SENSEX
NIFTY
GOLD
USD/INR

Weather

30    C
...

ಬಜೆಟ್‌ ನಲ್ಲಿ ಮುಸ್ಲಿಂರ ಓಲೈಕೆ ; ಸಿಟಿ ರವಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ

ಸಿಟಿ ರವಿ ಅವರ 'ಬಜೆಟ್‌ನಲ್ಲಿ ಮುಸ್ಲಿಮರ ಓಲೈಕೆ' ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರ ಜನಸಂಖ್ಯೆ ಶೇ. 40 ರಷ್ಟಿದ್ದು, ಆ ಪ್ರಮಾಣಕ್ಕೆ ಹೋಲಿಸಿದರೆ ಬಜೆಟ್‌ನಲ್ಲಿ ಅವರಿಗೆ ನೀಡಿದ ಅನುದಾನ ಕಡಿಮೆಯೇ ಹೊರತು ಹೆಚ್ಚಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಿ.ಟಿ. ರವಿ ಅಥವಾ ವಿಜಯೇಂದ್ರ ಅವರು ಬಜೆಟ್ ಪ್ರತಿಗಳನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಟೀಕಿಸಿದರು. ನಾಲ್ಕುವರೆ ಗಂಟೆಗಳ ಕಾಲ ಬಜೆಟ್ ಮಂಡಿಸಿದ ತಮಗೆ ಅದರ ಸಂಪೂರ್ಣ ಅರಿವಿದೆ ಎಂದಿದ್ದಾರೆ.

ವಿಜಯ ಕರ್ನಾಟಕ 4 Apr 2026 1:07 pm

ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ: NCERTಗೆ 'ಡೀಮ್ಡ್ ಯೂನಿವರ್ಸಿಟಿ' ಸ್ಥಾನಮಾನ

ನವದೆಹಲಿ: ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯ ಅತ್ಯುನ್ನತ ಸಂಸ್ಥೆಯಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಕೇಂದ್ರ ಸರ್ಕಾರವು ಅಧಿಕೃತವಾಗಿ 'ಡೀಮ್ಡ್ ಯೂನಿವರ್ಸಿಟಿ' ಸ್ಥಾನಮಾನವನ್ನು ನೀಡಿದೆ. ಇದು ದೇಶದ ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ವಿಭಾಗದಲ್ಲಿ ಒಂದು ಬೃಹತ್ ಮತ್ತು ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಿದೆ. ವಿಶ್ವವಿದ್ಯಾಲಯ ಧನಸಹಾಯ

ಒನ್ ಇ೦ಡಿಯ 4 Apr 2026 1:02 pm

ಒಂದೇ ದಿನದಲ್ಲಿ ಅಮೆರಿಕದ ಎರಡು ಯುದ್ಧವಿಮಾನವನ್ನು ಹೊಡೆದುರುಳಿಸಿದ ಇರಾನ್; ವರದಿ

ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳಿಗೆ ಹಾನಿ

ವಾರ್ತಾ ಭಾರತಿ 4 Apr 2026 1:01 pm

ಇಸ್ಲಾಮಾಬಾದ್‌ ನಲ್ಲಿ US ಅಧಿಕಾರಿಗಳ ಭೇಟಿಗೆ ಇರಾನ್ ನಕಾರ: ಸಂಧಾನ ಮಾತುಕತೆ ಫೇಲ್, ಪಾಕಿಸ್ತಾನಕ್ಕೆ ಭಾರಿ ಮುಖಭಂಗ!

ಮಧ್ಯಪ್ರಾಚ್ಯದ ಸಂಘರ್ಷವನ್ನು ಶಮನಗೊಳಿಸುವಲ್ಲಿ ಅಮೆರಿಕಾ ಹಾಗೂ ಇರಾನ್‌ ನಡುವೆ ರಾಜತಾಂತ್ರಿಕ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ಜಾಗತಿಕವಾಗಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸಿದ್ದ ಪಾಕ್‌ ಭಾರಿ ಮುಖಭಂಗವಾಗಿದ್ದು, ಇಸ್ಲಾಮಾಬಾದ್‌ ನಲ್ಲಿ ಅಮೆರಿಕಾದ ಅಧಿಕಾರಿಗಳನ್ನು ಭೇಟಿಯಾಗಲು ತಿರಸ್ಕರಿಸಿದ್ದು, ರಾಜತಾಂತ್ರಿಕ ಮಾತುಕತೆಗಳಲ್ಲಿ ಅಮೆರಿಕಾದ ನೀತಿಯ ಮೇಲೆ ಪ್ರಭಾವ ಬೀರುವಲ್ಲಿ ಪಾಕ್‌ ಗಿರುವ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯೇ ಇದಕ್ಕೆ ಕಾರಣ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 4 Apr 2026 1:00 pm

Koppal | ಯಲಬುರ್ಗಾದಲ್ಲಿ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ

ಕೊಪ್ಪಳ : ಏಕಕಾಲಕ್ಕೆ ನಾಲ್ಕು ನ್ಯಾಯಾಲಯಗಳು ನಡೆಯುವ ಸಾಮರ್ಥ್ಯ ಹೊಂದಿರುವ ಯಲಬುರ್ಗಾ ತಾಲೂಕಿನ ನೂತನ ನ್ಯಾಯಾಲಯ ಕಟ್ಟಡವನ್ನು ಎ.4ರಂದು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ, ಕುಷ್ಟಗಿ, ಕುಕನೂರ, ರೋಣ ಹಾಗೂ ಗಜೇಂದ್ರಗಡ ಭಾಗಗಳಿಂದ ವಕೀಲರು ಹಾಗೂ ನಿವೃತ್ತ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನ್ಯಾಯಮೂರ್ತಿಗಳೊಂದಿಗೆ ಗ್ರೂಪ್ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಅವರೊಂದಿಗೆ, ಕುಕನೂರ ಮಾರ್ಗವಾಗಿ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತ ನ್ಯಾಯಾಧೀಶರಾದ ಸಿ.ಎಂ. ಪೂಣಚ್ಚ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನ್ಯಾಯಾಲಯ ಆವರಣದಲ್ಲಿ ಸಸಿ ನೆಟ್ಟು, ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಈ ಮೂಲಕ ಯಲಬುರ್ಗಾ ತಾಲೂಕಿನ ನ್ಯಾಯಾಂಗ ವ್ಯವಸ್ಥೆಗೆ ಹೊಸ ಗರಿ ಮೂಡಿದಂತಾಯಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಿ.ಎಂ. ಪೂಣಚ್ಚ ಅವರು ವಕೀಲರೊಂದಿಗೆ ನ್ಯಾಯಾಲಯದ ಸಭಾಂಗಣ ಹಾಗೂ ದ್ವಾರಬಾಗಿಲ ಬಳಿ ಗ್ರೂಪ್ ಫೋಟೋದಲ್ಲಿ ಭಾಗಿಯಾದರು. ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಲಬುರ್ಗಾ ಪಟ್ಟಣದ ಐತಿಹಾಸಿಕ ಹಿನ್ನೆಲೆ ವಿವರಿಸಿ, ಎ.4 ಅನ್ನು ತಾಲೂಕಿಗೆ ಮಹತ್ವದ ದಿನವೆಂದು ವಿವರಿಸಿದರು. ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಕೊಪ್ಪಳ ಹಾಗೂ ಬಾರ್ ಅಸೋಸಿಯೇಷನ್ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ.ಕಣವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಲಬುರ್ಗಾ ಜೆ.ಎಂ.ಎಫ್.ಸಿ ಸಂಜಯ್ ಕುಮಾರ್ ಪಾಚಾಪೂರ, ನ್ಯಾಯಾಧೀಶರಾದ ರಂಗಸ್ವಾಮಿ ಜೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷಚಂದ್ರ ಎಸ್. ಹೊಂಬಳ, ಪ್ರಧಾನ ಕಾರ್ಯದರ್ಶಿ ಇ.ಟಿ. ಮಹಾಂತೇಶ ಹಾಗೂ ಉಪಾಧ್ಯಕ್ಷರಾದ ಎಂ.ಎಸ್. ನಾಯ್ಕರ್, ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಂತ್ ರಾಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಯಲಬುರ್ಗಾ ಬಾರ್ ಅಸೋಸಿಯೇಷನ್‌ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.      

ವಾರ್ತಾ ಭಾರತಿ 4 Apr 2026 12:51 pm

ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಮಾತ್ರ!

ಮುಸ್ಲಿಮರೆಂದರೆ ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟರು ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುವ ಬಿಜೆಪಿ, ಆರೆಸ್ಸೆಸ್‌ನವರು ಒಂದು ಮಿಷನ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ, ಆ ಸರಕಾರದ ಭಾಗವಾಗಿರುವ ಮಂತ್ರಿಗಳು, ಶಾಸಕರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಮ್ ಅಭ್ಯರ್ಥಿಗೆ ನೀಡದಿರುವುದು ಕಾಕತಾಳೀಯ ಅಲ್ಲ ಅಥವಾ ಚುನಾವಣೆ ಗೆಲ್ಲುವ ತಂತ್ರವೂ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮನಸ್ಥಿತಿ. ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಿಸುತ್ತದೆ ಎಂಬುದು ಹೊಸ ಮಾತಲ್ಲ. ಆರೆಸ್ಸೆಸ್ ಉದ್ದೇಶ ಈಡೇರಿಕೆಗೆ ಭಾರತೀಯ ಜನತಾ ಪಕ್ಷ ಒಂದು ಸಾಧನವಷ್ಟೇ. ಆರೆಸ್ಸೆಸ್ ಎಷ್ಟೇ ಸಾಮರಸ್ಯದ ಮಾತುಗಳನ್ನಾಡಿದರೂ ಅದು ಮುಸ್ಲಿಮ್ ಸಮುದಾಯದ ಬಗ್ಗೆ ಪೂರ್ವಾಗ್ರಹಪೀಡಿತ ನಿಲುವು ಇಟ್ಟುಕೊಂಡಿದೆ. ಆರೆಸ್ಸೆಸ್ ಮೂಲದ ಬಹುಪಾಲು ಬಿಜೆಪಿ ಮುಖಂಡರು ‘‘ನಮಗೆ ಮುಸ್ಲಿಮ್ ಮತಗಳು ಬೇಕಾಗಿಲ್ಲ’’-ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರಂತಹ ಕೆಲವೇ ಬಿಜೆಪಿ ನಾಯಕರು ಮುಸ್ಲಿಮ್ ವಿರೋಧಿ ನೀತಿ ಅನುಸರಿಸದೆ ಎಲ್ಲರ ಒಳಗೊಳ್ಳುವಿಕೆಯ ಮಂತ್ರ ಜಪಿಸುತ್ತ ಅಲ್ಪ ಮಟ್ಟಿಗೆ ಸಾಮರಸ್ಯ ಕಾಪಾಡಿದ ನಿದರ್ಶನಗಳಿವೆ. ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುಸ್ಲಿಮ್ ಸಮುದಾಯದವರಿಗೆ ಟಿಕೆಟ್ ನೀಡುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆಯ್ದ ಕೆಲ ಮುಸ್ಲಿಮರಿಗೆ ಪಕ್ಷದ ವಕ್ತಾರನ ಸ್ಥಾನ ಮತ್ತು ರಾಜ್ಯಸಭಾ ಹುದ್ದೆ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಹೊರ ಬಂದ ನಜ್ಮಾ ಹೆಫ್ತುಲ್ಲಾ, ಆರಿಫ್ ಮುಹಮ್ಮದ್ ಖಾನ್ ಅವರಿಗೆ ಬಿಜೆಪಿ ಉನ್ನತ ಹುದ್ದೆ ನೀಡಿತ್ತು. ಆರಿಫ್ ಮುಹಮ್ಮದ್ ಖಾನ್ ಅವರು ಶಾಬಾನು ಪ್ರಕರಣದಲ್ಲಿ ದಿ. ರಾಜೀವ್ ಗಾಂಧಿಯವರ ಜೊತೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕೆ ಕಾಂಗ್ರೆಸ್ ತೊರೆದಿದ್ದರು. ಆನಂತರ ಮೋದಿ ಆಡಳಿತದಲ್ಲಿ ಅವರಿಗೆ ಕೇರಳ ರಾಜ್ಯಪಾಲ ಹುದ್ದೆ ಸೇರಿದಂತೆ ರಾಜಕೀಯ ನೆಲೆ ಕಲ್ಪಿಸಲಾಗಿತ್ತು. ವಿವಾದಿತ ಬಾಬರಿ ಮಸೀದಿ-ರಾಮಜನ್ಮ ಭೂಮಿ ನ್ಯಾಯಪೀಠದಲ್ಲಿದ್ದ ಕರ್ನಾಟಕದ ಅಬ್ದುಲ್ ನಝೀರ್ ಅವರಿಗೂ ರಾಜ್ಯಪಾಲ ಹುದ್ದೆ ದಯಪಾಲಿಸಿದೆ. ಕರ್ನಾಟದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಾಗ ಮುಮ್ತಾಝ್ ಅಲಿಖಾನ್ ಅವರಿಗೆ ಸಚಿವ ಸ್ಥಾನ ನೀಡಿ ಎಂಎಲ್‌ಸಿಯನ್ನಾಗಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಅಝೀಮ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡಿದ್ದೂ ಯಡಿಯೂರಪ್ಪನವರೇ. ಮಂಗಳೂರು ಮೂಲದ ಮಾಣಿಪ್ಪಾಡಿ ಅವರನ್ನು ಆರೆಸ್ಸೆಸ್ ನಾಯಕರು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿಸಿದ್ದರು. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ ಎಂದು ವರದಿ ಸಿದ್ಧಪಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಯಡಿಯೂರಪ್ಪ ಅವರು ಮುಸ್ಲಿಮ್ ಸಮುದಾಯದ ಬಗ್ಗೆ ಮೃದು ಧೋರಣೆ ತಳೆಯಲು ಶಿವಮೊಗ್ಗ ಲೋಕಸಭೆ ಮತ್ತು ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಆ ಸುಮುದಾಯ ಮೊದಲಿಂದಲೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು ಕಾರಣವಾಗಿರಬಹುದು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಬೆಂಬಲದಿಂದ ಗೆಲ್ಲುತ್ತಿದ್ದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಲೇ ಉಗ್ರ ಹಿಂದುತ್ವವಾದಿಯಾಗಿ ಬದಲಾದರು. ಬಿ.ಎಲ್. ಸಂತೋಷ್ ಮತ್ತು ನಳಿನ್ ಕುಮಾರ್ ಕಟೀಲು ಅವರನ್ನು ಮೀರಿಸುವಷ್ಟು ಕೋಮುವಾದಿ ಮನಸ್ಥಿತಿ ರೂಢಿಸಿಕೊಂಡ ಬೊಮ್ಮಾಯಿ ಹಿಜಾಬ್ ವಿವಾದಕ್ಕೆ ತುಪ್ಪ ಸುರಿದರು. ಯಡಿಯೂರಪ್ಪ ಕೂಡಾ ಜಾರಿಗೆ ತರದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು. ಎಲ್ಲಕ್ಕಿಂತಲೂ ಮಿಗಿಲಾಗಿ ಮುಸ್ಲಿಮ್ ಸಮುದಾಯಕ್ಕಿರುವ ಉದ್ಯೋಗ ಮತ್ತು ಶಿಕ್ಷಣಕ್ಕಾಗಿರುವ 2ಬಿಯಡಿ ಸಿಗುತ್ತಿದ್ದ ಪ್ರತಿಶತ ನಾಲ್ಕರಷ್ಟು ಮೀಸಲಾತಿಯನ್ನು ಕಸಿದುಕೊಂಡರು. ಬಸವರಾಜ ಬೊಮ್ಮಾಯಿಯವರ ಅತಿಯಾದ ಮುಸ್ಲಿಮ್ ವಿರೋಧಿ ನೀತಿಯಿಂದಾಗಿ ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಅವರ ಮಗ ಭರತ್ ಬೊಮ್ಮಾಯಿ ಹೀನಾಯವಾಗಿ ಸೋಲಬೇಕಾಯಿತು. ಜನತಾ ದಳದ ಹಿರಿಯ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಜನ್ಮತಃ ಮುಸ್ಲಿಮ್ ವಿರೋಧಿಯಾಗಿರಲಿಲ್ಲ. ಆರೆಸ್ಸೆಸ್ ನಾಯಕರನ್ನು ಅತಿಯಾಗಿ ಓಲೈಸಲು ಹೋಗಿ ಮುಸ್ಲಿಮ್ ವಿರೋಧಿ ನೀತಿ ಅನುಸರಿಸಬೇಕಾಯಿತು. ಕರ್ನಾಟಕದ ನಗರ ಮತ್ತು ಮಹಾನಗರದ ಮುಸ್ಲಿಮ್ ಸಮುದಾಯ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿ ಬೆಂಬಲಿಸುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ನಾಯಕರು ಉದಾರಿಯಾಗಿದ್ದ ಸಂದರ್ಭದಲ್ಲಿ ಮಾತ್ರ ಮುಸ್ಲಿಮ್ ಸಮುದಾಯ ಅಂಥವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ಜಾತ್ಯತೀತ ಜನತಾ ದಳ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿದ್ದಾಗ ಕೆಲವು ಕಡೆ ಮುಸ್ಲಿಮ್ ಸಮುದಾಯ ಆ ಪಕ್ಷವನ್ನು ಬೆಂಬಲಿಸಿದ ನಿದರ್ಶನಗಳಿವೆ. ಉಳಿದಂತೆ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷದ ಖಾಯಂ ವೋಟ್ ಬ್ಯಾಂಕ್. ಕೆಲವೊಮ್ಮೆ ಅಭ್ಯರ್ಥಿ ಮುಸ್ಲಿಮ್ ವಿರೋಧಿಯಾಗಿದ್ದರೂ ಅನಿವಾರ್ಯವಾಗಿ ಬೆಂಬಲಿಸುತ್ತಾ ಬಂದಿದೆೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಸ್ಪಂದಿಸುವ ಗುಣ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ. ಮುಸ್ಲಿಮ್ ಟೋಪಿ ಹಾಕಿಕೊಂಡು ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಕರ್ತವ್ಯ ಮುಗಿಯಿತು ಎನ್ನುವ ಮನಸ್ಥಿತಿ ಸಿದ್ದರಾಮಯ್ಯ ಅವರದಲ್ಲ. ಸಾಮಾಜಿಕ ನ್ಯಾಯ ಮತ್ತು ಮುಸ್ಲಿಮ್ ಸಮುದಾಯದ ಬಗೆಗಿನ ಸಿದ್ದರಾಮಯ್ಯ ಅವರ ಪ್ರೀತಿ ಅಚಲವಾದುದು. ಆದರೆ ಅವರೊಬ್ಬರೇ ಎಲ್ಲವನ್ನೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಲೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದರೆ ಮಾತ್ರ ತಿದ್ದುಪಡಿ ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಪ್ರತಿಶತ ಹದಿನಾಲ್ಕರಷ್ಟು ಮುಸ್ಲಿಮ್ ಸಮುದಾಯದ ಜನಸಂಖ್ಯೆ ಇದೆ. ಕಾಂಗ್ರೆಸ್ ಪಕ್ಷದ ಬಹುತೇಕ ಮುಸ್ಲಿಮೇತರ ನಾಯಕರು ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಮುಸ್ಲಿಮ್ ವೋಟ್ ಬ್ಯಾಂಕ್ ಕಾರಣಕ್ಕೆ. ಮುಸ್ಲಿಮ್ ಸಮುದಾಯದ ವೋಟ್ ಬ್ಯಾಂಕ್ ಕಾರಣದಿಂದ ಗೆಲುವು ಸಾಧಿಸುವ ಕಾಂಗ್ರೆಸ್ ನಾಯಕರು ಪ್ರತಿನಿತ್ಯ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸಮುದಾಯಗಳನ್ನೇ ಓಲೈಸುತ್ತಿರುತ್ತಾರೆ. ಇದು ಈ ನಾಡಿನ ದುರಂತ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಭಾಲ್ಕಿಯಲ್ಲಿ ನೂರಕ್ಕೆ ನೂರು ಲಿಂಗಾಯತ ಮತಗಳು ಸಿಗುವುದಿಲ್ಲ. ಯಾಕೆಂದರೆ, ಬಿಜೆಪಿಯಿಂದ ಕಡ್ಡಾಯವಾಗಿ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿರುತ್ತಾರೆ. ಭಾಲ್ಕಿ ಮತಕ್ಷೇತ್ರದ ಮರಾಠಾ ಸಮುದಾಯ ಈಶ್ವರ್ ಖಂಡ್ರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿದೆ. ಈಶ್ವರ್ ಖಂಡ್ರೆಯವರ ಚುನಾವಣಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಕುರುಬ, ಮುಸ್ಲಿಮ್ ಮತ್ತು ದಲಿತರಲ್ಲಿನ ಬಲಗೈ ಸಮುದಾಯಗಳು ಮಾತ್ರ. ಯಾಕೆಂದರೆ ಆ ಮೂರೂ ಸಮುದಾಯಗಳಿಗೆ ಕಾಂಗ್ರೆಸ್ ಬಿಟ್ಟರೆ ಗತಿಯಿಲ್ಲ. ಸಿದ್ದರಾಮಯ್ಯ ಅವರ ಕಾರಣಕ್ಕೆ ಕುರುಬರು, ಖರ್ಗೆಯವರ ಕಾರಣಕ್ಕೆ ದಲಿತರು ಅನಿವಾರ್ಯವಾಗಿ ಕಾಂಗ್ರೆಸ್ ಪರ. ಆದರೆ ಮುಸ್ಲಿಮ್ ಸಮುದಾಯಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವ ಈಶ್ವರ್ ಖಂಡ್ರೆಯವರಿಗೆ ತನ್ನ ಗೆಲುವಿಗೆ ಕಾರಣವಾದ ಸಮುದಾಯಗಳ ಪರ ನಿಲ್ಲಬೇಕೆಂಬ ಕನಿಷ್ಠ ಪ್ರಜ್ಞೆ ಇರುವುದಿಲ್ಲ. ಋಣ ತೀರಿಸುವುದು ದೂರದ ಮಾತಾಯಿತು. ಹಾಗೆ ನೋಡಿದರೆ ಮುಸ್ಲಿಮ್ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇರುವುದು ಬೀದರ್‌ನಲ್ಲಿ. ಚಿಟಗುಪ್ಪ, ಬೀದರ್ ನಗರ, ಬಸವ ಕಲ್ಯಾಣ, ಚಿಂಚೋಳಿ, ಆಳಂದ, ಔರಾದ, ಭಾಲ್ಕಿ, ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಸಂಖ್ಯಾ ಬಾಹುಳ್ಯವಿದೆ. ಆದರೆ ಸಚಿವ ಈಶ್ವರ್ ಖಂಡ್ರೆಯವರಿಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ನೀಡಿ ಗೆಲ್ಲಿಸಿಕೊಳ್ಳಬೇಕೆಂಬ ದೊಡ್ಡ ಗುಣ ಬರುವುದೇ ಇಲ್ಲ. ಮಗನಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಳ್ಳುತ್ತಾರೆ. ಒಂದೇ ಒಂದು ವೋಟಿನ ಲಾಭ ಇಲ್ಲದ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಮಾಧ್ಯಮ ಸಲಹೆಗಾರ ಹುದ್ದೆ ನೀಡುತ್ತಾರೆ. ಆದರೆ ತನ್ನ ಮತ್ತು ಮಗನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಮ್ ಸಮುದಾಯದವರನ್ನು ಅಧಿಕಾರದ ಕೇಂದ್ರಕ್ಕೆ ಬಿಟ್ಟುಕೊಡುವುದೇ ಇಲ್ಲ. ತಾನು ವೀರಶೈವ ಮಹಾಸಭಾದ ಅಧ್ಯಕ್ಷರನ್ನಾಗಿ ನೇಮಕಗೊಳ್ಳಲು ಬೆಂಬಲಿಸಿದ ಎಸ್.ಎಸ್. ಮಲ್ಲಿಕಾರ್ಜುನ್ ಋಣ ತೀರಿಸಲು ಈಶ್ವರ್ ಖಂಡ್ರೆ ಹರಸಾಹಸ ಪಡುತ್ತಾರೆ. ಮುಖ್ಯಮಂತ್ರಿ ಮನವೊಲಿಸಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಅತ್ಯಂತ ಅಸಮರ್ಥ ಅಭ್ಯರ್ಥಿ ಸಮರ್ಥ್‌ಗೆ ಕೊಡಿಸುತ್ತಾರೆ. ಮುಸ್ಲಿಮ್ ಸಂಖ್ಯಾ ಬಾಹುಳ್ಯ ಇರುವ ಮತಕ್ಷೇತ್ರದಲ್ಲಿ ಅದೇ ಸಮುದಾಯದ ವ್ಯಕ್ತಿ ಅಭ್ಯರ್ಥಿಯಾಗುವುದು ಸೂಕ್ತ ಎಂದು ಹೇಳುವ ದೊಡ್ಡ ಮನಸ್ಸು ಮಾಡುವುದೇ ಇಲ್ಲ. ಇದೊಂದು ಸ್ಯಾಂಪಲ್ ಮಾತ್ರ. ಮುಸ್ಲಿಮ್ ಸಮುದಾಯದ ಮತಗಳ ಕಾರಣಕ್ಕೆ ಗೆಲ್ಲುವ ಬಹುತೇಕ ಮುಸ್ಲಿಮೇತರ ಕಾಂಗ್ರೆಸ್ ಮುಖಂಡರ ಮನಸ್ಥಿತಿ ಇದೇ ಬಗೆಯದು. ವಿಜಯಪುರ ನಗರದಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಜಾಸ್ತಿ ಇದೆ. ಆ ಮತಕ್ಷೇತ್ರದಲ್ಲಿ ಎಂ.ಎಲ್. ಉಸ್ತಾದ್ ನಿರಂತರ ಗೆದ್ದು ಮಂತ್ರಿಯೂ ಆಗುತ್ತಿದ್ದರು. ಆದರೆ ವಿಜಯಪುರ ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲ್ಲುವುದು ಸ್ವತಃ ಸಚಿವ ಎಂ.ಬಿ. ಪಾಟೀಲರಿಗೆ ಇಷ್ಟವಿಲ್ಲ. ಕಟ್ಟರ್ ಮುಸ್ಲಿಮ್ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಎಂ.ಬಿ. ಪಾಟೀಲ್ ಮ್ಯಾಚ್ ಫಿಕ್ಸಿಂಗ್. ಬಬಲೇಶ್ವರ್ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ. ಅಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸುಲಭ. ಆ ಕಾರಣಕ್ಕೆ ವಿಜಯಪುರ ನಗರದಲ್ಲಿ ಬಸನಗೌಡ ಗೆಲ್ಲಲು ಎಂ.ಬಿ. ಪಾಟೀಲ್ ಸಹಕರಿಸುತ್ತಾರೆ. ಗೆಲ್ಲುವ ಸಮರ್ಥ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಎಂ.ಬಿ. ಪಾಟೀಲ್ ಮನಸ್ಸು ಮಾಡುವುದೇ ಇಲ್ಲ. ಬೆಳಗಾವಿಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದೇ ಮುಸ್ಲಿಮ್ ಮತಗಳ ಕಾರಣಕ್ಕೆ. ಲಕ್ಷೀ ಹೆಬ್ಬಾಳ್ಕರ್ ಮತಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ನಿರ್ಣಾಯಕ. ಆದರೆ ಸ್ಥಳೀಯ ಸಂಸ್ಥೆಗಳ ಎಂಎಲ್‌ಸಿ ಚುನಾವಣೆಯಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು ಅಂತ ಯಾರಿಗೂ ಅನಿಸುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಹೋದರ ಚೆನ್ನರಾಜ್ ಹಟ್ಟಿಹೊಳಿಯನ್ನು ಗೆಲ್ಲಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಅವರೇ ಉತ್ತಮ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ, ಮುಸ್ಲಿಮ್, ವಾಲ್ಮೀಕಿ, ದಲಿತ ಬಲಗೈ ಮತ್ತು ಕುರುಬ ಮತಗಳು ನಿರ್ಣಾಯಕ. ಬಿಜೆಪಿಯಿಂದ ಪಂಚಮಸಾಲಿ ಸಮುದಾಯದ ವ್ಯಕ್ತಿ ಅಭ್ಯರ್ಥಿಯಾಗುವುದರಿಂದ ಆ ಮತಗಳು ಎಚ್.ಕೆ. ಪಾಟೀಲರಿಗೆ ಬೀಳುವುದಿಲ್ಲ. ಮುಸ್ಲಿಮ್ ಮತಗಳು ನಿರ್ಣಾಯಕವಾಗಿರುವುದರಿಂದ ಎಚ್. ಕೆ. ಪಾಟೀಲರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸಲೀಂ ಅಹ್ಮದ್ ಅವರನ್ನು ಬೆಂಬಲಿಸುತ್ತಾರೆ. ಋಣ ಪ್ರಜ್ಞೆಯೆಂದರೆ ಇದು. ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯಾ ಬಾಹುಳ್ಯಕ್ಕೆ ಅನುಗುಣವಾಗಿ ಶಾಸಕರು, ಸಂಸದರು ಇಲ್ಲ. ಪ್ರತಿಶತ ಹದಿನಾಲ್ಕರಷ್ಟು ಜನಸಂಖ್ಯೆಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂಭತ್ತು ಜನ ಮುಸ್ಲಿಮ್ ಶಾಸಕರು ಆಯ್ಕೆಯಾಗಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಟಿಕೆಟ್ ಮೇಲೆ. ಬಿಜೆಪಿಯವರು ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ. ಜೆಡಿಎಸ್ ಕೆಲವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲವು ಸಾಧಿಸಿರಲಿಲ್ಲ. ಶಿಗ್ಗಾವಿ ಉಪಚುನಾವಣೆ ಗೆಲುವಿನಿಂದಾಗಿ ಮುಸ್ಲಿಮ್ ಶಾಸಕರ ಸಂಖ್ಯೆ ಹತ್ತಕ್ಕೇರಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಏಳು ಜನ ಮುಸ್ಲಿಮ್ ಶಾಸಕರು ಗೆಲುವು ಸಾಧಿಸಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನರೇಂದ್ರ ಮೋದಿಯವರ ಕೋಮುವಾದಿ ರಾಜಕಾರಣದ ಅಬ್ಬರ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮ್ ನಾಯಕರಿಗೆ ಅವಕಾಶ ನೀಡುತ್ತಿಲ್ಲ. ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ಆ ಅಭ್ಯರ್ಥಿಯೂ ಗೆಲುವು ಸಾಧಿಸಲಿಲ್ಲ. ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್ ಏಕೈಕ ಮುಸ್ಲಿಮ್ ಪ್ರತಿನಿಧಿ. ಅವರು ಸಾಮಾನ್ಯ ಮುಸ್ಲಿಮರೊಂದಿಗೆ ಹೆಚ್ಚಿನ ನಂಟು ಹೊಂದಿಲ್ಲ. ಸಂಸತ್‌ನಲ್ಲಿ ಕರ್ನಾಟಕದ ಮುಸ್ಲಿಮ್ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಜಾಫರ್ ಶರೀಫ್, ಆಜೀಝ್ ಶೇಟ್, ಖಮರುಲ್ ಇಸ್ಲಾಂ ಅವರು ಹೋದ ಮೇಲೆ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯಕ್ಕೆ ಹೋರಾಡುವವರೇ ಇಲ್ಲದಂತಾಗಿದೆ. ಸದ್ಯ ಸಿದ್ದರಾಮಯ್ಯ ಒಬ್ಬರೇ ಮುಸ್ಲಿಮ್ ಹಿತ ಕಾಪಾಡುವ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯಕ್ಕೆ ಕೊಟ್ಟಿದ್ದು ಕಡಿಮೆ ಹೇಳಿಕೊಳ್ಳುವುದು ಜಾಸ್ತಿ. ಆದರೂ ಬಿಜೆಪಿ ಅಸ್ತ್ರ ಮಾಡಿಕೊಂಡು ಮುಸ್ಲಿಮ್ ಸಮುದಾಯದ ವಿರುದ್ಧ ಕೆಂಡ ಕಾರುತ್ತಲೇ ಇರುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಮನಗರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿದ್ದೇ ಮಹಾನ್ ಸಾಧನೆ ಎಂಬ ಭ್ರಮೆಯಲ್ಲಿ ಕೆಪಿಸಿಸಿ. ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಇದ್ದಾರೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದವರಿಗೆ ಅತ್ಯಂತ ಕಡಿಮೆ ಪ್ರಾತಿನಿಧ್ಯದೊರೆತಿದೆ. ಕರ್ನಾಟಕದಲ್ಲಿ ಹದಿನೈದಕ್ಕೂ ಹೆಚ್ಚು ಅಕಾಡಮಿ ಮತ್ತು ಪ್ರಾಧಿಕಾರಗಳಿವೆ. ಬ್ಯಾರಿ ಅಕಾಡಮಿ ಅಧ್ಯಕ್ಷತೆ ಬಿಟ್ಟು ಮುಸ್ಲಿಮ್ ಸಮುದಾಯದ ಬೇರೆ ಯಾವ ಸಾಹಿತಿ, ಕಲಾವಿದರಿಗೂ ಅಧ್ಯಕ್ಷ ಹುದ್ದೆ ನೀಡಲಿಲ್ಲ. ಚಲನಚಿತ್ರ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಭಾಗವಹಿಸುವಿಕೆಯೇ ವಿರಳ. ರಂಗಭೂಮಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಸಾಧಕರು ಹೆಚ್ಚಾಗಿದ್ದಾರೆ. ಅವರನ್ನಾದರೂ ಗುರುತಿಸಿ ಅವಕಾಶ ನೀಡಬೇಕಲ್ಲವೇ. ರಂಗಭೂಮಿಗಾಗಿ ಕುಕನೂರು ರೆಹಮಾನವ್ವ ಸೇರಿದಂತೆ ಅಸಂಖ್ಯಾತ ಕಲಾವಿದರು ಬದುಕನ್ನೇ ಪಣಕ್ಕಿಟ್ಟು ರಂಗ ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ದುರಂತ ನೋಡಿ, ಬಿಜೆಪಿಯವರು ಕಾಂಗ್ರೆಸ್ ಸರಕಾರದಲ್ಲಿ ಮುಸ್ಲಿಮ್ ಸಮುದಾಯ ಮಾತ್ರ ಹೆಚ್ಚು ಅವಕಾಶ ಪಡೆಯುತ್ತಿದೆ ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ, ಕಾಂಗ್ರೆಸ್ ಸರಕಾರದಲ್ಲಿ ಸಂಘ ಪರಿವಾರದ ಸಾಹಿತಿ ಕಲಾವಿದರು, ಶಿಕ್ಷಣ ತಜ್ಞರು ಪಡೆದಷ್ಟು ಅವಕಾಶವನ್ನು ಮುಸ್ಲಿಮ್ ಸಮುದಾಯದವರು ಪಡೆಯಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಕೃಷಿ, ತೋಟಗಾರಿಕೆ, ಕಾನೂನು, ತಾಂತ್ರಿಕ ವಿಶ್ವವಿದ್ಯಾನಿಲಯಗಳು ಸೇರಿ ಒಟ್ಟು 42 ವಿಶ್ವವಿದ್ಯಾನಿಲಯಗಳಿವೆ. 42 ವಿಶ್ವವಿದ್ಯಾನಿಲಯಗಳಲ್ಲಿ ಒಬ್ಬರು ಮಾತ್ರ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕುಲಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಸಕ್ತಿಯ ಫಲವಾಗಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ಕಳೆದ ಏಳು ತಿಂಗಳ ಹಿಂದೆ ನೇಮಕ ಮಾಡಲಾಯಿತು. ಆದರೆ ಆ ವಿಶ್ವವಿದ್ಯಾನಿಲಯಕ್ಕೆ ನಿತ್ಯ ಕಿರುಕುಳ ಕೊಡುವ ಶಂಕರಪ್ಪ ವಣಿಕ್ಯಾಳ ಅವರನ್ನು ಕುಲಸಚಿವರನ್ನಾಗಿ ಕಳುಹಿಸಿಕೊಡಲಾಗಿದೆ. ಆರೇಳು ತಿಂಗಳಿಂದ ಪ್ರೊ. ಖಾನ್ ಅವರು ತೊಂದರೆ ಅನುಭವಿಸುತ್ತಿದ್ದರೂ ಆ ಕುಲಸಚಿವರನ್ನು ವರ್ಗಾವಣೆ ಮಾಡುವ ಮನಸ್ಸು ಸರಕಾರ ಮಾಡುತ್ತಿಲ್ಲ. ನರೇಂದ್ರ ಮೋದಿಯವರು ಮತ್ತು ಸಂಘ ಪರಿವಾರದವರು ಕೋಮುವಾದಿ ನಿಲುವಿನ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ವ್ಯವಸ್ಥಿತವಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಜನಾಭಿಪ್ರಾಯ ರೂಪಿಸಲು ನಿರಂತರ ಯತ್ನಿಸುತ್ತಿದ್ದಾರೆ. ಮುಸ್ಲಿಮರೆಂದರೆ ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟರು ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುವ ಬಿಜೆಪಿ, ಆರೆಸ್ಸೆಸ್‌ನವರು ಒಂದು ಮಿಷನ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ, ಆ ಸರಕಾರದ ಭಾಗವಾಗಿರುವ ಮಂತ್ರಿಗಳು, ಶಾಸಕರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಮ್ ಅಭ್ಯರ್ಥಿಗೆ ನೀಡದಿರುವುದು ಕಾಕತಾಳೀಯ ಅಲ್ಲ ಅಥವಾ ಚುನಾವಣೆ ಗೆಲ್ಲುವ ತಂತ್ರವೂ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮನಸ್ಥಿತಿ. ಎಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪು. ಆದರೆ ಆ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸಬೇಡಿ, ಅವರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಎಲ್ಲದರಲ್ಲೂ ಪಾಲು ನೀಡುವುದು ಸಾಮಾಜಿಕ ನ್ಯಾಯದ ಭಾಗ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷದ ಈ ಉಡಾಫೆ ನಡವಳಿಕೆಗೆ ಮುಸ್ಲಿಮ್ ನಾಯಕರೂ ಕಾರಣ. ಮುಸ್ಲಿಮ್ ಸಮುದಾಯದಲ್ಲಿ ಅತಿ ಶ್ರೀಮಂತರು ಇರುವಂತೆ ಅತಿ ಬಡವರೂ ಇದ್ದಾರೆ. ಝಕಾತ್ ತತ್ವದ ಅನುಸಾರ ಆ ಸಮುದಾಯದ ಶ್ರೀಮಂತರು ಬಡವರ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾದರೆ ಒಟ್ಟು ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಬಲಗೊಳ್ಳುತ್ತದೆ. ಕೇವಲ ಪ್ರತಿಶತ ಮೂರು ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯದ ಮೂರು ಜನ ಸಂಸದರು, ಹೆಚ್ಚು ಶಾಸಕರು ಮತ್ತು ಎಲ್ಲಾ ಕ್ಷೇತ್ರದ ಆಯಕಟ್ಟಿನ ಜಾಗದಲ್ಲಿ ಇರಲು ಸಾಧ್ಯವಾಗಿದ್ದು ಆರ್ಥಿಕ-ಶೈಕ್ಷಣಿಕ ಶಕ್ತಿಯಿಂದ. ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅಲ್ಲಿನ ಮುಖಂಡರಿಗೆ ಜಾಗೃತ ಮುಸ್ಲಿಮರು ಮಾತ್ರ ಉತ್ತರ ಕೊಡಬಲ್ಲದು.

