SENSEX
NIFTY
GOLD
USD/INR

Weather

30    C
...

ಧಾರ್ಮಿಕತೆಗೂ ನೈತಿಕತೆಗೂ ಸಂಬಂಧವಿಲ್ಲವೇ?

ನಾವು ಸೂಕ್ಷ್ಮ ಹಾಗೂ ಪ್ರಜ್ಞಾವಂತಿಕೆಯ ಸ್ವಭಾವದವರಾಗಿದ್ದರೆ ಇಂದಿನ ಕಾಲದ ಬೆಳವಣಿಗೆಯೊಂದು ನಮ್ಮ ಗಮನಕ್ಕೆ ಬರದೇ ಹೋಗಲು ಸಾಧ್ಯವಿಲ್ಲ. ಇಂದು ಧಾರ್ಮಿಕ ಚಟುವಟಿಕೆಗಳು ಎದ್ದು ಕಾಣುವ ರೀತಿಯಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿವೆ. ಜೊತೆಗೆ ಇವುಗಳು ಸರಳ ಆಚರಣೆಗಳಿಂದ ಅದ್ದೂರಿತನದ ಕಡೆಗೆ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಈ ಎಲ್ಲ ಚಟುವಟಿಕೆಗಳಿಗೆ ಅಪಾರ ಪ್ರಮಾಣದ ಹಣ ವೆಚ್ಚವಾಗುತ್ತದೆ ಎಂಬುದನ್ನು ಬಿಡಿಸಿ ಹೇಳ ಬೇಕಾಗಿಲ್ಲ. ಇದನ್ನೆಲ್ಲ ಭರಿಸುವಷ್ಟು ಆರ್ಥಿಕ ಶಕ್ತಿಯನ್ನೂ ಜನರು ಗಳಿಸಿ ಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ. ಜನರಲ್ಲಿ ಇಂದು ಧಾರ್ಮಿಕ ಆಚರಣೆ, ವಿಧಿ-ವಿಧಾನಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುವಂತಹ ಶ್ರದ್ಧೆಯೂ ಕಡಿಮೆಯಾಗಿಲ್ಲ. ಇವುಗಳು ಜನರ ಉತ್ಸಾಹ, ಸಂಭ್ರಮಗಳನ್ನು ಉತ್ತೇಜಿಸಿ ಜೀವನ ಪ್ರೀತಿಯನ್ನು ಹೆಚ್ಚಿಸಿದಂತೆ ಕಾಣುತ್ತಿದೆ. ಆದರೆ ಇಲ್ಲಿಯ ವಿಪರ್ಯಾಸಕರ ಬೆಳವಣಿಗೆ ಮಾತ್ರ ನಿರಾಶೆ ಹುಟ್ಟಿಸುವಂತಿದೆ. ಜನರಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಾದಂತೆ ಅದಕ್ಕೆ ಸಂವಾದಿಯಾಗಿ ನೈತಿಕ ಮಟ್ಟವೂ ಔನತ್ಯ ಕಾಣಬೇಕಿತ್ತು ತಾನೆ? ಇದರ ಬದಲು ಸಮಾಜದಲ್ಲಿ ನೈತಿಕ ಮಟ್ಟ ಕುಸಿಯುತ್ತ ಸಾಗಿರುವುದು ಸೋಜಿಗವೆನಿಸುತ್ತದೆ. ಇಂದು ಸತ್ಯ, ಪ್ರಾಮಾಣಿಕತೆ, ಸಹೋದರತೆ, ಸಾಮರಸ್ಯ, ಮಾನವೀಯತೆಗಳಂತಹ ಸಾರ್ವಕಾಲಿಕ ಮೌಲ್ಯಗಳು ದೈನಂದಿನ ಬದುಕಿನಲ್ಲಿ ಹಿಂದಕ್ಕೆ ಸರಿಯುವಂತೆ ಭಾಸವಾಗುತ್ತಿದೆ. ನಿಜಕ್ಕೂ ದೇವರ ಮೇಲಿನ ನಂಬಿಕೆ, ಶ್ರದ್ಧೆ, ಭಕ್ತಿಗಳೆಲ್ಲವೂ ನೈತಿಕತೆಗೆ ಪೂರಕವಾದ ಬೆಳವಣಿಗೆ ಆಗ ಬೇಕಾಗಿತ್ತು. ಹಾಗಾದರೆ ಧಾರ್ಮಿಕತೆಗೂ ನೈತಿಕತೆಗೂ ಯಾವುದೇ ಅಂತರ್‌ಸಂಬಂಧವಿಲ್ಲವೇ? ದೇವರು ಇದ್ದಾನೋ ಇಲ್ಲವೋ ಎಂಬುದು ನಂಬಿಕೆಯ ಪ್ರಶ್ನೆಯಾದರೂ ದೇವರೆಂದರೆ ಪರಮ ಮೌಲ್ಯಗಳ ಪ್ರತಿರೂಪವೆನ್ನುವುದರ ಬಗ್ಗೆ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಹೀಗಾಗಿ ದೇವರ ಮೇಲಿನ ನಂಬಿಕೆಗೆ ಅನುಗುಣವಾಗಿ ನೈತಿಕತೆ, ಮೌಲ್ಯಗಳೆಲ್ಲ ದೇವ ಭಕ್ತರಲ್ಲಿ ಒಡಮೂಡಿರಬೇಕೆಂದು ಬಯಸುವುದರಲ್ಲಿ ತಪ್ಪೇನಿಲ್ಲ. ಧಾರ್ಮಿಕ ನಿಷ್ಠೆಯುಳ್ಳಂತಹ ವ್ಯಕ್ತಿಗಳ ನಡವಳಿಕೆಯನ್ನು ಜನರು ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಜೊತೆಗೆ ಅವರ ವೈಯಕ್ತಿಕವಾದ ಈ ನಂಬಿಕೆಯನ್ನು ಅವರ ಬದುಕಿನ ನೈತಿಕತೆಯೊಂದಿಗೆ ತುಲನೆಯನ್ನೂ ಮಾಡುವುದಿದೆ. ಮಹಾತ್ಮಾ ಗಾಂಧೀಜಿಯವರು 1925ರಲ್ಲಿ ತಾವು ನಡೆಸುತ್ತಿದ್ದ ‘ಯಂಗ್‌ಇಂಡಿಯಾ’ ವಾರ ಪತ್ರಿಕೆಯಲ್ಲಿ ಏಳು ಪಾಪಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ ಇವುಗಳು ಸಾಮಾಜಿಕ ಅವನತಿಗೆ ಕಾರಣವಾಗುತ್ತವೆ ಎಂದೂ ಎಚ್ಚರಿಸಿದ್ದರು. ಅವುಗಳು ಯಾವುದೆಂದರೆ, 1. ತತ್ವರಹಿತ ರಾಜಕಾರಣ 2. ದುಡಿಮೆಯಿಲ್ಲದ ಸಂಪತ್ತು. 3. ನೀತಿಯಿಲ್ಲದ ವಾಣಿಜ್ಯ. 4. ಮಾನವೀಯತೆಯಿಲ್ಲದ ವಿಜ್ಞಾನ. 5. ಆತ್ಮಸಾಕ್ಷಿರಹಿತ ಭೋಗ. 6. ತ್ಯಾಗವಿಲ್ಲದ ಪೂಜೆ. 7. ಶೀಲವಿಲ್ಲದ ಜ್ಞಾನ. ನಾವು ಇವುಗಳನ್ನೆಲ್ಲ ಮರೆತು ಬಿಟ್ಟಿದ್ದೇವೆ. ಭಾರತದಲ್ಲಿ ಧಾರ್ಮಿಕತೆಗೆ ಅನುಗುಣವಾಗಿ ನಿರ್ಮಾಣವಾಗ ಬಹುದಾಗಿದ್ದ ನೈತಿಕ ಸಮಾಜದ ಕನಸು ವಿಫಲ ಗೊಂಡಂತಾಗಿದೆ. ಗಾಂಧೀಜಿಯವರು ಪ್ರತಿಪಾದಿಸಿರುವ ಮೊದಲ ಮೂರು ಪಾಪಗಳು ಹೆಚ್ಚು ಕಡಿಮೆ ಸಮಾಜದ ದಿಕ್ಕನ್ನೇ ತಪ್ಪಿಸಿ ಬಿಟ್ಟಂತಾಗಿದೆ. ಇಂದಿನ ರಾಜಕಾರಣದಲ್ಲಿ ಸಿದ್ಧಾಂತ, ತತ್ವಗಳು ಮರೆಗೆ ಸರಿದು ಸಾಕಷ್ಟು ವರ್ಷಗಳಾಗಿವೆ. ಅಧಿಕಾರಕ್ಕಾಗಿ ತಂತ್ರಗಾರಿಕೆ, ಸುಳ್ಳು, ವಂಚನೆ, ಎತ್ತಿ ಕಟ್ಟುವಿಕೆ ಇತ್ಯಾದಿಗಳಲ್ಲಿ ಮುಳುಗಿರುವ ರಾಜಕೀಯ ನಾಯಕರು ಯಾವುದಕ್ಕೂ ಹೇಸಲಾರರು. ರಾಜಕಾರಣಿಗಳಿಗೆ ಮತ್ತು ಸರಕಾರಿ ನೌಕರರಿಗೆ ದುಡಿಮೆಯಿಲ್ಲದ ಸಂಪತ್ತೇ ಮುಖ್ಯವೆಂದಂತಾಗಿದೆ. ರಾಜ್ಯದ ವಿಧಾನ ಸೌಧದ ಪ್ರವೇಶ ದ್ವಾರದಲ್ಲಿ ಬರೆದಿರುವ ಧ್ಯೇಯ ವಾಕ್ಯವನ್ನು ಗಮನಿಸಿದರೆ ಧಾರ್ಮಿಕತೆಗೂ, ನೈತಿಕತೆಗೂ ಅಂತರ್‌ಸಂಬಂಧವಿದೆ ಎಂದಾಗುತ್ತದೆ. ಇದು ಹಿರಿಯರ ಮನದ ಇಂಗಿತವೂ ಆಗಿತ್ತು ಎನ್ನ ಬಹುದು. ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನ ಸೌಧವನ್ನು ಕಟ್ಟಿಸಿದರು. ಅವರು ರಾಜಕೀಯ ನಾಯಕರು ಮತ್ತು ಸರಕಾರಿ ನೌಕರರಿಗೆ ಮಾರ್ಗದರ್ಶಿ ಸೂತ್ರವಾಗಲಿ ಎಂಬ ಆಶಯದಿಂದ ಪ್ರವೇಶ ದ್ವಾರದಲ್ಲಿ ಎದ್ದು ಕಾಣುವಂತೆ ‘ಸರಕಾರಿ ಕೆಲಸ ದೇವರ ಕೆಲಸ’ ಎಂಬುದಾಗಿ ಬರೆಯಿಸಿದ್ದಾರೆ. ಆದರೆ ಈ ಪವಿತ್ರ ಕಟ್ಟಡದೊಳಗಿನ ವ್ಯವಹಾರಗಳು ನಿರಾಶೆಯೊಂದಿಗೆ ಅಸಹ್ಯವನ್ನೂ ಹುಟ್ಟಿಸುತ್ತದೆ. ಅಲ್ಲಿ ನಾವು ಆಯ್ಕೆ ಮಾಡಿ ಕಳುಹಿಸಿರುವ ನಾಯಕರು ತಮ್ಮ ಕರ್ತವ್ಯವನ್ನು ಸ್ವಹಿತಾಸಕ್ತಿಗೆ ಸೀಮಿತ ಗೊಳಿಸಿದಂತಿದ್ದಾರೆ. ಸರಕಾರಿ ವ್ಯವಸ್ಥೆ ಲಂಚ, ಅವ್ಯವಹಾರ, ಭ್ರಷ್ಟಾಚಾರಗಳ ಕೂಪವಾಗಿ ನಿಯಂತ್ರಣಕ್ಕೆ ನಿಲುಕದ ರೀತಿಯಲ್ಲಿ ಬೆಳೆದು ಬಿಟ್ಟಿದೆ. ಇದನ್ನು ಅರಿತು ಕೊಳ್ಳಲು ಲೋಕಾಯುಕ್ತ ನಿರಂತರವಾಗಿ ದಾಖಲಿಸುವ ಪ್ರಕರಣಗಳ ಲೆಕ್ಕವೇ ಬೇಕೆಂದಿಲ್ಲ. ಇದಕ್ಕೆ ಜನ ಸಾಮಾನ್ಯರು, ‘‘ಹಣ ಕೊಡದೆ ಯಾವ ಕೆಲಸ ಆಗುತ್ತದೆ’’ ಎಂದು ವ್ಯಕ್ತ ಪಡಿಸುವಂತಹ ಅಭಿಪ್ರಾಯವೇ ಸಾಕ್ಷಿಯಾಗುತ್ತದೆ. ಲಂಚ ತೆಗೆದು ಕೊಳ್ಳಲು ಅವಕಾಶವೇ ಇಲ್ಲದಂತಹ ಇಲಾಖೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳಿಗೆ ಭ್ರಷ್ಟಾಚಾರದ ಕಳಂಕ ಅಂಟಿ ಕೊಂಡಿದೆ. ಇಂದಿನ ವಾಣಿಜ್ಯ, ವ್ಯವಹಾರಗಳ ಕತೆ ಭಿನ್ನವೇನಿಲ್ಲ. ಅಲ್ಲಿ ನೀತಿ, ನಿಯಮಗಳು ಕಣ್ಮರೆಯಾಗಿ ವಂಚನೆ, ಮೋಸಗಳೇ ಯಶಸ್ವಿ ಸೂತ್ರಗಳಾಗಿವೆ. ವ್ಯಾಪಾರಿಗಳು, ವ್ಯವಹಾರಸ್ಥರಲ್ಲಿ ಕಟ್ಟಾ ದೈವ ಭಕ್ತರೇ ಹೆಚ್ಚು. ಇವರು ಏಕಕಾಲದಲ್ಲಿ ನಿಷ್ಠೆಯ ದೈವ ಭಕ್ತಿ, ದಾನ, ಧರ್ಮಗಳಲ್ಲಿ ತೊಡಗುತ್ತಾರೆ ಮತ್ತು ನೀತಿ, ನಿಯಮಗಳಿಗೆ ಅತೀತವಾಗಿ ವ್ಯವಹಾರವನ್ನೂ ನಡೆಸುತ್ತ ತೃಪ್ತರಾಗಿದ್ದಾರೆ. ಹಾಗೆಯೇ ಯಶಸ್ವಿ ಉದ್ಯಮಿಯೂ ಆಗುತ್ತಾರೆ. ಇಂದು ಶಿಕ್ಷಣ, ಆರೋಗ್ಯ ಕ್ಷೇತ್ರಗಳೂ ಇಂತಹ ಉದ್ಯಮಿಗಳ ಕಾರ್ಯಕ್ಷೇತ್ರವಾಗಿ ಪರಿವರ್ತಿತವಾಗಿರವುದು ಸಾಮಾಜಿಕ ದುರಂತ. ಸೇವೆ ಎನ್ನುವ ಪರಿಕಲ್ಪನೆ ಬದಲಾಗಿರುವ ಕಾಲಘಟ್ಟದಲ್ಲಿ ಆತ್ಮಸಾಕ್ಷಿಯ ಸ್ಥಾನದಲ್ಲಿ ಆತ್ಮವಂಚನೆಯ ಕಾರ್ಯವೂ ನಿರಾಂತಕವಾಗ ಬಲ್ಲದು. ಇದನ್ನೊಂದು ಉದಾಹರಣೆಯಾಗಿ ನೋಡ ಬಹುದು. ಇವರೊಬ್ಬ ಪರಮ ದೈವ ಭಕ್ತರು. ಧಾರ್ಮಿಕ ವಿಧಿ-ವಿಧಾನಗಳು, ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು. ಇವರು ದಿನಚರಿಯನ್ನು ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ದೇವ ಸ್ಮರಣೆಯೊಂದಿಗೆ ದಿನವನ್ನು ಮುಗಿಸುವಂತಹ ಧಾರ್ಮಿಕ ವ್ಯಕ್ತಿ. ಧಾರ್ಮಿಕ ಚಟುವಟಿಕೆಗಳು, ಧಾರ್ಮಿಕ ಕೇಂದ್ರಗಳಿಗೆ ಇವರು ಕೈ ಎತ್ತಿ ದೇಣಿಗೆ, ಕೊಡುಗೆಗಳನ್ನು ನೀಡುತ್ತಾರೆ. ಇವರ ಇನ್ನೊಂದು ಮುಖವನ್ನು ನೋಡಿದರೆ ಮಾತ್ರ ನಿರಾಶೆಯಾಗಿ ಬಿಡುತ್ತದೆ. ಹೆಸರಿಗೆ ನಗರದ ಖ್ಯಾತ ಉದ್ಯಮಿಯಾಗಿರುವ ಇವರ ಹೆಸರು ಕಳ್ಳ ಸಾಗಣೆ, ಅಕ್ರಮ ಗಣಿಗಾರಿಕೆ ಮುಂತಾದವುಗಳಲ್ಲಿ ತಳುಕು ಹಾಕಿ ಕೊಂಡಿದೆ. ಇವರ ಮನೆ, ಕಚೇರಿಗಳ ಮೇಲೆ ಹಲವು ಬಾರಿ ತನಿಖಾ ಸಂಸ್ಥೆಗಳ ದಾಳಿಗಳು ನಡೆದು ಈ ಕೇಸುಗಳ ವಿಚಾರಣೆಗಳು ಕೋರ್ಟುಗಳಲ್ಲಿ ನಡೆಯುತ್ತಿವೆ. ‘ಇವೆಲ್ಲ ವಿರೋಧಿಗಳ ಷಡ್ಯಂತ್ರ’ ಎನ್ನುವ ಇವರು, ಇದಾವುದಕ್ಕೂ ತಲೆ ಕೆಡಿಸಿ ಕೊಂಡವರಲ್ಲ. ಇವರ ವೈಯಕ್ತಿಕ ಗುಣ, ನಡತೆಗಳ ಬಗ್ಗೆಯೂ ಗುಸು ಗುಸು ಮಾತುಗಳಿವೆ. ಆದರೆ ಇವರು ಏಕಕಾಲದಲ್ಲಿ ತನ್ನ ಉದ್ಯಮಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಹಾಗೂ ಧಾರ್ಮಿಕ ಕೈಂಕರ್ಯಗಳಲ್ಲಿ ನಿರತರು. ಈ ವರ್ಗದಲ್ಲಿ ಉದ್ಯಮಿಗಳನ್ನು ಮಾತ್ರ ಗುರುತಿಸ ಬೇಕಾಗಿಲ್ಲ. ಇಂತಹ ರಾಜಕೀಯ ನಾಯಕರು, ಸರಕಾರಿ ಅಧಿಕಾರಿಗಳು, ವೈದ್ಯರು, ವಕೀಲರು ಮುಂತಾದವರು ಏಕಕಾಲದಲ್ಲಿ ಇಂತಹ ವಿರೋಧಾಭಾಸದ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಇವರ ದೈವ ಭಕ್ತಿ ಹಾಗೂ ಅನೈತಿಕ ಚಟುವಟಿಕಗಳು ಜೊತೆ ಜೊತೆಯಾಗಿ ಸಾಗುವುದನ್ನು ಗಮನಿಸಿದಾಗ ಆಶ್ಚರ್ಯವೂ ಆಗುತ್ತದೆ; ಗೊಂದಲವೂ ಅಗುತ್ತದೆ. ಹಾಗಾದರೆ ಧಾರ್ಮಿಕ ನಂಬಿಕೆ, ಶ್ರದ್ಧೆಗಳಿಗೂ ನೈತಿಕತೆಗೂ ಸಂಬಂಧವೇ ಇಲ್ಲವೇ? ಜನರು ಸರಕಾರಿ ಸೌಲಭ್ಯ, ತೆರಿಗೆ ಪಾವತಿಗಳಂತಹ ವಿಷಯಗಳಲ್ಲಿಯೂ ಪ್ರಾಮಾಣಿಕತೆ ಪ್ರದರ್ಶಿಸಲು ಇಷ್ಟ ಪಡುವುದಿಲ್ಲ. ಅಲ್ಲಿಯೂ ಮೋಸ, ವಂಚನೆ ತಲೆ ಹಾಕುತ್ತದೆ. ಆದಾಯ ತೆರಿಗೆ, ಜಿ.ಎಸ್.ಟಿ. ಇತ್ಯಾದಿ ತೆರಿಗೆ ಪಾವತಿಗಳಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇನ್ನೊಂದೆಡೆ ಜಾತಿವಾದ, ಕೋಮುವಾದ, ಮೂಲಭೂತವಾದಗಳಿಗೆ ಬಲಿ ಬಿದ್ದಿರುವ ಕಟ್ಟಾ ಆಸ್ತಿಕರ ‘ಧರ್ಮ ರಕ್ಷಣೆ’ ಎಂಬ ಡಾಂಭಿಕತನ ಧಾರ್ಮಿಕತೆಯನ್ನೇ ಅಣಕಿಸುವಂತಿದೆ ದೇವರ ಮೇಲೆ ಅತೀವ ಭಕ್ತಿ ಹೊಂದಿರುವ ಆಸ್ತಿಕರು ಅನ್ಯಾಯ, ವಂಚನೆ, ಭ್ರಷ್ಟಾಚಾರದ ಹಾದಿಯಲ್ಲಿ ಕಷ್ಟ-ನಷ್ಟಗಳಿಗೆ ಗುರಿಯಾದಾಗಲೂ ಪಶ್ಚಾತ್ತಾಪದ ಭಾವವು ಅವರಲ್ಲಿ ಕಂಡು ಬಾರದಿರುವುದು ವಿಶೇಷವೆನ್ನಬಹುದು. ಕನಿಷ್ಠ ತಮ್ಮ ನಡವಳಿಕೆಯನ್ನು ಈ ಹಂತದಲ್ಲಾದರೂ ತಿದ್ದಿಕೊಳ್ಳಲು ಅವರು ಮನಸ್ಸು ಮಾಡಲಾರರು. ಇದಕ್ಕೆ ಬದಲಾಗಿ ಅವರು ಅವಧೂತರೊ ಇಲ್ಲವೇ ಧಾರ್ಮಿಕ ಮಾರ್ಗದರ್ಶಕರೊ ಸೂಚಿಸುವ ಪರಿಹಾರಾತ್ಮಕ ಧಾರ್ಮಿಕ ಕ್ರಿಯೆಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೃತಾರ್ಥರಾಗಿ ಬಿಡುತ್ತಾರೆ!

ವಾರ್ತಾ ಭಾರತಿ 24 Mar 2026 1:14 pm

ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಗೀಳು ವಿಪರೀತವಾಗಿದೆ. ಅದರಲ್ಲೂ ಶಾಲಾ ಮಕ್ಕಳ ಭವಿಷ್ಯದ ಮೇಲೆ ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ತೀವ್ರ ದುಷ್ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇದೀಗ ಮಹತ್ವದ ಹಾಗೂ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಶಾಲಾ ಮಕ್ಕಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ

ಒನ್ ಇ೦ಡಿಯ 24 Mar 2026 1:11 pm

ಇ-ಖಾತೆಯಲ್ಲಿ ಲಂಚಾವತಾರ! ಸದನದಲ್ಲಿ ಫೋನ್ ಪೇ ದಾಖಲೆ ಪ್ರದರ್ಶನ ಮಾಡಿದ ಆರ್ ಅಶೋಕ್

ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಸದನದಲ್ಲಿ ಇಂದು ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಇ-ಖಾತೆಯಲ್ಲಿನ ಲಂಚಾವತಾರದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಫೋನ್‌ ಪೇ ಹಣ ವರ್ಗಾವಣೆ ಮಾಡಿರುವ ದಾಖಲೆಗಳನ್ನು ತೋರಿಸುವ ಮೂಲಕ ಸಾಕ್ಷಿಯನ್ನು ನೀಡಿದ್ದಾರೆ. ಅಲ್ಲದೆ, ಬೆಂಗಳೂರು ನಗರದ ರಸ್ತೆ ಗುಂಡಿಗಳ ಕುರಿತು ಮಾತನಾಡಿ ರಸ್ತೆ ಸರಿಮಾಡುವ ಲೆಕ್ಕ ಕೊಟ್ಟ ಹಣ ಎಲ್ಲಿಗೆ ಹೊಯ್ತು ಎಂದಿದ್ದು, ನಾವೇನಾದರೂ ರಸ್ತೆ ಸ್ಥಿತಿ ಬಗ್ಗೆ ಮಾತಾಡಿದ್ರೆ ನಿಮ್ಮ ಅವಧಿಯಲ್ಲಿ ಏಕೆ ಮಾಡಿಸಿಲ್ಲ ಎಂದು ಕೇಳ್ತಿರೀ ಆದರೆ, ಡಿಕೆ ಉಸ್ತುವಾರಿ ಇರುವ ಜಿಲ್ಲೆಯ ಬಗ್ಗೆ ತೆಲಂಗಾಣ ಸಿಎಂ ಮಾತಾಡಿದ್ರೆ ಏನೂ ಪ್ರತಿಕ್ರಿಯೆ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ವಿಜಯ ಕರ್ನಾಟಕ 24 Mar 2026 1:10 pm

Karnataka Weather: ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರಿಗೆ ಭಾನುವಾರದವರೆಗೂ ಮಳೆ, ಬೆಂಗಳೂರಿಗೆ ವೀಕೆಂಡ್ ಮಳೆ ಸಾಧ್ಯತೆ

ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಮುಂದಿನ 3 ಗಂಟೆಯಲ್ಲಿ ಗುಡುಗು, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ 1 ಗಂಟೆಗೆ ಅಲರ್ಟ್ ನೀಡಿದೆ. ಮಿಂಚು , ಬಿರುಗಾಳಿಯೊಂದಿಗೆ ಮಳೆ ಅಲರ್ಟ್ ಕೊಟ್ಟ ಹವಾಮಾನ ಇಲಾಖೆ ಇಂದು 25 ಜಿಲ್ಲೆಗಳಿಗೆ ಹಗುರ ಮಳೆ ಮುನ್ಸೂಚನೆ ಕೊಟ್ಟಿದೆ.

ವಿಜಯ ಕರ್ನಾಟಕ 24 Mar 2026 1:00 pm

ಬೆಳಗಾವಿಯಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯ ; ವಂಚಕರಿಗೆ ಬಿಸಿ ಮುಟ್ಟಿಸಿದ ಖಾಕಿ

ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸೈಬರ್ ವಂಚನೆ ಜಾಲದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಪೊಲೀಸ್ ತನಿಖೆಯ ವೇಳೆ ಸೈಬರ್ ಅಪರಾಧಿಗಳು ಅಮಾಯಕರ ಬ್ಯಾಂಕ್ ಖಾತೆಗಳನ್ನು 'ಮ್ಯೂಲ್ ಖಾತೆ'ಗಳನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈ ಜಾಲದ ಬೆನ್ನತ್ತಿರುವ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ಲಭ್ಯವಾಗಿದೆ.

ವಿಜಯ ಕರ್ನಾಟಕ 24 Mar 2026 12:56 pm

ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳಪೆ ಕಾಮಗಾರಿ : ಹನುಮಂತ ಮನ್ನಾಪೂರಿ ಆರೋಪ

ದೇವದುರ್ಗ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ಮೂಲಕ ಕ್ಲಬ್ ಮೈದಾನದವರೆಗೆ ನಿರ್ಮಿಸಿದ ಡಾಂಬರ್ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದ್ದು, ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಎಂ.ಆರ್.ಎಚ್.ಎಸ್. ಜಿಲ್ಲಾ ಅಧ್ಯಕ್ಷ ಹನುಮಂತ ಮನ್ನಾಪೂರಿ ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ದಿನನಿತ್ಯ ಸಾರ್ವಜನಿಕರು ಸಂಚರಿಸುತ್ತಿದ್ದು, ಇದುವರೆಗೆ ತಗ್ಗು-ಗುಂಡಿ ಮತ್ತು ಧೂಳಿನಿಂದ ಬಳಲುತ್ತಿದ್ದವರು ಉತ್ತಮ ರಸ್ತೆ ನಿರ್ಮಾಣವಾಗುತ್ತಿದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಹೊಸ ರಸ್ತೆಯೇ ಕಳಪೆಯಾಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಂಬರ್ ರಸ್ತೆ ನಿರ್ಮಾಣಕ್ಕೆ ಸೂಕ್ತ ಉಷ್ಣಾಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಇಲ್ಲಿ ಮಳೆಯಲ್ಲೇ ರಾತ್ರಿ ವೇಳೆ ಕಾಮಗಾರಿ ನಡೆಸಿರುವುದು ಸ್ಪಷ್ಟವಾಗಿದ್ದು, ಇದರಿಂದ ಗುತ್ತೇದಾರರು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ, ಪುನಃ ಎಸ್ಟಿಮೇಟ್ ಪ್ರಕಾರ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹನುಮಂತ ಮನ್ನಾಪೂರಿ ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 24 Mar 2026 12:43 pm

ಚುನಾವಣಾ ಆಯೋಗದ ಲೆಟರ್’ನಲ್ಲಿ ಬಿಜೆಪಿ ಸೀಲ್ : Clerical Error ಎಂದ ಇಸಿ, ಅಧಿಕಾರಿ ಸಸ್ಪೆಂಡ್

Election Commission Row : ಜಿದ್ದಾಜಿದ್ದಿನ ಚುನಾವಣೆಗೆ ಆಖಾಡಕ್ಕೆ ಸಿದ್ದವಾಗುತ್ತಿರುವ ಕೇರಳದಲ್ಲಿ ಮಹಾ ಎಡವಟ್ಟು ಒಂದು ಸಂಭವಿಸಿದೆ. ಚುನಾವಣಾ ಆಯೋಗದ ಲೆಟರ್’ನಲ್ಲಿ ಕೇರಳ ಬಿಜೆಪಿ ಘಟಕದ ಸೀಲ್ ಇರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ಆಯೋಗ, ಬಿಜೆಪಿ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆಯಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆಯೋಗ, ಅಧಿಕಾರಿಯನ್ನು ಅಮಾನತುಗೊಳಿಸಿದೆ.

ವಿಜಯ ಕರ್ನಾಟಕ 24 Mar 2026 12:35 pm

ರಣಬಿಸಿಲಿಗೆ ಜನ ತತ್ತರ: ತಂಪು ಪಾನೀಯಗಳಿಗೆ ಭಾರೀ ಬೇಡಿಕೆ

ನಿಡಗುಂದಿ: ಬೇಸಿಗೆಯ ಆರಂಭದಲ್ಲೇ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಡಗುಂದಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಮಾರ್ಚ್ ತಿಂಗಳಲ್ಲೇ ಬಿಸಿಲಿನ ತಾಪಮಾನ ಸುಮಾರು 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಜನರು ರಣಬಿಸಿಲಿಗೆ ತತ್ತರಿಸಿ ಹೋಗುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ಹೊರಗೆ ಹೋಗುವುದು ಕಷ್ಟವಾಗುತ್ತಿದೆ. ಬಿಸಿಲಿನ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಜನರು ಕಲ್ಲಂಗಡಿ, ಎಳೆನೀರು, ಮಜ್ಜಿಗೆ, ಕಬ್ಬಿನ ರಸ ಮತ್ತು ಐಸ್‌ಕ್ರೀಂ ಸೇರಿದಂತೆ ವಿವಿಧ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಪಟ್ಟಣದ ಬಸ್‌ಸ್ಟ್ಯಾಂಡ್ ಎದುರು, ರಾಷ್ಟ್ರೀಯ ಹೆದ್ದಾರಿ ಪಕ್ಕ, ಕಾಲೇಜು ರಸ್ತೆ ಹಾಗೂ ಬಜಾರ್ ಪ್ರದೇಶಗಳಲ್ಲಿ ತಾತ್ಕಾಲಿಕ ಅಂಗಡಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ತಂಪು ಪಾನೀಯಗಳ ಮಾರಾಟ ಜೋರಾಗಿದ್ದು, ರಸ್ತೆ ಬದಿಯಲ್ಲಿ ನಿಂತು ಜನರು ಬಾಯಾರಿಕೆ ತಣಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನೊಂದೆಡೆ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ರೈತರು, ಕಟ್ಟಡ ಕಾರ್ಮಿಕರು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯಾಹ್ನ ವೇಳೆಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಕಾರ್ಮಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ಆರಂಭದಲ್ಲೇ ತಾಪಮಾನ ಏರಿಕೆಯಾಗಿರುವುದರಿಂದ ಜನರಲ್ಲಿ ಆತಂಕವೂ ಹೆಚ್ಚಾಗಿದೆ. ಒಟ್ಟಿನಲ್ಲಿ ಬೇಸಿಗೆಯ ಆರಂಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಜನಜೀವನದ ಮೇಲೆ ಸ್ಪಷ್ಟ ಪರಿಣಾಮ ಬೀರಿದ್ದು, ತಂಪು ಪಾನೀಯಗಳ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಬೆಲೆಗಳ ಏರಿಕೆ ಎಳೆನೀರು: 50-60 ರೂ. ಕಲ್ಲಂಗಡಿ: 100-120 ರೂ. ಖರ್ಬುಜಾ: ಕೆಜಿಗೆ 100-150 ರೂ. ಮಜ್ಜಿಗೆ: 20 ರೂ. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. -ಎ.ಡಿ.ಅಮರಾವದಗಿ,  ತಹಶೀಲ್ದಾರ ನಿಡಗುಂದಿ ನಮ್ಮ ಭಾಗದಲ್ಲಿ ತೆಂಗಿನಕಾಯಿ ಉತ್ಪಾದನೆ ಕಡಿಮೆ ಇರುವುದರಿಂದ ಹೊರಗಿನಿಂದ ಎಳೆನೀರು ತರಬೇಕಾಗಿದೆ. ಆದರೂ ಬಿಸಿಲು ಹೆಚ್ಚುತ್ತಿರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದು, ವ್ಯಾಪಾರ ಉತ್ತಮವಾಗಿದೆ. -ಯಮನಪ್ಪ ಪೂಜಾರಿ,  ರಾಜನಕೋಳೂರು ಎಳೆನೀರು ವ್ಯಾಪಾರಿ

ವಾರ್ತಾ ಭಾರತಿ 24 Mar 2026 12:31 pm

ಇರಾನ್‌ ವಿರುದ್ಧ ಯುದ್ಧಭೂಮಿಗೆ ಇಳಿಯಲಿವೆ ಸೌದಿ, ಯುಎಇ? ಟ್ರಂಪ್‌ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕ್ಷಣ ಹತ್ತಿರ?

ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ ಇರಾನ್‌ ವಿರುದ್ಧದ ಹೋರಾಟದಲ್ಲಿ ಒಂಟಿತನ ಅನುಭವಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ರಾಷ್ಟ್ರಗಳಿಂದ ಸಿಹಿ ಸುದ್ದಿಯೊಂದು ಬರುವ ಸಾಧ್ಯತೆ ಇದೆ. ಇರಾನ್‌ ವಿರುದ್ಧ ಸೌದಿ ಮತ್ತು ಯುಎಇ ಯುದ್ಧಭೂಮಿಗೆ ಇಳಿಯುವ ಸಾಧ್ಯತೆ ಇದೆ ಅಮೆರಿಕನ್‌ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಈ ಎರಡೂ ರಾಷ್ಟ್ರಗಳು ಅಖಾಡಕ್ಕಿಳಿದರೆ ಮಧ್ಯಪ್ರಾಚ್ಯದ ಬಿಕ್ಕಟ್ಟು ಬೇರೊಂದು ಸ್ವರೂಪ ಪಡೆದುಕೊಳ್ಳುವುದು ಶತಸಿದ್ಧ.

ವಿಜಯ ಕರ್ನಾಟಕ 24 Mar 2026 12:30 pm

ದಲಿತ ಮೀಸಲಾತಿ ವರ್ಗೀಕರಣ ಆಗಿದ್ದೇನು? ಆಗಬೇಕಾದ್ದೇನು?

ಕರ್ನಾಟಕದಲ್ಲಿ ಮೀಸಲಾತಿ ವರ್ಗಿಕರಣ ಹೋರಾಟ ಪ್ರಾರಂಭವಾದಾಗ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಇದ್ದದ್ದು ಶೇ. 15. ಆನಂತರ 2022ರಲ್ಲಿ ಜನಸಂಖ್ಯೆಗನುಗುಣವಾಗಿ ಶೇ. 17 ಏರಿಕೆ ಮಾಡಲಾಗಿದೆ. ಮುಂದುವರಿದು ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಿದಾಗ 6-6-5 ಪ್ರಮಾಣ ನಿಗದಿಗೊಳಿಸಿದೆ. ಈ ವರ್ಗೀಕರಣ ಮಾಡುವಾಗ ಎರಡು ರೀತಿಯ ಮಾನದಂಡ/ಮಾದರಿ ಅಳವಡಿಸಿಕೊಳ್ಳಬಹುದಿತ್ತು. ಮಾದರಿ ಒಂದರಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಹಿಂದುಳಿದಿರುವಿಕೆಯ ಆಧರಿಸಿ ಎರಡು ಗುಂಪು ರಚಿಸಬಹುದಿತ್ತು. ಆಗ ಜಾತಿ ಅನ್ಯಾಯದ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಅತಿ ಹೆಚ್ಚು ಹಿಂದುಳಿದ ಜಾತಿಗಳು ಈ ಗುಂಪಿನಲ್ಲಿ ಇರುತ್ತಿದ್ದರಿಂದ ತಕರಾರು ಮಾಡುವ ಅವಕಾಶವಿರುತ್ತಿರಲ್ಲ. ಮಾದರಿ ಎರಡು ಪರಿಶಿಷ್ಟ ಜಾತಿಗಳ ಕುಲಶಾಸ್ತ್ರಿಯ ಅಧ್ಯಯನದ ಮೂಲಕ ಜನಸಂಖ್ಯೆಗನುಗುಣವಾಗಿ ಗುಂಪುಗಳನ್ನು ರಚಿಸಬಹುದಿತ್ತು. ದಲಿತ ಮೀಸಲು ವರ್ಗೀಕರಣ ಹೋರಾಟಗಾರರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈ ಕೆಲಸ ಮಾಡಲು (ಅಧಿಕಾರಕ್ಕೆ ಬರುವ ಮೊದಲು ತಾನೇ ಕಾಲ ಕಾಲಕ್ಕೆ ಮೀಸಲಾತಿ ವರ್ಗಿಕರಣ ಮಾಡಿ ಒಳಮೀಸಲಾರಿ ಜಾರಿ ಮಾಡುತ್ತೇನೆ ಎಂದು ಕೊಟ್ಟ ಭರವಸೆ ಈಡೇರಿಕೆ) ನವೆಂಬರ್ 2024ರಲ್ಲಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚಿಸಿ ಮೀಸಲು ವರ್ಗೀಕರಣದ ವರದಿ ನೀಡಲು ಸರಕಾರದ ಟರ್ಮ್ಸ್ ಆಂಡ್ ರೆಫರೆನ್ಸ್‌ಗಳನ್ನು ನೀಡಿತ್ತು. ಆಯೋಗವು ನೀಡಿದ್ದ ಕಾಲಮಿತಿಯಲ್ಲಿ ಲಭ್ಯವಾದ ದತ್ತಾಂಶಗಳನ್ನು ಬಳಸಿಕೊಂಡು (ಉದ್ದೇಶಪೂರ್ವಕವಾಗಿ ಆಯೋಗಕ್ಕೆ ಕೆಲವೊಂದು ಮಾಹಿತಿಯನ್ನು ಸರಕಾರದ ಅಧಿಕಾರಿಗಳು ನೀಡಿರುವುದಿಲ್ಲ) ಎರಡನೇ ಮಾದರಿ ಅನುಸಾರ ವರ್ಗೀಕರಣ ಮಾಡಿ ತನ್ನ ಶಿಫಾರಸು ವರದಿಯನ್ನು ಆಗಸ್ಟ್ 5, 2025ರಂದು ಸಲ್ಲಿಸಿತು. ಶಿಫಾರಸಿನಲ್ಲಿ ರಾಜ್ಯ ಸರಕಾರ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆಯೋಗ ಸೂಚಿಸಿದ ಐದು ಪ್ರವರ್ಗಗಳ ಬದಲಾಗಿ ನಾಲ್ಕು ಪ್ರವರ್ಗಗಳಾಗಿ ಮಾಡಿ ಜಾರಿಗೊಳಿಸಿದರೆ ಸಾಕಿತ್ತು. (ಪ್ರವರ್ಗ ಐದರಲ್ಲಿ ಬರುವ ಆದಿ ಕರ್ನಾಟಕ, ಆದಿ ದ್ರಾವಿಡ, ಅದಿ ಆಂಧ್ರ ಜನರ ಮೂಲ ಜಾತಿ ಮುಖಾಂತರ ಆಯಾ ಪ್ರವರ್ಗಗಳಿಗೆ ಸೇರಿಸಬಹುದಿತ್ತು. ಇದು ಸಾಧ್ಯವಾಗಬಾರದು ಎಂಬ ದುರುದ್ದೇಶ ಹಿತಾಸಕ್ತಿ ಹೋರಾಟದ ಕಾರಣ ಕೆಲ ಬದಲಾವಣೆ ಮಾಡಲಾಯಿತು) ಆದರೆ ಸರಕಾರ ಸಾಮಾಜಿಕ ನ್ಯಾಯವನ್ನು ಬದಿಗಿಟ್ಟು ರಾಜಕೀಯ ನ್ಯಾಯದ ಹಾದಿ ತುಳಿದು ಮೂರು ಪ್ರವರ್ಗಗಳಾಗಿ ಮಾಡಿತ್ತು. ಇದು ಪ್ರಸ್ತುತ ಸಂದರ್ಭದಲ್ಲಿ ಕೆಲವು ಪರಿಶಿಷ್ಟ ಜಾತಿಗಳ ಅಸಹನೆಗೆ ಕಾರಣವಾಗಿದೆ ಎಂದೇ ಭಾವಿಸಬಹುದು. ಪ್ರವರ್ಗ ಬಿ ಮತ್ತು ಸಿ ಗಳ ಪ್ರಮುಖ ಆರೋಪವೆಂದರೆ ಎಲ್ಲ ಹುದ್ದೆಗಳು ಪ್ರವರ್ಗ ಎ ಗೆ ಹೋಗುತ್ತಿವೆ ತಮಗೆ ಅನ್ಯಾಯವಾಗಿದೆ ಎಂಬುದೇ ಆಗಿದೆ. ಇದರ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿದಾಗ ಇದರ ಹಿಂದಿನ ತಕರಾರುಗಳಿಗೆ (ಅಸಹನೆ) ಕಾರಣಗಳನ್ನು ಈ ರೀತಿ ಪಟ್ಟಿ ಮಾಡಬಹುದು. 1. ಸರಕಾರ ಪರಿಶಿಷ್ಟ ಜಾತಿಗಳಿಗೆ ಹುದ್ದೆ ಕರೆದಾಗ ಒಂದೇ ವರ್ಗಗದವರಿಗೆ ನಿಗದಿಯಾಗುತ್ತಿದೆ. 6:6:5 ಫಾರ್ಮುಲ ಪಾಲಿಸುತಿಲ್ಲ. 2) ನಾವು 30 ವರ್ಷಗಳವರೆಗೆ ಕಾಯಲಾಗುವುದಿಲ್ಲ. 3) ಬಿ ಮತ್ತು ಸಿ ವರ್ಗಗಳಿಗೆ ಕನಿಷ್ಠ ಅರ್ಜಿ ಹಾಕುವ ಅರ್ಹತೆಯೂ ಇಲ್ಲ. 4) ರೋಸ್ಟರ್ ಬಿಂದುವಿನಲ್ಲಿ ತಪ್ಪಾಗಿದೆ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ವಾಸ್ತವಿಕವಾಗಿ ಈ ತಕರಾರು/ಆಪಾದನೆಗಳಲ್ಲಿ ಕಂಡುಬರುವುದು ಅಸಹನೆ ಮತ್ತು ಜಾತಿ ವಿರೋಧಿ ಮನಸ್ಥಿತಿ ಅಷ್ಟೇ ಎಂಬುದು ಕಂಡುಬರುತ್ತದೆ. ಸರಕಾರದ ನೀತಿಗಳು-ವಿಧಿ ವಿಧಾನಗಳು ಸಾಂವಿಧಾನಿಕ ಕಾನೂನಿನ ಮುಖಾಂತರ ನಡೆಯುವಾಗ ತಪ್ಪಾಗಲು ಹೇಗೆ ಸಾಧ್ಯ? ಸಂವಿಧಾನ ಬಳಸಿಕೊಂಡು ಒಂದೇ ಜಾತಿಗೆ ಅನುಕೂಲ ಮಾಡಲು ಸಾಧ್ಯವಿದೆಯೇ? ಪರಿಶಿಷ್ಟ ಜಾತಿಗಳು ಒಂದು ಗುಂಪಾಗಿ ತನ್ನಲ್ಲೇ ಹಿಂದುಳಿದವರಿಗೆ ಅವಕಾಶ ಸೃಷ್ಟಿಸಿದಾಗ ತನ್ನ ಜಾತಿಗೆ ಇದು ಮರಣ ಶಾಸನ, ಅನ್ಯಾಯ ಎಂಬ ಹಸಿ ಹಸಿ ಆಪಾದನೆ ಮಾಡಿ ಜಾತಿವಾದವನ್ನು ಬಿತ್ತುವುದರಿಂದ ಪರಿಶಿಷ್ಟ ಜಾತಿಗಳು ಸಾಧಿಸುವುದೇನು? ಒಮ್ಮೆ ಈ ಆಪಾದನೆಗಳನ್ನು ಪರಿಶೀಲಿಸಲು ಹೊರಟಾಗ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಶೇ. 15-17, ಸರಕಾರ ಒಂದು ಇಲಾಖೆಯ ಒಂದು ಕೇಡರ್‌ನ 100 ಹುದ್ದೆಗೆ ಭರ್ತಿಗೆ ಮುಂದಾದಾಗ ಪರಿಶಿಷ್ಟ ಜಾತಿಗಳ ಮೀಸಲಾತಿ ಅನುಗುಣವಾಗಿ ಒಟ್ಟು 17 ಹುದ್ದೆಗಳಲ್ಲಿ 6-6-5 ಫಾರ್ಮುಲ ಮೂರು ಪ್ರವರ್ಗಗಳಿಗೆ ಹುದ್ದೆಗಳು ದೊರೆಯುತ್ತವೆ. ಒಂದು ವೇಳೆ ಒಂದು ಇಲಾಖೆಯ ಒಂದು ಕೇಡರ್‌ನ 6 ಹುದ್ದೆಗಳನ್ನು ಕರೆದಾಗ ಒಂದು ಹುದ್ದೆ ಪರಿಶಿಷ್ಟ ಜಾತಿಗಳಿಗೆ ಲಭ್ಯವಾಗುತ್ತದೆ. ಅದನ್ನು ಪರಿಶಿಷ್ಟ ಜಾತಿ ಪ್ರವರ್ಗ ಎಗೆ ನಿಗದಿಗೊಳಿಸಲಾಗುತ್ತದೆ. ಇಲ್ಲಿ ಲಭ್ಯವಾಗುವ ಹುದ್ದೆಗಳ ಪ್ರಮಾಣ ಮುಖ್ಯವಾಗುತ್ತದೆ. ಮತ್ತೆ ಅದೇ ಇಲಾಖೆಯ ಅದೇ ಕೇಡರ್ ಹುದ್ದೆ ಭರ್ತಿ ಮಾಡುವಾಗ ಬಿ, ಸಿ ಪ್ರವರ್ಗಗಳಿಗೆ ನಿಗದಿಯಾಗುತ್ತದೆ, ಇದು ರೋಸ್ಟರ್ ಬಿಂದುಗಳ ಅನುಸಾರ ಮಾಡುವಂತಹದ್ದು. ಇದರಲ್ಲಿ ಒಂದೇ ಪ್ರವರ್ಗಕ್ಕೆ ಅನುಕೂಲ ಮಾಡುವಂತಹದ್ದು ಏನೂ ಇಲ್ಲ. ಎರಡನೇ ಆಪಾದನೆ ನೋಡಿದಾಗ 30 ವರ್ಷಗಳವರೆಗೆ ಕಾಯಲಾಗುವುದಿಲ್ಲವೆಂದರೆ ಅರ್ಥವೇನು? ಮೀಸಲಾತಿ ಉದ್ದೇಶ ಮತ್ತು ನೀತಿಗಳಿಗೆ ದ್ರೋಹ ಬಗೆದಂತಾಗುವುದಿಲ್ಲವೇ? ಇದು ರೋಸ್ಟರ್ ಬಿಂದುಗಳ ಮೆಲೋತ್ಪಾಟನೆ ಕ್ರಮ ಆಗುವುದಿಲ್ಲವೇ? ಸಾಂವಿಧಾನಿಕವಾಗಿ ಅವಕಾಶ ಇದ್ದರೆ ನೇಮಕಾತಿ ರೋಸ್ಟರ್‌ನ 1,2,3 ಬಿಂದುಗಳನ್ನು ಪ. ಜಾತಿಗಳಿಗೆ ನಿಗದಿಗೊಳಿಸಿದಾಗ ಮೂರು ಪ್ರವರ್ಗಗಳಿಗೂ ಅವಕಾಶ ಸಿಗುತ್ತದೆ. ಇದು ಕಾರ್ಯಸಾಧುವೇ? ಸರಕಾರ ಆರು ಹುದ್ದೆಗಳನ್ನು ಕರೆದಾಗ ಮೂರು ಹುದ್ದೆಗಳನ್ನು ಪರಿಶಿಷ್ಟ ಜಾತಿಗೆ ಕೊಡಲಾಗುತ್ತದೆಯೇ? ಈ ಆಪಾದನೆಯ ಹಿಂದಿರುವ ಮರ್ಮವಾದರೂ ಏನು? ಇದು ಪ್ರವರ್ಗ ಎ ಮೇಲಿನ ಅಸಹನೆಯೇ? 3ನೇ ಆಪಾದನೆಯತ್ತ ನೋಡಿದಾಗ ಕನಿಷ್ಠ ಅರ್ಜಿಯನ್ನು ಹಾಕುವ ಅರ್ಹತೆ ಬಿ, ಸಿ ಪ್ರವರ್ಗಗಳಿಗೆ ಇರುವುದಿಲ್ಲ ಎನ್ನುವುದು. ಯಾವುದೇ ಪ್ರವರ್ಗದ ಕೋಟಾಕ್ಕೆ ಆಯಾ ಪ್ರವರ್ಗದ ಅಭ್ಯರ್ಥಿ ಅರ್ಜಿ ಹಾಕಬಹುದೇ ವಿನಹ ಪದವಿಯಿಂದ್ದ ಮಾತ್ರಕ್ಕೆ ಅರ್ಜಿ ಹಾಕಬಹುದೆ? ನಾಲ್ಕನೇ ಆಪಾದನೆಯತ್ತ ನೋಡಿದಾಗ ಸಾಂವಿಧಾನಿಕ ಸರಕಾರ ರೋಸ್ಟರ್ ಬಿಂದುಗಳನ್ನು ತಪ್ಪು ಮಾಡಿ ಹುದ್ದೆ ತುಂಬಲು ಸಾಧ್ಯವೇ? ಹಾಗೊಂದು ವೇಳೆ ತಪ್ಪಾದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಲ್ಲವೇ? ನೇಮಕಾತಿಯಲ್ಲಿ 1995ರ ರೋಸ್ಟರ್ ಬಿಂದು ಅನುಸರಿಸಲಾಗುತ್ತಿದೆ.(ಶೇ. 15)ಗೆ 2022ರ ಪ. ಜಾತಿ ಮೀಸಲಾತಿ ಹೆಚ್ಚಳದ ನಂತರ ಶೇ. 17ಕ್ಕೆ 2022ರ ರೋಸ್ಟರ್ ಬಿಂದು ನಿಗದಿ ಮಾಡಲಾಗಿದೆ. ಈ ರೋಸ್ಟರ್ ನಿಯಮದ ಆದೇಶಗಳ ಮೇಲೆ ಪರಿಶಿಷ್ಟ ಜಾತಿಗಳಿಗೆ ಲಭ್ಯವಾಗವ ಹುದ್ದೆಗಳಿಗೆ ನಿಗದಿಗೊಳಿಸಿ ಹುದ್ದೆಗಳನ್ನು ತುಂಬಲಾಗುತ್ತದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದಂತಹ ಅಂಶವೆಂದರೆ ಪರಿಶಿಷ್ಟ ಜಾತಿಗಳ ಮೂರು ಎ ಬಿ ಸಿ ಪ್ರವರ್ಗಗಳಿಗೆ ಲಭ್ಯವಾಗಬಹುದಾದ ಹುದ್ದೆಗಳನ್ನಾಧರಿಸಿ ಮೂರು ಪ್ರವರ್ಗಗಳಿಗೂ ಅವಕಾಶ ನೀಡಲಾಗುತ್ತದೆ. ಮೊದಲು ಪ್ರವರ್ಗ ಎ ಸಿಗುತ್ತದೆ ಎಂಬ ಒಂದೇ ಅಂಶದ (ಅಸಹನೆಯೇ?) ಮೇಲೆ ರೋಸ್ಟರ್ ಬಿಂದುವಿನಲ್ಲಿ ತಪ್ಪಾಗಿದೆ ಎಂದು ಆಪಾದಿಸುವುದು ಎಷ್ಟು ಸರಿ? ಒಂದು ಪ್ರಜಾಪ್ರಭುತ್ವ ಸರಕಾರ ಸಮಸ್ಯೆಯನ್ನು ಸರಿಪಡಿಸುವ ಬದಲು ಕೆಲವರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಹೊರಟಾಗ ಅನ್ಯಾಯದ ಕ್ರಮ ಅನುಸರಿಸಬಹುದೇ? ಇದರಿಂದ ನಿರುದ್ಯೋಗಿಗಳಿಗೆ ಆಗುತ್ತಿರುವ ತೊಂದರೆ ತಡೆಗಟ್ಟುವುದಾದರೂ ಹೇಗೆ? ಮಾತು ಮಾತಿಗೂ ಈ ಸರಕಾರ ಸಾಮಾಜಿಕ ನ್ಯಾಯ ಪರ ಹೇಳಿಕೊಳ್ಳುತ ಸಾಮಾಜಿಕ ಅನ್ಯಾಯದ ಹಾದಿ ತುಳಿಯುತ್ತಿರುವುದು ಯಾರ ಹಿತಾಸಕ್ತಿಗೆ? ಶೇ. 17ಕ್ಕೆ ಮಾಡಿದ ಮೀಸಲು ವರ್ಗೀಕರಣ ಶೇ. 15ಕ್ಕೆ ಇಳಿಸಲು ಇರುವ ಅಡ್ಡಿಯಾದರೆ ಏನು? ಸರಕಾರ ರಚನೆಯಾಗಿರುವುದು ಕೆಲವು ಜಾತಿಗಳ ಹಿತಾಸಕ್ತಿ ರಕ್ಷಣೆಗಲ್ಲ, ಕೆಲವು ಜನರಿಗೋಸ್ಕರ ಅಲ್ಲ, ಸಮಸ್ತ ನಾಗರಿಕರಿಗಾಗಿ. ಹಾಗಾಗಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕಾಗಿದೆ. ಸಾಂವಿಧಾನಿಕವಾಗಿ ಸ್ಥಾಪಿಸಿರುವ ಜನಪರ ಸರಕಾರ ಎಲ್ಲ ಸಮುದಾಯದಗಳಿಗೆ ನ್ಯಾಯ ಒದಗಿಸಲು ವಿಫಲವಾಗುತ್ತಿರುವುದಾದರು ಏಕೆ? ತುಳಿತಕ್ಕೊಳಗಾದ ಜನರು ಸದಾಕಾಲ ಬೀದಿಯಲ್ಲಿ ಹೋರಾಟ ಮಾಡಬೇಕೇ? ಕರ್ನಾಟಕವು ಬಹುತ್ವದ ನೆಲೆ ಉಳಿಸಿಕೊಂಡಿರುವ ರಾಜ್ಯ. ಈ ಸರಕಾರದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಬಹುತೇಕ ಸಚಿವರು ಸಂವಿಧಾನ ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಅನುಸರಿಸುವವರು ಎಂದು ಹೇಳಿ 30-40 ವರ್ಷಗಳ ಸಾಮಾಜಿಕ ನ್ಯಾಯದ ಬೇಡಿಕೆಗೆ ಬೆನ್ನುತೋರಿಸುತಿರುವುದಾದರೂ ಯಾಕೆ?

ವಾರ್ತಾ ಭಾರತಿ 24 Mar 2026 12:22 pm

ರೈತರ ಜಮೀನಿನಲ್ಲಿ ವಾಲಿದ ವಿದ್ಯುತ್ ಕಂಬ

ಅನಾಹುತದ ಭೀತಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ

ವಾರ್ತಾ ಭಾರತಿ 24 Mar 2026 12:19 pm

ವಿಜಯನಗರ: ತೀವ್ರಗೊಳ್ಳುತ್ತಿರುವ ನೀರಿನ ಸಂಕಷ್ಟ

183 ಹಳ್ಳಿಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ

ವಾರ್ತಾ ಭಾರತಿ 24 Mar 2026 12:07 pm

ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ

ಬೆಂಗಳೂರು: ನಗರದ ಯಲಹಂಕ ಕೋಗಿಲು ಬಡಾವಣೆ ಅಕ್ರಮ ವಲಸಿಗರ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದರು. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ವ್ಯಾಪಕ ಚರ್ಚೆಗೆ, ವಿಪಕ್ಷ ನಾಯಕರ ಟೀಕೆಗೆ ಗುರಿಯಾಗಿತ್ತು. ಇದೀಗ ಕೇರಳ ಚುನಾವಣೆ ಹೊತ್ತಿನಲ್ಲಿ ಆ ರಾಜ್ಯದ ಲೋಕಸಭಾ ಕ್ಷೇತ್ರವೊಮದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬರೋಬ್ಬರಿ 10 ಕೋಟಿ ರೂಪಾಯಿ ವಿಶೇಷ

ಒನ್ ಇ೦ಡಿಯ 24 Mar 2026 11:46 am

ದಿಲ್ಲಿ ವಿಧಾನಸಭೆ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ. ದಿಲ್ಲಿ ವಿಧಾನಸಭೆ ಸಂಕೀರ್ಣಕ್ಕೆ ಬೆಳಿಗ್ಗೆ 7.28ರ ಸುಮಾರಿಗೆ ಮೊದಲ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಇದರ ಜೊತೆಗೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್ ಗೂ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೆ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ದಿಲ್ಲಿಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಇಮೇಲ್‌ಗಳ ಮೂಲದ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿದೆ. ಮಂಗಳವಾರ ದಿಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ನಡೆಯಲಿದೆ. ಇದೇ ದಿನ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ವಾರ್ತಾ ಭಾರತಿ 24 Mar 2026 11:46 am

ಕದನ ವಿರಾಮ ಪ್ರಸ್ತಾವನೆ ಕೇಳಿಯೇ ಹಸಿರು ಬಣ್ಣಕ್ಕೆ ತಿರುಗಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್‌, ನಿಫ್ಟಿ ಚೇತರಿಕೆ

ನೀರಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬಂತೆ, ಮಧ್ಯಪ್ರಾಚ್ಯ ಯುದ್ಧದಿಂದ ಜರ್ಜರಿತವಾಗಿರುವ ಭಾರತೀಯ ಷೇರು ಮಾರುಕಟ್ಟೆ, ಅಮೆರಿಕ ಮತ್ತು ಇರಾನ್‌ ನಡುವೆ ಐದು ದಿನಗಳ ಕದನ ವಿರಾಮ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಕೇಳಿಯೇ ಚುರುಕುಗೊಂಡಿದೆ. ಹೌದು, ನಿನ್ನೆ ಸುಮಾರು 12 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದ ಮುಂಬೈ ಷೇರು ಮಾರುಕಟ್ಟೆ, ಇಂದು (ಮಾ.24-ಮಂಗಳವಾರ) ತುಸು ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಏರಿಕೆಯತ್ತ ಮುಖ ಮಾಡಿವೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 24 Mar 2026 11:38 am

ಅಧಿಕೃತ ಹೇಳಿಕೆಗಾಗಿ ಕಾಯಿರಿ ಪಾಕಿಸ್ತಾನದಲ್ಲಿ US-ಇರಾನ್ ಮಾತುಕತೆ ಎನ್ನೋ ವರದಿಗಳಿಗೆ ತೆರೆ ಎಳೆದ ಶ್ವೇತಭವನ!

ಇರಾನ್‌ ಹಾಗೂ ಅಮೆರಿಕಾ ನಡುವೆ ಯುದ್ದಕ್ಕೆ ಟ್ರಂಪ್‌ 5 ದಿನಗಳ ಕದನವಿರಾಮ ಎಂದು ಘೋಷಿಸಿದ್ದು, ಪರಸ್ಪರ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇನ್ನು, ಇದಾದ ಬಳಿಕ ಉಭಯರ ನಡುವಿನ ಸಂಭಾವ್ಯ ಮಾತುಕತೆಯ ತಾಣ ಪಾಕಿಸ್ತಾನ ಆಗಿರಬಹುದು ಎಂಬ ವರದಿಗಳು ಹರಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅಮೆರಿಕಾ ಅಧಿಕೃತವಾಗಿ ತಿಳಿಸಿರುವವರೆಗೂ ಊಹಾಪೋಹದ ಸುದ್ದಿಗಳನ್ನು ಅಂತಿಮವೆಂದು ಪರಿಗಣಿಸಬಾರದು ಎಂದು ಸ್ಪಷ್ಟನೆ ನೀಡಿದೆ.

ವಿಜಯ ಕರ್ನಾಟಕ 24 Mar 2026 11:32 am

Tamil Nadu Opinion Poll: ದ್ರಾವಿಡ ಪಾರ್ಟಿಗಳ ನಡುವೆ ತೀವ್ರ ಹಣಾಹಣಿ - ಯಾರಾಗುತ್ತಾರೆ ಕಿಂಗ್‌ಮೇಕರ್ ?

ಒಪಿನಿಯಲ್ ಪೋಲ್ : ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇನ್ನು, ವಿಜಯ್ ಮತ್ತು ಸೀಮನ್ ಅವರ ಪಾರ್ಟಿಯ ಸಾಧನೆಯೂ ಮಹತ್ವದ್ದಾಗಿದೆ. ವೋಟ್ ವೈಬ್ ಎನ್ನುವ ಸಂಸ್ಥೆ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಯಾವ ಪಾರ್ಟಿಗೂ ಫುಲ್ ಬಹುಮತ ಸಿಗುವುದಿಲ್ಲ.

ವಿಜಯ ಕರ್ನಾಟಕ 24 Mar 2026 11:28 am

ಗದಗ: ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ; 15 ಮಂದಿಗೆ ಗಾಯ

ಗದಗ: ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯ (ವಾಲ್ಮೀಕಿ - ಎಸ್‌ಸಿ) ಗಳ ನಡುವೆ ಉದ್ಭವಿಸಿದ ವಾಗ್ವಾದ ತಾರಕಕ್ಕೇರಿ ಪರಸ್ಪರ ಹೊಡೆದಾಟಕ್ಕೆ ತಿರುಗಿ, ಕಲ್ಲು ತೂರಾಟ ನಡೆಸಿದ ಪರಿಣಾಮ 15 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಾಹಿತಿ ಪ್ರಕಾರ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ನೀರು ಕುಡಿದ ವ್ಯಕ್ತಿ ಎಸ್‌ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಈ ವಿಚಾರ ಊರಿನಲ್ಲೆಲ್ಲ ಹರಡಿ, ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಬಳಿಕ ಈ ವಾಗ್ವಾದ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಪರಿಣಾಮವಾಗಿ ಎರಡೂ ಸಮುದಾಯಗಳ ಸುಮಾರು 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 24 Mar 2026 11:10 am

ಉಪ ಚುನಾವಣೆ ಸವಾಲಿಗೆ ಅಲರ್ಟ್ ಆದ ಕಾಂಗ್ರೆಸ್‌: ಇಬ್ಬರು ಆಪ್ತ ಸಚಿವರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ!

ರಾಜ್ಯದಲ್ಲಿ ಎದುರಾಗಿರುವ ಈ ಉಪಚುನಾವಣೆಯು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ಕೇವಲ ಅಸ್ತಿತ್ವದ ಪ್ರಶ್ನೆಯಲ್ಲ, ಬದಲಿಗೆ ತನ್ನ ನಾಯಕತ್ವದ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವ ಅಗ್ನಿಪರೀಕ್ಷೆಯಾಗಿದೆ. ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಾಬೀತುಪಡಿಸಲು ಪ್ರತಿಪಕ್ಷಗಳು ಹವಣಿಸುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲಿ, ಜನಾಭಿಪ್ರಾಯ ಇಂದಿಗೂ ತನ್ನ ಪರವಾಗಿಯೇ ಇದೆ ಎಂದು ತೋರಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

ವಿಜಯ ಕರ್ನಾಟಕ 24 Mar 2026 11:01 am

ಮಧ್ಯಪ್ರಾಚ್ಯ ಸಂಘರ್ಷ| ಶಾಂತಿ ಮಾತುಕತೆ ಕುರಿತು ಟ್ರಂಪ್ ಹೇಳಿಕೆಯನ್ನು ನಕಲಿ ಸುದ್ದಿ ಎಂದು ತಳ್ಳಿ ಹಾಕಿದ ಇರಾನ್

ಟೆಹ್ರಾನ್: ಶಾಂತಿ ಮಾತುಕತೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಇರಾನ್ ನಕಲಿ ಸುದ್ದಿ ಎಂದು ಹೇಳಿದ್ದು, ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಇರಾನ್ ಜೊತೆ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆಗಳು ನಡೆಯುತ್ತಿವೆ. ಈ ಬಾರಿ ಇರಾನ್ ಸಮಸ್ಯೆ ಬಗೆಹರಿಸಬೇಕೆಂದು ಬಯಸುತ್ತದೆ. ಅವರಿಗೆ ಶಾಂತಿ ಬೇಕಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ. ಇದು ನಕಲಿ ಸುದ್ದಿಯಾಗಿದ್ದು, ಜಾಗತಿಕ ಹಣಕಾಸು ಮತ್ತು ತೈಲ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಲು ಇಂತಹ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು 5 ದಿನಗಳವರೆಗೆ ಮುಂದೂಡಲು ಅಮೆರಿಕ ಮಿಲಿಟರಿಗೆ ಸೂಚಿಸಿದ ಬೆನ್ನಲ್ಲೆ ಅಮೆರಿಕ ಮತ್ತು ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿವೆ ಮತ್ತು ಎರಡೂ ಕಡೆಯವರು ಒಪ್ಪಂದದ ʼಪ್ರಮುಖ ಅಂಶಗಳನ್ನು ಹೊಂದಿದ್ದಾರೆʼ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ವಾರ್ತಾ ಭಾರತಿ 24 Mar 2026 10:50 am

ಇರಾನ್‌ಗೆ ರಷ್ಯಾ-ಚೀನಾ ಬ್ಯಾಕಪ್‌; ಯುದ್ಧ ಭೂಮಿಯಿಂದ ಅಮರಿಕ ಪ್ಯಾಕಪ್‌? ಪುಟಿನ್‌-ಕ್ಸಿ ಪ್ಲ್ಯಾನ್‌ಗೆ ರೋಸಿ ಹೋದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂದುಕೊಂಡಿದ್ದೆಲ್ಲವೂ ನಡೆದುಬಿಟ್ಟಿದ್ದರೆ ಅದರ ಕಥೆ ಏನ್‌ ಕೇಳ್ತೀರಾ? ತಮ್ಮ ಯೋಜನೆಗಳೆಲ್ಲವೂ ಕೈಗೂಡಿದ್ದರೆ ಡೊನಾಲ್ಡ್‌ ಟ್ರಂಪ್ ಭೂಮಂಡಲದ ಅಧಿಪತಿಯಾಗಿ ಮೆರೆಯುತ್ತಿದ್ದರು. ಆದರೆ ಕಾಲದ ಯೋಜನೆಗಳ ಮುಂದೆ ಯಾರಾದರೂ ಸರಿ ತಲೆಬಾಗಲೇಬೇಕು. ಜಾಗತಿಕ ಭೂಪಟದಿಂದ ಇರಾನ್‌ ಹೆಸರನ್ನು ಅಳಿಸುವ ಹುಮ್ಮಸ್ಸಿನೊಂದಿಗೆ ಇಸ್ರೇಲ್‌ ಜೊತೆಗೂಡಿ ಮಧ್ಯಪ್ರಾಚ್ಯದ ಯುದ್ಧರಂಗಕ್ಕಿಳಿದ ಯುಎಸ್‌ ಅಧ್ಯಕ್ಷ, ಇರಾನ್‌ಗೆ ರಷ್ಯಾ ಮತ್ತು ಚೀನಾ ನೀಡುತ್ತಿರುವ ಪರದೆಯ ಹಿಂದಿನ ಬೆಂಬಲ ಕಂಡು ರೋಸಿ ಹೋಗಿದ್ದಾರೆ. ಟ್ರಂಪ್‌ ಅವರಿಗೆ ವ್ಲಾಡಿಮಿರ್‌ ಪುಟಿನ್‌ ಮತ್ತು ಕ್ಸಿ ಜಿನ್‌ಪಿಂಗ್‌ ಚೆಕ್‌ಮೇಟ್‌ ನೀಡಿದ್ದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 24 Mar 2026 10:28 am

Gold Rate Fall: 1.28 ಲಕ್ಷ ರೂಪಾಯಿಗೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ಒಂದೇ ತಿಂಗಳಲ್ಲಿ 80 ಸಾವಿರ ಇಳಿಕೆ

ಚಿನ್ನ ಬೆಳ್ಳಿ ದರಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಆಭರಣ ಕೊಳ್ಳುವವರಿಗೆ, ಚಿನ್ನದ ಖರೀದಿಗೆ ಇದು ಸುಸಂದರ್ಭವಾಗಿದೆ. ಬೆಳ್ಳಿ ಬೆಲೆ ಮಾರ್ಚ್ ತಿಂಗಳಲ್ಲಿ 80 ಸಾವಿರ ಇಳಿಕೆ ಆಗಿದ್ದರೆ, ಚಿನ್ನದ ಬೆಲೆ 32,740 ರೂಪಾಯಿ ಇಳಿಕೆ ಆಗಿದೆ.

