SENSEX
NIFTY
GOLD
USD/INR

Weather

30    C
...

ಮತ್ತೆ ಏರಿದ ಚಿನ್ನದ ದರ; ಇಂದಿನ ದರವೆಷ್ಟು?

ಭೌಗೋಳಿಕ- ರಾಜಕೀಯ ಉದ್ವಿಗ್ನತೆ ಹೆಚ್ಚಾಗುವ ಸೂಚನೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಕಾಣುತ್ತಿದೆ. ಚಿನ್ನದ ಇತ್ತೀಚೆಗಿನ ಏರಿಳಿತಕ್ಕೆ ಅಮೆರಿಕನ್ ಡಾಲರ್ ಏರಿಳಿತವೂ ಮುಖ್ಯ ಕಾರಣವಾಗಿದೆ. ಡಾಲರ್ ಬೆಲೆ ದುಬಾರಿಯಾದಾಗ ಚಿನ್ನದ ಖರೀದಿಯೂ ದುಬಾರಿಯಾಗಿಬಿಡುತ್ತದೆ. ಹೀಗಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದಿಂದ ದೂರ ಸರಿಯುತ್ತಾರೆ. ಆದರೆ ಇತ್ತೀಚೆಗೆ ಏರಿರುವ ಭೌಗೋಳಿಕ- ರಾಜಕೀಯ ಉದ್ವಿಗ್ನತೆ ಹೂಡಿಕೆದಾರರನ್ನು ಮತ್ತೆ ಸುರಕ್ಷಿತ ಹೂಡಿಕೆಯಾದ ಚಿನ್ನದ ಕಡೆಗೆ ಹೊರಳುವಂತೆ ಮಾಡುತ್ತಿದೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 03ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 196 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,50,930 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 180 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,38,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 147 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,13,200 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 03ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,093 (+196) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,835 (+180) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,320 (+147) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಚಂಚಲತೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಿಂದ ಪ್ರತಿ ಕೆಜಿಗೆ 2,45,000- 2,50,000 ರೂ. ನಡುವೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,50,000 ರೂ. ಗೆ ಬಂದಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,55,000 ರೂ. ಗೆ ಬಂದು ತಲುಪಿತ್ತು. ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದೆ. ಇದೀಗ ಶುಕ್ರವಾರ ಅದೇ ಬೆಲೆಯಲ್ಲಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,108 (+196) ರೂ., 22 ಕ್ಯಾರೆಟ್ ಚಿನ್ನದ ದರ 13,850 (+180) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,093 (+196) ರೂ., 22 ಕ್ಯಾರೆಟ್ ಚಿನ್ನದ ದರ 13,835 (+180) ರೂ.. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,098 (+196) ರೂ., 22 ಕ್ಯಾರೆಟ್ ಚಿನ್ನದ ದರ 13,840 (+180) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,109 (+109) ರೂ., 22 ಕ್ಯಾರೆಟ್ ಚಿನ್ನದ ದರ 13,850 (+100) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,093 (+196) ರೂ., 22 ಕ್ಯಾರೆಟ್ ಚಿನ್ನದ ದರ 13,835 (+180) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,093 (+196) ರೂ., 22 ಕ್ಯಾರೆಟ್ ಚಿನ್ನದ ದರ 13,835 (+180) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,108 (+196) ರೂ., 22 ಕ್ಯಾರೆಟ್ ಚಿನ್ನದ ದರ 13,850 (+180) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,108 (+196) ರೂ., 22 ಕ್ಯಾರೆಟ್ ಚಿನ್ನದ ದರ 13,850 (+180) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,108 (+196) ರೂ., 22 ಕ್ಯಾರೆಟ್ ಚಿನ್ನದ ದರ 13,850 (+180) ರೂ.

ವಾರ್ತಾ ಭಾರತಿ 3 Apr 2026 12:24 pm

‘ತಾಯ್ತನ ಎಂಬುದು ವೃತ್ತಿಜೀವನದ ಪೂರ್ಣವಿರಾಮವಲ್ಲ’: ಹೆರಿಗೆಯ ನಂತರ ಡಿಜಿಟಲ್ ಉದ್ಯಮದಲ್ಲಿ ಮಿಂಚಿದ ಪ್ರಿಯಾ ಪೋರ್ವಾಲ್

ಇಂದಿನ ದಿನಗಳಲ್ಲಿ ಮಹಿಳೆಯರ ವೃತ್ತಿಜೀವನದಲ್ಲಿ ಈ ಹೆರಿಗೆ ಮತ್ತು ಉದ್ಯೋಗ ಕಡಿತ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಆದರೆ ಇಲ್ಲೊಬ್ಬರು ಮಹಿಳೆ ಸತತ ಎರಡು ಬಾರಿ ಕೆಲಸ ಕಳೆದುಕೊಂಡು, ತಾಯ್ತನಕ್ಕಾಗಿ ವೃತ್ತಿಜೀವನಕ್ಕೆ ವಿರಾಮ ನೀಡಿದರೂ ಕೂಡ ಛಲ ಬಿಡದೆ ಇದೀಗ ಡಿಜಿಟಲ್ ಉದ್ಯಮದಲ್ಲಿ ಅಪಾರ ಯಶಸ್ಸು ಸಾಧಿಸಿದ್ದಾರೆ. 39 ವರ್ಷದ ಡಾ. ಪ್ರಿಯಾ ಪೋರ್ವಾಲ್ ಅವರು ತಮ್ಮ ಜೀವನವನ್ನು

ಒನ್ ಇ೦ಡಿಯ 3 Apr 2026 12:15 pm

Summer Gardening: ಸುಡು ಬಿಸಿಲಲ್ಲೂ ನಿಮ್ಮ ಕೈತೋಟದ ಹಸಿರಾಗಿರಲಿ: ಗಿಡಗಳ ರಕ್ಷಣೆಗೆ ಇಲ್ಲಿವೆ ಸರಳ ಸೂತ್ರಗಳು

ಬೆಂಗಳೂರು: ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ಬೇಸಿಗೆಯ ಕಾಲವು ಅತ್ಯಂತ ಕಠಿಣವಾಗಿರುತ್ತದೆ. ಸುಡುವ ಬಿಸಿಲು ಕೇವಲ ಮನುಷ್ಯರಿಗಷ್ಟೇ ಅಲ್ಲ, ನಾವು ಪ್ರೀತಿಯಿಂದ ಬೆಳೆಸಿದ ಗಿಡಗಳಿಗೂ ಹಾನಿಕಾರಕ. ತೀವ್ರವಾದ ಬಿಸಿಲಿನ ಶಾಖದ ಅಲೆಗಳು (Heatwaves) ಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಅವು ಒಣಗಿ ಹೋಗುವಂತೆ ಮಾಡುತ್ತವೆ. ಆದರೆ, ಸರಿಯಾದ ಸಿದ್ಧತೆ ಮತ್ತು ನಿರ್ವಹಣೆಯಿಂದ ನಿಮ್ಮ ಅಡುಗೆ ತೋಟವನ್ನು ಈ ಬಿಸಿಲಿನಿಂದ ರಕ್ಷಿಸಿ,

ಒನ್ ಇ೦ಡಿಯ 3 Apr 2026 12:00 pm

ಮಂಗಳೂರು: ಕ್ರೈಸ್ತರಿಂದ 'ಗುಡ್ ಫ್ರೈಡೇ' ಆಚರಣೆ

ಮಂಗಳೂರು: ಗುಡ್ ಫ್ರೈಡೇ ಪ್ರಯುಕ್ತ ಕ್ರೈಸ್ತರು ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ (ಗುಡ್ ಫ್ರೈಡೇ) ಆಚರಿಸುತ್ತಿದ್ದಾರೆ. ಇಂದು ಮಂಗಳೂರು ನಗರದ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತಿದೆ. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ಆರಂಭಗೊಂಡಿವೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿದೆ. ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ  ಇಂದು ಬೆಳಗ್ಗೆ ನಡೆದ ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ನೂರಾರು ಕ್ರೈಸ್ತರು ಭಾಗವಹಿಸಿದ್ದರು. ಚರ್ಚಿನ ಧರ್ಮಗುರು ಫಾ.ಬೊನಾವೆಂಚರ್ ನಝರೆತ್, ಸಹಾಯಕ ಧರ್ಮಗುರು ಅವಿತ್ ಪಾಯ್ಸ್ ನೇತೃತ್ವ ವಹಿಸಿದ್ದರು.              

ವಾರ್ತಾ ಭಾರತಿ 3 Apr 2026 11:56 am

ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದ 'ಮೂಡುಬಿದಿರೆ ಕಮ್ಯುನಿಟಿ ಸೆಂಟರ್' ಉದ್ಘಾಟನೆ

ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದ (ಎನ್.ಎನ್.ಒ.)ದ ವತಿಯಿಂದ ಮೂಡುಬಿದಿರೆ ತಾಲೂಕಿನಲ್ಲಿ ಸ್ಥಾಪಿಸಲಾದ 'ಎನ್.ಎನ್.ಒ. ಮೂಡುಬಿದಿರೆ ಕಮ್ಯುನಿಟಿ ಸೆಂಟರ್' ಗುರುವಾರ ಉದ್ಘಾಟನೆಗೊಂಡಿತು. ಕಮ್ಯುನಿಟಿ ಸೆಂಟರ್' ಅನ್ನು ಎನ್.ಎನ್.ಒ. ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಿಝ್ವಾನ್ ಅಹ್ಮದ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಮ್ಯುನಿಟಿ ಕೇಂದ್ರಗಳು ಶಿಕ್ಷಣ, ಉದ್ಯೋಗ ಮತ್ತು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವೇದಿಕೆಯಾಗಲಿದೆ ಎಂದು ಹೇಳಿದರು. ಬದ್ರಿಯಾ ಜುಮಾ ಮಸೀದಿಯ ಧರ್ಮಗುರು ದುಆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್.ಎನ್.ಒ. ಟ್ರಸ್ಟಿಗಳಾದ ಸಾಕಿಬ್ ರಝಾ ಖಾನ್, ಮುಹಮ್ಮದ್ ಹುಸೈನ್ (ಕಾರ್ಕಳ), ಅಬ್ದುಲ್ ಹಮೀದ್, ಹಾಗೂ ಮುಹಮ್ಮದ್ ಇಸಾಕ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾಸ್ಟರ್ ಸಂಘಟನೆಯ ಕಾರ್ಯಪದ್ಧತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಎನ್.ಎನ್.ಒ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ಸಮುದಾಯ ಕೇಂದ್ರದ ಉದ್ದೇಶಗಳನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು. ಎನ್.ಎನ್.ಒ. ತಾಲೂಕು ಘಟಕದ ಕಾರ್ಯದರ್ಶಿ ಅಬ್ದುಲ್ ರಝಾಕ್, ಖಜಾಂಚಿ ಎಲ್.ಆರ್.ರಿಝ್ವಾನ್ ಅಹ್ಮದ್, ಕಾರ್ಯಕಾರಿ ಸಮಿತಿಯ ಸದಸ್ಯರು, ಜಿಸಿಸಿ ಘಟಕದ ಪ್ರತಿನಿಧಿ ಮುಬೀನ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 3 Apr 2026 11:41 am

US ಸೈನಿಕರನ್ನೇ ಶಿಲಾಯುಗಕ್ಕೆ ಕಳಿಸ್ತೀವಿ -ಟ್ರಂಪ್‌ ಹೇಳಿಕೆಗೆ ಇರಾನ್ ತಿರುಗೇಟು: ಅಮೆರಿಕಾಕ್ಕೆ ಶಾಶ್ವತ ಅವಮಾನ ಆಗೋವರೆಗೂ ಯುದ್ಧ ನಿಲ್ಲಲ್ಲ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಅಮೆರಿಕಾ ಹಾಗೂ ಇರಾನ್‌ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಕ್ಷಿಪಣಿ ದಾಳಿಯಷ್ಟೇ ಬಿರುಸಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲೆ ಭೀಕರ ದಾಳಿ ನಡೆಸಿ ಅವರನ್ನು ಶಿಲಾಯುಗಕ್ಕೆ ಮರಳುವಂತೆ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇರಾನ್‌ ಇತಿಹಾಸ ನಮ್ಮನ್ನು ಚೆನ್ನಾಗಿ ಅರಿತಿದ್ದು, ಶಿಲಾಯುಗಕ್ಕೆ ಮರಳುವುದು ನಾವಲ್ಲ, ಅಮೆರಿಕಾದ ಸೈನಿಕರು ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಅಮೆರಿಕಾ ಶಾಶ್ವತವಾದ ಅವಮಾನವನ್ನು ಅನುಭವಿಸುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 3 Apr 2026 11:39 am

ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ

ಹಾಸನ: ಮದುವೆ ಎಂದರೆ ಎರಡು ಜೀವಗಳ, ಎರಡು ಕುಟುಂಬಗಳ ಹೊಸ ಸಂಬಂಧದ ಆರಂಭ. ಆದರೆ ಇಲ್ಲೊಂದು ಕಡೆ ಮದುವೆ ಮಂಟಪದಲ್ಲಿ, ಇನ್ನೇನು ಮಾಂಗಲ್ಯ ಧಾರಣೆಗೆ ಕೆಲವೇ ನಿಮಿಷಗಳಿರುವಾಗ ವಧು ದಿಢೀರ್ ಎಂದು ಮದುವೆಯನ್ನು ನಿಲ್ಲಿಸಿದ ಘಟನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನಡೆದಿದೆ. ವಧು ಪಲ್ಲವಿ ತಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳುವ

ಒನ್ ಇ೦ಡಿಯ 3 Apr 2026 11:37 am

ವಿಮಾನಗಳಲ್ಲಿ 60% ಸೀಟು ಉಚಿತ ಆಯ್ಕೆ ನಿಯಮಕ್ಕೆ ತಾತ್ಕಾಲಿಕ ತಡೆ

ಆದೇಶಿಸಿದ ಮೂರೇ ವಾರಗಳಲ್ಲಿ ವಾಪಸ್ ಪಡೆದ ಕೇಂದ್ರ ಸರಕಾರ

ವಾರ್ತಾ ಭಾರತಿ 3 Apr 2026 11:30 am

ಬೀದರ್ | ಪೊಲೀಸರಿಂದ ಕಿರುಕುಳ ಆರೋಪ: ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ

ಎಸ್‌ಪಿ ಸಹಿತ ಪೊಲೀಸ್ ಅಧಿಕಾರಿಗಳ ಹೆಸರು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಾಕಿರುವ ಯೂಟ್ಯೂಬರ್

ವಾರ್ತಾ ಭಾರತಿ 3 Apr 2026 11:22 am

ಚರ್ಚೆಗೆ ಗ್ರಾಸವಾಗುತ್ತಿದೆ ರೆಬೆಲ್ ನಾಯಕನ ನಡೆ: ಯತ್ನಾಳ್‌ಗೆ ಬಿಜೆಪಿ ಅನಿವಾರ್ಯವೋ, ಬಿಜೆಪಿಗೆ ಯತ್ನಾಳ್ ಅಗತ್ಯವೋ?

ಬಿಜೆಪಿಯಲ್ಲಿ ರೆಬೆಲ್ ಆಗಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ್ದಾರೆ. ಯತ್ನಾಳ್ ಪ್ರಚಾರ ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ನಡುವೆ ಯತ್ನಾಳ್ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಾರಾ? ಎಂಬ ಕುತೂಹಲವೂ ಕೆರಳಿಸಿದೆ.ಅಷ್ಟಕ್ಕೂ ಯತ್ನಾಳ್ ಅಗತ್ಯತೆ ಬಿಜೆಪಿಗೆ ಎಷ್ಟರ ಮಟ್ಟಿಗೆ ಇದೆ? ಜೊತೆಗೆ ಯತ್ನಾಳ್ ಅವರಿಗೆ ಬಿಜೆಪಿಯ ಅಗತ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬುವುದು ಮುಖ್ಯವಾಗುತ್ತದೆ.

ವಿಜಯ ಕರ್ನಾಟಕ 3 Apr 2026 11:09 am

ಶಿಕ್ಷಣದ ಹಾದಿಯಲ್ಲಿ ಎಡವಿ ಬೀಳುವ ಹದಿಹರೆಯದ ವಿದ್ಯಾರ್ಥಿಗಳು

ಇಂದು ಕೆಲವು ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಸೆಣಸಾಟ ನಡೆಸುವುದು, ಅವರನ್ನೇ ಕೊಲೆ ಮಾಡುವುದು, ಶಿಕ್ಷಕರ ಮೇಲೆ ಹಲ್ಲೆ ಮಾಡುವುದು, ಹೆತ್ತವರ ಮೇಲೆ ಕೈ ಎತ್ತುವುದು ಇವೇ ಮುಂತಾದ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಹಾಗೆಯೇ ಎಷ್ಟೋ ಗುಂಪು ಘರ್ಷಣೆಗಳು, ಕೋಮು ಗಲಭೆಗಳು, ಅಪರಾಧ ಕೃತ್ಯಗಳಲ್ಲಿ ಹದಿ ಹರೆಯದ ಈ ಹುಡುಗರು ಒಳಗೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇದಲ್ಲದೆ ರೇಪ್, ಲೈಂಗಿಕ ದೌರ್ಜನ್ಯಗಳಲ್ಲಿಯೂ ಇಂತಹ ಹದಿ ಹರೆಯದ ಹುಡುಗರು ಕಂಡು ಬರುತ್ತಿದ್ದಾರೆ. ಇವರನ್ನು ಕಾನೂನಿನ ಸಂಘರ್ಷಕ್ಕೆ ಒಳಗಾದವರು ಎಂದು ಗುರುತಿಸಲಾಗುತ್ತಿದೆ. ಶಿಕ್ಷಣದ ವ್ಯವಸ್ಥೆಯೊಳಗಡೆ ವಿವೇಕ ಪಕ್ವಗೊಳ್ಳುತ್ತಿರುವ ಹಂತದಲ್ಲಿ ಯಾಕೆ ಈ ಬಗೆಯ ದುರ್ನಡತೆಗಳು? ಹಾಗಂತ ಈ ಆಕ್ರಮಣಕಾರಿ ಪ್ರವೃತ್ತಿ ಪರರ ವಿರುದ್ಧ ಮಾತ್ರ ಸೀಮಿತವಾಗಿಲ್ಲ. ವಿದ್ಯಾಭ್ಯಾಸದ ಹಂತದಲ್ಲಿರುವ ಈ ಹದಿ ಹರೆಯದವರು ಸ್ವತಃ ತಮ್ಮನ್ನು ತಾವು ಹಿಂಸಿಸಿ ಕೊಳ್ಳಲು ಹೇಸಲಾರರು ಎಂಬುದೂ ಕೂಡ ವಾಸ್ತವವೇ. ಇಲ್ಲಿ ಹುಡುಗರ ಜೊತೆ ಹುಡುಗಿಯರೂ ಒಳಗೊಳ್ಳುವುದು ವಿಶೇಷ. ಮನೆಯಲ್ಲಿ ಗದರಿದರೆಂದೋ, ಮೊಬೈಲ್ ಕೊಡಿಸಿಲ್ಲವೆಂದೋ, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲವಾದರೆಂದೋ ಅನೇಕ ಮಂದಿ ಆತ್ಮಹತ್ಯೆಗೆ ಶರಣಾಗುವುದಿದೆ. ಇದು ಹೆತ್ತವರ ಪಾಲಿಗೆ ಬದುಕಿನುದ್ದಕ್ಕೂ ಕಾಡುವಂತಹ ನೋವು. ಇನ್ನು ಬದುಕಿನಲ್ಲಿ ಒಂದು ನೆಲೆ ಕಂಡು ಕೊಳ್ಳುವ ಮೊದಲೇ ಈ ವಿದ್ಯಾರ್ಥಿಗಳು ಪ್ರೀತಿ, ಪ್ರೇಮ, ಪ್ರಣಯವೆಂದು ಶಿಕ್ಷಣವನ್ನು ಕಡೆಗಣಿಸಿ ಹೆತ್ತವರನ್ನು ಗೋಳು ಹೊಯ್ದುಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಇಲ್ಲಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಹೆತ್ತವರ ಬದುಕು ನರಕವಾಗಿ ಬಿಡುತ್ತದೆ. ವಿದ್ಯಾರ್ಥಿಗಳ ಇಂತಹ ದುಡುಕಿನ ನಿರ್ಧಾರಗಳು ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಪರ್ಯವಸಾನ ಗೊಳ್ಳುವುದಿದೆ. ಎಳೆಯ ವಯಸ್ಸಲ್ಲೇ ಯಾಕಾಗಿ ಈ ರೀತಿಯ ಅತಿರೇಕದ ನಡವಳಿಕೆ ಕಂಡು ಬರುತ್ತದೆ? ಸಂಸ್ಕಾರ, ಶಿಕ್ಷಣದ ಹಾದಿಗೆ ಹೊರತಾದ ಮಕ್ಕಳಲ್ಲಿ ಈ ತೆರನಾದ ವರ್ತನೆ, ನಡವಳಿಕೆಗಳು ಕಂಡು ಬಂದಿದ್ದರೆ ಅದು ಹೆಚ್ಚು ತಲೆ ಕೆಡಿಸಿ ಕೊಳ್ಳಬೇಕಾದ ವಿಷಯವಾಗುತ್ತಿರಲಿಲ್ಲ ಎನ್ನ ಬಹುದು. ಆದರೆ ಒಂದು ಮಟ್ಟದ ಹೊಣೆಗಾರಿಕೆ, ಶಿಸ್ತು ವಿದ್ಯೆಗಳಂತಹ ಉತ್ತರದಾಯಿತ್ವದ ಹಿನ್ನೆಲೆಯ ಹದಿ ಹರೆಯದವರು ಅಡ್ಡ ಹಾದಿ ಹಿಡಿಯುತ್ತಾರೆ ಎಂದರೆ ಅದು ಕಡೆಗಣಿಸುವ ವಿಷಯವಂತೂ ಆಗಲಾರದು. ಈ ಬೆಳವಣಿಗೆ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಸಮಸ್ಯೆಯ ಸ್ವರೂಪ ತಾಳುತ್ತಿದೆಯೇ ಎಂಬ ಪ್ರಶ್ನೆ ಸಹ ಇಲ್ಲಿ ಸ್ವಾಭಾವಿಕ. ಇದಕ್ಕಾಗಿ ಸರಕಾರದ ಧೋರಣೆಗಳು, ಹೆತ್ತವರ ಹೊಣೆಗಾರಿಕೆ, ಶಿಕ್ಷಣ ವ್ಯವಸ್ಥೆ, ಬಾಹ್ಯ ಪ್ರಭಾವ ಮುಂತಾದ ಅಂಶಗಳನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದನಿಸುತ್ತದೆ. ಸಾಮಾನ್ಯವಾಗಿ ಇಂತಹ ಅಹಿತಕರ ಘಟನೆಗಳು ನಡೆದಾಗ ನಾವು ತಕ್ಷಣಕ್ಕೆ ಬೆರಳು ತೋರಿಸುವುದು ಚಲನಚಿತ್ರ, ಇಂಟರ್ನೆಟ್, ವಿದ್ಯುನ್ಮಾನ ಮಾಧ್ಯಮ, ಮೊಬೈಲ್ ಇತ್ಯಾದಿಗಳತ್ತ. ನಿಜ, ಇವುಗಳ ಪ್ರಭಾವ, ಪಾತ್ರಗಳೂ ಕಡಿಮೆಯೇನಲ್ಲ. ಆದರೆ ಸಂಪೂರ್ಣವಾಗಿ ಇವೇ ಕಾರಣವೆಂದು ಅಂತಿಮ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಎಲ್ಲರಿಗೂ ಗೊತ್ತಿದ್ದಂತೆ ಚಲನಚಿತ್ರ ಬಹಳ ಆಕರ್ಷಕ, ಜನಪ್ರಿಯ ಮಾಧ್ಯಮವಾಗಿರುವುದರಿಂದ ಎಲ್ಲ ವಯೋ ವರ್ಗದವರನ್ನು ಪ್ರಭಾವಿಸುವಂತಹದ್ದು. ಅದರಲ್ಲೂ ಎಳೆಯ ವಯಸ್ಸಿನ ಮಕ್ಕಳು ಈ ಮಾಧ್ಯಮಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಜೊತೆಗೆ ಸುಲಭದಲ್ಲಿ ಪ್ರಭಾವಿತರಾಗಿಯೂ ಬಿಡುತ್ತಾರೆ. ಇದು ಹಸಿ ಮಣ್ಣಿಗೆ ಸುಲಭದಲ್ಲಿ ಅಂಟಿ ಕೊಳ್ಳುವಂತಹ ಒಂದು ಮಾದರಿ. ಒಳ್ಳೆಯದು ಅಥವಾ ಕೆಟ್ಟದು ಯಾವುದಾದರೂ ಸರಿಯೇ ಅದು ಎಳೆಯ ಮನಸ್ಸುಗಳನ್ನು ಪ್ರಭಾವಿಸಿ ಬಿಡ ಬಲ್ಲದು. ನಮ್ಮ ಜನಪ್ರಿಯ ಚಲನಚಿತ್ರಗಳ ಸಿದ್ಧ ಸೂತ್ರಗಳಲ್ಲಿ ಫೈಟ್, ಪ್ರಣಯಗಳು ಯಶಸ್ಸಿನ ಸಾಮಾನ್ಯ ಅಂಶಗಳೆಂದು ಬೇರೆ ಹೇಳಬೇಕಾಗಿಲ್ಲ. ರಿವಾಲ್ವರ್, ಲಾಂಗು, ಮಚ್ಚು, ಕ್ರಿಕೆಟ್ ಬ್ಯಾಟುಗಳು ಇಂದಿನ ಸಿನೆಮಾ ಮಾರಾಮಾರಿಯ ಆಯುಧಗಳಾಗಿವೆ. ಗಂಡು ಮಕ್ಕಳಿಗೆ ಸಾಹಸ ದೃಶ್ಯಗಳು, ಹೊಡೆದಾಟ ಯಾವತ್ತಿದ್ದರೂ ಇಷ್ಟನೇ. ಹಾಗಾಗಿ ಇಲ್ಲಿಯ ಹಿಂಸಾತ್ಮಕ ದೃಶ್ಯಗಳು ಖಂಡಿತವಾಗಿಯೂ ಈ ಹುಡುಗರನ್ನು ಪ್ರಭಾವಿಸ ಬಲ್ಲದು. ಜೊತೆಗೆ ಪ್ರೀತಿ, ಪ್ರಣಯಗಳಂತಹ ಭಾವನಾತ್ಮಕ ವಿಷಯಗಳು ಎಳೆಯ ಮನಸ್ಸುಗಳನ್ನು ಮೋಡಿ ಮಾಡುವುದರಲ್ಲಿ ಸಂದೇಹವಿಲ್ಲ. ಇಂತಹ ಬಾಹ್ಯ ಪ್ರಭಾವಗಳನ್ನು ನಿವಾರಿಸಲು ಪರಿಣಾಮಕಾರಿ ಸಂಸ್ಕಾರ, ಶಿಕ್ಷಣಗಳಿಂದ ಮಾತ್ರ ಸಾಧ್ಯ. ಇವುಗಳಿಗೆ ಪೂರಕವಾದ ಕೌಟುಂಬಿಕ, ಶಾಲಾ ವಾತಾವರಣವಿಲ್ಲದಿದ್ದರೆ ವಿದ್ಯಾರ್ಥಿಗಳು ದಾರಿ ತಪ್ಪುವುದು ಸ್ವಾಭಾವಿಕ. ಇಂದು ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್‌ಗಳಿಗೆ ತೆರಳುವ ಅಗತ್ಯವಿಲ್ಲ. ಟಿ.ವಿ., ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್‌ಗಳು ಚಲನಚಿತ್ರಗಳನ್ನು ಕೈಯಳತೆಯೊಳಗೆ ಬಿಟ್ಟು ಕೊಟ್ಟಿವೆ. ಹಾಗಂತ ಎಲ್ಲ ವಿದ್ಯಾರ್ಥಿಗಳು ಇಂತಹ ಪ್ರವೃತ್ತಿಗೆ ಬಲಿ ಬೀಳುತ್ತಾರೆ ಎಂದಲ್ಲ. ಮನುಷ್ಯನ ದೌರ್ಬಲ್ಯದ ಎಳೆಗಳು ಕೆಲವರಲ್ಲಿ ವಿಕೃತಿಗೆ ತಿರುಗುವುದು ಸಾಮಾನ್ಯ. ಅದಕ್ಕಾಗಿಯೇ ನಾವು ಸಂಸ್ಕಾರ, ಮೌಲ್ಯ ಶಿಕ್ಷಣ, ಪಠ್ಯಾಧಾರಿತ ಶಿಕ್ಷಣಗಳನ್ನು ರೂಪಿಸಿ ಕೊಂಡಿದ್ದೇವೆ. ಇದರ ಹೊರತಾಗಿಯೂ ವಿದ್ಯಾರ್ಥಿ ದೆಸೆಯಲ್ಲಿಯೇ ಮನಸ್ಸು ದುರ್ಬಲವಾಗಿ ಕೆಲವು ಮಕ್ಕಳು ಸುಲಭದಲ್ಲಿ ಸಾಮಾಜಿಕ ಅನಿಷ್ಟಗಳಿಗೆ ಬಲಿ ಬೀಳುತ್ತಾರೆ. ಹೀಗಾದಾಗ ವ್ಯವಸ್ಥೆಯೊಳಗಿರುವ ಲೋಪಗಳನ್ನು ಪತ್ತೆ ಹಚ್ಚವುದು ಅಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಹದಿನಾರು ವಯಸ್ಸಿನ ಕೆಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವಂತಹ ಪ್ರಸ್ತಾವವನ್ನು ಘೋಷಿಸಿದೆ. ಇದು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶಸ್ವಿಯಾಗ ಬಹುದು ಎಂಬುದನ್ನು ಕಾದು ನೋಡ ಬೇಕು. ನಿಜಕ್ಕೂ ಸಮಸ್ಯೆಯ ಆಳಕ್ಕಿಳಿದು ನೋಡಿದರೆ ಮೇಲ್ನೋಟದ ಸವಾಲುಗಳಿಗಿಂತ ಹೆಚ್ಚು ಗಂಭೀರವಾಗಿರುವ ಮಹತ್ವದ ತೊಡಕುಗಳು ಅಂತರ್ಗತವಾಗಿ ಹೆಣೆದು ಕೊಂಡಿರುವುದು ಗಮನಕ್ಕೆ ಬರುತ್ತದೆ. ಇವುಗಳನ್ನು ಶಿಕ್ಷಣ ವ್ಯವಸ್ಥೆಯ ಲೋಪಗಳು ಹಾಗೂ ಹೆತ್ತವರ ಹೊಣೆಗಾರಿಕೆಯ ವೈಫಲ್ಯಗಳು ಎಂಬ ಎರಡು ವರ್ಗಗಳಡಿ ಚರ್ಚಿಸ ಬಹುದು. ಮೊದಲು ನಮ್ಮ ಇವತ್ತಿನ ಕೌಟುಂಬಿಕ ವಾತಾವರಣವನ್ನೊಮ್ಮೆ ಅವಲೋಕಿಸೋಣ. ಒಂದೋ ಎರಡೋ ಮಕ್ಕಳಿರುವ ಇಂದಿನ ಮನೆಗಳಲ್ಲಿ ಹೂವಿನಂತೆ ಅರಳುವ ಈ ಎಳೆಯ ಮಕ್ಕಳಿಗೆ ಹೊರಗೆ ದುಡಿಯುವ ಹೆತ್ತವರು ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಈ ವಿಭಕ್ತ ಕುಟುಂಬಗಳಲ್ಲಿ ಕನಿಷ್ಠ ಅಜ್ಜ, ಅಜ್ಜಿಯರಂತಹವರ ಉಪಸ್ಥಿತಿಯೂ ಕಡಿಮೆ. ಹಾಗೆಯೇ ಮಕ್ಕಳಿಗೆ ಇತರ ಕುಟುಂಬ ಸದಸ್ಯರೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಬೆರೆಯುವಂತಹ ಸಂದರ್ಭ, ಸನ್ನಿವೇಶಗಳು ದುರ್ಲಬವಾಗಿದೆ. ಹೀಗಾಗಿ ಮಕ್ಕಳು ಪ್ರೀತಿ ಪಾತ್ರರೊಂದಿಗೆ ಕಾಲ ಕಳೆದು ಮಾನವೀಯ ಗುಣಗಳನ್ನು ಮೈಗೂಡಿಸಿ ಕೊಳ್ಳುವ ಹಂತದಲ್ಲಿ ಭಾವನಾರಹಿತ ತಂತ್ರಜ್ಞಾನದ ಸೌಲಭ್ಯದೊಂದಿಗೆ ಕಾಲ ಕಳೆಯಬೇಕಾಗಿ ಬಂದಿದೆ. ಇದರಿಂದ ಬದುಕಿನ ಕಷ್ಟ-ನಷ್ಟಗಳು, ಸಹಜ ಏರಿಳಿತಗಳೊಂದಿಗೆ ಸಾಗುತ್ತ ಹೊಂದಾಣಿಕೆ ಮಾಡಿಕೊಳ್ಳುವಂತಹ ಮನೋಭಾವ ಮಕ್ಕಳಲ್ಲಿ ಒಡಮೂಡುವ ಸಾಧ್ಯತೆಗಳು ವಿರಳವಾಗಿವೆ. ಹೀಗಾಗಿ ಮಕ್ಕಳಲ್ಲಿ ಸಹನೆ, ತಾಳ್ಮೆ, ಕರುಣೆಗಳಂತಹ ಮಾನವೀಯ ಗುಣಗಳು ಕಣ್ಮರೆಯಾಗುತ್ತಿವೆ. ಈ ಹಿನ್ನೆಲೆಯ ಮಕ್ಕಳು ಹೊರ ಪ್ರಪಂಚಕ್ಕೆ ಕಾಲಿರಿಸುವ ಹಂತದಲ್ಲಿ ಬಹು ಬೇಗ ಹತಾಶರಾಗುತ್ತಾರೆ: ಸಿಟ್ಟು ಗೊಳ್ಳುತ್ತಾರೆ: ಹಿಂಸಾ ಕೃತ್ಯಗಳಲ್ಲಿಯೂ ತೊಡಗುತ್ತಾರೆ: ಕೊನೆಗೆ ಆತ್ಮಹತ್ಯೆಗೂ ಹಿಂಜರಿಯಲಾರರು. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಣವೂ ವ್ಯಾಪಾರೀಕರಣಗೊಂಡಿರುವುದನ್ನು ಕಾಣಬಹುದು. ಜ್ಞಾನ, ವಿವೇಕ, ಮೌಲ್ಯಯುತ ಶಿಕ್ಷಣ ಪಡೆಯ ಬೇಕಾದ ವಿದ್ಯಾರ್ಥಿಗಳು ಇಲ್ಲಿಯೂ ವಂಚಿತರು. ಈ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಹಣ, ಪ್ರತಿಷ್ಠೆ, ಸ್ಪರ್ಧೆಗಳು ಕಸಿದು ಕೊಂಡಿವೆ. ಶಾಲೆಗಳಲ್ಲಿ ಹೆಸರಿಗೆ ತಜ್ಞರ ಆಪ್ತ ಸಮಾಲೋಚನೆ, ಮೌಲ್ಯ ಶಿಕ್ಷಣಗಳೆಲ್ಲ ಇವೆ. ಅದರೆ ಅವುಗಳು ಪರಿಣಾಮಕಾರಿಯಾಗುವುದು ಮುಖ್ಯ. ಈ ವಿಚಾರದಲ್ಲಿ ಪ್ರಾಮಾಣಿಕ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ಸರಕಾರ, ಸಾಮಾಜಿಕ ಚಿಂತಕರು, ಶಿಕ್ಷಣ ತಜ್ಞರು ಚಿಂತಿಸಲಿ. ಆಧುನಿಕ ಶಿಕ್ಷಣ ವ್ಯವಸ್ಥೆಯೊಳಗಡೆ ಮಾನವೀಯತೆ, ನೈತಿಕತೆ, ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವುದು ಅತ್ಯವಶ್ಯಕ ಎಂಬುದನ್ನು ಮರೆಯದಿರೋಣ.