ವಾರ್ತಾ ಭಾರತಿ 4 Apr 2026 12:39 pm

ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ; ರಾಜ್ಯ ಸರಕಾರಕ್ಕೆ ಕೇಂದ್ರ ಸಚಿವ ಎಚ್ ಡಿಕೆ ಆಗ್ರಹ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಟೋ ಚಾಲಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ 6ನೇ ಗ್ಯಾರಂಟಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು ಇಂಧನದ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಆ ತೆರಿಗೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯ ಕರ್ನಾಟಕ 4 Apr 2026 12:31 pm

ಮುನೀರ್ ತುಂಬೆ ನಿಧನ

ಬಂಟ್ವಾಳ : ತುಂಬೆ ನಿವಾಸಿ ಮುನೀರ್ (55) ಅವರು ಹೃದಯಾಘಾತದಿಂದ ಶನಿವಾರ ರಾತ್ರಿ  ಸ್ವಗೃಹದಲ್ಲಿ ನಿಧನರಾದರು. ರಾತ್ರಿ11 ಘಂಟೆಯ ತನಕ ತನ್ನ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಮನೆಗೆ ಬಂದಿದ್ದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಮೂವರು ಪುತ್ರರು, ತಂದೆ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಾರ್ತಾ ಭಾರತಿ 4 Apr 2026 12:24 pm

ವಿರೋಧ ಪಕ್ಷದ ಕಾರ್ಯಕರ್ತರನ್ನು ಸರ್ಕಾರ ಟಾರ್ಗೆಟ್ ಮಾಡ್ತಿದ್ಯಾ? 3 ವರ್ಷಗಳಲ್ಲಿ 59 ಪ್ರಕರಣ: ಚಿಕ್ಕಮಗಳೂರಿನಲ್ಲೇ ಅತ್ಯಧಿಕ

ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂಬುವುದು ಬಿಜೆಪಿ ಆರೋಪವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಉದ್ದೇಶಪೂರ್ವಕ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂಬುವುದು ಕಾಂಗ್ರೆಸ್ ವಾದವಾಗಿದೆ. ಈ ನಡುವೆ ವಿರೋಧ ಪಕ್ಷಗಳ ಕಾರ್ಯಕರ್ತರ ವಿರುದ್ಧ ಕಳೆದ 3 ವರ್ಷಗಳಲ್ಲಿ 59 ಪ್ರಕರಣ ದಾಖಲಾಗಿದೆ. ಕುತೂಹಲವೆಂದರೆ ಚಿಕ್ಕಮಗಳೂರಿನಲ್ಲೇ ಅತ್ಯಧಿಕ ಪ್ರಕರಣ ದಾಖಲು ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಸಿಕ್ಕಿದೆ. ಇನ್ನು ಕೆಲವು ಪ್ರಕರಣಗಳನ್ನು ಸರ್ಕಾರ ಹಿಂಪಡೆದುಕೊಂಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 4 Apr 2026 12:19 pm

ಮಂಜೇಶ್ವರ : ಎಪಿ ಉಸ್ತಾದರನ್ನು ಭೇಟಿಯಾದ LDF ಅಭ್ಯರ್ಥಿ ಕೆ ಆರ್ ಜಯಾನಂದ

ಕಲ್ಲಿಕೋಟೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಉಸ್ತಾದರನ್ನು ‌ಭೇಟಿಯಾಗಿ ಆಶೀರ್ವಾದ ಹಾಗೂ ಬೆಂಬಲ ಕೋರಿದರು.  ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪವಿತ್ರ ಖುರ್‌ಆನಿನ ಕನ್ನಡಾನುವಾದ ಗ್ರಂಥವನ್ನು ಉಸ್ತಾದರಿಗೆ ನೀಡಿದರು.   

ವಾರ್ತಾ ಭಾರತಿ 4 Apr 2026 12:14 pm

ಕಲ್ಲಿಕೋಟೆ: ಎಪಿ ಉಸ್ತಾದರನ್ನು ಭೇಟಿಯಾದ ಮಂಜೇಶ್ವರದ LDF ಅಭ್ಯರ್ಥಿ

ಕಲ್ಲಿಕೋಟೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಉಸ್ತಾದರನ್ನು ‌ಭೇಟಿಯಾಗಿ ಆಶೀರ್ವಾದ ಹಾಗೂ ಬೆಂಬಲ ಕೋರಿದರು.  ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪವಿತ್ರ ಖುರ್‌ಆನಿನ ಕನ್ನಡಾನುವಾದ ಗ್ರಂಥವನ್ನು ಉಸ್ತಾದರಿಗೆ ನೀಡಿದರು.   

ವಾರ್ತಾ ಭಾರತಿ 4 Apr 2026 12:14 pm

Tumkur | ಬೈಕ್‌ಗೆ ಕಾರು ಢಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು

ತಿಪಟೂರು: ಬೈಕ್‌ಗೆ ಕಾರು ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ನಡೆದಿದೆ. ಮೃತರನ್ನು ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿ ಬಿ.ಎಲ್.ಕೊಪ್ಪಲು ಬಸವೇಶ್ವರ ನಗರ ನಿವಾಸಿ ವಿಜಯ್ ಕುಮಾರ್ (24) ಎಂದು ಗುರುತಿಸಲಾಗಿದೆ. ತಿಪಟೂರು ನಗರದ ಟಿ.ಎಂ.ಮಂಜುನಾಥ ನಗರ ಗೇಟ್ ಸಮೀಪದ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಅವರು ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವಾಗ ಬಿದಿರೆಗುಡಿ ಬಳಿ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಸರಿಯಾದ ಸೂಚನಾ ಫಲಕಗಳಿಲ್ಲದೇ ಇರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿದಿರೆಗುಡಿ ಮತ್ತು ಕೊನೆಹಳ್ಳಿ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಅಧಿಕಾರಿಗಳು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆದಿದ್ದರೂ, ಹೆದ್ದಾರಿ ಅಧಿಕಾರಿಗಳು ಸಭೆಗೆ ಗೈರುಹಾಜರಾಗಿರುವುದಾಗಿ ತಿಳಿದುಬಂದಿದೆ. ಆದರೂ ಕೂಡ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 4 Apr 2026 12:02 pm

ಬೇಸಿಗೆ ರಜೆ ಆರಂಭ; ಮಕ್ಕಳಿಗೆ ಶಿಬಿರಗಳು ಶುರು, ಕೃಷಿ ಪಾಠಕ್ಕೆ ಹೆಚ್ಚಿನ ಒತ್ತು

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆ ಶಿಬಿರಗಳ ಆಯೋಜನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇಂತಹ ಶಿಬಿರಗಳ ಸಂಖ್ಯೆ ಶೇಕಡಾ 25 ರಷ್ಟು ಹೆಚ್ಚಾಗಿದ್ದು, ಅಲ್ಲಿ ಡ್ಯಾನ್ಸ್, ಮ್ಯೂಸಿಕ್, ಕೋಡಿಂಗ್ ಮತ್ತು ರೋಬೋಟಿಕ್ಸ್‌ನಂತಹ ಆಧುನಿಕ ತರಬೇತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶಿಬಿರಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲದಿದ್ದರೂ, ಅಲ್ಲಿ ಕ್ರೀಡೆ, ಯೋಗ ಮತ್ತು ಕೃಷಿ ಆಧಾರಿತ ಚಟುವಟಿಕೆಗಳ ಪರಿಚಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ವಿಜಯ ಕರ್ನಾಟಕ 4 Apr 2026 12:01 pm

ಹೊಸ ಸಮೀಕ್ಷೆ : ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಳೆದುಕೊಳ್ಳುತ್ತಿರುವ ನೆಲೆ, ಹೆಚ್ಚುತ್ತಿರುವ ಬಿಜೆಪಿ ಅಲೆ

Mamata Banerjee Losing Ground : ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಹೊಸ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ. ಇದರ ಪ್ರಕಾರ, ಬಂಗಾಳದ ಹಲವು ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ನೆಲೆಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಇನ್ನು, ಬಿಜೆಪಿಯ ವೋಟ್ ಬ್ಯಾಂಕ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ವಿಜಯ ಕರ್ನಾಟಕ 4 Apr 2026 12:01 pm

ಯಡ್ರಾಮಿ: ದಶಕಗಳಿಂದ ಡಾಂಬರು ಕಾಣದ ರಸ್ತೆ

ಕಾಚಾಪುರ-ಮಳ್ಳಿ ಮಾರ್ಗ ದುರಸ್ತಿಗೆ ‌ಗ್ರಾಮಸ್ಥರ ಆಗ್ರಹ

ವಾರ್ತಾ ಭಾರತಿ 4 Apr 2026 11:59 am

ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ

Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದಿದೆ. ಇದೀಗ ಈ ಸ್ಪೀಡರ್ ರೈಲುಗಳಿಗೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಗಳನ್ನು ಮೈಸೂರಿನಲ್ಲಿ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ 'ಆಧುನಿಕ ವಂದೇ ಭಾರತ್ ನಿರ್ವಹಣಾ ಕೇಂದ್ರ' ಸ್ಥಾಪನೆಗೆ ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ. ನೈಋತ್ಯ

ಒನ್ ಇ೦ಡಿಯ 4 Apr 2026 11:59 am

ಅಮೆರಿಕದ ಫೈಟರ್ ಜೆಟ್ ಅನ್ನು ಇರಾನ್‌ ಹೊಡೆದುರುಳಿಸಿರುವುದರಿಂದ ಮಾತುಕತೆ ಮೇಲೆ ಪರಿಣಾಮ ಬೀರುವುದಿಲ್ಲ: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್: ಪಶ್ಚಿಮ ಏಶ್ಯಾ ಸಂಘರ್ಷ ಮುಂದುವರಿದಿದೆ. ಇರಾನ್ ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಫೈಟರ್ ಜೆಟ್ ಅನ್ನು ಇರಾನ್‌ ಹೊಡೆದುರುಳಿಸಿದರೂ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್‌ ಹೇಳಿರುವ ಬಗ್ಗೆ NBC ನ್ಯೂಸ್ ವರದಿ ಮಾಡಿದೆ. ಇತ್ತೀಚಿನ ಘಟನೆಗೂ ಇರಾನ್ ಮಧ್ಯೆ ನಡೆಯುತ್ತಿರುವ ಮಾತುಕತೆಗೂ ಏನಾದರೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದಾಗ, ಇಲ್ಲ, ಯಾವ ಸಂಬಂಧವೂ ಇಲ್ಲ. ಇದು ಯುದ್ಧ. ನಾವು ಯುದ್ಧದಲ್ಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಜೆಟ್ ಹೊಡೆದುರುಳಿಸಿದ ಬಳಿಕ ಅಮೆರಿಕದ ವಿಶೇಷ ಪಡೆಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ನೀಡಲು ಟ್ರಂಪ್ ನಿರಾಕರಿಸಿದ್ದಾರೆ. ಪಶ್ಚಿಮ ಇರಾನ್‌ನಲ್ಲಿ ಶುಕ್ರವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಾಯುಪಡೆಯು ಅಮೆರಿಕದ ಎಫ್-35 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು, ಅದರ ಪೈಲಟ್ ಐಆರ್‌ಜಿಸಿಯ ವಶದಲ್ಲಿರುವ ಸಾಧ್ಯತೆಯಿದೆ ಎಂದು ಇರಾನ್ ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿತ್ತು.

ವಾರ್ತಾ ಭಾರತಿ 4 Apr 2026 11:56 am

ಹುಣಸಗಿ ಬರದೇವನಾಳದಲ್ಲಿ ವಸತಿ ಹಗರಣ

ಹಳೆಯ ಮನೆಗಳಿಗೆ ಹೊಸ ಬಿಲ್: ಆರೋಪ

ವಾರ್ತಾ ಭಾರತಿ 4 Apr 2026 11:52 am

ಚಾಮರಾಜನಗರ ಗಡಿಯಲ್ಲಿ ಕಾಡಾನೆ ಸಂಚಾರ : ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ: ಕರ್ನಾಟಕ–ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಆನಂದಪುರಂ ಬಳಿ ಕಾಡಾನೆಯೊಂದು ಹಾಡು ಹಗಲೇ ಸಂಚರಿಸಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ಸಮೀಪದ ಆನಂದಪುರಂ ಗ್ರಾಮದೊಳಗೆ ಹಾದುಹೋಗುವ ರಸ್ತೆಯಲ್ಲಿ ಕಾಡಾನೆ ಸಂಚರಿಸುತ್ತಿರುವುದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಾರ್ತಾ ಭಾರತಿ 4 Apr 2026 11:49 am

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಬಸವ ವನ ಕಸದ ಗೂಡಾಗಿ ಪರಿವರ್ತನೆ; ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ

ಬಸವಕಲ್ಯಾಣ: ನಗರದ ಹೃದಯ ಭಾಗದಲ್ಲಿ 58 ವರ್ಷಗಳ ಹಿಂದೆ ಬಸವಣ್ಣನವರ ಅಷ್ಠ ಜನ್ಮಶತಮಾನೋತ್ಸವ ಸವಿನೆನಪಿಗಾಗಿ ಬಸವ ವನವನ್ನು ನಿರ್ಮಾಣ ಮಾಡಲಾಗಿತ್ತು. ಈ ಬಸವ ವನ ಇಂದು ಮೂಲಭೂತ ಸೌಕರ್ಯವಿಲ್ಲದೆ ಪಾಳು ಬಿದ್ದಿದ್ದು, ವನದ ತುಂಬೆಲ್ಲ ಕಸದಿಂದ ನಾರುತ್ತಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸುತ್ತಲಿನಲ್ಲಿ ಕಾಂಪೌಂಡ್ ಹಾಗೂ ಪ್ರವೇಶದ್ವಾರ ಕಟ್ಟಲಾಗಿದೆ. ಆದರೆ ಅದು ಸಾರ್ವಜನಿಕರ ಮೂತ್ರ ವಿಸರ್ಜನೆಗೆ ಆಸರೆಯಾಗಿದೆ. ಬಸವ ವನವನ್ನು 26ನೇ ಡಿಸೆಂಬರ್ 1967ರಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಅವರು ಉದ್ಘಾಟಿಸಿದ್ದರು. ಅಂದು ಇಲ್ಲಿ ಪ್ರತಿಷ್ಠಾಪಿಸಿದ್ದ ಆಕರ್ಷಕ ನಂದಿ ಮೂರ್ತಿ ಸುಸ್ಥಿತಿಯಲ್ಲಿದೆ. ಆದರೆ ಅದರ ಸುತ್ತಲೂ ಸ್ವಚ್ಛತೆ ಇಲ್ಲ. ವನದಲ್ಲಿರುವ ಎಲ್ಲ ವಸ್ತುಗಳು ಹಾಳಾಗಿವೆ. ವನದಲ್ಲಿ ಬೆಳೆದ ಹುಲ್ಲು ಒಣಗಿದ್ದು, ಹಾವು, ಚೇಳಿನಂಥ ವಿಷಜಂತುಗಳಿಗೆ ಆಶ್ರಯವಾಗಿದೆ. ಆದ್ದರಿಂದ ಇಲ್ಲಿಗೆ ಸಾರ್ವಜನಿಕರು ಹೋಗದಂತಾಗಿದೆ. ಈ ಬಸವ ವನ ಮೂರು ಎಕರೆ ಭೂಪ್ರದೇಶದಲ್ಲಿದೆ. ಇದು ಉದ್ಘಾಟನೆ ಮಾಡುವಾಗ ಬಸವಣ್ಣನವರ ಕಾಲದ 770 ಅಮರ ಗಣಂಗಳ (ಶರಣರ) ಹೆಸರಲ್ಲಿ ಅಷ್ಟೇ ಸಂಖ್ಯೆಯ ಮರಗಳು ನೆಟ್ಟು ಬೆಳೆಸಲಾಗಿತ್ತು. ಕೆಲ ವರ್ಷಗಳ ಹಿಂದೆ ಈ ಬಸವ ವನದಲ್ಲಿ ಹಸಿರು ಕಂಗೋಳಿಸುತಿತ್ತು. ದೂರದ ಪ್ರವಾಸಿಗರು ಸಹ ಇಲ್ಲಿಗೆ ಬಂದು ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಈ ವನದಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರು. ಸಾರ್ವಜನಿಕರು ವಾಯುವಿಹಾರ ಮಾಡುತ್ತಿದ್ದರು. ಬಹಳಷ್ಟು ವರ್ಷಗಳವರೆಗೆ ನಗರದಲ್ಲಿ ಇದೊಂದೇ ವನ ಇದ್ದುದರಿಂದ ಆಕರ್ಷಣೀಯ ಕೇಂದ್ರವಾಗಿತ್ತು. ಆದರೆ ಇದೀಗ ಅಲ್ಲಿನ ಬಹುತೇಕ ಎಲ್ಲ ಮರಗಳು ಒಣಗುತ್ತಿವೆ. ವನದ ಸಮೀಪವೇ ಮಿನಿ ಬಸ್ ನಿಲ್ದಾಣವಿದೆ. ದಿನಾಲೂ ಹಳ್ಳಿಯಿಂದ ಬರುವ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸುಡು ಬಿಸಿಲಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಇದರ ಪಕ್ಕವೇ ನ್ಯಾಯಾಲಯದ ಕಟ್ಟಡ ನಿರ್ಮಾಣಗುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಲಿದೆ. ಈ ಎಲ್ಲ ಕಾರಣದಿಂದಾಗಿ ಬಸವ ವನದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಿದರೆ ಸಾರ್ವಜನಿಕರು, ವಿದ್ಯಾರ್ಥಿಗಳು, ಪ್ರಯಾಣಿಕರು ವಿಶ್ರಾಂತಿಸಬಹುದು. ಅನುದಾನದ ಕೊರತೆ ಇದೆ. ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ರಾಜ್ಯ ಸರಕಾರಕ್ಕೆ ಹಾಗೂ ಕೆಕೆಆರ್‌ಡಿಬಿಗೆ 2ಕೋಟಿ ರೂ. ನೀಡುವಂತೆ ಮನವಿ ಸಲ್ಲಿಸಲಾಗಿದೆ. ಹಾಗೆಯೇ ಶಾಸಕರ ಗಮನಕ್ಕೂ ಕೂಡ ತರಲಾಗಿದೆ. ಆದರೆ ಬಜೆಟ್ ಸಿಗದ ಕಾರಣ ಯಾವುದೇ ಕೆಲಸ ಆಗುತ್ತಿಲ್ಲ. -ಸುನಿಲ್ ಗಂಗೋತ್ರಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕರು ಬಸವ ವನ ನಗರದ ಹೃದಯ ಭಾಗದಲ್ಲಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಬಸವ ವನದ ಮಹಾದ್ವಾರದ ಮುಂದೆಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಲ್ಲಿ ಸಿಸಿ ಕ್ಯಾಮೆರಾದ ವ್ಯವಸ್ಥೆಯಾಗಬೇಕಿದೆ. - ಆಕಾಶ್ ಖಂಡಾಳೆ, ಸ್ಥಳೀಯ ನಿವಾಸಿ ವನದಲ್ಲಿಯೇ ತೋಟಗಾರಿಕೆ  ಇಲಾಖೆಯ ಕಚೇರಿ ಬಸವ ವನದಲ್ಲಿಯೇ ತೋಟಗಾರಿಕೆಯ ತಾಲೂಕು ಅಧಿಕಾರಿಗಳ ಕಚೇರಿ ಇದೆ. ದಿನನಿತ್ಯ ಅವರು ಆ ವನವನ್ನು ಕಣ್ಣಾರೆ ನೋಡುತ್ತಾರೆ. ಆದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಶೋಚನಿಯ ಸಂಗತಿ.

