ರಾಜ್ಯದಲ್ಲಿ ಕ್ರೀಡಾ ಕ್ಷೇತ್ರವನ್ನು ಉತ್ತೇಜಿಸುವ ದೃಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಪರ್ ಆಫರ್ವೊಂದನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ 6 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ಬೆಳ್ಳಿ ಪದಕ ಗೆಲ್ಲುವವರಿಗೆ 4 ಕೋಟಿ ರೂ. ಮತ್ತು ಕಂಚಿನ ಪದಕ ಗೆಲ್ಲುವ ಕ್ರೀಡಾಪಟುವಿಗೆ 3 ಕೋಟಿ ರೂ. ಬಹುಮಾನ ನೀಡುವುದಾಗಿ ಸಿಎಂ ಹೇಳಿದ್ದಾರೆ.
ಸಿಂಧನೂರು | ತುರ್ವಿಹಾಳ ಪಟ್ಟಣ ಪಂಚಾಯತ್ ಉಪಚುನಾವಣೆ : ಶೇ.80ರಷ್ಟು ಶಾಂತಿಯುತ ಮತದಾನ
ಸಿಂಧನೂರು, ಡಿ.21: ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ 4ನೇ ವಾರ್ಡಿಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇ.80ರಷ್ಟು ಶಾಂತಿಯುತ ಮತದಾನವಾಗಿದೆ. ಸದಸ್ಯ ಡಿ.ಶಂಕರಗೌಡ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ತೆರವಾಗಿದ್ದ 4ನೇ ವಾರ್ಡಿಗೆ ಉಪಚುನಾವಣೆ ನಡೆಯಿತು. ಹಿಂದುಳಿದ ವರ್ಗ(ಅ)ಕ್ಕೆ ಮೀಸಲಾದ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬಾಲಾಜಿ ಮಡಿವಾಳ, ಭಾರತೀಯ ಜನತಾ ಪಾರ್ಟಿಯಿಂದ ಮುನಿಯಪ್ಪ ಸ್ಪರ್ಧಿಸಿದ್ದರು. ಪಟ್ಟಣದ ಕೋಟೆ ಶಾಲೆಯ ಮತಗಟ್ಟೆಯಲ್ಲಿ 919 ಮತದಾರರ ಪೈಕಿ 356 ಪುರುಷ ಹಾಗೂ 379 ಮಹಿಳಾ ಮತದಾರರು ಸೇರಿ 735 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬುಧವಾರ ಮತಎಣಿಕೆ ನಡೆಯಲಿದೆ. 14 ಸ್ಥಾನ ಬಲದ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಈಗಾಗಲೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೂ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸ್ವಗ್ರಾಮವಾಗಿರುವುದರಿಂದ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಎರಡು ಪಕ್ಷಗಳ ಮುಖಂಡರು, ನಾಯಕರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶತಾಯ-ಗತಾಯ ಪ್ರಯತ್ನಿಸಿದ್ದಾರೆ.
ಮಂಗಳೂರು | ಕೇಂದ್ರ ಸರಕಾರದ ವಿರುದ್ಧ ಡಿ.22ರಂದು ಕಾಂಗ್ರೆಸ್ ಪಾದಯಾತ್ರೆ: ಧರಣಿ
ಮಂಗಳೂರು : ಡಿ.22ರ, ಸೋಮವಾರದಂದು ಬೆಳಿಗ್ಗೆ 10.45 ಗಂಟೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಿಂದ ಪಾದಯಾತ್ರೆ ಆರಂಭವಾಗಿದ್ದು, ಜಿಲ್ಲಾ ಬಿಜೆಪಿ ಕಚೇರಿಗೆ ಘೇರಾವ್ ಹಾಕಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಹಾಗೂ ಸ್ವರೂಪ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ, ಜೊತೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಸ್ವಾಯತ್ತ ಸಂಸ್ಥೆಯಾದ ಜಾರಿ ನಿರ್ದೇಶನಾಲಯವನ್ನು (ಈ.ಡಿ.) ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಡಿ.22ರಂದು ಪ್ರತಿಭಟನೆ ನಡೆಸಲಾಗುವುದು. ಡಿ.ರ (ಸೋಮವಾರ) ಬೆಳಿಗ್ಗೆ 10.45 ಗಂಟೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಿಂದ ಪಾದಯಾತ್ರೆ ಆರಂಭವಾಗಿದ್ದು, ಜಿಲ್ಲಾ ಬಿಜೆಪಿ ಕಚೇರಿಗೆ ಘೇರಾವ್ ಹಾಕಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಳ್ಳಾರಿಯಲ್ಲಿ ಬಗರ್ ಹುಕುಂ ಹಕ್ಕುಪತ್ರ ವಿಲೇವಾರಿಗೆ ಗ್ರಹಣ: ಶೇ.80% ಅರ್ಜಿ ತಿರಸ್ಕೃತಗೊಂಡಿರೋದೇಕೆ?
ಬಳ್ಳಾರಿ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮ ಪ್ರಕ್ರಿಯೆ ಆಮೆಗತಿಯಲ್ಲಿದೆ. 26,946 ಅರ್ಜಿಗಳಲ್ಲಿ 22,362 ತಿರಸ್ಕೃತಗೊಂಡಿದ್ದು, ಒಬ್ಬ ರೈತನಿಗೂ ಭೂಮಿ ಮಂಜೂರಾಗಿಲ್ಲ. ತಾಂತ್ರಿಕ ಕಾರಣ, ದಾಖಲೆ ಕೊರತೆಯಿಂದ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಕೇವಲ 605 ಅರ್ಜಿಗಳು ಸಮಿತಿ ಮುಂದೆ ಮಂಡನೆಗೆ ಅರ್ಹತೆ ಪಡೆದಿವೆ. ಅಧಿಕಾರಿಗಳ ವಿಳಂಬದಿಂದ ರೈತರು ಅಸಮಾಧಾನಗೊಂಡಿದ್ದಾರೆ.
ಬೆಳ್ತಂಗಡಿ | ವಿಷದ ಹಾವು ಕಡಿತ: ಮಹಿಳೆ ಮೃತ್ಯು
ಬೆಳ್ತಂಗಡಿ : ತಾಲೂಕಿನ ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಡಿ.21ರಂದು ನಡೆದಿದೆ. ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ (55) ಮೃತ ಮಹಿಳೆಯಾಗಿದ್ದಾರೆ. ಮದ್ಯಾಹ್ನದ ವೇಳೆ ತೋಟದಲ್ಲಿ ಕೆಲಸ ನಿರತವಾಗಿದ್ದಾಗ ನಾಗರ ಹಾವು ಕಡಿದಿದೆ ಎಂದು ಹೇಳಲಾಗಿದೆ. ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.
IMD Weather Forecast: ಚಂಡಮಾರುತ ಪ್ರಸರಣ: ಈ ಭಾಗಗಳಲ್ಲಿ 5 ದಿನ ಶೀತ ಗಾಳಿ, ದಟ್ಟ ಮಂಜು ಅಲರ್ಟ್
ದೇಶಾದ್ಯಂತ ಮಿಶ್ರ ವಾತಾವರಣ ದಾಖಲಾಗಿದೆ. ಕರ್ನಾಟಕ, ತೆಲಂಗಾಣ ಸೇರಿ ಕೆಲವು ರಾಜ್ಯಗಳಲ್ಲಿ ಶೀತಗಾಳಿ ಪ್ರಭಾವ ಕಂಡು ಬರುತ್ತಿದೆ. ಕಣಿವೆ ರಾಜ್ಯಗಳಲ್ಲಿ ಕೆಲವೆಡೆ ಗುಡುಗು ಸಹಿತ ಮಳೆ ದಾಖಲಾಗಿದೆ. ಉಳಿದಂತೆ ಒಣಹವೆ ಹಾಗೂ ಹೆಚ್ಚಿನ ಚಳಿ ಕಂಡು ಬರುತ್ತಿದೆ. ಮುಂದಿನ ಐದು ದಿನ ಇದೇ ರೀತಿಯ ವಾತಾವರಣ ದೇಶದ ವಿವಿಧ ಭಾಗಗಳಲ್ಲಿ ಮುಂದುವರಿಯಲಿದೆ. ಚಳಿ ಮೇಲುಗೈ ಸಾಧಿಸಲಿದೆ ಎಂದು
8 ವರ್ಷ ಕಳೆದರೂ ಯಡ್ರಾಮಿ ತಾಲೂಕಿಗೆ ಸ್ವಂತ ಸರಕಾರಿ ಕಚೇರಿಗಳಿಲ್ಲ
ಸರಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ, ಸಂಘ ಮುಸ್ಲಿಂ ವಿರೋಧಿ ಅಲ್ಲ; ಮೋಹನ್ ಭಾಗವತ್!
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಯನ್ನು ಸುತ್ತುತ್ತಿರುವ ಸರಸಂಘಚಾಲಕ ಮೋಹನ್ ಭಾಗವತ್, ಸಂಘದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದರಂತೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಆರ್ಎಸ್ಎಸ್ 100 ವ್ಯಾಖ್ಯಾನ ಮಾಲಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾಗವತ್, ಭಾರತ ಹಿಂದೂ ರಾಷ್ಟ್ರ ಎಂಬ ಸತ್ಯವನ್ನು ಪರಿಗಣಿಸಲು ಯಾವುದೇ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸಂಘವು ಮುಸ್ಲಿಂ ವಿರೋಧಿ ಅಲ್ಲ ಎಂದು ಸರಸಂಘಚಾಲಕ ಸ್ಪಷ್ಟಪಡಿಸಿದ್ದಾರೆ. ಇಲ್ಲಿದೆ ಮಾಹಿತಿ.
ಅನ್ನಭಾಗ್ಯ: ಆಹಾರ ಧಾನ್ಯ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ
►ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತೀ ಕನಿಷ್ಠ ►ಬಡವರ ಬದುಕು ದುಸ್ತರ
ಅಕ್ರಮ ನಿರ್ಮಾಣ ಆರೋಪ: 400ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ ಜಿಬಿಎ
ಬಾಣಂತಿಯರು, ಮಕ್ಕಳ ಸಹಿತ ನೂರಾರು ಬಡ ಕುಟುಂಬಗಳು ಬೀದಿಪಾಲು
ಜಾಲಿ ಬಾರಿನಲ್ಲಿ ಕೂತ ಪೋಲಿ ಹುಡುಗರು, ಗುಂಡು ಹಾರಿಸಿ ಜನರನ್ನು ಕೊಂದರು; ದ.ಆಫ್ರಿಕಾ ಮಾಸ್ ಶೂಟಿಂಗ್ ಅಪ್ಡೇಟ್ಸ್!
ಆಫ್ರಿಕಾ ಖಂಡದಲ್ಲಿ ತ್ವರಿತ ಅಭಿವೃದ್ಧಿ ದರವನ್ನು ಹೊಂದಿರುವ ದಕ್ಷಿಣ ಆಫ್ರಿಕಾದಲ್ಲಿ, ಸಾಮೂಹಿಕ ಹತ್ಯೆಯಂತಹ ಅಪರಾಧಗಳು ಹೆಚ್ಚುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ರಾಜಧಾನಿ ಜೋಹಾನ್ಸ್ಬರ್ಗ್ ಸಮೀಪದ ಬಾರ್ವೊಂದರಲ್ಲಿ 12 ಜನ ಬಂದೂಕುಧಾರಿಗಳ ಗುಂಪೊಂದು, ಮನಬಂದಂತೆ ಗುಂಡುಹಾರಿಸಿ 9 ಜನರನ್ನು ಬಲಿಪಡೆದಿದೆ. ಘಟನೆ ನಿನ್ನೆ (ಡಿ.21-ಭಾನುವಾರ) ಸಂಭವಿಸಿದ್ದು, ಪೊಲೀಸರು ಬಂದೂಕುಧಾರಿ ಗುಂಪಿನ ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸಾಮೂಹಿಕ ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ. ಈ ಕುರಿತು ಇಲ್ಲಿದೆ ಮಾಹಿತಿ.
ಭೀಕರ ಚಳಿಗೆ ಉತ್ತರ ಭಾರತ ತತ್ತರ : ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತ
ಹೊಸದಿಲ್ಲಿ: ಶೀತಗಾಳಿಯ ಹೊಡೆತಕ್ಕೆ ಇಡೀ ಉತ್ತರ ಭಾರತ ನಲುಗಿದೆ. ತುತ್ತತುದಿಯ ಜಮ್ಮು ಕಾಶ್ಮೀರ, ಲಡಾಕ್ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಬಯಲು ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ಉತ್ತರ ಭಾರತದಲ್ಲಿ ಹಿಮಪಾತ, ದಟ್ಟ ಮಂಜು ಮತ್ತು ಮಳೆ ಮುಂದುವರಿಯಲಿದೆ. ಆದ್ದರಿಂದ ಚಳಿಯ ಹೊಡೆತ ಮುಂದುವರಿಯುವ ಸಾಧ್ಯತೆ ಇದೆ. ಜಮ್ಮು ಕಾಶ್ಮೀರದ ಎಲ್ಲೆಡೆ ವ್ಯಾಪಕ ಹಿಮಪಾತವಾಗುತ್ತಿದ್ದು, ಗುಲ್ಮಾರ್ಗ್ನಲ್ಲಿ ಎರಡು ಇಂಚು ದಪ್ಪಕ್ಕೆ ಮಂಜಿನ ಪದರ ನಿರ್ಮಾಣವಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ಏಕೈಕ ಪ್ರದೇಶದಲ್ಲಿ ಇದೀಗ ಉಷ್ಣಾಂಶ ಮೈನಸ್ 1.5 ಡಿಗ್ರಿ ಸೆಲ್ಷಿಯಸ್ಗೆ ಇಳಿದಿದೆ. ಸೂನಾಮಾರ್ಗ್ನಲ್ಲಿ ಮುಂಜಾನೆ ಆರಂಭವಾದ ಹಿಮಪಾತ ಮಧ್ಯಾಹ್ನದವರೆಗೂ ಮುಂದುವರಿದಿದೆ. ವ್ಯಾಪಕ ಹಿಮಪಾತದ ಹೊರತಾಗಿಯೂ ಶ್ರೀನಗರದಲ್ಲಿ ಈ ಋತುವಿನ ಅತ್ಯಂತ ಬೆಚ್ಚಗಿನ ರಾತ್ರಿ ದಾಖಲಾಗಿದ್ದು, ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಷಿಯಸ್ ಇತ್ತು. ಇದು ವಾಡಿಕೆಯ ತಾಪಮಾನಕ್ಕಿಂತ ಆರು ಡಿಗ್ರಿ ಅಧಿಕ. ಪ್ರತಿಕೂಲ ಹವಾಮಾನದ ಸ್ಥಿತಿಯಿಂದಾಗಿ 11 ವಿಮಾನಗಳು ಶ್ರೀನಗರ ವಿಮಾನ ನಿಲ್ದಾಣದಿಂದ ಸಂಚಾರ ರದ್ದುಪಡಿಸಿವೆ. ಹಿಮಾಚಲ ಪ್ರದೇಶದ ಲಹಲ್-ಸ್ಪಿತಿ ಮತ್ತು ಚಂಬಾಜಿಲ್ಲೆಗಳಲ್ಲಿ ಭಾರಿ ಶೀತಗಾಳಿಯ ಪರಿಸ್ಥಿತಿ ಇದೆ. ಶಿಂಕು ಲಾಮ ರೋಹ್ಟಗ್ ಪಾಸ್ ಮತ್ತು ಪಂಗ್ಲಿ ಕಣಿವೆಯಲ್ಲಿ ಹಿಮಪಾತವಾಗುತ್ತಿದೆ. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಬಯಲು ಸೀಮೆಯಲ್ಲಿ ದಟ್ಟ ಮಂಜು ಮುಸುಕಿದೆ. ಹರ್ಯಾಣದ ನರ್ಲೂಲ್ನಲ್ಲಿ ಕನಿಷ್ಠ ತಾಪಮಾನ 5.2 ಡಿಗ್ರಿಗೆ ಕುಸಿದಿದೆ. ಪಂಜಾಬ್ನ ಗುರುದಾಸಪುರದಲ್ಲಿ 6.8 ಡಿಗ್ರಿ ತಾಪಮಾನ ದಾಖಲಾಗಿದೆ.
ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸೆ: ಅಲ್ಪಸಂಖ್ಯಾತರ ರಕ್ಷಣೆಯಾಗಲಿ
ಬೂದಿ ಮುಚ್ಚಿದ ಕೆಂಡದಂತಿದ್ದ ಬಾಂಗ್ಲಾ ಮತ್ತೆ ಉರಿಯ ತೊಡಗಿದೆ. 2024ರ ಬಾಂಗ್ಲಾ ರಾಜಕೀಯ ವಿಪ್ಲವದ ಮುಂಚೂಣಿಯಲ್ಲಿದ್ದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬಳಿಕ ಬಾಂಗ್ಲಾದಲ್ಲಿ ಮತ್ತೆ ಜನರು ಬೀದಿಗಿಳಿದಿದ್ದಾರೆ. ಕಳೆದ ವಾರ ಢಾಕಾದ ಬಿಜೊಯ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಹಾದಿ ಅವರಿಗೆ ಗುಂಡಿಕ್ಕಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರು ಗುರುವಾರ ಮೃತಪಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆಯೇ ಬಾಂಗ್ಲಾದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿತು. ಬಾಂಗ್ಲಾದೊಳಗೆ ನಡೆಯುತ್ತಿರುವ ಈ ಹಿಂಸಾಚಾರ, ದಂಗೆಗಳನ್ನು ಆ ದೇಶದ ಆಂತರಿಕ ವಿಷಯವೆಂದು ಬಿಟ್ಟು ಬಿಡುವ ಸ್ಥಿತಿಯಲ್ಲಿ ಭಾರತವೂ ಇಲ್ಲ. ಯಾಕೆಂದರೆ ಈ ಹಿಂಸಾಚಾರದಲ್ಲಿ ಭಾರತದ ಹೆಸರು ಬೇಡವೆಂದರೂ ಜೋಡಿಸಲ್ಪಡುತ್ತಿದೆ. ಮುಖ್ಯವಾಗಿ, ಹಾದಿ ಹತ್ಯೆ ಆರೋಪಿಗಳು ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಶಂಕೆಯು, ಪ್ರತಿಭಟನಾಕಾರರನ್ನು ಕೆರಳಿಸಿದೆ. ಈ ಶಂಕೆಯು ಬಾಂಗ್ಲಾದಲ್ಲಿ ಭಾರತ ವಿರೋಧಿ ಮನಸ್ಥಿತಿಯನ್ನು ಹೆಚ್ಚಿಸಿದೆ. ಇದು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗೂ ಕಾರಣವಾಗುವ ಸಾಧ್ಯತೆಗಳಿವೆ. ಈಗಾಗಲೇ ಹಿಂದೂ ಧರ್ಮಕ್ಕೆ ಸೇರಿದ ಒಬ್ಬ ಯುವಕನ ಹತ್ಯೆಯಾಗಿದ್ದು, ಭಾರತದ ಉಗ್ರವಾದಿ ಕೇಸರಿ ಪಡೆಗಳು ಈ ಹತ್ಯೆಯನ್ನು ತಮ್ಮ ರಾಜಕೀಯಗಳಿಗೆ ಬಳಸಿಕೊಳ್ಳಲು ಮುಂದಾಗಿವೆ. ಬಾಂಗ್ಲಾದಲ್ಲಿ ಹಾದಿ ಹತ್ಯೆಯನ್ನು ಮುಂದಿಟ್ಟುಕೊಂಡು ಯುವಕರ ಗುಂಪು ಭಾರತದ ವಿರುದ್ಧ ದ್ವೇಷವನ್ನು ಹರಡಲು ಮುಂದಾಗಿದ್ದರೆ, ಇತ್ತ ಭಾರತದಲ್ಲಿ ಸಂಘಪರಿವಾರವು ಬಾಂಗ್ಲಾ ಹಿಂಸಾಚಾರವನ್ನು ತೋರಿಸಿ ಭಾರತದೊಳಗಿರುವ ಭಾರತೀಯ ಮುಸ್ಲಿಮರ ಮೇಲೆ ದ್ವೇಷ ಸಾಧಿಸಲು ಮುಂದಾಗಿದೆ. ಈ ಎರಡೂ ಗುಂಪುಗಳಿಗೆ ದೊಡ್ಡ ವ್ಯತ್ಯಾಸವೇನೂ ಇಲ್ಲ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಲ್ಲಿನ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವೆಂದು ಭಾರತದ ಕೆಲವು ರಾಜಕೀಯ ಶಕ್ತಿಗಳು ಬಿಂಬಿಸಲು ಪ್ರಯತ್ನಿಸುತ್ತಿದೆಯಾದರೂ, ಹಿಂಸಾಚಾರದಲ್ಲಿ ಮುಸ್ಲಿಮ್ ಮುಖಂಡರೂ ಬಲಿಯಾಗುತ್ತಿದ್ದಾರೆ. ಶನಿವಾರ ನಸುಕಿನಲ್ಲಿ ಅಲ್ಲಿನ ಬಿಎನ್ಪಿ ಮುಖಂಡನ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಈ ಸಂದರ್ಭದಲ್ಲಿ ಬಿಎನ್ಪಿ ಮುಖಂಡ ಬಿಲಾಲ್ ಹುಸೈನ್ ಅವರ ಏಳು ವರ್ಷದ ಪುತ್ರಿ ಮೃತಪಟ್ಟಿದ್ದಾಳೆ. ಉಳಿದ ಕುಟುಂಬ ಸದಸ್ಯರು ಗಂಭೀರ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದೂ ಯುವಕನನ್ನು ಬರ್ಬರವಾಗಿ ಕೊಂದು ಹಾಕಿದ ಏಳು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ದೇಶದ ಪ್ರಧಾನ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ‘ಹಾದಿ ಹತ್ಯೆಗೆ ಪ್ರತೀಕಾರ ಸಲ್ಲದು. ಹಿಂಸೆಯನ್ನು ವಿರೋಧಿಸುವುದೇ ಹಾದಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ’ ಎಂದು ಅವರು ಕರೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತವು ಅತ್ಯಂತ ಜಾಗರೂಕವಾಗಿ ಮುಂದಡಿಯಿಡಬೇಕು. ಅಲ್ಲಿನ ಆಂತರಿಕ ವಿದ್ಯಮಾನಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ನಡೆಸದೇ, ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಅಲ್ಲಿನ ಸರಕಾರಕ್ಕೆ ಗರಿಷ್ಠ ಒತ್ತಡವನ್ನು ಹೇರಬೇಕು. ಹಾದಿ ಹತ್ಯೆಯಲ್ಲಿ ಶಾಮೀಲಾಗಿರುವ ಆರೋಪಿಗಳಿಗೆ ಭಾರತದಲ್ಲಿ ತಲೆ ಮರೆಸುವುದಕ್ಕೆ ಯಾವ ರೀತಿಯಲ್ಲೂ ಅವಕಾಶವನ್ನು ನೀಡಬಾರದು. ಈ ನಿಟ್ಟಿನಲ್ಲಿ ಸರಕಾರ ತನ್ನ ನಿಲುವನ್ನು ಬಾಂಗ್ಲಾಕ್ಕೆ ಸ್ಪಷ್ಟ ಪಡಿಸುವುದು ಅತ್ಯಗತ್ಯ. ಈಗಾಗಲೇ ಪದಚ್ಯುತ ಬಾಂಗ್ಲಾ ಪ್ರಧಾನಮಂತ್ರಿ ಶೇಕ್ಹಸೀನಾರಿಗೆ ಆಶ್ರಯ ನೀಡುವ ಮೂಲಕ ಭಾರತವು ಬಾಂಗ್ಲಾದ ಸಿಟ್ಟಿಗೆ ಗುರಿಯಾಗಿದೆ. ಶೇಕ್ ಹಸೀನಾರಿಗೆ ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ಆಶ್ರಯ ನೀಡಲು ಹಿಂದೇಟು ಹಾಕಿದಾಗ ಭಾರತ ಆಕೆಯನ್ನು ಹಾರ್ದಿಕವಾಗಿ ಸ್ವಾಗತಿಸಿತು ಮಾತ್ರವಲ್ಲ, ‘ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದ್ದೇನೆ’ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿತು. ಒಂದೆಡೆ, ಭಾರತದಲ್ಲಿರುವ ನೂರಾರು ಪ್ರಜೆಗಳನ್ನೇ ‘ಬಾಂಗ್ಲಾ ನುಸುಳುಕೋರರು’ ಎಂದು ಅನುಮಾನಿಸಿ ಅವರಿಗೆ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ನೀಡುತ್ತಾ ಅವರನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಲು ಸಂಚು ರೂಪಿಸುತ್ತಿರುವ ಹೊತ್ತಿನಲ್ಲಿ ಭಾರತ ಸರಕಾರ ನರಮೇಧ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವ ಪದಚ್ಯುತ ಶೇಕ್ ಹಸೀನಾರಿಗೆ ನೀಡಿರುವ ಆಶ್ರಯವನ್ನು ಮಾನವೀಯ ನೆಲೆಯಲ್ಲಿ ಸಮರ್ಥಿಸಲು ನೋಡುತ್ತಿರುವುದು ಅನುಮಾನ, ಟೀಕೆಗಳಿಗೆ ಕಾರಣವಾಗಿದೆ. ಇಂದು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭಾರತ ಸರಕಾರ ಪ್ರಾಮಾಣಿಕವಾದ ಕಾಳಜಿಯನ್ನು ಹೊಂದಿದ್ದರೆ, ಅದು ಅಲ್ಲಿನ ಸರಕಾರದ ಮೇಲೆ ಒತ್ತಡಗಳನ್ನು ಹಾಕಬೇಕು. ಭಾರತದ ಆಗ್ರಹಗಳನ್ನು ಬಾಂಗ್ಲಾ ಸ್ವೀಕರಿಸಬೇಕಾದರೆ ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಯಾಗುವುದು ಅತ್ಯಗತ್ಯವಾಗಿದೆ. ಆದರೆ, ಕೆಲವು ದಿನಗಳಿಂದ ಭಾರತ-ಬಾಂಗ್ಲಾ ನಡುವೆ ಉದ್ವಿಗ್ನ ವಾತಾವರಣ ಹೆಚ್ಚ ತೊಡಗಿದೆ. ಇತ್ತೀಚೆಗೆ ಬಾಂಗ್ಲಾದೇಶದ ನ್ಯಾಶನಲ್ ಸಿಟಿಝನ್ ಪಾರ್ಟಿಯ ಮುಖಂಡ ಹಸ್ನತ್ ಅಬ್ದುಲ್ಲಾ ಅವರು, ‘ಭಾರತವು ಬಾಂಗ್ಲಾದ ವಿರೋಧಿ ಪಡೆಗಳಿಗೆ ಆಶ್ರಯ ನೀಡಿದೆ’ ಎಂದು ಆರೋಪಿಸಿರುವುದಲ್ಲದೆ, ಈಶಾನ್ಯ ಭಾರತದ ಭೂಭಾಗದ ಮೇಲೆ ಹಕ್ಕು ಸ್ಥಾಪಿಸುವ ಮಾತುಗಳನ್ನಾಡಿದ್ದರು. ಇದು ಉಭಯ ದೇಶಗಳ ನಡುವಿನ ಅಸಮಾಧಾನವನ್ನು ಹೆಚ್ಚಿಸಿತು. ಇದರ ಬೆನ್ನಿಗೇ ಭಾರತ ಸರಕಾರವು ಬಾಂಗ್ಲಾ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ, ಬಾಂಗ್ಲಾದಲ್ಲಿರುವ ಹಿಂದೂಗಳ ಬಗ್ಗೆ ಭಾರತವು ತನ್ನ ಆತಂಕವನ್ನು ಹೊರಗೆಡಹಿದೆ. ಭಾರತದ ಈ ಆತಂಕ ಎಷ್ಟು ಪ್ರಾಮಾಣಿಕತೆಯಿಂದ ಕೂಡಿದೆ ಎನ್ನುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಭಾರತದ ಆತಂಕವನ್ನು ಬಾಂಗ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ, ಭಾರತ ಸರಕಾರ ತನ್ನ ದೇಶದೊಳಗಿರುವ ಅಲ್ಪಸಂಖ್ಯಾತರ ಜೊತೆಗೆ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದೂ ಮುಖ್ಯವಾಗುತ್ತದೆ. ಬಾಂಗ್ಲಾ ನುಸುಳುಕೋರರು ಎಂದು ತನ್ನದೇ ದೇಶದ ಪ್ರಜೆಗಳನ್ನು ಸಂಶಯಿಸುತ್ತಾ ಅವರ ಮೇಲೆ ದೌರ್ಜನ್ಯ ನಡೆಸುವ ದೇಶ ಇನ್ನೊಂದು ದೇಶದ ಅಲ್ಪಸಂಖ್ಯಾತರ ಬಗ್ಗೆ ಕಳವಳ ವ್ಯಕ್ತಪಡಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ವ್ಯಕ್ತಪಡಿಸಿದರೂ ಅದನ್ನು ನೆರೆಯ ದೇಶ ಗಂಭೀರವಾಗಿ ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಇತ್ತೀಚೆಗೆ, ಓರ್ವ ಗರ್ಭಿಣಿ ಮತ್ತು ಆಕೆಯ ಎಂಟು ವರ್ಷದ ಪುತ್ರನನ್ನು ಭಾರತ ಸರಕಾರ ಅಕ್ರಮವಾಗಿ ಬಾಂಗ್ಲಾಕ್ಕೆ ಗಡಿಪಾರು ಮಾಡಿತ್ತು. ಸುಪ್ರೀಂಕೋರ್ಟ್ನ ಮಧ್ಯ ಪ್ರವೇಶದ ಬಳಿಕ ಸರಕಾರ ಆಕೆಯನ್ನು ಮತ್ತೆ ಭಾರತಕ್ಕೆ ಕರೆಸಿಕೊಳ್ಳಲು ಒಪ್ಪಿಕೊಂಡಿತು. ಬಾಂಗ್ಲಾ ನುಸುಳುಕೋರರು ಎಂದು ಆರೋಪಿಸಿ ನೂರಾರು ಕಾರ್ಮಿಕರನ್ನು ಭಾರತ ಸರಕಾರ ಬಂಧನ ಕೇಂದ್ರದಲ್ಲಿಟ್ಟಿರುವುದನ್ನು ನಾವು ಈ ಸಂದರ್ಭದಲ್ಲಿ ಮರೆಯಬಾರದು. ಬಾಂಗ್ಲಾ ನುಸುಳುಕೋರರ ವಿರುದ್ಧ ಕೇಂದ್ರ ಸರಕಾರ ಯಾವ ದಾಕ್ಷಿಣ್ಯವೂ ಇಲ್ಲದೆ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಹಲವು ದಶಕಗಳಿಂದ ಭಾರತ ನಿವಾಸಿಗಳಾಗಿರುವ ಕಾರ್ಮಿಕರನ್ನು ನುಸುಳುಕೋರರು ಎಂದು ಅನುಮಾನಿಸಿ ಅವರ ಮೇಲೆ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು. ಭಯಾನಕ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರ ಬಾಂಗ್ಲಾದಲ್ಲಿಲ್ಲ. ಬೀಫ್ ತಿಂದನೆಂದು ಅನುಮಾನಿಸಿ ವೃದ್ಧನನ್ನು ಕೊಂದು ಹಾಕಿದ ದಾದ್ರಿ ಬಾಂಗ್ಲಾದಲ್ಲಿಲ್ಲ. ಕೆಲವು ದಿನಗಳ ಹಿಂದೆ ಬಾಂಗ್ಲಾ ನುಸುಳುಕೋರ ಎಂದು ವಲಸೆ ಕಾರ್ಮಿಕನೊಬ್ಬನನ್ನು ಕೇರಳದಲ್ಲೇ ಥಳಿಸಿ ಕೊಂದು ಹಾಕಿದರು. ಇಂತಹ ಸಂದರ್ಭಗಳಲ್ಲಿ ತುಟಿ ಬಿಚ್ಚದ ಭಾರತದ ರಾಜಕೀಯ ನೇತಾರರು ನೆರೆಯ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಕಣ್ಣೀರು ಸುರಿಸಿದರೆ ಅದು ಮೊಸಳೆ ಕಣ್ಣೀರು ಅಷ್ಟೇ. ನೆರೆಯ ಹಿಂದೂಗಳ ಸ್ಥಿತಿಯನ್ನು ತನ್ನ ದೇಶದೊಳಗೆ ವಿಭಜನೆಯ ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಿ, ಅಲ್ಪಸಂಖ್ಯಾತರ ವಿಷಯದಲ್ಲಿ ಬಾಂಗ್ಲಾಕ್ಕೆ ಭಾರತವು ಮಾದರಿಯಾಗಬೇಕು. ಆಗ ಮಾತ್ರ ಬಾಂಗ್ಲಾದ ಸರಕಾರಕ್ಕೆ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿ ಸಲಹೆ ನೀಡುವ, ಒತ್ತಡ ಹಾಕುವ ನೈತಿಕತೆಯನ್ನು ಭಾರತದ ರಾಜಕಾರಣಿಗಳು ತನ್ನದಾಗಿಸಿಕೊಳ್ಳುತ್ತಾರೆ.
