವಾಬ್ದಾರಿಗಳು ಲೇಖಕರಿಗೆ ದೊರೆತವು. ಖಂಡ್ರೆಯವರ ಮಾರ್ಗದರ್ಶನ ಲೇಖಕರ ಬದುಕಿನ ಅಮೂಲ್ಯ ಅನುಭವವಾಯಿತು.

ವಿಜಯ ಕರ್ನಾಟಕ 29 Jan 2026 9:05 pm

ಹೊಸದಿಲ್ಲಿ|ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳಾ ಕಾನ್‌ಸ್ಟೇಬಲ್ ಮೃತ್ಯು

ಹೊಸದಿಲ್ಲಿ, ಜ. 29: ತನ್ನ ಪತಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ಐದು ದಿನಗಳ ಬಳಿಕ, ದಿಲ್ಲಿ ಪೊಲೀಸ್‌ನ ಮಹಿಳಾ ಕಾನ್‌ಸ್ಟೇಬಲ್ ಒಬ್ಬರು ಮಂಗಳವಾರ ಉತ್ತರಪ್ರದೇಶದ ಘಾಜಿಯಾಬಾದ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕ ‘ಸ್ಪೆಶಲ್ ವೆಪನ್ಸ್ ಆ್ಯಂಡ್ ಟ್ಯಾಕ್ಟಿಕ್ಸ್’ (ಸ್ವಾತ್)ನ ಕಮಾಂಡೊ 27 ವರ್ಷದ ಕಾಜಲ್ ಎಂಬುದಾಗಿ ಗುರುತಿಸಲಾಗಿದೆ. ಆರೋಪಿ ಪತಿ ಅಂಕುರ್ ಚೌಧರಿ ಮಹಿಳೆಗೆ ಡಂಬ್‌ಬೆಲ್‌ನಿಂದ ಹೊಡೆದು ಅವರ ತಲೆಯನ್ನು ಮನೆಯ ಗೋಡೆಗೆ ಅಪ್ಪಳಿಸಿದನು ಎಂಬುದಾಗಿ ಆರೋಪಿಸಲಾಗಿದೆ. ತೀವ್ರ ತಲೆ ಗಾಯಕ್ಕೆ ಒಳಗಾದ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ವರದಕ್ಷಿಣೆಯಾಗಿ ತನಗೆ ಹಣ ಮತ್ತು ಕಾರು ನೀಡುವಂತೆ ಗಂಡ ಕಾಜಲ್‌ಗೆ ಕಿರುಕುಳ ನೀಡುತ್ತಿದ್ದನು ಎಂದು ಆಕೆಯ ಕುಟುಂಬಿಕರು ಆರೋಪಿಸಿದ್ದಾರೆ. ಕಾಜಲ್ ಮತ್ತು ಅಂಕುರ್ ನಾಲ್ಕು ವರ್ಷಗಳ ಪ್ರೇಮದ ಬಳಿಕ 2023 ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಅವರಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಾರ್ತಾ ಭಾರತಿ 29 Jan 2026 9:04 pm

ಭಾರತೀಯ ವಿಕಾಸ ಟ್ರಸ್ಟ್‌ಗೆ ನಬಾರ್ಡ್ ಅಧಿಕಾರಿಗಳ ಭೇಟಿ

ಮಣಿಪಾಲ, ಜ.29: ನೇಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಸಂಸ್ಥೆಯ ವಿವಿಧ ರಾಜ್ಯಗಳ ಹಿರಿಯ ವ್ಯವಸ್ಥಾಪಕರ ತಂಡ ತಮ್ಮ ಅಧ್ಯಯನ ಭೇಟಿ ಪ್ರಯುಕ್ತ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಸಂಸ್ಥೆಗೆ ಭೇಟಿ ನೀಡಿತು. ಈ ವೇಳೆ ಸಂಸ್ಥೆಯ ಕಾರ್ಯಕ್ರಮ, ಅವುಗಳ ಅನುಷ್ಠಾನ, ಸಂಸ್ಥೆಯ ಬೆಳವಣಿಗೆ ಕುರಿತು ಮಾಹಿತಿಗಳನ್ನು ಕೇಳಿ ತಿಳಿದುಕೊಂಡರು. ಭಾರತೀಯ ವಿಕಾಸ ಟ್ರಸ್ಟ್‌ನ ಹಿರಿಯ ಸಲಹೆಗಾರರಾದ ಜಗದೀಶ್ ಪೈ ಇವರು ಸಂಸ್ಥೆ ಪ್ರಾರಂಭ ಗೊಂಡ ಉದ್ದೇಶ ಹಾಗೂ ಸಂಸ್ಥೆಯ ರೂವಾರಿಯಾದ ಪದ್ಮಶ್ರೀ ಟಿ.ಎ.ಪೈ ಇವರ ಗ್ರಾಮೀಣಾಭಿವೃದ್ಧಿ, ಸಮಾಜ ಅಭಿವೃದ್ಧಿ ಕನಸಿನ ಬಗ್ಗೆ, ವಸಂತಿ ಪೈ ಹಾಗೂ ಕೆ.ಎಮ್.ಉಡುಪ ಅವರ ದೂರದೃಷ್ಟಿ ಯೋಜನೆ ಗಳ ಕುರಿತು ವಿವರಿಸಿದರು. ಬಿವಿಟಿಯ ಹಿರಿಯ ಅಧಿಕಾರಿ ಮನೋಹರ್ ಕಟಗೇರಿ ಇವರು ಬಿವಿಟಿಯ ಕಾರ್ಯಕ್ರಮಗಳಾದ ಮಹಿಳಾ ಸಬಲೀಕರಣ, ಕೃಷಿ, ಸುಸ್ಥಿರ ಸೌರ ಶಕ್ತಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಸಂಸ್ಥೆಯ ಯೋಜನೆ ಕುರಿತು ಮಾಹಿತಿ ನೀಡಿದರು. ನಬಾರ್ಡ್ ಸಂಸ್ಥೆಯ ಅಧಿಕಾರಿ ಡಿಜಿಎಂ ಸತೀಸನ್ ಕರ್ತಾ ನಬಾರ್ಡ್ ಜೊತೆ ಸಂಸ್ಥೆ ಹೊಂದಿರುವ ಕಾರ್ಯತತ್ಪರತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ವಿವಿಧ ರಾಜ್ಯಗಳ ಒಟ್ಟು 43 ಅಧಿಕಾರಿಗಳ ತಂಡ ಬಿವಿಟಿ ಸಮಾಜದ ಅಭಿವೃದ್ಧಿಯಲ್ಲಿ ಬಿವಿಟಿ ಸಂಸ್ಥೆ ನೀಡಿದ ಉತ್ತಮ ಪರಿಣಾಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮಹೇಶ್ ಭಟ್ ಸ್ವಾಗತಿಸಿ, ಬಿವಿಟಿಯ ಹಣಕಾಸು ಅಧಿಕಾರಿ ಹೆಚ್.ಆರ್ ಕೃಷ್ಣದಾಸ ವಂದಿಸಿದರು.

ವಾರ್ತಾ ಭಾರತಿ 29 Jan 2026 9:01 pm

1,000 ಕೋಟಿ.ರೂ. ಬ್ಯಾಂಕ್ ವಂಚನೆ ಪ್ರಕರಣ: ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ

ಕೋಲ್ಕತಾ, ಜ. 29: ಸುಮಾರು 1,000 ಕೋ.ರೂ.ಗಳ ಬ್ಯಾಂಕ್ ವಂಚನೆ ಆರೋಪದ ಕುರಿತ ತನಿಖೆಗೆ ಸಂಬಂಧಿಸಿ ಸಿಬಿಐ ಗುರುವಾರ ಇಲ್ಲಿನ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತಾ ಮೂಲದ ಹಣಕಾಸು ಕಂಪೆನಿಯ ಪ್ರವರ್ತಕರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ಏಕ ಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭ ಸ್ಥಳದಲ್ಲಿ ಹೆಚ್ಚುವರಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘‘ಸರಕಾರಿ ಬ್ಯಾಂಕ್‌ಗೆ ದೊಡ್ಡ ಮಟ್ಟದಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲಿಪೋರೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು’’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಕೋಲ್ಕತಾ ಮೂಲದ ಹಣಕಾಸು ಕಂಪೆನಿಯೊಂದು ಸಾಲದ ಹೆಸರಿನಲ್ಲಿ ಹಣ ವಂಚಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. 2020 ಹಾಗೂ 2024ರ ನಡುವೆ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಕಂಪೆನಿಯ ಇಬ್ಬರು ನಿರ್ದೇಶಕರು ಹಾಗೂ ಅದರ ಒಂದು ಸಹ ಸಂಸ್ಥೆಯ ವಿರುದ್ಧ ಈ ಆರೋಪ ಮಾಡಲಾಗಿದೆ. ಎರಡು ಕಂಪೆನಿಗಳು ಸಾಲಕ್ಕಾಗಿ ಸರಕಾರಿ ಬ್ಯಾಂಕ್‌ವೊಂದನ್ನು ಸಂಪರ್ಕಿಸಿವೆ ಹಾಗೂ ತಮ್ಮ ಅರ್ಜಿಗೆ ಬೆಂಬಲವಾಗಿ ದಾಖಲೆಗಳನ್ನು ಸಲ್ಲಿಸಿವೆ. ಬ್ಯಾಂಕ್‌ನ ದೂರಿನ ಪ್ರಕಾರ, ಒಂದು ಕಂಪೆನಿ ಆರಂಭದಲ್ಲಿ 730.82 ಕೋ.ರೂ ಮಂಗಡ ಪಡೆದುಕೊಂಡಿತ್ತು. ಸಹವರ್ತಿ ಕಂಪೆನಿ 260.20 ಕೋ.ರೂ. ಸಾಲ ಪಡೆದುಕೊಂಡಿತ್ತು. ಹೆಚ್ಚುವರಿ ಸಾಲವನ್ನು ಬ್ಯಾಂಕ್ ಹಂತ ಹಂತವಾಗಿ ಮಂಜೂರು ಮಾಡಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಕಂಪೆನಿಗಳು ಸಾಲ ಒಪ್ಪಂದವನ್ನು ಉಲ್ಲಂಘಿಸಿವೆ ಹಾಗೂ ಕಂತುಗಳನ್ನು ಸಕಾಲಿಕವಾಗಿ ಮರು ಪಾವತಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ, ಎರಡೂ ಕಂಪೆನಿಗಳು ಕನಿಷ್ಠ ಆರು ಇತರ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿವೆ. ಆದರೆ, ಮರು ಪಾವತಿಸಿಲ್ಲ ಎಂದು ಸಿಬಿಐ ಹೇಳಿದೆ. 1,000 ಕೋಟಿ. ರೂ. ವಂಚನೆಗೆ ಸಂಬಂಧಿಸಿ 2023ರಲ್ಲಿ ಸರಕಾರಿ ಬ್ಯಾಂಕ್‌ನ ಇಬ್ಬರು ಅಧಿಕಾರಿಗಳು ಸಿಬಿಐಗೆ ಔಪಚಾರಿಕ ದೂರು ಸಲ್ಲಿಸಿದ್ದರು. ಅನಂತರ ಸಿಬಿಐ ಎರಡು ಕಂಪೆನಿಗಳು ಹಾಗೂ ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 29 Jan 2026 9:00 pm

ಮುಂಬೈ ಮೈದಾನದಲ್ಲಿ ಮಾಸ್ಕ್ ಧರಿಸಿ ಆಡಿದ ಸರ್ಫರಾಝ್ ಖಾನ್!; ರಣಜಿ ಪಂದ್ಯದ ವೇಳೆ ಯಾಕೆ ಹೀಗಾಯ್ತು?

Ranji Trophy 2025-26- ಕ್ರಿಕೆಟ್ ನಲ್ಲಿ ಮಾಸ್ಕ್ ಹಾಕಿಕೊಂಡು ಆಡುವುದು ಹೊಸತೇನಲ್ಲ. ದಿಲ್ಲಿಯಲ್ಲಾದರೆ ವಿಶೇಷವೂ ಅಲ್ಲ. ಆದರೆ ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮುಂಬೈ ಆಟಗಾರರೇ ಮಾಸ್ಕ್ ಧರಿಸಿ ಆಡಿದ ಘಟನೆ ನಡೆದಿದೆ. ಪ್ರಮುಖ ಆಟಗಾರ ಸರ್ಫರಾಝ್ ಖಾನ್ ಸೇರಿದಂತೆ ಕೆಲವರು ಕೆಲಹೊತ್ತು ಮಾಸ್ಕ್ ಧರಿಸಿ ಆಡಿದರು. ಇದು ಮುಂಬೈ ನಗರದ ವಾತಾವರಣದ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು. ಪಂದ್ಯದ ಮೊದಲನೇ ದಿನ ದಿಲ್ಲಿ ತಂಡ 221 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕುತ್ತರವಾಗಿ ಮುಂಬೈ 13 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದೆ.

