ಹಾಸನ | ಲೋಕಾಯುಕ್ತ ದಾಳಿ: ಮನೆ ಬಾಗಿಲು ತೆರೆಯದೆ ನಾಲ್ಕು ಗಂಟೆ ಸತಾಯಿಸಿದ ಮನಪಾ ಎಇಇ!
ಬಾಗಿಲು ತೆರೆಯುವಂತೆ ಮಾಡಿದ ನಿರಂತರ ಮನವಿಗೆ ಸ್ಪಂದಿಸದ ಅಧಿಕಾರಿ
Shiva rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
Shiva rajkumar: ಕನ್ನಡ ಚಿತ್ರರಂಗದಲ್ಲಿ #ActorsNotObjects (ನಟಿಯರು ವಸ್ತುಗಳಲ್ಲ) ಎನ್ನುವ ಅಭಿಯಾನವು ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ನಟ ಶಿವರಾಜ್ ಕುಮಾರ್ ಅವರು ಟ್ವೀಟ್ವೊಂದನ್ನು ಮಾಡಿದ್ದು, ಈ ಟ್ವೀಟ್ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಶಿವರಾಜ್ ಕುಮಾರ್ ಅವರ ಟ್ವೀಟ್ಗೆ ಹಲವರು ಬೆಂಬಲ ಸೂಚಿಸಿದ್ದರೆ, ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ
ರಾಜ್ಯಸಭಾ ಚುನಾವಣೆ | ನಾಮಪತ್ರ ಸಲ್ಲಿಸಿದ ನಿತೀಶ್ ಕುಮಾರ್
ಪಾಟ್ನಾ: ರಾಜ್ಯಸಭೆ ಚುನಾವಣೆಗೆ ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಸಮ್ಮುಖದಲ್ಲಿ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ದಾಖಲೆಯ 10ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ಕೇವಲ ನಾಲ್ಕು ತಿಂಗಳಲ್ಲಿ ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಬಿಹಾರದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ನೂತನ ತಾಲೂಕಾದರೂ ಇಲ್ಲ ಸೌಲಭ್ಯ; ಆಲಮೇಲಕ್ಕೆ ಬೇಕಿದೆ ಬಸ್ ಡಿಪೊ
ಆಲಮೇಲ: ವಿಜಯಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಆಲಮೇಲ ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಕಳೆದರೂ, ಇಲ್ಲಿಯವರೆಗೆ ಸ್ವಂತ ಬಸ್ ಡಿಪೊ ಹೊಂದಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲ ನೂರಾರು ಹಳ್ಳಿಗಳ ಸಂಪರ್ಕ ಕೊಂಡಿಯಾಗಿರುವ ಈ ಭಾಗಕ್ಕೆ ಪ್ರತ್ಯೇಕ ಡಿಪೊ ಮಂಜೂರಾತಿ ಈಗ ಅನಿವಾರ್ಯವಾಗಿದೆ. ಆಲಮೇಲವು ಭೌಗೋಳಿಕವಾಗಿ ಮಹಾರಾಷ್ಟ್ರದ ಗಡಿಗೆ ಹತ್ತಿರದಲ್ಲಿದೆ. ಪ್ರತಿನಿತ್ಯ ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು, ನೌಕರರು ಮತ್ತು ವ್ಯಾಪಾರಸ್ಥರು ವಿಜಯಪುರ, ಸಿಂದಗಿ, ಕಲ್ಬುರ್ಗಿ ಹಾಗೂ ಸೊಲ್ಲಾಪುರಕ್ಕೆ ಸಂಚರಿಸುತ್ತಾರೆ. ಆದರೆ, ಇಲ್ಲಿ ಬಸ್ ಡಿಪೊ ಇಲ್ಲದ ಕಾರಣ ಪಕ್ಕದ ಸಿಂದಗಿ ಅಥವಾ ಇಂಡಿ ಡಿಪೊಗಳಿಂದ ಬರುವ ಬಸ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಬಸ್ಗಳು ಲಭ್ಯವಾಗದೆ ಜನರು ಪರದಾಡುವಂತಾಗಿದೆ. ಸರಕಾರಿ ಜಮೀನು ಲಭ್ಯ: ಯಾವುದೇ ಒಂದು ಬಸ್ ಡಿಪೊ ನಿರ್ಮಾಣಕ್ಕೆ ವಿಶಾಲವಾದ ಜಾಗದ ಅಗತ್ಯವಿರುತ್ತದೆ. ಆಲಮೇಲ ಪಟ್ಟಣದ ವ್ಯಾಪ್ತಿಯಲ್ಲಿ ಡಿಪೊ ನಿರ್ಮಾಣಕ್ಕೆ ಪೂರಕವಾದ ಸಾಕಷ್ಟು ಸರಕಾರಿ ಜಮೀನು ಲಭ್ಯವಿದೆ. ಜಾಗದ ಕೊರತೆಯ ನೆಪ ಹೇಳಲು ಇಲ್ಲಿ ಅವಕಾಶವಿಲ್ಲದಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಜಮೀನು ಮಂಜೂರಾತಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಲಭ್ಯವಿರುವ ಸರಕಾರಿ ಜಮೀನನ್ನೇ ಬಳಸಿಕೊಂಡು ಡಿಪೊ ನಿರ್ಮಿಸಿದರೆ ಸರಕಾರಕ್ಕೆ ಭೂಸ್ವಾಧೀನದ ಹೊರೆಯೂ ತಪ್ಪಲಿದೆ. ತಾಲೂಕಿನ ಮೂಲೆ ಮೂಲೆಗಳಿಂದ ನೂರಾರು ವಿದ್ಯಾರ್ಥಿಗಳು ಇಲ್ಲಿನ ಕಾಲೇಜುಗಳಿಗೆ ಬರುತ್ತಾರೆ. ಸಂಜೆ ವೇಳೆಗೆ ಹಳ್ಳಿಗಳಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಮತ್ತು ಪೋಷಕರು ಆತಂಕ ಎದುರಿಸುತ್ತಿದ್ದಾರೆ. ನಮ್ಮದೇ ಡಿಪೊ ಇದ್ದರೆ ಗ್ರಾಮೀಣ ಭಾಗದ ರೂಟ್ಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ. ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಈಗಾಗಲೇ ಈ ಕುರಿತು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಲಭ್ಯವಿರುವ ಸರಕಾರಿ ಜಮೀನನ್ನು ಗುರುತಿಸಿ, ಡಿಪೊ ನಿರ್ಮಾಣಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಭಾಗದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಾರಿಗೆ ಇಲಾಖೆಯ ಮೇಲೆ ಒತ್ತಡ ತಂದು ಈ ಯೋಜನೆಗೆ ಚಾಲನೆ ನೀಡಬೇಕಿದೆ. ಬೇಡಿಕೆಗಳು ಏನು? <ರಾತ್ರಿ ವಾಸ್ತವ್ಯದ ಬಸ್ಗಳು: ಹಳ್ಳಿಗಳಿಂದ ಆಲಮೇಲಕ್ಕೆ ಬರುವ ಬಸ್ಗಳು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು. <ಹೊಸ ಬಸ್ ನಿಲ್ದಾಣದ ನವೀಕರಣ: ಡಿಪೊ ಜೊತೆಗೆ ಹಳೆಯ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. <ದೂರದ ಊರುಗಳಿಗೆ ನೇರ ಸಂಪರ್ಕ: ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಹೈದ್ರಾಬಾದ್ನಂತಹ ನಗರಗಳಿಗೆ ಆಲಮೇಲದಿಂದಲೇ ನೇರ ಬಸ್ ಸಂಚಾರ ಆರಂಭವಾಗಬೇಕು. ಆಲಮೇಲ ತಾಲೂಕಾದ ನಂತರ ವಾಹನಗಳ ಒತ್ತಡ ಹೆಚ್ಚಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದ ಸರಕಾರಿ ಜಮೀನು ಲಭ್ಯವಿದ್ದರೂ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಮಗೆ ಪ್ರತ್ಯೇಕ ಡಿಪೊ ಮಂಜೂರಾದರೆ ಸಾರಿಗೆ ವ್ಯವಸ್ಥೆ ಸುಧಾರಿಸುವುದಲ್ಲದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ವಿಜಯಕುಮಾರ ಅಕ್ಕಲಕೋಟ, ಸ್ಥಳೀಯ ನಿವಾಸಿ ಆಲಮೇಲಕ್ಕೆ ಬಸ್ ಡಿಪೊ ಮಂಜೂರು ಮಾಡುವಂತೆ ಈಗಾಗಲೇ ಹಲವು ಬಾರಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ಹಿತರಕ್ಷಣಾ ಸಮಿತಿಗಳ ವತಿಯಿಂದ ಸರ್ಕಾರಕ್ಕೆ ಮತ್ತು ಸಾರಿಗೆ ಇಲಾಖೆಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದಷ್ಟು ಸರಕಾರಿ ಜಮೀನು ಲಭ್ಯವಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮಹಾದೇವ ಬಿರಾದಾರ, ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ಸೇವಾ ಸಮಿತಿ
ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಆರತಕ್ಷತೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿ
ತೆಲಂಗಾಣ: ಹೈದರಾಬಾದ್ ನ ತಾಜ್ ಕೃಷ್ಣಾ ಹೋಟೆಲ್ ನಲ್ಲಿ ಬುಧವಾರ ಸಂಜೆ ನಡೆದ ಖ್ಯಾತ ನಟ-ನಟಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ಬಾ.ಹ.ಉಪೇಂದ್ರ ನಿಧನ
ಬೆಂಗಳೂರು, ಮಾ. 5: ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್.ನ ನಿವೃತ್ತ ಡಿಜಿಎಂ ಬಾಣಾಸಂದ್ರ ಹನುಮಂತರಾಯ ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಚ್ಎಎಲ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದ ಉಪೇಂದ್ರ ಅವರು ಅಪ್ರತಿಮ ಕನ್ನಡ ಹೋರಾಟಗಾರರಾಗಿದ್ದರು. ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಡಾ ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗವು 1986ಲ್ಲಿ ನಡೆಸಿದ ‘ಕನ್ನಡ ದೂರದರ್ಶನ’ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ನಡೆದಿರುವ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಶಕ್ತಿ ಕೇಂದ್ರದ ಸಹ ಕಾರ್ಯದರ್ಶಿ, ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಬರವಣಿಗೆಯಲ್ಲೂ ಪರಿಣಿತರಾಗಿದ್ದ ಅವರು ಕಥೆ, ಕವನ, ಲೇಖನಗಳನ್ನು ಬರೆದಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದದಲ್ಲಿ ಪರಣಿತರಾಗಿದ್ದ ಅವರು ರಾಜ್ಯ ಸರ್ಕಾರಕ್ಕೆ ಕೆಲವು ತಾಂತ್ರಿಕ ವಿಷಯವನ್ನು ಅನುವಾದಿಸಿಕೊಟ್ಟಿದ್ದಾರೆ. ತಾಂತ್ರಿಕ ಸಾಹಿತ್ಯ ರಚನೆ, ಅನುವಾದದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಮೆಚ್ಚುಗೆ ಗಳಿಸಿದ್ದರು. ಹಲವು ತಾಂತ್ರಿಕ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದರು. ‘ಕನ್ನಡ ಕಿಸೆಗನ್ನಡಿ’ಯಂತ ಅನನ್ಯ ಕೃತಿಯನ್ನು ಸಂಪಾದಿಸಿದ್ದರು. ಮೃತರು ಪತ್ನಿ , ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಉಪೇಂದ್ರ ಅವರ ದೇಹವನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ದಾನ ಮಾಡಲಾಗಿದೆ. ಕನ್ನಡದ ವಿಚಾರದಲ್ಲಿ ಬಾಣಾಸಂದ್ರ ಹನುಮಂತರಾಯ ಉಪೇಂದ್ರ ಅವರದು ಹನುಮನ ನಿಷ್ಟೆ; ಬುದ್ಧನ ತ್ಯಾಗ’. ನಾಲ್ಕು ದಶಕಗಳು ಕನ್ನಡದ ಹಿತರಕ್ಷಣೆಗೆ ತನು, ಮನ, ಧನ ಸಮರ್ಪಿಸಿದ ತ್ಯಾಗ ಜೀವಿಯಾಗಿದ್ದರು. ಅವರ ನಿಧನ ಕನ್ನಡ ಗೆಳೆಯರ ಬಳಗದ ಚೇತನ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ಕನ್ನಡ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಗೆೆಯ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಸಂತಾಪ ವ್ಯಕ್ತಡಿಸಿದ್ದಾರೆ.
ರಾಜ್ಯದಿಂದ ಮಹಿಳಾ ಪರ ಬಜೆಟ್ ನಿರೀಕ್ಷೆ: ಡಾ.ನಾಗಲಕ್ಷ್ಮಿ ಚೌಧರಿ
ಮಂಗಳೂರು, ಮಾ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಮಹಿಳಾ ಪರವಾಗಿರಬೇಕು. ತಾಯಿ ಮಕ್ಕಳ ಆಸ್ಪತ್ರೆ ಹೆಚ್ಚಾಗಬೇಕು. ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯರ ಸಹಿತ ಮೂಲಸೌಲಭ್ಯ ಇರಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು. ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು. ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳಾ ಹಾಸ್ಟೆಲ್, ಸುರಕ್ಷಣೆ, ಭದ್ರತೆ, ಬಸ್ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಆಯೋಗದ್ದು ಎಂದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಇದು 26ನೇ ಜಿಲ್ಲಾ ಭೇಟಿ. ಎಲ್ಲ ಕಡೆ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು, ಜಾಗೃತಿ ಮೂಡಿಸಿ, ಅಲ್ಲಿಂದ ಸಂಗ್ರಹಿಸಿ ಮಾಹಿತಿ, ಸಮಸ್ಯೆಗಳ ವರದಿಯನ್ನು ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುತ್ತೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಸಿಎಂ ಜತೆ ಖುದ್ದು ಚರ್ಚಿಸಿ, ಡಿಸಿಗಳಿಗೆ ಕರೆ ಮಾಡಿಸಿ ಸಮಸ್ಯೆ ಪರಿಹಾರ ಮಾಡಿಸುತ್ತೇನೆ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಅವರು ತಿಳಿಸಿದರು. 10ಕ್ಕಿಂತ ಹೆಚ್ಚು ಮಹಿಳೆಯರ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚನೆಯಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 78 ಸಾವಿರ ಮಂದಿ ‘ಶೀ ಬಾಕ್ಸ್’ ಪೋರ್ಟಲ್ನಲ್ಲಿ ಸಮಿತಿ ರಚಿಸಿರುವ ಬಗ್ಗೆ ಅಪ್ಲೋಡ್ ಮಾಡಿದ್ದಾರೆ. ಸಮಿತಿ ಮಾಡಿದ ಬಳಿಕ ಅನುಷ್ಠಾನವಾಗಬೇಕು. ಮಹಿಳಾ ದೌರ್ಜನ್ಯ ನಡೆದರೆ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಸ್ಮಾರ್ಟ್ ಫೋನ್ಗಳೂ, ಮಾದಕ ದ್ರವ್ಯ, ಮದ್ಯಪಾನ ಸಹಿತ ಹಲವು ಕಾರಣಗಳಿವೆ. ನಮ್ಮ ಕಾನೂನು ಬಿಗಿಯಾಗಿದ್ದರೂ, ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಪ್ರತೀ ಪ್ರೇಮದ ಹೆಸರಿನಲ್ಲಿ ಕೊಲೆಗಳು ನಡೆಯುತ್ತಿವೆ. ಧಾರವಾಡದಲ್ಲಿ ಅನ್ಯ ಜಾತಿಯ ಹುಡುಗನ ಜತೆ ಮದುವೆಯಾದ ಕಾರಣಕ್ಕೆ ಹೆತ್ತ ಮಗಳನ್ನೇ ಅಪ್ಪನೇ ಕೊಲ್ಲುತ್ತಾನೆ. ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಬೆಳೆಯಬೇಕು ಎಂದರು. ಬುಧವಾರ ರಾತ್ರಿ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯಗಳು ಹೈಟೆಕ್ ಆಗಿವೆ. ಕುಡಿಯುವ ನೀರು, ಪೊಲೀಸ್ ಗಸ್ತು, ಚೆಕ್ ಪೋಸ್ಟ್ ಎಲ್ಲವೂ ಚೆನ್ನಾಗಿವೆ. 21 ಸಿಸಿ ಕ್ಯಾಮೆರಗಳೂ ಕಾರ್ಯಾಚರಿಸುತ್ತಿವೆ. ತಾಯಿ ಮಗು ಕೊಠಡಿಯಿಂದ ತೆಗೆದಿರುವ ತೊಟ್ಟಿಲು ಮತ್ತೆ ಹಾಕಲು, ಇಲ್ಲಿಂದ ಹೊರಡುವ ಎಲ್ಲ ಬಸ್ಗಳಲ್ಲೂ ಸಹಾಯವಾಣಿ ಸಂಖ್ಯೆ ಅಳವಡಿಸಲು ಸಲಹೆ ಮಾಡಿದ್ದೇನೆ ಎಂದರು. ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಉಗ್ರಪ್ಪ ವರದಿ, ಜಯಮಾಲ ವರದಿ ಹಾಗೂ ಈಗಿನ ಎಸ್ಐಟಿ ತನಿಖೆ ಹಿನ್ನೆಲೆಯಲ್ಲಿ ವರದಿ ಕೊಡಲು ಪತ್ರ ಬರೆದಿದ್ದೆ. ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ತೀರ್ಪು ಬಂದ ಬಳಿಕ ವರದಿ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ.ನಾಗಲಕ್ಷ್ಮೀ ಚೌಧರಿ ಉತ್ತರಿಸಿದರು.
Assam | ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾದ ಮೂವರು ಕಾಂಗ್ರೆಸ್ ಶಾಸಕರು
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್ ಪಕ್ಷದ ಶಾಸಕರಾದ ಕಮಲಾಖ್ಯ ಡೇ ಪುರಕಾಯಸ್ತ, ಶಶಿಕಾಂತ ದಾಸ್ ಹಾಗೂ ಬಸಂತ ದಾಸ್ ಅವರು ಇನ್ನಿಬ್ಬರೊಂದಿಗೆ ಗುರುವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದರು. ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಪಬಿತ್ರ ಮಾರ್ಗೆರಿಟಾ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಸೈಕಿಯಾ ಅವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಬಿಜೆಪಿ ಪಕ್ಷಕ್ಕೆ ಅಸ್ಸಾಂ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಸೇರ್ಪಡೆಯಾದ ಬೆನ್ನಿಗೇ, ಈ ಬೆಳವಣಿಗೆ ನಡೆದಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಎಪ್ರಿಲ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರ AI ನಿರ್ಮಿತ ನಕಲಿ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಬರೋಬ್ಬರಿ 31 X ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿಗೆ ʼಇರಾನ್ ವಾರ್ ಮಾನಿಟರ್ʼ ಹೀಗೆ ವಿವಿಧ ಹೆಸರುಗಳನ್ನು ನೀಡಿ ಇರಾನ್ ಪರವಾದ ಸಂದೇಶಗಳಿರುವ ನಕಲಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದು ಬೆಳಕಿಗೆ ಬಂದಿದೆ ಎಂದು X ಪ್ರಾಡಕ್ಟ್ ಟೀಂ ಮುಖ್ಯಸ್ಥ ನಿಕಿತಾ ಬಿಯರ್ ಮಾಹಿತಿ ನೀಡಿದ್ದು, ಇಂತವರ ಎಡೆಮುರಿ ಕಟ್ಟಲು ಮುಂದಾಗಿದ್ದಾರೆ. ಇನ್ನು, ಹೀಗೆ ಯುದ್ದ ಸಂಬಂಧಿತ AI ವಿಡಿಯೋ ಹಂಚಿಕೊಂಡವರು AI ಎಂದು ಟ್ಯಾಗ್ ಮಾಡದೇ ಹೋದಲ್ಲಿ ಅವರಿಗೆ ನೀಡಲಾಗುವ ಆದಾಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜ್ಞಾನ ಭರಿತ ಶಿಕ್ಷಣ ಹೆಣ್ಣು ಮಕ್ಕಳ ಅಸ್ತ್ರ: ಡಾ. ನಾಗಲಕ್ಷ್ಮಿ ಚೌಧರಿ
ಮಂಗಳೂರು, ಮಾ.5: ಹೆಣ್ಣು ಮಕ್ಕಳು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯದ ಸಂದರ್ಭ ಎದ್ದು ನಿಂತು ಹೋರಾಡುವಲ್ಲಿ ಅರಿವಿನಿಂದ ಕೂಡಿದ ಶಿಕ್ಷಣ ಅಸ್ತ್ರವಾಗಿರುತ್ತದೆ. ಶಿಕ್ಷಣ ಪಡೆಯುವ ಜತೆಗೆ ಹೆಣ್ಣು ಮಕ್ಕಳು ತಮ್ಮ ಹಕ್ಕು, ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಯುವ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಆಂತರಿಕ ದೂರು ನಿವಾರಣಾ ಸಮಿತಿ ಸಹಯೋಗದಲ್ಲಿ ವಿದ್ಯಾರ್ಥಿನಿಯರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಸಂವಿಧಾನ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ನೀಡುತ್ತದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ತುಂಬುತ್ತದೆ. ಹೆಣ್ಣು ಅನ್ಯಾಯ, ದೌಜನ್ಯಗಳ ವಿರುದ್ಧ ಸಿಡಿದೇಳುವ ಶಕ್ತಿಯಾಗಿದ್ದು, ಆಕೆಯ ಹಕ್ಕು, ಕಾನೂನುಗಳನ್ನು ತಿಳಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದರು. ಆನ್ಲೈನ್, ಸೈಬರ್ ವಂಚನೆ ಮೂಲಕ ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿರುವ ಬಗ್ಗೆ ನೈಜ ಘಟನೆಯನ್ನು ವಿವರಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ ಅವರು, ಯಾವುದೇ ರೀತಿಯ ಅನ್ಯಾಯ ನಡೆದಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಪಡೆಯುವಂತೆ ಪ್ರೇರೇಪಿಸಿದರು. ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಕಠಿಣ ಪರಿಶ್ರಮದಿಂದ ಸೋಲನ್ನು ಜಯಿಸಬಹುದು. ಅವಮಾನ, ಸೋಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮಹಿಳೆಯರಲ್ಲಿರಬೇಕು ಎಂದು ತಮ್ಮ ಜೀವನದ ಸೋಲು ಗೆಲುವುಗಳನ್ನು ಡಾ. ನಾಗಲಕ್ಷ್ಮಿ ಚೌಧರಿ ಮೆಲುಕು ಹಾಕಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಜೈಬುನ್ನಿಸಾ, ಡಿಡಿಪಿಯು ರಾಜಲಕ್ಷ್ಮಿ, ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಗ್ರಂಥಪಾಲಕಿ ಶಿಲ್ಪಾ, ಆಂತರಿಕ ಗುಣಮಟ್ಟ ಭರವಸಾ ಕೋಶದ ಡಾ. ಮಂಜುಳಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಜಯಶ್ರೀ ಸ್ವಾಗತಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು. ಮಂಗಳೂರಿನ ಹೆಣ್ಣು ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ ಮಹಿಳಾ ಸಹಾಯವಾಣಿ, ಪೊಲೀಸ್ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಪ್ರಶ್ನಿಸುವ ಸಂದರ್ಭ ವಿದ್ಯಾರ್ಥಿನಿಯರು ಥಟ್ಟನೆ ಉತ್ತರಿಸಿದಾಗ ಡಾ. ನಾಗಲಕ್ಷ್ಮಿ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ. ಇನ್ನಷ್ಟು ಕಾನೂನು ತಿಳುವಳಿಕೆ ಪಡೆಯಬೇಕು ಎಂದು ಅವರು ಹೇಳಿದರು.
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆಲ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ
Sachin Tendulkar: ಟಿ20 ವಿಶ್ವಕಪ್ 2026 ಅತ್ಯಂತ ನಿರ್ಣಾಯಕ ಪಂದ್ಯವಾದ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಪರ ಫಿನ್ ಅಲೆನ್ ಸ್ಫೋಟಕ ಶತಕ ಸಿಡಿಸಿ ಹೊಸ ದಾಖಲೆ ಮಾಡಿದರು. ಅವರ ಈ ಅಮೋಘ ಇನಿಂಗ್ಸ್ ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಕುರಿತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ
ಅಬುಧಾಬಿಯಲ್ಲಿ ಸೀಮಿತ ವಿಮಾನ ಕಾರ್ಯಾಚರಣೆ ಪುನರಾರಂಭ: ವರದಿ
ಅಬುಧಾಬಿ: ಅಬುಧಾಬಿಯ ಝಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೀಮಿತ ಪ್ರಮಾಣದಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಪುನರಾರಂಭಿಸಲಾಗಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ ಎಂದು aljazeera.com ವರದಿ ಮಾಡಿದೆ. ಮದ್ಯಪ್ರಾಚ್ಯದಲ್ಲಿನ ಇತ್ತೀಚಿನ ಸಂಘರ್ಷದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯಗೊಂಡಿದ್ದ ವಿಮಾನ ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸುವ ಕ್ರಮ ಕೈಗೊಳ್ಳಲಾಗಿದ್ದು, ಪ್ರಸ್ತುತ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್ ಮತ್ತು ಎತಿಹಾದ್ ಏರ್ವೇಸ್ಗಳು ನಿರ್ದಿಷ್ಟಪಡಿಸಿರುವ ಸುರಕ್ಷಿತ ವಾಯು ಕಾರಿಡಾರ್ಗಳ ಮೂಲಕ ಸೀಮಿತ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ನಡೆಸಲಿವೆ ಎಂದು ತಿಳಿಸಿದೆ.
ವಿಶ್ವದ ಎಲ್ಲಾ ವಿಮಾನ ನಿಲ್ದಾಣಕ್ಕಿಂತ ಬೆಂಗಳೂರು ಏರ್ಪೋರ್ಟ್ ಬೆಸ್ಟ್: ಸತತ 4 ನೇ ಬಾರಿಗೆ ಬೆಸ್ಟ್ ಅರೈವಲ್ಸ್ ಪಟ್ಟ!
ಭಾರತ ದೇಶವೇ ಅತಿಥಿ ಸತ್ಕಾರಕ್ಕೆ ಹೆಸರುವಾಸಿ ದೇಶ, ಅದೇ ರೀತಿ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ , ಏರ್ಪೋರ್ಟ್ ಗೆ ಬರುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಸೇವೆ ಕೊಡುವ ಮೂಲಕ ವಿಶ್ವದಲ್ಲೇ ನಾಲ್ಕನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ.
