ಬಳ್ಳಾರಿ | ಕಂಪ್ಲಿ–ಗಂಗಾವತಿ ರಸ್ತೆಯ ಅಪಾಯಕಾರಿ ಸೇತುವೆ ಪುನರ್ ನಿರ್ಮಾಣ
ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊರವಲಯದ ಕಂಪ್ಲಿ–ಗಂಗಾವತಿ ರಾಜ್ಯ ಹೆದ್ದಾರಿ–29 ರ ಕೋಟೆ ಹತ್ತಿರದ ದರ್ಗಾ ತಿರುವು ರಸ್ತೆಯಲ್ಲಿರುವ ಸಿದ್ದಿವಿನಾಯಕ ದೇವಸ್ಥಾನದ ಸಮೀಪ ವಿಜಯನಗರ ಉಪ ಕಾಲುವೆ ಮೇಲೆ ನಿರ್ಮಿಸಲಾದ ಸೇತುವೆ ದುರಸ್ತಿಯಿಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿ, ಇದೀಗ ಲೋಕೋಪಯೋಗಿ ಇಲಾಖೆ (PWD) ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ. ಸೇತುವೆಯ ಎರಡೂ ಬದಿಗಳ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರೆ, ಮತ್ತೊಂದೆಡೆ ರಸ್ತೆಯಲ್ಲಿ ದೊಡ್ಡ ಗುಂಡಿ ಉಂಟಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಪರಿಣಾಮವಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿದ್ದವು. ಈ ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ಹಲವು ಬಾರಿ ಸಚಿತ್ರ ವರದಿಗಳು ಪ್ರಕಟವಾಗಿದ್ದವು. ಈ ಸೇತುವೆ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದ್ದರೂ, ಅದರ ಕೆಳಗೆ ಹರಿಯುವ ಉಪ ಕಾಲುವೆ ಜಲಸಂಪನ್ಮೂಲ ಇಲಾಖೆಗೆ ಸೇರಿದ್ದಾಗಿದ್ದು, ದುರಸ್ತಿ ಹೊಣೆಗಾರಿಕೆ ಯಾರದ್ದು ಎಂಬ ಗೊಂದಲವೂ ಉಂಟಾಗಿತ್ತು. ಆದರೆ, ಇತ್ತೀಚೆಗೆ ಕಂಪ್ಲಿ ಕೋಟೆಯಿಂದ ತುಂಗಭದ್ರಾ ನದಿವರೆಗೆ 2 ಕಿ.ಮೀ. ರಸ್ತೆ ಆಧುನೀಕರಣ, ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಇದೇ ಯೋಜನೆಯ ಭಾಗವಾಗಿ ಸೇತುವೆಯ ಪುನರ್ ನಿರ್ಮಾಣವೂ ಆರಂಭಗೊಂಡಿದೆ. ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಣ್ಣಿನ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮಣ್ಣಿನ ರಸ್ತೆಯಲ್ಲಿ ಸಂಚಾರದಿಂದ ಧೂಳಿನ ಸಮಸ್ಯೆ ಉಂಟಾಗಿ ಪಕ್ಕದ ಹೊಲಗಳ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಪ್ರತಿದಿನ ನೀರು ಸಿಂಪಡಿಸುವಂತೆ ಸ್ಥಳೀಯ ರೈತರು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಆನಂದ ಪಮ್ಮಾರ್, ಸೇತುವೆ ಕಿರಿದಾಗಿದ್ದು, ರಕ್ಷಣಾ ಗೋಡೆಗಳು ಕುಸಿದು ರಸ್ತೆ ಗುಂಡಿ ಬಿದ್ದ ಕಾರಣ ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯೊಂದಿಗೆ ಸೇತುವೆಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಇರಾನ್ನಲ್ಲಿ ಆಯತುಲ್ಲಾ ಆಲಿ ಖಾಮಿನೈ ಬಳಿಕ ಯಾರು ಅಧಿಕಾರ ವಹಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ: ಮಾರ್ಕೊ ರೂಬಿಯೊ
ವಾಷಿಂಗ್ಟನ್, ಜ.29: ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈಯನ್ನು ಅಧಿಕಾರದಿಂದ ತೆಗೆದು ಹಾಕಿದರೆ ಯಾರು ಅಧಿಕಾರ ನಿರ್ವಹಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗುರುವಾರ ಹೇಳಿದ್ದಾರೆ. ಇರಾನಿನಲ್ಲಿ ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಸನ್ನಿವೇಶವು ಅಸಾಮಾನ್ಯವಾಗಿ ಸಂಕೀರ್ಣವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ ಅವರು , ಈ ಪ್ರದೇಶದಲ್ಲಿ ಅಮೆರಿಕಾದ ಸಿಬ್ಬಂದಿಗಳನ್ನು ಮತ್ತು ಮಿತ್ರರಾಷ್ಟ್ರಗಳ ಸೌಲಭ್ಯಗಳನ್ನು ರಕ್ಷಿಸಲು ಪೂರ್ವಭಾವಿ ಮಿಲಿಟರಿ ಕ್ರಮದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ. ಸಂಸತ್ತಿನ ವಿದೇಶಾಂಗ ಸಂಬಂಧಗಳ ಸ್ಥಾಯಿ ಸಮಿತಿ ಎದುರು ಹೇಳಿಕೆ ನೀಡಿದ ರೂಬಿಯೊ, ಇರಾನಿನ ಆಡಳಿತ ವ್ಯವಸ್ಥೆಯ ಆಂತರಿಕ ರಚನೆಯು ಖಾಮಿನೈ ಅವರ ನಂತರದ ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ಅನಿಶ್ಚಿತಗೊಳಿಸುತ್ತದೆ ಎಂದರು. ಅಬ್ರಹಾಂ ಲಿಂಕನ್ ವಿಮಾನವಾಹಕ ಯುದ್ದ ನೌಕೆ ನಿಯೋಜನೆ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಅಮೆರಿಕಾದ ಮಿಲಿಟರಿ ವ್ಯವಸ್ಥೆಗಳನ್ನು ಬಲಪಡಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ರೂಬಿಯೊ ಸಮರ್ಥಿಸಿಕೊಂಡಿದ್ದು ಈ ಕ್ರಮವು ಈ ಪ್ರದೇಶದಲ್ಲಿ ನೆಲೆಸಿರುವ 30,000ಕ್ಕೂ ಹೆಚ್ಚು ಅಮೆರಿಕಾದ ಸೇವಾ ಸಿಬ್ಬಂದಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಸುರತ್ಕಲ್ : ಇಲ್ಲಿನ ಚೊಕ್ಕಬೆಟ್ಟು ನಿವಾಸಿ ಎಂ ಎ ಮನ್ಸೂರ್ (78) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.26ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ಸುಮಾರು ಎರಡು ದಶಕಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಕಾಟಿಪಳ್ಳ ಹಾಗೂ ಸುರತ್ಕಲ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಮಾಣಿಕ ಹಾಗೂ ನಿಷ್ಠಾವಂತವಂತರಾಗಿ ಸೇವೆ ಸಲ್ಲಿಸಿ ಸುರತ್ಕಲ್ ಪರಿಸರ ದಲ್ಲಿ ಬ್ಯಾಂಕ್ ಮನ್ಸೂರ್ ಎಂದು ಜನಪ್ರಿಯ ರಾಗಿದ್ದರು.
ಸಮಾಲೋಚನೆ ಪ್ರಾಮಾಣಿಕವಾಗಿದ್ದರೆ ಅಮೆರಿಕಾ ಜೊತೆ ಮಾತುಕತೆ: ಇರಾನ್
ಟೆಹ್ರಾನ್, ಜ.29: ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನೈಜ ಒಪ್ಪಂದವನ್ನು ತಲುಪುವಲ್ಲಿ ಪ್ರಾಮಾಣಿಕವಾಗಿದ್ದರೆ ಮಾತ್ರ ಅಮೆರಿಕಾದೊಂದಿಗೆ ಮಾತುಕತೆಗೆ ಇರಾನ್ ಮುಕ್ತವಾಗಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಗರ್ ಘಾಲಿಬಾಫ್ ಹೇಳಿದ್ದು ಒಂದು ವೇಳೆ ಇರಾನ್ನ ಮೇಲೆ ದಾಳಿ ಮಾಡಿದರೆ ಅಮೆರಿಕಾದ ಸೈನಿಕರಿಗೆ ಹಾನಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಇರಾನ್ ಮಾತುಕತೆಗೆ ಮುಕ್ತವಾಗಿದ್ದರೂ, ಅಮೆರಿಕಾದ ಅಧ್ಯಕ್ಷರ ಮಾತುಗಳನ್ನು ಗಮನಿಸಿದರೆ ಅವರು ತನ್ನ ಇಚ್ಛೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. 2015ರಲ್ಲಿ ಟ್ರಂಪ್ ಪರಮಾಣು ಒಪ್ಪಂದವನ್ನು ಹರಿದು ಕಸದ ಬುಟ್ಟಿಗೆ ಎಸೆದರು. ಈಗ ಮುಂದಿನ ಮಾತುಕತೆ ಪುನರಾರಂಭಗೊಳ್ಳುವ ಕೆಲವೇ ದಿನಗಳ ಮೊದಲು ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಹಸಿರು ನಿಶಾನೆ ತೋರುವ ಮೂಲಕ ಮಾತುಕತೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಘಾಲಿಬಾಫ್ ಆರೋಪಿಸಿದ್ದಾರೆ. ನೈಜ ಒಪ್ಪಂದವನ್ನು ತಲುಪುವ ಪ್ರಾಮಾಣಿಕ ಮಾತುಕತೆ, ಅಂತರಾಷ್ಟ್ರೀಯ ನಿಯಮಗಳ ಚೌಕಟ್ಟಿನಡಿ ನಡೆದರೆ ಮಾತ್ರ ಇರಾನ್ ಸಮಾಲೋಚನೆಗೆ ಮುಂದಾಗುತ್ತದೆ. ಟ್ರಂಪ್ ನಿಜವಾಗಿಯೂ ಶಾಂತಿಯನ್ನು ಬಯಸಿದರೆ ಯುದ್ದಾಸಕ್ತರಿಂದ ಮತ್ತು ಇರಾನ್ ಶರಣಾಗಬೇಕೆಂದು ಆಗ್ರಹಿಸುವವರಿಂದ ದೂರವಿರಬೇಕು. ಟ್ರಂಪ್ ಅವರು ಯುದ್ದವನ್ನು ಆರಂಭಿಸಬಹುದು, ಆದರೆ ಅದು ಹೇಗೆ ಕೊನೆಗೊಳ್ಳುತ್ತದೆ ಎಂಬುದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ' ಎಂದವರು ಎಚ್ಚರಿಕೆ ನೀಡಿದ್ದಾರೆ. ಇರಾನ್ ಆಡಳಿತದ ಅಂತ್ಯ ಸಮೀಪಿಸುತ್ತಿದೆ: ಜರ್ಮನಿ ಇರಾನ್ ಆಡಳಿತದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಬಹುಷಃ ಕೆಲವು ವಾರಗಳಲ್ಲೇ ಬದಲಾವಣೆ ಸಂಭವಿಸಬಹುದು ಎಂದು ಜರ್ಮನಿ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ. ತನ್ನದೇ ಜನರ ವಿರುದ್ಧ ಬಲಪ್ರಯೋಗ ಮತ್ತು ಭಯೋತ್ಪಾದನೆಯ ಮೂಲಕ ಅಧಿಕಾರವನ್ನು ನಿಯಂತ್ರಿಸುವ ಯಾವುದೇ ಆಡಳಿತ ಹೆಚ್ಚು ಕಾಲ ಬಾಳುವುದಿಲ್ಲ. ಈ ಆಡಳಿತವು ದೇಶವನ್ನು ಆಳಲು ಯಾವುದೇ ಕಾನೂನುಬದ್ಧತೆಯನ್ನು ಹೊಂದಿಲ್ಲ ಎಂದವರು ಪ್ರತಿಪಾದಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.
Kodagu | ಕಾಡಾನೆ ದಾಳಿಗೆ ಕಾರ್ಮಿಕ ಬಲಿ
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ತಮಿಳುನಾಡು ಎಸ್ಐಆರ್| ಹೊಂದಿಕೆಯಾಗದ ಹೆಸರುಗಳನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ,ಜ. 29: ತಮಿಳುನಾಡಿನ ಮತದಾರರ ಪಟ್ಟಿಯಲ್ಲಿರುವ ಹೊಂದಿಕೆಯಾಗದ ಹೆಸರುಗಳನ್ನು ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಹೊಂದಿಕೆಯಾಗದ ಹೆಸರುಗಳನ್ನು ಒಳಗೊಂಡ ಪಟ್ಟಿಗಳನ್ನು ತಮಿಳುನಾಡಿನ ಗ್ರಾಮ ಪಂಚಾಯತ್ ಭವನಗಳು, ತಾಲೂಕು ಕಚೇರಿಗಳು ಮತ್ತು ನಗರ ಪ್ರದೇಶಗಳ ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಎಂದು ಮುಖ್ಯ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಹೊಂದಿಕೆಯಾಗದ ಹೆಸರುಗಳ ಪಟ್ಟಿಗಳಲ್ಲಿ ಹೆಸರು ಇರುವವರು 10 ದಿನಗಳ ಅವಧಿಯಲ್ಲಿ ತಮ್ಮ ದಾಖಲೆಗಳು/ಆಕ್ಷೇಪಣೆಗಳನ್ನು ಸ್ವತಃ ಅಥವಾ ಪ್ರತಿನಿಧಿಗಳ ಮೂಲಕ ಸಲ್ಲಿಸಬಹುದಾಗಿದೆ ಎಂಬುದಾಗಿ ಸುಪ್ರೀಂ ಕೊರ್ಟ್ ತಿಳಿಸಿತು. ಆಕ್ಷೇಪಣೆಗಳನ್ನು ಉಪ ವಿಭಾಗೀಯ ಮಟ್ಟದ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಹೇಳಿದೆ. ಈ ಪಟ್ಟಿಗಳಲ್ಲಿ, ಚುನಾವಣಾ ಆಯೋಗವು ಹೆಸರು ಹೊಂದಿಕೆಯಾಗದಿರುವುದಕ್ಕೆ ಕಾರಣಗಳನ್ನೂ ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ಹಾಗೂ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯು ಸುಸೂತ್ರವಾಗಿ ನಡೆಯಲು ಸಾಧ್ಯವಾಗುವಂತೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನಗಳನ್ನೂ ನ್ಯಾಯಾಲಯ ನೀಡಿತು.
ರಾಜ್ಯ ಮಟ್ಟದ ಪ್ರತಿಭಾ ಶೋಧ -ಮೀಫ್ ಸಿವಿಲ್ ಕ್ವೆಸ್ಟ್ ಸ್ಪರ್ಧೆಯ ಫಲಿತಾಂಶ
ಮಂಗಳೂರು, ಜ.29: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್), ಇದರ ಆಶ್ರಯದಲ್ಲಿ ಬುಧವಾರ ಜಪ್ಪಿನಮೊಗರು ಯೆನೆಪೋಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾದ ‘‘ಪ್ರತಿಭಾ ಶೋಧ ಮೀಫ್ ಸಿವಿಲ್ ಕ್ವೆಸ್ಟ್ 1.0 . ರಾಜ್ಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 40 ವಿದ್ಯಾ ಸಂಸ್ಥೆಗಳ 154 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೀಫ್ ಶಾಲೆಗಳಲ್ಲಿ ಸಿವಿಲ್ ಸರ್ವಿಸ್ ತರಬೇತಿಯನ್ನು ಅಳವಡಿಸಲಾಗಿದ್ದು, 6 ಜಿಲ್ಲೆಗಳ 44 ವಿದ್ಯಾ ಸಂಸ್ಥೆಗಳ 4,000 ವಿದ್ಯಾರ್ಥಿಗಳು ಪ್ರತೀ ವಾರ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೂರು ಹಂತದಲ್ಲಿ ನಡೆದ ಈ ಸ್ಪರ್ಧೆ ಯಲ್ಲಿ ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯಂತ ಉನ್ನತ ಅಂಕ ಗಳಿಸಿದ 20 ವಿದ್ಯಾರ್ಥಿಗಳು 2ನೇ ಹಂತದಲ್ಲಿ ಸಾರ್ವಜನಿಕ ಭಾಷಣದಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು 8 ಮಂದಿ ನೇರ ಸಂದರ್ಶನದಲ್ಲಿ ಭಾಗವಹಿಸಿ, ಪ್ರೌಢ ಶಾಲಾ ವಿಭಾದಲ್ಲಿ 3 ಮಂದಿ ಮತ್ತು ಪೂರ್ವ ಕಾಲೇಜು ವಿಭಾಗದಲ್ಲಿ 2 ಮಂದಿ ವಿಜೇತರಾಗಿ ಹೊರ ಹೊಮ್ಮಿದರು. ವಿಜೇತರುಗಳ ವಿವರ ಇಂತಿವೆ:- *ಪದವಿ ಪೂರ್ವ ವಿಭಾಗ : ಪ್ರಥಮ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ ನಫೀಸಾ ಹೆಬತ್ ( ಸ್ನೇಹ ಪಬ್ಲಿಕ್ ಶಾಲೆ, ಪಕ್ಕಲಡ್ಕ), ದ್ವಿತೀಯ ಬಹುಮಾನ :ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ -ಮುಹಮ್ಮದ್ ರಿಹಾನ್( ಬ್ಯಾರೀಸ್ ಸೀಸೈಡ್, ಕೋಡಿ, ಕುಂದಾಪುರ). * ಪ್ರೌಢ ಶಾಲಾ ವಿಭಾಗ: - ಪ್ರಥಮ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ: ಡಿಪ್ರೋ ಅಧಿಕಾರಿ(ನೋಬಲ್ ಆಂಗ್ಲ ಮಾಧ್ಯಮ ಶಾಲೆ, ಕುಂಜತ್ಬೈಲ್), ದ್ವಿತೀಯ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ ಫಾತಿಮಾ ಝವ್ಬಿಯ( ಹಿರಾ ಪ್ರೌಢ ಶಾಲೆ, ಬಬ್ಬುಕಟ್ಟೆ ), ತೃತೀಯ ಬಹುಮಾನ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಫ್ಎಸ್ ಆಕಾಂಕ್ಷಿ-ರಿಮಾನ್ ಅಬ್ದುಲ್ ಸಲಾಂ( ಕ್ರೆಸೆಂಟ್ ಇಂಟರ್ನ್ಯಾಷನಲ್ ಶಾಲೆ, ಕಾಪು)
ಲಡಾಖ್ ಜನರು ಸೇನೆಗೆ ನೆರವು ನೀಡುವುದಿಲ್ಲ ಎಂದು ಹೇಳಿಲ್ಲ: ಸುಪ್ರೀಂ ಕೋರ್ಟ್ಗೆ ತಿಳಿಸಿದ ಸೋನಂ ವಾಂಗ್ಚುಕ್
ಹೊಸದಿಲ್ಲಿ: ಸರಕಾರವನ್ನು ಟೀಕಿಸುವುದು ಹಾಗೂ ಪ್ರತಿಭಟಿಸುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಇಂತಹ ಅನಿಸಿಕೆಗಳು ದೇಶದ ಭದ್ರತೆಗೆ ಧಕ್ಕೆ ತಂದು ನನ್ನನ್ನು ಬಂಧಿಸಲು ಕಾರಣವಾಗುವುದಿಲ್ಲ ಎಂದು ಲಡಾಖ್ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ನ್ಯಾ.ಅರವಿಂದ್ ಕುಮಾರ್ ಮತ್ತು ನ್ಯಾ ಪಿ.ಬಿ.ವರಾಳೆ ನ್ಯಾಯಪೀಠದೆದುರು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಲಡಾಖ್ ಪರಿಸರವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಹಾಗೂ ಈ ಪ್ರಾಚೀನ ಪರಿಸರ ಹಾಳಾಗುವುದು ಅಲ್ಲಿನ ಜನರಿಗೆ ಬೇಕಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸೋನಂ ವಾಂಗ್ಚುಕ್ ವಿರುದ್ಧ ಯಾವುದೇ ಉಲ್ಲಂಘನೆಯ ಆರೋಪವಿಲ್ಲ ಎಂದು ಅವರು ತಿಳಿಸಿದರು. ಸೋನಂ ವಾಂಗ್ಚುಕ್ ಅವರ ವಿರುದ್ಧ ಉಲ್ಲೇಖಿಸಲಾಗಿರುವ ಬಹುತೇಕ ಹೇಳಿಕೆಗಳು ಅವರ ಬಗ್ಗೆ ತಪ್ಪಾಗಿ ಆರೋಪಿಸಲಾಗಿದೆ. ಅವರ ಹೇಳಿಕೆಗಳನ್ನು ಸಮರ್ಪಕವಾಗಿ ಗ್ರಹಿಸದೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಅವರು ವಾದಿಸಿದರು. ಸೋನಂ ವಾಂಗ್ಚುಕ್ ಅವರನ್ನು ಬಂಧನ ಮಾಡಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಆರನೆಯ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 2025ರಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಗೀತಾಂಜಲಿ ಆಂಗ್ಮೊ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಕಪಿಲ್ ಸಿಬಲ್, ಅವರನ್ನು ಬಂಧಿಸಲು ಉಲ್ಲೇಖಿಸಲಾಗಿರುವ ವಿಡಿಯೊಗಳಲ್ಲಿ ಅವರ ವಿರುದ್ಧ ಏನೂ ಸಾಕ್ಷಿ ಇಲ್ಲ ಎಂದು ವಾದಿಸಿದರು. “ಲಡಾಖ್ ಜನರು ಸೇನೆಗೆ ನೆರವು ನೀಡುವುದಿಲ್ಲ ಎಂದು ಸೋನಂ ವಾಂಗ್ಚುಕ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಪ್ರಸ್ತಾಪಿಸಿದಾಗ, “ಇದೇ ಸಮಸ್ಯೆಯಾಗಿದೆ. ಅವು ಬಂಧಿಸುವ ಅಧಿಕಾರಿಗಳನ್ನು ದಾರಿ ತಪ್ಪಿಸಿವೆ. ಇದನ್ನು ನನ್ನ ಕಕ್ಷಿದಾರ ಹೇಳಿಯೇ ಇಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ನಾನು ತೋರಿಸಬಲ್ಲೆ. ಈ ಪ್ರಕರಣದಲ್ಲಿ ಈ ವಿಡಿಯೊ ಜೂನ್ 8, 2025ರದ್ದು. ಬಂಧನದ ಆದೇಶ ಹೊರಡಿಸಿರುವುದು ಸೆಪ್ಟೆಂಬರ್ 26ರಂದು. ಇದೇ ಆತಂಕವಾಗಿದ್ದರೆ, ಅವರನ್ನು ಜೂನ್ ತಿಂಗಳಲ್ಲೇ ಬಂಧಿಸಬಹುದಿತ್ತು” ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು. ಸಂವಹನ ಕೊರತೆಯಿಂದ ಭಾಷೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಉದ್ದೇಶಪೂರ್ವಕ ಅಸ್ಪಷ್ಟತೆಯಿಂದ ಸೇನೆಗೆ ಸಹಾಯ ಮಾಡುವುದಿಲ್ಲ ಎಂಬ ಆರೋಪವನ್ನು ಮಾಡಲಾಗಿದೆ ಎಂದೂ ಕಪಿಲ್ ಸಿಬಲ್ ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಅಗತ್ಯವಿದ್ದರೆ ಸೋನಂ ವಾಂಗ್ಚುಕ್ ಅವರಿಗೆ ತಕ್ಷಣವೇ ವೈದ್ಯಕೀಯ ಆರೈಕೆ ಒದಗಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿತು.
Greenland Future: ಗ್ರೀನ್ಲ್ಯಾಂಡ್ ಕಾಪಾಡಲು ಹೊಸ ತಂತ್ರ, ಕಣ್ಗಾವಲು ಮತ್ತು ಭದ್ರತೆ ವಿಚಾರದಲ್ಲಿ ಕ್ರಾಂತಿ?
