ಬೀದರ್ ಜಿಲ್ಲೆಯ ಸಂಸ್ಕೃತಿಯ ಸಿಂಹಾವಲೋಕನ
ಆದಿಕಾಲದಿಂದಲೂ ಮಾನವನು ಬದುಕುವ ಜತೆಗೆ ಹಲವಾರು ಬದಲಾವಣೆ ಮಾಡಿಕೊಳ್ಳುತ್ತ ಬಂದಿದ್ದಾನೆ. ಈಗ ಈ ಕಾಲದ ಆಧುನಿಕತೆಗೆ ಪರಿವರ್ತನೆಗೊಂಡು ಜೀವನ ನಡೆಸುತಿದ್ದಾನೆ. ಅವನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಏರು-ಪೇರುಗಳನ್ನು ಕಂಡುಕೊಂಡು ಸಾಗಿ ಬಂದಿದ್ದಾನೆ. ಅವನ ಬದುಕು ಗವಿ, ಬಂಡೆ ಮತ್ತು ಮರಗಳ ಆಸರೆಯಲ್ಲಿ ಸಾಗಿ ಬಂದಿತ್ತು. ಅವನು ಈ ಸುದೀರ್ಘ ಕಾಲಾವಧಿಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಜೀವನದಲ್ಲಿ ಸುಖ ಮತ್ತು ದುಃಖ ಅನುಭವಿಸಿ ಎದುರಾದ ಸಮಸ್ಯೆಗಳನ್ನು ಸ್ವೀಕರಿಸಿ ಪರಿಹಾರ ಕಂಡುಕೊಂಡು ಬಾಳಿದ್ದಾನೆ. ಅವನು ಗುಡ್ಡ, ಬೆಟ್ಟ, ಕಾಡುಗಳಲ್ಲಿ ಜೀವಿಸುತ್ತಿರುವಾಗಲೇ ಅವನೊಂದಿಗೆ ಅವನ ಆಂತರಿಕ ಭಾವನೆಗಳು ವ್ಯಕ್ತಪಡಿಸಲು ಧ್ವನಿ ಹುಟ್ಟಿಕೊಂಡಿತ್ತು. ಅನಂತರ ಅದು ಭಾಷೆಯಾಗಿ ರೂಪುಗೊಂಡಿತ್ತು. ತಾನು ಹುಟ್ಟು ಹಾಕಿದ ಧ್ವನಿ ಕ್ರಿಯೆ ಪ್ರತಿಕ್ರಿಯೆಗಳ ಫಲಿತಾಂಶಗಳೇ ವಿಚಾರಗಳ ವಿನಿಮಯವಾಯಿತು. ಅದುವೇ ಇಂದಿನ ಈ ಪರಿಯ ಮಾನವನ ಬೆಳವಣಿಗೆಗೆ ನಾಂದಿ ಹಾಡಿತು. ತನ್ನ ನೋವು-ನಲಿವುಗಳನ್ನು ಇತರರಲ್ಲಿ ಹಂಚಿಕೊಳ್ಳುವುದೇ ಮಾನವನ ನಾಗರಿಕತೆಗೆ ಬುನಾದಿಯಾಗಿ ಹಲವಾರು ಸಂಪ್ರದಾಯಗಳು, ಸಂಸ್ಕೃತಿಯ ಆಯಾಮಗಳು ರೂಪು ತಾಳಿದವು. ತನ್ನ ಕಷ್ಟಗಳ ಪರಿಹಾರಕ್ಕಾಗಿ ಯಾವುದೋ ಒಂದು ಶಕ್ತಿಗೆ ಮೊರೆ ಹೋದನು. ಅದುವೇ ಭಕ್ತಿಯಾಗಿ ದೇವರು, ಧರ್ಮ, ಆಧ್ಯಾತ್ಮಿಕ, ಶೀಲ, ಸದಾಚಾರ ಮತ್ತು ಉತ್ತಮ ಸಂಸ್ಕೃತಿಯಾಗಿ ರೀತಿ, ನೀತಿ ನಡವಳಿಕೆಗಳ ಮೂಲವಾಯಿತು. ಅನಂತರ ಪೂಜೆ, ವಿಧಿ ವಿಧಾನ, ಹಬ್ಬ-ಹರಿದಿನ, ಜಾತ್ರೆ ಉತ್ಸವ, ಸಂಗೀತ, ಗಾಯನ, ವಾದ್ಯಗಳು, ನೃತ್ಯ, ಕಲೆ ಮುಂತಾದ ಜಾನಪದ ವಲಯವು ರೂಪುಗೊಂಡಿತ್ತು. ಈ ಎಲ್ಲ ಪ್ರಕಾರಗಳು ವಿಶ್ವದೆಲ್ಲೆಡೆ ಬದುಕಿದ ಮಾನವರ ವಿವಿಧ ರೂಪಗಳ ಯಾನವಾಗಿದೆ. ಅದು ಜನಾಂಗ, ಭಾಷೆ, ಪ್ರದೇಶಗಳಿಗೆ ಭಿನ್ನವಾಗಿ ಬೆಳೆದು ಬಂದಿತ್ತು. ಈ ಎಲ್ಲದರ ಒಂದು ಸಾಂಸ್ಕೃತಿಕ ಅಂಶವೇ ಬೀದರ್ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಮತ್ತು ಕನ್ನಡ ನಾಡಿನ ವಿವಿಧ ಪ್ರಕಾರದ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಜಾನಪದ ಉತ್ಸವ, ಆಹಾರ ಪದ್ಧತಿ, ಉಡುಪು, ವಸ್ತ್ರಾಭರಣ ನಾಗರೀಕತೆಯ ವಿಭಿನ್ನ ಅಂಗಗಳಾದವು. ಮಾನವನಿಗೆ ಅರಿವು ಉಂಟಾದಂತೆ ಮನೆಗಳನ್ನು ನಿರ್ಮಿಸಿಕೊಂಡು ಅಲೆಮಾರಿತನದಿಂದ ಮುಕ್ತಿ ಹೊಂದಿ ಒಂದೇ ಸ್ಥಳದಲ್ಲಿ ಸ್ಥಾಯಿಯಾಗಿ ನೆಲೆಸಲು ಪ್ರಾರಂಭಿಸಿದ ಸಲುವಾಗಿಯೇ ಊರು, ಪಟ್ಟಣ, ನಗರಗಳು ಹುಟ್ಟಿಕೊಂಡವು. ಅವನು ಗೃಹ ಬಳಕೆಗೆ ಮತ್ತು ನಿರ್ಮಾಣಕ್ಕೆ ಅಗತ್ಯವಾದ ಉಪಕರಣ ನಿರ್ಮಿಸಿದನು. ಇಲ್ಲವೇ ಖರೀದಿಸಲು ಪ್ರಾರಂಭಿಸಿದನು. ಅಂತಹ ನಮ್ಮ ಸಂಸ್ಕೃತಿಯನ್ನು ಹಿಂದೆ ತಿರುಗಿ ನೋಡಿದಾಗ ನಮ್ಮ ಪೂರ್ವಜರು ಬಳಸುತ್ತಿರುವ ಮತ್ತು ನಿರ್ಮಿಸಿರುವ ಅನೇಕ ಪರಿಕರಗಳು ಈಗ ಮಾಯವಾಗಿವೆ. ಅಂತಹವುಗಳಲ್ಲಿ ಚಪ್ಪರು, ಕೊಟ್ಟಿಗೆ, ಗುಡಿಸಲು, ಕೈ ತಟ್ಟಿ, ಸುರ, ಬೆಂಗಟಿ, ಚಂದಿ, ಸೂಜು ಕಟ್ಟಿಗೆ, ಕಂಬ, ತೊಲೆ, ಜಂತಿ, ಚಿಲಕಿ, ಬೆಳಕಿಂಡಿ ಅಲ್ಲದೆ ಗಂಗಾಳು, ತಂಬಿಗೆ, ಚಂಬು, ಮಿಳ್ಳಿ, ಬೊಗೋಣಿ, ಸೌಟು, ಹುಟ್ಟು, ಫುಕಣಿ, ಕಡಚಿ, ಕೊಡ, ಹರಿ, ಫಟಿ, ಬಿಂದಿಗೆ, ಮಗಿ, ಮುಚ್ಚಳ, ಗೊಬ್ಬಿ, ತತ್ರಾಣಿ, ಹೂಜಿ, ರಂಜಣಿಗೆ, ನೆಲು, ಕರಬನ ಗಡಿಗೆಗಳು ಮುಖ್ಯವಾಗಿವೆ. ಅಲ್ಲದೆ ಪ್ರತ್ಯೇಕವಾಗಿ ಹಾಲಿನ ಗಡಿಗೆ, ಮೊಸರಿನ ಕುಳ್ಳಿ, ಮಜ್ಜಿಗೆ ಫಟಿ, ರೇವಗಿ, ಸಿಂಬೆ, ಥಾಳಿ, ಕುಳ್ಳು (ಬೆರಣಿ), ಹಗಿ, ಖರ್ಸಿ, ಗುಮ್ಮಿ, ಮರ ಹೆಂಡೆ ಬುಟ್ಟಿ, ತುರ ಬುಟ್ಟಿ, ರೊಟ್ಟಿ ಬುಟ್ಟಿ, ಹೋಳಿಗೆ ಬುಟ್ಟಿ, ಹಾಲು ಗಡಿಗೆ, ಕಟರಿ, ಸರ್ಚೀಲ, ಢಾಲ್ ಬುಟ್ಟಿ, ಕುರ್ಕುಲಿಗಳು ಇಂದು ಮಾಯವಾಗಿವೆ. ಅಲ್ಲದೆ ಅವರ ಉಡುಗೆಗಳಾದ ಸೀರೆ, ಧೋತರು, ಬಾರಾಬಂದಿ ಅಂಗಿ ರುಮಾಲು, ಪಟ್ಟಿ ರುಮಾಲು, ಚೌಕಾನಿ ರುಮಾಲು, ಪಾವಡು, ಹಫ್ರಮ್ ಅಂಗಿ, ಖಮಿಸ್ ಅಂಗಿ, ತಟ್ಟು, ಚೀಲ, ಗುಂಗಡಿ (ಕಂಬಳಿ), ಕುಂಚಿ, ಟೋಪಿ, ಚೆಸ್ಟರ್ ಟೋಪಿ, ಕುದರೆ ಕುಂಚಿ, ಕುಲಾಯಿ, ಲಂಗ, ಪೋಲಕಾ, ಫಡಕಿ, ಕೌದಿ ಮುಂತಾದ ಹಳೆಯ ಕಾಲದ ಉಡುಪುಗಳು ಇಂದಿಲ್ಲ. ಅಲ್ಲದೆ ಅವರು ಬಳಸುತ್ತಿರುವ ಆಭರಣಗಳಾದ ಹಾಲ್ಗಡಗ, ಮಗುವಿನ ಕರಿಮಣಿ, ಬಿಂದಲಿ, ಅರುಳೆಲೆ, ಗಂಟಿ, ಸರಪಳಿ, ರುಳಿ, ಕಡಗ, ರಟ್ಟಿ ಕಡಗ, ಡಾಬು, ಗೆಜ್ಜೆ ಡಾಬು, ಮುಂಗೈ ದಂಡಿ, ಬೆಂಡೋಲೆ, ಕೋಂಗು, ಲೋಲಕ, ನತ್ತು, ಬುಗುಡಿ, ಜಾಲಿ ನತ್ತು, ಮುತ್ತಿನ ನತ್ತು, ಸುಪಾನಿ, ಕಾಲುಂಗರ, ಬಿಚ್ಚು ಕಾಲುಂಗರ, ಸರ್ಗಿ, ಪಿಲ್ಲೆ, ಮೀನು ಪಿಲ್ಲೆ, ನಾಗ ಮುರ್ಗಿ, ಗುರ್ಮಿ ಖಡ್ಡಿ, ಸುಪಾನಿ, ಲವಂಗ ಕಡ್ಡಿ, ಅಂಟಿನ ಗುಂಡ, ಬರಗಿನ ಗುಂಡ, ತಾಮ್ರದ ಉಂಗುರು, ವಜ್ರದ ಉಂಗುರು, ಬೆಳ್ಳಿ ಉಂಗುರು ಮುಂತಾದವುಗಳು ಇಂದು ಕಾಣೆಯಾಗಿವೆ. ಜೊತೆಗೆ ಆಹಾರ ಪದ್ಧತಿಯಲ್ಲಿಯೂ ತುಂಬ ಬದಲಾವಣೆಯಾಗಿದೆ. ಅಂದಿನ ಕಾಲಘಟ್ಟದ ಆರೋಗ್ಯಕರವಾದ ಆಹಾರಗಳು ಅಂದರೆ ನುಚ್ಚು, ಮಜ್ಜಿಗೆ, ಖಿಚಡಿ, ಅಂಬಲಿ, ಗಂಜಿ, ಕಳವೆ ಬಾನಾ(ಅನ್ನ), ಜೋಳದ ಬಾನಾ, ನವಣೆ, ಬರಗೂ, ಸಾವೆ, ಹಾರಕ, ಕೆಂಪು ಕಳವಿ, ಕರಿ ಕಳವಿ, ಗುಡುಮೆ ಕಳವಿಗಳು ಇಂದು ಇಲ್ಲವಾಗಿವೆ. ಹೆಪ್ಪು ಹಾಕುವುದು, ಫುಂಡಿ ಪಲ್ಯ, ಚಗಚಿ ಪಲ್ಯ, ಕುಕ್ಕೆನ ಪಲ್ಯ, ಕುಸುಬೆ ಪಲ್ಯ, ಕಡಲೆ ಪಲ್ಯ, ಕಲ್ಲು ಸಾಬೂಸಕಿ, ಹುಣಸೆ ಹೂವಿನ ಪಲ್ಯ, ಚಟ್ಟಿ ಚಟ್ನಿ, ಅಗಸೆ, ಎಳ್ಳು, ಕಾರ್ ಎಳ್ಳುಗಳ ಹಿಂಡಿಗಳು ಹಿಂದೆ ಸರಿಯುತ್ತಿವೆ. ಶೇಂಗಾದ ಹೋಳಿಗೆ, ಎಣ್ಣೆ ಹೋಳಿಗೆ, ಗಾರಗಿ, ಪುಟಕುಳಿ, ಕೊಡಬೆಳೆ, ಶೀತನಿ (ಬೆಳಸಿ), ಉಮಗಿ, ಘುಗ್ಗರಿ, ಬೋಳು ಗಡಗೆಯ ಅವರೆಕಾಯಿ ಮುಂತಾದವುಗಳು ತೆರೆಗೆ ಸರಿದಿವೆ. ಹಾಗೆಯೇ ಕೃಷಿಯಲ್ಲಿ ಪರಿವರ್ತನೆಗೊಂಡು ತಿಪ್ಪೆ ಗೊಬ್ಬರು, ಕುರಿ ಹಿಕ್ಕಿ ಗೊಬ್ಬರು, ಬಂಡಿ, ನೊಗ, ಮಿಳಿ, ಹೊಣೆ ಹಗ್ಗ, ಶಾಹಿ ಕೀಲಿ, ನಳಕೆ, ಕುರಗಿ, ನೇಗಿಲು, ಕುಂಟೆ, ಎಡೆ, ಸೋಲು, ದಾವಣಿ, ಕಣ್ಣಿ, ನುಲಕಿ, ಶಣಬು, ಫುಂಡಿ, ತಟ್ಟು, ಜಮಖಾನೆ, ಉಡಿ ಚೀಲಗಳು ಕಣ್ಮರೆಯಾದವು. ಜೊತೆಗೆ ಮಕ್ಕಳು ಹಾಗೂ ಯುವಕ ಯುವತಿಯರ ಆಟಗಳಾದ ಗಿಲ್ಲಿ ಫಣಿ, ಬುಗುರಿ, ವಲಿ ಚಂಡು, ಮರಕೋತಿ, ಚುರ್ಯೋ, ಖೋಖೋ, ಹುತುತಿ (ಕಬ್ಬಡಿ), ಧಪ್ಪನ ಧೂಪ್ಪೆ, ಗೋಲಿ ಆಟ, ಸೋಪಿನ ಗೋಲಿ, ಗಾಜಿನ ಗೋಲಿ, ಹುಲಿಕಟ್ಟು, ಗಾಡ್ಯಾಕಳ್ ಮನೆ, ಕಣ್ಣು ಮುಚ್ಚಾಲೆ, ಜೋಕಾಲಿ, ಪತಂಗ ಹಾರಾಟ, ಪತ್ತದ ಆಟ, ಲಗೋರಿ, ಫುಗುಡಿ, ಗೊಂಬೆ ಆಟ, ಕುಂಟಲಿಪಿ ಮತ್ತು ಹುಡುಕುವ ಆಟಗಳು ಮಾಯವಾದವು. ಅಲ್ಲದೆ ಜಾನಪದ ಕಲೆಗಳಾದ ಕಟಬಾವು (ಕಟ ಪುತಲಿ, ತಗಲು ಗೊಂಬೆ), ದೊಡ್ಡಾಟ, ಸಣ್ಣಾಟ, ಡಪ್ಪಿನ ಆಟ, ನಾಟಕ, ಕೋಲಾಟ, ಪೈತ್ರಿ, ಬುಲಾಯಿ, ಶೀಗಿ, ಗೌರಿ, ಕೋತಿ ಆಟ, ಕರಡೆ ಕುಣಿತ, ಹಾವಾಡಿಗ, ಪಗಡೆ, ಚಂಪ, ಜಾತಗಾರ ಆಟ (ಬಹುರೂಪಿ), ಪಾತ್ರದವರ ಆಟ, ಜಾಣಿ, ವಗ್ಗೆ, ಮುರುಳಿ, ಭೂತೇರ ಆಟ, ಚೌಡಕಿ ಮೇಳ, ಗೊಂದಳಿ, ಕಲಗಿ ತುರಾಯಿ, ಹಂತಿ ಹಾಡು, ಮದುವೆ, ಸೊಬಾನೆ, ತೊಟ್ಟಿಲುಗಳ ಹಾಡುಗಳು, ಕೊರವಂಜಿ, ಬಾಳ ಸಂತರು, ಇರ್ಮುಟ್ಟಿ, ಫಕೀರರ ಸವಾಲು, ಸಾರ್ವಯ್ಯನವರು ಇಂದು ಕಾಣದಾಗಿದ್ದಾರೆ. ಜೊತೆಗೆ ಸಂಪ್ರದಾಯ ಹಾಡುಗಳು ಹಲಗೆ, ಬಾಜೆ, ಕೊಳಲು, ಡಪ್ಪು, ದಮಡಿ, ಘಂಟೆ, ಜಾಂಗ್ಟಿ, ತುಂತುನಿ, ಏಕತಾರಿ, ಮೃದಂಗ, ಚಲ್ಲಮ, ತಾಸೆ, ಹಲಗೆ ಕೋಲು ಮತ್ತು ಛಣಕಿ, ಶಂಖ, ಸಿಟಿ, ತುತ್ತುರಿ, ಪುಂಗಿ ಕಾಲ್ಪೇಟಿ ಮುಂತಾದ ವಾದ್ಯಗಳು ಇಂದು ಕಂಡು ಬರುತ್ತಿಲ್ಲ. ಅಲ್ಲದೆ ಮದುವೆ ಕಾರ್ಯ ಬದಲಾವಣೆಯಾಗಿ ಸುರುಗಿ, ಹಾಲ್ಗುಂಜಿ, ಹಂದರ, ಗೌರ್ ಜಗಲಿ, ಭಾಷಿಂಗ, ಕಂಕಣ, ಸೆರಗು ಸೆಲ್ಯ ಗಂಟು, ಐರಾಣಿ, ಹಾಲ್ಗುಗ್ಗಳು, ಬೀಗರ ಭೇಟಿ, ಬಿಡಕಿ ಮನೆ, ಸೀದದ ಊಟ, ಎಣ್ಣೆ ಎರೆಯುವುದು, ಅರಶಿಣ ಆಟ, ಪತಿ ಪತ್ನಿಯರ ಹೆಸರು ಹೇಳುವುದು, ಅಡಕೆ ಬುಡಿಸುವುದು, ಗದ್ದಿಗೆ, ಮಂಡಲಗಳ ರೀತಿಗಳು ದೂರ ಸರಿದವು. ಅಲ್ಲದೆ ಹಬ್ಬ ಹರಿದಿನಗಳಲ್ಲಿ ಸತ್ಯ ನಾರಾಯಣ ಕಥೆ, ಕೀರ್ತನೆ, ಮಣ್ಣೆತ್ತಿನ ಅಮಾವಾಸ್ಯೆ, ಕೊಟ್ಟಿಗೆ ಹುಣ್ಣಿಮೆ, ಚಟ್ಟಿ ಖಾರಾ, ತೆನೆ ಕಟ್ಟು, ತಳಿರು ತೋರಣ, ಗೋಡೆ ಓರಣ, ಗೋಡೆ ಚಿತ್ರಗಳು, ಮಾಡಾ, ಚಿಮಣಿ, ಕಂದಿಲು, ಬಿಜಲಿ, ಗೋಲ, ದೀವಿಟಿಕೆ, ಹೆಂಡಗಿ, ಕೊದಳಿ ಸುಡುವುದು, ದನ ಕರುಗಳಿಗೆ ಬೆಳಗುವಿಕೆಗಳು ನಿಂತು ಹೋದವು. ಅಲ್ಲದೆ ಜನರ ರಸಿಕತೆ ಹಾಗೂ ನೀತಿಗಾಗಿ ಹೇಳುವ ಕಥೆ, ಒಡಪು, ತಿಳಿಯುವ ಕಥೆಗಳು, ಪಡೆನುಡಿಗಳು, ಒಗಟುಗಳು ಮಾಯವಾದವು. ಹೀಗೆ ನಾವು ನಡೆದು ಬಂದ ದಾರಿಯನ್ನು ಒಮ್ಮೆ ಹಿಂದಕ್ಕೆ ದೃಷ್ಟಿ ಹಾಯಿಸಿ ನೋಡಿದಾಗ ಅತಿ ವಿಜೃಂಭಣೆಯ ಆರೋಗ್ಯಕರವಾದ, ಸಿರಿವಂತವಾದ ಬೀದರ್ ಜಿಲ್ಲೆಯ ಮತ್ತು ಕಲ್ಯಾಣ ಕರ್ನಾಟಕದ ಅನೇಕ ಸಂಸ್ಕೃತಿಯ ಅಂಶಗಳು ಇಂದು ಒಂದೊಂದಾಗಿ ಕಣ್ಮರೆಯಾಗುತ್ತಿರುವುದು ವಿಪರ್ಯಾಸವಾಗಿದೆ. ನಮ್ಮ ಪೂರ್ವಜರು ಸರಳ ಮತ್ತು ನೆಮ್ಮದಿಯ ಬದುಕಿಗಾಗಿ ಗೃಹ ನಿರ್ಮಾಣ ಮತ್ತು ದಿನಬಳಕೆ ವಸ್ತುಗಳೊಂದಿಗೆ ದಿನನಿತ್ಯ ಜೀವಿಸಲು ಉತ್ತಮ ಆಹಾರ ಪದ್ಧತಿ, ಮೈ ಮುಚ್ಚುವ ಉಡುಪುಗಳು ಅಲಂಕಾರಕ್ಕಾಗಿ ಬಳಸಿದ ಚಿನ್ನ, ಬೆಳ್ಳಿ, ತಾಮ್ರ, ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದ ಹಿಂದಿನ ಕಾಲದಲ್ಲಿ ಕುಶಲತೆಯಿಂದ ರಚಿಸಿದ ಆಭರಣಗಳಲ್ಲಿ ಈಗ ಕೆಲವು ಉಳಿದುಕೊಂಡು ಕೆಲವು ರೂಪ ಬದಲಾವಣೆ ಮಾಡಿಕೊಂಡು ಮುಂದುವರಿದರೆ ಹಲವಾರು ಸಂಸ್ಕೃತಿಯ ಅಂಗಗಳು ಕಳಚಿ ಹೋದವು. ಮಾನವನ ಅವಿಭಾಜ್ಯ ಅಂಗವಾಗಿ ವ್ಯಾಪಿಸಿಕೊಂಡ ಕನ್ನಡ ನೆಲದ ಗತ ವೈಭವವನ್ನು ಇವು ಬಿಂಬಿಸುತ್ತವೆ. ಅವರ ಜೀವನ ಶೈಲಿಯ ಸಡಗರ ಸಂಭ್ರಮದ ದರ್ಪಣವು ಕೂಡ ಆಗಿವೆ. ಮೇಲೆ ತಿಳಿಸಿದ ಹಲವಾರು ಪರಿಕರಗಳು ಇಂದಿನ ಪೀಳಿಗೆ ಮತ್ತು ಜನಾಂಗಕ್ಕೆ ಹೆಸರು ಅರಿಯದಂತೆ ಮಾಯವಾಗುತ್ತಿರುವುದು ಈ ನೆಲದ ಸಂಸ್ಕೃತಿಗೆ ಒಂದು ಪೆಟ್ಟು ಬಿದ್ದಂತೆ ಸರಿ.
ಯಾದಗಿರಿಯಲ್ಲಿ ಒಣಗುತ್ತಿರುವ ಜ್ಞಾನದೆಲೆಗಳು!
ಯಾದಗಿರಿ ಜಿಲ್ಲೆಯಲ್ಲಿ ಅಭಿವೃದ್ಧಿ ಎನ್ನುವುದು ಊಹಿಸಲಾಗದ ಪದ. ಯಾದಗಿರಿ ಎಂದಾಕ್ಷಣ ಕಣ್ಣ ಮುಂದೆ ಬರುವ ದೃಶ್ಯ ಎಂದರೆ ಗಂಟು ಮೂಟೆ ತಲೆಮೇಲೆ ಹೊತ್ತು, ಮಕ್ಕಳನ್ನು ಕಂಕಳಲ್ಲಿ ಕಟ್ಟಿಕೊಂಡು ಹಿಂಡುಗಳಂತೆ ರೈಲ್ವೆ ಭೋಗಿಗಳ ಶೌಚಾಲಯದ ಬಳಿ ಜಾಗ ಸಿಕ್ಕರೂ ಸಾಕು ಎಂದು ಪರದಾಡುವ ದೃಶ್ಯ. ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ಹೋಗುವ ಒಂದು ದೊಡ್ಡ ಜನರ ಗುಂಪು. ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಯಾದಗಿರಿ ಜಿಲ್ಲೆ ಇನ್ನೂ ಗುಲಾಮಗಿರಿಯಲ್ಲೇ ಬಂಧಿಸಲ್ಪಟ್ಟಿದೆ. ಇಲ್ಲಿ ಮನುಷ್ಯ ಬದುಕುವ ಹಕ್ಕಿಗೂ ಹೋರಾಡಬೇಕೇನೋ ಎನ್ನುವಷ್ಟು ಕಿತ್ತು ತಿನ್ನುವ ಬಡತನ ಇದೆ. ಒಂದು ಜಿಲ್ಲೆಯ ಅಭಿವೃದ್ಧಿ ಆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಅಭಿವ್ಯಕ್ತವಾಗುತ್ತದೆ. ಹೀಗಿರುವಾಗ ಯಾದಗಿರಿಯಲ್ಲಿರುವ ಜನರನ್ನು ದಾರಿದ್ರ್ಯದಿಂದ ಹೊರತರಲು, ಬಡ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಲು ಸರಕಾರಿ ಶಾಲೆ ಉಳಿಸಿ, ಬೆಳೆಸಲು ಹೆಚ್ಚಿನ ಅನುದಾನ ಮೀಸಲಿಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಯಾದಗಿರಿಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಕಾಣುವ 10ನೇ ತರಗತಿ ಹಾಗೂ ದ್ವಿತೀಯ ಪಿಯು ಫಲಿತಾಂಶ ಕುಸಿತವೇ ಸಾಕ್ಷಿಯಾಗಿದೆ. ಇದು ಹೆಚ್ಚು ಆತಂಕ ಉಂಟುಮಾಡಿದೆ. ಇದಕ್ಕೆ ಮೂಲಕಾರಣ ಮೂಲಭೂತ ಸೌಲಭ್ಯಗಳ ಕೊರತೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿರುವುದು ಯಾದಗಿರಿಯಲ್ಲಿಯೇ!. 21,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇವೆ. ನೂರಾರು ಶಾಲೆಗಳು ದುರಸ್ತಿ ಕಾಣದೆ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಅನೇಕ ಶಾಲೆಗಳಲ್ಲಿ ಶೌಚಾಲಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹೆದರುತ್ತಾರೆ. ಬಯಲು ಶೌಚಕ್ಕೆ ಹೋಗುವ ಎಷ್ಟೋ ವಿದ್ಯಾರ್ಥಿನಿ ಯರು ದೌರ್ಜನ್ಯಕ್ಕೆ ತುತ್ತಾಗಿರುವ ಅನೇಕ ಉದಾಹರಣೆಗಳಿವೆ. ಅನೇಕ ಶಾಲೆಗಳಲ್ಲಿ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಈ ಎಲ್ಲ ಮೂಲಸೌಕರ್ಯ ಒದಗಿಸದಿದ್ದರೆ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ! ಈಗ ಇದು ಸಾಲದು ಎಂಬಂತೆ ಕೆಪಿಎಸ್- ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರ ಕರ್ನಾಟಕದಲ್ಲಿ 40,000 ಸರಕಾರಿ ಶಾಲೆ ಮುಚ್ಚಲು ಮುಂದಾಗಿದೆ. ಇದರಿಂದ ಯಾದಗಿರಿ ಜಿಲ್ಲೆಯ 583 ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಈ ಯೋಜನೆ ಜಾರಿಯಾದಲ್ಲಿ ಶಾಲೆಗಳ ನಿರ್ವಹಣೆಯ ಹೊಣೆಯಿಂದ ಸರಕಾರ ನುಣುಚಿಕೊಳ್ಳಲಿದೆ. ಪೋಷಕರೇ ಮಕ್ಕಳ ಶಿಕ್ಷಣದ ಸಂಪೂರ್ಣ ಆರ್ಥಿಕ ಹೊರೆ ಹೊರಬೇಕಾಗುತ್ತದೆ. ಬಡತನದ ಬೇಗೆಯಲ್ಲಿರುವವರಿಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಗಾಯದ ಮೇಲೆ ಬರೆ ಎಳೆದಂತೆ ಪರಿಣಮಿಸಲಿದೆ. ಇನ್ನೊಂದೆಡೆ ಜಿಲ್ಲೆಯ ಸಾರಿಗೆ ವ್ಯವಸ್ಥೆಯ ದುಸ್ಥಿತಿ ಹೇಳತೀರದು. ಹಳ್ಳಿಯಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಅನೇಕ ವೇಳೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಸುರಕ್ಷತೆ ಇಲ್ಲದ ಕಾರಣ ಅನೇಕ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿರಿಸುವ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತವೆ. ಹೀಗಾಗಿ ಈ ಎಲ್ಲ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸಬೇಕಿದೆ. ಬಡಮಕ್ಕಳಿಂದ ಶಿಕ್ಷಣ ಕಸಿಯುವ ನೀತಿಗಳನ್ನು ಕೈಬಿಟ್ಟು ಅವರಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯ ಪ್ರಜ್ಞಾವಂತ ಜನತೆ ಧ್ವನಿ ಎತ್ತಬೇಕಿದೆ. ಇಲ್ಲವಾದಲ್ಲಿ ಹಿಂದುಳಿದ ಯಾದಗಿರಿಯ ಚಿತ್ರಣ ಇನ್ನೂ ಅನೇಕ ವರ್ಷಗಳು ಕಳೆದರೂ ಬದಲಾಗದು.
ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಗೋದಾಮು ಆಗಿ ಬದಲಾದ ಎಂ.ಪಿ.ಪ್ರಕಾಶ ಕಲಾಮಂದಿರ
ಹೊಸಪೇಟೆ ನಗರದ ಹೃದಯ ಭಾಗದಲ್ಲಿರುವ ಎಂಪಿ ಪ್ರಕಾಶ್ ಕಲಾಮಂದಿರವು ನಗರಸಭೆಯ ಗೋದಾಮಾಗಿ ಬದಲಾಗಿದೆ. ಹಂಪಿ ಉತ್ಸವಕ್ಕೆ ಬರುವ ಕಲಾವಿದರಿಗೆ ನಾಟಕ, ಪಾತ್ರಗಳ, ಅಭ್ಯಾಸಕ್ಕೆ ಕಲಾವಿದರಿಗಾಗಿ ಈ ಕಲಾಮಂದಿರ ಸ್ಥಾಪಿಸಲಾಗಿತ್ತು. ಆದರೆ ನಗರಸಭೆಯವರು ಎಂಪಿ ಪ್ರಕಾಶ್ ಕಲಾಮಂದಿರವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿ, ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆ ಮೂಲಕ ಯಾವುದೇ ಆದೇಶ, ಅಧಿಸೂಚನೆ ಇಲ್ಲದೆೆ ಇಷ್ಟ ಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಪ್ರಸಿದ್ಧಿಯಾದ ಹಂಪಿ ಉತ್ಸವಕ್ಕೆ ಬರುವ ಕಲಾವಿದರು ಈ ಕಲಾಮಂದಿರದಲ್ಲಿ ವಾಸ್ತವ್ಯ ಹೂಡಿ, ನಾಟಕ-ನೃತ್ಯ ಸೇರಿ ಕಾರ್ಯಕ್ರಮಗಳ ಅಭ್ಯಾಸ ಮಾಡುತ್ತಿದ್ದರು. ಆದರೆ, ಅದೀಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಜಿಲ್ಲೆಯ ಕಲಾವಿದರು ಹಲವಾರು ವರ್ಷಗಳಿಂದ ಮನವಿ ಮಾಡಿಕೊಂಡರೂ ಯಾವುದೇ ಅಧಿಕಾರಿಯು ಇತ್ತ ಕಡೆ ಗಮನ ಹರಿಸಿಲ್ಲ. ದಿವಂಗತ ಎಂ.ಪಿ. ಪ್ರಕಾಶ್ ರವರು ಅಧಿಕಾರ ಇದ್ದ ಸಂದರ್ಭದಲ್ಲಿ ಬಹಳಷ್ಟು ಜನಪರ ಕೆಲಸ ಮಾಡಿದ್ದರು. ಆದರೆ, ಅವರು ಕಲಾವಿದರಿಗಾಗಿ ನಿರ್ಮಿಸಿರುವ ಕಲಾಮಂದಿರವು ಇದೀಗ ಕಲಾವಿದರಿಗೆ ಅಲಭ್ಯವಾಗಿದೆ. ರಾಜ್ಯ ಸರಕಾರ ಆದಷ್ಟು ಬೇಗ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮಾಜಿ ಸಚಿವರಾದ ದಿವಂಗತ, ಎಂಪಿ ಪ್ರಕಾಶ್ ಕಲಾಮಂದಿರ ಸ್ವಚ್ಛಗೊಳಿಸಿ ಮತ್ತು ಕಲಾವಿದರಿಗೆ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕಲೆ ಮತ್ತು ಸಂಸ್ಕೃತಿಗೆ ಹೆಸರಾದ ನಾಡಿದು. ಸ್ವತಃ ಕಲಾವಿದರಾಗಿದ್ದ ಎಂಪಿ ಪ್ರಕಾಶ್ ರವರೇ ಕಲಾವಿದರಿಗೆ ಅನುಕೂಲವಾಗಲೆಂದು ಭವ್ಯವಾದ ಕಲಾಮಂದಿರ ಸ್ಥಾಪಿಸಿದ್ದರು. ಆದರೆ ಇವತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಪಾಳುಬಿದ್ದು ಹೋಗಿದ್ದು ಶೋಚನೀಯ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲಾವಿದರಿಗೆ ಅನುಕೂಲವಾಗುವ ರೀತಿಯಲ್ಲಿ ಕಲಾಮಂದಿರ ಮರು ನಿರ್ಮಾಣ ಮಾಡಬೇಕು. -ಗುಂಡಿ ರಮೇಶ್, ಕಲಾವಿದ, ಹೊಸಪೇಟೆ ಕಲಾ ಮಂದಿರ ನಿರ್ವಹಣೆ ಮಾಡುವುದಕ್ಕೆ ಅನುದಾನದ ಕೊರತೆ ಇದೆ. ಮುಂದಿನ ದಿನದಲ್ಲಿ ಅನುದಾನ ಬಂದರೆ ಕಲಾವಿದರಿಗೆ ಒಳ್ಳೆಯ ಕಲಾಮಂದಿರ ನಿರ್ಮಿಸಿ ಕೊಡುತ್ತೇವೆ. -ಶಿವಕುಮಾರ್ ಎರಗುಡಿ, ಪೌರಾಯುಕ್ತ, ನಗರಸಭೆ ಹೊಸಪೇಟೆ
ರಿಯಾದ್/ಮುಕಲ್ಲಾ: ಯೆಮೆನ್ ನ ದಕ್ಷಿಣ ಬಂದರು ನಗರ ಮುಕಲ್ಲಾದಲ್ಲಿ ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಯು, ಯೆಮೆನ್ ಸಂಘರ್ಷದಲ್ಲಿ ಪಾಲುದಾರರಾಗಿದ್ದ ಗಲ್ಫ್ ರಾಷ್ಟ್ರಗಳ ನಡುವಿನ ಬಿರುಕುಗಳನ್ನು ಬಹಿರಂಗಪಡಿಸಿದೆ. ದಕ್ಷಿಣ ಯೆಮೆನ್ ನ ಪ್ರತ್ಯೇಕತಾವಾದಿ ಪಡೆಗಳಿಗೆ ಶಸ್ತ್ರಾಸ್ತ್ರ ಸಾಗಣೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಸೌದಿ ಅರೇಬಿಯಾ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ನ ಫುಜೈರಾ ಬಂದರಿನಿಂದ ಹೊರಟ ಎರಡು ಹಡಗುಗಳು ಅನುಮತಿಯಿಲ್ಲದೆ ಮುಕಲ್ಲಾ ಬಂದರಿಗೆ ಪ್ರವೇಶಿಸಿವೆ. ಅವುಗಳಲ್ಲಿ ದಕ್ಷಿಣ ಯೆಮೆನ್ ನ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್ (STC) ಗೆ ಉದ್ದೇಶಿತ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಸಾಗಣೆಗಳನ್ನು ತನ್ನ ರಾಷ್ಟ್ರೀಯ ಭದ್ರತೆಗೆ ಸನ್ನಿಹಿತ ಬೆದರಿಕೆ ಎಂದು ಸೌದಿ ಅರೇಬಿಯಾ ಹೇಳಿದೆ. ರಾತ್ರಿ ವೇಳೆ ನಡೆಸಲಾದ ಕಾರ್ಯಾಚರಣೆ ಸೀಮಿತವಾಗಿದ್ದು, ನಾಗರಿಕ ಹಾನಿ ತಪ್ಪಿಸುವ ಉದ್ದೇಶ ಹೊಂದಿತ್ತು ಎಂದು ಒಕ್ಕೂಟ ಹೇಳಿದೆ. ಯೆಮೆನ್ ರಾಷ್ಟ್ರೀಯ ಮಾಧ್ಯಮಗಳು ಬಂದರು ಪ್ರದೇಶದಲ್ಲಿ ಹೊಗೆ ಬರುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿವೆ. ಮನೆಗಳಿಗೆ ಹಾನಿಯಾಗಿದೆ ಎಂಬ ವರದಿಗಳಿದ್ದರೂ, ಯಾವುದೇ ಸಾವು ಸಂಭವಿಸಿಲ್ಲ ಎಂದು ಸೌದಿ ಮಾಧ್ಯಮಗಳು ತಿಳಿಸಿವೆ. ದಕ್ಷಿಣ ಯೆಮೆನ್ ಗೆ ಸ್ವ-ಆಡಳಿತ ಅಥವಾ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿರುವ STC, ಯುನೈಟೆಡ್ ಅರಬ್ ಎಮಿರೇಟ್ಸ್ ಬೆಂಬಲದೊಂದಿಗೆ ಆಡೆನ್ ಸೇರಿದಂತೆ ದಕ್ಷಿಣ ಭಾಗದ ಪ್ರಮುಖ ಪ್ರದೇಶಗಳನ್ನು ನಿಯಂತ್ರಿಸುತ್ತಿದೆ. STC ಚಟುವಟಿಕೆಗಳು ಹದ್ರಾಮೌಟ್ ಹಾಗೂ ಅಲ್-ಮಹ್ರಾ ಪ್ರದೇಶಗಳ ಅಸ್ಥಿರತೆಗೆ ಕಾರಣವಾಗಬಹುದು ಎಂಬ ಆತಂಕವನ್ನು ಸೌದಿ ಅರೇಬಿಯಾ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸೌದಿ ವಿದೇಶಾಂಗ ಸಚಿವಾಲಯ, ತನ್ನ ಗಡಿಭದ್ರತೆಗೆ ಯಾವುದೇ ರೀತಿಯ ಬೆದರಿಕೆಯು ಎಚ್ಚರಿಕೆಯ ಕರೆಗಂಟೆ ಎಂದು ಸ್ಪಷ್ಟಪಡಿಸಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್, ಶಸ್ತ್ರಾಸ್ತ್ರ ಸಾಗಣೆ ಆರೋಪಗಳನ್ನು ತಿರಸ್ಕರಿಸಿದೆ. ಮುಕಲ್ಲಾಕ್ಕೆ ಬಂದ ವಾಹನಗಳು ಯೆಮೆನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಪಡೆಗಳಿಗೆ ಸಂಬಂಧಿಸಿದ್ದೇ ಹೊರತು STC ಗೆ ಅಲ್ಲ ಎಂದು ಹೇಳಿದೆ. ಯೆಮೆನ್ ನ ಆಂತರಿಕ ರಾಜಕೀಯ ಸಂಘರ್ಷದಲ್ಲಿ ತಾನು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಯುಎಇ, ಸಂಯಮ ಮತ್ತು ಸಮನ್ವಯಕ್ಕೆ ಕರೆ ನೀಡಿದೆ. ನಂತರದ ಬೆಳವಣಿಗೆಯಲ್ಲಿ, ಯುಎಇ ತನ್ನ ಉಳಿದ ಪಡೆಗಳನ್ನು ಯೆಮೆನ್ ನಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಇದರ ನಡುವೆ, ಯೆಮೆನ್ ನ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ನಾಯಕತ್ವ ಮಂಡಳಿಯ ಅಧ್ಯಕ್ಷ ರಶಾದ್ ಅಲ್-ಅಲಿಮಿ, ಯುಎಇಯೊಂದಿಗಿನ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿ, ಎಮರಾತಿ ಪಡೆಗಳು ದೇಶ ತೊರೆಯುವಂತೆ ಆದೇಶಿಸಿದ್ದಾರೆ. ಈ ಬೆಳವಣಿಗೆಗಳು ಈಗಾಗಲೇ ದಶಕದ ದೀರ್ಘ ಯುದ್ಧದಿಂದ ತತ್ತರಿಸಿರುವ ಯೆಮೆನ್ ನಲ್ಲಿ ಮತ್ತೊಂದು ರಾಜಕೀಯ–ಸೈನಿಕ ಉಲ್ಬಣಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಿಂಚೋಳಿ ಅರಣ್ಯದಲ್ಲಿ ಕೆಂಪು ಮಣ್ಣಿನ ಅಕ್ರಮ ಸಾಗಾಟ
ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಅರಣ್ಯಪ್ರದೇಶ ರಕ್ಷಿಸಿಕೊಳ್ಳುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಭಾರಿ ಗಾತ್ರದ ವಾಹನಗಳ ನಿಷೇಧವಿದ್ದರೂ ರಾತ್ರೋ ರಾತ್ರಿ ಬೃಹತ್ ವಾಹನಗಳ ಮೂಲಕ ಕೆಂಪು ಮಣ್ಣು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. 134.88 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಚಿಂಚೋಳಿ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಗ್ರಾಮ, ತಾಂಡಾಗಳಿಗೆ ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಅದೇ ಇಕ್ಕಟ್ಟಾದ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಅಕ್ರಮ ಮಣ್ಣು ಸಾಗಾಟದಲ್ಲಿ ತೊಡಗಿರುವುದು ನಿಜಕ್ಕೂ ದುರಂತ. ಈ ಭಾಗದ ಏಕೈಕ ವನ್ಯಜೀವಿ ಧಾಮವಾಗಿರುವ ಅಂದದ ಪ್ರಕೃತಿಯನ್ನು ರಕ್ಷಣೆ ಮಾಡದೆ ಅಕ್ರಮಗಳ ಅಡ್ಡೆಯಾಗಿರುವುದು ಕಂಡರೆ ಮುಂದೊಂದು ದಿನ ಇಲ್ಲಿ ಪರಿಸರ ಉಳಿಯುವುದು ಕಷ್ಟಸಾಧ್ಯ ಎನ್ನುತ್ತಾರೆ ಸ್ಥಳೀಯರು. ವನ್ಯಜೀವಿಗಳಿಗೆ ಪ್ರಾಣ ಸಂಕಟ : ದೊಡ್ಡ ವಾಹನಗಳ ಆರ್ಭಟದಿಂದಾಗಿ ವನ್ಯಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ವಾಹನಗಳ ಓಡಾಟದಿಂದ ಮಂಗ, ಜಿಂಕೆ, ವಿವಿಧ ಪ್ರಾಣಿ, ಪಕ್ಷಿಗಳು ಅಪಘಾತಕ್ಕೀಡಾಗಿವೆ. ರಸ್ತೆಯಲ್ಲಿ ಹೋಗುತ್ತಿದ್ದಂತೆ ಕಾಲು, ಕೈಗಳು ಮುರಿದುಕೊಂಡಿರುವ ಪ್ರಾಣಿಗಳನ್ನು ನೋಡುವುದು ಇಲ್ಲಿ ಸಹಜವೆಂಬಂತೆ ಆಗಿದೆ. ವನ್ಯಜೀವಿಗಳಿಗಾಗಿ ಮೀಸಲಿಟ್ಟ ಪ್ರದೇಶ ಸಂರಕ್ಷಿಸಲು ಅಧಿಕಾರಿಗಳೇ ಮುಂದಾಗದಿದ್ದರೆ, ಮುಂದೇನು? ಎನ್ನುವ ಪ್ರಶ್ನೆ ಪರಿಸರವಾದಿಗಳಲ್ಲಿ ಮೂಡಿದೆ. ರಸ್ತೆಯೆಲ್ಲ ಕೆಂಧೂಳು : ಕೊಂಚಾವರಂ ಕ್ರಾಸ್ನಿಂದ ಶಾದಿಪುರ ಗ್ರಾಮ ಮತ್ತಿತ್ತರ ತಾಂಡಾಗಳಿಗೆ ಹೋಗುವ ರಸ್ತೆಯು ಕೆಂಪು ಮಣ್ಣಿನ ಧೂಳಿನಿಂದಾಗಿ ಸಂಪೂರ್ಣ ಆವೃತ್ತಗೊಂಡಿದೆ. ನಿತ್ಯವೂ ಕೆಂಪು ಮಣ್ಣಿನ ಲಾರಿ, ಟ್ರಕ್ಗಳ ಓಡಾಟದಿಂದ ರಸ್ತೆಪೂರ್ತಿ ಮತ್ತು ಪಕ್ಕದಲ್ಲಿ ಗಿಡ ಮರಗಳಿಗೆ ಮಣ್ಣಿನ ಧೂಳು ಮೆತ್ತಿಕೊಂಡಿದೆ. ಇದರಿಂದ ಸೈಕಲ್, ಬೈಕ್ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ. ಮಿತಿ ಮೀರಿದ ಧೂಳು ವನ್ಯಜೀವಿಗಳಿಗೂ ಕಂಟಕವಾಗಿ ಪರಿಣಮಿಸಿದೆ. ಎರಡು ಮಾರ್ಗಗಳಿಂದ ಸಾಗಾಟ : ಆರೋಪ ಅರಣ್ಯದಲ್ಲಿ ಅಕ್ರಮ ಮಣ್ಣು ಸಾಗಾಟ ಎರಡು ಮಾರ್ಗಗಳ ಮೂಲಕ ನಡೆಯುತ್ತಿದೆ. ಕೊಂಚಾವರ, ಚಿಂದಾನೂರ್ ತಾಂಡಾ, ಶಾದಿಪುರ, ಸೇವಾ ನಾಯಕ ತಾಂಡಾ ಒಂದು ಕಡೆಯಿಂದ ಸಾಗಾಟ ನಡೆಸಿದರೆ, ಉಮಲಾ ನಾಯಕ ತಾಂಡಾ, ಚಂದು ನಾಯಕ ತಾಂಡಾ, ಬಿಕ್ಕು ನಾಯಕ ತಾಂಡಾದಿಂದ ಮತ್ತೊಂದೆಡೆ ಸಾಗಾಟ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಚಿವ, ಅಧಿಕಾರಿಗಳ ಕುಮ್ಮಕ್ಕು? : ಅಕ್ರಮ ಮಣ್ಣು ಸಾಗಾಣಿಕೆ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಅನೇಕ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಉಸ್ತುವಾರಿ ಸಚಿವ, ಶಾಸಕ, ಜಿಲ್ಲೆಯ ಹಾಗೂ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯಾಕೆಂದರೆ ಇಷ್ಟು ಗಾತ್ರದ ಭಾರೀ ವಾಹನಗಳು ಇಲ್ಲಿ ಓಡಾಟ ನಡೆಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಚಿಂಚೋಳಿ ಕಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಈಗಾಗಲೇ ನಮ್ಮ ಇಲಾಖೆಯ ಎರಡು ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ರಾತ್ರಿ ವೇಳೆ ಕೂಡ ಪರಿಶೀಲನೆ ನಡೆಸಲಾಗುವುದು. -ಸೋಮಶೇಖರ್ ಎಂ., ಉಪನಿರ್ದೇಶಕರು, ಗಣಿ, ಭೂವಿಜ್ಞಾನ ಇಲಾಖೆ ಚಿಂಚೋಳಿಯಿಂದ ಶಾದಿಪುರ ಕಡೆಗೆ ರಾತ್ರಿ ವೇಳೆ ಬರಲು ಹೆದರಿಕೆ ಹೆಚ್ಚಾಗುತ್ತದೆ. ಕೆಂಪು ಮಣ್ಣಿನ 200ಕ್ಕೂ ಹೆಚ್ಚು ವಾಹನಗಳು ರಾತ್ರಿ ಪೂರ್ತಿ ಓಡಾಟ ನಡೆಸುತ್ತವೆ. ಇರುವ ಚಿಕ್ಕ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಸವಾರರಿಗೆ ತಿರುಗಾಡಲು ಭಯವಾಗುತ್ತಿದೆ. -ನರೇಶ್, ಸ್ಥಳೀಯ ನಿವಾಸಿ ನಮ್ಮ ಭಾಗದಲ್ಲಿ ಇರುವ ಒಂದೇ ಒಂದು ಅರಣ್ಯ ಸಂರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲ ಇಲಾಖೆಯ ಅಧಿಕಾರಿಗಳಕುಮ್ಮಕ್ಕಿನಿಂದಾಗಿ ಅಕ್ರಮ ಕೆಂಪು ಮಣ್ಣಿನ ಸಾಗಾಟ ನಡೆಯುತ್ತಿದೆ. ಹೀಗಾದರೆ ಇರುವ ಪ್ರಕೃತಿ ಸಂರಕ್ಷಿಸುವವರು ಯಾರು? -ಮಾರುತಿ ಗಂಜಗಿರಿ, ಚಿಂಚೋಳಿ ಹೋರಾಟಗಾರ
ಮೂಲ ಸೌಕರ್ಯ ವಂಚಿತ ಕೂಡ್ಲೂರು ಗ್ರಾಮ
ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ರೋಗದ ಭೀತಿಯಲ್ಲಿ ಗ್ರಾಮಸ್ಥರು
ಐತಿಹಾಸಿಕ ಅಂಬಾ ಮಹೋತ್ಸವ : 400 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ
3ರಂದು ಸಿಂಧನೂರಿಗೆ ಸಿಎಂ, ಡಿಸಿಎಂ ಆಗಮನ: ಬಾದರ್ಲಿ
ಹೊಸವರ್ಷಾಚರಣೆಗೂ ಮುನ್ನವೇ 150 ಕೆಜಿ ಸ್ಫೋಟಕ ತುಂಬಿದ್ದ ಕಾರು ವಶ: ರಾಜಸ್ಥಾನದಲ್ಲಿ ಹೈ ಅಲರ್ಟ್!
ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇರುವಾಗ ರಾಜಸ್ಥಾನದ ಟೋಂಕ್ನಲ್ಲಿ 150 ಕೆಜಿ ಅಮೋನಿಯಂ ನೈಟ್ರೇಟ್, 200 ಸ್ಪೋಟಕ ಕಾರ್ಟ್ರಿಡ್ಜ್ಗಳು ಮತ್ತು 1,100 ಮೀಟರ್ ಸುರಕ್ಷತಾ ಫ್ಯೂಸ್ ವೈರ್ ತುಂಬಿದ್ದ ಕಾರು ಪತ್ತೆಯಾಗಿದೆ. ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಅಲರ್ಟ್ ಆಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಲ್ಲಿಸಿದ ಅರ್ಜಿ ಆಲಿಕೆಗೆ ಆಗ್ರಹಿಸಿ ಜ.4ರಂದು ಅಖಿಲ ಭಾರತ ಮಟ್ಟದ ಪ್ರತಿಭಟನೆ
ಮಂಗಳೂರು, ಡಿ.31: ಬೀದಿ ನಾಯಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನವೆಂಬರ್ 7ರಂದು ನೀಡಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಲ್ಲಿಸಿದ ಹಸ್ತಕ್ಷೇಪ ಅರ್ಜಿಗಳನ್ನು ಆಲಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಜ. 4ರಂದು ಅಖಿಲ ಭಾರತ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿದೆ. ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಬೆಳಗ್ಗೆ 9.30ಕ್ಕೆ ಈ ಪ್ರತಿಭಟನೆ ನಡೆಯಲಿದೆ ಎಂದು ಆನಿಮಲ್ ಕೇರ್ ಟ್ರಸ್ಟ್ನ ಟ್ರಸ್ಟಿ ನ್ಯಾಯವಾದಿ ಸುಮಾ ನಾಯಕ್ ತಿಳಿಸಿದರು. ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ವೈಜ್ಞಾನಿಕ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಅನುಸರಿಸಬೇಕು. ಅದಕ್ಕಾಗಿ ಪ್ರಾಣಿ ಸಂತಾನ ನಿಯಂತ್ರಣ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು. ಮಂಗಳೂರಿನಲ್ಲಿ ಈಗಾಗಲೇ ವ್ಯವಸ್ಥಿತವಾಗಿ ಇಂತಹ ಕೇಂದ್ರವು ಕಾರ್ಯಾಚರಿಸುತ್ತಿದೆ. ಆದರೆ ಒಂದು ಕೇಂದ್ರ ಸಾಕಾಗದು. ದಿನನಿತ್ಯ ನಗರದ ಪ್ರಮುಖ ಭಾಗಗಳಲ್ಲಿ ಸಾಕು ಪ್ರಾಣಿಗಳ ಮಾಲಕರು ತ್ಯಜಿಸಿದ ನಾಯಿಗಳಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳೂರಿನಲ್ಲಿ ಇಂತಹ ಕನಿಷ್ಟ ಇನ್ನೆರಡು ಕೇಂದ್ರಗಳ ಅಗತ್ಯವಿದೆ ಎಂದು ಅವರು ಹೇಳಿದರು. ನಗರದ್ಲಿ ನಾಯಿ ಕಡಿತಗಳ ಪ್ರಕರಣಗಳು ಮಾಲಕರಿಂದ ತ್ಯಜಿಸಿದ ನಾಯಿಗಳಿಂದಲೇ ಸಂಭವಿಸುತ್ತವೆ. ಹಾಗಾಗಿ ಸಾಕು ಪ್ರಾಣಿಗಳಿಗೆ ನೋಂದಣಿ, ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆಗಳನ್ನು ಕಡ್ಡಾಯಗೊಳಿಸಬೇಕು. ಕಚ್ಚಿದ ಇತಿಹಾಸ ಇರುವ ಅಥವಾ ಪಶು ವೈದ್ಯರು ಪ್ರಮಾಣೀಕರಿಸಿದ ಆಕ್ರಮಣಕಾರಿ ನಡವಳಿಕೆಯ ನಾಯಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ನಾಯಿ ಆಶ್ರಯ ತಾಣಗಳನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು. ಹಣಕ್ಕಾಗಿ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ಅಜಾಗರೂಕತೆಯಿಂದ ಬ್ರೀಡಂಗ್ ಮಾಡುವುದು ಹಾಗೂ ಇವುಗಳನ್ನು ತ್ಯಜಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿ ಸಂತಾನ ನಿಯಂತ್ರಣ ನಿಯಮ 2023ರ ಪ್ರಕಾರ ಬೀದಿ ಪ್ರಾಣಿಗಳಿಗೆ ಆಹಾರ ತಾಣಗಳನ್ನು ಗುರುತಿಸಬೇಕು. ಮಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ ಆಹಾರ ವಲಯಗಳ ವಾರ್ಡ್ವಾರು ಪಟ್ಟಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ನಗರಗಳಲ್ಲಿ ಅಲ್ಲಲ್ಲಿ ಸಾಕು ನಾಯಿಗಳನ್ನು ತ್ಯಜಿಸುತ್ತಿರುವಂತೆಯೇ ಪರ್ವತ ಪ್ರದೇಶ, ಕಾಡು ಪ್ರದೇಶಗಳಲ್ಲಿಯೂ ಮರಿಗಳನ್ನು ತ್ಯಜಿಸುವ ಪ್ರಕ್ರಿಯೆ ಹೆಚ್ಚುತ್ತಿದೆ. ನಾಯಿಗಳು ಶಿಕಾರಿ ಮಾಡುವ ಹವ್ಯಾಸ ಹೊಂದಿಲ್ಲದ ಕಾರಣ ಅವುಗಳಿಗೆ ಈ ರೀತಿಯ ಅನ್ಯಾಯ ಮಾಡಬಾರದು ಎಂದು ಪ್ರಾಣಿಗಳ ದೌರ್ಜನ್ಯ ತಡೆ ಸಮಾಜದ ಪ್ರಮುಖರಾದ ಹರೀಶ್ ರಾಜಕುಮಾರ್ ತಿಳಿಸಿದರು. ಬೀದಿ ನಾಯಿಗಳು ಆಹಾರ ಸಿಗದೆ ಆಕ್ರಮಣಕಾರಿಯಾಗಿ ವರ್ತಿಸಬಹುದೇ ಹೊರತು ಇಲ್ಲವಾದಲ್ಲಿ ಅವುಗಳು ಮನುಷ್ಯ ಸ್ನೇಹಿಯಾಗಿರುತ್ತವೆ. ಬೀದಿ ನಾಯಿಗಳನ್ನು ಸ್ವತಂತ್ರವಾಗಿ ಬದುಕಲು ಬಿಡಬೇಕು ಎಂದು ಪ್ರಾಣಿ ಸಂರಕ್ಷಕರಾದ ರಜನಿ ಶೆಟ್ಟಿ ಹೇಳಿದರು. ಪ್ರಾಣಿಗಳ ದೌರ್ಜನ್ಯ ತಡೆ ಸಮಾಜದ ದಿನೇಶ್ ಪೈ, ಪಶು ಶಸ್ತ್ರ ಚಿಕಿತ್ಸಕರಾದ ಡಾ. ಯಶಸ್ವೀ ರಾವ್, ಪ್ರಾಣಿ ಸಂರಕ್ಷಕಿ ಡಾ. ಶ್ರುತಿ ರಾವ್, ಚಾರ್ಲ್ಸ್ ಉಪಸ್ಥಿತರಿದ್ದರು.
(ಲೇಖನ) ಕಠ್ಮಂಡುವಿನಂಥ ದುರ್ಗಮ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಟೇಕಾಫ್, ಲ್ಯಾಂಡಿಂಗ್ ಸವಾಲುಗಳು!
ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಇತ್ತೀಚೆಗೆ ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದಾಗ ಅನುಭವಿಸಿದ ಒಂದು ಬೇಸರದ ಸಂಗತಿಯನ್ನು ವಿವರಿಸಿದ್ದಾರೆ. ನೇಪಾಳದ ಯಾತ್ರೆ ಮುಗಿಸಿ ಬೆಂಗಳೂರಿಗೆ ಹೊರಡುವಾಗ ಅವರು ನೇಪಾಳದ ಕಠ್ಮಂಡುವಿನಲ್ಲಿ ಬಂದಿಳಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಹತ್ತಿದ್ದಾರೆ. ಆದರೆ, ಗಂಟೆಗಳೇ ಕಳೆದರೂ ಆ ವಿಮಾನ ಗಗನಕ್ಕೆ ಹಾರಿಲ್ಲ. ಯಾಕೆ? ಇಲ್ಲಿದೆ. ವಿವರಣೆ.
VB - G RAM G ಮಂಡನೆಗೆ ಮುನ್ನವೇ MGNREGA ನಾಶಗೊಳಿಸಿದ್ದ ಮೋದಿ ಸರಕಾರ
ಪಶ್ಚಿಮ ಬಂಗಾಳಕ್ಕೆ ʼಕೆಲಸʼದ ಬಾಕಿ ಪಾವತಿಸಿ ಎಂದು ʼಸುಪ್ರೀಂʼ ಆದೇಶದ ಬೆನ್ನಿಗೇ ಯೋಜನೆ ರದ್ದು! ಹೊಸದಿಲ್ಲಿ,ಡಿ.31: 2025 ಅಂತ್ಯಗೊಳ್ಳುತ್ತಿರುವಾಗ ನರೇಂದ್ರ ಮೋದಿ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿ ಅದರ ಸ್ಥಾನದಲ್ಲಿ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯನ್ನು ತಂದಿದೆ. MGNREGA ರದ್ದುಗೊಳಿಸಿರುವ ಕ್ರಮವು ವ್ಯಾಪಕ ಟೀಕೆಗಳಿಗೆ ಗುರಿಯಾಗಿಯಾಗಿದೆಯಾದರೂ,ಹೊಸ ಕಾಯ್ದೆಯನ್ನು ತರುವ ಮೊದಲು MGNREGAವನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗಿತ್ತು ಎಂದು ಸುದ್ದಿ ಜಾಲತಾಣ The Wire ತನ್ನ ವಿಶ್ಲೇಷಣಾ ವರದಿಯಲ್ಲಿ ಬಹಿರಂಗಗೊಳಿಸಿದೆ. ಕಳೆದ ಒಂದು ದಶಕದ ಇಣುಕು ನೋಟವು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಒದಗಿಸುವ ವಿಶ್ವದ ಅತ್ಯಂತ ದೊಡ್ಡ ಗ್ಯಾರಂಟಿ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿತ್ತು ಎನ್ನುವುದನ್ನು ತೋರಿಸುತ್ತದೆ. ಯೋಜನೆಗೆ ಬಜೆಟ್ ಹಂಚಿಕೆಗಳನ್ನು ನಿರಂತರವಾಗಿ ಕಡಿತ ಮಾಡಲಾಗಿತ್ತು. ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರಿಂದಾಗಿ ಹಲವರ ಜಾಬ್ ಕಾರ್ಡ್ ಗಳು ರದ್ದುಗೊಂಡಿದ್ದವು. ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದರು. ವೇತನ ಪಾವತಿಗಳಲ್ಲಿ ವಿಳಂಬ ಮಾಮೂಲಾಗಿತ್ತು. ಅಂತಿಮವಾಗಿ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ ಎರಡು ದಶಕಗಳಷ್ಟು ಹಳೆಯ ಕಾಯ್ದೆಯನ್ನು ನಾಶಗೊಳಿಸಿ ಅದರ ಸ್ಥಾನದಲ್ಲಿ ಹೊಸ ಕಾಯ್ದೆಯನ್ನು ತರಲಾಗಿದೆ. ಭಾರತದಲ್ಲಿಯ ಕೃಷಿ ಬಿಕ್ಕಟ್ಟನ್ನು ‘ಕಾರ್ಪೊರೇಟ್ ರಂಗದಿಂದ ಕೃಷಿ ಕ್ಷೇತ್ರದ ಹೈಜಾಕ್’ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಬಣ್ಣಿಸಿರುವ ಹಿನ್ನೆಲೆಯಲ್ಲಿ MGNREGAದ ರದ್ದತಿ ನಡೆದಿದೆ. ಹವಾಮಾನದಲ್ಲಿ ಅನಿಯಮಿತ ಬದಲಾವಣೆಗಳು, ಕುಸಿಯುತ್ತಿರುವ ಆದಾಯ, ಹೆಚ್ಚುತ್ತಿರುವ ಗ್ರಾಮೀಣ ಸಾಲ, ಬೆಲೆ ಏರಿಳಿತ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು:ಇವೆಲ್ಲವೂ ಕೃಷಿ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿವೆ. MGNREGAಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ತನ್ನ ಹಿಂದಿನ ಅನೇಕ ಕ್ರಮಗಳಂತೆ ಮತ್ತೊಮ್ಮೆ ಗ್ರಾಮೀಣ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಮೂಲಭೂತ ಬದಲಾವಣೆಗೆ ಪ್ರಯತ್ನಿಸಿದೆ. ‘ಕಳೆದ 10 ವರ್ಷಗಳಲ್ಲಿ MGNREGA ಮೂಲಭೂತವಾಗಿ ವಿಫಲಗೊಳ್ಳುತ್ತಲೇ ಬಂದಿತ್ತು. ನೀವು ಕಾಯ್ದೆಯೊಂದರ ವಿರೋಧಿಯಾಗಿದ್ದರೆ ಮತ್ತು ಅದನ್ನು ನಿರ್ಬಂಧಿಸಲು,ನಾಶಗೊಳಿಸಲು ಬಯಸಿದರೆ ನೀವು ಅದನ್ನು ರದ್ದುಗೊಳಿಸುತ್ತೀರಿ ಎನ್ನುವುದು ತಾರ್ಕಿಕತೆಯಾಗಿದೆ ಮತ್ತು ಈಗ ಅದೇ ಸಂಭವಿಸಿದೆ’ ಎಂದು The Wireನೊಂದಿಗೆ ಮಾತನಾಡಿದ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ಅಭಿಪ್ರಾಯಿಸಿದ್ದಾರೆ. ಮೋದಿ ಪ್ರಧಾನಿಯಾದ ಒಂದು ವರ್ಷದ ಬಳಿಕ 2025ರಲ್ಲಿ MGNREGAವನ್ನು ‘ಪ್ರತಿಪಕ್ಷದ ವೈಫಲ್ಯಗಳ ಜೀವಂತ ಸ್ಮಾರಕ’ ಎಂದು ಬಣ್ಣಿಸಿದ್ದರು. ಅವರ 11 ವರ್ಷಗಳ ಅಧಿಕಾರಾವಧಿಯಲ್ಲಿ ಕೇಂದ್ರವು ಯೋಜನೆಗೆ ಬಜೆಟ್ ಹಂಚಿಕೆಯನ್ನು ಕಡಿಮೆ ಮಾಡುತ್ತಲೇ ಬಂದಿತ್ತು. MGNREGA ರದ್ದುಗೊಳ್ಳುವ ಕೆಲವೇ ತಿಂಗಳುಗಳ ಮುನ್ನ ಮಾರ್ಚ್ನಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ನರೇಗಾದಡಿ ನಿಧಿಗೆ ಕೇಂದ್ರ ಸರಕಾರದ ಪಾಲಿನ ಬಿಡುಗಡೆಯಲ್ಲಿ ನಿರಂತರ ವಿಳಂಬಗಳನ್ನು ಬೆಟ್ಟು ಮಾಡಿತ್ತು. ಬಿಜೆಪಿ ನೇತೃತ್ವದ ಸರಕಾರವು MGNREGA ಅನುಷ್ಠಾನದಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ 2021ರಿಂದ ಪಶ್ಚಿಮ ಬಂಗಾಳಕ್ಕೆ ಹಣಕಾಸು ಬಿಡುಗಡೆಯನ್ನು ಸ್ಥಗಿತಗೊಳಿಸಿದೆ. ಗಮನಾರ್ಹವಾಗಿ, ಪಶ್ಚಿಮ ಬಂಗಾಳಕ್ಕೆ ಬಾಕಿಗಳನ್ನು ಪಾವತಿಸುವಂತೆ ಮತ್ತು ಯೋಜನೆಯನ್ನು ಪುನರಾರಂಭಿಸುವಂತೆ ಕಲಕತ್ತಾ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದ ಕೆಲವೇ ವಾರಗಳಲ್ಲಿ ಕೇಂದ್ರ ಸರಕಾರವು MGNREGAವನ್ನೇ ರದ್ದುಗೊಳಿಸಿದೆ. ಸೌಜನ್ಯ: Thewire.in
ಮಂಗಳೂರು | ಶಸ್ತ್ರ ಚಿಕಿತ್ಸೆ ಇಲ್ಲದೆ ಹಳೆ ಪೇಸ್ಮೇಕರ್ ಹಿಂತೆಗೆತ; ಒಮೇಗಾ ಆಸ್ಪತ್ರೆ ವೈದ್ಯರ ಹೊಸ ಸಾಧನೆ
ಮಂಗಳೂರು, ಡಿ.31: ರೋಗಿಯೊಬ್ಬರಿಗೆ 35 ವರ್ಷಗಳ ಹಿಂದೆ ಅಬಿಧಮನಿಯಲ್ಲಿ ಅಳವಡಿಸಿದ್ದ ಪೇಸ್ ಮೇಕರ್ ತಂತಿಯು ಸೋಂಕಿಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ರಹಿತವಾಗಿ ಹೊರತೆಗೆಯುವಲ್ಲಿ ಒಮೇಗಾ ಆಸ್ಪತ್ರೆ ಹೊಸ ಸಾಧನೆ ಮಾಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ. ಮುಕುಂದ್ ಕೆ. ತಿಳಿಸಿದರು. ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 68 ವರ್ಷದ ವ್ಯಕ್ತಿಯು ಅಬಿಧಮನಿಗೆ ಅಳವಡಿಸಿದ ಹಳೆಯ ಪೇಸ್ ಮೇಕರ್ ತಂತಿಗೆ ಸೋಂಕು ತಗುಲಿ ಸಮಸ್ಯೆಯಾಗಿತ್ತು. ಇದನ್ನು ಒಮೇಗಾ ಆಸ್ಪತ್ರೆಯ ಹೃದ್ರೋಗ ತಂಡ ಶಸ್ತ್ರಚಿಕಿತ್ಸಾ ರಹಿತ ತಂತ್ರಜ್ಞಾನದ ಮೂಲಕ ಕ್ಯಾಥ್ ಲ್ಯಾಬ್ನಲ್ಲಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದರು. ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್ ಅವರು ವಿಶೇಷವಾದ ಪೇಸ್ ಮೇಕರ್ ಹೊರತೆಗೆಯುವ ತಂತ್ರಜ್ಞಾನವನ್ನು ಬಳಸಿ ಯಾವುದೇ ತೊಡಕು ಇಲ್ಲದೇ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಅರಿವಳಿಕೆಯಲ್ಲಿ ಡಾ. ಮೇಘನಾ ಮುಕುಂದ್ ಅವರು ಸಹಕರಿಸಿದ್ದಾರೆ. ಈಗ ರೋಗಿಯು ಆರೋಗ್ಯವಂತರಾಗಿ ಗುಣಮುಖರಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್, ಅರಿವಳಿಕೆ ತಜ್ಞೆ ಡಾ. ಮೇಘನಾ ಮುಕುಂದ್, ಭಾರಧ್ವಜ್ ಉಪಸ್ಥಿತರಿದ್ದರು.
ಕೋಗಿಲು ಬಡಾವಣೆ ತೆರವು ಪ್ರಕರಣ: ಸಮಗ್ರ ತನಿಖೆಗೆ ಎಸ್ಐಟಿ ರಚನೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ
ಮಂಗಳೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು, ಇಲ್ಲಿ ಬಂದು ನೆಲೆಸಿದ ಕಾರಣ ಸೇರಿ ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಒತ್ತಾಯಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅಲ್ಲಿ ಒಕ್ಕಲೆಬ್ಬಿಸಿದವರಿಂದ ಯಾವುದೇ ದಾಖಲೆ ಪತ್ರವನ್ನು ಕೇಳದೆಯೇ ಅವರಿಗೆ ನಾಲ್ಕೈದು ಕಿ.ಮೀ ದೂರದಲ್ಲಿ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಬೆಳವಣಿಗೆಗಳ ಹಿಂದೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೈವಾಡ ಇದೆ’ ಎಂದು ಅವರು ಆರೋಪಿಸಿದರು. ‘ಅಕ್ರಮ ವಲಸಿಗರಿಗೆ ವಸತಿ ಕಲ್ಪಿಸುವುದರ ಹಿಂದೆ ಕೇರಳದ ರಾಜಕೀಯ ಒತ್ತಡ ಕೆಲಸ ಮಾಡಿದೆ. ಎರಡೂವರೆ ವರ್ಷದಲ್ಲಿ ರಾಜ್ಯದ ಬಡವರಿಗೆ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ನಗರದಲ್ಲಿ ವಸತಿ ಜಮೀನಿಗಾಗಿ ನಮೂನೆ 94 ಸಿ ಮತ್ತು 94ಸಿ.ಸಿ ಅಡಿ ಅರ್ಜಿ ಸಲ್ಲಿಸಲಿಕ್ಕೂ ಅವಕಾಶ ಕಲ್ಪಿಸಿಲ್ಲ. ನಮ್ಮ ರಾಜ್ಯದವರ ಪರಿಸ್ಥಿತಿ ಹೀಗಿರುವಾಗ ಹೊರರಾಜ್ಯದ ಅಕ್ರಮ ವಲಸಿಗರಿಗೆ ಮನೆ ಕಟ್ಟಿಕೊಡುವ ಔಚಿತ್ಯವಾದರೂ ಏನು’ ಎಂದು ಅವರು ಪ್ರಶ್ನಿಸಿದರು. ‘ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡ ವಲಸಿಗರಿಗೆ ಒಮ್ಮೆಗೆ ಮಾತ್ರ ಅನ್ವಯವಾಗುವಂತೆ ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಸಚಿವ ಸಂಪುಟಕ್ಕೆ ಈ ಬಗ್ಗೆ ವಿಶೇಷ ಅಧಿಕಾರ ಇರಬಹುದು. ಆದರೂ ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದರು. ‘ಕೋಗಿಲು ಬಡಾವಣೆಯಲ್ಲಿ 2023ರವರೆಗೆ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ವಸತಿಗಳು ಇರಲಿಲ್ಲ. 2023ಕ್ಕೂ ಹಿಂದಿನ ಗೂಗಲ್ ನಕಾಶೆಯಲ್ಲಿ ಅಲ್ಲಿ ಬೆರಳೆಣಿಕೆಯ ಮನೆಗಳಿದ್ದುದು ಕಾಣಿಸುತ್ತದೆ. ಜಮೀರ್ ಅವರ ಗ್ಯಾಂಗ್ ಅಕ್ರಮ ವಲಸಿಗರನ್ನು ಅಲ್ಲಿ ಕರೆತಂದು ಕೂರಿಸಿದೆ. ಅಲ್ಲಿನ ಎಲ್ಲಾ ಜಾಗವನ್ನು ಒತ್ತುವರಿ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ’ ಎಂದು ಆರೋಪಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಅವರ ಜಮೀನನ್ನು ನಾವು ಹೋಗಿ ಒತ್ತುವರಿ ಮಾಡಿದರೆ, ನಮಗೆ ಅಲ್ಲಿ ಮನೆ ಕಟ್ಟಿಸಿ ಕೊಡುತ್ತಾರೆಯೇ?. ಮುಸಲ್ಮಾನರ ಮತಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಎಲ್ಲೆಲ್ಲಿಂದ ಬಂದು ಅಕ್ರಮವಾಗಿ ನೆಲೆಸಿದವರಿಗೆ ಮನೆ ಕಟ್ಟಿಕೊಡುವ ಸರ್ಕಾರ ರಾಜ್ಯದಲ್ಲೇ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೇರಳದಲ್ಲಿ ಕಾಡಾನೆ ದಾಳಿಗೊಳಗಾದರೂ ನಮ್ಮ ರಾಜ್ಯದಿಂದ ಪರಿಹಾರ ನೀಡಲಾಗುತ್ತದೆ. ರಾಜ್ಯದ ಜನತೆ ಕ್ಷಮಿಸಲಾಗದ ಅನ್ಯಾಯವನ್ನು ಸರ್ಕಾರ ಮಾಡುತ್ತಿದೆ’ ಎಂದರು. ಈಶಾನ್ಯ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನೆಲೆಸಲು ‘ಇನ್ನರ್ ಲೈನ್ ಪರ್ಮಿಟ್’ ಪಡೆಯುವ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದಕ್ಕೂ ಮೊದಲು ನಮ್ಮ ರಾಜ್ಯದಲ್ಲಿ ಎಷ್ಟು ಮಂದಿಗೆ ಸ್ವಂತ ಸೂರು ಇಲ್ಲ, ಸ್ವಂತ ಜಮೀನು ಹೊಂದಿಲ್ಲ ಎಂಬ ದತ್ತಾಂಶಗಳನ್ನು ಕಲೆ ಹಾಕಿ ಅದಕ್ಕೊಂದು ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು’ ಎಂದರು.