ಗುಂಡಿಗಳ ಗೂಡಾದ ರಾಷ್ಟ್ರೀಯ ಹೆದ್ದಾರಿ
ವಿಜಯಪುರ-ಇಂಡಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚಾರ
ಅರ್ಧಕ್ಕೆ ನಿಂತ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳು
ಸಂಕಷ್ಟಕ್ಕೆ ಸಿಲುಕಿದ ಫಲಾನುಭವಿಗಳು
ಇರಾನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ: ಅಮೆರಿಕ ಸೆನೆಟ್ನಿಂದ ಮಾಜಿ ನೌಕಾಪಡೆಯ ಅಧಿಕಾರಿ ಹೊರಕ್ಕೆ
ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಯನ್ನು ಖಂಡಿಸಿ ಬುಧವಾರ ಸಶಸ್ತ್ರ ಸೇವೆಗಳ ಉಪಸಮಿತಿಯ ಅಧಿವೇಶನದ ಸಮಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರೊಬ್ಬರನ್ನು ಯುಎಸ್ ಸೆನೆಟ್ ನಿಂದ ಹೊರ ಹಾಕಲಾಗಿದೆ. ಪ್ರತಿಭಟನಾಕಾರರನ್ನು ಬ್ರಿಯಾನ್ ಮೆಕ್ ಗಿನ್ನಿಸ್ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನಲ್ಲಿ ಅವರನ್ನು ಉತ್ತರ ಕೆರೊಲಿನಾದಲ್ಲಿ ಸೆನೆಟ್ಗೆ ಸ್ಪರ್ಧಿಸುತ್ತಿರುವ ಗ್ರೀನ್ ಪಾರ್ಟಿ ಅಭ್ಯರ್ಥಿ ಎಂದು ಹೇಳಿಕೊಂಡಿರುವುದು ಕಂಡು ಬಂದಿದೆ. ಮೆಕ್ ಗಿನ್ನಿಸ್ ಅಮೆರಿಕ ನೌಕಾಪಡೆಯ ಅಧಿಕಾರಿಯಂತೆ ಸಮವಸ್ತ್ರವನ್ನು ಧರಿಸಿರುವಂತೆ ಕಾಣುತ್ತಿದೆ ಎಂದು ವರದಿಯಾಗಿದೆ. ವೀಡಿಯೊದಲ್ಲಿ ಮೆಕ್ ಗಿನ್ನಿಸ್ ಅವರನ್ನು ಕೊಠಡಿಯಿಂದ ಹೊರಗೆ ಕರೆದೊಯ್ಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಅವರು ಕೂಗುಡುತ್ತಿರುವುದು ಕಂಡು ಬಂದಿದೆ. ಇಸ್ರೇಲ್ಗಾಗಿ ಯಾರೂ ಹೋರಾಡಲು ಬಯಸುವುದಿಲ್ಲ ಎಂದು ಹೇಳುವುದು ಕೇಳಿಸಿದೆ. ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯ, ಮೊಂಟಾನಾ ಸೆನೆಟರ್ ಟಿಮ್ ಶೀಹಿ, ಮೆಕ್ ಗಿನ್ನಿಸ್ಸ್ ಅವರ ಕೈ ಸಿಲುಕಿಕೊಂಡಿದೆ ಎಂದು ಇತರ ಪ್ರತಿಭಟನಾಕಾರರು ಕೂಗಿದಾಗ, ಸಹಾಯ ಮಾಡುವುದು ಕೂಡ ವೀಡಿಯೊದಲ್ಲಿ ಕಂಡು ಬಂದಿದೆ. #BREAKING : Watch Former Marine Sgt. Brian McGuinness stood up in Congress to say that we don’t want to fight a war with Iran for Israel while being removed by the Capitol police #Washington | #DC Watch As Former Marine Sgt. Brian McGuinness stood up during a Senate… pic.twitter.com/8mAyO2gz9q — R A W S A L E R T S (@rawsalerts) March 4, 2026
ಉತ್ತರ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ ದಾಳಿ: IRGC ಹೇಳಿಕೆ
ಟೆಹ್ರಾನ್: ಉತ್ತರ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ತನ್ನ ನೌಕಾಪಡೆಯು ಅಮೆರಿಕದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಹೇಳಿಕೊಂಡಿದೆ ಎಂದು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿ aljazeera.com ವರದಿ ಮಾಡಿದೆ. ಅಮೆರಿಕ, ಇಸ್ರೇಲ್ ಹಾಗೂ ಯುರೋಪಿಯನ್ ದೇಶಗಳನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಸೇರಿದ ಮಿಲಿಟರಿ ಮತ್ತು ವಾಣಿಜ್ಯ ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಅಂತಹ ಹಡಗುಗಳು ಗಮನಕ್ಕೆ ಬಂದರೆ ಅವುಗಳಿಗೆ ಖಂಡಿತವಾಗಿಯೂ ಹೊಡೆತ ಬೀಳುತ್ತದೆ ಎಂದು IRGC ಎಚ್ಚರಿಕೆ ನೀಡಿದೆ. “ಯುದ್ಧದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳ ಆಧಾರದ ಮೇಲೆ, ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳನ್ನು ನಿಯಂತ್ರಿಸುವ ಹಕ್ಕು ಇದೆ ಎಂದು ನಾವು ಈ ಹಿಂದೆಯೇ ತಿಳಿಸಿದ್ದೇವೆ,” ಎಂದು IRGC ಹೇಳಿದೆ. ಈ ಕುರಿತು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ನೇತ್ರಾವತಿ ನದಿ ತೀರದಲ್ಲಿ ಆಧಾರ್ ಕಾರ್ಡ್ಗಳ ರಾಶಿ ಪತ್ತೆ ; ತನಿಖೆಗೆ ಆಗ್ರಹ
ರಾಶಿ ರಾಶಿ ಆಧಾರ್ ಕಾರ್ಡ್ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಇಷ್ಟೊಂದು ಆಧಾರ್ ಕಾರ್ಡ್ಗಳು ಹೇಗೆ ತೇಲಿ ಬಂದವು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಣ ಪತ್ತೆ ಹಚ್ಚಲು ಸ್ಪೀಕರ್ ಯು.ಟಿ. ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಮೀನುಗಾರ ಮಹಿಳೆಯರ ಸಮಸ್ಯೆ ಸರಕಾರದ ಗಮನಕ್ಕೆ: ಡಾ.ನಾಗಲಕ್ಷ್ಮಿ ಚೌಧರಿ
ಮಂಗಳೂರು ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ, ಸಮಸ್ಯೆ ಆಲಿಕೆ
ಇರಾನ್ ಮುಂದೆ US ಸೋಲು ಖಚಿತ: ಚೀನಾದ ನಾಸ್ಟ್ರಾಡಾಮಸ್ ಭವಿಷ್ಯವಾಣಿ! ಯಾರೀ ಪ್ರೊಫೆಸರ್ Jiang Xueqin?
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾಂಗ್ ಭವಿಷ್ಯ ನುಡಿದಿದ್ದ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೆ, 2024ರಲ್ಲೇ ಜಿಯಾಂಗ್ ಈ ಭವಿಷ್ಯವಾಣಿ ನುಡಿದಿದ್ದರು. ಅದೀಗ ನಿಜವಾಗುತ್ತಾ?
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ದೂರು
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ಎಫ್ಐಆರ್
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಮತ್ತೆ ಕುಸಿದ ಚಿನ್ನದ ದರ, ಸ್ಥಿರವಾದ ಬೆಳ್ಳಿ
ಮಾರ್ಚ್ 18ರಂದು ನಡೆಯುವ ಸಭೆಯಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್ತು. ಕಳೆದ ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಆದರೆ, ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು, ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ಚಿನ್ನ-ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದ ನಂತರ ಗುರುವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಚಿನ್ನ-ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿವೆ. ಪ್ರಸ್ತುತ ಮಾರುಕಟ್ಟೆಯ ಗಮನವು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೈಗೊಂಡ ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರಗಳ ಕಡೆಗೆ ಹೋಗಿದೆ. ಅಮೆರಿಕನ್ ಡಾಲರ್ ಬೆಲೆಯು ಉತ್ತಮ ಸ್ಥಿತಿಗೆ ತಲುಪಿದೆ. ಹೀಗಾಗಿ ವಿದೇಶಿ ಖರೀದಿದಾರರಿಗೆ ಚಿನ್ನ-ಬೆಳ್ಳಿ ದುಬಾರಿಯಾಗಿಸಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಮಾರ್ಚ್ 18ರಂದು ನಡೆಯುವ ಸಭೆಯಲ್ಲಿ ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಶುಕ್ರವಾರ ಬಿಡುಗಡೆಯಾಗಲಿರುವ ಉದ್ಯೋಗ ವರದಿಯ ಮೇಲಿನ ನಿರೀಕ್ಷೆಯೂ ಹೂಡಿಕೆದಾರರನ್ನು ಚಿನ್ನದಿಂದ ದೂರವಿಟ್ಟಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 05ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 98 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,63,530 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 90 ರೂ. ಇಳಿದು ಹತ್ತು ಗ್ರಾಂಗೆ 1,49,900 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 73 ರೂ. ಇಳಿಕೆಯಾಗಿ ಹತ್ತು ಗ್ರಾಂಗೆ 1,22,650 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 05ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,353 (-98) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,265 (-73) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ಭಾನುವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಈ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು. ಮಂಗಳವಾರದಿಂದ ಬೆಳ್ಳಿಯ ಬೆಲೆ ಕುಸಿತದ ಹಾದಿಯಲ್ಲಿದೆ. ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ಇದೀಗ ಗುರುವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,358 (-98) ರೂ., 22 ಕ್ಯಾರೆಟ್ ಚಿನ್ನದ ದರ 14,995 (-90) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,495 (-87) ರೂ., 22 ಕ್ಯಾರೆಟ್ ಚಿನ್ನದ ದರ 15,120 (-80) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ.
ಸೇಡಂ: ಕಾಲು ಜಾರಿ ಬಿದ್ದು ಯುವಕ ನದಿಪಾಲು
ಸೇಡಂ: ಕಾಲು ಜಾರಿ ಬಿದ್ದು ಯುವಕನೋರ್ವ ನದಿಪಾಲಾಗಿರುವ ಘಟನೆ ತಾಲೂಕಿನ ಕಾಚೂರ ಸಮೀಪದ ಕಾಗಿಣಾ ನದಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸೇಡಂ ಪಟ್ಟಣದ ಶಾಸ್ತ್ರಿ ನಗರದ ನಿವಾಸಿ ರೂಹಾನ್ (18) ಮೃತ ಯುವಕ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಕಾಚೂರ ಕಾಗಿಣಾ ನದಿಯಲ್ಲಿ ಕಾಲು ಜಾರಿಬಿದ್ದು ನೀರುಪಾಲಾಗಿದ್ದಾನೆ. ಬಳಿಕ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯವರು ಶೋಧ ಕಾರ್ಯ ನಡೆಸಿದರು. ನಿರಂತರ ಶೋಧ ನಡೆಸಿದ ಬಳಿಕ ಸಂಜೆ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್-ಅಮೆರಿಕಾ ಮಧ್ಯೆ ಉದ್ವಿಗ್ನತೆ ಹಚ್ಚಾಗುತ್ತಿದೆ. ಈ ನಡುವೆ ಅಮೆರಿಕಾ ʼಡೂಮ್ಸ್ಡೇʼ ಎಂದೇ ಕರೆಸಿಕೊಳ್ಳುವ ಅತ್ಯಂತ ಅಪಾಯಕಾರಿ ಪರಮಾಣು ಸಾಮರ್ಥ್ಯದ ಮಿನಿಟ್ಮ್ಯಾನ್ III ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.ಈ ಪರೀಕ್ಷೆ ಪೂರ್ವ ನಿಯೋಜಿತವಾಗಿದ್ದು, ಇರಾನ್ ಯುದ್ದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಆದಾಗ್ಯೂ, ಪರೀಕ್ಷೆಯ ಸಮಯ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಇದು ಇರಾನ್ ಅನ್ನು ಬೆದರಿಸಲು US ಮಾಡುತ್ತಿರುವ ಕಾರ್ಯತಂತ್ರದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾದ್ರೆ, ಏನಿದು ʼಡೂಮ್ಸ್ಡೇʼ ಕ್ಷಿಪಣಿ? ಇದೆಷ್ಟು ಅಪಾಯಕಾರಿ ಎಂಬ ಮಾಹಿತಿ ಇಲ್ಲಿದೆ..
ಉಳ್ಳಾಲ | ಮಿಲ್ಲತ್ ನಗರದ ಯುವಕ ಕುವೈತ್ ನಲ್ಲಿ ಆತ್ಮಹತ್ಯೆ
ಉಳ್ಳಾಲ: ಉಳ್ಳಾಲದ ಯುವಕನೋರ್ವ ಕುವೈತ್ ನಲ್ಲಿ ಆತ್ಮಹತ್ಯೆಗೈದಿರುವುದಾಗಿ ವರದಿಯಾಗಿದೆ. ಉಳ್ಳಾಲ ಮಿಲ್ಲತ್ ನಗರ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಯಾಕೂಬ್ ನೌಫಲ್ ಇಬ್ರಾಹೀಂ(29) ಮೃತಪಟ್ಟ ಯುವಕ. ಕುವೈತ್ ನಲ್ಲಿ ಹೌಸ್ ಡ್ರೈವರ್ ಉದ್ಯೋಗದಲ್ಲಿದ್ದ ಯಾಕೂಬ್ ನೌಫಲ್ 2024ರಲ್ಲಿ ಊರಿಗೆ ಆಗಮಿಸಿದ್ದರು. ಬಳಿಕ ಅವರು ಕುವೈತ್ ಗೆ ತೆರಳಿ ಒಂದು ವರ್ಷ ಮೂರು ತಿಂಗಳು ಕಳೆದಿದ್ದು, ಮುಂಬರುವ ಬಕ್ರೀದ್ ಗೆ ಊರಿಗೆ ಬರುವ ಸಿದ್ಧತೆಯಲ್ಲಿದ್ದರು ಎಂದು. ಈ ಮಧ್ಯೆ ಬುಧವಾರ ಅವರ ಮೃತದೇಹ ಕುವೈತ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿವಾಹಿತರಾಗಿರುವ ಯಾಕೂಬ್ ನೌಫಲ್ ರಿಗೆ ಯಾವುದೇ ಕೌಟುಂಬಿಕ ಸಮಸ್ಯೆ ಇರಲಿಲ್ಲ. ಆದರೆ ಮೂರು ತಿಂಗಳಿನಿಂದ ವೇತನ ಸಿಕ್ಕಿಲ್ಲ ಎಂದು ಅವರು ಇತ್ತೀಚೆಗೆ ಮನೆಮಂದಿಯೊಂದಿಗೆ ಅಳಲು ತೋಡಿಕೊಂಡಿದ್ದರು. ಅವರ ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Karnataka School Fee: ಬರುವ ಶೈಕ್ಷಣಿಕ ವರ್ಷದಲ್ಲಿ (2026-27) ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಯೋಜಿಸುತ್ತಿರುವ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಶಿಕ್ಷಕರ ವೇತನ ಪರಿಷ್ಕರಣೆ ಮತ್ತು ಶಾಲಾ ನಿರ್ವಹಣಾ ವೆಚ್ಚಗಳ ಏರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇಕಡ 8 ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ.
ದೈಹಿಕ ಶಿಕ್ಷಣ ಶಾಲೆಯಿಂದ ಮಾಯವಾಗುತ್ತಿದೆಯೇ?
ರಾಜ್ಯ ಸರಕಾರ 2026-27ರಿಂದ ಮೌಲ್ಯಶಿಕ್ಷಣ ಎನ್ನುವ ಹೊಸ ವಿಷಯವನ್ನು ಶಾಲಾ ಪಠ್ಯದಲ್ಲಿ ಸೇರಿಸಲಿದೆ. ಆದರೆ, ದೈಹಿಕ ಶಿಕ್ಷಣವೇ ಕಾಣೆಯಾಗಿದ್ದು, ದೈಹಿಕ ಶಿಕ್ಷಣ ಏನಾಯಿತು? ಇನ್ನು ಮುಂದೆ ನಮ್ಮ ಪದನಾಮವೇನು ಆಗಲಿದೆ? ವೃಂದ ನೇಮಕಾತಿ ಬದಲಾಗುತ್ತದೆಯೇ? ಹೀಗೆ ಬದಲಾದರೆ ಮುಂದೆ ತರಬೇತಿ ಕಾಲೇಜಿನಲ್ಲಿಯೂ ಅದರ ಹೆಸರು ಬದಲಾಗುತ್ತದೆಯೇ? ಎಂದು ದೈಹಿಕ ಶಿಕ್ಷಣ ಶಿಕ್ಷಕರು ಚಿಂತಿತರಾಗಿದ್ದಾರೆ. ಈ ಸಂಬಂಧ ಸರಕಾರದಿಂದಾಗಲಿ ಇಲಾಖೆಯಿಂದಾಗಲಿ ಇನ್ನೂ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ದೈಹಿಕ ಶಿಕ್ಷಣದ ಹೆಸರನ್ನೇ ‘ಮೌಲ್ಯ ಶಿಕ್ಷಣ’ ಎಂದು ಬದಲಾಯಿಸಲಾಗಿದೆ. ಹಾಗಾದರೆ ಇದನ್ನು ಸರಕಾರಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಕಡಿತಗೊಳಿಸಿರುವುದು ಯಾಕಾಗಿ ಎಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ 2008ರಿಂದ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿಯಂತೆ 6ರಿಂದ 10ನೇ ತರಗತಿವರೆಗೆ ಸರಕಾರಿ, ಅನುದಾನಿತ, ಅನುದಾನರಹಿತ ಶಾಲಾ ಮಕ್ಕಳಿಗೂ ದೈಹಿಕ ಶಿಕ್ಷಣ 7ನೇ ಪಠ್ಯವಾಗಿ ಜಾರಿಗೊಳಿಸಿ ಮೌಲ್ಯ ಮಾಪನ ನಡೆಸಲಾಗುತ್ತಿತ್ತು. ದೈಹಿಕ ಶಿಕ್ಷಣ ಶಿಕ್ಷಕರು ಇತರ ವಿಷಯಗಳ ಶಿಕ್ಷಕರಿಗೆ ಸಮಾನರಾಗಿದ್ದಾರೆ, ಅವರಿಗೆ ಆಡಳಿತಾತ್ಮಕವಾಗಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ನೀಡುವುದರಿಂದ ದೈಹಿಕ ಶಿಕ್ಷಣದ ವಿಷಯದಲ್ಲಿಯೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಕೆಲಸ ಮಾಡಲು ಮತ್ತು ಮಕ್ಕಳನ್ನು ಶಿಸ್ತಾಗಿ ಚಟುವಟಿಕೆಯಲ್ಲಿ ತೊಡಗಿಸಲು ಸಾಧ್ಯ, ಹೀಗಾಗಿ ಅವರ ವೃಂದ ನೇಮಕಾತಿ ನಿಯಮ ಬದಲಿಸಲು ಒತ್ತಾಯವೂ ಕೇಳಿಬಂದಿತು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆ ನೀಡುವುದರ ಬಗ್ಗೆ ಸಹಶಿಕ್ಷಕರ ವಿರೋಧವಿದೆ. ದೈಹಿಕ ಶಿಕ್ಷಣದ ಬದಲಿಗೆ ಬೇರೆ ಹೆಸರು ಬಂದರೂ ಸಮಸ್ಯೆ ಆಗಲ್ಲ, ದೈಹಿಕ ಶಿಕ್ಷಣವನ್ನು ಹಿಂದಿನಿಂದ ಹೇಗೆ ನೋಡುತ್ತಿದ್ದೇವೆಯೇ ಹಾಗೆಯೇ ನೋಡುವ ಜನರಿಗೆ ಬದಲಾದ ವಿದ್ಯಮಾನಗಳಿಗೆ ಒಪ್ಪಿಸುವುದು ಕಷ್ಟ ಎಂಬುದು ಕೆಲವು ಅಧಿಕಾರಿಗಳ ವಿಶ್ಲೇಷಣೆ ಆಗಿತ್ತು. ಈ ವಿಷಯವಾಗಿ ಪರ-ವಿರೋಧಗಳ ನಡುವೆ ಡಾ. ವಿಶಾಲ್ರವರು 2022ರಲ್ಲಿ ದೈಹಿಕ ಶಿಕ್ಷಣವನ್ನು ಪಾತಾಳಕ್ಕೆ ಇಳಿಸಿಹೋದರು. ಇದರಿಂದ ತೇಜೋವಧೆಗೆ ಒಳಗಾದ ದೈಹಿಕ ಶಿಕ್ಷಣ ಶಿಕ್ಷಕರು ಹತಾಶರಾದರು. ಮಕ್ಕಳ ಹಿಡಿತ ಕೈ ತಪ್ಪಿ ಶಾಲೆಗಳಲ್ಲಿ ಅಶಿಸ್ತು ತಾಂಡವವಾಡಿತು. ಮೌಲ್ಯ ಶಿಕ್ಷಣದ ಕೂಗು ಕೇಳಿಬಂದಿತು. ಈಗ ದೈಹಿಕ ಶಿಕ್ಷಣದ ಬಗ್ಗೆ ಹಲವು ಅನುಮಾನ ಕಾಡತೊಡಗಿದೆ. ದೈಹಿಕ ಶಿಕ್ಷಣವನ್ನು ಮೂಲೆಗುಂಪು ಮಾಡಿ ಕೆಲವು ಯೋಗಕೇಂದ್ರದಲ್ಲಿ ಯೋಗ ತರಬೇತಿ ಪಡೆದವರನ್ನು ನೇಮಿಸಲು ತೆರೆ ಮರೆಯಲ್ಲಿ ಕೆಲಸ ನಡೆಯುತ್ತಿದೆಯೇ? ಅಥವಾ ದೈಹಿಕ ಶಿಕ್ಷಣದ ಕತ್ತಿಗೆ ಕತ್ತರಿ ಇಟ್ಟು ಅವರನ್ನು ಮುಖ್ಯಶಿಕ್ಷಕರ ಹುದ್ದೆಯಿಂದ ವಂಚಿಸುವ ತಂತ್ರವೇ ಎಂಬುದು ದೈಹಿಕ ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ದೈಹಿಕ ಶಿಕ್ಷಣ ಹಾವು ಏಣಿ ಆಟಕ್ಕೆ ಒಳಗಾಗಿ ಈಗ ಅವಸಾನದತ್ತ ಸಾಗಲು ಸಿದ್ಧವಾಗಿದೆ ಎಂಬಂತೆ ತೋರುತ್ತಿದೆ. ದೈಹಿಕ ಶಿಕ್ಷಣಕ್ಕೆ ಸರಕಾರ ನ್ಯಾಯ ಕೊಡಿಸಬೇಕೆಂದಿದ್ದರೆ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೂ ಮೌಲ್ಯಶಿಕ್ಷಣದಲ್ಲಿ ದೈಹಿಕ ಶಿಕ್ಷಣ ಸೇರಿಸಿ ಪಠ್ಯರಚಿಸಬಹುದಾಗಿತ್ತು. ದೈಹಿಕ ಶಿಕ್ಷಣ ಎಂಬುದು ನೈಸರ್ಗಿಕವಾಗಿ ದೈಹಿಕ ಚಲನಾಶಾಸ್ತ್ರದ ಮೇಲೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳನ್ನು ರಂಜಿಸಿ ಹಾಜರಾತಿ, ಕಲಿಕೆಗೆ ಪೂರಕವಾಗಿ ಶಿಕ್ಷಣದಲ್ಲಿ ಸಂಯೋಜಿಸುವ ಒಂದು ಪಠ್ಯ ವಸ್ತು ಆಗಿದ್ದು ಅದು ಇತರ ಪಠ್ಯಗಳಂತೆ ಪ್ರಧಾನ ವಿಷಯವಾಗಲಿ. ಶಿಕ್ಷಣಕ್ಕೆ ಪೂರಕವಾಗಿರುವ ದೈಹಿಕ ಶಿಕ್ಷಣದ ಕತ್ತು ಹಿಸಕಲು ಸಾಧ್ಯವಿಲ್ಲ. ಅದಕ್ಕೊಂದು ಹೊಸರೂಪವನ್ನು ಸರಕಾರ ನೀಡಲಿ. (ಲೇಖಕರು: ರಾಜ್ಯ ದೈಹಿಕ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು)
ಫ್ರಿಗೇಟ್ ಡೆನಾ ನೌಕೆ ಮುಳುಗಿಸುವ ಮೂಲಕ ಕ್ರೂರ ಕೃತ್ಯ ಎಸಗಿದ ಅಮೆರಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ: ಇರಾನ್
ಟೆಹ್ರಾನ್ : ಇರಾನ್ ನೌಕಾಪಡೆಯ ನೌಕೆ ಫ್ರಿಗೇಟ್ ಡೆನಾವನ್ನು ಮುಳುಗಿಸುವ ಮೂಲಕ ಅಮೆರಿಕ ಸಮುದ್ರದಲ್ಲಿ ಕ್ರೂರ ಕೃತ್ಯ ಎಸಗಿದೆ. ಇದಕ್ಕಾಗಿ ಅಮೆರಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಬ್ಬಾಸ್ ಅರಾಘ್ಚಿ, ಇರಾನ್ ಕರಾವಳಿಯಿಂದ 2,000 ಮೈಲು ದೂರದಲ್ಲಿ ಅಮೆರಿಕ ಸಮುದ್ರದಲ್ಲಿ ಈ ಕ್ರೂರ ಕೃತ್ಯ ಎಸಗಿದೆ ಎಂದು ಹೇಳಿದ್ದಾರೆ. “ಸುಮಾರು 130 ನಾವಿಕರನ್ನು ಹೊತ್ತಿದ್ದ ಫ್ರಿಗೇಟ್ ಡೆನಾಯನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ. ಅಮೆರಿಕ ಈ ಕೃತ್ಯಕ್ಕೆ ಪಶ್ಚಾತ್ತಾಪ ಪಡಲಿದೆ, ನೆನಪಿರಲಿ” ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. The U.S. has perpetrated an atrocity at sea, 2,000 miles away from Iran's shores. Frigate Dena, a guest of India's Navy carrying almost 130 sailors, was struck in international waters without warning. Mark my words: The U.S. will come to bitterly regret precedent it has set. pic.twitter.com/cxYiI9BLUk — Seyed Abbas Araghchi (@araghchi) March 5, 2026
ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಖಂಡಿಸಿ ಅಂಜುಮನ್ ಕಮಿಟಿಯಿಂದ ಸಂತಾಪ
ರಾಯಚೂರು: ಇರಾನ್ ದೇಶದ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ಖಂಡಿಸಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಕಮಿಟಿಯ ವತಿಯಿಂದ ಗಡಿಯಾರ ಚೌಕ್ ಬಳಿ ಬುಧವಾರ ರಾತ್ರಿ ಸಂತಾಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖಾಂಡರಾದ ಕೆಎಫ್ಸಿ ಮೊಹಮ್ಮದ್, ಫೈಸಲ್ ಚಾವುಸ್, ಇಬ್ರಾಹಿಂ, ಅಬ್ದುಲ್ ವಾಹಿದ್, ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸಾರುದ್ದಿನ್, ಅಧ್ಯಕ್ಷ ಹುಸೇನ್ ಭಾಷಾ ಕೆ., ಪ್ರಧಾನ ಕಾರ್ಯದರ್ಶಿ ಅಮೀನ್ ಭಾಯಿ, ವಿವಿಧ ತಾಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳಾದ ಮಹ್ಮದ್ ರಸೂಲ್, ದಾದಾಪೀರ್ ಭಾಯಿ, ರಾಜಸಾಬ್, ರಫಿ ಸಂಪಂಗಿ, ಮೌಲಾ ಭಾಯಿ, ವಸಿಂ, ಹಝ್ರತ್, ಫಾರೂಕ್, ಖಾಸಿಂ ಉಪಸ್ಥಿತರಿದ್ದರು.
ಪಂಚ ಪಾಲಿಕೆಗಳಿಗೆ ಅನುದಾನದ್ದೇ ಚಿಂತೆ! ಬೆಂಗಳೂರಿಗೆ 8500 ಕೋಟಿ ರೂ.ಗೂ ಹೆಚ್ಚಿನ ಅನುದಾನಕ್ಕೆ ಸರಕಾರದ ಮುಂದೆ ಬೇಡಿಕೆ
ರಾಜ್ಯ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಹೊಸದಾಗಿ ವಿಭಜನೆಗೊಮಡಿರುವ ಬೆಂಗಳೂರಿನ 5 ಪಾಲಿಕೆಗಳ ನಿರೀಕ್ಷೆ ಬೆಟ್ಟದಷ್ಟಿವೆ. ರಾಜ್ಯ ಸರ್ಕಾರದ ಅನದಾನ ಆಧರಿಸಿ, ಪಾಲಿಕೆಗಳೂ ಕೂಡಾ ಮಾರ್ಚ್ ತಿಂಗಳಾಂತ್ಯದೊಳಗೆ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಂಡಿವೆ. ಬಿಬಿಎಂಪಿಯ ಆದಾಯ ಸಾಲದೆ, ಸರಕಾರ ಕೊಡುವ ಅನುದಾನದಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ನಿರೀಕ್ಷೆಯಲ್ಲಿದೆ.