ಗ್ರೀನ್ಲ್ಯಾಂಡ್ ಸುದ್ದಿ ಇಡೀ ಜಗತ್ತಿನಾದ್ಯಂತ ಆವರಿಸಿದೆ, ಈ ರೀತಿ ಗ್ರೀನ್ಲ್ಯಾಂಡ್ ವಿಚಾರ ಭರ್ಜರಿ ಚರ್ಚೆಗೆ ಕಾರಣ ಆಗಿದ್ದೇ ಡೊನಾಲ್ಡ್ ಟ್ರಂಪ್ ಅವರು. ನೇರವಾಗಿ ಜಗತ್ತಿನ ಬೃಹತ್ ದ್ವೀಪ ಆಗಿರುವ ಗ್ರೀನ್ಲ್ಯಾಂಡ್ ಅನ್ನೇ ತಮ್ಮ ವಶಕ್ಕೆ ಪಡೆಯುವುದಾಗಿ ಟ್ರಂಪ್ ಘೋಷಿಸಿದ್ದರು. ಆದರೆ ಆ ನಂತರ, ಯುರೋಪ್ ಒಕ್ಕೂಟ ಮತ್ತು ನ್ಯಾಟೋ ಒಕ್ಕೂಟದ ನಾಯಕರ ಒತ್ತಡದ ಪರಿಣಾಮ ಟ್ರಂಪ್ ಅವರು
ಬಾರಾಮತಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನ್ನಪ್ಪಿದ ವಿಮಾನ ಅಪಘಾತ ಸಂಭವಿಸುವ ತಿಂಗಳುಗಳ ಮೊದಲು, ಸಂಸದೀಯ ಸ್ಥಾಯಿ ಸಮಿತಿಯು ಭಾರತದ ನಾಗರಿಕ ವಿಮಾನಯಾನ ಸುರಕ್ಷತಾ ಚೌಕಟ್ಟಿನಲ್ಲಿ ಗಂಭೀರ ಅಂತರಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಜೆಡಿ (ಯು) ಸಂಸದ ಸಂಜಯ್ ಝಾ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿ ವರದಿಯು, ವಿಮಾನಯಾನ ಉದ್ಯಮವು ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದೆ. ನಿರ್ದಿಷ್ಟವಾಗಿ ಖಾಸಗಿ ಚಾರ್ಟರ್ ವಿಮಾನಗಳಿಗೆ ಹೆಚ್ಚು ಕಠಿಣ ಸುರಕ್ಷತಾ ತಪಾಸಣೆಗಳ ಅಗತ್ಯವಿದೆ ಎಂದು ವರದಿ ಎತ್ತಿ ತೋರಿಸಿದೆ. ನಿಗದಿತ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಕಟ್ಟುನಿಟ್ಟಾದ, ಏಕರೂಪದ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದರೂ, ಖಾಸಗಿ ಚಾರ್ಟರ್ ಸೇವೆಗಳು ಅಸಮಂಜಸ ಮಾನದಂಡಗಳನ್ನು ಹೊಂದಿವೆ. ಖಾಸಗಿ ಹಾರಾಟವು ಎಷ್ಟು ವೇಗವಾಗಿ ಬೆಳೆದಿದೆಯೆಂದರೆ, ಸುರಕ್ಷತಾ ನಿಯಮಗಳನ್ನು ಪರಿಶೀಲಿಸುವ ಮತ್ತು ಜಾರಿಗೊಳಿಸುವ ಸರ್ಕಾರದ ಸಾಮರ್ಥ್ಯವು ಆ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಗಿದೆ ಎಂದು ಸಮಿತಿ ವರದಿ ಹೇಳಿದೆ. ಖಾಸಗಿ, ಚಾರ್ಟರ್ ವಿಮಾನಗಳ ಮೇಲೆ ಕಣ್ಣು ಖಾಸಗಿ ಚಾರ್ಟರ್ ಕಂಪೆನಿಗಳು ಸುರಕ್ಷತೆ ಮತ್ತು ದಾಖಲೆಗಳನ್ನು ನಿರ್ವಹಿಸಲು ಸಣ್ಣ, ಕಡಿಮೆ ಸಿಬ್ಬಂದಿಯ ತಂಡಗಳನ್ನು ಬಳಸುತ್ತವೆ. ಇದರಿಂದ ವಿಮಾನ ಸುರಕ್ಷತೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದು ಕಷ್ಟವಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳಿಗಿಂತ ಭಿನ್ನವಾಗಿ, ಈ ಸಣ್ಣ ನಿರ್ವಾಹಕರು ಪೈಲಟ್ಗಳು ಕೆಟ್ಟ ಹವಾಮಾನದ ಸಮಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ “ನಿಯಂತ್ರಣ ಕೇಂದ್ರಗಳನ್ನು” ಹೊಂದಿರುವುದಿಲ್ಲ. ಆದ್ದರಿಂದ DGCA ಕಠಿಣ ಲೆಕ್ಕಪರಿಶೋಧನೆಗಳು ಮತ್ತು ಅನಿರೀಕ್ಷಿತ ತಪಾಸಣೆಗಳನ್ನು ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅಂತಿಮವಾಗಿ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ಜೆಟ್ಗಳು ವಾಣಿಜ್ಯ ವಿಮಾನಯಾನ ಸಂಸ್ಥೆಗಳಂತೆಯೇ ಅದೇ ಉನ್ನತ ಮಟ್ಟದ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳನ್ನು ಬಳಸಲು ಒತ್ತಾಯಿಸಬೇಕು ಎಂದು ವರದಿ ಹೇಳಿದೆ. ಪ್ರತಿಕೂಲ ಹವಾಮಾನ ಅಥವಾ ವಿಮಾನಗಳ ತಿರುವು ಸಮಯದಲ್ಲಿ, ವಿಮಾನಯಾನ ಸಂಸ್ಥೆಗಳು ಕಾಕ್ಪಿಟ್ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಬಳಸುವ ಪದರಿತ ಕಾರ್ಯಾಚರಣಾ ನಿಯಂತ್ರಣ ಕೇಂದ್ರಗಳನ್ನು ಸಣ್ಣ ವಿಮಾನಯಾನ ಸಂಸ್ಥೆಗಳು ಹೊಂದಿಲ್ಲದಿರಬಹುದು. ಚಾರ್ಟರ್ ವಿಭಾಗದಲ್ಲಿನ ಸುರಕ್ಷತಾ ಪ್ರಕ್ರಿಯೆಗಳು ನಿಗದಿತ ವಾಹಕಗಳು ಅನುಸರಿಸುವ ಪ್ರಕ್ರಿಯೆಗಳಿಗೆ ಸಮಾನವಾಗಿರಬೇಕು. ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮತ್ತು ಸಂಪೂರ್ಣವಾಗಿ ಕ್ರಿಯಾತ್ಮಕ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳು (SMS) ಇರಬೇಕು. ವಿಮಾನವು ಟೇಕ್ ಆಫ್ ಆಗುವ ಮೊದಲು, ಗಮ್ಯಸ್ಥಾನದಲ್ಲಿ ಮಂಜು ಅಥವಾ ಗಾಳಿಯ ಅಪಾಯಗಳನ್ನು ಗುರುತಿಸಲು ಇತ್ತೀಚಿನ ಹವಾಮಾನ ದತ್ತಾಂಶವನ್ನು ಆಧರಿಸಿ “go or no-go” ಪರಿಶೀಲನೆ ನಡೆಸಬೇಕು. ಈ ಪ್ರಕ್ರಿಯೆಯು ಅಗತ್ಯವಾದ “ಪ್ಲಾನ್ ಬಿ” ಸಿದ್ಧತೆಯನ್ನು ಒಳಗೊಂಡಿರಬೇಕು. ಅಂದರೆ, ವಿಮಾನವು ಉದ್ದೇಶಿಸಿದಂತೆ ಇಳಿಯಲು ಸಾಧ್ಯವಾಗದಿದ್ದರೆ ಈಗಾಗಲೇ ಆಯ್ಕೆ ಮಾಡಲಾದ ಸ್ಪಷ್ಟ ಮತ್ತು ಸುರಕ್ಷಿತ ಪರ್ಯಾಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ಸಮಿತಿಯ ಪ್ರಮುಖ ಸಂದೇಶವೆಂದರೆ, ಈ “ನಿಗದಿತವಲ್ಲದ” ಖಾಸಗಿ ವಿಮಾನಗಳು ಸಾಮಾನ್ಯ ಜನರು ಬಳಸುವ ನಿಗದಿತ ವಾಣಿಜ್ಯ ವಿಮಾನಗಳಿಗಿಂತ ಎಂದಿಗೂ ಕಡಿಮೆ ಸುರಕ್ಷತಾ ಮಾನದಂಡಗಳನ್ನು ಹೊಂದಿರಬಾರದು. ನಿಯಂತ್ರಕರ ಮೇಲೆ ಒತ್ತಡ DGCA ಮೇಲೆ ಹೆಚ್ಚಿನ ಹೊರೆ ಇದೆ. ಸಿಬ್ಬಂದಿ ಕೊರತೆ ಮತ್ತು ವಿಸ್ತರಿಸುತ್ತಿರುವ ಜವಾಬ್ದಾರಿಗಳಿಂದಾಗಿ ಇದು ಆಗಾಗ್ಗೆ ಪ್ರತಿಕ್ರಿಯಾತ್ಮಕ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕ ಸಿಬ್ಬಂದಿಯನ್ನು ಬಲಪಡಿಸುವುದು, ತರಬೇತಿಯನ್ನು ಸುಧಾರಿಸುವುದು ಮತ್ತು ಘಟನೆಯ ನಂತರದ ಕ್ರಮಕ್ಕಿಂತ ಹೆಚ್ಚಾಗಿ ಭವಿಷ್ಯಸೂಚಕ ಮೇಲ್ವಿಚಾರಣೆಗೆ ಡೇಟಾ-ಚಾಲಿತ ಅಪಾಯ ಮೌಲ್ಯಮಾಪನ ಸಾಧನಗಳನ್ನು ಬಳಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ತ್ವರಿತ ಫ್ಲೀಟ್ ಬೆಳವಣಿಗೆ, ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಚ್ಚುತ್ತಿರುವ ವಿಮಾನ ಚಲನೆಗಳಿಗೆ ಅನುಗುಣವಾಗಿ ಸುರಕ್ಷತಾ ಕಣ್ಗಾವಲನ್ನು ಸಮಾನಾಂತರವಾಗಿ ಬಲಪಡಿಸುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ATC ಸಾಮರ್ಥ್ಯ ಮತ್ತು ಆಯಾಸದ ಅಪಾಯಗಳು ವಾಯು ಸಂಚಾರ ನಿಯಂತ್ರಣ (ATC) ಅನ್ನು “ಸುರಕ್ಷತೆಯ ಬೆನ್ನೆಲುಬು” ಎಂದು ಸಮಿತಿ ವಿವರಿಸಿದೆ. ಆದರೆ ಸಾಕಷ್ಟು ಸಿಬ್ಬಂದಿ ಇಲ್ಲದೆ ಹೆಚ್ಚಿನ ವಿಮಾನಗಳನ್ನು ನಿರ್ವಹಿಸುವುದರಿಂದ ನಿಯಂತ್ರಕರು ಹೆಚ್ಚು ಕೆಲಸದ ಒತ್ತಡದಲ್ಲಿದ್ದಾರೆ. ವಿಶೇಷವಾಗಿ ಬ್ಯುಸಿ ಸಮಯಗಳಲ್ಲಿ ಅಥವಾ ಕೆಟ್ಟ ಹವಾಮಾನದ ಸಂದರ್ಭದಲ್ಲಿ ತೀವ್ರ ಒತ್ತಡ ಮತ್ತು ಆಯಾಸದಿಂದ ನಿಯಂತ್ರಕರು ಅಪಾಯಕಾರಿ ಮಾನವ ದೋಷಗಳನ್ನು ಮಾಡುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಮಿತಿ ಎಚ್ಚರಿಸಿದೆ. ನಿಯಂತ್ರಕರ ತ್ವರಿತ ನೇಮಕಾತಿ, ಆಯಾಸವನ್ನು ತಡೆಗಟ್ಟಲು ಸುಧಾರಿತ ರೋಸ್ಟರಿಂಗ್ ವ್ಯವಸ್ಥೆಗಳು ಹಾಗೂ ಸಂವಹನ, ನ್ಯಾವಿಗೇಷನ್ ಮತ್ತು ಕಣ್ಗಾವಲು ವ್ಯವಸ್ಥೆಗಳ ವೇಗದ ಆಧುನೀಕರಣಕ್ಕೆ ಸಮಿತಿ ಕರೆ ನೀಡಿದೆ. ಜೊತೆಗೆ, ನಾಗರಿಕ–ರಕ್ಷಣಾ ವಾಯುಪ್ರದೇಶದ ಸುಗಮ ಸಮನ್ವಯದ ಅಗತ್ಯವನ್ನೂ ವರದಿ ಎತ್ತಿ ತೋರಿಸಿದೆ. ಹಿಂದಿನ ಅಪಘಾತಗಳಿಂದ ಕಲಿಯುವುದು ಈ ಹಿಂದೆ ನಡೆದ ಅಪಘಾತಗಳು ಸಾಮಾನ್ಯವಾಗಿ ಮಾನವ ದೋಷ, ಕಳಪೆ ತರಬೇತಿ ಅಥವಾ ಪೈಲಟ್ಗಳು ಒತ್ತಡದ ಸಂದರ್ಭದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಂಭವಿಸಿವೆ ಎಂದು ಸಮಿತಿ ಗಮನಿಸಿದೆ. ಅಪಘಾತ ತನಿಖೆಗಳಿಂದ ಲಭಿಸುವ ಸುರಕ್ಷತಾ ಪಾಠಗಳನ್ನು ನಿರ್ಲಕ್ಷಿಸುವ ಬದಲು ಅವುಗಳನ್ನು ವಾಸ್ತವವಾಗಿ ಜಾರಿಗೆ ತರಬೇಕು ಎಂದು ವರದಿ ಹೇಳಿದೆ. ಪ್ರತಿಯೊಂದು ಸುರಕ್ಷತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರಿಕೃತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಮಿತಿ ಪ್ರಸ್ತಾಪಿಸಿದೆ. ಪ್ರಾದೇಶಿಕ ಸಂಪರ್ಕ ಯೋಜನೆಗಳ ಅಡಿಯಲ್ಲಿ ಕಾರ್ಯಾಚರಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಣ್ಣ ವಿಮಾನ ನಿಲ್ದಾಣಗಳಲ್ಲಿನ ಮೂಲಸೌಕರ್ಯಗಳನ್ನೂ ವಿಸ್ತರಿಸಬೇಕು. ರನ್ವೇ ಸುರಕ್ಷತಾ ಪ್ರದೇಶಗಳು, ನ್ಯಾವಿಗೇಷನ್ ಸಹಾಯ ವ್ಯವಸ್ಥೆಗಳು ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಸಂಚಾರ ಹೆಚ್ಚಾಗುತ್ತಿದ್ದಂತೆ ಅಪ್ಗ್ರೇಡ್ ಮಾಡುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ಬೆಳವಣಿಗೆ vs ಸುರಕ್ಷತೆ ಬಗ್ಗೆ ಎಚ್ಚರಿಕೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ, ಬೆಳವಣಿಗೆಗಿಂತ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಬೇಕು ಎಂದು ಸಮಿತಿ ಎಚ್ಚರಿಸಿದೆ. ಸರ್ಕಾರಿ ಮೇಲ್ವಿಚಾರಣೆ, ವಾಯು ಸಂಚಾರ ನಿಯಂತ್ರಣ (ATC) ವ್ಯವಸ್ಥೆಗಳು ಮತ್ತು ಖಾಸಗಿ ಕಂಪೆನಿಗಳ ಶಿಸ್ತನ್ನು ಸಮರ್ಪಕವಾಗಿ ಸುಧಾರಿಸದೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರೆ, ಇಡೀ ವಾಯುಯಾನ ವ್ಯವಸ್ಥೆಯೇ ಹೆಚ್ಚು ಅಪಾಯಕಾರಿಯಾಗುತ್ತದೆ ಎಂದು ಸಂಜಯ್ ಝಾ ನೇತೃತ್ವದ ಸಂಸದೀಯ ಸಮಿತಿ ತಿಳಿಸಿದೆ.
Industry: ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಸಚಿವ ಎಂ.ಬಿ.ಪಾಟೀಲ ಕರೆ
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕರೆ ನೀಡಿದರು. ಅಂತಾರಾಷ್ಟ್ರೀಯ ಲಿಂಗಾಯತ ಯೂತ್
ಸುನೇತ್ರಾ ಪವಾರ್ಗೆ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ? ಅಜಿತ್ ಪವಾರ್ ಸ್ಥಾನ ತುಂಬಲು ಮಾಡಿರುವ ಪ್ಲ್ಯಾನ್ ಏನು?
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ, ಮಹಾರಾಷ್ಟ್ರ ತನ್ನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಕಳೆದುಕೊಂಡಿದೆ. ಅಜಿತ್ ಪವಾರ್ ಅವರ ದಿಢೀರ್ ನಿರ್ಗಮನ ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದು ನಿರ್ವಾತವನ್ನು ಸೃಷ್ಟಿಸಿದ್ದು, ದಾದಾ ಸ್ಥಾನ ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಮೂಡಿಸಿದೆ. ಇದಕ್ಕೆ ಎನ್ಸಿಪಿ ನಾಯಕರು ಪತ್ನಿ ಸುನೇತ್ರಾ ಪವಾರ್ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಸುನೇತ್ರಾ ಪವಾರ್ ಈಗಾಗಲೇ ರಾಜ್ಯಸಭಾ ಸಂಸದರಾಗಿದ್ದಾರೆ. ಈ ಕುರಿತು ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
ಮಂಗಳೂರು: ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದ ಜಾರ್ಖಂಡ್ ಮೂಲದ ಅಮೀರ್ ಖಾನ್ (26) ಎಂಬ ಕಾರ್ಮಿಕ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಣಾಜೆ ಸಮೀಪದ ಮುಡಿಪುವಿನಲ್ಲಿರುವ ರೆಡ್ ಸ್ಟೋನ್ ಪೋರ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮೀರ್ ಖಾನ್ ಬಳಿಕ ಅಲ್ಲಿ ಕೆಲಸವನ್ನು ಬಿಟ್ಟು ಬೈಕಂಪಾಡಿಯ ಸ್ಕ್ಯಾನ್ ವಾಲ್ ಯಾರ್ಡ್ ಬಳಿಯಿರುವ ತನ್ನ ಮಾವನ ರೂಮಿನಲ್ಲಿ 2 ದಿನಗಳ ಕಾಲ ತಂಗಿದ್ದರು. ಡಿ.31ರಂದು ಬೇರೆ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿ ಬೈಕಂಪಾಡಿಯಲ್ಲಿರುವ ಮಾವನ ರೂಮಿನಿಂದ ಹೊರಟು ಹೋದಾತ ವಾಪಾಸ್ ಬಾರದೆ, ಊರಿಗೂ ತೆರಳದೆ, ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಅಮೀರ್ ಖಾನ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ ಹಾಗೂ ಜಾರ್ಖಂಡ್ನ ಕೋಟ ಭಾಷೆ ಮಾತನಾಡುತ್ತಿದ್ದರು. ಇವರ ಗುರುತು ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನವರಿ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 29) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಕಲಬುರಗಿ | ಉಚಿತ ಫೋಟೋಗ್ರಾಫಿ–ವಿಡಿಯೋಗ್ರಾಫಿ ಕಾರ್ಯಗಾರ
ಫೋಟೋಗ್ರಾಫಿ ವೃತ್ತಿಗೆ ಸಮಾಜದಲ್ಲಿ ಗೌರವವಿದೆ : ಬಿ.ಎಂ.ರಾವೂರ
Government Employees: ಸರ್ಕಾರಿ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ: ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರಿಗೆ ಖಾದಿ ಪಟ್ಟೆ ಬಳಕೆ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ
ಕಲಬುರಗಿ ಕೀಟನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಮನ್ನಣೆ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಇಲ್ಲಿನ ರಾಜ್ಯ ಕೀಟನಾಶಕ ಪರೀಕ್ಷಾ ಪ್ರಯೋಗಾಲಯವು (SPTL) ISO/IEC 17025 ಅಡಿಯಲ್ಲಿ NABL (ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿರುವುದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೃಷಿ ಗುಣಮಟ್ಟದ ಭರವಸೆಯನ್ನು ಬಲಪಡಿಸುವ ಮಹತ್ವದ ಮೈಲಿಗಲ್ಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಏಪ್ರಿಲ್ 1997ರಲ್ಲಿ ಕೀಟನಾಶಕ ಕಾಯ್ದೆ–1968ರ ಅಡಿಯಲ್ಲಿ ಸ್ಥಾಪನೆಯಾದ ಈ ಪ್ರಯೋಗಾಲಯವು ಕಲಬುರಗಿ, ಯಾದಗಿರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳ ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ವಾರ್ಷಿಕವಾಗಿ 1,280 ಕೀಟನಾಶಕ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ದೀರ್ಘಕಾಲದಿಂದ ರೈತರ ಸೇವೆಯಲ್ಲಿ ನಿರತವಾಗಿರುವ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ ಲಭಿಸಿರುವುದು ಸಂತಸದ ವಿಷಯ ಎಂದು ಸಚಿವರು ಹೇಳಿದರು. ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ (NABL) ಭಾರತದ ಗುಣಮಟ್ಟ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರಯೋಗಾಲಯಗಳ ತಾಂತ್ರಿಕ ಸಾಮರ್ಥ್ಯವನ್ನು ಪ್ರಮಾಣೀಕರಿಸುತ್ತದೆ. ಈ ಮಾನ್ಯತೆಯಿಂದ ಕಲಬುರಗಿಯ SPTL ವಿಶ್ವಾಸಾರ್ಹ, ನಿಖರ ಹಾಗೂ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕೀಟನಾಶಕ ಪರೀಕ್ಷಾ ಸೇವೆಗಳನ್ನು ಒದಗಿಸುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಕೃಷಿ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಲಕರಣೆಗಳ ಮಾಪನಾಂಕ ನಿರ್ಣಯ, ಸಿಬ್ಬಂದಿಗೆ ಸಮಗ್ರ ತರಬೇತಿ, ದೃಢ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳ ಅನುಷ್ಠಾನ ಮತ್ತು ಕಠಿಣ ಆಂತರಿಕ ಲೆಕ್ಕಪರಿಶೋಧನೆಗಳ ಮೂಲಕ ಕಳೆದ ಆರು ತಿಂಗಳ ಅವಧಿಯಲ್ಲಿ ಈ ಮಾನ್ಯತೆಯನ್ನು ಸಾಧಿಸಲಾಗಿದೆ. ಭಾರತದ ಗುಣಮಟ್ಟ ಮಂಡಳಿಯು ಮಾನ್ಯತೆ ಪ್ರಮಾಣಪತ್ರವನ್ನು ನೀಡಿದ್ದು, ಶೀಘ್ರದಲ್ಲೇ ಅದನ್ನು ಅಧಿಕೃತವಾಗಿ ಪ್ರಯೋಗಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ NABL ಮಾನ್ಯತೆ ಗುಣಮಟ್ಟ, ಪಾರದರ್ಶಕತೆ ಹಾಗೂ ರೈತ ಕೇಂದ್ರಿತ ಸೇವಾ ವಿತರಣೆಗೆ ಜಿಲ್ಲಾಡಳಿತದ ಬದ್ಧತೆಯ ದೃಢೀಕರಣವಾಗಿದೆ. ಅಂತರರಾಷ್ಟ್ರೀಯ ಮಾನದಂಡ ಸಾಧಿಸಿರುವುದಕ್ಕಾಗಿ ಕಲಬುರಗಿ ಜಿಲ್ಲಾಡಳಿತ ಮತ್ತು ಪ್ರಯೋಗಾಲಯದ ತಂಡವನ್ನು ಅಭಿನಂದಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷ ಆರಂಭದ ಜೂ.1 ರೊಳಗೆ ಶಿಕ್ಷಕರ ನೇಮಕಾತಿ: ಸಚಿವ ಮಧುಬಂಗಾರಪ್ಪ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಜೂ.1 ರೊಳಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ. ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎಚ್.ಕೋನರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 10 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಕಾಲಮಿತಿಯಲ್ಲಿ ಶಿಕ್ಷಕರ ನೇಮಕಾತಿಯಾಗಲಿದೆ ಎಂದು ಹೇಳಿದರು. 2016ರ ಜ.1ರಿಂದ 2020ರ ಡಿ.31ರ ವರೆಗಿನ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ನಡೆಸಲಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ 2015ರ ಡಿ.31ರ ಪೂರ್ವದಲ್ಲಿ ಅನುದಾನಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿದ್ದ 1033 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ಪೈಕಿ 468 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು. ಖಾಸಗಿ ಅನುದಾನಿತ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಖಾಲಿಯಾದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಖಾಲಿಯಾದ ಅನುದಾನಿತ ಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಶಿಕ್ಷಕರ ಹುದ್ದೆಯಿಂದ ತುಂಬಿಕೊಳ್ಳಲು ಅವಕಾಶವಿದೆ. ನೇರ ನೇಮಕಾತಿಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹಪ್ಪಳದ ಪ್ಯಾಕೆಟ್ಟಿನ ಮೇಲೆ ‘prepared by Brahmins’ ಉಲ್ಲೇಖ - ಸರಿಯೋ, ತಪ್ಪೋ? ಫೇಸ್ ಬುಕ್ ನಲ್ಲಿ ನಡೀತು ಚರ್ಚೆ!
ಹಪ್ಪಳದ ಪ್ಯಾಕೆಟ್ನಲ್ಲಿ 'ಬ್ರಾಹ್ಮಣರು ತಯಾರಿಸಿದ್ದು' ಎಂದು ಬರೆದಿದ್ದರ ಬಗ್ಗೆ ಫೇಸ್ಬುಕ್ನಲ್ಲಿ ಚರ್ಚೆ ನಡೆಯಿತು. ಇದು ಜಾತಿ ತಾರತಮ್ಯವನ್ನು ಬೆಳೆಸುತ್ತದೆ ಎಂದು ಒಬ್ಬರು ಪ್ರಶ್ನಿಸಿದರು. ಆದರೆ, ಹಲವರು ಇದನ್ನು ಸಮರ್ಥಿಸಿ, ಇದು ತಯಾರಿಕೆಯ ಶೈಲಿ ಮತ್ತು ವಿಶೇಷತೆಯನ್ನು ಸೂಚಿಸುತ್ತದೆ ಎಂದರು. ಹಲಾಲ್ ಮುಕ್ತ ಆಹಾರ, ನಿರ್ದಿಷ್ಟ ಶೈಲಿಯ ಅಡುಗೆಯನ್ನು ಇದು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಲಿಂಗಾಯತ ಖಾನಾವಳಿ, ಗೌಡ್ರ ಹೋಟೆಲ್, ಅಯ್ಯಂಗಾರ್ ಬೇಕರಿಗಳಂತೆ ಇದು ವಿಶೇಷತೆಯನ್ನು ಹೇಳುತ್ತದೆ ಎಂದು ವಿವರಿಸಿದರು.
ಕಲಬುರಗಿ | ಕರಕುಶಲ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ : ಡಿಸಿ ಬಿ.ಫೌಝಿಯಾ ತರನ್ನುಮ್
ಪಿ.ಎಂ ವಿಶ್ವಕರ್ಮ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ
ಫೆ.4ರ ವರೆಗೆ ವಿಧಾನಸಭೆ ಅಧಿವೇಶನ ವಿಸ್ತರಣೆ: ಸ್ಪೀಕರ್ ಯು.ಟಿ. ಖಾದರ್
ಬೆಂಗಳೂರು: ವಿಧಾನಸಭೆಯ ಅಧಿವೇಶನವನ್ನು ಜ.31ರ ಬದಲಾಗಿ ಫೆ.4ರವರೆಗೆ ವಿಸ್ತರಣೆ ಮಾಡಲು ಗುರುವಾರ ನಡೆದ ವಿಧಾನಸಭೆಯ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು. ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಕಾರ್ಯ ಕಲಾಪಗಳ ಸಲಹಾ ಸಮಿತಿಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಮಾಹಿತಿ ನೀಡಿದ ಸ್ಪೀಕರ್, ಜ.30ರವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ನಡೆಯಲಿದ್ದು, ಅಂದು ಸಂಜೆ 7 ಗಂಟೆಯವರೆಗೆ ಸದನ ನಡೆಯಲಿದೆ ಎಂದು ಹೇಳಿದರು. ಫೆ.2ರಂದು ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ಉತ್ತರ ನೀಡಲಿದ್ದಾರೆ. ಫೆ.3 ಹಾಗೂ 4ರಂದು ಸರಕಾರದಿಂದ ಅಧಿಕೃತವಾಗಿ ಸ್ವೀಕರಿಸಲಾಗುವ ಸೂಚನೆ ಮೇಲೆ ಚರ್ಚೆ ನಡೆಸಿ, ಮುಖ್ಯಮಂತ್ರಿ ಉತ್ತರ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಜ.31ರಂದು ಶನಿವಾರ ವಿಧಾನಸಭೆಯ ಅಧಿವೇಶನ ಇರುವುದಿಲ್ಲ ಎಂದು ಸ್ಪೀಕರ್ ಪ್ರಕಟಿಸಿದರು.