Karnataka Weather: ಇಂದು ಐದು ಜಿಲ್ಲೆಗಳಲ್ಲಿ ಭಾರೀ ಚಳಿ, ಶೀತಗಾಳಿ: ತಾಪಮಾನ ತೀವ್ರ ಕುಸಿತ
ಬೆಂಗಳೂರು: ರಾಜ್ಯದಲ್ಲಿ ಶೀತ ಅಲೆಯ ಆರ್ಭಟ ಜೋರಾಗಿದೆ. ಮೋಡ ಕವಿದ ವಾತಾವರಣ ಸಹಿತ ತೇವ ಭರಿತ ಗಾಳಿ ಬೀಸುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತಾಪಮಾನ ಕಡಿಮೆ ಆಗಿದ್ದು, ಮೈಕೊರೆವ ಚಳಿ ಹೆಚ್ಚಾಗಿದೆ. ಮುಂದಿನ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ. ಇಂದು ಸೋಮವಾರ ಒಳನಾಡಿನ ಐದು ಜಿಲ್ಲೆಗಳಲ್ಲಿ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ. ಭಾರತೀಯ
ಮಹಾಯುತಿಗೆ ಪ್ರಚಂಡ ವಿಜಯ :ದೊಡ್ಡ ಪಕ್ಷವಾಗಿ ಹೊಮ್ಮಿದ ಬಿಜೆಪಿ
ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 127 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಮಹಾ ವಿಕಾಸ್ ಅಘಾಡಿ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ. ಒಟ್ಟು 6,850 ವಾರ್ಡ್ಗಳಲ್ಲಿ ಬಿಜೆಪಿ 3,325 ಸ್ಥಾನಗಳನ್ನು ಪಡೆದುಕೊಂಡಿದೆ.
ಬೆಂಗಳೂರಿಗೆ ಕಾವೇರಿ 5ನೇ ಹಂತದ ಬಳಿಕ, ನೀರಿನ ಸೋರಿಕೆ ಶೇ.33ಕ್ಕೆ ಜಿಗಿತ! ಜಲಮಂಡಳಿಗೆ ಆರ್ಥಿಕ ನಷ್ಟ
ಕಾವೇರಿ 5ನೇ ಹಂತದ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ನೀರಿನ ಸೋರಿಕೆ ಪ್ರಮಾಣ ಶೇ.27 ರಿಂದ ಶೇ.33.03ಕ್ಕೆ ಏರಿದೆ. ಇದರಿಂದ ಜಲಮಂಡಳಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಹಳೆಯ ಕೊಳವೆ ಮಾರ್ಗಗಳ ಆಧುನೀಕರಣಕ್ಕೆ 8,000 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಸೋರಿಕೆ ತಡೆಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
‘ಹಜ್ಯಾತ್ರೆ-2026’ ಜ.15ರೊಳಗೆ ಹಣ ಠೇವಣಿ ಇಡಲು ಇಕ್ಬಾಲ್ ಅಹ್ಮದ್ ಸಿದ್ದಿಖಿ ಮನವಿ
ಬೆಂಗಳೂರು, ಡಿ.21: ಖಾಸಗಿ ಟೂರ್ ಆಪರೇಟರ್ಗಳ ಮೂಲಕ 2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಬಯಸುವ ಯಾತ್ರಾರ್ಥಿಗಳು ಜ.15ರೊಳಗೆ ಹಣ ಠೇವಣಿ ಇಟ್ಟು, ತಮ್ಮ ಆಸನಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಜ್ ಆರ್ಗನೈಸರ್ ಅಸೋಸಿಯೇಷನ್ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದಿಖಿ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ನೇ ಸಾಲಿನ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಹಣ ಪಾವತಿಸುವ ವ್ಯವಸ್ಥೆಯೂ ಸೇರಿದೆ. ಹಣ ಪಾವತಿಸಲು ಸೌದಿ ಸರಕಾರ ನಿಗದಿಪಡಿಸಿದ ಗಡುವಿನೊಳಗೆ ಪಾವತಿಸಬೇಕಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಕಳೆದ ವರ್ಷ ಖಾಸಗಿ ಟೂರ್ ಆಪರೇಟರ್ಗಳ ಹಜ್ ಕೋಟಾವನ್ನು ಶೇ.80ರಷ್ಟು ಕಡಿತ ಮಾಡಲಾಗಿತ್ತು. ಈ ವರ್ಷ ಕೋಟಾವನ್ನು ಅನುಮೋದಿತ ಹಜ್ ಗುಂಪು ಸಂಘಟಕರಿಗೆ ಮುಂಚಿತವಾಗಿ ನಿಗದಿಪಡಿಸಲಾಗಿದೆ. ದೇಶಾದ್ಯಂತ ಖಾಸಗಿ ಟೂರ್ ಆಪರೇಟರ್ಗಳ ಮೂಲಕ 52,500 ಯಾತ್ರಿಕರ ಕೋಟಾವನ್ನು ನೀಡಲಾಗಿದೆ, ಅದರಲ್ಲಿ 2,400 ಯಾತ್ರಿಕರನ್ನು ಕರ್ನಾಟಕದ 41 ಪ್ರವಾಸ ನಿರ್ವಾಹಕರಿಗೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಫಿ ಅಹ್ಮದ್, ಖಜಾಂಚಿ ಫಹೀಮುದ್ದೀನ್, ಪ್ರಮುಖರಾದ ಶಕೀಲ್ ಅಹ್ಮದ್, ಜೀಶನ್, ನಾಸಿರ್ ಖಾನ್, ಇತರ ನಿರ್ವಾಹಕರು ಉಪಸ್ಥಿತರಿದ್ದರು.
ಎಲ್ಲಾ ತಪ್ಪುಗಳನ್ನೂ ವಿರೋಧ ಪಕ್ಷಗಳ ಮೇಲೆ ಹಾಕುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಹೊಸದಿಲ್ಲಿ: ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ಹಾವಳಿ ಹೆಚ್ಚಾಗಲು ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಕಾರಣ ಎಂಬ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಫಲ್ಯಗಳ ಹೊಣೆ ಹೊರುವ ಬದಲು, ವಿರೋಧ ಪಕ್ಷಗಳನ್ನು ದೂಷಿಸುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ಪದೇ ಪದೇ ಡಬಲ್ ಇಂಜಿನ್ ಸರಕಾರದ ಬಗ್ಗೆ ಮಾತನಾಡುತ್ತದೆ. ಹೀಗಿದ್ದೂ ನುಸುಳುವಿಕೆಯ ದೂಷಣೆಯನ್ನು ಕಾಂಗ್ರೆಸ್ ಮೇಲೇಕೆ ವರ್ಗಾಯಿಸುತ್ತಿದೆ ಎಂದು ಅವರು ಚಾಟಿ ಬೀಸಿದ್ದಾರೆ. “ಅವರೇಕೆ ವಿರೋಧ ಪಕ್ಷಗಳನ್ನು ದೂಷಿಸುತ್ತಿದ್ದಾರೆ? ಡಬಲ್ ಇಂಜಿನ್ ಸರಕಾರ ಎನ್ನಲಾಗುವ ಅವರ ಸರಕಾರ ಕೇಂದ್ರದಲ್ಲೂ ಇದೆ ಹಾಗೂ ಅಸ್ಸಾಂನಲ್ಲೂ ಇದೆ. ಅವರು ಗಡಿಯನ್ನು ರಕ್ಷಿಸಲು ವಿಫಲರಾದರೆ, ಅದಕ್ಕೆ ವಿರೋಧ ಪಕ್ಷಗಳನ್ನೇಕೆ ದೂಷಿಸಬೇಕು? ನಾವೇನಾದರೂ ಅಲ್ಲಿ ಆಡಳಿತ ನಡೆಸುತ್ತಿದ್ದೇವೆಯೆ?” ಎಂದು ಅವರು ಸರಣಿ ಪ್ರಶ್ನೆಗಳನ್ನೆಸೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಕಾರದ ವೈಫಲ್ಯಗಳನ್ನು ವಿರೋಧ ಪಕ್ಷಗಳ ಮೇಲೆ ಹಾಕುವುದನ್ನು ಚಟ ಮಾಡಿಕೊಂಡಿದ್ದಾರೆ ಎಂದೂ ಅವರು ತೀವ್ರವಾಗಿ ಖಂಡಿಸಿದ್ದಾರೆ. “ಅವರೇನಾದರೂ ವಿಫಲಗೊಂಡರೆ, ಅದೆಲ್ಲವನ್ನೂ ವಿರೋಧ ಪಕ್ಷಗಳ ಮೇಲೆ ಹಾಕುತ್ತಾರೆ. ನಾನು ಇಂತಹ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ದೇಶ ದ್ರೋಹಿಗಳೇ ಹೊರತು ನಾವಲ್ಲ. ನಾವು ಯಾರನ್ನೂ ರಕ್ಷಿಸುತ್ತಲೂ ಇಲ್ಲ. ನಾವೆಂದೂ ಭಯೋತ್ಪಾದಕರು, ನುಸುಳುಕೋರರು ಅಥವಾ ಇನ್ನಿತರರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಅವರು ಭಯೋತ್ಪಾದಕರು, ನುಸುಳುಕೋರರನ್ನು ತಡೆಯುವಲ್ಲಿ ವಿಫಲರಾಗಿರುವುದರಿಂದ ಅವರು ದೂಷಿಸುತ್ತಿದ್ದಾರೆ” ಎಂದೂ ಅವರು ಹರಿಹಾಯ್ದಿದ್ದಾರೆ. ಶನಿವಾರ ನಡೆದ ಗುವಾಹಟಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿತ್ತು. ಈ ಪ್ರಾಂತ್ಯದಲ್ಲಿ ನುಸುಳುಕೋರರು ನೆಲೆಸಲು ಅವಕಾಶ ನೀಡಿತ್ತು. ಆ ಮೂಲಕ, ಈ ಪ್ರಾಂತ್ಯದ ಭದ್ರತೆ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಬೆದರಿಕೆ ತಂದೊಡ್ಡಿತ್ತು” ಎಂದು ಆರೋಪಿಸಿದ್ದರು. ಇದೇ ವೇಳೆ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತು ಉಲ್ಲೇಖಿಸಿದ್ದ ಪ್ರಧಾನಿ ಮೋದಿ, “ಈ ಅಭಿಯಾನ ನುಸುಳುಕೋರರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಿಂದ ಹೊರಗಿಡುವ ಗುರಿ ಹೊಂದಿದೆ” ಎಂದು ಹೇಳಿದ್ದರು. “ದೇಶದ್ರೋಹಿಗಳು ನುಸುಳುಕೋರರಿಗೆ ರಕ್ಷಣೆ ನೀಡಲು ಯತ್ನಿಸುತ್ತಿದ್ದಾರೆ. ಆದರೆ, ನುಸುಳುವಿಕೆಯನ್ನು ತಪ್ಪಿಸಲು ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ತ್ತಿದೆ” ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಶಿವಮೊಗ್ಗ | ದೀವರ ಸಾಂಸ್ಕೃತಿಕ ವ್ರೆಭವಕ್ಕೆ ಚಾಲನೆ
ಸಮಾಜದ ಸಂಸ್ಕೃತಿ ಉಳಿಸಲು ಮಧು ಬಂಗಾರಪ್ಪ ಕರೆ
ಹೊಸಪೇಟೆ | ಮಾಬುಸಾಬ್ ಕೊಲೆ ಪ್ರಕರಣ : 9 ಆರೋಪಿಗಳ ಬಂಧನ
ಹೊಸಪೇಟೆ : ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಗಲಾಟೆ ಬಿಡಿಸಲು ಹೋದ ಮಾಬುಸಾಬ್ ಅವರನ್ನು ಕೊಲೆ ಮಾಡಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭಂಗಿ ಹನುಮಂತ, ಚರಣ, ಹುಲಿಗೆಮ್ಮ, ರಾಘವೇಂದ್ರ, ಚಂದ್ರಶೇಖರ್, ಗುರಯ್ಯ, ದರ್ಶನ್, ಮಾಲಿಂಗಪ್ಪ, ಗುರುಸಿದ್ದಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನಲೆ : ಡಿ.18 ರಂದು ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮನೆಯ ಮುಂದೆ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಮಾಬುಸಾಬ್ ಅವರ ಮೇಲೆ 9 ಜನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತಪಟ್ಟ ಮಾಬುಸಾಬ್ ಅವರ ಮಗ ಪಿ.ಜಿಲಾನ್ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹೊಸಪೇಟೆ ಡಿಎಸ್ಪಿ ಟಿ.ಮಂಜುನಾಥ್, ಪೊಲೀಸ್ ಇನ್ಸ್ಪೆಕ್ಟರ್ ಆರ್.ಕೆ.ಗುರುರಾಜ್, ಡಿ.ಹುಲುಗಪ್ಪ, ವಿಕಾಸ ಲಮಾಣಿ, ಪ್ರಹ್ಲಾದ್ ಚನ್ನಗಿರಿ, ಡಿ.ದುರುಗಪ್ಪ, ಪಿಎಸ್ಐ ಕೋದಂಡಪಾಣಿ, ಅಶೋಕ ಬೆವೂರು, ನಾಗರತ್ನ, ಸಿಬ್ಬಂದಿ ರಾಘವೇಂದ್ರ ಬೇವಿನಮರದ, ಜಾವೀದ್, ನಾಗರಾಜ್ ಬರಡಿ, ಮಂಜುನಾಥ್ ಮೇಟಿ, ಕೊಟ್ರೇಶ್.ವಿ, ರಾಘವೇಂದ್ರ, ಶ್ರೀನಾಥ್, ಸಂತೋಷ್ ನಾಯ್ಕ್, ಪ್ರವೀಣ್ ಕುಮಾರ್, ಪರಶುರಾಮ್ ನಾಯ್ಕ್, ನಾಗರಾಜ್ ಬಂಡಿಮೇಗಳ, ಯು.ಚಂದ್ರಶೇಖರ್, ಸಣ್ಣ ಗಾಳೆಪ್ಪ, ಕೆ.ಅಡಿವೆಪ್ಪ, ಎಂ ಸಂತೋಷ್ ಕುಮಾರ್, ಬಿ.ಚಂದ್ರಪ್ಪ, ಕುಮಾರ್ ನಾಯ್ಕ್, ಫಕೀರಪ್ಪ, ದೇವೇಂದ್ರಪ್ಪ, ಲಿಂಗರಾಜ್ ರವರನ್ನೊಳಗೊಂಡ ವಿಶೇಷ ತಂಡಕ್ಕೆ ವಿಜಯನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಟೊ ರಿಕ್ಷಾ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳ ಮೋಕ್ಷ; ವಿಡಿಯೊ ವೈರಲ್
ಮುಂಬೈ: ತಪ್ಪು ಪಥದಲ್ಲಿ ಆಟೊ ರಿಕ್ಷಾ ಚಲಾಯಿಸುತ್ತಿದ್ದ ಚಾಲಕನಿಗೆ ಘಟ್ಕೊಪಾರ್ (ಪೂರ್ವ) ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಪದಾಧಿಕಾರಿಗಳು, ಆಟೊ ರಿಕ್ಷಾ ಚಾಲಕನು ತಪ್ಪಾದ ಪಥದಲ್ಲಿ ತನ್ನ ವಾಹನವನ್ನು ಚಲಾಯಿಸುತ್ತಿದ್ದ. ಆಟೊ ರಿಕ್ಷಾವನ್ನು ಹೀಗೆ ಚಲಾಯಿಸುವ ತುರ್ತಾದರೂ ಏನಿದೆ ಎಂದು ಪರಾಗ್ ಶಾ ಪ್ರಶ್ನಿಸಿದರು. ಅದಕ್ಕೆ ಚಾಲಕನು ನಾನು ಅವಸರದಲ್ಲಿದ್ದೇನೆ ಎಂದು ಉತ್ತರಿಸಿದ ಎಂದು ಹೇಳಿದ್ದಾರೆ. ಇದಾದ ಬಳಿಕ, ಶಾಸಕ ಪರಾಗ್ ಶಾ ಆಟೊ ರಿಕ್ಷಾ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯ ವಿಡಿಯೊವನ್ನು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಎಂ.ಪಿ.ವರ್ಷ ಗಾಯಕ್ವಾಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಬಿಜೆಪಿ ಶಾಸಕರು ಅದೆಷ್ಟು ದುರಹಂಕಾರಿಗಳಾಗಿದ್ದಾರೆಂದರೆ, ಅವರು ಬಡ ರಿಕ್ಷಾ ಚಾಲಕರನ್ನೂ ಬಿಡುತ್ತಿಲ್ಲ” ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಶಾಸಕ ಪರಾಗ್ ಶಾ, “ಆಟೊ ರಿಕ್ಷಾ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ತಪ್ಪು ಪಥದಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ತಮ್ಮ ವಾಹನ ಚಲಾಯಿಸುವ ಕುರಿತು ಸ್ಥಳೀಯರು ಪದೇ ಪದೇ ದೂರು ನೀಡುತ್ತಿದ್ದರು. ಪೂರ್ವ ಘಟ್ಕೋಪಾರ್ ನಲ್ಲಿ ನಡೆದುಕೊಂಡು ಹೋಗಲೂ ಜಾಗವಿಲ್ಲ. ಹಲವಾರು ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರ ಹಾವಳಿ ಹಾಗೂ ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರು ನೀಡುತ್ತಿದ್ದರು” ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. सत्ता का नशा मुंबई में BJP के विधायक ने ऑटो रिक्शा ड्राइवर को थप्पड़ जड़ दिया. ये घटना बताती है कि BJP के नेता जनता को कीड़े-मकोड़े सा समझते हैं. ऐसा इसलिए है क्योंकि इनको पता है- ये जनता के वोट से नहीं, चोरी से सरकार में बैठे हैं. pic.twitter.com/t5VjI5uE8Z — Congress (@INCIndia) December 21, 2025
ಬಿಜೆಪಿ ‘ಒಂದು ದೇಶ, ಒಬ್ಬ ಉದ್ಯಮಿ’ ಕಾರ್ಯಸೂಚಿಗೆ ಕುಮ್ಮಕ್ಕು ನೀಡುತ್ತಿದೆ: ಅಖಿಲೇಶ್ ಯಾದವ್ ಆರೋಪ
ಬಿಜೆಪಿ ಏಕಸ್ವಾಮ್ಯವನ್ನು ಉತ್ತೇಜಿಸುತ್ತಿದೆ ಎಂದು ಎಸ್ಪಿ ಮುಖ್ಯಸ್ಥ
ಪಾಕ್ ಸಚಿವ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ಅಂಡರ್-19 ತಂಡ!