ಬಿಕರ್ನಕಟ್ಟೆ : ಜ.14-15ರಂದು ಬಾಲ ಯೇಸು ಕ್ಷೇತ್ರದ ವಾರ್ಷಿಕ ಮಹೋತ್ಸವ
ಮಂಗಳೂರು, ಡಿ.31: ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ನ ಬಾಲ ಯೇಸುವಿನ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ ಜನವರಿ 14 ಹಾಗೂ 15 ರಂದು ನಡೆಯಲಿದೆ. ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರದ ಗುರುಮಠದ ಮುಖ್ಯಸ್ಥ ರೆ.ಫಾ. ಮೆಲ್ವಿನ ಡಿಕುನ್ನಾ, ಜ. 14ರಂದು ಸಂಜೆ 6ಕ್ಕೆ ಮಹೋತ್ಸವದ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಫಾ. ಜೆರಾಲ್ಡ್ ಐಸಾಕ್ ಲೋಬೊ ನಿರ್ವಹಿಸುವರು. ಅದೇ ದಿನ ಬೆಳಿಗ್ಗೆ 10ಕ್ಕೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ರೆ.ಫಾ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ವಿಶೇಷ ಬಲಿಪೂಜೆಯನ್ನು ನೆರವೇರಿಸುವರು. ಜ. 15ರಂದು ಬೆಳಗ್ಗೆ 10ಕ್ಕೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಫಾ. ದುಮಿಂಗ್ ಡಾಯಸ್ ಬಲಿ ಪೂಜೆ ನಿರ್ವಹಿಸಲಿದ್ದು, ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರು ರೆ.ಫಾ. ಮೊನ್ಸಿಂಜರ್ ಮ್ಯಾಕ್ಸಿಂ ನೊರೊನ್ಹಾ ನೆರವೇರಿಸುವರು. ಈ ಎರಡು ದಿನದ ವಾರ್ಷಿಕ ಮಹೋತ್ಸವದ ಅಂಗವಾಗಿ ನವೇನಾ ಪ್ರಾರ್ಥನೆ ಜ.5 ರಿಂದ ಜ. 13 ರ ವರೆಗೆ ನಡೆಯಲಿರುವುದು. ಜನವರಿ 5 ರಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಇಗ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು. ಜ. 10ರಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಫಾ. ಹೆನ್ರಿ ಡಿಸೋಜಾಇವರು ನೆರವೇರಿಸಲಿರುವರು. ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು. ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ ಬಲಿಪೂಜೆಯ ಬಳಿಕ ಸುಮಾರು 7:15 ಕ್ಕೆ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಹೊರೆಕಾಣಿಕೆಯು ಜ. 3 ರಂದು ಸಂಜೆ 4.30ಕ್ಕೆ ಹೋಲಿಕ್ರಾಸ್ ಚರ್ಚ್, ಕುಲಶೇಖರದಿಂದ ಆರಂಭಗೊಳ್ಳುವುದು. ಹೊರೆಕಾಣಿಕೆಯ ಕೊನೆಗೆ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿ ವಂ. ಡಾ.ಪ್ರವೀಣ್ ಮಾರ್ಟಿಸ್ ಧ್ವಜಾರೋಹಣ ನೆರವೇರಿಸುವರು. ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿದೆ. ಜನವರಿ 7 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1ರವರೆಗೆ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ. ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ವರೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಹಾಗೂ ಬೋದನೆಗಳನ್ನು ಆದರಿಸಿ ಒಂದು ವಿಶೇಸ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು. ಗೋಷ್ಟಿಯಲ್ಲಿ ಕ್ಷೇತ್ರದ ನಿರ್ದೇಶಕ ರೆ.ಫಾ. ಸ್ಟೀಫನ್ ಪಿರೇರಾ, ಕಾರ್ಮೆಲ್ ಸಬೆಯ ರೆ.ಫಾ. ದೀಪ್ ಫೆರ್ನಾಂಡಿಸ್, ಬಾಳೊಖ್ ಜೆಜು ಕುಟಮ್ ಸಂಸ್ಥೆಯ ಉಪಾಧ್ಯಕ್ಷ ವಲೇರಿಯನ್ ಫುರ್ಟಾಡೊ, ಕ್ಷೇತ್ರದ ವ್ಯವಸ್ಥಾಪಕ ವಿಲ್ಫ್ರೆಡ್ ಲಸ್ರಾದೋ ಉಪಸ್ಥಿತರಿದ್ದರು. ಸಮಾಜಾಭಿವೃದ್ಧಿ ಯೋಜನೆಯ ಅನಾವರಣ ಕಾರ್ಮೆಲ್ ಸಭೆಯ ಸುಧಾರಕಾರಾದ ಶಿಲುಬೆಯ ಸಂತ ಯೊವಾನ್ನರನ್ನು ಸಂತ ಪದವಿಗೇರಿಸಿ 300 ಸಂವತ್ಸರಗಳು ಹಾಗೂ ಧರ್ಮಸಭೆಯ ಪಂಡಿತ ಎಂದು ನಾಮಕರಣಗೊಳಿಸಿ ಶತಾಬ್ದಿಯನ್ನು ಪೂರೈಸುವ ಜುಬಿಲಿ ವರ್ಷದಲ್ಲಿ ಕಾರ್ಮೆಲ್ ಇಗ್ನೆಟ್ ಎನ್ನುವ ಕಾರ್ಯಕ್ರಮದಡಿ ಬಡ ಹಾಗೂ ಯೋಗ್ಯ 400 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹಟ್ಟಿ: ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮಹಿಳಾ ದೌರ್ಜನ್ಯ ವಿರೋಧಿ ಕಾರ್ಯಕ್ರಮ
ಹಟ್ಟಿ: “ಈ ರಾತ್ರಿ ನಮ್ಮದು, ಈ ಹಗಲು ನಮ್ಮದು – ಘನತೆಯ ಬದುಕು ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯಗಳು 2025ರೊಂದಿಗೆ ಕೊನೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಹಟ್ಟಿಯ ಕಾಂ. ಅಮರಗುಂಡಪ್ಪ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಮೇಶ್ ವೀರಾಪುರ, ಸಿಐಟಿಯು ಮುಖಂಡ ಬಾಬು ಭೂಪೂರು ಸಂದರ್ಭೋಚಿತವಾಗಿ ಮಾತನಾಡಿದರು. ಪಟ್ಟಣದ ಪೈ ಭವನ ದಿಂದ ಕಾಂ.ಅಮರಗುಂಡಪ್ಪ ಬಸ್ ನಿಲ್ದಾಣ ರವರೆಗೆ ಮೇಣದ ಬತ್ತಿ ಹಿಡಿದು ರ್ಯಾಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಉಪಾಧ್ಯಕ್ಷೆ ಕೆ.ಎಸ್. ಶಾಂತಾ, ಸಾಹೀರಾ ಖಾನ್, ರಜಿಯಾ ಬೇಗಂ, ದುರುಗಮ್ಮ, ದೇವಮ್ಮ, ಜೈಬುನ್ನಿಸಾ, ಶಿವಮ್ಮ, ಕೆಪಿಆರ್ ಎಸ್ ಮುಖಂಡರಾದ ಮಹಾಂತೇಶ, ಸಿಐಟಿಯು ಮುಖಂಡರಾದ ಹನೀಫ್, ಹಾಜಿಬಾಬು ಕಟ್ಟಿಮನಿ, ನಿಂಗಪ್ಪ ಎಂ. ಸೇರಿದಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಹೊಸ ದಾಖಲೆ ಸೃಷ್ಟಿಸಿದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ! ಇಡೀ ಜಗತ್ತಿಗೇ ನಂಬರ್ ಒನ್ ಆಕೆ!
ಭಾರತದ ದೀಪ್ತಿ ಶರ್ಮಾ ಮಹಿಳಾ ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ದಾಖಲೆ ಬರೆದರು. ಒಟ್ಟಾರೆ 152 ವಿಕೆಟ್ ಗಳಿಸಿ ಮೆಗನ್ ಷಟ್ ಅವರನ್ನು ಹಿಂದಿಕ್ಕಿದರು. ಈ ಸರಣಿಯಲ್ಲಿ ಭಾರತ 5-0 ಅಂತರದಲ್ಲಿ ಗೆಲುವು ಸಾಧಿಸಿತು. ಸ್ಮೃತಿ ಮಂಧಾನ ಕೂಡ 10,000 ರನ್ ಗಡಿ ದಾಟಿದ್ದಾರೆ. ಶಫಾಲಿ ವರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
Uttar Pradesh | ಬುರ್ಖಾ, ಹಿಜಾಬ್ ಧರಿಸಿ ʼಧುರಂಧರ್ʼ ಚಿತ್ರದ ಗೀತೆಗೆ ನೃತ್ಯ ಮಾಡಿದ ಪುರುಷರ ಗುಂಪು; ವೀಡಿಯೊ ವೈರಲ್
ಅಮ್ರೋಹ: ಪುರುಷರ ಗುಂಪೊಂದು ಬುರ್ಖಾ, ಹಿಜಾಬ್ ಧರಿಸಿ ‘ಧುರಂಧರ್’ ಚಿತ್ರದ ಗೀತೆಗೆ ನೃತ್ಯ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. यूपी | ये वीडियो अमरोहा जिले के मेस्को पब्लिक स्कूल का है। यहां एक कार्यक्रम आयोजित हुआ। इसमें स्टूडेंट्स ने धुरंधर मूवी के गाने पर डांस किया। इस पर मुस्लिम संगठनों को आपत्ति है। उन्होंने स्कूल पर एक्शन लेने की मांग पुलिस से की है। पुलिस ने जांच शुरू की। pic.twitter.com/T0ANxlMOTM — Sachin Gupta (@SachinGuptaUP) December 31, 2025 ಈ ವೀಡಿಯೊ ತುಣುಕನ್ನು ‘ಟೀಮ್ ರೈಸಿಂಗ್ ಫಾಲ್ಕನ್’ ಎಂಬ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೆಸ್ಕೊ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಭಾಗವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಈ ವೀಡಿಯೊ ಚಿತ್ರೀಕರಣದ ನಿಖರ ದಿನಾಂಕವಿನ್ನೂ ತಿಳಿದು ಬಂದಿಲ್ಲ. ಪುರುಷರ ಗುಂಪೊಂದು ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವುದನ್ನು ಪ್ರೇಕ್ಷಕರು ಸುಮ್ಮನೆ ನೋಡುತ್ತಿರುವುದು ಈ ವೀಡಿಯೊದಲ್ಲಿ ಸೆರೆಯಾಗಿದೆ. ಕೆಲವರು ವೇದಿಕೆಯ ಮೇಲೂ ಹತ್ತಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. “ಈ ವೀಡಿಯೊ ತುಣುಕಿನಲ್ಲಿ ಯುವಕರ ಗುಂಪೊಂದು ಬುರ್ಖಾಗಳನ್ನು ಧರಿಸಿ, ಸ್ಪಷ್ಟವಾಗಿ ಹಿಜಾಬ್ ಮತ್ತು ಮುಸ್ಲಿಮರ ಧಾರ್ಮಿಕ ಅಸ್ಮಿತೆಯನ್ನು ಗೇಲಿ ಮಾಡುತ್ತಾ, ವಿವಾದಾತ್ಮಕ ಚಲನಚಿತ್ರ ‘ಧುರಂಧರ್’ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ನೃತ್ಯವು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತಿತ್ತು” ಎಂದು ಈ ವೀಡಿಯೊ ತುಣುಕಿಗೆ ಶೀರ್ಷಿಕೆ ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಈ ಘಟನೆಯಲ್ಲಿ ಭಾಗಿಯಾಗಿದ್ದ ಜನರನ್ನು ತಕ್ಷಣವೇ ಗುರುತಿಸಿ, ಬಂಧಿಸಬೇಕು ಎಂದು ಈ ಪೋಸ್ಟ್ ನಲ್ಲಿ ಆಗ್ರಹಿಸಲಾಗಿದೆ. “ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಮನರಂಜನೆಯ ಹೆಸರಲ್ಲಿ ಧಾರ್ಮಿಕ ಗೇಲಿ ಹಾಗೂ ದ್ವೇಷವನ್ನು ಸಹಜಗೊಳಿಸಬಾರದು” ಎಂದೂ ಈ ಪೋಸ್ಟ್ ನಲ್ಲಿ ಒತ್ತಾಯಿಸಲಾಗಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ, ತ್ವರಿತ ಕ್ರಮ ಕೈಗೊಳ್ಳಬೇಕೆಂದು ಹಲವರು ಪೊಲೀಸರನ್ನು ಒತ್ತಾಯಿಸಿದ್ದಾರೆ. “ತಕ್ಷಣವೇ ಈ ವಿಷಯವನ್ನು ಗಮನಿಸಿ ಹಾಗೂ ಸಾಧ್ಯವಾದದ್ದನ್ನು ಮಾಡಿ” ಎಂದು ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಮನವಿ ಮಾಡಿದ್ದಾರೆ. ಈ ನಡುವೆ, ಇಲ್ಲಿಯವರೆಗೆ ಈ ವೀಡಿಯೊದಲ್ಲಿ ಕಂಡು ಬರುವ ಯಾರೊಬ್ಬರ ಗುರುತನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಘಟನೆಯ ಕುರಿತು ಪೊಲೀಸರಿಂದ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ.
ನಯನತಾರಾ ‘TOXIC’ ಲುಕ್ ಬಿಡುಗಡೆ; ಯುಗಾದಿ ಹಬ್ಬಕ್ಕೆ ತೆರೆ ಮೇಲೆ ದೊಡ್ಡ ಸಿನಿಮಾಗಳ ಅಬ್ಬರ
ಮಾರ್ಚ್ 19ರಂದು ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ‘ಟಾಕ್ಸಿಕ್’ಗೆ ಸ್ಪರ್ಧೆ ನೀಡಲು ಹಿಂದಿಯಲ್ಲಿ ಯಶಸ್ಸು ಕಂಡ ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಬಿಡುಗಡೆಯಾಗುತ್ತಿದೆ. ಖ್ಯಾತ ನಟ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಮತ್ತೆ ಸುದ್ದಿಯಾಗಿದೆ. ಈ ಬಾರಿ ಸಿನಿಮಾದ ಮತ್ತೊಬ್ಬ ನಟಿ ‘ನಯನತಾರ’ ಅವರ ಗಂಗಾ ಪಾತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಾರ್ಚ್ 19ರಂದು ತೆರೆಗೆ ಬರಲು ಸಿದ್ಧವಾಗುತ್ತಿರುವ ‘ಟಾಕ್ಸಿಕ್’ ಸಿನಿಮಾ ಈ ಮೊದಲು ಯಶ್, ಕಿಯಾರಾ ಆಡ್ವಾಣಿ, ಹುಮಾ ಖುರೇಶಿ ಮೊದಲಾದ ನಟರ ಪಾತ್ರ ಪರಿಚಯ ಮಾಡಿತ್ತು. ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಯನತಾರಾ ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಅವರು ಈ ಮೊದಲು ಉಪೇಂದ್ರ ಅವರ ‘ಸೂಪರ್’ ಸಿನಿಮಾದಲ್ಲಿ ನಟಿಸಿದ್ದರು. ‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರ ತಂಡ ಹೇಳಿದೆ. ಪೋಸ್ಟರ್ ನಲ್ಲಿ ನಯನತಾರಾ ಗನ್ ಹಿಡಿದು ಪೋಸ್ ನೀಡಿದ್ದಾರೆ. ಅವರ ಈ ಮಾಸ್ ಲುಕ್ ಅಭಿಮಾನಿಗಳ ನಡುವೆ ಚರ್ಚೆಗೆ ಗ್ರಾಸವಾಗಿದೆ. ಯಶ್ ಮತ್ತು ಗೀತು ಮೋಹನ್ದಾಸ್ ಚಿತ್ರಕತೆ ಸಿದ್ಧಪಡಿಸಿದ್ದಾರೆ. ಗೀತು ಮೋಹನ್ದಾಸ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜನವರಿ 8 ನಟ ಯಶ್ ಅವರ ಜನ್ಮದಿನ. ಅಂದು ಚಿತ್ರದ ಮೊದಲ ಟೀಸರ್ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಸಿನಿಮಾದ ಎಲ್ಲಾ ಪಾತ್ರಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ನಯನತಾರಾ ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಶೂಟ್ ಮಾಡಿದ್ದರು. ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅವರ ಪಾತ್ರವನ್ನು ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿ ಗಂಗಾ ಹೆಸರಿನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್ ನಲ್ಲಿ ಕಂಡುಬಂದಿರುವ ಪ್ರಕಾರ ಅರಮನೆಯ ರೀತಿಯ ಸೆಟ್ ನಲ್ಲಿ ನಯನತಾರಾ ಎಂಟ್ರಿ ಕೊಡುತ್ತಿದ್ದಾರೆ. ಹಿಂಭಾಗದಲ್ಲಿ ವಿದೇಶಿಗರು ಕಾವಲು ಕಾಯಲು ನಿಂತಿದ್ದಾರೆ. ನಯನತಾರಾ ಕೈಯಲ್ಲಿ ಶಾಟ್ ಗನ್ ಇದೆ. ನಯನತಾರಾ ಲುಕ್ ಅನೇಕರಿಗೆ ಇಷ್ಟ ಆಗಿದೆ. ಮಾರ್ಚ್ 19ರಂದು ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಿಂದಿಯಲ್ಲಿ ಯಶಸ್ಸು ಕಂಡ ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಮಾರ್ಚ್ 19ರಂದೇ ಬಿಡುಗಡೆಯಾಗುತ್ತಿದೆ. ಹೀಗಾಗಿ ಅದೃಷ್ಟ ಯಾರ ಕಡೆಗೆ ತಿರುಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ದೇವದುರ್ಗ: ಬಾಲಕಿಯರ ಸರಕಾರಿ ಪ್ರೌಢ ಶಾಲೆ ಎಸ್ಡಿಎಂಸಿ ರಚನೆ, ಬಸವರಾಜ ನಾಯಕ ಅಧ್ಯಕ್ಷ
ದೇವದುರ್ಗ : ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ನೂತನವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುವಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಜಿ. ಬಸವರಾಜ ನಾಯಕ, ಉಪಾಧ್ಯಕ್ಷರಾಗಿ ದುರಗಮ್ಮ ಇವರು ಆಯ್ಕೆಯಾಗಿದ್ದಾರೆಂದು ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮೃತ್ಯುಂಜಯ ಅವರು ತಿಳಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ, ಈಹಿಂದೆ ಕೂಡ ಎಸ್.ಡಿ.ಎಂ.ಸಿ. ರಚನೆ ಮಾಡಲು ಎರಡು ಭಾರಿ ಸಭೆ ಕರೆದ ವೇಳೆ ಪೂರ್ಣ ಪ್ರಮಾಣದಲ್ಲಿ ಪೋಷಕರು ಬಾರದೇ ಇರುವುದರಿಂದ ಡಿ.30 ರಂದು ಕರೆದ ಸಭೆಯಲ್ಲಿ ಪಾಲಕರು ಹಾಜರಾಗಿದ್ದು, ಎಸ್.ಡಿ.ಎಂ.ಸಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ 9ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಹನುಮಂತ್ರಾಯ ಶಾಖೆ, ಹಿರಿಯ ಶಿಕ್ಷಕರಾದ ಮಮತಾ ಆದಿ, ಮಹಾದೇವಪ್ಪ, ಯಲ್ಲನಗೌಡ, ಬಸಲಿಂಗಪ್ಪ ಗೆಜ್ಜೆಭಾವಿ, ದೇವರಾಜ್, ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.
ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ವೇತನಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಕೊಡಲಿದೆ. ಕೇಂದ್ರ ಸರ್ಕಾರದ 8ನೇ ವೇತನ ಆಯೋಗ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದು, ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಜನವರಿ 1 ರಿಂದ 8ನೇ ವೇತನ ಆಯೋಗ ಜಾರಿಗೆ ಬಂದ ನಂತರ
ಕುಪ್ಪೆಪದವು : ಸಹೋದರತ್ವದ ಸಮಾಗಮ 2025
ಮಂಗಳೂರು : ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದ ಸಹೋದರತ್ವದ ಸಮಾಗಮ 2025 ಕುಪ್ಪೆಪದವಿನ ಮಾಝರಾ ಗಾರ್ಡನ್ ನಲ್ಲಿ ನೇರವೇರಿತು. ಕಾರ್ಯಕ್ರಮವನ್ನು ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆ ಮೂಲಕ ಉದ್ಘಾಟಿಸಿದರು. ಈ ವೇಳೆ ಅನುಗ್ರಹ ಟ್ರೈನಿಂಗ್ ಕಾಲೇಜ್ ಮುಡಿಪು, ಬೆಳ್ತಂಗಡಿ ನಿರ್ದೇಶಕ, ಇನ್ಫಾರ್ಮೇಟ್ ಫೌಂಡೇಶನ್ (ರಿ) ಕರ್ನಾಟಕ ಸಂಸ್ಥಾಪಕರಾದ ಅಬ್ದುಲ್ ಖಾದರ್ ನಾವೂರ್ ವಿದ್ಯಾರ್ಥಿಗಳ ಜೀವನ ಮತ್ತು ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಕೂಟ, ಮನೋರಂಜನಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದರಸ ಅಧ್ಯಕ್ಷರಾದ ಇಕ್ಬಾಲ್ A.P., ಉಪಾಧ್ಯಕ್ಷರಾದ ರಝಾಕ್ A.R. , ಸದರ್ ಉಸ್ತಾದ್ ಜುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಕಾರ್ಯದರ್ಶಿ ಸಜುದ್ದೀನ್, ಜೊತೆ ಕಾರ್ಯದರ್ಶಿ ಆರೀಫ್, ಬದ್ರಿಯಾ ಯಂಗ್ ಮೆನ್ಸ್ ಸದಸ್ಯ ಆಶಿಕ್, ಎಸ್ಕೆಎಸ್ಬಿವಿ ಅಧ್ಯಕ್ಷ ಮೊಹಮ್ಮದ್ ಅನಸ್, ಆಡಳಿತ ಮಂಡಳಿ ಸದಸ್ಯರಾದ ಮನ್ಸೂರ್, ಇಕ್ಬಾಲ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಸದಸ್ಯರಾದ ಇಕ್ಬಾಲ್ ಸಿ ಹೆಚ್, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.
ಡ್ರಗ್ಸ್ ದಂಧೆ ವಿರುದ್ಧ ಹೋರಾಟ: ಜಿ ಪರಮೇಶ್ವರ್ ಮನೆಗೆ ಎಬಿವಿಪಿ ಮುತ್ತಿಗೆ, ಕಾರ್ಯಕರ್ತರು ಪೊಲೀಸ್ ವಶಕ್ಕೆ
ರಾಜ್ಯದಲ್ಲಿ ಡ್ರಗ್ಸ್ ದಂಧೆ ಮಿತಿ ಮೀರಿದೆ ಎಂದು ಆರೋಪಿಸಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಪರಮೇಶ್ವರ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಆಗ್ರಹಿಸಿದರು. ಗೃಹ ಸಚಿವರ ಸರ್ಕಾರಿ ನಿವಾಸದ ಮುಂದೆ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಹೈಡ್ರಾಮ ನಡೆಯಿತು. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್ನಲ್ಲಿ ಕಲುಷಿತ ನೀರು ಕುಡಿದು ಐವರು ಮೃತ್ಯು: ಪತ್ರಕರ್ತ ಮುಹಮ್ಮದ್ ಝುಬೈರ್ ಕಳವಳ
ಇಂದೋರ್: ಕೇಂದ್ರ ಸರಕಾರದಿಂದ ಸತತ ಎಂಟು ಬಾರಿ ದೇಶದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಿಕೊಂಡಿದ್ದ ಮಧ್ಯಪ್ರದೇಶದ ಇಂದೋರ್ನಲ್ಲಿ ಕಲುಷಿತ ನೀರು ಕುಡಿದು ಐವರು ಮೃತಪಟ್ಟಿದ್ದು, 1000ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಕಳವಳಕ್ಕೆ ಕಾರಣವಾಗಿದೆ. ಇಂದೋರ್ನ ಭಗೀರಥ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಡಿಸೆಂಬರ್ 24 ರಿಂದ ಭಾಗೀರಥಪುರ ಪ್ರದೇಶದ ಹಲವಾರು ನಿವಾಸಿಗಳು ವಾಂತಿ ಮತ್ತು ಅತಿಸಾರದಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇಂದೋರ್ನ ಮುಖ್ಯ ಆರೋಗ್ಯ ಅಧಿಕಾರಿ ಮಾಧವ್ ಪ್ರಸಾದ್ ಹಸಾನಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ 111 ರೋಗಿಗಳು ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 1,000ಕ್ಕೂ ಹೆಚ್ಚು ಜನರು ಸಣ್ಣಪುಟ್ಟ ಅಸ್ವಸ್ಥತೆಗೆ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತ ಸುದ್ದಿ ವರದಿಯನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪತ್ರಕರ್ತ ಮುಹಮ್ಮದ್ ಝುಬೈರ್, ಕಲುಷಿತ ನೀರು ಸೇವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆದರೆ ಇಂದೋರ್ ಸತತ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರವಾಗಿ ಸ್ಥಾನ ಪಡೆದಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಿಡಿಎ ಯುಎಎಸ್ ನೌಕರರ ವಸತಿಗೃಹದಿಂದ ಮೇಖ್ರಿ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 403.25 ಕೋಟಿ ರೂ. ವೆಚ್ಚದ ಈ ಯೋಜನೆ 2026ರ ಜನವರಿಯಲ್ಲಿ ಆರಂಭವಾಗಲಿದೆ. ಇದು ಉತ್ತರ ಬೆಂಗಳೂರಿನ ಸಂಚಾರಕ್ಕೆ ಅನುಕೂಲವಾಗಲಿದೆ. ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಇದು ಉತ್ತಮ ಕೊಡುಗೆಯಾಗಿದೆ.
ಬೆಂಗಳೂರಿಂದ ಕನ್ಯಾಕುಮಾರಿವರೆಗೆ 5 ದಿನಗಳಲ್ಲಿ ಸೈಕಲಿಂಗ್ ಮಾಡಿ ಗಮನಸೆಳೆದ ಶಾಸಕ ಸುರೇಶ್ ಕುಮಾರ್
ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ 70ನೇ ವಯಸ್ಸಿನಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿವರೆಗೆ 702 ಕಿಲೋಮೀಟರ್ ದೂರವನ್ನು ಐದು ದಿನಗಳಲ್ಲಿ ಸೈಕಲ್ ನಲ್ಲಿ ತಲುಪಿ ಸಾಧನೆ ಮಾಡಿದ್ದಾರೆ.
ಜನವರಿ 1, 2026 ರಿಂದ, ಪ್ಯಾಕ್ ಮಾಡಿದ ಆಹಾರಗಳ ಸುರಕ್ಷತೆಗಾಗಿ FSSAI ಕಟ್ಟುನಿಟ್ಟಿನ ನಿಯಮ ಜಾರಿಗೆ ತರುತ್ತಿದೆ. ಹೊಸ ಉತ್ಪನ್ನಗಳಿಗೆ ವೈಜ್ಞಾನಿಕ ಪುರಾವೆ, ಭಾರತೀಯರ ಆಹಾರ ಪದ್ಧತಿಗೆ ಹೊಂದಿಕೆಯಾಗುವ ಪದಾರ್ಥಗಳ ವಿವರ, ಹಾಗೂ ಸೇವನೆಯ ಪ್ರಮಾಣದ ದತ್ತಾಂಶ ಕಡ್ಡಾವಾಗಿದ್ದು,ಇವುಗಳನ್ನು ಪರಿಶಿಲಿಸಿದ ನಂತರವೇ FSSAI ಮಾರುಕಟ್ಟೆಗೆ ಈ ಆಹಾರ ಉತ್ಪನ್ನ ಬರಬೇಕೋ ಬೇಡವೊ ಎಂದು ನಿರ್ಧರಿಸಲಿದೆ. ಇದು ಗ್ರಾಹಕರ ಆರೋಗ್ಯ ರಕ್ಷಣೆಗೊಂದು ಮಹತ್ವದ ಹೆಜ್ಜೆಯಾಗಿದೆ.
ಭಾರತ - ಪಾಕ್ ಸೇನಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ: ಚೀನಾ ಹೇಳಿಕೆಗೆ ಭಾರತ ಖಂಡನೆ
ಭಾರತ-ಪಾಕಿಸ್ತಾನ ಸೇನಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಚೀನಾ ಹೇಳಿದೆ. ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಉಭಯ ದೇಶಗಳ ಡಿಜಿಎಂಒಗಳ ನಡುವೆ ನೇರ ಮಾತುಕತೆ ನಡೆದಿತ್ತು ಎಂದು ಭಾರತ ಹೇಳಿದೆ. ಚೀನಾದ ಈ ಹೇಳಿಕೆ ಅದರ ದ್ವಂದ್ವ ನೀತಿಯನ್ನು ತೋರಿಸುತ್ತದೆ.
ಹೊಸ ವರ್ಷಾಚರಣೆ | ಉಡುಪಿ ಜಿಲ್ಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್
ಉಡುಪಿ : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಒಟ್ಟು 13 ಡಿಎಆರ್ ತುಕಡಿ ಹಾಗೂ 2 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹೊಸ ವರ್ಷದ ದಿನದಂದು ಜಿಲ್ಲೆಯಲ್ಲಿ ಇರುವ ಎಲ್ಲಾ ಹೈವೇ ಪಟ್ರೋಲ್ / ಹೊಯ್ಸಳ ವಾಹನಗಳು ಕಡ್ಡಾಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತಿನಲ್ಲಿಡಲಾಗಿದೆ ಎಂದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. 3 ಡ್ರೋನ್ ಕ್ಯಾಮೆರಾ, 10 ಹೆಚ್ಚುವರಿ ಪೆಟ್ರೋಲಿಂಗ್ ವಾಹನಗಳು ಹಾಗೂ 24 ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು, ವೀಲಿಂಗ್ ಮಾಡುವವರು ಹಾಗೂ ಇತರೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಡಿ.31ರಂದು ಕರಾವಳಿ ಪ್ರದೇಶದಲ್ಲಿನ ಸಮುದ್ರ/ಬೀಚ್ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಗಳ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು CSP ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ವ್ಯಾಪ್ತಿಯ ಠಾಣಾಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ► ಜಿಲ್ಲೆಯಲ್ಲಿ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಹೊಸ ವರ್ಷದ ಆಚರಣೆ ನಡೆಯುವ ಎಲ್ಲಾ ಹೋಂ ಸ್ಟೇಗಳು, ಹೋಟೆಲ್ಗಳು, ರೆಸಾರ್ಟ್ಗಳು, ಪಬ್ಗಳು / ಬಾರ್ಗಳನ್ನು ಪರಿಶೀಲಿಸಿ, ಯಾವುದೇ ಅಕ್ರಮ ಚಟುವಟಿಕೆಗಳು (ರೇವ್ ಪಾರ್ಟಿ, ಡ್ರಗ್ ಪಾರ್ಟಿ) ನಡೆಯದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು. ►ಸಾಮಾಜಿಕ ಜಾಲತಾಣಗಳು, ಆನ್ಲೈನ್ ಬುಕಿಂಗ್ಗಳು, ವೆಬ್ ಪುಟಗಳನ್ನು ಪರಿಶೀಲಿಸಿ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ►ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್ಗಳಲ್ಲಿ ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪುರುಷ ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ►ಉಡುಪಿ ಜಿಲ್ಲಾ “ಅಕ್ಕಪಡೆ” ತಂಡವನ್ನು ನಗರ ವ್ಯಾಪ್ತಿಯೊಳಗೆ ನಿಯೋಜಿಸಲಾಗುವುದು. ►ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಕುರಿತು ವಿಶೇಷ ಗಮನ ಹರಿಸಿ, ವಿದೇಶಿ ನಾಗರಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ► ʼCelebrate Responsiblyʼ (ಜವಾಬ್ದಾರಿಯಿಂದ ಆಚರಿಸಿ) ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಉತ್ತೇಜನ ನೀಡಲಾಗಿದೆ. ► ದೊಡ್ಡ ಸಾರ್ವಜನಿಕ ಸಮಾವೇಶಗಳ ಮೇಲ್ವಿಚಾರಣೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಡ್ರೋನ್ ಕ್ಯಾಮೆರಾಗಳನ್ನು ಬೆಳೆಸಲಿದ್ದಾರೆ.
ಜನವರಿ 2026 ರ ಬ್ಯಾಂಕ್ ರಜೆ ಎಂದೆಂದು? ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿದಂತೆ ರಜೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಜನವರಿ 2026 ರ ಬ್ಯಾಂಕ್ ರಜೆಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿದಂತೆ ವಿವಿಧ ರಾಜ್ಯಗಳ ಹಬ್ಬಗಳು ಮತ್ತು ವಿಶೇಷ ದಿನಗಳಂದು ಬ್ಯಾಂಕುಗಳು ಮುಚ್ಚಲಿವೆ. ಗ್ರಾಹಕರು ತಮ್ಮ ರಾಜ್ಯದ ರಜೆಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.
ಬೆಂಗಳೂರಿನಂತಹ ನಗರಗಳಲ್ಲಿ ಇ-ಕಾಮರ್ಸ್ ಸೇವೆಗಳು ಜನಜೀವನದ ಭಾಗವಾಗಿವೆ. 2025ರಲ್ಲಿ ಬ್ಲಿಂಕಿಟ್ ರೈಡರ್ಗಳು ಗ್ರಾಹಕರಿಂದ 47 ಕೋಟಿ ರೂಪಾಯಿಗಳಿಗೂ ಹೆಚ್ಚು ಟಿಪ್ಸ್ ಪಡೆದಿದ್ದಾರೆ. ಈ ವರ್ಷ ಅತಿ ಹೆಚ್ಚು ಆರ್ಡರ್ ಆದ ವಸ್ತು ತುಪ್ಪವಾಗಿದ್ದು, 1 ಕೋಟಿ ಕೆಜಿಗೂ ಅಧಿಕ ತುಪ್ಪವನ್ನು ಗ್ರಾಹಕರು ಆರ್ಡರ್ ಮಾಡಿದ್ದಾರೆ. ಹಾಗಲಕಾಯಿ, ಜೇನುತುಪ್ಪ, ಶುಂಠಿ, ಶಾಂಪೂ ಕೂಡಾ ಹೆಚ್ಚು ಆರ್ಡರ್ ಆದ ವಸ್ತುಗಳಾಗಿವೆ.
ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿಎಂ ಸಿದ್ದರಾಮಯ್ಯ
ಕೇರಳ (ತಿರುವನಂತಪುರ): ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾರಾಯಣ ಗುರುಗಳು ಕೇವಲ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು ಎಂದರು. ಇದೇ ನಾರಾಯಣ ಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ. ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ, ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು. ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ 'ಕೋಮು-ವಿರೋಧಿ' ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ 'ಸಂವಾದ'ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ 'ಸಮಾನತೆ'ಯನ್ನು ಮತ್ತು ಸಾಂಕೇತಿಕತೆಗಿಂತ 'ನೈತಿಕತೆ'ಯನ್ನು ಎತ್ತಿ ಹಿಡಿಯುತ್ತದೆ ಎಂದರು. ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು. ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು. ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ, ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ಸತ್ಯವನ್ನು ಘೋಷಿಸಿದರು. ಇದು ಕೇವಲ ಕಾವ್ಯಾತ್ಮಕ ಹೇಳಿಕೆಯಲ್ಲ. ಇದು ಜಾತಿ ತಾರತಮ್ಯ ಸೋಂಕಿನ ಮನುಸ್ಮೃತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆ, ಧಾರ್ಮಿಕ ಏಕಸ್ವಾಮ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ನೀಡಿದ ನೇರ ಸವಾಲಾಗಿತ್ತು ಎಂದರು. ನಾರಾಯಣ ಗುರುಗಳ ತತ್ವಜ್ಞಾನವು ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ನಂತರ ಪ್ರತಿಪಾದಿಸಿದ 'ವಿಶ್ವಮಾನವ' ಪರಿಕಲ್ಪನೆಯನ್ನು ಒಳಗೊಂಡಿತ್ತು. ಇದು ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು. ಹಿಂದುಳಿದ ಸಮುದಾಯಗಳು ತಮ್ಮದೇ ಆದ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿ, ದೇವಾಲಯಗಳಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿದರು. ದೈವತ್ವವು ಪ್ರತಿ ಮನುಷ್ಯನೊಳಗೆ ನೆಲೆಸಿದ್ದು, ಆತ್ಮಸಾಕ್ಷಾತ್ಕಾರ, ಸಮಾನತೆ ಹಾಗೂ ಯಾರಿಗೂ ಕೇಡು ಬಯಸದಿರುವುದೇ ನಿಜವಾದ ಆರಾಧನೆ ಎಂದು ತಿಳಿಸುವುದು ಇದರ ಉದ್ದೇಶವಾಗಿತ್ತು. ಶಾಲೆಗಳು, ದೇವಾಲಯಗಳು ಮತ್ತು ಸಾಮಾಜಿಕ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ, ನಾರಾಯಣ ಗುರುಗಳು ಶೋಷಿತರಿಗೆ ಸ್ವಾಭಿಮಾನ, ಜ್ಞಾನ ಮತ್ತು ನಾಯಕತ್ವದ ಗುಣವನ್ನು ಮರುಸ್ಥಾಪಿಸುವ ವೇದಿಕೆಯನ್ನು ಸೃಷ್ಟಿಸಿದರು. ಜಾತಿ ಎನ್ನುವುದು ಕೇವಲ ಆಚರಣೆಗಳಿಂದಲ್ಲ, ಜ್ಞಾನದ ವ್ಯವಸ್ಥಿತ ನಿರಾಕರಣೆಯಿಂದ ಜೀವಂತವಾಗಿರುವುದನ್ನು ಅವರು ಅರ್ಥಮಾಡಿಕೊಂಡಿದ್ದರು. ಅವರ ಪ್ರಕಾರ, ಅಜ್ಞಾನವು ಆಕಸ್ಮಿಕವಲ್ಲ, ಅದು ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಉಳಿವಿಗಾಗಿ ಮಾಡಿದ ರಾಜಕೀಯ ಉದ್ದೇಶದ ಸೃಷ್ಠಿಯಾಗಿತ್ತು ಎಂದರು. ನಾರಾಯಣ ಗುರುಗಳು ಶಿಕ್ಷಣವನ್ನು ಉತ್ತೇಜಿಸುವ ಮೂಲಕ, ಅನಿಷ್ಟ ಪದ್ಧತಿಗಳನ್ನು ವಿರೋಧಿಸುವ ಮೂಲಕ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದರು. ಮಹಿಳೆಯರ ಘನತೆ ಮತ್ತು ಸಮಾನ ಅವಕಾಶವಿಲ್ಲದೆ ಸಾಮಾಜಿಕ ನ್ಯಾಯ ಅಸಾಧ್ಯ ಎಂದು ಸಾರಿದರು. ಶಾಲೆಗಳು, ಗ್ರಂಥಾಲಯಗಳು, ಸಾಮಾಜಿಕ ಸುಧಾರಣಾ ಅಭಿಯಾನಗಳು ಮತ್ತು ಕೃಷಿ-ಕೈಗಾರಿಕಾ ಕಾರ್ಯಾಗಾರಗಳನ್ನು ಸಾಂಸ್ಥಿಕಗೊಳಿಸಿದರು. ಇದು ಆಧುನಿಕ ಸಮಾಜಶಾಸ್ತ್ರವು ಯಾವುದನ್ನು 'ಸಾಮಾಜಿಕ ಬಂಡವಾಳ' ಎಂದು ಕರೆಯುತ್ತದೆಯೋ, ಅದನ್ನು ಗುರುಗಳು, ಪರಸ್ಪರ ನಂಬಿಕೆಯ ಹಾಗೂ ಸಂಘಟಿತ ಹೋರಾಟದ ಮೂಲಕ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಅಗತ್ಯವೆಂದು ತಿಳಿಸಿದರು. ನಾರಾಯಣ ಗುರುಗಳ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1925ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಅವರು ನಡೆಸಿದ ಐತಿಹಾಸಿಕ ಸಂವಾದವು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. ಜಾತಿ ಎನ್ನುವುದು ಸಾಂಸ್ಕೃತಿಕ ವೈವಿಧ್ಯತೆಯಲ್ಲ, ಅದು ಸಾಂಸ್ಥಿಕ ಅನ್ಯಾಯ ಎಂಬ ಮೂಲಭೂತ ಸತ್ಯವನ್ನು ಗಾಂಧೀಜಿಯವರು ಅರಿತುಕೊಳ್ಳುವಂತೆ ಮಾಡಿತು. ಮಾವಿನ ಮರದ ಎಲೆಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಾರ ಒಂದೇ ಎಂಬ ಉದಾಹರಣೆಯ ಮೂಲಕ, ಜಾತಿ ಮತ್ತು ಧರ್ಮಗಳು ಜಗತ್ತಿನ ಆಳವಾದ ಸಾಮಾಜಿಕ ಸಮಸ್ಯೆಗಳೇ ಹೊರತು ವೈವಿಧ್ಯತೆಯಲ್ಲ ಎಂದು ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು. ನಾರಾಯಣ ಗುರುಗಳನ್ನು ಭೇಟಿಯಾದ ನಂತರವೇ ಗಾಂಧೀಜಿಯವರು ಅಸ್ಪೃಶ್ಯತೆ, ಸರಳತೆ ಮತ್ತು ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿದರು. ಅಂತರ್ಜಾತಿ ವಿವಾಹವಲ್ಲದ ಮದುವೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ಗಾಂಧೀಜಿಯವರು ನಿರ್ಧರಿಸಿದ್ದು ಕಾಕತಾಳೀಯವಲ್ಲ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ
ರವೀಂದ್ರನಾಥ ಟ್ಯಾಗೋರ್ ಅವರ ನೈತಿಕ ಮತ್ತು ಸೈದ್ಧಾಂತಿಕ ನಾರಾಯಣ ಗುರುಗಳು ಪ್ರಭಾವಿಸಿದರು. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ದೊಡ್ಡ ಅನ್ಯಾಯ ಎಂದು ಟ್ಯಾಗೋರ್ ಒಪ್ಪಿಕೊಂಡರು. ಟ್ಯಾಗೋರ್ ಅವರ 'ವಿಶ್ವಮಾನವ' ಪರಿಕಲ್ಪನೆಗೆ ನಾರಾಯಣ ಗುರುಗಳ ಚಿಂತನೆಗಳೇ ಸ್ಫೂರ್ತಿ. ಹೀಗೆ ನಾರಾಯಣ ಗುರುಗಳು ಆಧ್ಯಾತ್ಮಿಕತೆ, ವೈಚಾರಿಕತೆ, ಮಾನವತಾವಾದ ಮತ್ತು ಸಾಮಾಜಿಕ ನ್ಯಾಯವನ್ನು ಬೆಸೆಯುವ ಮೂಲಕ ಆಧುನಿಕ ಭಾರತದ ಸೈದ್ಧಾಂತಿಕ ಹಾದಿಯನ್ನು ನಿರ್ಮಿಸಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ವಕೀಲರು ನಿಗದಿತ ಸಮಯದೊಳಗೆ ವಾದ ಮಂಡಿಸಬೇಕು: ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಸುತ್ತೋಲೆ!
