Karkala | ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ: ಮೂವರಿಗೆ ಗಂಭೀರ ಗಾಯ
ಕಾರ್ಕಳ: ಏಕಾಏಕಿ ರಸ್ತೆಗೆ ಬಂದ ಸೈಕಲ್ ಸವಾರನನ್ನು ಬಚಾವ್ ಮಾಡುವ ಭರದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಕಾರ್ಕಳ ಹಿರ್ಗಾನ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ಸದಾನಂದ ನಾಯಕ್, ಅವರ ಪತ್ನಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸದಾನಂದ ನಾಯಕ್ ಅವರು ಹಿರ್ಗಾನ ಗ್ರಾಮದ ಮೂರೂರು ಬಳಿ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿ ಮೂಲಕ ತನ್ನ ಕುಟುಂಬದೊಂದಿಗೆ ಹೆಬ್ರಿ ಚಾಂತಾರಿನ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಾಲಕನೋರ್ವ ಸೈಕಲ್ ಚಲಾಯಿಸುತ್ತಾ ಏಕಾಏಕಿ ಕಾರಿಗೆ ಅಡ್ಡ ಬಂದಿದ್ದಾನೆ. ಈ ವೇಳೆ ಸೈಕಲ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಹಲವೆಡೆ ನೆಲಕಚ್ಚಿರುವ ರಾಗಿ ಪೈರು, ಕಟಾವಿಗೂ ತೊಂದರೆ, ಕಟಾವು ಯಂತ್ರಕ್ಕೆ ಮೊರೆ
ಶಿಡ್ಲಘಟ್ಟ : ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಳೆಯಿಂದ ನೆಲಕಚ್ಚಿದ ರಾಗಿ ಪೈರಿಗೆ ಇದೀಗ, ಬೀಳುತ್ತಿರುವ ತುಂತುರು ಮಳೆ, ತೇವಾಂಶದ ಕಾಟ ಶುರುವಾಗಿದೆ. ರೈತರಿಗೆ ರಾಗಿ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ತಾಲೂಕಿನಲ್ಲಿ ರಾಗಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಮುಂಗಾರು ಅವಧಿಯಲ್ಲಿ ರಾಗಿ ಬೆಳೆಯನ್ನು ಬಿತ್ತನೆ ಮಾಡಲಾಗಿದೆ. ಇದೀಗ ಬೆಳೆಯು, ಕಟಾವಿನ ಹಂತ ತಲುಪಿದ್ದು, ತೇವಾಂಶ, ತುಂತುರು ಮಳೆಯಿಂದಾಗಿ ಕಟಾವಿಗೂ ಸಮಸ್ಯೆಯ ಜೊತೆಗೆ ಕಟಾವಿನ ನಂತರ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕಾದ ಅನಿವಾರ್ಯವಿದೆ. ಇಲ್ಲವಾದಲ್ಲಿ ಫಸಲು ಹಾಳಾಗುವ ಭೀತಿ ಎದುರಾಗಿದೆ. ಸದ್ಯ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಒಣ ಹುಲ್ಲಿಗೂ ಹಾನಿಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯ: ರೈತರಿಗೆ, ಎಕರೆ ಉಳುಮೆ ಮಾಡಲು 3,600ರೂ. ವೆಚ್ಚ ಮಾಡಲಾಗುತ್ತದೆ. ಕೂಲಿ ನೀಡಿ ಕುಂಟೆ ಹಾಕುವುದಕ್ಕೆ ಎಕರೆಗೆ ಸುಮಾರು 1,400ರೂ., ಇರ ಖರ್ಚುಗಳು ಸೇರಿ ಒಟ್ಟು 15 ಸಾವಿರ ರೂ.ಗೂ ಹೆಚ್ಚು ಖರ್ಚು ಬರುತ್ತದೆ. ಇಷ್ಟೆಲ್ಲಾ ವೆಚ್ಚಮಾಡಿ, ಬೆಳೆ ಬೆಳೆದರೆ, ವಾತಾವರಣ ವೈಪರಿತ್ಯದಿಂದಾಗಿ ಬೆಳೆದ ಬೆಳೆ ಬಾಗಿದೆ. ಇದರಿಂದ ನಷ್ಟದ ಆತಂಕ ಎದುರಾಗಿದೆ. ಇನ್ನೂ ವಾಯುಭಾರ ಕುಸಿತದ ಪರಿಣಾಮ, ಹಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಈ ಅವಧಿಯಲ್ಲಿ ಮಳೆಯಾದರೆ ರಾಗಿ ಕಟಾವಿಗೂ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಕಾರ್ಮಿಕರಿಗೆ ಬೇಡಿಕೆ: ಅನೇಕ ಸವಾಲುಗಳ ನಡುವೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರಿಗೆ ಕೃಷಿ ಕಾರ್ಮಿ ಕರು ಸಿಗದಂತಾಗಿದ್ದಾರೆ. ಒಂದು ವೇಳೆ ಸಿಕ್ಕರೂ ಸಮಯಕ್ಕೆ ಸರಿಯಾಗಿ ಸಿಗದೆ, ಸಮಸ್ಯೆ ಎದುರಿಸುವಂತೆ ಆಗಿದೆ. ಕೂಲಿ ವಿಷಯಕ್ಕೆ ಬಂದರೆ ಪುರುಷರಿಗೆ 700 ರೂ.ಮಹಿಳೆಯರಿಗೆ 350 ರೂ. ಜತೆಗೆ ಊಟದ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಇಷ್ಟೆಲ್ಲ ಶ್ರಮಪಟ್ಟರೂ ಹಾಕಿರುವ ಬಂಡವಾಳ ಬಂದರೆ ಸಾಕು ಎಂಬಂತಹ ಪರಿಸ್ಥಿತಿ ರೈತರದ್ದಾಗಿದೆ. ಕೃಷಿ ಕಾರ್ಮಿಕರಿಗೆ ಸಾಕಷ್ಟು ಬೇಡಿಕೆಯಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬಹಳಷ್ಟು ರಾಗಿ ಫಸಲು ನೆಲಕಚ್ಚಿದೆ. ಕೆಲವು ಮಂದಿ ರೈತರು, ತೆನೆ ಕಟಾವು ಮಾಡಿಕೊಂಡಿದ್ದು, ತಡವಾಗಿ ಬಿತ್ತನೆ ಮಾಡಿರುವಂತಹ ರೈತರ ಹೊಲಗಳಲ್ಲಿನ ಬೆಳೆಗಳು, ಮಳೆಯಿಂದಾಗಿ ಕೆಲಕಚ್ಚಿವೆ. ದೊಡ್ಡ ಮಟ್ಟದಲ್ಲಿ ರಾಗಿ ಬೆಳೆದವರು ಯಂತ್ರಗಳನ್ನು ಬಳಸಿಕೊಂಡು ಕಟಾವು ಮಾಡುತ್ತಾರೆ. ಯಂತ್ರದಲ್ಲಿ ಪುಡಿಯಾಗಿ ಬೀಳುವುದರಿಂದ ಪಸಲು ಸಮರ್ಪಕವಾಗಿ ಸಿಗುವುದಿಲ್ಲ. -ನಾಗರಾಜಪ್ಪ, ರೈತ ಮಳ್ಳೂರು.
ಗುರು-ಗಾಂಧಿ ಭೇಟಿಗೆ ನೂರು ವರ್ಷ: ದೇಶದ ಇತಿಹಾಸ, ವರ್ತಮಾನ ಮತ್ತು ಭವಿಷ್ಯ
ಹಿಂದುಳಿದ ವರ್ಗಗಳು ಸಾರ್ವಜನಿಕ ರಸ್ತೆಯಲ್ಲಿ ನಡೆದಾಟ, ದೇವಸ್ಥಾನ ಪ್ರವೇಶ, ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣ, ಉದ್ಯೋಗದಿಂದ ಸಂಪೂರ್ಣ ವಂಚಿತರಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ಭೇಟಿ ಸಾಮಾಜಿಕ ಕ್ರಾಂತಿಗೆ ಪ್ರವೇಶಿಕೆಯಾಯಿತು. ಜಗತ್ತಿನಾದ್ಯಂತ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ಎಲ್ಲಾ ಮಹಾತ್ಮರಿಗೆ ಸ್ಫೂರ್ತಿಯಾಗಿದ್ದ ಮಹಾತ್ಮಾ ಗಾಂಧೀಜಿಯವರಿಗೆ ನಾರಾಯಣ ಗುರುಗಳು ಸ್ಫೂರ್ತಿಯಾಗಿದ್ದರು ಎನ್ನುವುದು ದಕ್ಷಿಣ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಮೊತ್ತಮೊದಲಿಗೆ ಸಾರಿದ ಆಧ್ಯಾತ್ಮಿಕ ಗುರು, ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ಮತ್ತು ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭೇಟಿಯಾಗಿ ನೂರು ವರ್ಷಗಳಾಗುತ್ತವೆ. 1925ರಲ್ಲಿ ಕೇರಳದ ಶಿವಗಿರಿ ಆಶ್ರಮ ಅಂಗಳದಲ್ಲಿ ಮಹಾತ್ಮಾ ಗಾಂಧಿ ಮತ್ತು ಶ್ರೀ ನಾರಾಯಣ ಗುರು ನಡೆಸಿದ ಸಂಭಾಷಣೆ, ಕೇವಲ ಇಬ್ಬರು ಮಹಾನುಭಾವರ ಮಾತುಕತೆ ಅಲ್ಲ! ಅದು ‘ಭಾರತದ ಆತ್ಮ’ದಲ್ಲಿ ಬಿತ್ತಿದ ಬೀಜ. ಅದಾಗಲೇ ಬ್ರಿಟಿಷರ ದಬ್ಬಾಳಿಕೆಯ ಜೊತೆಗೆ, ಸಂಪ್ರದಾಯದ ದಾಸ್ಯವನ್ನು ಹೊತ್ತುಕೊಂಡಿದ್ದ ದೇಶವು ಜಾತಿಯ ಹೆಸರಿನಲ್ಲಿ ಮಾಡುತ್ತಿದ್ದ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವಲ್ಲಿ ಗುರು-ಗಾಂಧಿ ಭೇಟಿ ಮಹತ್ವದ ಪಾತ್ರವನ್ನು ವಹಿಸಿತ್ತು. ಈ ಸಾಮಾಜಿಕ ಕ್ರಾಂತಿಯ ಮೊಳಕೆ ಈಗ ಹೆಮ್ಮರವಾಗಿದ್ದು, ಅದಕ್ಕೀಗ ನೂರು ವರ್ಷಗಳು. ಕರ್ನಾಟಕದ ಪಾಲಿಗೆ, ಅದರಲ್ಲೂ ಕರಾವಳಿ ಕರ್ನಾಟಕದ ಪಾಲಿಗಂತೂ ಈ ಮಹಾತ್ಮರ ಭೇಟಿ ಮಾಡಿದ ಪರಿಣಾಮಗಳು ಅನೂಹ್ಯವಾಗಿದೆ. ಮಹಾತ್ಮಾ ಗಾಂಧೀಜಿಯವರು ಐದು ಬಾರಿ ಕೇರಳಕ್ಕೆ ಭೇಟಿ ನೀಡಿದ್ದರು. ಎರಡನೇ ಬಾರಿ ಮಹಾತ್ಮಾ ಗಾಂಧೀಜಿಯವರು ವೈಕಂ ಸತ್ಯಾಗ್ರಹವನ್ನು ಬೆಂಬಲಿಸಲೆಂದೇ ಕೇರಳಕ್ಕೆ ಭೇಟಿ ನೀಡಿದ್ದರು. ‘ವೈಕಂ ದೇವಾಲಯದ ಸುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಹಿಂದುಳಿದ ವರ್ಗಗಳು ನಡೆದಾಡುವಂತಿಲ್ಲ’ ಎಂಬ ಆದೇಶದ ವಿರುದ್ಧ ನಾರಾಯಣ ಗುರುಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ನಾರಾಯಣ ಗುರುಗಳ ಈ ಹೋರಾಟವನ್ನು ಬೆಂಬಲಿಸಿ ಗಾಂಧೀಜಿಯವರು 1925 ಮಾರ್ಚ್ ತಿಂಗಳಲ್ಲಿ ಕೇರಳಕ್ಕೆ ಬಂದವರು ಶಿವಗಿರಿ ಮಠ ಮತ್ತು ನಾರಾಯಣ ಗುರುಗಳನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಇದು ಮಹಾತ್ಮಾ ಗಾಂಧೀಜಿಯವರಿಗೆ ‘ಜ್ಞಾನೋದಯ ನೀಡಿದ ಭೇಟಿ’ಯಾಯಿತು. ಈ ಇಬ್ಬರು ಮಹಾನ್ ಮಹಾತ್ಮರ ಭೇಟಿಯನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶ್ರೀ ನಾರಾಯಣ ಗುರುಗಳಿಗೆ ಅವರ ಭಕ್ತ ಎಂ.ಕೆ. ಗೋವಿಂದದಾಸರು ದಾನ ಮಾಡಿದ ಕಟ್ಟಡವನ್ನು ಶ್ರೀ ನಾರಾಯಣ ಗುರು ಮತ್ತು ಗಾಂಧೀಜಿಯವರ ಭೇಟಿಯ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಈ ಕಟ್ಟಡಕ್ಕೆ ಈಗ ‘ಗಾಂಧಿ ಆಶ್ರಮ’ ಎಂದು ಹೆಸರಿಡಲಾಗಿದೆ. ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಮಾತುಕತೆಯನ್ನು ಕುಮಾರನ್ ಅವರು ಅನುವಾದಿಸುತ್ತಿದ್ದರು. ಹಿಂದೂ ಧರ್ಮದೊಳಗಿನ ಅಸ್ಪಶ್ಯತೆ, ಹೋರಾಟದಲ್ಲಿ ಹಿಂಸಾ ಮಾರ್ಗ ಮತ್ತು ಅಹಿಂಸಾ ಮಾರ್ಗ, ಮತಾಂತರದ ಬಗ್ಗೆ ಚರ್ಚೆ ನಡೆಯಿತು. ಅಲ್ಲಿಯವರೆಗೂ ವರ್ಣಾಶ್ರಮ ಧರ್ಮದ ಮೃದು ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧಿಯವರು ಈ ಭೇಟಿಯ ಬಳಿಕ ವರ್ಣಾಶ್ರಮ ವ್ಯವಸ್ಥೆಯ ವಿರೋಧಿಯಾದರು. ‘‘ಅಸ್ಪಶ್ಯತೆ ತೊಲಗಬೇಕು. ಅದರ ಹೊರತಾಗಿ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಏನು ಕ್ರಮ ತೆಗೆದುಕೊಳ್ಳಬೇಕು?’’ ಎಂದು ಮಹಾತ್ಮಾ ಗಾಂಧಿಯವರು ನಾರಾಯಣ ಗುರುಗಳನ್ನು ಪ್ರಶ್ನಿಸುತ್ತಾರೆ. ‘‘ಹಿಂದುಳಿದ ವರ್ಗಗಳಿಗೆ ಅಧಿಕಾರ, ಸಂಪತ್ತು, ಶಿಕ್ಷಣ ನೀಡಬೇಕು’’ ಎಂದು ನಾರಾಯಣ ಗುರುಗಳು ಪ್ರತಿಪಾದಿಸುತ್ತಾರೆ. ಮತಾಂತರದ ಬಗ್ಗೆ ಸ್ಪಷ್ಟತೆ ಹೊಂದಿಲ್ಲದ ಮಹಾತ್ಮಾ ಗಾಂಧಿಯವರಿಗೆ ನಾರಾಯಣ ಗುರುಗಳು ಸ್ಪಷ್ಟತೆಯನ್ನು ನೀಡುತ್ತಾರೆ. ‘‘ಮತಾಂತರ ಹೊಂದುವುದು ಶೋಷಿತರ ತಪ್ಪಲ್ಲ. ಅವರು ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯವನ್ನು ಬಯಸಿ ಮತಾಂತರ ಆಗುವುದನ್ನು ತಪ್ಪೆಂದು ಹೇಳಲು ಆಗುವುದಿಲ್ಲ’’ ಎಂದು ಗುರುಗಳು ಗಾಂಧೀಜಿಯವರಿಗೆ ಹೇಳುತ್ತಾರೆ. ಗಾಂಧೀಜಿಯವರು ಹಿಂದೂ ಧರ್ಮದಲ್ಲಿ ಅಧ್ಯಾತ್ಮಿಕ ವಿಮೋಚನೆ ಸಾಧ್ಯ ಎಂದು ಗುರುಗಳಲ್ಲಿ ವಾದಿಸುತ್ತಾರೆ. ನಾರಾಯಣ ಗುರುಗಳು ಸ್ಪಷ್ಟವಾಗಿ ‘‘ನನ್ನ ಜನರಿಗೆ ಅಧ್ಯಾತ್ಮಿಕ ವಿಮೋಚನೆಗಿಂತ ಮುಖ್ಯವಾಗಿ ಭೌತಿಕ ವಿಮೋಚನೆ (ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವಾತಂತ್ರ್ಯ) ಮುಖ್ಯ’’ ಎಂದು ಪ್ರತಿಪಾದಿಸುತ್ತಾರೆ. ಇವೆಲ್ಲವೂ ಗಾಂಧೀಜಿಯ ಕಣ್ತೆರೆಸಿ ಮುಂದಿನ ಹೆಜ್ಜೆಗಳನ್ನಿಡಲು ಸಹಾಯ ಮಾಡುತ್ತವೆ. ಗಾಂಧೀಜಿ ಅಸ್ಪಶ್ಯತೆಯನ್ನು ವಿರೋಧಿಸಿದರೂ, ಅವರು ವರ್ಣಾಶ್ರಮ ವ್ಯವಸ್ಥೆಯನ್ನು ನಂಬಿದ್ದರು. ನಾರಾಯಣ ಗುರುಗಳ ಭೇಟಿ ಬಳಿಕ ವರ್ಣ ವ್ಯವಸ್ಥೆಯ ಬಗ್ಗೆ ಗಾಂಧೀಜಿಯವರ ಮನಸ್ಥಿತಿಯನ್ನು ಬದಲಾಯಿಸಿತು. ಆ ದಿನ ಗಾಂಧೀಜಿ ಶಿವಗಿರಿಯಲ್ಲಿ ವಿಶ್ರಾಂತಿ ಪಡೆದರು. ಶಿವಗಿರಿ ಮಠದ ಸೌಂದರ್ಯ ಮತ್ತು ಶುಚಿತ್ವವನ್ನು ಗಾಂಧೀಜಿ ಹೊಗಳಿದರು. ಆ ದಿನವೂ ದೊಡ್ಡ ಜನಸಮೂಹ ಜಮಾಯಿಸಿತ್ತು. ನಾರಾಯಣ ಗುರುಗಳೊಂದಿಗೆ ವೇದಿಕೆಯಲ್ಲಿ ಕುಳಿತಿದ್ದ ಗಾಂಧೀಜಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಸ್ಪಶ್ಯತೆ, ವೈಕಂ ಸತ್ಯಾಗ್ರಹ, ಖಾದಿ ಬಳಕೆ ಬಗ್ಗೆ ಮಹಾತ್ಮಾ ಗಾಂಧಿಯವರು ಭಾಷಣ ಮಾಡಿದರೆ, ನಾರಾಯಣ ಗುರುಗಳು ‘‘ಗಾಂಧೀಜಿ ಸಲಹೆ ನೀಡಿದುದನ್ನು ಅನುಸರಿಸಿ’’ ಎಂದು ಕರೆ ನೀಡಿದರು. ಶ್ರೀ ನಾರಾಯಣ ಗುರು ದಕ್ಷಿಣ ಭಾರತದ ಸಾಮಾಜಿಕ ಹೋರಾಟಗಳ ದಿಕ್ಕನ್ನು ಬದಲಿಸಿದ ಮಹಾಸಂತ ಸಮಾಜ ಸುಧಾರಕ. ನಾರಾಯಣ ಗುರುಗಳು ಪೆರಿಯಾರ್ರಂತೆ ಧರ್ಮವನ್ನು ತಿರಸ್ಕರಿಸಲಿಲ್ಲ, ಬದಲಾಗಿ ಧರ್ಮವನ್ನು ಮರುಪರಿಭಾಷಿಸಿದರು. ಗಾಂಧೀಜಿ ಮತ್ತು ಗುರುಗಳ ಭೇಟಿಯ ಚಿಂತನೆಯ ಪ್ರತಿಫಲನ ಕರ್ನಾಟಕದ ಕರಾವಳಿ ಭಾಗದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಕರಾವಳಿ ಪ್ರದೇಶಗಳಲ್ಲಿನ ಕರ್ಮಠ ಮಠಗಳು, ಸಾಂಸ್ಕೃತಿಕ ಕೇಂದ್ರಗಳಿಗೆ ನಾರಾಯಣ ಗುರು-ಗಾಂಧೀಜಿ ಭೇಟಿ ಪರಿಣಾಮ ಬೀರಿತ್ತು. ನಾರಾಯಣ ಗುರುಗಳ ಚಿಂತನೆ ಮತ್ತು ಗಾಂಧೀಜಿಯವರ ಜನಾಂದೋಲನವು ಕರಾವಳಿಯ ಬೌದ್ಧಿಕ ನೆಲೆಯನ್ನು ಬದಲಿಸಿತು. ಬಸವಣ್ಣನ ವಚನಗಳ ಸಮಾನತೆಯ ಶಕ್ತಿ, ಸೂಫಿ ಪರಂಪರೆಯ ಮಾನವೀಯತೆ ಮತ್ತು ನಾರಾಯಣ ಗುರು-ಗಾಂಧಿ ಚಿಂತನೆಗಳು ಕರಾವಳಿಯಲ್ಲಿ ಸಹಜವಾಗಿ ಒಂದಕ್ಕೆ ಒಂದು ಸೇರುತ್ತಾ ಮಾನವೀಯತೆಯ ಹೊಸ ವ್ಯಾಖ್ಯಾನ ನೀಡಿದವು. ಅಲ್ಪಸಂಖ್ಯಾತರು, ಮೀನುಗಾರ ಜನಾಂಗಗಳು, ತಳಸಮುದಾಯದ ಕಾರ್ಮಿಕರ ಜಾಗೃತಿ ಈ ಕಾಲದಲ್ಲಿ ಹೆಚ್ಚು ಗಾಢವಾಯಿತು. ಇದರ ಪರಿಣಾಮವಾಗಿ ಶಿಕ್ಷಣದ ಚಳವಳಿಗಳು, ಸಮಾನ ಹಕ್ಕಿನ ಹೋರಾಟಗಳು ಮತ್ತು ಸಂಘಟಿತ ಸಾಮಾಜಿಕ ಚಳವಳಿಗಳು ಕರಾವಳಿಯಲ್ಲಿ ವೇಗ ಪಡೆದವು. ಭವಿಷ್ಯದ ಭಾರತದ ಮಟ್ಟಿಗೆ ಈ ಭೇಟಿಯ ಪಾತ್ರವನ್ನು ನೋಡಿದರೆ, ಅದು ಕೇವಲ ಜಾತಿನಿರ್ಮೂಲನದ ಚಿಂತನೆಯಲ್ಲ. ಅದು ಭಾರತವನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಮರುಕಟ್ಟುವಿಕೆಗೆ ತಳಪಾಯವಾಯಿತು. ದಕ್ಷಿಣ ಕನ್ನಡ ಜಿಲ್ಲೆಯು ನಾರಾಯಣ ಗುರುಗಳನ್ನು ಮತ್ತು ಮಹಾತ್ಮಾ ಗಾಂಧೀಜಿಯವರನ್ನು ಒಂದೇ ದೇವಸ್ಥಾನದಲ್ಲಿ ‘ಆರಾಧಿಸುವ’ ಏಕೈಕ ಸ್ಥಳವಾಗಿದೆ. ಮಂಗಳೂರಿನ ಕಂಕನಾಡಿ ಗರೋಡಿಯಲ್ಲಿ ಮಹಾತ್ಮಾ ಗಾಂಧೀಜಿಯವರಿಗೂ, ನಾರಾಯಣ ಗುರುಗಳಿಗೂ ತ್ರಿಕಾಲ ಪೂಜೆ ನಡೆಯುತ್ತದೆ. ಇದು ಕರ್ನಾಟಕ ಕರಾವಳಿ ಮೇಲೆ ನಾರಾಯಣ ಗುರು-ಮಹಾತ್ಮಾ ಗಾಂಧಿ ಭೇಟಿಯ ಪರಿಣಾಮದ ಸಂಕೇತದಂತಿದೆ. ಬಿಲ್ಲವ ಸಮುದಾಯದ ಗಾಂಧೀವಾದಿ ನಾಯಕ ಕೊರಗಪ್ಪ ಅವರು ನಾರಾಯಣ ಗುರುಗಳನ್ನು ಭೇಟಿಯಾಗಿದ್ದು ಕೂಡಾ ಕರಾವಳಿ ಪಾಲಿಗೆ ಅತ್ಯಂತ ಮಹತ್ವದ್ದು. ತೀರಾ ಹಿಂದುಳಿದ ವರ್ಗವಾಗಿದ್ದ ಬಿಲ್ಲವರಿಗೆ ಕರಾವಳಿಯಲ್ಲಿ ದೇವಸ್ಥಾನ ಪ್ರವೇಶ ಇರಲಿಲ್ಲ. ಆಗ ಕೊರಗಪ್ಪ ಅವರು ಬಿಲ್ಲವ ಹಿರಿಯರ ನಿಯೋಗದ ನೇತೃತ್ವ ವಹಿಸಿ ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಬಿಲ್ಲವರಿಗೆ ದೇವಾಲಯ ನಿರ್ಮಿಸಲು ಮಾರ್ಗದರ್ಶನ ನೀಡಲು ಶ್ರೀ ನಾರಾಯಣ ಗುರುಗಳನ್ನು ಆಹ್ವಾನಿಸಿದರು. ಅದರಂತೆ ನಾರಾಯಣ ಗುರುಗಳು ಮಂಗಳೂರಿಗೆ ಆಗಮಿಸಿ ದೇವಸ್ಥಾನ ನಿರ್ಮಾಣಕ್ಕೆ ಕುದ್ರೋಳಿ ಪ್ರದೇಶವನ್ನು ಆಯ್ಕೆ ಮಾಡಿದರು. ಶ್ರೀ ನಾರಾಯಣ ಗುರುಗಳು ಕೊರಗಪ್ಪ ಅವರ ಮನೆಯಲ್ಲಿ ಕುಳಿತು ದೇವಾಲಯ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮುದಾಯದ ಹಿರಿಯರ ಜೊತೆ ಚರ್ಚಿಸಿದರು. ಅದರ ಫಲವಾಗಿ ಸರ್ವ ಜನಾಂಗದವರೂ ಯಾವುದೇ ಅಸ್ಪಶ್ಯತೆ ಇಲ್ಲದೆ ದೇವಸ್ಥಾನದೊಳಗೆ ಪ್ರವೇಶಿಸಬಹುದಾದ ’ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ’ ಸ್ಥಾಪನೆಯಾಯಿತು. ಹಿಂದುಳಿದ ವರ್ಗಗಳೇ ಇಲ್ಲಿ ದೇವರನ್ನು ಅರ್ಚನೆ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ಕರಾವಳಿಯಲ್ಲಿ ನಾರಾಯಣ ಗುರುಗಳು ನಾಂದಿ ಹಾಡಿದರು. ಹಿಂದುಳಿದ ವರ್ಗಗಳು ಸಾರ್ವಜನಿಕ ರಸ್ತೆಯಲ್ಲಿ ನಡೆದಾಟ, ದೇವಸ್ಥಾನ ಪ್ರವೇಶ, ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣ, ಉದ್ಯೋಗದಿಂದ ಸಂಪೂರ್ಣ ವಂಚಿತರಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ಭೇಟಿ ಸಾಮಾಜಿಕ ಕ್ರಾಂತಿಗೆ ಪ್ರವೇಶಿಕೆಯಾಯಿತು. ಜಗತ್ತಿನಾದ್ಯಂತ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ಎಲ್ಲಾ ಮಹಾತ್ಮರಿಗೆ ಸ್ಫೂರ್ತಿಯಾಗಿದ್ದ ಮಹಾತ್ಮಾ ಗಾಂಧೀಜಿಯವರಿಗೆ ನಾರಾಯಣ ಗುರುಗಳು ಸ್ಫೂರ್ತಿಯಾಗಿದ್ದರು ಎನ್ನುವುದು ದಕ್ಷಿಣ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಮಹಾತ್ಮಾಗಾಂಧೀಜಿಯವರಿಗೆ ಜ್ಞಾನೋದಯ ಮಾಡಿಸಿದ ಗುರು-ಗಾಂಧಿ ಭೇಟಿಯನ್ನು ಮತ್ತೆ ನೆನೆಯುವುದು, ಆ ಮೂಲಕ ಇಬ್ಬರ ಸಮ ಸಮಾಜದ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ʼಸಂಚಾರ್ ಸಾಥಿʼ ಆ್ಯಪ್ ಅಳವಡಿಕೆಗೆ ಸರಕಾರದ ಆದೇಶವನ್ನು ಪ್ರತಿರೋಧಿಸಲು ಆ್ಯಪಲ್ ಸಜ್ಜು; ವರದಿ
ಹೊಸದಿಲ್ಲಿ: ದೇಶದಲ್ಲಿ ತಯಾರಾಗುವ ಮತ್ತು ಆಮದು ಮಾಡಿಕೊಳ್ಳಲಾಗುವ ಎಲ್ಲ ಮೊಬೈಲ್ಗಳಲ್ಲಿ ʼಸಂಚಾರ್ ಸಾಥಿʼ ಆ್ಯಪ್ನ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸರಕಾರವು ಹೊರಡಿಸಿರುವ ಆದೇಶವನ್ನು ಪಾಲಿಸದಿರಲು ಆ್ಯಪಲ್ ಯೋಜಿಸಿದೆ ಮತ್ತು ತನ್ನ ಕಳವಳಗಳನ್ನು ಭಾರತ ಸರಕಾರಕ್ಕೆ ತಿಳಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಕಣ್ಗಾವಲು ಕಳವಳಗಳನ್ನು ವ್ಯಕ್ತಪಡಿಸಿ ಪ್ರತಿಪಕ್ಷಗಳು ಸರಕಾರದ ಕ್ರಮವನ್ನು ವಿರೋಧಿಸಿವೆ. ಇಂತಹ ಆದೇಶವು ಐಒಎಸ್ ಪರಿಸರ ವ್ಯವಸ್ಥೆಗೆ ಹಲವಾರು ಗೋಪ್ಯತೆ ಮತ್ತು ಭದ್ರತಾ ಸಮಸ್ಯೆಗಳನ್ನುಂಟು ಮಾಡುವುದರಿಂದ ಜಗತ್ತಿನ ಎಲ್ಲಿಯೂ ಇಂತಹ ಆದೇಶವನ್ನು ತಾನು ಪಾಲಿಸುವುದಿಲ್ಲ ಎಂದು ಆ್ಯಪಲ್ ಸರಕಾರಕ್ಕೆ ತಿಳಿಸಲಿದೆ ಎಂದು ಮೂಲಗಳು ತಿಳಿಸಿದವು. ಅದು ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ಬಯಸಿಲ್ಲ ಎಂದವು. ಸ್ಯಾಮ್ಸಂಗ್ ಸೇರಿದಂತೆ ಇತರ ಕಂಪನಿಗಳು ಸರಕಾರದ ಆದೇಶವನ್ನು ಪರಿಶೀಲಿಸುತ್ತಿವೆ ಎಂದೂ ಮೂಲಗಳು ಹೇಳಿದವು. ಅ್ಯಪಲ್ ತನ್ನ ವಾರ್ಷಿಕ 100 ಶತಕೋಟಿ ಡಾಲರ್ ಸೇವಾ ವ್ಯವಹಾರಕ್ಕೆ ನಿರ್ಣಾಯಕವಾಗಿರುವ ತನ್ನ ಆ್ಯಪ್ ಸ್ಟೋರ್ ಮತ್ತು ಐಒಎಸ್ ಸಾಫ್ಟ್ವೇರ್ನ ಮೇಲೆ ಬಿಗಿಯಾದ ನಿಯಂತ್ರಣವನ್ನು ಕಾಯ್ದುಕೊಂಡಿದೆ. ಗೂಗಲ್ನ ಆ್ಯಂಡ್ರಾಯ್ಡ್ ಮುಕ್ತವಾಗಿದ್ದು, ಸ್ಯಾಮ್ಸಂಗ್ ಮತ್ತು ಶಿಯೋಮಿಯಂತಹ ಕಂಪನಿಗಳು ತಮ್ಮ ಸಾಫ್ಟ್ವೇರ್ನ್ನು ಮಾರ್ಪಡಿಸಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ.
