400 ಕೋಟಿ ರೂ. ದರೋಡೆ ಪ್ರಕರಣ: ಪ್ರಮುಖ ಆರೋಪಿ ಕಿಶೋರ್ ಶರಣಾಗತಿ, ಬಿಗ್ ಟ್ವಿಸ್ಟ್
ಬೆಳಗಾವಿ: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಭಾರೀ ಸಂಚಲನ ಮೂಡಿಸಿರುವ 400 ಕೋಟಿ ರೂಪಾಯಿ ತುಂಬಿದ್ದ ಎರಡು ಕಂಟೇನರ್ ಕಳ್ಳತನ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಬೆಳವಣಿಗೆ ನಡೆದಿವೆ. ಈ ಕೇಸಿನ ಪ್ರಮುಖ ಆರೋಪಿ ಕಿಶೋರ್ ಸಾಳವೆ ಮೊನ್ನೆ ನಾಸಿಕ್ ತಾಲೂಕಿನ ಘೋಟಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಈತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಮೃತ್ಯು ಪ್ರಕರಣ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗ್ರಹ
ತಿರುವನಂತಪುರಂ: ಜನವರಿ 30ರಂದು ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮಾಲಕ ಸಿ.ಜೆ.ರಾಯ್ ಮೃತ್ಯುಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಪಿಣರಾಯಿ ವಿಜಯನ್, “ಈ ಘಟನೆ ದೇಶದ ತೆರಿಗೆ ಆಡಳಿತದ ಮೇಲಿನ ಕಪ್ಪು ಚುಕ್ಕೆಯಾಗಿದ್ದು, ದಾಳಿಯ ವೇಳೆ ಗಂಭೀರ ಲೋಪಗಳನ್ನು ಎಸಗಲಾಗಿದೆ” ಎಂದು ಆರೋಪಿಸಿದ್ದಾರೆ. ಮೃತ ಸಿ.ಜೆ.ರಾಯ್ ಸಹೋದರನ ಕಿರುಕುಳ ಆರೋಪವನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಿಎಂ ಪಿಣರಾಯಿ ವಿಜಯನ್, “ಆದಾಯ ತೆರಿಗೆ ವಂಚಿಸುವುದು ಗಂಭೀರ ಸಮಸ್ಯೆ ಹಾಗೂ ಅದನ್ನು ಹತ್ತಿಕ್ಕಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂಬ ಬಗ್ಗೆ ನನಗೆ ಸಂಪೂರ್ಣ ಸಹಮತವಿದೆ. ಆದರೆ, ಯಾವುದೇ ಕ್ರಮವು ಸಿ.ಜೆ.ರಾಯ್ ಪ್ರಕರಣದಲ್ಲಾದಂತೆ ಅಮೂಲ್ಯ ಜೀವವನ್ನು ತೆಗೆಯುವಂತಾಗಬಾರದು. ಅದನ್ನು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸಮರ್ಥಿಸಲು ಸಾಧ್ಯೆವೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ತಮ್ಮ ಸಹೋದರನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದ ಅವರ ಸಹೋದರ, “ನನ್ನ ಸಹೋದರ ಸಂಪೂರ್ಣವಾಗಿ ಸಹಕಾರ ನೀಡಿದ್ದ ಹಾಗೂ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ್ದ. ಹೀಗಿದ್ದೂ ಅಧಿಕಾರಿಗಳು ಮತ್ತೆ ಮತ್ತೆ ಬರಲು ಪ್ರಾರಂಭಿಸಿದ್ದರು. ಆದಾಯ ತೆರಿಗೆ ಇಲಾಖೆಯ ಸಮಸ್ಯೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆತ ನನಗೆ ಹಲವು ಬಾರಿ ಹೇಳಿದ್ದ” ಎಂದು ಆರೋಪಿಸಿದ್ದರು.
ಮಂಗಳೂರು : ಎಂಆರ್ ಪಿಎಲ್ ಗೆ ಎರಡು ಪ್ರಮುಖ ಪ್ರಶಸ್ತಿ
ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಗೋವಾದಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ 2026 ರಲ್ಲಿ ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ (FIPI)ಯಿಂದ ಎರಡು ಪ್ರಮುಖ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಶುದ್ಧೀಕರಣ ಕ್ಷೇತ್ರದಲ್ಲಿನ ನವೀನತೆ ಮತ್ತು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗಾಗಿ ಈ ಪ್ರಶಸ್ತಿ ಸಿಕ್ಕಿದೆ. ತೈಲ ಮತ್ತು ಅನಿಲ ಕ್ಷೇತ್ರದಲ್ಲಿನ ವೈಯಕ್ತಿಕ ಸಾಧನೆಗಾಗಿ ಎಂಆರ್ಪಿಎಲ್ನ ಆರ್.ಕಾರ್ತಿಕ್ ಅವರಿಗೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಶಸ್ತಿ ಪ್ರದಾನ ಮಾಡಿದರು.
ಅನಂತ ಸುಬ್ಬರಾವ್ ಅವರಂಥ ವ್ಯಕ್ತಿ ನಮ್ಮ ಇಂದಿನ ಸಾರ್ವಜನಿಕ ಜೀವನದಲ್ಲಿ ಲಕ್ಷಕ್ಕೊಬ್ಬರೂ ಸಿಗುವುದಿಲ್ಲ. ಅವರ ರಾಜಿ ರಹಿತ ಹೋರಾಟ, ಜೈಲು ವಾಸ, ಲಾಠಿ ಏಟು, ಬದ್ಧತೆ, ತ್ಯಾಗ ಛಲ, ಸರಳತೆ, ಸಜ್ಜನಿಕೆ, ಜಿಗುಟುತನ ಉಳಿದವರಿಗೆ ಮಾದರಿಯಾಗಿದೆ. ಕೊನೆಯ ದಾಗಿ ಹಾಸನ ಜಿಲ್ಲೆಯ ಬಾಗೂರು ನವಿಲೆ ರೈತ ಹೋರಾಟದ ಸಮಯದಲ್ಲಿ ಪ್ರಧಾನಿಯಾಗಿದ್ದ ಎಚ್. ಡಿ.ದೇವೇಗೌಡರು ಸ್ವತಃ ಫೋನ್ ಮಾಡಿ ಚಳವಳಿಯನ್ನು ವಾಪಸ್ ಪಡೆಯಲು ಮನವಿ ಮಾಡಿದರೂ ಅವರು ಜಗ್ಗಲಿಲ್ಲ. ಸೊಪ್ಪುಹಾಕಲಿಲ್ಲ. ಇದು ಅವರ ದಿಟ್ಟತನಕ್ಕೆ ಒಂದು ಉದಾಹರಣೆಯಾಗಿದೆ. ನಾನು ‘ವಾರ್ತಾಭಾರತಿ’ಯಲ್ಲಿ ‘ಪ್ರಚಲಿತ’ ಅಂಕಣ ಬರೆಯಲು ಆರಂಭಿಸಿದಾಗಿನಿಂದ ಆ ಫೋನ್ ಕರೆ ವಾರಕ್ಕೊಮ್ಮೆ ತಪ್ಪದೇ ಬರುತ್ತಿತ್ತು. ಪ್ರತೀ ಸೋಮವಾರ ಪ್ರಕಟವಾಗುತ್ತಿದ್ದ ಪ್ರಚಲಿತ ಓದಿದ ತಕ್ಷಣ ಅವರು ಫೋನ್ ಮಾಡುತ್ತಿದ್ದರು. ಅಂಕಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಬರೀ ಹೊಗಳಿಕೆಯಲ್ಲ, ಲೇಖನವನ್ನು ವಿಮರ್ಶಿಸಿ ತಪ್ಪು, ಸರಿಗಳ ಬಗ್ಗೆ ಹೇಳುತ್ತಿದ್ದರು. ತಮಗೆ ಸರಿಯೆನಿಸಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರು ಬೇರಾರೂ ಅಲ್ಲ, ಕಳೆದ ಗುರುವಾರ ನಮ್ಮನ್ನಗಲಿದ ನನ್ನ ಆತ್ಮ ಬಂಧು ಎಚ್. ವಿ.ಅನಂತಸುಬ್ಬರಾವ್. ಅವರ ನಿರ್ಗಮನವನ್ನು ಅರಗಿಸಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ. ಅನಂತ ಸುಬ್ಬರಾವ್ ಮತ್ತು ನನ್ನದು ಸುಮಾರು 50 ವರ್ಷಗಳ ಒಡನಾಟ. ಒಂದೇ ವಿಚಾರ ಧಾರೆ, ಒಂದೇ ಸಂಘಟನೆ ಮಾತ್ರವಲ್ಲ ವೈಯಕ್ತಿಕವಾಗಿಯೂ ನಮ್ಮದು ಕರುಳು ಬಳ್ಳಿಗಿಂತ ಮಿಗಿಲಾದ ಬಾಂಧವ್ಯ. ನಾವು ಬದುಕಿರುವಾಗ ಸುತ್ತಲಿನ ಸಮಾಜದಲ್ಲಿ ಬಂಧು ಬಳಗ ಮಾತ್ರವಲ್ಲ, ಹಲವಾರು ಜನರ ಸ್ನೇಹ ಸಂಬಂಧ ಸಹಜವಾಗಿ ಬರುತ್ತದೆ. ಅನೇಕ ಸ್ನೇಹ ಸಂಬಂಧಗಳ ಆಯುಷ್ಯ ತುಂಬಾ ಕಡಿಮೆ. ಒಂದೆರಡು ವರ್ಷ, ನಾಲ್ಕಾರು ವರ್ಷ ಹೀಗೆ ಅನಿರ್ದಿಷ್ಟ ಕಾಲಾವಧಿಯಲ್ಲಿ ಗೆಳೆತನದ ಕೊಂಡಿ ಕಳಚಿ ಬೀಳುತ್ತದೆ. ಆದರೆ, ಬದುಕಿನ ಪಯಣದಲ್ಲಿ ಜೊತೆಗಿರುವವರು ಕೆಲವೇ ಜನ. ನಮ್ಮೆರಡು ಕುಟುಂಬಗಳ ನಡುವಿನ ಸ್ನೇಹ ಸಂಬಂಧ ನಿತ್ಯ, ನಿರಂತರ ಹಸಿರಾಗಿರುತ್ತಿತ್ತು. ಬಿಡುವಿಲ್ಲದ ಕೆಲಸಗಳ ನಡುವೆ ಸದಾ ಅಧ್ಯಯನಶೀಲರಾಗಿರುತ್ತಿದ್ದ ಅನಂತ ಸುಬ್ಬರಾವ್ ಅವರು ಅತ್ಯಂತ ಹೆಚ್ಚು ಇಷ್ಟಪಡುವ ಪತ್ರಿಕೆ ವಾರ್ತಾಭಾರತಿ. ಅದರಲ್ಲಿ ಬರುವ ಲೇಖನಗಳು ಮತ್ತು ಸಂಪಾದಕೀಯಗಳನ್ನು ಅವರು ತಪ್ಪದೇ ಓದುತ್ತಿದ್ದರು. ಸಂಪಾದಕೀಯ ಬರಹಗಳು ಹಾಗೂ ನನ್ನ ಅಂಕಣ ಬರಹಗಳ ಸಂಗ್ರಹ ಪುಸ್ತಕ ಬರಬೇಕೆಂದು ಹೇಳುತ್ತಿದ್ದರು. ರಾಜ್ಯದಲ್ಲಿ ಸಂಚರಿಸುವಾಗ ಕಾರ್ಮಿಕರ ಸಭೆಗಳಲ್ಲಿ ವಾರ್ತಾಭಾರತಿ ಪತ್ರಿಕೆಯನ್ನು ಓದಬೇಕೆಂದು ಮನವಿ ಮಾಡುತ್ತಿದ್ದರು. ಒಂದು ವಾರ ನನ್ನ ಅಂಕಣ ಬರದಿದ್ದರೆ ಯಾಕೆ ಬರೆದಿಲ್ಲ ಎಂದು ಕೇಳುತ್ತಿದ್ದರು. ಮನೆಗೆ ‘ವಾರ್ತಾಭಾರತಿ’ ಬರುವುದು ತಡವಾದರೆ ಯಾಕೆ ಬಂದಿಲ್ಲ ಎಂದೇ ಕೇಳುತ್ತಿದ್ದರು. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಳ್ಳಿಯೊಂದರಿಂದ ಬಂದ ಅನಂತ ಸುಬ್ಬರಾವ್ ಅರುವತ್ತರ ದಶಕದಲ್ಲಿ ಹಾಸನದಲ್ಲಿ ವ್ಯಾಸಂಗ ಮಾಡಿದ ನಂತರ ಜೀವ ವಿಮಾ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದರು.ವಿಮಾ ಸಂಸ್ಥೆಯಲ್ಲಿ ಕೆಲಸ ಮಾಡುವಾಗಲೇ ನೌಕರರ ಸಂಘಟನೆಯನ್ನು ಸೇರಿದರು. ಅಲ್ಲಿ ಮಾರ್ಕ್ಸ್ ವಾದದ ಸೈದ್ಧಾಂತಿಕ ದೀಕ್ಷೆ ಪಡೆದ ಅವರು ಮತ್ತೆ ತಿರುಗಿ ನೋಡಲಿಲ್ಲ. ವಿಮಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಭಡ್ತಿ ಪಡೆಯಲು ಆಡಳಿತದಿಂದ ಸೂಚನೆ ಬಂದರು ಅದನ್ನು ಅನಂತ ಸುಬ್ಬರಾವ್ ನಿರಾಕರಿಸಿದರು. ಪ್ರಮೋಶನ್ ಪಡೆದರೆ ಉನ್ನತ ಅಧಿಕಾರಿಯಾಗಬಹುದು ಆದರೆ ಕಾರ್ಮಿಕ ಸಂಘಟನೆಯಲ್ಲಿ ಸೇವೆ ಮಾಡುವ ಅವಕಾಶ ತಪ್ಪಿ ಹೋದರೆ ಹೇಗೆ ಎಂದು ಭಕ್ತಿಯನ್ನು ಅವರು ಇಷ್ಟಪಡಲಿಲ್ಲ. ಎಪ್ಪತ್ತರ ದಶಕದ ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತನಾಗಿ ಸಮತೆಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಅನಂತ ಸುಬ್ಬರಾವ್ ಜೀವ ವಿಮಾ ಕೆಲಸಕ್ಕೆ ರಾಜೀನಾಮೆ ನೀಡಿದರು. ಆಗ ಸೋವಿಯತ್ ರಶ್ಯ ಸೇರಿದಂತೆ ಪೂರ್ವ ಯುರೋಪಿನ ಕೆಲವು ದೇಶಗಳಲ್ಲಿ ಕಮ್ಯುನಿಸ್ಟ್ ಸರಕಾರಗಳು ಅಸ್ತಿತ್ವದಲ್ಲಿ ಇದ್ದವು. ಭಾರತದ ಕಮ್ಯುನಿಸ್ಟ್ ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಕಮ್ಯುನಿಸ್ಟ್ ದೇಶಗಳಿಗೆ ಅಧ್ಯಯನ ಕಾರಣಕ್ಕಾಗಿ ಪ್ರವಾಸ ಮಾಡಿ ಬರಲು ಆಹ್ವಾನ ಇರುತ್ತಿತ್ತು. ಇಂಥ ಅವಕಾಶ ಅನಂತ ಸುಬ್ಬರಾವ್ ಅವರಿಗೆ ಹಲವಾರು ಸಲ ಬಂದಾಗ ಅಲ್ಲಿ ಪ್ರವಾಸ ಹೋದರೆ ಇಲ್ಲಿ ಸಾರಿಗೆ ಮತ್ತಿತರ ಕಾರ್ಮಿಕ ಸಂಘಟನೆಗಳನ್ನು ನೋಡಿಕೊಳ್ಳುವವರು ಯಾರು? ಎಂದು ಅದನ್ನು ಒಪ್ಪಿಕೊಳ್ಳಲಿಲ್ಲ. ಕಾಮ್ರೇಡ್ ದಣಿವರಿಯದ ಕಾರ್ಮಿಕ ಹೋರಾಟಗಾರ . ಲಕ್ಷಾಂತರ ಕಾರ್ಮಿಕರ ಅಚ್ಚುಮೆಚ್ಚಿನ ನಾಯಕ. ಬರೀ ಕಾರ್ಮಿಕ ನಾಯಕ ಮಾತ್ರವಲ್ಲ ಮಾರ್ಕ್ಸ್ ವಾದದ ಸೈದ್ಧಾಂತಿಕ ತತ್ವ ಶಾಸ್ತ್ರ ದಲ್ಲಿ ಪಾರಂಗತ. ಕರ್ನಾಟಕ ಕಂಡ ಈ ಅಪರೂಪದ ಕಮ್ಯುನಿಸ್ಟ್ ಸಂಗಾತಿ, ಎಚ್.ವಿ. ಅನಂತ ಸುಬ್ಬರಾವ್ ನಿರ್ಗಮನ ಅಕ್ಷರಶಃ ಸಾರ್ವಜನಿಕ ಜೀವನಕ್ಕೆ ತುಂಬಲಾಗದ ನಷ್ಟ. ಅವರನ್ನು ತುಂಬಾ ಹತ್ತಿರದಿಂದ ನೋಡಿದ ನನ್ನಂಥವರಿಗೆ ಈ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಅಚ್ಚುಮೆಚ್ಚಿನ ನಾಯಕರಾಗಿದ್ದ ಅನಂತ ಸುಬ್ಬರಾವ್ ನಮ್ಮ ಸಾರ್ವಜನಿಕ ಜೀವನಕ್ಕೆ ಒಂದು ಘನತೆಯನ್ನು ತಂದು ಕೊಟ್ಟವರು. ಅವರದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರ ಬದುಕು ಪಾರದರ್ಶಕವಾಗಿತ್ತು. ನಂಬಿದ ಸಿದ್ಧಾಂತ ಮತ್ತು ಶ್ರಮಜೀವಿಗಳ ಹೋರಾಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅನಂತ ಸುಬ್ಬರಾವ್ ತಮ್ಮನ್ನು ತಾವು ಮೇಣದ ಬತ್ತಿಯಂತೆ ಸುಟ್ಟುಕೊಂಡು ಚಳವಳಿ ಕಟ್ಟಿದವರು. ಅವರ ಮಾತು ಮತ್ತು ಕೃತಿಯಲ್ಲಿ ಒಂದಿಂಚು ವ್ಯತ್ಯಾಸವೂ ಇರಲಿಲ್ಲ. ಅನಂತ ಸುಬ್ಬರಾವ್ ಕೇವಲ ವೇದಿಕೆಯ ಮೇಲೆ ನಿಂತು ಭಾಷಣ ಮಾಡುವ ನಾಯಕ ಅಲ್ಲ.ಕಮ್ಯುನಿಸ್ಟ್ ಪಕ್ಷದ ಪ್ರತೀ ಕಾರ್ಯಕರ್ತನ , ಕಾರ್ಮಿಕ ಸಂಘಟನೆಯ ಪ್ರತಿಯೊಬ್ಬ ಕಾರ್ಮಿಕನ ಕಷ್ಟ , ತಾಪತ್ರಯಗಳಿಗೆ ಸ್ಪಂದಿಸುತ್ತಿದ್ದರು. ಅವರ ಮನೆಗೆ ಹೋಗಿ ಆರೋಗ್ಯದ ಸ್ಥಿತಿ ಗತಿಗಳ ಬಗ್ಗೆ ವಿಚಾರಿಸುತ್ತಿದ್ದರು. ವೈದ್ಯಕೀಯ ವರದಿಗಳನ್ನು ನೋಡಿ ಅಗತ್ಯವೆನಿಸಿದರೆ ಚಿಕಿತ್ಸೆಗೆ ಏರ್ಪಾಟು ಮಾಡುತ್ತಿದ್ದರು. ವೈಯಕ್ತಿಕವಾಗಿ ನನ್ನ ಅನುಭವವನ್ನು ಹೇಳಬೇಕೆಂದರೆ ನಾನು ಅಸ್ವಸ್ಥತೆಯಿಂದ ಹಲವಾರು ಸಲ ಆಸ್ಪತ್ರೆಗೆ ಸೇರಿದಾಗ ಸ್ವತಃ ತಾವೇ ಆಸ್ಪತ್ರೆಗೆ ಬಂದು ವಿಚಾರಿಸಿದವರು ಅನಂತ ಸುಬ್ಬರಾವ್. ಇಂಥವರನ್ನು ಹೇಗೆ ಮರೆಯಲು ಸಾದ್ಯ? ಅನಂತ ಸುಬ್ಬರಾವ್ ಒಮ್ಮ್ಮೆಲೇ ಬೆಳೆದು ನಿಂತವರಲ್ಲ.ಒಂದೊಂದು ಹೆಜ್ಜೆ ಇಡುತ್ತ ಬಹು ಎತ್ತರಕ್ಕೆ ಬೆಳೆದು ನಿಂತವರು. ಬರೀ ಸಿದ್ಧಾಂತವನ್ನು ಅರಿತುಕೊಂಡು ಅವರು ಸುಮ್ಮನಿರಲಿಲ್ಲ. ಸುಲಿಗೆ, ಶೋಷಣೆಯಿಲ್ಲದ ಹೊಸ ಸಮಾಜವನ್ನು ನಿರ್ಮಿಸುವ ಕನಸನ್ನು ನನಸಾಗಿಸಲು ತನ್ನ ಇಡೀ ಬದುಕನ್ನೇ ಸಮರ್ಪಿಸಿಕೊಂಡರು. ಸಾರಿಗೆ ಸಂಸ್ಥೆಯ ಕಾರ್ಮಿಕರನ್ನು ಸಂಘಟಿಸುವುದು ಸುಲಭದ ಸಂಗತಿಯಲ್ಲ.ಅದಕ್ಕಾಗಿ ಇಡೀ ಕರ್ನಾಟಕವನ್ನು ನೂರಾರು ಸಲ ಸುತ್ತಿದರು. ಪ್ರತೀ ಜಿಲ್ಲೆ ‘ತಾಲೂಕು’ಡಿಪೊಗೆ ಹೋಗಿ ಕಾರ್ಮಿಕರ ಕಷ್ಟಗಳನ್ನು ಆಲಿಸಿದರು. ಸಮಸ್ಯೆ ಅರಿತುಕೊಂಡು ಸರಕಾರಕ್ಕೆ ಮನದಟ್ಟು ಮಾಡುವ ಚಾಕಚಕ್ಯತೆ ಅವರಿಗಿತ್ತು. ಅವರ ಮತ್ತು ನನ್ನ ಐದು ದಶಕಗಳ ಪರಿಚಯ ಮತ್ತು ಒಡನಾಟದಲ್ಲಿ ನಾನು ಕಂಡಂತೆ ಅವರಿಗೆ ಸ್ವಂತದ ಬದುಕಿಗಿಂತ ಲಕ್ಷಾಂತರ ಸಾರಿಗೆ ನೌಕರರ, ಕಾರ್ಮಿಕರ ಬದುಕು ಮುಖ್ಯವಾಗಿತ್ತು. ಮಧುಮೇಹ, ನೂರೆಂಟು ಆರೋಗ್ಯದ ಸಮಸ್ಯೆಗಳಿದ್ದರೂ ಅನಂತ ಸುಬ್ಬರಾಯರ ಹೋರಾಟ, ಚಳವಳಿಗಳೆದುರು ಅವೆಲ್ಲವೂ ನಗಣ್ಯವಾಗಿದ್ದವು. ಕಾರ್ಮಿಕರ ಪಾಲಿಗೆ ಅವರು ಕೇವಲ ನೇತಾರರಾಗಿರಲ್ಲ್ಲ ಹಿರಿಯಣ್ಣನಂತೆ ಇದ್ದರು. ಅದೊಂದು ಕಾಲವಿತ್ತು ಅನಂತ ಸುಬ್ಬರಾಯರು ಬೆಂಗಳೂರಿನಿಂದ ಒಂದು ಕರೆ ಕೊಟ್ಟರೆ ಸಾಕು ಇಡೀ ರಾಜ್ಯದ ಬಸ್ ಸಂಚಾರ ಒಮ್ಮೆಲೆ ನಿಂತಲ್ಲೇ ನಿಲ್ಲುತ್ತಿದ್ದವು. ಅವರ ಒಂದು ಕರೆಯಿಂದ ಇಡೀ ರಾಜ್ಯದ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿತ್ತು. ಹೀಗಾಗಿ ಯಾವುದೇ ಸರಕಾರವಿರಲಿ ಅನಂತ ಸುಬ್ಬರಾವ್ ಅವರ ಮಾತನ್ನು ಕಡೆಗಣಿಸುವುದು ಸುಲಭವಾಗಿರಲಿಲ್ಲ. ಜಾಗತೀಕರಣದ ಶಕೆ ಆರಂಭವಾದ ನಂತರ ಸಾರ್ವಜನಿಕ ಒಡೆತನದ ರಾಜ್ಯ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ನಿರಂತರವಾಗಿ ಮಸಲತ್ತು ನಡೆಯುತ್ತಲೇ ಬಂತು.ರಾಜ್ಯ ಸಾರಿಗೆ ಸಂಸ್ಥೆಯ ಸಾವಿರಾರು ಕೋಟಿ ರೂಪಾಯಿ ಸೊತ್ತನ್ನು ನುಂಗುವ ಹುನ್ನಾರವನ್ನು ತಡೆಯಲು ಅವಿಶ್ರಾಂತ ಹೋರಾಟ ಮಾಡಿದವರು ಅನಂತ ಸುಬ್ಬರಾವ್. ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಅಂಕಿ ಸಂಖ್ಯೆಗಳು ಸದಾ ಅವರ ನಾಲಗೆ ಮೇಲೆ ಇರುತ್ತಿದ್ದವು. ಹೀಗಾಗಿ ಅವರನ್ನು ಯಾಮಾರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ತಿಂಗಳು, ಎರಡು ತಿಂಗಳಿಗೊಮ್ಮೆ ಕರ್ನಾಟಕ ಸುತ್ತಿ ಶ್ರಮಿಕರ ಕಷ್ಟ ಸುಖಗಳನ್ನು ಆಲಿಸದಿದ್ದರೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ಅವರು ಇಡೀ ದಿನ ಎಐಟಿಯುಸಿ ಕಚೇರಿಯಲ್ಲೇ ಇರುತ್ತಿದ್ದರು. ಇಷ್ಟು ಮಾತ್ರವಲ್ಲ ರಾತ್ರಿ ಕಚೇರಿಯಲ್ಲೇ ಉಳಿಯುತ್ತಿದ್ದರು. ಚಾಪೆ, ಪೇಪರ್ಗಳನ್ನು ಹಾಸಿಕೊಂಡು ಮಲಗುತ್ತಿದ್ದರು. ನಾನೂ ಅನೇಕ ಸಲ ರಾತ್ರಿಯೆಲ್ಲ ಚರ್ಚಿಸುತ್ತ ಅಲ್ಲಿರುತ್ತಿದ್ದೆ. ಅನಂತ ಸುಬ್ಬರಾವ್ ಅವರ ಮನೆಯಲ್ಲಿ ಜಾತಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರೇ ಬರಲಿ ಅವರ ಜೊತೆಗೆ ಕುಳಿತು ಊಟ ಮಾಡಬೇಕೆಂದು ಅವರು ಬಯಸುತ್ತಿದ್ದರು. ತಮ್ಮ ತಟ್ಟೆಯನ್ನು ತಾವೇ ತೊಳೆಯುತ್ತಿದ್ದ ಅವರು, ಬಹುತೇಕ ಸಲ ಮನೆಯಲ್ಲಿ ಊಟ ಮಾಡಿದ ಎಲ್ಲರ ಪಾತ್ರೆಗಳನ್ನು ತೊಳೆಯುವುದಕ್ಕೆ ಹಿಂಜರಿಯುತ್ತಿರಲಿಲ್ಲ. ನಮ್ಮ ತಟ್ಟೆಯನ್ನು ನಾವೇ ತೊಳೆಯಬೇಕೆಂಬುದನ್ನು ನಾನು ಅವರಿಂದ ಕಲಿತೆ.ಮಗಳು ಜ್ಯೋತಿ ಅಂತರ್ಜಾತಿ ಮದುವೆಯಾಗುವು ದಾಗಿ ಹೇಳಿದಾಗ ಕಮ್ಯುನಿಸ್ಟ್ ಪಕ್ಷದ ಸಂಗಾತಿ ದಲಿತ ಸಮುದಾಯದಿಂದ ಬಂದ ಸಾತಿ ಸುಂದರೇಶ ಜೊತೆಗೆ ಅನಂತ ಸುಬ್ಬರಾವ್ ಅವರು ತಾವೇ ನಿಂತು ಮದುವೆ ಮಾಡಿಸಿದರು. ವಿಧಾನ ಸಭಾ ಚುನಾವಣೆಗೆ ಪಕ್ಷದ ಪರವಾಗಿ ಸ್ಪರ್ಧಿಸಲು ಕಮ್ಯುನಿಸ್ಟ್ ಪಕ್ಷದಿಂದ ಸೂಚನೆ ಬಂದಾಗೆಲ್ಲ ನಿರಾಕರಿಸುತ್ತಲೇ ಬಂದ ಅನಂತ ಸುಬ್ಬರಾವ್ ಪಕ್ಷದ ಒತ್ತಾಯ ತೀವ್ರವಾದಾಗ ಬೆಂಗಳೂರಿನ ರಾಜಾಜಿ ನಗರದಿಂದ ಒಂದು ಬಾರಿ ಸ್ಪರ್ಧಿಸಿದರು. ನಂತರ ಚುನಾವಣೆ ನಮ್ಮಂಥವರಿಗಲ್ಲ ಎಂದು ಮತ್ತೆ ಅದರ ಉಸಾಬರಿಗೆ ಹೋಗಲಿಲ್ಲ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಒಡನಾಟವನ್ನೂ ಹೊಂದಿದ್ದ ಅನಂತ ಸುಬ್ಬರಾಯರಂಥ ಅಪರೂಪದ ನಾಯಕನನ್ನು ಕಳೆದುಕೊಂಡು ರಾಜ್ಯದ ಕಾರ್ಮಿಕ ಚಳವಳಿ, ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಬಹುದೊಡ್ಡ ಶೂನ್ಯ ಆವರಿಸಿದೆ. ಚಳವಳಿಗಳು ಇರುವವರೆಗೆ ಅನಂತಸುಬ್ಬರಾವ್ ಇದ್ದೇ ಇರುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ. ಸಾಮಾನ್ಯವಾಗಿ ಸಾರ್ವಜನಿಕ ರಂಗದ ಯಾರಾದರೂ ವ್ಯಕ್ತಿ ಅಸುನೀಗಿದಾಗ ಕೊನೆಯುಸಿರೆಳೆಯುವವರೆಗೆ ತಾನು ನಂಬಿದ ಆದರ್ಶಕ್ಕಾಗಿ ದುಡಿದರು ಎಂಬ ವರ್ಣನೆ ಬರುತ್ತಿರುತ್ತದೆ.ಕಾಮ್ರೆಡ್ ಅನಂತ ಸುಬ್ಬರಾವ್ ಅವರು ಅಕ್ಷರಶಃ ಅದೇ ರೀತಿ ನಿರ್ಗಮಿಸಿದರು. ಜನವರಿ 29 ಕ್ಕೆ ಸಾರಿಗೆ ನೌಕರರ ಚಲೋ ಬೆಂಗಳೂರು ಪ್ರತಿಭಟನೆಯನ್ನು ನಡೆಸುವ ಯೋಚನೆಯಲ್ಲ್ ಅನಂತಸುಬ್ಬರಾವ್ ಇದ್ದರು. ಅದರ ಬಗ್ಗೆ ತಮ್ಮ ಸಂಘಟನೆಯ ಸಂಗಾತಿಗಳ ಜೊತೆಗೆ ಚರ್ಚಿಸುತ್ತಿರುವಾಗಲೇ ಉಸಿರು ನಿಂತು ಹೋಯಿತು. ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಪ್ರಾರ್ಥಿವ ಶರೀರಕ್ಕೆ ಗೌರವಿಸಲು ಮನೆಗೆ ಬಂದಾಗ ಅನಂತ ಸುಬ್ಬರಾವ್ ಅವರ ಜ್ಯೋತಿ ತಮ್ಮ ತಂದೆ ಸಾರಿಗೆ ನೌಕರರ ಬೇಡಿಕೆಗಳು ಈಡೇರದ ಕೊರಗಿನಲ್ಲೇ ಹೊರಟು ಹೋದರು, ದಯವಿಟ್ಟು ಅವರ ಈ ಕೊನೆಯಾಸೆಯನ್ನು ಈಡೇರಿಸಿ ಎಂದು ಕೊಂಡರು. ಇದು ಅನಂತ ಸುಬ್ಬರಾವ್ ಕುಟುಂಬದ ಎಲ್ಲರೂ ಹೇಗೆ ಒಂದು ಆದರ್ಶಕ್ಕೆ ಬದ್ಧರಾಗಿದ್ದರು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಸಾಮಾನ್ಯವಾಗಿ ದೊಡ್ಡವರು ನಿರ್ಗಮಿಸಿದಾಗ ಅವರನ್ನು ಮಾತ್ರ ಹೊಗಳಿ ಅವರ ಸಾಧನೆಯ ಹಿಂದೆ ಇರುವವರನ್ನು ಮರೆತು ಬಿಡುತ್ತೇವೆೆ. ಬಹು ಎತ್ತರಕ್ಕೆ ಬೆಳೆದು ನಿಂತ ಬಾಬಾಸಾಹೇಬ ಅಂಬೇಡ್ಕರ್ ಅವರ ಹಿಂದೆ ಅವರ ಜೀವನ ಸಂಗಾತಿ ರಮಾಬಾಯಿ ಅವರ ಸಣ್ಣಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಪಟ್ಟ ಪರಿಶ್ರಮ, ತ್ಯಾಗ ಮತ್ತು ಅವರ ಸಾವಿನ ನಂತರ ಅಂಬೇಡ್ಕರ್ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಸವಿತಾ ಅಂಬೇಡ್ಕರ್ ಅವರು ಯಾರ ಗಮನಕ್ಕೂ ಬರುವುದಿಲ್ಲ.ಅದೇ ರೀತಿ ದುಡಿಯುವ ಜನರ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅನಂತ ಸುಬ್ಬರಾವ್ ಅವರ ಸಾಧನೆಯ ಹಿಂದೆ ಅವರ ಜೀವನ ಸಂಗಾತಿ ನಾಗರತ್ನಮ್ಮನವರ ಕೊಡುಗೆಯನ್ನು ಮರೆಯಲು ಆಗುವುದಿಲ್ಲ. ಸುಮಾರು ಐವತ್ತು ವರ್ಷಗಳ ಕಾಲ ಮನೆಯ ಹೊಣೆಯನ್ನು ತಾನೇ ಹೊತ್ತು ಕೊಂಡ ನಾಗರತ್ನಮ್ಮ ಯಾವುದೂ ಪತಿಯ ಹೋರಾಟದ ಬದುಕಿಗೆ ಅಡ್ಡಿಯಾಗದಂತೆ ನೋಡಿಕೊಂಡರು. ಇದು ಎಲ್ಲ ದೊಡ್ಡವರಿಗೆ ಅನ್ವಯಿಸುವ ಸತ್ಯ ಸಂಗತಿ. ಅನಂತ ಸುಬ್ಬರಾವ್ ಅವರಂಥ ವ್ಯಕ್ತಿ ನಮ್ಮ ಇಂದಿನ ಸಾರ್ವಜನಿಕ ಜೀವನದಲ್ಲಿ ಲಕ್ಷಕ್ಕೊಬ್ಬರೂ ಸಿಗುವುದಿಲ್ಲ. ಅವರ ರಾಜಿ ರಹಿತ ಹೋರಾಟ, ಜೈಲು ವಾಸ, ಲಾಠಿ ಏಟು, ಬದ್ಧತೆ, ತ್ಯಾಗ ಛಲ, ಸರಳತೆ, ಸಜ್ಜನಿಕೆ, ಜಿಗುಟುತನ ಉಳಿದವರಿಗೆ ಮಾದರಿಯಾಗಿದೆ. ಕೊನೆಯ ದಾಗಿ ಹಾಸನ ಜಿಲ್ಲೆಯ ಬಾಗೂರು ನವಿಲೆ ರೈತ ಹೋರಾಟದ ಸಮಯದಲ್ಲಿ ಪ್ರಧಾನಿಯಾಗಿದ್ದ ಎಚ್. ಡಿ.ದೇವೇಗೌಡರು ಸ್ವತಃ ಫೋನ್ ಮಾಡಿ ಚಳವಳಿಯನ್ನು ವಾಪಸ್ ಪಡೆಯಲು ಮನವಿ ಮಾಡಿದರೂ ಅನಂತ ಸುಬ್ಬರಾವ್ ಜಗ್ಗಲಿಲ್ಲ. ಸೊಪ್ಪುಹಾಕಲಿಲ್ಲ. ಇದು ಅವರ ದಿಟ್ಟತನಕ್ಕೆ ಒಂದು ಉದಾಹರಣೆಯಾಗಿದೆ.