ಮಂಗಳೂರು: ಗ್ಯಾರಂಟಿ ಯೋಜನೆ ಪರಿಶೀಲನಾ ಸಭೆ
ಮಂಗಳೂರು,ಜ.29: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸಭೆಯು ಅಧ್ಯಕ್ಷ ಸುರೇಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಂಗಳೂರು ತಾಪಂ ಸಭಾಂಗಣದಲ್ಲಿ ನಡೆಯಿತು. 2025ರ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಫಲಾನುಭವಿ ಗಳ ಖಾತೆಗೆ ಜಮೆ ಆಗಲಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ತಿಳಿಸಿದರು. ಉಳಾಯಿಬೆಟ್ಟು ಸಂಕಮಾಡು ಮಾರ್ಗವಾಗಿ ಹೊಸ ಕೆಎಸ್ಸಾರ್ಟಿಸಿ ಬಸ್ ಮಂಜೂರಾಗಿದ್ದು, ಶೀಘ್ರ ಪ್ರಾರಂಭಿಸು ವಂತೆ ಸಮಿತಿಯ ಸದಸ್ಯ ನವಾಝ್ ಒತ್ತಾಯಿಸಿದರು. ಇದಕ್ಕೆ ಕೆಎಸ್ಸಾರ್ಟಿಸಿ ಅಧಿಕಾರಿ ಸಕರಾತ್ಮಕವಾಗಿ ಸ್ಪಂದಿಸಿದರು. ಸಭೆಯಲ್ಲಿ ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯ ಅಲ್ಸ್ಟನ್ ಡಿಕುನ್ಹ, ತಾಲೂಕು ಸಮಿತಿ ಸದಸ್ಯರಾದ ಪ್ರಶಾಂತ್ ಎಸ್, ಶೈಲಾ ನೀತಾ ಡಿಸೋಜ, ರಾಜೇಶ್ ಶೆಟ್ಟಿ , ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ, ಡಿ.ಎಂ.ಮುಸ್ತಫಾ ಹಾಗೂ ತಾಪಂ ಯೋಜನಾಧಿಕಾರಿ ಸುಕನ್ಯ, ವಿಷಯ ನಿರ್ವಾಹಕ ಹಾರಿಸ್, ತಾಲೂಕು ಐಇಸಿ ಸಂಯೋಜಕಿ ನಿಶ್ಮಿತಾ ಬಿ. ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸುರಪುರ | ಹೆಚ್ಚು ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಕಲಿಸಿ : ಪಂಡಿತರಾವ್
ಸುರಪುರ : ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆದು ಯಶಸ್ವಿಯಾಗಿ ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಜಿಲ್ಲಾ ಉಪ ನಿರ್ದೇಶಕ ಪಂಡಿತರಾವ್ ಆರ್. ಪವರ್ ತಿಳಿಸಿದರು. ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೀಲನಕ್ಷೆ, ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಪರೀಕ್ಷಾ ತಂತ್ರಗಳ ಬಗ್ಗೆ ಸ್ಪಷ್ಟ ಮನನ ಮಾಡಿಸಬೇಕು ಎಂದು ಸೂಚಿಸಿದರು. ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ, ಕನಿಷ್ಠ ಅಂಕಗಳನ್ನು ಪಡೆಯುವಂತೆ ಎಲ್ಲಾ ಉಪನ್ಯಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಬೋಧನೆ ನಡೆಸಬೇಕು. ಉತ್ತಮ ಫಲಿತಾಂಶಕ್ಕಾಗಿ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಪಂಡಿತರಾವ್ ಪವರ್ ಅವರು, ಗೊತ್ತಿರದ ವಿಷಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಬೇಕು. ನಿಯಮಿತ ಅಭ್ಯಾಸದ ಮೂಲಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ರುದ್ರಗೌಡ ಮಾಲಿ ಪಾಟೀಲ್, ಕಾಲೇಜಿನ ಪ್ರಾಚಾರ್ಯ ಮೋನಯ್ಯ ದೇವರಗೋನಾಲ, ಉಪನ್ಯಾಸಕ ಬಸವರಾಜ ಇನಾಮದಾರ, ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಫಿಸಾಬ್ ಗುತ್ತೇದಾರ, ಗಂಗಾಧರ್ ರುಮಾಲ್ ಸೇರಿದಂತೆ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲು ದ.ಕ.ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ಜಿಲ್ಲೆಯ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಸ್ಥಳೀಯ ವಾರ್ಡುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಅಡಚಣೆಯಾಗದಂತೆ ಹಾಗೂ ನೀರಿನ ಕೊರತೆಯಾಗದಂತೆ ಸ್ಥಳೀಯ ಸಂಸ್ಥೆಗಳಲ್ಲಿ ತಕ್ಷಣ ಯೋಜನೆ ರೂಪಿಸಿ ಸಿದ್ಧಗೊಂಡಿರಬೇಕು. ಲಭ್ಯವಿರುವ ನೀರಿನ ಮೂಲಗಳನ್ನು ಗುರುತಿಸಿ ಅಗತ್ಯ ಸಂದರ್ಭ ನೀರು ಪೂರೈಕೆಯಾಗುವಂತೆ ಗಮನಹರಿಸಬೇಕು ಎಂದು ಡಿಸಿ ದರ್ಶನ್ ಎಚ್.ವಿ. ಹೇಳಿದರು. ಜಿಲ್ಲೆಯ ಎಲ್ಲಾ 14 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳಲ್ಲಿ ನೀರಿನ ಮೂಲ ವಿತರಣಾ ಜಾಲವನ್ನು ಆಗಾಗ ಅಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ನೀರು ಒದಗಿಸಲು ಟ್ಯಾಂಕರ್ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ನೀರು ಒದಗಿಸಲು ತಮ್ಮಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು ಎಂದರು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ, ತುಂಬೆಯಿಂದ ನೇತ್ರಾವತಿ ನೀರು ಪೂರೈಕೆ ಜಾಲದಲ್ಲಿ ಕೆಲವೆಡೆ ಪಡೆದಿರುವ ಅನಧಿಕೃತ ಸಂಪರ್ಕಗಳ ಬಗ್ಗೆ ಕ್ರಮ ವಹಿಸಬೇಕು. ಆಯಾ ಗ್ರಾಪಂಗಳೊಂದಿಗೆ ಒಪ್ಪಂದ ಮಾಡಿಕೊಂಡು ಶುಲ್ಕ ಪಡೆಯುವಂತೆ ತಿಳಿಸಿದರು. ತುಂಬೆ ನೇತ್ರಾವತಿ ಡ್ಯಾಮ್ನಲ್ಲಿ ಮಹಾನಗರ ಪಾಲಿಕೆ ಸಹಿತ ವಿವಿದ ಇಲಾಖೆ ಹಾಗೂ ಕೈಗಾರಿಕೆಗಳ ಒಟ್ಟು 7 ಜಾಕ್ವೆಲ್ಗಳು ಕಾರ್ಯನಿರ್ವಹಿಸುತ್ತಿದೆ ಎಂದು ನಗರಪಾಲಿಕೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪ್ರಸ್ತುತ ನೇತ್ರಾವತಿ ಡ್ಯಾಮ್ನಲ್ಲಿ ಲಭ್ಯವಿರುವ ನೀರು ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಈಗಿನ ಅಂದಾಜಿನಂತೆ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು.
ಭಾಸ್ಕರ ಪರ್ವ: ಜನವರಿ 31ರಂದು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ 'ಭಾಸ್ಕರ ಪರ್ವ', ಗುರುಗಳಿಗೆ ವಿಶೇಷ ಬೀಳ್ಕೊಡುಗೆ
ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸುದೀರ್ಘ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ಅನೇಕ ಪತ್ರಿಕೋದ್ಯಮ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿರುವ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ್ ಹೆಗಡೆ ಅವರು ಜನವರಿ 31ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ವಿದ್ಯಾರ್ಥಿಗಳು ವಿಶೇಷ 'ಭಾಸ್ಕರ ಪರ್ವ - ಮಾಧ್ಯಮ ಗುರುವಿಗೆ ಅಭಿನಂದನೆ' ಎಂಬ ವಿಶಿಷ್ಟ ಬೀಳ್ಕೊಡುಗೆ
ಕುಂದಾಪುರ: ಉಚಿತ ನೇತ್ರ ತಪಾಸಣಾ ಶಿಬಿರ; ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2026
ಕುಂದಾಪುರ, ಜ.29: ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಕುಂದಾಪುರ ಪೊಲೀಸ್ ಠಾಣೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ ಹಾಗೂ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಬೆಂಗಳೂರು ಮತ್ತು ಕುಂದಾಪುರ ತಾಲೂಕು ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2026’ ಅಂಗವಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿ, ಖಾಸಗಿ ಬಸ್, ಶಾಲಾ ಬಸ್, ಟೆಂಪೋ, ರಿಕ್ಷಾ ಹಾಗೂ ಇತರ ವಾಹನ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆರೋಗ್ಯ ಮಾಹಿತಿ ಕಾರ್ಯಗಾರ ಕುಂದಾಪುರ ಪೊಲೀಸ್ ಲೈನ್ನಲ್ಲಿರುವ ಶ್ರೀರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕುಂದಾಪುರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಜಯರಾಮ್ ಡಿ. ಗೌಡ, ಸಂಚಾರ ಠಾಣೆಯ ಉಪ ನಿರೀಕಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು, ಪ್ರಸಾದ ನೇತ್ರಾಲಯದ ನೇತ್ರ ತಜ್ಞೆ ಡಾ. ಕ್ರೀನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ್ದಾಸ್, ಕುಂದಾಪುರ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮೇದಿನಿ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧಿಕಾರಿ ಗಾಯತ್ರಿ, ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿ ರಮೀಜಾ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ರಸ್ತೆ ಅಪಘಾತ ತಡೆಗಟ್ಟುವಲ್ಲಿ ಆರೋಗ್ಯ ಮತ್ತು ಕಣ್ಣಿನ ದೃಷ್ಟಿಯ ಮಹತ್ವದ ಬಗ್ಗೆ ಸೂಕ್ತ ಮಾಹಿತಿ ನೀಡಿ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ತಿಳಿಹೇಳಿ ವಾಹನ ಚಾಲಕರಿಗೆ ಅರಿವು ಮೂಡಿಸಲಾಯಿತು. ಶಿಬಿರದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ, ವಾಹನದ ಚಾಲಕರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ ,ಕನ್ನಡಕದ ಅಗತ್ಯವಿದ್ದಲ್ಲಿ, ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಇದರೊಂದಿಗೆ ಎಲ್ಲಾ ವಾಹನ ಚಾಲಕರಿಗೆ ಉಚಿತವಾಗಿ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಿ, ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಯಿತು. ಶಂಕರನಾರಾಯಣ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ| ಬಸ್ ಬಾಗಿಲು ಅಳವಡಿಕೆಗೆ ಜೂ.1ರವರೆಗೆ ಕಾಲಾವಕಾಶ: ಎಸ್ಪಿ ಹರಿರಾಮ್ ಶಂಕರ್
ಉಡುಪಿ, ಜ.29: ತಾಂತ್ರಿಕ ಹಾಗೂ ಇತರ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್ಗಳು ಸೇರಿ ದಂತೆ ಎಲ್ಲಾ ಬಸ್ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಕೆಗೆ ನೀಡಿರುವ ಕಾಲಾವಕಾಶವನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ ಎಂದು ಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಬಸ್ ಮಾಲಕರ ಸಂಘದೊಂದಿಗೆ ಇಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ. ಮಾರ್ಚ್ ತಿಂಗಳವರೆಗೆ ಶಾಲೆಗಳು ಹಾಗೂ ಮಕ್ಕಳಿಗೆ ಪರೀಕ್ಷೆಗಳು ನಡೆಯ ಲಿರುವುದರಿಂದ ಹಾಗೂ ಜಿಲ್ಲೆಯ ಖಾಸಗಿ ಸೇರಿದಂತೆ ಎಲ್ಲಾ ಬಸ್ಗಳಿಗೆ ಹೊಸದಾಗಿ ಬಾಗಿಲುಗಳನ್ನು ಅಳವಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಗ್ಯಾರೇಜ್ಗಳು ಇಲ್ಲದೇ ಇರುವುದರಿಂದ ಬಸ್ ಚಾಲಕರು ಹಾಗೂ ಮಾಲಕರ ಕೋರಿಕೆಯ ಮೇರೆಗೆ ಫೋಲ್ಡಿಂಗ್ ಮಾದರಿಯ ಬಾಗಿಲುಗಳನ್ನು ಅಳವಡಿಸಲು ಜೂನ್ 1ರವರೆಗೆ ಸಮಯವನ್ನು ನೀಡಲಾಯಿತು ಎಂದು ಅವರು ತಿಳಿಸಿದರು. ಆದರೆ ಇಂದಿನಿಂದಲೇ ಎಲ್ಲಾ ಬಸ್ಗಳ ದೃಢತೆ ಸರ್ಟಿಫಿಕೇಟ್ (ಫಿಟ್ನೆಸ್ ಸರ್ಟಿಫಿಕೇಟ್-ಎಫ್ಸಿ)ಗಳನ್ನು ನವೀಕರಿಸಲಾಗುವುದು.ಇದಕ್ಕೆ ಮುನ್ನ ಬಸ್ಗೆ ಜೂನ್ 1ರೊಳಗೆ ಪೋಲ್ಡಿಂಗ್ ಮಾದರಿಯ ಬಾಗಿಲನ್ನು ಅಳವಡಿಸದಿದ್ದರೆ ಎಫ್ಸಿಯನ್ನು ರದ್ದುಪಡಿಸುವ ಷರತ್ತನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು. ಅಲ್ಲದೇ ಜೂನ್1ರ ಬಳಿಕ ಯಾವುದೇ ಬಸ್ ಸುಸಜ್ಜಿತ ಬಾಗಿಲನ್ನು ಅಳವಡಿಸಿಕೊಳ್ಳದೇ ಇದ್ದರೆ ಅದನ್ನು ಮುಟ್ಟು ಗೋಲು ಹಾಕಿಕೊಳ್ಳುವ ಷರತ್ತಿಗೂ ಎಲ್ಲಾ ಖಾಸಗಿ ಬಸ್ಗಳ ಮಾಲಕರು ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದ್ದು, ಜಿಲ್ಲಾಡಳಿತದ ಷರತ್ತನ್ನು ಶೇ.100ರಷ್ಟು ಅನುಷ್ಠಾನಗೊಳಿಸುವ ಭರವಸೆಯನ್ನೂ ಅವರು ನೀಡಿದ್ದಾರೆ ಎಂದು ಹರಿರಾಮ್ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡ ವಿಮಾನಗಳಿಗಿಂತ ಸಣ್ಣ ವಿಮಾನಗಳೇ ಹೆಚ್ಚು ಅಪಘಾತಕ್ಕೀಡಾಗಲು ಕಾರಣವೇನು?
ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ಅಜಿತ್ ಪವಾರ್ ಮತ್ತು ಇತರ ನಾಲ್ವರು Bombardier Learjet 45 ಬ್ಯುಸಿನೆಸ್ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿದೆ. ಈ ವಿಮಾನ ಪತನವು ವಾಣಿಜ್ಯೇತರ ಸಣ್ಣ ವಿಮಾನಗಳ ಸುರಕ್ಷತೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಸಿಸಿಟಿವಿ ದೃಶ್ಯಾವಳಿಗಳು ವಿಮಾನ ಸ್ಫೋಟಗೊಳ್ಳುವುದನ್ನು ತೋರಿಸಿದ್ದು ಢಿಕ್ಕಿಯ ಸಮಯದಲ್ಲಿ ಪ್ರದೇಶದಾದ್ಯಂತ ವಿಮಾನದ ಅವಶೇಷಗಳು ಹರಡಿಕೊಂಡಿವೆ. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ಪ್ರಾರಂಭಿಸಿದೆ. ಅಜಿತ್ ಪವಾರ್ ಪ್ರಯಾಣಿಸುತ್ತಿದ್ದದ್ದು ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಲಿಯರ್ಜೆಟ್ 45 ಅವಳಿ-ಎಂಜಿನ್ ಲೈಟ್ ಬ್ಯುಸಿನೆಸ್ ಜೆಟ್ ನಲ್ಲಿ. ಇದು ಸಣ್ಣ ವಿಮಾನವಾಗಿದ್ದು ಈ ರೀತಿಯ ಸಣ್ಣ ವಿಮಾನಗಳು ಹೆಚ್ಚಾಗಿ ಅಪಘಾತಕ್ಕೊಳಗಾಗುತ್ತವೆ ಎಂದು ತೋರಿಸುತ್ತಿದೆ ಜಾಗತಿಕ ವಾಯುಯಾನ ಡೇಟಾ. ಸಣ್ಣ ವಿಮಾನಗಳು ಸಾಮಾನ್ಯ ವಾಯುಯಾನದ (GA) ಭಾಗವಾಗಿದೆ. ಇವು ಮೂಲತಃ ನಾಗರಿಕ ವಿಮಾನಗಳಾಗಿದ್ದು ಅವು ನಿಗದಿತ ವಾಣಿಜ್ಯ ವಿಮಾನಯಾನ ಸೇವೆ ಅಥವಾ ಮಿಲಿಟರಿ ಸ್ವರೂಪವನ್ನು ಹೊಂದಿರುವುದಿಲ್ಲ. ಅವು ಖಾಸಗಿಯಲ್ಲದ ಜೆಟ್ಗಳು, ಚಾರ್ಟರ್ಡ್ ವಿಮಾನಗಳು ಮತ್ತು ಜೆಟ್-ಎಂಜಿನ್ ಅಲ್ಲದ ಟರ್ಬೊಪ್ರೊಪ್ಗಳನ್ನು ಒಳಗೊಂಡಂತೆ ಏಕ ಎಂಜಿನ್ ವಿಮಾನಗಳನ್ನು ಸಹ ಒಳಗೊಂಡಿವೆ. ಈ ರೀತಿಯ ಸಣ್ಣ ವಿಮಾನಗಳು ದೊಡ್ಡ ವಿಮಾನಗಳಾದ ವಾಣಿಜ್ಯ ವಿಮಾನಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಅಪಘಾತ ದರಗಳನ್ನು ದಾಖಲಿಸುತ್ತವೆ. ವಾಯುಯಾನ ಶಕ್ತಿ ಕೇಂದ್ರವಾದ ಅಮೆರಿಕದಲ್ಲಿ ಸಾಮಾನ್ಯ ವಿಮಾನಯಾನವು 2019 ರಲ್ಲಿ 1,220 ಅಪಘಾತಗಳನ್ನು ದಾಖಲಿಸಿದೆ, ಅದರಲ್ಲಿ 233 ಗಂಭೀರ ಅಪಘಾತಗಳು. ಈ ಬಗ್ಗೆ ಡೇಟಾ ಪರಿಶೀಲಿಸಿದರೆ ವಾಣಿಜ್ಯ ವಿಮಾನಯಾನವು ಆ ವರ್ಷ 40 ಅಪಘಾತಗಳನ್ನು ವರದಿ ಮಾಡಿದೆ. ಅದರಲ್ಲಿ ಸಾವಿಗೀಡಾದವರು ಇಬ್ಬರು ಎಂದು ವಾಷಿಂಗ್ಟನ್ ಡಿಸಿ ಮೂಲದ ಮಾಧ್ಯಮ WUSA (ಚಾನೆಲ್ 9) ತಿಳಿಸಿದೆ. ಅಮೆರಿಕನ್ ಏಜೆನ್ಸಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ದತ್ತಾಂಶವು ಅಪಾಯದಲ್ಲಿನ ತೀವ್ರ ಅಸಮಾನತೆಯನ್ನು ತೋರಿಸುತ್ತದೆ. ವಾಣಿಜ್ಯ ವಿಮಾನಗಳು 2019 ರಲ್ಲಿ 100,000 ಹಾರಾಟದ ಗಂಟೆಗೆ ಕೇವಲ 0.2 ಅಪಘಾತಗಳನ್ನು ದಾಖಲಿಸಿದರೆ, ಖಾಸಗಿ ವಿಮಾನಗಳು 100,000 ಗಂಟೆಗೆ 5.6 ಅಪಘಾತದ ಪ್ರಮಾಣವನ್ನು ದಾಖಲಿಸಿವೆ. ಇದು 25 ಪಟ್ಟು ಹೆಚ್ಚು. ಸಣ್ಣ ಖಾಸಗಿ ವಿಮಾನಗಳು ಪ್ರಮುಖ ವಾಣಿಜ್ಯ ವಿಮಾನಗಳಿಗಿಂತ 32.9 ಪಟ್ಟು ಹೆಚ್ಚು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಅದೇ ವೇಳೆ ಚಾರ್ಟರ್ ವಿಮಾನಗಳು 9.4 ಪಟ್ಟು ಅಪಾಯಕಾರಿ ಎಂದು ಯುಎಸ್ ಮೂಲದ ಕಾನೂನು ಸಂಸ್ಥೆಯಾದ SD ಲಿಟಿಗೇಷನ್ ಗಮನಿಸಿದೆ. ಇದಲ್ಲದೆ, ವಿಮಾನಯಾನ ವ್ಯಾಪಾರ ಸಂಘವಾದ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (IATA), 2024 ರಲ್ಲಿ ವಾಣಿಜ್ಯ ಜೆಟ್ ಅಪಘಾತ ದರಗಳು ಪ್ರತಿ ಮಿಲಿಯನ್ ಟೇಕಾಫ್ ಗಳಿಗೆ 0.23 ಗಂಭೀರ ಅಪಘಾತಗಳು ಸಂಭವಿಸಿವೆ ಎಂದು ವರದಿ ಮಾಡಿದೆ. ಬ್ಯುಸಿನೆಸ್ ಮತ್ತು ಖಾಸಗಿ ಜೆಟ್ಗಳು 2024 ರಲ್ಲಿ ಅಪಘಾತ ದರ ಸುಮಾರು 2.56 ಎಂದು 2025 ರ ASAP ಸುರಕ್ಷತಾ ಅವಲೋಕನ ಮತ್ತು ವಿಶ್ಲೇಷಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಣ್ಣ ವಿಮಾನಗಳಲ್ಲೇ ಅಪಘಾತ ಜಾಸ್ತಿ ಯಾಕೆ? ವಿಮಾನವು ಚಿಕ್ಕದಾಗಿದ್ದು, ದುರ್ಬಲವಾಗಿರುವುದರಿಂದ ಮಾತ್ರವಲ್ಲ, ಕಾರ್ಯಾಚರಣೆಯಲ್ಲಿನ ಸಮಸ್ಯೆಗಳಿಂದಲೂ ಅಪಘಾತಕ್ಕೊಳಗಾಗುತ್ತದೆ. ಸಾಮಾನ್ಯವಾಗಿ, ದೂರದ ಪ್ರದೇಶಗಳಿಗೆ ನಿಗದಿತ ಮಾರ್ಗಗಳಲ್ಲಿ ಚಲಿಸುವ ಸಣ್ಣ ವಿಮಾನಗಳಿಗೆ ಸಡಿಲವಾದ ನಿಯಂತ್ರಕ ಮೇಲ್ವಿಚಾರಣೆ ಮತ್ತು ಪೈಲಟ್ ಗಳ ಅನುಭವವೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಅಜಿತ್ ಪವಾರ್ ಅವರ ವಿಮಾನದ ವಿಷಯದಲ್ಲಿ ಇದು ಭಿನ್ನವಾಗಿದೆ, ಈ ವಿಮಾನ ವಿವಿಐಪಿಗಳನ್ನು ಹೊತ್ತುಕೊಂಡು ಪ್ರಮುಖ ವಿಮಾನ ನಿಲ್ದಾಣವಾದ ಮುಂಬೈನಿಂದ ಹಾರುತ್ತಿತ್ತು. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವಷ್ಟು ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಸಣ್ಣ ವಿಮಾನಗಳು ಕಾರ್ಯಾಚರಣೆ ಮಾಡುತ್ತದೆ. ಇಲ್ಲಿ ಹವಾಮಾನ ಮತ್ತು ಕಡಿಮೆ ಸುರಕ್ಷತಾ ಕ್ರಮಗಳೂ ಅಪಘಾತಕ್ಕೆ ಕಾರಣವಾಗುತ್ತವೆ. ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೀಡಾದ ಬಾರಾಮತಿ ವಿಮಾನ ನಿಲ್ದಾಣ ಸಣ್ಣ ವಿಮಾನ ನಿಲ್ದಾಣವಾಗಿದೆ. ಬಾರಾಮತಿ ವಾಯುನೆಲೆಯು ಸರಿಸುಮಾರು 2,000 ಅಡಿ ಎತ್ತರದಲ್ಲಿದೆ . ಅದು ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಹೊಂದಿಲ್ಲ. ಹೀಗಾಗಿ, ಪೈಲಟ್ಗಳು ಲ್ಯಾಂಡಿಂಗ್ಗಾಗಿ ಹಸ್ತಚಾಲಿತ ಮತ್ತು ದೃಶ್ಯ ತಂತ್ರಗಳನ್ನು ಅವಲಂಬಿಸಬೇಕಾಗುತ್ತದೆ. ಪೈಲಟ್ಗಳ ಅನುಭವ ಕೂಡಾ ಪ್ರಧಾನ ಅಂಶವಾಗಿದೆ. ಸಣ್ಣ ವಿಮಾನ ಹಾರಾಟ ಮಾಡುವ ಪೈಲಟ್ ಗಳು ದೊಡ್ಡ ವಿಮಾನ ಹಾರಾಟ ಮಾಡುವ ಪೈಲಟ್ಗಳಿಗಿಂತ ಕಡಿಮೆ ಹಾರಾಟದ ಸಮಯವನ್ನು ದಾಖಲಿಸುತ್ತಾರೆ. ಸಣ್ಣ ವಿಮಾನಗಳ ಪೈಲಟ್ ಗಳ ಅನುಭವವೂ ಕಡಿಮೆ ಇರುತ್ತದೆ. ಅಧ್ಯಯನ ಮತ್ತು ತಜ್ಞರ ಪ್ರಕಾರ ವಿಶೇಷವಾಗಿ ಸಣ್ಣ, ಅನಿಯಂತ್ರಿತ ವಿಮಾನ ನಿಲ್ದಾಣಗಳಲ್ಲಿ ಇದು ನಿಯಂತ್ರಣ ನಷ್ಟದ ಘಟನೆಗಳು, ಸ್ಥಗಿತಗಳು ಮತ್ತು ಇಂಧನ ದುರುಪಯೋಗದ ಅಪಾಯಗಳನ್ನು ಹೆಚ್ಚಿಸುತ್ತದೆ. ಆದರೆ ಆರಂಭಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಅವರ ವಿಮಾನವನ್ನು ಹಾರಿಸಿದ ಇಬ್ಬರೂ ಪೈಲಟ್ಗಳು ಅನುಭವಿಗಳಾಗಿದ್ದರು. ಸಣ್ಣ ವಿಮಾನ ನಿಲ್ದಾಣಗಳು ಸಣ್ಣ ವಿಮಾನಗಳ ಅಪಾಯವನ್ನು ಹೆಚ್ಚಿಸುತ್ತವೆಯೇ? ಎಲ್ಲಾ ಸಿಂಗಲ್-ಎಂಜಿನ್ ವಿಮಾನಗಳು ಸಾಮಾನ್ಯವಾಗಿ ಸಣ್ಣ ವಿಮಾನಗಳಾಗಿವೆ. ಸಿಂಗಲ್-ಎಂಜಿನ್ ವಿಮಾನಗಳಲ್ಲಿನ ಎಂಜಿನ್ ವೈಫಲ್ಯವು ಬಹು-ಎಂಜಿನ್ ಜೆಟ್ಗಳಿಗಿಂತ ಹೆಚ್ಚು ಅಪಾಯಕಾರಿ. ವಿಶ್ಲೇಷಕರು ಸಾಮಾನ್ಯವಾಗಿ ಸಣ್ಣ-ವಿಮಾನ ಸುರಕ್ಷತೆಯನ್ನು ರಸ್ತೆ ಚಾಲನೆಗೆ ಹೋಲಿಸುತ್ತಾರೆ. ದೊಡ್ಡ ವಾಣಿಜ್ಯ ವಿಮಾನಯಾನ ಸಂಸ್ಥೆಯು ವೃತ್ತಿಪರ ಬಸ್ ಸೇವೆಯಂತೆ ಸುರಕ್ಷಿತವಾಗಿದ್ದರೂ ಸಣ್ಣ ಖಾಸಗಿ ವಿಮಾನದಲ್ಲಿ ಹಾರಾಟ ನಡೆಸುವುದು ಹೆದ್ದಾರಿಯಲ್ಲಿ ನಿಮ್ಮ ಸ್ವಂತ ಕಾರನ್ನು ಚಲಾಯಿಸುವಷ್ಟೇ ಅಪಾಯಕಾರಿ ಅಂತಾರೆ. ಆದಾಗ್ಯೂ, ಅಜಿತ್ ಪವಾರ್ ಅವರ ವಿಮಾನವು ಡಬಲ್-ಎಂಜಿನ್ ಜೆಟ್ ವಿಮಾನವಾಗಿತ್ತು. ಇದಲ್ಲದೆ, ಮಾನವ ದೋಷ ಮಾತ್ರ ಸುಮಾರು 75% ಸಾಮಾನ್ಯ ವಿಮಾನ ಅಪಘಾತಗಳಿಗೆ ಕಾರಣವಾಗಿದೆ ಎಂದು ಯುಎಸ್ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ಎನ್ಟಿಎಸ್ಬಿ ಅಂಕಿಅಂಶಗಳು ಹೇಳುತ್ತವೆ. ಮತ್ತೊಂದೆಡೆ, ವಾಣಿಜ್ಯ ವಿಮಾನಗಳು ಮತ್ತು ನಾಗರಿಕ ವಿಮಾನಗಳು ಕಟ್ಟುನಿಟ್ಟಾದ ನಿಯಂತ್ರಕ ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಡ್ಯುಯಲ್ ಪೈಲಟ್ಗಳು, ಸುಧಾರಿತ ಹವಾಮಾನ ರಾಡಾರ್, ರೆಜಿಮೆಂಟೆಡ್ ನಿರ್ವಹಣಾ ವೇಳಾಪಟ್ಟಿಗಳು ಮತ್ತು ಸಂಪ್ರದಾಯವಾದಿ ಗೋ/ನೋ-ಗೋ ನಿರ್ಧಾರಗಳನ್ನು ಕಡ್ಡಾಯಗೊಳಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚಿನ ಸಾಮಾನ್ಯ ವಿಮಾನವು ಏಕ-ಪೈಲಟ್ ಕಾರ್ಯಾಚರಣೆಗಳು ಮತ್ತು ಕನಿಷ್ಠ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪವಾರ್ ಪ್ರಯಾಣಿಸುತ್ತಿದ್ದ ಲಿಯರ್ಜೆಟ್ನಂತಹ ವ್ಯಾಪಾರ ಜೆಟ್ಗಳು, ರಿಫೈನ್ಡ್ ಪಿಸ್ಟನ್-ಎಂಜಿನ್ ವಿಮಾನಗಳಿಗಿಂತ ಸುರಕ್ಷಿತವಾಗಿದ್ದು, ಉತ್ತಮ ಏವಿಯಾನಿಕ್ಸ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಇಬ್ಬರು ಪೈಲಟ್ಗಳೂ ಇದ್ದರು. ಬಾರಾಮತಿಯಲ್ಲಿರುವ ಟೇಬಲ್ಟಾಪ್ ರನ್ವೇ ಬಗ್ಗೆ ಪರಿಚಿತವಾಗಿರುವ ಪೈಲಟ್ ಒಬ್ಬರು ಅಪಘಾತದ ಹಿಂದಿನ ಸಂಭಾವ್ಯ ಕಾರಣವೆಂದರೆ ಶಾರ್ಟ್ ಫೈನಲ್ಸ್ ಹಂತ ಎಂದು ಕರೆಯಲ್ಪಡುವ ಅಸ್ಥಿರವಾದ ಅಂತಿಮ ವಿಧಾನ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣದ ಎರಡೂ ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್ವೇ ಇದ್ದರೆ ಅದನ್ನು ಟೇಬಲ್ ಟಾಪ್ ರನ್ವೇ ಎಂದು ಕರೆಯಲಾಗುತ್ತದೆ. ಇದು ಲ್ಯಾಂಡಿಂಗ್ ಅನ್ನು ಇನ್ನಷ್ಟು ಸವಾಲಿನದ್ದಾಗಿ ಮಾಡುತ್ತದೆ. ಜಾಗತಿಕವಾಗಿ ವಾಣಿಜ್ಯ ಹಾರಾಟವು ಸುರಕ್ಷಿತ ಸಾರಿಗೆ ವಿಧಾನಗಳಲ್ಲಿ ಒಂದಾಗಿದ್ದರೂ, ಅಜಿತ್ ಪವಾರ್ ಅವರ ವಿಮಾನವನ್ನು ಒಳಗೊಂಡ ಅಪಘಾತವು ಸಣ್ಣ ಮತ್ತು ಚಾರ್ಟರ್ಡ್ ವಿಮಾನಗಳು ಹೆಚ್ಚಿನ ಅಪಾಯಗಳನ್ನು ಹೊಂದುವುದನ್ನು ತೋರಿಸುತ್ತದೆ. ಸಣ್ಣ ವಿಮಾನ ಅಪಘಾತಗಳು ಜನವರಿ 10ರಂದು ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೊಂದು ರೂರ್ಕೇಲಾ ಬಳಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಆರು ಮಂದಿ ಗಾಯಗೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಭುವನೇಶ್ವರದಿಂದ ರೂರ್ಕೇಲಾಗೆ ಪ್ರಯಾಣಿಕರನ್ನು ಕರೆದ್ದೊಯ್ಯುತ್ತಿದ್ದ ಒಂಬತ್ತು ಆಸನಗಳ ಇಂಡಿಯಾ ಒನ್ ವಿಮಾನಯಾನ ಸಂಸ್ಥೆಗೆ ಸೇರಿದ ಒನ್ ಎ–1 ವಿಮಾನ ದಾರಿ ಮಧ್ಯೆ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿ ನಾಲ್ವರು ಪ್ರಯಾಣಿಕರು, ಇಬ್ಬರು ಸಿಬ್ಬಂದಿ ಇದ್ದರು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಪೈಲಟ್ ವಿಮಾನವನ್ನು ಜನವಸತಿ ಇಲ್ಲದ ಬಯಲು ಪ್ರದೇಶದಲ್ಲಿ ಇಳಿಸಿದ್ದರು. ಇದರಿಂದಾಗಿ ಭಾರೀ ಅನಾಹುತದಿಂದ ವಿಮಾನ ಪಾರಾಗಿತ್ತು. 2003ರಲ್ಲಿ VSR Venturesನ Learjet 45 ವಿಮಾನ ಮುಂಬೈನಲ್ಲಿ ಭಾರೀ ಮಳೆಯ ಸಮಯದಲ್ಲಿ ಗೋಚರತೆ ಕಡಿಮೆ ಆದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ವಿಮಾನ ಎರಡು ಭಾಗಗಳಾಗಿ ಮುರಿದಿದ್ದು ವಿಮಾನದಲ್ಲಿದ್ದ ಎಂಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು . ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಬುಧವಾರ (ಜನವರಿ 28, 2026) ಸಣ್ಣ ವಿಮಾನವೊಂದು ಪತನಗೊಂಡು ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವಿಗೀಡಾಗಿದ್ದಾರೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾಗೆ ಸೇರಿದ ಈ ವಿಮಾನ ಕುಕುಟಾದಿಂದ ಟೇಕಾಫ್ ಆಗಿತ್ತು. ಒಕಾನೊ ಬಳಿ ಇಳಿಯಬೇಕಿದ್ದ ವಿಮಾನ ಲ್ಯಾಂಡಿಂಗ್ಗಿಂತ ಮೊದಲು ಸಂಪರ್ಕ ಕಡಿದುಕೊಂಡು ಅಪಘಾತಕ್ಕೀಡಾಗಿದೆ.