ವಿಜಯ ಕರ್ನಾಟಕ 29 Jan 2026 9:00 pm

ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿಗೆ ಎಸ್.ವಿ.ಪಿ. ಪ್ರಶಸ್ತಿ

ಉಡುಪಿ: ಕನ್ನಡದ ಖ್ಯಾತ ಕವಿ ಎಸ್.ವಿ.ಪರಮೇಶ್ವರ ಭಟ್ಟರ ಹೆಸರಿನಲ್ಲಿ ನೀಡಲಾಗುವ ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಕನ್ನಡದ ಖ್ಯಾತನಾಮ ಸಮಕಾಲೀನ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಎಸ್.ಪಿ.ಪಿ.ಪ್ರತಿಷ್ಠಾನದಿಂದ ನೀಡುವ ಈ ಪ್ರಶಸ್ತಿಯನ್ನು 2026ನೇ ಸಾಲಿನಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಹಿರಿಯ ಕವಿ, ಕಥೆಗಾರ ಸುಬ್ರಾಯ ಚೊಕ್ಕಾಡಿ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ ಹಾಗೂ ತಾಯಿ ಸುಬ್ಬಮ್ಮ. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದು ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವಷರ್ಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಲಂಕೇಶ ಮುಂತಾದವರ ನಿಕಟವರ್ತಿಯಾಗಿದ್ದ ಚೊಕ್ಕಾಡಿ, ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದರು. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸಲು ಹಳ್ಳಿಯಲ್ಲಿ ‘ಸುಮನಸಾ’ ಎಂಬ ವಿಚಾರ ವೇದಿಕೆಯನ್ನು ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸವಾರ್ಂತರ್ಯಾಮಿ ಎನಿಸಿದ್ದರು. ಸುಬ್ರಾಯ ಚೊಕ್ಕಾಡಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು ಇತ್ಯಾದಿ ಕವನಸಂಕಲನ ಪ್ರಕಟಿಸಿದ್ದರು. ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು), ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು, ಸಮಾಲೋಕ, ಅವಲೋಕನ ಇವರ ವಿಮರ್ಶಾ ಕೃತಿಗಳೊಂದಿಗೆ ಸಂಪಾದಿತ ಕೃತಿ (ದ.ಕ.ಕಾವ್ಯ) ಪ್ರಕಟಿಸಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರಿಗೆ ಸಂದ ಗೌರ, ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧ ಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್.ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಪ್ರಮುಖವಾದವು.

ವಾರ್ತಾ ಭಾರತಿ 29 Jan 2026 8:59 pm

ಕೋಲ್ಕತಾ| ಗೋದಾಮಿನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 21ಕ್ಕೆ ಏರಿಕೆ

ಕೋಲ್ಕತಾ, ಜ. 29: ಜನವರಿ 26ರಂದು ಅಗ್ನಿ ಅವಘಡ ಸಂಭವಿಸಿದ ಕೋಲ್ಕತಾದ ಆನಂದಪುರದ ಗೋದಾಮು ಹಾಗೂ ಉತ್ಪಾದನಾ ಘಟಕದಲ್ಲಿ ಮತ್ತೆ 13 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 28 ಮಂದಿ ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ 21 ಪರಗಣ ಜಿಲ್ಲೆಯ ಆನಂದಪುರದಲ್ಲಿರುವ ಎರಡು ಗೋದಾಮುಗಳು ಹಾಗೂ ಮೋಮೋ ಕಂಪೆನಿಯ ಒಂದು ಉತ್ಪಾದನಾ ಘಟಕ ರವಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಬೂದಿಯಾಗಿತ್ತು. ಘಟನೆಯ ಸ್ವರೂಪ ಹಾಗೂ ಹಾನಿಯ ವ್ಯಾಪ್ತಿಯನ್ನು ಗಮನಿಸಿದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪತ್ತೆಯಾದ ಒಟ್ಟು 21 ಮೃತದೇಹಗಳ ಗುರುತು ಪತ್ತೆ ಹಚ್ಚಲು ಡಿಎನ್‌ಎ ವಿಶ್ಲೇಷಣೆ ಕಾರ್ಯ ಗುರುವಾರ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 29 Jan 2026 8:58 pm

ಕಾರ್ಮಿಕ ವಿರೋಧಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಎಐಸಿಸಿಟಿಯು ವತಿಯಿಂದ ಮಾನ್ವಿಯಲ್ಲಿ ಬೈಕ್ ರ‍್ಯಾಲಿ

ಮಾನ್ವಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ಉದ್ಯೋಗ ಕಸಿಯುವ ವಿಬಿ ಗ್ರಾಮ ಜಿ–2025 ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ, ಕೇಂದ್ರ ಸರ್ಕಾರದ ರೈತ–ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಜೆಸಿಟಿಯು ಫೆಬ್ರವರಿ 12ರಂದು ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ಕರೆಯ ಪ್ರಯುಕ್ತ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಸಂಘಟನೆ ಮುಖಂಡರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್‌ಗಳು ವಿರೋಧ ವ್ಯಕ್ತಪಡಿಸಿದ್ದರೂ, ಕಾರ್ಮಿಕರ ಮನವಿಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ದೊರಕಬೇಕಾದ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀದಾರ್ ಮಾತನಾಡಿ, ಸಾರ್ವಜನಿಕ ವಲಯವನ್ನು ಖಾಸಗಿಯವರಿಗೆ, ವಿಶೇಷವಾಗಿ ಏಕಸ್ವಾಮ್ಯ ಬಂಡವಾಳಗಾರರಿಗೆ ಹಸ್ತಾಂತರಿಸುವ ನೀತಿ ದೇಶದ ಕಾರ್ಮಿಕರಿಗೆ ಮಾರಕವಾಗಿದೆ. ಕಾರ್ಮಿಕರು ತ್ಯಾಗ ಮತ್ತು ಹೋರಾಟಗಳಿಂದ ಪಡೆದ 29 ಕಾನೂನುಗಳನ್ನು ರದ್ದುಪಡಿಸಿ ಮಾಲಕರ ಪರ ಸಂಹಿತೆಗಳನ್ನು ಜಾರಿ ಮಾಡಲಾಗಿದೆ. ಈ ಅನ್ಯಾಯಕರ ನೀತಿಗಳನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸಿರಿವಾರ ವಿಭಾಗದ ಅಧ್ಯಕ್ಷ ರಾಜ ಮಹ್ಮದ್, ಮಾನ್ವಿ ಉಪ ವಿಭಾಗದ ಅಧ್ಯಕ್ಷ ಬಸಲಿಂಗಪ್ಪ ಜಂಬಲದಿನ್ನಿ, ಹಿರೆಕೊಟ್ನೆಕಲ್ ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ, ಕೇಂದ್ರ ಸಮಿತಿ ಖಜಾಂಚಿ ಜಲೀಲ್ ಪಾಷಾ, ಗೋಪಾಲ ರಾವ್, ಚಂದ್ರಶೇಖರ್, ಬಸವರಾಜ ಬಾಗಲವಾಡ, ರಂಗಪ್ಪ ನಾಯಕ, ಶಂಕರ್ ಜಾನೇಕಲ್, ಕೃಷ್ಣ, ಇಮ್ರಾನ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿ ಪ್ರಚಾರಾಂದೋಲನವನ್ನು ಯಶಸ್ವಿಗೊಳಿಸಿದರು.  

ವಾರ್ತಾ ಭಾರತಿ 29 Jan 2026 8:57 pm

ಮಾದೇಗೌಡ, ಅಂಬರೀಶ್, ಇತರೆ ನಾಯಕರ ವಿರುದ್ದ ಅವಾಚ್ಯ ಶಬ್ದ ಬಳಸಿಲ್ಲ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸ್ಪಷ್ಟನೆ

ಮಂಡ್ಯ: ಮಾಜಿ ಸಂಸದರಾದ ಜಿ.ಮಾದೇಗೌಡ, ಅಂಬರೀಶ್, ಇತರೆ ರಾಜಕೀಯ ನಾಯಕರ ವಿರುದ್ಧ ತಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ. ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಡಿಯೋದಲ್ಲಿ ಇರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಅದರಲ್ಲಿ ಬಹುತೇಕ ಮಾತುಗಳನ್ನು ನಾನು ಮಾತನಾಡಿಯೇ ಇಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 'ಜ.11ರಂದು ಕದಬಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತ ರಂಗ ಎಂಬಾತ ನನಗೆ ದೂರವಾಣಿ ಕರೆಮಾಡಿ ಪ್ರಶ್ನಿಸಿದ್ದ. ಆತನ ಜತೆ 2 ನಿಮಿಷ 42 ಸೆಕೆಂಡ್ ಅಷ್ಟೆ ಮಾತನಾಡಿದ್ದೆ' ಎಂದು ಬಗ್ಗೆ ವಿವರಿಸಿದ್ದಾರೆ. 'ಆದರೆ, ಘಟನೆ ನಡೆದ 18 ದಿನಗಳ ನಂತರ ನನ್ನ ಅಡಿಯೋದಲ್ಲಿ ಇಲ್ಲಸಲ್ಲದ್ದನ್ನು ಸೇರಿಸಿ 2 ನಿಮಿಷ 42 ಸೆಕೆಂಡ್ ಆಡಿಯೋವನ್ನು 20 ನಿಮಿಷದ ಅಡಿಯೋ ಆಗಿ ಪರಿವರ್ತಿಸಿ, ತಮಗೆ ಬೇಕಾದ ರೀತಿಯಲ್ಲಿ ಪದಗಳನ್ನು ಸೇರಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಅಂಬರೀಶ್ ಅವರ ಬಗ್ಗೆ ಆಗಲಿ, ಜಿ.ಮಾದೇಗೌಡರ ಬಗ್ಗೆ ಆಗಲಿ ಅಥವಾ ಯಾವುದೇ ನಾಯಕರ ಬಗ್ಗೆ ಅವಾಚ್ಯ ಶಬ್ದ ಅಥವಾ ಅಸಭ್ಯ ಪದಗಳನ್ನು ನಾನು ಬಳಸಿಲ್ಲ' ಎಂದು ಅವರು ತಿಳಿಸಿದ್ದಾರೆ. 'ಈ ಹಿಂದೆಯು ಕೂಡ ನನ್ನ ಬಗ್ಗೆ ಪಿತೂರಿ ಮಾಡಿದ್ದರು. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯಲ್ಲದಿದ್ದರೂ ಅಂಬರೀಶ್ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.