Gold Rate March 05: ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ Vs ಇರಾನ್ ನಡುವೆ ತೀವ್ರ ಯುದ್ಧ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಾಮಾನ್ಯವಾಗಿ ಭೌಗೋಳಿಕವಾಗಿ ಸಮಸ್ಯೆಗಳು ಎದುರಾದಾಗೆಲ್ಲವೂ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ ಹೆಚ್ಚಳವಾಗುವುದು ಇದೆ. ಆದರೆ ಇದೀಗ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು
ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ. ದಿಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ‘ಆಮ್ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಸೋತು, ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ‘ಅಬಕಾರಿ ನೀತಿ ಹಗರಣ’ದ ಕಾನೂನು ಸಮರದಲ್ಲಿ ಗೆದ್ದು ಆರೋಪ ಮುಕ್ತರಾಗಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದವರೆಲ್ಲರೂ ನಿರಾಳರಾಗಿದ್ದಾರೆ. ತನಿಖಾಧಿಕಾರಿಗಳನ್ನು ದಿಲ್ಲಿ ‘ರೌಸ್ ಅವೆನ್ಯೂ ಕೋರ್ಟ್’ ಹಿಗ್ಗಾಮುಗ್ಗ ಜಾಡಿಸಿದೆ. ‘‘ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದಿರುವುದರಿಂದ ಪ್ರಕರಣ ವಿಚಾರಣೆಗೆ ಯೋಗ್ಯವಲ್ಲ’’ ಎಂದು ಹೇಳಿದೆ. ಕೇಜ್ರಿವಾಲ್ ಹಾಗೂ ಅವರ ಸಹೊದ್ಯೋಗಿಗಳು ಆರೋಪ ಮುಕ್ತರಾಗಿ ಹೊರ ಬರುವ ನಿರೀಕ್ಷೆ ‘ಕೇಂದ್ರ ತನಿಖಾ ದಳ’ (ಸಿಬಿಐ) ಅಥವಾ ಅವರ ರಾಜಕೀಯ ವೈರಿಗಳಿಗೆ, ಅದರಲ್ಲೂ ಬಿಜೆಪಿ ನಾಯಕರಿಗೆ ಇರಲಿಲ್ಲ. ತನಿಖೆ ಕುರಿತು ಕೋರ್ಟ್ ಕಟುವಾಗಿ ಟೀಕಿಸಿರುವುದನ್ನು ಗಮನಿಸಿದರೆ, ಇದು ‘ರಾಜಕೀಯ ಪ್ರೇರಿತ ಪ್ರಕರಣ’ ಎಂದು ಹೇಳಬಹುದು. ಹಗರಣ ರಾಜಕೀಯವಾಗಿಯೂ ಸೂಕ್ಷ್ಮವಾಗಿರುವುದರಿಂದ ಕೆಳ ಹಂತದ ಕೋರ್ಟ್ ಬೇಕಾಬಿಟ್ಟಿ ವಿಚಾರಣೆ ನಡೆಸಿರುವುದಿಲ್ಲ. ಎಲ್ಲ ಅಂಶಗಳನ್ನು ಪರಿಶೀಲಿಸಿಯೇ ತೀರ್ಪು ನೀಡಿರುತ್ತದೆ. ಆರೋಪದಲ್ಲಿ ಕೂದಲೆಳೆಯ ಅನುಮಾನ (ಅಯೋಟಾ ಆಫ್ ಡೌಟ್) ಇದ್ದರೂ ಕೇಜ್ರಿವಾಲ್ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಿತ್ತು. ಈ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸುತ್ತಿದೆ. ಸಾಮಾನ್ಯವಾಗಿ ಮೇಲಿನ ಕೋರ್ಟ್ ಗಳು ಅಧೀನ ನ್ಯಾಯಾಲಯಗಳ ತೀರ್ಪನ್ನು ಬದಿಗೊತ್ತುವುದು ಅಪರೂಪ. ಅಪ್ಲಿಕೇಷನ್ ಆಫ್ ಫ್ಯಾಕ್ಟ್ಸ್, ಅಪ್ಲಿಕೇಷನ್ ಆಫ್ ಎವಿಡೆನ್ಸ್ ಅಥವಾ ಅಪ್ಲಿಕೇಷನ್ ಆಫ್ ಮೈಂಡ್ನಲ್ಲಿ ಲೋಪ ಅಥವಾ ಎರರ್ ಆಫ್ ಜಡ್ಜ್ ಮೆಂಟ್ ಇದ್ದರೆ ತದ್ವಿರುದ್ಧ ತೀರ್ಪು ಬರುತ್ತವೆ. ಅಧೀನ ನ್ಯಾಯಾಲಯ ಹಾಗೇನಾದರೂ ಮಾಡಿದ್ದರೆ ಮೇಲಿನ ಕೋರ್ಟ್ ಕಟುವಾದ ಆಕ್ಷೇಪ (ಸ್ಟ್ರಿಕ್ಚರ್ ಪಾಸ್ ಮಾಡುವ) ಎತ್ತುವ ಸಾಧ್ಯತೆಗಳಿರುತ್ತವೆ. ಇದರ ಬಗ್ಗೆಯೂ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಭಯವಿರುತ್ತದೆ. ಹೀಗಾಗಿ, ಸೂಕ್ಷ್ಮಾತಿಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವಾಗ ಎಚ್ಚರಿಕೆ ವಹಿಸುವುದುಂಟು. ದಿಲ್ಲಿ ಕೋರ್ಟ್ ತೀರ್ಪಿನಿಂದ ಸಿಬಿಐ ನಡೆ ಮತ್ತೊಮ್ಮೆ ಅನುಮಾನಕ್ಕೆ ಎಡೆಮಾಡಿದೆ. ಸಿಬಿಐ, ಈ.ಡಿ., ಐ.ಟಿ ಮತ್ತಿತರ ಸಂಸ್ಥೆಗಳ ಮೇಲಿನ ಅಪನಂಬಿಕೆ ಹೊಸದಲ್ಲ. ಅಧಿಕಾರದಲ್ಲಿರುವ ಪಕ್ಷ ತನ್ನ ಎದುರಾಳಿಗಳನ್ನು ಬಗ್ಗುಬಡಿಯಲು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಆರೋಪವೂ ನಿರಂತರವಾಗಿದೆ. ಇದಕ್ಕೆ ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಕೆಲವು ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ಸಿಬಿಐ, ಈ.ಡಿ. ನಿಷ್ಪಕ್ಷವಾಗಿರದೆ ಕಳಂಕ ಹೊತ್ತಿವೆ. ವೃತ್ತಿಪರತೆ, ದಕ್ಷತೆ ಮೆರೆಯಬೇಕಿದ್ದ ಸಂಸ್ಥೆಗಳು ಸರಕಾರದ ಕೈಗೊಂಬೆಯಾಗಿ ಕುಣಿಯುತ್ತಿವೆ. ಸುಪ್ರೀಂ ಕೋರ್ಟ್, ‘ಸಿಬಿಐ ಪಂಜರದ ಗಿಳಿ. ಸ್ವತಂತ್ರವಲ್ಲ. ಪೊಲಿಟಿಕಲ್ ಬಾಸ್ಗಳ ಬಾಲಂಗೋಚಿ. ಅವರ ದನಿಯಲ್ಲೇ ಮಾತನಾಡುತ್ತದೆ’ ಎಂದು ಲೇವಡಿ ಮಾಡಿತ್ತು. ಕಲ್ಲಿದ್ದಲು, ಎರಡನೇ ತಲೆಮಾರಿನ ತರಂಗಾಂತರ ಹಗರಣದ ವಿಚಾರಣೆ ವೇಳೆ ಅಫೆಕ್ಸ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿತ್ತು. ‘ಕಲ್ಲಿದ್ದಲು ಹಗರಣ’ದಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಕರಡು ವರದಿಯನ್ನು ತಿದ್ದಿದ ಹಿನ್ನೆಲೆಯಲ್ಲಿ ಯುಪಿಎ- 2 ಸರಕಾರದ ಕಾನೂನು ಮಂತ್ರಿ ಅಶ್ವನಿ ಕುಮಾರ್ ರಾಜೀನಾಮೆ ಕೊಡಬೇಕಾಯಿತು. ಮನಮೋಹನ್ ಸಿಂಗ್ ಬಗ್ಗೆ ಯಾರು ಏನೇ ಟೀಕಿಸಿದರೂ, ‘ಮೌನಿ ಸಿಂಗ್’ ಎಂದು ಜರಿದರೂ ಇಂಥ ವಿಷಯಗಳಲ್ಲಿ ಸೂಕ್ಷ್ಮವಾಗಿದ್ದರು. ಈ ಸಂದರ್ಭ ಈಗ ಎದುರಾಗಿದ್ದರೆ ಕಾನೂನು ಸಚಿವರು ರಾಜೀನಾಮೆ ನೀಡುವುದಿರಲಿ, ಎನ್ಡಿಎ ಸರಕಾರದ ಮುಖಂಡರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಕ್ಕಟ್ಟಿನಿಂದ ಪಾರಾಗಲು ದಾರಿ ಹುಡುಕುತ್ತಿದ್ದರು. ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆ ಅಡಿ 1963ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸ್ಥಾಪನೆ ಆದರೂ ಅದಕ್ಕೆ ಮಹತ್ವ ಬಂದಿದ್ದು 1980- 90ರ ದಶಕದಲ್ಲಿ. ‘ಬೋಫೋರ್ಸ್ ಹೌವಿಟ್ಝರ್’ ಖರೀದಿ ವ್ಯವಹಾರದಲ್ಲಿ ಕಮಿಷನ್ ಪಡೆಯಲಾಗಿದೆ ಎಂಬ ಆರೋಪ ಕುರಿತಾದ ತನಿಖೆಯನ್ನು ಸಿಬಿಐ ನಡೆಸಿದ ಬಳಿಕ. ಭ್ರಷ್ಟಾಚಾರ ಆರೋಪದ ಮಸಿ ಆಗಿನ ರಾಜೀವ್ ಗಾಂಧಿ ಸರಕಾರಕ್ಕೆ ಮೆತ್ತಿಕೊಂಡಿತ್ತು. ಬಳಿಕ, ಒಂದರ ಹಿಂದೆ ಒಂದರಂತೆ ರಾಜಕಾರಣಿಗಳು ಭಾಗಿಯಾದ ಪ್ರಕರಣಗಳು ಹೊರ ಬಂದವು. ಇದು ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಯಿತು. ಡಾ. ಸಿಂಗ್ ಸರಕಾರಕ್ಕೆ ಕಳಂಕ ಹಚ್ಚಿದ ಎರಡನೇ ತಲೆಮಾರಿನ ತರಂಗಾಂತರ ಮಾರಾಟ ಪ್ರಕ್ರಿಯೆ ಹಗರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆಗಿನ ದೂರ ಸಂಪರ್ಕ ಸಚಿವ ಎ. ರಾಜಾ, ಲೋಕಸಭೆ ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲ 19 ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಕಲ್ಲಿದ್ದಲು ಹಗರಣದಲ್ಲಿ ಮಾತ್ರ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತಿತರರಿಗೆ ಶಿಕ್ಷೆ ಆಯಿತು. ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯಡಿ ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 65- 75ರಷ್ಟಿದೆ ಎಂದು ಹೇಳಿಕೊಂಡರೂ ಪ್ರಭಾವಿಗಳು- ಗಣ್ಯರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತೀ ಕಡಿಮೆ ಇದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಾದ ಪ್ರಕರಣಗಳ ತನಿಖೆಯನ್ನು ‘ಜಾರಿ ನಿರ್ದೇಶನಾಲಯ’ (ಈ.ಡಿ.) ನಡೆಸುತ್ತದೆ. ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳು ನಡೆಸಿದ ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವುದು ಕಂಡುಬಂದರೆ ಈ.ಡಿ. ಜತೆ ಮಾಹಿತಿ ಹಂಚಿಕೊಳ್ಳುತ್ತವೆ. ಬಳಿಕ ಈ.ಡಿ. ಪ್ರವೇಶ ಮಾಡುತ್ತದೆ. ಈ.ಡಿ. ತನಿಖೆ ಮಾಡಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 94ಕ್ಕಿಂತಲೂ ಅಧಿಕ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ಡಿಸೆಂಬರ್ನಲ್ಲಿ ಲೋಕಸಭೆಗೆ ಹೇಳಿದ್ದಾರೆ. ಆದರೆ, ಸಿಬಿಐ, ಈ.ಡಿ. ಮತ್ತಿತರ ಸಂಸ್ಥೆಗಳ ತನಿಖಾ ಗುಣಮಟ್ಟದ ಬಗ್ಗೆ ಕೋರ್ಟ್ ಆಗಾಗ ಕಿವಿ ಹಿಂಡುತ್ತಲೇ ಇರುತ್ತದೆ. ಈ ಸಾಲಿಗೀಗ ಅಬಕಾರಿ ನೀತಿ ಪ್ರಕರಣ ಸೇರಿಕೊಂಡಿದೆ. ಕಳಪೆ ಗುಣಮಟ್ಟದ ತನಿಖೆಯೊಂದರಿಂದಲೇ ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಲ್ಲ. ಇನ್ನು ಕೆಲವು ಕಾರಣಗಳಿವೆ. ಸಿಬಿಐ ನಿರ್ದೇಶಕರ ನೇಮಕವೂ ಆಗಾಗ ವಿವಾದಕ್ಕೆ ಒಳಗಾಗುತ್ತಿದೆ. ಪ್ರಧಾನಿ ನೇತೃತ್ವದ ಉನ್ನತ ಸಮಿತಿ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕರೂ ಸಮಿತಿಯಲ್ಲಿರುತ್ತಾರೆ. 2025ರ ಮೇ 5ರಂದು ನಿರ್ದೇಶಕರ ಆಯ್ಕೆಗೆ ಸಮಿತಿ ಸಭೆ ಸೇರಿತ್ತು. ಉನ್ನತ ಹುದ್ದೆಗೆ ಕೆಲವು ಹೆಸರು ಶಿಫಾರಸಾಗಿತ್ತು. ಸಮಿತಿ ಒಮ್ಮತಕ್ಕೆ ಬರಲಾಗದ್ದರಿಂದ ಈಗಿನ ನಿರ್ದೇಶಕ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನೇ ಒಂದು ವರ್ಷ ಮುಂದುವರಿಸಲಾಗಿದೆ. ವಿವಾದ ಇದಲ್ಲ. ಈ ಹಿಂದೆಯೂ ಸಿಬಿಐ ನಿರ್ದೇಶಕರು ಹಾಗೂ ವಿಶೇಷ ನಿರ್ದೇಶಕರ ನೇಮಕ ದೊಡ್ಡ ವಿವಾದವಾಯಿತು. ಇದಾಗಿದ್ದು ಎನ್ಡಿಎ-1 ಸರಕಾರದಲ್ಲಿ. ಇಬ್ಬರು ಅಧಿಕಾರಿಗಳ ಕಿತ್ತಾಟ ಬೀದಿಗೆ ಬಂದಿತ್ತು. ಇದು ದೇಶದ ಉನ್ನತ ತನಿಖಾ ಸಂಸ್ಥೆಯ ವರ್ಚಸ್ಸಿಗೂ ವ್ಯಾಪಕ ಧಕ್ಕೆ ಮಾಡಿತು. 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದ 1984ರ ಬ್ಯಾಚ್ ಅಧಿಕಾರಿಯೊಬ್ಬರು ತಮ್ಮದೇ ಬ್ಯಾಚ್ನ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಶೇಷ ನಿರ್ದೇಶಕರಾಗಿ ನೇಮಿಸಿದ್ದನ್ನು ವಿರೋಧಿಸಿದ್ದರು. ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಕಿತ್ತಾಟ ಯಾವ ಹಂತ ತಲುಪಿತೆಂದರೆ, ಸಿಬಿಐ ತನ್ನದೇ ವಿಶೇಷ ನಿರ್ದೇಶಕರ ವಿರುದ್ಧ ಎರಡು ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿತ್ತು. ಮಾಂಸದ ರಫ್ತುದಾರರಿಗೆ ಸಂಬಂಧಿಸಿದ ಪ್ರಕರಣದಿಂದ ಪಾರಾಗಲು ಉದ್ಯಮಿಯೊಬ್ಬರಿಂದ ಲಂಚ ಪಡೆದರೆಂಬ ಆರೋಪ ಪ್ರಕರಣ ಇದಾಗಿತ್ತು. ತಮ್ಮ ಸಹೋದ್ಯೋಗಿ ನಿರ್ದೇಶಕರ ಮೇಲೆ ವಿಶೇಷ ನಿರ್ದೇಶಕರೂ ಇಂತಹದೇ ಆರೋಪ ಮಾಡಿದ್ದರು. ಮಾಂಸದ ರಫ್ತುದಾರರು ಹವಾಲಾ ಹಗರಣಗಳಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿದ್ದರು. ಅವರ ವಿರುದ್ಧ ಸಿಬಿಐ ತನಿಖೆಯೂ ನಡೆಯುತ್ತಿತ್ತು. ಬಳಿಕ ಸರಕಾರ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಆಮೇಲೆ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮರು ನೇಮಕ ಮಾಡಿತು. ಎರಡೇ ದಿನದಲ್ಲಿ ಹೊಸ ನಿರ್ದೇಶಕರನ್ನು ನೇಮಿಸಲಾಯಿತು. ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಕುತೂಹಲದಿಂದ ಗಮನಿಸುತ್ತಿರುವ ಕೆಲವರಿಗೆ ಯುಪಿಎ ಸರಕಾರ-2 ಅವಧಿಯಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು ಮಾಂಸದ ವ್ಯಾಪಾರಿಯ ಹವಾಲ ವ್ಯವಹಾರದ ತನಿಖೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ್ದು ನೆನಪಿರಬಹುದು. ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಮುಕ್ತ- ಪಾರದರ್ಶಕವಾಗಿ ಸಿಬಿಐ ಕೆಲಸ ಮಾಡಬೇಕಾದ ವಾತಾವರಣ ಸೃಷ್ಟಿಸಬೇಕಿದೆ. ಪ್ರತಿಷ್ಠಿತ ತನಿಖಾ ಸಂಸ್ಥೆ ಎಲ್ಲಿಯವರೆಗೂ ಸರಕಾರದ ಅಧೀನದಲ್ಲಿ ಇರುವುದೋ ಅಲ್ಲಿಯವರೆಗೆ ಪೊಲಿಟಿಕಲ್ ಮಾಸ್ಟರ್ಗಳ ದನಿಯಲ್ಲೇ ಮಾತನಾಡಲಿದೆ. ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗುವವರೆಗೂ ಪಂಜರದ ಗಿಳಿಯಾಗಿಯೇ ಇರಲಿದೆ.
ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ದೃಢಪಡಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ನೂತನ ಸಿಎಂ ಕುರಿತು ಹೆಚ್ಚಿದ ಕುತೂಹಲ
ಇರಾನ್-ಅಮೆರಿಕಾ ಸಂಘರ್ಷ ಸದ್ಯ ಮಧ್ಯಪ್ರಾಚ್ಯವನ್ನು ದಾಟಿ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಲ್ಲಿ ಸೌಹಾರ್ದಯುತ ಮಿಲಿಟಿರಿ ಕವಾಯತುಗಳನ್ನು ಮುಗಿಸಿಕೊಂಡು ಇರಾನ್ ನತ್ತ ಮರಳುತ್ತಿದ್ದ ಇರಾನ್ ನ ದೈತ್ಯ ಯುದ್ದನೌಕೆ ಐರಿಸ್ ದೆನಾವನ್ನು ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ಕರಾವಳಿ ಬಳಿಯಲ್ಲಿ ಅಮೆರಿಕಾದ ಯುದ್ದನೌಕೆಯಿಂದ ದಾಳಿ ಮಾಡಿ ಪತನಗೊಳಿಸಲಾಗಿದೆ. ಇದರಿಂದಾಗಿ ನೌಕೆಯಲ್ಲಿದ್ದ 87 ಮಂದಿ ಸಾವನ್ನಪ್ಪಿದ್ದು, ಈ ಘಟನೆ ಸದ್ಯ ಹಿಂದೂ ಮಹಾಸಾಗರದಲ್ಲಿ ಯುದ್ದವನ್ನು ಆರಂಭಿಸುವ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದ ಅಧಿಕೃತ ಭಾಷೆಯಾಗಲಿ ತುಳು: ಸರ್ಕಾರಕ್ಕೆ ಆಂಧ್ರ ಮಾದರಿಯ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರು, ಮಾರ್ಚ್ 5: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತ ಮಹತ್ವದ ಪ್ರಕ್ರಿಯೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ. ಈ ಸಂಬಂಧ ಹೆಚ್ಚುವರಿ ಅಧಿಕೃತ ಭಾಷೆ ಘೋಷಣೆಗೆ ಸಂಬಂಧಿಸಿದ ಮಾನದಂಡಗಳನ್ನು ಅಧ್ಯಯನ ಮಾಡಲು ನೇಮಿಸಲಾದ ಸಮಿತಿಯು ತನ್ನ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂದರ್ಭದಲ್ಲಿ
ರಾಜ್ಯಸಭಾ ಚುನಾವಣೆ | ಅಭಿಷೇಕ್ ಮನು ಸಿಂಘ್ವಿ ಸಹಿತ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್
ಹೊಸದಿಲ್ಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 6 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಮ್ ನರೇಂದ್ರ ರೆಡ್ಡಿ, ಛತ್ತೀಸಗಢದಿಂದ ಫೂಲವ್ ದೇವಿ ನೇಟಂ, ಹರ್ಯಾಣದಿಂದ ಕರಮ್ವೀರ್ ಸಿಂಗ್ ಬೌದ್ಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ, ತಮಿಳುನಾಡಿನಿಂದ ಎಂ.ಕ್ರಿಸ್ಟೊಫರ್ ತಿಲಕ್ ಅವರನ್ನು ಅಭ್ಯರ್ಥಿಗಳಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾರ್ಚ್ 16ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯಲಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆಪ್ತ ವೆಮ್ ನರೇಂದರ್ ರೆಡ್ಡಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ನಾಮನಿರ್ದೇಶನಗೊಂಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಸನ | ವೇಶ್ಯಾವಾಟಿಕೆ ಆರೋಪ: ಲಾಡ್ಜ್ ನಿಂದ ಮೂವರು ವಿದೇಶಿ ಮಹಿಳೆಯರ ರಕ್ಷಣೆ
ಓರ್ವ ಪೊಲೀಸ್ ವಶಕ್ಕೆ
ಯಾದಗಿರಿ: ಜೆಸ್ಕಾಂ ಸಹಾಯಕ ಅಭಿಯಂತರರ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಯಾದಗಿರಿ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಯಾದಗಿರಿ ಜೆಸ್ಕಾಂ ಸಹಾಯಕ ಅಭಿಯಂತರ (ಎಇ) ವಿರೇಶ್ ಹಿರೇಮಠ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಮುಂಜಾನೆ ದಾಳಿ ಮಾಡಿದ್ದಾರೆ. ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿರುವ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವಿರೇಶ್ ಹಿರೇಮಠ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಲೋಕಾಯುಕ್ತ ಎಸ್ಪಿ ಸಿದ್ದರಾಯ ಬಳರಗಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮಧ್ಯೆ Doomsday ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದ ಅಮೆರಿಕ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರನೇ ದಿನಕ್ಕೆ ಪ್ರವೇಶಿಸಿದೆ. ಈ ಮಧ್ಯೆ ಅಮೆರಿಕ ಅಣ್ವಸ್ತ್ರ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಮಿನಿಟ್ಮ್ಯಾನ್ III doomsday ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ಇದು ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ, ಅಮೆರಿಕದ ವಾಯುಪಡೆ ಗ್ಲೋಬಲ್ ಸ್ಟ್ರೈಕ್ ಕಮಾಂಡ್ ಕ್ಯಾಲಿಫೋರ್ನಿಯಾದ ವಾಂಡೆನ್ ಬರ್ಗ್ ಸ್ಪೇಸ್ ಫೋರ್ಸ್ ಬೇಸ್ ನಿಂದ ಶಸ್ತ್ರರಹಿತ Minuteman III ICBM ಅನ್ನು ಉಡಾವಣೆ ಮಾಡಿದೆ. ಯುಎಸ್ ಬಾಹ್ಯಾಕಾಶ ಪಡೆ ಪರೀಕ್ಷಾ ವಾಹನ GT-255 ಎಂದು ಗುರುತಿಸಿರುವ ಈ ಕ್ಷಿಪಣಿಯನ್ನು ದೀರ್ಘಕಾಲದ ನಿಯಮಿತ ಮೌಲ್ಯಮಾಪನದ ಭಾಗವಾಗಿ ಉಡಾವಣೆ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಮತ್ತು ಇದಕ್ಕೆ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆ ಕ್ಷಿಪಣಿ ಸಾವಿರಾರು ಮೈಲುಗಳಷ್ಟು ದೂರ ಯಶಸ್ವಿಯಾಗಿ ಸಂಚರಿಸಿ ಪಶ್ಚಿಮ-ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಮಾರ್ಷಲ್ ದ್ವೀಪಗಳ ಸಮೀಪದ ನಿಗದಿತ ಗುರಿಯನ್ನು ತಲುಪಿದೆ ಎಂದು ವರದಿಯಾಗಿದೆ.
ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ: ನೆಗಡಿಗೆ ಮೂಗು ಕತ್ತರಿಸಬೇಕೇ?
ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಹೆಚ್ಚುಕಡಿಮೆ 40,000 ಕನ್ನಡ ಸರಕಾರಿ ಶಾಲೆಗಳು ಮುಚ್ಚಲಿವೆ. ಇದೇ ಜೂನ್ಗೆ ಅಂದರೆ ಮುಂಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಸರಕಾರಿ ಶಾಲೆಗಳು ಶಾಶ್ವತವಾಗಿ ಸಮಾಧಿಯಾಗಲಿವೆ. ಬಡವರ ಮಕ್ಕಳು ಕಲಿಯುವ ಈ ಶಾಲೆಗಳನ್ನು ಮುಗಿಸಲು ಸ್ವತಃ ರಾಜ್ಯ ಸರಕಾರವೇ ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕ್ನಿಂದ 10,000 ಕೋಟಿ ರೂ.ಯ ‘ಸುಪಾರಿ’ ಪಡೆದಿದೆ. ಅದರಲ್ಲಿ ಈಗಾಗಲೇ 2,000 ಕೋಟಿ ರೂ. ಸರಕಾರದ ಕೈ ಸೇರಿದೆ. ಈ ಸುಪಾರಿ ಹಣಕ್ಕೆ ರಾಜ್ಯ ಸರಕಾರವು ‘ಅಭಿವೃದ್ಧಿಗಾಗಿ ಪಡೆಯುವ ಸಾಲ’ ‘ಗುಣಮಟ್ಟದ ಶಿಕ್ಷಣಕ್ಕಾಗಿ ಸಾಲ’ ಎಂಬ ಸಿಹಿಲೇಪಿತ ವಿಷದ ಮಾತ್ರೆಯನ್ನು ಜನರಿಗೆ ನುಂಗಿಸುತ್ತಿದೆ. ಇದೆಂಥ ತಣ್ಣನೆಯ ಕ್ರೌರ್ಯ!! ಈ ಕೊಲೆಗಡುಕ ಕೆಲಸವನ್ನು ಸಮರ್ಥಿಸಲು ಜನರಿಂದ ಆಯ್ಕೆಯಾಗಿ ಹೋದ ರಾಜ್ಯದ ಬಹುತೇಕ ಎಲ್ಲಾ ಪಕ್ಷಗಳ ಎಲ್ಲಾ ಶಾಸಕರು, ಸಂಸದರು ಮೂಕಪ್ರೇಕ್ಷಕರಾಗಿದ್ದಾರೆ. ಕೆಲವರು ಜಾಣ ಮೌನ ತಾಳಿದರೆ, ಇನ್ನು ಕೆಲ ಶಾಸಕ ಸಚಿವರುಗಳು ಈ ಸರಕಾರಿ ಶಾಲೆಗಳ ಮಾರಣ ಹೋಮ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಾಸಕ ಚಿದಾನಂದ ಎಂ. ಗೌಡ ಇವರ ಪ್ರಶ್ನೆಗೆ ರೋಷಾವೇಷದಿಂದ ಉತ್ತರಿಸುತ್ತಾ ‘‘ನಮ್ಮ ರಕ್ತದಲ್ಲೇ ಕನ್ನಡವಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ’’ ಎಂದು ಹೇಳಿದರು. ಆದರೆ ಶಾಲೆಗಳ ವಿಲೀನದ ಹೆಸರಲ್ಲಿ ಶಾಲೆಗಳನ್ನು ಮುಚ್ಚುವ ಅಕ್ಟೋಬರ್ 15ರ ಇಲಾಖೆಯ ಆದೇಶವನ್ನು ಸರಕಾರ ಇದುವರೆಗೂ ಹಿಂಪಡೆದಿಲ್ಲ. ಯಾಕೆ ಹಿಂಪಡೆದಿಲ್ಲ? ಮತ್ತು ಯಾವ ಉದ್ದೇಶಕ್ಕಾಗಿ ಹಿಂಪಡೆದಿಲ್ಲ? ಹಿಂಪಡೆಯುವ ಬದಲು ಈ ಆದೇಶಕ್ಕನುಗುಣವಾಗಿಯೇ ಶಾಲೆಗಳ ಮುಚ್ಚುವ(ವಿಲೀನ) ಕೆಲಸ ಸದ್ದಿಲ್ಲದೇ ಮಾಡುವುದಾದರೂ ಯಾಕೆ? ಆಯಾ ಮ್ಯಾಗ್ನೆಟ್ ಶಾಲೆಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಶಿಕ್ಷಕರನ್ನು ಮ್ಯಾಗ್ನೆಟ್ ಶಾಲೆಗಳಿಗೆ ವರ್ಗಾಯಿಸುತ್ತಿರುವುದೇಕೆ? ಈ ಮ್ಯಾಗ್ನೆಟ್ ಶಾಲೆ ಯೋಜನೆ ಜಾರಿಯಾದರೆ ಒಂದು ಅಂದಾಜಿನಂತೆ 80,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳೇ ನಾಶವಾಗಲಿವೆ. ಒಂದೆಡೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಾ ಇನ್ನೊಂದೆಡೆ ಶಿಕ್ಷಕ ಹುದ್ದೆಗಳನ್ನು ನಾಶಮಾಡುವುದು ಯಾವ ಸೀಮೆ ನ್ಯಾಯ? ಮುಂದುವರಿದು ಸರಕಾರವು ‘‘ಇಲ್ಲ, ಇಲ್ಲ ಆಯಾ ಹಳ್ಳಿಗಳಿಂದ ಮ್ಯಾಗ್ನೆಟ್ ಶಾಲೆಗಳಿಗೆ ಬಸ್ ಸೌಲಭ್ಯ ಒದಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ’’ ಎಂದು ಹೇಳುತ್ತಿದೆ. ಕಾಲೇಜುಗಳಿಗೆ ಹೋಗಲು ಪಟ್ಟಣ-ನಗರಗಳಿಗೇ ಬಸ್ ಸೌಲಭ್ಯವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವಾಗ ಇನ್ನು ಯಾವುದೋ ಮೂಲೆಯಲ್ಲಿರುವ ಅತಿಚಿಕ್ಕ ಹಳ್ಳಿಗಳಿಂದ/ತಾಂಡಾಗಳಿಂದ/ ಹಟ್ಟಿಗಳಿಂದ ತೋಟದ ವಸ್ತಿಗಳಿಂದ ಪಂಚಾಯತ್ ಮಟ್ಟಕ್ಕೆ ಮ್ಯಾಗ್ನೆಟ್ ಶಾಲಾ ಮಕ್ಕಳಿಗೆಂದೆ ಬಸ್ ಓಡಿಸುತ್ತಾರಂತೆ! ಈ ಕಾಗಕ್ಕ ಗುಬ್ಬಕ್ಕ ಕಥೆ ರಾಜ್ಯದ ಜನ ನಂಬಬೇಕಂತೆ! ಹೇಗಿದೆ ನೋಡಿ ನಮ್ಮ ಶಿಕ್ಷಣ ಸಚಿವರ ರಕ್ತದಲ್ಲಿನ ಕನ್ನಡ ಪ್ರೀತಿ!! ಸರಕಾರವು ಇನ್ನು ಮುಂದೆ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಶಾಲೆ)ನಂತಹ ಕೆಲವು ಆಕರ್ಷಣೀಯ ಶಾಲೆಗಳನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸರಕಾರಿ ಶಾಲೆಗಳನ್ನು ಮುಚ್ಚಿ ಬಡವರ, ದಲಿತರ, ಹಿಂದುಳಿದ ವರ್ಗದವರ ಮತ್ತು ಜನಸಾಮಾನ್ಯರ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳುತ್ತದೆ. ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗೆ ಆರ್ಥಿಕ ಸಂಪನ್ಮೂಲವನ್ನೂ ಆಯಾ ಎಸ್ಡಿಎಂಸಿಗಳೇ ನೋಡಿಕೊಳ್ಳಬೇಕಂತೆ. ಬೇಕಿದ್ದರೆ ಶಾಲಾ ಕಾಂಪೌಂಡ್ಗೆ ಹೊಂದಿ ವಾಣಿಜ್ಯಮಳಿಗೆಗಳನ್ನು ತೆರೆಯಬಹುದಂತೆ, ಕಾಂಪೌಂಡ್ನ ಗೋಡೆಗಳನ್ನು ಜಾಹೀರಾತುದಾರರಿಗೆ ಬಾಡಿಗೆ ನೀಡಬಹುದಂತೆ. ಇವೆಲ್ಲಾ ಯಾವುದರ ಲಕ್ಷಣಗಳೆಂದರೆ, ಕಾಲಕ್ರಮೇಣ ಈ ಪಬ್ಲಿಕ್ ಶಾಲೆಗಳನ್ನೂ ಪಿಪಿಪಿ ಹೆಸರಲ್ಲೋ ಅಥವಾ ಇನ್ನಾವುದೋ ಮತ್ತೊಂದು ಬೇರೆ ಆಕರ್ಷಣೀಯವಾದ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಮನೆತನಗಳಿಗೆ ಧಾರೆ ಎರೆದು ಶಿಕ್ಷಣದ ಜವಾಬ್ದಾರಿಯಿಂದ ಸರಕಾರ ಸಂಪೂರ್ಣ ಕೈ ತೊಳೆದುಕೊಳ್ಳುವುದರ ಮುನ್ಸೂಚನೆ. ಒಂದೆಡೆ ಸರಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತೀ 1.ಕಿ.ಮೀ. ಗೆ ಪ್ರಾಥಮಿಕ ಶಾಲೆ ಮತ್ತು ಪ್ರತೀ 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಶಾಲೆಗಳಿರಬೇಕು ಎಂದು ಪ್ರತಿಪಾದಿಸುತ್ತದೆ. ಇನ್ನೊಂದೆಡೆ ಇದೇ ಸರಕಾರವು 5ರಿಂದ 7ಕಿ.ಮೀ. ವ್ಯಾಪ್ತಿಯಡಿ ಬರುವ ಶಾಲೆಗಳನ್ನು ವಿಲೀನಗೊಳಿಸುವ ಹೆಸರಲ್ಲಿ ಮುಚ್ಚಬೇಕು ಎಂದು ಸಾರುತ್ತದೆ. ಇದೆಂತಹ ಇಬ್ಬಂದಿತನ? ಇನ್ನೂ ವಿಶೇಷವೆಂದರೆ ಕಲ್ಯಾಣ ಕರ್ನಾಟಕದಲ್ಲಿ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯ ಅನುದಾನವನ್ನು ಚಿಕ್ಕ ಚಿಕ್ಕ ಹಳ್ಳಿಗಳಲ್ಲಿನ ಶಾಲೆಗಳನ್ನು ಬಲಪಡಿಸುವ ಬದಲು ಪಂಚಾಯತ್ಗೊಂದರಂತೆ ತಲೆಯೆತ್ತುವ ಮ್ಯಾಗ್ನೆಟ್ ಶಾಲೆಗಳಿಗೆ ಬಳಸುತ್ತಾರಂತೆ. ಅಂದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಣವನ್ನು ಬಳಸಿ, ಕಲ್ಯಾಣ ಕರ್ನಾಟಕದ ಸರಕಾರಿ ಶಾಲೆಗಳನ್ನೇ ಕೊಲ್ಲುವ ಕೆಲಸ! ಶಹಬ್ಬಾಷ್!! ರಾಜ್ಯದ ಯಾರೊಬ್ಬರೂ ಪಬ್ಲಿಕ್ ಶಾಲೆಗಳ ಆರಂಭಕ್ಕೆ ವಿರೋಧಿಸುತ್ತಿಲ್ಲ. ಬದಲಾಗಿ ಪಬ್ಲಿಕ್ ಶಾಲೆ ತೆರೆಯುವ ಹೆಸರಲ್ಲಿ ಇರುವ 40,000ಕ್ಕೂ ಹೆಚ್ಚು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ. ಹಲವಾರು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ಗ್ರಂಥಾಲಯಗಳಿಲ್ಲ, ಕೆಲವೆಡೆ ಶಿಕ್ಷಕರ ಕೊರತೆ ಇದೆ, ಯೋಗ್ಯ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಗುಣಮಟ್ಟದ ಶಿಕ್ಷಣಕ್ಕೆ ಸಮರ್ಪಕ ನೀತಿನಿಯಮಗಳಿಲ್ಲ, ರಾಜ್ಯದಲ್ಲೀಗ 7,000 ಏಕೋಪಾಧ್ಯಾಯ ಶಾಲೆಗಳಿವೆ. 59,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇಷ್ಟೆಲ್ಲ ಸಮಸ್ಯೆಗಳಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವುದು ಸಹಜ. ಸಮಸ್ಯೆಗಳಿವೆ ಎಂದು ಶಾಲೆಗಳನ್ನೇ ಮುಚ್ಚುವುದೆಂದರೆ ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿದಂತಾಗುವುದಿಲ್ಲವೇ? ಸ್ಥಳೀಯ ಶಾಸಕರು ಈ ಉದ್ದೇಶಿತ ಕೆ.ಪಿ.ಎಸ್. ಶಾಲೆಗಳ ಎಸ್ಡಿಎಮ್ಸಿಯ ಅಧ್ಯಕ್ಷರಾಗುವುದರಿಂದ ನೇರ ರಾಜಕೀಯ ಹಸ್ತಕ್ಷೇಪಕ್ಕೆ ದಿಡ್ಡಿ ಬಾಗಿಲನ್ನೇ ತೆರೆದಂತಾಗುತ್ತದೆ. ಸಂವಿಧಾನದ ಅನುಚ್ಛೇದ 21ರ ಪ್ರಕಾರ ಶಿಕ್ಷಣ ಮಗುವಿನ ಮೂಲಭೂತ ಹಕ್ಕು. ಆದರೆ ಶಾಲೆಗಳೇ ಇಲ್ಲ ಎಂದ ಮೇಲೆ ಹಕ್ಕು ಇದ್ದಾದರೂ ಏನು ಪ್ರಯೋಜನ? ಬಡವರು ತಮ್ಮ ಮಕ್ಕಳನ್ನು ತಮ್ಮೂರಲ್ಲಿನ ಸರಕಾರಿ ಶಾಲೆಗೆ ಕಳುಹಿಸುವುದು ಕಷ್ಟವಾದರೂ ಸದ್ಯಕ್ಕೆ ಅಲ್ಪಸ್ವಲ್ಪ ಸಾಧ್ಯವಿದೆ. ಆದರೆ ಇನ್ನು ಸರಕಾರಿ ಶಾಲೆಗಳು ಮುಚ್ಚಿದರೆ ಈ ಬಡ ಕೂಲಿಕಾರರು ತಮ್ಮ ಮಕ್ಕಳನ್ನು ದೂರದ ಮ್ಯಾಗ್ನೆಟ್ ಶಾಲೆಗಳಿಗೆ ಕಳುಹಿಸುವ ಬದಲು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಪರೋಕ್ಷವಾಗಿ ಸರಕಾರವೇ ಬಾಲಕಾರ್ಮಿಕತನ ಹೆಚ್ಚು ಮಾಡಿದಂತಾಗುತ್ತದೆ, ಅಷ್ಟೇ ಅಲ್ಲ ಆ ಮಗುವಿನ ಶಿಕ್ಷಣದ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಈಗಾಗಲೇ ಈ ಮ್ಯಾಗ್ನೆಟ್ ಶಾಲೆಗಳ ಪರಿಕಲ್ಪನೆ ಮುಂದುವರಿದ ಅಮೆರಿಕ ಮತ್ತು ಚೀನಾ ದೇಶಗಳಲ್ಲಷ್ಟೇ ಅಲ್ಲ ಸ್ವೀಡನ್, ಮೆಕ್ಸಿಕೋದಂತಹ ದೇಶಗಳಲ್ಲೂ ಸಂಪೂರ್ಣ ವಿಫಲವಾಗಿವೆ. ಇಂಥ ಹಳಸಿದ ಶೈಕ್ಷಣಿಕ ನೀತಿಗಳನ್ನು ಸರಕಾರ ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವ ಉದ್ದೇಶವಾದರೂ ಏನು? ಮತ್ತು ಯಾರ ಹಿತಕ್ಕಾಗಿ ಈ ಡೊಂಬರಾಟ? ತಾವು ಈ ಬ್ಯಾಚ್ನ ವಿದ್ಯಾರ್ಥಿಗಳು, ತಾವು ಆ ಬ್ಯಾಚ್ನ ವಿದ್ಯಾರ್ಥಿಗಳು ಎಂದು ಹಲವಾರು ವರ್ಷಗಳ ನಂತರ ಗುರುವಂದನೆಯ ಹೆಸರಲ್ಲಿ ಆಯಾ ಶಾಲೆಗಳಲ್ಲಿ ಒಂದೆಡೆ ಸೇರುವ ಸಹಪಾಠಿಗಳಿದ್ದಾರೆ, ತುಂಬಾ ಸಂತೋಷ. ಹಾಗೆ ಸೇರಿ ತಿಂದುಂಡು ಹಳೆ ನೆನಪುಗಳನ್ನು ಕೆದಕಿ ‘ಸವಿ ಸವಿನೆನಪು’ ಎಂದು ಮೆಲುಕು ಹಾಕಿದರೆ ಸಾಕಾಗುವುದಿಲ್ಲ. ಬದಲಾಗಿ ನಮಗೆ ಅಕ್ಷರ ಮತ್ತು ಅನ್ನದ ತುತ್ತು ನೀಡಿದ ಈ ಶಾಲೆಗಳ ರಕ್ಷಣೆಗೆ ಮುಂದಾಗಬೇಕಿದೆ. ಎಷ್ಟೋ ಜನರು ಈ ಶಾಲೆಗಳಲ್ಲಿ ಕಲಿತು ದೊಡ್ಡ ಅಧಿಕಾರಿಗಳೋ, ಇಂಜಿನಿಯರೋ ಡಾಕ್ಟರೋ ಅಥವಾ ಮತ್ತಿನ್ನಾವುದೋ ದೊಡ್ಡ ದೊಡ್ಡ ಹುದ್ದೇಗೇರಿದ್ದಾರೆ. ಅವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಈ ಶಾಲೆಗಳಿರದಿದ್ದರೆ ತಾವೆಲ್ಲಿ ಇರುತ್ತಿದ್ದರು ಎಂದು. ಆ ಚಿಕ್ಕ ಚಿಕ್ಕ ಶಾಲೆಗಳಲ್ಲಿ ಕಲಿತ ದೊಡ್ಡ ದೊಡ್ಡ ಪಾಠಗಳೇ ಇಂದು ಕೆಲವರನ್ನು ಬಾನೆತ್ತರಕ್ಕೇರಿಸಿವೆ. ಮತ್ತೆ ಕೆಲವರ ಬದುಕಿಗೆ ಊರುಗೋಲನ್ನೊದಗಿಸಿವೆ. ಒಟ್ಟಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಟ್ಟ ಈ ಜೀವಂತ ದೇವಾಲಯಗಳೀಗ ತಾವು ಬದುಕಲು ಸೆಣಸಾಡುತ್ತಿವೆ. ಮರಣಶಯ್ಯೆಯಲ್ಲಿ ನರಳುತ್ತಾ ಹಳೆ ವಿದ್ಯಾರ್ಥಿಗಳು, ಪೋಷಕರು, ನಾಗರಿಕರತ್ತ ಕಣ್ಣಲ್ಲೇ ಜೀವ ಹಿಡಿದು ನೋಡುತ್ತಿವೆ, ನಮ್ಮನ್ನು ಯಾರಾದರೂ ರಕ್ಷಿಸಬಹುದಾ? ಎಂದು. 200 ವರ್ಷ ದೇಶವಾಳಿದ ಪರಕೀಯ ಬ್ರಿಟಿಷರು ನಮ್ಮ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಆದರೆ ಇಂದು ನಮ್ಮನ್ನಾಳುವ ನಮ್ಮ ಸರಕಾರಗಳೇ ನಮ್ಮ ಶಾಲೆಗಳನ್ನು ಮುಚ್ಚುತ್ತಿವೆ. ಇದೆಂಥ ವೈರುಧ್ಯ? ಈ ಶಾಲೆಗಳೆಂದರೆ ಕೇವಲ ಕಟ್ಟಡವಲ್ಲ ಅಥವಾ ಕೇವಲ ಆಗಸ್ಟ್ 15, ಜನವರಿ 26ರಂದು ಧ್ವಜಾರೋಹಣಮಾಡುವ ಸ್ಥಳಗಳೂ ಅಲ್ಲ. ನಮ್ಮ ದೇಶಕ್ಕೆ ಬೇಕಾದ ಅತ್ಯುತ್ತಮ ವ್ಯಕ್ತಿತ್ವಗಳನ್ನು ಬಿತ್ತಿಬೆಳೆಯುವ ತೋಟ. ಮಕ್ಕಳಲ್ಲಿ ಆದರ್ಶ, ಮೌಲ್ಯ, ದೇಶ ಭಕ್ತಿ, ಜೀವನಪ್ರೀತಿ, ಸಾಮೂಹಿಕ ಜೀವನ ಕಲಿಸುವ ಸಾಂಸ್ಕೃತಿಕ ಕೇಂದ್ರಗಳು, ಹಳ್ಳಿಗಳ ಜೀವನಾಡಿಗಳು! ಹಲವಾರು ಶಿಕ್ಷಕರು, ಶಿಕ್ಷಣ ಪ್ರೇಮಿಗಳು ತಮ್ಮ ಆಯುಷ್ಯವನ್ನೇ ಸವೆಸಿ ಮಕ್ಕಳ ಭವಿಷ್ಯ ಕೆತ್ತಿದ ಪವಿತ್ರ ಸ್ಥಳಗಳು! ಈ ಶಾಲೆಗಳನ್ನು ನಾವು ಇನ್ನಾದರೂ ಉಳಿಸಿಕೊಳ್ಳಬೇಕಿದೆ.
Gold Rate Fall: 1.50 ಲಕ್ಷದಿಂದ ಕೆಳಗಿಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ
ಚಿನ್ನಾಭರಣ ಪ್ರಿಯರಿಗೆ ಸಹಿಸುದ್ದಿ ಇಲ್ಲಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಅದರಲ್ಲೂ 22 ಕ್ಯಾರೆಟ್ ಬೆಲೆ ಒಂದುವರೇ ಲಕ್ಷದಿಂದ ಕೆಳಗಿಳಿದಿದೆ. ಆದರೆ ಅಮೆರಿಕಾ-ಇರಾನ್ ಸಂಘರ್ಷ ಹೀಗೆ ಮುಂದುವರಿದರೆ ಬೆಲೆಯಲ್ಲಿ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯ ಉದ್ವಿಗ್ನ - ಮನೆಯೊಳಗಿರಿ, ಬಾಲ್ಕನಿ ಹೊರಗೂ ಬರಬೇಡಿ: ಕತಾರ್ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಬಾರದಂತೆ, ಕಿಟಕಿ - ಬಾಲ್ಕನಿ ಬಳಿ ಇರದಂತೆ ಕತಾರ್ನಲ್ಲಿರುವ ಭಾರತೀಯ ನಾಗರಿಕರಿಗೆ ಇಂಡಿಯನ್ ಎಂಬೆಸ್ಸಿ ಸೂಚಿಸಿದೆ.
Raichuru | ವೇತನ ಕಡಿತ, ದೌರ್ಜನ್ಯದ ಆರೋಪ; ರಿಮ್ಸ್ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ
ರಾಯಚೂರು: ಗುತ್ತಿಗೆ ಸಂಸ್ಥೆಯು ವೇತನ ಕಡಿತಗೊಳಿಸಿ ಪಿಎಫ್, ಎಸ್ ಐ ಹಣವನ್ನು ಸರಿಯಾಗಿ ಜಮಾ ಮಾಡದೇ ಡಿ ಗ್ರೂಪ್ ನೌಕರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಗುರುವಾರ ಬೆಳಗ್ಗೆ ಕೆಲಸಕ್ಕೆ ಗೈರಾಗಿ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರು ಮೂಲದ ಸ್ವಿಸ್ ಎಂಬ ಗುತ್ತಿಗೆ ಸಂಸ್ಥೆ ಡಿ ಗ್ರೂಪ್ ನೌಕರರಿಗೆ ಮಾನಸಿಕ ಹಿಂಸೆ ನೀಡುತ್ತಿದೆ, ಪ್ರತೀ ತಿಂಗಳು ವೇತನ ಪಾವತಿಸದೆ, ಮೂರ್ನಾಲ್ಕು ತಿಂಗಳಿಗೆ ವೇತನ ಜಮಾ ಮಾಡಲಾಗುತ್ತಿದೆ ಎಂದು ದೂರಿದರು. ಎರಡು ತಿಂಗಳ ವೇತನ ಬಾಕಿ ಇಟ್ಟು ಇತ್ತೀಚೆಗೆ ವೇತನ ಪಾವತಿ ಮಾಡಿದ್ದು ಅನೇಕರಿಗೆ 3-5 ಸಾವಿರ ರೂ. ವರೆಗೆ ವೇತನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಸಮವಸ್ತ್ರ ಬದಲಾವಣೆಗೆ ಕಡಿತಗೊಳಿಸಿದ್ದೇವೆ'' ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದ್ದು, ಅದರಲ್ಲೂ ಸಮವಸ್ತ್ರದ ಹೆಸರಿನಲ್ಲಿ ಐದು ಸಾವಿರ ರೂ. ಕಡಿತಗೊಳಿಸಿದರೆ ಕುಟುಂಬ ನಿರ್ವಹಣೆ ಮಾಡುವುದಾದರು ಹೇಗೆ ಎಂದು ಏಜೆನ್ಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್) ಬೋಧಕ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ. ಮೂವರ ಕೆಲಸ ಒಬ್ಬರೇ ಮಾಡಬೇಕಿದೆ, ಗುತ್ತಿಗೆ ಸಂಸ್ಥೆಯವರು ಗೌರವಯುತವಾಗಿ ನಡೆದುಕೊಳ್ಳದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಆನಂದ, ಪ್ರಶಾಂತ, ರಮೇಶ, ಸಂದೀಪ್, ನರೇಶ, ಮಲ್ಲಿಕಾರ್ಜುನ, ವಿನೋದ, ಅನುರಾಧಾ, ಸುನೀತಾ, ಪುಷ್ಪಾ, ಈರಮ್ಮ, ಶ್ರೀನಿವಾಸ, ಅಮರಮ್ಮ, ವಿಶ್ವನಾಥ, ನವೀನ ಕುಮಾರ್ ಉಪಸ್ಥಿತರಿದ್ದರು.
ಇರಾನ್ ಮೇಲೆ ದಾಳಿಗೆ ಅಮೆರಿಕಾದಿಂದ ಭಾರತದ ನೌಕಾನೆಲೆ ಬಳಕೆ? US ಮಾಜಿ ಸೇನಾಧಿಕಾರಿ ಹೇಳಿಕೆ ಶುದ್ಧ ಸುಳ್ಳು ಎಂದ MEA
ಇರಾನ್-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್ಲಿ US ಪರ ವಹಿಸಿದೆ ಎಂದು USನ ಮಾಜಿ ಸೇನಾ ಕರ್ನಲ್ ಒಬ್ಬರು ನೀಡಿದ್ದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಆಧಾರರಹಿತ ಹಾಗೂ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಈ ಕುರಿತ ವರದಿ ಇಲ್ಲಿದೆ..
ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಎನ್ಸಿಇಆರ್ಟಿಯ ವಿಷಯದಲ್ಲಿ ಈಗ ಕೈಗೊಂಡಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ಮೊನ್ನೆಮೊನ್ನೆ ಸರ್ವೋಚ್ಚ ನ್ಯಾಯಾಲಯವು ಪ್ರೌಢಶಾಲೆಗಳ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಭಾಗವನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ((National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್ಸಿಇಆರ್ಟಿ (NCERT) ಎಂಬ ರಾಷ್ಟ್ರೀಯ ಸಂಸ್ಥೆಯು ಸೇರಿಸಿದ್ದರ ವಿರುದ್ಧ ಕೆಂಡಾಮಂಡಲವಾಯಿತು. ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡು ಆ ಪಾಠವನ್ನು ನಿಷೇಧಿಸಿ ಅದನ್ನು ಸೇರಿಸಿದ್ದರ ಮತ್ತು ಸೇರಿಸಿದವರ ಕುರಿತು ತನಿಖೆಗೆ ಆದೇಶಿಸಿತು. ತಕ್ಷಣವೇ ಎನ್ಸಿಇಆರ್ಟಿ ಈಗಾಗಲೇ ವಿತರಣೆ ಯಾದ ಪುಸ್ತಕಗಳನ್ನು ಮರಳಿ ಪಡೆಯಲು ಕ್ರಮಕೈಗೊಂಡದ್ದು ಮಾತ್ರವಲ್ಲ, ಆ ಪಾಠವನ್ನು ಒಳಗೊಂಡ ಪಠ್ಯಕ್ರಮವನ್ನೇ ವಾಪಸ್ ಪಡೆಯಿತು. ಇದರ ಬೇರುಗಳು ಪ್ರಧಾನಿಯವರೆಗೂ ಇಳಿದಿರಬಹುದು. ಕಾದು ನೋಡಬೇಕು. ಸರ್ವೋಚ್ಚ ನ್ಯಾಯಾಲಯಕ್ಕೆ ಸಿಟ್ಟು ಬಂದದ್ದು ಸಹಜವೇ. ಒಂದು ಸಾಂವಿಧಾನಿಕ ವ್ಯವಸ್ಥೆಯನ್ನು ನೇತ್ಯಾತ್ಮಕವಾಗಿಯೇ ಹೆಸರಿಸಿ ಮಕ್ಕಳಿಗೆ ಹೇಳಿಕೊಟ್ಟರೆ-ಬೇಡ, ಓದಲು ಅವಕಾಶಕೊಟ್ಟರೆ ಏನಾಗಬೇಡ? ಪ್ರೌಢಶಾಲೆಯ ಅಂದರೆ ಹದಿಹರೆಯದ ಮಕ್ಕಳು ಒದ್ದೆಗೋಡೆಯ ಹಾಗೆ. ಏನನ್ನು ಎಸೆದರೂ ಅದು ಭದ್ರವಾಗಿ ಅಂಟಿಕೊಳ್ಳುತ್ತದೆ. ನ್ಯಾಯಾಂಗ ಎಂಬ ಪಾಠ ಅಥವಾ ನ್ಯಾಯಾಂಗದ ಒಳಿತು-ಕೆಡುಕುಗಳು ಮುಂತಾದ ವಿಚಾರಗಳು ಪಠ್ಯದಲ್ಲಿ ಸೇರುವುದು ಸಹಜ. ಸಮಾಜ ಗೌರವಿಸುವ ವ್ಯಕ್ತಿ ಇಲ್ಲವೇ ಸಂಸ್ಥೆಯನ್ನು ಕೇಡಿನಂತೆ ಕಾಣಲು ಪ್ರೇರೇಪಿಸುವ ಯಾವುದೇ ಚಿಂತನೆಯೂ ಕೇಡೇ ಆಗಿರುತ್ತದೆ. ಇರಲಿ; ಇದರ ಕುರಿತು ಕೆಲವು ನೋಟಗಳನ್ನು ಹರಿಸೋಣ: ಭಾರತದ ಸಾಧು ಸನ್ಯಾಸಿಯೊಬ್ಬರು ಅಮೆರಿಕಕ್ಕೆ ಪ್ರವಾಸ ಹೋದ ಕತೆಯಂತೆ ಇದು. ವಿಮಾನದಿಂದ ಇಳಿದಾಗ ಪತ್ರಕರ್ತರು ಅವರನ್ನು ಮುತ್ತಿಕೊಂಡರು. ಒಬ್ಬ ಪತ್ರಕರ್ತ ಕೇಳಿದ: ‘‘ಅಮೆರಿಕದ ನೈಟ್ ಕ್ಲಬ್ಗಳ ಕುರಿತು ತಮ್ಮ ಅಭಿಪ್ರಾಯವೇನು?’’ ನಮ್ಮ ಈ ಸನ್ಯಾಸಿಗಳು ವಿಚಲಿತರಾಗಿ ‘‘ಇಲ್ಲಿ ನೈಟ್ ಕ್ಲಬ್ಗಳಿವೆಯೇ?’’ ಎಂದು ಕೇಳಿದರು. ಮರುದಿನ ಪತ್ರಿಕೆಗಳಲ್ಲಿ ‘‘ಭಾರತದ ಸನ್ಯಾಸಿಗಳು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಇಲ್ಲಿ ನೈಟ್ ಕ್ಲಬ್ಗಳಿವೆಯೇ? ಎಂದು ವಿಚಾರಿಸಿದರು’’ ಎಂದು ಪ್ರಕಟವಾಗಿತ್ತಂತೆ. ಪ್ರಶ್ನೆಯೇ ಋಣಾತ್ಮಕವಾಗಿರುವಾಗ ಯಾವ ಉತ್ತರವೂ ಅದನ್ನು ಪುಷ್ಟೀಕರಿಸುವಂತಿರುತ್ತದೆ. ಇಷ್ಟಕ್ಕೂ ಎನ್ಸಿಇಆರ್ಟಿ ಎಂಬ ಈ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಸಹಜವಾಗಿಯೇ ಹುಟ್ಟುತ್ತದೆ. ಭಾರತ ವಿಶ್ವಗುರುವಾಗಿದೆಯೆಂದು ನಾವೆಷ್ಟೇ ಎದೆ-ಬೆನ್ನು (ಇನ್ನು ಲಭ್ಯವಾಗುವ ಇತರ ದೈಹಿಕ ಭಾಗಗಳು) ಎಷ್ಟೇ ತಟ್ಟಿಕೊಂಡರೂ ಇಲ್ಲಿ ಎಲ್ಲೆಡೆ ಇರುವಂತೆ ಭ್ರಷ್ಟಾಚಾರ ವ್ಯಾಪಕವಾಗಿದೆ ಮತ್ತು ಭಾರತ ಇದರಿಂದ ಮುಕ್ತವಾಗಲು ಸಾಧ್ಯವಿಲ್ಲದ ವಾತಾವರಣದಲ್ಲಿ ನಾವಿದ್ದೇವೆಂಬ ಸತ್ಯವನ್ನು ಮರೆಮಾಚೆವು. ರಾಜಕಾರಣವಂತೂ ಹಂದಿಗಳೂ ಸಹಿಸಲಾಗದಷ್ಟು ಗಬ್ಬೆದ್ದಿದೆ. ಪ್ರಸ್ತುತ ಸರಕಾರ ತಾನಷ್ಟೇ ಸರಿಯಿದ್ದೇನೆಂಬ ಭ್ರಮೆಯ ಭಾವನೆಯನ್ನು ಜನರಲ್ಲಿ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಸಂವಿಧಾನವನ್ನು ತಿರುಚುವ ಯತ್ನವು ಅನುದಿನ ನಡೆಯುತ್ತಿದೆ. ಹೆಸರು ಬದಲಾವಣೆಗಳು ಹೆಸರಿಗಷ್ಟೇ ಸೀಮಿತವಾಗಿಲ್ಲ. ಅವು ದೇಶದ ಜಾತ್ಯತೀತ ಲಕ್ಷಣಗಳನ್ನು ಅಳಿಸುವ ಯತ್ನಗಳೇ. ಬಹಳಷ್ಟು ಯೋಜನೆಗಳು ಈಗ ಈ ರೀತಿಯ ವಾಮಾಚಾರದ ಮೂಲಕ ನಡೆಯುತ್ತಿವೆ. ಒಕ್ಕೂಟ ಸರಕಾರದ ನಡವಳಿಕೆಗಳನ್ನು ಗಮನಿಸಿದರೆ ಅದು ಯಾವ ಬಗೆಯ ಪ್ರತಿರೋಧಗಳನ್ನೂ ಸಹಿಸಲು ಸಿದ್ಧವಿಲ್ಲ. ಎಲ್ಲವನ್ನೂ ತನ್ನ ಊಳಿಗದ ತನಿಖಾ ಸಂಸ್ಥೆಯ ಮೂಲಕ ಸದೆಬಡಿಯುವ ತಂತ್ರಗಳನ್ನು ಹುಡುಕುತ್ತಿದೆ. ಅಗತ್ಯವಿರುವ ಎಲ್ಲ ವಿಚಾರಗಳ ಸದ್ದಡಗಿಸಿ ತಮ್ಮ ಗುಪ್ತ ಸೂಚಿಯನ್ನು ಅಳವಡಿಸುವ ತಂತ್ರ ನ್ಯಾಯಾಂಗದ ಮಟ್ಟಿಗಂತೂ ವಿಫಲವಾಯಿತು. ಆದರೆ ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬ ಸಮಸ್ಯೆ ಹಾಗೇ ಉಳಿದಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಎನ್ಸಿಇಆರ್ಟಿ ಎಂಬ ಮತ್ತು ಅಂತಹ ಸಂಸ್ಥೆಗಳ ಕೈವಾಡಗಳನ್ನು ಪರಿಶೀಲಿಸಬೇಕು. ಭಾವನೆಗಳು ಮಾತ್ರವಲ್ಲ, ವಿಚಾರಗಳೂ ವೈಯಕ್ತಿಕವೇ. ಅವನ್ನು ತನ್ನ ಸುತ್ತಲಿನ ಸಮಾಜಕ್ಕೆ, ಹೊರ ಜಗತ್ತಿಗೆ ಅನ್ವಯಿಸುವುದು ಮನುಷ್ಯನ ಜಾಣತನ. ತನಗಾದ ಅನ್ಯಾಯವನ್ನು ಲೋಕಕ್ಕಾದ ಅನ್ಯಾಯವೆಂದು ಮನುಷ್ಯ ತಿಳಿಯುತ್ತಾನೆ. ಹಾಗೆಂದು ಪರರಿಗಾದ, ಅಗುವ ತೊಂದರೆಗಳನ್ನು ತನಗೆ ಅನ್ವಯಿಸಿ ಕಾರ್ಯ ಪ್ರವೃತ್ತರಾಗುವ ಮನುಷ್ಯರು ಬಹಳ ಅಪರೂಪ. ಉಳಿದದ್ದೆಲ್ಲ ತೋರಿಕೆಯ ಅಥವಾ ಗೋಚರವಾಗದ ಮಾರುವೇಷ. ಈ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್ಸಿಇಆರ್ಟಿ (NCERT) ಎಂದು ಕರೆಯಲ್ಪಡುವ ಒಕ್ಕೂಟ ಸರಕಾರವು 1961ರಲ್ಲಿ ಸ್ಥಾಪಿಸಿದ ಮತ್ತು ಅದರ ಆಡಳಿತಕ್ಕೆ ಒಳಪಡುವ ‘ಸ್ವಾಯತ್ತ’ ಸಂಸ್ಥೆಯೊಂದಿದೆ. ಇದು ತನ್ನ ಹೆಸರೇ ಸೂಚಿಸುವಂತೆ ಶಿಕ್ಷಣಕ್ಕೆ ಸಂಬಂಧ ಪಟ್ಟ ಪಠ್ಯಗಳನ್ನು ತಯಾರಿಸುವುದು ಅಥವಾ ಸೂಚಿಸುವುದು, ಹಾಗೂ ಶಿಕ್ಷಣಕ್ಕೆ ಬೇಕಾದ ಅಧ್ಯಯನ, ತರಬೇತಿ ಮುಂತಾದವುಗಳನ್ನು ಜೋಡಿಸುವ ಅಥವಾ ಜೋಡಿಸಬೇಕಾದ ಸಂಸ್ಥೆ. ಒಟ್ಟಾರೆ ಹೇಳುವುದಾದರೆ ಇದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ವದ ಹೊಣೆಯನ್ನು ಹೊತ್ತ ಮತ್ತು ಹೊರಬೇಕಾದ ಸಂಸ್ಥೆ. ಯಾವುದೇ ಆಡಳಿತವು ತನ್ನದೇ ಆದ ರಾಜಕೀಯ ಉದ್ದೇಶಗಳನ್ನು ಹೊಂದಿರುತ್ತದೆ. ತತ್ವ-ಸಿದ್ಧಾಂತಗಳ ಹೆಸರಿನಲ್ಲಿ ಹುಟ್ಟಿಕೊಂಡು ಬಳಿಕ ತನ್ನ ಅಧಿಕಾರ ರಾಜಕೀಯಕ್ಕೆ ನೆರವಾಗುವ ವಿಚಾರಗಳನ್ನು ಪ್ರಚುರಪಡಿಸುವ, ಪ್ರಚಾರ-ಪ್ರಸಾರ ಮಾಡುವ ಹಾದಿಯಲ್ಲೇ ಈ ನೀತಿಯು ವಿಕಾಸಗೊಳ್ಳುತ್ತದೆ. ಇದನ್ನು ಮೀರಿ ಸಾಂವಿಧಾನಿಕ ಬದ್ಧತೆಯಿಂದ ಮೊದಲ ಕೆಲವು ದಶಕಗಳಲ್ಲಿ ಸ್ವತಂತ್ರ ಭಾರತದ ಸ್ವಾಯತ್ತ ಸಂಸ್ಥೆಗಳು ಕಾರ್ಯನಿರ್ವಹಿಸಿದವಾದರೂ ಆನಂತರ ಅವು ಶಿವನೆದುರು ನಿಂತ (ಕುಳಿತ?) ನಂದಿಯ ಹಾಗೆ ಪ್ರಭುಸಂಹಿತೆಗೆ ಒಳಗಾದವು. ಬುದ್ಧಿವಂತರು, ಗಣ್ಯರು, ಜ್ಞಾನಿಗಳು ಎನಿಸಿಕೊಂಡವರು ಕೂಡಿ ಚರ್ಚಿಸಿ ಕೈಗೊಂಡ ನಿಲುವು ದೇಶಕ್ಕೆ ಹಿತ ತಂದವೆಂದೇನೂ ಇಲ್ಲ. ಪುಸ್ತಕದ ಬದನೆಕಾಯಿ ಮಡಿಕೆಯಲ್ಲಿ ಬೇಯದು ಎಂಬಂತೆ ಅವರೂ ಸಾಕಷ್ಟು ಹುಂಬತನದ ನಿರ್ಧಾರವನ್ನು ಮಾಡಿದ ಉದಾಹರಣೆಗಳಿವೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅಜ್ಜನೆಟ್ಟಾಲಕ್ಕೆ ನೇತುಕೊಳ್ಳಬಾರದೆಂಬ ಮತ್ತು ಪರಂಪರೆಯನ್ನು ಉದ್ಧರಿಸುವ ಮಾರ್ಗವೆಂದರೆ ಪ್ರಯೋಗಕ್ಕೆ ಒಳಪಡುವುದು ಮತ್ತು ಒಳಪಡಿಸುವುದು ಎಂಬ ನಂಬಿಕೆ. ಆದರೆ ಎಲ್ಲ ಸಂಪ್ರದಾಯ/ಪರಂಪರೆಯೂ ಬದಲಾವಣೆಗೆ ಒಳಪಡಬೇಕಾದ್ದಿಲ್ಲ ಎಂಬ ನೀತಿಯನ್ನು ಅನುಸರಿಸುವುದಕ್ಕೆ ನಮ್ಮ ಸ್ವಘೋಷಿತ (ಸೋ ಕಾಲ್ಡ್) ಪಂಡಿತರು ಒಪ್ಪುವುದಿಲ್ಲ. ತಾವು ಅಲ್ಲಿರುವುದಕ್ಕೆ ಮತ್ತು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವುದಕ್ಕಾದರೂ ಕೆಲವೊಂದು ಬದಲಾವಣೆಯನ್ನು ತರಬೇಕೆಂಬುದು ಈ ನಂದೀಶ್ವರರ ನಂಬಿಕೆ. ಇದು ರಾಷ್ಟ್ರಮಟ್ಟಕ್ಕೆ ಸೀಮಿತವಾಗಿಲ್ಲ. ರಾಜ್ಯಮಟ್ಟದಲ್ಲೂ ಈ ಪ್ರಹಸನ ಯಥೇಚ್ಛವಾಗಿ ನಡೆಯುತ್ತಿದೆ. ಅದನ್ನು ಬರೆಯಹೊರಟರೆ ಈ ಅಂಕಣ ಸಾಲದು. ಇಂತಹ ವಹಿವಾಟುಗಳು ಈ ದೇಶದ ಲಾಕ್ಷಣಿಕ ಸೋಂಕು. ರಾಜಕಾರಣವನ್ನು ಹೊರತುಪಡಿಸಿದರೆ ನಮ್ಮ ಸಾರ್ವಜನಿಕ ಹಣ ಅತೀ ಹೆಚ್ಚು ಲೂಟಿಯಾಗುತ್ತಿರುವುದು ಈ ಬುದ್ಧಿವಂತರ, ವಿದ್ವಾಂಸರ ಪ್ರಪಂಚದಲ್ಲಿ. ಈ ಯೋಚನೆ-ಯೋಜನೆಗೆ ಪ್ರಯೋಗ ಪ್ರಾಣಿ (ಗಿನಿಪಿಗ್)ಗಳು ಬೇರೆ ಯಾರೂ ಅಲ್ಲ, ನಮ್ಮ ಪ್ರಜೆಗಳು. ಅದರಲ್ಲೂ ಈ ಪ್ರಯೋಗದ ದುರಂತಮಯ ಬಲಿಪಶುಗಳು ಎಳೆಹರೆಯದ, ಜಗತ್ತನ್ನು ವಿಸ್ಮಯಕಣ್ಣುಗಳಿಂದ ನೋಡುವ, ಗ್ರಹಿಸುವ, ಎಳೆಯರು. ಪದವಿಯ ವರೆಗಿನ ಶಿಕ್ಷಣವನ್ನು 10+2, 11+1, ಹೀಗೆಲ್ಲ ಕಾಲಮಿತಿಯ ಲೆಕ್ಕಾಚಾರವನ್ನು ಹೇರಿ ಈಗ 5+3+3+4 ಎಂಬ ಹೊಸ ಪಾತಳಿಯನ್ನು ನಿರ್ಧರಿಸಲಾಗಿದೆ. ಇವನ್ನೆಲ್ಲ ಗಮನಿಸಿದರೆ ಹಿಂದೊಮ್ಮೆ ಡಾ. ಶಿವರಾಮ ಕಾರಂತರು ಟೀಕಿಸಿದಂತೆ 15-3 ಯಾಕೆ ಕೂಡದು ಎಂದು ಪ್ರಶ್ನಿಸಬೇಕಾಗುತ್ತದೆ! 2020ರಲ್ಲಿ ರಾಷ್ಟ್ರೀಯ ನೀತಿ ಪ್ರಕಟವಾಯಿತು. ಇದರಲ್ಲಿ ನೀತಿ ಎಷ್ಟು, ಅನೀತಿ ಎಷ್ಟು ಎಂಬುದು ಸಾರ್ವಜನಿಕ ಚರ್ಚೆಯ ವಸ್ತು. ಸಂಘ ಪರಿವಾರವು ತನ್ನೆಲ್ಲ ಕಾರ್ಯಸೂಚಿಗಳನ್ನು ಮೋದಿ ಸರಕಾರದ ಮೂಲಕ ನಿರ್ವಹಿಸುತ್ತಿದೆ. ಈಗಂತೂ ಮತೀಯತೆಯ ಕಾರ್ಯಸೂಚಿಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಸೇರಿಸಲಾಗುತ್ತಿದೆ. ‘‘Nagpur Communal Ecosystem for Rewriting of Textbooks--which is the real NCERT'’ ಎಂಬ ಟೀಕೆ ಬಂದಿದೆ. ಮನುಸ್ಮತಿಯನ್ನು ಪಠ್ಯವಾಗಿ ಸೇರಿಸಿದ ಉದಾಹರಣೆಗಳಿವೆ. ವಿಶ್ವವಿದ್ಯಾನಿಲಯಗಳ ಮುಖಂಡರಾಗಿ ನೇರ ಮತೀಯ ರಾಜಕೀಯದ ನಿಷ್ಠರನ್ನು ತುಂಬಿಸಲಾಗುತ್ತಿದೆ. ಇದಕ್ಕೆ ನೀಡುವ ಸಮರ್ಥನೆಯೆಂದರೆ ಒಂದೊಮ್ಮೆ- ಪ್ರಾಯಃ ನೆಹರೂ ಕಾಲದಲ್ಲಿ- ಎಲ್ಲ ಪಠ್ಯಗಳಲ್ಲಿ ಸಮಾಜವಾದಿ ಸಿದ್ಧಾಂತಗಳನ್ನು ಹೇರಲಾಗಿದೆ ಮತ್ತು ಎಡಪಂಥೀಯರೇ ಅಲ್ಲಿ ಅಂದರೆ ವಿಶ್ವವಿದ್ಯಾನಿಲಯಗಳಲ್ಲಿ, ಯುಜಿಸಿ ಮುಂತಾದ ಶಿಕ್ಷಣ ಸಂಬಂಧಿ ಸಂಸ್ಥೆಗಳಲ್ಲಿ ತುಂಬಿಹೋಗಿದ್ದರು ಎಂಬ ಆರೋಪ. ಸ್ವಲ್ಪ ಮಟ್ಟಿಗೆ ಇದೂ ಸತ್ಯವೇ. ಆದರೆ ಕಾಯಿಲೆಯನ್ನು ಗುಣಮಾಡುವ ಬದಲು ಇನ್ನೊಂದು ಅದಕ್ಕಿಂತ ಗಂಭೀರ ಕಾಯಿಲೆಗೆ ಅವಕಾಶಮಾಡಿಕೊಟ್ಟರೆ ಸಮಾಜವೆಂಬ ರೋಗಿಯ ಪಾಡು ಏನಾಗಬೇಡ? ಈಗ ಆಗಿರುವುದು ಅದೇ. ನ್ಯಾಯಾಂಗವು ಪೂರ್ಣ ಸರಿಯಿರಲಿಕ್ಕಿಲ್ಲ. ಅದು ಸಾಧ್ಯವೂ ಅಲ್ಲ.ಏನಿದ್ದರೂ ಅದು ನಾವು ಬದುಕಿ ಬಾಳುವ ಸಮಾಜದ, ಈ ನೆಲದ ಸಂಸ್ಕೃತಿಯ ಭಾಗವಾಗಿರುವುದರಿಂದ ಇಲ್ಲಿನ ಸಿಹಿಕಹಿಗಳು ಅಲ್ಲೂ ಇರುತ್ತವೆ. ಉದಾಹರಣೆಗೆ ಎನ್ಸಿಇಆರ್ಟಿಯ ಅಕ್ರಮಗಳಲ್ಲಿ ಇದೇ ಮೊದಲಲ್ಲ. ಮನುಸ್ಮತಿಯ ಸೇರ್ಪಡೆ, ಮೊಗಲ್ ಇತಿಹಾಸದ ಬೇರ್ಪಡೆ ಮುಂತಾದವು ಇಡೀ ದೇಶವನ್ನು ತಲ್ಲಣಗೊಳಿಸಿದಾಗಲೂ ಸರ್ವೋಚ್ಚ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತಿತ್ತು. ಎನ್ಸಿಇಆರ್ಟಿ ನ್ಯಾಯಾಂಗದ ಬಗ್ಗೆ ಪ್ರಸ್ತಾಪಿಸದಿದ್ದರೆ, ಅದರ ಗೋಜಿಗೆ ನ್ಯಾಯಾಂಗವು ಹೋಗುತ್ತಿರಲಿಲ್ಲ. ಇಷ್ಟು ವೇಗವಾಗಿ ಕ್ರಮಕೈಗೊಂಡ ಇತಿಹಾಸ ಸ್ವತಂತ್ರ ಭಾರತದಲ್ಲಿ ಇಲ್ಲ. ಸರಕಾರ ಮಾಡಿದ ಇತರ ಅನೇಕ ಅಕ್ರಮಗಳನ್ನು ಗಮನಿಸುವ ಇರಾದೆಯು ಸರ್ವೋಚ್ಚ ನ್ಯಾಯಾಲಯಕ್ಕಿದ್ದರೆ ಈಗಲೂ ತಡವಾಗಿಲ್ಲ. ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಇಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ನ್ಯಾಯಾಂಗವು ತನ್ನ ಸಾಂವಿಧಾನಿಕ ಹೊಣೆಯನ್ನು ನಿರ್ವಹಿಸಲು ವಿಫಲವಾದಲ್ಲಿ ಅದಕ್ಕೆ ಸರಿಯಾದ ಕ್ರಮಗಳನ್ನು ಸರಕಾರ ಕೈಗೊಳ್ಳಬಹುದು. ಆದರೆ ಸರಕಾರವು ಸಂವಿಧಾನದ ಚೌಕಟ್ಟಿನಲ್ಲೇ ಈ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ತನ್ನ ರಾಜಕಾರಣದ ಆಕಾಂಕ್ಷೆಗಳನ್ನು ಈಡೇರಿಸುವ, ತನ್ನ ಅನುಕೂಲಕ್ಕಾಗಿ ಇತರರ ತೋಳು ತಿರುಚುವ ಇಲ್ಲವೇ ಅಕ್ರಮಗಳ ಮೂಲಕವಲ್ಲ. ನ್ಯಾಯಮೂರ್ತಿಗಳ ಪದಚ್ಯುತಿಯ ಕ್ರಮಕ್ಕೆ ಎಷ್ಟು ಸಂಸದರು ನಿರ್ಭೀತಿಯಿಂದ ನಿಷ್ಪಕ್ಷತೆಯಿಂದ ಭಾಗವಹಿಸುತ್ತಾರೆ? ಅಲ್ಲಿ ನಡೆಯುವುದು ಅಕ್ರಮ ರಾಜಕೀಯವೇ ಹೊರತು ದೇಶಹಿತದ, ನ್ಯಾಯಹಿತದ, ಸಂವಿಧಾನಹಿತದ ಕ್ರಮವಲ್ಲ. ಕ್ರಿಮಿನಲ್ ಪ್ರಕರಣಗಳ ಆರೋಪಿಗಳೇ ಹೆಚ್ಚಿರುವ ಸಂಸತ್ ಅಥವಾ ಶಾಸನಸಭೆಗಳಲ್ಲಿ ಎಂತಹ ನ್ಯಾಯ ನಡೆಯಬಹುದು? ನ್ಯಾಯಾಂಗದ ಕುರಿತ ಟೀಕೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಸರಕಾರವು ತಿರುಚುತ್ತಿದೆ. ಇದು ಹಿಂದಿನ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಇದ್ದಾಗಲೇ ನಡೆಯುತ್ತಿತ್ತು. ಚುನಾವಣಾ ಆಯೋಗದ ಆಯ್ಕೆಯಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಗಳ ಭಾಗವಹಿಸುವಿಕೆಯನ್ನು ಶಾಸನದ ಮೂಲಕ ಮೊದಲ ಬಾರಿಗೆ ನಿರಾಕರಿಸಲಾಯಿತು. ಈಗಿನ ಸ್ಥಿತಿಯಲ್ಲಿ ಸರಕಾರವು ತನಗೆ ಬೇಕಾದವರನ್ನೇ ಅಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗಿದೆ. ಇದರ ಪರಿಣಾಮವನ್ನು ದೇಶವು ಈಗಾಗಲೇ ಕಾಣುತ್ತಿದೆ. ತಮಗಾಗದ ನ್ಯಾಯಮೂರ್ತಿಗಳಿಗೆ ಪದೋನ್ನತಿಯನ್ನು ನಿರಾಕರಿಸುವ ಅಥವಾ ಅವರ ಆಯ್ಕೆಯನ್ನು ಅವರ ನಿವೃತ್ತಿಯವರೆಗೂ ವಿಳಂಬಿಸುವ ನೀತಿಯನ್ನು ಸರಕಾರ ವಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎನ್ಸಿಇಆರ್ಟಿ ಒಂದು ವೇಳೆ ನ್ಯಾಯಾಂಗದ ಕುರಿತ ಅಸಮಾಧಾನವಿದ್ದರೆ ಮತ್ತು ಅದನ್ನು ಶಿಕ್ಷಣದ ಭಾಗವಾಗಿಸಬೇಕಾದರೆ ನಿಷ್ಪಕ್ಷವಾಗಿ ಪ್ರದರ್ಶಿಸಬೇಕು. ಪ್ರಾಯಃ ಭಾರತದಲ್ಲಿ ಭ್ರಷ್ಟಾಚಾರ ಎಂಬ ದೊಡ್ಡ ಕ್ಯಾನ್ವಾಸನ್ನು ರಚಿಸಿಕೊಂಡು ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಸಂವಿಧಾನದ ಮೂರು ಮೂಲೆಗಳಲ್ಲಿ ಭ್ರಷ್ಟಾಚಾರ ಎಂಬ ಪಠ್ಯಕ್ರಮವನ್ನು ಸೇರಿಸಬಹುದು. ಇಂದಿನ ಪರಿಸ್ಥಿತಿಯಲ್ಲಿ ಇವಿಷ್ಟೇ ಸಾಲದು: ಮಾಧ್ಯಮದಲ್ಲಿ, ಉದ್ದಿಮೆಯಲ್ಲಿ, ಕಲೆ-ಸಾಹಿತ್ಯದಲ್ಲಿ, ಮತ-ಧರ್ಮಗಳಲ್ಲಿ, ಕೊನೆಗೆ ಕ್ರೀಡೆಯಲ್ಲೂ- ಹೀಗೆ ಇತರ ಅನೇಕ ಕ್ಷೇತ್ರಗಳನ್ನೂ ಬೆಟ್ಟು ಮಾಡಿ ತೋರಿಸಬಹುದು; ಆಗ ನ್ಯಾಯಾಂಗದ ಕುರಿತೂ ಕ್ಷ-ಕಿರಣವನ್ನು ಬೀರಬಹುದು. ದೇಶದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವು ತಾಂಡವವಾಡಬೇಕಾದರೆ ನ್ಯಾಯಾಂಗವನ್ನು ಮಾತ್ರ ಆರೋಪಿಸುವುದು ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಅಥವಾ ರಾಜಕಾರಣಕ್ಕೆ, ಅಧಿಕಾರಶಾಹಿಗೆ ಅನುಕೂಲವಾಗುವಂತಹ ತ್ರಿಶಂಕು ನರಕವನ್ನು ಸೃಷ್ಟಿಸುವ ಸರ್ಕಸ್ಸಾಗಬಹುದು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಒಟ್ಟು ಸಮಾಜಕ್ಕೇ ಅಂಟುವ ಕ್ಯಾನ್ಸರ್ ಆಗುವ ಆತಂಕವನ್ನು ತರಬಹುದು. ಶಾಸಕಾಂಗ ಮತ್ತು ಕಾರ್ಯಾಂಗ ಈ ಕೆಲಸವನ್ನು ಮಾಡುತ್ತದೆಂಬ ಸೂಚನೆಗಳಿಲ್ಲ. ಇದನ್ನು ತಡೆಗಟ್ಟುವ ಕರ್ತವ್ಯ ಎನ್ಸಿಇಆರ್ಟಿ ಮತ್ತು ಅಂತಹ ಸಂಸ್ಥೆಗಳಿಗಿದೆೆ; ನ್ಯಾಯಾಂಗಕ್ಕೂ ಇದೆ; ಇವೆರಡೂ ವಿಫಲವಾದರೆ ಈ ಹಕ್ಕು, ಕರ್ತವ್ಯ ಜನರಿಗಿದೆ.