ಯಾದಗಿರಿ | ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶ್ರಮದಾನ
ಯಾದಗಿರಿ : ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಶುಕ್ರವಾರ (ಜ.30) ಬೆಳಿಗ್ಗೆ 8 ಗಂಟೆಗೆ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ ಮತ್ತು ಆರೋಗ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡುವ ಉದ್ದೇಶದಿಂದ ಈ ಶ್ರಮದಾನ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ನಡೆಯಲಿದೆ ಎಂದರು. ಈ ಶ್ರಮದಾನವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೀಮ್ಸ್, ನ್ಯಾಯವಾದಿಗಳ ಸಂಘ, ಗೃಹರಕ್ಷಕ ದಳ ಹಾಗೂ ಎನ್ಎಸ್ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿವಿಧ ಇಲಾಖೆ ಸಿಬ್ಬಂದಿಗಳು ಶ್ರಮದಾನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 2026ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಮಾ.14ರಂದು ಆಯೋಜಿಸಲಾಗುವುದು. ಈ ಲೋಕ್ ಅದಾಲತ್ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಮತ್ತು ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇ- ಸಮನ್ಸ್ ಜಾರಿಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ : ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರವನ್ನು ಶ್ಲಾಘಿಸಿದ ಮರುಳಸಿದ್ಧಾರಾಧ್ಯ ಅವರು, ಇ-ಸಮನ್ಸ್, ನೋಟಿಸ್ ಹಾಗೂ ವಾರೆಂಟ್ ಜಾರಿಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು. ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಶೇ.41 ರಷ್ಟು ಸಮನ್ಸ್ ಜಾರಿಯಾಗಿದ್ದು, ಶೇ.90 ರಷ್ಟು ವಿಸ್ತರಣೆ ಸಾಧಿಸಲಾಗಿದೆ. ಹಿಂದಿನ ಲೋಕ್ ಅದಾಲತ್ ಯಶಸ್ವಿಗೆ ಪೊಲೀಸ್ ಇಲಾಖೆಯ ಸಹಕಾರ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಬಿರಾದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರಿಗೆ ಇಲಾಖೆ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದಿದ್ದರೆ ಹೋರಾಟ: ಕರವೇ ಎಚ್ಚರಿಕೆ
ಉಡುಪಿ, ಜ.29: ಜಿಲ್ಲೆಯ ಆರ್ಟಿಓ ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನಗಳ ಮಾಲಕರಿಗೆ ನೀಡದೇ ಸತಾಯಿಸುತ್ತಿರುವ ವಾಹನದ ನಿರಾಕ್ಷೇಪಣಾ ಪತ್ರವನ್ನು ಇನ್ನು 15 ದಿನದಲ್ಲಿ ನೀಡದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್ ಎಚ್ಚರಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು ಎಂಟು ತಿಂಗಳಿನಿಂದ ಸಾವಿರಕ್ಕೂ ಅಧಿಕ ನಿರಾಕ್ಷೇಪಣಾ ಪತ್ರದ ಕಡತಗಳು ವಿಲೇವಾರಿಯಾಗದೆ ಉಳಿದು ಕೊಂಡಿದೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಮಣಿಪಾಲದಲ್ಲಿರುವ ಆರ್ಟಿಓ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದವರು ತಿಳಿಸಿದರು. ಈ ಸಮಸ್ಯೆಗೆ ಅಧಿಕಾರಿಗಳು 2020ಕ್ಕಿಂತ ಮೊದಲಿನ ವಾಹನದ ಆರ್.ಸಿ. ಪತ್ರದಲ್ಲಿ ವೀಲ್ ಬೆಸ್ ಹಾಗೂ ಎಚ್.ಪಿ ಅನ್ನು ನಮೂದಿಸಿಲ್ಲ. ಹೀಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. 2020ನೇ ಇಸವಿಗಿಂತ ಮೊದಲಿನ ವಾಹನಗಳ ಆರ್.ಸಿ. ಪತ್ರದಲ್ಲಿ ಬಿಟ್ಟು ಹೋಗಿರುವ ವಿಚಾರಗಳನ್ನು ನಮೂದಿಸುವ ಜವಾಬ್ದಾರಿ ಸರಕಾರದ್ದು ಅಥವಾ ಸಂಬಂಧಪಟ್ಟ ಇಲಾಖೆಯದ್ದು. ಇವರ ಬೇಜವಾಬ್ದಾರಿಯಿಂದ ಆಗಿರುವ ಲೋಪ ದೋಷಕ್ಕೆ ವಾಹನ ಮಾಲಕರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳಗಳಲ್ಲಿ 580 ರೂ. ಶುಲ್ಕ ಕಟ್ಟಿಸಿಕೊಂಡು ಆರ್ಟಿಓ ನಿರೀಕ್ಷಕರು ತಮ್ಮ ಮೊಬೈಲ್ ಆ್ಯಪ್ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಹೊಸ ಆರ್ಸಿ ಪತ್ರವನ್ನು ತರಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದವರು ಪ್ರಶ್ನಿಸಿದರು. ಆರ್ಟಿಓ ಅಧಿಕಾರಿಗಳು 15 ದಿನಗಳ ಒಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಆರ್.ಟಿ.ಓ. ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ಅಲ್ಲದೇ ಕೆಲವು ತಿಂಗಳ ಹಿಂದೆ ಲೋಕಾಯುಕ್ತ ದಾಳಿಗೊಳಗಾಗಿ ಅಕ್ರಮ ಪತ್ತೆಯಾದ ಆರ್ಟಿಓ ಅಧಿಕಾರಿ ಅದೇ ಸ್ಥಾನದಲ್ಲಿ ಮುಂದುವರಿದಿದ್ದು, ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದೂ ಅವರು ಸರಕಾರವನ್ನು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಲಾಲ್, ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್ ನಿಜಾಮ್, ಸುಧೀರ್ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್ ಸನಿಲ್, ಮಹಿಳಾ ಸಮಿತಿ ಉಪಾಧ್ಯಕ್ಷೆ ದೇವಕಿ ಬಾರ್ಕೂರು ಉಪಸ್ಥಿತರಿದ್ದರು.
ಯಾದಗಿರಿ | ದಲಿತರ ರುದ್ರಭೂಮಿ ಒತ್ತುವರಿ ತೆರವುಗೊಳಿಸಿ ಹಸ್ತಾಂತರಿಸಲು ಡಿಎಸ್ಎಸ್ ಆಗ್ರಹ
ಯಾದಗಿರಿ : ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೊಬಳಿಯ ಚಟ್ನಳ್ಳಿ ಗ್ರಾಮದ ಮರಮಕಲ್ ಸೀಮಾಂತರದಲ್ಲಿರುವ ಸರ್ವೇ ನಂ.9ರಲ್ಲಿ ದಲಿತರಿಗಾಗಿ ಮೀಸಲಾದ ರುದ್ರಭೂಮಿಯನ್ನು ತಕ್ಷಣವೇ ದಲಿತ ಸಮುದಾಯಕ್ಕೆ ಹಸ್ತಾಂತರಿಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಜಿಲ್ಲಾ ಶಾಖೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಸುಮಾರು 15 ವರ್ಷಗಳ ಹಿಂದೆ ಸರ್ಕಾರವು ದಲಿತರ ರುದ್ರಭೂಮಿಗಾಗಿ 3 ಎಕರೆ ಜಮೀನನ್ನು ಖರೀದಿಸಿದ್ದು, ಅದು ಪ್ರಸ್ತುತ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ದಾಖಲಾಗಿರುವುದಾಗಿ ತಿಳಿಸಿದರು. ಈ ಜಮೀನನ್ನು ಪಾಹಣಿಯಲ್ಲಿ ಸ್ಪಷ್ಟವಾಗಿ ‘ದಲಿತರ ರುದ್ರಭೂಮಿ’ ಎಂದು ನಮೂದಿಸಿ, ಚಟ್ನಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಅಧಿಕೃತವಾಗಿ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ, ಈ ರುದ್ರಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಈಶಪ್ಪ ತಂ. ಬಸಣ್ಣಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜಮೀನಿನ ಅಳತೆ ಕಾರ್ಯ ಪೂರ್ಣಗೊಳಿಸಿ ಚೆಕ್ಬಂದಿ ಮಾಡಿಸಿ, ಸುತ್ತಲು ಕಾಪೌಂಡ್ ಗೋಡೆ ನಿರ್ಮಿಸುವ ಮೂಲಕ ದಲಿತರ ಹಕ್ಕನ್ನು ರಕ್ಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಯೋಜಕರಾದ ಮರೆಪ್ಪ ಕ್ರಾಂತಿ, ಶಿವಲಿಂಗ ಹಾಸನಾಪುರ, ಶರಬಣ್ಣ ದೋರನಹಳ್ಳಿ, ಭೀಮಶಂಕರ ಗುಂಡಹಳ್ಳಿ, ದೊಡ್ಡಪ್ಪ ಕಾಡಿಂಗೇರ, ಸಂತೋಷ್ ಗುಂಡಹಳ್ಳಿ, ನಾಗರಾಜ್ ಕೋಡಮ್ಮನಹಳ್ಳಿ, ಮಲ್ಲು ಖಾನಾಪುರ, ನಿಂಗಪ್ಪ ಖಾನಾಪುರ ಸೇರಿದಂತೆ ಅನೇಕ ಡಿಎಸ್ಎಸ್ ಕಾರ್ಯಕರ್ತರು ಹಾಗೂ ಚಟ್ನಳ್ಳಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಯುನೈಟೆಡ್ ಕಿಂಗ್ಡಮ್ನ ಭಾರತೀಯ ಕುಟುಂಬಗಳಲ್ಲಿ ಗಂಡು ಮಕ್ಕಳಿಗೆ ಹೆಚ್ಚಿದ ಆದ್ಯತೆ?
ಜೈವಿಕ ಮಿತಿಗೂ ಮೀರಿದ ಲಿಂಗಾನುಪಾತ
ಮಂಗಳೂರು: ಮುಕುಂದ್ ರಿಯಾಲ್ಟಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ ಯೋಜನೆಯ ಅನಾವರಣ
ಮಂಗಳೂರು: ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿ ಅತ್ಯಪೂರ್ವ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ನ ನೂತನ ಯೋಜನೆಯನ್ನು ತಣ್ಣೀರುಬಾವಿ ಬೀಚ್ನಲ್ಲಿ ಜರುಗಿದ ಡೆನ್ ಡೆನ್ ಅಂತಾರಾಷ್ಟ್ರೀಯ ಮುಕ್ತ ಈಜು ಚಾಂಪಿಯನ್ಶಿಪ್ ಸಂದರ್ಭ ಸಾಂಕೇತಿಕವಾಗಿ ಗಾಳಿಪಟ ಹಾರಿಸುವ ಮೂಲಕ ಅನಾವರಣಗೊಳಿಸಲಾಯಿತು. ಆಹ್ವಾನಿತ ಅತಿಥಿಗಳು, ಕ್ರೀಡಾಪಟುಗಳು ಮತ್ತು ಸಂಸ್ಥೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಮತ್ತು ಮಂಗಲದೀಪ್ ಎ.ಆರ್. ನೇತೃತ್ವದಲ್ಲಿ ರುದ್ರಾಕ್ಷ್ ಯೋಜನೆಯ ಮಾಹಿತಿ ಪತ್ರ ಅನಾವರಣಗೊಳಿಸಲಾಯಿತು. ಅಭೂತಪೂರ್ವವಾಗಿ ನಡೆದ ಡೆನ್ ಡೆನ್ 2026 ಹೊಸ ಯೋಜನೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತ್ತು. ಮಂಗಳೂರಿನಲ್ಲಿ ಮುಕುಂದ್ ರಿಯಾಲ್ಟಿಯು ಜಾಗತಿಕ ಮಟ್ಟದ ಜೀವನಶೈಲಿ ಆಧಾರಿತ ವಸತಿಗಳನ್ನು ಒದಗಿಸುವ ರುದ್ರಾಕ್ಷ್ ಪರಿಕಲ್ಪನೆಯನ್ನು ಇಲ್ಲಿ ಪರಿಚಯಿಸಿರುವುದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ರುದ್ರಾಕ್ಷ್ - ಹೈ ಲಿವಿಂಣ್ ಲಕ್ಷುರಿ ಹೋಮ್ಸ್: ಮಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರಿಡಾರ್ಗಳಲ್ಲಿ ಒಂದಾದ ಕೊಟ್ಟಾರದ ಇನ್ಫೋಸಿಸ್ ಬಳಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್ಮೆಂಟ್ ಯೋಜನೆಯು ಜಾಗತಿಕ ಮಾನದಂಡಗಳೊಂದಿಗೆ ವಾಸ್ತು ಪ್ರಕಾರವಾಗಿ ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ. ಗುಣಮಟ್ಟದ ಜೀವನ ಶೈಲಿಗೆ ಒಪ್ಪುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇಲ್ಲಿನ ಮನೆಗಳಲ್ಲಿ ವಾಸ ಮಾಡುವವರಿಗೆ ಸುಖ, ಶಾಂತಿ, ನೆಮ್ಮದಿಯೊಂದಿಗೆ ಹೊಸ ಅನುಭವ ನೀಡಲಿದೆ. ಸೌಲಭ್ಯ ಮತ್ತು ವಿನ್ಯಾಸ: ರುದ್ರಾಕ್ಷ್ ಅಪಾರ್ಟ್ಮೆಂಟ್ ನಿವಾಸಿಗಳ ದೈನಂದಿನ ಜೀವನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಅತ್ಯಾಧುನಿಕ ಶ್ರೇಣಿಯ ಸೌಲಭ್ಯಗಳನ್ನು ಕಲ್ಪಿಸಲಿದೆ. ಇವುಗಳಲ್ಲಿ ಭವ್ಯವಾದ ಮೇಲ್ಛಾವಣಿಯ ಪ್ರವೇಶ ಲಾಬಿ, ಸಮುದಾಯ ಮತ್ತು ಮನರಂಜನಾ ಸ್ಥಳಗಳು, ಜಕುಝಿ ಮತ್ತು ಸೌನಾ ಮತ್ತು ನಗರ ಮತ್ತು ಕರಾವಳಿಯ ವಿಹಂಗಮ ನೋಟಗಳನ್ನು ಕಣ್ತುಂಬಿಕೊಳ್ಳಲು ಮೇಲ್ಛಾವಣಿಯ ವ್ಯವಸ್ಥೆಯನ್ನು ಒಳಗೊಂಡಿದೆ. ಯೋಜನೆಯ ವಿಶೇಷತೆ: ರುದ್ರಾಕ್ಷ್ ಯೋಜನೆಯ ಪ್ರಮುಖ ವಿಶೇಷ, ಮಂಗಳೂರಿನ ಮೊಟ್ಟಮೊದಲ 24/7 ಕ್ಲೌಡ್ ಕಿಚನ್ ಅನ್ನು ವಸತಿ ಅಭಿವೃದ್ಧಿಯೊಳಗೆ ಪರಿಚಯಿಸಲಾಗಿದೆ, ಇದು ಮುಕುಂದ್ ರಿಯಾಲ್ಟಿಯ ನಾವೀನ್ಯತೆ ಮತ್ತು ಅನುಕೂಲತೆಗೆ ನಗರ ಜೀವನಶೈಲಿಗೆ ನೀಡಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ರುದ್ರಾಕ್ಷ್ ಐಷಾರಾಮಿ ಮನೆಗಳಿರುವ ಸ್ಥಳವು ಐಟಿ ಹಬ್ಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಮಾರುಕಟ್ಟೆ ಸಹಿತ ವಿವಿಧ ಅಗತ್ಯತೆಗಳ ಕೇಂದ್ರಗಳು ಮತ್ತು ಪ್ರಮುಖ ರಸ್ತೆಗಳಿಗೆ ಅತ್ಯುತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ವೃತ್ತಿಪರರು ಮತ್ತು ಕುಟುಂಬಗಳಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗಲಿದೆ. ಮುಕುಂದ್ ರಿಯಾಲ್ಟಿ: ಮುಕುಂದ್ ರಿಯಾಲ್ಟಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾಗಿದ್ದು, ವಾಸ್ತುಶಿಲ್ಪದ ಗುಣಮಟ್ಟ, ಕ್ರಿಯಾತ್ಮಕ ಯೋಜನೆ ಮತ್ತು ಶಾಶ್ವತ ಮೌಲ್ಯವನ್ನು ಸಂಯೋಜಿಸುವ ಉತ್ತಮವಾಗಿ ವಿನ್ಯಾಸಗೊಳಿಸಿದ ವಸತಿ ಯೋಜನೆಗಳನ್ನು ಗ್ರಾಹಕರಿಗೆ ಕಲ್ಪಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದೆ. ರುದ್ರಾಕ್ಷ್ ಬಿಡುಗಡೆಯೊಂದಿಗೆ, ಕಂಪನಿಯು ಮಂಗಳೂರಿನ ಪ್ರೀಮಿಯಂ ವಸತಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಭದ್ರಗೊಳಿಸಲಿದೆ. ಈ ಮೂಲಕ ಜವಾಬ್ದಾರಿಯುತ ಮತ್ತು ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿಗೆ ತನ್ನ ಕೊಡುಗೆ ಯನ್ನು ಕಲ್ಪಿಸುವ ಆಶಯ ಹೊಂದಿದೆ. “ಆರಾಮ, ಕ್ಷೇಮ ಮತ್ತು ದೀರ್ಘಾವಧಿಯ ಮೌಲ್ಯಕ್ಕೆ ಆದ್ಯತೆ ನೀಡುವ ಚಿಂತನಶೀಲ ಯೋಜಿತ ಬೆಳವಣಿಗೆಗಳಿಗೆ ಕಂಪನಿಯ ಬದ್ಧತೆಯನ್ನು ರುದ್ರಾಕ್ಷ್ ಯೋಜನೆ ಪ್ರತಿಬಿಂಬಿಸುತ್ತದೆ. ಅನುಕೂಲತೆ, ಸಂಪರ್ಕ ಮತ್ತು ಉನ್ನತ ಜೀವನಕ್ಕಾಗಿ ಬಯಸುವ ಮನೆ ಖರೀದಿದಾರರ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ರುದ್ರಾಕ್ಷ್ನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ತಿಳಿಸಿದರು.
ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ನಿರ್ಧಾರ; ಸಿದ್ಧತೆಗೆ ಡಿಸಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ
ಫೆಬ್ರುವರಿಯಲ್ಲಿ ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ನಡೆದಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಂದಿನ ವಾರದೊಳಗೆ ದಾಖಲೆಗಳನ್ನು ಸಿದ್ಧಪಡಿಸಲು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಡಿಜಿಟಲ್ ಹಕ್ಕುಪತ್ರ ವಿತರಣೆಯಿಂದ ಫಲಾನುಭವಿಗಳಿಗೆ ಶಾಶ್ವತ ನೆಮ್ಮದಿ ಸಿಗಲಿದೆ.
