ಹಿರಿಯ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ಗೆ ಡಿಐಜಿಯಾಗಿ ಭಡ್ತಿ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ, ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕ ಅಬ್ದುಲ್ ಅಹದ್ ಅವರು ಬುಧವಾರ ಉಪಪೊಲೀಸ್ ಮಹಾನಿರೀಕ್ಷಕರಾಗಿ (ಡಿಐಜಿ) ಭಡ್ತಿ ಪಡೆದಿದ್ದಾರೆ. ಗುರುವಾರ ಅವರು ಬಿಎಂಟಿಸಿ ಸುರಕ್ಷತೆ ಹಾಗೂ ಜಾಗೃತ ವಿಭಾಗದ ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಅಬ್ದುಲ್ ಅಹದ್ ಅವರು ಈ ಹಿಂದೆ ಬೆಂಗಳೂರಿನ ಸಿಟಿ ಕ್ರೈಂ ಬ್ರ್ಯಾಂಚ್ ಡಿಸಿಪಿ, ಕರಾವಳಿ ಕಾವಲು ಪಡೆಯ ಎಸ್ಪಿ, ವೈಟ್ ಫೀಲ್ಡ್ ಡಿಸಿಪಿ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬೆಂಗಳೂರು ಎಸ್ಪಿಯಾಗಿ, ಸಿಐಡಿಯಲ್ಲಿ ಆರ್ಥಿಕ ಅಪರಾಧಗಳ ವಿಭಾಗದ ಎಸ್ಪಿಯಾಗಿ ಹಾಗೂ ಕೆಎಸ್ಆರ್ಪಿಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸ್ವಚ್ಛ ನಗರಿ ಇಂದೋರ್ನಲ್ಲಿ ಕಲುಷಿತ ನೀರು ದುರಂತ ಸಂಭವಿಸಿದೆ. ಭಗೀರಥಪುರದಲ್ಲಿ ಕುಡಿಯುವ ನೀರಿನಲ್ಲಿ ಶೌಚಾಲಯದ ತ್ಯಾಜ್ಯ ಬೆರೆತು ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ. ಸರ್ಕಾರ ಪರಿಹಾರ ಘೋಷಿಸಿದ್ದು, ತನಿಖೆ ಆರಂಭಿಸಿದೆ.
IMD Weather Forecast: ಮೈಕೊರೆಯುವ ಚಳಿ ನಡುವೆ ಈ ಭಾಗಗಳಲ್ಲಿ ನಾಲ್ಕು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಶೀತಗಾಳಿ ಬೀಸುತ್ತಿದೆ. ಈ ನಡುವೆಯೇ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಉತ್ತರ ಭಾರತದ
H-1B ವೀಸಾ ವಿಳಂಬ: ಭಾರತೀಯ ಉದ್ಯೋಗಿಗಳಿಗೆ Work From Homeಗೆ ಅವಕಾಶ
H-1B ವೀಸಾ ನೀಡುವ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ಇತರ ವಿದೇಶಿಯರಿಗೆ ಮರಳಿ ಅಮೆರಿಕಕ್ಕೆ ಹೋಗುವಲ್ಲಿ ತೊಂದರೆ ಎದುರಾಗಿದೆ. ಕಚೇರಿಗೆ ಕಡ್ಡಾಯವಾಗಿ ಹಾಜರಾಗಿ ಕೆಲಸ ಮಾಡಬೇಕು ಎನ್ನುವ Amazon ಕಂಪೆನಿಯ ನಿಯಮವನ್ನು ಭಾರತೀಯ ಹಾಗೂ ವಿದೇಶಿ ಕಾರ್ಮಿಕರಿಗಾಗಿ ಸಡಿಲಿಸಲಾಗಿದೆ. H-1B ವೀಸಾ ವಿಳಂಬದಿಂದಾಗಿ ರಜಾದಲ್ಲಿ ಭಾರತಕ್ಕೆ ಆಗಮಿಸಿ ಅಮೆರಿಕಕ್ಕೆ ಮರಳಲಾಗದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ. H-1B ವೀಸಾ ವಿಳಂಬದಿಂದಾಗಿ ಅಮೆರಿಕಕ್ಕೆ ಮರಳಲಾಗದ Amazon ನ ಭಾರತೀಯ ಉದ್ಯೋಗಿಗಳಿಗೆ ಇದೀಗ ಕಂಪೆನಿಯಿಂದ ನಿಯಮ ಸಡಿಲಿಕೆ ಸಿಕ್ಕಿದೆ. ವಾರದಲ್ಲಿ ಐದು ದಿನ ಕಚೇರಿಯಲ್ಲಿ ಕೆಲಸ ಮಾಡುವುದು ಕಡ್ಡಾಯ ಎನ್ನುವ ನೀತಿಯನ್ನು Amazon ತಾತ್ಕಾಲಿಕವಾಗಿ ಸಡಿಲಿಸಿದೆ. 2025 ಡಿಸೆಂಬರ್ 13ರಂದು ಭಾರತದಲ್ಲಿದ್ದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸಲಾಗಿದೆ. ಈ ಕುರಿತಾಗಿ Amazon HR ಪೋರ್ಟಲ್ ಮೂಲಕ ಆಂತರಿಕ ಮೆಮೊ ಕಳುಹಿಸಲಾಗಿದೆ. H-1B ವೀಸಾ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ವಿದೇಶಿಯರಿಗೆ ಪ್ರಯಾಣದ ಅನಿಶ್ಚಿತತೆ ಎದುರಾಗಿದೆ. Amazonನ ಅನೇಕ ಉದ್ಯೋಗಿಗಳು ಖಾಸಗಿ ಕಾರಣಗಳಿಂದ ಡಿಸೆಂಬರ್ ನಲ್ಲಿ ಭಾರತಕ್ಕೆ ಪ್ರಯಾಣಿಸಿದ್ದರು. ಆದರೆ ಮರಳುವ ವೇಳೆಗೆ ವೀಸಾ ಅಪಾಯಿಂಟ್ಮೆಂಟ್ ಸ್ಲಾಟ್ಗಳು ಲಭ್ಯವಿಲ್ಲ ಅಥವಾ ವಿಳಂಬವಾಗಿದೆ ಎಂಬ ಮಾಹಿತಿಯಷ್ಟೇ ದೊರೆತಿದೆ. ಮರಳಲು ಸ್ಪಷ್ಟವಾದ ಸಮಯಾವಧಿ ಇಲ್ಲದ ಕಾರಣ ರಜೆಯನ್ನು ವಿಸ್ತರಿಸುವ ಬದಲಾಗಿ ಕಂಪೆನಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ. ಸಾಮಾನ್ಯ ನಿಯಮಗಳ ಪ್ರಕಾರ Amazon ವಿದೇಶಿ ಉದ್ಯೋಗಿಗಳಿಗೆ 20 ಕಾರ್ಯದಿನಗಳನ್ನು ಮೀರಿಸಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಆದರೆ ಈ ಸಡಿಲಿಕೆಯಲ್ಲೂ ಹಲವು ಮಿತಿಗಳನ್ನು ವಿಧಿಸಲಾಗಿದೆ. ಉದ್ಯೋಗಿಗಳು ಮಾಡುವ ಕೆಲಸದ ಸ್ವರೂಪವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾಗಿದೆ. ಕೋಡಿಂಗ್ಗೆ ನಿಷೇಧ ಹೇರಲಾಗಿದೆ. ಸಾಫ್ಟ್ವೇರ್ ಟೆಸ್ಟಿಂಗ್ ಅಥವಾ ಅಭಿವೃದ್ಧಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಕೋಡ್ ಡಿಪ್ಲಾಯ್ ಮಾಡುವುದು, ಗುಣಮಟ್ಟದ ಭರವಸೆ (ಕ್ವಾಲಿಟಿ ಅಶೂರನ್ಸ್) ಕಾರ್ಯಗಳು ಅಥವಾ ಇತರೆ ತಾಂತ್ರಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ. ಮತ್ತೊಂದು ಪ್ರಮುಖ ಮಿತಿಯೆಂದರೆ ಉದ್ಯೋಗಿಗಳು ಭಾರತದಲ್ಲಿರುವ Amazon ಕಚೇರಿಗಳಿಗೆ ಪ್ರವೇಶಿಸುವಂತಿಲ್ಲ. Amazon ಇಂಡಿಯಾ ಕಚೇರಿಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕುವುದು, ತಂಡದ ಮೇಲ್ವಿಚಾರಣೆ ಅಥವಾ ಕಾರ್ಯಯೋಜನಾ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೂ ನಿರ್ಬಂಧವಿದೆ. ಎಲ್ಲಾ ವಿಶ್ಲೇಷಣೆ, ಅಂತಿಮ ನಿರ್ಧಾರಗಳು ಹಾಗೂ ಸಹಿ ಸಂಬಂಧಿತ ಪ್ರಕ್ರಿಯೆಗಳು ಭಾರತದಿಂದ ಹೊರಗೆ ನಡೆಯಬೇಕಿದೆ. ಇದು ಅಮೆರಿಕ ಮತ್ತು ಭಾರತದ ಕಾನೂನು ಅಗತ್ಯಗಳ ಪಾಲನೆಗಾಗಿ ಎಂದು ತಿಳಿಸಲಾಗಿದೆ. ಈ ನಿಯಮಗಳಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಉದ್ಯೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳು ಅನುಮತಿಸಲಾದ ಮಿತಿಗಳೊಳಗೇ ಇವೆ ಎಂಬುದನ್ನು ತಮ್ಮ ಮ್ಯಾನೇಜರ್ಗಳು ಹಾಗೂ ಎಚ್ಆರ್ ತಂಡಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು. ಮಿತಿಗಳನ್ನು ಮೀರಿ ಕೆಲಸ ಮಾಡಿದರೆ ಕಾನೂನು ಅಥವಾ ನೀತಿ ಉಲ್ಲಂಘನೆಯಾಗುತ್ತದೆ ಎಂದು ಅಮೆಜಾನ್ ಎಚ್ಚರಿಕೆ ನೀಡಿದೆ. H-1B ವೀಸಾ ವಿಳಂಬದಿಂದ Amazonಗೆ ಮಾತ್ರ ಸಮಸ್ಯೆಯಾಗಿಲ್ಲ. Google, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳೂ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿವೆ. ವೀಸಾ ನೀಡಿಕೆಯಲ್ಲಿ ವಿಳಂಬದಿಂದಾಗಿ ವಿದೇಶದಲ್ಲಿ ತಿಂಗಳುಗಳ ಕಾಲ ಅಥವಾ ವರ್ಷಗಳವರೆಗೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಕಂಪೆನಿಗಳು ಸೂಚಿಸಿವೆ. Amazonಗೆ ಭಾರತೀಯ ಹಾಗೂ ವಿದೇಶಿ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಿಸುವ ಒತ್ತಡ ಹೆಚ್ಚಾಗಿದೆ. 2024ರ ಅಮೆರಿಕದ ಹಣಕಾಸು ವರ್ಷದಲ್ಲೇ ಕಂಪೆನಿ 14,783 H-1B ಅರ್ಜಿಗಳಿಗೆ ಪ್ರಾಯೋಜಕತ್ವ ವಹಿಸಿತ್ತು. ಇದರಿಂದ ಕಂಪೆನಿ ವಿದೇಶಿ ಕಾರ್ಮಿಕರ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಉಡುಪಿ|ಸಂಚಾರ ನಿಯಮ ಉಲ್ಲಂಘನೆ; 1,199 ಪ್ರಕರಣ ದಾಖಲು
ಹೊಸ ವರ್ಷಾಚರಣೆ, ಹಬ್ಬಗಳಿಗೆ ವಿಶೇಷ ಕಾರ್ಯಾಚರಣೆ
2026ರಲ್ಲಿ ಭಾರತದ ಅರ್ಥವ್ಯವಸ್ಥೆಗೆ ಅಗತ್ಯವಾಗಿರುವ ಒಂದು ವಿಷಯ ಏನು ಗೊತ್ತೆ?
ಪ್ರಸ್ತುತ ರಫ್ತು ಪ್ರಾಬಲ್ಯವು ತಾತ್ಕಾಲಿಕ ಹೊಂದಿಕೆಗಳ ಮೇಲೆ ನಿಂತಿದೆ. ಈ ಹೊಂದಾಣಿಕೆಯನ್ನು ಸ್ಥಿರತೆ ಎಂದು ಮಾರುಕಟ್ಟೆಯನ್ನು ವಿಶ್ಲೇಷಿಸಬಾರದು. 2026ರಲ್ಲಿ ಈ ಹೊಂದಾಣಿಕೆಯ ಪರಿಣಾಮವು ಸ್ಪರ್ಧಾತ್ಮಕತೆ ನಷ್ಟ, ಕಳಪೆ ಹೂಡಿಕೆ ಅವಕಾಶ, ಉದ್ಯೋಗದ ಮೇಲಿನ ಒತ್ತಡ ಮತ್ತು ಕಾರ್ಯಯೋಜನೆಯ ಅನಿಶ್ಚಿತತೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಬಹುದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಿರುವ ಹೊರತಾಗಿಯೂ, ಏಪ್ರಿಲ್ನಿಂದ ನವೆಂಬರ್ವರೆಗೆ ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು ಗಣನೀಯವಾಗಿ ಏರಿಕೆಯಾಗಿದೆ. ಈ ಅವಧಿಯಲ್ಲಿ ವರ್ಷಾನುವರ್ಷದ ಶೇ 11.38ರಷ್ಟು ವೃದ್ಧಿ ಕಂಡಿದ್ದು, ನವೆಂಬರ್ನಲ್ಲಿ ಮಾತ್ರವೇ ವರ್ಷಾನುವರ್ಷದ ಶೇ 22ರಷ್ಟು ಏರಿಕೆಯಾಗಿದೆ. ಆದರೆ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣದಲ್ಲಿ ಕಾಣುತ್ತಿರುವ ಈ ವಿರೋಧಾಭಾಸವನ್ನು ಭಾರತದ ನೀತಿ ನಿರೂಪಕರು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮೊದಲ ನೋಟಕ್ಕೆ ಈ ದೃಢತೆ ಧೈರ್ಯ ತುಂಬಿಸಬಹುದು. ಆದರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಪ್ರಸ್ತುತ ಸ್ಥಿರತೆಯ ನೆಲೆಗಟ್ಟು ಅಲುಗಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 2026ರಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಅತ್ಯಗತ್ಯ ವಿಚಾರವೆಂದರೆ ಅಮೆರಿಕದ ಜೊತೆಗೆ ಸಮಗ್ರ ಹಾಗೂ ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡು ಮುಂದುವರಿಯುವುದು. ಅಂತಹ ಒಪ್ಪಂದವಿಲ್ಲದೆ ಅತಿಯಾದ ಸುಂಕದ ಪರಿಣಾಮ ಪ್ರಗತಿ, ಉದ್ಯೋಗ ಮತ್ತು ಸ್ಪರ್ಧಾತ್ಮಕತೆಯ ಮೇಲೆ ಸ್ಪಷ್ಟವಾಗಿ ಬೀಳಲಿದೆ. *ತೆರಿಗೆಯ ಪರಿಣಾಮ ಇನ್ನೂ ಏಕೆ ಕಾಣಿಸಿಕೊಂಡಿಲ್ಲ? ಅಮೆರಿಕಕ್ಕೆ ಆಗುತ್ತಿರುವ ರಫ್ತುಗಳಲ್ಲಿ ಇತ್ತೀಚೆಗೆ ಕಂಡುಬಂದ ಪುನಶ್ಚೇತನವನ್ನು ತೆರಿಗೆಯಿಂದ ಸುರಕ್ಷತೆ ಎಂದು ತಪ್ಪಾಗಿ ಅರ್ಥೈಸಬಾರದು. ಜಾಗತಿಕ ವ್ಯಾಪಾರ ಸಂಶೋಧನಾ ಯೋಜನೆ (ಜಿಟಿಆರ್ಐ) ಮುಂದಿಟ್ಟಿರುವ ವಿವರಗಳ ಪ್ರಕಾರ, ಸೆಪ್ಟೆಂಬರ್ ನಂತರ ಕಂಡ ಚೇತರಿಕೆ ಕಠಿಣ ತೆರಿಗೆಗೆ ಹೊಂದಿಕೊಳ್ಳುವಿಕೆಯ ಸಂಕೇತವೇ ಹೊರತು, ಅದರ ಪರಿಣಾಮದಿಂದ ಶಮನ ಪಡೆದಿರುವುದಲ್ಲ. ಆರಂಭದಲ್ಲಿ ಅನಿಶ್ಚಿತತೆಯ ಕಾರಣ ಅಮೆರಿಕದ ಖರೀದಿದಾರರು ಮತ್ತು ಭಾರತೀಯ ರಫ್ತುದಾರರು ವ್ಯವಹಾರಗಳನ್ನು ವಿಳಂಬಗೊಳಿಸಿದ್ದರು. ಅದೇ ಕಾರಣಕ್ಕೆ ಮೇ ಮತ್ತು ಸೆಪ್ಟೆಂಬರ್ ನಡುವೆ ರಫ್ತು ಕುಸಿತ ಕಂಡುಬಂದಿತ್ತು. ಒಮ್ಮೆ ತೆರಿಗೆ ಖಚಿತವಾದ ನಂತರ, ಬೆಲೆಗಳನ್ನು ಮರುಹೊಂದಿಸಿಕೊಂಡು, ಕಾರ್ಯಯೋಜನೆಗೆ ಅಗತ್ಯವಿರುವ ಉತ್ಪನ್ನಗಳಿಗೆ ಆದ್ಯತೆ ನೀಡಿ, ವೆಚ್ಚವನ್ನು ಹೀರಿಕೊಂಡು ವ್ಯವಹಾರ ಮುಂದುವರಿಸಲಾಗಿದೆ. ಜಿಟಿಆರ್ಐ ಪ್ರಕಾರ, ಈ ಹೊಂದಾಣಿಕೆಯೇ ತೆರಿಗೆಯ ನಿಜವಾದ ಪರಿಣಾಮವನ್ನು ತಾತ್ಕಾಲಿಕವಾಗಿ ಮರೆಯುವಂತೆ ಮಾಡಿದೆ. ಸರಬರಾಜು ಸರಪಳಿ ಮರುಹೊಂದಿಕೆ, ಅಮೆರಿಕದ ಹಬ್ಬದ ಅವಧಿಗೆ ಮೊದಲು ದಾಸ್ತಾನು ಮರುಸ್ಥಾಪನೆ ಮತ್ತು ಅಲ್ಪಾವಧಿಯ ಕಾರ್ಯಯೋಜನೆಗಳಿಂದ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ರತ್ನಗಳು ಮತ್ತು ಆಭರಣಗಳು, ಔಷಧೋದ್ಯಮ, ಜವಳಿ ಹಾಗೂ ಆಟೋ ಭಾಗಗಳಂತಹ ಕ್ಷೇತ್ರಗಳು ಲಾಭ ಪಡೆದಿವೆ. ಆದರೆ ರಫ್ತು ವ್ಯವಸ್ಥೆ ರಚನಾತ್ಮಕವಾಗಿ ಭದ್ರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. *ತೆರಿಗೆಗಳು ಇನ್ನೂ ಅರ್ಥವ್ಯವಸ್ಥೆಗೆ ಏಕೆ ಬೆದರಿಕೆ? ರಫ್ತು ಕ್ಷೇತ್ರ ಈವರೆಗೆ ದೃಢತೆ ತೋರಿದರೂ, ಶೇ 50ರಷ್ಟು ಸುಂಕವು ಆರ್ಥಿಕವಾಗಿ ಅಸಮತೋಲನಕಾರಿ ಮತ್ತು ದೀರ್ಘಾವಧಿಯಲ್ಲಿ ಸಹಿಸಲಾಗದ ಮಟ್ಟದಲ್ಲಿದೆ. ವಿಶೇಷವಾಗಿ ಲಾಭದ ಮಾರ್ಜಿನ್ ಕಡಿಮೆಯಿರುವ ಕ್ಷೇತ್ರಗಳಲ್ಲಿ, ಇತರ ದೇಶಗಳ ತೀವ್ರ ಸ್ಪರ್ಧೆಯ ನಡುವೆ ಇಂತಹ ಸುಂಕವು ಬೆಲೆಯ ಸ್ಪರ್ಧಾತ್ಮಕತೆಯನ್ನು ಸಂಪೂರ್ಣವಾಗಿ ಕುಂದಿಸುತ್ತದೆ. ಭಾರತೀಯ ರಫ್ತುದಾರರು ತಾತ್ಕಾಲಿಕವಾಗಿ ನಷ್ಟವನ್ನು ಭರಿಸಬಹುದು ಅಥವಾ ಲಾಭದ ಅಂಚನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದರಿಂದ ಹೂಡಿಕೆ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲಾಗುವುದಿಲ್ಲ. ಉದ್ಯೋಗ ಮತ್ತು ಉತ್ಪಾದನಾ ಸಾಮರ್ಥ್ಯ ವೃದ್ಧಿಯ ಮೇಲೂ ಇದರ ಪ್ರಭಾವ ಬೀಳಲಿದೆ. ಕಾಲಕ್ರಮೇಣ ಅಮೆರಿಕದ ಖರೀದಿದಾರರು ಕಡಿಮೆ ಸುಂಕ ಇರುವ ದೇಶಗಳತ್ತ ತಿರುಗುವ ಸಾಧ್ಯತೆ ಇದೆ. ಪ್ರಸ್ತುತ ಭಾರತೀಯ ಉತ್ಪನ್ನಗಳಿಗೆ ಪರ್ಯಾಯಗಳು ಸೀಮಿತವಾಗಿದ್ದರೂ, ಈ ಪರಿಸ್ಥಿತಿ ಶಾಶ್ವತವಲ್ಲ. ಇಂದಿಗೆ ಅರ್ಧ ವೆಚ್ಚವನ್ನು ಭರಿಸಿಕೊಂಡಿರುವ ಖರೀದಿದಾರರು, ಮುಂದಿನ ಹಂತದಲ್ಲಿ ಆರ್ಡರ್ಗಳನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ. ಜವಳಿ, ಉಡುಪು, ಕಾರ್ಪೆಟ್ಗಳು, ರತ್ನಗಳು ಮತ್ತು ಆಭರಣಗಳಂತಹ ಕಾರ್ಮಿಕ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಉದ್ಯೋಗದ ಮೇಲಿನ ಒತ್ತಡ ಸಾಮಾಜಿಕ ಮಟ್ಟದಲ್ಲಿಯೂ ಪರಿಣಾಮ ಬೀರುವ ಅಪಾಯವಿದೆ. *ಉತ್ಪಾದನೆ ಮತ್ತು ಉದ್ಯೋಗದ ಮೇಲೆ ಒತ್ತಡ ಭಾರತದ ಆರ್ಥಿಕ ಕಾರ್ಯಯೋಜನೆ ಮುಖ್ಯವಾಗಿ ಉತ್ಪಾದನಾ ನೇತೃತ್ವದ ಪ್ರಗತಿಯನ್ನು ಆಧರಿಸಿದೆ. ರಫ್ತು ವ್ಯಾಪ್ತಿ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ ಇದರ ಕೇಂದ್ರಬಿಂದುವಾಗಿವೆ. ದೇಶದ ಅತಿದೊಡ್ಡ ರಫ್ತು ಮಾರುಕಟ್ಟೆಯಲ್ಲೇ ಅತಿಯಾದ ಸುಂಕ ವಿಧಿಸಿದರೆ, ಈ ಕಾರ್ಯಯೋಜನೆಗೆ ನೇರ ಹೊಡೆತ ಬೀಳಬಹುದು. ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ವಾಹನಗಳು ಮತ್ತು ಆಟೋಮೊಬೈಲ್ ಭಾಗಗಳು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಅತ್ಯಂತ ಮಹತ್ವಾಕಾಂಕ್ಷೆಯ ಕ್ಷೇತ್ರಗಳಾಗಿವೆ. ಅಮೆರಿಕದ ಮಾರುಕಟ್ಟೆಗೆ ಪ್ರವೇಶ ಸೀಮಿತವಾದರೆ, ಸಂಸ್ಥೆಗಳು ಉತ್ಪಾದನೆ ವಿಸ್ತರಿಸಲು ಅಥವಾ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಹಿಂಜರಿಯಬಹುದು. ಉದ್ಯೋಗ ಸೃಷ್ಟಿಯ ಮೇಲೂ ಇದರಿಂದ ನೇರ ಪರಿಣಾಮ ಬೀಳಲಿದೆ. *ಇತರ ಮಾರುಕಟ್ಟೆಗಳ ಹುಡುಕಾಟದ ಮಿತಿಗಳು ಭಾರತ ಅಮೆರಿಕ ಹೊರತಾದ ಮಾರುಕಟ್ಟೆಗಳತ್ತ ಗಮನ ಹರಿಸುತ್ತಿರುವುದು ಅಗತ್ಯವಾದ ಕಾರ್ಯಯೋಜನೆಯೇ. ಆದರೆ ಹೊಸ ಮಾರುಕಟ್ಟೆಗಳ ಹುಡುಕಾಟಕ್ಕೆ ಪ್ರಾಯೋಗಿಕ ಮಿತಿಗಳಿವೆ. ಅಮೆರಿಕ ಒದಗಿಸುವಷ್ಟು ಖರೀದಿ ಶಕ್ತಿ ಮತ್ತು ವ್ಯಾಪಕ ಬೇಡಿಕೆಯನ್ನು ಇತರೆ ಮಾರುಕಟ್ಟೆಗಳು ನೀಡಲು ಸಾಧ್ಯವಿಲ್ಲ. ಸ್ಮಾರ್ಟ್ಫೋನ್ಗಳು ಮತ್ತು ಔಷಧೋದ್ಯಮದಿಂದ ಹಿಡಿದು ಆಹಾರ ವಸ್ತುಗಳು ಮತ್ತು ರಾಸಾಯನಿಕಗಳವರೆಗೆ ಅಮೆರಿಕ ಭಾರತದ ಅತಿ ದೊಡ್ಡ ರಫ್ತು ಗಮ್ಯಸ್ಥಾನವಾಗಿದೆ. ಈ ಮಟ್ಟದ ಬೇಡಿಕೆಯನ್ನು ಬೇರೆಡೆ ಪೂರೈಸುವುದು ವಾಸ್ತವವಾಗಿ ಕಷ್ಟಕರ. ಜೊತೆಗೆ, ಯುರೋಪಿಯನ್ ಒಕ್ಕೂಟದ ಕಾರ್ಬನ್ ಸುಂಕ ಮತ್ತು ಏಷ್ಯಾದ ಮಾರುಕಟ್ಟೆಗಳ ಮೇಲೆ ಚೀನಾದ ಪ್ರಭಾವ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ. *ಅನಿಶ್ಚಿತತೆಯ ವ್ಯಾಪಾರ ನಷ್ಟ ವ್ಯಾಪಾರ ನೀತಿಯ ಅನಿಶ್ಚಿತತೆಯಲ್ಲೇ ಆರ್ಥಿಕ ನಷ್ಟ ಅಡಗಿದೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಅನಿಶ್ಚಿತತೆಯ ಕಾರಣ ರಫ್ತು ಕುಸಿತ ಕಂಡಿರುವುದು ಇದಕ್ಕೆ ಉದಾಹರಣೆ. ಖರೀದಿದಾರರ ಮನೋಭಾವ ಎಷ್ಟು ಸೂಕ್ಷ್ಮವಾಗಿರುತ್ತದೆ ಮತ್ತು ಯಾವಾಗ ಬೇಕಾದರೂ ಬದಲಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಅಮೆರಿಕದ ಜೊತೆಗೆ ಸಮಗ್ರ ವ್ಯಾಪಾರ ಒಪ್ಪಂದವೊಂದು ಸ್ಥಿರತೆಯ ಸ್ಪಷ್ಟ ಸಂಕೇತವನ್ನು ನೀಡಲಿದೆ. ರಫ್ತು ಆಧಾರಿತ ಕ್ಷೇತ್ರಗಳಲ್ಲಿ ಹೂಡಿಕೆಗೂ ಇದು ಉತ್ತೇಜನ ನೀಡಬಹುದು. 2026ರಲ್ಲಿ ವ್ಯಾಪಾರ ಒಪ್ಪಂದ ಏಕೆ ಅಗತ್ಯ? ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ನೀಡಿರುವ ಹೇಳಿಕೆಗಳು, ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಸುಧಾರಣೆಯ ಹಂತದಲ್ಲಿವೆ ಎಂಬುದನ್ನು ಸೂಚಿಸುತ್ತವೆ. ಈ ಮಾತುಕತೆಗಳನ್ನು ಪೂರ್ಣಗೊಳಿಸಲು ಸರ್ಕಾರವೂ ತುರ್ತು ಪ್ರಯತ್ನದಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ. ಭಾರತ ಅಮೆರಿಕದ ಶೇ 50ರಷ್ಟು ಸುಂಕದ ಹೊರತಾಗಿಯೂ ಹೊಂದಿಕೊಳ್ಳುವ ಸಾಮರ್ಥ್ಯ ತೋರಿಸಿದೆ. ಆದರೆ ಹೊಂದಿಕೊಳ್ಳುವಿಕೆಯನ್ನೇ ಭದ್ರತೆ ಎಂದು ತಪ್ಪಾಗಿ ಅರ್ಥೈಸಬಾರದು. ಪ್ರಸ್ತುತ ರಫ್ತು ಪ್ರಾಬಲ್ಯವು ತಾತ್ಕಾಲಿಕ ಹೊಂದಿಕೆಗಳ ಮೇಲೆ ನಿಂತಿದೆ. ಈ ಹೊಂದಾಣಿಕೆಯನ್ನು ಸ್ಥಿರತೆ ಎಂದು ಮಾರುಕಟ್ಟೆ ವಿಶ್ಲೇಷಿಸಬಾರದು. 2026ರಲ್ಲಿ ಈ ಹೊಂದಾಣಿಕೆಯ ಪರಿಣಾಮ ಸ್ಪರ್ಧಾತ್ಮಕತೆ ನಷ್ಟ, ಕಳಪೆ ಹೂಡಿಕೆ ಅವಕಾಶಗಳು, ಉದ್ಯೋಗದ ಮೇಲಿನ ಒತ್ತಡ ಮತ್ತು ಕಾರ್ಯಯೋಜನೆಯ ಅನಿಶ್ಚಿತತೆಯಾಗಿ ಬಹಿರಂಗವಾಗಿ ಕಾಣಿಸಿಕೊಳ್ಳಲಿದೆ. ಕೃಪೆ: Economic Times
Vaishnavi Sharma- ಕ್ರಿಕೆಟರ್ ಆಗ್ತಾಳೆಂದು ಜ್ಯೋತಿಷ್ಯ ನುಡಿದಿದ್ದ ತಂದೆ! ನ್ಯಾಶನಲ್ ಕ್ರಶ್ ಆದ ಪ್ರತಿಭಾವಂತೆ!
Vaishnavi Sharma Father Narendra Sharma -ಕೇವಲ ತಿಂಗಳ ಹಿಂದಷ್ಟೇ ಯಾರೂ ಆರಿಯದ ವೈಷ್ಣವಿ ಶರ್ಮಾ ಇಂದು ಭಾರತದ ಕ್ರಿಕೆಟ್ ನ ಉದಯೋನ್ಮುಖ ತಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 20ರ ಹರೆಯದ ತರುಣಿ ಈ ಎಡಗೈ ಸ್ಪಿನ್ನರ್ ನ್ಯಾಶನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಅವರ ತಂದೆ, ಜ್ಯೋತಿಷಿ ನರೇಂದ್ರ ಶರ್ಮಾ, ವೈಷ್ಣವಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾರೆ ಎಂದು ಬಾಲ್ಯದಲ್ಲೇ ಭವಿಷ್ಯ ನುಡಿದಿದ್ದರಂತೆ. ತಂದೆಯ ಮಾರ್ಗದರ್ಶನದಿಂದ ವೈಷ್ಣವಿ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.
Wildlife | ಕಾಡಿನಲ್ಲಿ ಹುಲಿಗಳ ಟೆರಿಟರಿ ಫೈಟ್!
ಕಾದಾಡಿ ಸಾಯುತ್ತಿರುವ Tigers; 2025ರಲ್ಲಿ 166 ಹುಲಿಗಳ ಸಾವು
Hebbal Flyover : 2ನೇ ಲೂಪ್ ಉದ್ಘಾಟನೆ - ರಾಜಧಾನಿಗೆ 3 ಮಹತ್ವದ ಯೋಜನೆಯ ಸುಳಿವು ಕೊಟ್ಟ ಡಿಸಿಎಂ
DCM DK Shivakumar on Hebbal Flyover : ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಹೆಬ್ಬಾಳ ಎರಡನೇ ಫ್ಲೈಓವರ್ ಲೂಪ್ ಉದ್ಘಾಟನೆಗೊಂಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಜೊತೆಗೆ, ನಾಲ್ಕು ಯೋಜನೆಗಳ ಸುಳಿವನ್ನು ನೀಡಿದ್ದಾರೆ.
ಗಿಗ್ ಕಾರ್ಮಿಕರ ಐಡಿಗಳನ್ನು ನಿರ್ಬಂಧಿಸಿದ ವಿತರಣಾ ಪ್ಲಾಟ್ ಫಾರ್ಮ್ ಗಳು!
ಗಿಗ್ ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ; ಬೇಡಿಕೆಗಳೇನು? ವಿದೇಶಗಳಲ್ಲಿ ಗಿಗ್ ಕಾರ್ಮಿಕರಿಗೆ ಯಾವ ರೀತಿಯ ಹಕ್ಕುಗಳಿವೆ?
ಸೇಡಂ | ಭೀಮಾ ಕೋರೆಗಾಂವ್ ಯುದ್ಧ ಹಕ್ಕುಗಳಿಗೆ ಸಂದ ಹೋರಾಟ : ಸುನೀಲಕುಮಾರ ಕೋಳಿ
ಸೇಡಂ: 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವು ದಲಿತ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಸಂದ ಜಯ ಎಂದು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ಸೇಡಂ ತಾಲೂಕು ಅಧ್ಯಕ್ಷರು ಸುನೀಲಕುಮಾರ ಕೋಳಿ ಅವರು ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಅವರಣದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಾರುತಿ ಹುಳಗೋಳಕರ, ದಲಿತ ಮುಖಂಡ ದೇವಿಂದ್ರ ಹೆಗಡೆ, ಉಪಾಧ್ಯಕ್ಷರಾದ ಹಣಮಂತ ಸಾಗರ, ತಾಲೂಕು ಸಂಚಾಲಕರಾದ ರಾಜು ಡಿ. ಟಿ, ಮನೋಹರ ದೊಡ್ಡಮನಿ, ದಶರಥ ಚಿಟಕನಪಲ್ಲಿ, ಸುರೇಶ ಸೇಡಂಕರ, ದೇವಿಂದ್ರ ಛೋಟಿಗಿರಣಿ ಇತರರು ಇದ್ದರು.
ಕಲಬುರಗಿ | ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಕಲಬುರಗಿ:ಸಾಲಬಾಧೆಯಿಂದ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಕೆಲ್ಲೂರ ಗ್ರಾಮದ ನಿವಾಸಿ ನಿಂಗಣ್ಣ ಮಲ್ಲೇಶಪ್ಪ ದೇಸಾಯಿ (37) ಎಂದು ಗುರುತಿಸಲಾಗಿದೆ. ನಿಂಗಣ್ಣ ಅವರು 2.21 ಎಕರೆ ಸ್ವಂತ ಜಮೀನು ಹೊಂದಿದ್ದು, ಜೊತೆಗೆ ಹತ್ತಾರು ಎಕರೆ ಜಮೀನನ್ನು ಲೀಝ್ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಈ ಬಾರಿ ಹತ್ತಿ ಸೇರಿದಂತೆ ಇತರೆ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದರು. ತೆಗೆದುಕೊಂಡ ಸಾಲವನ್ನು ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ಡಿಸಿಸಿ ಬ್ಯಾಂಕಿನಲ್ಲಿ 22 ಸಾವಿರ ರೂ. ಹಾಗೂ ಖಾಸಗಿಯಾಗಿ ಸುಮಾರು 10.5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲದ ಒತ್ತಡದಿಂದ ಮನನೊಂದು ತಮ್ಮ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ವಿಜಯಲಕ್ಷ್ಮೀ ತಿಳಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ವಾಹನ ಸವಾರರಿಗೆ ಗುಡ್ ನ್ಯೂಸ್: ಹೆಬ್ಬಾಳದಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟನೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳದಲ್ಲಿ ನಿರ್ಮಿಸಿರುವ ತುಮಕೂರು ಮತ್ತು ಬೆಂಗಳೂರು ಉತ್ತರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸುಗಮ ಸಂಚಾರಕ್ಕೆ ಅನುವಾಗುವ ಮೇಲ್ಸೇತುವೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿದರು. ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಮಾತನಾಡಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಅಂತಾರಾಷ್ಟ್ರೀಯ ವಿಮಾನ
ʻನಟ ವಿಜಯ್ ಎಷ್ಟೇ ಪ್ರಯತ್ನಿಸಿದರೂ ಫಲವಿಲ್ಲ, ತಮಿಳುನಾಡು ಗೆಲ್ಲೋದು ಇಂಡಿಯಾʼ: ಪಿ. ಚಿದಂಬರಂ
ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ನಟ ವಿಜಯ್ ಅವರು ಭರಪೂರ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಮಾತನಾಡಿ, ವಿಜಯ್ ಅವರ ರಾಜಕೀಯ ಜೀವನಕ್ಕೆ ಶುಭ ಹಾರೈಸುತ್ತೇನೆ. ಆದರೆ, ಅವರ ರಾಜಕೀಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎನ್ನುವ ಭವಿಷ್ಯ ನುಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟಕ್ಕೆ ಜಯ ಸಿಗುವುದು. ಮೈತ್ರಿಕೂಟಕ್ಕೆ ಚುನಾವಣೆ ಎದುರಿಸುವುದು, ಪ್ರಚಾರ ನಡೆಸುವುದು ಗೊತ್ತು ಎಂದರು
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ತಿರುವು ; ದೇವಾಲಯದ ಏಳು ತಾಮ್ರದ ತಗಡುಗಳಲ್ಲೂ ಚಿನ್ನ ನಾಪತ್ತೆ
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ದೇವಾಲಯದ ಏಳು ತಾಮ್ರದ ತಗಡುಗಳಿಂದ ಚಿನ್ನ ನಾಪತ್ತೆಯಾಗಿದೆ. ವಿಶೇಷ ತನಿಖಾ ತಂಡ ಈ ಸಂಗತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ. ಈ ಪ್ರಕರಣವು ಕೇವಲ ಎರಡು ವಿಗ್ರಹಗಳಿಗೆ ಸೀಮಿತವಾಗಿಲ್ಲ ಎಂದು ತನಿಖಾ ತಂಡ ತಿಳಿಸಿದೆ. ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
DK Shivakumar: ಜಿಬಿಎ ಪಾಲಿಕೆ ಸೇರಿದಂತೆ ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿ ಕೆ ಶಿವಕುಮಾರ್
ಬೆಂಗಳೂರು: ಜಿಬಿಎ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ಈ ವರ್ಷವೇ ನಡೆಸಲಾಗುವುದು. ಸ್ಥಳೀಯ
ಕಲಬುರಗಿ | ʼಕನ್ನಡನಾಡು ಪ್ರಶಸ್ತಿʼಗೆ ಲೇಖಕರ ಪುಸ್ತಕಗಳ ಆಹ್ವಾನ
ಕಲಬುರಗಿ : ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಖಕರ ಪುಸ್ತಕಗಳಿಗೆ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಕಳೆದ ಎಂಟು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅದರಂತೆ ಈಗ 2024 ರಲ್ಲಿ ಪ್ರಥಮ ಮುದ್ರಣವಾದ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಮಹಿಳಾ ಸಾಹಿತ್ಯ, ಹಾಗೂ ಸಂಕೀರ್ಣ ಕೃತಿಗಳನ್ನು ಅಹ್ವಾನಿಸಲಾಗಿದೆ. ಲೇಖಕರು ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳ ನಾಗರಿಕರಾಗಿರಬೇಕು. ಕನ್ನಡನಾಡು ಪ್ರಕಾಶನದ ಪುಸ್ತಕಗಳನ್ನು ಮತ್ತು ಸಂಘದ ಆಡಳಿತ ಮಂಡಳಿ ಸದಸ್ಯರ ಪುಸ್ತಕಗಳು, ಕಳೆದ ಮೂರು ವರ್ಷಗಳಲ್ಲಿ ಪ್ರಶಸ್ತಿ ಪಡೆದ ಲೇಖಕರ ಪುಸ್ತಕಗಳನ್ನು ಹಾಗೂ ಸಂಪಾದಿತ ಮತ್ತು ಪಿ.ಎಚ್ ಡಿ ಪ್ರಭಂದದ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಗಳು 5,000 ರೂ. ನಗದು, ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. 2024 ರಲ್ಲಿ ಪ್ರಕಟವಾದ ಉತ್ತಮ ಕಥಾಸಂಕಲನ, ಉತ್ತಮ ಕವನ ಸಂಕಲನ, ಉತ್ತಮ ಕಾದಂಬರಿ, ಮಹಿಳಾ ಸಾಹಿತ್ಯ ಮತ್ತು ಸಂಕೀರ್ಣ ವಿಭಾಗದಲ್ಲಿ ಉತ್ತಮ ಕೃತಿಗೆ ಪ್ರಶಸ್ತಿ ನೀಡಲಾಗುವುದು. ಪುಸ್ತಕಗಳನ್ನು ಜ.20ರ, 2026ರೊಳಗಾಗಿ ತಮ್ಮ ಕೃತಿಯ ಮೂರು ಪ್ರತಿಗಳನ್ನು ಅಧ್ಯಕ್ಷರು ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ” ಜಿ.2 ವಿ. ವಿ.ಹಾಸ್ಟೇಲ್ ಕಾಂಪ್ಲೆಕ್ಸ್ ಸೇಡಂ ರಸ್ತೆ ಕಲಬುರಗಿ -585105. ವಿಳಾಸಕ್ಕೆ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಕಳಿಸಿಕೊಡಲು ಕೋರಲಾಗಿದೆ. ಈ ಪ್ರಶಸ್ತಿಯ ನೀಡಿಕೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ. ಈ ಕುರಿತು ಪತ್ರ ವ್ಯವಹಾರ ಇಲ್ಲವೇ ವಿಚಾರಣೆಗೆ ಅವಕಾಶವಿಲ್ಲ. ಪ್ರಶಸ್ತಿಗೆ ಬಂದ ಪುಸ್ತಕಗಳನ್ನು ಹಿಂದುರಿಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಪ್ಪಾರಾವ ಅಕ್ಕೋಣೆ 9448570985, ಸ್ವಾಮಿರಾವ ಕುಲಕರ್ಣಿ- 9448333539, ಡಾ.ಶರಣಬಸಪ್ಪ ವಡ್ಡನಕೇರಿ 9741169055 ಅವರನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಂಡಾಂತರದಿಂದ ಕುರ್ಚಿ ಫೈಟ್’ವರೆಗೆ - 2025ರಲ್ಲಿ ಕೋಡಿಶ್ರೀಗಳ 4 ಭವಿಷ್ಯಗಳು: ನಿಜವಾಗಿದ್ದು ಯಾವುದು?