ಹೊಸದಿಲ್ಲಿ: ನೋಟಿಸ್ ನಂತರದ ಮತ್ತು ನಿಯಮಿತ ವಿಚಾರಣೆಯ ಪ್ರಕರಣಗಳಲ್ಲಿ ವಕೀಲರ ಮೌಖಿಕ ವಾದಗಳಿಗೆ ಸಮಯ ಮಿತಿಯನ್ನು ಸೂಚಿಸುವ ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP)ವನ್ನು ಸುಪ್ರೀಂ ಕೋರ್ಟ್ ಪರಿಚಯಿಸಿದೆ. ಈ ಕುರಿತು ಡಿಸೆಂಬರ್ 29 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನಿರ್ದೇಶನದ ಮೇರೆಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ನ್ಯಾಯಾಲಯದ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಪೀಠಗಳ ನಡುವೆ ಕೆಲಸದ ಸಮಯದ ಸಮಾನ ವಿತರಣೆ ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಈ ಕ್ರಮವು ಹೊಂದಿದೆ. ಸುತ್ತೋಲೆಯ ಪ್ರಕಾರ, ಹಿರಿಯ ವಕೀಲರು ಮತ್ತು ವಾದ ಮಂಡಿಸುವ ವಕೀಲರು ಮೌಖಿಕ ವಾದಗಳಿಗೆ ಎಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಮುಂಚಿತವಾಗಿ ತಿಳಿಸಬೇಕಿದೆ. ವಿಚಾರಣೆಗೆ ಕನಿಷ್ಠ ಒಂದು ದಿನ ಮೊದಲು ನ್ಯಾಯಾಲಯದ ಆನ್ಲೈನ್ ಹಾಜರಾತಿ ಸ್ಲಿಪ್ ಪೋರ್ಟಲ್ ಮೂಲಕ ಈ ಮಾಹಿತಿ ನೀಡಬೇಕಿದೆ. ಸಮಯಸೂಚಿಗಳ ಜೊತೆಗೆ, ಎಲ್ಲಾ ವಾದ ಮಂಡಿಸುವ ವಕೀಲರು ಅಥವಾ ಹಿರಿಯ ವಕೀಲರು ವಿಚಾರಣೆಯ ದಿನಾಂಕಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಐದು ಪುಟಗಳಿಗೆ ಸೀಮಿತವಾದ ಸಂಕ್ಷಿಪ್ತ ಲಿಖಿತ ಸಲ್ಲಿಕೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದೆ. ಎಲ್ಲಾ ವಕೀಲರು ನಿಗದಿಪಡಿಸಿದ ಸಮಯಾವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ತಮ್ಮ ಮೌಖಿಕ ವಾದಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಢಾಕಾಗೆ ತೆರಳಿದ್ದಾರೆ. ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ಖಲೀದಾ ಜಿಯಾ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸುವ ಸಲುವಾಗಿ ತೆರಳಿದ್ದಾರೆ. ಖಲೀದಾ ನಿಧನ ವಾರ್ತೆ ಬೆನ್ನಲ್ಲೆ, ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಇಂದು ಅಂತ್ಯಕ್ರಿಯೆ ನೆರವೇರಲಿದ್ದು, ಅವರ ಮೃತದೇಹವನ್ನು ತಮ್ಮ ಪತಿ ಜಿಯಾವುರ್ ರೆಹಮಾನ್ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿ ಸಮಾಧಿ ಮಾಡಲಾಗುತ್ತದೆ.
ರಾಯಚೂರು : ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ʼಅಕ್ಕ ಪಡೆʼ ಸಜ್ಜು
ರಾಯಚೂರು: ಮಹಿಳೆಯರ,ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಕ್ಕ ಪಡೆ ಸಜ್ಜಾಗಿದ್ದು, ರಾಯಚೂರು ಜಿಲ್ಲೆಯ ಎಸ್ಪಿ ಎಂ ಪುಟ್ಟಮಾದಯ್ಯ ಅವರು ಅಕ್ಕ ಪಡೆ ಕಾರ್ಯಾಚರಣೆಗೆ ಚಾಲನೆ ನೀಡಿದರು. ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡು ಮತ್ತು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಸುಧಾರಣೆ ತರುವ ಜೊತೆಗೆ ಸಮಾಜದಲ್ಲಿ ಕಾನೂನು ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾದ ಅಕ್ಕ ಪಡೆಯ ಜಿಲ್ಲಾ ಪಡೆ ಇನ್ನು ಮುಂದೆ ರಾಯಚೂರು ನಗರದಲ್ಲೂ ಕೂಡ ಕಾರ್ಯ ನಿರ್ವಹಿಸಲಿದೆ. ಬೀದರ್ ಜಿಲ್ಲೆಯ ಗೃಹ ಇಲಾಖೆಯಿಂದ ರಚಿಸಲ್ಪಟ್ಟ ಅಕ್ಕ ಪಡೆಯ ಯಶಸ್ವಿ ಕಾರ್ಯವನ್ನು ರಾಜ್ಯ ಸರ್ಕಾರ ಪರಿಗಣಿಸಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಅಕ್ಕ ಪಡೆಯನ್ನು ವಿಸ್ತರಿಸಲಾಗಿದ್ದು, ಇಂದು ನಗರದ ಎಸ್ಪಿ ಕಚೇರಿಯಲ್ಲಿ ಅಕ್ಕ ಪಡೆಯ ವಾಹನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿ ಜಿಲ್ಲೆಯಾಧ್ಯಂತ ಮಹಿಳೆ ಮತ್ತು ಮಕ್ಕಳ ರಕ್ಷಣೆ , ಭಿಕ್ಷಾಟನೆ ತಡೆಯುವ ಕೆಲಸ ಅಕ್ಕಾ ಪಡೆ ಕಾರ್ಯನಿರ್ವಹಿಸಲಿದೆ. ಅಕ್ಕಾ ಪಡೆ ಸಾರ್ವಜನಿಕರ ಸಕಾಲಕ್ಕೆ ಸೇವೆ ಒದಗಿಸುವ ಮೂಲಕ ಪರಿಣಾಮಕಾರಿ ಯೋಜನೆ ಅನುಷ್ಟಾನಕ್ಕೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದರು. ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು, ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಕ್ಕ ಪಡೆಯ ಮೂಲ ಉದ್ದೇಶವಾಗಿದೆ ಎಂದರು. ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವುದು, ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು, ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂದಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ ಎಂದು ತಿಳಿಸಿದರು. ಅಕ್ಕ ಪಡೆಯ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಅವಶ್ಯಕತೆ ಇರುವ ಮಹಿಳೆಯರು ಮತ್ತು ಮಕ್ಕಳಿಗೆ ಈ ಅಕ್ಕ ಪಡೆ ಅನುಕೂಲವಾಗಲಿದ್ದು, ಜನರು ಕೂಡ ಜಾಗೃತರಾಗಬೇಕು ಎಂದು ಹೇಳಿದರು.
ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕ ಜಿಗಿತ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ!
2025ರ ಹೊತ್ತಿಗೆ, ಭಾರತದ ಆರ್ಥಿಕತೆಯು ಅಚ್ಚರಿಯ ಬೆಳವಣಿಗೆಯನ್ನು ಸಾಧಿಸಿದೆ. ಅಮೆರಿಕದ ಸುಂಕದ ಅಡೆತಡೆಗಳ ಹೊರತಾಗಿಯೂ, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ನಿಯಂತ್ರಣದಲ್ಲಿ ಭಾರತದ ಸಾಧನೆ ಗಮನಾರ್ಹವಾಗಿದೆ. 2026ರಲ್ಲೂ ಭಾರತವು ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲಿದೆ.
ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲು: ಸಚಿವ ಅಶ್ವಿನಿ ವೈಷ್ಣವ್, ವಿ ಸೋಮಣ್ಣ ಮಹತ್ವದ ಮಾಹಿತಿ; 3 ಎಕ್ಸ್ಪ್ರೆಸ್?
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ. ಸಕಲೇಶಪುರ-ಸುಬ್ರಮಣ್ಯ ಘಾಟ್ ವಿಭಾಗದ 55 ಕಿ.ಮೀ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇದು ಬೆಂಗಳೂರು-ಮಂಗಳೂರು ಸಂಪೂರ್ಣ ಮಾರ್ಗವನ್ನು ವಿದ್ಯುದ್ದೀಕರಿಸಿದೆ. ಕೇಂದ್ರ ಸಚಿವರ ಪ್ರಕಾರ, ಇದು ಆರ್ಥಿಕ, ವಾಣಿಜ್ಯ ಸಂಪರ್ಕವನ್ನು ಬಲಪಡಿಸಲಿದೆ. ದಕ್ಷಿಣ ಕನ್ನಡ ಸಚಿವರು ಮೂರು ವಂದೇ ಭಾರತ್ ರೈಲುಗಳ ಸೇವೆಗೆ ಮನವಿ ಮಾಡಿದ್ದಾರೆ.
ಅಯ್ಯೋ… ಏನಿದು ʼಚಿನ್ನʼ? ಮೂರು ದಿನಗಳಲ್ಲಿ 10 ಗ್ರಾಂಗೆ 6,540 ರೂಪಾಯಿ ಕುಸಿತ
ಡಿ.29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ವರ್ಷಾಂತ್ಯದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂ.ಗೆ ಕುಸಿದಿದೆ. ಹೊಸ ವರ್ಷದ ಹೊಸ್ತಿಲಿನಲ್ಲಿ ದೇಶದಲ್ಲಿ ಚಿನ್ನದ ಬೆಲೆ ಕುಸಿದಿದೆ. ವರ್ಷವಿಡೀ ಏರಿಕೆಯಲ್ಲಿದ್ದ ಚಿನ್ನದ ದರ ವರ್ಷದ ಕೊನೆಯ ಮೂರು ದಿನಗಳಲ್ಲಿ ಹತ್ತು ಗ್ರಾಂಗೆ ಬರೋಬ್ಬರಿ 6,540 ರೂ. ಕಡಿತಗೊಂಡಿದೆ. ಮಾರುಕಟ್ಟೆ ವರದಿಗಳ ಪ್ರಕಾರ ಮೂರು ವಿಧದ ಚಿನ್ನದ ಬೆಲೆಗಳೂ ಸತತ ಮೂರನೇ ದಿನವೂ ಕುಸಿದಿದೆ. ಡಿಸೆಂಬರ್ 29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ವರ್ಷಾಂತ್ಯದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂ.ಗೆ ಕುಸಿದಿದೆ. ಡಿಸೆಂಬರ್ 31 ಬುಧವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,588 ರೂ. ಇದ್ದು, ಇಂದು 32 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,880 ರೂ. ಇದ್ದು, 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 320 ರೂ. ಕುಸಿದಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 12,455 ರೂ. ಗೆ ಕುಸಿದಿದ್ದು, ಇಂದು 30 ರೂ. ಇಳಿದಿದೆ. 10 ಗ್ರಾಂ ಬೆಲೆ 1,24,550 ರೂ. ಇದ್ದು, ಇಂದು 10 ಗ್ರಾಂ ನಲ್ಲಿ 300 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)? ಬುಧವಾರ ಡಿಸೆಂಬರ್ 31ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,588 (-32) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,455 (-30) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,191 (-24) ರೂ. ಬೆಲೆಗೆ ತಲುಪಿದೆ. ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,588 ರೂ. ಇದ್ದರೆ, 10 ಗ್ರಾಂ ಶುದ್ಧ ಚಿನ್ನಕ್ಕೆ 1,35,880 ರೂ. ಇದೆ. 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ಇಂದಿಗೆ 12,455 ರೂ. ಆಗಿದ್ದು, ನಿನ್ನೆ 12,485 ರೂ.ಇದ್ದುದರಿಂದ 30 ರೂ. ಕುಸಿದಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದಿಗೆ 1 ಗ್ರಾಂಗೆ 10,191 ರೂ. ಆಗಿದ್ದು, ನಿನ್ನೆ 10,215 ರೂ. ಇದ್ದುದರಿಂದ 24 ರೂ. ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ ಇಂದಿಗೆ 1,01,910 ರೂ. ಆಗಿದ್ದು, ನಿನ್ನೆ 1,02,150 ಇದ್ದುದರಿಂದ ರೂ. ರೂ. 240 ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಬೆಲೆ 240 ರೂ. ಆಗಿದ್ದು, ಕೆಜಿಗೆ 2,40,000 ರೂ. ಇದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ 5,841 ರೂ. ಮತ್ತು 10 ಗ್ರಾಂಗೆ 58,410 ರೂ. ಆಗಿದ್ದು ಭಾರೀ ಕುಸಿತ ಕಂಡಿದೆ. ಗ್ರಾಂ ಮೇಲೆ 339 ರೂ. ವರೆಗೆ ದರ ಇಳಿದಿದೆ.
ಕುಂದಲಹಳ್ಳಿ ಪಿಜಿಯಲ್ಲಿ ಸಿಲಿಂಡರ್ ಸ್ಪೋಟ: 2023 ರ ಕಟ್ಟಡ ಕೆಡವುವ ಆದೇಶ ಉಲ್ಲಂಘನೆಯೇ ಕಾರಣವಾಯ್ತಾ?
ಕುಂದಲಹಳ್ಳಿ ಪಿಜಿಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. 2023 ರಿಂದ ಬಾಕಿ ಇದ್ದ ಕಟ್ಟಡ ಕೆಡವುವ ಆದೇಶವನ್ನು ಪಾಲಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ನಿವಾಸಿಗಳು ಹೇಳಿದ್ದಾರೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡದಲ್ಲಿ ಈ ಘಟನೆ ನಡೆದಿದೆ.
Ration Card: ರೇಷನ್ ಕಾರ್ಡ್ ಇದ್ದವರ ಖಾತೆಗೆ ಪ್ರತಿ ತಿಂಗಳು ₹1,000?
ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್ ಗ್ರೂಪ್ಗಳಲ್ಲಿ ಒಂದು ಸುದ್ದಿ ಬೆಂಕಿಯಂತೆ ಹಬ್ಬುತ್ತಿದೆ. “ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್ ಸಿಕ್ಕಿದ್ದು, ಇನ್ಮುಂದೆ ಪ್ರತಿ ತಿಂಗಳು ಅವರ ಖಾತೆಗೆ 1,000 ರೂಪಾಯಿ ಜಮೆ ಆಗಲಿದೆ” ಎಂಬುದು ಆ ಸುದ್ದಿಯ ಸಾರಾಂಶ. ಬೆಲೆ ಏರಿಕೆಯ ಈ ಸಮಯದಲ್ಲಿ ಬಡ ಕುಟುಂಬಗಳಿಗೆ ಇಂತಹ ಸುದ್ದಿ ಸಹಜವಾಗಿಯೇ ಕುತೂಹಲ ಮತ್ತು ಸಂತಸವನ್ನು ತರುತ್ತದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಬರುತ್ತಿರುವಾಗ, ಇದು ... Read more The post Ration Card: ರೇಷನ್ ಕಾರ್ಡ್ ಇದ್ದವರ ಖಾತೆಗೆ ಪ್ರತಿ ತಿಂಗಳು ₹1,000? appeared first on Karnataka Times .
ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಪ್ರಜ್ಞೆ ಕಳೆದುಕೊಂಡವರಿಗೆ ವಿಶ್ರಾಂತಿ ತಾಣಗಳನ್ನು ಮಾಡಲಾಗಿದೆ. ಬೆಂಗಳೂರಿನ 15 ಕಡೆಗಳಲ್ಲಿ ರೆಸ್ಟಿಂಗ್ ಟೆಂಟ್ ಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ನಶೆ ಏರಿದವರು ಇಲ್ಲಿ ಮಲಗಿ ವಿಶ್ರಾಂತಿ ಪಡೆದುಕೊಳ್ಳಬಹುದು. ಅದರಲ್ಲೂ ಮಹಿಳೆಯರಿಗೆ ಅದ್ಯತೆ ನೀಡಲಾಗಿದೆ. ನಶೆ ಇಳಿದ ಬಳಿಕ ಅವರು ಮನೆಗಳಿಗೆ ತೆರಳಬಹುದಾಗಿದೆ.
ಕಾಸರಗೋಡು: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು
ಕಾಸರಗೋಡು: ಕಾರು, ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನೀರ್ಚಾಲು ಎಂಬಲ್ಲಿ ನಡೆದಿದೆ. ಸೀತಾಂಗೋಳಿ ಪೆಟ್ರೋಲ್ ಬಂಕ್ ನೌಕರ ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕ ನಿವಾಸಿ ಮುಹಮ್ಮದ್ ಝೈನುದ್ದೀನ್ (29)ಮೃತಪಟ್ಟವರು. ಬೆಳಿಗ್ಗೆ ಪೆಟ್ರೋಲ್ ಬಂಕ್ ನ ಕೆಲಸಕ್ಕೆಂದು ಬೈಕ್ ನಲ್ಲಿ ಹೋಗುವಾಗ ನೀರ್ಚಾಲು ಕೆಳಗಿನ ಪೇಟೆಯಲ್ಲಿ ಅಪಘಾತ ನಡೆದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿರಿ ಸಲಾಗಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ
ಮೇಲ್ತೆನೆಯ ಅಧ್ಯಕ್ಷರಾಗಿ ಮಂಗಳೂರು ರಿಯಾಝ್ ಆಯ್ಕೆ
ದೇರಳಕಟ್ಟೆ, ಡಿ.31: ಮೇಲ್ತೆನೆ (ಬ್ಯಾರಿ ಎಲ್ತ್ಕಾರ್-ಕಲಾವಿದಮಾರೊ ಕೂಟ) ದೇರಳಕಟ್ಟೆ ಇದರ ವಾರ್ಷಿಕ ಸಭೆಯು ಮಂಗಳವಾರ ಕಾಜೂರಿನ ಖಾಸಗಿ ಹೊಟೇಲಿನಲ್ಲಿ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ಇಬ್ರಾಹೀಂ ನಡುಪದವು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ 2026ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆಲಿಕುಂಞಿ ಪಾರೆ ಪುನರಾಯ್ಕೆಗೊಂಡರು. ಅಧ್ಯಕ್ಷರಾಗಿ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಮಲಾರ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸಿ.ಎಂ ಶರೀಫ್ ಪಟ್ಟೋರಿ, ಕೋಶಾಧಿಕಾರಿಯಾಗಿ ವಿ. ಇಬ್ರಾಹೀಂ ನಡುಪದವು ಆಯ್ಕೆಯಾದರು. ಸದಸ್ಯರಾಗಿ ಟಿ. ಇಸ್ಮಾಯಿಲ್ ಮಾಸ್ಟರ್, ಯೂಸುಫ್ ವಕ್ತಾರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಬಿ.ಎಂ. ಕಿನ್ಯ, ಅಬೂಬಕರ್ ಹೂಹಾಕುವ ಕಲ್ಲು, ಮನ್ಸೂರ್ ಅಹ್ಮದ್ ಸಾಮಣಿಗೆ, ಅಶ್ರಫ್ ಡಿ.ಎ. ದೇರ್ಲಕಟ್ಟೆ, ಸಿದ್ದೀಕ್ ಎಸ್. ರಾಝ್, ಆಸೀಫ್ ಬಬ್ಬುಕಟ್ಟೆ, ರಫೀಕ್ ಕಲ್ಕಟ್ಟ, ಹೈದರ್ ಆಲಡ್ಕ ಆಯ್ಕೆಯಾದರು. ಆರು ವರ್ಷದ ಹಿಂದೆ ಆರಂಭಿಸಲಾಗಿದ್ದ ಮೇಲ್ತೆನೆ ಇ-ಪೇಪರ್ ಅನ್ನು ಹಂಝ ಮಲಾರ್ ಮತ್ತು ಬಶೀರ್ ಅಹ್ಮದ್ ಕಿನ್ಯ ಅವರ ಸಂಪಾದಕತ್ವದಲ್ಲಿ ಪುನಃ ಹೊರತರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.
ರಾಯಚೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಡಾ. ಮೊಹಮ್ಮದ್ ಸುಹೈಲ್ ನಾಯಕ್ ನೇಮಕ
ರಾಯಚೂರು: ರಾಯಚೂರಿನ ಯುವ ಹೋರಾಟಗಾರ ಡಾ. ಮೊಹಮ್ಮದ್ ಸುಹೈಲ್ ನಾಯಕ್ ಅವರನ್ನು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಯಚೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಮೆಹಬೂಬ್ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಸೈಯದ್ ಫಯಾಝುದೀನ್ ಅವರು ಆದೇಶ ಹೊರಡಿಸಿದ್ದಾರೆ . ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸೈಯದ್ ಫಯಾಝುದೀನ್ ಅವರು ಆದೇಶ ಪತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯೂಸುಫ್ ಖಾನ್, ನರಸಿಂಹಲು ಮಾಡಗಿರಿ, ಶೌಕತ್ ಹಮ್ರಾಜ್ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ ಡಿಪಿಐನಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಸುಹೈಲ್ ಅವರು, ದಲಿತ, ಅಲ್ಪಸಂಖ್ಯಾತ, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಟ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಕಾರಣಾಂತರಗಳಿಂದ ಪಕ್ಷ ತೊರೆದಿದ್ದರು.
ಬೆಂಗಳೂರಿನ ಬಯೋಕಾನ್ ಉದ್ಯೋಗಿ ಕಚೇರಿಯಲ್ಲಿ ಅನುಮಾನಾಸ್ಪದ ಸಾವು
ಬೆಂಗಳೂರಿನಲ್ಲಿರುವ ಬಿಟ್ ಕಾಯಿನ್ ಕಂಪನಿಯ 26 ವರ್ಷದ ಉದ್ಯೋಗಿ ಅನುಂತ ಕುಮಾರ್ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಂಪನಿಯ ಫೇಸ್ 2 ಕಚೇರಿಯ ಆವರಣದಲ್ಲಿ ಅವರ ಶವ ಸಿಕ್ಕಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಪನಿ ಈ ಬಗ್ಗೆ ದುಃಖ ವ್ಯಕ್ತಪಡಿಸಿದೆ.
ದಿಲ್ಲಿಯಲ್ಲಿ ದಟ್ಟ ಮಂಜು: 148 ವಿಮಾನಗಳ ಹಾರಾಟ ರದ್ದು
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಬುಧವಾರ 148 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ರದ್ದುಗೊಂಡ ವಿಮಾನಗಳ ಪೈಕಿ 70 ನಿರ್ಗಮನ ವಿಮಾನಗಳು ಹಾಗೂ 78 ಆಗಮನ ವಿಮಾನಗಳು ಸೇರಿವೆ. ಈ ನಡುವೆ ದಿಲ್ಲಿಯಲ್ಲಿ ಕಳಪೆ ವಾಯು ಗುಣಮಟ್ಟ ಮುಂದುವರಿದಿದ್ದು, ಇದರಿಂದ ದಿಲ್ಲಿ ಎನ್ಸಿಆರ್ ಪ್ರದೇಶದ ನಿವಾಸಿಗಳಿಗೆ ಗಂಭೀರ ಸವಾಲು ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆಯು ದಿಲ್ಲಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಬುಧವಾರ ದಿಲ್ಲಿಯಲ್ಲಿ ಅಧಿಕ ಪ್ರಮಾಣದ ದಟ್ಟ ಮಂಜು ಆವರಿಸಿದೆ. ಇದರಿಂದ ದಿಲ್ಲಿಯ ವಿವಿಧ ಪ್ರದೇಶಗಳಲ್ಲಿ ಗೋಚರತೆಯ ಪ್ರಮಾಣ ತೀವ್ರ ಸ್ವರೂಪದಲ್ಲಿ ಕ್ಷೀಣಿಸಿದೆ.
ಮಂಗಳೂರು ಟು ಬೆಂಗಳೂರು ರೈಲು ಪ್ರಯಾಣ ಸಮಯ 6 ಗಂಟೆ ಸಾಕು: ಫೇಸ್ಬುಕ್ನಲ್ಲಿ ಚರ್ಚೆ
ಕೃಷ್ಣ ಭಟ್ ಅವರ ಬರಹ: ಕರ್ನಾಟಕ ರಾಜ್ಯದಲ್ಲಿ ರೈಲು ಪ್ರಯಾಣಕ್ಕೆ ವ್ಯಾಪಕ ಬೇಡಿಕೆ ಇದ್ದು ಕೇಂದ್ರದಿಂದ ಹೆಚ್ಚುವರಿಯಾಗಿ ರೈಲು ಸೇವೆ ಸಿಗಬೇಕು ಎಂಬುದು ಕನ್ನಡಿಗರ ಆಗ್ರಹ. ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರ ಬೇಡಿಕೆ ಈಡೇರುತ್ತಿದ್ದು, ಕರ್ನಾಟಕದಲ್ಲಿ ಸಾಲು ಸಾಲು ಹೊಸ ಮಾರ್ಗಗಳು ಆರಂಭವಾಗುತ್ತಿವೆ. ಜೊತೆಗೆ ಹಳೆಯ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳ ಓಡಾಟ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
Gold Rate Fall: ವರ್ಷ ಪೂರ್ತಿ ಭರ್ಜರಿ ಹೆಚ್ಚಳ ಕಂಡ್ರೂ, ಕೊನೆಯ ದಿನ ಇಳಿದ ಚಿನ್ನದ ಬೆಲೆ! ಎಷ್ಟಾಯಿತು ಗೊತ್ತಾ?
ಚಿನ್ನದ ಬೆಲೆ ವರ್ಷಾಂತ್ಯಕ್ಕೆ ನಿರಂತರವಾಗಿ ಇಳಿಕೆ ಆಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ 1,35,880 ರೂಪಾಯಿಗೆ ಕಡಿತಗೊಂಡಿದೆ. ಡಿಸೆಂಬರ್ 29 ರಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು ಮೂರು ದಿನದಲ್ಲಿ ಭರ್ಜರಿ ಪ್ರತಿನಿತ್ಯದ ಚಿನ್ನ ಬೆಳ್ಳಿ ಬೆಲೆ ತಿಳಿಯಲು ವಿಜಯ ಕರ್ನಾಟಕ ವೆಬ್ಸೈಟ್ ಫಾಲೋ ಮಾಡಿ
Gold Price Today: ಹೊಸ ವರ್ಷಕ್ಕೆ ಇಳಿಯಿತು ಚಿನ್ನದ ಬೆಲೆ, ಇಂದಿನ ದರ ಎಷ್ಟಿದೆ?
ವರ್ಷದ ಕೊನೆಯ ದಿನ ಚಿನ್ನದ ದರಗಳು ಭಾರೀ ಇಳಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರಿಗೆ ನೆಮ್ಮದಿ ನೀಡಿದೆ. ಕಳೆದ ವಾರವಿಡೀ ಚಿನ್ನದ ದರಗಳು ಗಗನಮುಖಿಯಾಗಿದ್ದವು. ನಿರಂತರ ಏರಿಕೆಯಿಂದ ಖರೀದಿದಾರರು ಕೂಡ ಹಿಂದೇಟು ಹಾಕಿದ್ದರು. ಕಳೆದ ಎರಡು ದಿನಗಳಿಂದ ಚಿನ್ನದ ದರಗಳು ಸತತವಾಗಿ ಇಳಿಕೆ ಕಾಣುತ್ತಿವೆ. 24 ಕ್ಯಾರೆಟ್ ಚಿನ್ನದ ಮೇಲೆ ಇಂದು 32 ರೂಪಾಯಿ ಕಡಿಮೆಯಾಗಿದೆ. ಹೊಸ
ಮಾನವೀಯತೆ ಹಾಗೂ ಕಾನೂನಿನ ನಡುವೆ ಸಿಲುಕಿಕೊಂಡ ಕೋಗಿಲು ವಿವಾದ: ಧರ್ಮ, ಅಕ್ರಮ ವಲಸೆಯ ಸುಳಿಯಲ್ಲಿ ಸಂತ್ರಸ್ತರು
ಕೋಗಿಲು ಪ್ರಕರಣ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಇದಕ್ಕೆ ಬಿಜೆಪಿಯ ವಿರೋಧ ಇದೆ. ಕೋಗಿಲು ಬಡಾವಣೆ ಪ್ರಕರಣ ಮಾನವೀಯತೆ ಮತ್ತು ಕಾನೂನಿನ ನಡುವೆ ಸಿಲುಕಿಕೊಂಡಿದೆ. ಈ ವಿವಾದಕ್ಕೆ ಇದೀಗ ಧರ್ಮ, ಅಕ್ರಮ ವಲಸೆಯ ಆಯಾಮ ನೀಡಲಾಗುತ್ತಿದೆ. ಹೀಗಾಗಿ ಕೋಗಿಲು ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಕುರಿತಾದ ಮತ್ತಷ್ಟು ವಿವರಗಳು ಇಲ್ಲಿವೆ.
ಕಾಪು : ಅಬ್ದುಲ್ ಶೂಕುರ್ ಸಾಹೇಬ್ ನಿಧನ
ಕಾಪು : ಬೆಳಪು ನಿವಾಸಿ ಅಬ್ದುಲ್ ಶೂಕುರ್ ಸಾಹೇಬ್, (66) ಬುಧವಾರ ಮುಂಜಾನೆ ನಿಧನ ಹೊಂದಿದರು. ಇವರು ಪತ್ನಿ, ಒಂದು ಹೆಣ್ಣು 3 ಗಂಡ್ಡು ಮಕ್ಕಳನ್ನು, ಅಪಾರ ಬಂಧುಗಳನ್ನು ಅಗಲಿರುವರು.
Madhya Pradesh| ಕಲುಷಿತ ನೀರು ಕುಡಿದು ಮೂವರು ಮೃತ್ಯು; 100ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
ಇಂದೋರ್: ಕಲುಷಿತ ನೀರು ಕುಡಿದು ಮೂವರು ಮೃತಪಟ್ಟು, 100ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಭಗೀರಥ್ ಪುರ ಪ್ರದೇಶದಲ್ಲಿ ನಡೆದಿದೆ ಎಂದು ನಗರದ ಮೇಯರ್ ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಕಲುಷಿತ ನೀರು ಸೇವಿಸಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಡಿಸೆಂಬರ್ 25ರಂದು ಭಗೀರಥ್ ಪುರ ಪ್ರದೇಶದಲ್ಲಿ ಸರಬರಾಜು ಮಾಡಲಾಗಿದ್ದ ನೀರು ಕೆಟ್ಟದಾಗಿ ವಾಸನೆ ಬರುತ್ತಿತ್ತು. ಅದನ್ನು ಸೇವಿಸಿದ ನಂತರ ಗ್ರಾಮಸ್ಥರು ಅಸ್ವಸ್ಥಗೊಂಡರು ಎಂದು ಸ್ಥಳೀಯ ಕೌನ್ಸಿಲರ್ ಹೇಳಿದ್ದಾರೆ. ಭಾಗೀರಥಪುರದ ಒಂದು ಸ್ಥಳದಲ್ಲಿ ಮುಖ್ಯ ನೀರು ಸರಬರಾಜು ಪೈಪ್ಲೈನ್ನಲ್ಲಿ ಸೋರಿಕೆಯಾಗುತ್ತಿರುವುದು ಮತ್ತು ಪೈಪ್ಲೈನ್ ಸಮೀಪ ಶೌಚಾಲಯ ನಿರ್ಮಿಸಿರುವುದು ಕಂಡುಬಂದಿದೆ ಎಂದು ಪುರಸಭೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ. ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚ ಭರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಡಿಜಿಟಲ್ ಕ್ರಾಂತಿಯು ಶಿಕ್ಷಣವನ್ನು ಎಲ್ಲರ ಕೈಗೆ ತಲುಪಿಸಿದೆ. ಭಾರತ ಸರ್ಕಾರದ ಪಿಎಂ ಇ-ವಿದ್ಯಾ ಯೋಜನೆಯು ತಂತ್ರಜ್ಞಾನದ ಶಕ್ತಿಯನ್ನು ಬಳಸಿ, ದೇಶದ ಮೂಲೆಮೂಲೆಗೂ ಗುಣಮಟ್ಟದ ಕಲಿಕೆಯನ್ನು ವಿಸ್ತರಿಸುತ್ತಿದೆ. ಆನ್ಲೈನ್, ಟಿವಿ, ರೇಡಿಯೋ ಮೂಲಕ ಲಭ್ಯವಿರುವ ಸಂಪನ್ಮೂಲಗಳು, ದೀಕ್ಷಾ, ಸ್ವಯಂ ಪೋರ್ಟಲ್, ಮತ್ತು ವರ್ಚುವಲ್ ಲ್ಯಾಬ್ಗಳಂತಹ ನವೀನ ವೇದಿಕೆಗಳು ಕಲಿಕೆಯನ್ನು ಸುಲಭ, ಆಕರ್ಷಕ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಿವೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನೂ ಒಳಗೊಂಡಂತೆ, ಈ ಮಹತ್ವಾಕಾಂಕ್ಷೆಯು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕುರಿತ ವಿವರಗಳು ಇಲ್ಲಿವೆ.
ಕಲಬುರಗಿ ಸುಣ್ಣದ ಕಲ್ಲು ಗಣಿಗಾರಿಕೆ : 850.21 ಕೋಟಿ ರೂ. ದಂಡ ಪಾವತಿ ಬಾಕಿ ಉಳಿಸಿಕೊಂಡ ಎಸಿಸಿ ಸಿಮೆಂಟ್ಸ್
ಬೆಂಗಳೂರು : ಕಲಬುರಗಿಯ ವಾಡಿ ಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಸರಕಾರಕ್ಕೆ 850.21 ಕೋಟಿ ರೂ. ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೂ ಸಹ ಹೊಸದಾಗಿ ಗಣಿ ಹರಾಜಿನಲ್ಲಿ ಮತ್ತೊಂದು ಗಣಿ ಪ್ರದೇಶವನ್ನು ಪಡೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ. ಹಾಗೆಯೇ 850.21 ಕೋಟಿ ರೂ.ಯಷ್ಟು ಬಾಕಿ ಮೊತ್ತವನ್ನು ಉಳಿಸಿಕೊಂಡಿದ್ದರೂ ಸಹ ಎಂಡಿಪಿಎ ಕಾಯ್ದೆಯಂತೆ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸರಕಾರದ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕಿದ್ದ ಸರಕಾರವು, ಕಂಪೆನಿ ಪರ ವಕಾಲತ್ತು ವಹಿಸಿದೆ. ಈ ಕಂಪೆನಿಯು 2021ರಲ್ಲೇ ಹರಾಜಿನಲ್ಲಿ ಯಶಸ್ವಿಯಾಗಿತ್ತು. 2021ರ ಜನವರಿ 4ರಂದೇ ಲೆಟರ್ ಆಫ್ ಇಂಟೆಂಟನ್ನು 5 ವರ್ಷಗಳ ಅವಧಿಗೆ ನೀಡಲಾಗಿತ್ತು. ಇದೀಗ ಇದರ ಅವಧಿಯು 2026ರ ಜನವರಿ 3ರವರೆಗೆ ಚಾಲ್ತಿಯಲ್ಲಿದೆ. ಹೀಗಾಗಿ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹರಾಜು ಪ್ರಕ್ರಿಯೆಯು ರದ್ದಾಗಲಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು, ಕಂಪೆನಿಗೆ ಮತ್ತಷ್ಟು ಷರತ್ತುಗಳನ್ನು ಒಳಪಡಿಸಿ ಗಣಿ ಗುತ್ತಿಗೆ ಕರಾರನ್ನು ಮಾಡಿಕೊಡಲು ಮುಂದಾಗಿದೆ. ರಾಜಧನ ಬಾಕಿ ಮತ್ತು ವಿಧಿಸಿರುವ ದಂಡದ ಮೊತ್ತ ಪಾವತಿಗೆ ಸರಕಾರವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಎಸಿಸಿ ಲಿಮಿಟೆಡ್, ಹೈಕೋರ್ಟ್ನಲ್ಲಿ 2 ರಿಟ್ ಅರ್ಜಿಗಳನ್ನು ಸಲ್ಲಿಸಿದೆ. ಮತ್ತೊಂದು ಅರ್ಜಿಯನ್ನು ಸರಕಾರವೇ ಹೈಕೋರ್ಟ್ನಲ್ಲಿ ಸಲ್ಲಿಸಿದೆ. ಈ ಮೂರು ರಿಟ್ ಅರ್ಜಿಗಳು 2026ರ ಫೆ.10ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಿದ್ದರೂ ಸಹ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಆದೇಶವನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಕಂಪೆನಿಯಿಂದ ಪ್ರಮಾಣ ಪತ್ರ ಪಡೆಯಲು ಸರಕಾರವು ಮುಂದಾಗಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘the-file.in’ಗೆ ಖಚಿತಪಡಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳೊಂದಿಗೆ ಹಲವು ಸುತ್ತಿನ (ಕಡತ ಸಂಖ್ಯೆ; ಸಿಐ 14/ಸಿಎಂಸಿ/2024) ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಈ ಪ್ರಕರಣವು ಅತೀ ಸೂಕ್ಷ್ಮ ಮತ್ತು ಪ್ರಮುಖ ವಿಷಯವಾಗಿದೆ. ಅಲ್ಲದೇ ಈ ಪ್ರಕರಣವು ಆರ್ಥಿಕ ಅಂಶಗಳನ್ನೂ ಒಳಗೊಂಡಿದೆ. ಹೀಗಿದ್ದರೂ ಸಹ ಈ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಅತ್ಯಾಸಕ್ತಿ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಗಣಿಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ರೀತಿಯ ಉಲ್ಲಂಘನೆ ನಡೆಸಿರುವ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಎಸಿಸಿ ಲಿಮಿಟೆಡ್ ವಿರುದ್ಧ ಸರಕಾರವು 482.69 ಕೋಟಿಯಷ್ಟು ದಂಡ ವಿಧಿಸಿತ್ತು. ಈ ಕುರಿತು ಎಸಿಸಿ ಲಿಮಿಟೆಡ್, ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ (ಸಂಖ್ಯೆ; ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು. ಅಲ್ಲದೇ ರಾಜಧನ ರೂಪದಲ್ಲಿ 492.51 ಕೋಟಿ ರೂ. ಪಾವತಿಸಬೇಕಿತ್ತು. ಒಟ್ಟಾರೆ ಸರಕಾರಕ್ಕೆ 850.21 ಕೋಟಿ ರೂ.ಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ. ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ (ಗಣಿ ಗುತ್ತಿಗೆ ಸಂಖ್ಯೆ 2641) ಸರಕಾರದ ಹಂತದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2023ರ ಮಾರ್ಚ್ 31ರಂದು ಸರಕಾರಕ್ಕೆ ವರದಿ ನೀಡಿತ್ತು. ಇದರ ಪ್ರಕಾರ ಎಸಿಸಿ ಲಿಮಿಟೆಡ್, 492.51 ಕೋಟಿ ರೂ. ಮತ್ತು ಉಚ್ಛ ನ್ಯಾಯಾಲಯವು 2024ರ ಅಕ್ಟೋಬರ್ 29ರಂತೆ ಎಸಿಸಿ ಲಿಮಿಟೆಡ್ ರಾಜಧನ ರೂಪದಲ್ಲಿ 125.00 ಕೋಟಿ ರೂ. ಪಾವತಿಸಿದೆ. ಸರಕಾರಕ್ಕೆ ಇನ್ನೂ 367.51 ಕೋಟಿ ರು ರಾಜಧನ ಪಾವತಿಸಲು ಬಾಕಿ ಇದೆ. ಹಾಗೆಯೇ ಪ್ರಶ್ನಿತ ಈ ಕಂಪೆನಿಯು ರಾಜಧನ ಮೊತ್ತದಲ್ಲಿ ಇನ್ನೂ 367.51 ಕೋಟಿ ರೂ. ಪಾವತಿಸುವುದಕ್ಕೆ ಬಾಕಿ ಉಳಿಸಿಕೊಂಡಿದೆ. ಇದನ್ನು ಎಸ್ಕ್ರೋ ಖಾತೆಗೆ ಪಾವತಿಸಿಲ್ಲ. ಬದಲಿಗೆ ಕೇಂದ್ರದ ಗಣಿ ಸಚಿವಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪರಿಷ್ಕರಣೆ ಪ್ರಾಧಿಕಾರವು ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು ರಾಜ್ಯ ಸರಕಾರಕ್ಕೆ ಹಿಂದಿರುಗಿಸಿತ್ತು. ಕಲಬುರಗಿಯ ವಾಡಿ ಪ್ರದೇಶವು ಪ್ರಮುಖವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಮತ್ತು ಗಣಿಗಳಿವೆ. ಇಲ್ಲಿ ಉತ್ಪಾದನೆಯಾಗುವ ಸುಣ್ಣದ ಕಲ್ಲು ಮತ್ತು ಶಹಬಾದಿ ಕಲ್ಲುಗಳು ರಾಜ್ಯಾದ್ಯಂತ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತವೆ. ಆದರೆ, ಈ ಕಂಪನಿಯ ಗಣಿಗಾರಿಕೆಯಿಂದಾಗಿ ರೈತರ ಭೂಮಿ ಫಲವತ್ತತೆ ಕಣ್ಮರೆಯಾಗುತ್ತಿದೆ ಮತ್ತು ಪರಿಸರ ಸಮಸ್ಯೆಗಳು ಉಂಟಾಗುತ್ತಿದೆ. ಈ ಕಂಪೆನಿಯ ಗಣಿ ಚಟುವಟಿಕೆಗೆ ಸ್ಥಳೀಯ ವಿರೋಧವೂ ಇದೆ.
