ಕಲಬುರಗಿ : ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ: ಸಿಂಗಲ್ಸ್ ನಲ್ಲಿ ವೈಷ್ಣವಿ ಚಾಂಪಿಯನ್
ಕಲಬುರಗಿ: ಇಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಟೆನಿಸ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವೈಷ್ಣವಿ ಅಡ್ಕರ್ ಅವರು ಅಂಕಿತಾ ರೈನಾರನ್ನು ಸೋಲಿಸುವುದರ ಮೂಲಕ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದರು. ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ಬೆಳಗ್ಗೆ ನಡೆದಿದ್ದ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಂಕಿತಾ ರೈನಾ ವಿರುದ್ಧ 7-6, 6 -4 ನೇರ ಸೆಟ್ ಗಳ ಗೆಲ್ಲುವ ಮೂಲಕ ವೈಷ್ಣವಿ ಅಡ್ಕರ್ ಗೆಲುವಿನ ನಗೆ ಬೀರಿದರು. ಮೊದಲ ಸೆಟ್ ನಲ್ಲಿ ಟೈ ಬ್ರೇಕರ್ ಆದ ಬಳಿಕ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ವೈಷ್ಣವಿ ಅಂಕ ಗಿಟ್ಟಿಸಿಕೊಂಡು ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ ನ ಮೊದಲಾರ್ಧದಲ್ಲಿ ವೈಷ್ಣವಿ ಅಡ್ಕರ್ ಅನೇಕ ಶಾಟ್ ಗಳು ನೆಟ್ ಗೆ ಹೊಡೆಯುವ ಮೂಲಕ ಅಂಕಗಳನ್ನು ಅಂಕಿತಾ ರೈನಾಗೆ ಬಿಟ್ಟುಕೊಟ್ಟರು. ಎರಡನೇ ಸೆಟ್ ನಲ್ಲಿ 2 - 4ರಿಂದ ಹಿನ್ನಡೆಯಲ್ಲಿದ್ದ ಅಂಕಿತಾ ರೈನಾ ಅನುಭವಿ ಕೌಶಲ್ಯ ಮೂಲಕ 4 - 4 ಅಂಕಗಳನ್ನು ಸಾಧಿಸುವ ಮೂಲಕ ಅಂಕಗಳನ್ನು ಸಮಗೊಳಿಸಿದರು. ಬಳಿಕ ಅಂಕಿತಾ ವೈದ್ಯಕೀಯ ತಪಾಸಣೆಗೆ ಒಳಗಾದರು. ರನ್ನರ್ ಅಪ್ ಅಂಕಿತಾ ರೈನಾ ಮತ್ತೆ ಪುಟಿದೆದ್ದ ವೈಷ್ಣವಿ ಎರಡನೇ ಸೆಟ್ ನಲ್ಲಿ 6 - 4 ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಲ್ಸ್ ವಿಭಾಗದ ಟ್ರೋಫಿ ತಮ್ಮ ಮುಡಿಗೇರಿಸಿಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ವೈಷ್ಣವಿ ಅಡ್ಕರ್ ಅವರಿಗೆ ಟ್ರೋಫಿ ಹಸ್ತಾಂತರಿಸಿದರು. ಇದೇ ವೇಳೆಯಲ್ಲಿ ಅಂಕಿತಾ ರೈನಾ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯೇಶನ್ ಜಂಟಿ ಕಾರ್ಯದರ್ಶಿ ಸುನೀಲ್ ಯಜಮಾನ, ಕೈಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಅಬ್ದುಲ್ ಅಝೀಮ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ, ಸೂಪರ್ ವೈಸರ್ ಸುಪ್ರೀತ್, ಪ್ರವೀಣ್ ಪುಣೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ಞೆಯನ್ನೇ ಕಾಡುವ ಅನುಭವ ಕಥನಗಳು
ಸಮಕಾಲೀನ ಸ್ಪರ್ಶ ಕಲ್ಪಿಸುತ್ತಲೇ ಗತ ವಾಸ್ತವವನ್ನು ಬಿಂಬಿಸುವ ‘ಕಾಡು ಕಾಯುವ ಮರ’
ಆರಿದ ಕುಲುಮೆ ಮತ್ತು ಮಾಂಗಲ್ಯದ ಭಾಷೆ!
ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ? ಗೆಳೆಯರೊಬ್ಬರು ತನ್ನ ಹೊಸ ಮನೆಯ ಗೋಡೆಗೇರಿಸಲು ಎ.ಐ.ಗೆ ತನ್ನ ಮಡದಿಯ ಬಣ್ಣದ ಫೋಟೊ ಒಂದನ್ನು ಕೊಟ್ಟು ಅದನ್ನೇ ಹಳೆಯ ಕಪ್ಪು ಬಿಳುಪು ಕಲಾತ್ಮಕ ಚಿತ್ರವನ್ನಾಗಿ ಬದಲಾಯಿಸಲು ಸೂಚನೆ ಕೊಟ್ಟರು. ಕ್ಷಣಾರ್ಧದಲ್ಲಿ ಕೃತಕ ಬುದ್ಧಿಮತ್ತೆ ಅದ್ಭುತ ಚಿತ್ರವೊಂದನ್ನು ರೂಪಿಸಿತು. ಚಿತ್ರ ನೋಡಿದ ಯಾರೇ ಆಗಲಿ ಬೆರಗಾಗುವುದು ಸಹಜ. ಬೆಳಕು, ನೆರಳು, ಮುಖಭಾವ ಎಲ್ಲವೂ ನಿಖರ. ಆದರೆ ಸೂಕ್ಷ್ಮವಾಗಿ ನೋಡಿದಾಗ ಒಂದು ವಿಚಿತ್ರ ಬದಲಾವಣೆ ಇತ್ತು. ಅವರ ಕುತ್ತಿಗೆಯಲ್ಲಿದ್ದ ಎರಡು ಸರಗಳ ಪೈಕಿ ಕರಿಮಣಿಯೊಂದನ್ನು ಕಳಚಿ ಆ ಜಾಗದಲ್ಲಿ ಮತ್ತೊಂದು ಹೊಸ ವಜ್ರದ ನೆಕ್ಲೆಸ್ ಸೇರಿಕೊಂಡಿತ್ತು. ಯಾರೂ ಕೇಳದೇ, ಯಾರೂ ಹೇಳದೇ ಕೃ.ಬು. ತನ್ನ ಕಲ್ಪನೆಯಿಂದ ಸೇರಿಸಿದ ಆಭರಣವದು. ಆ ಹೊಸ ಸರ ಯಾವುದು? ಎಲ್ಲಿಂದ ಬಂತು? ಚಲನಚಿತ್ರ ಪ್ರಿಯೆ ಅವರ ಮಡದಿ ಗಮನವಿಟ್ಟು ನೋಡಿದಾಗ ಗೊತ್ತಾದ ಸತ್ಯ, ಅದು ಈ ದೇಶದ ಪ್ರಮುಖ ಹಿಂದಿ ನಟಿಯೊಬ್ಬಳ ಕುತ್ತಿಗೆಯಲ್ಲಿದ್ದ ವಜ್ರದ ಸರ. ಎ.ಐ. ತನ್ನ ಡೇಟಾ ಸಂಗ್ರಹದೊಳಗೆ ಇದ್ದ ಲಕ್ಷಾಂತರ ಚಿತ್ರಗಳೊಳಗಿಂದ ಗೆಳೆಯನ ಮಡದಿಯ ಮುಖ ಕುತ್ತಿಗೆ ದೇಹಾಂಗಗಳನ್ನು ಅಳತೆ ಮಾಡಿ ಅದಕ್ಕೆ ಸೂಕ್ತವಾಗುವ ಸರವನ್ನು ಆರಿಸಿ ಕುತ್ತಿಗೆಗೆ ಹಾಕಿಬಿಟ್ಟಿದೆ! ಎ.ಐ.ಗೆ ಅದು ಕೇವಲ ವಿನ್ಯಾಸ. ಆಕಾರ. ಹೊಳಪು. ಸೌಂದರ್ಯ. ಆದರೆ ನಮಗೆ? ಕರಿಮಣಿ ಕೇವಲ ಅಲಂಕಾರವಲ್ಲ. ಅದು ವೈವಾಹಿಕ ಸಂಬಂಧದ ಸಂಕೇತ. ಸಂಸ್ಕೃತಿಯ ಗುರುತು. ಕುಟುಂಬದ ಒಳಗಡೆ ಸುಸ್ಥಿರ ಸಾಂಗತ್ಯ ಸಾಗುವ ನೆನಪಿನ ಸರಪಳಿ.ಮದುವೆಯ ಒಪ್ಪಂದ. ಎ.ಐಗೆ ಸದ್ಯ ಆ ಸೂಕ್ಷ್ಮ ಅರಿವು ಇಲ್ಲ. ಅದು ಆಭರಣವನ್ನು ಚಿತ್ರವಾಗಿ ಮಾತ್ರ ನೋಡುತ್ತದೆ. ಅದಕ್ಕೆ ಮಾಲೆಯೊಳಗಿನ ಸಂಸ್ಕೃತಿ, ಭಾವನೆ, ಬಾಂಧವ್ಯ, ನಂಬಿಕೆ - ಯಾವುದೂ ಬಹುಶಃ ಈವರೆಗೆ ಡೇಟಾ ಆಗಿ ದಾಖಲಾಗಿಲ್ಲ. ಆದ್ದರಿಂದ ಅದು ಒಬ್ಬರದ್ದನ್ನು ಇನ್ನೊಬ್ಬರಿಗೆ ಧರಿಸುತ್ತದೆ. ಒಂದು ಸಂಸ್ಕೃತಿಯ ಸಂಕೇತವನ್ನು ಮತ್ತೊಂದು ದೇಹದ ಮೇಲೆ ಅಂಟಿಸುತ್ತದೆ. ಅಲ್ಲಿ ಅರ್ಥ ಇಲ್ಲ. ಕೇವಲ ಬಳಕೆ ಮಾತ್ರ. ಇದು ಜಾಗತೀಕರಣದ ಯಾಂತ್ರೀಕರಣದ ಮೂಲ ಸ್ವಭಾವ. ಅದು ಎಲ್ಲವನ್ನೂ ಸಂಗ್ರಹಿಸುತ್ತದೆ, ಆದರೆ ಅನುಭವಿಸುವುದಿಲ್ಲ. ಎಲ್ಲವನ್ನೂ ಮಿಶ್ರಣ ಮಾಡುತ್ತದೆ, ಆದರೆ ಮೂಲಬೇರು ಉಳಿಸುವುದಿಲ್ಲ. ಅದು ಸಂಸ್ಕೃತಿ, ಭಾವನೆ, ಸಂವೇದನೆ ಎಲ್ಲವನ್ನೂ ವಸ್ತುವಾಗಿ ನೋಡುತ್ತದೆ. ಅಂದರೆ ಅದಕ್ಕೆ ಎಲ್ಲವೂ ಉಪಯೋಗದ ವಸ್ತು, ಪ್ರದರ್ಶನದ ವಸ್ತು, ಮಾರಾಟದ ವಸ್ತು. ಈ ದೃಷ್ಟಿಯಲ್ಲಿ ನೋಡಿದರೆ, ಎ.ಐ. ಕುತ್ತಿಗೆಯಲ್ಲಿ ಸೇರಿಸಿದ ಮೂರನೇ ಸರ ಆ ವಜ್ರದ ನೆಕ್ಲಿಸ್ ಇದೆಯಲ್ಲ? ಅದು ಮತ್ತೊಂದು ದೊಡ್ಡ ರೂಪಕ. ಅದು ಹೇಳುವುದು, ನಮ್ಮ ಸಂಸ್ಕೃತಿಯ ಸಂಕೇತಗಳು ಮುಂದೆ ನಿಧಾನವಾಗಿ ತಮ್ಮ ಅರ್ಥ ಕಳೆದುಕೊಂಡು, ಜಾಗತೀಕರಣದ ಮಾರುಕಟ್ಟೆಯೊಳಗೆ ತೇಲುವ ಅಲಂಕಾರಗಳಾಗುತ್ತಿವೆ ಎಂಬ ಸತ್ಯ. ಇದೇ ಕಥೆಯ ಇನ್ನೊಂದು ಮುಖವನ್ನು ಹೇಳುತ್ತೇನೆ ಕೇಳಿ. ಮಲದೇವಿಹಳ್ಳಿ ಎಂಬುವುದು ಕರ್ನಾಟಕದ ಆ ಚಿಕ್ಕ ಹಳ್ಳಿ. (ಹಾಸನ) ಆ ಹಳ್ಳಿಗೆ ಹಿಂದೊಮ್ಮೆ ಹೋಗಿದ್ದೆ. ಬರೆದಿದ್ದೆ. ಒಂದು ಕಾಲದಲ್ಲಿ ಅಲ್ಲಿಯ ನೆಲದವರ ನಾಟಿ ಜಾಣ್ಮೆ ಈ ದೇಶದ ಕಲಾ ಜಗತ್ತಿಗೆ ಒಂದು ಸುಂದರವಾದ ನಾದವನ್ನು ಕೊಟ್ಟಿತ್ತು. ಅದು ಕೈಚಳಕದ ಜೀವಂತ ಶಾಲೆಯಾಗಿತ್ತು. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಅಲ್ಲಿಯ ಮೂವತ್ತು-ನಲ್ವತ್ತು ಮನೆಗಳಲ್ಲಿ ಅಡುಗೆಯ ಒಲೆಯ ಬದಿಯಲ್ಲೇ ಪುಟ್ಟ ಪುಟ್ಟ ಕುಲುಮೆಗಳು ಹೊತ್ತಿರುತ್ತಿದ್ದವು. ಆ ಕುಲುಮೆಯಲ್ಲಿ ಹುಟ್ಟುತ್ತಿದ್ದುದು ಶಾಸ್ತ್ರೀಯ ನೃತ್ಯ, ಭರತನಾಟ್ಯದ ಗೆಜ್ಜೆಗಳು, ಗಾಡಿ ಎತ್ತುಗಳ ಕೊರಳಿಗೆ ಕಟ್ಟುವ ಘಂಟೆಗಳು, ದೇವಾಲಯದ ನೃತ್ಯಕ್ಕೆ ಬೇಕಾದ ಲಯದ ನಿನಾದದ ಸಾಧನಗಳು. ನಿಮಗೆ ಶಿವರಾಜ್ ಕುಮಾರ್ ಅವರ ‘ಜನುಮದ ಜೋಡಿ’ ಗೊತ್ತಲ್ಲ? ಆ ಚಲನಚಿತ್ರದಲ್ಲಿ ಒಂದು ಹಳ್ಳಿಯ ಕೆರೆ ದಂಡೆಯ ಮೇಲೆ ನೂರಾರು ಎತ್ತಿನ ಗಾಡಿಗಳು ಸಾಲಾಗಿ ಹೋಗುವಾಗ ‘ಮಣಿ ಮಣಿ ಮಣಿ’ ಎಂಬ ಹಾಡೊಂದಿದೆ. ಆಗ ಸ್ಫುರಿಸುವ ಲಯಬದ್ಧ ಈ ಗೆಜ್ಜೆಗಳ ನಿನಾದ ನಿಮಗೆ ನೆನಪಿರುತ್ತದೆ. ಅದು ಅಲ್ಲಿ ಕೇವಲ ಉತ್ಪಾದನೆ ಅಲ್ಲ. ಅದು ಸಂಸ್ಕೃತಿಯ ಸೃಷ್ಟಿ. ಆ ಬೆಂಕಿಯ ಮುಂದೆ ಕೂತವರು ಕೇವಲ ಕಾರ್ಮಿಕರಲ್ಲ. ಅವರು ಕಲಾವಿದರು. ಅವರ ಕೈಗಳಲ್ಲಿ ಲಯ ಇತ್ತು. ಅವರ ಕಿವಿಗಳಲ್ಲಿ ತಾಳ ಇತ್ತು. ಅವರ ಮನಸ್ಸಿನಲ್ಲಿ ಶ್ರದ್ಧೆ ಇತ್ತು. ನಾಟ್ಯಪಟುಗಳ ಕಾಲಿಗೆ ಕಟ್ಟುವ ಒಂದು ಜೋಡಿ ಗೆಜ್ಜೆ ಆದ ತಕ್ಷಣ ಅವರು ಅದನ್ನು ದೇವರ ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಕಿವಿಯ ಹತ್ತಿರ ಹಿಡಿದು ಅಲುಗಾಡಿಸಿ ಅದರ ಲಯವನ್ನು ಪರೀಕ್ಷಿಸುತ್ತಿದ್ದರು. ಕೆಲವೊಮ್ಮೆ ಕಾಲಿಗೆ ಕಟ್ಟಿ ಆಂಗಿಕವಾಗಿ ಅಭಿನಯಿಸಿ ನಾದದ ಪರೀಕ್ಷೆಯೂ ನಡೆಯುತ್ತಿತ್ತು. ಅದರೊಂದಿಗೆ ಆ ಕ್ಷಣ ಅವರು ಏಕಕಾಲದಲ್ಲಿ ಕಲಾವಿದರೂ ಕುಶಲಕರ್ಮಿಗಳೂ ನಾಟ್ಯಪಟುಗಳೂ ಎಲ್ಲವೂ ಆಗಿ ಪಳಗಿದವರೇ ಆಗಿದ್ದರು. ಆದರೆ ಯಾವಾಗ ಆ ಗೆಜ್ಜೆಗಳು ಯಂತ್ರದಲ್ಲಿ ಸೃಷ್ಟಿಯಾಗಲು ಆರಂಭಿಸಿದವೋ ಎಲ್ಲವೂ ಬದಲಾಯಿತು. ಯಂತ್ರದ ಬಾಯಲ್ಲಿ ಸಾವಿರ ಗೆಜ್ಜೆಗಳನ್ನು ಒಂದೇ ಗಂಟೆಯಲ್ಲಿ ತಯಾರಿಸುವ ಸಾಧ್ಯತೆ ಬಂತು. ಮಾರುಕಟ್ಟೆಗೆ ವೇಗ ಬೇಕಿತ್ತು. ಕಡಿಮೆ ಬೆಲೆ ಬೇಕಿತ್ತು. ಪ್ರಮಾಣ ಹೆಚ್ಚು ಬೇಕಿತ್ತು. ಆ ಕ್ಷಣದಲ್ಲಿ ಮಲದೇವಿಹಳ್ಳಿಯ ಕುಲುಮೆ ನಿಧಾನವಾಗಿ ಆರಿತು. ಒಂದು ಊರಿನ ಸಂಸ್ಕೃತಿಯ ಉಸಿರು ನಿಂತುಹೋಯಿತು. ಉದ್ಯೋಗ ಉಳಿಸಿಕೊಳ್ಳಲು, ಬದುಕಲು ಅವರು ಬಿದಿರಿನ ಹಿಂದೆ ಓಡಿದರು. ಹತ್ತಾರು ಕಿಲೋಮೀಟರ್ ದೂರದಿಂದ ಬಿದಿರು ಕಡಿದು ಲಾರಿಗೆ ಏರಿಸಿ ತಂದು ಬುಟ್ಟಿ ಮಾಡಿದರು. ಕೆಲವು ವರ್ಷಗಳ ಕಾಲ ಅದು ಬದುಕಿಗೆ ಆಧಾರವಾಯಿತು. ಆದರೆ ಪ್ಲಾಸ್ಟಿಕ್ ಬಂದಾಗ, ಬಿದಿರಿಗೂ ಮಾರುಕಟ್ಟೆ ಇಲ್ಲವಾಯಿತು. ಆಗ ಅವರು ಊರು ಬಿಟ್ಟು ಬೆಂಗಳೂರು, ಮೈಸೂರು ಕಡೆಗೆ ಕಟ್ಟಡ ಕೆಲಸಕ್ಕೆ ಹೋದರು. ಸೆಂಟ್ರಿಂಗ್, ಕೂಲಿ, ದಿನಗೂಲಿ -ಅವರ ಬದುಕಿನ ಹೊಸ ಅರ್ಥವಾಯಿತು. ಇಲ್ಲಿ ಆದ ಒಂದು ಸೂಕ್ಷ್ಮ ಬದಲಾವಣೆಯನ್ನು ಗಮನಿಸಿ, ಕುಲುಮೆಯ ಮುಂದೆ ಇದ್ದಾಗ ಇವರೆಲ್ಲ ಕಲಾವಿದರು. ಬಿದಿರ ಬುಟ್ಟಿ ಮಾಡುವಾಗ ಕುಶಲಕರ್ಮಿಗಳು. ಈಗ ನಗರದ ಕಟ್ಟಡದ ಮೇಲೆ ಕೇವಲ ಕಾರ್ಮಿಕರು. ಇದು ಕೇವಲ ಉದ್ಯೋಗ ಬದಲಾವಣೆ ಅಲ್ಲ. ಇದು ಮಾನವ ಗೌರವದ ಕುಸಿತದೊಂದಿಗೆ ಕೌಶಲ್ಯದ ನಾಶ. ಸಂಸ್ಕೃತಿಯ ನಿಧಾನ ಮೌಲ್ಯಹೀನತೆ. ಜಾಗತೀಕರಣ ಖಂಡಿತ ನಮಗೆ ಕೆಲಸ ಕೊಟ್ಟಿದೆ. ಸುಖದ ಆವಿಷ್ಕಾರಗಳನ್ನು ಮನೆ ಮನೆಯ ಒಳಗಡೆ ರಾಶಿ ಸುರಿದಿದೆ. ಜಗತ್ತನ್ನೇ ಹಳ್ಳಿಯ ಅಂಗಳದಲ್ಲಿ ಕೂತು ನೋಡುವ ದಾರಿ ಮತ್ತು ಯಂತ್ರವನ್ನು ಮೈಗೆ ಕಟ್ಟಿದೆ. ಆದರೆ ಅದು ನಮ್ಮ ಕುಶಲ ಕುಸುರಿ ಕಲೆಗಳನ್ನು ಕಸಿದುಕೊಂಡಿತು. ನವ ನಾಗರಿಕತೆ ತಲೆಗೆ, ಹೊಟ್ಟೆಗೆ ಅನ್ನ- ಬಣ್ಣ ಕೊಟ್ಟಿತು. ಆದರೆ ಆತ್ಮಕ್ಕೆ ಹಸಿವುಂಟುಮಾಡಿತು. ಎ.ಐ. ಕರಿಮಣಿ ಕಸಿದುಕೊಂಡು ಆ ಜಾಗದಲ್ಲಿಟ್ಟ ಮೂರನೇ ಸರವೂ, ಮಲದೇವಿಹಳ್ಳಿಯ ಆರಿದ ಕುಲುಮೆಯೂ ಒಂದೇ ಕಥೆಯನ್ನು ಹೇಳುತ್ತವೆ. ನಮ್ಮ ಸಂಬಂಧ, ಸೂಕ್ಷ್ಮತೆಗಳನ್ನು ಯಂತ್ರದ ವೇಗದಲ್ಲಿ ನುಚ್ಚು ನೂರಾಗಿಸಲಾದ ವ್ಯಥೆಯ ಕತೆಯದು. ಸಂಸ್ಕೃತಿಯ ಅರ್ಥವನ್ನು ಮಾರುಕಟ್ಟೆಯ ಬೆಲೆಯಲ್ಲಿ ಕರಗಿಸಲಾದ ನೋವದು. ಮಾಲೆ ಕೇವಲ ಈಗ ಅಲಂಕಾರ. ಗೆಜ್ಜೆ ಕೇವಲ ಈಗ ಶಬ್ದ. ಬಿದಿರು ಈಗ ಅಪ್ರಯೋಜಕ ವಸ್ತು. ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ - ಈ ವೇಗದ ಬದುಕಿನಲ್ಲಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ? ನಮ್ಮ ಮಣ್ಣಿನ ವಿವೇಕವನ್ನು, ನಮ್ಮ ಸಂಸ್ಕೃತಿಯ ಸೂಕ್ಷ್ಮತೆಯನ್ನು ಉಳಿಸಿಕೊಳ್ಳದೆ ಹೋದರೆ, ಮುಂದಿನ ತಲೆಮಾರಿಗೆ ಉಳಿಯುವುದು ಕೇವಲ ಡೇಟಾ. ಅನುಭವವಿಲ್ಲದ ನೆನಪು. ಅರ್ಥವಿಲ್ಲದ ಪರಂಪರೆ. ಪ್ರೀತಿ ಇಲ್ಲದ ಸಂಬಂಧ. ಒಳಗೊಳ್ಳುವಿಕೆ ಇಲ್ಲದ ಕೆಲಸ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮಕ್ಕಳು ಮಾಂಗಲ್ಯವನ್ನು ಕೇವಲ ಫ್ಯಾಷನ್ ಸರವೆಂದೂ, ಗೆಜ್ಜೆಯನ್ನು ಕೇವಲ ಶಬ್ದವೆಂದೂ ನೋಡಬಹುದು. ಈ ಕಾರಣಕ್ಕಾಗಿಯೇ ಖಂಡಿತವಾಗಿಯೂ ಎ.ಐ. ನಮ್ಮ ಬದುಕನ್ನು ವಿಸ್ತರಿಸಿದೆ, ಆದರೆ ನಮ್ಮ ಆತ್ಮವನ್ನು ಮಾತ್ರ ಸಣ್ಣದು ಮಾಡಿದೆ. ಇದು ತಂತ್ರಜ್ಞಾನ ವಿರೋಧಿ ಮಾತಲ್ಲ. ಇದು ಮನುಷ್ಯನ ಪರವಾದ ಭವಿಷ್ಯದ ಎಚ್ಚರಿಕೆ. ತಂತ್ರಜ್ಞಾನ ಖಂಡಿತವಾಗಿಯೂ ನಮ್ಮ ಬದುಕನ್ನು ಬೆಳಗಿಸಬೇಕು. ಆದರೆ ನಮ್ಮ ಬೇರುಗಳನ್ನು ಸುಡಬಾರದು.ಇಲ್ಲದಿದ್ದರೆ, ಮುಂದೊಂದು ದಿನ ನಮ್ಮದೇ ಸಂಸ್ಕೃತಿಯನ್ನೂ, ನಮ್ಮದೇ ನೆನಪುಗಳನ್ನೂ, ಎ.ಐ. ನಮಗಾಗಿ ಹೊಸದಾಗಿ ರಚಿಸಿ ಕೊಡುವ ದಿನ ಬರುತ್ತದೆ. ಆಗ ನಾವು ನಮ್ಮನ್ನೇ ಗುರುತಿಸಲಾಗದಷ್ಟು ದೂರ ಸರಿದಿರುತ್ತೇವೆ. ಮೊದಲು ಕೃಷಿ ಅನ್ನಕೇಂದ್ರಿತವಾಗಿದ್ದಾಗ, ರೈತನ ಜೀವನವು ಪ್ರಕೃತಿ, ಕಾಲಚಕ್ರ, ಹಬ್ಬ-ಹರಿದಿನ, ದೇವರು-ದೈವ, ಊರಿನ ಸಂಬಂಧಗಳು, ಪರಸ್ಪರ ಅವಲಂಬನೆ ಇವೆಲ್ಲದರ ಜೊತೆ ನೇರವಾಗಿ ಜೋಡಿಗೊಂಡಿತ್ತು. ಬಿತ್ತನೆ, ಕೊಯ್ಲು, ನಾಟಿ, ಕೊಟ್ಟಿಗೆ, ಅಡುಗೆ-ಎಲ್ಲವೂ ಒಂದು ಸಂಸ್ಕೃತಿಯ ಆಚರಣೆಯಾಗಿತ್ತು. ಅನ್ನವು ಕೇವಲ ಆಹಾರವಲ್ಲ, ಅದು ಬದುಕಿನ ತತ್ವ, ಬದುಕಿನ ನೀತಿ, ಬದುಕಿನ ಮೌಲ್ಯವಾಗಿತ್ತು. ಆದರೆ ಕೃಷಿ ಹಣದ ದಾರಿಗೆ ತಿರುಗಿದ ಕ್ಷಣದಿಂದ, ಭೂಮಿ ತಾಯಿ ಅಲ್ಲ; ಉತ್ಪಾದನಾ ಸಾಧನ ಆಗಿಬಿಟ್ಟಳು. ಬೆಳೆ ಆಹಾರವಲ್ಲ; ಮಾರುಕಟ್ಟೆ ಸರಕಾಯಿತು. ರೈತ ಸಂಸ್ಕೃತಿಯ ಪಾಲಕನಲ್ಲ; ಉತ್ಪಾದಕ ಮತ್ತು ವ್ಯಾಪಾರಿ ಆಗಿ ಬದಲಾಯಿಸಲ್ಪಟ್ಟ. ಇಲ್ಲಿಯೇ ನಮ್ಮ ಭಾಷೆ ಬದಲಾಯಿತು. ಭಾವನೆ ಬದಲಾಯಿತು. ಅದರ ಅರ್ಥ ಬದಲಾಯಿತು. ಸಾಂಸ್ಕೃತಿಕ ಪಲ್ಲಟದ ಮೊದಲ ಬಿರುಕು ಗೋಚರಿಸುತ್ತದೆ. ಒಟ್ಟಾಗಿ ಬಿತ್ತೋಣ, ಒಟ್ಟಾಗಿ ಕೊಯ್ಯೋಣ ಎಂಬ ಕೂಡು ಸಂಸ್ಕೃತಿ ಇದ್ದಲ್ಲಿ, ಈಗ ನನ್ನ ಲಾಭ ಎಷ್ಟು? ನನ್ನ ಕೂಲಿ ಎಷ್ಟು? ದುಡಿಮೆ ಎಷ್ಟು ಗಂಟೆ? ಎಂಬ ಲೆಕ್ಕಾಚಾರ ಪ್ರಬಲವಾಗುತ್ತಿದೆ. ಹಂಚಿಕೆ ಸಂಸ್ಕೃತಿಗೆ ಬದಲು ಸ್ಪರ್ಧಾತ್ಮಕ ಮನೋಭಾವ ವಿಜೃಂಭಿಸುತ್ತಿದೆ. ಸಂಧಿ, ಕಥೆ, ಕಬಿತೆ ಹೇಳಲು ಗದ್ದೆಯ ಕೆಸರಲ್ಲಿ ಸಾಲಾಗಿ ನಿಂತವರೆಲ್ಲ ಒಂದು ಗುಂಪಾಗದೆ ಪ್ರತ್ಯೇಕ ಘಟಕಗಳಾಗಿ ಕಾಣಿಸುತ್ತಾರೆ. ಹಬ್ಬಗಳು, ಜಾತ್ರೆಗಳು, ಆಚರಣೆಗಳು - ಇವುಗಳೂ ಅನ್ನದ ಚಕ್ರದಿಂದ ಹಣದ ವೇಳಾಪಟ್ಟಿಗೆ ಸರಿದಿವೆ. ಮೊದಲು ಹಬ್ಬ ಎಂದರೆ ಕೊಯ್ಲಿನ ಸಂತಸ, ಹಳ್ಳಿಯ ಪಾಲಿಗೆ ಕೂಡೂಟ, ದೇವರಿಗೆ ಕೃತಜ್ಞತೆ. ಈಗ ಹಬ್ಬ ಎಂದರೆ ಮಾರುಕಟ್ಟೆ ಆಫರ್, ಶಾಪಿಂಗ್, ಪ್ರದರ್ಶನ. ಹಬ್ಬದೊಳಗಿನ ಆಧ್ಯಾತ್ಮಿಕತೆ ಸಂಭ್ರಮ ಮಸುಕಾಗಿ, ಪ್ರದರ್ಶನ ಮತ್ತು ಖರ್ಚಿನ ಸಂಸ್ಕೃತಿ ಪ್ರಬಲವಾಗುತ್ತದೆ. ಹಳ್ಳಿ ಮನೆಗಳ ಆಹಾರ ಪದ್ಧತಿಯಲ್ಲೂ ಭಾರೀ ಪಲ್ಲಟ. ಸ್ಥಳೀಯ ಬೆಳೆ, ಸಾಂಪ್ರದಾಯಿಕ ಆಹಾರ ಪದ್ಧತಿ ಹಿನ್ನಡೆಯಾಗಿ, ಮಾರುಕಟ್ಟೆ ನಿಯಂತ್ರಿತ ಆಹಾರ ಸಂಸ್ಕೃತಿ ಮೆತ್ತಗೆ ಕೈ ಹಿಡಿಯುತ್ತದೆ. ರಾಗಿ, ಜೋಳ, ತೆಂಗು, ಹಲಸು, ಕಾಡುಸೊಪ್ಪು - ಇವೆಲ್ಲವೂ ನಿಧಾನವಾಗಿ ಮರೆತು, ಅಕ್ಕಿ-ಗೋಧಿ-ಪ್ಯಾಕೆಟ್ ಆಹಾರ ಮೇಲುಗೈ ಪಡೆಯುತ್ತದೆ. ಇದರೊಂದಿಗೆ ದೇಹ ಆರೋಗ್ಯ ಮಾತ್ರವಲ್ಲ, ಸಾಂಸ್ಕೃತಿಕ ಸ್ಮತಿಯೂ ಕ್ಷೀಣಿಸುತ್ತದೆ. ಮೊದಲು ಕೃಷಿ ಸಂಬಂಧಿತ ನುಡಿಗಟ್ಟುಗಳು, ಮಾತು, ಹಾಡುಗಳು ಇದ್ದಲ್ಲಿ, ಈಗ ಮಾರುಕಟ್ಟೆ, ಲಾಭ, ಯೋಜನೆ, ಸಾಲ, ಬಡ್ಡಿ ಇವುಗಳ ಭಾಷೆ ಪ್ರಬಲವಾಗುತ್ತದೆ. ಅತಿದೊಡ್ಡ ಪಲ್ಲಟ ಸಂಭವಿಸುವುದು ರೈತನ ಆತ್ಮಗೌರವದಲ್ಲಿ. ಅನ್ನ ನೀಡುವವನಾಗಿದ್ದ ರೈತ, ಹಣದ ಬಲವಂತದೊಳಗೆ ಸಿಲುಕಿದಾಗ, ತನ್ನನ್ನು ತಾನು ಉತ್ಪಾದನಾ ಯಂತ್ರದ ಒಂದು ಭಾಗವೆಂದು ಕಾಣತೊಡಗುತ್ತಾನೆ. ಇಲ್ಲಿಂದಲೇ ಬೇಸರ, ಅಸಮಾಧಾನ, ಆತಂಕ, ಸಾಲದ ಒತ್ತಡ, ಆತ್ಮಹತ್ಯೆಗಳಂತಹ ದಾರುಣ ಸ್ಥಿತಿಗಳು ಹುಟ್ಟುತ್ತವೆ. ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ? ಕರಿಮಣಿಯ ಜಾಗದಲ್ಲಿ ವಜ್ರದ ಸರ ಹಾಕಿದ್ದು ವಿನ್ಯಾಸದ ದೃಷ್ಟಿಯಿಂದ ತಪ್ಪಲ್ಲ. ಆದರೆ ಜೀವನದ ದೃಷ್ಟಿಯಿಂದ ಅದು ಅರ್ಥದ ಕಳವು. ಯಂತ್ರದ ಮನಸ್ಸಿಗದು ಆಕಾರ, ಹೊಳಪು, ಸೌಂದರ್ಯ ಎಲ್ಲವೂ ಹೌದು. ಆದರೆ ನಮಗದು ಸಂಬಂಧ, ಸಂಸ್ಕೃತಿಯ ನೆನಪು. ಇಂದು ಯಂತ್ರ ಮೃದಂಗ ಬಾರಿಸಬಹುದು, ರಾಗ ರಚಿಸಬಹುದು, ನಾಟ್ಯ ಭಂಗಿ ಕಲಿಸಬಹುದು, ಅನ್ನ ಬೇಯಿಸಬಹುದು. ಆದರೆ ಅದು ನಾದದ ಕಂಪನವನ್ನು ಅನುಭವಿಸುವುದಿಲ್ಲ. ಮಣ್ಣಿನ ವಾಸನೆಯನ್ನು ಒಳಗೊಳ್ಳುವುದಿಲ್ಲ. ಮಳೆ ಬಾರದ ರಾತ್ರಿ ರೈತನ ಮನದ ಆತಂಕವನ್ನು ಸ್ಪರ್ಶಿಸುವುದಿಲ್ಲ. ಅದು ಕೇವಲ ಮಾಹಿತಿ ಸಂಗ್ರಹಿಸುತ್ತದೆ; ಬದುಕನ್ನು ಅನುಭವಿಸುವುದಿಲ್ಲ. ನಮ್ಮ ಕೈಯಲ್ಲಿ ಯಂತ್ರ ಇರಲಿ; ಆದರೆ ಯಂತ್ರದ ಕೈಯಲ್ಲಿ ನಮ್ಮ ಅರ್ಥ ಸಿಕ್ಕಿಹಾಕಿಕೊಳ್ಳಬಾರದು. ನಾಳೆ ಎ.ಐ. ನಮ್ಮ ಅಂಗೈಯಲ್ಲೇ ಕೂತು ನಮ್ಮ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಬಹುದು. ಆದರೆ ನಾವು ಅದನ್ನು ಬದುಕದೇ ಹೋದರೆ, ಆ ಚಿತ್ರ ಸತ್ಯವಾಗುವುದಿಲ್ಲ. ಅದೇ ನಮ್ಮ ಕಾಲದ ಸೂಕ್ಷ್ಮ ಮಿತಿ.
ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರಗಳು ನಿರಂತರವಾಗಿ ಇಳಿಕೆ ಕಂಡಿತ್ತು. ಆದರೆ ಶನಿವಾರ ದರ ದಿಢೀರ್ ಏರಿಕೆ ಕಾಣುವ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳು ನಿನ್ನೆ
ಉಳ್ಳಾಲ: ಅಜ್ಜಿನಡ್ಕ ನಿವಾಸಿ ಟಿ.ಎ.ಅಬ್ದುಲ್ ಖಾದರ್(63) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದ ಅವರು ಅಜ್ಜಿನಡ್ಕದ ಬದ್ರಿಯಾ ಜಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಬದ್ರಿಯಾ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿ, ಅಜ್ಜಿನಡ್ಕ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಗಲ್ಫ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದರು.