Year 2025 Kodi Mutt Swamiji Prediction : ತಾಳೇಗರಿ ಆಧಾರಿತವಾಗಿ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಕಳೆದ ವರ್ಷ (2025) ಹಲವು ಭವಿಷ್ಯಗಳನ್ನು ನುಡಿದಿದ್ದರು. ಆ ಪೈಕಿ, ಅವರು ನುಡಿದಿದ್ದ ಕೆಲವೊಂದು ಭವಿಷ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅಂತಹ ನಾಲ್ಕು ಭವಿಷ್ಯದ ಸತ್ಯಾಸತ್ಯತೆ ಏನು?
ಅಗ್ನಿದುರಂತ ತಡೆಯಲು ಕೆಎಸ್ ಆರ್ ಟಿಸಿಯ ಈ ಬಸ್ಸುಗಳಲ್ಲಿನ್ನು ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆ
ರಾಜ್ಯ ಸರ್ಕಾರವು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಡ್ಯಾಶ್ಕ್ಯಾಮ್ ಮತ್ತು ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳು ಮತ್ತು ಅಪಘಾತಗಳಿಂದ ಎಚ್ಚೆತ್ತಿರುವ ಸರ್ಕಾರ, ಚಾಲಕರ ನಡವಳಿಕೆ ಮತ್ತು ವಾಹನ ಚಾಲನಾ ಮಾದರಿಗಳನ್ನು ಪರಿಶೀಲಿಸಲು ಈ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುತ್ತಿದೆ.
ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಸರಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ
ಕಲಬುರಗಿ: ರಾಜ್ಯ ಸರಕಾರಿ ನೌಕರರ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಸೃಜಿಸಲಾದ 2026ರ ವಾರ್ಷಿಕ ಕ್ಯಾಲೆಂಡರ್ ಅನ್ನು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಬಿಡುಗಡೆಗೊಳಿಸಿದರು. ಇದೇ ವೇಳೆಯಲ್ಲಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಕೊರಲಾಯಿತು. ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ವಾರ್ಷಿಕ ಕ್ಯಾಲೆಂಡರ್ ವಿತರಣೆ ಮಾಡಲಾಯಿತು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಹೂಗಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಹಿರಿಯ ಉಪಾಧ್ಯಕ್ಷರಾದ ಎಂ.ಬಿ.ಪಾಟೀಲ, ಸುರೇಶ ವಗ್ಗೆ, ಕಾರ್ಯಾಧ್ಯಕ್ಷರಾದ ಚಂದ್ರಕಾಂತ ಏರಿ, ಸಿದ್ದಲಿಂಗಯ್ಯ ಸ್ವಾಮಿ, ರಾಜೇಶ ನೀಲಳ್ಳಿ, ವೀರಭದ್ರಯ್ಯ ಸ್ವಾಮಿ, ಶಶಿಕಾಂತ ಹೊಳಕರ, ಜಮೀಲ್ ಇಮ್ರಾನ್, ರೇವಣಸಿದ್ದಪ್ಪ, ಗುರುಶರಣ, ಮಲ್ಲಿಕಾರ್ಜುನ, ಪದ್ಮರಾಜ , ಅನೀಲ ಕುಮಸಿ, ಯಾದವ್, ಸವಿತಾ ನಾಸಿ, ಅಣವೀರಪ್ಪ ಯಾಕಾಪೂರ, ಶರಣರಾಜ ಛಪ್ಪರಬಂಧಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಕನೂರು ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ
ಕುಕನೂರು : ಪಟ್ಟಣದ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕುಕನೂರು ಬಸ್ ನಿಲ್ದಾಣ ಹಾಗೂ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಪೊಲೀಸ್ ಠಾಣೆಯ ಎಎಸ್ಐ ನಿಂಗಮ್ಮ ಅವರು ಕರಪತ್ರಗಳನ್ನು ವಿತರಿಸಿ ಸಂಚಾರ ನಿಯಮಗಳು, ತುರ್ತು ಕರೆ ಸಂಖ್ಯೆ 112, ಮಹಿಳಾ ಸಹಾಯವಾಣಿ 181 ಹಾಗೂ ಸೈಬರ್ ವಂಚನೆ ದೂರು ಸಂಖ್ಯೆ 1930 ಕುರಿತು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಅಪರಾಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ಕೇವಲ ಪೊಲೀಸರಿಂದ ಅಪರಾಧ ತಡೆ ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಅಪರಾಧಗಳು ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ, ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಯಾವುದೇ ಅಪರಾಧವನ್ನು ಕಂಡ ಸಂದರ್ಭಗಳಲ್ಲಿ ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ನೀಡಬೇಕು. ಇಲ್ಲವಾದಲ್ಲಿ ಸಾಕ್ಷ್ಯಾಭಾವದಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಮನೆಗೆ ಬೀಗ ಹಾಕಿ ಹೊರ ಊರಿಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು ಅಥವಾ ಗೃಹ ರಕ್ಷಕ ತಂತ್ರಾಂಶದಲ್ಲಿ ಮನೆ ವಿವರಗಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ವಿನೋದ ಕಾಮನೂರು, ಚಂದ್ರಶೇಖರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜನವರಿ 1ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 1) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
PHOTOS | ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ
ಕೋಗಿಲು ಪ್ರಕರಣ; ಹೊರದೇಶದವರಿಗೆ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು- ಎಸ್.ಆರ್.ವಿಶ್ವನಾಥ್
ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು- ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂಪಾಯ ದುಡ್ಡು
LPG Price: ಹೊಸ ವರ್ಷದ ಮೊದಲ ದಿನವೇ ಎಲ್ಪಿಜಿ ಸಿಲಿಂಡರ್ ದರ ಭಾರೀ ಏರಿಕೆ: ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ
LPG Price: ಭಾರತದಲ್ಲಿ ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಇದೀಗ ಇಂದು (ಜನವರಿ 1, 2026) ದರವನ್ನು ಏರಿಕೆ ಮಾಡಲಾಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಈ ರೈಲು ಮೊದಲು ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚರಿಸಲಿದ್ದು, ದೂರದ ಪ್ರಯಾಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ರಾತ್ರಿಯ ಪ್ರಯಾಣಕ್ಕೆ ಅನುಕೂಲವಾಗುವ ಸ್ಲೀಪರ್ ಸೌಲಭ್ಯವು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ.
Canada| ವ್ಯಾಂಕೋವರ್ ಏರ್ಪೋರ್ಟ್ನಲ್ಲಿ ಮದ್ಯಪಾನ ಮಾಡಿರುವ ಶಂಕೆ: ಏರ್ ಇಂಡಿಯಾ ಪೈಲಟ್ ಬಂಧನ
ವ್ಯಾಂಕೋವರ್,ಜ.1: ಕೆನಡಾದ ವ್ಯಾಂಕೋವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ದಿಲ್ಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಚಲಾಯಿಸಲಿದ್ದ ಪೈಲಟ್ ಒಬ್ಬರನ್ನು ಮದ್ಯಪಾನ ಮಾಡಿದ ಶಂಕೆಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ಹತ್ತುವ ಮೊದಲು ಪೈಲಟ್ ಬಾಯಿಯಿಂದ ಮದ್ಯದ ವಾಸನೆ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಯೋರ್ವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೈಲಟ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿ ವಿಫಲರಾದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಈ ಘಟನೆ ಬಳಿಕ ಪೈಲಟ್ ‘ಕರ್ತವ್ಯಕ್ಕೆ ಬೇಕಾದ ಫಿಟ್ನೆಸ್’ ಕುರಿತು ಕಳವಳ ವ್ಯಕ್ತಪಡಿಸಿದ ಕೆನಡಾದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.
KEA: ವೈದ್ಯಕೀಯ ಅಭ್ಯರ್ಥಿಗಳಿಗೆ ಗುಡ್ನ್ಯೂಸ್: ಜ.6 ರಂದು ಪಶು ವೈದ್ಯಕೀಯ ಸೀಟು ಹಂಚಿಕೆ
ಬೆಂಗಳೂರು: ವೈದ್ಯಕೀಯ ವೃತ್ತಿಪರ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಾವುದೇ ಸುತ್ತಿನಲ್ಲಿ ಸೀಟು ಹಂಚಿಕೆ ಆಗದ ವೈದ್ಯಕೀಯ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಕರ್ನಾಟಕದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಇನ್ನೂ 24 ಪಶು ವೈದ್ಯಕೀಯ (UG Veterinary 2025) ಸೀಟುಗಳು ಹಂಚಿಕೆಗೆ ಲಭ್ಯ ಇವೆ. ಅವುಗಳ ಹಂಚಿಕೆಯಲ್ಲಿ ನೀವು
ನ್ಯಾಕ್ ಜೊತೆಗಿನ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪತ್ರವ್ಯವಹಾರಕ್ಕೆ ಕನ್ನಡ ಕಡ್ಡಾಯ; ಸರ್ಕಾರದ ಮಹತ್ವದ ಆದೇಶ
ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನ್ಯಾಕ್ ಜೊತೆಗಿನ ಎಲ್ಲಾ ಸಂವಹನಗಳನ್ನು ಕನ್ನಡದಲ್ಲೇ ನಡೆಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಕೇಂದ್ರದ ಅನುದಾನ ಪಡೆಯಲು ನ್ಯಾಕ್ ಮಾನ್ಯತೆ ಕಡ್ಡಾಯವಾಗಿದೆ. ಈ ಮಾನ್ಯತೆ ಪಡೆಯದಿದ್ದರೆ ಕೇಂದ್ರದ ಆರ್ಥಿಕ ನೆರವು ಸಿಗುವುದಿಲ್ಲ. ಬಾಕಿ ಇರುವ ಕಾಲೇಜುಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
MADIKERI | ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಮೃತ್ಯು
ಮಡಿಕೇರಿ, ಜ.1: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದಲ್ಲಿ ನಡೆದಿದೆ. ಸಂಗಯ್ಯಪುರ ಗ್ರಾಮದ ನಿವಾಸಿ ಪೊನ್ನಪ್ಪ(62) ಮೃತಪಟ್ಟವರು. ಇವರು ಮನೆಯ ಮುಂಭಾಗದಲ್ಲಿರುವ ಜಮೀನಿಗೆ ಕೆಲಸಕ್ಕೆಂದು ತೆರಳಿದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎಸಿಎಫ್ ಗೋಪಾಲ್, ಆರ್ಎಫ್ಒ ಶೈಲೇಂದ್ರ, ಡಿಆರ್ಎಫ್ ಶ್ರವಣ ಕುಮಾರ್, ಸಿಬ್ಬಂದಿಗಳಾದ ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್, ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಹಾಗೂ ವೃತ್ತ ನೀರಿಕ್ಷಕರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಡಾನೆ ಉಪಟಳ ಮಿತಿಮೀರಿರುವ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದಾಗ ಅರಣ್ಯ ಅಧಿಕಾರಿಗಳು ಆನೆ ಕಂದಕ ಮತ್ತು ಸೋಲಾರ್ ಬೇಲಿ ನಿರ್ಮಾಣದ ಭರವಸೆ ನೀಡಿದರು.
ಮೀಫ್ ವತಿಯಿಂದ ಮಂಗಳೂರು ತಾಲೂಕು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಮಂಗಳೂರು, ಜ.1: ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ (ಮೀಫ್) ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಗುರುವಾರ ಮಂಗಳೂರಿನ ಹ್ಯಾಟ್ ಹಿಲ್ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಗೊಂಡಿತು. ಕಾರ್ಯಾಗಾರವನ್ನು ಉದ್ಘಾಟಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹ ಮಾತನಾಡಿ, ‘ಎಸೆಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯೊಂದಿಗೆ ಮೀಫ್ ಜಿಲ್ಲಾದ್ಯಂತ ನೀಡುತ್ತಿರುವ ನಿರಂತರ ಸಹಕಾರವನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೌದಿ ಅರಬಿಯದ ಎಕ್ಸ್ ಪರ್ಟೈಸ್ ಕಂಪೆನಿಯ ಸಿಎಸ್ಒ ಮುಹಮ್ಮದ್ ಅಶ್ರಫ್ ಕರ್ನಿರೇ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಮೀಫ್ ನ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಮೀಫ್ ಸಲಹೆಗಾರ ಫಾರೂಕ್ ಏರ್ ಲೈನ್ಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಪ್ರೌಢ ಶಾಲೆಯ ಶುಭಾ ಭಟ್ ಮತ್ತು ಬಡಗ ಎಕ್ಕಾರು ಪ್ರೌಢ ಶಾಲೆಯ ರಮ್ಯಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ನಗರ ವ್ಯಾಪ್ತಿಯ ಹನ್ನೆರಡು ವಿದ್ಯಾ ಸಂಸ್ಥೆಗಳ 138 ಆಯ್ದ ವಿದ್ಯಾರ್ಥಿಗಳು ಪಾಲ್ಗೊಂಡರು. ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಖತೀಜತುಲ್ ಕುಬ್ರಾ ಸ್ವಾಗತಿಸಿದರು. ಮೀಫ್ ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ ವಂದಿಸಿದರು.
ಮರ್ಯಾದೆಗೇಡು ಹತ್ಯೆ ತಡೆಗೆ ʻಮಾನ್ಯಾʼ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ: ಸಚಿವ ಮಹದೇವಪ್ಪ
ಮರ್ಯಾದೆಗೇಡು ಹತ್ಯೆ ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವ ಮಹದೇವಪ್ಪ ಅವರು ಹೇಳಿದರು. ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ, ಮುಂದಿನ ಅಧಿವೇಶನದಲ್ಲಿ ಕಠಿಣ ಕಾನೂನು ತರಲು ಪ್ರಯತ್ನಿಸಲಾಗುವುದು. ಏಳು ತಿಂಗಳ ಗರ್ಭಿಣಿಯನ್ನು ಕುಟುಂಬಸ್ಥರೇ ಕೊಲೆ ಮಾಡಿದ್ದು ಅಮಾನವೀಯ. ಇಂತಹ ಮನುವಾದಿ ಮನಸ್ಸುಗಳನ್ನು ಹತ್ತಿಕ್ಕಲಾಗುವುದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
`ಕನಸು ಅಷ್ಟು ಬೇಗ ನನಸಾಗದು': 75 ಎಸೆತದಲ್ಲಿ 157 ರನ್ ಸಿಡಿಸಿದರೂ ಸರ್ಫರಾಝ್ ಖಾನ್ ವಿಷಾದ!
Sarfaraz Khan Dream- ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿರುವ ಸರ್ಫರಾಝ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದಾರೆ. ಗೋವಾ ವಿರುದ್ಧ ಅವರು ಕೇವಲ 75 ಎಸೆತಗಳಲ್ಲಿ 157 ರನ್ ಸಿಡಿಸಿ ಮುಂಬೈಗೆ 87 ರನ್ಗಳ ಗೆಲುವು ತಂದಿದ್ದಾರೆ.ಆದರೆ ಸಹೋದರ ಸಹೋದರ ಮುಷೀರ್ ಖಾನ್ ಜೊತೆ ಶತಕ ಸಿಡಿಸುವ ಕನಸು ನನಸಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನೊಂದಿಗೆ ಮುಂಬೈ ತಂಡ ಎಲೈಟ್ ಗ್ರೂಪ್ ಸಿ ಯಲ್ಲಿ ಅಗ್ರಸ್ಥಾನದಲ್ಲಿದೆ.