ವಿಜಯ ಕರ್ನಾಟಕ 24 Mar 2026 10:28 am

ತನಗರಿವಿಲ್ಲದಂತೆಯೇ ಭಾರತವು ಅಮೆರಿಕ, ರಶ್ಯ, ಮ್ಯಾನ್ಮಾರ್ ಒಳಗೊಂಡ ಪ್ರಾಕ್ಸಿ ಯುದ್ಧಗಳಿಗೆ ನೆಲವಾಗಿದೆಯೇ?

ಭಾರತದ ಬೇಹು ಹಾಗೂ ಇತರ ವ್ಯವಸ್ಥೆಯ ಗಮನಕ್ಕೆ ಬಾರದೆ ನಮ್ಮ ಪ್ರದೇಶಗಳು ವಿದೇಶಿ ಡ್ರೋನ್‌ಗಳು ಮತ್ತು ಮಾದಕವಸ್ತುಗಳ ಸಾಗಣೆಗೆ ನೆಲೆಯಾದದ್ದು ಹೇಗೆ? ಭಾರತ ಗೊತ್ತಿಲ್ಲದಂತೆಯೇ ಅಮೆರಿಕ, ರಶ್ಯ, ಮ್ಯಾನ್ಮಾರ್ ಒಳಗೊಂಡ ಪ್ರಾಕ್ಸಿ ಯುದ್ಧಗಳಿಗೆ ನೆಲವಾಗಿದೆಯೇ? ಭಾರತದೊಳಗೆ ಈ ಜಾಲವನ್ನು ನಿಜವಾಗಿಯೂ ಸಕ್ರಿಯಗೊಳಿಸಿದವರು ಯಾರು? ಮತ್ತಿದು ಗುಪ್ತಚರ ವೈಫಲ್ಯವೇ? ರಶ್ಯದ ಇಂಟಲಿಜೆನ್ಸ್ ಸುಳಿವು ನೀಡುತ್ತಿದೆ ಎಂದಾದರೆ, ಅದು ಭಾರತದ ಆಂತರಿಕ ಭದ್ರತಾ ಸಾಮರ್ಥ್ಯದ ಬಗ್ಗೆ ಏನು ಹೇಳುತ್ತದೆ? ಸಶಸ್ತ್ರ ಸಂಘರ್ಷಕ್ಕೆ ಹಣಕಾಸು ಒದಗಿಸಲು ಮತ್ತು ಇಲ್ಲಿ ಅಸ್ಥಿರತೆ ತರಲು ಮಾನವೀಯ ಮತ್ತು ಧಾರ್ಮಿಕ ಜಾಲಗಳನ್ನು ಬಳಸಲಾಗುತ್ತಿದೆಯೇ? ಇತ್ತೀಚೆಗೆ ಅಮೆರಿಕನ್ ಮರ್ಸಿನರಿ ಮ್ಯಾಥ್ಯೂ ವ್ಯಾನ್‌ಡೈಕ್ ಮತ್ತು ಆರು ಉಕ್ರೇನಿಯನ್ನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಮ್ಯಾನ್ಮಾರ್ ಬಂಡುಕೋರರಿಗೆ ಸಹಾಯ ಮಾಡಿದ ಮತ್ತು ಡ್ರೋನ್ ತರಬೇತಿ ನೀಡಿದ್ದಾರೆ ಎಂಬ ಆರೋಪ ಈ ಬಂಧಿತರ ಮೇಲಿದೆ. ಇದರೊಂದಿಗೆ, ಚಿನ್ ಮಾದಕವಸ್ತು ಕಾರ್ಯಾಚರಣೆ, ಯುಎಸ್ ಇವಾಂಜೆಲಿಕಲ್ ಫಂಡಿಂಗ್, ಉಕ್ರೇನಿಯನ್ ಯೋಧರು, ರಶ್ಯದ ಗುಪ್ತಚರ ಮತ್ತು ಮಣಿಪುರಕ್ಕೆ ಮಾದಕವಸ್ತು ಸಾಗಾಟ ಜಾಲದ ಸಂಪರ್ಕ ಬಯಲಿಗೆ ಬಂದಿದೆ. ಆದರೆ, ಈ ಅಂತರ್‌ರಾಷ್ಟ್ರೀಯ ಕೈವಾಡ ಇಷ್ಟು ದಿನ ಹೇಗೆ ಪತ್ತೆಯಾಗದೆ ಉಳಿದಿತ್ತು ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಮಾರ್ಚ್ 13ರ ರಾತ್ರಿ ಎನ್‌ಐಎ ಮೂರು ವಿಮಾನ ನಿಲ್ದಾಣಗಳಲ್ಲಿ ಅಮೆರಿಕನ್ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್ ಮತ್ತು ಆರು ಉಕ್ರೇನಿಯನ್ನರನ್ನು ಬಂಧಿಸಿದಾಗ, ಅದನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎನ್ನಲಾಯಿತು. ವಿದೇಶಿ ಪ್ರಜೆಗಳು ಮಿಜೋರಾಂಗೆ ಅಕ್ರಮವಾಗಿ ಪ್ರವೇಶಿಸಿ, ಮ್ಯಾನ್ಮಾರ್‌ಗೆ ದಾಟಿ, ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧದ ತರಬೇತಿ ನೀಡಿದ್ದಾರೆ. ಅಲ್ಲದೆ, ಯುರೋಪಿಯನ್ ಡ್ರೋನ್‌ಗಳನ್ನು ಕಳ್ಳಸಾಗಣೆ ಮಾಡಿದ್ದಾರೆ. ಯುಎಪಿಎ ಕಾಯ್ದೆಯಡಿಯಲ್ಲಿ ಆ ಏಳು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ವ್ಯಾನ್‌ಡೈಕ್‌ನನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಆರು ಉಕ್ರೇನಿಯನ್ನರಲ್ಲಿ ಸ್ಟೆಫನ್‌ಕಿವ್ ಮರಿಯನ್, ಹೊಂಚರುಕ್ ಮ್ಯಾಕ್ಸಿಮ್ ಮತ್ತು ಕಾಮಿನ್ಸ್ಕಿ ವಿಕ್ಟರ್ ಈ ಮೂವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಹರ್ಬಾ ಪೆಟ್ರೋ, ಸ್ಲೈವಿಯಾಕ್ ತಾರಸ್, ಇವಾನ್ ಸುಕ್ಮನೋವ್ಸ್ಕಿ ಎಂಬ ಇತರ ಮೂವರನ್ನು ಲಕ್ನೊ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ದಿಲ್ಲಿ ನ್ಯಾಯಾಲಯ ಎಲ್ಲಾ ಏಳು ಜನರನ್ನು ಮಾರ್ಚ್ 27ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ. ಆದರೆ, ಇಲ್ಲಿ ವಿಷಯದ ಗಂಭೀರತೆ ಎಂಥದು ಎಂಬುದನ್ನು ‘ದಿ ಕ್ವಿಂಟ್’ ತನಿಖಾ ವರದಿ ತೋರಿಸುತ್ತಿದೆ. ಅದರ ಪ್ರಕಾರ, ಇದೆಲ್ಲದರ ಹಿಂದೆ ಚಿನ್ ಬಂಡುಕೋರರ ಡ್ರಗ್ ಸಾಮ್ರಾಜ್ಯ, ಅಮೆರಿಕನ್ ಇವಾಂಜೆಲಿಕಲ್ ಚರ್ಚ್ ಫಂಡಿಂಗ್, ರಶ್ಯದ ಯೋಧರು, ಮ್ಯಾನ್ಮಾರ್‌ನೊಳಗಿನ ರಶ್ಯದ ಗುಪ್ತಚರ ಕೇಂದ್ರಗಳು ಮತ್ತು ಚಿನ್ ರಾಜ್ಯದಿಂದ ಮಣಿಪುರದ ಮೂಲಕ ಭಾರತಕ್ಕೆ ಹರಿಯುವ ಮಾದಕವಸ್ತು ಪೈಪ್‌ಲೈನ್ ಅನ್ನು ಸಂಪರ್ಕಿಸುವ ಜಾಲದ ಸಂಪರ್ಕ ಇದೆ. ಅದರಲ್ಲೂ, ಬರ್ಮಾದ ಚಿನ್ ರಾಷ್ಟ್ರೀಯ ರಕ್ಷಣಾ ಪಡೆ ಸಿಎನ್‌ಡಿಎಫ್‌ನ ಉಪಾಧ್ಯಕ್ಷ ಪೀಟರ್ ಥಾಂಗ್ ಈ ಜಾಲದ ಕೇಂದ್ರ ವ್ಯಕ್ತಿಯಾಗಿದ್ದಾನೆ ಎಂಬುದನ್ನು ತನಿಖೆಗೆ ನಿಕಟವಾಗಿರುವ ಹಲವು ಮೂಲಗಳು ಹೇಳುತ್ತಿರುವುದಾಗಿ ತನಿಖಾ ಪತ್ರಕರ್ತ ವಿ.ಕೆ. ಶಶಿಕುಮಾರ್ ಅವರ ವರದಿ ಹೇಳುತ್ತಿದೆ. ಸಿಎನ್‌ಡಿಎಫ್ 2021ರಲ್ಲಿ ಬರ್ಮಾದ ಚಿನ್ ರಾಜ್ಯದ ಫಾಲಂನಲ್ಲಿ ಸ್ಥಾಪಿಸಲಾದ ಚಿನ್ ರಾಷ್ಟ್ರೀಯ ಸಂಘಟನೆಯ (ಸಿಎನ್‌ಒ) ಸಶಸ್ತ್ರ ವಿಭಾಗ. ಇದು ಪಶ್ಚಿಮ ಚಿನ್ ರಾಜ್ಯದಲ್ಲಿ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುವ ಪ್ರಮುಖ ಬಣಗಳಲ್ಲಿ ಒಂದಾಗಿದೆ. 2021ರ ದಂಗೆಗೆ ಮೊದಲು ಯಾಂಗೋನ್‌ನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಪೀಟರ್ ಥಾಂಗ್, ಈಗ ಸಿಎನ್‌ಡಿಎಫ್‌ನ ಮಾದಕವಸ್ತು ಸ್ಮಗ್ಲಿಂಗ್‌ನಲ್ಲಿ ತೊಡಗಿದ್ದಾನೆ. ಇದು ಮ್ಯಾನ್ಮಾರ್ ಸೇನೆ ವಿರುದ್ಧದ ಸಶಸ್ತ್ರ ಹೋರಾಟಕ್ಕೆ ಹಣಕಾಸು ಒದಗಿಸುತ್ತದೆ. ಈಗ ಭಾರತದಲ್ಲಿ ಬಂಧಿತರಾಗಿರುವ ವ್ಯಾನ್‌ಡೈಕ್ ಮತ್ತು ಆರು ಉಕ್ರೇನಿಯನ್ನರು ಭಾಗಿಯಾಗಿದ್ದ ಡ್ರೋನ್ ಕಳ್ಳಸಾಗಣೆ ಕಾರ್ಯಾಚರಣೆಯ ವ್ಯವಸ್ಥೆ ಮಾಡಿದ್ದವನು ಕೂಡ ಇದೇ ಥಾಂಗ್ ಎನ್ನಲಾಗಿದೆ. ಸಿಎನ್‌ಡಿಎಫ್ ಸೇರಿದಂತೆ ಚಿನ್ ರೆಸಿಸ್ಟೆನ್ಸ್ ಪಡೆಗಳು, ಚಿನ್ ರಾಜ್ಯದ ಹೆಚ್ಚಿನ ಗ್ರಾಮೀಣ ಭಾಗ ಮತ್ತು ಅದರ ಅರ್ಧಕ್ಕಿಂತ ಹೆಚ್ಚು ಪಟ್ಟಣಗಳಿಂದ ಅಲ್ಲಿನ ಮಿಲಿಟರಿಯನ್ನು ಹೊರಹಾಕಿವೆ. 2024ರ ಕೊನೆಯಲ್ಲಿ ಸಿಎನ್‌ಡಿಎಫ್ ಚಿನ್ ರಾಜ್ಯದ ಹಿಂದಿನ ರಾಜಧಾನಿಯಾದ ಫಾಲಂ ಪಟ್ಟಣ ವಶಪಡಿಸಿಕೊಳ್ಳಲು ‘ಮಿಷನ್ ಜೆರುಸಲೆಮ್’ ಅನ್ನು ಶುರುಮಾಡಿತು. ಆದರೆ ರಶ್ಯ ಮತ್ತು ಚೀನೀ ಜೆಟ್‌ಗಳ ದಾಳಿಯಿಂದ ಸಿಎನ್‌ಡಿಎಫ್ ಹೋರಾಟಗಾರರಲ್ಲಿ ಹಲವು ಸತ್ತರು. ಚಿನ್ ಬ್ರದರ್‌ಹುಡ್ ಎಂಬುದರ ಅಡಿಯಲ್ಲಿ ಕೆಲಸ ಮಾಡುವ ಸಿಎನ್‌ಡಿಎಫ್ ಮತ್ತು ಚಿನ್ ನ್ಯಾಷನಲ್ ಆರ್ಮಿ (ಸಿಎನ್‌ಎ) ಎರಡೂ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತವೆ. ಆದರೆ ಎರಡೂ ಸಂಘಟನೆಗಳಿಗೆ ಹಣ ಹೋಗುವುದು ಮಾತ್ರ ಬೇರೆ ಬೇರೆ ರೀತಿಯಲ್ಲಿ ಎಂದು ಹೇಳಲಾಗುತ್ತದೆ. ಸಿಎನ್‌ಡಿಎಫ್ ಬೆಂಬಲಕ್ಕೆ ಅಮೆರಿಕನ್ ಮಿಷನರಿ ಜಾಲಗಳು ನಿಂತಿವೆ ಎನ್ನಲಾಗಿದೆ. ಸಿಎನ್‌ಡಿಎಫ್‌ನ ಸಶಸ್ತ್ರ ಹೋರಾಟಕ್ಕೆ ಮುಖ್ಯವಾಗಿ ಡ್ರಗ್ಸ್ ವ್ಯವಹಾರದ ಮೂಲಕ ಹಣಕಾಸು ಒದಗಿಸಲಾಗುತ್ತದೆ. ಚಿನ್ ಸ್ಟೇಟ್ ಮತ್ತು ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಡುಕೋರ ಗುಂಪುಗಳು ಭಾರತದೊಳಕ್ಕೆ ಡ್ರಗ್ಸ್ ಸಾಗಿಸುವಲ್ಲಿ ಕೆಲಸ ಮಾಡುತ್ತವೆ. ಜೊಮಿ, ಚಿನ್ ಮತ್ತು ಮಿಜೊ ಸಮುದಾಯಗಳು ವಸಾಹತುಶಾಹಿ ಯುಗಕ್ಕಿಂತ ಮುಂಚಿಂದಲೂ ಉತ್ತಮ ಜನಾಂಗೀಯ ಮತ್ತು ರಕ್ತಸಂಬಂಧಗಳನ್ನು ಹೊಂದಿವೆ. ಈ ಬಾಂಧವ್ಯದಿಂದಾಗಿಯೇ, ದಕ್ಷಿಣ ಏಶ್ಯದ ಕಾಡು ಪ್ರದೇಶದ ಮೂಲಕ ಹಾದುಹೋಗುವ 510 ಕಿ.ಮೀ. ಗಡಿಯುದ್ದಕ್ಕೂ ಶಸ್ತ್ರಾಸ್ತ್ರ, ಮಾದಕ ವಸ್ತು ಮತ್ತು ಈಗ ಡ್ರೋನ್‌ಗಳ ಸಾಗಾಟ ಜಾಲಗಳಿಗೆ ಬೆಂಬಲ ಸಿಗುತ್ತಿದೆ. ಯುರೋಪಿಯನ್ ಡ್ರೋನ್‌ಗಳನ್ನು ಚಿನ್ ರಾಜ್ಯಕ್ಕೆ ಸಾಗಿಸುವ ಅದೇ ಜಾಲಗಳು ಡ್ರಗ್ಸ್ ಅನ್ನೂ ಸಾಗಿಸುತ್ತಿವೆ. ಇನ್ನು, ಮ್ಯಾಥ್ಯೂ ವ್ಯಾನ್‌ಡೈಕ್ ಬಾಲ್ಟಿಮೋರ್‌ನಲ್ಲಿ ಜನಿಸಿದವನು. ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಿಂದ ಸೆಕ್ಯೂರಿಟಿ ಸ್ಟಡೀಸ್‌ನಲ್ಲಿ ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಯುದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಆತ ಸ್ಥಾಪಿಸಿರುವ ಸನ್ಸ್ ಆಫ್ ಲಿಬರ್ಟಿ ಇಂಟರ್‌ನ್ಯಾಷನಲ್ (SOLI) ಒಂದು ಭದ್ರತಾ ಗುತ್ತಿಗೆ ಸಂಸ್ಥೆ. ಅದು ಸರ್ವಾಧಿಕಾರಿಗಳ ವಿರುದ್ಧ ಹೋರಾಡುವ ಪಡೆಗಳಿಗೆ ಮಿಲಿಟರಿ ತರಬೇತಿ ನೀಡುತ್ತದೆ. ವ್ಯಾನ್‌ಡೈಕ್ 2011ರ ಲಿಬಿಯಾದ ಅಂತರ್ಯುದ್ಧದಲ್ಲಿ ಹೋರಾಡಿದ್ದ. ಮುಅಮ್ಮರ್ ಗದ್ದಾಫಿಯ ಜೈಲುಗಳಲ್ಲಿ ಯುದ್ಧ ಕೈದಿಯಾಗಿ 6 ತಿಂಗಳು ಕಳೆದಿದ್ದ. ಸಿರಿಯಾದಲ್ಲಿ ಡಾಕ್ಯೂಮೆಂಟರಿ ಮಾಡಿ ಪ್ರಶಸ್ತಿಯನ್ನೂ ಪಡೆದಿದ್ದಾನೆ. ತನ್ನ ಪತ್ರಕರ್ತ ಸ್ನೇಹಿತರಾದ ಜೇಮ್ಸ್ ಫೋಲಿ ಮತ್ತು ಸ್ಟೀವನ್ ಸಾಟ್ಲಾಫ್ ಅವರನ್ನು ಐಸಿಸ್ ಕೊಂದ ಬಳಿಕ ಆತ SOLI ಅನ್ನು ಸ್ಥಾಪಿಸಿದ. ಐಸಿಸ್ ವಿರುದ್ಧ ಹೋರಾಡಲು ಇರಾಕಿ ಕ್ರಿಶ್ಚಿಯನ್ನರಿಗೆ ತರಬೇತಿ ನೀಡಿದ ಮತ್ತು 2022ರಿಂದ ರಶ್ಯ ವಿರುದ್ಧ ಉಕ್ರೇನಿಯನ್ ನಾಗರಿಕರಿಗೆ ತರಬೇತಿ ನೀಡಿದ. ಲಿಬಿಯಾ, ಸಿರಿಯಾ, ಇರಾಕ್, ಅಫ್ಘಾನಿಸ್ತಾನ, ಉಕ್ರೇನ್, ಫಿಲಿಪ್ಪೀನ್ಸ್, ವೆನೆಝುವೆಲಾ ಬಳಿಕ ಈಗ ಮ್ಯಾನ್ಮಾರ್‌ನಲ್ಲಿ ಆತನ ಕಾರ್ಯಚಾರಣೆ ಶುರುವಾಗಿತ್ತು. ಚಿನ್ ಸ್ಟೇಟ್‌ಗೆ ಉಕ್ರೇನಿಯನ್ ಯುದ್ಧ ಯೋಧರನ್ನು ನೇಮಿಸಿಕೊಳ್ಳುವುದರ ಹಿಂದೆ ಈತ ಇದ್ದಾನೆ ಎಂದು ಎನ್‌ಐಎ ಅನುಮಾನಿಸಿದೆ. ಯುಎಸ್‌ನಲ್ಲಿನ ಇವಾಂಜೆಲಿಕಲ್ ಚರ್ಚ್ ಗುಂಪುಗಳೊಂದಿಗೆ ಕೂಡ ವ್ಯಾನ್‌ಡೈಕ್‌ನ ಸಂಪರ್ಕವಿದೆ ಎಂಬುದು ಈಗ ಬಯಲಾಗಿರುವ ವಿಷಯವಾಗಿದೆ. ಮೂಲಗಳ ಪ್ರಕಾರ, ಈ ಚರ್ಚ್ ನೆಟ್‌ವರ್ಕ್‌ಗಳು ಸಿಎನ್‌ಡಿಎಫ್‌ಗೆ ಹಣಕಾಸು ಒದಗಿಸುತ್ತವೆ. ಚಿನ್ ಕ್ರಿಶ್ಚಿಯನ್ ಸಮುದಾಯ ಅಮೆರಿಕನ್ ಬ್ಯಾಪ್ಟಿಸ್ಟ್ ಮಿಷನರಿ ಜೊತೆ ಶತಮಾನದಷ್ಟು ಹಳೆಯ ಸಂಪರ್ಕ ಹೊಂದಿದೆ ಮತ್ತು ಈ ಸಂಪರ್ಕವನ್ನು ಸಿಎನ್‌ಡಿಎಫ್‌ನ ಸಶಸ್ತ್ರ ಹೋರಾಟಕ್ಕೆ ಆರ್ಥಿಕ ಬೆಂಬಲ ನೀಡಲು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಹಣಕಾಸು ನೆರವಿಗೂ ಮೀರಿದ ಸಂಬಂಧವಿದೆ. ಸಿಎನ್‌ಡಿಎಫ್‌ನ ರಕ್ಷಣಾ ಕಾರ್ಯದರ್ಶಿ, ಮಾಜಿ ರಾಷ್ಟ್ರೀಯ ಕರಾಟೆ ಚಾಂಪಿಯನ್ ಮತ್ತು ಮ್ಯಾನ್ಮಾರ್‌ನ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಹಿಂದಿನ ಸಹಾಯಕ ನಿರ್ದೇಶಕಿ ಒಲಿವಿಯಾ ಥಾಂಗ್ ಲುವಾಯ್ ಅವರು ಅಮೆರಿಕನ್ ಪ್ರಜೆಯನ್ನು ವಿವಾಹವಾಗಿದ್ದಾರೆ. ಇದು ಮಿಷನರಿ ಮತ್ತು ಮಿಲಿಟರಿ ಜಾಲದ ಆಳ ಸಂಬಂಧವನ್ನು ಸೂಚಿಸುತ್ತದೆ. ವ್ಯಾನ್‌ಡೈಕ್ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಅನೇಕ ಸಲ ತರಬೇತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋರ್ಟ್‌ಗೆ ಎನ್‌ಐಎ ಹೇಳಿದೆ. ಸಂಘಟಿತ ಬಂಧನಗಳಿಗೆ ಮೊದಲು ಎನ್‌ಐಎ ತಂಡಗಳು ಹಲವಾರು ತಿಂಗಳುಗಳಿಂದ ಈಶಾನ್ಯದಲ್ಲಿ ಶಂಕಿತರನ್ನು ಪತ್ತೆಹಚ್ಚುತ್ತಿದ್ದವು. ತನಿಖಾಧಿಕಾರಿಗಳು ಹೇಳುವಂತೆ ಈ ಗುಂಪು 2024ರಿಂದಲೂ ಪದೇ ಪದೇ ಈ ಪ್ರದೇಶಕ್ಕೆ ಬರುತ್ತಿತ್ತು. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ 14 ಉಕ್ರೇನಿಯನ್ ಪ್ರಜೆಗಳಲ್ಲಿ ಇನ್ನೂ 8 ಜನರು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ. ಇಲ್ಲಿ ಗಮನಿಸಬೇಕಿರುವ ಒಂದು ಸಂಗತಿಯೆಂದರೆ, ಇದೆಲ್ಲದರ ಬಗ್ಗೆ ಎನ್‌ಐಎ ಎಚ್ಚರಗೊಳ್ಳಲು ಮಾಹಿತಿ ಕೊಟ್ಟದ್ದು ರಶ್ಯದ ಇಂಟಲಿಜೆನ್ಸ್ ಎಂಬುದು. ಬಂಡುಕೋರ ಗುಂಪುಗಳ ವಿರುದ್ಧ ಮಿಲಿಟರಿಗೆ ಬೆಂಬಲಿಸಲು ಮ್ಯಾನ್ಮಾರ್ ಒಳಗೆ ಮಾಸ್ಕೊ ಹಲವಾರು ಗುಪ್ತಚರ ಕೇಂದ್ರಗಳನ್ನು ಸ್ಥಾಪಿಸಿದೆ. ರಶ್ಯ ಮತ್ತು ಚೀನಾ ಎರಡೂ ಮ್ಯಾನ್ಮಾರ್ ಸೇನೆಯ ಬೆನ್ನಿಗಿವೆ. ರಶ್ಯ ಹೆಲಿಕಾಪ್ಟರ್‌ಗಳು, ಫೈಟರ್ ಜೆಟ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳನ್ನು ಪೂರೈಸುತ್ತದೆ. ಚೀನಾ ಮಿಲಿಟರಿ ಉಪಕರಣಗಳನ್ನು ಒದಗಿಸುತ್ತದೆ ಮತ್ತು ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ಜನಾಂಗೀಯ ಸಶಸ್ತ್ರ ಗುಂಪುಗಳ ಮೇಲೆ ತನ್ನ ಹತೋಟಿ ಸಾಧಿಸಿದೆ. ಭಾರತದೊಳಕ್ಕೆ ಡ್ರೋನ್‌ಗಳ ಸಾಗಣೆ ಮತ್ತು ಮಣಿಪುರಕ್ಕೆ ಡ್ರಗ್ಸ್ ಹರಿದುಬರುತ್ತಿರುವುದು ಭಾರತದ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ರಶ್ಯ ಗುಪ್ತಚರ ಮಾಹಿತಿ ಸಿಕ್ಕಿದ್ದು ಮಹತ್ವದ ಬೆಳವಣಿಗೆ. ಇದೇ ಹೊತ್ತಲ್ಲಿ, ಬಂಡುಕೋರರಿಗೆ ಡ್ರೋನ್ ಪೂರೈಕೆ ತಪ್ಪಿಸುವ ಮೂಲಕ ಮಿಲಿಟರಿ ಆಡಳಿತವನ್ನು ರಕ್ಷಿಸುವ ರಶ್ಯದ ಭೌಗೋಳಿಕ ರಾಜಕೀಯ ಹಿತಾಸಕ್ತಿಯೂ ಕೆಲಸ ಮಾಡಿದೆ. ಇನ್ನು, ಮಿಜೋರಾಂ ಮ್ಯಾನ್ಮಾರ್ ಅಂತರ್ಯುದ್ಧಕ್ಕೆ ಮರ್ಸಿನರಿಗಳನ್ನು ಪೂರೈಸುವ ಕಾರಿಡಾರ್ ಆಗಿದೆ. ಮಿಲಿಟರಿ ವಿರುದ್ಧ ಹೋರಾಡುವ ಬಂಡಾಯ ಸಂಘಟನೆಗಳಿಗೆ ತರಬೇತಿ ನೀಡಲು ಉಕ್ರೇನ್ ಯೋಧರು ಮಿಜೋರಾಂ ಮೂಲಕ ಮ್ಯಾನ್ಮಾರ್‌ನ ಚಿನ್ ರಾಜ್ಯಕ್ಕೆ ಹೋಗುವ ವಿಷಯ ಬಯಲಾಗಿದೆ. 2024ರ ಜೂನ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಸುಮಾರು 2,000 ವಿದೇಶಿಯರು ಮಿಜೋರಾಂ ಪ್ರವೇಶಿಸಿದರು. ಅವರಲ್ಲಿ ಹಲವರು ಮಿಲಿಟರಿ ತರಬೇತಿಗಾಗಿ ಚಿನ್ ಹಿಲ್ಸ್‌ಗೆ ಹೋದರು. ಈಗ ಅಂಥವರ ಸಂಖ್ಯೆ ತುಂಬಾ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ನೂರಾರು ಉಕ್ರೇನಿಯನ್ನರು ಮತ್ತು ಅಮೆರಿಕನ್ನರು ಮಿಜೋರಾಂ ಮೂಲಕ ಚಿನ್ ರಾಜ್ಯಕ್ಕೆ ಹೋಗಿದ್ದಾರೆ. ಇದಕ್ಕೂ ಹಿಂದೆ 2024ರ ಜೂನ್ ನಲ್ಲಿ ಬ್ರಿಟಿಷ್ ಪ್ರಜೆ ಡೇನಿಯಲ್ ನ್ಯೂಯಿಯನ್ನು ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬೆಲ್ಜಿಯಂ ಪ್ರಜೆ ಸೈಮನ್ ಕ್ಲೆಮೆಂಟೆಯನ್ನು ಕೂಡ 2025ರ ಮಾರ್ಚ್‌ನಲ್ಲಿ ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಗಲೇ ಇಂಥ ಮದ್ದುಗುಂಡು ಸಾಗಾಟದ ಕಾರಿಡಾರ್ ಪತ್ತೆಯಾಗಿದ್ದರೂ, ಅದನ್ನು ಮುಚ್ಚಲಾಗಿಲ್ಲ. ಎನ್‌ಐಎ ತನಿಖೆ ಆರಂಭಿಕ ಹಂತದಲ್ಲಿದೆ. ಆದರೆ ವರ್ಷಗಳಿಂದ ಭಾರತದ ಈಶಾನ್ಯ ಪ್ರದೇಶದಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂಬುದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಶ್ಯ ಸುಳಿವು ನೀಡುವವರೆಗೂ ಸಾವಿರಾರು ಡ್ರೋನ್‌ಗಳು ಯುರೋಪ್‌ನಿಂದ ಭಾರತದ ಭೂಪ್ರದೇಶದ ಮೂಲಕ ಗೊತ್ತೇ ಇಲ್ಲದಂತೆ ಹೇಗೆ ಸಾಗಣೆಯಾದವು? ಡ್ರಗ್ ಸ್ಮಗ್ಲಿಂಗ್ ಜಾಲ ಸಕ್ರಿಯವಾಗಿರುವುದು ಮಣಿಪುರವನ್ನು ಯಾವ ಮಟ್ಟಿನ ಅಪಾಯಕ್ಕೆ ತಳ್ಳಿರಬಹುದು? ಇನ್ನೂ ಪತ್ತೆಯಾಗದ 8 ಉಕ್ರೇನಿಯನ್ನರು ಇನ್ನೂ ಮ್ಯಾನ್ಮಾರ್‌ನಲ್ಲಿದ್ದಾರೆಯೇ? ಅಲ್ಲದೆ, SಔಐI ಸಂಘಟನೆ, ಅಮೆರಿಕದ ಮಿಷನರಿ ಫಂಡಿಂಗ್ ಮತ್ತು ಅಮೆರಿಕ ಸರಕಾರದ ನಡುವಿನ ಸಂಬಂಧ ಏನಿರಬಹುದು? ಇಂಥ ಹಲವಾರು ಪ್ರಶ್ನೆಗಳು ಈಗ ಎದ್ದಿವೆ. ಅಮೆರಿಕನ್ ಪ್ರಜೆಯ ಬಂಧನದ ಬಳಿಕ ಯುಎಸ್ ರಾಯಭಾರ ಕಚೇರಿ, ಪರಿಸ್ಥಿತಿ ಬಗ್ಗೆ ತಿಳಿದಿದೆ ಮತ್ತು ಗೌಪ್ಯತೆ ಕಾರಣಗಳಿಗಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದೆ. ಉಕ್ರೇನ್ ಮಾತ್ರ ತನ್ನ ಪ್ರಜೆಗಳ ತಕ್ಷಣದ ಬಿಡುಗಡೆ ಮತ್ತು ಕಾನ್ಸುಲರ್ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಔಪಚಾರಿಕ ಪ್ರತಿಭಟನೆ ಸಲ್ಲಿಸಿದೆ. ನಿಜವಾಗಿಯೂ ಭಾರತದ ಈಶಾನ್ಯ ಗಡಿಯಲ್ಲಿ ಏನಾಗುತ್ತಿದೆ ಎಂಬುದು ಆತಂಕ ಹೆಚ್ಚಿಸುವ ಪ್ರಶ್ನೆಯಾಗಿದೆ.

ವಾರ್ತಾ ಭಾರತಿ 24 Mar 2026 10:11 am

ದಾವಣಗೆರೆ : ಒಂದೇ ವಾಹನದಲ್ಲಿ ಬಿಜೆಪಿಯ ಆ ಮತ್ತು ಈ ಬಣದ ನಾಯಕರು - ಕಮಲ ಪಡೆಯ ಒಗ್ಗಟ್ಟು, ಕೈಗೆ ಇಕ್ಕಟ್ಟು

Davanagere By Poll : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ, ನಾಮಪತ್ರ ಸಲ್ಲಿಸಲು ಇರುವ ಗಡುವು ಮುಕ್ತಾಯಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು, ಭಾರೀ ಅಬ್ಬರದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿನ ಎರಡು ಬಣಗಳು ಜೊತೆಯಾಗಿ ಕಾಣಿಸಿಕೊಂಡಿದ್ದದ್ದು ಕಾರ್ಯಕರ್ತರ ಉತ್ಸಾಹ ಹೆಚ್ಚಾಗಲು ಕಾರಣವಾಗಿದೆ.

ವಿಜಯ ಕರ್ನಾಟಕ 24 Mar 2026 9:57 am

ಮಾರ್ಚ್‌ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್‌ 24) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಒನ್ ಇ೦ಡಿಯ 24 Mar 2026 9:31 am

ಚಿತ್ರದುರ್ಗದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ; 10 ಕೆಜಿ ಸೌದೆಗೆ 70 ರೂ. ಏರಿಕೆ :ಹೆದ್ದಾರಿ ಬದಿ ಹೋಟೆಲ್‌ಗಳು ಬಂದ್‌!