ವಾರ್ತಾ ಭಾರತಿ 29 Jan 2026 8:56 pm

2027ರಲ್ಲಿ ಶೇ.7.2 ಜಿಡಿಪಿ ಬೆಳವಣಿಗೆ: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗ

ಹೊಸದಿಲ್ಲಿ,ಜ.29: ಕೇಂದ್ರ ಸರಕಾರದ ಯೋಜಿತ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ದೇಶದಲ್ಲಿ ಬಡತನವು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ತಳಮಟ್ಟದಲ್ಲಿರುವ ಜನಸಂಖ್ಯೆಯ ಪೈಕಿ ಶೇ.5ರಿಂದ 10ರಷ್ಟು ಮಂದಿಯ ಖರೀದಿ ವೆಚ್ಚದಲ್ಲಿ ತೀವ್ರ ಏರಿಕೆಯಾಗಿದೆ ಎಂದು 2025-26ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ದೇಶದ ಒಟ್ಟು ಆರ್ಥಿಕ ಬೆಳವಣಿಗೆ (ಜಿಡಿಪಿ)ದರದ ಕುರಿತು ವಿವರಗಳನ್ನು ನೀಡಿದರು. 2026ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ.7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆೆ. ಆದರೆ 2027ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ.6.8ರಿಂದ ಶೇ.7.2ರವರೆಗೆ ಇರಲಿದೆ. ಆದಾಗ್ಯೂ ಇದು ಐಎಂಎಫ್ ಹಾಗೂ ವಿಶ್ವಬ್ಯಾಂಕ್‌ನ ಅಂದಾಜಿಗಿಂತ ತೀರಾ ಅಧಿಕವಾಗಿದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂಬ ಸ್ಥಾನಮಾನವನ್ನು ಭಾರತವು ಮತ್ತೊಮ್ಮೆ ದೃಢಪಡಿಸಿದೆ. 2025-26ನೇ ಸಾಲಿನ ಮೊದಲಾಧರ್ ದಲ್ಲಿ ರಫ್ತಿನ ಪ್ರಮಾಣವು 22.2 ಶತಕೋಟಿ ಡಾಲರ್ ಆಗಿದೆ. ಎಲೆಕ್ಟ್ರಾನಿಕ್ ವಲಯವು ಎರಡನೇ ಅತಿ ದೊಡ್ಡ ರಫ್ತುದಾರನಾಗಿದೆ. ಹೂಡಿಕೆ ಹಾಗೂ ಉತ್ಪಾದನಾ ವಲಯಗಳು ದೇಶದ ಆರ್ಥಿಕತೆಗೆ ಬಲತುಂಬಿರುವುದಾಗಿ ವರದಿ ಹೇಳಿದೆ. ಜಗತ್ತಿನಾದ್ಯಂತ ಹಲವಾರು ದೇಶಗಳು ಆರ್ಥಿಕ ಹಿಂಜರಿಕೆಯನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಭಾರತದ ಈ ಸಾಧನೆ ಗಮನಾರ್ಹವೆಂದು ವರದಿ ಹೇಳಿದೆ. ಹೆಚ್ಚುತ್ತಿರುವ ಹೂಡಿಕೆ, ಸ್ಥಿರವಾದ ಹಣದುಬ್ಬರ, ಉತ್ಪಾದನಾ ವಲಯಗಳು, ಮೂಲಸೌಕರ್ಯಗಳು,ಸೇವಾ ವಲಯಗಳು ಹಾಗೂ ವಿತ್ತೀಯ ವ್ಯವಸ್ಥೆಯಲ್ಲಿ ಸಂರಚನಾತ್ಮಕ ಸುಧಾಣೆಗಳು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ವರದಿಯು ತಿಳಿಸಿದೆ. ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತನಾಗೇಶ್ವರನ್ ನೇತೃತ್ವದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಪ್ರಕಟಿಸಲಿರುವ ಈ ಸಮೀಕ್ಷೆಯು ಹಾಲಿ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯು ಹೇಗಿತ್ತು, ಮುಂದಿನ ಆರ್ಥಿಕ ವರ್ಷದಲ್ಲಿ ಅದು ಹೇಗಿರಬಹುದು ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ. ಕೇಂದ್ರ ಸರಕಾರ 2026-27ನೇ ಸಾಲಿನ ಬಜೆಟ್ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು... 2025-26ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ 8.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ದೇಶದಲ್ಲಿ ಉದ್ಯೋಗಿಗಳ ಸಂಖ್ಯೆಯು 56.2 ಕೋಟಿಗೆ ಏರಿಕೆಯಾಗಿದೆ. ಆದರೆ ನಿರುದ್ಯೋಗ ಪ್ರಮಾಣವು ಈಗಲೂ ಶೇ.5ರಷ್ಟರಲ್ಲಿಯೇ ಉಳಿದುಕೊಂಡಿದೆ. ಬೊಜ್ಜಿನ ಸಮಸ್ಯೆಯು ಎಲ್ಲಾ ವಯೋವರ್ಗದವರನ್ನೂ ಬಾಧಿಸುತ್ತಿದ್ದು, ಪಥ್ಯಾಹಾರ ಸೇವನೆಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ. ಕೃಷಿ ವಲಯವು ಬೆಳವಣಿಗೆಯನ್ನು ಕಾಣುತ್ತಿರುವ ಹೊರತಾಗಿಯೂ ಅದು ಹವಾಮಾನ, ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಟೋಮೊಬೈಲ್ ರಫ್ತು ವಲಯವು ಬಲವಾದ ಬೆಳವಣಿಗೆಯನ್ನು ಕಂಡಿದ್ದು, ಪ್ರಯಾಣಿಕ, ವಾಣಿಜ್ಯ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ವಲಯಗಳಿಂದ 50.30 ಲಕ್ಷ ವಾಹನಗಳು ರಫ್ತಾಗಿವೆ. 55 ಕೋಟಿಗೂ ಅಧಿಕ ಜನಧನ ಖಾತೆಗಳನ್ನು ತೆರೆಯಲಾಗಿದೆ. ಅಧಿಕವೇಗದ ರಸ್ತೆಕಾರಿಡಾರ್‌ಗಳನ್ನು ಸುಮಾರು 10 ಪಟ್ಟು ಅಂದರೆ 5364 ಕಿ.ಮೀ.ನಷ್ಟು ವಿಸ್ತರಿಸಲಾಗಿದೆ. 2014ರಲ್ಲಿ ದೇಶದಲ್ಲಿ 74 ವಿಮಾನನಿಲ್ದಾಣಗಳಿದ್ದರೆ 2025ರಲ್ಲಿ 164ಕ್ಕೇರಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಅಂತರ್‌ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಜಗತ್ತು ಹೊರಹೊಮ್ಮಿದೆ. 2025ರಲ್ಲಿ ವಿಶಿಷ್ಟ ಹೂಡಿಕೆದಾರರ ಸಂಖ್ಯೆಯು 12 ಕೋಟಿಯ ಗಡಿಯನ್ನು ದಾಟಿದ್ದು, ಅವರಲ್ಲಿ ಶೇ.25ರಷ್ಟು ಮಂದಿ ಮಹಿಳೆಯರು. 2026ರ ಜನವರಿ 16ರ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು 701.4 ಶತಕೋಟಿ ಡಾಲರ್‌ಗೆ ಹೆಚ್ಚಿದೆ. 2025ರ ಎಪ್ರಿಲ್-ಡಿಸೆಂಬರ್‌ವರೆಗೆ ಆಂತರಿಕ ಹಣದುಬ್ಬರವು ಸರಾಸರಿ 1.7 ಶೇಕಡ ಆಗಿದೆ. 2024-25ರ ಸಾಲಿನಲ್ಲಿ ಭಾರತದ ಆಹಾರಧಾನ್ಯ ಉತ್ಪಾದನೆಯು 3577.3 ಲಕ್ಷ ಮೆಟ್ರಿಕ್ ಟನ್‌ಗೆ ತಲುಪಿದ್ದು, ಹಿಂದಿನ ಸಾಲಿಗಿಂತ 254.3 ಲಕ್ಷ ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆ. ಪಿಎಂ-ಕಿಸಾನ್ ಯೋಜನೆಯು ಆರಂಭವಾದಾಗಿನಿಂದ ಈವರೆಗೆ 4.09 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತಗಳಲ್ಲಿ ಒಟ್ಟು ದಾಖಲಾತಿ ಪ್ರಮಾಣವು ಕ್ರಮವಾಗಿ 90.9, 90.3 ಹಾಗೂ 78.7 ಆಗಿದೆ. ಐರೋಪ್ಯ ಒಕ್ಕೂಟದ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ಉತ್ಪಾದನಾ ಸ್ಮರ್ಧಾತ್ಮಕತೆಯನ್ನು, ವ್ಯೆಹಾತ್ಮಕ ಸಾಮರ್ಥ್ಯವನ್ನು ಬಲಪಡಿಸಲಿದೆ.

ವಾರ್ತಾ ಭಾರತಿ 29 Jan 2026 8:53 pm

‌ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತ: ನಟ ಮಯೂರ್ ಪಟೇಲ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮದ್ಯಪಾನ ಮಾಡಿ ತಮ್ಮ ಫಾರ್ಚೂನರ್ ಕಾರನ್ನು ವೇಗವಾಗಿ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಕಾರುಗಳಿಗೆ ಢಿಕ್ಕಿ ಹೊಡೆದ ಸಂಬಂಧ ಕನ್ನಡ ಚಲನಚಿತ್ರ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಮಯೂರ್ ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬವರ ಕಾರುಗಳು ಹಾಗೂ ಸರಕಾರಿ ವಾಹನ ಜಖಂ ಆಗಿದೆ. ಅಪಘಾತದ ಕುರಿತು ಶ್ರೀನಿವಾಸ್ ಎಂಬವರು ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಪಾಸಣೆ ವೇಳೆ ನಟ ಮಯೂರ್ ಪಟೇಲ್ ಕುಡಿದು ವಾಹನ ಚಲಾಯಿಸಿರುವುದು ಸಾಬೀತಾಗಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸದ್ಯ ಮಯೂರ್ ಪಟೇಲ್ ಕಾರ್ ಸೀಝ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್ ಪಟೇಲ್ ಕಾರಿಗೆ ವಿಮೆ ಇಲ್ಲದಿರುವುದು ಪತ್ತೆಯಾಗಿದೆ.

ವಾರ್ತಾ ಭಾರತಿ 29 Jan 2026 8:48 pm

'ಪವಾರ್ ಬಹು’ವಿನ ಪವರ್ ಪಾಲಿಟಿಕ್ಸ್ : NCP ಸಾರಥ್ಯ ವಹಿಸಲಿದ್ದಾರೆಯೇ ಅಜಿತ್ ಪತ್ನಿ ಸುನೇತ್ರಾ ಪವಾರ್?