ವಾರ್ತಾ ಭಾರತಿ 4 Apr 2026 11:46 am

Sakleshpura | ಕುಶಾಲನಗರ ಬಡಾವಣೆಯಲ್ಲಿ ಬೆಂಕಿ ಅವಘಡ : ಬೈಕ್ ಸುಟ್ಟು ಭಸ್ಮ

ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಬೈಕ್ ಒಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜರುಗಿದೆ. ಸ್ಥಳೀಯ ನಿವಾಸಿ ಚೋಟು ಎಂಬುವರಿಗೆ ಸೇರಿದ ಯಮಹಾ ಆರ್‌-15 (R15) ಬೈಕ್ ಬೆಂಕಿಗೆ ಆಹುತಿಯಾಗಿದೆ. ಚೋಟು ಅವರು ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಬೈಕಿನ ಇಂಜಿನ್ ಭಾಗದಲ್ಲಿ ಅಲ್ಪ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ವಾರ್ತಾ ಭಾರತಿ 4 Apr 2026 11:33 am

ಹಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ‌ ಎಲ್‌ಪಿಜಿ ಸಿಲಿಂಡರ್‌ಗಳ ಹೋಮ್ ಡೆಲಿವರಿ ಸ್ಥಗಿತ

ಬೆಂಗಳೂರು : ಇರಾನ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಂಟಾದ ಆರಂಭದಿಂದಲೂ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈಗ ಗ್ಯಾಸ್ ಏಜೆನ್ಸಿಗಳು ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಹೋಮ್ ಡೆಲಿವರಿಯನ್ನು ಸ್ಥಗಿತಗೊಳಿಸಿರುವುದು ಬೆಳಕಿಗೆ ಬಂದಿದೆ. ಯುದ್ಧ ಆರಂಭಕ್ಕೂ ಮುನ್ನ ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಯಾವುದೇ ತೊಂದರೆ ಇಲ್ಲದೆ, ಹೋಮ್ ಡೆಲಿವರಿಯ ಮೂಲಕವೇ ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತಿದ್ದವು. ಇದಕ್ಕಾಗಿ ಪ್ರತ್ಯೇಕವಾಗಿ 50 ರೂ.ಗಳಿಂದ 100 ರೂ.ಗಳವರೆಗೆ ಗ್ರಾಹಕರಿಂದ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತಿತ್ತು. ಆದರೆ ಈಗ ಗ್ಯಾಸ್ ಏಜೆನ್ಸಿಗಳು ಗ್ರಾಮೀಣ ಪ್ರದೇಶಗಳಿಗೆ ಗೃಹ ಬಳಕೆಯ ಅನಿಲ ಸಿಲಿಂಡರ್ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಿವೆ. ಏಜೆನ್ಸಿಗಳು ಹೋಮ್ ಡೆಲಿವರಿಯನ್ನು ನಿಲ್ಲಿಸಿರುವುದರಿಂದ ಹಳ್ಳಿಯ ಜನರಿಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಜನರು ಗ್ಯಾಸ್ ಅನ್ನು ಬುಕ್ ಮಾಡಿ, ನಗರ ಪ್ರದೇಶಗಳಲ್ಲಿರುವ ಗ್ಯಾಸ್ ಏಜೆನ್ಸಿಗಳ ಗೋಡಾನ್‌ಗಳಿಗೆ ತೆರಳಿ ಸಿಲಿಂಡರ್‌ಗಳನ್ನು ತೆಗೆದುಕೊಂಡು ಬರುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಹೋಟೆಲ್‌ಗಳಲ್ಲಿ ಉಂಟಾಗಿರುವ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಅಭಾವ, ಆಟೊ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯದಿಂದ ಆಟೊ ಚಾಲಕರ ಸಂಕಷ್ಟದ ನಡುವೆ ಗ್ರಾಮೀಣ ಪ್ರದೇಶಗಳಿಗೆ ಹೋಮ್ ಡೆಲಿವರಿ ಸ್ಥಗಿತವು ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ಹಳ್ಳಿಗಳಲ್ಲಿ ವಾಸವಾಗಿರುವ ಬಹುತೇಕ ಜನರು ಸಮಯ ಉಳಿತಾಯ ಹಾಗೂ ಹೊಗೆರಹಿತವಾಗಿ ಅಡುಗೆ ಮಾಡಲು ಅನಿಲ ಸಿಲಿಂಡರ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಈಗ ಸಕಾಲದಲ್ಲಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಸಾಮಾನ್ಯವಾಗಿ ಗ್ಯಾಸ್ ಏಜೆನ್ಸಿಗಳು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಗೋಡಾನ್‌ಗಳನ್ನು ತೆರೆಯುತ್ತಿದ್ದು, ಗ್ಯಾಸ್ ಬುಕ್ ಮಾಡಿದ ಹಳ್ಳಿಯ ಗ್ರಾಹಕರು ಈ ಸಮಯದಲ್ಲಿಯೇ ಗೋಡಾನ್‌ಗಳಿಗೆ ತೆರಳಿ ಸಿಲಿಂಡರ್‌ಗಳನ್ನು ಪಡೆಯಬೇಕಾಗಿದೆ. ಸಿಲಿಂಡರ್ ತರುವುದಕ್ಕಾಗಿಯೇ ತಮ್ಮ ಕೆಲಸವನ್ನು ಬಿಟ್ಟು ಒಂದು ದಿನವನ್ನು ಮೀಸಲಿಡಬೇಕಾಗಿದೆ. ಇದು ಗ್ರಾಮೀಣ ಪ್ರದೇಶದ ಜನರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಮೊ ದಲು ಸಿಲಿಂಡರ್ ಬುಕ್ ಮಾಡಿದ ಮರುದಿನವೇ ಮಾಲೂರಿನಲ್ಲಿರುವ ಸ್ವಾಮಿ ಬಾಲಾಜಿ ಇಂಡೇನ್ ಗ್ಯಾಸ್ ಏಜೆನ್ಸಿಯು ಹೋಮ್ ಡೆಲಿವರಿ ಮೂಲಕ ಮನೆ ಬಾಗಿಲಿಗೆ ಸಿಲಿಂಡರ್ ಅನ್ನು ಕಳುಹಿಸುತ್ತಿತ್ತು. ಆದರೆ ಈಗ ಸಿಲಿಂಡರ್ ಅನ್ನು ಬುಕ್ ಮಾಡಿ ಒಂದು ವಾರವಾದರೂ ಹೋಮ್ ಡೆಲಿವರಿ ಮೂಲಕ ಸಿಲಿಂಡರ್ ಸಿಗುತ್ತಿಲ್ಲ. ಏಜೆನ್ಸಿಯು ಹೋಮ್ ಡೆಲಿವರಿಯನ್ನು ಸ್ಥಗಿತ ಮಾಡಿದೆ. ಹೀಗಾಗಿ ಗ್ರಾಮದ ನಿವಾಸಿಗಳು ಕೆಲಸ ಬಿಟ್ಟು ಗೋಡಾನ್‌ಗೆ ಹೋಗಿ ಸಿಲಿಂಡರ್ ತರಬೇಕಾಗಿದೆ. -ಲಕ್ಷ್ಮಮ್ಮ, ಗೃಹಿಣಿ ಗೃಹ ಬಳಕೆಯ ಅನಿಲ ಸಿಲಿಂಡರ್‌ನ ಹೋಮ್ ಡೆಲಿವರಿಯನ್ನು ಸ್ಥಗಿತ ಮಾಡಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸ್ವಾಮಿ ಬಾಲಾಜಿ ಇಂಡೇನ್ ಗ್ಯಾಸ್ ಏಜೆನ್ಸಿಯು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಯಾವಾಗಲೂ ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ಟೆಂಪೋ ಚಾಲಕ ಕರೆ ಸ್ವೀಕರಿಸಿಲ್ಲ. ಕ್ಯಾಟರಿಂಗ್ ಮಾಡುವವರಿಗೂ ವಾಣಿಜ್ಯ ಅನಿಲ ಸಿಲಿಂಡರ್ ಸಮಸ್ಯೆ: ಎಪ್ರಿಲ್, ಮೇ ತಿಂಗಳಿನಲ್ಲಿ ಮದುವೆ, ಗೃಹಪ್ರವೇಶ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ ಬೇಕಾಗುವ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಆಗುತ್ತಿಲ್ಲ. ಇದರಿಂದ ಕಾರ್ಯಕ್ರಮಗಳೂ ರದ್ದಾಗುತ್ತಿವೆ. ಶುಭ ಕಾರ್ಯಕ್ರಮಗಳನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಕ್ಯಾಟರಿಂಗ್ ಕೆಲಸಗಾರರು, ವೀಡಿಯೊ ಪೋಟೊ ಗ್ರಾಫರ್, ಫ್ಲವರ್ ಡೆಕೋರೇಟರ್ಸ್, ವಾದ್ಯಗೋಷ್ಠಿ ಹಾಗೂ ಇತರರಿಗೂ ತೊಂದರೆ ಆಗುತ್ತಿದೆ.

ವಾರ್ತಾ ಭಾರತಿ 4 Apr 2026 11:32 am

ಮಂಜೇಶ್ವರದಲ್ಲಿ ಹೈವೋಲ್ಟೇಜ್‌ ಕದನ ; ರಾಷ್ಟ್ರೀಯ ಗಮನ ಸೆಳೆಯುತ್ತಿದೆ ಕ್ಷೇತ್ರ

ಕಳೆದ ಎರಡು ಚುನಾವಣೆಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟದ ವೇದಿಕೆ ಸಿದ್ಧವಾಗಿದೆ. ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಒಟ್ಟು 11 ಮಂದಿ ಅಭ್ಯರ್ಥಿಗಳು ಇಲ್ಲಿ ಕಣದಲ್ಲಿದ್ದು, ಪ್ರಮುಖ ಪಕ್ಷಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಮಂಜೇಶ್ವರಕ್ಕಿದೆ.

ವಿಜಯ ಕರ್ನಾಟಕ 4 Apr 2026 11:19 am

ಕಲಬುರಗಿ ಸಂಪುಟ ಸಭೆಯಲ್ಲಿ 2.13 ಕೋ.ರೂ. ದುಂದುವೆಚ್ಚ?: ಆರ್‌ಟಿಐ ವರದಿ ಬಹಿರಂಗ

ಕಾರಿನ ಇಂಧನಕ್ಕೆ ಲ‌ಕ್ಷಾಂತರ ರೂ. ಬಿಲ್!

ವಾರ್ತಾ ಭಾರತಿ 4 Apr 2026 11:17 am

ʼತಿಂದ ಮನೆಗೆ ಕನ್ನ ಹಾಕಬೇಡಿ, ಗಂಟು ಮೂಟೆ ಕಟ್ಟಿಹೊರಡಿʼ : ರಾಜ್ಯಪಾಲರ ವಿರುದ್ಧ ಕರವೇ ಆಕ್ರೋಶ

ತೃತೀಯ ಭಾಷೆಗೆ ಗ್ರೇಡ್ ನೀಡುವ ವ್ಯವಸ್ಥೆ ಕುರಿತು ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜ್ಯಪಾಲರು

ವಾರ್ತಾ ಭಾರತಿ 4 Apr 2026 11:13 am

ಕಾಸರಗೋಡು: ಡಾ. ಚೇತನಾಗೆ ಜಾಗತಿಕ ಗೌರವ; Hallett Prize Medal ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಸಮೀಪದ ಮೇಲ್ಪರಂಬ ನಿವಾಸಿ ಡಾ. ಚೇತನಾ ಸಿ.ಎಸ್. ಅವರು ಎಂ.ಆರ್.ಸಿ.ಎಸ್. (ಇ.ಎನ್.ಟಿ) ಪರೀಕ್ಷೆಯಲ್ಲಿ ಶೇ. 92 ಅಂಕಗಳನ್ನು ಗಳಿಸಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ಪ್ರದಾನವಾಗುವ ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾರ್ಚ್ 26ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಸರ್ಜನ್‌ಗಳಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ, ಎಂ.ಆರ್.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅಗ್ರ ಪ್ರತಿಭಾವಂತರಿಗೆ ಮಾತ್ರವೇ ನೀಡಲಾಗುತ್ತದೆ. ಈ ಬಾರಿ ಡಾ. ಚೇತನಾ ಅವರು ಶೇ. 92 ಅಂಕಗಳೊಂದಿಗೆ ವಿಶಿಷ್ಟ ಸಾಧನೆ ಮಾಡಿರುವುದು ಗಮನಾರ್ಹ. ಭಾರತದಲ್ಲಿ ಈ ಗೌರವಕ್ಕೆ ಪಾತ್ರರಾದ ವೈದ್ಯರ ಸಂಖ್ಯೆ ಅತ್ಯಲ್ಪವಾಗಿದೆ. ಪ್ರಸ್ತುತ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇ.ಎನ್.ಟಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯೆನೆಪೋಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಮನೋವೈದ್ಯರಾದ ಡಾ. ಶಾಶ್ವತ್ ಸತ್ಯನಾಥ್ ಅವರ ಧರ್ಮಪತ್ನಿ. ದಂಪತಿಗೆ ಅನುಷ್ಕಾ ಎಂಬ ಪುತ್ರಿ ಇದ್ದಾಳೆ. ಡಾ. ಚೇತನಾ ಅವರು ಕಾಸರಗೋಡಿನ ಕಳನಾಡು ನರ್ಸಿಂಗ್ ಹೋಮ್‌ನ ಡಾ. ಎಂ. ಸತ್ಯನಾಥ್ ಮತ್ತು ಡಾ. ಗೀತಾ ಸತ್ಯನಾಥ್ ಅವರ ಸೊಸೆಯಾಗಿದ್ದು, ಉಜಿರೆಯ ಪ್ರೊ. ಶಿವರಾವ್ ಹಾಗೂ ಜಾಹ್ನವಿ ದಂಪತಿಯ ಪುತ್ರಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಸಾಧನೆಯ ಮೂಲಕ ಡಾ. ಚೇತನಾ ಅವರು ಕಾಸರಗೋಡು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಈ ಅತ್ಯುನ್ನತ ಸಾಧನೆಗೆ ಕಾಸರಗೋಡು ಹಾಗೂ ಮಂಗಳೂರಿನ ಐಎಂಎ ಸಹಿತ ನೂರಾರು ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.

ವಾರ್ತಾ ಭಾರತಿ 4 Apr 2026 11:01 am

ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ

ಛತ್ತೀಸ್‌ಗಢ: ದೇಶದ ಬುಡಕಟ್ಟು ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಛತ್ತೀಸ್‌ಗಢದಲ್ಲಿ ಆಯೋಜಿಸಲಾಗಿದ್ದ ಚೊಚ್ಚಲ 'ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026' (Khelo India Tribal Games) ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಕರ್ನಾಟಕ ರಾಜ್ಯವು ಅತಿ ಹೆಚ್ಚು ಚಿನ್ನದ ಪದಕಗಳನ್ನು ಬೇಟೆಯಾಡುವ ಮೂಲಕ 'ಸಮಗ್ರ

ಒನ್ ಇ೦ಡಿಯ 4 Apr 2026 10:57 am

HPV ಲಸಿಕೆ ಆಗ ಬೇಡ ಆದದ್ದೇಕೆ? ಈಗ ಬೇಕಾದದ್ದೇಕೆ?

ಭಾರತೀಯ ಲಸಿಕೆಗೆ ಅಗತ್ಯ ಅನುಮತಿ ಪಡೆಯುವ ಚಟುವಟಿಕೆಗೆ ವೇಗ ನೀಡುವ ಬದಲು, ಭಾರತ ಸರಕಾರವು ಅದೇ ಹಳೆಯ ವಿವಾದಕ್ಕೀಡಾದ Gardasil ಲಸಿಕೆಯೊಂದಿಗೆ ಮುಂದುವರಿಯಲು ತೀರ್ಮಾನಿಸಿರುವುದು, ಈಗಾಗಲೇ ಕೋವಿಡ್ ಲಸಿಕೆಯ ಕಾಲದ ವಿಶ್ವಾಸಾರ್ಹತೆ ಕೊರತೆಯಿಂದ ಬಳಲುತ್ತಿರುವ ದೇಶದಲ್ಲಿ, ವಾದ-ವಿವಾದಗಳಿಗೆ ಹಾದಿ ತೆರೆದಿರುವುದು ಸಹಜ. ಭಾರತದಲ್ಲಿ ಸ್ತನ ಹಾಗೂ ಗರ್ಭಕೋಶದ ಕತ್ತಿನ ಕ್ಯಾನ್ಸರ್‌ಗಳು ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಾಗಿದ್ದು, ಅವುಗಳ ಪೈಕಿ ಗರ್ಭಕೋಶದ ಕತ್ತಿನ ಕ್ಯಾನ್ಸರ್‌ಬೆಳೆಯುವಲ್ಲಿ ಗಮನಾರ್ಹ ಪಾಲು ಇರುವುದು ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV)ನದು. ಹೆಚ್ಚಾಗಿ ಲೈಂಗಿಕ ಸಂಪರ್ಕ- ಚರ್ಮ ಸಂಪರ್ಕದ - ಗಾಯಗಳ ಮೂಲಕ ಹರಡುವ ಈ ವೈರಲ್ ಮೂಲದ ಕ್ಯಾನ್ಸರ್, ಭಾರತದಲ್ಲಿ ಪ್ರತೀ ವರ್ಷ ಅಂದಾಜು 1.20 ಲಕ್ಷ ಜನರಿಗೆ ಕಾಣಿಸಿಕೊಳ್ಳುತ್ತಿದ್ದು; ವಾರ್ಷಿಕ ಅಂದಾಜು 80,000 ಜನರ ಜೀವಕ್ಕೆ ಎರವಾಗುತ್ತಿದೆ. ಈ ವೈರಸ್‌ಗೆ ಲಸಿಕೆ ಲಭ್ಯವಿದ್ದು, ಭಾರತ ಸರಕಾರವು 14 ವರ್ಷ ಪ್ರಾಯದ 1.15 ಕೋಟಿ ಹುಡುಗಿಯರಿಗೆ ಈ ವರ್ಷ ಸಾರ್ವತ್ರಿಕವಾಗಿ ಲಸಿಕೆ ನೀಡುವ ಅಭಿಯಾನ ಆರಂಭಿಸಿದೆ. ಫೆಬ್ರವರಿ 27ರಂದು ಪ್ರಧಾನಿಯವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. 2022ರ ಜೂನ್‌ನಲ್ಲಿ WHOದ ಪರಿಣತ ಸಲಹಾ ತಂಡವು (SAGE) ಈ ಲಸಿಕೆಯ ಸಾಂಪ್ರದಾಯಿಕ ಎರಡು ಡೋಸ್‌ಗಳ ಬದಲಿಗೆ ಒಂದು ಡೋಸ್ ಸಾಕಾಗುತ್ತದೆ ಎಂದಿರುವುದನ್ನು ಭಾರತದ ಲಸಿಕಾ ಪರಿಣತರ ತಂಡ (NTAGI) ಕೂಡ ಅನುಮೋದಿಸಿದೆ. ಜಗತ್ತಿನಾದ್ಯಂತ 160 ದೇಶಗಳಲ್ಲಿ, 50 ಕೋಟಿ ಮಂದಿಗೆ ಈ ತನಕ ಈ ಲಸಿಕೆ ನೀಡಲಾಗಿದ್ದು, ಅದು ಶೇ. 93-100 ಪರಿಣಾಮಕಾರಿ ಎಂದು ಕಂಡುಕೊಳ್ಳಲಾಗಿದೆ ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ (PIB Release ID: 2233632). ಈಗಿನ್ನೂ ಸಾರ್ವತ್ರಿಕೆ ಲಸಿಕೆ ಕಾರ್ಯಕ್ರಮದ (UIP) ಭಾಗವಾಗಿರದ ಈ HPV ಲಸಿಕೆಯನ್ನು, ಭಾರತ ಸರಕಾರ ತನ್ನ ಮೂಗಿನ ನೇರಕ್ಕೆ ತೀರ್ಮಾನಿಸಿ, ಬಾಲಕಿಯರಿಗೆ ಸಾರ್ವತ್ರಿಕವಾಗಿ ನೀಡಲಾರಂಭಿಸಿರುವ ಕುರಿತು ಹಲವು ಪ್ರಶ್ನೆಗಳು ಏಳತೊಡಗಿವೆ. ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯ ಕಾಪಾಡುವಿಕೆಯಂತಹ ಮೂಲಭೂತ ಅಂಶಗಳಿಗೆ ಮತ್ತು ಆರಂಭಿಕ ಹಂತದಲ್ಲೇ ಎಲ್ಲ ವಿಧದ ಕ್ಯಾನ್ಸರ್‌ಗಳ ಸ್ಕ್ರೀನಿಂಗ್ ಮಾಡುವುದಕ್ಕೆ ಆದ್ಯತೆ ನೀಡುವ ಬದಲು, ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಹರಡುವ ಈ HPV ವೈರಸ್ ನಿಯಂತ್ರಣಕ್ಕೆ ಸರಕಾರ ಆದ್ಯತೆ ನೀಡಿ ಮುಂದೆ ನಿಂತಿರುವುದರ ಹಿನ್ನೆಲೆಯ ಬಗ್ಗೆ ಗುಮಾನಿಗಳಿವೆ. ಈ ಲಸಿಕೆಯನ್ನು ಸಾರ್ವತ್ರಿಕವಾಗಿ ನೀಡುವ ಅವಶ್ಯಕತೆ, ಲಸಿಕೆಯ ಪರಿಣಾಮಗಳು, ಸರಕಾರದ ಈ ನಿಲುವಿನಿಂದ ಹೆತ್ತವರ ಹಕ್ಕುಗಳ ಮೇಲೆ ಆಗಲಿರುವ ಹಸ್ತಕ್ಷೇಪ, ಎಳೆಯರ ಲೈಂಗಿಕ ವರ್ತನೆಗಳ ಕುರಿತು ಸರಕಾರದ ಏಕಮುಖಿ ತೀರ್ಮಾನದ ಬಗ್ಗೆ ಕಳವಳಗಳು, ಈ ಇಡೀ ಪ್ರಕರಣದಲ್ಲಿ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್‌ಗೇಟ್ಸ್ ಅವರ GAVI ಲಸಿಕೆ ಒಕ್ಕೂಟದ ಪಾತ್ರದ ಕುರಿತು ಇರುವ ವದಂತಿ ಪ್ರೇರಿತ ಆತಂಕಗಳು... ಇವೆಲ್ಲ ಸಾರ್ವಜನಿಕವಾಗಿ ಚರ್ಚೆ ಆಗತೊಡಗಿವೆ. ಒಂದು ಹಳೆಯ ಕಥೆ ಈ ಲಸಿಕೆಗೆ ಸಂಬಂಧಿಸಿದಂತೆ ಒಂದು ಹಳೆಯ ಕುತೂಹಲಕರ ಕಥೆ ಇದೆ. ಜೂನ್ 2006ರಿಂದ ಮೇ 2011ರ ನಡುವೆ, ನಾಲ್ಕು ದೇಶಗಳಲ್ಲಿ (ಉಗಾಂಡಾ, ಪೆರು, ವಿಯೆಟ್ನಾಂ, ಭಾರತ) ಇದೇ HPV ಲಸಿಕೆಯನ್ನು ಸಾರ್ವಜನಿಕರ ಮೇಲೆ ಪ್ರಯೋಗಿಸಲು ಅಮೆರಿಕ ಮೂಲದ Programme for Appropriate Technology for Health - PATH ಸಂಸ್ಥೆಯು ಕಾರ್ಯಕ್ರಮವೊಂದನ್ನು ರೂಪಿಸಿತ್ತು. ಗುಜರಾತ್ (ಬರೋಡಾ) ಮತ್ತು ಆಂಧ್ರಪ್ರದೇಶ (ಖಮ್ಮಮ್)ಗಳಲ್ಲಿ ಈ ಪ್ರಯೋಗ ನಡೆದು, 23,000 ಬಾಲಕಿಯರಿಗೆ HPV ಲಸಿಕೆ ನೀಡಲಾಗಿತ್ತು. ಅವರಲ್ಲಿ, ಏಳು ಮಂದಿ ಬಡ ಆದಿವಾಸಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಗದ್ದಲವಾಗಿ, ಒಂದು ಸಂಸದೀಯ ಸ್ಥಾಯೀ ಸಮಿತಿ ರಚನೆಗೊಂಡು, ಆ ಸಮಿತಿಯು ಪ್ರಕರಣದ ತನಿಖೆ ನಡೆಸಿ, ತನ್ನ ವರದಿಯಲ್ಲಿ, ಸದ್ರಿ ಪ್ರಯೋಗವು ನಿಯಂತ್ರಕ ನಿಯಮಗಳ, ನೈತಿಕ ನಿಯಮಗಳ ಸಾರಾಸಗಟು ಉಲ್ಲಂಘನೆ ಹಾಗೂ ಕಾರ್ಯಕ್ರಮದ ಮೇಲ್ವಿಚಾರಣೆಯಲ್ಲಿ ಗಂಭೀರ ಸ್ವರೂಪದ ಲೋಪಗಳಿಂದ ಕೂಡಿತ್ತೆಂದು ಅಭಿಪ್ರಾಯಪಟ್ಟಿತ್ತು. ಈ ಪ್ರಕರಣದಲ್ಲಿ ICMR ಹಾಗೂ DCGI ನಡವಳಿಕೆಗಳ ಬಗ್ಗೆ ಸಂಸದೀಯ ಸಮಿತಿ ಕಟುವಾದ ಆಕ್ಷೇಪಗಳನ್ನು ದಾಖಲಿಸಿತ್ತು. ಇಂದು ಉತ್ತರಪ್ರದೇಶದಲ್ಲಿ ಉಪಮುಖ್ಯಮಂತ್ರಿಯೂ, ಆರೋಗ್ಯ ಸಚಿವರೂ ಆಗಿರುವ ಅಂದಿನ ಸಂಸದ ಬೃಜೇಶ್ ಪಾಠಕ್ ಈ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದರು ಹಾಗೂ ಇಂದು ಭಾರತ ಸರಕಾರದ ಆರೋಗ್ಯ ಸಚಿವರಾಗಿರುವ ಡಾ. ಜಗತ್ ಪ್ರಸಾದ್ ನಡ್ಡಾ ಆ ಸಂಸದೀಯ ಸಮಿತಿಯ ಸದಸ್ಯರಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. 2013ರಲ್ಲಿ ಈ ಸಮಿತಿ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತ್ತು. (ಆಧಾರ: Parliament of India, 72nd report on Alleged irregularities in the conduct of studies using HPV vaccine by PATH India.) ಮುಂದೆ ಸರಕಾರದ್ದೇ ಇನ್ನೊಂದು ಸಮಿತಿ, ಆ ಸಾವುಗಳಿಗೆ ಲಸಿಕೆ ಕಾರಣ ಅಲ್ಲ ಎಂದು ಷರಾ ಬರೆಯಿತು; ಲಸಿಕೆ ಉದ್ದಾನುದ್ದಕ್ಕೂ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಅಂದು ನೀಡಲಾದದ್ದು ಮರ್ಕ್ ಸಂಸ್ಥೆಯ Gardasil ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್ ಸಂಸ್ಥೆಯ Ceravix ಲಸಿಕೆಗಳನ್ನು. ಅಂದು ಕೂಡ ಆ ಲಸಿಕೆಗಳನ್ನು ನೀಡಲು ಆರ್ಥಿಕ ಸಹಾಯ ಮಾಡಿದ್ದು, ಇಂದಿನ GAVI ಮುಖ್ಯಸ್ಥರಾಗಿರುವ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್. ಅಂದು ಮಾನವರ ಮೇಲೆ ಈ ವೈದ್ಯಕೀಯ ಪ್ರಯೋಗವನ್ನು ‘ಡೆಮಾನ್‌ಸ್ಟ್ರೇಷನ್ ಪ್ರಾಜೆಕ್ಟ್’ ಎಂಬ ಮುಸುಕಿನಲ್ಲಿ ಮಾಡಲಾಗಿತ್ತು. ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಈ ಕಾರ್ಯಕ್ರಮದ ಕುರಿತು ಮಾಡಿರುವ ಆಬ್ಸರ್ವೇಶನ್‌ಗಳಲ್ಲಿ ಒಂದು ಹೀಗಿದೆ: ‘‘ಈ ಇಡಿಯ ಪ್ರಕರಣವು ಕುತೂಹಲಕರ ಮತ್ತು ಅನುಮಾನಾಸ್ಪದ. ಪ್ರಯೋಗಕ್ಕೆ ದೇಶ ಮತ್ತು ಜನಸಮುದಾಯಗಳ ಆಯ್ಕೆ; ಉತ್ಪನ್ನವನ್ನು ಮಾರುಕಟ್ಟೆಗೆ ದೂಡುವ ಸನ್ನಿವೇಶದಲ್ಲಿ ಅದರ ಏಕಸ್ವಾಮ್ಯತೆಯ ಸ್ವರೂಪ; ಆಯಾ ದೇಶಗಳ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳಲ್ಲಿ ಅಳವಡಿಕೆಯಾದರೆ ಅದರಿಂದ ಸಿಗುವ ಅಪರಿಮಿತ ಮಾರುಕಟ್ಟೆ ಮತ್ತು ಅವಕಾಶಗಳೆಲ್ಲವೂ ಬೊಟ್ಟು ಮಾಡುತ್ತಿರುವುದು - ಇದೆಲ್ಲ ಸನ್ನಿವೇಶದ ಭರಪೂರ ಲಾಭ ಪಡೆಯಲು ಮಾಡಿರುವ ಸುಯೋಜಿತ ತಂತ್ರ ಎಂದು. ಸಂಬಂಧಿಸಿದ ದೇಶಗಳಲ್ಲಿನ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳಲ್ಲಿ ಈ HPV ಲಸಿಕೆಯನ್ನು ಸೇರ್ಪಡೆಗೊಳಿಸುವಲ್ಲಿ PATH ಯಶಸ್ವಿಯಾಗುತ್ತಿದ್ದರೆ, ಯಾವುದೇ ಪ್ರಚಾರ, ಖರ್ಚು ಇಲ್ಲದೆ ಪ್ರತೀವರ್ಷ ಆಟೊಮ್ಯಾಟಿಕ್ ಮಾರುಕಟ್ಟೆ ಲಭ್ಯವಾಗುತ್ತಿತ್ತು; ಉತ್ಪಾದಕರಿಗೆ ಲಾಭದ ಸುರಿಮಳೆಯಾಗುತ್ತಿತ್ತು. ಒಮ್ಮೆ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಕೊಂಡರೆ ಯಾವುದೇ ಲಸಿಕೆಯನ್ನು ಆ ಬಳಿಕ ಹಿಂದೆಗೆದುಕೊಳ್ಳುವುದು ರಾಜಕೀಯವಾಗಿ ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. PATH ಸಂಸ್ಥೆಯು ಈ ಗುರಿಯನ್ನು ಸಾಧಿಸಲು, ಕಟ್ಟುನಿಟ್ಟಿನ ನಿಯಂತ್ರಣಗಳಿರುವ ಕಠಿಣ ನಿಯಮಬದ್ಧ ಹಾದಿಯನ್ನು ಬಿಟ್ಟು, ಕ್ಲಿನಿಕಲ್ ಟ್ರಯಲ್‌ಗಳನ್ನು ‘ನಿಗಾ ಅಧ್ಯಯನ’ ಅಥವಾ ‘ಪ್ರದರ್ಶನ ಯೋಜನೆ’ ಎಂಬಿತರ ಹೆಸರುಗಳಲ್ಲಿ ಚಾಲ್ತಿಗೆ ತಂದು, ಕುತಂತ್ರದ ಸುಲಭ ಹಾದಿ ಹಿಡಿದಿದೆ.’’ ಇಂತಹದೊಂದು ವರದಿ ನೀಡಿದ ಸಮಿತಿಯ ಭಾಗ ಆಗಿದ್ದ ಆರೋಗ್ಯ ಸಚಿವ ಡಾ. ನಡ್ಡಾ ಅವರೇ ಈಗ ಇದೇ ಲಸಿಕೆಗಳಲ್ಲಿ ಒಂದನ್ನು ದೇಶದ ಒಳಗೆ ಬಳಕೆಗೆ ಮುಂದಾಗಿದ್ದಾರೆ ಎಂದಾಗ, ಸಹಜವಾಗಿಯೇ ಹುಬ್ಬುಗಳು ಏರುತ್ತವೆ. GAVI ಈಗ ಭಾರತಕ್ಕೆ 2.6 ಕೋಟಿ HPV ಲಸಿಕೆ ಡೋಸ್‌ಗಳನ್ನು ಒದಗಿಸುತ್ತಿದ್ದು, ಅದನ್ನು ಪ್ರತೀ ವರ್ಷ 14 ವರ್ಷ ಪ್ರಾಯ ತಲುಪುವ ಬಾಲಕಿಯರಿಗೆ ನೀಡುವ ಉದ್ದೇಶ ಸರಕಾರಕ್ಕೆ ಇದ್ದಂತಿದೆ. ಭಾರತೀಯ ಲಸಿಕೆ ಇದ್ದೂ... ಮೇಲೆ ವಿವರಿಸಲಾದ ವಿವಾದಗಳ ಕಾರಣದಿಂದ, ಭಾರತದಲ್ಲಿ HPV ಲಸಿಕೆಯು ಒಂದು ದಶಕದಷ್ಟು ವಿಳಂಬವಾಗಿ, ಈಗಷ್ಟೇ ಬಳಕೆಗೆ ಬರುತ್ತಿದೆ. ಈಗ ಭಾರತದಲ್ಲಿ ಸರಕಾರ ತನ್ನ ಅಭಿಯಾನಕ್ಕೆ ಬಳಸುತ್ತಿರುವುದು ಬಿಲ್ ಗೇಟ್ಸ್ ಅವರ GAVI ಸಹಾಯಹಸ್ತದೊಂದಿಗೆ ದೊರೆತಿರುವ Gardasil ಲಸಿಕೆಯ ಏಕ ಡೋಸ್‌ಅನ್ನು. ಭಾರತದ್ದೇ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಈಗಾಗಲೇ Cervavac ಎಂಬ ಲಸಿಕೆಯನ್ನು ಸಿದ್ಧಪಡಿಸಿದ್ದು (2022), ಅದಕ್ಕೆ ಇನ್ನೂ WHOದಿಂದ ಏಕ ಡೋಸ್ ಬಳಕೆಯ ಅನುಮತಿ ಸಿಕ್ಕಿಲ್ಲ. ಭಾರತೀಯ ಲಸಿಕೆಗೆ ಅಗತ್ಯ ಅನುಮತಿ ಪಡೆಯುವ ಚಟುವಟಿಕೆಗೆ ವೇಗ ನೀಡುವ ಬದಲು, ಭಾರತ ಸರಕಾರವು ಅದೇ ಹಳೆಯ ವಿವಾದಕ್ಕೀಡಾದ Gardasil ಲಸಿಕೆಯೊಂದಿಗೆ ಮುಂದುವರಿಯಲು ತೀರ್ಮಾನಿಸಿರುವುದು, ಈಗಾಗಲೇ ಕೋವಿಡ್ ಲಸಿಕೆಯ ಕಾಲದ ವಿಶ್ವಾಸಾರ್ಹತೆ ಕೊರತೆಯಿಂದ ಬಳಲುತ್ತಿರುವ ದೇಶದಲ್ಲಿ, ವಾದ-ವಿವಾದಗಳಿಗೆ ಹಾದಿ ತೆರೆದಿರುವುದು ಸಹಜ. ಗಮನಿಸಬೇಕಾದ ಸಂಗತಿ ಎಂದರೆ, ಬಜೆಟ್‌ನಲ್ಲಿ ಹಣಕಾಸು ಸಚಿವರು ಈ ಬಗ್ಗೆ ಪ್ರಕಟಿಸಿರುವುದನ್ನು ವಿವರಿಸಿರುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕೃತ ವೆಬ್‌ಸೈಟ್, ಭಾರತವು ಇಲ್ಲೇ ಸಿದ್ಧಗೊಂಡು SII ಮಾರುಕಟ್ಟೆ ಮಾಡುತ್ತಿರುವ Cervavac ಲಸಿಕೆಯನ್ನೇ ಅಭಿಯಾನಕ್ಕೆ ಬಳಸಲಿದೆ. ಅದು ಹಾಲಿ ಖಾಸಗಿ ಆಸ್ಪತ್ರೆಗಳಲ್ಲಿ ಡೋಸೊಂದರ 4000ರೂ.ಗಳಿಗೆ ಲಭ್ಯ ಎಂದು ಹೇಳುತ್ತಿದೆ! ಈ ರೀತಿಯ ಗೊಂದಲದ ಬೆಳವಣಿಗೆಗಳೆಲ್ಲ ಅಂತಿಮವಾಗಿ, ಈಗಾಗಲೇ ವಾಣಿಜ್ಯೀಕರಣದ ಬಿರುಗಾಳಿಗೆ ತುತ್ತಾಗಿರುವ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಜನಸಾಮಾನ್ಯರಿಗೆ ಬಾಕಿ ಉಳಿದಿರುವ ಕಿಂಚಿತ್ ಭರವಸೆ, ವಿಶ್ವಾಸಗಳಿಗೆ ಧಕ್ಕೆ ಮಾಡುತ್ತಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸರಕಾರಕ್ಕೆ ಕ್ಯಾನ್ಸರ್‌ಗಳ ಕುರಿತು ಕಾಳಜಿ ಇದ್ದರೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ಗಳನ್ನು ಗುರುತಿಸುವ ಸ್ಕ್ರೀನಿಂಗ್ ವ್ಯವಸ್ಥೆಯನ್ನು ದೇಶದಾದ್ಯಂತ ಬಲಪಡಿಸುವ, ಅಭಿಯಾನದೋಪಾದಿಯಲ್ಲಿ ಅದನ್ನು ಆಚರಣೆಗೆ ತರುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದರ ಬದಲು ಒಂದು ನಿರ್ದಿಷ್ಟ ಕ್ಯಾನ್ಸರ್ ಬೆನ್ನು ಹತ್ತಿ ಹೊರಟಿರುವುದು ಯಾಕೋ ತಾರ್ಕಿಕ ಅನ್ನಿಸುತ್ತಿಲ್ಲ. ಬೆಂಕಿ ಇಲ್ಲದೇ ವಿವಾದಗಳು ಹೊಗೆಯಾಡುವುದಿಲ್ಲ.