ಹೊಸ ವರ್ಷಕ್ಕೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದುಬಾರಿ: 111ರೂ. ಹೆಚ್ಚಳ
ವಿಮಾನ ಇಂಧನ ದರದಲ್ಲಿ ಇಳಿಕೆ
2026ರ ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ಮಿಚೆಲ್ ಮಾರ್ಷ್ ನಾಯಕತ್ವ ವಹಿಸಲಿದ್ದಾರೆ. ಭಾರತದ ಪಿಚ್ಗಳಿಗೆ ಅನುಗುಣವಾಗಿ ಸ್ಪಿನ್ನರ್ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನುಭವಿ ಆಟಗಾರರೊಂದಿಗೆ ಯುವ ಪ್ರತಿಭೆಗಳಿಗೂ ಅವಕಾಶ ಸಿಕ್ಕಿದೆ. ಕೆಲವು ಆಟಗಾರರ ಗಾಯದ ಸಮಸ್ಯೆಗಳ ನಡುವೆಯೂ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಂಡಿವೆ.
ಪಣಜಿ,ಜ.1: ಡಿಸೆಂಬರ್ ಆರಂಭದಲ್ಲಿ 25 ಜನರ ಪ್ರಾಣಹಾನಿಗೆ ಕಾರಣವಾದ ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿನ ನೈಟ್ಕ್ಲಬ್ ಅನ್ನು ಉಪ್ಪಿನ ಅಗರದ ಮಧ್ಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದು, ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು ಎಂದು ಮ್ಯಾಜಿಸ್ಟೀರಿಯಲ್ ತನಿಖಾ ವರದಿ ತಿಳಿಸಿದೆ. ಈ ಪ್ರಕರಣದಲ್ಲಿ ಹಲವು ಹಂತಗಳಲ್ಲಿ ಗಂಭೀರ ಆಡಳಿತಾತ್ಮಕ ಲೋಪಗಳು ಮತ್ತು ಅಧಿಕಾರಿಗಳ ಸಹಭಾಗಿತ್ವ ಕಂಡುಬಂದಿದೆ ಎಂದು ವರದಿಯು ಹೇಳಿದೆ. ಡಿಸೆಂಬರ್ 31ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್ಕ್ಲಬ್ ಉಪ್ಪಿನ ಅಗರ ಹಾಗೂ ಜಲಮೂಲದ ಮಧ್ಯದಲ್ಲಿ ನಿರ್ಮಾಣವಾಗಿದ್ದು, ಇಂತಹ ನಿರ್ಮಾಣಕ್ಕೆ ಯಾವುದೇ ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಉಪ್ಪಿನ ಅಗರವನ್ನು ಪರಿವರ್ತಿಸಿರುವುದು ಭೂ ಕಂದಾಯ ಸಂಹಿತೆ ಹಾಗೂ ಕರಾವಳಿ ವಲಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಗ್ರಾಮ ಪಂಚಾಯತ್ ನೀಡಿದ್ದ ವ್ಯಾಪಾರ ಪರವಾನಗಿ ಮಾರ್ಚ್ 31, 2024ರವರೆಗೆ ಮಾತ್ರ ಮಾನ್ಯವಾಗಿದ್ದು, ಬಳಿಕ ಅದನ್ನು ನವೀಕರಿಸಲಾಗಿರಲಿಲ್ಲ. ಆದರೂ ನೈಟ್ಕ್ಲಬ್ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಲೇ ಇತ್ತು. ಈ ಅವಧಿಯಲ್ಲಿ ಆವರಣವನ್ನು ಸೀಲ್ ಮಾಡಲು ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತನಿಖೆಯು ತಿಳಿಸಿದೆ. ತನಿಖೆಯ ವೇಳೆ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮದ ಅಧಿಕಾರಿಗಳು, ಪರವಾನಗಿ ನವೀಕರಿಸಿಲ್ಲ ಎಂಬುದು ತಿಳಿದಿದ್ದರೂ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿಲ್ಲ ಹಾಗೂ ನೈಟ್ಕ್ಲಬ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ಆಸ್ತಿಯ ಮಾಲೀಕರೊಂದಿಗೆ ಪಂಚಾಯತ್ ಅಧಿಕಾರಿಗಳು ಶಾಮೀಗಿದ್ದಾರೆ ಎಂದು ವರದಿಯು ತಿಳಿಸಿದೆ. 2023ರಲ್ಲಿ ಸಲ್ಲಿಸಲಾದ ಪರವಾನಗಿ ಅರ್ಜಿಯಲ್ಲಿ ನಕಲಿ, ತಿದ್ದುಪಡಿ ಮಾಡಿದ ದಾಖಲೆಗಳು ಮತ್ತು ಅನುಮೋದಿತ ಯೋಜನೆ, ಭೂ ದಾಖಲೆಗಳಂತಹ ಕಡ್ಡಾಯ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ. ಅರ್ಜಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪರವಾನಗಿಯನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ವರದಿಯು ತಿಳಿಸಿದೆ. ಪೊಲೀಸ್ ವರದಿ ಆಧಾರದ ಮೇಲೆ, ಅಗ್ನಿ ದುರಂತದ ದಿನ ನೈಟ್ಕ್ಲಬ್ನಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಪಟಾಕಿ ಪ್ರದರ್ಶನ ಆಯೋಜಿಸಲಾಗಿದ್ದು, ಅಗತ್ಯ ಎಚ್ಚರಿಕೆ ವಹಿಸದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತನಿಖೆಯು ಹೇಳಿದೆ. ಕ್ಲಬ್ನಲ್ಲಿ ತುರ್ತು ನಿರ್ಗಮನ ದ್ವಾರಗಳಿಲ್ಲದೆ ಮತ್ತು ಮಾನ್ಯ ಅನುಮತಿಗಳಿಲ್ಲದೆ ಕಾರ್ಯಾಚರಣೆ ನಡೆಯುತ್ತಿತ್ತು ಎಂದು ವರದಿಯು ಉಲ್ಲೇಖಿಸಿದೆ. ಶಬ್ದ ಮಾಲಿನ್ಯ ಹಾಗೂ ಪಾರ್ಕಿಂಗ್ ಸಮಸ್ಯೆಗಳ ಕುರಿತು ಹಲವು ದೂರುಗಳು ದಾಖಲಾಗಿದ್ದರೂ, ‘ಸ್ಥಳದಲ್ಲಿ ಏನೂ ಕಂಡುಬಂದಿಲ್ಲ’ ಎಂಬ ಕಾರಣ ನೀಡಿ ಆ ದೂರುಗಳನ್ನು ಮುಚ್ಚಲಾಗಿದೆ. ನ್ಯಾಯಾಲಯದ ನಿರ್ದೇಶನಗಳನ್ನೂ ಪಾಲಿಸಲಾಗಿಲ್ಲ ಎಂದು ವರದಿಯು ತಿಳಿಸಿದೆ. ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಇದುವರೆಗೆ ನೈಟ್ಕ್ಲಬ್ನ ಮೂವರು ಮಾಲಕರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ದುರಂತದ ಬಳಿಕ ವಿದೇಶಕ್ಕೆ ಪಲಾಯನ ಮಾಡಿದ ಮಾಲಕರನ್ನು ನಂತರ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರು ಗೋವಾ ಸರಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ; ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ʼಮನುಷ್ಯನಿಗೆ ಆಕಾಂಕ್ಷೆ ಎನ್ನುವುದು ಇರಲೇಬೇಕು, ಇಲ್ಲ ಅಂದರೆ ಮನುಷ್ಯ ಅನಿಸಿಕೊಳ್ಳಲ್ಲ. ಎಲ್ಲರಂತೆ ನನಗೂ ಆಕಾಂಕ್ಷೆ ಇದೆ. ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆʼ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಹೇಳಿದರು. ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ನಿಮಗೆ ರಾಜಕೀಯ ಪದೋನ್ನತಿ ಸಿಗಲಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇಲ್ಲಿಯವರೆಗೆ ಆಶಾವಾದಿಯಾಗಿಯೇ ಬದುಕಿದ್ದೇನೆ. ಜೀವನದಲ್ಲಿ ಏನೇನೋ ಆಗಬೇಕು ಎಂದು ಬಯಕೆ ಎಲ್ಲರಿಗೂ ಇರುತ್ತದೆ. ಮನುಷ್ಯನಿಗೆ ಆಕಾಂಕ್ಷೆ ಎಂಬುದು ಇರಲೇಬೇಕು. ಹೈಕಮಾಂಡ್ ತೀರ್ಮಾನ ಮಾಡಿದರೆ ಆಗುತ್ತದೆ. ಅದು ನಮ್ಮ ವರಿಷ್ಠರಿಗೆ ಬಿಟ್ಟದ್ದು ಎಂದು ತಿಳಿಸಿದರು. ʼಧರ್ಮಸ್ಥಳ ಪ್ರಕರಣʼ ತನಿಖೆ ಶೀಘ್ರ ಪೂರ್ಣಗೊಳಿಸುತ್ತೇವೆ : ಈ ವರ್ಷ ಬಾಕಿ ಇರುವ ಎಸ್ಐಟಿ, ಸಿಐಡಿ ತನಿಖೆಗಳನ್ನು ಪೂರ್ಣಗೊಳಿಸುತ್ತೇವೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಯಾವುದೆಲ್ಲ ಬಾಕಿ ಪ್ರಕರಣ ಇವೆಯೋ ಈ ವರ್ಷ ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯೂಟ್ಯೂಬ್ನಂತೆ ಇನ್ಮುಂದೆ ಎಕ್ಸ್ನಿಂದಲೂ ಸಿಗಲಿದೆ ದುಡ್ಡು: ಎಲಾನ್ ಮಸ್ಕ್ ಗುಡ್ನ್ಯೂಸ್
ಭಾರತದ ಲಕ್ಷಾಂತರ ಜನರಿಗೆ ಯೂಟ್ಯೂಬ್ ಆದಾಯ ಮೂಲವಾಗಿದೆ. ಭಾರತದಲ್ಲಿ ಯೂಟ್ಯೂಬ್ ಕೇವಲ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಈಗ ಆದಾಯದ ಮೂಲವಾಗಿಯೂ ಬದಲಾಗಿದೆ. ದೇಶದಲ್ಲಿ ಲಕ್ಷಾಂತರ ಜನ ಯೂಟ್ಯೂಬ್ ಮೂಲಕ ಗುರುತಿಸಿಕೊಂಡಿದ್ದು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಈ ರೀತಿ ಇರುವಾಗ ಸೋಷಿಯಲ್ ಮೀಡಿಯಾ ಎಕ್ಸ್ (X) - ಯೂಟ್ಯೂಬ್ಗೆ (Youtube) ಪೈಪೋಟಿ ಕೊಡುವುದಕ್ಕೆ ಮುಂದಾಗಿದ್ದು. ಇನ್ಮುಂದೆ ನೀವು ಎಕ್ಸ್ನಿಂದಲೂ
ಜಾಗತಿಕ ಎಐ ಇಂಡೆಕ್ಸ್: 3ನೇ ಸ್ಥಾನಕ್ಕೆ ಜಿಗಿದ ಭಾರತ; ಕರ್ನಾಟಕದ ಕೊಡುಗೆಯನ್ನು ಶ್ಲಾಘಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಭಾರತವು ಜಾಗತಿಕ ಎಐ ವೈಬ್ರನ್ಸಿ ಇಂಡೆಕ್ಸ್ನಲ್ಲಿ 3ನೇ ಸ್ಥಾನ ಗಳಿಸಿದೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಈ ಶ್ರೇಯಾಂಕದಲ್ಲಿ ಅಮೆರಿಕ ಮತ್ತು ಚೀನಾ ಮಾತ್ರ ಮುಂದಿವೆ. ಕರ್ನಾಟಕವು ಈ ಸಾಧನೆಗೆ ಪ್ರಮುಖ ಕೊಡುಗೆ ನೀಡಿದೆ. ಇನ್ನು, ಭಾರತವು ಜಪಾನ್ಅನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. 2030ರ ವೇಳೆಗೆ ಜರ್ಮನಿಯನ್ನೂ ಮೀರಿಸಿ 3ನೇ ಸ್ಥಾನಕ್ಕೇರಲಿದೆ.
Government Employees: ಹಳೆ ಪಿಂಚಣಿ ಯೋಜನೆ ಮರು ಜಾರಿ: ಸರ್ಕಾರಕ್ಕೆ ಸಿ ಎಸ್ ಷಡಾಕ್ಷರಿ ಕೊಟ್ಟ ಎಚ್ಚರಿಕೆ ಏನು?
ಶಿವಮೊಗ್ಗ: ಕರ್ನಾಟಕದಲ್ಲಿ ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆ. ರಾಜ್ಯ ಸರಕಾರಿ ನೌಕರರ ಸಂಘವು ಎನ್ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಲು ಒತ್ತಾಯಿಸಿದೆ. ಸರ್ಕಾರಿ ನೌಕರರ ಆರ್ಥಿಕ ಭದ್ರತೆಗಾಗಿ ಈ ಕ್ರಮ ಅಗತ್ಯ ಎಂದು ಸರ್ಕಾರಿ ನೌಕರರು ಮನವಿ ಮಾಡಿದ್ದು, ಸಮಿತಿಯು ಶೀಘ್ರದಲ್ಲೇ ವರದಿ ಸಲ್ಲಿಸುವ ಭರವಸೆ
ಕಲಬುರಗಿ ಸೆಂಟ್ರಲ್ ಜೈಲ್ ಕರ್ಮಕಾಂಡ: ಕೈದಿಗಳ ಐಷಾರಾಮಿ ಜೀವನದ ವಿಡಿಯೋ ಬಯಲು
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯ ಸೇವಿಸಿ, ಜೂಜಾಟದಲ್ಲಿ ತೊಡಗಿರುವ ಐಷಾರಾಮಿ ಜೀವನದ ವಿಡಿಯೋ ವೈರಲ್ ಆಗಿದೆ. ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜೈಲಿನಲ್ಲಿ ದಾಳಿ ನಡೆಸಿದ್ದು, ಯಾವುದೇ ವಸ್ತು ಪತ್ತೆಯಾಗಿಲ್ಲ.
Delhi Weather: ರಾಷ್ಟ್ರ ರಾಜಧಾನಿಗೆ ಚಳಿ ಕಂಟಕ, 6 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು
ನವದೆಹಲಿ: ರಾಷ್ಟ್ರ ರಾಜಧಾನಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಾ ಇದ್ದು, ಸಾಲು ಸಾಲು ಕಂಟಕ ದೆಹಲಿ ಜನರನ್ನು ಕಾಡುತ್ತಲೇ ಇದೆ. ಒಂದು ಕಡೆ ಮಾಲಿನ್ಯದ ಪರಿಣಾಮ, ಈಗಾಗಲೇ ಸಾವಿರಾರು ಜನರು ಆಸ್ಪತ್ರೆ ಸೇರಿದ್ಧಾರೆ. ಹೀಗಿದ್ದಾಗ ದೆಹಲಿ 6 ವರ್ಷಗಳಲ್ಲೇ ಅತ್ಯಂತ ಶೀತಮಯ ಡಿಸೆಂಬರ್ ದಿನವನ್ನು ದಾಖಲಿಸಿದೆ. 2025 ಚಳಿಗಾಲವು ದೆಹಲಿಯ ಜನರ ಪಾಲಿಗೆ ತೀವ್ರ ಆಘಾತ ತಂದೊಡ್ಡಿದ್ದು,
ಡಾ.ಎಂ.ಕೆ.ಅಬ್ದುಲ್ ಆರಿಸ್ ರಿಗೆ 'ಯುಎಇ ರಾಷ್ಟ್ರೀಯ ಪ್ರಶಸ್ತಿ – 2025'
ದುಬೈ: ವೈದ್ಯ ಮತ್ತು ಸಮಾಜ ಸೇವಕ ಡಾ.ಎಂ.ಕೆ.ಅಬ್ದುಲ್ ಆರಿಸ್ ಅವರು ವೆಸ್ಟ್ ವರ್ಲ್ಡ್ ಯುಕೆ ಲಿಮಿಟೆಡ್ ನ ಸಂಯುಕ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ(Co-CEO) ಮತ್ತು ಯುಎಇ ಆಡಳಿತ ಪ್ರಾಧಿಕಾರ ಜಂಟಿಯಾಗಿ ನೀಡುವ ಪ್ರತಿಷ್ಠಿತ 'ಯುಎಇ ರಾಷ್ಟ್ರೀಯ ಪ್ರಶಸ್ತಿ–2025'ಕ್ಕೆ ಭಾಜನರಾಗಿದ್ದಾರೆ. ದುಬೈನ ಡಬಲ್ ಟ್ರೀ ಬೈ ಹಿಲ್ಟನ್ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಎಂ.ಕೆ.ಅಬ್ದುಲ್ ಆರಿಸ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೂಲತಃ ಬೆಳ್ತಂಗಡಿಯ ಪುತಿಲ ಗ್ರಾಮದ ಕುಂದಡ್ಕ ಮನೆ ನಿವಾಸಿಯಾಗಿರುವ ಡಾ.ಎಂ.ಕೆ.ಅಬ್ದುಲ್ ಆರಿಸ್ ಅವರು ಯುಎಇಯಲ್ಲಿ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಲ್ಲಿಸಿದ ವಿಶಿಷ್ಟ ವೈದ್ಯಕೀಯ ಮತ್ತು ಸಮಾಜ ಸೇವೆಯನ್ನೊಳಗೊಂಡ ಮಾನವೀಯ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಶಾಕ್: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಭಾರಿ ಏರಿಕೆ
2026ರ ಹೊಸ ವರ್ಷದ ಮೊದಲ ದಿನದಂದೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ₹111 ಏರಿಕೆಯಾಗಿದೆ. 19 ಕೆಜಿ ಸಿಲಿಂಡರ್ ಬೆಲೆ ಹೆಚ್ಚಳವು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಲಿದೆ.
Gold Price on January 1: ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ 2026ನೇ ವರ್ಷದ ಮೊದಲ ದಿನದ ಚಿನ್ನದ ದರಪಟ್ಟಿ
Gold Price on January 1: 2026ನೇ ವರ್ಷದ ಮೊದಲ ದಿನ ಬಂಗಾರ ದರ ಎಷ್ಟಿದೆ ಎನ್ನುವುದೇ ಬಹುತೇಕ ಮಂದಿ ಪ್ರಶ್ನೆಯಾಗಿದೆ. ಹಾಗಾದ್ರೆ, ಇಂದು (ಜನವರಿ 1) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ
Ration Card: ವರ್ಷಕ್ಕೆ 8 ಲಕ್ಷದವರೆಗೆ ವ್ಯವಹಾರ ಮಾಡುವ ಬಡವರಿಗೆ ಹೊಸ ರೂಲ್ಸ್
ರಾಜ್ಯದಲ್ಲಿ ಲಕ್ಷಾಂತರ ಬಿಪಿಎಲ್ (BPL) ಕಾರ್ಡ್ಗಳ ರದ್ದತಿ ವಿಷಯವು ಕಳೆದ ಕೆಲವು ದಿನಗಳಿಂದ ಬಡವರ ನಿದ್ದೆಗೆಡಿಸಿತ್ತು. ಅನರ್ಹರ ಕಾರ್ಡ್ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾದ ಬೆನ್ನಲ್ಲೇ, ಸಣ್ಣ ವ್ಯಾಪಾರಿಗಳು ಮತ್ತು ಬಡ ಕುಟುಂಬಗಳಲ್ಲಿ ಆತಂಕ ಮನೆಮಾಡಿತ್ತು. ಆದರೆ, ಇದೀಗ ಪಡಿತರ ಚೀಟಿದಾರರಿಗೆ, ವಿಶೇಷವಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಒಂದು ಮಹತ್ವದ ಸುದ್ದಿ ಲಭ್ಯವಾಗಿದೆ. ಸರ್ಕಾರದ ಮಾನದಂಡಗಳಲ್ಲಿನ ಗೊಂದಲದಿಂದಾಗಿ ಅನೇಕ ಅರ್ಹ ಬಡವರ ಕಾರ್ಡ್ಗಳು ಕೂಡ ರದ್ದಾಗುವ ಭೀತಿಯಲ್ಲಿದ್ದವು. ಈ ಗೊಂದಲವನ್ನು ಬಗೆಹರಿಸಲು ಆಹಾರ ಇಲಾಖೆಯು (Food Department) ... Read more The post Ration Card: ವರ್ಷಕ್ಕೆ 8 ಲಕ್ಷದವರೆಗೆ ವ್ಯವಹಾರ ಮಾಡುವ ಬಡವರಿಗೆ ಹೊಸ ರೂಲ್ಸ್ appeared first on Karnataka Times .