ಪಿಸ್ತೂಲಿನ ಟ್ರಿಗರ್ ಎಳೆದ 13 ವರ್ಷದ ಬಾಲಕ - 80 ಸಾವಿರ ಜನರ ಸಮ್ಮುಖದಲ್ಲಿ ಬಿತ್ತು ಆತನ ಹೆಣ!
ಅಫ್ಘಾನಿಸ್ತಾನದ ಖೋಶ್ತ್ನಲ್ಲಿ 80,000 ಜನರ ಮುಂದೆ, ಕೊಲೆ ಪ್ರಕರಣದಲ್ಲಿ ಅಪರಾಧಿ ಸಾಬೀತಾದ ಮಂಗಳ್ ಎಂಬಾತನಿಗೆ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ. ಕೋರ್ಟ್ ವಿಚಾರಣೆಯಲ್ಲಿ ಆ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಮಂಗಳ್ ಹಿಂದೆ ಕೊಂದಿದ್ದ ವ್ಯಕ್ತಿಯ ಕುಟುಂಬದ ಬಾಲಕನಿಂದಲೇ ಶಿಕ್ಷೆ ಜಾರಿಗೊಳಿಸಿದ ತಾಲಿಬಾನಿಗಳು. .
ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಬುಧವಾರ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜ ಮತ್ತಿತರರು ಸ್ವಾಗತಿಸಿದರು. ಈ ವೇಳೆ ಮುಖ್ಯಮಂತ್ರಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದರು. ಶಿವಗಿರಿ ಮಠ, ವರ್ಕಲ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ನಡೆಯಲಿರುವ ಶ್ರೀ ನಾರಾಯಣ ಗುರು-ಗಾಂಧೀಜಿ ಸಂವಾದ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿರುವ ಶ್ರೀ ಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದ್ದಾರೆ.
ರಾಯಚೂರು: ಭಂಗಿ ಜನಾಂಗಕ್ಕೆ ರಾಜಕೀಯ ಸ್ಥಾನ ನೀಡಲು ಭಾಸ್ಕರ ಬಾಬು ಒತ್ತಾಯ
ರಾಯಚೂರು: ಕೇಂದ್ರದಲ್ಲಿ ಭಂಗಿ ಜನಾಂಗಕ್ಕೆ ಸೇರಿದವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಬೇಕೆಂದು ಅಖಿಲ ಭಾರತೀಯ ಮಜ್ದೂರ್ ಕಾಂಗ್ರೆಸ್ನ ರಾಷ್ಟ್ರೀಯ ಕಾರ್ಯದರ್ಶಿ ಭಾಸ್ಕರ ಬಾಬು ಅವರು ಸಂಸದರು ಮತ್ತು ಶಾಸಕರನ್ನು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಭಂಗಿ ಜನಾಂಗಕ್ಕೆ ಸೇರಿದವರನ್ನು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯರ ಸ್ಥಾನವನ್ನು ನೀಡಿ ನಾಮನಿರ್ದೇಶನ ಮಾಡಬೇಕು. ರಾಜ್ಯದ ಎಲ್ಲಾ ನಗರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ ಅವಲಂಬಿತ ಒಬ್ಬರಿಗೆ ನಾಮ ನಿರ್ದೇಶನ ಸದಸ್ಯರಾಗಿ ನೇಮಕ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ದಾಳಿಗಳನ್ನು ಕಾಂಗ್ರೆಸ್ ತೀವ್ರಗೊಳಿಸಿದಂತೆ ಕಂಡುಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಾಂಗ್ರೆಸ್ ನಾಯಕಿ ಡಾ. ರಾಗಿಣಿ ನಾಯಕ್ ಅವರು, ಜಾಗತಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಚಹಾ ಮಾರುತ್ತಿರುವ ರೀತಿಯಲ್ಲಿ ಚಿತ್ರಿಸಿರುವ AI ವಿಡಿಯೋವೊಂದನ್ನು ತಮ್ಮ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿಯ ಈ AI ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಈ ನಡೆಯನ್ನು ಕಾಂಗ್ರೆಸ್ ನಾಯಕತ್ವದ ಮನಸ್ಥಿತಿಗೆ ಸಾಕ್ಷಿ ಎಂದು ಹರಿಹಾಯ್ದಿದೆ.
ಭಾರತದೊಂದಿಗೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಅನುಮೋದನೆ
ಭಾರತ ಮತ್ತು ರಷ್ಯಾ ನಡುವೆ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ರಷ್ಯಾ ಸಂಸತ್ತು ಅನುಮೋದನೆ ನೀಡಿದೆ. ಈ ಒಪ್ಪಂದವು ಉಭಯ ದೇಶಗಳ ಸೇನೆಗಳಿಗೆ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ಜಂಟಿ ಕಾರ್ಯಾಚರಣೆ, ತರಬೇತಿ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಹಕಾರವನ್ನು ಸುಲಭಗೊಳಿಸಲಿದೆ. ಅಧ್ಯಕ್ಷ ಪುಟಿನ್ ಭಾರತ ಭೇಟಿಗೂ ಮುನ್ನ ಈ ಒಪ್ಪಂದ ಜಾರಿಗೆ ಬಂದಿದೆ.
ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್, ಗಾಂಧಿ- ಗುರು ಕಾರ್ಯಕ್ರಮದಲ್ಲಿ ಡಿಕೆಶಿ ದೂರ
ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸದ್ಯ ಒಂದ ಹಂತಕ್ಕೆ ತೀವ್ರತೆಯನ್ನು ಕಳೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳಿದ್ದಾರೆ. ಮಂಗಳೂರಿಗೆ ತೆರಳಿದ ಸಿದ್ದರಾಮಯ್ಯಗೆ ಅಹಿಂದ ಸಚಿವರ ಸಾಥ್ ನೀಡಿದ್ದಾರೆ. ಮಂಗಳೂರಿನ ಉಳ್ಳಾಲದಲ್ಲಿ ಗಾಂಧಿ- ಗುರು ಸಂವಾದ 100 ವರ್ಷ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಈ ಕುರಿತಾಗಿ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬ ಮತ್ತಷ್ಟು ಮಾಹಿತಿ ಇಲ್ಲಿದೆ. ಾರೆ
2028ರಲ್ಲಿ ನಾನು ಸ್ಪರ್ಧಿಸುವುದಿಲ್ಲ ಟ್ರಂಪ್ ಧಿಡೀರ್ ಘೋಷಣೆ; ಹಾಗಾದ್ರೆ, ಯಾರಾಗ್ತಾರೆ ಟ್ರಂಪ್ ಉತ್ತರಾಧಿಕಾರಿ?
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ 2028ರ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದ ಟ್ರಂಪ್, ಈಗ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಉತ್ತರಾಧಿಕಾರಿ ಯಾರಾದರೂ ಒಬ್ಬರು ಅಥವಾ ಇಬ್ಬರು ಸ್ಪರ್ಧಿಸಬಹುದು ಎಂದಿದ್ದಾರೆ. ಇದು ಸಭೇಯಲ್ಲೆ ಕುಳಿತಿದ್ದ ಜೆ.ಡಿ ವ್ಯಾನ್ಸ್ ಹಾಗೂ ಮಾರ್ಕೋ ರುಬಿಯೋ ಅವರನ್ನೇ ಬೋಟ್ಟು ಮಾಡಿ ಹೇಳಿದಂತಿದೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಹನುಮ ಜಯಂತಿಗೆ ಶುಭಕೋರಿದ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್: ನೆಟ್ಟಿಗರು ಹೇಳಿದ್ದೇನು ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮ ಜಯಂತಿಯ (ಹನುಮದ್ವ್ರತದ) ಶುಭಾಶಯ ಕೋರಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ. ಡಿಸೆಂಬರ್ 3ರ ಬುಧವಾರ ಶುಭಕೋರಿದ್ದಾರೆ. ಇನ್ನು ನೆನ್ನೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಶುಭಕೋರಿ ಸಂದೇಶ ಹಂಚಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಮಬಂಟ ಹನುಮನ ಸ್ವಾಮಿನಿಷ್ಠೆ,
Delhi | MCD ಉಪಚುನಾವಣೆ ಫಲಿತಾಂಶ: ಬಿಜೆಪಿ 7, ಎಎಪಿ 3; ಕಾಂಗ್ರೆಸ್ ಗೆ ಸಂಗಮ್ ವಿಹಾರ್ನಲ್ಲಿ ಜಯ
ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆಯ 12 ವಾರ್ಡ್ಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (BJP) ಏಳು ಸ್ಥಾನಗಳಲ್ಲಿ ಜಯಗಳಿಸಿದೆ. ಆಮ್ ಆದ್ಮಿ ಪಕ್ಷ (AAP) ಮೂರು ವಾರ್ಡ್ಗಳಲ್ಲಿ ಗೆಲುವು ಗಳಿಸಿದ್ದರೆ, ಸಂಗಮ್ ವಿಹಾರ್–ಎ ವಾರ್ಡಿನಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆದಿದೆ. ನ. 30ರಂದು 12 ವಾರ್ಡ್ಗಳಲ್ಲಿ ಉಪಚುನಾವಣೆ ನಡೆದಿದ್ದು, ಅವುಗಳಲ್ಲಿ ಒಂಭತ್ತು ವಾರ್ಡ್ ಗಳು ಮೊದಲು ಬಿಜೆಪಿಯದ್ದಾಗಿದ್ದರೆ, ಉಳಿದ ಮೂರು ಎಎಪಿಯದ್ದಾಗಿದ್ದವು. 2022ರ MCD ಚುನಾವಣೆಯಲ್ಲಿ 50.47 ಶೇಕಡಾ ಮತದಾನವಾಗಿದ್ದರೆ, ಈ ಬಾರಿ ಮತದಾನ ಶೇಕಡಾ 38.51ರ ಮಟ್ಟಿಗೆ ಇಳಿಕೆಯಾಗಿದೆ. ಕಾಂಝವಾಲಾ, ಪಿತಾಂಪುರ, ಭಾರತ್ ನಗರ, ಸಿವಿಲ್ ಲೈನ್ಸ್, ರೌಸ್ ಅವೆನ್ಯೂ, ದ್ವಾರಕಾ, ನಜಫ್ಗಢ, ಗೋಲ್ ಮಾರುಕಟ್ಟೆ, ಪುಷ್ಪ್ ವಿಹಾರ್ ಹಾಗೂ ಮಾಂಡವಾಲಿ ಸೇರಿ ಹತ್ತು ಕೇಂದ್ರಗಳಲ್ಲಿ ಎಣಿಕೆ ಕೇಂದ್ರಗಳನ್ನು ರಾಜ್ಯ ಚುನಾವಣಾ ಆಯೋಗ ಸ್ಥಾಪಿಸಿತ್ತು. ಪ್ರತಿಯೊಂದು ಎಣಿಕೆ ಕೇಂದ್ರದಲ್ಲೂ ಭದ್ರತಾ ವ್ಯವಸ್ಥೆ, ಸ್ಟ್ರಾಂಗ್ ರೂಮ್ ವ್ಯವಸ್ಥೆ ಹಾಗೂ ಮತಪೆಟ್ಟಿಗೆಗಳ ಸುರಕ್ಷಿತ ಸಾಗಣೆಗಾಗಿ ವಿಶೇಷ ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿತ್ತು ಎಂದು ಆಯೋಗ ತಿಳಿಸಿದೆ. ಉಪಚುನಾವಣೆಯ ಫಲಿತಾಂಶದ ಮೂಲಕ ರಾಜಧಾನಿಯ ರಾಜಕೀಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ತೋರಿಸಿದ್ದು, ಎಎಪಿಗೂ ಮೂರು ವಾರ್ಡ್ಗಳಲ್ಲಿ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ ಗೆದ್ದ ಏಕೈಕ ವಾರ್ಡ್ ಸಂಗಮ್ ವಿಹಾರ್–ಎ ಪಕ್ಷಕ್ಕೆ ಸಣ್ಣ ಮಟ್ಟಿನ ರಾಜಕೀಯ ಬಲ ನೀಡಿದೆ.
ಲಿಂಗಸುಗೂರು | ವಿದ್ಯಾರ್ಥಿಗಳನ್ನು ನಿಂದಿಸಿದ ಡಿಪೋ ಕಂಟ್ರೋಲ್ ಮ್ಯಾನೇಜರ್ ; ಆರೋಪ
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
Raichur| ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ 55 ಸಾವಿರ ದಂಡ
ಸಿಂಧನೂರು: ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023 ಸೆಪ್ಟೆಂಬರ್ ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಾಲಯ, ಪೀಠಾಸೀನ ಸಿಂಧನೂರು ನ್ಯಾಯಾಲಯವು ಆರೋಪಿಗೆ 55 ಸಾವಿರ ದಂಡ ಸಹಿತ 20 ವರ್ಷ ಕಠಿಣ ಶಿಕ್ಷೆ ವಿಧಿಸಿ, 2025 ಡಿ.1 ರಂದು ಆದೇಶ ನೀಡಿದೆ. ಸಿಂಧನೂರು ನಗರದ ನಿವಾಸಿ ಅಮೀನ್ ಸಾಬ್ (43) ಶಿಕ್ಷೆಗೆ ಗುರಿಯಾದ ಆರೋಪಿ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ಅಂದಿನ ಆರಕ್ಷಕ ನಿರೀಕ್ಷಕರಾದ ದುರುಗಪ್ಪ ಇವರು ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯ ಪತ್ರವನ್ನು ಸಲ್ಲಿಸಿದ್ದರು. ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ, ಆರೋಪಿಯ ಮೇಲಿನ ಆಪಾದನೆ ಸಾಬೀತಾಗಿದೆಯೆಂದು 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ಪೋಕ್ಸೋ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಬಿ.ಬಿ.ಜಕಾತಿಯವರು ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಅದರಂತೆ ಆರೋಪಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ 55 ಸಾವಿರ ದಂಡವನ್ನು ವಿಧಿಸಲಾಗಿದೆ. ಮತ್ತು ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ 7 ಲಕ್ಷ 50 ಸಾವಿರ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಮಂಜುನಾಥ ಅವರು ವಾದವನ್ನು ಮಂಡಿಸಿದ್ದು, ಸಾಕ್ಷಿದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಸಮಯಕ್ಕೆ ಸರಿಯಾಗಿ ಪೊಲೀಸ್ ಪೇದೆಗಳಾದ ಬೂದೆಪ್ಪ ಮತ್ತು ಕೆಂಚಮ್ಮ ಅವರು ಕರೆತಂದು ಸಹಕರಿಸಿದ್ದಾರೆ.
ಎಸ್ಐಆರ್ ದಿನಾಂಕ ವಿಸ್ತರಿಸಬೇಕೆಂಬ ಕೇರಳದ ಮನವಿಯನ್ನು ಪರಿಗಣಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ವಿಶೇಷ ತೀವ್ರ ಪರಿಷ್ಕರಣೆ ಗಡುವು ವಿಸ್ತರಿಸುವ ಕೇರಳದ ಮನವಿಯನ್ನು ಚುನಾವಣಾ ಆಯೋಗ ಸಹಾನುಭೂತಿಯಿಂದ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು SIR ಪ್ರಕ್ರಿಯೆ ಏಕಕಾಲದಲ್ಲಿ ನಡೆಯುವುದರಿಂದ ಉಂಟಾಗುವ ವ್ಯವಸ್ಥಾಪನಾ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಎತ್ತಿ ತೋರಿಸಿತ್ತು. ನವೆಂಬರ್ 18 ರೊಳಗೆ ನಿರ್ಧಾರ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟು; 250 ಅಂಕಗಳಿಗೆ ಕುಸಿದ ಸೆನ್ಸೆಕ್ಸ್, ನಿಫ್ಟಿ ಕಥೆ ಏನು?
ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ನಿರಂತರ ಕುಸಿತ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ನ 3 ದಿನಗಳ ಹಣಕಾಸು ಸಭೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಷೇರು ಮಾರುಕಟ್ಟೆಯು ಇಂದು (ಡಿ.3-ಬುಧವಾರ) ದುರ್ಬಲ ವಹಿವಾಟು ನಡೆಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತ ದಾಖಲಿಸಿದ್ದು, ಷೇರು ಮಾರುಕಟ್ಟೆಯು ಮೂರು ಅವಧಿಗಳ ಕುಸಿತವನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮತ್ತು ಮಧ್ಯಮ ಗಾತ್ರದ ಷೇರುಗಳಲ್ಲಿ ಉತ್ತಮ ಗುಣಮಟ್ಟದ ಬೆಳವಣಿಗೆಯ ಷೇರುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮೆಂಟಲ್ ತರ ಮಾತನಾಡಿದ್ರೆ ಪಿತ್ತ ನೆತ್ತಿಗೇರುತ್ತೆ: ಮೆಟ್ರೋ ಅಧಿಕಾರಿಯ ವಿರುದ್ಧ ಕೃಷ್ಣ ಬೈರೇಗೌಡ ಗರಂ
ಮೆಟ್ರೋ ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷ ಸಮಯಾವಕಾಶ ತೆಗೆದುಕೊಂಡ ಮೆಟ್ರೋ ಅಧಿಕಾರಿಗಳ ನಡೆಯನ್ನು ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಮ್ಮ ಮೆಟ್ರೋದ ಹಂತ 2ಬಿ ನಾಗವಾರ ನಿಲ್ದಾಣದಿಂದ ಬಾಗಲೂರು ಕ್ರಾಸ್ ನಿಲ್ದಾಣದವರೆಗಿನ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ವೀಕ್ಷಣೆ ಮಾಡಿದರು. ಈ ವೇಳೆ ಅಧಿಕಾರಿಯೊಬ್ಬರ ಬೇಜವಾಬ್ದಾರಿ ಉತ್ತರಕ್ಕೆ ಸಿಡಿದೆದ್ದ ಸಚಿವರು, ಮೆಂಟಲ್ ತರ ಮಾತನಾಡಿದರೆ ಪಿತ್ತ ನೆತ್ತಿಗೇರುತ್ತದೆ ಎಂದು ಗರಂ ಆದರು.
ಪುಟಿನ್ ದಿಲ್ಲಿಗೆ ಭೇಟಿ ನೀಡುವ ಮೊದಲೇ ಭಾರತದ ಜೊತೆಗಿನ ಮಹತ್ವದ ಸೇನಾ ಒಪ್ಪಂದಕ್ಕೆ ರಶ್ಯಾ ಅನುಮೋದನೆ
ಹೊಸದಿಲ್ಲಿ: ರಶ್ಯಾ ಪಾರ್ಲಿಮೆಂಟ್ನ ಕೆಳಮನೆ ಸ್ಟೇಟ್ ಡುಮಾ ಮಂಗಳವಾರ ಭಾರತದೊಂದಿಗಿನ ಪ್ರಮುಖ ಸೇನಾ ಒಪ್ಪಂದವನ್ನು ಅನುಮೋದಿಸಿರುವ ಬಗ್ಗೆ ವರದಿಯಾಗಿದೆ. ಡಿಸೆಂಬರ್ 4 ಮತ್ತು 5ರಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಿಲ್ಲಿಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲೇ ಈ ಅನುಮೋದನೆ ನೀಡಲಾಗಿದೆ. ಕಳೆದ ಫೆಬ್ರವರಿ 18ರಂದು ಎರಡೂ ದೇಶಗಳ ಸರಕಾರಗಳ ನಡುವೆ ಸಹಿ ಹಾಕಲಾಗಿದ್ದ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯ ಒಪ್ಪಂದ (RELOS)ವನ್ನು ಕಳೆದ ವಾರ ರಶ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ತಿನ್ ಅವರು ಡುಮಾಗೆ ಅನುಮೋದನೆಗಾಗಿ ಕಳುಹಿಸಿಕೊಟ್ಟಿದ್ದರು. ಭಾರತದೊಂದಿಗಿನ ನಮ್ಮ ಸಂಬಂಧಗಳು ಸಮಗ್ರವಾಗಿದೆ ಮತ್ತು ನಾವು ಅವುಗಳನ್ನು ಬಹಳ ಮೌಲ್ಯಯುತವೆಂದು ಪರಿಗಣಿಸುತ್ತೇವೆ. ಈ ಒಪ್ಪಂದದ ಅನುಮೋದನೆಯು ಪರಸ್ಪರ ಸಂಬಂಧದ ಬಲವರ್ಧನೆಯ ಮತ್ತೊಂದು ಹೆಜ್ಜೆಯಾಗಿದೆ ಎಂದು ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ವೊಲೊದಿನ್ ಅವರು ಹೇಳಿದ್ದಾರೆ. RELOS ಒಪ್ಪಂದವು ರಷ್ಯಾದ ಮಿಲಿಟರಿ ರಚನೆಗಳು, ಯುದ್ಧನೌಕೆಗಳು ಮತ್ತು ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಕಳುಹಿಸುವ ಕಾರ್ಯವಿಧಾನವನ್ನು ನಿಗದಿಪಡಿಸುತ್ತದೆ. ಇಷ್ಟೇ ಅಲ್ಲದೇ ಪರಸ್ಪರ ಲಾಜಿಸ್ಟಿಕಲ್ ಬೆಂಬಲವನ್ನು ನಿಗದಿಪಡಿಸುತ್ತದೆ. ಈ ಒಪ್ಪಂದವು ರಕ್ಷಣಾ ಪಡೆಗಳು ಮತ್ತು ಸಲಕರಣೆಗಳ ರವಾನೆಯನ್ನು ಮಾತ್ರವಲ್ಲದೆ, ಅವುಗಳ ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನೂ ಕೂಡ ನಿಯಂತ್ರಿಸುತ್ತದೆ ಎಂದು ವರದಿಯಾಗಿದೆ.
IMD Rain Forecast: ಶೀತಗಾಳಿ, ವಾಯುಭಾರ ಕುಸಿತ: ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ
ವಾಯುಭಾರ ಕುಸಿತದ ಪ್ರಭಾವದಿಂದಾಗಿ ಡಿಸೆಂಬರ್ 5ರವರೆಗೆ ತಮಿಳುನಾಡಿನ ಉತ್ತರ ಕರಾವಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದ್ದು, ಕೆಲವು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಮತ್ತೊಂದೆಡೆ ಪಂಜಾಬ್ ಮತ್ತು ಉತ್ತರದ ಮೇಲೆ ಪ್ರತ್ಯೇಕ ಪ್ರದೇಶಗಳಲ್ಲಿ, ಮಧ್ಯ ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಶೀತ ಗಾಳಿಯ ಪರಿಸ್ಥಿತಿಗಳು ಉಂಟಾಗುವ
ಮಂಗಳೂರು: ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ
ಮಂಗಳೂರು: ನಗರದ ನೆಹರೂ ಮೈದಾನ ಬಳಿಯ ಸುಸಜ್ಜಿತ ಆಸ್ಟ್ರೊ ಟರ್ಫ್ ಫುಟ್ಬಾಲ್ ಕ್ರೀಡಾಂಗಣ ಬುಧವಾರ ಉದ್ಘಾಟನೆಗೊಂಡಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೂತನ ಕ್ರೀಡಾಂಗಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಉತ್ತಮ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಮುಂದೆ ಈ ಕ್ರೀಡಾಂಗಣದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲಾಗುವುದು ಎಂದರು. ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಮತ್ತಿತರರು ಉಪಸ್ಥಿತರಿದ್ದರು. ಇದೇವೇಳೆ ಸ್ಪೀಕರ್ ಯು.ಟಿ.ಖಾದರ್ ಫುಟ್ಬಾಲ್ ನಲ್ಲಿ ತನ್ನ ಕಾಲ್ಚಳಕ ತೋರಿಸಿ ಗಮನಸೆಳೆದರು.