Indo - Pak ಸಂಘರ್ಷ ಕೊನೆಗೂಳಿಸಲು ಮಧ್ಯಸ್ಥಿಕೆ ವಹಿಸಿರುವುದಾಗಿ ಚೀನಾ ಹೇಳಿಕೆ: ಸ್ಪಷ್ಟವಾಗಿ ತಿರಸ್ಕರಿಸಿದ ಭಾರತ
ಬೀಜಿಂಗ್/ಹೊಸದಿಲ್ಲಿ: ಮೇ ತಿಂಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಉಂಟಾದ ಮಿಲಿಟರಿ ಉದ್ವಿಗ್ನತೆಯನ್ನು ಶಮನಗೊಳಿಸಲು ಚೀನಾ ಮಧ್ಯಸ್ಥಿಕೆ ವಹಿಸಿದೆ ಎಂಬ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆಯನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಭಾರತ–ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರಗಳಲ್ಲಿ ತೃತೀಯ ಪಕ್ಷಕ್ಕೆ ಯಾವುದೇ ಪಾತ್ರವಿಲ್ಲ ಎಂಬ ತನ್ನ ನಿಲುವನ್ನು ಭಾರತವು ಮತ್ತೊಮ್ಮೆ ಪುನರುಚ್ಚರಿಸಿದೆ. ಈ ಹಿಂದೆ ಹಲವು ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತರಲು ನಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿದ್ದರು. ಈಗ ಅದೇ ವರಸೆಯನ್ನು ಚೀನಾವು ಪ್ರಾರಂಭಿಸಿದೆ. ಬೀಜಿಂಗ್ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಾಂಗ್ ಯಿ, ಜಗತ್ತಿನಾದ್ಯಂತ ಸಂಘರ್ಷಗಳು ಹಾಗೂ ಅಸ್ಥಿರತೆ ತೀವ್ರವಾಗಿ ಹೆಚ್ಚಾಗಿವೆ ಎಂದು ಹೇಳಿದರು. ಭಾರತ–ಪಾಕಿಸ್ತಾನ ಉದ್ವಿಗ್ನತೆ ಸೇರಿದಂತೆ ಹಲವು ಜಾಗತಿಕ ಬಿಕ್ಕಟ್ಟುಗಳಲ್ಲಿ ಚೀನಾ “ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವಿನಿಂದ” ಮಧ್ಯಸ್ಥಿಕೆ ವಹಿಸಿದೆ ಎಂದು ಅವರು ಹೇಳಿಕೊಂಡರು. ಉತ್ತರ ಮ್ಯಾನ್ಮಾರ್, ಇರಾನ್ ನ ಪರಮಾಣು ವಿಚಾರ, ಫೆಲೆಸ್ತೀನ್–ಇಸ್ರೇಲ್ ಹಾಗೂ ಕಾಂಬೋಡಿಯಾ–ಥೈಲ್ಯಾಂಡ್ ನಡುವಿನ ಸಂಘರ್ಷಗಳನ್ನೂ ಅವರು ಉದಾಹರಣೆಯಾಗಿ ನೀಡದರು. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಿಲಿಟರಿ ಘರ್ಷಣೆ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು. ನಂತರ ಈ ಕಾರ್ಯಾಚರಣೆ ಮಿಲಿಟರಿ ನೆಲೆಗಳವರೆಗೆ ವಿಸ್ತರಿಸಿತ್ತು. ಮೇ 10ರಂದು ಜಾರಿಯಾದ ಕದನ ವಿರಾಮವು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒಗಳು) ನಡುವಿನ ನೇರ ಮಾತುಕತೆಯ ಫಲವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. “ಭಾರತ–ಪಾಕಿಸ್ತಾನ ಕದನ ವಿರಾಮದ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ. ಈ ನಿಲುವನ್ನು ನಾವು ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದೇವೆ,” ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ತಮ್ಮ ಜಾತಿಯ ಅಸ್ಮಿತೆಗಾಗಿ ಹೋರಾಡುತ್ತಿರುವ ‘ಮನ್ಸ’ರು
ಮನ್ಸ ಎನ್ನುವುದು ಒಂದು ಆದಿವಾಸಿ ಬುಡಕಟ್ಟು. ಆದರೆ ಜಾತಿಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿಕರ್ನಾಟಕ, ಆದಿದ್ರಾವಿಡ, ಹಸಲರು ಮುಂತಾಗಿ ಇಷ್ಟೂ ಕಾಲ ಜಾತಿ ಪ್ರಮಾಣಪತ್ರ ಪಡೆದು ಅಷ್ಟಿಷ್ಟು ಸವಲತ್ತು ಪಡೆಯುತ್ತಿದ್ದ ಮನ್ಸ ಜಾತಿಯವರು ತಮ್ಮ ಅಸ್ಮಿತೆಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತಿದ್ದಾರೆ. ‘ಮನ್ಸ’ ಎಂಬ ಜಾತಿಗೆ ಅಸ್ಪಶ್ಯ ಜಾತಿಯ ಕಳಂಕ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇಲ್ಜಾತಿಗಳು ‘ಮನ್ಸ’ರನ್ನು ತೀರಾ ನಿಕೃಷ್ಟವಾಗಿ ಕಾಣುವುದರಿಂದ ಇವರು ಕೆಲವು ಪ್ರದೇಶಗಳಲ್ಲಿ ತಮ್ಮ ಜಾತಿಯ ಗುರುತನ್ನು ಗುಟ್ಟಾಗಿ ಮರೆಮಾಚುವುದರಿಂದ ಈ ಜಾತಿಗೆ ಪ್ರತ್ಯೇಕ ಅಸ್ಮಿತೆ ಸಿಗದಿರುವುದಕ್ಕೆ ಕಾರಣವಾಗಿದೆ. ‘‘ನಮ್ಮ ಹೆಣ್ಣನ್ನು ಸಾಕಿ ಸಲಹಿ ಇಷ್ಟು ಬೆಳೆಸಿದ್ದೇವೆ. ಇನ್ನು ಮುಂದಕ್ಕೆ ಸರಿಯಾಗಿ ನೋಡಿಕೊಳ್ಳುವ ಕೆಲಸ ನಿನ್ನದು, ಇಲ್ಲವಾದರೆ ನಿನ್ನ ಕೈಕಾಲು ಮುರಿದು ಹಾಕಿಯೇವು..’’ ಹೆಣ್ಣಿನ ಕಡೆಯವರು ಗಂಡಿಗೆ ಹೇಳುವ ಎಚ್ಚರಿಕೆಯ ಮಾತುಗಳಿವು! ಧಾರೆಯ ಬಳಿಕ ಹೆಣ್ಣನ್ನು ಗಂಡನ ಮನೆಗೆ ಕಳಿಸುವಾಗ ಎರಡೂ ಕುಟುಂಬಗಳ ನಡುವೆ ಪರಸ್ಪರ ನಡೆಯುವ ದಾಂಪತ್ಯ ಬಗೆಗಿನ, ಶೃಂಗಾರದ, ಮಧುರ ಸಂಭಾಷಣೆಗಳಲ್ಲಿ, ಹಾಸ್ಯೋಕ್ತಿಗಳು, ಹೊಗಳಿಕೆಗಳು, ಸ್ವಾರಸ್ಯಕರ ಬೈಗುಳಗಳು, ನೀತಿ ಮಾತುಗಳ ನಡುವೆ ಇಂತಹ ಎಚ್ಚರಿಕೆಯ ಮಾತುಗಳೂ ಇರುತ್ತವೆ. ‘ಮನ್ಸ’ ಸಮುದಾಯದ ಕುರಿತು ಅಧ್ಯಯನ ಮಾಡುತ್ತಿದ್ದಾಗ ಇಂತಹ ಸ್ವಾರಸ್ಯಕರ ಮತ್ತು ಈ ಸಮುದಾಯದಲ್ಲಿ ಹೆಣ್ಣಿನ ಬಗ್ಗೆ ಇರುವ ವಿಶೇಷ ಕಾಳಜಿಯ ವಿಷಯಗಳು ಗಮನ ಸೆಳೆದವು. ಬಹುತೇಕ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಗಳಲ್ಲಿ ನೆಲೆಸಿರುವ ಮನ್ಸರು ಮೂಲತಃ ಅಸ್ಪಶ್ಯರು. ಮನ್ಸ ಎಂದರೆ ತೀರಾ ಕೀಳಾಗಿ ಕಾಣುವುದರಿಂದ ತಮ್ಮನ್ನು ಮನ್ಸ ಎಂದು ಕರೆದುಕೊಳ್ಳಲು ಹಿಂಜರಿದು, ಒಂದು ಹಂತದಲ್ಲಿ ತಮ್ಮನ್ನು ‘ಆದಿದ್ರಾವಿಡ’ ಎಂದು ಕರೆದುಕೊಳ್ಳಲು ಆರಂಭಿಸಿದರು. ಆನಂತರ ಆದಿದ್ರಾವಿಡ ಎನ್ನುವುದು ಒಂದು ಜಾತಿಯ ಅಸ್ಮಿತೆಯಲ್ಲ, ಆದಿದ್ರಾವಿಡ ಎನ್ನುವುದು ಕೆಲ ಜಾತಿಗಳ ಸಮೂಹ ಎಂದು ಮನದಟ್ಟಾದ ಮೇಲೆ ಕೆಲವು ಮಂದಿ ವಿದ್ಯಾವಂತರು ಮತ್ತು ಪ್ರಜ್ಞಾವಂತರು ತಮ್ಮನ್ನು ಮನ್ಸ ಎಂದೇ ಕರೆದುಕೊಳ್ಳತೊಡಗಿದರು. ಇದು ಇಂದು ವ್ಯಾಪಕವಾಗುತ್ತಿದೆ. ‘‘ನಾವು ಮೂಲತಃ ಮನ್ಸರು, ನಮ್ಮ ಜಾತಿಯ ಹೆಸರು ದೊಡ್ಡ ಜಾತಿಗಳ ಬಾಯಲ್ಲಿ ಹೇಯಕರ ಮತ್ತು ನಿಂದನಾತ್ಮಕವಾಯಿತು, ಆದ್ದರಿಂದ ನಮ್ಮಲ್ಲಿ ಕೆಲವರು ಹಿಂಜರಿದು ನಮ್ಮ ಮೂಲ ಜಾತಿಯ ಹೆಸರನ್ನು ಹೇಳಿಕೊಳ್ಳದೆ ಮರೆಮಾಚಿ ‘ಆದಿದ್ರಾವಿಡ’ ಎಂದು ಕರೆದುಕೊಂಡರು. ನಮ್ಮ ಜಾತಿಯಂತೆಯೇ ಕೀಳಾಗಿ ಕರೆಯಲಾಗುವ ಹೊಲೆಯ, ಮಾದಿಗ, ಹಜಾಮ, ದರ್ವೇಸಿ, ಹಲಾಲ್ ಕೋರ್, ದೋಭಿ ಮುಂತಾಗಿ ಕರೆಸಿಕೊಳ್ಳುತ್ತಿದ್ದವರು, ಒಂದು ಕಾಲದಲ್ಲಿ ಹೀಗೇ ತಮ್ಮ ಜಾತಿ ಹೆಸರೇಳಲು ಹಿಂಜರಿದವರು, ಇಂದು ತಮ್ಮ ಜಾತಿಯನ್ನು ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಈಗೀಗ ಸ್ಪಶ್ಯ ಸಮಾಜದವರು ಈ ಸಮುದಾಯಗಳ ಹೆಸರನ್ನು ಗೌರವದಿಂದ ಸ್ವೀಕರಿಸಲು ತೊಡಗಿದ್ದಾರೆ. ಇದೆಲ್ಲ ಡಾ. ಅಂಬೇಡ್ಕರ್ ಅವರು ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ಫಲ ಮತ್ತು ಸಂವಿಧಾನ ನೀಡಿದ ಆತ್ಮಗೌರವದಿಂದ ಸಾಧ್ಯವಾಗಿದೆ. ಹೀಗಿದ್ದಾಗ ನಾವೇಕೆ ನಮ್ಮ ಜಾತಿಯ ಬಗ್ಗೆ ನಾವೇ ಕೀಳರಿಮೆ ಬೆಳೆಸಿಕೊಳ್ಳಬೇಕು? ನಮ್ಮ ಜಾತಿಗೂ ಒಂದು ಅಸ್ಮಿತೆ ಸಿಗುವ ಕಡೆ ಬಾಬಾಸಾಹೇಬರು ಹಾಕಿಕೊಟ್ಟ ಅರಿವಿನ ಹಾದಿಯಲ್ಲಿ ಮುನ್ನಡೆಯೋಣ..’’ ಎಂದು ಮನ್ಸ ಸಂಘಟನೆಯ ಮುಖ್ಯಸ್ತರಲ್ಲಿ ಒಬ್ಬರಾದ ಅಚ್ಯುತ ಹೇಳುತ್ತಾರೆ. ನಾನು ಆಯೋಗದಲ್ಲಿದ್ದಾಗ ಇದೇ ಸಮಸ್ಯೆ ಹೊತ್ತು ಮನ್ಸ ಸಮುದಾಯದವರು ಆಯೋಗಕ್ಕೆ ಬಂದಿದ್ದರು. ಮನ್ಸ ಸಮುದಾಯ ಅಸ್ಪಶ್ಯ ಸಮುದಾಯವಾಗಿದ್ದರಿಂದ ಅದು ನಮ್ಮ ಆಯೋಗದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಆದರೂ ಮನ್ಸ ಎನ್ನುವ ಹೆಸರೇ ಕುತೂಹಲ ಹುಟ್ಟಿಸಿದರಿಂದ ನಾನು ಅವರನ್ನು ಕೂರಿಸಿ ಮಾತಾಡಿಸಿದ್ದೆ. ‘‘ಮನ್ಸ ಅನ್ನುವುದು ಜಾತಿ ಅಲ್ಲ, ಅದು ಮನುಜ ಕುಲದ ಹೆಸರು.. ಹೀಗಿರುವಾಗ ಮನ್ಸ ಅನ್ನುವುದು ಹೇಗೆ ಕೀಳರಿಮೆಯಾಗುತ್ತೆ..?’’ ಎಂದಿದ್ದೆ. ಅದಕ್ಕವರು ‘‘ನಿಜ ಸಾರ್.. ನಮಗೆ ಜಾತಿಯ ಗೊಡವೆಯೇ ಬೇಡ, ನಾವು ಮನುಷ್ಯರಾಗಿಯೇ ಇದ್ದು ಬಿಡೋಣ ಎಂದು ‘ಮನ್ಸ’ ಅಂತ ಇಟ್ಟುಕೊಂಡರೆ ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ಜಾತಿಜಾಡ್ಯ ಬಡಿದವರು ಅದನ್ನೇ ಜಾತಿಯ ಹೆಸರಾಗಿ ಮಾಡಿಬಿಟ್ಟರು’’ ಎಂದು ಹೇಳಿ ನಕ್ಕಿದ್ದರು. ಮನ್ಸ ಎನ್ನುವುದು ಒಂದು ಆದಿವಾಸಿ ಬುಡಕಟ್ಟು. ಆದರೆ ಜಾತಿಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿಕರ್ನಾಟಕ, ಆದಿದ್ರಾವಿಡ, ಹಸಲರು ಮುಂತಾಗಿ ಇಷ್ಟೂ ಕಾಲ ಜಾತಿ ಪ್ರಮಾಣಪತ್ರ ಪಡೆದು ಅಷ್ಟಿಷ್ಟು ಸವಲತ್ತು ಪಡೆಯುತ್ತಿದ್ದ ಮನ್ಸ ಜಾತಿಯವರು ತಮ್ಮ ಅಸ್ಮಿತೆಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತಿದ್ದಾರೆ. ‘ಮನ್ಸ’ ಎಂಬ ಜಾತಿಗೆ ಅಸ್ಪಶ್ಯ ಜಾತಿಯ ಕಳಂಕ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇಲ್ಜಾತಿಗಳು ‘ಮನ್ಸ’ರನ್ನು ತೀರಾ ನಿಕೃಷ್ಟವಾಗಿ ಕಾಣುವುದರಿಂದ ಇವರು ಕೆಲವು ಪ್ರದೇಶಗಳಲ್ಲಿ ತಮ್ಮ ಜಾತಿಯ ಗುರುತನ್ನು ಗುಟ್ಟಾಗಿ ಮರೆಮಾಚುವುದರಿಂದ ಈ ಜಾತಿಗೆ ಪ್ರತ್ಯೇಕ ಅಸ್ಮಿತೆ ಸಿಗದಿರುವುದಕ್ಕೆ ಕಾರಣವಾಗಿದೆ. ‘ಮನ್ಸ’ ಜಾತಿಯನ್ನು ಅನೇಕ ಮಂದಿ ಮಾನವಶಾಸ್ತ್ರೀಯ ಸಂಶೋಧಕರು ಗುರುತಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಹೊರತಂದಿರುವ ದಿವಂಗತ ಡೀಕಯ್ಯನವರು ಬರೆದ ‘ತುಳುನಾಡಿನ ಮನ್ಸರು: ಒಂದು ಜನಾಂಗಿಕ ಅಧ್ಯಯನ’ ಎಂಬ ಪುಸ್ತಕದಲ್ಲಿ ಮನ್ಸರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಐತಿಹಾಸಿಕ ವಿವರಗಳಿವೆ. ಅಂತೆಯೇ ಡಾ. ವಾಮನ ನಂದಾವರ ಅವರ ಕರ್ನಾಟಕ ಬುಡಕಟ್ಟುಗಳು, ಪ್ರೊ.ಲಕ್ಕಪ್ಪಗೌಡರು ಸಂಪಾದಿಸಿರುವ ಕರ್ನಾಟಕ ಬುಡಕಟ್ಟುಗಳು ಸಂಪುಟ: ಒಂದು, ಕೆ.ಎಸ್.ಸಿಂಗ್ ಅವರ ಪ್ಯೂಪಿಲ್ಸ್ ಆಫ್ ಇಂಡಿಯಾ ಪ್ರಾಜೆಕ್ಟ್ - 1998, ಆರ್.ಜಿ . ಕಾಕಡೆಯವರ ಡಿಪ್ರೆಸ್ಡ್ ಕ್ಲಾಸಸ್ ಆಫ್ ಸೌತ್ ಕೆನರ, ಎಲ್.ಜೆ.ಹಾವನೂರು ವರದಿ, ಜಸ್ಟಿಸ್ ಸದಾಶಿವ ವರದಿಯಲ್ಲೂ ‘ಮನ್ಸ’ ಸಮುದಾಯದ ಬಗ್ಗೆ ಮಾಹಿತಿಗಳಿವೆ. ಇಷ್ಟಾದರೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮನ್ಸರನ್ನು ಸೇರಿಸದಿರುವುದು ಅಧಿಕಾರಿಗಳು ತಮ್ಮ ಅಜ್ಞಾನದಿಂದ ಮಾಡಿರುವ ಅಚಾತುರ್ಯವಷ್ಟೆ. ಇದರಿಂದಾಗಿ ಸಂಕಷ್ಟ ಅನುಭವಿಸುತ್ತಿರುವವರು ಮಾತ್ರ ಮುಗ್ಧ ಮನ್ಸರು. ಮೇರರು, ಮುಂಡಾಲರು, ಬಾಕುಡ ಮತ್ತು ಮನ್ಸರು ಹೊಲೆಯರಲ್ಲಿನ ಒಂದು ವರ್ಗ ಎಂದು ಪರಿಗಣಿಸುತ್ತಾರೆ. ಇವರನ್ನೇ ಕೇರಳದಲ್ಲಿ ಪುಲವರು, ಪುಲಯರು, ಪೊಲವರ್ ಎಂತಲೂ ಕರೆಯುತ್ತಾರೆ. ಮನ್ಸರನ್ನು ಧಿಕ್ಕ ಎಂತಲೂ ಅತ್ಯಂತ ನಿಕೃಷ್ಟವಾಗಿ ಕರೆಯುತ್ತಾರೆ. ಮೂಲತಃ ಈ ಸಮುದಾಯವನ್ನು ಜೀತದ ಆಳುಗಳಾಗಿ ಇಟ್ಟುಕೊಂಡು ಕೃಷಿಗೆ ಸಂಬಂಧಿಸಿದ, ಮನೆ ಚಾಕರಿಯ, ದನಕರು ಮೇಯಿಸುವ ಕಷ್ಟದ ಕೆಲಸಗಳಲ್ಲಿ ಕೂಲಿಯಾಳುಗಳಾಗಿಯೂ ಬಳಸುತ್ತಾರೆ. ಮೂಲದ ಧಿಕ್ಕ ನೀರು ಕುಡಿದ ಅಂಗಳದ ಒಪ್ಪಿಗೆ ಇಲ್ಲದೆ ಮತ್ತೊಂದು ಅಂಗಳದ ಕೆಲಸಕ್ಕೆ ಹೋಗುವಂತಿಲ್ಲ. ಲಾಭವೇ ಆಗಲಿ ನಷ್ಟವೇ ಆಗಲಿ ಧಿಕ್ಕನ ಮಕ್ಕಳು ನೀರು ಕುಡಿದ ಅಂಗಳವನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅವನ ಒಡೆಯನ ದುಃಖ, ನೋವು, ಕಷ್ಟ ಕಟ್ಟಳೆಗಳಲ್ಲಿ ತಾನೂ ಮೀಯಬೇಕು. ಮೂರೂ ಹೊತ್ತು ಅಲ್ಲೇ ಬಿಟ್ಟಿ ಚಾಕರಿ ಮಾಡುತ್ತಾ ಬದುಕು ಸವೆಸಬೇಕು. ಇಲ್ಲದಿದ್ದಲ್ಲಿ ಒಡೆಯನ ಮನೆಯವರ ಬೈಗುಳ, ಹೊಡೆತಗಳನ್ನು ಕಲ್ಪಿಸಿಕೊಳ್ಳಲಸಾಧ್ಯ. ಈ ವಿಷಯದಲ್ಲಿ ಮನ್ಸರ ಅಸಹಜ ಸಾವುಗಳೂ ಕೂಡ ತೀರಾ ಭೀಕರವಾಗಿರುತ್ತವೆ! ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯನ್ನು ಮತ್ತೊಮ್ಮೆ ತಿರುವಿಹಾಕಿ, ಮನ್ಸ ಸಮುದಾಯದ ಚೋಮನ ಬದುಕು ನಿಮ್ಮ ಮುಂದೆ ದಾರುಣವಾಗಿ ತೆರೆದುಕೊಳ್ಳುತ್ತದೆ. ನೀರಿನಲ್ಲಿ ಮುಳುಗುತ್ತಿದ್ದ ಚೋಮನ ಮಗ ನೀಲನನ್ನು ನೋಡಿದ ಬ್ರಾಹ್ಮಣ ಮಾಣಿಯೋರ್ವ ಮರುಕಪಟ್ಟು ನೀರಿನಿಂದ ಮೇಲಕ್ಕೆಳೆದು ಹಾಕಲು ನೋಡಿದರೆ ಎದುರಾದ ಸಮಸ್ಯೆಯಾದರೂ ಏನು..? ಮುಳುಗುವ ಮನ್ಸರ ಕುಟ್ಟಿಯನ್ನು ಮುಟ್ಟಿದರೆ ಬ್ರಾಹ್ಮಣ್ಯಕ್ಕೆ ಮಾಸದ ಮೈಲಿಗೆಯಾದಂತೆ ಎಂದು ಆತನನ್ನು ಹೆದರಿಸಿದರೇ ಹೊರತು ಪ್ರಾಣರಕ್ಷಣೆಯ ಮಾನವೀಯತೆಯನ್ನು ಅಲ್ಲಿನ ವೈದಿಕರು ಮೆರೆಯಲಿಲ್ಲ! ‘‘ಮನ್ಸ ಬಿಟ್ಟು ಇತರ ಯಾವ ಕರಟಿಹೋದ ಜಾತಿಯವನಾಗಿದ್ದರೂ ನನ್ನ ಮಗ ನೀಲ ಬದುಕುಳಿಯುತ್ತಿದ್ದ..’’ ಎಂದು ಚೋಮ ತನ್ನ ಜಾತಿಯನ್ನೇ ಶಪಿಸಿಕೊಳ್ಳುವ ದೃಶ್ಯ ಇಡೀ ಜಾತಿಗ್ರಸ್ಥರ ಮನಸ್ಸಿಗೇ ಬೆಂಕಿ ಇಟ್ಟಂಗಾಗುತ್ತದೆ. ಇಷ್ಟೆಲ್ಲ ಅಸ್ಪಶ್ಯತೆಯ ನೋವುಗಳನ್ನು ಅನುಭವಿಸಿದರೂ ಈ ಸಮುದಾಯ ಸಾಂಸ್ಕೃತಿಕವಾಗಿ ಒಂದಷ್ಟು ಶ್ರೀಮಂತಿಕೆಯಿಂದ ಕೂಡಿದೆ ಅನ್ನಬಹುದು. ಮನ್ಸರಲ್ಲಿ ಭೂತಾರಾಧನೆ ಅತಿ ಮುಖ್ಯ ಆರಾಧನೆ. ಇವರ ಹಬ್ಬಗಳು, ಅವೈದಿಕ ಪರಂಪರೆಯ ಆಚರಣೆಗಳು ಸಾಂಸ್ಕೃತಿಕವಾಗಿ ಅನನ್ಯವಾಗಿವೆ. ಅಂತೆಯೇ ತುಳುನಾಡಿನ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಮನ್ಸ ಕುಲದ ಅವಳಿಗಳಾದ ‘ಕಾನದ-ಕಟದ’ ಎಂಬ ಸಾಂಸ್ಕೃತಿಕ ವೀರರ ಇತಿಹಾಸ ಇಡೀ ತುಳುನಾಡಿನಲ್ಲೇ ಪ್ರಸಿದ್ಧವಾದುದು. ಇಷ್ಟೆಲ್ಲ ಹಿನ್ನೆಲೆಯುಳ್ಳ ಮನ್ಸರು ಇಂದು ಧ್ವನಿ ಇಲ್ಲದವರಾಗಿರುವುದು ದುರಂತ! ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ತಮ್ಮ ಮನ್ಸ ಜಾತಿಯ ಹೆಸರು ಸೇರಿಸಿ ತಮಗೊಂದು ಅಸ್ಮಿತೆ ನೀಡಬೇಕೆಂದು ಅನೇಕ ವರ್ಷಗಳಿಂದ ಬಂದಬಂದ ಸರಕಾರಗಳನ್ನೆಲ್ಲ ಮನ್ಸರು ಅಂಗಲಾಚುತ್ತಿದ್ದಾರೆ. ‘ಅಹಿಂದ’ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಲು ದೂರದ ಮೂಡಬಿದಿರೆಯಿಂದ ಅನೇಕ ಸಲ ಬಂದ ಮನ್ಸ ಸಮುದಾಯದ ನಿಯೋಗಕ್ಕೆ ಸಾಮಾಜಿಕ ನ್ಯಾಯದ ಹರಿಕಾರ, ‘ಜನಪ್ರಿಯ’ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಲೂ ಆಗದೆ ಸೋತು ಬರಿಗೈಯಲ್ಲಿ ವಾಪಸಾಗಿದೆ! ಬರುವ ಸರಕಾರಗಳಾದರೂ ಮನ್ಸರನ್ನು ಕನಿಷ್ಠ ಮನುಷ್ಯರಂತೆ ನೋಡುವ ಹೃದಯ ಹೊಂದಬೇಕಿದೆ.
ಉಕ್ಕಿನ ಉತ್ಪನ್ನಗಳ ಆಮದಿನ ಮೇಲೆ ಮೂರು ವರ್ಷಗಳ ಅವಧಿಗೆ ಸುಂಕ; ಚೀನಾದ ಕಳಪೆ ಗುಣಮಟ್ಟದ ಕಪಾಳಕ್ಕೆ ಹೊಡೆದ ಭಾರತ!
ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಬರುವ ಕಳಪೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳ ಮೇಲೆ, ಭಾರತ ಮೂರು ವರ್ಷಗಳ ಅವಧಿಗೆ ಆಮದು ಸುಂಕ ವಿಧಿಸಿ ಹೊಸ ಆದೇಶ ಜಾರಿ ಮಾಡಿದೆ. ದೇಶೀಯ ಉಕ್ಕು ಉದ್ಯಮವು ಹಾನಿಗೊಳಗಾಗುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತದ ಈ ನಿರ್ಧಾರ ಸ್ಥಳಿಯ ಉಕ್ಕು ಉದ್ಯಮವನ್ನು ಸದೃಢಗೊಳಿಸುವುದಲ್ಲದೇ, ವಿದೇಶಗಳ ಕಳಪೆ ಗುಣಮಟ್ಟದ ಉಕ್ಕು ಆಮದನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ. ಇಲ್ಲಿದೆ ಮಾಹಿತಿ.
ಸಮಾಜಮುಖಿ ಸಂವೇದನೆಯನ್ನು ಹೊಂದಿರುವ ಕತೆಗಳು
ಎಂ. ಅಶೀರುದ್ದೀನ್ ಸಾರ್ತಬೈಲ್ ಅವರ ಮೊದಲ ಸಣ್ಣ ಕತೆಗಳ ಸಂಕಲನ ‘ಪಾಸ’ ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ಕನ್ನಡದ ಕಥಾ ಸಂಕಲನವೊಂದು ತುಳು ಭಾಷೆಯ ಶೀರ್ಷಿಕೆಯನ್ನು ಹೊಂದಿರುವುದು ವಿಶೇಷ. ಪಾಸ ಎಂದರೆ ತುಳುವಿನಲ್ಲಿ ಉಪವಾಸ ಎಂದರ್ಥ. ಮುಖ್ಯವಾಗಿ ಇದು ಮುಸ್ಲಿಮರ ರಮಝಾನ್ ಸಂದರ್ಭದ ಉಪವಾಸಕ್ಕೆ ಅನ್ವಯಿಸುವಂತಹದ್ದು. ‘ಉಪವಾಸ’ ಪವಿತ್ರವೂ ಹೌದು, ದೇಹ ದಂಡನೆಯೂ ಹೌದು ಎಂದು ಲೇಖಕರು ಮುನ್ನುಡಿಯಲ್ಲಿ ತಿಳಿಸುತ್ತಾರೆ. ಮುಂದುವರಿದು ಉಪವಾಸ ಹಸಿವನ್ನು ನೆನಪಿಸುತ್ತದೆ ಹಾಗೂ ಹಸಿದಿರುವ ಜನರನ್ನು ನೆನಪಿಸುತ್ತದೆ ಎಂದಿರುವುದು ಅರ್ಥಪೂರ್ಣವೆನಿಸುತ್ತದೆ. ಅಶೀರುದ್ದೀನ್ ವೃತ್ತಿಯಲ್ಲಿ ಶಿಕ್ಷಕರು. ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿರುವವರು. ಅವರಲ್ಲಿ ಸಾಮಾಜಿಕ ಪ್ರಜ್ಞಾವಂತಿಕೆ ಹಾಗೂ ಸಾಹಿತ್ಯಿಕ ಆಸಕ್ತಿ ಜೊತೆಗೂಡಿದೆ. ಹೀಗಾಗಿ ಈ ಸಂಕಲನದಲ್ಲಿರುವ ಕತೆಗಳು ಸಮಾಜಮುಖಿ ಸಂವೇದನೆಯನ್ನು ಹೊಂದಿವೆ. ಈ ಸಂಕಲನದಲ್ಲಿ ೧೬ ಕತೆಗಳಿವೆ. ಇವುಗಳಲ್ಲಿ ‘ಮಸೀದಿಯ ಕಲ್ಲು’, ‘ಮಸೀದಿಯ ಕಲೆಕ್ಷನ್’, ‘ಒಂದು ತುಂಡು ಮಾಂಸ’, ‘ಪಾಸ’, ‘ಬಡ್ಡಿಮಗ’, ‘ಒಂದು ಕೊಂಡೆ ಹಾಲು’, ‘ಕಿಟ್’, ‘ದಾಡಿವಾಲ’ ಮನಸ್ಸನ್ನು ತಟ್ಟುತ್ತವೆ. ಮುಸ್ಲಿಮ್ ಲೇಖಕರ ಕತೆಗಳೆಂದರೆ ಕೇವಲ ಮುಸ್ಲಿಮ್ ಸಂವೇದನೆಯ ಕತೆಗಳೆಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಹಿಂದೂ ಮತ್ತು ಮುಸ್ಲಿಮರು ನೆರೆಹೊರೆಯವರಾಗಿ ಜೀವನ ಮಾಡುವಾಗ ಸಹಜವಾಗಿಯೇ ಮಾನವೀಯ ಸಂವೇದನೆ ಎಲ್ಲವನ್ನೂ ಮೀರಿ ನಿಲ್ಲುತ್ತದೆ. ಅಶೀರುದ್ದೀನ್ ಕತೆಗಳಲ್ಲಿ ಇಂತಹ ಗುಣಗಳನ್ನು ಗುರುತಿಸಬಹುದು. ‘ಮಸೀದಿಯ ಕಲ್ಲು’ ಕೋಮುವಾದಿಗಳ ಕಿಡಿಗೇಡಿತನಕ್ಕೆ ಹೇಗೆ ಸ್ವಧರ್ಮೀಯನಾಗಿರುವ ಬಡವನೊಬ್ಬ ತೊಂದರೆಗೀಡಾಗುತ್ತಾನೆ ಎಂಬುದನ್ನು ನಿರೂಪಿಸುತ್ತದೆ. ‘ಮಸೀದಿಯ ಕಲೆಕ್ಷನ್’ ಮತ್ತು ‘ಬಡ್ಡಿ ಮಗ’ ಕತೆಗಳು ಧಾರ್ಮಿಕ ಡಾಂಭಿಕತನವನ್ನು ಬಯಲಿಗೆಳೆಯುತ್ತವೆ. ಹೇಳುವುದೊಂದು ಮಾಡುವುದು ಇನ್ನೊಂದು ಎನ್ನುವಂತಹ ಮಾದರಿಯ ವ್ಯಕ್ತಿಗಳು ಎಲ್ಲ ಮತ, ಧರ್ಮಗಳಲ್ಲೂ ಇದ್ದಾರೆ ಎಂಬುದನ್ನು ಈ ಕತೆಗಳು ತೆರೆದಿಡುತ್ತವೆ. ‘ಒಂದು ಕೊಂಡೆ ಹಾಲು’ ಮತ್ತು ‘ಕಿಟ್’ ಕತೆಗಳು ಮತೀಯ ಸಾಮರಸ್ಯ, ಮಾನವೀಯತೆಯಗಳಿಗೆ ಕನ್ನಡಿ ಹಿಡಿಯುತ್ತವೆ. ಈ ಸಂಕಲನದ ಶೀರ್ಷಿಕೆ ಹೊತ್ತ ಕತೆ ‘ಪಾಸ’ ಪ್ರಾತಿನಿಧಿಕವಾದ ಕತೆಯಾಗಿ ನಿಲ್ಲುವಂತಹ ಅರ್ಹತೆಯನ್ನು ಪಡೆಯುತ್ತದೆ. ಸಹಜವಾಗಿರುವ ಮಾನವೀಯ ಸಂಬಂಧಗಳ ಬಂಧ ಹಾಗೂ ಅಂತಃಕರಣದ ಭಾವನೆಗಳು ಸಂಕುಚಿತ ಕೋಮುವಾದವನ್ನು ಮೀರಿ ನಿಲ್ಲುವಂತಹ ವಾಸ್ತವ ಚಿತ್ರಣ ಇಲ್ಲಿ ಕಾಣುತ್ತದೆ. ಇದೊಂದು ಯಶಸ್ವಿ ಕತೆ. ‘ದಾಡಿವಾಲ’ ಎಂಬ ಕಿರು ಕತೆ ಗಡ್ಡ ಬಿಟ್ಟ ಮುಸ್ಲಿಮರನ್ನೆಲ್ಲ ಉಗ್ರಗಾಮಿಯೆಂದು ಅಪಾರ್ಥ ಮಾಡಿಕೊಳ್ಳುವವರ ಭ್ರಮೆಯನ್ನು ಕಳಚುತ್ತದೆ. ಅಶೀರುದ್ದೀನ್ ಅವರ ಕೆಲವು ಕತೆಗಳು ಅತ್ಯಂತ ಸರಳ ರೇಖೆಯಲ್ಲಿ ಸಾಗುತ್ತ ಅವಸರದ ಅಂತ್ಯ ಕಾಣುತ್ತವೆ. ಒಂದರೆಡು ಕತೆಗಳು ತೆಳು ಭಾವನೆಗಳಿಗೆ ಸೀಮಿತಗೊಳ್ಳುತ್ತವೆ. ಕತೆಗಳ ಯಶಸ್ಸು ಕಲೆಗಾರಿಕೆಯ ಸೂಕ್ಷ್ಮ ಹಾಗೂ ಸಂಕೀರ್ಣತೆಯೊಂದಿಗೆ ಹೆಣೆದುಕೊಳ್ಳುವುದರಲ್ಲಿದೆ. ಇದು ಲೇಖಕರ ಮೊದಲ ಕೃತಿಯಾಗಿರುವುದರಿಂದ ಇವೆಲ್ಲ ಸಹಜ. ಆದರೆ ಅಶೀರುದ್ದೀನ್ಅವರಿಗೆ ಕತೆ ಕಟ್ಟುವ ವಿಧಾನ ತಿಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾಹಿತ್ಯದ ಹೆಚ್ಚಿನ ಬೆಳವಣಿಗೆಯನ್ನು ಅವರಿಂದ ನಿರೀಕ್ಷಿಸಬಹುದು.