ಕಳೆದ ಎರಡು ವಾರಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದ್ದು, ಇದರಿಂದ ಹೆದ್ದಾರಿ ಬದಿಯ ಹೋಟೆಲ್‌ಗಳ ನಿರ್ವಹಣೆ ದುಸ್ತರವಾಗಿದೆ. ಆರಂಭದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸಿಲಿಂಡರ್‌ ಹಾಗೂ ಪರ್ಯಾಯವಾಗಿ ಸೌದೆಯನ್ನು ಬಳಸಿ ಹೋಟೆಲ್ ನಡೆಸುತ್ತಿದ್ದ ಮಾಲೀಕರಿಗೆ, ಈಗ ಸೌದೆಯ ಬೆಲೆ ಏರಿಕೆಯೂ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನಿವಾರ್ಯವಾಗಿ ಹೋಟೆಲ್‌ಗಳನ್ನು ಮುಚ್ಚಲು ಅವರು ನಿರ್ಧರಿಸಿದ್ದಾರೆ.

ವಿಜಯ ಕರ್ನಾಟಕ 24 Mar 2026 9:14 am

ಈ ಪುರುಷಾರ್ಥಕ್ಕಾ ಅಬ್ಬರಿಸಿ ಬೊಬ್ಬಿರಿದಿದ್ದು? ಟ್ರಂಪ್‌ ಹೇಳಿಕೆಗೆ ಹೊರಳಾಡಿ ನಕ್ಕ ಇರಾನ್‌; ಕದನ ವಿರಾಮ ಆಫರ್‌ ತಿರಸ್ಕಾರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ, ನೀವು ಮಲಗಿದ್ದ ಹುಲಿಯನ್ನುಯ ಬಡಿದೆಬ್ಬಿಸಿರುವಿರಿ. ಅನಗತ್ಯವಾಗಿ ಮೈಮೇಲೆ ಬಿದ್ದು ಈಗ ಕದನ ವಿರಾಮ ಎಂದರೆ ನಾವು ಕೇಳಲ್ಲ. ಈ ಯುದ್ಧವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೇ ಬಿಡಲ್ಲ.. ಇದು ಇರಾನ್‌ಗೆ ಐದು ದಿನಗಳ ಕದನ ವಿರಾಮ ಒಪ್ಪಂದದ ಆಫರ್‌ ನೀಡಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು ಇರಾನ್‌ ಮಾಧ್ಯಮಗಳು ಕುಹುಕವಾಡಿದ ಪರಿ. ಅಷ್ಟೇ ಅಲ್ಲ, ಇರಾನ್‌ ಆಡಳಿತ ಟ್ರಂಪ್‌ ಅವರ ಕದನ ವಿರಾಮ ಒಪ್ಪಂದದ ಪ್ರಸ್ತಾನೆಯನ್ನೂ ತಿರಸ್ಕರಿಸಿದೆ.

ವಿಜಯ ಕರ್ನಾಟಕ 24 Mar 2026 8:51 am

ಭಟ್ಕಳ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ; ಪ್ರಕರಣ ದಾಖಲು

ಭಟ್ಕಳ: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಟ್ಕಳ ತಾಲೂಕಿನ ಜಾಲಿ ಗ್ರಾಮದ ಶೇಡಕುಳಿ ಹೊಂಡಾ ಪ್ರದೇಶದಲ್ಲಿ ಸಂಭವಿಸಿದೆ. ತಹಸೀನ್ ಭಾನು ಮೆಹಬೂಬಲಿ ಶೇಖ್ ಅವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್ ನಸುಕಿನ ವೇಳೆ ಬೆಂಕಿಗೆ ಆಹುತಿಯಾಗಿದೆ.  ತಮ್ಮ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ರಾತ್ರಿ ಸುಮಾರು 1.30ರ ವೇಳೆಗೆ  ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದರೂ, ಬೆಂಕಿ ತೀವ್ರವಾಗಿದ್ದರಿಂದ ಆರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಬೈಕ್ ಅನ್ನು ಯಾವುದೇ ಅಪಾಯಕಾರಿ ಸ್ಥಳದಲ್ಲಿ ನಿಲ್ಲಿಸಿರಲಿಲ್ಲ ಹಾಗೂ ಸ್ವಯಂವಾಗಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ, ಈ ಘಟನೆ ಕುರಿತು ಅನುಮಾನ ವ್ಯಕ್ತವಾಗಿದೆ. ಅಂದಾಜು 70 ಸಾವಿರ ಮೌಲ್ಯದ ಬೈಕ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಭಟ್ಕಳದ ಯಾಸೀನ್ ನಝೀರ್ ಖಾನ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ತಹಸೀನ್ ಭಾನು ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 24 Mar 2026 8:50 am

ಶಿವಯ್ಯ ಅಜ್ಜ ಕಾಲಜ್ಞಾನ ಭವಿಷ್ಯವಾಣಿ : ಅಕ್ರಾಳ, ವಿಕ್ರಾಳ, ಕರಾಳ - ಅಧಿಕಾರ ಬದಲಾವಣೆಯ ಮುನ್ಸೂಚನೆ

ಕಥಕನಹಳ್ಳಿ ಶ್ರೀಗಳ ಕಾಲಜ್ಞಾನ ಭವಿಷ್ಯವಾಣಿ: ಹೊಸ ಬಗೆಯ ಸಾಂಕ್ರಾಮಿಕ ರೋಗಗಳು ದೇಶವನ್ನು ಕಾಡಲಿದೆ. ಯುದ್ದ ಬರೀ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರಲಿದೆ ಎನ್ನುವ ಭವಿಷ್ಯವನ್ನು ವಿಜಯಪುರ ಜಿಲ್ಲೆಯ ಕಥಕನಹಳ್ಳಿ ಶ್ರೀಗಳು, ಯುಗಾದಿಯ ಅಮಾವಾಸ್ಯೆಯಂದು ಕಾಲಜ್ಞಾನ ಭವಿಷ್ಯವನ್ನು ನುಡಿದಿದ್ದಾರೆ.

ವಿಜಯ ಕರ್ನಾಟಕ 24 Mar 2026 8:42 am

ನಾಗಮಂಗಲದಲ್ಲಿ ನಿಂತಿದ್ದ ಲಾರಿಗೆ ಖಾಸಗಿ ಬಸ್‌ ಡಿಕ್ಕಿ: ಓರ್ವ ಮೃತ, ಹಲವು ಮಂದಿಗೆ ಗಾಯ

ಮಂಡ್ಯದ ನಾಗಮಂಗಲದಲ್ಲಿ, ಸೋಮವಾರ ಮುಂಜಾನೆ ಬಸ್‌ ಅಪಘಾತವಾಗಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಓರ್ವ ಮೃತಪಟ್ಟಿದ್ದಾನೆ.

ವಿಜಯ ಕರ್ನಾಟಕ 24 Mar 2026 8:34 am

Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?

ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇದು ಮಹತ್ವದ ಸುದ್ದಿಯಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಎಂಸಿಎಕ್ಸ್ (MCX) ವಹಿವಾಟಿನಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಇಂದು (ಮಾರ್ಚ್ 24, 2026) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದಿದೆ. ಇಂದಿನ ದರಗಳ ಪ್ರಕಾರ, ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಪ್ರತಿ ಗ್ರಾಂಗೆ ಒಂದು ರೂಪಾಯಿ ಇಳಿಕೆಯಾಗಿದೆ. ಹಣದುಬ್ಬರದ ವಿರುದ್ಧ ರಕ್ಷಣೆ

ಒನ್ ಇ೦ಡಿಯ 24 Mar 2026 8:03 am

ಬೆಂಗಳೂರು ರಸ್ತೆಯಲ್ಲೇ ಬಿಯರ್‌ ಸೇವಿಸಿ ತ್ರಿಬಲ್‌ 'ರೈಡಿಂಗ್‌' ಪುಂಡಾಟ: ಮೂವರು ವೈದ್ಯರ ಬಂಧನ

ಬೆಂಗಳೂರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮುಗಿಸಿ ವಾಪಾಸ್ ಬರುತ್ತಿದ್ದ ಮೂರು ಮಂದಿ ವೈದ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಹಾಗೂ ಕೈಯಲ್ಲಿ ಬಿಯರ್ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.

ವಿಜಯ ಕರ್ನಾಟಕ 24 Mar 2026 7:54 am

ಎಲ್‌ಪಿಜಿ ಸಮಸ್ಯೆ ತೀವ್ರ: 14.2 ಕೆಜಿ ಬದಲು ಇನ್ನು 10 ಕೆಜಿ ಮರುಭರ್ತಿ!

ಹೊಸದಿಲ್ಲಿ: ಗಲ್ಫ್ ಸಂಘರ್ಷದ ಕಾರಣದಿಂದ ಎಲ್‌ಪಿಜಿ ಲಭ್ಯತೆಯ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪನಿಗಳು ಅಡುಗೆ ಅನಿಲ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದ ಕಡಿಮೆ ತೂಕದ ಸಿಲಿಂಡರ್ ಗಳನ್ನು ಮಾರಾಟ ಮಾಡಲು ಉದ್ದೇಶಿಸಿವೆ ಎಂದು ತಿಳಿದು ಬಂದಿದೆ. ಗೃಹ ಬಳಕೆದಾರರಿಗೆ 14.2 ಕೆ.ಜಿ ಸಿಲಿಂಡರ್ ಬದಲು 10 ಕೆಜಿಯ ಸಿಲಿಂಡರ್ ಮಾರಾಟ ಮಾಡಲು ತೈಲ ಮಾರಾಟ ಕಂಪನಿಗಳು ಸಜ್ಜಾಗಿವೆ ಎಂಬ ವರದಿಗಳನ್ನು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಳ್ಳಿಹಾಕಿದ್ದು, ಇದು ಕಪೋಲ ಕಲ್ಪಿತ ಎಂದು ಬಣ್ಣಿಸಿವೆ. ಆದರೆ ಈ ಪ್ರಸ್ತಾವ ಸರ್ಕಾರದ ಮುಂದೆ ಬಾಕಿ ಇದೆ ಎಂದು ತೈಲ ಸಂಸ್ಕರಣಾ ಕಂಪನಿಗಳು ಸ್ಪಷ್ಟಪಡಿಸಿವೆ. ಈ ವಿಚಾರವನ್ನು ಪರಿಶೀಲಿಸಲಾಗುತ್ತಿದೆ; ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿ ಹೇಳಿದೆ. ಆದಾಗ್ಯೂ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಇದನ್ನು ವದಂತಿ ಎಂದು ಹೇಳಿದ್ದಾರೆ. ಇಂಥ ಯಾವುದೇ ಊಹೆಗಳಿಗೆ ವಿವರಣೆ ಅಥವಾ ಪ್ರತಿಕ್ರಿಯೆ ನೀಡಲಾಗದು. ದಯವಿಟ್ಟು ವದಂತಿಗಳನ್ನು ನಂಬಬೇಡಿ. ಇದು ಊಹಾತ್ಮಕ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 50 ಲಕ್ಷ ಎಲ್‌ಪಿಜಿ ಗೃಹಬಳಕೆ ಸಿಲಿಂಡರ್ ಗಳ ಲಭ್ಯತೆ ಇದೆ. ಪೂರೈಕೆ ಸಹಜವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ತೈಲ ಶುದ್ಧೀಕರಣ ಘಟಕಗಳು ಎಲ್‌ಪಿಜಿ ಉತ್ಪಾದನೆಯನ್ನು ಈ ಹಿಂದೆ ಇದ್ದ ದೇಶೀಯ ಬೇಡಿಕೆಯ ಶೇಕಡ 40ರಿಂದ ಶೇಕಡ 50-60ಕ್ಕೆ ಹೆಚ್ಚಿಸಿವೆ. ಪಶ್ಚಿಮ ಏಷ್ಯಾ ಸಂಷರ್ಘದಿಂದಾಗಿ ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯವಾಗಿದ್ದು, ಇದು ತೈಲ ಮತ್ತು ಅನಿಲ ಆಮದಿನ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ವಾಣಿಜ್ಯ ಬಳಕೆದಾರರಿಗೆ ನೀಡುವ ಪೂರೈಕೆಯನ್ನು ಕಡಿಮೆ ಮಾಡಿ, ಗೃಹಬಳಕೆದಾರರಿಗೆ ಆದ್ಯತೆಯ ಮೇಲೆ ಅಡುಗೆ ಅನಿಲ ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ 33.2 ಕೋಟಿ ಎಲ್‌ಪಿಜಿ ಸಂಪರ್ಕಗಳಿದ್ದು, ಕಳೆದ 10 ದಿನಗಳಲ್ಲಿ ಸುಮಾರು ಎರಡು ಲಕ್ಷ ಗ್ರಾಹಕರು ಪೈಪ್ ಮೂಲಕ ಅನಿಲ ಪಡೆಯುವ ವ್ಯವಸ್ಥೆಗೆ ಬದಲಾಗಿದ್ದಾರೆ. 3.5 ಲಕ್ಷ ಪಿಎನ್‌ಜಿ ಸಂಪರ್ಕ ನೀಡಲಾಗಿದೆ. ಇಂಧನ ಬರಿದಾಗುತ್ತಿದೆ ಎಂಬ ವರದಿಗಳನ್ನು ಶರ್ಮಾ ನಿರಾಕರಿಸಿದ್ದು, ಪೂರೈಕೆ ಸಹಜವಾಗಿದೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 24 Mar 2026 7:38 am

ಮಹಿಳಾ ಮೀಸಲಾತಿಗಾಗಿ ಸಂಸತ್ ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆ?

ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆ ಮತ್ತು ಆ ಬಳಿಕದ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಅನುವಾಗುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಎರಡು ಹೊಸ ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ನಡೆಯು ದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿದ್ದು, ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಸಬಲೀಕರಣದ ಕಾರ್ಯಸೂಚಿಗೆ ಪೂರಕವಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದಾದಲ್ಲಿ ಲೋಕಸಭೆ ಸ್ಥಾನಗಳ ಸಂಖ್ಯೆ ಶೇಕಡ 50ರಷ್ಟು ಹೆಚ್ಚಲಿವೆ. ಹಾಲಿ ಇರುವ 543 ಸ್ಥಾನಗಳ ಬದಲಾಗಿ 273 ಹೆಚ್ಚುವರಿ ಸ್ಥಾನಗಳು ಸೇರಿ ಒಟ್ಟು ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದೆ. ಹೆಚ್ಚುವರಿ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇಡುವುದರಿಂದ ಹಾಲಿ ಪುರುಷ ಸಂಸದರ ಸ್ಥಾನಕ್ಕೆ ಕುತ್ತು ಬರದಂತಹ ರಾಜಕೀಯ ಚಿತ್ರಣ ರೂಪುಗೊಳ್ಳಲಿದೆ ಎಂದು ಹೇಳಲಾಗಿದೆ. ಹೊಸ ವ್ಯವಸ್ಥೆಯ ಬಳಿಕ ಬಹುಮತಕ್ಕೆ ಅಗತ್ಯ ಸ್ಥಾನಗಳ ಸಂಖ್ಯೆ 409 ಆಗಲಿದೆ. ಐದು ದಶಕಗಳಲ್ಲೇ ಮೊದಲ ಬಾರಿಗೆ ಲೋಕಸಭೆಯ ಸದಸ್ಯಬಲ ಹೆಚ್ಚಲಿದ್ದು, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳ ಸಂಖ್ಯೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲೇ ಆಂಗೀಕರಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಮಸೂದೆಗಳ ಅಂಗೀಕಾರಕ್ಕೆ ಎನ್‌ಡಿಎಗೆ ಸ್ವಂತ ಸದಸ್ಯಬಲ ಇಲ್ಲದಿದ್ದರೂ, ಏಪ್ರಿಲ್ 4ಕ್ಕೆ ಕೊನೆಗೊಳ್ಳುವ ಬಜೆಟ್ ಅಧಿವೇಶನದಲ್ಲೇ ಇವುಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಉತ್ಸುಕವಾಗಿದೆ.

ವಾರ್ತಾ ಭಾರತಿ 24 Mar 2026 7:28 am

Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚುತ್ತಿದ್ದು, ಜನ ಸೆಕೆ ತಾಳಲಾರದೆ ಹೈರಾಣಾಗಿದ್ದಾರೆ. ಆದರೆ ಭಾರತ ಹವಾಮಾನ ಇಲಾಖೆ (IMD)ಇಂದು ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಾದ್ಯಂತ ಇಂದು (ಮಾರ್ಚ್ 24, 2026) ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳಾಗುವ ನಿರೀಕ್ಷೆಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೇಸಿಗೆಯ

ಒನ್ ಇ೦ಡಿಯ 24 Mar 2026 7:07 am

ಕೊಲಂಬಿಯಾದ 110 ಕ್ಕೂ ಹೆಚ್ಚು ಸೈನಿಕರಿದ್ದ ಮಿಲಿಟರಿ ವಿಮಾನ ಪತನ: ಅಪಾರ ಸಾವು ನೋವು

ಸೋಮವಾರ ದಕ್ಷಿಣ ಕೊಲಂಬಿಯಾದಲ್ಲಿ ಭಾರಿ ಅವಘಡ ನಡೆದಿದ್ದು, 110 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಪತನಗೊಂಡು ಬೆಂಕಿ ಹತ್ತಿ ಉರಿದಿದೆ. ಇಡೀ ವಿಮಾನ ಧಗಧಗನೇ ಉರಿಯುತ್ತಿರುವ ದೃಶ್ಯ ಸೆರೆಯಾಗಿದ್ದು, ಅಪಾರ ಸಾವು ನೋವು ಸಂಭವಿಸಿರುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 24 Mar 2026 7:05 am

ರೈತರಿಗೆ ಸಂಕಷ್ಟ: ನಾರಾಯಣಪುರ ಕಾಲುವೆ ನೀರಿಗಾಗಿ ಐಸಿಸಿ ಸಭೆಗೆ ಹೆಚ್ಚಿದ ಕೂಗು

ಯಾದಗಿರಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಇಲ್ಲಿನ ರೈತರಿಗೆ ಈಗ ಬೇಸಿಗೆಯ ಹಿಂಗಾರು ಬೆಳೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ನೀರಿನ ಅಭಾವ ಸೃಷ್ಟಿಯಾಗಿರುವುದರಿಂದ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಬಾರದು ಎಂಬ ಆತಂಕದಲ್ಲಿರುವ ರೈತರು ಏಪ್ರಿಲ್‌ 15ರವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ವಿಜಯ ಕರ್ನಾಟಕ 24 Mar 2026 6:54 am

ಜಿಬಿಎ 5 ಪಾಲಿಕೆಗಳಲ್ಲಿ ಮಾ.25, 26 ರಂದು ಬಜೆಟ್‌ ಮಂಡನೆ: ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಆಯವ್ಯಯ ಮಂಡನೆ

ಬಹುನಿರೀಕ್ಷಿತ ಬೆಂಗಳೂರಿನ 5 ಮಹಾನಗರ ಪಾಲಿಕೆಗಳ ಬಜೆಟ್ ಮಂಡಳಿ ನಾಳೆ ಹಾಗೂ ನಾಡಿದ್ದು ಗುರುವಾರ ಮಂಡನೆ ಆಗಲಿದೆ.

ವಿಜಯ ಕರ್ನಾಟಕ 24 Mar 2026 5:51 am

ಸಶಸ್ತ್ರ ಸೀಮಾ ಬಲ್ನಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದ್ದು, 827 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿರ ಬರುವ ಪ್ರಮುಖ ಭಾರತೀಯ ಗಡಿ ಕಾವಲುಪಡೆಯಾದ ಸಶಸ್ತ್ರ ಸೀಮಾ ಬಲ್ನಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಸೀಮಾ ಬಲವು 1,751 ಕಿಮೀ ಭಾರತ- ನೇಪಾಳ ಮತ್ತು 699 ಕಿಮೀ ಭಾರತ- ಭೂತಾನ್ ಗಡಿ ಭದ್ರಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದ್ದು, 827 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 2026 ಮಾರ್ಚ್ 21ರಿಂದ ಎಸ್ಎಸ್ಬಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 23 - 27 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://applyssb.com/SSB_CT_25/applicationIndex ಪ್ರಮುಖ ದಿನಾಂಕಗಳು • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 21 ಮಾರ್ಚ್ 2026 • ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20 ಎಪ್ರಿಲ್ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 20 ಏಪ್ರಿಲ್ 2026 • ಪರೀಕ್ಷೆಯ ದಿನಾಂಕ: ಶೀಘ್ರವೇ ಸೂಚಿಸಲಾಗುವುದು • ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು • ಪರೀಕ್ಷೆಯ ಫಲಿತಾಂಶ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು ಅರ್ಜಿ ಶುಲ್ಕ ಎಸ್ಸಿ/ಎಸ್ಟಿ/ ಮಹಿಳೆಯರಿಗೆ: ಶುಲ್ಕವಿಲ್ಲ ಯುಆರ್, ಒಬಿಸಿ ಇಡಬ್ಲ್ಯುಎಸ್: 100/- ಶುಲ್ಕ ಪಾವತಿ ವಿಧಾನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವಾಲೆಟ್ ಮೂಲಕ ಪಾವತಿಸಬಹುದಾಗಿದೆ. ವಯೋಮಿತಿ • ಕನಿಷ್ಠ ವಯಸ್ಸು : 18 ವರ್ಷಗಳು. • ಗರಿಷ್ಠ ವಯಸ್ಸು: 23 - 27 ವರ್ಷಗಳು ಕಾನ್ಸ್ಟೇಬಲ್ (ಟ್ರೇಡ್ಸ್ಮನ್) ಸ್ಥಾನಕ್ಕೆ ಎಸ್ಎಸ್ಬಿ ನಿಯಮಗಳ ಪ್ರಕಾರ ಹುದ್ದೆಗೆ ವಯೋಮಿತಿ ಸಡಿಲಿಕೆ ನೀಡುತ್ತದೆ. ಒಟ್ಟು ಹುದ್ದೆಗಳು 827 ಹುದ್ದೆಗಳು ಹುದ್ದೆಗಳ ವಿವರ ಹುದ್ದೆಯ ಹೆಸರು- ಹುದ್ದೆಯ ಸಂಖ್ಯೆ ಕಾನ್ಸ್ಟೇಬಲ್ (ಪಶು)- 34 ಕಾನ್ಸ್ಟೇಬಲ್ (ಚಾಲಕ) ಪುರುಷ- 553 ಕಾನ್ಸ್ಟೇಬಲ್ (ಉದ್ಯಾನವನ) – 41 ಕಾನ್ಸ್ಟೇಬಲ್ (ವಾಟರ್ ಕ್ಯಾರಿಯರ್)- 05 ಕಾನ್ಸ್ಟೇಬಲ್ (ಕೋಬ್ಲರ್)- 25 ಕಾನ್ಸ್ಟೇಬಲ್ (ಟ್ರೈಲರ್)- 41 ಕಾನ್ಸ್ಟೇಬಲ್ (ವಾಷರ್ಮನ್) – 74 ಕಾನ್ಸ್ಟೇಬಲ್ (ಬಾರ್ಬರ್) – 43 ಕಾನ್ಸ್ಟೇಬಲ್ (ವೈಟರ್)- 03 ಕಾನ್ಸ್ಟೇಬಲ್ (ಕಾರ್ಪೆಂಟರ್)- 07 ಕಾನ್ಸ್ಟೇಬಲ್ (ನರ್ಸಿಂಗ್ ಆರ್ಡರ್ಲಿ) -01 ಶೈಕ್ಷಣಿಕ ಅರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ (ಹೈಸ್ಕೂಲ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಅರ್ಜಿದಾರರು ಈ ಕೆಳಗಿನ ಷರತ್ತುಗಳಲ್ಲಿ ಒಂದನ್ನು ಪೂರೈಸಬೇಕು. • ಕನಿಷ್ಠ 1 ವರ್ಷದ ಅನುಭವ • ಮಾನ್ಯ ಎಚ್ಎಂವಿ ಚಾಲನಾ ಪರವಾನಗಿ • 1 ವರ್ಷದ ಅನುಭವದೊಂದಿಗೆ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ • 2 ವರ್ಷಗಳ ಅನುಭವ ಅಥವಾ 1 ವರ್ಷದ ಅನುಭವದೊಂದಿಗೆ ಸಂಬಂಧಿತ ವ್ಯಾಪಾರದಲ್ಲಿ 1 ವರ್ಷದ ಐಟಿಐ • ಸಂಬಂಧಿತ ವ್ಯಾಪಾರದಲ್ಲಿ 2 ವರ್ಷಗಳ ಐಟಿಐ.

ವಾರ್ತಾ ಭಾರತಿ 24 Mar 2026 12:51 am

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ : ದಿನೇಶ್ ಗುಂಡೂರಾವ್

ಮುಂದಿನ ಎರಡು ತಿಂಗಳಲ್ಲಿ ಡಿಪಿಆರ್ ಇಲಾಖೆಗೆ ಸಲ್ಲಿಕೆ

ವಾರ್ತಾ ಭಾರತಿ 24 Mar 2026 12:50 am

ಬೆಂಗಳೂರು ಉತ್ತರ ವಿವಿಯಲ್ಲಿ ಭ್ರಷ್ಟಾಚಾರ ಮೇಲ್ಮನೆಯಲ್ಲಿ ಪ್ರತಿಧ್ವನಿ: ಅಕ್ರಮ ಸಾಬೀತಾದರೆ ಕಾನೂನು ಕ್ರಮ: ಡಾ.ಎಂ.ಸಿ.ಸುಧಾಕರ್

ಬೆಂಗಳೂರು : ಬೆಂಗಳೂರು ಉತ್ತರ ವಿವಿ ಕಾಮಗಾರಿಗಳಲ್ಲಿ ಉಪಕುಲಪತಿ ಕೋಟ್ಯಂತರ ರೂ. ಗಳ ಭ್ರಷ್ಟಾಚಾರ ನಡೆಸಿರುವುದು ಸಾಬೀತಾದರೆ ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೆಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಉತ್ತರ ವಿವಿಯಲ್ಲಿ ನಡೆದ ಕಾಮಗಾರಿಯ ಟೆಂಡರ್‍ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಕಾಮಗಾರಿ ಅಕ್ರಮ ನಡೆದ ಸಂಬಂಧ ಕುಲಪತಿಯೊಬ್ಬರು ನೇರವಾಗಿ ರಾಜ್ಯಪಾಲರಿಗೆ ದೂರು ಕೊಡಲಾಗಿತ್ತು. ಇದಕ್ಕೆ ಏಕ ನ್ಯಾಯಮೂರ್ತಿ ಸಮಿತಿಯನ್ನು ಮಾಡಿದ್ದರು. ಅದರ ತನಿಖಾ ವರದಿ ನೇರವಾಗಿ ಅವರಿಗೆ ಸಲ್ಲಿಕೆಯಾಗಿದೆ. ಈ ವರದಿ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ನ್ಯಾಯಾಲಯದಲ್ಲಿ ಇದಕ್ಕೆ ತಡೆ ಹಿಡಿಯಲಾಗಿದೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡಲಾಗುವುದಿಲ್ಲ ಎಂದು ಎಂ.ಸಿ.ಸುಧಾಕರ್ ಹೇಳಿದರು. ಇನ್ನು, ಬೆಂಗಳೂರು ಉತ್ತರ ವಿವಿಯಲ್ಲಿ ಬೇಕಂತಲೇ ಕುಲಪತಿಗಳನ್ನು ಬದಲಾವಣೆ ಮಾಡಲಾಗಿದೆ. ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆದಿದೆ. ಹಳೆಯ ಕಟ್ಟಡ ಕಾಮಗಾರಿ ಬಗ್ಗೆ ಏಕೆ ಮಾತನಾಡಿಲ್ಲ, ಕುಲಪತಿಗಳನ್ನು ವರ್ಗಾವಣೆ ಮಾಡಿ, ಇನ್ನೊಬ್ಬರನ್ನು ತರಲಾಗಿದೆ ಎಂಬ ಭೋಜೆಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಲಪತಿಗಳನ್ನು ನಾವು ಕಳುಹಿಸಿಲ್ಲ. ಅವರ ಸಮಯ 4 ವರ್ಷ ಅವಧಿ ಮುಗಿದಿತ್ತು. ಅದಕ್ಕೆ ಬದಲಾವಣೆಯಾಗಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾದರೆ ಕ್ರಮ ವಹಿಸುತ್ತೇವೆ ಎಂದು ವಿವರಿಸಿದರು. ಇದಕ್ಕೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಇದು ಭ್ರಷ್ಟಾಚಾರದ ವಿಚಾರವಾಗಿದೆ. ಇದನ್ನು ಸದನ ಗಂಭೀರವಾಗಿ ತೆಗೆದುಕೊಂಡು ನ್ಯಾಯಾಲಯದ ತಡೆಯಾಜ್ಞೆ ತೆರವಾದ ಬಳಿಕ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.  

ವಾರ್ತಾ ಭಾರತಿ 24 Mar 2026 12:46 am

ಸಬ್ಸಿಡಿಯನ್ನು ತುಚ್ಛವಾಗಿ ಕಾಣುವುದು ಬಿಡಿ : ಕೃಷ್ಣಭೈರೇಗೌಡ

ಬೆಂಗಳೂರು : ಸಮಾಜದಲ್ಲಿ ಆರ್ಥಿಕವಾಗಿ ತೀರಾ ಕೆಳ ಹಂತದಲ್ಲಿರುವ ಬಡ ಜನರಿಗೆ ನೀಡುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ತುಚ್ಛಗೊಳಿಸುವ, ಅಪರಾಧಿಕರಿಸುವ ಕೃತ್ಯವನ್ನು ಬೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತಿನ ನಡುವೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಡವರಿಗೆ ನೀಡುವ ಸಬ್ಸಿಡಿಯನ್ನು ಭಾರತದಂತೆ ಬೇರೆ ದೇಶದಲ್ಲೂ ತುಚ್ಚವಾಗಿ ಕಾಣಲಾಗುತ್ತದೆ. ಆದರೆ, 150 ವರ್ಷಗಳ ಆರ್ಥಿಕ ಚಿಂತನೆಗಳ ಕಡೆಗೆ ಒಮ್ಮೆ ಗಮನ ಹರಿಸಿದರೆ ದೇಶವೊಂದನ್ನು ಆರ್ಥಿಕ ಹಿಂಜರಿತದಿಂದ ಪ್ರಗತಿಪಥದತ್ತ ಮುನ್ನಡೆಸಲು ಬಡವರಿಗೆ ಸಬ್ಸಿಡಿ ನೀಡುವ ಮೂಲಕ ಬೇಡಿಕೆಯ ವಲಯವನ್ನು ಬಲಪಡಿಸುವುದೊಂದೇ ಪರಿಹಾರವಾಗಿ ಕಂಡುಬಂದಿದೆ ಎಂದು ವ್ಯಾಖ್ಯಾನಿಸಿದರು. ಸ್ವಾಭಾವಿಕವಾಗ ಎರಡು ರೀತಿಯ ಆರ್ಥಿಕ ಚಿಂತನೆಗಳು ಕಾಣಿಸುತ್ತವೆ. ಮೊದಲನೇಯದು ಉತ್ಪಾದಕ ವಲಯದ ಅಭಿವೃದ್ಧಿಗೆ ಸಹಾಯ ಮಾಡುವುದು, ಮತ್ತೊಂದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಜನಸಾಮಾನ್ಯರ ಆರ್ಥಿಕ ಸ್ಥಿತಿ, ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು. ಉತ್ಪಾದನ ವಲಯಕ್ಕೆ ತೆರಿಗೆ ಕಡಿತ ಮಾಡುವ ಮೂಲಕ ನೇರವಾಗಿ ಸಹಾಯ ಮಾಡಬಹುದು. ಹೀಗೆ ಮಾಡಿದಲ್ಲಿ ಅವರ ಉಳಿತಾಯ ಹೆಚ್ಚಾಗಿ ಆ ಹಣವನ್ನು ಅವರು ಮತ್ತೆ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಜನರಿಗೆ ಕನಿಷ್ಟ ಆದಾಯ ಲಭ್ಯವಾಗುವುದನ್ನು ಖಾತರಿಪಡಿಸಿ, ಅವರೂ ಸಹ ಜೀವನ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಆರ್ಥಿಕತೆಯನ್ನು ವೃದ್ಧಿಸಬಹುದಾಗಿದೆ ಎಂದು ವಿವರಿಸಿದರು. ಒಬ್ಬ ವ್ಯಕ್ತಿ ಕೈಗೆ ಒಂದು ರೂಪಾಯಿ ಕೊಟ್ಟರೆ ಆ ಹಣ ಮಾರುಕಟ್ಟೆಯಲ್ಲಿ ಕನಿಷ್ಠ ಐದು ಬಾರಿ ಮರು ಚಲಾವಣೆಯಾಗುತ್ತದೆ. ಈ ಮೂಲಕ ಐದರಷ್ಟು ಆರ್ಥಿಕತೆಯನ್ನು ಸೃಷ್ಟಿಸುತ್ತದೆ. ಪರಿಣಾಮ ಆರ್ಥಿಕತೆಯೂ ವೃದ್ಧಿಸುತ್ತದೆ. ಬೇಡಿಕೆ ಜಾಸ್ತಿಯಾದಾಗ ಉತ್ಪಾದನಾ ವಲಯಕ್ಕೂ ಅನುಕೂಲವಾಗುತ್ತದೆ. ಉತ್ಪಾದನಾ ವಲಯವನ್ನು ಬಲಪಡಿಸಿ ಬೇಡಿಕೆ ಇಲ್ಲದೆ ಹೋದರೆ ಆರ್ಥಿಕ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತದೆ. ಅಸಲಿಗೆ ಬೇಡಿಕೆ ಇಲ್ಲದೆ ಹೂಡಿಕೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಹಾಗೂ ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ಸಬ್ಸಿಡಿಗಳೇ ಕಾರಣ. ಕೇಂದ್ರ ಸರಕಾರ ಇತ್ತೀಚೆಗೆ ಜಿಎಸ್ಟಿ ತೆರಿಗೆಯನ್ನು ಸರಳೀಕರಣಗೊಳಿಸಿದಾಗ ಇತರೆ ಎಲ್ಲ ರಾಜ್ಯಗಳಿಗೂ ಹೋಲಿಸಿದರೆ ಕರ್ನಾಟಕದಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಅಷ್ಟೇ ನೂ ಕೊರತೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಅಷ್ಟರ ಮಟ್ಟಿಗೆ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ವಾರ್ತಾ ಭಾರತಿ 24 Mar 2026 12:43 am

ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಬುಮ್ರಾ ಸೇರ್ಪಡೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2026ರ ಆವೃತ್ತಿಯ ಆರಂಭಕ್ಕೆ ಒಂದು ವಾರ ಉಳಿದಿರುವಂತೆಯೇ, ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಗಾಯದಿಂದ ಚೇತರಿಸಿಕೊಳ್ಳಲು ಅವರು ಅಲ್ಲಿಗೆ ಸೇರ್ಪಡೆಗೊಂಡಿದ್ದಾರೆಯೇ ಅಥವಾ ನಿಯಮಿತ ತಪಾಸಣೆಗಾಗಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅವರು ಈವರೆಗೆ ಮುಂಬೈ ಇಂಡಿಯನ್ಸ್ ಶಿಬಿರವನ್ನು ಸೇರಿಕೊಂಡಿಲ್ಲ. ಟಿ20 ವಿಶ್ವಕಪ್ ವಿಜೇತ ಭಾರತೀಯ ತಂಡದಲ್ಲಿದ್ದ ನಾಲ್ವರು ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚುವರಿ ವಿರಾಮವನ್ನು ನೀಡಲಾಗಿದೆ ಎಂಬುದಾಗಿ ಕಳೆದ ವಾರ ಮುಂಬೈ ಇಂಡಿಯನ್ಸ್ ಪ್ರಧಾನ ಕೋಚ್ ಮಹೇಲ ಜಯವರ್ಧನೆ ಹೇಳಿದ್ದರು. ಭಾರತ ತಂಡವು ಮಾರ್ಚ್ 8ರಂದು ನಡೆದ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದಿದೆ. ‘‘ಪ್ರತಿ ವರ್ಷವೂ ನಮ್ಮ ಗುರಿ ಐಪಿಎಲ್ ಟ್ರೋಫಿ ಗೆಲ್ಲುವುದು. ಆದರೆ, ಇದು ಸುದೀರ್ಘ ಋತು ಎನ್ನುವುದು ನನಗೆ ಗೊತ್ತು. ಹಾಗಾಗಿ ಪಂದ್ಯಾವಳಿ ಪೂರ್ವ ಋತು ಹಿಂದಿನಂತೆಯೇ ಆರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ನಾವು ಕಠಿಣ ಪರಿಶ್ರಮ ಪಡುತ್ತೇವೆ, ತಂಡಕ್ಕೆ ಹೊಸ ಹುಡುಗರನ್ನು ನೇಮಿಸಿಕೊಳ್ಳುತ್ತೇವೆ. ನಮ್ಮ ಟಿ20 ವಿಶ್ವಕಪ್ ವಿಜೇತ ಹುಡುಗರಿಗೆ ನಾವು ಹೆಚ್ಚುವರಿ ವಿರಾಮವನ್ನು ನೀಡಿದ್ದೇವೆ. ಅವರು ಮುಂದಿನ ವಾರಾಂತ್ಯದಲ್ಲಿ ನಮ್ಮನ್ನು ಸೇರಿಕೊಳ್ಳುತ್ತಾರೆ. ವಿದೇಶಿ ಆಟಗಾರರೂ ಮನೆಗೆ ಹೋಗಿದ್ದಾರೆ. ಬಳಿಕ ಅವರು ನಮ್ಮನ್ನು ಸೇರಲಿದ್ದಾರೆ. ಆದರೆ, ಮೊದಲ ಪಂದ್ಯಕ್ಕೆ ಮೊದಲು ಅವರಿಗೆ ಒಂದು ವಾರದ ತರಬೇತಿ ನೀಡಲಾಗುವುದು’’ ಎಂದು ಎಮ್‌ಐಜಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಜೂನಿಯರ್ ಋತುವಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಯವರ್ಧನೆ ಹೇಳಿದ್ದರು. ಮುಂಬೈ ಇಂಡಿಯನ್ಸ್ ಐಪಿಎಲ್ 2026ರ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆಡಲಿದೆ.