ಬೆಂಗಳೂರಿನಲ್ಲಿ ಅಕ್ರಮ ಬಡಾವಣೆಗಳ ಕಾರುಬಾರು ಹತ್ತಿಕ್ಕಲು ಕಂದಾಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿರುವುದರ ಜೊತೆಯಲ್ಲೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಕ್ರಮ ಬಡಾವಣೆಗಳ ವಿಚಾರದಲ್ಲಿ ಝೂರೋ ಟಾಲರೆನ್ಸ್ ನಿಯಮವನ್ನು ಅಳವಡಿಸಿಕೊಂಡಿದೆ. ಈಗಾಗಲೇ ಬೆಂಗಳೂರು ಸುತ್ತ ಮುತ್ತ ಇರುವ ಅಕ್ರಮ ಬಡಾವಣೆಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಬೊಮ್ಮನಹಳ್ಳಿಯ ಬೇಗೂರು ವಿಭಾಗದ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಅಕ್ರಮವಾಗಿ ಬಿ ಖಾತಾ ನೀಡಿರುವ ಆರೋಪದಡಿ ಆರು ಕಂದಾಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇಂಥ ಕಠಿಣ ಕ್ರಮ ಆಗಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು.
BENGALURU | ಕಳಪೆ ಆಹಾರ ಪ್ರಶ್ನಿಸಿದ್ದಕ್ಕೆ ಬ್ಲ್ಯಾಕ್ ಮೇಲ್ ಆರೋಪ: ರಾಮೇಶ್ವರಂ ಕೆಫೆ ಮಾಲಕರ ವಿರುದ್ಧ ಎಫ್ಐಆರ್
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರೊಬ್ಬರಿಗೆ ನೀಡಿದ್ದ ಕಳಪೆಯಾಗಿರುವುದನ್ನು ಪ್ರಶ್ನಿಸಿದ್ದಕ್ಕೆ ಬ್ಲ್ಯಾಕ್ ಮೇಲೆ ಮಾಡಿದ ಆರೋಪದಡಿ ಕೆಫೆಯ ಮಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳಪೆ ಆಹಾರವನ್ನು ನೀಡಲಾಗಿದೆ ಎಂದು ಕೆಫೆಯ ಮಾಲಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ವ್ಯವಸ್ಥಾಪಕ ಸುಮಂತ್ ಲಕ್ಷ್ಮೀನಾರಾಯಣ್ ವಿರುದ್ದ ಗ್ರಾಹಕರೊಬ್ಬರು ದೂರು ನೀಡಿದ್ದಾರೆ. ಕ್ರಿಮಿನಲ್ ಪಿತೂರಿ, ಸುಳ್ಳು ಮಾಹಿತಿ ಒದಗಿಸುವುದು, ಸಾಕ್ಷ್ಯಗಳನ್ನು ರೂಪಿಸುವುದು ಮತ್ತು ಕಲಬೆರಕೆ ಅಥವಾ ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು ಸೇರಿದಂತೆ ಇತರ ಆರೋಪಗಳನ್ನು ಕೆಫೆ ವಿರುದ್ಧ ಹೊರಿಸಲಾಗಿದೆ. ದೂರುದಾರ ನಿಖಿಲ್ ಜು.24ರಂದು ಟರ್ಮಿನಲ್ 1ರಲ್ಲಿ ಗುವಾಹಟಿಗೆ ತೆರಳಲು ತಯಾರಿ ನಡೆಸುತ್ತಿದ್ದಾಗ ಕೆಫೆಯ ವಿಮಾನ ನಿಲ್ದಾಣದ ಕೌಂಟರ್ನಲ್ಲಿ 'ಪೊಂಗಲ್' ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು. ಪೊಂಗಲ್ ನಲ್ಲಿ ಹುಳ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿದ್ದೆ ಅವರು ಬದಲಿ ಆಹಾರ ನೀಡುವುದಾಗಿ ತಿಳಿಸಿದರು. ಆದರೆ ಬೋರ್ಡಿಂಗ್ ಗೆ ಆತುರ ಇದ್ದುದರಿಂದ ನಿರಾಕರಿಸಿದ್ದೆ ಎಂದು ನಿಖಿಲ್ ಹೇಳಿದ್ದಾರೆ. ಇತರ ಗ್ರಾಹಕರು ಚಿತ್ರ, ವೀಡಿಯೊ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ನಿಖಿಲ್ ಯಾವುದೇ ಸಮಸ್ಯೆ ಉಂಟುಮಾಡದೆ ಸುಮ್ಮನೆ ಹೊರಟು ಹೋಗಿದ್ದರು. ಆದರೆ, ಆಹಾರದಲ್ಲಿ ಹುಳ ಸಿಕ್ಕಿರುವ ವೀಡಿಯೊ, ಚಿತ್ರಗಳು ಮರುದಿನ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಹೋಟೆಲ್ ನವರು ನಿಖಿಲ್ ವಿರುದ್ದ ಬ್ರಾಂಡ್ ಹೆಸರಿಗೆ ಕಳಂಕ ತಂದಿರುವುದಾಗಿ ಬೆದರಿಕೆಯೊಡ್ಡಿ, 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದರು. ಕೆಫೆಯ ಆರೋಪಗಳ ಆಧಾರದ ಮೇಲೆ ಪೊಲೀಸರು ನಿಖಿಲ್ ಮತ್ತು ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದರು. ಆದರೆ ನಿಖಿಲ್ ತಾನು ಎಂದಿಗೂ ಪರಿಹಾರ ಅಥವಾ ಮರುಪಾವತಿ ಕೇಳಿಲ್ಲ. ಕೆಫೆ ಮಾಡಿರುವ ಆರೋಪಗಳಿಗೂ ತನಗೂ ಸಂಬಂಧ ಇಲ್ಲ. ಆ ಹೊತ್ತಿನಲ್ಲಿ ವಿಮಾನದಲ್ಲಿದ್ದೆ ಎಂದು ದಾಖಲೆಗಳನ್ನು ತೋರಿಸಿದ್ದರು. ಹಾಗೆಯೇ ನಿಖಿಲ್ ಪ್ರತಿದೂರು ದಾಖಲಿಸಿ, ಈ ಘಟನೆಯನ್ನು 'ಗಂಭೀರ ಆಹಾರ ಸುರಕ್ಷತೆಯ ವೈಫಲ್ಯ' ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಕೆಫೆಯು ತನ್ನ ವರ್ಚಸ್ಸಿಗೆ ಕಳಂಕ ತರುವ ಮತ್ತು ತನ್ನನ್ನು ಬೆದರಿಸುವ ಸಲುವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿದೆ ಎಂದು ಆರೋಪಿಸಿದ್ದಾರೆ.
ಮಳೆಯಿಂದಾಗಿ ಕಾಳು ಮೆಣಸಿಗೂ ಕಂಟಕ: ಶೇ.30ರಷ್ಟು ಬೆಳೆ ಇಳುವರಿ ಕುಸಿತ ಕಂಡು ರೈತರು ಕಂಗಾಲು
ಕೊಡಗಿನಲ್ಲಿ ದೀರ್ಘಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಕಾಳು ಮೆಣಸು ಉತ್ಪಾದನೆ ಶೇ.30ರಷ್ಟು ಕುಸಿದಿದೆ. ಉತ್ತರ ಕೊಡಗಿನಲ್ಲಿ ಬೆಳೆ ನಷ್ಟ ಹೆಚ್ಚಾಗಿದ್ದು, ಕೊಳೆ ರೋಗದಿಂದ ಬಳ್ಳಿಗಳು ನಾಶವಾಗಿವೆ. ತಡವಾಗಿ ಮರ ಸವರುವಿಕೆ ಮಾಡಿದವರಿಗೆ ಹೆಚ್ಚು ನಷ್ಟ ಉಂಟಾಗಿದೆ. ಸರಿಯಾದ ಸಮಯಕ್ಕೆ ನೆರಳು ತೆಗೆದವರಿಗೆ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದು ಐಸಿಎಆರ್ ತಿಳಿಸಿದೆ.
1983ರ ನೆಲ್ಲಿ ಹತ್ಯಾಕಾಂಡ ಮತ್ತು ಬಿಜೆಪಿಯ ಹಂತಕ ರಾಜಕಾರಣ
ಹಿಮಂತ ಬಿಸ್ವಾ ಶರ್ಮಾ, ವಾಜಪೇಯಿ, ಇಂದಿರಾ ಗಾಂಧಿ ಎಲ್ಲರೂ ರಾಜಕೀಯ ರಣಹದ್ದುಗಳೇ!
\ದಲಿತರ ಬಗ್ಗೆ ಕಾಂಗ್ರೆಸ್ನ ನಿಜ ಬಣ್ಣ ಬಯಲು ಮಾಡಿದ ಡಾ.ಪರಮೇಶ್ವರ್\
ಬೆಂಗಳೂರು, ಡಿಸೆಂಬರ್ 03: ದಲಿತರ ಬಗ್ಗೆ ಕಾಂಗ್ರೆಸ್ನ ವರ್ತನೆ ಮತ್ತು ವಿಧಾನವು ಪ್ರಾಮಾಣಿಕವಲ್ಲ ಮತ್ತು ನಕಲಿ ಎಂದು ಬಿಜೆಪಿ ಯಾವಾಗಲೂ ತಿಳಿಸುತ್ತ ಬಂದಿದೆ. ಇದನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ ದೃಢಪಡಿಸಿದ್ದಾರೆ ಮತ್ತು ಸಮರ್ಥಿಸಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಅವರು ಇಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ
ಹೊರಳು ಹಾದಿಯಲ್ಲಿರುವ ಭಾರತ ಕ್ರಿಕೆಟ್ ತಂಡ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರ ನಡುವಿನ ವೈಮನಸ್ಸು ಒಂದು. ಆದರೆ ಈಗ ಈ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಗಳು ಆರಂಭವಾಗಿವೆ. ಅದಕ್ಕೆ ಪುಷ್ಠಿ ಎಂಬಂತೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮಧ್ಯಸ್ಥಿಕೆ ಪ್ರಯತ್ನ ಆರಂಭಿಸಿದ್ದರು. ಆದರೆ ಬಿಸಿಸಿಐ ಇದಕ್ಕೆ ಬ್ರೇಕ್ ನೀಡಿದೆ. ಇದಕ್ಕೆ ಕಾರಣ ಇಲ್ಲಿದೆ.
RAYACHUR | ಸಿಂಧನೂರು: ನಿರ್ಮಾಣ ಹಂತದ ಸೇತುವೆ ಬೈಕ್ ಢಿಕ್ಕಿ; ಇಬ್ಬರು ಮೃತ್ಯು
ರಾಯಚೂರು: ನಿರ್ಮಾಣ ಹಂತದ ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಬೂತಲದಿನ್ನಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ. ಮೃತರು ಲಿಂಗಸಗೂರು ತಾಲೂಕಿನ ಹಿರೇನಗನೂರು ಹಾಗೂ ಯದ್ದಲದೊಡ್ಡಿ ನಿವಾಸಿಗಳೆಂದು ತಿಳಿದುಬಂದಿದೆ. ಇವರಿಬ್ಬರು ಸೋಮವಾರ ರಾತ್ರಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೂತಲದಿನ್ನಿ ಗ್ರಾಮದ ಹತ್ತಿರ ಸಿಂಧನೂರು ಮತ್ತು ಮಸ್ಕಿ ಹೆದ್ದಾರಿಯ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆಯ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕಳಿಸಿದ್ದಾರೆ.
Drumstick Price: ಚಿಕನ್ಗಿಂತಲೂ ನುಗ್ಗೆಕಾಯಿ ದುಬಾರಿ, ಕೆ.ಜಿ.ಗೆ 500-700 ರೂಪಾಯಿ!
ತರಕಾರಿಗಳ ದರ ಪೈಕಿ ನುಗ್ಗೆಕಾಯಿ ಬೆಲೆ ಸಾಮಾನ್ಯವಾಗಿ ಕಡಿಮೆಯೇ ಇರುತಿತ್ತು. ಆದರೆ, ಇತ್ತೀಚೆಗೆ ನುಗ್ಗೆಕಾಯಿ ಚಿಕನ್ ಹಾಗೂ ಮಟನ್ಗಿಂತಲೂ ದುಬಾರಿಯಾಗುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಇದರಿಂದ ಗ್ರಾಹಕರು ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ ಎನುತ್ತಿದ್ದಾರೆ. ಸದ್ಯ ತರಕಾರಿ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿಗೆ ಭಾರೀ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆ ಕೆ.ಜಿ.ಗೆ 500 ರೂಪಾಯಿಯಿಂದ 700 ರೂಪಾಯಿವರೆಗೆ ಇದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಕರಾವಳಿ ಉತ್ಸವ ಡಿ.20 ರಿಂದ ಜ.4 ರವರೆಗೆ ನಡೆಯಲಿದೆ. ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಚಟುವಟಿಕೆಗಳು ಇರಲಿವೆ. ಮೈದಾನದಲ್ಲಿ ನಾನಾ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಲಭ್ಯವಿರಲಿದೆ. ಕಡಲ ತೀರಗಳಲ್ಲಿ ಸಂಗೀತ ಸಂಭ್ರಮ, ಬೀಚ್ ಉತ್ಸವ, ಹೆಲಿ ರೈಡ್, ಚಿತ್ರ ಶಿಲ್ಪ ನೃತ್ಯ ಮೇಳ, ಫಲಪುಷ್ಪ ಪ್ರದರ್ಶನ, ಟ್ರಯಾತ್ಲಾನ್, ಗಾಳಿಪಟ ಉತ್ಸವ ಆಯೋಜಿಸಲಾಗಿದೆ.
ಗುಜರಾತ್ನಲ್ಲಿ ಡ್ರಗ್ಸ್ ಮತ್ತು ಅಪರಾಧ ಹೆಚ್ಚಳವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ನ 'ಜನ್ ಆಕ್ರೋಶ್ ಯಾತ್ರೆ'ಯಲ್ಲಿ ಮಹಿಳೆಯರು ಮತ್ತು ಯುವಕರು ಈ ಸಮಸ್ಯೆಗಳಿಂದ ಅಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಗಾಂಧಿ ಟೀಕಿಸಿದ್ದಾರೆ. ರೈತರ ಪರಿಹಾರದ ವಿಚಾರದಲ್ಲೂ ಬಿಜೆಪಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
BAGALAKOTE | ಜಮಖಂಡಿಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಮೃತ್ಯು
ಬಾಗಲಕೋಟೆ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಮಖಂಡಿ ತಾಲೂಕಿನ ಸಿದ್ಧಾಪುರದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಮತ್ತು ಪ್ರಜ್ವಲ್ (17) ಮೃತಪಟ್ಟವರು. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಸಿದ್ದಾಪುರ ಗ್ರಾಮದಿಂದ ನಾಲ್ವರು ಸ್ನೇಹಿತರು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರ್ಯಾಕ್ಟರ್ ಕಾರ್ಖಾನೆ ಬಳಿ ನಿಂತಿತ್ತು. ಈ ಟ್ರ್ಯಾಕ್ಟರ್ ಗೆ ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಭಾಗಶಃ ಟ್ರ್ಯಾಕ್ಟರ್ ನ ಒಳಗೆ ನುಗ್ಗಿದ್ದು, ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಅಸ್ಪಶ್ಯರಿಗೇ ಅಸ್ಪಶ್ಯರಾದ ದಕ್ಕಲರು
ಆದಿಜಾಂಬವ ಪರಂಪರೆಯ ಮಾದಿಗ ಕುಲದ ಉಪಜಾತಿಗಳಲ್ಲಿ ಒಂದಾಗಿರುವ ದಕ್ಕಲರನ್ನು ದೊಕ್ಕಲ ಮಕ್ಕಳು, ಮನೆಮಕ್ಕಳು, ಹಳೇಮಕ್ಕಳು ಎಂದು ಗುರುತಿಸಿದರೂ ಮಾದಿಗರ ಸಂಬಂಧಿಗಳೆಂಬ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ದಕ್ಕಲರನ್ನು ಗುರುತಿಸಲಾಗುತ್ತದೆ. ದಕ್ಕಲಿಗರು ಹಸಿವು ನೀಗಿಸಿಕೊಳ್ಳುವ ಪಡಿಪಾಟಲನ್ನು, ಹಸಿವಿನ ಹಾಹಾಕಾರವನ್ನು ನೋಡಿದ ನಮ್ಮ ‘ಸಭ್ಯ’ಸಮಾಜ ಯಾರಾದರೂ ಉಣ್ಣಲು ಹಾತೊರೆದರೆ ‘ದೊಕ್ಕಲೋರು ಆಡ್ದಂಗೆ ಆಡ್ತಾನೆ’ ಎಂದು ಬೈಗುಳವಾಗಿ ದಕ್ಕಲರ ಹಸಿವನ್ನು ಇಂದಿಗೂ ಆಡಿಕೊಳ್ಳುತ್ತದೆ. ‘ದಕ್ಕಲರು’ ಅಂದರೆ ಅದೊಂದು ನಗಣ್ಯವಾದ, ಅತಿಸೂಕ್ಷ್ಮವಾದ ಅಲೆಮಾರಿ, ಅಸ್ಪಶ್ಯ ಕುಲ. ದಕ್ಕಲ, ದಕ್ಕಲ್, ದಕ್ಕಲರು, ದಕ್ಕಲಿಗ, ದೊಕ್ಕಲೊಳ್ಳು, ದಕ್ಕಲ್ವಾರ, ದೊಕ್ಕಲೇರು, ಡಕ್ಕಲೇರು, ದೊಕ್ಕಲ ಮುಂತಾಗಿ ಕರೆಯಲಾಗುವ ಈ ಸಮುದಾಯ ಭಾರತೀಯ ಜಾತಿ ಶ್ರೇಣಿಯಲ್ಲಿ ಕಟ್ಟಕಡೆಯ ಸಮುದಾಯ ಎಂದು ಪರಿಗಣಿಸಲಾಗಿದೆ. ದಕ್ಕಲರು ಅಸ್ಪಶ್ಯರಿಗೆ ಅಸ್ಪಶ್ಯರು! ಅಂದರೆ ಅಸ್ಪಶ್ಯರಾದ ಮಾದಿಗರು ಹಿಂದೆ ದಕ್ಕಲರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಅವರ ಗುಡಿಸಲು, ಗುಡಾರಗಳಲ್ಲಿ ಅನ್ನ, ನೀರುಗಳನ್ನೂ ಸ್ವೀಕರಿಸುತ್ತಿರಲಿಲ್ಲ! ಹಿಂದೆ ದಕ್ಕಲರು ‘‘ನಾವು ದಕ್ಕಲರು, ನಿಮ್ಮ ಮಕ್ಕಳು ಭಿಕ್ಷೆಗೆ ಬಂದಿದ್ದೇವೆ..’’ ಎಂದು ಮಾದಿಗರ ಹಟ್ಟಿಗಳ ಹೊರಗೆ ನಿಂತು ಬೇಡಿದರೆ ಇಡೀ ಮಾದಿಗರ ಹಟ್ಟಿಯೇ ಬಾಗಿಲು ಮುಚ್ಚಿಕೊಳ್ಳುತ್ತಿತ್ತು. ನಂತರ ಮಾದಿಗ ವ್ಯಕ್ತಿಯೊಬ್ಬ ಮಾದಿಗರ ಹಟ್ಟಿಯಲ್ಲಿನ ಎಲ್ಲಾ ಗುಡಿಸಲುಗಳಲ್ಲಿ ಉಂಡುಳಿದ ಗಂಜಿ, ಅನ್ನಾಹಾರಗಳನ್ನು ಸಂಗ್ರಹಿಸಿ, ಒಂದು ಮಣ್ಣಿನ ಕೊಡದಲ್ಲಿ ತಂದು ಹಟ್ಟಿಯ ಹೊರಗಿಡುತ್ತಿದ್ದ. ಆ ಭಿಕ್ಷಾನ್ನವನ್ನು ತೆಗೆದುಕೊಂಡು ಹೋಗುವಾಗ ದಕ್ಕಲರು ‘‘ನಿಮ್ಮ ಮಕ್ಕಳು ಭಿಕ್ಷೆಯನ್ನು ಪಡೆದಿದ್ದೇವೆ.. ಬಾಗಿಲು ತೆಗೆದುಕೊಳ್ಳಬಹುದು..’’ ಎಂದು ಹೇಳಿದ ಮೇಲಷ್ಟೇ ಬಾಗಿಲು ತೆಗೆಯುತ್ತಿದ್ದರಂತೆ. ದಕ್ಕಲರು ಮಾದಿಗರಿಗಷ್ಟೇ ಅಲ್ಲ ಇಡೀ ಜನಸಮುದಾಯಕ್ಕೆ ಕೇವಲ ಮುಟ್ಟಬಾರದವರಲ್ಲ, ನೋಡಬಾರದವರೂ ಆಗಿದ್ದರು! ದಕ್ಕಲರು ತಮ್ಮನ್ನು ಮಾದಿಗರ ಮಕ್ಕಳು ಎಂದು ಇಂದಿಗೂ ಹೇಳಿಕೊಳ್ಳುತ್ತಾರೆ. ಆದ್ದರಿಂದಲೇ ‘ಮಾದಿಗರಿಂದ ಭಿಕ್ಷೆ ಪಡೆಯುವುದು ನಮ್ಮ ಹಕ್ಕು’ ಎಂದು ಭಾವಿಸಿದ್ದಾರೆ. ಆದಿಜಾಂಬವ ಪರಂಪರೆಯ ಮಾದಿಗ ಕುಲದ ಉಪಜಾತಿಗಳಲ್ಲಿ ಒಂದಾಗಿರುವ ದಕ್ಕಲರನ್ನು ದೊಕ್ಕಲ ಮಕ್ಕಳು, ಮನೆಮಕ್ಕಳು, ಹಳೇಮಕ್ಕಳು ಎಂದು ಗುರುತಿಸಿದರೂ ಮಾದಿಗರ ಸಂಬಂಧಿಗಳೆಂಬ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ದಕ್ಕಲರನ್ನು ಗುರುತಿಸಲಾಗುತ್ತದೆ. ದಕ್ಕಲಿಗರು ಹಸಿವು ನೀಗಿಸಿಕೊಳ್ಳುವ ಪಡಿಪಾಟಲನ್ನು, ಹಸಿವಿನ ಹಾಹಾಕಾರವನ್ನು ನೋಡಿದ ನಮ್ಮ ‘ಸಭ್ಯ’ಸಮಾಜ ಯಾರಾದರೂ ಉಣ್ಣಲು ಹಾತೊರೆದರೆ ‘ದೊಕ್ಕಲೋರು ಆಡ್ದಂಗೆ ಆಡ್ತಾನೆ’ ಎಂದು ಬೈಗುಳವಾಗಿ ದಕ್ಕಲರ ಹಸಿವನ್ನು ಇಂದಿಗೂ ಆಡಿಕೊಳ್ಳುತ್ತದೆ. ದಕ್ಕಲರ ಭೀಕರ ದಾರಿದ್ರ್ಯ ಕಂಡವರು ಅವರು ವಾಸವಾಗಿರುವ ಕಡೆ ಸುಳಿಯುವುದೇ ಇಲ್ಲ. ಇವರ ವೋಟು ಪಡೆದರೂ ದಾರಿದ್ರ್ಯ ಬರುತ್ತದೆ, ಇದರಿಂದಾಗಿ ಸೋಲುತ್ತೇವೆ ಎಂಬ ಕಾರಣಕ್ಕೆ ಮತ್ತು ‘ವೋಟಿಗೂ ಅಸ್ಪಶ್ಯತೆ’ ತಗಲುತ್ತದೆಂಬ ಕಾರಣದಿಂದಾಗಿ ಇವರನ್ನು ಅನೇಕ ಕಡೆ ಮತಪಟ್ಟಿಗೂ, ಮತಗಟ್ಟೆಗೂ ಸೇರಿಸುತ್ತಿರಲಿಲ್ಲ! ಈ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಇವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಸರ್ಟಿಫಿಕೇಟ್ ದೊರಕುತ್ತಿಲ್ಲ. ಈಚೆಗೆ ನನಗೆ ತಿಳಿದುಬಂದಂತೆ ಡಾ.ಅಂಬೇಡ್ಕರ್ ಭವನವೊಂದರಲ್ಲಿ ಆಯೋಜಿಸಿದ್ದ, ಧರ್ಮಸ್ಥಳ ಮಂಜುನಾಥೇಶ್ವರ ಸೊಸೈಟಿಗೆ ಸದಸ್ಯರಾಗಲು ಸಾಲಿನಲ್ಲಿ ನಿಂತಿದ್ದ ದಕ್ಕಲರನ್ನು ಅಂಬೇಡ್ಕರ್ ಭವನದೊಳಕ್ಕೇ ಸೇರಿಸದೆ ಹೋದದ್ದು ವಿಪರ್ಯಾಸ! ಯಾರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಹೋರಾಡಿದರೋ ಅವರ ಹೆಸರಿನ ಭವನದೊಳಕ್ಕೂ ದಕ್ಕಲರನ್ನು ಸೇರಿಸದೇ ಹೋದ ಅಸ್ಪಶ್ಯ ಮನಸ್ಸುಗಳನ್ನು ಏನೆಂದು ಕರೆಯಬೇಕು? ಸುಮಾರು ನಲವತ್ತು ವರ್ಷಗಳ ಹಿಂದೆ ‘ಲಂಕೇಶ್ ಪತ್ರಿಕೆ’ಗೆ ಬರೆಯಲು ಕೋಲಾರಜಿಲ್ಲೆಯ, ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಬಳಿಯಿರುವ ಬೈಕೊತ್ತೂರು ಎಂಬ ಕುಗ್ರಾಮಕ್ಕೆ ಹೋಗಿ ದಕ್ಕಲಿಗ ಸಮುದಾಯದ ಹಾಡುಗಾರ, ತೀರಾ ವಯಸ್ಸಾಗಿದ್ದ ವಯೋವೃದ್ಧ ಜೋಂಕಿಣಿ ಮುನೆಪ್ಪನನ್ನು ಬೆಟ್ಟಿಮಾಡಿ, ಆತ ಹಾಡುತ್ತಿದ್ದ ‘ಗಂಗ ಭಾರತ’ವನ್ನು ಸಂಗ್ರಹಿಸಿ ಲಂಕೇಶ್ ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ಬರೆದೆ. ದಕ್ಕಲಿಗ ಮತ್ತು ಮಾದಿಗ ಸಮುದಾಯಗಳ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿದು ಜೋಂಕಿಣಿ ವಾದ್ಯ ನುಡಿಸುತ್ತಾ ಹಾಡುತಿದ್ದ ಜೋಂಕಿಣಿ ಮುನೆಪ್ಪ ತನ್ನ ಕುಲದ ಮೂಲಪುರುಷ ಜಾಂಬುತಾತ ‘ಆಕಾಶಕ್ಕಿಂತಲೂ ಆರು ತಿಂಗಳು ದೊಡ್ಡವನು, ಭೂಮಿಗಿಂತಲೂ ಮೂರು ತಿಂಗಳು ದೊಡ್ಡವನು’ ಎಂದು ಹೇಳುವುದರ ಮೂಲಕ ‘ಇಡೀ ಮನುಕುಲಕ್ಕೇ ನಾವು ದಕ್ಕಲರು ಮೂಲಪುರುಷರು’ ಎಂಬುದನ್ನು ಅನೇಕ ನಿದರ್ಶನಗಳನ್ನು ನೀಡುತ್ತಾ ಹಾಡಿನಲ್ಲೇ ದಾಖಲಿಸುತ್ತಿದ್ದ. ‘ಲಂಕೇಶ್ ಪತ್ರಿಕೆ’ಯಲ್ಲಿ ಇದನ್ನು ಓದಿದ್ದ, ಆಗಿನ ಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದ ಜಾನಪದ ತಜ್ಞ ಡಾ.ಎಚ್.ಎಲ್. ನಾಗೇಗೌಡರು, ಅಕಾಡಮಿಯ ರಿಜಿಸ್ಟ್ರಾರ್ ಆಗಿದ್ದ ಡಾ. ಬೋರಲಿಂಗಯ್ಯನವರು, ಅಕಾಡಮಿ ಸದಸ್ಯರಾಗಿದ್ದ ಡಾ.ಕಾಳೇಗೌಡ ನಾಗವಾರರು ಸೇರಿ ಜೋಕಿಂಣಿ ಮುನೆಪ್ಪನನ್ನು ನೋಡದೆಯೇ ಕೇವಲ ನನ್ನ ಲೇಖನದ ಆಧಾರದ ಮೇಲೆ ಅವರಿಗೆ ಅಡಾಡಮಿ ಪ್ರಶಸ್ತಿ ಘೋಷಿಸಿ, ಜೋಂಕಿಣಿ ಮುನೆಪ್ಪನ ಕುಗ್ರಾಮಕ್ಕೇ ಹೋಗಿ ಪ್ರಶಸ್ತಿ, ಹಣ ನೀಡಿ ಗೌರವಿಸಿ ಬಂದಿದ್ದೆವು. ಇದಕ್ಕೆ ಸ್ಥಳೀಯ ಕವಿ ಸ.ರಘುನಾಥ್ ಅವರು ಸಾತ್ ನೀಡಿದ್ದರು. ಇದಾದ ಹಲವು ವರ್ಷಗಳ ನಂತರ ನಾನು ಆಯೋಗದ ಅಧ್ಯಕ್ಷನಾಗಿ ಚಿಕ್ಕನಾಯಕನಹಳ್ಳಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೆ. ಮಾರ್ಗ ಮಧ್ಯೆ ಸ್ಮಶಾನವೊಂದರ ಸೆರಗಿನಲ್ಲಿ ಇಡೀ ದಾರಿದ್ರ್ಯವೇ ಮೈವೆತ್ತಂತಹ ಕಡು ಬಡತನದ ಟೆಂಟು, ಗುಡಾರಗಳನ್ನು ನೋಡಿದೆ. ನನ್ನೊಂದಿಗೇ ಇದ್ದ ಗೆಳೆಯ ಡಾ. ರಘುಪತಿ ‘‘ನೋಡಿ ಸರ್.. ಇವರು ದಕ್ಕಲಿಗರು ಇವರ ಪರಿಸ್ಥಿತಿ ಒಮ್ಮೆ ನೋಡಿ..’’ ಎಂದರು. ನಾನು ಕುತೂಹಲಗೊಂಡು ಅಲ್ಲೇ ಕಾರು ನಿಲ್ಲಿಸಿದೆ. ಕಾರು ನಿಂತಿದ್ದೇ ತಡ ನನ್ನ ಮುಂದಿದ್ದ ಪೊಲೀಸ್ ಪ್ರೋಟೋಕಾಲ್ ಮತ್ತು ನಮ್ಮ ಅಧಿಕಾರಿಗಳ ಕಾರುಗಳನ್ನು ನೋಡಿದ್ದೇ ತಡ ದಕ್ಕಲರು ತಮ್ಮ ಮಕ್ಕಳನ್ನು ಕಂಕುಳಲ್ಲಿ ಹಾಕಿಕೊಂಡು, ಕೈಗೆ ಸಿಕ್ಕಷ್ಟು ಪ್ಲಾಸ್ಟಿಕ್ ಬಿಂದಿಗೆ, ಬಟ್ಟೆಬರೆಗಳನ್ನು ಎತ್ತಿಕೊಂಡು ಓಡತೊಡಗಿದರು. ಅನಧಿಕೃತವಾಗಿ ಅಲ್ಲಿ ಟೆಂಟುಗಳನ್ನು ಹಾಕಿಕೊಂಡಿದ್ದ ಅವರನ್ನು ಎತ್ತಂಗಡಿ ಮಾಡಿಸಲು ಬಂದಿರುವ ಅಧಿಕಾರಿಗಳು ಎಂದು ಭಾವಿಸಿದ್ದರು. ನಾನು ಅವರನ್ನು ಕೂಗಿ ಕರೆದು ಕೂರಿಸಿ ಮಾತಾಡತೊಡಗಿದೆ. ಅವರಲ್ಲೇ ಸ್ವಲ್ಪ ಅರಿವಿದ್ದ ಶಾಂತರಾಜು ಎಂಬ ಹುಡುಗ ತನಗೆ ತಿಳಿದಷ್ಟು ದಕ್ಕಲರ ಬದುಕಿನ ವಿವರಗಳನ್ನು ಕಟ್ಟಿಕೊಟ್ಟ, ನೆಲೆಯೇ ಇಲ್ಲದ ದಕ್ಕಲರ ಬದುಕು ಅರ್ಥವಾಗತೊಡಗಿತು. ನಮ್ಮೊಂದಿಗೆ ಇದ್ದ ಜಿಲ್ಲಾಧಿಕಾರಿ ಸೋಮಶೇಖರ್ ಅವರಿಗೆ ದಕ್ಕಲರ ದರ್ಶನ ಮಾಡಿಸಿದೆ. ಅವರು ಬೆಚ್ಚಿಬಿದ್ದವರಂತೆ ದಕ್ಕಲರನ್ನು ನೋಡತೊಡಗಿದರು, ಅವರ ಹೃದಯ ನೀರಾಯಿತು, ಅವರು ಕಾಳಜಿ ವಹಿಸಿ ಕೇವಲ ಒಂದೆರಡು ತಿಂಗಳಲ್ಲಿ ಅಲ್ಲಿದ್ದ ಕುಟುಂಬಗಳಿಗೆ ನಿವೇಶನ ನೀಡಿದರು. ಮನೆ ಕಟ್ಟಿಸಿಕೊಡುವಷ್ಟರಲ್ಲಿ ಸರಕಾರ ಅವರನ್ನು ಬೇರೆಡೆಗೆ ವರ್ಗಾಯಿಸಿತ್ತು. ದಕ್ಕಲ ಸಮುದಾಯದ ಬಗ್ಗೆ ‘ಔಟ್ ಲುಕ್’ ಪತ್ರಿಕೆಯ ಗೆಳೆಯ ಸುಗತ ಶ್ರೀನಿವಾಸರಾಜು ಅವರ ಗಮನ ಸೆಳೆದೆ. ಅತ್ಯಂತ ಕಾಳಜಿ ಮತ್ತು ಆಸಕ್ತಿ ತೋರಿದ ಸುಗತ ದಂಪತಿ ಚಿಕ್ಕನಾಯಕನಹಳ್ಳಿಯ ದಕ್ಕಲರ ಟೆಂಟುಗಳಿಗೆ ಬಂದರು, ಅಂದು ಸ್ವಾತಂತ್ರ್ಯ ದಿನೋತ್ಸವ, ಹಾಗೆಂದರೇನೇ ತಿಳಿಯದ ದಕ್ಕಲರ ಮಕ್ಕಳೊಂದಿಗೆ ಭಾರತದ ಬಾವುಟ ಹಾರಿಸಿ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿ, ಸಿಹಿ ಹಂಚಿಕೊಂಡೆವು. ‘ಔಟ್ ಲುಕ್’ ಪತ್ರಿಕೆಯಲ್ಲಿ ದಕ್ಕಲರ ಕುರಿತು ಸುಗತ ಅವರು ಬರೆದ ಹೃದಯಸ್ಪರ್ಶಿ ಲೇಖನದಿಂದಾಗಿ ದಕ್ಕಲ ಸಮುದಾಯದ ಬಗ್ಗೆ ಇಡೀ ಜಗತ್ತಿಗೆ ತಿಳಿಯಿತು. ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಲೇಖನ ಓದಿ ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ದಕ್ಕಲರ ದಾರಿದ್ರ್ಯದ ಕುರಿತು ಮಾತನಾಡಿದರು. ಒಂದೇ ದಿನದಲ್ಲಿ ದಕ್ಕಲರ ಕಾಲನಿಗೆ ಅಧಿಕಾರಿಗಳು, ಸರಕಾರದ ಮುಖ್ಯಸ್ಥರು ಬರತೊಡಗಿದರು. ಪರಿಣಾಮ ದಕ್ಕಲರಿಗೆ ಮನೆಗಳು ಸಿಕ್ಕವು. ಆದರೆ ನಂತರ ಬಂದ ಸರಕಾರಗಳು ದಕ್ಕಲರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯದ ಬದುಕನ್ನು ನೋಡಲೇ ಇಲ್ಲ. ಇದರ ಪರಿಣಾಮ ಅಂದು ಟೆಂಟುಗಳಲ್ಲಿದ್ದ ದಾರಿದ್ರ್ಯ ಇಂದು ಮನೆಗಳಲ್ಲಿದೆ ಅಷ್ಟೇ!