2025: ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನಕ್ಕೆ ಐತಿಹಾಸಿಕ ವರ್ಷ; ಯುವ ವಿಜ್ಞಾನಿಯ ಬರಹದಲ್ಲಿ ಕಂಡ ಹರುಷ
ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಆಧುನಿಕ ಭಾರತ ಸಾಧನೆ ಮಾಡದ ಕ್ಷೇತ್ರವಿಲ್ಲ. ಅದರಲ್ಲೂ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗುರುತುಗಳನ್ನು ಇಡೀ ಜಗತ್ತು ಗಮನಿಸುತ್ತಿದೆ. 2025ರ ವರ್ಷದಲ್ಲಿ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರ, ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಯುವ ವಿಜ್ಞಾನಿ ಮತ್ತು ಬರಹಗಾರ ದೀಪಕ್ ಎಎಸ್ ಅವೆಲ್ಲವುಗಳನ್ನೂ ತಮ್ಮ ಈ ಸುದೀರ್ಘ ಲೇಖನದಲ್ಲಿ ಪಟ್ಟಿ ಮಾಡಿದ್ದಾರೆ. ಈ ಲೇಖನ ಯುವ ಮನಸ್ಸುಗಳನ್ನು ತಲುಪಲಿ ಎಂದು ನಾವು ಆಶಿಸುತ್ತೇವೆ.
ಜಾತಿವಾದಿಗಳಿಗೆ ಪಾಠ ಕಲಿಸಿದ ಭೀಮಾ ಕೋರೆಗಾಂವ್ ಯುದ್ಧ
ಜಗತ್ತಿನೆಲ್ಲೆಡೆ ಹೊಸ ವರ್ಷವನ್ನು ಸ್ವಾಗತಿಸಲು ಯುವಜನತೆ ಕುಣಿದು ಕುಪ್ಪಳಿಸುತ್ತಾರೆ. ಆದರೆ ಭಾರತದ ಬಹುಜನರು ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಪ್ರಜ್ಞಾಪೂರ್ವಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಮೋಜು ಮಸ್ತಿಗಿಂತಲೂ ಪ್ರಜ್ಞೆ ದೊಡ್ಡದು ಎಂದು ಸಾರುತ್ತಿದ್ದಾರೆ. ಕೋರೆಗಾಂವ್ ಯುದ್ಧದ ಇತಿಹಾಸ ಸಾವಿರಾರು ವರ್ಷಗಳ ಕಾಲ ನಾಗರಿಕ ಬದುಕಿನಿಂದ ದೂರವಾಗಿ ಬದುಕಿದ ಅಸ್ಪಶ್ಯರಿಗೆ ಬ್ರಿಟಿಷ್ ಆಳ್ವಿಕೆಯು ಒಂದು ಹೊಸ ಲೋಕದ ಬಾಗಿಲನ್ನು ತೆರೆಯಿತು. ಹೀಗೆ ಹೊಸ ಜಗತ್ತಿನ ಬಾಗಿಲನ್ನು ತೆರೆಯಲು ಮೊದಲ ದೊರೆತ ಅವಕಾಶ ಎಂದರೆ ಬ್ರಿಟಿಷ್ ಸೈನ್ಯದಲ್ಲಿ ಸೈನಿಕರಾಗಿ ಸೇರ್ಪಡೆ ಆದದ್ದು. ಇಂದಿಗೂ ಭಾರತೀಯ ಸೈನ್ಯದಲ್ಲಿರುವ ಮಹಾರ್ ರೆಜಿಮೆಂಟ್, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ರೆಜಿಮೆಂಟ್, ಘೂರ್ಖಾ ರೆಜಿಮೆಂಟ್, ಪಂಜಾಬ್ ರೆಜಿಮೆಂಟ್, ಎಂಇಜಿ ಮುಂತಾದ ರೆಜಿಮೆಂಟ್ಗಳು ಬ್ರಿಟಿಷರೇ ಆರಂಭಿಸಿದ ತುಕಡಿಗಳಾಗಿವೆ. ವರ್ಣಾಶ್ರಮ ವ್ಯವಸ್ಥೆಯು ನಿರಾಕರಿಸಿದ್ದ ಘನತೆ, ಗೌರವಗಳೆಲ್ಲವನ್ನೂ ಈ ಸೈನಿಕ ಲೋಕವು ಅಸ್ಪಶ್ಯರಿಗೆ ನೀಡಿತು. ಆರ್ಥಿಕ ಭದ್ರತೆಯ ಜೊತೆಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶವೂ ಅವರಿಗೆ ದೊರೆಯಿತು. ಇಂತಹ ಪರಿಸರದಲ್ಲಿ ಅಸ್ಪಶ್ಯರು ಅತೀವ ಆತ್ಮವಿಶ್ವಾಸದಿಂದ ತಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ’ ಎಂಬಂತೆ ಬದುಕತೊಡಗಿದರು. ಅವರ ನರನಾಡಿಗಳಲ್ಲಿ ಸ್ವಾಭಿಮಾನವು ತುಂಬಿ ಹರಿಯುತ್ತಿತ್ತು! ಇಂತಹ ಕಾಲಘಟ್ಟದಲ್ಲಿಯೇ ಅವರ ಪರಾಕ್ರಮವನ್ನು ಪ್ರದರ್ಶಿಸುವ ಅವಕಾಶವೊಂದು ಒದಗಿಬಂತು. ಛತ್ರಪತಿ ಶಿವಾಜಿಯನ್ನು ಕೊಂದು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಪೇಶ್ವೆಗಳು ಇಂದಿನ ಮಹಾರಾಷ್ಟ್ರದ ಪೂನಾ ಪ್ರಾಂತವನ್ನು ಆಳುತ್ತಿದ್ದರು. ಬ್ರಿಟಿಷರ ಕಾಲಕ್ಕೆ ಎರಡನೆಯ ಬಾಜಿರಾಯನು ಆಳ್ವಿಕೆ ನಡೆಸುತ್ತಿದ್ದನು. ಇವನು 1817ರ ಕೊನೆಯ ತಿಂಗಳಲ್ಲಿ ಬ್ರಿಟಿಷರ ವಿರುದ್ಧ ಸಮರ ಸಾರಿದನು. ಪುಣೆಯನ್ನು ವಶಪಡಿಸಿಕೊಳ್ಳುವ ಸಲುವಾಗಿ ತನ್ನ ಸೈನಿಕರೊಂದಿಗೆ ಚಾಕಣ ಎಂಬ ಸ್ಥಳದಲ್ಲಿ ಬಂದು ಬೀಡುಬಿಟ್ಟನು. ಏಕಾಏಕಿ ಆಕ್ರಮಣ ನಡೆಸಲು ಸಜ್ಜಾಗಿ ಬಂದ ಬಾಜಿರಾಯನ ಪಡೆಯನ್ನು ಕಂಡು ಬ್ರಿಟಿಷ್ ಅಧಿಕಾರಿಗಳು ದಂಗಾಗಿಹೋದರು! ಆಗ ಶಿರೂರಿನಲ್ಲಿ ಬೀಡುಬಿಟ್ಟಿದ್ದ ಲೆಫ್ಟಿನೆಂಟ್ ಕರ್ನಲ್ ಪಿಲ್ಸ್ಮನ್ ಸೈನ್ಯದಲ್ಲಿ ಬಾಂಬೆ ನೇಟಿವ್ ಇನ್ಫೆಂಟ್ರಿಯ ಎರಡನೆಯ ಬೆಟಾಲಿಯನ್ನ ಮೊದಲನೆಯ ರೆಜಿಮೆಂಟ್ ಮಾತ್ರ ಇತ್ತು. ಅದರಲ್ಲಿ 500 ಮಹಾರ್ ಸೈನಿಕರು, 270 ಕುದುರೆ ಸವಾರರು ಹಾಗೂ 25 ಜನ ತೋಪು ಹಾರಿಸುವವರು ಮಾತ್ರ ಇದ್ದರು. ಮಹಾರ್ ಜನರ ಪರಾಕ್ರಮದ ಬಗ್ಗೆ ಅರಿವಿದ್ದ ಬ್ರಿಟಿಷರು ಬಾಜಿರಾಯನು ಹಾಕಿದ ಸವಾಲನ್ನು ಎದುರಿಸಲು ಸಿದ್ಧರಾದರು. ಆಗ ಅವರಿಗೆ ಅದು ಅನಿವಾರ್ಯವಾಗಿತ್ತು. ತಮ್ಮ ನಿರ್ಧಾರವನ್ನು ಮಹಾರ್ ರೆಜಿಮೆಂಟಿಗೆ ತಿಳಿಸಿದಾಗ, ಅವರು ಯುದ್ಧಮಾಡಲು ಕಾದು ಕುಳಿತಿದ್ದವರಂತೆ ಒಮ್ಮೆಗೆ ರಣೋತ್ಸಾಹದಿಂದ ಕೇಕೆ ಹಾಕಿ ಕುಣಿದಾಡತೊಡಗಿದರು. ಆ ಕ್ಷಣದಿಂದಲೇ ಅವರು ಯುದ್ಧಕ್ಕೆ ತಯಾರಾಗತೊಡಗಿದರು. ಮನುವಾದಿ ಪೇಶ್ವೆಗಳು ಮಹಾರ್(ಅಸ್ಪಶ್ಯರು)ರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ಕಾಲ ಅಸ್ಪಶ್ಯರನ್ನು ಆಯುಧಗಳಿಂದ ದೂರವಿರಿಸಲಾಗಿತ್ತು. ಅಸ್ಪಶ್ಯರ ಬಳಿ ಒಂದೇ ಒಂದು ಸಣ್ಣ ಆಯುಧ ದೊರಕಿದರೂ ಅವರನ್ನು ಗಲ್ಲಿಗೆ ಹಾಕಲಾಗುತ್ತಿತ್ತು! ಅಸ್ಪಶ್ಯರು ಊರೊಳಗೆ ಪ್ರವೇಶಿಸಬೇಕಾದರೆ, ಮಧ್ಯಾಹ್ನ ಸೂರ್ಯನು ನಡುನೆತ್ತಿಯ ಮೇಲೆ ಬಂದಾಗ ಪ್ರವೇಶಿಸಬೇಕಿತ್ತು. ಅವರ ನೆರಳು ಅವರ ಕಾಲಿನ ಬುಡದಲ್ಲಿಯೇ ಇರಬೇಕು. ಅವರ ಹೆಜ್ಜೆಯು ಊರಲ್ಲಿ ಮೂಡಬಾರದಾಗಿತ್ತು ಮತ್ತು ಉಗುಳು ನೆಲಕ್ಕೆ ಬೀಳಬಾರದಿತ್ತು. ಆದಕಾರಣ, ಹಿಂದೆ ಒಂದು ಕಸಬರಕೆಯನ್ನು ಸೊಂಟಕ್ಕೆ ಕಟ್ಟಲಾಗುತ್ತಿತ್ತು ಮತ್ತು ಕುಡಿಕೆಯನ್ನು ಕೊರಳಿಗೆ ಕಟ್ಟಲಾಗುತ್ತಿತ್ತು. ಇಂತಹ ಹೀನಾಯ ಬದುಕಿಗೆ ದೂಡಲ್ಪಟ್ಟಿದ್ದ ಮನುವಾದಿ ವ್ಯವಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಹಾರರು ತವಕದಿಂದ ಕಾಯುತ್ತಿದ್ದರು. ಯುದ್ಧದ ತಯಾರಿಯನ್ನು ಹರುಪಿನಿಂದ ಮಾಡುತ್ತಿದ್ದಾಗಲೇ ಮಹಾರ್ ಸೈನಿಕರು ಸಂದಿಗ್ಧಕ್ಕೆ ಬಿದ್ದರು. ಬ್ರಿಟಿಷರು ಎಷ್ಟೇ ಒಳ್ಳೆಯವರಾದರೂ ಪರಕೀಯರು. ಆದರೆ ಬಾಜಿರಾಯನು ಎಷ್ಟೇ ಕ್ರೂರಿಯಾದರೂ ನಮ್ಮವನು. ಒಮ್ಮೆ ಬಾಜಿರಾಯನೊಂದಿಗೆ ಮಾತನಾಡಿ, ಯುದ್ಧಕ್ಕೆ ಬದಲು ಸಂಧಾನ ಮಾಡಿಕೊಂಡರೆ ಉತ್ತಮ ಎಂಬ ಆಲೋಚನೆಯು ಅವರಿಗೆ ಬಂತು. ಮಹಾರ್ ರೆಜಿಮೆಂಟ್ ನಾಯಕನಾದ ಸಿದನಾಕನು ಬಾಜಿರಾಯನೊಂದಿಗೆ ಮಾತುಕತೆಯಾಡಲು ನಿರ್ಧರಿಸಿದನು. ಈ ರಹಸ್ಯ ಭೇಟಿಯನ್ನು ಬಾಜಿರಾಯನ ಸೇನಾಪತಿ ಬಾಪೂಗೋಖಲೆ ವ್ಯವಸ್ಥೆ ಮಾಡಿದನು. ಈ ರಹಸ್ಯ ಭೇಟಿಯಲ್ಲಿ ಸಿದನಾಕನು ಯುದ್ಧದ ಸೂಕ್ಷ್ಮತೆಯ ಬಗ್ಗೆ ಬಾಜಿರಾಯನಿಗೆ ತಿಳಿಹೇಳಿದನು. ಆದರೆ ಬಾಜಿರಾಯನು ಥೇಟ್ ಮನುವಾದಿಯಂತೆ ಮಾತಾಡಿದನು. ಈ ಅಸ್ಪಶ್ಯ ಮಹಾರನು ತನ್ನೊಂದಿಗೆ ಮಾತಾಡಲು ಬಂದದ್ದೇ ದೊಡ್ಡ ಅಪರಾಧವೆಂದು ಭಾವಿಸಿದನು. ಈ ಮಹಾರನನ್ನು ಒಳಗೆ ಬಿಟ್ಟವರನ್ನು ಗಲ್ಲುಗಂಬಕ್ಕೆ ಏರಿಸಿ ಎಂದು ಆಜ್ಞೆಮಾಡಿದ! ಆದರೆ ಸಿದನಾಕನು ತಾಳ್ಮೆ ಕಳೆದುಕೊಳ್ಳಲಿಲ್ಲ. ಇತಿಹಾಸವು ತನ್ನ ಜನಾಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದೆಂದು ತಿಳಿದು ತಾನೇ ಸಂಧಾನಕ್ಕೆ ಮುಂದಾದ. ನಾವು ನಿಮ್ಮ ಪರವಾಗಿ ಹೋರಾಡಲು ತಯಾರಿದ್ದೇವೆ. ನಮಗೆ ನೀವೇನೂ ಕೊಡುವುದು ಬೇಕಾಗಿಲ್ಲ. ಆದರೆ ಗೆಲುವಿನ ನಂತರ ನೀವು ನಮಗೆ ಯಾವ ರೀತಿಯ ಮಾನ ಸನ್ಮಾನಗಳನ್ನು ನೀಡುವಿರಿ ಎಂಬುದನ್ನು ತಿಳಿಸಿ ಎಂದು ವಿನಯಪೂರ್ವಕವಾಗಿ ವಿನಂತಿಸಿದನು. ಕೋಪದಿಂದ ಸಿಡಿಮಿಡಿಗೊಳ್ಳುತ್ತಿದ್ದ ಬಾಜಿರಾಯನು ‘‘ಧರ್ಮಗ್ರಂಥಗಳು ಏನು ಹೇಳುತ್ತವೆಯೋ ಅದರಂತೆ ನಿಮ್ಮನ್ನು ನಡೆಸಿಕೊಳ್ಳುತ್ತೇನೆ. ನೀವು ಅಸ್ಪಶ್ಯರು ಎಂಬುದನ್ನು ಮರೆಯಕೂಡದು’’ ಎಂದು ಗುಡುಗಿದನು! ಈತನು ನಮ್ಮ ದೇಶದವನೇ ಆದರೇನಂತೆ, ಅತ್ಯಂತ ಕ್ರೂರಿಯಾಗಿದ್ದಾನೆ. ಇಂತಹ ಅಮಾನವೀಯ ವ್ಯಕ್ತಿಯ ಪರವಾಗಿ ಹೋರಾಡುವುದಕ್ಕಿಂತ, ಬ್ರಿಟಿಷರ ಪರವಾಗಿ ಹೋರಾಡಿ ಹೊಸ ಸಮಾಜ ನಿರ್ಮಿಸುವುದೇ ಲೇಸು ಎಂದು ಸಿದನಾಕನು ತೀರ್ಮಾನಿಸಿದನು. ಅವನು ಹೊರಟು ಹೋದ ಮೇಲೆ ಆತನು ನಿಂತಿದ್ದ ಜಾಗಕ್ಕೆ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಬಾಜಿರಾಯ! ಯುದ್ಧವನ್ನು ಗೆಲ್ಲುವ ಸಲುವಾಗಿ ಬಾಜಿರಾಯನು ನೂರೊಂದು ಯಾಗಗಳನ್ನು ಮಾಡಿದ್ದ. ಅಲ್ಲದೆ ಜ್ಯೋತಿಷಿಯು ಹೇಳಿದ್ದ ಸಮಯಕ್ಕೆ ಸರಿಯಾಗಿ ಯುದ್ಧ ಭೂಮಿಗೆ ಹೊರಟ! ನಕ್ಷತ್ರ-ಗ್ರಹಗತಿಗಳನ್ನು ನೋಡಿದ ಜ್ಯೋತಿಷಿಯು ಗೆಲುವು ಬಾಜಿರಾಯನದೆಂದೇ ಭವಿಷ್ಯವನ್ನೂ ನುಡಿದಿದ್ದ! ಆದರೆ ನಡೆದದ್ದೇ ಬೇರೆ! 25,000 ಕುದುರೆ ಸವಾರರು, 5,000 ಕಾಲ್ದಳ ಮತ್ತು 2,000 ಅರಬರನ್ನು ಹೊಂದಿದ್ದ ಬಾಜಿರಾಯನ ಸೈನ್ಯವನ್ನು ಮಹಾರ್ ಸೈನಿಕರು ಕೇವಲ 12 ಗಂಟೆಗಳ ಅವಧಿಯಲ್ಲಿ ಇರುವೆಗಳಂತೆ ಹೊಸಕಿಹಾಕಿ ಧೂಳೀಪಟ ಮಾಡಿದರು! ಬಾಜಿರಾಯನ ಮಗ ಸತ್ತುಹೋದ. ಬಾಜಿರಾಯ ಮತ್ತು ಗೋಖಲೆ ಪ್ರಾಣ ಉಳಿಸಿಕೊಳ್ಳಲು ರಣರಂಗದಿಂದ ತಲೆತಪ್ಪಿಸಿಕೊಂಡು ಓಡಿಹೋದರು. ಭೀಮಾನದಿ ತೀರದ ಕೋರೆಗಾಂವ್ ಎಂಬಲ್ಲಿ ಡಿಸೆಂಬರ್ 31, 1817ರ ರಾತ್ರಿ ಆರಂಭವಾದ ಯುದ್ಧವು ಮರುದಿನ ಅಂದರೆ ಜನವರಿ 1, 1818ರ ಬೆಳಗ್ಗೆ ಮುಗಿದೇಹೋಯಿತು! ವೀರ ಮಹಾರ್ ಸೈನಿಕರು ಬಾಜಿರಾಯನ ದುರಾಡಳಿತವನ್ನು ಕೊನೆಗೊಳಿಸಿ, ಪುಣೆಯ ಜನರಿಗೆ ಹೊಸ ವರ್ಷದ ಕೊಡುಗೆಯನ್ನಾಗಿ ನೀಡಿದರು. ಮಹಾರ್ ಸೈನಿಕರ ಪೈಕಿ ಕೇವಲ 21 ಜನರು ಮಾತ್ರ ಅಸುನೀಗಿದರು! ಇಂತಹ ಪವಾಡವು ನಡೆದದ್ದಾದರೂ ಹೇಗೆ? ಇಡೀ ಜಗತ್ತಿನ ಇತಿಹಾಸದಲ್ಲಿ ಇಂತಹ ಪವಾಡಸದೃಸ್ಯ ಯುದ್ಧವು ಮತ್ತೊಂದು ನಡೆದಿಲ್ಲ! ಆದರೆ ಇದು ಹೇಗೆ ಸಾಧ್ಯವಾಯಿತು? ಬಾಜಿರಾಯನಿಂದ ಅವಮಾನಿತನಾಗಿ ಬಂದ ಸಿದನಾಕನು ನಡೆದದ್ದೆಲ್ಲವನ್ನೂ ತನ್ನ ಒಡನಾಡಿ ಸೈನಿಕರಿಗೆ ತಿಳಿಸಿದ. ಸಾವಿರಾರು ವರ್ಷಗಳ ಅವಮಾನದಿಂದ ಕುದಿಯುತ್ತಿದ್ದ ಮಹಾರ್ರಿಗೆ ಗಾಯದ ಮೇಲೆ ಬರೆಹಾಕಿದಂತಾಯಿತು! ತಾವು ಅವನಿಂದ ಯಾವುದೇ ಪದವಿ, ಪುರಸ್ಕಾರ, ಸಂಭಾವನೆಗಳನ್ನು ಕೇಳಿರಲಿಲ್ಲ! ಎಲ್ಲಾ ಅವಮಾನಗಳನ್ನು ಮರೆತು ತಾವಾಗಿಯೇ ಮುಂದೆ ಬಂದರೂ ಇಂತಹ ಅವಮಾನವೆ? ಇಂತಹ ಪರಮ ನೀಚನ ರಾಜ್ಯವನ್ನು ಉಳಿಸಬಾರದೆಂದು ಎಲ್ಲಾ ಮಹಾರರು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡಿದರು! ಸಾವಿರಾರು ವರ್ಷಗಳ ಮೂದಲಿಕೆ ಮತ್ತು ಅವಮಾನಗಳನ್ನು ಇದು ತಮ್ಮ ಕರ್ಮ ಮತ್ತು ಹಿಂದಿನ ಜನ್ಮದ ಪಾಪದ ಫಲವೆಂದು ಭಾವಿಸಿಕೊಂಡು ಮಹಾರರು ಬದುಕುತ್ತಿದ್ದರು. ಆದರೆ ಬ್ರಿಟಿಷ್ ಸೈನ್ಯದಲ್ಲಿನ ಸ್ವತಂತ್ರ-ಸ್ವಾಭಿಮಾನದ ಜೀವನವು ಅವರ ಹಳೆಯ ನಂಬಿಕೆಯನ್ನು ಮತ್ತು ಮನಸ್ಥಿತಿಯನ್ನು ನಾಶಮಾಡಿತು; ನಾವು ಯಾರಿಗೂ ಕಡಿಮೆಯಿಲ್ಲ ಎಂಬ ಹೊಸ ಆತ್ಮವಿಶ್ವಾಸವನ್ನು ತುಂಬಿಸಿತ್ತು! ಅವರಲ್ಲಿ ಮನೆಮಾಡಿದ್ದ ಗುಲಾಮನ ಭಾಷೆಯು ಮಾಯವಾಗಿ ಸ್ವಾಭಿಮಾನದ ಭಾಷೆಯು ಹುಟ್ಟಿಕೊಂಡಿತ್ತು! ಬಾಜಿರಾಯನು ಇದನ್ನು ಅರಿಯದೆ ತಪ್ಪುಮಾಡಿದ! ನಾನು ಇನ್ನು ಮುಂದೆ ನಿಮ್ಮನ್ನು ಮನುಷ್ಯರಂತೆ ಕಾಣುತ್ತೇನೆ ಎಂದು ಒಂದೇ ಒಂದು ವಾಕ್ಯ ಹೇಳಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತು! ಆದರೆ ಮನುವಾದಿ ಬಾಜಿರಾಯನಿಗೆ ದೇಶಕ್ಕಿಂತ ತನ್ನ ಜಾತಿ ಮತ್ತು ಅವಮಾನವೀಯ ಧರ್ಮವೇ ಮುಖ್ಯವಾಗಿತ್ತು! ಇಂಗ್ಲೆಂಡ್ನ ವಿಕ್ಟೋರಿಯಾ ಮಹಾರಾಣಿಗೆ ಯುದ್ದದ ಗೆಲುವು ಖುಷಿಯನ್ನು ನೀಡಿತು. ಕ್ಯಾಪ್ಟನ್ ಸ್ಟಾಂಟನ್ನನ್ನು ಕರೆದು ಮಹಾರ್ ಸೈನಿಕರು ಏನು ಕೇಳಿದರೂ ಕೊಡುಗೆಯನ್ನು ನೀಡಿ ಎಂದು ಸಲಹೆ ನೀಡಿದರು. ಆಗ ಸಿದನಾಕನು ಮಂತ್ರಿ ಪದವಿ, ಲಕ್ಷಾಂತರ ಹಣ, ಚಿನ್ನ, ಅರಮನೆ, ಸಂಪತ್ತು, ಭೂಮಿ ಏನು ಕೇಳಿದರೂ ಬ್ರಿಟಿಷರು ಕೊಡಲು ಸಿದ್ಧರಿದ್ದರು. ಆದರೆ ಸಿದನಾಕನು ವಿದ್ಯೆಯಿಲ್ಲದ ಕಾರಣ ಭಾರತದ ಬಹು ಜನರು ಗುಲಾಮರಾಗಿದ್ದಾರೆ. ಈ ಗುಲಾಮಗಿರಿಯ ಬಿಡುಗಡೆಯಾಗಲು ದೇಶದ ಎಲ್ಲಾ ಜನರಿಗೂ ಸಾರ್ವತ್ರಿಕ ಶಿಕ್ಷಣ ನೀಡುವಂತೆ ಬೇಡುತ್ತಾರೆ. ವೈಯಕ್ತಿಕವಾಗಿ ಏನನ್ನು ಕೇಳದೆ ಸಮಾಜಕ್ಕಾಗಿ ಕೋರಿಕೊಂಡ ಇವರ ಆದರ್ಶ ಶ್ರೇಷ್ಠವಾದದು. ಅವರ ಆಸೆಯಂತೆ ದೇಶದ ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ಶಿಕ್ಷಣ ನೀಡುತ್ತೇವೆ ಎಂದು ಬ್ರಿಟಿಷರು ಭರವಸೆ ನೀಡಿದರು. ಈ ಯುದ್ಧದ ಪರಿಣಾಮವೇನೆಂದರೆ ದೇಶದ ಎಲ್ಲಾ ಪ್ರಜೆಗಳಿಗೂ ಸಾರ್ವತ್ರಿಕ ಶಿಕ್ಷಣ ನೀಡುವ ಯೋಜನೆ ಜಾರಿಗೆ ಬರಲು ಕಾರಣವಾಯಿತು. ಈಗ ವಿದ್ಯೆ ಪಡೆದಿರುವ ದೇಶದ ಎಲ್ಲಾ ನಾಗರಿಕರು ಮಹಾರ್ ರೆಜಿಮೆಂಟ್ನ್ನು ಗೌರವಿಸಬೇಕು. ಪೂನಾ ಜಿಲ್ಲೆಯ ಕೋರೆಗಾಂವ್ನಲ್ಲಿ, ಯುದ್ಧದಲ್ಲಿ ಮಡಿದ 21 ಮಹಾರ್ ಸೈನಿಕರ ನೆನಪಿನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಜನವರಿ ಒಂದನೇ ದಿನದಂದು, ಬಾಬಾಸಾಹೇಬ್ ಅಂಬೇಡ್ಕರರು ಈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ವೀರಯೋಧರಿಗೆ ಗೌರವ ಸಲ್ಲಿಸುತ್ತಿದ್ದರು! ಈ ಸ್ಮಾರಕವು ಅನೇಕ ಪಾಠಗಳನ್ನು ಹೇಳುತ್ತದೆ. ಎಲ್ಲಿಯತನಕ ಅಪಮಾನಿತ ಜನರು ತಮ್ಮ ಹೀನಾಯ ಬದುಕನ್ನು ತಮ್ಮ ಕರ್ಮವೆಂದು ಭಾವಿಸಿರುತ್ತಾರೋ ಅಲ್ಲಿಯತನಕ ಅವರು ಗುಲಾಮರಾಗಿಯೇ ಉಳಿದಿರುತ್ತಾರೆ. ಆದರೆ ಈ ಗುಲಾಮಗಿರಿಯನ್ನು ತಾವು ಬದಲಾಯಿಸಲು ಸಾಧ್ಯವೆಂದು ಮನಗಂಡ ಕ್ಷಣದಲ್ಲಿ ಅವರ ಗುಲಾಮಗಿರಿಯ ಕೊನೆ ಆರಂಭವಾಗುತ್ತದೆ. ತಮ್ಮ ದುಸ್ಥಿತಿಗೆ ತಮ್ಮನ್ನೇ ನಿಂದಿಸಿಕೊಳ್ಳುವುದನ್ನು ನಿಲ್ಲಿಸಿ, ನಮ್ಮ ಬಿಡುಗಡೆ ನಮ್ಮ ಕೈಯಲ್ಲಿದೆ ಎಂದು ಅರಿತ ದಿನವೇ ಹೊಸ ಬದುಕು ಆರಂಭವಾಗುತ್ತದೆ! ಮಾನಸಿಕ ಗುಲಾಮಗಿರಿಯು ಕೊನೆಯಾದ ಕ್ಷಣದಲ್ಲೇ ರಾಜಕೀಯ ಗುಲಾಮುಗಿರಿಯು ಕೊನೆಯಾಗಲು ಆರಂಭವಾಗುತ್ತದೆ. ಗುಲಾಮರು ಆಳುವ ದೊರೆಗಳಂತೆ ಮಾತಾಡುವುದನ್ನು ಕಲಿತಾಗಲೇ ಪರಿವರ್ತನೆ ಶುರುವಾಗುತ್ತದೆ!
CHIKKAMAGALURU | ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ಯುವಕನ ಕೊಲೆ
ಚಿಕ್ಕಮಗಳೂರು: ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿ ಮೆಸೇಜ್ ಮಾಡಿದ ಕಾರಣಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಉಡೇವಾ ಮೂಲದ ಮಂಜುನಾಥ್ (28) ಕೊಲೆಯಾದ ಯುವಕ. ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕ ವೇಣು ಮತ್ತು ಕೊಲೆ ಆರೋಪಿಗಳು ಎಂದು ಹೇಳಲಾಗಿದೆ. ವೇಣುವಿನ ಜೊತೆ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಗೆ ಮಂಜುನಾಥ್ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿದ್ದನೆನ್ನಲಾಗಿದೆ. ಈ ವಿಚಾರವಾಗಿ ವೇಣು ಮತ್ತು ಮಂಜುನಾಥ್ ಮಧ್ಯೆ ಅತ್ತಿಗನಾಳು ಗ್ರಾಮದಲ್ಲಿ ಬುಧವಾರ ಗಲಾಟೆ ನಡೆದಿದೆ. ಇದು ಅತಿರೇಕಕ್ಕೆ ತಿರುಗಿದ್ದು, ವೇಣು ಹಾಗೂ ಸ್ನೇಹಿತರು ಮಂಜುನಾಥ್ ರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ತರೀಕೆರೆ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ತಂಬಾಕು ಪ್ರಿಯರಿಗೆ ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಮೇಲೆ ಹೆಚ್ಚುವರಿ ತೆರಿಗೆ ಜಾರಿಯಾಗಲಿದೆ. ಇದರಿಂದ ಸಿಗರೇಟ್ ಮತ್ತು ಪಾನ್ ಮಸಾಲಾ ದರಗಳು ಏರಿಕೆಯಾಗಲಿವೆ. ಜಿಎಸ್ಟಿ ಪರಿಹಾರ ಸೆಸ್ ರದ್ದಾಗಿ, ಅದರ ಬದಲಿಗೆ ಹೊಸ ಸೆಸ್ ಜಾರಿಯಾಗಲಿದೆ. ಇದು ಸಾರ್ವಜನಿಕ ಆರೋಗ್ಯ ಸುಧಾರಣೆ ಮತ್ತು ತಂಬಾಕು ಸೇವನೆ ನಿರುತ್ಸಾಹಪಡಿಸುವ ಉದ್ದೇಶ ಹೊಂದಿದೆ.
2026: ಸ್ವಿಗ್ಗಿ ಸೇರಿ ಈ ಪ್ಲಾಟ್ಫಾರ್ಮ್ಗಳಲ್ಲಿ ಬಿರಿಯಾನಿ - ಕಾಂಡೋಮ್ ಸೇರಿ ಈ ವಸ್ತುಗಳಿಗೆ ಡಿಮ್ಯಾಂಡ್
ಹೊಸ ವರ್ಷದ ಹಿಂದಿನ ದಿನ 2025ರ ಡಿಸೆಂಬರ್ 31ರಂದು ಸ್ವಿಗ್ಗಿಯಲ್ಲಿ ಹಲವು ಭರ್ಜರಿ ಆರ್ಡರ್ಗಳನ್ನು ಮಾಡಲಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹಲವರು ಪಾರ್ಟಿಗಳಿಗೆ ಸಂಬಂಧಿಸಿದ ಫೂಡ್ಗಳನ್ನು ಆರ್ಡರ್ ಮಾಡಿದ್ದಾರೆ. ಚಿನ್ನ, ಬಿರಿಯಾನಿ ಹಾಗೂ ಸಿಹಿ ತಿನಿಸುಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಕಾಂಡೋಮ್ ಆರ್ಡರ್ಗಳು
ತುಂತುರು ಮಳೆಯೊಂದಿಗೆ ಹೊಸವರ್ಷಕ್ಕೆ ಸ್ವಾಗತ ಕೋರಿದ ದಿಲ್ಲಿ ; 6 ವರ್ಷಗಳಲ್ಲೇ ಅತೀ ಹೆಚ್ಚು ಚಳಿ ದಾಖಲೆ
ಅತಿಯಾದ ವಾಯುಮಾಲಿನ್ಯದಿಂದ ನಲುಗಿದ್ದ ದಿಲ್ಲಿ, ಹೊಸವರ್ಷದಂದು ತುಸು ನಿರಾಳವಾಯಿತು. ನೂತನ ವರ್ಷವನ್ನು ಲಘು ಮಳೆಯೊಂದಿಗೆ ಸ್ವಾಗತ ಕೋರಿತು. ಇದು ವಾಯುಮಾಲಿನ್ಯದಿಂದ ಜನರಿಗೆ ನೆಮ್ಮದಿ ನೀಡಿದೆ. ದೇಶದ ಹಲವು ಭಾಗಗಳಲ್ಲಿ ತೀವ್ರ ಚಳಿ, ದಟ್ಟವಾದ ಮಂಜು ಮತ್ತು ತಾಪಮಾನ ಕುಸಿತ ದಾಖಲಾಗುತ್ತಿದೆ. ಜನವರಿ 3 ರಿಂದ ಹಿಮಾಲಯದಿಂದ ಬರುವ ತಂಪಾದ ಗಾಳಿಯಿಂದ ಚಳಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಕನ್ನಡಿಗರ ತೆರಿಗೆ ಹಣದಲ್ಲಿ, ಹೈಕಮಾಂಡ್ ಪವರ್ ಗೇಮ್: ಕೇರಳದ ಮೇಲಿನ 'ವಿಶೇಷ ಪ್ರೀತಿ'ಗೆ ಇಲ್ಲಿವೆ 3 ಸಾಕ್ಷಿ
Benefit to Kerala from Karnataka : ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ಸಂಬಂಧ ರಾಜಕೀಯ ಕೆಸೆರೆರೆಚಾಟ ಜೋರಾಗಿ ನಡೆಯುತ್ತಿದೆ. ಕೇರಳದ ಒತ್ತಡಕ್ಕೆ ಸಿದ್ದರಾಮಯ್ಯ ಸರ್ಕಾರ ಮಣಿದಿದೆ ಎನ್ನುವುದು ಒಂದು ಕಡೆಯಾದರೆ, ಸರ್ಕಾರ ಕೆಸಿ ವೇಣುಗೋಪಾಲ್ ಅವರ ಅಣತಿಯಂತೆ ನಡೆಯುತ್ತಿದೆ ಎನ್ನುವ ಇನ್ನೊಂದು ಆಪಾದನೆಯೂ ಎದುರಾಗಿದೆ.
ಸತತ ಕುಸಿತದ ನಂತರ ಹೊಸ ವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ
ಹತ್ತು ಪ್ರಮುಖ ವಿಶ್ಲೇಷಕರು ಚಿನ್ನದ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ವಿಶ್ಲೇಷಿಸಿದ್ದಾರೆ. ಈ ವರ್ಷ ಬೆಳ್ಳಿ ಚಿನ್ನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶೇ. 80ರಷ್ಟು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2025ರ ಚಿನ್ನ ಮತ್ತು ಬೆಳ್ಳಿಯ ಬೆಲೆಯ ನಾಗಾಲೋಟ 2026ರಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಕುಸಿದಿದ್ದ ಚಿನ್ನ ಹೊಸ ವರ್ಷದ ಆರಂಭದಲ್ಲೇ ಸ್ವಲ್ಪ ಏರಿಕೆ ಕಂಡಿದೆ. ಚಿನ್ನಪ್ರಿಯರು ಮತ್ತು ಹೂಡಿಕೆದಾರರು ಈ ವರ್ಷವೂ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. Economic Times ನಡೆಸಿದ ಸಮೀಕ್ಷೆಯಲ್ಲಿ, ಹತ್ತು ಪ್ರಮುಖ ವಿಶ್ಲೇಷಕರು ಚಿನ್ನದ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಊಹಿಸಿದ್ದಾರೆ. ಈ ವರ್ಷ ಬೆಳ್ಳಿ ಚಿನ್ನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶೇ. 80 ರಷ್ಟು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬೆಳ್ಳಿಗೆ ಕೈಗಾರಿಕಾ ಬೇಡಿಕೆ ಹೆಚ್ಚಾಗಲಿದ್ದು, ಅದರ ಬೆಲೆಯನ್ನು ಆಕಾಶಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ. ಶೇ.60ರಷ್ಟು ತಜ್ಞರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಔನ್ಸ್ ಗೆ 100 ಡಾಲರ್ ತಲುಪುತ್ತದೆ ಎಂದು ನಂಬಿದ್ದಾರೆ. ಇದು ಪ್ರಸ್ತುತ ಬೆಲೆಗಳಿಗಿಂತ ಶೇ. 40 ರಷ್ಟು ಹೆಚ್ಚಾಗಿದೆ. ಇನ್ನು ಕೆಲವರು ಬೆಳ್ಳಿಯ ಬೆಲೆ 110 ಡಾಲರ್ ದಾಟುತ್ತದೆ ಎಂದು ಹೇಳಿದ್ದಾರೆ. ಈ ನಿರೀಕ್ಷೆಗಳು ನಿಜವಾದಲ್ಲಿ ಬೆಳ್ಳಿಯ ಬೆಲೆ ದಾಖಲೆಯ ಏರಿಕೆಯಾಗುವ ಸಂಭವವಿದೆ. ಕೇಂದ್ರ ಬ್ಯಾಂಕ್ ಗಳು ಹೊಂದಿರುವ ಮೀಸಲುಗಳು ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಕಾರಣ. ಬೆಲೆಗಳು ಏರಿಕೆಯಾಗುವ ನಿರೀಕ್ಷೆಯಿದ್ದರೂ, ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರಲು ತಜ್ಞರು ಸಲಹೆ ನೀಡಿದ್ದಾರೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಗುರುವಾರ, ಜನವರಿ 1ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,506 (+17) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,380 (+15) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,129 (+12) ರೂ. ಬೆಲೆಗೆ ತಲುಪಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್ (10 ಗ್ರಾಂ) ಬೆಲೆ: 1,34,880 ರೂ. 22 ಕ್ಯಾರೆಟ್ (10 ಗ್ರಾಂ) ಬೆಲೆ: 1,23,640 ರೂ. 18 ಕ್ಯಾರೆಟ್ (10 ಗ್ರಾಂ) ಬೆಲೆ: 1,01,160 ರೂ.