ಕ್ರಾಶ್ ಆದ ಚಿನಿವಾರ ಪೇಟೆ| ಮಂಗಳೂರಿನಲ್ಲಿ ಚಿನ್ನದ ದರ ಭಾರೀ ಕುಸಿತ: ಇಂದಿನ ದರವೆಷ್ಟು?
ಜನವರಿ ಆರಂಭದಿಂದಲೇ ಏರುಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಶುಕ್ರವಾರದ ನಂತರ ಕುಸಿತದ ಹಾದಿಯಲ್ಲಿದ್ದು, ಮೂರು ದಿನಗಳಲ್ಲಿ ಸುಮಾರು ಮೂರು ಸಾವಿರ ರೂ. ಕುಸಿದು 15 ಸಾವಿರದ ಬಳಿ ತಲುಪಿವೆ. ಕೇಂದ್ರ ಬಜೆಟ್ಗೆ ಮುನ್ನವೇ ಕುಸಿತದ ಹಾದಿಯಲ್ಲಿದ್ದ ಚಿನ್ನ, ಬಜೆಟ್ ನಂತರವೂ ಸೋಮವಾರ ಇಳಿಕೆಯಾಗುತ್ತಲೇ ಇದೆ. ಸತತ ಮೂರು ದಿನಗಳಲ್ಲಿ ಮೂರು ಸಾವಿರದ ಸಮೀಪ ಕುಸಿತ ಕಂಡಿದೆ. MCX ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ ದರ ಶೇ.6ರಷ್ಟು ಕುಸಿತ ಕಂಡಿದೆ. ಬೆಳ್ಳಿಯೂ ಕುಸಿತದ ಹಾದಿಯಲ್ಲಿದೆ. ಇಂದು ಸೋಮವಾರ ಗ್ರಾಂಗೆ 50 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 3 ಲಕ್ಷ ರೂ. ತಲುಪಿದೆ. ಚಿನ್ನದ ಬೆಲೆ ಕುಸಿತಕ್ಕೆ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿರುವುದೂ ಮುಖ್ಯ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡ್ ಅಧ್ಯಕ್ಷ ಸ್ಥಾನಕ್ಕೆ ಕೆವಿನ್ ವಾರ್ಷ್ ಅವರನ್ನು ಆರಿಸಿರುವುದು ಹಾಗೂ ಬಡ್ಡಿದರ ಕಡಿತದ ಸಾಧ್ಯತೆಯನ್ನು ಹೂಡಿಕೆದಾರರು ಗಮನಿಸಿದ ಕಾರಣ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ. ಇತ್ತ ಭಾರತದಲ್ಲಿ ರವಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ ನಂತರ ಚಿನ್ನದ ದರ ಶೇ. 3 ಮತ್ತು ಬೆಳ್ಳಿ ಬೆಲೆ ಶೇ. 9ರಷ್ಟು ಕುಸಿದಿವೆ. ಬಜೆಟ್ನಲ್ಲಿ ಚಿನ್ನ-ಬೆಳ್ಳಿ ಮೇಲಿನ ಆಮದು ಕಸ್ಟಮ್ಸ್ ಸುಂಕವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ, ಫೆಬ್ರವರಿ 02ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,153 (-905) ರೂ.ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,890 (-830) ರೂ. ಹಾಗೂ ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,365 (-679) ರೂ.ಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ರವಿವಾರ ಬೆಳ್ಳಿ ಬೆಲೆ ಕೆಜಿಗೆ 72,500 ರೂ. ಅಂದರೆ ಶೇ. 18.85ರಷ್ಟು ಕುಸಿದು 3,12,000 ರೂ.ಗೆ ತಲುಪಿದೆ. ಗುರುವಾರ ಗರಿಷ್ಠ ದಾಖಲೆ ಮಟ್ಟವಾದ ಪ್ರತಿ ಕೆಜಿಗೆ 4,04,500 ರೂ. ತಲುಪಿದ ನಂತರ ಮೂರೇ ದಿನಗಳಲ್ಲಿ ತೀವ್ರ ಇಳಿಕೆ ಕಂಡಿದೆ. ಹಾಗಿದ್ದರೂ, 2025 ಡಿಸೆಂಬರ್ 31ಕ್ಕೆ ಹೋಲಿಸಿದರೆ 2,39,000 ರೂ.ಗಿಂತ 73,000 ರೂ. ಅಂದರೆ ಶೇ. 30.5ರಷ್ಟು ಏರಿಕೆಯಲ್ಲಿ ರವಿವಾರ ವಹಿವಾಟು ನಡೆಸುತ್ತಿದೆ. ಆದರೆ ಸೋಮವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಸೋಮವಾರ ಗ್ರಾಂಗೆ 50 ರೂ.ನಷ್ಟು ಕುಸಿದು ಬೆಳ್ಳಿ ಕೆಜಿಗೆ 3 ಲಕ್ಷ ರೂ. ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು): ದಿಲ್ಲಿ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ. ಮುಂಬೈ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ. ಅಹಮದಾಬಾದ್ – 24 ಕ್ಯಾರೆಟ್ 15,158 (-905) ರೂ.; 22 ಕ್ಯಾರೆಟ್ 13,895 (-830) ರೂ. ಚೆನ್ನೈ – 24 ಕ್ಯಾರೆಟ್ 15,218 (-1,037) ರೂ.; 22 ಕ್ಯಾರೆಟ್ 13,950 (-950) ರೂ. ಕೋಲ್ಕತ್ತಾ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ. ಹೈದರಾಬಾದ್ – 24 ಕ್ಯಾರೆಟ್ 15,153 (-905) ರೂ.; 22 ಕ್ಯಾರೆಟ್ 13,890 (-830) ರೂ. ಜೈಪುರ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ. ಭೋಪಾಲ್ – 24 ಕ್ಯಾರೆಟ್ 15,158 (-905) ರೂ.; 22 ಕ್ಯಾರೆಟ್ 13,895 (-830) ರೂ. ಲಖನೌ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ. ಚಂಡೀಗಢ – 24 ಕ್ಯಾರೆಟ್ 15,168 (-905) ರೂ.; 22 ಕ್ಯಾರೆಟ್ 13,905 (-830) ರೂ
Epstein files ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೆಸರು ಬಹಿರಂಗ
ಈಮೇಲ್ ವಿನಿಮಯಗಳು, ಸಭೆಗಳ ವಿವರ ಪ್ರಕಟ; ‘ಡಿಜಿಟಲ್ ಇಂಡಿಯಾ ಪರವಾಗಿ ವಾದ ಮಂಡಿಸಿದ್ದೆ’ ಎಂದ ಮೋದಿ ಸಂಪುಟ ಸಚಿವ
Gold Rate Drop: ಯುಎಸ್ನ ಈ ವ್ಯಕ್ತಿಯಿಂದ ಬಂಗಾರದ ದರ ಕುಸಿತ: 1987ರ ಬಳಿಕ ಒಂದೇ ದಿನ ಗರಿಷ್ಠ ಇಳಿಕೆ
ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಆಗುತ್ತಿದೆ. 22 ಕ್ಯಾರಟ್ ಚಿನ್ನದ ಒಂದು ಪವನ್ (ಎಂಟು ಗ್ರಾಂ) ದರವು ಜನವರಿ 29 ರಂದು ಬರೋಬ್ಬರಿ 131,160 ರೂಪಾಯಿ ಇತ್ತು. ಒಂದೇ ದಿನದಲ್ಲಿ ಏರುಗತಿ ಚಿನ್ನದ ಮೌಲ್ಯದಲ್ಲಿ ಭಾರೀ ಬದಲಾವಣೆ ಆಯಿತು. ಏರಿಕೆಯಾಗುತ್ತಿದ್ದ ದರವು ಕುಸಿಯಲು ಪ್ರಾರಂಭಿಸಿತು. ಮೂರು ದಿನಗಳಲ್ಲಿ 13,400 ರೂಪಾಯಿಗೆ ಇಳಿಯಿತು. ಸದ್ಯ ಚಿನ್ನದ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದಿಢೀರನೆ ಕುಸಿದಿದೆ. ಜನವರಿ 30 ರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆರಂಭವಾಗಿದೆ. ಇಂದು ಭರ್ಜರಿ 9050 ರೂ ಇಳಿಕೆ ಆಗುವ ಮೂಲಕ ಭಾರಿ ಕುಸಿತ ಕಂಡಿದೆ.
ಅಜಿತ್ ಪವಾರ್ ಅವರನ್ನು ಕಳೆದುಕೊಂಡು ಡೋಲಾಯಮಾನವಾಗಿದ್ದ ಮಹಾರಾಷ್ಟ್ರ ಮಹಾಯುತಿ ಸರ್ಕಾರ, ಇದೀಗ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಸುನೇತ್ರಾ ಪವಾರ್ಗೆ ಡಿಸಿಎಂ ಪಟ್ಟ ನೀಡುವ ಮೂಲಕ ಎನ್ಸಿಪಿಯನ್ನು ಸಮಾಧಾನಗೊಳಿಸಿರುವ ಬಿಜೆಪಿ ಮತ್ತು ಶಿಂಧೆ ಶಿವಸಸೇನೆಗೆ, ಇದೀಗ ಎನ್ಸಿಪಿ ವಿಲೀನ ಚಿಂತೆ ಕಾಡತೊಡಗಿದೆ. ಒಂದು ವೇಳೆ ಎನ್ಸಿಪಿಯ ಎರಡೂ ಬಣಗಳು ವಿಲೀನಗೊಂಡರೆ ಅದರಿಂದ ಮಹಾಯುತಿ ಸರ್ಕಾರಕ್ಕೆ ಏನು ನಷ್ಟ? ಇಲ್ಲಿದೆ ವಿಶ್ಲೇಷಣೆ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಆಡುವುದಿಲ್ಲ. ಆದರೂ ಭಾರತ ತಂಡ ನಿಗದಿತ ಮೈದಾನಕ್ಕೆ ತೆರಳಬೇಕು. ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ. ಪಾಕಿಸ್ತಾನ ಬರದಿದ್ದರೆ ಭಾರತಕ್ಕೆ ವಾಕ್ ಓವರ್ ಮೂಲಕ ಅಂಕಗಳು ಸಿಗಲಿವೆ. ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ.
ಮೌನವೇ ಆಭರಣ; ಚಿನ್ನ ಮತ್ತು ಬೆಳ್ಳಿ ಬೆಲೆ ಕೇಳಿ ಶುಭ ಕಾರ್ಯಗಳ ಮೂಕರೋದನ!
Gold Price In India : ಚಿನ್ನದ ಮೇಲೆ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆಯಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಇದರ ಹೊಡೆತ ದಿನದಿಂದ ದಿನಕ್ಕೆ ಬೀಳುತ್ತಿದೆ. ಒಂದು ವರ್ಷದ ಹಿಂದಿನ ಚಿನ್ನದ ಬೆಲೆಗೂ, ಈಗಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿರುವುದು, ಜನರು ಶುಭ ಕಾರ್ಯಕ್ರಮ ನಡೆಸುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ. ಚಿನ್ನದ ಬೆಲೆಯ ಏರಿಕೆಯಿಂದ ಯಾವರೀತಿ ತೊಂದರೆಯಾಗಲಿದೆ ಎನ್ನುವುದನ್ನು ಇಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಜಮ್ಮುಕಾಶ್ಮೀರ| ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ
ಶ್ರೀನಗರ: ಸೋಮವಾರ ಬೆಳಗ್ಗೆ 5.35ಕ್ಕೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಭೂಕಂಪನ ಕೇಂದ್ರವು ಪಟ್ಟನ್ ಪ್ರದೇಶದಲ್ಲಿತ್ತು. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಈ ಭೂಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಗುಲ್ಮಾರ್ಗ್ ಮತ್ತು ಪಶ್ಚಿಮ ಶ್ರೀನಗರದಲ್ಲಿ ಭೂಕಂಪನ ಕೇಂದ್ರವಿತ್ತು ಎಂದು ಹೇಳಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಭೂಕಂಪ ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು 9.03° ಉತ್ತರ ಅಕ್ಷಾಂಶ ಮತ್ತು 92.78° ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿಸಿದೆ.
ಕಲಬುರಗಿ |ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಫೇಸ್ಬುಕ್ ಖಾತೆ ಅಡ್ಮಿನ್ ಬಂಧನ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಸೇರಿದಂತೆ ಪರಿಶಿಷ್ಟ ಸಮುದಾಯದ ವಿವಿಧ ರಾಜಕೀಯ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 'ಗುಲಾಮರ ಅಪ್ಪ' ಎನ್ನುವ ಫೇಸ್ಬುಕ್ ಖಾತೆಯ ಅಡ್ಮಿನ್ ನನ್ನು ಸಬ್ ಅರ್ಬನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಾಮಾನ್ಯ ನಗರದ ನಿವಾಸಿ ಆನಂದ್ ಅಂಜನಪ್ಪ (41) ಬಂಧಿತ ಆರೋಪಿ. 'ಗುಲಾಮರ ಅಪ್ಪ' ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದಿದ್ದ ಆನಂದ್ ಅಂಜನಪ್ಪ, ಡಾ.ಅಂಬೇಡ್ಕರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸುತ್ತಿದ್ದ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ, ರಾಜ್ಯದ ದಲಿತ ಮುಖಂಡರು ಸಬ್ ಅರ್ಬನ್ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದೆಲ್ಲೆಡೆ ಪ್ರಕರಣ ದಾಖಲಿಸಿದ್ದರು. ನಕಲಿ ಖಾತೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ, ಗೃಹ ಸಚಿವ ಜಿ.ಪರಮೇಶ್ವರ, ಸಚಿವ ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದರು. ಸದ್ಯ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಕೆಪಿಸಿಸಿ ಮುಂದಾಗಿದ್ದು, ರಾಹುಲ್ ಗಾಂಧಿಯವರ ಸೂಚನೆಯಂತೆ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಲಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಕಾಂಗ್ರೆಸ್ ಭವನಗಳಿಗೆ ಮಂಜೂರು ಮಾಡುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ವಿಧಾನಪರಿಷತ್ ನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ನಗರಾಭಿವೃದ್ಧಿ ಇಲಾಖೆ ವಿವರ ನೀಡಿದೆ. ಈ ದಾಖಲೆಯ ಪ್ರಕಾರ, ಯಾವೆಲ್ಲಾ ಪ್ರದೇಶದಲ್ಲಿ ಎಷ್ಟೆಷ್ಟು ಮೌಲ್ಯದ ಸರ್ಕಾರಿ ಆಸ್ತಿ ಕಾಂಗ್ರೆಸ್ ಪಕ್ಷದ ಪಾಲಾಗಿದೆ ಎಂಬ ಕುರಿತು ವರದಿ ಇಲ್ಲಿದೆ..
ದೇಶದ ಬಜೆಟ್ ಮಂಡಿಸುವ 'ಮಹಿಳಾ ಮಣಿ' ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಭಾರತದ ರಾಜಕೀಯ ಇತಿಹಾಸದಲ್ಲಿ ನಿರ್ಮಲಾ ಸೀತಾರಾಮನ್ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು. ಭಾನುವಾರ2026 ಫೆಬ್ರವರಿ 1 ರಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಕಠಿಣ ನಿರ್ಧಾರಗಳು, ಸ್ಪಷ್ಟ ಆಲೋಚನೆ ಮತ್ತು ದಕ್ಷ ಆಡಳಿತಕ್ಕೆ ಹೆಸರಾದ ಸೀತಾರಾಮನ್ ಅವರು ದೇಶದ ಆರ್ಥಿಕತೆಯ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಕೋಟ್ಯಂತರ ರೂಪಾಯಿಗಳ
ಸಿಜೆ ರಾಯ್ ಆತ್ಮಹತ್ಯೆ : ಕಾಂಗ್ರೆಸ್ ನಾಯಕನಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್, ಸಾವಿನ ಸುತ್ತ ಕಾಡುವ 4ಪ್ರಶ್ನೆಗಳು!
Bengaluru Businessman CJ Roy : ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ. ಇದಕ್ಕೆ ರಾಜಕೀಯ ಆಯಾಮಗಳೂ ಸಿಗುತ್ತಿದ್ದು, ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಯ ಟಾರ್ಚರ್ ಎಂದು ಆರೋಪಿಸಿದ್ದಾರೆ. ಇನ್ನೊಂದು ಸುದ್ದಿಗಳ ಪ್ರಕಾರ , ಕೇರಳ ಚುನಾವಣೆಗೆ ಫಂಡಿಂಗ್ ಆರೋಪವೂ ಕೇಳಿ ಬರುತ್ತಿದೆ. ಈ ಸಾವಿನ ಹಿಂದೆ ಉತ್ತರ ಸಿಗದ ಹಲವಾರು ಪ್ರಶ್ನೆಗಳು ಉದ್ಬಸಿವೆ.
ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಬವಣೆ; 156 ಗ್ರಾಮಗಳಲ್ಲಿ ಶುರುವಾಗಿದೆ ಜಲ ಆತಂಕ
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದಾಗಿ 156 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹಿರಿಯೂರು ತಾಲೂಕಿನಲ್ಲಿ ಅತಿ ಹೆಚ್ಚು 65 ಜನವಸತಿ ಪ್ರದೇಶಗಳು ತೀವ್ರ ಸಮಸ್ಯೆಗೆ ಒಳಗಾಗಲಿವೆ.
ಬೆಂಗಳೂರಿನ BTM ಲೇಔಟ್ ಬಳಿಯಿರುವ ಕೆಎಎಸ್ ಕಾಲೊನಿಯಲ್ಲಿ ಮನೆಯೊಡತಿ ಮೇಲೆ ಕೆಲಸಗಾರ ಅತ್ಯಾಚಾರ ಎಸಗಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿದೇಶದಿಂದ ಮರಳಿದ ಪತಿ, ನೆಲ ಮಹಡಿಯಲ್ಲಿ ಪತ್ನಿ ಮೃತದೇಹ ಹಾಗೂ ಕೆಲಸಗಾರನ ಶವ ನೋಡಿ ಆಘಾತಕ್ಕೊಳಗಾಗಿದ್ದಾರೆ. 8 ವರ್ಷಗಳಿಂದ ಪರಿಚಿತನಾಗಿದ್ದ ಕೆಲಸಗಾರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಬಜೆಟ್ 2026 | ಮೇಲಿಂದ ಮೇಲೆ ರಾಜ್ಯಕ್ಕೆ ಅನ್ಯಾಯ : ಸಚಿವ ಡಾ.ಶರಣಪ್ರಕಾಶ ಪಾಟೀಲ
ಸೇಡಂ: ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಮೇಲಿಂದ ಮೇಲೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಬಜೆಟ್ ವಿಚಾರದಲ್ಲೂ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ. ಕೇಂದ್ರ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು, ಕಾರ್ಮಿಕರು ಹಾಗೂ ಯುವಜನತೆಗೆ ನೆರವಾಗುವ ಯಾವುದೇ ಅಂಶವೂ ಇಲ್ಲದಿರುವುದನ್ನು ಖಂಡಿಸಿದ್ದಾರೆ. ಅವಶ್ಯಕ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯ ಅಸಮಾನತೆ ಎಂಬ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳಿಲ್ಲ. ಜೊತೆಗೆ ರಾಜ್ಯದ ಹಿತಕಾಪಾಡುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅತ್ಯಧಿಕ ಸಂಪನ್ಮೂಲಗಳಿದ್ದು, ಅವುಗಳ ಸಮರ್ಪಕ ಬಳಕೆ ಮಾಡಿಕೊಂಡು ಅಭಿವೃದ್ಧಿಶೀಲತೆಯನ್ನು ಪುನಶ್ಚೇತನದ ಮಾರ್ಗದಲ್ಲಿ ನಡೆಸಬಹುದಾದರೂ, ಕೇಂದ್ರ ಸರ್ಕಾರ ಕರ್ನಾಟಕದ ಕೈಗಾರಿಕೆಗಳು ಮತ್ತು ಆರ್ಥಿಕ ಸ್ವಾವಲಂಬನೆಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಹೆಚ್ಚಿನ ಒತ್ತು ಕಾರ್ಪೊರೇಟ್ಗಳಿಗೆ ನೀಡಲಾಗಿದ್ದು, ದೇಶದ ಅಸ್ಮಿತೆಯಂತಿರುವ ಹಿಂದುಳಿದ, ದೀನ ದಲಿತ ಹಾಗೂ ಕೂಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ತನ್ನ ಬಜೆಟ್ನ್ನು ಉಳ್ಳವರ ಪರವಾಗಿ ಘೋಷಿಸಿರುವುದು ದುರಂತವೇ ಸರಿ.ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಬೇಕಾದ ಅನುದಾನವನ್ನು ಕಡಿತಗೊಳಿಸಲಾಗಿದೆ. ಬಹಳಷ್ಟು ಪ್ರಚಾರ ಮಾಡಲಾದ ವಿಬಿ ಜಿ ರಾಮ್ ಜಿ ಯೋಜನೆಗೆ ಕೇವಲ 96,000 ಕೋಟಿ ಅನುದಾನ ನಿಗದಿಗೊಳಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆಯ ಗೋವುಗಳಿಗೆ ಬೇಕೇಬೇಕು ‘ಇಕ್ಬಾಲ್’ ನೀಡುವ ಹಿಟ್ಟು!
ಕರ್ನಾಟಕದ ಬಾಗಲಕೋಟೆಯ ಗೋ ಶಾಲೆಗಳಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರು ಗೋವುಗಳಿಗೆ ಆಹಾರ ನೀಡುವ ಕೈಂಕರ್ಯ ಮಾಡುತ್ತಿದ್ದಾರೆ. ಅವರ ಹೆಸರು ಇಕ್ಬಾಲ್. ಇವರು ಸ್ವಂತದ್ದೊಂದು ಹಿಟ್ಟಿನ ಗಿರಣಿ ನಡೆಸುತ್ತಾರೆ. ಇವರ ಗಿರಣಿಯ ಮುಂದೆ ಪ್ರತಿದಿನ ಹಲವಾರು ಗೋವುಗಳು ಬರುತ್ತಿರುತ್ತವೆ. ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಸರಿಯಾಗಿ ಹತ್ತಾರು ಗೋವುಗಳು ಬಂದು ನಿಂತಾಗ ಇವರೇ ಖುದ್ದಾಗಿ ಗೋವುಗಳಿಗೆ ಹಿಟ್ಟು ಹಾಕುತ್ತಾರೆ. ಕಳೆದೊಂದು ವರ್ಷದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಈ ಬಗ್ಗೆ ಮತ್ತಷ್ಟು ವಿವರಣೆ ಇಲ್ಲಿದೆ.
Earthquake: ಅಂಡಮಾನ್ ನಿಕೋಬಾರ್ ದ್ವೀಪ ಹಾಗೂ ಕಾಶ್ಮೀರದಲ್ಲಿ ಅವಳಿ ಭೂಕಂಪ; ಯಾವ ಭಾಗದಲ್ಲಿ ಎಷ್ಟಿದೆ ತೀವ್ರತೆ?
ಸೋಮವಾರ ಮುಂಜಾನೆ ಭಾರತದ ಎರಡು ಕಡೆಗಳಲ್ಲಿ ಭೂಕಂಪ ಸಂಭವಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ 4.7 ತೀವ್ರತೆಯ ಭೂಕಂಪ ಉಂಟಾಗಿದೆ. ಈ ಕಂಪನಗಳು ಪಾಕಿಸ್ತಾನದಲ್ಲೂ ಅನುಭವಕ್ಕೆ ಬಂದಿವೆ. ಯಾವುದೇ ಹಾನಿಯ ವರದಿಗಳಾಗಿಲ್ಲ ಎಂದು ವರದಿಯಾಗಿದೆ.
ವಿದೇಶಕ್ಕೆ ರಫ್ತಾಗುತ್ತಿರುವ ಕೊಪ್ಪಳದ ‘ಕೇಸರ್’ ಮಾವಿಗೆ ಜಿಐ ಟ್ಯಾಗ್?