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹಠಾತ್ ನಿಧನವು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಜಿತ್ ಪವಾರ್ ಬಣ ಮತ್ತು ಶರದ್ ಪವಾರ್ ಬಣ ಎಂದು ಎನ್‌ಸಿಪಿ ಇಬ್ಭಾಗವಾಗಿದ್ದರೂ, ಇತ್ತೀಚೆಗೆ ಈ ಬಣಗಳು ಮತ್ತೆ ಒಂದಾಗುವ ಸೂಚನೆ ನೀಡಿದ್ದವು. ಈ ಹೊತ್ತಿನಲ್ಲಿ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಅವರನ್ನು ಕಳೆದುಕೊಂಡಿರುವುದು, ಎನ್‌ಸಿಪಿಯ ಅಜಿತ್ ಬಣದ ನಾಯಕ ಸ್ಥಾನಕ್ಕೆ ಅರ್ಹ ವ್ಯಕ್ತಿಯನ್ನು ತಂದುಕೂರಿಸುವ ಜವಾಬ್ದಾರಿಯನ್ನು ಪಕ್ಷದ ಮೇಲೆ ಹಾಕಿದೆ. ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಸಿಗುವ ಮೊದಲ ಉತ್ತರ – ಅವರ ಪತ್ನಿ ಸುನೇತ್ರಾ ಪವಾರ್. ಮಹಾರಾಷ್ಟ್ರದಾದ್ಯಂತ ಪ್ರೀತಿಯಿಂದ “ವಹಿನಿ” (ವೈಣಿ–ಅತ್ತಿಗೆ) ಎಂದು ಕರೆಯಲ್ಪಡುವ ಸುನೇತ್ರಾ ಪವಾರ್, ಮೂರು ದಶಕಗಳಿಗೂ ಹೆಚ್ಚು ಕಾಲ ಅಜಿತ್ ಪವಾರ್ ಅವರ ಜೊತೆ ಕುಟುಂಬ–ರಾಜಕೀಯದ ಪಯಣದಲ್ಲಿ ಜತೆಯಾಗಿದ್ದವರು. ಸುನೇತ್ರಾ ಬಾರಾಮತಿಯಲ್ಲಿ ಸಾಮಾಜಿಕ ಹಾಗೂ ಸಂಸ್ಥಾತ್ಮಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರೂ, ಅವರ ಕೆಲಸವು ಮುಖ್ಯವಾಗಿ 2010ರಲ್ಲಿ ಅವರು ಸ್ಥಾಪಿಸಿದ ಎನ್ವಿರಾನ್ಮೆಂಟಲ್ ಫೋರಮ್ ಆಫ್ ಇಂಡಿಯಾ (EFOI) ಮತ್ತು ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ಬಾರಾಮತಿ ಹೈಟೆಕ್ ಜವಳಿ ಪಾರ್ಕ್ ಮೂಲಕ ಗುರುತಿಸಿಕೊಂಡಿದೆ. ಸುನೇತ್ರಾ ಪವಾರ್ ಕುಟುಂಬ ಹಿನ್ನೆಲೆ 1963 ಅಕ್ಟೋಬರ್ 18ರಂದು ಜನಿಸಿದ ಸುನೇತ್ರಾ ಪವಾರ್, ಮರಾಠವಾಡದ ಧರಾಶಿವ್ ಮೂಲದವರು. ಅವರದ್ದು ರಾಜಕೀಯ ಕುಟುಂಬ. ಅವರ ತಂದೆ ಮಹಾರಾಷ್ಟ್ರದ ಮಾಜಿ ಸಚಿವ ಪದ್ಮಸಿಂಹ ಬಾಜಿರಾವ್ ಪಾಟೀಲ್. ಸುನೇತ್ರಾ ಅವರ ಸಹೋದರ ಪದ್ಮಸಿಂಹ ಪಾಟೀಲ್ ರಾಜ್ಯ ಸಚಿವರಾಗಿಯೂ, ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. 1985ರಲ್ಲಿ ಅಜಿತ್ ಪವಾರ್ ಅವರನ್ನು ವಿವಾಹವಾದ ಸುನೇತ್ರಾ, ಪವಾರ್ ಕುಟುಂಬದ ಸೊಸೆ ಎಂಬ ಅರ್ಥದಲ್ಲಿ “ಪವಾರ್ ಬಹು” ಎಂದೇ ಪ್ರಸಿದ್ಧರಾಗಿದ್ದಾರೆ. ಅಜಿತ್ ಪವಾರ್ ಪ್ರಭಾವಿ ರಾಜಕಾರಣಿ, ತಂತ್ರಜ್ಞ ಹಾಗೂ ಡೀಲ್ ಮೇಕರ್ ಆಗಿದ್ದರೆ, ಅವರ ಪತ್ನಿ ಸುನೇತ್ರಾ ಹಲವು ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದರು. ಅಜಿತ್ ಪವಾರ್ ಬಾರಾಮತಿಯ ‘ದಾದಾ’ ಆಗಿ ಜನಪ್ರಿಯರಾದರೆ, ಸುನೇತ್ರಾ ಬಾರಾಮತಿ ಮತ್ತು ಮರಾಠವಾಡದಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ವ್ಯಾಪಾರ ಜಾಲಗಳನ್ನು ಬೆಳೆಸಿದರು. ಪವಾರ್ ಕುಟುಂಬಕ್ಕೆ ಹತ್ತಿರವಿರುವವರು, ಅವರನ್ನು ತೀಕ್ಷ್ಣ, ಶಿಸ್ತುಬದ್ಧ ಮತ್ತು ಮಹಾರಾಷ್ಟ್ರ ರಾಜಕೀಯದ ಕುರಿತು ಆಳವಾದ ತಿಳುವಳಿಕೆ ಹೊಂದಿರುವ ವ್ಯಕ್ತಿ ಎಂದು ವರ್ಣಿಸುತ್ತಾರೆ. 2024ರಲ್ಲಿ ಸುನೇತ್ರಾ ಪವಾರ್ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಪ್ರತಿಸ್ಪರ್ಧಿ ಅತ್ತಿಗೆ ಸುಪ್ರಿಯಾ ಸುಳೆ. ಇದು ಕೇವಲ ಚುನಾವಣೆಯಲ್ಲ; ಪವಾರ್ ಕುಟುಂಬದ ವಿಭಜನೆಯ ಕುರಿತು ಜನಾಭಿಪ್ರಾಯ ಸಂಗ್ರಹವಾಗಿಯೂ ಪರಿಣಮಿಸಿತ್ತು. ಚುನಾವಣೆಯಲ್ಲಿ ಸುನೇತ್ರಾ ಪವಾರ್ ಸೋಲನ್ನಪ್ಪಿದರು. ಸುಪ್ರಿಯಾ ಸುಳೆ 7,32,312 ಮತಗಳನ್ನು ಪಡೆದರೆ, ಸುನೇತ್ರಾ ಪವಾರ್ 5,73,979 ಮತಗಳನ್ನು ಗಳಿಸಿದರು. ಮತಗಳ ಅಂತರ ನಿರ್ಣಾಯಕವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಸೋತರೂ, ಸುನೇತ್ರಾ ಪವಾರ್ ರಾಜಕೀಯದಿಂದ ಹಿಂದೆ ಸರಿಯಲಿಲ್ಲ. ಕೆಲವೇ ವಾರಗಳೊಳಗೆ ಅವರು ಮಹಾರಾಷ್ಟ್ರದಿಂದ ಅವಿರೋಧವಾಗಿ ರಾಜ್ಯಸಭಾ ಸಂಸದೆಯಾಗಿ ಆಯ್ಕೆಯಾದರು. ಈ ನಡೆ ಅವರಿಗೆ ರಾಷ್ಟ್ರ ರಾಜಕೀಯದಲ್ಲಿ ಗುರುತು ಮತ್ತು ಔಪಚಾರಿಕ ಅಧಿಕಾರವನ್ನು ನೀಡಿತು. 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಆಸ್ತಿ ವಿವರಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ ರೂ.127.6 ಕೋಟಿ. ರೂ.16.9 ಕೋಟಿ ಲಾಯಬಿಲಿಟಿ ಇದ್ದು, ಒಟ್ಟು ಆದಾಯ ರೂ.5.1 ಕೋಟಿ. ರಾಜ್ಯಸಭಾ ಸಂಸದೆಯಾಗಿ ಅವರ ಹಾಜರಾತಿ ಶೇ.69ರಷ್ಟಿದೆ ಎಂದು ಪಿಆರ್‌ಎಸ್ ಇಂಡಿಯಾ ಅಂಕಿಅಂಶಗಳು ಸೂಚಿಸುತ್ತವೆ. ಬಹುಮುಖ ಪ್ರತಿಭೆ ಸುನೇತ್ರಾ ಪವಾರ್ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಪದವಿ ಪಡೆದಿದ್ದಾರೆ. ರಾಜಕೀಯದ ಜೊತೆಗೆ ಅವರು ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಮಹಾರಾಷ್ಟ್ರದ ಗ್ರಾಮೀಣ ಉದ್ಯೋಗಕ್ಕೆ ಮಹತ್ವದ ಪಾತ್ರ ವಹಿಸುವ ಬಾರಾಮತಿ ಜವಳಿ ಕಂಪೆನಿಯ ಅಧ್ಯಕ್ಷೆಯಾಗಿರುವ ಇವರು, ಸಾವಯವ ಕೃಷಿ, ಸುಸ್ಥಿರತೆ ಮತ್ತು ಪರಿಸರ–ಗ್ರಾಮಗಳ ಮೇಲೆ ಕೇಂದ್ರೀಕರಿಸುವ ಭಾರತದ ಪರಿಸರ ವೇದಿಕೆಯನ್ನು ಸ್ಥಾಪಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ಮಾಡಿದ ಕಾರ್ಯಗಳು ರಾಜ್ಯದೊಳಗೆ ಮನ್ನಣೆಯನ್ನು ಗಳಿಸಿವೆ. ಶರದ್ ಪವಾರ್ ಸ್ಥಾಪಿಸಿದ ಶಿಕ್ಷಣ ಟ್ರಸ್ಟ್ ವಿದ್ಯಾ ಪ್ರತಿಷ್ಠಾನದ ಟ್ರಸ್ಟಿಯಾಗಿಯೂ ಸುನೇತ್ರಾ ಪವಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಯಾಗಿಯೂ ಅವರು ವರ್ಷಗಳಿಂದ ಉನ್ನತ ಶಿಕ್ಷಣ ನೀತಿಯಲ್ಲಿ ತಮ್ಮ ಪಾತ್ರ ವಹಿಸಿದ್ದಾರೆ. ಅಜಿತ್ ಪವಾರ್ ಕುಟುಂಬ ಅಜಿತ್ ಪವಾರ್–ಸುನೇತ್ರಾ ದಂಪತಿಗೆ ಇಬ್ಬರು ಪುತ್ರರು – ಪಾರ್ಥ್ ಪವಾರ್ ಮತ್ತು ಜಯ್ ಪವಾರ್. ಹಿರಿಯ ಪುತ್ರ ಪಾರ್ಥ್ ಪವಾರ್ 2019ರಲ್ಲಿ ಮಾವಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು. ಪವಾರ್ ಕುಟುಂಬದ ದೀರ್ಘಕಾಲದ ರಾಜಕೀಯ ಪ್ರಾಬಲ್ಯ ಹಿನ್ನೆಲೆಯಲ್ಲಿ ಅವರ ಪ್ರವೇಶ ಗಮನ ಸೆಳೆದಿತ್ತು. ಆದರೆ ಅವರು ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋಲನ್ನಪ್ಪಿದರು. ನಂತರ ಪಾರ್ಥ್ ಪವಾರ್ ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಯಾವುದೇ ಚುನಾಯಿತ ಹುದ್ದೆ ಅಥವಾ ಪಕ್ಷದ ಔಪಚಾರಿಕ ಪಾತ್ರ ಹೊಂದಿಲ್ಲ. ಕಿರಿಯ ಪುತ್ರ ಜಯ್ ಪವಾರ್ ಚುನಾವಣಾ ರಾಜಕೀಯದಿಂದ ದೂರವಿದ್ದು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಇದುವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಅಥವಾ ಔಪಚಾರಿಕವಾಗಿ ರಾಜಕೀಯ ಜೀವನ ಪ್ರವೇಶಿಸಿಲ್ಲ. ಆದರೆ ಪ್ರಚಾರಗಳು ಮತ್ತು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಕುಟುಂಬ ಸದಸ್ಯರಿಗೆ ಬೆಂಬಲವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಜಯ್ ಪವಾರ್ ಬಹ್ರೇನ್‌ನಲ್ಲಿ ರುತುಜಾ ಪಾಟೀಲ್ ಅವರನ್ನು ವಿವಾಹವಾಗಿದ್ದಾರೆ.

ವಾರ್ತಾ ಭಾರತಿ 29 Jan 2026 8:46 pm

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ: ಶ್ವಾಸಕೋಶದ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ರೋಗಿಗೆ ಜೀವದಾನ

ಮಂಗಳೂರು: ಶ್ವಾಸಕೋಶ ಸಂಬಂಧಿ ತೀವ್ರ ಕಾಯಿಲೆಯಿಂದ ಸಾವು ಬದುಕಿನ ಹೋರಾಟದಲ್ಲಿದ್ದ ಹಾಸನ ಮೂಲದ 38 ಹರೆಯದ ರೋಗಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ವಿನೂತನ ಶೈಲಿಯ ಕ್ಲಿಷ್ಟಕರ ಮತ್ತು ಅಪಾಯಕಾರಿ ಶಸ್ತ್ರ ಚಿಕಿತ್ಸೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದರೊಂದಿಗೆ ವೈದ್ಯರ ತಂಡವು ರೋಗಿಗೆ ಜೀವದಾನ ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ಗಂಭೀರ ರಕ್ತಹೀನತೆ, ತೀಕ್ಷ್ಣ ಎದೆ ನೋವು, ನಿಶಕ್ತಿ, ಸಮಸ್ಯೆಗಳಿಂದ ಬಳಲುತ್ತಿದ್ದು, ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ.ಎಚ್.ಪ್ರಭಾಕರ್ ಅವರನ್ನು ಭೇಟಿ ಯಾಗಿದ್ದರು. ವೈದ್ಯರು ಸೂಕ್ಷ್ಮವಾಗಿ ರೋಗಿಯನ್ನು ಸಮಗ್ರ ಆರೋಗ್ಯ ತಪಾಸಣೆ ಒಳಪಡಿಸಿದಾಗ ರೋಗಿಯು ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದರು. ರಕ್ತ ಚಲನವಲನದ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ಪರಿಗಣಿಸಿ, ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ರೋಗಿಯನ್ನು ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಆನಂದ್ ಕೆ.ಟಿ.ಯವರನ್ನು ಶಸ್ತ್ರ ಚಿಕಿತ್ಸೆಗಾಗಿ ಭೇಟಿಯಾಗಲು ಸಲಹೆ ನೀಡಿದರು. ಅವರು ತುರ್ತು 6 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ ಶ್ವಾಸಕೋಶ ಶಸ್ತ್ರ ಚಿಕಿತ್ಸೆ ಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇವರಿಗೆ ಹೃದ್ರೋಗ ಶಾಸ್ತ್ರ ಅರಿವಳಿಕೆ ತಜ್ಞರಾದ ಡಾ. ಎಮ್.ಎಮ್. ಚೇತನಾ ಆನಂದ್ ಸಹಕರಿಸಿದ್ದರು. ರೋಗಿಯು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ ಫೌಸ್ಟಿನ್ ಲ್ಯೂಕಸ್ ಲೋಬೊ ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದ್ದಾರೆ.