ಬೀದರ್: ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ ಆರೋಪ: ಸಾವಿರಾರು ಮುಸ್ಲಿಮರಿಂದ ಬೃಹತ್ ಪ್ರತಿಭಟನೆ, ಕೋಮು ಸಂಘರ್ಷ
ಬೀದರ್: ಬಸವಕಲ್ಯಾಣದಲ್ಲಿ ಕೋಮುಸಂಘರ್ಷ ಶುರುವಾಗಿದೆ. ಬಸವಕಲ್ಯಾಣದಲ್ಲಿ ಮಾರ್ಚ್ 3ರ ತಡರಾತ್ರಿ ನಡೆದಿರುವ ಬೆಳವಣಿಗೆಯೂ ಈ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಕಾರಣವಾಗಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಸಾವಿರಾರು ಜನ ಒಂದೆಡೆ ಸೇರಿದ್ದಾರೆ. ಈ ಘಟನೆಯ ಹಿನ್ನೆಲೆ ಏನು, ಈಗ ಬೀದರ್ನಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವ
ಪುತ್ತೂರು: ಪೆರ್ಲಂಪಾಡಿಯ ಮರ್ಹೂಂ ಇಬ್ರಾಹೀಂ ಹಾಜಿಯವರ ಪತ್ನಿ ಬೀಫಾತಿಮಾ ಹಜ್ಜುಮ್ಮ (85) ಗುರುವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾನಿಯೂ ಆಗಿದ್ದ ಬೀಫಾತಿಮಾ ಹಜ್ಜುಮ್ಮ ಅವರ ದಫನ ಕಾರ್ಯವು ಬಂದ್ಯೋಡು ಸಮೀಪದ ಮೀಪ್ರಿ ಜುಮಾ ಮಸೀದಿಯ ಆವರಣದಲ್ಲಿ ಗುರುವಾರ ಅಸರ್ ನಮಾಝ್ ಬಳಿಕ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾವೂರು: ನಗರದ ಪಚ್ಚನಾಡಿ ಎಸ್ಟಿಪಿ ಬಳಿ ಒಳಚರಂಡಿ ಕಾಮಗಾರಿ ಹಾಗೂ ಉನ್ನತೀಕರಣ ಯೋಜನೆ, ಸುರತ್ಕಲ್ ಮತ್ತು ದಕ್ಷಿಣ ಕ್ಷೇತ್ರದ ಎಸ್ಟಿಪಿ ಮೇಲ್ದರ್ಜೆ ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಯೋಜನೆ ಹಾಗೂ ಎನ್ಜಿಟಿ ಅನುದಾನದಡಿ ಸುಮಾರು 40 ಕೋಟಿ ರೂ. ಅನುದಾನ ಲಭಿಸಿದೆ. ರಾಜ್ಯ ಸರಕಾರದ ಪಾತ್ರ ಕೇವಲ ಅನುಷ್ಠಾನಕ್ಕೆ ಸೀಮಿತವಾಗಿದೆ. ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಪ್ರಥಮ ಅವಧಿಯಲ್ಲೇ ಪತ್ರ ಬರೆದು ಅನುದಾನ ತರಲು ಕ್ರಮ ವಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಜಿಲ್ಲೆಗೆ ಬರುವುದೇ ಅಪರೂಪ. ಅದರ ನಡುವೆಯೂ ಸರಕಾರದ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿ ತೆರಳುತ್ತಾರೆ. ಪಚ್ಚನಾಡಿಯ ಕಾರ್ಯಕ್ರಮ ಸ್ಥಳೀಯ ಶಾಸಕನಾದ ತಮ್ಮ ಉಪಸ್ಥಿತಿಯಲ್ಲಿ ನಡೆಯಬೇಕಾಗಿತ್ತು. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಕೂಡ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಹಾಗೂ ಅವರ ಉತ್ತಮ ಕೆಲಸಗಳನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಯೋಜನೆಯನ್ನು ತಮ್ಮದೇ ಸಾಧನೆ ಎಂಬಂತೆ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಡಾ. ಭರತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅನುದಾನ ; ರಾಜ್ಯ ಬಜೆಟ್ ಮೇಲಿದೆ ಭಾರೀ ನಿರೀಕ್ಷೆ!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ್ಧೀಕರಣಕ್ಕೆ ರಾಜ್ಯ ಸರಕಾರ ಮನಸ್ಸು ಮಾಡಬೇಕಿದೆ. ಇನ್ನು ಜಿಲ್ಲೆಗೆ 2027ಕ್ಕೆ ಎತ್ತಿನಹೊಳೆ ನೀರು ಹರಿಯುತ್ತೆ ಎಂದು ರಾಜ್ಯ ಸರಕಾರ ಹೇಳುತ್ತಿದೆ, ಆದರೆ ಹೇಳಿದಂತೆ ಅನುಷ್ಠಾನಕ್ಕೆ ಬರುತ್ತಾ ಎನ್ನುವುದೇ ಈಗ ಪ್ರಶ್ನೆ.
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು
Petrol - Diesel: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು. ಇರಾನ್ನಲ್ಲಿ ಮಾರಣಹೋಮವೇ ನಡೆದಿದೆ. ಇರಾನ್ನಲ್ಲಿ ಮಾತ್ರವಲ್ಲದೇ ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲೂ ಸೈನಿಕರು, ಜನ ಸಾವನ್ನಪ್ಪಿದ್ದಾರೆ. ಯುದ್ಧದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಸಂಗ್ರಹ ಹಾಗೂ
ಅಂತರ್ಜಲ ವೃದ್ಧಿಗೆ ಜಲಮಂಡಳಿ ಕ್ರಮ: ಬೆಂಗಳೂರಿನ ಕೆರೆಗಳಿಗೂ ಸಂಸ್ಕರಿಸಿದ ನೀರು!
ಬೇಸಿಗೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳಲು, ಬರಿದಾಗುತ್ತಿರುವ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಜಲಮಂಡಳಿ ನಿರ್ಧರಿಸಿದೆ.
ಕೇಂದ್ರ ಮಾರ್ಗಸೂಚಿ ಜಾರಿಗೆ ರಾಜ್ಯ ಸರಕಾರ ಚಿಂತನೆ ; ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ನಷ್ಟ ಭೀತಿ
ಉದ್ಯೋಗ ಕಳೆದುಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆಯ ನೌಕರರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಜುಜುಬಿ ಗೌರವಧನಕ್ಕೆ ದುಡಿಯುವ ಕಾರ್ಯಕರ್ತೆಯರು ಇಲಾಖೆಯ ಡಿ ಗ್ರೂಪ್ ಹುದ್ದೆಗಾಗಿ ಇತರ ತಾಲೂಕು, ಜಿಲ್ಲಾಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ.
ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ; ಐವರು ಮೃತ್ಯು
ಕೋಲಾರ, ಮಾ.5: ತಿರುಪತಿ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ–ಪಲಮನೇರು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಪಲಮನೇರು ತಾಲೂಕಿನ ಗಂಗಾವರಂ ಹೋಬಳಿಯ ವೈಎಸ್ಆರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ರಾಜಾಜಿನಗರ ನಿವಾಸಿಗಳಾದ ಮೋಹನ್ ದಾಸ್ (70), ನಾಗರಾಜ್ (60), ಕುಸುಮ (60), ಜಯಂತಿ (59) ಹಾಗೂ ಪೂಜಾ (33) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪಲಮನೇರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.
ಇಂದು ನೇಪಾಳ ಚುನಾವಣೆ: ಯುವ ನೇತಾರನ ವಿರುದ್ಧ ಕಣಕ್ಕಿಳಿದ ಕೆ.ಪಿ.ಶರ್ಮಾ ಓಲಿ!
ಕಠ್ಮಂಡು: ರಾಜಕೀಯ ವಿಪ್ಲವಗಳಿಗೆ ಸಾಕ್ಷಿಯಾದ ಪುಟ್ಟ ಹಿಮಾಲಯನ್ ದೇಶದಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನೇಪಾಳ ರಾಜಕೀಯದಲ್ಲಿ 50 ವರ್ಷಗಳಿಂದ ಪಳಗಿದ ಕೆ.ಪಿ.ಶರ್ಮಾ ಓಲಿ ಅವರು ಯುವನೇತಾರ 35 ವರ್ಷದ ಬಾಲೆನ್ ಅವರ ಸವಾಲು ಎದುರಿಸುತ್ತಿದ್ದಾರೆ. ಕಠ್ಮಂಡು ಮತ್ತು ಇತರ ಹಲವು ನಗರಗಳಲ್ಲಿ ಓಲಿ ಸರ್ಕಾರ ಪದಚ್ಯುತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಲವು ಮಂದಿ genZ ಮತದಾರರು 35 ವರ್ಷ ವಯಸ್ಸಿನ ಬಾಲೆನ್ ಅವರನ್ನು ಮುನ್ನಲೆಗೆ ತಂದಿದ್ದರು. ಆದರೆ ಇದು ನೇಪಾಳದ ಸಾಂಪ್ರದಾಯಿಕ ನಾಯಕತ್ವಕ್ಕೆ ಅಸಹನೀಯವಾಗಿತ್ತು. ಆದಾಗ್ಯೂ ಓಲಿ ನೇಪಾಳ ರಾಜಕೀಯ ವ್ಯವಸ್ಥೆಯಲ್ಲಿ ಮುಂಚೂಣಿ ನಾಯಕರಾಗಿಯೇ ಮುಂದುವರಿದಿದ್ದಾರೆ. ಹಲವು ವರ್ಷಗಳ ರಾಜಕೀಯ ಪ್ರಕ್ಷುಬ್ಧತೆಯ ಬಳಿಕವೂ ಓಲಿ ತಮ್ಮ ಸಾಂಪ್ರದಾಯಿಕ ಝಾಪಾ-5 ಕ್ಷೇತ್ರದಲ್ಲಿ ಮತದಾರರ ನಿಷ್ಠೆ ಉಳಿಸಿಕೊಂಡಿದ್ದಾರೆ. ಓಲಿಯವರ ರಾಜಕೀಯ ಬದುಕು ರೂಪಿಸಿದ ಝಾಪಾ-5 ಕ್ಷೇತ್ರ ಭಾರತದ ಗಡಿಗೆ ಹೊಂದಿಕೊಂಡಿದೆ. ಈ ಬಾರಿ ನೇರ ಕದನದಲ್ಲಿ ಬಲೇನ್ ಹಿರಿಯ ಮುತ್ಸದ್ಧಿಗೆ ಸವಾಲೊಡ್ಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. 1952ರಲ್ಲಿ ಜನಿಸಿದ ಓಲಿ ನೇಪಾಳದ ಪಂಚಾಯತ್ ಯುಗದಲ್ಲೇ ರಾಜಕೀಯ ಪ್ರವೇಶಿಸಿದ್ದರು. 1970ರಲ್ಲಿ ಹದಿಹರೆಯದ ಕಮ್ಯುನಿಸ್ಟ್ ಹೋರಾಟಗಾರನಾಗಿ ಪಕ್ಷರಹಿತ ವ್ಯವಸ್ಥೆಯನ್ನು ಮತ್ತು ರಾಜಪ್ರಭುತ್ವವನ್ನು ವಿರೋಧಿಸಿದ್ದರು. 1973ರ ಅಕ್ಟೋಬರ್ ನಲ್ಲಿ ಝಾಪಾ ದಂಗೆ ಮತ್ತು ರಾಜಪ್ರಭುತ್ವ ವಿರೋಧಿ ಹೋರಾಟದ ಆರೋಪದಲ್ಲಿ ಬಂಧಿಸಲ್ಪಟ್ಟು 14 ವರ್ಷ ಕಾಲ ಜೈಲಿನಲ್ಲಿ ಕಳೆದಿದ್ದರು. ದಶಕಗಳ ಬಳಿಕ ಯಾವ ರಾಜಪ್ರಭುತ್ವದ ವಿರುದ್ಧ ಓಲಿ ಹೋರಾಡಿದ್ದರೋ ಅದೇ ವ್ಯವಸ್ಥೆಯ ಪ್ರಬಲ ನಾಯಕನಾಗಿ ಹೊರಹೊಮ್ಮಿದರು. 2024ರಲ್ಲಿ ಮತ್ತೆ ದೇಶದ ಚುಕ್ಕಾಣಿ ಹಿಡಿದ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿ ನಡೆದ genZ ಹೋರಾಟದ ಬಳಿತ ಪತನಗೊಂಡಿತ್ತು. ರಾಜೀನಾಮೆ ಬಳಿಕ ಅವರ ರಾಜಕೀಯ ವೃತ್ತಿ ಕೊನೆಗೊಂಡಿತು ಎಂದೇ ಹಲವರು ಭಾಗವಹಿಸಿದ್ದರು. ಆದರೆ ಓಲಿ ಮತ್ತೆ ಝಾಪಾ-5 ಕ್ಷೇತ್ರದಿಂದ ಚುನಾವಣಾ ಕದನಕ್ಕೆ ಧುಮುಕಿ, ಐದು ದಶಕಗಳ ಅನುಭವವನ್ನು ಒರೆಗೆ ಹಚ್ಚಿದ್ದಾರೆ.
Bihar CM: ಭಾರತದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಮೈತ್ರಿ ಪಕ್ಷ (ಎನ್ಡಿಎ ಮೈತ್ರಿಕೂಟ) ಜೆಡಿಯು ಪಕ್ಷದ ಈ ನಡೆಯು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ದಾಖಲೆಯ ಹತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕು
Maharashtra | ಕಿರಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ: 10ನೇ ತರಗತಿಯ 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ನಾಸಿಕ್: ಜಿಲ್ಲೆಯ ಸರ್ಕಾರಿ ಹಾಸ್ಟೆಲ್ ನಲ್ಲಿ ಕಿರಿಯ ವಿದ್ಯಾರ್ಥಿಗಳ ಜತೆ ಅಸಹಜ ಲೈಂಗಿಕತೆಯಲ್ಲಿ ತೊಡಗಿ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ 10ನೇ ತರಗತಿಯ ಎಂಟು ವಿದ್ಯಾರ್ಥಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೋಕ್ಸೋ) ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧೀಕ್ಷಕ ಬಾಳಾಸಾಹೇಬ್ ಪಾಟೀಲ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿ ಅಸಹಜ ಲೈಂಗಿಕತೆಯಲ್ಲಿ ತೊಡಗುವಂತೆ ಬಲವಂತಪಡಿಸುತ್ತಿದ್ದರು. ಸಂತ್ರಸ್ತ ವಿದ್ಯಾರ್ಥಿಗಳ ಹೇಳಿಕೆ ಅನ್ವಯ ಕಳೆದ ಆರೇಳು ತಿಂಗಳಿನಿಂದ ಈ ಕಿರುಕುಳ ಮುಂದುವರಿದಿತ್ತು. ಫೆ. 22ರಂದು ವಿದ್ಯಾರ್ಥಿಗಳು ಈ ವಿಚಾರವನ್ನು ಹಾಸ್ಟೆಲ್ ಅಧೀಕ್ಷಕರ ಗಮನಕ್ಕೂ ತಂದಿದ್ದರು ಎಂದು ಎಸ್ಪಿ ವಿವರಿಸಿದ್ದಾರೆ. ಅಧೀಕ್ಷಕರು ಹತ್ತನೇ ತರಗತಿಯ ಎಂಟು ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ ಅವರನ್ನು ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಸಂತ್ರಸ್ತರ ಪೋಷಕರನ್ನೂ ಕರೆಸಿದ್ದರು. ಒಬ್ಬ ವಿದ್ಯಾರ್ಥಿಯ ಹೇಳಿಕೆಯನ್ನು ಆಧರಿಸಿ 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅವರನ್ನು ಬಾಲನ್ಯಾಯ ಮಂಡಳಿಯ ಮುಂದೆ ಅಗತ್ಯ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಲಾಗುವುದು. ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕವೂ ಪೊಲೀಸರಿಗೆ ದೂರು ನೀಡದ ಹಿನ್ನೆಲೆಯಲ್ಲಿ ಹಾಸ್ಟೆಲ್ ಅಧೀಕ್ಷಕರು ಸೇರಿದಂತೆ ಮೂವರು ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕೆಎಸ್ಐಸಿ ಕಾರ್ಖಾನೆ ಮೇಲ್ದರ್ಜೆಗೇರಿಸುವ ಕನಸಿಗೆ ಪೆಟ್ಟು
ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8 ಎಕರೆ ಮಾತ್ರ ಉಳಿಯಲಿದೆ. ಇದು ಕಾರ್ಖಾನೆ ಮೇಲ್ದರ್ಜೆಗೇರಿಸಿ ವಿಸ್ತರಿಸುವ ಯೋಜನೆಗೆ ತೊಡಕಾಗಲಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತದ ದೌರ್ಬಲ್ಯ ಬಗ್ಗೆ ಉಲ್ಲೇಖಿಸಿದ ಮಾಜಿ ಕೀಪರ್
ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ ಪಂದ್ಯದ ಸೆಮಿಫೈನಲ್ ನಲ್ಲಿ ಭಾರತ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣೆಸಲಿದ್ದು, ಈ ಮಹತ್ವದ ಪಂದ್ಯಕ್ಕೆ ಮುನ್ನ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಭಾರತೀಯ ತಂಡದ ದೌರ್ಬಲ್ಯವನ್ನು ಪ್ರಸ್ತಾವಿಸಿ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ, ಭಾರತದ ದೊಡ್ಡ ದೌರ್ಬಲ್ಯವೆಂದರೆ ಕಳಪೆ ಫೀಲ್ಡಿಂಗ್. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟೂರ್ನಿಯಲ್ಲಿ ಇದುವರೆಗೆ 13 ಕ್ಯಾಚ್ ಗಳನ್ನು ಕೈಚೆಲ್ಲಿದೆ. ಭಾರತ ತಂಡದ ಕ್ಯಾಚಿಂಗ್ ಸಾಮರ್ಥ್ಯ ಶೇಕಡ 72.7ಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣ. ಇದಕ್ಕೆ ತದ್ವಿರುದ್ಧವಾಗಿ ಕಳಪೆ ಫೀಲ್ಡಿಂಗ್ನಿಂದಾಗಿ ಟೀಕೆಗಳಿಗೆ ಗುರಿಯಾಗಿರುವ ಪಾಕಿಸ್ತಾನದ ಕ್ಯಾಚಿಂಗ್ ಕ್ಷಮತೆ ಶೇಕಡ 83.3ರಷ್ಟಿದೆ. ಆತಂಕದ ಅಂಶವೆಂದರೆ ಫೀಲ್ಡಿಂಗ್; ಈಡನ್ ಗಾರ್ಡನ್ಸ್ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಮಾತ್ರವಲ್ಲ; ಕಳೆದ ಒಂದೂವರೆ ವರ್ಷದಿಂದ ಈ ಸಮಸ್ಯೆ ಇದೆ. ನಾವು ಸಾಕಷ್ಟು ಕ್ಯಾಚ್ ಗಳನ್ನು ಕೈಚೆಲ್ಲುತ್ತಿದ್ದೇವೆ. ಈ ವಿಚಾರದಲ್ಲಿ ಭಾರತ ಸುಧಾರಿಸಲೇಬೇಕು ಎಂದು ಪಾರ್ಥಿವ್ ಪಟೇಲ್ ಜಿಯೊ ಹಾಟ್ಸ್ಟಾರ್ನಲ್ಲಿ ಹೇಳಿದ್ದಾರೆ. ಈಡನ್ ಗಾರ್ಡನ್ ನಲ್ಲಿ 190ಕ್ಕೂ ಹೆಚ್ಚು ರನ್ ಗಳನ್ನು ಬೆನ್ನಟ್ಟಿ ಜಯ ಸಾಧಿಸಿರುವುದು ಅದ್ಭುತ ವಿಜಯ. ಅದು ಆತ್ಮವಿಶ್ವಾಸವನ್ನೂ ವೃದ್ಧಿಸಿದೆ. ಟಾಸ್ ಗೆದ್ದ ಭಾರತ, ಇಬ್ಬನಿ ಬೀಳುತ್ತದೆ ಎಂದು ಭಾವಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಟ ಮುಗಿದಾಗ ಇಬ್ಬನಿ ಇರಲೇ ಇಲ್ಲ. ಆದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಈ ನಾಕೌಟ್ ನಲ್ಲಿ 190ಕ್ಕಿಂತ ಹೆಚ್ಚು ರನ್ ಬೆನ್ನಟ್ಟಲು ಆಟಗಾರರು ಅದ್ಭುತ ಪ್ರದರ್ಶನ ನೀಡಬೇಕು. ಸಂಜು ಸ್ಯಾಮ್ಸನ್ ಅದನ್ನು ಸಾಧಿಸಿದರು ಎಂದು ಪಾರ್ಥಿವ್ ಬಣ್ಣಿಸಿದ್ದಾರೆ.
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣವು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮನ್ನಾರ್ ಕೊಲ್ಲಿ ಮತ್ತು ನೆರೆಹೊರೆಗಳ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪ್ರಸರಣ ಮುಂದುವರೆದಿದೆ. ಉತ್ತರ - ದಕ್ಷಿಣ ತಗ್ಗು/ ಗಾಳಿಯ ಸುಳಿ ಈಗ ಮನ್ನಾರ್ ಕೊಲ್ಲಿ ಮತ್ತು
ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ್ಧದಾಹಿಗಳು ಬಾಂಬು ಉದುರಿಸಿ ಪೌರುಷ ಮೆರೆದಿರುವುದು ಅನಾಗರಿಕತೆಯಲ್ಲದೆ ಮತ್ತೇನು?
ಕುವೈತ್ ಸಮೀಪ ಹಡಗಿನ ಬಳಿ ಸ್ಫೋಟದ ಶಬ್ದ: ತೈಲ ಸೋರಿಕೆ ಸಾಧ್ಯತೆ
ಕುವೈತ್, ಮಾ.5: ಕುವೈತ್ ನ ಮುಬಾರಕ್ ಅಲ್–ಕಬೀರ್ ಬಂದರಿನ ಆಗ್ನೇಯ ದಿಕ್ಕಿನಲ್ಲಿ ಸುಮಾರು 30 ನಾಟಿಕಲ್ ಮೈಲುಗಳು (ಸುಮಾರು 55.5 ಕಿಮೀ) ದೂರದಲ್ಲಿ ಸಮುದ್ರದಲ್ಲಿ ಸ್ಪೋಟ ಘಟನೆ ಸಂಭವಿಸಿರುವುದಾಗಿ ಯುನೈಟೆಡ್ ಕಿಂಗ್ಡಮ್ ಮರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ತಿಳಿಸಿದೆ. ಲಂಗರು ಹಾಕಿದ್ದ ಟ್ಯಾಂಕರ್ ನ ಮಾಸ್ಟರ್ ಬಂದರು ಬದಿಯಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿರುವುದನ್ನು ಗಮನಿಸಿದ್ದು, ಬಳಿಕ ಆ ಪ್ರದೇಶದಿಂದ ಒಂದು ಸಣ್ಣ ನೌಕೆ ಹೊರಟು ಹೋಗುತ್ತಿರುವುದನ್ನು ನೋಡಿದ್ದಾರೆ ಎಂದು UKMTO ಹೇಳಿದೆ. ಘಟನೆಯ ಬಳಿಕ ಸರಕು ಟ್ಯಾಂಕ್ನಿಂದ ನೀರಿನಲ್ಲಿ ತೈಲ ಕಾಣಿಸಿಕೊಂಡಿದ್ದು, ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಡಗು ನೀರಿನ ಮೇಲೆಯೇ ತೇಲುತ್ತಿದ್ದು, ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ಎಲ್ಲಾ ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್ ಆರಂಭಿಸಬೇಕೆಂಬ ನಿಯಮಗಳಿಂದಾಗಿ ಉದ್ಯಮಿಗಳಿಗೆ ಜಾಗ ಹುಡುಕುವುದೇ ಕಷ್ಟವಾಗಿದೆ.
ಮೂರು ಕ್ರೂಸ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಿದ ಸೌದಿ ಅರೇಬಿಯಾ
ರಿಯಾದ್: ಅಲ್-ಖಾರ್ಜ್ ನಗರದ ಹೊರವಲಯದಲ್ಲಿ ಉಡಾಯಿಸಲಾದ ಮೂರು ಕ್ರೂಸ್ ಕ್ಷಿಪಣಿಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ತಡೆದು ನಾಶಪಡಿಸಿದೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಕ್ಷಿಪಣಿಗಳು ದೇಶದ ವಾಯುಪ್ರದೇಶದತ್ತ ಬರುತ್ತಿರುವುದನ್ನು ಪತ್ತೆಹಚ್ಚಿದ ನಂತರ ಅವನ್ನು ಮಧ್ಯದಲ್ಲೇ ತಡೆದು ಧ್ವಂಸಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಬೇಲೂರು-ಚಿಕ್ಕಮಗಳೂರು ನಡುವೆ ರೈಲುಮಾರ್ಗದ ಶೇ.70ರಷ್ಟು ಕಾಮಗಾರಿ ಪೂರ್ಣ : ಡಿಸೆಂಬರ್ಗೆ ಸೇವೆ ನಿರೀಕ್ಷೆ
ಮಲೆನಾಡು-ಬಯಲು ಸೀಮೆ ಹಾಗೂ ಕರಾವಳಿಗೆ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗುವ ಬೇಲೂರು-ಚಿಕ್ಕಮಗಳೂರು ನಡುವಿನ ರೈಲುಮಾರ್ಗ ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಮುಖ ಪ್ರವಾಸಿ ಸ್ಥಳ ಬೇಲೂರಿಗೆ ರೈಲು ಸಂಪರ್ಕದ ಜೊತೆಗೆ, ಮಂಗಳೂರು ಕೂಡಾ ಸಂಪರ್ಕಿಸಲು ಈ ರೈಲು ಮಾರ್ಗ ಪ್ರಮುಖವಾಗಿದೆ.