ಬೆಂಗಳೂರು: ಕರ್ನಾಟಕ ರಾಜಕೀಯದ ರಣರಂಗದಲ್ಲಿ ಇದೀಗ ಕುರುಕ್ಷೇತ್ರ'ಶುರುವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರದಂತೆ ಸಿಎಂ ಪಟ್ಟಕ್ಕಾಗಿ ಡಿ ಕೆ ಶಿವಕುಮಾರ್ ಅವರು ಪಣ ತೊಟ್ಟಿದ್ದಾರೆ. ಸ ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗಜಗ್ಗಾಟ ಇದೀಗ ತಾರಕಕ್ಕೇರಿದ್ದು, ಹೊಸ ವರ್ಷದ ಹೊತ್ತಲಿ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ
ಹೊಸದಿಲ್ಲಿ: ಗಿಗ್ ಮತ್ತು ವಿತರಣಾ ಕಾರ್ಮಿಕರು ಡಿ.31ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಹೊಸ ವರ್ಷದ ಮುನ್ನಾದಿನ ದೇಶದ ಹಲವು ನಗರಗಳಲ್ಲಿ ಆಹಾರ ವಿತರಣೆ, ತ್ವರಿತ ವಾಣಿಜ್ಯ ಹಾಗೂ ಇ–ಕಾಮರ್ಸ್ ಸೇವೆಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೊಸ ವರ್ಷದ ಮುನ್ನಾದಿನ ಆನ್ಲೈನ್ ಆರ್ಡರ್ಗಳಿಗೆ ವರ್ಷದ ಅತ್ಯಂತ ಬೇಡಿಕೆಯ ದಿನವಾಗಿರುವುದರಿಂದ, ಮುಷ್ಕರದ ಪರಿಣಾಮ ಆಹಾರ, ದಿನಸಿ ಮತ್ತು ಕೊನೆಯ ಕ್ಷಣದ ಖರೀದಿಗಳ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. Zomato, Swiggy, Blinkit, Zepto, Amazon ಮತ್ತು Flipkart ಪ್ಲಾಟ್ಫಾರ್ಮ್ಗಳಿಗೆ ಸಂಬಂಧಿಸಿದ ವಿತರಣಾ ಪಾಲುದಾರರು ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ Indian Federation of App-based Transport Workers (IFAT) ಮುಷ್ಕರಕ್ಕೆ ಕರೆ ನೀಡಿದ್ದು, ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿ–ಎನ್ಸಿಆರ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕೆಲವು ಭಾಗಗಳ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಅಪ್ಲಿಕೇಶನ್ ಆಧಾರಿತ ವಾಣಿಜ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ವಿತರಣಾ ಕಾರ್ಮಿಕರ ಆದಾಯ ಕುಸಿಯುತ್ತಿದ್ದರೂ, ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಒಕ್ಕೂಟಗಳು ಆರೋಪಿಸಿವೆ. ಅಸುರಕ್ಷಿತ ವಿತರಣಾ ಗುರಿಗಳು, ಉದ್ಯೋಗ ಭದ್ರತೆಯ ಕೊರತೆ, ಕೆಲಸದ ಘನತೆಯ ಅಭಾವ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದಿರುವುದು ಪ್ರಮುಖ ಸಮಸ್ಯೆಗಳೆಂದು ತಿಳಿಸಿವೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಕಳುಹಿಸಿದ ಪತ್ರದಲ್ಲಿ, IFAT ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ಅಪ್ಲಿಕೇಶನ್ ಆಧಾರಿತ ಸಾರಿಗೆ ಮತ್ತು ವಿತರಣಾ ಕಾರ್ಮಿಕರನ್ನು ತಾವು ಪ್ರತಿನಿಧಿಸುತ್ತಿರುವುದಾಗಿ ಹೇಳಿದೆ. ಡಿ.25ರಂದು ನಡೆದ ರಾಷ್ಟ್ರವ್ಯಾಪಿ ದಿಢೀರ್ ಮುಷ್ಕರದಿಂದ ಹಲವಾರು ನಗರಗಳಲ್ಲಿ 50–60 ಶೇಕಡಾ ಸೇವಾ ವ್ಯತ್ಯಯ ಉಂಟಾಗಿತ್ತು. ಆದರೆ, ಅದರ ನಂತರವೂ ಪ್ಲಾಟ್ಫಾರ್ಮ್ ಕಂಪೆನಿಗಳು ಕಾರ್ಮಿಕರೊಂದಿಗೆ ಸಂವಾದಕ್ಕೆ ಮುಂದಾಗಿಲ್ಲ ಎಂದು ಒಕ್ಕೂಟ ಆರೋಪಿಸಿದೆ. ಖಾತೆ ನಿಷ್ಕ್ರಿಯಗೊಳಿಸುವಿಕೆ ಹಾಗೂ ದಂಡಗಳ ಮೂಲಕ ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವುದಾಗಿ ತಿಳಿಸಿದೆ. ಡಿ.31ರಂದು ವಿತರಣಾ ಕಾರ್ಯನಿರ್ವಾಹಕರು ಅಪ್ಲಿಕೇಶನ್ಗಳಿಂದ ಲಾಗ್ಔಟ್ ಆಗುವುದು ಅಥವಾ ಕೆಲಸದ ಹೊರೆ ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ, ಗ್ರಾಹಕರು ಆರ್ಡರ್ ವಿಳಂಬ ಮತ್ತು ರದ್ದತಿಯನ್ನು ಎದುರಿಸಬೇಕಾಗಬಹುದು. ಪುಣೆ, ಬೆಂಗಳೂರು, ದಿಲ್ಲಿ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಇದರ ಪರಿಣಾಮ ಹೆಚ್ಚು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಪ್ಲಾಟ್ಫಾರ್ಮ್ ಕಂಪೆನಿಗಳನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು, ಅತಿವೇಗದ ಮತ್ತು ಅಸುರಕ್ಷಿತ ವಿತರಣಾ ಮಾದರಿಗಳನ್ನು ನಿಷೇಧಿಸಬೇಕು, ಐಡಿ ನಿರ್ಬಂಧಿಸುವಿಕೆಗೆ ಕಡಿವಾಣ ಹಾಕಬೇಕು ಹಾಗೂ ಆರೋಗ್ಯ ರಕ್ಷಣೆ, ಅಪಘಾತ ವಿಮೆ ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ. ಸರಕಾರ, ಪ್ಲಾಟ್ಫಾರ್ಮ್ ಕಂಪೆನಿಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ಒಳಗೊಂಡ ತ್ರಿಪಕ್ಷೀಯ ಮಾತುಕತೆಗಳನ್ನು ತಕ್ಷಣ ಆರಂಭಿಸಬೇಕು ಎಂದು ಮನವಿ ಮಾಡಿದೆ.
Warren Buffett: ಮನಿ ಮ್ಯಾಗ್ನೆಟ್ ವಾರೆನ್ ಬಫೆಟ್ ಇಲ್ಲದ ವ್ಯಾಪಾರ ಜಗತ್ತು: 2025ರ ಕೊನೆಯ ದಿನದ ಚರ್ಚೆ
ಟ್ರೇಡಿಂಗ್ ಮಾಂತ್ರಿಕ, ಸ್ಟಾಕ್ ಮಾರ್ಕೆಟ್ ದಿಗ್ಗಜ ಎಂದೇ ಖ್ಯಾತರಾದ ಅಮೇರಿಕನ್ ಉದ್ಯಮಿ ವಾರೆನ್ ಬಫೆಟ್ ಅವರು ಬೆರ್ಕ್ಶೈರ್ ಹ್ಯಾಥವೇ ಕಂಪನಿಯ ನೇತೃತ್ವದಿಂದ ಹಿಂದೆ ಸರಿಯುತ್ತಿರುವುದು ಜಾಗತಿಕ ವ್ಯಾಪಾರ ಜಗತ್ತಿನಲ್ಲಿ ಅಪರೂಪದ ಮತ್ತು ಮಹತ್ವದ ಕ್ಷಣ ಎಂದು ಕರೆಯಲಾಗುತ್ತಿದೆ. ಕಾರ್ಪೊರೇಟ್ ಇತಿಹಾಸದಲ್ಲಿ ಇವರ ನಿರ್ಗಮನಗಳಿಗೆ ಜಾಗತಿಕವಾಗಿ ಗಮನ ಸೆಳೆದಿದೆ. ಈ ವಾರದ ನಂತರ, ಸುಮಾರು 900 ಬಿಲಿಯನ್ ಡಾಲರ್
ಕುಮದ್ವತಿ ನದಿಗೆ ನಿರ್ಮಿಸಿದ ಬಾಂದಾರಗಳಲ್ಲಿ ನೀರು ಸೋರಿಕೆ; ರೈತರಲ್ಲಿ ಹೆಚ್ಚಿದ ಆತಂಕ
ರಟ್ಟೀಹಳ್ಳಿ ತಾಲೂಕಿನಲ್ಲಿ ಕುಮದ್ವತಿ ನದಿಗೆ ನಿರ್ಮಿಸಿದ ಬಾಂದಾರಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಹಿರೇಮೊರಬ, ಹಿರೇಮಾದಾಪುರ ಗ್ರಾಮಗಳ ಬಳಿ ನಿರ್ಮಿಸಿದ ಬಾಂದಾರಗಳಲ್ಲಿ ಗೇಟ್ ಅಳವಡಿಸಿದರೂ ನೀರು ವ್ಯರ್ಥವಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಮಾಸೂರು ಬಾಂದಾರ ಬಳಿ ನೀರು ಖಾಲಿಯಾಗಿದೆ. ಕೂಡಲೇ ಅಧಿಕಾರಿಗಳು ಬಾಂದಾರಗಳನ್ನು ದುರಸ್ತಿಪಡಿಸಿ ನೀರು ನಿಲ್ಲುವಂತೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಬೆಳೆಗಳಿಗೆ ಅನುಕೂಲವಾಗಲಿದೆ.
ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅಧಿಕೃತ ಭೂದಾಖಲೆಯೇ ನೂರಮೂವತ್ತು ವರ್ಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟಿಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟಿಷರು ಹೋಗಿ ಈಗಾಗಲೇ ಎಪ್ಪತ್ತೈದು ವರ್ಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ.ಮೀ.ಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಭಾಗದಲ್ಲಿದೆ. ಇಲ್ಲಿಂದ ಜೋಗಕ್ಕೆ ವೈಮಾನಿಕ ದೂರ ಸುಮಾರು ಒಂದು ಕಿ.ಮೀ. ಇರಬಹುದು. ರಸ್ತೆಯಲ್ಲಿ ಸಾಗಿದರೆ ಅದು ಸುಮಾರು ಎಂಟು ಕಿ.ಮೀ.ಗಳು ಅಗಬಹುದು. ಈ ಹಳ್ಳಿಯ ಹೆಸರು ಪಡನ್ ಬೈಲು. ಇದು ಆಡಳಿತಾತ್ಮಕವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಸೇರುತ್ತದೆ. ಈ ಹಳ್ಳಿಯ ಪಕ್ಕದಲ್ಲಿ, ಅಂದರೆ ಎರಡೂವರೆ ಕಿ.ಮೀ.ಗಳಷ್ಟು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಈ ಹೆದ್ದಾರಿಯಿಂದ ಒಂದು ಮಣ್ಣುರಸ್ತೆ ಕವಲೊಡೆದು ಈ ಹಳ್ಳಿಯ ಮೂಲಕ ಸಾಗುತ್ತದೆ. ಈ ರಸ್ತೆ ಮುಂದೆ ಎಂಟರಿಂದ ಹತ್ತು ಕಿ.ಮೀ. ಕ್ರಮಿಸಿ ಕಾರ್ಗಲ್ ಎಂಬ ಊರಿನ ಮೂಲಕ ಮತ್ತೆ ಅದೇ ಹೆದ್ದಾರಿಯನ್ನು ಸೇರಿಕೊಳ್ಳುತ್ತದೆ. ಇದನ್ನು ಜಿಲ್ಲಾ ಮುಖ್ಯರಸ್ತೆ ಎಂದು ಗುರುತಿಸಿ ಕಿ.ಮೀ. ಕಲ್ಲುಗಳನ್ನು ಹಾಕಲಾಗಿದೆ. ಆದರೆ ಈ ರಸ್ತೆಯಲ್ಲಿ ಬೇಸಿಗೆಯಲ್ಲೇ ವಾಹನಗಳು ತಿರುಗಾಡಲು ಸಾಧ್ಯವಿಲ್ಲದಂತಹ ಸ್ಥಿತಿಯಿದೆ. ಕನಿಷ್ಠ ಜಲ್ಲಿಕಲ್ಲುಗಳನ್ನು ಕೂಡ ಇನ್ನೂ ಕಾಣದಿರುವ ಜಿಲ್ಲಾ ಮುಖ್ಯ ರಸ್ತೆ ಎಂದು ಕರೆಸಿಕೊಂಡಿರುವ ರಸ್ತೆ ಇದಾಗಿದೆ ಎಂದರೆ ನೀವು ನಂಬಲೇಬೇಕು. ಇನ್ನು ಮಳೆಗಾಲದಲ್ಲಂತೂ ಕಾಲ್ನಡಿಗೆಯಷ್ಟೇ ಸಾಧ್ಯ. ಆಟೊರಿಕ್ಷಾಗಳಾಗಲೀ, ಬೈಕು, ಕಾರುಗಳಾಗಲೀ ಮಳೆಗಾಲದಲ್ಲಿ ಈ ರಸ್ತೆಗಿಳಿಯಲು ಅಸಾಧ್ಯವೆನ್ನುವಂತಹ ಪರಿಸ್ಥಿತಿಯಿದೆ. ಪಡನ್ ಬೈಲಿನ ಜನರು ಸೇರಿಕೊಂಡು ಶ್ರಮದಾನ ಮಾಡಿ ತಮ್ಮ ಊರಿನವರೆಗಿನ ರಸ್ತೆಯನ್ನು ವರ್ಷವರ್ಷವೂ ರಿಪೇರಿ ಮಾಡುತ್ತಿರುವುದರಿಂದಾಗಿ ಬೇಸಿಗೆಯಲ್ಲಿ ಒಂದಷ್ಟು ಶ್ರಮ ವಹಿಸಿ ವಾಹನಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಬಹುದು ಅಷ್ಟೆ. ಯಾರಿಗಾದರೂ ಆರೋಗ್ಯ ಏರುಪೇರಾಗಿ ನಡೆಯಲಾರದಂತಹ ಪರಿಸ್ಥಿತಿ ಬಂದರೆ ಕಂಬಳಿ ಇಲ್ಲವೇ ಬೆಡ್ಶೀಟಿನಲ್ಲಿ ಮಲಗಿಸಿ ನಾಲ್ಕಾರು ಜನರು ಸೇರಿ ಎತ್ತಿಕೊಂಡು ಹಲವು ಕಿ.ಮೀ. ಕ್ರಮಿಸಿ ಹೆದ್ದಾರಿ ಸೇರಿ ಅಲ್ಲಿಂದ ಯಾವುದಾದರೂ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಈಗಲೂ ಇದೆಯೆಂದರೆ ಅಲ್ಲಿನ ಪರಿಸ್ಥಿತಿಯ ದಾರುಣತೆಯನ್ನು ಗ್ರಹಿಸಬಹುದು. ಈ ರಸ್ತೆಯಲ್ಲಿ ಕಾರ್ಗಲ್ವರೆಗೂ ಹಲವಾರು ಮನೆಗಳಿವೆ. ಅವರುಗಳಂತೂ ಏಳೆಂಟು ಕಿ.ಮೀ.ಗಳು ಈ ರಸ್ತೆಯೆಂದು ಕರೆಯಲ್ಪಡುವ ಆದರೆ ವಾಹನಗಳು ಚಲಿಸಲಾಗದಂತಿರುವ ದಾರಿಯಲ್ಲಿ ಸಾಗಿ ಬರಬೇಕಾಗುತ್ತದೆ. ಶಾಲೆಗಳಿಗೆ ಹೋಗುವ ಮಕ್ಕಳಂತೂ ಮಳೆಗಾಲದಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ. ರಭಸವಾಗಿ ಸುರಿಯುವ ಭಾರೀ ಮಳೆ ಹಾಗೂ ರಭಸದ ಕುಳಿರ್ಗಾಳಿಯ ಜೊತೆಗೆ ಕಾಡಿನ ರಸ್ತೆಯ ಕೆಸರಿನ ಮಧ್ಯೆ ಹಲವು ಕಿ.ಮೀ.ಗಳಷ್ಟು ನಡೆದುಕೊಂಡೇ ಸಾಗಬೇಕಾದ ದುಸ್ಥಿತಿ. ಅಲ್ಲಿನವರಿಗೆ ಅಲ್ಪಸ್ವಲ್ಪ ಭೂಮಿಯಿದೆ. ಭತ್ತ, ಅಡಿಕೆ ಪ್ರಧಾನವಾಗಿ ಬೆಳೆಯುತ್ತಾರೆ. ಅಡಿಕೆಗೆ ರೋಗ ಈಗಾಗಲೇ ಹರಡತೊಡಗಿದೆ. ಈ ಹಳ್ಳಿ ಸ್ವಯಂಪೂರ್ಣ ಹಳ್ಳಿಯಂತೆ ಇದೆ. ಮಿಗುತಾಯ ಆದಾಯ ಎನ್ನುವುದು ಇಲ್ಲವೆನ್ನುವಷ್ಟು ಕಡಿಮೆ. ಪಕ್ಕದಲ್ಲೇ ಲೋಕಪ್ರಸಿದ್ಧವೆಂದು ಕರೆಯಲ್ಪಡುವ ಜೋಗ ಜಲಪಾತವಿದೆ. ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ. ದೇಶದ ಒಂದು ಪ್ರಮುಖ ಪ್ರವಾಸಿ ತಾಣವೆಂದು ಜೋಗ ಜಲಪಾತಕ್ಕೆ ಹೆಸರಿದೆ. ಕವಿಗಳಿಗೆ ಸೌಂದರ್ಯ ಹಾಗೂ ರಮ್ಯತೆಯ ಸ್ಫೂರ್ತಿಯಾಗಿ ಕನ್ನಡದ ಕವಿ ನಿಸಾರ್ ಅಹಮದ್ರಿಂದ ನಿತ್ಯೋತ್ಸವ ಕವನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಜಲಪಾತವಿದು. ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಎಂದೆಲ್ಲಾ ಕರ್ನಾಟಕದ ಮೇರು ಕಲಾವಿದ ರಾಜಕುಮಾರ್ರಿಂದ ಹಾಡಿಸಿಕೊಂಡ ತಾಣವಿದು. ಆದರೆ ‘ಜೋಗದ ಸಿರಿಯ ಬೆಳಕು’ ಈ ಭಾಗದ ಜನರ ಬದುಕಿಗೆ ಸಿರಿ ಹೋಗಲಿ ಕನಿಷ್ಠ ಮೂಲಭೂತ ನಾಗರಿಕ ಸೌಲಭ್ಯಗಳಿಗೂ ದಾರಿ ಮಾಡಿಕೊಡಲಿಲ್ಲವೆಂದರೆ ಏನನ್ನಬೇಕು? ಇಷ್ಟೆಲ್ಲಾ ಇದ್ದರೂ ಜೋಗಕ್ಕೆ ಹೊಂದಿಕೊಂಡಿರುವ ಈ ಹಳ್ಳಿಗಳಿಗೆ ಕನಿಷ್ಠ ಜಲ್ಲಿ ರಸ್ತೆಯೂ ಇಲ್ಲ. ವಿದ್ಯುತ್ ಸಂಪರ್ಕವಿದ್ದರೂ ಮಿಕ್ಸಿ ನಡೆಸಲೂ ಕೂಡ ವೋಲ್ಟೇಜ್ ಇರುವುದಿಲ್ಲವೆಂದರೆ ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ಅಭಿವೃದ್ಧಿಯ ಅಣಕವಲ್ಲವೇ?! ಈ ಹಳ್ಳಿಯು ನಮ್ಮ ನಾಡಿನ ಇಂತಹ ಸಾವಿರಾರು ಹಳ್ಳಿಗಳನ್ನು ಪ್ರತಿನಿಧಿಸುತ್ತದೆ ಎನ್ನಬಹುದು. ಇದು ನಮ್ಮ ರಾಜಕೀಯ ಅಧಿಕಾರ ವ್ಯವಸ್ಥೆ ಇಲ್ಲವೇ ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯವಲ್ಲವೇ?! ಈ ಭಾಗವನ್ನು ಕರ್ನಾಟಕದ ಅಧಿಕಾರ ರಾಜಕಾರಣದ ದಿಗ್ಗಜರಲ್ಲಿ ಸ್ಥಾನ ಪಡೆದಿದ್ದ ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹವರು ವಿಧಾನ ಸಭೆಯಲ್ಲಿ ಪ್ರತಿನಿಧಿಸಿದ್ದರು. ಬಂಗಾರಪ್ಪ ಮುಖ್ಯ ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ಕಾಗೋಡು ತಿಮ್ಮಪ್ಪ ಶಾಸಕ, ಸಭಾಪತಿ, ಕಂದಾಯ ಮಂತ್ರಿಯಾಗಿಯೂ ಅಧಿಕಾರ ನಡೆಸಿದವರು. ನಂತರ ಕುಮಾರ್ ಬಂಗಾರಪ್ಪ, ಈಗ ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣರಂತಹವರು ಪ್ರತಿನಿಧಿಸುತ್ತಿದ್ದಾರೆ. ಮಧು ಬಂಗಾರಪ್ಪ ಸಂಫುಟ ಸಚಿವರಾಗಿರುವವರು. ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರು ನಗುತ್ತಿರುವ ಕಟೌಟುಗಳು ಜೋಗ ಜಲಪಾತದ ಸ್ಥಳದಲ್ಲಿ ಈಗಲೂ ನೋಡಬಹುದು. ಅವರುಗಳ ಅದರಲ್ಲಿನ ನಗುಮುಖದ ಅರ್ಥವೇನೋ ಗೊತ್ತಿಲ್ಲ. ಇದು ಕೇವಲ ಈ ಒಂದು ಹಳ್ಳಿಗಷ್ಟೇ ಸೀಮಿತವಾದ ವಿಚಾರವಲ್ಲ ಈ ಶಿವಮೊಗ್ಗ ಜಿಲ್ಲೆಯ ಈ ಭಾಗದ ಹಾಗೂ ಉತ್ತರಕನ್ನಡ ಜಿಲ್ಲೆಯ ಹಲವು ಹಳ್ಳಿಗಳ ಕತೆಗಳು ಹಾಗೂ ಪರಿಸ್ಥಿತಿಗಳು ಇದೇ ರೀತಿಯಲ್ಲಿವೆ. ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಾಣಬಹುದಷ್ಟೇ. ಈ ಎಲ್ಲಾ ಹಳ್ಳಿಗಳಿರುವ ಭಾಗಗಳು ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವ ಪ್ರದೇಶಗಳಾಗಿವೆ ಎನ್ನುವುದನ್ನಿಲ್ಲಿ ಗಮನಿಸಬೇಕು. ಕೆಲವು ವರ್ಷಗಳ ಹಿಂದೆ ಈ ಹಳ್ಳಿಗಾಡುಗಳಿರುವ ಪ್ರದೇಶವನ್ನು ಖಾಸಗಿ ಕಂಪನಿಯೊಂದಕ್ಕೆ ಜೋಗ ಜಲಪಾತದ ಅಭಿವೃದ್ಧಿಯ ಹೆಸರಿನಲ್ಲಿ ಪರಭಾರೆ ಮಾಡಲು ಸರಕಾರಿ ವ್ಯವಸ್ಥೆ ಹೊರಟಿತ್ತು. ಚೆಕ್ ಡ್ಯಾಮ್ ನಿರ್ಮಿಸಿ ಈ ಪ್ರದೇಶವನ್ನು ಮುಳುಗಡೆ ಮಾಡಿ ನೂರಾರು ವರುಷಗಳಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನರನ್ನು ಒಕ್ಕಲೆಬ್ಬಿಸಿ ನಿರ್ವಸಿತರನ್ನಾಗಿ ಮಾಡಿ ಕಾರ್ಪೊರೇಟ್ಗಳಿಗೆ ಭಾರೀ ಲಾಭ ಮಾಡಿಕೊಡುವ ಕುತಂತ್ರ ಅದಾಗಿತ್ತು. ಜೋಗ ಜಲಪಾತ ವರ್ಷವಿಡೀ ತುಂಬಿತುಳುಕುವಂತೆ ಮಾಡುವ ಭಾರೀ ಪ್ರವಾಸೋದ್ದಿಮೆ ಅಭಿವೃದ್ದಿ ಯೋಜನೆ ಎಂದೆಲ್ಲಾ ಅದನ್ನು ಬಿಂಬಿಸಲಾಗಿತ್ತು. ಈ ಭಾಗದ ಜನಸಾಮಾನ್ಯರು ಹಾಗೂ ಪ್ರಕೃತಿಯ ನಾಶಕ್ಕೆ ಕಾರಣವಾಗಬಹುದಾಗಿದ್ದ ಆ ಯೋಜನೆಗೆ ಜನರ ವಿರೋಧ ತೀವ್ರವಾಗಿದ್ದರಿಂದ ಅದು ಜಾರಿಯಾಗಿರಲಿಲ್ಲ. ಈ ಭಾಗದವರೇ ಆಗಿದ್ದ ಕನ್ನಡದ ಸಾಹಿತಿ, ಕತೆಗಾರ ನಾ. ಡಿಸೋಜರು ಹೋರಾಟದಲ್ಲಿ ಇಲ್ಲಿನ ಜನರೊಂದಿಗೆ ನಿಂತಿದ್ದರು. ಅದರಿಂದಾಗಿ ಈ ಭಾಗದ ಹಳ್ಳಿಗಳಷ್ಟೇ ಅಲ್ಲ ಕಾಡು ಹಾಗೂ ಸಾವಿರಾರು ಎಕರೆ ಕೃಷಿಯೋಗ್ಯ ಭೂಪ್ರದೇಶವೂ ಮುಳುಗಡೆಯಾಗುತ್ತಿತ್ತು. ಅದೂ ಅಲ್ಲದೆ ಹಿಂದೆ ಲಿಂಗನಮಕ್ಕಿ ಅಣೆಕಟ್ಟೆಗಾಗಿ ಕೂಡ ಈ ಭಾಗದಿಂದ ಭಾರೀ ಪ್ರಮಾಣದಲ್ಲಿ ಕಲ್ಲು ಮಣ್ಣುಗಳನ್ನು ಬಗೆದು ಸಾಗಿಸಲಾಗಿತ್ತು. ಕಾರ್ಪೊರೇಟ್ಗಳಿಗೆ ಲಾಭದ ಖಜಾನೆಯನ್ನು ತೆರೆದುಕೊಡುವ ಯೋಜನೆಗಳ ಜಾರಿಗಾಗಿನ ಉತ್ಸಾಹ ಹಾಗೂ ಮುತುವರ್ಜಿ ಜನಸಾಮಾನ್ಯರ ವಿಚಾರದಲ್ಲಿ ತೋರದಿರುವವರೇ ನಮ್ಮ ಅಧಿಕಾರ ರಾಜಕಾರಣದಲ್ಲಿರುವವರಲ್ಲಿ ಹೆಚ್ಚಿನವರಾಗಿದ್ದಾರೆ. ಇದು ನಮ್ಮ ಚುನಾವಣಾ ರಾಜಕಾರಣದ ಪ್ರಧಾನ ಭಾಗವಾಗಿರುವುದು ನಾಡಿನ ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದಕ್ಕೆ ಪಕ್ಷಗಳ ಭೇದಗಳೂ ಇಲ್ಲವಲ್ಲ. ಕರ್ನಾಟಕ ಸರಕಾರ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಆಡಳಿತಾಂಗ ಇನ್ನಾದರೂ ತಮ್ಮ ಇರುವಿಕೆಯನ್ನು ಈ ಭಾಗದ ಜನರ ಬದುಕಿಗೆ ಪೂರಕವಾಗಿ ತೋರಿಸುತ್ತಾರೋ.. ಕಾದುನೋಡಬೇಕಾಗಿದೆ. ಜನರು ಸಂಘಟಿತರಾಗಿ ಇದಕ್ಕಾಗಿ ಶ್ರಮಿಸಬೇಕಾದ ಅಗತ್ಯವೂ ಇದೆ. ನಾಡಿನ ಜನರ ಒತ್ತಾಸೆಯೂ ಬೇಕಿದೆ.
ಪವಾರ್ ಕುಟುಂಬದ ಸ್ವಾರ್ಥ ರಾಜಕೀಯಕ್ಕೆ ಬಲಿಪಶುಗಳಾಗುವವರು ಯಾರು?