ಕೊಪ್ಪಳದ ಕೇಸರ್ ಮಾವಿಗೆ ಭೌಗೋಳಿಕ ಸೂಚನಾ ಟ್ಯಾಗ್ (ಜಿಐ ಟ್ಯಾಗ್) ನೀಡಲು ತೋಟಗಾರಿಕೆ ಇಲಾಖೆ ಪ್ರಯತ್ನ ನಡೆಸುತ್ತಿದೆ. ಈ ಮಾವು ಈಗಾಗಲೇ ವಿದೇಶಗಳಿಗೆ ರಫ್ತಾಗುತ್ತಿದ್ದು, ಹೆಚ್ಚಿನ ಬೇಡಿಕೆ ಹೊಂದಿದೆ. ಜಿಐ ಟ್ಯಾಗ್ ದೊರೆತರೆ ಇದರ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಲಿದೆ. ಇದರಿಂದ ಮಾವು ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜಿಲ್ಲೆಗೆ ಮತ್ತೊಂದು ಹಿರಿಮೆ ತರುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ.
ಭಾರತಕ್ಕೆ ಮುಜುಗರ ತಂದ ಎಪ್ಸ್ಟೀನ್ ಪಾತಕಿಯ ಕಡತ
ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳು ಭಾರತದಲ್ಲೂ ಸುದ್ದಿ ಮಾಡುತ್ತಿವೆ. ಅಮೆರಿಕ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ಸುಮಾರು ಮೂರು ಮಿಲಿಯನ್ ಪುಟಗಳನ್ನು ಮೀರಿದೆ ಎನ್ನಲಾಗುತ್ತಿರುವ ಈ ದಾಖಲೆಗಳು 2,000ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಸುಮಾರು 1,80,000 ಚಿತ್ರಗಳನ್ನು ಒಳಗೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ನಾಯಕರ ಹಲವು ಹಗರಣಗಳು ಈ ದಾಖಲೆಗಳ ಮೂಲಕ ಹೊರಗೆ ಬರುವ ಸಾಧ್ಯತೆಗಳಿವೆಯಾದುದರಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಸ್ಲೋವಾಸ್ಕಿಯಾದ ಭದ್ರತಾ ಸಿಬ್ಬಂದಿಯ ಬಲಿಯನ್ನು ಈಗಾಗಲೇ ಪಡೆದಿರುವ ಕಡತ, ಇನ್ನು ಹಲವು ಬಲಿಗಳನ್ನು ಪಡೆಯುವ ಸಾಧ್ಯತೆಗಳು ಕಾಣುತ್ತಿವೆ. ಹಲವು ರಾಜಕೀಯ, ಸಾಂಸ್ಕೃತಿಕ ಗಣ್ಯರು ಹೊಂದಿರುವ ಅಂತರ್ರಾಷ್ಟ್ರೀಯ ರಾಜಕೀಯ ಸಂಪರ್ಕಗಳು, ಪಾತಕ ಜಗತ್ತಿನ ಜೊತೆಗೆ ಅವರಿಗಿರುವ ಸಂಬಂಧಗಳನ್ನು ಎಪ್ಸ್ಟೀನ್ ಕಡತ ಸೂಕ್ಷ್ಮವಾಗಿ ಹೇಳುತ್ತದೆ. ಸದ್ಯದ ಜಾಗತಿಕ ರಾಜಕೀಯ ಬೆಳವಣಿಗೆಗಳ ಮೇಲೆ ಈ ಸಂಪರ್ಕ, ಸಂಬಂಧಗಳು ಪರಿಣಾಮ ಬೀರಿರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಳವಳಕಾರಿ ರಾಜಕೀಯ ನಡೆಗಳು ಎಪ್ಸ್ಟೀನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಈ ದಾಖಲೆಗಳ ಪ್ರಕಾರ ಟ್ರಂಪ್ ಅಥವಾ ಅಮೆರಿಕ ಇಸ್ರೇಲ್ನ ಹಿಡಿತದಲ್ಲಿದೆ. ಟ್ರಂಪ್ ಕುಟುಂಬವು ಝಿಯೋನಿಸ್ಟ್ ಚಾಬಾದ್ ಜಾಲದೊಂದಿಗೆ ಸಂಪರ್ಕಗಳನ್ನು ಹೊಂದಿರುವ ಬಗ್ಗೆಯೂ ಈ ದಾಖಲೆಗಳು ಹೇಳುತ್ತಿವೆ. ಟ್ರಂಪ್ ತೆಗೆದುಕೊಂಡಿರುವ ಹಲವು ಆತ್ಮಹತ್ಯೆಗೆ ಸಮನಾದ ರಾಜಕೀಯ ನಿರ್ಧಾರಗಳ ಹಿಂದೆ ಅಂತರ್ರಾಷ್ಟ್ರೀಯ ಮಟ್ಟದ ‘ಬ್ಲ್ಯಾಕ್ಮೇಲ್’ಗಳು ಕೆಲಸ ಮಾಡಿರಬಹುದೇ ಎಂದು ಅನುಮಾನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತದ ಹೆಸರೂ ಈ ಲೈಂಗಿಕ ಅಪರಾಧಿಯ ದಾಖಲೆಗಳಲ್ಲಿ ಸೇರ್ಪಡೆಗೊಂಡಿರುವುದು ವಿಪರ್ಯಾಸವಾಗಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಬಗ್ಗೆ ಉಲ್ಲೇಖಿಸಿದ್ದ ಇಮೇಲ್ ವಿವರಗಳು ಇದೀಗ ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಕಡತದಲ್ಲಿದೆ ಎನ್ನಲಾಗುತ್ತಿದೆ. ಆದರೆ ಈ ಉಲ್ಲೇಖವನ್ನು ‘ಅಪರಾಧಿಯೊಬ್ಬನ ನಕಲಿ ವದಂತಿಗಳು’ ಎಂದು ಕರೆದು ವಿದೇಶಾಂಗ ಸಚಿವಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಅಮೆರಿಕದ ಅಧ್ಯಕ್ಷರಿಗಾಗಿ ಪ್ರಧಾನಿ ಮೋದಿಯವರು ಇಸ್ರೇಲ್ಗೆ ಭೇಟಿ ಕೊಟ್ಟಿದ್ದರು ಎಂದು ದಾಖಲೆಗಳು ಹೇಳುತ್ತವೆ. ‘‘ಎಪ್ಸ್ಟೀನ್ ಕಡತಗಳಲ್ಲಿ ಪ್ರಧಾನಿ ಮೋದಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿರುವ ಇಮೇಲ್ ಸಂದೇಶದ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017ರಲ್ಲಿ ಪ್ರಧಾನಿಯವರ ಇಸ್ರೇಲ್ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್ನಲ್ಲಿರುವ ಉಳಿದ ಪ್ರಸ್ತಾವಗಳು ಅಪರಾಧಿಯೊಬ್ಬರ ಸುಳ್ಳು ಕಥೆಗಳು. ಅದು ಅತ್ಯಂತ ತಿರಸ್ಕಾರದಿಂದ ವಜಾಗೊಳಿಸಬೇಕಾದ ವಿಷಯವಾಗಿದೆ’’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಅಪರಾಧಿಯ ಕಡತದಲ್ಲಿ ಪ್ರಧಾನಿ ಮೋದಿಯ ಹೆಸರು ಹೇಗೆ, ಯಾಕೆ ಪ್ರಸ್ತಾಪವಾಯಿತು? ಎನ್ನುವ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ಬಳಿ ಉತ್ತರವಿಲ್ಲ. ಒಬ್ಬ ಅಪರಾಧಿಯ ಕಡತದಲ್ಲಿ ಪ್ರಧಾನಿಯ ಹೆಸರು ಸೇರಿಕೊಂಡಿರುವುದು ಈ ದೇಶಕ್ಕೆ ಘನತೆ ತರುವ ವಿಷಯವೇ? ಎಂದು ಜನರ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ. ಎಪ್ಸ್ಟೀನ್ ಕಡತದಲ್ಲಿ ಭಾರತದ ಹಲವು ರಾಜಕಾರಣಿಗಳ ಹೆಸರುಗಳು ಸೇರ್ಪಡೆಗೊಂಡಿವೆ ಎಂಬ ಶಂಕೆ ಈ ಹಿಂದೆಯೇ ವ್ಯಕ್ತವಾಗಿತ್ತು. ಹಾಗೆ ವ್ಯಕ್ತಪಡಿಸಿದವರಲ್ಲಿ ಬಿಜೆಪಿಯ ಮುಖಂಡರಲ್ಲಿ ಒಬ್ಬರಾಗಿರುವ ಸುಬ್ರಮಣಿಯನ್ ಸ್ವಾಮಿ ಕೂಡ ಸೇರಿದ್ದಾರೆ. ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಈ ಬಗ್ಗೆ ಅನುಮಾನ ಪಡಿಸುತ್ತಿರುವಾಗ, ಎಪ್ಸ್ಟೀನ್ನ ದಾಖಲೆಗಳು ವಿಶ್ವಾಸಕ್ಕೆ ಅರ್ಹವಲ್ಲ ಎಂದು ಹೇಳುವ ಮೂಲಕ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಳ್ಳುವುದು ಎಷ್ಟು ಸರಿ? ಈ ಕಾರಣದಿಂದಲೇ, ಎಪ್ಸ್ಟೀನ್ ಕಡತಗಳಲ್ಲಿ ಭಾರತೀಯ ಸಚಿವರ ಹೆಸರುಗಳಿವೆಯೇ? ಎನ್ನುವ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಬೇಕು ಎನ್ನುವ ಸುಬ್ರಮಣಿಯನ್ ಅವರ ಬೇಡಿಕೆ ಮಹತ್ವವನ್ನು ಪಡೆಯುತ್ತದೆ. ಕಡತಗಳು ಪ್ರಸ್ತಾಪಿಸಿರುವ ವಿಷಯ ಸುಳ್ಳೇ ಆಗಿದ್ದರೂ ಆ ಕಡತದಲ್ಲಿ ಯಾವೆಲ್ಲ ಭಾರತೀಯರ ಹೆಸರುಗಳಿವೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಖಂಡಿತವಾಗಿಯೂ ಈ ದೇಶದ ಜನತೆಗೆ ಇದೆ. ಕೆಲವರ ಹೆಸರುಗಳನ್ನು ಅಮೆರಿಕವು ಉದ್ದೇಶಪೂರ್ವಕವಾಗಿ ಬಹಿರಂಗ ಪಡಿಸದೇ ಇರುವ ಸಾಧ್ಯತೆಗಳಿವೆ. ಬೇರೆ ಬೇರೆ ಹಗರಣಗಳಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಗಳನ್ನು ಬಳಸಿಕೊಂಡು ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವಲ್ಲಿ ಅಮೆರಿಕವು ಈ ಹಿಂದೆಯು ಪ್ರಯತ್ನಿಸಿದೆ. ಆದುದರಿಂದ, ಈಗಾಗಲೇ ಹೆಸರು ಬಹಿರಂಗವಾಗಿರುವ ರಾಜಕಾರಣಿಗಳಿಗಿಂತ, ಇನ್ನೂ ಕಡತದಲ್ಲಿದ್ದೂ ಬಹಿರಂಗವಾಗದ ರಾಜಕಾರಣಿಗಳು ಭಾರತದ ಪಾಲಿಗೆ ಅನಾಹುತಗಳನ್ನು ತಂದಿಡಬಲ್ಲರು. ಇತ್ತೀಚೆಗೆ ಈ ದೇಶದಲ್ಲಿ ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಪಾಕಿಸ್ತಾನಕ್ಕೆ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಗಳಲ್ಲಿ ಬಂಧಿಸಲಾಗುತ್ತಿದೆ. ಅವರೆಲ್ಲರೂ ಹಣಕ್ಕಾಗಿಯೇ ಈ ಕೃತ್ಯವನ್ನು ಮಾಡಿಲ್ಲ. ಬಹುತೇಕರು ಹನಿಟ್ರ್ಯಾಪ್ಗೆ ಬಲಿಯಾಗಿ, ಅನಿವಾರ್ಯವಾಗಿ ದೇಶದ ರಹಸ್ಯಗಳನ್ನು ಶತ್ರು ದೇಶಗಳಿಗೆ ಮಾರಾಟ ಮಾಡಿದ್ದರು. ಇಂತಹ ಹನಿಟ್ರ್ಯಾಪ್ಗಳಿಗೆ ರಾಜಕೀಯ ವ್ಯಕ್ತಿಗಳು ಹಲವು ಸಂದರ್ಭಗಳಲ್ಲಿ ಬಲಿಯಾಗಿದ್ದಾರೆ. ಕರ್ನಾಟಕವೂ ರಾಜಕಾರಣಿಗಳ ಅಶ್ಲೀಲ ಸೀಡಿಗಳಿಗಾಗಿ ಒಂದು ಕಾಲದಲ್ಲಿ ಸುದ್ದಿ ಮಾಡಿತ್ತು. ಇಂತಹ ಸಿಡಿಗಳನ್ನು ಬಳಸಿಕೊಂಡು ಈ ರಾಜಕಾರಣಿಗಳಿಂದ ದುಷ್ಕರ್ಮಿಗಳು ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಂಡಿರುವ ಬಗ್ಗೆಯೂ ವದಂತಿಗಳಿವೆ. ಈ ಸಿಡಿಗಳನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡಿ ಸರಕಾರವನ್ನು ಉರುಳಿಸಿರುವ ಬಗ್ಗೆಯೂ ಆರೋಪಗಳಿವೆ. ಇದು ಒಂದು ರಾಜ್ಯದ ಸ್ಥಿತಿಯಾಯಿತು. ಕೇಂದ್ರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಜಾಲದೊಳಗೆ ಸಿಲುಕಿಕೊಂಡರೆ, ಆತನನ್ನು ನಮ್ಮದೇ ದೇಶದ ವಿರುದ್ಧ ಶತ್ರುಗಳು ಆಯುಧವಾಗಿ ಬಳಸಬಹುದು. ಭಾರತದ ರಾಜಕೀಯ, ಆರ್ಥಿಕ ನೀತಿಗಳ ಮೇಲೆ ಅದು ಪರಿಣಾಮಗಳನ್ನು ಬೀರಬಹುದು. ಆದುದರಿಂದಲೇ, ಎಪ್ಸ್ಟೀನ್ನಂತಹ ಪಾತಕಿಗಳ ಕಡತಗಳಲ್ಲಿ ಈ ದೇಶದ ಉನ್ನತ ವ್ಯಕ್ತಿಗಳ ಹೆಸರುಗಳು ಕಾಣಿಸಿಕೊಳ್ಳುವುದು ಕಳವಳಕಾರಿ ವಿಷಯವಾಗಿದೆ. ದೇಶ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಕಡತದಲ್ಲಿರುವ ವಿಷಯಗಳನ್ನು ನಂಬಬೇಕೋ ಬೇಡವೋ ಎನ್ನುವುದು ಆನಂತರದ ವಿಷಯ. ಮೊದಲು ಕಡತದಲ್ಲಿ ಭಾರತದ ಯಾವೆಲ್ಲ ಸಚಿವರು ಅಥವಾ ರಾಜಕಾರಣಿಗಳ ಹೆಸರುಗಳು ಉಲ್ಲೇಖವಾಗಿವೆ ಎನ್ನುವುದು ಬಹಿರಂಗವಾಗಬೇಕು. ಹಾಗೆ ಹೆಸರುಗಳು ಉಲ್ಲೇಖವಾಗಿರುವ ರಾಜಕಾರಣಿಗಳನ್ನು ಮಹತ್ವದ ಸ್ಥಾನಗಳಿಂದ ದೂರವಿಡುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಕೇಂದ್ರ ಬಜೆಟ್ ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕಿಲ್ಲ ವಿಶೇಷ ಪ್ಯಾಕೇಜ್; ಮಿಶ್ರ ಪ್ರತಿಕ್ರಿಯೆ
ಕೇಂದ್ರ ಸರಕಾರದ ಬಜೆಟ್ಗೆ ಮೈಸೂರು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸೋದ್ಯಮ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪನೆ ಘೋಷಣೆ ಅನುಕೂಲಕರವಾಗಿದೆ. ಆದರೆ, ರಾಜ್ಯಕ್ಕೆ ದೊಡ್ಡ ಶೂನ್ಯ ದೊರೆತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೃಷಿ ಕ್ಷೇತ್ರಕ್ಕೆ ಯಾವುದೇ ಪೂರಕ ಯೋಜನೆಗಳಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
16ನೇ ಹಣಕಾಸು ಆಯೋಗದ ಸೂತ್ರ; ಕರ್ನಾಟಕ ಗರಿಷ್ಠ ಫಲಾನುಭವಿ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯ 16ನೇ ಹಣಕಾಸು ಆಯೋಗದ ಸಮತಲ ಹಂಚಿಕೆ ಸೂತ್ರದಲ್ಲಿ ಅತಿದೊಡ್ಡ ಫಲಾನುಭವಿಯಾಗಿ ಹೊರಹೊಮ್ಮಿದೆ. ಆದಾಗ್ಯೂ ಬಿಜೆಪಿ ಆಡಳಿತದ ಮಧ್ಯಪ್ರದೇಶಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಣಕಾಸು ಆಯೋಗವು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರ ಸಂಗ್ರಹಿಸಿದ ಆದಾಯವನ್ನು ಕೇಂದ್ರ ಹಾಗೂ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡುವ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರ ಇದರ ಕಾನೂನಾತ್ಮಕ ಬದ್ಧತೆಯನ್ನು ಹೊಂದಿಲ್ಲವಾದರೂ, ಆಯೋಗದ ಸಲಹೆಗಳನ್ನು ಸಾಮಾನ್ಯವಾಗಿ ಜಾರಿ ಮಾಡುತ್ತದೆ. ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ನೇತೃತ್ವದ ಆಯೋಗವನ್ನು 2023ರಲ್ಲಿ ರಚಿಸಲಾಗಿತ್ತು. ಅನುದಾನದಲ್ಲಿ ಹೆಚ್ಚಿನ ಪಾಲಿನ ಬೇಡಿಕೆ ಇಟ್ಟ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜತೆ ಚರ್ಚಿಸಿದ ಬಳಿಕ 225ರ ನವೆಂಬರ್ ನಲ್ಲಿ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸಿತ್ತು. ಹೊಸ ಸೂತ್ರದ ಪ್ರಕಾರ ಕೇಂದ್ರೀಯ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ 2026-31ರ ಅವಧಿಗೆ ಶೇಕಡ 4.13ರಷ್ಟು ಪಾಲು ಪಡೆಯಲಿದೆ. ಈ ಹಿಂದೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಇದು ಶೇಕಡ 3.65 ಆಗಿತ್ತು. ಅಂದರೆ ಕರ್ನಾಟಕದ ಪಾಲು ಈ ಹಿಂದೆ ಇದ್ದ 55,663 ಕೋಟಿ ರೂಪಾಯಿಯಿಂದ 63,050 ಕೋಟಿ ರೂಪಾಯಿಗಳಿಗೆ ಹೆಚ್ಚಲಿದೆ. ಕರ್ನಾಟಕದ ಪಾಲು 7387 ಕೋಟಿ ಅಧಿಕವಾಗಲಿದೆ. ಹೊಸ ಸೂತ್ರದಲ್ಲಿ ತೆರಿಗೆ ಹಂಚಿಕೆಯಲ್ಲಿ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ)ಗೆ ಕೊಡುಗೆ ವಿಭಾಗಕ್ಕೆ ಶೇಕಡ 10ರಷ್ಟು ಒತ್ತು ನೀಡಿರುವುದರಿಂದ ಕರ್ನಾಟಕದ ಅನುದಾನ ಹೆಚ್ಚಲಿದೆ. ಇದು ರಾಜ್ಯಗಳ ಆರ್ಥಿಕ ಸಾಧನೆಯನ್ನು ಅಳೆದು ಉತ್ತಮ ಸಾಧನೆಗೆ ಬಹಮಾನ ನೀಡುವ ಹೊಸ ಮಾನದಂಡವಾಗಿದೆ. ಉತ್ಪಾದನೆ, ಸೇವೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಮೂಲಕ ಭಾರತ ಸರ್ಕಾರಕ್ಕೆ ಕರ್ನಾಟಕ ಅತಿದೊಡ್ಡ ದೇಣಿಗೆಯನ್ನು ತೆರಿಗೆ ರೂಪದಲ್ಲಿ ನೀಡುತ್ತಿದೆ. ಇದರಿಂದಾಗಿ ಇದಕ್ಕೆ ಅರ್ಹ ಪ್ರತಿಫಲವನ್ನು ಪಡೆಯುವುದು ಸಾಧ್ಯವಾಗಲಿದೆ. 2026-31ರ ಅವಧಿಯಲ್ಲಿ ಕೇಂದ್ರ ಸರ್ಕಾರ ತನ್ನ ಒಟ್ಟು ತೆರಿಗೆ ಆದಾಯದಲ್ಲಿ ಶೇಕಡ 41ನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಪ್ರಕಟಿಸಿದ್ದರು. ಮಧ್ಯಪ್ರದೇಶ ಕನಿಷ್ಠ ಪ್ರತಿಫಲ ಪಡೆಯಲಿದ್ದು, ಈ ಹಿಂದೆ ಪಡೆಯುತ್ತಿದ್ದ 1.12 ಲಕ್ಷ ಕೋಟಿಗೆ ಹೋಲಿಸಿದರೆ ಆ ರಾಜ್ಯದ ಅನುದಾನ 7677 ಕೋಟಿಯಷ್ಟು ಕಡಿಮೆಯಾಗಲಿದೆ. ಅಂದರೆ ಒಟ್ಟು ತೆರಿಗೆ ಆದಾಯ ಹಂಚಿಕೆಯಲ್ಲಿ ರಾಜ್ಯದ ಪಾಲು ಶೇಕಡ 7.85ರಿಂದ 7.35ಕ್ಕೆ ಕುಸಿಯಲಿದೆ. ನೆರೆಯ ರಾಜ್ಯವಾದ ಕೇರಳ ಕೂಡಾ 6975 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ಪಡೆಯಲಿದೆ.
T20 World Cup: ಭಾರತದ ಜತೆಗಿನ ವಿಶ್ವಕಪ್ ಪಂದ್ಯಾವಳಿ ಬಹಿಷ್ಕರಿಸಿದ ಪಾಕಿಸ್ತಾನ, ಐಸಿಸಿ ದಂಡ ಹೇರಿಕೆ ಸಾಧ್ಯತೆ
ನವದೆಹಲಿ: ಟಿ-20 ವಿಶ್ವಕಪ್ ನಿಂದ ಬಾಂಗ್ಲಾದೇಶವನ್ನು ಹೊರ ಹಾಕಿದ ಬೆನ್ನಲ್ಲೆ ಆ ದೇಶದ ಮೇಲೆ ಪ್ರೀತಿ ಹೆಚ್ಚಾಗಿರುವ ಪಾಕಿಸ್ತಾನವು ಭದ್ರತೆ ಹಾಗೂ ಕೆಲವು ಕಾರಣ ನೀಡಿ ಭಾರತದ ವಿರುದ್ಧದ ಟಿ-20 ವಿಶ್ವಕಪ್ ಆಡದಿರಲು ನಿರ್ಧರಿಸಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನ ಮೇಲೆ ದಂಡ ವಿಧಿಸುವ ಬಗ್ಗೆ ಗಂಭೀರ ಚಿಂತನೆ ಮಾಡಿದೆ. ಫೆಬ್ರವರಿಯಲ್ಲಿ ಭಾರತದ
ಕೇಂದ್ರ ಬಜೆಟ್: ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ? ಸಮಗ್ರ ವಿವರ ಇಲ್ಲಿದೆ...
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ 2026-27ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ರೈಲ್ವೆ, ರಕ್ಷಣೆ, ಕೃಷಿ, ಎಂಎಸ್ಎಂಇ, ಆರೋಗ್ಯ ಸೇವೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಪ್ರಮುಖ ಹಂಚಿಕೆಗಳನ್ನು ಘೋಷಿಸಿದ್ದಾರೆ. ಆದಾಯ ತೆರಿಗೆ ನಿಬಂಧನೆಗಳಲ್ಲೂ ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಿದ್ದಾರೆ. ಬಜೆಟ್ ನಲ್ಲಿ ಸಾರಿಗೆ ಕ್ಷೇತ್ರಕ್ಕೆ ಗರಿಷ್ಠ ಅಂದರೆ 5,98,520 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ. ರಕ್ಷಣಾ ಕ್ಷೇತ್ರ 5,94,585 ಕೋಟಿ ರೂಪಾಯಿ ಪಡೆಯಲಿದ್ದು, ಅನುದಾನ ಹಂಚಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಅಭಿವೃದ್ಧಿ ಕ್ಷೇತ್ರ 2,73,108 ಕೋಟಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಗೃಹ ವ್ಯವಹಾರಗಳ ಸಚಿವಾಲಯ 2,55,234 ಕೋಟಿ ರೂಪಾಯಿ ಅನುದಾನ ಹಂಚಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ 1,62,671 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಶಿಕ್ಷಣ (1,39,289 ಕೋಟಿ ರೂಪಾಯಿ), ಇಂಧನ (1,09,029 ಕೋಟಿ), ಆರೋಗ್ಯಸೇವೆ (1,04,599 ಕೋಟಿ) ಕ್ಷೇತ್ರಗಳು ಕೂಡಾ ಒಂದು ಲಕ್ಷ ಕೋಟಿಗಿಂತ ಹೆಚ್ಚಿನ ಅನುದಾನ ಪಡೆಯಲಿವೆ. ನಗರಾಭಿವೃದ್ಧಿ (85,522 ಕೋಟಿ), ಐಟಿ ಹಾಗೂ ದೂರಸಂಪರ್ಕ (74560 ಕೋಟಿ) ಮತ್ತು ವಾಣಿಜ್ಯ & ಕೈಗಾರಿಕಾ ಕ್ಷೇತ್ರ (76,296 ಕೋಟಿ) ಹೆಚ್ಚಿನ ಅನುದಾನ ಪಡೆದಿರುವ ಇತರ ಕ್ಷೇತ್ರಗಳಾಗಿವೆ. ಸಮಾಜ ಕಲ್ಯಾಣ ಕ್ಷೇತ್ರ (62,362 ಕೋಟಿ), ವೈಜ್ಞಾನಿಕ ಇಲಾಖೆ (55,756 ಕೋಟಿ) ಹಾಗೂ ತೆರಿಗೆ ಆಡಳಿತ (45,500 ಕೋಟಿ), ವಿದೇಶಾಂಗ ವ್ಯವಹಾರ (22,119 ಕೋಟಿ) ಹಣಕಾಸು ಕ್ಷೇತ್ರ (20,649 ಕೋಟಿ) 10 ಸಾವಿರ ಕೋಟಿಗಿಂತ ಅಧಿಕ ಅನುದಾನ ಪಡೆಯುವ ವಿಭಾಗದಲ್ಲಿ ಸೇರಿವೆ. ಈಶಾನ್ಯ ಅಭಿವೃದ್ಧಿಗೆ 6,812 ಕೋಟಿ ಹಂಚಿಕೆಯಾಗಲಿದೆ.
ಬಲೂಚಿಸ್ತಾನದಲ್ಲಿ 145 ಜನರನ್ನು ಕೊಂದು ಹಾಕಿದ ಪಾಕಿಸ್ತಾನ; ಕೈಗಂಟಿದ ರಕ್ತ ನೋಡಿ ಅಸುರ ನಗೆ!
ತನ್ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ನಡೆಸಿದ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನವು ಕೇವಲ ಎರಡು ದಿನಗಳಲ್ಲಿ 145ಕ್ಕೂ ಹೆಚ್ಚು ಬಲೂಚಿಸ್ತಾನ ಜನರನ್ನು ಕೊಂದು ಹಾಕಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಪಾಕ್ ಸೇನೆ, ಎರಡು ದಿನಗಳ ದಾಳಿಯಲ್ಲಿ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸುಮಾರು 145 ಜನರು ಸಾವನ್ಮಪ್ಪಿದ್ದಾರೆ ಎಂದು ತಿಳಿಸಿದೆ. ಪಾಕ್ ಪಡೆಗಳು ಮತ್ತು ಬಿಎಲ್ಎ ನಡುವಿನ ಈ ಕಾಳಗ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಸಂಘರ್ಷ ಎಂದು ಪರಿಗಣಿಸಲ್ಪಟ್ಟಿದೆ.
ಅದಾನಿ ಗ್ರೂಪ್ಗೆ ಬೆಂಗಳೂರಿನ ಅವಳಿ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆ?
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮಹಾನಗರದ ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸಿಲ್್ಕಬೋರ್ಡ್ವರೆಗೆ 6 ಪಥಗಳ 'ಟ್ವಿನ್ ಟ್ಯೂಬ್ ಟನಲ್' ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಅದಾನಿ ಗ್ರೂಪ್ಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಈ ತಿಂಗಳಾಂತ್ಯದೊಳಗೆ ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿದೆ. 17,698 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ 14 ಪ್ರವೇಶ, ನಿರ್ಗಮನ ರಾರಯಂಪ್ಗಳಿರಲಿವೆ. ಗುತ್ತಿಗೆ ಪಡೆದ ಕಂಪನಿಯೇ 30 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ.
ಹುಬ್ಬಳ್ಳಿ, ಧಾರವಾಡಕ್ಕೆ ಮಹದಾಯಿ ನೀರು ಮತ್ತಷ್ಟು ತಡ!
ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಪರಿಸರ ಇಲಾಖೆ ಮತ್ತೆ ತಡೆ ನೀಡಿದೆ. ಹುಬ್ಬಳ್ಳಿ-ಧಾರವಾಡಕ್ಕೆ ನೀರು ಒದಗಿಸುವ ಪ್ರಸ್ತಾವನೆಯಲ್ಲಿ ಪರಿಸರ, ವನ್ಯಜೀವಿ ಸಂರಕ್ಷಣೆ ಹಾಗೂ 161 ಗಿರಿಜನ ಕುಟುಂಬಗಳ ಪುನರ್ವಸತಿ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೇ ಕಾರಣ. ಅರಣ್ಯ ಪ್ರದೇಶಕ್ಕೆ ಹತ್ತಿರವಿರುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗುವ ಸಾಧ್ಯತೆಯೂ ಇದೆ.