ಅಂಜನಾದ್ರಿಯಲ್ಲಿ ಭಕ್ತಿಯ ಪರಾಕಾಷ್ಠೆ, ಚಳಿಯ ನಡುವೆಯೂ ಹನುಮಮಾಲೆ ವಿಸರ್ಜನೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತರ ಹನುಮಮಾಲೆ ವಿಸರ್ಜನೆ ಸಂಭ್ರಮದಿಂದ ನಡೆಯಿತು. ಚಳಿಯ ನಡುವೆಯೂ ಲಕ್ಷಾಂತರ ಮಾಲಾಧಾರಿಗಳು 575 ಮೆಟ್ಟಿಲುಗಳನ್ನು ಏರಿ ಹನುಮನ ದರ್ಶನ ಪಡೆದರು. ಭಕ್ತರ ದಟ್ಟಣೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ನಾನೇ ಪೂರ್ಣಾವಧಿಗೆ ಸಿಎಂನಿಂದ ಯಾವುದೂ ಶಾಸ್ವತವಲ್ಲದವರೆಗೆ : ಬದಲಾಗುತ್ತಿರುವ ರಾಜಕೀಯ ಕಾಲಚಕ್ರ
CM Change In Karnataka : ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವಿನ ಎರಡನೇ ಬ್ರೇಕ್ಫಾಸ್ಟ್ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಉಪಹಾರದ ನಂತರ,ಇಬ್ಬರೂ ನಾವು ಬ್ರದರ್ಸ್ ಎಂದು ಹೇಳಿದರೂ, ವಿಧಾನಸೌಧದಲ್ಲಿ ಅವರು ಆಡಿದ ಮಾತು ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದನ್ನು ಮಾಡಲಾರಂಭಿಸಿದೆ.
ಮಲೆನಾಡಲ್ಲಿ ಅಡಕೆಗೆ ತಪ್ಪುತ್ತಿಲ್ಲ ಎಲೆಚುಕ್ಕಿ ರೋಗ ; ಫಸಲು ನಷ್ಟ ಅಪಾರವಾಗಿದ್ದರೂ ರೈತರ ಗೋಳು ಕೇಳೋರಿಲ್ಲ
ಶಿವಮೊಗ್ಗದ ಮಲೆನಾಡಿನಲ್ಲಿ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ಮತ್ತು ಕೊಳೆರೋಗದಿಂದಾಗಿ ಅಡಕೆ ಮರಗಳು ನಾಶವಾಗುತ್ತಿವೆ. ನಿರೀಕ್ಷೆಗೂ ಮೀರಿ ಫಸಲು ನಷ್ಟವಾಗಿದ್ದು, ರೈತರು ಆರ್ಥಿಕವಾಗಿ ತತ್ತರಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಬೆಳೆಯ ಫಸಲು ಇಲ್ಲದೆ ರೈತರು ಕಂಗಾಲಾಗುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ, ಸಾಲದ ಬಡ್ಡಿ ಮನ್ನಾ ಮತ್ತು ಮರುಪಾವತಿ ಅವಧಿ ವಿಸ್ತರಣೆ ಮಾಡಲು ರೈತರು ಆಗ್ರಹಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಪ್ರವಾಸಕ್ಕೂ ಮೊದಲೇ ಭಾರತದೊಂದಿಗೆ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಾಳೆ (ಡಿ.4-ಗುರುವಾರ) ಭಾರತಕ್ಕೆ ಭೇಟಿ ನೀಡಲಿದ್ದಾರೆ. 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪುಟಿನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ಕೂಡ ನಡೆಸಲಿದ್ದಾರೆ. ಈ ಮಧ್ಯೆ ಪುಟಿನ್ ಭಾರತ ಭೇಟಿಗೂ ಮೊದಲೇ, ರಷ್ಯಾ ಸಂಸತ್ತಿನ ಕೆಳಮನೆಯು, ಭಾರತದೊಂದಿಗಿನ ಅತ್ಯಂತ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ನಾವು ಭಾರತದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಎಂದು ಡುಮಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಇಲ್ಲಿದೆ ಮಾಹಿತಿ.
ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಮುಂದಿನ ಮೂರು ದಿನಗಳ ಕಾಲ ಈ ಮಳೆ ಮುಂದುವರಿಯುವ ಸಾಧ್ಯತೆ ಇದೆ. ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಚಳಿಯೊಂದಿಗೆ ಮಳೆಯ ವಾತಾವರಣ ಇರಲಿದೆ.
ಡಿಜಿಟಲ್ ಬಂಧನಕ್ಕೊಳಗಾಗಿರುವ ದೇಶದ ಅರ್ಥವ್ಯವಸ್ಥೆ
ದೇಶದಲ್ಲಿ ಅಸಲಿ ತನಿಖಾ ಸಂಸ್ಥೆಗಳಿಗಿಂತ ನಕಲಿ ತನಿಖಾ ಸಂಸ್ಥೆಗಳ ಕಾರ್ಯಾಚರಣೆಗಳೇ ಹೆಚ್ಚುತ್ತಿರುವುದು ಸುಪ್ರೀಂಕೋರ್ಟ್ನ ಗಮನಕ್ಕೂ ಬಂದಂತಿದೆ. ಡಿಜಿಟಲ್ ಬಂಧನ ಪ್ರಕರಣಗಳ ಕುರಿತು ಏಕೀಕೃತ ರಾಷ್ಟ್ರವ್ಯಾಪಿ ತನಿಖೆಯನ್ನು ಸೋಮವಾರ ಸಿಬಿಐಗೆ ವಹಿಸಿಕೊಟ್ಟಿರುವ ಸರ್ವೋಚ್ಚ ನ್ಯಾಯಾಲಯವು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಆರ್ಬಿಐಗೂ ನೋಟಿಸನ್ನು ನೀಡಿದೆ. ‘ಸೈಬರ್ ವಂಚನೆ’ ಪ್ರಕರಣಗಳಲ್ಲಿ ಬಳಸಲಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವನ್ನು ಯಾಕೆ ಬಳಸಿಲ್ಲ ಎನ್ನುವುದಕ್ಕೆ ಉತ್ತರಿಸುವಂತೆಯೂ ಅದು ಸೂಚಿಸಿದೆ. ಜೊತೆಗೆ ಇಂತಹ ಆನ್ಲೈನ್ ಅಪರಾಧಗಳನ್ನು ಎದುರಿಸಲು ಪ್ರಾದೇಶಿಕ ಮತ್ತು ರಾಜ್ಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಪ್ರಧಾನಿ ಮೋದಿಯವರು ತನ್ನ ಆಡಳಿತದ ಹೆಗ್ಗಳಿಕೆಗಳಲ್ಲಿ ಒಂದು ಎಂದು ಹೇಳಿಕೊಂಡು ಬರುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ದೇಶದಲ್ಲಿ ದರೋಡೆಗೆ ಹೊಸ ಆಯಾಮವೊಂದನ್ನು ನೀಡಿದೆ. 2014ಕ್ಕೆ ಮೊದಲು ಮನೆ, ಬ್ಯಾಂಕ್ಗಳ ಬಾಗಿಲು ಮುರಿದು, ಗೋಡೆ ಕೊರೆದು ಒಳ ನುಗ್ಗಿ ದರೋಡೆ ಮಾಡುತ್ತಿದ್ದರೆ, ಮೋದಿಯವರ ಡಿಜಿಟಲ್ ಯುಗದಲ್ಲಿ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತು ದೇಶದ ಜನರ ಮನೆ, ಬ್ಯಾಂಕ್ಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಒಂದು ರೀತಿಯಲ್ಲಿ, ದರೋಡೆಗಳನ್ನೇ ಡಿಜಿಟಲೀಕರಣ ಮಾಡಲಾಗಿದೆ. ಹಿಂದೆ ಬ್ಯಾಂಕ್ ದರೋಡೆಯಾದರೆ ಅದರ ಹೊಣೆಯನ್ನು ಬ್ಯಾಂಕ್ಗಳು ಹೊತ್ತುಕೊಂಡು ಗ್ರಾಹಕರಿಗೆ ಆದ ನಷ್ಟವನ್ನು ತುಂಬಿಕೊಡುತ್ತಿತ್ತು. ಆದರೆ ಈ ಡಿಜಿಟಲ್ ದರೋಡೆಗಳಿಗೆ ಸಂಬಂಧಿಸಿ ಬ್ಯಾಂಕ್ಗಳು ಹೊಣೆಗಾರಿಕೆಯಿಂದ ಸಂಪೂರ್ಣ ನುಣುಚಿಕೊಳ್ಳುತ್ತಿದೆ. ಗ್ರಾಹಕ ತನ್ನ ಖಾತೆಯನ್ನು ಸೈಬರ್ ಕಳ್ಳರು ದೋಚಿದರೆ ಯಾರಲ್ಲಿ ದೂರು ನೀಡಬೇಕು ಎಂದು ಗೊತ್ತಾಗದೆ ಅಸಹಾಯಕನಾಗಬೇಕಾಗುತ್ತದೆ. ಈ ಡಿಜಿಟಲ್ ದರೋಡೆಗಳಿಗೆ ಹೊಸ ತಂತ್ರಗಳನ್ನು ಅನ್ವೇಷಣೆ ಮಾಡುವಲ್ಲಿ ಕಳ್ಳರು ಪೊಲೀಸರಿಗಿಂತ ಎಷ್ಟೋ ಮುಂದಿದ್ದಾರೆ. ಪ್ರಧಾನಿ ಮೋದಿಯವರು ಭದ್ರತೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು, ಸಂತ್ರಸ್ತ ಗ್ರಾಹಕರನ್ನು ತಮ್ಮ ಭಾಷಣಗಳಿಂದ ಸಂತೈಸುವುದಕ್ಕೆ ಸೀಮಿತರಾಗಿದ್ದಾರೆ. 2024ರಲ್ಲಿ ಭಾರತವು ಸೈಬರ್ ಕ್ರಿಮಿನಲ್ಗಳು ಮತ್ತು ವಂಚಕರಿಂದಾಗಿ 22, 842 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಅಷ್ಟೇ ಅಲ್ಲ, 2025ರಲ್ಲಿ ಇಂತಹ ವಂಚನೆಗಳಿಂದ 1.2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಅಂದಾಜಿಸಿದೆ. 2023ರಲ್ಲಿ ಈ ಸೈಬರ್ ದರೋಡೆಯಲ್ಲಿ ಭಾರತೀಯರು 7, 465 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರೆ, 2022ರಲ್ಲಿ 2,306 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತಿರುವ ಹಣ ಹಲವು ಪಟ್ಟು ಹೆಚ್ಚುತ್ತಿದೆ. ವಿಶೇಷವೆಂದರೆ, ಹೀಗೆ ಹಣ ಕಳೆದುಕೊಳ್ಳುತ್ತಿರುವವರು ಅನಕ್ಷರಸ್ಥರು, ಡಿಜಿಟಲ್ ಬ್ಯಾಂಕಿಂಗ್ನ ಬಗ್ಗೆ ಅಜ್ಞಾನ ಹೊಂದಿರುವವರಲ್ಲ. ಸ್ವತಃ ಬ್ಯಾಂಕ್ ಅಧಿಕಾರಿಗಳೇ ಈ ಸೈಬರ್ ವಂಚಕರ ಮೋಸಕ್ಕೆ ನೇರವಾಗಿ ಬಲಿಯಾಗುತ್ತಿದ್ದಾರೆ. ರಾಜಕಾರಣಿಗಳು, ಉಪನ್ಯಾಸಕರು, ನಿವೃತ್ತ ಅಧಿಕಾರಿಗಳು ಹೀಗೆ ವಿದ್ಯಾವಂತರ ದೊಡ್ಡ ಪಡೆಯೇ ಡಿಜಿಟಲ್ ದರೋಡೆಯ ನೇರ ಸಂತ್ರಸ್ತರಾಗಿದ್ದಾರೆ. ಕಳೆದ ವರ್ಷ ಕರ್ನಾಟಕದ ಗದಗ್ ಜಿಲ್ಲೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಸೈಬರ್ ವಂಚಕರಿಗೆ ಬಲಿಯಾಗಿ 26 ಲಕ್ಷ ರೂಪಾಯಿ ಕಳೆದುಕೊಂಡರು. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಿ ಎನ್ನುವ ಜಾಹೀರಾತಿಗೆ ಮರುಳಾಗಿ ತಮ್ಮ ಬ್ಯಾಂಕ್ ವಿವರಗಳನ್ನು ನೀಡಿ ಅವರು ಹಣ ಕಳೆದುಕೊಂಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬ್ಯಾಂಕ್ ಅಧಿಕಾರಿಯನ್ನೇ ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು 56 ಲಕ್ಷ ರೂಪಾಯಿಗಳನ್ನು ದೋಚಿದ್ದರು. ಜನರನ್ನು ಜಾಗೃತಿಗೊಳಿಸಬೇಕಾಗಿದ್ದ, ಡಿಜಿಟಲ್ ಬ್ಯಾಂಕ್ ವ್ಯವಹಾರದ ಕುರಿತಂತೆ ಜನರನ್ನು ಸಾಕ್ಷರರನ್ನಾಗಿಸಬೇಕಾಗಿದ್ದ ಅಧಿಕಾರಿಗಳೇ ಡಿಜಿಟಲ್ ಅರೆಸ್ಟ್ಗೆ ಬಲಿಯಾದರೆ, ಇನ್ನು ಜನಸಾಮಾನ್ಯರ ಸ್ಥಿತಿಯೇನಾಗಬೇಕು? ಇನ್ನೊಬ್ಬರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಅಥವಾ ಮೋಸದಿಂದ ಒಟಿಪಿ ಪಡೆದು ಹಣ ದೋಚುವುದು ಒಂದು ರೀತಿಯಾದರೆ, ಡಿಜಿಟಲ್ ಆ್ಯರೆಸ್ಟ್ ಹೆಸರಿನಲ್ಲಿ ಕೋಟಿಗಟ್ಟಳೆ ಹಣವನ್ನು ದೋಚುವುದು ವಂಚಕರ ಇನ್ನೊಂದು ಬಗೆಯ ತಂತ್ರ. ಇಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರವಲ್ಲ, ತನಿಖಾ ಸಂಸ್ಥೆಯ ಹೆಸರನ್ನೇ ದುರ್ಬಳಕೆ ಮಾಡಿ ಜನರನ್ನು ವಂಚಿಸಲಾಗುತ್ತಿದೆ. ಸಿಬಿಐ ಹೆಸರಿನಲ್ಲಿ ಇಂತಹ ಭಾರೀ ವಂಚನೆಗಳು ನಡೆದಾಗಲೇ ತನಿಖಾ ಸಂಸ್ಥೆಗಳು ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ತನಿಖಾ ಸಂಸ್ಥೆಗಳ ಹೆಸರುಗಳನ್ನೇ ಬಳಸಿಕೊಂಡು ವಂಚಕರು ಮೋಸವೆಸಗುವುದು ಆಯಾ ಸಂಸ್ಥೆಗೆ ಅವಮಾನಕಾರಿ ವಿಷಯವಾಗಿದೆ. ತಮ್ಮ ಹೆಸರಿನಲ್ಲೇ ನಡೆಯುತ್ತಿರುವ ವಂಚನೆಗಳನ್ನು ತಡೆಯಲು ತನಿಖಾ ಸಂಸ್ಥೆಗಳು ವಿಫಲವಾಗುತ್ತವೆ ಎಂದಾದರೆ, ಇತರ ವಂಚನೆಗಳನ್ನು ತಡೆಯುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು? ಡಿಜಿಟಲ್ ಅರೆಸ್ಟ್ನಲ್ಲಿ ಜನರು ಮೋಸ ಹೋಗಿ ಹಣದ ವಿವರಗಳನ್ನು ನೀಡುವುದು ಈ ದೇಶದ ಕಾನೂನು ವ್ಯವಸ್ಥೆಗೆ ಹೆದರಿ. ಒಂದು ರೀತಿಯಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ವಂಚಕರು ಕಾನೂನು ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ಗೊಳಾಗಾದವರ ಹಿನ್ನೆಲೆ ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಗುಜರಾತ್ನಲ್ಲಿ ವೈದ್ಯೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಬೆದರಿಸಿ ಅವರಿಂದ 19 ಕೋಟಿ ರೂಪಾಯಿಯನ್ನು ದೋಚಿದ್ದಾರೆ. ಇಲ್ಲಿ, ದುಷ್ಕರ್ಮಿಗಳು ಆರಂಭದಲ್ಲಿ ದೂರವಾಣಿ ಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಆಕೆಯ ಮೊಬೈಲ್ ಸಂಖ್ಯೆಯನ್ನು ಅಕ್ರಮ ವ್ಯವಹಾರಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ವೈದ್ಯೆ ತನ್ನ ಜೀವಮಾನದ ಗಳಿಕೆಯನ್ನೆಲ್ಲ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳಿಗೆ ಒಪ್ಪಿಸಿ ಬಿಟ್ಟಿದ್ದರು. ಹಿಮಾಚಲ ಪ್ರದೇಶದಲ್ಲಿ ನಿವೃತ್ತ ಕರ್ನಲ್ ದಂಪತಿಯನ್ನು ಡಿಜಿಟಲ್ ಬಂಧನಗೈದು 49 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ನೋಯ್ಡಾದಲ್ಲಿ ಕುಟುಂಬವೊಂದನ್ನು ಐದು ದಿನಗಳ ಕಾಲ ಡಿಜಿಟಲ್ ಬಂಧನಕ್ಕೊಳಪಡಿಸಿ ಸುಮಾರು 1.1 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು. ಮುಂಬೈಯಲ್ಲಿ ಓರ್ವ ವೃದ್ಧೆಯನ್ನು ಒಂದು ತಿಂಗಳ ಕಾಲ ಡಿಜಿಟಲ್ ಬಂಧನಕ್ಕೊಳಪಡಿಸಿ 3.8 ಕೋಟಿ ರೂಪಾಯಿಯನ್ನು ದೋಚಿದ್ದರು. 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಇದೇ ರೀತಿಯಲ್ಲಿ ವಂಚಿಸಿ 31 ಕೋಟಿ ರೂಪಾಯಿಯನ್ನು ದೋಚಿದ್ದರು. ಇತ್ತೀಚೆಗೆ ನಡೆದ ಅತಿ ದೊಡ್ಡ ವಂಚನೆ ಪ್ರಕರಣ ಇದು. ಒಂದು ರೀತಿಯಲ್ಲಿ, ಇಡೀ ದೇಶದ ಅರ್ಥವ್ಯವಸ್ಥೆ ಡಿಜಿಟಲ್ ಬಂಧನದಲ್ಲಿದೆ. ಆರ್ಬಿಐ ಇನ್ನಾದರೂ ಎಚ್ಚೆತ್ತು ಈ ಬಂಧನದಿಂದ ಬಿಡುಗಡೆಗೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕು.
Gold Price Today Dec 3: ಚಿನ್ನ ಖರೀದಿದಾರರಿಗೆ ನೆಮ್ಮದಿ ಸುದ್ದಿ, ಇಂದಿನ ದರ ಎಷ್ಟಿದೆ?