ವಾರ್ತಾ ಭಾರತಿ 29 Jan 2026 8:41 pm

ದೇವದುರ್ಗ | ಗಬ್ಬೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಬೂದಿಬಸವೇಶ್ವರ ಮಹಾ ರಥೋತ್ಸವ

ದೇವದುರ್ಗ : ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಬೂದಿಬಸವೇಶ್ವರ ಮಹಾ ರಥೋತ್ಸವ ಗುರುವಾರ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಸಂಭ್ರಮಿಸಿದರು. ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಮಠದ ಕರ್ತೃ ಗದ್ದುಗೆಯಿಂದ ಹೊರಟು ಗ್ರಾಮದೊಳಗಿನ ಮಠವನ್ನು ತಲುಪಿದರು. ನಂತರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ, ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ರಥಕ್ಕೆ ಎಣ್ಣೆ ಸವರಿ ಹರಕೆ ತೀರಿಸುವುದು ಸಂಪ್ರದಾಯವಾಗಿದ್ದು, ಭಕ್ತರು ಬೆಳಗ್ಗೆಯಿಂದಲೇ ಹರಕೆ ತೀರಿಸಲು ಮುಗಿಬಿದ್ದರು. ಆರು ಚಕ್ರಗಳ ಬೃಹತ್ ರಥವನ್ನು ಮಠದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದ ಪಾದಗಟ್ಟೆವರೆಗೆ ಭಕ್ತರು ಎಳೆದು ಕೊಂಡೊಯ್ದರು. ರಥದ ಮೇಲೆ ಹಣ್ಣು, ಬರ್ಫಿ ತೂರಿ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ರಾಯಚೂರಿನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ರಾಚೋಟಿ ವೀರ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರ ಪಂಚಾಕ್ಷರಿ ಮಠದ ಶಂಭು ಸೋಮೇಶ್ವರ ಸ್ವಾಮೀಜಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಗ್ರಾಮದ ಹಿರಿಯ ಮುಖಂಡರಾದ ಸಾಲಿ ಬೂದಯ್ಯ ಸ್ವಾಮಿ, ಸಾಲಿ ದೊಡ್ಡಬಸಯ್ಯ ಸ್ವಾಮಿ, ಸಾಲಿ ಶರಣಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಈ ವೇಳೆ ಮಠಾಧೀಶ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಾರ್ತಾ ಭಾರತಿ 29 Jan 2026 8:41 pm

ಇರಾನ್ ಮೇಲೆ ಹೊಸ ನಿರ್ಬಂಧಕ್ಕೆ ಯುರೋಪಿಯನ್ ಒಕ್ಕೂಟದ ಸಚಿವರಿಂದ ಅನುಮೋದನೆ

ಬ್ರಸೆಲ್ಸ್, ಜ.29: ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಮನದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಯುರೋಪಿಯನ್ ಯೂನಿಯನ್‍ನ(ಇಯು) ವಿದೇಶಾಂಗ ಸಚಿವರು ಗುರುವಾರ ಇರಾನಿನ ಮೇಲೆ ಹೊಸ ನಿರ್ಬಂಧಗಳನ್ನು ಅನುಮೋದಿಸಿರುವುದಾಗಿ ರಾಜತಾಂತ್ರಿಕ ಮೂಲಗಳು ಹೇಳಿವೆ. ರಾಯ್ಟರ್ಸ್ ವರದಿಯ ಪ್ರಕಾರ, ಸಚಿವರು ಇರಾನಿನ `ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಅನ್ನು ಯುರೋಪಿಯನ್ ಯೂನಿಯನ್‍ನ `ಭಯೋತ್ಪಾದಕ ಸಂಸ್ಥೆಗಳ' ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಸಹಮತಕ್ಕೆ ಬರುವ ನಿರೀಕ್ಷೆಯಿದೆ. ದೀರ್ಘಕಾಲದಿಂದ ಈ ಪ್ರಸ್ತಾಪವನ್ನು ವಿರೋಧಿಸುತ್ತಾ ಬಂದಿದ್ದ ಫ್ರಾನ್ಸ್ ಸಹಿತ ಕೆಲವು ಸದಸ್ಯರು ಇದೀಗ ಈ ಕ್ರಮವನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಇಂತಹ ನಿರ್ಧಾರಗಳಿಗೆ ಯುರೋಪಿಯನ್ ಯೂನಿಯನ್ ಬಣದ 27 ಸದಸ್ಯರಲ್ಲಿ ಸರ್ವಾನುಮತದ ಅಗತ್ಯವಿದೆ. 1979ರಲ್ಲಿ ಸ್ಥಾಪನೆಯಾದ ಐಆರ್‍ಜಿಸಿ ದೇಶದಲ್ಲಿ ದೊಡ್ಡ ಹಿಡಿತವನ್ನು ಹೊಂದಿದ್ದು ಆರ್ಥಿಕತೆ ಮತ್ತು ಸಶಸ್ತ್ರ ಪಡೆಗಳನ್ನು ನಿಯಂತ್ರಿಸುತ್ತದೆ. ಮತ್ತು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪರಮಾಣ ಕಾರ್ಯಕ್ರಮಗಳ ಉಸ್ತುವಾರಿಯನ್ನೂ ವಹಿಸಿದೆ.

ವಾರ್ತಾ ಭಾರತಿ 29 Jan 2026 8:38 pm

ಬಳ್ಳಾರಿ | ಕಂಪ್ಲಿ–ಗಂಗಾವತಿ ರಸ್ತೆಯ ಅಪಾಯಕಾರಿ ಸೇತುವೆ ಪುನರ್ ನಿರ್ಮಾಣ

ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊರವಲಯದ ಕಂಪ್ಲಿ–ಗಂಗಾವತಿ ರಾಜ್ಯ ಹೆದ್ದಾರಿ–29 ರ ಕೋಟೆ ಹತ್ತಿರದ ದರ್ಗಾ ತಿರುವು ರಸ್ತೆಯಲ್ಲಿರುವ ಸಿದ್ದಿವಿನಾಯಕ ದೇವಸ್ಥಾನದ ಸಮೀಪ ವಿಜಯನಗರ ಉಪ ಕಾಲುವೆ ಮೇಲೆ ನಿರ್ಮಿಸಲಾದ ಸೇತುವೆ ದುರಸ್ತಿಯಿಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿ, ಇದೀಗ ಲೋಕೋಪಯೋಗಿ ಇಲಾಖೆ (PWD) ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ. ಸೇತುವೆಯ ಎರಡೂ ಬದಿಗಳ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರೆ, ಮತ್ತೊಂದೆಡೆ ರಸ್ತೆಯಲ್ಲಿ ದೊಡ್ಡ ಗುಂಡಿ ಉಂಟಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಪರಿಣಾಮವಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿದ್ದವು. ಈ ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ಹಲವು ಬಾರಿ ಸಚಿತ್ರ ವರದಿಗಳು ಪ್ರಕಟವಾಗಿದ್ದವು. ಈ ಸೇತುವೆ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದ್ದರೂ, ಅದರ ಕೆಳಗೆ ಹರಿಯುವ ಉಪ ಕಾಲುವೆ ಜಲಸಂಪನ್ಮೂಲ ಇಲಾಖೆಗೆ ಸೇರಿದ್ದಾಗಿದ್ದು, ದುರಸ್ತಿ ಹೊಣೆಗಾರಿಕೆ ಯಾರದ್ದು ಎಂಬ ಗೊಂದಲವೂ ಉಂಟಾಗಿತ್ತು. ಆದರೆ, ಇತ್ತೀಚೆಗೆ ಕಂಪ್ಲಿ ಕೋಟೆಯಿಂದ ತುಂಗಭದ್ರಾ ನದಿವರೆಗೆ 2 ಕಿ.ಮೀ. ರಸ್ತೆ ಆಧುನೀಕರಣ, ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಇದೇ ಯೋಜನೆಯ ಭಾಗವಾಗಿ ಸೇತುವೆಯ ಪುನರ್ ನಿರ್ಮಾಣವೂ ಆರಂಭಗೊಂಡಿದೆ. ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಣ್ಣಿನ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮಣ್ಣಿನ ರಸ್ತೆಯಲ್ಲಿ ಸಂಚಾರದಿಂದ ಧೂಳಿನ ಸಮಸ್ಯೆ ಉಂಟಾಗಿ ಪಕ್ಕದ ಹೊಲಗಳ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಪ್ರತಿದಿನ ನೀರು ಸಿಂಪಡಿಸುವಂತೆ ಸ್ಥಳೀಯ ರೈತರು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಆನಂದ ಪಮ್ಮಾರ್, ಸೇತುವೆ ಕಿರಿದಾಗಿದ್ದು, ರಕ್ಷಣಾ ಗೋಡೆಗಳು ಕುಸಿದು ರಸ್ತೆ ಗುಂಡಿ ಬಿದ್ದ ಕಾರಣ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯೊಂದಿಗೆ ಸೇತುವೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ವಾರ್ತಾ ಭಾರತಿ 29 Jan 2026 8:36 pm

ಎಂ.ಎ. ಮನ್ಸೂರ್

ಸುರತ್ಕಲ್ : ಇಲ್ಲಿನ ಚೊಕ್ಕಬೆಟ್ಟು ನಿವಾಸಿ ಎಂ ಎ ಮನ್ಸೂರ್ (78) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.26ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ಸುಮಾರು ಎರಡು ದಶಕಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಕಾಟಿಪಳ್ಳ ಹಾಗೂ ಸುರತ್ಕಲ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಮಾಣಿಕ ಹಾಗೂ ನಿಷ್ಠಾವಂತವಂತರಾಗಿ ಸೇವೆ ಸಲ್ಲಿಸಿ ಸುರತ್ಕಲ್ ಪರಿಸರ ದಲ್ಲಿ ಬ್ಯಾಂಕ್ ಮನ್ಸೂರ್ ಎಂದು ಜನಪ್ರಿಯ ರಾಗಿದ್ದರು.