Karnataka Weather: ಕರಾವಳಿ-ಒಳನಾಡು ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಉರಿ ಬಿಸಿಲು, ಹವಾಮಾನ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಾದ್ಯಂತ ಸಂಪೂರ್ಣವಾಗಿ ಚಳಿ ಕಡಿಮೆ ಆಗಿಲ್ಲ. ರಾಜ್ಯದಲ್ಲ ಎಲ್ಲ ಜಿಲ್ಲೆಗಳಲ್ಲೂ ಶುಷ್ಕ ವಾತಾವರಣ ನಿರ್ಮಾಣವಾಗಿಲ್ಲ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಕಂಡು ಬಂದಿದೆ. ಜನರಿಗೆ ಸೆಕೆಯ ಅನುಭವವಾಗುತ್ತಿದೆ. ಬೆಂಗಳೂರು ನಗರ ಸೇರಿ ಕೆಲವು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಬೆಳಗ್ಗೆ ಮಂಜಿನ ವಾತಾವರಣ ಹಾಗೂ ಚಳಿ ಕಂಡು ಬರುತ್ತಿದೆ. ಚಂಡಮಾರುತ ಪ್ರಸರಣ ಉಂಟಾಗಿರುವ ಕಾರಣ
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಸಮಸ್ಯೆಯ ಕೂಗು ದಶಕಗಳಿಂದ ಕೇಳಿಬಂದಿದೆ. ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಎರಡು ದಶಕಗಳ ಹಿಂದೆ ಪ್ರೊ. ನಂಜುಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಹಿಂದುಳಿತ ತಾಲೂಕುಗಳ ಪ್ರಮಾಣ ಶೇ.65ರಿಂದ ಶೇ.72.8ಕ್ಕೆ ಹೆಚ್ಚಳವಾಗಿದೆ. ಕರ್ನಾಟಕ ಪ್ರಾದೇಶಿಕ ಸಮತೋಲನ ನಿವಾರಣೆಗಾಗಿ ನೇಮಿಸಲಾಗಿದ್ದ ಪ್ರೊ. ಗೋವಿಂದರಾವ್ ಸಮಿತಿಯು ನೀಡಿರುವ ವರದಿಯಲ್ಲಿ ಮುಂದಿನ ಐದು ವರ್ಷಗಳಿಗೆ 43 ಸಾವಿರ ಕೋಟಿ ರೂ. ಮೀಸಲಿಡಬೇಕಿದೆ. ಆ ಕೆಲಸವನ್ನು ಈ ಬಾರಿಯ ಬಜೆಟ್ ನಲ್ಲಿ ಮಾಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ (ಫೆ.1-ಭಾನುವಾರ) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2026 ಮಂಡನೆ ಮಾಡಿದ್ದಾರೆ. ದೇಶಾದ್ಯಂತ ಬಜೆಟ್ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕೇಂದ್ರ ಬಜೆಟ್ಗೆ ಮಿಶ್ರ ಪ್ರತಿಕ್ತಿಯೆ ವ್ಯಕ್ತವಾಗಿದೆ. ಅನೇಕರು ಬಜೆಟ್ ಬಗ್ಗ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದರೆ, ಕೆಲವರು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಲೆಕ್ಕಾಚಾರವನ್ನು ಪ್ರಶ್ನಿಸಿದರು. ಕೇಂದ್ರ ಬಜೆಟ್ ಕುರಿತ ಜನರ ಈ ಮಿಶ್ರ ಪ್ರತಿಕ್ರಿಯೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Union Budget 2026: ಏರಿಳಿತವೇ ಷೇರು ಮಾರುಕಟ್ಟೆಯ ಗುಣ; ಡೋಂಟ್ ವರಿ ಎಂದ ಪ್ರಧಾನಿ ಆರ್ಥಿಕ ಸಲಹೆಗಾರ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ (ಫೆ.1-ಭಾನುವಾರ) ಲೋಕಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಬಜೆಟ್ ಮಂಡನೆಯಾಗುತ್ತಿದ್ದಂತೇ ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿರುವುದು, ಹೂಡಿಕೆದಾರರನ್ನು ಚಿಂತೆಗೆ ದೂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, ಷೇರು ಮಾರುಕಟ್ಟೆ ಪರಿಸ್ಥಿತಿಗಳಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ.ರವಿ ಅಧ್ಯಕ್ಷ, ದಿನೇಶ್ ಹೊಸೂರು ಉಪಾಧ್ಯಕ್ಷರಾಗಿ ಆಯ್ಕೆ
ಚಿಕ್ಕಮಗಳೂರು : ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪದ ಎಚ್. ಕೆ.ದಿನೇಶ್ ಹೊಸೂರು ರವಿವಾರ ಡಿಸಿಸಿ ಬ್ಯಾಂಕ್ನಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ನೂತನ ಅಧ್ಯಕ್ಷ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೊಪ್ಪದ ಎಚ್.ಕೆ.ದಿನೇಶ್ ಮಾತನಾಡಿ, ತಮ್ಮ ಆಯ್ಕೆಗೆ ಸಹಕರಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ನಿರ್ದೇಶಕ ಎಸ್.ಎಲ್.ಭೋಜೇಗೌಡ, ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಹಳಸೆ ಶಿವಣ್ಣ, ಎಸ್.ವಿ.ಬಸವರಾಜಪ್ಪ ಎಸ್.ಡಿ.ಸೋನಾಲ್, ಬಿ.ಎಸ್.ಸತೀಶ್, ಕೆ.ಆರ್.ಆನಂದಪ್ಪ ಟಿ.ಎಲ್.ರಮೇಶ್, ಎಚ್.ಕೆ.ದಿನೇಶ್ ಹೆಗ್ಡೆ ಜೈಪಾಲ್ ಕೆ.ಸಿ., ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮುಖಂಡರಾದ ಕಲ್ಕುರುಡಪ್ಪ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್ ಉಪಸ್ಥಿತರಿದ್ದರು.
ಬ್ಯಾರಿ ಕವಿಗೋಷ್ಠಿ | ಸಮಾಜದಲ್ಲಿ ಕವಿಗಳು ಮೌನವಾಗಿರಬಾರದು : ಮುಹಮ್ಮದ್ ಬಡ್ಡೂರು
ಬೆಂಗಳೂರು : ಜಗತ್ತಿನಲ್ಲಿ ದಬ್ಬಾಳಿಕೆ ನಡೆದಾಗ ಆಗ ಕ್ರಾಂತಿ ತಂದಿರುವುದೇ ಸಾಹಿತ್ಯ. ಸಾಹಿತಿಗಳ ಧೈರ್ಯವಂತರಾಗಿರಬೇಕು. ಸಮಾಜದ ಅವ್ಯವಸ್ಥೆ, ಆಡಳಿತ ಅಭದ್ರತೆಯ ಕುರಿತು ಮಾತನಾಡುವಂತಹ ಸಾಹಿತಿಗಳಾಗಬೇಕೆಂದು ಕವಿಗಳಿಗೆ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಕರೆ ನೀಡಿದ್ದಾರೆ. ಬಶೀರ್ ಅಹ್ಮದ್ ಕಿನ್ಯ, ಹೈದರ್ ಕಾಟಿಪಳ್ಳ, ಹುಸೈನ್ ಕಾಟಿಪಳ್ಳ, ಹಂಝ ಮಲಾರ್, ಹಫ್ಸಾ ಭಾನು, ಆಶ್ರಫ್ ಅಪೋಲೋ ಕಲ್ಲಡ್ಕ, ರಶೀದ್ ನಂದಾವರ, ರಫೀಕ್ ಪಾಣೇಲ, ಹನೀಫ್ ನಂದರಬೆಟ್ಟು, ಯಂಶ ಬೇಂಗಿಲ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಇಬ್ರಾಹಿಂ ಖಲೀಲ್ ಬನ್ನೂರು ಸ್ವ-ರಚಿತ ಬ್ಯಾರಿ ಕವಿತೆ ವಾಚಿಸಿದರು. ವೇದಿಕೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಉಪಸ್ಥಿತರಿದ್ದರು.
ಕೇಂದ್ರದ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿವೆ : ನ್ಯಾ.ಗೋಪಾಲಗೌಡ
‘ಕಾರ್ಮಿಕರ ಸಮಾವೇಶ
ನಿರ್ಣಾಯಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಪ್ರೀಮಿಯರ್ ಲೀಗ್ 2026ರ ಪ್ಲೇ ಆಫ್ಗೆ ಪ್ರವೇಶಿಸಿದೆ. ಈ ಗೆಲುವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಈಗ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯನ್ ಓಪನ್: ಅಲ್ಕರಾಝ್ ಚಾಂಪಿಯನ್
► ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದ ಕಿರಿಯ ಆಟಗಾರ ► ವೃತ್ತಿಜೀವನದ ಏಳನೇ ಪ್ರಶಸ್ತಿ ಗೆದ್ದ ವಿಶ್ವದ ನಂ.1 ಆಟಗಾರ ► ಮೆಲ್ಬರ್ನ್ ನಲ್ಲಿ ಮೊದಲ ಬಾರಿ ಫೈನಲ್ ನಲ್ಲಿ ಸೋತ ಜೊಕೊವಿಕ್
ಅಂಡರ್ 19 ಏಷ್ಯಾಕಪ್ ನಲ್ಲಾದ ಸೋಲು ಮತ್ತು ಅದರ ಬಳಿಕ ಪಾಕಿಸ್ತಾನ ಮಾಡಿದ ಅವಮಾನಕ್ಕೆ ಇದೀಗ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡದ ತನ್ನ ಆಟದ ಮೂಲಕವೇ ಉತ್ತರ ನೀಡಿದೆ. ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು 58 ರನ್ ಗಳ ಸೋಲಿಸಿದ ಆಯುಷ್ ಮ್ಹಾತ್ರೆ ಬಳಕ ಸೆಮಿಫೈನಲ್ ತಲುಪಿದ್ದಲ್ಲದೆ, ಪಾಕಿಸ್ತಾನ ತಂಡವನ್ನೂ ಟೂರ್ನಿಯಿಂದ ಹೊರಗಟ್ಟುವಲ್ಲಿ ಯಶಸ್ವಿಯಾಯಿತು. ಆಲ್ರೌಂಡ್ ಪ್ರದರ್ಶನ ನೀಡಿದ ಕಾನಿಷ್ಕ್ ಚೌಹಾನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೂಪರ್ ಸಿಕ್ಸ್ 2ನೇ ಗುಂಪಿನಲ್ಲಿ ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದಿರುವ ಭಾರತ ಮತ್ತು ಇಂಗ್ಲೆಂಡ್ ತಲಾ 8 ಅಂಕಗಳೊಂದಿಗೆ ಮೊದಲೆರಡು ಸ್ಥಾನಿಗಳಾಗಿ ಸೆಮಿಫೈನಲ್ ಪ್ರವೇಶಿಸಿವೆ. ಪಾಕಿಸ್ತಾನ ತಂಡ ಆಡಿರುವ 4 ಪಂದ್ಯಗಳಲ್ಲಿ 2 ಮಾತ್ರ ಜಯಿಸಿದೆ. ಕೊನೇ ಪಂದ್ಯದಲ್ಲಿ ಅದು ಗೆದ್ದರೂ ಅಗತ್ಯ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬುಲಾವಯೋದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 49.5 ಓವರ್ ಗಳಲ್ಲಿ 252 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 46.2 ಓವರ್ ಗಳಲ್ಲಿ 194 ರನ್ ಗಳಿಸಿ ಆಲೌಟ್ ಆಯಿತು. ಪಾಕಿಸ್ತಾನದ ಪರವಾಗಿ ಆರಂಭಿಕ ಬ್ಯಾಟರ್ ಹಂಝ ಝಹೂರ್ (49 ಎಸೆತಗಳಲ್ಲಿ 42) ಉಸ್ಮಾನ್ ಖಾನ್ (92 ಎಸೆತಗಳಲ್ಲಿ 66) ಮತ್ತು ಫರ್ಹಾನ್ ಯೂಸುಫ್ (39 ಎಸೆತಗಳಲ್ಲಿ 38) ರನ್ ಗಳಿಸಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರದ್ದರಿಂದ ತಂಡ 22 ಎಸೆತಗಳು ಬಾಕಿ ಇರುವಾಗಲೇ ಆಲೌಟ್ ಆಯಿತು. ಭಾರತದ ಪರ ಖಿಲಾನ್ ಪಟೇಲ್ ಮತ್ತು ನಾಯಕ ಆಯುಷ್ ಮ್ಹಾತ್ರೆ ತಲಾ 3 ವಿಕೆಟ್ ಗಳಿಸಿದರು. ಕಾನಿಶ್ಕ್ ಚೌಹಾನ್, ಅಂಬರೀಷ್, ಹೆನಿಲ್ ಪಟೇಲ್, ವಿಹಾನ್ ಮಲ್ಹೋತ್ರಾ ತಲಾ 1 ವಿಕೆಟ್ ಪಡೆದರು. ಅಗ್ರ ಕ್ರಮಾಂಕ ವಿಫಲ ಇದಕ್ಕೂ ಮೊದಲ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಆ್ಯರೋನ್ ಜಾರ್ಜ್(16 ಎಸೆತದಲ್ಲಿ 16) ಮತ್ತು (22 ಎಸೆತಗಳಲ್ಲಿ 30) ಉತ್ತಮ ಆರಂಭವನ್ನೇ ಒದಗಿಸಿದರು. ಆದರೆ ಇಬ್ಬರು ದೊಡ್ಡ ಮೊತ್ತ ಗಳಿಸುವಲ್ಲಿ ಸಫಲರಾಗಲಿಲ್ಲ. ನಾಯಕ ಆಯುಷ್ ಮ್ಹಾತ್ರೆ ಅವರು ಸಹ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ತಲುಪಿದ್ದು ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿತು. ಆದರೆ ಈ ಸಂದರ್ಭದಲ್ಲಿ ವೇದಾಂತ್ ತ್ರಿವೇದಿ(98 ಎಸೆತಗಳಲ್ಲಿ 68) ಮತ್ತು ವಿಹಾನ್ ಮಲ್ಹೋತ್ರಾ (43 ಎಸೆತಗಳಲ್ಲಿ 21) ಎಚ್ಚರಿಕೆಯಿಂದ ಆಡಿ ತಂಡದ ಕುಸಿತವನ್ನು ತಪ್ಪಿಸಿದರು. ನಂತರ ಬಂದ ಅಭಿಜ್ಞಾನ್ ಕುಂಡು ಮತ್ತು ಅಂಬರೀಶ್ ಅವರು ರನ್ ಗತಿಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಆದರೆ ಅಂತಿಮ ಓವರ್ ಗಳಲ್ಲಿ ಕಾನಿಷ್ಕ್ ಚೌಹಾನ್ ಮತ್ತು ಖಿಲಾನ್ ಪಟೇಲ್ ಕೊಂಚ ಬಿರುಸಿನ ಆಟವಾಡಿದ್ದರಿಂದ ಭಾರತ 250ರ ಗಡಿ ದಾಟುವಂತಾಯಿತು. ಪಾಕಿಸ್ತಾನದ ಪರ ಅಬ್ದುಲ್ ಸುಭಾನ್ 2, ಮೊಹಮ್ಮದ್ ಸಯ್ಯಮ್ 2 ವಿಕೆಟ್ ಎಗರಿಸಿದರು. ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಅನುಭವಿಸಿತ್ತು. ಇದೀಗ ಭಾರತ ತಂಡ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರಗಟ್ಟುವ ಮೂಲಕ ತಿರುಗೇಟು ನೀಡಿದ ಹಾಗಾಗಿದೆ. ಏಷ್ಯಾಕಪ್ ನ ಲೀಗ್ ಪಂದ್ಯದಲ್ಲಿ ಕಾನಿಷ್ಕ್ ಚೌಹಾನ್ ಅವರ ಆಲ್ರೌಂಡ್ ಆಟದ ಪರಿಣಾಮವಾಗಿ ಭಾರತ ತಂಡ ಸಾಧಿಸಿತ್ತು. ಸಂಕ್ಷಿಪ್ತ ಸ್ಕೋರ್ ಭಾರತ 49.5 ಓವರ್ ಗಳಲ್ಲಿ 252ಕ್ಕೆ ಆಲೌಟ್ ವೇದಾಂತ್ ತ್ರಿವೇದಿ 68(98), ಕಾನಿಷ್ಕ್ ಚೌಹಾನ್ 35(29), ವೈಭವ್ ಸೂರ್ಯವಂಶಿ 30(22), ಅಬ್ದುಲ್ ಸುಭಾನ್ 33ಕ್ಕೆ 3, ಮೊಹಮ್ಮದ್ ಸಯ್ಯಮ್ 69ಕ್ಕೆ 2 ಪಾಕಿಸ್ತಾನ 46.2 ಓವರ್ ಗಳಲ್ಲಿ 194ಕ್ಕೆ ಆಲೌಟ್, ಖಿಲಾನ್ ಪಟೇಲ್ 35ಕ್ಕೆ 3, ಆಯುಷ್ ಮ್ಹಾತ್ರೆ 21ಕ್ಕೆ 3, ವಿಹಾನ್ ಮಲ್ಹೋತ್ರಾ 15ಕ್ಕೆ1,
ದೊಡ್ಡ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ: 'ಅಂಬಲಿ ರಾಶಿಗೆ ಮುತ್ತಿನ ಗಿಣಿ...' ಅರ್ಥವೇನು?
ಹರಪನಹಳ್ಳಿಯ ದೊಡ್ಡ ಮೈಲಾರದಲ್ಲಿ ಗೊರವಯ್ಯನ ಕಾರ್ಣಿಕ ನುಡಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ಹೊರಬಿದ್ದಿದೆ. ಇದು ರಾಜ್ಯದಲ್ಲಿ ಸಮೃದ್ಧಿ, ಸಂತೋಷ ಮತ್ತು ಉತ್ತಮ ಮಳೆಬೆಳೆಗಳ ಸೂಚನೆ ಎಂದು ಭಕ್ತರು ವಿಶ್ಲೇಷಿಸಿದ್ದಾರೆ. ಫೆಬ್ರವರಿ 4 ರಂದು ಮೈಲಾರದಲ್ಲಿ ಕಾರ್ಣಿಕೋತ್ಸವ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಅಂಜುಮನ್ ಕಮಿಟಿಯಿಂದ 100ಕ್ಕೂ ಅಧಿಕ ಬಡ ಮಹಿಳೆಯರಿಗೆ ಬಡ್ಡಿರಹಿತ ಸಾಲ ವಿತರಣೆ
ವಿಜಯನಗರ : ಅಂಜುಮನ್ ಕಮಿಟಿ ವತಿಯಿಂದ ಅಂಜುಮನ್ ಶಾದಿಮಹಲ್ನಲ್ಲಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಯಾವುದೇ ಬಡ್ಡಿ ಇಲ್ಲದೆ ತಲಾ 10,000ರೂ. ಮೊತ್ತದ ಆರ್ಥಿಕ ಸಹಕಾರವನ್ನು 100ಕ್ಕೂ ಹೆಚ್ಚು ಮಹಿಳೆಯರಿಗೆ ವಿತರಿಸಲಾಯಿತು. ಸಹಾಯ ಪಡೆದ ಮಹಿಳೆಯರು ದಿನಕ್ಕೆ 100 ರೂಪಾಯಿಯಂತೆ 100 ದಿನಗಳಲ್ಲಿ ಮರುಪಾವತಿ ಮಾಡಬೇಕಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೊಹಿನುದ್ದಿನ್ ದುರ್ವೆಶ್, ಮಹಿಳೆಯರು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೊಲಿಗೆ, ಸಣ್ಣ ವ್ಯಾಪಾರ, ಗೃಹಾಧಾರಿತ ಉದ್ಯಮಗಳು ಸೇರಿದಂತೆ ಜೀವನೋಪಾಯಕ್ಕೆ ಸಹಕಾರಿಯಾಗುವ ಕಾರ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಬಡ್ಡಿ ಇಲ್ಲದೇ ನೀಡಲಾಗುತ್ತಿರುವ ಈ ಸಹಾಯಧನದಿಂದ ಬಡ ಕುಟುಂಬಗಳ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ, ಕುಟುಂಬದ ಆರ್ಥಿಕ ಸ್ಥಿತಿಗತಿಗೂ ಬಲ ಸಿಗಲಿದೆ ಎಂದು ಅಂಜುಮನ್ ಕಮಿಟಿ ಯ ಅಧ್ಯಕ್ಷರಾದ ಎಚ್ ಎನ್ ಮಹಮ್ಮದ್ ಇಮಾಮ್ ನಿಯಾಜಿ ಹೇಳಿದರು. ಕಾರ್ಯಕ್ರಮದಲ್ಲಿ, ಅನ್ಸಾರ್ ಬಾಷ, ಫೈರೋಝ್ ಖಾನ್, ನಗರಸಭಾ ಸದಸ್ಯೆ ಮುನ್ನಿ, ಮಹಬೂಬ್ ಬೈ, ದಾದಾಪೀರ್, ಖದೀರ್ ಬೈ ( ಕಂಚಗಾರ್ ಪೇಟ್ ), ಗಫೂರ್ ಬೈ, ಅತ್ತಾಯೇ ರಸೂಲ್, ಗುಲಾಮ್ ರಸೂಲ್, ಮೆಟ್ರೋ ಮುರ್ಶಿದ್, ಸದ್ದಾಂ, ಮೊಹಿಶಿನ್ ಕೊತ್ವಾಲ್, ಮಹಬು ಸಾಬ್, ನಯೀಂ ಸಾಬ್, ಜಹಾಂಗೀರ್ ಬೈ, ಹಾಗೂ ಅಂಜುಮ್ ಕಮಿಟಿಯ ಎಲ್ಲಾ ಸದಸ್ಯರು, ಗಣ್ಯರು ಹಾಗೂ ಲಾಭ ಪಡೆದ ಮಹಿಳೆಯರು ಉಪಸ್ಥಿತರಿದ್ದರು.
ಕೇರಳವು ಭಾರತದ ಭೂಪಟದಲ್ಲಿ ಇದೆಯೇ ಎಂಬ ಬಗ್ಗೆ ಪ್ರಶ್ನಿಸುವಂತಾಗಿದೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಎಲ್ ಡಿ ಎಫ್ ಜಾಥಾಕ್ಕೆ ಚಾಲನೆ
ಕೇಂದ್ರ ಬಜೆಟ್ 2026 | ಜನ ವಿರೋಧಿ ಬಜೆಟ್: ಮಮತಾ ಬ್ಯಾನರ್ಜಿ
ಹೊಸದಿಲ್ಲಿ, ಫೆ. 1: 2026-27ನೇ ಸಾಲಿನ ಬಜೆಟ್ ಅನ್ನು ದಿಕ್ಕುರಹಿತ ಹಾಗೂ ಮುನ್ನೋಟವಿಲ್ಲದ ಬಜೆಟ್ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ವಿವರಿಸಿದ್ದಾರೆ. ಈ ಬಜೆಟ್ ಸಾಮಾನ್ಯ ಜನರಿಗೆ ಹಾಗೂ ತನ್ನ ರಾಜ್ಯಕ್ಕೆ ಏನನ್ನೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ‘‘ಇದು ದಿಕ್ಕುರಹಿತ, ಮುನ್ನೋಟವಿಲ್ಲದ, ಕ್ರಿಯಾಶೀಲವಲ್ಲದ ಹಾಗೂ ಜನ ವಿರೋಧಿ ಬಜೆಟ್. ಇದು ಮಹಿಳಾ ವಿರೋಧಿ, ರೈತ ವಿರೋಧಿ, ಶಿಕ್ಷಣ ವಿರೋಧಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ವಿರೋಧಿ ಬಜೆಟ್. ಇದರಲ್ಲಿ ಪಶ್ಚಿಮ ಬಂಗಾಳಕ್ಕೆ ಏನನ್ನೂ ನೀಡಿಲ್ಲ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಬಜೆಟ್ 2026 | ನೀತಿ ಮುನ್ನೋಟದ ಕೊರತೆ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ, ಫೆ. 1: ಮೋದಿ ಸರ್ಕಾರದ ಚಿಂತನೆಗಳು ಖಾಲಿಯಾಗಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಹೇಳಿದ್ದಾರೆ. 2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಭಾರತದ ಹಲವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸವಾಲಗಳಿಗೆ ಒಂದೇ ಒಂದು ಪರಿಹಾರ ಒದಗಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ‘ಎಕ್ಸ್’ನ ಪೋಸ್ಟ್ನಲ್ಲಿ ಅವರು, ಈ ಬಜೆಟ್ನಲ್ಲಿ ನೀತಿ ಮುನ್ನೋಟ ಅಥವಾ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲ. ಈ ಬಜೆಟ್ ಯಾವುದೇ ಪರಿಹಾರ ನೀಡುವುದಿಲ್ಲ. ಸಾಮಾಜಿಕ ಸೇವೆಗಳ ಕ್ಷೇತ್ರಗಳಲ್ಲಿ ಹಲವನ್ನು ಕೈಬಿಡಲಾಗಿದೆ. ಈ ವೈಫಲ್ಯವನ್ನು ಮರೆಮಾಚಲು ಅವುಗಳ ಬಗ್ಗೆ ಒಂದು ಪ್ರಸ್ತಾವವನ್ನೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ| ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ ಕುರಿತ ಸಂವಾದ
ಕಲಬುರಗಿ: ಬ್ರಿಟಿಷರ ಮಾನವ ಹತ್ಯೆ ಖಂಡಿಸಿ ಬರೆದ ನರಬಲಿ ಕವಿತೆ ಬೇಂದ್ರೆ ಅಜ್ಜನ ಬಂಧನಕ್ಕೆ ಕಾರಣವಾಯಿತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶೈಲಜಾ ಕೊಪ್ಪರ್ ಹೇಳಿದರು. ರವಿವಾರ ನಗರದ ಕನ್ನಡ ಭವನದ ಕಲಾ ಭವನದಲ್ಲಿ ಪ್ರೋಗ್ರೆಸಿವ್ ಕಲ್ಚರ್ ಅಸೋಸಿಯೇಷನ್ ಆಫ್ ಇಂಡಿಯಾ (ಪಿಸಿಎಐ) ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಶಬ್ದ ಗಾರುಡಿಗ ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯರನ್ನು ತುಳಿದು ಆಡಳಿತ ನಡೆಸುತ್ತಿದ್ದ ಬಿಳಿಯರ ವಿರುದ್ಧ ಕೆಂಡ ಕಾರಿದ್ದ ಈ ಕವಿತೆ ಭಾರತೀಯರನ್ನು ಬಡಿದೆಚ್ಚರಿಸುವ ಸಾಮರ್ಥ್ಯ ಹೊಂದಿತ್ತು. ಜನರು ಹೋರಾಟಕ್ಕೆ ಸಿಡಿದೇಳುವ ಆತಂಕ ಕಾಡಿದ್ದರಿಂದ ಬ್ರಿಟಿಷ್ ಸರಕಾರ ಬೇಂದ್ರೆಯವರನ್ನು ಬಂಧಿಸಿ ಜೈಲಿಗಟ್ಟಿತ್ತು. ಹತ್ತು ವರ್ಷಗಳ ಕಾಲ ಜೈಲಲ್ಲಿಟ್ಟು ಶಿಕ್ಷೆ ನೀಡಿತು. ಮೇಲಾಗಿ ಇವರಿಗೆ ಯಾವುದು ನೌಕರಿಗೆ ಸೇರಿಸಿಕೊಳ್ಳದಂತೆ ಆದೇಶ ಹೊರಡಿಸಿತು. ಇದರಿಂದ ಬೇಂದ್ರೆ ಕುಟುಂಬ ಆರ್ಥಿಕ ಸಂಕಟಕ್ಕೊಳಗಾಗಿ ಕ್ರೂರ ಬಡತನವನ್ನು ಅನುಭವಿಸಬೇಕಾಯಿತು. ನರಬಲಿ ಕವಿತೆಯಿಂದ ವರಕವಿ ದೊಡ್ಡ ಬೆಲೆ ತೆತ್ತಬೇಕಾಯಿತು ಎಂದರು. ಕುರುಡು ಕಾಂಚಾಣ ಕುಣಿಯುತ್ತಿತ್ತು.. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು.. ಎಂದು ಬರೆಯುವ ಮೂಲಕ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಬೇಂದ್ರೆ ಸಾಹಿತ್ಯ ಕ್ರಾಂತಿ ಮುಂದುವರೆಯಿತು. ಇಬ್ಬನಿಯ ಹನಿಗಳನ್ನು ಅಮೃತದ ಹನಿಗಳಿಗೆ ಹೋಲಿಸಿ, ಗಿಡಗಂಟೆಗಳ ಕೊರಳಿಂದ ಹಕ್ಕಿಗಳ ಹಾಡು ಹೊರಟಿದೆ ನೋಡಿ ಎಂದು ಬರೆದು ಭಾವ ಕವಿ ಎನ್ನಿಸಿದರು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ಉನ್ನತಿ ಮರೆಯಾಗುತ್ತಿದೆ. ಭಾವ ಕವಿ ಜೀವಪರ ಕವಿಯಾಗಿ ಜನಮನ ಗೆದ್ದಿದ್ದಾರೆ. ನೀ ಹೀಂಗ ನೋಡಬ್ಯಾಡ ನನ್ನ... ಕವಿತೆ ಎಲ್ಲಿಯವರೆಗೂ ಜನರ ಕೊರಳ ಹಾಡಾಗಿರುತ್ತದೋ ಅಲ್ಲಿವರೆಗೆ ಬೇಂದ್ರೆ ಬದುಕಿರುತ್ತಾರೆ ಎಂದು ವಿವರಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಂಕಣ್ಣ ಡೊಣ್ಣೆಗೌಡರ್ ಮಾತನಾಡಿ, ಕಾವ್ಯ ಲೋಕದಲ್ಲಿ ತಮ್ಮದೇಯಾದ ಭಾವ ಸಾಹಿತ್ಯ ಕಟ್ಟಿಕೊಟ್ಟ ಬೇಂದ್ರೆ ಅವರು ಬದುಕಿನ ಕಷ್ಟಗಳಿಂದ ಬೆಂದು ಹೋಗಿದ್ದರು. ಜಾತಿಯನ್ನು ಮೀರಿ ಜನರನ್ನು ಪ್ರೀತಿಸುವ ಜನಪರ ಕವಿಯಾಗಿದ್ದರು ಎಂಬುದಕ್ಕೆ ಅವರ ಬದುಕು ಮತ್ತು ಬರಹವೇ ಸಾಕ್ಷಿಯಾಗಿದೆ ಎಂದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಎ.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಪುಟ್ಟರಾಜ್ ಲಿಂಗಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿಶಾಲಾಕ್ಷಿ ದೇಸಾಯಿ, ಮಡಿವಾಳಪ್ಪ ಹೇರೂರ, ಮಹಾದೇವಿ ಬಿ.ಕೆ, ಶೋಬನಾ ಸೇರಿದಂತೆ ನಗರದ ಸಾಹಿತ್ಯಾಸಕ್ತರು, ಸಂಘಟಕರು ಪಾಲ್ಗೊಂಡಿದ್ದರು. ಆವಿಷ್ಕಾರ ವೇದಿಕೆಯ ಶ್ರೀಶರಣ ಹೊಸಮನಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿಶಾಲಾಕ್ಷಿ ದೇಸಾಯಿ ಹಾಗೂ ಶೋಬನಾ ಬೇಂದ್ರೆ ಸಾಹಿತ್ಯದ ಗೀತೆಗಳನ್ನು ಹಾಡಿದರು
ಕೇಂದ್ರ ಬಜೆಟ್ 2026 | ಭಾರತದ ನಿಜವಾದ ಸಮಸ್ಯೆಗಳ ಬಗ್ಗೆ ಕುರುಡಾಗಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಫೆ. 1: 2026-27 ಸಾಲಿನ ಕೇಂದ್ರ ಬಜೆಟ್ ಅನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ರವಿವಾರ ತೀವ್ರವಾಗಿ ಟೀಕಿಸಿದ್ದಾರೆ. ಈ ಬಜೆಟ್ ‘‘ಭಾರತದ ನಿಜವಾದ ಸಮಸ್ಯೆಗಳ ಬಗ್ಗೆ ಕುರುಡಾಗಿದೆ’’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಸಾಮಾನ್ಯ ಜನರು ಎದುರಿಸುವ ತೀವ್ರ ಆರ್ಥಿಕ ಸಂಕಷ್ಟಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. ‘ಎಕ್ಸ್’ನ ಪೋಸ್ಟ್ನಲ್ಲಿ ಅವರು ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಅನೇಕ ಯುವಕರು ಉದ್ಯೋಗವಿಲ್ಲದೆ ಇದ್ದಾರೆ. ಉತ್ಪಾದನಾ ವಲಯ ಕುಸಿಯುತ್ತಿದೆ. ಹೂಡಿಕೆದಾರರು ಬಂಡವಾಳ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಕುಟುಂಬಗಳ ಉಳಿತಾಯ ತೀವ್ರವಾಗಿ ಕುಸಿಯುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜಾಗತಿಕ ಆಘಾತ ಸಂಭವಿಸುವ ಸಾಧ್ಯತೆ ಇದೆ. ಇವೆಲ್ಲವನ್ನೂ ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಜೆಟ್ ಹಿಂದಿನ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ. ಭಾರತದ ನಿಜವಾದ ಸಮಸ್ಯೆಗಳ ಬಗ್ಗೆ ಕುರುಡಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
20,000 ಪಶುವೈದ್ಯರಿಗೆ ತರಬೇತಿ; ಮೀನುಗಾರಿಕೆಗೆ 500 ಜಲಮೂಲಗಳ ಅಭಿವೃದ್ಧಿ
ಹೊಸದಿಲ್ಲಿ, ಫೆ.1: ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸುವ ಮತ್ತು ಸಾಂಪ್ರದಾಯಿಕ ಕೃಷಿಯನ್ನು ಮೀರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಾನುವಾರು ಹಾಗೂ ಮೀನುಗಾರಿಕೆ ಕ್ಷೇತ್ರಗಳಿಗೆ ಸರಣಿ ಉಪಕ್ರಮಗಳನ್ನು ಘೋಷಿಸಿದ್ದಾರೆ. ಜಾನುವಾರುಗಳು ಕೃಷಿ ಆದಾಯದ ಶೇಕಡಾ 16ರಷ್ಟು ಕೊಡುಗೆ ನೀಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಶುವೈದ್ಯ ವೃತ್ತಿಪರರ ಲಭ್ಯತೆಯನ್ನು 20,000ಕ್ಕಿಂತಲೂ ಹೆಚ್ಚಿಸಲು ಸಾಲ-ಸಂಯೋಜಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ಘೋಷಿಸಿದ್ದಾರೆ. ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಪಶುವೈದ್ಯಕೀಯ ಆಸ್ಪತ್ರೆಗಳು, ರೋಗ ನಿರ್ಣಯ ಪ್ರಯೋಗಾಲಯಗಳು ಮತ್ತು ತಳಿ ಸೌಲಭ್ಯಗಳ ಸ್ಥಾಪನೆಗೆ ಈ ಯೋಜನೆ ಬೆಂಬಲ ನೀಡುತ್ತದೆ. ಮೀನುಗಾರಿಕೆಗಾಗಿ ಸರ್ಕಾರವು 500 ಸರೋವರಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಿದೆ. ನವೋದ್ಯಮಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ. ಇದರ ಜೊತೆಗೆ, ಪಶುಸಂಗೋಪನಾ ಉದ್ಯಮಶೀಲತೆ ಅಭಿವೃದ್ಧಿಗಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಕರಾವಳಿಯ ರೈತರಿಗೆ ಮಹತ್ವದ ಕ್ರಮವಾಗಿ, ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಹೊಸ ಪ್ರಬೇಧಗಳೊಂದಿಗೆ ಬದಲಿಸುವ ಗುರಿಯನ್ನು ಹೊಂದಿರುವ ತೆಂಗು ಉತ್ತೇಜನಾ ಯೋಜನೆಯನ್ನು ಪ್ರಕಟಿಸಲಾಗಿದೆ. ಭಾರತೀಯ ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮದಲ್ಲಿ ದೇಶವನ್ನು ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ 2030ರ ವೇಳೆಗೆ ಅವುಗಳನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಶ್ರೀಗಂಧದ ಕೃಷಿ ಮತ್ತು ಕಟಾವಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಸರ್ಕಾರವು ರಾಜ್ಯಗಳೊಂದಿಗೆ ಸಹಭಾಗಿತ್ವ ಹೊಂದಲಿದೆ. ಗುಡ್ಡಗಾಡು ಪ್ರದೇಶಗಳಿಗೆ ಮೀಸಲಾದ ಯೋಜನೆಯು ಹಳೆಯ ತೋಟಗಳ ಪುನರುಜ್ಜೀವನಕ್ಕೆ ಬೆಂಬಲ ನೀಡುತ್ತದೆ. ವಾಲ್ನಟ್ (ಅಕ್ರೋಟು), ಬಾದಾಮಿ ಮತ್ತು ಪೈನ್ ಮರದ ಬೀಜಗಳ ಕೃಷಿಯನ್ನು ವಿಸ್ತರಿಸುವುದರ ಜೊತೆಗೆ ಯುವಜನತೆಯ ತೊಡಗಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆಗೆ ಕೇಂದ್ರೀಕರಿಸಿದೆ.
ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಯಿಂದ ಕಾರ್ಮಿಕರ ಭವಿಷ್ಯಕ್ಕೆ ಮಾರಕ: ಕೆ.ಮಹಾಂತೇಶ್
ರಾಯಚೂರು: ಕೇಂದ್ರ ಸರಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಕಾರ್ಮಿಕ ವಿರೋಧಿ, ಉದ್ಯಮಿಗಳ ಪರವಾಗಿರುವ ಕಾನೂನುಗಳಾದ್ದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ್ ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ, ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಕಾರ್ಮಿಕರ-ರೈತ-ಕೂಲಿಕಾರರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೆ.ಮಹಾಂತೇಶ್, ಕೇಂದ್ರ ಸರಕಾರ 29 ಕಾರ್ಮಿಕ ಕಾನೂನುಗಳನ್ನು 4 ಕೋಡ್ಗಳಾಗಿ ಮಾಡಿ ಜಾರಿಗೊಳಿಸಿದೆ. 29 ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡದೇ ಅವುಗಳನ್ನು ತಿದ್ದುಪಡಿ ಮಾಡಿ 4 ವಿಂಗಡಣೆಯಾಗಿ ಮಾಡಿದ್ದಾರೆ. ಈ ಹಿಂದೆ 44 ಕಾರ್ಮಿಕ ಕಾನೂನುಗಳಿದ್ದವು ಅವುಗಳನ್ನು 29ಕ್ಕೆ ತರಲಾಯಿತು. ಇದೀಗ ಅವುಗಳನ್ನು 4 ಕೋಡ್ಗಳಾಗಿ ಮಾಡಿದ್ದು ಇವುಗಳು ಯಾರಿಗೂ ಅರ್ಥವಾಗದಂತೆ ಮಾಡಲಾಗಿದೆ. ತಿದ್ದುಪಡಿ ಮಾಡಿ ಮಾಲಕರ ಪರವಾಗಿ ಮಾಡಲಾಗಿದೆ ಎಂದರು. ಕಾರ್ಮಿಕರ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ, ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ನಮ್ಮ ಬೇಡಿಕೆಯಾಗಿತ್ತು, ಇದ್ಯಾವುದನ್ನು ಮಾಡದೇ ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೊಳಿಸಿದ್ದಾರೆ ಎಂದು ದೂರಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕಾನೂನುಗಳನ್ನು ಜಾರಿಗೊಳಿಸಿವೆ. ಕೇಂದ್ರದಲ್ಲಿ ಸಂಸದರು, ರಾಜ್ಯದಲ್ಲಿ ಶಾಸಕರು ಇವುಗಳ ಬಗ್ಗೆ ಚರ್ಚಿಸಬೇಕು. ಆದರೆ ಇದಾವುದನ್ನು ಮಾಡದೇ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕರ ಪರವಾದ ಕಾನೂನುಗಳು ಬೇಕಾಗಿದೆ, ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಇಎಸ್ಐ, ಪಿಎಫ್, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಕೆಗೆ ನಮ್ಮ ಒತ್ತಾಯವಾಗಿ ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಿರಂತರವಾಗಿದೆ ಎಂದರು. ಈ ಸಂದರ್ಭದಲ್ಲಿ ಎಐಯುಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ, ಟಿಯುಸಿಐ ರಾಜ್ಯಾಧ್ಯಕ್ಷ ಅಮೀರ್ ಅಲಿ, ಎಸ್.ಕೆಕೆ. ಜಿಲ್ಲಾ ಸಂಚಾಲಕ ಕೆಜಿ ವೀರೇಶ್, ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಕಾಶಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿಎಸ್ ಶರಣಬಸವ, ಎಐಯುಟಿಯುಸಿ ಉಪಾಧ್ಯಕ್ಷ ಎನ್ಎಸ್ ವೀರೇಶ್, ಎಂ.ರವಿ, ಜಿಂದಪ್ಪ, ರೈತ ಸಂಘದ ಅಧ್ಯಕ್ಷ ಪ್ರಭಾಕರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Uttarakhand | “ಇವನು ಇಂದಿನ ಭಾರತದ ಹೀರೋ”; ʼಮುಹಮ್ಮದ್ ದೀಪಕ್ʼಗೆ ರಾಹುಲ್ ಗಾಂಧಿ ಪ್ರಶಂಸೆ
“ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಸಾಹಸಿ”
ಮಂಗಳೂರು| ಆನ್ಲೈನ್ ಗೇಮ್ನಲ್ಲಿ ಸೋಲಿಸಿದ ದ್ವೇಷ: ಕೊಲೆ ಯತ್ನ ನಡೆಸಿದ ಆರೋಪಿಗೆ ಜೈಲುಶಿಕ್ಷೆ, ದಂಡ
ಮಂಗಳೂರು, ಫೆ.1: ಆನ್ಲೈನ್ ಗೇಮ್ನಲ್ಲಿ ಸೋಲಿಸಿದ ವಿಚಾರದಲ್ಲಿ ನಗರದ ನಂದಿಗುಡ್ಡೆ ಬಳಿಯ ನಿವಾಸಿ ಪ್ರತ್ಯೂಶ್ ಸಾಲಿಯಾನ್ ಎಂಬವರಿಗೆ ಬೆದರಿಕೆ ಹಾಕಿ, ಕೊಲೆ ಯತ್ನ ನಡೆಸಿರುವ ಪ್ರಕರಣದಲ್ಲಿ ಸಂಜಯ್ ಪೂಜಾರಿ ಎಂಬಾತನಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2023ರ ಮೇ 17ರಂದು ಸಂಜೆ 3:40ರ ವೇಳೆಗೆ ಪ್ರತ್ಯೂಶ್ ತನ್ನ ಮನೆಯಿಂದ ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜಯ್ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಕೊಲೆಯತ್ನ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್ಐ ಶೀತಲ್ ಅಲಗೂರು ಮತ್ತು ಪಿಎಸ್ಐ ಮನೋಹರ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್.ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ಪೂಜಾರಿಗೆ ಜ.31ರಂದು 4 ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.
ಕೇಂದ್ರ ಬಜೆಟ್ 2026: ಮಹತ್ವದ ಯೋಜನೆಗಳೇನು? ಯಾವ ರಾಜ್ಯಕ್ಕೆ ಏನೇನು ಸಿಕ್ಕಿದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ. 01) 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ► ಬಜೆಟ್ ಭಾಷಣದ ಮುಖ್ಯಾಂಶಗಳು ► ಆದಾಯ ತೆರಿಗೆ 2026–27ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹಣಕಾಸು ಸಚಿವೆ ಘೋಷಿಸಲಿಲ್ಲ. ಆದಾಯ ತೆರಿಗೆ ಪಾವತಿದಾರರ ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಐಟಿಆರ್–1 ಸಲ್ಲಿಸುವ 50 ಲಕ್ಷ ರೂ.ವರೆಗೆ ಆದಾಯ ಗಳಿಸುವ ಸಂಬಳದಾರರು ಮತ್ತು ಪಿಂಚಣಿದಾರರಿಗೆ, ಹಾಗೂ ಐಟಿಆರ್–2 ಸಲ್ಲಿಸುವ (ಐಟಿಆರ್–1 ವರ್ಗಕ್ಕೆ ಸೇರದ) ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಜುಲೈ 31ರವರೆಗೆ ಗಡುವು ಇರುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ 2025ರ ಆದಾಯ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಕಾನೂನನ್ನು ಆಗಸ್ಟ್ನಲ್ಲಿ ಸಂಸತ್ತು ಅಂಗೀಕರಿಸಿತು. ► ವಿತ್ತೀಯ ಕೊರತೆ 2026–27ರ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಕೊರತೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 4.3% ಎಂದು ಅಂದಾಜಿಸಲಾಗಿದೆ. ಇದು 2025–26ರ ಬಜೆಟ್ ಅಂದಾಜಿನ 4.4%ಗಿಂತ ಸ್ವಲ್ಪ ಕಡಿಮೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಸರ್ಕಾರದ ಖರ್ಚು ಅದು ಉತ್ಪಾದಿಸುವ ಆದಾಯಕ್ಕಿಂತ ಹೆಚ್ಚಾದಾಗ ವಿತ್ತೀಯ ಕೊರತೆ ಉಂಟಾಗುತ್ತದೆ. ► ರಾಷ್ಟ್ರೀಯ ಸಾಲ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಸಾಲ–ಜಿಡಿಪಿ ಅನುಪಾತ 55.6% ಎಂದು ಅಂದಾಜಿಸಲಾಗಿದೆ. ಇದು 2025–26ರ ಪರಿಷ್ಕೃತ ಅಂದಾಜಿನ 56.1%ಗಿಂತ ಸ್ವಲ್ಪ ಕಡಿಮೆ. ► ವೆಚ್ಚ 2026–27ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ 53.5 ಲಕ್ಷ ಕೋಟಿ ರೂ. ಆಗುವ ನಿರೀಕ್ಷೆಯಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರದ ನಿವ್ವಳ ತೆರಿಗೆ ಸ್ವೀಕೃತಿಗಳು 28.7 ಲಕ್ಷ ಕೋಟಿ ರೂ. ಆಗುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ► ಬಂಡವಾಳ ವೆಚ್ಚ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವನ್ನು 11.2 ಲಕ್ಷ ಕೋಟಿ ರೂ.ಗಳಿಂದ 12.2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ರಸ್ತೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ ಖರ್ಚು ಮಾಡುವ ಹಣವೇ ಬಂಡವಾಳ ವೆಚ್ಚ. ಪಶ್ಚಿಮ ಬಂಗಾಳದ ಡಂಕುನಿ ಮತ್ತು ಗುಜರಾತ್ ನ ಸೂರತ್ ಅನ್ನು ಸಂಪರ್ಕಿಸುವ ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್, 20 ಹೊಸ ರಾಷ್ಟ್ರೀಯ ಜಲಮಾರ್ಗಗಳು ಹಾಗೂ ಪ್ರಮುಖ ನಗರಗಳ ನಡುವೆ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ► ರೈಲ್ವೆ 2026–27ರ ಹಣಕಾಸು ವರ್ಷಕ್ಕೆ ರೈಲ್ವೆ ಸಚಿವಾಲಯಕ್ಕೆ 2.9 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. 2025–26ರ ಪರಿಷ್ಕೃತ ಅಂದಾಜು 2.6 ಲಕ್ಷ ಕೋಟಿ ರೂ. ಆಗಿತ್ತು. ► ವಿಬಿ–ಜಿ ರಾಮ್ ಜಿ ಯೋಜನೆ ಕೇಂದ್ರ ಸರ್ಕಾರವು ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ–ಜಿ ರಾಮ್ ಜಿ) ಯೋಜನೆಗಾಗಿ 95,691 ಕೋಟಿ ರೂ. ಅನುದಾನ ನೀಡಿದೆ. ಡಿಸೆಂಬರ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ವಿಬಿ–ಜಿ ರಾಮ್ ಜಿ ಕಾಯ್ದೆ ಬದಲಾಯಿಸಲಾಗಿತ್ತು. ► ಗ್ರಾಮ ಸ್ವರಾಜ್ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್’ ಉಪಕ್ರಮವನ್ನು ಪ್ರಾರಂಭಿಸಲು ಹಣಕಾಸು ಸಚಿವೆ ಪ್ರಸ್ತಾಪಿಸಿದ್ದಾರೆ. ಇದು ಜಾಗತಿಕ ಮಾರುಕಟ್ಟೆ ಸಂಪರ್ಕ ಮತ್ತು ಬ್ರ್ಯಾಂಡಿಂಗ್ಗೆ ಸಹಾಯ ಮಾಡಲಿದೆ. ತರಬೇತಿ, ಕೌಶಲ್ಯ, ಗುಣಮಟ್ಟ ಹಾಗೂ ಉತ್ಪಾದನೆಯನ್ನು ಸುಗಮಗೊಳಿಸಲು ಸಹಕಾರಿ ಎಂದು ತಿಳಿಸಿದ್ದಾರೆ. ► ಮೂಲಸೌಕರ್ಯ ನಿರ್ಮಾಣ ಮೂಲಸೌಕರ್ಯ ಅಭಿವೃದ್ಧಿಯ ಹಂತದಲ್ಲಿ ಖಾಸಗಿ ಡೆವಲಪರ್ಗಳ ವಿಶ್ವಾಸವನ್ನು ಹೆಚ್ಚಿಸಲು ಮೂಲಸೌಕರ್ಯ ಅಪಾಯ ಖಾತರಿ ನಿಧಿ ಸ್ಥಾಪಿಸಲಾಗುವುದು. ವಿಶೇಷವಾಗಿ ಶ್ರೇಣಿ–II ಮತ್ತು ಶ್ರೇಣಿ–III ನಗರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಹೆಚ್ಚಿಸಲು ಕ್ರಮಗಳನ್ನು ಘೋಷಿಸಲಾಗಿದೆ. ► ಶಿಕ್ಷಣ ಉದಾರೀಕೃತ ಹಣ ರವಾನೆ ಯೋಜನೆ (LRS) ಅಡಿಯಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (TCS) ದರವನ್ನು ಶೇಕಡಾ 5ರಿಂದ ಶೇಕಡಾ 2ಕ್ಕೆ ಇಳಿಸಲಾಗಿದೆ. ಇದರಿಂದ ವಿದೇಶಿ ಶಿಕ್ಷಣದ ವೆಚ್ಚ ಕಡಿಮೆಯಾಗುವ ನಿರೀಕ್ಷೆ ಇದೆ. LRS ಯೋಜನೆಯಡಿ ಪ್ರತಿ ಹಣಕಾಸು ವರ್ಷಕ್ಕೆ 2,50,000 ಅಮೆರಿಕನ್ ಡಾಲರ್ ವರೆಗೆ ರವಾನೆ ಮಾಡಲು ಅನುಮತಿ ಇದೆ. ಶಿಕ್ಷಣ ಮತ್ತು ವೈದ್ಯಕೀಯ ಹೊರತುಪಡಿಸಿ ಇತರ ಉದ್ದೇಶಗಳಿಗೆ TCS ದರ ಶೇಕಡಾ 20ರಲ್ಲೇ ಮುಂದುವರಿಯುತ್ತದೆ. ► ತೆರಿಗೆ ರಜೆ ಭಾರತೀಯ ಡೇಟಾ ಸೆಂಟರ್ ಗಳನ್ನು ಬಳಸುವ ವಿದೇಶಿ ಕಂಪೆನಿಗಳಿಗೆ 2047ರವರೆಗೆ ತೆರಿಗೆ ರಜೆ ನೀಡಲಾಗುವುದು. ಕಂಪೆನಿಗಳು ಭಾರತೀಯ ಮರುಮಾರಾಟಗಾರರ ಮೂಲಕ ಭಾರತೀಯ ಗ್ರಾಹಕರಿಗೆ ಸೇವೆ ನೀಡಬೇಕಾಗುತ್ತದೆ. ► ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ–ಪುಣೆ, ಹೈದರಾಬಾದ್–ಪುಣೆ, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಬೆಂಗಳೂರು–ಚೆನ್ನೈ, ದೆಹಲಿ–ವಾರಣಾಸಿ ಹಾಗೂ ವಾರಣಾಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಹಮದಾಬಾದ್–ಮುಂಬೈ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದೆ. ► ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಸರ್ಕ್ಯೂಟ್ ಅಭಿವೃದ್ಧಿ. ಲೋಥಾಲ್, ಧೋಲವಿರ, ರಾಖಿಗಢಿ, ಸಾರನಾಥ, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿ 15 ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು–ಕಾಶ್ಮೀರದಲ್ಲಿ ಪರಿಸರ ಸ್ನೇಹಿ ಚಾರಣ ಹಾದಿಗಳ ಅಭಿವೃದ್ಧಿ. ► ಔಷಧ ಮತ್ತು ಬಯೋಫಾರ್ಮಾ ಮುಂದಿನ ಐದು ವರ್ಷಗಳಲ್ಲಿ ಬಯೋಫಾರ್ಮಾ ಶಕ್ತಿ ಕಾರ್ಯಕ್ರಮಕ್ಕೆ 10,000 ಕೋಟಿ ರೂ. ಮೀಸಲು. ಮೂರು ಹೊಸ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (NIPER) ಹಾಗೂ 1,000 ಕ್ಲಿನಿಕಲ್ ಪ್ರಯೋಗ ತಾಣಗಳ ರಾಷ್ಟ್ರೀಯ ಜಾಲ ಸ್ಥಾಪನೆ. ► ಅನಿವಾಸಿ ಭಾರತೀಯರಿಗೆ ಪೋರ್ಟ್ಫೋಲಿಯೋ ಹೂಡಿಕೆ ಯೋಜನೆಯ ಮೂಲಕ ಈಕ್ವಿಟಿ ಹೂಡಿಕೆ ಅವಕಾಶ. ಕನಿಷ್ಠ ಪರ್ಯಾಯ ತೆರಿಗೆ (MAT) ವಿನಾಯಿತಿ ಹಾಗೂ ಆರು ತಿಂಗಳ ವಿದೇಶಿ ಆಸ್ತಿ ಬಹಿರಂಗಪಡಿಸುವ ಯೋಜನೆ. ► ಐದು ಯುನಿವರ್ಸಿಟಿ ಟೌನ್ ಕೈಗಾರಿಕಾ ಲಾಜಿಸ್ಟಿಕ್ ಕೇಂದ್ರಗಳ ಸಮೀಪ ಐದು ಯುನಿವರ್ಸಿಟಿ ಟೌನ್ಗಳ ಸ್ಥಾಪನೆ. ► ಆರೆಂಜ್ ಎಕಾನಮಿ 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಲ್ಯಾಬ್ಗಳ ಸ್ಥಾಪನೆ. ► ಕ್ರೀಡೆ ಖೇಲೋ ಇಂಡಿಯಾ ಮಿಷನ್ ಪ್ರಾರಂಭ. ► ದೀರ್ಘಾವಧಿಯ ಇಂಧನ ಭದ್ರತೆ ಕಾರ್ಬನ್ ಕ್ಯಾಪ್ಚರ್ ಯುಟಿಲೈಸೇಶನ್ ಅಂಡ್ ಸ್ಟೋರೇಜ್ (CCUS) ತಂತ್ರಜ್ಞಾನಗಳಿಗೆ ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ. ವೆಚ್ಚ. ► ಪಶುಸಂಗೋಪನೆ ಪಶುವೈದ್ಯಕೀಯ ವೃತ್ತಿಪರರ ಸಂಖ್ಯೆ 20,000ಕ್ಕೂ ಹೆಚ್ಚು ಹೆಚ್ಚಳ; ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಸಾಲ–ಆಧಾರಿತ ಬಂಡವಾಳ ಸಬ್ಸಿಡಿ ಯೋಜನೆ. ► ಯಾವ ರಾಜ್ಯಕ್ಕೆ ಏನೇನು ಸಿಕ್ಕಿದೆ? ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಗಳು • ಒಡಿಶಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡು: ಅಪರೂಪದ ಭೂ ಕಾರಿಡಾರ್ಗಳ ಸ್ಥಾಪನೆ • ಪಶ್ಚಿಮ ಬಂಗಾಳ: ದುರ್ಗಾಪುರವನ್ನು ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ನೊಳಗೆ ಸಂಯೋಜಿತ ನೋಡ್ ಆಗಿ ಅಭಿವೃದ್ಧಿಪಡಿಸುವುದು • ಗುಜರಾತ್: ಜಾಮ್ನಗರದಲ್ಲಿರುವ WHO ಗ್ಲೋಬಲ್ ಟ್ರೆಡಿಷನಲ್ ಮೆಡಿಕಲ್ ಸೆಂಟರ್ ಆಧುನೀಕರಣ • ಪೂರ್ವ ಪ್ರದೇಶ: ಹೊಸ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಸ್ಥಾಪನೆ ಮೂಲಸೌಕರ್ಯ ಮತ್ತು ಸಂಪರ್ಕ • ಹೈಸ್ಪೀಡ್ ರೈಲು ಕಾರಿಡಾರ್ಗಳು ವಿವಿಧ ರಾಜ್ಯಗಳಲ್ಲಿ • ಒಡಿಶಾ: 20 ರಾಷ್ಟ್ರೀಯ ಜಲಮಾರ್ಗಗಳ ಕಾರ್ಯಾಚರಣೆ • ಉತ್ತರ ಪ್ರದೇಶ ಮತ್ತು ಬಿಹಾರ: ಒಳನಾಡು ಹಡಗು ದುರಸ್ತಿ ಕೇಂದ್ರಗಳು ಪರಿಸರ ಪ್ರವಾಸೋದ್ಯಮ • ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು–ಕಾಶ್ಮೀರ: ಪರ್ವತ ಹಾದಿಗಳ ಅಭಿವೃದ್ಧಿ • ಆಂಧ್ರಪ್ರದೇಶ ಮತ್ತು ತಮಿಳುನಾಡು: ಪಕ್ಷಿ ವೀಕ್ಷಣಾ ಹಾದಿಗಳ ಅಭಿವೃದ್ಧಿ • ಒಡಿಶಾ, ಕರ್ನಾಟಕ, ಕೇರಳ: ಆಮೆ ಹಾದಿಗಳ ಅಭಿವೃದ್ಧಿ • ಈಶಾನ್ಯ ರಾಜ್ಯಗಳು: ಬೌದ್ಧ ಸರ್ಕ್ಯೂಟ್ ಅಭಿವೃದ್ಧಿ
ಬ್ಯಾರಿಗಳು ಎಲ್ಲೇ ಇದ್ದರೂ ತಮ್ಮ ಅಸ್ಮಿತೆ ಬಿಟ್ಟು ಕೊಡುವುದಿಲ್ಲ: ಸಿಎಂ ಸಿದ್ದರಾಮಯ್ಯ
ಬ್ಯಾರಿ ಕೂಟದ ಸಮಾರೋಪ ಸಮಾರಂಭ
ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳ: ಶರಣಪ್ಪ ಡಿ ಮಾನೇಗಾರ ಯರಗೋಳ
ಸೈದಾಪೂರ: ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಯೊಬ್ಬರ ಹಿತ ಕಾಯುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಪಿಸಿಸಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ ಮಾನೇಗಾರ ಅವರು ಅಭಿಪ್ರಾಯ ಪಟ್ಟರು. ಗುರುಮಠಕಲ್ ಮತಕ್ಷೇತ್ರದ ಸೈದಾಪೂರ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಶರಣಪ್ಪ ಡಿ ಮಾನೇಗಾರ, ನಿಷ್ಠಾವಂತ ಕಾರ್ಯಕರ್ತರ ದುಃಖದಲ್ಲಿ ಭಾಗಿಯಾಗಿ ಅವರಿಗೆ ಮಾನಸಿಕ ಬೆಂಬಲ ನೀಡಿ ಧೈರ್ಯ ತುಂಬುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು. ನೀಲಹಳ್ಳಿ ಗ್ರಾಮದ ಸಿದ್ರಾಮಪ್ಪ ಬಾಗ್ಲಿ, ಮಲ್ಲೇಶ ಪಾಪಣ್ಣೋರ್ , ಬೆಳಗುಂದಿ ಗ್ರಾಮದ ಮಾಜಿ ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಪಣ್ಣಗೌಡ ಪೊಲೀಸ್ ಪಾಟೀಲ್, ತೋರಣತಿಪ್ಪ ಗ್ರಾಮದ ಶ್ರೀನಿವಾಸ್ ಗೂಡೆಬಳ್ಳೂರು, ಬದ್ದೆಪಲ್ಲಿ ಗ್ರಾಮದ ಸೌರಪ್ಪ , ಅಜಲಾಪುರ ಗ್ರಾಮದ ಹುಸೇನಪ್ಪ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನೀಲಹಳ್ಳಿ ಗ್ರಾಮದ ಮಲ್ಲಯ್ಯನ ದೇವಸ್ಥಾನ, ನರಸಪ್ಪನ ಗುಡಿ, ದೊಡ್ಡಸಂಭ್ರ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನ, ಅಜಲಾಪೂರ ಗ್ರಾಮದ ಭೀಮರಾಯ ದೇವಸ್ಥಾನ, ಬದ್ದೆಪಲ್ಲಿ ಗ್ರಾಮದ ಮಹಿಬೂಬ್ ಸುಭಾನಿ ದರ್ಗಾಕ್ಕೆ ಭೇಟಿ ನೀಡಿ ಅವರು ದರ್ಶನ ಪಡೆದರು. ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರೆಡ್ಡಿ ಬೆನಕನಹಳ್ಳಿ, ಮಾಜಿ ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ಸುದರ್ಶನ ಪಾಟೀಲ್ ಜೈಗ್ರಾಮ, ಹಣಮಂತ ದೊಡ್ಡಮನಿ, ಜಗದೀಶ್ ಸಜ್ಜನ್, ದೇವಪ್ಪ ಗೌಡ ರಾಚನಳ್ಳಿ, ಬನ್ನಪ್ಪ ಹುಲಿಬೆಟ್ಟ, ಸಾಹೇಬ್ ಹುಸೇನಿ ನೀಲಹಳ್ಳಿ, ಡಾ. ಮೈಮುದ್ ಬಡಿಗೇರ್ ಬದ್ದೇಪಲ್ಲಿ, ರಘುಪತಿ ಗೌಡಗೇರಿ, ಮಲ್ಲು ಮಾಳಿಕೇರಿ, ಮಲ್ಲಯ್ಯ ಮೈಲಾಪುರ,ಬಸಲಿಂಗಪ್ಪ ನಾಯಕ ನೀಲಹಳ್ಳಿ, ಬಸವಂತ ಬೆಳಗುಂದಿ, ಶಿವಶಂಕರ ಬಾಗ್ಲಿ ನೀಲಹಳ್ಳಿ , ಸೈದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷ ಅಂಜನೇಯ ಕಟ್ಟಿಮನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ವಿಜಯ ಕಂದಳ್ಳಿ, ವೀರೇಶ್ ಸಜ್ಜನ ಕಡೇಚೂರ, ಮಣಿ ಕ್ಯಾತನಾಳ, ಸಚಿನ್ ಸೈದಾಪುರ, ವೆಂಕಟೇಶ್ ನಾಯಕ್ ಕೂಡ್ಲೂರ, ಪುಂಡಲಿಕ ಗೊಂದೆಡಗಿ, ತಿಮ್ಮಣ್ಣರೆಡ್ಡಿ ಬೆಳಗುಂದಿ, ಭೀಮರಾಯ ಉಜ್ಜೆಲಿ, ಮಂಜುನಾಥ ಮೇತ್ರಿ ಮಲ್ಹಾರ, ಸಾಬು ಪೂಜಾರಿ ರಾಂಪುರ, ಸಿದ್ದು ನಾಯಕ, ಸತೀಶ್ ಕಣೇಕಲ್ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶರಣಪ್ಪ ಮಾನೇಗಾರ ಅಭಿಮಾನಿಗಳು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ನಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗಿದೆ: ರಮಾನಾಥ ರೈ
ಮಂಗಳೂರು: ಕೇಂದ್ರ ಬಜೆಟ್ನಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಅದರಲ್ಲೂ ಕರಾವಳಿ ಕರ್ನಾಟಕಕ್ಕೆ ಏನನ್ನು ನೀಡಲಾಗಿಲ್ಲ. ದೇಶಕ್ಕೆ ಗರಿಷ್ಠ ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕಡಿಮೆ ಅನುದಾನವನ್ನು ಘೋಷಿಸಿದೆ. ಇದೊಂದು ದೂರದೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುರಪುರ| ಜಮೀನಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ: ಹಲವರಿಗೆ ಗಾಯ
ಸುರಪುರ: ರಸ್ತೆಯ ಮೇಲೆ ಕಟ್ಟಡ ಕಟ್ಟುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿರುವ ಘಟನೆ ನಗರದ ದಖನಿ ಮೊಹಲ್ಲಾದ ಟಿಪ್ಪು ಸುಲ್ತಾನ್ ವೃತ್ತದ ಬಳಿ ನಡೆದಿದೆ. ಸರಕಾರಿ ರಸ್ತೆಯ ಮೇಲೆ ಕಟ್ಟಡ ಕಟ್ಟಲು ಬುನಾದಿ ಅಗೆಯುತ್ತಿದ್ದು ಇದನ್ನು ಪ್ರಶ್ನಿಸಿದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಸರಕಾರಿ ಜಮೀನಾಗಿದ್ದು, ಈ ಕುರಿತು ಈಗಾಗಲೇ ನಗರ ಸಭೆಗೆ ಮತ್ತು ಪೊಲೀಸ್ ಠಾಣೆಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಈಗ ಕಟ್ಟಡಕ್ಕೆ ಅಡಿಪಾಯ ಹಾಕಲು ಮುಂದಾಗಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡಿರುವ ಇಬ್ರಾಹಿಂ ಆರೋಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಚಿವರ ವೇತನಗಳು, ಸರಕಾರಿ ಅತಿಥಿಗಳ ಆದರಾತಿಥ್ಯಕ್ಕೆ ಬಜೆಟ್ ನಲ್ಲಿ 1,102 ಕೋಟಿ ರೂ. ಮೀಸಲು
ಹೊಸದಿಲ್ಲಿ, ಫೆ. 1: ಕೇಂದ್ರ ಮುಂಗಡಪತ್ರದಲ್ಲಿ ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನಿ ಕಚೇರಿ ವೆಚ್ಚಗಳು ಮತ್ತು ಸರಕಾರಿ ಅತಿಥಿಗಳ ಆದರಾತಿಥ್ಯಕ್ಕಾಗಿ 1,102 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೊತ್ತವು 2025–26ರಲ್ಲಿ ಹಂಚಿಕೆ ಮಾಡಲಾಗಿದ್ದ 978.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗಿಂತ ಹೆಚ್ಚಾಗಿದೆ. ಮುಂಬರುವ ವಿತ್ತವರ್ಷದಲ್ಲಿ ಸಚಿವ ಸಂಪುಟದ ವೆಚ್ಚಗಳಿಗಾಗಿ 620 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ (ಕಳೆದ ವರ್ಷ 483.54 ಕೋಟಿ ರೂ.). ಇದು ಸಂಪುಟ ಸಚಿವರು, ಸಹಾಯಕ ಸಚಿವರು ಮತ್ತು ಮಾಜಿ ಪ್ರಧಾನಿಗಳ ವೇತನಗಳು, ಇತರ ಭತ್ಯೆಗಳು ಹಾಗೂ ಪ್ರಯಾಣ ವೆಚ್ಚಗಳನ್ನು ಒಳಗೊಂಡಿದೆ. ಇತರ ಹಂಚಿಕೆಗಳು: • ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ 256.19 ಕೋಟಿ ರೂ. • ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ 65 ಕೋಟಿ ರೂ.ವರೆಗೆ • ಸಂಪುಟ ಸಚಿವಾಲಯಕ್ಕೆ 80 ಕೋಟಿ ರೂ. • ಪ್ರಧಾನಿ ಕಚೇರಿಗೆ 73.52 ಕೋಟಿ ರೂ. • ಆದರಾತಿಥ್ಯ ಮತ್ತು ಮನೋರಂಜನೆ ವೆಚ್ಚಗಳಿಗಾಗಿ 5.76 ಕೋಟಿ ರೂ.