ಚಿನ್ನದ ಬೆಲೆಗಳು ಕಳೆದ ವಾರ ಸತತವಾಗಿ ಏರಿಕೆ ಕಂಡಿತ್ತು. ಇದರಿಂದ ಚಿನ್ನ ಖರೀದಿದಾರರು ಕಂಗಾಲಾಗಿದ್ದರು. ಆದರೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಗಳು ಇಳಿಕೆ ಕಾಣುತ್ತಿವೆ. ಇದರಿಂದ ಚಿನ್ನಾಭರಣ ಪ್ರಿಯರಿಗೆ ತುಸು ರಿಲೀಫ್ ಸಿಕ್ಕಂತಾಗಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆಗಳು ಕಡಿಮೆಯಾಗಿರುವುದು ಗ್ರಾಹಕರ ದೃಷ್ಟಿಯಿಂದ ಒಳ್ಳೆಯದು. ಇನ್ನು ಇಂದಿನ (ಡಿ.3) 24 ಕ್ಯಾರೆಟ್, 22 ಕ್ಯಾರೆಟ್,
ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಪ್ರಲ್ಹಾದ ಜೋಶಿ
ನವೀಕರಿಸಬಹುದಾದ ಇಂಧನದಲ್ಲಿ ರಾಜ್ಯದ ಸಾಮರ್ಥ್ಯ ಶೇ.10.24ರಷ್ಟು. 2025ರ ನವೆಂಬರ್ 26ರಂತೆ ದೇಶಾದ್ಯಂತ ಸೂರ್ಯಘರ್ ಯೋಜನೆಯಡಿ ಒಟ್ಟು 18,72,499 ಸೋಲಾರ್ ಮೇಲ್ಛಾವಣಿ ಘಟಕಗಳನ್ನು ಅಳವಡಿಸಿದ್ದು, 23,47,694 ಕುಟುಂಬಗಳು ಪ್ರಯೋಜನ ಪಡೆದಿವೆ. ಈ ಪೈಕಿ ಕರ್ನಾಟಕದಲ್ಲಿ ಒಟ್ಟು 14,151 ಘಟಕಗಳನ್ನು ಅಳವಡಿಸಲಾಗಿದೆ ಎಂದು ಜೋಶಿ, ರಾಜ್ಯಸಭೆಯಲ್ಲಿ ವಿವರಿಸಿದರು.
ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ
ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ದೇಶದ ಸಂಪನ್ಮೂಲಗಳ ಮೇಲೆ ಭಾರತೀಯ ಬಡವರಿಗೆ ಆದ್ಯತೆ ಇದೆ, ಅಕ್ರಮ ವಲಸಿಗರಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ರೋಹಿಂಗ್ಯಾ ಅಕ್ರಮ ವಲಸಿಗರ ಗಡಿಪಾರು ವಿಚಾರದಲ್ಲಿ ಭಾರತದ ನಿಲುವನ್ನು ಇದು ಎತ್ತಿ ತೋರಿಸುತ್ತದೆ.
ಜಗತ್ತಿನ ಎಲ್ಲಾ ಜೀವಿಗಳನ್ನು ಸುಖವಾಗಿಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಂಸ್ಕೃತಿ ನಮ್ಮದು. ವಸುದೈವ ಕುಟುಂಬಕಂ ತತ್ವವನ್ನು ಪಾಲಿಸುತ್ತಾ, ಸಕಲ ಜೀವರಾಶಿಗಳಿಗೆ ಒಳಿತು ಬಯಸುವ ಶ್ರೀಮಂತ ಸಂಸ್ಕೃತಿಯ ವಾರಸುದಾರರು ನಾವು. ಅದೇ ರೀತಿ ಉದ್ಯಮ ಕ್ಷೇತ್ರದಲ್ಲೂ ಕೂಡ ಭಾರತೀಯ ಉದ್ಯಮಿಗಳು ತಾವೂ ಬೆಳೆದು ಇತರರನ್ನೂ ಬೆಳೆಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಸಂಪತ್ತಿನ ಗಳಿಕೆ ಜೊತೆಗೆ ಸಂಪತ್ತಿನ ಸೃಷ್ಟಿಗೂ ಒತ್ತು ನೀಡುವ ಈ ಉದ್ಯಮಿಗಳು, ಭಾರತೀಯರನ್ನು ಹೇಗೆ ಶ್ರೀಮಂತಗೊಳಿಸಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಳಗಾವಿ ಅಧಿವೇಶನದಲ್ಲಿ 21 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ
ಟಾಟಾ ಗ್ರೂಪ್ ನಿಯಂತ್ರಿತ ಟ್ರಸ್ಟ್ ಮೂಲಕ ರವಾನಿಸಲಾದ ರಾಜಕೀಯ ದೇಣಿಗೆಯಲ್ಲಿ ಬಿಜೆಪಿಗೆ ಸಿಂಹಪಾಲು
ಹೊಸದಿಲ್ಲಿ: ಟಾಟಾ ಸಮೂಹ ನಿಯಂತ್ರಿಸುವ ಪ್ರೋಗ್ರೆಸ್ಸಿವ್ ಎಲೆಕ್ಟೊರಲ್ ಟ್ರಸ್ಟ್ (ಪಿಇಟಿ) ಮೂಲಕ 2024-25ರಲ್ಲಿ ನೀಡಲಾದ ಒಟ್ಟು 915 ಕೋಟಿ ರೂಪಾಯಿ ರಾಜಕೀಯ ದೇಣಿಗೆಯ ಪೈಕಿ ಶೇಕಡ 83ರನ್ನು ಬಿಜೆಪಿ ಬಾಚಿಕೊಂಡಿದೆ. ಕಾಂಗ್ರೆಸ್ ಪಾಲು ಕೇವಲ ಶೇಕಡ 8.4ರಷ್ಟಿದೆ. ವಿವಿಧ ಇಲೆಕ್ಟೊರಲ್ ಟ್ರಸ್ಟ್ಗಳ ರಾಜಕೀಯ ದೇಣಿಗೆಯ ವಿವರಗಳು ಇದೀಗ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇವುಗಳನ್ನು ಪರಿಶೀಲಿಸಿದಾಗ, 2024ರ ಫೆಬ್ರುವರಿಯಲ್ಲಿ ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬಳಿಕವೂ ಬಿಜೆಪಿಯ ಆದಾಯ ಬರಿದಾಗಿಲ್ಲ. ಬಿಜೆಪಿ ಕಚೇರಿ ಪಿಇಟಿಯಿಂದ 757.6 ಕೋಟಿ, ನ್ಯೂ ಡೆಮಾಕ್ರಟಿಕ್ ಇಟಿಯಿಂದ 150 ಕೋಟಿ, ಹಾರ್ಮೊನಿ ಇಟಿಯಿಂದ 30.1 ಕೋಟಿ, ಟ್ರಂಪ್ ಇಟಿಯಿಂದ 21 ಕೋಟಿ, ಜನಕಲ್ಯಾಣ ಇಟಿಯಿಂದ 9.5 ಲಕ್ಷ, ಇಂಝಿಗ್ರೇಟಿಗ್ ಇಟಿಯಿಂದ 7.75 ಲಕ್ಷ ರೂಪಾಯಿ ದೇಣಿಗೆ ಸ್ವೀಕರಿಸಿದ್ದು, ಒಟ್ಟು 959 ಕೋಟಿ ರೂಪಾಯಿ ಕ್ರೋಢೀಕರಿಸಿದೆ. ಟಾಟಾ ಸಮೂಹಕ್ಕೆ ಸೇರಿದ ವಿವಿಧ ಉದ್ಯಮಗಳಿಂದ ರಾಜಕೀಯ ದೇಣಿಗೆ ಸ್ವೀಕರಿಸಿ, ಲೋಕಸಭಾ ಚುನಾವಣೆ ನಡೆಯುವ ವರ್ಷ ವಿತರಿಸುವ ಪಿಇಟಿ, 2018-19ರಲ್ಲಿ 454 ಕೋಟಿ ರೂಪಾಯಿಗಳನ್ನು ಮೂರು ಪಕ್ಷಗಳಿಗೆ ವರ್ಗಾಯಿಸಿದೆ. ಇದರಲ್ಲಿ ಶೇಕಡ 75ರಷ್ಟು ಅಂದರೆ 356 ಕೋಟಿ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ 55.6 ಕೋಟಿ ಹಾಗೂ ತೃಣಮೂಲ ಕಾಂಗ್ರೆಸ್ 43 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿವೆ. 2024-25ರ ಪಿಇಟಿ ದೇಣಿಗೆ ವರದಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡದೇ ಇರುವುದರಿಂದ ಆಡಳಿತ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎನ್ನುವುದನ್ನು ತಕ್ಷಣಕ್ಕೆ ಅಂದಾಜಿಸುವಂತಿಲ್ಲ. 2023-24ರಲ್ಲಿ ಬಿಜೆಪಿ, ಪಿಇಟಿಯಿಂದ 724 ಕೋಟಿ ಸೇರಿದಂತೆ 856.7 ಕೋಟಿ ರೂಪಾಯಿಯನ್ನು ಟ್ರಸ್ಟ್ಗಳಿಂದ ಸಂಗ್ರಹಿಸಿದ್ದು, ಬಾಂಡ್ ಮೂಲಕ 1685 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಕಾಂಗ್ರೆಸ್ ಪಕ್ಷ 2024-25ರಲ್ಲಿ 77.3 ಕೋಟಿ ರೂಪಾಯಿಗಳನ್ನು ಪಿಇಟಿಯಿಂದ, 5 ಕೋಟಿ ರೂಪಾಯಿಗಳನ್ನು ನ್ಯೂ ಡೆಮಾಕ್ರಟಿಕ್ ಇಟಿ ಹಾಗೂ 9.5 ಲಕ್ಷ ರೂಪಾಯಿಗಳನ್ನು ಜನಕಲ್ಯಾಣ ಇಟಿಯಿಮದ ಪಡೆದಿದೆ. ಪಿಇಟಿ ಕಾಂಗ್ರೆಸ್ ಪಕ್ಷಕ್ಕೆ 216.3 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಎಬಿ ಜನರಲ್ ಇಟಿ 15 ಕೋಟಿ ನೀಡಿದೆ ಎಂದು ಕಾಂಗ್ರೆಸ್ ಪಕ್ಷ 2024-25ರ ಅವಧಿಗೆ ಸಲ್ಲಿಸಿದ ದೇಣಿಗೆ ವರದಿಯಲ್ಲಿ ಹೇಳಿದೆ. 2024-25ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 517 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದು, ಈ ಪೈಕಿ 313 ಕೋಟಿ ರೂಪಾಯಿ ಟ್ರಸ್ಟ್ಗಳಿಂದ ಬಂದಿದೆ.
ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ: 'ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ'-ಅರ್ಥವೇನು ಗೊತ್ತೇ?
ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದ ಕುರಿತಾಗಿ ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ಹೇಳಿಕೆಗಳು, ಹೈಕಮಾಂಡ್ ಮೇಲೆ ಒತ್ತಡ, ನಡುವೆ ಬ್ರೇಕ್ಫಾಸ್ಟ್ ಮೀಟಿಂಗ್ ಸಂಧಾನ ಸಭೆ ಎಲ್ಲವೂ ರಾಜ್ಯ ರಾಜಕಾರಣದಲ್ಲಿ ಜೋರಾಗಿ ನಡೆಯುತ್ತಿದ್ದು, ಮಹತ್ವದ ಭವಿಷ್ಯಗಳನ್ನು ನುಡಿದಿರುವ ಕೋಡಿಶ್ರೀ ಸ್ವಾಮೀಜಿ ಈ ಗೊಂದಲದ ಬಗ್ಗೆಯೂ ಮಹತ್ವದ ಭವಿಷ್ಯ ನುಡಿದಿದ್ದಾರೆ.. ಏನು ನೋಡಿ
Karnataka weather update: ಡಿಸೆಂಬರ್ 5ರವರೆಗೆ ಈ ಜಿಲ್ಲೆಗಳಲ್ಲಿ ಮಳೆಯೋ ಮಳೆ!
ತಮಿಳುನಾಡಿಗೆ ಅಪ್ಪಳಿಸಿರುವ ದಿತ್ವಾ ಚಂಡಮಾರುತದಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಹಾಗೂ ಚಳಿಯ ವಾತಾವರಣವಿದೆ. ಕರಾವಳಿ ಕರ್ನಾಟಕದಾದ್ಯಂತ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿದ್ದು, ಒಳನಾಡಿನ ಕರ್ನಾಟಕದಲ್ಲಿ ದುರ್ಬಲವಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದಿದೆ. ಡಿಸೆಂಬರ್ 5ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ
ಅವರೆ, ತೊಗರಿಗೆ ಮಳೆ ಕಾಟ : ಕೋಲಾರದಲ್ಲಿ ಮೋಡ ಕವಿದ ವಾತಾವರಣ, ಮಳೆಯಿಂದ ಉದುರುತ್ತಿರುವ ಹೂವು
ಕೋಲಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದ ಅವರೆ, ತೊಗರಿ ಬೆಳೆಗಳ ಹೂವು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ. ಬೆಳೆ ವೆಚ್ಚ ದುಬಾರಿಯಾಗಿದೆ. ಪಕ್ಷಿಗಳಿಂದಲೂ ಬೆಳೆ ಹಾನಿಯಾಗುತ್ತಿದೆ. ಸರ್ಕಾರ ರೈತರ ನೆರವಿಗೆ ಬರಬೇಕಿದೆ.
ಇನ್ಮೇಲೆ ಎರಡೇ ಪರೀಕ್ಷೆ ! ಅನುತ್ತೀರ್ಣರಾದ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳ 3ನೇ ಪರೀಕ್ಷೆಗೆ ವಿದಾಯ
ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ಅಪ್ಡೇಟ್ ಇಲ್ಲಿದೆ. ಉತ್ತೀರ್ಣ ಅಂಕಗಳನ್ನು ಇಳಿಕೆ ಮಾಡಿದ ಕಾರಣ ಬಹುತೇಕ ವಿದ್ಯಾರ್ಥಿಗಳು ಮೊದಲ ಎರಡು ಮರು ಪರೀಕ್ಷೆಗಳಲ್ಲೇ ಪಾಸ್ ಆಗುತ್ತಾರೆ. ಇನ್ನು ಫೈಲ್ ಆಗುವವರು 3ನೇ ನೇ ಪರೀಕ್ಷೆಯಲ್ಲೂ ಹೆಚ್ಚು ಅಂಕ ಗಳಿಸುತ್ತಿಲ್ಲ ಅನ್ನೋದು ಇಲಾಖೆ ಲೆಕ್ಕಾಚಾರ..
ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ; ಬೇಕಾಬಿಟ್ಟಿ ವಾಹನ ನಿಲ್ಲಿಸಿದರೆ ದಂಡ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು ಮತ್ತು ಅನುಕೂಲತೆಯನ್ನು ಸುಧಾರಿಸಲು ಇದೇ ಡಿ.8ರಿಂದ ನಿಯಮಗಳನ್ನು ಪರಿಚಯಿಸುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ, ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1.30ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 1ಲಕ್ಷ ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್ಗಳ ಮುಂಭಾಗ ಇರುವ ಕರ್ಬ್ಸೈಡ್ನಲ್ಲಿ (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ವಿಮಾನ ನಿಲ್ದಾಣವು ಪ್ರಯಾಣಿಕರ ಅನುಭವ ಹೆಚ್ಚಿಸಲು, ದಟ್ಟಣೆಯನ್ನು ಸರಾಗಗೊಳಿಸುವ ಮತ್ತು ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಹೆಜ್ಜೆ ಇಟ್ಟಿದೆ. ಇನ್ನು ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಬರುವ ಖಾಸಗಿ ಕಾರುಗಳು ಮತ್ತು ಕ್ಯಾಬ್ಗಳು ಪಥಗಳಲ್ಲಿ ದೀರ್ಘಕಾಲ ಕಾಯುವಿಕೆಯಿಂದ ಕೃತಕ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಇದರಿಂದ ಕಾಲ್ನಡಿಗೆಯಿಂದ ವಿಮಾನ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಮತ್ತು ಚಾಲಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು, ಬಿಐಎಎಲ್ ಶಿಸ್ತಬದ್ಧ ನಿಯಮ ಜಾರಿಗೊಳಿಸುತ್ತಿದೆ. ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಪ್ರತ್ಯೇಕ ಪಥ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಇದು ಕರ್ಬ್ಸೈಡ್ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ, ಟರ್ಮಿನಲ್ಗಳ ಮುಂದೆ ಪಿಕ್-ಅಪ್ ವಲಯದ ದುರುಪಯೋಗವನ್ನು ತಡೆಯಬಹುದಾಗಿದೆ. ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟಿ1 ಮತ್ತು ಟಿ2 ನಲ್ಲಿ ನಿಗದಿಪಡಿಸಿದ ಆಗಮನ ಪಿಕ್-ಅಪ್ ವಲಯಕ್ಕೆ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ. ಆದರೆ ನಿಗದಿತ ಸಮಯ ಮಿತಿಯನ್ನು ಮೀರಿದರೆ ಅಂತಹ ವಾಹನಗಳ ಮೇಲೆ ಹೆಚ್ಚು ಕಾಲ ನಿಲ್ಲಿಸಿ, ಅವಕಾಶವನ್ನು ದುರ್ಬಳಕೆ ಮಾಡಿಕೊಂಡದ್ದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ವಿಮಾನ ನಿಲ್ದಾಣವು ವಲಯದ ಉಚಿತ ವಾಹನ ನಿಲುಗಡೆಯ ಅವಕಾಶವನ್ನು 8 ನಿಮಿಷಗಳ ಕಾಲ (ಅಂತಾರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿನದು) ನೀಡುತ್ತದೆ. ಅದನ್ನು ಮೀರಿದ ಎಲ್ಲ ವಾಹನ ಬಳಕೆದಾರರಿಗೆ 8-13 ನಿಮಿಷಗಳ ಕಾಲ ಉಳಿಯಲು 150 ರೂ.ಶುಲ್ಕ ಮತ್ತು 13-18 ನಿಮಿಷಗಳಿಗೆ 300ರೂ. ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುತ್ತದೆ. ಇಲ್ಲಿ, ಅನ್ವಯವಾಗುವ ದಂಡ ಮತ್ತು ಟೋಯಿಂಗ್ ಶುಲ್ಕವನ್ನು ವಿಧಿಸುವುದು ಅನಿವಾರ್ಯವಾಗಿದೆ. ಇನ್ನು ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್ಗಳು ಸೇರಿದಂತೆ ಎಲ್ಲ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕಾಗುತ್ತದೆ. ಸುಗಮ ಪಿಕ್-ಅಪ್ ಅನುಭವವನ್ನು ಒದಗಿಸಲು, ಪಾರ್ಕಿಂಗ್ ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತವೆ. ಟರ್ಮಿನಲ್ 1ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು ಪಿ4 ಮತ್ತು ಪಿ3 ಪಾರ್ಕಿಂಗ್ ವಲಯಗಳಿಗೆ ತೆರಳಬೇಕು. ಆದರೆ ಟರ್ಮಿನಲ್ 2 ಗೆ ಸೇವೆ ಸಲ್ಲಿಸುವ ವಾಹನಗಳನ್ನು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕಾಗುತ್ತದೆ. ಈ ಉಪಕ್ರಮದ ಕುರಿತು ಮಾತನಾಡಿದ ಬಿಐಎಎಲ್ ಎಂ.ಡಿ. ಮತ್ತು ಸಿಇಒ ಹರಿ ಮರಾರ್, ‘ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹೆಚ್ಚಳ ಹೆಚ್ಚುತ್ತಲೇ ಇರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ಪ್ರಯಾಣಿಕರ ಸುರಕ್ಷತೆ, ಸುಗಮ ಆಗಮನ ಹಾಗೂ ನಿರ್ಗಮನಕ್ಕೆ ಸಹಕಾರಿಯಾಗಲಿದೆ. ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಹೊಸ ಪ್ರಕ್ರಿಯೆಯನ್ನು ಅನುಸರಿಸಿದಾಗ, ಅನುಭವವು ತ್ವರಿತ, ಸುರಕ್ಷಿತ ಮತ್ತು ಈ ಭಾಗದಲ್ಲಿ ಓಡಾಡುವ ಎಲ್ಲರಿಗೂ ಹೆಚ್ಚು ಅನುಕೂಲಕರವಾಗುತ್ತದೆ. ವಿಮಾನ ನಿಲ್ದಾಣದ ಅನುಭವವನ್ನು ಸುಗಮ ಮತ್ತು ಉತ್ತಮವಾಗಿ ಸಂಘಟಿತವಾಗಿಸುವಲ್ಲಿ ಎಲ್ಲ ಪಾಲುದಾರರ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು.
ಬಿಜೆಪಿಯಲ್ಲಿ ನಿಲ್ಲದ ಗುಂಪುಗಾರಿಕೆ; ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ ರಮೇಶ್ ಜಾರಕಿಹೊಳಿ ನೇತೃತ್ವದ ಬಣ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಗೊಂಡ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು, ಗುಂಪುಗಾರಿಕೆ ಆರಂಭವಾಗಿದೆ. ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿತ ಬಣ ವರಿಷ್ಠರ ಭೇಟಿಗೆ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಬಿ.ವಿ.ನಾಯಕ್ ಸೇರಿದಂತೆ ಕೆಲವು ಮುಖಂಡರು ಪಕ್ಷದ ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ್ದು, ಕುತೂಹಲಕ್ಕೆ ಕಾರಣವಾಗಿದೆ. ದಿಲ್ಲಿ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ‘ಪಕ್ಷದ ಹೈಕಮಾಂಡ್ ಜತೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾಲಾವಕಾಶ ಸಿಕ್ಕಿದೆ. ಸದ್ಯಕ್ಕೆ ಅಗತ್ಯ ಇರುವ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಈ ಭೇಟಿಯು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಪಕ್ಷದ ಸಂಘಟನಾತ್ಮಕ ವಿಷಯ, ವಿಶೇಷವಾಗಿ 2028ರ ಚುನಾವಣೆಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಲಿವೆ’ ಎಂದು ಹೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿ ಸಾವು ಪ್ರಕರಣ; ನ್ಯಾಯಾಂಗ ತನಿಖೆಗೆ ಪಿಯುಸಿಎಲ್ ಆಗ್ರಹ
ಬೆಂಗಳೂರು : ಪರಿಶಿಷ್ಟ ಜಾತಿಗೆ ಸೇರಿದ ದಿನಗೂಲಿ ನೌಕರ ದರ್ಶನ್ ಎಂಬಾತನನ್ನು ವಿವೇಕನಗರ ಪೊಲೀಸ್ ಠಾಣಾಧಿಕಾರಿಗಳು ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡಿದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ಸತ್ಯಶೋಧನಾ ವರದಿಯಲ್ಲಿ ತಿಳಿದುಬಂದಿದ್ದು, ಸರಕಾರ ಪ್ರಕರಣವನ್ನು ಈ ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಸಂಘಟನೆ ಆಗ್ರಹಿಸಿದೆ. ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್ನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ ಇತ್ತೀಚೆಗೆ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪುನರ್ವಸತಿ ಕೇಂದ್ರದಲ್ಲಿ ಸಾವಿಗೀಡಾಗಿದ್ದ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಸತ್ಯಶೋಧನಾ ತಂಡದ ಮಧ್ಯಂತರ ವರದಿ ಬಿಡುಗಡೆ ಮಾಡಿ ಮಾತನಾಡಿದರು. ಮೃತ ದರ್ಶನ್ ತಾಯಿ ಆದಿಲಕ್ಷ್ಮೀ ಹೇಳಿಕೆಯಂತೆ, ವಿವೇಕನಗರ ಪೊಲೀಸ್ ಠಾಣೆಯವರು ದರ್ಶನ್ಗೆ ಪೊಲೀಸ್ ವಶದಲ್ಲಿದ್ದ ವೇಳೆ ನೀಡಿದ ಚಿತ್ರಹಿಂಸೆಯನ್ನು ಮುಚ್ಚಿಹಾಕಲು, ಪೊಲೀಸರು ಯೂನಿಟಿ ಫೌಂಡೇಶನ್ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಸಿಬ್ಬಂದಿ ಪವನ್ ಇನ್ನಿತರರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಅಕ್ರಮವಾಗಿ ಬಂಧಿಸಿ ಲಾಠಿ ಮತ್ತು ಪೈಪ್ಗಳಿಂದ ಕ್ರೂರವಾಗಿ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ವಿವೇಕನಗರ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಮತ್ತು ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಪೊಲೀಸರು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ದರ್ಶನ್ ಕುಟುಂಬಸ್ಥರಿಗೆ ಬೆದರಿಕೆ ಹಾಕಿರುವುದರಿಂದ ಸಂತ್ರಸ್ತ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜೇಂದ್ರ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶುಜಾಯತ್ ಉಲ್ಲಾ, ಸಂಚಾಲಕಿ ವಿ.ಚಂದ್ರಶ್ರೀ, ವಕೀಲ ನರಸಿಂಹಮೂರ್ತಿ, ದರ್ಶನ್ ಕುಟುಂಬಸ್ಥರು ಉಪಸ್ಥಿತರಿದ್ದರು.
ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣ | ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು : ಹನ್ನೆರಡು ವರ್ಷಗಳ ಹಿಂದೆ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ 3ನೇ ಆರೋಪಿ ತಮಿಳುನಾಡು ಮೂಲದ ಕಿಚನ್ ಬುಹಾರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನಿರಾಕರಿಸಿ 2024ರ ಫೆಬ್ರವರಿ 23ರಂದು ಎನ್ಐಎ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಕಿಚನ್ ಬುಹಾರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಬೆಂಗಳೂರು : ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಹಾಗೂ ಎಂ.ಡಿ.ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಲಾಗಿರುವ ದೂರಿನ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ. ಬೆಂಗಳೂರು ನಿವಾಸಿ ತೇಜಸ್ ಎ.ಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೀರ್ತನ್ ಕುಮಾರ್ ವಾದ ಮಂಡಿಸಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್ ಹಾಗೂ ಎಂ.ಡಿ.ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆ, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಎಸ್ಐಟಿ, ರಾಜ್ಯ ಸರಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್.ಐ.ಟಿ, ಆದಾಯ ತೆರಿಗೆ ಮಂಗಳೂರು ಕೇಂದ್ರ ವಲಯ ಅಧಿಕಾರಿ, ಜಾರಿ ನಿರ್ದೇಶನಾಲಯಕ್ಕೆ ಅರ್ಜಿದಾರರು 2025ರ ಆಗಸ್ಟ್ 20, ಸೆಪ್ಟೆಂಬರ್ 5, 8 ಹಾಗೂ 9ರಂದು ಮನವಿ ಮತ್ತು ದೂರು ಸಲ್ಲಿಸಿದ್ಧಾರೆ. ಆದರೆ, ಅವುಗಳನ್ನು ಪರಿಗಣಿಸಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಸರಕಾರದ ಪರ ವಕೀಲರು, ಅರ್ಜಿದಾರರ ದೂರು ಆಧರಿಸಿ ಕೈಗೊಂಡ ಕ್ರಮಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ನೀಡಿ ಪಡೆದು ತಿಳಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.
ಬ್ರಹ್ಮಾವರ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ
ಬ್ರಹ್ಮಾವರ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಕೋಟೆಯ ನಡುಹಿತ್ಲು ನಿವಾಸಿ ಶ್ರೇಯಾ(21) ಎಂಬವರಿಗೆ ನ.24ರಂದು ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅದರಂತೆ ಶ್ರೇಯಾ ತನ್ನ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗೆ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ಶ್ರೇಯಾ ಅವರಿಗೆ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಗೆ 21ಲಕ್ಷ ಆನ್ಲೈನ್ ವಂಚನೆ
ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಕುಂದಾಪುರ ತಲ್ಲೂರಿನ ರಘುರಾಮ ಶೆಟ್ಟಿ (72) ಎಂಬವರು ನ.28ರಂದು ಫೇಸ್ಬುಕ್ನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಆಫ್ ಬರೋಡದಿಂದ ವಿವಿಧ ಸವಲತ್ತುಗಳನ್ನು ಒದಗಿಸುವ ಕಾರ್ಡ್ ಕುರಿತ ಜಾಹೀರಾತು ನೋಡಿದ್ದು, ಬಳಿಕ ಅದರಲ್ಲಿದ್ದ ಲಿಂಕ್ ಒಪನ್ ಮಾಡಿದ್ದರು. ನಂತರ ನ.29ರಂದು ರಘುರಾಮ ಶೆಟ್ಟಿ ಅವರ ಮೊಬೈಲ್ಗೆ ಬ್ಯಾಂಕ್ ಆಫ್ ಬರೋಡ ಅಲ್ಕಾಪುರಿ, ಗುಜರಾತ್ನಿಂದ ಮಾತನಾಡುತ್ತಿರುವುದಾಗಿ ಅಪರಿಚಿತ ಕರೆ ಮಾಡಿದ್ದು, ಬಳಿಕ ಜಾಹೀರಾತುವಿನಲ್ಲಿನ ಸೌಲಭ್ಯಗಳನ್ನು ತಿಳಿಸಿದ್ದನು. ಆತ ಅವರ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬ್ರ, ಈ-ಮೇಲ್ ಹಾಗೂ ಇತರೆ ವೈಯುಕ್ತಿಕ ವಿವರಗಳನ್ನು ಭರ್ತಿಗೊಳಿಸುವಂತೆ ತಿಳಿಸಿದ್ದು, ಅದರಂತೆ ರಘುರಾಮ ಶೆಟ್ಟಿ ವಿವರ ಭರ್ತಿಗೊಳಿಸಿ ಹಾಗೂ ಬ್ಯಾಂಕ್ ಒಟಿಪಿಯನ್ನು ಅಪರಿಚಿತನೊಂದಿಗೆ ಹಂಚಿಕೊಂಡರು. ಅನಂತರದಲ್ಲಿ ರಘುರಾಮ ಶೆಟ್ಟಿಯ ಬ್ಯಾಂಕ್ ಖಾತೆಯಿಂದ ಒಟ್ಟು 21,28,055.86ರೂ. ಹಣವನ್ನು ಅಪರಿಚಿತ ತನ್ನ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ.
ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿ ಮೃತ್ಯು
ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ತಮ್ಮು ಪೂಜಾರಿ(78) ಎಂದು ಗುರುತಿಸಲಾಗಿದೆ. ಇವರು ನ.20ರಂದು ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್ ಅನ್ನು ಮಧ್ಯಪಾನವೆಂದು ಭಾವಿಸಿ ಸೇವಿಸಿದ್ದರು ಎನ್ನಲಾಗಿದೆ. ಇದು ವಿಷಯುಕ್ತವಾಗಿರುವುದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಡಿ.2ರಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಮರ್ಗಳಿಂದ ಕೋರ್ಟ್ ಕಲಾಪಗಳಿಗೆ ಸಮಸ್ಯೆ; ಸಾಮರ್ಥ್ಯ ಮಿತಿ ಕಾರಾಗೃಹಕ್ಕಷ್ಟೇ ಸೀಮಿತಗೊಳಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಕೊಡಿಯಾಲಬೈಲ್ನಲ್ಲಿರುವ ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ಗಳ ಸಾಮರ್ಥ್ಯ ಮಿತಿಯನ್ನು ಕಾರಾಗೃಹಕ್ಕೆ ಸೀಮಿತಗೊಳಿಸುವಂತೆ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಯಾದ ಮೆಸರ್ಸ್ ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ಗೆ ಹೈಕೋರ್ಟ್ ನಿರ್ದೇಶಿಸಿದೆ. ನ್ಯಾಯಾಲಯದಲ್ಲಿ ಸಂವಹನಕ್ಕೆ ಅಡ್ಡಿಪಡಿಸುತ್ತಿರುವ ಜಾಮರ್ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ ಹಾಗೂ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಹೇಳಲಾಗಿರುವ ಸಮಸ್ಯೆ ಕುರಿತು ತಾಂತ್ರಿಕ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರದ ಸಂವಹನ ಸಚಿವಾಲಯಕ್ಕೆ ಸೂಚಿಸಲಾಗಿತ್ತು. ಅದರಂತೆ ಸಚಿವಾಲಯದ ವೈರ್ಲೆಸ್ ಮಾನಿಟರಿಂಗ್ ಸಂಸ್ಥೆ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿದಾಗ ಜೈಲು ಆವರಣದೊಳಗೆ ಜಾಮರ್ ಸಿಗ್ನಲ್ ಸಾಮರ್ಥ್ಯವು ಅಂದಾಜು 70 ಡಿಬಿಎಂ (ಡೆಸಿಬೆಲ್ ಮಿಲಿವಾಟ್ಸ್) ಎಂದು ಸೂಚಿಸುತ್ತದೆ. ಅದಾಗ್ಯೂ, ಈ ಸಾಮರ್ಥ್ಯ ಮಿತಿಯು ಜೈಲು ಆವರಣದ ಗಡಿಯನ್ನು ದಾಟಿದೆ ಮತ್ತು 900 ಮೀಟರ್ನಲ್ಲಿ ಜಾಮರ್ ಸಾಮರ್ಥ್ಯ -80 ಡಿಬಿಎಂ ಮತ್ತು 2.5 ಕಿಮೀ ವರೆಗೆ -100 ಡಿಬಿಎಂ ಆಗಿದೆ ಎಂಬುದನ್ನು ಪರಿಗಣಿಸಿ, ನ್ಯಾಯಪೀಠ ಈ ನಿರ್ದೇಶನ ನೀಡಿತು. ಜಾಮರ್ ಸಿಗ್ನಲ್ ನಿಗದಿತ ವ್ಯಾಪ್ತಿ ಪ್ರದೇಶವನ್ನು ಮೀರಿ ವಿಸ್ತರಿಸಿದೆ ಎಂದು ವರದಿಯು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು ಔಟ್ಪುಟ್ ಪವರ್ ಮತ್ತು ಜಾಮರ್ ಆ್ಯಂಟೆನಾಗಳ ಎತ್ತರ/ಓರಿಯಂಟೇಷನ್ ಸೇರಿದಂತೆ ಜಾಮರ್ನ ತಾಂತ್ರಿಕ ನಿಯತಾಂಕಗಳನ್ನು ಮರುಮೌಲ್ಯಮಾಪನ ಮಾಡಿ ಅದನ್ನು ಸೂಕ್ತಗೊಳಿಸಬೇಕು ಎಂದು ವರದಿ ಶಿಫಾರಸು ಮಾಡಿದೆ ಎಂದು ಉಲ್ಲೇಖಿಸಿದ ನ್ಯಾಯಪೀಠ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಆವರಣದಲ್ಲಿ ಮೊಬೈಲ್, ಇಂಟರ್ನೆಟ್ ಬಳಕೆಗೆ ನೆಟ್ವರ್ಕ್ ಸಮಸ್ಯೆ ಆಗದಂತೆ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ ಗಳ ಸಾಮರ್ಥ್ಯವನ್ನು ಮಿತಿಗೊಳಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಜಾಮೀನು ಅರ್ಜಿಯ ವಿಚಾರಣೆ ವೇಳೆ ಉಮರ್ ಖಾಲಿದ್ ಭಾಷಣ ತೋರಿಸಿದ ಕಪಿಲ್ ಸಿಬಲ್
“ಗಾಂಧೀಜಿಯ ಮಾರ್ಗ ಉಪದೇಶಿಸಿದರೆ ಪಿತೂರಿಯೇ?” ಎಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ
ಉಡುಪಿಯಲ್ಲಿ ಆರ್ಟಿಫಿಶಲ್ ಇಂಟಲಿಜೆನ್ಸ್ ಸಂಚಾರ ವ್ಯವಸ್ಥೆ ಅನುಷ್ಠಾನ: ಎಸ್ಪಿ ಹರಿರಾಂ ಶಂಕರ್
ಉಡುಪಿ: ಉಡುಪಿ ನಗರ ಹಾಗೂ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಣಿಪಾಲದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್ಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೆಜ್ಮೆಂಟ್ ಸಿಸ್ಟಮ್ ನಡಿ ಏಳು ಜಂಕ್ಷನ್ಗಳಲ್ಲಿ 14 ಕ್ಯಾಮೆರಾಗಳನ್ನು ಆಳವಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ನಗರಸಭೆಯ 50ಲಕ್ಷ ರೂ. ಅನುದಾನದಲ್ಲಿ ನಾಲ್ಕು ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು. ಈ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಲಾಗುವುದು. ದಂಡದ ನೋಟೀಸ್ ನೇರವಾಗಿ ಅವರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಆರಂಭಿಸಲಾಗುವುದು. ಹೀಗೆ ಎಲ್ಲ ವ್ಯವಸ್ಥೆಯನ್ನು ಅಟೋಮೆಟಿಕ್ ಮಾಡಲಾಗುವುದು. ಇನ್ನು ಟ್ರಾಫಿಕ್ ಪೊಲೀಸರು ನಿಂತು ದಂಡ ವಿಧಿಸುವ ಕ್ರಮವನ್ನು ಕ್ರಮೇಣ ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದರು. ಇದೇ ಯೋಜನೆಗೆ ಉಡುಪಿ ನಗರಸಭೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಆ ಹಣದಲ್ಲಿ ನಗರಸಭೆ ವ್ಯಾಪ್ತಿಯ 3-4 ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಇದು ಕೂಡ ಆರ್ಟಿಫಿಶಲ್ ಇಂಟೆಲಿಜೆನ್ಸ್ ಸಿಸ್ಟಮ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ನಗರ ಮತ್ತು ಜಿಲ್ಲಾ ಗಡಿ ಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಕ್ಯಾಮೆರಾ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಲು ಅನುಕೂಲವಾಗುತ್ತದೆ ಎಂದು ಎಸ್ಪಿ ತಿಳಿಸಿದರು. ಸ್ಪೀಡ್ ರ್ಯಾಡರ್ ಗನ್ ಅಳವಡಿಕೆ ಸರಕಾರದಿಂದ ಉಡುಪಿ ಜಿಲ್ಲೆಯಲ್ಲಿ ಸ್ಪೀಡ್ ರ್ಯಾಡರ್ ಗನ್ ಅಳವಡಿಸಲು ಅನುಮೋದನೆ ದೊರೆತಿದ್ದು, ಇವುಗಳನ್ನು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು. ಈ ಮೂಲಕ ಓವರ್ ಸ್ಪೀಡ್ನಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆ ಹಚ್ಚಲಾಗುವುದು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ. ಉಡುಪಿ ಚೇಂಬರ್ ಆಫ್ ಕಾಮರ್ಸ್ ಜೊತೆ ಆರಂಭಿಸಿರುವ ಸೇನಾ ದೃಷ್ಠಿ ಯೋಜನೆಯಲ್ಲಿ 200 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಿಸಲಾಗಿದ್ದು, ಅದರ ಪೈಕಿ 25 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ಡಿ.20ರಿಂದ ಜ.4ರವರೆಗೆ ʼಕರಾವಳಿ ಉತ್ಸವʼ: ದ.ಕ. ಜಿಲ್ಲಾಧಿಕಾರಿ
ಮಂಗಳೂರು: ದ.ಕ. ಜಿಲ್ಲಾಡಳಿತವು, ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳ ಸಮಾಗಮವಾದ ‘ಕರಾವಳಿ ಉತ್ಸವ 2025-26’ ಅನ್ನು ಡಿ.20ರಿಂದ ಜ.4ರವರೆಗೆ ಆಯೋಜಿಸಲು ಸಜ್ಜಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್ ಮತ್ತು ನಗರದ ಕಡಲತೀರಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಅವರು ಹೇಳಿದರು. ಡಿ.20ರಂದು ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ನ ಶಾಸಕರು, ವಿವಿಧ ಅಕಾಡಮಿ, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ವಿವರಿಸಿದರು. ಮನರಂಜನಾ ಚಟುವಟಿಕೆಗಳು: ಕರಾವಳಿ ಉತ್ಸವ ಮೈದಾನದಲ್ಲಿ ವಿವಿಧ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.20ರಿಂದ ಜ.4ರವರೆಗೆ ಪ್ರತೀ ಶನಿವಾರ ಮತ್ತು ರವಿವಾರ ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಸಂಗೀತ ಸಂಭ್ರಮ: ಜ.3 ಮತ್ತು 4ರಂದು ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಕಡಲತೀರಗಳಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಖ್ಯಾತ ಕಲಾವಿದರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ. ಜನವರಿ-ಫೆಬ್ರವರಿ ವಿಶೇಷ ಆಕರ್ಷಣೆಗಳು: ಉತ್ಸವದ ಮುಂದುವರಿದ ಭಾಗವಾಗಿ, ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ದರ್ಶನ್ ಎಚ್.ವಿ. ತಿಳಿಸಿದರು. ಜ.9ರಿಂದ 11ರವರೆಗೆ ಕಲೆ ಮತ್ತು ಸಂಸ್ಕೃತಿಯ ಅಂಗವಾಗಿ ಕದ್ರಿ ಪಾರ್ಕ್ ರಸ್ತೆಯಲ್ಲಿ ಶರಧಿ ಪ್ರತಿಷ್ಠಾನದ ಸಹಯೋಗದೊಂದಿಗೆ ಚಿತ್ರ ಶಿಲ್ಪನೃತ್ಯ ಮೇಳ ‘ಕಲಾ ಪರ್ಬ’ ನಡೆಯಲಿದೆ. ಕದ್ರಿ ಪಾರ್ಕ್ (ತೋಟಗಾರಿಕೆ ಇಲಾಖೆ) ವತಿಯಿಂದ ಜ.26ರಂದು ಫಲಪುಷ್ಪಪ್ರದರ್ಶನ ನಡೆಯಲಿದೆ. ಕ್ರೀಡೆ ಸಂಬಂಧಿಸಿದಂತೆ ಟ್ರಯತ್ಲಾನ್ ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್ (ತಪಸ್ಯಾ ಫೌಂಡೇಶನ್ ಸಹಯೋಗ)ನಲ್ಲಿ ನಡೆಯಲಿದೆ. ಜ.17, 18ರಂದು ತಣ್ಣೀರು ಬಾವಿ ಬೀಚ್ನಲ್ಲಿ ಅಂತರ್ರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಜ.23ರಿಂದ 25ರವರೆಗೆ ಪ್ರಮುಖ ಬೀಚ್ಗಳಲ್ಲಿ ಬೀಚ್ ಉತ್ಸವ ನಡೆಯಲಿದೆ. ಜ.30 ಮತ್ತು 31ರಂದು ಕದ್ರಿ ಪಾರ್ಕ್ ರೋಡ್ ಬಳಿ ಫುಡ್ ಸ್ಟ್ರೀಟ್ನಡೆಯಲಿದೆ. ಜನವರಿ ಕೊನೆಯ ವಾರ ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಮೇಳ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಡಾ.ನಾರ್ವಡೆ ವಿನಾಯಕ ಕರ್ಬಾರಿ ಡಿಸಿಪಿ ಮಿಥುನ್ ಎಚ್.ಎನ್. ಉಪಸ್ಥಿತರಿದ್ದರು.
'ಅವಳನ್ನು ಚೆನ್ನಾಗಿ ನೋಡಿಕೊಳ್ತೇನೆ ಮದ್ವೆ ಮಾಡಿಸು ಭಗವಂತ': ನಂದೀಶ್ವರ ದೇಗುಲದ ಹುಂಡೀಲಿ ಸಿಕ್ತು ಲವ್ ಲೆಟರ್ಸ್
ಐತಿಹಾಸಿಕ ಭೋಗ ನಂದೀಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ ಹಣಕ್ಕಿಂತ ಹೆಚ್ಚಾಗಿ ಹುಂಡಿಯಲ್ಲಿ ಹಲವು ಬೇಡಿಕೆಯುಳ್ಳ ಪತ್ರಗಳು ಸಿಕ್ಕಿವೆ. . ಮಹಿಳೆಯೊಬ್ಬರ ಫೋಟೋ ಹಿಂಭಾಗ 'ಪದ್ಮ ಮತ್ತೆ ತಿರುಗಿ ಬಾ' ಎಂದು ಬರೆದಿರುವುದು ಒಂದು ಕಡೆ ಸಿಕ್ಕರೆ, ಮತ್ತೊಂದು ಪತ್ರದಲ್ಲಿ ತಾನು ಪ್ರೀತಿಸಿದ ಹುಡುಗಿಯ ಮನೆಯವರು ಮದುವೆಗೆ ಒಪ್ಪುವಂತೆ ಮಾಡು ಎಂದು ದೇವರಲ್ಲಿ ಬೇಡಿಕೊಳ್ಳಲಾಗಿದೆ. ಇನ್ನು ಸಾಕಷ್ಟು ಪತ್ರಗಳು ಸಿಕ್ಕಿವೆ ಎಂದು ತಹಶೀಲ್ದಾರ್ ಹೇಳಿದ್ದಾರೆ.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಮೇಲಿನ ಲಾಠಿ ಚಾರ್ಜ್ ಖಂಡನೀಯ: ಶಿವ ಅಷ್ಟಗಿ
ಕಲಬುರಗಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ಹಾಗೂ ಯುವಕರ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮಾಡಿ ಅವರನ್ನು ಬಂಧಿಸಿರುವ ಕ್ರಮವನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶಿವ ಅಷ್ಠಗಿ, ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಉದ್ಯೋಗಾಕಾಂಕ್ಷಿಗಳು ಈ ಮೊದಲು ಕೂಡ ಪ್ರತಿಭಟನೆ ಮಾಡಿದ್ದಾರೆ. ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟನಾನಿರತ ಆಕಾಂಕ್ಷಿಗಳ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಲಾಠಿಚಾರ್ಜ್ ಮಾಡಿಸಿ ಹೋರಾಟಗಾರರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಉದ್ಯೋಗ ಭರ್ತಿ ಮಾಡಿಕೊಳ್ಳುವ ಸಂಸ್ಥೆಗಳು ಭ್ರಷ್ಟಾಚಾರ, ಅಕ್ರಮ ನೇಮಕಾತಿಯಲ್ಲಿ ತೊಡಗಿಕೊಂಡಿವೆ. ಇದರಿಂದ ಸಾವಿರಾರು ಪ್ರತಿಭಾನ್ವಿತ ಮತ್ತು ಬಡ ಉದ್ಯೋಗಾಕಾಂಕ್ಷಿಗಳ ಬದುಕಿಗೆ ಕೊಳ್ಳಿ ಇಡುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಒಂದು ಕಡೆ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ಮತ್ತು ವಿಳಂಬ ಫಲಿತಾಂಶದಿಂದ ತತ್ತರಿಸಿ ಹೋಗಿದ್ದಾರೆ, ಇನ್ನೊಂದು ಕಡೆ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Suraj Revanna: ಪ್ರಜ್ವಲ್ ಬಳಿಕ ಸೂರಜ್ ರೇವಣ್ಣಗೂ ಬಿಗ್ ಶಾಕ್, ಮತ್ತೆ ಜೈಲಿಗೆ?
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಗಂಭೀರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದಾರೆ. ಇದೀಗ ರೇವಣ್ಣ ಅವರ ಮತ್ತೊಬ್ಬ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೂ ದೊಡ್ಡ ಸಂಕಷ್ಟ ಎದುರಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ಗೆ ಕೋರ್ಟ್ ಬಿಗ್ಶಾಕ್ ನೀಡಿದೆ. ಯುವಕನ ಮೇಲೆ
ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ 59, ಮರಳುಗಾರಿಕೆಗೆ 42 ಪರವಾನಿಗೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳುಗಾರಿಕೆ ಸಮಸ್ಯೆ ಬಹುತೇಕ ಪರಿಹಾರಗೊಂಡಿದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಈಗಾಗಲೇ 59 ಪರವಾನಿಗೆ ನೀಡಲಾಗಿದೆ. 42 ಬ್ಲಾಕ್ಗಳಲ್ಲಿ ಮರಳುಗಾರಿಕೆ ನಡೆಸಲು ಮಾರ್ಚ್ ಒಳಗೆ ಪರವಾನಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈಗಾಗಲೇ 19 ಬ್ಲಾಕ್ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇನ್ನೂ 42 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಮುಂದಿನ ಐದು ವರ್ಷ ಮರಳುಗಾರಿಕೆಗೆ ಸಮಸ್ಯೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ಈ ಹಿಂದೆ 30-35 ರೂ.ಗೆ ದೊರೆಯುತ್ತಿದ್ದ ಕೆಂಪುಕಲ್ಲು ಬಳಿಕ 65 ರೂ.ಗೆ ಏರಿಕೆಯಾಗಿತ್ತು. ಈ ಸಮಸ್ಯೆ ಬಗೆಹರಿಸಿ, ಕೆಂಪು ಕಲ್ಲು ತೆಗೆಯಲು ಇದುವರೆಗೆ 59 ಪರ್ಮಿಟ್ಗಳನ್ನು ನೀಡಲಾಗಿದೆ. ಇನ್ನೂ 12 ಅರ್ಜಿಗಳು ಬಾಕಿ ಉಳಿದಿದ್ದು, ಶೀಘ್ರ ವಿಲೇವಾರಿ ಮಾಡಲಾಗುವುದು. ಸದ್ಯ ಕಲ್ಲಿನ ದರ 45 ರೂ.ಗೆ ಇಳಿಕೆಯಾಗಿದೆ. ಮುಂದೆ ಇದನ್ನು 40 ರೂ.ಗಿಂತ ಕೆಳಗೆ ಇಳಿಸುವ ಉದ್ದೇಶ ಇದೆ ಎಂದರು. ಕೆಂಪುಕಲ್ಲು ತೆಗೆಯಲು ಅರ್ಜಿ ಆಹ್ವಾನಿಸಲಾಗಿದ್ದು, 60 ಅರ್ಜಿಗಳು ಮಾತ್ರ ಬಂದಿದೆ. ಆಸಕ್ತರು ಅರ್ಜಿ ಹಾಕಿದರೆ ಪರ್ಮಿಟ್ ನೀಡಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ರಸ್ತೆ ಗುಂಡಿ ಮುಚ್ಚಲು ಕ್ರಮ: ಜಿಲ್ಲೆಯ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ರಸ್ತೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಏಳು ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಗರ ಹೊರವಲಯದ ಪಡೀಲ್ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರೂ ವಾರದಲ್ಲೊಂದು ದಿನ ತಾನು ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಜಿಲ್ಲಾಧಿಕಾರಿ ದರ್ಶನ್ ಹೇಳಿದರು. ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ಎಎಫ್ ಪಡೆ ಕಚೇರಿಗೆ ಸ್ಥಳಾವಕಾಶ ನೀಡಲಾಗಿದೆ. ಉಳಿದಂತೆ ರಾಷ್ಟ್ರೀಯ ಹೆದ್ದಾರಿ, ಕಾರ್ಮಿಕ ಇಲಾಖೆಗೆ ಸ್ಥಳಾವಕಾಶ ನೀಡುವ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದ.ಕ. ಜಿಪಂ ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಉಪಸ್ಥಿತರಿದ್ದರು.