ಸಿದ್ದರಾಮಯ್ಯನವರ ಬಜೆಟ್ ಕೇವಲ ಅಲ್ಪಸಂಖ್ಯಾತರಿಗಷ್ಟೇ ನೀಡಿದೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಸರಕಾರದ 2026-27ನೇ ಸಾಲಿನ 4.48 ಲಕ್ಷ ಕೋಟಿ ರೂ. ಆಯವ್ಯಯ ಮಂಡಿಸಿದ್ದಾರೆ, ಬಜೆಟ್ ಭಾಷಣ ಮುಗಿಯುವದಕ್ಕಿಂತ ಮುಂಚೆಯೇ ಬಿಜೆಪಿ ಪಟಾಲಂ ಇದು ಅಲ್ಪಸಂಖ್ಯಾತರ ತುಷ್ಟೀಕರಣ, ಸಾಕಷ್ಟು ಅನುದಾನ ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿರುವುದು ಇವರ ಪೂರ್ವಾಗ್ರಹ ಎದ್ದು ಕಾಣುತ್ತದೆ. ಏಕಕಾಲಕ್ಕೆ ಬಿಜೆಪಿಯ ಎಲ್ಲಾ ನಾಯಕರು ಮತ್ತು ಇವರ ಸಾಮಾಜಿಕ ಜಾಲತಾಣದ ಐಟಿ ಸೆಲ್ ಮುಸ್ಲಿಮ್ ಪರ ಬಜೆಟ್ ಎಂದು ತೀರ್ಪು ನೀಡಿದ್ದಾರೆ. ಕರ್ನಾಟಕ ಸರಕಾರದ ಬಜೆಟ್ ಗಾತ್ರದ 4.48 ಲಕ್ಷ ಕೋಟಿ ರೂ.ಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಎಲ್ಲಾ ಯೋಜನೆಗಳೂ ಸೇರಿದಂತೆ ಮೀಸಲಿಟ್ಟ ಅನುದಾನ 4,763 ಕೋಟಿ ರೂ. ಇದು ಬಜೆಟ್ನ ಕೇವಲ ಶೇ. 1ರಷ್ಟು ಮಾತ್ರ, ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್, ಸಿಖ್, ಕ್ರಿಶ್ಚಿಯನ್, ಜೈನ್, ಫಾರ್ಸಿ, ಬೌದ್ಧ ಸಮುದಾಯದ ಜನಸಂಖ್ಯೆ ಶೇ. 18ರಷ್ಟು, ಆದರೆ ನೀಡಿರುವ ಅನುದಾನ ಕೇವಲ ಶೇ 1ರಷ್ಟು. ಇದು ಯಾವ ರೀತಿಯ ತುಷ್ಟೀಕರಣ ಎಂದು ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಬೇಕು. ‘‘ಇದು ಕೇವಲ ಅಲ್ಪಸಂಖ್ಯಾತರಿಗೆ ಮಂಡಿಸಲಾದ ಬಜೆಟ್, ಹಿಂದೂಗಳಿಗೆ ಖಾಲಿ ಚೊಂಬು ನೀಡಲಾಗಿದೆ’’ ಎಂದು ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತ, ಬಜೆಟ್ ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿಯಲ್ಲಿ ಘೋಷಿಸಲಾದ ಯೋಜನೆಗಳನ್ನು ಬರೆದು, ಇಡೀ ಬಜೆಟ್ ಕೇವಲ ಅಲ್ಪಸಂಖ್ಯಾತರಿಗಾಗಿಯೇ ಮಂಡಿಸಲಾಗಿದೆ ಎನ್ನುವ ರೀತಿ ವರ್ತಿಸಲಾಗಿದೆ. ಇದರಿಂದ ಆರು ಧರ್ಮಗಳ ಶೇ. 18ರಷ್ಟು ರಾಜ್ಯದ ನಾಗರಿಕರಿಗೆ ಅವಮಾನ ಮಾಡಲಾಗುತ್ತಿದೆ ಎಂದೇ ಹೇಳಬಹುದು. ಅಲ್ಪಸಂಖ್ಯಾತರಿಗೆ 1,000 ಕೋಟಿ ರೂ. ವೆಚ್ಚದಲ್ಲಿ ಶಾಲಾ ಉನ್ನತೀಕರಣ ಎನ್ನುವ ಯೋಜನೆ ಇದೆ, ಶಿಕ್ಷಣ ನೀಡುವುದು ರಾಜ್ಯದ ಸರಕಾರದ ಸಂವಿಧಾನಬದ್ಧ ಕರ್ತವ್ಯ, ಇದನ್ನು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಇಲಾಖೆ ಮಾಡದಿದ್ದರೆ ಶಿಕ್ಷಣ ಇಲಾಖೆ ಮಾಡಲೇಬೇಕಾಗುತ್ತದೆ ಎನ್ನುವ ಕನಿಷ್ಠ ತಿಳುವಳಿಕೆ ಬಿಜೆಪಿ ನಾಯಕರಿಗೆ ಇಲ್ಲ, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ 3.0 ಲಕ್ಷ ಸಹಾಯಧನ, ಇದು ಇತರ ಇಲಾಖೆಗಳಲ್ಲಿ ಜಾರಿಯಲ್ಲಿರುವ ಹಳೆಯ ಯೋಜನೆ, ಈ ಇಲಾಖೆಯಲ್ಲಿಯೂ ಜಾರಿ ಮಾಡಲಾಗುತ್ತಿದೆ. ಕಾಲನಿ ಅಭಿವೃದ್ಧಿ ಯೋಜನೆ ಎಂದು 1,000 ಕೋಟಿ ರೂ. ಅನುದಾನ ಒದಗಿಸಲಾಗಿದೆ, ಅಲ್ಲದೆ ಆ ಇಲಾಖೆಗೆ ಒದಗಿಸಲಾದ ಅನುದಾನದಲ್ಲಿ ಲ್ಯಾಪ್ಟ್ಯಾಪ್ ವಿತರಣೆ ಇತ್ಯಾದಿ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಸಿದ್ದರಾಮಯ್ಯನವರ ಸರಕಾರ ಅಲ್ಪಸಂಖ್ಯಾತರಿಗೆ ಮಾತ್ರ, ‘ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್ನಲ್ಲಿ ಶೂನ್ಯ ದರ್ಶನ’ ಎಂದು ಬಿಜೆಪಿಯ ಎಲ್ಲಾ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ, ಅದನ್ನೇ ನಂಬಿ ಅವರ ಕಾರ್ಯಕರ್ತರು ಮುಂದುವರಿಸಿದ್ದಾರೆ. ವಾಸ್ತವವಾಗಿ ಈ ಬಿಜೆಪಿ ನಾಯಕರು ಯಾರನ್ನು ಹಿಂದೂಗಳು ಎಂದು ಕರೆಯುತ್ತಾರೆ ಎನ್ನುವುದೇ ಅನುಮಾನ ಉಂಟು ಮಾಡುತ್ತಿದೆ. ಯಾಕೆಂದರೆ, ಸರಕಾರ ಬಜೆಟ್ನಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಉಪಯೋಜನೆಯಡಿಯಲ್ಲಿ ಸುಮಾರು 46,500 ಕೋ.ರೂ ಅನುದಾನ ಒದಗಿಸಿದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾದ ಯೋಜನೆಗಳಿಗಿಂತ ಹತ್ತು ಪಟ್ಟು ಯೋಜನೆ ಘೋಷಿಸಲಾಗಿದೆ, 16 ನಿಗಮ ಮಂಡಳಿಗಳು ಆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಆ ಇಲಾಖೆಯಲ್ಲಿ ರಾಜ್ಯ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗರು ಸಹ ಬರುತ್ತಾರೆ, ಅವರೆಲ್ಲರಿಗೂ ಸರಕಾರ ಹಲವು ಯೋಜನೆಗಳನ್ನು ನೀಡಿದೆ. ಅದೇ ರೀತಿ ಆರ್ಯ ವೈಶ್ಯ ಸಮುದಾಯಕ್ಕೂ ನಿಗಮ ಮಂಡಳಿ ಇದೆ. ಬ್ರಾಹ್ಮಣ ಸಮಾಜಕ್ಕೂ ನಿಗಮ ಮಂಡಳಿ ಇದೆ. ಈ ಬಜೆಟ್ನಲ್ಲಿ ಸಣ್ಣ ಸಣ್ಣ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸುವ ಕುರಿತು ಪ್ರಸ್ತಾವಿಸಲಾಗಿದೆ, ಇವರೆಲ್ಲರೂ ಹಿಂದೂಗಳಲ್ಲವೇ? ಅವರಿಗೆ ನೀಡಲಾದ ಅನುದಾನ ಲೆಕ್ಕಕ್ಕಿಲ್ಲವೇ? ಇದಕ್ಕೆ ಬಿಜೆಪಿ ಉತ್ತರಿಸಬೇಕಲ್ಲವೇ? ಬಿಜೆಪಿ ಪಕ್ಷ ಮತ್ತು ಅದರ ಎಲ್ಲಾ ನಾಯಕರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ನೀಡಲಾದ ಅನುದಾನವನ್ನು ಹಿಂದೂ ಸಮಾಜ ಎಂದು ಭಾವಿಸುವುದಿಲ್ಲವೇ? ಬಜೆಟ್ ಪ್ರತಿಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಎಂದು ಪ್ರತ್ಯೇಕ ಪ್ಯಾರಾಗಳೇ ಇರುವಾಗ ಅದನ್ನು ಓದುವ ಅಥವಾ ಅವರನ್ನು ಹಿಂದೂಗಳೆಂದು ಪರಿಗಣಿಸಲು ಸಾಧ್ಯವಾಗದ ಮನಸ್ಥಿತಿ ಬಿಜೆಪಿಗಿದೆಯೇ? ಕೇವಲ ಮತಕ್ಕಾಗಿ ಮಾತ್ರ ಅವರನ್ನು ಪರಿಗಣಿಸುತ್ತದೆಯೇ? ತಮ್ಮ ಸರಕಾರ ಇದ್ದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಚ್ಚಲಾಗಿತ್ತೇ? ಆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಅನುದಾನ ನೀಡುತ್ತಿರಲಿಲ್ಲವೇ? ಯೋಜನೆಗಳನ್ನು ಸ್ಥಗಿತಗೊಳಿದ್ದರೋ? ಇದಕ್ಕೆಲ್ಲ ಉತ್ತರಿಸ ಬಲ್ಲರೇ? ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ನಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅದೇ ರೀತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಒದಗಿಸಿದ್ದಾರೆ, ಸಣ್ಣ ಸಣ್ಣ ಸಮಾಜಗಳಿಗೂ ಯೋಜನೆಗಳು ತಲುಪಲಿ ಎಂದು ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸೇರಿದಂತೆ ಹತ್ತಾರು ನಿಗಮ ಮಂಡಳಿಗಳನ್ನು ರಚನೆ ಮಾಡಿದ್ದಾರೆ, ಅವುಗಳಿಗೆ 1,500 ಕೋ.ರೂ ಅನುದಾನ ಮೀಸಲಿಟ್ಟಿದ್ದಾರೆ, ಅವೆಲ್ಲವನ್ನೂ ಬಿಜೆಪಿ ಮುಚ್ಚಿಟ್ಟು ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲು ಹೊರಟಿದೆ, ಹಿಂದೂಗಳೆಲ್ಲರೂ ಸಿದ್ದರಾಮಯ್ಯನವರು ತಮಗೆ ಏನೂ ಕೊಟ್ಟೇ ಇಲ್ಲ ಎಂದು ಭಾವಿಸಬೇಕೆಂದು ಬಿಜೆಪಿ ಬಯಸುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ 15,081 ಕೋಟಿ ರೂ. ಅನುದಾನವನ್ನು ನಡೆಯುತ್ತಿರುವ 11,00ಕ್ಕೂ ಹೆಚ್ಚು ವಸತಿ ಶಾಲೆಗಳಿಗೆ ಖರ್ಚು ಮಾಡಲಾಗುತ್ತಿದೆ, 2,676 ಕೋಟಿ ರೂ. ಅನುದಾನವನ್ನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಬಳಸಲಾಗುತ್ತಿದೆ, 289 ಕೋ.ರೂ ಅನುದಾನದಲ್ಲಿ ಶ್ರಮಶಕ್ತಿ ಯೋಜನೆಯಡಿಯಲ್ಲಿ ವಾಹನ ಸೌಲಭ್ಯ ಒದಗಿಸಲಾಗಿದೆ, 822 ಕೋ.ರೂ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಖರ್ಚು ಮಾಡಲಾಗುತ್ತಿದೆ, ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 9 ಹಾಗೂ 10 ನೇ ವರ್ಷದಲ್ಲಿ ಪ್ರವೇಶ ಪಡೆದ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ವಿದ್ಯಾರ್ಥಿಗಳಿಗೆ 19 ಕೋ ರೂ ಅನುದಾನ ಒದಗಿಸಲಾಗಿದೆ, 40 ಹೊಸ ವಸತಿ ಶಾಲೆಗಳು. 31 ವಸತಿ ಶಾಲೆಗಳನ್ನು ಪಿಯುಸಿ ವರೆಗೆ ವಿಸ್ತರಿಸಲಾಗಿದೆ. 660 ಕೋ.ರೂ ಅನುದಾನದಲ್ಲಿ 30 ವಸತಿ ಶಾಲೆಗಳನ್ನು ನಿರ್ಮಾನ ಮಾಡಲಾಗುತ್ತಿದೆ. ಶೇ. 75ರಷ್ಟು ಸಬ್ಸಿಡಿಯೊಂದಿಗೆ ಫಾಸ್ಟ್ ಫುಡ್ ಟ್ರಕ್ ಟ್ರಾವೆಲರ್ ಯೋಜನೆ, 50 ಹೊಸ ಪೋಸ್ಟ್ ಮೆಟ್ರಕ್ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವದು ಎಂದು ಹೇಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸವಿತಾ ಸಮಾಜಕ್ಕೆ ವೃತ್ತಿ ಕೈಗೊಳ್ಳಲು 10.00 ಲಕ್ಷದವರೆಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪಡೆದಿರುವ ಶೈಕ್ಷಣಿಕ ಸಾಲಕ್ಕೆ ಒಂದು ಸಲಕ್ಕೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗಿದೆ, ಇತ್ತೀಚಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಬಡ್ಡಿ ಮನ್ನಾ ಮಾಡಲಾಗಿತ್ತು. ಕೆಟಗರಿ 1ಎ ಅಡಿಯಲ್ಲಿ ಬರುವ 46 ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಆರ್ಥಿಕ ಸೌಲಭ್ಯ ನೀಡಲು ಘೋಷಿಸಲಾಗಿದೆ. ಮಡಿವಾಳ ಸಮಾಜಕ್ಕೆ 75 ಲಕ್ಷ ಅನುದಾನದಲ್ಲಿ ಧೋಬಿ ಘಾಟ್ ಮತ್ತು ಇನ್ನಿತರ ಸೌಲಭ್ಯ ಒದಗಿಸುವ ಯೋಜನೆ ಘೋಷಿಸಲಾಗಿದೆ, ಆಧುನಿಕ ಲಾಂಡ್ರಿ ವೃತ್ತಿ ಕೈಗೆತ್ತಿಕೊಳ್ಳಲು ಶೇ. 4ರ ಬಡ್ಡಿ ದರದಲ್ಲಿ ರೂ. 5.00 ಲಕ್ಷದವರೆಗೆ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ. ಇದೇ ರೀತಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೂ ಯೋಜನೆಗಳನ್ನು ಘೋಷಿಸಲಾಗಿದೆ. ಇವೆಲ್ಲವೂ ಹಿಂದೂಗಳಿಗೆ ಎಂದು ಬಿಜೆಪಿ ನಾಯಕರಿಗೆ ಕಾಣುತ್ತಿಲ್ಲವೇ. ಸರಕಾರ ಅಲ್ಪಸಂಖ್ಯಾತರಿಗೆ ಯಾವುದೇ ಯೋಜನೆ ಘೋಷಿಸಿದಾಗ ಬಿಜೆಪಿ ಯಾಕೆ ಹೊಟ್ಟೆಕಿಚ್ಚು ಪಡುತ್ತಾರೆ ಎನ್ನುವುದು ಅರ್ಥವಾಗದ ವಿಷಯ.
Koppala | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕನಕಗಿರಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ತಳವಾರ (54) ಆತ್ಮಹತ್ಯೆಗೈದ ರೈತ. ನಾಗಪ್ಪ ತಳವಾರ ಮಕ್ಕಳ ಮದುವೆ, ಹೈನುಗಾರಿಕೆಗಾಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘ ಮತ್ತು ಕೈಸಾಲ ಮಾಡಿಕೊಂಡಿದ್ದರು. ಆದರೆ ಮಳೆ-ಬೆಳೆ ಆಗದೇ ನಷ್ಟವಾಗಿದ್ದರಿಂದ ಮನನೊಂದು ಮಾ.6ರ ರಾತ್ರಿ ಊಟದ ಬಳಿಕ ಜಮೀನಿಗೆ ಹೋಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಮೃತನ ಪತ್ನಿ ಹುಲಿಗೆಮ್ಮ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಭಾರತದ ಹಿತ್ತಲಿಗೆ ತಲುಪಿದ ಯುದ್ಧ: ಮುಂದೇನು?
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ? ಮಾರ್ಚ್ 4ರ ಬುಧವಾರದಂದು, ಶ್ರೀಲಂಕಾ ಬಳಿಯ ಸಮುದ್ರದಲ್ಲಿ ನಡೆದ ಘಟನೆ ಎಲ್ಲ ಭಾರತೀಯರೂ ಚಿಂತಿಸುವಂತೆ ಮಾಡಿದೆ. ಅಮೆರಿಕದ ಒಂದು ಜಲಾಂತರ್ಗಾಮಿ, ಸಮುದ್ರದ ನೀರಿನಾಳದಲ್ಲಿ ಸಾಗಿ, ಗುರಿಗೆ ಅಪ್ಪಳಿಸಿ ಸ್ಫೋಟಿಸುವ ಕ್ಷಿಪಣಿಯಾದ ಟಾರ್ಪಿಡೋ ಒಂದನ್ನು ಪ್ರಯೋಗಿಸಿ, ಐಆರ್ಐಎಸ್ ದೇನಾ ಎನ್ನುವ ಇರಾನಿಯನ್ ಯುದ್ಧ ನೌಕೆಯನ್ನು ಮುಳುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 80 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ದೂರದಲ್ಲೆಲ್ಲೋ ಮಧ್ಯ ಪೂರ್ವದಲ್ಲಿ ನಡೆದಿರುವುದಲ್ಲ. ಬದಲಿಗೆ, ಇದು ಹಿಂದೂ ಮಹಾಸಾಗರವನ್ನು ನಮ್ಮೊಡನೆ ಹಂಚಿಕೊಳ್ಳುವ, ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾದ ಬಳಿ ನಡೆದಿದೆ. ಈ ದಾಳಿ ನಡೆದ ಸಮಯದಲ್ಲಿ, ಐರಿಸ್ ದೇನಾ ಯಾವುದೇ ಅನುಮಾನಾಸ್ಪದ ಕಾರ್ಯದಲ್ಲಿ ತೊಡಗಿರಲಿಲ್ಲ. ಅದು ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಮಿಲಾನ್-2026 ಅಂತರ್ರಾಷ್ಟ್ರೀಯ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡು ಇರಾನ್ಗೆ ಮರಳುತ್ತಿತ್ತು. ನೌಕೆ ‘ಪೀಸ್ಫುಲ್ ಪ್ಯಾಸೇಜ್’ ಎಂದು ಕರೆಯುವ, ಅಂತರ್ರಾಷ್ಟ್ರೀಯ ಸಮುದ್ರದಲ್ಲಿ ಮೌನವಾಗಿ ಸಾಗುತ್ತಾ, ಯಾರಿಗೂ ತೊಂದರೆ ಉಂಟುಮಾಡದೆ, ಯಾವುದೇ ಕದನದಲ್ಲಿ ಪಾಲ್ಗೊಳ್ಳದೆ ಸಾಗುತ್ತಿತ್ತು. ಆದರೆ, ಈ ನೌಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು! ಈ ಬೆಳವಣಿಗೆಯೇ ಘಟನೆಯನ್ನು ಅತ್ಯಂತ ವಿಷಾದಕರ, ದುಃಖಕರವಾಗಿಸಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ? ಸಂಪೂರ್ಣ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲು ಅಂತರ್ರಾಷ್ಟ್ರೀಯ ಸಾಗರ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ವಿಚಾರಗಳು ಸಂಕೀರ್ಣವಾಗುವುದೇ ಇಲ್ಲಿ. ಜಗತ್ತಿನ ಸಮುದ್ರಗಳಿಗೆ ಸಂಬಂಧಿಸಿದ ಪ್ರಮುಖ ಕಾನೂನು ಪುಸ್ತಕವನ್ನು ಯುಎನ್ಸಿಎಲ್ಒಎಸ್ (ಯುನೈಟೆಡ್ ನೇಶನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ) ಎಂದು ಕರೆಯಲಾಗುತ್ತದೆ. ಇದನ್ನು ಸಮುದ್ರಗಳಿಗೆ ಸಂಬಂಧಿಸಿದ ಸಂವಿಧಾನ ಎಂದು ಭಾವಿಸಿಕೊಳ್ಳಿ. ಆದರೆ, ಅಮೆರಿಕ ಮಾತ್ರ ಈ ಒಪ್ಪಂದಕ್ಕೆ ಎಂದೂ ಸಹಿ ಹಾಕಿಲ್ಲ. ಈ ವಿಚಾರವೇ ನಮಗೆ ಒಂದು ಮಹತ್ವದ ವಿಚಾರವನ್ನು ತಿಳಿಸುತ್ತದೆ. ಯುಎನ್ಸಿಎಲ್ಒಎಸ್ ಮುಖ್ಯವಾಗಿ ಶಾಂತಿಯ ಸಮಯದ ನಿಯಮಗಳನ್ನು ಒಳಗೊಂಡಿದೆ. ಅಂದರೆ, ಸಮುದ್ರದ ಯಾವ ಪ್ರದೇಶದ ಮೇಲೆ ಯಾರ ಸ್ವಾಮ್ಯವಿದೆ, ಮೀನುಗಾರಿಕಾ ಹಕ್ಕುಗಳು, ವ್ಯಾಪಾರ ಮಾರ್ಗಗಳು ಹೀಗೆ ಹಲವಾರು ವಿಚಾರಗಳನ್ನು ಇದು ನಿರ್ಧರಿಸುತ್ತದೆ. ಆದರೆ, ಯುದ್ಧದ ಸಂದರ್ಭದಲ್ಲಿ, ಇದರೊಡನೆ ಒಂದು ಪ್ರತ್ಯೇಕ ನೌಕಾ ಯುದ್ಧದ ನಿಯಮಾವಳಿಗಳೂ ಜಾರಿಗೆ ಬರುತ್ತವೆ. ಈ ಕಾನೂನುಗಳ ಅಡಿಯಲ್ಲಿ, ಐರಿಸ್ ದೆೇನಾ ಒಂದು ಇರಾನಿಯನ್ ಯುದ್ಧ ನೌಕೆಯಾಗಿರುವುದರಿಂದ, ಅದು ಎಲ್ಲಿ ಚಲಿಸುತ್ತಿದ್ದರೂ ಅಥವಾ ಆ ಕ್ಷಣದಲ್ಲಿ ಅದು ಏನೇ ಮಾಡುತ್ತಿದ್ದರೂ, ತಾಂತ್ರಿಕವಾಗಿ ಅದು ದಾಳಿಗೆ ಒಂದು ಸೂಕ್ತವಾದ ಮಿಲಿಟರಿ ಗುರಿ ಎಂದು ಪರಿಗಣಿತವಾಗುತ್ತದೆ. ಹಲವಾರು ಭಾರತೀಯ ನೌಕಾಪಡೆಯ ಅಧಿಕಾರಿಗಳೂ ಸಹ ಈ ಅಪ್ರಿಯ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಚಾರ್ಟರ್ನ ಆರ್ಟಿಕಲ್ 2 (4) ಪ್ರಕಾರ, ಯಾವುದೇ ದೇಶವೂ ಬೇರೆ ದೇಶಗಳ ಮೇಲೆ ಮಿಲಿಟರಿ ಬಲವನ್ನು ಪ್ರಯೋಗಿಸುವಂತಿಲ್ಲ. ಇದು ಸ್ಪಷ್ಟವಾದ ಕಾನೂನಾಗಿದೆ. ಆದರೆ, ಇದೇ ಚಾರ್ಟರ್ನ 51ನೇ ವಿಧಿ ಒಂದು ವಿನಾಯಿತಿಯನ್ನೂ ನೀಡುತ್ತದೆ. ಒಂದು ದೇಶ ಏನಾದರೂ ಸಶಸ್ತ್ರ ಬೆದರಿಕೆ ಹೊಂದಿದ್ದರೆ, ಅದು ಸ್ವರಕ್ಷಣೆಗಾಗಿ ದಾಳಿ ಮಾಡಬಹುದು. ಇದರೊಡನೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಮಿಲಿಟರಿ ದಾಳಿಗೆ ವಿಶೇಷ ಅನುಮತಿ ನೀಡುವ ಅವಕಾಶವಿದ್ದು, 1990ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಭದ್ರತಾ ಮಂಡಳಿ ಇದನ್ನೇ ಮಾಡಿತ್ತು. ಆದರೆ ಈ ಅನುಮತಿ ಪಡೆಯಲು ಬಹುಮತದ ಅಗತ್ಯವಿದ್ದು, ಅಮೆರಿಕ, ರಶ್ಯ, ಚೀನಾ, ಯುಕೆ ಮತ್ತು ಫ್ರಾನ್ಸ್ ಇದರ ವಿರುದ್ಧ ವಿಟೋ ಚಲಾಯಿಸಬಾರದು. ವಿಟೋ ಅಧಿಕಾರ ಎಂದರೆ, ಈ ಐದು ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ಒಂದು ಸದಸ್ಯನೂ ‘ಇಲ್ಲ’ ಎಂದರೆ, ಆ ಒಟ್ಟಾರೆ ನಿರ್ಧಾರಕ್ಕೆ ತಡೆಯಾಗುತ್ತದೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಅಮೆರಿಕದ ಖಜಾನೆ ಇಲಾಖೆ ಐರಿಸ್ ದೇನಾ ಮೇಲೆ 2023ರಲ್ಲಿ ಅಧಿಕೃತ ನಿರ್ಬಂಧ ಹೇರಿದೆ. ನಿರ್ಬಂಧಗಳು ಮೂಲತಃ ಹಣಕಾಸಿನ ದಂಡಗಳು ಮತ್ತು ನಿಬಂಧನೆಗಳಾಗಿದ್ದು, ನೌಕೆಗಳು ಅಥವಾ ದೇಶಗಳ ಮೇಲೆ ವಿಧಿಸಲಾಗುತ್ತದೆ. ನೌಕೆಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದರೆ, ಅದು ನೌಕೆಯನ್ನು ಚಲಿಸದಂತೆ ಮಾಡುವುದಿಲ್ಲವಾದರೂ, ಅದರ ಕುರಿತು ವ್ಯಾಪಕ ಅನುಮಾನಗಳನ್ನು ಸೃಷ್ಟಿಸುತ್ತದೆ. ಈ ದಾಳಿ ನಡೆದ ಸಂದರ್ಭದಲ್ಲಿ, ಐರಿಸ್ ದೇನಾ ಕ್ಲೋಸ್ ಇನ್ ಆಯುಧ ವ್ಯವಸ್ಥೆಯನ್ನು ಹೊಂದಿತ್ತು. ಅಂದರೆ, ಸನಿಹ ಬರುವ ಕ್ಷಿಪಣಿಗಳು ಅಥವಾ ಡ್ರೋನ್ಗಳನ್ನು ಹೊಡೆದುರುಳಿಸಲು ರ್ಯಾಪಿಡ್ ಫೈರ್ ಗನ್ಗಳನ್ನು ನೌಕೆ ಹೊಂದಿತ್ತು. ಇದರೊಡನೆ, ನೌಕೆಯಲ್ಲಿ ವಿಶಾಲ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳಿದ್ದವು. ಇವೆಲ್ಲದರ ಹೊರತಾಗಿಯೂ, ನೌಕೆ ದಾಳಿಯ ವೇಳೆ ಪ್ರತ್ಯುತ್ತರ ಇಲ್ಲದಂತಾಗಿತ್ತು. ಭಾರತೀಯ ನೌಕಾಪಡೆಯ ಮಾಜಿ ಉಪ ಮುಖ್ಯಸ್ಥರು ಮತ್ತು ಭಾರತದ ಮೊದಲ ರಾಷ್ಟ್ರೀಯ ಸಮುದ್ರ ಭದ್ರತಾ ಸಮನ್ವಯಕಾರ ನಿವೃತ್ತ ವೈಸ್ ಅಡ್ಮಿರಲ್ ಜಿ. ಅಶೋಕ್ ಕುಮಾರ್ ಅವರು ಸಾಗರ ವಲಯದಲ್ಲಿ ಯುದ್ಧ ಎಂದಾದಾಗ ಅದಕ್ಕೆ ಯಾವುದೇ ನಿರ್ದಿಷ್ಟ ಗಡಿಗಳು ಇರುವುದಿಲ್ಲ ಎಂದಿದ್ದಾರೆ. ಒಂದು ಬಾರಿ ಚಕಮಕಿ ಆರಂಭಗೊಂಡರೆ, ಅದಕ್ಕೆ ಸಮುದ್ರದಲ್ಲಿ ಯಾವುದೇ ತಡೆಗೋಡೆ ಇಲ್ಲ. ಯುದ್ಧ ನೌಕೆ ಭಾರತೀಯ ತೀರದಿಂದ ತೆರಳಿದಾಗಲೇ ಯುದ್ಧ ಆರಂಭಗೊಂಡಿತ್ತು ಎಂದು ಅವರು ವಿವರಿಸಿದ್ದಾರೆ. ನೌಕೆಯ ಮೇಲಿನ ದಾಳಿ ಶ್ರೀಲಂಕಾದ ವಿಶೇಷ ಆರ್ಥಿಕ ವಲಯದಲ್ಲಿ, ಅಂದರೆ, ಶ್ರೀಲಂಕಾಗೆ ಸಮುದ್ರ ಸಂಪನ್ಮೂಲಗಳ ಮೇಲೆ ವಿಶೇಷ ಅಧಿಕಾರ ಇರುವ ಪ್ರದೇಶದಲ್ಲಿ ನಡೆದಿರುವುದರಿಂದ, ರಕ್ಷಣಾ ತಂಡಗಳಿಗೆ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಅನುಕೂಲವಾಯಿತು ಎಂದಿದ್ದಾರೆ. ಆದರೆ, ನಿವೃತ್ತ ರಿಯರ್ ಅಡ್ಮಿರಲ್ ಸುಧೀರ್ ಪಿಳ್ಳೈ ಎನ್.ಎಂ. ಅವರು ಒಂದಷ್ಟು ಕಠಿಣ ಸವಾಲುಗಳನ್ನು ಎತ್ತಿದ್ದಾರೆ. ‘‘ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರದ ಅಂತರ್ರಾಷ್ಟ್ರೀಯ ಸಮುದ್ರದಲ್ಲಿ ಒಂದು ವಿದೇಶಿ ಯುದ್ಧ ನೌಕೆಯ ಮೇಲೆ ದಾಳಿ ನಡೆಸುವುದನ್ನು ಸ್ಪಷ್ಟವಾಗಿ ಸ್ವಯಂ ರಕ್ಷಣೆ ಎಂದು ಸಾಬೀತುಪಡಿಸದಿದ್ದರೆ, ಅದು ಅಕ್ರಮ ದಾಳಿ ಎಂದೇ ಕರೆಯಲ್ಪಡುತ್ತದೆ’’ ಎಂದಿದ್ದಾರೆ. ಇನ್ನೊರ್ವ ಹಿರಿಯ ನೌಕಾಪಡೆ ಅಧಿಕಾರಿ ಈ ದಾಳಿಯನ್ನು ಪ್ರಮುಖ ಯುದ್ಧ ತೀವ್ರತೆಯ ಹೆಜ್ಜೆ ಎಂದಿದ್ದಾರೆ. ಇರಾನ್ನ ಯುದ್ಧ ನೌಕೆ ಯಾವುದೇ ಚಕಮಕಿಯ ಪ್ರದೇಶದಲ್ಲಿ ಇರಲಿಲ್ಲ. ಅದು ಬೆಳಗಿನ ವೇಳೆಯಲ್ಲಿ, ಶಾಂತವಾಗಿ ಸಾಗುತ್ತಿತ್ತು. ನೌಕೆಯಲ್ಲಿದ್ದ ಯಾವ ಸಿಬ್ಬಂದಿಯೂ ಸಮುದ್ರದ ಆಳದಿಂದ ಒಂದು ಟಾರ್ಪಿಡೋ ಮೌನವಾಗಿ ಬಂದು ದಾಳಿ ಮಾಡಬಹುದು ಎಂದು ಊಹಿಸಿಯೇ ಇರಲಿಲ್ಲ. ಇದು ಆಧುನಿಕ ಯುದ್ಧದ ಒಂದು ಭಯಾನಕ ವಾಸ್ತವ. ಸಮುದ್ರದಲ್ಲಿ ಯಾವುದೇ ಸುರಕ್ಷಿತ ಮಾರ್ಗಗಳಿಲ್ಲ, ಯಾವುದೇ ನಿರ್ದಿಷ್ಟ ಗಡಿಗಳಿಲ್ಲ. ಸಮುದ್ರ ಸದಾ ಮುಕ್ತವಾಗಿದ್ದು, ಇಂದು ಸಮುದ್ರಗಳು ಸಂಪೂರ್ಣ ಊಹೆಗೆ ನಿಲುಕದಂತಾಗಿವೆ. ಭಾರತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ನು ಮುಂದಿನ ಸಾಧ್ಯತೆಗಳೇನು ಎನ್ನುವ ಕುರಿತು ಭಾರತ ಬಹಳ ಜಾಗರೂಕವಾಗಿ ಆಲೋಚಿಸಬೇಕಿದೆ.
Kamal Haasan: ನಟ, ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಿರುಗೇಟು ನೀಡಿದ್ದು, ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಕಮಲ್ ಹಾಸನ್ ಅವರು ಬರೆದಿರುವ ಬರಹವು ವೈರಲ್ ಆಗುತ್ತಿದೆ. ಭಾರತವು ತೈಲ ಖರೀದಿ ಮಾಡುವ ವಿಚಾರವಾಗಿ
ಕಲ್ಲಂಗಡಿಗೆ ಮುಳ್ಳಾದ ವೈರಸ್ ಸೋಂಕು; ಕಟಾವು ಹಂತದಲ್ಲಿ ವ್ಯಾಪಿಸಿದ ಬಾಧೆ
ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 400 ಎಕರೆಯಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದು, ಕೆಜಿಗೆ 20 ರೂ. ಬೆಲೆ ಇದೆ. ಆದರೆ, ಬೆಳೆಗೆ ವೈರಸ್ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ವೈರಸ್ ಜತೆಗೆ ಹಳದಿ ಎಲೆ ಚುಕ್ಕಿ ರೋಗ ಕೂಡ ಕಾಡುತ್ತಿದೆ.
ಕೆಂಪು ಸುಂದರಿ ಮೆಣಸಿನಕಾಯಿಗೆ ಬಂಪರ್ ಬಂಪರ್ ಬೆಲೆ!
ಈ ಬಾರಿ ಕೆಂಪು ಮೆಣಸಿಗೆ ಉತ್ತಮಬೆಲೆ ಬಂದಿದೆ. ಕಂಪ್ಲಿ ತಾಲೂಕಿನಲ್ಲಿ ಒಣಕಾಯಿ ಕೀಳುವ ಕಾರ್ಯ ಭರದಿಂದ ಸಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೆನೋ ಅಧಿಕವಾಗಿದೆ. ಆದರೆ ಇಳುವರಿ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಬಳ್ಳಾರಿ | 9ನೇ ತರಗತಿ ವಿದ್ಯಾರ್ಥಿಯಿಂದ ಹಲ್ಲೆ: ಓರ್ವ ವಿದ್ಯಾರ್ಥಿ ಮೃತ್ಯು, ವಾರ್ಡನ್ ಸಹಿತ ಏಳು ಮಂದಿ ಗಂಭೀರ
♦ 'ಗುರುಕುಲ ಕಾನ್ಸೆಪ್ಟ್ ಸ್ಕೂಲ್ ನಲ್ಲಿ ಆಘಾತಕಾರಿ ಘಟನೆ♦ ಹಲ್ಲೆ ಆರೋಪಿ ಪರಾರಿ
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು
Jaggery: ಇಂದಿನ ದಿನಗಳಲ್ಲಿ ಬಹುತೇಕ ವಸ್ತುಗಳು ಕಲಬೆರಕೆ ಆಗಿವೆ. ಅದರಲ್ಲೂ ಬೆಣ್ಣೆ, ತುಪ್ಪ ಹಾಗೂ ಬೆಲ್ಲ ಸೇರಿದಂತೆ ಕೆಲವೊಂದು ಪ್ರಮುಖ ಆಹಾರ ಪದಾರ್ಥಗಳಲ್ಲೇ ಕಲಬೆರಕೆ ವಸ್ತುಗಳನ್ನು ಸೇರಿಸಲಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಭಾರತೀಯರು ಬೆಲ್ಲವನ್ನು ಹಲವು ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಅಲ್ಲದೆ ಸಕ್ಕರೆಗೆ ಪರ್ಯಾಯವಾಗಿಯೂ ಬೆಲ್ಲವನ್ನು ಬಳಸುವುದು ಇದೆ. ಆದರೆ ಇದೀಗ
ರಾಮನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳು ಮುಂದಾಗುತ್ತಿದ್ದು, ನಗರದಲ್ಲಿ ಬರೋಬ್ಬರಿ 2ಕೋಟಿ ವೆಚ್ಚದಲ್ಲಿ ಚಾಮನಹಳ್ಳಿ ಬಳಿಯಲ್ಲಿ ಡಾಗ್ ಶೆಲ್ಟರ್ ನಿರ್ಮಿಸಲು ಮುಂದಾಗಿದೆ. ಇನ್ನು, ನಗರಸಭೆ ಪ್ರಕಾರ, ಜಿಲ್ಲೆಯಲ್ಲಿ 3ಸಾವಿರ ಬೀದಿನಾಯಿಗಳಿದ್ದು, ಇವುಗಳ ಪೈಕಿ 1150 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು 20 ಲಕ್ಷ ಮೀಸಲಿಟ್ಟಿದ್ದಾರೆ. ಹಾಗಾದ್ರೆ, ಬೀದಿನಾಯಿಗಳಿಗೆ ನಿರ್ಮಿಸಲಾಗುತ್ತಿರುವ ಈ ಹೈಟೆಕ್ ಡಾಗ್ ಶೆಲ್ಟರ್ ಹೇಗಿರಲಿದೆ ಎಂಬುದರ ಕುರಿತ ವರದಿ ಇಲ್ಲಿದೆ..
ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅನುಮತಿ ಬೇಕಿಲ್ಲ: ಅಮೆರಿಕಕ್ಕೆ ತಿರುಗೇಟು
ಹೊಸದಿಲ್ಲಿ: ಅಮೆರಿಕ ಮತ್ತು ಭಾರತ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಚೌಕಟ್ಟಿನಡಿ, ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಸ್ಥಗಿತಗೊಳಿವುದಾಗಿ ಭಾರತ ಭರವಸೆ ನೀಡಿದೆ ಎಂಬ ಹೇಳಿಕೆ ನೀಡಿ ಡೊನಾಲ್ಡ್ ಟ್ರಂಪ್ ಅವರು ಶೇ.25ರಷ್ಟು ತೆರಿಗೆಯನ್ನು ರದ್ದುಪಡಿಸಿದ ಬಳಿಕವೂ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಭಾರತ ಎಂದೂ ಸ್ಥಗಿತಗೊಳಿಸಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಯಾವ ದೇಶದ ಅನುಮತಿಯೂ ಬೇಕಿಲ್ಲ ಎಂದು ಮೂಲಗಳು ಹೇಳಿವೆ. ಫೆಬ್ರವರಿಯಲ್ಲಿ ಕೂಡಾ ಭಾರತಕ್ಕೆ ಅತ್ಯಧಿಕ ತೈಲ ಪೂರೈಕೆ ಮಾಡುವ ದೇಶವಾಗಿ ರಷ್ಯಾ ಮುಂದುವರಿದಿದೆ ಎಂದು ಹೇಳಲಾಗಿದೆ. ಭಾರತದ ತೈಲ ಖರೀದಿ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಯ ತತ್ವದಿಂದ ನಿರ್ದೇಶಿತವಾಗಿವೆ. ಎಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮತ್ತು ಸರಬರಾಜು ಲಭ್ಯವಿರುತ್ತದೆಯೋ ಅಲ್ಲಿಂದ ಖರೀದಿಸುತ್ತೇವೆ. ಅದನ್ನು ನಾವು ಮುಂದುವರಿಸಲಿದ್ದೇವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ವಿಧಿಸಿದ್ದ ಸುಂಕವನ್ನು 30 ದಿನಗಳವರೆಗೆ ಮನ್ನಾ ಮಾಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅದು ಅವರ ದೇಶಿಯ ಪ್ರೇಕ್ಷಕರಿಗೆ ನೀಡಿದ ಹೇಳಿಕೆ ಎಂದು ಉನ್ನತ ಅಧಿಕಾರಿ ಪ್ರತಿಕ್ರಿಯಿಸಿದರು. ಇದು ನಮ್ಮ ಸ್ಥಿರವಾದ ನಿಲುವು ಎಂದು ಸ್ಪಷ್ಟಪಡಿಸಿದರು. ಭಾರತ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಮೂರು ತತ್ವಗಳಿಂದ ನಿರ್ದೇಶಿಸಲ್ಪಟ್ಟಿರುತ್ತವೆ: ಅವುಗಳೆಂದರೆ, ಕೈಗೆಟುಕುವ ಬೆಲೆ, ಲಭ್ಯತೆ ಮತ್ತು ಸುಸ್ಥಿರತೆ ಎಂದು ಹೇಳಿದರು. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗುರುವಾರ ಹೇಳಿಕೆ ನೀಡಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಇರಾನ್ ಹೊರ್ಮುಜ್ ಸಂಧಿಯನ್ನು ತಡೆದಿರುವ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕೆ 30 ದಿನಗಳ ಕಾಲ ಸುಂಕ ಮನ್ನಾ ಮಾಡಲು ಅಮೆರಿಕ ನಿರ್ಧರಿಸಿದೆ ಎಂದು ಪ್ರಕಟಿಸಿದ್ದರು.
ಚಿಕ್ಕಬಳ್ಳಾಪುರ : ಚದಲಪುರ ಫ್ಲೈಓವರ್ ಗೆ ಶೀಘ್ರ ಮುಕ್ತಿ
ಚದಲಪುರ ಫ್ಲೈಓವರ್ ಕಾಮಗಾರಿ ಆರಂಭವಾದಾಗಲೇ ಅವೈಜ್ಞಾನಿಕ ಎಂಬ ಕೂಗು ಎದ್ದಿತ್ತು. ಇನ್ನೊಂದೆಡೆ ಕೆಲವು ರೈತರು ನಮ್ಮ ಜಾಗಕ್ಕೆ ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕಾಮಗಾರಿ ನಿಂತಲ್ಲೇ ನಿಂತಿತ್ತು. ಈ ವರ್ಷದ ಜುಲೈ ತಿಂಗಳಲ್ಲಿಕೋರ್ಟ್ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಿತ್ತು. ಅಂದಿನಿಂದ ಕಾಮಗಾರಿ ಮತ್ತೆ ನಡೆಯುತ್ತಿದೆ. ಆದರೆ ಇದುವರೆಗೂ ಕಾಮಗಾರಿಗೆ ಮುಕ್ತಿ ಹಾಡಲು ಸಾಧ್ಯವಾಗಿಲ್ಲ.
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ 52 ಸಾವಿರ ಭಾರತೀಯರು ಸ್ವದೇಶಕ್ಕೆ ವಾಪಾಸು
ಹೊಸದಿಲ್ಲಿ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಸಂಘರ್ಷಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಮಾರ್ಚ್ 1-7ರ ಅವಧಿಯಲ್ಲಿ ವಿವಿಧ ವಿಮಾನಗಳಲ್ಲಿ ಸುರಕ್ಷಿತವಾಗಿ 52 ಸಾವಿರ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ವಿಮಾನಗಳಲ್ಲಿ ವಾಪಸ್ಸಾಗಲು ಮುಂದಾಗಿದ್ದಾರೆ ಎಂದು ಹೇಳಿದೆ. ಇರಾನ್ನ ಮೇಲೆ ಕಳೆದ ತಿಂಗಳು ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ ಒಂದು ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಹಾಗೂ ವ್ಯಾಪಾರ ಸರಕುಗಳು ಹಾಗೂ ಇಂಧನ ಪೂರೈಕೆ ಸುವ್ಯವಸ್ಥಿತವಾಗಿ ಮುಂದುವರಿಯಲು ಭಾರತ ಒತ್ತು ನೀಡಿದೆ ಎಂದು ಸಚಿವಾಲಯ ಹೇಳಿದೆ. ಗಲ್ಫ್ ಪ್ರದೇಶದಲ್ಲಿ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಾವಧಿ ಪ್ರವಾಸಕ್ಕೆ ತೆರಳಿ ಈ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ಕಲ್ಯಾಣಕ್ಕೆ ಗಮನ ಹರಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಕಳೆದ ಕೆಲ ದಿನಗಳಿಂದ ಪಶ್ಚಿಮ ಏಷ್ಯಾ ವಾಯುಮಾರ್ಗಗಳನ್ನು ಭಾಗಶಃ ತೆರೆದಿರುವ ಹಿನ್ನೆಲೆಯಲ್ಲಿ ಭಾರತದ ಹಾಗೂ ವಿದೇಶಿ ವಿಮಾನಯಾನ ಸಂಸ್ಥೆಗಳು ವಿಮಾನಗಳ ಕಾರ್ಯಾಚರಣೆ ಆರಂಭಿಸಿವೆ. ಇದರಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ಇಲ್ಲದ ವಿಮಾನಗಳು ಕೂಡ ಸೇರಿದ್ದು, ಮಧ್ಯಂತರ ಹಾಗೂ ಅಲ್ಪಾವಧಿ ವೀಸಾ ಹೊಂದಿದ ಭಾರತೀಯ ಪ್ರಯಾಣಿಕರು ವಾಪಸ್ಸಾಗಲು ಇದರಿಂದ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಕಂಡುಬಂದಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದೆ. ರಾಜ್ಯದ ಬಳ್ಳಾರಿಯಲ್ಲಿ 39.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ, ರಾಜ್ಯದ ಬಯಲು ಸೀಮೆಯಾದ ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕೊರೆಯುವ ಚಳಿಯ ಅನುಭವವಾಗಿದೆ. ರಾಜ್ಯದ ಒಳನಾಡಿನ
Sanju Samson: ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ 89 ರನ್ ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಶತಕದ ಸನಿಹಕ್ಕೆ ಬಂದರೂ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ
ಕೊಡವರ ದಶಕದ ಹೋರಾಟಕ್ಕೆ ಜಯ ; ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹವ್ಯಕ ಭಾಷಾ ಅಕಾಡೆಮಿ ಮತ್ತು ಕೊಡವ ಅಭಿವೃದ್ಧಿ ನಿಗಮ ಘೋಷಣೆ ಜತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ
T20 World Cup 2026 Final: ಅಹಮದಾಬಾದ್ನ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೆ ಐಸಿಸಿ (ICC) ಅಂಪೈರ್ಗಳನ್ನು ಘೋಷಿಸಿದೆ. ಆದರೆ, ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ರಿಚರ್ಡ್ ಅಲನ್ ಕೆಟಲ್ಬರೋ ಅವರ ಹೆಸರಿಲ್ಲದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ,
ಟೆಹ್ರಾನ್ ನಲ್ಲಿ ಇಸ್ರೇಲಿ ಕ್ಷಿಪಣಿ ದಾಳಿ: ಆಂಬ್ಯುಲೆನ್ಸ್ ಬೆಂಕಿಗಾಹುತಿ
ಟೆಹ್ರಾನ್: ಇರಾನ್ ನ ರಾಜಧಾನಿ ಟೆಹ್ರಾನ್ ನಲ್ಲಿ ಇಸ್ರೇಲಿ ಕ್ಷಿಪಣಿ ದಾಳಿಯ ಬಳಿಕ ಆಂಬ್ಯುಲೆನ್ಸ್ ಒಂದು ನಾಶವಾಗಿ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಫಾರ್ಸ್ ಸಂಸ್ಥೆ ಎಕ್ಸ್ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಆಂಬ್ಯುಲೆನ್ಸ್ ಬೆಂಕಿಗೆ ಆಹುತಿಯಾಗಿರುವುದು ಕಾಣಿಸುತ್ತದೆ. ತುರ್ತು ಸೇವೆಯ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ದೃಶ್ಯವೂ ಅದರಲ್ಲಿ ಕಂಡುಬಂದಿದೆ. ಸಿಟಿಜನ್ ಜರ್ನಲಿಸಂ ಗುಂಪಾದ ‘ಮಾಮ್ಲೆಕೇಟ್’ ಕೂಡ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಟೆಹ್ರಾನ್ನ ಪೂರ್ವ ಭಾಗದಲ್ಲಿರುವ ಟೆಹ್ರಾನ್ ಪಾರ್ಸ್ ಜಿಲ್ಲೆಯ ಒಂದು ಗಲ್ಲಿಯ ಮೂಲಕ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ಜೋರಾದ ಸ್ಫೋಟದ ಬಳಿಕ ಏಕಾಏಕಿ ನಿಂತಿದೆ ಎಂದು ವರದಿ ಮಾಡಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಾಗಿಲ್ಲ.
ನಮ್ಮ ಮೆಟ್ರೋ 3 ನೇ ಹಂತದ ಕಾಮಗಾರಿ ಡೆಡ್ಲೈನ್ 2031ರ ಮೇವರೆಗೆ ವಿಸ್ತರಣೆ
ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಕೆಂಪು ಮಾರ್ಗ 22.14 ಕಿ.ಮೀ. ಎಲಿವೇಟೆಡ್ ಹಾಗೂ 14.45 ಕಿ.ಮೀ. ಸುರಂಗ ಸೇರಿ ಸುಮಾರು 37 ಕಿ.ಮೀ. ಹೊಂದಿದೆ. ಇದರ ಅಂದಾಜು ವೆಚ್ಚ 25,485 ಕೋಟಿ ರೂ. ಈ ವೆಚ್ಚ ಹೆಚ್ಚಳದ ಸಂಬಂಧವೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ರಾಜ್ಯಕ್ಕೆ ಯೋಜನೆ ಮರುಪರಿಶೀಲಿಸುವಂತೆ ಸೂಚಿಸಿದೆ.
ಖತರ್ ಕಡೆಗೆ ಇರಾನ್ ನಿಂದ 12 ಕ್ಷಿಪಣಿ ದಾಳಿ: ರಕ್ಷಣಾ ಸಚಿವಾಲಯ
ದೋಹಾ, ಮಾ. 8: ಇರಾನ್ ನಿಂದ ಹಾರಿಸಲಾದ ಒಟ್ಟು 12 ಕ್ಷಿಪಣಿಗಳು ಖತರ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದವು ಎಂದು ಖತರ್ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸಚಿವಾಲಯ ಪ್ರಕಟಿಸಿದ ಹೇಳಿಕೆಯಲ್ಲಿ, 10 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡು ಕ್ರೂಸ್ ಕ್ಷಿಪಣಿಗಳನ್ನು ಖತರ್ ಕಡೆಗೆ ಹಾರಿಸಲಾಗಿದೆ ಎಂದು ವಿವರಿಸಿದೆ. ಖತರ್ ಸಶಸ್ತ್ರ ಪಡೆಗಳ ಪ್ರಕಾರ, ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡೂ ಕ್ರೂಸ್ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಮಧ್ಯದಲ್ಲೇ ತಡೆಹಿಡಿಯಲಾಗಿದೆ. ಉಳಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಖತರ್ ನ ಪ್ರಾದೇಶಿಕ ಸಮುದ್ರ ನೀರಿನಲ್ಲಿ ಬಿದ್ದಿವೆ. ಇನ್ನೆರಡು ಕ್ಷಿಪಣಿಗಳು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಹಾಗೂ ಯಾವುದೇ ಬಾಹ್ಯ ಬೆದರಿಕೆಗೆ ತಕ್ಷಣ ಪ್ರತಿಕ್ರಿಯಿಸಲು ಖತರ್ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಮರ್ಥವಾಗಿದ್ದು ಸಿದ್ಧವಾಗಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇಸ್ರೇಲ್ ಗೆ 20 ಸಾವಿರಕ್ಕೂ ಹೆಚ್ಚು ಬಾಂಬ್ ಮಾರಾಟಕ್ಕೆ ಅಮೆರಿಕ ಅನುಮೋದನೆ
ಕಾಂಗ್ರೆಸ್ ಪರಿಶೀಲನೆ ಪ್ರಕ್ರಿಯೆ ಕೈಬಿಟ್ಟ ಟ್ರಂಪ್!
ಗಾಝಾದಲ್ಲಿ ಇಸ್ರೇಲ್ ನಿಂದ ಮುಂದುವರಿದ ನರಮೇಧ: ತಂದೆ–ಮಗಳು ಸೇರಿ ಮೂವರು ಮೃತ್ಯು
ವ್ಯಾಪಕ ಯುದ್ಧದ ನಡುವೆಯೂ ದಾಳಿ; ಪಶ್ಚಿಮ ದಂಡೆಯಲ್ಲೂ ಹಿಂಸಾಚಾರ
ಹರಪನಹಳ್ಳಿ | ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟ ಡಾ.ಅಂಬೇಡ್ಕರ್ ವಸತಿ ಶಾಲೆ
ಹರಪನಹಳ್ಳಿ: ನಗರದ ಐಬಿ ವೃತ್ತದ ಪೋಲೀಸ್ ಠಾಣೆ ಹಿಂಭಾಗದಲ್ಲಿರುವ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ನಿರ್ವಹಣೆಯ ಕೊರತೆಯಿಂದ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದನ್ನು 1998ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿ ಅಂದಿನ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ದಿ.ಎಂ.ಪಿ.ಪ್ರಕಾಶ್ ಉದ್ಘಾಟನೆ ಮಾಡಿದ ನಂತರ 2023ರವರೆಗೆ ಸುಗಮವಾಗಿ ನಡೆದ ಶಾಲೆಯು ಮೇಲ್ಚಾವಣಿಯ ಕುಸಿತದ ನೆಪದಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಇಂದು ಹಾಳು ಕೊಂಪೆಯಾಗಿ ಬದಲಾಗಿದೆ. ಇಂದು ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಗಿಡ ಗಂಟಿಗಳು, ಅಲ್ಲಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಧೂಮಪಾನ ಮಾಡಿ ಬಿಸಾಡಿರುವ ಸಿಗರೇಟಿನ ತುಂಡುಗಳು, ಪುಂಡ ಪೋಕರಿಗಳು ಕುಡಿದು ಅಡುಗೆ ಮಾಡಲು ಬಳಸಿರುವ ಕಲ್ಲಿನ ಒಲೆ-ಕಟ್ಟಿಗೆಗಳು ಕಟ್ಟಡದ ಪಾಳು ಕೊಂಪೆಗೆ ಸಾಕ್ಷಿಯಾಗಿವೆ. ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 1ರಿಂದ 5ರವರೆಗೆ ಒಟ್ಟು 250 ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಆರಂಭದಿಂದಲೂ ಉತ್ತಮ ನಿರ್ವಹಣೆ ಇತ್ತು. ಬಳಿಕ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇದಕ್ಕೆ ಹೊಂದಿಕೊಂಡ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದ್ದು, ನಿಲಯ ಪಾಲಕ ಜುಂಜಪ್ಪನವರ ಉತ್ತಮ ನಿರ್ವಹಣೆಯಿಂದ 60 ಮಕ್ಕಳು ಈಗಲೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಹೊಂದಿಕೊಂಡ ಅಂಬೇಡ್ಕರ್ ವಸತಿ ಶಾಲೆ ಪಾಳು ಬಿದ್ದಿದೆ. ತಾಲೂಕಿನಾದ್ಯಂತ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಿತ್ಯ ನಗರಕ್ಕೆ ಬರುತ್ತಾರೆ. ಆದರೆ ಹಾಸ್ಟೆಲ್ ಸೌಲಭ್ಯಗಳು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಸಿಕ್ಕರೆ, ಇನ್ನೂ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸಿಗದೆ, ಊರಿಂದ ಅಲೆದಾಡುವ ಪರಿಸ್ಥಿತಿ ಇದೆ. ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ನಿರ್ಮಾಣಗೊಂಡಿದ್ದ ಶಾಲೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. -ಕೆ.ಸುಭಾಷ್, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಬಳಕೆ ಇಲ್ಲದೆ ಪಾಳುಬಿದ್ದಿದೆ. ಅವುಗಳನ್ನು ನೆಲಸಮಗೊಳಿಸುವ ಕೆಲಸವಾಗಲಿ, ಇಲ್ಲವೇ ನಿರ್ವಹಣೆಯೂ ನಡೆಯದ ಕಾರಣದಿಂದ ಗಿಡಗಂಟಿ ಬೆಳೆದು ಅವು ಸರಿಸೃಪಗಳ ಆವಾಸವಾಗಿ ಪರಿಣಮಿಸಿದೆ. ಅಂಬೇಡ್ಕರ್ ವಸತಿ ಶಾಲೆ ಕೊಠಡಿ ದುರಸ್ತಿಗೆ ಸರಕಾರಕ್ಕೆ ಈಗಾಗಲೆ ಮನವಿ ನೀಡಲಾಗಿದೆ. ಮಕ್ಕಳ ಭದ್ರತೆಯ ದೃಷ್ಟಿಯಿಂದ ಅಲ್ಲಿಯ ಮಕ್ಕಳನ್ನು ನಗರದ ಬಸ್ ಡಿಪೋ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. -ಗಂಗಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡ ಅವನತಿಗೆ ಕಾರಣವಾಗಿದೆ. ಬಹುತೇಕ ಕೊಠಡಿ, ಕಟ್ಟಡಗಳು ಅವನತಿ ಅಂಚಿನಲ್ಲಿದೆ, ಅಭಿವೃದ್ಧಿಯತ್ತ ಅಧಿಕಾರಿಗಳು ಗಮನ ಹರಿಸಬೇಕು. -ಗುಳೇದಹಟ್ಟಿ ಸಂತೋಷ್ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ
ಯುದ್ಧದ ಅಂತ್ಯಕ್ಕೆ ಒತ್ತಾಯ : ಹಲವು ರಾಷ್ಟ್ರಗಳ ರಾಯಭಾರಿಗಳೊಂದಿಗೆ ಒಮಾನ್ ಚರ್ಚೆ
ಮಸ್ಕತ್, ಮಾ. 8: ಗಲ್ಫ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ರಾಜಕೀಯ ಹಾಗೂ ರಾಜತಾಂತ್ರಿಕ ಒತ್ತಡ ತೀವ್ರಗೊಳಿಸುವ ಅಗತ್ಯವಿದೆ ಎಂದು ಒಮಾನ್ ವಿದೇಶಾಂಗ ಸಚಿವ ಸಯ್ಯಿದ್ ಬದ್ರ್ ಬಿನ್ ಹಮದ್ ಅಲ್ಬುಸೈದಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ಹೊರಗಿನ ಯುರೋಪಿಯನ್ ರಾಷ್ಟ್ರಗಳ ರಾಯಭಾರಿಗಳ ಗುಂಪು, ಅಮೆರಿಕ, ಬ್ರೆಝಿಲ್ ಹಾಗೂ ಟರ್ಕಿ ದೇಶಗಳ ರಾಯಭಾರಿಗಳನ್ನು ಅವರು ಭೇಟಿ ಮಾಡಿ ಪ್ರಸ್ತುತ ಪರಿಸ್ಥಿತಿ ಮತ್ತು ಯುದ್ಧ ಅಂತ್ಯಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು ಎಂದು ಒಮಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಈಜಿಪ್ಟ್, ಇರಾಕ್ ಮತ್ತು ಜೋರ್ಡಾನ್ ದೇಶಗಳ ಗಲ್ಫ್ ಸಹಕಾರ ಮಂಡಳಿ (GCC) ರಾಜ್ಯಗಳ ರಾಯಭಾರಿಗಳೊಂದಿಗೆ ಎರಡನೇ ಸುತ್ತಿನ ಸಭೆಯನ್ನೂ ನಡೆಸಲಾಯಿತು. ಯುದ್ಧವನ್ನು ನಿಲ್ಲಿಸಲು ರಾಜಕೀಯ ಮತ್ತು ರಾಜತಾಂತ್ರಿಕ ಒತ್ತಡಗಳನ್ನು ಮುಂದುವರಿಸುವುದು ಹಾಗೂ ಅವನ್ನು ಇನ್ನಷ್ಟು ತೀವ್ರಗೊಳಿಸುವುದು ಅತ್ಯಂತ ಆದ್ಯತೆಯಾಗಿದೆ. ಜೊತೆಗೆ ಯುದ್ಧದಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ನಿಯಂತ್ರಿಸುವ ಬಗ್ಗೆ ಸಭೆಗಳಲ್ಲಿ ಚರ್ಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಯುದ್ಧವನ್ನು ಕೊನೆಗೊಳಿಸುವುದು ಎಲ್ಲರಿಗೂ ಸರ್ವೋಚ್ಚ ರಾಷ್ಟ್ರೀಯ ಹಾಗೂ ಅರಬ್ ರಾಷ್ಟ್ರಗಳ ಹಿತಾಸಕ್ತಿಯ ವಿಷಯವಾಗಿದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿ ವ್ಯಾಪಕ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಲ್ಬುಸೈದಿ ಒತ್ತಿ ಹೇಳಿದರು.
ಅಮೆರಿಕದ ಸೈನಿಕರನ್ನು ಸೆರೆಹಿಡಿದಿದ್ದೇವೆ ಎಂಬ ಇರಾನ್ ಹೇಳಿಕೆ ಸುಳ್ಳು: CENTCOM
ವಾಷಿಂಗ್ಟನ್, ಮಾ. 8: ಇರಾನ್ ಯಾವುದೇ ಅಮೆರಿಕದ ಸೈನಿಕರನ್ನು ಸೆರೆಹಿಡಿದಿಲ್ಲ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರು ಇರಾನ್ ಅಮೆರಿಕದ ಸೈನಿಕರನ್ನು ಸೆರೆಹಿಡಿದಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಕುರಿತು CENTCOM ಪ್ರತಿಕ್ರಿಯೆ ನೀಡಿದೆ. ‘ಅಮೆರಿಕನ್ ಸೈನಿಕರನ್ನು ಸೆರೆಹಿಡಿದಿರುವುದಾಗಿ ಇರಾನ್ ಆಡಳಿತ ಮಾಡಿರುವ ಹೇಳಿಕೆಗಳು ಅದರ ಸುಳ್ಳು ಮತ್ತು ವಂಚನೆಗಳಿಗೆ ಮತ್ತೊಂದು ಉದಾಹರಣೆ ಮಾತ್ರ’ ಎಂದು CENTCOM ವಕ್ತಾರರು ತಿಳಿಸಿದ್ದಾರೆ. ಈ ಕುರಿತು ಅವರು Al Jazeera ಅರೇಬಿಕ್ ಗೆ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮಾಡಿರುವ ಆರೋಪಗಳನ್ನು ಅಮೆರಿಕ ಸಂಪೂರ್ಣವಾಗಿ ತಳ್ಳಿಹಾಕಿದೆ.
ಉನ್ನತ ಶಿಕ್ಷಣದ ಕುರಿತು ಯಾವುದೇ ದೂರದರ್ಶಿತ್ವ, ಧ್ಯೇಯ ಇಲ್ಲದ ಬಜೆಟ್
ಶಿಕ್ಷಣಕ್ಕೆ 47,224 ಕೋಟಿ ರೂ.(ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು ಪರಿಗಣಿಸಿರುವ ಸರಕಾರ ಸಾರ್ವಜನಿಕ ಹೂಡಿಕೆಯಿಂದ ಹಂತ ಹಂತವಾಗಿ ಹಿಂದೆ ಸರಿಯುತ್ತಿದೆ. ಉನ್ನತ ಶಿಕ್ಷಣದ ಕುರಿತು ಹೇಳುವುದಾದರೆ ಬಜೆಟ್ ಹಂಚಿಕೆ ನಿರಾಶಾದಾಯಕವಾಗಿದೆ. ಉನ್ನತ ಶಿಕ್ಷಣಕ್ಕೆ ಬಜೆಟ್ ವೆಚ್ಚದ ಶೇ.2.1ರಷ್ಟು ಮಾತ್ರ ಹಂಚಿಕೆ ಮಾಡಿದ್ದಾರೆ. ಇದು ಈಗಿನ ಹಣಕಾಸಿನ ಕೊರತೆಗೆ ಯಾವುದೇ ರೀತಿಯಲ್ಲೂ ಪರಿಹಾರವಲ್ಲ. ಸಾರ್ವಜನಿಕ ಹೂಡಿಕೆ ಇಲ್ಲದೆ ಉನ್ನತ ಶಿಕ್ಷಣ ಉಳಿಸಲು ಸಾಧ್ಯವಿಲ್ಲ. ತಮಾಷೆಯೆಂದರೆ ಕಳೆದ 3 ವರ್ಷಗಳಿಂದ ಪ್ರತೀ ಬಜೆಟ್ನಲ್ಲಿಯೂ 2,000 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾ ಬರಲಾಗಿದೆ.ಇದುವರೆಗೂ ಅದರ ಆರಂಭಿಕ ಚಟುವಟಿಕೆಗಳು ಪ್ರಾರಂಭವಾಗಿಲ್ಲ. ಇದೊಂದು ಮರೆಮೋಸವಷ್ಟೆ. ಇಂದು 430 ಪದವಿ ಕಾಲೇಜುಗಳಲ್ಲಿ ಮಾನವಿಕ ವಿಭಾಗಗಳು ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿವೆ. ಖಾಸಗಿ ವಿವಿಗಳ ಲಿಬರಲ್ ಆರ್ಟ್ಸ್, ಬಹುಶಿಸ್ತೀಯ ವ್ಯಾಸಂಗ ಕ್ರಮದ ಎದುರು ತುಂಬಾ ಪೇಲವವಾಗಿ ಕಾಣುತ್ತಿದೆ. ಈ ಬಿಕ್ಕಟ್ಟನ್ನು ಸಮಗ್ರವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ಯಾವುದೇ ಕಾರ್ಯಯೋಜನೆ ಇಲ್ಲ.. 1,000 ವಿದ್ಯಾರ್ಥಿಗಳಿಗಿಂತ ಹೆಚ್ಚಿರುವ 50 ಪದವಿ ಕಾಲೇಜುಗಳ ಉನ್ನತೀಕರಣ. ಇದು ಬಾಯಿ ಮಾತಿನ ಹೇಳಿಕೆಯಷ್ಟೆ. ಇದಕ್ಕೆ ಯಾವುದೇ ನೀಲನಕ್ಷೆ ಇಲ್ಲ. ಆರು ತಿಂಗಳ ನಂತರ ಇದೇ ಉನ್ನತೀಕರಣದ ವಿಚಾರ ಎಲ್ಲಿಗೆ ಬಂದು ನಿಂತಿದೆ ಎಂದು ಕಾದು ನೋಡಿ ಪರಿಶೀಲಿಸಬಹುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್ಡಿಬಿ) ಮೂಲಕ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕರ್ಕೇರಾ, ರಾಯಚೂರು ಜಿಲ್ಲೆಯ ಅಂಬಾಪುರ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ಕೆಕೆಆರ್ಡಿಬಿ ಕಾರ್ಯಕ್ಷಮತೆ ತುಂಬಾ ನಿರಾಶಾದಾಯಕವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಯಾವುದೇ ಬಗೆಯ ರಚನಾತ್ಮಕ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಇದರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಇಂತಹ ಮಂಡಳಿಯಿಂದ ಹೊಸ ಪದವಿ ಕಾಲೇಜು ಸ್ಥಾಪನೆ ಮತ್ತು ನಿರ್ವಹಣೆ ಕುರಿತು ಭರವಸೆ ಇಲ್ಲ. ಆದರೆ ಕಾದು ನೋಡಬೇಕಿದೆ. ಸರಕಾರಿ ಪದವಿ ಕಾಲೇಜು ಹಾಗೂ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ಸೌಲಭ್ಯ ನೀಡಿರುವುದು ಸ್ವಾಗತಾರ್ಹ ವಾಗಿದೆ. ಆದರೆ, ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾನಿಲಯ ಪ್ರಾರಂಭಿಸಲು 25 ಎಕರೆ ಭೂಮಿ ಕೊಡುವ ಪ್ರಸ್ತಾವವು ಒಂದು ಹಗರಣ ಎಂದೇ ಕರೆಯಬೇಕಾಗುತ್ತದೆ. ಯಾಕೆಂದರೆ ಖಾಸಗಿ ಸಂಸ್ಥೆಗಳಿಗೆ ಸರಕಾರಿ ಜಮೀನು ಕೊಡುವುದು ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ ಮತ್ತು ಈ ರೀತಿ ಖಾಸಗಿಯವರಿಗೆ ಪ್ರೋತ್ಸಾಹಿಸುವುದು ಸಾಧಕವಲ್ಲ, ಬಾಧಕ ಎಂದು ವಿಷಾದದಿಂದ ಹೇಳಬೇಕಿದೆ. ಇನ್ನು ಹಾಸ್ಟೆಲ್ಗಳಿಗೆ ಅನುದಾನ ಮುಂತಾದವುಗಳು ಸಹಜವಾದ ಆಡಳಿತಾತ್ಮಕ ಕರ್ತವ್ಯಗಳು. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಆದರೆ, ರಾಜ್ಯ ಶಿಕ್ಷಣ ನೀತಿ ಕುರಿತು ಯಾವುದೇ ಪ್ರಸ್ತಾವವಿಲ್ಲ.ಸಂಶೋಧನೆ ಕುರಿತು ಸಮಗ್ರ ನೀತಿಯಿಲ್ಲ. ಇಲ್ಲಿ ರಾಜ್ಯ ಶಿಕ್ಷಣ ನೀತಿಯೂ ಇಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯೂ ಇಲ್ಲ. ಈ ಸರಕಾರದ ಅವಧಿ ಇನ್ನು ಎರಡು ವರ್ಷ ಮಾತ್ರ. ಥೋರಟ್ ಆಯೋಗ ಸಲ್ಲಿಸಿದ ಶಿಫಾರಸುಗಳ ವರದಿ ಮುಂಬರುವ ಆಗಸ್ಟ್ಗೆ ಒಂದು ವರ್ಷವಾಗುತ್ತದೆ. ಇದುವರೆಗೂ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲಿಲ್ಲ. ವಿಧಾನಮಂಡಲದ ಎರಡೂ ಸದನಗಳಲ್ಲಿಯೂ ಮಂಡಿಸಲಿಲ್ಲ. ಇದು ಬಿಡಿ ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆ ಮಾಡಲಿಲ್ಲ. ಈ ಬಾರಿ ಬಜೆಟ್ನಲ್ಲಿಯೂ ಪ್ರಸ್ತಾವವಿಲ್ಲ. ಇದು ಬೇಜವಾಬ್ದಾರಿಯಲ್ಲವೇ? ಇನ್ನುಳಿದ ಎರಡು ವರ್ಷಗಳಲ್ಲಿ ಈ ಎಸ್ಇಪಿ ಪರಾಮರ್ಶೆಯಾಗಿ, ಅಗತ್ಯವಿದ್ದರೆ ಸೂಕ್ತ ತಿದ್ದುಪಡಿಯಾಗಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಸಾಧ್ಯವೇ? ಇದ್ಯಾವುದೂ ಆಗದೆ 2028ರ ಚುನಾವಣೆಯಲ್ಲಿ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದರೆ, ಅದು ಎಸ್ಇಪಿಯನ್ನು ಖಂಡಿತಾ ತಿರಸ್ಕರಿಸುತ್ತದೆ. ಆಗ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯವೇನು? ರೋಹಿತ್ ವೇಮುಲಾ ಕಾಯ್ದೆ ಜಾರಿ ಕುರಿತು ಪ್ರಸ್ತಾವ ಸ್ವಾಗತಾರ್ಹ. ಆದರೆ ಇದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿ ಬೇಕು. ಏಕೆಂದರೆ ಕಳೆದ ಒಂದು ವರ್ಷದಿಂದ ಇದರ ಕುರಿತು ಸಾಕಷ್ಟು ಚರ್ಚೆ, ಸಂವಾದ ಮಾಡಿದ್ದೇವೆ. ಇಲ್ಲಿನ ಪ್ರಗತಿಪರ ಲೇಖಕರು, ನ್ಯಾಯವಾದಿಗಳು, ಪ್ರಾಧ್ಯಾಪಕರ ತಂಡವು ಸತತವಾಗಿ ಅಧ್ಯಯನ ಮಾಡಿ ಇದರ ಕರಡು ಪ್ರತಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಕ್ಯಾಬಿನೆಟ್ ಸಭೆಯಲ್ಲೂ ಇದರ ಕುರಿತು ಚರ್ಚೆ ನಡೆಸಲಿಲ್ಲ. ಕೇವಲ ಪ್ರಿಯಾಂಕ್ ಖರ್ಗೆಯವರು ಮಾತ್ರ ಇದರ ಕುರಿತು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಉನ್ನತ ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರು ಆಸಕ್ತಿ ತೋರಿಸುತ್ತಿಲ್ಲ. ಇದು ಕಳೆದ ಒಂದು ವರ್ಷದ ಬೆಳವಣಿಗೆ. ಈ ಬಾರಿಯಾದರೂ ಅನುಮೋದನೆ ದೊರಕಬಹುದು ನೋಡೋಣ. ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿರ್ಧಾರ ಮೇಲ್ನೋಟಕ್ಕೆ ಸ್ವಾಗತಾರ್ಹವಾದರೂ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲದೇ ಹೋದರೆ, ಸೈದ್ಧಾಂತಿಕ ಸ್ಪಷ್ಟತೆಯಿಲ್ಲದೇ ಹೋದರೆ ಕ್ಯಾಂಪಸ್ಗಳು ಎಬಿವಿಪಿಯ ಆಡುಂಬೊಲವಾಗುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆ ಉನ್ನತ ಶಿಕ್ಷಣದ ಕುರಿತು ಯಾವುದೇ ದೂರದರ್ಶಿತ್ವ ಮತ್ತು ಧ್ಯೇಯ (ವಿಷನ್ ಪ್ಯಾಶನ್) ಇಲ್ಲದ ಈ ಬಜೆಟ್ ಕೇವಲ ಕಾಮಗಾರಿಗಳ ಘೋಷಣೆಯಷ್ಟೆ. ವಾಸ್ತವದಲ್ಲಿ ಸರಕಾರವು ಉನ್ನತ ಶಿಕ್ಷಣದ ಜೊತೆಗೆ ಎಂಗೇಜ್ ಆಗಬೇಕು. ಆದರೆ ಈಗ ಕೇವಲ ಮಧ್ಯಸ್ಥಿಕೆ ವಹಿಸುತ್ತಿದೆ. ಇದು ಕೇವಲ ಫೈರ್ ಫೈಟಿಂಗ್ ಅಷ್ಟೇ.. ಅಥವಾ ಅದೂ ಅಲ್ಲ. ಜಾಗತಿಕವಾಗಿ ಉನ್ನತ ಶಿಕ್ಷಣ ಯಾವ ಹಂತದಲ್ಲಿದೆ? ನಾವೆಲ್ಲಿದ್ದೇವೆ ಎನ್ನುವ ಕನಿಷ್ಠ ಕಾಳಜಿಯೂ ಇಲ್ಲದೇ ಹೋದರೆ ಹೇಗೆ?