ವಾರ್ತಾ ಭಾರತಿ 3 Apr 2026 11:09 am

Coconut: ರೈತರ ನಿದ್ದೆಗೆಡಿಸಿದ ತೆಂಗಿನ ರೋಗ: ಶೇ.14ರಷ್ಟು ತೋಟಗಳಿಗೆ ಕೀಟಬಾಧೆ; ತಜ್ಞರ ತಂಡ ಪರಿಶೀಲನೆ

ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಈ ತೆಂಗು ಬೆಳೆ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ತೋಟಗಳಲ್ಲಿ ಕೀಟ ಮತ್ತು ರೋಗ ಬಾಧೆ ಹೆಚ್ಚಾಗುತ್ತಿದೆ. ಈ ಸ್ಥಿತಿಯು ರೈತರ ನಿದ್ದೆಗೆಡಿಸಿದೆ. ಗ್ರಾಮೀಣ ಆರ್ಥಿಕತೆಗ ಪೂರಕವಾದ ಹಲವಾರು ತೋಟಗಳಿಗೆ ಈ ರೋಗಬಾಧೆ ಸಮಸ್ಯೆ ವಿಸ್ತರಿಸುತ್ತಿದೆ. ಕರ್ನಾಟಕದಂತಹ ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಸಮಸ್ಯೆ

ಒನ್ ಇ೦ಡಿಯ 3 Apr 2026 11:00 am

ಬಾಗಲಕೋಟೆ : ಕಾಂಗ್ರೆಸ್ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷಾ ವರದಿ - ಏನಿದೆ ರಿಪೋರ್ಟ್’ನಲ್ಲಿ?

Bagalkot By Poll : ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ ಒಂಬತ್ತರಂದು ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯಲು ಇನ್ನು ಕೇವಲ ನಾಲ್ಕು ದಿನಗಳು ಬಾಕಿಯಿದೆ. ಈ ನಡುವೆ, ಆಂತರಿಕ ವರದಿಯ ಪ್ರಕಾರ, ಗೆಲುವಿನ ಅಂತರ ಹೆಚ್ಚು ಇರುವುದಿಲ್ಲ ಎನ್ನುವ ಮಾಹಿತಿ ಬಂದ ಹಿನ್ನಲೆಯಲ್ಲಿ, ಮುಖ್ಯಮಂತ್ರಿಗಳು ನೇರವಾಗಿ ಆಖಾಡಕ್ಕೆ ಇಳಿದಿದ್ದಾರೆ.

ವಿಜಯ ಕರ್ನಾಟಕ 3 Apr 2026 10:56 am

ಚೆಕ್ ಬೌನ್ಸ್ ಪ್ರಕರಣ | ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಗೆ ಮರುಪಾವತಿಗೆ ಅವಧಿ ನಿರಾಕರಣೆ: ತೀರ್ಪು ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಬಾಕಿ ಹಣ ಪಾವತಿಸಲು ಹೆಚ್ಚುವರಿ ಅವಧಿ ನೀಡುವ ಮನವಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿ, ತೀರ್ಪನ್ನು ಕಾಯ್ದಿರಿಸಿದೆ. ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ, ಯಾದವ್ ಹಾಗೂ ಅವರ ವಕೀಲರು ಪಾವತಿ ಕುರಿತು ಪರಸ್ಪರ ವಿರುದ್ಧ ನಿಲುವುಗಳನ್ನು ತೆಗೆದುಕೊಂಡಿರುವುದನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ತೀವ್ರವಾಗಿ ಆಕ್ಷೇಪಿಸಿದರು. “ನ್ಯಾಯಾಧೀಶರು ನಿಮಗೆ ಒಳ್ಳೆಯವರಾಗಿದ್ದರೆ ಅವರನ್ನು ದುರ್ಬಲರೆಂದು ಭಾವಿಸಬೇಡಿ,” ಎಂದು ನ್ಯಾಯಾಲಯ ಹೇಳಿತು. ವಿಚಾರಣೆಯ ವೇಳೆ ಯಾದವ್ ತಾವು ಬಾಕಿ ಪಾವತಿಸಲು ಸಿದ್ಧ ಎಂದು ಹೇಳಿದರೆ, ಅವರ ವಕೀಲರು ಈಗಾಗಲೇ ಶಿಕ್ಷೆ ಅನುಭವಿಸಿರುವುದರಿಂದ ಪಾವತಿ ಅಗತ್ಯವಿಲ್ಲ ಎಂಬ ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಪಾವತಿಸಲು ಸಿದ್ಧರಾಗಿದ್ದರೆ ತಕ್ಷಣ ಪಾವತಿಸಿ. ಇಲ್ಲವಾದರೆ ವಿಚಾರಣೆ ಏಕೆ?” ಎಂದು ಪ್ರಶ್ನಿಸಿತು. 6 ಕೋಟಿ ರೂಪಾಯಿ ಪಾವತಿಸಲು 30 ದಿನಗಳ ಕಾಲಾವಕಾಶ ನೀಡುವಂತೆ ಯಾದವ್ ಮನವಿ ಮಾಡಿದರೂ, “ಇಲ್ಲ ಎಂದರೆ ಇಲ್ಲ. ಹೆಚ್ಚಿನ ಸಮಯ ನೀಡುವುದಿಲ್ಲ,” ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು. ಮೇ 2024ರಲ್ಲಿ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದಲ್ಲಿ ಯಾದವ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ವಿವಾದ ಇತ್ಯರ್ಥವಾಗಲಿದೆ ಎಂಬ ಭರವಸೆಯ ಮೇರೆಗೆ ಹೈಕೋರ್ಟ್ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿತ್ತು. ಆದರೆ, ಹಲವು ಬಾರಿ ಭರವಸೆ ನೀಡಿದರೂ ಯಾದವ್ ಅವರು ಹಣ ಪಾವತಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. 2.5 ಕೋಟಿ ರೂಪಾಯಿ ಸೇರಿದಂತೆ ಭರವಸೆ ನೀಡಿದ ಮೊತ್ತಗಳನ್ನು ಠೇವಣಿ ಮಾಡಿಲ್ಲ ಎಂದು ತಿಳಿಸಿದೆ. 2026ರ ಫೆಬ್ರವರಿಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಶರಣಾಗುವಂತೆ ಸೂಚಿಸಲಾಗಿತ್ತು. ಅವರು ಫೆಬ್ರವರಿ 5ರಂದು ಶರಣಾಗಿ, 1.5 ಕೋಟಿ ರೂಪಾಯಿ ಠೇವಣಿ ಮಾಡಿದ ಬಳಿಕ ಮಧ್ಯಂತರ ಅಮಾನತು ಪಡೆದಿದ್ದರು. ದೂರುದಾರರ ಪರ ವಕೀಲ ಅವನೀತ್ ಸಿಂಗ್ ಸಿಕ್ಕಾ, “ಶಿಕ್ಷೆ ಅನುಭವಿಸಿರುವುದರಿಂದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುಮಾರು 7.75 ಕೋಟಿ ರೂಪಾಯಿ ಇನ್ನೂ ಬಾಕಿ ಇದೆ,” ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಾದವ್, “ನ್ಯಾಯಾಲಯ ನೀಡುವ ಯಾವುದೇ ನಿರ್ದೇಶನವನ್ನು ಪಾಲಿಸುತ್ತೇನೆ. ನನ್ನ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಆದರೆ ಭಾರೀ ಆರ್ಥಿಕ ನಷ್ಟವಾಗಿದೆ,” ಎಂದು ಹೇಳಿದರು. ತಮ್ಮ ಐದು ಫ್ಲಾಟ್‌ಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದಾಗಿ ಅವರು ತಿಳಿಸಿದರು. ವಿಚಾರಣೆಯ ವೇಳೆ 6 ಕೋಟಿ ರೂಪಾಯಿ ಪಾವತಿಸಿದರೆ ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಸೂಚಿಸಿತು. ಆದರೆ ಹೆಚ್ಚುವರಿ ಅವಧಿ ನೀಡಲು ನಿರಾಕರಿಸಿ, ಅಂತಿಮವಾಗಿ ತೀರ್ಪನ್ನು ಕಾಯ್ದಿರಿಸಿದೆ.

ವಾರ್ತಾ ಭಾರತಿ 3 Apr 2026 10:56 am

ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ದಿನಾಂಕ ಮತ್ತು ಸಮಯವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ. ಫಲಿತಾಂಶದ ಲಿಂಕ್ ಸಕ್ರಿಯಗೊಳ್ಳುವ ಮುನ್ನ, ಮಂಡಳಿಯು 12ನೇ

ಒನ್ ಇ೦ಡಿಯ 3 Apr 2026 10:38 am

Kadaba | ಅಕ್ರಮ ಜಾನುವಾರು ಸಾಗಾಟ: ಓರ್ವನ ಬಂಧನ

ಕಡಬ, ಎ.3: ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಕಡಬ ಠಾಣಾ ಪೊಲೀಸರು ಶುಕ್ರವಾರ ಬೆಳಗಿನ ಜಾವ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಕಡಬ ಠಾಣಾ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸರ ತಂಡ ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 10:19 am

ಮಮತಾ ಬ್ಯಾನರ್ಜಿ ‘ಆಟ’ ಈ ಚುನಾವಣೆಯಲ್ಲೂ ನಡೆಯುವುದೇ?

ಟಿಎಂಸಿಗೆ ನಗದು ವರ್ಗಾವಣೆ(ಡಿಬಿಟಿ) ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬೆಂಬಲ ಇದೆ. ಅದು ಉದ್ಯೋಗ ಸೃಷ್ಟಿ, ವಲಸೆ ಸಮಸ್ಯೆ ಮತ್ತು ರಾಜ್ಯದಿಂದ ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಿಜೆಪಿಯನ್ನು ‘ಕೌ ಬೆಲ್ಟ್ ಪಾರ್ಟಿ’; ಅಧಿಕಾರಕ್ಕೆ ಬಂದರೆ ಸಸ್ಯಾಹಾರವನ್ನು ಹೇರುತ್ತದೆ ಎಂದು ದೂರುತ್ತ ನರೇಟಿವ್ ಕಟ್ಟಿದೆ. ಈ ಪಡಿಯಚ್ಚು ತೊಡೆದುಹಾಕಲು ಬಿಜೆಪಿ ಹೆಣಗಾಡುತ್ತಿದೆ; ಬಿಧಾನ್‌ನಗರ ಬಿಜೆಪಿ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ‘ಕಾಟ್ಲಾ’ ಮೀನು ಹಿಡಿದುಕೊಂಡು ಪ್ರಚಾರ ಕೈಗೊಂಡಿದ್ದು ಇದೇ ಕಾರಣದಿಂದ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಐಆರ್, ಆಡಳಿತ ವಿರೋಧಿ ಅಲೆ, ರಾಜ್ಯಪಾಲರ ಪ್ರವೇಶ, ಕಣಕ್ಕಿಳಿದಿರುವ ಗಣ ಸಮೂಹ ಮತ್ತು ಚುನಾವಣೆ ಆಯೋಗ ಸಾರಾಸಗಟು ಅಧಿಕಾರಶಾಹಿಯನ್ನು ವರ್ಗಾಯಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ತಿರುಗುಬಾಣ ಆಗುವುದೇ? ಅಥವಾ ಟಿಎಂಸಿ ಪ್ರತಿಪಾದಿಸುವ ಬಂಗಾಳಿ ಉಪರಾಷ್ಟ್ರೀಯತೆಗೆ ಜನ ಮಣೆ ಹಾಕುವರೇ? ರಾಜ್ಯದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾ(ಬಿಜಿಪಿಎಂ) ಡಾರ್ಜಿಲಿಂಗ್ ಬೆಟ್ಟ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ 3 ಅವಧಿಯಿಂದ ಆಡಳಿತ ನಡೆಸುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ತಡೆಯಲು 74 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ ಮತ್ತು 15 ಶಾಸಕರ ಕ್ಷೇತ್ರಗಳನ್ನು ಬದಲಿಸಿದೆ. ಚುನಾವಣೆ ಆಯೋಗ ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಮಹಿಳೆಯರು, ಮುಸ್ಲಿಮರು, ಆದಿವಾಸಿಗಳು ಹಾಗೂ ಇನ್ನಿತರ ಬದಿಗೊತ್ತಲ್ಪಟ್ಟ ಸಮುದಾಯದ ಮತದಾರರನ್ನು ತೆಗೆದುಹಾಕಿದೆ ಎಂದು ಟಿಎಂಸಿ ದೂರಿದೆ. ಪಕ್ಷ ಉದ್ಯೋಗ ಸೃಷ್ಟಿ, ವಲಸೆ ಮತ್ತು ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಂಗಾಳಿ ಉಪರಾಷ್ಟ್ರೀಯತೆಯನ್ನು ಆಧರಿಸಿದ್ದು, ಬಿಜೆಪಿ ‘ಹೊರಗಿನ’ ಪಕ್ಷ ಎನ್ನುತ್ತಿದೆ. ಪ್ರತಿಯಾಗಿ, ಅಕ್ರಮ ನುಸುಳುವಿಕೆ, ಮಹಿಳೆಯರ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಕುಸಿತ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆ ಆಧರಿಸಿ, ಧರ್ಮದ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಯತ್ನಿಸುತ್ತಿದೆ. ಪ್ರಧಾನಿ ಮಾರ್ಚ್ 14ರಂದು ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಭೆಯಲ್ಲಿ ‘‘ಈ ಚುನಾವಣೆ ಸರಕಾರದ ಬದಲಾವಣೆ ಮಾತ್ರವಲ್ಲ; ಬಂಗಾಳದ ಆತ್ಮವನ್ನು ಉಳಿಸುವ ಪ್ರಯತ್ನ’’ ಎಂದು ಹೇಳಿದರು. ಎಸ್‌ಐಆರ್ ಸಮಸ್ಯೆ ಅಕ್ಟೋಬರ್ 25, 2025ರಲ್ಲಿ ಮತದಾರರ ಪಟ್ಟಿಯಲ್ಲಿ 7,66,37,529 ಜನರಿದ್ದರು. ಎಸ್‌ಐಆರ್ ಬಳಿಕ ಫೆ.28, 2026ರಂದು ಸಂಖ್ಯೆ 6,44,52,609ಕ್ಕೆ ಕುಸಿಯಿತು; 61.78 ಲಕ್ಷ ಮತದಾರರನ್ನು ತೆಗೆದುಹಾಕಲಾಯಿತು ಮತ್ತು 60.06 ಲಕ್ಷ ಮತದಾರರು ನ್ಯಾಯಾಂಗದ ಪರಾಮರ್ಶೆಯಲ್ಲಿದ್ದಾರೆ. ಇವರ ಅರ್ಜಿಗಳ ಪರಿಶೀಲನೆಗೆ ಆಯೋಗ 19 ಮೇಲ್ಮನವಿ ನ್ಯಾಯಾಧಿಕರಣಗಳನ್ನು ಸ್ಥಾಪಿಸಿದೆ. ಮಾ.29, 2026ರಂದು ನಾಲ್ಕನೇ ಪೂರಕ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆ ಸಮೀಪದಲ್ಲಿದ್ದರೂ, ಲಕ್ಷಾಂತರ ಮತದಾರರು ತಮ್ಮ ಹಕ್ಕಿನ ಬಗ್ಗೆ ಖಾತ್ರಿಯಿಲ್ಲದೆ ಅತಂತ್ರರಾಗಿದ್ದಾರೆ. ಮೂರು ಅವಧಿ ಅಧಿಕಾರದಲ್ಲಿದ್ದರೂ, ಹಲವು ಸಮಸ್ಯೆಗಳನ್ನು ಬಗೆಹರಿಸಲಾಗದ ಟಿಎಂಸಿಗೆ ಎಸ್‌ಐಆರ್ ವರವಾಗಿ ಪರಿಣಮಿಸಿದೆ; ಬಿಜೆಪಿ ಬಂಗಾಳದ ವಿರುದ್ಧ ಇದೆ ಎಂದು ಹೇಳಲು ಎಸ್‌ಐಆರ್ ಬಳಸಿಕೊಳ್ಳುತ್ತಿದೆ. 2024ರಲ್ಲಿ ಕೋಲ್ಕತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣ(ಆಕೆಯ ತಾಯಿ ರತ್ನ ದೇಬನಾಥ್‌ಗೆ ಬಿಜೆಪಿ ಪನಿಹಾತಿ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದೆ), ಭ್ರಷ್ಟಾಚಾರ, ಸಂದೇಶ್‌ಖಲಿಯಲ್ಲಿ ಪಕ್ಷದ ಮುಖಂಡ ಶೇಕ್ ಶಹಜಹಾನ್ ನಡೆಸಿದ ಅಂದಾದುಂದಿ ಇತ್ಯಾದಿ ಪ್ರಕರಣಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಮೈತ್ರಿ ಗೊಂದಲ ರಾಜ್ಯದಲ್ಲಿ ಶೇ.72ರಷ್ಟು ಹಿಂದೂ ಹಾಗೂ ಶೇ.25ರಷ್ಟು ಮುಸ್ಲಿಮರು ಇದ್ದಾರೆ; ಮುಸ್ಲಿಮರು 80 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. 2016ರಲ್ಲಿ ಟಿಎಂಸಿ 211, ಬಿಜೆಪಿ 3, ಕಾಂಗ್ರೆಸ್ 44(ಶೇ.12.25), ಎಡರಂಗ 32(ಶೇ.19.57) ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, 1 ಸ್ಥಾನ ಇತರರ ಪಾಲಾಗಿತ್ತು. ಆದರೆ, 2021ರಲ್ಲಿ ಬಿಜೆಪಿ ಸದಸ್ಯ ಬಲ ಇದ್ದಕ್ಕಿದ್ದಂತೆ 77 (ಶೇ.10.16)ಕ್ಕೆ ಹೆಚ್ಚಿತು; ಟಿಎಂಸಿ 215(+4, ಶೇ.44.91) ಸ್ಥಾನ ಗಳಿಸಿತು. 2025ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ತನ್ನ ಹಿಡಿತ ಮುಂದುವರಿಸಿತು; ತೃಣಮೂಲ 29(+7, ಶೇ.46.16), ಬಿಜೆಪಿ 12(-6, ಶೇ.39.08) ಹಾಗೂ ಕಾಂಗ್ರೆಸ್ 1(-1, ಶೇ. 4.72) ಸ್ಥಾನ ಗಳಿಸಿದವು. ಕಾಲಕ್ರಮೇಣ ಕಾಂಗ್ರೆಸ್ ಮತಗಳು ಟಿಎಂಸಿಗೆ ಹಾಗೂ ಎಡ ರಂಗದ ಮತಗಳು ಬಿಜೆಪಿಗೆ ವರ್ಗಾವಣೆಯಾಗಿವೆ. ಟಿಎಂಸಿ ‘ಇಂಡಿಯಾ’ ಒಕ್ಕೂಟದಲ್ಲಿರುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. 2011ರಲ್ಲಿ ಕಾಂಗ್ರೆಸ್ ಜತೆಗೂಡಿ ಎಡಪಕ್ಷಗಳನ್ನು ಸೋಲಿಸಿದ ಮಮತಾ, ಒಂದು ವರ್ಷದ ಬಳಿಕ ರಾಜ್ಯದಲ್ಲಿ ಪಕ್ಷದ ಸಂಬಂಧ ತೊರೆದರು. ಆದರೆ, ರಾಷ್ಟ್ರ ಮಟ್ಟದಲ್ಲಿ ಯುಪಿಎ ಭಾಗವಾಗಿ ಉಳಿದರು. ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ಅವರು ಬಿಜೆಪಿ ಸರಕಾರದಲ್ಲಿ ರೈಲ್ವೆ ಸಚಿವೆ ಆಗಿದ್ದರು ಕೂಡ. 2016ರಲ್ಲಿ ಎಡ ಪಕ್ಷಗಳು+ಕಾಂಗ್ರೆಸ್ ಶೇ.32 ಮತ ಗಳಿಸಿದ್ದವು; ಕಾಂಗ್ರೆಸ್ ಸಮಸ್ಯೆ ಏನೆಂದರೆ, ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷಕ್ಕೆ ಮೈತ್ರಿಕೂಟದ ಸದಸ್ಯರೇ ಎದುರಾಳಿಗಳು. ಬಂಗಾಳದಲ್ಲಿ ಎಡ ಪಕ್ಷಗಳು-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ, ಕೇರಳದಲ್ಲಿ ವಿಪರಿಣಾಮ ಆಗುತ್ತದೆ. ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಣಾಹಣಿ ನಡೆಸುತ್ತಿವೆ. 2021ರಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯನ್ ಎರಡನೇ ಬಾರಿ ಅಧಿಕಾರಕ್ಕೆ ಬಂದರು. ನಿರಂತರ ಸೋಲಿನಿಂದ ದುರ್ಬಲಗೊಂಡಿರುವ ಕಾಂಗ್ರೆಸ್, ಪ್ರಾಂತೀಯ ಪಕ್ಷವಾಗಿ ಪರಿಣಮಿಸಿದೆ. ಮಮತಾ ಅವರನ್ನು ಸಮಾಧಾನಪಡಿಸಲು ಬೆಹ್ರಾಮ್‌ಪುರದಿಂದ 5 ಬಾರಿ ಆಯ್ಕೆಯಾದ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ, ಶುಭಂಕರ್ ಸರಕಾರ್ ಅವರನ್ನು ನೇಮಿಸಿತು. ಮಮತಾ ಅವರ ಕಟು ಟೀಕಾಕಾರರಾದ ಚೌಧರಿ, 2024ರ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟಿಗ, ಟಿಎಂಸಿಯ ಯೂಸುಫ್ ಪಠಾಣ್ ಅವರಿಂದ 70,000 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆನಂತರ 2 ವರ್ಷ ಕಾಂಗ್ರೆಸ್ ಮುಖಂಡರು ರಾಜ್ಯದ ಕಡೆ ತಲೆ ಹಾಕಲಿಲ್ಲ. ಇದರಿಂದ ಟಿಎಂಸಿ ತನ್ನ ಶಕ್ತಿ ಬೆಳೆಸಿಕೊಂಡಿತು. ಕಾಂಗ್ರೆಸ್‌ನ ಸೌಜನ್ಯವನ್ನು ಟಿಎಂಸಿ ಗೌರವಿಸಲಿಲ್ಲ. ರಾಜ್ಯದಾಚೆಗೂ ಪಕ್ಷವನ್ನು ವಿಸ್ತರಿಸಬೇಕೆಂದು ಗೋವಾ ವಿಧಾನಸಭೆ ಚುನಾವಣೆ(2022)ಯಲ್ಲಿ ಸ್ಪರ್ಧಿಸಿ, ಶೂನ್ಯ ಸಂಪಾದನೆ (ಶೇ.5.2 ಮತಗಳಿಕೆ) ಮಾಡಿತು. ಇದರ ಪರಿಣಾಮ ಕಾಂಗ್ರೆಸ್ ಮೇಲೆ ಆಯಿತು; 11(-6 ಸ್ಥಾನ) ಗಳಿಸಿತು. ಬಿಜೆಪಿ 20 ಸ್ಥಾನ ಗಳಿಸಿ, ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಆದರು. ಆಪ್ 2(ಶೇ.6.77) ಸ್ಥಾನ ಗಳಿಸಿತು. ಗೋವಾದಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಎಚ್ಚೆತ್ತಿರುವ ಕಾಂಗ್ರೆಸ್ ಒಂಟಿಯಾಗಿ, 298 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಅಧೀರ್ ರಂಜನ್ ಚೌಧರಿ(ಬೆಹ್ರಾಮ್‌ಪುರ) ಮತ್ತು ಟಿಎಂಸಿ ರಾಜ್ಯಸಭೆ ಮಾಜಿ ಸದಸ್ಯೆ ಮೌಸಂ ಬೆನಝೀರ್ ನೂರ್(ಮಾಲತಿಪುರ) ಕಣಕ್ಕೆ ಇಳಿಯಲಿದ್ದಾರೆ. ನೂರ್, ಜನವರಿ 2026ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಮಾಲ್ಡಾ-ಮುರ್ಷಿದಾಬಾದ್ ಹಾಗೂ ಕೇಂದ್ರ ಬಂಗಾಳದಲ್ಲಿ ಪ್ರಭಾವ ಹೊಂದಿದೆ. ಸಮಸ್ಯೆ ಏನೆಂದರೆ, ದೇಶದೆಲ್ಲೆಡೆ ಬಿಜೆಪಿ ಮತಗಳು ಭದ್ರವಾಗಿವೆ ಮತ್ತು ಬೇರೆಬೇರೆ ಸಮುದಾಯಗಳನ್ನು ಆಕರ್ಷಿಸಿದಂತೆ, ಮತ ಗಳಿಕೆ ಹೆಚ್ಚುತ್ತಿದೆ. ಆದರೆ, ಉಳಿದ ಪಕ್ಷಗಳು ಪರಸ್ಪರ ಬಡಿದಾಡಿಕೊಳ್ಳುತ್ತಿವೆ. ಖೇಲಾ ಹೋಬೆ ಮತ್ತು ರಾಜಭವನ ಚುನಾವಣೆ ಆಯೋಗವು ಮಾರ್ಚ್ 16, 2026ರ ಮಧ್ಯರಾತ್ರಿಯಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ, ಕೋಲ್ಕತಾ ನಗರ ಪೊಲೀಸ್ ಆಯುಕ್ತ, 19 ಉನ್ನತ ಪೊಲೀಸ್ ಹಾಗೂ 13 ಚುನಾವಣೆ ಅಧಿಕಾರಿಗಳನ್ನು ಬದಲಿಸಿತು. ಬಳಿಕ ಮಾರ್ಚ್ 30ರಂದು 173 ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಕೋಲ್ಕತಾ ನಗರದ 31 ಇನ್‌ಸ್ಪೆಕ್ಟರ್‌ಗಳು ಮತ್ತು 31 ಅಧಿಕಾರಿಗಳನ್ನು ವರ್ಗಾವಣೆ ಮಾಡಿತು. ಯಾರನ್ನು ವರ್ಗಾವಣೆ ಮಾಡಬೇಕು ಮತ್ತು ಅವರ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬುದು ಮೊದಲೇ ನಿರ್ಧಾರವಾಗಿದೆ. ಸಂವಿಧಾನವು ಆಯೋಗಕ್ಕೆ ಚುನಾವಣೆ ಮತಪಟ್ಟಿ ಸಿದ್ಧತೆ ಹಾಗೂ ಎಲ್ಲ ಚುನಾವಣೆಗಳನ್ನು ನಡೆಸುವ ಅಧಿಕಾರ ನೀಡಿದೆ. ಮಾದರಿ ಶಿಷ್ಟಾಚಾರ ಸಂಹಿತೆ ಜಾರಿಗೊಂಡ ತಕ್ಷಣ ಈ ಅಧಿಕಾರ ಪ್ರಾಪ್ತವಾಗುತ್ತದೆ. ರಾಷ್ಟ್ರಪತಿ/ರಾಜ್ಯಪಾಲರು ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಬೇಕಾಗುತ್ತದೆ. ಆದರೆ, ಆಯೋಗ ಇದೇ ಮೊದಲ ಬಾರಿಗೆ ರಾಜ್ಯವೊಂದರ ಇಡೀ ಅಧಿಕಾರಶಾಹಿಯನ್ನು ಬದಲಿಸಿದೆ. ಟಿಎಂಸಿ ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸಿದರೂ ಪ್ರಯೋಜನ ಆಗಲಿಲ್ಲ. ಎನ್.ಆರ್. ರವಿ ಆಗಮನದಿಂದ ಚುನಾವಣೆ ಆಟದಲ್ಲಿ ರಾಜಭವನವೂ ಭಾಗಿಯಾಗಲಿದೆ. ಐಪಿಎಸ್ ಅಧಿಕಾರಿ ರವಿ, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರ ಸಮೀಪವರ್ತಿ. 2018-19ರಲ್ಲಿ ಸುಮಾರು 9 ತಿಂಗಳು ದೋವಲ್ ಅವರ ಸಹಾಯಕ ಆಗಿದ್ದರು. ಬಳಿಕ ನಾಗಾಲ್ಯಾಂಡಿಗೆ ರಾಜ್ಯಪಾಲರಾಗಿ ನೇಮಿಸಲಾಯಿತು. ‘‘ಚುನಾವಣೆ ಹಿನ್ನೆಲೆಯಲ್ಲಿ ರವಿ ಅವರನ್ನು ನೇಮಿಸಲಾಗಿದೆ. ನೇಮಕದ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ’’ ಎಂದು ಮಮತಾ ದೂರಿದ್ದರು. ರಾಜ್ಯಪಾಲರ ವರ್ಗಾವಣೆ ಮತ್ತು ನೇಮಕ ಆಡಳಿತಾತ್ಮಕ ವಿಷಯ. ಆದರೆ, ಈಗ ರಾಜಭವನಗಳು ರಾಜಕೀಯ ಹತಾರಗಳಾಗಿ ಬಳಕೆಯಾಗುತ್ತಿವೆ. ರವಿ ತಮಿಳುನಾಡಿನಲ್ಲಿ ಇದ್ದಾಗ, ಡಿಎಂಕೆ ಸರಕಾರಕ್ಕೆ ತಲೆನೋವಾಗಿದ್ದರು. ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದೆ ದೀರ್ಘಕಾಲ ವಿಳಂಬ, ಅಧಿವೇಶನದಲ್ಲಿ ಮಾತನ್ನಾಡದೆ ನಿರ್ಗಮಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಸುಪ್ರೀಂ ಕೋರ್ಟ್‌ನ ತಪರಾಕಿ ಬಳಿಕವೂ ಅವರ ವರ್ತನೆ ಬದಲಾಗಲಿಲ್ಲ. ‘‘ರಾಜ್ಯದ ವ್ಯವಹಾರಗಳಲ್ಲಿ ಮೂಗು ತೂರಿಸುವ ಮೂಲಕ ಒಕ್ಕೂಟ ತತ್ವಕ್ಕೆ ಧಕ್ಕೆಯಾಗುತ್ತಿದೆ; ನಾವು ರಾಜ್ಯದ ಸ್ವಾಯತ್ತೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುತ್ತಿದ್ದೇವೆ’’ ಎಂದು ಡಿಎಂಕೆ ಸರಕಾರ ಹೇಳಿತು. ಕೇಂದ್ರ ಏನೇ ಸಮಜಾಯಿಷಿ ನೀಡಿದರೂ, ಚುನಾವಣೆ ಉದ್ದೇಶದಿಂದಲೇ ರವಿ ಅವರನ್ನು ಸಿ.ವಿ. ಆನಂದ ಬೋಸ್ ಜಾಗಕ್ಕೆ ಕೂರಿಸಲಾಗಿದೆ. ಉಪ ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್, ಟಿಎಂಸಿಗೆ ತಲೆನೋವಾಗಿದ್ದರು. ರಾಜ್ಯ ಸರಕಾರದ ವಿರುದ್ಧ ಸಂಕಥನವೊಂದನ್ನು ಸೃಷ್ಟಿಸಿದರು ಮತ್ತು ಇದರಿಂದ ಬಿಜೆಪಿ ನಾಟಕೀಯವಾಗಿ ಬೆಳೆಯಿತು. ರವಿ ನೇಮಕವು ವಿರೋಧಪಕ್ಷಗಳ ಅಧಿಕಾರವಿರುವ ರಾಜ್ಯಗಳಲ್ಲಿ ರಾಜಭವನ ವನ್ನು ಬಳಸಿಕೊಳ್ಳುವ ಬಿಜೆಪಿ ಕಾರ್ಯನೀತಿಯ ಮುಂದುವರಿಕೆ. ಕೇಂದ್ರ-ರಾಜ್ಯಗಳ ಸಂಬಂಧ ಕುರಿತು ಅಧ್ಯಯನ ನಡೆಸಿದ್ದ ನ್ಯಾ.ಸರ್ಕಾರಿಯಾ ಆಯೋಗವು ರಾಜ್ಯಪಾಲರ ನೇಮಕಕ್ಕೆ ಮುನ್ನ ಸಂಬಂಧಿಸಿದ ಮುಖ್ಯಮಂತ್ರಿಯನ್ನು ಕೇಳಬೇಕು ಎಂದು 1980ರಲ್ಲಿ ಶಿಫಾರಸು ಮಾಡಿತ್ತು; ಈ ಶಿಫಾರಸು ಯಾರಿಗೂ ನೆನಪಿದ್ದಂತೆ ಕಾಣುತ್ತಿಲ್ಲ. ಆರೆಸ್ಸೆಸ್ ಮತ್ತು ಅಸ್ಮಿತೆಯ ಪ್ರಶ್ನೆ ಬಿಹಾರದ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಆರೆಸ್ಸೆಸ್ ಬಂಗಾಳದೆಡೆಗೆ ದೃಷ್ಟಿ ಹರಿಸಿತು. ಸಂಘಟನೆ ಕಾರ್ಯಕರ್ತರು ರಾಜ್ಯದ ಹಳ್ಳಿ, ಪಟ್ಟಣ ಮತ್ತು ನೆರೆಹೊರೆಯಲ್ಲಿ ನಿಶ್ಯಬ್ದವಾಗಿ ಬ್ಯಾನರ್, ಮೈಕ್ರೋಫೋನ್ ಇಲ್ಲದೆ ‘ಜಾಗರಣ್’ ಎಂಬ ಆಂದೋಲನ ಆರಂಭಿಸಿದರು. ಈ ಆಂದೋಲನದ ಅಂತರಂಗದಲ್ಲಿ ಇರುವುದು-ಹಿಂದೂಗಳು ಅಪಾಯ ಎದುರಿಸುತ್ತಿದ್ದಾರೆ. ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಅವರು ಒಟ್ಟಾಗಬೇಕಿದೆ ಎಂಬ ನರೇಟಿವ್. ಬಂಗಾಳದಲ್ಲಿ ರಾಷ್ಟ್ರೀಯವಾದ-ಹಿಂದುತ್ವ ರಾಜಕೀಯಕ್ಕೆ ದೀರ್ಘ ಇತಿಹಾಸ ಇದೆ. ಆದರೆ, ಈಗ ಅದು ವಿಸ್ತರಿಸುತ್ತಿರುವ ರೀತಿ ಭಿನ್ನವಾಗಿದೆ. ‘ಜಾಗರಣ್’ನಲ್ಲಿ ಬಾಜಾಭಜಂತ್ರಿ ಇರುವುದಿಲ್ಲ; ನಿಮ್ಮ ಅಭಿಪ್ರಾಯ ಬದಲಿಸಿಕೊಳ್ಳಿ ಎಂದು ಒತ್ತಡ ಹೇರುವುದಿಲ್ಲ; ಭಯವನ್ನು ಏಕಾಏಕಿ ತುಂಬುವುದಿಲ್ಲ. ತನ್ನನ್ನು ಸಮಾಜ-ಸಮುದಾಯ ಗುರುತಿಸಬೇಕು ಎನ್ನುವುದು ಮಾನವ ಸಹಜ ಪ್ರವೃತ್ತಿ. ಸಮಾಜಗಳು ಹೇಗೆ ತಮಗೆ ಗೊತ್ತಿಲ್ಲದಂತೆ ಹೊರತಾಗಿಸುವಿಕೆಯೆಡೆಗೆ ಬಾಗುತ್ತವೆ ಎಂದು ಹಲವು ಚಿಂತಕರು ಅರ್ಥೈಸಿದ್ದಾರೆ; ತತ್ವಶಾಸ್ತ್ರಜ್ಞ ಥಿಯೋಡೋರ್ ಅಡಾರ್ನೋ, ‘‘ಸರ್ವಾಧಿಕಾರಿ ರಾಜಕೀಯವು ಬಹಿರಂಗ ದ್ವೇಷ ಇಲ್ಲವೇ ಹಿಂಸೆಯಿಂದ ಆರಂಭವಾಗುವುದು ಅಪರೂಪ. ಅದು ಭಾವನಾತ್ಮಕ ಅಭಿಪ್ರಾಯಗಳ ಮೂಲಕ ಬೆಳೆಯುತ್ತದೆ; ಅಭಿಪ್ರಾಯಭೇದಕ್ಕೆ ಅಸಹನೆ, ಕಠಿಣ ಆಡಳಿತದ ಅಪೇಕ್ಷೆ ಮತ್ತು ಕೆಲವು ಸಾಮಾಜಿಕ ಗುಂಪುಗಳನ್ನು ದೂರಲಾಗುತ್ತದೆ. ಜನರ ಮೇಲೆ ಅಭಿಪ್ರಾಯಗಳನ್ನು ಹೇರುವ ಬದಲು ಅದರೆಡೆಗೆ ತಿರುಗುವಂತೆ ತರಬೇತಿ ನೀಡಲಾಗುತ್ತದೆ’’ ಎಂದು ವಿಶ್ಲೇಷಿಸಿದ್ದಾರೆ. ‘ಜಾಗರಣ್’ ಮೂಲಕ ಸಾಂಸ್ಕೃತಿಕ ಅಸ್ಮಿತೆ ಅಪಾಯದಲ್ಲಿದೆ ಮತ್ತು ರಾಜಕೀಯ ಕ್ರಿಯೆಗಳು ಸ್ವರಕ್ಷಣೆಯ ಇನ್ನೊಂದು ರೂಪ ಎಂದು ಒಪ್ಪಿಸಲಾಗುತ್ತಿದೆ. ಇದು ಕಾಲಕ್ರಮೇಣ ಅವಕಾಶ ಗಳನ್ನು ಹಾಗೂ ಒಳಗೊಳ್ಳುವಿಕೆಯನ್ನು ಹೃಸ್ವಗೊಳಿಸಿ, ಯಾರು ಲೆಕ್ಕಕ್ಕಿದ್ದಾರೆ ಹಾಗೂ ಯಾರು ಲೆಕ್ಕಕ್ಕಿಲ್ಲ ಎಂದು ನಿರ್ಧರಿಸಲು ಬಳಕೆಯಾಗುತ್ತದೆ. ಈ ಕಾರ್ಯತಂತ್ರದ ಸಾಂಸ್ಕೃತಿಕ ಆಯಾಮ ಕೂಡ ಮುಖ್ಯ. ಹಬ್ಬ-ಧಾರ್ಮಿಕ ಆಚರಣೆಗಳು ರಾಜಕೀಯ ಸಂದೇಶವನ್ನು ಪರೋಕ್ಷವಾಗಿ ರವಾನಿಸುತ್ತವೆ; ಜಾತ್ರೆ-ಮೇಳಗಳು ಏಕತೆ ಮತ್ತು ಪ್ರಾಬಲ್ಯದ ಅಭಿವ್ಯಕ್ತಿಯಾಗಿ ಬಿಂಬಿತವಾಗುತ್ತವೆ. ವ್ಯಕ್ತಿ ಸಮಾಜ-ಸಮುದಾಯದಲ್ಲಿ ಗುರುತಿಸಿಕೊಳ್ಳಲು ಇದರಲ್ಲಿ ಪಾಲ್ಗೊಳ್ಳುತ್ತಾನೆ. ಇದನ್ನೆಲ್ಲ ಯಾರೂ ಹೇರುತ್ತಿಲ್ಲ; ಈ ವಿಷವೃತ್ತದಲ್ಲಿ ಸಿಲುಕುವವರು ಭಾವನಾತ್ಮಕ ತೃಪ್ತಿ ಪಡೆಯುತ್ತಾರೆ. ಸಮಕಾಲೀನ ಮಾಧ್ಯಮ ಈ ಪ್ರಕ್ರಿಯೆಯನ್ನು ಆಳವಾಗಿಸುತ್ತದೆ; ಸಮ್ಮತಿಯನ್ನು ಹೇಗೆ ರೂಪುಗೊಳಿಸಲಾಗುತ್ತದೆ ಎಂಬುದನ್ನು ನೋಮ್ ಚೋಮ್‌ಸ್ಕಿ ಮತ್ತು ಎಡ್ವರ್ಡ್ ಎಸ್.ಹರ್ಮನ್ ವಿಷದಪಡಿಸಿದ್ದಾರೆ. ಸಮಾಜವಿಜ್ಞಾನಿಗಳ ಪ್ರಕಾರ, ಇಂಥ ರಾಜಕಾರಣ ತತ್‌ಕ್ಷಣ ಹಿಂಸೆಗೆ ಕಾರಣವಾಗುವುದಿಲ್ಲ; ಬದಲಿಗೆ, ನೈತಿಕ ನಿರೀಕ್ಷೆಗಳನ್ನು ಮರುರೂಪಿಸುತ್ತದೆ. ಅಸ್ಮಿತೆ ರಾಜಕೀಯದಿಂದ ಜನರು ಈ ಹಿಂದೆ ಪ್ರಶ್ನಿಸುತ್ತಿದ್ದ ಘಟನೆ-ಪ್ರಕ್ರಿಯೆಗಳನ್ನು ಸಹಿಸಿಕೊಳ್ಳಲು ಆರಂಭಿಸುತ್ತಾರೆ. ಬಂಗಾಳ ಹಿಂದಿನಿಂದಲೂ ಚರ್ಚೆ ಮತ್ತು ಸೈದ್ಧಾಂತಿಕತೆಯನ್ನು ಗೌರವಿಸುತ್ತ ಬಂದಿದೆ. ಈ ಚುನಾವಣೆ ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಸೀಮಿತವಾಗಿಲ್ಲ; ಪ್ರಾದೇಶಿಕ ಅಸ್ಮಿತೆ, ಉಪರಾಷ್ಟ್ರೀಯತೆ, ಭಾಷಿಕ ಅಸ್ಮಿತೆ ಮತ್ತು ಸ್ಥಳೀಯತೆಯನ್ನು ನಿರ್ಧರಿಸಲಿದೆ. ಯಾರು ಹಿತವರು? ಟಿಎಂಸಿಗೆ ನಗದು ವರ್ಗಾವಣೆ(ಡಿಬಿಟಿ) ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬೆಂಬಲ ಇದೆ. ಅದು ಉದ್ಯೋಗ ಸೃಷ್ಟಿ, ವಲಸೆ ಸಮಸ್ಯೆ ಮತ್ತು ರಾಜ್ಯದಿಂದ ಕೈಗಾರಿಕೆಗಳ ಪಲಾಯನ ಕುರಿತು ಮಾತನ್ನಾಡುತ್ತಿಲ್ಲ; ಬದಲಿಗೆ, ಬಿಜೆಪಿಯನ್ನು ‘ಕೌ ಬೆಲ್ಟ್ ಪಾರ್ಟಿ’; ಅಧಿಕಾರಕ್ಕೆ ಬಂದರೆ ಸಸ್ಯಾಹಾರವನ್ನು ಹೇರುತ್ತದೆ ಎಂದು ದೂರುತ್ತ ನರೇಟಿವ್ ಕಟ್ಟಿದೆ. ಈ ಪಡಿಯಚ್ಚು ತೊಡೆದುಹಾಕಲು ಬಿಜೆಪಿ ಹೆಣಗಾಡುತ್ತಿದೆ; ಬಿಧಾನ್‌ನಗರ ಬಿಜೆಪಿ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ‘ಕಾಟ್ಲಾ’ ಮೀನು ಹಿಡಿದುಕೊಂಡು ಪ್ರಚಾರ ಕೈಗೊಂಡಿದ್ದು ಇದೇ ಕಾರಣದಿಂದ. ರಾಜ್ಯದ ಭಾಷಿಕ-ಸಾಂಸ್ಕೃತಿಕ ವೈವಿಧ್ಯದ ನಿರಾಕರಣೆ, ಎಸ್‌ಐಆರ್ ಮೂಲಕ ಮತದಾರರ ಹಕ್ಕುಗಳಿಗೆ ಧಕ್ಕೆ, ರಾಜಭವನ-ಚುನಾವಣೆ ಆಯೋಗ ಮತ್ತು ಸಿಬಿಐ-ಈ.ಡಿ.-ಆದಾಯ ತೆರಿಗೆ ಇತ್ಯಾದಿ ಸಂಸ್ಥೆಗಳ ನೆರವಿನಿಂದ ಚುನಾವಣೆಯನ್ನು ನಿರ್ವಹಿಸುತ್ತದೆ ಎಂಬ ಆರೋಪ ಬಿಜೆಪಿ ಮೇಲಿದೆ. ರಾಜ್ಯದೊಳಗೆ ಬಾಂಗ್ಲಾ ದೇಶೀಯರು ಸೇರಿದಂತೆ 60 ಲಕ್ಷ ಮಂದಿ ನುಸುಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ‘ಟಿಎಂಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅಕ್ರಮ ನುಸುಳುಕೋರರನ್ನು ಹೊರಹಾಕಲು ಎಸ್‌ಐಆರ್ ಮಾಡಲಾಗಿದೆ’ ಎಂದು ಬಿಜೆಪಿ ಹೇಳುತ್ತಿದೆ. ನುಸುಳುವಿಕೆಯನ್ನು ತಡೆಯುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಜವಾಬ್ದಾರಿ. ಇದರಲ್ಲಿ ಗೃಹ ಮಂತ್ರಾಲಯದ ಹೊಣೆಗಾರಿಕೆಯೇ ಹೆಚ್ಚು. ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎನ್ನುವ ಸಂಕಥನ ಕೂಡ ಸುಳ್ಳು. 121 ಕೋಟಿ ಜನರಿರುವ ದೇಶದಲ್ಲಿ ಹಿಂದೂಗಳ ಸಂಖ್ಯೆ 96.63 ಕೋಟಿ(ಶೇ.79.8); ಮುಸ್ಲಿಮರು ಶೇ.14.2 ಮತ್ತು ಇತರರು ಶೇ.6(2011ರ ಜನಗಣತಿ ಪ್ರಕಾರ). ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆ 9.13 ಕೋಟಿಯಲ್ಲಿ ಮುಸ್ಲಿಮರ ಸಂಖ್ಯೆ 2.47 ಕೋಟಿ(ಶೇ.27). ಹೀಗಿರುವಾಗ ದೇಶ ಇಲ್ಲವೇ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವುದು ಹೇಗೆ? ಆದರೆ, ಈ ಸುಳ್ಳನ್ನು ಮತ್ತೆಮತ್ತೆ ಹೇಳಲಾಗುತ್ತಿದೆ. ಪ್ರಜಾಪ್ರಭುತ್ವಗಳು ರಾತ್ರೋರಾತ್ರಿ ಕುಸಿಯುವುದು ಅಪರೂಪ. ಸಮಾಜಗಳು ನೈತಿಕ ಎಲ್ಲೆಕಟ್ಟುಗಳ ಕುಸಿತಕ್ಕೆ ಒಗ್ಗಿಕೊಂಡಾಗ ಮತ್ತು ಎಲ್ಲವೂ ರಾಜಕೀಯ ಪ್ರಾಜೆಕ್ಟ್ ಎಂದು ಗುರುತಿಸದೆ ಇದ್ದಾಗ ಪ್ರಜಾತಂತ್ರ ಸವೆಯುತ್ತದೆ. ಬಿಜೆಪಿ ತಂತ್ರವನ್ನು ಅಂಥದ್ದೇ ಪ್ರತಿತಂತ್ರದಿಂದ ಯಶಸ್ವಿಯಾಗಿ ಮಣಿಸಿರುವ ಮಮತಾ ಬ್ಯಾನರ್ಜಿ ಅವರ ‘ಆಟ’ ಈ ಚುನಾವಣೆಯಲ್ಲಿ ನಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ.