ಗುವಾಹಟಿ, ಡಿ.02: ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯ ಶ್ರೀಭೂಮಿ ನೀಲಮ್ ಬಜಾರ್ ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ, ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಬಾಸಿತ್ ಅವರ ತ್ವರಿತ ಸ್ಪಂದನೆಯಿಂದ ಏಳು ಹಿಂದೂ ಪ್ರಯಾಣಿಕರ ಜೀವಗಳನ್ನು ಉಳಿದಿರುವ ಘಟನೆ ನಡೆದಿದೆ. ಬಹದ್ದೂರ್ ಪುರ ಪ್ರದೇಶದ ರಸ್ತೆ ಬದಿಯ ಕೊಳಕ್ಕೆ ನಿಯಂತ್ರಣ ತಪ್ಪಿದ ಕಾರು ಬಿದ್ದ ಪರಿಣಾಮ, ವಾಹನದೊಳಗಿದ್ದ ಪ್ರಯಾಣಿಕರು ಕ್ಷಣಾರ್ಧದಲ್ಲೇ ನೀರಿನಲ್ಲಿ ಮುಳುಗುತ್ತಿದ್ದರು. ಅಪಘಾತವಾದ ದೊಡ್ಡ ಶಬ್ದವು ಹತ್ತಿರದ ಮಸೀದಿಯಲ್ಲಿದ್ದ ಇಮಾಮ್ ಬಾಸಿತ್ ಅವರಿಗೆ ಕೇಳಿತು. ನೋಡಿದರೆ ಪಕ್ಕದಲ್ಲೇ ಇರುವ ಕೊಳದಲ್ಲಿ ವಾಹನದ ಹೆಡ್ ಲೈಟ್ ಮಿನುಗುತ್ತಿದ್ದು ಅವರಿಗೆ ಕಂಡುಬಂತು. ಘಟನೆಯ ಗಂಭೀರತೆ ಅರಿತ ಇಮಾಮ್ ಬಾಸಿತ್ ಅವರು, ವಿಳಂಬ ಮಾಡದೆ ಧ್ವನಿವರ್ಧಕದ ಬಳಿಗೆ ಧಾವಿಸಿದರು. ಗ್ರಾಮಸ್ಥರಿಗೆ ತಕ್ಷಣದ ಎಚ್ಚರಿಕೆ ನೀಡಿದ ಅವರು, ಅಪಘಾತವಾದ ಬಗ್ಗೆ ತಿಳಿಸಿ ತುರ್ತು ನೆರವಿಗಾಗಿ ಸಹಾಯ ಕೋರಿದರು. ನೀರಿನೊಳಗೆ ಕಾರಿನ ದೀಪಗಳು ಉರಿಯುತ್ತಿದ್ದುದನ್ನು ಕಂಡ ತಕ್ಷಣ ಧ್ವನಿವರ್ಧಕದಲ್ಲಿ ಜನರನ್ನು ಎಚ್ಚರಿಸಿದೆ. ಧರ್ಮ ಅಥವಾ ಜಾತಿಯ ಬಗ್ಗೆ ಯೋಚಿಸುವ ಸಂದರ್ಭ ಅಲ್ಲ ಅದು. ಮೊದಲ ಆದ್ಯತೆ ಜೀವ ಉಳಿಸುವುದಾಗಿತ್ತು,” ಎಂದು ನೀಲಂ ಬಜಾರ್ ಪ್ರದೇಶದ ನಿವಾಸಿ ಮತ್ತು ಮದರಸಾ ಜಾಮಿಯಾ ಉಲ್ ಉಲೂಮ್ ಫುರ್ಕಾನಾಯಾ ಕರೀಮ್ ಗಂಜ್ ನಲ್ಲಿ ಶಿಕ್ಷಕರಾಗಿರುವ ಬಾಸಿತ್ ತಿಳಿಸಿದ್ದಾರೆ. ಮೈಕ್ ನಲ್ಲಿ ಘೋಷಣೆಯನ್ನು ಕೇಳಿದ ನಂತರ ಬಹುತೇಕ ಮುಸ್ಲಿಂ ನಿವಾಸಿಗಳೇ ಆಗಿರುವ ಆ ಪ್ರದೇಶದ ಜನರು ಕೊಳಕ್ಕೆ ಧಾವಿಸಿ, ಈಜುತ್ತಾ ಕಾರಿನ ಕಿಟಕಿಗಳನ್ನು ಒಡೆದು, ಏಳು ಮಂದಿ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಕೆಲವೇ ನಿಮಿಷಗಳಲ್ಲಿ ವಾಹನ ಸಂಪೂರ್ಣವಾಗಿ ಮುಳುಗಿತು ಎಂದು India Today NE ವರದಿ ಮಾಡಿದೆ. ಸ್ಥಳೀಯ ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ಅವರು ಬಾಸಿತ್ ಅವರ ಕಾರ್ಯವನ್ನು ಕೊಂಡಾಡಿದರು. ಇದು ನಿಜವಾದ ಮಾನವೀಯತೆಯ ಉದಾಹರಣೆ. ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದು, ಎಂದರು. ತ್ರಿಪುರಾದ ನಿವಾಸಿಗಳಾದ ಈ ಪ್ರಯಾಣಿಕರು ಸಿಲ್ಚಾರ್ ನಿಂದ ತಮ್ಮ ಮನೆಗೆ ಮರಳುವಾಗ ಈ ಘಟನೆ ಸಂಭವಿಸಿದೆ. ರಕ್ಷಣೆಯ ನಂತರ ಅವರಿಗೆ ಬೇರೆ ವಾಹನಗಳ ಮೂಲಕ ಸುರಕ್ಷಿತವಾಗಿ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದು ಬಂದಿದೆ. ಘಟನೆಯ ನಂತರ ಸ್ಥಳೀಯ ಬಿಜೆಪಿ ನಾಯಕ ಇಕ್ಬಾಲ್ ಅವರು ಬಾಸಿತ್ ಅವರನ್ನು ಭೇಟಿ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದರು. ಪೊಲೀಸರು ಘಟನೆಯ ವಿವರಗಳನ್ನು ಸಂಗ್ರಹಿಸಿದ್ದು, ಬಾಸಿತ್ ಅವರಿಗೆ ಅಧಿಕೃತ ಗೌರವ ಅಥವಾ ಪ್ರಶಸ್ತಿ ನೀಡಲಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ನೂತನ ಮೀಸಲಾತಿ ಅನ್ವಯವೇ ನೇಮಕಾತಿ : ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟನೆ
ಬೆಂಗಳೂರು : ಸರಕಾರವು ಸೂಕ್ತ ಹೋರಾಟದ ಮೂಲಕ ನೂತನ ಮೀಸಲಾತಿ ಸೂತ್ರವನ್ನು ಜಾರಿಗೊಳಿಸಿ ಅದರ ಅನ್ವಯವೇ ನೇಮಕಾತಿಯನ್ನು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧರಣಿ ನಡೆಯುತ್ತಿರುವ ವಿಚಾರ ಸಂಬಂಧ ಸೋಮವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದ ಮಹದೇವಪ್ಪ ಅವರು, ‘ಹಳೇ ಮೀಸಲಾತಿಯಂತೆ ಖಾಲಿ ಹುದ್ದೆಗಳು ಭರ್ತಿ’ ಎಂದು ಹೇಳಿರುವುದು ವಾರ್ತಾಭಾರತಿಯಲ್ಲಿ ಪ್ರಕಟವಾಗಿತ್ತು. ಈ ಸಂಬಂಧ ಮಂಗಳವಾರ ಸ್ಪಷ್ಟನೆ ನೀಡಿರುವ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವಾಗ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ನಮ್ಮ ಸರಕಾರವು ಬದ್ಧವಾಗಿದ್ದು, ಇದಕ್ಕೆ ಪೂರಕವಾದ ಕಾನೂನು ಹೋರಾಟವನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವಾಗ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ನಮ್ಮ ಸರ್ಕಾರವು ಬದ್ಧವಾಗಿದ್ದು, ಇದಕ್ಕೆ ಪೂರಕವಾದ ಕಾನೂನು ಹೋರಾಟವನ್ನು ಮಾಡುತ್ತಿದೆ. ಸರ್ಕಾರವು ಸೂಕ್ತ ಹೋರಾಟದ ಮೂಲಕ ನೂತನ ಮೀಸಲಾತಿ ಸೂತ್ರವನ್ನು ಜಾರಿಗೊಳಿಸಿ ಅದರ ಅನ್ವಯವೇ ನೇಮಕಾತಿಯನ್ನು ಮಾಡುವ ಉದ್ದೇಶವನ್ನು… pic.twitter.com/YYtO7gOy0T — Dr H C Mahadevappa(Buddha Basava Ambedkar Parivar) (@CMahadevappa) December 2, 2025
ಸೂರಜ್ ರೇವಣ್ಣಗೆ ಬಿಗ್ ಶಾಕ್: 'ಕ್ಲೀನ್ ಚಿಟ್' ತಿರಸ್ಕರಿಸಿದ ಕೋರ್ಟ್; ಮರುತನಿಖೆಗೆ ಆದೇಶ
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಮರು ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಸೂರಜ್ ರೇವಣ್ಣಗೆ ಭಾರೀ ಹಿನ್ನಡೆಯುಂಟಾಗಿದೆ. ಪ್ರಕರಣದ ಮರು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಬಳ್ಳಾರಿ ನಗರದ ಸರಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು: ಸಚಿವ ಭೈರತಿ ಸುರೇಶ್
ಬಳ್ಳಾರಿ,ಡಿ.2: ಗಣಿನಾಡು ಬಳ್ಳಾರಿ ನಗರದ ಸರಕಾರಿ ಜಾಗ, ರಸ್ತೆ ಮತ್ತು ಉದ್ಯಾನಗಳ ಒತ್ತುವರಿಯನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸಬೇಕೆಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಕುಂದುಕೊರತೆಗಳನ್ನು ಆಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಭೈರತಿ ಸುರೇಶ್, ನಗರದಲ್ಲಿ ಪಾರ್ಕ್, ರಸ್ತೆ ಮತ್ತು ಸರಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ಅಂತಹ ಒತ್ತುವರಿ ಪ್ರಕರಣಗಳನ್ನು ಪತ್ತೆ ಮಾಡಿ ಒಂದು ತಿಂಗಳೊಳಗಾಗಿ ಆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದರು. ಸರಕಾರಿ ಜಾಗವನ್ನು ಭೂಗಳ್ಳರಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಸಮರ್ಥರಿರುವ ವಕೀಲರನ್ನು ನೇಮಕ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ್ದೇನೆ ಎಂದು ಭೈರತಿ ಸುರೇಶ್ ಹೇಳಿದರು. ನಗರದೆಲ್ಲೆಡೆ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಕಲುಷಿತ ನೀರು ಪೂರೈಕೆ ಪ್ರಕರಣಗಳು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ತೆರಿಗೆ ಸಂಗ್ರಹ ಹೆಚ್ಚಳ ಮಾಡುವ ಬಗ್ಗೆ ಗಮನಹರಿಸಬೇಕು. ಕಟ್ಟುನಿಟ್ಟಾಗಿ ವಾಣಿಜ್ಯ ಕಟ್ಟಡಗಳಿಂದ ತೆರಿಗೆ ವಸೂಲು ಮಾಡಬೇಕು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಮತ್ತು ಕಟ್ಟಡ ಪರವಾನಗಿಯನ್ನು ತ್ವರಿತವಾಗಿ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಅಮೃತ್ 2.0 ಯೋಜನೆಯಡಿ ಉದ್ಯಾನಗಳು ಮತ್ತು ಕೆರೆಗಳನ್ನು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇ-ಖಾತಾ ಅಭಿಯಾನವನ್ನು ಇನ್ನಷ್ಟು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಪ್ರತಿಯೊಬ್ಬ ಅಧಿಕಾರಿಯೂ ವಾರ್ಡ್ ಗಳಿಗೆ ಭೇಟಿ ನೀಡಿ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಬೇಕು. ಹೀಗೆ ಯಾವ ವಾರ್ಡಿಗೆ ಭೇಟಿ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯುಕ್ತರನ್ನು ಒಳಗೊಂಡ ವಾಟ್ಸಪ್ ಗ್ರೂಪ್ ಆರಂಭಿಸಬೇಕು ಮತ್ತು ಆಯಾ ವಾರ್ಡ್ ನ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಸುರೇಶ್ ಸೂಚನೆ ನೀಡಿದರು. ಬೀದಿ ನಾಯಿ ನಿಯಂತ್ರಣಕ್ಕೆ ಸಂತಾನ ನಿಯಂತ್ರಣ ಲಸಿಕೆ ಹಾಕಿಸಬೇಕು ಮತ್ತು ಬಿಡಾಡಿ ದನಗಳನ್ನು ಗೋಶಾಲೆಗೆ ಹಾಕಬೇಕು. ಇಂದಿರಾ ಕ್ಯಾಂಟೀನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸುರೇಶ್ ಸೂಚನೆ ನೀಡಿದರು. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಆದಷ್ಟೂ ಬೇಗ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. 127 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಜಿಎನ್ವಿವೈ ಕಾಮಗಾರಿಗಳನ್ನು ಕೈಗೊಳ್ಳಬೇಕು. ಆಲಪುರ ಕೆರೆ ಮತ್ತು ಬಂಡಿಕೆರೆಯನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರದಿಂದ 200 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭೈರತಿ ಸುರೇಶ್ ಹೇಳಿದರು. ಸಭೆಯಲ್ಲಿ ಸಂಸದ ಈ.ತುಕಾರಾಂ, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯುಲು, ಉಪಮೇಯರ್ ಮುಬೀನಾ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಂಡುರಾಸ್ ನ ಮಾಜಿ ಅಧ್ಯಕ್ಷರಿಗೆ ಟ್ರಂಪ್ ಕ್ಷಮಾದಾನ: ಅಮೆರಿಕದ ಜೈಲಿನಿಂದ ಬಿಡುಗಡೆ
ವಾಶಿಂಗ್ಟನ್,ಡಿ.2: ಅಮೆರಿಕಕ್ಕೆ 400 ಟನ್ ಕೊಕೇನ್ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡಲು ನೆರವಾದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹೊಂಡುರಾಸ್ ನ ಮಾಜಿ ಅಧ್ಯಕ್ಷ ಜುವಾನ್ ಒರ್ಲಾಂಡೊ ಹೆರ್ನಾಂಡೆಝ್ ಅವರಿಗೆ ಅಧ್ಯಕ್ಷ ಡೊನಾಲ್ಡ್ ಕ್ಷಮಾದಾನ ಘೋಷಿಸಿದ್ದಾರೆ. ಅಮೆರಿಕದ ವೆಸ್ಟ್ ವರ್ಜೀನಿಯಾದಲ್ಲಿರುವ ಜೈಲಿನಿಂದ ಜುವಾನ್ ಒರ್ಲಾಂಡೊ ಬಿಡುಗಡೆಗೊಂಡಿದ್ದಾರೆ ಹಾಗೂ ಮತ್ತೊಮ್ಮೆ ಸ್ವತಂತ್ರ ವ್ಯಕ್ತಿಯಾಗಿದ್ದಾರೆ ಎಂದು ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಈ ಮಧ್ಯೆ ಅಮೆರಿಕದ ಕಾರಾಗೃಹಗಳ ಇಲಾಖೆಯು, ಜುವಾನ್ ಒರ್ಲಾಂಡೊ ಅವರನ್ನು ಬಿಡುಗಡೆಗೊಳಿಸಿರುವ ಛಾಯಾಚಿತ್ರವನ್ನು ಕೂಡಾ ಪ್ರಕಟಿಸಿದೆ. ಕೆರಿಬಿಯನ್ ಸಮುದ್ರದಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ಮಾಡುತ್ತಿವೆಯೆನ್ನಲಾದ ನೌಕೆಗಳ ಮೇಲೆ ಅಮೆರಿಕ ಅಧ್ಯಕ್ಷರು ಏಕಕಾಲದಲ್ಲಿ ಬಾಂಬ್ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಟ್ರಂಪ್ ಅವರು ಈ ವಿವಾದಾತ್ಮಕ ಕ್ಷಮಾದಾನವನ್ನು ಘೋಷಿಸಿದ್ದಾರೆ. ಈ ಮಧ್ಯೆ ಹೊಂಡುರಾಸ್ ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜುವಾನ್ ಒರ್ಲಾಂಡೊ ಅವರ ಪಕ್ಷವನ್ನು ಟ್ರಂಪ್ ಬೆಂಬಲಿಸುತ್ತಿದ್ದಾರೆ. ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಮಾದಕದ್ರವ್ಯ ಕಳ್ಳಸಾಗಣೆ ಜಾಲದ ವಿರುದ್ಧ ಟ್ರಂಪ್ ಸಮರವನ್ನು ಘೋಷಿಸಿರುವ ಸಂದರ್ಭದಲ್ಲೇ ಒಲಾಂಡೊ ಅವರಿಗೆ ಕ್ಷಮಾದಾನ ಘೋಷಿಸುವ ಮೂಲಕ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ.
ಕೇರಳ ಪಂಚಾಯತಿ ಚುನಾವಣೆ | ಮುನ್ನಾರ್ ನಿಂದ Sonia Gandhiಯನ್ನು ಕಣಕ್ಕಿಳಿಸಿದ BJP!
ತಿರುವನಂತಪುರಂ: ಕೇರಳದ ಮುನ್ನಾರ್ ನಿಂದ ಸೋನಿಯಾ ಗಾಂಧಿ ಪಂಚಾಯತಿ ಚುನಾವಣೆಗಿಳಿದಿದ್ದಾರೆ! ಹೌದು, ಸೋನಿಯಾ ಗಾಂಧಿಯೇ ಮುನ್ನಾರ್ ನಿಂದ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ!! ಇನ್ನೂ ಸ್ವಾರಸ್ಯಕರ ಸಂಗತಿಯೆಂದರೆ, ಅವರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ!!! ಹಾಗಾದರೆ, ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾದ ಸೋನಿಯಾ ಗಾಂಧಿಯೇ ಮುನ್ನಾರ್ ನಿಂದ ಪಂಚಾಯತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆಯೆ? ಸ್ವಲ್ಪ ತಡೆಯಿರಿ! ಕೇರಳದ ಗುಡ್ಡಗಾಡು ಪ್ರದೇಶವಾದ ಮುನ್ನಾರ್ ನ ನಲ್ಲತನ್ನಿ ವಾರ್ಡ್ ನಿಂದ (ವಾರ್ಡ್ ನಂ. 16) ಸೋನಿಯಾ ಗಾಂಧಿ ಎಂಬ ಹೆಸರಿನ ಮಹಿಳೆಯನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿಯಂತೂ ಅಲ್ಲ; ಬದಲಿಗೆ, ನಲ್ಲತನ್ನಿ ಕಲ್ಲರ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 34 ವರ್ಷದ ಸೋನಿಯಾ ಗಾಂಧಿ ಆಗಿದ್ದಾರೆ! ಇವರಿಬ್ಬರ ರಾಜಕೀಯ ಮತ್ತು ಮಾರ್ಗಗಳೆರಡೂ ವಿಭಿನ್ನವಾಗಿದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಥನವಿದೆ. ಸ್ಥಳೀಯ ಕೂಲಿ ಕಾರ್ಮಿಕ ಹಾಗೂ ಕಾಂಗ್ರೆಸ್ ನಾಯಕ ದಿ. ದುರೆ ರಾಜ್ ಎಂಬುವವರಿಗೆ ಹೆಣ್ಣು ಮಗುವೊಂದು ಜನಿಸಿತು. ಸೋನಿಯಾ ಗಾಂಧಿ ಬಗೆಗಿನ ಆರಾಧನೆ ಅಥವಾ ಬಹುಶಃ ಹೆಮ್ಮೆಯಿಂದ ಆ ನವಜಾತ ಶಿಶುವಿಗೆ ದುರೆ ರಾಜ್ ಅವರು ಸೋನಿಯಾ ಗಾಂಧಿಯವರ ಹೆಸರನ್ನೇ ನಾಮಕರಣ ಮಾಡಿದರು. ಆ ಮಗುವೇ ಇಂದು ಬೆಳೆದು, ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತಿ ಚುನಾವಣಾ ಕಣಕ್ಕಿಳಿದಿದೆ! ಇಲ್ಲಿಯವರೆಗೆ ಇಡುಕ್ಕಿಯ ಗುಡ್ಡಗಾಡಿನಲ್ಲಿ ಈ ಹೆಸರು ಚೇತೋಹಾರಿ ಕಾಕತಾಳೀಯ ಮಾತ್ರವಾಗಿತ್ತು. ಆದರೆ, ಬಿಜೆಪಿಯ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಸುಭಾಶ್ ರನ್ನು ಸೋನಿಯಾ ಗಾಂಧಿ ವರಿಸಿದ ನಂತರ, ಅವರ ಜೀವನ ಮಾರ್ಗವೇ ಬದಲಾಯಿತು. ಈ ಹಿಂದೆ ಹಳೆಯ ಮುನ್ನಾರ್ ಮುಲಕ್ಕಾಡ್ ಕ್ಷೇತ್ರದಿಂದ ಉಪ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಸುಭಾಶ್ ರನ್ನು ವಿವಾಹವಾದ ಬಳಿಕ ಸೋನಿಯಾ ಗಾಂಧಿ ಕೂಡಾ ಬಿಜೆಪಿಯ ತೆಕ್ಕೆಗೆ ಜಾರಿದರು. ಆ ಮೂಲಕ, ತನ್ನ ಹೆಸರಿನ ಪರಂಪರೆಯನ್ನು ರಾಜಕೀಯ ಚದುರಂಗದಾಟದಲ್ಲಿ ಇದೀಗ ಪಣಕ್ಕೊಡ್ಡಿದ್ದಾರೆ. ಇದೀಗ ಅವರು ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿರುವುದರಿಂದ, ಅವರ ಬಗೆಗಿನ ಕುತೂಹಲವೂ ಗರಿಗೆದರಿದೆ. ಅವರ ಎದುರಾಳಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುಳಾ ರಮೇಶ್ ಹಾಗೂ ಸಿಪಿಎಂ ಅಭ್ಯರ್ಥಿ ವಲಾರ್ಮತಿ ಅಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕಿ ಸೋನಿಯಾ ಗಾಂಧಿಯ ಹೆಸರನ್ನೇ ಹೊಂದಿರುವ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ, ಇದೀಗ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಸೆಣಸಬೇಕಾಗಿ ಬಂದಿದೆ.
ಸ್ಟಾರ್ಟಪ್ ಹೂಡಿಕೆಯಲ್ಲಿ ಕುಸಿತ ಎಂದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಕೊಟ್ಟ ಉತ್ತರವೇನು?
2025ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತದ ಟೆಕ್ ಸ್ಟಾರ್ಟ್ಅಪ್ ನಿಧಿಯಲ್ಲಿ ಕರ್ನಾಟಕವು ಶೇ 35ಕ್ಕಿಂತ ಹೆಚ್ಚು ಹಣವನ್ನು ಹೊಂದಿದ್ದು, ಎಲ್ಲ ರಾಜ್ಯಗಳಲ್ಲಿ ನಮ್ಮನ್ನು ನಂಬರ್ 1 ಸ್ಥಾನದಲ್ಲಿರಿಸಿದೆ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹೀಗಿರುವಾಗ ರಾಜ್ಯ ಬಿಜೆಪಿಗೆ ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ. ದಯವಿಟ್ಟು ನಿಮ್ಮ ಐಟಿ ಸೆಲ್ಗೆ ಕನಿಷ್ಠ ವೇತನವನ್ನು ನೀಡಲು ಪ್ರಾರಂಭಿಸಿ.
ʻಬೆಳಗ್ಗೆ ಏಳೋದು ದಿನವಿಡೀ ಕೆಲಸ ಮಾಡೋದು ಹಿಂಸೆ, ರಾಜೀನಾಮೆ ಕೊಡ್ತೇನೆʼ; ಬೆಂಗಳೂರು ಯುವಕನ ನೋವಿನ ಕತೆ ವೈರಲ್
ಬೆಂಗಳೂರಿನಲ್ಲಿ ಇಪ್ಪತ್ತೆರಡು ವರ್ಷದ ಯುವಕನೊಬ್ಬ ನಾನು ಕೆಲಸ ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಒಲವಿಲ್ಲ, ಬದಲಾಗಿ ದ್ವೇಷವಿದೆ. ರಾಜೀನಾಮೆ ನೀಡುತ್ತೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿದೆ. ಆತನ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ, ಸೋಮವಾರ ಮತ್ತೆ ವಿಡಿಯೋ ಹಂಚಿಕೊಂಡಿರುವ ಆತ ನನಗೆ ಆಫೀಸಿಗೆ ತೆರಳಲು ಭಯವಾಗುತ್ತಿದೆ. ಕೆಲಸ ಬಿಡಬೇಕಾ ಬೇಡವಾ ಎಂದು ತಿಳಿಯುತ್ತಿಲ್ಲ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರಿನ 5 ನಗರ ಪಾಲಿಕೆಗಳ 14 ವಾರ್ಡ್ಗಳ ಹೆಸರು ಬದಲಾವಣೆ; ಆಕಾಶ್ ವಾರ್ಡ್ಗೆ ಕೊಕ್, ಹೊಸ ಹೆಸರೇನು?
ಬೆಂಗಳೂರು ಮಹಾನಗರ ಪ್ರದೇಶದ 5 ನಗರ ಪಾಲಿಕೆಗಳಲ್ಲಿ 14 ವಾರ್ಡ್ಗಳ ಹೆಸರು ಬದಲಿಸಲಾಗಿದೆ. ಕೆಲವು ವಾರ್ಡ್ಗಳ ಗಡಿಗಳಲ್ಲೂ ಮಾರ್ಪಾಡು ಮಾಡಲಾಗಿದೆ. ಯಲಹಂಕದ 'ಆಕಾಶ್ ವಾರ್ಡ್' ಹೆಸರು ಬದಲಾಗಿ 'ಏರೋಸಿಟಿ ವಾರ್ಡ್' ಎಂದು ಮರುನಾಮಕರಣಗೊಂಡಿದೆ. ಕೆಂಗೇರಿ, ಕುಮಾರಸ್ವಾಮಿ ಲೇಔಟ್, ಟಿ.ಸಿ. ಪಾಳ್ಯ, ಮೇಡಹಳ್ಳಿ, ಚಿಕ್ಕ ದೇವಸಂದ್ರ, ಶಿವನಸಮುದ್ರ, ಇಂದಿರಾನಗರ, ನ್ಯೂ ತಿಪ್ಪಸಂದ್ರ ವಾರ್ಡ್ಗಳ ಹೆಸರು ಮತ್ತು ಗಡಿಗಳಲ್ಲಿ ಬದಲಾವಣೆ ಮಾಡಲಾಗಿದೆ.
ಬ್ಯಾಂಕ್ಗಳಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯ: ಆರ್ಬಿಐನಿಂದ ಎಲ್ಲ ಬ್ಯಾಂಕ್ಗಳಿಗೆ ಮಾರ್ಗಸೂಚಿ
ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸುಲಭ ಸೇವೆ ಒದಗಿಸಲು ತ್ರಿಭಾಷಾ ಸೂತ್ರ ಕಟ್ಟುನಿಟ್ಟಾಗಿ ಪಾಲಿಸಲು ಕೇಂದ್ರ ಸರಕಾರವು ನಿರ್ದೇಶನ ನೀಡಿದೆ. ಅರ್ಜಿಗಳು, ಪಾಸ್ಬುಕ್ಗಳು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಬೇಕು ಎಂದು ಹೇಳಿದೆ. ಸ್ಥಳೀಯ ಭಾಷೆಗಳಲ್ಲಿ ಸಂವಹನಕ್ಕೆ ಆದ್ಯತೆ ನೀಡಲು ಆರ್ಬಿಐ ಬ್ಯಾಂಕ್ಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
PMO | ಪ್ರಧಾನ ಮಂತ್ರಿ ಕಚೇರಿ ಇರುವ ನೂತನ ಸಂಕೀರ್ಣ ಇನ್ನು ಮುಂದೆ ‘ಸೇವಾ ತೀರ್ಥ’
ಹೊಸದಿಲ್ಲಿ, ಡಿ. 2: ಪ್ರಧಾನ ಮಂತ್ರಿ ಅವರ ಕಚೇರಿ ಇರುವ ಹೊಸ ಸಂಕೀರ್ಣವನ್ನು ‘ಸೇವಾ ತೀರ್ಥ’ ಎಂದು ಕರೆಯಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ನಿರ್ಮಾಣದ ಅಂತಿಮ ಹಂತದಲ್ಲಿರುವ ಈ ನೂತನ ಸಂಕೀರ್ಣಕ್ಕೆ ಈ ಹಿಂದೆ ಸೆಂಟ್ರಲ್ ವಿಸ್ತಾ ಮರು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ‘ಎಕ್ಸ್ಕ್ಯೂಟಿವ್ ಎಂಕ್ಲೇವ್’ ಎಂದು ಕರೆಯಲಾಗುತ್ತಿತ್ತು. ‘ಎಕ್ಸ್ಕ್ಯೂಟಿವ್ ಎಂಕ್ಲೇವ್’ ಪ್ರಧಾನ ಮಂತ್ರಿ ಕಚೇರಿ ಅಲ್ಲದೆ, ಸಂಪುಟ ಕಾರ್ಯಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯ ಹಾಗೂ ಇಂಡಿಯಾ ಹೌಸ್ ಅನ್ನು ಒಳಗೊಂಡಿರಲಿದೆ. ಇದು ಭೇಟಿ ನೀಡುವ ಗಣ್ಯರು ಉನ್ನತ ಮಟ್ಟದ ಮಾತುಕತೆ ನಡೆಸುವ ಸ್ಥಳವಾಗಲಿದೆ. ಸೇವಾ ತೀರ್ಥವು ಸೇವಾ ಮನೋಭಾವನ್ನು ಪ್ರತಿಬಂಬಿಸುವ ಹಾಗೂ ರಾಷ್ಟ್ರೀಯ ಆದ್ಯತೆಗಳು ರೂಪುಗೊಳ್ಳುವ ಕಾರ್ಯ ಸ್ಥಳವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಪಾಲರ ನಿವಾಸಗಳಾದ ರಾಜ ಭವನಗಳಿಗೆ ಕೂಡ ‘ಲೋಕಭವನ’ ಎಂದು ಮರು ನಾಮಕರಣ ಮಾಡಲಾಗುತ್ತಿದೆ.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ದಕ್ಷಿಣ ಕನ್ನಡ ಎಸ್ಪಿ ಬಳಿ ಸಮಗ್ರ ಮಾಹಿತಿ ಕೇಳಿದ ಕರ್ನಾಟಕ ಹೈಕೋರ್ಟ್
ಧರ್ಮಸ್ಥಳ ಧರ್ಮಾಧಿಕಾರಿಗಳ ವಿರುದ್ಧದ ಷಡ್ಯಂತ್ರದ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರ ಚಲನವಲನ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಅರ್ಜಿದಾರರು ಸಲ್ಲಿಸಿದ್ದ ದೂರುಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಲಾಗಿದೆ.
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ಭೈರತಿ ಸುರೇಶ್
ಬಳ್ಳಾರಿ: ಸಿಎಂ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆ ವಿಚಾರಣೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬೈರತಿ ಸುರೇಶ್, ಸಿಎಂ, ಡಿಸಿಎಂ ಇಬ್ಬರೂ ನಮ್ಮ ಪಕ್ಷದವರೇ ಆಗಿದ್ದಾರೆ. ಅವರು ಜೊತೆಯಾಗಿ ಬ್ರೇಕ್ ಫಾಸ್ಟ್ ಮಾಡಿದ್ರೆ ತಪ್ಪೇನು? ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಜೊತೆಗೆ ಬ್ರೇಕ್ ಫಾಸ್ಟ್ ಮಾಡಿದ್ರೆ ಚರ್ಚೆ ಮಾಡಬೇಕು. ನಮ್ಮ ಪಕ್ಷದವರ ಮನೆಗೆ ಹೋದರೆ ವಿಶೇಷ ಏನೂ ಇಲ್ಲ ಎಂದು ಹೇಳಿದರು. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ಹೈಕಮಾಂಡ್ ತೀರ್ಮಾನ ಮಾಡಿದರೆ ನಾಗೇಂದ್ರ ಕೂಡ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ, ಶಾಸಕ ಭರತ್ ರೆಡ್ಡಿ, ಶಾಸಕ ಕಂಪ್ಲಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಜೂನಿಯರ್ ಹಾಕಿ ವಿಶ್ವಕಪ್ | ಬಾಂಗ್ಲಾದೇಶ ವಿರುದ್ಧ ಜಯ, ಕ್ವಾರ್ಟರ್ ಫೈನಲ್ ಗೆ ಫ್ರಾನ್ಸ್
ಚೆನ್ನೈ, ಡಿ.2: ಬಾಂಗ್ಲಾದೇಶ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿರುವ ಫ್ರಾನ್ಸ್ ತಂಡವು 2025ರ ಆವೃತ್ತಿಯ ಎಫ್ಐಎಚ್ ಹಾಕಿ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಪಡೆದಿದೆ. ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡ ಈ ಸಾಧನೆ ಮಾಡಿದೆ. ‘ಎಫ್’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ದಕ್ಷಿಣ ಕೊರಿಯಾ ತಂಡವನ್ನು 3-1 ಅಂತರದಿಂದ ಮಣಿಸಿತು. ಈ ಗೆಲುವಿನ ಹೊರತಾಗಿಯೂ ಆಸ್ಟ್ರೇಲಿಯನ್ನರು ಕ್ವಾರ್ಟರ್ ಫೈನಲ್ ರೇಸ್ನಿಂದ ನಿರ್ಗಮಿಸಿದೆ. ನಿರಂತರ ಮಳೆಯ ನಡುವೆಯೂ ಚಿಲಿ ತಂಡವು ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡವನ್ನು 2-0 ಅಂತರದಿಂದ ಮಣಿಸಿತು. ಈ ಮೂಲಕ ಮೂರನೇ ಸ್ಥಾನ ಪಡೆಯಿತು. ಭಾರತ ಹಾಗೂ ಸ್ವಿಟ್ಸರ್ಲ್ಯಾಂಡ್ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯ ಮದುರೈನಲ್ಲಿ ನಡೆಯಲಿದೆ. ಜರ್ಮನಿ, ಅರ್ಜೆಂಟೀನ, ಸ್ಪೇನ್, ನೆದರ್ಲ್ಯಾಂಡ್ಸ್ ಹಾಗೂ ಫ್ರಾನ್ಸ್ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಪಡೆದಿವೆ. ನ್ಯೂಝಿಲ್ಯಾಂಡ್ ಕೂಡ ಅಂತಿಮ-8ರಲ್ಲಿ ಸ್ಥಾನ ಪಡೆದಿದೆ.