ನಖ್ವಿ ಇದ್ದ ವೇದಿಕೆ ಏರಲು ನಕಾರ
ಮೊದಲ ಟಿ-20: ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 8 ವಿಕೆಟ್ ಗೆಲುವು
ವಿಶಾಖಪಟ್ಟಣ: ಜೆಮಿಮಾ ರೊಡ್ರಿಸ್ ಆಕರ್ಷಕ ಬ್ಯಾಟಿಂಗ್(ಔಟಾಗದೆ 69, 44 ಎಸೆತ, 10 ಬೌಂಡರಿ), ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿದೆ. ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 121 ರನ್ ಗುರಿ ಪಡೆದ ಭಾರತ ತಂಡವು 14.4 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 122 ರನ್ ಗಳಿಸಿತು. ಭಾರತ ತಂಡ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(9 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 54 ರನ್ ಜೊತೆಯಾಟ ನಡೆಸಿದ ಸ್ಮತಿ ಮಂಧಾನ(25 ರನ್)ಹಾಗೂ ಜೆಮಿಮಾ ರೋಡ್ರಿಗ್ಸ್ ತಂಡವನ್ನು ಆಧರಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ(39 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ(1-20), ಕ್ರಾಂತಿ ಗೌಡ್(1-23)ಹಾಗೂ ಶ್ರೀ ಚರಣಿ(1-30) ತಲಾ ಒಂದು ವಿಕೆಟ್ ಪಡೆದರು. ಮೂವರು ಆಟಗಾರ್ತಿಯರು ರನೌಟಾದರು.
ಕಲಬುರಗಿ | ಕಬ್ಬಿನ ಹೊಲಕ್ಕೆ ಬೆಂಕಿ: ಅಪಾರ ನಷ್ಟ
ಕಲಬುರಗಿ: ಅಫಜಲಪುರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ರವಿವಾರ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅರ್ಜುಣಗಿ ಗ್ರಾಮದ ಚಾಂದ್ ರಾಜಾ ಪಟೇಲ್ ಅವರ ಗದ್ದೆಯಲ್ಲಿ ಹೊತ್ತಿಕೊಂಡ ಬೆಂಕಿ ಪಕ್ಕದ ಸರಸಂಬಿ ಅವರ ಹೊಲಕ್ಕೂ ವಿಸ್ತರಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ. ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ರೇವೂರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ | ಡಿ.23ರಂದು ಚೆನ್ನವೀರ ಕಣವಿ, ಪ್ರೊ.ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ
ಕಲಬುರಗಿ: ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ ಹಾಗೂ ಪ್ರೊ.ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ, ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಮನೆಗೊಂದು ಗ್ರಂಥಾಲಯ, ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭ ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಅವರು ಉದ್ಘಾಟಿಸಿ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಖ್ಯಾತ ಸಾಹಿತಿ ಮತ್ತು ಪ್ರೊ.ಚಂದ್ರಶೇಖರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟದ ಸಂಪಾದಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಉಚಿತ ಪುಸ್ತಕಗಳನ್ನು ಮತ್ತು ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟದ ಸಂಪಾದಕ ಡಾ. ಜಿ.ಎಂ.ಹೆಗಡೆ ಅವರು ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಅವರು ಸಂಪುಟಗಳ ಕುರಿತು ಮಾತನಾಡಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊ.ಚಂದ್ರಶೇಖರ ಪಾಟೀಲ ಹಾಗೂ ಚೆನ್ನವೀರ ಕಣವಿ ಅವರ ಕುಟುಂಬ ಸದಸ್ಯರುಗಳಾದ ನೀಲಾ ಪಾಟೀಲ್, ಪ್ರಿಯದರ್ಶಿ ಕಣವಿ, ಪ್ರೊ.ಚಂದ್ರಶೇಖರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟಗಳ ಸಹ ಸಂಪಾದಕ ಡಾ.ಮಂಜುನಾಥ ಟಿ., ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಡಾ.ಸುರೇಶ ಜಂಗೆ, ಸಿಂಡಿಕೇಟ್ ಸದಸ್ಯ ಉದಯ ಬಿ.ಪಾಟೀಲ್ ಅವರು ಉಪಸ್ಥಿತರಿರಲಿದ್ದಾರೆ.
ಮೆಸ್ಸಿ ಭಾರತ ಭೇಟಿ: ಸಾಲ್ಟ್ಲೇಕ್ ಸ್ಟೇಡಿಯಂ ಅಸ್ತವ್ಯಸ್ತತೆಯನ್ನು ಟೀಕಿಸಿದ ಭುಟಿಯ
ಹೊಸದಿಲ್ಲಿ: ಇತ್ತೀಚೆಗೆ ಕೋಲ್ಕತಾದ ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ಲಿಯೊನೆಲ್ ಮೆಸ್ಸಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ತಲೆದೋರಿದ ಅಸ್ತವ್ಯಸ್ತತೆಯನ್ನು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯ ರವಿವಾರ ಟೀಕಿಸಿದ್ದಾರೆ. ಆ ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ ಅವರು, ಕ್ರೀಡಾ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು ಹಾಗೂ ರಾಜಕೀಯ ಕಾರಣಗಳು ಮತ್ತು ಔಪಚಾರಿಕತೆಗಳಿಗಾಗಿ ಅನಗತ್ಯ ವಿಳಂಬ ಮಾಡಬಾರದು ಎಂದರು. ಅಭಿಮಾನಿಗಳು ಕ್ರೀಡೆಯನ್ನು ಆನಂದಿಸಲು ಮತ್ತು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸ್ಟೇಡಿಯಂಗಳಿಗೆ ಬರುತ್ತಾರೆಯೇ ಹೊರತು, ಸುದೀರ್ಘ ಭಾಷಣಗಳನ್ನು ಕೇಳುತ್ತಾ ಅಥವಾ ವಿಐಪಿಗಳ ಆಗಮನಕ್ಕಾಗಿ ಕಾಯುತ್ತಾ ಕೂರಲು ಅಲ್ಲ ಎಂದು ಅವರು ನುಡಿದರು. ‘‘ಕ್ರೀಡಾ ಕಾರ್ಯಕ್ರಮಗಳು ಇರುವಾಗ, ಕ್ರೀಡೆಗೆ ಆದ್ಯತೆ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ’’ ಎಂದು ಭುಟಿಯ ಹೇಳಿದರು. ‘‘ಈ ಸಮಸ್ಯೆ ಭಾರತದಾದ್ಯಂತ ಕಂಡು ಬರುತ್ತಿದೆ. ಸಂಘಟಕರು ರಾಜಕಾರಣಿಗಳು ಮತ್ತು ಮುಖ್ಯ ಅತಿಥಿಗಳಿಗಾಗಿ ಕಾಯುವುದರಿಂದ ಹೆಚ್ಚಿನ ಕ್ರೀಡಾ ಪಂದ್ಯಗಳು ವಿಳಂಬಗೊಳ್ಳುತ್ತವೆ. ಇಂತಹ ಪ್ರವೃತ್ತಿಯು ಅಭಿಮಾನಿಗಳು ಮತ್ತು ಆಟಗಾರರ ತಾಳ್ಮೆಗೆಡಿಸುತ್ತ’’ ಎಂದು ಅವರು ನುಡಿದರು.
ಭಾರತದ ನೌಕಾಸೇನೆಯ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ: ಗುಜರಾತ್ ಮೂಲದ ವ್ಯಕ್ತಿ ಬಂಧನ
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಶಿಪ್ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ ಹೀರೇಂದ್ರ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಗಂಭೀರ ಆರೋಪ ಕೇಲಿಬಂದ ಹಿನ್ನೆಲೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ನಡೆದ ಘಟನೆ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ
ಆಳಂದ | ಕೃಷಿ ಇಲಾಖೆಯಿಂದ ರಾಶಿ ಯಂತ್ರ ವಿತರಣೆ
ಕಲಬುರಗಿ(ಆಳಂದ): ಆಳಂದ ಪಟ್ಟಣದ ಶಾಸಕರ ಸಂಪರ್ಕ ಕಚೇರಿಯಲ್ಲಿ ರವಿವಾರ ಕೃಷಿ ಇಲಾಖೆಯ ಆಶ್ರಯದಲ್ಲಿ ಸಹಾಯಧನದ ಪಡೆದ ಇಬ್ಬರು ಫಲಾನುಭವಿಗಳಿಗೆ ರಾಶಿ ಯಂತ್ರವನ್ನು ವಿತರಣೆ ಮಾಡಲಾಯಿತು. ಫಲಾನುಭವಿಗಳಿಗೆ ಯಂತ್ರದ ಕೀ ವಿತರಿಸಿ ಮಾತನಾಡಿದ ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್ ಅವರು, ದುಬಾರಿ ಹಣ ಪಡೆಯದೆ ರೈತ ಸ್ನೇಹಿಯಾಗಿ ಸೇವೆ ಮಾಡುವಂತೆ ಸಲಹೆ ನೀಡಿದರು. ಆಳಂದ ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದಲೂ ಯಂತ್ರಗಳು ತಂದು ರೈತರಿಂದ ಹೆಚ್ಚಿನ ಹಣ ಪಡೆದು ತೊಗರಿ, ಸೊಯಾಬಿನ್, ಹೆಸರು, ಉದ್ದಿನ, ಜೋಳದ ರಾಶಿ ಮಾಡುತ್ತಿರುವದನ್ನು ಮನಗಂಡು ಕೃಷಿ ಇಲಾಖೆಯ 2025-26 ನೇ ಸಾಲಿನ ಹೈಟೆಕ್ ಹಾರ್ವೇಸ್ಟರ್ ಹಬ್ಬ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಸಹಾಯಧನಲ್ಲಿ ವಿತರಣೆ ಮಾಡಿದ್ದು ಇದರ ಲಾಭವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ ಮಾತನಾಡಿ, ಇಲಾಖೆಯ ಕುರಿತು ವಿವಿಧ ಮಾಹಿತಿ ನೀಡಿದರು. ಮಾದನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ್, ಕಲಬುರಗಿ-ಬೀದರ್-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಕೃಷಿ ಅಧಿಕಾರಿ ಸರೋಜಿನಿ ಎಚ್.ಗೋವಿನ, ಶ್ರೀಮಂತ ವಾಗಧರಗಿ, ವಿಶ್ವನಾಥ ವಠಾರ, ಶರಣಬಸಪ್ಪ ವಾಗೆ, ಆನಂದ ದೇಶಮುಖ, ಹಜರತ್ ಪಟೇಲ್, ಬಸಲಿಂಗಪ್ಪ ಗಾಯಕವಾಡ, ಮಲ್ಲಿನಾಥ ಅಮರೆ, ಚಿದಾನಂದ ನಾಗಣಸೂರೆ, ಚನ್ನವೀರ ಕಾಳಕಿಂಗೆ, ರಾಮ ಹತ್ತರಕಿ, ಶ್ರವಣ ಆಳಂಗೆ, ಸೂರ್ಯಕಾಂತ ಧಾಬಾ, ಯೋಗೇಶ ಸಕ್ಕರಗಿ , ಫಲಾನುಭವಿ ಅವಿನಾಶ ರಾಠೋಡ, ಮಹೇಶ ಬಿರಾದಾರ ಸೇರಿದಂತೆ ಇತರರು ಇದ್ದರು.
ಪಶ್ಚಿಮದಂಡೆ: 19 ಹೊಸ ವಸಾಹತುಗಳಿಗೆ ಇಸ್ರೇಲ್ ನ ಭದ್ರತಾ ಸಂಪುಟ ಅನುಮೋದನೆ
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯಲ್ಲಿ 19 ಹೊಸ ವಸಾಹತುಗಳಿಗೆ ಇಸ್ರೇಲ್ ನ ಭದ್ರತಾ ಕ್ಯಾಬಿನೆಟ್ ಅನುಮೋದನೆ ನೀಡಿರುವುದಾಗಿ ಇಸ್ರೇಲ್ ನ ವಿತ್ತಸಚಿವ ಬೆಜಾಲೆಲ್ ಸ್ಮೊಟ್ರಿಚ್ ಹೇಳಿದ್ದು ಈ ಕ್ರಮವು ಫೆಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ. ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಇಸ್ರೇಲ್ ನ ಸಂಪುಟ ಅನುಮೋದನೆ ನೀಡಿರುವ ವಸಾಹತುಗಳ ಸಂಖ್ಯೆ 69ಕ್ಕೇರಿದೆ. `ವಸಾಹತುಗಳ ಸ್ಥಾಪನೆಯು ಫೆಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಯನ್ನು ತಡೆಯುವ ಗುರಿಯನ್ನೂ ಹೊಂದಿದೆ. ನಮ್ಮ ಪೂರ್ವಜರ ಪರಂಪರೆಯ ಭೂಮಿಯನ್ನು ನಾವು ಅಭಿವೃದ್ಧಿಪಡಿಸಿ, ವಸಾಹತುಗಳನ್ನು ನಿರ್ಮಿಸುತ್ತೇವೆ ಮತ್ತು ನೆಲೆಸುತ್ತೇವೆ' ಎಂದು ಬೆಜಾಲೆಲ್ ಹೇಳಿದ್ದಾರೆ. ಪಶ್ಚಿಮದಂಡೆಯಲ್ಲಿ ಇಸ್ರೇಲ್ ವಸಾಹತುಗಳ ವಿಸ್ತರಣೆ ಅಂತರಾಷ್ಟ್ರೀಯ ಕಾನೂನಿನಡಿ ಕಾನೂನುಬಾಹಿರ ಎಂದು ಪರಿಗಣಿಸಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
ಆಳಂದ | ಗುತ್ತೇದಾರ ಸ್ಮಾರಕ ಪ್ರೌಢಶಾಲೆಯ ರಜತ ಮಹೋತ್ಸವ ಆಚರಣೆ
ಕಲಬುರಗಿ(ಆಳಂದ): ಆಳಂದ ಪಟ್ಟಣದಲ್ಲಿರುವ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಭೀಮಬಾಯಿ ಹಣಮಯ್ಯ ಗುತ್ತೇದಾರ ಸ್ಮಾರಕ ಪ್ರೌಢಶಾಲೆಯ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳ ಆಯೋಜನೆಯಲ್ಲಿ ಶಾಲೆಯ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ರವಿವಾರ ನೆರವೇರಿತು. ಶಾಲೆಯ ಕಾರ್ಯದರ್ಶಿ ಹರ್ಷಾ ಗುತ್ತೇದಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಶಾಲೆಯ ಮೊದಲ ಬ್ಯಾಚ್ನ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಈ ರಜತ ಮಹೋತ್ಸವವು ಕೇವಲ ಒಂದು ಆಚರಣೆಯಲ್ಲ, ನಮ್ಮ ಶಾಲೆಯ ಶಿಕ್ಷಣ ಗುಣಮಟ್ಟ ಮತ್ತು ಗುರು-ಶಿಷ್ಯರ ಸಂಬಂಧದ ಗಾಢತೆಯನ್ನು ತೋರಿಸುವ ಸಂಭ್ರಮದ ಕ್ಷಣ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಹಣಮಂತ ಶೇರಿ ಅವರು, 2000ನೇ ಸಾಲಿನಲ್ಲಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಇಲ್ಲಿ ಸೇರಿರುವುದು ಶಾಲೆಯ ಯಶಸ್ಸಿನ ನಿಜವಾದ ಸಾಕ್ಷಿ. ಈ ಶಾಲೆಯು ಕೇವಲ ಶಿಕ್ಷಣ ನೀಡಿದ್ದಲ್ಲ, ಜೀವನದ ಮೌಲ್ಯಗಳನ್ನೂ ನೀಡಿದೆ ಎಂದು ಹೇಳಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಅವರು ಮಾತನಾಡಿದರು. ಪಿಯು ಪ್ರಾಚಾರ್ಯ ಡಾ.ಅಪ್ಪಾಸಾಬ ಬಿರಾದಾರ, ಎಂಪಿಎಜಿ ಪಿಯು ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಮತ್ತು ಎಂಬಿಎಚ್ಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿನಾಥ ತುಕ್ಕಾಣೆ ಅವರು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕರಾದ ಕಲಬುರಗಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಾರಾಮ ವಾಡೇದ ಅವರು ಮಾತನಾಡಿದರು. ಸುರೇಶ ತೋಳೆ, ಶರಣು ಅಚಲೇರಿ, ರಾಜೇಂದ್ರ ಬಾವಿ, ಸಿದ್ಧರಾಮ ದೋತ್ರೆ, ವಿಜಯಲಕ್ಷ್ಮಿ ಬಿರಾದಾರ, ಸೈಯದ್ ಅಬಿದಲಿ, ರಾಜೇಂದ್ರ ಬೋಳಶೆಟ್ಟಿ, ಸಂತೋಷ ವೇದಪಾಠಕ, ಸಂತೋಷ ಕಾಮಣೆ, ಸಂಜಯ ಮೋರೆ, ಸುಭಾಷ ಮೈಂದರಗಿ, ಗುಂಡೇರಾವ್ ಪಾಟೀಲ ಕವಲಗಾ, ಇಶಾಕ್ ಅಲಿ, ಶಿವಾನಂದ ಚಿಲಾಮಣಿ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗೌರವಾನ್ವಿತ ಅತಿಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ನಾಟಕ ಮತ್ತು ಗುರುಗಳಿಗೆ ಸ್ಮರಣಾರ್ಥ ಸಮರ್ಪಣೆಗಳು ನಡೆದವು. ಕಾಶಿನಾಥ ಹಿರೇಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪವನ ಹಿರೇಮಠ ಸ್ವಾಗತಿಸಿದರು. ಅನೀತಾ ಹತ್ತರಕಿ ಅವರು ವಂದಿಸಿದರು.
ಚುನಾವಣೆ ವಿಳಂಬಗೊಂಡರೆ ರಾಷ್ಟ್ರವ್ಯಾಪಿ ಪ್ರತಿಭಟನೆ: ನೇಪಾಳದ ಮಾಜಿ ಪ್ರಧಾನಿ ಎಚ್ಚರಿಕೆ
ಕಠ್ಮಂಡು: ನೇಪಾಳದಲ್ಲಿ ಮಾರ್ಚ್ 5ರಂದು ನಿಗದಿಗೊಂಡಿರುವ ಸಾರ್ವತ್ರಿಕ ಚುನಾವಣೆಯನ್ನು ವಿಳಂಬಿಸಿದರೆ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ `ಪ್ರಚಂಡ' ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ರಚನೆಯಾದ ನೇಪಾಳಿ ಕಮ್ಯುನಿಸ್ಟ್ ಪಾರ್ಟಿ(ಎನ್ಸಿಪಿ)ಯ ಸಂಯೋಜಕರಾಗಿರುವ `ಪ್ರಚಂಡ' ಕಠ್ಮಂಡುವಿನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡಲು ಪ್ರತಿಗಾಮಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಭದ್ರತಾ ಕಾಳಜಿ, ಈಗ ನಡೆಯುತ್ತಿರುವ ರಾಜಪ್ರಭುತ್ವದ ಪರವಾದ ಪ್ರದರ್ಶನಗಳನ್ನು ನೆಪವಾಗಿಸಿ ಚುನಾವಣೆ ಮುಂದೂಡುವುದನ್ನು ತಮ್ಮ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದವರು ಹೇಳಿದ್ದಾರೆ.
ಕಲಬುರಗಿ | ಭೀಮ್ ಆರ್ಮಿಯ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಎಸ್.ಎಸ್.ತಾವಡೆ ಅವರ ನೇತೃತ್ವದಲ್ಲಿ ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಲ್ಯಾಣ ಕರ್ನಾಟಕ ಮಹಿಳಾ ಘಟಕದ ವಿಭಾಗ ಅಧ್ಯಕ್ಷರಾಗಿ ಸೋನುಬಾಯಿ ಆರ್ ಸಿಂಗೇರಿ ಹಾಗೂ ವಿಭಾಗೀಯ ಕಾರ್ಯದರ್ಶಿಯಾಗಿ ಶಿಲ್ಪಾ ನಾಗೂರೆ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನ ಕಾರ್ಯದರ್ಶಿ ರಾಯಪ್ಪ ಬುಳ್ಳ, ರಾಜ್ಯ ಕಾರ್ಯದರ್ಶಿ ಸುರೇಶ ಗಂಗಾರೆ ಬೀದರ್, ಭೀಮ್ ಆರ್ಮಿ ಚಿತ್ತಾಪುರ ತಾಲೂಕು ಅಧ್ಯಕ್ಷ ನಾಗರಾಜ ಗಾಯಕವಾಡ, ರಾಹುಲ್ ಸಿಂಗೆ, ಜಿಲ್ಲಾ ಖಜಾಂಚಿ ತಿಪ್ಪಣ್ಣ ಬಿರಾದಾರ್ ಹಾಗೂ ರಾಜೇಶ್ವರಿ ಸುಗಂಧಿ ಇದ್ದರು.
ಕಲಬುರಗಿ | ಕಲ್ಯಾಣ ಕರ್ನಾಟಕದಲ್ಲಿ ರಂಗ ಚಟುವಟಿಕೆ ಕುಂಠಿತ: ಶಶೀಲ್ ನಮೋಶಿ ಕಳವಳ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ರಂಗಭೂಮಿ ಚಟುವಟಿಕೆಗಳು ಕುಂಠಿತಗೊoಡಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಶಶೀಲ್ ಜಿ ನಮೋಶಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ನನ್ನ ಪಿತಾಮಹ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿರು. ಬೇರೆ ಭಾಗದಲ್ಲಿನ ನಾಟಕಗಳಿಗೆ ಹೋಲಿಕೆ ಮಾಡಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಷಿಣಿಸಿವೆ. ಇದಕ್ಕೆ ನಾಟಕ ಕಲಾವಿದರು ಹಾಗೂ ಆಸಕ್ತರ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಗಳನ್ನು ಚುರುಕುಗೊಳಿಸಬೇಕಾಗಿದೆ ಎಂದು ಹೇಳಿದರು. ಚಲನಚಿತ್ರ ನಟ ಹಗೂ ನಿರ್ದೇಶಕ ಸುಚೇಂದ್ರ ಪ್ರಸಾದ ಮಾತನಾಡಿ, ಸಾಂಸ್ಕೃತಿಕ ಜೀವನ ರೂಪಿಸುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ನನ್ನ ಪಿತಾಮಹ ಎಂಬ ನಾಟಕ ಉತ್ತರ ಕರ್ನಾಟಕ ಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ. ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಮತ್ತೆ ಬೇರೂರಲು ರಂಗ ನಾಟಕಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಟನೆಗೆ ಭಾವನೆಗಳ ಬೆಸುಗೆ ಮುಖ್ಯ. ನಾಟಕ ಕಲಾವಿದರು ಅನೇಕ ಸಮಸ್ಯೆಗಳನ್ನು ಎದುರಿಸಿ ರಂಗಭೂಮಿ ಶ್ರೀಮಂತಿಕೆಗೆ ಶ್ರಮಿಸಿದ್ದಾರೆ. ನಾಟಕಗಳನ್ನು ನೋಡುವ ಪ್ರೇಕ್ಷಕರು ಹೆಚ್ಚಾಗಬೇಕು. ಈ ಮೂಲಕ ಕಲಾ ಸಿರಿಯನ್ನು ಹೆಚ್ಚಿಸಿ ಪೋಷಿಸಬೇಕು ಎಂದರು. ಯಜ್ಞ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಾಲಾ ದಣ್ಣೂರ, ಸಂಸ್ಕಾರ ಭಾರತಿ ಅಧ್ಯಕ್ಷೆ ಲೀಲಾವತಿ ಕುಲಕರ್ಣಿ, ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ್, ಡಾ., ಸ್ವಪ್ನಿಕ್ ಚಾಪೇಕರ್, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಭುವನೇಶ್ವರಿ ಹಳ್ಳಿಖೇಡ, ಸಿದ್ಧಲಿಂಗ ಬಾಳಿ, ದಿನೇಶ ಮದಕರಿ, ಶಿವಾನಂದ ಸುರವಸೆ, ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಜಯನಗರ | ಮಕ್ಕಳಿಂದ ಟಾಯ್ಲೆಟ್, ಬಾತ್ರೂಮ್ ಸ್ವಚ್ಛಗೊಳಿಸಿದ್ದು ಅಮಾನವೀಯ : ಎನ್.ವೆಂಕಟೇಶ್
ವಿಜಯನಗರ : ವಿಶೇಷ ಚೇತನ ಮಕ್ಕಳಿಂದಲೇ ವಸತಿಶಾಲೆಯ ಟಾಯ್ಲೆಟ್, ಬಾತ್ರೂಮ್ ಸ್ವಚ್ಛಗೊಳಿಸುವಂತಹ ಅಮಾನವೀಯ ಘಟನೆ ನಡೆದಿದೆಯೆಂದು ಆರೋಪಿಸಿ ವಿಶೇಷ ಚೇತನರ ಸಂಘದ ಗೌರವ ಸಲಹೆಗಾರ ಎನ್.ವೆಂಕಟೇಶ್ ಅವರು, ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ, ವಿಶೇಷ ಚೇತನರ ಸಂಘದಿಂದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬಾಗಲಕೋಟೆಯ ನವನಗರದ 54ನೇ ಸೆಕ್ಟರ್ನಲ್ಲಿ ದಿವ್ಯಜೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳ ಮೇಲೆ ವಸತಿಶಾಲೆಯ ಮುಖ್ಯಸ್ಥ ಹಾಗೂ ಸಹ ಶಿಕ್ಷಕರು ಪ್ಲಾಸ್ಟಿಕ್ ಪೈಪ್, ಬೆಲ್ಟ್ನಿಂದ ಹಲ್ಲೆ ನಡೆಸಿ ಖಾರದಪುಡಿ ಎರಚಿ ವಿಕೃತಿ ಮೆರೆದಿದ್ದಾರೆ ಎಂದು ಆಪಾದಿಸಿದ್ದಾರೆ. ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆ ಇದಾಗಿದೆ. ಯಾವುದೇ ಪರವಾನಿಗೆ ಪಡೆಯದೆ ನಡೆಸುತ್ತಿರುವ ಈ ವಸತಿ ಶಾಲೆಯಲ್ಲಿ 3 ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಗಲಕೋಟೆ ಎಸ್.ಪಿ. ಸಿದ್ದಾರ್ಥ್ ಗೋಯೆಲ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ವಿಶೇಷ ಚೇತನರ ಕಲ್ಯಾಣಾಧಿಕಾರಿ ಗಿರಿಜಾ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18 ವರ್ಷ ಹಿಂದೆ ತನ್ನ ಮಾವನನ್ನು ಹತ್ಯೆಗೈದ ಆರೋಪಿಯನ್ನು ಗುಂಡಿಕ್ಕಿ ಕೊಂದ ಬಾಲಕ!
ಲಕ್ನೋ: ಉತ್ತರಪ್ರದೇಶದ ಮುರಾದ್ನಗರದಲ್ಲಿ, ಹದಿಹರಯದ ಬಾಲಕನೊಬ್ಬ 18 ವರ್ಷಗಳ ಹಿಂದೆ ತನ್ನ ಮಾವನನ್ನು ಕೊಂದಿರುವ ಆರೋಪ ಎದುರಿಸಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ ಹಾಗೂ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಮೃತನನ್ನು 49 ವರ್ಷದ ಹಾಲಿನ ವ್ಯಾಪಾರಿ ಇಮ್ರಾನ್ ಎಂಬುದಾಗಿ ಗುರುತಿಸಲಾಗಿದೆ. ಇಮ್ರಾನ್ 2007ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಇಮ್ರಾನ್ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಹೋಗಿದ್ದನು. 2017ರಿಂದ ಆತ ಜಾಮೀನಿನಲ್ಲಿ ಹೊರಗಿದ್ದ. ಅಪ್ರಾಪ್ತ ವಯಸ್ಸಿನ ಬಾಲಕನು ಶನಿವಾರ ತನ್ನ ಮಾವನ ಕೊಲೆಗೆ ಪ್ರತೀಕಾರವಾಗಿ ಇಮ್ರಾನ್ನನ್ನು ಗುಂಡಿಕ್ಕಿ ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದರು. ಮುರಾದ್ನಗರದ ಒಲಿಂಪಿಕ್ ಜಂಕ್ಷನ್ನಲ್ಲಿ ಇಮ್ರಾನ್ ತನ್ನ ಗೆಳೆಯನ ಸೈಕಲ್ ಅಂಗಡಿಯಲ್ಲಿ ಕುಳಿತಿದ್ದಾಗ, ಆರೋಪಿ ಬಾಲಕನು ಅಲ್ಲಿಗೆ ಬಂದು ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡುಗಳು ಇಮ್ರಾನ್ನ ಎದೆಯನ್ನು ಹೊಕ್ಕವು ಹಾಗೂ ಆತ ತಕ್ಷಣ ಕುಸಿದು ಬಿದ್ದನು ಎಂದು ಪೊಲೀಸರು ತಿಳಿಸಿದರು.
ಬೀದರ್ | ಪೋಲಿಯೋ ರೋಗ ತಪ್ಪಿಸಲು ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಿ : ಮಹೇಶ್ ಗೋರನಾಳಕರ್
ಬೀದರ್ : ಪೋಲಿಯೋ ಮಾರಕ ರೋಗವಾಗಿದ್ದು, ಅದನ್ನು ತಪ್ಪಿಸಲು ಕಡ್ಡಾಯವಾಗಿ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ್ ಗೋರನಾಳಕರ್ ಅವರು ತಿಳಿಸಿದರು. ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೈಲೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ದಿನ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿ ಚಾಲನೆ ನೀಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಪ್ರಕಾಶ್, ಮೈಲೂರಿನ ಅಂಗನವಾಡಿ ಕಾರ್ಯಕರ್ತೆ ಶಾವುಬಾಯಿ, ಆಶಾ ಕಾರ್ಯಕರ್ತೆ ಸುರೇಕಲಾ, ಕಲ್ಪನಾ ಮಹೇಶ್ ಹಾಗೂ ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಶಿವಾಜಿ ಮಾನಕಾರೆ ಇದ್ದರು.
ಹೈದರಾಬಾದ್: ಆಸ್ಟ್ರೇಲಿಯಾದ ಬೊಂಡಿ ಬೀಚ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಸಂದರ್ಭ, ತೆಲಂಗಾಣ ಮೂಲದ 37 ವರ್ಷದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಗುಂಡೇಟಿನಿಂದ ಗಾಯಗೊಂಡವರ ನೆರವಿಗೆ ಧಾವಿಸುವ ಮೂಲಕ ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ. 2019ರಿಂದ ಆಸ್ಟ್ರೇಲಿಯದಲ್ಲಿ ವಾಸವಾಗಿರುವ ಮುಹಮ್ಮದ್ ರಹ್ಮತ್ ಪಾಶಾ ಅವರು ಅಪಾಯ ಸನ್ನಿವೇಶದಲ್ಲೂ ಗಾಯಾಳುಗಳ ಶುಶ್ರೂಷೆ ಮಾಡಿದ್ದಲ್ಲದೆ, ಅವರನ್ನು ಆ್ಯಂಬುಲೆನ್ಸ್ ಗಳಿಗೆ ಕೊಂಡೊಯ್ಯಲು ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೆರವಾಗಿದ್ದರು. ದಾಳಿಕೋರನೊಬ್ಬ ಗುಂಡುಹಾರಿಸುತ್ತಾ ಮುನ್ನುಗ್ಗಿ ಬರುತ್ತಿರುವುದನ್ನು ಕಂಡು ಬೀಚ್ ನಲ್ಲಿದ್ದ ಜನರು ಭಯಭೀತರಾಗಿ ಓಡತೊಡಗಿದರು. ಸ್ಥಳದಲ್ಲಿದ್ದ ಪಾಶಾ ಕೂಡಾ ಹೆದರಿದ್ದರಾದರೂ, ಧೈರ್ಯ ವಹಿಸಿ ಗಾಯಾಳುಗಳ ನೆರವಿಗೆ ಧಾವಿಸಿದರು. ಕಾಲಿಗೆ ಗುಂಡೇಟು ಬಿದ್ದು, ನೆರವಿಗಾಗಿ ಕೂಗುತ್ತಿದ್ದ ಮಹಿಳೆಯ ಬಳಿ ತೆರಳಿದ ಅವರು, ಆಕೆಯನ್ನು ಸಂತೈಸಿದರು ಮತ್ತು ನೆರವು ಕಾರ್ಯಕರ್ತರು ಬರುವವರೆಗೂ ಆಕೆಯ ಸಮೀಪದಲ್ಲೇ ಇದ್ದರು ಎಂದು ಬೊಂಡಿ ಬೀಚ್ ದಾಳಿಯ ಘಟನೆಯನ್ನು ʼThe Hinduʼ ಸುದ್ದಿಸಂಸ್ಥೆ ಜೊತೆ ಪಾಶಾ ಸ್ಮರಿಸಿಕೊಂಡರು. ಸಂಜೆ 7 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಾಗ, ಮೊದಲಿಗೆ ಪಾಶಾ ಅವರು ಇದೊಂದು ಪಟಾಕಿಯ ಸದ್ದೆಂದು ಭಾವಿಸಿದ್ದರು. ಆದರೆ ಜನರು ಕಿರುಚುತ್ತಾ ದಿಕ್ಕುಪಾಲಾಗಿ ಓಡುತ್ತಿರುವುದನ್ನು ಮತ್ತು ಇನ್ನು ಕೆಲವರು ಕುಸಿದು ಬೀಳುತ್ತಿರುವುದನ್ನು ಕಂಡಾಗ ಅವರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಯಿತು. ವೃತ್ತಿಯಲ್ಲಿ ಬಾಣಸಿಗರಾದ ಪಾಶಾ ಅವರು ಮೂರು ಮಕ್ಕಳ ತಂದೆ. ಈ ಘಟನೆಯು ತನ್ನ ಮೇಲೆ ತೀವ್ರ ಭಾವಾನಾತ್ಮಕ ಪರಿಣಾಮವನ್ನು ಬೀರಿದೆಯೆಂದು ಅವರು ಹೇಳಿದ್ದಾರೆ. ನನ್ನ ಕಣ್ಣಮುಂದೆಯೇ ದಾಳಿಯಲ್ಲಿ ಸಾವನ್ನಪ್ಪಿದವರ ಹಾಗೂ ನಾನು ರಕ್ಷಿಸಲು ಯತ್ನಿಸಿದ ಗಾಯಾಳುಗಳ ನೆನಪು ಇನ್ನೂ ನನ್ನನ್ನು ಕಾಡುತ್ತಿದೆ. ಘಟನೆ ನಡೆದಾಗಿನಿಂದ ನಾನು ಕೆಲಸಕ್ಕೆ ಹಿಂತಿರುಗಿಲ್ಲ, ಅಲ್ಲದೆ ನಾನು ಸರಿಯಾಗಿ ನಿದ್ರಿಸಿಲ್ಲ ಎಂದು ಪಾಶಾ ತಿಳಿಸಿದ್ದಾರೆ. ಬೊಂಡಿ ಬೀಚ್ ದಾಳಿ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭರಿತ ಪೋಸ್ಟ್ ಗಳು ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಶಾ ಅವರು, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಹಾಗೂ ಎಲ್ಲಾ ರೀತಿಯ ವಿಭಿನ್ನತೆಗಳನ್ನು ಮೀರಿ ಅದರ ವಿರುದ್ಧ ಮಾನವಕುಲ ಒಗ್ಗೂಡಬೇಕಾಗಿದೆ ಎಂದು ಹೇಳಿದ್ದಾರೆ. ಪಾಶಾ ಅವರ ದಿಟ್ಟತನ, ಮಾನವೀಯತೆಗೆ ಆಸ್ಟ್ರೇಲಿಯಾದ ಜನತೆ ಅಭಿನಂದಿಸುತ್ತಿದ್ದರೆ, ಭಾರತದಲ್ಲಿರುವ ಕುಟುಂಬಿಕರು, ಈ ಯಾತನಾಮಯ ನೆನಪಿನಿಂದ ಚೇತರಿಸಿಕೊಳ್ಳಲು ಶೀಘ್ರದಲ್ಲೇ ಅವರು ತಾಯ್ನಾಡಿಗೆ ವಾಪಸಾಗಲಿದ್ದಾರೆಂಬ ಆಶಾವಾದವನ್ನು ಹೊಂದಿದ್ದಾರೆ.
ಮುಂದಿನ ಬಜೆಟ್ಗೆ ವಿಜಯನಗರ ಪ್ರೇರಣೆ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಕಮಲಾಪುರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ
ಪೋಲಿಯೋ ಮುಕ್ತ ದೇಶದ ಕನಸು ನನಸಾಗಿಸಲು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ: ಸಚಿವ ಎನ್.ಎಸ್.ಬೋಸರಾಜು
ರಾಯಚೂರು : ಪೋಲಿಯೋ ವೈರಸ್ನಿಂದ ಜೀವನ ಪರ್ಯಂತ ಅಂಗವಿಕಲತೆ ಉಂಟು ಮಾಡುವುದನ್ನು ತಡೆಯಲು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಹಾಕಿಸಿದ್ದರೂ ಸಹ ಮತ್ತೆ ಈಗಲೂ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತು ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ರಿಮ್ಸ್ ಆಸ್ಪತ್ರೆ, ನವೋದಯ ವೈದ್ಯಕೀಯ ಕಾಲೇಜು, ರೋಟರಿ, ಲಯನ್ಸ್ ಕ್ಲಬ್, ರೆಡ್ಕ್ರಾಸ್, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಯೋಗದಲ್ಲಿ ನಗರದ ಕೆ.ಇ.ಬಿ ಕಾಲೋನಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿ.21ರಂದು ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1994 ರಿಂದ ಅಭಿಯಾನದ ರೂಪದಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಕೈಗೊಂಡು ನಮ್ಮ ದೇಶದಲ್ಲಿ ಕಳೆದ 14 ವರ್ಷಗಳಿಂದ ಯಾವುದೇ ಪ್ರಕರಣ ವರದಿಯಾಗದಂತೆ ಸರಕಾರವು ಲಸಿಕೆ ಹಾಕುವ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2,59,984 ಮಕ್ಕಳಿಗೆ 1,133 ಮನೆ ಬೇಟಿ ತಂಡಗಳು, 33 ಮೊಬೈಲ್ ತಂಡ, 53 ಟ್ರಾನ್ಸಿಟ್ ತಂಡಗಳ ಮೂಲಕ 248 ಮೇಲ್ವಿಚಾರಣೆಯೊಂದಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ್ ನಾಯಕ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಲಸಿಕೆಗಳಿಂದಾಗಿ, ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಯುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಜನತೆ ಲಸಿಕೆಗಳ ಬಗ್ಗೆ ಯಾವುದೇ ಸಂಶಯ ವ್ಯಕ್ತಪಡಿಸದೇ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಲಸಿಕೆಗಳನ್ನು ಹಾಕಿಸಿ ರಾಯಚೂರು ಜಿಲ್ಲೆಯು ಈ ದಿಸೆಯಲ್ಲಿ ಮುಂಚೂಣಿಯಲ್ಲಿರಲು ಪ್ರತಿಯೊಬ್ಬರೂ ಸಹಕರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದು, ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ, ಆರ್ಸಿಹೆಚ್ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ವಿಜಯೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್., ಸರ್ವೇಕ್ಷಣಾಧಿಕಾರಿ ಡಾ ಗಣೇಶ್ ಕೆ, ರೋಟರಿ ಸಂಸ್ಥೆಯ ತ್ರಿವಿಕ್ರಮ ಜೋಷಿ, ಮುಖಂಡರಾದ ಜಯಣ್ಣ, ಜಯವಂತರಾವ್ ಪತಂಗೆ, ಜಿಲ್ಲಾ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಡಾ.ಈರಣ್ಣ ಕೋಸಗಿ, ಶಿಶು ಅಭಿವೃದ್ಧಿ ಯೋಜನಧಿಕಾರಿ ಮಂಜುನಾಥ, ಮನ್ಸೂರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಈಶ್ವರ ಹೆಚ್ ದಾಸಪ್ಪನವರ, ರೇಡ್ಕ್ರಾಸ್ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ, ಮಾನವ ಹಕ್ಕುಗಳ ಸಂಘಟನೆಯ ಚಂದ್ರಶೇಖರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ರಾಜಶೇಖರ ಪಾಟೀಲ್, ಹೀರಾಲಾಲ್ ಮುಖ್ಯ ಗುರುಗಳು, ಡಿಪಿಎಮ್ ನವೀನ್, ಐಎಫ್ವಿ ಕೋಪ್ರೇಶ್, ಗುರು ಗಂಪಾ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ರೋಟರಿ, ಲಯನ್ಸ್, ಸೇರಿದಂತೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ದರ ಏನಾಗಲಿದೆ ಗೊತ್ತಾ? ಇಲ್ಲಿದೆ ಆಭರಣ ಸಂಘಟನೆಗಳು ಕೊಟ್ಟ ಮಹತ್ವದ ಸುಳಿವು!
ಸಂಕ್ರಾಂತಿ ಬಳಿಕ ಚಿನ್ನ ಮತ್ತು ಬೆಳ್ಳಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಗಗನಕ್ಕೇರಿದೆ. ಜಾಗತಿಕ ರಾಜಕೀಯ ನಿರ್ಧಾರಗಳಿಂದಾಗಿ ಚಿನ್ನ-ಬೆಳ್ಳಿ ಹೂಡಿಕೆಗೆ ಸುರಕ್ಷಿತ ಎಂಬ ಭಾವನೆ ಜನರಲ್ಲಿದೆ. ಇದರಿಂದಾಗಿ ಭೌತಿಕ ಮತ್ತು ಡಿಜಿಟಲ್ ರೂಪದಲ್ಲಿ ಚಿನ್ನ ಖರೀದಿಗೆ ಜನರು ಒಲವು ತೋರುತ್ತಿದ್ದಾರೆ.
ಡಿ. 25ರಂದು ನವೀ ಮುಂಬೈ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ
ಮುಂಬೈ: ಮುಂಬೈಯ ಎರಡನೇ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಗಿರುವ ನವೀ ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಡಿಸೆಂಬರ್ 25ರಿಂದ ತನ್ನ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಸಿದ್ಧವಾಗಿದೆ. ಡಿಜಿಟಲ್-ಫಸ್ಟ್ ಪ್ರಯಾಣಿಕ ಸಂವಹನ ವ್ಯವಸ್ಥೆ, ವೈ-ಫೈ ಚಾಲಿತ ಆ್ಯಪ್ ಮತ್ತು ವರ್ಚುವಲ್ ಅಸಿಸ್ಟಾಂಟ್ ವ್ಯವಸ್ಥೆಯೊಂದಿಗೆ ಈ ವಿಮಾನ ನಿಲ್ದಾಣವು ವ್ಯಾಪಕ ಶ್ರೇಣಿಯ ಆಧುನಿಕ ಸೌಲಭ್ಯಗಳನ್ನು ನೀಡುತ್ತಿದೆ. ಈ ವಿಮಾನ ನಿಲ್ದಾಣವು ಆರಂಭದಲ್ಲಿ ಸೀಮಿತ ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುತ್ತದೆ. ಬಳಿಕ ಹಂತಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುತ್ತದೆ. ವಿಮಾನ ನಿಲ್ದಾಣದಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ನೀಡಲು ಅದು ಬಿಎಸ್ಎನ್ಎಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿಮಾನ ನಿಲ್ದಾಣವು ಮೊದಲ ಹಂತದಲ್ಲಿ ವರ್ಷಕ್ಕೆ ಎರಡು ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಮಾನ ನಿಲ್ದಾಣವನ್ನು 19.650 ಕೋಟಿ ರೂಪಾಯಿ ಆರಂಭಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಅದರ ಸಾಮರ್ಥ್ಯವನ್ನು 9 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸುವ ಯೋಜನೆಯಿದೆ. ಮುಂಬೈಯಲ್ಲಿ ಈಗ ಇರುವ ವಿಮಾನ ನಿಲ್ದಾಣದ ನಿಬಿಡತೆಯನ್ನು ನವೀ ಮುಂಬೈ ವಿಮಾನ ನಿಲ್ದಾಣವು ಕಡಿಮೆ ಮಾಡುತ್ತದೆ.
ಚಡಚಣ | ಜಾನುವಾರುಗಳ ಮೇಲೆ ದಾಳಿ; ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರ ಒತ್ತಾಯ
ಚಡಚಣ : ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ತದ್ದೇವಾಡಿ ಗ್ರಾಮದ ಜನರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದ್ದು, ರವಿವಾರ ಚಿರತೆ ದಾಳಿಯಿಂದ ಮತ್ತೊಂದು ಜಾನುವಾರು ಮೃತಪಟ್ಟಿರುವ ಘಟನೆ ನಡೆದಿದೆ. ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ʼಸಾಕು ಪ್ರಾಣಿಗಳ ಮೇಲೆ ದಾಳಿಯಿಂದ ಜನ ಭಯಭೀತರಾಗಿದ್ದಾರೆ. ಸಾಕಷ್ಟು ಬಾರಿ ಅಧಿಕಾರ ಗಮನಕ್ಕೆ ತರಲಾಗಿದೆ. ಇಲ್ಲಿಯವರಗೆ ಚಿರತೆ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು. ಇಲ್ಲಿಯವರಗೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದೆ ಹೋರಾಟ ಮಾಡಲಾಗುವುದುʼ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ. ಚಿರತೆ ಪತ್ತೆಗೆ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ತದ್ದೇವಾಡಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪತ್ತೆ ಹಚ್ಚಲು ಡ್ರೂನ್ ಕ್ಯಾಮೆರಾ ಕಾರ್ಯಾಚರಣೆ ನಡೆದಿದೆ. ಅದಷ್ಟು ಬೇಗ ಪತ್ತೆ ಹಚ್ಚಲಾಗುವುದು. ಹಾನಿಯಾದ ಜಾನುವಾರಗಳಿಗೆ ಪರಿಹಾರ ನೀಡಲಾಗುವುದು -ಎಸ್.ಜಿ.ಸಂಗಲಕ, ಅರಣ್ಯಾಧಿಕಾರಿ, ಇಂಡಿ
ವೆನೆಝುವೆಲಾದ ಮತ್ತೊಂದು ತೈಲ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕಾ: ವರದಿ
ವಾಷಿಂಗ್ಟನ್: ಅಮೆರಿಕಾದ ಪಡೆಗಳು ಕ್ಯಾರಿಬಿಯನ್ ಸಮುದ್ರದಲ್ಲಿ ವೆನೆಝುವೆಲಾದ ಮತ್ತೊಂದು ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಮೆರಿಕಾದ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ತಿ ನೊಯೆಮ್ ದೃಢಪಡಿಸಿದ್ದಾರೆ. ರಕ್ಷಣಾ ಇಲಾಖೆಯ ನೆರವಿನೊಂದಿಗೆ ಅಮೆರಿಕಾದ ಕರಾವಳಿ ಕಾವಲು ಪಡೆ ಶನಿವಾರ ಎರಡನೇ ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿದೆ. ತಮ್ಮ ದೇಶದಲ್ಲಿನ ಮಾದಕ ವಸ್ತು ಕಳ್ಳಸಾಗಣೆ ಜಾಲದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ವೆನೆಝುವೆಲಾದ ಆಡಳಿತದ ಮೇಲೆ ನಡೆಯುತ್ತಿರುವ ಒತ್ತಡದ ಮುಂದುವರಿದ ಭಾಗ ಇದಾಗಿದೆ. ಈ ಪ್ರದೇಶದಲ್ಲಿ ಮಾದಕ ವಸ್ತು- ಭಯೋತ್ಪಾದನೆಗೆ ಧನ ಸಹಾಯ ಒದಗಿಸಲು ಬಳಸಲಾಗುವ ನಿರ್ಬಂಧಿತ ತೈಲದ ಅಕ್ರಮ ಸಾಗಣೆಯನ್ನು ಗುರಿಯಾಗಿಸಿ ಅಮೆರಿಕಾ ನಡೆಸುತ್ತಿರುವ ದಾಳಿ ಮುಂದುವರಿಯಲಿದೆ' ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಅಮೆರಿಕಾದ ಕ್ರಮವನ್ನು ವೆನೆಝುವೆಲಾ ಸರಕಾರ ಖಂಡಿಸಿದ್ದು ಅಮೆರಿಕಾ ಕ್ರಮಗಳ ಕಾನೂನುಬಾಹಿರತೆಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಎಲ್ಲಾ ಪ್ರಕ್ರಿಯೆಗಳನ್ನೂ ಕೈಗೊಳ್ಳುವುದಾಗಿ ಪಣತೊಟ್ಟಿದೆ. ಅಮೆರಿಕಾಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆಗೆ ಮತ್ತು ಭಯೋತ್ಪಾದನೆಗೆ ಧನಸಹಾಯ ನೀಡಲು ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಆಡಳಿತವು ತೈಲ ಆದಾಯವನ್ನು ಬಳಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆಪಾದಿಸುತ್ತಿದ್ದಾರೆ.