ಸೇಡಂ | ವಾರ್ತಾಭಾರತಿ ವರದಿ ಫಲಶ್ರುತಿ : ಮೂತ್ರಾಲಯಗಳ ಸ್ವಚ್ಛತಾ ಕಾರ್ಯ ಆರಂಭ
ಸೇಡಂ: ಪಟ್ಟಣ ಪುರಸಭೆ ಅವಧಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಸಾರ್ವಜನಿಕ ಮೂತ್ರಾಲಯಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ದುರ್ವಾಸನೆ ಬೀರುತ್ತಿವೆ ಎಂಬ ಸುದ್ದಿ ಫೆ.26ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಮೂತ್ರಾಲಯಗಳ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2024-25ನೇ ಸಾಲಿನಲ್ಲಿ ಆಗಿನ ಪುರಸಭೆ ವತಿಯಿಂದ ಲೋಹಾರಗಲ್ಲಿ, ಕೊಡ್ಲಾ ಕ್ರಾಸ್, ಬಸವೇಶ್ವರ ವೃತ್ತ, ಚಿಂಚೋಳಿ ಕ್ರಾಸ್, ಊಡಗಿ ರಸ್ತೆ, ಹಳೆ ತಹಶೀಲ್ದಾರ್ ಕಚೇರಿ ರಸ್ತೆ, ಐಟಿಐ ಕಾಲೇಜು ರಸ್ತೆ ಹಾಗೂ ತಾಲೂಕು ಕ್ರೀಡಾಂಗಣ ರಸ್ತೆ ಸೇರಿ ಒಟ್ಟು ಎಂಟು ಸ್ಥಳಗಳಲ್ಲಿ ಸಾರ್ವಜನಿಕ ಮೂತ್ರಾಲಯಗಳನ್ನು ನಿರ್ಮಿಸಲಾಗಿತ್ತು.ಆದರೆ ನಿರಂತರ ನಿರ್ವಹಣೆ ಇಲ್ಲದ ಕಾರಣ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ‘ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿರುವ ಮೂತ್ರಾಲಯಗಳು’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲೂಕು ಕ್ರೀಡಾಂಗಣ ಮುಖ್ಯರಸ್ತೆ, ಬಸವೇಶ್ವರ ವೃತ್ತ ಹಾಗೂ ತಹಶೀಲ್ದಾರ್ ಕಚೇರಿ ರಸ್ತೆಯ ಮೂತ್ರಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಉಳಿದ ಕಡೆಗಳಲ್ಲೂ ಸ್ವಚ್ಛ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಗರ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ ತಿಳಿಸಿದ್ದಾರೆ. ನಗರಸಭೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಸ್ವಾಗತ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ನಿಯಮಿತ ಸ್ವಚ್ಛತೆ ಹಾಗೂ ನಿರ್ವಹಣೆ ನಡೆಯಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಸಾರ್ವಜನಿಕ ಮೂತ್ರಾಲಯಗಳಲ್ಲಿ ನೀರಿನ ಪೂರೈಕೆ ಮತ್ತು ಪೈಪ್ಲೈನ್ ದುರಸ್ತಿಸಂಬಂಧಪಟ್ಟ ಅಧಿಕಾರಿಗಳಗಮನಕ್ಕೆ ತರಲಾಗುವುದು. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. -ಮಲ್ಲಿಕಾರ್ಜುನ, ಹಿರಿಯ ಆರೋಗ್ಯನಿರೀಕ್ಷಕರು, ಸೇಡಂ
Dubai | ವೈಮಾನಿಕ ದಾಳಿಯ ಅವಶೇಷ ವಾಹನದ ಮೇಲೆ ಬಿದ್ದು ವ್ಯಕ್ತಿ ಮೃತ್ಯು
ದುಬೈ, ಮಾ. 8: ದುಬೈ ನಗರದ ಬರ್ಷಾ ಪ್ರದೇಶದಲ್ಲಿ ವೈಮಾನಿಕ ದಾಳಿಯ ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ದುಬೈ ಮರೀನಾ ಪ್ರದೇಶದಲ್ಲಿರುವ ಗೋಪುರಗಳಲ್ಲಿ ಒಂದರ ಮುಂಭಾಗಕ್ಕೂ ದಾಳಿಯ ಅವಶೇಷಗಳು ಬಿದ್ದ ಘಟನೆ ನಡೆದಿದೆ. ಈ ಘಟನೆಯನ್ನು ಅಧಿಕಾರಿಗಳು ಯಶಸ್ವಿಯಾಗಿ ನಿಭಾಯಿಸಿದ್ದು, ಇದು ವೈಮಾನಿಕ ದಾಳಿಯ ಪರಿಣಾಮವಾಗಿರಬಹುದು ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ. ಈ ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮರೀನಾ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೆ ನೀಡಿದೆ. سقوط شظايا صاروخية على أحد الأبراج في منطقة دبي مارينا بدولة الإمارات مساء السبت، ما تسبّب في تصاعد ألسنة الدخان. pic.twitter.com/aGCekfzo2n — قناة الجزيرة (@AJArabic) March 7, 2026
ಇಸ್ರೇಲ್ ಗಾಗಿ ಬೇಹುಗಾರಿಕೆ ಆರೋಪ; ಕುದ್ಸ್ ಪಡೆ ಮುಖ್ಯಸ್ಥ ಇಸ್ಮಾಯಿಲ್ ಖಾನಿಗೆ ಗಲ್ಲು: ವರದಿ
ಟೆಹ್ರಾನ್, ಮಾ.7: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುಡ್ಸ್ ಪಡೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಖಾನಿಯನ್ನು ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಬಂಧಿಸಿ ಗಲ್ಲಿಗೇರಿಸಲಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮ ಹಾಗೂ ಕೆಲವು ಅರಬ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಟೆಹ್ರಾನ್ ಧೃಡಪಡಿಸಿಲ್ಲ. ಅರಬ್ ಮಾಧ್ಯಮ ವರದಿಗಳ ಪ್ರಕಾರ, ಖಾನಿಯನ್ನು ಬೇಹುಗಾರಿಕೆಯ ಶಂಕೆಯಲ್ಲಿ IRGC ಬಂಧಿಸಿ ಗಲ್ಲಿಗೇರಿಸಿರಬಹುದು ಎಂದು ಹೇಳಲಾಗಿದೆ. ಎಮಿರೇಟ್ಸ್ ಮೂಲದ ‘ದಿ ನ್ಯಾಷನಲ್’ ಮಾಧ್ಯಮವು ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಹೇಳಿಕೆಗಳು ಹರಿದಾಡುತ್ತಿರುವುದಾಗಿ ವರದಿ ಮಾಡಿದೆ. ಕುದ್ಸ್ ಪಡೆ ಮುಖ್ಯಸ್ಥರಾಗಿರುವ ಖಾನಿ ಕಳೆದ ಹಲವು ವರ್ಷಗಳಿಂದ ವಿವಿಧ ವದಂತಿಗಳ ಕೇಂದ್ರಬಿಂದುವಾಗಿದ್ದಾರೆ. ತನ್ನ ಸುತ್ತಲಿನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡ ಅನೇಕ ಹತ್ಯೆ ಪ್ರಯತ್ನಗಳಿಂದ ಬದುಕುಳಿದಿರುವುದರಿಂದ ಅವರಿಗೆ ‘ಒಂಭತ್ತು ಜನರ ಜೀವಗಳನ್ನು ಬಲಿ ಪಡೆದ ವ್ಯಕ್ತಿ’ ಎಂಬ ಹೆಸರೂ ಪ್ರಚಲಿತದಲ್ಲಿದೆ ಎಂದು ವರದಿಗಳು ಹೇಳುತ್ತವೆ. ಇತ್ತೀಚೆಗೆ ಇರಾನ್ ನ ಸರ್ವೋಚ್ಚ ನಾಯಕ ಆಯತಲ್ಲಾ ಅಲಿ ಖಾಮಿನೈ ಹಾಗೂ ಹಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸಾವಿಗೀಡಾದ ದಾಳಿಯಲ್ಲಿ ಖಾನಿ ಮೃತಪಟ್ಟಿಲ್ಲ ಎಂಬ ವರದಿಗಳು ಹೊರಬಂದಿದ್ದವು. ಮಾಹಿತಿಗಳ ಪ್ರಕಾರ, ದಾಳಿ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಅವರು ಆ ಸ್ಥಳವನ್ನು ತೊರೆದಿದ್ದರು ಎಂದು ಹೇಳಲಾಗಿದೆ. ಖಾನಿ ದಾಳಿಗಳಿಂದ ಪಾರಾಗಿರುವುದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸಾವಿಗೀಡಾದ ಅನೇಕ ಉನ್ನತ ನಾಯಕರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರಿಂದ ಅವರ ಬಗ್ಗೆ ಅನುಮಾನಗಳು ಹೆಚ್ಚಾಗಿದ್ದವು. ಅಕ್ಟೋಬರ್ 2024ರಲ್ಲಿ ಖಾನಿ ಸಾವಿಗೀಡಾದರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೂ, ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ನಂತರ ಅವರು ಇರಾನ್ ನ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ನಡೆದ 12 ದಿನಗಳ ಯುದ್ಧದ ವೇಳೆಯೂ ಹಲವಾರು ಮಾಧ್ಯಮಗಳು ಖಾನಿ ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಬಳಿಕ ಅವರು ಮತ್ತೆ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡು ಆ ವರದಿಗಳಿಗೆ ತೆರೆ ಎಳೆದಿದ್ದರು. ಇಸ್ರೇಲಿ ಕ್ಷಿಪಣಿಗಳ ದಾಳಿಗೆ ಗುರಿಯಾದ ಕೆಲವು ಸ್ಥಳಗಳಲ್ಲಿ ಖಾನಿ ಅಪಾಯವಿಲ್ಲದೆ ಪಾರಾಗಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ತನ್ನ ನಿರಪರಾಧಿತ್ವವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದರು ಎಂದು ವರದಿಗಳು ಹೇಳುತ್ತವೆ. ಇದರ ನಡುವೆ, ಮೊಸಾದ್ ನೇಮಕ ಮಾಡಿಕೊಂಡ ಆಂತರಿಕ ಏಜೆಂಟ್ ಒಬ್ಬರು ಖಾಮಿನೈ ಮೃತದೇಹದ ವಿಡಿಯೊವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಳುಹಿಸಿದ್ದಾನೆ ಎಂಬ ಹೇಳಿಕೆಗಳೂ ಕೇಳಿಬಂದಿದ್ದವು. ಈ ಘಟನೆ ಬಳಿಕ ಖಾನಿ ಕುರಿತು ಮತ್ತಷ್ಟು ಊಹಾಪೋಹಗಳು ಹೆಚ್ಚಾಗಿದ್ದವು. 2025ರಲ್ಲಿ ಮೊಸಾದ್ಗೆ ಸಂಬಂಧಿಸಿದೆ ಎನ್ನಲಾದ ಖಾತೆಯೊಂದರಿಂದ ಪ್ರಕಟವಾದ ಚಿತ್ರದಲ್ಲಿ ಖಾನಿ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಸುಳಿವು ನೀಡಲಾಗಿತ್ತು. ಚಿತ್ರಕ್ಕೆ ಲಗತ್ತಿಸಲಾದ ಶೀರ್ಷಿಕೆಯಲ್ಲಿ ಅವರು ಇಸ್ರೇಲಿ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಖಾನಿ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ, ತನ್ನ ಸ್ಥಳವನ್ನು ಪತ್ತೆಹಚ್ಚಲು ಇಸ್ರೇಲ್ ನಡೆಸಿದ ಪ್ರಯತ್ನಗಳ ಭಾಗವಾಗಿಯೇ ಈ ಆರೋಪಗಳು ಹರಡಲಾಗುತ್ತಿವೆ ಎಂದು ಹೇಳಿದ್ದಾರೆ. ಮೊಸಾದ್ ಗೆ ಸಂಬಂಧಿಸಿದೆ ಎನ್ನಲಾದ ಮತ್ತೊಂದು ಸಾಮಾಜಿಕ ಮಾಧ್ಯಮ ಖಾತೆಯು ಕೂಡ ಅದೇ ವರ್ಷ ಖಾನಿ ಗೂಢಚಾರನಲ್ಲ ಎಂದು ಹೇಳಿಕೊಂಡಿತ್ತು. ಇದೀಗ ಇಸ್ರೇಲ್ ಹೆಜ್ಬೊಲ್ಲಾ ನಾಯಕತ್ವದ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಭವನೀಯ ಭದ್ರತಾ ಉಲ್ಲಂಘನೆಗಳ ಕುರಿತು ಇರಾನ್ ಅಧಿಕೃತ ತನಿಖೆ ಆರಂಭಿಸಿದೆ ಎಂಬ ವರದಿಗಳು ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಖಾನಿಯನ್ನು ಮೊಸಾದ್ ಏಜೆಂಟ್ ಎಂಬ ಅನುಮಾನದಲ್ಲಿ ಐಆರ್ಜಿಸಿ ಬಂಧಿಸಿ ಗಲ್ಲಿಗೇರಿಸಿದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭಿಸಿವೆ. ಆದರೆ ಈ ಎಲ್ಲ ಹೇಳಿಕೆಗಳನ್ನು ಟೆಹ್ರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಅಮೆರಿಕ 2020ರ ಜನವರಿಯಲ್ಲಿ ಕುದ್ಸ್ ಪಡೆಯ ಹಿಂದಿನ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಹತ್ಯೆ ಮಾಡಿದ ಬಳಿಕ ಇಸ್ಮಾಯಿಲ್ ಖಾನಿ ಕುಡ್ಸ್ ಪಡೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಇರಾನ್ ನಿಂದ ಕ್ಷಿಪಣಿ–ಡ್ರೋನ್ ದಾಳಿ ಬೆದರಿಕೆ: ಯುಎಇ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯ
ನಿವಾಸಿಗಳಿಗೆ ಸಾಮಾನ್ಯ ಚಟುವಟಿಕೆ ಪುನರಾರಂಭಿಸಬಹುದು ಎಂದು ಅಲರ್ಟ್ ಸಂದೇಶ
ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ
ಮೈಸೂರು: ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು HD ಕೋಟೆಯ ಶಿರಮಹಳ್ಳಿಯಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ನೂತನ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದರು. HD ಕೋಟೆಯ ಶಿರಮಹಳ್ಳಿಯ ಜನರು ದೈವಭಕ್ತರು. ದೇಗುಲದಲ್ಲಿ ಸ್ಥಾಪಿಸುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಬಸವಾದಿ ಶರಣರು, ದೇವರು ಎಲ್ಲೆಡೆಯೂ , ಎಲ್ಲರಲ್ಲಿಯೂ ಇದ್ದಾನೆ ಎಂದಿದ್ದರು. ನಮ್ಮ ಪ್ರಾರ್ಥನೆಯಲ್ಲಿ ಇತರರ ಒಳಿತನ್ನೂ ಕೇಳಬೇಕಾಗಿದ್ದು, ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಯಾವ ಜಾತಿಧರ್ಮಗಳು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದೇ ತಿಳಿಸುತ್ತದೆ ಎಂದರು. ಜಾತಿಧರ್ಮಗಳ ಮರೆತು ಜನರು ಒಗ್ಗಟ್ಟಾಗಬೇಕು: ಸಮಾಜದ ಪಟ್ಟಭದ್ರಹಿತಾಸಕ್ತಿಗಳು , ಸಮಾಜದ ಜಾತಿವ್ಯವಸ್ಥೆ ಹಾಗೂ ಅಸಮಾನತೆಗಳನ್ನು ಬೆಂಬಲಿಸುತ್ತಾರೆ. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕುಶಕ್ತಿಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಇಂದು ಲಕ್ಷ್ಮೀ ದೇಗುಲದ ಉದ್ಘಾಟನೆಯನ್ನು ಜಾತ್ರೆಯ ರೀತಿಯಲ್ಲಿ ಆಯೋಜಿಸಿರುವುದು ಸಂತಸದ ವಿಚಾರ. ಜಾತಿಧರ್ಮಗಳ ಬೇಧ ಮರೆದು ಜನರು ಒಗ್ಗಟ್ಟಾಗುವ ಅವಶ್ಯಕತೆ ಹಿಂದಿಂದೆಗಿಂತಲೂ ಹೆಚ್ಚಿದೆ ಎಂದರು. ಜನರ ಆಶೀರ್ವಾದದಿಂದ ಹೆಚ್ಚು ಆಯವ್ಯಯಗಳನ್ನು ಮಂಡಿಸಿದ್ದೇನೆ: ಶಿರಮಳ್ಳಿಯ ಜನರ ಪ್ರೀತಿಯಿಂದ ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಅಭಿನಂದನೆಗಳು. ಶಿರಮಳ್ಳಿ ಗ್ರಾಮ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಆಶೀರ್ವಾದದಿಂದ ಕರ್ನಾಟಕದ ಇತಿಹಾಸದಲ್ಲಿ ಹೆಚ್ಚು ಆಯವ್ಯಯವನ್ನು ಮಂಡಿಸಿದ ಸಾಧನೆ ಸಾಧ್ಯವಾಗಿದೆ. ಶಿರಮಳ್ಳಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರು ರಾಜ್ಯದ ಜನರಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಚಿತ್ತಾಪುರ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು : ಪಾಟೀಲ್
ಚಿತ್ತಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು. ಪಟ್ಟಣದ ಹೊರವಲಯದ ಮಳಖೇಡ ರಸ್ತೆಯಲ್ಲಿರುವ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಗ್ರೇಟ್ ಇಂಡಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷರರು ನೀಡುತ್ತಾರೆ. ಅದರ ಜೊತೆಗೆ ಮನೆಯಲ್ಲಿ ಪಾಲಕರಾದವರು ಕೂಡ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದು ಅಷ್ಟೇ ಮುಖ್ಯ ಎಂದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು. ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಕಲಿಯಬೇಕು ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿದರು.ಇದೇ ವೆಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಪ-ನಿರ್ದೇಶಕ ಕಚೇರಿಯ ವಿ.ಎಂ.ಪತ್ತಾರ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಕರಬಸಪ್ಪ ಮಾಲಿ ಪಾಟೀಲ್, ನಿವೃತ ಮುಖ್ಯಗುರು ಯಶವಂತರಾವ್ ಬಿರಾದಾರ್, ಸಂಸ್ಥೆಯ ಸಂಸ್ಥಾಪಕ ವಿಜಯಕುಮಾರ ಹಂಚಿನಾಳ, ಅಧ್ಯಕ್ಷ ಪ್ರಕಾಶ ಹಂಚಿನಾಳ, ಸಂಸ್ಥೆ ಕಾರ್ಯದರ್ಶಿ ಪ್ರಶಾಂತ್ ಪಾಟೀಲ್, ಆಡಳಿತಾಧಿಕಾರಿ ಶೃತಿ ಪಾಟೀಲ್, ಮುಖ್ಯಗುರ ಗುರುರಾಜ ರಾವೂರ ವೇದಿಕೆಯಲ್ಲಿದ್ದರು. ಕಾರ್ಯಮಕ್ರದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೇಟ್ಟಿ, ರಮೇಶ ಬಟಗೇರಿ, ಶಿವಮುದ್ರಪ್ಪ ಸಣ್ಣೂರಕರ, ಡಿ.ಕೆ.ಪಾಟೀಲ್, ಡಾ.ದಾವೂದ ಪಟೇಲ್, ರಾಜಶೇಖರ ತಿಮ್ಮನಾಯಕ್, ರಾಜಶೇಖರ ಬಳ್ಳಾ, ರವಿ ಅಬ್ಬಿಗೇರಿ, ವಿರಸಂಗಪ್ಪ ಸುಲೇಗಾಂವ, ಶೃತಿ ಡಿ. ಹೆಬ್ಬಾಳ, ಕಾವೇರಿ ದರಪುರ್ ಇದ್ದರು. ಶಿಕ್ಷಕ ಜೋಸೇಫ್ ನಿರೂಪಿಸಿದರು. ನಾಗರತ್ನ ವಂದಿಸಿದರು.
ಬಿಡಿಎ ಅಧಿಕಾರಿಗೆ 4 ಪ್ರತ್ಯೇಕ ಪ್ರಕರಣಗಳಲ್ಲಿ 1ಲಕ್ಷ ರೂ.ದಂಡ ವಿಧಿಸಿದ ಮಾಹಿತಿ ಆಯೋಗ
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ್ದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ 4 ಪ್ರತ್ಯೇಕ ಪ್ರಕರಣಗಳಲ್ಲಿ 1 ಲಕ್ಷ ರೂ. ದಂಡ ವಿಧಿಸಿದೆ. ಅದೇ ರೀತಿ ಮತ್ತೊಬ್ಬ ಅಧಿಕಾರಿಗೆ ಪ್ರಕರಣವೊಂದರಲ್ಲಿ ಮಾಹಿತಿ ನೀಡದಿದ್ದಕ್ಕಾಗಿ 25ಸಾವಿರ ರೂ ದಂಡ ವಿಧಿಸಿದೆ. ಬಿಡಿಎ ಉಪಕಾರ್ಯದರ್ಶಿ-1 ಉಮೇಶ್ ಅವರೇ ಮಾಹಿತಿ ಆಯೋಗದಿಂದ 1ಲಕ್ಷ ರೂ.ದಂಡನೆಗೆ ಒಳಗಾದ ಅಧಿಕಾರಿ. ಅದೇ ರೀತಿ ಬಿಡಿಎ ಕಾರ್ಯದರ್ಶಿ ಸಿ.ಎಲ್.ಶಿವಕುಮಾರ್ಗೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಆಯೋಗ 25 ಸಾವಿರ ರೂ.ದಂಡ ಹಾಕಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಕಾಯ್ದೆಯ ಕಲಂ 4ರ ಅನ್ವಯ ತಮ್ಮ ಪ್ರಾಧಿಕಾರಗಳ ಹೊಣೆಗಾರಿಕೆಯನ್ನು ಕಾಲಕಾಲಕ್ಕೆ ನಿರ್ವಹಿಸಿದ ಕುರಿತು ತಮ್ಮ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ನಿರ್ವಹಿಸಿರಬೇಕು. ಈ ಬಗ್ಗೆ ದೇಶದ ಸುಪ್ರೀಂ ಕೋರ್ಟ್ ಮಾಹಿತಿ ಹಕ್ಕು ಕಾಯ್ದೆಯ ಕಲಂ 4ನ್ನು ಜಾರಿಗೊಳಿಸಿ, ನಿರ್ವಹಿಸಬೇಕು, ಕಾಲಕಾಲಕ್ಕೆ ಪರಿಷ್ಕರಿಸಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ತೀರ್ಪು ನೀಡಿತ್ತು. ಕಾಯ್ದೆ ಜಾರಿಯಾಗಿ 20ವರ್ಷ ಕಳೆದರೂ ಇನ್ನೂ ಹಲವು ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆಯ ಕಲಂ 4 (1)(ಎ)ಮತ್ತು (ಬಿ)ಯನ್ನು ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿತ್ತು. ಅದನ್ನು ಪಾಲಿಸುವುದು ಕಡ್ಡಾಯ ಆಗಿದ್ದರೂ ಇನ್ನೂ ಅಧಿಕಾರಿಗಳು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ಆಯೋಗ ಅಧಿಕಾರಿಗೆ ದಂಡ ವಿಧಿಸಿದೆ. ಬಿಡಿಎ ಉಪಕಾರ್ಯದರ್ಶಿಗೆ ಕಚೇರಿಯಲ್ಲಿ ಆರ್ಟಿಐ ಕಾಯ್ದೆಯ ಕಲಂ 4ರ ನಿರ್ವಹಣೆ ಕುರಿತಂತೆ ನಾಲ್ವರು ಅರ್ಜಿದಾರರು ತಮ್ಮ ಪ್ರತ್ಯೇಕ ಅರ್ಜಿಗಳಲ್ಲಿ ಮಾಹಿತಿ ಕೋರಿದ್ದರು. ಅರ್ಜಿದಾರರು ಸಲ್ಲಿಸಿದ ಕೋರಿಕೆಗೆ ಯಾವುದೇ ಮಾಹಿತಿ ನೀಡದೇ, ಉಪಕಾರ್ಯದರ್ಶಿ ಉಮೇಶ್ ನಿರ್ಲಕ್ಷ್ಯ ತೋರಿದ್ದರು. ಈ ಬಗ್ಗೆ ಅರ್ಜಿದಾರರಾದ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ. ಮತ್ತು ಬಾಲಚಂದ್ರ ರಾವ್ ಎಂಬುವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಉಮೇಶ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೂ, ಸದರಿ ಅಧಿಕಾರಿಯವರು ಅರ್ಜಿದಾರರಿಗೆ ಮಾಹಿತಿ ಒದಗಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25ಸಾವಿರ ರೂ.ನಂತೆ 1 ಲಕ್ಷ ರೂ.ದಂಡ ವಿಧಿಸಿದೆ. ಅಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸಿರುವ ಉಮೇಶ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಮತ್ತೊಂದು ಪ್ರಕರಣದಲ್ಲಿ, ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತಂತೆ ಸರಕಾರದ ಆದೇಶದ ಪ್ರತಿಯನ್ನು ಕೋರಿ, ಸುರೇಶ್ ಚಂದ್ರ ಬಾಬು ಎಂಬುವರು, ಬಿಡಿಎ ಕಾರ್ಯದರ್ಶಿ ಶಿವಕುಮಾರ್ಗೆ ಅರ್ಜಿ ಸಲ್ಲಿಸಿದ್ದರು. ಶಿವಕುಮಾರ್ ಕೂಡ ಅರ್ಜಿದಾರರು ಕೋರಿರುವ ದಾಖಲೆ ಒದಗಿಸಿಲ್ಲ. ಹೀಗಾಗಿ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಮಾಹಿತಿ ನೀಡದ ಶಿವಕುಮಾರ್ಗೆ 25ಸಾವಿರ ರೂ.ದಂಡ ವಿಧಿಸಿದೆ. ಒಂದು ವೇಳೆ ಅರ್ಜಿದಾರರು ಕೋರಿರುವ ದಾಖಲೆಯನ್ನು ತಕ್ಷಣ ನೀಡದಿದ್ದಲ್ಲಿ ಶಿವಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡುವುದು ಎಂದು ಎಚ್ಚರಿಕೆ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಆಯೋಗವು ತಿಳಿಸಿದೆ.
Bengaluru | ಲೋಕಾಯುಕ್ತ ದಾಳಿ ಪ್ರಕರಣ: ಬಿಡಿಎ ಅಧಿಕಾರಿಯ ಬಳಿ 3 ಕೋಟಿ ರೂ. ಗೂ ಅಧಿಕ ಸಂಪತ್ತು
ಬೆಂಗಳೂರು: ನಿಗದಿತ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು, ಬಿಡಿಎ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ನಾಲ್ಕು ಸ್ಥಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಪತ್ತು ಪತ್ತೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ವಲಯ ಅರಣ್ಯಾಧಿಕಾರಿ ಎ.ಎಲ್.ದಾಳೇಶ್ ಅವರ ನಿವಾಸ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಶೋಧನಾ ಕಾರ್ಯ ಕೈಗೊಂಡರು. ಈ ವೇಳೆ ಎ.ಎಲ್.ದಾಳೇಶ್ಗೆ ಸಂಬಂಧಿಸಿದಂತೆ 3 ನಿವೇಶನಗಳು, 2 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ, 17 ಎಕರೆ 20 ಗುಂಟೆ ಕೃಷಿ ಜಮೀನು ಸೇರಿ ಒಟ್ಟು ಮೌಲ್ಯ 2,70,30,000 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾದರೆ, 1.35 ಲಕ್ಷ ರೂ. ನಗದು, 13 ಲಕ್ಷ ಮೌಲ್ಯದ ಚಿನ್ನಾಭರಣ, 34.50 ಲಕ್ಷ ಮೌಲ್ಯದ ವಾಹನಗಳು ಚರ ಆಸ್ತಿ ಒಳಗೊಂಡತೆ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಪತ್ತು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟನೆ ತಿಳಿಸಿದೆ.
2ನೇ ವಾರಕ್ಕೆ ಕಾಲಿಟ್ಟ ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕದಿಂದ ಇಸ್ರೇಲ್ಗೆ 12 ಸಾವಿರ ಬಾಂಬ್ ಮಾರಾಟ
Middle East War- ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಮರ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸಾವುನೋವುಗಳ ಸಂಖ್ಯೆ 1,600 ದಾಟಿದೆ. ಏತನ್ಮಧ್ಯೆ ಇಸ್ರೇಲ್ಗೆ ತುರ್ತಾಗಿ 12 ಸಾವಿರ ವೈಮಾನಿಕ ಬಾಂಬ್ಗಳನ್ನು ಪೂರೈಸಲು ಅಮೆರಿಕದ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ. ಇತ್ತ ಇರಾನ್ನ ಪರಮಾಣು ಕೇಂದ್ರ ಹಾಗೂ ಲೆಬನಾನ್ನ ಹೆಜ್ಬೊಲ್ಲಾ ನೆಲೆಗಳ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಪ್ರತಿಯಾಗಿ ಇರಾನ್ ಯುಎಇ ಮತ್ತು ಸೌದಿಯಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.
ಬ್ಯಾಂಕ್ನಲ್ಲಿ ಗ್ರಾಹಕನ ಕೊಂದು 15 ಲಕ್ಷ ದರೋಡೆ ಮಾಡಿದ್ದ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
2012ರಲ್ಲಿ ಕಾರ್ಪೋರೇಷನ್ ಬ್ಯಾಂಕಿನ ಚಿಕ್ಕಬಾಣಾವರ ಶಾಖೆಯಲ್ಲಿ ನಡೆದಿದ್ದ ಘಟನೆ
2026ರ ಟಿ20 ವಿಶ್ವಕಪ್ ಫೈನಲ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ?: ಸಾಮಾಜಿಕ ಜಾಲತಾಣಗಳಲ್ಲಿ ವದಂತಿ!
ICC T20 World Cup 2026 - ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿರುವ ಭಾರತ Vs ನ್ಯೂಜಿಲೆಂಡ್ ಫೈನಲ್ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲದಿರುವುದು, ವಯಸ್ಸು, ಫಾರ್ಮ್ ಸಮಸ್ಯೆ, ಯುವ ಆಟಗಾರರ ಪೈಪೋಟಿ ಕಾರಣಗಳಿಂದಾಗಿ ತಂಡದಲ್ಲಿ ಸ್ಥಾನ ನೀಡುವುದು ಬಿಸಿಸಿಐಗೆ ಸಹ ಕಷ್ಟವಾಗಬಹುದು. ಈ ಕಾರಣಕ್ಕಾಗಿ ಅವರು ನಿವೃತ್ತಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಏನಿದ್ದರೂ ಫೈನಲ್ ಪಂದ್ಯದ ಬಳಿಕವೇ ತಿಳಿಯಲಿದೆ.
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಆರೋಪ: ಸಂತ್ರಸ್ತೆಯನ್ನು ತಾಯಿಯ ಸುಪರ್ದಿಗೆ ವಹಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಸ್ವಂತ ಮಗಳನ್ನು ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಆರೋಪ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಲ್ಪಟ್ಟ ಸಂತ್ರಸ್ತೆಯನ್ನು ತಾಯಿಯ ಸುಪರ್ದಿಗೆ ವಹಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ವ್ಯಾಜ್ಯದ ವಿಷಯವು ಅಪರಾಧದ ಬಗ್ಗೆ ಅಥವಾ ಸರ್ಕಾರ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಸಂತ್ರಸ್ತೆ ಮತ್ತು ಇತರರ ಹೇಳಿಕೆಗಳು ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾಳೆ ಎಂಬುದನ್ನು ಮೇಲ್ನೋಟಕ್ಕೆ ಸೂಚಿಸುತ್ತವೆ. ವೇಶ್ಯಾವಾಟಿಕೆ ದಂಧೆಯಿಂದ ಸಂತ್ರಸ್ತೆಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಕೇಂದ್ರದ ವಶದಲ್ಲಿರಿಸಿದ್ದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಾಳೆ ಎಂಬ ಆರೋಪಗಳಿವೆ. ಇಂಥ ಸಂದರ್ಭದಲ್ಲಿ ಮಗುವನ್ನು ತಾಯಿಯ ವಶಕ್ಕೆ ನೀಡಬಾರದು ಎಂಬ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರ ವಾದ ಸರಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸುವಾಗ ತಾಯಿಯ ಹೆಸರನ್ನು ಹೇಗೆ ಕೈಬಿಡಲಾಗಿದೆ ಎಂಬುದು ಅರ್ಥವಾಗದ ವಿಷಯವಾಗಿದೆ. ಮೇಲ್ನೋಟಕ್ಕೆ ಆಕೆ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎಂಬ ಬಲವಾದ ಅನುಮಾನವಿದ್ದರೂ ಸಹ, ದೋಷಾರೋಪ ಪಟ್ಟಿಯಲ್ಲಿ ಆಕೆಯ ಹೆಸರನ್ನು ಪೊಲೀಸರು ಹೇಗೆ ಬಿಡಲು ಸಾಧ್ಯ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸಂತ್ರಸ್ತೆಯನ್ನು ಅರ್ಜಿದಾರರ ವಶಕ್ಕೆ ನೀಡುವ ಬದಲು ಆಕೆಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಮಾನವ ಕಳ್ಳ ಸಾಗಣೆ ಪ್ರಕರಣಗಳಲ್ಲಿ ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಅನೈತಿಕ ಸಾಗಣೆ (ತಡೆ) ಕಾಯ್ದೆ ಸೆಕ್ಷನ್ 17(2)ರ ಅಡಿಯಲ್ಲಿ ವಿಚಾರಣೆ ನಡೆಸಲು ಅವಕಾಶವಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯ ವಯಸ್ಸು, ನಡತೆ, ಹಿನ್ನೆಲೆ ಮತ್ತು ಆ ವ್ಯಕ್ತಿಯ ಪಾಲನೆಯನ್ನು ವಹಿಸಿಕೊಳ್ಳಲು ಅವರ ಪೋಷಕರು, ಪೋಷಕರು ಅಥವಾ ಪತಿ ಸೂಕ್ತವೇ ಎಂಬುದನ್ನು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬೇಕಾಗುತ್ತದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಅವರ ಪೋಷಕರು, ಪತಿ ಅಥವಾ ಪೋಷಕರಿಗೆ ಒಪ್ಪಿಸುವ ಆದೇಶವನ್ನು ಹೊರಡಿಸುವ ಮೊದಲು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುವುದನ್ನು ಸೆಕ್ಷನ್ 17ಎ ಕಡ್ಡಾಯಗೊಳಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ದೆಹಲಿ ಮತ್ತು ಬಾಂಬೆ ಹೈಕೋರ್ಟ್ಗಳ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಮ್ಯಾಜಿಸ್ಟ್ರೇಟ್ ಅವರು ಸೆಕ್ಷನ್ 17(2)ರ ಅಡಿಯಲ್ಲಿ ಮೊದಲ ಬಾರಿಗೆ ಹಾಜರುಪಡಿಸಿದಾಗಲೇ ಅವರ ವಯಸ್ಸನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆ ವ್ಯಕ್ತಿ 18 ವರ್ಷದೊಳಗಿನವರಾಗಿದ್ದು, ಕಾನೂನಿನ ಸಂಘರ್ಷಕ್ಕೊಳಪಟ್ಟ ಬಾಲಾಪರಾಧಿಯಾಗಿದ್ದರೆ ಬಾಲನ್ಯಾಯ ಮಂಡಳಿಗೆ ಅಥವಾ ಆ ವ್ಯಕ್ತಿಯು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವಾಗಿದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಹೇಳಿದೆ. ಮೇಲಿನ ತೀರ್ಪುಗಳ ಆಧಾರದಲ್ಲಿ, ತನ್ನ ಮಗಳನ್ನೇ ವೇಶ್ಯಾವಾಟಿಕೆ ದಂದೆಯಲ್ಲಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಲಾದ ತಾಯಿಗೆ ಮಗುವನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯಾವುದೇ ವಿಚಾರಣಾ ಅರ್ಹತೆ (ಮೆರಿಟ್) ಹೊಂದಿರದ ಕಾರಣ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆ ಸಂತ್ರಸ್ತೆಯ ತಾಯಿಯಾಗಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಒಂದರಿಂದ ಸಂತ್ರಸ್ತೆಯನ್ನು ರಕ್ಷಿಸಲಾಗಿತ್ತು. ಸರ್ಕಾರ ಆಕೆಯನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಿತ್ತು. ಈ ಮಧ್ಯೆ, ಮಗಳಿಗೆ 18 ವರ್ಷ ತುಂಬಿರುವುದರಿಂದ ಆಕೆಯನ್ನು ತನ್ನ ಸುಪರ್ದಿಗೆ ವಹಿಸುವಂತೆ ಕೋರಿ ಆಕೆಯ ತಾಯಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 18 ವರ್ಷ ತುಂಬಿದವರನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಲು ಸಾಧ್ಯವಿಲ್ಲ. ಆದ್ದರಿಂದ, ಮಗಳನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂಬುದು ತಾಯಿಯ ವಾದವಾಗಿತ್ತು. ಆದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಳು ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆಕೆಯ ಅರ್ಜಿ ತಿರಸ್ಕರಿಸಿತ್ತು. ಇದರಿಂದ, ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ
ಚಿನ್ನ.. ಚಿನ್ನ.. ಅಂತಾ ಚಿನ್ನದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೊಂದಿದ್ದ ಆಭರಣ ಪ್ರಿಯರು ಈಗ ಚಿನ್ನ ಖರೀದಿ ಮಾಡುವುದು ಬಿಡಿ ಬಂಗಾರ ಕನಸಲ್ಲಿ ಬಂದರೂ ಭಯಪಡುವ ವಾತಾವರಣ ನಿರ್ಮಾಣ ಆಗಿದೆ. ಏಕೆಂದರೆ ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಸಾಗಿದ್ದು, ಇನ್ನೇನು ಬರೋಬ್ಬರಿ 2,00,000 ರೂಪಾಯಿ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದೇ ಕಾರಣಕ್ಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ. ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್ ಪವನ್, ಧನರಾಜ್, ನಂದೀಶ್ ಮತ್ತು ವಿ. ವಿನಯ್ಗೆ ಜಾಮೀನು ಮಂಜೂರು ಮಾಡಿ ನಗರದ 56ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2024ರ ಡಿಸೆಂಬರ್ 23ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು (ರಾಜ್ಯ ಸರ್ಕಾರ) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಮಾರ್ಚ್ 6) ವಿಚಾರಣೆ ನಡೆಸಿತು. ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಪ್ರಕರಣವು ಅತ್ಯಂತ ಹೀನವಾಗಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಈ ನಾಲ್ವರು ಆರೋಪಿಗಳಿಗೆ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರಿಂಕೋರ್ಟ್ ಆದೇಶವಿರುವುದು ನಿಜ. ಆದರೆ, ಅರ್ಜಿದಾರರಿಗೆ ಜಾಮೀನು ರದ್ದುಪಡಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿ ಕುರಿತಂತೆ ಪರಿಶೀಲನೆ ನಡೆಸಬೇಕಿದೆ. ಅರ್ಜಿ ಸಂಬಂಧ ಆರೋಪಿಗಳ ಪರ ವಕೀಲರು ತಮ್ಮ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿತು. ಮುಂದುವರಿದು, ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದೇನಿಲ್ಲ. ಕೋರ್ಟ್ ಮೆಟ್ಟಿಲೇರಿದ ಎಲ್ಲ ಕೊಲೆ ಪ್ರಕರಣಗಳನ್ನು ಒಂದೇ ರೀತಿ ತಾಳೆ ಹಾಕಲಾಗದು. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸಿದರೆ, ಸಂವಿಧಾನದಲ್ಲಿ ಕೊಡಮಾಡಲಾಗಿರುವ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದಿಲ್ಲವೇ? ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇರುತ್ತದೆ. ಜಾಮೀನು ರದ್ದತಿ ವಿಚಾರವವು ಮೂಲಭೂತ ಹಕ್ಕು ಆದ ಜೀವಿಸುವ ಹಕ್ಕಿಗೆ ಸಂಬಂಧಪಟ್ಟಿರುತ್ತದೆ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಜಾಮೀನು ಅರ್ಜಿಗಳ ಕುರಿತು ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಹೈಕೋರ್ಟ್ಗೆ ಇರುತ್ತದೆ. ಆದ ಮಾತ್ರಕ್ಕೆ ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾತಿ ಆದೇಶ ಎತ್ತಿಹಿಡಿಯಲಾಗುತ್ತದೆ ಎಂದರ್ಥವಲ್ಲ. ವಿಶೇಷವಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ನ್ಯಾಯಾಲಯವೂ ಅದರ ಪ್ರಭಾವಕ್ಕೂ ಒಳಗಾಗಬೇಕಿಲ್ಲ ಎಂದು ಮೌಖಿಕವಾಗಿ ಹೇಳಿತು. ಅಂತಿಮವಾಗಿ ಅರ್ಜಿ ಕುರಿತು ಲಿಖಿತ ಆಕ್ಷೇಪಣೆ/ ವಾದಾಂಶ ಸಲ್ಲಿಸುವಂತೆ ಪ್ರತಿವಾದಿಯಾಗಿರುವ ನಾಲ್ವರೂ ಆರೋಪಿಗಳಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು.
ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಅಭ್ಯರ್ಥಿ, ಅವರನ್ನು ಮತ್ತೆ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ
ಮೂಡೂರು - ಪಡೂರು ಜೋಡುಕರೆ ಕಂಬಳ
ರಿಯಾದ್, ಮಾ. 7: ಸೌದಿ ಅರೇಬಿಯಾದ ರಿಯಾದ್ ನ ಆಗ್ನೇಯ ಭಾಗದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯತ್ತ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ಜನವಸತಿಯಿಲ್ಲದ ಪ್ರದೇಶದಲ್ಲಿ ಬಿದ್ದಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಕುರಿತು ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಅಧಿಕೃತ ವಕ್ತಾರರು, ಕ್ಷಿಪಣಿ ಪತನದಿಂದ ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿಯನ್ನುಂಟಾಗಿಲ್ಲ ಎಂದು ಹೇಳಿದ್ದಾರೆ. ರಿಯಾದ್ನ ಆಗ್ನೇಯದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯು ಸೌದಿ ಅರೇಬಿಯಾ ಹಾಗೂ ಅಮೆರಿಕದ ಸೇನಾ ಪಡೆಗಳು ಕಾರ್ಯಾಚರಣೆ ನಡೆಸುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ ಎಂದು Aljazeera ವರದಿ ಮಾಡಿದೆ.
ಮಾ.8ರಿಂದ ಮಂಗಳೂರು - ಜಿದ್ದಾ - ಮಸ್ಕತ್ ವಿಮಾನ ಯಾನ ಪುನರಾರಂಭ
ಮಂಗಳೂರು, ಮಾ.7: ಮಂಗಳೂರು - ಜೆದ್ದಾ ಮತ್ತು ಮಂಗಳೂರು - ಮಸ್ಕತ್ ಮಧ್ಯೆ ಮಾ.8ರಿಂದ ವಿಮಾನ ಯಾನ ಪುನರಾರಂಭಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಮಂಗಳೂರಿನಿಂದ ಜೆದ್ದಾಕ್ಕೆ ಐಎಕ್ಸ್ 845 ವಿಮಾನ ಮುಂಜಾವ 5:20ಕ್ಕೆ ನಿಗದಿಯಾಗಿತ್ತು. ಆದರೆ ಅದು ಬೆಳಗ್ಗೆ 9ಕ್ಕೆ ನಿರ್ಗಮಿಸುವ ಸಾಧ್ಯತೆ ಇದೆ. ಐಎಕ್ಸ್ 846 ವಿಮಾನವು ಜೆದ್ದಾದಿಂದ ಹೊರಟು ಮಂಗಳೂರಿಗೆ ಸಂಜೆ 6:20ಕ್ಕೆ ತಲುಪುವ ಬಗ್ಗೆ ಸಮಯ ನಿಗದಿಯಾಗಿದ್ದರೂ ಅದು ರಾತ್ರಿ 10ಕ್ಕೆ ಮಂಗಳೂರು ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾ.8ರಂದು ಬೆಳಗ್ಗೆ 9:25ಕ್ಕೆ ಮಂಗಳೂರಿನಿಂದ ಮಸ್ಕತ್ಗೆ ಏರ್ಇಂಡಿಯಾ ವಿಮಾನ ತೆರಳಲಿದೆ. ಮಸ್ಕತ್ನಿಂದ ಮಂಗಳೂರಿಗೆ ಸಂಜೆ 5:25ಕ್ಕೆ ಏರ್ಇಂಡಿಯಾ ವಿಮಾನ ಆಗಮಿಸಲಿದೆ. *ಮಾ.8ರಂದು ರಾತ್ರಿ 8ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಚರಿಸಲಿದೆ. *ಮಾ.8ರ ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು (ಐಎಕ್ಸ್ 832), ಮಂಗಳೂರು -ದುಬೈ (ಐಎಕ್ಸ್ 813), ಮಾ.9ರ ದುಬೈ-ಮಂಗಳೂರು (ಐಎಕ್ಸ್ 814), ಮಾ.8ರ ಮಂಗಳೂರು-ಬಹರೈನ್ (ಐಎಕ್ಸ್ 841), ಮಾ.9ರ ಬಹರೈನ್- ಮಂಗಳೂರು (ಐಎಕ್ಸ್ 842), ಮಾ.8ರ ಮಂಗಳೂರು-ಅಬುಧಾಬಿ (ಐಎಕ್ಸ್815), ಮಾ.9ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳವಳಿ ಬಲಗೊಳ್ಳಲಿ: ತೀಸ್ತಾ ಸೆಟಲ್ವಾಡ್
ಹಾಸನ: ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ರಾಜಕೀಯ ಹಾಗೂ ದೌರ್ಜನ್ಯಗಳ ವಿರುದ್ಧ ಮಹಿಳಾ ಚಳವಳಿಗಳು ಇನ್ನಷ್ಟು ಬಲವಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮಹಿಳಾ ಚಳವಳಿಗಳು ಹಲವು ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯುತ್ತಿವೆ. ಜಾತಿಯ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ಹಾಗೂ ಮುಸ್ಲಿಮ್ ಮಹಿಳೆಯರ ವಿರುದ್ಧ ಅವಮಾನಕಾರಿ ನಡೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮೇಲೂ ದಾಳಿಗಳು ಹೆಚ್ಚುತ್ತಿರುವುದಾಗಿ ಅವರು ಉಲ್ಲೇಖಿಸಿದರು. ಜಾಗತಿಕ ಮಟ್ಟದಲ್ಲಿಯೂ ಯುದ್ಧ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯದ ಪರಿಣಾಮವಾಗಿ ಸಾಮಾನ್ಯ ಜನರು, ವಿಶೇಷವಾಗಿ ಮಕ್ಕಳು ಬಲಿಯಾಗುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು. ರಮಝಾನ್ ಸಂದರ್ಭದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬನ ಹತ್ಯೆ ನಡೆದಿರುವ ಘಟನೆ ಉಲ್ಲೇಖಿಸಿದ ಅವರು, ಇಂತಹ ದ್ವೇಷಪರ ಘಟನೆಗಳ ವಿರುದ್ಧ ಮಹಿಳಾ ಚಳವಳಿಗಳು ದೃಢವಾಗಿ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ವತಂತ್ರವಾಗಿ ದುಡಿಯಲು ಹಾಗೂ ಪ್ರಶ್ನಿಸಲು ಮಹಾತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ ಮೆಂಟ್ ಗ್ಯಾರಂಟಿ ಆಕ್ಟ್ ಯೋಜನೆ ಮಾನಸಿಕ ಬಲ ನೀಡಿತ್ತು. ಆದರೆ ಈಗ ವಿವಿಧ ಕಾರಣಗಳಿಂದ ಈ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸಬಿತಾ ಬನ್ನಾಡಿ, ಅನುಪಮ ಮಾತನಾಡಿದರು. ತೀಸ್ತಾ ಸೆಟಲ್ವಾಡ್ ಅವರಿಗೆ ಕೌದಿ ಹೊದಿಸಿ ಗೌರವಿಸಲಾಯಿತು. ಸಮಾವೇಶಕ್ಕೂ ಮುನ್ನ ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ ಕೋಲಾಟ ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ ‘ಹಾಸನ ಮಣ್ಣಿನ ಹೆಣ್ಣು ಧ್ವನಿಗಳು’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು. ಸಮಾವೇಶದ ಅಧ್ಯಕ್ಷತೆಯನ್ನು ಸಾಹಿತಿ ರೂಪ ಹಾಸನ್ ವಹಿಸಿದ್ದರು. ವೇದಿಕೆಯಲ್ಲಿ ಮಮತಾ ನಿರಂಜನ, ಬಾ.ಹ. ರಮಾ, ಅರ್ಚನಾ ಜಯಂತ್, ಪ್ರಭಾವತಿ ದೇಸಾಯಿ, ಸುಜಾತ ಕುಮಾರಸ್ವಾಮಿ, ಶಾನು ಸುಹಾನ ಸಹಿ ಅನೇಕ ಮಹಿಳಾ ನಾಯಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಶಬಾನ ಮೈಸೂರು ಮತ್ತು ಕೆ.ಬಿ.ಮನು ನಿರ್ವಹಿಸಿದರು. ಮಾಧ್ಯಮಗಳ ಕಾರ್ಪೊರೇಟೀಕರಣದಿಂದ ಅಲ್ಪಸಂಖ್ಯಾತರ ಪ್ರಶ್ನೆಗಳು ಹಿಮ್ಮೆಟ್ಟುತ್ತಿವೆ ಎಂದು ಆರೋಪಿಸಿದ ಅವರು, ಕೆಲವು ಮಾಧ್ಯಮಗಳು ಮುಸ್ಲಿಮ್ ಮಹಿಳೆಯರನ್ನು ತಪ್ಪಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿವೆ. ದಾಖಲೆಗಳ ಹೆಸರಿನಲ್ಲಿ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. -ತೀಸ್ತಾ ಸೆಟಲ್ವಾಡ್, ನಾಗರಿಕ ಹಕ್ಕುಗಳ ಹೋರಾಟಗಾರ್ತಿ
ಸಮಾಜದ ಕಟ್ಟಕಡೆಯ ಜನಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಸರಕಾರದ ಗುರಿ: ಸಿಎಂ ಸಿದ್ದರಾಮಯ್ಯ
ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಮುಖ್ಯಮಂತ್ರಿ ಆಗಮನ
2023ರ ಗಲಭೆ ಪ್ರಕರಣ | ತೆಹ್ರಿಕೆ ಇನ್ಸಾಫ್ ಪಕ್ಷದ 47 ಮಂದಿಗೆ 10 ವರ್ಷ ಜೈಲು
ಇಸ್ಲಾಮಾಬಾದ್, ಮಾ.7: 2023ರ ಮೇ 9ರಂದು ನಡೆದ ಹಿಂಸಾಚಾರ ಹಾಗೂ ದೊಂಬಿ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ ಪಕ್ಷದ 47 ನಾಯಕರು ಹಾಗೂ ಅವರ ಬೆಂಬಲಿಗರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ಪಾಕ್ ರೂ. ದಂಡವನ್ನು ವಿಧಿಸಿದೆ. ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರ ಬಂಧನದ ಬಳಿಕ ಪಿಟಿಐ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಾಕ್ನಾದ್ಯಂತ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಉದ್ರಿಕ್ತ ಪ್ರತಿಭಟನಕಾರರು ರಾವಲ್ಪಿಂಡಿಯಲ್ಲಿ ಸೇನಾ ವರಿಷ್ಠರ ಮಹಾಕಾರ್ಯಾಲಯದ ಮೇಲೆ ದಾಳಿಗೂ ಪ್ರಯತ್ನಿಸಿದ್ದರು. ಘಟನೆ ನಡೆದ ಬೆನ್ನಲ್ಲೇ ರಾವಲ್ಪಿಂಡಿಯ ಆರ್.ಎ. ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಟಿಐ ಬೆಂಬಲಿಗರ ವಿರುದ್ಧ ದಂಗೆ, ಮುತ್ತಿಗೆ ಹಾಕುವಿಕೆ, ದಾಂಧಲೆ, ಪೊಲೀಸರ ಮೇಲೆ ದಾಳಿ ಹಾಗೂ ಸರಕಾರಿ ಸೊತ್ತಿಗೆ ಹಾನಿ, ಅದರಲ್ಲೂ ಸೇನಾ ವರಿಷ್ಠರ ಪ್ರಧಾನ ಕಾರ್ಯಾಲಯದ ಪ್ರವೇಶದ್ವಾರ, ಹಂಝಾ ಕ್ಯಾಂಪ್, ಸೇನಾ ಮ್ಯೂಜಿಯಂ ಹಾಗೂ ಮೆಟ್ರೋ ನಿಲ್ದಾಣದ ಮೇಲೆ ದಾಳಿ ನಡೆಸಿದ ಆರೋಪಗಳನ್ನು ಹೊರಿಸಲಾಗಿತ್ತು. ಈ 47 ಆರೋಪಿಗಳನ್ನು ಈಗಾಗಲೇ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿತ್ತು.
ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆ: ಮಮತಾ ಬ್ಯಾನರ್ಜಿ ಘೋಷಣೆ
ಕೋಲ್ಕತಾ, ಮಾ. 7: ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭ ಚುನಾವಣಾ ಆಯೋಗ ಮತದಾರರ ಹೆಸರನ್ನು ದೊಡ್ಡ ಸಂಖ್ಯೆಯಲ್ಲಿ ಅಳಿಸಿರುವುದನ್ನು ವಿರೋಧಿಸಿ ನಡೆಸಿದ ಧರಣಿಯಲ್ಲಿ ಅವರು ಈ ಘೋಷಣೆ ಮಾಡಿದರು. ಹತ್ತನೇ ತರಗತಿ ಉತ್ತೀರ್ಣರಾದ 21 ರಿಂದ 40 ವರ್ಷಗಳ ನಡುವಿನ ಯುವಕರು ಹಾಗೂ ಯುವತಿಯರು ಇಂದಿನಿಂದ (ಮಾರ್ಚ್ 7ರಿಂದ) ತಿಂಗಳಿಗೆ 1,500 ರೂ. ಭತ್ಯೆ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಈ ನೆರವು ಎಪ್ರಿಲ್ನಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅದು ಈಗ ತತ್ಕ್ಷಣ ಪ್ರಾರಂಭಿಸಲಾಗಿದೆ ಎಂದು ಬ್ಯಾನರ್ಜಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ, ರಾಜ್ಯದ ಅಭಿವೃದ್ಧಿಗಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಜೆಟ್ ಕುರಿತು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಮಂಡಿಸಿರುವ 2026-27 ನೇ ಸಾಲಿನ ಬಜೆಟ್ ದೂರ ದೃಷ್ಟಿ ಇರುವ ಬಜೆಟ್. ಬಡವರು, ಹಿಂದುಳಿದವರು, ದಲಿತರ ಪರವಾಗಿ ಇರುವ ಬಜೆಟ್ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಸಾಲ ಮಾಡಿರೋದೇ ಸಾಧನೆ ಅಂತಾ ಹೇಳ್ತೀರಲ್ಲ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಮಾಡಿರೋದೇನು? ಸಿದ್ದರಾಮಯ್ಯ ಅವರು ಮಾಡಿರೋ ಸಾಲ 2.86 ಲಕ್ಷ ಕೋಟಿ. ಆದರೆ 4 ವರ್ಷದಲ್ಲಿ ಬಿಜೆಪಿ ಮಾಡಿದ ಸಾಲ 4 ಲಕ್ಷ 48 ಸಾವಿರ ಕೋಟಿ. ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಜೆಟ್ ಮಂಡನೆಯಾದರೆ ಅತ್ತ ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಖಾಲಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರು ತೋರಿಸಿರೋ ಚೊಂಬು ಕೇಂದ್ರ ಬಜೆಟ್ ವಿರುದ್ಧ ಎಂದು ಲಕ್ಷ್ಮಣ್ ಟೀಕಿಸಿದರು. ಮೈಸೂರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರಲ್ವಾ? ಈ ಬಾರಿ ಮೈಸೂರಿಗೆ 27 ಯೋಜನೆ ಕೊಟ್ಟಿದ್ದಾರೆ. ತಾಲೂಕುವಾರು 15 ಯೋಜನೆ ಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ. ಕೊಟ್ಟಿದ್ದಾರೆ ಎಂದರು. ರಾಜ್ಯಕ್ಕೆ ನಯಾ ಪೈಸೆ ತರುವ ಯೋಗ್ಯತೆ ಬಿಜೆಪಿಯವರಿಗೆ ಇಲ್ಲ. ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ತಲೆ ಬುಡ ಇಲ್ಲದೇ ಮಾತಾಡ್ತಾರೆ. ವಿರೋಧ ಪಕ್ಷದ ನಾಯಕರನ್ನು ರಾಜ್ಯದ ಜನರು ಜೋಕರ್ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಶಿವಣ್ಣ, ಗಿರೀಶ್, ಮಾಧ್ಯಮ ವಕ್ತಾರ ಎಂ.ಮಹೇಶ್ ಉಪಸ್ಥಿತರಿದ್ದರು.
ಇದು ಮಾನವೀಯ ಕೆಲಸ; ಇರಾನ್ ನ ಹಡಗು ನಿಲ್ಲಲು ಭಾರತ ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡ ಜೈಶಂಕರ್
ಹೊಸದಿಲ್ಲಿ, ಮಾ. 7: ಹಿಂದೂ ಮಹಾಸಾಗರದಲ್ಲಿ ತಾಂತ್ರಿಕ ಸಮಸ್ಯೆ ವರದಿಯಾದ ಬಳಿಕ ಇರಾನ್ ನೌಕಾಪಡೆಯ ಹಡಗಿಗೆ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಲು ಭಾರತ ಅನುಮತಿ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ. ಈ ವಲಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ನಿರ್ಧಾರವನ್ನು ಮಾನವೀಯ ಪ್ರತಿಕ್ರಿಯೆ ಎಂದು ಅವರು ವಿವರಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ‘ರೈಸಿನಾ ಡಯಲಾಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್ ನೆರವು ಕೋರಿದ ಬಳಿಕ ಇರಾನ್ನ ಹಡಗು ಐರಿಸ್ ಲಾವನ್ಗೆ ಲಂಗರು ಹಾಕಲು ಭಾರತ ಅನುಮತಿ ನೀಡಿದೆ ಎಂದು ವಿವರಿಸಿದರು. ಫೆಬ್ರವರಿ 15ರಿಂದ ಫೆಬ್ರವರಿ 26ರ ವರೆಗೆ ನಡೆದ ‘ಅಂತರರಾಷ್ಟ್ರೀಯ ಹಡಗು ಪರಿಶೀಲನೆ’ ಹಾಗೂ ಮಿಲನ್ 2026ರಲ್ಲಿ ಇರಾನ್ನ ಪಾಲ್ಗೊಳ್ಳುವಿಕೆಯ ಭಾಗವಾಗಿ ಈ ಹಡಗು ಈ ವಲಯದಲ್ಲಿ ಕಾರ್ಯಾಚರಿಸುತ್ತಿತ್ತು. ಜೈಶಂಕರ್ ಅವರ ಪ್ರಕಾರ, ಐರಿಸ್ ಲಾವನ್ ಭಾರತದ ಜಲಭಾಗದಲ್ಲಿ ಸಂಚರಿಸುತ್ತಿದ್ದಾಗ ತೊಂದರೆ ಎದುರಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ಭಾರತವನ್ನು ಸಂಪರ್ಕಿಸಿದೆ. ಭಾರತ ಈ ಮನವಿಗೆ ಮಾರ್ಚ್ 1ರಂದು ಒಪ್ಪಿಗೆ ನೀಡಿದೆ. ಎಂದು ಬ್ಯಾನರ್ಜಿ ಹೇಳಿದರು.
ಅಮೆರಿಕ ದಾಳಿಯಲ್ಲಿ ಇರಾನ್ನ 42 ನೌಕಾಪಡೆ ಹಡಗುಗಳ ಧ್ವಂಸ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಮಾ.7: ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ನ ಸೇನಾ ಸಾಮರ್ಥ್ಯಕ್ಕೆ ಗಣನೀಯ ಹಾನಿಯಾಗಿದ್ದು, ಈ ದಾಳಿಯಿಂದ ಇರಾನ್ನ ನೌಕಾಪಡೆ, ವಾಯುಪಡೆ ಮತ್ತು ಸಂವಹನ ಮೂಲಭೂತ ಸೌಕರ್ಯಗಳು ತೀವ್ರವಾಗಿ ಹಾನಿಗೀಡಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇತ್ತೀಚಿನ ದಿನಗಳಲ್ಲಿ ಅಮೆರಿಕ ಸೇನಾಪಡೆಯು ಇರಾನ್ನ 42 ಯುದ್ಧನೌಕೆಗಳನ್ನು ಧ್ವಂಸಗೊಳಿಸಿದೆ ಹಾಗೂ ಇರಾನ್ನ ಬಹುತೇಕ ವಾಯುಪಡೆ ಶಕ್ತಿ ಮತ್ತು ದೂರಸಂಪರ್ಕ ವ್ಯವಸ್ಥೆಗಳನ್ನು ನಾಶಗೊಳಿಸಿದೆ ಎಂದು ತಿಳಿಸಿದ್ದಾರೆ. ಇರಾನ್ನ ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸೌಕರ್ಯಗಳ ಮೇಲೆ ಈ ಹಿಂದೆ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಗಳು ನಡೆಯುವುದಕ್ಕೂ ಮುನ್ನ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವ ಹಂತಕ್ಕೆ ಸಮೀಪಿಸಿತ್ತು ಎಂದು ಅವರು ಹೇಳಿದ್ದಾರೆ. ಈ ಕಾರ್ಯಾಚರಣೆ ಮಹತ್ವದ ಯಶಸ್ಸಾಗಿದ್ದು, ಇರಾನ್ನ ಸೇನಾ ಸಾಮರ್ಥ್ಯಗಳಿಗೆ ಈ ದಾಳಿಗಳು ನಿರ್ಣಾಯಕ ಹೊಡೆತ ನೀಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತಕ್ಕಿಲ್ಲ ಇನ್ನು ಇಂಧನ ಕೊರತೆ ಭೀತಿ: ಆಸ್ಪ್ರೇಲಿಯಾ, ಕೆನಡಾದಿಂದ ಹೆಚ್ಚುವರಿ ಕಚ್ಚಾತೈಲ ಪೂರೈಸುವ ಭರವಸೆ
Middle East Conflict- ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹರ್ಮುಜ್ ಜಲಸಂಧಿ ಬಂದ್ ಆಗಿದ್ದರೂ, ಭಾರತದ ಇಂಧನ ಭದ್ರತೆಗ ಯಾವುದೇ ರೀತಿಯ ಧಕ್ಕೆ ಎದುರಾಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತ ಪೂರೈಕೆ ಜಾಲವನ್ನು ಇದೀಗ ವಿಸ್ತರಿಸಿಕೊಂಡಿದೆ. ನೆರೆರಾಷ್ಟ್ರ ಪಾಕಿಸ್ತಾನ, ಜರ್ಮನಿ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದರೂ, ಭಾರತದಲ್ಲಿ ತೈಲ ಬೆಲೆ ಸ್ಥಿರವಾಗಿರುವುದು ವಿಶೇಷ. ಆದರೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕ್ರಮಗಳಿಂದಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿಲ್ಲ.
Shubman Gill: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭಕ್ಕೆ ಟೀಂ ಇಂಡಿಯಾ ತಂಡದ ನಾಯಕ ಶುಭ್ಮನ್ ಗಿಲ್ ಹಾಜರಾಗದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭ
ಎಎಫ್ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿ | ಭಾರತವನ್ನು 11–0 ಗೋಲಿನಿಂದ ಸೋಲಿಸಿದ ಜಪಾನ್
ಪರ್ತ್ (ಆಸ್ಟ್ರೇಲಿಯ), ಮಾ. 7: ಎಎಫ್ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿಯಲ್ಲಿ ಶನಿವಾರ ಜಪಾನ್ ತಂಡವು ಭಾರತವನ್ನು 11–0 ಗೋಲುಗಳ ಅಂತರದಿಂದ ಸೋಲಿಸಿದೆ. ಆಸ್ಟ್ರೇಲಿಯದ ಪರ್ತ್ ರೆಕ್ಟಾಂಗ್ಯುಲರ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಯಾವುದೇ ಪ್ರತಿರೋಧ ತೋರಿಸಲು ವಿಫಲರಾದರು. ಇದು ಈ ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯ ಮಹಿಳೆಯರ ಎರಡನೇ ಅತಿ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು, 2003ರ ಆವೃತ್ತಿಯಲ್ಲಿ ಚೀನಾ ಮಹಿಳೆಯರು ಭಾರತವನ್ನು 12–0 ಗೋಲುಗಳ ಅಂತರದಿಂದ ಸೋಲಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ್ತಿ ಹಿನಟ ಮಿಯಝಾವ ಮತ್ತು ವೆಸ್ಟ್ ಹ್ಯಾಮ್ ಯುನೈಟೆಡ್ ತಂಡದ ಆಟಗಾರ್ತಿ ರಿಕೊ ಯೂಕಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಜಪಾನ್ ತಂಡದ ನಾಯಕಿ ಯೂ ಹಸೆಗವ ಮತ್ತು ಕಿಕೊ ಸೈಕೆ ತಲಾ ಅವಳಿ ಗೋಲುಗಳನ್ನು ಬಾರಿಸಿದರು. ಮಾಯಾ ಹಿಜಿಕಟ ಒಂದು ಗೋಲು ದಾಖಲಿಸಿದರು. 2011ರ ಫಿಫಾ ವಿಶ್ವಕಪ್ ಚಾಂಪಿಯನ್ ಜಪಾನ್ 78 ಶೇಕಡಾ ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿತ್ತು. ಅದು ಗೋಲುಗಳಿಗಾಗಿ 36 ಪ್ರಯತ್ನಗಳನ್ನು ಮಾಡಿತು. ಭಾರತ ಗೋಲಿಗಾಗಿ ಒಂದೂ ಪ್ರಯತ್ನವನ್ನು ಮಾಡಲಿಲ್ಲ.
ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳ ಸ್ವದೇಶ ಪ್ರಯಾಣಕ್ಕೆ ವಿಶೇಷ ವಿಮಾನ
ಮುಂಬೈ, ಮಾ. 7: ಪಶ್ಚಿಮ ಏಶ್ಯದಲ್ಲಿ ನೆಲೆಸಿರುವ ಸಂಘರ್ಷ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ಸ್ವದೇಶ ಪ್ರಯಾಣಕ್ಕೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ವಿಶೇಷ ವಿಮಾನಗಳ ಏರ್ಪಾಡು ಮಾಡಿದೆ. ಈ ತಂಡಗಳು ವಾರಾಂತ್ಯದಲ್ಲಿ ತಮ್ಮ ದೇಶಗಳಿಗೆ ಪ್ರಯಾಣಿಸಲಿವೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ವಾಯು ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ತನ್ನ ನೆರೆ ದೇಶಗಳ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಗಳಿಂದಾಗಿ ಪಶ್ಚಿಮ ಏಶ್ಯ ತತ್ತರಿಸಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಇಂಗ್ಲೆಂಡ್ ತಂಡದ ಸದಸ್ಯರು ಶನಿವಾರ ಸಂಜೆ ವಿಶೇಷ ವಿಮಾನವೊಂದರಲ್ಲಿ ಸ್ವದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂಬುದಾಗಿ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಗುರುವಾರ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಸೋಲನುಭವಿಸಿತ್ತು. ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕ ತಂಡಗಳ ಅಭಿಯಾನ ಕೊನೆಗೊಂಡಿದ್ದರೂ, ವಿಮಾನ ಹಾರಾಟ ಸ್ಥಗಿತದ ಹಿನ್ನೆಲೆಯಲ್ಲಿ ಅವುಗಳೂ ಭಾರತದಲ್ಲೇ ಉಳಿದುಕೊಂಡಿವೆ. ಕೋಲ್ಕತಾದಲ್ಲಿ ರವಿವಾರ ನಡೆದ ಸೂಪರ್ ಎಂಟು ಪಂದ್ಯದಲ್ಲಿ ಭಾರತದ ವಿರುದ್ಧ ಸೋಲುವ ಮೂಲಕ ವೆಸ್ಟ್ ಇಂಡೀಸ್ನ ಅಭಿಯಾನ ಕೊನೆಗೊಂಡಿತ್ತು. ಬುಧವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋತ ಬಳಿಕ ದಕ್ಷಿಣ ಆಫ್ರಿಕದ ಅಭಿಯಾನ ಕೊನೆಗೊಂಡಿತ್ತು. ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಇನ್ನೊಂದು ವಿಶೇಷ ವಿಮಾನದಲ್ಲಿ ಕೋಲ್ಕತಾದಿಂದ ಜೊತೆಯಾಗಿ ಪ್ರಯಾಣಿಸಲಿದ್ದಾರೆ. ಎರಡು ತಂಡಗಳು ಮೊದಲು ಜೊಹಾನ್ಸ್ಬರ್ಗ್ಗೆ ಪ್ರಯಾಣಿಸಲಿವೆ. ಅಲ್ಲಿಂದ ವೆಸ್ಟ್ ಇಂಡೀಸ್ ಆಟಗಾರರು ಆಂಟಿಗಾಗೆ ಪ್ರಯಾಣವನ್ನು ಮುಂದುವರಿಸಲಿದ್ದಾರೆ. ಈ ವಿಮಾನವು ರವಿವಾರ ಕೋಲ್ಕತಾದಿಂದ ಹೊರಡುವ ನಿರೀಕ್ಷೆಯಿದೆ.
38ನೇ ಕಳ್ತೂರು ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಾರ್ವಜನಿಕ ರುದ್ರಭೂಮಿ ನಿರ್ಮಾಣ: ಮಾ.8ರಂದು ಲೋಕಾರ್ಪಣೆ
ಉಡುಪಿ, ಮಾ.7: ಹೆಬ್ರಿಗೆ ಸಮೀಪದ ಗ್ರಾಮೀಣ ಪ್ರದೇಶವಾದ 38ನೇ ಕಳ್ತೂರು ಸಂತೆಕಟ್ಟೆಯಲ್ಲಿ ದಾನಿಗಳ ನೆರವಿನಿಂದಲೇ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣ ಗೊಂಡಿದ್ದು ಮಾ.8ರಂದು ರವಿವಾರ ಇದು ಲೋಕಾರ್ಪಣೆಗೊಳ್ಳಲಿದೆ. ಕಳ್ತೂರು ಸಂತೆಕಟ್ಟೆಯಲ್ಲಿ ಈ ಮೊದಲು ಸ್ಮಶಾನ ಇದ್ದಿರಲಿಲ್ಲ. ದೂರದ ಕೊಕ್ಕರ್ಣೆ, ಹೆಬ್ರಿಗೆ ಇದಕ್ಕಾಗಿ ಹೋಗ ಬೇಕಿತ್ತು. ಕಳ್ತೂರು ಸಂತೆಕಟ್ಟೆಯಲ್ಲೂ ಸುಸಜ್ಜಿತವಾದ ರುದ್ರಭೂಮಿಯನ್ನು ನಿರ್ಮಿಸುವ ಸಂಕಲ್ಪ ಈಗ ಈಡೇರಿದೆ. ‘ನಮ್ಮೂರಿನ ಜನರಲ್ಲಿ ಇನ್ನೂ ಕೂಡ ಸ್ಮಶಾನದ ಬಗೆಗೆ ಭಯವಿದೆ. ಹಾಗಾಗಿ ಸ್ಮಶಾನ ಪುಣ್ಯದ ಭೂಮಿ ಎಂಬ ಪರಿಕಲ್ಪನೆಯಲ್ಲಿ ಜನರ ಭಯ ದೂರವಾಗಿಸಲು ಭವ್ಯವಾಗಿ ಸಕಲ ವ್ಯವಸ್ಥೆಯೊಂದಿಗೆ ರುದ್ರಭೂಮಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದೇವೆ’ ಎಂದು 38ನೇ ಕಳ್ತೂರು ಸಂತೆಕಟ್ಟೆಯ ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರುಧ್ರಭೂಮಿ ನಿರ್ಮಾಣದ ರೂವಾರಿ ಬಿ.ಚಂದ್ರಶೇಖರ ಶೆಟ್ಟಿ ತಿಳಿಸಿದರು. 78 ಸೆನ್ಸ್ ಜಾಗವನ್ನು ಸಾರ್ವಜನಿಕ ಹಿಂದೂ ರುದ್ರಭೂಮಿಗಾಗಿಯೇ ಕಾದಿರಿಸಿ ಆದೇ ಜಾಗದಲ್ಲಿ ಸಾರ್ವಜನಿಕ ಹಿಂದೂ ಭೂಮಿಯನ್ನು ನಿರ್ಮಿಸ ಲಾಗಿದೆ. 2005ರಿಂದ 2010 ರ ತನಕ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸ್ಮಶಾನ ನಿರ್ಮಾಣದ ಕನಸು ಕಂಡಿದ್ದೆ. 2021ರಲ್ಲಿ ಸದಸ್ಯನಾಗಿ ಸ್ಮಶಾನ ನಿರ್ಮಾಣಕ್ಕೆ ವಿಶೇಷ ಯೋಜನೆಯನ್ನು ಸಿದ್ಧಪಡಿಸಿ ದಾನಿಗಳಲ್ಲಿ ಮೂಲಕ ಈ ಯೋಜನೆ ಇದೀಗ ಕಾರ್ಯಗತಗೊಂಡಿರುವುದು ಸಂತೋಷ ತಂದಿದೆ ಎಂದು ಚಂದ್ರಶೇಖರ ಶೆಟ್ಟಿ ನುಡಿದರು. ಸಂತೇಕಟ್ಟೆಯ ಉದ್ಯಮಿಗಳಾದ ಎ.ಪ್ರಶಾಂತ್ ಕಾಮತ್ ಮತ್ತು ಮಾಧವ ಕಾಮತ್ ಅವರು ತಂದೆ ಆರ್ಬೆಟ್ಟು ವೆಂಕಟೇಶ ಕಾಮತ್ರ ನೆನಪಿನಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಳ್ತೂರು ಗ್ರಾಪಂ ವತಿಯಿಂದ ಜಾಗದ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆ ಯನ್ನು ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ 2 ಲಕ್ಷ ರೂ. ಅನುದಾನ ನೀಡಿದ್ದಾರೆ. ರುದ್ರಭೂಮಿಯಲ್ಲಿ ಈಗಾಗಲೇ ಒಂದು ಸಿಲಿಕಾನ್ ಛೇಂಬರ್ ಶೆಡ್ನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮತ್ತೊಂದು ಸಿಲಿಕಾನ್ ಛೇಂಬರ್ ಶೆಡ್ನ್ನು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ನಿರ್ಮಿಸಲಾಗುತ್ತದೆ. ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಅತೀ ಶೀಘ್ರವಾಗಿ ಇದು ನಿರ್ಮಾಣಗೊಳ್ಳಲಿದೆ. ವಿಶಾಲ ಜಾಗದಲ್ಲಿ ದಿ.ಆರ್ಬೆಟ್ಟು ವೆಂಕಟೇಶ ಕಾಮತ್ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ. ಆವರಣ ಗೋಡೆ, ಸುತ್ತಲು ಗಿಡಗಳನ್ನು ನೆಡಲಾಗಿದೆ. ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿ ಸಕಲ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕ ಕೇಂದ್ರದ ಪರಿಕಲ್ಪನೆಯಲ್ಲೇ ರುದ್ರಭೂಮಿಯ ನಿರ್ಮಾಣ ವಾಗಿದೆ. ರುದ್ರಭೂಮಿಯ ಪ್ರವೇಶದ್ವಾರದಲ್ಲಿ ಕಾವಲುಗಾರನ ಪ್ರತಿಮೆ ನಿರ್ಮಿಸಲಾಗಿದೆ. ಎಡಬದಿ ಯಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಸ್ಮಶಾನ ಅಭಿವೃದ್ಧಿ ಸಮಿತಿ ನಿರ್ವಹಣೆ: ಸ್ಮಶಾನ ಅಭಿವೃದ್ಧಿ ಸಮಿತಿಯನ್ನು ನಿಯಮನುಸಾರ ನೊಂದಾವಣೆ ಮಾಡಲಾಗಿದ್ದು 38ನೇ ಕಳ್ತೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮಿತಿಯೇ ಸ್ಮಶಾನವನ್ನು ನಿರ್ವಹಣೆ ಮಾಡಲಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ. ಮಾರ್ಚ್ 8 ಲೋಕಾರ್ಪಣೆ: 38ನೇ ಕಳ್ತೂರು ಗ್ರಾಮ ಪಂಚಾಯಿತಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿ ಸಹಯೋಗ ದೊಂದಿಗೆ ಕಳ್ತೂರು ಸಂತೆಕಟ್ಟೆ ಕೊಂಬೆ ರಸ್ತೆಯಲ್ಲಿ ನಿರ್ಮಾಣಗೊಂಡ ಆರ್ಬೆಟ್ಟು ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿಯ ಉದ್ಘಾಟನೆ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದಾನಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು ಭಾಗವಹಿಸುವರು ಎಂದು ಸಮಿತಿ ತಿಳಿಸಿದೆ.