ಶರದ್ ಪವಾರ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಒಬ್ಬರು ಜಾತ್ಯತೀತ, ಪ್ರಜಾಪ್ರಭುತ್ವ ಸಂರಕ್ಷಕನಂತೆ, ಇನ್ನೊಬ್ಬರು ಅಧಿಕಾರದಲ್ಲಿರುವವರಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅವರು ಬೇರೆ ಬೇರೆ ವೇಷದಲ್ಲಿದ್ದಾರೆ ಅಷ್ಟೆ. ಆದರೆ, ಅವರು ಬೇರೆಬೇರೆಯಲ್ಲ. ಅವರ ಗುರಿ ರಾಜ್ಯದ ಅಭಿವೃದ್ಧಿಯಲ್ಲ ಅಥವಾ ಸಿದ್ಧಾಂತಕ್ಕೆ ಬದ್ಧವಾಗಿರುವುದೂ ಅಲ್ಲ. ಬದಲಾಗಿ, ಬಾರಾಮತಿ ಪವರ್ ಸೆಂಟರ್ ಅನ್ನು ಸಂರಕ್ಷಿಸುವುದು. ಪವಾರ್ದ್ವಯರು ಅಧಿಕಾರದಲ್ಲಿ ಇರುವವರೆಗೆ ಅವರ ಕುಟುಂಬ ಗೆಲ್ಲುತ್ತದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಪವಾರ್ ಕುಟುಂಬದ ಆಟ ಅಸಾಧಾರಣ ವಾಗಿದೆ. ಮತದಾರರಿಗಾಗಲಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಲಿ ಅಥವಾ ರಾಜಕೀಯ ವಿಶ್ಲೇಷಕರಿಗಾಗಲೀ ಸತ್ಯ ಯಾವುದು, ನಾಟಕ ಯಾವುದು ಎಂದು ಅರ್ಥವಾಗದಂತಾಗಿದೆ. ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ ಬಣಗಳು ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡಿವೆ. ಇಷ್ಟಾದರೂ, ಅಜಿತ್ ಪವಾರ್ ಬಿಜೆಪಿ ಸರಕಾರದ ಡಿಸಿಎಂ ಹುದ್ದೆಯಲ್ಲಿ ಆರಾಮವಾಗಿ ಕುಳಿತಿದ್ದಾರೆ. ಸಿದ್ಧಾಂತವನ್ನು ನಂಬುವ ಯಾರಿಗೇ ಆದರೂ ಈ ಆಟ ಆಘಾತಕಾರಿ ಎನ್ನಿಸದೇ ಇರುವುದಿಲ್ಲ. ಹಣ ಮತ್ತು ಅಧಿಕಾರವೇ ಎಲ್ಲಕ್ಕಿಂತ ದೊಡ್ಡದು ಎಂಬಂತೆ ಪವಾರ್ ಕುಟುಂಬ ನಡೆದುಕೊಳ್ಳುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ, ಇಬ್ಬರೂ ಪವಾರ್ಗಳ ನಡುವೆ ಪಕ್ಷ ಛಿದ್ರವಾಗಿರುವುದನ್ನು ಎನ್ಸಿಪಿಯ ಆತ್ಮಕ್ಕಾಗಿ ನಡೆಯುವ ಯುದ್ಧ ಎಂದು ಹೇಳಲಾಯಿತು. ಶರದ್ ಪವಾರ್ ಅವರ ಜಾತ್ಯತೀತ ಮೌಲ್ಯಗಳು ಮತ್ತು ಅಜಿತ್ ಪವಾರ್ ಅವರ ಅಧಿಕಾರದ ಹಸಿವಿನ ನಡುವಿನ ಸಂಘರ್ಷ ಎನ್ನಲಾಯಿತು. ಆದರೆ ಈಗ ಆ ನಿರೂಪಣೆ ಛಿದ್ರವಾಗಿದೆ. ಮುಖವಾಡ ಕಳಚಿಬಿದ್ದಿದೆ. 2023 ರಲ್ಲಿ ಏಕನಾಥ ಶಿಂದೆ-ಬಿಜೆಪಿ ಸರಕಾರವನ್ನು ಸೇರಲು ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ಹಸನ್ ಮುಶ್ರಿಫ್ ಅವರಂತಹ ದಿಗ್ಗಜರೊಂದಿಗೆ ಅಜಿತ್ ಪವಾರ್ ಎನ್ಸಿಪಿಯಿಂದ ಹೊರಬಂದರು.ಅದನ್ನು ದಂಗೆ, ದ್ರೋಹ ಎಂದೆಲ್ಲ ಬಿಂಬಿಸಲಾಯಿತು. ವಿಭಜನೆಯ ಮೊದಲು ಎನ್ಸಿಪಿ ಅಧಿಕಾರದಿಂದ ಹೊರಗುಳಿದಿತ್ತು.ಅದರ ನಾಯಕರಿಗೆ ಈ.ಡಿ., ಸಿಬಿಐ ಭಯದ ಬಿಸಿ ತಟ್ಟಿತ್ತು. ಕಡೆಗೆ ವಿಭಜನೆ ನಂತರ ಅದೇ ಪ್ರಮುಖ ನಾಯಕರು ಮಂತ್ರಿಗಳಾದರು. ಈ.ಡಿ. ಫೈಲುಗಳ ಸದ್ದು ಕೂಡ ಅಡಗಿತ್ತು. ಪ್ರಕರಣವೇ ಮುಚ್ಚಿಹೋಯಿತು. ರಾಜಕೀಯ ಎನ್ನುವುದು ಇವರಿಗೆ ಸಾರ್ವಜನಿಕ ಸೇವೆಯಲ್ಲ, ಅದೊಂದು ‘ಪವಾರ್ ಆಂಡ್ ಫ್ಯಾಮಿಲಿ ಪ್ರೈವೇಟ್ ಲಿಮಿಟೆಡ್’ ಕಂಪೆನಿ! ಇಲ್ಲಿ ಸಿದ್ಧಾಂತ, ಮೌಲ್ಯ, ಪ್ರಜಾಪ್ರಭುತ್ವ ಎಲ್ಲವೂ ಬರೀ ಬೂಟಾಟಿಕೆ. ಹಗಲಿನಲ್ಲಿ ಪಕ್ಷಗಳ ಹೆಸರಿನಲ್ಲಿ ಕಚ್ಚಾಡುವ ನಾಟಕವಾಡುವ ಇವರು, ಕತ್ತಲಾದರೆ ಒಂದೇ ಕಡೆ ಕುಳಿತು ರಾಜ್ಯದ ಸಂಪನ್ಮೂಲವನ್ನು ಹೇಗೆ ಹಂಚಿಕೊಳ್ಳುವುದೆಂದು ಲೆಕ್ಕ ಹಾಕುತ್ತಾರೆ. ಅಧಿಕಾರದ ಕುರ್ಚಿಗಾಗಿ ಮತ್ತು ಅಕ್ರಮವಾಗಿ ಗಳಿಸಿದ ಸಾವಿರಾರು ಕೋಟಿ ಹಣವನ್ನು ಉಳಿಸಿಕೊಳ್ಳುವುದಕ್ಕಾಗಿ ಇವರು ಯಾರ ಕಾಲಿಗೆ ಬೇಕಾದರೂ ಬೀಳುತ್ತಾರೆ, ಯಾರ ಬೆನ್ನಿಗೆ ಬೇಕಾದರೂ ಚೂರಿ ಹಾಕುತ್ತಾರೆ. ಇವರಿಗೆ ಬೇಕಿರುವುದು ಮಹಾರಾಷ್ಟ್ರದ ಅಭಿವೃದ್ಧಿಯಲ್ಲ, ತಮ್ಮ ಕುಟುಂಬದ ಖಜಾನೆಯ ಅಭಿವೃದ್ಧಿ ಮಾತ್ರ! ಇನ್ನು ದ್ರೋಹಕ್ಕೆ ಒಳಗಾದವರು ಎನ್ನಲಾದ ಶರದ್ ಪವಾರ್ ಕೂಡ ಲೋಕಸಭೆ ಚುನಾವಣೆಯಲ್ಲಿ ತಮ್ಮ ನೆಲೆ ಉತ್ತಮಪಡಿಸಿಕೊಳ್ಳುವಷ್ಟು ಸ್ಥಾನ ಗಳಿಸಿದರು. ಅವರು ಸಿಂಪಥಿ ವೋಟುಗಳನ್ನು ಗಳಿಸಿದರು. ಒಂದು ಬಣ ಅಧಿಕಾರ ಅನುಭವಿಸುತ್ತ, ತನಿಖೆಯ ಅಪಾಯವನ್ನೂ ತಪ್ಪಿಸಿಕೊಳ್ಳುತ್ತದೆ. ಇನ್ನೊಂದು ಬಣ ತಾತ್ವಿಕ ವಿರೋಧದ ಮುಖವಾಡ ಹಾಕಿಕೊಂಡು ಜನರ ಸಿಂಪಥಿ ಗಳಿಸುತ್ತದೆ. ಈಗ, ಕೇವಲ ೩೦ ತಿಂಗಳ ನಂತರ, ಬಿಜೆಪಿಯನ್ನು ಹೊರಗಿಡಲು ಎರಡೂ ಬಣಗಳು ಮೈತ್ರಿ ಮಾಡಿಕೊಂಡಿವೆ. ಅಜಿತ್ ಪವಾರ್ ತಮ್ಮದೇ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷ ಬಿಜೆಪಿಯನ್ನು ಸೋಲಿಸಲು ತಮ್ಮ ಪ್ರತಿಸ್ಪರ್ಧಿ ಬಣದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೇನಾದರೂ ಸಮರ್ಥನೆ ಇದೆಯೆ ಎಂಬುದು ಈಗ ಪ್ರಶ್ನೆ. ಈ ದ್ವಂದ್ವತೆಯ ಅತ್ಯಂತ ವಿಕಾರ ಬಗೆಯೆಂದರೆ, ಅದಾನಿ ಸಂಪರ್ಕ. ವರ್ಷಗಳಿಂದ, ರಾಹುಲ್ ಗಾಂಧಿ ಗೌತಮ್ ಅದಾನಿ ವಿರುದ್ಧದ ವಿರೋಧವನ್ನು ತಮ್ಮ ರಾಜಕೀಯದ ಪ್ರಮುಖ ತತ್ವವಾಗಿ ಮಾಡಿಕೊಂಡು ಬಂದಿದ್ದಾರೆ. ಅವರು ಭಾರತದಲ್ಲಿನ ರಾಜಕೀಯ ಯುದ್ಧವನ್ನು ಬಡವರು ಮತ್ತು ಶ್ರೀಮಂತರ ನಡುವಿನ ಯುದ್ಧ ಎಂದೇ ಹೇಳುತ್ತ ಬಂದಿದ್ದಾರೆ. ಹಾಗೆ ರಾಹುಲ್ ಗಾಂಧಿಯವರು ಅದಾನಿ ವಿರುದ್ಧ ನಿಂತಿರುವಾಗ, ಎನ್ಸಿಪಿಯ ಸುಪ್ರಿಯಾ ಸುಳೆ ಗೌತಮ್ ಅದಾನಿಯನ್ನು ತನ್ನ ಸಹೋದರ ಎಂದು ಸಾರ್ವಜನಿಕವಾಗಿ ಕರೆಯುತ್ತಾರೆ. ಅವರು ೩೦ ವರ್ಷಗಳ ಹಳೆಯ ಕುಟುಂಬ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇದೇ ವೇಳೆ ಶರದ್ ಪವಾರ್ ಅವರನ್ನು ಅದಾನಿ ತಮ್ಮ ಮೆಂಟರ್ ಎಂದು ಬಹಿರಂಗವಾಗಿಯೇ ಹೇಳುತ್ತಾರೆ. ಹಾಗಾದರೆ, ತನ್ನದೇ ಮೈತ್ರಿಪಕ್ಷವೊಂದು ತಾನು ವಿರೋಧಿಸುವ ಅದಾನಿಯ ಪಕ್ಕ ಹೋಗಿ ನಿಂತಿರುವಾಗ, ಕಾಂಗ್ರೆಸ್ ಹೇಗೆ ಜನರೆದುರು ಹೋಗಲು ಸಾಧ್ಯವಾಗುತ್ತದೆ? ಅದಾನಿ ಹಟಾವೋ ಘೋಷಣೆಗೆ ಏನು ಅರ್ಥ ಉಳಿದಂತಾಗುತ್ತದೆ? ಪವಾರ್ಗಳು ಕಾಂಗ್ರೆಸ್ನ ಅತಿದೊಡ್ಡ ಅಸ್ತ್ರವನ್ನೇ ವಿಫಲಗೊಳಿಸಿದಂತಾಯಿತಲ್ಲವೆ? ಕಾಂಗ್ರೆಸ್ನೊಂದಿಗಿನ ರಾಜಕೀಯ ಮೈತ್ರಿ, ಅದಾನಿಯೊಂದಿಗೆ ವೈಯಕ್ತಿಕ ಮತ್ತು ವ್ಯವಹಾರ ಮೈತ್ರಿ ಈ ದ್ವಂದ್ವವೇ ಎಷ್ಟು ಅವಕಾಶವಾದಿಯಾಗಿದೆಯಲ್ಲವೆ? ಇದು ಈಗಿನಿಂದಲ್ಲ, ಭ್ರಷ್ಟಾಚಾರ ಆರೋಪ ಎದುರಿಸಿ, ನಂತರ ಬಿಜೆಪಿ ಸೇರಿ ಅದನ್ನು ತೊಳೆದುಕೊಂಡಾಗಿನಿಂದಲೂ ಕಾಣಿಸುತ್ತಲೇ ಇದೆ. ಅಜಿತ್ ಪವಾರ್ ಅವರೊಂದಿಗೆ ಪಕ್ಷದಿಂದ ಹೊರಬಂದಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಹಸನ್ ಮುಶ್ರಿಫ್ ತಮ್ಮ ರಾಜಕೀಯವನ್ನೇ ಮುಗಿಸಬಲ್ಲ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು; ಜೈಲು ಶಿಕ್ಷೆ ಕೂಡ ಕಾದಿತ್ತು. ಆದರೆ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರಿದ ತಕ್ಷಣ ಕ್ಲೀನ್ ಆಗಿಬಿಟ್ಟರು. ಇಷ್ಟಾಗಿಯೂ ಅವರು, ಅಗತ್ಯ ಬಿದ್ದಾಗ ಘರ್ ವಾಪ್ಸಿ ಅವಕಾಶ ಇರುವ ಹಾಗೆ ಶರದ್ ಪವಾರ್ ಜೊತೆಗೂ ಉತ್ತಮ ಸಂಬಂಧದಲ್ಲೇ ಇದ್ದಾರೆ. ಹೀಗಾಗಿ, ಅವೆರಡೂ ಬಣಗಳ ನಡುವೆ ಬಿರುಕು ಎಂದಿಗೂ ಶಾಶ್ವತವಾಗಿರಲಿಲ್ಲ ಎಂದು ಅವರೇ ಸೂಚಿಸುತ್ತಿದ್ದಾರೆ. ಪವಾರ್ಗಳ ಈ ಆಟದಿಂದಾಗಿ ಬಿಜೆಪಿಗೆ ದ್ರೋಹವಾಯಿತೆ? ಶರದ್ ಪವಾರ್ ಅವರನ್ನು ದುರ್ಬಲಗೊಳಿಸಲು ಎನ್ಸಿಪಿಯನ್ನು ಒಡೆದಿರುವುದಾಗಿ ಅದು ಭಾವಿಸಿತ್ತು. ಆದರೆ ಈಗ ಅಜಿತ್ ಪವಾರ್ ಬಣ ಬಜೆಪಿ ಸರಕಾರದಲ್ಲಿದ್ದುಕೊಂಡೇ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಿಜೆಪಿಯ ನೆಲೆಯನ್ನೇ ಅಲ್ಲಾಡಿಸಲು ಈ ಮೈತ್ರಿ ಮಾಡಿಕೊಂಡಿದೆ. ಪವಾರ್ಗಳ ಈ ಆಟದ ನಿಜವಾದ ಬಲಿಪಶುಗಳೆಂದರೆ ಪಕ್ಷದ ಕಾರ್ಯಕರ್ತರು. ಎರಡು ಬಣಗಳ ಕಾರ್ಯಕರ್ತರು ಇಲ್ಲಿಯವರೆಗೆ ಪರಸ್ಪರ ಗುದ್ದಾಟದಲ್ಲಿದ್ದರು, ಕಚ್ಚಾಟದಲ್ಲಿದ್ದರು. ಈಗ ಅವರೇ ಗೊಂದಲಗೊಳ್ಳುವಂತಾಗಿದೆ. ತಮ್ಮ ನಾಯಕರ ನಿರ್ಧಾರದಿಂದಾಗಿ ಅವರೀಗ ಪರಸ್ಪರ ಮುಖ ನೋಡಿಕೊಳ್ಳುತ್ತ, ಜೊತೆಯಾಗಿ ಹೋಗಬೇಕಾದ ಮುಜುಗರ ಎದುರಿಸುವ ಹಾಗಾಗಿದೆ. ಪುಣೆಯಲ್ಲಿ ಶರದ್ ಪವಾರ್ ಅವರ ನಿಷ್ಠಾವಂತ ಬೆಂಬಲಿಗರೊಬ್ಬರು ಕಳೆದ ಎರಡು ವರ್ಷಗಳಿಂದ ಅಜಿತ್ ಪವಾರ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಅವರು ಅಜಿತ್ ಪವಾರ್ ಅವರ ಅಭ್ಯರ್ಥಿಗಳ ವಿರುದ್ಧ ಹೋರಾಡಿದ್ಧಾರೆ. ಅವರನ್ನು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡ ಮೋಸಗಾರರು ಎಂದು ಅವರು ಬ್ರಾಂಡ್ ಮಾಡಿದ್ಧಾರೆ. ಈಗ ಅವರು ಆ ದೇಶದ್ರೋಹಿಯ ಜೊತೆಗೇ ಹೋಗಬೇಕಾಗಿದೆ. ಇನ್ನು ಅಜಿತ್ ಪವಾರ್ ಬೆಂಬಲಿಗರು ತಮ್ಮ ನಾಯಕ ಬಿಜೆಪಿ ಜೊತೆ ಹೋದುದನ್ನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳನ್ನು ಕಳೆದರು. ಅವರು ತಮ್ಮ ವಲಯದಲ್ಲಿರುವ ಜಾತ್ಯತೀತ ಮತದಾರರನ್ನು ದೂರವಿಟ್ಟರು. ಈಗ, ಅವರು ಅದೇ ವಿರೋಧಿ ನಾಯಕನ ಜೊತೆ ಹೋಗಬೇಕಾಗಿದೆ. ಈ ನಾಯಕರು ಮಾತ್ರ ತಮ್ಮ ಸಂಬಂಧಗಳಿಗೆ ಯಾವ ಧಕ್ಕೆಯನ್ನೂ ತಂದುಕೊಂಡಿರುವುದಿಲ್ಲ. ಇವರ ಈ ಆಟದಲ್ಲಿ ಕಾರ್ಯಕರ್ತರು ಮೂರ್ಖರಂತಾಗಿದ್ದಾರೆ. ಪವಾರ್ಗಳು ಈ ರಾಜಕೀಯ ನಡೆಯ ಮೂಲಕ ಸಾವಿರಾರು ಯುವ ಮಹಾರಾಷ್ಟ್ರೀಯರ ಜೀವನ ಮತ್ತು ಭಾವನೆಗಳೊಂದಿಗೂ ಆಟವಾಡಿದ್ದಾರೆ. ೨೦೧೪ರಲ್ಲಿ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿ ಮತ್ತು ಶಿವಸೇನೆ ವಿಭಜನೆಯಾದಾಗ, ಫಲಿತಾಂಶಗಳ ನಂತರ ತಕ್ಷಣವೇ ಏಕಪಕ್ಷೀಯವಾಗಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದು ಶರದ್ ಪವಾರ್. ಈ ನಡೆ ಶಿವಸೇನೆಯ ಚೌಕಾಸಿ ಶಕ್ತಿಯನ್ನೇ ಮುಗಿಸಿತ್ತು. ನಂತರ ೨೦೧೯ರಲ್ಲಿ ಇದ್ದಕ್ಕಿದ್ದಂತೆ ಅಜಿತ್ ಪವಾರ್ ಬಿಜೆಪಿ ಕೂಟ ಸೇರಿಕೊಂಡಿದ್ದರು. ಇವರ ಈ ಆಟದಿಂದಾಗಿ ಇಂದಿಗೂ ಉದ್ಧವ್ ಠಾಕ್ರೆ ತಮ್ಮ ರಾಜಕೀಯ ಉಳಿವಿಗಾಗಿ ಹೋರಾಡುವಂತಾಗಿದೆ. ತಮ್ಮ ಪಕ್ಷವನ್ನು ಅವರು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿರುವಾಗ, ಎನ್ಸಿಪಿ ಡಬಲ್ ಗೇಮ್ನಲ್ಲಿ ತೊಡಗಿದೆ. ಅಜಿತ್ ಪವಾರ್ ಅವರೊಂದಿಗೆ ಜೊತೆಯಾಗಿ ಹೋಗಲು ಏನೂ ತೊಂದರೆಯಿಲ್ಲ ಎಂದು ತೋರಿಸುವ ಮೂಲಕ, ಶರದ್ ಪವಾರ್ ಈಗ ಅಜಿತ್ ಪವಾರ್ ದಂಗೆಯನ್ನೇ ಮರೆಯುತ್ತಾರೆ. ಇದು, ಅವರು ಅಜಿತ್ ಪವಾರ್ ಅವರನ್ನು ಕ್ಷಮಿಸಿ ಮತ್ತೆ ಒಂದಾಗಲು ಸಾಧ್ಯವಾದರೆ, ಏಕನಾಥ ಶಿಂದೆಯ ಜೊತೆ ಉದ್ಧವ್ ಹೋಗಲು ಏಕೆ ಸಾಧ್ಯವಿಲ್ಲ ಎನ್ನುವಂತೆ ಮಾಡಿದೆ. ಎನ್ಸಿಪಿಯ ಬೂಟಾಟಿಕೆ ದೇಶದ್ರೋಹಿಗಳ ವಿರುದ್ಧದ ಎಂವಿಎಯ ನೈತಿಕ ದಾಳಿಯನ್ನು ದುರ್ಬಲಗೊಳಿಸುತ್ತದೆ. ಕಾಂಗ್ರೆಸ್ ಅನ್ನು ಸಹ ತಮಾಷೆಯಾಗಿ ತೆಗೆದುಕೊಳ್ಳಲಾಗುತ್ತಿದೆ. ಜಾತ್ಯತೀತ ಹೊದಿಕೆಯಡಿ ಉಳಿದುಕೊಂಡು, ಎನ್ಸಿಪಿ ತನ್ನ ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಹಾಗೆಯೇ ಉಳಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಆದರೆ ಎನ್ಸಿಪಿ ನಾಯಕತ್ವ ಬಿಜೆಪಿಯ ಕಾರ್ಪೊರೇಟ್ ಬೆಂಬಲಿಗರೊಂದಿಗೆ ತನ್ನ ಸ್ನೇಹಶೀಲ ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಮುಂದುವರಿಸುತ್ತದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಒಬ್ಬರು ಜಾತ್ಯತೀತ, ಪ್ರಜಾಪ್ರಭುತ್ವ ಸಂರಕ್ಷಕನಂತೆ, ಇನ್ನೊಬ್ಬರು ಅಧಿಕಾರದಲ್ಲಿರುವವರಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅವರು ಬೇರೆ ಬೇರೆ ವೇಷದಲ್ಲಿದ್ದಾರೆ ಅಷ್ಟೆ. ಆದರೆ, ಅವರು ಬೇರೆಬೇರೆಯಲ್ಲ. ಅವರ ಗುರಿ ರಾಜ್ಯದ ಅಭಿವೃದ್ಧಿಯಲ್ಲ ಅಥವಾ ಸಿದ್ಧಾಂತಕ್ಕೆ ಬದ್ಧವಾಗಿರುವುದೂ ಅಲ್ಲ. ಬದಲಾಗಿ, ಬಾರಾಮತಿ ಪವರ್ ಸೆಂಟರ್ ಅನ್ನು ಸಂರಕ್ಷಿಸುವುದು. ಪವಾರ್ದ್ವಯರು ಅಧಿಕಾರದಲ್ಲಿ ಇರುವವರೆಗೆ ಅವರ ಕುಟುಂಬ ಗೆಲ್ಲುತ್ತದೆ. ನಾವು ನೋಡುತ್ತಿರುವ ಚುನಾವಣೆಗಳು ಸುಪ್ರಿಯಾ vs ಸುನೇತ್ರಾ, ಅಜಿತ್ vs ಯುಗೇಂದ್ರ ಎನ್ನುವ ಥರದ ಯುದ್ಧಗಳಲ್ಲ. ಅಲ್ಲಿ ಸೋತವರಿಗೂ ಬೇರೆ ವ್ಯವಸ್ಥೆಯಿರುತ್ತದೆ. ಸುನೇತ್ರಾ ಪವಾರ್ ಅವರನ್ನು ಸೋತ ತಕ್ಷಣ ರಾಜ್ಯಸಭೆಗೆ ಕಳುಹಿಸಲಾಯಿತು ಎಂಬುದನ್ನು ಗಮನಿಸಬೇಕು. ಇನ್ನು, ಗೆದ್ದವರು ಕುಟುಂಬದಲ್ಲಿ ಸ್ಥಾನ ಉಳಿಸಿಕೊಳ್ಳುವಂತೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇಡೀ ರಾಜಕೀಯವನ್ನು ಅವರು ಆಟವಾಗಿ ಬಳಸಿಕೊಳ್ಳುತ್ತ, ವೇಷ ಮುಂದುವರಿಸಿದ್ದಾರೆ.
ಕೋಗಿಲು ವಿವಾದ: ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಬಿಜೆಪಿ ವಿರೋಧ, ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ವಿಪಕ್ಷ ನಾಯಕರು
ಕೋಗಿಲು ಬಡಾವಣೆಯಲ್ಲಿ ಒತ್ತುವರಿ ತೆರವು ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಮಂಗಳವಾರ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
Uttarakhand| ವಿಷ್ಣುಗಢ–ಪಿಪಲ್ಕೋಟಿ ಯೋಜನೆಯ ಸುರಂಗದಲ್ಲಿ ಲೋಕೋ ರೈಲುಗಳ ಢಿಕ್ಕಿ; ಕನಿಷ್ಠ 60 ಮಂದಿಗೆ ಗಾಯ
ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಷ್ಣುಗಢ–ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಪಿಪಲ್ಕೋಟಿ ಸುರಂಗದೊಳಗೆ ಮಂಗಳವಾರ ಸಂಜೆ ಲೋಕೋ ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಮಾರು 60 ಕಾರ್ಮಿಕರು ಹಾಗೂ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಮತ್ತೊಂದು ಗೂಡ್ಸ್ ಲೋಕೋ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ರೈಲಿನಲ್ಲಿ ಒಟ್ಟು 109 ಮಂದಿ ಇದ್ದರು ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗಾಯಗೊಂಡವರಲ್ಲಿ 10 ಮಂದಿಯನ್ನು ಚಿಕಿತ್ಸೆಗಾಗಿ ಗೋಪೇಶ್ವರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. THDC (India) ಸಂಸ್ಥೆಯು ನಿರ್ಮಿಸುತ್ತಿರುವ ಈ ಯೋಜನೆಯ ಸುರಂಗಗಳಲ್ಲಿ ಕಾರ್ಮಿಕರು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಸಾಗಿಸಲು ಲೋಕೋ ರೈಲುಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಚಮೋಲಿ ಜಿಲ್ಲೆಯ ಹೆಲಾಂಗ್ ಮತ್ತು ಪಿಪಲ್ಕೋಟಿ ನಡುವಿನ ಅಲಕನಂದಾ ನದಿಗೆ ಅಡ್ಡಲಾಗಿ 444 ಮೆಗಾವ್ಯಾಟ್ ಸಾಮರ್ಥ್ಯದ ಈ ಜಲವಿದ್ಯುತ್ ಯೋಜನೆ ನಿರ್ಮಾಣವಾಗುತ್ತಿದ್ದು, ನಾಲ್ಕು ಟರ್ಬೈನ್ಗಳ ಮೂಲಕ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಯೋಜನೆಯನ್ನು ಮುಂದಿನ ವರ್ಷ ಪೂರ್ಣಗೊಳಿಸಲಾಗುವುದು ಎಂದು ತಿಳಿದು ಬಂದಿದೆ.
ವೈಕುಂಠ ಏಕಾದಶಿ : ಎಲ್ಲಾ ಕಡೆ ಅಚ್ಚರಿ, ದಶಕದಲ್ಲೇ ಕಾಣಿಸದಂತಹ ಭಕ್ತರ ರಷ್- ಹೆಚ್ಚುತ್ತಿರುವ ಆಧ್ಯಾತ್ಮಿಕತೆಯ ಸಂಕೇತವೇ?
Vaikuntha Ekadashi 2025 : ವೈಕುಂಠ ಏಕಾದಶಿ ಆಚರಣೆಯ ವೇಳೆ, ಭಕ್ತರು ದೇವಾಲಯಗಳಲ್ಲಿ ವಿಷ್ಣುವಿನ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಪರೂಪ ಎನ್ನುವಂತೆ ದೇವಾಲಯಗಳು ಭಕ್ತರಿಂದ ತುಂಬಿ ತುಳುಕಿದ್ದವು.
Train Collision: ಎರಡು ರೈಲುಗಳ ನಡುವೆ ಡಿಕ್ಕಿ, 60 ಜನರಿಗೆ ಗಾಯ
ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ 60 ಜನರಿಗೆ ಗಾಯವಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಷ್ಣುಗಢ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆ ಸುರಂಗ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. 2 ಲೋಕೋ ಟ್ರೈನ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪಿಪಲ್ಕೋಟಿ ಸುರಂಗದ ಮೂಲಕ ಜನರನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ದುರಂತ ಸಂಭವಿಸಿದ್ದು, ಈ ಘಟನೆ
Explained: ಭಾರತ-ಪಾಕಿಸ್ತಾನ ಶಾಂತಿ ಸ್ಥಾಪನೆಯ ಕ್ರೆಡಿಟ್ ತನ್ನದೆಂದ ಚೀನಾ; ವರ್ಷದ ಕೊನೆಯ ದಿನ ವಾಂಗ್ ವಾಂಗಿಬಾತ್!
ಯಶಸ್ಸಿಗೆ ನೂರಾರು ಅಪ್ಪಂದಿರಾದರೆ ವೈಫಲ್ಯ ಯಾವಾಗಲೂ ಅನಾಥವಾಗಿರುತ್ತದೆ. ಅದೇ ರೀತಿ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಯಶಸ್ಸಿನ ಕ್ರೆಡಿಟ್ ಪಡೆಯಲು, ಚೀನಾ ಇದೀಗ ಅಮೆರಿಕದೊಂದಿಗೆ ಪೈಪೋಟಿಗೆ ಇಳಿದಿದೆ. ಹೌದು, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾಗಿ ಚೀನಾ ಹೇಳಿಕೊಂಡಿದೆ. ಈ ಕುರಿತ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿದ್ದೆಗೆಡೆಸಿದೆ.
IMD Weather: ಇಂದು, ನಾಳೆ ಹಲವೆಡೆ ಭಾರೀ ಮಳೆ, ತಾಪಮಾನ ಕುಸಿತ
ಹಲವು ರಾಜ್ಯಗಳಲ್ಲಿ ಸದ್ಯ ಭಾರೀ ಶೀತಗಾಳಿ ಬೀಸುತ್ತಿರುವುದರಿಂದ ಚಳಿ ತೀವ್ರಗೊಂಡಿದೆ. ಇದರೊಂದಿಗೆ ಇಂದು ಮತ್ತು ನಾಳೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಡಿಶಾ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಪಶ್ಚಿಮ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ 50 ಮೀ ಗಿಂತ ಕಡಿಮೆ ಗೋಚರತೆಯೊಂದಿಗೆ ಅತಿ
2018 ರ ಪ್ರಾಕೃತಿಕ ವಿಕೋಪ: ಸರಕಾರಕ್ಕೆ ಕಾಣದ ಕೊಡಗು ಜಿಲ್ಲೆಯ ಸಂತ್ರಸ್ತರು
ಬೆಂಗಳೂರಿನಲ್ಲಿ ಅಕ್ರಮ ಮನೆ ತೆರವುಗೊಳಿಸಿ ತಕ್ಷಣ ಪುನರ್ವಸತಿ ಕಲ್ಪಿಸಿದರೆ, ಕೊಡಗಿನಲ್ಲಿ 2018ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಇನ್ನೂ ಮನೆಗಳಿಲ್ಲ. 4056 ಮನೆಗಳಿಗೆ ಹಾನಿಯಾಗಿದ್ದು, 840 ಸಂಪೂರ್ಣ ನಾಶವಾಗಿವೆ. 250ಕ್ಕೂ ಹೆಚ್ಚು ಭೂಕುಸಿತ ಸಂತ್ರಸ್ತರಿಗೆ ಮನೆ ನೀಡುವುದು ಬಾಕಿ ಇದೆ. ಸಿದ್ದಾಪುರದಲ್ಲಿ 500 ಕುಟುಂಬಗಳು ಮನೆ ಕಳೆದುಕೊಂಡಿದ್ದು, 250 ಕುಟುಂಬಗಳು ಬಾಡಿಗೆ ಮನೆಯಲ್ಲೇ ವಾಸ. ಸರಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಪ್ರಧಾನಿ ಮೋದಿಗೆ ಸುದೀರ್ಘ ಪತ್ರ ಬರೆದ ಸಿದ್ದರಾಮಯ್ಯ: ಕಾರಣ ಏನು?
ಬೆಂಗಳೂರು: ಮನರೇಗಾ ಯೋಜನೆಯ ಹೆಸರು ಹಾಗೂ ರೂಪುರೇಷೆ ಬದಲಿಸಿ ರೂಪಿಸಿರುವ ವಿಬಿ-ಜಿ ರಾಮ್ಜಿ ಕಾಯಿದೆಯು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ಜತೆಗೆ ರಾಜ್ಯ ಸರಕಾರಗಳಿಗೆ ಆರ್ಥಿಕ ಹೊರೆ ಹೆಚ್ಚಿಸಲಿದ್ದು, ಕಾಯಿದೆ ಅನುಷ್ಠಾನವನ್ನು ತಡೆಹಿಡಿಯಬೇಕು ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಗ್ಯಾರಂಟಿ
ಚಾಮರಾಜನಗರ: ಯಶಸ್ವಿ ಕಾರ್ಯಚರಣೆ; ನಂಜದೇವನಪುರದಲ್ಲಿ ಗಂಡು ಹುಲಿ ಸೆರೆ
ಚಾಮರಾಜನಗರ: ತಾಲೂಕಿನ ನಂಜೆದೇವನಪುರದಲ್ಲಿ 5 ಹುಲಿಗಳ ಕೂಂಬಿಂಗ್ ನಡೆದಿದ್ದು, ಮಂಗಳವಾರ ಮಧ್ಯರಾತ್ರಿ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿದೆ. ಅರಣ್ಯಾಧಿಕಾರಿಗಳ ಕೂಂಬಿಂಗ್ ವೇಳೆ ಮಂಗಳವಾರ ರಾತ್ರಿ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ. ನಂಜೆದೇವನಪುರದಲ್ಲಿ 5 ಹುಲಿಗಳ ಓಡಾಟದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ್ಯಾಪ್ ನಲ್ಲಿ ಸೆರೆಯಾಗಿದ್ದ ಇದೇ ಗಂಡು ಹುಲಿಯನ್ನು ಮಂಗಳವಾರ ಮಧ್ಯರಾತ್ರಿ ಕೂಬಿಂಗ್ ನಡೆಸಿದ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಅರಳಿಕೆ ನೀಡಿ ಸೆರೆ ಹಿಡಿದ್ದಾರೆ.
ಡೊನಾಲ್ಡ್ ಟ್ರಂಪ್ಗೆ ಇಸ್ರೇಲ್ ಶಾಂತಿ ಪ್ರಶಸ್ತಿ; ಗೆಳೆಯನ ಆಸೆ ಈಡೇರಿಸಿದ ಬೆಂಜಮಿನ್ ನೆತನ್ಯಾಹು
ಜಾಗತಿಕ ಮಟ್ಟದಲ್ಲಿ ಶಾಂತಿ ಪ್ರಶಸ್ತಿಗಳನ್ನು ಪಡೆಯುವುದೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಲ್ಲಿಲ್ಲದ ಖುಷಿ. 2025ರ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿದಕ್ಕೆ ಕೋಪ ಮಾಡಿಕೊಂಡಿದ್ದ ಟ್ರಂಪ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮಾಧಾನ ಮಾಡಿದ್ದಾರೆ. ಟ್ರಂಪ್ಗೆ ಇಸ್ರೇಲ್ ಶಾಂತಿ ಪ್ರಶಸ್ತಿ ಘೋಷಿಸಿರುವ ನೆತನ್ಯಾಹು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ಅಮೆರಿಕ ಅಧ್ಯಕ್ಷರ ಪ್ರಯತ್ನಗಳನ್ನು ಗೌರವಿಸಿದ್ದಾರೆ. ಫಿಫಾ ಶಾಂತಿ ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ಟ್ರಂಪ್ ಇದೀಗ ಇಸ್ರೇಲ್ ಶಾಂತಿ ಪ್ರಶಸ್ತಿ ಪಡೆದು ಡಬಲ್ ಖುಷಿಯಲ್ಲಿದ್ದಾರೆ.
ಹೊಸ ವರ್ಷದ ಸಂಭ್ರಮಕ್ಕಾಗಿ ದಾವಣಗೆರೆಯಲ್ಲಿ 7 ಸಾವಿರ ಕೆಜಿಗೂ ಅಧಿಕ ಕೇಕ್ಗಳ ತಯಾರಿಕೆ ಮತ್ತು ಮಾರಾಟ ನಿರೀಕ್ಷಿಸಲಾಗಿದೆ. ನಗರದಲ್ಲಿ 5 ಸಾವಿರ ಕೆಜಿ ಕೇಕ್ ತಯಾರಾಗುತ್ತಿದ್ದು, ಆಹಾರ್ 2000, ಕೇಕ್ ವರ್ಲ್ಡ್, ರಾಕಿಂಗ್ಗಳಲ್ಲಿ ವಿಶೇಷ ಕೇಕ್ಗಳು ಲಭ್ಯ. ಈ ಬಾರಿ ರಸ್ತೆ ಕಾಮಗಾರಿಯಿಂದ ಕೇಕ್ ಮಾರಾಟ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಇದರೊಂದಿಗೆ 2 ಲಕ್ಷ ಲೀಟರ್ ಮದ್ಯ ಮಾರಾಟವಾಗುವ ನಿರೀಕ್ಷೆಯಿದೆ, ಆದರೆ ಬೆಲೆ ಏರಿಕೆಯಿಂದ ಮಾರಾಟ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ ಎಂದು ಅಂದಾಜಿಸಲಾಗಿದೆ.
ಬೆಂಗಳೂರು, ಡಿ.30: ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬರ ನಿರ್ವಹಣೆಗಾಗಿ ಮಾಡಿದ್ದ 5,791.47 ಕೋಟಿ ರೂ.ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳೂ ಲೆಕ್ಕಪರಿಶೋಧನೆಗೆ ಸಲ್ಲಿಕೆಯಾಗಿಲ್ಲ. ಹಾಗೆಯೇ ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಜೆಡಿಎಸ್ ಪಾಲುದಾರಿಕೆಯ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರವು ಯಾವುದೇ ವ್ಯವಸ್ಥೆಯನ್ನೇ ಮಾಡಿರಲಿಲ್ಲ. 2025ರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ವಿಪತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಿಎಜಿಯು ಮಂಡಿಸಿದ್ದ ವರದಿಯಲ್ಲಿ ಬರ ನಿರ್ವಹಣೆಗೆ ಮಾಡಿದ್ದ ಖರ್ಚು ವೆಚ್ಚದ ಅಂಕಿ ಅಂಶಗಳನ್ನೂ ದಾಖಲಿಸಿದೆ. ಈ ವರದಿಯ ಪ್ರತಿಯು he-file.inಗೆ ಲಭ್ಯವಾಗಿದೆ. ಬರಗಾಲದ ವೆಚ್ಚಗಳನ್ನು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ರಾಜ್ಯ ಸರಕಾರವು ಮಾರ್ಗಸೂಚಿ ಮತ್ತು ಬರಗಾಲ ಕೈಪಿಡಿಯನ್ನೂ ಹೊರಡಿಸಿತ್ತು. ಅಲ್ಲದೇ ಬಳಕೆ ಪ್ರಮಾಣ ಪತ್ರಗಳು, ಆಂತರಿಕ ಮತ್ತು ಬಾಹ್ಯ ಲೆಕ್ಕ ಪರಿಶೋಧನೆ ಹೇಗೆ ಮಾಡಬೇಕು ಎಂದು ಸರಕಾರವು ಆದೇಶಿಸಿತ್ತು. ಈ ಆದೇಶದಂತೆ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರಕಾರದಲ್ಲಿ ಬರಗಾಲದ ವೆಚ್ಚಗಳನ್ನು ಲೆಕ್ಕ ಪರಿಶೋಧನೆಯನ್ನೇ ಮಾಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಬರಗಾಲದ ವೆಚ್ಚಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಿಎಜಿಗೆ ನೀಡಿರುವ ಮಾಹಿತಿ ಪ್ರಕಾರ 2017-18ರಿಂದ 2019-20ರವರೆಗೆ ರಾಜ್ಯದಲ್ಲಿ ಬರ ನಿರ್ವಹಣೆಗಾಗಿ 5,791.47 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ ಜಿಲ್ಲಾವಾರು ಬಿಡುಗಡೆ ಮಾಡಿದ್ದ ಅಥವಾ ವೆಚ್ಚವನ್ನು ಕಾಯ್ದಿರಿಸಿದ್ದ ವಸ್ತುಗಳ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ. ಇದಲ್ಲದೇ ರಾಜ್ಯ ಸರಕಾರ ಮತ್ತು ನೋಡಲ್ ಇಲಾಖೆಯು ಖಾತೆಗಳು ಅಥವಾ ವೆಚ್ಚದ ಘಟನೆವಾರು ಅಂಕಿ ಸಂಖ್ಯೆಗಳ ಮಾಹಿತಿಯನ್ನೂ ನಿರ್ವಹಿಸುವುದಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಹಾಗೆಯೇ ಪರೀಕ್ಷಾ ತನಿಖೆಗೆ ಒಳಗಾದ ಯಾವುದೇ ಜಿಲ್ಲಾಡಳಿತಗಳು ಅಗತ್ಯವಾದ ಬಳಕೆ ಪ್ರಮಾಣ ಪತ್ರಗಳನ್ನು ಘಟನೆವಾರು ಅಥವಾ ಸ್ವೀಕರಿಸಿದ, ಖರ್ಚು ಮಾಡಿದ ಒಟ್ಟು ಮೊತ್ತಕ್ಕೆ ರಾಜ್ಯ ಸರಕಾರ, ನೋಡಲ್ ಇಲಾಖೆಗೆ ಸಲ್ಲಿಸಿಲ್ಲ. ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ರಾಜ್ಯ ಸರಕಾರವು ವ್ಯವಸ್ಥೆಯನ್ನೇ ಮಾಡಲಿಲ್ಲ. ಬರ ಪರಿಹಾರಕ್ಕಾಗಿ ವೆಚ್ಚವನ್ನು ಸಿದ್ಧಪಡಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರಕಾರದ ಪ್ರಯತ್ನಗಳು ಅಸಮರ್ಪಕವಾಗಿದ್ದವು. ಹೀಗಾಗಿ ಬರ ನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ. ‘ಹೀಗಾಗಿ ಬರ ನಿರ್ವಹಣೆ, ಬರಗಾಲದಲ್ಲಿ ಮಾಡಿದ್ದ ವೆಚ್ಚಗಳು ಮತ್ತು ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. 2018ರಲ್ಲಿ ರಾಜ್ಯದ 30 ಜಿಲ್ಲೆಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದವು. ಒಟ್ಟು 28,046.95 ಕೋಟಿ ರೂ.ನಷ್ಟವಾಗಿತ್ತು. ಇದರಲ್ಲಿ ಹಿಂಗಾರು ಋತುವಿನಲ್ಲಿ 11,384.47 ಕೋಟಿ ರೂ., ಮುಂಗಾರು ಹಂಗಾಮು ಬೆಳೆ ನಷ್ಟದ ರೂಪದಲ್ಲಿ 16,662 ಕೋಟಿ ರೂ.ನಷ್ಟು ಅಂದಾಜು ನಷ್ಟವಾಗಿತ್ತು. 2019ರಲ್ಲಿ 49 ತಾಲೂಕುಗಳು ಬರಪೀಡಿತವಾಗಿದ್ದವು. ಆದರೆ ಈ ಅವಧಿಯಲ್ಲಿ ಎಷ್ಟು ಮೊತ್ತ ನಷ್ಟವಾಗಿತ್ತು ಎಂಬ ಬಗ್ಗೆ ಸಿಎಜಿ ವರದಿಯಲ್ಲಿ ವಿವರಗಳಿಲ್ಲ. ರಾಜ್ಯವು ಕಳೆದ 2001ರಿಂದ 2022ರವರೆಗೆ ಒಟ್ಟು 15 ವರ್ಷಗಳ ಕಾಲ ಬರಗಾಲದಿಂದ ಬಾಧಿತವಾಗಿತ್ತು. 2018ರಲ್ಲಿ ತೀವ್ರ ಬರಗಾಲದಿಂದ ಬಾಧಿತವಾಗಿದ್ದರೇ 2019ರಲ್ಲಿ ಬರದ ತೀವ್ರತೆಯು ತುಸು ಕಡಿಮೆಯಾಗಿತ್ತು. ಸಿಎಜಿಯು ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲಬುರಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಕುರಿತು ತನಿಖೆ ನಡೆಸಿತ್ತು. 2018ರಲ್ಲಿ ಮುಂಗಾರು ಹಂಗಾಮಿನಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೇ ಹಿಂಗಾರು ಹಂಗಾಮಿನಲ್ಲಿ ಈ ತಾಲೂಕುಗಳ ಸಂಖ್ಯೆಯು 156ಕ್ಕೇರಿತ್ತು. ಹೀಗಾಗಿ ಬರಗಾಲದ ಪರಿಣಾಮವು 2019ರ ಮುಂಗಾರ ಋತುವಿನವರೆಗೂ ಮುಂದುವರಿದಿತ್ತು. ಇದರಲ್ಲಿ ರಾಜ್ಯ ಸರಕಾರವು 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. 2013ರಿಂದ 2018ರವರೆಗೆ ಬರಗಾಲದಿಂದ ಕೃಷಿ, ತೋಟಗಾರಿಕೆ ವಲಯದಲ್ಲಿ ಒಟ್ಟಾರೆ 80,015.38 ಕೋಟಿ ರೂ.ನಷ್ಟವಾಗಿತ್ತು. 2013ರಲ್ಲಿ ಕೃಷಿ ವಲಯದಲ್ಲಿ 1,016.99 ಕೋಟಿ ರೂ., ತೋಟಗಾರಿಕೆಗೆ 702.30 ಕೋಟಿ ರೂ. ಸೇರಿ ಒಟ್ಟಾರೆ 1,719.29 ಕೋಟಿ ರೂ. ನಷ್ಟವಾಗಿತ್ತು. 2014ರಲ್ಲಿ ಕೃಷಿ ವಲಯದಲ್ಲಿ 2,706.17 ಕೋಟಿ ರೂ., ತೋಟಗಾರಿಕೆಯಲ್ಲಿ 882.90 ಕೋಟಿ ರೂ. ಸೇರಿ 3,589.07 ಕೋಟಿ ರೂ.ಯಷ್ಟು ನಷ್ಟವಾಗಿತ್ತು. 2015ರಲ್ಲಿ ಕೃಷಿ ವಲಯದಲ್ಲಿ 21,204.51 ಕೋಟಿ, ತೋಟಗಾರಿಕೆ ವಲಯದಲ್ಲಿ 1,164.70 ಕೋಟಿ ರೂ. ಸೇರಿ 22,369.21 ಕೋಟಿ ರೂ. ನಷ್ಟವಾಗಿತ್ತು. 2016ರಲ್ಲಿ ಕೃಷಿ ವಲಯದಲ್ಲಿ 22,533.58 ಕೋಟಿ ರೂ., ತೋಟಗಾರಿಕೆಯಲ್ಲಿ 1,757.28 ಕೋಟಿ ರೂ. ಸೇರಿ 24,290.86 ಕೋಟಿ ರೂ. ನಷ್ಟವಾಗಿದ್ದರೆ 2018ರಲ್ಲಿ ಕೃಷಿ ವಲಯಕ್ಕೆ 26,514.32 ಕೋಟಿ ರೂ., ತೋಟಗಾರಿಕೆಯಲ್ಲಿ 1,532.63 ಕೋಟಿ ಸೇರಿ 28,046.95 ಕೋಟಿ ರೂ.ಯಷ್ಟು ನಷ್ಟವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ. ನಷ್ಟದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ದತ್ತಾಂಶಗಳಿಂದ ಕಂಡು ಬಂದಿದೆ. ರಾಜ್ಯ ಸರಕಾರವು ಅಭಿವೃದ್ಧಿಪಡಿಸಿದ್ದ ಪರಿಹಾರ ಎಂಬ ವಿಶೇಷ ಪೋರ್ಟಲ್ನ ಮೂಲಕ ಪರಿಹಾರ ವಿತರಿಸಿತ್ತು. 2018-19ನೇ ಸಾಲಿನಲ್ಲಿ ಬರಪೀಡಿತ ಭೂ ಮಾಲಕರಿಗೆ ಒಟ್ಟಾರೆ 1,625.39 ಕೋಟಿ ರೂ.ಆರ್ಥಿಕ ಪರಿಹಾರ ಪಾವತಿಯಾಗಿತ್ತು. ಕಳೆದ ಎರಡು ದಶಕಗಳಲ್ಲಿ ರಾಜ್ಯವು ಹೆಚ್ಚಿನ ವರ್ಷಗಳಲ್ಲಿ ಬರ ಪರಿಸ್ಥಿತಿ ಅನುಭವಿಸಿದೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ, ಮಳೆಯ ಪ್ರಾದೇಶಿಕ ಮತ್ತು ತಾತ್ಕಾಲಿಕ ವ್ಯತ್ಯಾಸದ ಬಗ್ಗೆ ರಾಜ್ಯಕ್ಕೆ ಮಾಹಿತಿ ಇತ್ತು. ಆದರೂ ರಾಜ್ಯ ಸರಕಾರವು ಬರ ನಿರ್ವಹಣೆಗಾಗಿ ಪ್ರದೇಶವಾರು ನಿರ್ದಿಷ್ಟ ಮಾರ್ಗಸೂಚಿಗಳನ್ನೇ ಹೊರತಂದಿರಲಿಲ್ಲ. ಅಲ್ಲದೇ ಮಾರ್ಗಸೂಚಿಗಳನ್ನು ಹೊರತರದಿರಲು ಯಾವುದೇ ಕಾರಣಗಳನ್ನೂ ಸಿಎಜಿಗೆ ಒದಗಿಸಿರಲಿಲ್ಲ. ಕೊರತೆಯ ಮುನ್ಸೂಚನೆ: ಬರ ಕೈಪಿಡಿ ಪ್ರಕಾರ ರಾಜ್ಯ ಸರಕಾರವು ಬರ ನಿರ್ವಹಣೆಯಲ್ಲಿ ಎಡವಿತ್ತು. ಮತ್ತು ವಾಸ್ತವವನ್ನು ಪ್ರತಿಬಿಂಬಿಸುವ ತೀಕ್ಷ್ಣಮತ್ತು ವಿಶ್ವಾಸಾರ್ಹ ವೀಕ್ಷಣಾ ದತ್ತಾಂಶಗಳ ಕೊರತೆ ಇತ್ತು. ಒಟ್ಟಾರೆ ರಾಜ್ಯದ ಹವಾಮಾನ ಮೇಲ್ವಿಚಾರಣೆ ವ್ಯವಸ್ಥೆಯೇ ನ್ಯೂನತೆಗಳಿಂದ ಕೂಡಿತ್ತು. ಅಲ್ಲದೇ ಬರ ಮೇಲ್ವಿಚಾರಣೆ ಕೋಶವನ್ನು ಸ್ಥಾಪಿಸಿದ್ದರೂ ಸಹ ಉಪಕರಣಗಳ ಕಾರ್ಯಕ್ಷಮತೆಯು ಕಳಪೆಯಿಂದ ಕೂಡಿತ್ತು. ಕಾರ್ಯವಿಧಾನವು ಕೊರತೆಯನ್ನು ಹೊಂದಿತ್ತು ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಬಿಕ್ಕಟ್ಟು ನಿರ್ವಹಣಾ ಯೋಜನೆಯೇ ಅಸ್ತಿತ್ವದಲ್ಲಿಲ್ಲ ಬರ ಕೈಪಿಡಿಯ ಪರಿಚ್ಛೇಧ 2.1.1ರ ಪ್ರಕಾರ ಬರ ನಿಗಾ ವ್ಯವಸ್ಥೆಯ ಜತೆಗೆ ಸೂಕ್ಷ್ಮ ಪ್ರದೇಶಗಳ ಬರ ನಿರ್ವಹಣೆಗಾಗಿ ಮಧ್ಯಮ ಮತ್ತು ದೀರ್ಘಕಾಲಿನ ಪ್ರದೇಶ, ನಿರ್ದಿಷ್ಟ ಯೋಜನೆಗಳನ್ನು ಸಿದ್ಧಪಡಿಸಬೇಕಿತ್ತು. ಇದಲ್ಲದೇ ಅಲ್ಪಾವಧಿಯಲ್ಲಿ ಬರವನ್ನು ಎದುರಿಸಲು ಬಿಕ್ಕಟ್ಟು ನಿರ್ವಹಣಾ ಯೋಜನೆಗಳನ್ನು ಎಚ್ಚರಿಕೆಯಿಂದ ರೂಪಿಸಬೇಕಿತ್ತು. ಮಳೆ, ಬಿತ್ತನೆ ಪ್ರಗತಿ, ದೂರ ಸಂವೇದಿಕೆ ಆಧಾರಿತ ಸಸ್ಯ ಸೂಚ್ಯಂಕಗಳು, ಮಣ್ಣಿನ ತೇವಾಂಶ ಆಧರಿತ ಸೂಚ್ಯಂಕಗಳು, ಜಲ ವಿಜ್ಞಾನ ಸೂಚ್ಯಂಕಗಳು ಇವುಗಳನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಬಿಕ್ಕಟ್ಟು ನಿರ್ವಹಣೆ ಯೋಜನೆ ರೂಪಿಸಬೇಕಿತ್ತು. ಆದರೆ ರಾಜ್ಯ ಸರಕಾರವು 2023-24ರವರೆಗೂ ಇಂತಹದ್ದೊಂದು ಬಿಕ್ಕಟ್ಟು ನಿರ್ವಹಣೆ ಯೋಜನೆಯನ್ನೇ ರೂಪಿಸಿರಲಿಲ್ಲ.