ವಾರ್ತಾ ಭಾರತಿ 29 Jan 2026 8:31 pm

ಸಮಾಲೋಚನೆ ಪ್ರಾಮಾಣಿಕವಾಗಿದ್ದರೆ ಅಮೆರಿಕಾ ಜೊತೆ ಮಾತುಕತೆ: ಇರಾನ್

ಟೆಹ್ರಾನ್, ಜ.29: ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನೈಜ ಒಪ್ಪಂದವನ್ನು ತಲುಪುವಲ್ಲಿ ಪ್ರಾಮಾಣಿಕವಾಗಿದ್ದರೆ ಮಾತ್ರ ಅಮೆರಿಕಾದೊಂದಿಗೆ ಮಾತುಕತೆಗೆ ಇರಾನ್ ಮುಕ್ತವಾಗಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಗರ್ ಘಾಲಿಬಾಫ್ ಹೇಳಿದ್ದು ಒಂದು ವೇಳೆ ಇರಾನ್‍ನ ಮೇಲೆ ದಾಳಿ ಮಾಡಿದರೆ ಅಮೆರಿಕಾದ ಸೈನಿಕರಿಗೆ ಹಾನಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಇರಾನ್ ಮಾತುಕತೆಗೆ ಮುಕ್ತವಾಗಿದ್ದರೂ, ಅಮೆರಿಕಾದ ಅಧ್ಯಕ್ಷರ ಮಾತುಗಳನ್ನು ಗಮನಿಸಿದರೆ ಅವರು ತನ್ನ ಇಚ್ಛೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. 2015ರಲ್ಲಿ ಟ್ರಂಪ್ ಪರಮಾಣು ಒಪ್ಪಂದವನ್ನು ಹರಿದು ಕಸದ ಬುಟ್ಟಿಗೆ ಎಸೆದರು. ಈಗ ಮುಂದಿನ ಮಾತುಕತೆ ಪುನರಾರಂಭಗೊಳ್ಳುವ ಕೆಲವೇ ದಿನಗಳ ಮೊದಲು ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಹಸಿರು ನಿಶಾನೆ ತೋರುವ ಮೂಲಕ ಮಾತುಕತೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಘಾಲಿಬಾಫ್ ಆರೋಪಿಸಿದ್ದಾರೆ. ನೈಜ ಒಪ್ಪಂದವನ್ನು ತಲುಪುವ ಪ್ರಾಮಾಣಿಕ ಮಾತುಕತೆ, ಅಂತರಾಷ್ಟ್ರೀಯ ನಿಯಮಗಳ ಚೌಕಟ್ಟಿನಡಿ ನಡೆದರೆ ಮಾತ್ರ ಇರಾನ್ ಸಮಾಲೋಚನೆಗೆ ಮುಂದಾಗುತ್ತದೆ. ಟ್ರಂಪ್ ನಿಜವಾಗಿಯೂ ಶಾಂತಿಯನ್ನು ಬಯಸಿದರೆ ಯುದ್ದಾಸಕ್ತರಿಂದ ಮತ್ತು ಇರಾನ್ ಶರಣಾಗಬೇಕೆಂದು ಆಗ್ರಹಿಸುವವರಿಂದ ದೂರವಿರಬೇಕು. ಟ್ರಂಪ್ ಅವರು ಯುದ್ದವನ್ನು ಆರಂಭಿಸಬಹುದು, ಆದರೆ ಅದು ಹೇಗೆ ಕೊನೆಗೊಳ್ಳುತ್ತದೆ ಎಂಬುದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ' ಎಂದವರು ಎಚ್ಚರಿಕೆ ನೀಡಿದ್ದಾರೆ. ಇರಾನ್ ಆಡಳಿತದ ಅಂತ್ಯ ಸಮೀಪಿಸುತ್ತಿದೆ: ಜರ್ಮನಿ ಇರಾನ್ ಆಡಳಿತದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಬಹುಷಃ ಕೆಲವು ವಾರಗಳಲ್ಲೇ ಬದಲಾವಣೆ ಸಂಭವಿಸಬಹುದು ಎಂದು ಜರ್ಮನಿ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ. ತನ್ನದೇ ಜನರ ವಿರುದ್ಧ ಬಲಪ್ರಯೋಗ ಮತ್ತು ಭಯೋತ್ಪಾದನೆಯ ಮೂಲಕ ಅಧಿಕಾರವನ್ನು ನಿಯಂತ್ರಿಸುವ ಯಾವುದೇ ಆಡಳಿತ ಹೆಚ್ಚು ಕಾಲ ಬಾಳುವುದಿಲ್ಲ. ಈ ಆಡಳಿತವು ದೇಶವನ್ನು ಆಳಲು ಯಾವುದೇ ಕಾನೂನುಬದ್ಧತೆಯನ್ನು ಹೊಂದಿಲ್ಲ ಎಂದವರು ಪ್ರತಿಪಾದಿಸಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.

ವಾರ್ತಾ ಭಾರತಿ 29 Jan 2026 8:31 pm

Kodagu | ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಾರ್ತಾ ಭಾರತಿ 29 Jan 2026 8:27 pm

ತಮಿಳುನಾಡು ಎಸ್‌ಐಆರ್| ಹೊಂದಿಕೆಯಾಗದ ಹೆಸರುಗಳನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ,ಜ. 29: ತಮಿಳುನಾಡಿನ ಮತದಾರರ ಪಟ್ಟಿಯಲ್ಲಿರುವ ಹೊಂದಿಕೆಯಾಗದ ಹೆಸರುಗಳನ್ನು ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಹೊಂದಿಕೆಯಾಗದ ಹೆಸರುಗಳನ್ನು ಒಳಗೊಂಡ ಪಟ್ಟಿಗಳನ್ನು ತಮಿಳುನಾಡಿನ ಗ್ರಾಮ ಪಂಚಾಯತ್ ಭವನಗಳು, ತಾಲೂಕು ಕಚೇರಿಗಳು ಮತ್ತು ನಗರ ಪ್ರದೇಶಗಳ ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಎಂದು ಮುಖ್ಯ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಹೊಂದಿಕೆಯಾಗದ ಹೆಸರುಗಳ ಪಟ್ಟಿಗಳಲ್ಲಿ ಹೆಸರು ಇರುವವರು 10 ದಿನಗಳ ಅವಧಿಯಲ್ಲಿ ತಮ್ಮ ದಾಖಲೆಗಳು/ಆಕ್ಷೇಪಣೆಗಳನ್ನು ಸ್ವತಃ ಅಥವಾ ಪ್ರತಿನಿಧಿಗಳ ಮೂಲಕ ಸಲ್ಲಿಸಬಹುದಾಗಿದೆ ಎಂಬುದಾಗಿ ಸುಪ್ರೀಂ ಕೊರ್ಟ್ ತಿಳಿಸಿತು. ಆಕ್ಷೇಪಣೆಗಳನ್ನು ಉಪ ವಿಭಾಗೀಯ ಮಟ್ಟದ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಹೇಳಿದೆ. ಈ ಪಟ್ಟಿಗಳಲ್ಲಿ, ಚುನಾವಣಾ ಆಯೋಗವು ಹೆಸರು ಹೊಂದಿಕೆಯಾಗದಿರುವುದಕ್ಕೆ ಕಾರಣಗಳನ್ನೂ ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ಹಾಗೂ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯು ಸುಸೂತ್ರವಾಗಿ ನಡೆಯಲು ಸಾಧ್ಯವಾಗುವಂತೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನಗಳನ್ನೂ ನ್ಯಾಯಾಲಯ ನೀಡಿತು.

ವಾರ್ತಾ ಭಾರತಿ 29 Jan 2026 8:27 pm

ವಿಜಯನಗರ | ಗಣರಾಜ್ಯೋತ್ಸವದಲ್ಲಿ ಗಾಂಧಿ–ಅಂಬೇಡ್ಕರ್ ಭಾವಚಿತ್ರ ನಿರ್ಲಕ್ಷ್ಯ ಆರೋಪ : ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಡಿಎಸ್ಎಸ್ ಮನವಿ

ವಿಜಯನಗರ/ಹೊಸಪೇಟೆ : ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇರಿಸದೇ ಕಾರ್ಯಕ್ರಮ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಜಿಲ್ಲಾ ಬಿಜೆಪಿ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಜಯನಗರ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ವೈ. ರಾಮಚಂದ್ರ ಬಾಬು, ರಾಜ್ಯ ಸರ್ಕಾರದ ಆದೇಶದಂತೆ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ನಿಯಮವಿದ್ದರೂ, ಉದ್ದೇಶಪೂರ್ವಕವಾಗಿ ಇಬ್ಬರು ಮಹಾನ್ ನಾಯಕರನ್ನು ನಿರ್ಲಕ್ಷಿಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮ ಆಯೋಜಿಸಿದವರು ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಜಿಲ್ಲಾ ಬಿಜೆಪಿ ಘಟಕದ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿ ಅವರಿಗೆ, ವಿಜಯನಗರ ಜಿಲ್ಲಾಧಿಕಾರಿಗಳ ಮುಖಾಂತರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಿ. ರಮೇಶ್, ಪದಾಧಿಕಾರಿಗಳಾದ ಸಿ. ಗೋವಿಂದರಾಜ್, ರಾಮಕೃಷ್ಣ, ಕೆ. ವೆಂಕೋಬ, ವೈ. ವೆಂಕಟೇಶ್, ಹಸೇನ್, ಹುಸೇನ್, ಅಕ್ಬರ್, ಮಾಬು, ಚಿನ್ನಿ, ರವಿ, ಸಂದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 29 Jan 2026 8:27 pm

ರಾಜ್ಯ ಮಟ್ಟದ ಪ್ರತಿಭಾ ಶೋಧ -ಮೀಫ್ ಸಿವಿಲ್ ಕ್ವೆಸ್ಟ್ ಸ್ಪರ್ಧೆಯ ಫಲಿತಾಂಶ

ಮಂಗಳೂರು, ಜ.29: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್), ಇದರ ಆಶ್ರಯದಲ್ಲಿ ಬುಧವಾರ ಜಪ್ಪಿನಮೊಗರು ಯೆನೆಪೋಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾದ ‘‘ಪ್ರತಿಭಾ ಶೋಧ ಮೀಫ್ ಸಿವಿಲ್ ಕ್ವೆಸ್ಟ್ 1.0 . ರಾಜ್ಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 40 ವಿದ್ಯಾ ಸಂಸ್ಥೆಗಳ 154 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೀಫ್ ಶಾಲೆಗಳಲ್ಲಿ ಸಿವಿಲ್ ಸರ್ವಿಸ್ ತರಬೇತಿಯನ್ನು ಅಳವಡಿಸಲಾಗಿದ್ದು, 6 ಜಿಲ್ಲೆಗಳ 44 ವಿದ್ಯಾ ಸಂಸ್ಥೆಗಳ 4,000 ವಿದ್ಯಾರ್ಥಿಗಳು ಪ್ರತೀ ವಾರ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೂರು ಹಂತದಲ್ಲಿ ನಡೆದ ಈ ಸ್ಪರ್ಧೆ ಯಲ್ಲಿ ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯಂತ ಉನ್ನತ ಅಂಕ ಗಳಿಸಿದ 20 ವಿದ್ಯಾರ್ಥಿಗಳು 2ನೇ ಹಂತದಲ್ಲಿ ಸಾರ್ವಜನಿಕ ಭಾಷಣದಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು 8 ಮಂದಿ ನೇರ ಸಂದರ್ಶನದಲ್ಲಿ ಭಾಗವಹಿಸಿ, ಪ್ರೌಢ ಶಾಲಾ ವಿಭಾದಲ್ಲಿ 3 ಮಂದಿ ಮತ್ತು ಪೂರ್ವ ಕಾಲೇಜು ವಿಭಾಗದಲ್ಲಿ 2 ಮಂದಿ ವಿಜೇತರಾಗಿ ಹೊರ ಹೊಮ್ಮಿದರು. ವಿಜೇತರುಗಳ ವಿವರ ಇಂತಿವೆ:- *ಪದವಿ ಪೂರ್ವ ವಿಭಾಗ : ಪ್ರಥಮ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ ನಫೀಸಾ ಹೆಬತ್ ( ಸ್ನೇಹ ಪಬ್ಲಿಕ್ ಶಾಲೆ, ಪಕ್ಕಲಡ್ಕ), ದ್ವಿತೀಯ ಬಹುಮಾನ :ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ -ಮುಹಮ್ಮದ್ ರಿಹಾನ್( ಬ್ಯಾರೀಸ್ ಸೀಸೈಡ್, ಕೋಡಿ, ಕುಂದಾಪುರ). * ಪ್ರೌಢ ಶಾಲಾ ವಿಭಾಗ: - ಪ್ರಥಮ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ: ಡಿಪ್ರೋ ಅಧಿಕಾರಿ(ನೋಬಲ್ ಆಂಗ್ಲ ಮಾಧ್ಯಮ ಶಾಲೆ, ಕುಂಜತ್‌ಬೈಲ್), ದ್ವಿತೀಯ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ ಫಾತಿಮಾ ಝವ್ಬಿಯ( ಹಿರಾ ಪ್ರೌಢ ಶಾಲೆ, ಬಬ್ಬುಕಟ್ಟೆ ), ತೃತೀಯ ಬಹುಮಾನ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಫ್‌ಎಸ್ ಆಕಾಂಕ್ಷಿ-ರಿಮಾನ್ ಅಬ್ದುಲ್ ಸಲಾಂ( ಕ್ರೆಸೆಂಟ್ ಇಂಟರ್‌ನ್ಯಾಷನಲ್ ಶಾಲೆ, ಕಾಪು) 

ವಾರ್ತಾ ಭಾರತಿ 29 Jan 2026 8:27 pm

ಲಡಾಖ್‌ ಜನರು ಸೇನೆಗೆ ನೆರವು ನೀಡುವುದಿಲ್ಲ ಎಂದು ಹೇಳಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸೋನಂ ವಾಂಗ್ಚುಕ್