Thane | ಸಾಮಾಜಿಕ ಮಾಧ್ಯಮ ಪ್ರಭಾವಿಯ ಹೌಸಿಂಗ್ ಸೊಸೈಟಿ ಮೇಲೆ ಗುಂಡಿನ ದಾಳಿ, ಓರ್ವನ ಬಂಧನ
ಥಾಣೆ, ಮಾ. 7: ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರ ಹೌಸಿಂಗ್ ಸೊಸೈಟಿ ಮೇಲೆ ಶನಿವಾರ ಮುಂಜಾನೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಹಬಾದ್ ಅಲಿಯಾಸ್ ಶಂಭು ಮುನ್ನಾ ಶಂಶದ್ ಖುರೇಶಿ (28)ಯನ್ನು ಬಂಧಿಸಿದ್ದಾರೆ. ಪೊಲೀಸರ ತಂಡ ಶಿಲ್ ದಾಯಿಗಡ್ ಬೀದಿಯಲ್ಲಿ ಬೆನ್ನಟ್ಟಿದಾಗ ಆತ ಐದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಬೀದಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಖುರೇಶಿ ಹಾಗೂ ಇನ್ನೋರ್ವ ಆರೋಪಿ ಮುಂಬ್ರಾದ ಕೌಸಾ ಪ್ರದೇಶದಲ್ಲಿ ವಾಸಿಸುತ್ತಿರುವ ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ನದೀಮ್ ಮೊಯಿನುದ್ದೀನ್ ಖಾನ್ (45) ಅಲಿಯಾಸ್ ಬಾಬಾ ಖಾನ್ ಅವರ ಹೌಸಿಂಗ್ ಸೊಸೈಟಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಗುಂಡುಗಳು ಖಾನ್ ಅವರ ಕಾರನ್ನು ಹಾನಿಗೊಳಿಸಿವೆ. ಗಾಳಿಯಲ್ಲಿ ಒಂದು ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಕೂಡಲೇ ತನಿಖಾ ತಂಡ ಕಾರ್ಯಾಚರಣೆ ಆರಂಭಿಸಿತು ಹಾಗೂ ಖುರೇಶಿಯನ್ನು ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಖಿಲ ಭಾರತ ಅಂತರ್ ವಿವಿ ದೇಹದಾರ್ಢ್ಯ ಸ್ಪರ್ಧೆ: ಮಂಗಳೂರು ವಿ.ವಿ ಚಾಂಪಿಯನ್
ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿಗೆ ಚಿನ್ನದ ಪದಕ, ಪ್ರಥಮ್ ಪೂಜಾರಿಗೆ ಬೆಳ್ಳಿಯ ಪದಕ
Gujrat | ಬಣ್ಣ ಹಾಕುವ ಕಾರ್ಖಾನೆಯ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ವಲಸೆ ಕಾರ್ಮಿಕರು ಮೃತ್ಯು, ಇನ್ನೋರ್ವ ಗಂಭೀರ
ಅಹ್ಮದಾಬಾದ್, ಮಾ. 7: ಗುಜರಾತ್ ನ ಸೂರತ್ ನಗರದಲ್ಲಿರುವ ಬಣ್ಣ ಹಾಕುವ ಕಾರ್ಖಾನೆಯ ರಾಸಾಯನಿಕ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಸುರಕ್ಷಾ ಸಾಧನಗಳಿಲ್ಲದೆ ಇಳಿದ ಬಿಹಾರದ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಅಸ್ವಸ್ಥರಾಗಿದ್ದಾರೆ. ಈ ಘಟನೆ ಪಾಂಡೇಸರ ಜಿಐಡಿಸಿಯ ನ್ಯೂ ಪಾರಸ್ ಡೈಯಿಂಗ್ ಮಿಲ್ನ ಜವಳಿ ಸಂಸ್ಕರಣಾ ಘಟಕದಲ್ಲಿ ಗುರುವಾರ ರಾತ್ರಿ ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಿದೆ. ಪ್ರಾಥಮಿಕ ವರದಿ ಪ್ರಕಾರ, ಸಂಗ್ರಹವಾದ ಅವಶೇಷಗಳನ್ನು ಸ್ವಚ್ಛಗೊಳಿಸಲು ಆಳವಾದ ರಾಸಾಯನಿಕ ಸಂಗ್ರಹ ಟ್ಯಾಂಕ್ಗೆ ನಾಲ್ವರು ಕಾರ್ಮಿಕರನ್ನು ಒಬ್ಬರ ನಂತರ ಇನ್ನೊಬ್ಬರು ಇಳಿಯುವಂತೆ ಸೂಚಿಸಲಾಯಿತು. ಆದರೆ, ಟ್ಯಾಂಕ್ ಒಳಗೆ ಆಮ್ಲಜನಕದ ಮಟ್ಟ ಅತ್ಯಂತ ಕಡಿಮೆ ಇತ್ತು ಹಾಗೂ ರಾಸಾಯನಿಕ ಹೊಗೆ ತುಂಬಿಕೊಂಡಿತ್ತು. ಟ್ಯಾಂಕ್ನೊಳಗೆ ಇಳಿದ ಕೂಡಲೇ ಆಮ್ಲಜನಕದ ಕೊರತೆಯಿಂದ ಕಾರ್ಮಿಕರಿಗೆ ಉಸಿರುಕಟ್ಟಲು ಪ್ರಾರಂಭವಾಗಿದೆ. ಒಬ್ಬರ ನಂತರ ಮತ್ತೊಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ. ಇದರಿಂದ ಕಾರ್ಖಾನೆಯಲ್ಲಿ ಆತಂಕದ ವಾತಾವರಣ ಉಂಟಾಯಿತು. ಕಾರ್ಮಿಕರು ಕುಸಿದು ಬೀಳುವುದನ್ನು ಸಹೋದ್ಯೋಗಿ ಕಾರ್ಮಿಕರು ಗಮನಿಸಿದರು. ಕೂಡಲೇ ನಾಲ್ವರು ಕಾರ್ಮಿಕರನ್ನು ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಒಬ್ಬ ತೀವ್ರ ಅಸ್ವಸ್ಥಗೊಂಡಿದ್ದಾನೆ. ಮೃತಪಟ್ಟವರೆಲ್ಲ ಬಿಹಾರದ ರೋಹತಾಸ್ ಜಿಲ್ಲೆಯವರಾಗಿದ್ದು, ಕೆಲಸ ಹುಡುಕಿಕೊಂಡು ಗುಜರಾತ್ಗೆ ಬಂದಿದ್ದರು. ಮೃತಪಟ್ಟವರನ್ನು ಅಂಕಿತ್ ಕುಮಾರ್ (19), ಸೋನು ಕುಮಾರ್ ಪಾಸ್ವಾನ್ ಹಾಗೂ ಸಂದೀಪ್ ಪಾಸ್ವಾನ್ (22) ಎಂದು ಗುರುತಿಸಲಾಗಿದೆ. ಇನ್ನೋರ್ವ ಕಾರ್ಮಿಕ ಅಮರೇಂದ್ರ ಕುಮಾರ್ (23) ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ.
Assam | ಬಾಂಗ್ಲಾದೇಶಿ ವಲಸಿಗ, ವಿದೇಶಿ ಎಂದು ಘೋಷಿಸಲಾಗಿದ್ದ ಮಹಿಳೆಗೆ CAA ಮೂಲಕ ಪೌರತ್ವ!
ಗುವಾಹಟಿ, ಮಾ. 7: ಅಸ್ಸಾಂನ ಕಛಾರ್ ಜಿಲ್ಲೆಯಲ್ಲಿ ವಿದೇಶಿ ಎಂದು ಘೋಷಿಸಿದ ಬಳಿಕ ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಮಹಿಳೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಈ ಮಹಿಳೆಯನ್ನು 59 ವರ್ಷದ ದೀಪಾಲಿ ದಾಸ್ ಎಂದು ಗುರುತಿಸಲಾಗಿದೆ. ಇವರು ಧೊಲಾಯಿ ವಿಧಾನಸಭಾ ಕ್ಷೇತ್ರದ ಹವಾಯ್ತಾಂಗ್ ಪ್ರದೇಶದ ನಿವಾಸಿ. ಇವರನ್ನು 2019ರ ಫೆಬ್ರವರಿಯಲ್ಲಿ ವಿದೇಶಿಗರ ನ್ಯಾಯಮಂಡಳಿ (ಎಫ್ಟಿ) ಅಕ್ರಮ ವಲಸಿಗರೆಂದು ಘೋಷಿಸಿತ್ತು. ಅಸ್ಸಾಂನಲ್ಲಿ ದೀಪಾಲಿ ಅವರನ್ನು ಮೊಟ್ಟಮೊದಲು ವಿದೇಶಿ ಎಂದು ಘೋಷಿಸಲಾಗಿತ್ತು. ನ್ಯಾಯಮಂಡಳಿ ಘೋಷಿಸಿದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಅದೇ ವರ್ಷ ಮೇ 10ರಂದು ಅವರನ್ನು ಸಿಲ್ಚಾರ್ ಬಂಧನ ಕೇಂದ್ರಕ್ಕೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ 2021ರ ಮೇ 17ರಂದು ಜಾಮೀನಿನಲ್ಲಿ ಬಿಡುಗಡೆಯಾಗುವವರೆಗೆ ಎರಡು ವರ್ಷಗಳ ಕಾಲ ಅವರು ಬಂಧನ ಕೇಂದ್ರದಲ್ಲಿದ್ದರು ಎಂದು ಅವರ ವಕೀಲ ಧರ್ಮಾನಂದ ದೇಬ್ ತಿಳಿಸಿದ್ದಾರೆ. ದೀಪಾಲಿ ಅವರು ಮೂಲತಃ ಬಾಂಗ್ಲಾದೇಶದ ಸಿಲೆಟ್ ಜಿಲ್ಲೆಯ ಧಿರೈ ಪೊಲೀಸ್ ಠಾಣಾ ವ್ಯಾಪ್ತಿಯ ದಿಪ್ಪುರ್ ಗ್ರಾಮದ ನಿವಾಸಿ. ಅವರು ಹಬಿಗಂಜ್ ಜಿಲ್ಲೆಯ ಬನಿಯಾಚೋಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಪರಾಯಿ ಗ್ರಾಮದ ಅಭಿಮನ್ಯು ದಾಸ್ ಅವರನ್ನು 1987ರಲ್ಲಿ ವಿವಾಹವಾಗಿದ್ದರು. ಈ ದಂಪತಿ 1988ರಲ್ಲಿ ಭಾರತ ಪ್ರವೇಶಿಸಿದ್ದರು. ಕಛಾರ್ ಜಿಲ್ಲೆಗೆ ತೆರಳಿದ್ದರು. ಅನಂತರ ಅವರು ಅಲ್ಲೇ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ, ಸೃಷ್ಟಿಯಾದ ಉದ್ಯೋಗ 8190
ರಾಜ್ಯದಲ್ಲಿ ಸ್ಟಾರ್ಟಪ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಒಂದು ಕಡೆಯಲ್ಲಿ ಯುವಜನರಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ ಇವೆ. ಸ್ಟಾರ್ಟ್ ಅಪ್ ಗಳಿಂದ 8,190 ರಷ್ಟು ಉದ್ಯೋಗ ಸೃಷ್ಟಿಯಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಅಧೀನದಲ್ಲಿ 4000 ಕ್ಕೂ ಹೆಚ್ಚು ಸ್ಟಾರ್ಟಪ್ ಗಳು ನೋಂದಾಣಿ ಆಗಿವೆ. ನೋಂದಣಿ ಮಾಡಲು ಕೆಲವೊಂದು ಮಾನದಂಡಗಳು ಇವೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿವೆ ಸ್ಟಾರ್ಟ್ ಅಪ್ ಗಳಿಂದ? ಇಲ್ಲಿದೆ ಮಾಹಿತಿ.
ಕಲಬುರಗಿ | ಎಮ್.ಎನ್.ದೇಸಾಯಿ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಗಾರ
ಕಲಬುರಗಿ : ನಗರದ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ 'ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನ' ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಸಿಇಒ ಯತೀಶ್ ಕೆ.ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುಗದಲ್ಲಿ ಎಐ ಕೇವಲ ಇಂಜಿನಿಯರ್ಗಳಿಗೆ ಸೀಮಿತವಾಗಿಲ್ಲ, ಎಲ್ಲರಿಗೂ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯತಿಕಾರ್ಪ್ ನ ನೂತನ ಎಐ ಕಾರ್ಡ್ ಅನ್ನು ಪರಿಚಯಿಸಲಾಯಿತು. ಯಾವುದೇ ತಾಂತ್ರಿಕ ಹಿನ್ನೆಲೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೆಲವೇ ಗಂಟೆಗಳಲ್ಲಿ ತಮ್ಮದೇ ಆದ ಸ್ವಂತ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳನ್ನು ಯಶಸ್ವಿಯಾಗಿ ರೂಪಿಸಿ ಪ್ರದರ್ಶಿಸಿದರು. ಕೋಡಿಂಗ್ ಜ್ಞಾನವಿಲ್ಲದಿದ್ದರೂ (ಎಐ) ತಂತ್ರಜ್ಞಾನವನ್ನು ಬಳಸಿ ಹೇಗೆ ಸೃಜನಶೀಲವಾಗಿ ಬೆಳೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಸಾಬೀತುಪಡಿಸಿದರು. ಕಾರ್ಯಕ್ರಮದಲ್ಲಿ ಯತಿಕಾರ್ಪ್ ನಿರ್ದೇಶಕರಾದ ಪ್ರಖ್ಯಾತ ರೈ, ಜನರಲ್ ಮ್ಯಾನೇಜರ್ ಕೃಪಾ ಕೆ., ಮತ್ತು ಜೆಸ್ಕಾಮ್ನ ಹಿರಿಯ ಕೌಶಲ್ಯ ತರಬೇತಿ ಸಂಯೋಜಕ ರವಿ ಸಂಗಶೆಟ್ಟಿ, ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ ಮತ್ತು ಜಗನ್ನಾಥ್ ನಾಗೂರ್, ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಅಮರ್ ಹಾಗರಗ, ದೇವೇಂದ್ರಪ್ಪ ಸಜ್ಜನ್, ರಾಧಿಕಾ ಗುತ್ತೇದಾರ್, ಶ್ರೀದೇವಿ ಹಿರೇಮಠ, ಗುರುಬಾಯಿ ವಾಡಿ, ಅಂಬಿಕಾ ಪಟನೆ, ಜ್ಯೋತಿ ಹಂಗರಗಿ, ರೇಷ್ಮಾ ರಾಥೋಡ್, ಜೈಶ್ರೀ ದೇಶಮುಖ್, ಶಿಲ್ಪ ಚೆಟ್ಟಿ, ಗೀತಾ ಇಂಗಿನ್, ಸಂತೋಷ್ ಲಸ್ಕರ್, ಕಾಶಿಬಾಯಿ ವಗ್ಗೆ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
ಹವ್ಯಕ ಭಾಷಾ ಅಕಾಡೆಮಿಯ ರಚನೆಯ ತೀರ್ಮಾನಕ್ಕೆ ಸ್ವಾಗತ: ಎಂ.ಜಿ.ಹೆಗ್ಡೆ
ಮಂಗಳೂರು, ಮಾ.7; ಹವ್ಯಕ ಭಾಷಾ ಅಕಾಡೆಮಿ ರಚನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಹವ್ಯಕ ಭಾಷೆಗೆ ನೂರಾರು ವರುಷಗಳ ಇತಿಹಾಸ ಇದೆ. ಉತ್ತರ ಕನ್ನಡ, ಶಿವಮೊಗ್ಗ, ದ.ಕ, ಕಾಸರಗೋಡು ಹಾಗೂ ಇತರ ಜಿಲ್ಲೆ ಗಳು ಸೇರಿದಂತೆ ಸುಮಾರು ಆರೂವರೆ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಲ ಲಡ್ಕ ಅವರು ಪ್ರಯತ್ನ ಸ್ಮರಿಸಬೇಕಾಗಿದೆ ಎಂದು ಎಂ.ಜಿ.ಹೆಗ್ಡೆ ತಿಳಿಸಿದ್ದಾರೆ. ಈ ರೀತಿಯ ಅಕಾಡೆಮಿಯ ರಚನೆಯಿಂದ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾ ರಿಗಳಾದ ಪ್ರಕಾಶ್ ಸಾಲ್ಯಾನ್,ಯೋಗೀಶ್ ನಾಯ್ಕ್ , ಶುಭೋದಯ ಆಳ್ವ, ನಮಿತಾ ಡಿ ಆಳ್ವ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.
ಕಲಬುರಗಿ | ರಾಜ್ಯ ಬಜೆಟ್ ವಿರುದ್ಧ ಸಿಪಿಐಎಂ ಪ್ರತಿಭಟನೆ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಬಂಡವಾಳ ಪರವಾಗಿದ್ದು, ಉದ್ಯೋಗ ಖಾತ್ರಿ ಯೋಜನೆಗೆ ಸಮರ್ಪಕ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ) ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಸಮಾಜವಾದಿ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರೂ ಸಾಮಾನ್ಯ ಜನರ ಆರ್ಥಿಕ ಮಟ್ಟ ಹೆಚ್ಚಿಸುವುದು ಹಾಗೂ ನಿರುದ್ಯೋಗ ನಿವಾರಣೆಗೆ ಅಗತ್ಯವಾದ ಘೋಷಣೆಗಳನ್ನು ಮಾಡಲಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸಿ “ವಿಬಿ ಗ್ರಾಮ್ ಜಿ” ಯೋಜನೆ ಜಾರಿಗೆ ತಂದು ಕಾರ್ಮಿಕರ ಉದ್ಯೋಗ ಅವಕಾಶಗಳನ್ನು ಕಡಿಮೆ ಮಾಡಿದೆ. ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದರೂ, ಬಡ ಕೃಷಿ ಕಾರ್ಮಿಕರ ಉದ್ಯೋಗ ಭದ್ರತೆಗೆ ರಾಜ್ಯ ಬಜೆಟ್ನಲ್ಲಿ ಯಾವುದೇ ಭರವಸೆ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿರುವ ಸಾಧನೆಯನ್ನು ಹೇಳಿಕೊಂಡರೂ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಯಿಂದ ಹಿಂದಿನ ಉದ್ಯೋಗ ಖಾತ್ರಿ ಯೋಜನೆ ದುರ್ಬಲಗೊಂಡಿದ್ದು, ಕಾಂಗ್ರೆಸ್ ಸರ್ಕಾರವೂ ಅದೇ ದಾರಿಯಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕೆ. ನೀಲಾ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗೌರಮ್ಮ, ಸರ್ವೇಶ್, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ನಾಳೆ(ಮಾ.8) ಐಸಿಸಿ ಟಿ20 ವಿಶ್ವಕಪ್ ಫೈನಲ್; ಸತತ 2ನೇ ಪ್ರಶಸ್ತಿಯ ಮೇಲೆ ಆತಿಥೇಯರ ಕಣ್ಣು
ಪ್ರಶಸ್ತಿಗಾಗಿ ಭಾರತ–ನ್ಯೂಝಿಲ್ಯಾಂಡ್ ಹಣಾಹಣಿ
ಸರಕಾರದ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ನಿಧಿ ಬಳಕೆಗೆ ವಿರೋಧ
ಉಡುಪಿ, ಮಾ.7: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 600 ಕೋಟಿ ರೂ.ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತೀವ್ರವಾಗಿ ವಿರೋಧಿಸಿದೆ. ತರಬೇತಿ ಕೇಂದ್ರಗಳ ಸ್ಥಾಪನೆ ರಾಜ್ಯ ಸರಕಾರದ ಕೆಲಸ. ಜೊತೆಗೆ ಈ ತರಬೇತಿ ಕೇಂದ್ರಗಳಲ್ಲಿ ಕೇವಲ ಕಟ್ಟಡ ಕಾರ್ಮಿಕರ ಮಕ್ಕಳು ಮಾತ್ರವಲ್ಲದೇ ಎಲ್ಲರಿಗೂ ಪ್ರವೇಶಾವಕಾಶವಿದೆ. ಆದ್ದರಿಂದ ಕಲ್ಯಾಣ ಮಂಡಳಿಯಿಂದ 600 ಕೋಟಿ ರೂ. ವೆಚ್ಚ ಮಾಡುವ ನಿರ್ಧಾರವು ಕಟ್ಟಡ ಕಾರ್ಮಿಕರಿಗೆ ಬಗೆಯುವ ದ್ರೋಹವಾಗಿರುತ್ತದೆ ಎಂದು ಫೆಡರೇಷನ್ನ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಹಾಗೂ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ಅಭಿವೃದ್ಧಿ ಅಕಾಡೆಮಿಗಳನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯನ್ನು ಬಳಸಿ ನಿರ್ಮಾಣ ಮಾಡುವ ಪ್ರಸ್ತಾಪವು 1996ರ ಕಟ್ಟಡ ಕಾರ್ಮಿಕರ ಕಾಯ್ದೆಯ ಉದ್ದೇಶವನ್ನೇ ಬುಡಮೇಲು ಮಾಡಲಿದೆ ಎಂದವರು ಅಭಿಪ್ರಾಯಪಟ್ಟರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸೇರಿದಂತೆ ಕಾರ್ಮಿಕರ ಆರೋಗ್ಯ ಸುರಕ್ಷತೆ ಹಾಗೂ ಶಿಕ್ಷಣದ ಅಗತ್ಯತೆಗಳಿಗಾಗಿ ಬಳಸಬೇಕು ಮತ್ತು ಇದನ್ನು ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಗಳಿಗೆ ಬಳಸಬಾರದೆಂದು ಕಾಯ್ದೆ ಹೇಳುತ್ತದೆ. ಸುಪ್ರೀಂ ಕೋರ್ಟ್ ಸಹ ಇದನ್ನೇ ಎತ್ತಿ ಹಿಡಿದಿದೆ ಎಂದವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಸರಕಾರದ ಈ ಮೂರು ಬಜೆಟ್ ಪ್ರಸ್ತಾಪಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಹಾಗೂ ಇದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ.
ಮಾ.9: ಕಾರಂತ ಟ್ರಸ್ಟ್ನಿಂದ ಮಹಿಳಾ ದಿನಾಚರಣೆ ಸಪ್ತಾಹ
ಉಡುಪಿ, ಮಾ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘ ಹಾಗೂ ಉಡುಪಿ ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಂಸ್ಥೆಗಳ ಸಹ ಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣಾ ಸಪ್ತಾಹದ ಉದ್ಘಾಟನಾ ಸಮಾರಂಭವು ಮಾ.9ರಂದು ಸೋಮವಾರ ಅಪರಾಹ್ನ 2:00 ಗಂಟೆಗೆ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕರ್ನಾಟಕ ಸಭಾಪತಿ ಬಸರೂರು ರಾಜೀವ ಶೆಟ್ಟಿ ಉದ್ಘಾಟಿಸ ಲಿದ್ದು, ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಚಿಂತಕಿ ಮತ್ತು ಲೇಖಕಿ ಬಿ.ಎಂ.ರೋಹಿಣಿ ಕಾರಂತರ ಚಿಂತನೆಗಳ ಕುರಿತು ಮತ್ತು ಸುರತ್ಕಲ್ನ ಪ್ರೊ. ದಿವ್ಯರಾಣಿ ಪ್ರದೀಪ್ ಮಹಿಳಾ ಸಬಲೀಕರಣದ ಸವಾಲುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಪ್ತಾಹದ ಅಂಗವಾಗಿ ಮಾ.8ರಂದು ಮರವಂತೆಯ ಸರಕಾರಿ ಪ್ರೌಢ ಶಾಲೆಯಲ್ಲಿ ರಂಗವಲ್ಲಿಯ ಮೂಲಕ ಮಾನವ ಹಕ್ಕುಗಳ ಪರಿಚಯ, ಮಾ.10ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ ಇಲ್ಲಿ ಉಪನ್ಯಾಸಕಿ ಡಾ.ವಿದ್ಯಾಲತ, 11ರಂದು ಕಾರ್ಕಳದ ಶ್ರೀ ವೆಂಕಟರಮಣ ಕಾಲೇಜಿನಲ್ಲಿ ಡಾ.ನಿಕೇತನ, 12ರಂದು ಮೂಡ್ಲು ಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಸಂತಿ ಶೆಟ್ಟಿ ಬ್ರಹ್ಮಾವರ ಹಾಗೂ ಮಾ.13 ರಂದು ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ದುರ್ಗಾ ಮೆನನ್ ಇವರಿಂದ ಕಾರಂತರ ಬರಹಗಳಲ್ಲಿನ ಮಹಿಳಾ ಅಭಿವ್ಯಕ್ತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಪ್ತಾಹದ ಸಮಾರೋಪ ಸಮಾರಂಭವು ಮಾ.14ರ ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ರೆಡ್ಕ್ರಾಸ್ ಸಂಸ್ಥೆಯ ಹೆನ್ರಿ ಡುನ್ಯಾಂಟ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ರಂಗನಟಿ ಮತ್ತು ಚಿಂತಕಿ ಗೀತಾ ಸುರತ್ಕಲ್ ಮಹಿಳಾ ಸಬಲೀಕರಣದಲ್ಲಿ ರಂಗಭೂಮಿ ಮತ್ತುಕಾರಂತರು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ದೇಶದಲ್ಲಿ ಮೊದಲ ಬಾರಿ ಡಿಜಿಟಲ್ ರೂಪದಲ್ಲಿ ಜನಗಣತಿ: ಉಡುಪಿ ಡಿಸಿ ಸ್ವರೂಪ ಟಿ.ಕೆ.
ಉಡುಪಿ, ಮಾ.7: ದೇಶದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸ್ವಯಂ-ಗಣತಿ ಆಯ್ಕೆಯೂ ಇದರಲ್ಲಿ ಲಭ್ಯವಿದೆ. ಮೊದಲ ಹಂತದಲ್ಲಿ ಎಪ್ರಿಲ್ 16ರಿಂದ 30 ದಿನಗಳ ಕಾಲ ಮನೆ ಪಟ್ಟಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2027ರ ಜನಗಣತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಎರಡನೇ ಹಂತದಲ್ಲಿ ಜನಸಂಖ್ಯಾ ಎಣಿಕೆ ಕಾರ್ಯ 2027ರ ಫೆಬ್ರವರಿಯಿಂದ ಪ್ರಾರಂಭಗೊಳ್ಳಲಿದೆ ಎಂದವರು ತಿಳಿಸಿದರು. ಸರಕಾರದ ಮಾರ್ಗಸೂಚಿಯಂತೆ ಗಣತಿ ಕಾರ್ಯ ಕೈಗೊಳ್ಳಲು ಅಗತ್ಯ ವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಮನೆಗಳ ಪಟ್ಟಿ, ದತ್ತಾಂಶ ಸಂಗ್ರಹಣೆ, ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ಕೇಂದ್ರ ಪೋರ್ಟಲ್ ಬಳಸಲಾಗುವುದು ಎಂದು ಅವರು ವಿವರಿಸಿದರು. ಮೊದಲು ಮನೆ ಗಣತಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಗಣತಿಗಾಗಿ ತರಬೇತುದಾರರ ಅಂತಿಮಗೊಳಿಸುವಿಕೆ, ಜಿಲ್ಲಾ ಜನಗಣತಿ ಅಧಿಕಾರಿಗಳಿಗೆ ತರಬೇತಿ ಮತ್ತು ಕ್ಷೇತ್ರ ಕಾರ್ಯಕರ್ತರ ನೇಮಕಾತಿ ಕುರಿತು ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಲು ಸೂಚಿಸಿದರು. ಜಿಪಿಎಸ್ ಆಧಾರಿತ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಎಲ್ಲ ಅಗತ್ಯ ಕ್ರಮಗಳನ್ನು ಕಾಲಮಿತಿಯಲ್ಲೇ ನಡೆಸಬೇಕು. ಇದಕ್ಕಾಗಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಉದಯಕುಮಾರ್ ಶೆಟ್ಟಿ, ಸಹಾಯಕ ಮಿಷನರ್ ರಶ್ಮಿ, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮನೆಗೆ ನುಗ್ಗಿ 14.67 ಲಕ್ಷ ರೂ. ಮೌಲ್ಯದ ನಗನಗದು ಕಳವು: ಪ್ರಕರಣ ದಾಖಲು
ಬ್ರಹ್ಮಾವರ, ಮಾ.7: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಬಾರಕೂರು ಹೇರಾಡಿ ಎಂಬಲ್ಲಿ ಮಾ.6ರಂದು ರಾತ್ರಿ ವೇಳೆ ನಡೆದಿದೆ. ಮಂಜುನಾಥ ರಾವ್ ಎಂಬವರು ತನ್ನ ಪತ್ನಿ ಜೊತೆ ಮನೆಗೆ ಬೀಗ ಹಾಕಿ ಬಾರಕೂರುನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯ ಎದುರು ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 1 ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, ಎರಡು ಚಿನ್ನದ ಬಳೆ, ಒಂದು ಜೋತೆ ಚಿನ್ನದ ಬೆಂಡೋಲೆ, 4 ಚಿನ್ನದ ಉಂಗುರ, 3 ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ ಮತ್ತು ಕವಳಿಗೆ ಹಾಗೂ 49,000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಕಳವಾದ ಒಟ್ಟು ಸೊತ್ತುಗಳ ಒಟ್ಟು ಮೌಲ್ಯ 14,67,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಲ್ಫ್ ಪ್ರವೇಶಿಸುವ ಅಮೆರಿಕನ್ ಹಡಗು ಸಮುದ್ರದ ತಳಕ್ಕೆ ಹೋಗಲಿದೆ: ಇರಾನ್ ಎಚ್ಚರಿಕೆ
ತೇಹ್ರಾನ್: ಗಲ್ಫ್ ಪ್ರದೇಶಕ್ಕೆ ಪ್ರವೇಶಿಸುವ ಯಾವುದೇ ಅಮೆರಿಕನ್ ಹಡಗು ಸಮುದ್ರದ ತಳಕ್ಕೆ ಹೋಗಲಿದೆ ಎಂದು ಇರಾನ್ ಮಿಲಿಟರಿ ವಕ್ತಾರರು ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ. ಗಲ್ಫ್ ಪ್ರವೇಶಿಸುವ ಅಮೆರಿಕದ ನೌಕಾಪಡೆಯ ಹಡಗುಗಳನ್ನು ಮುಳುಗಿಶಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರದೇಶದಲ್ಲಿ ಅಮೆರಿಕದ ಸೈನಿಕ ಚಟುವಟಿಕೆಗಳನ್ನು ಇರಾನ್ ತೀವ್ರವಾಗಿ ವಿರೋಧಿಸುತ್ತಿದ್ದು, ಇಂತಹ ಕ್ರಮಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ವಕ್ತಾರರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಂದಿದೆ. ಗಲ್ಫ್ ಪ್ರದೇಶದ ಭದ್ರತೆ ಮತ್ತು ಸಮುದ್ರ ಮಾರ್ಗಗಳ ಮೇಲೆ ನಡೆಯುತ್ತಿರುವ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿವೆ. ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ಗಳಿಗೆ ಯುಎಸ್ ನೌಕಾಪಡೆಯು ಸಾಧ್ಯವಾದಷ್ಟು ಬೇಗ ಬೆಂಗಾವಲು ನೀಡಲು ಆರಂಭಿಸಲಿದೆ ಎಂದು ಹೇಳಿದ್ದರು. ಈ ಕ್ರಮವು ಪ್ರದೇಶದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಭದ್ರತೆಯನ್ನು ಖಚಿತಪಡಿಸಲು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಇಲ್ಲಿ ಯಾವುದೇ ಮಿಲಿಟರಿ ಉದ್ವಿಗ್ನತೆ ಉಂಟಾದರೆ ಜಾಗತಿಕ ತೈಲ ಮಾರುಕಟ್ಟೆಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದ ಭದ್ರತೆ ಕುರಿತ ಆತಂಕಗಳು ಹೆಚ್ಚುತ್ತಿವೆ.
ಐಎಂಎ ಹಗರಣದ ಸಂತ್ರಸ್ತರಿಗೆ 80 ಕೋಟಿ ರೂ. ಮರುಪಾವತಿ: ಶಾಸಕ ರಿಝ್ವಾನ್ ಅರ್ಶದ್
ಬೆಂಗಳೂರು: ಐಎಂಎ ಹಗರಣದಲ್ಲಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯಾಲಯದ ಮಾರ್ಗಸೂಚಿಯನ್ವಯ ಮುಂದಿನ ವಾರ ಸಕ್ಷಮ ಪ್ರಾಧಿಕಾರವು 80 ಕೋಟಿ ರೂ.ಗಳನ್ನು ಮರು ಪಾವತಿ ಮಾಡಲಿದೆ ಎಂದು ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದರು. ಶನಿವಾರ ಇಲ್ಲಿನ ವಸಂತ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಗರಣದಿಂದಾಗಿ ಬಹುಪಾಲು ಬಡ ಹಾಗು ಮಧ್ಯಮ ವರ್ಗದ ಕುಟುಂಬಗಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಯಿತು ಎಂದು ಹೇಳಿದರು. ಕಳೆದ ವರ್ಷ 112 ಕೋಟಿ ರೂ.ಗಳನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಈಗ 80 ಕೋಟಿ ರೂ.ಗಳನ್ನು ಮರು ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು. ಐಎಂಎ ಸಂಸ್ಥೆಯ ಆಸ್ತಿಗಳು ಕೆಳಹಂತದ ನ್ಯಾಯಾಲಯ, ಜಾರಿ ನಿರ್ದೇಶನಾಲಯ(ಈ.ಡಿ)ದಲ್ಲಿ ಸಿಲುಕಿದ್ದರಿಂದ ಅವುಗಳನ್ನು ಬಿಡಿಸಿಕೊಂಡು, ಹರಾಜು ಹಾಕುವ ಪ್ರಕ್ರಿಯೆ ನಡೆಸಲು ಹೆಚ್ಚಿನ ಸಮಯ ತಗುಲಿತು. ಆದರೆ, ಸಕ್ಷಮ ಪ್ರಾಧಿಕಾರವು ತನ್ನ ನಿರಂತರ ಪ್ರಯತ್ನದಿಂದ ಆ ಆಸ್ತಿಗಳನ್ನು ಹರಾಜು ಹಾಕಿ, ಸಂತ್ರಸ್ತರಿಗೆ ಅವರ ಹಣವನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನೆರವು ಇಲ್ಲದೆ, ಇಂತಹ ವಂಚನೆಗಳು ನಡೆಯಲು ಸಾಧ್ಯವಿಲ್ಲ. ಆದುದರಿಂದ, ಜನಸಾಮಾನ್ಯರು ಯಾವುದೆ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಬದಲು ಅದರ ಪೂರ್ವಾಪರವನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳುವುದು ಉತ್ತಮ ಎಂದು ರಿಝ್ವಾನ್ ಅರ್ಶದ್ ಸಲಹೆ ನೀಡಿದರು.
ಚಾಳಿ ಬಿಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಕರ್ನಾಟಕ ಮಾಹಿತಿ ಆಯೋಗ,ಬಿಡಿಎ ಇಬ್ಬರು ಅಧಿಕಾರಿಗಳಿಗೆ 1.25 ಲಕ್ಷ ರೂ ದಂಡ
ಕರ್ನಾಟಕ ಮಾಹಿತಿ ಆಯೋಗ,ಬಿಡಿಎ ಇಬ್ಬರು ಅಧಿಕಾರಿಗಳಿಗೆ ಒಟ್ಟು 1.25 ಲಕ್ಷ ರೂ ದಂಡ ವಿಧಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಅರ್ಜಿದಾರರು ಮಾಹಿತಿ ಹಕ್ಕುಗಳ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಮಾಹಿತಿ ನೀಡದ ಶಿವಕುಮಾರ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿ, ಬಿಸಿ ಮುಟ್ಟಿಸಿದೆ. ಒಂದು ವೇಳೆ ಅರ್ಜಿದಾರರು ಕೋರಿರುವ ದಾಖಲೆಯನ್ನು ತಕ್ಷಣ ನೀಡದಿದ್ದಲ್ಲಿ ಶಿವಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ದುಬೈ, ಮಾ.7: ಇರಾನ್ ನೊಂದಿಗೆ ನಡೆಯುತ್ತಿರುವ ಮಿಲಿಟರಿ ಸಂಘರ್ಷಕ್ಕೆ ಗಲ್ಫ್ ಹಾಗೂ ಮಧ್ಯಪ್ರಾಚ್ಯ ಪ್ರದೇಶವನ್ನು ಎಳೆಯುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಯುಎಇ ಮೂಲದ ಕೋಟ್ಯಧಿಪತಿ ಉದ್ಯಮಿ ಖಲಾಫ್ ಅಹ್ಮದ್ ಅಲ್ ಹಬ್ತೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಪ್ರದೇಶವನ್ನು ಯುದ್ಧಭೂಮಿಯನ್ನಾಗಿ ಮಾಡಲು ನಿಮಗೆ ಅಧಿಕಾರ ನೀಡಿದವರು ಯಾರು?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ ಹಬ್ತೂರ್ ಗ್ರೂಪ್ನ ಸಂಸ್ಥಾಪಕರಾದ ಖಲಾಫ್ ಅಲ್ ಹಬ್ತೂರ್ ಗುರುವಾರ ಅಮೆರಿಕ ಅಧ್ಯಕ್ಷರಿಗೆ ಮುಕ್ತ ಪತ್ರ ಬರೆದು, ಅದನ್ನು ಅರೇಬಿಕ್ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಯುದ್ಧಕ್ಕೆ ಹೋಗುವ ನಿರ್ಧಾರ ಟ್ರಂಪ್ ಅವರ ಸ್ವಂತದ್ದೇ ಅಥವಾ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಭಾವದಿಂದ ಆಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ದಾಳಿ ನಡೆಸಿ ದೇಶದ ನಾಯಕತ್ವ ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ದಾಳಿಯ ನಂತರ ಇರಾನ್ ಯುಎಇ ಸೇರಿದಂತೆ ಗಲ್ಫ್ ಪ್ರದೇಶದ ಕೆಲವು ರಾಷ್ಟ್ರಗಳತ್ತ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತು. ಈ ಹಿನ್ನೆಲೆದಲ್ಲಿ ಯುಎಇ ಹಾಗೂ ಅದರ ನೆರೆಯ ರಾಷ್ಟ್ರಗಳು ಸಂಘರ್ಷವನ್ನು ತಕ್ಷಣ ಕೊನೆಗೊಳಿಸಿ ಶಾಂತಿ ಮಾತುಕತೆ ಆರಂಭಿಸಲು ಉಭಯ ಪಕ್ಷಗಳಿಗೆ ಕರೆ ನೀಡಿವೆ. “ನೀವು ಗಲ್ಫ್ ಸಹಕಾರ ಮಂಡಳಿ ಮತ್ತು ಅರಬ್ ರಾಷ್ಟ್ರಗಳನ್ನು ಅವರು ಆಯ್ಕೆ ಮಾಡದ ಅಪಾಯದ ಕೇಂದ್ರದಲ್ಲಿ ನಿಲ್ಲಿಸಿದ್ದೀರಿ. ದೇವರಿಗೆ ಧನ್ಯವಾದಗಳು, ನಾವು ಬಲಿಷ್ಠರಾಗಿದ್ದು ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ. ನಮ್ಮ ತಾಯ್ನಾಡುಗಳನ್ನು ರಕ್ಷಿಸುವ ಸೈನ್ಯ ಹಾಗೂ ರಕ್ಷಣಾ ಪಡೆಗಳು ನಮ್ಮಲ್ಲಿವೆ. ಆದರೆ ಪ್ರಶ್ನೆ ಇನ್ನೂ ಉಳಿದಿದೆ: ನಮ್ಮ ಪ್ರದೇಶವನ್ನು ಯುದ್ಧಭೂಮಿಯನ್ನಾಗಿ ಮಾಡಲು ನಿಮಗೆ ಯಾರು ಅನುಮತಿ ನೀಡಿದರು?” ಎಂದು ಅಲ್ ಹಬ್ತೂರ್ ಪ್ರಶ್ನಿಸಿದ್ದಾರೆ. ಇರಾನ್ ವಿರುದ್ಧ ಯುದ್ಧ ಮಾಡುವ ಅಮೆರಿಕದ ನಿರ್ಧಾರವು ಈ ಪ್ರದೇಶದ ಜನರ ಜೊತೆಗೆ ಅಮೆರಿಕದ ಜನರಿಗೂ ಆತಂಕ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. “ಅಮೆರಿಕದ ಜನರಿಗೆ ಶಾಂತಿ ಮತ್ತು ಸಮೃದ್ಧಿಯ ಭರವಸೆ ನೀಡಲಾಗಿತ್ತು. ಆದರೆ ಈಗ ಅವರು ತಮ್ಮ ಹಣ ಮತ್ತು ತೆರಿಗೆಗಳಿಂದ ನಿಧಿ ಸಂಗ್ರಹಗೊಂಡ ಯುದ್ಧದಲ್ಲಿ ತಾವು ಸಿಲುಕಿಕೊಂಡಿದ್ದಾರೆ,” ಎಂದು ಅವರು ಟೀಕಿಸಿದ್ದಾರೆ. ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ ವರದಿ ಪ್ರಕಾರ, ಈ ಯುದ್ಧದ ನೇರ ಮಿಲಿಟರಿ ಕಾರ್ಯಾಚರಣೆಗಳಿಗೆ 40ರಿಂದ 65 ಶತಕೋಟಿ ಡಾಲರ್ ವೆಚ್ಚವಾಗಬಹುದು. ಸಂಘರ್ಷ ನಾಲ್ಕು ಅಥವಾ ಐದು ವಾರಗಳವರೆಗೆ ಮುಂದುವರಿದರೆ ಆರ್ಥಿಕ ಪರಿಣಾಮಗಳು ಹಾಗೂ ಪರೋಕ್ಷ ನಷ್ಟಗಳನ್ನು ಸೇರಿಸಿ ಸುಮಾರು 210 ಶತಕೋಟಿ ಡಾಲರ್ ತನಕ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಯುದ್ಧಗಳಲ್ಲಿ ಭಾಗಿಯಾಗುವುದಿಲ್ಲ ಎಂಬ ತಮ್ಮ ಭರವಸೆಯನ್ನು ಟ್ರಂಪ್ ಮುರಿದಿದ್ದಾರೆ ಎಂದು ಅಲ್ ಹಬ್ತೂರ್ ಆರೋಪಿಸಿದ್ದಾರೆ. “ನಿಮ್ಮ ಎರಡನೇ ಅವಧಿಯಲ್ಲಿ ಸೊಮಾಲಿಯಾ, ಇರಾಕ್, ಯೆಮೆನ್, ನೈಜೀರಿಯಾ, ಸಿರಿಯಾ, ಇರಾನ್ ಮತ್ತು ವೆನೆಝುವೆಲಾ ಸೇರಿ ಏಳು ದೇಶಗಳಲ್ಲಿ ವಿದೇಶಿ ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಿದ್ದೀರಿ. ಕೆರಿಬಿಯನ್ ಹಾಗೂ ಪೂರ್ವ ಪೆಸಿಫಿಕ್ ಮಹಾಸಾಗರ ಪ್ರದೇಶಗಳಲ್ಲಿಯೂ ನೌಕಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ 658ಕ್ಕೂ ಹೆಚ್ಚು ವಿದೇಶಿ ವೈಮಾನಿಕ ದಾಳಿಗಳನ್ನು ನಿರ್ದೇಶಿಸಿದ್ದೀರಿ,” ಎಂದು ಅವರು ಹೇಳಿದ್ದಾರೆ. ಈ ಕ್ರಮಗಳ ಪರಿಣಾಮವಾಗಿ ಕೇವಲ 400 ದಿನಗಳಲ್ಲೇ ಅಮೆರಿಕ ಅಧ್ಯಕ್ಷರ ಅನುಮೋದನೆ ಪ್ರಮಾಣವು ಸುಮಾರು ಒಂಭತ್ತು ಶೇಕಡಾ ಇಳಿಕೆಯಾಗಿದೆ ಎಂದು ಅಲ್ ಹಬ್ತೂರ್ ಹೇಳಿದ್ದಾರೆ. ಅಮೆರಿಕದೊಳಗೇ ಹೊಸ ಯುದ್ಧಕ್ಕೆ ಎಳೆಯಲ್ಪಡುವ ಬಗ್ಗೆ ಆತಂಕ ಹೆಚ್ಚುತ್ತಿದೆ. ಇದರಿಂದ ಅಮೆರಿಕನ್ನರ ಜೀವಿತ, ಅವರ ಆರ್ಥಿಕತೆ ಮತ್ತು ಭವಿಷ್ಯ ಅನಗತ್ಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಸಂದೇಶದಲ್ಲಿ, ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ಗಲ್ಫ್ ಹಾಗೂ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಹಾನಿಗೆ ಯಾರು ಹೊಣೆಗಾರರು ಎಂದು ಅವರು ಪ್ರಶ್ನಿಸಿದ್ದಾರೆ. “ನಮ್ಮ ಯಾವುದೇ ಪಾತ್ರವಿಲ್ಲದ ಈ ಸಂಘರ್ಷದಿಂದ ಉಂಟಾದ ಉದ್ವಿಗ್ನತೆಗೆ ಯಾರು ಬೆಲೆ ಕಟ್ಟುತ್ತಾರೆ? ನಮ್ಮ ಆರ್ಥಿಕತೆಗಳು, ನಮ್ಮ ಭದ್ರತೆ ಮತ್ತು ನಮ್ಮ ಜನರ ಸ್ಥಿರತೆ ಮಹಾಶಕ್ತಿಗಳ ನಡುವೆ ಅಂಕಗಳನ್ನು ಇತ್ಯರ್ಥಪಡಿಸುವ ವೇದಿಕೆಗಳಲ್ಲ,” ಎಂದು ಅವರು ಹೇಳಿದ್ದಾರೆ. “ನಾವು ಸ್ಥಿರತೆ ಮತ್ತು ಶಾಂತಿಯ ಪರವಾಗಿದ್ದೇವೆ. ಈ ಸಂಘರ್ಷದ ಭಾಗವಾಗಲು ನಾವು ಆಯ್ಕೆ ಮಾಡಿಲ್ಲ. ಆದರೆ ನಾವು ಸೃಷ್ಟಿಸದ ಉದ್ವಿಗ್ನತೆಗೆ ಬೆಲೆ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಇತರರ ಸಂಘರ್ಷದಿಂದ ಪ್ರದೇಶದ ದೇಶಗಳು ಮತ್ತು ಜನರು ಅನುಭವಿಸಿದ ನಷ್ಟಗಳಿಗೆ ಯಾರು ಜವಾಬ್ದಾರರು, ಯಾರು ಪರಿಹಾರ ನೀಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಬೇಕು,” ಎಂದು ಅಲ್ ಹಬ್ತೂರ್ ಹೇಳಿದ್ದಾರೆ. “ಈ ಪ್ರದೇಶಕ್ಕೆ ಶಾಂತ ಮನಸ್ಸಿನ ಅಗತ್ಯವಿದೆ; ಯುದ್ಧದ ಜ್ವಾಲೆಗಳನ್ನು ಇನ್ನಷ್ಟು ಹೆಚ್ಚಿಸುವ ಪ್ರತಿಕ್ರಿಯೆಗಳ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.