ಇತ್ತೀಚೆಗೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ತ್ರಿಪುರಾ ಮೂಲದ ಎಂಬಿಎ ವಿದ್ಯಾರ್ಥಿಯನ್ನು ಐವರು ಯುವಕರು ಇರಿದು ಕೊಂದಿದ್ದರು. ಜನಾಂಗೀಯ ದ್ವೇಷವೇ ಈ ಹತ್ಯೆಗೆ ಕಾರಣವೆನ್ನಲಾಗಿದೆ. ಆರಂಭದಲ್ಲಿ ವಿದ್ಯಾರ್ಥಿಯನ್ನು ‘ಚೀನೀ ಪ್ರಜೆ’ ಎಂದು ಐವರು ನಿಂದಿಸಿದ್ದು ಇದು ಸಂಘರ್ಷಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ವಿದ್ಯಾರ್ಥಿಯ ಸೋದರ ಮೈಕಲ್ ಮೇಲೆಯೂ ಗಂಭೀರ ಹಲ್ಲೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಏಂಜೆಲ್ ಚಕ್ಮಾ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದೆಡೆ ಚೀನಾ, ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ತನ್ನ ಭೂಮಿಯ ಮೇಲೆ ಭಾರತ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅಷ್ಟೇ ಅಲ್ಲ ಬಾಂಗ್ಲಾ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗಾಗಿ ಮರುಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ತನ್ನದೇ ಜನರ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆ, ದೌರ್ಜನ್ಯಗಳನ್ನು ತಡೆಯಲು ವಿಫಲವಾಗುತ್ತಿದೆ. ನೆರೆಯ ಬಾಂಗ್ಲಾದಲ್ಲಿ ಹಿಂದೂ ಧರ್ಮೀಯನೊಬ್ಬನನ್ನು ದಂಗೆಯಲ್ಲಿ ಕೊಂದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತವು ತನ್ನದೇ ದೇಶದಲ್ಲಿ ಪ್ರಾದೇಶಿಕ, ಧಾರ್ಮಿಕ, ಜಾತಿಯ ಭಿನ್ನತೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗುತ್ತಿದೆ. ಕೆಲವೊಮ್ಮೆ ಈ ಹತ್ಯೆಗಳನ್ನು ಮೌನವಾಗಿ ಬೆಂಬಲಿಸುತ್ತಿದೆ. ಕಳೆದ ಒಂದು ದಶಕದಿಂದ ಈಶಾನ್ಯ ಭಾರತ ಅನುಭವಿಸುತ್ತಿರುವ ಪರಕೀಯತೆಯ ಬಗ್ಗೆ ಭಾರತ ದಿವ್ಯ ನಿರ್ಲಕ್ಷ್ಯವನ್ನು ವಹಿಸಿದೆ. ಈಶಾನ್ಯ ಭಾರತೀಯರು ಭಾರತದೊಳಗಿದ್ದೂ ಪರಕೀಯರಂತೆ ಬಾಳುತ್ತಿದ್ದಾರೆ. ‘ನಾವು ನೇಪಾಳಿಗರಲ್ಲ, ‘ನಾವು ಚೀನಿಯರಲ್ಲ’ ‘ನಾವು ಭಾರತೀಯರು’ ಎನ್ನುವುದನ್ನು ಭಾರತೀಯರಿಗೆ ಪದೇ ಪದೇ ನೆನಪಿಸುವುದು ಅವರಿಗೆ ಅನಿವಾರ್ಯವಾಗಿ ಬಿಟ್ಟಿದೆ. ‘ಏಳು ಸಹೋದರಿಯರು’ ಒಬ್ಬ ‘ಸಹೋದರನನ್ನು’ ಕಟ್ಟಿಕೊಂಡ ಈಶಾನ್ಯ ಭಾರತ, ಸುದ್ದಿಯಲ್ಲಿರುವುದು ಹಿಂಸೆ ಮತ್ತು ಬಡತನಕ್ಕಾಗಿ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಹೀಗೆ ಏಳು ಸಹೋದರಿಯರ ಜೊತೆಗೆ ಸಿಕ್ಕಿಂ ಏಕೈಕ ಸೋದರ. ನೂರಾರು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಈ ಬೆಟ್ಟ ಗುಡ್ಡಗಳ ಪ್ರದೇಶ ಜನಾಂಗೀಯ ಸಂಘರ್ಷಗಳಿಗಾಗಿ ಸದಾ ಸುದ್ದಿಯಲ್ಲಿರುತ್ತವೆ. ಇವುಗಳ ನಡುವೆಯೇ ಈ ಪ್ರದೇಶದ ಜನತೆ ಯಾರಿಗೂ ಸಲ್ಲದವರಂತೆ ಬದುಕುತ್ತಿದ್ದಾರೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಭಾರತ ಇದನ್ನು ಪ್ರತಿರೋಧಿಸುತ್ತಲೇ ಬಂದಿದೆ. ಆದರೆ ಅರುಣಾಚಲ ಪ್ರದೇಶದಲ್ಲಿ ಬದುಕುತ್ತಿರುವ ಜನರ ಬಗ್ಗೆ ಉಭಯ ದೇಶಗಳಿಗೂ ವಿಶೇಷ ಕಾಳಜಿಯಿಲ್ಲ. ಈ ಭಾಗದ ಜನರನ್ನು ಭಾರತದ ಹೃದಯ ಭಾಗ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತದೆ. ಚೀನೀ ಪ್ರಜೆಗಳು ಎಂದು ಅವರನ್ನು ಅನುಮಾನಿಸುತ್ತದೆ. ಅತ್ತ, ಚೀನಾದ ಸೈನಿಕರಿಗೂ ಈ ಜನರು ಬೇಕಾಗಿಲ್ಲ. ಆಗಾಗ ಇಲ್ಲಿನ ಜನರು ಸೈನಿಕರ ದಾಳಿಗೀಡಾಗುತ್ತಾರೆ. ಇದರ ವಿರುದ್ಧ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಲೇ ಇದೆ. ಇದೇ ಸಂದರ್ಭದಲ್ಲಿ ಈಶಾನ್ಯ ಭಾರತೀಯರ ಮೇಲೆ ಭಾರತದೊಳಗಿರುವ ಜನರು ಎಸಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿದೆ. ಅಸ್ಸಾಮಿನಲ್ಲಿ ಅಲ್ಪಸಂಖ್ಯಾತರೊಂದಿಗೆ ಅಲ್ಲಿನ ಸರಕಾರ ಹೇಗೆ ವರ್ತಿಸುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಪರಕೀಯರು, ಒಳನುಸುಳುಕೋರರು ಎಂದು ಅಲ್ಲಿನ ವಲಸೆ ಕಾರ್ಮಿಕರ ಮೇಲೆ ನಿರಂತರ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಮುಸ್ಲಿಮರ ಮೇಲೆ ಬಹಿರಂಗವಾಗಿಯೇ ಅಲ್ಲಿನ ಸರಕಾರ ದ್ವೇಷ ಕಾರುತ್ತಿದೆ. ಮಣಿಪುರದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಹತ್ಯಾಕಾಂಡಗಳಿಗೆ ವಿಶ್ವ ಕಳವಳ ಪಡಿಸುತ್ತಾ ಬಂದಿದೆ. ಮೈತೈ ಮತ್ತು ಕುಕಿ ಜನರ ನಡುವೆ ಸರಕಾರವೇ ವಿಭಜನೆಯನ್ನು ತಂದಿಕ್ಕಿ ಅವರನ್ನು ಬಡಿದಾಡಿಸಿತು. ನೂರಾರು ಮನೆಗಳು, ಚರ್ಚುಗಳು ಧ್ವಂಸವಾದವು. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆದವು. ಈಗಲೂ ಮಣಿಪುರ ಶಾಂತವಾಗಿಲ್ಲ. ಈ ಭಾಗದ ಜನರನ್ನು ಭಾರತೀಯರು ಸದಾ ಅನುಮಾನದ ಕಣ್ಣಿನಿಂದಲೇ ನೋಡುತ್ತಾರೆ. ತ್ರಿಪುರಾ ಮೂಲದ ವಿದ್ಯಾರ್ಥಿಯ ಮೇಲೆ ಉತ್ತರಾಖಂಡದಲ್ಲಿ ನಡೆದ ದಾಳಿಗೂ ಈ ಸಂಶಯವೇ ಕಾರಣ. ಭಾರತದೊಳಗಿರುವ ನಮ್ಮವರನ್ನೇ ಪರಕೀಯರನ್ನಾಗಿಸಿ ಅವರ ಮೇಲೆ ದಾಳಿಗಳನ್ನು ಸಂಘಟಿಸುತ್ತಿರುವ ನಮಗೆ, ನೆರೆಯ ಬಾಂಗ್ಲಾ, ಪಾಕಿಸ್ತಾನದಲ್ಲಿ ನಡೆಯುವ ಜನಾಂಗೀಯ ದ್ವೇಷದ ಬಗ್ಗೆ ಮಾತನಾಡಲು ನೈತಿಕತೆಯಿದೆಯೆ? ಈಶಾನ್ಯ ಭಾರತದಿಂದ ಬಂದ ಎಲ್ಲ ಕಾರ್ಮಿಕರೂ ಈ ಭಾಗದ ಜನರಿಗೆ ‘ಬಾಂಗ್ಲಾ ನುಸುಳುಕೋರರು’. ಈ ಭಾಗದ ಕಾರ್ಮಿಕರನ್ನು ತಮ್ಮ ತೋಟ, ಎಸ್ಟೇಟ್ಗಳಲ್ಲಿ ದುಡಿಸಿ ಬಳಿಕ ಅವರನ್ನು ಬಾಂಗ್ಲಾ ನುಸುಳುಕೋರರು ಎಂದು ಹೊರಗಟ್ಟುವುದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನಾಂಗೀಯ ಹತ್ಯೆಗಳು ಹೆಚ್ಚುತ್ತಿವೆ. ಅತ್ಯಂತ ಸುಶಿಕ್ಷಿತರ ನಾಡು ಎಂದು ಗುರುತಿಸಲ್ಪಟ್ಟ ಕೇರಳದಲ್ಲಿ ಛತ್ತೀಸ್ಗಡ ಮೂಲದ ಕಾರ್ಮಿಕನನ್ನು ಬಾಂಗ್ಲಾ ನುಸುಳುಕೋರನೆಂದು ಆರೋಪಿಸಿ ಅತ್ಯಂತ ಬರ್ಬರವಾಗಿ ಕೊಂದು ಹಾಕಲಾಯಿತು. ಕೊಂದವರೆಲ್ಲರೂ ಸಂಘಪರಿವಾರ ಕಾರ್ಯಕರ್ತರಾಗಿರುವುದು ಆಕಸ್ಮಿಕವಲ್ಲ. ಪಶ್ಚಿಮಬಂಗಾಳದ ಮುರ್ಷಿದಾಬಾದ್ನ ಜ್ಯುವೆಲ್ ರಾಣಾ ಎಂಬ 19 ವರ್ಷದ ವಲಸೆ ಕಾರ್ಮಿಕನನ್ನು ಒಡಿಶಾದ ಸಂಬಲ್ಪುರದಲ್ಲಿ ಗುಂಪೊಂದು ಭೀಕರವಾಗಿ ಥಳಿಸಿ ಕೊಂದು ಹಾಕಿತು. ‘ಬಾಂಗ್ಲಾ ನುಸುಳುಕೋರ’ ಎಂದು ಆರೋಪಿಸಿ ಗುಂಪು ಈ ಕೃತ್ಯ ಎಸಗಿದೆ. ಆದರೆ ಆತ ಪಶ್ಚಿಮಬಂಗಾಳದ ನಿವಾಸಿಯಾಗಿದ್ದ. ಆತನ ಸಹವರ್ತಿಗಳು ಕೂಡ ಈ ಸಂದರ್ಭದಲ್ಲಿ ಹಲ್ಲೆಗೀಡಾಗಿದ್ದರು. ಪಶ್ಚಿಮ ಬಂಗಾಳ, ಈಶಾನ್ಯ ಭಾರತದ ಕೂಲಿ ಕಾರ್ಮಿಕರನ್ನು ಇಂದು ಭಾರತದೊಳಗೇ ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ತಮ್ಮದೇ ದೇಶದಲ್ಲಿ ತಮಗೆ ರಕ್ಷಣೆ ಇಲ್ಲ ಎನ್ನುವ ಸ್ಥಿತಿಯಿದೆ. ಇಂದು ಕೂಲಿ ಅರಸಿಕೊಂಡು ಕಾರ್ಮಿಕರು ಇತರ ರಾಜ್ಯಗಳಿಗೆ ಹೋಗುವಂತಹ ವಾತಾವರಣವೇ ಇಲ್ಲ. ಅವರನ್ನು ಶೋಷಣೆ ಮಾಡುವುದು ಕೂಡ ಸುಲಭ. ಸಂಘಪರಿವಾರ ದ್ವೇಷದ ಬೀಜಗಳನ್ನು ಬಿತ್ತಿ ಎಲ್ಲರನ್ನೂ ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡಿದೆ. ಈ ಜನಾಂಗೀಯ ದ್ವೇಷದ ನೇತೃತ್ವವನ್ನು ಸರಕಾರವೇ ಹೊತ್ತುಕೊಂಡಿದೆ. ಇತ್ತೀಚೆಗೆ ಗರ್ಭಿಣಿ ಯೊಬ್ಬರನ್ನು ಬಾಂಗ್ಲಾ ನಿವಾಸಿ ಎಂದು ಸರಕಾರವೇ ಗಡಿಪಾರು ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ, ಆಕೆಯನ್ನು ಕರೆಸಿಕೊಂಡಿತು. ಚುನಾವಣಾ ಆಯೋಗ ನಡೆಸುತ್ತಿರುವ ನೂತನ ಮತದಾರರ ಪಟ್ಟಿ ಪರಿಷ್ಕರಣೆಯು ಈ ದೇಶದಲ್ಲಿ ‘ಲಕ್ಷಾಂತರ ಕೃತಕ ನುಸುಳುಕೋರರನ್ನು’ ಸೃಷ್ಟಿಸುವ ದುರುದ್ದೇಶವನ್ನು ಹೊಂದಿದೆ. ಮತದಾರರ ಪಟ್ಟಿಯಿಂದ ಹೊರ ಬಿದ್ದ ಲಕ್ಷಾಂತರ ಜನರ ಪೌರತ್ವ ಪ್ರಶ್ನೆಗೀಡಾಗುತ್ತದೆ. ಅಂತಿಮವಾಗಿ ಇವರೆಲ್ಲರನ್ನೂ ವಿದೇಶಿಗರು, ನುಸುಳುಕೋರರು ಎಂದು ವಿಭಜಿಸುವ ಪ್ರಯತ್ನ ನಡೆಯಲಿದೆ. ಭಾರತದ ಭವಿಷ್ಯವನ್ನು ಇದು ಇನ್ನಷ್ಟು ಅಪಾಯಕ್ಕೆ ತಳ್ಳಲಿದೆ. ಭಾರತದೊಳಗಿನ ಜನರಲ್ಲಿ ಪರಕೀಯತೆಯನ್ನು ಬಿತ್ತುವ ಪ್ರಯತ್ನವನ್ನು ಯಾರೇ ಮಾಡಿದರೂ ಅವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದರೆ, ಭಾರತದ ಪ್ರತಿ ಊರು ಒಂದೊಂದು ಮಣಿಪುರವಾಗಿ ಪರಿವರ್ತನೆಗೊಳ್ಳಲಿದೆ.
ಸರಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಜನನ , ಮರಣ ನೋಂದಣಿ ಪ್ರಮಾಣ ಪತ್ರ 21 ದಿನದೊಳಗೆ ವಿತರಣೆಗೆ ಸೂಚನೆ
ಆರೋಗ್ಯ ಇಲಾಖೆಯು ಜನನ ಮತ್ತು ಮರಣ ನೋಂದಣಿಯನ್ನು 21 ದಿನದೊಳಗೆ ಕಡ್ಡಾಯಗೊಳಿಸಿದೆ. 2023ರ ತಿದ್ದುಪಡಿಯಂತೆ, ಇದು ಕಡ್ಡಾಯವಾಗಿದ್ದು, ಸಕಾಲದಲ್ಲಿ ಪ್ರಮಾಣಪತ್ರ ನೀಡದಿದ್ದರೆ ವೈದ್ಯಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಇದರಿಂದ ನಾಗರಿಕರು ಸೌಲಭ್ಯ ವಂಚಿತರಾಗುವುದನ್ನು ತಪ್ಪಿಸಿ, ಸಮರ್ಪಕ ಮಾಹಿತಿ ಲಭ್ಯವಾಗಲಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್-11 ತಂಡದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ
ಸಿಡ್ನಿ: ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ಪ್ರಮುಖ ಕ್ಷಣಗಳಿಗೆ 2025 ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆದ್ದಿದೆ. ಬಳಿಕ ಭಾರತದ ವಿರುದ್ಧ ತವರು ನೆಲದಲ್ಲೇ ಕ್ಲೀನ್ ಸ್ವೀಪ್ ಸಾಧಿಸಿತು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ರನ್ ಹೊಳೆ ಹರಿಯಿತು. ಆ್ಯಷಸ್ ಸರಣಿಯನ್ನು ಆಸ್ಟ್ರೇಲಿಯಾ 3-1 ಅಂತರದಿಂದ ಗೆದ್ದಿತು. ಏತನ್ಮಧ್ಯೆ 2025ರಲ್ಲಿ ಹಲವು ಮಂದಿ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತಂಡ ತನ್ನ ಟೆಸ್ಟ್ 11 ತಂಡವನ್ನು ಪ್ರಕಟಿಸಿದೆ. ವರ್ಷದಲ್ಲಿ 11 ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಈ ತಂಡದಲ್ಲಿ ಸೇರಿದ್ದಾರೆ. ಅಂತೆಯೇ ರವೀಂದ್ರ ಜಡೇಜಾ 12ನೇ ಆಟಗಾರನಾಗಿ ಸ್ಥಾನ ಪಡೆಯುವ ಮೂಲಕ ನಾಲ್ವರು ಭಾರತೀಯರು ಕೂಡಾ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ತಲಾ ಇಬ್ಬರು ತಂಡದಲ್ಲಿದ್ದಾರೆ. ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರೆಂದರೆ ಶುಭ್ಮನ್ ಗಿಲ್, ಕೆ.ಎಲ್.ರಾಹುಲ್ ಹಾಗೂ ಜಸ್ಪ್ರೀತ್ ಬೂಮ್ರಾ. ಆಡುವ 11ರಲ್ಲಿ ಸ್ಥಾನ ಪಡೆಯುವ ಅವಕಾಶದಿಂದ ವಂಚಿತರಾಗಿರುವ ಜಡೇಜಾ ಅವರ ಸ್ಥಾನವನ್ನು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕಸಿದುಕೊಂಡಿದ್ದಾರೆ. ಗಿಲ್ 2025ರಲ್ಲಿ 16 ಇನಿಂಗ್ಸ್ ಗಳಿಂದ 983 ರನ್ ಗಳಿಸಿದ್ದು, ರಾಹುಲ್ 19 ಇನ್ನಿಂಗ್ಸ್ ಗಳಲ್ಲಿ 813 ರನ್ ಗಳಿಸಿದ್ದಾರೆ. ಬೂಮ್ರಾ 14 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ ಕಿತ್ತಿದ್ದಾರೆ. ನಾಯಕರಾಗಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವೂಮಾ ಆಯ್ಕೆಯಾಗಿದ್ದಾರೆ. ಭಾರತದ ವಿರುದ್ಧ ಗಣನೀಯ ಪ್ರದರ್ಶನ ನೀಡಿದ ಸೈಮನ್ ಹರ್ಮರ್ ತಂಡದಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಫ್ರಿಕನ್ ಆಟಗಾರ.
2026ರಲ್ಲೂ ಭಾರತ-ಪಾಕಿಸ್ತಾನ ಸಂಘರ್ಷ ಸಾಧ್ಯತೆ: ಅಮೆರಿಕ ಚಿಂತಕರ ಚಾವಡಿ ಎಚ್ಚರಿಕೆ
ವಾಷಿಂಗ್ಟನ್: 2026ರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಅಮೆರಿಕದ ಚಿಂತಕ ಕೂಟವೊಂದು ಎಚ್ಚರಿಕೆ ನೀಡಿದೆ. ವಿದೇಶಿ ಸಂಪರ್ಕಗಳ ಮಂಡಳಿ ವರದಿ ಅಮೆರಿಕದ ವಿದೇಶಾಂಗ ನೀತಿಯ ತಜ್ಞರನ್ನು ಸಮೀಕ್ಷೆಗೆ ಗುರಿಪಡಿಸಿದೆ. ಟ್ರಂಪ್ ಆಡಳಿತ ಉಭಯ ದೇಶಗಳ ನಡುವಿನ ಸಂಘರ್ಷ ಶಮನಗೊಳಿಸಲು ಯತ್ನಿಸಿತ್ತು ಎಂದು ವಿವರಿಸಿದೆ. ಟ್ರಂಪ್ ಆಡಳಿತ ಹಲವು ಸಂಘರ್ಷಗಳನ್ನು ಅಂತ್ಯಗೊಳಿಸಲು ಶ್ರಮಿಸಿತ್ತು. ಇದರಲ್ಲಿ ಕಾಂಗೋ ಗಣರಾಜ್ಯ, ಗಾಝಾ ಪಟ್ಟಿ, ಉಕ್ರೇನ್ ಸೇರಿದ್ದು, ಭಾರತ ಹಾಗೂ ಪಾಕಿಸ್ತಾನ, ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಸಂಘರ್ಷವೂ ಸೇರಿದೆ ಎಂದು ವರದಿ ಹೇಳಿದೆ. ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮೂರು ದಿನಗಳ ಸಂಘರ್ಷ ಏರ್ಪಟ್ಟಿತ್ತು. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ ಬಳಿಕ ಈ ಸಂಷರ್ಘ ಏರ್ಪಟ್ಟಿತ್ತು. ಗಡಿಯಾಚೆಗಿನ ಉಗ್ರ ದಾಳಿಗಳು ಹೆಚ್ಚುವ ಸಾಧ್ಯತೆಯ ಹಿನ್ನೆಲೆಯಲ್ಲಿ 2026ರಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಸಿಎಫ್ಆರ್ ವರದಿ ಎಚ್ಚರಿಸಿದೆ.
ಅಣ್ಣನ ಮಗನ ಜೊತೆ ಮಗಳ ಮದುವೆ ಮಾಡಿಸಿದ ಅಸಿಮ್ ಮುನೀರ್; ಪಾಕ್ ಸೇನಾ ಮುಖ್ಯ ಕಚೇರಿಯಲ್ಲಿ ಭರ್ಜರಿ ದಾವತ್
ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಮಗಳ ಮದುವೆ ಮಾಡಿ ತಂದೆಯ ಜವಾಬ್ದಾರಿಯನ್ನು ಹೆಗಲ ಮೇಲಿಂದ ಕಳಚಿದ್ದಾರೆ. ತಮ್ಮ ಸಹೋದರ ಖಾಸಿಂ ಮುನೀರ್ ಅವರ ಪುತ್ರ ಕ್ಯಾ. ಅಬ್ದುಲ್ ರೆಹಮಾನ್ ಜೊತೆ, ಅಸಿಮ್ ಮುನೀರ್ ತಮ್ಮ ಮಗಳಾದ ಮಹ್ನೂರ್ ಅವರ ಮದುವೆ ಮಾಡಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯ ಕಚೇರಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಕಿಸ್ತಾನದ ಅನೇಕ ಗಣ್ಯುರು ಭಾಗಿಯಾಗಿದ್ದರು. ಇಲ್ಲಿದೆ ಹೆಚ್ಚಿನ ಮಾಹಿತಿ.
180 ಕಿ.ಮೀ. ವೇಗ ದಾಖಲಿಸಿದ ವಂದೇಭಾರತ್ ಸ್ಲೀಪರ್!
ಹೊಸದಿಲ್ಲಿ: ಕೋಟಾ ಮತ್ತು ನಗ್ದಾ ಸೆಕ್ಷನ್ ನಡುವೆ ವಂದೇಭಾರತ್ ಸ್ಲೀಪರ್ ರೈಲು 180 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ವಾಟರ್ ಟೆಸ್ಟ್ ನಡೆಸಿದ ವಿಡಿಯೊವನ್ನೂ ಶೇರ್ ಮಾಡಿದ್ದಾರೆ. ರೈಲ್ವೆ ಸುರಕ್ಷಾ ವಿಭಾಗದ ಆಯುಕ್ತರು ಇಂದು ವಂದೇ ಭಾರತ್ ಸ್ಲೀಪರ್ ಪರೀಕ್ಷಿಸಿದ್ದಾರೆ. ಕೋಟಾ ನಗ್ದಾ ಸೆಕ್ಷನ್ ಗಳ ನಡುವೆ ಇದು 180 ಕಿಲೋಮೀಟರ್ ವೇಗದಲ್ಲಿ ಚಲಿಸಿದೆ. ಈ ಹೊಸ ಪೀಳಿಗೆ ರೈಲು ವಾಟರ್ ಟೆಸ್ಟ್ನಲ್ಲೂ ತಾಂತ್ರಿಕ ವೈಶಿಷ್ಟಗಳನ್ನು ಪ್ರದರ್ಶಿಸಿದೆ ಎಂದು ವೈಷ್ಣವ್ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ರೈಲು 182 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವುದು ಮೊಬೈಲ್ ಸ್ಕ್ರೀನ್ ನಲ್ಲಿ ದಾಖಲಾಗಿದೆ. ಪ್ರತಿ ಬೋಗಿಯ ಮೇಲ್ಭಾಗದಲ್ಲಿ ನೀರು ತುಂಬಿದ ಲೋಟಗಳನ್ನು ಇಟ್ಟು ಪರೀಕ್ಷಿಸಲಾಗಿದ್ದು, ನೀರು ಚೆಲ್ಲದೇ ಇರುವುದು ರೈಲಿನ ಸ್ಥಿರತೆಯನ್ನು ಪ್ರತಿಬಿಂಬಿಸಿದೆ. ವಂದೇಭಾರತ್ ರೈಲು ಪ್ರಸ್ತುತ ಭಾರತೀಯ ರೈಲ್ವೆ ಜಾಲದಲ್ಲಿ ಸೆಮಿ ಹೈಸ್ಪೀಡ್ ರೈಲುಗಳಾಗಿ ಓಡುತ್ತಿದ್ದು, 180 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ರೈಲಿನ ಸರಾಸರಿ ವೇಗ, ರೈಲು ಹಳಿಯ ಭೌಗೋಳಿಕ ಅಂಶಗಳು, ನಿಲುಗಡೆ, ನಿರ್ವಹಣಾ ಕೆಲಸವನ್ನು ಅವಲಂಬಿಸಿದೆ ಎಂದು ರೈಲ್ವೆ ಸಚಿವಾಲಯದ ಹೇಳಿಕೆ ವಿವರಿಸಿತ್ತು. ಮುಂದಿನ ದಿನಗಳಲ್ಲಿ ವಂದೇಭಾರತ್ ಸ್ಲೀಪರ್ ರಾತ್ರಿ ಅವಧಿಯ ಪ್ರಯಾಣವನ್ನೇ ಬದಲಿಸಲಿದೆ; ಅದರ ವೇಗ, ಆರಾಮ ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಇದು ದೂರದ ಪ್ರಯಾಣಿಕರಿಗೆ ಒದಗಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ. Vande Bharat Sleeper tested today by Commissioner Railway Safety. It ran at 180 kmph between Kota Nagda section. And our own water test demonstrated the technological features of this new generation train. pic.twitter.com/w0tE0Jcp2h — Ashwini Vaishnaw (@AshwiniVaishnaw) December 30, 2025
Karnataka Weather: ವಾಯುಭಾರ ಕುಸಿತ, ರಾಜ್ಯದ 9 ಜಿಲ್ಲೆಗಳಲ್ಲಿ ಎರಡು ದಿನ ಮಳೆ ಸಾಧ್ಯತೆ
ರಾಜ್ಯದಲ್ಲಿ ಒಂದೆಡೆ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹೊಸ ವರ್ಷದ ಹೊತ್ತಲ್ಲೇ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ವರ್ಷದ ಕೊನೆಯ ದಿನವಾದ ಇಂದು (ಡಿ.31) ಹಾಗೂ ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಈ ವಾಯುಭಾರ ಕುಸಿತವು ಈಗ
Explained: ಯಲಹಂಕದ ಕೋಗಿಲು ಅಕ್ರಮ ಲೇಔಟ್ 20 ವರ್ಷದ್ದಲ್ಲ, ಈಚೆಗೆ ಸೃಷ್ಟಿಯಾದದ್ದು!
ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ 2018ರ ನಂತರ ಅಕ್ರಮ ಲೇಔಟ್ ತಲೆ ಎತ್ತಿದ್ದು, ಸ್ಥಳೀಯ ಮುಖಂಡರ ಕುಮ್ಮಕ್ಕಿನಿಂದ ಬಡವರು ಒತ್ತುವರಿ ಮಾಡಿ ಶೆಡ್, ಮನೆ ನಿರ್ಮಿಸಿಕೊಂಡಿದ್ದರು. 150ಕ್ಕೂ ಅಧಿಕ ಮನೆ ಧ್ವಂಸಗೊಂಡಿದ್ದು, 1007 ಜನ ಬಾಧಿತರಾಗಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ, ಸಂತ್ರಸ್ತರ ಬಳಿ ಇರುವ ದಾಖಲೆಗಳು ನಕಲಿ ಎಂದು ತಹಶೀಲ್ದಾರ್ ಹೇಳಿದ್ದಾರೆ.
ಭಯೋತ್ಪಾದಕ ದಾಳಿಯಿಂದಾಗಿ 2026ರಲ್ಲಿ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಉಲ್ಬಣ; ಯುಎಸ್ ವರದಿಯಿಂದ ತಲ್ಲಣ!
2025ರಲ್ಲಿ ಭಾರತ-ಪಾಕಿಸ್ತಾನ ವರ್ಷವೀಡಿ ಪರಸ್ಪರ ಜಗಳವಾಡಿಕೊಂಡೇ ಇದ್ದವು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಆದರೆ ಅಮೆರಿಕದ ಚಿಂತಕರ ಚಾವಡಿಯೊಂದು, 2026ರಲ್ಲೂ ಭಾರತ-ಪಾಕಿಸ್ತಾನ ನಡುವಿನ ಈ ಕಂದರ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದಾಗಿ, ದಕ್ಷಿಣ ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳ ನಡುವೆ ಮಿಲಿಟರಿ ಸಂಘರ್ಷ ಉಲ್ಬಣಗೊಳ್ಳಲಿದೆ ಎಂದು ವರದಿ ಅಂದಾಜಿಸಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
Vande Bharat Sleeper: 180 ಕಿಮೀ ವೇಗ ಪರೀಕ್ಷೆಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಅಚ್ಚರಿಯ ಸ್ಥಿರತೆ, ವಿಡಿಯೋ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿ ಉಂಟು ಮಾಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮುಂದುವರಿದ ಭಾಗ ವಂದೇ ಭಾರತ್ ಸ್ಲೀಪರ್ ರೈಲು (Vande Bharat Express Sleeper Train) 2026ರಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಈ ರೈಲು ಪ್ರತಿ ಗಂಟೆಗೆ 180 ಕಿಲೋ ಮೀಟರ್ಗೂ ಅಧಿಕ ವೇಗದಲ್ಲಿ ಚಲಿಸಲಿದೆ. ಈ ರೈಲಿನ ಶಕ್ತಿ, ಸಾಮರ್ಥ್ಯ, ಸಮತೋಲನ
ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ 53 ಜನರ ತಂಡ ಇಂದೋರ್ ಅಧ್ಯಯನ ಪ್ರವಾಸದಿಂದ ಮರಳಿದೆ. ಈ ಪ್ರವಾಸದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಮೇಯರ್ ಮತ್ತು ಆಯುಕ್ತರು ಪ್ರವಾಸದ ಉದ್ದೇಶ, ಖರ್ಚು, ಮತ್ತು ಅನುಷ್ಠಾನದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಇದರಿಂದಾಗಿ ನಾಗರಿಕರು ನಿರಾಶೆಗೊಂಡಿದ್ದಾರೆ. ಇಂದೋರ್ ಮಾದರಿಯಲ್ಲಿ ವ್ಯವಸ್ಥೆ ಸುಧಾರಿಸಲು ಇಚ್ಛಾಶಕ್ತಿ ಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು. ಶ್ವಾನಗಳ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಸಭೆ ಅನುಮೋದನೆ ನೀಡಿತು.
ಹೊಸ ವರ್ಷಾಚರಣೆಗೆ ಹಂಪಿ ಸಜ್ಜು: ಸುರ್ಯೋದಯ ವೀಕ್ಷಣೆಗೆ ಕಾತರ
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. ವಿದೇಶಿ ಹಾಗೂ ದೇಶೀ ಪ್ರವಾಸಿಗರು ಹಂಪಿಯ ಸ್ಮಾರಕಗಳ ವೈಭವದೊಂದಿಗೆ ಗುಡ್ಡ, ಬೆಟ್ಟಗಳಲ್ಲಿ ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಕಾತುರರಾಗಿದ್ದಾರೆ. ಹೋಟೆಲ್ಗಳು ಸಂಪೂರ್ಣ ಭರ್ತಿಯಾಗಿದ್ದು, ಪ್ರವಾಸಿಗರು ಪಕ್ಕದ ನಗರಗಳತ್ತ ಮುಖಮಾಡಿದ್ದಾರೆ.
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ಜ.1 ರಿಂದ ಆರಂಭ, ಈ ಬಾರಿಯ ಅಜ್ಜನ ಜಾತ್ರೆಯ ವಿಶೇಷಗಳೇನು ಗೊತ್ತಾ?
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಜ.1ರಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ತೆಪ್ಪೋತ್ಸವ, ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ, ಕುಸ್ತಿ, ಕಬಡ್ಡಿ ಪಂದ್ಯಾವಳಿ, ರಕ್ತದಾನ ಶಿಬಿರ, ಕೃಷಿ ಮೇಳ ಹಾಗೂ ಫಲಪುಷ್ಪ ಪ್ರದರ್ಶನಗಳು ಜರುಗಲಿವೆ. ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

28 C