ವಾರ್ತಾ ಭಾರತಿ 4 Apr 2026 10:50 am

Maharashtra| ಬಾವಿಗೆ ಬಿದ್ದ ಕಾರು: ಒಂದೇ ಕುಟುಂಬದ 9 ಮಂದಿ ಮೃತ್ಯು

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿನ್ಡೋರಿ ತಾಲೂಕಿನಲ್ಲಿ ಕಾರು ಬಾವಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಧ್ಯರಾತ್ರಿಯ ಸುಮಾರಿಗೆ ಕ್ರೇನ್‌ಗಳು ಮತ್ತು ಈಜುಗಾರರ ಸಹಾಯದಿಂದ ಕಾರನ್ನು ಹೊರತೆಗೆದಿದ್ದಾರೆ. ಮೃತರನ್ನು ಸುನಿಲ್ ದತ್ತು ದರ್ಗುಡೆ (32), ಅವರ ಪತ್ನಿ ರೇಷ್ಮಾ, ಆಶಾ ಅನಿಲ್ ದರ್ಗುಡೆ (32) ಎಂದು ಗುರುತಿಸಲಾಗಿದೆ. ಇದಲ್ಲದೆ ಅವರ ಕುಟುಂಬದ ಆರು ಮಕ್ಕಳು ಮೃತಪಟ್ಟಿದ್ದಾರೆ. ಮೃತದೇಹವನ್ನು ದಿಂಡೋರಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.   ಅಪಘಾತದ ಕುರಿತು ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 4 Apr 2026 10:47 am

ಏರುತ್ತಿರುವ ಜನಪ್ರಿಯತೆಯ ಗ್ರಾಫ್ : ಜಮೀರ್ ಅಹ್ಮದ್’ಗೆ ಎಐಸಿಸಿಯಲ್ಲಿ ಹೊಡೆಯಿತು ಲಾಟರಿ

Minority Commission post of AICC to Zameer : ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರಾದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿ, ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಇದು, ಎಐಸಿಸಿ ಮಟ್ಟದಲ್ಲಿ ಸಿಕ್ಕಿರುವ ಪೋಸ್ಟ್ ಆಗಿದೆ. ಜಮೀರ್ ಅವರು ಸದ್ಯ, ಕೇರಳದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 4 Apr 2026 10:45 am

Kerala| ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ಪಡೆಯ ವಾಹನ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಂಡೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ತಿರುವಳ್ಳಿ ಚೆಲ್ಲಿತೋಡು ಸೇತುವೆ ಬಳಿ ಘಟನೆ ನಡೆದಿದೆ.   “ನಾವು ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು ಎಂಟು ಮಂದಿಯಿದ್ದ ಗುಂಪು ವಾಹನವನ್ನು ತಡೆದಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಭದ್ರತಾ ಸಿಬ್ಬಂದಿಯೋರ್ವರು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿದೆʼ ಎಂದು ಆರೋಪಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಕುರಿತು ಪ್ರಕರಣವನ್ನು ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.  

ವಾರ್ತಾ ಭಾರತಿ 4 Apr 2026 10:22 am

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಗಲ್ಫ್ ಭಾಗದ ರಫ್ತು ಕುಸಿತ ; ಸ್ಥಳೀಯರ ತಟ್ಟೆಗೆ ಭರಪೂರ ಮೊಟ್ಟೆ !

ಮಧ್ಯ ಪ್ರಾಚ್ಯದ ಸಂಘರ್ಷವು ದಕ್ಷಿಣ ಭಾರತದ ಕೋಳಿ ಸಾಕಾಣಿಕೆ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರತದ 'ಮೊಟ್ಟೆಯ ತೊಟ್ಟಿಲು' ಎನಿಸಿಕೊಂಡಿರುವ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದ ಭಾಗಗಳಿಂದ ಗಲ್ಫ್ ರಾಷ್ಟ್ರಗಳಿಗೆ ತಿಂಗಳಿಗೆ ರಫ್ತಾಗುತ್ತಿದ್ದ ಕೋಟ್ಯಂತರ ಮೊಟ್ಟೆಗಳ ವ್ಯಾಪಾರಕ್ಕೆ ಯುದ್ಧದ ಕಾರಣದಿಂದ ಅಡ್ಡಿಯಾಗಿದೆ.

ವಿಜಯ ಕರ್ನಾಟಕ 4 Apr 2026 9:52 am

ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷದ್ವೀಪದ ಮೀನುಗಾರ ಯುವಕ ಅಬ್ದುಲ್ ಫತ್ತಾ

ಜಗದಾಲ್ಪುರ (ಛತ್ತೀಸ್‌ಗಢ): ರಾತ್ರಿಯಿಡೀ ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಕುಟುಂಬಕ್ಕೆ ಆಧಾರವಾಗಿರುವ ಯುವಕನೊಬ್ಬ, ಹಗಲಿನಲ್ಲಿ ಕ್ರೀಡಾ ಮೈದಾನದಲ್ಲಿ ಬೆವರು ಸುರಿಸಿ ಇದೀಗ ಇಡೀ ದೇಶವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಛತ್ತೀಸ್‌ಗಢದ ಜಗದಾಲ್ಪುರದಲ್ಲಿ ನಡೆಯುತ್ತಿರುವ 'ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ'ದಲ್ಲಿ (KITG - 2026) ಲಕ್ಷದ್ವೀಪದ 18 ವರ್ಷದ ಯುವಕ ಅಬ್ದುಲ್ ಫತ್ತಾ ಉದ್ದ ಜಿಗಿತ ಸ್ಪರ್ಧೆಯಲ್ಲಿ

ಒನ್ ಇ೦ಡಿಯ 4 Apr 2026 9:42 am

ದಾವಣಗೆರೆ: ಏಪ್ರಿಲ್‌ 10 ರ ನಂತರ ತಾಪಮಾನದಲ್ಲಿ ಇನ್ನಷ್ಟು ಹೆಚ್ಚಳ; ಎರಡು ದಿನ 42 ಡಿಗ್ರಿ ಉಷ್ಣಾಂಶ ಸಾಧ್ಯತೆ

ಜಗಳೂರು ತಾಲೂಕಿನಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿಕೆಯಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೆ ಏರುತ್ತಿದೆ.

ವಿಜಯ ಕರ್ನಾಟಕ 4 Apr 2026 9:31 am

ಹೊರ್ಮುಜ್‌ ಭದ್ರಗೊಳಿಸೋ ನಿರ್ಣಯದ ಮತದಾನ ಮುಂದಿನ ವಾರಕ್ಕೆ ಮುಂದೂಡಿದ ವಿಶ್ವಸಂಸ್ಥೆ: UNSCಯಲ್ಲಿ ಮಿಲಿಟರಿ ಕ್ರಮಕ್ಕೆ ಚೀನಾ ರಷ್ಯಾ ವಿರೋಧ!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಹೊರ್ಮುಜ್‌ ಜಲಸಂಧಿಯನ್ನು ಸುರಕ್ಷಿತಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದ ಮತದಾನ ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇನ್ನು, ಹೊರ್ಮುಜ್‌ ಜಲಸಂಧಿಯ ಸುರಕ್ಷತೆಗೆ ಮಿಲಿಟರಿ ಕ್ರಮ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ದೇಶಗಳಿಗೆ ಅವಕಾಶ ನೀಡುವ ನಿರ್ಣಯದಲ್ಲಿ ಮಿಲಿಟರಿ ದಾಳಿ ಅಂಶಕ್ಕೆ ರಷ್ಯಾ ಚೀನಾದಿಂದ ವಿರೋಧ ಕೇಳಿ ಬಂದಿದೆ. ಇನ್ನು, ಇತ್ತ ಪ್ರಾದೇಶಿಕವಾಗಿ ಯುದ್ಧ ಉಲ್ಬಣಗೊಳುತ್ತಿದ್ದು, ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮುಂದುವರೆಸಿದೆ.

ವಿಜಯ ಕರ್ನಾಟಕ 4 Apr 2026 9:14 am

ಕೇಜ್ರಿವಾಲ್ ’blue-eyed boy’ ರಾಘವ್ ಚಡ್ಡಾ ವಜಾ : ಇದರ ಹಿಂದಿದೆ ಚಡ್ಡಾ ಬಿಜೆಪಿ ಸೇರ್ಪಡೆಯ ಘಮಲು?

Raghav Chadha Joining BJP : ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಉಪನಾಯಕನ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ, ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿದೆ.

ವಿಜಯ ಕರ್ನಾಟಕ 4 Apr 2026 8:48 am

ರಾಜ್ಯದ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳಲ್ಲಿ 1.16 ಕೋಟಿ ಖಾತೆಗಳು ಅನಾಥ

ಸಾಂದರ್ಭಿಕ ಚಿತ್ರ PC: freepik ಬೆಂಗಳೂರು, ಎ.3: ಸರಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರ ಖಾಸಗಿ ಬ್ಯಾಂಕ್‌ಗಳಲ್ಲಿ, ವಿವಿಧ ಬ್ಯಾಂಕ್‌ಗಳಲ್ಲಿ ತೆರೆದಿದ್ದ ಖಾತೆಗಳು ವಾರಸುದಾರರಿಲ್ಲದೇ 1.16 ಕೋಟಿಯಷ್ಟು ಖಾತೆಗಳು ಅನಾಥವಾಗಿ ನಿಷ್ಕ್ರೀಯವಾಗಿವೆ. ಈ ಖಾತೆಗಳಲ್ಲಿ 2025ರ ಅಕ್ಟೋಬರ್ ಅಂತ್ಯಕ್ಕೆ 3,403 ಕೋಟಿ ಹಣವಿತ್ತು. ಈ ಹಣವನ್ನು ಮರಳಿಸದ ಕಾರಣ ನಿಷ್ಕ್ರೀಯ ಖಾತೆಗಳಲ್ಲಿ ಉಳಿದಿದೆ. 2025ರ ನವೆಂಬರ್‌ನಲ್ಲಿ ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಾಲೋಚನ ಸಭೆಯ ನಡವಳಿಯಲ್ಲಿ ಈ ಮಾಹಿತಿ ಇದೆ. ಈ ಸಭೆಯ ನಡವಳಿಗಳು ‘the-file.in’ಗೆ ಲಭ್ಯವಾಗಿವೆ. ಹೀಗಾಗಿ ಇಂತಹ ಖಾತೆಗಳ ಕುರಿತು ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಈ ಅವಧಿಯಲ್ಲಿ ಗರಿಷ್ಠ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು. ವಾರಸುದಾರರಿಲ್ಲದೇ ನಿಷ್ಕ್ರೀಯವಾಗಿರುವ ಠೇವಣಿಗಳನ್ನು ಠೇವಣಿದಾರರು ಮತ್ತು ಹಕ್ಕುದಾರರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಪೂರ್ವಭಾವಿಯಾಗಿ ಸಂಪರ್ಕ ಕಲ್ಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ತಿಳಿದು ಬಂದಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹದಿನೈದು ದಿನಗಳ ಆಧಾರದ ಮೇಲೆ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಇಂತಹ ನಿಷ್ಕ್ರೀಯ ಖಾತೆಗಳ ಕುರಿತು ಎಲ್ಲಾ ಬ್ಯಾಂಕುಗಳು ತಮ್ಮ ಪ್ರಗತಿ ಅಂಕಿ ಅಂಶಗಳನ್ನು ಎಸ್‌ಎಲ್‌ಬಿಸಿಗೆ ತಕ್ಷಣವೇ ಸಲ್ಲಿಸಬೇಕು ಎಂದು ಸೂಚಿಸಿದೆ. ಬ್ಯಾಂಕ್‌ಗಳು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ನಿಷ್ಕ್ರೀಯ ಖಾತೆಗಳ ವಿವರಗಳನ್ನು ಸಂಬಂಧಪಟ್ಟ ಸರಕಾರಿ ಇಲಾಖೆಗಳೊಂದಿಗೆ ನೇರವಾಗಿ ಹಂಚಿಕೊಳ್ಳಬೇಕು. ಮತ್ತು ಅಂತಹ ಪ್ರಕರಣಗಳ ಸುಗಮ ಇತ್ಯರ್ಥಕ್ಕಾಗಿ ಅವರೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡಬೇಕು. ಶಾಖೆ ಮಟ್ಟದ ಸೂಚನೆಗಳು, ಔಟ್ ರೀಚ್ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಚಾನೆಲ್‌ಗಳ ಮೂಲಕ ಬ್ಯಾಂಕುಗಳು ಕ್ಲೈಮ್ ಮಾಡದ ಠೇವಣಿಗಳ ಲಭ್ಯತೆ ಮತ್ತು ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಸಭೆಯು ಸಲಹೆ ನೀಡಿದೆ. ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಇಂತಹ ಖಾತೆಗಳಿಗೆ ವಿವಿಧ ಸೌಲಭ್ಯಗಳ ಹಣವು ಜಮೆಯಾಗುತ್ತದೆ. ಆದರೆ ಬಹುತೇಕರು ಈ ಹಣವನ್ನು ಪಡೆಯದೇ ಅಲ್ಲಿಯೇ ಇಟ್ಟಿರುತ್ತಾರೆ. ಹಲವು ಫಲಾನುಭವಿಗಳು ಮರಣ ಹೊಂದಿರುತ್ತಾರೆ. ಹೀಗಾಗಿ ಕೆಲವು ಖಾತೆಗಳಲ್ಲಿ ಅವಲಂಬಿತರ ಹೆಸರು ಕೂಡ ಇರುವುದಿಲ್ಲ. ಹೀಗಾಗಿ ಸರಕಾರದ ಹಣವು ಅನೇಕ ವರ್ಷಗಳಿಂದ ಅಲ್ಲಿಯೇ ಕೊಳೆಯುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಶಿಷ್ಯ ವೇತನ ಸೇರಿ ಇತರ ಸೌಲಭ್ಯಗಳಿಗೆ ತೆರೆದಿರುವ ಖಾತೆಗಳ ಪಟ್ಟಿಯನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನಿಷ್ಕ್ರೀಯಗೊಳಿಸಿದ ಪಟ್ಟಿಯನ್ನು ಬ್ಯಾಂಕ್‌ಗಳು ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿಸಲು ಅಥವಾ ನವೀಕರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಎಲ್ಲಾ ಬ್ಯಾಂಕ್‌ಗಳಿಗೆ ಸಲಹೆ ನೀಡುತ್ತದೆ. 2025ರ ಫೆಬ್ರವರಿ ಅಂತ್ಯಕ್ಕೆ 3,305 ನಿಷ್ಕ್ರೀಯ ಖಾತೆಗಳಿದ್ದವು. ಇದರಲ್ಲಿ 55.78 ಕೋಟಿ ರೂ. ಇತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 45.14 ಕೋಟಿ ರೂ.ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ 7.03 ಕೋಟಿ ರೂ. ರಾಜ್ಯ ಸರಕಾರವು ಠೇವಣಿ ಇರಿಸಿತ್ತು. ಈ ಹಣವು ಯಾರ ಬಳಕೆಗೂ ಬಾರದೇ ಅಲ್ಲಿಯೇ ಉಳಿದುಕೊಂಡಿತ್ತು. ಆದರೆ 2025ರ ನವೆಂಬರ್ ಅಂತ್ಯಕ್ಕೆ ಇಂತಹ ನಿಷ್ಕ್ರೀಯ ಖಾತೆಗಳ ಸಂಖ್ಯೆಯು 1.13 ಕೋಟಿಯಷ್ಟಾಗಿವೆ. ಮೊತ್ತವೂ 3,403 ಕೋಟಿ ರೂ.ಇದೆ. ತುಮಕೂರು ಜಿಲ್ಲೆಯಲ್ಲಿ ಡಿಸೆಂಬರ್ 2025ರ ಅಂತ್ಯಕ್ಕೆ 26 ಬ್ಯಾಂಕ್‌ಗಳ 373 ಶಾಖೆಗಳಲ್ಲಿ ಒಟ್ಟಾರೆ 4,11,477 ಖಾತೆಗಳು ನಿಷ್ಕ್ರೀಯಗೊಂಡಿದ್ದವು. ಈ ಖಾತೆಗಳಲ್ಲಿ ಒಟ್ಟು 110.45 ಕೋಟಿ ಹಣವಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2025ರ ಡಿಸೆಂಬರ್ ಅಂತ್ಯಕ್ಕೆ ಒಟ್ಟಾರೆ 2,15,344 ಸಂಖ್ಯೆಯ ನಿಷ್ಕ್ರೀಯ ಖಾತೆಗಳಿದ್ದವು. ಈ ಖಾತೆಗಳಲ್ಲಿ 46.79 ಕೋಟಿ ಹಣವಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐನಲ್ಲಿಯೇ ಅತೀ ಹೆಚ್ಚು ನಿಷ್ಕ್ರೀಯ ಖಾತೆಗಳಿದ್ದವು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ 83,727 ನಿಷ್ಕ್ರೀಯ ಖಾತೆಗಳಲ್ಲಿ 16.77 ಕೋಟಿ ರೂ.ಇತ್ತು. ಮೈಸೂರು ಜಿಲ್ಲೆಯಲ್ಲಿ ವಾರಸುದಾರರಿಲ್ಲದ ಇಂತಹ ಖಾತೆಗಳಲ್ಲಿ 5.17 ಕೋಟಿ ರೂ.ಠೇವಣಿ ಸಂಗ್ರಹವಾಗಿತ್ತು. ಬೆಂಗಳೂರು ನಗರ ಜಿಲ್ಲೆಯಲ್ಲಿ 120 ಖಾತೆಗಳಿದ್ದವು. ಇದರಲ್ಲಿ 6.38 ಕೋಟಿ ಇತ್ತು. ಅತೀ ಕಡಿಮೆ ಖಾತೆಗಳು ಬಾಗಲಕೋಟೆ ಜಿಲ್ಲೆಯಲ್ಲಿದ್ದವು. ಇದರಲ್ಲಿ 1.04 ಕೋಟಿ ರೂ.ಇತ್ತು. ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೇ 99 ಖಾತೆಗಳಲ್ಲಿ 3.37 ಲಕ್ಷ ರೂ.ಠೇವಣಿ ಇತ್ತು. ಉಳಿದಂತೆ ಬಳ್ಳಾರಿಯಲ್ಲಿ 41 ಖಾತೆಗಳಲ್ಲಿ 2.68 ಕೋಟಿ, ಕಲಬುರಗಿಯಲ್ಲಿ 122 ಖಾತೆಗಳಲ್ಲಿ 2.57 ಕೋಟಿ ರೂ., ರಾಯಚೂರಿನಲ್ಲಿ 171 ಖಾತೆಗಳಲ್ಲಿ 2.31 ಕೋಟಿ ರೂ., ಕೋಲಾರದಲ್ಲಿ 135 ಖಾತೆಗಳಲ್ಲಿ 2.19 ಕೋಟಿ ರೂ., ಚಿತ್ರದುರ್ಗದಲ್ಲಿ 130 ಖಾತೆಗಳಲ್ಲಿ 2.10 ಕೋಟಿ ರೂ., ಹಾಸನದಲ್ಲಿ 157 ಖಾತೆಗಳಲ್ಲಿ 1.93 ಕೋಟಿ ರೂ.ಇತ್ತು. ಗದಗದಲ್ಲಿ 80 ಖಾತೆಗಳಲ್ಲಿ 1.71 ಕೋಟಿ ರೂ.ಇತ್ತು. ಎರಡು ವರ್ಷ ಯಾವುದೇ ವಹಿವಾಟು ನಡೆಸದೇ ಇದ್ದರೆ ಆ ಖಾತೆ ನಿಷ್ಕ್ರೀಯವಾಗುತ್ತದೆ. ಇಂತಹ ಖಾತೆಗಳು ಆ ಬ್ಯಾಂಕ್‌ನಲ್ಲಿಯೇ ಇರುತ್ತವೆ. ಆದರೆ 10 ವರ್ಷ ವಹಿವಾಟು ನಡೆಸದೇ ಇದ್ದಲ್ಲಿ ಅಂತಹ ನಿಷ್ಕ್ರೀಯ ಖಾತೆಗಳನ್ನು ಆರ್‌ಬಿಐಗೆ ವರದಿ ಮಾಡಲಾಗುತ್ತದೆ. 2022-23ರನೇ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್‌ಗಳು ಹೀಗೆ ಡಿಇಎ ನಿಧಿಗೆ ವರ್ಗಾಯಿಸಿದ ಠೇವಣಿ ಮೊತ್ತವೇ 42 ಸಾವಿರ ಕೋಟಿ ರೂ.ಗೂ ಹೆಚ್ಚಿತ್ತು. ಈ ಠೇವಣಿಗಳಿಗೆ ಲಭ್ಯವಾಗಿದ್ದ ಬಡ್ಡಿ ಮತ್ತು ಆದಾಯದ ಮೊತ್ತವೂ 20 ಸಾವಿರ ಕೋಟಿ ರೂ.ದಾಟಿತ್ತು. ಹೀಗೆ 10 ವರ್ಷಗಳ ಅವಧಿಯವರೆಗೆ ವಾರಸುದಾರರಿಲ್ಲದ ಮತ್ತು ನಿಷ್ಕ್ರೀಯ ಖಾತೆಗಳಲ್ಲಿನ ಠೇವಣಿಗಳ ಮೊತ್ತವೇ 62 ಸಾವಿರ ಕೋಟಿ ರೂ.ಗೂ ಹೆಚ್ಚಿತ್ತು. 2018-19ನೇ ಆರ್ಥಿಕ ವರ್ಷದಿಂದ 2022-23ನೇ ಆರ್ಥಿಕ ವರ್ಷದಲ್ಲಿ ಡಿಇಎ ನಿಧಿಯಿಂದ 5,279 ಕೋಟಿ ರೂ.ಗಳನ್ನಷ್ಟೇ ವಾಪಸ್ ಪಡೆದಿತ್ತು. ನಿಷ್ಕ್ರೀಯ ಖಾತೆಗಳ ವಾರಸುದಾರರನ್ನು ಹುಡುಕಿ ಠೇವಣಿಯನ್ನು ಹಿಂತಿರುಗಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿವೆಯಾದರೂ ಆ ಅವಧಿಯಲ್ಲಿ 62 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಡಿಇಎ ನಿಧಿಯಲ್ಲಿಯೇ ಉಳಿದಿತ್ತು. ಬ್ಯಾಂಕ್‌ಗಳು ಕ್ಲೈಮ್ ಮಾಡದ ಠೇವಣಿಗಳ ಇತ್ಯರ್ಥಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಖ) ಎಲ್ಲಾ ಶಾಖೆ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಮತ್ತು ಶಾಖೆ ಮಟ್ಟದಲ್ಲಿ ಸುಗಮ ಮತ್ತು ಗ್ರಾಹಕ ಸ್ನೇಹಿ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ದೇಶದಲ್ಲಿ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಬಳಿ ವಾರಸುದಾರರಿಲ್ಲದೇ 1.84 ಲಕ್ಷ ಕೋಟಿ ಮೊತ್ತದಷ್ಟು ಅಸ್ತಿ ಇತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ನೀಡಿದ್ದರು. ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ತೆರೆಯಲಾಗಿದ್ದ ಖಾತೆಗಳಲ್ಲಿ ಶೇ.20ರಷ್ಟು ಖಾತೆಗಳು ನಿಷ್ಕ್ರಿಯವಾಗಿದ್ದವು. 10 ವರ್ಷಗಳಿಗೂ ಹೆಚ್ಚು ಅವಧಿ ನಿಷ್ಕ್ರೀಯವಾಗಿರುವ ಖಾತೆಗಳಲ್ಲಿ ಇರುವ ಠೇವಣಿಯನ್ನು ಆಯಾ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನ ಠೇವಣಿದಾರರಿಗೆ ಬ್ಯಾಂಕಿಂಗ್ ಸಾಕ್ಷರತೆ ಮತ್ತು ಜಾಗೃತಿ ನಿಧಿ ಡಿಐಎ ನಿಧಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ಒದಗಿಸಿತ್ತು.