ನಿರ್ಬಂಧಿತ ವಲಯ ಪ್ರವೇಶಿಸಿ ಇರಾನಿನ ಹಡಗಿನ ದೃಶ್ಯ ಸೆರೆಹಿಡಿಯಲು ಯತ್ನ: ರಿಪಬ್ಲಿಕ್ ಟಿವಿಯ ವರದಿಗಾರ ಸೇರಿ ಮೂವರ ಬಂಧನ
ಕೊಚ್ಚಿ, ಮಾ.7: ಕೊಚ್ಚಿಯ ದಕ್ಷಿಣ ನೌಕಾ ನೆಲೆಯಲ್ಲಿ ನಿಲುಗಡೆಗೊಂಡಿರುವ ಇರಾನಿನ ಹಡಗು ಐರಿಸ್ ಲಾವನ್ನ ದೃಶ್ಯಗಳನ್ನು ಸೆರೆಹಿಡಿಯಲು ನಿರ್ಬಂಧಿತ ವಲಯಕ್ಕೆ ಪ್ರವೇಶಿಸಿದ ಆರೋಪದಲ್ಲಿ ಪತ್ರಕರ್ತ ಸೇರಿದಂತೆ ಮೂವರನ್ನು CISF ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಲ್ಲಿ ರಿಪಬ್ಲಿಕ್ ಟಿವಿಯ ವರದಿಗಾರ, ಕ್ಯಾಮೆರಾಮನ್ ಮತ್ತು ಅವರು ಪ್ರಯಾಣಿಸುತ್ತಿದ್ದ ದೋಣಿಯ ಚಾಲಕ ಸೇರಿದ್ದಾರೆ. ಅಮೆರಿಕದಿಂದ ಸಂಭವನೀಯ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಈ ಹಡಗು ಕೊಚ್ಚಿಗೆ ಆಗಮಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನ ದೃಶ್ಯಗಳನ್ನು ಸೆರೆಹಿಡಿಯಲು ಮಾಧ್ಯಮ ತಂಡವು ಮೆರೈನ್ ಡ್ರೈವ್ನಿಂದ ದೋಣಿಯನ್ನು ಬಾಡಿಗೆಗೆ ಪಡೆದು ಸಮುದ್ರ ಮಾರ್ಗವಾಗಿ ತೆರಳಿತ್ತು. ಈ ವೇಳೆ ಅವರು ನಿರ್ಬಂಧಿತ ವಲಯಕ್ಕೆ ಪ್ರವೇಶಿಸಿದುದನ್ನು ಗಮನಿಸಿದ CISF ಅಧಿಕಾರಿಗಳು ಅವರನ್ನು ತಡೆದು ವಶಕ್ಕೆ ಪಡೆದರು. ಬಳಿಕ ಮೂವರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು. ಪತ್ರಕರ್ತರ ಕ್ಯಾಮೆರಾಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ಕೋರಿಕೆಯ ಮೇರೆಗೆ ಬುಧವಾರ ಇರಾನಿನ ಯುದ್ಧನೌಕೆಗೆ ಕೊಚ್ಚಿಯಲ್ಲಿ ಆಶ್ರಯ ನೀಡಲಾಗಿತ್ತು. ಭಾರತೀಯ ನೌಕಾಪಡೆಯ ಭದ್ರತೆಯಲ್ಲಿ ಹಡಗಿನಲ್ಲಿದ್ದ 183 ನಾವಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮೊದಲು ಶ್ರೀಲಂಕಾ ಸಮೀಪದಲ್ಲಿ ಇರಾನಿಗೆ ಸೇರಿದ ಐರಿಸ್ ದೇನಾ ಹಡಗನ್ನು ಅಮೆರಿಕ ನೌಕಾಪಡೆಯು ಟಾರ್ಪಿಡೊ ಮೂಲಕ ದಾಳಿ ಮಾಡಿತ್ತು. ಹಿಂದೂ ಮಹಾಸಾಗರ ಪ್ರದೇಶದಲ್ಲಿದ್ದ ಐರಿಸ್ ಲಾವನ್ ಮೇಲೂ ದಾಳಿ ನಡೆಯುವ ಸಾಧ್ಯತೆ ಇರುವ ಭೀತಿಯ ಹಿನ್ನೆಲೆಯಲ್ಲಿ ಇರಾನ್ ಫೆಬ್ರವರಿ 28ರಂದು ಭಾರತದಿಂದ ಆಶ್ರಯ ಕೋರಿತ್ತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಹಡಗಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ವಿಜಯನಗರ | ಎಸೆಸೆಲ್ಸಿ ಪರೀಕ್ಷೆ; ಅಕ್ರಮಗಳಿಗೆ ಅವಕಾಶ ಕೊಡದೆ ಸುಗಮವಾಗಿ ನಡೆಸಿ : ಡಿಸಿ ಕವಿತಾ ಮನ್ನಿಕೇರಿ
ವಿಜಯನಗರ (ಹೊಸಪೇಟೆ) ಮಾ.07: ಇದೇ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ–1 ನಡೆಯಲಿದ್ದು, ಪರೀಕ್ಷೆ ವೇಳೆ ಯಾವುದೇ ಅಕ್ರಮಗಳಿಗೆ ಅವಕಾಶ ಕೊಡದೆ ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಸಲು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು. ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಎಸೆಸೆಲ್ಸಿ ಪರೀಕ್ಷೆ–1ರ ಪೂರ್ವ ಸಿದ್ಧತಾ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲಿ 16, ತಾಲ್ಲೂಕು ಕೇಂದ್ರಗಳಲ್ಲಿ 15, ಹೋಬಳಿ ಮಟ್ಟದಲ್ಲಿ 14 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 28 ಕೇಂದ್ರಗಳನ್ನು ಸೇರಿಸಿ ಒಟ್ಟು 73 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ವರ್ಷ ಜಿಲ್ಲೆಯಲ್ಲಿ ಒಟ್ಟು 22,041 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಬೇಕು. ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸಿ, ಕೊಠಡಿಗಳು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಆರೋಗ್ಯ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸಾ ಕಿಟ್ನೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಪರೀಕ್ಷೆಯ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಜೆಸ್ಕಾಂ ಇಲಾಖೆ ಎಚ್ಚರವಹಿಸಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸಬೇಕು ಎಂದು ಅವರು ಹೇಳಿದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯತ್ ಕೆಸ್ವಾನ್ ಕೇಂದ್ರದಿಂದ ವೆಬ್ ಕಾಸ್ಟಿಂಗ್ ಮೂಲಕ ತಂಡದೊಂದಿಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು. ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಖಜಾನೆಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ರವಾನಿಸಬೇಕು. ಪರೀಕ್ಷೆ ಮುಗಿದ ನಂತರ ಪ್ರತಿದಿನ ಉತ್ತರ ಪತ್ರಿಕೆಗಳನ್ನು ಜಿಲ್ಲಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳಿಗೆ ಪರೀಕ್ಷೆ ನಡೆಸುವ ಅನುಭವ ಇದ್ದರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಗೆ ಕೀರ್ತಿ ತರುವಂತೆ ಅವರು ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಹೆಚ್ಚಿನ ಅಂಕ ಗಳಿಸಲು ಪ್ರೋತ್ಸಾಹಿಸಬೇಕು. ಈ ಮೂಲಕ ಫಲಿತಾಂಶವನ್ನು ಹೆಚ್ಚಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು. ಪರೀಕ್ಷಾ ವೇಳೆ ಯಾವುದೇ ರೀತಿಯ ಸಮಸ್ಯೆ ಅಥವಾ ಗೊಂದಲ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಡಿಡಿಪಿಐ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯನಗರ | ಜಿಲ್ಲಾ ಕೇಂದ್ರದಲ್ಲಿ ದೇವರದಾಸಿಮಯ್ಯ, ಅಗ್ನಿಬನ್ನಿರಾಯ, ಮಹಾವೀರ ಜಯಂತಿ ಆಚರಣೆ
ವಿಜಯನಗರ (ಹೊಸಪೇಟೆ): ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ವತಿಯಿಂದ ಮಾರ್ಚ್ 23ರಂದು ಶ್ರೀ ದೇವರದಾಸಿಮಯ್ಯ ಜಯಂತಿ, ಮಾರ್ಚ್ 28ರಂದು ಅಗ್ನಿಬನ್ನಿರಾಯ ಜಯಂತಿ ಹಾಗೂ ಮಾರ್ಚ್ 31ರಂದು ಶ್ರೀ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಜಯಂತಿಗಳ ಆಚರಣೆ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾರ್ಚ್ 23ರಂದು ಶ್ರೀ ದೇವರದಾಸಿಮಯ್ಯ ಜಯಂತಿಯನ್ನು ನಗರದಲ್ಲಿ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ ಸ್ಥಳ ಹಾಗೂ ದಾಸಿಮಯ್ಯನವರ ಕುರಿತು ಸಂದೇಶ ನೀಡಲು ಉಪನ್ಯಾಸಕರ ಆಯ್ಕೆ ಕುರಿತು ಚರ್ಚಿಸಿ ನಂತರ ತಿಳಿಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು. ಮಾರ್ಚ್ 28ರಂದು ಅಗ್ನಿಬನ್ನಿರಾಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೌಹಾರ್ದಯುತವಾಗಿ ಆಚರಿಸಲು ನಿರ್ಧರಿಸಲಾಯಿತು. ಇದೇ ವೇಳೆ ಮಾರ್ಚ್ 31ರಂದು ಶ್ರೀ ಮಹಾವೀರ ಜಯಂತಿಯನ್ನು ನಗರದ ಬಳ್ಳಾರಿ ರಸ್ತೆಯ ಜೆ.ಪಿ.ನಗರದಲ್ಲಿರುವ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಬೇಕು. ಮಹನೀಯರ ತತ್ವ ಹಾಗೂ ಆದರ್ಶಗಳನ್ನು ಇಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಗೀತಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ, ದೇವಾಂಗ ಸಮುದಾಯದ ಮುಖಂಡರು, ಜೈನ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ʼಬೆಲೆ ಏರಿಕೆಯಿಂದ ನೆಲಕ್ಕೆ ಬಿದ್ದವನಿಗೆ ಒದ್ದಂತೆʼ: ಸಿಲಿಂಡರ್ ಬೆಲೆ ಏರಿಕೆಗೆ ಸಿಎಂ ಸಿದ್ದರಾಮಯ್ಯ ಟೀಕೆ
ಬೆಂಗಳೂರು: ‘ಭಾರತದ ಬಡ-ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಸಮಯದಲ್ಲಿಯೇ ಪ್ರಧಾನಿ ಮೋದಿ ಸರಕಾರ, ಎಲ್ಪಿಜಿ ಸಿಲಿಂಡರ್ ದರ 60ರೂ.ಗಳನ್ನು ಹೆಚ್ಚಿಸಿರುವುದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ‘ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು 60 ರೂ.ಗಳರಷ್ಟು ಹೆಚ್ಚಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನನಿರ್ವಹಣೆಯ ವೆಚ್ಚ ದುಬಾರಿಯಾಗಲಿದೆ. ಈ ಏರಿಕೆ ಅನಿವಾರ್ಯ ಕ್ರಮವೇನಲ್ಲ, ಇದು ಶರಣಾಗತಿಯನ್ನೇ ದೇಶದ ಕಾರ್ಯತಂತ್ರವೆಂದು ತಪ್ಪಾಗಿ ತಿಳಿದುಕೊಂಡ ವಿದೇಶಾಂಗ ನೀತಿಯ ಫಲವಾಗಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಮೂಲಕ ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿದ್ದಾರೆ ಮತ್ತು ರಷ್ಯಾ ಹಾಗೂ ಇರಾನ್ನಂತಹ ದೇಶಗಳೊಂದಿಗಿನ ಭಾರತದ ದೀರ್ಘಕಾಲೀನ ಇಂಧನ ಸಹಭಾಗಿತ್ವವನ್ನು ಹಾಳುಗೆಡವಿದ್ದಾರೆ. ಇವು ಹಲವು ದಶಕಗಳಿಂದ ಭಾರತೀಯರಿಗೆ ಇಂಧನ ಸ್ಥಿರತೆಯನ್ನು ಖಾತ್ರಿಪಡಿಸಿದ ರಾಷ್ಟ್ರಗಳು ಎಂಬುದನ್ನು ಪ್ರಧಾನಿ ಮರೆತಂತಿದೆ ಎಂದು ಅವರು ಟೀಕಿಸಿದ್ದಾರೆ. ‘ನೆಹರೂರವರ ಪ್ರಕಾರ ‘ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮವಾಗಿದೆ’ ನೆಹರೂ ಅವರು ಏಳೆಂಟು ದಶಕಗಳ ಹಿಂದೆಯೇ ನೀಡಿದ್ದ ಎಚ್ಚರಿಕೆ ಇಂದು ಅಕ್ಷರಶಃ ಸತ್ಯವಾಗಿದೆ. ರಾಜತಾಂತ್ರಿಕತೆ ಎನ್ನುವುದು ಕಾರ್ಯತಂತ್ರವಾಗದೆ, ಪ್ರದರ್ಶನದ ವಸ್ತುವಾಗಿ ಮಾರ್ಪಟ್ಟಾಗ, ಅದಕ್ಕೆ ಅನಿವಾರ್ಯವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ಬಲಿಯಾಗುತ್ತಾರೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ತಮ್ಮ ಪುಸ್ತಕದಲ್ಲಿ ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ. ನರವಣೆ ಅವರು ಭಾರತದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆ ಮತ್ತು ವ್ಯೂಹಾತ್ಮಕ ತಿಳುವಳಿಕೆಯ ಕೊರತೆಯ ಬಗ್ಗೆ ಆತಂಕಗಳನ್ನು ಎತ್ತಿದ್ದರು. ಇದು ಪ್ರಧಾನಿಗೆ ರಾಜತಾಂತ್ರಿಕ ನಿಲುವು ಮತ್ತು ಅದರ ಆರ್ಥಿಕ ಪರಿಣಾಮಗಳ ಮೂಲಭೂತ ತಿಳುವಳಿಕೆಯ ಕೊರತೆ ಇದೆ ಎಂಬ ಅನುಮಾನವನ್ನು ಖಚಿತಪಡಿಸುವಂತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಭಾರತದ ಇಂದಿನ ವಿದೇಶಾಂಗ ನೀತಿಯ ವೈಫಲ್ಯವು ಪ್ರಧಾನಿ ಮೋದಿ ಅವರಿಗೆ ಎಫ್ಸ್ಟೀನ್ ಫೈಲ್ಸ್ ನ ಬಗೆಗಿನ ಭಯ ಮತ್ತು ರಾಜತಾಂತ್ರಿಕ ತೀರ್ಮಾನಗಳಲ್ಲಿನ ಅಜ್ಞಾನವನ್ನು ತೋರುತ್ತದೆ. ಪ್ರಧಾನಿಗಳು ತಮ್ಮ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಯಾಕೆ ಬೆಲೆ ತೆರಬೇಕು ಎನ್ನುವುದನ್ನು ತಿಳಿಸಲಿ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಲಿ ಮತ್ತು ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ. ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಸಮಯದಲ್ಲಿಯೇ ಪ್ರಧಾನಿ @narendramodi ಅವರ ಸರ್ಕಾರ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಿಸಿರುವುದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ. ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು ₹60ರಷ್ಟು ಹೆಚ್ಚಿಸಿರುವುದರಿಂದ ಬಡ ಮತ್ತು ಮಧ್ಯಮ… pic.twitter.com/Bbm5w9JugR — Siddaramaiah (@siddaramaiah) March 7, 2026
ಭಾರತದ ಪ್ರಮುಖ ಕೈಗಾರಿಕೆಗಳ ಮೇಲೆ ಪಶ್ಚಿಮ ಏಷ್ಯಾ ಸಂಘರ್ಷ ಯಾವ ರೀತಿ ಪರಿಣಾಮ ಬೀರುತ್ತಿದೆ?
ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಮಾತ್ರವಲ್ಲ, ಭಾರತದ ಹಲವಾರು ಪ್ರಮುಖ ಕೈಗಾರಿಕೆಗಳ ಮೇಲೂ ಪ್ರಭಾವ ಬೀರುತ್ತಿದೆ. ಉಕ್ಕು, ರಸಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ಪ್ರಸರಣದಂತಹ ಕ್ಷೇತ್ರಗಳು ಪಶ್ಚಿಮ ಏಷ್ಯಾದಿಂದ ಅಗತ್ಯ ಕಚ್ಚಾ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿವೆ. ಭಾರತವು ಸುಣ್ಣದ ಕಲ್ಲು, ಗಂಧಕ, ಜಿಪ್ಸಮ್, ಕಬ್ಬಿಣ (DRI) ಮತ್ತು ತಾಮ್ರದ ತಂತಿಗಳಂತಹ ಪ್ರಮುಖ ಕೈಗಾರಿಕಾ ವಸ್ತುಗಳ ಪೂರೈಕೆಯ ಅರ್ಧಕ್ಕಿಂತ ಹೆಚ್ಚುವನ್ನು ಈ ಪ್ರದೇಶದಿಂದಲೇ ಪಡೆಯುತ್ತದೆ. ಪಶ್ಚಿಮ ಏಷ್ಯಾ ಪ್ರದೇಶವು ವಿಶಾಲವಾಗಿ ಆರು ಗಲ್ಫ್ ಸಹಕಾರ ಮಂಡಳಿ (GCC) ದೇಶಗಳಾದ ಬಹರೇನ್, ಕುವೈತ್, ಒಮಾನ್, ಖತರ್, ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗೆ ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ ಮತ್ತು ಯೆಮೆನ್ನಂತಹ ಇತರ ಪ್ರಾದೇಶಿಕ ಆರ್ಥಿಕತೆಗಳನ್ನೂ ಒಳಗೊಂಡಿದೆ. ಈ ಪ್ರದೇಶದಲ್ಲಿ ಸಂಘರ್ಷ ಮುಂದುವರೆದಿದ್ದು, ಕೊಲ್ಲಿಯಾದ್ಯಂತ ಹಲವಾರು ಇಂಧನ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆಯುತ್ತಿವೆ. ಇದರಿಂದ ಪೂರೈಕೆ ಅಡಚಣೆಗಳ ಭಯ ತೀವ್ರಗೊಂಡಿದೆ. ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮತ್ತು ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆ ಜಾಗತಿಕ ಇಂಧನ ಪೂರೈಕೆ ಆಘಾತದ ಕಳವಳವನ್ನು ಹೆಚ್ಚಿಸಿದೆ. ಭಾರತಕ್ಕೆ ಈ ಪ್ರದೇಶವು ಇಂಧನ ಮತ್ತು ಕೈಗಾರಿಕಾ ವಸ್ತುಗಳ ಪ್ರಮುಖ ಪೂರೈಕೆದಾರವಾಗಿದೆ. ಹೊಸದಿಲ್ಲಿ ಮೂಲದ ವ್ಯಾಪಾರ ಚಿಂತಕರ ಚಾವಡಿ GTRI ವರದಿಯ ಪ್ರಕಾರ, ಭಾರತವು 2025ರಲ್ಲಿ ಈ ಪ್ರದೇಶದಿಂದ 98.7 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಆದ್ದರಿಂದ ಈ ಪ್ರದೇಶದಲ್ಲಿನ ಯಾವುದೇ ಅಶಾಂತಿ ಅಥವಾ ಹಾರ್ಮುಜ್ ಜಲಸಂಧಿಯಂತಹ ಹಡಗು ಮಾರ್ಗಗಳಿಗೆ ಅಡ್ಡಿಯು ತೈಲ ಮತ್ತು ಅನಿಲವನ್ನು ಮೀರಿದಂತೆ ಅನೇಕ ಭಾರತೀಯ ಕೈಗಾರಿಕೆಗಳ ಮೇಲೂ ತ್ವರಿತವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ತೈಲ, ಅನಿಲವನ್ನು ಮೀರಿದ ವಲಯಗಳು ಜಗತ್ತಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆದಾರವಾಗಿರುವ ಪಶ್ಚಿಮ ಏಷ್ಯಾದಲ್ಲಿನ ಯಾವುದೇ ಅಶಾಂತಿ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ತಕ್ಷಣವೇ ದುರ್ಬಲಗೊಳಿಸುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಯುದ್ಧದ ಪರಿಣಾಮಗಳು ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಭಾರತದಲ್ಲಿ ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮಾತ್ರ ಸಂಗ್ರಹವಾಗಿರುವುದರಿಂದ ಭಾರತೀಯ ಸಂಸ್ಕರಣಾಗಾರಗಳು ರಷ್ಯಾದಿಂದ ಹೆಚ್ಚಿನ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಲು ಪ್ರಾರಂಭಿಸಿವೆ. ಅದೇ ಸಮಯದಲ್ಲಿ ಖತರ್ನಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಸರಬರಾಜು ಕಡಿತಗೊಳಿಸುವ ಬಗ್ಗೆ ಅನಿಲ ಕಂಪನಿಗಳು ಯೋಚಿಸುತ್ತಿವೆ. ಆದಾಗ್ಯೂ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಗೆ ಅಡಚಣೆಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಪರಿಣಾಮವು ಇಂಧನ ವಲಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಜಿಟಿಆರ್ಐ ವರದಿಯ ಪ್ರಕಾರ ರಸಗೊಬ್ಬರ ಪೂರೈಕೆ, ಉತ್ಪಾದನಾ ಒಳಹರಿವು, ನಿರ್ಮಾಣ ಸಾಮಗ್ರಿಗಳು ಮತ್ತು ವಜ್ರಗಳಂತಹ ರಫ್ತು ಕೈಗಾರಿಕೆಗಳಲ್ಲಿಯೂ ಇದರ ಪರಿಣಾಮ ಕಾಣಿಸಬಹುದು. ಸಂಘರ್ಷ ಮುಂದುವರಿದರೆ ಈ ಪ್ರದೇಶದಿಂದ ಖನಿಜ ಆಮದನ್ನು ಅವಲಂಬಿಸಿರುವ ನಿರ್ಮಾಣ ವಲಯದ ಮೇಲೂ ಪರಿಣಾಮ ಬೀರುತ್ತದೆ. GTRI ವರದಿಯ ಪ್ರಕಾರ ಭಾರತವು ಪಶ್ಚಿಮ ಏಷ್ಯಾದಿಂದ 483 ಮಿಲಿಯನ್ ಡಾಲರ್ ಮೌಲ್ಯದ ಸುಣ್ಣದ ಕಲ್ಲನ್ನು ಆಮದು ಮಾಡಿಕೊಂಡಿದೆ, ಇದು ಅದರ ಒಟ್ಟು ಆಮದಿನ 68.5% ರಷ್ಟಾಗಿದೆ. ಅದೇ ವೇಳೆ 129 ಮಿಲಿಯನ್ ಡಾಲರ್ ಮೌಲ್ಯದ ಜಿಪ್ಸಮ್ ಅನ್ನು ಆಮದು ಮಾಡಿಕೊಂಡಿದ್ದು, ಇದು ಆಮದುಗಳಲ್ಲಿ 62.1% ರಷ್ಟಾಗಿದೆ. ನಿರ್ಮಾಣ ಪರಿಸರ ವ್ಯವಸ್ಥೆಗೆ ಈ ಎರಡೂ ಖನಿಜಗಳು ನಿರ್ಣಾಯಕವಾಗಿವೆ. ಸಿಮೆಂಟ್ ಉತ್ಪಾದನೆಗೆ ಸುಣ್ಣದ ಕಲ್ಲು ಪ್ರಮುಖ ವಸ್ತುವಾಗಿದ್ದು, ಜಿಪ್ಸಮ್ ಅನ್ನು ಸಿಮೆಂಟ್ ಹಾಗೂ ಇತರ ನಿರ್ಮಾಣ ಸಾಮಗ್ರಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾದರೆ ಸಿಮೆಂಟ್ ಬೆಲೆಗಳು ಏರಬಹುದು ಮತ್ತು ಮೂಲಸೌಕರ್ಯ ಯೋಜನೆಗಳು ವಿಳಂಬಗೊಳ್ಳಬಹುದು. ಭಾರತವು ಪಶ್ಚಿಮ ಏಷ್ಯಾದಿಂದ 420 ಮಿಲಿಯನ್ ಡಾಲರ್ ಮೌಲ್ಯದ ಸಲ್ಫರ್ ಅನ್ನು ಆಮದು ಮಾಡಿಕೊಂಡಿದೆ, ಇದು ಅದರ ಆಮದುಗಳಲ್ಲಿ 65.8% ರಷ್ಟಾಗಿದೆ. ರಸಗೊಬ್ಬರಗಳು ಹಾಗೂ ಹಲವು ರಾಸಾಯನಿಕ ಕೈಗಾರಿಕೆಗಳಿಗೆ ಅಗತ್ಯವಾದ ಗಂಧಕವನ್ನು ಸಲ್ಫ್ಯೂರಿಕ್ ಆಮ್ಲ ಉತ್ಪಾದನೆಗೆ ಬಳಸಲಾಗುತ್ತದೆ. ಅದೇ ರೀತಿ ಭಾರತವು ಈ ಪ್ರದೇಶದಿಂದ 190 ಮಿಲಿಯನ್ ಡಾಲರ್ ಮೌಲ್ಯದ ಡೈರೆಕ್ಟ್ ರೆಡ್ಯೂಸ್ಡ್ ಕಬ್ಬಿಣ (DRI) ಅನ್ನು ಆಮದು ಮಾಡಿಕೊಂಡಿದ್ದು, ಇದು ಅದರ ಆಮದುಗಳಲ್ಲಿ 59.1% ಅನ್ನು ಪ್ರತಿನಿಧಿಸುತ್ತದೆ. DRI ಉಕ್ಕು ತಯಾರಿಕೆಯಲ್ಲಿ ಬಳಸುವ ಪ್ರಮುಖ ವಸ್ತುವಾಗಿದೆ. ಭಾರತವು ಪಶ್ಚಿಮ ಏಷ್ಯಾದಿಂದ 869 ಮಿಲಿಯನ್ ಡಾಲರ್ ಮೌಲ್ಯದ ತಾಮ್ರದ ತಂತಿಯನ್ನೂ ಆಮದು ಮಾಡಿಕೊಂಡಿದೆ, ಇದು ಅದರ ಒಟ್ಟು ಸರಕುಗಳ ಆಮದಿನ 50.7% ರಷ್ಟಾಗಿದೆ. ತಾಮ್ರದ ತಂತಿ ವಿದ್ಯುತ್ ಪ್ರಸರಣ ಜಾಲಗಳು, ವಿದ್ಯುತ್ ಉಪಕರಣಗಳು ಹಾಗೂ ನವೀಕರಿಸಬಹುದಾದ ಇಂಧನ ಮೂಲಸೌಕರ್ಯಗಳಲ್ಲಿ ಪ್ರಮುಖ ಅಂಶವಾಗಿದೆ. ಆದ್ದರಿಂದ ಈ ವಲಯವು ಈ ಪ್ರದೇಶದಿಂದ ಪೂರೈಕೆಯಲ್ಲಿ ಉಂಟಾಗುವ ಯಾವುದೇ ಅಡಚಣೆಗೆ ಗುರಿಯಾಗುವ ಸಾಧ್ಯತೆ ಇದೆ. ಸಂಘರ್ಷವು ಭಾರತದ ವಜ್ರ ಸಂಸ್ಕರಣಾ ಉದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಶವು ತನ್ನ ಕಚ್ಚಾ ವಜ್ರಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ನಂತರ ಅವುಗಳನ್ನು ಭಾರತದ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೇಂದ್ರಗಳಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಗುಜರಾತ್ನ ಸೂರತ್ನಲ್ಲಿ ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗಳಿಗೆ ಪಾಲಿಶ್ ಮಾಡಿದ ವಜ್ರಗಳಾಗಿ ರಫ್ತು ಮಾಡಲಾಗುತ್ತದೆ. ಉಕ್ಕಿನ ವಲಯದ ಮೇಲೆ ಒತ್ತಡ ಕೆಲವು ಕಚ್ಚಾ ವಸ್ತುಗಳಿಗೆ ಪರ್ಯಾಯ ಮೂಲಗಳು ಲಭ್ಯವಿದ್ದರೂ, ಹೆಚ್ಚುತ್ತಿರುವ ಇಂಧನ ವೆಚ್ಚಗಳು ದೊಡ್ಡ ಕಳವಳವನ್ನು ಉಂಟುಮಾಡುತ್ತವೆ ಎಂದು ಕೈಗಾರಿಕಾ ತಜ್ಞರು ಹೇಳುತ್ತಾರೆ. ಸುಣ್ಣದ ಕಲ್ಲು ಮತ್ತು ಡಿಆರ್ಐನಂತಹ ವಸ್ತುಗಳಿಗೆ ಪರ್ಯಾಯ ಮೂಲಗಳು ಲಭ್ಯವಿದ್ದರೂ, ನಿಜವಾದ ಸವಾಲು ತೈಲ ಮತ್ತು ಅನಿಲ ಬೆಲೆಗಳ ಏರಿಳಿತವಾಗಿದೆ. “ಸುಣ್ಣದ ಕಲ್ಲನ್ನು ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಿಂದ ಪಡೆಯಬಹುದು. ಅಗತ್ಯವಿದ್ದರೆ ಡಿಆರ್ಐ ಲಿಬಿಯಾ ಅಥವಾ ಮಲೇಷ್ಯಾದಂತಹ ಸ್ಥಳಗಳಿಂದಲೂ ಪಡೆಯಬಹುದು. ಆದರೆ ತೈಲ ಮತ್ತು ಅನಿಲ ಬೆಲೆಗಳ ಚಲನೆಯೇ ನಿಜವಾದ ಸವಾಲು” ಎಂದು ತಜ್ಞರೊಬ್ಬರು ಹೇಳಿದ್ದಾರೆ. ಭಾರತದಲ್ಲಿನ ಉಕ್ಕಿನ ಉದ್ಯಮವು ತನ್ನ ಡಿಕಾರ್ಬೊನೈಸೇಶನ್ ಪ್ರಯತ್ನಗಳ ಭಾಗವಾಗಿ ಅನಿಲವನ್ನು ಅವಲಂಬಿಸಿದೆ. ಇದರಿಂದ ಅದು ಜಾಗತಿಕ ಅನಿಲ ಮಾರುಕಟ್ಟೆಯ ಏರಿಳಿತಗಳಿಗೆ ಗುರಿಯಾಗುತ್ತದೆ. ಉಕ್ಕಿನ ಉದ್ಯಮವು ಅಗತ್ಯ ವಸ್ತುಗಳು ಮತ್ತು ಇಂಧನವನ್ನು ಪಡೆಯಲು ಈಗಾಗಲೇ ಸವಾಲು ಎದುರಿಸುತ್ತಿದೆ. ಹೆಚ್ಚಿನ ಉಕ್ಕು ಸ್ಥಾವರಗಳು ಕಾರ್ಯನಿರ್ವಹಿಸಲು LPG ಮತ್ತು LNG ನಂತಹ ಇಂಧನಗಳನ್ನು ಅವಲಂಬಿಸಿವೆ. ಆದರೆ ಸ್ಥಿರವಾದ ಪೂರೈಕೆಯನ್ನು ಪಡೆಯುವುದು ನಿಜವಾದ ಸಮಸ್ಯೆಯಾಗಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿಯ (EEPC) ಅಧ್ಯಕ್ಷ ಪಂಕಜ್ ಚಡ್ಡಾ ತಿಳಿಸಿದ್ದಾರೆ. ಆದಾಗ್ಯೂ, ರಸಗೊಬ್ಬರ ವಲಯವು ತಕ್ಷಣವೇ ಪರಿಣಾಮ ಅನುಭವಿಸುವುದಿಲ್ಲ. ಆದರೆ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಅಡಚಣೆಗಳು ಮುಂದುವರಿದರೆ ಪರಿಣಾಮ ಬೀರುವ ಸಾಧ್ಯತೆ ಇದೆ. ICRA ಲಿಮಿಟೆಡ್ನ ಕಾರ್ಪೊರೇಟ್ ರೇಟಿಂಗ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ವಶಿಷ್ಠ ಅವರ ಪ್ರಕಾರ, ಎಲ್ಎನ್ಜಿ ಮತ್ತು ಸಲ್ಫರ್ನಂತಹ ರಸಗೊಬ್ಬರ ಉತ್ಪಾದನೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಉಂಟಾಗುವ ಅಡಚಣೆಗಳು ಭಾರತದಲ್ಲಿ ರಸಗೊಬ್ಬರ ಬಳಕೆಯ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಆದರೆ ಎಲ್ಎನ್ಜಿ ಪೂರೈಕೆಯಲ್ಲಿ ಅಡಚಣೆಗಳು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಮುಂಬರುವ ಋತುವಿನಲ್ಲಿ ದೇಶೀಯ ಯೂರಿಯಾ ಉತ್ಪಾದನೆ ಮತ್ತು ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ರಸಗೊಬ್ಬರ ಉದ್ಯಮವು ಸಲ್ಫರ್ಗಾಗಿ ಆಗ್ನೇಯ ಏಷ್ಯಾದಂತಹ ಇತರ ಪೂರೈಕೆದಾರರನ್ನು ಹುಡುಕುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅನಿಲ ಮತ್ತು ಅಡುಗೆ ಇಂಧನ ಭಾರತದ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳಲ್ಲಿ ಪಶ್ಚಿಮ ಏಷ್ಯಾ 68% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇದನ್ನು ರಸಗೊಬ್ಬರ ಸ್ಥಾವರಗಳು, ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳು ಹಾಗೂ CNG ಮತ್ತು ಪೈಪ್ಡ್ ಅಡುಗೆ ಅನಿಲವನ್ನು ಪೂರೈಸುವ ನಗರ ಅನಿಲ ವಿತರಣಾ ಜಾಲಗಳಲ್ಲಿ ಬಳಸಲಾಗುತ್ತದೆ. ಅಡಚಣೆ ಈಗಾಗಲೇ ಪರಿಣಾಮ ತೋರಿಸಲು ಪ್ರಾರಂಭಿಸಿದೆ. ಹಡಗು ಸಂಚಾರದ ಮೇಲಿನ ನಿರ್ಬಂಧಗಳ ಕಾರಣದಿಂದ ಖತರ್ನ ಪೆಟ್ರೋನೆಟ್ LNG ಸಂಸ್ಥೆ 2026 ಮಾರ್ಚ್ 4ರಿಂದ GAIL ಗೆ ಎಲ್ಎನ್ಜಿ ಸರಬರಾಜನ್ನು ನಿಲ್ಲಿಸಿದೆ. ಅಡುಗೆ ಇಂಧನದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ LPG ಆಮದುಗಳಲ್ಲಿ ಸುಮಾರು 47% ಪಶ್ಚಿಮ ಏಷ್ಯಾದಿಂದ ಬರುತ್ತವೆ. ದೇಶೀಯ ಸಂಗ್ರಹವು ಕೇವಲ ಎರಡು ವಾರಗಳ ಬಳಕೆಗೆ ಮಾತ್ರ ಸಾಕಾಗುವ ಹಿನ್ನೆಲೆ, ದೀರ್ಘಕಾಲದ ಅಡಚಣೆ ಉಂಟಾದರೆ ಲಕ್ಷಾಂತರ ಮನೆಗಳಿಗೆ ಅಡುಗೆ ಅನಿಲ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದಲ್ಲದೆ ಭಾರತವು ಪಶ್ಚಿಮ ಏಷ್ಯಾದಿಂದ 1.9 ಶತಕೋಟಿ ಡಾಲರ್ ಮೌಲ್ಯದ ಸಂಸ್ಕರಿಸಿದ ಇಂಧನಗಳನ್ನು ಆಮದು ಮಾಡಿಕೊಂಡಿದ್ದು, ಇದು ಆಮದುಗಳಲ್ಲಿ 19.7% ಅನ್ನು ಪ್ರತಿನಿಧಿಸುತ್ತದೆ. ಅದೇ ವೇಳೆ 1.3 ಶತಕೋಟಿ ಡಾಲರ್ ಮೌಲ್ಯದ ಪೆಟ್ರೋಲಿಯಂ ಕೋಕ್ ಅನ್ನು ಆಮದು ಮಾಡಿಕೊಂಡಿದೆ, ಇದು ಆಮದುಗಳಲ್ಲಿ 37.3% ರಷ್ಟಾಗಿದೆ. ಪೆಟ್ರೋಲಿಯಂ ಕೋಕ್ ಅನ್ನು ಸಿಮೆಂಟ್ ಸ್ಥಾವರಗಳು, ಅಲ್ಯೂಮಿನಿಯಂ ಕರಗಿಸುವ ಘಟಕಗಳು ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಪೂರೈಕೆಯಲ್ಲಿ ಕೊರತೆ ಉಂಟಾದರೆ ಈ ವಲಯಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚುವ ಸಾಧ್ಯತೆ ಇದ್ದು, ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳು ನಿಧಾನಗೊಳ್ಳಬಹುದು.