ಇರಾನ್ ವಿರುದ್ಧ ಮಿಲಿಟರಿ ಕ್ರಮ: ಕಾಂಗ್ರೆಸ್ ಅನುಮೋದನೆ ಕಡ್ಡಾಯಗೊಳಿಸುವ ನಿರ್ಣಯ ತಡೆಹಿಡಿದ ಯುಎಸ್ ಸೆನೆಟ್
ವಾಷಿಂಗ್ಟನ್, ಮಾ.5: ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಕಾಂಗ್ರೆಸ್ ನ ಸ್ಪಷ್ಟ ಅನುಮೋದನೆ ಕಡ್ಡಾಯವಾಗಬೇಕು ಎಂದು ಸೂಚಿಸಿದ್ದ ನಿರ್ಣಯವನ್ನು ಅಮೆರಿಕದ ಸೆನೆಟ್ ತಡೆಹಿಡಿದಿದೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ಸಶಸ್ತ್ರ ಪಡೆಗಳನ್ನು ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಗಳಲ್ಲಿ ಬಳಸುವ ಅಧಿಕಾರವನ್ನು ಅಧ್ಯಕ್ಷರಿಂದ ನಿಯಂತ್ರಿಸಿ ಕಾಂಗ್ರೆಸ್ ನ ಮೇಲ್ವಿಚಾರಣೆಯಡಿ ತರಲು ಈ ನಿರ್ಣಯವನ್ನು ಮಂಡಿಸಲಾಗಿತ್ತು. ಆದರೆ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಇದಕ್ಕೆ ಅಗತ್ಯ ಬೆಂಬಲ ದೊರಕಲಿಲ್ಲ. ಮತದಾನದಲ್ಲಿ ರಿಪಬ್ಲಿಕನ್ ಪಕ್ಷದ ಸೆನೆಟರ್ ಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 47–53 ಮತಗಳ ಅಂತರದಲ್ಲಿ ನಿರ್ಣಯ ತಿರಸ್ಕೃತವಾಯಿತು. ಮತದಾನ ಬಹುತೇಕವಾಗಿ ಪಕ್ಷಗಳ ರಾಜಕೀಯ ನಿಲುವಿಗೆ ಅನುಗುಣವಾಗಿಯೇ ನಡೆಯಿತು. ಈ ಪ್ರಸ್ತಾವನೆಯ ಪ್ರಕಾರ, ಕಾಂಗ್ರೆಸ್ ಅನುಮೋದನೆ ನೀಡದ ಹೊರತು ಇರಾನ್ ವಿರುದ್ಧ ನಡೆಯುವ ಮಿಲಿಟರಿ ಕಾರ್ಯಾಚರಣೆಗಳಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರ್ದೇಶಿಸುವ ವಿಧಾನವೂ ಸೇರಿಸಲಾಗಿತ್ತು. ಅಧ್ಯಕ್ಷರ ಮಿಲಿಟರಿ ಅಧಿಕಾರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ಮುಂದಿರಿಸಲಾಗಿತ್ತು. ಆದರೆ ಸೆನೆಟ್ ನಲ್ಲಿ ನಿರ್ಣಯ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಅದು ಜಾರಿಗೆ ಬರಲಿಲ್ಲ. ಇದರಿಂದ ಇರಾನ್ ಕುರಿತ ಮಿಲಿಟರಿ ಕ್ರಮಗಳ ವಿಷಯದಲ್ಲಿ ಅಧ್ಯಕ್ಷರಿಗೆ ಇರುವ ಅಧಿಕಾರ ಯಥಾಸ್ಥಿತಿಯಲ್ಲೇ ಮುಂದುವರಿದಂತಾಗಿದೆ. [4:24 am, 5/3/2026] Vb_irshad Venoor: Breaking
ಇರಾನ್ ದಾಳಿ | ಅಮೆರಿಕದ ಹೇಳಿಕೆಗೆ ಸ್ಪೇನ್ ತಿರುಗೇಟು
ಮಿಲಿಟರಿ ನೆಲೆಗಳ ಬಳಕೆಗೆ ಅನುಮತಿ ಇಲ್ಲ, ನಿಲುವಿನಲ್ಲಿ ಒಂದೇ ಒಂದು ಅಲ್ಪವಿರಾಮವೂ ಬದಲಾಗಿಲ್ಲ ಎಂದ ಮ್ಯಾಡ್ರಿಡ್
ವಾಷಿಂಗ್ಟನ್, ಮಾ.5: ಇರಾನ್ ವಿರುದ್ಧ ಅಮೆರಿಕ ಕೈಗೊಂಡ ಮಿಲಿಟರಿ ಕ್ರಮದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ CNN ಪತ್ರಕರ್ತ ಹಾಗೂ ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಮೊಮ್ಮಗ ಮನು ರಾಜು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಪ್ರಶ್ನಿಸಿ ಗಮನ ಸೆಳೆದಿದ್ದಾರೆ. ಈ ಪ್ರಶ್ನೋತ್ತರ ವಿನಿಮಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಈ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುಬಿಯೊ, ಇಸ್ರೇಲ್ ಇರಾನ್ ಮೇಲೆ ತನ್ನದೇ ಆದ ದಾಳಿಯನ್ನು ಯೋಜಿಸುತ್ತಿದೆ ಮತ್ತು ನಂತರ ಟೆಹ್ರಾನ್ ಅಮೆರಿಕದ ಪಡೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಅಮೆರಿಕದ ನಾಯಕರು ಅಂದಾಜಿಸಿದ್ದರಿಂದ ಅಮೆರಿಕ ಇರಾನ್ ವಿರುದ್ಧ ದಾಳಿಗಳನ್ನು ಆರಂಭಿಸಿತು ಎಂದು ಹೇಳಿದ್ದಾರೆ. ಹೆಚ್ಚಿನ ಸಾವುನೋವುಗಳನ್ನು ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಅಮೆರಿಕ ಮೊದಲು ದಾಳಿ ಮಾಡಿತು ಎಂದು ಅವರು ವಿವರಿಸಿದರು. ಅಮೆರಿಕದ ಪಡೆಗಳನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುಬಿಯೊ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯ ವೇಳೆ ಮನು ರಾಜು, ರುಬಿಯೊ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, ಇಸ್ರೇಲ್ ನ ಯೋಜಿತ ದಾಳಿ ಇದ್ದಾಗ ಅಮೆರಿಕ ಯಾವ ಕಾರಣಕ್ಕೆ ಅದೇ ಸಮಯದಲ್ಲಿ ಕ್ರಮ ಕೈಗೊಂಡಿತು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರುಬಿಯೊ, ‘ಸ್ಪಷ್ಟೀಕರಣ ನೀಡಲು ಏನೂ ಇಲ್ಲ’ ಎಂದು ಹೇಳಿ, ಒಂದು ಹಂತದಲ್ಲಿ ರಾಜು ಅವರಿಗೆ ‘ಇದು ನನ್ನ ಪತ್ರಿಕಾಗೋಷ್ಠಿ’ ಎಂದು ಉತ್ತರಿಸಿದರು. ರುಬಿಯೊ ಅವರ ಹಿಂದಿನ ಹೇಳಿಕೆಗಳು ಅಮೆರಿಕದ ಕ್ರಮಗಳು ಇಸ್ರೇಲ್ನ ಯೋಜನೆಗಳಿಗೆ ಸಂಬಂಧಿಸಿದ್ದೇ ಎಂಬ ಅನುಮಾನವನ್ನು ಮೂಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೋತ್ತರ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕಾರಣವೇನು ಮತ್ತು ಇತರ ಮಿತ್ರ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಯ ಸಮಯದ ಮೇಲೆ ಪ್ರಭಾವ ಬೀರಿದೆಯೇ ಎಂಬ ಪ್ರಶ್ನೆಗಳು ಇದರಿಂದ ಉದ್ಭವಿಸಿವೆ. ನಂತರ ರುಬಿಯೊ ತಮ್ಮ ಹಿಂದಿನ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅಮೆರಿಕಕ್ಕೆ ಇಸ್ರೇಲ್ ನ ಯೋಜನೆಗಳ ಬಗ್ಗೆ ಮಾಹಿತಿ ಇದ್ದರೂ ಇರಾನ್ ಮೇಲೆ ದಾಳಿ ಮಾಡುವ ಅಂತಿಮ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷರೇ ತೆಗೆದುಕೊಂಡಿದ್ದಾರೆ ಮತ್ತು ಅದು ಯಾವ ಪರಿಸ್ಥಿತಿಯಲ್ಲಾದರೂ ಜಾರಿಗೆ ಬರುತ್ತಿತ್ತು ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇಸ್ರೇಲ್ ಅಮೆರಿಕದ ಕ್ರಮಗಳನ್ನು ನಿರ್ದೇಶಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಇರಾನ್ನಿಂದ ಉಂಟಾದ ಭದ್ರತಾ ಬೆದರಿಕೆಯನ್ನು ಅಂದಾಜಿಸಿದ ಆಧಾರದ ಮೇಲೆ ಅಮೆರಿಕ ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿಯನ್ನು ಪ್ರಶ್ನಿಸಿದ ಪತ್ರಕರ್ತ ಮನು ರಾಜು ಯಾರು? ಮನು ರಾಜು ಅಮೆರಿಕದ ಪ್ರಮುಖ ರಾಜಕೀಯ ಪತ್ರಕರ್ತರಲ್ಲಿ ಒಬ್ಬರು. ಪೊಲಿಟಿಕೊ ಹಾಗೂ ಇತರ ರಾಷ್ಟ್ರೀಯ ಸುದ್ದಿ ಸಂಸ್ಥೆಗಳಲ್ಲಿ ವರದಿ ಮಾಡಿದ ನಂತರ ಅವರು 2015ರಲ್ಲಿ CNN ಗೆ ಸೇರಿದರು. ಪ್ರಸ್ತುತ ಅವರು CNN ನ ಮುಖ್ಯ ಕಾಂಗ್ರೆಷನಲ್ ವರದಿಗಾರರಾಗಿದ್ದು, ಕ್ಯಾಪಿಟಲ್ ಹಿಲ್ ಹಾಗೂ ಅಮೆರಿಕದ ರಾಷ್ಟ್ರೀಯ ರಾಜಕೀಯವನ್ನು ವರದಿ ಮಾಡುತ್ತಿದ್ದಾರೆ. ಜೊತೆಗೆ CNN ನ ರವಿವಾರದ ರಾಜಕೀಯ ಕಾರ್ಯಕ್ರಮ ‘ಇನ್ಸೈಡ್ ಪಾಲಿಟಿಕ್ಸ್ ವಿತ್ ಮನು ರಾಜು’ ಕಾರ್ಯಕ್ರಮವನ್ನು ಸಹ ನಿರೂಪಿಸುತ್ತಿದ್ದಾರೆ. ವಾಷಿಂಗ್ಟನ್ನಲ್ಲಿ ಅನುಭವಿ ವರದಿಗಾರರಾಗಿರುವ ರಾಜು, CNN ಗೆ ಸೇರುವ ಮೊದಲು ಏಳು ವರ್ಷಗಳ ಕಾಲ ಪೊಲಿಟಿಕೊದಲ್ಲಿ ಹಿರಿಯ ಕ್ಯಾಪಿಟಲ್ ಹಿಲ್ ವರದಿಗಾರರಾಗಿದ್ದರು. ಅದಕ್ಕೂ ಮುನ್ನ ‘ದಿ ಹಿಲ್’, ‘ಕಾಂಗ್ರೆಷನಲ್ ಕ್ವಾರ್ಟರ್ಲಿ’ ಮತ್ತು ‘ಇನ್ಸೈಡ್ ವಾಷಿಂಗ್ಟನ್ ಪಬ್ಲಿಷರ್ಸ್’ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಟಿವಿ ಹಾಗೂ ರೇಡಿಯೊ ರಾಜಕೀಯ ಚರ್ಚಾ ಕಾರ್ಯಕ್ರಮಗಳಲ್ಲಿ ಅವರು ಆಗಾಗ್ಗೆ ಅತಿಥಿಯಾಗಿ ಭಾಗವಹಿಸುತ್ತಾರೆ. ವಾಷಿಂಗ್ಟನ್ ರಾಜಕೀಯದ ಪ್ರಮುಖ ಘಟನೆಗಳು ಮತ್ತು ಚುನಾವಣಾ ಪ್ರಚಾರಗಳ ವರದಿಗಾಗಿ ಮನು ರಾಜು ಹಲವು ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2022ರಲ್ಲಿ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ವರದಿಗಾಗಿ ರೇಡಿಯೋ ಮತ್ತು ಟೆಲಿವಿಷನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಡೇವಿಡ್ ಬ್ಲೂಮ್ ಪ್ರಶಸ್ತಿಯನ್ನು ಪಡೆದ ತಂಡದ ಭಾಗವಾಗಿದ್ದರು. ಅದೇ ವರ್ಷ ಮಿಲ್ವಾಕೀ ಪ್ರೆಸ್ ಕ್ಲಬ್ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಸೇಕ್ರೆಡ್ ಕ್ಯಾಟ್’ ಪ್ರಶಸ್ತಿಯಿಂದ ಗೌರವಿಸಿತು. ಇದಕ್ಕೂ ಮೊದಲು 2012ರಲ್ಲಿ ಅಮೆರಿಕದ ಸಾಲದ ಮಿತಿ ಬಿಕ್ಕಟ್ಟಿನ ವರದಿಗಾಗಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಮೆರಿಮನ್ ಸ್ಮಿತ್ ಪ್ರಶಸ್ತಿಯನ್ನು ಪಡೆದ ತಂಡದಲ್ಲೂ ಅವರು ಇದ್ದರು. 2015ರಲ್ಲಿ ಮಧ್ಯಂತರ ಚುನಾವಣಾ ವರದಿಗಾಗಿ ಡಿ.ಸಿ.ಯ ಸೊಸೈಟಿ ಆಫ್ ಪ್ರೊಫೆಷನಲ್ ಜರ್ನಲಿಸ್ಟ್ಸ್ ನೀಡುವ ಪ್ರಥಮ ಬಹುಮಾನ ಹಾಗೂ ಸೆನೆಟರ್ ಎಲಿಜಬೆತ್ ವಾರೆನ್ ಕುರಿತ ಫೀಚರ್ ವರದಿಗಾಗಿ ಫೋಲಿಯೊ: ಎಡ್ಡಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. 2017ರಲ್ಲಿ ಅತ್ಯುತ್ತಮ ಕಾಂಗ್ರೆಸ್ ವರದಿಗಾಗಿ ನೀಡುವ ಜೋನ್ ಶೋರೆನ್ಸ್ಟೈನ್ ಬರೋನ್ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ರಾಜಕಾರಣಿಗಳು ಸಾರ್ವಜನಿಕವಾಗಿ ಹೇಳದ ವಿಷಯಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ವರದಿಗಾರನಾಗಿ ರಾಜು ಹೆಸರು ಮಾಡಿದ್ದಾರೆ. ರಾಜಕಾರಣಿಗಳನ್ನು ತೀಕ್ಷ್ಣವಾಗಿ ಹಾಗೂ ಕೌಶಲ್ಯಪೂರ್ಣವಾಗಿ ಪ್ರಶ್ನಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಮನು ರಾಜು ಅವರು ಇಲಿನಾಯ್ಸ್ನಲ್ಲಿ ಜನಿಸಿದ್ದು, ಅವರ ಪೋಷಕರು 1970ರ ದಶಕದಲ್ಲಿ ಕರ್ನಾಟಕದಿಂದ ಅಮೆರಿಕಕ್ಕೆ ವಲಸೆ ಬಂದವರು. ಅವರ ತಂದೆ ವೈದ್ಯರಾಗಿದ್ದರು. ರಾಜು ಅವರು ಪ್ರಸಿದ್ಧ ಕನ್ನಡ ಕವಿ ಗೋಪಾಲಕೃಷ್ಣ ಅಡಿಗ ಮೊಮ್ಮಗ. ವಿಸ್ಕಾನ್ಸಿನ್–ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಲ್ಲಿನ ವಿದ್ಯಾರ್ಥಿ ಪತ್ರಿಕೆ ‘ದಿ ಬ್ಯಾಡ್ಜರ್ ಹೆರಾಲ್ಡ್’ನಲ್ಲಿ ಕೆಲಸ ಮಾಡುವ ಮೂಲಕ ರಾಜು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕಾಗೊ ಪ್ರದೇಶದಲ್ಲಿ ಬೆಳೆದ ಅವರು ಅಲ್ಲಿನ ಕ್ರೀಡಾ ತಂಡಗಳ ಅಭಿಮಾನಿಯಾಗಿಯೂ ಪರಿಚಿತರಾಗಿದ್ದಾರೆ. RAJU: Your quote is, 'We knew there was going to be an Israeli action. We know that would precipitate an attack--' MARCO RUBIO: The-- you asked-- I was asked a very specific question, so you guys can misrepresent but I was asked a very specific question yesterday. The bottom… pic.twitter.com/2sPoX4H0oj — Aaron Rupar (@atrupar) March 3, 2026
Andhra Pradesh | ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಬೆಂಗಳೂರಿನ ಐವರು ಮೃತ್ಯು
ಪಲಮನೇರು : ಕಾರೊಂದು ನಿಂತಿದ್ದ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬೆಂಗಳೂರಿನಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ ಟ್ರಕ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇರಾನ್ ಮೇಲಿನ ದಾಳಿಗೆ ಅಮೆರಿಕದೊಂದಿಗೆ ಸಹಕಾರಕ್ಕೆ ಸ್ಪೇನ್ ಒಪ್ಪಿಗೆ: ಶ್ವೇತಭವನ
ವಾಷಿಂಗ್ಟನ್, ಮಾ.5: ಇರಾನ್ ಮೇಲಿನ ಅಮೆರಿಕದ ಮಿಲಿಟರಿ ದಾಳಿಗೆ ಸಹಕಾರ ನೀಡಲು ಸ್ಪೇನ್ ಒಪ್ಪಿಕೊಂಡಿದೆ ಎಂದು ಶ್ವೇತಭವನ ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮ್ಯಾಡ್ರಿಡ್ ಜೊತೆಗಿನ ವ್ಯಾಪಾರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ ನಂತರ ಈ ನಿರ್ಧಾರಕ್ಕೆ ಸ್ಪೇನ್ ಬಂದಿರುವುದಾಗಿ ತಿಳಿಸಲಾಗಿದೆ ಎಂದು Aljazeera ವರದಿ ಮಾಡಿದೆ. “ಸ್ಪೇನ್ ವಿಚಾರದಲ್ಲಿ ಹೇಳುವುದಾದರೆ, ಅವರು ನಿನ್ನೆ ಅಧ್ಯಕ್ಷರ ಸಂದೇಶವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ. “ಕಳೆದ ಹಲವಾರು ಗಂಟೆಗಳಲ್ಲಿ ಅವರು ಅಮೆರಿಕದ ಮಿಲಿಟರಿಯೊಂದಿಗೆ ಸಹಕರಿಸಲು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅಮೆರಿಕದ ಮಿಲಿಟರಿ ಸ್ಪೇನ್ನಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ನನಗೆ ತಿಳಿದಿದೆ,” ಎಂದರು. ಇದಕ್ಕೂ ಮೊದಲು ಸ್ಪೇನ್ನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್, ವಿಶ್ವಸಂಸ್ಥೆಯ ಚಾರ್ಟರ್ ವ್ಯಾಪ್ತಿಗೆ ಒಳಪಡದ ಯಾವುದೇ ದಾಳಿಗಳಲ್ಲಿ ದಕ್ಷಿಣ ಸ್ಪೇನ್ ನಲ್ಲಿರುವ ಜಂಟಿಯಾಗಿ ಕಾರ್ಯನಿರ್ವಹಿಸುವ ಮಿಲಿಟರಿ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ತಮ್ಮ ದೇಶ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಮರುದಿನವೇ ಅಧ್ಯಕ್ಷ ಟ್ರಂಪ್ ಮಂಗಳವಾರ “ಸ್ಪೇನ್ನೊಂದಿಗಿನ ಎಲ್ಲಾ ವ್ಯಾಪಾರವನ್ನು ಕಡಿತಗೊಳಿಸುವುದಾಗಿ” ಎಚ್ಚರಿಕೆ ನೀಡಿದ್ದರು. ಈ ಕುರಿತು ಸ್ಪೇನ್ ಸರ್ಕಾರದಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಯುಜಿಸಿಇಟಿ : ಶುಲ್ಕ ಪಾವತಿಗೆ ಮಾ.7 ಕೊನೆ ದಿನ
ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಹಾಗೂ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮಾ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ನಿಗದಿತ ಶುಲ್ಕ ಪಾವತಿ ಮಾಡಿದ್ದಾರೆ. ಇನ್ನೂ 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿದ್ದು, ಅವರಿಗೆ ಅನುಕೂಲ ಆಗಲೆಂದು ದಿನಾಂಕ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ನೇಮಕಾತಿ: ಅಂಕಪಟ್ಟಿ ಪ್ರಕಟ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳಿಗೆ ಫೆ.21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಅವುಗಳ ಅಂತಿಮ ಕೀ ಉತ್ತರ ಹಾಗೂ ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಪಟ್ಟಿ ಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಗದ್ಯಾಳ ಅವರು ತಿಳಿಸಿದ್ದಾರೆ. ಅಂಕ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಮಾ.6ರಂದು ಬೆಳಿಗ್ಗೆ 11ಗಂಟೆ ಒಳಗೆ ಆನ್ ಲೈನ್ ಮೂಲಕ ಸಲ್ಲಿಸಬೇಕು ಎಂದೂ ಅವರು ವಿವರಿಸಿದ್ದಾರೆ.
ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ; ಪುನರ್ ಪರಿಶೀಲನೆ ಮಾಡಲು ಒತ್ತಾಯ
ಬೆಂಗಳೂರು : ಸರಕಾರ ಒಂದನೇ ತರಗತಿ ಪ್ರವೇಶಕ್ಕೆ ದಾಖಲಾತಿ ಪಡೆಯುವ ಮಗು ವಯಸ್ಸು ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ನಿಯಮವನ್ನು ಜಾರಿಗೆ ತಂದಿದ್ದು, ಈ ನಿಯಮವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಒತ್ತಾಯಿಸಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಅವರು, ಒಂದನೇ ತರಗತಿಯ ದಾಖಲಾತಿಯಲ್ಲಿ ಯಾವುದೇ ಮಗು ತನ್ನ ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗದಂತೆ ಮಾರ್ಗೋಪಾಯಗಳನ್ನು ತಂದು ಸಮದೂಗಿಸಲು ಕ್ರಮವಾಗಬೇಕು ಎಂದು ಹೇಳಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷದಲ್ಲೂ ಸಾಕಷ್ಟು ಪೋಷಕರು ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಮಕ್ಕಳು ಈ ನಿಯಮದಿಂದ ಹಿಂದಿನ ತರಗತಿಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ಆಯೋಗದ ಗಮನಕ್ಕೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈ ಹಿಂದೆಯೂ ಶಿಕ್ಷಣ ಇಲಾಖೆಗೆ ಪತ್ರ ಬರೆದು ಈ ವಯೋಮಿತಿಯನ್ನು ಪುನರ್ ಪರಿಶೀಲಿಸುವಂತೆ ಅಥವಾ ನಿಯಮದಲ್ಲಿ ಸಡಿಲಿಕೆ ನೀಡುವಂತೆ ಮಾರ್ಗೋಪಾಯಗಳನ್ನು ತಿಳಿಸಲು ಕೋರಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈಗಲೂ ಶಿಕ್ಷಣ ಇಲಾಖೆಯಿಂದ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡ ಮಕ್ಕಳನ್ನು ಮಾತ್ರ ಜೂನ್/ಜುಲೈನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲಾಗುವುದು ಎಂಬ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಮತ್ತೊಮ್ಮೆ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಇಲಾಖೆಯು ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಖಾಮಿನೈ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ವಿಚಾರ: ಪ್ರಕರಣ ದಾಖಲು ಮಾಡಿದ್ದೇವೆ : ಜಿ.ಪರಮೇಶ್ವರ್
ಬೆಂಗಳೂರು : ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ಶಿಯಾ ಮುಸ್ಲಿಮರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಗದ ಜನರು ಆಯತುಲ್ಲಾ ಅಲಿ ಖಾಮಿನೈ ಅವರನ್ನು ಗುರುಗಳಾಗಿ ಭಾವಿಸಿದ್ದಾರೆ. ಅವರು ತೀರಿಕೊಂಡಾಗ ಸ್ವಾಭಾವಿಕವಾಗಿ ಅವರಿಗೆ ನೋವು ಆಗಿರಬಹುದು. ಅದನ್ನು ಪ್ರದರ್ಶಿಸಬಹುದು. ಆದರೆ ನಮ್ಮ ದೇಶದ ಕಾನೂನಿನ ಒಳಗಡೆ ಆಗಬೇಕು. ಅವರಿಗೆ ಅನುಮತಿ ಕೊಟ್ಟಿರಲಿಲ್ಲ. ಆದರೂ, ನಿಮಯ ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಮೈದಾನ ಹೊರತುಪಡಿಸಿ ಬೇರೆ ಎಲ್ಲಿಯೂ ಪ್ರತಿಭಟನೆ ನಡೆಸಬಾರದೆಂದು ಹೈಕೋರ್ಟಿನ ಆದೇಶವೇ ಇದೆ. ಹೀಗಾಗಿ, ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ, ಕೋರ್ಟ್ ಆದೇಶವನ್ನು ಎಲ್ಲರೂ ಗೌರವಿಸಬೇಕು ಎಂದು ಅವರು ಉಲ್ಲೇಖಿಸಿದರು.
ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ: ಪತ್ತೆಗಾಗಿ ಪೊಲೀಸರಿಗೆ ಒಂದು ವಾರದ ಗಡುವು ನೀಡಿದ ಹೈಕೋರ್ಟ್
ಬೆಂಗಳೂರು : ತಿಂಗಳ ಹಿಂದೆ ನಾಪತ್ತೆಯಾದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಈವರೆಗೂ ಪತ್ತೆಯಾಗದ ಹಿನ್ನೆಲೆ, ಕುಟುಂಬಸ್ಥರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಪತ್ತೆಗಾಗಿ ನ್ಯಾಯಾಲಯ ವಿದ್ಯಾರಣ್ಯಪುರ ಠಾಣಾ ಪೊಲೀಸರಿಗೆ ಒಂದು ವಾರದ ಗಡುವು ನೀಡಿರುವುದಾಗಿ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು ಘಟನೆ ನಡೆದಿದ್ದು, ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಪರೀಕ್ಷೆಯ ಬಗ್ಗೆ ಭಯ ಹೊಂದಿದ್ದ ವಿದ್ಯಾರ್ಥಿನಿ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಅದೇ ಭಯದಿಂದಲೇ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದೆ. ಜನವರಿ 31ರಂದು ಎಂದಿನಂತೆ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯರು ಮನೆಗೆ ಮರಳಿಲ್ಲ. ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣ ಕೊಂಡೊಯ್ದಿಲ್ಲ. ಕೇವಲ ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ಕೊಂಡೊಯ್ದಿದ್ದು, ಉಚಿತ ಬಸ್ ಪ್ರಯಾಣದ ಸೌಲಭ್ಯ ಬಳಸಿಕೊಂಡಿರಬಹುದು ಎನ್ನಲಾಗಿದೆ. ವಿದ್ಯಾರ್ಥಿನಿಯರು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್(ರಿಟ್) ಅರ್ಜಿ ಸಲ್ಲಿಸಿದ್ದು, ಪತ್ತೆಗಾಗಿ ನ್ಯಾಯಾಲಯ ಪೊಲೀಸರಿಗೆ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ.