ವಾರ್ತಾ ಭಾರತಿ 4 Apr 2026 8:42 am

ವಿಷಕಾರಿಯಾಗುತ್ತಿವೆ ಮಂಗಳೂರು ಸುತ್ತಮುತ್ತಲಿನ ಜೀವನದಿಗಳು !

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೂರ್ಯನ ಪ್ರಖರತೆ ಮತ್ತು ತೀವ್ರವಾಗುತ್ತಿರುವ ನೀರಿನ ಅಭಾವವು ನಮ್ಮ ಬದುಕಿನ ಭದ್ರತೆಯನ್ನು ಅಲುಗಾಡಿಸುತ್ತಿದೆ. ಭೂಮಿಯ ಆಳದ ಜಲಮೂಲಗಳಾದ ಬೋರ್‌ವೆಲ್ ಹಾಗೂ ಬಾವಿಗಳು ಬರಿದಾಗುತ್ತಿರುವುದು ಒಂದೆಡೆಯಾದರೆ, ನದಿ-ಕೆರೆಗಳ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಪರಿಸ್ಥಿತಿಯಲ್ಲಿ ಲಭ್ಯವಿರುವ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ದೊಡ್ಡ ಸಂಶಯ ಮೂಡುತ್ತಿದೆ.

ವಿಜಯ ಕರ್ನಾಟಕ 4 Apr 2026 8:35 am

Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?

ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿಯ ದರ ಪ್ರತಿದಿನದ ಪ್ರಮುಖ ಸುದ್ದಿಯಾಗಿರುತ್ತದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ ಭಾರತೀಯ ಎಂಸಿಎಕ್ಸ್ (MCX) ಮಾರುಕಟ್ಟೆಯ ವಹಿವಾಟುಗಳು ಪ್ರತಿನಿತ್ಯ ಈ ಬೆಲೆಬಾಳುವ ಲೋಹಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂದು (ಏಪ್ರಿಲ್ 4) ರಾಜ್ಯ ರಾಜಧಾನಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು

ಒನ್ ಇ೦ಡಿಯ 4 Apr 2026 8:03 am

ಶೀಘ್ರವೇ POK ಭಾರತದಲ್ಲಿ ವಿಲೀನವಾಗಲಿದ್ದು ಘರ್‌ ವಾಪ್ಸಿ ಪಕ್ಕಾ ಎಂದು ಆಲ್‌ ಇಂಡಿಯಾ ಇಮಾಮ್‌ ಮುಖ್ಯಸ್ಥ ಅಹ್ಮದ್‌ ಇಲ್ಯಾಸಿ ಭವಿಷ್ಯ

ಶೀಘ್ರವೇ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲಿದೆ. ಅಲ್ಲಿನ ಜನರು ಕಾಶ್ಮೀರದ ಪ್ರಗತಿಯಿಂದ ಸಂತಸವಾಗಿದ್ದು, ಜನಾಭಿಪ್ರಾಯ ಸಂಗ್ರಹಕ್ಕೆ ಇಚ್ಚಿಸುತ್ತಾರೆ.ಹಾಗಾಗಿ ದೇವರ ಇಚ್ಛೆಯಿದ್ದರೆ, ಅವರು ಘರ್‌ ವಾಪ್ಸಿ ನಡೆಯಲಿದೆ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್‌ನ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ತಿಳಿಸಿದ್ದಾರೆ. ಅಲ್ಲದೆ, 370ವಿಧಿಯ ಬಳಿಕ ಕಾಶ್ಮೀರದಲ್ಲಿ ಆದ ಬೆಳವಣಿಗೆಯ ಕುರಿತು ಅಂದು ಕಲ್ಲು ಹಿಡಿಯುತ್ತಿದ್ದ ಕೈಗಳು ಇಂದು ಪೆನ್ನು ಹಿಡಿಯುತ್ತಿದೆ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 4 Apr 2026 7:47 am

ಸಂಘರ್ಷ ತೀವ್ರ: ಹಾರ್ಮುಝ್ ಜಲಸಂಧಿ ಕುರಿತ ಮತದಾನ ಮುಂದಕ್ಕೆ ಹಾಕಿದ ಭದ್ರತಾ ಮಂಡಳಿ

ನ್ಯೂಯಾರ್ಕ್: ಹಾರ್ಮುಝ್ ಜಲಸಂಧಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಶಿಪ್ಪಿಂಗ್ ಸಂರಕ್ಷಿಸುವ ಕುರಿತಂತೆ ಬಹರೈನ್ ಪ್ರಾಯೋಜಿತ ನಿರ್ಣಯದ ಮೇಲಿನ ಮತದಾನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದಿನ ವಾರಕ್ಕೆ ಮುಂದೂಡಿದೆ. ಶುಕ್ರವಾರ ಈ ಸಂಬಂಧ ಚರ್ಚಿಸಲು ನಿರ್ಧರಿಸಲಾಗಿತ್ತು. ಬಳಿಕ ಶನಿವಾರಕ್ಕೆ ಅದನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದ್ದು, ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಮಂಡಳಿಯ ಅಧ್ಯಕ್ಷ ಸ್ಥಾನ ಹೊಂದಿರುವ ಬಹರೈನ್ ಗುರುವಾರ ಇದರ ಕರಡು ಸಿದ್ಧಪಡಿಸಿತ್ತು. ಈ ಆಯಕಟ್ಟಿನ ಪ್ರದೇಶಗಳಲ್ಲಿ ಕನಿಷ್ಠ ಮುಂದಿನ ಆರು ತಿಂಗಳ ಕಾಲ ಹಡಗುಗಳ ಸರಾಗ ಸಂಚಾರವನ್ನು ಖಾತರಿಪಡಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡುವ ನಿರ್ಣಯ ಇದಾಗಿರುತ್ತದೆ. ಈ ಮಾರ್ಗದ ಮೂಲಕ ಜಾಗತಿಕ ತೈಲ ಸಾಗಾಣಿಕೆಯ ಶೇಕಡ ಐದನೇ ಒಂದರಷ್ಟು ಪಾಲು ಸಾಗಾಟವಾಗುತ್ತದೆ. ಅಮೆರಿಕ ಹಾಗೂ ಇಸ್ರೇಲ್ ಫೆಬ್ರುವರಿ 28ರಂದು ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯನ್ನು ಮುಚ್ಚಿತ್ತು. ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಪ್ರಾದೇಶಿಕ ಭದ್ರತೆ ಕುರಿತ ಕಳವಳಕ್ಕೂ ಕಾರಣವಾಗಿತ್ತು. ಏತನ್ಮಧ್ಯೆ ದಕ್ಷಿಣ ಹಾಗೂ ಕೇಂದ್ರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಅಮೆರಿಕದ ಯುದ್ಧವಿಮಾನವನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಬಗ್ಗೆ ವಿವರವಾದ ಹೇಳಿಕೆ ನೀಡಲು ಟ್ರಂಪ್ ನಿರಾಕರಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ಯುದ್ಧದಲ್ಲಿ ಒತ್ತೆಯಾಳುಗಳನ್ನು ಇರಿಸಿಕೊಳ್ಳುವ ಹಂತಕ್ಕೆ ಸಂಘರ್ಷ ಉಲ್ಬಣಿಸಿದೆ. ಇರಾನ್ ನ ಪ್ರತಿದಾಳಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಛೇದಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಂತೆಯೇ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲಿ ಸೈನಿಕರು ಮತ್ತು ಸೇನಾ ವಾಹನಗಳನ್ನು ಗುರಿ ಮಾಡಿ ಸರಣಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹಿಝ್ಬುಲ್ಲಾ ಪ್ರಕಟಿಸಿದೆ. ಇಸ್ರೇಲ್ ಗಡಿಗೆ ಹೊಂದಿಕೊಂಡಿರುವ ಅಲ್ ಸರ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಿಕೆ ನೀಡಿದೆ.

ವಾರ್ತಾ ಭಾರತಿ 4 Apr 2026 7:45 am

ಕದನ ವಿರಾಮ ಮಾತುಕತೆಗೆ ಹಿನ್ನಡೆ: ಅಮೆರಿಕ ಅಧಿಕಾರಿಗಳ ಭೇಟಿಗೆ ಇರಾನ್ ನಕಾರ

ಟೆಹರಾನ್: ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನವಾಗಿ ನಡೆಯುತ್ತಿರುವ ಪ್ರಾದೇಶಿಕ ಮಧ್ಯಸ್ಥಿಕೆ ಪ್ರಯತ್ನಗಳು ಕೊನೆಗೊಂಡಿವೆ ಎಂದು ಸಂಧಾನಕಾರರು ಶುಕ್ರವಾರ ಪ್ರಕಟಿಸಿದ್ದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಂಘರ್ಷನಿರತ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮುಂದಾಳುತ್ವದಲ್ಲಿ ನಡೆದ ಪ್ರಯತ್ನ ಫಲ ನೀಡಿಲ್ಲ ಎಂದು ಟೆಹರಾನ್ ಅಧಿಕೃತವಾಗಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಇಸ್ಲಾಮಾಬಾದ್ ಗೆ ಮಾತುಕತೆಗಾಗಿ ಯಾವುದೇ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕದ ಬೇಡಿಕೆಗಳು ಸ್ವೀಕಾರಾರ್ಹವಲ್ಲ; ಆದ್ದರಿಂದ ಪ್ರಸ್ತುತ ಸಂಧಾನ ಮಾತುಕತೆ ಚೌಕಟ್ಟನ್ನು ರದ್ದುಪಡಿಸಲಾಗುವುದು ಎಂದು ಹೇಳಿದೆ. ಈ ಮಾತುಕತೆ ಯತ್ನ ವಿಫಲವಾಗಿರುವುದರಿಂದ ಟರ್ಕಿ ಹಾಗೂ ಈಜಿಪ್ಟ್ ಸಮಸ್ಯೆ ನಿವಾರಣೆಯ ಪ್ರಯತ್ನ ಆರಂಭಿಸಿವೆ. ಉಭಯ ದೇಶಗಳ ನಡುವೆ ಮಾತುಕತೆಯ ಪ್ರಕ್ರಿಯೆ ಆರಂಭಿಸಲು ಆತಿಥ್ಯ ವಹಿಸಲು ಹೊಸ ತಾಣಗಳನ್ನು ಪ್ರಸ್ತಾಪಿಸಲು ಈ ದೇಶಗಳು ಮುಂದಾಗಿವೆ. ಕದನ ವಿರಾಮ ಮಾತುಕತೆಗೆ ವೇದಿಕೆಯಾಗಲು ಖತರ್ ಹಾಗೂ ಇಸ್ತಾಂಬುಲ್ ಉತ್ಸುಕತೆ ತೋರಿವೆ.

ವಾರ್ತಾ ಭಾರತಿ 4 Apr 2026 7:29 am

ದಂಡಕ್ಕೆ ಡೋಂಟ್‌ ಕೇರ್‌ ಎನ್ನುತ್ತಿರೋ ಸವಾರರು: ರಾಜ್ಯದಲ್ಲಿ 3 ವರ್ಷದಲ್ಲಿ 2,000 ಕೋಟಿ ದಂಡ, ವಸೂಲಿ ಮಾತ್ರ ಕೇವಲ 44 ಪರ್ಸೆಂಟ್!

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಸಂಚಾರಿ ಪೊಲೀಸರು ನಿರ್ದಾಕ್ಷಿಣ್ಯವಾಗಿ ದಂಡ ಪ್ರಯೋಗ ಮಾಡುತ್ತಿದ್ದರೂ ಸಹ ಅದನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿಲ್ಲ.ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 4.51 ಕೋಟಿ ಪ್ರಕರಣಗಳು ದಾಖಲಾಗಿದ್ದು, 2,522 ಕೋಟಿ ರೂ. ದಂಡ ವಿಧಿಸಲಾಗಿದೆ. ಆದಾಗ್ಯೂ, ಈವರೆಗೂ ವಸೂಲಿಯಾಗಿರುವ ದಂಡ ಕೇವಲ ಶೇ.44ರಷ್ಟು ಮಾತ್ರ. ಈ ಕುರಿತು ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 4 Apr 2026 6:59 am

Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ತಿಂಗಳ ಆರಂಭದಲ್ಲಿಯೇ ತಾಪಮಾನದಲ್ಲಿ ಗಣನೀಯ ಏರಿಳಿತಗಳು ಕಂಡುಬರುತ್ತಿದ್ದು, ಬೇಸಿಗೆಯ ಸುಡುವ ಬಿಸಿಲಿನ ಝಳದ ನಡುವೆಯೂ ಮುಂಗಾರು ಪೂರ್ವ ಮಳೆಯ ಆಗಮನವಾಗಿದೆ. ಇಂದು (ಏಪ್ರಿಲ್ 4, 2026) ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದ್ದು, ಭಾರತೀಯ ಹವಾಮಾನ ಇಲಾಖೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ

ಒನ್ ಇ೦ಡಿಯ 4 Apr 2026 6:51 am

ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಡ್ರಗ್ಸ್‌ ವ್ಯಸನಿ ಬಂಧನ: ಮೊಬೈಲ್‌ ನಿಂದ ಸೆರೆಸಿಕ್ಕ ಆರೋಪಿ

ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಮಾದಕ ವ್ಯಸನಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾದಕ ಚಟದಿಂದ ಹೊರಬರಲುಮೇಲೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಂಡು ಅದರಿಂದ ರ‍್ಯಾಪಿಡೋ ಬುಕ್‌ ಮಾಡಿ ಬಳಿಕ ಆಟೋ ಚಾಲಕನ ಮೇಲೂ ಹಲ್ಲೆ ಮಾಡಿ, ಆಟೋ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅದೇ ಫೋನ್‌ನ ಜಾಡು ಹಿಡಿದು ಬಂಧಿಸಿದ್ದಾರೆ.

ವಿಜಯ ಕರ್ನಾಟಕ 4 Apr 2026 6:32 am

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಷರತ್ತುಬದ್ದ ತಾತ್ವಿಕ ಒಪ್ಪಿಗೆ: ಅಕ್ಟೋಬರ್‌ ವೇಳೆಗೆ 252ಕಿ.ಮೀ ನಾಲೆಗೆ ನೀರು

ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ 35 ಅಂಶಗಳ ಷರತ್ತುಬದ್ದ ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದಾಗಿ ಅಕ್ಟೋಬರ್‌ ತಿಂಗಳಿನ ವೇಳೆಗೆ ಮೊದಲ ಹಂತದಲ್ಲಿ ತುಮಕೂರುವರೆಗಿನ 252 ಕಿ,ಮೀ ನಾಲೆಗೆ ನೀರುಹರಿಸುವ ಹಾದಿ ಸುಲಭವಾಗಿದ್ದು, ಈ ಕಾರ್ಯಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ಕಾರ್ಯ ಪ್ರವೃತ್ತವಾಗಿದೆ. ಇನ್ನು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ನೀರುಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 4 Apr 2026 6:06 am

ಬಿಟ್‌ ಕಾಯಿನ್‌ ಹಗರಣ : ವಂಚನೆ, ನಂಬಿಕೆ ದ್ರೋಹ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಶ್ರೀಕಿ, ರಾಬಿನ್‌

ಬೆಂಗಳೂರು: ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮತ್ತವರ ಸ್ನೇಹಿತ ರಾಬಿನ್‌ ಖಂಡೇಲವಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಹಾಗೂ ಪಶ್ಚಿಮ ಬಂಗಾಳದ ಮೂಲದ ಬಿಟ್‌ ಕಾಯಿನ್‌ ಟ್ರೇಡರ್‌ ರಾಬಿನ್‌ ಖಂಡೇಲವಾಲ್‌ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದಾಖಲೆಗಳನ್ನು ಪರಿಶೀಲಿಸಿ ವಾದ ಮಂಡಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ಪ್ರಕರಣವೇನು? : ಬೆಂಗಳೂರಿನ ಇಂದಿರಾನಗರದ ಯಶೋಧಾ ದೇವಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿ, ಶ್ರೀಕೃಷ್ಣ ಹಾಗೂ ರಾಬಿನ್‌ ಖಂಡೇಲವಾಲ್‌ ಅವರು 2019ರಲ್ಲಿ ಭೇಟಿಯಾಗಿ 28 ಲಕ್ಷ ರೂ. ನೀಡಿದರೆ ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಿ 28 ಲಕ್ಷ ರೂ. ಜತೆ 17 ಲಕ್ಷ ರೂ. ಸೇರಿಸಿ ಒಟ್ಟು 45 ಲಕ್ಷ ರೂ. ನೀಡುತ್ತೇವೆ ಎಂದು ಖಾತೆ ನಂಬರ್‌ ಒಂದನ್ನು ನೀಡಿದ್ದರು. ಅದಕ್ಕೆ ತಾಂತ್ರಿಕ ತೊಂದರೆಯಿಂದಾಗಿ ಹಣ ಹೋಗಿರಲಿಲ್ಲ. ಆನಂತರ, ಅಜಿತ್‌ ಖಂಡೇಲವಾಲ್‌ ಎಂಬಾತನ ಖಾತೆಗೆ ಹಣ ಹಾಕುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆಯೇ ಅಜಿತ್‌ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ಹಿಂದಿರುಗಿಸುವುದಾಗಿ ಹೇಳಿದ್ದ ಆರೋಪಿಗಳು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದ್ದರಿಂದ, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ದೂರು ಆಧರಿಸಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ರುಬಿಟ್‌ ಆನ್‌ಲೈನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ನ ರಾಬಿನ್‌ ಖಂಡೇವಾಲ್‌ ಮತ್ತು ಅಜಿತ್‌ ಖಂಡೇಲವಾಲ್‌ ವಿರುದ್ಧ ಪೊಲೀಸರು 2020ರ ನ.19ರಂದು ಐಪಿಸಿ ಸೆಕ್ಷನ್‌ 406 ಹಾಗೂ 420ರ ಅಡಿ ಪ್ರಕರಣ ದಾಖಲಿಸಿದ್ದರು. ಈ ಎಫ್‌ಐಆರ್‌ ಮತ್ತದರ ಸಂಬಂಧ 2021ರ ಫೆ.10ರಂದು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಾರ್ತಾ ಭಾರತಿ 4 Apr 2026 12:03 am

ಭಾರತದ ಸೆನ್ಸಾರ್‌ ಶಿಪ್ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಅಮೆರಿಕದ ವ್ಯಾಪಾರ ಪ್ರತಿನಿಧಿಯ 2026ರ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿಯು ಭಾರತದ ಯೂಸರ್ ಖಾತೆಗಳಿಂದ ಕಂಟೆಂಟ್ ತೆಗೆದುಹಾಕುವ ಅಭ್ಯಾಸವನ್ನು ಔಪಚಾರಿಕವಾಗಿ ಖಂಡಿಸಿದೆ, ರಾಜಕೀಯ ಪ್ರೇರಿತವೆಂದು ತೋರುವ ವಿಷಯಗಳನ್ನು ಬಳಕೆದಾರ ಖಾತೆಗಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಹಾಕುತ್ತಿರುವ ವಿನಂತಿಗಳನ್ನು ಯುಎಸ್ ಸಂಸ್ಥೆಗಳು ಎದುರಿಸುತ್ತಿವೆ ಎಂದು ಅದು ಹೇಳಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಐಟಿ ನಿಯಮಗಳ ಅಡಿಯಲ್ಲಿ ಕಂಟೆಂಟ್ ತೆಗೆದುಹಾಕುವಿಕೆಯನ್ನು, ಆಗಾಗ್ಗೆ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಜೊತೆಗೆ ಸುಂಕ ರಹಿತ ವ್ಯಾಪಾರ ಅಡೆತಡೆಗಳಾಗಿ ವರ್ಗೀಕರಿಸಲಾಗಿದೆ. ವಿಶ್ವಗುರು ಮೋದಿ ಒಮ್ಮೆ ‘ಟೀಕೆ ಪ್ರಜಾಪ್ರಭುತ್ವದ ಆತ್ಮ' ಎಂದು ಹೇಳಿದರು. ಆದರೂ ಈ ಆಡಳಿತವು ಹಿಂಜರಿಕೆಯಿಲ್ಲದೆ ಟೀಕೆಗಳನ್ನು ಹೂತುಹಾಕುವುದನ್ನು ಸಾಮಾನ್ಯಗೊಳಿಸಿದೆ ಎಂದು ದೂರಿದ್ದಾರೆ. ವಾಸ್ತವವಾಗಿ ಇತ್ತೀಚೆಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಕಾಶಕರಲ್ಲದವರು ಸಹ ಪೋಸ್ಟ್ ಮಾಡಿದ ಸುದ್ದಿ ವಿಷಯಕ್ಕಾಗಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಅವಕಾಶ ನೀಡುವ ಮೂಲಕ 2021ರ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಇದು ಪರಿಣಾಮಕಾರಿಯಾಗಿ ಸ್ವತಂತ್ರ ಧ್ವನಿಗಳನ್ನು ನೇರ ನಿಯಂತ್ರಣಕ್ಕೆ ತರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಬಿಜೆಪಿ ಐಟಿ ಕೋಶವು ಪರಿಶೀಲನೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಇದೆಲ್ಲವೂ ಒಂದೇ ಒಂದು ವಿಷಯವನ್ನು ಅರ್ಥೈಸಬಲ್ಲದು. ಭಿನ್ನಾಭಿಪ್ರಾಯದ ಧ್ವನಿ ಜೋರಾಗಿ ಬೆಳೆಯುತ್ತಿದೆ ಮತ್ತು ಬಿಜೆಪಿ ತುಂಬಾ ಭಯಭೀತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಾರ್ತಾ ಭಾರತಿ 4 Apr 2026 12:01 am

ಸುರಪುರ | ಗುಜರಿ ಅಂಗಡಿಯಲ್ಲಿ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ಸುರಪುರ : ಪಟ್ಟಣದ ಹಸನಾಪುರ ಕ್ಯಾಂಪ್ ಪ್ರದೇಶದಲ್ಲಿರುವ ಗುಜರಿ ಅಂಗಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಶೌಕತ್ ಅಲಿ ಎಂಬವರಿಗೆ ಸೇರಿದ ಗುಜುರಿ ಅಂಗಡಿಯಲ್ಲಿ ರಾತ್ರಿ ವೇಳೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು ನಡೆದಿದೆ ಎಂದು ತಿಳಿದು ಬಂದಿದೆ. ಎ.1ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಶೌಕತ್‌ ಅಲಿ ಎ.2ರಂದು ಬೆಳಗ್ಗೆ ಅಂಗಡಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯೊಳಗಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಹಳೆಯ ವಸ್ತುಗಳನ್ನು ಕಳವು ಗೈದಿರುವುದಾಗಿ ತಿಳಿದು ಬಂದಿದೆ . ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಅಂಗಡಿ ಮಾಲಕ ಶೌಕತ್ ಅಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.