ಟಿ20 ವಿಶ್ವಕಪ್: ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್ ಮಾಡಿದ ಪಾಕಿಸ್ತಾನ! ಆಟವಾಡಲ್ಲ ಎಂದಿದ್ದೇಕೆ? ಟೂರ್ನಿ ಕತೆ ಏನು?
2026ರ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ. ಪಾಕಿಸ್ತಾನ ಸರ್ಕಾರ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಗೆ ತಂಡ ಕಳುಹಿಸಲು ಅನುಮತಿ ನೀಡಿದ್ದರೂ, ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ಸರ್ಕಾರ ನೀಡಿಲ್ಲ. ಪಾಕಿಸ್ತಾನ ಈ ಪಂದ್ಯವನ್ನು ಬಹಿಷ್ಕರಿಸಿದರೆ ಎರಡು ಅಂಕಗಳನ್ನು ಕಳೆದುಕೊಳ್ಳಲಿದೆ.
2026ರಲ್ಲಿ ಭಾರತದಲ್ಲಿ ಮೊದಲ Global Big Cat Summit: ವಿತ್ತ ಸಚಿವೆ ನಿರ್ಮಲಾ ಘೋಷಣೆ
ಹೊಸದಿಲ್ಲಿ, ಫೆ. 1: ಹುಲಿ, ಸಿಂಹ, ಚಿರತೆ ಮುಂತಾದ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಲು ಈ ವರ್ಷ ಭಾರತವು ಮೊದಲ Global Big Cat Summit ಅನ್ನು ಏರ್ಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಅದೇ ವೇಳೆ, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಕಡಲಾಮೆಗಳು ಸುರಕ್ಷಿತವಾಗಿ ಮೊಟ್ಟೆ ಇಡಲು ಸಾಧ್ಯವಾಗುವಂತೆ ‘ಆಮೆ ವಲಯ’ವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಶೃಂಗ ಸಮ್ಮೇಳನದಲ್ಲಿ 95 ದೇಶಗಳು ಭಾಗವಹಿಸಲಿವೆ. ಹಕ್ಕಿಗಳ ವೀಕ್ಷಣೆ ಮತ್ತು ಸಂರಕ್ಷಣೆಗಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪುಲಿಕಟ್ ಸರೋವರದುದ್ದಕ್ಕೂ ವಲಯವನ್ನು ಸ್ಥಾಪಿಸಲಾಗುವುದು ಎಂದರು. ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (ಐಬಿಸಿಎ) ಪ್ರಧಾನ ಕಚೇರಿ ಮತ್ತು ಕಾರ್ಯಾಲಯವನ್ನು ಸ್ಥಾಪಿಸುವುದಕ್ಕಾಗಿ ಭಾರತ ಕಳೆದ ವರ್ಷ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಯ ಉದ್ದೇಶದ ‘ಪ್ರಾಜೆಕ್ಟ್ ಟೈಗರ್’ ಯೋಜನೆಯು 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 2023ರ ಏಪ್ರಿಲ್ನಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಬಿಸಿಎಗೆ ಚಾಲನೆ ನೀಡಿದ್ದರು. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪ್ಯೂಮಾ ಪ್ರಾಣಿಗಳ ಸಂರಕ್ಷಣೆಗಾಗಿ ಐಬಿಸಿಎಯನ್ನು ಸ್ಥಾಪಿಸಲಾಗಿದೆ.
ಯಾದಗಿರಿ| ಹಾಲಗೇರಾ ಯಲ್ಲಮ್ಮದೇವಿ ಅದ್ದೂರಿ ರಥೋತ್ಸವ
ಯಾದಗಿರಿ: ವಡಗೇರಾ ತಾಲೂಕಿನ ಸುಕ್ಷೇತ್ರ ಹಾಲಗೇರಾ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿಯ ಭವ್ಯ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷದ ನಡುವೆ ಭಕ್ತಿ ಸಂಭ್ರಮದಿಂದ ರವಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಹಾಲಗೇರಾ ಗ್ರಾಮಕ್ಕೆ ಆಗಮಿಸಿ ಶ್ರೀ ಯಲ್ಲಮ್ಮದೇವಿಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಹಲಗೆ, ಡೊಳ್ಳು, ಬಾಜಾಭಜಂತ್ರಿ ಸೇರಿದಂತೆ ಮಂಗಲವಾದ್ಯಗಳನಾದದೊಂದಿಗೆ ಇಡೀ ಹಾಲಗೇರಾ ಗ್ರಾಮ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ಸುಡು ಬಿಸಿಲಿನ ನಡುವೆಯೂ ಭಕ್ತರು ಬಸ್, ಕಾರು, ಜೀಪು ಹಾಗೂ ಆಟೋಗಳಲ್ಲಿ ತಂಡೋಪತಂಡವಾಗಿ ಗ್ರಾಮಕ್ಕೆ ಧಾವಿಸಿ ಬಂದರು. ಸೂರ್ಯ ಮುಳುಗುವ ವೇಳೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡು ಕಾದು ನಿಂತಿತ್ತು. ಹಾಲಗೇರಾ ಯಲ್ಲಮ್ಮದೇವಿಯ ರಥೋತ್ಸವ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿಲ್ಲ. ವೇದ್ಯಕೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಠಿಯಿಂದ ದೇಶದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಹಬ್ ಮತ್ತು ಆಯುರ್ವೇದ ಕೇತ್ರದ ಅಭಿವೃದ್ಧಿಗೆ ಮೂರು ಆಯುರ್ವೇದ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸಲಾಗುವುದು ಘೋಷಿಸಿದೆ. ಆದರೆ ಅದು ಎಲ್ಲಿ ಎಂದು ಸ್ಪಷ್ಟಪಡಿಸಿಲ್ಲ. ಈ ಪೈಕಿ ಒಂದು ವೈದ್ಯಕೀಯ ಹಬ್ ಮತ್ತು ಒಂದು ಆಯುರ್ವೇದ ವಿವಿಯನ್ನು ಕೇಂದ್ರ ಸರಕಾರವು ಕರ್ನಾಟಕಕ್ಕೆ ನೀಡಲಿ ಎಂದು ಆಗ್ರಹಿಸುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೇಂದ್ರ ಸರಕಾರ ಕೇವಲ ಗುಜರಾತ್ನ ಅಭಿವೃದ್ಧಿ ಕಡೆಗೆ ಗಮನ ನೀಡಿದರೆ ಸಾಲದು. ಬೇರೆ ರಾಜ್ಯಗಳ ಕಡೆಗೂ ಗಮನ ಹರಿಸಿದರೆ ಉತ್ತಮ. ಬೆಂಗಳೂರು-ಮಂಗಳೂರು ನಡುವೆ ಮೂರು ವಂದೇ ಭಾರತ್ ರೈಲು ಪ್ರಾರಂಭಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಒಂದು ರೈಲನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿಲ್ಲ. ರಬ್ಬರ್ ಬೆಳೆಯನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸುವಂತೆ ಕೇಂದ್ರಕ್ಕೆ ಆಗ್ರಹಿಸಲಾಗಿತ್ತು. ಆದರೆ ಅದನ್ನು ಪರಿಗಣಿಸಲಾಗಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ: ಐವನ್ ಡಿಸೋಜ
ಮಂಗಳೂರು : ಕೇಂದ್ರ ಸರಕಾರ ಮಂಡಿಸಿದ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ನೀಡಿಲ್ಲ. ಹಿಂದೆ ಘೋಷಿಸಿದ ಯೋಜನೆಗಳಿಗೆ ಅನುದಾನ ಒದಗಿಸಿಲ್ಲ. ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ್ಕೆ ದೊಡ್ಡ ಮೋಸ ಮಾಡಿದೆ. ಕರ್ನಾಟಕ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ರೀತಿಯಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಎನ್ಐಟಿಕೆಯನ್ನು ಐಐಟಿ ಮಾಡುವ ಬೇಡಿಕೆಗೆ ಸ್ಪಂದಿಸಿಲ್ಲ. ಕರ್ನಾಟಕ್ಕೆ ಒಂದು ದೊಡ್ಡ ಚೊಂಬು ಕೊಟ್ಟಿದ್ದಾರೆ. ಆದರೆ ಚೊಂಬಿನಲ್ಲಿ ನೀರಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ಕನಕಪುರ : ಕೇಂದ್ರ ಸರಕಾರದ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೆ ಕೊಡುಗೆ ಕೊಟ್ಟಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ಬೆಂಗಳೂರಿಗೆ ಹೈಸ್ಪೀಡ್ ರೈಲು ಎಂದು ಹೇಳಿದ್ದಾರೆ. ಆದರೆ, ಯಾವ ಹೈಸ್ಪೀಡ್ ರೈಲೂ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ರವಿವಾರ ಕನಕಪುರದಲ್ಲಿ ಕೇಂದ್ರ ಸರಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಹೈಸ್ಪೀಡ್ ರೈಲು ಯೋಜನೆ ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.50:50 ಅನುದಾನ ಪ್ರಮಾಣದಲ್ಲಿ ಅನುಷ್ಠಾನ ಮಾಡುವುದು ಸಾಧ್ಯವಿಲ್ಲ. ಕೇಂದ್ರ ಸರಕಾರ ಈ ಯೋಜನೆಗೆ ಶೇ.90 ಹಾಗೂ ರಾಜ್ಯದ ಪಾಲು ಶೇ.10ರಷ್ಟು ನಿಗದಿ ಮಾಡಿದರೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಹೇಳಿದ್ದರು. ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆ ಇತ್ತು. ಆದರೆ, ಯಾವುದೆ ಗುರುತರವಾದ ಕೊಡುಗೆಯನ್ನು ನೀಡಿಲ್ಲ ಎಂದು ಶಿವಕುಮಾರ್ ಹೇಳಿದರು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ಬದಲಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಅನುಪಾತ ಶೇ.60:40 ಹಂಚಿಕೆಯಿಂದ ಜಾರಿಗೊಳಿಸಲು ಸಾಧ್ಯವೇ ಇಲ್ಲ. ರಾಜ್ಯ ಸರಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದರಿಂದ ಯಾವ ಸರಕಾರಗಳು ಬಂಡವಾಳ ಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಬಳಕೆಗೆ ಬಜೆಟ್ನಲ್ಲಿ ಒತ್ತು ನೀಡಿರುವ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಮನರೇಗಾ ಯೋಜನೆಗೂ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ ಎಂದಿದ್ದರು. ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ. ಈಗ ಎಐ ಬಳಕೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ, ವ್ಯವಸಾಯಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಟೀಕಿಸಿದರು. ಪ್ರಗತಿ ಆಧಾರಿತ, ಜನಕೇಂದ್ರಿತ ಆಯವ್ಯಯ: ಪ್ರಹ್ಲಾದ್ ಜೋಶಿ ಕೇಂದ್ರ ಬಜೆಟ್ 2026-27ರ ಆರ್ಥಿಕ ಮುನ್ನೋಟವು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ ಕನಸಿಗೆ ಪೂರಕ ಮತ್ತು ಭವ್ಯ ಭಾರತದ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿದೆ. ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದ್ದು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮಥ್ರ್ಯ ಬಲಪಡಿಸುವಿಕೆ ಮೇಲೆ ಕೇಂದ್ರೀಕೃತವಾಗಿದೆ. ವ್ಯವಹಾರ ಪ್ರಕ್ರಿಯೆಗಳ ಸರಳೀಕರಣ, ಸಹಕಾರಿ ಕ್ಷೇತ್ರಕ್ಕೆ ಹೊಸ ಕಾರ್ಯಕ್ರಮಗಳು ಮತ್ತು ಐಟಿ ಕ್ಷೇತ್ರಕ್ಕೆ ಬಲವಾದ ನೀತಿ ಈ ಬಜೆಟ್ನ ಪ್ರಮುಖ ಅಂಶಗಳು. ಒಟ್ಟಿನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹಾಕದೇ, ಸಮತೋಲನ ಮತ್ತು ನವೀನತೆಯಿಂದ ಕೂಡಿದ ಈ ಬಜೆಟ್ ಭಾರತವನ್ನು ಅಭಿವೃದ್ಧಿಶೀಲ ಮತ್ತು ಆತ್ಮನಿರ್ಭರ ಭವಿಷ್ಯದತ್ತ ದೃಢ ಸಂಕಲ್ಪದೊಂದಿಗೆ ಕೊಂಡೊಯ್ಯುತ್ತದೆ’ ‘ತೆಂಗು ಹಾಗೂ ಗೋಡಂಬಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ. ಟೆಕ್ಸ್ ಟೆಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು. ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ. 2047ರ ವೇಳೆಗೆ ಜಾಗತಿಕ ಐಟಿ ಕ್ಷೇತ್ರದಲ್ಲಿ ಭಾರತದ ಪಾಲು ಶೇ.10ಕ್ಕೆ ಏರಿಸುವ ಗುರಿ - ಇದರಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ. ಉತ್ತರ ಭಾರತದಲ್ಲಿ ಹೊಸ ನಿಮ್ಹಾನ್ಸ್ ಸ್ಥಾಪನೆ - ಇದರಿಂದ ಸ್ಥಳೀಯರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಲಭ್ಯ. ಒಟ್ಟಾರೆಯಾಗಿ ರೈತರಿಂದ ಹಿಡಿದು ಐಟಿ ವೃತ್ತಿಪರರವರೆಗೆ ಎಲ್ಲರನ್ನೂ ಒಳಗೊಂಡ ಭವಿಷ್ಯದ ಬಜೆಟ್ ಇದಾಗಿದೆ’ -ತೇಜಸ್ವಿ ಸೂರ್ಯ, ಸಂಸದ
ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ : ಸಚಿವ ದಿನೇಶ್ ಗುಂಡೂರಾವ್
ಬ್ಯಾರೀಸ್ ಸೆಂಟ್ರಲ್ ಕಮಿಟಿ ವತಿಯಿಂದ ʼಬ್ಯಾರಿ ಕೂಟ-2026ʼ
ಕನಕಗುರುಪೀಠ ಜಾತ್ಯಾತೀತ, ಬೇಡಿಕೆಗಳಿಗೆ ಹೆಚ್ಚಿನ ಅನುದಾನ: ಸಿಎಂ ಸಿದ್ದರಾಮಯ್ಯ ಭರವಸೆ
ರಾಯಚೂರು: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆಧ್ಯಾತ್ಮ ಹಾಗೂ ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಬೇರೂರಿಸುವ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಗುರುಪೀಠದ ವಿವಿಧ ಬೇಡಿಕೆಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ದೇವದುರ್ಗದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ
ವಿಟ್ಲ: ಆಟೋ ಚಾಲಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು
ವಿಟ್ಲ: ವಿಟ್ಲ ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರು ಹೋಗುತ್ತಿದ್ದ ವೇಳೆ ಮೂವರು ಮುಸುಕುದಾರಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪಡ್ನೂರು ಗ್ರಾಮದ ನಿವಾಸಿ, ಆಟೋ ಚಾಲಕ ಇಸುಬು ಎಂಬವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದು ಇಸುಬು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ವಿಟ್ಲ ಕಸಬಾ ಗ್ರಾಮದ ಕೆ ರವೀಶ್ ಕುಲಾಲ್(40), ಅಶೋಕ(42) ಎಂಬವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಚಾಲಕ ಇಸುಬು ಅವರು ಶನಿವಾರ ಮಹಿಳೆಯೊಬ್ಬರನ್ನು ಮನೆಗೆ ತಲುಪಿಸಿ ಹಿಂತಿರುಗುತ್ತಿದ್ದರು. ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆ ಬಳಿ ಆಟೋ ಬರುತ್ತಿದ್ದಂತೆ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಆಟೋ ಚಾಲಕನ ತಡೆದು ವಿಚಾರಿಸಿದ್ದಾರೆ. ನಾನು ಬಾಡಿಗೆ ಹೋಗಿ ಬರುತ್ತಿದ್ದೇನೆಂದು ಹೇಳಿದರೂ ಕೇಳಿಸಿಕೊಳ್ಳದ ಮುಸುಕುಧಾರಿಗಳು ಚಾಲಕನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ಥಳಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಗಾಯಾಳು ಆರೋಪಿಸಿದ್ದಾರೆ.
ಮಜೂರು: ಮಸೀದಿಯ ವಿವಿಧ ಕಾಮಗಾರಿಗಳ ಉದ್ಘಾಟನೆ
ʼನೋಡ ಬನ್ನಿ ನಮ್ಮ ಮಸೀದಿʼ ಕಾರ್ಯಕ್ರಮ
ಪುತ್ತಿಗೆ: ಅಹ್ದಲ್ ಉರೂಸ್, ಸನದುದಾನ ಸಮಾವೇಶ
ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ನ ಸಾರಥಿ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಇಪ್ಪತ್ತನೇ ಉರೂಸ್ ಮುಬಾರಕ್ ಮತ್ತು ಸನದುದಾನ ಸಮಾವೇಶವು ಸಾವಿರಾರು ಜನರಿಗೆ ಅನ್ನದಾನದೊಂದಿಗೆ ಸಮಾಪ್ತಿಗೊಂಡಿತು. ಸಂಜೆ ಐದು ಗಂಟೆಗೆ ಆರಂಭವಾದ ಅಹ್ದಲಿಯ್ಯ ಆಧ್ಯಾತ್ಮಿಕ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಪ್ರಮುಖರು ಭಾಗವಹಿಸಿದ್ದರು. ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಅಬ್ದುಲ್ಲಾ ಕುಂಞಿ ಫೈಜಿ ಅವರ ಅಧ್ಯಕ್ಷತೆಯಲ್ಲಿ ಮರ್ಕಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಜಿ ಉದ್ಘಾಟಿಸಿದರು. ಸಮಸ್ತ ಅಧ್ಯಕ್ಷ ರೈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸನದುದಾನ ಪ್ರಭಾಷಣ ಮಾಡಿದರು. ಸಯ್ಯಿದ್ ಅಲಿ ಬಾಫಖಿ ತಂಙಳ್, ವಿ. ಪಿ. ಎಂ. ಫೈಜಿ ವಿಲ್ಯಪ್ಪಳ್ಳಿ, ಕೆ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ, ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಎಣ್ಮೂರು, ಮುಹಮ್ಮದ್ ಫಾಜಿಲ್ ರಜ್ವಿ ಕಾವಲ್ ಕಟ್ಟೆ, ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಚೂರಿ, ಸಯ್ಯಿದ್ ಅಬ್ದುಲ್ ಅಸೀಸ್ ತಂಙಳ್ ಹೈದ್ರೂಸಿ, ಹಾಜಿ ಅಮೀರಲಿ ಚೂರಿ, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಹುಸೈನ್ ಸಅದಿ ಕೆ. ಸಿ. ರೋಡ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಸಯ್ಯಿದ್ ಹಬೀಬ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಹುಸೈನ್ ಅಮೀನ್ ತಂಙಳ್, ಸಿ. ಕೆ. ರಾಶಿದ್ ಬುಖಾರಿ, ಸಯ್ಯಿದ್ ಖಾಸಿಂ ತಂಙಳ್ ಪಾಜೂರು, ಸಯ್ಯಿದ್ ಜುನೈದ್ ತಂಙಳ್ ಮಟ್ಟೂಲ್, ಸಯ್ಯಿದ್ ಯು. ಪಿ. ಎಸ್. ತಂಙಳ್ ಅರ್ಲಡ್ಕ, ಮೊಯ್ತು ಸಅದಿ ಚೇರೂರು, ಕಾಸಿಂ ಮದನಿ ಕರಾಯ, ಎ. ಕೆ. ಎಂ. ಅಶ್ರಫ್ ಎಂ. ಎಲ್. ಎ, ಹಂಸ ಸಖಾಫಿ ಬಂಟ್ವಾಳ, ಅಬ್ದುಸ್ಸಲಾಂ ದಾರಿಮಿ ಕುಬಣೂರು, ಇಸ್ಮಾಯಿಲ್ ಸಅದಿ ಮಳ್ಳೂರು, ಶೇಖ್ ಬಾವ ಮಂಗಳೂರು, ಕರೀಮ್ ಹಾಜಿ ಚಾಲಿಯಂ, ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ, ಮೂಸಾ ಸಖಾಫಿ, ಅಬೂಬಕ್ಕರ್ ಕಾಮಿಲ್ ಸಖಾಫಿ, ಉಮರ್ ಸಖಾಫಿ, ಲತೀಫ್ ಸಅದಿ ಉರುಮಿ, ಸಿದ್ದೀಕ್ ಮೊಂಡುಗೋಳಿ, ರಫೀಕ್ ಸಅದಿ ದೇಲಂಪಾಡಿ, ಬಶೀರ್ ಪುಳಿಕೂರು, ಸುಲೈಮಾನ್ ಕರಿವೆಳ್ಳೂರು, ಅಬ್ದುರ್ರಜಾಕ್ ಸಖಾಫಿ ಕೊಟ್ಟಕುನ್ನು, ಅಬ್ದುಲ್ ಖಾದರ್ ಸಅದಿ ಚುಳ್ಳಿಕಾನಂ, ಸಿ. ಎನ್. ಅಬ್ದುಲ್ ಖಾದರ್ ಮಾಸ್ಟರ್, ಅಸೀಸ್ ಕಳತ್ತೂರು ಮೊದಲಾದವರು ಭಾಗವಹಿಸಿದ್ದರು. ಈ ವರ್ಷ ಮುಹಿಮ್ಮಾತ್ನಿಂದ ಧಾರ್ಮಿಕ ಶಿಕ್ಷಣ ಪೂರೈಸಿದ 68 ಹಿಮಮಿಗಳು ಮತ್ತು 8 ಹಾಫಿಳ್ಗಳು ಸನದು ಸ್ವೀಕರಿಸಿದರು.