ಹೊಸದಿಲ್ಲಿ: ಸರಕಾರವನ್ನು ಟೀಕಿಸುವುದು ಹಾಗೂ ಪ್ರತಿಭಟಿಸುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಇಂತಹ ಅನಿಸಿಕೆಗಳು ದೇಶದ ಭದ್ರತೆಗೆ ಧಕ್ಕೆ ತಂದು ನನ್ನನ್ನು ಬಂಧಿಸಲು ಕಾರಣವಾಗುವುದಿಲ್ಲ ಎಂದು ಲಡಾಖ್‌ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ನ್ಯಾ.ಅರವಿಂದ್ ಕುಮಾರ್ ಮತ್ತು ನ್ಯಾ ಪಿ.ಬಿ.ವರಾಳೆ ನ್ಯಾಯಪೀಠದೆದುರು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಲಡಾಖ್ ಪರಿಸರವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಹಾಗೂ ಈ ಪ್ರಾಚೀನ ಪರಿಸರ ಹಾಳಾಗುವುದು ಅಲ್ಲಿನ ಜನರಿಗೆ ಬೇಕಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸೋನಂ ವಾಂಗ್ಚುಕ್ ವಿರುದ್ಧ ಯಾವುದೇ ಉಲ್ಲಂಘನೆಯ ಆರೋಪವಿಲ್ಲ ಎಂದು ಅವರು ತಿಳಿಸಿದರು. ಸೋನಂ ವಾಂಗ್ಚುಕ್ ಅವರ ವಿರುದ್ಧ ಉಲ್ಲೇಖಿಸಲಾಗಿರುವ ಬಹುತೇಕ ಹೇಳಿಕೆಗಳು ಅವರ ಬಗ್ಗೆ ತಪ್ಪಾಗಿ ಆರೋಪಿಸಲಾಗಿದೆ. ಅವರ ಹೇಳಿಕೆಗಳನ್ನು ಸಮರ್ಪಕವಾಗಿ ಗ್ರಹಿಸದೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಅವರು ವಾದಿಸಿದರು. ಸೋನಂ ವಾಂಗ್ಚುಕ್ ಅವರನ್ನು ಬಂಧನ ಮಾಡಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಆರನೆಯ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 2025ರಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಗೀತಾಂಜಲಿ ಆಂಗ್ಮೊ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಕಪಿಲ್ ಸಿಬಲ್, ಅವರನ್ನು ಬಂಧಿಸಲು ಉಲ್ಲೇಖಿಸಲಾಗಿರುವ ವಿಡಿಯೊಗಳಲ್ಲಿ ಅವರ ವಿರುದ್ಧ ಏನೂ ಸಾಕ್ಷಿ ಇಲ್ಲ ಎಂದು ವಾದಿಸಿದರು. “ಲಡಾಖ್ ಜನರು ಸೇನೆಗೆ ನೆರವು ನೀಡುವುದಿಲ್ಲ ಎಂದು ಸೋನಂ ವಾಂಗ್ಚುಕ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಪ್ರಸ್ತಾಪಿಸಿದಾಗ, “ಇದೇ ಸಮಸ್ಯೆಯಾಗಿದೆ. ಅವು ಬಂಧಿಸುವ ಅಧಿಕಾರಿಗಳನ್ನು ದಾರಿ ತಪ್ಪಿಸಿವೆ. ಇದನ್ನು ನನ್ನ ಕಕ್ಷಿದಾರ ಹೇಳಿಯೇ ಇಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ನಾನು ತೋರಿಸಬಲ್ಲೆ. ಈ ಪ್ರಕರಣದಲ್ಲಿ ಈ ವಿಡಿಯೊ ಜೂನ್ 8, 2025ರದ್ದು. ಬಂಧನದ ಆದೇಶ ಹೊರಡಿಸಿರುವುದು ಸೆಪ್ಟೆಂಬರ್ 26ರಂದು. ಇದೇ ಆತಂಕವಾಗಿದ್ದರೆ, ಅವರನ್ನು ಜೂನ್ ತಿಂಗಳಲ್ಲೇ ಬಂಧಿಸಬಹುದಿತ್ತು” ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು. ಸಂವಹನ ಕೊರತೆಯಿಂದ ಭಾಷೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಉದ್ದೇಶಪೂರ್ವಕ ಅಸ್ಪಷ್ಟತೆಯಿಂದ ಸೇನೆಗೆ ಸಹಾಯ ಮಾಡುವುದಿಲ್ಲ ಎಂಬ ಆರೋಪವನ್ನು ಮಾಡಲಾಗಿದೆ ಎಂದೂ ಕಪಿಲ್ ಸಿಬಲ್ ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಅಗತ್ಯವಿದ್ದರೆ ಸೋನಂ ವಾಂಗ್ಚುಕ್ ಅವರಿಗೆ ತಕ್ಷಣವೇ ವೈದ್ಯಕೀಯ ಆರೈಕೆ ಒದಗಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿತು.

ವಾರ್ತಾ ಭಾರತಿ 29 Jan 2026 8:24 pm

Greenland Future: ಗ್ರೀನ್‌ಲ್ಯಾಂಡ್ ಕಾಪಾಡಲು ಹೊಸ ತಂತ್ರ, ಕಣ್ಗಾವಲು ಮತ್ತು ಭದ್ರತೆ ವಿಚಾರದಲ್ಲಿ ಕ್ರಾಂತಿ?

ಗ್ರೀನ್‌ಲ್ಯಾಂಡ್ ಸುದ್ದಿ ಇಡೀ ಜಗತ್ತಿನಾದ್ಯಂತ ಆವರಿಸಿದೆ, ಈ ರೀತಿ ಗ್ರೀನ್‌ಲ್ಯಾಂಡ್ ವಿಚಾರ ಭರ್ಜರಿ ಚರ್ಚೆಗೆ ಕಾರಣ ಆಗಿದ್ದೇ ಡೊನಾಲ್ಡ್ ಟ್ರಂಪ್ ಅವರು. ನೇರವಾಗಿ ಜಗತ್ತಿನ ಬೃಹತ್ ದ್ವೀಪ ಆಗಿರುವ ಗ್ರೀನ್‌ಲ್ಯಾಂಡ್ ಅನ್ನೇ ತಮ್ಮ ವಶಕ್ಕೆ ಪಡೆಯುವುದಾಗಿ ಟ್ರಂಪ್ ಘೋಷಿಸಿದ್ದರು. ಆದರೆ ಆ ನಂತರ, ಯುರೋಪ್ ಒಕ್ಕೂಟ ಮತ್ತು ನ್ಯಾಟೋ ಒಕ್ಕೂಟದ ನಾಯಕರ ಒತ್ತಡದ ಪರಿಣಾಮ ಟ್ರಂಪ್ ಅವರು

ಒನ್ ಇ೦ಡಿಯ 29 Jan 2026 8:21 pm

Ajit Pawar plane crash: ನಾಗರಿಕ ವಿಮಾನಯಾನ ಸುರಕ್ಷತಾ ಚೌಕಟ್ಟಿನಲ್ಲಿನ ಅಂತರಗಳ ಬಗ್ಗೆ ಸಂಸದೀಯ ಸಮಿತಿ ವರದಿ ಹೇಳಿದ್ದೇನು?

ಬಾರಾಮತಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನ್ನಪ್ಪಿದ ವಿಮಾನ ಅಪಘಾತ ಸಂಭವಿಸುವ ತಿಂಗಳುಗಳ ಮೊದಲು, ಸಂಸದೀಯ ಸ್ಥಾಯಿ ಸಮಿತಿಯು ಭಾರತದ ನಾಗರಿಕ ವಿಮಾನಯಾನ ಸುರಕ್ಷತಾ ಚೌಕಟ್ಟಿನಲ್ಲಿ ಗಂಭೀರ ಅಂತರಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಜೆಡಿ (ಯು) ಸಂಸದ ಸಂಜಯ್ ಝಾ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿ ವರದಿಯು, ವಿಮಾನಯಾನ ಉದ್ಯಮವು ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದೆ. ನಿರ್ದಿಷ್ಟವಾಗಿ ಖಾಸಗಿ ಚಾರ್ಟರ್ ವಿಮಾನಗಳಿಗೆ ಹೆಚ್ಚು ಕಠಿಣ ಸುರಕ್ಷತಾ ತಪಾಸಣೆಗಳ ಅಗತ್ಯವಿದೆ ಎಂದು ವರದಿ ಎತ್ತಿ ತೋರಿಸಿದೆ. ನಿಗದಿತ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಕಟ್ಟುನಿಟ್ಟಾದ, ಏಕರೂಪದ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದರೂ, ಖಾಸಗಿ ಚಾರ್ಟರ್ ಸೇವೆಗಳು ಅಸಮಂಜಸ ಮಾನದಂಡಗಳನ್ನು ಹೊಂದಿವೆ. ಖಾಸಗಿ ಹಾರಾಟವು ಎಷ್ಟು ವೇಗವಾಗಿ ಬೆಳೆದಿದೆಯೆಂದರೆ, ಸುರಕ್ಷತಾ ನಿಯಮಗಳನ್ನು ಪರಿಶೀಲಿಸುವ ಮತ್ತು ಜಾರಿಗೊಳಿಸುವ ಸರ್ಕಾರದ ಸಾಮರ್ಥ್ಯವು ಆ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಗಿದೆ ಎಂದು ಸಮಿತಿ ವರದಿ ಹೇಳಿದೆ. ಖಾಸಗಿ, ಚಾರ್ಟರ್ ವಿಮಾನಗಳ ಮೇಲೆ ಕಣ್ಣು ಖಾಸಗಿ ಚಾರ್ಟರ್ ಕಂಪೆನಿಗಳು ಸುರಕ್ಷತೆ ಮತ್ತು ದಾಖಲೆಗಳನ್ನು ನಿರ್ವಹಿಸಲು ಸಣ್ಣ, ಕಡಿಮೆ ಸಿಬ್ಬಂದಿಯ ತಂಡಗಳನ್ನು ಬಳಸುತ್ತವೆ. ಇದರಿಂದ ವಿಮಾನ ಸುರಕ್ಷತೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದು ಕಷ್ಟವಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳಿಗಿಂತ ಭಿನ್ನವಾಗಿ, ಈ ಸಣ್ಣ ನಿರ್ವಾಹಕರು ಪೈಲಟ್‌ಗಳು ಕೆಟ್ಟ ಹವಾಮಾನದ ಸಮಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ “ನಿಯಂತ್ರಣ ಕೇಂದ್ರಗಳನ್ನು” ಹೊಂದಿರುವುದಿಲ್ಲ. ಆದ್ದರಿಂದ DGCA ಕಠಿಣ ಲೆಕ್ಕಪರಿಶೋಧನೆಗಳು ಮತ್ತು ಅನಿರೀಕ್ಷಿತ ತಪಾಸಣೆಗಳನ್ನು ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅಂತಿಮವಾಗಿ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ಜೆಟ್‌ಗಳು ವಾಣಿಜ್ಯ ವಿಮಾನಯಾನ ಸಂಸ್ಥೆಗಳಂತೆಯೇ ಅದೇ ಉನ್ನತ ಮಟ್ಟದ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳನ್ನು ಬಳಸಲು ಒತ್ತಾಯಿಸಬೇಕು ಎಂದು ವರದಿ ಹೇಳಿದೆ. ಪ್ರತಿಕೂಲ ಹವಾಮಾನ ಅಥವಾ ವಿಮಾನಗಳ ತಿರುವು ಸಮಯದಲ್ಲಿ, ವಿಮಾನಯಾನ ಸಂಸ್ಥೆಗಳು ಕಾಕ್‌ಪಿಟ್ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಬಳಸುವ ಪದರಿತ ಕಾರ್ಯಾಚರಣಾ ನಿಯಂತ್ರಣ ಕೇಂದ್ರಗಳನ್ನು ಸಣ್ಣ ವಿಮಾನಯಾನ ಸಂಸ್ಥೆಗಳು ಹೊಂದಿಲ್ಲದಿರಬಹುದು. ಚಾರ್ಟರ್ ವಿಭಾಗದಲ್ಲಿನ ಸುರಕ್ಷತಾ ಪ್ರಕ್ರಿಯೆಗಳು ನಿಗದಿತ ವಾಹಕಗಳು ಅನುಸರಿಸುವ ಪ್ರಕ್ರಿಯೆಗಳಿಗೆ ಸಮಾನವಾಗಿರಬೇಕು. ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮತ್ತು ಸಂಪೂರ್ಣವಾಗಿ ಕ್ರಿಯಾತ್ಮಕ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳು (SMS) ಇರಬೇಕು. ವಿಮಾನವು ಟೇಕ್ ಆಫ್ ಆಗುವ ಮೊದಲು, ಗಮ್ಯಸ್ಥಾನದಲ್ಲಿ ಮಂಜು ಅಥವಾ ಗಾಳಿಯ ಅಪಾಯಗಳನ್ನು ಗುರುತಿಸಲು ಇತ್ತೀಚಿನ ಹವಾಮಾನ ದತ್ತಾಂಶವನ್ನು ಆಧರಿಸಿ “go or no-go” ಪರಿಶೀಲನೆ ನಡೆಸಬೇಕು. ಈ ಪ್ರಕ್ರಿಯೆಯು ಅಗತ್ಯವಾದ “ಪ್ಲಾನ್ ಬಿ” ಸಿದ್ಧತೆಯನ್ನು ಒಳಗೊಂಡಿರಬೇಕು. ಅಂದರೆ, ವಿಮಾನವು ಉದ್ದೇಶಿಸಿದಂತೆ ಇಳಿಯಲು ಸಾಧ್ಯವಾಗದಿದ್ದರೆ ಈಗಾಗಲೇ ಆಯ್ಕೆ ಮಾಡಲಾದ ಸ್ಪಷ್ಟ ಮತ್ತು ಸುರಕ್ಷಿತ ಪರ್ಯಾಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ಸಮಿತಿಯ ಪ್ರಮುಖ ಸಂದೇಶವೆಂದರೆ, ಈ “ನಿಗದಿತವಲ್ಲದ” ಖಾಸಗಿ ವಿಮಾನಗಳು ಸಾಮಾನ್ಯ ಜನರು ಬಳಸುವ ನಿಗದಿತ ವಾಣಿಜ್ಯ ವಿಮಾನಗಳಿಗಿಂತ ಎಂದಿಗೂ ಕಡಿಮೆ ಸುರಕ್ಷತಾ ಮಾನದಂಡಗಳನ್ನು ಹೊಂದಿರಬಾರದು. ನಿಯಂತ್ರಕರ ಮೇಲೆ ಒತ್ತಡ DGCA ಮೇಲೆ ಹೆಚ್ಚಿನ ಹೊರೆ ಇದೆ. ಸಿಬ್ಬಂದಿ ಕೊರತೆ ಮತ್ತು ವಿಸ್ತರಿಸುತ್ತಿರುವ ಜವಾಬ್ದಾರಿಗಳಿಂದಾಗಿ ಇದು ಆಗಾಗ್ಗೆ ಪ್ರತಿಕ್ರಿಯಾತ್ಮಕ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕ ಸಿಬ್ಬಂದಿಯನ್ನು ಬಲಪಡಿಸುವುದು, ತರಬೇತಿಯನ್ನು ಸುಧಾರಿಸುವುದು ಮತ್ತು ಘಟನೆಯ ನಂತರದ ಕ್ರಮಕ್ಕಿಂತ ಹೆಚ್ಚಾಗಿ ಭವಿಷ್ಯಸೂಚಕ ಮೇಲ್ವಿಚಾರಣೆಗೆ ಡೇಟಾ-ಚಾಲಿತ ಅಪಾಯ ಮೌಲ್ಯಮಾಪನ ಸಾಧನಗಳನ್ನು ಬಳಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ತ್ವರಿತ ಫ್ಲೀಟ್ ಬೆಳವಣಿಗೆ, ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಚ್ಚುತ್ತಿರುವ ವಿಮಾನ ಚಲನೆಗಳಿಗೆ ಅನುಗುಣವಾಗಿ ಸುರಕ್ಷತಾ ಕಣ್ಗಾವಲನ್ನು ಸಮಾನಾಂತರವಾಗಿ ಬಲಪಡಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ATC ಸಾಮರ್ಥ್ಯ ಮತ್ತು ಆಯಾಸದ ಅಪಾಯಗಳು ವಾಯು ಸಂಚಾರ ನಿಯಂತ್ರಣ (ATC) ಅನ್ನು “ಸುರಕ್ಷತೆಯ ಬೆನ್ನೆಲುಬು” ಎಂದು ಸಮಿತಿ ವಿವರಿಸಿದೆ. ಆದರೆ ಸಾಕಷ್ಟು ಸಿಬ್ಬಂದಿ ಇಲ್ಲದೆ ಹೆಚ್ಚಿನ ವಿಮಾನಗಳನ್ನು ನಿರ್ವಹಿಸುವುದರಿಂದ ನಿಯಂತ್ರಕರು ಹೆಚ್ಚು ಕೆಲಸದ ಒತ್ತಡದಲ್ಲಿದ್ದಾರೆ. ವಿಶೇಷವಾಗಿ ಬ್ಯುಸಿ ಸಮಯಗಳಲ್ಲಿ ಅಥವಾ ಕೆಟ್ಟ ಹವಾಮಾನದ ಸಂದರ್ಭದಲ್ಲಿ ತೀವ್ರ ಒತ್ತಡ ಮತ್ತು ಆಯಾಸದಿಂದ ನಿಯಂತ್ರಕರು ಅಪಾಯಕಾರಿ ಮಾನವ ದೋಷಗಳನ್ನು ಮಾಡುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಮಿತಿ ಎಚ್ಚರಿಸಿದೆ. ನಿಯಂತ್ರಕರ ತ್ವರಿತ ನೇಮಕಾತಿ, ಆಯಾಸವನ್ನು ತಡೆಗಟ್ಟಲು ಸುಧಾರಿತ ರೋಸ್ಟರಿಂಗ್ ವ್ಯವಸ್ಥೆಗಳು ಹಾಗೂ ಸಂವಹನ, ನ್ಯಾವಿಗೇಷನ್ ಮತ್ತು ಕಣ್ಗಾವಲು ವ್ಯವಸ್ಥೆಗಳ ವೇಗದ ಆಧುನೀಕರಣಕ್ಕೆ ಸಮಿತಿ ಕರೆ ನೀಡಿದೆ. ಜೊತೆಗೆ, ನಾಗರಿಕ–ರಕ್ಷಣಾ ವಾಯುಪ್ರದೇಶದ ಸುಗಮ ಸಮನ್ವಯದ ಅಗತ್ಯವನ್ನೂ ವರದಿ ಎತ್ತಿ ತೋರಿಸಿದೆ. ಹಿಂದಿನ ಅಪಘಾತಗಳಿಂದ ಕಲಿಯುವುದು ಈ ಹಿಂದೆ ನಡೆದ ಅಪಘಾತಗಳು ಸಾಮಾನ್ಯವಾಗಿ ಮಾನವ ದೋಷ, ಕಳಪೆ ತರಬೇತಿ ಅಥವಾ ಪೈಲಟ್‌ಗಳು ಒತ್ತಡದ ಸಂದರ್ಭದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಂಭವಿಸಿವೆ ಎಂದು ಸಮಿತಿ ಗಮನಿಸಿದೆ. ಅಪಘಾತ ತನಿಖೆಗಳಿಂದ ಲಭಿಸುವ ಸುರಕ್ಷತಾ ಪಾಠಗಳನ್ನು ನಿರ್ಲಕ್ಷಿಸುವ ಬದಲು ಅವುಗಳನ್ನು ವಾಸ್ತವವಾಗಿ ಜಾರಿಗೆ ತರಬೇಕು ಎಂದು ವರದಿ ಹೇಳಿದೆ. ಪ್ರತಿಯೊಂದು ಸುರಕ್ಷತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರಿಕೃತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಮಿತಿ ಪ್ರಸ್ತಾಪಿಸಿದೆ. ಪ್ರಾದೇಶಿಕ ಸಂಪರ್ಕ ಯೋಜನೆಗಳ ಅಡಿಯಲ್ಲಿ ಕಾರ್ಯಾಚರಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಣ್ಣ ವಿಮಾನ ನಿಲ್ದಾಣಗಳಲ್ಲಿನ ಮೂಲಸೌಕರ್ಯಗಳನ್ನೂ ವಿಸ್ತರಿಸಬೇಕು. ರನ್‌ವೇ ಸುರಕ್ಷತಾ ಪ್ರದೇಶಗಳು, ನ್ಯಾವಿಗೇಷನ್ ಸಹಾಯ ವ್ಯವಸ್ಥೆಗಳು ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಸಂಚಾರ ಹೆಚ್ಚಾಗುತ್ತಿದ್ದಂತೆ ಅಪ್‌ಗ್ರೇಡ್ ಮಾಡುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ಬೆಳವಣಿಗೆ vs ಸುರಕ್ಷತೆ ಬಗ್ಗೆ ಎಚ್ಚರಿಕೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ, ಬೆಳವಣಿಗೆಗಿಂತ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಬೇಕು ಎಂದು ಸಮಿತಿ ಎಚ್ಚರಿಸಿದೆ. ಸರ್ಕಾರಿ ಮೇಲ್ವಿಚಾರಣೆ, ವಾಯು ಸಂಚಾರ ನಿಯಂತ್ರಣ (ATC) ವ್ಯವಸ್ಥೆಗಳು ಮತ್ತು ಖಾಸಗಿ ಕಂಪೆನಿಗಳ ಶಿಸ್ತನ್ನು ಸಮರ್ಪಕವಾಗಿ ಸುಧಾರಿಸದೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರೆ, ಇಡೀ ವಾಯುಯಾನ ವ್ಯವಸ್ಥೆಯೇ ಹೆಚ್ಚು ಅಪಾಯಕಾರಿಯಾಗುತ್ತದೆ ಎಂದು ಸಂಜಯ್ ಝಾ ನೇತೃತ್ವದ ಸಂಸದೀಯ ಸಮಿತಿ ತಿಳಿಸಿದೆ.

ವಾರ್ತಾ ಭಾರತಿ 29 Jan 2026 8:18 pm

Industry: ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಸಚಿವ ಎಂ.ಬಿ.ಪಾಟೀಲ ಕರೆ

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕರೆ ನೀಡಿದರು. ಅಂತಾರಾಷ್ಟ್ರೀಯ ಲಿಂಗಾಯತ ಯೂತ್

ಒನ್ ಇ೦ಡಿಯ 29 Jan 2026 8:16 pm

ಸುನೇತ್ರಾ ಪವಾರ್‌ಗೆ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ? ಅಜಿತ್‌ ಪವಾರ್‌ ಸ್ಥಾನ ತುಂಬಲು ಮಾಡಿರುವ ಪ್ಲ್ಯಾನ್‌ ಏನು?

ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ, ಮಹಾರಾಷ್ಟ್ರ ತನ್ನ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಕಳೆದುಕೊಂಡಿದೆ. ಅಜಿತ್‌ ಪವಾರ್‌ ಅವರ ದಿಢೀರ್‌ ನಿರ್ಗಮನ ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದು ನಿರ್ವಾತವನ್ನು ಸೃಷ್ಟಿಸಿದ್ದು, ದಾದಾ ಸ್ಥಾನ ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಮೂಡಿಸಿದೆ. ಇದಕ್ಕೆ ಎನ್‌ಸಿಪಿ ನಾಯಕರು ಪತ್ನಿ ಸುನೇತ್ರಾ ಪವಾರ್‌ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಸುನೇತ್ರಾ ಪವಾರ್‌ ಈಗಾಗಲೇ ರಾಜ್ಯಸಭಾ ಸಂಸದರಾಗಿದ್ದಾರೆ. ಈ ಕುರಿತು ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.

ವಿಜಯ ಕರ್ನಾಟಕ 29 Jan 2026 8:03 pm

ಜಾರ್ಖಂಡ್ ಮೂಲದ ಕಾರ್ಮಿಕ ನಾಪತ್ತೆ

ಮಂಗಳೂರು: ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದ ಜಾರ್ಖಂಡ್ ಮೂಲದ ಅಮೀರ್ ಖಾನ್ (26) ಎಂಬ ಕಾರ್ಮಿಕ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಣಾಜೆ ಸಮೀಪದ ಮುಡಿಪುವಿನಲ್ಲಿರುವ ರೆಡ್ ಸ್ಟೋನ್ ಪೋರ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮೀರ್ ಖಾನ್ ಬಳಿಕ ಅಲ್ಲಿ ಕೆಲಸವನ್ನು ಬಿಟ್ಟು ಬೈಕಂಪಾಡಿಯ ಸ್ಕ್ಯಾನ್ ವಾಲ್ ಯಾರ್ಡ್ ಬಳಿಯಿರುವ ತನ್ನ ಮಾವನ ರೂಮಿನಲ್ಲಿ 2 ದಿನಗಳ ಕಾಲ ತಂಗಿದ್ದರು. ಡಿ.31ರಂದು ಬೇರೆ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿ ಬೈಕಂಪಾಡಿಯಲ್ಲಿರುವ ಮಾವನ ರೂಮಿನಿಂದ ಹೊರಟು ಹೋದಾತ ವಾಪಾಸ್ ಬಾರದೆ, ಊರಿಗೂ ತೆರಳದೆ, ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಅಮೀರ್ ಖಾನ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ ಹಾಗೂ ಜಾರ್ಖಂಡ್‌ನ ಕೋಟ ಭಾಷೆ ಮಾತನಾಡುತ್ತಿದ್ದರು. ಇವರ ಗುರುತು ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 29 Jan 2026 8:02 pm