ವಿಜಯಪುರ : ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆ, ಹೋರಾಟದ ಕುರಿತು ಈಗಾಗಲೇ ಸಚಿವ ಸಂಪುಟ ಸಭೆ, ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಜಿಲ್ಲೆಗೆ ಕಾಲೇಜನ್ನು ಮಂಜೂರು ಮಾಡಿಸಿಕೊಂಡು ಬರಲು ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಈ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಾನು ಕೂಡ ಪರವಾಗಿದ್ದೇನೆ, ಈ ವಾರದಲ್ಲೇ ಮತ್ತೆ ಮುಖ್ಯಮಂತ್ರಿಯವರ ಬಳಿಗೆ ಹೋರಾಟಗಾರರ ನಿಯೋಗ ಕರೆದೊಯ್ದು, ಅವರನ್ನು ಒಪ್ಪಿಸುತ್ತೇನೆ. ಉದ್ದೇಶಿತ ಪಿಪಿಪಿ ಮಾದರಿ ಕೈಬಿಟ್ಟು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನೇಕರು ವಿರೋಧ ಮಾಡುತ್ತಿದ್ದಾರೆ. ಆದರೆ, ಈಗ ಕೇಂದ್ರ ಸರಕಾರವೇ ರಾಷ್ಟ್ರದಾದ್ಯಂತ ಪಿಪಿಪಿ ಮಾದರಿಯಲ್ಲಿ 11 ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ವೈದ್ಯಕೀಯ ಕಾಲೇಜು ಸ್ಥಾಪನೆಯ ಹೋರಾಟಗಾರರು ಇಂದೇ ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕು, ನಾಳೆಯೇ ಆಗಬೇಕು, ಲಿಖಿತವಾಗಿ ಬರೆದುಕೊಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡುವುದು ಸರಿಯಲ್ಲ. ಕಾಲೇಜು ಸ್ಥಾಪನೆಗೆ ಕಾಲಾವಕಾಶ ಬೇಕಾಗುತ್ತದೆ ಎಂದರು. ಈ ಹಿಂದೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಹೋರಾಟಗಾರರ ನಿಯೋಗವನ್ನು ಸಿಎಂ ಬಳಿಗೆ ಕರೆದಾಗ ಯಾರಿಗೂ ಎಲ್ಲಿಯೂ ಅವಮಾನ ಆಗಿಲ್ಲ. ಸಿಎಂ ಅವರು ಅಂದು ಕಾರ್ಯಕ್ರಮಗಳ ಒತ್ತಡದಲ್ಲಿ ಇದ್ದರು. ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದರು. ಹೀಗಾಗಿ ನಿಯೋಗದೊಂದಿಗೆ ಚರ್ಚಿಸಲು ಹೆಚ್ಚು ಸಮಯ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಕಳ : ರೋಟರಿ ಕ್ಲಬ್ ವತಿಯಿಂದ ‘ಪಲ್ಸ್ ಪೋಲಿಯೊ‘ ದಿನಾಚರಣೆ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯವರಿಂದ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆಯ ಪ್ರಯುಕ್ತ ಕೂಕ್ಕುಂದೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಪೊಲೀಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೂಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಬಂಗೇರ ನೆರವೇರಿಸಿ ಶುಭ ಹಾರೈಸಿದರು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾll ಭರತೇಶ್ ರೋಟರಿ ಸಂಸ್ಥೆಯು ಕಳೆದ ನಲ್ವತ್ತು ವರ್ಷಗಳಿಂದ ಸರಕಾರ ದೊಂದಿಗೆ ಪೊಲೀಯೋ ನಿರ್ಮೂಲನ ಕಾರ್ಯ ಮಾಡುತ್ತಿದ್ದು , ‘ಪೊಲೀಯೋ ಮುಕ್ತ ಭಾರತ’ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೂ ನೆರೆಯ ರಾಷ್ಟ್ರಗಳಲ್ಲಿ ಪೊಲೀಯೋ ಕಂಡು ಬಂದಿರುವು ದರಿಂದ ನಾವೂ ಕೂಡಾ ಅದರ ವಿರುದ್ದ ಹೋರಾಡುವ ಅಗತ್ಯವಿದೆ ಎಂದು ಹೇಳುತ್ತಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಕೊಂಡಾಡಿದರು. ಪ್ರಾಥಮಿಕ ಅರೋಗ್ಯ ಘಟಕದ ವೈಧ್ಯಾಧಿಕಾರಿ ಡಾll ವಿದ್ಯಾಶ್ರೀ ಸ್ವಾಗತಿಸಿ ಕೆಲವು ಬೇಡಿಕೆಗಳನ್ನು ರೋಟರಿಯವರ ಮುಂದಿಟ್ಟರು. ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು, ಪಂಚಾಯತ್ ಸದಸ್ಯರಾದ ನಕ್ರೆ ಅಂತೋನಿ ಡಿಸೋಜ ಹಾಗೂ ರೀನಾ ಕ್ಯಾತರಿನ್ ಫೆರ್ನಾಂಡಿಸ್, ಅಣ್ಣಪ್ಪ ನಕ್ರೆ ಉಪಸ್ಥಿತರಿದ್ದರು. ಸಿಬ್ಬಂದಿ ಕುಮುದಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಅರ್ಚನಾ ಹಾಗೂ ಇತರರು ಸಹಕರಿಸಿದರು. ಫಲಾನುಭವಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ
ಮಂಗಳೂರು, ಡಿ.21: ದ. ಕ. ಮತ್ತು ಉಡುಪಿ ಜಿಲ್ಲೆಗಳ ಜಮೀಯ್ಯತ್ತುಲ್ ಸಂಸ್ಥೆಯ ಫಲಾಹ್ ಸುಳ್ಯತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಮಾದಕ ವಸ್ತುಗಳ ವಿರೋಧಿ ಆಂದೋಲನ ಜಾಗೃತಿ ಉಪನ್ಯಾಸ ಮತ್ತು ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಜರಗಿತು ಅಧ್ಯಕ್ಷತೆಯನ್ನು ಸುಳ್ಯ ಘಟಕದ ಅಧ್ಯಕ್ಷ ಮೂಸ ಕುಂಞಿ ಪೈಂಬಚಾಲ್ ವಹಿಸಿದ್ದರು, ವಿದ್ಯಾರ್ಥಿ ವೇತನ ವಿತರಣೆಗೆ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ಧಿ ಕಾಣಲು ಸಾಧ್ಯ, ಕಲಿತು ಉದ್ಯೋಗ ಪಡೆದು ಸಂಪಾದನೆಗೆ ತೊಡಗಿದ ಮೇಲೆ ಇನ್ನೊಬ್ಬರನ್ನು ಪ್ರೋತ್ಸಾಹಿಸುವ ಮನೋಭಾವ ಬೆಳೆಸಬೇಕು ಸಮಾರಂಭಗಳ ಉದ್ದೇಶವೇ ಅದು ಎಂದರು ಕಾರ್ಯಕ್ರಮವನ್ನು ದ. ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್. ಮಹಮ್ಮದ್ ಉದ್ಘಾಟಿಸಿದರು. ಪ್ರತಿಭಾ ಪುರಸ್ಕಾರವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ನೆರವೇರಿಸಿದರು. ಮಾದಕ ವ್ಯಸನ, ಮಾರಾಟ, ಪ್ರೋತ್ಸಾಹ ಶಿಕ್ಷರ್ಹ ಅಪರಾಧ ಇದರ ಬಗ್ಗೆ ಕಾನೂನಿನ ಅರಿವು ನೀಡಿದ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ ವಿದ್ಯಾರ್ಥಿ ಸಮುದಾಯ ಯಾವುದೇ ಸಮಾಜ ವಿರೋಧಿ ಚಟುವಟಿಕೆ ಗಳಲ್ಲಿ ಭಾಗಿಯಾಗದೆ ಪರಿಶುದ್ಧ ಜೀವನ ಸಂಸ್ಕಾರಯುತ ಶಿಕ್ಷಣ ಪಡೆದು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು. ಮಾದಕ ದ್ರವ್ಯ ಗಳ ಭೀಕರತೆ, ಶಿಕ್ಷಣ ದ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಸುಳ್ಯ ಗ್ರೀನ್ ವ್ಯೆ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ಇಲ್ಯಾಸ್. ಕೆ. ಕಾಶಿಪಟ್ಣ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ,ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ,ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಧನಲಕ್ಷ್ಮಿ,್ಮ ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಜೆಎಫ್ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಕಾರ್ಯದರ್ಶಿ ಹಸೈನಾರ್ ವಳಲಂಬೆ, ಖಜಾಂಚಿ ಶಾಫಿ ಕುತ್ತಾಮೊಟ್ಟೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ವೋಕೇಟ್, ಮಾಜಿ ಅಧ್ಯಕ್ಷರುಗಳಾದ ಹೆಚ್. ಎ. ಅಬ್ಬಾಸ್ ಕಲ್ಲುಗುಂಡಿ, ಉಪಾಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಅಮೀರ್ ಕುಕ್ಕುಂಬಳ, ಕೆ. ಬಿ. ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು.
ಡಿ.23ರಂದು ಪಂಪ್ವೆಲ್ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ, ಹಿಮಮಿ ಸಂಗಮ
ಮಂಗಳೂರು, ಡಿ.21: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕ ರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28ರಿಂದ 31 ರ ತನಕ ನಡೆಯಲಿದೆ.ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮವನ್ನು ಡಿಸೆಂಬರ್ 23ರಂದು ಮಂಗಳೂರು ಪಂಪ್ವೆಲ್ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್ನ ಡಿಕೆಎಸ್ ಹಾಲ್ನಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಳ್ ಹಾಗೂ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಳ್ ಅವರು ನೇತೃತ್ವ ವಹಿಸಲಿದ್ದಾರೆ. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಷರಫುದ್ದೀನ್ ತಂಙಳ್ ಪರೀಧ್ನಗರ, ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಮುಸ್ಲಿಂ ಜಮಾಅತ್ ಪ್ರ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ, ಎಸ್ವೈಎಸ್ ಪ್ರ.ಕಾರ್ಯದರ್ಶಿ ಕೆ ಎಮ್ ಸಿದ್ದೀಖ್ ಮೋಂಟುಗೋಳಿ, ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರ ಕಾರ್ಯದರ್ಶಿ ಇಕ್ಬಾಲ್ ಬರಕ ಓಮಾನ್, ಎಸ್ ಎಮ್ ಎ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ, ಎಸ್ ಜೆ ಎಂ ಪ್ರ. ಕಾರ್ಯದರ್ಶಿ ಮುಹಮ್ಮದ್ ಮದನಿ, ಎಸ್ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಲಿಕೆ, ಕರ್ನಾಟಕ ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸ ಅದಿ,ಕೆಕೆಎಂ ಕಾಮಿಲ್ ಸಖಾಫಿ , ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸ್ಹಾಕ್ ಹಾಜಿ ಬೊಳ್ಳಾಯಿ ಸಮೇತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30 ರಿಂದ ಅಪರಾಹ್ನ 1.30ರ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಸ್ಡಿಪಿಐ ಪ್ರತಿಭಟನಾ ಸಭೆ: ಪೊಲೀಸರಿಂದ ಸ್ವಯಂಪ್ರೇರಿತ ದೂರು
ಮಂಗಳೂರು, ಡಿ.21: ಮಂಗಳೂರಿನಲ್ಲಿ ಡಿ.19ರಂದು ನಡೆದ ಎಸ್ಡಿಪಿಐ ಪ್ರತಿಭಟನಾ ಸಭೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಪ್ರತಿಭಟನೆಯ ವಿಡಿಯೊ ತುಣುಕುಗಳನ್ನು ಪರಿಶೀಲಿಸಿದಾಗ ಹಲವು ಸುಳ್ಳು ಮಾಹಿತಿಗಳನ್ನು ಹಾಗೂ ನ್ಯಾಯಾಲಯಗಳ ಕೆಲವು ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಸಾರ್ವಜನಿಕರಿಗೆ ತಿಳಿಸಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗಿದೆ ಎಂಬ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ವಯಂಪ್ರೇರಿತ ದೂರರ್ಜಿಯನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಿಜಿ ವೈದ್ಯಕೀಯ : ನಾಳೆಯಿಂದ ಎರಡನೆ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಸಂಬಂಧ ಎರಡನೆ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.23ರ ಬದಲಿಗೆ ಡಿ.22ರಂದೇ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಕೆಲ ಅಭ್ಯರ್ಥಿಗಳಿಗೆ ಅಖಿಲ ಭಾರತ ಮಟ್ಟದ, ಎಂಸಿಸಿ ಎರಡನೆ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು, ಅಂತಹವರು ಒಂದು ವೇಳೆ ಅಲ್ಲಿಯೇ ಹೋಗಿ ಪ್ರವೇಶ ಪಡೆಯುವುದಿದ್ದರೆ ಅವರಿಗೆ ಅನುಕೂಲ ಆಗಲಿ ಎಂದು ಈ ತೀರ್ಮಾನ ಮಾಡಲಾಗಿದೆ. ಡಿ.22ರ ಸಂಜೆ 6 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಡಿ.23ರಂದು ಸಂಜೆ 4 ಗಂಟೆಯೊಳಗೆ ಕೆಇಎ ಕಚೇರಿಗೆ ಬಂದು ಪಡೆಯಬಹುದು. ಈ ಸುತ್ತಿನಲ್ಲಿ ಭಾಗವಹಿಸಲು ಕಟ್ಟಿರುವ ಶುಲ್ಕದಲ್ಲಿ 25 ಸಾವಿರ ರೂಪಾಯಿ ಕಡಿತ ಮಾಡಿಕೊಂಡು ಉಳಿದ ಹಣವನ್ನು ಒಂದೇ ದಿನದಲ್ಲಿ ಹಿಂದಿರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಎಂಸಿಸಿ ಸೀಟಿಗೆ ಪ್ರವೇಶ ಪಡೆಯುವ ಕಾರಣದಿಂದ ಪ್ರಾಧಿಕಾರದಲ್ಲಿ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಹಂಚಿಕೆಯಾಗಿ ರದ್ದುಗೊಳ್ಳುವ ಪಿಜಿ ಸೀಟುಗಳನ್ನು ಅದೇ ಸುತ್ತಿನಲ್ಲೇ ಅರ್ಹರಿಗೆ ಸಿಗುವ ಹಾಗೆ ಮಾಡಿ, ಡಿ.24ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಈ ಮೊದಲು ದಾಖಲಿಸಿದ್ದ ಇಚ್ಛೆ/ಆಯ್ಕೆಗಳ ಆಧಾರದ ಮೇಲೆಯೇ ಅಂತಿಮವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಹಾಗೆಯೇ ಈ ಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೂ 3ನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಈ ಸಂಬಂಧ ಮಾರ್ಗಸೂಚಿಗಳನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯುನಿವೆಫ್ - ಕುದ್ರೋಳಿಯಲ್ಲಿ ಸೀರತ್ ಸಮಾವೇಶ
ಮಂಗಳೂರು: ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ “ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನದ ಸೀರತ್ ಸಮಾವೇಶವು ಕುದ್ರೋಳಿಯ A1 ಭಾಗ್ ನಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಸ್ಲಿಮ್ ಲೀಗ್ ಮಂಗಳೂರು ಇದರ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಇವರು ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ಅಂದಿನ ಅನಾಗರಿಕ ಜನರ ಶೋಷಣೆಯಿಂದ ಜನಸಾಮಾನ್ಯರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ವಿಮೋಚನೆಗೊಳಿಸಿದ ಆ ಮಾದರಿಯನ್ನು ಯುನಿವೆಫ್ ಕರ್ನಾಟಕ ಮುಂದುವರಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ”ಶೋಷಣೆಯ ವಿರುದ್ಧ ಪ್ರವಾದಿ (ಸ) ಯ ನಡೆ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ, ಶೋಷಣೆಯ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕಾದ ಕಾಲ ಸನ್ನಿಹಿತವಾಗಿದೆ. ಮನುಕುಲದ ಉದ್ಧಾರಕ್ಕಾಗಿ ಸೃಷ್ಟಿಸಲ್ಪಟ್ಟ ಸಮುದಾಯ ಆ ಉದ್ದೇಶವನ್ನು ಈಡೇರಿಸುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ಜನರಿಗೆ ಅವರ ಉದ್ದೇಶವನ್ನು ನೆನಪಿಸಲಿಕ್ಕಾಗಿ ಇಂತಹ ಅಭಿಯಾನಗಳನ್ನು ಯುನಿವೆಫ್ ಹಮ್ಮಿಕೊಂಡಿದೆ ಎಂದು ಹೇಳಿದರು. ಕುದ್ರೋಳಿ ಶಾಖೆಯ ಅಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಜುನೈದ್ ಕಿರಅತ್ ಪಠಿಸಿದರು. ಮುಹಮ್ಮದ್ ಆಸಿಫ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಹಾಗೂ ಕುದ್ರೋಳಿ ಶಾಖೆಯ ಹಿರಿಯ ಸದಸ್ಯ ಅಬ್ದುರ್ರಶೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಭಿಯಾನ ಪ್ರಯುಕ್ತ ಕುದ್ರೋಳಿಯಲ್ಲಿ ನಡೆದ ಮಕ್ಕಳ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವೂ ಜರಗಿತು.
Bengaluru | ಲಂಚ ಸ್ವೀಕಾರ: ಲೆಫ್ಟಿನೆಂಟ್ ಕರ್ನಲ್ ಸಹಿತ ಇಬ್ಬರನ್ನು ಬಂಧಿಸಿದ ಸಿಬಿಐ
ಬೆಂಗಳೂರು : ಬೆಂಗಳೂರು ಮೂಲದ ಕಂಪೆನಿಯೊಂದರಿಂದ 3 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಡಿ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಶರ್ಮಾ ಹಾಗೂ ಖಾಸಗಿ ವ್ಯಕ್ತಿ ವಿನೋದ್ ಕುಮಾರ್ ಎಂಬುವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ. ಡಿ.20ರ ಶನಿವಾರ ದೀಪಕ್ ಕುಮಾರ್ ಶರ್ಮಾ ಅವರ ಹೊಸದಿಲ್ಲಿ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಸಿಬಿಐ ಅಧಿಕಾರಿಗಳು, 2.23 ಕೋಟಿ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲದೇ ಅವರ ಪತ್ನಿಗೆ ಸಂಬಂಧಪಟ್ಟ 10 ಲಕ್ಷ ರೂಪಾಯಿ ನಗದು ಹಾಗೂ ಇತರ ಆರೋಪ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯದ ಉತ್ಪಾದನಾ ಇಲಾಖೆಯ ಸಹಾಯಕ ಯೋಜನಾ ಅಧಿಕಾರಿಯಾಗಿ (ಅಂತಾರಾಷ್ಟ್ರೀಯ ಸಹಕಾರ ಮತ್ತು ರಫ್ತು) ದೀಪಕ್ ಕುಮಾರ್ ಶರ್ಮಾ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ರಾಜಸ್ಥಾನದ ಶ್ರೀಗಂಗಾನಗರದಲ್ಲಿ 16ನೇ ಪದಾತಿ ದಳದ ಅಧಿಕಾರಿಯಾಗಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಶರ್ಮಾ ಅವರು ರಕ್ಷಣಾ ಉತ್ಪನ್ನಗಳ ಉತ್ಪಾದನೆ ರಫ್ತು ಸೇರಿ ಇನ್ನಿತರ ವ್ಯವಹಾರಗಳಲ್ಲಿ ಖಾಸಗಿ ಕಂಪೆನಿ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆಯುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶರ್ಮಾ ಮತ್ತು ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ: ಬೆಂಗಳೂರು ಮೂಲದ ಕಂಪೆನಿಯಿಂದ ಶರ್ಮಾ ಅವರು ಲಂಚ ಸ್ವೀಕರಿಸಿರುವುದರ ಕುರಿತು ಸಿಬಿಐ ಮಾಹಿತಿ ಕಲೆ ಹಾಕಿತ್ತು. ಈ ಕಂಪೆನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ರಾಜೀವ್ ಯಾದವ್ ಮತ್ತು ರವಜಿತ್ ಸಿಂಗ್ ಜೊತೆ ಶರ್ಮಾ ನಿರಂತರ ಸಂಪರ್ಕದಲ್ಲಿದ್ದರು. ಅವರ ಜೊತೆಗೂಡಿ, ವಿವಿಧ ಸರಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಂದ ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ ಪಡೆಯುತ್ತಿದ್ದರು. ಈ ಕಂಪೆನಿಯ ಸೂಚನೆಯ ಮೇರೆಗೆ ವಿನೋದ್ ಕುಮಾರ್, ಶರ್ಮಾರಿಗೆ 3 ಲಕ್ಷ ರೂಪಾಯಿ ಹಣವನ್ನು ಡಿಸೆಂಬರ್ 18ರಂದು ನೀಡಿದ್ದರು ಎಂದು ಸಿಬಿಐ ಪ್ರಕಟನೆಯಲ್ಲಿ ತಿಳಿಸಿದೆ.
ಕೇಪು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ; ದ.ಕ BJP ಅಧ್ಯಕ್ಷ, ಮಾಜಿ MLA ಸೇರಿ 27 ಮಂದಿ ಮೇಲೆ ಕೇಸ್ ದಾಖಲು!
ವಿಟ್ಲ ಠಾಣೆ ವ್ಯಾಪ್ತಿಯ ಕೇಪುವಿನಲ್ಲಿ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಮಠಂದೂರು ಸಹಿತ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ನಾಯಕತ್ವ ರಾಗ ನಿತ್ಯವೂ ಬದಲು: ನಾನು, ಸಿಎಂ ಬ್ರದರ್ಸ್ ಎಂದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಎನ್. ರಾಜಣ್ಣ ಅವರ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿರಲಿಲ್ಲ, ನಾವು ಸಹೋದ್ಯೋಗಿಗಳು ಎಂದು ಅವರು ಹೇಳಿದ್ದಾರೆ. ಜನರ ಆಶೀರ್ವಾದವೇ ನಮಗೆ ವಿಶ್ವಾಸ ಎಂದೂ ಅವರು ತಿಳಿಸಿದರು.
ಮಾರ್ಚ್- ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಹಣ 5 ಸಾವಿರ ಕೋಟಿ ಎಲ್ಲಿ ಹೋಗಿದೆ: ಎಚ್ಡಿ ಕುಮಾರಸ್ವಾಮಿ ಪ್ರಶ್ನೆ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ 5000 ಕೋಟಿ ರೂಪಾಯಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಕೇಂದ್ರದ ನೆರವಿನ ಬಗ್ಗೆ ಸುಳ್ಳು ಹೇಳುವ ಬದಲು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ನಿರ್ವಹಣೆ ಮತ್ತು ರೈತರ ನೆರವಿನಲ್ಲಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರ ಸ್ಥಳೀಯಾಡಳಿತ ಚುನಾವಣೆ: ಆಡಳಿತಾರೂಢ ಮಹಾಯುತಿ ಜಯಭೇರಿ
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ
ಬ್ರಹ್ಮ ರಾಕ್ಷಸನಂತಿರುವ ಆರೆಸ್ಸೆಸ್ ವಿರುದ್ಧ ಹೋರಾಟ ಅನಿವಾರ್ಯ: ಸಾಹಿತಿ ಕುಂ.ವೀರಭದ್ರಪ್ಪ
11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ
ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಹಲ್ಲೆ: ಪ್ರಕರಣ ದಾಖಲು
ಮಣಿಪಾಲ: ಜಾಗದ ವಿಚಾರದ ಧ್ವೇಷದಲ್ಲಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಆರೋಪಿಗಳ ತಂಡ ಹಲ್ಲೆ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.11ರಂದು ಬೊಮ್ಮರಬೆಟ್ಟು ಗ್ರಾಮದ ಹುಸೇನ್ ಶೇಖ್ ಅಹ್ಮದ್ ಹಾಗೂ ಆರೋಪಿಗಳಾದ ಮೊಹಮ್ಮದ್ ರಫೀಕ್, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಸಾಜೀಕ್ ಎಂಬವರಿಗೆ ಜಾಗದ ವಿಚಾರದಲ್ಲಿ ಬೊಮ್ಮರಬೆಟ್ಟು ಗ್ರಾಮದಲ್ಲಿ ಗಲಾಟೆ ನಡೆದಿತ್ತು. ನಂತರ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಹುಸೇನ್ ಶೇಖ್ ಹಾಗೂ ಅವರ ಮಗ ಹೋಗಿದ್ದು, ಆಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಎದುರು ಆರೋಪಿಗಳಾದ ರಫೀಕ್, ಅಶ್ರಫ್, ಸಾಜೀಕ್ ಮತ್ತು ಅಶ್ರಫ್ನ ಕಾರು ಚಾಲಕ ಸೇರಿ ಸಮಾನ ಉದ್ದೇಶದಿಂದ ತಡೆಹಿಡಿದು ಹುಸೇನ್ ಶೇಖ್ ಮತ್ತು ಅವರ ಮಗನಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ವಿದ್ಯುತ್ ಕಡಿತದಿಂದ ತತ್ತರಿಸಿದ ಸ್ಯಾನ್ ಫ್ರಾನ್ಸಿಸ್ಕೋ
ನ್ಯೂಯಾರ್ಕ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶನಿವಾರ ಭಾರೀ ವಿದ್ಯುತ್ ಕಡಿತ ಸಂಭವಿಸಿದ್ದು ಸುಮಾರು 1,30,000 ಜನರು ವಿದ್ಯುತ್ ಪೂರೈಕೆಯಿಲ್ಲದೆ ತೊಂದರೆಗೊಳಗಾದರು ಎಂದು ವರದಿಯಾಗಿದೆ. 8 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ `ಟೆಕ್ಹಬ್' ( ತಂತ್ರಜ್ಞಾನ ಕೇಂದ್ರ)ಸ್ಯಾನ್ ಫ್ರಾನ್ಸಿಸ್ಕೋ ಹೆಚ್ಚಿನ ಭಾಗಗಳು ಕಗ್ಗತ್ತಲೆಯಲ್ಲಿ ಮುಳುಗಿದ್ದು ಹೆಚ್ಚಿನ ಟ್ರಾಫಿಕ್ ಲೈಟ್ ಸ್ಥಗಿತಗೊಂಡ ಕಾರಣ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತೊಡಕಾಗಿದೆ. ಕೆಲವು ವ್ಯಾಪಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ಟ್ರಾಫಿಕ್ ಸಿಗ್ನಲ್ ಗಳು ನಿಷ್ಕ್ರಿಯಗೊಂಡಿದ್ದು ಮಳೆಯೂ ಬರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರ ತೆರಳಬೇಕು ಎಂದು ನಗರದ ಮೇಯರ್ ಡೇನಿಯಲ್ ಲ್ಯೂರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿರಂತರ ಕಾರ್ಯಾಚರಣೆಯ ಬಳಿಕ ಸುಮಾರು 95,000 ಜನರಿಗೆ ವಿದ್ಯುತ್ ಸಂಪರ್ಕ ಮರುಕಲ್ಪಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 112 ಹೊಸ ಬಸ್ಗಳು ಸಂಚಾರ ಆರಂಭಿಸಿವೆ. ಸಚಿವ ರಾಮಲಿಂಗಾ ರೆಡ್ಡಿ ಅವರು ವಿಜಯಪುರದಲ್ಲಿ ಈ ಬಸ್ಗಳಿಗೆ ಚಾಲನೆ ನೀಡಿದರು. ಈ ವರ್ಷ ಒಟ್ಟು 400 ಹೊಸ ಬಸ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 56 ಪ್ರತಿಷ್ಠಿತ ಬಸ್ಗಳು ಮತ್ತು 225 ಇ - ಬಸ್ಗಳು ಸಹ ಸೇರ್ಪಡೆಯಾಗಲಿವೆ.
ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ವ್ಯಕ್ತಿಯ ಮೇಲೆ ಗುಂಪು ಹಲ್ಲೆ; ವರದಿ
ಢಾಕ: ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ವ್ಯಕ್ತಿಯೊಬ್ಬನ ಮೇಲೆ ಗುಂಪು ಹಲ್ಲೆ ನಡೆಸಿರುವ ಮತ್ತೊಂದು ಘಟನೆ ತಡವಾಗಿ ವರದಿಯಾಗಿದೆ. ಖುಲ್ನಾ ಪ್ರಾಂತದ ಜೆನೈದಾ ಜಿಲ್ಲೆಯಲ್ಲಿ ಗೋವಿಂದ ಬಿಸ್ವಾಸ್ ಎಂಬ ರಿಕ್ಷಾ ಚಾಲಕನ ಮೇಲೆ ಶುಕ್ರವಾರ ದಾಳಿ ನಡೆದಿದೆ. ಬಿಸ್ವಾಸ್ ತನ್ನ ಮಣಿಕಟ್ಟು(ಮುಂಗೈ)ಗೆ ಕೆಂಪು ಬಣ್ಣದ ಪವಿತ್ರ ದಾರವನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದ ಕೆಲವರು ಈತ ಭಾರತದ ಗುಪ್ತಚರ ಏಜೆನ್ಸಿಯ(ರಾ) ಜೊತೆ ಸಂಪರ್ಕದಲ್ಲಿದ್ದಾನೆ ಎಂದು ವದಂತಿ ಹಬ್ಬಿಸಿದ್ದಾರೆ. ಇದರ ಬೆನ್ನಲ್ಲೇ ಅಲ್ಲಿಗೆ ಬಂದ ಗುಂಪೊಂದು ಬಿಸ್ವಾಸ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಸ್ವಾಸ್ ರ ಗಂಟಲು, ಎದೆಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಅವರನ್ನು ಜೆನೈದಾ ಸದರ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಮೊಬೈಲ್ ಫೋನ್ ನಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಗೆ ಸಂಬಂಧಿಸಿದ ಹಲವು ವಾಟ್ಸ್ಯಾಪ್ ವಹಿವಾಟುಗಳು ಪತ್ತೆಯಾಗಿವೆ. ಅಲ್ಲದೆ ಬಿಸ್ವಾಸ್ ಗೆ ಭಾರತದ ವ್ಯಕ್ತಿಯೊಬ್ಬರಿಂದ ಕರೆಯೂ ಬಂದಿದೆ. ಭಾರತದ ಪ್ರಜೆ ಆಕಾಶ್ ಎಂಬಾತ ತನಗೆ ಪರಿಚಿತ ಎಂದು ಬಿಸ್ವಾಸ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಬಿಸ್ವಾಸ್ ಬಂಧನವನ್ನು ಜೆನೈದಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ದೃಢಪಡಿಸಿದ್ದು, ಬಿಸ್ವಾಸ್ ಹಲವಾರು ವರ್ಷ ಭಾರತದಲ್ಲಿ ವಾಸಿಸುತ್ತಿದ್ದಾಗಿ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಭಾರತೀಯ ಏಜೆನ್ಸಿಗಳೊಂದಿಗೆ ಬಿಸ್ವಾಸ್ ಸಂಪರ್ಕದಲ್ಲಿದ್ದ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೂರನೇ ಟೆಸ್ಟ್ | ಇಂಗ್ಲೆಂಡ್ ವಿರುದ್ಧ 82 ರನ್ ಗೆಲುವು: ಆ್ಯಶಸ್ ಕಪ್ ತನ್ನಲ್ಲೇ ಉಳಿಸಿಕೊಂಡ ಆಸ್ಟ್ರೇಲಿಯ ತಂಡ
ಅಡಿಲೇಡ್: ಅಡಿಲೇಡ್ ಓವಲ್ ನಲ್ಲಿ ರವಿವಾರ ಕೊನೆಗೊಂಡಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 82 ರನ್ ಗಳಿಂದ ಮಣಿಸಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಪ್ರತಿಷ್ಠಿತ ಆ್ಯಶಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗೆಲ್ಲಲು ವಿಶ್ವ ದಾಖಲೆಯ 435 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಐದನೇ ದಿನವಾದ ರವಿವಾರ 352 ರನ್ ಗಳಿಸಿ ಆಲೌಟಾಯಿತು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್(3-62) ರವಿವಾರ ಮೂರು ವಿಕೆಟ್ಗಳನ್ನು ಉರುಳಿಸಿದ್ದು, ಭೋಜನ ವಿರಾಮಕ್ಕೆ ಮೊದಲು ಜೋಶ್ ಟಾಂಗ್(1 ರನ್) ಅವರ ವಿಕೆಟನ್ನು ಪಡೆದ ಸ್ಕಾಟ್ ಬೋಲ್ಯಾಂಡ್(1-35) ಇಂಗ್ಲೆಂಡ್ ಇನಿಂಗ್ಸ್ ಗೆ ತೆರೆ ಎಳೆದರು. ನಾಯಕ ಪ್ಯಾಟ್ ಕಮಿನ್ಸ್(3-48) ಹಾಗೂ ಸ್ಪಿನ್ನರ್ ನಾಥನ್ ಲಿಯೊನ್(3-77)ತಲಾ ಮೂರು ವಿಕೆಟ್ಗಳನ್ನು ಉರುಳಿಸಿ ಇಂಗ್ಲೆಂಡ್ ತಂಡಕ್ಕೆ ಸೋಲಿನ ಕಹಿ ಉಣಿಸಿದರು. ‘‘ಹಲವು ಕಾರಣಗಳಿಂದಾಗಿ ಈ ಗೆಲುವು ತೃಪ್ತಿಕರವಾಗಿದೆ. ಸರಣಿಗಿಂತ ಮೊದಲೇ ನಾವು ಮಾತುಕತೆ ನಡೆಸಿದ್ದು, ಅದರಂತೆ ಎಲ್ಲವೂ ನಡೆದಿದೆ’’ಎಂದು ಬೆನ್ನುನೋವಿನಿಂದ ಚೇತರಿಸಿಕೊಂಡು ಮೂರನೇ ಟೆಸ್ಟ್ ಪಂದ್ಯದ ಮೂಲಕ ಆಸ್ಟ್ರೇಲಿಯ ತಂಡಕ್ಕೆ ವಾಪಸಾಗಿ ಆರು ವಿಕೆಟ್ ಗಳನ್ನು ಪಡೆದಿದ್ದ ನಾಯಕ ಪ್ಯಾಟ್ ಕಮಿನ್ಸ್ ಸುದ್ದಿಗಾರರಿಗೆ ತಿಳಿಸಿದರು. ಪರ್ತ್ ಹಾಗೂ ಬ್ರಿಸ್ಬೇನ್ ನಲ್ಲಿ ನಡೆದಿರುವ ಮೊದಲೆರಡು ಟೆಸ್ಟ್ ಪಂದ್ಯಗಳನ್ನು 8 ವಿಕೆಟ್ ಗಳ ಅಂತರದಿಂದ ಸೋತಿದ್ದ ಇಂಗ್ಲೆಂಡ್ ತಂಡವು ಇದೀಗ ಸತತ ನಾಲ್ಕನೇ ಆಸ್ಟ್ರೇಲಿಯ ಪ್ರವಾಸದಲ್ಲಿ ಮೂರು ಆ್ಯಶಸ್ ಪಂದ್ಯಗಳನ್ನು ಸೋತಿದೆ. ಕಾಂಗರೂ ನಾಡಿನಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳ ಪೈಕಿ 16ನೇ ಸೋಲು ಕಂಡು ಕಳಪೆ ಪ್ರದರ್ಶನ ಮುಂದುವರಿಸಿದೆ. ‘‘ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವು 2010-11ರ ನಂತರ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಆ್ಯಶಸ್ ಕಪ್ ಗೆಲ್ಲಲಿದೆ’’ ಎಂದು ನಾಯಕ ಬೆನ್ ಸ್ಟೋಕ್ಸ್ ಸರಣಿಗಿಂತ ಮೊದಲು ವಿಶ್ವಾಸದ ಮಾತುಗಳನ್ನಾಡಿದ್ದರು. ‘‘ನಾವು ಗುರಿ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆವು. ಆದರೆ ಅದನ್ನು ಸಾಧಿಸಲು ಅಸಮರ್ಥರಾಗಿದ್ದೇವೆ. ಇದು ನಮಗೆ ತುಂಬಾ ನೋವುಂಟು ಮಾಡಿದೆ’’ ಎಂದು ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಹೇಳಿದ್ದಾರೆ. ಐದನೇ ದಿನವಾದ ರವಿವಾರ ಇಂಗ್ಲೆಂಡ್ ತಂಡಕ್ಕೆ 3ನೇ ಟೆಸ್ಟ್ ಪಂದ್ಯದ ಗೆಲುವಿಗೆ 228 ರನ್ ಅಗತ್ಯವಿತ್ತು. 6 ವಿಕೆಟ್ಗಳ ನಷ್ಟಕ್ಕೆ 207 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ಆಲ್ ರೌಂಡರ್ ವಿಲ್ ಜಾಕ್ಸ್ ಹಾಗೂ ವಿಕೆಟ್ ಕೀಪರ್ ಜಮೀ ಸ್ಮಿತ್ ಆಶಾಕಿರಣವಾಗಿದ್ದರು. ಜಾಕ್ಸ್ ಹಾಗೂ ಸ್ಮಿತ್ ಏಳನೇ ವಿಕೆಟ್ಗೆ 177 ಎಸೆತಗಳಲ್ಲಿ 91 ರನ್ ಜೊತೆಯಾಟದಲ್ಲಿ ಭಾಗಿಯಾದರು. ಎರಡನೇ ಹೊಸ ಚೆಂಡಿನಲ್ಲಿ ಸ್ಮಿತ್ ಮುನ್ನುಗ್ಗಿ ಆಡಿದ್ದು, ಪ್ಯಾಟ್ ಕಮಿನ್ಸ್ ಹಾಗೂ ಸ್ಟಾರ್ಕ್ ಬೌಲಿಂಗ್ನಲ್ಲಿ ಸತತ ಬೌಂಡರಿ ಗಳಿಸಿದರು. ಇಂಗ್ಲೆಂಡ್ ಗೆಲುವಿಗೆ 150 ರನ್ ಅಗತ್ಯವಿದ್ದಾಗ ಸ್ಮಿತ್(60 ರನ್,83 ಎಸೆತ, 7 ಬೌಂಡರಿ, 2 ಸಿಕ್ಸರ್) ಅವರು ಸತತ ಮೂರನೇ ಬಾರಿ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. 137 ಎಸೆತಗಳಲ್ಲಿ 47 ರನ್ ಗಳಿಸಿದ ಆಲ್ರೌಂಡರ್ ಜಾಕ್ಸ್ ಬಾಲಂಗೋಚಿ ಕಾರ್ಸ್(ಔಟಾಗದೆ 39, 64 ಎಸೆತ)ಜೊತೆಗೂಡಿ 8ನೇ ವಿಕೆಟ್ಗೆ 87 ಎಸೆತಗಳಲ್ಲಿ 52 ರನ್ ಸೇರಿಸಿ ಹೋರಾಟ ಮುಂದುವರಿಸಿದರು. ಜಾಕ್ಸ್ ವಿಕೆಟನ್ನು ಉರುಳಿಸಿದ ಸ್ಟಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು. ಆಸ್ಟ್ರೇಲಿಯದ ವಿಕೆಟ್ಕೀಪರ್ ಅಲೆಕ್ಸ್ ಕ್ಯಾರಿ ಮೊದಲ ಇನಿಂಗ್ಸ್ನಲ್ಲಿ 106 ಹಾಗೂ ಎರಡನೇ ಇನಿಂಗ್ಸ್ನಲ್ಲಿ 72 ರನ್ ಗಳಿಸಿದ ಹಿನ್ನೆಲೆಯಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಟ್ರಾವಿಸ್ ಹೆಡ್ ಅವರು ಮೂರನೇ ಇನಿಂಗ್ಸ್ನಲ್ಲಿ 170 ರನ್ ಗಳಿಸಿದ್ದು ಅಡಿಲೇಡ್ ಓವಲ್ನಲ್ಲಿ ಸತತ ನಾಲ್ಕನೇ ಟೆಸ್ಟ್ ಶತಕ ಗಳಿಸಿ ಗಮನ ಸೆಳೆದರು.
ದಿಲ್ಲಿ ವಾಯು ಗುಣಮಟ್ಟ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ; ವರದಿ
ಹೊಸದಿಲ್ಲಿ: ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟ ಹೊಗೆ, ಕೊರೆಯುವ ಚಳಿ ಹಾಗೂ ಮಂಜಿನ ಹೊದಿಕೆ ಆವರಿಸಿದ್ದು, ದಿಲ್ಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ರವಿವಾರ ʼಗಂಭೀರʼ ವರ್ಗಕ್ಕೆ ಹತ್ತಿರದಲ್ಲಿದೆ ಎಂದು ವರದಿಯಾಗಿದೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯುಐ) ಹಗಲಿನಲ್ಲಿ ತೀವ್ರವಾಗಿ ಏರಿದೆ. ರಾತ್ರಿ 11 ಗಂಟೆಗೆ 410ಕ್ಕೆ ತಲುಪಿದ್ದು, ‘‘ತೀವ್ರ’’ ಮಿತಿಯನ್ನು ದಾಟಿದೆ. ರವಿವಾರ ಬೆಳಗ್ಗೆ 6.30ಕ್ಕೆ ವಾಯು ಗುಣಮಟ್ಟ ಸೂಚ್ಯಾಂಕ (ಎಐಕ್ಯು) ಸ್ವಲ್ಪ ಸುಧಾರಣೆ ಕಂಡಿತು. ಆದರೆ, 396ರ ತೀವ್ರ ಮಟ್ಟದ ಸಮೀಪವೇ ಇತ್ತು ಎಂದು ದಿಲ್ಲಿಯ ಭೂ ವಿಜ್ಞಾನಗಳ ಸಚಿವಾಲಯದ ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆ ವರದಿ ಮಾಡಿದೆ. 20.12.2025ರಿಂದ 22.12.2025ರ ವರೆಗೆ ವಾಯು ಗುಣಮಟ್ಟ ತೀವ್ರ ವರ್ಗದಲ್ಲಿ ಇರುವ ಸಾಧ್ಯತೆ ಇದೆ. 23.12.2015ರಂದು ವಾಯು ಗುಣಮಟ್ಟ ಅತ್ಯಂತ ಕಳಪೆ ವರ್ಗದಲ್ಲಿ ಇರುವ ಸಾಧ್ಯತೆ ಇದೆ ಎಂದು ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆ ತಿಳಿಸಿದೆ. ಬುಲೆಟಿನ್ ಪ್ರಕಾರ ಮುಂದಿನ 6 ದಿನಗಳ ಮುನ್ಸೂಚನೆ ಚಿಂತಾಜನಕವಾಗಿದೆ. ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಅಥವಾ ಗಂಭೀರ ಮಟ್ಟದಲ್ಲಿರಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆ್ಯಪ್ ನ ದತ್ತಾಂಶ ರಾಜಧಾನಿಯಾದ್ಯಂತದ ಹಲವು ಮೇಲ್ವಿಚಾರಣಾ ಕೇಂದ್ರಗಳು ಬೆಳಗಿನ ಜಾವ ಗಾಳಿಯ ಗುಣಮಟ್ಟ ಅಂತ್ಯಂತ ಕಳಪೆಯಾಗಿದೆ ಎಂದು ವರದಿ ಮಾಡಿರುವುದನ್ನು ತೋರಿಸಿದೆ. ಬೆಳಗ್ಗೆ 6.05ಕ್ಕೆ ಚಾಂದನಿ ಚೌಕ್ (455), ವಝೀರ್ಪುರ (499), ರೋಹಿನಿ (444), ಜಹಾಗೀರಪುರಿ (444), ಆನಂದ್ ವಿಹಾರ್ (438) ಹಾಗೂ ಮುಂಡ್ಕಾ (436) ವಾಯು ಮಾಲಿನ್ಯದ ತೀವ್ರ ಹೊಡೆತಕ್ಕೆ ಗುರಿಯಾಗಿವೆ. ಈ ಸ್ಥಳಗಳು ‘‘ತೀವ್ರ’’ ವರ್ಗದಲ್ಲಿದೆ. 97 ವಿಮಾನಗಳ ಹಾರಾಟ ರದ್ದು: ದಿಲ್ಲಿಯಲ್ಲಿ ಮುಂಜಿನಿಂದಾಗಿ ವಿಮಾನ ಹಾಗೂ ರೈಲು ಸಂಚಾರಕ್ಕೆ ತಡೆ ಉಂಟಾಗಿದೆ. 48 ಆಗಮನ ಹಾಗೂ 49 ನಿರ್ಗಮನ ವಿಮಾನಗಳು ಸೇರಿದಂತೆ ದಿಲ್ಲಿ ವಿಮಾನ ನಿಲ್ದಾಣದಿಂದ ಒಟ್ಟು 97 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. 200ಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬವಾಗಿವೆ. ಉತ್ತರ ರೈಲ್ವೆಯ 50ಕ್ಕೂ ಅಧಿಕ ರೈಲುಗಳ ವಿಳಂಬವಾಗಿ ಸಂಚರಿಸಿವೆ.
ಮಲ್ಪೆ, ಡಿ.21: ಮಲ್ಪೆಯ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯ ನಿವಾಸಿ ಬಿಸು ಬೆಹೆರಾ(35) ಎಂಬವರು ಡಿ.8ರಂದು ಮಲ್ಪೆ ಹನುಮಾನ್ ನಗರದಲ್ಲಿ ವಾಸ್ತವ್ಯದ ಮನೆಯಿಂದ ಬಟ್ಟೆ ಬರೆ ಹಾಗೂ ಬ್ಯಾಗ್ ಸಮೇತ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Under 19 Asia Cup Final- ಟೀಂ ಇಂಡಿಯಾ ರೀತಿಯಲ್ಲೇ ಭಾರತದ ಅಂಡರ್ 19 ಕ್ರಿಕೆಟ್ ತಂಡವು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಿಲ್ಲ. ಪಾಕಿಸ್ತಾನ ತಂಡದ ವಿರುದ್ಧ ಫೈನಲ್ ನಲ್ಲಿ ಪರಾಭವಗೊಂಡು ರನ್ನರ್ ಅಪ್ ಆದ ಭಾರತದ ಆಟಗಾರರಿಗೆ ಐಸಿಸಿ ಅಸೋಸಿಯೇಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಮುಬಾಶ್ಶಿರ್ ಉಸ್ಮಾನಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅದನ್ನೂ ವೇದಿಕೆಗೆ ಹೋಗಿ ಸ್ವೀಕರಿಸದೆ ಮೈದಾನದಲ್ಲೇ ಸ್ವೀಕರಿಸುವ ಮೂಲಕ ತಿರುಗೇಟು ನೀಡಿತು.
ಉಡುಪಿ, ನ.21: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸು ವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಉಡುಪಿ ಡಿಸಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ರವಿವಾರವೂ ಮುಂದುವರೆದಿದೆ. ರಾತ್ರಿ ಹಗಲು ಎನ್ನದೆ ಕಳೆದ ಏಳು ದಿನಗಳಿಂದ ತಮ್ಮ ಬೇಡಿಕೆ ಈಡೇರಿ ಸುವಂತೆ ಕೊರಗ ಸಮುದಾಯದವರು ಧರಣಿ ನಡೆಸುತ್ತಿದ್ದಾರೆ. ಈ ಚಳಿಯಲ್ಲೂ ಮನೆಮಂದಿ ಮಕ್ಕಳು ಧರಣಿ ಸ್ಥಳದಲ್ಲಿ ಕುಳಿತು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಸಮುದಾಯದ ಪ್ರತಿಭಾವಂತ ಯುವ ಜನತೆಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸುವವರೆಗೆ ಧರಣಿ ಮುಂದುವರೆಸಲಾಗುವುದು ಎಂದು ಧರಣಿ ನಿರತರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಅಧ್ಯಕ್ಷೆ ಸುಶೀಲ ನಾಡ, ಮುಖಂಡ ರಾದ ಶೇಖರ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.
ಡಿಕೆಎಸ್ಸಿ ವಿಷನ್ 30: ನೂತನ ಸಮಿತಿ ರಚನೆ
ಉಡುಪಿ, ಡಿ.21: ಮೂರು ದಶಕಗಳ ಪ್ರಯಾಣವನ್ನು ಮುಗಿಸಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ನ ಮುಂದಿನ ಯೋಜನೆ ’ವಿಷನ್ 30’ಯ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಾಜಿ ಝಕರಿಯ್ಯ ಮುಝೈನ್ ಅವರ ನಿವಾಸದಲ್ಲಿ ಡಿಕೆಎಸ್ಸಿಯ ಪ್ರಮುಖ ನೇತಾರರ ಸಭೆ ಇತ್ತೀಚೆಗೆ ನಡೆಯಿತು. ಸಭೆ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ವಹಿಸಿದ್ದರು. ಡಿಕೆಎಸ್ಸಿ ಹಣಕಾಸು ಕಾರ್ಯದರ್ಶಿ ಹಾಜಿ ದಾವೂದು ಕಜೆಮಾರ್ ಕಿರಾತ್ ಪಠಿಸಿದರು. ಹಾಜಿ ಝಕರಿಯಾ ಜೋಕಟ್ಟೆ, ಅಬ್ದುಲ್ ಹಮೀದ್ ಅಸ್ಕಾಫ್, ಹಾಜಿ ಹಾತಿಂ ಕೂಳೂರು ಮುಂತಾದವರು ಮಾತನಾಡಿದರು. ಸಭೆಯಲ್ಲಿ ಮುಖ್ಯವಾಗಿ ಇತ್ತೀಚೆಗೆ ಡಿಕೆಎಸ್ಸಿ ಮುಡಿಪುವಿನಲ್ಲಿ ನೂತನವಾಗಿ ಖರೀದಿಸಿದ ಜಾಗದ ಅಭಿವೃಧ್ಧಿಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಡಿಕೆಎಸ್ಸಿ ವಿಷನ್ 30ಗೆ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯು.ಟಿ.ಖಾದರ್, ಚೇಯರ್ಮೆನ್ ಆಗಿ ಹಾಜಿ ಝಕರಿಯ್ಯ ಜೋಕಟ್ಟೆ ಅಲ್ಮುಝೈನ್, ವೈಸ್ ಚೆಯರ್ ಮೆನ್ ಆಗಿ ಅಶ್ಫಾಖ್ ಕರ್ನಿರೆ ಎಕ್ಸ್ಪರ್ಟೈಸ್, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್(ಅಸ್ಕಾಫ್), ಕೋಶಾಧಿಕಾರಿ ಯಾಗಿ ಶರೀಫ್ ಬೋಳಾರ್ ವೈಟ್ಸ್ಟೋನ್, ಸಲಹೆಗಾರರಾಗಿ ಅಶ್ರಫ್ ಎಕ್ಸ್ಪರ್ಟೈಸ್, ಕಾರ್ಯದರ್ಶಿಗಳಾಗಿ ಶಬೀರ್ ಎಂಪ್ಲಿಟ್ಯೂಡ್, ಹಿದಾಯತ್ ಅಡ್ಡೂರು, ಸಂಘಟನಾ ಕಾರ್ಯದರ್ಶಿಗಳಾಗಿ ಅಮ್ಜದ್ ಪುತ್ತೂರು, ಜುನೈದ್ ಎಂಪ್ಲಿಟ್ಯೂಡ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸೀದಿ ಹಾಜಿ ಬಹರೈನ್, ಝಹೀರ್ ಝಕರಿಯ್ಯ, ಹಾತಿಂ ಕೂಳೂರು, ಜಾವಿದ್ ಕಲ್ಲಡ್ಕ ಜಿದ್ದಾ, ಶಕೀಲ್ ಜಿದ್ದಾ, ನಝೀರ್ ಅಲ್ ಫಲಾಹ್, ಅಬ್ದುರ್ರಹ್ಮಾನ್ ಕರ್ನಿರೆ ಫೇಸ್, ಅನ್ಸಾಫ್ ಐಎನ್ಸಿ, ಮುಬೀನ್, ಟೇಬಲ್ ಪೋರ್ ಶಹೀರ್, ಸಬಕೋರ್ ಖಮರುದ್ದೀನ್, ಮುಸ್ತಫಾ ಭಾರತ್, ಮುಹಮ್ಮದ್ ಕಮ್ಮರಡಿ, ಆಸೀಫ್ ಎಸ್.ಎ. ಇಂಜಿನಿಯರಿಂಗ್, ಇಸ್ಮಾಯೀಲ್ ಝಕರಿಯ್ಯ ಬಾಕೋರ್, ಅಶ್ರಫ್ ಶಾಹ್ ಮಾಂತೂರು ದುಬೈ, ಕೆ.ಎಚ್.ರಫೀಖ್ ಸೂರಿಂಜೆ, ಅಬ್ದುಲ್ ಮಜೀದ್ ಕಣ್ಣಂಗಾರ್, ಅಬ್ದುಲ್ ಹಮೀದ್ ಉಳ್ಳಾಲ, ಅಬ್ದುಲ್ ಅಝೀಝ್ ಮೂಳೂರು, ದಾವೂದ್ ಕಜಮಾರ್, ಅಬ್ದುಲ್ ಅಝೀಝ್ ಬಜ್ಪೆ ಅವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಹಮೀದ್ ಅರೆಮೆಕ್ಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ಎಚ್.ರಫೀಕ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀಲ ಪ್ರಭುಪಾದರು ವಿಶ್ವಗುರುಗಳು: ಪುತ್ತಿಗೆ ಶ್ರೀ
ಉಡುಪಿ, ಡಿ.21: ಪಾಶ್ಚಾತ್ಯ ದೇಶಗಳಿಗೆ ಶ್ರೀಕೃಷ್ಣನ ಭಕ್ತಿ ವೇದಾಂತ ಸಾರವನ್ನು ತಮ್ಮ ಉಪನ್ಯಾಸ ಹಾಗೂ ಭಕ್ತಿ ಚಳುವಳಿಯ ಮೂಲಕ ಪಸರಿಸಿದ ಶ್ರೀಲ ಪ್ರಭುಪಾದರು ನಿಜಾರ್ಥದಲ್ಲಿಯೇ ವಿಶ್ವಗುರುವಾಗಿದ್ದಾರೆ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಬೆಂಗಳೂರಿನ ಇಸ್ಕಾನ್ ವತಿಯಿಂದ ಇಸ್ಕಾನ್ ಸಂಸ್ಥಾಪಕ ಶೀಲ ಪ್ರಭುಪಾದ ಅವರಿಗೆ ಕಳೆದ ಕುಂಭಮೇಳದ ಸಂದರ್ಭದಲ್ಲಿ ಅಖಾಡ ಪರಿಷತ್ ವತಿಯಿಂದ ನೀಡಲಾದ ‘ವಿಶ್ವ ಗುರು’ ಗೌರವವನ್ನು ಶ್ರೀಕೃಷ್ಣನಿಗೆ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶ್ರೀಕೃಷ್ಣನೇ ಹೇಳಿದಂತೆ ಕಲಿಯುಗದಲ್ಲಿ ಧರ್ಮ ರಕ್ಷಣೆಗಾಗಿ ಭಗವಂತನ ಅವತಾರ ಭಕ್ತರ ರೂಪದಲ್ಲಿ ಆಗುತ್ತದೆ. ಇದರಂತೆ ಆಚಾರ್ಯ ಮಧ್ವರು, ಶ್ರೀಪ್ರಭುಪಾದರ ಅವತಾರವಾಗಿದೆ. ವಿಶ್ವ ಗುರುವಾಗಿ ಕೃಷ್ಣಭಕ್ತಿ ಸಾರವನ್ನು ಜಗದೆಲ್ಲೆಡೆ ಸಾರಿದ ಪ್ರಭುಪಾದಾರಿಗೆ ಇದೀಗ ಕೃಷ್ಣ ಹಾಗೂ ಆಚಾರ್ಯ ಮಧ್ವರು ಒಂದಾಗಿ ಮತ್ತೊಮ್ಮೆ ವಿಶ್ವ ಗುರು ಉಪಾಧಿ ನೀಡಿ ಹರಸಿದ್ದಾರೆ. ಹೀಗಾಗಿ ಇದು ಮಿನಿ ಕುಂಭವಾಗಿದೆ ಎಂದರು. ಹರಿದ್ವಾರ ನಿರಂಜನಿ ಅಖಾಡದ ಮಹಾಮಂಡಲೇಶ್ವರ ಶ್ರೀಕೈಲಾಸಾನಂದ ಗಿರಿ ಮಹಾರಾಜ್ ಅವರಿಗೆ ಪರ್ಯಾಯ ಪುತ್ತಿಗೆ ಸ್ವಾಮೀಜಿ ಶ್ರೀಕೃಷ್ಣನ ಕಡೆಗೋಲು, ಪ್ರಸಾದ ನೀಡಿ ಗೌರವಿಸಿದರು. ಡಾ.ಕಬ್ಬಿನಾಲೆ ವಸಂತ ಕುಮಾರ್ ಅವರು ಸಂಪಾದಿಸಿದ ‘ಶ್ರೀಲ ಪ್ರಭುಪಾದ ಚೈತನ್ಯಮೃತಂ’ ಕನ್ನಡ ಕಾವ್ಯದ ಲೋಕಾರ್ಪಣೆ ನಡೆಯಿತು. ಇಸ್ಕಾನ್ ಬೆಂಗಳೂರು ಇದರ ಅಕ್ಷಯಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ಇಸ್ಕಾನ್ ಬೆಂಗಳೂರಿನ ಚೈತನ್ಯ ದಾಸ್, ವಾಸುದೇವ ಕೇಶವದಾಸ್ ಮೊದಲಾದವರು ಉಪಸ್ಥಿತರಿದ್ದರು.