ವಾರ್ತಾ ಭಾರತಿ 3 Apr 2026 10:17 am

Karnataka Weather: ಏಪ್ರಿಲ್ 8 ರವರೆಗೆ ಗುಡುಗು ಸಹಿತ ಮಳೆ ಎಚ್ಚರಿಕೆ: ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಉತ್ತರ ಕರ್ನಾಟಕದ ಜಿಲ್ಲೆಗಳು, ದಕ್ಷಿಣ ಒಳನಾಡು ಸೇರಿದಂತೆ ಕರಾವಳಿಯ ಎರಡು ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ನಾಳೆಯಿಂದ ಮಳೆ ಆರಂಭ ಆಗಲಿದೆ.

ವಿಜಯ ಕರ್ನಾಟಕ 3 Apr 2026 10:10 am

ಜೇವರ್ಗಿ: ಭೀಮಾ ನದಿಗೆ ಈಜಲು ಇಳಿದ ವಿದ್ಯಾರ್ಥಿ ಮೃತ್ಯು

ಕಲಬುರಗಿ, ಎ.3: ನದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಲಾಲಸಾಬ ಸರ್ದಾರ ಪಟೇಲ್ (19 ) ಎಂದು ಗುರುತಿಸಲಾಗಿದೆ. ಕದಂಬ ಪಿಯು ಕಾಲೇಜ ಜೇವರ್ಗಿಯಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಲಾಲಸಾಬ, ಗುರುವಾರ ಮಧ್ಯಾಹ್ನ ಗೆಳೆಯರೊಂದಿಗೆ ಭೀಮಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Apr 2026 10:04 am

ಕರ್ನಾಟಕ ಸರ್ಕಾರಕ್ಕೆ 'EV' ಅಲರ್ಜಿ: ಲೈಫ್ ಟ್ಯಾಕ್ಸ್ ಭಾರೀ ಏರಿಕೆಯ ಹಿಂದಿನ ಕಾರಣ ವಿವರಿಸಿದ ಕೇಂದ್ರ ಸಚಿವ

Life Tax Increase in Karnataka : ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಜೀವಿತಾವಧಿ ತೆರಿಗೆಯನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ. ಈ ಸಂಬಂಧ, ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಲ್ಲಾ ರಾಜ್ಯಗಳು ಇವಿ ಮೇಲೆ ರಿಯಾಯತಿ ಘೋಷಿಸಿದ್ದರೆ, ಕರ್ನಾಟಕ ಸರ್ಕಾರ ಟ್ಯಾಕ್ಸ್ ಹೆಚ್ಚಿಸುತ್ತಿದೆ.

ವಿಜಯ ಕರ್ನಾಟಕ 3 Apr 2026 9:56 am

ಇರಾನ್‌ನ ಅತಿದೊಡ್ಡ ಸೇತುವೆ ಧ್ವಂಸಗೊಳಿಸಿದ US: ದಾಳಿ ವಿಡಿಯೋ ಹಂಚಿಕೊಂಡು ಒಪ್ಪಂದವಾಗದಿದ್ರೆ ಸರ್ವನಾಶ ಪಕ್ಕಾ ಎಂದು ಟ್ರಂಪ್ ವಾರ್ನಿಂಗ್!

ಇರಾನ್‌ ಒಪ್ಪಂದ ಮಾಡಿಕೊಳ್ಳದಿದ್ದರೆ, ಮತ್ತಷ್ಟು ಭೀಕರವಾಗಿ ದಾಳಿ ಮಾಡಿ ಅವರನ್ನು ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಟ್ರಂಪ್‌ ಘೋಷಣೆ ಮಾಡಿದ ಬೆನ್ನಲ್ಲೇ, ಇರಾನ್‌ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಗುರಿಯಾಗಿಸಿ ದಾಳಿ ಮಾಡಿದ್ದು, ಧ್ವಂಸಗೊಳಿಸಿದೆ. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್‌ ಹಂಚಿಕೊಂಡಿದ್ದು, ಒಪ್ಪಂದ ಮಾಡಿಕೊಳ್ಳದಿದ್ದರೆ, ಇನ್ನಷ್ಟು ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದು, ಇದಕ್ಕೆ ಇರಾನ್‌ ನಿಮ್ಮ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ. ಇನ್ನು, ಈ ದಾಳಿಯಿಂದಾಗಿ ಸುಮಾರು 8ಮಂದಿ ಸಾವನ್ನಪ್ಪಿದ್ದು, 95 ಜನರು ಗಾಯಗೊಂಡಿದ್ದಾರೆ.

ವಿಜಯ ಕರ್ನಾಟಕ 3 Apr 2026 9:26 am

ಖಾಸಗಿ ಬಸ್‌ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಮುಂಬೈಗೆ ಏಕೆ ಬಸ್ ಸೇವೆಗಳನ್ನು ಒದಗಿಸುತ್ತಿಲ್ಲ ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಲಾಭದಾಯಕ ಮಾರ್ಗದಲ್ಲಿ ಖಾಸಗಿ ಬಸ್ ನಿರ್ವಾಹಕರು ಪ್ರೀಮಿಯಂ ಸೇವೆಗಳು ಸೇರಿದಂತೆ ಪ್ರತಿದಿನ ಬರೋಬ್ಬರಿ 94 ಬಸ್‌ಗಳನ್ನು ಓಡಿಸುತ್ತಿದ್ದಾರೆ. ಆದರೆ, ರಾಜ್ಯ ಸಾರಿಗೆ ಸಂಸ್ಥೆಯು

ಒನ್ ಇ೦ಡಿಯ 3 Apr 2026 9:25 am

ಪ್ರಾಧ್ಯಾಪಕರ ಜೊತೆ ಸಂಬಂಧದ ಆರೋಪ, ನೊಂದು ನೇಣಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಚಿತ್ರದುರ್ಗ: ಕಾಲೇಜು ಪ್ರಾಧ್ಯಾಪಕರೊಂದಿಗೆ ಸಂಬಂಧವಿದೆ ಎಂಬ ವದಂತಿಗಳಿಂದ ತೀವ್ರವಾಗಿ ನೊಂದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಲಿಖಿತಾ ಎಂದು ಗುರುತಿಸಲಾಗಿದ್ದು, ಇವರು ಮಲ್ಲಾಡಿಹಳ್ಳಿಯ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (BAMS) ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು.

ಒನ್ ಇ೦ಡಿಯ 3 Apr 2026 8:44 am

ನಕ್ಸಲ್ ಮುಕ್ತ ಭಾರತ ಬಡತನ ಮುಕ್ತವಾಗುವುದೆಂದು?

59 ವರ್ಷಗಳ ಬಳಿಕ ಭಾರತ ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸೋಮವಾರ ಘೋಷಣೆ ಮಾಡಿದ್ದಾರೆ. ‘‘ನಕ್ಸಲ್ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುಮಾರು 12 ರಾಜ್ಯಗಳಲ್ಲಿ ನಕ್ಸಲರ ಕಾರಣದಿಂದ 12 ಕೋಟಿ ಜನರು ಯಾವುದೇ ಸೌಲಭ್ಯಗಳಿಲ್ಲದೆ ಬಡತನದಿಂದ ಬದುಕುತ್ತಿದ್ದರು. ನಕ್ಸಲರ ಕ್ರೌರ್ಯಕ್ಕೆ 5,000 ಭದ್ರತಾ ಸಿಬ್ಬಂದಿ ಸೇರಿದಂತೆ 20,000 ಜನರು ಬಲಿಯಾಗಿದ್ದಾರೆ’’ ಎಂದೂ ಈ ಸಂದರ್ಭದಲ್ಲಿ ಅಮಿತ್ ಶಾ ಸಂಸತ್ತಿಗೆ ಮಾಹಿತಿ ನೀಡಿದ್ದರು. ‘‘ನಕ್ಸಲೀಯರ ಕಟ್ಟಕಡೆಯ ಭದ್ರಕೋಟೆಯಾಗಿದ್ದ ಛತ್ತೀಸ್‌ಗಡದ ಬಸ್ತಾರ್ ಕೂಡ ಬಹುತೇಕ ನಕ್ಸಲ್ ಮುಕ್ತವಾಗಿದೆ. ಅಲ್ಲಿನ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಸ್ಥಾಪಿಸುವ, ಪಡಿತರ ಅಂಗಡಿ ತೆರೆಯುವ ಅಭಿಯಾನ ಆರಂಭವಾಗಿದೆ. ಜನರಿಗೆ ಆಧಾರ್ ಹಾಗೂ ರೇಷನ್ ಕಾರ್ಡ್‌ಗಳನ್ನು ಒದಗಿಸಲಾಗಿದೆ’’ ಎಂದು ಅವರು ವಿವರಗಳನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅಮಿತ್ ಶಾ ಹೇಳಿಕೆಗೆ ಸೆಡ್ಡು ಹೊಡೆದಿರುವ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ‘‘ದೇಶದಲ್ಲೇ ಮೊದಲ ನಕ್ಸಲ್‌ಮುಕ್ತ ರಾಜ್ಯ ಕರ್ನಾಟಕವಾಗಿದೆ’’ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ‘‘ಅಮಿತ್ ಶಾ ಅವರು ಇತ್ತೀಚೆಗೆ ದೇಶವನ್ನು ನಕ್ಸಲ್ ಮುಕ್ತ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ ಸ್ಥಾಪಿಸುವ ಮೂಲಕ ದೇಶದ ಮೊದಲ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ’’ ಎಂದು ಗೃಹ ಸಚಿವರಾಗಿ ತಮ್ಮ ಸಾಧನೆಯನ್ನು ಹೇಳಿಕೊಂಡಿದ್ದಾರೆ. ದೇಶ ನಕ್ಸಲ್ ಮುಕ್ತವಾಗಿದೆಯಾದರೂ, ಇನ್ನೂ ಹಸಿವು ಮುಕ್ತವಾಗಿಲ್ಲ, ಬಡತನಮುಕ್ತವಾಗಿಲ್ಲ, ಅಸಮಾನತೆಯಿಂದ ಮುಕ್ತವಾಗಿಲ್ಲ. ಹಾಗೆಯೇ ಜಾತಿ, ಅಸ್ಪಶ್ಯತೆಗಳಿಂದಲೂ ಮುಕ್ತವಾಗಿಲ್ಲ. ನಕ್ಸಲರ ಜೊತೆ ಜೊತೆಗೇ ಇವೆಲ್ಲವೂ ಭಾರತದಿಂದ ತೊಲಗಿದೆ ಎಂದು ಗೃಹ ಸಚಿವರು ಘೋಷಿಸಿದ್ದರೆ ದೇಶ ಖಂಡಿತವಾಗಿಯೂ ಸಂಭ್ರಮಿಸುತ್ತಿತ್ತು. ನಕ್ಸಲರು ತಮ್ಮ ಗುರಿಯನ್ನು ಸಾಧಿಸುವುದಕ್ಕಾಗಿ ಆರಿಸಿದ ಹಿಂಸಾ ಮಾರ್ಗ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಎತ್ತಿದ ಪ್ರಶ್ನೆಯ ಬಗ್ಗೆ ಈ ದೇಶದ ಜನತೆಗೆ ಭಿನ್ನಾಭಿಪ್ರಾಯವಿರಲಿಲ್ಲ. ನಕ್ಸಲರು ಹೊರದೇಶಗಳಿಂದ ನುಸುಳಿದ ಭಯೋತ್ಪಾದಕರಾಗಿರಲಿಲ್ಲ. ಆಕಾಶದಿಂದ ಇಳಿದ ಕೋರೆ ಹಲ್ಲುಗಳು, ಕೊಂಬುಗಳಿರುವ ರಾಕ್ಷಸರೂ ಅವರಾಗಿರಲಿಲ್ಲ. ಅವರೆಲ್ಲರೂ ನಮ್ಮದೇ ನೆಲದ ದಲಿತರು, ರೈತರು, ಬಡವರ ಮಕ್ಕಳಾಗಿದ್ದರು. ಅವರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಪ್ರಜಾಸತ್ತಾತ್ಮಕ ಸರಕಾರದ ವಿರುದ್ಧ ಯುದ್ಧ ಘೋಷಿಸಿದ್ದು ತಪ್ಪೇ ಇರಬಹುದು. ಆದರೆ ಅಂತಹದೊಂದು ಅನಿವಾರ್ಯ ಸ್ಥಿತಿಯನ್ನು ಅವರಿಗೆ ನಿರ್ಮಾಣ ಮಾಡಿದ್ದು ಯಾರು? ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಅಥವಾ ಯಾವುದೋ ಒಂದು ದೇವರ ಹೆಸರಿನಲ್ಲಿ ಅವರು ಶಸ್ತ್ರಾಸ್ತ್ರ ಕೈಗೆತ್ತಿಕೊಂಡವರಾಗಿರಲಿಲ್ಲ. ಬದಲಿಗೆ, ಬಡತನ, ಅನಕ್ಷರತೆ, ಜಾತೀಯತೆ, ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ ಬಡವರ್ಗಕ್ಕೆ ಸೇರಿದ ಜನರಾಗಿದ್ದರು. ಕರ್ನಾಟಕದಲ್ಲಿ ನಕ್ಸಲ್ ನಿಗ್ರಹ ಪಡೆಗಳು ಕೊಂದು ಹಾಕಿದ ಪಾರ್ವತಿ, ಹಾಜಿಮ್ಮ, ವಿಕ್ರಮ್ ಗೌಡ ಇವರೆಲ್ಲ ಈ ನಾಡಿನ ರೈತರು, ಕೂಲಿ ಕಾರ್ಮಿಕರ ಮಕ್ಕಳಾಗಿದ್ದರು. ತಮ್ಮ ಜನರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಅವರು ಅನಿವಾರ್ಯ ಸ್ಥಿತಿಯಲ್ಲಿ ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡರು. ಅಂತಿಮವಾಗಿ ಅದೇ ಶಸ್ತ್ರಾಸ್ತ್ರಗಳಿಗೆ ಬಲಿಯಾದರು. ನಕ್ಸಲೀಯರಿಗೂ ಕೂಡ ತಮ್ಮ ಹೋರಾಟದ ಮಿತಿ ಅರ್ಥವಾಗಿದೆ. ಜನರ ಜೊತೆಗೆ ಬೆರೆತು ಹೋರಾಟವನ್ನು ಪ್ರಜಾಸತ್ತಾತ್ಮಕವಾಗಿ ಮರು ರೂಪಿಸುವ ಅಗತ್ಯವನ್ನು ಅವರೂ ಕಂಡುಕೊಂಡಂತಿದೆ. ಈ ಕಾರಣಕ್ಕಾಗಿಯೇ ಶಸ್ತ್ರಗಳನ್ನು ತೊರೆದು ಸಾವಿರಾರು ನಕ್ಸಲೀಯರು ಈಗಾಗಲೇ ಶರಣಾಗತರಾಗಿದ್ದಾರೆ. ಸಂವಿಧಾನ ಕಲ್ಪಿಸಿಕೊಟ್ಟ ದಾರಿಯಲ್ಲಿ ಅವರು ನಡೆಯಲು ಮುಂದಾಗಿದ್ದಾರೆ. ಸರಕಾರ ನಕ್ಸಲರನ್ನು ಭೌತಿಕವಾಗಿ ನಾಶ ಮಾಡಲು ಭಾಗಶಃ ಯಶಸ್ವಿಯಾಗಿದೆ ಎನ್ನುವುದೇನೋ ನಿಜ. ಆದರೆ ನಕ್ಸಲರ ಸೃಷ್ಟಿಗೆ ಕಾರಣವಾಗಿರುವ ಸಾಮಾಜಿಕ ಪಿಡುಗುಗಳನ್ನು ಇಲ್ಲವಾಗಿಸಲು ಎಲ್ಲಿಯವರೆಗೆ ಸರಕಾರಕ್ಕೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ದೇಶ ಪೂರ್ಣವಾಗಿ ನಕ್ಸಲ್ ಮುಕ್ತವಾಗುವುದಿಲ್ಲ ಎನ್ನುವ ವಾಸ್ತವ ಸರಕಾರಕ್ಕೆ ಗೊತ್ತಿರಬೇಕಾಗಿದೆ. ಈಶಾನ್ಯ ಭಾರತದಲ್ಲಿ ನಕ್ಸಲ್ ಚಳವಳಿ ಹೇಗೆ ಬೆಳೆಯಿತು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಆದಿವಾಸಿಗಳು, ಬುಡಕಟ್ಟು ಜನರು ಬದುಕುತ್ತಿದ್ದ ಅರಣ್ಯ ಪ್ರದೇಶಗಳಲ್ಲಿ ಸರಕಾರ ನಡೆಸಿದ ಹಸ್ತಕ್ಷೇಪವೇ ಹಿಂಸೆಗೆ ಕಾರಣವಾಯಿತು. ಕಾಡಿನಲ್ಲಿ ತಲೆ ತಲಾಂತರಗಳಿಂದ ಬದುಕುತ್ತಾ ಬಂದ ಜನರನ್ನು ಒಕ್ಕಲೆಬ್ಬಿಸಿ ಅರಣ್ಯ ಪ್ರದೇಶಗಳನ್ನು ಬೃಹತ್ ಕಾರ್ಪೊರೇಟ್ ಜನರಿಗೆ ಒಪ್ಪಿಸುವ ಸರಕಾರದ ಪ್ರಯತ್ನದ ವಿರುದ್ಧ ಎದ್ದ ಪ್ರತಿರೋಧ ಹಿಂಸೆಯ ರೂಪದಲ್ಲಿ ಸ್ಫೋಟಗೊಂಡಿತು. ಆದಿವಾಸಿಗಳಿಗೆ ಬೆಂಗಾವಲಾಗಿ ನಕ್ಸಲ್ ಸಂಘಟನೆಗಳು ನಿಂತವು. ಆಂಧ್ರ, ಬಿಹಾರಗಳಲ್ಲೂ ಜಮೀನ್ದಾರರು, ಮೇಲ್‌ಜಾತಿಯ ದಬ್ಬಾಳಿಕೆಯ ವಿರುದ್ಧ ಜನರು ದಂಗೆಯೆದ್ದರು. ಈ ಸಂದರ್ಭದಲ್ಲಿ ಈ ಜನರ ನೆರವಿಗೆ ಸರಕಾರ ಮುಂದಾಗಿದ್ದರೆ ಇವರು ನಕ್ಸಲ್ ಉಗ್ರವಾದಿಗಳಾಗುತ್ತಿರಲಿಲ್ಲವೇನೋ? ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಲು ಮುಂದಾದ ಜನರನ್ನು ದಮನಿಸಲು ಜಮೀನ್ದಾರರು ಮತ್ತು ಮೇಲ್‌ಜಾತಿಯ ಜನರು ಪೊಲೀಸರ ನೆರವನ್ನು ಪಡೆದರು. ಈ ಸಂದರ್ಭದಲ್ಲಿ, ಇವರು ಕಾಡಿನಲ್ಲಿ ತಲೆಮರೆಸಿಕೊಳ್ಳುವುದು ಅನಿವಾರ್ಯವಾಯಿತು. ಅನ್ಯಾಯಗಳ ವಿರುದ್ಧ ಧ್ವನಿಯೆತ್ತಿದ ಜನರನ್ನು ಕೊಂದು ಹಾಕುವುದರಿಂದ ಯಾವುದೇ ಉಗ್ರವಾದ ಅಂತ್ಯವಾಗುವುದಿಲ್ಲ. ಸರಕಾರ ಮೊದಲು ಆ ಉಗ್ರವಾದಕ್ಕೆ ಕಾರಣವಾದ ಅನ್ಯಾಯಗಳನ್ನು ಇಲ್ಲವಾಗಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಕ್ಸಲರು ಇಲ್ಲವಾಗಿರಬಹುದು, ಆದರೆ ಅವರು ಮತ್ತೆ ಹುಟ್ಟಿ ಬರದಂತೆ ನೋಡಿಕೊಳ್ಳಬೇಕಾದರೆ, ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಮುಂದಾಗಬೇಕು. ಇದೇ ಸಂದರ್ಭದಲ್ಲಿ, ಕಾಡಿನಲ್ಲಿ ಅಡಗಿರುವ ಉಗ್ರರನ್ನು ದಮನಿಸಿದ್ದೇವೆ ಎಂದು ಮೀಸೆ ತಿರುವುತ್ತಿರುವ ರಾಜಕಾರಣಿಗಳೇ ನಾಡಿನೊಳಗೆ ಹೊಸ ಬಗೆಯ ಉಗ್ರರನ್ನು ಬೆಳೆಸುತ್ತಿರುವುದು ಇನ್ನಷ್ಟು ಆತಂಕಕಾರಿಯಾಗಿದೆ. ಬಡತನ, ಶಿಕ್ಷಣ, ಆರೋಗ್ಯದ ಹಕ್ಕುಗಳಿಗಾಗಿ ಧ್ವನಿಯೆತ್ತಿದವರು ನಕ್ಸಲ್ ಉಗ್ರರಾದರೆ, ನಾಡಿನ ಒಳಗೆ ಧರ್ಮ, ದೇವರು, ಗೋವುಗಳ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಉಗ್ರರನ್ನು ಏನೆಂದು ಕರೆಯಬೇಕು? ನಕ್ಸಲರನ್ನು ದಮನಿಸಿದ್ದೇವೆ ಎಂದು ಘೋಷಿಸಿರುವ ಸರಕಾರವೇ ಇಂತಹ ಧರ್ಮಾಂಧ ಉಗ್ರರನ್ನು ಪರೋಕ್ಷವಾಗಿ ಪೋಷಿಸುತ್ತಿದೆ. ನಕ್ಸಲ್ ಉಗ್ರವಾದಕ್ಕಿಂತಲೂ ಅಪಾಯಕಾರಿಯಾಗಿರುವ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕೂಡ ಇಂದಿನ ಅಗತ್ಯವಾಗಿದೆ.

ವಾರ್ತಾ ಭಾರತಿ 3 Apr 2026 8:38 am

Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ

Karnataka Rain: ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕದಕ 207 ತಾಲ್ಲೂಕುಗಳಲ್ಲಿ ಈ ವರ್ಷದಲ್ಲಿ ಮಳೆ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಂಪುಟ ಉಪ

ಒನ್ ಇ೦ಡಿಯ 3 Apr 2026 8:30 am

ಕಾಂಗ್ರೆಸ್‌ ಗೆ ಸೋಲುವ ಭೀತಿ: ದಾವಣಗೆರೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ವೇಳೆ ಕೈ ವಿರುದ್ದ ಆರ್‌ ಅಶೋಕ್‌, ಶ್ರೀರಾಮುಲು ವಾಕ್ಸಮರ

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪರ ವಿಪಕ್ಷ ನಾಯಕ ಆರ್‌ ಅಶೋಕ್‌ ಹಾಗೂ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ಮತಯಾಚನೆ ಮಾಡಿದ್ದು, ಕಾಂಗ್ರೆಸ್‌ ವಿರುದ್ದ ವಾಕ್ಸಮರ ನಡೆಸಿದ್ದಾರೆ.ಈ ವೇಳೆ ಶ್ರೀರಾಮುಲು ಕಾಂಗ್ರೆಸ್‌ ನಾಯಕರು ಸೋಲಿನ ಭೀತಿಯಲ್ಲಿ ಬಿಜೆಪಿ ಗೆದ್ದರೆ, ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಹೇಳುತ್ತಾರೆ, ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಥವಾ ಕಾಂಗ್ರೆಸ್‌ ಇದೆಯೋ ಎಂದು ವ್ಯಂಗ್ಯಮಾಡಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಬಡವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ, ಬಿಜೆಪಿ ಅಭ್ಯರ್ಥಿ ಸಾಮಾನ್ಯ ಬಡ ಕಾರ್ಯಕರ್ತನಾಗಿದ್ದು, ಅವರನ್ನೇ ಗೆಲ್ಲಿಸಿ ಎಂದು ಆರ್‌ ಅಶೋಕ್‌ ಮತಯಾಚನೆ ಮಾಡಿದ್ದಾರೆ.