ವಾರ್ತಾ ಭಾರತಿ 24 Mar 2026 12:27 am

Mysuru | ಹಳೇ ಮೀಸಲಾತಿ ಜಾರಿಗೆ ಒತ್ತಾಯಿಸಿ ಬಲಗೈ ಸಮುದಾಯದಿಂದ ಧರಣಿ

ಒಳಮೀಸಲಾತಿ ನಿರ್ಧಾರದಿಂದ ಸರಕಾರ ಹಿಂದೆ ಸರಿಯಲಿ : ಸಿ.ಹರಕುಮಾರ್

ವಾರ್ತಾ ಭಾರತಿ 24 Mar 2026 12:23 am

ಐಪಿಎಲ್: ಅಗ್ರ ಆರು ಬೌಂಡರಿ ಹಿಟ್ಟರ್ ಗಳತ್ತ ಒಂದು ಕಿರು ನೋಟ...

ಹೊಸದಿಲ್ಲಿ: ಕಳೆದ ಕೆಲವು ಐಪಿಎಲ್ ಋತುಗಳಲ್ಲಿ ಬೌಂಡರಿಗಳ ಸುರಿಮಳೆಯಾಗಿದೆ. 2024ರಲ್ಲಿ ಮೊದಲ ಬಾರಿ ಪ್ರತಿ ಐದು ಎಸೆತಗಳಲ್ಲಿ ಒಂದು ಬೌಂಡರಿ ಬಾರಿಸಲಾಗಿತ್ತು. ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬಂದ ನಂತರ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮೊದಲ ಎಸೆತದಿಂದಲೇ ಅಬ್ಬರಿಸತೊಡಗಿದರು. ಅಭಿಷೇಕ್ ಶರ್ಮಾ, ನಿಕೊಲಸ್ ಪೂರನ್, ಟ್ರಾವಿಸ್ ಹೆಡ್ ಹಾಗೂ ಫಿಲ್ ಸಾಲ್ಟ್ರಂತಹ ಬ್ಯಾಟರ್ಗಳು ಬೌಂಡರಿ ಮಳೆ ಸುರಿಸಿದ್ದಾರೆ. 2026ರ ಐಪಿಎಲ್ ನಲ್ಲೂ ಬೌಂಡರಿಗಳ ಸಂಖ್ಯೆ ಹೆಚ್ಚಾಗಬಹುದು. ►ಅಗ್ರ ಆರು ಬೌಂಡರಿ ಹಿಟ್ಟರ್ಗಳತ್ತ ಒಂದು ಕಿರು ನೋಟ ಇಲ್ಲಿದೆ: ಅಭಿಷೇಕ್ ಶರ್ಮಾ: ಅಭಿಷೇಕ್ ತನ್ನ ದೊಡ್ಡ ಹೊಡೆತಕ್ಕೆ ಲೆಗ್ ಸೈಡ್ ಅವಲಂಭಿಸಿದ ಕೆಲವೇ ಆ‘ುನಿಕ ಬ್ಯಾಟರ್ಗಳ ಪೈಕಿ ಒಬ್ಬರಾಗಿದ್ದಾರೆ. ಅವರು ಶೇ.50ರಷ್ಟು ಟಿ-20 ರನ್ಗಳನ್ನು ಆಫ್ ಸೈಡ್ನಲ್ಲಿ ಗಳಿಸಿದ್ದಾರೆ. ಇಶಾನ್ ಕಿಶನ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಹಾಗೂ ಕಿವೀಸ್ ವಿರುದ್ಧ ಸರಣಿಯುದ್ದಕ್ಕೂ ಅಬ್ಬರಿಸಿದ್ದ ಕಿಶನ್ ಟಿ-20 ವಿಶ್ವಕಪ್ ನಲ್ಲೂ ಮಿಂಚಿದ್ದರು. ವೈಭವ್ ಸೂರ್ಯವಂಶಿ: ಕಳೆದ 10 ಟಿ-20 ಇನಿಂಗ್ಸ್ಗಳಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ್ದಷ್ಟು ರನ್ ಯಾವ ಬ್ಯಾಟರ್ ಕೂಡ ಗಳಿಸಿಲ್ಲ. ಸೂರ್ಯವಂಶಿ ಹಿಂದಿನ 10 ಟಿ-20 ಇನಿಂಗ್ಸ್ ಗಳಲ್ಲಿ 202.79ರ ಸ್ಟ್ರೈಕ್‌ ರೇಟ್ ಒಟ್ಟು 436 ರನ್ ಗಳಿಸಿದ್ದಾರೆ. 2025ರ ಐಪಿಎಲ್ ನಂತರ ಇಷ್ಟೊಂದು ರನ್ ಗಳಿಸಿದ್ದಾರೆ. ಫಿನ್ ಅಲೆನ್: ಟಿ-20 ವಿಶ್ವಕಪ್ ನಲ್ಲಿ ವೇಗದ ಶತಕ ಗಳಿಸಿರುವ ಅಲೆನ್ ಸದ್ಯ ಟಾಪ್ ಫಾರ್ಮ್ ನಲ್ಲಿದ್ದಾರೆ. 2025ರ ಜೂನ್ ನಂತರ 30 ಪಂದ್ಯಗಳಲ್ಲಿ 200.17ರ ಸ್ಟ್ರೈಕ್‌ ರೇಟ್ ನಲ್ಲಿ ಒಟ್ಟು 1,177 ರನ್ ಗಳಿಸಿದ್ದಾರೆ. 9 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಮೂರು ಶತಕಗಳನ್ನು ಬಾರಿಸಿದ್ದಾರೆ. ಅಲೆನ್ 2025ರ ಜೂನ್ ನಂತರ ಒಟ್ಟು 99 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಸಂಜು ಸ್ಯಾಮ್ಸನ್: ಟಿ-20 ವಿಶ್ವಕಪ್ನ ಕೊನೆಯ ಮೂರು ಇನಿಂಗ್ಸ್ಗಳಲ್ಲಿ ಆಕರ್ಷಕ ಅರ್ಧಶತಕಗಳನ್ನು ಗಳಿಸಿದ್ದ ಸಂಜು ಸ್ಯಾಮ್ಸನ್ ಈ ವರ್ಷದ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠ ಬೌಂಡರಿ ಹಿಟ್ಟರ್ ಆಗಿ ಹೊರಹೊಮ್ಮುವ ವಿಶ್ವಾಸ ಮೂಡಿಸಿದ್ದಾರೆ. ಸ್ಯಾಮ್ಸನ್ ಪಿಚ್ ನ ಎರಡೂ ಬದಿಗಳಿಂದ ಬೌಂಡರಿ ಬಾರಿಸಬಲ್ಲರು. ವಿಶ್ವಕಪ್ ಫಾರ್ಮ್ ಅನ್ನು ಐಪಿಎಲ್ ನಲ್ಲಿ ಮುಂದುವರಿಸಿದರೆ ಎದುರಾಳಿ ನಾಯಕರಿಗೆ ಫೀಲ್ಡಿಂಗ್ ನಿಯೋಜಿಸುವುದು ಕಷ್ಟಕರವಾಗಲಿದೆ. ಶಿಮ್ರೊನ್ ಹೆಟ್ಮೆಯರ್: ಸ್ಯಾಮ್ಸನ್ ಸಿಎಸ್ಕೆಗೆ ಸೇರಿದ ಕಾರಣ ರಾಜಸ್ಥಾನ ರಾಯಲ್ಸ್ನ 3ನೇ ಕ್ರಮಾಂಕ ತೆರವಾಗಿದೆ. ಶಿಮ್ರೊನ್ ಹೆಟ್ಮೆಯರ್ ಈ ಬಾರಿ ಇದೇ ಕ್ರಮಾಂಕದಲ್ಲಿ ಆಡಬಹುದು. 2025ರ ಜೂನ್ ನಂತರ 3ನೇ ಕ್ರಮಾಂಕದಲ್ಲಿ 12 ಇನಿಂಗ್ಸ್ಗಳಲ್ಲಿ 40.80ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2025ರ ಐಪಿಎಲ್ ನಂತರ ಎಲ್ಲ ಟಿ-20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ. ಹೆಟ್ಮೆಯರ್ ಕೇವಲ 51 ಇನಿಂಗ್ಸ್ಗಳಲ್ಲಿ 105 ಸಿಕ್ಸರ್ ಸಿಡಿಸಿದ್ದಾರೆ.

ವಾರ್ತಾ ಭಾರತಿ 24 Mar 2026 12:19 am

ಐಪಿಎಲ್ ನ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಟೀಕಿಸಿದ ಅಕ್ಷರ್ ಪಟೇಲ್

ಹೊಸದಿಲ್ಲಿ: ಸ್ವತಃ ಆಲ್ರೌಂಡರ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಐಪಿಎಲ್ ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದ್ದು, ‘‘ಇದನ್ನು ನಾನು ಇಷ್ಟಪಡಲಾರೆ’’ ಎಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಮಾತನಾಡಿದ್ದರು. ಈ ನಿಯಮವು ಪಂದ್ಯದ ಯಾವುದೇ ಸಂದರ್ಭದಲ್ಲಿ ಐವರು ಬದಲಿ ಆಟಗಾರರ ಪಟ್ಟಿಯಲ್ಲಿರುವ ಒಬ್ಬರನ್ನು ಆಡುವ 11ರ ಬಳಗದಲ್ಲಿ ಆಡಿಸಲು ತಂಡಗಳಿಗೆ ಅವಕಾಶ ನೀಡುತ್ತದೆ. 2023ರಲ್ಲಿ ಜಾರಿಗೆ ತಂದಿರುವ ಈ ನಿಯಮವು 2027ರ ತನಕ ಇರಲಿದೆ. ನಾನು ಈ ನಿಯಮದ ಅಭಿಮಾನಿಯಲ್ಲ. ಇದು ಭಾರತೀಯ ಕ್ರಿಕೆಟ್ ನಲ್ಲಿ ಆಲ್ರೌಂಡರ್ ಗಳ ಬೆಳವಣಿಗೆಯ ಮೇಲೆ ಹಾನಿ ಮಾಡುತ್ತದೆ ಎಂದು 2024ರಲ್ಲಿ ರೋಹಿತ್ ಹೇಳಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮಾನವಾಗಿ ಉತ್ತಮವಾಗಿಲ್ಲದಿದ್ದರೆ ತಂಡದಲ್ಲಿ ಆಲ್ರೌಂಡರ್ ಅನ್ನು ಆಯ್ಕೆ ಮಾಡುವುದು ಕಷ್ಟಕರವಾಗಲಿದೆ ಎಂದು ಹಾರ್ದಿಕ್ ಪಾಂಡ್ಯ ಈ ಹಿಂದೆ ಹೇಳಿದ್ದರು. ಭಾರತ ಕ್ರಿಕೆಟ್ ತಂಡದ ಉಪ ನಾಯಕ ಅಕ್ಷರ್ ಪಟೇಲ್ ಗೆ ಈ ನಿಯಮದ ಕುರಿತು ಪ್ರಶ್ನಿಸಿದಾಗ ತನ್ನ ಸಹ ಆಟಗಾರರ ಅಭಿಪ್ರಾಯಗಳಿಗೆ ಧ್ವನಿಗೂಡಿಸಿದರು. ‘‘ನಾನು ಸ್ವತಃ ಆಲ್ರೌಂಡರ್ ಆಗಿರುವ ಕಾರಣ ನನಗೆ ಈ ನಿಯಮ ಇಷ್ಟವಿಲ್ಲ. ಮೊದಲು ನಾವು ಬ್ಯಾಟಿಂಗ್ ಹಾಗೂ ಬೌಲಿಂಗ್ಗಾಗಿ ಅಲ್ರೌಂಡರ್ ರನ್ನು ಆಯ್ಕೆ ಮಾಡುತ್ತಿದ್ದೆವು. ಈಗ ತಂಡದ ಆಡಳಿತವು ನಿರ್ದಿಷ್ಟ ಬ್ಯಾಟರ್ ಅಥವಾ ಬೌಲರ್ ಅನ್ನು ಆಯ್ಕೆ ಮಾಡುವ ಕಾರಣ ಆಲ್ರೌಂಡರ್ ಮಹತ್ವ ಕಡಿಮೆಯಾಗುತ್ತಿದೆ. ನಿಯಮಗಳನ್ನು ನಾವು ಪಾಲಿಸಬೇಕು. ಆದರೆ ವೈಯಕ್ತಿಕವಾಗಿ ನನಗೆ ಇದು ಇಷ್ಟವಾಗುವುದಿಲ್ಲ’’ ಎಂದು ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟರು. 2024ರಲ್ಲಿ 264 ಎಸೆತಗಳನ್ನು ಬೌಲಿಂಗ್ ಮಾಡಿದ್ದ ಅಕ್ಷರ್ ಪಟೇಲ್ ಕಳೆದ ಋತುವಿನ ಐಪಿಎಲ್ನಲ್ಲಿ ಕೇವಲ 204 ಎಸೆತಗಳನ್ನು ಎಸೆದಿದ್ದರು. ಇಂಪ್ಯಾಕ್ಟ್ ಪ್ಲೇಯರ್ ನಿಯಮವೇ ಇದಕ್ಕೆ ಕಾರಣ ಎಂದು ಅಕ್ಷರ್ ಹೇಳಿದ್ದಾರೆ.

ವಾರ್ತಾ ಭಾರತಿ 24 Mar 2026 12:05 am

ಎರಡು ಬಿಲಿಯ ಡಾಲರ್ ಗಡಿ ದಾಟಿದ ಭಾರತೀಯ ಕ್ರೀಡಾ ಆರ್ಥಿಕತೆ

ಹೊಸದಿಲ್ಲಿ: ಭಾರತದ ಕ್ರೀಡಾ ಆರ್ಥಿಕತೆ ಮೊದಲ ಬಾರಿಗೆ ಎರಡು ಬಿಲಿಯ ಡಾಲರ್ ದಾಟಿದೆ. ಅದು ಕಳೆದ ವರ್ಷದಿಂದ 13.4 ಶೇಕಡ ಬೆಳವಣಿಗೆ ದಾಖಲಿಸಿ ಹಾಲಿ ಆರ್ಥಿಕ ವರ್ಷದಲ್ಲಿ 2.13 ಬಿಲಿಯ ಡಾಲರ್ (ಸುಮಾರು 18,864 ಕೋಟಿ ರೂಪಾಯಿ) ಮೊತ್ತವನ್ನು ತಲುಪಿದೆ. ಅದು ಸುಮಾರು 19 ಶೇಕಡ ಸಿಎಜಿಆರ್‌ನೊಂದಿಗೆ ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಈ ಪೈಕಿ ಕ್ರಿಕೆಟ್ 89 ಶೇಕಡ ಪಾಲು ಹೊಂದಿದೆ. ಅದು 2024ರಲ್ಲಿ ಇದ್ದ 85 ಶೇಕಡಕ್ಕಿಂತ ಈಗ ಮತ್ತಷ್ಟು ಹೆಚ್ಚಾಗಿದೆ. ಉದಯೋನ್ಮುಖ ಕ್ರೀಡೆಗಳ ಪಾಲು 11 ಶೇಕಡಕ್ಕೆ ಇಳಿದಿದೆ. ಕ್ರಿಕೆಟ್ ಒಂದೇ 16,704 ಕೋಟಿ ರೂ. ವ್ಯವಹಾರವನ್ನು ದಾಖಲಿಸಿದೆ. ಡಬ್ಲ್ಯುಪಿಪಿ ಮೀಡಿಯದ ‘ಸ್ಪೋರ್ಟಿಂಗ್ ನೇಶನ್: ಬಿಲ್ಡಿಂಗ್ ಎ ಲೆಗಸಿ’ ಎಂಬ ಹೆಸರಿನ ವರದಿಯ ಪ್ರಕಾರ, ಆದಾಯದ ಮೂರು ಪ್ರಧಾನ ಮೂಲಗಳನ್ನು ಕ್ರೀಡಾ ಮೌಲ್ಯಮಾಪನದಲ್ಲಿ ಪರಿಗಣಿಸಲಾಗಿದೆ. ಅವುಗಳೆಂದರೆ- ಪ್ರಾಯೋಜಕತ್ವ, ಅತ್ಲೀಟ್ ಜಾಹೀರಾತುಗಳು ಮತ್ತು ಜಾಹೀರಾತು ವೆಚ್ಚಗಳು. ‘‘ಇಂದು ಕ್ರೀಡೆಯು ಸಂಸ್ಕೃತಿ ಮತ್ತು ವಾಣಿಜ್ಯ ಸಂಧಿಸುವ ಸ್ಥಳದಲ್ಲಿ ಕುಳಿತುಕೊಂಡಿದೆ. ಬ್ರಾಂಡ್‌ಗಳು ಕೇವಲ ಪ್ರಾಯೋಜಕರಾಗದೆ, ದಿನೇ ದಿನೇ ಕ್ರೀಡೆಯ ಭಾಗವಾಗುತ್ತಾ ಸಾಗಿದೆ. ಆಳವಾಗಿ ಮಿಳಿತಗೊಂಡಿರುವ ಭಾಗೀದಾರಿಕೆಗಳು ಅಭಿಮಾನಿಗಳ ಪಾಲ್ಗೊಳ್ಳುವಿಕೆ ಮತ್ತು ವಾಣಿಜ್ಯ ಪರಿಣಾಮ ಎರಡನ್ನೂ ಹೆಚ್ಚಿಸುತ್ತವೆ ಎನ್ನುವುದನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಂತಹ ಲೀಗ್‌ಗಳ ವಿಕಾಸವು ತೋರಿಸಿಕೊಟ್ಟಿದೆ’’ ಎಂದು ಡಬ್ಲ್ಯುಪಿಪಿ ಮೀಡಿಯ ಸೌತ್ ಏಶ್ಯದ ಕ್ರೀಡೆ ಮತ್ತು ಮನರಂಜನೆ ವಿಭಾಗದ ಕಂಟೆಂಟ್ ಆಡಳಿತ ನಿರ್ದೇಶಕ ವಿನೀತ್ ಕಾರ್ಣಿಕ್ ಹೇಳುತ್ತಾರೆ.

ವಾರ್ತಾ ಭಾರತಿ 24 Mar 2026 12:01 am

100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಪತನ

ಪೆರು: 100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ದಕ್ಷಿಣ ಅಮೆಜಾನ್ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ ಎಂದು ವರದಿಯಾಗಿದೆ. ವಾಯುಪಡೆಯ ಹರ್ಕ್ಯುಲಸ್ ಸಿ -130 ವಿಮಾನದಲ್ಲಿ 100ಕ್ಕೂ ಅಧಿಕ ಸೈನಿಕರು ಪ್ರಯಾಣಿಸುತ್ತಿದ್ದರು. ಪೆರುವಿನ ಗಡಿಗೆ ಸಮೀಪದ ಪೋರ್ಟೊ ಲೆಗುಜಾಮೊ ಪಟ್ಟಣದ ಬಳಿ ವಿಮಾನ ಪತನಗೊಂಡಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ಅಪಘಾತದಲ್ಲಿ ಹಲವು ಸೈನಿಕರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.

ವಾರ್ತಾ ಭಾರತಿ 23 Mar 2026 11:49 pm

Budget Session 2026 | 14,767.89 ಕೋಟಿ ರೂ., ಪೂರಕ ಅಂದಾಜು ಮಂಡನೆ

ಬೆಂಗಳೂರು : ರಾಜ್ಯ ಸರಕಾರವು 2025-26ನೆ ಸಾಲಿನ ಅಂತಿಮ ಕಂತಿನ 14,767.89 ಕೋಟಿ ರೂ. ಮೊತ್ತದ ಪೂರಕ ಅಂದಾಜು ಅನ್ನು ಮಂಡನೆ ಮಾಡಿದೆ. ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಸಚಿವ ಕೃಷ್ಣ ಭೈರೇಗೌಡ ಪೂರಕ ಅಂದಾಜನ್ನು ಮಂಡಿಸಿದರು. ಮೂರನೇ ಮತ್ತು ಅಂತಿಮ ಕಂತಿನ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 14,767.89 ಕೋಟಿ ರೂ.ಗಳಲ್ಲಿ 7.41 ಕೋಟಿ ರೂ.ಗಳು ಪ್ರಭೃತ ವೆಚ್ಚ ಮತ್ತು 14,760.49 ಕೋಟಿ ರೂ.ಗಳು ಪುರಸ್ಕೃತ ವೆಚ್ಚ ಸೇರಿರುತ್ತವೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 911.11 ಕೋಟಿ ರೂ.ಗಳು ಪುರಸ್ಕೃತ ವಾಗಬೇಕಾಗಿದ್ದು, ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 13,856.79 ಕೋಟಿ ರೂ. ಗಳು. ಇದರಲ್ಲಿ 5,735.80 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 8,120.99 ಕೋಟಿ ರೂ. ಗಳಾಗಿರುತ್ತವೆ. ಈ ಮೊತ್ತವನ್ನು ರಾಜ್ಯದ ರಾಜಸ್ವ ಸ್ವೀಕೃತಿಗಳಿಂದ ಮತ್ತು ಅಗತ್ಯವಿದ್ದಲ್ಲಿ, ಸಂಭವನೀಯ ಉಳಿತಾಯ ಹಾಗೂ ಸಾಲದ ಮೂಲಕ ಭರಿಸಲಾಗುತ್ತದೆ ಎಂದು ತಿಳಿಸಿದೆ. ಇಲಾಖೆಗಳಿಗೆ ಎಷ್ಟು ಪೂರಕ ಅಂದಾಜು : ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 478.12 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 221.65 ಕೋಟಿ ರೂ. ಪೂರಕ ಅಂದಾಜು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕ 106.70 ಕೋಟಿ ರೂ. ಪೂರಕ ಅಂದಾಜು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರಾಜಸ್ವ ಲೆಕ್ಕ 112.16 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 1.50 ಕೋಟಿ ರೂ. ಪೂರಕ ಅಂದಾಜು. ಕಂದಾಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 735.97 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 125 ಕೋಟಿ ರೂ. ಪೂರಕ ಅಂದಾಜು. ಶಿಕ್ಷಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 33.55 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 34.74 ಕೋಟಿ ರೂ. ಪೂರಕ ಅಂದಾಜು. ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 663.91 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 311.59 ಕೋಟಿ ರೂ. ಪೂರಕ ಅಂದಾಜು. ಲೋಕೋಪಯೋಗಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 433 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 100 ಕೋಟಿ ರೂ. ಪೂರಕ ಅಂದಾಜು. ನೀರಾವರಿ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 1,226 ಕೋಟಿ ರೂ. ಪೂರಕ ಅಂದಾಜು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 406.53 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 24.74 ಕೋಟಿ ರೂ. ಪೂರಕ ಅಂದಾಜು. ಇಂಧನ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 5,760 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 4.47 ಕೋಟಿ ರೂ. ಪೂರಕ ಅಂದಾಜು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 207.33 ಕೋಟಿ ರೂ. ಬಂಡವಾಳ ಲೆಕ್ಕದಲ್ಲಿ 208.33 ಕೋಟಿ ರೂ. ಪೂರಕ ಅಂದಾಜು ಎಂದು ಉಲ್ಲೇಖಿಸಲಾಗಿದೆ. ಉಪ ಚುನಾವಣೆಗೆಗಳಿಗೆ ಅನುದಾನ: 2019, 2021ರ ಉಪಚುನಾವಣೆಗಳ ಬಾಕಿ ಬಿಲ್ ಹಾಗೂ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಗಳಿಗೆ ಹೆಚ್ಚುವರಿ ವೆಚ್ಚ, ರಾಜ್ಯಪಾಲರು, ಮುಖ್ಯಮಂತ್ರಿ ಅವರ ಹೆಲಿಕಾಪ್ಟರ್, ಏರ್‌ ಕ್ರಾಫ್ಟ್ ವೆಚ್ಚ 15 ಕೋಟಿ ರೂ. ಪೂರಕ ಅಂದಾಜು ಎಂದು ತಿಳಿಸಲಾಗಿದೆ. *ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹೊಸ ವಾಹನ ಖರೀದಿಗೆ 1.25 ಕೋಟಿ ರೂ. ಪೂರಕ ಅಂದಾಜು. *ರಸ್ತೆ ಸಾರಿಗೆ ಸಂಸ್ಥೆಯ ಬಾಕಿ ಮೋಟಾರು ವಾಹನ ತೆರಿಗೆ ಪಾವತಿಗೆ 676 ಕೋಟಿ ರೂ. ಪೂರಕ ಅಂದಾಜು. *ಹಾವೇರಿ, ಹಾಸನ, ವಿಜಯನಗರ ಜಿಲ್ಲೆಗಳಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಗಳಿಗೆ 16.30 ಕೋಟಿ ರೂ. ವೆಚ್ಚ. * ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿಗೆ 10 ಕೋಟಿ ರೂ. ವೆಚ್ಚ. *ರಾಜ್ಯದ ದೇವಸ್ಥಾನ, ಮಠ, ಟ್ರಸ್ಟ್‌ ಗಳ ಅಭಿವೃದ್ಧಿಗೆ 15 ಕೋಟಿ ರೂ. ಪೂರಕ ಅಂದಾಜು. *ದಾವೋಸ್ ಶೃಂಗಸಭೆಗೆ ರಾಜ್ಯದ ನಿಯೋಗದ ಪ್ರವಾಸ ವೆಚ್ಚ 10 ಕೋಟಿ ರೂ. ಪೂರಕ ಅಂದಾಜು. *ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶಕ್ಕೆ 25 ಕೋಟಿ ರೂ. ಹೆಚ್ಚುವರಿ ಅಂದಾಜು. *ಕೈಗಾರಿಕಾ ಘಟಕಗಳಿಗೆ ಸಹಾಯಧನ 335 ಕೋಟಿ ರೂ. ಪೂರಕ ಅಂದಾಜು. *ಯುವನಿಧಿ ಗ್ಯಾರಂಟಿಗೆ 25 ಕೋಟಿ ರೂ. ಪೂರಕ ಅಂದಾಜು. *ಬೆಳಗಾವಿ ಅಧಿವೇಶನಕ್ಕೆ 5.1 ಕೋಟಿ ರೂ.ಹೆಚ್ಚುವರಿ ವೆಚ್ಚ. *ರಾಜ್ಯದ ವಿವಿಧ ನೀರಾವರಿ ನಿಗಮಗಳ ಬಾಕಿ ಬಿಲ್‍ಗಳ ಪಾವತಿಗೆ 1,025 ಕೋಟಿ ರೂ. ಪೂರಕ ಅಂದಾಜು. *ಗೃಹಜ್ಯೋತಿ ಗ್ಯಾರಂಟಿ ಬಾಕಿ ಪಾವತಿಗೆ 159 ಕೋಟಿ ರೂ. ಪೂರಕ ಅಂದಾಜು.  

ವಾರ್ತಾ ಭಾರತಿ 23 Mar 2026 11:45 pm

ಪಾಕಿಸ್ತಾನದ PSL ಗೆ ಉಗ್ರರ ಬೆದರಿಕೆ: ವಿದೇಶಿ ಆಟಗಾರರಿಗೆ ʼತಕ್ಷಣವೇ ಹಿಂದೆ ಸರಿಯಲು’ ಸೂಚನೆ

ಕರಾಚಿ: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ(ಟಿಟಿಪಿ)ಟಿ-20 ಪಂದ್ಯಾವಳಿಯಲ್ಲಿ ವಿದೇಶೀ ಆಟಗಾರರು ಭಾಗವಹಿಸುವುದರ ವಿರುದ್ಧ ಬೆದರಿಕೆ ಒಡ್ಡಿದ ನಂತರ ಮಾರ್ಚ್ 26ರಿಂದ ಆರಂಭವಾಗಬೇಕಾಗಿದ್ದ 11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಈ ಉಗ್ರ ಸಂಘಟನೆಯು ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ವಿದೇಶೀ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭದ್ರತೆಯ ಕುರಿತು ಕಳವಳ ವ್ಯಕ್ತವಾಗಿದೆ. ಪಶ್ಚಿಮ ಏಶ್ಯದ ಯುದ್ಧದ ಸನ್ನಿವೇಶ ಹಾಗೂ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಗೆ ಕೇವಲ ಎರಡು ತಾಣಗಳಾದ ಕರಾಚಿ ಹಾಗೂ ಲಾಹೋರ್ ಗೆ ಸೀಮಿತಗೊಳಿಸಿ ಪ್ರೇಕ್ಷಕರಿಗೆ ಪ್ರವೇಶವನ್ನು ನೀಡದೆ ಪಿಎಸ್ಎಲ್ ಟೂರ್ನಿ ನಡೆಸಲು ಪಿಸಿಬಿ ನಿರ್ಧರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಈ ವರ್ಷದ ಪಿಎಸ್ಎಲ್ ನಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮೊಯಿನ್ ಅಲಿ, ಡೆವೊನ್ ಕಾನ್ವೆ ಹಾಗೂ ಆ್ಯಡಮ್ ಝಂಪಾ ಸಹಿತ ಹಲವು ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಈ ಎಲ್ಲರ ಭಾಗವಹಿಸುವಿಕೆಯು ಲೀಗ್ ಗೆ ಅಂತರ್ರಾಷ್ಟ್ರೀಯ ಆಟಗಾರರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿದೆ. ಸ್ಟೀವ್ ಸ್ಮಿತ್ ಅವರು ಮುಲ್ತಾನ್ ಸುಲ್ತಾನ್ ಫ್ರಾಂಚೈಸಿಗೆ ಸೇರ್ಪಡೆಯಾಗಲು ಸೋಮವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಬಿಗ್ ಬ್ಯಾಶ್ ಲೀಗ್ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ಮಿತ್ ಇದೇ ಮೊದಲ ಬಾರಿ ಪಿಎಸ್ಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಇಂದನ ಬಿಕ್ಕಟ್ಟನ್ನು ನಿವಾರಿಯಿಸಲು ಪ್ರೇಕ್ಷಕರಿಲ್ಲದೆ ಕೇವಲ ಎರಡು ತಾಣಗಳಲ್ಲಿ ಲೀಗ್ ಆಡಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಮುಖ್ಯಸ್ಥ ಮುಹ್ಸಿನ್ ನಖ್ವಿ ರವಿವಾರ ದೃಢಪಡಿಸಿದ್ದಾರೆ. ಪಿಎಸ್ಎಲ್ ಟೂರ್ನಿಯು ಮಾರ್ಚ್ 26ರಿಂದ ಮೇ 3 ರ ತನಕ ನಿಗದಿಯಾಗಿತ್ತು.