WPL 2026: ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ಪ್ಲೇಯಿಂಗ್ 11: ಇಲ್ಲಿದೆ ನೋಡಿ ಸಂಪೂರ್ಣ ವಿವರ
WPL 2026: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಹಾಗಾದ್ರೆ, ಎರಡು ತಂಡಗಳ ಪ್ಲೇಯಿಂಗ್ 11, ಪಂದ್ಯದ ಸಮಯ, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಡಬ್ಲ್ಯೂಪಿಎಲ್ ನಾಲ್ಕನೇ ಸೀಸನ್ ಇದೀಗ ನಿರ್ಣಾಯಕ ಹಂತ ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳುವ ಹೊತ್ತಿಗೆ
ವದಂತಿ, ವಾಸ್ತವದ ನಡುವಿನ ಗೊಂದಲದಲ್ಲಿ ಕೆಜೆ ಜಾರ್ಜ್ ರಾಜೀನಾಮೆ ವಿಚಾರ: ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ
ಹಿರಿಯ ಐಎಎಸ್ ಅಧಿಕಾರಿಗೆ ನೋಟಿಸ್ ನೀಡುವ ವಿಚಾರವಾಗಿ ಮುನಿಸಿಕೊಂಡಿರುವ ಹಿರಿಯ ಸಚಿವ ಕೆಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಸ್ವತಃ ಕೆಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಬಸವಕಲ್ಯಾಣ | ತಾಲೂಕು ಆರೋಗ್ಯಾಧಿಕಾರಿ, ಪಿಎಚ್ಸಿ ಸಿಬ್ಬಂದಿಯ ಅಮಾನತಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ
ಬಸವಕಲ್ಯಾಣ : ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಹಾಗೂ ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸಿದ್ದಣ್ಣಾ ಅವರನ್ನು ಅಮಾನತುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಒತ್ತಾಯಿಸಿದೆ. ಈ ಸಂಬಂಧ ಬುಧವಾರ ಬಸವಕಲ್ಯಾಣದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆ, ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿರುವ ಸಿದ್ದಣ್ಣಾ ಅವರು ಕಳೆದ ಸುಮಾರು 10 ವರ್ಷಗಳಿಂದ ಕರ್ತವ್ಯ ನಿರ್ವಹಿಸದೇ, ಅವರ ಬದಲು ಪುತ್ರ ಮಹೇಶ್ ಅವರು ಕೆಲಸ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಮೈಲಾರೆ ಅವರು ಮಹೇಶ್ ಅವರಿಂದ ಲಂಚ ಪಡೆದು ತಂದೆಯ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದು ಸ್ಪಷ್ಟವಾದ ಅಕ್ರಮ ಹಾಗೂ ಭ್ರಷ್ಟಾಚಾರವಾಗಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ. ಅದೇ ರೀತಿ ಕರ್ತವ್ಯ ಲೋಪ ಎಸಗಿರುವ ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸಿದ್ದಣ್ಣಾ ಅವರನ್ನೂ ಸೇವೆಯಿಂದ ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಗೆ ಸ್ಪಂದಿಸಿ ಒಂದು ತಿಂಗಳ ಒಳಗಾಗಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಉಪವಾಸ ಧರಣಿ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಯ ತಾಲೂಕು ಅಧ್ಯಕ್ಷ ಮಹಾದೇವ್ ಎಂ. ಗಾಯಕವಾಡ್, ಶಹಿದ್ ಪಾಷಾ, ಕವಿರಾಜ್ ದೇವಕರ್, ಸಚಿನ್ ಬಸನಳ್ಳೆ, ಅತೀಶ್ ಗಾಯಕವಾಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇರಾನ್-ಅಮೆರಿಕ ಸಂಘರ್ಷ: ಕಚ್ಚಾ ತೈಲ ದರಕ್ಕೆ ಬಿತ್ತು ಬೆಂಕಿ, ಬ್ರೆಂಟ್ ತೈಲ ಬೆಲೆ 70 ಡಾಲರ್ಗೆ ಜಿಗಿತ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಬೆದರಿಕೆ ಹಾಕಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 70 ಡಾಲರ್ ಗಡಿ ದಾಟಿದೆ. ಸೆಪ್ಟೆಂಬರ್ ನಂತರ ತೈಲ ಬೆಲೆ ಇಷ್ಟು ಏರಿಕೆಯಾಗಿರುವುದು ಇದೇ ಮೊದಲು. ಇರಾನ್ ಅಣುಬಾಂಬ್ ತಯಾರಿಸುವುದನ್ನು ನಿಲ್ಲಿಸಿ ಮಾತುಕತೆಗೆ ಬರಬೇಕು ಎಂದು ಟ್ರಂಪ್ ಎಚ್ಚರಿಸಿದ್ದರೆ, ಇರಾನ್ ಕೂಡ ಅಮೆರಿಕಕ್ಕೆ ಪ್ರಬಲ ತಿರುಗೇಟು ನೀಡಿದೆ. ಈ ಬೆಳವಣಿಗೆಯಿಂದ ಇರಾನ್ನ ತೈಲ ಉತ್ಪಾದನೆ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಸಾಗಾಟಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ.
Government Employees: ಸರ್ಕಾರಿ ನೌಕರರಿಗೆ ಗುಡ್ನ್ಯೂಸ್: ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದಂತಾಗಿದೆ. ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ
ಯಾದಗಿರಿ | ಪರಿಶಿಷ್ಟ ಪಂಗಡ ಹಕ್ಕುಗಳ ರಕ್ಷಣೆಗೆ ಫೆ.2ರಿಂದ ಶಾಸಕರ ಮನೆ ಮುಂದೆ ಸಾಂಕೇತಿಕ ಧರಣಿ : ಮರೆಪ್ಪ ನಾಯಕ
ಯಾದಗಿರಿ : ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳು, ಮೀಸಲಾತಿ ಹಾಗೂ ಅಭಿವೃದ್ಧಿ ಯೋಜನೆಗಳ ರಕ್ಷಣೆಗೆ ಆಗ್ರಹಿಸಿ ಫೆ.2ರಿಂದ 6ರವರೆಗೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರ ಮನೆಗಳ ಮುಂದೆ ಸಾಂಕೇತಿಕ ಪ್ರತಿಭಟನೆ ಮತ್ತು ಧರಣಿ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ನಾಯಕ ಮಗದಂಪೂರ ತಿಳಿಸಿದ್ದಾರೆ. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೇಡ, ವಾಲ್ಮೀಕಿ, ನಾಯಕ ಸೇರಿದಂತೆ 51 ಪರಿಶಿಷ್ಟ ಪಂಗಡ ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು 11,000 ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ಸಮಾಜದ ಮೇಲಿನ ಸರ್ಕಾರದ ದ್ರೋಹವಾಗಿದೆ ಎಂದು ಅವರು ಕಿಡಿಕಾರಿದರು. ಜೊತೆಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಶಾಲೆ–ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಪ್ರೋತ್ಸಾಹ ಧನ ಮತ್ತು ಸಹಾಯಧನಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್ಡಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಹಾಯಧನವನ್ನೂ ತಡೆಹಿಡಿಯಲಾಗಿದೆ. ಇದರಿಂದ ಸಮಾಜದ ಶಿಕ್ಷಣ ಮತ್ತು ಅಭಿವೃದ್ಧಿ ಕನಿಷ್ಠ 20 ವರ್ಷ ಹಿಂದಕ್ಕೆ ಸರಿದಿದೆ ಎಂದು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಲಿ/ಕಬ್ಬಲಿಗ ಜನಾಂಗಕ್ಕೆ ಸಂಬಂಧಿಸಿದ ಹೇಳಿಕೆಗಳು ಜಾತಿ ವೈಷಮ್ಯ ಉಂಟುಮಾಡಿ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಾರಣವಾಗಿವೆ. ಇದರ ಪರಿಣಾಮವಾಗಿ 15 ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಸೋಲು ಕಂಡಿದೆ. ಇದು ಸಮಾಜ ನೀಡಿದ ಪಾಠವಾಗಿದೆ ಎಂದು ಮರೆಪ್ಪ ನಾಯಕ ಹೇಳಿದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರು ಹಾಗೂ ಸಮಾಜದ ಸಚಿವರು ವಿಧಾನಸಭೆಗಳಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತದಿರುವುದು ಅವರ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಫೆ.2ರಿಂದ 6ರವರೆಗೆ ಪ್ರತಿದಿನ ಒಂದೊಂದು ಶಾಸಕರ ಮನೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ದಪ್ಪಚರ್ಮದ ರಾಜಕಾರಣಿಗಳಿಗೆ ಸಮಾಜದ ನೋವು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ಈ ಧರಣಿಯಲ್ಲಿ ಹೋರಾಟಗಾರರು, ವಿಚಾರವಾದಿಗಳು, ವಿದ್ಯಾರ್ಥಿಗಳು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ದೊರೆ, ಸಾಬುಗೌಡ ಗೌಡಗೇರಾ, ದೊಡ್ಡಯ್ಯ ನಾಯಕ, ಶರಣಪ್ಪ ಜಾಕನಳ್ಳಿ, ಮರೆಪ್ಪ ಪ್ಯಾಟಿ, ನಿಂಗಣ್ಣ ಜೇವರ್ಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಜ.3ರಿಂದ ದ.ಕ. ಜಿಲ್ಲೆಯಲ್ಲಿ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ
ಮಂಗಳೂರು, ಜ.29: ದ.ಕ. ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮ 2026 ಜ.30ರಿಂದ ಫೆ.13ರವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತಿಮ್ಮಯ್ಯ ಎಚ್.ಆರ್. ತಿಳಿಸಿದ್ದಾರೆ. ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನರಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಸಮುದಾಯದ ಮನೆ ಬಾಗಿಲಿಗೆ ಕುಷ್ಠ ರೋಗದ ಬಗ್ಗೆ ಮಾಹಿತಿ , ಕುಷ್ಠರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ಮತ್ತು ಸಾಮಾಜಿಕ ತಾರತಮ್ಯಗಳನ್ನು ನಿವಾರಿಸುವ ಜೊತೆಗೆ ಶೀಘ್ರ ಕುಷ್ಠರೋಗಿಗಳ ಪತ್ತೆ ಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ಕುಷ್ಠರೋಗವು ಮೈಕೋಬ್ಯಾಕ್ಟಿರಿಯಂ ಲೆಪ್ರೇ ಎಂಬ ಸೂಕ್ಷ್ಮರೋಗಾಣುವಿನಿಂದ ಬರುವ ಕಾಯಿಲೆ ಹಾಗೂ ಇದು ನಿಧಾನವಾಗಿ ಹರಡುವ ಸೋಂಕು ರೋಗವಾಗಿದೆ. ಇದು ಮುಖ್ಯವಾಗಿ ಚರ್ಮ ಮತ್ತು ನರಗಳಿಗೆ ಬರುವ ಖಾಯಿಲೆ.ರೋಗದ ಮೊದಲ ಲಕ್ಷಣಗಳು 2-5 ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು. ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು.ಕೈಕಾಲುಗಳಲ್ಲಿ ಜೋಮು ಉಂಟಾಗುವುದು ಮತ್ತು ಮರಗಟ್ಟುವುದು.ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊ ಳ್ಳುವುದು ಮತ್ತು ಎಣ್ಣೆ ಸವರಿದಂತೆ ಚರ್ಮ ಕಾಣಿಸಿಕೊಳ್ಳುವುದು.ನರಗಳ ಊತವಾಗುವಿಕೆ (ನ್ಯೂರೈಟಿಸ್) ಈ ರೋಗದ ಲಕ್ಷಣಗಳಾಗಿದೆ ಎಂದು ವಿವರಿಸಿದರು. *47 ಪ್ರಕರಣಗಳು ಪತ್ತೆ : ದ.ಕ. ಜಿಲ್ಲೆಯಲ್ಲಿ 2025 ಎಪ್ರಿಲ್ನಿಂದ ಡಿಸೆಂಬರ್ ಅಂತ್ಯದ ತನಕ 47 ಮಂದಿ ಕುಷ್ಠ ರೋಗ ಬಾಧಿಸಿರುವುದು ದೃಢಪಟ್ಟಿತ್ತು. ಇದರಲ್ಲಿ 30 ಮಂದಿ ದ.ಕ. ಜಿಲ್ಲೆ ನಿವಾಸಿಗಳಿಗೆ ಮತ್ತು 17 ಹೊರಗಿನಿಂದ ಬಂದವರಲ್ಲಿ ಕುಷ್ಠರೋಗ ಕಂಡು ಬಂದಿದೆ. ಈ ಪೈಕಿ ಗಂಭೀರ ಪ್ರಕರಣಗಳು 42( ದ.ಕ. ಜಿಲ್ಲೆ 25, ಹೊರಗಿನ 17), ಆರಂಭಿಕ ಹಂತ 5, ಜಿಲ್ಲೆಯ 1 ಮಗುವಿಗೆ ಕುಷ್ಠರೋಗದ ಲಕ್ಷಣ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು. 2020-21ರಲ್ಲಿ 29, 2021-22ರಲ್ಲಿ 39, 2022-23ರಲ್ಲಿ 75, 2023-24ರಲ್ಲಿ 62, 2024-25ರಲ್ಲಿ 43 ಕುಷ್ಠ ರೋಗ ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ದೃಢಪಟ್ಟಿತ್ತು ಎಂದು ಡಾ. ತಿಮ್ಮಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಷಯ ರೋಗ ನಿಯಂತ್ರಣಧಿಕಾರಿ ಡಾ. ದಿಲ್ಶಾದ್ ಖತೀಜ ಎಂ.ಪಿ., ವೈದ್ಯಾಧಿಕಾರಿಗಳಾದ ಡಾ.ಸುದರ್ಶನ್, ಡಾ.ಸುಜಯ್ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಕಿರಾಅತ್ ಸ್ಪರ್ಧೆ: ಕಾಸರಗೋಡಿನ ಉಮರ್ ಮುಕ್ತಾರ್ ಪ್ರಥಮ
ಮಂಗಳೂರು, ಜ.29: ಯುವ ಪೀಳಿಗೆಗೆ ಪವಿತ್ರ ಕುರಾನ್ ಪಠಣದ ಮಹತ್ವವನ್ನು ತಲುಪಿಸುವ ಉದ್ದೇಶದಿಂದ ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ನಗರದ ಇಂಡಿಯಾನ ಕನ್ವೆನ್ಶನ್ ಹಾಲ್ನಲ್ಲಿ ರಾಷ್ಟ್ರಮಟ್ಟದ ಮುಕ್ತ ಕಿರಾಅತ್ ಸ್ಪರ್ಧೆಯು ಬುಧವಾರ ಜರುಗಿತು. ರಾಷ್ಟ್ರಮಟ್ಟದ ಈ ಸ್ಪರ್ಧೆಗೆ 2,252 ಮಂದಿ ಆನ್ಲೈನ್ ಮೂಲಕ ಕಿರಾಅತ್ ವೀಡಿಯೊಗಳನ್ನು ಕಳುಹಿಸಿದ್ದರು. ಖ್ಯಾತ ವಿದ್ವಾಂಸರಿಂದ ನಡೆದ ತಾಂತ್ರಿಕ ಪರಿಶೀಲನೆಯ ನಂತರ 50 ಸ್ಪರ್ಧಿಗಳನ್ನು (40 ಮಂದಿ ಹುಡುಗರು ಮತ್ತು 10 ಮಂದಿ ಹುಡುಗಿಯರು) ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕ, ಕೇರಳ, ಗೋವಾ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಿಗಳು ಅಂತಿಮ ಹಂತದಲ್ಲಿ ಪೈಪೋಟಿ ನೀಡಿದರು. ಉತ್ತರ ಪ್ರದೇಶದ ಶೈಖ್ ಸರ್ಫರಾಝ್ ಅಝ್ಹರಿ ಮತ್ತು ಹೈದರಾಬಾದ್ನ ಖಾರಿ ಅಹ್ಮದ್ ಮುನೀರ್ ತೀರ್ಪುಗಾರರಾಗಿದ್ದರು. ಯುವಜನತೆಯನ್ನು ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರವಿಟ್ಟು, ಆಧ್ಯಾತ್ಮಿಕ ಶಿಕ್ಷಣದತ್ತ ಕೊಂಡೊಯ್ಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಭಾರತದಲ್ಲಿ ನಡೆದ ಮೊದಲ ರಾಷ್ಟ್ರಮಟ್ಟದ ಮುಕ್ತ ಕಿರಾಅತ್ ಸ್ಪರ್ಧೆ ಇದಾಗಿದ್ದು, ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಆಯೋಜಕ ಅಬ್ದುಲ್ ಶಕೀಲ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಹಝರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಯು.ಟಿ.ಇಫ್ತಿಕಾರ್, ರಮಾನಾಥ ರೈ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಪೂಜಾರಿ, ಕೆ.ಕೆ. ಶಾಹುಲ್ ಹಮೀದ್, ಎಸ್.ಎಂ. ರಶೀದ್ ಹಾಜಿ, ನಾಸಿರ್ ಲಕ್ಕಿಸ್ಟಾರ್, ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕ ಅಬ್ದುಲ್ ಶಕೀಲ್ರನ್ನು ಸನ್ಮಾನಿಸಲಾಯಿತು. ಸಲಾಹ್ ಕುತ್ತಾರ್, ಸಮ್ರಾನ್, ಶೈಬಾನ್ ಮಾಡನ್ನೂರು ಕಾರ್ಯಕ್ರಮ ನಿರೂಪಿಸಿದರು. * ಪ್ರಥಮ ಸ್ಥಾನ: ಉಮರ್ ಮುಕ್ತಾರ್ ಬಿ.ಎಂ. (ಕಾಸರಗೋಡು, ಕೇರಳ) *ದ್ವಿತೀಯ ಸ್ಥಾನ: ಮುಹಮ್ಮದ್ ರಶಾದ್ (ಪಾಲಕ್ಕಾಡ್, ಕೇರಳ) * ತೃತೀಯ ಸ್ಥಾನ: ಮುಹಮ್ಮದ್ ಸಾದ್ (ಮೈಸೂರು, ಕರ್ನಾಟಕ) ಪ್ರಥಮ ಸ್ಥಾನ ವಿಜೇತರಿಗೆ 1,11,111 ರೂ., ದ್ವಿತೀಯ ಸ್ಥಾನ ವಿಜೇತರಿಗೆ 55,555 ರೂ. ತೃತೀಯ ಸ್ಥಾನ ವಿಜೇತರಿಗೆ 33,333 ರೂ. ಬಹುಮಾನದ ಚೆಕ್ ವಿತರಿಸಲಾಯಿತು.
Miracle in China: 55 ದಿನ ಕೋಮಾದಲ್ಲಿದ್ದ ಬಾಲಕ ಎಚ್ಚರವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಕೆಲವೊಮ್ಮೆ ಪ್ರೀತಿ ಮತ್ತು ನಂಬಿಕೆಯ ಮುಂದೆ ಸೋಲುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಳೆದ ನವೆಂಬರ್ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಕೋಮಾಗೆ ಜಾರಿದ್ದ 8 ವರ್ಷದ ಲಿಯು ಚುಕ್ಸಿ (Liu Chuxi) ಎಂಬ ಬಾಲಕ, ಬರೋಬ್ಬರಿ 55 ದಿನಗಳ ನಂತರ ತನ್ನ ಸಹಪಾಠಿಗಳ ಧ್ವನಿ ಕೇಳಿ ಪವಾಡಸದೃಶ
ವಿಜಯನಗರ | ರಾಜ್ಯ ಸರಕಾರದ ಸರಳ ವಿವಾಹ ಯೋಜನೆಯ ಸದುಪಯೋಗ ಪಡೆದುಕೊಳ್ಳಿ : ಶಾಸಕ ಎಚ್.ಆರ್.ಗವಿಯಪ್ಪ
ಸರಳ ವಿವಾಹ ಯೋಜನೆಯಡಿ 10 ಮುಸ್ಲಿಂ ನವ ಜೋಡಿಗಳ ಸಾಮೂಹಿಕ ವಿವಾಹ
ಕಲಬುರಗಿ | ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿ ಫಾರೂಕ್ ಪಟೇಲ್ ಮುದಬಾಳ ಆಯ್ಕೆ
ಕಲಬುರಗಿ : ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಲಬುರಗಿ ಜಿಲ್ಲಾ ಸಂಚಾಲಕರಾಗಿ ಫಾರೂಕ್ ಪಟೇಲ್ ಮುದಬಾಳ ಅವರನ್ನು ಆಯ್ಕೆ ಮಾಡಲಾಗಿದೆ. ಈ ನೇಮಕಕ್ಕೆ ಕಾರಣಿಕರ್ತರಾದ ಕರ್ನಾಟಕ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದು ಹಳ್ಳೆಗೌಡ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಫಾರೂಕ್ ಪಟೇಲ್ ಮುದಬಾಳ ಅವರು ಕೃತಜ್ಞತೆ ಸಲ್ಲಿಸಿದರು. ನನಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಶ್ರದ್ದೆಯಿಂದ ನಿರ್ವಹಿಸುತ್ತೇನೆ. ಯುವ ಕಾಂಗ್ರೆಸ್ ಹಾಗೂ ಪಕ್ಷದ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಯುವಿ ಅನಿರೀಕ್ಷಿತವಾಗಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದೇಕೆ? ನಿವೃತ್ತಿಯಾಗಿ 7 ವರ್ಷಗಳ ಬಳಿಕ ಬಾಯಿಬಿಟ್ಟ ಸಂಗತಿ!
Yuvraj Singh On His Retirement- 2019ರ ವಿಶ್ವಕಪ್ ನಲ್ಲಿ ಸ್ಥಾನ ಸಿಗದ ಬೇಸರದಲ್ಲಿ ಕ್ರಿಕೆಟ್ ಗೆ ಗುಡ್ ಹೇಳಿದ್ದರು ಯುವರಾಜ್ ಸಿಂಗ್. ಅದಾಗಿ ಆರು ವರ್ಷಗಳಲ್ಲೂ ತಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಅವರು ಎಲ್ಲೂ ಮುಕ್ತವಾಗಿ ಮಾತನಾಡಿರಲಿಲ್ಲ. ಇದೀಗ ಕೆಲವೊಂದು ವಿಚಾರಗಳನ್ನುಮಾರ್ಮಿಕವಾಗಿ ಹೇಳಿದ್ದಾರೆ. ತಮಗೆ ಗೌರವ ಮತ್ತು ಬೆಂಬಲ ಸಿಗುತ್ತಿಲ್ಲ ಎಂಬ ಭಾವನೆ ಅತಿಯಾಗಿ ಕಾಡುತ್ತಿತ್ತು. ಆಟವನ್ನು ಆನಂದಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಏಕೆ ಆಡಬೇಕು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದರಿಂದ ಈ ನಿರ್ಧಾರಕ್ಕೆ ಬಂದೆ ಎಂದು ತಿಳಿಸಿದ್ದಾರೆ.
ನೀವು ಬೆಂಗಳೂರಿನ ಹಳೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ದರೆ ಬರಲಿದೆ ಹೊಸ ರೂಲ್ಸ್
15 ವರ್ಷ ಹಳೆಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿರುವಂತೆ, 30 ವರ್ಷ ಮೇಲ್ಪಟ್ಟ ಬೆಂಗಳೂರಿನ ಅಪಾರ್ಟ್ಮೆಂಟ್ಗಳ ಗುಣಮಟ್ಟ ಪರಿಶೀಲನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2025ರ ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ ಮತ್ತು ನಿರ್ವಹಣಾ ಕಾಯ್ದೆಯನ್ನು ರೂಪಿಸಿದೆ. ಈ ಕಾಯ್ದೆಯು ಹಳೆಯ ಅಪಾರ್ಟ್ಮೆಂಟ್ಗಳ ಪುನರುತ್ಥಾನ, ಮೂಲಸೌಕರ್ಯ ಸುಧಾರಣೆ ಮತ್ತು ಮಾಲೀಕರ ಹಕ್ಕುಗಳ ಸ್ಪಷ್ಟತೆಗೆ ಒತ್ತು ನೀಡುತ್ತದೆ.
ಜಪಾನ್ ರಾಜಧಾನಿ ಟೋಕಿಯೊದಲ್ಲಿ ಎಳ್ಳು-ಬೆಲ್ಲದ ಘಮ; ಕನ್ನಡ ಸಂಘದ ವತಿಯಿಂದ ಸಂಕ್ರಾತಿ ಹಬ್ಬ ಆಚರಣೆ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ಕುವೆಂಪು ಅವರ ವಾಣಿಯಂತೆ, ಜಪಾನ್ನಲ್ಲಿರುವ ಕನ್ನಡಿಗರು ವಿಜೃಂಭಣೆಯ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ, ತಮ್ಮೊಳಗಿನ ಕನ್ನಡಿಗನನ್ನು ಸ್ಮರಿಸಿದ್ದಾರೆ. ಜಪಾನ್ ಕನ್ನಡ ಸಂಘದ ವತಿಯಿಂದ ರಾಜಧಾನಿ ಟೋಕಿಯೊದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದ್ದು, ಇದರಲ್ಲಿ ಸ್ಥಳೀಯರೂ ಕೂಡ ಭಾಗವಹಿಸಿ ವಿಶೇಷತೆ ಮೆರೆದಿದ್ದಾರೆ. ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡರಲ್ಲದೇ, ವಿಶೇಷ ಪೂಜೆ ನೆರವೇರಿಸಿ ಹಬ್ಬವನ್ನು ಆಚರಿಸಲಾಯಿತು. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಸುಳ್ಯ: ರಸ್ತೆ ಅಪಘಾತ; ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ್ಯು
ಸುಳ್ಯ: ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಎದುರಿನಿಂದ ಬಂದ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ಸಂಭವಿಸಿದೆ. ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದು ಈ ವೇಳೆ ಎದುರಿನಿಂದ ಬರುತ್ತಿದ್ದ ಲಾರಿ ಅಡಿಗೆ ರಿಕ್ಷಾ ಚಾಲಕ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಚಾಲಕನನ್ನು ಸುಂದರ ಚಿಟ್ಟಿಕ್ಕಾನ ( 56) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
WPL 2026: ಆರ್ಸಿಬಿ, ಯುಪಿ ವಾರಿಯರ್ಸ್ಗೆ ಮಹತ್ವದ ಪಂದ್ಯ: ಎರಡು ತಂಡಗಳ ಮುಂದಿರುವ ಪ್ರಮುಖ ಸವಾಲುಗಳು
WPL 2026 RCB: ಡಬ್ಲ್ಯೂಪಿಎಲ್ 2026 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿವೆ. ಎರಡು ತಂಡಗಳಿಗೂ ಈ ಪಂದ್ಯ ಪ್ರಮುಖವಾಗಿದ್ದು, ಹೈವೋಲ್ಟೇಜ್ ಆಗಿರಲಿದೆ. ಹಾಗಾದ್ರೆ, ಪ್ರಮುಖ ಸವಾಲುಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 7 ಪಂದ್ಯಗಳಲ್ಲಿ 5 ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ
ಜ.31ರಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ
ಮಂಗಳೂರು, ಜ.29: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಮತ್ತು ಅನುವಾದ ಪ್ರಶಸ್ತಿ ಪದಾನ ಕಾರ್ಯಕ್ರಮ ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಜ.31 ಮತ್ತು ಫೆ.1ರಂದು ನಡೆಯಲಿದೆ. ಜ.31ರಂದು ಸಂಜೆ 5ಕ್ಕೆ ಮಂಗಳೂರು ಸಾಧನಾ ಬಳಗ ಶ್ರಿ ಪ್ರಕಾಶ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು ಭಕ್ತ ಪುರಂದರ ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅಂದು ಸಂಜೆ 7ಕ್ಕೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಜನಪ್ರಿಯ ಚಿಕೆ ರಾಬ್ (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶಿಸಲಿದ್ದಾರೆ. ಫೆ.1ರಂದು ಸಂಜೆ 5ಕ್ಕೆ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದಿಂದ ಹೆಡೋನಿಸ್ಟ್ ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಅಂದು ಸಂಜೆ 7ಕ್ಕೆ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ತಂಡದಿಂದ ಪಾರಿಜಾತ ಫೂಲ್ ಗೀತ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.1ರಂದು ಸಂಜೆ 6ಕ್ಕೆ ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾರಿ ಮತ್ತು ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಹಾಲು ಬೆರೆಸಿದ ಕಾಫಿಗಿಂತ ಕರಿ ಕಾಫಿ ಉತ್ತಮ!; ವೈದ್ಯರು ಹೇಳುವುದೇನು?
ಕಾಫಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಚರ್ಚಿತ ವಿಚಾರ. ಇತ್ತೀಚೆಗೆ ಕರಿಕಾಫಿಯಿಂದ ಅಡ್ಡಪರಿಣಾಮಗಳಿವೆ ಎಂದು ವರದಿಯಾಗಿತ್ತು. ಈ ಕುರಿತು ವೈದ್ಯರು ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ. ಕರಿ ಕಾಫಿಯ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ. ಬೆಳಗ್ಗೆ ಎದ್ದು ಹಾಲಿನ ಕಾಫಿ ಕುಡಿಯುವ ಬದಲಾಗಿ ಸಕ್ಕರೆ ಬೆರೆಸದ ಕರಿ ಕಾಫಿ ಕುಡಿದರೆ ಚೆನ್ನಾಗಿರುತ್ತದೆ ಎಂದು ಅನೇಕ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಡಾ. ಸಬಾ ಉಸ್ಮಾನ್, “ಒಮ್ಮೆ ನೀವು ಕರಿ ಕಾಫಿಯನ್ನು ಸಕ್ಕರೆ ಬೆರೆಸದೆ ಸೇವಿಸಲು ಆರಂಭಿಸಿದರೆ ಮತ್ತೆ ಹಿಂತಿರುಗಿ ನೋಡಬೇಕಾಗಿಲ್ಲ. ಇದು ರುಚಿ ಮಾತ್ರವಲ್ಲ. ಸಿಹಿಯ ಬದಲಾಗಿ ಅಧಿಕೃತವಾದುದನ್ನು ಸೇವಿಸುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ ಮಿಲಾದ್ ಶಾರಿಫ್ಪೌರ್ ಅವರ ಪ್ರಕಾರ, “ಕರಿಕಾಫಿಯನ್ನು ಹಾಲು, ಕ್ರೀಮ್ ಅಥವಾ ಸಕ್ಕರೆ ಬೆರೆಸದೆ ಸೇವಿಸಿದರೆ ಸಮಸ್ಯೆಯಿಲ್ಲ. ಶಸ್ತ್ರಚಿಕಿತ್ಸೆಗೆ ಎರಡು ಗಂಟೆಗಳಿಗೆ ಮೊದಲು ಕೂಡ ಇದನ್ನು ಸೇವಿಸಬಹುದು. ಹೀಗಾಗಿ ರೋಗಿಗಳಿಗೆ ಬೆಳಗಿನ ಕಾಫಿ ಕುಡಿಯದಂತೆ ಸೂಚಿಸುವುದು ತಪ್ಪು.” ಬಹುತೇಕರು ಕರಿ ಕಾಫಿಯಿಂದ ಅಡ್ಡಪರಿಣಾಮಗಳಾಗುತ್ತವೆ ಎಂದು ಹೇಳುತ್ತಾರೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಲಿವರ್ ಡಾಕ್ ಎಂದು ಪ್ರಸಿದ್ಧಿ ಪಡೆದ ಸಿರಿಯಾಕ್ ಅಬಿ ಫಿಲಿಪ್ಸ್ ಹೇಳುವ ಪ್ರಕಾರ ಕರಿಕಾಫಿಯಿಂದ ಅಡ್ಡಪರಿಣಾಮಗಳಾಗುತ್ತವೆ ಎನ್ನುವುದು ಸುಳ್ಳು. ಅವರ ಪ್ರಕಾರ ಕರಿಕಾಫಿ ನಿರಂತರವಾಗಿ ಆರೋಗ್ಯ ಲಾಭಗಳಿಗೆ ಕಾರಣವಾಗಿದೆ. ಕರಿಕಾಫಿಯಿಂದ ಅಡ್ಡಪರಿಣಾಮಗಳಿಲ್ಲ! ಜೀರ್ಣದ ಸಮಸ್ಯೆ ಇದ್ದವರು ಕರಿಕಾಫಿ ಕುಡಿಯಬಾರದು ಎನ್ನುವ ಪ್ರಚಲಿತವಾದ ಮಾತು ಸುಳ್ಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗ್ಯಾಸ್ಟ್ರಿಕ್, ಅಲ್ಸರ್, ರಿಫ್ಲಕ್ಸ್ ಅನ್ನನಾಳದ ಉರಿಯೂತ ಮೊದಲಾದ ಕಾಯಿಲೆಗಳಿಗೂ ಕಾಫಿ ಸೇವನೆಗೂ ಸಂಬಂಧವಿಲ್ಲ ಎನ್ನುವುದು ಜಪಾನ್ನ ಅಧ್ಯಯವನೊಂದು ಬಹಿರಂಗಪಡಿಸಿದೆ. ಹಾಗೆಯೇ ಕರಿಕಾಫಿ ನಿದ್ರೆಗೆ ಸಮಸ್ಯೆ ಒಡ್ಡಲಿದೆ ಎನ್ನುವುದೂ ತಪ್ಪು. ಕರಿಕಾಫಿಯಲ್ಲ, ಕೆಫೈನ್ ನಿದ್ರೆಗೆ ಸಮಸ್ಯೆಯೊಡ್ಡುತ್ತದೆ. ಆದರೆ ಒಟ್ಟಾರೆ ನಿದ್ರೆಯಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ ಎಂದು ಅವರು ಅಧ್ಯಯನವೊಂದನ್ನು ಮುಂದಿಟ್ಟು ವಿವರಿಸಿದ್ದಾರೆ. ಹಾಗೆಯೇ ಕರಿಕಾಫಿ ಆತಂಕ (anxiety) ಖಾಯಿಲೆಗೆ ಕಾರಣವಾಗಬಹುದು ಎನ್ನುವುದನ್ನೂ ಅವರು ಸುಳ್ಳು ಎಂದು ಹೇಳಿದ್ದಾರೆ. ತಮ್ಮ ವಾದಕ್ಕೆ ಪುಷ್ಠಿ ನೀಡುವ ಅಧ್ಯಯನದ ದಾಖಲೆಗಳನ್ನು ಅವರು ಮುಂದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ವಿವರ ನೀಡಿದ ಕಿಮ್ಸ್ ಆಸ್ಪತ್ರೆಯ ಆಹಾರ ತಜ್ಞೆ ಡಾ ಅಮ್ರೀನ್ ಶೇಕ್ ಪ್ರಕಾರ, ಗ್ಯಾಸ್ಟ್ರಿಕ್ಸ್, ಆತಂಕದ (anxiety) ಅಥವಾ ನಿದ್ರೆಯ ಸಮಸ್ಯೆ ಇರುವವರು ಕರಿಕಾಫಿಯನ್ನು ಸೇವಿಸುವುದು ಕಡಿಮೆಗೊಳಿಸಬೇಕು. ದಿನಕ್ಕೆ 1-2 ಕಪ್ಗಳು ಸಾಕು. ತಡಸಂಜೆ ಸೇವಿಸಬಾರದು. ಅಮ್ರೀನ್ ಶೇಕ್ ಪ್ರಕಾರ, ಹಾಲಿನ ಚಹಾವನ್ನು ಸಕ್ಕರೆ ಹಾಕಿ ಕುಡಿದರೆ ಹಾಲಿನ ಕೊಬ್ಬಿನಿಂದ ಕ್ಯಾಲರಿಗಳು ಮತ್ತು ಲ್ಯಾಕ್ಟೋಸ್ ಕೂಡ ದೇಹವನ್ನು ಸೇರುತ್ತದೆ. ಬದಲಾಗಿ ಕರಿ ಕಾಫಿ ಕ್ಯಾಲರಿ ರಹಿತವಾಗಿರುತ್ತದೆ. ಬಹಳಷ್ಟು ಮಂದಿ ಕರಿ ಕಾಫಿ ಕುಡಿದ ನಂತರ ಹೊಟ್ಟೆ ಉಬ್ಬರಿಸುವುದು ಕಡಿಮೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಅಮ್ರೀನ್ ಹೇಳುವ ಪ್ರಕಾರ, ಅಸಿಡಿಟಿ ಅಥವಾ ಆಮ್ಲೀಯ ರಿಫ್ಲೆಕ್ಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನನುಕೂಲವಾಗಬಹುದು. ಹೀಗಾಗಿ ಹಾಲಿಲ್ಲದೆ ಬೆಳಗಿನ ಬದಲು ಸಂಜೆ ಕುಡಿಯುವುದು ಉತ್ತಮ. ತೂಕ ಇಳಿಸಲು ಕರಿ ಕಾಫಿ ಸಹಕಾರಿ ಅಮ್ರೀನ್ ಹೇಳುವ ಪ್ರಕಾರ, ಕಾಫಿಯಿಂದ ಹಾಲು ಮತ್ತು ಸಕ್ಕರೆ ತೆಗೆದು ಬಳಸುವುದರ ಪರಿಣಾಮ ಆರು ತಿಂಗಳಲ್ಲಿ ತಿಳಿದು ಬರಲಿದೆ. ಕರಿಕಾಫಿಯಿಂದ ತೂಕ ಇಳಿಕೆಯಾಗದೆ ಇದ್ದರೂ, ಸಮತೋಲಿತ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯಿಂದ ತೂಕವನ್ನು ನಿರ್ವಹಣೆ ಮಾಡಬಹುದಾಗಿದೆ. ಕೆಫೈನ್ನಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ವ್ಯಾಯಾಮದ ಸಂದರ್ಭದಲ್ಲಿ ಕೊಬ್ಬು ಕರಗಿಸಲು ನೆರವಾಗಬಹುದು. ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಲಾಭಗಳಿವೆಯೆ? ಅಮ್ರೀನ್ ಪ್ರಕಾರ ಕರಿ ಕಾಫಿಗೆ ಬದಲಾಗುವುದರಿಂದ ಹಾಲಿನಿಂದಾಗಬಹುದಾದ ಸಕ್ಕರೆ ಏರಿಕೆಯನ್ನು ತಪ್ಪಿಸಬಹುದು. “ಇನ್ಸುಲಿನ್ ರೆಸಿಸ್ಟನ್ಸ್ ಅಥವಾ ಮಧುಮೇಹ ಪೂರ್ವದ ಸ್ಥಿತಿ ಇರುವವರಿಗೆ ಹಾಲು ಕಾಫಿಗೆ ಬದಲಾಗಿ ಕರಿಕಾಫಿ ಸೇವಿಸಲು ಆರಂಭಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು. ಕಾಲಾನುಸಾರ ಇನ್ಸುಲಿನ್ ಸಂವೇದನೆ ಸುಧಾರಿಸಬಹುದು. ಒಟ್ಟು ಸಕ್ಕರೆ ಪ್ರಮಾಣ ಸೇವನೆ ಕಡಿಮೆಯಾಗಬಹುದು.”
ರಾಜ್ಯದ ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಬಂಪರ್ ಗಿಫ್ಟ್, ಸಿಗಲಿದೆ ಕಡ್ಡಾಯ ರಜೆ; ಯಾವ್ಯಾವ ದಿನ?
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಜನವರಿ 29 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಇನ್ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂದು ರಜೆ ಕೇಳಿದರೆ, ಮೇಲಧಿಕಾರಿಗಳು ಕಡ್ಡಾಯವಾಗಿ ರಜೆ ನೀಡಬೇಕಿದೆ. ಕಠಿಣ ಕೆಲಸದ ಒತ್ತಡದ ನಡುವೆ ಸಿಬ್ಬಂದಿಗೆ ಮಾನಸಿಕ ನೆಮ್ಮದಿ, ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಮತ್ತು ಕೆಲಸದ ಕಡೆಗೆ ಹೆಚ್ಚಿನ ಉತ್ಸಾಹ ತುಂಬುವ ಉದ್ದೇಶದಿಂದ ಈ ಮಾನವೀಯ ಕ್ರಮ ಕೈಗೊಳ್ಳಲಾಗಿದೆ.
ಕಲಬುರಗಿ | ಬಸ್-ಲಾರಿ ಮಧ್ಯೆ ಢಿಕ್ಕಿ : 8 ಮಂದಿಗೆ ಗಂಭೀರ ಗಾಯ
ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಎಂಟು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೇವರ್ಗಿ ರಸ್ತೆಯ ಹಸನಾಪೂರ್ ಕ್ರಾಸ್ ಬಳಿ ಬುಧವಾರ ನಡೆದಿದೆ. ಕಲಬುರಗಿಯಿಂದ ರಾಯಚೂರಿನತ್ತ ಹೊರಟಿದ್ದ ಕೆಕೆಆರ್ಟಿಸಿ ಬಸ್ ಹಸನಾಪೂರ್ ಕ್ರಾಸ್ ಸಮೀಪಕ್ಕೆ ತಲುಪುತ್ತಿದ್ದಾಗ, ಜೇವರ್ಗಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಲಾರಿಯೊಂದಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಕೂಡ ಬಸ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಎಂಟು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಜೇವರ್ಗಿ ಮತ್ತು ಕಲಬುರಗಿಯ ವಿವಿಧ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಪಘಾತದ ಪರಿಣಾಮ ಜೇವರ್ಗಿ–ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ–1 ರಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿದೆ: ಮೀನಾಕ್ಷಿ ಸುಂದರಂ
*ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿಯ ಸಮಾರೋಪ
ಭಾರತದ ಸ್ವದೇಶಿ ತಂತ್ರಜ್ಞಾನವಾದ ಜಿಯೋಸ್ಪೇಷಿಯಲ್ ಪರಿಸರ ವ್ಯವಸ್ಥೆಗೆ ಸಾಕಷ್ಟು ಉತ್ತೇಜನ ನೀಡುವ ಸಲುವಾಗಿ ಬೆಂಗಳೂರು ಮೂಲದ ನಕ್ಷೆಗಳ ವೇದಿಕೆ ಲ್ಯಾಟ್ಲಾಂಗ್, ಗೃಹ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ದೇಶದಲ್ಲಿ ವಿಳಾಸಗಳಿಗೆ ಮ್ಯಾಪಿಂಗ್ ಮಾಡುವಲ್ಲಿ ಜಿಯೋಕೋಡಿಂಗ್ ಎಪಿಐ ತಾನು Google Maps ಗಿಂತ ನಾಲ್ಕು ಪಟ್ಟು ಹೆಚ್ಚು ನಿಖರವಾಗಿರುವುದಾಗಿ ಘೋಷಿಸಿದೆ. ಭಾರತದಲ್ಲಿ ವಿಳಾಸಗಳಿಗಾಗಿ ಲ್ಯಾಟ್ಲಾಂಗ್ನ ಎಪಿಐ ಈಗಾಗಲೇ
ವಿಜ್ಞಾನಿಗಳು ಮತ್ತು ಸಾಧು ಸಂತರ ಮಾರ್ಗ ಒಂದೇ; ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅಭಿಮತ
ಸತ್ಯ ಶೋಧನೆ ಮತ್ತು ಬ್ರಹ್ಮಾಂಡದಲ್ಲಿ ಮಾನವನ ಅಸ್ತಿತ್ವದ ಅಂತಿಮ ಸತ್ಯವನ್ನು ಕಂಡುಹಿಡಿಯುವುದೇ ವಿಜ್ಞಾನ ಮತ್ತು ಆಧ್ಯಾತ್ಮದ ಗುರಿಯಾಗಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಡಾ.ಎಸ್. ಸೋಮನಾಥ್ ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನ ಮತ್ತು ಧರ್ಮದ ಗುರಿ ಒಂದೇ ಆಗಿದ್ದು, ಆ ಗುರಿಯನ್ನು ಭಿನ್ನ ಮಾರ್ಗದಲ್ಲಿ ಮತ್ತು ಪರಸ್ಪರ ಪೂರಕವಾಗಿ ತಲುಪುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಸ್ರೋ ಮಾಜಿ ಮುಖ್ಯಸ್ಥರು ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ವಿವೇಕ ದೀಪ್ತಿ ಸಮಾವೇಶದಲ್ಲಿ ಮಾತನಾಡಿದರು.
‘ರಕ್ಕಸಪುರದೊಳ್’ ಟ್ರೇಲರ್ ಬಿಡುಗಡೆ; ಪೊಲೀಸ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ
ಗ್ರಾಮವೊಂದರಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸುವ ಕತೆ ಎಂದು ‘ರಕ್ಕಸಪುರದೊಳ್’ ಸಿನಿಮಾದ ಟ್ರೇಲರ್ ನೋಡಿದಾಗ ತಿಳಿದುಬರುತ್ತದೆ. ಖ್ಯಾತ ನಿರ್ದೇಶಕ ರವಿ ಸಾರಂಗ ನಿರ್ದೇಶನದ ಮತ್ತು ನಟ ರಾಜ್ ಬಿ ಶೆಟ್ಟಿ ಅಭಿನಯದ ಸಿನಿಮಾ ‘ರಕ್ಕಸಪುರದೊಳ್’ ಸಿನಿಮಾದ ಟ್ರೇಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದು ಗ್ರಾಮವೊಂದರಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸುವ ಕತೆ ಎಂದು ಟ್ರೇಲರ್ ನೋಡಿದಾಗ ತಿಳಿದುಬರುತ್ತದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ಮೊತ್ತ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಕ್ಕಸಪುರದೊಳ್ ಟ್ರೇಲರ್ ನಲ್ಲಿ ಏನಿದೆ? ರಾಜ್ ಬಿ ಶೆಟ್ಟಿ ‘ಸು ಫ್ರಂ ಸೊ’ ಯಶಸ್ವೀ ಸಿನಿಮಾ ನೀಡಿದ ನಂತರ ‘ಲ್ಯಾಂಡ್ ಲಾರ್ಡ್’ನಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದರು. ಇದೀಗ 2026 ಫೆಬ್ರವರಿ 06ರಂದು ಅವರ ಮತ್ತೊಂದು ಚಿತ್ರ ‘ರಕ್ಕಸಪುರದೊಳ್’ ಬಿಡುಗಡೆಯಾಗುತ್ತಿದೆ. ಮದ್ಯದ ಚಟದ ವಿರುದ್ಧ ಹೋರಾಟದಲ್ಲಿ ತೊಂದರೆಗೆ ಸಿಲುಕುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಎರಡು ನಿಮಿಷ 36 ಸೆಕೆಂಡುಗಳಿರುವ ಟ್ರೇಲರ್ ಪಟ್ಟಣದ ಉಸ್ತುವಾಗಿ ವಹಿಸಿದ ಪೊಲೀಸ್ ಅಧಿಕಾರಿಯ ಪರಿಚಯದ ಜೊತೆಗೆ ಆರಂಭವಾಗುತ್ತದೆ. ಅಪರಾಧ ಅತಿ ಕಡಿಮೆ ಇರುವ ಪಟ್ಟಣದಲ್ಲಿ ಪ್ರಭಾವಿ ವ್ಯಕ್ತಿಯ ಮಗಳನ್ನು ಕೊಲೆ ಮಾಡಲಾಗುತ್ತದೆ. ಈ ಪ್ರಕರಣದ ನಿಗೂಢತೆ, ಅಲೌಕಿಕ ಶಕ್ತಿ ಸೇರಿದಂತೆ ಬಹು ದಿಕ್ಕುಗಳಲ್ಲಿ ತನಿಖೆ ಹೊರಳುತ್ತದೆ. ಹೀಗೆ ಗ್ರಾಮದೊಳಗೆ ಅಡಿಗಿರುವ ರಕ್ಕಸರನ್ನು ಬಹಿರಂಗಪಡಿಸುವ ಕತೆಯನ್ನು ಹೊಂದಿದೆ. ಕುತೂಹಲ ಕೆರಳಿಸಿದ ರಕ್ಕಸಪುರದೊಳ್ ರಕ್ಕಸ ಎಂದರೆ ರಾಕ್ಷಸ ಎಂದರ್ಥ. ಪುರ ಎಂದರೆ ಊರು. ರಾಕ್ಷಸರೇ ಇರುವ ಊರು ಎಂಬುದು ‘ರಕ್ಕಸಪುರದೊಳ್’ ಸಿನಿಮಾ ಶೀರ್ಷಿಕೆಯ ಅರ್ಥ ಎಂಬ ವಿವರಣೆಯನ್ನು ಸಿನಿಮಾ ಮಹೂರ್ತದ ಸಂದಭರ್ಭದಲ್ಲಿ ರವಿ ಸಾರಂಗ ನೀಡಿದ್ದರು. ಈಗಾಗಲೇ ಟೀಸರ್ ಮತ್ತು ‘ನೀನಾ, ನೀನಾ…’ ಹಾಡು ಜನಪ್ರಿಯವಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ಹಾಡಿದ ‘ಸಿದ್ದಯ್ಯ ಸ್ವಾಮಿ ಬನ್ನಿ’ ಎನ್ನುವ ಹಾಡು ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಹಾಡಿಗೆ ತೆರೆ ಮೇಲೆ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯಾ ತೆರೆಮರೆಯಲ್ಲಿ ಸಂಗೀತ ನಿರ್ದೇಶನಗಳ ಮೂಲಕ ಚಿರಪರಿಚಿತರಾಗಿದ್ದರೂ, ತೆರೆ ಮೇಲೆ ಬಣ್ಣ ಹಚ್ಚಿರುವುದು ಅಪರೂಪ. ಈ ಹಾಡನ್ನು ಕ್ರಾಂತಿ ಕುಮಾರ್ ಬರೆದಿದ್ದಾರೆ. ಗ್ರಾಮಸ್ಥರು ತಮ್ಮ ತೊಂದರೆಗಳ ಪರಿಹಾರಕ್ಕಾಗಿ ಸಿದ್ದಯ್ಯ ಸ್ವಾಮಿ ಮೊರೆ ಹೋಗುವಾಗ ಈ ಸನ್ನಿವೇಶ ಬರುತ್ತದೆ. ಈ ಹಾಡಿನಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಮತ್ತು ಗ್ರಾಮಸ್ಥರ ದೊಡ್ಡ ಗುಂಪೇ ಕಾಣಿಸಿಕೊಂಡಿದೆ. ರವಿವರ್ಮ ನಿರ್ಮಾಣದ ಸಿನಿಮಾ ನಿರ್ದೇಶಕ ಪ್ರೇಮ್ ಜೊತೆಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ರವಿ ಸಾರಂಗ ‘ರಕ್ಕಸಪುರದೊಳ್’ ಸಿನಿಮಾ ನಿರ್ದೇಶಿಸಿದ್ದಾರೆ. ಕೊಳ್ಳೇಗಾಲದ ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆದಿದೆ. ರವಿವರ್ಮ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಾಹಸ ನಿರ್ದೇಶಕ ಡಾ ರವಿವರ್ಮ ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ‘ರುಸ್ತುಂ’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ರವಿವರ್ಮ, ಇದೀಗ ‘ರಕ್ಕಸಪುರದೊಳ್’ ಸಿನಿಮಾದ ಮೂಲಕ ನಿರ್ಮಾಪಕರಾಗಿದ್ದಾರೆ.
ವಿದೇಶಿ ಹೂಡಿಕೆದಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ ಸುಪ್ರೀಂ ತೀರ್ಪು; ಏನಿದು ಫ್ಲಿಪ್ಕಾರ್ಟ್ ಡೀಲ್ ಕೇಸ್?
2018ರಲ್ಲಿ ವಾಲ್ಮಾರ್ಟ್ಗೆ ಫ್ಲಿಪ್ಕಾರ್ಟ್ ಷೇರುಗಳನ್ನು ಮಾರಾಟ ಮಾಡಿದ ಟೈಗರ್ ಗ್ಲೋಬಲ್ ಸಂಸ್ಥೆಯು ಭಾರತದಲ್ಲಿ ತೆರಿಗೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಾರಿಷಸ್ ತೆರಿಗೆ ಒಪ್ಪಂದದ ನೆಪವೊಡ್ಡಿ ತೆರಿಗೆ ವಿನಾಯಿತಿ ಕೋರಿದ್ದ ಟೈಗರ್ ಗ್ಲೋಬಲ್ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ. ಕೇವಲ ತೆರಿಗೆ ಉಳಿಸಲು ಕಾಗದದ ಮೇಲೆ ಕಂಪನಿ ಸೃಷ್ಟಿಸಿದ್ದರೆ ಒಪ್ಪಂದದ ಲಾಭ ಸಿಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಈ ತೀರ್ಪು 2017ಕ್ಕೂ ಹಿಂದಿನ ಹಳೆಯ ಹೂಡಿಕೆಗಳ ಮೇಲೂ ತೆರಿಗೆ ಅಧಿಕಾರಿಗಳ ಹದ್ದಿನ ಕಣ್ಣು ಬೀಳಲು ದಾರಿ ಮಾಡಿಕೊಟ್ಟಿದ್ದು, ವಿದೇಶಿ ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
Snow Storm: ಭೀಕರ ಹಿಮ ಬಿರುಗಾಳಿಗೆ 60 ಜನ ಬಲಿ, ಅಮೆರಿಕದಲ್ಲಿ ಚಳಿಗಾಲ ಮತ್ತಷ್ಟು ಗಂಭೀರ
ಪ್ರಕೃತಿ ಮಾತೆಯ ಏಟಿಗೆ ಸಿಲುಕಿ ನಲುಗಿ ಹೋಗಿರುವ ಅಮೆರಿಕದಲ್ಲಿ ಕ್ಷಣಕ್ಷಣಕ್ಕೂ ಚಳಿಗಾಲದ ಸ್ಥಿತಿ ಕೈಮೀರಿ ಹೋಗುತ್ತಿದೆ. ಕಳೆದ 1 ವಾರದಿಂದ ನಿರಂತರವಾಗಿ ಭೀಕರ ಹಿಮ ಪ್ರವಾಹಕ್ಕೆ ಸಿಲುಕಿರುವ ಅಮೆರಿಕ ಅದರಿಂದ ಸುಧಾರಿಸಿಕೊಂಡು ಹೊರಗೆ ಬರಲು ಆಗುತ್ತಿಲ್ಲ. ಸಾಲು ಸಾಲು ಸಾವುಗಳ ಜೊತೆ ಮೂಲಸೌಕರ್ಯ ವ್ಯವಸ್ಥೆ ಕೂಡ ಹಾಳಾಗಿ ಹೋಗುತ್ತಿದೆ. ಹೀಗಿದ್ದಾಗ ಜನರು ಮನೆಯಲ್ಲಿ ನರಳುತ್ತಾ ಇದ್ದು, ಹೊರಗೆ
ಕುಕನೂರು | ರಾಜೂರ ಗ್ರಾಮ ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕುಕನೂರು : ಕುಕನೂರು ತಾಲೂಕು ವ್ಯಾಪ್ತಿಯ ರಾಜೂರ ಗ್ರಾಮ ಪಂಚಾಯಿತಿಯಲ್ಲಿ ಐದು ವರ್ಷಗಳ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರನ್ನು ಪಂಚಾಯತ್ ಸಿಬ್ಬಂದಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನನ್ನ ಸೇವಾ ಅವಧಿಯಲ್ಲಿ ಇಂತಹ ಸಹಾನುಭೂತಿ ಮತ್ತು ಸಹಕಾರ ಮನೋಭಾವ ಹೊಂದಿದ ಸದಸ್ಯರೊಂದಿಗೆ ಕಾರ್ಯನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ಸದಸ್ಯರ ಒಗ್ಗಟ್ಟಿನ ಆಡಳಿತಕ್ಕೆ ಸಾಕ್ಷಿಯಾಗಿ 2024–25ನೇ ಸಾಲಿನಲ್ಲಿ ರಾಜೂರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಇದು ಪಂಚಾಯತ್ಗೆ ಮಾತ್ರವಲ್ಲ, ಗ್ರಾಮಸ್ಥರಿಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ಸದಸ್ಯ ಬಸವರಾಜ್ ರೆಡ್ಡಿ, ಚಿಕ್ಕ ವಯಸ್ಸಿನಲ್ಲಿ ಸದಸ್ಯರಾಗಿ ಬಂದಾಗ ಅನೇಕ ಅಭಿವೃದ್ಧಿ ಕನಸುಗಳನ್ನು ಹೊತ್ತುಕೊಂಡು ಬಂದಿದ್ದೆವು. ವಾಸ್ತವ ಸ್ಥಿತಿಯ ಅರಿವಿನೊಂದಿಗೆ ಶಾಸಕರು ಹಾಗೂ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾದಷ್ಟು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ತೃಪ್ತಿ ಇದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಸದಸ್ಯ ಭೀಮರೆಡ್ಡಿ ಮಾದನೂರು ಮಾತನಾಡಿ, ಒಳ್ಳೆಯ ಸದಸ್ಯರ ತಂಡದೊಂದಿಗೆ ಪಂಚಾಯತ್ ಕಾರ್ಯಗಳನ್ನು ಮುನ್ನಡೆಸಿದ ಹೆಮ್ಮೆ ಇದೆ. ಎಲ್ಲ ಸದಸ್ಯರ ಸಹಕಾರ ಮನೋಭಾವದಿಂದಲೇ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಯಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮಾಲಗಿತ್ತಿ, ಉಪಾಧ್ಯಕ್ಷ ಕೋಟೆಪ್ಪ ಗೊಂದಿ, ಸದಸ್ಯರಾದ ವೀರಪ್ಪ ಬಿಡ್ನಾಳ, ವಿಜಯಕುಮಾರ್ ಮಾದನೂರು, ಶಿವನಪ್ಪ ಹೂಗಾರ, ಹುಲ್ಲಮ್ಮ, ರತ್ನಮ್ಮ, ಬುಡ್ಡಮ್ಮ, ಭೀಬಿ ಜಾನ್, ದೇವಮ್ಮ, ಶರಣಮ್ಮ, ಶಾಂತ ಮೂಲಿಮನಿ, ಶೈನಾಜಾ ಬೇಗಂ, ಸಿಬ್ಬಂದಿಗಳಾದ ಬಸವರಾಜ ಹುಬಳ್ಳಿ, ರಾಜಸಾಬ, ದಾವಲಸಾಬ, ನಿಂಗಪ್ಪ ಗೊಂದಿ, ಮಂಗಳೇಶ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
`ಬಾಬರ್ ಅನ್ನು ಬಿಟ್ಟುಬಿಡಿ ಮಾರಾಯ್ರೆ, ಇನ್ನೂ 14 ಮಂದಿ ಇದ್ದಾರೆ!'; ಪಾಕ್ ನಾಯಕ ಸಲ್ಮಾನ್ ಆಘಾ ಹೀಗೆ ಹೇಳಿದ್ದು ಯಾಕೆ?