ವಿಜಯ ಕರ್ನಾಟಕ 3 Apr 2026 8:17 am

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುತ್ತಾರೆಯೇ? ವೈರಲ್ ವಿಡಿಯೊ ಸೃಷ್ಟಿಸಿದ ಕುತೂಹಲ

ಚೆನ್ನೈ: ಐಪಿಎಲ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸಿಎಸ್‌ಕೆ ಸ್ಟಾರ್ ಆಟಗಾರ ಎಂ.ಎಸ್.ಧೋನಿ ಮೈದಾನಕ್ಕೆ ಇಳಿಯುತ್ತಾರೆಯೇ ಎಂಬ ಕುತೂಹಲ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಮೂಡಿದೆ. ಧೋನಿ ಏಪ್ರಿಲ್ ಕೊನೆಯ ವರೆಗೂ ಐಪಿಎಲ್ ಪಂದ್ಯಗಳಿಗೆ ಲಭ್ಯರಿಲ್ಲ ಎಂದು ಹೇಳಲಾಗಿತ್ತು. ಆದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಧೋನಿ ತಂಡ ಸೇರಿಕೊಳ್ಳುತ್ತಾರೆಯೇ ಎಂಬ ಕಾತರದಲ್ಲಿ ಸಿಎಸ್‌ಕೆ ಅಭಿಮಾನಿಗಳಿದ್ದಾರೆ. ಸ್ನಾಯುಸೆಳೆತದಿಂದಾಗಿ ಧೋನಿ ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಪ್ರಕಟಿಸಿತ್ತು. ಈ ಕಾರಣದಿಂದ ಗುವಾಹತಿಗೆ ತಂಡದ ಜತೆ ಧೋನಿ ಪ್ರಯಾಣಿಸಿರಲಿಲ್ಲ. ಸೀಸನ್ ನ ಆರಂಭಿಕ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ. ಆದಾಗ್ಯೂ ಸಿಎಸ್‌ಕೆ ಅಧಿಕೃತ ಜಾಲತಾಣ ಹ್ಯಾಂಡಲ್ ನಿಂದ ಹಂಚಿಕೊಂಡ ವಿಡಿಯೊ ತುಣುಕಿನಲ್ಲಿ, ಧೋನಿ ತಮ್ಮ ಕಿಟ್ ನೊಂದಿಗೆ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇದು ಅವರ ಫಿಟ್ನೆಸ್ ಮತ್ತು ಲಭ್ಯತೆ ಬಗ್ಗೆ ಹಲವು ವದಂತಿಗಳಿಗೆ ಕಾರಣವಾಗಿದೆ. ಅವರ ಪುನರಾಗಮನ ಬಗ್ಗೆ ಅಧಿಕೃತ ದೃಢೀಕರಣ ಇದುವರೆಗೆ ಬಂದಿಲ್ಲವಾದರೂ, ತರಬೇತಿಯಲ್ಲಿ ಅವರ ಉಪಸ್ಥಿತಿಯು ಅಭಿಮಾನಿಗಳ ಆಶಾವಾದಕ್ಕೆ ಕಾರಣವಾಗಿದೆ. ಕುತೂಹಲದ ವಿಚಾರವೆಂದರೆ ಆರಂಭಿಕ ಪಂದ್ಯಕ್ಕೆ ಮುನ್ನವೂ ಧೋನಿ ತರಬೇತಿಯಲ್ಲಿ ಕಾಣಿಸಿಕೊಂಡಿದ್ದರು. ಮತ್ತೆ ಇದೇ ಬಗೆಯ ವಿಡಿಯೊ ಹರಿದಾಡುತ್ತಿರುವುದು ಈ ಹಿರಿಯ ಆಟಗಾರ ನಿರೀಕ್ಷೆಗಿಂತ ಮುಂಚಿತವಾಗಿಯೇ ತಂಡ ಸೇರಿಕೊಳ್ಳುತ್ತಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. Kodiyil Oruvan! #WhistlePodu #Yellove pic.twitter.com/SuztJYGNzr — Chennai Super Kings (@ChennaiIPL) April 1, 2026

ವಾರ್ತಾ ಭಾರತಿ 3 Apr 2026 7:57 am

ಎಪ್ಸ್ಟೀನ್ ತನಿಖಾ ನಿರ್ವಹಣೆ ವಿವಾದ: ಅಮೆರಿಕ ಅಟಾರ್ನಿ ಜನರಲ್ ವಜಾ

ವಾಷಿಂಗ್ಟನ್: ಎಪ್ಸ್ಟೀನ್ ಕಡತ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಮೃತ ಹವ್ಯಾಸಿ ಪತ್ರಕರ್ತ ಮತ್ತು ಲೈಂಗಿಕ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ತನಿಖಾತ್ಮಕ ಕಡತಗಳ ನಿರ್ವಹಣೆಯಲ್ಲಿ ಅಟಾರ್ನಿ ಜನರಲ್ ವಿಫಲರಾಗಿದ್ದಾರೆ ಎಂಬ ಆರೋಪ ಮತ್ತು ಅವರ ಅಭಿಯೋಜಕ ದೃಷ್ಟಿಕೋನದ ಕಾರಣದಿಂದ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಟ್ರಂಪ್ ಅವರ ನಿಕಟವರ್ತಿಗಳು ಮತ್ತು ಹಲವು ಮಂದಿ ರಿಪಬ್ಲಿಕನ್ ಸಂಸದರು ಬೊಂಡಿ ಕಾರ್ಯನಿರ್ವಹಣೆಯನ್ನು ವ್ಯಾಪಕವಾಗಿ ಟೀಕಿಸಿದ್ದರು. ನ್ಯಾಯಾಂಗ ಇಲಾಖೆಯ ಲೈಂಗಿಕ ಕಳ್ಳಸಾಗಾಣಿಕೆ ತನಿಖೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಅವರು ತಪ್ಪಾಗಿ ನಿರ್ವಹಿಸಿದ್ದರು ಅಥವಾ ತಡೆಹಿಡಿದಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಟ್ರಂಪ್ ಅವರ ರಾಜಕೀಯ ಟೀಕಾಕಾರರ ವಿರುದ್ಧ ಮತ್ತು ವಿರುದ್ಧದ ಅಪರಾಧ ಪ್ರಕರಣಗಳನ್ನು ವೇಗವಾಗಿ ಮುನ್ನಡೆಸುತ್ತಿಲ್ಲ ಎಂಬ ವಿಚಾರದಲ್ಲೂ ಟ್ರಂಪ್ ಅವರು ಬೊಂಡಿಯವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ. ಬೊಂಡಿಯವರ ಪದಚ್ಯುತಿಯನ್ನು ದೃಢಪಡಿಸಿರುವ ಟ್ರಂಪ್, ಉಪ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆಯವರು ಮುಂದೆ ಬೊಂಡಿ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಜಾಲತಾಣ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ. ಆದಾಗ್ಯೂ ಬೊಂಡಿಯವರನ್ನು ಶ್ರೇಷ್ಠ ಅಮೆರಿಕನ್ ರಾಷ್ಟ್ರಭಕ್ತೆ ಮತ್ತು ನಿಷ್ಠಾವಂತ ಸ್ನೇಹಿತೆ ಎಂದು ಶ್ಲಾಘಿಸಿರುವ ಟ್ರಂಪ್, ಖಾಸಗಿ ವಲಯದಲ್ಲಿ ತಮ್ಮ ಉದ್ಯೋಗಕ್ಕೆ ಮರಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 3 Apr 2026 7:50 am

Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?

ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯು ಸದಾ ಹೂಡಿಕೆದಾರರ ಮತ್ತು ಆಭರಣ ಪ್ರಿಯರ ಗಮನ ಸೆಳೆಯುತ್ತದೆ. ಏಪ್ರಿಲ್ 03, 2026 ರಂದು, ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್‌) ನ ಪ್ರಭಾವದಿಂದ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ಇಂದಿನ ನಿಖರ ಅಂಕಿ-ಅಂಶಗಳ ಪ್ರಕಾರ, ನಿನ್ನೆಗಿಂತ ಇಂದು ಚಿನ್ನದ ದರದಲ್ಲಿ

ಒನ್ ಇ೦ಡಿಯ 3 Apr 2026 7:48 am

ಡಿಜಿಟಲ್ ವಾಹಿವಾಟಿನಲ್ಲಿ OTPಗೆ ಶೀಘ್ರವೇ ಗುಡ್‌ ಬೈ, ಸೈಲೆಂಟ್ ಅಥೆಂಟಿಕೇಶನ್ ವ್ಯವಸ್ಥೆ ಜಾರಿ: ಸಿಮ್ ಸ್ವಾಪಿಂಗ್ ದಂಧೆಗೆ ಬ್ರೇಕ್!

ಡಿಜಿಟಲ್‌ ಬ್ಯಾಕಿಂಗ್‌ ಸಮಯದಲ್ಲಿ ವಂಚನೆ ಹಾಗೂ ಇತರೆ ತೊಂದರೆಗಳಿಗೆ ಕಡಿವಾಣ ಹಾಕಲು ಬ್ಯಾಂಕ್‌ ಹಾಗೂ ಟೆಲಿಕಾಂ ಸಂಸ್ಥೆಗಳು ಜಂಟಿಯಾಗಿ ಒನ್‌ ಟೈಮ್‌ ಪಾಸ್‌ ವರ್ಡ್‌ ಬದಲಿಗೆ, ಸೈಲೆಂಟ್‌ ಅಥೆಂಟಿಕೇಶನ್‌ ಮೆಕ್ಯಾನಿಸಂ ಎಂಬ ಸ್ವಯಂ ದೃಢೀಕರಣ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿವೆ.​​ ಈ ವ್ಯವಸ್ಥೆಯಿಂದ ಡಿಜಿಟಲ್ ವಹಿವಾಟಿನ ಸಮಯದಲ್ಲಿ‌ ನೋಂದಾಯಿತ ಸಿಮ್‌ ಬ್ಯಾಕ್‌ ಗ್ರೌಂಡ್‌ ಚೆಕ್‌ ಮಾಡಲಿದ್ದು ಯಾವುದೇ ವಂಚನೆಗಳು ಕಂಡುಬಂದಲ್ಲಿ, ಗ್ರಾಹಕರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲದೆಯೇ ಬ್ಯಾಂಕ್‌ ಗಳು ನೇರವಾಗಿ ಕ್ರಮಕೂಗೊಳ್ಳುತ್ತದೆ. ಇದು ಸಿಮ್‌ ಕ್ಲೋನಿಂಗ್‌ ಮತ್ತು ಸಿಮ್‌ ಸ್ವಾಪಿಂಗ್‌ ನಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 3 Apr 2026 7:20 am

2026ರ 'ಹೊಸ ಆಧಾರ್ ಆ್ಯಪ್'ನಲ್ಲಿರುವ ಟಾಪ್ 8 ಫೀಚರ್ಸ್ ಏನು ಗೊತ್ತಾ? ಇಲ್ಲಿದೆ ಮಾಹಿತಿ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) 2026ರಲ್ಲಿ ಪರಿಚಯಿಸಿರುವ ಹೊಸ 'ಆಧಾರ್ ಆ್ಯಪ್' ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಒಂದು ಅತ್ಯುತ್ತಮ ಸಾಧನವಾಗಿ ಮಾರ್ಪಟ್ಟಿದೆ. ಬ್ಯಾಗಿನಲ್ಲಿ ಪರ್ಸ್ ಅಥವಾ ಒರಿಜಿನಲ್ ಆಧಾರ್ ಕಾರ್ಡ್ ಇಟ್ಟುಕೊಂಡು ತಿರುಗಾಡುವ ಹಾಗೂ ಪ್ರತಿಯೊಂದಕ್ಕೂ ಜೆರಾಕ್ಸ್ ಪ್ರತಿಗಳನ್ನು ನೀಡುವ ಹಳೆಯ ಪದ್ಧತಿಗೆ ಈ ಆ್ಯಪ್ ಮುಕ್ತಿ ನೀಡಿದೆ. ಹಾಗಾದರೆ, ಈ ಹೊಸ ಆ್ಯಪ್‌ನಲ್ಲಿ

ಒನ್ ಇ೦ಡಿಯ 3 Apr 2026 7:00 am

Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ?

ಬೆಂಗಳೂರು: ಬೇಸಿಗೆಯ ಕಡು ಬಿಸಿಲು ಮತ್ತು ಸೆಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇದೀಗ ಹವಾಮಾನದಲ್ಲಿನ ಹಠಾತ್ ಬದಲಾವಣೆ ಅಚ್ಚರಿ ಮೂಡಿಸಿದೆ. ಪ್ರಸ್ತುತ ಹವಾಮಾನ ಮಾಹಿತಿಯ ಪ್ರಕಾರ, ಏಪ್ರಿಲ್ ತಿಂಗಳ ಆರಂಭದಲ್ಲಿಯೇ ರಾಜ್ಯದ ವಿವಿಧೆಡೆ ತಾಪಮಾನದಲ್ಲಿ ಏರುಪೇರು ಕಂಡುಬರುತ್ತಿದೆ. ಹವಾಮಾನ ಇಲಾಖೆಯ ವರದಿಯಂತೆ ಇಂದು (ಏಪ್ರಿಲ್ 3, 2026) ರಾಜ್ಯದ ಹಲವಾರು ಕಡೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಗುಡುಗು

ಒನ್ ಇ೦ಡಿಯ 3 Apr 2026 6:56 am

ಅನಿಲ ಬಿಕ್ಕಟ್ಟು, ಅಸೆಂಬ್ಲಿ ಚುನಾವಣೆ ಎಫೆಕ್ಟ್ ಗೆ ಕಂಗೆಟ್ಟ ಕರಾವಳಿ ಮೀನುಗಾರಿಕೆ ವಲಯ: ದಡದಲ್ಲೇ ಲಂಗರು ಹಾಕಿದ ಶೇ.50ರಷ್ಟು ದೋಣಿಗಳು

ಮಧ್ಯಪ್ರಾಷ್ಯದಲ್ಲಿನ ಯುದ್ಧದಿಂದಾಗಿ ಎದುರಾಗಿರುವ ಅನಿಲ ಬಿಕ್ಕಟ್ಟು, ಇದರ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಹಿನ್ನೆಯಲ್ಲಿ ಕಾರ್ಮಿಕರ ಕೊರತೆಯುಂಟಾಗಿದ್ದು, ಬೋಟ್‌ ಗಳು ದಡದಲ್ಲೇ ಲಂಗರು ಹಾಕಿದ್ದು, ಇದರಿಂದಾಗಿ ಕರಾವಳಿಯ ಮೀನುಗಾರಿಕಾ ವಲಯಕ್ಕೆ ಭಾರಿ ಹೊಡೆತಬಿದ್ದಿದೆ. ಈಗಾಗಲೇ LPG ಕೊರತೆಯಿಂದಾಗಿ ಸಮಸ್ಯೆ ಎದುರಾಗಿದ್ದು, ಈ ನಡುವೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಅನ್ಯರಾಜ್ಯ ಕಾರ್ಮಿಕರು ಚುನಾವಣೆಯಿಂದಾಗಿ ತಮ್ಮ ತಮ್ಮ ಊರುಗಳಿಗೆ ತಿಂಗಳ ಮುಂಚಯೇ ಹೋಗಿದ್ದು, ಸಮಸ್ಯೆ ಶೇ.50ರಷ್ಟು ಬೋಟುಗಳು ಸ್ಥಗಿತವಾಗುವಂತಹ ಪರಿಸ್ಥಿತಿ ಬಂದಿದೆ.

ವಿಜಯ ಕರ್ನಾಟಕ 3 Apr 2026 6:31 am

ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು

ಬೆಳಗಾವಿ: ಎಂಜಿನಿಯರಿಂಗ್ ಮಾಡಿ ವೃತ್ತಿ ಪಡೆದರೆ ಜೀವನ ಉತ್ತಮವಾಗಿರುತ್ತದೆ. ಕೈತುಂಬ ಸಂಬಳ ಮತ್ತಿನ್ನೇನು ಬೇಕು ಎಂದು ಹೇಳುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಜನರು ಕೈಲಿದ್ದ ನೌಕರಿ ಬಿಟ್ಟು ಇಷ್ಟದ ಕೆಲಸ, ಸ್ವಂತ ಉದ್ಯಮ ಆರಂಭಿಸುತ್ತಾರೆ. ಅದೇ ರೀತಿ ಕರ್ನಾಟಕದ ಟೆಕ್ಕಿಯೊಬ್ಬರು ಹುಣಸೆ ಚೋಕೊ ಉತ್ಪನ್ನ ತಯಾರಿಸಿ ಅದಕ್ಕೆ ಜಾಗತಿಕ ಸ್ಥಾನಮಾನ ನೀಡಿದ್ದಾರೆ. ತಮ್ಮ ಉತ್ಪನ್ನಕ್ಕೆ ಪೇಟೆಂಟ್

ಒನ್ ಇ೦ಡಿಯ 3 Apr 2026 6:30 am

ಕಚ್ಚಾ ತೈಲ ನಿರ್ವಹಣೆಗೆ NMPAಯಿಂದ 438.29 ಕೋಟಿ ವೆಚ್ಚದಲ್ಲಿ ಬರ್ತ್ ಪುನರ್‌ನಿರ್ಮಾಣ; ಭಾರತ ಜಾಗತಿಕ ಜಲನಾಯಕನಾಗೋ ಗುರಿ

ಸಮುದ್ರದ ಮೂಲಕ ಕಚ್ಚಾತೈಲ ಸೇರಿದಂತೆ ಪೆಟ್ರೋಲಿಯನಂತಹ ಭಾರಿ ಪ್ರಮಾಣದ ದ್ರವ ಸರಕುಗಳನ್ನು ನಿರ್ವಹಣೆ ಮಾಡಲು ನವಮಂಗಳೂರು ಬಂದರು ಪ್ರಾಧಿಕಾರ ಸಿದ್ದತೆ ನಡೆಸುತ್ತಿದ್ದು, ಬರೋಬ್ಬರಿ 438.29 ಕೋಟಿ ವೆಚ್ಚದಲ್ಲಿ ಇದಕ್ಕಾಗಿ ಬರ್ತ್‌ ಸಂಖ್ಯೆ 9ಅನ್ನು ಪುನರ್‌ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್‌ ಅವರಿಂದ ಅನುಮೋದನೆ ದೊರೆತಿದ್ದು, ಭಾರತವನ್ನು ಜಾಗತಿಕ ಜಲಯಾನ ನಾಯಕನಾಗಿ ಮಾಡುವ ಗುರಿ ಹೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 3 Apr 2026 6:03 am

ಇಂಧನ ಸಂಕಷ್ಟದ ನಡುವೆ ಸಿಲಿಕಾನ್ ಸಿಟಿಯಲ್ಲಿ ಇವಿ ಕ್ರಾಂತಿ: ಒಂದೇ ದಿನ 13 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ; ಶೇ.400ರಷ್ಟು ಏರಿಕೆ!

ಪೆಟ್ರೋಲ್‌ ದರ ಏರಿಕೆ ಹಾಗೂ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಎದುರಾಗುತ್ತಿರುವ ಇಂಧನ ಅನಿಶ್ಚಿತತೆ ನಡುವೆ ರಾಜ್ಯದ ಜನ ಹೆಚ್ಚಾಗಿ ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಒಲವು ತೋರಿಸುತ್ತಿದ್ದು, ಬೆಂಗಳೂರಿನ ಇದರ ಡಿಮ್ಯಾಂಡ್‌ ಭಾರಿ ಏರಿಕೆಯಾಗಿದೆ. ಅಲ್ಲದೆ, ಏ.1ರಿಂದ ಜಾರಿಯಲ್ಲಿರುವ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯಿದೆಯಡಿ ಇವಿ ವಾಹನದಾರರಿಗೆ ಸಿಗುವ ಲಾಭಗಳಿಂದಾಗಿಯೂ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಜೋರಾಗಿದ್ದು, ಕೇವಲ ಮಾ.31ರಂದು ಮಾತ್ರವೇ ಬೆಂಗಳೂರಿನಲ್ಲಿ 13ಸಾವಿರಕ್ಕೂ ಅಧಿಕ ವಾಹನಗಳ ನೋಂದಾಣಿಯಾಗಿದ್ದು, ದೈನಂದಿನ ವಿದ್ಯುತ್‌ ವಾಹನಗಳ ನೋಂದಣಿಯಲ್ಲಿ ಶೇ.400ರಷ್ಟು ಹೆಚ್ಚಳ ಕಂಡುಬಂದಿದೆ.

ವಿಜಯ ಕರ್ನಾಟಕ 3 Apr 2026 5:25 am

‘ನವೀಕರಿಸಬಹುದಾದ ಇಂಧನ ನವೋದ್ಯಮಕ್ಕೆ ಉತ್ತೇಜನ’ | ಆಸ್ಟೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, ಐಐಎಸ್‍ಸಿ, ಐಐಎಂಬಿ ಜತೆ ಕರ್ನಾಟಕ ಒಪ್ಪಂದ

ಬೆಂಗಳೂರು : ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್‍ ಅಪ್‍ಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ, ಬೆಂಗಳೂರಿನ ಐಐಎಸ್‍ಸಿಯ ಎಫ್‍ಎಸ್‍ಐಡಿ, ಐಐಎಂಬಿ ಇನ್ನೋವೇಶನ್ ಎನ್‍ಎಸ್‍ಆರ್‍ಸಿಇಎಲ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಗುರುವಾರ ಬೆಸ್ಕಾಂ ಕಾರ್ಪೊ ರೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಕ್ರೆಡಲ್‍ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ ಸಿಡ್ನಿಯ ಯುಎನ್‍ಎಸ್‍ಡಬ್ಲ್ಯು ಪ್ರೊ ವೈಸ್-ಚಾನ್ಸೆಲರ್ ಆಗಿರುವ ಲಿಸಾ ಝಾಂಬರ್ಲಾನ್ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಐಐಎಸ್‍ಸಿಯ ಎಫ್‍ಎಸ್‍ಐಡಿ, ಐಐಎಂಬಿ ಇನ್ನೋವೇಶನ್ ಎನ್‍ಎಸ್‍ಆರ್‍ಸಿಇಎಲ್ ಮುಖ್ಯಸ್ಥರು ಕ್ರೆಡಲ್ ಜತೆಗಿನ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‍ಗೀಚಿ ಮತ್ತು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಈ ಒಪ್ಪಂದಗಳಿಗೆ ಸಾಕ್ಷಿಯಾದರು. ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಒತ್ತು ನೀಡುವ 'ಆಸ್ಟ್ರೇಲಿಯಾ ಇಂಡಿಯಾ ಬಿಸಿನೆಸ್ ಕೌನ್ಸಿಲ್' ಈ ಒಪ್ಪಂದಕ್ಕೆ ನೆರವಾಗಿದೆ. ಸೌರ, ಪವನ, ಜೈವಿಕ ಶಕ್ತಿ ಮತ್ತು ಇಂಧನ ಸಂಗ್ರಹಣೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಒಪ್ಪಂದದ ಅನ್ವಯ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕ್ರೆಡಲ್ ಬೆಂಗಳೂರಿನಲ್ಲಿ ಇನ್‍ಕ್ಯುಬೇಷನ್ ಮತ್ತು ತಂತ್ರಜ್ಞಾನ ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸಲಿದೆ. ಮೂಲಸೌಕರ್ಯ ಮತ್ತು ಸ್ಥಳೀಯ ನಿಧಿಯನ್ನು ಕ್ರೆಡಲ್ ಒದಗಿಸಿದರೆ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ಮಾರ್ಗದರ್ಶನವನ್ನು ಪಾಲುದಾರಿಕೆ ಸಂಸ್ಥೆಗಳು ನೀಡಲಿವೆ. ಜತೆಗೆ, ಜಾಗತಿಕ ಸಂಶೋಧನಾ ಸಂಸ್ಥೆಗಳು ಮತ್ತು ನಾವೀನ್ಯತೆ ಜಾಲಗಳೊಂದಿಗೆ ಯುಎನ್‍ಎಸ್‍ಡಬ್ಲ್ಯು ಸಂಪರ್ಕ ಬೆಸೆಯಲಿದೆ. ಈ ಉಪಕ್ರಮದಡಿ ಪ್ರತಿ ವರ್ಷ 20 ನವೋದ್ಯಮಗಳಿಗೆ ಬೆಂಬಲ ನೀಡಲಾಗುವುದು. ಕಾರ್ಯಕ್ರಮದ ಅವಧಿಯಲ್ಲಿ ಮೂಲ ಮಾದರಿ ಅಭಿವೃದ್ಧಿ ಹಾಗೂ ನವೋದ್ಯಮಗಳಿಗೆ ಕ್ರೆಡಲ್ ನೆರವು ನೀಡಲಿದೆ. ಕಾರ್ಯಕ್ರಮದ ವ್ಯಾಪ್ತಿ ವಿಸ್ತರಣೆಗೆ ಯುಎನ್‍ಎಸ್‍ಡಬ್ಲ್ಯು ಹೆಚ್ಚುವರಿ ಅಂತಾರಾಷ್ಟ್ರೀಯ ನಿಧಿ ಸಂಗ್ರಹಣೆಗೆ ಆದ್ಯತೆ ನೀಡಲಿದೆ. ಇದರಿಂದ ಈ ಸ್ಟಾರ್ಟ್‍ಅಪ್‍ಗಳಿಗೆ ಜಾಗತಿಕ ಮಟ್ಟದ ಸಂಪರ್ಕ, ಸುಧಾರಿತ ಇನ್‍ಕ್ಯುಬೇಷನ್, ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ವಿಸ್ತೃತ ಮಾರುಕಟ್ಟೆ ದೊರೆಯಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಶುದ್ಧ ಇಂಧನ ಅಳವಡಿಕೆ ಹಾಗೂ ನವೀಕರಿಸಬಹುದಾದ ಇಂಧನ ವಲಯದ ನವೋದ್ಯಮಗಳನ್ನು ಬೆಂಬಲಿಸುವ ಪ್ರಮುಖ ಒಪ್ಪಂದಕ್ಕೆ ಕ್ರೆಡಲ್ ಹಾಗೂ ಯುಎನ್‍ಎಸ್‍ಡಬ್ಲ್ಯು ಸಹಿ ಹಾಕಿವೆ. ಈ ಸಹಯೋಗದಿಂದ ನಾವೂ ಆಸ್ಟ್ರೇಲಿಯಾದ ಸುಧಾರಿತ ಪರಿಣತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿದ್ದು, ಈ ಮೂಲಕ ಜಾಗತಿಕ ವ್ಯವಸ್ಥೆಯೊಂದಿಗೆ ನಾವು ಕೈಜೋಡಿಸಬಹುದಾಗಿದೆ. ಈ ಮೂರು ಒಪ್ಪಂದಗಳಿಂದ ರಾಜ್ಯದ ಉದ್ದಿಮೆಗಳಿಗೆ ನೆರವಾಗಲಿದ್ದು, ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಹೇಳಿದರು. ಸಿಡ್ನಿಯ ಯುಎನ್‍ಎಸ್‍ಡಬ್ಲ್ಯು ಪ್ರೊ  ವೈಸ್ ಚಾನ್ಸೆಲರ್ ಪ್ರೊಫೆಸರ್ ಲಿಸಾ ಝಂಬರ್ಲಾನ್ ಮಾತನಾಡಿ, ಶುದ್ಧ ಇಂಧನ ವಲಯದ ಸ್ಟಾರ್ಟ್‍ಅಪ್‍ಗಳನ್ನು ಬೆಂಬಲಿಸುವ ಈ ಒಪ್ಪಂದವು ಭಾರತ ಮತ್ತು ಆಸ್ಟ್ರೇಲಿಯಾದ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪಾಲುದಾರಿಕೆ ಮೂಲಕ ಪರಿಸರ ಸಂರಕ್ಷಣೆ, ಇಂಧನ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ, ಎಂದು ಹೇಳಿದರು. ಐಐಎಸ್‍ಸಿ ಹಾಗೂ ಐಐಎಂಬಿ ಜತೆಗೆ ಕ್ರೆಡಲ್ ಒಪ್ಪಂದ: ಕರ್ನಾಟಕದಲ್ಲಿ ಡೀಪ್-ಟೆಕ್ ನವೀಕರಿಸಬಹುದಾದ ಇಂಧನ ನವೋದ್ಯಮ(ಸ್ಟಾರ್ಟ್‍ಅಪ್) ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬೆಂಗಳೂರಿನ ಐಐಎಸ್‍ಸಿಯ ಎಫ್‍ಎಸ್‍ಐಡಿ ಹಾಗೂ ಕ್ರೆಡಲ್ ನಡುವೆ ಮೂರು ವರ್ಷಗಳ ಸಹಯೋಗ ಏರ್ಪಟ್ಟಿದೆ. ಬೆಂಗಳೂರಿನಲ್ಲಿ ಇನ್‍ಕ್ಯುಬೇಷನ್ ಮತ್ತು ಟೆಕ್ನಾಲಜಿ ಇನ್ನೋವೇಶನ್ ಸೆಂಟರ್ ಸ್ಥಾಪನೆ, ನಿರ್ವಹಣೆ, ಸ್ಟಾರ್ಟ್‍ಅಪ್‍ಗಳ ಆಯ್ಕೆ ಪ್ರಕ್ರಿಯೆ ಮತ್ತು ಸಂಬಂಧಿತ ಉದ್ಯಮ ಪಾಲುದಾರಿಕೆಗಳನ್ನು ಸಂಘಟಿಸುವ ಜವಾಬ್ದಾರಿ ಕ್ರೆಡಲ್‍ನದ್ದು. ಐಐಎಸ್‍ಸಿಯ ಇನ್‍ಕ್ಯುಬೇಷನ್ ವಿಭಾಗವಾದ ಎಫ್‍ಎಸ್‍ಐಡಿಯು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಲ್ಯಾಬ್ ಸೌಲಭ್ಯ ಒದಗಿಸಲಿದೆ. ಅಲ್ಲದೇ, ಐಐಎಸ್‍ಸಿಯ ಅಧ್ಯಾಪಕರು ಮತ್ತು ಸಂಶೋಧಕರು ವೈಜ್ಞಾನಿಕ ಮಾರ್ಗದರ್ಶನ ನೀಡಲಿದ್ದಾರೆ. ಆರಂಭಿಕ ಹಂತದ ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್‍ಅಪ್‍ಗಳಿಗೆ ಪೂರಕ ಪರಿಸರ ಕಲ್ಪಿಸುವ ಜತೆಗೆ ದೊಡ್ಡ ಮಟ್ಟದಲ್ಲಿ ಅವುಗಳ ವಿಸ್ತರಣೆಗಾಗಿ ಐಐಎಂಬಿಯ ಇನ್ನೋವೇಶನ್ (ಎನ್‍ಎಸ್‍ಆರ್‍ಸಿಇಎಲ್) ಜತೆಗಿನ ಕ್ರೆಡಲ್ ಒಪ್ಪಂದ ನೆರವಾಗಲಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾ ಆಸ್ಟ್ರೇಡ್‍ನ ವ್ಯಾಪಾರ ಮತ್ತು ಹೂಡಿಕೆ ಆಯುಕ್ತ ವಿಕ್ ಸಿಂಗ್, ಯುಎನ್‍ಎಸ್ ಡಬ್ಲ್ಯೂನ ವ್ಯವಸ್ಥಾಪಕ ನಿರ್ದೇಶಕ ದೀಪಂಕರ್ ಚಕ್ರವರ್ತಿ, ಎಫ್‍ಎಸ್‍ಐಡಿ ಸ್ಟೆಮ್ ಸೆಲ್ ಸಿಇಒ ರಾಜ್ ವಾಘ್ರೇ, ಎನ್‍ಎಸ್‍ಆರ್‍ಸಿಇಎಲ್ (ಐಐಎಂಬಿ ಇನ್ನೋವೇಶನ್ಸ್) ಸಿಇಒ ಆನಂದ್ ಶ್ರೀ ಗಣೇಶ್, ಎನ್‍ಎಸ್‍ಆರ್‍ಸಿಇಎಲ್ (ಐಐಎಂಬಿ ಇನ್ನೋವೇಶನ್ಸ್) ಸಿಎಫ್‍ಒ ವಿಜಯ್‍ಕೃಷ್ಣನ್ ಟಿ.ಎಸ್ ಹಾಜರಿದ್ದರು. ಕರ್ನಾಟಕ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ನಡುವಿನ ಈ ಒಪ್ಪಂದವು ನವೀಕರಿಸಬಹುದಾದ ಇಂಧನ ವಲಯದ ಮಹತ್ವದ ಮೈಲಿಗಲ್ಲು. ಈ ಪಾಲುದಾರಿಕೆಯು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು ಮತ್ತು ನವೋದ್ಯಮಗಳಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಚಾಲನೆ ನೀಡುತ್ತದೆ. ಆಸ್ಟ್ರೇಲಿಯಾದ ಜತೆಗೆ ಕರ್ನಾಟಕದ ಸಂಬಂಧವನ್ನು ಬಲಪಡಿಸುತ್ತದೆ. ಈ ಮೂರು ಒಪ್ಪಂದಗಳು ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತವೆ. -ಕೆ.ಜೆ.ಜಾರ್ಜ್, ಇಂಧನ ಸಚಿವ   ನವೀಕರಿಸಬಹುದಾದ ಇಂಧನ ತಂತ್ರಜ್ಞಾನದ ನವೋದ್ಯಮಗಳಿಗೆ ನಾವೀನ್ಯತೆ ಮತ್ತು ಇನ್‍ಕ್ಯೂಬೇಷನ್ ಅವಕಾಶ ಹೆಚ್ಚಿಸಲು ನಾವಿಂದು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೂರು ಒಪ್ಪಂದಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವ ಗುರಿ ನಮ್ಮದು. -ಟಿ.ಡಿ.ರಾಜೇಗೌಡ, ಕ್ರೆಡಲ್ ಅಧ್ಯಕ್ಷ  

ವಾರ್ತಾ ಭಾರತಿ 3 Apr 2026 12:14 am

‘ಭೀಮಣ್ಣ ಖಂಡ್ರೆ ಪ್ರಶಸ್ತಿ’ಗೆ ರಾಮು ಪಾಟೀಲ್‌ ಆಯ್ಕೆ : ಶಿವಾನಂದ ತಗಡೂರು

ಬೆಂಗಳೂರು : ಸ್ವಾತಂತ್ರ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನಲ್ಲಿ ಅವರ ಪುತ್ರ, ಸಚಿವ ಈಶ್ವರ ಖಂಡ್ರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 3 ಲಕ್ಷ ರೂ.ದತ್ತಿ ನಿಧಿ ಸ್ಥಾಪನೆ ಮಾಡಿದ್ದು, ಮೊದಲ ಪ್ರಶಸ್ತಿಗೆ ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್‍ನ ಸಹಾಯಕ ಸ್ಥಾನಿಕ ಸಂಪಾದಕ ರಾಮು ಪಾಟೀಲ್‍ರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂನ ರಾಮು ಪಾಟೀಲ್ 1997ರಲ್ಲಿ ಪತ್ರಿಕೋದ್ಯಮ ಪ್ರವೇಶ ಮಾಡಿದರು. ವೀಕ್ ಪತ್ರಿಕೆ, ಮಸ್ಕತ್ ಡೈಲಿಯಲ್ಲಿ ಸೇವೆ ಸಲ್ಲಿಸಿ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರ್ಪಡೆಗೊಂಡರು. ಸತತ 25 ವರ್ಷಗಳ ವೃತ್ತಿ ಸೇವೆ ಮಾಡಿರುವ ಅವರು ಈಗಲೂ ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್‍ನ ಸಹಾಯಕ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೀದರ್‍ನಲ್ಲಿ ಎ.11 ಮತ್ತು 12ರಂದು ನಡೆಯಲಿರುವ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿ : ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಹೊಸದಾಗಿ ಅವರು ಪುತ್ರ ಶಿವರಾಜ ಕೆಂಭಾವಿ ಸ್ಥಾಪನೆ ಮಾಡಿರುವ ಪ್ರಶಸ್ತಿಗೆ ಹಾಸನ ಜಿಲ್ಲೆ ಹಾಸನವಾಣಿ ಪತ್ರಿಕೆ ಬೇಲೂರು ತಾಲೂಕು ವರದಿಗಾರರಾದ ಭಾರತಿಗೌಡ ಮತ್ತು ವಿಜಯಪುರ ಜಿಲ್ಲೆ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ವರದಿಗಾರರಾದ ಷಡಾಕ್ಷರಿ ಬಸವರಾಜು ಕಂಪೂನವರ(ಷಡಾಕ್ಷರಿ ಬಿ.ಕಂಪೂನವರ) ಅವರು ಆಯ್ಕೆ ಯಾಗಿದ್ದಾರೆ.  