ವಾರ್ತಾ ಭಾರತಿ 23 Mar 2026 11:45 pm

ತಲೆಮೊಗರು| ಮಸೀದಿಯ ವಿಚಾರಕ್ಕೆ ಸಂಬಂಧಿಸಿ ಗುಂಪು ಘರ್ಷಣೆ: ಪ್ರಕರಣ ದಾಖಲು

ಬಂಟ್ವಾಳ : ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಘರ್ಷಣೆ ನಡೆದಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22 ರಂದು ಬೆಳಿಗ್ಗೆ ಇವರು ಮತ್ತು ಅವರ ಸಂಬಂಧಿ ದಾವೂದ್ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್, ಇಸಾಕ್, ಶಫೀಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಎಂಬವರು ಗುಂಪು ಕಟ್ಟಿಕೊಂಡು ನಿಂತಿದ್ದು, ನವಾಝ್ ಹಾಗೂ ದಾವೂದ್ ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ನವಾಝ್ ಹಾಗೂ ದಾವೂದ್ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ಗಫೂರ್ (48) ಎಂಬವರು ನೀಡಿದ ದೂರಿನಂತೆ, ಆರೋಪಿ ಗಳಾದ ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರು ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ಗಫೂರ್ ಅವರನ್ನು ತಡೆದು ನಿಲ್ಲಿಸಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಗಫೂರ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ 3 ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಶೌಕತ್ ಆಲಿ (40) ಎಂಬವರು ನೀಡಿದ ದೂರಿನಂತೆ ಶೌಕತ್ ಅವರು ಮಾ. 22 ರಂದು ಬೆಳಿಗ್ಗೆ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ ಆರೋಪಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಝ್, ಗಫೂರ್, ಶರೀಫ್, ಆಶಿಕ್ ಎಂಬವರು ಅಂಗಡಿಗೆ ಬಂದು ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಶೌಕತ್ ಅವರ ಸಂಬಂಧಿ ರಬಿಯತ್ ಅವರಿಗೆ ಹಲ್ಲೆ ನಡೆಸಿರುತ್ತಾರೆ‌ ಎಂದು ದೂರಲಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್, ಇಸಾಕ್, ಅಶ್ರಫ್ ಎಂಬವರಿಗೆ ಹಾಗೂ ಶೌಕತ್ ಅವರಿಗೂ ಅವ್ಯಾಚವಾಗಿ ಬೈದು ತಲವಾರಿನಿಂದ ಹಲ್ಲೆಗೆ ಯತ್ನಿಸಿರುತ್ತಾರೆ ಎನ್ನಲಾಗಿದ್ದು, ಈ ವೇಳೆ ಗಲಾಟೆ ಬಿಡಿಸಲು ಬಂದ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತ್ತಂಡಗಳ ಪೈಕಿ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯದ ಗಾಯಗಳಾಗಿರುವುದಿಲ್ಲ ಎಂದಿರುವ ಪೊಲೀಸರು ಗಾಯಾಳುಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಾರ್ತಾ ಭಾರತಿ 23 Mar 2026 11:40 pm

ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ 250 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಲ್ಲಿಕೆ

ಬೆಂಗಳೂರು : ರಾಜ್ಯದಲ್ಲಿರುವ ಎಲ್ಲ ಮಾಜಿ ದೇವದಾಸಿಯರು ಎಸ್‍ಸಿ-ಎಸ್‍ಟಿ ವರ್ಗಕ್ಕೆ ಸೇರಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಚಿವರ ಜೊತೆಗೆ ಚರ್ಚಿಸಿ, ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಸುಮಾರು 250ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪರಿಷತ್ ಕಲಾಪದ ವೇಳೆ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ‘ದೇವದಾಸಿ ಸಮೀಕ್ಷೆಗೆ ಸಂಬಂಧಿಸಿದಂತೆ ಗಮನ ಸೆಳೆದಾಗ ಉತ್ತರಿಸಿದ ಸಚಿವರು, ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರುಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ ಮಾಜಿ ದೇವದಾಸಿ ಹಾಗೂ ಅವರ ಮಕ್ಕಳಿಗಾಗಿ ವಿಶೇಷ ಪ್ಯಾಕೇಜ್ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಇನ್ನು ಶೇ.100ರಷ್ಟು ಮಾಜಿ ದೇವದಾಸಿಯರು ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿದ್ದು, ಸಮಾಜ ಕಲ್ಯಾಣ ಇಲಾಖೆಯೊಂದಿಗೂ ಚರ್ಚಿಸಲಾಗಿದೆ ಎಂದರು. ಮರುಸಮೀಕ್ಷೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ 1ನೆ, 2ನೆ ಹಾಗೂ 3ನೆ ತಲೆಮಾರಿನ ಒಟ್ಟು 90,092 ಮಾಜಿ ದೇವದಾಸಿಯರ ಮಕ್ಕಳು ಇರುವುದಾಗಿ ತಿಳಿದು ಬಂದಿರುತ್ತದೆ. ಅವರಿಗೆ ಶಿಕ್ಷಣ, ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗು ಆದಾಯೋತ್ಪನ್ನಕರ ತರಬೇತಿ ಹಾಗು ಸಾಲ ಸೌಲಭ್ಯ ನೀಡುವ ಬಗ್ಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸಮಾಜ ಕಲ್ಯಾಣ ಇಲಾಖೆಯವರಿಗೆ ಸಲ್ಲಿಸಲಾಗಿದೆ ಎಂದು ಅವರು ಉತ್ತರಿಸಿದರು. 45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಪಿಂಚಣಿಯನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2013-14 ರಿಂದ ಈವರೆಗೆ ಒಟ್ಟು 13,663 ಮಾಜಿ ದೇವದಾಸಿ ಮಹಿಳೆಯರಿಗೆ 30,000 ರೂಪಾಯಿಗಳಿಂದ 50 ಸಾವಿರ ರೂಪಾಯಿಗಳವರೆಗೆ ಪ್ರೋ ತ್ಸಾಹ ಧನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ಮಾಜಿ ದೇವದಾಸಿ ಮಹಿಳೆಯರಿಗಾಗಿ ಹೆಚ್ಚಿನ ಪಿಂಚಣಿ, ವಸತಿ, ಆರೋಗ್ಯ ಹಾಗು ಆದಾಯೋತ್ಪನ್ನಕರ ಚಟುವಟಿಕೆ ಹಾಗೂ ಸಾಲಸೌಲಭ್ಯ ಒದಗಿಸಲಾಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ 10,725 ಮಂದಿ ವಸತಿ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ ನೀಡಿದರು.  

ವಾರ್ತಾ ಭಾರತಿ 23 Mar 2026 11:40 pm

ಪಶ್ಚಿಮ ಬಂಗಾಳ: ಚುನಾವಣಾ ವೀಕ್ಷಕರಾಗಿ 294 ಐಎಎಸ್ ಅಧಿಕಾರಿಗಳ ನಿಯೋಜನೆ

ಕೋಲ್ಕತಾ: ಅಭೂತಪೂರ್ವ ಕ್ರಮವೊಂದರಲ್ಲಿ, ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ 294 ಚುನಾವಣಾ ವೀಕ್ಷಕರನ್ನು ನಿಯೋಜಿಸಿದೆ. ಇದು ಈ ವರ್ಷ ಚುನಾವಣೆ ನಡೆಯಲಿರುವ ಯಾವುದೇ ರಾಜ್ಯದಲ್ಲಿ ನಿಯೋಜಿಸಲಾಗಿರುವ ಚುನಾವಣಾ ವೀಕ್ಷಕರ ಅತ್ಯಧಿಕ ಸಂಖ್ಯೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲ್ಪಟ್ಟಿರುವ ಎಲ್ಲಾ ಚುನಾವಣಾ ವೀಕ್ಷಕರು ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳಾಗಿದ್ದಾರೆ. ಅವರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ತೀವ್ರ ನಿಗಾ ಇಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯು ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಲಿತಾಂಶವು ಮೇ 4ರಂದು ಹೊರಬೀಳಲಿದೆ. ರಾಜ್ಯಾದ್ಯಂತ 80,600 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ‘‘ಸಾಮಾನ್ಯವಾಗಿ ಚುನಾವಣಾ ವೀಕ್ಷಕರೊಬ್ಬರು ಒಂದಕ್ಕಿಂತ ಹೆಚ್ಚು ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳ ಮೇಲೆ ನಿಗಾ ಇಡುತ್ತಾರೆ. ಆದರೆ, ಈ ಬಾರಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಹಿನ್ನೆಲೆಯಲ್ಲಿ ಇದು ಭಿನ್ನವಾಗಿದೆ. ಎಸ್‌ಐಆರ್ ಬಳಿಕ, ರಾಜ್ಯ ಮತದಾರರ ಪಟ್ಟಿಯಿಂದ ಸುಮಾರು 64 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ’’ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

ವಾರ್ತಾ ಭಾರತಿ 23 Mar 2026 11:37 pm

ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಳ ಮೇಲಣ ತೆರಿಗೆ ವಿಧೇಯಕ ಅಂಗೀಕಾರ

ಬೆಂಗಳೂರು : 2026ನೆ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ( ತಿದ್ದುಪಡಿ)ವಿಧೇಯಕವನ್ನು ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಈ ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು. ಈ ವಿಧೇಯಕವು ಜನಪರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಬೆಂಬಲ ಇರುವುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ ಕಾರಣ ಯಾವುದೇ ಚರ್ಚೆ ಇಲ್ಲದೆ ಈ ತಿದ್ದುಪಡಿ ವಿಧೇಯಕವು ಅನುಮೋದನೆಗೊಂಡಿತು. ಈ ವಿಧೇಯಕದ ಕುರಿತು ವಿವರಣೆ ನೀಡಿದ ಕೃಷ್ಣ ಬೈರೇಗೌಡ, ಇದು ಅತ್ಯಂತ ಸರಳ ತಿದ್ದುಪಡಿಯಾಗಿದ್ದು, ವೃತ್ತಿ ತೆರಿಗೆಯನ್ನು ವಿಧಿಸಬೇಕೆಂದು ಸಂವಿಧಾನದಲ್ಲೆ ಅಡಕವಾಗಿದೆ. ಯಾರು ತಿಂಗಳಿಗೆ 25 ಸಾವಿರ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವರೋ ಅವರು ವರ್ಷಕ್ಕೆ 2500 ರೂ. ತೆರಿಗೆಯನ್ನು ಕಟ್ಟಬೇಕು. ಅವರು ತೆರಿಗೆ ಕಟ್ಟುವ ಜೊತೆಗೆ ರಿಟನ್ಸ್‌ ಫೈಲ್ ಮಾಡಬೇಕಾಗಿತ್ತು. ಈ ತಿದ್ದುಪಡಿಯಲ್ಲಿ ರಿಟನ್ಸ್‌ ಫೈಲ್ ಮಾಡುವುದನ್ನು ತೆಗೆದು ಹಾಕಲಾಗಿದೆ. ಇದರಿಂದ ಸಾರ್ವಜನಿಕರು ರಿಟನ್ಸ್‌ ಫೈಲ್ ಮಾಡಲು ಸಿ.ಎ.ಅವರ ಹತ್ತಿರ ಹೋಗುವ ಅವಶ್ಯಕತೆ ಇರುವುದಿಲ್ಲ. ಇದರಿಂದ ನಮ್ಮ ಸಿಬ್ಬಂದಿಗಳ ಸಮಯವೂ ಉಳಿಯಲಿದೆ ಎಂದು ಅವರು ಹೇಳಿದರು. ಹಾಗೆಯೇ ಹಿರಿಯ ನಾಗರಿಕರು, ಸೈನ್ಯೆಯಲ್ಲಿರುವವರು ಮತ್ತು ವಿಕಲಚೇತನರಿಗೆ ತೆರಿಗೆಯಿಂದ ವಿನಾಯತಿ ನೀಡಲಾಗಿದ್ದರೂ, ಅವರು ಕೂಡ ‘ನಿಲ್ ರಿಟನ್ಸ್‌ ಫೈಲ್’ ಮಾಡಬೇಕಿತ್ತು. ಈ ತಿದ್ದುಪಡಿಯಿಂದ ಅವರು ಕೂಡ ರಿಟನ್ಸ್‌ ಫೈಲ್ ಮಾಡುವಂತಿಲ್ಲ. ಇದರಿಂದ ಸಾರ್ವಜನಿಕರ ಮತ್ತು ನಮ್ಮ ಸಿಬ್ಬಂದಿಯ ಸಮಯ ವ್ಯರ್ಥವಾಗುವುದಿಲ್ಲ. ಈಗಾಗಲೇ ತಂತ್ರಜ್ಞಾನದಲ್ಲಿ ಇದನ್ನು ಅಳವಡಿಸಲಾಗಿದ್ದು, ಕಾನೂನು ಮೂಲಕವು ಅಳವಡಿಸಿಕೊಳ್ಳಬೇಕಾಗಿರುವುದರಿಂದ ಈ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.  

ವಾರ್ತಾ ಭಾರತಿ 23 Mar 2026 11:36 pm

ಆರ್‌ಟಿಐ ಅರ್ಜಿ ತಿರಸ್ಕಾರ ದರ 2024-25ರಲ್ಲಿ ಶೇ. 3.26ಕ್ಕೆ ಇಳಿಕೆ; ರಾಜ್ಯಸಭೆಗೆ ಕೇಂದ್ರ ಸರಕಾರ ಮಾಹಿತಿ

ಹೊಸದಿಲ್ಲಿ: ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿ ತಿರಸ್ಕಾರ ದರವು 2013-14ರಲ್ಲಿ ಶೇ. 7.21 ಇದ್ದುದು, 2024-25ರಲ್ಲಿ ಶೇ. 3.26ಕ್ಕೆ ಇಳಿದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಮಾಹಿತಿಯನ್ನು ಕೇಂದ್ರದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ರಾಜ್ಯ ಸಭೆಗೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಇಲಾಖೆ/ಸಂಸ್ಥೆಗಳಿಗೆ ಸಂಬಂಧಿಸಿದ ಆರ್‌ಟಿಐ ಅರ್ಜಿಗಳ ಸ್ವೀಕಾರ, ಪ್ರತಿಕ್ರಿಯೆ, ಕಾರಣದೊಂದಿಗೆ ತಿರಸ್ಕಾರದ ಕುರಿತ ಆಯಾ ವರ್ಷಗಳ ದತ್ತಾಂಶ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ವಾರ್ಷಿಕ ವರದಿಯಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ. ಆರ್‌ಟಿಐ ವ್ಯವಸ್ಥೆಯ ಪರಿಣಾಮಕಾರಿತ್ವದ ಅಂದಾಜು ಹಾಗೂ ಪುನರ್ ಪರಿಶೀಲನೆ ನಿರಂತರ ನಡೆಯುವ ಪ್ರಕ್ರಿಯೆ ಎಂದು ಸಿಂಗ್ ಹೇಳಿದ್ದಾರೆ. ಸಂಬಂಧಿತ ಸರಕಾರಿ ಇಲಾಖೆ/ಸಂಸ್ಥೆಗಳಿಂದ ನಡೆಯುವ ಪೂರ್ವಭಾವಿ/ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಗಳ ತೃತೀಯ ಪಕ್ಷದ ಪಾರದರ್ಶಕ ಲೆಕ್ಕ ಪರಿಶೋಧನೆ ನಡೆಸುವ ಕುರಿತು ಸರಕಾರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Mar 2026 11:31 pm

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಅಂತಿಮ ಅವಕಾಶ; ಮತ್ತೂ ಕಟ್ಟದೇ ಹೋದಲ್ಲಿ ಜಿಬಿಎನಿಂದ ಮುಟ್ಟುಗೋಲು ಖಚಿತ

ಆಸ್ತಿ ತೆರಿಗೆ ಬಾಕಿದಾರರಿಗೆ ಬಾಕಿ ಪಾವತಿಸಲುಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (GBA) ಅಂತಿಮವಾಗಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಮಾರಾಟವಾಗದ ಆಸ್ತಿಗಳನ್ನು ಪಾಲಿಕೆಯೇ ಮಾರ್ಗದರ್ಶಕ ಮೌಲ್ಯಕ್ಕೆ ಖರೀದಿಸಲಿದೆ. ಮಾರಾಟದಿಂದ ಬಂದ ಮೊತ್ತದಿಂದ ತೆರಿಗೆ ಮತ್ತು ದಂಡದ ಮೊತ್ತವನ್ನು ಕಡಿದುಕೊಂಡು ಉಳಿದ ಹಣವನ್ನು ಮೂಲ ಮಾಲೀಕರಿಗೆ ನೀಡಲಾಗುವುದು. ತೆರಿಗೆ ವಸೂಲಾತಿಯಲ್ಲಿ ಶಿಸ್ತು ತರಲು ಮತ್ತು ನಗರದ ಅಭಿವೃದ್ಧಿಗೆ ಆದಾಯ ಹೆಚ್ಚಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಬಿಎ ತಿಳಿಸಿದೆ.

ವಿಜಯ ಕರ್ನಾಟಕ 23 Mar 2026 11:25 pm

ಶಹಾಪುರ | ರಾಜ್ಯ ಕೃಷಿ-ಗ್ರಾಮೀಣ ಕಾರ್ಮಿಕರ 9ನೇ ಸಮ್ಮೇಳನದ ಲಾಂಛನ ಬಿಡುಗಡೆ

ಶಹಾಪುರ: ಎ.26ರಿಂದ 28ರವರೆಗೆ ನಗರದಲ್ಲಿ ನಡೆಯಲಿರುವ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಮಟ್ಟದ 9ನೇ ಸಮ್ಮೇಳನದ ಲಾಂಛನವನ್ನು ಭಾನುವಾರ ಸ್ವಾಗತ ಸಮಿತಿ ಅಧ್ಯಕ್ಷ ಹಣಮೇಗೌಡ ಬಿರನಕಲ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕೊರತೆಯಿಂದ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ ಲಭ್ಯವಿಲ್ಲದೆ ರೈತರು ಕಂಗಾಲಾಗುತ್ತಿದ್ದಾರೆ. ರೈತ ಮತ್ತು ಕಾರ್ಮಿಕ ವರ್ಗದ ಹಿತ ಕಾಯುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತುರ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪ್ರೇಮಿ ತಿಮ್ಮಯ್ಯ ಪುರ್ಲೆ ಮಾತನಾಡಿ, ಬಡವರಿಗೆ ನೀಡುವ ಯೋಜನೆಗಳನ್ನು ಟೀಕಿಸುವವರು ಬಡ ಜನತೆಯ ವಿರೋಧಿಗಳೇ ಆಗಿದ್ದಾರೆ ಎಂದು ಟೀಕಿಸಿದರು. ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ತಕ್ಷಣ ರಚಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡರಾದ ಚೆನ್ನಪ್ಪ ಆನೆಗುಂದಿ, ಆರ್.ಚೆನ್ನಬಸ್ಸು, ವನದುರ್ಗ ಗಿರೆಯಪ್ಪ ಗೌಡ ಹಾಗೂ ದಾವಲಸಾಬ್ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Mar 2026 11:22 pm

ಸರಕಾರಿ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪಂಜಾಬ್‌ನ ಮಾಜಿ ಸಚಿವ ಲಾಲ್ ಸಿಂಗ್ ಭುಲ್ಲರ್ ಬಂಧನ

ಚಂಡಿಗಢ: ಪಂಜಾಬ್ ರಾಜ್ಯ ಗೋದಾಮು ನಿಗಮ (ಪಿಎಸ್‌ಡಬ್ಲ್ಯುಸಿ)ದ ಜಿಲ್ಲಾ ಮ್ಯಾನೇಜರ್ ಗಂಗನ್‌ದೀಪ್ ಸಿಂಗ್ ರಾಂಧವ ಆತ್ಮಹತ್ಯೆ ಆರೋಪದ ಕುರಿತ ಪ್ರಕರಣದಲ್ಲಿ ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್‌ನನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಬಂಧನವನ್ನು ದೃಢಪಡಿಸಿರುವ ಅಮೃತಸರದ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್, ಮಾಜಿ ಸಚಿವ ಲಾಲ್ ಜಿತ್ ಸಿಂಗ್ ಭುಲ್ಲರ್ ಅವರನ್ನು ಮಂಡಿ ಗೋಬಿಂದಗಢದಿಂದ ಬಂಧಿಸಲಾಗಿದೆ. ಅವರ ಆಪ್ತ ಸಹಾಯಕ ದಿಲ್‌ಬಾಗ್ ಸಿಂಗ್ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಬಂಧನಕ್ಕಿಂತ ಮುನ್ನ ಭುಲ್ಲರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, ತಾನು ಸ್ವಯಂಪ್ರೇರಿತವಾಗಿ ಶರಣಾಗತನಾಗಿದ್ದೇನೆ ಎಂದಿದ್ದಾರೆ. ತಾನು ಪರಾರಿಯಾಗಿದ್ದೇನೆ ಎಂಬ ವದಂತಿಯನ್ನು ಅವರು ನಿರಾಕರಿಸಿದ್ದಾರೆ. ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ‘ಎಕ್ಸ್’ನಲ್ಲಿ, ‘‘ನನಗೆ ಸಂಪೂರ್ಣ ಪಂಜಾಬ್ ಒಂದು ಕುಟುಂಬ. ಪಂಜಾಬ್‌ನಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಆತ ಹೊಂದಿರುವ ಹುದ್ದೆ, ಅತ ತನ್ನ ಸಂಬಂಧಿ ಅಥವಾ ಪ್ರಭಾವಿ ಎಂಬುದು ಮುಖ್ಯವಲ್ಲ. ಯಾರೊಬ್ಬರನ್ನೂ ರಕ್ಷಿಸುವುದು ನಮ್ಮ ಪಕ್ಷದ ಕಾರ್ಯಸೂಚಿ ಅಲ್ಲ’’ ಎಂದಿದ್ದಾರೆ.

ವಾರ್ತಾ ಭಾರತಿ 23 Mar 2026 11:22 pm

ವಿಧಾನಸಭೆಯ ಕಾರ್ಯಕಲಾಪಗಳ ಸಂಪೂರ್ಣ ಡಿಜಿಟಲೀಕರಣ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ವಿಧಾನಸಭೆಯ ಕಾರ್ಯ ಕಲಾಪಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. ಸೋಮವಾರ ಭೋಜನ ವಿರಾಮದ ಬಳಿಕ ಸದನದಲ್ಲಿ ಈ ಸಂಬಂಧ ಮಾಹಿತಿ ಒದಗಿಸಿದ ಅವರು, ಇನ್ನು ಮೂರು ತಿಂಗಳಲ್ಲಿ ವಿಧಾನಸಭೆಯು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. ಅಲ್ಲದೇ, ಸದನಕ್ಕೆ ಬರುವ ಸದಸ್ಯರ ಹಾಜರಾತಿ ಸಂಗ್ರಹಿಸಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.  

ವಾರ್ತಾ ಭಾರತಿ 23 Mar 2026 11:20 pm

ರಾಜ್ಯದಲ್ಲಿ ಮಕ್ಕಳ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಲು ಕ್ರಮ : ಸಚಿವ ಮಧುಬಂಗಾರಪ್ಪ

ಬೆಂಗಳೂರು : ರಾಜ್ಯದಲ್ಲಿ 16 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳನ್ನು ಮತ್ತು ಮೊಬೈಲ್ ಬಳಕೆಯನ್ನು ನಿಷೇಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ತಿಳಿಸಿದ್ದಾರೆ. ಸೋಮವಾರ ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಮತ್ತು ಮೊಬೈಲ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಲಾಗಿದೆ. ಅದರನ್ವಯ ತಜ್ಞರ ಸಮಿತಿಗಳನ್ನು ರಚನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು. ವಿದ್ಯಾರ್ಥಿಗಳಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು ಸರಕಾರಿ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 23 Mar 2026 11:17 pm

ವಿಜಯನಗರ | ʼಕಿತ್ತೂರು ರಾಣಿ ಚೆನ್ನಮ್ಮʼ ರಾಜ್ಯ ಪ್ರಶಸ್ತಿಗೆ ಅನುರಾಧ ವಾಲ್ಮೀಕಿ ಆಯ್ಕೆ

ವಿಜಯನಗರ: ಕೂಡ್ಲಿಗಿ ತಾಲೂಕಿನ ಪ್ರತಿಭಾವಂತ ಸಂಗೀತ ಹಾಗೂ ರಂಗಭೂಮಿ ಕಲಾವಿದೆ ಶ್ರೀಮತಿ ಅನುರಾಧ ವಾಲ್ಮೀಕಿ ಅವರಿಗೆ ರಾಜ್ಯ ಮಟ್ಟದ ಮಹತ್ವದ ಗೌರವ ಲಭಿಸಿದೆ. ಮಹಿಳಾ ದಿನಾಚರಣೆ ಅಂಗವಾಗಿ ಮಾ.24ರ, 2026ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನುರಾಧ ಅವರು, ಪ್ರಸ್ತುತ ಮಹಿಳಾ ಸಂಗೀತ ಕಲಾವಿದರ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ದಿವಂಗತ ವೆಂಕಮ್ಮ ಅವರಿಂದ ಬಂದ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅವರು, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನಾಟಕ ತರಬೇತಿ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಉತ್ಸವಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಅವರು, ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2013ರಲ್ಲಿ ಸ್ಥಾಪಿಸಿದ ‘ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ’ ಮೂಲಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹವಾಗಿದೆ. ಈ ಗೌರವಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅನುರಾಧ ವಾಲ್ಮೀಕಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 23 Mar 2026 11:15 pm

ಮಂಗಳೂರು: ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ

ಮಂಗಳೂರು: ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧಕೋರ ನೀತಿಗಳನ್ನು ಖಂಡಿಸಿ ಸಿಐಟಿಯು, ಡಿವೈಎಫ್‌ಐ, ಜೆಎಂಎಸ್, ಡಿಎಚ್‌ಎಸ್ , ಆದಿವಾಸಿ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಮೆರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧದಾಹದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತನ್ನು ತನ್ನ ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದೆ. ಜಗತ್ತಿನ 80 ದೇಶಗಳಲ್ಲಿ ಸುಮಾರು 750ಕ್ಕೂ ಮಿಕ್ಕಿದ ನೌಕಾನೆಲೆಗಳನ್ನು ಸ್ಥಾಪಿಸಿ ತನಗೆ ವಿರುದ್ಧ ವಾಗಿರುವ ದೇಶಗಳನ್ನು ಬೆದರಿಸುತ್ತಿದೆ. ಈ ಮೂಲಕ ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವವನ್ನು ನಾಶಪಡಿಸುವುದೇ ತನ್ನ ಉದ್ದೇಶವನ್ನಾಗಿಸಿದೆ. ಜಗತ್ತಿನೆಲ್ಲೆಡೆ ಯುದ್ಧಗಳು ನಡೆದರೆ ಮಾತ್ರವೇ ಅಮೇರಿಕಾ ದೇಶದ ಆರ್ಥಿಕತೆ ಉಳಿಯುತ್ತದೆ ಎಂದು ಹೇಳಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಮಾತನಾಡಿ, ಯುದ್ಧ ಹಾಗೂ ಸರ್ವನಾಶ ಎಂಬುವುದು ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ಉಸಿರು. ಅವುಗಳು ಇಲ್ಲದೆ ಹೋದರೆ ಇವೆರಡೂ ಶಕ್ತಿಗಳು ಕ್ಷಣಮಾತ್ರದಲ್ಲೇ ಸಾಯುತ್ತದೆ.ಅದಕ್ಕೆ ತನ್ನ ಅಸ್ತಿತ್ವಕ್ಕಾಗಿ ಜಗತ್ತಿನ ಹಲವೆಡೆ ಯುದ್ದಗಳನ್ನು ಪ್ರಚೋದಿಸಿ ಅಮಾಯಕ ಜನತೆಯ ಪ್ರಾಣಗಳನ್ನು ಬಲಿ ಪಡೆಯುತ್ತಿದೆ ಎಂದು ಹೇಳಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡಿ, ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಜಗತ್ತಿನಾದ್ಯಂತ ವ್ಯಾಪಕ ಪರಿಣಾಮ ಬಿದ್ದಿದ್ದು, ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು ಯುದ್ಧದ ಅಪಾಯ ಗಳನ್ನು ವಿವರಿಸುತ್ತಾ, ಅಲಿಪ್ತ ನೀತಿಯನ್ನು ಪ್ರತಿಪಾದಿಸುತ್ತಿದ್ದ ಭಾರತವನ್ನು ಅಮೆರಿಕಾದ ಕಿರಿಯ ಪಾಲುದಾರರ ನ್ನಾಗಿಸಿದ ನರೇಂದ್ರ ಮೋದಿ ಸರಕಾರ ದೇಶದ ಘನತೆ ಗೌರವವನ್ನು ಮಣ್ಣುಪಾಲು ಮಾಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತಿ ಶೆಟ್ಟಿ, ಆಶೋಕ್ ಶ್ರೀಯಾನ್, ಜಯಂತ ನಾಯಕ್, ಜಯಲಕ್ಷ್ಮಿ, ಭಾರತಿ ಬೋಳಾರ, ಡಿವೈಎಫ್‌ಐ ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ರೋಹಿಣಿ ಜಲ್ಲಿಗುಡ್ಡ,ಮಮತಾ, ಯೋಗಿತಾ ಮುಂತಾದವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 23 Mar 2026 11:14 pm

ಬಳ್ಳಾರಿ | ಅಕ್ರಮ ಜೂಜಾಟದ ಅಡ್ಡೆಗೆ ದಾಳಿ : 60 ಮಂದಿ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ ನಗರದಲ್ಲಿ ಅಕ್ರಮ ಜೂಜಾಟದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಗರದ ನಟರಾಜ್ ಸಿನಿಮಾ ಮಂದಿರದ ಹತ್ತಿರ ಇರುವ ಖಾಸಗಿ ರೆಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಕ್ಲಬ್‌ನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬ್ರೂಸ್‌ಪೇಟೆ ಪೊಲೀಸರು ದಾಳಿ ನಡೆಸಿ 60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾ.22 ರಂದು ಬಂದ ಮಾಹಿತಿಯ ಆಧಾರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ದಾಳಿ ವೇಳೆ ಜೂಜಾಟ ನಡೆಯುತ್ತಿರುವುದು ಬಹಿರಂಗವಾಗಿದೆ. ಈ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 44/2026 ದಾಖಲಿಸಿ, ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 79 ಮತ್ತು 80ರಡಿ 60 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ 1,77,820 ರೂ. ನಗದು, 2 ಡಿವಿಆರ್‌ಗಳು, 810 ಇಸ್ಪೀಟ್ ಕಾರ್ಡ್‌ಗಳು, 58 ಕ್ಲಬ್ ಐಡಿ ಕಾರ್ಡ್‌ಗಳು, 1 ಕ್ಯೂಆರ್ ಕೋಡ್ ಬೋರ್ಡ್ ಹಾಗೂ 303 ಟೋಕನ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು, “ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ” ಎಂದು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 23 Mar 2026 11:12 pm

ಬೆಂಗಳೂರು ಟ್ರಾಫಿಕ್ ನಿಂದ ಪಾರಾಗಲು ಸಂಜೆ ಆಫೀಸಿನಿಂದ ಮನೆಗೆ ಕಾಲ್ನಡಿಗೆ; ಎಷ್ಟೆಲ್ಲಾ ಲಾಭ ಎಂದ ಯುವತಿಯ ವಿಡಿಯೋ ವೈರಲ್!

Bengaluru Traffic- ಬೆಂಗಳೂರಿನ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಕಚೇರಿಯಿಂದ 2.7 ಕಿಮೀ ದೂರ ಇರುವ ತನ್ನ ಮನೆಗೆ ನಿರಂತರ ಎರಡು ವಾರಗಳ ಕಾಲ ನಡೆದುಕೊಂಡು ಹೋಗಿ ಗಮನ ಸೆಳೆದಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಈ ಪ್ರಯೋಗದಿಂದ ತಮ್ಮಲ್ಲಿ ಹೊಸ ಶಕ್ತಿಯ ಸಂಚಾರವಾಗಿದೆ, ವ್ಯಾಯಾಮದ ಜೊತೆಗೆ ಪ್ರಯಾಣದ ಹಣವೂ ಉಳಿದಿದೆ ಎಂದು ಅವರು ವಿವರಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಲು ಇದು ಉತ್ತಮ ಉಪಾಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ ಕರ್ನಾಟಕ 23 Mar 2026 11:11 pm

‘ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ’ ನಿಷೇಧಿಸುವ ನಿಟ್ಟಿನಲ್ಲಿ ಕರಡು ನೀತಿ ಪ್ರಕಟ

ಬೆಂಗಳೂರು : ಸೋಮವಾರದಂದು ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕರಡು ನೀತಿಯನ್ನು ಪ್ರಕಟಿಸಿದ್ದು, ಪ್ರತಿದಿನ ಶಾಲೆ ಮುಗಿದ ನಂತರವೂ ಶಾಲಾ ಮಕ್ಕಳು ಮನರಂಜನೆಗಾಗಿ ಮೊಬೈಲ್ ಬಳಸುವ ಅವಧಿಯನ್ನು ಒಂದು ಗಂಟೆಗೆ ಸೀಮಿತಗೊಳಿಸಬೇಕು ಎಂದು ಶಾಲೆಗಳಿಗೆ ನಿರ್ದೇಶನ ನೀಡಿದೆ. ಶಾಲೆಗಳು ಡಿಜಿಟಲ್ ಯೋಗಕ್ಷೇಮ ಮತ್ತು ಸಾಮಾಜಿಕ ಮಾಧ್ಯಮ ಸಾಕ್ಷರತೆಯನ್ನು ಅಳವಡಿಸಿಕೊಳ್ಳಬೇಕು. ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಡಿಜಿಟಲ್ ಪೌರತ್ವ ಎಂದರೆ ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಜವಾಬ್ದಾರಿಯುತ, ಸುರಕ್ಷಿತ, ಕಾನೂನುಬದ್ಧ ಮತ್ತು ನೈತಿಕ ರೀತಿಯಲ್ಲಿ ಬಳಸುವ ಕೌಶಲ್ಯವನ್ನು ಪಾಠಗಳಲ್ಲಿ ಅಳವಡಿಕೆ ಮಾಡಿ ಬೋಧನೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮ ವಹಿಸಬೇಕು ಎಂದು ಸೂಚಿಸಿದೆ. ಮಕ್ಕಳು ಇಂಟರ್ನೆಟ್ ಅನ್ನು ಅತಿಯಾಗಿ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಲು ಶಾಲೆಗಳು ಸಮಿತಿಯನ್ನು ರಚನೆ ಮಾಡಬೇಕು. ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಶಾಲೆಯ ಪ್ರಾಂಶುಪಾಲ, ಒಬ್ಬ ಮಾನಸಿಕ ಆರೋಗ್ಯ ತಜ್ಞ, ಶಿಕ್ಷಕ, ಒಬ್ಬ ಪೋಷಕ ಹಾಗೂ ವಿದ್ಯಾರ್ಥಿಯನ್ನು ಸಮಿತಿಯು ಒಳಗೊಂಡಿರಬೇಕು ಎಂದು ನೀತಿಯಲ್ಲಿ ಹೇಳಿದೆ. ಸಂಜೆ 7 ಗಂಟೆಯ ಒಳಗಾಗಿ ಆಡಿಯೋ-ಮಾತ್ರ ಇರುವ ಫೋನ್‍ಗಳನ್ನು ಬಳಕೆ ಮಾಡುವ ರೀತಿಯಲ್ಲಿ ‘ಮಕ್ಕಳ ಯೋಜನೆ’ ಅನ್ನು ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳೊಂದಿಗೆ ನೇರ ಸಂವಹನಕ್ಕಾಗಿ ವಾಟ್ಸ್‌ ಆಪ್ ಸಂಪರ್ಕದ ಬದಲಿಗೆ ‘ದಿನಚರಿ ಪುಸ್ತಕ ಪದ್ಧತಿ’ಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಪ್ರತಿ ಶಾಲೆಯು ಡಿಜಿಟಲ್ ಬಳಕೆ ನೀತಿಯ ರೂಪರೇಖೆಯನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.  