ವಾರ್ತಾ ಭಾರತಿ 3 Apr 2026 11:57 pm

ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

ಕರ್ನಾಟಕ ವಿಧಾನ ಪರಿಷತ್ತಿನ 12 ಮಂದಿ ಎಂಎಲ್‌ಸಿಗಳು ಶೀಘ್ರ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಗಳಿಗೆ ಬಿಜೆಪಿ ಕಾಂಗ್ರೆಸ್‌ನಿಂದ ನೂರಾರು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ವಿಧಾನಸಭೆಯಿಂದ 4 ಸ್ಥಾನಗಳು ಕಾಂಗ್ರೆಸ್‌ಗೆ ಖಚಿತವಾಗಿ ಸಿಗಲಿದೆ. ಇನ್ನು ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಸಾಧ್ಯತೆ ಇದೆ. ನಿವೃತ್ತಿಯಾಗುತ್ತಿರುವವರು ಯಾರು? ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 3 Apr 2026 11:50 pm

Ballari |ಇಂಜಿನಿಯರ್ ಮೇಲೆ ಹಲ್ಲೆ ಆರೋಪ : ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ ಇಂಜಿನಿಯರ್ ಜಿ.ಎಂ.ವೀರೇಶ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಆರಂಭಿಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಸರ್ಕಾರಿ ನೌಕರರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ಪಾಲಿಕೆ ಕಚೇರಿ ಮುಂದೆ ಶುಕ್ರವಾರ ಸಂಜೆ ಆರಂಭವಾದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪದೇ ಪದೇ ಗಲಭೆಗಳು ಮತ್ತು ವಿವಾದಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಘಟನೆಗಳು ಬಳ್ಳಾರಿ ನಗರದ ಮಾನಕ್ಕೆ ಧಕ್ಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ತಡೆಗಟ್ಟಬೇಕು ಎಂದು ಹೇಳಿದರು. ಇಂಜಿನಿಯರ್ ಜಿ.ಎಂ. ವೀರೇಶ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಾಂಗ್ರೆಸ್ ಕಾರ್ಪೊರೇಟರ್ ವಿ.ಕುಬೇರ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಬಿಜೆಪಿ ಹಂತ ಹಂತವಾಗಿ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 11:36 pm

IPL 2026 | ಶ್ರೇಯಸ್ ಅಯ್ಯರ್ ಅರ್ಧಶತಕ; CSK ವಿರುದ್ಧ ಪಂಜಾಬ್‌ ಗೆ ಜಯ

ಚೆನ್ನೈ, ಎ.3: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ (50 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ನೆರವಿನಿಂದ ಶುಕ್ರವಾರ ನಡೆದ ಏಳನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಐದು ವಿಕೆಟ್‌ ಗಳ ಅಂತರದಿಂದ ಮಣಿಸಿತು. ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ CSK ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಆಯುಷ್ ಮ್ಹಾತ್ರೆ ಅವರ ಆಕರ್ಷಕ ಅರ್ಧಶತಕದ (73 ರನ್, 43 ಎಸೆತ, 6 ಬೌಂಡರಿ, 5 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‌ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್‌ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಸತತ ಎರಡನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಪಂಜಾಬ್ ಇನಿಂಗ್ಸ್ ಆರಂಭಿಸಿದ ಪ್ರಭ್‌ಸಿಮ್ರಾನ್ ಸಿಂಗ್ (43 ರನ್, 34 ಎಸೆತ) ಹಾಗೂ ಪ್ರಿಯಾಂಶ್ ಆರ್ಯ (39 ರನ್, 11 ಎಸೆತ) ಕೇವಲ 26 ಎಸೆತಗಳಲ್ಲಿ 61 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು. ಮ್ಯಾಟ್ ಹೆನ್ರಿ ಈ ಜೋಡಿಯನ್ನು ಬೇರ್ಪಡಿಸಿದರು. ಪ್ರಭ್‌ಸಿಮ್ರಾನ್ 43 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೂಪರ್ 36 ರನ್‌ ಗೆ ವಿಕೆಟ್ ಒಪ್ಪಿಸಿದರು. ಆಗ ಪಂಜಾಬ್ 127 ರನ್‌ ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ ಗೆ 32 ಎಸೆತಗಳಲ್ಲಿ 59 ರನ್ ಸೇರಿಸಿದ ಶ್ರೇಯಸ್ ಮತ್ತು ವಧೇರ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶ್ರೇಯಸ್ ಅರ್ಧಶತಕ ಗಳಿಸಿದ ಬೆನ್ನಲ್ಲೇ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್ (ಔಟಾಗದೆ 14) ಹಾಗೂ ಮಾರ್ಕಸ್ ಸ್ಟೋಯಿನಿಸ್ (ಔಟಾಗದೆ 9) ಪಂಜಾಬ್‌ ಗೆ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. CSK ಪರವಾಗಿ ಮ್ಯಾಟ್ ಹೆನ್ರಿ (2-54) ಹಾಗೂ ಅನ್ಶುಲ್ ಕಾಂಬೋಜ್ (2-35) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು CSK ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇವಲ 7 ರನ್‌ ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವಿಫಲರಾದರು. ಆಗ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ (28 ರನ್, 22 ಎಸೆತ) ಎರಡನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಋತುರಾಜ್, ಆಯುಷ್ ಹಾಗೂ ಕಾರ್ತಿಕ್ ಶರ್ಮಾ (1 ರನ್) ಔಟಾದಾಗ CSK 130 ರನ್‌ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಸರ್ಫರಾಝ್ ಖಾನ್ (32 ರನ್, 12 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶಿವಂ ದುಬೆ (ಔಟಾಗದೆ 45, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಐದನೇ ವಿಕೆಟ್‌ಗೆ 38 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು. ► ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ ಗಳಲ್ಲಿ 209/5 (ಆಯುಷ್ ಮ್ಹಾತ್ರೆ 73, ಶಿವಂ ದುಬೆ ಔಟಾಗದೆ 45, ಸರ್ಫರಾಝ್ ಖಾನ್ 32, ಋತುರಾಜ್ ಗಾಯಕ್ವಾಡ್ 28, ವಿ. ವೈಶಾಕ್ 2-38) ಪಂಜಾಬ್ ಕಿಂಗ್ಸ್: 18.4 ಓವರ್‌ ಗಳಲ್ಲಿ 210/5 (ಶ್ರೇಯಸ್ ಅಯ್ಯರ್ 50, ಪ್ರಭ್‌ಸಿಮ್ರಾನ್ ಸಿಂಗ್ 43, ಪ್ರಿಯಾಂಶ್ ಆರ್ಯ 39, ಕೂಪರ್ 36, ಅನ್ಶುಲ್ ಕಾಂಬೋಜ್ 2-43, ಮ್ಯಾಟ್ ಹೆನ್ರಿ 2-54)

ವಾರ್ತಾ ಭಾರತಿ 3 Apr 2026 11:36 pm

ಬೆಂಗಳೂರು ನಗರ ವಿವಿಯ ಘಟಿಕೋತ್ಸವ | ಮೋಹನ್ ಆಳ್ವ ಸಹಿತ ಆರು ಮಂದಿಗೆ ಗೌರವ ಡಾಕ್ಟರೇಟ್

ಬೆಂಗಳೂರು : ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ 5ನೇ ವಾರ್ಷಿಕ ಘಟಿಕೋತ್ಸವವನ್ನು ನಾಳೆ ಬೆಳಗ್ಗೆ 11:30ಕ್ಕೆ ನಗರದ ಅರಮನೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ರಮೇಶ್ ಬಿ. ತಿಳಿಸಿದ್ದಾರೆ. ಶುಕ್ರವಾರ ಬೆಂ.ನ.ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಥಾವರ್‌ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಡಾ.ಬಿನಯ್ ಕುಮಾರ್‌ ದಾಸ್ ಮುಖ್ಯ ಅತಿಥಿಯಾಗಿ ಆಗಮಿಸಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತಲಿರಲಿದ್ದಾರೆ ಎಂದರು. ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಒಳಗೊಡಂತೆ ಒಟ್ಟು 37,393 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆ ಪೈಕಿ 21,912 (ಶೇ.58.63) ಮಹಿಳೆಯರು ಮತ್ತು 15,458 (ಶೇ.47.31) ಪುರುಷ ವಿದ್ಯಾರ್ಥಿಗಳಾಗಿರುತ್ತಾರೆ. 23 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‍ಡಿ ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 71 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪ್ರಮಾಣ ಪತ್ರಗಳನ್ನು, 73 ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದರು. 71 ರ್ಯಾಂಕ್ ವಿಜೇತರಲ್ಲಿ 42 ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗಗಳಿಗೆ ಸಂಬಂಧಿಸಿದವರಾಗಿದ್ದು, ಅವರಲ್ಲಿ 5 ಪುರುಷ ಮತ್ತು 37 ಮಹಿಳಾ ವಿದ್ಯಾರ್ಥಿಗಳಾಗಿರುತ್ತಾರೆ. 29 ವಿದ್ಯಾರ್ಥಿಗಳು ಸ್ನಾತಕ ವ್ಯಾಸಂಗಗಳಿಗೆ ಸಂಬಂಧಿಸಿದವರಾಗಿದ್ದು, ಅವರಲ್ಲಿ 9 ಪುರುಷ ಮತ್ತು 37 ಮಹಿಳಾ ವಿದ್ಯಾರ್ಥಿಗಳಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು. ಆರು ಮಂದಿಗೆ ಗೌರವ ಡಾಕ್ಟರೇಟ್: ಡಾ.ಮನಮೋಹನ್ ಸಿಂಗ್ ಬೆಂ.ನ.ವಿವಿ 5ನೇ ವಾರ್ಷಿಕ ಘಟಿಕೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಿಂದ ಬಿ.ಕೆ.ವೆಂಕಟೇಶ್ ಪ್ರಸಾದ್, ಡಾ.ಕೆ.ಗೋವಿಂದರಾಜ್, ಸಂಗೀತ ಕ್ಷೇತ್ರದಿಂದ ಅರ್ಜುನ್‌ ಜನ್ಯ, ಶಿಕ್ಷಣ ಕ್ಷೇತ್ರದಿಂದ ತಜ್ಞರಾದ ಟಿ.ಕೆ.ನಾರಾಯಣಪ್ಪ, ಮೋಹನ್ ಆಳ್ವ ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಿಂದ ಬಿ.ಎಂ.ಫಾರೂಖ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುವುದು ಎಂದು ರಮೇಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ನವೀನ್ ಜೋಸೆಫ್ ಎ., ಕುಲಸಚಿವ(ಮೌಲ್ಯಮಾಪನ)ಪ್ರೊ.ರಮೇಶ ಬಿ.ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ಸಿಂಡಿಕೇಟ್ ಸದಸ್ಯರಾದ ಪ್ರೊ.ಬಿ.ಆರ್.ಸುಪ್ರೀತ್, ಶಿಲ್ಪಶ್ರೀ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 11:35 pm

ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಡಿಪೋ ಶೀಘ್ರ; 400 ಕೋಟಿ ರೂ. ವೆಚ್ಚ- ಇನ್ನಷ್ಟು ರೈಲುಗಳ ಸಂಪರ್ಕ

ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ನಿರ್ಹವಣೆಗೆ ಆತ್ಯಾಧುನಿಕ ಡಿಪೋ ಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ 400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಮತ್ತಷ್ಟು ರೈಲುಗಳ ಸಂಚಾರ, ನಿಲುಗಡೆಗೆ ಅನುಕೂಲವಾಗಲಿದೆ. 2 ವರ್ಷದಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಿಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆಯ ಡಿಆರ್‌ಎಂ ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 3 Apr 2026 11:13 pm

Siddaramaiah: ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಈ ಕಾರಣಕ್ಕೆ ಕಾಂಗ್ರೆಸ್ ಬೇಕು: ಸಿದ್ದರಾಮಯ್ಯ

Siddaramaiah: ತಲಾ ಆದಾಯದಲ್ಲಿ ಕರ್ನಾಟಕದ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಕಾಂಗ್ರೆಸ್ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಏಪ್ರಿಲ್ 3ರ ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು.

ಒನ್ ಇ೦ಡಿಯ 3 Apr 2026 11:03 pm

Madikeri | ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ನಾಪತ್ತೆ

ಮಡಿಕೇರಿ : ಕೊಡಗಿನ ಅತ್ಯಂತ ಎತ್ತರದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಲ್ಲಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿ, ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ(36) ನಾಪತ್ತೆಯಾಗಿರುವ ಮಹಿಳೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯ ಒಟ್ಟು ನಾಲ್ಕು ತಂಡಗಳು ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ. ನಾಪೊಕ್ಲು ಸಮೀಪದ ಯವಕಪಾಡಿ ಕಕ್ಕಬ್ಬೆಯಿಂದ ಸುಮಾರು ಐದು ಕಿಲೋ ಮೀಟರ್ ದೂರ ಕಡಿದಾದ ಹಾದಿಯ ಚಾರಣ ನಡೆಸಿದಲ್ಲಿ, ತಡಿಯಂಡಮೋಳ್ ಶಿಖರವನ್ನು ತಲುಪಬಹುದು. ಗುರುವಾರ ಚಾರಣಕ್ಕೆ ಹೊರಟ ಶರಣ್ಯ ಅವರು ಒಬ್ಬಂಟಿಯಾಗಿದ್ದ ಹಿನ್ನೆಲೆಯಲ್ಲಿ, ಇತರ ಚಾರಣಿಗರ ಜೊತೆಗೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಚಾರಣ ತೆರಳಿದವರು ಮರಳಿ ಬಂದಿದ್ದರಾದರೂ, ಶರಣ್ಯ ಮಾತ್ರ ಹಿಂದಿರುಗಿರಲಿಲ್ಲ. ಈ ಬಗ್ಗೆ ಅಲ್ಲಿನ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಮೇಲೆ ಸ್ಥಳೀಯರು, ಪೊಲೀಸರು ಹಾಗೂ ಗ್ರಾಮಸ್ಥರು ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರಾದರೂ ಶರಣ್ಯ ಅವರು ಪತ್ತೆಯಾಗಿರಲಿಲ್ಲ. ತೀವ್ರ ಶೋಧ: ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ನಾಲ್ಕು ತಂಡಗಳು ಶ್ವಾನದಳದ ಸಹಕಾರದೊಂದಿಗೆ ಶರಣ್ಯ ಅವರ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 11:02 pm

ಈಜಿಪ್ಟ್ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ‘‘ಮುಸ್ಲಿಮ್-ವಿರೋಧಿ’’ ಘೋಷಣೆಗೆ ಲಮಿನ್ ಯಮಲ್ ಟೀಕೆ

ಬಾರ್ಸಿಲೋನ, ಎ. 3: ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯದ ವೇಳೆ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿರುವುದಕ್ಕಾಗಿ ಸ್ಪೇನ್ ಪ್ರೇಕ್ಷಕರ ಒಂದು ವರ್ಗವನ್ನು ದೇಶದ ಸ್ಟಾರ್ ಆಟಗಾರ ಲಮಿನ್ ಯಮಲ್ ಟೀಕಿಸಿದ್ದಾರೆ. ಫುಟ್ಬಾಲ್ ನಲ್ಲಿ ಇಂತಹ ವರ್ತನೆಯನ್ನು ಸಹಿಸಬಾರದು ಎಂದು ಅವರು ಹೇಳಿದ್ದಾರೆ. ಬಾರ್ಸಿಲೋನದ RCDE ಸ್ಟೇಡಿಯಮ್ ನಲ್ಲಿ ಮಂಗಳವಾರ ಘಟನೆ ನಡೆದಿದೆ. ಪ್ರೇಕ್ಷಕರ ಒಂದು ವರ್ಗವು ‘‘ಬೋಟೆ, ಬೋಟೆ, ಬೋಟೆ ಮುಸಲ್ಮಾನ್ ಎಲ್ ಕ್ಯೂ ನೋ ಬೋಟೆ (ಜಿಗಿ, ಜಿಗಿ, ಜಿಗಿ, ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್)’’ ಎಂಬ ಘೋಷಣೆಯನ್ನು ಕೂಗಿತ್ತು. ಪಂದ್ಯದ ವೇಳೆ ಹಲವು ಬಾರಿ ಈ ಘೋಷಣೆಯನ್ನು ಕೂಗಲಾಗಿತ್ತು. ಆಗ ಸ್ಟೇಡಿಮ್ ನಲ್ಲಿ, ಘೋಷಣೆಯೊಂದನ್ನು ಹೊರಡಿಸಿ, ಜನಾಂಗೀಯವಾದಿ ಭಾಷೆಯನ್ನು ಬಳಸದಂತೆ ಪ್ರೇಕ್ಷಕರಿಗೆ ಮನವಿ ಮಾಡಲಾಯಿತು. ಅದೇ ಸಂದೇಶವನ್ನು ದೊಡ್ಡ ಪರದೆಯಲ್ಲೂ ಪ್ರದರ್ಶಿಸಲಾಯಿತು. ಈ ಘೋಷಣೆಯನ್ನು ಪ್ರೇಕ್ಷಕರ ಒಂದು ವರ್ಗವು ಶಿಳ್ಳೆಗಳ ಮೂಲಕ ಸ್ವಾಗತಿಸಿತು. ಈಜಿಪ್ಟ್ ಮುಖ್ಯವಾಗಿ ಮುಸ್ಲಿಮ್ ಬಾಹುಳ್ಯದ ದೇಶ. 18 ವರ್ಷದ ಸ್ಪೇನ್ ಆಟಗಾರ ಲಮಿನ್ ಯಮಲ್ ಕೂಡ ಮುಸ್ಲಿಮ್. ಅವರು ಇದಕ್ಕೆ ಮೊದಲು ಕೂಡ ತನ್ನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ‘‘ನಾನೊಬ್ಬ ಮುಸ್ಲಿಮ್, ಧನ್ಯವಾದಗಳು ದೇವರೇ’’ ಎಂಬುದಾಗಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ‘‘ನಿನ್ನೆ ಸ್ಟೇಡಿಯಮ್ ನಲ್ಲಿ, ‘ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್’ ಎಂಬ ಘೋಷಣೆಯನ್ನು ನಾವು ಕೇಳಿದೆವು. ಅದನ್ನು ಎದುರಾಳಿ ತಂಡವನ್ನು ಉದ್ದೇಶಿಸಿ ಹೇಳಿರುವುದು ಎಂದು ನನಗೆ ಗೊತ್ತಿದೆ. ವೈಯಕ್ತಿಕವಾಗಿ ಅದು ನನ್ನ ಬಗ್ಗೆ ಹೇಳಿದ್ದಲ್ಲ. ಆದರೆ, ಸ್ವತಃ ಮುಸ್ಲಿಮ್ ಆಗಿರುವ ನನಗೂ ಈ ಘೋಷಣೆಯು ಅಗೌರವಯುತವಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಎಲ್ಲಾ ಅಭಿಮಾನಿಗಳು ಹಾಗಿಲ್ಲ ಎನ್ನುವುದೂ ನನಗೆ ಗೊತ್ತು. ಆದರೆ, ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಜನರನ್ನು ಹೀಯಾಳಿಸಲು ಧರ್ಮವನ್ನು ಬಳಸಿದರೆ, ನೀವು ಅಜ್ಞಾನಿಗಳು ಮತ್ತು ಜನಾಂಗೀಯವಾದಿಗಳಾಗುತ್ತೀರಿ. ಫುಟ್ಬಾಲ್ ಇರುವುದು ಆನಂದಿಸಲು ಮತ್ತು ಬೆಂಬಲಿಸುವುದಕ್ಕಾಗಿಯೇ ಹೊರತು, ಜನರು ಏನಾಗಿದ್ದಾರೋ ಮತ್ತು ಏನನ್ನು ನಂಬುತ್ತಾರೋ ಅದರ ಮೂಲಕ ಅವರನ್ನು ನೋಯಿಸಲು ಅಲ್ಲ’’ ಎಂದು ಅವರು ಬರೆದಿದ್ದಾರೆ. ‘‘ಆದರೂ, ಬೆಂಬಲಿಸಲು ಮೈದಾನಕ್ಕೆ ಬಂದ ಅಭಿಮಾನಿಗಳಿಗೆ ಧನ್ಯವಾದಗಳು’’ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 10:55 pm

ತಾಪಮಾನ ಹೆಚ್ಚಳ; ಕಲಬುರಗಿ ಕೋರ್ಟ್ ಕಾರ್ಯಕಲಾಪದ ಸಮಯದಲ್ಲಿ ಬದಲಾವಣೆ

ಬೆಂಗಳೂರು: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಎಪ್ರಿಲ್ 6 ರಿಂದ ಮೇ ಅಂತ್ಯದವರಗೆ ಅನ್ವಯವಾಗುವಂತೆ ಹೈಕೋರ್ಟ್‌ ಕಲಬುರಗಿ ಪೀಠಗಳ ಕಾರ್ಯಕಲಾಪದ ಸಮಯ ಬದಲಾವಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಕೆ.ಎಸ್‌. ಭರತ್‌ ಕುಮಾರ್‌ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಕಲಬುರಗಿ ಹೈಕೋರ್ಟ್‌ ಪೀಠದ ಕಲಾಪವು ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಪ್ರತಿದಿನ ಬೆಳಗ್ಗೆ 8ರಿಂದ 11 ಗಂಟೆ ಹಾಗೂ 11.3ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಶನಿವಾರ ಹೊರತುಪಡಿಸಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2ಗಂಟೆಯವರಿಗೆ ಇರಲಿದೆ. ಶನಿವಾರ ಬೆಳಗ್ಗೆ 7.30ರಿಂದ 11 ಗಂಟೆಯವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಿಚಾರಣಾ ಕೋರ್ಟ್‌ಗಳ ಸಮಯದಲ್ಲೂ ಬದಲಾವಣೆ: ಕಲಬುರಗಿ ವಿಭಾಗದಡಿ ಬರುವ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಯಾದಗಿರಿ ಮತ್ತು ಬೆಳಗಾವಿ ವಿಭಾಗದಕ್ಕೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್‌ ಮತ್ತು ಕ್ರಿಮಿನಲ್‌, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯ ಕಾರ್ಯ ಕಲಾಪದ ಸಮಯವನ್ನೂ ಸಹ ಎಪ್ರಿಲ್ 4ರಿಂದ ಮೇ ಅಂತ್ಯದವರೆಗೆ ಬದಲಿಸಲಾಗಿದೆ. ಈ ನ್ಯಾಯಾಲಯಗಳಲ್ಲಿ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ ಮಧ್ಯಾಹ್ನ 1.30ರವರೆಗೆ ಕಲಾಪ ನಡೆಯಲಿದೆ. ಮಧ್ಯಾಹ್ನ 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಬೆಳಗ್ಗೆ 7.30ಕ್ಕೆ ಆರಂಭವಾಗಿ ಮಧ್ಯಾಹ್ನ 2ಕ್ಕೆ ಕೊನೆಯಾಗಲಿದೆ. ಏಪ್ರಿಲ್ 24ರಂದು ನಾಲ್ಕನೇ ಶನಿವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 3 Apr 2026 10:54 pm

ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿ ಎತ್ತಿ ಹಿಡಿದ ಹೈಕೋರ್ಟ್ ಪೂರ್ಣಪೀಠ

ಬೆಂಗಳೂರು : ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್‌ ಪೂರ್ಣಪೀಠ, ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನಾಲ್ಕು ಬಿಂದು ರೋಸ್ಟರ್‌ ಅನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ಹಿರಿತನದ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಹಾಗೂ ಬಡ್ತಿ ಪಡೆದ ನ್ಯಾಯಾಧೀಶರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಸುನೀಲ್‌ ದತ್‌ ಯಾದವ್‌, ಲಲಿತಾ ಕನ್ನೆಗಂಟಿ ಹಾಗೂ ವಿಜಯಕುಮಾರ್‌ ಪಾಟೀಲ್‌ ಅವರಿದ್ದ ಪೂರ್ಣಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನಿರಾಕರಿಸಲಾಗಿದ್ದರೂ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಭವಿಷ್ಯದಲ್ಲಿ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು. ಹೈಕೋರ್ಟ್‌ ಮತ್ತು ರಾಜ್ಯ ಸರ್ಕಾರ '4 ಅಂಶಗಳ ರೋಸ್ಟರ್‌' ಅನ್ನು ಅಳವಡಿಸಿಕೊಳ್ಳಬೇಕು ಎಂದು ಅದೇಶಿಸಿರುವ ನ್ಯಾಯಪೀಠ, ಈ ವಿಚಾರದಲ್ಲಿ ಹಲವು ನಿರ್ದೇಶನಗಳನ್ನೂ ನೀಡಿದೆ. ಪೂರ್ಣಪೀಠದ ನಿರ್ದೇಶನಗಳು: * ಹೈಕೋರ್ಟ್‌ ಎಲ್ಲ ಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ನ್ಯಾಯಾಂಗ ಅಧಿಕಾರಿಗಳ ವೃಂದ ಬಲವನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಬೇಕು. ಆ ವೃಂದ ಬಲದ ಅಧಿಸೂಚನೆ ಆಧರಿಸಿ '4 ಅಂಶಗಳ ರೋಸ್ಟರ್‌' ಅನ್ನು ಜಾರಿಗೊಳಿಸಬೇಕು. * 4 ಅಂಶಗಳ ರೋಸ್ಟರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ವೃಂದ ಬಲದ ಅಧಿಸೂಚನೆ ಹೊರಡಿಸಬೇಕು. ಬಡ್ತಿ ಕೋಟಾದಲ್ಲಿ ಬದಲಾವಣೆಯಾಗಿ ಶೇ.50 ಬಡ್ತಿ, ಶೇ.25 ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೇ.25 ನೇರವಾಗಿ ನೇಮಕಗೊಂಡ ಜಿಲ್ಲಾನ್ಯಾಯಾಧೀಶರ ಕೋಟಾ ಪರಿಗಣಿಸಿ ಹೊಸ ಕೋಟಾ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಬೇಕು. * ಹಾಲಿ ಪ್ರತ್ಯೇಕ ಸೇವಾಹಿರಿತನ ನಿಯಮಗಳು ಜಾರಿಯಲ್ಲಿಲ್ಲದ ಕಾರಣ, ಹೈಕೋರ್ಟ್‌ ಜತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ಹೊಸ ಸೇವಾ ಹಿರಿತನ ನಿಯಮ ರೂಪಿಸಬೇಕು. ಹೈಕೋರ್ಟ್‌ ಜಿಲ್ಲಾ ನ್ಯಾಯಾಧೀಶರ ಹಿರಿತನ ಮತ್ತು ವೃಂದವನ್ನು ನಿಯಂತ್ರಿಸುವ ಕಾನೂನು ಚೌಕಟ್ಟನ್ನು ರೂಪಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣವೇನು? ಹೈಕೋರ್ಟ್‌ 2016ರಲ್ಲಿ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 2015ರಲ್ಲಿ ಎರಡು ಬಾರಿ ಪದೋನ್ನತಿ ನೀಡಲಾದ ಅಧಿಕಾರಿಗಳನ್ನು ಸೇವಾ ಹಿರಿತನ ಪಟ್ಟಿಯಲ್ಲಿ ನೇರ ನೇಮಕಾತಿ ಆಗಿರುವ ನ್ಯಾಯಾಧೀಶರಿಗಿಂತ ಮೇಲೆ ಇಡಲಾಗಿತ್ತು. ಇದನ್ನು ನೇರ ನೇಮಕಾತಿಯಾಗಿದ್ದ ನ್ಯಾಯಾಧೀಶರು ಪ್ರಶ್ನಿಸಿದ್ದರು. ಆ ಅರ್ಜಿ ಆಲಿಸಿದ್ದ ಏಕಸದಸ್ಯ ನ್ಯಾಯಪೀಠ, ಸೇವಾ ಹಿರಿತನ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಮತ್ತು ಬಡ್ತಿ ಪಡೆದು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಅನು ಶಿವರಾಮನ್‌ ಅವರು ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ರಾಜೇಶ್‌ ರೈ ಅವರು ಏಕಸದಸ್ಯ ನ್ಯಾಯಪೀಠದ ಆದೇಶದಂತೆ ಹೊಸದಾಗಿ ಸೇವಾ ಹಿರಿತನ ಪಟ್ಟಿ ಮಾಡಬೇಕೆಂದು ತೀರ್ಪು ನೀಡಿದ್ದರು. ಭಿನ್ನ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮೇಲ್ಮನವಿಗಳ ಇತ್ಯರ್ಥಕ್ಕೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠವನ್ನು ರಚನೆ ಮಾಡಿದ್ದರು. ಇದೀಗ ಮೇಲ್ಮನವಿಯ ಸಮಗ್ರ ವಿಚಾರಣೆ ನಡೆಸಿರುವ ಪೂರ್ಣಪೀಠ 142 ಪುಟಗಳ ತೀರ್ಪು ಪ್ರಕಟಿಸಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ.

ವಾರ್ತಾ ಭಾರತಿ 3 Apr 2026 10:50 pm

ಬೆಂಗಳೂರು ಸೇರಿ ಎಲ್ಲೆಡೆ ʼಗುಡ್‍ಫ್ರೈಡೆ ಆಚರಣೆʼ

ಬೆಂಗಳೂರು : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್‍ಫ್ರೈಡೆ) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಶುಕ್ರವಾರ ಬೆಳಗ್ಗೆ 7.30ರಿಂದಲೇ ಆಚರಣೆಗಳು ಆರಂಭಗೊಂಡವು. ಚರ್ಚ್‍ಗಳಲ್ಲಿ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಬೆಂಗಳೂರಿನ ಎಂ.ಜಿ.ರಸ್ತೆಯ ಈಸ್ಟ್ ಪರೇಡ್ ಮಲಯಾಳಂ ಚರ್ಚ್‍ನಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಚಾಮರಾಜಪೇಟೆಯ ಸೇಂಟ್ ಲೂಕ್ಸ್ ಚರ್ಚ್‍ನಲ್ಲೂ ಗುಡ್‍ಫ್ರೈಡೆ ಆಚರಣೆ ನಡೆಯಿತು. ಅದೇ ರೀತಿ, ಎಟಿಯನ್ ಸ್ಮಾರಕ ಚರ್ಚ್, ತಿಲಕನಗರ ಸೇಂಟ್ ಮೇರಿ ಚರ್ಚ್, ಶಿವಜಿಂಗಾರ್ ಫ್ರಾಂಚೈಸ್ ಕ್ಸೇವಿಯರ್ ಚರ್ಚ್, ಸೇಂಟ್ ಜೋಹಾನ್ಸ್ ರಸ್ತೆ, ಶಿಶು ಜೀಸಸ್ ಚರ್ಚ್ ವಿವೇಕನಗರ ಸೇರಿದಂತೆ ಹಲವೆಡೆ ವಿಶೇಷ ಪ್ರಾರ್ಥನೆ ಜರುಗಿತು. ಕೆಲವು ಚರ್ಚ್‍ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಎತ್ತಿಕೊಂಡು ಮೆರವಣಿಗೆ ಸಾಗಿದ ದೃಶ್ಯ ಕಂಡುಬಂದಿತು.  