ವಾರ್ತಾ ಭಾರತಿ 3 Apr 2026 12:08 am

ಕೆಪಿಸಿಎಲ್‍ನಲ್ಲಿ 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ : ಗೌರವ್ ಗುಪ್ತ

ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ದಲ್ಲಿ ಭರ್ತಿ ಮಾಡಲಾಗುತ್ತಿರುವ 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಕೌನ್ಸ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ತಿಳಿಸಿದ್ದಾರೆ. ಗುರುವಾರ ನಡೆದ ಕೌನ್ಸಿಲಿಂಗ್ ನಲ್ಲಿ ಆಯ್ಕೆಯಾದ 20 ಸಹಾಯಕ ಇಂಜಿನಿಯರ್ (ಸಿವಿಲ್), 38 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 20 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್), 27 ಸಹಾಯಕ ಇಂಜಿನಿಯರ್ (ಇನ್ ಸ್ಟ್ರುಮೆಂಟೇಷನ್), 13 ಕಿರಿಯ ಎಂಜಿನಿಯರ್ (ಸಿವಿಲ್), 61 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 41 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್), 2 ಕೆಮಿಸ್ಟ್ ಹಾಗೂ 11 ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಉಳಿದ ಹುದ್ದೆಗಳಿಗೆ ದಾಖಲೆಗಳ ನೈಜತೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಬಳಿಕ ನೇಮಕಾತಿ ಆದೇಶ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ, ಇಂಧನ ಸಚಿವರ ಸಹಕಾರದಿಂದ ಕೆಪಿಸಿಎಲ್‍ನಲ್ಲಿ ಈ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. 233 ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ. ನಿಗಮಕ್ಕೆ ನೇಮಕಗೊಂಡಿರುವ ಯುವ ಇಂಜಿನಿಯರ್ ಗಳು ತಮ್ಮ ಕೌಶಲ್ಯದಿಂದ ಕೆಪಿಸಿಎಲ್‍ನ ಪ್ರತಿಷ್ಟೇ ಹೆಚ್ಚಿಸಬೇಕು. ನೀವು ಬಂದಿರುವುದರಿಂದ ನಿಗಮದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಎಂದು ಅವರು ಕರೆ ನೀಡಿದರು. ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ವಿದ್ಯುತ್ ಉತ್ಪಾದನೆಯಲ್ಲಿ ನಿಗಮನನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯವ ಪ್ರಯತ್ನ ನಿಮ್ಮಿಂದ ಆಗಬೇಕು. ಹೊಸದಾಗಿ ನೇಮಕಗೊಂಡಿರುವವರಿಗೆ ಉನ್ನತ ಹುದ್ದೆಗೇರಲು ಸಾಕಷ್ಟು ಅವಕಾಶಗಳಿದ್ದು, ನಿಗಮದಿಂದ ನೀವೇನು ಪಡೆದಿದ್ದೀರಿ ಎಂಬುದಕ್ಕಿಂತ ನಿಗಮಕ್ಕೆ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು ಎಂದು ಗೌರವ್ ಗುಪ್ತ ಸಲಹೆ ಮಾಡಿದರು. ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕಿ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಡಾ.ಆಶಾ ಎಸ್. ಮತ್ತಿತರರು ಇದ್ದರು.  

ವಾರ್ತಾ ಭಾರತಿ 3 Apr 2026 12:03 am

ಬ್ರಿಟಿಷರು, ಅಂಬೇಡ್ಕರ್ ಸಹಾಯದಿಂದ ಬುದ್ಧ ಮತ್ತೆ ಪ್ರಚಲಿತಕ್ಕೆ ಬಂದ : ಮೂಡ್ನಾಕೂಡು ಚಿನ್ನಸ್ವಾಮಿ

ಮೈಸೂರು : ಬ್ರಿಟಿಷರು ಮತ್ತು ಅಂಬೇಡ್ಕರ್ ಅವರ ಸಹಾಯದಿಂದ ಭಾರತದಲ್ಲಿ ಬುದ್ದ ಮತ್ತೆ ಪ್ರಚಲಿತಕ್ಕೆ ಬಂದ ಎಂದು ಚಿಂತಕ ಹಾಗೂ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಇನ್‌ಸ್ಟ್ಟಿಟ್ಯೂಟ್ ಅಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಗುರುವಾರ ಲಡಾಯಿ ಪ್ರಕಾಶನ ಗದಗ, ದಲಿತ ಸಂಘರ್ಷ ಸಮಿತಿ ಮೈಸೂರು, ಮೈಸೂರು ವಿವಿ ಸಂಶೋಧಕ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ಬುದ್ಧ ಧಮ್ಮ ಮತ್ತು ಸಮಾಜ ಸುಧಾರಕರು ಹಾಗೂ ಬುದ್ಧ ಧಮ್ಮ ಮತ್ತು ಮಹಿಳೆ ಪುಸ್ತಕ ಬಿಡುಗಡೆಗೊಳಿಸಿ ನಂತರ ಅವರು ಮಾತನಾಡಿದರು. ಬುದ್ಧನ ನಂತರ ಬೌದ್ಧ ಧಮ್ಮ ಸಾವಿರ ವರ್ಷಗಳ ಭಾರತದ ಪ್ರಮುಖ ಧರ್ಮವಾಗಿತ್ತು. ಬೌದ್ಧ ಧಮ್ಮ ನಾಶವನ್ನು ಮುಸಲ್ಮಾನರ ಮೇಲೆ ಹಾಕಲಾಯಿತು. ಆದರೆ ಬ್ರಾಹ್ಮಣ ವಾದದ ಹಗೆತನ ಮತ್ತು ಹಿಂಸಾತ್ಮಕ ರಾಜಕಾರಣ ಅದನ್ನು ನಾಶ ಮಾಡಲು ಪ್ರಯತ್ನಿಸಿತು ಎಂದು ಹೇಳಿದರು. ಬೌದ್ಧ ಧಮ್ಮ ವೈಜ್ಞಾನಿಕವಾದದ್ದು, ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಂದು ಪ್ರಪಂಚದ ಅನೇಕ ಕಡೆ ಯುದ್ಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬುದ್ಧ ಪ್ರಸ್ತುತನಾಗುತ್ತಾನೆ. ಅದಕ್ಕಾಗಿಯೇ ಎಲ್ಲರಿಗೂ ಬುದ್ಧ ಬೇಕು ಎಂದರು. ಬಸವಣ್ಣ ಅವರು ಮತ್ತೊಂದು ಧರ್ಮವನ್ನು ಹುಟ್ಟು ಹಾಕಿದರಾದರೂ ಅವರು ಸಹ ಬುದ್ಧ ತತ್ವವನ್ನೇ ಅನುಸರಿಸಿದ್ದಾರೆ. ಕಳಬೇಡ ಕೊಲಬೇಡ, ಹುಸಿಯ ನುಡಿಯಲೂ ಬೇಡ ಎಂದು ಬಸವಣ್ಣ ಅವರು ಹೇಳಿರುವುದು ಬುದ್ಧನ ಪರಿಕಲ್ಪನೆಯಲ್ಲೇ, ವಚನಕಾರರಿಗೂ ಬುದ್ಧ ಧಮ್ಮ ಸಿಕ್ಕಿತ್ತು ಎನ್ನುವುದಕ್ಕೆ ಅವರ ಬರವಣಿಗೆಗಳೇ ಸಾಕ್ಷಿ ಎಂದು ಎಂದು ಹೇಳಿದರು. ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಚ.ಹ.ರಘುನಾಥ್ ಪುಸ್ತಕ ಪರಿಚಯ ಮಾಡಿಕೊಟ್ಟರು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮುಖ್ಯ ಅತಿಥಿಗಳಾಗಿದ್ದರು.ಕುಮಾರ್ ಆರ್.ಕೀರ್ತಿ ಎಸ್.ಬೈಂದೂರು, ದೀಪಾ ಬುದ್ಧೆ ಪುಸ್ತಕ ಓದಿನ ಅನುಭವ ಹಂಚಿಕೊಂಡರು. ಲೇಖಕಿ ಡಾ.ಎಚ್.ಎಸ್.ಅನುಪಮಾ, ಲಡಾಯಿ ಪ್ತಕಾಶನದ ಬಸವರಾಜ ಸೂಳಿಭಾವಿ, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಲಿತ ವಿದ್ಯಾರ್ಥಿ ಒಕ್ಕೂಟದ ಗಜೇಂದ್ರ ಚಿನ್ನಸ್ವಾಮಿ ಉಪಸ್ಥಿತರಿದ್ದರು. ಲೇಖಕ ಅವಿನಾಶ್ ಟಿಜಿಎಸ್ ಸ್ವಾಗತಿಸಿದರು.

ವಾರ್ತಾ ಭಾರತಿ 2 Apr 2026 11:58 pm

ಕುಕನೂರು | ಮಠದ ಜಮೀನಿನಲ್ಲಿ ಸರಕಾರಿ ಕಟ್ಟಡ ನಿರ್ಮಾಣಕ್ಕೆ ವಿರೋಧ : ಭಕ್ತರ ಆಕ್ರೋಶ

ಕುಕನೂರು : ಪಟ್ಟಣದ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಗುದ್ನೇಶ್ವರ ಮಠದ ರುದ್ರಮುನೀಶ್ವರ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಹುಬ್ಬಳ್ಳಿ-ಧಾರವಾಡ ಭಾಗದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಪಟ್ಟಣದ ಗುದ್ನೇಪ್ಪನ ಮಠದ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಕ್ತರು ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಗದಗ ಜಿಲ್ಲೆಯ ನೀಲಗುಂದ ಗ್ರಾಮದ ಭಕ್ತರಾದ ಬಸಪ್ಪ ಪೂಜಾರ್ ಹಾಗೂ ಪ್ರಭು ಅಂಗಡಿ ಮಾತನಾಡಿ, 2023ರಲ್ಲಿ ಸರ್ವೇ ನಂ.78ರಲ್ಲಿ ಇರುವ ಮಠದ 26 ಎಕರೆ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು. ಈ ಕ್ರಮದ ವಿರುದ್ಧ 18 ಸೇವಾದಾರರು ನ್ಯಾಯಾಲಯದ ಮೊರೆ ಹೋಗಿದ್ದು, ಭೂ ನ್ಯಾಯಮಂಡಳಿ 40 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಆದೇಶ ನೀಡಿದೆ. ಪ್ರಕರಣ ಧಾರವಾಡ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಪ್ರಸ್ತುತ ಸ್ಟೇ ಆದೇಶ ಜಾರಿಯಲ್ಲಿದೆ ಎಂದರು. ಇದಾದ ಬಳಿಕವೂ ಮತ್ತೆ 17 ಎಕರೆ ಭೂಮಿಯಲ್ಲಿ ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಪ್ರಭು ಅಂಗಡಿ ಮಾತನಾಡಿ, ಶಾಸಕರು ಐದು ವರ್ಷಕ್ಕೊಮ್ಮೆ ಬದಲಾಗುತ್ತಾರೆ; ಆದರೆ ಭಕ್ತರು ಶಾಶ್ವತ. ನ್ಯಾಯಾಲಯದ ಅಂತಿಮ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಆದರೆ ತೀರ್ಪು ಬರುವ ಮೊದಲು ಯಾವುದೇ ಕಾಮಗಾರಿಗಳು ನಡೆಯಬಾರದು,” ಎಂದು ಹೇಳಿದರು. ಮಠದ ಭೂಮಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮೀಸಲಿಟ್ಟಿರುವುದರಿಂದ ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. “ಪ್ರಾಣ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ,” ಎಂದು ಭಕ್ತರು ಎಚ್ಚರಿಕೆ ನೀಡಿದರು. ಈಗಾಗಲೇ ಮಠದ 214 ಎಕರೆ ಭೂಮಿಯಲ್ಲಿ ನವೋದಯ ಶಾಲೆ, ಐಟಿಐ ಕಾಲೇಜು, ಮುರಾರ್ಜಿ ಶಾಲೆ, ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡಿವೆ. ಉಳಿದ ಭೂಮಿಯಲ್ಲಿಯೂ ಕಟ್ಟಡ ನಿರ್ಮಾಣ ಮಾಡಿದರೆ ಜಾತ್ರೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ ಎಂದು ಹೇಳಿದರು. ಗ್ರಾಮದಲ್ಲಿ ಅನಗತ್ಯ ಭೂ ಮತ್ತು ಮನೆಗಳ ಸರ್ವೇ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಲಾಗುತ್ತಿದೆ ಎಂದು ದೂರಿದರು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು. ಇಲ್ಲವಾದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಸರ್ಕಾರ ಮತ್ತು ಜಿಲ್ಲಾ ಆಡಳಿತವೇ ಹೊಣೆ ಎಂದು ಭಕ್ತರು ಎಚ್ಚರಿಸಿದರು. ಬಳಿಕ ಭಕ್ತರು ಕುಕನೂರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ವಾರ್ತಾ ಭಾರತಿ 2 Apr 2026 11:58 pm

ಇರಾನ್ ಮೇಲಿನ ದಾಳಿ ಹಾರ್ಮುಝ್ ತಡೆಗೆ ಮೂಲ ಕಾರಣ: ಚೀನಾ‌

ಬೀಜಿಂಗ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳು ಹಾರ್ಮುಝ್ ಜಲಸಂಧಿಯಲ್ಲಿನ ತಡೆಗೆ ಮೂಲ ಕಾರಣವಾಗಿದೆ ಎಂದು ಚೀನಾ ಗುರುವಾರ ಹೇಳಿದೆ. ಜಲಸಂಧಿ ಮುಚ್ಚುವಿಕೆಯಿಂದ ಬಾಧಿತ ರಾಷ್ಟ್ರಗಳು ಜಲಸಂಧಿಯನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ‌ʼಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್‍ನ ಕಾನೂನುಬಾಹಿರ ಮಿಲಿಟರಿ ಕಾರ್ಯಾಚರಣೆಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಂಚರಣೆಗೆ ಅಡ್ಡಿಯಾಗಲು ಮೂಲ ಕಾರಣವಾಗಿದೆ. ಕದನ ವಿರಾಮವನ್ನು ಸಾಧಿಸುವ ಮೂಲಕ ಮತ್ತು ಗಲ್ಫ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಂಡರೆ ಮಾತ್ರ ಅಂತಾರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ಸುಗಮ ಸಂಚಾರದ ಹರಿವನ್ನು ಮೂಲಭೂತವಾಗಿ ಖಚಿತಪಡಿಸಿಕೊಳ್ಳಬಹುದು. ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಜಾಗತಿಕ ಆರ್ಥಿಕತೆ ಮತ್ತು ಇಂಧನ ಭದ್ರತೆಯ ಮೇಲೆ ಪ್ರಾದೇಶಿಕ ಪ್ರಕ್ಷುಬ್ಧತೆಯ ಮತ್ತಷ್ಟು ಪರಿಣಾಮಗಳನ್ನು ತಡೆಗಟ್ಟಲು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು' ಎಂದು ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 2 Apr 2026 11:55 pm

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‍ನ ಹಿರಿಯ ಅಧಿಕಾರಿಗೆ ಗಾಯ

ಟೆಹ್ರಾನ್: ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿದ್ದ ಇರಾನ್‍ನ ಹಿರಿಯ ಅಧಿಕಾರಿ ಕಮಲ್ ಖರಾಜಿ ಅವರು ಶಂಕಿತ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸಂಭಾವ್ಯ ಶಾಂತಿ ಮಾತುಕತೆಯ ಬಗ್ಗೆ ಪಾಕಿಸ್ತಾನದೊಂದಿಗೆ ಅನಧಿಕೃತ ಸಭೆಯಲ್ಲಿ ಪಾಲ್ಗೊಂಡಿದ್ದ ಖರಾಜಿ ಅವರ ಟೆಹ್ರಾನ್‍ನ ನಿವಾಸದ ಮೇಲೆ ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಖರಾಜಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ. ಖರಾಜಿ ಅವರು 1977ರಿಂದ 2005ರವರೆಗೆ ಇರಾನ್‍ನ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ವಾರ್ತಾ ಭಾರತಿ 2 Apr 2026 11:53 pm

ಚಿಕ್ಕಬಳ್ಳಾಪುರದಲ್ಲಿ ಮೂರು ಪ್ರತ್ಯೇಕ ಅಪಘಾತಗಳು; ನವವಿವಾಹಿತೆ ಸಹಿತ ಇಬ್ಬರ ಮೃತ್ಯು, ಹಲವರಿಗೆ ಗಾಯ

ಚಿಕ್ಕಬಳ್ಳಾಪುರ : ತಾಲೂಕಿನಲ್ಲಿ ವಿವಿಧೆಡೆ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನವವಿವಾಹಿತೆ ಸೇರಿ ಇಬ್ಬರು ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ ಹಲವು ವಾಹನಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ. ಜಾತ್ರೆಗೆ ತೆರಳುವಾಗ ಭೀಕರ ಅಪಘಾತ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಶೆಟ್ಟಿಗೆರೆ ಗೇಟ್ ಬಳಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ನವವಿವಾಹಿತೆ ರಕ್ಷಿತಾ ರೆಡ್ಡಿ (23) ಹಾಗೂ ಪವನ್ ಕುಮಾರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಂಭೀರವಾಗಿ ಗಾಯಗೊಂಡಿರುವ ರಾಜಶೇಖರ್ ರೆಡ್ಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ರಕ್ಷಿತಾ ಮತ್ತು ರಾಜಶೇಖರ್ ಬೆಂಗಳೂರಿನಲ್ಲಿ ವಾಸವಿದ್ದು, ಜಾತ್ರೆಗೆ ಅನಂತಪುರಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಲಾರಿಯ ಹಿಂಭಾಗಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೈಪಾಸ್ ರಸ್ತೆಯಲ್ಲಿ ಸರಣಿ ಅಪಘಾತ: ನಗರದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಎರಡು ಕಾರು,ಎರಡು ಲಾರಿ ಹಾಗೂ ಒಂದು ಸಿಮೆಂಟ್ ಟ್ಯಾಂಕರ್ ನಡುವೆ ಸರಣಿ ಅಪಘಾತ ಸಂಭವಿಸಿದೆ.ಲಾರಿಯ ಟೈಯರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಅಡ್ಡವಾಗಿ ನಿಂತಿತ್ತು.ಬಳಿಕ ಸಿಮೆಂಟ್ ಟ್ಯಾಂಕರ್ ಸೇರಿದಂತೆ ಇನ್ನಿತರ ವಾಹನಗಳು ಒಂದರ ಹಿಂದೆ ಒಂದಾಗಿ ಡಿಕ್ಕಿ ಹೊಡೆದವು.ಟ್ಯಾಂಕರ್ ಹಳ್ಳಕ್ಕೆ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡರೂ,ಸ್ಥಳೀಯರು ತಕ್ಷಣವೇ ಬೆಂಕಿಯನ್ನು ನಂದಿಸಿದರು.ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸದಿದ್ದರೂ,ಸಣ್ಣಪುಟ್ಟ ಗಾಯಗಳು ಉಂಟಾಗಿದೆ.ಈ ಅಪಘಾತದಿಂದ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಬಳಿಕ ಸಂಚಾರಿ ಪೊಲೀಸರು ಸಂಚಾರವನ್ನು ನಿಯಂತ್ರಿಸಿದರು. ಒಲ್ವೊ ಬಸ್-ಟಿಪ್ಪರ್ ಢಿಕ್ಕಿ : ತಾಲೂಕಿನ ಬಂಡಹಳ್ಳಿ ಕ್ರಾಸ್ ಬಳಿ ಖಾಸಗಿ ಒಲ್ವೊ ಬಸ್ ಹಾಗೂ ಟಿಪ್ಪರ್ ನಡುವೆ ಮತ್ತೊಂದು ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಟಿಪ್ಪರ್ ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟಿಪ್ಪರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಪೆರೇಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 2 Apr 2026 11:53 pm

ಕುಕನೂರು | ಗ್ರಾಮ-1 ಯೋಜನೆಗೆ ಅರ್ಜಿ ಆಹ್ವಾನ

ಕುಕನೂರು : ತಾಲೂಕಿನ ಮಂಗಳೂರು, ಭಾನಾಪುರ ಹಾಗೂ ಕುದರಿಮೋತಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಗ್ರೇಡ್-2 ಇಂದ ಗ್ರೇಡ್-1ಕ್ಕೆ ನವೀಕರಿಸಲಾದ ಹಾಗೂ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹೊಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತರು ಏಪ್ರಿಲ್ 15ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 2 Apr 2026 11:50 pm

200ನೇ IPL ಪಂದ್ಯವನ್ನಾಡಿದ 11ನೇ ಆಟಗಾರ ಅಜಿಂಕ್ಯ ರಹಾನೆ

ಕೋಲ್ಕತಾ: ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ತನ್ನ 200ನೇ ಐಪಿಎಲ್ ಪಂದ್ಯವನ್ನಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ 11ನೇ ಆಟಗಾರ ಎನಿಸಿಕೊಂಡರು. ಸಿಎಸ್ಕೆ ತಂಡದ ಎಂ.ಎಸ್. ಧೋನಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು(278)ಆಡಿದ್ದಾರೆ. ಆ ನಂತರ ರೋಹಿತ್ ಶರ್ಮಾ(273 ಪಂದ್ಯಗಳು) ಹಾಗೂ ವಿರಾಟ್ ಕೊಹ್ಲಿ(269 ಪಂದ್ಯಗಳು)ಅವರಿದ್ದಾರೆ. ರಹಾನೆ ಐಪಿಎಲ್ ನಲ್ಲಿ 30.72ರ ಸರಾಸರಿಯಲ್ಲಿ ಆರು ವಿವಿಧ ತಂಡಗಳಾದ-ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ಜಯಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಒಟ್ಟು 5,099 ರನ್ ಗಳಿಸಿದ್ದಾರೆ. ►ಐಪಿಎಲ್ ನಲ್ಲಿ 200, ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರು: ಎಂ.ಎಸ್.ಧೋನಿ-278 ಪಂದ್ಯಗಳು ರೋಹಿತ್ ಶರ್ಮಾ-273 ಪಂದ್ಯಗಳು ವಿರಾಟ್ ಕೊಹ್ಲಿ-268 ಪಂದ್ಯಗಳು ದಿನೇಶ್ ಕಾರ್ತಿಕ್-257 ಪಂದ್ಯಗಳು ರವೀಂದ್ರ ಜಡೇಜ-255 ಪಂದ್ಯಗಳು ಶಿಖರ್ ಧವನ್-222 ಪಂದ್ಯಗಳು ಆರ್.ಅಶ್ವಿನ್-221 ಪಂದ್ಯಗಳು ಸುರೇಶ್ ರೈನಾ-205 ಪಂದ್ಯಗಳು ರಾಬಿನ್ ಉತ್ತಪ್ಪ-205 ಪಂದ್ಯಗಳು ಅಂಬಟಿ ರಾಯುಡು-204 ಪಂದ್ಯಗಳು ಅಜಿಂಕ್ಯ ರಹಾನೆ-200 ಪಂದ್ಯಗಳು

ವಾರ್ತಾ ಭಾರತಿ 2 Apr 2026 11:50 pm

ಎ.4ರಂದು ಯಲಬುರ್ಗಾ ನೂತನ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ

ಯಲಬುರ್ಗಾ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣವನ್ನು ಏಪ್ರಿಲ್ 4, 2026ರಂದು ಶನಿವಾರ ಉದ್ಘಾಟಿಸಲಾಗುವುದು ಎಂದು ನ್ಯಾಯಾಧೀಶರಾದ ಜೆ. ರಂಗಸ್ವಾಮಿ ತಿಳಿಸಿದ್ದಾರೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ನ್ಯಾಯಾಲಯ ಕಟ್ಟಡವನ್ನು ಕಾನೂನು ಸಚಿವ ಎಚ್. ಕೆ. ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ನಂತರ ಯಲಬುರ್ಗಾ ತಾಲೂಕು ವಕೀಲ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ ಮಾತನಾಡಿ, “ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಶ್ರಮಿಸಿದ ಶಾಸಕ ಬಸವರಾಜ್ ರಾಯರೆಡ್ಡಿ ಅವರಿಗೆ ಧನ್ಯವಾದಗಳು” ಎಂದು ಹೇಳಿದರು. ಈ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಗಾಗಿ ಪ್ರತ್ಯೇಕ ಕಟ್ಟಡವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಅದನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯ್ಕರ್, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ. ಪಾಟೀಲ್, ಶರಣಯ್ಯ ಶಶಿಮಠ, ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕ ವಕೀಲರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷರಾದ ಎಂ ಎಸ್ ನಾಯ್ಕರ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಈಟಿ, ಹಸನ್ ಸಾಬ್ ನದಾಫ್, ಬಸವರಾಜ್ ಆರ್ ತುರಕಾಣಿ, ಶ್ರೀಮತಿ ಅಕ್ಕಮಹಾದೇವಿ ಎಂ ಪಾಟೀಲ್ ಶರಣಯ್ಯ ಶಶಿ ಮಠ. ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ, ಹಿರಿಯ ವಕೀಲರಾದ ಬಿ.ಎಂ. ಶಿರೂರ, ಉಮೇಶ ಮೆಣಸಗೇರಿ, ಪಿ.ಎಸ್. ಬೇಲೇರಿ, ಸಿ.ಪಿ.ಪಾಟೀಲ, ಪಿ.ಎಸ್. ಹಿರೇಮಠ,, ಇಂದ್ರಾ ಉಳ್ಳಾಗಡ್ಡಿ, ಉಮಾ ಕಲ್ಲೂರ, ಸಾವಿತ್ರಿ ಗೊಲ್ಲರ, ಲಕ್ಷ್ಮಿ, ಜೆ.ರಂಗಸ್ವಾಮಿ, ನಾಯಕ, ಜ್ಯೋತಿ ಹಾಲಕೇರಿ, ಎಂ.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 2 Apr 2026 11:49 pm

ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ದರ್ಶನ್ ಅರ್ಜಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಬಗ್ಗೆ ನಿಲುವು ತಿಳಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಪೀಠ ಸೂಚಿಸಿತು. ಅದಕ್ಕೆ ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಪ್ರತಿಕ್ರಿಯಿಸಿ, ಅರ್ಜಿಯಲ್ಲಿ ಕೋರಲಾದ ಮನವಿ ಕುರಿತು ಯಾವ ಕ್ರಮ ಕೈಗೊಳಲಾಗುವುದು ಎಂಬ ಬಗ್ಗೆ ಸೋಮವಾರದೊಳಗೆ ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದೂಡಿತು. ಸುದ್ದಿ ವಾಹಿನಿಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅನಿಮೇಷನ್‌ಗಳನ್ನು ಬಳಸಿಕೊಂಡು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸುತ್ತಿವೆ ಮತ್ತು ವಿಚಾರಣಾ ನ್ಯಾಯಾಲಯವು ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024 ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯವು ಹೊರಡಿಸಿದ ತಡೆಯಾಜ್ಞೆಯ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ. ಇದು ಸಂವಿಧಾನದ ಕಲಂ 14 ಮತ್ತು ಕಲಂ 21 ರ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ಉಲ್ಲಂಘನೆಯಾಗಿದೆ. ಆದ್ದರಿಂದ ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 2 Apr 2026 11:45 pm

ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್‍‌ಸಿಬಿ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ತಿಂಗಳಾಂತ್ಯದಿಂದ ಶುರುವಾಗಿದೆ. ಹಲವಾರು ತಂಡಗಳ ಪೈಕಿ ಈಗಾಗಲೇ ಒಟ್ಟು ಹತ್ತು ತಂಡಗಳು ಕಣಕ್ಕಿಳಿದು ಶೌರ್ಯ ಪ್ರದರ್ಶಿಸಿವೆ. ಅದರಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಸೇರಿ ವಿವಿಧ ತಂಡಗಳು ಗೆಲುವು ತಮ್ಮದಾಗಿಸಿಕೊಂಡಿವೆ. ಆದರೆ ಉಳಿದ ತಂಡಗಳು ಮೊದಲ ಗೆಲುವಿಗೆ ತವಕಿಸುತ್ತಿವೆ. ಗೆದ್ದ ತಂಡಗಳ ಸೇರಿದಂತೆ ಯಾವ ಕ್ರಿಕೆಟ್ ತಂಡಗಳು ಆರೇಂಜ್

ಒನ್ ಇ೦ಡಿಯ 2 Apr 2026 11:43 pm

Namma Metro- ಮೇ ತಿಂಗಳಿಂದ ಹಳದಿ ಮಾರ್ಗದಲ್ಲಿ 5 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೆ BMRCL ಸಿದ್ಧತೆ

BMRCL Plan In Yellow Line- ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (ಆರ್.ವಿ. ರಸ್ತೆ-ಬೊಮ್ಮಸಂದ್ರ) ಮೇ ತಿಂಗಳಿನಿಂದ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚರಿಸುವಂತೆ ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಪ್ರಸ್ತುತ 9 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತಿವೆ. ಈ ತಿಂಗಳು ಟಿಟಾಗರ್ ರೈಲ್ ಸಿಸ್ಟಮ್ಸ್‌ನಿಂದ ಎರಡು ಹೊಸ ರೈಲುಗಳ ಸೇರ್ಪಡೆಯಾಗಲಿದ್ದು ಪ್ರಾಯೋಗಿಕ ಸಂಚಾರದ ನಂತರ ಇವು ವಾಣಿಜ್ಯ ಬಳಕೆಗೆ ಮುಕ್ತವಾಗಲಿವೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 13 ಹೆಚ್ಚುವರಿ ರೈಲುಗಳ ಅವಶ್ಯಕತೆಯಿದೆ.

ವಿಜಯ ಕರ್ನಾಟಕ 2 Apr 2026 11:43 pm

ತುಂಬಾ ತಡವಾಗುವ ಮುನ್ನ ಒಪ್ಪಂದಕ್ಕೆ ಬನ್ನಿ: ದಾಳಿಯ ವಿಡಿಯೋ ಹಂಚಿಕೊಂಡು ಇರಾನ್‌ ಗೆ ಟ್ರಂಪ್ ಎಚ್ಚರಿಕೆ

ಟೆಹ್ರಾನ್–ಕರಾಜ್ ಸೇತುವೆ ಮೇಲೆ ದಾಳಿ; ಇಬ್ಬರು ಮೃತ್ಯು

ವಾರ್ತಾ ಭಾರತಿ 2 Apr 2026 11:41 pm

SRH Vs KKR HIghlights- ನಿತೀಶ್ ರೆಡ್ಡಿ ಆಲ್ರೌಂಡ್ ಆದ ಮುಂದೆ ಮಂಕಾದ ಕೋಲ್ಕತಾ: ಸನ್ ರೈಸರ್ಸ್ ಗೆ ಮೊದಲ ಗೆಲುವಿನ ಸಿಹಿ

ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಕಹಿಯುಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಆಲ್ರೌಂಡ್ ಪ್ರದರ್ಶನದ ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅದರದ್ದೇ ತವರು ನೆಲದಲ್ಲಿ 65 ರನ್ ಗಳ ಅಂತರದಿಂದ ಸೋಲಿಸಿ ಬೀಗಿದೆ. ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಏಪ್ರಿಲ್ 2ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದರು. ಇದಕ್ಕುತ್ತರವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ 16 ಓವರ್ ಗಳಲ್ಲಿ 161 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ()ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸಿಗಿಳಿದಿದ್ದ ಫಿನ್ ಅಲೆನ್ ಅವರು ಕೇವಲ 7 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನೊಳಗೊಂಡ 28 ರನ್ ಬಾರಿಸಿದಾಗ ಕೋಲ್ಕತಾ ಸುಲಭ ಗೆಲುವು ಸಾಧಿಸಬಹುದು ಎಂದೇ ಭಾಸವಾಗಿತ್ತು. ಆದೆರೆ ಅವರ ವಿಕೆಟ್ ಪತನವಾಗುತ್ತಲೇ ಒತ್ತಡ ಹೇರುವಲ್ಲಿ ಸನ್ ರೈಸರ್ಸ್ ಬೌಲರ್ ಗಳು ಸಫಲರಾದರು. ಆದರೂ ಅಂಗರಿಕ್ಷ್ ರಘುವಂಶಿ ಅವರು ಹೋರಾಟ ಜಾರಿಯಲ್ಲಿತ್ತು. ರಿಂಕು ಸಿಂಗ್ (25 ಎಸೆತದಲ್ಲಿ 35) ಮತ್ತು ಅವರ ನಡುವೆ ತಾಳಮೇಳದಲ್ಲಿ ವ್ಯತ್ಯಾಸವಾಗಿದ್ದರಿಂದ ರಘುವಂಶಿ ಅವರು ರನೌಟ್ ಆದರು. ಇದು ಸನ್ ರೈಸರ್ಸ್ ಕಡೆಗೆ ಸಂಪೂರ್ಣವಾಗಿ ಪಂದ್ಯ ವಾಲಲು ಕಾರಣವಾಯಿತು. 29 ಎಸೆತಗಳನ್ನು ಎದುರಿಸಿದ ಅಂಗರಿಕ್ಷ್ 6 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಒಳಗೊಂಡಿದ್ದ 52 ರನ್ ಬಾರಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ(21 ಎಸೆತದಲ್ಲಿ 48 ರನ್) ಮತ್ತು ಟ್ರಾವಿಸ್ ಹೆಡ್(21 ಎಸೆತದಲ್ಲಿ 46 ರನ್) ಅವರು ಭರ್ಜರಿ ಆರಂಭ ಒದಗಿಸಿದರು. ಬ್ಯಾಟಿಂಗ್ ಗೆ ಅನುಕೂಲಕರವಾಗಿದ್ದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ಇವರಿಬ್ಬರು ಮೊದಲ ವಿಕೆಟ್ ಗೆ ಕೇವಲ 5.4 ಓವರ್ ಗಳಲ್ಲಿ 82 ರನ್ ಗಳ ಜೊತೆಯಾಟವಾಡಿದರು.ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ (35 ಎಸೆತಗಳಲ್ಲಿ 52 ರನ್) ನಿತೀಶ್ ಮಾರ್ ರೆಡ್ಡಿ(24 ಎಸೆತದಲ್ಲಿ 39) ಅವರ ಉಪಯುಕ್ತ ಕೊಡುಗೆಯಿಂದಾಗಿ ತಂಡ ದೊಡ್ಡ ಮೊತ್ತವನ್ನು ಪೇರಿಸುವಂತಾಯಿತು. ಬ್ಲೆಸ್ಸಿಂಗ್ ಮುಝರಬಾನಿ ಅವರು 4 ವಿಕೆಟ್ ಪಡೆದು ಮಿಂಚಿದರು. ವೈಭವ್ ಅರೋರಾ 2 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 226/8, ಟ್ರಾವಿಯ್ ಹೆಡ್ 46(21), ಅಭಿಷೇಕ್ ಶರ್ಮಾ 48(21), ಹೆನ್ರಿಚ್ ಕ್ಲಾಸನ್ 52(35), ನಿತೀಶ್ ರೆಡ್ಡಿ 39(24), ಬ್ಲೆಸ್ಸಿಂಗ್ ಮುಝರಬಾನಿ 41ಕ್ಕೆ 4, ವೈಭವ್ ಆರೋರಾ 47ಕ್ಕೆ 2. ಕೋಲ್ಕತಾ ನೈಟ್ ರೈಡರ್ಸ್ 16 ಓವರ್ ಗಳಲ್ಲಿ 161ಕ್ಕೆ ಆಲೌಟ್, ಅಂಗರಿಕ್ಷ್ ರಘುವಂಶಿ 52(29), ರಿಂಕು ಸಿಂಗ್ 35(25), ಫಿನ್ ಅಲೆನ್ 28(7), ಜಯದೇವ್ ಉನಾದ್ಕತ್ 21ಕ್ಕೆ 3, ಇಶಾನ್ ಮಾಲಿಂಗ 14ಕ್ಕೆ 2, ನಿತೀಶ್ ರೆಡ್ಡಿ 17ಕ್ಕೆ 2.