ಒಂದು ಮಗವೂ ಪೊಲೀಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ: ಎಡಿಸಿ ಅಬೀದ್ ಗದ್ಯಾಳ್
ಉಡುಪಿ, ಡಿ.21: ಜಿಲ್ಲೆಯಲ್ಲಿ 5 ವರ್ಷದೊಳಗಿನ 75395 ಮಕ್ಕಳನ್ನು ಗುರುತಿಸಲಾಗಿದ್ದು ಇದಕ್ಕಾಗಿ 657 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಪಲ್ಸ್ ಪೋಲಿಯೊ ಲಸಿಕಾದಿನದಂದು ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ. ಯಾವುದೇ ಒಂದು ಮಗುವೂ ಕೂಡಾ ಲಸಿಕೆ ನೀಡುವುದ ರಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತವು ಪೋಲಿಯೋ ರೋಗ ಮುಕ್ತವಾಗಿದ್ದರೂ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಇನ್ನೂ ಜೀವಂತವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ದೇಶಾ ದ್ಯಂತ ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಪೋಲಿಯೊ ಲಸಿಕೆಯ ಎರಡು ಹನಿಗಳು ಒಂದು ಮಗುವಿನ ಜೀವ ಉಳಿಸಬಲ್ಲದು. ಪೋಲಿಯೊದಿಂದಾಗಿ ಮಗುವು ಅಂಗವೈಕಲ್ಯ ಹೊಂದಿದಾಗ ಆ ಮಗುವಿನ ಹೆತ್ತವರು ಮತ್ತು ಕುಟುಂಬವು ಶಾಶ್ವತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಶೂನ್ಯ ಪೋಲಿಯೊ ಪ್ರಕರಣಗಳು ದಾಖಲಾಗಿದ್ದರೂ ಮುಂದಿನ ದಿನಗಳಲ್ಲಿ ಯಾವುದೇ ಮಗುವೂ ಪೋಲಿಯೊ ರೋಗಕ್ಕೆ ತುತ್ತಾಗಬಾರದು ಎನ್ನುವ ಕಾರಣಕ್ಕೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ಪೋಲಿಯೊ ಲಸಿಕೆಗಳನ್ನು ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್, ಬೆಂಗಳೂರು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಸುರೇಶ್ ಶಾಸ್ತ್ರಿ, ರೋಟೇರಿಯನ್ ಸುಬ್ರಹ್ಮಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುರಾಧಾ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ. ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರೂಪಿಸಿ, ಜೆ.ಸೂರಜ್ ಕುಮಾರ್ ವಂದಿಸಿದರು. ‘ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವು ವಿಶ್ವದ ಯಶಸ್ವಿ ಅಭಿಯಾನವಾಗಿದ್ದು, 2011ರಲ್ಲಿ ಕಟ್ಟ ಕಡೆಯ ಪೋಲಿಯೊ ಪ್ರಕರಣ ದಾಖಲಾಗಿದ್ದು ಆ ಬಳಿಕ ಭಾರತದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ದಾಖಲಾಗಿಲ್ಲ. ಸತತ ಮೂರು ವರ್ಷಗಳವರೆಗೆ ಪೋಲಿಯೊ ಪ್ರಸರಣವನ್ನು ಯಶಸ್ವಿಯಾಗಿ ತಡೆಗಟ್ಟಿದ ಕಾರಣ 2014ರಂದು ವಿಶ್ವ ಆರೋಗ್ಯ ಸಂಸ್ಥೆ ಯು ಅಧಿಕೃತವಾಗಿ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿ ಸಿದೆ. ಎಲ್ಲರ ಸಹಕಾರದಿಂದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವು ಯಶಸ್ವಿಯಾಗಿದ್ದು, ಮುಂದೆಯೂ ಇದೇ ರೀತಿಯಾಗಿ ಪೋಲಿಯೊ ಪ್ರಸರಣ ವನ್ನು ತಡೆಗಟ್ಟಿ ವಿಶ್ವಕ್ಕೆ ಮಾದರಿಯಾಗಬೇಕು’ -ಅಬೀದ್ ಗದ್ಯಾಳ್, ಅಪರ ಜಿಲ್ಲಾಧಿಕಾರಿ, ಉಡುಪಿ
SSLC Exam 2026 Preparation: ಹೆಚ್ಚು ಅಂಕ ಪಡೆಯಲು ತಂತ್ರ, ಸಲಹೆ ಮತ್ತು ಮಾರ್ಗದರ್ಶನ ಇಲ್ಲಿದೆ
ಬೆಂಗಳೂರು: ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು (SSLC Exam 2026) 2026 ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯು (KSEAB) ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆ-ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. 10 ನೇ ತರಗತಿಗಳ ಪರೀಕ್ಷಾ ತಯಾರಿ ಹೇಗಿರಬೇಕು? ಹೆಚ್ಚು ಅಂಕಗಳನ್ನು ಗಳಿಸಲು ಏನು ಮಾಡಬೇಕು? ಏನೆಲ್ಲ ಗಮನಿಸಬೇಕು?,
ಯಾದಗಿರಿ | ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ಕಟ್ಟೆ ನಿರ್ಮಾಣಕ್ಕೆ ಚಾಲನೆ
ಯಾದಗಿರಿ: ಇಲ್ಲಿನ ಗಂಜ ವ್ಯಾಪ್ತಿಯ ಸ್ಥಳದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಿಜ ಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಕಟ್ಟೆ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದಿಂದ ಸರ್ವ ಪದಾಧಿಕಾರಿ ಮತ್ತು ಮುಖಂಡರ ಸಮ್ಮುಖದಲ್ಲಿ ರವಿವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ ಹಾಗೂ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪುರ ನೇತೃತ್ವದಲ್ಲಿ ಕಟ್ಟೆ ನಿರ್ಮಾಣದ ಸ್ಥಳಕ್ಕೆ ಧಾರ್ಮಿಕ ವಿಧಿವಿಧಾನದ ಮೂಲಕ ಪೂಜೆ ನೆರವೇರಿತು. ಈ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಸಮಾಜದ ಬಹುದಿನಗಳ ಬೇಡಿಕೆಗೆ ಕಾಲ ಕೂಡಿಬಂದಿದೆ. ಮೂರ್ತಿ ಸ್ಥಾಪಿಸುವುದರ ಜತೆಗೆ ಚೌಡಯ್ಯ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಮಾತನಾಡಿ, ಇಂದು ಕಟ್ಟೆ ಪೂಜೆ ನೆರವೇರಿಸಲಾಗಿದೆ. ಬರುವ ದಿನಗಳಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿಯಾಗಿ ಮಾಡಲಾಗುವುದು ಎಂದು ಹೇಳಿದರು. ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ, 12 ನೇ ಶತಮಾನದ ಶರಣರಲ್ಲಿಯೇ ನಮ್ಮ ಸಮಾಜದ ಗುರು ನಿಜಶರಣ ಅಂಬಿಗರ ಚೌಡಯ್ಯ ಅವರು ದೊಡ್ಡ ಕ್ರಾಂತಿಕಾರಿ ವಚನಕಾರರಾಗಿದ್ದರು ಎಂದು ಹೇಳಿದರು. ಈ ವೇಳೆ ಮುಖಂಡರಾದ ಮಹೇಶ ಅನಪೂರ್, ನಿಂಗಪ್ಪ ಜಾಲಗಾರ, ಮಲ್ಲು ಪೂಜಾರಿ, ರಾಜಪ್ಪಾ ಸೈದಾಪುರ್, ಮುದುಕಪ್ಪ ಚಾಮನಹಳ್ಳಿ, ಮಹೇಶ್ ಬಾಡ್ಯಾಳ್, ಅಯ್ಯಪ್ಪ ನಾಯಕೋಡಿ, ಬಸವರಾಜ್ ಕೊಲ್ಕರ್, ಮಲ್ಲಿಕಾರ್ಜುನ್ ಗಿರ್ಮಿಸಿ, ದುರ್ಗಪ್ಪ ಹನುಮನಗರ, ಸಮಾಜ ಹಿರಿಯರಾದ ಮರೆಪ್ಪಾ ಗೋಸಿ, ಸಿ.ಎಂ.ಪಟ್ಟೆದಾರ, ಸಣ್ಣ ಹಣಮಂತಪ್ಪ ಬಳಿಚಕ್ರ, ಶಂಕರ್ ಗೋಸಿ, ಮಹಾದೆವಪ್ಪ, ಗಣಪೂರ, ಶರಣಪ್ಪ ಮೋಟ್ನಳ್ಳಿ ಹೋನಗೆರಾ, ಭೀಮರೆಡ್ಡಿ ಎಸ್.ಯರಗೋಳ ಉಪಸ್ಥಿತರಿದ್ದರು. ಜ.21 ರಂದು ಹಾಸ್ಟೆಲ್ ಆರಂಭ : ಗೋಸಿ ಜಿಲ್ಲೆಯ ಕೋಲಿ, ಕಬ್ಬಲಿಗ ಸಮಾಜದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ಸ್ಥಾನದ ಚಿತ್ತಾಪುರ ರಸ್ತೆಯ ಆರ್ ಟಿಒ ಕಚೇರಿ ಸಮೀಪದಲ್ಲಿ ಬರುವ ಜ.21ರಂದು ಹಾಸ್ಟೆಲ್ ಆರಂಭಿಸಲಾಗುವುದು ಎಂದು ಜಿಲ್ಲಾ ಕೋಲಿ, ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ತಿಳಿಸಿದ್ದಾರೆ. ಅಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಇರುವುದರಿಂದ ಆ ಶುಭಗಳಿಗೆಯಲ್ಲಿ ಸಮಾಜದ ಮಕ್ಕಳಿಗೆ ಅನುಕೂಲವಾಗಲು ಸಮಾಜದ ಜಿಲ್ಲಾ ಘಟಕವು ಮುಖಂಡರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
ಅರಾವಳಿ: ಸುಸ್ಥಿರ ಗಣಿಗಾರಿಕೆಗೆ ಕೇಂದ್ರದ ನಿರ್ವಹಣಾ ಯೋಜನೆ ಸಿದ್ಧ
ಹೊಸದಿಲ್ಲಿ: ಅರಾವಳಿ ಪರ್ವತಶ್ರೇಣಿ ಕುರಿತ ಮೋದಿ ಸರಕಾರದ ವ್ಯಾಖ್ಯಾನವನ್ನು ಪರಿಸರ ಸಚಿವ ಭೂಪೇಂದ್ರ ಯಾದವ್ ಸಮರ್ಥಿಸಿಕೊಂಡಿದ್ದಾರೆ. ‘‘ಅರಾವಳಿ ಪರ್ವತಶ್ರೇಣಿಯು ನಾಲ್ಕು ರಾಜ್ಯಗಳ ಒಟ್ಟು 39 ಜಿಲ್ಲೆಗಳಲ್ಲಿ ಹರಡಿದೆ. ಅರಾವಳಿ ಎಂದರೆ ಕೇವಲ ಅರಣ್ಯಭೂಮಿ ಮಾತ್ರವೇ ಅಲ್ಲ, ಅವು ಕೋಟೆಗಳು, ಸರೋವರಗಳು, ಸಂರಕ್ಷಿತ ಅರಣ್ಯ ಪ್ರದೇಶಗಳು, ದೇವಾಲಯಗಳು ಹಾಗೂ ನಗರಗಳನ್ನು ಒಳಗೊಂಡಿದೆ. ಅವು ದೇಶಕ್ಕೆ ಅತ್ಯಗತ್ಯವಾಗಿರುವ ಅಮೂಲ್ಯ ಖನಿಜಗಳ ಆಗರವೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಭಾಗವಾಗಿ, ಪರಿಸರ ಸಚಿವಾಲಯವು ಸುಸ್ಥಿರವಾದ ಗಣಿಗಾರಿಕೆಗಾಗಿನ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ. ಸದ್ಯಕ್ಕೆ ನ್ಯಾಯಾಲವು ಕೇವಲ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸುವಂತೆ ಮಾತ್ರವೇ ಕೇಳಿದೆ. ಗಣಿಗಾರಿಕೆಗೆ ಇನ್ನೂ ಅನುಮತಿ ನೀಡಿಲ್ಲವೆಂದು ಅವರು ಹೇಳಿದರು. ಅರಾವಳಿ ಬೆಟ್ಟಗಳ ಸಂರಕ್ಷಣೆ ಅತ್ಯಗತ್ಯವೆಂದು ಹೇಳಿದ ಸಚಿವರು, ಯದ್ವಾತದ್ವಾ ಗಣಿಗಾರಿಕೆಗೆ ಅವಕಾಶ ನೀಡಲಾಗುವುದಿಲ್ಲವೆಂದು ಹೇಳಿದರು. ಕಾಂಗ್ರೆಸ್ ಖಂಡನೆ: ರಾಜಸ್ಥಾನದ ಪ್ರತಿಪಕ್ಷ ನಾಯ, ಕಾಂಗ್ರೆಸ್ ನ ಟಿಕಾ ರಾಮ್ ಜೂಲ್ಲಿ ಅವರು ಸುಪ್ರೀಂಕೋರ್ಟ್ ನಿರ್ಧಾರವನ್ನು ವಿರೋಧಿಸಿದ್ದು, ಇದರಿಂದಾಗಿ ಅರಾವಳಿ ಪರ್ವತಶ್ರೇಣಿಗಳಿಗೆ ಹಾನಿಯಾಗಲಿದೆ ಹಾಗೂ ಅಲ್ಲಿನ ಪ್ರದೇಶವು ಮರುಭೂಮೀಕರಣಗೊಳ್ಳುವುದಕ್ಕೆ ಆಸ್ಪದ ನೀಡಲಿದೆ ಎಂದು ಕಳವಳ ವ್ಯಕ್ಚಪಡಿಸಿದ್ದಾರೆ. ಒಂದೆಡೆ ಪ್ರಧಾನಿ ಮೋದಿಯವರು ‘ಏಕ್ ಪೇಡ್ ಮಾ ಕೆ ನಾಮ್’ ಆಂದೋಲನವನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಅವರ ಗೆಳೆಯರಿಗಾಗಿ ಲಕ್ಷಾಂತರ ಮರಗಳನ್ನು ಕಡಿದುಹಾಕಲಾಗುತ್ತಿದೆ. ಒಂದು ವೇಳೆ ಅರಾವಳಿ ಪರ್ವತಶ್ರೇಣಿಯು ಇಲ್ಲದೇ ಇದ್ದಲ್ಲಿ ಇಡೀ ದಿಲ್ಲಿಯವರೆಗಿನ ಪ್ರದೇಶವು ಮರುಭೂಮಿಯಾಗಿರುತ್ತಿತ್ತು ಎಂಬ ವಾದವನ್ನು ವಿಜ್ಞಾನಿಗಳು ಕೂಡಾ ಒಪ್ಪಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಅರಾವಳಿ: ಗಣಿಗಾರಿಕೆಗೆ ಅವಕಾಶ ನೀಡುವ ಕೇಂದ್ರದ ವ್ಯಾಖ್ಯಾನ ವಿರುದ್ಧ ಜನಾಕ್ರೋಶ
ರಾಜಸ್ಥಾನ, ಹರ್ಯಾಣ, ದಿಲ್ಲಿ, ಗುಜರಾತ್ ನಲ್ಲಿ ಪ್ರತಿಭಟನೆಯ ಕಿಡಿ
ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯ! ಕೈ ತುಂಬ ಮೊಳೆ ಹಿಡಿದುಕೊಂಡು ವಾಹನ ಸವಾರ ವಿಡಿಯೋ
ಬೆಂಗಳೂರಿನ ಹೆಬ್ಬಾಳ - ಗೊರಗುಂಟೆಪಾಳ್ಯ ರಿಂಗ್ ರಸ್ತೆಯಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ವಾಹನಗಳ ಟೈರ್ಗಳನ್ನು ಪಂಕ್ಚರ್ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದು, ದುಬಾರಿ ಶುಲ್ಕ ಪಡೆದು ದುರಸ್ತಿ ಮಾಡುವ ಜಾಲವೊಂದು ಸಕ್ರಿಯವಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಸ್ತೆಯ ಎಡಭಾಗ ಬಳಸದಂತೆ ಸಲಹೆ ನೀಡಲಾಗಿದೆ. ನಾಗರಿಕರು ಎಚ್ಚರಿಕೆಯಿಂದಿರಬೇಕು
ವಿಟ್ಲ| ಅಕ್ರಮ ಕೋಳಿ ಅಂಕಕ್ಕೆ ದಾಳಿ; 27 ಮಂದಿಯ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಕೇಪುನಲ್ಲಿ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ, ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಹಲವಾರು ಜನರು ಗುಂಪು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ, ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತುಕೊಂಡಿದ್ದರು. ಅದಲ್ಲದೇ ಸ್ಥಳದಲ್ಲಿ ಹಾಜರಿದ್ದ ಸಂಜೀವ ಮಠಂದೂರು, ಮುರಳೀಧರ ರೈ, ಸತೀಶ ಕುಂಪಲ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ಅಶೋಕ ಶೆಟ್ಟಿ ವಿಟ್ಲ , ರಾಜೇಶ್ ಬಾಳೆಕಲ್ಲು ಎಂಬವರು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿರುತ್ತಾರೆ ಎಂದು ಆರೋಪಿಸಲಾಗಿದೆ. ನಂತರ ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು)ಗಳನ್ನು ಸ್ವಾಧೀನಪಡಿಸಲಾಗಿದ್ದು, ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು 3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಪು: 2ನೇ ದಿನವೂ ಅಕ್ರಮ ಕೋಳಿ ಅಂಕ; ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು
20 ಮಂದಿ ಪೊಲೀಸ್ ವಶಕ್ಕೆ
2,000 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ವಿದ್ಯುದೀಕರಣ : ವಿ.ಸೋಮಣ್ಣ
ಕೋಲಾರ ಜಿಲ್ಲೆಯ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಮೇಲ್ಸೇತುವೆ ಲೋಕಾರ್ಪಣೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ಕಿರುಕುಳ : ಕೇಂದ್ರದ ವಿರುದ್ಧ ಉಗ್ರಪ್ಪ ಆಕ್ರೋಶ
ಕೊಪ್ಪಳ. ಡಿ.21: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು, ಈಡಿ ಮೂಲಕ ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ದಾಳಿ ಮಾಡಿಸಿದ್ದಾರೆ. ಇದು ಸ್ವಾತಂತ್ರ್ಯ ಚಳವಳಿಗೆ ಮಾಡುತ್ತಿರುವ ಅಪಚಾರ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ. ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಲ್ಲ. ಕಾನೂನೂ ಪಾಲಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಹತಾಶರಾದ ಬಿಜೆಪಿಗರು ಇಡಿ ಮೂಲಕ ದಾಳಿ ಮಾಡಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ, ಜವಾಹರಲಾಲ್ ನೆಹರು 5 ಸಾವಿರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಪತ್ರಿಕೆಯ ವಿರುದ್ಧ ದಾಳಿ ಮಾಡಿಸಿದ್ದಾರೆ. ಪ್ರಕರಣ ದಾಖಲಿಸದೆ ದಾಳಿ ಮಾಡಿದ್ದಕ್ಕೆ ದಿಲ್ಲಿಯ ವಿಶೇಷ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ರಾಜಕೀಯ ಸೇಡಿನಿಂದ ಈಡಿ ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದರು. ಆರೆಸ್ಸೆಸ್ ಸಂಘಟನೆಯನ್ನೇಕೆ ನೋಂದಾಯಿಸಿಲ್ಲ?. ಅಲ್ಲಿ ಲಕ್ಷಾಂತರ ಕೋಟಿ ಗುರುದಕ್ಷಿಣಿ ರೂಪದಲ್ಲಿ ಪಡೆಯುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಇವರಿಗೆ ಹೇಗೆ ವೇತನ ಪಾವತಿಸುತ್ತೀರಿ. ಇದರ ಸಂಪೂರ್ಣ ಲೆಕ್ಕ ಎಲ್ಲಿದೆ? ಇದನ್ನೇ ದೇಶದ್ರೋಹ ಎನ್ನುತ್ತಾರೆ ಎಂದು ಅವರು ಹೇಳಿದರು. ಮನರೇಗಾ ಹೆಸರು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವರು ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಫೆವಿಕೋಲ್ ಹಾಕಿಕೊಂಡು, ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿ, ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ರಾಜೀನಾಮೆ ಕೊಟ್ಟು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ದೇಶದ ಜನ ಪ್ರಬುದ್ಧರಿದ್ದು, ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯುತ್ತಾರೆ ಎಂದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಇಟ್ಟಂಗಿ, ಅಕ್ಬರ್ ಪಾಶಾ ಪಲ್ಟನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ಕಿಶೋರಿ ಬೂದನೂರ ಇದ್ದರು. ರಾಮ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ್ದಾನೆ. ರಾಮನ ಆಶಯದಂತೆ ಬಿಜೆಪಿಯವರು ನಡೆದುಕೊಳ್ಳುವುದಿಲ್ಲ. ತನ್ನ ಶ್ರೀಮತಿಯನ್ನೇ ರಕ್ಷಣೆ ಮಾಡದ ಪ್ರಧಾನಿ ನರೇಂದ್ರ ಮೋದಿಗೆ ರಾಮನ ಹೆಸರೇಳಲು ಅರ್ಹತೆ ಇದೆಯಾ?. ರಾಮನು ಜಾತಿರಹಿತ, ವರ್ಗರಹಿತ, ಸಮಪಾಲು, ಸಮ ಬಾಳು, ಸಮಾನ ಅವಕಾಶದ ಸಮಾಜ ಕಟ್ಟಿದ್ದರು ಎಂದು ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿದ್ದಾರೆ. ಮೋದಿ ತಂಡವು ರಾಮನ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಮನ ಆಶಯಕ್ಕೆ ಬದ್ಧವಾಗಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯು ಓಟಿಗಾಗಿ ರಾಮನ ಹೆಸರೇಳುತ್ತಾರೆ. ರಾಮನ ಹೆಸರಲ್ಲಿ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಗಾಂಧೀಜಿ ಹೆಸರನ್ನು ಬದಲಿಸಲು ವಿಕಸಿತ ಭಾರತ ವಿ ರಾಮ್ ಜಿ ಬಿಲ್ ತಂದಿದ್ದಾರೆ. ಇದು ಜನರಿಗೆ ಅರ್ಥವೇ ಆಗುವುದಿಲ್ಲ. -ವಿ.ಎಸ್.ಉಗ್ರಪ್ಪ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ
ಟಿ20 ವಿಶ್ವಕಪ್ ಗೆ ಆಯ್ಕೆಯಾಗದ ಜಿತೇಶ್ ಶರ್ಮಾ; RCB ಪೋಸ್ಟ್ ಗೆ CSKಯ ಋತುರಾಜ್ ಗಾಯಕ್ವಾಡ್ ರಿಪ್ಲೈ ವೈರಲ್!