ಕೇಂದ್ರ ಬಜೆಟ್ 2026 | ಆಯುಷ್ ಸಚಿವಾಲಯಕ್ಕೆ ಶೇ.20ರಷ್ಟು ಹೆಚ್ಚಿನ ಹಂಚಿಕೆ
ಹೊಸದಿಲ್ಲಿ, ಫೆ. 1: 2026–27ರ ಮುಂಗಡಪತ್ರದಲ್ಲಿ ಆಯುಷ್ ಸಚಿವಾಲಯಕ್ಕೆ 4,408.93 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 3,671.82 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.20ರಷ್ಟು ಏರಿಕೆಯಾಗಿದೆ. ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆಯನ್ನೂ ಸರ್ಕಾರ ಪ್ರಕಟಿಸಿದೆ. ರವಿವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗಾಗಲೇ ವಿಶ್ವದ ಹಲವು ಭಾಗಗಳಲ್ಲಿ ಗೌರವಕ್ಕೆ ಪಾತ್ರವಾಗಿರುವ ಪ್ರಾಚೀನ ಭಾರತೀಯ ಯೋಗ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಟ್ಟಕ್ಕೆ ತೆಗೆದುಕೊಂಡು ಹೋದಾಗ ಅದು ಸಾಮೂಹಿಕ ಜಾಗತಿಕ ಮನ್ನಣೆಯನ್ನು ಪಡೆದಿತು. ಕೋವಿಡ್ ನಂತರ ಅದು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಿದರು. ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನು ರಫ್ತು ಮಾಡುವುದು ಮೂಲಿಕೆಗಳನ್ನು ಬೆಳೆಯುವ ರೈತರಿಗೆ ಮತ್ತು ಅವುಗಳನ್ನು ಸಂಸ್ಕರಿಸುವ ಯುವಜನತೆಗೆ ನೆರವಾಗುತ್ತದೆ ಎಂದರು. ಜಾಗತಿಕ ಬೇಡಿಕೆಯನ್ನು ಪೂರೈಸಲು ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಆಯುಷ್ ಫಾರ್ಮಸಿಗಳು ಮತ್ತು ಔಷಧಿ ಪರೀಕ್ಷಾ ಪ್ರಯೋಗಾಲಯಗಳ ಉನ್ನತೀಕರಣ, ಹೆಚ್ಚು ನುರಿತ ಸಿಬ್ಬಂದಿಯನ್ನು ಲಭ್ಯವಾಗಿಸುವುದು ಮತ್ತು ಜಾಮನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದನ್ನು ಅವರು ಪ್ರಸ್ತಾಪಿಸಿದರು. ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಷ್ಟ್ರೀಯ ಆಯುಷ್ ಮಿಷನ್ಗೆ 1,300 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 780.96 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ.66.5ರಷ್ಟು ಏರಿಕೆಯಾಗಿದೆ. ಇದೇ ವೇಳೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಹಂಚಿಕೆಯನ್ನು ಶೇ.12ರಷ್ಟು ಹೆಚ್ಚಿಸಲಾಗಿದ್ದು, ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗೆ ಹಂಚಿಕೆಯನ್ನು 279.24 ಕೋಟಿ ರೂ.ಗಳಿಂದ 219.05 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ.
ಸುರತ್ಕಲ್: ಮುಮ್ತಾಝ್ ಅಲಿ ಸ್ಮರಣಾರ್ಥ ಬಸ್ ತಂಗುದಾಣ, ಕುಡಿಯುವ ನೀರಿನ ಘಟಕ ಉದ್ಘಾಟನೆ
ಸುರತ್ಕಲ್: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್.ವೈ.ಎಸ್. ಎಸ್ಸೆಸ್ಸೆಫ್ 7ನೇ ಬ್ಲಾಕ್ ಯುನಿಟ್ ಹಾಗೂ ಬದ್ರಿಯಾ ದಫ್ ಕಮೀಟಿ ಕೃಷ್ಣಾಪುರ ಇದರ ವತಿಯಿಂದ ಮರ್ಹೂಂ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಅವರ ಸ್ಮರಣಾರ್ಥ ಕೃಷ್ಣಾಪುರ ಕುಕ್ಕಾಡಿಯ ಬದ್ರಿಯಾ ಬಸ್ ತಂಗುದಾಣದಲ್ಲಿ ನಿರ್ಮಾಣಗಿಗೊಂಡ ನೂತನ ಶುದ್ಧ ಕುಡಿಯುವ ನೀರಿನ ಘಟಕವು ರವಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಕೇಂದ್ರ ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿದರು. ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಶಾಸಕ ಬಿ.ಎ ಮೊಯ್ದೀನ್ ಬಾವಾ ಅವರು ಉದ್ಘಾಟಿಸಿದರು. ಬದ್ರಿಯಾ ದಫ್ ಕಮೀಟಿಯ ಗೌರವಾಧ್ಯಕ್ಷ ಬಿ. ಮುಹಮ್ಮದ್ ಅಲಿ, ಕೇಂದ್ರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಝಾಕೀರ್ ಹುಸೈನ್, ಮಾಜಿ ಪ್ರ.ಕಾರ್ಯದರ್ಶಿ ಎಂ.ಎಸ್. ಶರೀಫ್, ಎಸ್.ವೈ.ಎಸ್ ದ.ಕ ಜಿಲ್ಲಾ ಸದಸ್ಯ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ಅಧ್ಯಕ್ಷ ಅನೀಸ್ ಮರ್ಝೂಕಿ, ಎಸ್ ವೈಎಸ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಇರ್ಫಾನ್ ನೂರಾನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಮನ್ಸೂರ್ ರೈಹಾನ್, ಲುಕ್ಮಾನಿಯ ಉಸ್ತಾದ್ ಉಪಸ್ಥಿತರಿದ್ದರು.
ಬಜೆಟ್ನಲ್ಲಿ ಕರ್ನಾಟಕಕ್ಕೆ ಚೊಂಬು: ಡಾ.ಮಂಜುನಾಥ ಭಂಡಾರಿ
ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಇದು. ವಿಕಸಿತ ಭಾರತ ಎಂದು ಬರೀ ಹೇಳಿಕೆಗಳಿಂದ ಕೂಡಿದ್ದು, ದೇಶದ ಸಾಮಾನ್ಯ ಜನತೆಗೆ ಮತ್ತೊಮ್ಮೆ ನಿರಾಶೆಯನ್ನುಂಟು ಮಾಡಿದೆ ಎಂದು ಶಾಸಕರು, ಕರ್ನಾಟಕ ವಿಧಾನ ಪರಿಷತ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ.ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ರಾಜ್ಯಕ್ಕೆ ಕೇಂದ್ರ ಸರಕಾರ ಚೊಂಬು ನೀಡಿದೆ. ಬಜೆಟ್ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್ ಹೊಂದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Uttar Pradesh | ಮರ್ಯಾದೆಗೇಡು ಹತ್ಯೆ; ವಿದ್ಯುತ್ ಶಾಕ್ ನೀಡಿ ಯುವತಿಯ ಹತ್ಯೆಗೈದ ಆರೋಪ!
ಗೋಂಡಾ, ಫೆ. 1: ದೂರದ ಸಂಬಂಧಿಯೋರ್ವರನ್ನು ವಿವಾಹವಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಹತ್ಯೆಗೈದ ಘಟನೆ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಥೊರ್ಹಾನ್ಸ್ ಗ್ರಾಮದ ಮನೆಯೊಂದರಲ್ಲಿ ಯುವತಿಯೊಬ್ಬಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಬಗ್ಗೆ ಶುಕ್ರವಾರ ಮಾಹಿತಿ ಸ್ವೀಕರಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ. 112ಕ್ಕೆ ಮಾಡಲಾದ ಕರೆಯಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಮಾಹಿತಿ ಸ್ವೀಕರಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದರು. ಪೊಲೀಸ್ ತಂಡ ಹಾಗೂ ಶ್ವಾನ ದಳದ ನೆರವಿನಿಂದ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಹಾಗೂ ಇತರ ಪುರಾವೆಗಳ ಆಧಾರದಲ್ಲಿ ಯುವತಿಯ ತಂದೆ ಚಂದ್ರ ಪ್ರಕಾಶ್ ಮತ್ತು ಸಹೋದರ ರಾಹುಲ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಭಾವಿ ಪತಿ ಪರಮೇಶ್ವರ್ ಪಾಠಕ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಕೆ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಲು ಬಯಸಿದ್ದಳು. ಆದ್ದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಚಂದ್ರ ಪ್ರಕಾಶ್ ಹಾಗೂ ರಾಹುಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜನವರಿ 30ರಂದು ಆಕೆ ಮನೆಯಿಂದ ತೆರಳಲು ತಯಾರಿ ನಡೆಸುತ್ತಿದ್ದಳು. ಇದನ್ನು ತಿಳಿದ ತಂದೆ ಹಾಗೂ ಸಹೋದರ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಆಕೆಯ ಕೈಕಾಲುಗಳನ್ನು ಕಟ್ಟಿದರು, ಬಾಯಿಯನ್ನು ಬಿಗಿದರು; ನಂತರ ವಿದ್ಯುತ್ ತಂತಿಯಿಂದ ಆಘಾತ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ: ಹರೀಶ್ ಕುಮಾರ್
‘‘ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಯಾವುದೇ ಹೊಸ ಹೊಸ ಯೋಜನೆಗಳಿಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಹಾಗೆ ಒಟ್ಟು ಬಜೆಟ್ನಲ್ಲಿ 16.9 ಲಕ್ಷ ಕೋಟಿ ಸಾಲ ಮಾಡುತ್ತಿರುವ ಮೋದಿ-ನಿರ್ಮಲಾ ಸೀತಾರಾಮನ್ ಅವರ ಸಾಲದ ಸರಕಾರ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ -ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಕೆಳ, ಮಧ್ಯಮ ಕುಟುಂಬಗಳಿಗೆ ಹೊರೆಯಾಗಿದೆ. ಕೇಂದ್ರ ಸರಕಾರ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ತಾರತಮ್ಯ ನೀತಿಯನ್ನು ಮತ್ತೆ ಮುಂದುವರಿಸುತ್ತಿದ್ದು, ಮತ್ತೊಮ್ಮೆ ಕರ್ನಾಟಕಕ್ಕೆ ನಿರ್ಮಲಮ್ಮನ ಉಂಡೆನಾಮ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Jharkhand | ವ್ಯಕ್ತಿಯ ಥಳಿಸಿ ಹತ್ಯೆ
ರಾಂಚಿ, ಫೆ. 1: ವಿವಾದವೊಂದರ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರನ್ನು ಅವರ ನೆರೆಯವರು ಥಳಿಸಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಲಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ದಮಾನ್ ಕಂಪೌಂಡ್ ಪ್ರದೇಶದ ದೋಬಿ ಘಾಟ್ ಸಮೀಪ ಶನಿವಾರ ನಡೆದಿದೆ. ಮೃತಪಟ್ಟವರನ್ನು ಮಾಧೇಶ್ವರ ಸಿಂಗ್ (55–60) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. “ಇಬ್ಬರು ನೆರೆಹೊರೆಯವರ ನಡುವೆ ವಿವಾದ ಇತ್ತು. ಮಾಧೇಶ್ವರ ಸಿಂಗ್ ಅವರ ಪುತ್ರ ಅಂಕಿತ್ ಸಿಂಗ್ ಹಾಗೂ ಅವರ ಸಹೋದರರಾದ ಅಮಾನ್, ಅನಿಕೇತ್ ಒರಾನ್ ನಡುವೆ ಕೆಲವು ವಿಷಯಕ್ಕೆ ಸಂಬಂಧಿಸಿ ಜಗಳ ನಡೆಯಿತು. ನಂತರ ಅದು ಹಿಂಸಾಚಾರಕ್ಕೆ ತಿರುಗಿತು. ಅವರ ಜಗಳವನ್ನು ತಡೆಯಲು ಮಾಧೇಶ್ವರ ಸಿಂಗ್ ಮಧ್ಯೆ ಪ್ರವೇಶಿಸಿದಾಗ ಅಮಾನ್ ಹಾಗೂ ಅನಿಕೇತ್ ಒರಾನ್ ಅವರು ಅವರನ್ನು ತೀವ್ರವಾಗಿ ಥಳಿಸಿದರು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು” ಎಂದು ಡಿಎಸ್ಪಿ (ನಗರ) ಕೆ.ವಿ. ರಾಮನ್ ತಿಳಿಸಿದ್ದಾರೆ. ಮಾಧೇಶ್ವರ ಸಿಂಗ್ ಅವರನ್ನು ಕೂಡಲೇ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ. ಲಾಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೂಪೇಶ್ ಕುಮಾರ್ ಸಿಂಗ್ ಅವರು, ಅಮಾನ್ ಹಾಗೂ ಅನಿಕೇತ್ ಒರಾನ್ನನ್ನು ಬಂಧಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ MGNREGAಗೆ 30,000 ಕೋಟಿ ರೂ.!
ಹೊಸದಿಲ್ಲಿ, ಫೆ.1: ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರವು ಅದಕ್ಕಾಗಿ ಮುಂಗಡಪತ್ರದಲ್ಲಿ 95,692.31 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದೇ ವೇಳೆ MGNREGAಕ್ಕೆ 30,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ವಿಬಿ–ಜಿ ರಾಮ್ ಜಿ ಜಾರಿಗೊಳ್ಳುವವರೆಗೆ MGNREGA ಯೋಜನೆ ಮುಂದುವರಿಯಲಿದ್ದು, ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಜೆಟ್ ದಾಖಲೆಗಳಂತೆ ಸಚಿವಾಲಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 1,94,368.81 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ (ಕಳೆದ ವರ್ಷ 1,86,995.61 ಕೋಟಿ ರೂ.). • ಭೂ ಸಂಪನ್ಮೂಲಗಳ ಇಲಾಖೆಗೆ 2,654.33 ಕೋಟಿ ರೂ. • ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (ಪಿಎಂಜಿಎಸ್ವೈ) 19,000 ಕೋಟಿ ರೂ. • ದೀನದಯಾಳ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ಗೆ 19,200 ಕೋಟಿ ರೂ. • ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (ಪಿಎಂಎವೈ–ಜಿ)ಗೆ 54,916.70 ಕೋಟಿ ರೂ.
ಕೇಂದ್ರ ಬಜೆಟ್ | ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದರೂ ಭಾರತದ ಹವಾಮಾನ ಹೋರಾಟಕ್ಕೆ ಕನಿಷ್ಠ ಪ್ರೋತ್ಸಾಹ
ಹೊಸದಿಲ್ಲಿ, ಫೆ.1: ಹೆಚ್ಚುತ್ತಿರುವ ಉಷ್ಣ ಅಲೆಗಳು, ಪ್ರವಾಹಗಳು, ಚಂಡಮಾರುತಗಳು ಮತ್ತು ವಾಯು ಮಾಲಿನ್ಯ ತುರ್ತು ಪರಿಸ್ಥಿತಿಗಳಿಂದಾಗಿ ಭಾರತವು ತತ್ತರಿಸುತ್ತಿದ್ದರೂ 2026ರ ಕೇಂದ್ರ ಮುಂಗಡಪತ್ರದಲ್ಲಿ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಅನುದಾನವನ್ನು ಸೀಮಿತ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಇದು ಹವಾಮಾನ ಬದಲಾವಣೆ ವಿರುದ್ಧದ ಹೋರಾಟ ಅಗತ್ಯವಿರುವ ಗಮನವನ್ನು ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2026–27ರಲ್ಲಿ ಪರಿಸರ ಸಚಿವಾಲಯಕ್ಕೆ 3,759.46 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದ್ದು, ಇದು ಹಿಂದಿನ ವರ್ಷದ ಬಜೆಟ್ ಅಂದಾಜು (3,481.61 ಕೋಟಿ ರೂ.)ಗೆ ಹೋಲಿಸಿದರೆ ಸುಮಾರು ಶೇ.8ರಷ್ಟು (278 ಕೋಟಿ ರೂ.) ಹೆಚ್ಚಾಗಿದೆ. ಕಾಗದದ ಮೇಲೆ ಈ ಹೆಚ್ಚಳ ಗಮನಾರ್ಹವೆಂಬಂತೆ ಕಂಡುಬರುತ್ತಿದ್ದರೂ ಭಾರತದ ಹವಾಮಾನ ಮತ್ತು ಪರಿಸರ ಸಮಸ್ಯೆಗಳ ವ್ಯಾಪ್ತಿಯನ್ನು ಪರಿಗಣಿಸಿದರೆ ಒಟ್ಟಾರೆ ಅನುದಾನದ ಮೊತ್ತ ಕಡಿಮೆಯೇ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೊಡ್ಡ ಬದಲಾವಣೆಗಿಂತ ನಿರಂತರತೆಯೇ ಹೆಚ್ಚಾಗಿ ಕಂಡುಬರುತ್ತದೆ. ಬಂಡವಾಳ ವೆಚ್ಚವು 174.39 ಕೋಟಿ ರೂ.ಗಳಿಂದ 222.80 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಸಂಶೋಧನಾ ಮೂಲಸೌಕರ್ಯ ಮತ್ತು ಮೇಲ್ವಿಚಾರಣಾ ಸೌಲಭ್ಯಗಳಂತಹ ದೀರ್ಘಕಾಲೀನ ಆಸ್ತಿಗಳಲ್ಲಿ ಕೆಲವು ಹೆಚ್ಚುವರಿ ಹೂಡಿಕೆಗಳನ್ನು ಸೂಚಿಸುತ್ತದೆ. ಆದಾಯ ವೆಚ್ಚವೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದು ಹೆಚ್ಚಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಮತ್ತು ಯೋಜನೆಗಳಿಗೆ ಬಳಕೆಯಾಗಲಿದೆ. ಬಜೆಟ್ ನ ಬಹುಭಾಗ ನಿಯಂತ್ರಣ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಬಟಾನಿಕಲ್ ಸರ್ವೆ ಆಫ್ ಇಂಡಿಯಾ, ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಂತಹ (ಎನ್ಜಿಟಿ) ಸಂಯೋಜಿತ ಮತ್ತು ಅಧೀನ ಕಚೇರಿಗಳಿಗೆ ಅನುದಾನವನ್ನು ಹೆಚ್ಚಿಸಲಾಗಿದ್ದು, ಇದು ಪರಿಸರ ಮೇಲ್ವಿಚಾರಣೆ ಮತ್ತು ವಿವಾದ ಪರಿಹಾರಕ್ಕೆ ಸಂಬಂಧಿಸಿದ ಕೆಲಸದ ಹೊರೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ದೇಶಾದ್ಯಂತ ಪರಿಸರ ಸಂಬಂಧಿತ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಎನ್ಜಿಟಿಗೆ ಅನುದಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಾರ್ಯಕ್ರಮ ವೆಚ್ಚದಲ್ಲಿ ಮಾಲಿನ್ಯ ನಿಯಂತ್ರಣದ ಪ್ರಾಬಲ್ಯ ಮುಂದುವರಿದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಬೆಂಬಲಕ್ಕಾಗಿ 2026–27ರಲ್ಲಿ 1,091 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ಸಾಲಿನ ಪರಿಷ್ಕೃತ ಅಂದಾಜುಗಳಲ್ಲಿ ಒದಗಿಸಲಾಗಿದ್ದ 1,300 ಕೋಟಿ ರೂ.ಗಿಂತ ಕಡಿಮೆಯಾಗಿರುವುದು ಹಲವು ಭಾರತೀಯ ನಗರಗಳಲ್ಲಿ ವಾಯು ಗುಣಮಟ್ಟ ಇನ್ನೂ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿರುವಾಗ ವೆಚ್ಚದ ಮೇಲೆ ಬಿಗಿಹಿಡಿತವನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮುಂಗಡಪತ್ರವು ಭಾರತದ ಹವಾಮಾನ ಹೋರಾಟವನ್ನು ಮುಂದುವರಿಸುತ್ತದೆ, ಆದರೆ ಅದಕ್ಕೆ ವೇಗ ನೀಡುವುದಿಲ್ಲ. ಇಂದು ಹವಾಮಾನ ಅಪಾಯಗಳು ಭವಿಷ್ಯದ ಮುನ್ಸೂಚನೆಗಳಾಗಿರದೆ ಜೀವಂತ ವಾಸ್ತವಗಳಾಗಿರುವಾಗ ಇದು ಗಂಭೀರ ಚಿಂತೆಯ ವಿಷಯವಾಗಿದೆ.
ಬಜೆಟ್ 2026: ವಿಕಸಿತ ಭಾರತದ ಕನಸಿಗೆ ಪೂರಕವಾದ ಆಯವ್ಯಯ - ಇದಕ್ಕೆ 5 ಕಾರಣ ಕೊಟ್ಟ ಜೋಶಿ
Union Budget 2026 : ಫೆಬ್ರವರಿ ಒಂದು ಭಾನುವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ವಿಕಸಿತ ಭಾರತದ ಕನಸು ನನಸು ಮಾಡುವ ಆಯವ್ಯಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಸೆಮಿಕಂಡಕ್ಟರ್ ಮಿಷನ್, ಭಾರತವನ್ನು ಟೆಕ್ನಾಲಜಿ ಹಬ್’ನನ್ನಾಗಿ ಮಾಡಲಿದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಬಜೆಟ್ 2026 | ಗೃಹ ಸಚಿವಾಲಯಕ್ಕೆ 2.55 ಕೋಟಿ ರೂ. ಹಂಚಿಕೆ
ಹೊಸದಿಲ್ಲಿ, ಫೆ.1: ರವಿವಾರ ಲೋಕಸಭೆಯಲ್ಲಿ ಮಂಡಿಸಲಾದ 2026–27ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ 2,55,233.53 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 1,73,802.53 ಕೋಟಿ ರೂ.ಗಳಷ್ಟು ಹೆಚ್ಚಿನ ಮೊತ್ತವನ್ನು ಆಂತರಿಕ ಭದ್ರತೆ, ಗಡಿ ಕಾವಲು ಮತ್ತು ಪ್ರಮುಖ ಸ್ಥಾವರಗಳ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿರುವ CRPF, BSP ಮತ್ತು CISF ನಂತಹ ಕೇಂದ್ರೀಯ ಪೊಲೀಸ್ ಪಡೆಗಳು ಪಡೆಯಲಿವೆ. 2025–26ರ ಬಜೆಟ್ ನಲ್ಲಿ ಗೃಹ ಸಚಿವಾಲಯಕ್ಕೆ 2,33,210.68 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ರ ಬಜೆಟ್ ನಲ್ಲಿ ಗೃಹ ಸಚಿವಾಲಯದಡಿ ಮಾಡಿರುವ ಹಂಚಿಕೆಗಳು: • ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಗೆ 1,73,802.53 ಕೋಟಿ ರೂ. • ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ದಿಲ್ಲಿಗೆ ಅನುಕ್ರಮವಾಗಿ 43,290.29 ಕೋಟಿ ರೂ. ಮತ್ತು 1,348 ಕೋಟಿ ರೂ., ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಕ್ಕೆ 6,680.94 ಕೋಟಿ ರೂ., ಚಂಡಿಗಡಕ್ಕೆ 5,720.17 ಕೋಟಿ ರೂ., ದಾದ್ರಾ ಮತ್ತು ನಗರ ಹವೇಲಿ ಹಾಗೂ ದಾಮನ್ ಮತ್ತು ದಿಯುಗೆ 2,832.70 ಕೋಟಿ ರೂ., ಲಡಾಖ್ಗೆ 4,869.31 ಕೋಟಿ ರೂ., ಲಕ್ಷದ್ವೀಪಕ್ಕೆ 1,682.35 ಕೋಟಿ ರೂ. ಮತ್ತು ಪುದುಚೇರಿಗೆ 3,517.88 ಕೋಟಿ ರೂ. • ಎ.1ರಿಂದ ಮೊದಲ ಹಂತ ಆರಂಭವಾಗಲಿರುವ ಜನಗಣತಿ ಸಂಬಂಧಿತ ಕೆಲಸಗಳಿಗೆ 6,000 ಕೋಟಿ ರೂ. • ಗುಪ್ತಚರ ಸಂಸ್ಥೆಗೆ (ಐಬಿ) 6,782.43 ಕೋಟಿ ರೂ., ದಿಲ್ಲಿ ಪೊಲೀಸ್ ಪಡೆಗೆ 12,503.65 ಕೋಟಿ ರೂ., ಪ್ರಧಾನಿಗೆ ರಕ್ಷಣೆಯನ್ನು ಒದಗಿಸುವ ಎಸ್ಪಿಜಿಗೆ 499.99 ಕೋಟಿ ರೂ., ಜಮ್ಮು–ಕಾಶ್ಮೀರ ಪೊಲೀಸ್ ಪಡೆಗೆ 9,925.50 ಕೋಟಿ ರೂ. • ರಾಜ್ಯ ಪೊಲೀಸ್ ಪಡೆಗಳು ಮತ್ತು ಅಪರಾಧ ಹಾಗೂ ಅಪರಾಧ ಪತ್ತೆ ನೆಟ್ವರ್ಕ್ ಗಳು ಮತ್ತು ಸಿಸ್ಟಮ್ ಗಳ (ಸಿಸಿಟಿಎನ್ಎಸ್) ಆಧುನೀಕರಣಕ್ಕೆ 450.54 ಕೋಟಿ ರೂ. • ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುರಕ್ಷತಾ ಸಂಬಂಧಿತ ವೆಚ್ಚ ಮತ್ತು ವಿಶೇಷ ಮೂಲಸೌಕರ್ಯ ಯೋಜನೆಗೆ 3,610.80 ಕೋಟಿ ರೂ. • ಕೇಂದ್ರೀಯ ಸಶಸ್ತ್ರ ಪಡೆಗಳ ಆಧುನೀಕರಣ ಯೋಜನೆಗೆ 343.66 ಕೋಟಿ ರೂ. • ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಗೆ 5,576.51 ಕೋಟಿ ರೂ. • ಪೊಲೀಸ್ ಮೂಲಸೌಕರ್ಯಕ್ಕಾಗಿ 5,393.37 ಕೋಟಿ ರೂ. • ಮಹಿಳಾ ಸುರಕ್ಷತೆ ಯೋಜನೆಗೆ 889.05 ಕೋಟಿ ರೂ. • ಜೈಲುಗಳ ಆಧುನೀಕರಣಕ್ಕೆ 300 ಕೋಟಿ ರೂ. • ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ 350 ಕೋಟಿ ರೂ. ಮತ್ತು ಅದರ ಎರಡನೇ ಹಂತಕ್ಕೆ 300 ಕೋಟಿ ರೂ. • ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ರಕ್ಷಾ ವಿವಿ ಸೇರಿದಂತೆ ಸ್ವಾಯತ್ತ ಸಂಸ್ಥೆಗಳಿಗೆ 665.40 ಕೋಟಿ ರೂ.