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ
T20 World Cup Final 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 8) ನಡೆಯುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿವೆ. ಈ ಕ್ಷಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಏನಾಗಲಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿದೆ. ಹಾಗಾದ್ರೆ, ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ
ದೋಷಪೂರಿತ ನಂಬರ್ ಪ್ಲೇಟ್ ವಾಹನಗಳ ವಿರುದ್ಧ ವಿಜಯನಗರ ಪೊಲೀಸರ ವಿಶೇಷ ಕಾರ್ಯಾಚರಣೆ : 288 ಪ್ರಕರಣಗಳು ದಾಖಲು
ವಿಜಯನಗರ: ದೋಷಪೂರಿತ ಹಾಗೂ ನಿಯಮಬಾಹಿರ ನಂಬರ್ ಪ್ಲೇಟ್ ಅಳವಡಿಸಿಕೊಂಡ ವಾಹನಗಳ ವಿರುದ್ಧ ವಿಜಯನಗರ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಐಎಂವಿ (IMV) ಕಾಯ್ದೆ ಅನ್ವಯ ದೋಷಪೂರಿತ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಂಡು ಒಟ್ಟು 288 ಪ್ರಕರಣಗಳನ್ನು ದಾಖಲಿಸಲಾಗಿದೆ. ಉಪವಿಭಾಗವಾರು ದಾಖಲಾಗಿರುವ ಪ್ರಕರಣಗಳು : • ಹೊಸಪೇಟೆ ಉಪವಿಭಾಗ: 65 ಪ್ರಕರಣಗಳು • ಕೂಡ್ಲಿಗಿ ಉಪವಿಭಾಗ: 73 ಪ್ರಕರಣಗಳು • ಹರಪನಹಳ್ಳಿ ಉಪವಿಭಾಗ: 150 ಪ್ರಕರಣಗಳು ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ವಾಹನ ಚಾಲನೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ (DL), ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC), ಇನ್ಶುರೆನ್ಸ್ ಹಾಗೂ ಮಾಲಿನ್ಯ ಪ್ರಮಾಣಪತ್ರ (PUC) ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದೆ. ವಾಹನಗಳಲ್ಲಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
‘ಅನ್ವೇಷಣಾ’ ರಾಷ್ಟ್ರ ಮಟ್ಟದ ಸಂಶೋಧನಾ ವಿಚಾರ ಸಂಕಿರಣ
ಉಡುಪಿ, ಮಾ.7: ಉದ್ಯಾವರದ ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ಮಾ.6ರಂದು ಒಂದು ದಿನದ ರಾಷ್ಟ್ರಮಟ್ಟದ ಸಂಶೋಧನಾ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕ ಡಾ.ಲಕ್ಷ್ಮೀನಾರಾಯಣ ಶೆಣೈ ಮಾತನಾಡಿ, ಪ್ರಕೃತಿಯ ಪರಿ ವೀಕ್ಷಣೆಯೇ ಎಲ್ಲಾ ಸಂಶೋಧನೆಗಳ ಮೂಲ ಹಾಗೂ ಕೃತಕ ಬುದ್ಧಿಮತ್ತೆಯ ಪ್ರಾಮಾಣಿಕತೆಯ ಪರಿಶೀಲನೆ ಚರ್ಚಾಸ್ಪದವಾಗಿದೆ ಎಂದು ಹೇಳಿದರು. ಮೈಸೂರಿನ ರಾಷ್ಟ್ರೀಯ ಎಂಜಿನಿಯರಿಂಗ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಶ್ರೀನಾಥ್ ರಾಮ್ ಪುರೆ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು. ಸಮ್ಮೇಳನದ ಮುಖ್ಯ ಸಂಘಟಕ ಡಾ.ಅಶೋಕ್ ಕುಮಾರ್ ಬಿ.ಎನ್. ಸ್ವಾಗತಿಸಿದರು. ಸಂಸ್ಥೆಯ ಬಾಲರೋಗ ವಿಭಾಗದ ಸಹ ಪ್ರಾಧ್ಯಾಪಕ ಸಹನಾ ಶಂಕರಿ ವಂದಿಸಿದರು, ಸಹಾಯಕ ಪ್ರಾಧ್ಯಾಪಕ ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲದ ಮುನಿಯಾಲ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್, ಕ್ಲಿನಿಕಲ್ ಸ್ಟಡಿ ಡಿಸೈನ್ ವಿಷಯವಾಗಿ ಉಪನ್ಯಾಸ ನೀಡಿದರು. ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕ ಡಾ.ಲಕ್ಷ್ಮೀನಾರಾಯಣ ಶೆಣೈ ಬಯೋ ಸ್ಟ್ಯಾಟಿಸ್ಟಿಕ್ಸ್ ಇನ್ ಆಯುರ್ವೇದ ವಿಷಯವನ್ನು ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಎಲ್.ಹೆಗ್ಡೆ, ಸಂಸ್ಥೆಯ ಅಗದತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರವಿಕೃಷ್ಣ ಎಸ್. ಹಾಗೂ ಇಂಟೆಗ್ರೇಟೆಡ್ ಹೆಲ್ತ್ ಆಂಡ್ ಟ್ರಾನ್ಸಿಷನಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ.ಸಂದೇಶ್ ಕುಮಾರ್ ಉಪನ್ಯಾಸ ನೀಡಿದರು. ಸಮಾರೋಪ ಸಮಾರಂಭ: ಸಂಕಿರಣದ ಉಪನ್ಯಾಸಗಳ ಮೇಲ್ವಿಚಾರಕ ಡಾ.ನವೀನ್ ಚಂದ್ರ ಎನ್.ಎಚ್. ಸಮ್ಮೇಳನದ ಸಾರಾಂಶವನ್ನು ವಿವರಿಸಿ ದರು. ಕಾರ್ಯಕ್ರಮದ ಮುಖ್ಯ ರೂವಾರಿ ಡಾ.ಲಕ್ಷ್ಮೀನಾರಾಯಣ ಶೆಣೈ ಅವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ಡಾ.ನಾಗರಾಜ್ ಎಸ್. ವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸಮ್ಮೇಳನದ ಮುಖ್ಯ ಸಂಘಟಕ ಡಾ.ಅಶೋಕ್ ಕುಮಾರ್ ಬಿ.ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದ ಉಪ ಕಾರ್ಯದರ್ಶಿ ಹಾಗೂ ಇಂಟೆಗ್ರೇಟೆಡ್ ಹೆಲ್ತ್ ಆಂಡ್ ಟ್ರಾನ್ಸಿಷನಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ.ಸಂದೇಶ್ ಕುಮಾರ್ ವಂದಿಸಿದರು. ಸಂಸ್ಥೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೇಘನಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ| ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳವು ಪ್ರಕರಣ: ಇಬ್ಬರು ಕುಖ್ಯಾತ ಅಂತರ್ರಾಜ್ಯ ಕಳವು ಆರೋಪಿಗಳ ಬಂಧನ
ಕಾಪು: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಜ.30ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ರಾಜ್ಯದ ತಿರುನಲ್ವೇಲಿ ತಿರುಕ್ಕುರುಂಕುಡಿಯ ಎಸಾಕ್ಕಿ ರಾಜ (28) ಹಾಗೂ ಆತನ ಸಹಚರ ನಂಬಿ ರಾಜ (23) ಬಂಧಿತ ಆರೋಪಿಗಳು. ಕಾಪು ದಿವಾಕರ ಶೆಟ್ಟಿ ಕುಟುಂಬದವರು ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ಮನೆಗೆ ಬೀಗ ಹಾಕಿ ಮುಂಬಯಿಗೆ ಹೋಗಿದ್ದು, ಈ ಸಂದರ್ಭದಲ್ಲಿ ಮನೆಯ ಮುಖ್ಯ ಬಾಗಿಲ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ದೇವರ ಕೋಣೆಯಲ್ಲಿದ್ದ ಮತ್ತು ಬೆಡ್ರೂಂನ ಕಪಾಟಿನಲ್ಲಿದ್ದ ಬೆಳ್ಳಿ ಹಾಗೂ 30 ಗ್ರಾಂ ತೂಕದ ಕರಗಿಸಿದ ಗಟ್ಟಿ ಚಿನ್ನ, ವಾಚ್ ಹಾಗೂ ನಗದು ಸೇರಿ ಒಟ್ಟು 19,05,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕುಖ್ಯಾತ ಅಂತರ್ ರಾಜ್ಯ ಕಳ್ಳವು ಆರೋಪಿ ಎಸಾಕ್ಕಿ ರಾಜಾ ಮತ್ತು ಆತನ ಸಹಚರ ನಂಬಿ ರಾಜ ಎಂಬಾತನನ್ನು ಬಂಧಿಸಿದರು. ಈ ಪ್ರಕರಣದಲ್ಲಿ ತಮಿಳುನಾಡು ರಾಜ್ಯದ ಉಳಿದ ಪ್ರಮುಖ ಮೂರು ಆರೋಪಿಗಳು ಭಾಗಿಯಾಗಿದ್ದು, ಇವರನ್ನು ಪತ್ತೆ ಹಚ್ಚಿ, ಸೊತ್ತು ವಶಪಡಿಸಿಕೊಳ್ಳಲು ಬಾಕಿ ಇದೆ. ಈ ಆರೋಪಿಗಳ ವಿರುದ್ಧ ಕೇರಳ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸುಧಾಕರ ಎಸ್.ನಾಯ್ಕ, ಕಾರ್ಕಳ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ನೇತೃತ್ವದಲ್ಲಿ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ. ಹಾಗೂ ಕಾಪು ಪೊಲೀಸ್ ಎಸ್ಸೈಗಳಾದ ತೇಜಸ್ವಿ ಟಿ.ಐ., ಶುಭಕರ, ಮತ್ತು ಸಿಬ್ಬಂದಿ ಮಹಮ್ಮದ್ ರಫೀಕ್, ನಾರಾಯಣ, ಮೋಹನ ಚಂದ್ರ, ರಘು, ಪಡುಬಿದ್ರಿ ಠಾಣೆಯ ಎಎಎಸ್ಸೈ ರಾಜೇಶ್, ಶಿರ್ವ ಠಾಣೆಯ ದಯಾನಂದ ಪ್ರಭು ಮತ್ತು ಅನ್ವರ್ ಆಲಿ ಹಾಗೂ ಕಾಪು ವೃತ್ತ ಕಛೇರಿಯ ಸಿಬ್ಬಂದಿ ಶರಣಪ್ಪ ಹಾಗೂ ಜೀವನ್ ಮತ್ತು ಜೀಪು ಚಾಲಕರಾದ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಈ ಕಾರ್ಯಾಚರಣೆ ನಡೆಸಿದ್ದಾರೆ.
ನೇಪಾಳದ Gen Z ದಂಗೆಯ ಬಳಿಕ ಪ್ರಧಾನಿ ಗದ್ದುಗೆಯೇರಲಿರುವ ಬಲೇಂದ್ರ ಶಾಗೆ ಇದೆ ಬೆಂಗಳೂರು ನಂಟು
ನೇಪಾಳ ಚುನಾವಣೆಯಲ್ಲಿ ಬಲೇಂದ್ರ ‘ಬಲೇನ್’ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ರ್ಯಾಪರ್ ಆಗಿದ್ದ ಬಲೇನ್ ಶಾ ರಾಜಕಾರಣಕ್ಕೆ ಪ್ರವೇಶಿಸಿ ಮೇಯರ್ ಆಗಿದ್ದರು. ಇದೀಗ ಅವರು ನೇಪಾಳದ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ರಾಷ್ಟ್ರಾದ್ಯಂತ ನಡೆದ Gen Z ದಂಗೆಯ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಶಾ ಅವರ ಪಕ್ಷವನ್ನು Gen Z ಬೆಂಬಲಿತ ಪಕ್ಷವೆಂದು ವ್ಯಾಪಕವಾಗಿ ನೋಡಲಾಗುತ್ತಿದೆ. ಬಲೇಂದ್ರ ಶಾ ಅವರು ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಝಾಪಾ ಕ್ಷೇತ್ರದಲ್ಲಿ ಸೋಲಿಸಿದ್ದು, RSP ರಾಷ್ಟ್ರೀಯ ಮಟ್ಟದಲ್ಲಿಯೂ ಭರ್ಜರಿ ಗೆಲುವಿನತ್ತ ಸಾಗುತ್ತಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತೋರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಬಲ ಉಪಸ್ಥಿತಿಯನ್ನು ಹೊಂದಿದ್ದ ಮಾಜಿ ರ್ಯಾಪರ್ ಶಾ, ಡಿಜಿಟಲ್ ಸಂಪರ್ಕ, ಆಡಳಿತ ವಿರೋಧಿ ಸಂದೇಶ ಮತ್ತು ಸಾಂಪ್ರದಾಯಿಕ ರಾಜಕೀಯ ಗಣ್ಯರ ವಿರುದ್ಧದ ಕಟು ಟೀಕೆಗಳ ಮೂಲಕ ಯುವ ನಗರ ಮತದಾರರ ಬೆಂಬಲ ಗಳಿಸಿದ್ದರು. ‘ಬಲೇನ್’ ಎಂದೇ ಜನಪ್ರಿಯವಾಗಿರುವ 35 ವರ್ಷ ವಯಸ್ಸಿನ ಬಲೇಂದ್ರ ಶಾ ಮೇ 2022 ರಿಂದ 2026 ಜನವರಿವರೆಗೆ ಕಠ್ಮಂಡುವಿನ 15ನೇ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಬಲೇಂದ್ರ ಶಾ ಯಾರು? 1990ರಲ್ಲಿ ಕಠ್ಮಂಡುವಿನಲ್ಲಿ ಜನಿಸಿದ ಬಲೇಂದ್ರ ಶಾ, ಭಾರತದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವ ಮೊದಲು ನೇಪಾಳದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ್ದರು. ತಮ್ಮ ರಾಜಕೀಯ ವೃತ್ತಿಜೀವನಕ್ಕೆ ಮುಂಚಿತವಾಗಿ ಅವರು ನೇಪಾಳದ ಹಿಪ್-ಹಾಪ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸಂಗೀತವನ್ನು ಬಳಸುತ್ತಿದ್ದರು. ಬಲೇನ್ ಹಲವಾರು ಹಾಡುಗಳನ್ನು ಬರೆದಿದ್ದಾರೆ. ತ್ಯಾಗ ಎಂದರ್ಥವಿರುವ ನೇಪಾಳಿ ಭಾಷೆಯ “ಬಲಿದಾನ್” ಹಾಡು ಯೂಟ್ಯೂಬ್ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಇದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ. ಈ ಹಾಡಿನಲ್ಲಿನ ಒಂದು ಸಾಲು ಹೀಗಿದೆ: “ಸರ್ಕಾರವೇ, ನನ್ನ ಮಾತು ಕೇಳಿ – ಮಾತನಾಡುವುದು ಅಪರಾಧವಲ್ಲ. ಸತ್ಯ ಹೇಳಲು ನಾನು ಹೆದರುವುದಿಲ್ಲ. ದನಿಯೆತ್ತಿದ್ದಕ್ಕಾಗಿ ನನಗೆ ನಿಜವಾಗಿಯೂ ಕಾನೂನಿನಿಂದ ಶಿಕ್ಷೆಯಾಗುತ್ತದೆಯೇ?” ಬಲೇನ್ ಮೊದಲು ಹೆಸರು ಮಾಡಿದ್ದು 2013ರಲ್ಲಿ. ಅದು ರಾಜಕೀಯದಲ್ಲಿ ಅಲ್ಲ, ರ್ಯಾಪ್ ಜಗತ್ತಿನಲ್ಲಿ. ಅವರು ನೇಪಾಳದಲ್ಲಿ ‘ರಾ ಬಾರ್ಜ್’ ಎಂದು ಕರೆಯಲ್ಪಡುವ ಜನಪ್ರಿಯ ರ್ಯಾಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದರು. ಶಾ ಪಕ್ಷೇತರ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿದರು. 2022ರ ಕಠ್ಮಂಡು ಮೇಯರ್ ಚುನಾವಣೆಯಲ್ಲಿ 61,000 ಕ್ಕೂ ಹೆಚ್ಚು ಮತಗಳಿಂದ ಗೆದ್ದು, ಸ್ಥಾಪಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿದರು. 2018ರಲ್ಲಿ ಲೇಖಕಿ ಸಬೀನಾ ಕಫ್ಲೆ ಅವರನ್ನು ವಿವಾಹವಾದ ಬಲೇನ್ ಅವರಿಗೆ ಒಬ್ಬಳು ಮಗಳಿದ್ದಾಳೆ. ಬಲೇನ್ಗೆ ಬೆಂಗಳೂರು ನಂಟು ನೇಪಾಳದ ಪ್ರಧಾನಿ ಗದ್ದುಗೆಯೇರಲಿರುವ ಬಲೇನ್ ಅವರಿಗೆ ಬೆಂಗಳೂರಿನೊಂದಿಗೆ ನಂಟು ಇದೆ. 2016 ರಿಂದ 2018ರ ನಡುವೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMIT) ನಲ್ಲಿ MTech ವಿದ್ಯಾರ್ಥಿಯಾಗಿದ್ದರು. ಸ್ಟ್ರಕ್ಚರಲ್ ಎಂಜಿನಿಯರಿಂಗ್ ಕೋರ್ಸ್ನ ಮೊದಲ ಬ್ಯಾಚ್ನ ವಿದ್ಯಾರ್ಥಿಯಾಗಿದ್ದರು. YouTube ನಲ್ಲಿ ಅವರ ಜನಪ್ರಿಯತೆಯಿಂದಾಗಿ ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಲ್ಲಿ ರ್ಯಾಪರ್ ಆಗಿ ಪರಿಚಿತರಾಗಿದ್ದರು. ಆದರೆ ಬೆಂಗಳೂರಿನಲ್ಲಿರುವ ಅವರ ಶಿಕ್ಷಕರು, ಬಲೇನ್ ಕಠ್ಮಂಡುವಿನ ಮೇಯರ್ ಆಗುವ ಮೊದಲು ಅವರ ರಾಜಕೀಯ ಆಕಾಂಕ್ಷೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, NMIT ಪ್ರೊಫೆಸರ್ ಭಾರತಿ ಗಣೇಶ್ ಅವರು ತಮ್ಮ ವಿದ್ಯಾರ್ಥಿಯಾಗಿದ್ದ ಶಾ ಅವರನ್ನು ಶ್ರದ್ಧೆಯಿಂದ ಕಲಿಯುವ ವಿದ್ಯಾರ್ಥಿ ಹಾಗೂ ಪ್ರಸಿದ್ಧ ರ್ಯಾಪರ್ ಎಂದು ನೆನಪಿಸಿಕೊಂಡರು. ತಾನು ಕಲಿಸಿದ ಅನೇಕ ನೇಪಾಳಿ ವಿದ್ಯಾರ್ಥಿಗಳು ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದು, ಬಲೇನ್ ರ್ಯಾಪರ್ ಆಗಿದ್ದರು. “ನಾವು ಅವರ ಶೋಗಳ YouTube ವಿಡಿಯೊಗಳನ್ನು ನೋಡುತ್ತಿದ್ದೆವು,” ಎಂದಿದ್ದಾರೆ. ಬೆಂಗಳೂರಿನಲ್ಲಿ ಅವರ ರ್ಯಾಪ್ ಸಂಗೀತವು ಗೆಳೆಯರಲ್ಲಿ ಜನಪ್ರಿಯವಾಗಿದ್ದರೂ, ಅದು ನೀಡುವ ಸಾಮಾಜಿಕ ಸಂದೇಶಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಅವರು ತರಗತಿಗಳನ್ನು ತಪ್ಪಿಸುತ್ತಿರಲಿಲ್ಲ. ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರವೂ ಅವರು ನನಗೆ ಮತ್ತು ಇತರ ಅಧ್ಯಾಪಕರಿಗೆ ಸಂದೇಶ ಕಳುಹಿಸುತ್ತಿದ್ದರು. 2022ರಲ್ಲಿ ಅವರು ನೇಪಾಳದ ಕಠ್ಮಂಡು ಮೆಟ್ರೋಪಾಲಿಟನ್ ನಗರದ ಮೇಯರ್ ಆಗಿ ಆಯ್ಕೆಯಾದಾಗ ಅವರನ್ನು ಅಭಿನಂದಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದರ ನಂತರ ನಾನು ಅವರನ್ನು ‘ಮೇಯರ್ ಸಾಬ್’ ಎಂದು ತಮಾಷೆಯಾಗಿ ಕರೆದಿದ್ದೇನೆ ಎಂದು ಭಾರತಿ ಗಣೇಶ್ ಹೇಳಿದ್ದಾರೆ. ಈಗ ಎನ್ಎಂಐಟಿಯಲ್ಲಿ ಉಪ ನೋಂದಣಿ ಅಧಿಕಾರಿಯಾಗಿರುವ ಶ್ರೇಯಸ್ ಹೇಳುವಂತೆ, ಬಲೇನ್ ಕಾಲೇಜು ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ಅವರಿಗಿಬ್ಬರು ಸ್ನೇಹಿತರಿದ್ದರು. ಅವರಲ್ಲಿ ಒಬ್ಬರು ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತರ ಇಬ್ಬರು ನೇಪಾಳಿ ವಿದ್ಯಾರ್ಥಿಗಳ ಹೆಸರು ಪ್ರವೀಣ್ ಶ್ರೇಷ್ಠ ಮತ್ತು ಸುನಿಲ್ ಲನ್ಸಾಲ್. ಅವರು ಮೂವರೂ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಅವರು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದು, ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದರು. ನನಗೆ ನೆನಪಿರುವಂತೆ ಅವರು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರು ಎಂದು ಶ್ರೇಯಸ್ ತಿಳಿಸಿದ್ದಾರೆ. ಕಠ್ಮಂಡುವಿನ ಮೇಯರ್ 2022ರಲ್ಲಿ ಬಲೇನ್ ಅವರು ಕಠ್ಮಂಡು ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಪ್ರಮುಖ ರಾಜಕೀಯ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (UML) ಅಭ್ಯರ್ಥಿಗಳನ್ನು ಪರಾಭವಗೊಳಿಸಿದರು. ಮೇಯರ್ ಆಗಿ ಬಲೇನ್ ನೇಪಾಳದ ರಾಜಧಾನಿಯನ್ನು ಸ್ವಚ್ಛಗೊಳಿಸುವತ್ತ ಕೆಲಸ ಮಾಡಿದರು. ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಸರ್ಕಾರದೊಂದಿಗೆ ಜಗಳ ನಡೆಯುತ್ತಿರುವಾಗ, ಪ್ರಧಾನಮಂತ್ರಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಿಂದ ಕಸ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಅವರು ಆದೇಶಿಸಿದ್ದರು. ಬಲೇನ್ಗೆ Gen Z ಬೆಂಬಲ ಕಪ್ಪು ಜಾಕೆಟ್, ಪ್ಯಾಂಟ್ ಮತ್ತು ಕಪ್ಪು ಕನ್ನಡಕ ಧರಿಸಿ ಕೂಲ್ ಆಗಿ ಕಾಣಿಸಿಕೊಳ್ಳುವ ಬಲೇನ್ ಮೇಯರ್ ಹುದ್ದೆಯನ್ನು ತ್ಯಜಿಸಿ ರಾಷ್ಟ್ರೀಯ ಸ್ವತಂತ್ರ ಪಕ್ಷವನ್ನು ಸೇರಿದರು. ಪ್ರಚಾರದ ಆರಂಭದಿಂದಲೇ ಅವರು ನೇಪಾಳದ Gen Z ಬೆಂಬಲವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಂವಾದದ ಶೈಲಿಯು ಯುವಕರನ್ನು ಆಕರ್ಷಿಸಿತು. ಚುನಾವಣೆಗೂ ಮುಂಚೆಯೇ ಬಲೇನ್ ಅವರಿಗೆ ನೇಪಾಳದ ಯುವಕರ ಬೆಂಬಲವಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದು ಕೆಪಿ ಶರ್ಮಾ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾರಣವಾಯಿತು. ಆಗ Gen Zಗಳಲ್ಲಿ ಅನೇಕರು 35 ವರ್ಷ ವಯಸ್ಸಿನ ಬಲೇನ್ ರಾಷ್ಟ್ರವನ್ನು ಮುನ್ನಡೆಸುವಂತೆ ಕರೆ ನೀಡಿದರು. ತಮ್ಮ ಪ್ರಚಾರದಲ್ಲಿ ಬಲೇನ್ ಬಡವರಿಗೆ ಉತ್ತಮ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವನ್ನು ಒದಗಿಸುವುದಾಗಿ ಹಾಗೂ ಉದ್ಯಮಿಗಳಿಗೆ ವ್ಯಾಪಾರದ ವಾತಾವರಣವನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದಾರೆ. ವಿವಾದಗಳು ಜನಪ್ರಿಯತೆಯ ಹೊರತಾಗಿಯೂ ಬಲೇನ್ ವಿವಾದಗಳಿಂದ ಹೊರತಾಗಿಲ್ಲ. ದೇಶವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ನೇಪಾಳದ ರೂ. 40 ಮಿಲಿಯನ್ ಮೌಲ್ಯದ ದುಬಾರಿ ಲ್ಯಾಂಡ್ ರೋವರ್ ಡಿಫೆಂಡರ್ನಲ್ಲಿ ಅವರು ಪ್ರಚಾರ ಮಾಡಿದ್ದು ಟೀಕೆಗೆ ಗುರಿಯಾಯಿತು. 2023ರಲ್ಲಿ ಭಾರತದ “ಅಖಂಡ ಭಾರತ” ಭಿತ್ತಿಚಿತ್ರಕ್ಕೆ ಪ್ರತಿಕ್ರಿಯೆಯಾಗಿ ಶಾ ತಮ್ಮ ಕಚೇರಿಯಲ್ಲಿ “ಗ್ರೇಟರ್ ನೇಪಾಳ” ನಕ್ಷೆಯನ್ನು ನೇತುಹಾಕಿದರು. ಇದರಲ್ಲಿ ಒಂದು ಕಾಲದಲ್ಲಿ ನೇಪಾಳಕ್ಕೆ ಸೇರಿದ್ದ, ಆದರೆ ಈಗ ಭಾರತದ ಗಡಿಯೊಳಗೆ ಇರುವ ಪ್ರದೇಶಗಳು ಸೇರಿವೆ. ಅವರ ಈ ನಡೆ ಭಾರತದಿಂದ ಟೀಕೆಗೆ ಗುರಿಯಾಯಿತು. ಬೀದಿ ವ್ಯಾಪಾರಿಗಳು ಮತ್ತು ನಗರ ಕೊಳೆಗೇರಿ ನಿವಾಸಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರನ್ನು ಬಳಸಿದ್ದಕ್ಕಾಗಿ ಮಾನವ ಹಕ್ಕುಗಳ ಸಂಘಟನೆಗಳಿಂದಲೂ ಬಲೇನ್ ಟೀಕೆಗಳನ್ನು ಎದುರಿಸಿದ್ದರು.
ಸುರಪುರ | ಟ್ರ್ಯಾಕ್ಟರ್ ಢಿಕ್ಕಿ : ಬೈಕ್ ಸವಾರ ಮೃತ್ಯು
ಸುರಪುರ: ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಹಾತ್ಮ ಗೌತಮ್ ಬುದ್ಧ ವೃತ್ತದ ಬಳಿಯ ಗ್ರಂಥಾಲಯ ಮುಂಭಾಗದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಮಹಾತ್ಮ ಗಾಂಧಿ ವೃತ್ತದ ಕಡೆಯಿಂದ ರಂಗಂಪೇಟೆ ಕಡೆಗೆ ಟ್ರ್ಯಾಕ್ಟರ್ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ತಾಲೂಕಿನ ಅಡ್ಡೊಡಗಿ ಗ್ರಾಮದ ಶರ್ಮುದ್ದಿನ್ ಲವಾರಿ (40) ಅವರಿಗೆ ಗುದ್ದಿದ ಪರಿಣಾಮ ಬೈಕ್ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿಕೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಮತ್ತೋರ್ವ ವ್ಯಕ್ತಿಯಾದ ಯಾದಗಿರಿ ಜಿಲ್ಲೆಯ ಶಾಂತಿನಗರ ನಿವಾಸಿ ಅಬ್ದುಲ್ ಅಲಿ ಶಹಾನ್ ಅವರಿಗೂ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ಗುದ್ದಿದ ರಭಸಕ್ಕೆ ಅನೇಕ ವಾಹನಗಳು ಪರಸ್ಪರ ತಾಗಿಕೊಂಡು ಕೆಲವು ವಾಹನಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಣ್ಣ ಯಡ್ರಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ಎಂ. ನಾಯಕ ತಿಳಿಸಿದ್ದಾರೆ.
Ind Vs Eng- `ಹೊಸದೇನಾದ್ರೂ ಹೇಳಿ': ಮಿಚೆಲ್ ಸ್ಯಾಂಟ್ನರ್ ಮೈಂಡ್ ಗೇಮ್ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ವ್ಯಂಗ್ಯ
ಅಹ್ಮದಾಬಾದ್: 2026 ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಮೈಂಡ್ ಗೇಮ್ ಆಡಲು ಹೊರಟ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ಇದೀಗ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಿರುಗೇಟು ನೀಡಿದ್ದಾರೆ. ``ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ಪ್ರೇಕ್ಷಕರನ್ನು ಮೌನವಾಗಿಸುತ್ತೇವೆ ಎಂಬ ಹೇಳಿಕೆಗೆ `ಎಲ್ಲರೂ ಇದೇ ಲೈನ್ ಅನ್ನು ಕಾಪಿ ಮಾಡುತ್ತಿದ್ದಾರೆ, ಏನಾದರೂ ಹೊಸದಾಗಿ ಹೇಳಿ' ಎಂದು ವ್ಯಂಗ್ಯವಾಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಅವರು ನಮ್ಮ ಗುರಿ ಮೈದಾನದಲ್ಲಿರುವ ಪ್ರೇಕ್ಷಕರನ್ನು ಸುಮ್ಮನಾಗಿಸುವುದು. ತವರಿನಲ್ಲಿ ಗೆಲ್ಲಲೇಬೇಕಾದ ಹೆಚ್ಚಿನ ಒತ್ತಡ ಭಾರತದ ಮೇಲಿದೆ ಎಂದು ಹೇಳಿದ್ದರು. ಕಮಿನ್ಸ್- ಕರ್ರನ್ ಇದೇ ಮಾತು 2023ರಲ್ಲಿ ಇದೇ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಮುನ್ನ ಆಸ್ಟ್ರೇಲಿಯಾದ ವಿಶ್ವಕಪ್ ಪ್ಯಾಟ್ ಕಮಿನ್ಸ್ ಇವರು ಇದೇ ಮಾತನ್ನು ಹೇಳಿದ್ದರು. ಆ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿಶ್ವಚಾಂಪಿಯನ್ ಆಗಿತ್ತು. ಭಾರತ ತಂಡ ಆಸ್ಟ್ರೇಲಿಯಾಗೆ ಹೇಳಿದ್ದರು. ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ನ ಆಲ್ರೌಂಡರ್ ಸ್ಯಾಮ್ ಕರ್ರನ್ ಅವರು ಸಹ ಭಾರತದ ಅಭಿಮಾನಿಗಳನ್ನು ಮೌನವಾಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಪಂದ್ಯದ ಬಳಿಕ ಅವರ ಈ ಹೇಳಿಕೆ ವಿಪರೀತ ಟ್ರೋಲ್ ಆಗಿತ್ತು. ಇದೀಗ ಮಿಚೆಲ್ ಸ್ಯಾಂಟ್ನರ್ ಅವರು ಸಹ ಇದೇ ರೀತಿಯ ಹೇಳಿಕೆ ನೀಡಿರುವ ಬಗ್ಗೆ ಫೈನಲ್ ಪಂದ್ಯಕ್ಕೂ ಪೂರ್ವಭಾವಿಯಾಗಿ ಸೂರ್ಯಕುಮಾರ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ, ಕುಚ್ ತೋ ನಯಾ ಬೋಲೋ (ಎಲ್ಲರೂ ಇದೇ ಸಾಲನ್ನು ನಕಲು ಮಾಡುತ್ತಿದ್ದಾರೆ, ಹೊಸದು ಏನಾದರಿದ್ದರೆ ಹೇಳಿ) ಎಂದು ಲೇವಡಿ ಮಾಡಿದರು. ಎದುರಾಳಿ ತಂಡದ ಆಟಗಾರರು, ನಾಯಕರು ಒಂದೇ ರೀತಿಯ ಮಾನಸಿಕ ತಂತ್ರ(Mind Game) ಬಳಸುತ್ತಿರುವುದನ್ನು ಅವರು ಈ ಮೂಲಕ ತಳ್ಳಿಹಾಕಿದರು. ತಂಡದಲ್ಲಿ ಸಕಾರಾತ್ಮಕ ವಾತಾವರಣ ಇನ್ನು ಮಿಚೆಲ್ ಸ್ಯಾಂಟ್ನರ್ ಅವರು ಭಾರತ ತಂಡಕ್ಕೆ ತವರಿನಲ್ಲಿ ಕಪ್ ಗೆಲ್ಲಬೇಕಾದ ಒತ್ತಡ ಇದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ತಂಡದಲ್ಲಿ ತುಂಬಾ ಸಕಾರಾತ್ಮಕ ವಾತಾವರಣವಿದೆ. ಇದೊಂದು ವಿಶೇಷ ಅನುಭವವಾಗಿದ್ದು ನಾವೆಲ್ಲರೂ ಪಂದ್ಯವನ್ನು ಎಂಜಾಯ್ ಮಾಡುವುದನ್ನು ಇಷ್ಟಪಡುತ್ತೇವೆ. ಈ ದೊಡ್ಡ ಪಂದ್ಯಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು. ಇನ್ನು ನಾಯಕನಾಗಿ ಖಂಡಿತವಾಗಿಯೂ ನನ್ನ ಮೇಲೆ ಒತ್ತಡ ಇದೆ. ಅದನ್ನು ಅಲ್ಲಗೆಳೆಯುವಂತಿಲ್ಲ ಎಂದು ತಿಳಿಸಿದರು. ಇನ್ನು ತಂಡದ ಯಶಸ್ಸಿನ ಬಗ್ಗೆ ಮಾತನಾಡಿ. ಕೋಚ್ ಗೌತಮ್ ಗಂಭೀರ್ ಅವರು ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಂಡದ ಕೊಡುಗೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಅವರು ಶ್ಲಾಘಿಸಿದರು.
ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕ್ರಮ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಮಾ.7: ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರಿದ್ದಾರೆಂಬುದಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ‘ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪೋಷಕರು ಕಡ್ಡಾಯವಾಗಿ ಇರಲೇ ಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಇದು ಸುಳ್ಳು ಸುದ್ದಿ. ಇಂತಹ ಸಂದೇಶಗಳನ್ನು ಯಾರಾದರೂ ಹರಡುತ್ತಿರುವುದು ಗಮನಕ್ಕೆ ಬಂದರೆ ನಮಗೆ ತಿಳಿಸಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು’ ಎಂದು ಎಸ್ಪಿ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
Bengaluru | ಅಕ್ರಮವಾಗಿ ನೆಲೆಸಿದ್ದ 200 ವಿದೇಶಿಗರು ಪತ್ತೆ
ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಒಟ್ಟಾರೆ 200ಕ್ಕೂ ಹೆಚ್ಚು ವಿದೇಶಿಗರನ್ನು ಪತ್ತೆಹಚ್ಚಿದ್ದಾರೆ. ಅಕ್ರಮವಾಗಿ ನೆಲೆಸಿದವರ ಪೈಕಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರೇ ಹೆಚ್ಚು ಇದ್ದು, ಈ ಸಂಬಂಧ ಪರಿಶೀಲನೆ ಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ನಗರದಲ್ಲಿ ಅಕ್ರಮವಾಗಿ ವಾಸಿಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಓ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

29 C