RCB Instagram Post- 2026ರ ಟಿ20 ವಿಶ್ವಕಪ್ ಆಡಲಿರುವ ಭಾರತ ತಂಡದಿಂದ ಜಿತೇಶ್ ಶರ್ಮಾ ಅವರು ಆಯ್ಕೆ ಆಗದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದೆ. ಅದಕ್ಕಿಂತಲೂ ಗಮ್ಮತ್ತಿನ ಸಂಗತಿಯೆಂದರೆ ಸಿಎಸ್ ಕೆಯ ಆಟಗಾರ ಋತುರಾಜ್ ಗಾಯಕ್ವಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜಿತೇಶ್ ಶರ್ಮಾ ಅವರ ಬದಲಿಗೆ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ಕಲಬುರಗಿ | ಬೆಳೆ ಪರಿಹಾರಕ್ಕಾಗಿ ಆಗ್ರಹಿಸಿ ಡಿ.23ರಂದು ಧರಣಿ ಸತ್ಯಾಗ್ರಹ: ರಾಜಕುಮಾರ್ ಪಾಟೀಲ್
ಕಲಬುರಗಿ(ಸೇಡಂ): ಅತಿವೃಷ್ಠಿಯಿಂದ ಹಾನಿಗೊಳಗಾದ ಎಲ್ಲ ರೈತರಿಗೆ ಬೆಳೆಪರಿಹಾರವನ್ನು ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ, ಸೇಡಂ ತಾಲೂಕು ಬಿಜಿಪಿ ಘಟಕದ ವತಿಯಿಂದ ಡಿ.23 ರಂದು ಇಲ್ಲಿನ ಮಿನಿ ವಿಧಾನಸೌದ ಆವರಣದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಾಮಾಣದ ಬೆಳೆಹಾನಿಯಾಗಿದೆ. ಆದರೆ ಸರಕಾರಿ ಅಧಿಕಾರಿಗಳು ಮಾಡಿದ ಅವೈಜ್ಞಾನಿಕ ಸಮೀಕ್ಷೆಯಿಂದ ಸಾಕಷ್ಟು ರೈತರಿಗೆ ಬೆಳೆಪರಿಹಾರ ದೊರಕಿಲ್ಲ. ಸೇಡಂ ಕ್ಷೇತ್ರದಲ್ಲಿ ಒಟ್ಟಾರೆಯಾಗಿ 46 ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿದ್ದರೆ, ಅಧಿಕಾರಿಗಳು ಕೇವಲ 30 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದರಿಂದ ರೈತರಿಗೆ ಬಿಡಿಗಾಸು ಜಮೆಯಾಗುವ ಮೂಲಕ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ತಾಲೂಕು ಆಡಳಿತ ನಡೆಸಿದ ಸಮೀಕ್ಷೆಯ ಲೆಕ್ಕದಂತೆ ಎಕರೆಗೆ 17 ಸಾವಿರ ರೂ. ಹಣ ಬಿಡುಗಡೆಯಾದರೂ ಕೂಡ, ಸೇಡಂ ತಾಲೂಕಿನಲ್ಲಿ ಸುಮಾರು 50 ಕೋಟಿ ರೂ. ಬೆಳೆಪರಿಹಾರ ಬರಬೇಕಿತ್ತು, ಆದರೆ ಇಲ್ಲಿಯವರೆಗೆ ಕೇವಲ 22 ಕೋಟಿ ರೂ. ಪರಿಹಾರ ಮಾತ್ರ ಬಂದಿದೆ. ಇನ್ನು ಕೆಲ ರೈತರಿಗೆ ಪರಿಹಾರವೇ ಬಂದಿಲ್ಲ. ಹೀಗಾಗಿ ಎಂಟು ದಿನಗಳೊಳಗಾಗಿ ತಾಲೂಕು ಆಡಳಿತ ಮತ್ತೊಮ್ಮೆ ಸಮೀಕ್ಷೆ ನಡೆಸಿ ಎಲ್ಲ ರೈತರಿಗೂ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಸತೀಶ್ ಪಾಟೀಲ್ ತರನಳ್ಳಿ, ಓಂಪ್ರಕಾಶ ಪಾಟೀಲ್, ನಾಗಪ್ಪ ಕೊಳ್ಳಿ, ವಿರೇಶ ಹೂಗಾರ್, ರಾಘವೇಂದ್ರ ಮೆಕಾನಿಕ್, ಶ್ರೀಮಂತ ಆವಂಟಿ, ಜೈ ಪ್ರಕಾಶ, ಶಿವಕುಮಾರ್ ಪಾಗ, ರಾಮು ನಾಯಕ್, ಶಿವಾನಂದ ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.
ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ : ಸಚಿವ ಈಶ್ವರ್ ಖಂಡ್ರೆ
ಮಕ್ಕಳಿಗೆ ಪೋಲಿಯೋ ಹನಿ ನೀಡುವ ಮೂಲಕ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ
ಬೀದರ್ | ಗುಣಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ : ಸಂಸದ ಸಾಗರ್ ಖಂಡ್ರೆ
ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ : ಶಾಸಕ ಪ್ರಭು ಚೌವ್ಹಾಣ್
ಔರಾದ್ : ಐದು ವರ್ಷದೊಳಗಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಹಾಮಾರಿ ಪೋಲಿಯೋ ಮರಳಿ ಬಾರದಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ತಿಳಿಸಿದರು. ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿನ ಗೃಹ ಕಚೇರಿಯಲ್ಲಿ ರವಿವಾರ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಪಲ್ಸ್ ಪೋಲಿಯೋ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಪೋಲಿಯೋ ಕಾರ್ಯಕ್ರಮ ಕ್ರಾಂತಿಕಾರಕ ಬದಲಾವಣೆ ತಂದಿದೆ. ಈಗಾಗಲೇ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂಬ ಹೆಗ್ಗಳಿಕೆ ಹೊಂದಿದೆ. ಆದರೂ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪೋಲಿಯೋ ರೋಗ ಇನ್ನೂ ಜೀವಂತ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗಾಗಿ ಪೋಲಿಯೋ ಲಸಿಕೆ ಹಾಕಿಸುವುದು ಅತ್ಯವಶ್ಯಕವಿದೆ ಎಂದರು. ಪೋಲಿಯೋ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗಾಗಿ ಪೋಷಕರು ನಿರ್ಭಯವಾಗಿ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದ ಅವರು, ಪ್ರತಿ ಗ್ರಾಮಗಳಲ್ಲಿ ಯಾವೊಬ್ಬ ಮಗುವು ಲಸಿಕೆಯಿಂದ ವಂಚಿತಗೊಳ್ಳದಂತೆ ನೋಡಿಕೊಳ್ಳಬೇಕು. ಅಲೆಮಾರಿ ಸಮುದಾಯಗಳು ಇರುವ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಹಾಗೂ ಮೆಡಿಕಲ್ ಆಫಿಸರ್ ಡಾ.ಅಮಿತ್ ಪಾಲ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಔರಾದ್ ತಹಶೀಲ್ದಾರ್ ಕಚೇರಿಗೆ ವಿವಿಧ ಇಲಾಖೆಗಳನ್ನು ವರ್ಗಾಯಿಸಲು ಆಗ್ರಹ
ಔರಾದ್ : ತಾಲೂಕಿನ ಸಂತಪೂರ ವಲಯದಲ್ಲಿರುವ ಪಿಡಬ್ಲ್ಯೂಡಿ, ಮೀನುಗಾರಿಗೆ, ಪ್ರಾದೇಶಿಕ ವಲಯ ಮತ್ತು ಸಾಮಾಜಿಕ ವಲಯ, ಅರಣ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳನ್ನು ತಾಲೂಕು ಕೆಂದ್ರವಾದ ಔರಾದ್ ಗೆ ವರ್ಗಾಯಿಸಬೇಕು ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದಿಂದ ಆಗ್ರಹಿಸಲಾಯಿತು. ಔರಾದ್ ನ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಔರಾದ್ ತಾಲೂಕಿನ ಎಲ್ಲ ಇಲಾಖೆಗಳ ಕಾರ್ಯಲಯಗಳು ಒಂದೇ ಸೂರಿನಲ್ಲಿರಬೇಕು ಎನ್ನುವ ಉದ್ದೇಶದಿಂದ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಭಂಡರಕುಮಟಾ, ದಾಬಕಾ ಮುರ್ಕಿ, ಹೊಕ್ರಾಣ, ಸಾವರಗಾಂವ್, ಖೇರ್ಡಾ ಗ್ರಾಮಗಳ ಸಾರ್ವಜನಿಕರು ಸರ್ಕಾರಿ ಕೆಲಸಕ್ಕಾಗಿ ಔರಾದ್ ಗೆ ಬರುತ್ತಾರೆ. ಹಾಗಾಗಿ ಎಲ್ಲ ಕಚೇರಿಗಳು ಔರಾದ್ ಪಟ್ಟಣಕ್ಕೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕೈರಂಗಳ| ಅಂಬರ್ ವ್ಯಾಲಿ ಶಾಲೆಯ ವಾರ್ಷಿಕೋತ್ಸವ
ಕೈರಂಗಳ : ಅಂಬರ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ, ಕೈರಂಗಳ ಇದರ ಶಾಲಾ ವಾರ್ಷಿಕೋತ್ಸವವನ್ನು ನಡೆಸಲಾಯಿತು. ಸಂಸ್ಥೆಯ ಟ್ರಸ್ಟಿ ಪಿ. ಎ ಅಹ್ಮದ್ ಕುಂಜಿ ಹಾಜಿ ಕಾರ್ಯಕ್ರಮ ಉದ್ಘಾಟನೆಗೈದು, ಸಮಾರಂಭದ ಅಧ್ಯಕ್ಸತೆಯನ್ನು ಶಾಲಾ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ವಹಿಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಇಫ್ತಿಕಾರ್ ಫರೀದ್ ರನ್ನು ಸನ್ಮಾನಿಸಲಾಯಿತು. ಅವರು ಶಿಕ್ಷಣದ ಮಹತ್ವ ಮತ್ತು ಲಭ್ಯವಿರುವ ಹಲವು ಪಾರಾ ಮೆಡಿಕಲ್ ಕೋರ್ಸುಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕಳೆದ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ, ಪೋಷಕರಾದ ಅನಿವಾಸಿ ಭಾರತೀಯ ಉದ್ಯಮಿ ಮಜೀದ್ ಪಡಿಂಜಾರ್ ಹಾಗೂ ಸಂಸ್ಥೆಯ ಟ್ರಸ್ಟಿ ಸತ್ತಾರ್ ಖತರ್ ರವರಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಖ್ಫ್ ಜಿಲ್ಲಾಧಿಕಾರಿ ಅಬೂಬಕ್ಕರ್, ಬ್ಯಾರಿಸ್ ಶಿಕ್ಷಣ ಸಂಸ್ಥೆಯ ಜಬ್ಬಾರ್ ಮೊಂಟೆಪದವು, ಪ್ರಥ್ವಿರಾಜ್, ಶಮಿಮ ಸುಲ್ತಾನ, ನಿಟ್ಟೆ ಕಾಲೇಜ್ ನ ಫಿರೋಝ್, ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರೀಫ್ ಪಟ್ಟೋರಿ, ಸದಸ್ಯರಾದ ಜನಾರ್ಧನ್ ಕುಲಾಲ್, ಹನೀಫ್ ಎಚ್ ಕಲ್ಲು, PDO ವೆಂಕಟೇಶ್ ಉಪಸ್ಥಿತರಿದ್ದರು. ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ಇದರ ಸಿವಿಲ್ ಸರ್ವಿಸ್ IAS/IPS ಬಗ್ಗೆ ಯುವ ಕೋಚ್ ಶಿಹಾಬುದ್ದೀನ್ ಮಾಹಿತಿ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಸಂಚಾಲಕರಾದ ಅಝೀಝ್ ಅಂಬರ್ ವ್ಯಾಲಿ ಸ್ವಾಗತಿಸಿದರು. ಶಾಲಾ ಮುಖ್ಯ ಉಪಾಧ್ಯಾಯಿನಿ ಉಷಾ ವರದಿ ವಾಚಿಸಿದರು. ಸಮಾರಂಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಹೈದರ್ ಮಾವಿನಡಿ, ಶಾಲೆಯ ಗುಣ ಮಟ್ಟದ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಭಾ, ಪವಿತ್ರ, ದಿವ್ಯ, ಅಶ್ವಿನಿ ರಾವ್, ಖುಬುರಾ ನಿರ್ವಹಿಸಿದರು. ಕಾರ್ಯಕ್ರಮವನ್ನು ರಂಮ್ಲ ಸಂಯೋಜಿಸಿದರು. ಅಶ್ವಿನಿ ನಾಯ್ಕ್ ವಂದಿಸಿದರು.
ಸುಮಾರು ಆರು ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ ರಸ್ತೆಯು ಜನವರಿ 2026ರ ಮೊದಲ ವಾರದಿಂದ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ತೆರೆಯಲಿದೆ. ಇದರಿಂದ ಎಂಜಿ ರಸ್ತೆ, ಕಬ್ಬನ್ ರಸ್ತೆ, ಡೆಕನ್ಸನ್ ರಸ್ತೆಯ ಸುತ್ತಮುತ್ತ ಸಂಚಾರ ದಟ್ಟಣೆ ತಗ್ಗಲಿದೆ. ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ರಸ್ತೆಯನ್ನು ಪುನರ್ನಿರ್ಮಿಸಲಾಗಿದೆ. ಜನವರಿ 2ರಿಂದ ಸಂಚಾರ ಆರಂಭ ಸಾಧ್ಯತೆ ಇದೆ. ಇದು ಪ್ರಯಾಣಿಕರ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ಸೇರಿ 17 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 261.43 ಕೋಟಿ ರೂ. ಪರಿಹಾರ ಜಮೆ ಮಾಡಲಾಗಿದೆ. 8,615 ರೈತರಿಗೆ ತಾಂತ್ರಿಕ ಕಾರಣದಿಂದ ಪರಿಹಾರ ಇನ್ನೂ ಬಿಡುಗಡೆಯಾಗಲಿಲ್ಲ. ಈ ಪರಿಹಾರ ಹಣ ಬಿಡುಗಡೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು. ರವಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬೆಳೆ ವಿಮೆ ಮತ್ತು ಇನ್ನಿತರೆ ವಿಷಯಗಳ ಕುರಿತು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ನಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿ ಹೇಕ್ಟರ್ ಗೆ ಮಳೆಯಾಶ್ರೀತ 8,500 ರೂ. ನೀರಾವರಿ ಬೆಳೆಗೆ 17,000 ರೂ. ಮತ್ತು ಬಹುವಾರ್ಷಿಕ ಬೆಳೆಗಳಿಗೆ 22,500 ರೂ. ಗಳಂತೆ ಬೆಳೆ ಹಾನಿಯಾದ ರೈತರಿಗೆ 10 ಹಂತಗಳಲ್ಲಿ ಒಟ್ಟು 1,76,382 ರೈತರಿಗೆ 127.16 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆ ಜಮೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ 8,500 ರೂ. ಗಳು ಸಹ 7 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 134.27 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು. ಬೀದರ್ ನ ರೇಷ್ಮೆ ಇಲಾಖೆಯ 25 ಎಕರೆ ಜಮೀನಿನಲ್ಲಿ ಭವ್ಯವಾದ 20 ಸಾವಿರ ಜನರ ಸಾರ್ಮಥ್ಯದ ಕ್ರೀಡಾಂಗಣ ಮಳಿಗೆ ನಿರ್ಮಿಸಲಾಗುವುದು. ಇದಕ್ಕೆ ಒಂದು ವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗುವುದು. ಸಚಿವ ಸಂಪುಟದಲ್ಲಿ ಮಂಡಿಸಿ ಅನುಮತಿ ಪಡೆದು ಕೆ ಕೆ ಆರ್ ಡಿ ಬಿ ಅಡಿಯಲ್ಲಿ 25 ಕೋಟಿ ರೂ. ಅನುದಾನ ಪಡೆಯಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರತಿಪಕ್ಷ, ರೈತರನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಯಂತ್ರಣ ಕಾನೂನು : ಬಸವರಾಜ ಬೊಮ್ಮಾಯಿ
ಗದಗ : ರಾಜ್ಯ ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ರೈತರು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ತಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ರವಿವಾರ ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಯಾವ ಇಲಾಖೆಯಲ್ಲಿಯೂ ಕೆಲಸ ಆಗುತ್ತಿಲ್ಲ. ಭ್ರಷ್ಟಾ ಚಾರ ಹೆಚ್ಚಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಜನರು ಇದನ್ನು ವಿರೋಧ ಮಾಡಬಾರದು ಎಂದು ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ನವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಬಿಎನ್ಎಸ್ ಕಾನೂನಿದೆ. ಇವರು ವಿರೋಧ ಪಕ್ಷ, ರೈತರನ್ನು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ಈ ಕಾನೂನು ತಂದಿದ್ದಾರೆ ಎಂದು ಹೇಳಿದರು. ಜಿ ರಾಮ್ ಜಿ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ ರಾಮ್ ಜಿ ವಿಧೇಯಕದ ಬಗ್ಗೆ ಸಂಸತ್ತಿನಲ್ಲಿ ಸುಮಾರು ಹದಿನೈದು ಗಂಟೆಗಳಿಗಿಂತ ಹೆಚ್ಚು ಸುದೀರ್ಘವಾಗಿ ಚರ್ಚೆಯಾಗಿದೆ. ಪ್ರಮುಖವಾಗಿ ಹದಿನೈದು ಇಪ್ಪತ್ತು ವರ್ಷದಿಂದ ಇದ್ದ ಕಾನೂನು ಇವತ್ತಿನ ಗ್ರಾಮೀಣ ಪರಿಸ್ಥಿತಿ ಬಹಳ ಬದಲಾಗಿದೆ. ಅದರ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಭ್ರಷ್ಟಾ ಚಾರ ಹೆಚ್ಚಾಗಿತ್ತು. ಯೋಜನೆ ದುರುಪಯೋಗ ಆಗುತ್ತಿರುವ ಆರೋಪ ಇತ್ತು. ತಾಂತ್ರಿಕವಾಗಿ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸೋರಿಕೆ ತಡೆಯಲಾಗಿದೆ. ಆಸ್ತಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಈ ಯೋಜನೆ ಬಳಕೆ ಆಗಬೇಕೆಂದು ಬದಲಾವಣೆ ತಂದಿದ್ದಾರೆ. ಪ್ರತಿ ವರ್ಷ ಒಂದು ಲಕ್ಷ ಹನ್ನೊಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದು ಒಳ್ಳೆಯ ಉದ್ದೇಶಕ್ಕೆ ಆಗಬೇಕು. ಬಹಳಷ್ಟು ರಾಜ್ಯಗಳಲ್ಲಿ ದುರುಪಯೋಗ ಆಗುತ್ತಿತ್ತು. ನೋಂದಣಿ ಅಥವಾ ಉದ್ಯೋಗದ ದಿನಗಳನ್ನು ಕಡಿಮೆ ಮಾಡಿಲ್ಲ. 25 ದಿನ ಹೆಚ್ಚಿಗೆ ಮಾಡಲಾಗಿದೆ. ವಿರೋಧ ಪಕ್ಷಗಳು ಇದನ್ನು ವಿರೋಧ ಮಾಡಲು ವಿರೋಧಿಸುತ್ತಿವೆ ಎಂದು ಅವರು ಹೇಳಿದರು. ಮಹಾತ್ಮಾ ಗಾಂಧಿ ವಿಚಾರಧಾರೆ ಹತ್ತಿಕ್ಕಲು ಈ ವಿಧೇಯಕ ತರಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರು ತೆಗೆದುಕೊಂಡಾಗ ಅದರಲ್ಲಿ ಗಾಂಧೀಜಿ ಇದ್ದಾರೆ. ಗಾಂಧಿ ರಾಮರಾಜ್ಯ, ಗ್ರಾಮ ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ರಾಮನನ್ನು ಗಾಂಧೀಜಿಯಿಂದ ಬೇರ್ಪಡಿಸುವುದೆ ಗಾಂಧಿಜಿಗೆ ಮಾಡುವ ದೊಡ್ಡ ಅಪಚಾರ ಎಂದು ಹೇಳಿದರು. ರೈತರಿಗೆ ಮೋಸ : ರಾಜ್ಯ ಸರಕಾರ ಮೆಕ್ಕೆಜೋಳ ಖರೀದಿ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ನಾನು ಇದನ್ನು ಮೊದಲೆ ಹೇಳಿದ್ದೆ. ಯಾವುದೇ ಏಜೆನ್ಸಿ ನಿಗದಿ ಮಾಡಿರಲಿಲ್ಲ. ಅವರೇ ಹತ್ತು ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಎಷ್ಟು ಮೆಟ್ರಿಕ್ ಟನ್ ಖರೀದಿ ಮಾಡಿದ್ದಾರೆ ಎಂದು ಸರಕಾರ ಬಹಿರಂಗ ಪಡಿಸಲಿ. ಎಲ್ಲಿಯೂ ಖರೀದಿ ಆಗುತ್ತಿಲ್ಲ. 8-10 ಕ್ವಿಂಟಾಲ್ ಖರೀದಿಸಿ ನಿಲ್ಲಿಸುತ್ತಾರೆ. ಮೆಕ್ಕೆಜೋಳ ಬೆಳೆಯುವ ರೈತರಿಗೆ ಸರಕಾರ ಮೋಸ ಮಾಡಿದೆ ಎಂದು ದೂರಿದರು.
ಸುರತ್ಕಲ್: ಉರುಮಾಲ್ ಕನ್ನಡ ಮಾಸಿಕದ 20ನೇ ವಾರ್ಷಿಕೋತ್ಸವ; ವಿಶೇಷಾಂಕ ಬಿಡುಗಡೆ
ವಿಶೇಷ ಚೇತನರಿಗೆ ಗಾಳಿಕುರ್ಚಿ, ಹೊಲಿಗೆ ಯಂತ್ರ ವಿತರಣೆ, ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ
ರಾಜ್ಯದ ಹಲವೆಡೆ ಶೀತಗಾಳಿ ತೀವ್ರ; ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಬೆಳಗಿನ ಜಾವ ದಟ್ಟ ಮಂಜು ಸಾಧ್ಯತೆ
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಪರಿಸ್ಥಿತಿ ತೀವ್ರಗೊಂಡಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಹಲವೆಡೆ ತಾಪಮಾನ ತೀವ್ರವಾಗಿ ಕುಸಿದಿದೆ. ಇದು ಈ ಋತುವಿನ ಅತ್ಯಂತ ಶೀತದ ಸಮಯಗಳಲ್ಲಿ ಒಂದಾಗಿದೆ.ಇತ್ತ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಆದರೆ ಕರಾವಳಿ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಯ ನಿರೀಕ್ಷೆಯಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ವಿಶೇಷವಾಗಿ ಬೆಳಗಿನ ಜಾವದಲ್ಲಿ ದಟ್ಟವಾದ ಮಂಜು ಆವರಿಸುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ತೀವ್ರ ಶೀತ ವಾತಾವರಣವಿದ್ದು, ಕಳೆದ ಒಂದು ತಿಂಗಳಿನಿಂದ ಕನಿಷ್ಠ ತಾಪಮಾನ ಸ್ಥಿರವಾಗಿ ಕುಸಿಯುತ್ತಿದೆ. ರಾಯಚೂರು ಮತ್ತು ಧಾರವಾಡದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗದಗ ಮತ್ತು ಹಾವೇರಿಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಹಾಸನದಲ್ಲಿ ಕನಿಷ್ಠ ತಾಪಮಾನ 8.5 ಡಿಗ್ರಿ ಸೆಲ್ಸಿಯಸ್ ಇದ್ದರೆ, ದಾವಣಗೆರೆಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ತಾಪಮಾನ ಸುಮಾರು 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೀದರ್ ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

18 C