ಹೊಸ ದಿಲ್ಲಿ: 2026ರಲ್ಲಿ ದೇಶದ ಜನತೆ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯವನ್ನು ರಕ್ಷಿಸಲು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಗಟ್ಟಿಗೊಳಿಸಲು ಸಾಮೂಹಿಕ ಪ್ರಯತ್ನ ಮಾಡಬೇಕು ಎಂದು ಹೊಸ ವರ್ಷದ ಪ್ರಯುಕ್ತ ಕೋರಿರುವ ಶುಭಾಶಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಇಡೀ ದೇಶದ ಜನತೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂದೇಶವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. “ಈ ವರ್ಷವನ್ನು ದುರ್ಬಲರ ಹಕ್ಕುಗಳನ್ನು ರಕ್ಷಿಸುವ ಬೃಹತ್ ಆಂದೋಲನವನ್ನಾಗಿ ಪರಿವರ್ತಿಸಿ” ಎಂದೂ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. “ಇಂದಿನ ಸಂಭ್ರಮದ ಹೊಸ ವರ್ಷದಲ್ಲಿ ನಾನು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರುತ್ತೇನೆ. ನಾವು ಈ ವರ್ಷವನ್ನು ದುರ್ಬಲರ ಹಕ್ಕುಗಳು, ಉದ್ಯೋಗದ ಹಕ್ಕು, ಮತದಾನದ ಹಕ್ಕು, ಘನತೆಯಿಂದ ಬದುಕುವ ಹಕ್ಕನ್ನು ರಕ್ಷಿಸುವ ಬೃಹತ್ ಆಂದೋಲನವನ್ನಾಗಿ ಪರಿವರ್ತಿಸೋಣ. ನಾವೆಲ್ಲರೂ ಒಟ್ಟಾಗಿ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸೋಣ. ನಾಗರಿಕರನ್ನು ಸಬಲಗೊಳಿಸೋಣ. ಸಮಾಜದಲ್ಲಿ ಸೌಹಾರ್ದತೆಯನ್ನು ಬಲಗೊಳಿಸೋಣ” ಎಂದು ಮಲ್ಲಿಕಾರ್ಜುನ ಖರ್ಗೆ ಹೊಸ ವರ್ಷದ ಸಂದೇಶದಲ್ಲಿ ತಿಳಿಸಿದ್ದಾರೆ.
ಆರೋಗ್ಯ ವಲಯ : ಕಳೆದುಕೊಂಡದ್ದು, ಪಡೆದುಕೊಳ್ಳಲಿರುವುದು...
2025 ಹಿನ್ನೋಟ - 2026 ಮುನ್ನೋಟ
BELAGAVI | ಹಿಂಡಲಗಾ ಜೈಲಿಗೆ ಹೊರಗಡೆಯಿಂದ ಡ್ರಗ್ಸ್–ಮೊಬೈಲ್ ಎಸೆತ: ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆ
ಬೆಳಗಾವಿ: ನಗರದ ಹಿಂಡಲಗಾ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಹಾಗೂ ಮಾದಕ ವಸ್ತುಗಳನ್ನು ತಲುಪಿಸುವ ಯತ್ನ ಮತ್ತೆ ಮುಂದುವರಿದಿದೆ. ಜೈಲಿನ ಹೊರಗೋಡೆಯ ಮೇಲಿಂದ ಮೊಬೈಲ್, ಸಿಮ್ ಕಾರ್ಡ್ ಹಾಗೂ ಡ್ರಗ್ಸ್ ಒಳಗೆ ಎಸೆದು ಖದೀಮರು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಿಡಿಗೇಡಿಗಳು, ಬಟ್ಟೆಯಲ್ಲಿ ಕಟ್ಟಿದ ವಸ್ತುಗಳನ್ನು ಜೈಲಿನ ಗೋಡೆಯ ಮೇಲಿಂದ ಏಕಾಏಕಿ ಎಸೆದು ಕ್ಷಣಾರ್ಧದಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೃತ್ಯ ಜೈಲಿನ ಸಿಸಿಟಿವಿ ಕ್ಯಾಮರಗಳಲ್ಲಿ ಸೆರೆಯಾಗಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಹೊಸ ವರ್ಷ ಹೊಸ ಭಾಷ್ಯ ಬರೆಯಲಿ; ಗರಿಗೆದರಿದ ಕೊಪ್ಪಳ ಮಂದಿಯ ನಿರೀಕ್ಷೆ
ಹೊಸ ವರ್ಷ ಜಿಲ್ಲೆಯ ಅಭಿವೃದ್ಧಿಗೆ ಹೊಸ ಹರುಷ ತುಂಬಲಿ. 2025 ಕಳೆದು 2026ರತ್ತ ಸಾಗುತ್ತಿದ್ದು, ಹೊಸ ವರ್ಷದಲ್ಲಿಜಿಲ್ಲೆಯಲ್ಲಿಆಗಬೇಕಿರುವ ನಾನಾ ಕಾಮಗಾರಿಗಳಿಗೆ ಮುನ್ನುಡಿ ಬರೆಯಲಿ. ಜಿಲ್ಲೆಯಲ್ಲಿ ಕನಕಗಿರಿ ಭಾಗದಲ್ಲಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಅಂತೆಯೇ ಕೊಪ್ಪಳ, ಯಲಬುರ್ಗಾ ತಾಲೂಕುಗಳ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಈ ವರ್ಷವಾದರೂ ಕೆರೆಗೆ ನೀರು ಬರುವ ನಿರೀಕ್ಷೆಯಲ್ಲಿ ಜನರಿದ್ದಾರೆ.
Switzerland| ಕ್ರಾನ್ಸ್–ಮೊಂಟಾನಾದ ಬಾರ್ನಲ್ಲಿ ಸ್ಫೋಟ; ಹಲವರು ಮೃತ್ಯು
ಕ್ರಾನ್ಸ್–ಮೊಂಟಾನಾ (ಸ್ವಿಟ್ಜರ್ಲ್ಯಾಂಡ್),ಜ.1:ಸ್ವಿಟ್ಜರ್ಲ್ಯಾಂಡ್ನ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್–ಮೊಂಟಾನಾದಲ್ಲಿ ಬಾರ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ಕಿಕ್ಕಿರಿದಿದ್ದ ‘ಲೆ ಕಾನ್ಸ್ಟೆಲೇಷನ್’ ಬಾರ್ನಲ್ಲಿ ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಮೂಲ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನೈಋತ್ಯ ಸ್ವಿಟ್ಜರ್ಲ್ಯಾಂಡ್ ನ ವಾಲಿಸ್ ಕ್ಯಾಂಟನ್ ನ ಪೊಲೀಸ್ ವಕ್ತಾರ ಗೇಟನ್ ಲಾಥಿಯನ್ ಈ ಕುರಿತು ಪ್ರತಿಕ್ರಿಯಿಸಿ, ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹಲವರು ಮೃತಪಟ್ಟಿದ್ದಾರೆ,” ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ಗಳು ಹಾಗೂ ಇತರೆ ತುರ್ತು ಸೇವೆಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸ್ಥಳೀಯ ಮಾಧ್ಯಮಗಳು ಪ್ರಕಟಿಸಿದ ಚಿತ್ರಗಳಲ್ಲಿ ಸ್ಫೋಟ ಸಂಭವಿಸಿದ ಕಟ್ಟಡ ಬೆಂಕಿಗಾಹುತಿಯಾಗಿರುವುದು ಕಂಡುಬಂದಿದೆ. ಸ್ಫೋಟದ ಕಾರಣ ಮತ್ತು ಹಿನ್ನೆಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
2026ರ ಹೊಸ ವರ್ಷದ ಹೊಸ್ತಿಲಲ್ಲೇ, ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್! ರಾಜ್ಯ ಸರ್ಕಾರ ಬರೋಬ್ಬರಿ 24,300 ಹುದ್ದೆಗಳಿಗೆ ನೇಮಕಾತಿ ಅಖಾಡಕ್ಕೆ ಇಳಿಯಲಿದೆ. ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿದ್ದು, ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ನೀಗಿಸಲು ವಿಶೇಷ ಗಮನ ಹರಿಸಲಾಗುತ್ತಿದೆ. ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.
BIDAR | ಕಾರು-ಬೈಕ್ ಮಧ್ಯೆ ಅಪಘಾತ : ಬೈಕ್ ಸವಾರ ಮೃತ್ಯು
ಬೀದರ್ : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂದಬಂದಗಿ ಗ್ರಾಮದ ಬಳಿ ಬುಧವಾರ ರಾತ್ರಿ ಸುಮಾರು 11:30ರ ವೇಳೆ ಸಂಭವಿಸಿದೆ. ಮೃತ ಯುವಕನನ್ನು ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ನಿವಾಸಿ ನಾಗೇಶ್ (25) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸಿಂದಬಂದಗಿ ಗ್ರಾಮದ ಬಳಿ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ನಾಗೇಶ್ ರನ್ನು. ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬೈಕ್ ಸಹಸಹವಾರನಿಗೆ ಗಾಯಗಳಾಗಿದ್ದು, ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಮತ್ತು ಬೈಕ್ ಜಖಂಗೊಂಡಿವೆ.
Property: ಗ್ರಾಮೀಣ ಭಾಗದ ಆಸ್ತಿದಾರರಿಗೆ ಗುಡ್ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ: ಈ ಆಸ್ತಿಗಳಿಗೆ ಒಸಿಯಿಂದ ವಿನಾಯಿತಿ
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ತೋಟದ ಮನೆ ಮಾಲೀಕರು ಮತ್ತು ಹೊಸದಾಗಿ ನಿರ್ಮಿಸಲಾದ ಆಸ್ತಿ ಮಾಲೀಕರಿಗೆ ಪ್ರಮುಖ ಪರಿಹಾರ ಸಿಕ್ಕಂತಾಗಿದೆ. ಸರ್ಕಾರ ಬುಧವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರ್ದಿಷ್ಟ ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಗ್ರಾಮೀಣ ಭಾಗದ ಕೆಲವು ನಿರ್ದಿಷ್ಟ ಆಸ್ತಿಗಳಿಗೆ ಸಂಬಂಧಿಸಿದಂತೆ ಆಕ್ಯುಪೆನ್ಸಿ ಪ್ರಮಾಣಪತ್ರ (Occupancy
ಕುರಾನ್ ಪ್ರತಿ ಮೇಲೆ ಕೈ ಇಟ್ಟು ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಜೋಹ್ರಾನ್ ಮಮ್ದಾನಿ
ಅಮೆರಿಕದ ಅತಿದೊಡ್ಡ ನಗರವಾದ ನ್ಯೂಯಾರ್ಕ್ ಸಿಟಿಯ ಮೊದಲ ಮುಸ್ಲಿಂ ಮೇಯರ್ ಆಗಿ, ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೋಹ್ರಾನ್ ಮಮ್ದಾನಿ ಅವರಿಗೆ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಪ್ರಮಾಣವಚನ ಬೋಧಿಸಿದರು. ಈ ಬಾರಿಯ ನ್ಯೂಯಾರ್ಕ್ ಮೇಯರ್ ಚುನಾವಣೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಚುನಾವಣೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ನಡುವಿನ ಫೈಟ್ ಎಂದೇ ಬಿಂಬಿಸಲಾಗಿತ್ತು. ಅಂತಿಮವಾಗಿ ಮಮ್ದಾನಿ ಜಯಗಳಿಸಿದರು.
ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಎನ್ ವಿನಯ ಹೆಗ್ಡೆ ನಿಧನ: ರಾಜಕೀಯ ಗಣ್ಯರ ಸಂತಾಪ
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಡಾ. ಎನ್.ವಿನಯ ಹೆಗ್ಡೆ ಇಂದು ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರ. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿರುವ ವಿನಯ ಹೆಗ್ಡೆ ಅವರು ಪ್ರಸ್ತುತ ಮಂಗಳೂರಿನ
Iran Protest: ಇರಾನ್ ನೆಲದಲ್ಲಿ ನಿಲ್ಲದ ಹೋರಾಟ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ
ಇರಾನ್ ನೆಲದಲ್ಲಿ ಶುರುವಾಗಿರುವ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಾಗಿದ್ದು, ಇರಾನ್ ಸೇನೆ ಸಮೇತ ಸಾವಿರಾರು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಎಂಟ್ರಿ ಕೊಟ್ಟ ನಂತರ ವಾತಾವರಣ ಇನ್ನಷ್ಟು ಕೈಮೀರಿ ಹೋಗಿದೆ. ನೋಡ ನೋಡುತ್ತಲೇ ಪ್ರತಿಭಟನಾಕಾರರ ಹಿಂಸೆಗೆ ಸರ್ಕಾರಿ ಕಟ್ಟಡಗಳು &ವಾಹನ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ
Madhya Pradesh| ಪ್ರಶ್ನೆ ಕೇಳಿದ NDTV ಪತ್ರಕರ್ತನಿಗೆ ಆಕ್ಷೇಪಾರ್ಹ ಪದ ಬಳಸಿದ ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯ!
'ಸ್ವಚ್ಛ ನಗರ' ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟ ಪ್ರಕರಣ
ಸಂಪಾದಕೀಯ | ಕೋಗಿಲಿನ ನಿರ್ವಸಿತ ಕೋಗಿಲೆಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೆಂಗಳೂರಿನ ಯಲಹಂಕದಲ್ಲಿ ತೆರವು ಕಾರ್ಯಾಚರಣೆ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಗೃಹ ಸಚಿವರು ಅಕ್ರಮ ವಲಸಿಗರಿಗೆ ಪರ್ಯಾಯ ವಸತಿ ನೀಡುವುದಿಲ್ಲ, ತಕ್ಷಣವೇ ಗಡಿಪಾರು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಪರಿಶೀಲನೆ ಬಳಿಕ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಗಡಿಪಾರು ಮಾಡಲಾಗುವುದು. ಬಿಜೆಪಿ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತುಷ್ಟೀಕರಣ ರಾಜಕಾರಣದ ಆರೋಪ ಮಾಡಿದ್ದಾರೆ.
CBSE Class 10, 12 Exam 2026: ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಮುಂದೂಡಿಕೆ: ಇಲ್ಲಿದೆ ದಿನಾಂಕಗಳ ವಿವರ
CBSE Board Exam 2026: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಗಳ ಪರೀಕ್ಷೆಯನ್ನು ಮುಂದೂಕೆ ಮಾಡಲಾಗಿದ್ದು, ದಿನಾಂಕಗಳನ್ನು ಮರು ನಿಗದಿಪಡಿಸಲಾಗಿದೆ. ಹಾಗಾದ್ರೆ ಯಾವಾಗಿನಿಂದ ಆರಂಭ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆಡಳಿತಾತ್ಮಕ ಕಾರಣಗಳ ಹಿನ್ನೆಲೆ ಸಿಬಿಎಸ್ಸಿ 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕಗಳನ್ನು ಮುಂದೂಡಿಕೆ ಮಾಡಲಾಗಿದೆ. ಈ
SSLC Exam: ಎಸ್ಎಸ್ಎಲ್ಸಿ ಪರೀಕ್ಷೆ; ನವೀಕರಣಗೊಳ್ಳದ ಪ್ರೌಢ ಶಾಲೆಗಳಿಗೆ ಸಂಕಷ್ಟ
ಬೆಂಗಳೂರು: ಕರ್ನಾಟಕದಲ್ಲಿ ಮಾನ್ಯತೆ ನವೀಕರಣಗೊಳ್ಳದ ಖಾಸಗಿ ಶಾಲೆಗಳ ಎಸ್ ಎಸ್ ಎಲ್ ಸಿ (SSLC) ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಯಿಂದ ಸಂಕಷ್ಟ ಎದುರಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿ, ಈ ಶಾಲೆಗಳ ವಿದ್ಯಾರ್ಥಿಗಳನ್ನು ಸಮೀಪದ ಪರೀಕ್ಷಾ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿದೆ. ಮಾನ್ಯತೆ ನವೀಕರಣಗೊಳ್ಳದ ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ
Gold Rate Rise: ವರ್ಷಾರಂಭದಲ್ಲೇ ತುಸು ಹೆಚ್ಚಳ ಕಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆ ಎಷ್ಟಾಗಿದೆ ಗೊತ್ತಾ?
ಚಿನ್ನದ ಬೆಲೆಯ ಏರಿಕೆ ಮತ್ತೆ ಮುಂದುವರಿದಿದೆ. ಸದ್ಯಕ್ಕೆ ಭಾರಿ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹೂಡಿಕೆದಾರರು ಅಧಿಕ ಲಾಭ ಗಳಿಸಿದ ಬಳಿಕ ಶೇರು ಮಾರಾಟದಲ್ಲಿ ತೊಡಗಿದ್ದರಿಂದ ಡಿಸೆಂಬರ್ ಕೊನೆ ವಾರದಲ್ಲಿ ಸ್ವಲ್ಪ ಇಳಿಕೆಯಾದ ಬೆಲೆ ಈಗ ಮತ್ತೆ ಹೆಚ್ಚಳ ಆಗತೊಡಗಿದೆ.
ಯಾವ ರಾಜ್ಯದಲ್ಲಿ ಇರುತ್ತೀರೋ ಅಲ್ಲಿನ ಭಾಷೆ ಕಲಿಯಿರಿ; ಎಲ್ಲವೂ ರಾಷ್ಟ್ರೀಯ ಭಾಷೆಗಳೇ ಎಂದ ಮೋಹನ್ ಭಾಗವತ್
ಭಾರತದಲ್ಲಿ ಭಾಷಾ ವಿವಾದ ಹೆಚ್ಚುತ್ತಿರುವ ಬೆನ್ನಲ್ಲೇ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಲ್ಲಾ ಭಾಷೆಗಳನ್ನು ಗೌರವಿಸುವ ಮತ್ತು ಎಲ್ಲಾ ಭಾಷೆಗಳನ್ನು ಗೌರವಿಸುವ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿರುವ ಎಲ್ಲಾ ಭಾಷೆಗಳನ್ನು ರಾಷ್ಟ್ರೀಯ ಭಾಷೆಗಳು ಎಂದು ಕರೆದಿರುವ ಆರ್ಎಸ್ಎಸ್ ಮುಖ್ಯಸ್ಥರು, ನಾವು ಯಾವ ರಾಜ್ಯದಲ್ಲಿ ನೆಲೆ ಕಂಡುಕೊಳ್ಳುತ್ತೇವೆಯೋ , ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ಮೋಹನ್ ಭಾಗವತ್ ಛತ್ತೀಸ್ಗಢ ರಾಜಧಾನಿ ರಾಯಪುರ್ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿದೆ ಮಾಹಿತಿ.