ವಾರ್ತಾ ಭಾರತಿ 23 Mar 2026 11:08 pm

ಬಳ್ಳಾರಿ | ಕೆಐಎಡಿಬಿನಲ್ಲಿ 16 ಕೋಟಿಗೂ ಅಧಿಕ ಹಣ ದುರುಪಯೋಗ ಆರೋಪ

ಬಳ್ಳಾರಿ, ಮಾ.23: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 16.17 ಕೋಟಿ ರೂ. ಹಣವನ್ನು ನಕಲಿ ಸಹಿಗಳ ಮೂಲಕ ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಎಂ. ಕೊಳಲಗಿ ಅವರು ನೀಡಿದ ದೂರಿನ ಪ್ರಕಾರ, 2022ರಿಂದ 2026ರ ಅವಧಿಯಲ್ಲಿ ಮೂವರು ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ ಕಾರ್ಯಕಾಲದಲ್ಲಿ, ಕಚೇರಿಯ ಗುತ್ತಿಗೆ ನೌಕರರು, ಇತರೆ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಯವರ ಸಹಭಾಗಿತ್ವದಲ್ಲಿ ಮಂಡಳಿ ಖಾತೆಯಿಂದ ನಕಲಿ ಸಹಿಗಳನ್ನು ಬಳಸಿ ಹಣವನ್ನು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವಂಚನೆ ಆಂತರಿಕ ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿದ್ದು, ಪ್ರಕರಣ ಪ್ರಾಥಮಿಕ ತನಿಖೆಯಲ್ಲಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದೆ. ವಂಚನೆಯ ಮೊತ್ತವು 15 ಕೋಟಿ ರೂ.ಗಳಿಗೂ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಪೊಲೀಸ್ ಪ್ರಧಾನ ಕಚೇರಿಯ ನಿರ್ದೇಶನದಂತೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ತನಿಖೆಯನ್ನು ವೇಗವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Mar 2026 11:06 pm

ಕ್ಷಯರೋಗ ಚಿಕಿತ್ಸೆ ಸಂಪೂರ್ಣ ಉಚಿತ : ದಿನೇಶ್ ಗುಂಡೂರಾವ್

‘ರೋಗಿಗಳು ಹಿಂಜರಿಕೆ ತೊರೆದು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಿರಿ’

ವಾರ್ತಾ ಭಾರತಿ 23 Mar 2026 11:03 pm

ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು : ಸಚಿವ ಈಶ್ವರ್ ಖಂಡ್ರೆ

ಈಶ್ವರ್ ಖಂಡ್ರೆ ಅವರಿಗೆ ಸನ್ಮಾನ ಕಾರ್ಯಕ್ರಮ

ವಾರ್ತಾ ಭಾರತಿ 23 Mar 2026 11:00 pm

ತಾಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯಲ್ಲ : ಮಧುಬಂಗಾರಪ್ಪ

ಬೆಂಗಳೂರು : ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು. ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಣಮಟ್ಟ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇ ಶದಿಂದ ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವ ಚಿಂತನೆ ಇಲ್ಲ ಎಂದರು. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಮೌಲ್ಯಮಾಪಕರಿಗೆ ತೆರಳಲು ಸಮಸ್ಯೆ ಆಗುತ್ತದೆ. ಸಾರಿಗೆ ಖರ್ಚು ಹೆಚ್ಚಾಗುತ್ತದೆ. ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಮೌಲ್ಯಮಾಪನವನ್ನು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ. ನಮಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮಧುಬಂಗಾರಪ್ಪ ಸ್ಪಷ್ಟಪಡಿಸಿದರು.  

ವಾರ್ತಾ ಭಾರತಿ 23 Mar 2026 10:54 pm

Kalaburagi | ಭೀಕರ ರಸ್ತೆ ಅಪಘಾತ: ತಾಯಿ, ಮಗು ಮೃತ್ಯು

ಕಲಬುರಗಿ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗು ಮೃತಪಟ್ಟು, ಕುಟುಂಬದ ಇನ್ನಿಬ್ಬರು ಗಾಯಗೊಂಡಿರುವ ದುರ್ಘಟನೆ ನದಿಸಿನ್ನೂರ ಗ್ರಾಮದ ಬಳಿ ಸೋಮವಾರ ನಡೆದಿದೆ. ಬೀದರ್ ಮೂಲದ ಬಟ್ಟೆ ವ್ಯಾಪಾರಿ ಪಿರೋಝ್ ಖಾನ್ (34) ಅವರು ವ್ಯಾಪಾರದ ನಿಮಿತ್ತ ಜೇವರ್ಗಿಗೆ ಬಂದಿದ್ದರು. ಬಳಿಕ ತಮ್ಮ ಗರ್ಭಿಣಿ ಪತ್ನಿ ಪ್ರವೀದ್ ಶೇಖ್‌ (32) ಅವರನ್ನು ತಪಾಸಣೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಕೂಟರ್‌ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಅಭಿಷಾನ್ (2) ಮತ್ತು ನಾಝಿಯಾ (5) ಜೊತೆಗೆ ಪ್ರಯಾಣಿಸುತ್ತಿದ್ದಾಗ, ನದಿಸಿನ್ನೂರ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪ್ರವೀದ್ ಶೇಖ್‌ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಗು ಅಭಿಷಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯ ಮಧ್ಯೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಪಿರೋಝ್ ಖಾನ್ ಹಾಗೂ ಹಿರಿಯ ಮಗಳು ನಾಝಿಯಾ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಟ್ರಾಫಿಕ್-2 ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಜಪ್ತಿ ಮಾಡಿದ್ದಾರೆ. ಪರಾರಿಯಾಗಿರುವ ಕಾರು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 23 Mar 2026 10:54 pm

ಯಾದಗಿರಿ | ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ : ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಯಾದಗಿರಿ: ಗುರುಮಠಕಲ್ ತಾಲೂಕಿನ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ನಿಲಯದಲ್ಲಿ ಸ್ವಾತಿ (21) ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗಣ್ಣ ಎಂ. ಗೋನಾಲ ಗಂಭೀರ ಆರೋಪ ವ್ಯಕ್ತಪಡಿಸಿ, ಹಾಸ್ಟೆಲ್‌ನ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಗಂಭೀರ ಅವ್ಯವಸ್ಥೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಶಹಾಪುರ ಹಾಗೂ ಗುರುಮಿಠಕಲ್ ಭಾಗಗಳಲ್ಲಿ ಇಂತಹ ಘಟನೆಗಳು ಈ ಹಿಂದೆ ಕೂಡ ನಡೆದಿವೆ. ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದಿರುವುದು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಕೆಲ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಕಾಳಜಿ ತೋರಿಸುತ್ತಿಲ್ಲ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳ ಕಡೆ ಗಮನ ಹರಿಸಲಾಗುತ್ತಿಲ್ಲ ಎಂದು ದೂರಿದರು. ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಬಯೋಮೆಟ್ರಿಕ್ ಹಾಜರಾತಿ ನಿಯಮಗಳ ಉಲ್ಲಂಘನೆ ಹಾಗೂ ಆಹಾರ ಧಾನ್ಯ ಪೂರೈಕೆಯಲ್ಲಿ ಅಕ್ರಮ ಸೇರಿದಂತೆ ಹಲವು ಸಮಸ್ಯೆಗಳು ಇರುವುದಾಗಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಒಂದು ವಾರದೊಳಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಮಪ್ಪ ಕೋರೆ, ನಾಗು ಗೋಗಿಕರ್, ಭೀಮಣ್ಣ ಅಡೊಡಗಿ ಇದ್ದರು.

ವಾರ್ತಾ ಭಾರತಿ 23 Mar 2026 10:49 pm

Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಮಳೆ ಮತ್ತು ಗಾಳಿ ಸಹಿತ ಗುಡುಗು ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಗುಡುಗು, ಮಿಂಚು ಮತ್ತು ವೇಗವಾಗಿ ಬೀಸುವ ಗಾಳಿಯ ಅಬ್ಬರ ಇರಲಿದೆ ಎಂದು ಎಚ್ಚರಿಸಿದೆ. ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾರವಾಡ

ಒನ್ ಇ೦ಡಿಯ 23 Mar 2026 10:41 pm

ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,400ಕ್ಕೂ ಅಧಿಕ ಗೃಹ ಬಳಕೆ ಸಿಲಿಂಡರ್ ವಶ: 25 ಎಫ್‍ಐಆರ್ ದಾಖಲು

ಬೆಂಗಳೂರು : ರಾಜ್ಯದಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, 10 ದಿನಗಳಿಂದ ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,448 ಗೃಹ ಬಳಕೆ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಹಾಗೆಯೇ 25 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. ಸೋಮವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಬಾಗಲಕೋಟೆ 64, ಬೆಂಗಳೂರು ನಗರ 507, ರಾಯಚೂರು 4, ಶಿವಮೊಗ್ಗ 7, ತುಮಕೂರು 37, ವಿಜಯಪುರ 16, ಯಾದಗಿರಿ 100, ಬಳ್ಳಾರಿ 1, ಕಲಬುರಗಿ 7, ಮೈಸೂರು 52, ಬೆಂಗಳೂರು ದಕ್ಷಿಣ 39, ಉತ್ತರ ಕನ್ನಡ 30 ಮತ್ತು ವಿಜಯಪುರ 16 ಸಿಲಿಂಡರ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, 25 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ 10 ದಿನಗಳಿಂದ ಇಲ್ಲಿಯವರೆಗೂ ಗೃಹ ಬಳಕೆಯ 30,51,045 ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ. ಅಲ್ಲದೇ ವಾಣಿಜ್ಯ ಬಳಕೆಯ 67,641 ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ. ಸುಮಾರು 40,083 ಆಟೋ ಎಲ್‍ಪಿಜಿ ಸಿಲಿಂಡರ್‌ ಗಳನ್ನು ಅಂದರೆ 761.655 ಮೆ.ಟನ್.ಗಳಷ್ಟು ಅನಿಲವನ್ನು ವಿತರಣೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಗೃಹ ಬಳಕೆ ಸಿಲಿಂಡರ್ ಸರಬರಾಜು ಸಹಜವಾಗಿ ನಿರ್ವಹಣೆಯಾಗುತ್ತಿದ್ದು, ವಾಣಿಜ್ಯ ಸಿಲಿಂಡರ್‌ ಗಳ ಮತ್ತು ಆಟೋ ಎಲ್‍ಪಿಜಿಗಳ ವಿತರಣೆಯಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದೆ.

ವಾರ್ತಾ ಭಾರತಿ 23 Mar 2026 10:37 pm

ರಾಯಚೂರು | ಒಳಮೀಸಲಾತಿ ಜಾರಿಗೆ ಬಿಜೆಪಿ, ಕಾಂಗ್ರೆಸ್ ಸರಕಾರದಿಂದ ವಿಳಂಬ : ಮಹೇಂದ್ರ ಕುಮಾರ ಮಿತ್ರ ಆರೋಪ

ರಾಯಚೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ನಿರ್ಲಕ್ಷ್ಯ ವಹಿಸಿ ಕಾಲಹರಣ ಮಾಡಿವೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಉದ್ದೇಶವಿಲ್ಲ ಎಂದು ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು. ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯಿಲ್ಲದೆ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ಮೆಮೋ ಸಲ್ಲಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಮಾ.27ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಮುನ್ನ ಈ ಮೆಮೋ ಹಿಂಪಡೆಯದಿದ್ದರೆ, ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು. ದೇವಿಂದರ್ ಸಿಂಗ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆದರೆ ಆಯೋಗದ ವರದಿಯನ್ನು ಪರಿಗಣಿಸದೇ ಸರ್ಕಾರವೇ ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಭಜಿಸಿ (ಎ-6%, ಬಿ-6%, ಸಿ-5%) ಮೀಸಲಾತಿ ನಿಗದಿ ಮಾಡಿದೆ ಎಂದು ಟೀಕಿಸಿದರು. ಮಾದಿಗ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಆರ್.ಬಿ. ತಿಮ್ಮಾಪುರ ಸಮುದಾಯದ ಹಿತಾಸಕ್ತಿಗೆ ಬದ್ಧರಾಗಿದ್ದರೆ, ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಮೆಮೋ ಹಿಂಪಡೆಯುವಂತೆ ಒತ್ತಾಯಿಸಿ ನಂತರವೇ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬೇಕು ಎಂದು ಆಗ್ರಹಿಸಿದರು. ಒಳ ಮೀಸಲಾತಿಯಿಲ್ಲದೆ ನೇಮಕಾತಿ ನಡೆದರೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ.15 ಮೀಸಲಾತಿಯೊಳಗೆ ಹಾಗೂ ಸಾಮಾನ್ಯ ವರ್ಗದಲ್ಲೂ ಸ್ಪರ್ಧಿಸಿ ಅವಕಾಶ ಪಡೆಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು. ಆರೆಸ್ಸೆಸ್‌ ಹಿನ್ನೆಲೆಯುಳ್ಳ ವಾದಿರಾಜ್ ಎಂಬುವವರು ಹೊಲೆಯ ಹಾಗೂ ಮಾದಿಗ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಪಕ್ಷದಲ್ಲಿರುವ ಮಾದಿಗ ಸಮುದಾಯದವರು ಎಚ್ಚರಿಕೆಯಿಂದಿರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಆಂಜನೇಯ, ಹುಸೇನಬಾಷಾ ಪಲಕನಮರಡಿ, ಕಮಲ್ ಆಂಜನೇಯ ಇದ್ದರು.

ವಾರ್ತಾ ಭಾರತಿ 23 Mar 2026 10:35 pm

Kerala | ಇಬ್ಬರು NDA ಅಭ್ಯರ್ಥಿಗಳ ಹೆಸರು ಮತಪಟ್ಟಿಯಿಂದಲೇ ನಾಪತ್ತೆ; ಸ್ಪರ್ಧೆಗೆ ಅನರ್ಹ!

ತಿರುವನಂತಪುರಂ: NDA ಮೈತ್ರಿಕೂಟದ ಭಾಗವಾಗಿರುವ ಟ್ವೆಂಟಿ20 (Twenty20) ಪಕ್ಷದ ಇಬ್ಬರು ಸಂಭವನೀಯ ಅಭ್ಯರ್ಥಿಗಳ ಹೆಸರು ಮತಪಟ್ಟಿಯಿಂದಲೇ ನಾಪತ್ತೆಯಾಗಿದ್ದು, ಹೀಗಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹವಾಗಿರುವ ವಿಚಿತ್ರ ಘಟನೆ ವರದಿಯಾಗಿದೆ. ಕ್ರಮವಾಗಿ ಪೆರುಂಬವೂರ್ ಹಾಗೂ ಎಟ್ಟುಮನೂರ್ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದ್ದ ಚಲನಚಿತ್ರ ನಟಿಯರಾದ ಲಕ್ಷ್ಮಿಪ್ರಿಯಾ ಹಾಗೂ ವೀನಾ ನಾಯರ್ ಅವರ ಹೆಸರುಗಳು ಮತಪಟ್ಟಿಯಲ್ಲಿ ನಾಪತ್ತೆಯಾಗಿವೆ ಎಂದು thenewsminute.com ವರದಿ ಮಾಡಿದೆ. 1951ರ ಜನಪ್ರತಿನಿಧಿ ಕಾಯ್ದೆಯನ್ವಯ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಯಾವುದೇ ಅಭ್ಯರ್ಥಿಯ ಹೆಸರು ರಾಜ್ಯದ ಯಾವುದಾದರೊಂದು ಕ್ಷೇತ್ರದ ಮತಪಟ್ಟಿಯಲ್ಲಿ ಇರಬೇಕಾಗಿದೆ. ಮಾರ್ಚ್ 18ರಂದು ಟ್ವೆಂಟಿ20 ಪಕ್ಷದ ಅಧ್ಯಕ್ಷ ಸಾಬು ಎಂ.ಜಾಕೋಬ್ ಅವರಿಬ್ಬರ ಸ್ಪರ್ಧೆಯನ್ನು ಪ್ರಕಟಿಸಿದ್ದರು. ಆದರೆ, ಮಾರ್ಚ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ವಿಳಾಸ ಬದಲಾವಣೆಯಿಂದ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ವೀಣಾ ನಾಯರ್ ಹೇಳಿದ್ದರೆ, ಇತ್ತೀಚೆಗೆ ನಡೆದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಲಕ್ಷ್ಮಿ ಪ್ರಿಯಾ ಆರೋಪಿಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ನಾವು ನಮ್ಮ ಮತವನ್ನು ಚಲಾಯಿಸಿದ್ದೆವು ಎಂದು ಅವರಿಬ್ಬರೂ ಪ್ರತಿಪಾದಿಸಿದ್ದಾರೆ. ನನ್ನ ಹೆಸರು ಚಂಗನಚೇರಿ ಮತಪಟ್ಟಿಯಲ್ಲಿತ್ತು ಎಂದು ವೀಣಾ ನಾಯರ್ ಹೇಳಿಕೊಂಡಿದ್ದರೆ, ಈ ಹಿಂದೆ ನನ್ನ ಮತವು ತ್ರಿಶೂರ್ ವಿಧಾನಸಭಾ ಮತಪಟ್ಟಿಯಲ್ಲಿತ್ತು. ಆದರೆ, ವಿಳಾಸ ಬದಲಾವಣೆಯಾಗಿರುವುದರಿಂದ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ನನ್ನ ಹೆಸರು ಕೈಬಿಟ್ಟು ಹೋಗಿದೆ ಎಂದು ಲಕ್ಷ್ಮಿ ಪ್ರಿಯಾ ಆರೋಪಿಸಿದ್ದಾರೆ. ಇಬ್ಬರೂ ಕೊನೆಯ ಕ್ಷಣದಲ್ಲಿ ತಮ್ಮ ಹೆಸರುಗಳನ್ನು ಮತಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನಿಸಿದರಾದರೂ, ಮಾರ್ಚ್ 22ರ ಮುನ್ನ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯರವಿಲ್ಲ ಎಂದು ಚುನಾವಣಾಧಿಕಾರಿಗಳು ಅವರ ಕೋರಿಕೆಯನ್ನು ತಳ್ಳಿ ಹಾಕಿದ್ದಾರೆ. ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದುದರಿಂದ, ಟ್ವೆಂಟಿ20 ಪಕ್ಷವು ಅಭ್ಯರ್ಥಿಗಳನ್ನು ಬದಲಿಸುವ ನಿರ್ಣಯ ಕೈಗೊಂಡಿತು. ಇದರ ಬೆನ್ನಿಗೇ, ಎಟ್ಟುಮನೂರ್ ವಿಧಾನಸಭಾ ಕ್ಷೇತ್ರದಿಂದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಅತಿರಾ ಡಿ ನಾಯರ್ ಹಾಗೂ ಪೆರುಂಬವೂರ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಕಾಂಗ್ರೆಸ್ ನಾಯಕ ಜಿಬಿ ವರ್ಗೀಸ್ ಪತ್ತಿಕ್ಕಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಯಿತು. ಈ ಇಬ್ಬರ ಪೈಕಿ, ಜಿಬಿ ವರ್ಗೀಸ್ ಪತ್ತಿಕ್ಕಲ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದರು.

ವಾರ್ತಾ ಭಾರತಿ 23 Mar 2026 10:24 pm

Bengaluru | ಅಪ್ರಾಪ್ತೆಯ ಹತ್ಯೆ ಪ್ರಕರಣ: ರಾಜಸ್ಥಾನದ ಅಜ್ಮೀರ್‌ನಲ್ಲಿ ಆರೋಪಿ ಬಂಧನ

ಬೆಂಗಳೂರು : ಅಪ್ರಾಪ್ತೆಯ ಕತ್ತು ಸೀಳಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಡಿ.ಜೆ.ಹಳ್ಳಿ ಠಾಣೆಯ ಪೊಲೀಸರು ರಾಜಸ್ಥಾನದ ಅಜ್ಮೀರ್‍ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ. ಆರೋಪಿ ಶಬೀಲ್(20) ಎಂಬಾತನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾರ್ಚ್ 17ರಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಕ್ಕರೆ ಮಂಡಿ ಸಮೀಪದ ಪಾಳು ಬಿದ್ದ ಮನೆಯಲ್ಲಿ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಅಪ್ರಾಪ್ತೆ ಮತ್ತು ಶಬೀಲ್‍ಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಬಕ್ರೀದ್ ಹಬ್ಬದ ನಂತರ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇಬ್ಬರೂ ಸಹ ಸಕ್ಕರೆ ಮಂಡಿಯಲ್ಲಿರುವ ಶಬೀಲ್‍ನ ಸಂಬಂಧಿಕರ ಒಡೆತನದ ಪಾಳು ಬಿದ್ದ ಕಟ್ಟಡದ ಬಳಿ ಆಗಾಗ್ಗೆ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ನಿಶ್ಚಿತಾರ್ಥದ ಬಳಿಕ ಸಣ್ಣ, ಸಣ್ಣ ವಿಷಯಗಳಿಗೂ ಅನುಮಾನಿಸುತ್ತಿದ್ದ ಶಬೀಲ್, ಅಪ್ರಾಪ್ತೆಯ ಜೊತೆ ಜಗಳವಾಡಲಾರಂಭಿಸಿದ್ದ. ಅದೇ ಕಾರಣದಿಂದ ಕೃತ್ಯ ಎಸಗಿ ಪರಾರಿಯಾಗಿದ್ದ ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಸದ್ಯ, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Mar 2026 10:23 pm

ಹಾರ್ಮುಝ್ ಜಲಸಂಧಿಯನ್ನು ಅಮೆರಿಕ, ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು: ಟ್ರಂಪ್

ವಾಶಿಂಗ್ಟನ್: ಹಾರ್ಮುಝ್ ಜಲಸಂಧಿಯನ್ನು ಅಮೆರಿಕ ಮತ್ತು ಇರಾನ್ ಜಂಟಿಯಾಗಿ ನಿಯಂತ್ರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಇರಾನ್‍ನೊಂದಿಗೆ ಒಪ್ಪಂದ ಏರ್ಪಟ್ಟರೆ ಹಾರ್ಮುಝ್ ಜಲಸಂಧಿಯನ್ನು ಯಾರು ನಿಯಂತ್ರಿಸಬಹುದು ಎಂಬ ಪ್ರಶ್ನೆಗೆ ಟ್ರಂಪ್ ʼಬಹುಷಃ ನಾನು ಮತ್ತು ಹೊಸ ಆಯತೊಲ್ಲಾ, ಆಯತೊಲ್ಲಾ ಯಾರೇ ಆಗಿರಲಿ. ಜಲಸಂಧಿ ಶೀಘ್ರವೇ ತೆರೆಯಲಿದೆ ಮತ್ತು ಒಪ್ಪಂದಕ್ಕೆ ಸಹಿ ಬಿದ್ದೊಡನೆ ತೈಲ ಬೆಲೆ ಇಳಿಯಲಿದೆ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ. ಅಮೆರಿಕ ಮತ್ತು ಇರಾನ್ ಇತ್ತೀಚಿನ ಮಾತುಕತೆಗಳಲ್ಲಿ ಒಪ್ಪಂದದ ಪ್ರಮುಖ ಅಂಶಗಳನ್ನು ತಲುಪಿವೆ. ದಾಳಿಗಳಿಗೆ ಐದು ದಿನಗಳ ವಿರಾಮವು ಫಲಪ್ರದವಾದರೆ ಮಧ್ಯಪ್ರಾಚ್ಯ ಸಂಘರ್ಷದ ಪರಿಹಾರಕ್ಕೆ ಕಾರಣವಾಗಬಹುದು ಎಂದು ಫ್ಲೋರಿಡಾದಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಮಾತುಕತೆಯು ಇರಾನ್‍ನ ಅತ್ಯಂತ ಗೌರವಾನ್ವಿತ ಅಧಿಕಾರಿಯೊಂದಿಗೆ ನಡೆದಿದೆ. ಇರಾನ್ ತನ್ನ ಪರಮಾಣು ಮಹಾತ್ವಾಕಾಂಕ್ಷೆಗಳನ್ನು ಮತ್ತು ಯುರೇನಿಯಂ ದಾಸ್ತಾನನ್ನು ಬಿಟ್ಟುಕೊಡುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತುಕತೆ ಕೇಂದ್ರೀಕರಿಸಿದೆ. ನಾವು ಅವರ ನಾಯಕತ್ವದ ಒಂದನೇ ಹಂತ, ಎರಡನೆಯ ಹಂತ ಮತ್ತು ಬಹುತೇಕ ಮೂರನೆ ಹಂತವನ್ನು ಅಳಿಸಿ ಹಾಕಿದ್ದೇವೆ. ಆದರೆ ನಾವು ಅತ್ಯಂತ ಗೌರವಾನ್ವಿತ ನಾಯಕ ಎಂದು ನಂಬುವ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ. ಮಧ್ಯಪ್ರಾಚ್ಯದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜರೆಡ್ ಕ್ರುಷ್ನರ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ರವಿವಾರ ಪ್ರಾರಂಭಗೊಂಡಿರುವ ಮಾತುಕತೆಯು ಸೋಮವಾರ ಮುಂದುವರಿಯುತ್ತದೆ ಮತ್ತು ಉತ್ಪಾದಕವಾಗಿ ಮುಂದುವರಿದರೆ ಶೀಘ್ರದಲ್ಲೇ ಒಪ್ಪಂದವನ್ನು ತಲುಪಬಹುದು. ಆದರೆ ಮಾತುಕತೆ ವಿಫಲವಾದರೆ ಬಾಂಬ್ ದಾಳಿ ಮುಂದುವರಿಯುತ್ತದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 23 Mar 2026 10:21 pm

Bengaluru | ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಗೆ ವಂಚನೆ : ದಂಪತಿ ಬಂಧನ

ಬೆಂಗಳೂರು : ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ನಿರುದ್ಯೋಗಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದಡಿ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೈಸನ್ ಡಿಸೋಜಾ(36) ಮತ್ತು ಲವೀನಾ(31) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ನಿರುದ್ಯೋಗಿಗಳು, ಖಾಸಗಿ ಕಂಪೆನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆಗಿಳಿಯುತ್ತಿದ್ದ ಆರೋಪಿಗಳು, ಅವರಿಗೆ ನ್ಯಾಯಾಲಯದಲ್ಲಿ ಡಿ-ಗ್ರೂಪ್ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು. ಇದೇ ರೀತಿ ಒಬ್ಬೊಬ್ಬರಿಂದ 10 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಹಣ ಸಂಗ್ರಹಿಸಲು ಮತ್ತು ಉದ್ಯೋಗಾಸಕ್ತರನ್ನು ಹುಡುಕಲು ಏಜೆಂಟ್‍ಗಳನ್ನು ನೇಮಿಸಿಕೊಂಡಿದ್ದ ಆರೋಪಿಗಳು, ವಂಚಿಸಿದ ಹಣದಲ್ಲಿ ಆ ಏಜೆಂಟ್‍ಗಳಿಗೆ ಕಮಿಷನ್ ನೀಡುತ್ತಿದ್ದರು. ಖಾಸಗಿ ಹೋಟೆಲ್‍ಗಳಲ್ಲಿ ದಾಖಲೆ ಪರಿಶೀಲನೆಯ ನಾಟಕವಾಡಿ, ನಕಲಿ ಆಫರ್ ಲೆಟರ್‍ಗಳನ್ನು ತೋರಿಸಿ ನಂಬಿಸುತ್ತಿದ್ದರು. ಹಣ ನೀಡಿದವರು ಕೆಲಸದ ಬಗ್ಗೆ ವಿಚಾರಿಸಿದಾಗ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದರು. ಕೊನೆಗೆ ಸಂತ್ರಸ್ತರ ಫೋನ್ ಕರೆಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಸೇರಿದಂತೆ ಕೆಲವೆಡೆ ಪ್ರಕರಣಗಳು ದಾಖಲಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. 2024ರಲ್ಲೂ ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ ಜೈಲು ಸೇರಿದ್ದ ದಂಪತಿ, ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕವೂ ಬುದ್ಧಿ ಕಲಿಯದೇ ಮತ್ತದೇ ಕೃತ್ಯ ಎಸಗಿರುವುದು ಕಂಡುಬಂದಿದೆ. ವಿಚಾರಣೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 23 Mar 2026 10:20 pm

ರೈತರ ಸಾಲ ಮನ್ನಾ ಪ್ರಸ್ತಾವ ಕೇಂದ್ರ ಸರಕಾರದ ಮುಂದಿಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವವು ಕೇಂದ್ರ ಸರಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದರು. ಆದರೆ, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೇಂದ್ರ ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ನುಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಮಯಕ್ಕೆ ಸರಿಯಾಗಿ ಮತ್ತು ಬೇಕಾದಷ್ಟು ಸಾಲವನ್ನು ನೀಡುವುದು ಇದರಲ್ಲಿ ಸೇರಿದೆ ಎಂದು ಅವರು ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗಿನ ಬೆಳೆ ಸಾಲವನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದವರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತದೆ. ಅದೂ ಅಲ್ಲದೆ, ಭದ್ರತೆ ರಹಿತ ಕಿರು ಅವಧಿಯ ಕೃಷಿ ಸಾಲಗಳ ಮೊತ್ತವನ್ನು 1.60 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಸರಕಾರವು ಏರಿಸಿದೆ ಹಾಗೂ ಸಾಕಷ್ಟು ಪ್ರಮಾಣದ ಸಾಲ ಬ್ಯಾಂಕಿಂಗ್ ವ್ಯವಸ್ಥೆಯಿಂದ ಕೃಷಿ ಸೇರಿದಂತೆ ಆದ್ಯತಾ ವಲಯಗಳಿಗೆ ಹರಿಯುವಂತೆ ನೋಡಿಕೊಳ್ಳುತ್ತಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ನಿರ್ಮಲಾ ಹೇಳಿದರು. ಜೊತೆಗೆ, ಜಮೀನು ಹೊಂದಿರುವ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ ಹಾಗೂ ಬೆಳೆ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ವಾರ್ತಾ ಭಾರತಿ 23 Mar 2026 10:13 pm

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ವಿಡಿಯೋ ಶೇರ್ ಮಾಡಿದ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಮಾ.23: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ 2025ರ ಅಕ್ಟೋಬರ್ ನಲ್ಲಿ ‘ನಝೀರ ಮಂಗಳೂರು’ ಎಂಬ ಫೇಸ್ ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸಿರುವ ಪ್ರಕರಣದ ಆರೋಪಿ ಬಡಗಬೆಳ್ಳೂರು ಗ್ರಾಮದ ಕೊಳ್ತಮಜಲ ನಿವಾಸಿ ರಫೀಕ್ ( 38 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘‘ನಝೀರ ಮಂಗಳೂರು’’ ಎಂಬ ಫೇಸ್ ಬುಕ್ ಖಾತೆಯಿಂದ ಆರೋಪಿಯು ವಿಡಿಯೋ ಶೇರ್ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು. ಮಾ. 22ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ವಾರ್ತಾ ಭಾರತಿ 23 Mar 2026 10:13 pm

ದಾವಣಗೆರೆಯಲ್ಲಿ ಮುಸ್ಲಿಮರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್‌ : ಬಿಜೆಪಿ ಮುಖಂಡ ಭಾಸ್ಕರರಾವ್‌ ಟೀಕೆ

ಕಲಬುರಗಿ : ದಾವಣಗೆರೆ ದಕ್ಷಿಣ ಮತಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡದೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಿಗೆ ಟಿಕೆಟ್ ಕೊಡುವ ಮೂಲಕ ಮುಸ್ಲಿಮರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್‌ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಮತಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದ್ದರೂ ಅವರಿಗೆ ಟಿಕೆಟ್ ಕೊಡಲಿಲ್ಲ. ಹಲವು ವರ್ಷಗಳ ಕಾಲ ಬೆಂಬಲಿಸುತ್ತಾ ಬಂದಿರುವ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ತೀರಾ ಅನ್ಯಾಯ ಮಾಡಿದೆ ಎಂದು ಹೇಳಿದರು. ಮುಸ್ಲಿಮರ ಬಗ್ಗೆ ಅನುಕಂಪ ತೋರುವ ಕಾಂಗ್ರೆಸ್ ಪಕ್ಷ ಅಧಿಕಾರ ಅಥವಾ ಚುನಾವಣಾ ಟಿಕೆಟ್ ನೀಡುವ ವಿಷಯ ಬಂದಾಗ ಕುಟುಂಬ ರಾಜಕಾರಣಕ್ಕೆ ಹೆಚ್ಚು ಗಮನ ಕೊಡುತ್ತೆ ಹೊರತು, ಮುಸ್ಲಿಂ ಸಮುದಾಯಕ್ಕೆ ಪ್ರಾಶ್ಯಸ್ತವೇ ಕೊಡಲ್ಲ ಎಂದು ಟೀಕಿಸಿದರು. ನಿರಂತರವಾಗಿ ಕಡೆಗಣನೆಗೆ ಒಳಗಾಗುತ್ತಿರುವ ಮುಸ್ಲಿಂ ಸಮುದಾಯದವರು ಈಗಲಾದರೂ ಎಚ್ಚೆತ್ತು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಬದಲು ಬಿಜೆಪಿ, ಜೆಡಿಎಸ್ ಪಕ್ಷಗಳನ್ನೂ ಬೆಂಬಲಿಸಬೇಕು. ಈ ಪಕ್ಷಗಳಲ್ಲಿಯೂ ಗುರುತಿಸಿಕೊಂಡರೆ ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಬಹುದು ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅಲ್ಲಿನ ಸರ್ಕಾರಗಳು ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ನಮ್ಮ ಪಕ್ಷ ಮುಸ್ಲಿಂ ಸಮುದಾಯದ ಮುಖಂಡರಿಗೆ ಉತ್ತಮ ಸ್ಥಾನಮಾನ ನೀಡಿದೆ ಎಂದರು. ರಾಜ್ಯದಲ್ಲಿ ಡ್ರಗ್ಸ್‌, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಗೃಹಸಚಿವರು ಅಸಮರ್ಥರಾಗಿದ್ದರಿಂದ ಗೃಹ ಇಲಾಖೆಯ ಬಗ್ಗೆ ಪ್ರಿಯಾಂಕ್ ಖರ್ಗೆ, ಮಹಾದೇವಪ್ಪ ಅವರು ಹೇಳಿಕೆ ಕೊಡುವಂತಾಗಿದೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಶೋಕ ಬಗಲಿ, ಕಾಡಾದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಮುಖಂಡೆ ಶೋಭಾ ಬಾಣಿ, ಅವ್ವಣ್ಣ ಮ್ಯಾಕೇರಿ, ಬಾಬುರಾವ ಹಾಗರಗುಂಡಗಿ, ಆನಂದ್ ಪಾಟೀಲ್ ಮತ್ತಿತ್ತರರು ಇದ್ದರು.