ವಿಜಯ ಕರ್ನಾಟಕ 2 Apr 2026 11:38 pm

ಹಟ್ಟಿ ಚಿನ್ನದ ಗಣಿಯಲ್ಲಿ ಲಿಫ್ಟ್ ಶಾರ್ಟ್ ಸರ್ಕ್ಯೂಟ್ : 2200 ಅಡಿ ಕೆಳಗೆ ಸಿಲುಕಿದ 8 ಕಾರ್ಮಿಕರು

ಹಟ್ಟಿ : ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸೆಂಟ್ರಲ್ ಶಾಪ್ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಿಫ್ಟ್ ಏಕಾಏಕಿ ಸ್ಥಗಿತಗೊಂಡ ಪರಿಣಾಮ 8 ಕಾರ್ಮಿಕರು ಸುಮಾರು 2 ಗಂಟೆ 30 ನಿಮಿಷಗಳ ಕಾಲ ಒಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಬುಧವಾರ ರಾತ್ರಿ 11:30ರ ಸುಮಾರಿಗೆ ಗಣಿಗೆ ಇಳಿಯುತ್ತಿದ್ದ ವೇಳೆ ಕೇಜ್ 2200 ಅಡಿ ಆಳದಲ್ಲಿ ನಿಂತುಹೋಯಿತು. ಲಿಫ್ಟ್‌ನ ಕೆಳಭಾಗದಲ್ಲಿ 6 ಜನ ಮತ್ತು ಮೇಲ್ಭಾಗದಲ್ಲಿ 2 ಜನ ಸೇರಿ ಒಟ್ಟು 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಲಿಫ್ಟ್ ಒಳಗೆ ಆಮ್ಲಜನಕ ಕೊರತೆಯಿಂದ ಮೂವರು ಕಾರ್ಮಿಕರು ಮೂರ್ಚೆ ಹೋಗಿದ್ದು, ಇತರರು ಉಸಿರಾಟದ ತೊಂದರೆ ಅನುಭವಿಸಿದರು. ಕುಡಿಯುವ ನೀರಿನ ಕೊರತೆಯಿಂದ ಕೆಲವರು ತಲೆ ಸುತ್ತಿನಿಂದ ಬಳಲಿದರು ಎಂದು ತಿಳಿದುಬಂದಿದೆ. ಘಟನೆ ತಿಳಿದ ತಕ್ಷಣ ಎಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶಾರ್ಟ್ ಸರ್ಕ್ಯೂಟ್ ದುರಸ್ತಿ ಮಾಡಿ ಲಿಫ್ಟ್ ಅನ್ನು ಪುನಃ ಕಾರ್ಯಾಚರಣೆಗೆ ತಂದರು. ಬಳಿಕ ಸಿಲುಕಿದ್ದ ಕಾರ್ಮಿಕರನ್ನು ಮೇಲಕ್ಕೆ ಕರೆತಂದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ ಹಾಗೂ ಇತರ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಗೆ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದು, ಗಣಿಯಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಆಡಳಿತಕ್ಕೆ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 2 Apr 2026 11:34 pm

CAPF ಮಸೂದೆ 2026 ವಿರುದ್ಧ ನಿವೃತ್ತ ಅಧಿಕಾರಿಗಳೇಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಏನಿದು ವಿವಾದ?

ರಾಜ್ಯಸಭೆಯಲ್ಲಿ ಮಂಡಿಸಲಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಾಮಾನ್ಯ ಆಡಳಿತ) ಮಸೂದೆ, 2026 (CAPF), ಮಹತ್ವದ ಚರ್ಚೆಗೆ ನಾಂದಿ ಹಾಡಿದೆ. ಪ್ರಸ್ತಾವಿತ ಶಾಸನವು CAPF ಗಳಲ್ಲಿ ಹಿರಿಯ ನಾಯಕತ್ವದ ಸ್ಥಾನಗಳಲ್ಲಿ ಗಣನೀಯ ಪಾಲನ್ನು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳಿಗೆ ನಿಯೋಜನೆಯ ಮೇಲೆ ಮೀಸಲಿಡಲು ಪ್ರಯತ್ನಿಸುತ್ತದೆ. ಮಸೂದೆಯಡಿಯಲ್ಲಿ, ಇನ್ಸ್‌ಪೆಕ್ಟರ್ ಜನರಲ್ (IG) ಹುದ್ದೆಗಳಲ್ಲಿ 50%, ಹೆಚ್ಚುವರಿ ಮಹಾನಿರ್ದೇಶಕ (ADG) ಹುದ್ದೆಗಳಲ್ಲಿ ಕನಿಷ್ಠ 67% ಮತ್ತು ಎಲ್ಲಾ ವಿಶೇಷ DG ಮತ್ತು ಮಹಾನಿರ್ದೇಶಕ (DG) ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳು ತುಂಬುತ್ತಾರೆ. ►ಸುಪ್ರೀಂ ಕೋರ್ಟ್ ತೀರ್ಪು ಮತ್ತು ಸರ್ಕಾರದ ಪ್ರತಿಕ್ರಿಯೆ ಮೇ 23, 2025 ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ನಂತರ ಈ ಶಾಸನವು ಜಾರಿಗೆ ಬಂದಿದೆ. ಇದು CAPF ಗ್ರೂಪ್ A ಅಧಿಕಾರಿಗಳನ್ನು ಸಂಘಟಿತ ಗುಂಪು A ಸೇವೆಗಳು (OGAS) ಎಂದು ಗುರುತಿಸಿ, ಅವರನ್ನು IAS, IPS ಮತ್ತು IFS ಗೆ ಸಮನಾಗಿರುತ್ತದೆ. ►ನ್ಯಾಯಾಲಯವು ಸರ್ಕಾರಕ್ಕೆ ನೀಡಿರುವ ನಿರ್ದೇಶನಗಳು CAPF ಗಳಲ್ಲಿ ಐಪಿಎಸ್ ನಿಯೋಜನೆಯನ್ನು ಎರಡು ವರ್ಷಗಳಲ್ಲಿ ಕ್ರಮೇಣ ಕಡಿಮೆ ಮಾಡಿ ಆರು ತಿಂಗಳೊಳಗೆ ಕೇಡರ್ ರಿವ್ಯೂ ನಡೆಸುವುದು ಆದಾಗ್ಯೂ, ಗೃಹ ಸಚಿವಾಲಯ (MHA) ಈ ತೀರ್ಪನ್ನು ಪ್ರಶ್ನಿಸಿದ್ದು, 2025 ಅಕ್ಟೋಬರ್ 28ರಂದು ಅದರ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಯಿತು. ತೀರ್ಪು ಅಂತಿಮವಾಯಿತು. ಇದರ ಹೊರತಾಗಿಯೂ ಐಪಿಎಸ್ ನೇಮಕಾತಿಗಳು ಮುಂದುವರೆದವು ಎಂದು ವರದಿಯಾಗಿದೆ. ಈ ಬಗ್ಗೆ ನಿವೃತ್ತ CAPF ಅಧಿಕಾರಿಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 2026 ಮಾರ್ಚ್ 9ರಂದು ಗೃಹ ಸಚಿವಾಲಯಸೂಕ್ತ ಶಾಸನಬದ್ಧ ಮತ್ತು ನಿಯಂತ್ರಕ ಹಸ್ತಕ್ಷೇಪ ವನ್ನು ಪರಿಗಣಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು. ಒಂದು ದಿನದ ನಂತರ, ಕೇಂದ್ರ ಸಚಿವ ಸಂಪುಟವು ಸಿಎಪಿಎಫ್ ಮಸೂದೆ, 2026 ಅನ್ನು ಅನುಮೋದಿಸಿತು. ►ನಿವೃತ್ತ ಸಿಎಪಿಎಫ್ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವುದೇಕೆ? ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮತ್ತು ಶಾಸನವನ್ನು ವ್ಯಾಪಕ ಸಮಾಲೋಚನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿ ನಿವೃತ್ತ ಸಿಎಪಿಎಫ್ ಅಧಿಕಾರಿಗಳು ಮಸೂದೆಯನ್ನು ವಿರೋಧಿಸಿದ್ದಾರೆ. ಮಾಜಿ ಐಜಿಗಳು ಮತ್ತು ಎಡಿಜಿಗಳು ಸೇರಿದಂತೆ ಹಿರಿಯ ನಿವೃತ್ತ ಸೈನಿಕರು, ಕಾಲಮಿತಿಯ ಬಡ್ತಿಗಳು ಮತ್ತು ಪಿಂಚಣಿ ಪ್ರಯೋಜನಗಳಂತಹ ಸುಧಾರಣೆಗಳಲ್ಲಿನ ವಿಳಂಬವು ನೈತಿಕತೆಯನ್ನು ಹಾಳು ಮಾಡುತ್ತಿದೆ ಎಂದು ವಾದಿಸುತ್ತಾರೆ. ಸಮ್ಮೇಳನವೊಂದರಲ್ಲಿ ಮಾತನಾಡಿದ ಮಾಜಿ ಸಿಆರ್‌ಪಿಎಫ್ ಎಡಿಜಿ ಎಚ್‌ಆರ್ ಸಿಂಗ್, ದೀರ್ಘ ಕಾನೂನು ಹೋರಾಟದ ನಂತರ, ನೀಡಲಾದ ತೀರ್ಪು ನ್ಯಾಯಯುತವಾಗಿತ್ತು. ಅದು ಸಿಎಪಿಎಫ್ ಸಿಬ್ಬಂದಿಯ ಕಳವಳಗಳನ್ನು ಪರಿಹರಿಸಿದೆ. ಪ್ರಶ್ನೆಯೆಂದರೆ, ಅದರ ಅನುಷ್ಠಾನದಲ್ಲಿ ಇನ್ನೂ ವಿಳಂಬ ಏಕೆ? ಎಂದು ಕೇಳಿದ್ದಾರೆ. ಕಾನೂನಿನ ಮೂಲಕ ತೀರ್ಪನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ►ಸಂಸತ್ತಿನ ಪರಿಶೀಲನೆಗೆ ಬೇಡಿಕೆ ಮಸೂದೆಯನ್ನು ವಿವರವಾದ ಪರಿಶೀಲನೆಗೆ ಒಳಪಡಿಸಬೇಕು ಎಂದು ಸಿಂಗ್ ಹೇಳಿದ್ದಾರೆ. ಇದು ಸಾವಿರಾರು ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ಮಹತ್ವದ ವಿಷಯವಾಗಿದೆ. ಇದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಬೇಕು ಮತ್ತು ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಇತರ ನಿವೃತ್ತ ಸೈನಿಕರು ಕೂಡಾ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತಾವಿತ ಕಾನೂನು CAPF ಗಳೊಳಗಿನ ಕಮಾಂಡ್ ರಚನೆ, ಸೇವಾ ಪರಿಸ್ಥಿತಿಗಳು ಮತ್ತು ನಾಯಕತ್ವದ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸುತ್ತಾರೆ. ►ಪ್ರಮುಖ ಕಾಳಜಿಗಳು: ಬಡ್ತಿಗಳು, ನೈತಿಕತೆ ಮತ್ತು ನ್ಯಾಯಸಮ್ಮತತೆ ಸಿಎಪಿಎಫ್ ಅಧಿಕಾರಿಗಳಲ್ಲಿ ವೃತ್ತಿಜೀವನದ ನಿಶ್ಚಲತೆಯು ಒಂದು ಪ್ರಮುಖ ಕಾಳಜಿಯಾಗಿದೆ. ಸೀಮಿತ ಬಡ್ತಿ ಅವಕಾಶಗಳು ಮತ್ತು ನಿರ್ಬಂಧಿತ ನೇಮಕಾತಿ ನಿಯಮಗಳು ಅಡಚಣೆಗಳನ್ನು ಸೃಷ್ಟಿಸಿವೆ ಅಂತಾರೆ ನಿವೃತ್ತ ಯೋಧರು. ಒಬ್ಬ ಅಧಿಕಾರಿಗೆ ಬಡ್ತಿ ನೀಡಿದಾಗ, ಅದು ಸರಪಳಿ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಕಾನ್‌ಸ್ಟೆಬಲ್‌ಗಳು ಮತ್ತು ಇತರ ಸಿಬ್ಬಂದಿಗಳು ಸಹ ಮೇಲ್ದರ್ಜೆಗೆ ಹೋಗುತ್ತಾರೆ. ಪಿಂಚಣಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು ಪ್ರಯೋಜನಗಳನ್ನು ನಿರಾಕರಿಸುವುದು ನೈತಿಕತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ಸಿಂಗ್ ಹೇಳಿದ್ದಾರೆ. ►ಐಪಿಎಸ್ ನಿಯೋಜನೆಯ ಕುರಿತು ಚರ್ಚೆ ಪ್ರಸ್ತುತ, ಸಿಎಪಿಎಫ್‌ಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಐಪಿಎಸ್ ಅಧಿಕಾರಿಗಳು ಗಮನಾರ್ಹ ಪಾಲನ್ನು ಹೊಂದಿದ್ದಾರೆ. ಇದು ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ವಾದಿಸುತ್ತಾರೆ. ಸುಮಾರು 20% ಡಿಐಜಿ ಹುದ್ದೆಗಳು ಮತ್ತು 50% ಐಜಿ ಹುದ್ದೆಗಳು ಹೊರಗಿನಿಂದ ಬರುವ ಅಧಿಕಾರಿಗಳಿಗೆ ಮೀಸಲಾಗಿವೆ ಎಂದ ಸಿಂಗ್, ಸಿಎಪಿಎಫ್ ಅಧಿಕಾರಿಗಳು ಇತರ ಸೇವೆಗಳಲ್ಲಿಯೂ ಅವಕಾಶಗಳನ್ನು ಪಡೆಯುವ ಪರಸ್ಪರ ವ್ಯವಸ್ಥೆಯನ್ನು ಸೂಚಿಸಿದ್ದಾರೆ. ಮಾಜಿ ಬಿಎಸ್‌ಎಫ್ ಎಡಿಜಿ ಎಸ್ ಕೆ ಸೂದ್ ಪ್ರಸ್ತಾವಿತ ಮಸೂದೆಯನ್ನು ದುರದೃಷ್ಟಕರ ಎಂದು ಹೇಳಿದ್ದಾರೆ. ಇದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ದುರ್ಬಲಗೊಳಿಸಬಹುದು. ಐಪಿಎಸ್ ಅಧಿಕಾರಿಗಳು ಸಮರ್ಥರಾಗಿದ್ದರೂ, ಸಿಎಪಿಎಫ್ ಸಿಬ್ಬಂದಿ ಈ ಪಡೆಗಳು ನಿರ್ವಹಿಸುವ ನಿರ್ದಿಷ್ಟ ಪಾತ್ರಗಳಿಗೆ ಹೆಚ್ಚು ಸೂಕ್ತರು ಎಂದು ಹೇಳಿದ್ದಾರೆ. ಮಾಜಿ ಐಜಿ ವಿಕಾಶ್ ಚಂದ್ರ ಅವರು, ಸರ್ಕಾರವನ್ನು ಸಂಪರ್ಕಿಸಲು ನಮಗೆ ನೇರ ಮಾರ್ಗವಿಲ್ಲ. ನಾವು ನಮ್ಮ ಯೌವನದಲ್ಲಿ ಸಿಎಪಿಎಫ್‌ಗಳಲ್ಲಿ ಸೇವೆ ಸಲ್ಲಿಸಿದ್ದೇವೆ, ಆದರೆ ಉನ್ನತ ಹುದ್ದೆಗಳಿಗೆ ಪ್ರವೇಶಿಸಲಾಗದೇ ಉಳಿದೆವು ಎಂದಿದ್ದಾರೆ. ►ಸಿಎಪಿಎಫ್‌ ಎಂದರೇನು? ಸಿಎಪಿಎಫ್‌ಗಳಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಆಂತರಿಕ ಭದ್ರತೆ, ಗಡಿ ರಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹಕ್ಕೆ ಜವಾಬ್ದಾರರಾಗಿರುವ ಇತರ ಪಡೆಗಳು ಸೇರಿವೆ. ಅವರು ಸುಮಾರು 10 ಲಕ್ಷ ಸಿಬ್ಬಂದಿ ಮತ್ತು ಸುಮಾರು 13,000 ಗ್ರೂಪ್ ಎ ಅಧಿಕಾರಿಗಳನ್ನು ಹೊಂದಿದ್ದಾರೆ. ಆದಾಗ್ಯೂ, ಸಂಸತ್ತು ಇತ್ತೀಚೆಗೆ ವಿವಿಧ ಶ್ರೇಣಿಗಳಲ್ಲಿ ಸುಮಾರು 93,000 ಖಾಲಿ ಹುದ್ದೆಗಳನ್ನು ಗುರುತಿಸಿದೆ, ಇದು ಅಸ್ತಿತ್ವದಲ್ಲಿರುವ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಿಎಪಿಎಫ್ ಮಸೂದೆ 2026 ಸಾಂಸ್ಥಿಕ ಸ್ವಾಯತ್ತತೆ, ನ್ಯಾಯಸಮ್ಮತತೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಐಪಿಎಸ್ ನಾಯಕತ್ವವು ಉತ್ತಮ ಸಮನ್ವಯವನ್ನು ಖಚಿತಪಡಿಸುತ್ತದೆ ಎಂದು ಸರ್ಕಾರ ವಾದಿಸಿದರೆ, ಮಸೂದೆಯು ವೃತ್ತಿಪರ ಪರಿಣತಿಯ ಮೇಲೆ ಅಧಿಕಾರಶಾಹಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.

ವಾರ್ತಾ ಭಾರತಿ 2 Apr 2026 11:34 pm

ಎಚ್.ಡಿ.ಕುಮಾರಸ್ವಾಮಿ-ಎಂ.ಚಂದ್ರಶೇಖರ್‌ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರ ನೇಮಕಾತಿ : ಹೈಕೋರ್ಟ್

ಬೆಂಗಳೂರು : ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥಪಡಿಸಲು ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೈಕೋರ್ಟ್‌ ತಿಳಿಸಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠ, ಈ ಹಿಂದೆ ನ್ಯಾಯಾಲಯ ನೀಡಿದ್ದ ಸಲಹೆಯಂತೆ ಪ್ರಕರಣವನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನು ನೇಮಕ‌ ಮಾಡಲು ಎಚ್.ಡಿ. ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ನ್ಯಾಯಾಲಯವೇ ಸೂಕ್ತ ಮಧ್ಯಸ್ಥಿಕೆದಾರರ ನೇಮಕ ಮಾಡಲಿದೆ. ಜತೆಗೆ, ಮಧ್ಯಸ್ಥಿಕೆದಾರರ ಮುಂದೆ ಅರ್ಜಿದಾರರು ಹಾಗೂ ದೂರುದಾರರು ಮಾತುಕತೆ ನಡೆಸಲು ಹಾಜರಾಗಬೇಕಾದ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿತು. ಪ್ರಕರಣವೇನು? ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್‌ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 2 Apr 2026 11:27 pm

ಗ್ಯಾಸ್ ಸಿಲಿಂಡರ್ ಕೊರತೆ : ಕೊಟ್ಟೂರಿನಲ್ಲಿ ಗ್ರಾಹಕರ ಪರದಾಟ

ಕೊಟ್ಟೂರು (ವಿಜಯನಗರ): ಪಟ್ಟಣದ ಶ್ರೀ ವೆಂಕಟಸಾಯಿ ಗ್ಯಾಸ್ ಕಂಪನಿಯಲ್ಲಿ ಗ್ಯಾಸ್ ಸಿಲಿಂಡರ್ ಸಮಯಕ್ಕೆ ಸಿಗದೆ ಗ್ರಾಹಕರು ಬೇಸರಗೊಂಡು ಮನೆಗೆ ಹಿಂತಿರುಗಿದ ಘಟನೆ ಗುರುವಾರ ನಡೆದಿದೆ. ಗ್ಯಾಸ್ ಸಿಲಿಂಡರ್ ಪಡೆಯಲು ದಿನಪೂರ್ತಿ ಕರೆ ಮಾಡಿದರೂ ಬುಕ್ಕಿಂಗ್ ಆಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಏಜೆನ್ಸಿ ಕಚೇರಿಗೆ ತೆರಳಿ ವಿಚಾರಿಸಿದಾಗ “ಸಂಜೆ, ರಾತ್ರಿ ಅಥವಾ ಮುಂಜಾನೆ ಕರೆ ಮಾಡಿ” ಎಂದು ಸೂಚನೆ ನೀಡಲಾಗುತ್ತಿದೆ. ಆದರೆ ಆ ಸಮಯದಲ್ಲೂ ಕರೆ ಮಾಡಿದರೂ ಬುಕ್ಕಿಂಗ್ ಆಗದೇ, “ಸರ್ವರ್ ಬ್ಯುಸಿ” ಎಂಬ ಸಂದೇಶ ಮಾತ್ರ ಬರುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಬುಕ್ಕಿಂಗ್ ಮೆಸೇಜ್ ತೋರಿಸಿದಾಗಲೂ, ರೆಫರೆನ್ಸ್ ಐಡಿ ಇಲ್ಲದಿದ್ದರೆ ಬುಕ್ಕಿಂಗ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಜನರಲ್ಲಿ ಮತ್ತಷ್ಟು ಗೊಂದಲ ಮತ್ತು ಆತಂಕ ಉಂಟಾಗಿದೆ. ಈ ಕುರಿತು ರೈತರ ಸಂಘದ ಮುಖಂಡ ಜಯಪ್ರಕಾಶ್ ಮಾತನಾಡಿ, “ಒಂದು ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಮಾತ್ರ ಮಿತಿ ಇರುತ್ತದೆ. ಅದಕ್ಕಿಂತ ಹೆಚ್ಚಾದರೆ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಬುಕ್ಕಿಂಗ್ ಆಗುವುದಿಲ್ಲ. ಸರ್ವರ್ ಸಮಸ್ಯೆಯಿಂದಲೂ ವಿಳಂಬವಾಗುತ್ತದೆ. ಸಾಧ್ಯವಾದರೆ ಸಂಜೆ ಅಥವಾ ಮುಂಜಾನೆ ಕರೆ ಮಾಡಿದರೆ ಬುಕ್ಕಿಂಗ್ ಆಗುವ ಸಾಧ್ಯತೆ ಇದೆ” ಎಂದು ಹೇಳಿದರು.

ವಾರ್ತಾ ಭಾರತಿ 2 Apr 2026 11:23 pm

ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಜಿಬಿಎ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟವನ್ನು ಪರಿಗಣಿಸಿ, ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಇರುವ ಶೇ.5 ರಿಂದ ಶೇ.15ಕ್ಕೆ ಹೆಚ್ಚಿಸಲು ಸರಕಾರವು ಮಹತ್ವಪೂರ್ಣವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ ಎಂದಿದ್ದಾರೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಭೂಮಿಯ ಅತೀವವಾದ ಬೆಲೆಯಿಂದ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಹಾಲಿ ನಿಯಮಗಳಲ್ಲಿ ಶೇ.5ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ. ಆದುದರಿಂದ ವಾಸ್ತವಿಕ ಅಂಶಗಳನ್ನು ಮನಗಂಡು ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಕಟ್ಟಡ ಉಪವಿಧಿಗಳು 2003 ರ ಉಪವಿಧಿ 6ಕ್ಕೆ ತಿದ್ದುಪಡಿ ತಂದು, ಕಟ್ಟಡಗಳ ಉಲ್ಲಂಘನೆ ಮಿತಿಯನ್ನು ಶೇ.5 ರ ಬದಲಾಗಿ ಶೇ.15 ರವರೆಗೆ ಹೆಚ್ಚಿಸಿ, ಅದಕ್ಕೆ ದಂಡ ಪಾವತಿಸಿಕೊಂಡು ಕ್ರಮಬದ್ದಗೊಳಿಸಲು ಸರಕಾರವು ತೀರ್ಮಾನಿಸಿರುತ್ತದೆ. ಅದರಂತೆ ಬೆಂಗಳೂರು ನಗರದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಎಲ್ಲ 5 ನಗರ ಪಾಲಿಕೆಗಳಿಂದ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಈ ಅಧಿಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಂತರ್ಜಾಲ https://updates.bbmpgov.in/public   ರಲ್ಲಿ ವೀಕ್ಷಿಸಬಹುದಾಗಿದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಆಯಾ ನಗರಪಾಲಿಕೆ ಕಛೇರಿಗಳ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ವಾರ್ತಾ ಭಾರತಿ 2 Apr 2026 11:21 pm

IPL 2026 | ಕೋಲ್ಕತ್ತದ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಜಯ

ಕೋಲ್ಕತ್ತಾ : ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಹೈದರಾಬಾದ್ ತಂಡವು 65 ರನ್‌ಗಳ ಜಯಗಳಿಸಿದೆ

ವಾರ್ತಾ ಭಾರತಿ 2 Apr 2026 11:21 pm

ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ : ಮಧುಬಂಗಾರಪ್ಪ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಹಿಂದಿ ಪರವಾಗಿ ಮಾತನಾಡುವುದು ಸರಿಯಲ್ಲ. ಏಕೆಂದರೆ ಬಹುತೇಕ ಎಲ್ಲ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ನೀತಿ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡುತ್ತಾರೆಂದು ಉತ್ತರ ಕೊಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಆಳಿದವರಾಗಿದ್ದು, ಅವರಿಗೆ ಗೌರವ ಕೊಡುತ್ತೇವೆ. ಆದರೆ ಬಿಜೆಪಿಯವರೇ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂದರು. ರಾಜ್ಯದ ತೆರಿಗೆ ಸಂಗ್ರಹ ಕುರಿತಂತೆ ಬಿಜೆಪಿಯವರು ಮಾತನಾಡುವುದಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಬರಗಾಲ ಬಂದಾಗಲೂ ಬಿಜೆಪಿಯವರು ಮಾತನಾಡುವುದಿಲ್ಲ. ಆದರೆ ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ಸಚಿವರಿಗೆ ಶಿಕ್ಷಣವಿಲ್ಲ ಎಂದು ಟೀಕಿಸಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಅವರು ಹಿಂದಿ ಮಾತನಾಡುವುದನ್ನು ನೋಡಿ, ನಾವು ರಾಜ್ಯದಲ್ಲಿ ತೃತೀಯ ಭಾಷೆ ಹಿಂದಿ ವಿಚಾರದಲ್ಲಿ ಗ್ರೇಡಿಂಗ್ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದರು. ಗ್ರಾಮೀಣ ಭಾಗದಲ್ಲಿ ತೃತೀಯ ಭಾಷೆ ಹೇರಿಕೆಯಾಗಿದೆ. ಕೆಲವು ಕಡೆ ಕನ್ನಡ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ನಮ್ಮ ಕನ್ನಡಿಗರು ಹೊಟ್ಟೆಪಾಡಿಗಾಗಿ ಹಿಂದಿ ಬೋಧನೆ ಮಾಡುತ್ತಿದ್ದಾರೆ. ಅಂಥವರಿಗೆ ಯಾವುದೇ ಒತ್ತಡ ಆಗಬಾರದು. ಅಲ್ಲದೆ ಯಾವುದೇ ಭಾಷೆ ವಿರುದ್ಧ ನಾವಿಲ್ಲ. ಈಗ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 2 Apr 2026 11:19 pm

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗೆ ಎಐ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಡಯಾಲಿಸಿಸ್ ಯೋಜನೆಯನ್ನು ಬಲಪಡಿಸುವ ಉದ್ದೇಶದಿಂದ ಎಐ ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆಯನ್ನು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿದೆ. ಇದರ ಉಪಯೋಗವನ್ನು ಎರಡು ತಿಂಗಳ ಕಾಲ ಪರಿಶೀಲಿಸಿ, ನಂತರ ಇತರೆ ಸರಕಾರಿ ಆಸ್ಪತ್ರೆಗಳಲ್ಲೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಗುರುವಾರ ಇಲ್ಲಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನೆಫ್ರೊಪ್ಲಸ್ ಸಂಸ್ಥೆ ಜಾರಿಗೆ ತಂದಿರುವ ‘ಎಐ ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ. ಈ ವ್ಯವಸ್ಥೆಯ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನೀಡಲಾಗುವ ಡಯಾಲಿಸಿಸ್ ಸೇವೆಗಳು ಖಾಸಗಿ ಕ್ಷೇತ್ರದ ಮಟ್ಟಕ್ಕೆ ಸಮನಾಗುತ್ತಿವೆ ಎಂದು ಹೇಳಿದರು. ನೆಫ್ರೋ ಪ್ಲಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ಸಿಂಗ್ ಮಾತನಾಡಿ, ಡಯಾಲಿಸಿಸ್ ಚಿಕಿತ್ಸೆಯಲ್ಲಿ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. ಈ ಎಐ ವ್ಯವಸ್ಥೆಯ ಮೂಲಕ ಎಲ್ಲ ಕೇಂದ್ರಗಳಲ್ಲಿಯೂ ಸಮಾನ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ, ರೋಗಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಎಐ ಮೂಲಕ ಡಯಾಲಿಸಿಸ್ ವೇಳೆ ರೋಗಿಯ ರಕ್ತದ ಒತ್ತಡ, ದ್ರವದ ಹೊರಹರಿವು, ಇಲೆಕ್ಟ್ರೋಲೈಟ್ ಸಮತೋಲನ ಸೇರಿದಂತೆ ಪ್ರಮುಖ ಅಂಶಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದು. ರೋಗಿ ಸುರಕ್ಷತೆ ಹಾಗೂ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಇದಷ್ಟೇ ಅಲ್ಲದೆ, 28 ಪ್ರಮುಖ ಅಂಶಗಳನ್ನು ಪರಿಶೀಲಿಸುವ ಎಐ, ರೋಗಿ ಆರೈಕೆ, ಸುರಕ್ಷತೆ, ಹಾಸಿಗೆ ಲಭ್ಯತೆ, ಸಿಬ್ಬಂದಿ ಎಚ್ಚರಿಕೆ, ತುರ್ತು ಸಿದ್ಧತೆ, ಸೋಂಕು ನಿಯಂತ್ರಣ, ಸ್ವಚ್ಛತೆ ಹಾಗೂ ಕಾರ್ಯಕ್ಷಮತೆ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರಂತರ ಮೌಲ್ಯಮಾಪನ ನಡೆಸುತ್ತದೆ. ಇದರಿಂದ ಆಡಳಿತ ಮತ್ತು ವೈದ್ಯಕೀಯ ತಂಡಗಳಿಗೆ ಅಂಕಿ-ಅಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಸಹಕಾರವಾಗುತ್ತದೆ ಎಂದು ಅವರು ತಿಳಿಸಿದರು. ಈ ತಂತ್ರಜ್ಞಾನವು ಪರಂಪರೆಯ ಅವಧಿ ಆಧಾರಿತ ಪರಿಶೀಲನೆಗಳನ್ನು ಮೀರಿ, ಸದಾ ಸಕ್ರಿಯ ನಿಗಾವಳಿ ವ್ಯವಸ್ಥೆಯನ್ನು ಒದಗಿಸುತ್ತದೆ. ಪ್ರಸ್ತುತ ಶೇ.85 ರಿಂದ ಶೇ.95ರಷ್ಟು ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ಮಾಡುವ ಯೋಜನೆ ಇದೆ ಎಂದು ರೋಹಿತ್ ಸಿಂಗ್ ಹೇಳಿದರು. ನೆ‍‍ಫ್ರೋ ಪ್ಲಸ್ ಸಂಸ್ಥೆಯು 5 ದೇಶಗಳ 328ಕ್ಕೂ ಹೆಚ್ಚು ನಗರಗಳಲ್ಲಿ 521 ಡಯಾಲಿಸಿಸ್ ಕೇಂದ್ರಗಳನ್ನು ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು 36,550 ರೋಗಿಗಳಿಗೆ ಸೇವೆ ಒದಗಿಸುತ್ತದೆ.  