ಸಂಚಾರ ಸಾಥಿ ಆ್ಯಪ್: ಕೇಂದ್ರದ ತರ್ಕವನ್ನು ಪ್ರಶ್ನಿಸಿದ ತರೂರ್
ಹೊಸದಿಲ್ಲಿ,ಡಿ.2: ಮೊಬೈಲ್ ಫೋನ್ ತಯಾರಕರು ಎಲ್ಲ ನೂತನ ಹ್ಯಾಂಡ್ ಸೆಟ್ಗಳ ಮಾರಾಟಕ್ಕೆ ಮುನ್ನ ಅವುಗಳಲ್ಲಿ ಸಂಚಾರ ಸಾಥಿ ಆ್ಯಪ್ ನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ದೂರಸಂಪರ್ಕ ಇಲಾಖೆಯ ಆದೇಶವನ್ನು ಮಂಗಳವಾರ ಟೀಕಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಇಂತಹ ಸಾಧನಗಳು ಐಚ್ಛಿಕವಾಗಿರಬೇಕೇ ಹೊರತು ಅವುಗಳನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಿ ಹೇಳಿದರು. ನೂತನ ನೀತಿಯ ಕಡ್ಡಾಯ ಸ್ವರೂಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,’ನನ್ನ ಸಾಮಾನ್ಯ ಜ್ಞಾನದ ಪ್ರಕಾರ ಇಂತಹ ಆ್ಯಪ್ ಗಳು ಸ್ವಯಂಪ್ರೇರಿತವಾಗಿದ್ದರೆ ಉಪಯುಕ್ತವಾಗುತ್ತವೆ. ಅವುಗಳ ಅಗತ್ಯವಿರುವವರು ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಕಡ್ಡಾಯಗೊಳಿಸುವುದು ತೊಂದರೆದಾಯಕವಾಗುತ್ತದೆ’ ಎಂದರು. ಇಂತಹ ಕ್ರಮಗಳನ್ನು ಜಾರಿಗೊಳಿಸುವ ಮುನ್ನ ಅದರ ಹಿಂದಿನ ತಾರ್ಕಿಕತೆಯನ್ನು ಸರಕಾರವು ವಿವರಿಸಬೇಕು ಎಂದ ಅವರು, ‘ಸರಕಾರವು ಮಾಧ್ಯಮ ವರದಿಗಳ ಮೂಲಕ ಆದೇಶವನ್ನು ಹೊರಡಿಸುವ ಬದಲು ಸಾರ್ವಜನಿಕರಿಗೆ ಪ್ರತಿಯೊಂದನ್ನೂ ವಿವರಿಸಬೇಕು. ನಾವು ಚರ್ಚೆ ನಡೆಸುವ ಅಗತ್ಯವಿದೆ ಮತ್ತು ಅಲ್ಲಿ ಸರಕಾರವು ನಿರ್ಧಾರದ ಹಿಂದಿನ ತರ್ಕವನ್ನು ವಿವರಿಸಬೇಕು’ ಎಂದು ಹೇಳಿದರು.
ಡಿ.7ರಂದು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಉಡುಪಿಗೆ
ಉಡುಪಿ: ಪರ್ಯಾಯ ಪುತ್ತಿಗೆಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರ ನಟ ಹಾಗೂ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ. ಡಿ.7ರಂದು ಸಂಜೆ 4:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಪರಿಸರ, ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಪವನ್ ಕಲ್ಯಾಣ್ ಆಗಮಿಸುವರು ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ. ನ.8ರಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಉದ್ಘಾಟನಗೊಂಡ ಬೃಹತ್ ಗೀತೋತ್ಸವ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದಿದ್ದು, ವಿಶ್ವ ದಾಖಲೆಗೆ ಪಾತ್ರವಾದ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿರುವುದನ್ನು ಸ್ಮರಿಸಬಹುದು ಎಂದು ಮಠದ ಪ್ರಕಟನೆ ತಿಳಿಸಿದೆ.
ತಂದೆಯ ಪಾಲನೆ ಮಾಡದ ಮಗನಿಂದ ಆಸ್ತಿ ವಾಪಸ್: ತುಮಕೂರು ನ್ಯಾಯಾಲಯ ಮಹತ್ವದ ಆದೇಶ
ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ನೀಡಿದ್ದು, ವೃದ್ಧ ತಂದೆಯನ್ನು ಸರಿಯಾಗಿ ನೋಡಿಕೊಳ್ಳದ ಮಗನಿಂದ ಆಸ್ತಿಯನ್ನು ವಾಪಸ್ ಕೊಡಿಸಿದೆ. 2020ರಲ್ಲಿ ನೋಂದಾಯಿತ ದಾನಪತ್ರದ ಮೂಲಕ ಮಗನ ಹೆಸರಿಗೆ ವರ್ಗಾಯಿಸಿದ್ದ ಆಸ್ತಿಯನ್ನು, ಪಾಲನೆ ಮಾಡದ ಕಾರಣ ರದ್ದುಪಡಿಸಿ ತಂದೆಯ ಹೆಸರಿಗೆ ಖಾತೆ ಬದಲಾಯಿಸಲು ಆದೇಶಿಸಲಾಗಿದೆ.
ಸುರಕ್ಷತಾ ಪ್ರಮಾಣ ಪತ್ರವಿಲ್ಲದೆ ಪದೇ ಪದೇ ಹಾರಾಟ: Air India ವಿರುದ್ಧ ತನಿಖೆ ನಡೆಸಲಿರುವ DGCA
ಹೊಸದಿಲ್ಲಿ: ಸುರಕ್ಷತಾ ಮಾನದಂಡಗಳ ದಾಖಲೆಯಾದ ಮಾನ್ಯತೆ ಹೊಂದಿದ ವಾಯುಮೌಲ್ಯ ಪರಾಮರ್ಶೆ ಪ್ರಮಾಣ ಪತ್ರವಿಲ್ಲದೆ ಎಂಟು ಬಾರಿ ತನ್ನ ಎ-320 ಏರ್ ಬಸ್ ವಿಮಾನದ ಹಾರಾಟ ನಡೆಸಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನ ಯಾನ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (DGCA) ಮಂಗಳವಾರ ಪ್ರಕಟಿಸಿದೆ. ಈ ವಿಮಾನವನ್ನು ಹಾರಾಟ ನಡೆಸದಂತೆ ಸೂಚಿಸಲಾಗಿದೆ ಹಾಗೂ ಸಂಬಂಧಿತ ಸಿಬ್ಬಂದಿಯನ್ನು ಸೇವಾ ಪಾಳಿಯಿಂದ ಹೊರಗಿಡಲಾಗಿದೆ ಎಂದೂ ಅದು ಹೇಳಿದೆ. ಆದರೆ, ಆ ವಿಮಾನ ಯಾವ ಮಾದರಿಯದ್ದು ಹಾಗೂ ಅದರ ತಯಾರಕರು ಯಾರು ಎಂಬುದರ ಕುರಿತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆ ವಿಮಾನವು ಸಿಂಗಲ್ ಇಂಜಿನ್ ಏರ್ಬಸ್ ವಿಮಾನ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಇತ್ತೀಚಿನ ಸುರಕ್ಷತಾ ಲೋಪವಾಗಿದೆ. ಈ ಹಿಂದೆ ಕೂಡಾ ಸಿಬ್ಬಂದಿಗಳ ಆಲಸ್ಯಕಾರಿ ನಿರ್ವಹಣೆ ಮತ್ತು ತರಬೇತಿ ಸೇರಿದಂತೆ ವಿವಿಧ ಲೋಪಗಳಿಗಾಗಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಎಚ್ಚರಿಕೆ ನೀಡಿತ್ತು.
Pakistan | ಜೈಲಿನಲ್ಲಿ ಜೀವಂತವಾಗಿರುವ ಇಮ್ರಾನ್ ಖಾನ್ ಸಹೋದರಿಯೊಂದಿಗೆ 20 ನಿಮಿಷಗಳ ಭೇಟಿಯ ವೇಳೆ ಹೇಳಿದ್ದೇನು?
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಿದ್ದು, ನನ್ನ ಬಂಧನ ಹಾಗೂ ಈಗಿನ ಪರಿಸ್ಥಿತಿಗೆ ಕಾರಣವಾಗಿರುವ, ಸಂಪೂರ್ಣ ಸೇನಾ ನಿಯಂತ್ರಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಝರ್ದಾರಿ ಹಾಗೂ ತಮಗೆ(ಮುನೀರ್) ಜೀತಾವಧಿ ರಕ್ಷಣೆಯನ್ನು ಖಾತರಿಪಡಿಸಲು ದೇಶದ ಸಂವಿಧಾನವನ್ನು ಮರು ರಚಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಇಮ್ರಾನ್ ಖಾನ್ರ ಸಹೋದರಿ ಡಾ. ಉಝ್ಮಾ ಖಾನುಂ ಮಂಗಳವಾರ ತಿಳಿಸಿದ್ದಾರೆ. ತಮ್ಮ ಸಹೋದರ ಇಮ್ರಾನ್ ಖಾನ್ರೊಂದಿಗೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಇಪ್ಪತ್ತು ನಿಮಿಷಗಳ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಉಝ್ಮಾ ಖಾನುಂ, ದೇವರ ದಯೆಯಿಂದ ಆತ ಚೆನ್ನಾಗಿದ್ದಾನೆ. ಆದರೆ, ತನಗೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಅತ ವ್ಯಗ್ರನಾಗಿದ್ದಾನೆ. ಇಡೀ ದಿನ ಆತನನ್ನು ಆತನ ಕೋಣೆಯಲ್ಲಿ ಕೂಡಿ ಹಾಕಲಾಗಿರುತ್ತದೆ. ಕಡಿಮೆ ಅವಧಿಗೆ ಮಾತ್ರ ಹೊರಗೆ ಬರಲು ಅವಕಾಶ ನೀಡಲಾಗುತ್ತಿದೆ ಹಾಗೂ ಯಾರೊಂದಿಗೆ ಸಂಭಾಷಿಸಲು ಅವಕಾಶ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಆಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಸೇನಾ ಮುಖ್ಯಸ್ಥ ಅಸೀಂ ಮುನೀರ್ ಸೂಚನೆಯ ಮೇರೆಗೆ ಹತ್ಯೆಗೈಯ್ಯಲಾಗಿದೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹರಡಿದ ಪರಿಣಾಮ, ಇಮ್ರಾನ್ ಖಾನ್ ಹಾಗೂ ಅವರ ಸಹೋದರಿ ಡಾ. ಉಝ್ಮಾ ಖಾನುಂ ನಡುವೆ ಈ ಭೇಟಿ ನಡೆದಿದೆ.
ಮುಂದಿನ 5-10 ವರ್ಷಗಳಲ್ಲಿ ಮಹಾ ಯುದ್ಧ ನಡೆಯಲಿದೆ: ಎಲಾನ್ ಮಸ್ಕ್ ಎಚ್ಚರಿಕೆ
ಹೊಸದಿಲ್ಲಿ,ಡಿ.2: ಜಗತ್ತು ಶೀಘ್ರವೇ ಜಾಗತಿಕ ಸಂಘರ್ಷದಲ್ಲಿ ಸಿಲುಕಲಿದೆ ಎಂದು ಟೆಕ್ ಬಿಲಿಯಾಧೀಶ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಭವಿಷ್ಯ ನುಡಿದಿದ್ದಾರೆ. ಜಾಗತಿಕ ಆಡಳಿತದ ಮೇಲೆ ಪರಮಾಣು ತಡೆಗಟ್ಟುವಿಕೆಯ ಪರಿಣಾಮವನ್ನು ಎಕ್ಸ್ ನಲ್ಲಿ ಚರ್ಚಿಸಿದ ಬಳಕೆದಾರರೊಬ್ಬರಿಗೆ ಮಸ್ಕ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಹಂಟರ್ ಆ್ಯಷ್ ಎಂಬ ಎಕ್ಸ್ ಬಳಕೆದಾರರು, ಯುದ್ಧದ ಯಾವುದೇ ಬಾಹ್ಯ ಬೆದರಿಕೆಯಿಲ್ಲದೆ ವಿಶ್ವಾದ್ಯಂತ ಸರಕಾರಗಳು ನಿರುಮ್ಮಳವಾಗಿದ್ದು,ಆಡಳಿತದಲ್ಲಿ ಕಡಿಮೆ ಪರಿಣಾಮಕಾರಿಯಾಗಿವೆ ಎಂದು ಪ್ರತಿಪಾದಿಸಿದ್ದರು. ► ಯುದ್ಧ ಅನಿವಾರ್ಯ ಅಣ್ವಸ್ತ್ರಗಳು ಬಲಿಷ್ಠ ದೇಶಗಳ ನಡುವೆ ಯುದ್ಧವನ್ನು ಅಥವಾ ಯುದ್ಧದ ಬೆದರಿಕೆಯನ್ನೂ ತಡೆಯುತ್ತಿರುವುದರಿಂದ ಸರಕಾರಗಳು ಆಡಳಿತದಲ್ಲಿ ಜಡವಾಗಿವೆ. ಹೀಗಾಗಿ ಅವು ಗಂಭೀರವಾಗಿರಲು ಯಾವುದೇ ಬಾಹ್ಯ/ವಿಕಸನಶೀಲ/ಮಾರುಕಟ್ಟೆ ಒತ್ತಡಗಳು ಇಲ್ಲ ಎಂದು ಅವರು ಬರೆದಿದ್ದರು. ಇದಕ್ಕೆ ಸ್ಪಷ್ಟವಾಗಿ ಉತ್ತರಿಸಿರುವ ಮಸ್ಕ್,ಯುದ್ಧ ನಡೆಯುವುದು ಖಚಿತ. ಯಾವಾಗ ಎಂದು ನೀವು ಕೇಳಬಹುದು. ನನ್ನ ಪ್ರಕಾರ 2030ರೊಳಗೆ. ಯುದ್ಧ ಅನಿವಾರ್ಯ, ಐದು ವರ್ಷಗಳಲ್ಲಿ, ಹೆಚ್ಚೆಂದರೆ 10 ವರ್ಷಗಳಲ್ಲಿ ಅದು ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಮಸ್ಕ್ ತನ್ನ ಹೇಳಿಕೆಯ ಬಗ್ಗೆ ನಿರ್ದಿಷ್ಟವಾಗಿ ಅಥವಾ ವಿವರವಾಗಿ ಏನನ್ನೂ ಹೇಳಿಲ್ಲ, ತನ್ಮೂಲಕ ಶೀಘ್ರದಲ್ಲಿಯೇ ಏನು ಸಂಭವಿಸಲಿದೆ ಎಂಬ ಬಗ್ಗೆ ಎಕ್ಸ್ ಬಳಕೆದಾರರನ್ನು ಕತ್ತಲೆಯಲ್ಲಿ ಇರಿಸಿದ್ದಾರೆ. ಬಹುಶ ಸರಕಾರಗಳು ಶೀಘ್ರದಲ್ಲೇ ಎದುರಾಗಬಹುದಾದ ಭವಿಷ್ಯದ ಸಂಕಷ್ಟಕ್ಕೆ ಸಜ್ಜಾಗಲು ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಅಗತ್ಯವಾಗಬಹುದು ಎಂದು ಸೂಚಿಸಲು ಮಸ್ಕ್ ಈ ರೀತಿಯಲ್ಲಿ ಸೂಚಿಸಿರಬಹುದು. ಆದರೆ ಗಣ್ಯವ್ಯಕ್ತಿಯಾಗಿ ಮಸ್ಕ್ ಅವರ ಪ್ರಭಾವ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಡಿ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ಅವರ ಅನುಭವವನ್ನು ಪರಿಗಣಿಸಿ ಅವರ ಈ ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ.
ದೇವನಹಳ್ಳಿ | ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ
ದೇವನಹಳ್ಳಿ : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂಸ್ವಾಧೀನವನ್ನು ಕೂಡಲೇ ರದ್ದುಪಡಿಸಬೇಕು ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಮಂಗಳವಾರ 1,339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ರೈತರು ಚರ್ಚಿಸಿ, ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ ನಿಯಮಗಳನ್ನು ರೂಪಿಸಲು ಸಮಿತಿ ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಸಮಿತಿಯು ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, ಇದು ರೈತರ ಹಿತರಕ್ಷಣೆಯಲ್ಲ, ಬದಲಿಗೆ ಭೂಮಿ ನೀಡದ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ‘ಶಾಶ್ವತ ವಿಶೇಷ ಕೃಷಿ ವಲಯ'ದ ಹೆಸರಿನಲ್ಲಿ ರೈತರ ಕೃಷಿ ಭೂಮಿಯ ಮೌಲ್ಯವನ್ನು ಕುಗ್ಗಿಸಿ, ಅವರ ಮೇಲೆ ಒತ್ತಡ ಹೇರಿ ಭೂಮಿಯನ್ನು ಕಸಿಯುವ ಹುನ್ನಾರ ಎಂದು ಟೀಕಿಸಿದರು. ಹೋರಾಟಗಾರ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಸರಕಾರ ಯಾವುದೇ ರೀತಿಯ ನಿರ್ಬಂಧಗಳನ್ನು ಹೇರದೆ, 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಪ್ರಸ್ತುತ ಇರುವಂತೆ ಕೃಷಿ ವಲಯವನ್ನಾಗಿ ಮುಂದುವರಿಸಿ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು. ಹೋರಾಟದಲ್ಲಿ ಸಮಿತಿಯ ಮುಖಂಡ ನಲ್ಲಪನಹಳ್ಳಿ ನಂಜಪ್ಪ, ರೈತರಾದ ವೆಂಕಟಮ್ಮ, ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಶ್ಯಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್, ವೆಂಕಟೇಶ್, ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ, ಸೇರಿದಂತೆ 13ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.
ಮಂಗಳೂರು: ಮಂಗಳವಾರವೂ ಮುಷ್ಕರ ನಡೆಸಿದ ಬಿಸಿಯೂಟ ನೌಕರರು
ಮಂಗಳೂರು: ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತ, ಮಾಂಸ ಇಲ್ಲದಂತೆ ಮಾಡಿ ಅವರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಹೇಳಿದರು. ನಗರದ ಕ್ಲಾಕ್ ಟವರ್ ಮುಂದೆ ಬಿಸಿಯೂಟ ತಯಾರಕರ ಸಂಬಳ ಏರಿಕೆ, ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ಎರಡನೇ ದಿನದ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಕಳೆದ 2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಕನಿಷ್ಟ ಸಂಬಳವನ್ನೂ ಏರಿಸದಿರುವುದು ಯಾವ ಸೀಮೆಯ ಬೇಟಿ ಬಚಾವೋ ಎಂದು ಪ್ರಶ್ನಿಸಿದ ಅವರು ಕೇರಳ ಸರಕಾರ ಬಿಸಿಯೂಟ ಸಿಬ್ಬಂದಿಗಳಿಗೆ ದಿನಕ್ಕೆ 600 ರೂ. ಸಂಬಳ ನೀಡುತ್ತಿದ್ದರೂ ಈ ಬಿಜೆಪಿ, ಕಾಂಗ್ರೆಸ್ ಸರಕಾರಗಳಿಗೆ ಯಾಕೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಿ.ಕೆ. ಇಮ್ತಿಯಾಝ್ ಅಕ್ಷರ ದಾಸೋಹ ಸಂಘದ ಕಡಬ ತಾಲೂಕು ಕಾರ್ಯದರ್ಶಿ ಸುಲೋಚನ, ಡಿವೈಎಫ್ಐ ಮುಖಂಡ ಅಭಿಷೇಕ್ ಬೆಳ್ತಂಗಡಿ ಮಾತಾಡಿದರು. ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ, ಬೆಳ್ತಂಗಡಿ ತಾಲೂಕು ನಾಯಕಿಯರಾದ ಸುನೀತಾ, ವಿನೋದ, ಜಾನಕಿ ಸಿಐಟಿಯು ಮುಖಂಡರಾದ ಪ್ರಮೋದಿನಿ, ಅಕ್ಷರ ದಾಸೋಹ ಸಂಘದ ಮುಖಂಡರಾದ ಬಬಿತ, ಝರೀನ, ರೇಖಾ, ಭವಾನಿ, ಮಮತ, ಹೇಮಲತ ಕಡಬ ಉಪಸ್ಥಿತರಿದ್ದರು.
3 ಸಾವಿರ ವಾಣಿಜ್ಯ ವಾಹನ ಚಾಲನಾ ತರಬೇತಿದಾರರ ಪರವಾನಗಿ ರದ್ದತಿಗೆ ಆಮೆರಿಕ ಚಿಂತನೆ!
ಅಮೆರಿಕದಲ್ಲಿನ ಸಾವಿರಾರು ಭಾರತೀಯ ಟ್ರಕ್ ಚಾಲಕರಿಗೆ ಸಂಕಷ್ಟ
ಡಬ್ಲ್ಯುಎಫ್ಐ ಚುನಾವಣೆ ಪ್ರಶ್ನಿಸಿದ ಬಜರಂಗ್ ಪುನಿಯ, ವಿನೇಶ್ ಫೋಗಾಟ್ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಡಿ. 2: ರಾಷ್ಟ್ರೀಯ ಕುಸ್ತಿ ಒಕ್ಕೂಟ (ಡಬ್ಲುಎಫ್ಐ) 2023 ಡಿಸೆಂಬರ್ನಲ್ಲಿ ನಡೆಸಿದ ಚುನಾವಣೆಯನ್ನು ಪ್ರಶ್ನಿಸಿ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಹಾಗೂ ಸತ್ಯವೃತ ಕಾದಿಯಾನ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಳ್ಳಿ ಹಾಕಿದೆ. ಡಬ್ಲುಎಫ್ಐಗೆ ಆಗ ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಅನಿತ ಶ್ಯೋರಾಣಾ ಅವರನ್ನು ಸೋಲಿಸಿದ್ದರು. ಅನಿತಾ ಶ್ಯೋರಾಣಾ ಅವರಿಗೆ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಬೆಂಬಲ ನೀಡಿದ್ದರು. ನ್ಯಾಯಮೂರ್ತಿ ಮಿನಿ ಪುಷ್ಕರನಾ ನವೆಂಬರ್ 27ರಂದು ಪ್ರಕರಣದ ವಿಚಾರಣೆ ನಡೆಸಿದರು. ಪ್ರಕರಣ ವಿಚಾರಣೆಗೆ ಬಂದಾಗ ಅರ್ಜಿದಾರರು ಯಾರೂ ಹಾಜರಿರಲಿಲ್ಲ ಎಂಬುದನ್ನು ಅವರು ಗಮನಿಸಿದರು. ಹಿಂದಿನ ಎರಡು ವಿಚಾರಣೆಗಳಿಗೆ ಕೂಡ ಅವರು ಗೈರು ಹಾಜರಾಗಿದ್ದಾರೆ ಎಂದು ಅವರು ದಾಖಲಿಸಿದರು. ‘‘ಅರ್ಜಿದಾರರು ಪ್ರಸಕ್ತ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವ ಆಸಕ್ತಿ ಹೊಂದಿದಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ರಾಷ್ಟ್ರೀಯ ಕುಸ್ತಿ ಒಕ್ಕೂಟದ ಚುನಾವಣೆಯನ್ನು ನ್ಯಾಯಯುತ ಹಾಗೂ ಪಾರದರ್ಶಕ ವಿಧಾನದಲ್ಲಿ ನಡೆಸಿಲ್ಲ ಎಂದು ಆರೋಪಿಸಿ ಕುಸ್ತಿ ಪಟುಗಳು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚುನಾವಣಾ ಪ್ರಕ್ರಿಯೆಯ ಕಾರ್ಯ ವಿಧಾನದಲ್ಲಿ ಲೋಪಗಳು ಹಾಗೂ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು. ಅರ್ಜಿದಾರರು ನಿರಂತರ ಹಾಜರಾಗದೇ ಇರುವುದರಿಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
ಡಿ.6-7 ರಂದು ಉಡುಪಿಯಲ್ಲಿ ಕರಾವಳಿ ಭಜನಾ ಸಮಾವೇಶ
ಉಡುಪಿ: ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಉಡುಪಿಯ ಕನಕದಾಸ ಅಧ್ಯಯನ ಸಂಶೋದನಾ ಪೀಠ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋದನಾ ಕೇಂದ್ರಗಳ ಸಹಯೋಗದಲ್ಲಿ ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳನ್ನೊಳಗೊಂಡ ಭಜನಾ ಸಮಾವೇಶ ಡಿ.6 ಮತ್ತು 7ರಂದು ಉಡುಪಿಯಲ್ಲಿ ನಡೆಯಲಿದೆ. ಸಂತಕವಿ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಹಾಗೂ ಕಾರ್ಯಾನುಷ್ಠಾನ ಮಂಡಳಿ ಸದಸ್ಯೆ, ಕವಯಿತ್ರಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಎರಡು ದಿನಗಳ ಭಜನಾ ಸಮಾವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಒಟ್ಟು 13 ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾವೇಶ ಡಿ.6-7ರಂದು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಟಿ.ಮೋಹನದಾಸ ಪೈ ಅಮೃತ ಸೌಧ ಸಭಾಂಗಣದಲ್ಲಿ ನಡೆಯಲಿದೆ ಎಂದವರು ತಿಳಿಸಿದರು. ಭಾರತದ ಆರಾಧನಾ ಗಾಯನ ಕಲೆಗಳಲ್ಲಿ ಭಜನೆಗಳು ಬಹುಮುಖ್ಯವಾ ದುದು. ತತ್ವಪದಗಳೂ ಭಕ್ತಿಯ ಇನ್ನೊಂದು ಮಾರ್ಗವಾಗಿದೆ. ಇವುಗಳು ಆರಾಧನಾ ಹಾಗೂ ಆಚರಣೆಯ ಸಂದರ್ಭಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ದೇಸಿ ಸಂಸ್ಕೃತಿ ಸ್ವರೂಪದಲ್ಲಿರುವ ಭಜನೆಗಳು ಅಂತರಂಗ ಮತ್ತು ಬಹಿರಂಗ ಶುದ್ಧಿಗಳ ಆಶಯವನ್ನು ಒಳಗೊಂಡಿವೆ ಎಂದು ಡಾ. ಕಾತ್ಯಾಯಿನಿ ವಿವರಿಸಿದರು. ಡಿ.6ರಂದು ಬೆಳಗ್ಗೆ 10ಗಂಟೆಗೆ ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿ.ಎ.ವಿವೇಕ ರೈ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆಯ ಸಹಕುಲಪತಿ ಡಾ.ನಾರಾಯಣ ಸಭಾಹಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸಮಾರಂಭದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕ್, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಶ್ವನಾಥ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿರುವರು. ಡಿ.7ರಂದು ಉಡುಪಿಯ ಸಂಗೀತ, ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್. ಸಾಮಗ ಸಮಾರೋಪ ಭಾಷಣ ಮಾಡಲಿದ್ದಾರೆ. ರಮೇಶ ಕಲ್ಮಾಡಿ ಹಾಗೂ ಜ್ಯೋತಿ ದೇವಾಡಿಗರ ಸಂಯೋಜನೆಯಲ್ಲಿ ನಡೆಲಿರುವ ಭಜನಾ ಮೇಳದಲ್ಲಿ 13 ಭಜನಾ ತಂಡಗಳು ಭಜನೆಗಳನ್ನು ಹಾಡಲಿವೆ. ಕೊನೆಯಲ್ಲಿ ಸಂವಾದವೂ ನಡೆಯಲಿದೆ ಎಂದೂ ಡಾ.ಕಾತ್ಯಾಯಿನಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ರವಿರಾಜ್ ಎಚ್.ಪಿ., ಉಡುಪಿ ಕನಕದಾಸ ಅಧ್ಯಯನ ಸಂಶೋದನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, ಡಾ.ಅರುಣ್ಕುಮಾರ್ ಉಪಸ್ಥಿತರಿದ್ದರು.

24 C