Salman Agha On Babar Azam- ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಸುದ್ದಿಗೋಷ್ಠಿಯಲ್ಲಿ ದೊಡ್ಡ ತಲೆನೋವು ಬಾಬರ್ ಆಝಂ ಅವರ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವುದು. ಪಾಕಿಸ್ತಾನದ ಹಿರಿಯ ಆಟಗಾರನ ಬಗ್ಗೆ ಪ್ರಶ್ನೆ ಇರದ ಸುದ್ದಿಗೋಷ್ಠಿಗಳಿಲ್ಲ. ಇದರಿಂದ ಬೇಸತ್ತ ಸಲ್ಮಾನ್ ಆಘಾ, ಪತ್ರಕರ್ತರಲ್ಲಿ ಅವರನ್ನು ಅವರ ಪಾಡಿಗೆ ಇರಲು ಬಿಟ್ಟುಬಿಡಿ, ನಮ್ಮ ತಂಡದಲ್ಲಿ ಇರುವ ಉಳಿದ 14 ಆಟಗಾರರ ಬಗ್ಗೆಯೂ ಕೇಳಿ ಎಂದು ಪತ್ರಕರ್ತರಲ್ಲಿ ಮನವಿ ಮಾಡಿರುವ ಘಟನೆ ನಡೆದಿದೆ.
ಮೂರುವರೆ ದಶಕಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ ಫ್ಲೈಟ್ ಅಟೆಂಡೆಂಟ್; ವಿಮಾನದಲ್ಲಿದ್ದರೆ ಇವರೇ ಸೂಪರಿಂಟೆಂಡೆಂಟ್
Noopur Parth Air India Air hostess: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋ ತುಣುಕುಗಳಗಾಲಿ, ಕೆಂಟೆಂಟ್’ಗಳಾಗಲಿ ಜನರಿಗೆ ಹತ್ತಿರವಾಗಲು ಕಾರಣ ಅದು, ಹೃದಯಕ್ಕೆ ಹತ್ತಿರವಾಗುವಂತಹ ವಿಚಾರವಾಗಿರುತ್ತದೆ. ಇಂತಹ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ಫುಲ್ ವೈರಲ್ ಆಗುತ್ತಿದೆ. ಏರ್ ಇಂಡಿಯಾ ಸಿಬ್ಬಂದಿಯೊಬ್ಬರು 35 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ವಿಷಯಕ್ಕೆ ಸಂಬಂಧ ಪಟ್ಟ ವಿಡಿಯೋ ಇದಾಗಿತ್ತು.
ಬೀದರ್ | ಎಸ್ಐಆರ್- ಚಿಂತನ ಮಂಥನ ಸಮಾವೇಶದ ಕರಪತ್ರ ಬಿಡುಗಡೆ
ಬೀದರ್ : ಫೆ.3 ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯುವ ಎಸ್ಐಆರ್- ಚಿಂತನ ಮಂಥನ ಸಮಾವೇಶ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಕರಪತ್ರವನ್ನು ಗುರುವಾರ ಅಂಬೇಡ್ಕರ್ ವೃತ್ತದ ಎದುರುಗಡೆ ಸಿದ್ಧರಾಮ ಬೆಲ್ದಾಳ್ ಶರಣರು, ಭಂತೆ ಸಂಘ ರಖ್ಖಿತ್, ಚನ್ನಬಸವಾನಂದ್ ಸ್ವಾಮೀಜಿ, ಸತ್ಯದೇವಿ ಮಾತಾಜಿ, ಪಾಸ್ಟರ್ ಕ್ಲೆರಿ ಡಿಸೊಜಾ, ಪಾಸ್ಟರ್ ವಿಜಯಕುಮಾರ್ ಡೆವಿಡ್, ಮೌಲನಾ ಮುಫ್ತಿ ಸಿರಾಜೋಧ್ದಿನ್ ನಿಜಾಮಿ, ಮೌಲಾನಾ ಮೊನಿಸ್ ಕಿರ್ಮಾನಿ ಜಂಟಿಯಾಗಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಎಸ್ಐಆರ್ ವಿರೋಧಿ ಜನಾಂದೋಲನಾ ಸಮಿತಿಯ ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಮಾರುತಿ ಬೌದ್ದೆ, ಮನ್ನಾನ ಸೇಠ್, ಮಹೇಶ್ ಗೋರನಾಳಕರ್, ವಿನಯಕುಮಾರ್ ಮಾಳಗೆ, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದರ್, ಡಾ.ಮಕ್ಸೂದ್ ಚಂದಾ, ತಲಹಾ ಹಾಸ್ಮಿ, ಮುಹಮ್ಮದ್ ನಿಜಾಮೋದ್ದಿನ್, ವಿಜಯಕುಮಾರ ಆರ್., ಮಂಜುಳಾ ಮೆತೆಸುಲಾ, ನಳಿನಕುಮಾರ್ ಶಾಮಸನ್, ಡಾ. ದೇವಿದಾಸ್ ತುಮಕುಂಟೆ, ಡಾ.ಕಾಶಿನಾಥ್ ಚೆಲ್ವಾ, ವಿಠಲದಾಸ್ ಪ್ಯಾಗೆ, ಸಂಜಯ್ ಜಾಗಿರದಾರ್, ಮುಹಮ್ಮದ್ ಆಸಿಫ್, ಉಷಾಬಾಯಿ ಬನ್ಸುಡೆ, ಮುಹಮ್ಮದ್ ಆರಿಫೋದ್ದಿನ್, ಸಂದೀಪ್ ಮುಕಿಂದೆ, ಮುಕೆಶ್ ರಾಯ್, ವಿನೋದ್ ಗುಪ್ತಾ, ಸಂದೀಪ್ ಕಾಂಟೆ, ಪ್ರದೀಪ್ ನಾಟೆಕರ್, ಅಮರ್ ಅಲ್ಲಾಪೂರ್, ನಂದಮ್ಮಾ ಕುಂದೆ, ಸೋನಮ್ಮ ಕಸ್ತೂರೆ, ಕಮಳಮ್ಮಾ ಸಂತಪೂರೆ, ಶೆಶಿಕಲಾ ಶರ್ಮಾ, ಸಂಗೀತಾ ಕಾಂಬಳೆ, ಮನೊರಂಜನಿ ಮೊಹನ್ ಹಾಗೂ ಸುಮನ್ ಶಿಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಸ್ರೇಲ್ ಪ್ರಧಾನಿ ನೆತನ್ಯಾಹು ಮೊಬೈಲ್ ಫೋನಿನ ಹಿಂಬದಿಯ ಕ್ಯಾಮೆರಾಕ್ಕೆ ಕೆಂಪು ಟೇಪ್ ಅಂಟಿಸಿರೋದ್ಯಾಕೆ ಗೊತ್ತಾ?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಫೋನ್ ಕ್ಯಾಮೆರಾ ಮತ್ತು ಸೆನ್ಸರ್ಗಳನ್ನು ಕೆಂಪು ಟೇಪ್ನಿಂದ ಮುಚ್ಚಿರುವುದು ಗಮನ ಸೆಳೆದಿದೆ. ದೂರದಿಂದಲೇ ವಿಶೇಷ ಪರಿಕರಗಳ ಮೂಲಕ ಫೋನ್ನೊಳಗಿನ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುವುದರಿಂದ, ಗೂಢಚಾರಿಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.
ಮಾಜಿ ಬಾಯ್ ಫ್ರೆಂಡ್ ನೊಂದಿಗೆ ಡೇಟಿಂಗ್ ಮಾಡಲು 6 ತಿಂಗಳು ಮುದುಕಿಯಂತೆ ವೇಷ ಧರಿಸಿದ್ದರಂತೆ ರೋಸ್
ಕೆ-ಪಾಪ್ ಐಡಲ್ ಗಳು ಡೇಟಿಂಗ್ ಮಾಡುವುದು ಸುಲಭದ ಮಾತಲ್ಲ. ಕ್ಯಾಮೆರಾ ಹಾಗೂ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಅವರ ಕೆರಿಯರ್ ಮುಗಿದೇ ಹೋಗುವಷ್ಟು ಸುದ್ದಿಯಾಗುತ್ತೆ. ಇದನ್ನು ತಪ್ಪಿಸಿಕೊಳ್ಳಲು ಹಲವರು ಭಿನ್ನ ಭಿನ್ನವಾಗಿ ಮುಂಜಾಗ್ರತೆ ತೆಗೆದುಕೊಳ್ಳುತ್ತಾರೆ. ಹಾಗಯೇ ಬ್ಲಾಕ್ ಪಿಂಕ್ ರೋಸ್, ಮಾಜಿ ಗೆಳೆಯನೊಂದಿಗೆ ಡೇಟಿಂಗ್ಗೆ ಹೋಗಲು 6 ತಿಂಗಳ ಕಾಲ ಅಜ್ಜಿಯಂತೆ ವೇಷ ಧರಿಸಿದ್ದರಂತೆ. ಈ ವಿಚಿತ್ರ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ರೋಸ್ ಏನು ಹೇಳಿದ್ರು ನೋಡಿ..
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಲಯ ಆಧರಿತ ಅಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಮತ್ತು ಮಂಗಳೂರು ವಲಯದ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ಪರೀಕ್ಷೆ 2026ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ನೇಮಕಾತಿ 2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಮತ್ತು ಮಂಗಳೂರು ವಲಯದ ಎಸ್ಬಿಐ ಸರ್ಕಲ್ ಆಧಾರಿತ ಅಧಿಕಾರಿಗಳ ಸಿಬಿಒ ಪರೀಕ್ಷೆ 2026ರಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 2026 ಜನವರಿ 29ರಿಂದ 2026 ಫೆಬ್ರವರಿ 18ರ ನಡುವೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅರ್ಹತೆ, ಹುದ್ದೆಯ ಮಾಹಿತಿ, ಆಯ್ಕೆ ವಿಧಾನ ಮತ್ತು ವಯಸ್ಸಿನ ಮಿತಿ, ವೇತನ ಶ್ರೇಣಿ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://ibpsreg.ibps.in/sbicbonov25/ ಪ್ರಮುಖ ದಿನಾಂಕಗಳು • ಆನ್ಲೈನ್ ಅರ್ಜಿ ಆರಂಭ: 29 ಜನವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಫೆಬ್ರವರಿ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 18 ಫೆಬ್ರವರಿ 2026 • ಪರೀಕ್ಷೆ ದಿನಾಂಕ: 2026 ಮಾರ್ಚ್ (ತಾತ್ಕಾಲಿಕ) • ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು • ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. ಅರ್ಜಿ ಶುಲ್ಕ • ಜನರಲ್/ಒಬಿಸಿ/ಇಡಬ್ಲ್ಯುಎಸ್: 750 ರೂ. • ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: 0 ರೂ. • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ವಯೋಮಿತಿ • ಕನಿಷ್ಠ ವಯಸ್ಸು- 21 ವರ್ಷಗಳು • ಗರಿಷ್ಠ ವಯಸ್ಸು 30 ವರ್ಷಗಳು ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಸಿಬಿಒ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು. ಒಟ್ಟು ಹುದ್ದೆಗಳು ಒಟ್ಟು ಹುದ್ದೆ 2050. ಕರ್ನಾಟಕದಲ್ಲಿ 200 ಹುದ್ದೆಗಳು ಲಭ್ಯವಿವೆ. ಕೇರಳ/ಲಕ್ಷದ್ವೀಪ- 50 ಹುದ್ದೆಗಳು (ಮಲಯಾಳಂ ಭಾಷಾ ಪ್ರಾವೀಣ್ಯತೆ ಅಗತ್ಯ) ಹುದ್ದೆಯ ವಿವರಗಳು • ಎಸ್ಬಿಐ ಸರ್ಕಲ್ ಬೇಸ್ಡ್ ಆಫೀಸರ್ ಸಿಬಿಒ ವಿದ್ಯಾರ್ಹತೆ ಯಾವುದೇ ರೀತಿಯ ಪದವಿ. ಸ್ಥಳೀಯ ಭಾಷೆಯಲ್ಲಿ ಬರೆಯುವುದು, ಓದುವುದು ಮತ್ತು ಅರ್ಥಮಾಡಿಕೊಳ್ಳಲು ತಿಳಿದಿರಬೇಕು. ಕಮರ್ಶಿಯಲ್ ಬ್ಯಾಂಕ್ ಅಥವಾ ಆರ್ಆರ್ಬಿಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವುದು ಹೆಚ್ಚುವರಿ ಕೌಶಲ್ಯವಾಗಿ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಒಂದು ಸರ್ಕಲ್ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ. SMGS-IVಗೆ ಬಡ್ತಿ ನೀಡುವವರೆಗೆ ಅಥವಾ 12 ವರ್ಷ ಪೂರ್ಣಗೊಳ್ಳುವವರೆಗೂ ಅಂತರ್ ವಲಯ ವರ್ಗಾವಣೆ ಇರುವುದಿಲ್ಲ. ಸರ್ಕಾರಿ ನಿಯಮಗಳಿಗೆ ಅನುಸಾರ ಮೀಸಲಾತಿ ಇರುತ್ತದೆ. ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ ಒಬ್ಜೆಕ್ಟಿವ್ ಪರೀಕ್ಷೆ (120 ಅಂಕಗಳು, 2 ಗಂಟೆಗಳು) ಇಂಗ್ಲಿಷ್ (30 ಪ್ರಶ್ನೆಗಳು, 30 ಅಂಕಗಳು) ಬ್ಯಾಂಕಿಂಗ್ ಜ್ಞಾನ (40 ಪ್ರಶ್ನೆಗಳು, 40 ಅಂಕಗಳು) ಸಾಮಾನ್ಯ ಜ್ಞಾನ/ ಅರ್ಥವ್ಯವಸ್ಥೆ (30 ಪ್ರಶ್ನೆಗಳು, 30 ಅಂಕಗಳು) ಕಂಪ್ಯೂಟರ್ ಜ್ಞಾನ (20 ಪ್ರಶ್ನೆಗಳು, 20 ಅಂಕಗಳು) ವಿವರಣಾತ್ಮಕ ಪರೀಕ್ಷೆಗಳು (50 ಪ್ರಶ್ನೆಗಳು, 30 ನಿಮಿಷಗಳು) ಪತ್ರ ಬರೆಯುವುದು ಮತ್ತು ಪ್ರಬಂಧ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಪರೀಕ್ಷೆಯಲ್ಲಿ ಪಾಸಾದವರಿಗೆ ಸಂದರ್ಶನ 50 ಅಂಕಗಳು (ಕನಿಷ್ಠ ಅರ್ಹತೆ) ಅಂತಿಮ ಮೆರಿಟ್ ಪಟ್ಟಿ- ಸಾಮಾನ್ಯೀಕರಿಸಿದ ಅಂಕಗಳ ಮೇಲೆ ಆಧರಿಸಿದೆ ಆನ್ಲೈನ್ ಪರೀಕ್ಷೆ (ಶೇ 75) + ಸಂದರ್ಶನ (ಶೇ 25) ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ- ಕಡ್ಡಾಯವಾಗಿ 10/12ನೇ ತರಗತಿಯ ಪ್ರಮಾಣಪತ್ರ
UN Dairies: ಮಾನ ಮರ್ಯಾದೆ ಇಲ್ಲದ ಜನ, ಇನ್ನೂ ಎಷ್ಟು ವರ್ಷ ಭಾರತದಿಂದ ಹಿಂಗೆ ಬೈಯಿಸಿಕೊಳ್ಳುತ್ತೆ ಪಾಕಿಸ್ತಾನ?
ಥೂ ಇಷ್ಟು ಕತ್ತೆ ವಯಸ್ಸಾಯ್ತು, ಆದ್ರೂ ಮನೆಯಲ್ಲಿ ಬೈಯಿಸಿಕೊಳ್ತಿಯಲ್ಲೋ ಅಂತಾ ಪೋಷಕರು ತಮ್ಮ ಮಕ್ಕಳನ್ನು ಗದರುವುದು ಸಾಮಾನ್ಯ. ಆದರೆ ಪಾಕಿಸ್ತಾನ ರಚನೆಯಾಗಿ 79 ವರ್ಷಗಳಾದರೂ, ಭಾರತದಿಂದ ಬೈಯಿಸಿಕೊಳ್ಳುವ ಚಾಳಿಯನ್ನು ಮಾತ್ರ ಅದು ಬಿಟ್ಟಿಲ್ಲ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಜನ್ಮ ಜಾಲಾಡಿರುವ ಭಾರತ, ಅದರ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ಗೆ ನೀಡಲಾಗಿರುವ ಅಪರಿಮಿತ ಅಧಿಕಾರವನ್ನು ಪ್ರಶ್ನಿಸಿದೆ. ಈ ಕುರಿತು ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿ ಪರ್ವತನೇನಿ ಹರೀಶ್ ಏನು ಹೇಳಿದ್ದಾರೆ ನೋಡೋಣ ಬನ್ನಿ.
ಸೇಡಂ | ಫುಲೆ ದಂಪತಿ ಪ್ರಶಸ್ತಿ ಪುರಸ್ಕೃತರಿಗೆ ಶಾಲಾ ಶಿಕ್ಷಕರಿಂದ ಸನ್ಮಾನ
ಸೇಡಂ : ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕು ಮಟ್ಟದ ಸಾಧಕರಿಗೆ ನೀಡಲಾಗುವ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ತಾಲೂಕು ಮಟ್ಟದ ಪ್ರಶಸ್ತಿಗೆ ಭಾಜನರಾದ ಸಂಪನ್ಮೂಲ ಅಧಿಕಾರಿ (ಸಿಆರ್ಪಿ) ರಾಜಶೇಖರ್ ಟೈಗರ್ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಚಂದುಬಾಯಿ ಕುಲಕರ್ಣಿ ಅವರನ್ನು ಶಾಲಾ ಶಿಕ್ಷಕರು ಶಾಲು ಹೊದಿಸಿ, ಹಾರ ಹಾಕಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಕ ಮಹಾಂತೇಶ ಪಾಟೀಲ್, ತಾಲೂಕು ಮಟ್ಟದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಲಭಿಸಿರುವುದು ಅಪಾರ ಸಂತೋಷ ತಂದಿದೆ ಎಂದು ಹೇಳಿದರು. ಅಕ್ಷರದ ಅವ್ವೆಂದು ಖ್ಯಾತರಾದ ಸಾವಿತ್ರಿಬಾಯಿ ಫುಲೆ ಅವರು ಅವಮಾನ, ಅಪಮಾನಗಳನ್ನು ಸಹಿಸಿ ಮಹಿಳಾ ಶಿಕ್ಷಣಕ್ಕಾಗಿ ದಿಟ್ಟ ನಿರ್ಧಾರಗಳೊಂದಿಗೆ ಕ್ರಾಂತಿಕಾರಿ ಹೋರಾಟ ನಡೆಸಿದ ಪರಿಣಾಮವೇ ಇಂದು ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗೂಳಾಯ್ಯ, ಮಹಾದೇವಪ್ಪ, ಶ್ರೀಕಾಂತ್, ಶಿವಲೀಲಾ, ಸಿದ್ದಮ್ಮ, ನೀತಾ ಕುಲಕರ್ಣಿ, ಸರಿತಾ, ಗೀತಾ, ಶಿಲ್ಪರಾಣಿ, ಶಾಂತಾ, ಅತಿಥಿ ಶಿಕ್ಷಕರಾದ ಜ್ಯೋತಿ, ಅರ್ಚನಾ ಮಸ್ತಿ, ರೇಣುಕಾ, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ತಾಪುರ | ಅಹೋರಾತ್ರಿ ಧರಣಿ ಹಿಂಪಡೆದ ರೈತರು
ಚಿತ್ತಾಪುರ : ತಾಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ಉಂಟಾಗುತ್ತಿರುವ ಧೂಳಿನಿಂದ ಸುಮಾರು 200 ಎಕರೆ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ಹಾಗೂ ಹೊಲಗಳಿಗೆ ತೆರಳಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ಹಿಂಪಡೆದುಕೊಂಡರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಮಂಗಳವಾರ ರಾತ್ರಿ ಧರಣಿ ಆರಂಭಿಸಿದ್ದರು. ವಿಷಯ ತಿಳಿದ ಶ್ರೀ ಸಿಮೆಂಟ್ ಕಂಪನಿಯ ಅಧಿಕಾರಿಗಳು ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಹಿಂಪಡೆದುಕೊಂಡರು. ರೈತ ಮುಖಂಡ ರಮೇಶ್ ಬೊಮ್ಮನಳ್ಳಿ ಮಾತನಾಡಿ, ಸೂಲಹಳ್ಳಿ ಸ್ಟೇಷನ್ ಸಮೀಪ ನಡೆಯುತ್ತಿರುವ ಶ್ರೀ ಸಿಮೆಂಟ್ ಕಂಪನಿಯ ರೈಲ್ವೆ ಕಾಮಗಾರಿಯಿಂದ ರೈತರ ಹೊಲಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಮೂಲ ರಸ್ತೆ ಹಾಗೂ ಸರ್ಕಾರಿ ಹಣಾದಿಗಳನ್ನು ಒತ್ತುವರಿ ಮಾಡಿಕೊಂಡು ರೈಲ್ವೆ ಹಳಿ ನಿರ್ಮಿಸಿರುವುದರಿಂದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ಹಾಗೂ ಮರಳಲು ಸೂಕ್ತ ಮಾರ್ಗವಿಲ್ಲದೆ ಸಮಸ್ಯೆ ಎದುರಾಗುತ್ತಿದೆ ಎಂದು ದೂರಿದರು. ಈ ವರ್ಷ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಕಂಪನಿಯವರು ನೀಡಿದ್ದ ಭರವಸೆಯಂತೆ ರಸ್ತೆಯ ಎರಡೂ ಬದಿಯಲ್ಲಿ ನಾಲೆ ನಿರ್ಮಾಣ ಮಾಡಲಾಗಿಲ್ಲ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿ ಅಧಿಕಾರಿಗಳು, ಹೊಲಗಳಿಗೆ ತೆರಳಲು ರಸ್ತೆ ಮತ್ತು ನಾಲೆ ನಿರ್ಮಾಣ ಮಾಡಲಾಗುವುದು. ಬೆಳೆ ಹಾನಿ ಕುರಿತು ಕೃಷಿ ಇಲಾಖೆಯ ವರದಿ ಬಂದ ನಂತರ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿಗಳಾದ ನರಸಿಂಗ್, ರಮನಾಗೌಡ, ಕಂದಾಯ ನಿರೀಕ್ಷಕ ಮೈನೋದ್ದಿನ್, ರೈತರಾದ ನಾಗರಾಜ ರೇಷ್ಮಿ, ಮಲ್ಲಿಕಾರ್ಜುನ ರೆಡ್ಡಿ ಆಲೂರ, ಸಿದ್ದು ರೇಷ್ಮಿ, ರವಿ ಗಂಗಾಣಿ, ಅಂಬು, ತಿಮ್ಮಯ್ಯ ಭೋವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಗಿ | ನೇಣು ಬಿಗಿದು ಯುವಕ ಆತ್ಮಹತ್ಯೆ
ಕಲಬುರಗಿ : ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಮನನೊಂದ ಯುವಕನೋರ್ವ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಮೃತನನ್ನು ಕೆ.ಎಚ್.ಬಿ ಕಾಲೋನಿಯ ನಿವಾಸಿ ಯಾಸೀನ್ (22) ಎಂದು ಗುರುತಿಸಲಾಗಿದೆ. ಯಾಸೀನ್ ಗೌಂಡಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಚಟಕ್ಕೆ ಒಳಗಾಗಿದ್ದನು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಟುಂಬಸ್ಥರು ಬುದ್ಧಿವಾದ ಹೇಳಿದರು ಯಾರ ಮಾತನ್ನು ಕೇಳುತ್ತಿರಲಿಲ್ಲ ಎನ್ನಲಾಗಿದೆ. ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದ ಯಾಸೀನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ : ಗುಡ್ ನ್ಯೂಸ್ ಕೊಟ್ಟ ಕೃಷ್ಣ ಬೈರೇಗೌಡ
ಬೆಂಗಳೂರು: ಫೆಬ್ರವರಿ.13 ರಂದು ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದ್ದು, ಮುಂದಿನ ವಾರದೊಳಗೆ ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಸಿದ್ಧಗೊಳಿಸಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು. ವಿಕಾಸಸೌಧದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ
ಯುಜಿಸಿ ಜಾರಿಗೊಳಿಸಿರುವ ಹೊಸ ಸಮಾನತೆ ನಿಯಮಗಳನ್ನು ಸ್ವಾಗತಿಸಿದ ಸಿಎಂ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಯುಜಿಸಿ ಹೊಸ ಸಮಾನತೆ ನಿಯಮಗಳನ್ನು ಸ್ವಾಗತಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಈ ನಿಯಮಗಳು ಸಹಕಾರಿ ಎಂದಿದ್ದಾರೆ. ಕೇಂದ್ರ ಸರ್ಕಾರ ಈ ನಿಯಮಗಳನ್ನು ದುರ್ಬಲಗೊಳಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಈ ನಿಯಮಗಳು ಅತ್ಯಗತ್ಯ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ನಿಯಮಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
'ಮಿಸ್ಟರ್ ರಾಯಚೂರು ಉತ್ಸವ -2026' ಕಿರೀಟ ಮುಡಿಗೇರಿಸಿಕೊಂಡ ಪ್ರಶಾಂತ ಕನ್ನೂರಕರ
ರಾಯಚೂರು ಜಿಲ್ಲಾ ಉತ್ಸವ: ರಾಜ್ಯಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆ
1 ವಿಡಿಯೋ ವೈರಲ್, 1 ಇಂಜೆಕ್ಷನ್; ರಾಜಸ್ಥಾನದಲ್ಲಿ ಬಿರುಗಾಳಿ ಎಬ್ಬಿಸಿದ ಖ್ಯಾತ ಸಾಧ್ವಿ ಪ್ರೇಮ್ ನಿಗೂಢ ಸಾವು!