ವಾರ್ತಾ ಭಾರತಿ 23 Mar 2026 10:12 pm

ಮಂಗಳೂರು| ಮಾ.25ರಂದು ಇನ್‌ಲ್ಯಾಂಡ್ ಎಲೋರಾ ಉದ್ಘಾಟನೆ

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿ ತಲೆ ಎತ್ತಿ ನಿಂತಿರುವ ಅತ್ಯಾಧುನಿಕ ಸವಲತ್ತು, ಸೌಕರ್ಯಗಳನ್ನು ಒಳಗೊಂಡಿರುವ ಇನ್‌ಲ್ಯಾಂಡ್ ಎಲೋರಾ ವಸತಿ ಸಮುಚ್ಚಯದ ಉದ್ಘಾಟನೆ ಮಾ.25 ರಂದು ನಡೆಯಲಿದೆ. ಬಹುಮಹಡಿ ಕಟ್ಟಡದಲ್ಲಿ 20 ಮನೆಗಳಿದ್ದು, ಪ್ರತಿಯೊಂದು ಮನೆಯ ಎಲ್ಲ ಆಧುನಿಕ ಸವಲತ್ತು ಮತ್ತು ಸೌಕರ್ಯಗಳಿಂದ ಕೂಡಿದ್ದು, ಇನ್‌ಲ್ಯಾಂಡ್ ಎಲೋರಾ ಈಗ ತನ್ನ ನಿವಾಸಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಮಣ್ಣಗುಡ್ಡದ ಹೃದಯಭಾಗದಲ್ಲಿರುವ ಇನ್‌ಲ್ಯಾಂಡ್ ಎಲೋರಾವು ಶಾಂತಿಯುತ ಜೀವನ ಮತ್ತು ನಗರ ಅನುಕೂಲತೆಯ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ. ಈ ಯೋಜನೆಯು 1165 ಚದರ ಅಡಿ , 1510 ಚದರ ಅಡಿ , 1630 ಚದರ ಅಡಿ ವಿಶಾಲವಾದ 2 ಮತ್ತು 3 ಬಿಎಚ್‌ಕೆ ಮನೆಗಳನ್ನು ಹೊಂದಿದೆ. ನಾಲ್ಕು ಮಹಡಿಗಳ ಕಟ್ಟಡ ಇನ್‌ಲ್ಯಾಂಡ್ ಎಲೋರಾದ ಪ್ರತಿಯೊಂದು ಪ್ಲಾಟ್ ಕೂಡಾ ವಿಶಿಷ್ಟ ವಿನ್ಯಾಸ ಹಾಗೂ ಉನ್ನತ ಗುಣಮಟ್ಟದ ನಿರ್ಮಾಣದಿಂದ ಕೂಡಿದೆ. ಇದು ಇನ್‌ಲ್ಯಾಂಡ್‌ನ ಹೆಗ್ಗಳಿಕೆಯಾಗಿರುತ್ತದೆ. ಇನ್‌ಲ್ಯಾಂಡ್ ಎಲೋರಾ ನಿವಾಸಿಗಳಿಗೆ ಪ್ರಮುಖ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಶಾಪಿಂಗ್ ತಾಣ ಗಳು ಮತ್ತು ಪೂಜಾ ಸ್ಥಳಗಳಿಗೆ ತೆರಳಲು ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಶಾಲಾ ಬಸ್‌ಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ಬಹು-ಮಾರ್ಗದ ಸಾರಿಗೆ ಆಯ್ಕೆಗಳು ಸುಲಭವಾಗಿ ಲಭ್ಯವಿದ್ದು, ಇದು ಪ್ರತಿದಿನದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇನ್‌ಲ್ಯಾಂಡ್ ಎಲೋರಾದಲ್ಲಿ ದಿನ ನಿತ್ಯದ ಜೀವನಶೈಲಿಗೆ ಅಗತ್ಯದ ಸೌಲಭ್ಯಗಳು ಇವೆ. ವಿವರ ಇಂತಿವೆ:- * ಸುಸಜ್ಜಿತ ಜಿಮ್ನಾಶಿಯಂ * ಮಕ್ಕಳ ಆಟದ ಪ್ರದೇಶ * ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ಹಾಗೂ ಸಿಸಿಟಿವಿ ಸಹಿತ 24 ಗಂಟೆಗಳ ಭದ್ರತಾ ವ್ಯವಸ್ಥೆ ಇರುತ್ತದೆ. ಈ ಎಲ್ಲಾ ಸೌಲಭ್ಯಗಳು ನಿಮ್ಮ ಕುಟುಂಬದ ಎಲ್ಲಾ ವಯಸ್ಸಿನ ಸದಸ್ಯರಿಗೆ ಸ್ವತಂತ್ರ ಹಾಗೂ ಆರಾಮದಾಯಕ ವಾತಾವರಣ ಒದಗಿಸಲು ಸಿದ್ಧವಾಗಿದೆ. ಇನ್‌ಲ್ಯಾಂಡ್ ಎಲೋರಾದಲ್ಲಿ ಮನೆ ಖರೀದಿದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗ ಕೆಲವೇ ಫ್ಲಾಟ್‌ ಗಳು ಮಾತ್ರ ಲಭ್ಯವಿದ್ದು ವಿವರಗಳಿಗೆ ಇಲ್ಲಿ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಸ್ಥಳಕ್ಕೆ ಭೇಟಿ ನೀಡಿ ಫ್ಲಾಟ್‌ ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇನ್‌ಲ್ಯಾಂಡ್ ಬಿಲ್ಡರ್ಸ್, 3ನೇ ಮಹಡಿ, ಇನ್‌ಲ್ಯಾಂಡ್ ಓರ್ನಟ್, ನವಭಾರತ ಸರ್ಕಲ್, ಮಂಗಳೂರು -575003. ಸಂಪರ್ಕ -9972089099, www.inlandbunilders.net    

ವಾರ್ತಾ ಭಾರತಿ 23 Mar 2026 10:08 pm

West Bengal | ಉವೈಸಿ-ಹುಮಾಯೂನ್ ಕಬೀರ್ ಮೈತ್ರಿಯನ್ನು ಟೀಕಿಸಿದ ಪ್ರತಿಪಕ್ಷಗಳು

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಅಖಿಲ ಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಮ್‌ಐಎಮ್) ಮತ್ತು ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ನಡುವಿನ ಮೈತ್ರಿಯನ್ನು ಪ್ರತಪಕ್ಷ ನಾಯಕರು ಸೋಮವಾರ ಟೀಕಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ, ಇಂಥ ಕ್ರಮಗಳು ಮತಗಳನ್ನು ವಿಭಜಿಸಬಹುದು ಮತ್ತು ‘ಜಾತ್ಯತೀತ ಪಕ್ಷಗಳನ್ನುʼ ದುರ್ಬಲಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗಾಗಿ, ಅಸದುದ್ದೀನ್ ಉವೈಸಿಯವರ ಎಐಎಮ್‌ಐಎಮ್ ಪಕ್ಷವು ಹುಮಾಯೂನ್ ಕಬೀರ್‌ರ ಆಮ್ ಜನತಾ ಉನ್ನಯನ್ ಪಕ್ಷ (ಎಜೆಯುಪಿ)ದೊಂದಿಗೆ ಮೈತ್ರಿ ಮಾಡಿಕೊಂಡಿದೆ. 294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಗೆ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 4ಂದು ಫಲಿತಾಂಶ ಹೊರಬೀಳಲಿದೆ. ಇದು ‘‘ಕೆಟ್ಟ ಬೆಳವಣಿಗೆ’’ ಎಂಬುದಾಗಿ ಬಣ್ಣಿಸಿರುವ ಟಿಎಮ್‌ಸಿ ಸಂಸದ ಸೌಗತ ರಾಯ್, ಇದು ಮುಸ್ಲಿಮ್ ಮತದಾರರನ್ನು ಪ್ರತ್ಯೇಕಿಸಬಹುದು ಎಂದು ಹೇಳಿದ್ದಾರೆ. ‘‘ಉವೈಸಿಯ ಪಕ್ಷವು ಬಿಜೆಪಿಗೆ ಸಹಾಯ ಮಾಡುತ್ತಿದೆ. ಆದರೆ ಅದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅವರಿಗೆ ಇಲ್ಲಿ ಶಕ್ತಿಯಿಲ್ಲ ಹಾಗೂ ಅವರು ಮತಗಳನ್ನು ಪಡೆಯುವುದಿಲ್ಲ’’ ಎಂದು ಸಂಸತ್ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್ ಹೇಳಿದರು. ‘‘ಕೆಲವು ವ್ಯಕ್ತಿಗಳು ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಗುತ್ತಿಗೆಯನ್ನು ಪಡೆದುಕೊಂಡಿದ್ದಾರೆ’’ ಎಂದು ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಆರೋಪಿಸಿದರು.

ವಾರ್ತಾ ಭಾರತಿ 23 Mar 2026 10:08 pm

Kalaburagi | ಭಗತ್ ಸಿಂಗ್ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ

ಕಲಬುರಗಿ : ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನಾಚರಣೆ ಅಂಗವಾಗಿ ಎಐಡಿವೈಓ ವತಿಯಿಂದ ಸೋಮವಾರ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಬಡತನ, ನಿರುದ್ಯೋಗ, ಅಸಮಾನತೆ, ಕೋಮು ಹಾಗೂ ಜಾತಿ ವೈಷಮ್ಯಗಳಿಲ್ಲದ ಭಾರತವೇ ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಈ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಅವುಗಳ ವಿರುದ್ಧ ಹೋರಾಡಲು ಭಗತ್ ಸಿಂಗ್ ಅವರ ವಿಚಾರಧಾರೆ ಅತ್ಯಂತ ಅಗತ್ಯವಾಗಿದೆ. ಯುವಕರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಭಗತ್ ಸಿಂಗ್ ಅವರು ಕೇವಲ 23ನೇ ವಯಸ್ಸಿನಲ್ಲಿ ಅಪಾರ ಜ್ಞಾನ ಸಂಪಾದಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿಕಾರಿಯಾಗಿದ್ದು, ಯುವಕರು ಅವರಂತೆ ಅಧ್ಯಯನ ಮತ್ತು ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ್ ಎಸ್.ಎಚ್ ಮಾತನಾಡಿ, 2004ರಲ್ಲಿ ಪದವೀಧರ ನಿರುದ್ಯೋಗ ಪ್ರಮಾಣ ಶೇ.32ರಷ್ಟು ಇತ್ತಾದರೆ, 2024ರಲ್ಲಿ ಅದು ಶೇ.67ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಯುವಜನರನ್ನು ಕಡೆಗಣಿಸಿದ್ದು, ಲಕ್ಷಾಂತರ ಪದವೀಧರರು ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯ ರಮೇಶ್ ದೇವಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಜಿನ ಮೆರವಣಿಗೆಯು ರೈಲು ನಿಲ್ದಾಣದಿಂದ ಪ್ರಾರಂಭವಾಗಿ ಎಸ್.ವಿ.ಪಿ ವೃತ್ತದಲ್ಲಿ ಸಮಾಪ್ತಿಯಾಯಿತು. ಕಾರ್ಯಕ್ರಮದಲ್ಲಿ ರಘು ಪವಾರ್, ಪುಟ್ಟರಾಜ್, ಲಿಂಗ ಶೆಟ್ಟಿ, ಪ್ರಶಾಂತ್ ಹೊಸಮನಿ, ದೇವರಾಜ್ ಮಿರಲ್ಕರ್, ಶೇಖರ್ ಸಿಂಗ್, ಉಮೇಶ್ ಯಾದವ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕೆ ವಹಿಸಿದ್ದರು.

ವಾರ್ತಾ ಭಾರತಿ 23 Mar 2026 10:07 pm

Kalaburagi | ಮಾ.24, 25 ರಂದು ಅಬಕಾರಿ ಇಲಾಖೆಯಿಂದ ಜಪ್ತಿಯಾದ 20 ವಾಹನಗಳ ಬಹಿರಂಗ ಹರಾಜು

ಕಲಬುರಗಿ : ಜಿಲ್ಲೆಯ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಒಟ್ಟು 20 ವಿವಿಧ ಮಾದರಿಯ ವಾಹನಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ಕಲಬುರಗಿ ಅಬಕಾರಿ ನಿರೀಕ್ಷಕರ ವಲಯ ಕಚೇರಿ ನಂ.1, ವಲಯ ಕಚೇರಿ ನಂ.2 ಹಾಗೂ ಚಿಂಚೋಳಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಗಳಲ್ಲಿ ಇರುವ ಈ ವಾಹನಗಳ ಹರಾಜು ಮಾರ್ಚ್ 24 ಮತ್ತು 25ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಮಾರ್ಚ್ 24ರಂದು ಕಲಬುರಗಿ ವಲಯ ನಂ.1 ಕಚೇರಿಯಲ್ಲಿ 2 ವಾಹನಗಳು ಹರಾಜಿಗೆ ಇಡಲಾಗುತ್ತದೆ. ಮಾರ್ಚ್ 25ರಂದು ವಲಯ ನಂ.2 ಕಚೇರಿಯಲ್ಲಿ 6 ವಾಹನಗಳು ಹಾಗೂ ಚಿಂಚೋಳಿ ಕಚೇರಿಯಲ್ಲಿ 12 ವಾಹನಗಳನ್ನು ಹರಾಜು ಮಾಡಲಾಗುತ್ತದೆ. ಹರಾಜಿನ ಷರತ್ತುಗಳು, ವಾಹನಗಳ ವಿವರಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Mar 2026 10:02 pm

ಎಲ್‌ಪಿಜಿ ಹೊತ್ತ 2 ಭಾರತೀಯ ಹಡಗುಗಳು ಹೋರ್ಮುಝ್ ದಾಟಲು ಸಜ್ಜು

ಹೊಸದಿಲ್ಲಿ: ಭಾರತೀಯ ಧ್ವಜಗಳನ್ನು ಹೊತ್ತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಪರ್ಸಿಯನ್ ಕೊಲ್ಲಿಯಿಂದ ತಮ್ಮ ಯಾನವನ್ನು ಆರಂಭಿಸಿದ್ದು, ಸಂಘರ್ಷಪೀಡಿತ ಹೋರ್ಮುಝ್ ಜಲಸಂಧಿಯನ್ನು ಶೀಘ್ರದಲ್ಲೇ ದಾಟುವ ನಿರೀಕ್ಷೆಯಿದೆ. ‘ಪೈನ್ ಗ್ಯಾಸ್’ ಮತ್ತು ‘ಜಗ್ ವಸಂತ್’ ಎಂಬ ಹೆಸರಿನ ಎಲ್‌ಪಿಜಿ ಟ್ಯಾಂಕರ್‌ಗಳು ಪರಸ್ಪರ ಸಮೀಪದಲ್ಲೇ ಚಲಿಸುತ್ತಿದ್ದು, ಸೋಮವಾರ ಅಪರಾಹ್ನ ಇರಾನ್‌ನ ಲರಕ್ ಮತ್ತು ಕೇಶ್ಮ್ ದ್ವೀಪಗಳ ನಡುವಿನ ಜಲಪ್ರದೇಶದ ಸಮೀಪವಿದ್ದವು. ಹೋರ್ಮುಝ್ ಜಲಸಂಧಿಯನ್ನು ದಾಟುವುದಕ್ಕಾಗಿ ತಮ್ಮ ಗುರುತನ್ನು ಇರಾನ್ ಅಧಿಕಾರಿಗಳಿಗೆ ಸ್ಪಷ್ಟಪಡಿಸುವುದಕ್ಕಾಗಿ ಅವುಗಳು ಅಲ್ಲಿಗೆ ಹೋಗಿರಬೇಕೆಂದು ಭಾವಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಆಕ್ರಮಣ ಆರಂಭಿಸಿದಂದಿನಿಂದ ಪರ್ಸಿಯನ್ ಕೊಲ್ಲಿಯಲ್ಲಿ 22 ಭಾರತೀಯ ಧ್ವಜಗಳನ್ನು ಹೊತ್ತ ಹಡಗುಗಳು ಬಾಕಿಯಾಗಿವೆ. ಈ ಪೈಕಿ ಈ ಎರಡು ಎಲ್‌ಪಿಜಿ ಟ್ಯಾಂಕರ್‌ಗಳೂ ಸೇರಿವೆ. ಈ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಸೋಮವಾರ ಹೋರ್ಮುಝ್ ಜಲಸಂಧಿಯನ್ನು ದಾಟಿ ಭಾರತೀಯ ಬಂದರುಗಳತ್ತ ಸಾಗಬಹುದು ಎನ್ನುವ ಸೂಚನೆಯನ್ನು ಹಡಗು ನಿಗಾ ದತ್ತಾಂಶಗಳು ನೀಡಿವೆ. ಇದಕ್ಕೂ ಮುಂಚೆ, 92,712 ಟನ್ ಅಡುಗೆ ಅನಿಲವನ್ನು ಹೊತ್ತ ಹಡಗುಗಳಾದ ಎಮ್‌ಟಿ ಶಿವಲಿಕ್ ಮತ್ತು ಎಮ್‌ಟಿ ನಂದಾ ದೇವಿ ಟ್ಯಾಂಕರ್‌ಗಳು ಹೋರ್ಮುಝ್ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಭಾರತೀಯ ತೀರವನ್ನು ತಲುಪಿದ್ದವು. ಹೋರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ದಾಟಲು 14 ಗಂಟೆಗಳವರೆಗಿನ ಸಮಯ ಬೇಕಾಗುತ್ತದೆ. ಪರ್ಸಿಯನ್ ಕೊಲ್ಲಿಯಲ್ಲಿರುವ ಅನಿಲ ಉತ್ಪಾದಕರನ್ನು ಬಾಹ್ಯ ಜಗತ್ತಿಗೆ ಸಂಪರ್ಕಿಸುವ ಹೋರ್ಮುಝ್ ಜಲಸಂಧಿಯು, ಫೆಬ್ರವರಿ ಅಂತ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿದಂದಿನಿಂದ ಬಹುತೇಕ ಮುಚ್ಚಿದೆ.

ವಾರ್ತಾ ಭಾರತಿ 23 Mar 2026 10:00 pm

ಮಂಗಳೂರು| ಮಾದಕ ವಸ್ತು ಮಾರಾಟಕ್ಕೆ ಯತ್ನ ಪ್ರಕರಣ: ಮೂವರ ಬಂಧನ

ಮಂಗಳೂರು, ಮಾ.23: ಮಂಗಳೂರು ನಗರದ ಎಕ್ಕೂರು ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸೈ ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಒಟ್ಟು 26.06 ಗ್ರಾಂ ತೂಕದ ಮಾದಕ ವಸ್ತು ವಶಪಡಿಸಕೊಳ್ಳಲಾಗಿದ್ದು, ಇದರ ಮೌಲ್ಯ ಒಟ್ಟು ಸುಮಾರು 2,50,000 ರೂ ಹಾಗೂ ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 4,37,500 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಎಕ್ಕೂರು ಫಿಶರಿಸ್ ಕಾಲೇಜ್ ಎದುರು ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಬದಿಯಲ್ಲಿ ನಿಟ್ಟೆ ಗೆಸ್ಟ್ ಹೌಸ್ ಬಳಿ ಆಟೋ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳಾದ ಹೈದರ್ ಯಾನೆ ಹೈದರ್ ಆಲಿ, ಸಜಾದ್ , ಜೈಸನ್ ಮೆನೆಜಸ್ ಓಡಿ ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದರು. ಆರೋಪಿಗಳನ್ನು ಪೊಲೀಸರು ಹಿಡಿದು ತಪಾಸಣೆ ನಡೆಸಿದಾಗ ಆರೋಪಿ ಹೈದರ್ ಆಲಿಯು ರಿಕ್ಷಾದ ಹ್ಯಾಂಡಲ್‌ನ ಬ್ಯಾಗ್ ನಲ್ಲಿಟ್ಟಿದ್ದ 15.40 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ತೂಕ ಮಾಪನ, ಮೊಬೈಲ್ ಫೋನ್-1 ಮತ್ತು ನಗದು ಹಣ 30,000 ರೂ. ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಾರ್ತಾ ಭಾರತಿ 23 Mar 2026 9:59 pm

Kalaburagi | ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮ ದಿನ ಆಚರಣೆ

ಕಲಬುರಗಿ: ದೇಶದ ಮಹಾನ್ ಕ್ರಾಂತಿಕಾರರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಹುತಾತ್ಮ ದಿನವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಹಾಗೂ ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಈ ಮೂವರು ಯುವ ಕ್ರಾಂತಿಕಾರರ ತ್ಯಾಗವನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಮೀನಾ ಮಾತನಾಡಿ, ಬ್ರಿಟಿಷರ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಯುವಜನರಲ್ಲಿ ದೇಶಭಕ್ತಿ ಮೂಡಿಸಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಸದಾ ಸ್ಫೂರ್ತಿದಾಯಕವಾಗಿದೆ ಎಂದರು. ಕೇವಲ 23ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇವರ ಜೀವನ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ಯುವಕರು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗದೆ, ಇತಿಹಾಸದ ಮಹನೀಯರ ವಿಚಾರಗಳನ್ನು ಅರಿತು ತಮ್ಮ ಶಕ್ತಿ ಹಾಗೂ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಕರೆ ನೀಡಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ ಅವರು ಮಾತನಾಡಿ, ಇಂದಿನ ಯುವಜನತೆ ತಂತ್ರಜ್ಞಾನ ಮತ್ತು ಶಿಕ್ಷಣದೊಂದಿಗೆ ಬೆಳೆದಿದ್ದರೂ ನಿರುದ್ಯೋಗ, ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯದಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಈ ಕ್ರಾಂತಿಕಾರರ ಆದರ್ಶಗಳು ಇನ್ನಷ್ಟು ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಹೋದರತ್ವ ಸ್ಥಾಪನೆಗಾಗಿ ಯುವಜನತೆ ಹೋರಾಡಬೇಕು. ನವಸಾಮ್ರಾಜ್ಯಶಾಹಿಯ ವಿರುದ್ಧ ಐಕ್ಯತೆಯಿಂದ ಮುಂದುವರಿಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಭಾಗೀರತಿ ಮಾತನಾಡಿ, ಭಗತ್ ಸಿಂಗ್ ಯುವಕರಲ್ಲಿ ಚಿಂತನೆ, ಧೈರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿದಂತೆ, ಇಂದಿನ ಯುವಜನತೆ ಶಿಕ್ಷಣ, ವಿಜ್ಞಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ಅನ್ಯಾಯ ಎಲ್ಲೇ ನಡೆದರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೋಧನಾ ಸಿಬ್ಬಂದಿಗಳಾದ ವನಜಾಕ್ಷಿ ಪಾಟೀಲ್, ಮಹಾದೇವಿ ಕಲ್ಲಾ ಹಾಗೂ ಭವಾನಿ ಬಡದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Mar 2026 9:57 pm

ಉಡುಪಿಗೆ ಪ್ರತ್ಯೇಕ ಕಂದಾಯ ಉಪವಿಭಾಗಕ್ಕೆ ಐವನ್ ಡಿಸೋಜ ಒತ್ತಾಯ

ಉಡುಪಿ, ಮಾ.23: ಉಡುಪಿಗೆ ತುರ್ತಾಗಿ ಪ್ರತ್ಯೇಕ ಉಡುಪಿ ಕಂದಾಯ ಉಪವಿಭಾಗ (ಎಸಿ) ಕಚೇರಿಯನ್ನು ಮಂಜೂರುಗೊಳಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಇಂದು ರಾಜ್ಯ ವಿಧಾನಪರಿಷತ್‌ನಲ್ಲಿ ಸರಕಾರದ ಗಮನ ಸೆಳೆದರು. ಉಡುಪಿಗೆ ತುರ್ತಾಗಿ ಪ್ರತ್ಯೇಕ ಉಡುಪಿ ಕಂದಾಯ ಉಪವಿಭಾಗ ಕಛೇರಿ ಜನತೆಯ ಬಹುದಿನಗಳ ಬೇಡಿಕೆ. ಈ ಬಗ್ಗೆ ಇಂದು ಐವನ್ ಡಿ’ಸೋಜಾ ಶೂನ್ಯ ವೇಳೆಯಲ್ಲಿ ಸದನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಸರಕಾರದ ಗಮನಸೆಳೆದರು. ವಿಷಯ ಮಂಡಿಸಿ ಮಾತನಾಡಿದ ಅವರು, 1862ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ನಂತರ 1927ರಲ್ಲಿ ಆಡಳಿತಾತ್ಮಕ ಸೌಲಭ್ಯಕ್ಕಾಗಿ ಪುತ್ತೂರು, ಮಂಗಳೂರು ಮತ್ತು ಕುಂದಾಪುರ ಉಪವಿಭಾಗ ಗಳನ್ನು ರಚಿಸಲಾಯಿತು. ಆ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಕ್ಕೆ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳನ್ನು ಸೇರಿಸಲಾಗಿತ್ತು. 1997ರ ಜುಲೈ 25ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕವಾಗಿ ಉಡುಪಿ ಜಿಲ್ಲೆ ರಚನೆಯಾದ ನಂತರ, ಜಿಲ್ಲೆಯ ಕೇಂದ್ರಭಾಗದಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಕಚೇರಿ ಅಗತ್ಯತೆ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ ಜಿಲ್ಲಾಡಳಿತವು ಹೊಸ ಉಪವಿಭಾಗ ರಚನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ, ಕುಂದಾಪುರ ಉಪವಿಭಾಗದ ವ್ಯಾಪ್ತಿಗೆ ಜಿಲ್ಲೆಯ ಏಳು ತಾಲೂಕುಗಳ ಅರ್ಜಿಗಳು ಸೇರಿರುವುದರಿಂದ, ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಪಹಣಿ ತಿದ್ದುಪಡಿ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಿಗೆ ಜನರು ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗು ತ್ತಿದೆ ಎಂಬ ಅಸಮಾಧಾನ ಜನರಿಂದ ವ್ಯಕ್ತವಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉಡುಪಿಯಲ್ಲಿ ಪ್ರತ್ಯೇಕ ಕಂದಾಯ ಉಪವಿಭಾಗ ಪ್ರಾರಂಭಿ ಸುವುದು ಅನಿವಾರ್ಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, 2024ರ ಜುಲೈ 19ರಂದು ಜಿಲ್ಲಾಡಳಿತ ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದ್ದರಿಂದ ಕಂದಾಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪವಿಭಾಗ ಕಚೇರಿ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಐವನ್ ಡಿಸೋಜ ಮನವಿ ಮಾಡಿದರು.

ವಾರ್ತಾ ಭಾರತಿ 23 Mar 2026 9:55 pm

ಕರಾವಳಿಗೆ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಶಾಸಕ ಸುನಿಲ್‌ ಕುಮಾರ್: ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ

ಉಡುಪಿ: ಎರಡು ದಶಕಗಳ ಹಿಂದೆ ಕರಾವಳಿಗೆ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಕಾರ್ಕಳದ ಶಾಸಕರಾದ ಸುನಿಲ್‌ ಕುಮಾರ್. ಶಾಸಕರ ಹಾಗೂ ಅವರ ಪಟಾಲಂನ ಕಮಿಷನ್ ಉಪಟಳದಿಂದ ಜವುಳಿ ಪಾರ್ಕ್ ಕ್ಷೇತ್ರದಲ್ಲಿ ಇನ್ನೂ ತಲೆ ಎತ್ತಿಲ್ಲ ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಂಡ್ಕೂರಿನ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಹಲ್ಲೆ ಹಾಗೂ ಕಾರ್ಕಳಕ್ಕೆ ನೀರುಣಿಸುವ ಮುಂಡ್ಲಿ ಅಣೆಕಟ್ಟಿ ಮೂರು ಗೇಟ್‌ಗಳ ಕಳವು ಪ್ರಕರಣ ಇವರ ಪಟಾಲಂನ ದುಷ್ಕೃತ್ಯಗಳಿಗೆ ಸಾಕ್ಷಿಯಾಗಿವೆ ಎಂದವರು ದೂರಿದರು. ಮುಂಡ್ಕೂರು ಧಾರ್ಮಿಕ ಕ್ಷೇತ್ರದ ದುರ್ಘಟನೆ ಶಾಸಕನ ಬೆಂಬಲಿಗ ರಿಂದ ನಡೆದರೆ, ಮುಂಡ್ಲಿ ಅಣೆಕಟ್ಟಿನ ಮೂರು ಗೇಟ್‌ಗಳನ್ನು ಅವರ ಬೆಂಬಲಿಗ ಕೆಲಸಗಾರರೇ ಕದ್ದಿದ್ದಾರೆ. ಅಜೆಕಾರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾ ದರೂ ಎಲ್ಲೂ ಬಹಿರಂಗಗೊಳ್ಳದಂತೆ ಅವರು ನೋಡಿಕೊಂಡಿದ್ದಾರೆ ಎಂದು ಮುನಿಯಾಲು ಆರೋಪಿಸಿದರು. ಈ ಬಗ್ಗೆ ಕೂಡಲೇ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಜಿಪಂ, ತಾಪಂ ಸೇರಿದಂತೆ ವಿವಿಧ ಚುನಾವಣೆಗಳು ಶೀಘ್ರವೇ ನಡೆಯಲಿರುವುದರಿಂದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸುವ ಕೆಲಸವನ್ನು ಶಾಸಕರ ಬೆಂಬಲಿಗರು ನಡೆಸುತಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಅಪಪ್ರಚಾರ ಕಾರ್ಕಳ ಕ್ಷೇತ್ರದಲ್ಲಿ ಶಾಸಕರಿಂದ ನಡೆಯುತ್ತಿದೆ ಎಂದರು. ಐದು ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು 425 ಕೋಟಿ ರೂ. ತಾಲೂಕಿನ ಮನೆಮಗಳಿಗೆ ತಲುಪಿವೆ ಎಂದು ಹೇಳಿದ ಉದಯ ಶೆಟ್ಟಿ, ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ 60 ಕೋಟಿ ರೂ.ಸೇರಿದಂತೆ ಒಟ್ಟು 110 ಕೋಟಿ ರೂ.ಗಳ ಅನುದಾನ ಬಂದಿವೆ. ಆದರೆ ಶಾಸಕರು ಮಾತ್ರ ಯಾವುದೇ ಅನುದಾನ ಬಂದಿಲ್ಲ ಎಂದು ಹೇಳಿ ಅಪಪ್ರಚಾರ ಮಾಡುತಿದ್ದಾರೆ ಎಂದು ಹೇಳಿದರು. ಕುಕ್ಕಂದೂರು ಗ್ರಾಮದ ಪರಪು ಸೇತುವೆ, ರೆಂಜಾಳ ಗ್ರಾಪಂನ ಬಳಿಯ ಸೇತುವೆ, ಬೋಳಗ್ರಾಮದ ರುದ್ರ ಸೋಮನಾಥೇಶ್ವರ ದೇವಸ್ಥಾನ ಬಳಿಯ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ತಲಾ 1.5 ಕೋಟಿ ರೂ. ಬಿಡುಗಡೆ ಯಾಗಿದೆ. ಅಲ್ಲದೇ ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಹಲವು ಗ್ರಾಮಗಳ ಒಟ್ಟು 29 ಕಾಮಗಾರಿಗಳಿಗೆ ರಾಜ್ಯ ಸರಕಾರ ಮುಖ್ಯಮಂತ್ರಿಗಳ ಮೂಲಕ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಮುನಿಯಾಲು ತಿಳಿಸಿದರು. ಸುನಿಲ್ ಕುಮಾರ್ ಅವರು, ಧರ್ಮ ಹಾಗು ದೇವರ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ ಹೊರತು ಅಭಿವೃದ್ದಿ ಮಾಡುತ್ತಿಲ್ಲ. ಕೇವಲ ರಾಜ್ಯಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರ ಬೆಂಬಲಿಗನೇ ಮುಂಡ್ಲಿ ಅಣೆಕಟ್ಟಿನ ಗೇಟ್ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮುಂಡ್ಲಿ ಅಣೆಕಟ್ಟಿನ ಗೇಟ್ ಹಾಗೂ ಉಪಕರಣ ಕಳ್ಳತನವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಪರಶುರಾಮ ಥೀಮ್ ಪಾರ್ಕ್‌ನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿಯಾಲು ಉದಯ ಶೆಟ್ಟಿ, ಈ ಕುರಿತು ನಾವು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ನಾಳೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ನಾಳೆಯಾದರೂ ಕೋರ್ಟ್‌ನಿಂದ ಸೂಕ್ತ ನಿರ್ದೇಶನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಈ ನಡುವೆ ಬೈಲೂರಿನ ಬೆಟ್ಟದ ಮೇಲೆ ನಿಂತಿರುವ ಪರಶುರಾಮದ ಮೂರ್ತಿಯನ್ನು ತೆಗೆಯಲು ಪ್ರಯತ್ನ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು. ಮುಂದಿನ ವರ್ಷ ನಡೆಯುವ ಕಾರ್ಕಳ ಗೋಮ್ಮಟನ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಎಂ.ಎನ್.ರಾಜೇಂದ್ರಕುಮಾರ್ ಪ್ರಯತ್ನದಿಂದ ರಾಜ್ಯ ಸರಕಾರ 75 ಕೋಟಿ ರೂ.ಬರುವ ನಿರೀಕ್ಷೆ ಇದೆ. ಇದಕ್ಕೆ ಅಡ್ಡಗಾಲು ಹಾಕದಂತೆ ಸುನಿಲ್‌ಗೆ ಆ ದೇವರೇ ಸದ್ಭುದ್ಧಿ ನೀಡಬೇಕು ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಬಾಸ್ಕರ್, ಹೆಬ್ರಿ ಬ್ಲಾಕ್‌ನ ಪ್ರಸನ್ನ ಶೆಟ್ಟಿ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Mar 2026 9:53 pm