ವಾರ್ತಾ ಭಾರತಿ 2 Apr 2026 11:09 pm

ಇಂಡೋನೇಶ್ಯದಲ್ಲಿ ಪ್ರಬಲ ಭೂಕಂಪ: ಓರ್ವ ಮೃತ್ಯು; ಕಟ್ಟಡಗಳಿಗೆ ಹಾನಿ

ಜಕಾರ್ತ: ಗುರುವಾರ ಇಂಡೋನೇಶ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸುಲವೆಸಿ ಮತ್ತು ಮಲುಕು ದ್ವೀಪ ಸಮೂಹಗಳ ನಡುವೆ ಮೊಲುಕ್ಕಾ ಸಮುದ್ರದ 35 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಉತ್ತರ ಸುಲಾವೆಸಿ ಪ್ರಾಂತದ ಮನಾಡೊ ನಗರದಲ್ಲಿ ಕಟ್ಟಡವೊಂದು ಕುಸಿದುಬಿದ್ದು ಓರ್ವ ಸಾವನ್ನಪ್ಪಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ. ಸಮುದ್ರದಲ್ಲಿ 2.5 ಅಡಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದು ಆರಂಭದಲ್ಲಿ ತ್ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 2 Apr 2026 11:06 pm

ಮಧ್ಯಪ್ರಾಚ್ಯದಲ್ಲಿ ಸಂಘರ್ಷ | ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಶ್ಯ

ಮಾಸ್ಕೊ: ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ರಶ್ಯ ಗುರುವಾರ ಘೋಷಿಸಿದೆ. ಈ ಮಧ್ಯೆ, ಸಂಭಾವ್ಯ ಕದನ ವಿರಾಮಕ್ಕೆ 4 ಷರತ್ತುಗಳನ್ನು ಇರಾನ್ ಪ್ರಸ್ತಾವಿಸಿರುವುದಾಗಿ ವರದಿಯಾಗಿದೆ. ಆಕ್ರಮಣ ಮತ್ತು ದಾಳಿಗಳ ಸಂಪೂರ್ಣ ಮತ್ತು ನಿರ್ಣಾಯಕ ನಿಲುಗಡೆ, ಆಕ್ರಮಣ ಅಥವಾ ಯುದ್ಧದ ಪುನರಾರಂಭವನ್ನು ತಡೆಗಟ್ಟಲು ವಸ್ತಿನಿಷ್ಠ ಮತ್ತು ವಿಶ್ವಾಸಾರ್ಹ ಖಾತರಿ ಒದಗಿಸುವುದು, ವಸ್ತು ಮತ್ತು ನೈತಿಕ ಹಾನಿಗಳಿಗೆ ಸಂಪೂರ್ಣ ಪರಿಹಾರ, ಅಂತರರಾಷ್ಟ್ರೀಯ ಕಡಲ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶಕ್ಕಾಗಿ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್‍ನ ಅಧಿಕಾರ ವ್ಯಾಪ್ತಿಯನ್ನು ಗೌರವಿಸಬೇಕು ಎಂದು ರಶ್ಯಕ್ಕೆ ಇರಾನ್‍ನ ರಾಯಭಾರಿ ಆಗ್ರಹಿಸಿರುವುದಾಗಿ ರಶ್ಯದ ಸುದ್ದಿಸಂಸ್ಥೆ ತಾಸ್ ವರದಿ ಮಾಡಿದೆ.‌

ವಾರ್ತಾ ಭಾರತಿ 2 Apr 2026 11:02 pm

ನಮ್ಮದು ಮಹಾತ್ಮ ಗಾಂಧಿಯವರ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆಯ ಹಿಂದುತ್ವ: ಸಿಎಂ ಸಿದ್ದರಾಮಯ್ಯ

ದಾವಣಗೆರೆ : ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸಕಲ ಜಾತಿಯವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಾಗಿದ್ದು, ಮಹಾತ್ಮ ಗಾಂಧಿ ಹೇಳುವ ಹಿಂದುತ್ವವನ್ನು, ಅಧ್ಯಾತ್ಮವನ್ನು ಪಾಲಿಸುವ ಪಕ್ಷ. ಬಿಜೆಪಿ ನಾಥೂರಾಮ್ ಗೋಡ್ಸೆಯ ಹಿಂದುತ್ವದಲ್ಲಿ ನಂಬಿಕೆ ಇರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂಬಂಧ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಿ ಮಾತನಾಡಿದರು. ನನ್ನ ಹೆಸರಲ್ಲೇ ಶಿವ, ರಾಮ ಇದ್ದಾರೆ. ನಾನು ಹಿಂದೂ ಅಲ್ಲವಾ ? ನಮ್ಮ ಜೊತೆಗಿರುವ ಈಶ್ವರ್ ಖಂಡ್ರೆಯವರು ಹಿಂದೂ ಅಲ್ವಾ? ಎಂ.ಸಿ.ಸುಧಾಕರ್ ಅವರು ಹಿಂದೂ ಅಲ್ವಾ ಎಂದು ಪ್ರಶ್ನಿಸಿದರು. ಗೋಡ್ಸೆಯ ಹಿಂದುತ್ವ ಹೇಳಿಕೊಂಡು ಅಧಿಕಾರಕ್ಕೆ ಬರುವುದು, ಆಮೇಲೆ ಜನರನ್ನು ಮರೆತು , ಅಭಿವೃದ್ಧಿ ಮರೆತು ಹಣ ಲೂಟಿ ಹೊಡೆಯುತ್ತಾ ಕೂತರು. ಇದಕ್ಕೆ ಹಿಂದುತ್ವವನ್ನು ಬಳಸಿಕೊಳ್ಳುವುದು ಬಿಜೆಪಿಗೆ ರೂಢಿ ಆಗಿದೆ ಎಂದು ಟೀಕಿಸಿದರು. ನಾವು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರು ಸೇರಿ ಎಲ್ಲಾ ಶ್ರಮಿಕ ವರ್ಗಗಳ ಸಾಲ ಮನ್ನಾ ಮಾಡಿ ಜನರಿಗೆ ನೆರವಾದೆವು. ಆದರೆ, ಯಡಿಯೂರಪ್ಪ ಅವರಿಗೆ ಸಾಲ ಮನ್ನಾ ಮಾಡಿ ಎಂದರೆ, ನಮ್ಮಲ್ಲಿ ಹಣ ಮುದ್ರಿಸುವ ಮೆಷಿನ್ ಇಲ್ಲ ಎಂದು ಉಡಾಫೆಯಿಂದ ಅಧಿಕಾರ ಮುಗಿಸಿದರು. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ 29000 ಕೋಟಿ ಗುತ್ತಿಗೆದಾರರ ಹಣ ಬಾಕಿ ಉಳಿಸಿ ಹೋದರು. ಇದರಲ್ಲಿ 23 ಸಾವಿರ ಕೋಟಿ ತೀರಿಸಿದ್ದೀವಿ. ಉಳಿದದ್ದನ್ನೂ ತೀರಿಸ್ತೀವಿ ಎಂದರು. ನಾವು ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹನ್ನೆರಡು ವರ್ಷದಲ್ಲಿ ತಾವೇ ಹೇಳಿದ್ದರಲ್ಲಿ ಒಂದನ್ನೂ ಜಾರಿ ಮಾಡಲಿಲ್ಲ. ಕೇವಲ ಅದಾನಿ ಮತ್ತು ಅಂಬಾನಿ ಇಬ್ಬರಿಗೆ ಮಾತ್ರ ಲಾಭ ಮಾಡಿಕೊಟ್ಟಿದ್ದನ್ನು ವಿವರಿಸಿದರು. ಹೀಗಾಗಿ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು, ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ವಾರ್ತಾ ಭಾರತಿ 2 Apr 2026 10:54 pm

ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ: ಟೆಕ್ಕಿ ಯುವತಿ ಆತ್ಮಹತ್ಯೆ

ಹೈದರಾಬಾದ್: ಹೆಚ್ಚುವರಿ ವರದಕ್ಷಿಣೆ ತರುವಂತೆ ಪತಿಯ ಕಿರುಕುಳದಿದ ನೊಂದ ಬಿಹಾರದ 26 ವರ್ಷ ವಯಸ್ಸಿನ ಸಾಫ್ಟ್ವೇರ್ ಎಂಜಿನಿಯರ್ ಯುವತಿಯೊಬ್ಬರು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಸೈಬರಾಬಾದ್ ಪ್ರದೇಶದಲ್ಲಿ ನಡೆದಿದೆ. ಇಶಿತಾ ಯಾದವ್ ಅವರು ಬುಧವಾರ ಸಂಜೆ ತನ್ನ ಅಪಾರ್ಟ್ಮೆಂಟ್ನ ಹಾಲ್ನಲ್ಲಿರುವ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ ಮೂಲದ ಇಶಿತಾ ಹಾಗೂ ಮಧ್ಯಪ್ರದೇಶದ ನೀರಜ್ ಅವರಿಗೆ 2020ರಲ್ಲಿ ಸಾಮಾಜಿಕ ಜಾಲತಾಣವೊಂದರ ಮೂಲಕ ಪರಸ್ಪರ ಪರಿಚಯವಾಗಿತ್ತು. ಐದು ವರ್ಷಗಳ ಕಾಲ ಪ್ರೇಮ ಸಂಬಂಧ ಹೊಂದಿದ್ದ ಅವರು ಫೆಬ್ರವರಿ 20ರಂದು ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಪಾಟ್ನಾದಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ದಂಪತಿಯು ಹೈದರಾಬಾದ್ ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಅವರು ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಹೆಚ್ಚುವರಿ ವರದಕ್ಷಿಣೆಯನ್ನು ತರುವಂತೆ ನೀರಜ್ ಪತ್ನಿ ಇಶಿತಾಳ ಮೇಲೆ ಒತ್ತಡ ಹೇರತೊಡಗಿದ ಬಳಿಕ ದಂಪತಿಯ ನಡುವೆ ಭಿನ್ನಾಭಿಪ್ರಾಯ ಬೆಳೆಯಿತೆಂದು ಮೃತಳ ಪಾಲಕರು ತಿಳಿಸಿದ್ದಾರೆ. ಅಲ್ಲದೆ ತಾನು ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್ಅಪ್ ಕಂಪೆನಿಯಲ್ಲಿ ಹಣ ಹೂಡುವಂತೆಯೂ ಇಶಿತಾಳನ್ನು ನೀರಜ್ ಬಲವಂತಪಡಿಸುತ್ತಿದ್ದನೆಂದು ಅವರು ಆಪಾದಿಸಿದ್ದಾರೆ. ಇಶಿತಾಳ ಪಾಲಕರ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 2 Apr 2026 10:53 pm

Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್‌ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ

ಮುಂಬೈ: ದೇಶಾದ್ಯಂತ ಇಂದು ಏಪ್ರಿಲ್ 2ರಂದು ವಿಶ್ವ ಜಲ ದಿನ 2026 (World Water Day 2026) ಆಚರಿಸಲಾಗುತ್ತದೆ. ಈ ಪ್ರಯುಕ್ತ ರಿಲಯನ್ಸ್ ಫೌಂಡೇಷನ್ ವಿಶೇಷ ಅಭಿಯಾನ ಆರಂಭಿಸಿದ್ದು, ರಾಷ್ಟ್ರವ್ಯಾಪಿ Water4Life ಅಭಿಯಾನ ಆರಂಭಿಸಿದೆ. ಸಾವಿರಾರು ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದು, ಪ್ರಾಕೃತಿಕವಾಗಿ ನಮಗೆ ದೊರೆತ ಅದೆಷ್ಟೋ ಅತ್ಯಮೂಲ್ಯ ಜಲಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಮಹತ್ವದ

ಒನ್ ಇ೦ಡಿಯ 2 Apr 2026 10:49 pm

2003ರಲ್ಲಿ NCP ನಾಯಕನ ಕೊಲೆ ಪ್ರಕರಣ |ಮಾಜಿ ಸಿಎಂ ಅಜಿತ್ ಜೋಗಿ ಪುತ್ರ ಅಮಿತ್ ಜೋಗಿ ದೋಷಿ: ಚತ್ತೀಸ್ಗಡ ಹೈಕೋರ್ಟ್ ತೀರ್ಪು

ರಾಯ್ಪುರ: ಎನ್ಸಿಪಿ ಪಕ್ಷದ ಖಜಾಂಚಿ ರಾಮಾವತಾರ್ ಜಗ್ಗಿ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಚತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ದೋಷಿಯೆಂದು ಪರಿಗಣಿಸಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಅಜಿತ್ ಜೋಗಿ ಚತ್ತೀಸ್ಗಡದ ಮುಖ್ಯಮಂತ್ರಿಯಾಗಿದ್ದಾಗ, 2003ರ ಜೂನ್ 4ರಂದು ರಾಮಾವತಾರ್ ಜಗ್ಗಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಎನ್ಸಿಪಿ ಪಕ್ಷದ ಬೃಹತ್ ರ‍್ಯಾಲಿಗೆ ಮುಂಚಿತವಾಗಿ ಜಗ್ಗಿ ಅವರು ಅಮಿತ್ ಜೋಗಿ ಹತ್ಯೆ ಸಂಚಿನ ರೂವಾರಿಯೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು. 2007ರ ಮೇ 31ರಂದು ಪ್ರಕರಣಕ್ಕೆ ಸಂಬಂಧಿಸಿ 28 ಮಂದಿಯನ್ನು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿತ್ತು, ಆದರೆ ಅಮಿತ್ ಜೋಗಿ ಅವರನ್ನು ದೋಷಮುಕ್ತಗೊಳಿಸಿತ್ತು. ಅಮಿತ್ ಜೋಗಿ ಅವರ ದೋಷಮುಕ್ತಿಯನ್ನು ಪ್ರಶ್ನಿಸಿ ಸಿಬಿಐ 2011ರಲ್ಲಿ ಚತ್ತೀಸ್ ಗಡ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಆದರೆ ವಿಳಂಬವಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಕುರಿತು ಚತ್ತೀಸ್ಗಡ ಸರಕಾರ ಹಾಗೂ ರಾಮಾವತಾರ್ ಜಗ್ಗಿ ಅವರ ಪುತ್ರ ಸತೀಶ್ ಜಗ್ಗಿ ಅವರ ಮನವಿಯನ್ನು ಕೂಡಾ ನ್ಯಾಯಾಲಯ ತಿರಸ್ಕರಿಸಿತ್ತು. ತರುವಾಯ ಸಿಬಿಐ, ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನ ಮೆಟ್ಟಲೇರಿತ್ತು. ನವೆಂಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಹೈಕೋರ್ಟ್ ನ ಪ್ರಸ್ತಾವನೆಗೆ ಮರಳಿ ಒಪ್ಪಿಸಿದ್ದು, ಸಿಬಿಐ ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಗಣನೀಯವಾದ ವಿಳಂಬದ ಬಳಿಕ ಸಿಬಿಐ ಅರ್ಜಿಯನ್ನು ಸಲ್ಲಿಸಿದೆಯಾದರೂ, ಅಮಿತ್ ಜೋಗಿ ವಿರುದ್ಧ ಹೊರಿಸಲಾದ ದುರಾಳಿ ರಾಜಕೀಯ ಪಕ್ಷದ ನಾಯಕನ ಕೊಲೆ ಸಂಚಿನ ಆರೋಪ ಕೂಡಾ ಅತ್ಯಂತ ಗುರುತರವಾದುದಾಗಿದೆ ಎಂದು ಅಭಿಪ್ರಾಯಿಸಿತು. ಚತ್ತೀಸ್ಗಡ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಗುರುವಾರ ನೀಡಿದ ಆದೇಶದಲ್ಲಿ ಅಮಿತ್ ಜೋಗಿ ಅವರ ದೋಷಮುಕ್ತಿಯನ್ನು ತಳ್ಳಿಹಾಕಿತು ಹಾಗೂ ಶರಣಾಗುವಂತೆ ಅವರಿಗೆ ಆದೇಶಿಸಿತ್ತು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಜೋಗಿ ಅವರು, ಸಾಮಾಜಿಕ ಜಾಲತಾಣವೊಂದರಲ್ಲಿ ನೀಡಿದ ಹೇಳಿಕೆಯಲ್ಲಿ, ತನಗೆ ಘೋರ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ‘‘ ನನ್ನ ವಿರುದ್ಧದ ಸಿಬಿಐ ಮನವಿಯನ್ನು ಹೈಕೋರ್ಟ್ ,ಕೇವಲ 30 ನಿಮಿಷಗಳ ಆಲಿಕೆಯಲ್ಲಿ ಪುರಸ್ಕರಿಸಿತು. ನನಗೆೆ ಅಹವಾಲನ್ನು ಮಂಡಿಸಲೂ ಅವಕಾಶ ನೀಡಲಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 2 Apr 2026 10:49 pm

ವಿಜಯನಗರ | ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಪಿಎಸ್‌ಐ ಕೋದಂಡಪಾಣಿ ಅವರಿಗೆ ಮುಖ್ಯಮಂತ್ರಿ ಪದಕ

ಹೊಸಪೇಟೆ/ವಿಜಯನಗರ: ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಟಿಬಿ ಡ್ಯಾಂ ಪೊಲೀಸ್ ಠಾಣೆಯ ಪಿಎಸ್‌ಐ ಕೋದಂಡಪಾಣಿ ಅವರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಅಧಿಕಾರಿಗಳ ಕಾರ್ಯಕ್ಷಮತೆಗೆ ಇದು ಮತ್ತೊಂದು ಗುರುತಾಗಿದೆ. ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಅವರು ಕರ್ತವ್ಯ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೆರೆದಿದ್ದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ, ಪಿಎಸ್‌ಐ ಕೋದಂಡಪಾಣಿ ಅವರು ಟಿಬಿ ಡ್ಯಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಸ್ತಿನ ಆಡಳಿತ, ತ್ವರಿತ ಕ್ರಮ ಮತ್ತು ಜನಸಾಮಾನ್ಯರೊಂದಿಗೆ ಸ್ನೇಹಪೂರ್ಣ ಸಂಪರ್ಕ ಸಾಧಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ.

ವಾರ್ತಾ ಭಾರತಿ 2 Apr 2026 10:48 pm

ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ ಶೇ.6.9ರಷ್ಟು ಕುಸಿತ

ಹೊಸದಿಲ್ಲಿ: ಅಮೆರಿಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಹಿಡಿದು ವಿವಿ ಕೋರ್ಸ್ ಗಳವರೆಗೆ 5.5 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ 2026ರ ಫೆಬ್ರವರಿಯಲ್ಲಿ ಶೇ.6.9ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ. ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ ಇಳಿಮುಖವಾಗಿದೆಯೇ ಹಾಗೂ ತಿರಸ್ಕೃತ ವೀಸಾಗಳು ಹಾಗೂ ವೀಸಾಗಳ ವಿರಳ ಲಭ್ಯತೆ ಇದಕ್ಕೆ ಕಾರಣವೇ ಎಂಬ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಬಿಡುಗಡೆಗೊಳಿಸಿದ ವಿಸಿಟರ್ ಇನ್ಫಾರ್ಮೇಶನ್ ಸಿಸ್ಟಮ್ (ಸೆವಿಸ್) ಮ್ಯಾಪಿಂಗ್ ಟೂಲ್ ಬಿಡುಗಡೆಗೊಳಿಸಿದ ದತ್ತಾಂಶವನ್ನು ಸಚಿವರು ಸದನದಲ್ಲಿ ಹಂಚಿಕೊಂಡಿದ್ದರು. 2025ರ ಫೆಬ್ರವರಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ವೃತ್ತಿಪರ, ಹೈಸ್ಕೂಲ್, ಭಾಷಾ ತರಬೇತಿ, ವಿಮಾನಚಾಲನೆ ಶಿಕ್ಷಣ, ಪದವಿ, ಸ್ನಾತಕೋತ್ತರ,ಡಾಕ್ಟರೇಟ್ ಸೇರಿದಂತೆ ಅಮೆರಿಕದಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ 3,78,787 ಭಾರತೀಯ ವಿದ್ಯಾರ್ಥಿಗಳಿದ್ದರೆ, 2026ರ ಫೆಬ್ರವರಿಯಲ್ಲಿ ಅವರ ಸಂಖ್ಯೆ 3,52,644 ಆಗಿದೆ ಎಂದು ಕೀರ್ತಿವರ್ಧನ್ ಸಿಂಗ್ ಸದನಕ್ಕೆ ತಿಳಿಸಿದರು. ಅಮೆರಿಕದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಒಟ್ಟಾರೆ ದಾಖಲಾತಿಯಲ್ಲಿ ಶೇ.6.9ರಷ್ಟು ಇಳಿಕೆಯಾಗಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ಸಚಿವರು ತಿಳಿಸಿದರು.

ವಾರ್ತಾ ಭಾರತಿ 2 Apr 2026 10:43 pm

ವಿಜಯನಗರ | ಪೊಲೀಸ್ ಧ್ವಜ ದಿನಾಚರಣೆ : ಶೌರ್ಯ, ತ್ಯಾಗ ಮತ್ತು ನಂಬಿಕೆಯ ಪ್ರತೀಕ : ಸಲೀಂ ಪಾಷಾ

ವಿಜಯನಗರ (ಹೊಸಪೇಟೆ) : ಪೊಲೀಸರ ಶೌರ್ಯ, ತ್ಯಾಗ ಮತ್ತು ಸಾರ್ವಜನಿಕರು ಅವರ ಮೇಲಿಟ್ಟ ನಂಬಿಕೆಯ ಪ್ರತೀಕ ದಿನವೇ ಪೊಲೀಸ್ ಧ್ವಜ ದಿನಾಚರಣೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶ ಹೇಳಿದರು. ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಕಾಯ್ದೆಯನ್ನು 1963ರಲ್ಲಿ ಅಂಗೀಕರಿಸಿ, 1965ರ ಎ.2ರಂದು ಜಾರಿಗೆ ತರಲಾಯಿತು. ಈ ಕಾಯ್ದೆಯು ಇಲಾಖೆಗೆ ಸಂಘಟನೆ ಹಾಗೂ ಕಾನೂನು ಜಾರಿಗೆ ಅಧಿಕಾರ ನೀಡಿದ ಮಹತ್ವದ ಘಟ್ಟವಾಗಿದೆ. ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿವರ್ಷ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಪೊಲೀಸರ ಸೇವೆಯನ್ನು ಶ್ಲಾಘಿಸಿದ ಅವರು, ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರವಾಗುವಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಅಗತ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದು, ಕರ್ತವ್ಯದ ಒತ್ತಡವನ್ನು ಮನೆಗೆ ಕೊಂಡೊಯ್ಯದೇ ಕುಟುಂಬದೊಂದಿಗೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶ್ರೀಹರಿ ಬಾಬು, ಸಂತೋಷ್ ಚೌವ್ಹಾಣ್ ಹಾಗೂ ಕೋದಂಡ ಪಾಣಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, 2025-26ನೇ ಸಾಲಿನಲ್ಲಿ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು. ಸಿಬ್ಬಂದಿಗಳಿಗಾಗಿ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರಗಳು, ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ಆರೋಗ್ಯ ಭಾಗ್ಯ ಯೋಜನೆಯಡಿ 2025 ಎ.1ರಿಂದ ಈವರೆಗೆ 268 ಮಂದಿ (ಸಿಬ್ಬಂದಿ ಮತ್ತು ಕುಟುಂಬದವರು) ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ಕಲ್ಯಾಣ ನಿಧಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ 1.25 ಲಕ್ಷ ರೂ., ಕನ್ನಡಕ ಖರೀದಿಗೆ 71,540ರೂ., ಮರಣೋತ್ತರ ಸಹಾಯಧನವಾಗಿ 60 ಸಾವಿರ ರೂ. ಸೇರಿದಂತೆ ಒಟ್ಟು 12.61 ಲಕ್ಷ ರೂ. ನೆರವು ನೀಡಲಾಗಿದೆ. ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೂ ಆರೋಗ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳಡಿ ನೆರವು ಒದಗಿಸಲಾಗಿದ್ದು, 32 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ 2.36 ಲಕ್ಷ ರೂ. ಧನಸಹಾಯ ನೀಡಲಾಗಿದೆ ಎಂದು ವಿವರಿಸಿದರು. ಧ್ವಜ ಮಾರಾಟದಿಂದ 26.82 ಲಕ್ಷ ರೂ. ಸಂಗ್ರಹ : 2025ರ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಧ್ವಜ ಮಾರಾಟದಿಂದ 26,82,600 ರೂ. ಸಂಗ್ರಹವಾಗಿದ್ದು, ಅದರಲ್ಲಿ 50% ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ 50% ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಆರು ತುಕಡಿಗಳಿಂದ ಆಕರ್ಷಕ ಪೆರೇಡ್ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಪೊಲೀಸ್ ಉಪಾಧೀಕ್ಷಕ ಡಾ. ಮಂಜುನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಾರ್ತಾ ಭಾರತಿ 2 Apr 2026 10:41 pm

ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್ ಮೊರೆ ಹೋದ ನುವಾನ್ ತುಷಾರ; ಕಾರಣವೇನು?

ಕೊಲಂಬೊ: ತನಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಲು ನಿರಾಕ್ಷೇಪಣೆ ಪ್ರಮಾಣಪತ್ರ (ಎನ್ಒಸಿ) ನೀಡಲು ನಿರಾಕರಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ವಿರುದ್ಧ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ನುವಾನ್ ತುಷಾರ ಕೊಲಂಬೊ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ತನ್ನ ನೂತನ ಹಾಗೂ ಕಠಿಣ ದೈಹಿಕ ಕ್ಷಮತೆ ನಿಯಮಗಳ ಅಡಿಯಲ್ಲಿ ತುಷಾರಗೆ ನಿರಾಕ್ಷೇಪಣೆ ಪ್ರಮಾಣಪತ್ರವನ್ನು ನೀಡಲು ಶ್ರೀಲಂಕಾ ಕ್ರಿಕೆಟ್ ನಿರಾಕರಿಸಿತ್ತು. ಶ್ರೀಲಂಕಾ ಕ್ರಿಕೆಟ್ನೊಂದಿಗಿನ ತನ್ನ ಗುತ್ತಿಗೆಯು 2026 ಮಾರ್ಚ್ 31ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ತಾನು ಉದ್ದೇಶಿಸಿದ್ದೆ ಎಂದು ತುಷಾರ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ಹಾಗಾಗಿ, ಎಸ್ಎಲ್ಸಿಯು ನೂತನ ದೈಹಿಕ ಕ್ಷಮತೆ ನಿಯಮಗಳನ್ನು ತನಗೆ ಅನ್ವಯಿಸಿರುವುದು ಸರಿಯಲ್ಲ ಹಾಗೂ ಅದು ತನ್ನ ಜೀವನೋಪಾಯಕ್ಕೆ ನೀಡಿದ ಹೊಡೆತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ತುಷಾರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದಾರೆ. ಐಪಿಎಲ್ ನಿಂದ ಹೊರಬಿದ್ದಿರುವುದರಿಂದ ತನ್ನ ಆದಾಯ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಮೊಕದ್ದಮೆಯಲ್ಲಿ, ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವ, ಕಾರ್ಯದರ್ಶಿ ಬಂಡುಲಾ ದಿಸ್ಸನಾಯಕೆ, ಖಜಾಂಚಿ ಸುಜೀವ ಗೋದಲಿಯಡ್ಡ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಶ್ಲೇ ಡಿ ಸಿಲ್ವರನ್ನು ಪ್ರತಿವಾದಿಗಳಾಗಿ ಮಾಡಲಾಗಿದೆ. ತುಷಾರ ಅವರ ಮೊಕದ್ದಮೆಯ ವಿಚಾರಣೆಯು ಎಪ್ರಿಲ್ 9ರಂದು ನಡೆಯಲಿದೆ. ಅದಕ್ಕಿಂತ ಮೊದಲು ಈಸ್ಟರ್ ವಾರಾಂತ್ಯದಲ್ಲಿ ನ್ಯಾಯಾಲಯಗಳು ಮುಚ್ಚಿರುತ್ತವೆ. ಅದೂ ಅಲ್ಲದೆ, ಅರ್ಜಿಯು ಒಂದೇ ವಿಚಾರಣೆಯಲ್ಲಿ ಇತ್ಯರ್ಥಗೊಳ್ಳುವ ಸಾಧ್ಯತೆ ಅತ್ಯಲ್ಪ. ಹಾಗಾಗಿ, ಈ ಬಾರಿಯ ಐಪಿಎಲ್ನಲ್ಲಿ ತುಷಾರ ಆಡುವ ಸಾಧ್ಯತೆಯೂ ಅತ್ಯಲ್ಪ.

ವಾರ್ತಾ ಭಾರತಿ 2 Apr 2026 10:40 pm

ಕಾವೂರು: ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕಾವೂರು: ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ನದಿಯಲ್ಲಿ ನಾಪತ್ತೆಯಾಗಿದ್ದ ರಾಯಲ್ (27) ಎಂಬಾತನ ಮೃತದೇಹವು ಗುರುವಾರ ಪತ್ತೆಯಾಗಿದೆ. ಘಟನೆ ನಡೆದ 24 ಗಂಟೆಯ ಬಳಿ ದೋಣಿ ಮುಳುಗಿದ ಸ್ಥಳದಲ್ಲೇ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅದನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬುಧವಾರ ದೋಣಿಯೊಂದರಲ್ಲಿ ಮೀನು ಹಿಡಿಯಲು ಫಲ್ಗುಣಿ ನದಿಗೆ ತೆರಳಿದ್ದ ವೇಳೆ ದೋಣಿ ಮಗುಚಿ ಇಬ್ಬರು ಯುವಕರು ನೀರು ಪಾಲಾಗಿದ್ದು, ಓರ್ವ ಈಜಿ ದಡ ಸೇರಿದ್ದ. ನೀರು ಪಾಲಾಗಿದ್ದ ಇಬ್ಬರ ಪೈಕಿ ಕುಂಜತ್ತಬೈಲು ನಿವಾಸಿ ಗಣೇಶ್ ಅವರ ಮೃತದೇಹ ಬುಧವಾರ ಮಧ್ಯಾಹ್ನ ನದಿಯಲ್ಲಿ ಪತ್ತೆಯಾಗಿತ್ತು. ರಾಯಲ್ ಅವರ ಮೃಹದೇಹ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ‌ದಳ‌ ಮತ್ತು ಸ್ಥಳೀಯ ಈಜು ತಜ್ಞರ ತಂಡ ಸತತ ಹುಡುಕಾಟ ನಡೆಸಿ ರಾತ್ರಿ ಕಾರ್ಯಾಚರಣೆ ಸ್ಥಗಿತ ಗೊಳಿಸಿತ್ತು. ಇಂದು ಬೆಳಗ್ಗೆ ರಾಯಲ್ ಅವರ ಮೃತದೇಹ ದೋಣಿ ಮುಳುಗಿದ್ದ ಸ್ಥಳದಲ್ಲೇ‌ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 2 Apr 2026 10:36 pm

ಹರಪನಹಳ್ಳಿ | ಅದ್ದೂರಿಯಿಂದ ಜರುಗಿದ ಕೋಲಶಾಂತೆಶ್ವರ ರಥೋತ್ಸವ

ಹರಪನಹಳ್ಳಿ: ಪಂಚಗಣಾಧೀಶರಲ್ಲಿ ಒಬ್ಬರಾದ ಅರಸೀಕೆರೆ ಶ್ರೀ ಕೋಲಶಾಂತೆಶ್ವರ ರಥೋತ್ಸವವು ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಅರಸೀಕೆರೆಯ ಹೃದಯ ಭಾಗದಲ್ಲಿ ನಿರ್ಮಿಸಲಾದ ಆಕರ್ಷಕ ರಥವನ್ನು ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟಗಳು, ದೇವಾನುದೇವತೆಗಳ ಭಾವಚಿತ್ರಗಳು, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪಮಾಲೆಗಳೊಂದಿಗೆ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಭಜನೆ ಹಾಗೂ ವಾದ್ಯಗಳ ಮಧ್ಯೆ ಕೋಲಶಾಂತೇಶ್ವರ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಶ್ರೀ ಕೋಲಶಾಂತೆಶ್ವರ ಮಠದ ಶಾಂತ ಲಿಂಗ ದೇಶೀಕೇಂದ್ರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು.  ರಥಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿದ ಕೂಡಲೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರು ಹರಕೆ ತೀರಿಸಲು ರಥದ ಮೇಲೆ ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀ ಕೋಲಶಾಂತೆಶ್ವರ ಮಠದ ಶಾಂತ ಲಿಂಗ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಂಸದ ವೈ. ದೇವೇಂದ್ರಪ್ಪ, ಬಿಡಿಸಿಸಿ ನಿರ್ದೇಶಕ ವೈ.ಡಿ. ಅಣ್ಣಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು.

ವಾರ್ತಾ ಭಾರತಿ 2 Apr 2026 10:36 pm

ಪಶ್ಚಿಮ ಏಶ್ಯಾ ಸಂಘರ್ಷ ಹಿನ್ನೆಲೆ 40 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ ಮಾಡಿದ ಕೇಂದ್ರ ಸರಕಾರ

ಹೊಸದಿಲ್ಲಿ: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಉಂಟಾಗಿರುವ ಪೂರೈಕೆ ಅಡಚಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಗುರುವಾರ ಸುಮಾರು 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಜೂ.30ರವರೆಗೆ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ದೇಶೀಯ ಕೈಗಾರಿಕೆಗಳಿಗೆ ಪ್ರಮುಖ ಪೆಟ್ರೋಕೆಮಿಕಲ್ ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಉತ್ಪಾದನಾ ವಲಯದ ವೆಚ್ಚಗಳನ್ನು ತಗ್ಗಿಸಲು ಮತ್ತು ದೇಶದಲ್ಲಿ ಪೂರೈಕೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ತಾತ್ಕಾಲಿಕ ಕ್ರಮವಾಗಿ ಈ ವಿನಾಯಿತಿಯನ್ನು ಘೋಷಿಸಲಾಗಿದೆ ಎಂದು ವಿತ್ತ ಸಚಿವಾಲಯವು ತಿಳಿಸಿದೆ. ವಿನಾಯಿತಿ ಘೋಷಿಸಲ್ಪಟ್ಟಿರುವ ಉತ್ಪನ್ನಗಳಲ್ಲಿ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್,ಪಾಲಿಯಾಲ್ಸ್,ಪಾಲಿಬ್ಯುಟಾಡೀನ್ ಮತ್ತು ಅನಹೈಡ್ರಸ್ ಅಮೋನಿಯಾ ಸೇರಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ ಮತ್ತು ಈಥೇನ್ ಬಳಸಿ ಕೆಲವು ಪೆಟ್ರೋಕೆಮಿಕಲ್ ಉತ್ಪನ್ನಗಳು ಸ್ಥಳೀಯವಾಗಿ ತಯಾರಾಗುತ್ತಿದ್ದರೂ ಭಾರತವು ಪ್ರಮುಖವಾಗಿ ಆಮದುಗಳ ಮೇಲೆಯೇ ಅವಲಂಬಿತವಾಗಿದೆ. ಗುರುವಾರ ಘೋಷಿಸಲಾದ ವಿನಾಯಿತಿಯಿಂದ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧಿ, ರಾಸಾಯನಿಕಗಳು, ವಾಹನ ಬಿಡಿಭಾಗಗಳು ಮತ್ತು ಇತರ ತಯಾರಿಕಾ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಾರ್ತಾ ಭಾರತಿ 2 Apr 2026 10:33 pm

ಕಲಬುರಗಿ | ಸಿದ್ಧಗಂಗಾ ಮಠದ ಶ್ರೀಗೆ ಮರಣೋತ್ತರ ಭಾರತ ರತ್ನ ನೀಡಿ : ಡಾ.ಕೇದಾರಲಿಂಗಯ್ಯ ಹಿರೇಮಠ

ಕಲಬುರಗಿ: ತ್ರಿವಿಧ ದಾಸೋಹಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕು ಎಂದು ರೈತ ಪರ ಚಳವಳಿಗಾರ ಡಾ. ಕೇದಾರಲಿಂಗಯ್ಯ ಹಿರೇಮಠ ಅವರು ಒತ್ತಾಯಿಸಿದರು. ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಿದ್ಧಿಯಗಂಗಾ ಪ್ರಶಸ್ತಿ’ ಪ್ರದಾನಿಸಿ ಮಾತನಾಡಿದ ಅವರು, ಬಡವರು ಹಾಗೂ ನಿರ್ಗತಿಕ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದ ಮಹಾ ದಾಸೋಹ ಮೂರ್ತಿಗೆ ಭಾರತ ರತ್ನ ನೀಡಿದರೆ ಸರ್ಕಾರದ ಗೌರವ ಹೆಚ್ಚುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಾತಿ-ಮತ ಭೇದವಿಲ್ಲದೆ ಸಮಾನತೆಯಿಂದ ಸೇವೆ ಸಲ್ಲಿಸಿದ ಡಾ. ಶಿವಕುಮಾರ ಮಹಾಸ್ವಾಮಿಗಳು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಮಾತನಾಡಿ, ಮಾನವೀಯತೆ ಮತ್ತು ದಾಸೋಹ ಸೇವೆಗೆ ಆದ್ಯತೆ ನೀಡಿದ ಮಹಾನ್ ಸಂತರಿಗೆ ಭಾರತ ರತ್ನ ಘೋಷಿಸುವಂತೆ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಗರೆಡ್ಡಿ ಪಾಟೀಲ ಕರದಾಳ, ಡಾ. ಶರಣು ಬಿ. ಗದ್ದುಗೆ, ಅಣವೀರ ಇಂಗಿನಶೆಟ್ಟಿ, ಗುರುಪಾದಪ್ಪ ಮಾಟೂರ, ನಾಗರಾಜ ಜಮದರಖಾನಿ, ಗೌರಿ ಚಿಚಕೋಟಿ, ಬಸವರಾಜ ಪಟೇದ್, ಸುನೀಲ ಮಾನ್ಪಡೆ, ಮಂದಾಗಿನಿ ಪಿ. ಅವರಿಗೆ ‘ಸಿದ್ಧಿಯಗಂಗಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ವಾರ್ತಾ ಭಾರತಿ 2 Apr 2026 10:27 pm