ಉಡುಪಿ| ಎನ್ಎಸ್ಯುಐ ಮುಖಂಡನ ಮೇಲೆ ತಲವಾರು ದಾಳಿ: ಪ್ರಕರಣ ದಾಖಲು
ಉಡುಪಿ, ಫೆ.1: ಉಡುಪಿ ಜಿಲ್ಲಾ ಎನ್ಎಸ್ಯುಐ ಉಪಾಧ್ಯಕ್ಷ, ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್(25) ಎಂಬವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜ.30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ಇವರು ಮಣಿಪಾಲಕ್ಕೆ ಹೋಗಿದ್ದು, ಅಲ್ಲಿ ಇವರ ಸ್ನೇಹಿತರಾದ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ನ ಮಾಲಕ ರಾಧಾಕೃಷ್ಣ ಪೈ ಎಂಬವರ ಮಗ ರಮಾನಂದ ಪೈ ಇದ್ದರು. ಈ ವೇಳೆ ಶರತ್ ಕುಂದರ್ ಕೈಗೆ ರಮಾನಂದ ಪೈಯ ಕೈ ತಾಗಿದ್ದು, ಆಗ ಇವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಶರತ್ ಕುಂದರ್ ವಾಪಾಸು ಮನೆಗೆ ಹೊರಡುವಾಗ ಅಕ್ಷತ್ಕರೆ ಮಾಡಿ, ಗಲಾಟೆ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದನು. ಅದರಂತೆ ಶರತ್ ಕುಂದರ್, ಧ್ರುವ, ಸಿಲಾನ್ ಗಗನ್, ರೋಹಿತ್ ಪಿಪಿಸಿ ರಸ್ತೆಯ ಕೋಸ್ಟಲ್ ಚಿಕನ್ ಅಂಗಡಿಯ ಎದರು ನಿಂತಿದ್ದರು. ಆಗ ಅಲ್ಲಿಗೆ ವಾಹನಗಳಲ್ಲಿ ತಲವಾರು, ರಾಡ್ ಹಿಡಿದುಕೊಂಡು ರಮಾನಂದ ಪೈ, ಅಕ್ಷತ್ ಪೈ, ಶಶಾಂಕ ಹಾಗೂ ಇತರ 6-7 ಮಂದಿ ಬಂದರು. ರಮಾನಂದ ಪೈ ತಲವಾರಿನಿಂದ ಬೀಸಿದಾಗ ಶರತ್ ಕೈಗೆ ತಾಗಿ ಗಾಯವಾಗಿದೆ. ಈ ವೇಳೆ ಶರತ್ ಸ್ನೇಹಿತರು ಬೊಬ್ಬೆ ಹಾಕಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋದರೆನ್ನ ಲಾಗಿದೆ. ಗಾಯಗೊಂಡಿರುವ ಶರತ್ ಉಡುಪಿವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕಕ್ಕೆ ಮತ್ತೆ ಚೊಂಬು: ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ
ಕಲಬುರಗಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಕರ್ನಾಟಕಕ್ಕೆ ಮತ್ತೆ ಚೊಂಬು ನೀಡುವ ಮೂಲಕ ಮಲತಾಯಿ ಧೋರಣೆ ಮುಂದುವರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ತೆರಿಗೆ, ಜಿಎಸ್ಟಿ ಸಂಗ್ರಹ, ವಿದೇಶ ಹೋಡಿಕೆಯಲ್ಲಿ ಮೊದಲ ಸ್ಥಾನ ಮತ್ತು ಸೆಸ್ ಸಂಗ್ರಹ ಮಾಡುವ 2ನೇ ರಾಜ್ಯವಾಗಿದೆ. ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. 1 ರೂ. ಪಡೆದು 14 ಪೈಸೆ ಮಾತ್ರ ನಮಗೆ ವಾಪಸ್ ನೀಡುವ ಮೂಲಕ ಕೇಂದ್ರ ಸರಕಾರ ನಮಗೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು. ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರಕಾರದ 13ನೇ ಬಜೆಟ್ ಮೋದಿ ಸರಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತವಾಗಿದೆ. 2025-26 ಸಾಲಿನ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳಷ್ಟಿತ್ತು. ಆದರೆ ಪರಿಷ್ಕೃತ ಅಂದಾಜು 49,64,842 ಕೋಟಿ ರೂ. ಆಗಿದೆ. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಪರಿಷ್ಕರಿಸಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ಬರಿ ಹೇಳಿಕೆಗಳ ಬಜೆಟ್ ಆಗಿದೆ ಎಂದು ಟೀಕಿಸಿದರು. ವಿಕಸಿತ ಭಾರತದ ಸಂಕಲ್ಪ ಎನ್ನುವುದು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸಲು ಬೇಕಾದ ಯಾವುದೇ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ಕರ್ನಾಟಕ್ಕೆ ನೀರಾವರಿ ಯೋಜನೆ, ಮೆಟ್ರೋ ರೈಲು, ಮಹಾದಾಯಿ ಸಮಸ್ಯೆ, ಕೃಷ್ಣಮೇಲ್ದಂಡೆ ಯೋಜನೆ, ಕಬ್ಬು, ತೊಗರಿ ಬೆಳೆಗಳಿಗೆ ಸಹಾಯ ಸಿಗುವ ನಿರೀಕ್ಷೆ ಇತ್ತು. ಅದು ಸಿಕ್ಕಿಲ್ಲ. ಕೇವಲ ನಮಗೆ ಮತ್ತೆ ಚೊಂಬು ಸಿಕ್ಕಿದೆ ಎಂದು ಹೇಳಿದರು. ಬೆಂಗಳೂರು- ಮುಂಬೈ, ಬೆಂಗಳೂರು- ಮಂಗಳೂರು, ಬೆಂಗಳೂರು ಪುಣೆ ಹೈ ಸ್ಪೀಡ್ ರೈಲುಗಳನ್ನು ಘೋಷಣೆ ಮಾಡಿದರೆ ಅನುಕೂಲ ಆಗುತ್ತಿತ್ತು. ಆದರೆ ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿ.ಮೀ ನಮಗೆ ಸಂಚರಿಸುವುದು ಕರ್ನಾಟಕದಲ್ಲಲ್ಲ. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್ಗಳಿಗಿಂತ ಮೇಲೆ ಹೋಗಲಿಲ್ಲ. ಕರ್ನಾಟಕಕ್ಕೆ ಏನೂ ಸಿಗಲಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟರು. ಕರ್ನಾಟಕ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ. ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್ ಎಂದರು. 14 ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಶೇ. 4.71 ರಷ್ಟು ತೆರಿಗೆ ಪಾಲು ಸಿಕ್ಕಿತ್ತು. ಆದರೆ 14ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.64 ಕ್ಕೆ ಇಳಿದ ಕಾರಣ ನಮಗೆ ಶೇ.23 ರಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಾಜ್ಯಕ್ಕೆ ಕನಿಷ್ಟ 14ನೇ ಹಣಕಾಸು ಆಯೋಗ ಕೊಟ್ಟ ತೆರಿಗೆ ಪಾಲಿಗಿಂತ ಹೆಚ್ಚಿನ ಪಾಲು ಕೊಟ್ಟರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದೆವು. ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೆ ಎಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಮಧ್ಯಪ್ರದೇಶಕ್ಕೆ 12,847 ಕೋಟಿ ರೂ., ಉತ್ತರ ಪ್ರದೇಶಕ್ಕೆ 16,342 ಕೋಟಿ ರೂ. ಕೊಟ್ಟಿದ್ದಾರೆ. SDMF ನಿಧಿಯಲ್ಲಿ ಕರ್ನಾಟಕಕ್ಕೆ 5 ವರ್ಷಗಳಲ್ಲಿ 1,712 ಕೋಟಿ ರೂ., ಮಹಾರಾಷ್ಟ್ರಕ್ಕೆ 7,895 ಕೋಟಿ ರೂ. ಕೊಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ 23,697 ಕೋಟಿ ರೂ., ಗುಜರಾತ್ಗೆ 6766 ಕೋಟಿ ರೂ., ಮಧ್ಯ ಪ್ರದೇಶಕ್ಕೆ 9,357 ಕೋಟಿ ರೂ., ಹಾಗೂ ಉತ್ತರ ಪ್ರದೇಶಕ್ಕೆ 12,256 ಕೋಟಿ ರೂ. ಕೊಟ್ಟಿದ್ದಾರೆ. ಹಣಕಾಸು ಆಯೋಗದ ವರದಿಯ ಶಿಫಾರಸ್ಸಿನ ಆಧಾರದ ಮೇಲೆ 2025-26 ರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ SDRF ನಲ್ಲಿ 24,257 ಕೋಟಿ ಕೊಟ್ಟಿದ್ದರು. 2026-27ರ ಬಜೆಟ್ನಲ್ಲಿ 22,574 ಕೋಟಿ ರೂ. ಮೀಸಲಿರಿಸಿದ್ದಾರೆ. SDMF ನಲ್ಲಿ 9,250 ಕೋಟಿ ರೂ. ಕಳೆದ ವರ್ಷ ಇಟ್ಟಿದ್ದರೆ, ಈ ವರ್ಷ 5,641 ಕೋಟಿ ರೂ.ಗೆ ಇಳಿಸಿದ್ದಾರೆ ಎಂದು ವಿವರಿಸಿದರು. ನಾವು ನೀರಾವರಿ ಯೋಜನೆಗಳಿಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ, ಬೆಂಗಳೂರು ಅಭಿವೃದ್ಧಿಗೆ, ಮಲೆನಾಡು-ಕರಾವಳಿ ಅಭಿವೃದ್ಧಿಗೆ ವಿಶೇಷ ನೆರವು ಕೋರಿದ್ದೆವು. ಬೆಂಗಳೂರು ಮೆಟ್ರೋ, ಸಬ್ ಅರ್ಬನ್ ರೈಲುಗಳ ಕುರಿತು ಯಾವುದೇ ಉಲ್ಲೇಖಗಳಿಲ್ಲ. ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41 ರಿಂದ ಶೇ.50 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದೆವು. ಬೆಂಗಳೂರಿಗೆ ರೂ. 27093 ಕೋಟಿ ಹಾಗೂ ಉಳಿದ ಭಾಗಗಳಿಗೆ ಅನುದಾನ ಘೋಷಿಸುವಂತೆ ಕೇಳಿದ್ದೆವು. ಸೆಸ್ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಕೇಳಿದ್ದೆವು. ಈ ಒತ್ತಾಯಗಳನ್ನು ಹಣಕಾಸು ಆಯೋಗವು ಪರಿಗಣಿಸದಿರುವುದು ದುರದೃಷ್ಟಕರ ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶಿವರಾಜ್ ತಂಗಡಗಿ, ಬೋಸರಾಜು, ಶಾಸಕಿ ಕನೀಜ್ ಫಾತೀಮಾ, ಶಾಸಕ ಎಂ.ವೈ.ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ಪಾಲಿಕೆ ಮಹಾಪೌರ ವರ್ಷಾ ಜಾನೆ, ಮತ್ತಿತ್ತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2026 | VB-G RAM G ಯೋಜನೆಗೆ 95,692.31 ಕೋಟಿ ರೂ. ಮೀಸಲು
ಮೊತ್ತ ತೀರಾ ಕಡಿಮೆಯಾಗಲಿದೆ ಎಂದು ತಜ್ಞರ ಎಚ್ಚರಿಕೆ
ಬಜೆಟ್| ವಿಕಸಿತ ಭಾರತಕ್ಕೆ ಭದ್ರ ತಳಹದಿ: ನಳಿನ್ ಕುಮಾರ್ ಕಟೀಲ್
ಮಂಗಳೂರು : ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ತೆಂಗಿನಕಾಯಿ, ಕೊಕ್ಕೊ ಬೆಳೆಗಳಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಕೃಷಿ ಅಭಿವೃದ್ಧಿಗೆ ಉತ್ತೇಜಿಸಿರುವುದು ಕರಾವಳಿ ಭಾಗದ ಕೃಷಿಕರಿಗೆ ವರದಾನವಾಗಲಿದೆ. ಮೀನುಗಾರಿಕಾ ಕ್ಷೇತ್ರವನ್ನು ಬಲಪಡಿಸಲು ಸುಂಕ ವಿನಾಯಿತಿ, ಸಮುದ್ರ ಉತ್ಪನ್ನಗಳ ರಫ್ತು ಹೆಚ್ಚಳ ಘೋಷಿಸಿರುವುದು ಸ್ವಾಗತಾರ್ಹ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಮೆ ಹಾದಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಘೋಷಿಸಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಬಡವರ, ಮಧ್ಯಮ ವರ್ಗದವರ, ಮಹಿಳೆಯರ , ಯುವಕರ ಹಿತ ಕಾಯುವ ಸರ್ವ ಸ್ಪರ್ಶಿ ಬಜೆಟ್ ಇದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಡಿವಾಳ ಮಾಚಿದೇವ ಅಸ್ಪಶ್ಯರ ಬದುಕಿಗೆ ಆಶಾ ಕಿರಣ: ಯಶ್ಪಾಲ್ ಸುವರ್ಣ
ಉಡುಪಿ, ಫೆ.1: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದ ಜನರ ಬದುಕಿಗೆ ಆಶಾ ಕಿರಣವಾಗಿ ಸಮಾಜದ ಏಳಿಗೆಗೆ, ಸಮಾಜದ ಒಗ್ಗಟ್ಟಿಗೆ ಹಾಗೂ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಾಚಿದೇವ ಅವರ ಆದರ್ಶ ಗಳನ್ನು ದೈನಂದಿನ ಜೀವನದಲ್ಲಿ ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಎ.ಸುವರ್ಣ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀರಜಕ ಯಾನೆ ಮಡಿವಾಳ ಸಂಘ ಉಡುಪಿ ಇವರ ಸಹಯೋಗದಲ್ಲಿ ರವಿವಾರ ಉಡುಪಿಯ ಅಂಬಾಗಿಲು ಶ್ರೀಗುರು ಮಾಚೀದೇವ ಸಭಾಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಶರಣರು ವಚನ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನು ಮನ ಮುಟ್ಟುವ ಹಾಗೆ ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ನೀಡಿದ್ದಾರೆ. 12ನೇ ಶತಮಾನ ದಲ್ಲಿ ಬಸವಣ್ಣ, ಮಾಚಿದೇವ ಸೇರಿದಂತೆ ಹಲವಾರು ದಾರ್ಶನಿಕರು ಸನ್ಮಾಗದಲ್ಲಿ ನಡೆಯಲು ಹಾದಿ ತೋರಿದ್ದಾರೆ ಎಂದರು. ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಹೋರಾಡಿದ ಶರಣರು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದಾರೆ. ಸುಮಾರು 850 ವರ್ಷಗಳ ಹಿಂದೆ ಶರಣರು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ತಮ್ಮ ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು. ಶ್ರಮ ಜೀವಿಯಾದ ಇವರು ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿದ್ದರು. ಕಲ್ಯಾಣದಲ್ಲಿ ಮಡಿ ಮಾಡುವ ಕಾಯಕದಲ್ಲಿ ತೊಡಗಿದ್ದ ಇವರ ಕಾಯಕ ಭಕ್ತಿಗೆ ಬಸವಣ್ಣ ನವರು ಸಹ ಶರಣಾಗಿದ್ದರು ಎಂದ ಅವರು, ಹನ್ನೆರಡನೇ ಶತಮಾನ ದಲ್ಲಿ ಶಿವ-ಶರಣರು ಸಾವಿರಾರು ವಚನಗಳನ್ನು ರಚಿಸಿದ್ದಾರೆ ಅವುಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳಲ್ಲಿ ರುವ ತತ್ವಗಳನ್ನು ಪಾಲಿಸಿದ್ದಲ್ಲಿ ಅವು ನಮ್ಮಲ್ಲಿ ಬದುಕಿನಲ್ಲಿ ಮನುಷ್ಯತ್ವ ರೂಪಿಸಲು ಸಹಕರಿ ಯಾಗಲಿದೆ ಎಂದರು ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ವಹಿಸಿದ್ದರು. ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷ ಬಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ವಂದಿಸಿದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್: ಸಂಸದ ಕೋಟ
ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಅತ್ಯಂತ ಪರಿಷ್ಕೃತವಾದ, ಸಮಾಜ ಸರ್ವರು ಒಪ್ಪಿಕೊಳ್ಳುವ ಹಾಗೂ ಎಲ್ಲ ವರ್ಗದ ಜನವರಿಗೆ ಅನುಕೂಲವಾಗುವ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಹಲವು ಯೋಜನೆ ಹಾಗೂ ಯೋಚನೆಗಳನ್ನು ಪರಿಚಯಿಸಲಾಗಿದೆ. ಬಡವರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, ಮಾರಕ ಕಾಯಿಲೆಗಳ ಔಷಧಿಗಳಿಗೆ ರಿಯಾಯಿತಿ, ದೇಶದ ಅನೇಕ ಕಡೆಗಳಲ್ಲಿ ಹೊಸ ಮೆಡಿಕಲ್ ಕಾಲೇಜು, ಹಬ್ ಸ್ಥಾಪನೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹೈ ಸ್ರೀಡ್ ರೈಲು ಪರಿಚಯ, ರಾಷ್ಟ್ರೀಯ ಹೆದ್ದಾರಿ ಒತ್ತು ಕೊಡುವ ಕಾರ್ಯ ಮಾಡಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಹೆಚ್ಚಿನ ಅನುದಾನ ಮೀಸಲಿರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಜೆಟ್| ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ: ಪ್ರಸಾದ್ರಾಜ್ ಕಾಂಚನ್
ಉಡುಪಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ. ಇದೊಂದು ನಿರಾಶದಾ ಯಕ ಮತ್ತು ಶ್ರೀಮಂತರ ಬಜೆಟ್ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಟೀಕಿಸಿದ್ದಾರೆ. ಮುಂದೆ ಬರಲಿರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ ಹೊರತು ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ. ಕರಾವಳಿ ಭಾಗದಲ್ಲಿ ರೈಲ್ವೇ ಯೋಜನೆಗಳಿಗೆ ವಿಶೇಷ ಒತ್ತು ನೀಡಬೇಕಾಗಿತ್ತು. ಹೆಚ್ಚುವರಿ ರೈಲುಗಳು ಹಾಗೂ ದ್ವಿಪಥ ಯೋಜನೆಗಳನ್ನು ವಿಸ್ತರಿಸಬೇಕಾಗಿತ್ತು. ಈ ವಿಚಾರದಲ್ಲಿ ಕರಾವಳಿಗೆ ವಿತ್ತ ಸಚಿವೆ ಯಾವುದೇ ಯೋಜನೆಯನ್ನು ನೀಡಿರುವುದು ನಿಜಕ್ಕೂ ನೋವುಂಟು ಮಾಡಿದೆ. ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡ ಲಾಗಿದ್ದು ಕರಾವಳಿಯ ಬಂದರುಗಳನ್ನು ಅಭಿವೃದ್ದಿ ಪಡಿಸಲು ಒತ್ತು ನೀಡದಿರುವುದು ಕಂಡು ಬಂದಿದೆ. ಬಹುಶಃ ಕರಾವಳಿ ಭಾಗದ ಸಂಸದರು ಗಳು ಕರಾವಳಿ ಭಾಗಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಕಾರಣದಿಂದ ಕರಾವಳಿಗೆ ಅನ್ಯಾಯವಾಗಿರ ಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಳಕೇರಾ ಗ್ರಾಮದಲ್ಲಿ ಆಕಸ್ಮಿಕ ಸ್ಪೋಟ: ಸ್ಥಳಕ್ಕೆ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿ ಪರಿಶೀಲನೆ
ಹುಮನಾಬಾದ್: ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಘಟನಾ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಘಟನೆ ಕುರಿತು ವಿವರವಾದ ಮಾಹಿತಿ ಪಡೆದು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮೇಲ್ನೋಟಕ್ಕೆ ಮನೆಯ ಮುಂಭಾಗದಲ್ಲಿ ರಾಸಾಯನಿಕ ಮಿಶ್ರಿತ ವಸ್ತುಗಳನ್ನು ಶೇಖರಣೆ ಮಾಡಿರುವುದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಪೂರ್ಣ ತನಿಖಾ ವರದಿ ಬಂದ ತಕ್ಷಣ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಲೋಪ ಕಂಡು ಬಂದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಸಚಿವರು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕೆಮಿಕಲ್ ತ್ಯಾಜ್ಯದಿಂದ ಗ್ರಾಮದ ಸುತ್ತಲಿನ ವಾತಾರಣ, ಹವಾಮಾನ ಕಲುಷಿತಗೊಳ್ಳುತ್ತಿದೆ ಎಂದು ಸಚಿವರಿಗೆ ಗ್ರಾಮಸ್ಥರು ದೂರು ಸಲ್ಲಿಸಿದರು. ರಾಜ್ಯ ಪರಿಸರ ಇಲಾಖೆಯಿಂದ ಒಂದು ತಂಡವನ್ನು ಕರೆಸಿ ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಸಚಿವರು ಭರವಸೆ ನೀಡಿದರು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಂಬಂಧಿತ ಇಲಾಖೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಘಟನೆಯಿಂದ ಯಾರೂ ಭಯಪಡುವ ಅಗತ್ಯವಿಲ್ಲ. ಈಗಾಗಲೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಈ ಘಟನೆಯಲ್ಲಿ ಯಾರೇ ಶಾಮಿಲಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಬಿ.ಪಾಟೀಲ್, ಮಾಜಿ ಶಾಸಕ ರಾಜಶೇಖರ್ ಬಿ.ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಹುಮನಾಬಾದ್ ತಹಸೀಲ್ದಾರ್ ಅಜುಂ ತಬಸುಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ: ಸಂಸದ ಜಿ ಕುಮಾರ್ ನಾಯಕ್
ರಾಯಚೂರು: ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಬಡವರು, ಮಧ್ಯಮ ವರ್ಗದವರು, ರೈತರು, ಕಾರ್ಮಿಕರು ಹಾಗೂ ಯುವಜನತೆಗೆ ನೇರವಾಗಿ ಲಾಭವಾಗುವ ಯೋಜನೆಗಳಿಗೆ ಅಗತ್ಯ ಆದ್ಯತೆ ನೀಡಲಾಗಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯ ಅಸಮಾನತೆ ಎಂಬ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳಿಲ್ಲ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ್ ನಾಯಕ್ರವರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಹತ್ವಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನರು ಈ ಬಾರಿ ಕೂಡ ಕೇಂದ್ರದ ಬಜೆಟ್ ನಿಂದ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಜಿಲ್ಲೆಗೆ ಮಂಜೂರು ಮಾಡಬೇಕಾದಂತಹ ಏಮ್ಸ್ ಆಸ್ಪತ್ರೆಯನ್ನು ಈ ಬಾರಿಯೂ ಕೂಡ ಬಜೆಟ್ನಿಂದ ಕೈಬಿಟ್ಟಿದ್ದು, ಈ ಭಾಗಗಳಲ್ಲಿ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಕೈಗಾರಿಕೆಗಳ ಸ್ಥಾಪಿಸುವ ಕುರಿತು ಯಾವುದೇ ರೀತಿಯ ವಿಶೇಷ ಘೋಷಣೆಗಳಿಲ್ಲ. ಇದು ಕೇವಲ ಹೆಸರಿಗಷ್ಟೇ ಮಹತ್ವಾಕಾಂಕ್ಷೆ ಜಿಲ್ಲೆ ಎಂಬುದು ಈಗ ದೃಢವಾಗಿದೆ ಎಂದು ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕುರಿತು ಸ್ಪಷ್ಟತೆ ಇಲ್ಲ. ಯುವಕರ ಉದ್ಯೋಗ ಸೃಷ್ಟಿಗೆ ಯಾವುದೇ ದೃಢ ಯೋಜನೆ ಇಲ್ಲ. ದೇಶದ ಜನರ ಹಿತಾಸಕ್ತಿಯನ್ನು ಕಾಪಾಡುವ ಬಜೆಟ್ನ್ನು ತರುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದು ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಮ್ಮ ಸಂಸದ ಜಿ ಕುಮಾರ್ ನಾಯಕ್ ಹೇಳಿದರು.
ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವರು ಘೋಷಿಸಿದ ತೆರಿಗೆ ರಜಾ ಎಂದರೇನು?
ತೆರಿಗೆ ರಜಾ ಎಂದರೆ ನಿರ್ದಿಷ್ಟ ಅವಧಿಯವರೆಗೆ ಕೆಲವು ತೆರಿಗೆಗಳನ್ನು ಪಾವತಿಸುವುದರಿಂದ ಕಂಪೆನಿಗಳಿಗೆ ವಿನಾಯಿತಿ ನೀಡುವ ಕ್ರಮವಾಗಿರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ನೆಲೆಗೊಂಡಿರುವ ಡಾಟಾ ಸೆಂಟರ್ಗಳನ್ನು ಬಳಸಿ ಜಾಗತಿಕವಾಗಿ ಕ್ಲೌಡ್ ಸೇವೆ ಒದಗಿಸಲು ಬಯಸುವ ವಿದೇಶಿ ಕಂಪೆನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಿದ್ದಾರೆ. ದೇಶದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಪ್ರಮುಖ ಸೂಚನೆ ಇದಾಗಿದೆ ಎಂದು ಅವರು ಹೇಳಿದ್ದಾರೆ. ತೆರಿಗೆ ರಜಾ ಎಂದರೇನು? ತೆರಿಗೆ ರಜಾ ಎಂದರೆ ನಿರ್ದಿಷ್ಟ ಅವಧಿಯವರೆಗೆ ಕೆಲವು ತೆರಿಗೆಗಳನ್ನು ಪಾವತಿಸುವುದರಿಂದ ಕಂಪೆನಿಗಳಿಗೆ ವಿನಾಯಿತಿ ನೀಡುವ ಕ್ರಮವಾಗಿರುತ್ತದೆ. ಆದ್ಯತೆಯ ವಲಯದಲ್ಲಿ ಹೂಡಿಕೆ ಉತ್ತೇಜಿಸಲು, ಆರಂಭಿಕ ಯೋಜನಾ ವೆಚ್ಚ ಕಡಿಮೆ ಮಾಡಲು ಮತ್ತು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಹೀಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಮೂಲಸೌಕರ್ಯ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ದೀರ್ಘಕಾಲೀನ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸರ್ಕಾರಗಳು ಸಾಮಾನ್ಯವಾಗಿ ಇಂತಹ ಉತ್ತೇಜಕಗಳನ್ನು ಘೋಷಿಸುತ್ತವೆ. ಯಾರು ತೆರಿಗೆ ರಜಾ ಪಡೆಯಬಹುದು? ಕೆಲವು ಷರತ್ತುಗಳನ್ನು ಒಳಪಟ್ಟು ತೆರಿಗೆ ವಿನಾಯಿತಿ ನೀಡಲಾಗುವುದು. ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯಲು ವಿದೇಶಿ ಕ್ಲೌಡ್ ಸೇವೆ ಒದಗಿಸುವವರು ಭಾರತೀಯ ಮರುಮಾರಾಟಗಾರ ಸಂಸ್ಥೆಯ ಮೂಲಕ ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸಬೇಕಾಗುತ್ತದೆ. ಜಾಗತಿಕ ಕಾರ್ಯನಿರ್ವಹಣೆಯ ಜೊತೆಗೆ ದೇಶೀಯ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಸರ್ಕಾರದ ಉದ್ದೇಶವನ್ನು ಒತ್ತಿ ಹೇಳಿದ್ದಾರೆ. ಡಾಟಾ ಸೆಂಟರ್ಗಳಲ್ಲಿ ದೀರ್ಘಕಾಲೀನ ಹೂಡಿಕೆ ಉತ್ತೇಜಿಸಲು ಮತ್ತು ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು ಈ ಪ್ರಸ್ತಾಪದ ಉದ್ದೇಶವಾಗಿದೆ. ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಸೇವೆಗಳ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಈ ವಲಯ ಅತ್ಯಗತ್ಯವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಸೇಫ್ ಹಾರ್ಬರ್ ಮಾರ್ಜಿನ್ ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ಭಾರತದ ಸ್ಥಾನವನ್ನು ಎತ್ತಿಹಿಡಿದ ನಿರ್ಮಲಾ ಸೀತಾರಾಮನ್ ಅವರು, ಸಾಫ್ಟ್ವೇರ್ ಅಭಿವೃದ್ಧಿ ಸೇವೆಗಳು, ಐಟಿ-ಸಕ್ರಿಯಗೊಳಿಸಿದ ಸೇವೆಗಳು, ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ ಮತ್ತು ಒಪ್ಪಂದ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಇದೀಗ “ಮಾಹಿತಿ ತಂತ್ರಜ್ಞಾನ ಸೇವೆಗಳು” ಎನ್ನುವ ಒಂದೇ ವರ್ಗದ ಅಡಿಯಲ್ಲಿ ತರಲಾಗುವುದು ಎಂದು ಘೋಷಿಸಿದ್ದಾರೆ. ಬಜೆಟ್ನಲ್ಲಿ ಐಟಿ ಸೇವೆಗಳಿಗೆ ಶೇ. 15.5 ರಷ್ಟು ಸಮಾನ ಸೇಫ್ ಹಾರ್ಬರ್ ಮಾರ್ಜಿನ್ ಅನ್ನು ಪ್ರಸ್ತಾಪಿಸಲಾಗಿದೆ. ತೆರಿಗೆಯಲ್ಲಿ ಕಾಮನ್ ಸೇಫ್ ಹಾರ್ಬರ್ ಮಾರ್ಜಿನ್ (common safe harbour margin) ಎಂದರೆ ಐಟಿ ಸೇವೆಗಳು ಅಥವಾ ಉತ್ಪಾದನೆಯಂತಹ ನಿರ್ದಿಷ್ಟ ಅಂತರರಾಷ್ಟ್ರೀಯ ವಹಿವಾಟುಗಳಿಗಾಗಿ ತೆರಿಗೆ ಅಧಿಕಾರಿಗಳು ನಿಗದಿಪಡಿಸಿದ ಪೂರ್ವನಿರ್ಧರಿತ, ಸ್ವೀಕಾರಾರ್ಹ ಕನಿಷ್ಠ ಲಾಭದ ಮಾರ್ಜಿನ್ ಅನ್ನು ಸೂಚಿಸುತ್ತದೆ. ಈ ಸೇಫ್ ಹಾರ್ಬರ್ ಪಡೆಯುವ ಮಿತಿಯನ್ನು 300 ಕೋಟಿ ರೂ.ನಿಂದ 2,000 ಕೋಟಿ ರೂ.ಗೆ ಏರಿಸಲಾಗಿದೆ.
ಬಡವರ ಆಹಾರ ಭದ್ರತೆಗೆ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ: ಸಚಿವ ಮಂಕಾಳ್ ವೈದ್ಯ
ಭಟ್ಕಳ: ಹಳ್ಳಿಗಳು ಮತ್ತು ವಿವಿಧ ಊರುಗಳಿಂದ ಕೆಲಸಕ್ಕಾಗಿ ನಗರಗಳು ಹಾಗೂ ಪಟ್ಟಣಗಳಿಗೆ ಬರುವ ಬಡವರು ದಿನನಿತ್ಯದ ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಒದಗಿ ಸುವ ಉದ್ದೇಶದಿಂದ ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು. ಅವರು ಭಾನುವಾರ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಝಾದ್ ನಗರದಲ್ಲಿ ನೂತನವಾಗಿ ನಿರ್ಮಿಸಲ್ಪ ಟ್ಟಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಊಟ ನೀಡುವ ಮೂಲಕ ಬಡವರಿಗೆ ಆರೋಗ್ಯಕರ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಉಳಿದ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು. ಮೊದಲ ಹಂತದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು, ನಂತರ ಈ ಯೋಜನೆಯನ್ನು ರಾಜ್ಯದಾದ್ಯಂತ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಗಳಿಗೆ ವಿಸ್ತರಿಸಲಾ ಗಿದೆ. ಭಟ್ಕಳ, ಜಾಲಿ, ಹೊನ್ನಾವರ, ಮಂಕಿ ಹಾಗೂ ಮುರುಡೇಶ್ವರ ಸೇರಿದಂತೆ ಹಲವೆಡೆ ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಈ ಯೋಜನೆ ಸ್ಥಳೀಯರಿಗೆ ಮಾತ್ರ ಸೀಮಿತವಲ್ಲದೆ, ರಾಜ್ಯದ ಯಾವುದೇ ಭಾಗದಿಂದ ಬರುವವರು ಕಡಿಮೆ ದರದಲ್ಲಿ ಆಹಾರ ಪಡೆಯಬಹುದಾಗಿದೆ. ಹಣವಿರುವವರು ಹೋಟೆಲ್ಗಳನ್ನು ಹುಡುಕುವರು, ಆದರೆ ಬಡವರಿಗೆ ಇಂದಿರಾ ಕ್ಯಾಂಟೀನ್ ಆಶ್ರಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಪ್ರಸ್ತುತ ಸುಮಾರು 600 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಕೇಂದ್ರ ದಲ್ಲಿ ಹಲವರಿಗೆ ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ಒಂದೆಡೆ ನಿರುದ್ಯೋಗಿಗಳಿಗೆ ಕೆಲಸ, ಮತ್ತೊಂದೆಡೆ ಬಡವರಿಗೆ ಆಹಾರ ಭದ್ರತೆ ಒದಗಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಜಾಲಿ ಪ.ಪಂ ಅಧ್ಯಕ್ಷೆ ಅಫ್ಸಾ ಹುಝೈಫಾ ಕಾಜಿಯಾ, ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಸದಸ್ಯರಾದ ಈಶ್ವರ್ ಮೊಗೇರ್, ಎನ್. ಮಂಜಪ್ಪ ಮುಅ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ನಾಮನಿರ್ದೇಶಿತ ಸದಸ್ಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಕಾರ್ಯಪಾಲ ಅಭಿಯಂತರರು ಜಿಲ್ಲಾ ನಗರಾ ಭಿವೃದ್ಧಿಕೋಶ ಕಾರವಾರ ಕೆ.ಎಸ್. ಕುಮಾರ್, ಮತ್ತಿತರರು ಇದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.
ರಾಯಚೂರು ಉತ್ಸವ| ಕೃತಕ ಅರಣ್ಯ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಚಾಲನೆ
ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಅರಣ್ಯ ಇಲಾಖೆಯು ಕೃತಕ ಅರಣ್ಯ ಪರಿಕಲ್ಪನೆ ಜನಾಕರ್ಷಣೀಯ ವಿನೂತನ ಯೋಜನೆ ರೂಪಿಸಿದೆ. ಬಸವೇಶ್ವರ ವೃತ್ತದ ಹತ್ತಿರ ಇರುವ ವಾಲ್ಕಟ್ ಮೈದಾನದಲ್ಲಿ ಕೃತಕ ಅರಣ್ಯ ನಿರ್ಮಿಸಿದ್ದು ಜನರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಚಾಲನೆ ನೀಡಿದರು. ಕಾಡಿನಲ್ಲಿನ ನೀರು ಜಾಡು, ತೊರೆ, ತಗ್ಗು, ಗಿಡ ಮರ, ಬಳ್ಳಿ, ಆನೆ, ನೀರುಗೋಳಿ, ಕೊಕ್ಕರೆ, ಬೆಳ್ಳಕ್ಕಿ ಸೇರಿದಂತೆ ಬಗೆಬಗೆಯ ಕಾಡು ಪ್ರಾಣಿಗಳ ಚಿತ್ರಗಳು ಇಲ್ಲಿ ಗಮನ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅರಣ್ಯ ಇಲಾಖೆಯ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

25 C