ರಾಜಸ್ಥಾನದ ಜೈಪುರದಲ್ಲಿ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ತಮ್ಮ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಕ್ತರು ಇದನ್ನು ಅನುಮಾನಾಸ್ಪದ ಸಾವು ಎಂದು ಹೇಳುತ್ತಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಸಾಧ್ವಿ ಅವರು ಜ್ವರದಿಂದ ಬಳಲುತ್ತಿದ್ದರು ಮತ್ತು ಕಾಂಪೌಂಡರ್ ನೀಡಿದ ಇಂಜೆಕ್ಷನ್ ನಂತರ ಕುಸಿದು ಬಿದ್ದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆತ್ಮಹತ್ಯೆಯ ಪತ್ರದಂತಹ ಪೋಸ್ಟ್ ಕಾಣಿಸಿಕೊಂಡಿದೆ.
ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆಯೇ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ?
ಪಶ್ಚಿಮ ಬಂಗಾಳದಲ್ಲಿ ಪಕ್ಷ ಆರಂಭಿಸುವ ಸಾಧ್ಯತೆ: ವರದಿ
ಕೇಂದ್ರ ಬಜೆಟ್ 2026ನಲ್ಲಿ ದಕ್ಷಿಣದ ರಾಜ್ಯಗಳ ನಿರ್ಲಕ್ಷ್ಯ ಬೇಡ: ನೀರಾವರಿ, ಮೆಟ್ರೋ ಯೋಜನೆಗಳಿಗೆ ಆರ್ಥಿಕ ಬೆಂಬಲ ಕೊಡಿ
ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹಿಸುವ ಕೊಡುವ ರಾಜ್ಯಗಳ ಪೈಕಿ ಎರಡನೇ ಅತೀ ದೊಡ್ಡ ರಾಜ್ಯ ಕರ್ನಾಟಕ. ಆದರೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಹಂಚಿಕೆ ಪಾಲು ತೀರಾ ಕಡಿಮೆ ಎಂದು ಹಿಂದಿನಿಂದಲೂ ಕರ್ನಾಟಕ ಕಾಂಗ್ರಸ್ ನಾಯಕರು ದೂರುತ್ತಲೇ ಬಂದಿದ್ದಾರೆ. ಇದೀಗ ಕೇಂದ್ರ ಬಜೆಟ್ 2026 ಮಂಡನೆಗೂ ಮುನ್ನ ನಮ್ಮ ತೆರಿಗೆ ಪಾಲು ನಮಗೆ ಕೊಡಿ ಎಂದು ಕಾಂಗ್ರೆಸ್
ಒಂದೇ ದಿನ 20% ಏರಿಕೆ, 10 ತಿಂಗಳಲ್ಲಿ ಬರೋಬ್ಬರಿ 305% ಲಾಭ ನೀಡಿದೆ ಸರ್ಕಾರಿ ಕಂಪನಿ ಷೇರು!
ಹಿಂದುಸ್ತಾನ್ ಕಾಪರ್ ಲಿಮಿಟೆಡ್ ಷೇರುಗಳು ಕಳೆದ 10 ತಿಂಗಳಲ್ಲಿ ಶೇ. 305 ರಷ್ಟು ಲಾಭ ನೀಡುವ ಮೂಲಕ ಮಲ್ಟಿಬ್ಯಾಗರ್ ಆಗಿ ಹೊರಹೊಮ್ಮಿವೆ. ಗುರುವಾರ ಷೇರು ಬೆಲೆ 760 ರೂ.ಗೆ ಏರಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯ 71,000 ಕೋಟಿ ರೂ. ದಾಟಿದೆ. ಫೆಬ್ರವರಿ 5 ರಂದು ನಡೆಯಲಿರುವ ಮಂಡಳಿ ಸಭೆಯಲ್ಲಿ ಲಾಭಾಂಶ ಘೋಷಣೆಯ ನಿರೀಕ್ಷೆಯಿದೆ. ಆದರೆ, ಷೇರು ಬೆಲೆ ಅತಿಯಾಗಿ ಏರಿರುವುದರಿಂದ ಹೊಸ ಹೂಡಿಕೆದಾರರು ಈಗ ಪ್ರವೇಶಿಸುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ಗಣಿನಾಡ ಜಿಲ್ಲೆ ಬಳ್ಳಾರಿಯಲ್ಲಿ ವೇಗದ ಬದುಕಿನ ರೋಗಗಳಿಗೆ ಇಂಗ್ಲಿಷ್ ಔಷಧ ಬಿಟ್ಟು, ನೈಸರ್ಗಿಕ ಗಿಡಮೂಲಿಕೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಔಷಧಗಳ ಮೊರೆ ಹೋಗುತ್ತಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಯುಷ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಅಧಿಕವಾಗಿ ಹೆಣ್ಣು ಮಕ್ಕಳೇ ಇದ್ದು,ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಇನ್ನು, ಬಳ್ಳಾರಿಯಾದ್ಯಂತ 2025ನೇ ಸಾಲಿನಲ್ಲಿ ಏಪ್ರಿಲ್ ನಿಂದ ಡಿಸೆಂಬರ್ ವರೆಗೂ ಸುಮಾರು 42,894 ಜನರು ಆಯುರ್ವೇದ ಚಿಕಿತ್ಸೆಗೆ ಪಡೆದಿದ್ದು, ಈ ಬಾರಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಕಾಮ್ರೆಡ್ ಎಚ್.ವಿ.ಅನಂತ ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ
ಬೆಂಗಳೂರು, ಜ.29: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಕಾಮ್ರೇಡ್ ಎಚ್.ವಿ.ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಾಮ್ರೆಡ್ ಅನಂತ ಸುಬ್ಬರಾವ್ ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ತಿಂಗಳ ಹಿಂದೆ ನಡೆದ ಕೆಎಸ್ಸಾರ್ಟಿಸಿ ನೌಕರರ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದರು. ಅವರು ಕೆಎಸ್ಸಾರ್ಟಿಸಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಸಿಬ್ಬಂದಿ ಯೂನಿಯನ್ ನ ಅಧ್ಯಕ್ಷರಾಗಿದ್ದರು. ಬದ್ಧತೆಯ ಜಾತ್ಯತೀತ ಹಾಗೂ ಸಿಪಿಐ ನಾಯಕರಾಗಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭರಿಸಲು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು. ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಿಂದಲೂ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದರು.
ಸದನದಲ್ಲಿ ಗಾಂಧಿ v/s ಸಂಗಪ್ಪ ಜಾಹೀರಾತು ಸದ್ದು: ಸರ್ಕಾರ ಸಮರ್ಥನೆ, ಪ್ರತಿಪಕ್ಷ ಸಭಾತ್ಯಾಗ
ಮನರೇಗಾ ವಿಚಾರದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಜಾಹೀರಾತು ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬಳಕೆಯ ಬಗ್ಗೆ ಪ್ರಶ್ನಿಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು. ಮೋದಿ ಅವರ ಹುಟ್ಟು
ದಾದಾ ವ್ಯಕ್ತಿತ್ವ ಗಿರಿ ಸಮಾನ, ಅಜಿತ್ ಪವಾರ್ ಪಂಚಭೂತಗಳಲ್ಲಿ ಲೀನ; ಅಮಿತ್ ಶಾ ಸೇರಿ ಹಲವು ಗಣ್ಯರಿಂದ ಅಂತಿಮ ನಮನ
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ, ಇಂದು (ಜ.29-ಗುರುವಾರ) ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇರಿತು. ಅಜಿತ್ ಪವಾರ್ ಅವರ ಪುತ್ರ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೇ, ಸಾವಿರಾರು ಅಭಿಮಾನಿಗಳು ಅಜಿತ್ ದಾದಾ ಅಮರ್ ರಹೇ ಘೋಷಣೆಗಳನ್ನು ಮೊಳಗಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಡೀ ಪವಾರ್ ಕುಟುಂಬದ ಸಮ್ಮುಖದಲ್ಲಿ ಅಜಿತ್ ಪವಾರ್ ಅವರನ್ನು ಬೀಳ್ಕೊಡಲಾಯಿತು.
ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಿಎಸ್ಟಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ಮಂಗಳವಾರ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಪಿಸಿಎಸ್ ಅಧಿಕಾರಿ ಅಲಂಕಾರ್ ಅಗ್ನಿಹೋತ್ರಿ ಅವರನ್ನು ಅಶಿಸ್ತು ಮತ್ತು ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತುಗೊಳಿಸಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಅಲಂಕಾರ್ ಅಗ್ನಿಹೋತ್ರಿ ಯುಜಿಸಿಯ ಹೊಸ ನಿಯಮಗಳನ್ನು ವಿರೋಧಿಸಿದ್ದರು ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಜೀನಾಮೆ ವೇಳೆ ಆರೋಪಿಸಿದ್ದರು. ಅಯೋಧ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಶಾಂತ್ ಕುಮಾರ್ ಸಿಂಗ್, ನಾನು ಎರಡು ರಾತ್ರಿ ನಿದ್ದೆ ಮಾಡಿರಲಿಲ್ಲ. ಸರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬೆಂಬಲಿಸಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ. ಸಿಎಂ ಆದಿತ್ಯನಾಥ್ ವಿರುದ್ಧದ ಹೇಳಿಕೆಗಳಿಂದ ನನಗೆ ನೋವಾಗಿದೆ. ನನಗೆ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪವಿತ್ರ ಭೂಮಿಯಾದ ಪ್ರಯಾಗ್ರಾಜ್ನಿಂದ ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ವಿಭಜಿಸುವ ಹೇಯ ಪ್ರಯತ್ನಗಳು ನಡೆದಿವೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮುಖ್ಯಮಂತ್ರಿ ವಿರುದ್ಧ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಆದರೆ, ಸರಕಾರಿ ಉದ್ಯೋಗ ಪಡೆಯಲು ನಕಲಿ ಅಂಗವೈಕಲ್ಯ ಪ್ರಮಾಣಪತ್ರ ಬಳಸಿದ್ದಾರೆ ಎಂದು ಆರೋಪಿಸಿ ಅಯೋಧ್ಯೆ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ವಿರುದ್ಧ ಅವರ ಹಿರಿಯ ಸಹೋದರ ಡಾ.ವಿಶ್ವಜೀತ್ ಸಿಂಗ್ ದೂರು ನೀಡಿದ್ದಾರೆ. ತಮ್ಮ ಕಿರಿಯ ಸಹೋದರ ನಕಲಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಬಳಸಿಕೊಂಡು ತಮ್ಮ ಸರಕಾರಿ ನೇಮಕಾತಿಯನ್ನು ಪಡೆದುಕೊಂಡಿದ್ದಾರೆ ಎಂದು ಇದಕ್ಕೂ ಮೊದಲು ಡಾ.ವಿಶ್ವಜೀತ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದರು. ಸಿಎಂಒಗೆ ಕಳುಹಿಸಿದ ಪತ್ರದಲ್ಲಿ ಡಾ.ವಿಶ್ವಜೀತ್ ಸಿಂಗ್ ಅವರು ಅಂಗವೈಕಲ್ಯ ಪ್ರಮಾಣ ಪತ್ರದ ನೈಜತೆ ಕುರಿತು ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ರಾಜೀನಾಮೆ ನೀಡಿರುವುದು ಪರಿಶೀಲನೆ ಮತ್ತು ಕಾನೂನು ಕ್ರಮಗಳನ್ನು ತಪ್ಪಿಸಲು ಮಾಡಿರುವ ನಾಟಕವಾಗಿರಬಹುದು ಎಂದು ಹೇಳಿದ್ದಾರೆ.
ರಾಜ್ಯದ ಪೊಲೀಸರಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ: ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ
ಬೆಂಗಳೂರು: ರಾಜ್ಯದ ಪೊಲೀಸರಿಗೆ ಇನ್ನೂ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವಗಳಿಗೆ ಸಾಂದರ್ಭಿಕ ರಜೆ ಸಿಗಲಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಡಾ. ಎಂ.ಎ.ಸಲೀಂ ಸುತ್ತೋಲೆ ಹೊರಡಿಸಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ಕೋರಿದಲ್ಲಿ, ತಪ್ಪದೆ ರಜೆ ಮಂಜೂರು ಮಾಡುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವಗಳಂತಹ ವೈಯಕ್ತಿಕ ಕಾರ್ಯಕ್ರಮಗಳನ್ನು ಆಚರಿಸುವುದು ಬಹಳ ಮಹತ್ವದ್ದಾಗಿದೆ. ಈ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚೇತನಗೊಳ್ಳಲು, ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಕರ್ತವ್ಯ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಮನೋಬಲ ವೃದ್ಧಿಯಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಇದು ಕೆಲಸದ ಮೇಲಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ಕೋರಿದಲ್ಲಿ, ತಪ್ಪದೆ ರಜೆ ಮಂಜೂರು ಮಾಡಲು ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; 2026-27ರಲ್ಲಿ ಭರ್ಜರಿ 7.2% ಜಿಡಿಪಿ ಬೆಳವಣಿಗೆಯ ನಿರೀಕ್ಷೆ
ನವದೆಹಲಿ: ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ನಿರ್ಮಲಾ ಸೀತಾರಾಮನ್ ಜನವರಿ 29, ಗುರುವಾರದಂದು ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2026-27ರ ಸಾಲಿನಲ್ಲಿ ಭಾರತದ ಆರ್ಥಿಕತೆಯು ಶೇ. 6.8 ರಿಂದ ಶೇ. 7.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಕೇಂದ್ರ ಬಜೆಟ್ಗೂ ಮುನ್ನ
Vihaan Malhotra In RCB- ವಿರಾಟ್ ಕೊಹ್ಲಿ ಅವರ ಜೊತೆ ಆಡಬೇಕು, ಅವರ ಹಾಗಾಗಬೇಕು ಎಂದು ಯಾವ ಎಳೆಯರಿಗೆ ಆಸೆಯಿರುವುದಿಲ್ಲ ಹೇಳಿ. ಆದರೆ ಆ ಕನಸನ್ನು ಉತ್ಕಟವಾಗಿ ಜೀವಿಸಿದವರಿಗೆ ಮಾತ್ರ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯ. ಪಾಟಿಯಾಲದ 19ರ ಹರೆಯದ ಹುಡುಗ ವಿಹಾನ್ ಮಲ್ಹೋತ್ರಾ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರುವ ಬಾಲಕ. ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚತ್ತಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೆಕ್ಕೆಗೆ ಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಆವಕಾಶ ಸಿಕ್ಕಿದೆ.
Illegal Bangladeshi Migrants: ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಆರೋಪಗಳ ನಡುವೆ ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಪ್ರಜೆಗಳ ಪತ್ತೆಗೆ ಎಸ್.ಐ.ಟಿ. ರಚಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ. ಅಕ್ರಮ ಬಾಂಗ್ಲಾ ಪ್ರಜೆಗಳು ಬೆಂಗಳೂರು ಸೇರಿದಂತೆ ಅನೇಕ ಕಡೆ ನೆಲಸಬಹುದು. ಅವರನ್ನು ಗಡಿಪಾರು ಮಾಡುವ ಆತುರತೆ ರಾಜ್ಯ ಸರ್ಕಾರಕ್ಕಿಲ್ಲ. ಸಣ್ಣ ಪುಟ್ಟ
ಕಾಂಗ್ರೆಸ್ ಪಕ್ಷದೊಳಗೆ ಬಿಕ್ಕಟ್ಟು ವದಂತಿ ನಡುವೆಯೇ ರಾಹುಲ್ ಗಾಂಧಿ, ಖರ್ಗೆಯನ್ನು ಭೇಟಿಯಾದ ಶಶಿ ತರೂರ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಕುರಿತು ಸರಣಿ ಪ್ರಶಂಸೆಯ ಹೇಳಿಕೆಗಳನ್ನು ನೀಡುವ ಮೂಲಕ, ಬಿಜೆಪಿಗೆ ಪಕ್ಷಾಂತರ ಮಾಡಬಹುದು ಎಂಬ ವದಂತಿಗೆ ಕಾರಣವಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಗುರುವಾರ ಬೆಳಗ್ಗೆ ಸಂಸತ್ ಭವನದಲ್ಲಿ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷಗಳ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ. ತಮ್ಮ ತವರು ರಾಜ್ಯವಾದ ಕೇರಳದಲ್ಲಿ ಈ ವರ್ಷ ನಡೆಯಲಿರುವ ಚುನಾವಣೆ ಕುರಿತು ನಡೆದ ಚರ್ಚೆ ಸೇರಿದಂತೆ ಹಲವು ಉನ್ನತ ಕಾಂಗ್ರೆಸ್ ನಾಯಕರೊಂದಿಗಿನ ಸಭೆಗಳನ್ನು ಶಶಿ ತರೂರ್ ತಪ್ಪಿಸಿಕೊಂಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಶಶಿ ತರೂರ್ ಅವರು ತಮ್ಮ ದೃಷ್ಟಿಕೋನ ಹಾಗೂ ಕಳವಳಗಳನ್ನು ವ್ಯಕ್ತಪಡಿಸಲು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಬಯಸಿದ್ದರು ಹಾಗೂ ಚುನಾವಣೆಗೂ ಮುನ್ನ ಅವರ ಕುಂದುಕೊರತೆಗಳನ್ನು ಪರಿಹರಿಸಲು ಪಕ್ಷ ಪ್ರಯತ್ನಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಶಶಿ ತರೂರ್ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಹಳಸಿದಂತೆ ಕಂಡು ಬಂದಿತ್ತು. ತಿರುವನಂತಪುರಂನ ನಾಲ್ಕು ಬಾರಿಯ ಸಂಸದರಾದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿ ಈ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯನ್ನು ಬಲವಾಗಿ ಶ್ಲಾಘಿಸಿದ್ದರು. ಈ ಶ್ಲಾಘನೆಯ ವಿರುದ್ಧ ಕಾಂಗ್ರೆಸ್ ನಾಯಕರು ತೀಕ್ಷ್ಣ ವಾಗ್ದಾಳಿ ನಡೆಸಿದ್ದರು. ಈ ಪೈಕಿ ಬಹುತೇಕರು ಶಶಿ ತರೂರ್ ಬಿಜೆಪಿಯತ್ತ ವಾಲಲು ಒಂದು ಆಹ್ವಾನವನ್ನು ಎದುರು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ರಾಹುಲ್ ಗಾಂಧಿ ಭೇಟಿಯಾದ ಶಶಿ ತರೂರ್, 90 ನಿಮಿಷ ಚರ್ಚೆ; ಸಭೆ ಬಳಿಕ ಏನಂದ್ರು ತಿರುವನಂತಪುರಂ ಸಂಸದರು?
ಬಿಜೆಪಿ ಸೇರ್ಪಡೆಯ ವದಂತಿ ಮತ್ತು ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ನಡುವೆ, ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಭೆಯ ನಂತರ ನಾವೆಲ್ಲರೂ ಒಂದೇ ದಾರಿಯಲ್ಲಿ ಸಾಗುತ್ತಿದ್ದೇವೆ, ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತಿರುವನಂತಪುರಂ ಸಂಸದರು ತೆರೆ ಎಳೆದಿದ್ದಾರೆ.
ಭಾರತೀಯ ಸಂಜಾತ ಅಮೆರಿಕದ ಸೈಬರ್ ಮುಖ್ಯಸ್ಥನಿಂದ ಪ್ರಮಾದ; ChatGPTಗೆ ಸೂಕ್ಷ್ಮ ಮಾಹಿತಿ ಅಪ್ಲೋಡ್!
ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ ಭದ್ರತಾ ಏಜೆನ್ಸಿಯ (CISA) ಹಾಲಿ ಮುಖ್ಯಸ್ಥರಾಗಿರುವ ಮಧು ಗೊಟ್ಟುಮುಕ್ಕಲ ಕಳೆದ ಬೇಸಗೆಯಲ್ಲಿ ತಮ್ಮ ಕಾರ್ಯ ವ್ಯಾಪ್ತಿಯೊಳಗೆ ChatGPTಗೆ ಪ್ರಮುಖ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಸೈಬರ್ ಏಜೆನ್ಸಿ ಮುಖ್ಯಸ್ಥ ಭಾರತೀಯ ಸಂಜಾತರಾದ ಮಧು ಗೊಟ್ಟುಮುಕ್ಕಲ ಅವರು ಸೈಬರ್ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ChatGPTಗೆ ಅಪ್ಲೋಡ್ ಮಾಡಿರುವುದಾಗಿ ವರದಿಯಾಗಿದೆ. ಪೊಲಿಟಿಕೊ ಮಾಧ್ಯಮದ ಪ್ರಕಾರ ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ ಭದ್ರತಾ ಏಜೆನ್ಸಿಯ (CISA) ಹಾಲಿ ಮುಖ್ಯಸ್ಥರಾಗಿರುವ ಮಧು ಕಳೆದ ಬೇಸಗೆಯಲ್ಲಿ ತಮ್ಮ ಕಾರ್ಯ ವ್ಯಾಪ್ತಿಯೊಳಗೆ ಕಾಂಟ್ರಾಕ್ಟಿಂಗ್ (ಕಚ್ಚಾ ಮಾಹಿತಿ) ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ವಿವರಗಳನ್ನು ಎಐ ವೇದಿಕೆಯಾದ ChatGPTಗೆ ಅಪ್ಲೋಡ್ ಮಾಡಿದ್ದರು. ಮಾಹಿತಿ ChatGPTಗೆ ಹಾಕಿದ ತಕ್ಷಣ ಸ್ವಯಂಚಾಲಿತವಾಗಿ ಭದ್ರತಾ ಎಚ್ಚರಿಕೆ ಹೋಗಿತ್ತು ಮತ್ತು ಪರಿಣಾಮವಾಗಿ ಆಂತರಿಕವಾಗಿ ವಿಚಾರಣೆಯೂ ನಡೆದಿದೆ ಎಂದು ವರದಿಯಾಗಿದೆ. ದಾಖಲೆಯನ್ನು ಗೌಪ್ಯ ಎಂದು ವರ್ಗೀಕರಿಸಲಾಗಿರಲಿಲ್ಲ. ಆದರೆ “ಕಚೇರಿ ಬಳಕೆಗೆ ಮಾತ್ರ” ಎನ್ನುವ ಮಾಹಿತಿ ನೀಡಲಾಗಿತ್ತು. ಹೀಗಾಗಿ ಸಾರ್ವಜನಿಕವಾಗಿ ಪ್ರಕಟಿಸುವ ಅವಕಾಶವಿರಲಿಲ್ಲ. ಹೀಗೆ ಗೌಪ್ಯ ಮಾಹಿತಿಯನ್ನು ಬಹಿರಂಗ ವೇದಿಕೆಗಳಿಗೆ ಅಪ್ಲೋಡ್ ಮಾಡಿದ ತಕ್ಷಣ ಸುರಕ್ಷೆಗೆ ಸಂಬಂಧಿಸಿದ ಎಚ್ಚರಿಕೆಗಳು ಬರುತ್ತವೆ. ಸೂಕ್ಷ್ಮ ಮಾಹಿತಿಗಳು ಬಹಿರಂಗವಾಗದೆ ಇರಲು ಅಮೆರಿಕದಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲಿಟಿಕೊ ವರದಿ ಮಾಡಿದೆ. ಮಧು ಗೊಟ್ಟುಮುಕ್ಕಲ ಯಾರು? ಮಧು ಅವರು ಭಾರತೀಯ ಸಂಜಾತರಾಗಿದ್ದು, ಅತ್ಯಾಧುನಿಕ ಸೈಬರ್ ಬೆದರಿಕೆ, ರಷ್ಯಾ ಮತ್ತು ಚೀನಾಗೆ ಸಂಬಂಧಿತ ಸೇರಿದಂತೆ ಯಾವುದೇ ರಾಷ್ಟ್ರದ ಬೆಂಬಲಿತ ಸೈಬರ್ ಬೆದರಿಕೆಗಳಿಂದ ಫೆಡರಲ್ ನೆಟ್ವರ್ಕ್ ಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಮಧು ಅವರು ಡಕೋಟ ವಿಶ್ವವಿದ್ಯಾಲಯದಿಂದ ಇನ್ಫಾರ್ಮೇಶನ್ ಸಿಸ್ಟಮ್ಸ್ನಲ್ಲಿ ಪಿಎಚ್ಡಿ ಪದವೀಧರರು. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿರ್ವಹಣೆಯಲ್ಲಿ ಡಲ್ಲಾಸ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಆಂಧ್ರ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಬಿಇ ಪದವೀಧರರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆಗಸ್ಟ್ ನಲ್ಲಿ ಸರ್ಕಾರಿ ವ್ಯವಸ್ಥೆ ಅಥವಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆಯೇ ಎಂದು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಭಾಗದ (DHS) ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ತನಿಖೆಯ ಫಲಿತಾಂಶವನ್ನು ಇನ್ನೂ ಬಹಿರಂಗಪಡಿಸಿಲ್ಲ. ಬಹುತೇಕ DHS ಅಧಿಕಾರಿಗಳಿಗೆ ChatGPT ಬಳಸುವ ಅಧಿಕಾರವಿಲ್ಲದೆ ಇದ್ದರೂ, ಮಧು ಅವರಿಗೆ ಬಳಸಲು ಅವಕಾಶ ನೀಡಲಾಗಿತ್ತು. ಈ ಬಗ್ಗೆ CISA ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಧು ಅವರಿಗೆ ChatGPT ಬಳಕೆಗೆ ಅವಕಾಶವಿದೆ. ಅವರು ಅಲ್ಪಾವಧಿಗೆ ಮಿತಿಯೊಳಗೆ ಅದನ್ನು ಬಳಸುತ್ತಾರೆ ಎಂದು ತಿಳಿಸಿದೆ. “ಅವರು ಕೊನೆಯ ಬಾರಿ 2025 ಜುಲೈ ಮಧ್ಯಭಾಗದಲ್ಲಿ ChatGPT ಬಳಸಿದ್ದಾರೆ. ಅವರಿಗೆ ಅಧಿಕೃತವಾಗಿ ಬಳಕೆಗೆ ಅನುಮತಿ ನೀಡಲಾಗಿತ್ತು” ಎಂದು CISA ವಕ್ತಾರ ತಿಳಿಸಿದ್ದಾರೆ.

24 C