ಅದ್ದೂರಿಯಿಂದ ಜರುಗಿದ ಶಹಾಬಾದ್‌ ಶರಣಬಸವೇಶ್ವರ ರಥೋತ್ಸವ

ಶಹಾಬಾದ್‌: ನಗರದಲ್ಲಿ ಗುರುವಾರ ಮಹಾದಾಸೋಹಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಅತ್ಯಂತ ವೈಭವ ಹಾಗೂ ಶ್ರದ್ಧಾ ಭಕ್ತಿಯಿಂದ ಜರುಗಿತು. ಸಾವಿರಾರು ಭಕ್ತರು ಈ ಧಾರ್ಮಿಕ ಮಹೋತ್ಸವಕ್ಕೆ ಸಾಕ್ಷಿಯಾದರು. ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ರಥೋತ್ಸವದ ನಿಮಿತ್ತ ಬೆಳಗ್ಗೆಯಿಂದಲೇ ಭರದ ಸಿದ್ಧತೆ ಕೈಗೊಳ್ಳಲಾಗಿತ್ತು. ತೇರಿಗೆ ಹೂವು-ತಳಿರು ತೋರಣಗಳು ಹಾಗೂ ಬಣ್ಣ ಬಣ್ಣದ ಪರಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ ಅಡವಿತಾತರ ಗದ್ದುಗೆಯಿಂದ ದೇವಾಲಯದವರೆಗೆ ನಂದಿಕೋಲು ಉತ್ಸವ ನಡೆಯಿತು. ಸಾಯಂಕಾಲ ಅಪಾರ ಸಂಖ್ಯೆಯ ಭಕ್ತರು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ “ಶರಣಬಸವೇಶ್ವರ ಮಹಾರಾಜ ಕಿ ಜೈ” ಎಂಬ ಘೋಷಣೆಗಳು ಮೊಳಗಿದವು. ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾತ್ರಿ ಗೀಗೀ ಪದಗಳ ಕಾರ್ಯಕ್ರಮ ಜರುಗಿದ್ದು, ಜಾತ್ರೆಗೆ ಆಗಮಿಸಿದ ಭಕ್ತರಿಗೆ ವೀರಶೈವ ಯುವಕ ಮಂಡಳಿಯಿಂದ ದಾಸೋಹ ಸೇವೆ ನೀಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್ ಠಾಣೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಾರ್ತಾ ಭಾರತಿ 2 Apr 2026 10:25 pm

ಹರಿದ್ವಾರ ಮುನ್ಸಿಪಲ್ ವ್ಯಾಪ್ತಿಯಲ್ಲಿ ಮಾಂಸ, ಮೊಟ್ಟೆಗಳ ನಿಷೇಧ ಸಾಧ್ಯತೆ

ಹರಿದ್ವಾರ (ಉತ್ತರಾಖಂಡ): ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅರ್ಧ ಕುಂಭಮೇಳದ ಹಿನ್ನೆಲೆಯಲ್ಲಿ ತನ್ನ ಮುನ್ಸಿಪಲ್ ವ್ಯಾಪ್ತಿಯಲ್ಲಿ ಮಾಂಸ ಮತ್ತು ಮೊಟ್ಟೆಗಳನ್ನು ನಿಷೇಧಿಸಲು ಹರಿದ್ವಾರ ಮಹಾನಗರ ಪಾಲಿಕೆಯು (ಮನಪಾ) ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಎ.6ರಂದು ನಡೆಯಲಿರುವ ಮನಪಾ ಸಭೆಯಲ್ಲಿ ಸ್ವಚ್ಛತಾ ಕಳವಳಗಳಿಂದಾಗಿ ನಗರದಲ್ಲಿ ಮಾಂಸ ನಿಷೇಧದ ಪ್ರಸ್ತಾವವನ್ನು ಮಂಡಿಸಲಾಗುವುದು ಎಂದು ಬಿಜೆಪಿ ನಾಯಕಿ ಹಾಗೂ ಮೇಯರ್ ಕಿರಣ ಜೈಸಲ್ ತಿಳಿಸಿದರು. ಪ್ರಸ್ತುತ ಹರಿದ್ವಾರದಲ್ಲಿ ಯಾವುದೇ ಕಸಾಯಿಖಾನೆ ಇಲ್ಲ ಮತ್ತು ಹಸಿ ಮಾಂಸವನ್ನು ಮಾರಾಟ ಮಾಡುವ ಅಂಗಡಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು,ಅಲ್ಲಿ 56 ಅಂಗಡಿಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಇನ್ನಷ್ಟೇ ಅಂಗಡಿಕಾರರಿಗೆ ಹಂಚಿಕೆ ಮಾಡಬೇಕಿದೆ. ಪ್ರಸ್ತುತ ಪ್ರಸ್ತಾವವು ರೆಸ್ಟೋರಂಟ್ಗಳಲ್ಲಿ ಮಾಂಸದ ಖಾದ್ಯಗಳ ಮಾರಾಟ ನಿಷೇಧವನ್ನೂ ಒಳಗೊಂಡಿದ್ದು,ಇದು ಸ್ಥಳೀಯ ಮಾಂಸಾಹಾರಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ನಿರ್ಣಯವು ಅಂಗೀಕಾರಗೊಂಡರೆ 100ಕ್ಕೂ ಹೆಚ್ಚಿನ ಮಳಿಗೆಗಳು ಮತ್ತು 10,000ಕ್ಕೂ ಅಧಿಕ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಕೌನ್ಸಿಲರ್ ಗಳು ಅಂದಾಜಿಸಿದ್ದಾರೆ. ಪ್ರಸ್ತುತ ಸ್ವಾತಂತ್ರ್ಯಪೂರ್ವದ ನಿಯಮಗಳಿಂದಾಗಿ ಹರ ಕಿ ಪೌಡಿ ಘಾಟ್ ನ ಐದು ಕಿ.ಮೀ.ವ್ಯಾಪ್ತಿಯಲ್ಲಿ ಮಾಂಸ ನಿಷೇಧ ಜಾರಿಯಲ್ಲಿದೆ. 60 ಸದಸ್ಯ ಬಲದ ಮನಪಾದಲ್ಲಿ ಬಿಜೆಪಿ 40 ಕೌನ್ಸಿಲರ್ ಗಳನ್ನು ಮತ್ತು ಓರ್ವ ಪಕ್ಷೇತರ ಸದಸ್ಯರ ಬೆಂಬಲವನ್ನು ಹೊಂದಿದೆ. ಸಭೆಯಲ್ಲಿ ನಿರ್ಣಯವು ಅಂಗೀಕಾರಗೊಂಡರೆ ಔಪಚಾರಿಕ ವಿಚಾರಣೆ ನಡೆಯಲಿದ್ದು, ಅಲ್ಲಿ ನಿವಾಸಿಗಳು ತಮ್ಮ ಆಕ್ಷೇಪಗಳನ್ನು ಎತ್ತಬಹುದಾಗಿದೆ. ಬಳಿಕ ಅದನ್ನು ಗೆಝೆಟ್ ನಲ್ಲಿ ಅಧಿಸೂಚಿಲಾಗುವುದು ಮತ್ತು ಪ್ರಕ್ರಿಯೆಯು ಎರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜೈಸಲ್ ತಿಳಿಸಿದರು. ಮಾಂಸ ಮಾರಾಟವನ್ನು ನಿಷೇಧಿಸಿರುವ ಪ್ರಸಕ್ತ ನಿಯಮಗಳು ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿರುವ ಜ್ವಾಲಾಪುರದ ಕೆಲವು ಭಾಗಗಳಿಗೆ ವಿನಾಯಿತಿ ನೀಡಿದೆ.

ವಾರ್ತಾ ಭಾರತಿ 2 Apr 2026 10:22 pm

ಕಲಬುರಗಿ | ಸೈಬರ್ ವಂಚನೆ, ಮಾದಕ ಜಾಲ ವಿರುದ್ಧ ತಂತ್ರಜ್ಞಾನ ಬಳಕೆ ಅಗತ್ಯ: ಇಸ್ಮಾಯಿಲ್ ಶರೀಫ್

ಕಲಬುರಗಿ : ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಪೊಲೀಸ್ ಇಲಾಖೆ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಮೊಹಮ್ಮದ್ ಇಸ್ಮಾಯಿಲ್ ಷರೀಫ್ ಹೇಳಿದರು. ಗುರುವಾರ ನಗರದ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ಮನೆ ಮನೆಗೆ ಪೊಲೀಸ್’ ಯೋಜನೆಯಡಿ ನಿಖರ ದತ್ತಾಂಶ ಸಂಗ್ರಹಿಸುವುದು ಹಾಗೂ ಅಪರಾಧಿಗಳ ಪತ್ತೆಗೆ ‘ಹೂ ಈಸ್ ಹೂ’ ಡೈರಿಗಳನ್ನು ನಿರ್ವಹಿಸುವುದು ಅಗತ್ಯವೆಂದು ಹೇಳಿದರು. ಪೊಲೀಸ್ ಸಿಬ್ಬಂದಿಗಳು ಆರ್ಥಿಕ ಭದ್ರತೆಗಾಗಿ ಉಳಿತಾಯದ ಕಡೆಗೆ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಹಾಗೂ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆಯುತ್ತಿರುವುದು ಗಂಭೀರ ಆತಂಕಕಾರಿ ಸಂಗತಿ ಎಂದು ಹೇಳಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿ ಮಾತನಾಡಿ, 1965ರ ಏಪ್ರಿಲ್ 2ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. 1984ರಿಂದ ಪೊಲೀಸ್ ಧ್ವಜ ದಿನ ಮತ್ತು ಪೊಲೀಸ್ ಕಲ್ಯಾಣ ದಿನಗಳನ್ನು ಒಂದಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು. ಅತ್ಯುತ್ತಮ ಸೇವೆ ಸಲ್ಲಿಸಿದ 153 ಸಿಬ್ಬಂದಿಗಳಿಗೆ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ಹಾಗೂ ‘ಡಿಜಿ ಕಮೆಂಡೇಶನ್ ಡಿಸ್ಕ್’ ನೀಡಲಾಗುತ್ತದೆ. ಇದರಲ್ಲಿ ಜಿಲ್ಲೆಯ ಐದು ಜನರಿಗೆ ಚಿನ್ನದ ಪದಕ ಲಭಿಸಿದೆ. ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಶೈಕ್ಷಣಿಕ ಧನಸಹಾಯ ಮತ್ತು ಆರೋಗ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ 30,000 ರೂ. ನಿಂದ 50,000 ರೂ. ವರೆಗೆ ಶೈಕ್ಷಣಿಕ ಧನಸಹಾಯ ವಿತರಿಸಲಾಯಿತು. ನಿವೃತ್ತ ಸಿಬ್ಬಂದಿಗಳಿಗೆ ವೈದ್ಯಕೀಯ ನೆರವು ನೀಡಲಾಯಿತು. ಕರ್ತವ್ಯ ನಿರ್ವಹಣೆಯಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಶಿವಪುತ್ರಪ್ಪ ಅಣ್ಣಾರಾವ್ ಶಳಗೆ ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸಂಗ್ರಹಿಸಿದ 9 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಪೊಲೀಸ್ ತುಕಡಿಗಳ ಪಥಸಂಚಲನ ನಡೆಯಿತು. ಪರೇಡ್ ಕಮಾಂಡರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಎಂಟು ತುಕಡಿಗಳು ಶಿಸ್ತಿನ ಪ್ರದರ್ಶನ ನೀಡಿದವು. ಮಹಿಳಾ ಪೊಲೀಸ್ ತುಕಡಿ ಸೇರಿದಂತೆ ಹಲವು ಘಟಕಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದವು. ಕಾರ್ಯಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಆಂತರಿಕ ಭದ್ತತೆಯ ಗುಪ್ತ ವಾರ್ತೆಯ ಎಸ್.ಪಿ. ಎ.ಆರ್.ಕರ್ನಲ್, ಜಿಲ್ಲಾ ಉಪ ಪೊಲೀಸ್ ಆಯುಕ್ತ ಪ್ರವೀಣ್ ಎಚ್. ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಜಿಲ್ಲಾ ಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.          

ವಾರ್ತಾ ಭಾರತಿ 2 Apr 2026 10:22 pm

ನನ್ನನ್ನು ಅಭ್ಯರ್ಥಿ, ಅವರ ತಂದೆ-ತಾಯಿ ಪ್ರಚಾರಕ್ಕೆ ಕರೆದೇ ಇಲ್ಲ : MLC ಅಬ್ದುಲ್ ಜಬ್ಬಾರ್

ನಮ್ಮ ಅವಶ್ಯಕತೆ ಇಲ್ಲ ಅಂತ ಬಿಟ್ಟಿದ್ದಾರಾ ಗೊತ್ತಿಲ್ಲ ಎಂದ ದಾವಣಗೆರೆಯ ಹಿರಿಯ ಕೈ ನಾಯಕ

ವಾರ್ತಾ ಭಾರತಿ 2 Apr 2026 10:22 pm

ಎಲ್‌ಪಿಜಿ ಕೊರತೆ, ಬೆಲೆ ಏರಿಕೆ ವಿರುದ್ಧ ಆಟೋ ರಾಜಕನ್ಮಾರ್ ಯೂನಿಯನ್‌ನಿಂದ ಮನವಿ

ಮಂಗಳೂರು, ಎ.2: ದ.ಕ. ಜಿಲ್ಲೆಯಲ್ಲಿ ಆಟೋ ರಿಕ್ಷಾಗಳಿಗೆ ಎಲ್‌ಪಿಜಿ ಅನಿಲದ ತೀವ್ರ ಕೊರತೆ ಮತ್ತು ಅನಿಯಂತ್ರಿತ ಬೆಲೆ ಏರಿಕೆಯನ್ನು ಖಂಡಿಸಿ ಆಟೋ ರಾಜಕನ್ಮಾರ್ ಯೂನಿಯನ್ (ರಿ)ನ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಎಲ್‌ಪಿಜಿ ಅನಿಲದ ಬೆಲೆ ಶೇ.50ರಿಂದ 60ರಷ್ಟು ಏರಿಕೆಯಾಗಿದೆ. ಇದರಿಂದ ಆಟೋ ಚಾಲಕರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಲೆ ಏರಿಕೆಯನ್ನು ತಕ್ಷಣ ನಿಯಂತ್ರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅನಿಲ ಪಂಪ್‌ಗಳಲ್ಲಿ ಸರಿಯಾದ ಸರಬರಾಜು ಇಲ್ಲದೆ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದ ದಿನದ ದುಡಿಮೆಯೂ ಇಲ್ಲದೆ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆಯಲ್ಲದೆ, ಸಮಸ್ಯೆಗಳು ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಯೂನಿಯನ್ ಎಚ್ಚರಿಸಿದೆ. ಮನವಿ ಸಲ್ಲಿಸುವ ಸಂದರ್ಭ ಯೂನಿಯನ್ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ., ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್, ಪದಾಧಿಕಾರಿಗಳಾದ ಶಖೀಕ್ ಸಾಲೆತ್ತೂರು, ಸಿದ್ದೀಕ್ ಕೊಡಕ್ಕಲ್, ಇಕ್ಬಾಲ್ ಮಾಡೂರು, ಸಿರಾಜ್ ಇರಾ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 2 Apr 2026 10:16 pm

ಮಾನ್ವಿ | ಕನ್ನಡ ಸಾಹಿತ್ಯ ಪರಿಷತ್ತಿಗೆ 25 ಸಾವಿರ ರೂ. ಸ್ಮರಣಾರ್ಥ ದೇಣಿಗೆ ನೀಡಿದ ಪ್ರಾಧ್ಯಾಪಕ

ಮಾನ್ವಿ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ದಿವಂಗತ ಸೈಯದ್ ಇಕ್ಬಾಲ್ ಅಹ್ಮದ್ ಅವರ ಸ್ಮರಣಾರ್ಥವಾಗಿ ಪಟ್ಟಣದ ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸೈಯದ್ ಮುಜೀಬ್ ಅಹ್ಮದ್ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿಗೆ 25 ಸಾವಿರ ರೂ. ದೇಣಿಗೆಯನ್ನು ಬುಧವಾರ ನೀಡಿದರು. ಪಟ್ಟಣದ ಗ್ಯಾಲಕ್ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಿನಿಧಿ ದೇಣಿಗೆ ಮೊತ್ತದ ಡಿಡಿಯನ್ನು ಸ್ವೀಕರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಸೈಯದ್ ಮುಜೀಬ್ ಅಹ್ಮದ್ ಅವರು ತಮ್ಮ ಚಿಕ್ಕಪ್ಪ ಸೈಯದ್ ಇಕ್ಬಾಲ್ ಅಹ್ಮದ್ ಅವರ ನೆನಪಿನಲ್ಲಿ ದತ್ತಿ ಸ್ಥಾಪಿಸಿರುವುದು ಶ್ಲಾಘನೀಯ ಎಂದರು. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಸೈಯದ್ ಇಕ್ಬಾಲ್ ಅಹ್ಮದ್ ಅವರು ಜಾತ್ಯತೀತ ಮನೋಭಾವ ಹೊಂದಿದ್ದು, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಗುಣ ಹೊಂದಿದ್ದರು. ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸೈಯದ್ ಮುಜೀಬ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೈಯದ್ ಇಕ್ಬಾಲ್ ಅಹ್ಮದ್ ಅವರ ಸಹೋದರ ಸೈಯದ್ ಹುಸೇನ್ ಸಾಹೇಬ್ ಸೇರಿದಂತೆ ಕಸಾಪದ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದು, ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.

ವಾರ್ತಾ ಭಾರತಿ 2 Apr 2026 10:16 pm

ಕುಂದಾಪುರ: ವಿದ್ಯಾರ್ಥಿ ಆತ್ಮಹತ್ಯೆ

ಕುಂದಾಪುರ: ಮನೆಯಲ್ಲಿ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ನಗರದ ಮಂಗಲಪಾಂಡೆ ರಸ್ತೆಯಲ್ಲಿ ಗುರುವಾರ ನಡೆದಿದೆ. ಮಂಗಲಪಾಂಡೆ ರಸ್ತೆ ನಿವಾಸಿ ಕೌಶಿಕ್ ಬಾಯರಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಕುಂದಾಪುರ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.  ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಾರ್ತಾ ಭಾರತಿ 2 Apr 2026 10:14 pm

ರಾಯಚೂರು | ಮುಖ್ಯಮಂತ್ರಿ ಪದಕಕ್ಕೆ ಡಿವೈಎಸ್‌ಪಿ ಶಾಂತವೀರ ಆಯ್ಕೆ

ರಾಯಚೂರು: ರಾಯಚೂರು ಡಿವೈಎಸ್‍ಪಿ ಶಾಂತವೀರ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಸಾಧಕ ಪೊಲೀಸ್ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ರಾಜ್ಯದ ಐದು ಜನ ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಐದು ಜನರಲ್ಲಿ ಡಿವೈಎಸ್ಪಿ ಶಾಂತವೀರ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾದ ಶಾಂತವೀರರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣಾಂಗ್ಷುಗಿರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಹರೀಶ ಅಭಿನಂದಿಸಿದ್ದಾರೆ.

ವಾರ್ತಾ ಭಾರತಿ 2 Apr 2026 10:12 pm

GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ

ಬೆಂಗಳೂರು: ಕೇಂದ್ರ ಸರ್ಕಾರದಿಂದ 10,000 ಕೋಟಿ ರೂಪಾಯಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಯಿಂದ ಬರಬೇಕು ಎಂದು ಸುಳ್ಳು ಹೇಳಿದ್ದಾರೆ. ಪ್ರತಿ ತಿಂಗಳು ಜಿಎಸ್ ಟಿ ಯಿಂದ ಪಾಲು ರಾಜ್ಯಕ್ಕೆ ಬರುವುದು ಬರುತ್ತದೆ. ಕಾಂಗ್ರೆಸ್ ಜಿಎಸ್ ಟಿ ಕಡಿಮೆ ಮಾಡಿರುವುದನ್ನು ಒಪ್ಪಿ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದಿಯಾ? ಎನ್ನುವುದನ್ನು ತಿಳಿಸಲಿ ಎಂದು

ಒನ್ ಇ೦ಡಿಯ 2 Apr 2026 10:10 pm

ಕಲಬುರಗಿ ಬಸ್ ನಿಲ್ದಾಣದಲ್ಲಿ ಟಿಪ್ಪರ್ ಚಾಲಕನಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಅಪರಿಚಿತರೊಬ್ಬರು ಟಿಪ್ಪರ್ ಚಾಲಕನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖೈನೂರು ಗ್ರಾಮದ ನಿವಾಸಿ ಹಣಮಂತ ಪೂಜಾರಿ ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವಾರ್ತಾ ಭಾರತಿ 2 Apr 2026 10:09 pm

ವೃದ್ಧ ನಾಪತ್ತೆ

ಉಡುಪಿ, ಎ.2: ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ನಿವಾಸಿ ದೇವದಾಸ್ ಪೂಜಾರಿ (75) ಎಂಬ ವೃದ್ಧರು 2024ರ ಡಿಸೆಂಬರ್ 1ರಂದು ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 2 Apr 2026 10:08 pm

ಉಡುಪಿ| ಗಡಿಪಾರು ಆದೇಶದ ಆರೋಪಿಯ ಬಂಧನ

ಉಡುಪಿ, ಎ.2: ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೊರಜಿಲ್ಲೆಗೆ ಗಡಿಪಾರು ಆದೇಶ ಪಡೆದು, ಆದೇಶದ ಪ್ರತಿ ಜಾರಿ ಮಾಡಲು ಬಂದ ಪೊಲೀಸರನ್ನು ಯಾಮಾರಿಸಿ ಓಡಿ ಹೋಗಿದ್ದ ಫೈಝಲ್ ಎಂಬ ಆರೋಪಿಯನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೊರ ಜಿಲ್ಲೆಗೆ ಗಡಿಪಾರು ಆದೇಶವನ್ನು ಜಾರಿ ಮಾಡಲು ಹೋದ ವೇಳೆ ಆರೋಪಿ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರು ವುದನ್ನು ಖಚಿತಪಡಿಸಿಕೊಂಡು ಮಲ್ಪೆ ಪೊಲೀಸರು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಹೋದಾಗ, ಆರೋಪಿ ತಾನು ಕುಳಿತಿದ್ದ ಕಾರನ್ನು ಒಮ್ಮೆಗೆ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಓಡಿ ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಕಾರು ಜಖಂಗೊಂಡಿದ್ದು, ಆತನ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆತ ಬಿಟ್ಟು ಹೋದ ಕಾರಿನ ಮಹಜರು ಪ್ರಕ್ರಿಯೆ ನಡೆಸುವಾಗ ಅದರಲ್ಲಿ ಮಾದಕ ವಸ್ತು ಗಾಂಜಾ 173.42 ಗ್ರಾಮ್ (ಮೌಲ್ಯ ಅಂದಾಜು 8,000ರೂ.) ಪತ್ತೆಯಾಗಿತ್ತು. ಇದರೊಂದಿಗೆ ದೊರೆತ ಎರಡು ಮೊಬೈಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಫೈಝಲ್ ಮತ್ತೊಬ್ಬ ಆರೋಪಿ ಯೊಂದಿಗೆ ಸೇರಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟು ಕೊಂಡು ಮಾರಾಟ ಮಾಡಲು ಕಾಯುತ್ತಿದ್ದುದಾಗಿ ತಿಳಿದುಬಂದಿತ್ತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೇಲಿನ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾರ್ಕಳದ ಬಂಗ್ಲಗುಡ್ಡೆ ಕಸಬ ನಿವಾಸಿ ಫೈಝಲ್‌ನ್ನು ಕಾರ್ಕಳ ಪೊಲೀಸ್ ಉಪನಿರೀಕ್ಷಕರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ವಾರ್ತಾ ಭಾರತಿ 2 Apr 2026 10:07 pm

ಭಾರತದ ರಕ್ಷಣಾ ಸಾಮಾಗ್ರಿಗಳ ರಫ್ತು 38,424 ಕೋಟಿ ರೂ.ಗೆ ಏರಿಕೆ

ಕಳೆದ ಸಾಲಿಗಿಂತ ಶೇ.62ರಷ್ಟು ಬೆಳವಣಿಗೆ

ವಾರ್ತಾ ಭಾರತಿ 2 Apr 2026 10:07 pm

ತಂದೆ ಮಾಡಿರುವ ಆರೋಪಗಳನ್ನು ಬೆಂಬಲಿಸೊಲ್ಲ, ಕಪಿಲ್-ಧೋನಿಯ ಕ್ಷಮೆ ಯಾಚಿಸುವೆ ಎಂದ ಯುವರಾಜ್ ಸಿಂಗ್: ಏನಿದು ವಿವಾದ?

ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಕಪಿಲ್ ದೇವ್ ಮತ್ತು ತನ್ನ ಮಗನ ವೃತ್ತಿ ಜೀವನವನ್ನು ಮಹೇಂದ್ರ ಸಿಂಗ್ ಧೋನಿ ಹಾಳುಗೆಡವಿದ್ದರು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದರು. ತಂದೆಯ ಈ ಹೇಳಿಕೆಗೆ ಯುವರಾಜ್ ಸಿಂಗ್ ಅವರು ಕಪಿಲ್ ಮತ್ತು ಧೋನಿ ಅವರ ಕ್ಷಮೆ ಯಾಚಿಸಿದ್ದಾರೆ. ಸ್ಪೋರ್ಟ್ಸ್ ತಕ್ ನ ಪಾಡ್ ಕಾಸ್ಟ್ ನ ಟೀಸರ್ ನಲ್ಲಿ ಯುವರಾಜ್ ಸಿಂಗ್ ಈ ಅವರು ಈ ಬಗ್ಗೆ ಮಾತನಾಡಿದ್ದು, ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಅವರ ಕ್ಷಮೆಯಾಚಿಸಲು ನಾನು ಬಯಸುತ್ತೇನೆ. ಈ ರೀತಿ ಮಾತನಾಡುವುದು ಸರಿಯಿಲ್ಲ.'' ಎಂದು ನಾನು ಅಪ್ಪನಿಗೆ ಹೇಳಿರುವುದಾಗಿ ಹೇಳಿಕೆ ನೀಡಿದ್ದಾರೆ. ಏನು ಹೇಳಿದ್ದರು ಯೋಗರಾಜ್? ಮೊದಲಿನಿಂದಲೂ ಭಾರತ ತಂಡದ ಅವರು ಕಿಡಿಕಾರುತ್ತಲೇ ಇದ್ದಾರೆ. ಯುವರಾಜ್ ಸಿಂಗ್ ಅವರು ಭಾರತ ತಂಡದಿಂದ ಹೊರಬೀಳಲು ಧೋನಿಯೇ ಕಾರಣ. ಧೋನಿಯಿಂದಾಗಿಯೇ ಯುವಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಹಾಳಾಯಿತು ಎಂದು ಬಹಳಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳನ್ನು ಯುವರಾಜ್ ಸಿಂಗ್ ಅವರು ಅಲ್ಲಗೆಳೆಯುತ್ತಾ ಬಂದಿದ್ದರು. ಇನ್ನು ಭಾರತ ಕ್ರಿಕೆಟ್ ನ ದಂತಕೆತೆಗಳನ್ನು ಮಾಡಿದ್ದರು. 1980 ರ ದಶಕದ ಆರಂಭದಲ್ಲಿ ಭಾರತ ತಂಡ ಮಾಜಿ ನಾಯಕ ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನವನ್ನು ಹಾಳು ಮಾಡಿದ್ದರು. ಅವರು ನನಗೆ ಬೆದರಿಕೆ ಹಾಕಿದ್ದರಿಂದ ಅವರನ್ನು ಎದುರಿಸಲು ಒಮ್ಮೆ ಪಿಸ್ತೂಲ್‌ನೊಂದಿಗೆ ಅವರ ಮನೆಗೆ ಹೋಗಿದ್ದೆ ಎಂದು ಯೋಗರಾಜ್ ಹೇಳಿದ್ದರು. ಈ ಬಗ್ಗೆ ಕಪಿಲ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ `ಯಾರು ಯೋಗರಾಜ್?' ಎಂದು ಮರು ಪ್ರಶ್ನೆ ಹಾಕಿದ್ದರು. ಆ ಪ್ರಶ್ನೆಯನ್ನು ಅವರು ನಿರ್ಲಕ್ಷಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ತಂದೆಯ ಈ ಆರೋಪಿಗಳ ಬಗ್ಗೆ ಯುವರಾಜ್ ಸಿಂಗ್ ಅವರು ಮಾತನಾಡಿದ್ದು, ಯುವರಾಜ್ ಸಿಂಗ್ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಕ್ಷಮೆಯಾಚಿಸಿದ್ದಾರೆ.ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಸಂಚಿಕೆಯು ಯುವರಾಜ್ ಅವರ ಮೊದಲ ವಿವರವಾದ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ಎರಡು ನಿಮಿಷಗಳ ಟೀಸರ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ರಿಷಭ್ ಪಂತ್ ಮತ್ತು ಹದಿಹರೆಯದ ಪ್ರತಿಭೆ ವೈಭವ್ ಸೂರ್ಯವಂಶಿ ಸೇರಿದಂತೆ ಹಲವಾರು ಕ್ರಿಕೆಟ್ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ. ವೈಟ್ ಬಾಲ್ ಸ್ಪೆಷಲಿಸ್ಟ್ ಯುವಿ ಭಾರತ ತಂಡ 2008ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಯುವರಾಜ್ ಸಿಂಗ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಭಾರತದ ವೈಟ್ ಬಾಲ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿದ್ದ ಅವರು 304 ಏಕದಿನ ಪಂದ್ಯಗಳಿಂದ 36.55 ಸರಾಸರಿಯಲ್ಲಿ 8701 ರನ್ ಕಲೆ ಹಾಕಿದ್ದರು. ಅದರಲ್ಲಿ 14 ಶತಕ ಮತ್ತು 52 ಅರ್ಧಶತಕಗಳಿದ್ದವು. 111 ವಿಕೆಟ್ ಪಡೆದಿದ್ದರು. ಇನ್ನು 58 ಟಿ20 ಪಂದ್ಯಗಳಿಂದ 28.02 ಸರಾಸರಿಯಲ್ಲಿ 1177 ರನ್ ಪೇರಿಸಿದ್ದರು. 28 ವಿಕೆಟ್ ಗಳನ್ನೂ ಪಡೆದಿದ್ದರು. ಇದರೊಂದಿಗೆ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 1900 ರನ್ ಮತ್ತು 9 ವಿಕೆಟ್ ಗಳಿಸಿದ್ದರು. 2019ರಲ್ಲಿ ಅವರು ಹೇಳಿದ್ದರು. ಇದೀಗ ಮೆಂಟರ್ ಆಗಿ ಯುವ ಕ್ರಿಕೆಟಿಗರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಮುಗ್ನರಾಗಿದ್ದಾರೆ.

ವಿಜಯ ಕರ್ನಾಟಕ 2 Apr 2026 10:06 pm

Kalaburagi | ಮಾರಕಾಸ್ತ್ರಗಳಿಂದ ಕೊಚ್ಚಿ ವಕೀಲನ ಕೊಲೆ

ಕಲಬುರಗಿ: ಹಳೆಯ ಜೇವರ್ಗಿ ರಸ್ತೆಯಲ್ಲಿ ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಖಾಸಗಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಹಾಗೂ ವಕೀಲನಾಗಿದ್ದ ಅನಿಲ್ ರಾಠೋಡ್ (45)  ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಆಯುಕ್ತ ಶರಣಪ್ಪ ಎಸ್.ಡಿ ಅವರು, ಹರಿತವಾದ ಆಯುಧಗಳಿಂದ ಅನಿಲ್ ರಾಠೋಡ್ ಅವರನ್ನು ಕೊಲೆ ಮಾಡಲಾಗಿದೆ. ಅವರು ಖಾಸಗಿ ಫೈನಾನ್ಸ್ ಜೊತೆಗೆ ವಕೀಲ ವೃತ್ತಿಯಲ್ಲಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 2 Apr 2026 10:05 pm

ಶಿಕ್ಷಣ ಸಂಸ್ಥೆಗಳಲ್ಲಿ EWS ಕೋಟಾ| ಶಾಲಾ ದಾಖಲಾತಿಗೆ ಕರಡು ನಿಯಮ ರಚನೆ: ಸುಪ್ರೀಂಕೋರ್ಟ್ ಗೆ ಕೇಂದ್ರದ ಅಫಿಡವಿಟ್

ಹೊಸದಿಲ್ಲಿ: ಶಿಕ್ಷಣದ ಹಕ್ಕು ಕಾಯ್ದೆ (RTE)ಯಡಿ ಆರ್ಥಿಕವಾಗಿ ದುರ್ಬಲ ವರ್ಗಗಳ ಹಾಗೂ ಅವಕಾಶವಂಚಿತ ಸಮುದಾಯಗಳ ಮಕ್ಕಳನ್ನು ಆಸುಪಾಸಿನ ಶಾಲೆಗಳಿಗೆ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ತಾನು ನಡೆಸುತ್ತಿರುವುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಕರಡು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಅಂತಿಮಗೊಳಿಸಲು 3-4 ತಿಂಗಳುಗಳು ತಗಲಬಹುದು. ಹೀಗಾಗಿ ಸುಪ್ರೀಂಕೋರ್ಟ್ ನ ಆದೇಶದ ಅನುಸರಣೆಗೆ ನೀಡಲಾದ ಕಾಲಾವಕಾಶವನ್ನು ನಾಲ್ಕು ತಿಂಗಳಿಗೆ ವಿಸ್ತರಿಸಬೇಕೆಂದು ಕೇಂದ್ರ ಸರಕಾರ ಸೂಚಿಸಿತ್ತು. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು (ಡಿಒಎಸ್ಇಎಲ್) ಆರ್ಟಿಇ ಕಾಯ್ದೆಯ ಸೆಕ್ಷನ್ 1(12)(ಸಿ)ಯ ನಿಯಮಾವಳಿಗಳ ಅನುಷ್ಠಾನದ ಕುರಿತ ಕರಡು ನಿಯಮಗಳನ್ನು ರೂಪಿಸಲು ಫೆಬ್ರವರಿಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಖಾಸಗಿ ಶಾಲೆಗಳಲ್ಲಿ ಪ್ರವೇಶಮಟ್ಟದ ಶೇ.25ರಷ್ಟು ಸೀಟುಗಳನ್ನು ದುರ್ಬಲ ವರ್ಗಗಳು ಹಾಗೂ ಅವಕಾಶವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೀಸಲಿಡುವುದಕ್ಕೆ ಈ ಸೆಕ್ಷನ್ ಅವಕಾಶ ನೀಡುತ್ತದೆ. RTE ಕಾಯ್ದೆಯ ಸೆಕ್ಷನ್ 12(1)(ಸಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲವೆಂದು ಸುಪ್ರೀಂಕೋರ್ಟ್ ಜನವರಿಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿತ್ತು. ಸೂಕ್ತವಾದ ಅನುಷ್ಠಾನ ನಿಯಮಗಳು ಇಲ್ಲದೆ ಇದ್ದಲ್ಲಿ ಸೆಕ್ಷನ್ 12(1)(ಸಿ)ಯಡಿ ಶಾಸನಾತ್ಮಕ ನೀತಿಯು ಕೇವಲ ನಿರ್ಜೀವ ಪತ್ರವಾಗಿರುವುದು ಎಂದು ಅದು ಅಸಮಾಧಾನ ವ್ಯಕ್ತಪಡಿಸಿತ್ತು.

ವಾರ್ತಾ ಭಾರತಿ 2 Apr 2026 10:03 pm