ವಿಬಿ-ಜಿ-ರಾಮ್ಜಿ ಕಾಯ್ದೆ ವಿರುದ್ಧ ಕಾನೂನು ಹೋರಾಟ : ಬಿ.ಆರ್.ಪಾಟೀಲ್
ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೋಟ್ಯಂತರ ಗ್ರಾಮೀಣ ಕುಟುಂಬಗಳಿಗೆ ನೆರವಾಗಿದೆ. ಕೇಂದ್ರ ಇದೀಗ ಅದನ್ನು ಬದಲಿಸಿ ಹೊಸ ಕಾಯ್ದೆ ಜಾರಿಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆದ ಮನರೇಗಾ ವರ್ಸಸ್ ಜಿ ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದಲಾವಣೆ: ಸಾಧಕ-ಭಾದಕಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ವ್ಯವಸ್ಥೆಯಲ್ಲಿ ಬೇಡಿಕೆ ಆಧಾರಿತ ಯೋಜನೆ ಇತ್ತು. ಗ್ರಾಮ ಮಟ್ಟದಲ್ಲೇ ರಸ್ತೆ, ಶೌಚಾಲಯ ಸೇರಿದಂತೆ ಅಗತ್ಯ ಕಾಮಗಾರಿಗಳ ನಿರ್ಧಾರವಾಗುತ್ತಿತ್ತು. ಈಗ ಆ ಅಧಿಕಾರವನ್ನು ಕೇಂದ್ರೀಕರಿಸಲಾಗುತ್ತಿದೆ ಎಂದರು. ಕೇಂದ್ರ ಸರಕಾರದ ಉದ್ಯೋಗ ಖಾತೆ ಸಂಬಂಧಿತ ತಿದ್ದುಪಡಿ ಕಾಯ್ದೆ ವಿರುದ್ಧ ಗದಗ್ ತಾಲೂಕಿನಲ್ಲಿ ನಡೆದ ಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕಾಯ್ದೆ ವಿಕೇಂದ್ರೀಕರಣ ವ್ಯವಸ್ಥೆಗೆ ವಿರುದ್ಧವಾಗಿದ್ದು, ಬಡವರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುತ್ತದೆ ಎನ್ನಲಾಗುತ್ತಿದೆ. ಉದ್ಯೋಗ ಖಾತೆಯಲ್ಲಿ ಭ್ರಷ್ಟಾ ಚಾರ ಇದೆ ಎಂಬ ಕಾರಣ ನೀಡಿ, ಕಾಯ್ದೆ ಬದಲಾವಣೆ ಮಾಡಿ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರ ಇದ್ದರೆ ಅದನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಅದಕ್ಕಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುವಂತ ಕ್ರಮ ಯಾಕೆ? ಎಂದು ಅವರು ಪ್ರಶ್ನಿಸಿದರು. ರಾಜ್ಯ ಸರಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಶೇ.40 ಪಾಲು ಭರಿಸುವ ಸಾಮರ್ಥ್ಯ ಇಲ್ಲದಂತಾಗಿದೆ. ಇನ್ನೂ ಕೇಂದ್ರ ಸರಕಾರದಿಂದ ಅಂತಿಮ ಅಧಿಸೂಚನೆ ಹಾಗೂ ನಿಯಮಾವಳಿ ಹೊರಬಂದಿಲ್ಲ. ನಿಯಮಾವಳಿ ಪ್ರಕಟವಾದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ. 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಅಡಿಯಲ್ಲಿ ಗ್ರಾಮ ಸ್ವರಾಜ್ಯದ ಆಶಯವನ್ನು ಹಿಂಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು. ಮನರೇಗಾ ಯೋಜನೆ ಫಲಾನುಭವಿ ಮೋಕ್ಷಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯೋಗದ ಅಭಾವ, ಅಸ್ಥಿರ ಮಳೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ 2005ರಲ್ಲಿ ಜಾರಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಉದ್ಯೋಗ ಖಾತ್ರಿ) ಹೊಸ ಆಶಾಕಿರಣವಾಗಿ ಪರಿಣಮಿಸಿತು. ಆರಂಭಿಕ ದಿನಗಳಲ್ಲಿ ಯೋಜನೆ ಬಗ್ಗೆ ಅರಿವು ಕಡಿಮೆಯಿದ್ದರೂ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆಗಳ ಪ್ರಯತ್ನದಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ ಚೌಧರಿ, ಆಯೋಗದ ಸದಸ್ಯ ಡಾ.ನಿರಾಂಜನಾರಾಧ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರು ಸ್ವಾಭಿಮಾನ ಅಡವಿಟ್ಟು ಬಿಜೆಪಿಯಲ್ಲಿ ಬದುಕುತಿದ್ದಾರೆ : ರಮೇಶ್ಬಾಬು
ಬೆಂಗಳೂರು : ತಲೆ ಮೇಲೆ ಚಡ್ಡಿ ಹೊತ್ತು ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿಯಲ್ಲಿ ಬದುಕುತ್ತಿರುವ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ಬಜೆಟ್ಗೆ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ಮತ್ತೊಮ್ಮೆ ಚಡ್ಡಿ ಹೊರುವ ಸಂಸ್ಕೃತಿಗೆ ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್ಬಾಬು ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಭತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಿಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕ ವಿಧಾನಮಂಡಲದ ಇಬ್ಬರೂ ವಿರೋಧ ಪಕ್ಷದ ನಾಯಕರು ಅತ್ಯಂತ ವೈಫಲ್ಯದ ನಾಯಕರಾಗಿದ್ದು, ರಾಜ್ಯದ ಸಮಸ್ಯೆಗಳು ಮತ್ತು ಆಡಳಿತದ ಮೇಲೆ ಬೆಳಕು ಚೆಲ್ಲುವ ಬದಲು ಪದೇ ಪದೇ ತಮ್ಮ ವೈಫಲ್ಯಗಳನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜ.28ರಂದು ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ ಇತಿಹಾಸ ಬರೆದಿರುತ್ತಾರೆ. ಈಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಂಡಿರುತ್ತಾರೆ ಎಂದು ಟೀಕಿಸಿದರು. ಛಲವಾದಿ ನಾರಾಯಣಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಕೇಂದ್ರ ಬಿಜೆಪಿ ಸರಕಾರವು ತನ್ನ ಒಟ್ಟಾರೆ ಬಜೆಟ್ನಲ್ಲಿ ಶೇ.10ರಷ್ಟು ಹಣ ಕೂಡ ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿರುವುದಿಲ್ಲ. ದಲಿತ ವಿರೋಧಿ ನೀತಿಯನ್ನು ತನ್ನ ಆಡಳಿತದ ಉದ್ದಗಲಕ್ಕೂ ಸಾರುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನಾಗಲಿ ಅಥವಾ ಮೀಸಲಾತಿ ವಿರೋಧಿ ನೀತಿಯನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರವನ್ನಾಗಲಿ ಪ್ರಶ್ನೆ ಮಾಡುವ ತಾಕತ್ತು, ಧೈರ್ಯ ಅಥವಾ ನೈತಿಕತೆಯನ್ನು ಹೊಂದಿರದ ಛಲವಾದಿ ನಾರಾಯಣಸ್ವಾಮಿ ಅವರು, ಧರ್ಮದ ಹೆಸರಿನಲ್ಲಿ ಬೆಂಕಿ ಇಡುವ ಬಿಜೆಪಿ ಪ್ರವೃತ್ತಿಯ ಮುಂದುವರಿದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರಕಾರದ ಬಜೆಟ್ ಪ್ರತಿಗೆ ಬೆಂಕಿ ಇಡುವ ಮಾತನಾಡಿರುತ್ತಾರೆ ಎಂದು ಹೇಳಿದರು. ದೇಶದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರವನ್ನು ಅನುಕರಣೆ ಮಾಡಲು ವಿಫಲವಾಗಿರುವ ಕೇಂದ್ರ ಬಿಜೆಪಿ ಸರಕಾರ ಮತ್ತು ಇತರೆ ರಾಜ್ಯಗಳ ಬಿಜೆಪಿ ಸರಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳೆಯುತ್ತಿದ್ದಾರೆ. ಬಹುಶಃ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇದಕ್ಕಿಂತ ಹೆಚ್ಚು ಭಟ್ಟಂಗಿತನ ಪ್ರದರ್ಶನ ಮಾಡಲು ಇವರಿಗೆ ಸಾಧ್ಯವಿಲ್ಲ ಎಂದರು. ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದು, ಸಾರ್ವಜನಿಕವಾಗಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದು ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ ಮತ್ತು ಸಂಘ ಪರಿವಾರದಿಂದ ಕಲಿತ ಸಂಸ್ಕೃ ತಿಯಾಗಿದೆ. ಇವರಿಗೆ ದಲಿತರ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಬಿಜೆಪಿ ಸರಕಾರದ ಬಜೆಟ್ನಲ್ಲಿ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನಗಳ ಕುರಿತು ಧ್ವನಿಯೆತ್ತಲಿ ಎಂದು ತಿಳಿಸಿದರು. ಪ್ರಚಾರಕ್ಕಾಗಿ ಚಡ್ಡಿ ಹೊರುವ, ಪುಸ್ತಕ ಹರಿಯುವ, ಬೆಂಕಿ ಇಡುವ ನಡತೆಯಿಂದ ಮುಕ್ತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಒತ್ತಾಯಿಸದರು.
ಒಳಮೀಸಲಾತಿ ಅನುಷ್ಠಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ದಲಿತ ಸಚಿವರ ನಿಯೋಗ
ಬೆಂಗಳೂರು : ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ದಲಿತ ಸಮುದಾಯದ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಭೇಟಿ ಮಾಡಿ, ಚರ್ಚಿಸಿದ್ದಾರೆ. ಒಮ್ಮತದ ಅಭಿಪ್ರಾಯದ ಮೂಲಕ ಮೀಸಲಾತಿ ಹಂಚಿಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿಯ ನೂರೊಂದು ಸಮುಯದಾಯಗಳಿಗೂ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಚಂದ್ರಪ್ಪ, ಎಲ್.ಹನುಮಂತಯ್ಯ, ಶಾಸಕ ಶ್ರೀನಿವಾಸ್, ಧರ್ಮಸೇನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಮುಂದಿನ ಎರಡು ವರ್ಷಗಳಲ್ಲಿ ಐದು ಲಕ್ಷ ಸ್ವತ್ತುಗಳ ಪೋಡಿ ದುರಸ್ತಿ ಗುರಿ : ಕೃಷ್ಣ ಬೈರೇಗೌಡ
ಕಂದಾಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶ
Kalaburagi | ನೋಟಿಸ್ ನೀಡದೆ ಕಾಮಗಾರಿ ಆರೋಪ : ರೈಲ್ವೆ ಅಧಿಕಾರಿಗಳ ವಿರುದ್ಧ ಎಫ್ಐಆರ್
ಕಲಬುರಗಿ: ನೋಟಿಸ್ ನೀಡದೆ ಹೊಲಗಳಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ನಡೆಸಿದ ಆರೋಪದ ಮೇರೆಗೆ ಮೂವರು ರೈಲ್ವೆ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೈಋತ್ಯ ರೈಲ್ವೆ ಕನ್ಸ್ಟ್ರಕ್ಷನ್ ವಿಭಾಗದ ಸಹಾಯಕ ಮುಖ್ಯ ಎಂಜಿನಿಯರ್ ರಾಮಾಶ್ರಯ ಝಾ ಸತ್ಯೇಂದ್ರ ಝಾ (51), ಬಿಹಾರ ರಾಜ್ಯದ ಪಟ್ನಾ ನಿವಾಸಿಯಾಗಿರುವ ಸೀನಿಯರ್ ಸೆಕ್ಷನ್ ಇಂಜಿನಿಯರ್ ಹಿಮಾಂಶುಕುಮಾರ್ ಮೌಜಿ ಮಾಲಕರ (40), ಮತ್ತೊಬ್ಬ ಸೀನಿಯರ್ ಸೆಕ್ಷನ್ ಇಂಜಿನಿಯರ್ ಜಗ್ಗು ಮಾಹಂತಿ (49) ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಡಿ ಠಾಣೆ ವ್ಯಾಪ್ತಿಯ ಹಲಕರ್ಟಿ ಗ್ರಾಮದ ಸರ್ವೇ ನಂ. 283ರಲ್ಲಿ ಖಾಜಮ್ಮ ಮುಹಮ್ಮದ್ ಅಲಿಸಾಬ್ ಅವರ ಹೊಲದಲ್ಲಿ ನೋಟಿಸ್ ನೀಡದೆ ಗದಗ ರೈಲ್ವೆ ಹಳಿ ಕಾಮಗಾರಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಸುತ್ತಮುತ್ತಲಿನ ಜಮೀನಿನ ಮಾಲಕರು ಪರಿಹಾರ ಹಣ ದೊರಕಿಲ್ಲವೆಂದು ಆರೋಪಿಸಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಮಗಾರಿ ಮಾಡಲು ಯತ್ನಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಡಿ ನಿವಾಸಿ ಮಲ್ಲಯ್ಯ ಹಣಮಯ್ಯ ಗುತ್ತೇದಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮಾದಕವಸ್ತು ಸಂಗ್ರಹ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆಗೊಳಿಸಿರುವ ಹೈಕೋರ್ಟ್, ಅಧಿಕೃತ ದಾಖಲೆಗಳಿಲ್ಲದೆ ಕಳೆದೊಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಅರ್ಜಿದಾರ ವಿದೇಶಿಗರನ್ನು ಬಿಡುಗಡೆಗೊಂಡ ನಂತರ ದೇಶದಿಂದ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಅಕ್ರಮವಾಗಿ ಬಂಧನದಲ್ಲಿರಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಮುಕ್ತ ನ್ಯಾಯಾಲಯದಲ್ಲಿ ತೀರ್ಪಿನ ಸಾರಾಂಶ ಓದಿದ ನ್ಯಾಯಪೀಠ, ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿರುವುದರಿಂದ ಹಾಗೂ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಅರ್ಜಿದಾರರು ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಅರ್ಜಿದಾರರು ಬಿಡುಗಡೆಯಾದ ತಕ್ಷಣ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣಕ್ಕಾಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಹಿಂಪಡೆಯುವುದಕ್ಕೆ ಹಾಗೂ ಗಡೀಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್ಒಪಿ) ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಅವರನ್ನು ಸಂಬಂಧಪಟ್ಟ ವ್ಯಾಪ್ತಿಯ ಎಫ್ಆರ್ಆರ್ಒಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ, ಎಸ್ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮಟ್ಟದ ಸ್ಕ್ರೀನಿಂಗ್ ಸಮಿತಿ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ನಾಗರಿಕ ಕೇಂದ್ರಿತವಲ್ಲ: ಭಾರತದ ಸಂವಿಧಾನದ ವಿಧಿ 22(1)ರ ಪ್ರಕಾರ, ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯವಾಗಿದೆ. ಬಂಧನದ ಕಾರಣಗಳನ್ನು ತಿಳಿಸಬೇಕೆನ್ನುವುದು ಒಂದು ಕಡ್ಡಾಯವಾದ ಸಾಂವಿಧಾನಿಕ ರಕ್ಷಣೆಯಾಗಿದೆಯೇ ಹೊರತು ಅದು ಔಪಚಾರಿಕ ಕಾರ್ಯವಿಧಾನವಷ್ಟೇ ಅಲ್ಲ. 22ನೇ ವಿಧಿಯು ಕೇವಲ ನಾಗರಿಕ ಕೇಂದ್ರಿತವಲ್ಲದೆ, ವ್ಯಕ್ತಿ ಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ ದೊರೆತಿರುವ ಸಾಂವಿಧಾನಿಕ ರಕ್ಷಣೆಯು ಭಾರತದ ಭೂಪ್ರದೇಶದಲ್ಲಿರುವ ವಿದೇಶಿಗರಿಗೂ ಸೇರಿದಂತೆ ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಬಂಧನದ ಕಾರಣಗಳನ್ನು ತಿಳಿಸಲು ಕಾನೂನು ಯಾವುದೇ ಕಟ್ಟುನಿಟ್ಟಾದ ಸ್ವರೂಪವನ್ನು ನಿಗದಿಪಡಿಸಿಲ್ಲ. ಬಂಧಿತ ವ್ಯಕ್ತಿಗೆ ಆತನ ಬಂಧನದ ಆಧಾರದ ಬಗ್ಗೆ ಅರಿವು ಮೂಡಿಸಿದರೆ, ಅದು ಕಾನೂನಿನ ಗಮನಾರ್ಹ ಪಾಲನೆಯೆಂದು ಪರಿಗಣಿಸಲ್ಪಡುತ್ತದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ವಿಮರ್ಶೆಯು ಬಂಧನದ ಕಾರಣಗಳನ್ನು ತಿಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಆ ಕಾರಣಗಳು ಸಮರ್ಪಕವಾಗಿವೆಯೇ ಅಥವಾ ಸರಿಯಾಗಿವೆಯೇ ಎಂಬ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಉದ್ದೇಶಪೂರ್ವಕ ಕೃತ್ಯ: ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಬಹುಶಃ ಎಸ್ಒಪಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಇದಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಂಥ ಜನರು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಕೊಳ್ಳುತ್ತಾರೆ. ಆನಂತರ ಪ್ರಕರಣದ ವಿಚಾರಣೆ ಬಾಕಿ ಇದೆ ಎಂಬ ನೆಪದಲ್ಲಿ ಅವಧಿ ಮೀರಿ ಇಲ್ಲಿಯೇ ಉಳಿದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಎಸ್ಒಪಿಯೇ ಸರಿಯಾಗಿದೆ ಎಂದು ಮೌಖಿಕವಾಗಿ ಹೇಳಿತು. ಪ್ರಕರಣದ ಹಿನ್ನೆಲೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರ್ಜಿದಾರರನ್ನು 2024ರ ಮೇ 12ರಂದು ನಗರದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, ಆರೋಪಿಗಳಿಂದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ ಅರ್ಜಿದಾರರು ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಧಿಕೃತ ವೀಸಾ ಹಾಗೂ ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿತ್ತು. ಜತೆಗೆ, ಎಫ್ಆರ್ಆರ್ಒ ನಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತ್ತಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ, ಎಫ್ಆರ್ಆರ್ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತಂತೆ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು.
Middle East Conflict- ಟ್ರಂಪ್ ಹತ್ಯೆಗೆ ಸಂಚು ನಡೆಸಿದ್ದಕ್ಕೆ ಇರಾನ್ಗೆ ಶಾಸ್ತಿ: ಅಮೆರಿಕದಿಂದ ಈಗ ಹೊಸ ವರಸೆ!
ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ವಿರೋಧಿಸಿ ಅದರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಈವರೆಗೂ ಹೇಳಿಕೊಂಡು ಬಂದಿದ್ದ ಅಮೆರಿಕ ಇದೀಗ ತನ್ನ ವರಸೆ ಬದಲಿಸಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದ್ದೇ ಟೆಹ್ರಾನ್ ಮೇಲಿನ ದಾಳಿಗೆ ಪ್ರಮುಖ ಕಾರಣ ಎಂದು ಸಮರ್ಥಿಸಿಕೊಂಡಿದೆ. ಇದೇವೇಳೆ ಸ್ಪಷ್ಟ ಯೋಜನೆಯಿಲ್ಲದ ಈ ಯುದ್ಧಕ್ಕೆ ಬೆಂಬಲ ನೀಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿರುವುದು ಅಮೆರಿಕಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ ದಕ್ಷಿಣ ಇರಾನ್ನ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ವಿದ್ಯಾರ್ಥಿನಿಯರು ಸಾವನ್ನಪ್ಪಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ.
ಬ್ರಿಟನ್ ಬಳಿಕ ಅಮೆರಿಕಗೆ ಕೈಕೊಟ್ಟ ಸ್ಪೇನ್, ಕುತೂಹಲ ಕೆರಳಿಸಿದ ಸ್ಪೇನ್ ನಡೆ | Operation Roaring Lion
ಇರಾನ್ ಮತ್ತು ಅಮೆರಿಕ ಯುದ್ಧದ ವಿಚಾರದಲ್ಲಿ ಎಲ್ಲಾ ಕಡೆಯೂ ಸಾಲು ಸಾಲು ಚರ್ಚೆಗಳು ಈಗ ನಡೆಯುತ್ತಾ ಇವೆ. ಈ ಯುದ್ಧವನ್ನು ಬೆಂಬಲಿಸುವ ದೇಶಗಳ ಜೊತೆಗೆ, ಯುದ್ಧ ಬೇಡವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ದೇಶಗಳು ಕೂಡ ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ನಂಬಿರುವ &ಅಮೆರಿಕದ ಜೊತೆಗೆ ಶತಮಾನಗಳಿಂದ ಸ್ನೇಹ ಉಳಿಸಿಕೊಂಡು ಬಂದಿರುವ ಯುರೋಪ್ ದೇಶಗಳಲ್ಲೇ ಇದೀಗ ಭಿನ್ನರಾಗ ಶುರುವಾಗಿದೆ.
ಪೂಂಚ್ನಲ್ಲಿ ಭಯೋತ್ಪಾದಕರ ಒಳನುಸುಳುವ ಯತ್ನ ವಿಫಲಗೊಳಿಸಿದ ಸೇನೆ
ಶ್ರೀನಗರ, ಮಾ. 4: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬೆರ್ ಗಾಲಿ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವ ಪ್ರಯತ್ನವೊಂದನ್ನು ಸೈನಿಕರು ವಿಫಲಗೊಳಿಸಿದ್ದಾರೆ ಎಂದು ಸೇನೆ ಬುಧವಾರ ತಿಳಿಸಿದೆ. ‘‘ವಿಶ್ವಾಸಾರ್ಹ ಬೇಹುಗಾರಿಕಾ ಮಾಹಿತಿಗಳನ್ನು ಆಧರಿಸಿ ನಿರಂತರ ಕಣ್ಗಾವಲನ್ನು ಇರಿಸಿದ ಬಳಿಕ, ಭಿಂಬೆರ್ ಗಾಲಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಲಾಯಿತು’’ ಎಂದು ಜಮ್ಮುವಿನಲ್ಲಿ ನೆಲೆ ಹೊಂದಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಿಳಿಸಿದೆ. ಆಗ ಕಾರ್ಪ್ಸ್ನ ಸೈನಿಕರು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದರು ಹಾಗೂ ತಮ್ಮ ಶ್ರೇಷ್ಠ ಯುದ್ಧಕೌಶಲವನ್ನು ಪ್ರದರ್ಶಿಸಿ ಅವರನ್ನು ಹಿಮ್ಮೆಟ್ಟಿಸಿದರು ಎಂದು ಸಂದೇಶ ತಿಳಿಸಿದೆ. ‘‘ಸಂಘಟಿತ ಭೂ ಕಾರ್ಯಾಚರಣೆಯ ಮೂಲಕ ಶತ್ರುವಿನ ಪಿತೂರಿಯನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲಾಯಿತು’’ ಎಂದು ಸೇನೆ ತಿಳಿಸಿದೆ.
ಇರಾನ್ ಯುದ್ಧಕ್ಕೆ ಶೀಘ್ರದಲ್ಲೇ ಬ್ರೇಕ್ ಹಾಕಲು ಜಾಗತಿಕ ಮಟ್ಟದಲ್ಲಿ ಶುರುವಾಯ್ತು ಒತ್ತಡ | Operation Roaring Lion
ಆಧುನಿಕ ಕಾಲದಲ್ಲಿ ಯುದ್ಧಗಳನ್ನು ಮಾಡಬಾರದು, ಶಾಂತಿಯುತ ಮಾರ್ಗವೇ ಪರಿಹಾರ ಎಂದು ಭಾರತ ಪದೇ ಪದೇ ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಶುರುವಾದ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಹೇಳಿದ್ದ ಮಾತುಗಳು ಇಡೀ ಜಗತ್ತಿಗೆ ಮಾದರಿ ಆಗಿದ್ದವು. ನೇರವಾಗಿ ರಷ್ಯಾಗೆ ಕೂಡ ಭಾರತ ಇದೇ ಮಾತನ್ನು ಹೇಳಿ, ಉಕ್ರೇನ್ನ ವಿರುದ್ಧ
ಕಾಕುಬಾಳ | ಅಕ್ರಮ ಪಡಿತರ ಅಕ್ಕಿ ಜಪ್ತಿ
ವಿಜಯನಗರ, ಮಾ. 4: ತಾಲೂಕಿನ ಕಾಕುಬಾಳ ಗ್ರಾಮದ ಜೋಳದ ರಸ್ತೆ ಕರಿಯಮ್ಮನ ಗುಡಿ ಸಮೀಪ ಮನೆಯೊಂದರ ಮುಂದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಅನಾಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.10 ಲಕ್ಷ ರೂ. ಮೌಲ್ಯದ 60.80 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಮತ್ತು ಸಾಗಣೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
Chikkamagaluru | ಬಾಬಾ ಬುಡಾನ್ ದರ್ಗಾದಲ್ಲಿ ಉರೂಸ್ಗೆ ಚಾಲನೆ
ಶಾಖಾದ್ರಿ ನೇತೃತ್ವದಲ್ಲಿ ಆಚರಣೆಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನ
ಕೆಪಿಎಸ್ಸಿ ಆಯ್ಕೆ ಪಟ್ಟಿ ವಿವಾದ | ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ
ಆಧಾರವಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ: ಕೆಪಿಎಸ್ಸಿ ಸ್ಪಷ್ಟನೆ
ರಾಯಚೂರು | ಮಾ.5ರಿಂದ ನವೋದಯ ಶಿಕ್ಷಣ ಸಂಸ್ಥೆಯಿಂದ ರಿಗೆಲ್-26 ವಾರ್ಷಿಕೋತ್ಸವ
ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯಿಂದ ಮಾ.5ರಿಂದ 7ರ ವರೆಗೆ ರಿಗೆಲ್-26 ವಾರ್ಷಿಕೋತ್ಸವ ಹಾಗೂ ಇಫೋರಿಯಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ರೆಡ್ಡಿ ಹೇಳಿದರು. ಬುಧವಾರ ನವೋದಯ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.5ರ ಸಂಜೆ 6.30ಕ್ಕೆ ರಿಗೆಲ್ ಕಾರ್ಯಕ್ರಮವು ಕ್ಯಾಂಪಸ್ನ ಫುಡ್ ಕೋರ್ಟ್ ಬಳಿಯ ಬಯಲು ಮೈದಾನದಲ್ಲಿ ನಡೆಯಲಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಉದ್ಘಾಟಿಸಲಿದ್ದಾರೆ. ಮಾ.6ರ ಬೆಳಿಗ್ಗೆ 10 ಗಂಟೆಗೆ ಸಂಸ್ಥೆಯ ಮುಖ್ಯ ಸಭಾಂಗಣದಲ್ಲಿ ವೈದ್ಯಕೀಯ, ದಂತ ಹಾಗೂ ಫಿಸಿಯೋಥೆರಪಿಸ್ಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಭಗವಾನ್.ಬಿ.ಸಿ ಆಗಮಿಸಲಿದ್ದಾರೆ. ಸಂಜೆ 6ಕ್ಕೆ ಎಫೋರಿಯಾ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಆಗಮಿಸಲಿದ್ದಾರೆ ಎಂದು ಹೇಳಿದರು. ಮಾ.7ರಂದು 10.45ಕ್ಕೆ ಫಾರ್ಮರ್ಸಿ, ನರ್ಸಿಂಗ್, ಅಲೈಡ್ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಹಾಗೂ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಯನ್ನು ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ನಿರ್ದೇಶಕ ಪ್ರೊ.ವೆಂಕಪ್ಪಯ್ಯ.ಆರ್.ದೇಸಾಯಿ ಅವರು ಪ್ರದಾನ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬೆಂಗಳೂರಿನ ಸೆಹೆರ್ ಬ್ಯಾಂಡ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು, ಕಾಲೇಜಿನ ಭೋದಕ, ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಭಾರತದ ಮೌನವೇಕೆ?
ಭಾರತದ ಮೌನದ ಹಿಂದಿನ ಐದು ಭೌಗೋಳಿಕ ರಾಜಕೀಯ ಅಂಶಗಳು

32 C