ನ್ಯೂಯಾರ್ಕ್ನ ಮೊದಲ ಮುಸ್ಲಿಂ ಮೇಯರ್ ಆಗಿ ಝೊಹ್ರಾನ್ ಮಮ್ದಾನಿ ಪ್ರಮಾಣವಚನ
ನ್ಯೂಯಾರ್ಕ್, ಜ.1: ಡೆಮಾಕ್ರಟಿಕ್ ಪಕ್ಷದ ನಾಯಕ, ಸಮಾಜವಾದಿ ಝೊಹ್ರಾನ್ ಮಮ್ದಾನಿ ಗುರುವಾರ ಮುಂಜಾನೆ ನ್ಯೂಯಾರ್ಕ್ ನಗರದ 112ನೇ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
RAICHURU | ಕೈಕಾಲು ತೊಳೆಯಲು ಕಾಲುವೆಗಿಳಿದ ಇಬ್ಬರು ಮಹಿಳೆಯರು ನೀರುಪಾಲು
ಓರ್ವ ಮಹಿಳೆಯ ಮೃತದೇಹ ಪತ್ತೆ, ಇನ್ನೊಬ್ಬರು ಕಾಣೆ
ಫೆಬ್ರವರಿ 1ರಿಂದ ಸಿಗರೇಟ್, ಬೀಡಿ, ಪಾನ್ ಮಸಾಲಾ ಮೇಲೆ ಹೆಚ್ಚುವರಿ ಸುಂಕ: ಕೇಂದ್ರ ಸರಕಾರದಿಂದ ಅಧಿಸೂಚನೆ
ಹೊಸದಿಲ್ಲಿ: ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾದ ಮೇಲೆ ಹೊಸ ಸೆಸ್ ಅನ್ನು ವಿಧಿಸಲಾಗುವುದು ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಮತ್ತು ಪಾನ್ ಮಸಾಲಾದ ಮೇಲಿನ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚುವರಿಯಾಗಿ ಇರುತ್ತವೆ. ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 40ರಷ್ಟು ಜಿಎಸ್ಟಿ ದರವನ್ನು ವಿಧಿಸಲಾಗುವುದು. ಬೀಡಿಗಳಿಗೆ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಇದರ ಜೊತೆಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಡಿಸೆಂಬರ್ನಲ್ಲಿ ಸಂಸತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮತ್ತು ತಂಬಾಕಿನ ಮೇಲೆ ಅಬಕಾರಿ ಸುಂಕ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಈ ತೆರಿಗೆಗಳು ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಸರಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ಕೊಳ್ಳೇಗಾಲ | ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಬೆಂಕಿ: ಅಪಾರ ನಷ್ಟ
ಚಾಮರಾಜನಗರ : ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿಯಲ್ಲಿ ಕಳೆದ ರಾತ್ರಿ 8:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಬೆಂಕಿಯಿಂದ ನಿರ್ಮಾಣವಾದ ಹೊಗೆಯು ಪಕ್ಕದ ಮಯೂರ ಬೇಕರಿಗೆ ಹಾಗೂ ರಸ್ತೆಗೆ ಆವರಿಸಿತು. ನೋಡು ನೋಡುತ್ತಲೆ ಬೆಂಕಿಯ ಕೆನ್ನಾಲಗೆ 108 ಅಡಿ ಉದ್ದವಿರುವ ಸಾಕಮ್ಮಸ್ ಅಂಗಡಿಯನ್ನು ಹಬ್ಬಿತು. ಬೆಂಕಿಯ ತೀವ್ರತೆ ಕಂಡು ಅಕ್ಕಪಕ್ಕವಿದ್ದ ಅಂಗಡಿ- ಮುಂಗಟ್ಟುಗಳು ಬಾಗಿಲು ಬಂದ್ ಮಾಡ ಲಾಯಿತು. ಮಾಹಿತಿ ತಿಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗ ಮಿಸಿ ಅಂಗಡಿ ಬಾಗಿಲು ಹೊಡೆದು ಬೆಂಕಿ ನಂದಿ ಸಲು ಹರ ಸಾಹಸಪಟ್ಟರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು. ಹೊಸ ವರ್ಷ ಆಚರಣೆಗೆ ಮಯೂರ ಬೇಕರಿಯಲ್ಲಿ ಸಿದ್ಧಪಡಿಸಿದ್ದ ಸಿಹಿ ತಿಂಡಿಗಳು ಹಾಗೂ ಕೇಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತ ಹಾನಿಯಾಗಿವೆ ಎಂದು ಹೇಳಲಾಗಿದೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸರ್ಕಾರ ಮತ್ತೊಮ್ಮೆ ಸಜ್ಜು: ಯಾವ ಹುದ್ದೆಗೆ ಎಷ್ಟು ಮೀಸಲು?
ಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಹತ್ವದ ಯೋಜನೆಯನ್ನು ಪುನಶ್ಚೇತನಗೊಳಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ವ್ಯವಸ್ಥಾಪಕ ಹುದ್ದೆಗಳಿಗೆ ಶೇ. 50, ವ್ಯವಸ್ಥಾಪಕೇತರ ಹುದ್ದೆಗಳಿಗೆ ಶೇ. 70, ಮತ್ತು ಗ್ರೂಪ್ ಸಿ, ಡಿ ಹುದ್ದೆಗಳಿಗೆ ಶೇ. 100 ರಷ್ಟು ಮೀಸಲಾತಿ ನೀಡುವ ಗುರಿ ಇದೆ. ಇದು ಸ್ಥಳೀಯರ ಉದ್ಯೋಗ ಹಿತಾಸಕ್ತಿ ಕಾಪಾಡುವ ಉದ್ದೇಶ ಹೊಂದಿದೆ.
KUNDAPURA | ಆಯಿಲ್ ಮಿಲ್ ನಲ್ಲಿ ಬೆಂಕಿ ಅವಘಡ : ಅಪಾರ ನಷ್ಟ
ಕುಂದಾಪುರ: ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಮಧು ಆಯಿಲ್ ಮಿಲ್ ನಲ್ಲಿ ಬುಧವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು ಅಪಾರ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಬುಧವಾರ ತಡರಾತ್ರಿ ಶ್ರೀ ಮಧುಮಾಯ ಆಯಿಲ್ಸ್(ಮಧು) ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್ ನಿಂದ ತಲಾ ಒಂದೊಂದು ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳೀಯರ ಸಹಕಾರದಲ್ಲಿ ರಾತ್ರಿಯಿಂದ ಬೆಳಗ್ಗೆ 9ರ ವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ತೊಡಗಿಸಿಕೊಂಡಿದ್ದಾರೆ. ತೆಂಗಿನೆಣ್ಣೆ ಆದ ಕಾರಣ ಬೆಂಕಿ ತೀವೃತೆ ಜಾಸ್ತಿಯಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
Karnataka Weather: ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೂರು ದಿನ ಉತ್ತಮ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಮುಂದುವರೆದಿದೆ. ಅದರಲ್ಲೂ ಉತ್ತರ ಒಳನಾಡಿನ ಭಾಗದಲ್ಲಿ ಭಾರೀ ಶೀತಗಾಳಿಗೆ ಜನರು ದಂಗಾಗಿದ್ದಾರೆ. ಈ ನಡುವೆಯೇ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಇಂದು
ಅದೊಂದು ಕಾಲವಿತ್ತು ಅಮೆರಿಕ ಎಂದರೆ ವಲಸಿಗರ ಸ್ವರ್ಗ ಎಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಅಮೆರಿಕ ವಲಸಿಗರ ಪಾಲಿಗೆ ನರಕವಾಗಿ ಪರಿಣಮಿಸಿದೆ. ಅದು ಅಕ್ರಮ ವಲಸಿಗರಾಗಿಲಿ ಅಥವಾ ಕಾನೂನುಬದ್ಧ ವಲಸಿಗರಾಗಿರಲಿ, ಇಬ್ಬರಿಗೂ ಗಡಿಪಾರು ಶಿಕ್ಷೆಯ ತೂಗುಗತ್ತಿ ಸದಾ ಕಾಣುತ್ತಿರುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ ವರ್ಷಾಂತ್ಯಕ್ಕೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹೊಸ ಎಚ್ಚರಿಕೆಯನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಭಾರತೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅತ್ತ ಅಮೆರಿಕದಲ್ಲಿ ಒಂದೊಮ್ಮೆ ಅಮೆರಿಕ ಬಿಟ್ಟು ಹೊರಗೆ ಹೋದರೆ ಮರಳಿ ದೇಶಕ್ಕೆ ಪ್ರವೇಶ ಪಡೆಯುವುದು ಅಸಾಧ್ಯ ಎಂಬ ಭಯದಲ್ಲಿ, ಶೇ. 32ರಷ್ಟು H-1B ವೀಸಾದಾರರು ತಮ್ಮ ಪ್ರಯಾಣ ಯೋಜನೆಯನ್ನೇ ರದ್ದಗೊಳಿಸಿದ್ದಾರೆ.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಸನಾತನ ರಾಷ್ಟ್ರ ಮಹೋತ್ಸವ
ಸರಕಾರದಿಂದಲೇ ಖುದ್ದು ಇಸ್ಲಾಮೋಫೋಬಿಯಾಗೆ ಕುಮ್ಮಕ್ಕು!
ಹೊಸ ವರ್ಷಕ್ಕೆ ಹೊಸ ನಿರ್ಧಾರ, ದುಶ್ಚಟಗಳನ್ನು ಬಿಡುವುದು ಸುಲಭ! New Year
2026 ಶುರುವಾಗಿದ್ದು ನಾವೆಲ್ಲಾ ಹೊಸ ವರ್ಷಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದೇವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನೆರವೇರಿದೆ. ಕೋಟ್ಯಂತರ ಜನರು ಹೊಸ ವರ್ಷಾಚರಣೆ ಮಾಡಿ ಖುಷಿಯಲ್ಲಿ ಕುಣಿದಾಡಿದ್ದಾರೆ. ಅಲ್ಲದೆ ಹೊಸ ವರ್ಷದಲ್ಲಿ ಏನೋ ಹೊಸ ಹುಮ್ಮಸ್ಸು ಸಿಗಲಿದೆ ಅಂತಾ ಕೂಡ ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆಯೇ ದುಶ್ಚಟಗಳು ಹಲವರ ನೆಮ್ಮದಿಗೆ ಕೊಳ್ಳಿ ಇಟ್ಟಿರುತ್ತದೆ. ಹಾಗಾದರೆ,
2025 : ಆಸಿಮ್ ಮುನೀರ್ ಕಂಡರೆ ಮೋದಿಗೆ ಗಡಗಡ ಅಂತೆ - 4 ಸುಳ್ಳಿನಿಂದ ವಿಶ್ವದ ಮುಂದೆ ಬೆತ್ತಲಾದ ಪಾಕ್
Pakistan Four Lies : ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಪಡಿಸಲಾಗದಷ್ಟು ಕೆಟ್ಟು ಹೋಗಿದೆ. ಪಹಲ್ಗಾಮ್ ಉಗ್ರರ ಕೃತ್ಯದ ನಂತರ ಎರಡು ದೇಶಗಳ ನಡುವೆ ಸದಾ ಉದ್ವಿಗ ಪರಿಸ್ಥಿತಿ ಮುಂದುವರಿದಿದೆ. ಈ ನಡುವೆ, ಪಾಕಿಸ್ತಾನದ ಜನತೆ ಮತ್ತು ಅಲ್ಲಿನ ನಾಯಕರ 4 ಸುಳ್ಳುಗಳು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲು ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಜಗತ್ತು ಈಗ ಯುದ್ಧ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆಯಿಂದ, ಯುದ್ಧ ಮುಗಿಸುವುದು ಯಾರಿಗೆ ಬೇಕಿಲ್ಲ ಎಂಬ ಪ್ರಶ್ನೆಯತ್ತ ಹೊರಳಿದ್ದು, ಇದಕ್ಕೆ ಉತ್ತರ ಸಿಗುವುದು ಅಷ್ಟು ಸುಲಭವಲ್ಲ. ಈ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದ ರಷ್ಯಾ ಸೇನೆ, ತನ್ನ ಆರೋಪಕ್ಕೆ ಸಾಕ್ಷಿಯಾಗಿ ಹಾನಿಗೊಳಗಾದ ಡ್ರೋನ್ನ ವಿಡಿಯೋ ಬಿಡುಗೆ ಮಾಡಿದೆ. ಇಲ್ಲಿದೆ ಮಾಹಿತಿ.
ರಾಜ್ಯದ 12 ಜಿಲ್ಲೆಗಳಿಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕ
New Superintendents of Police: ರಾಜ್ಯ ಸರ್ಕಾರ ಹೊಸ ವರ್ಷದ ಹಿಂದಿನ ದಿನ ಡಿಸೆಂಬರ್ 31, 2025ರಂದು ಆಡಳಿತ ಯಂತ್ರಕ್ಕೆ ಮೇಜರಿ ಸರ್ಜರಿ ಮಾಡಿದೆ. 12 ಜಿಲ್ಲೆಗಳಿಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕ ಮಾಡಿದೆ ಆದೇಶ ಹೊರಡಿಸಿದೆ. ಹಾಗಾದ್ರೆ, ಯಾರು ಎಲ್ಲಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆಗಾಗ ರಾಜ್ಯ ಸರ್ಕಾರ ಇಂತಹ ಮಹತ್ವದ
ದ್ವೀತಿಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ವೆಬ್ ಸ್ಟ್ರೀಮಿಂಗ್ ಜಾರಿ; ಪಾರದರ್ಶಕತೆಗೆ ಒತ್ತು!
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ) ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಅನ್ಯಾಯ ಮತ್ತು ಪಾರದರ್ಶಕತೆಗೆ ಒತ್ತು ನೀಡಲು ವೆಬ್ ಸ್ಟ್ರೀಮಿಂಗ್ ಜಾರಿಗೊಳಿಸಲು ನಿರ್ಧರಿಸಿದೆ. ಈ ಹೊಸ ವ್ಯವಸ್ಥೆಯ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳನ್ನು ರಿಯಲ್ ಟೈಮ್ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ, ಇದರಿಂದ ಪಾರದರ್ಶಕತೆ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ನ್ಯಾಯವಾಗಿ ಅಂಕಗಳು
ದೇವನಹಳ್ಳಿ | ಡ್ರಗ್ಸ್ ಮಾರಾಟ : ವಿದೇಶಿ ಪ್ರಜೆ ಬಂಧನ, 21 ಗ್ರಾಂ ಕೊಕೇನ್, 30 ಗ್ರಾಂ ಎಂಡಿಎಂಎ ವಶ
ದೇವನಹಳ್ಳಿ : ಹೊಸ ವರ್ಷದ ಹಿನ್ನಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ವಿದೇಶಿ ಮೂಲದ ವ್ಯಕ್ತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಸಮೀಪ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ, ದೇವನಹಳ್ಳಿ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅನುಮಾನಾಸ್ಪದವಾಗಿ ಡ್ರಗ್ಸ್ ಖರೀದಿದಾರರನ್ನು ಸೆಳೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 21 ಗ್ರಾಂ ಕೊಕೇನ್ ಹಾಗೂ 30 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಆಳಂದ ರಸ್ತೆ ಅಗಲೀಕರಣ | ಕಾನೂನುಬದ್ಧವಾಗಿ ಅರ್ಹರಿಗೆ ಪರಿಹಾರ : ಶಾಸಕ ಬಿ.ಆರ್.ಪಾಟೀಲ್
ಆಳಂದ:ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯಿಂದ ಆಸ್ತಿ ಕಳೆದುಕೊಳ್ಳುವವರಿಗೆ ಮೊದಲು ಪರಿಹಾರ ಘೋಷಿಸಿ ನಂತರವೇ ಕಾಮಗಾರಿ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ನಡುವೆಯೇ, ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಹಾಗೂ ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಸ್ತೆ ಅಗಲೀಕರಣ ಹಾಗೂ ಪರಿಹಾರ ವಿಷಯಕ್ಕೆ ಸಂಬಂಧಿಸಿ ನಮ್ಮ ಪ್ರತಿನಿಧಿ ಬುಧವಾರ ದೂರವಾಣಿ ಮೂಲಕ ಸಂಪರ್ಕಿಸಿದ ವೇಳೆ ಪ್ರತಿಕ್ರಿಯಿಸಿದ ಅವರು, ಪರಿಹಾರ ಕಾನೂನು ಪ್ರಕಾರ ಅರ್ಹವಾಗಿದ್ದರೆ ಸಂಬಂಧಪಟ್ಟವರು ಅದನ್ನು ಪಡೆದುಕೊಳ್ಳಲಿ. ಈ ಕುರಿತು ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಬೇಕು. ಮನವಿ ಬಂದಲ್ಲಿ ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ ಅರ್ಹರಿಗೆ ನ್ಯಾಯ ದೊರಕಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ರಸ್ತೆ ಅಗಲೀಕರಣವು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗಿರುವ ಮಹತ್ವದ ಅಭಿವೃದ್ಧಿ ಕಾಮಗಾರಿಯಾಗಿದ್ದು, ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇನ್ನೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಾಸಕರು, ರಸ್ತೆ ಅಗಲೀಕರಣ ಕಾರ್ಯಕ್ಕೆ ಸಾರ್ವಜನಿಕರು ನೀಡುತ್ತಿರುವ ಸಹಕಾರ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅಭಿನಂದಿಸಿದರು. ಜೊತೆಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಂದಿರುವ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ವಿರುದ್ಧವಾಗಿ, ರಸ್ತೆ ಅಗಲೀಕರಣದಿಂದ ನೇರವಾಗಿ ಪ್ರಭಾವಿತರಾಗುತ್ತಿರುವ ಆಸ್ತಿ ಮಾಲಕರು, ಮೊದಲು ಪರಿಹಾರ ಘೋಷಿಸಬೇಕು ಅಥವಾ ಪರಿಹಾರ ನೀಡಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ರಸ್ತೆ ಅಗಲೀಕರಣ ವಿಚಾರ ದಿನೇದಿನೇ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶಾಸಕ ಬಿ.ಆರ್. ಪಾಟೀಲ್ ಅವರು ಆರೋಗ್ಯ ಕಾರಣಗಳಿಂದ ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಅವರು ಸದ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆದರೂ, ದೂರವಾಣಿ ಮೂಲಕ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಸ್ತೆ ಅಗಲೀಕರಣ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಒಟ್ಟಾರೆ, ರಸ್ತೆ ಅಗಲೀಕರಣ ಎಂಬ ಅಭಿವೃದ್ಧಿ ಕಾರ್ಯ ಮತ್ತು ಪರಿಹಾರ ಕುರಿತ ಬೇಡಿಕೆಗಳ ನಡುವೆ ಸಮತೋಲನ ಸಾಧಿಸುವ ಹೊಣೆ ಆಡಳಿತದ ಮೇಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ಸ್ಪಷ್ಟ ನಿರ್ಧಾರಗಳ ಮೇಲೆ ಆಳಂದ ಪಟ್ಟಣದ ರಾಜಕೀಯ ಹಾಗೂ ಸಾಮಾಜಿಕ ವಾತಾವರಣ ಅವಲಂಬಿತವಾಗಲಿದೆ.

26 C