ವಾರ್ತಾ ಭಾರತಿ 3 Apr 2026 10:45 pm

ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳು ಕಳವಳಕಾರಿ: ಶ್ವೇತ ಭವನ

ಟೆಹರಾನ್/ವಾಷಿಂಗ್ಟನ್: ಅಮೆರಿಕದ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳು ಕಳವಳಕಾರಿಯಾಗಿವೆ ಎಂದು ಶ್ವೇತ ಭವನ ಪ್ರತಿಕ್ರಿಯಿಸಿದೆ. ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು ಇನ್ನೂ ದೃಢಪಟ್ಟಿಲ್ಲದಿದ್ದರೂ, ಪ್ಯಾರಾಶೂಟ್ ಒಂದು ಪತ್ತೆಯಾಗಿದೆ ಎಂದು ಇರಾನ್‌ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ ನ ಮಧ್ಯ ಭಾಗದಲ್ಲಿ ಅಮೆರಿಕ ಯುದ್ಧ ವಿಮಾನವು ಬಾಂಬ್ ಹಾಕುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಲ್ಲಿ ಹೆಲಿಕಾಪ್ಟರ್‌ ಗಳು ಹಾಗೂ ಮರು ಇಂಧನ ಭರ್ತಿ ವಿಮಾನಗಳು ಕಂಡು ಬಂದಿರುವುದರಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಸೂಚನೆ ದೊರೆತಿದೆ. ಹೊಡೆದುರುಳಿಸಲಾದ ಯುದ್ಧ ವಿಮಾನದ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇರಾನ್ ಮಾಧ್ಯಮಗಳಲ್ಲಿನ ವರದಿಯನ್ನು ದೃಢಪಡಿಸುವಂತಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಹೆಸರೇಳಲು ಇಚ್ಛಿಸದ ಅಮೆರಿಕ ಅಧಿಕಾರಿ ನಿರಾಕರಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕ ಪೈಲಟ್‌ ಗಳನ್ನು ಇರಾನ್ ಸೇನಾಪಡೆ ವಶಕ್ಕೆ ಪಡೆದಿರುವುದು ಇರಾನ್-ಅಮೆರಿಕ ಯುದ್ಧದಲ್ಲಿ ಒಂದು ತಿರುವಾಗಬಹುದು ಎಂದು ಅಂದಾಜಿಸಲಾಗಿದೆ. ಎಫ್-55 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ್ದರೂ, ಅದು ಇನ್ನೂ ದೃಢಪಟ್ಟಿಲ್ಲ. ಆದರೆ, ಇಬ್ಬರು ಅಮೆರಿಕ ಪೈಲಟ್‌ ಗಳು ಇರಾನ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆಕಾಶದಿಂದ ಯೋಧರನ್ನು ಕೆಳಕ್ಕಿಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇರಾನ್ ಹಾಗೂ ಅಮೆರಿಕ ಭೂಸೇನಾ ಪಡೆಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಇದರಿಂದ ಆಕ್ರಮಣಕ್ಕೆ ಮುಂದಾಗಿರುವ ಅಮೆರಿಕ ಸೇನಾಪಡೆಯಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಇರಾನ್ ಹೇಳಿದೆ. ಅಮೆರಿಕ ಪೈಲಟ್‌ ಗಳನ್ನು ಪತ್ತೆ ಮಾಡಿದವರಿಗೆ 10 ಶತಕೋಟಿ ತೊಮನ್ಸ್ (64,102 ಡಾಲರ್) ಬಹುಮಾನವಾಗಿ ನೀಡಲಾಗುವುದು ಎಂದು ಇರಾನ್ ಟಿವಿ ಪ್ರಕಟಿಸಿದೆ. ಹೀಗಾಗಿ, ಈ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಜನತೆಗೆ ಮನವಿ ಮಾಡಲಾಗಿದೆ. ಒಂದು ವೇಳೆ ಅಮೆರಿಕ ಪೈಲಟ್‌ ಗಳು ಇರಾನ್ ಸೇನಾಪಡೆಗಳಿಗೆ ಸೆರೆ ಸಿಕ್ಕರೆ, ಅದು ಈ ಯುದ್ಧದಲ್ಲಿ ಒಂದು ತಿರುವಾಗಲಿದೆ. ಇದೇ ಮೊದಲ ಬಾರಿಗೆ ಇರಾನ್ ಸೇನಾಪಡೆ ಅಮೆರಿಕ ಪೈಲಟ್‌ ಗಳನ್ನು ಸೆರೆ ಹಿಡಿದಂತಾಗಲಿದ್ದು, ಇದರಿಂದ ಈ ಯುದ್ಧದ ಅವಧಿಯಲ್ಲಿ ಅಮೆರಿಕ ಖೈದಿಗಳು ಇರಾನ್‌ ನ ಕಾರಾಗೃಹದಲ್ಲಿರುವಂತಾಗಲಿದೆ ಎಂದು Aljazeera ವರದಿ ಮಾಡಿದೆ.

ವಾರ್ತಾ ಭಾರತಿ 3 Apr 2026 10:44 pm

Bengaluru | ಚಾಕುವಿನಿಂದ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಬೆಂಗಳೂರು : ಮದ್ಯದ ಅಮಲಿನಲ್ಲಿ ದ್ವಿಚ್ರಕವಾಹನ ಸವಾರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಎಚ್.ಎಸ್.ಸಂದೀಪ್ ಹಾಗೂ ಶ್ಯಾಮ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ. ಮಾ.25ರ ಬೆಳಗಿನ ಜಾವ ವ್ಯಕ್ತಿಯೊಬ್ಬರು ತನ್ನ ಬೈಕ್‍ನಲ್ಲಿ ತೆರಳುವಾಗ ಹುಣಸಮಾರನಹಳ್ಳಿ ಬಳಿ ಇಬ್ಬರು ಆರೋಪಿಗಳು ನಿಲ್ಲಿಸಿದಲ್ಲದೆ, ಬೆದರಿಸಿ ಚಾಕು ಹಾಗೂ ಹೆಲ್ಮೆಟ್‍ನಿಂದ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಇವರಿಂದ ಸುಮಾರು 2.20 ಲಕ್ಷ ಮೌಲ್ಯದ ಬೈಕ್, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 10:41 pm

Bengaluru | ಕಬ್ಬನ್‍ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು : ವ್ಯಕ್ತಿಯೊಬ್ಬರು ನಗರದ ಕಬ್ಬನ್ ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದಿಂದಲೇ ಕಾಣೆಯಾಗಿದ್ದ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಎಚ್‍ಎಸ್‍ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಶುಕ್ರವಾರ ಬೆಳಗ್ಗೆ ಪಾರ್ಕ್‍ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಬ್ಬನ್ ಪಾರ್ಕ್ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಆತ ಬೆಂಗಳೂರಿನ ಎಸ್‍ಪಿ ರೋಡ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ನಂತರ ಆತನ ಕುಟುಂಬಕ್ಕೆ ಮಾಹಿತಿ ತಿಳಿಸಿದ ಅಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.  

ವಾರ್ತಾ ಭಾರತಿ 3 Apr 2026 10:35 pm

ಅದಾನಿ ಬಂದರುಗಳು - ವಿಶೇಷ ಆರ್ಥಿಕ ವಲಯ: 500 ಮಿಲಿಯನ್ ಟನ್ ಮೈಲಿಗಲ್ಲು ದಾಟಿದ ಅದಾನಿ ಬಂದರು, 2030ಕ್ಕೆ 1 ಬಿಲಿಯನ್ ಟನ್ ಗುರಿ

ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯವು 500 ಮಿಲಿಯನ್ ಟನ್ ಸರಕು ಸಾಮರ್ಥ್ಯದೊಂದಿಗೆ ಮಹತ್ವದ ಮೈಲಿಗಲ್ಲನ್ನು ಹೊಂದಿದೆ. ಇದು ಮುಂಚೂಣಿಯ ಕೆಲಸಗಾರರ ಪಾತ್ರ, ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಗೆ ಸಿದ್ಧವಾಗಿರುವ ಲಾಜಿಸ್ಟಿಕ್ಸ್ ಜಾಲವನ್ನು ಎತ್ತಿ ತೋರಿಸುತ್ತದೆ. ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ವಾಹಕರಾದ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ

ಒನ್ ಇ೦ಡಿಯ 3 Apr 2026 10:34 pm

ಬೆಂಗಳೂರಿನ 49 ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕ್ರಮಗಳ ವರದಿ ಸಲ್ಲಿಸಲು ನಿರ್ದೇಶನ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ 2025ನೆ ಸಾಲಿನಲ್ಲಿ 49 ಪ್ರದೇಶಗಳು ಪ್ರವಾಹ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಪ್ರದೇಶಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು. ಇದಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಐದು ನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಶಾಶ್ವತ ಪರಿಹಾರ ಒದಗಿಸದ ಪ್ರದೇಶಗಳಲ್ಲಿ, ನಗರ ಪಾಲಿಕೆಗಳ ಮುಖ್ಯ ಅಭಿಯಂತರರು, ಜಿಬಿಎ ಯೋಜನಾ ಅನುಷ್ಠಾನ ಘಟಕದ ಮುಖ್ಯ ಅಭಿಯಂತರರೊಂದಿಗೆ ಸಮನ್ವಯ ಸಾಧಿಸಿ ಮಳೆಯ ಸಮಯದಲ್ಲಿ ಯಾವುದೇ ತೊಂದರೆ ಅಥವಾ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ನಗರ ಪಾಲಿಕೆಗಳ ಅಪರ ಆಯುಕ್ತರು ಮೇಲ್ವಿಚಾರಣೆ ವಹಿಸಬೇಕು ಎಂದಿದ್ದಾರೆ. ಎಲ್ಲ ರಸ್ತೆಗಳ ಮಳೆ ನೀರು ಚರಂಡಿಗಳಲ್ಲಿ ಎಪ್ರಿಲ್ ಅಂತ್ಯದೊಳಗೆ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಪ್ರಸ್ತುತ ಅನುಮೋದನೆಗೊಂಡ ಟೆಂಡರ್‌ಗಳಡಿ ಆರಂಭಗೊಂಡ ಕಾಮಗಾರಿಗಳಲ್ಲಿ ಆದ್ಯತೆಯ ಮೇರೆಗೆ ಹೂಳು ತೆಗೆಯುವ ಕಾರ್ಯವನ್ನು ನಿರ್ವಹಿಸಿ, ಶೋಲ್ಡರ್ ಡ್ರೈನ್‍ಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ನಗರ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಚರಂಡಿಗಳಲ್ಲಿ ಹೂಳು ತೆಗೆಯುವಾಗ ಹತ್ತಿರದ ರಾಜಕಾಲುವೆವರೆಗೆ ಸಂಪರ್ಕ ಕಲ್ಪಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು. ಹೂಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಉಸ್ತುವಾರಿ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಗ್ನಿಶಾಮಕ ತಂಡಗಳೊಂದಿಗೆ ಸಮನ್ವಯ ಸಾಧಿಸಿ: ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯ ಅಗ್ನಿಶಾಮಕ ಠಾಣೆಗಳು ಹಾಗೂ ಎಸ್‍ಡಿಆರ್‍ಎಫ್ ತಂಡಗಳೊಂದಿಗೆ ಸಮನ್ವಯ ಸಾಧಿಸಿ, ಅಧಿಕಾರಿಗಳು/ಸಿಬ್ಬಂದಿಗಳ ಪಟ್ಟಿಯನ್ನು ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ನೆರವು ದೊರೆಯುವಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಮರ ತೆರವು ತಂಡಗಳನ್ನು ರಚಿಸಿ: ಮಳೆಯಿಂದಾಗಿ ಧರೆಗುರುಳುವ ಮರಗಳು ಹಾಗೂ ರೆಂಬೆ-ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಲು ನಗರ ಪಾಲಿಕೆ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಮುನ್ನೆಚ್ಚರಿಕೆಯಾಗಿ ಬಾಗಿರುವ ಅಥವಾ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸಬೇಕು ಎಂದು ಮಹೇಶ್ವರ್ ರಾವ್ ಹೇಳಿದ್ದಾರೆ.  

ವಾರ್ತಾ ಭಾರತಿ 3 Apr 2026 10:33 pm

ಕಾಂಗ್ರೆಸ್ ಪಕ್ಷ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನೀಡಿದೆ : ಕೆ.ಎಚ್.ಮುನಿಯಪ್ಪ

ಬಾಗಲಕೋಟೆ : ಕಾಂಗ್ರೆಸ್ ಪಕ್ಷ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಈ ಭಾಗದ ಜನರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಆಶೀರ್ವಾದ ಮಾಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು. ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಿರೂರು ಚನ್ನಯ್ಯನಗರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬಹುಮತದ ಗೆಲುವು ದೊರಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಬಡವರ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರಿಗೆ ಅಕ್ಕಿ ದೊರೆಯಬೇಕು, ಅವರು ನೆಮ್ಮದಿಯಾಗಿ ಊಟ ಮಾಡಬೇಕು ಮತ್ತು ಗೌರವಯುತ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಕಡುಬಡವರಿಗಾಗಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಯಿತು. ದೇಶದಲ್ಲಿ ಯಾವುದೇ ಸರಕಾರ ಇದ್ದರೂ ಬಡವರಿಗೆ ಅಕ್ಕಿ ನೀಡಲೇಬೇಕು ಎಂಬ ದೃಷ್ಟಿಯಿಂದ ಈ ಕಾನೂನು ರೂಪಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದರು. 2013ರಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಬಡವರಿಗೆ ಉಚಿತ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು, ಜನರಿಗೆ ನೆಮ್ಮದಿಯ ಜೀವನವನ್ನು ಕಲ್ಪಿಸಿದರು. ಬಳಿಕವೂ ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಿ, ಅಕ್ಕಿಯ ಜೊತೆಗೆ ಹಣ ಸಹಾಯ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಇದೊಂದೇ ಅಲ್ಲ, ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಮಾಸಿಕ 2 ಸಾವಿರ ರೂ.ಆರ್ಥಿಕ ನೆರವು, 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಉದ್ಯೋಗಕ್ಕಾಗಿ ತರಬೇತಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ-ಇವೆಲ್ಲವೂ ಬಡವರ ಬದುಕು ಸುಧಾರಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸುತ್ತವೆ ಎಂದು ಮುನಿಯಪ್ಪ ಹೇಳಿದರು.  ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 10:31 pm

POK ಭಾರತದೊಂದಿಗೆ ವಿಲೀನಗೊಳ್ಳಲಿದೆ: ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ

ಶ್ರೀನಗರ, ಎ. 3: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಶುಕ್ರವಾರ ಹೇಳಿದ್ದಾರೆ. ‘‘ಕಾಶ್ಮೀರದಲ್ಲಿ ನಿಂತುಕೊಂಡು ನಮ್ಮ ನೆರೆಯ ದೇಶಕ್ಕೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿ ಭಾರತದೊಂದಿಗೆ ವಿಲೀನಗೊಳ್ಳಲಿದೆ. ಏಕೆಂದರೆ ಪಿಒಕೆ ಜನರು ಜನಾಭಿಪ್ರಾಯ ಸಂಗ್ರಹಿಸಲು ಬಯಸಿದ್ದಾರೆ’’ ಎಂದರು. ‘‘ದೇವರು ಬಯಸಿದರೆ, ಅವರ ಘರ್ ವಾಪಸಿ ಶೀಘ್ರದಲ್ಲಿ ನಡೆಯಲಿದೆ. ಅಲ್ಲಿನ ಜನರು ಇದನ್ನು ಬಯಸುತ್ತಾರೆ. ಅವರು ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಸಂತೋಷಪಡುತ್ತಾರೆ. ಕಾಶ್ಮೀರ ಇಂದು ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ’’ ಎಂದು ಅವರು ಹೇಳಿದರು. 370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಉಂಟಾದ ಪರಿವರ್ತನೆಯನ್ನು ನೋಡಿ ತನಗೆ ತುಂಬಾ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 10:17 pm

ಬಂಗಾಳ, ತಮಿಳು ನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭಕ್ಕಾಗಿ ನೀತಿ ಸಂಹಿತೆ ಉಲ್ಲಂಘಿಸಿ ‘ವಿಶೇಷ ಅಧಿವೇಶನ’: ಕಾಂಗ್ರೆಸ್

ಹೊಸದಿಲ್ಲಿ, ಎ. 3: ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯಲು ಸರ್ಕಾರವು ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲು ವಿಶೇಷ ಅಧಿವೇಶನವನ್ನು ಕರೆದಿದ್ದು, ಇದು ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ‘ಸರ್ಕಾರವು ಅವಸರದಿಂದ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾದರೆ ಗಂಭೀರ ಪರಿಣಾಮಗಳು ಉಂಟಾಗಲಿವೆ. ಪ್ರಸ್ತುತ ಸ್ಥಿತಿಗೆ ಯಾವುದೇ ವ್ಯತ್ಯಯವನ್ನು ನಾವು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 2023ರ ನಾರಿ ಶಕ್ತಿ ವಂದನ ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ಅಂಗೀಕಾರಗೊಂಡ ಬಳಿಕ 30 ತಿಂಗಳುಗಳ ಕಾಲ ಸರ್ಕಾರವು ನಿದ್ರೆಗೆ ಜಾರಿತ್ತು. ಈಗ ಚುನಾವಣಾ ಸಮಯದಲ್ಲಿ ‘ದುಪ್ಪಟ್ಟು ಶ್ರೇಯ’ ಪಡೆಯುವ ಉದ್ದೇಶದಿಂದ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿದ ರಮೇಶ್, ಕ್ಷೇತ್ರ ಪುನರ್ವಿಂಗಡಣೆ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ಪ್ರಸ್ತಾವ ಹೊರಬಿದ್ದಿಲ್ಲ ಎಂದು ಬೆಟ್ಟು ಮಾಡಿದರು. ‘ಆದಾಗ್ಯೂ ಲೋಕಸಭಾ ಸ್ಥಾನಗಳಲ್ಲಿ ಪ್ರಮಾಣಾನುಪಾತದಲ್ಲಿ ಹೆಚ್ಚಳವಾಗಲಿದೆ ಎಂಬುದು ನಮಗೆ ತಿಳಿದುಬಂದಿದೆ. ಆದರೆ ವಾಸ್ತವದಲ್ಲಿ ಸಣ್ಣ ರಾಜ್ಯಗಳು ಹಾಗೂ ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮದ ರಾಜ್ಯಗಳು ತೀವ್ರ ತೊಂದರೆ ಎದುರಿಸಲಿವೆ. ಪ್ರಸ್ತಾವಿತ ಮಸೂದೆಯೊಂದಿಗೆ ಉತ್ತರ ಪ್ರದೇಶದ ಸಂಸದರ ಸಂಖ್ಯೆ 80ರಿಂದ 120ಕ್ಕೆ ಏರಿಕೆಯಾಗಲಿದ್ದು, ಕೇರಳದಲ್ಲಿ 20ರಿಂದ ಗರಿಷ್ಠ 30ಕ್ಕೆ ಹೆಚ್ಚಬಹುದು. ಹೀಗಾಗಿ ನಮಗೆ ಅನಧಿಕೃತವಾಗಿ ತಿಳಿದುಬಂದಿರುವ ಈ ಮಾಹಿತಿಯೂ ಹಲವಾರು ರಾಜ್ಯಗಳಿಗೆ ಅಪಾಯಕಾರಿಯಾಗಬಹುದು’ ಎಂದು ಹೇಳಿದರು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಮೇಲೆ ಪ್ರಭಾವ ಬೀರಲು ರಾಜಕೀಯ ಲಾಭ ಪಡೆಯುವುದು ಈ ವಿಶೇಷ ಅಧಿವೇಶನದ ಏಕೈಕ ಉದ್ದೇಶವಾಗಿದೆ ಎಂದ ಅವರು, 15 ದಿನಗಳ ಬಳಿಕ, ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಮುಗಿದ ನಂತರ ಅಧಿವೇಶನವನ್ನು ಕರೆಯುವುದು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಎ. 16ರ ಮೊದಲು ಹಿರಿಯ ಕಾಂಗ್ರೆಸ್ ಸಂಸದರ ಮತ್ತು ನಂತರ ಪ್ರತಿಪಕ್ಷ ನಾಯಕರ ಸಭೆಗಳನ್ನು ಕರೆಯಲಿದ್ದಾರೆ ಎಂದು ರಮೇಶ್ ತಿಳಿಸಿದರು. ಮಹಿಳಾ ಮೀಸಲಾತಿ ಕಾನೂನನ್ನು ಆದಷ್ಟು ಶೀಘ್ರ ಜಾರಿಗೊಳಿಸಲು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸಲು ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ಬಜೆಟ್ ಅಧಿವೇಶನವು ಸಂಕ್ಷಿಪ್ತ ವಿರಾಮದ ಬಳಿಕ ಎ. 16ರಂದು ಮರುಸಮಾವೇಶಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 3 Apr 2026 10:14 pm

SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ; ಸರ್ಕಾರಕ್ಕೆ ಪತ್ರ

ರಾಜ್ಯ ಸರ್ಕಾರ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಂಕದ ಬದಲು ಗ್ರೇಡ್‌ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಗರಂ ಆಗಿದ್ದಾರೆ. ರಾಜ್ಯ ಸರ್ಕಾಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದು, ತೀರ್ಮಾನ ಮರುಪರಿಶೀಲಿಸಲು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 3 Apr 2026 10:09 pm

Tumkur | 14ನೇ ಶತಮಾನದ ‘ಜಾತ್ರೆ ವೀರಗಲ್ಲು' ಶಾಸನ ಪತ್ತೆ

ತುಮಕೂರು : 14ನೇ ಶತಮಾನದ ಮಹತ್ವದ ಸಾಂಸ್ಕೃತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ.ಕೊಟ್ರೇಶ್ ಹಾಗೂ ಡಾ.ಸುಧಾ ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ. ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹವನ್ನು ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ‘ಸತ್ಯಮಂಗಲ’ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ. ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆಂದರೆ ಅದರಲ್ಲಿ ಕೆತ್ತಲಾಗಿರುವ ಸಾಂಸ್ಕೃತಿಕ ಚಿತ್ರಣ. 14ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭಗಳನ್ನು ಹೊತ್ತುಕೊಂಡು ಸಂಭ್ರಮದಿಂದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕೆತ್ತಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ. ಇತಿಹಾಸಕಾರರ ವಿಶ್ಲೇಷಣೆಯ ಪ್ರಕಾರ, ಜನಸಾಮಾನ್ಯರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶತ್ರುಗಳು ಅಥವಾ ದರೋಡೆಕೋರರು ಅಡ್ಡಿಪಡಿಸಿರಬಹುದು. ಆ ಸಮಯದಲ್ಲಿ ಜನರ ರಕ್ಷಣೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ವೀರನ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ. 

ವಾರ್ತಾ ಭಾರತಿ 3 Apr 2026 10:00 pm

Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ

Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ ಹಿರಿಯ ಪತ್ರಕರ್ತ ಶಿವಕುಮಾರ್ ಮೆಣಸಿನಕಾಯಿ ಅವರ ಬರಹ ಇಲ್ಲಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರ ಅಣ್ಣಾಮಲೈ ಅವರನ್ನು ಬಿಜೆಪಿ ಈ ಬಾರಿ ಕಣಕ್ಕೆ ಇಳಿಸಿಲ್ಲ. ಕರ್ನಾಟಕದಲ್ಲಿ ಸೇವೆಯಲ್ಲಿದ್ದಷ್ಟು ದಿನ ಮನೆಮಾತಾಗಿದ್ದ ಅಣ್ಣಾಮಲೈ ರಾಜಕೀಯ ಉನ್ಮಾದಕ್ಕೆ ಒಳಗಾಗಿ ಕಷ್ಟಪಟ್ಟು ಗಳಿಸಿದ್ದ ಹುದ್ದೆಯನ್ನು ಕೈಚೆಲ್ಲಿ ಹೋದರು. ಈಗ

ಒನ್ ಇ೦ಡಿಯ 3 Apr 2026 9:57 pm

ಫೆಲೆಸ್ತೀನಿಯನ್ನರಿಗೆ ಮಾತ್ರ ಅನ್ವಯವಾಗುವ ಇಸ್ರೇಲ್‌ ನ ಮರಣದಂಡನೆ ಕಾನೂನು; ಏನಿದು?

ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸಲು ಇಸ್ರೇಲ್‌ ನಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು, ಇದು ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಇದನ್ನು ವರ್ಣಭೇದ ನೀತಿಯ ವಿಸ್ತರಣೆ ಎಂದು ಹೇಳಿದ್ದಾರೆ. ಈ ಕಾನೂನು ನಿರ್ದಿಷ್ಟವಾಗಿ ಯಹೂದಿ ನಾಗರಿಕರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವುದರಿಂದ, ಹಲವಾರು ಯುರೋಪಿಯನ್ ರಾಷ್ಟ್ರಗಳು ಇದನ್ನು 'ಬಹಿರಂಗವಾಗಿ ಜನಾಂಗೀಯ ಸ್ವರೂಪ' ಎಂದು ಹಣೆಪಟ್ಟಿ ಕಟ್ಟಿವೆ. ಇಸ್ರೇಲ್‌ ನಲ್ಲಿ ಬಲಪಂಥೀಯ ಬೆಂಬಲಿಗರು ಹರ್ಷೋದ್ಗಾರದೊಂದಿಗೆ ಅನುಮೋದನೆಯನ್ನು ಸ್ವಾಗತಿಸಿದರೆ, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ ನಾಯಕರು ಮಸೂದೆಯ ಉದ್ದೇಶಿತ ಸ್ವರೂಪ ಮತ್ತು ಪ್ರಾದೇಶಿಕ ಸ್ಥಿರತೆಗೆ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಾಸ್ತವಿಕ ತಾರತಮ್ಯದ ಸ್ವರೂಪದ ಬಗ್ಗೆ ನಾವು ವಿಶೇಷವಾಗಿ ಚಿಂತಿತರಾಗಿದ್ದೇವೆ. ಈ ಮಸೂದೆಯನ್ನು ಅಂಗೀಕರಿಸುವುದರಿಂದ ಇಸ್ರೇಲ್‌ ನ ಪ್ರಜಾಪ್ರಭುತ್ವ ತತ್ವಗಳಿಗೆ ಸಂಬಂಧಿಸಿದ ಬದ್ಧತೆಗಳು ದುರ್ಬಲಗೊಳ್ಳುವ ಅಪಾಯವಿದೆ ಎಂದು ವಿದೇಶ ಸಚಿವಾಲಯಗಳು ರವಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮಾನವ ಹಕ್ಕುಗಳ ಗುಂಪುಗಳು ಮಸೂದೆಯನ್ನು ಟೀಕಿಸಿವೆ. ಫೆಬ್ರವರಿಯಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಶಾಸನವು ಮರಣದಂಡನೆಯನ್ನು ಇಸ್ರೇಲ್‌ ನ ವರ್ಣಭೇದ ನೀತಿಯ ವ್ಯವಸ್ಥೆಯಲ್ಲಿ ಮತ್ತೊಂದು ತಾರತಮ್ಯದ ಸಾಧನವನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಹ್ಯೂಮನ್ ರೈಟ್ಸ್ ವಾಚ್ (HRW) ಮಂಗಳವಾರ ಕಾನೂನನ್ನು ತಾರತಮ್ಯ ಎಂದು ಕರೆದಿದೆ, ಏಕೆಂದರೆ ಇದು ಪ್ರಾಥಮಿಕವಾಗಿ, ಪ್ರತ್ಯೇಕವಾಗಿ ಅಲ್ಲದಿದ್ದರೂ, ಫೆಲೆಸ್ತೀನಿಯನ್ನರಿಗೆ ಅನ್ವಯಿಸುತ್ತದೆ. ಹ್ಯೂಮನ್ ರೈಟ್ಸ್ ವಾಚ್‌ನ ಆಡಮ್ ಕೂಗಲ್ ಅವರ ಪ್ರಕಾರ, ಮರಣದಂಡನೆಗೆ ಇಸ್ರೇಲ್‌ ನ ಒತ್ತಾಯವು ಭದ್ರತಾ ಕಾಳಜಿಗಳನ್ನು ಮೀರಿದೆ. ಈ ಕ್ರಮವು ದ್ವಂದ್ವ ನ್ಯಾಯ ವ್ಯವಸ್ಥೆ ಮತ್ತು ಬೇರೂರಿರುವ ತಾರತಮ್ಯವನ್ನು ಗಟ್ಟಿಗೊಳಿಸುತ್ತದೆ. ಈ ಕ್ರಮಗಳನ್ನು 'ವರ್ಣಭೇದ ನೀತಿಯ ಲಕ್ಷಣಗಳು' ಎಂದು ಅವರು ಹೇಳಿದ್ದಾರೆ. ಮರಣದಂಡನೆಯು ಬದಲಾಯಿಸಲಾಗದ್ದು ಮತ್ತು ಕ್ರೂರವಾದುದು. ಮೇಲ್ಮನವಿಗಳ ಮೇಲಿನ ಅದರ ಕಠಿಣ ನಿರ್ಬಂಧಗಳು ಮತ್ತು ಅದರ 90-ದಿನಗಳ ಮರಣದಂಡನೆ ಸಮಯದ ಜೊತೆಗೆ, ಈ ಮಸೂದೆಯು ಫೆಲೆಸ್ತೀನಿಯನ್ ಬಂಧಿತರನ್ನು ವೇಗವಾಗಿ ಮತ್ತು ಕಡಿಮೆ ಪರಿಶೀಲನೆಯೊಂದಿಗೆ ಕೊಲ್ಲುವ ಗುರಿಯನ್ನು ಹೊಂದಿದೆ ಎಂದು ಕೂಗಲ್ ಹೇಳಿದ್ದಾರೆ. ಅದೇನೇ ಇದ್ದರೂ, ಸಂಸತ್ತಿನಲ್ಲಿ ಯಶಸ್ವಿಯಾಗಿ ಅಂಗೀಕಾರವಾದಾಗ ಶಾಸನದ ಪ್ರಮುಖ ಪ್ರತಿಪಾದಕ, ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಅವರು ಷಾಂಪೇನ್ ಬಾಟಲಿ ಹಿಡಿದು ►ಕಾನೂನು ಇಸ್ರೇಲಿಗಳನ್ನು ಗುರಿಯಾಗಿಸದೆ ಫೆಲೆಸ್ತೀನಿಯನ್ನರನ್ನು ಹೇಗೆ ಗುರಿಯಾಗಿಸುತ್ತದೆ? ಈ ಶಾಸನವು ಪ್ರಾಥಮಿಕವಾಗಿ ಮಿಲಿಟರಿ ನ್ಯಾಯಾಲಯಗಳಿಗೆ ಸೀಮಿತವಾಗಿದೆ, ಇವು ಆಕ್ರಮಿತ ಪ್ರದೇಶಗಳಲ್ಲಿ ಫೆಲೆಸ್ತೀನಿಯನ್ನರ ಮೇಲೆ ಮಾತ್ರ ನ್ಯಾಯವ್ಯಾಪ್ತಿಯನ್ನು ಹೊಂದಿವೆ. ಈ ಹೊಸ ನಿಬಂಧನೆಗಳ ಅಡಿಯಲ್ಲಿ, ಪಶ್ಚಿಮ ದಂಡೆಯೊಳಗೆ ಇಸ್ರೇಲಿ ನಾಗರಿಕನನ್ನು ಕೊಂದ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಗೆ ಕಡ್ಡಾಯ ಮರಣದಂಡನೆ ವಿಧಿಸಲಾಗುತ್ತದೆ. ನ್ಯಾಯಾಲಯಗಳು ನಿಯಮಿತವಾಗಿ ಶಿಕ್ಷೆಯ ಅಂಕಿಅಂಶಗಳನ್ನು ಪ್ರಕಟಿಸದಿದ್ದರೂ, 2010ರಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಾಡಿದ ಅಪರಾಧಗಳಿಗಾಗಿ ವಿಚಾರಣೆಗೆ ಒಳಗಾದ ಫೆಲೆಸ್ತೀನಿಯನ್ನರಲ್ಲಿ 99.74 ಪ್ರತಿಶತದಷ್ಟು ಜನರು ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ ಎಂದು ನ್ಯಾಯಾಲಯ ವ್ಯವಸ್ಥೆಯು ಒಪ್ಪಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಬ್ರವರಿ ಅಂತ್ಯದಲ್ಲಿ ತಮ್ಮ ದೇಶವು ಇರಾನ್ ವಿರುದ್ಧ ಯುದ್ಧ ಪ್ರಾರಂಭಿಸಿದ ಕೆಲವೇ ವಾರಗಳಲ್ಲಿ ಏಳು ಫೆಲೆಸ್ತೀನಿಯನ್ನರನ್ನು ಕೊಂದ ಇಸ್ರೇಲಿ ವಸಾಹತುಗಾರರನ್ನು ಇಸ್ರೇಲ್‌ ನ ನಾಗರಿಕ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮಾರ್ಚ್ ಅಂತ್ಯದಲ್ಲಿ ಯುಕೆಯ ಗಾರ್ಡಿಯನ್ ಪತ್ರಿಕೆಯ ವಿಶ್ಲೇಷಣೆಯ ಪ್ರಕಾರ, ಈ ದಶಕದ ಆರಂಭದಿಂದಲೂ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದಿದ್ದಕ್ಕಾಗಿ ತನ್ನ ಯಾವುದೇ ನಾಗರಿಕರ ವಿರುದ್ಧ ಇನ್ನೂ ಕಾನೂನು ಕ್ರಮ ಜರುಗಿಸಿಲ್ಲ. ಹೊಸ ಶಾಸನದ ಅಡಿಯಲ್ಲಿ, ಇಸ್ರೇಲ್‌ ನ ನಾಗರಿಕ ನ್ಯಾಯಾಲಯಗಳಿಗೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದ ತಪ್ಪಿತಸ್ಥರೆಂದು ಕಂಡುಬಂದ ಇಸ್ರೇಲಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಹೆಚ್ಚುವರಿ ಮಟ್ಟದ ಸಡಿಲತೆಯನ್ನು ನೀಡಲಾಗುತ್ತದೆ. ನ್ಯಾಯಾಧೀಶರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ನಡುವೆ ಆರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಲೆಸ್ತೀನಿಯನ್ನರನ್ನು ವಿಚಾರಣೆ ನಡೆಸುವ ಮಿಲಿಟರಿ ನ್ಯಾಯಾಲಯಗಳಿಗೆ ಶಿಕ್ಷೆಗಳು ಸ್ವಯಂಚಾಲಿತ ಮರಣದಂಡನೆಯನ್ನು ಹೊಂದಿರುತ್ತವೆ; ತೀವ್ರ ಸಂದರ್ಭಗಳಲ್ಲಿ ಮಾತ್ರ ಜೀವಾವಧಿ ಶಿಕ್ಷೆ ಲಭ್ಯವಿದೆ. ಇಸ್ರೇಲಿ ಹಕ್ಕುಗಳ ಗುಂಪು ಯೆಶ್ ದಿನ್ ನಡೆಸಿದ ಅಧ್ಯಯನದ ಪ್ರಕಾರ, 2005 ಮತ್ತು 2024ರ ನಡುವೆ ಪಶ್ಚಿಮ ದಂಡೆಯಲ್ಲಿ (ಪೂರ್ವ ಜೆರುಸಲೆಮ್ ಹೊರತುಪಡಿಸಿ) ಫೆಲೆಸ್ತೀನಿಯನ್ನರ ವಿರುದ್ಧ ಅಪರಾಧಗಳನ್ನು ಎಸಗಿದ ನಾಗರಿಕ ನ್ಯಾಯಾಲಯಗಳು ತಪ್ಪಿತಸ್ಥರೆಂದು ಕಂಡುಕೊಂಡ ವಸಾಹತುಗಾರರ ಶಿಕ್ಷೆಯ ಪ್ರಮಾಣವು ಸುಮಾರು 3 ಪ್ರತಿಶತದಷ್ಟಿದೆ. ವಸಾಹತುಗಾರರ ಹಿಂಸಾಚಾರದ ಕುರಿತಾದ ಸುಮಾರು 93.8 ಪ್ರತಿಶತದಷ್ಟು ತನಿಖೆಗಳು ತನಿಖೆಯ ಕೊನೆಯಲ್ಲಿ ಯಾವುದೇ ದೋಷಾರೋಪಣೆಯನ್ನು ಸಲ್ಲಿಸದೆ ಮುಕ್ತಾಯಗೊಂಡಿವೆ ಎಂದು ಗುಂಪು ಗಮನಿಸಿದೆ. 2018ರ ರಾಷ್ಟ್ರ-ರಾಜ್ಯ ಕಾನೂನು ಈ ನೀತಿಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ಹಂತದ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಔಪಚಾರಿಕಗೊಳಿಸುತ್ತದೆ. ಕಾನೂನು ಇಸ್ರೇಲ್ ಅನ್ನು ಯಹೂದಿ ಜನರ ವಿಶೇಷ ತಾಯ್ನಾಡು ಎಂದು ಗುರುತಿಸುತ್ತದೆ ಮತ್ತು ಯಹೂದಿ ವಸಾಹತುವನ್ನು ರಾಷ್ಟ್ರೀಯ ಹಿತಾಸಕ್ತಿಯಾಗಿ ಆದ್ಯತೆ ನೀಡುತ್ತದೆ. ಇದು ಜನಸಂಖ್ಯೆಯ ಸುಮಾರು 20 ಪ್ರತಿಶತದಷ್ಟು ಇರುವ ಫೆಲೆಸ್ತೀನಿಯನ್ ನಾಗರಿಕರ ಸ್ಥಾನಮಾನವನ್ನು ಸಮಾನತೆಯ ಯಾವುದೇ ಖಾತರಿಯನ್ನು ಬಿಟ್ಟುಬಿಡುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ. ►ಅದು ಹೇಗೆ ಕಾನೂನುಬದ್ಧವಾಗಿದೆ? ಹಲವರ ಪ್ರಕಾರ, ಇದು ಕಾನೂನುಬದ್ಧವಾಗಿಲ್ಲ. ಪ್ರಧಾನ ಮಂತ್ರಿ ನೆತನ್ಯಾಹು ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ಆಡಳಿತಾತ್ಮಕ ಅಧಿಕಾರ ಹೊಂದಿರುವ ಅವರ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಫೆಲೆಸ್ತೀನಿಯನ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರೂ, ಅದು ಮಿಲಿಟರಿ ಆಕ್ರಮಣದಲ್ಲಿರುವ ವಿದೇಶಿ ಪ್ರದೇಶವಾಗಿ ಉಳಿದಿದೆ. ಇಸ್ರೇಲ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್‌ ನ ಭದ್ರತೆ ಮತ್ತು ಪ್ರಜಾಪ್ರಭುತ್ವ ಕೇಂದ್ರದ ಹಿರಿಯ ಸಹೋದ್ಯೋಗಿ ಅಮಿಚೈ ಕೊಹೆನ್ ಅವರ ಪ್ರಕಾರ, ಅಂತರರಾಷ್ಟ್ರೀಯ ಕಾನೂನು ಇಸ್ರೇಲ್‌ ನ ಸಂಸತ್ತು ಪಶ್ಚಿಮ ದಂಡೆಗೆ ಶಾಸನ ರಚಿಸಲು ಅನುಮತಿಸುವುದಿಲ್ಲ, ಏಕೆಂದರೆ ಈ ಪ್ರದೇಶವು ಕಾನೂನುಬದ್ಧವಾಗಿ ಇಸ್ರೇಲ್‌ ನ ಸಾರ್ವಭೌಮ ಪ್ರದೇಶದ ಭಾಗವಾಗಿಲ್ಲ. ಸೆಪ್ಟೆಂಬರ್ 2024ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಒಂದು ವರ್ಷದೊಳಗೆ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ನ ಇಸ್ರೇಲಿ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿತು. ಯುಎನ್‌ಜಿಎ ನಿರ್ಣಯವು ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹಾ ಅಭಿಪ್ರಾಯವನ್ನು ಬೆಂಬಲಿಸಿತು, ಅದು ಇಸ್ರೇಲಿ ಆಕ್ರಮಣವನ್ನು ಕಾನೂನುಬಾಹಿರ ಎಂದು ಕರೆದಿದೆ. ಅದೇ ರೀತಿ, ಇಸ್ರೇಲ್‌ ನಲ್ಲಿನ ನಾಗರಿಕ ಹಕ್ಕುಗಳ ಸಂಘವು ಮಸೂದೆಯನ್ನು ಅನುಮೋದಿಸಿದ ಕೆಲವೇ ನಿಮಿಷಗಳ ನಂತರ ಈ ವಿಷಯವನ್ನು ಇಸ್ರೇಲ್‌ ನ ಅತ್ಯುನ್ನತ ನ್ಯಾಯಾಲಯಕ್ಕೆ ಈಗಾಗಲೇ ಕೊಂಡೊಯ್ದಿದೆ ಎಂದು ಘೋಷಿಸಿತು. ಈ ಕ್ರಮವು ಯೋಜಿತವಾಗಿ ತಾರತಮ್ಯದಿಂದ ಕೂಡಿದೆ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಾಸಿಸುವ, ಇಸ್ರೇಲಿ ನಾಗರಿಕರಲ್ಲದ ಫೆಲೆಸ್ತೀನಿಯನ್ನರ ಮೇಲೆ ಅದನ್ನು ಹೇರಲು ಶಾಸಕರಿಗೆ ಯಾವುದೇ ಕಾನೂನು ಅಧಿಕಾರವಿಲ್ಲ ಎಂದು ಗುಂಪು ವಾದಿಸಿತು. ►ಫೆಲೆಸ್ತೀನಿಯನ್ನರನ್ನು ಗುರಿಯಾಗಿಸಲು ಇಸ್ರೇಲ್ ತನ್ನ ಕಾನೂನು ವ್ಯವಸ್ಥೆಯನ್ನು ಬಳಸುತ್ತಿದೆಯೇ? HRW ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸೇರಿದಂತೆ ಮಾನವ ಹಕ್ಕುಗಳ ಗುಂಪುಗಳು ಫೆಲೆಸ್ತೀನಿಯನ್ನರು ಮತ್ತು ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಾರರಿಗೆ ಅನ್ವಯಿಸುವ ಕಾನೂನು ವ್ಯವಸ್ಥೆಗಳು ಮೂಲಭೂತವಾಗಿ ಅಸಮಾನತೆಯಿಂದ ಕೂಡಿವೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿವೆ. ಅದೇ ಪ್ರದೇಶದಲ್ಲಿ, ಫೆಲೆಸ್ತೀನಿಯನ್ನರು ಮಿಲಿಟರಿ ಕಾನೂನಿಗೆ ಒಳಪಟ್ಟಿದ್ದರೆ, ಇಸ್ರೇಲಿ ವಸಾಹತುಗಾರರು ಇಸ್ರೇಲಿ ನಾಗರಿಕ ಕಾನೂನಿನಿಂದ ನಿಯಂತ್ರಿಸಲ್ಪಡುವ ದ್ವಿ-ಕಾನೂನು ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ಸಮಾನಾಂತರ ರಚನೆಯು ಆಡಳಿತಾತ್ಮಕ ಬಂಧನ ಸೇರಿದಂತೆ ತಾರತಮ್ಯದ ಅಭ್ಯಾಸಗಳನ್ನು ಸುಗಮಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವಾದಿಸುತ್ತವೆ. ಇವು ಆಡಳಿತಾತ್ಮಕ ಬಂಧನಕ್ಕೆ (ಜನರನ್ನು ಯಾವುದೇ ಆರೋಪವಿಲ್ಲದೆ ಅನಿರ್ದಿಷ್ಟವಾಗಿ ಬಂಧಿಸಬಹುದು) ಅನುವು ಮಾಡಿಕೊಡುತ್ತದೆ. ಕಾನೂನಿನ ಅಡಿಯಲ್ಲಿ ನಾಟಕೀಯವಾಗಿ ಅಸಮಾನ ರಕ್ಷಣೆಗಳು ಮತ್ತು ಆ ಕಾನೂನುಗಳ ಆಯ್ದ ಜಾರಿಯಂತಹ ತಾರತಮ್ಯದ ಬಂಧನ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ. ಇವೆಲ್ಲವೂ ವರ್ಣಭೇದ ನೀತಿಯ ವ್ಯಾಪಕ ಆರೋಪಗಳಿಗೆ ಆಧಾರವಾಗಿವೆ. ಮಾರ್ಚ್ 2026ರ ಹೊತ್ತಿಗೆ, ಸರಿಸುಮಾರು 9,500 ಫೆಲೆಸ್ತೀನಿಯನ್ನರನ್ನು ಇಸ್ರೇಲಿ ಜೈಲುಗಳಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಬಂಧಿಸಲಾಗಿದೆ. ಸುಮಾರು ಅರ್ಧದಷ್ಟು ಜನರು ಆಡಳಿತಾತ್ಮಕ ಬಂಧನದಲ್ಲಿ ಅಥವಾ ಕಾನೂನುಬಾಹಿರ ಹೋರಾಟಗಾರರು ಎಂದು ಹಣೆಪಟ್ಟಿ ಕಟ್ಟಲಾಗಿದೆ. ಅವರಿಗೆ ವಿಚಾರಣೆಯನ್ನು ನಿರಾಕರಿಸಲಾಗಿದ್ದು, ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಸ್ಟಡಿಯಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಅನೇಕ ಅಂತರರಾಷ್ಟ್ರೀಯ ವೀಕ್ಷಕರು ಮತ್ತು ಹಕ್ಕುಗಳ ಗುಂಪುಗಳಲ್ಲಿ ಕಳವಳಕ್ಕೆ ಕಾರಣವಾಗಿವೆ. ಪೋಷಕರ ಉಪಸ್ಥಿತಿಯಿಲ್ಲದೆ ಫೆಲೆಸ್ತೀನಿಯನ್ ಅಪ್ರಾಪ್ತ ವಯಸ್ಕರನ್ನು ವಿಚಾರಣೆ ಮಾಡಬಹುದು ಮತ್ತು ಇಸ್ರೇಲ್‌ ನ ಸ್ವಂತ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ಕಾನೂನು ಸಲಹೆಗಾರರನ್ನು ಸಮಯೋಚಿತವಾಗಿ ಸಂಪರ್ಕಿಸಲು ಅವರಿಗೆ ಅವಕಾಶ ನಿರಾಕರಿಸಲಾಗುತ್ತದೆ ಎಂದು HRW ಗಮನಿಸಿದೆ. ಅಂತರರಾಷ್ಟ್ರೀಯ ಕಳವಳದ ಪ್ರಮುಖ ಅಂಶವೆಂದರೆ ನಿರ್ಮಾಣ ಪರವಾನಗಿಗಳ ಕೊರತೆಯ ಕಾರಣ ನೀಡಿ ಫೆಲೆಸ್ತೀನಿಯನ್ ಮನೆಗಳನ್ನು ವ್ಯವಸ್ಥಿತವಾಗಿ ಕೆಡವುವುದು. ಫೆಲೆಸ್ತೀನಿಯನ್ನರು ಪರವಾನಗಿ ಪಡೆಯುವುದೇ ಅಸಾಧ್ಯ. ಇದಕ್ಕೆ ವ್ಯತಿರಿಕ್ತವಾಗಿ, ಅನಧಿಕೃತ ವಸಾಹತುಗಾರರ ಹೊರಠಾಣೆಗಳು ವಿರಳವಾಗಿ ತೊಂದರೆಗೊಳಗಾಗುತ್ತವೆ ಮತ್ತು ಹಿಂದಿನಿಂದಲೂ ಕಾನೂನುಬದ್ಧಗೊಳಿಸಲ್ಪಡುತ್ತವೆ. ►ಕಾನೂನಿಗೆ ಖಂಡನೆ ವ್ಯಕ್ತಪಡಿಸಿದ ಎಂಟು ದೇಶಗಳು ಮಾರಣಾಂತಿಕ ದಾಳಿಗಳಿಗೆ ಶಿಕ್ಷೆಗೊಳಗಾದ ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸುವ ಇಸ್ರೇಲ್‌ ನ ಏಕಪಕ್ಷೀಯ ಮಸೂದೆಯನ್ನು ಬಲವಾಗಿ ಖಂಡಿಸಿದ ಎಂಟು ಮುಸ್ಲಿಂ ಬಹುಸಂಖ್ಯಾತ ದೇಶಗಳು ಜಂಟಿ ಹೇಳಿಕೆಯನ್ನು ನೀಡಿವೆ. ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಖತರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವರ್ಣಭೇದ ನೀತಿಯನ್ನು ಬೇರೂರಿಸುವ, ಹೆಚ್ಚು ತಾರತಮ್ಯದ ಇಸ್ರೇಲಿ ಪದ್ಧತಿಗಳನ್ನು ಖಂಡಿಸಿವೆ ಎಂದು ಇಸ್ಲಾಮಾಬಾದ್ ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಎಂಟು ದೇಶಗಳು ಇಸ್ರೇಲ್ ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಪರಿಸ್ಥಿತಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ. ಚಿತ್ರಹಿಂಸೆ, ಅಮಾನವೀಯ ಮತ್ತು ಅವಮಾನಕರ ವರ್ತನೆ, ಹಸಿವು ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆ ಸೇರಿದಂತೆ ನಡೆಯುತ್ತಿರುವ ದೌರ್ಜನ್ಯಗಳ ವರದಿಗಳ ನಡುವೆ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ. ಈ ಕ್ರಮಗಳು ಫೆಲೆಸ್ತೀನಿಯನ್ ಜನರ ವಿರುದ್ಧ ಉಲ್ಲಂಘನೆಗಳ ವ್ಯಾಪಕ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ನೆಲದ ಮೇಲೆ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುವ ಇಸ್ರೇಲ್ ಕ್ರಮಗಳ ವಿರುದ್ಧವೂ ದೇಶಗಳು ಎಚ್ಚರಿಕೆ ನೀಡಿವೆ. ಈ ಕಾನೂನನ್ನು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟ ಕೂಡ ಟೀಕಿಸಿದೆ. ಆದಾಗ್ಯೂ, ಇಸ್ರೇಲ್‌ ನ ಮಿತ್ರ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಅದರದ್ದೇ ಆದ ಕಾನೂನುಗಳನ್ನು ನಿರ್ಧರಿಸುವ ಸಾರ್ವಭೌಮ ಹಕ್ಕನ್ನು ಬೆಂಬಲಿಸಿದೆ.

ವಾರ್ತಾ ಭಾರತಿ 3 Apr 2026 9:56 pm

ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿತ ಮರಗಳಲ್ಲಿ ಶೇ.43ರಷ್ಟು ಸತ್ತಿವೆ: ಸರಕಾರ

ಹೊಸದಿಲ್ಲಿ, ಎ.3: ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿಸಲಾಗಿದ್ದ ಮರಗಳಲ್ಲಿ ಸುಮಾರು ಶೇ.43ರಷ್ಟು ಸತ್ತು ಹೋಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. 2019ರಲ್ಲಿ ಆರಂಭಗೊಂಡಿರುವ ಈ ಯೋಜನೆಯು ಸೆಂಟ್ರಲ್ ದಿಲ್ಲಿಯ ಒಂದು ಭಾಗದ ಪುನರ್‌ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಈವರೆಗೆ ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿಯ ನಿವಾಸ ಮತ್ತು ನೂತನ ಪ್ರಧಾನಮಂತ್ರಿ ಕಚೇರಿ ಪೂರ್ಣಗೊಂಡಿವೆ. ಟೀಕಾಕಾರರು ಈ ಯೋಜನೆಯನ್ನು ಬಿಜೆಪಿ ಸರ್ಕಾರದ ‘ಆಡಂಬರದ ಯೋಜನೆ’ ಎಂದು ಬಣ್ಣಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು, ಯೋಜನೆಗಾಗಿ 3,609 ಮರಗಳನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ 1,545 ಮರಗಳು ನಾಶಗೊಂಡಿವೆ ಎಂದು ತಿಳಿಸಿದರು. ಕಾನೂನುಬದ್ಧ ಅಗತ್ಯಗಳ ಪ್ರಕಾರ ಮರಗಳ ಕಡಿತಕ್ಕೆ ಬದಲಿಯಾಗಿ ದಿಲ್ಲಿಯ ಬದರ್‌ ಪುರ ಪ್ರದೇಶದ ಎನ್‌ಟಿಪಿಸಿ ಇಕೋ ಪಾರ್ಕ್‌ನಲ್ಲಿ 24,450 ಮತ್ತು ಘಿಟ್ರೋನಿಯಲ್ಲಿ 1,730 ಗಿಡಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು. 2023-24ರಿಂದ 2025-26ರ ಅವಧಿಯಲ್ಲಿ ಮರಗಳ ಸ್ಥಳಾಂತರ ಹಾಗೂ ಬದಲಿ ಗಿಡಗಳ ನೆಡುವಿಕೆಗೆ 5.2 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆಯು ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯ ನೂತನ ಅಧಿಕೃತ ನಿವಾಸಗಳು, ನೂತನ ಪ್ರಧಾನಿ ಕಚೇರಿ ಹಾಗೂ ‘ಕರ್ತವ್ಯ ಭವನಗಳು’ ಎಂದು ಹೆಸರಿಸಲಾದ 10 ಸರ್ಕಾರಿ ಕಚೇರಿ ಕಟ್ಟಡಗಳ ನಿರ್ಮಾಣವನ್ನು ಒಳಗೊಂಡಿದೆ. ಅಸ್ತಿತ್ವದಲ್ಲಿರುವ ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಿದ ಬಳಿಕ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನೂತನ ಪ್ರಧಾನಿಯ ನಿವಾಸ ಮತ್ತು ಉಳಿದ ಏಳು ಸಚಿವಾಲಯ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಚೇರಿಗಳನ್ನು ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವುದೂ ಯೋಜನೆಯಲ್ಲಿ ಸೇರಿದೆ.

ವಾರ್ತಾ ಭಾರತಿ 3 Apr 2026 9:47 pm

ಅಬುಧಾಬಿಯ ಮೇಲೆ ಕ್ಷಿಪಣಿ ದಾಳಿ | ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ

ಅಬುಧಾಬಿ, ಎ.3: ಶುಕ್ರವಾರ ಅಬುಧಾಬಿಯ ಮೇಲೆ ಇರಾನ್ ಪ್ರಯೋಗಿಸಿದ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆ ನಿರ್ಬಂಧಿಸಿದ ಬಳಿಕ, ಅದರ ಅವಶೇಷಗಳು ಅಜ್ಬಾನ್ ಪ್ರದೇಶದಲ್ಲಿ ಬಿದ್ದು ಐವರು ಭಾರತೀಯರು ಮತ್ತು 7 ನೇಪಾಳಿ ಪ್ರಜೆಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಮತ್ತೊಂದು ಕ್ಷಿಪಣಿಯ ಅವಶೇಷದಿಂದ ಹಬ್ಷಾನ್ ಗ್ಯಾಸ್ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿಯ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು: • ಇರಾನ್‌ ನಿಂದ ಪ್ರಯೋಗಿಸಲಾದ 18 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಕ್ರೂಸ್ ಕ್ಷಿಪಣಿಗಳು ಮತ್ತು 47 ಡ್ರೋನ್‌ಗಳನ್ನು ನಿರ್ಬಂಧಿಸಿರುವುದಾಗಿ ಯುಎಇ ತಿಳಿಸಿದೆ. • ಇರಾನ್‌ ನ ಗಲ್ಫ್ ಬಂದರು ಚರಾಕ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಪ್ರಯಾಣಿಕರ ಟರ್ಮಿನಲ್‌ಗೆ ಹಾನಿಯಾಗಿದೆ. • ಉತ್ತರ ಇರಾನ್‌ ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯ ಮತ್ತು ಮೆಹರಾಬಾದ್ ವಿಮಾನ ನಿಲ್ದಾಣ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. • ದಕ್ಷಿಣ ಇರಾನ್‌ನಲ್ಲಿ ನೆರವು ವಿತರಣೆಗಾಗಿ ಬಳಸುತ್ತಿದ್ದ ಕಂಟೈನರ್‌ಗಳು ಮತ್ತು ತುರ್ತು ಸೇವಾ ವಾಹನಗಳಿದ್ದ ಗೋದಾಮಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 2 ಕಂಟೈನರ್‌ಗಳು, 2 ಬಸ್ಸುಗಳು ಹಾಗೂ ಹಲವು ಆಂಬ್ಯುಲೆನ್ಸ್‌ಗಳಿಗೆ ಹಾನಿಯಾಗಿದೆ ಎಂದು ರೆಡ್‌ಕ್ರಾಸ್ ತಿಳಿಸಿದೆ. • ಮಧ್ಯಪ್ರಾಚ್ಯದಾದ್ಯಂತ ಅಮೆರಿಕಕ್ಕೆ ಸಂಬಂಧಿಸಿದ ಸ್ವತ್ತುಗಳು, ಇಂಧನ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. • ಗುರುವಾರ ತಡರಾತ್ರಿ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆದಿದ್ದು, 4 ಮಂದಿ ಗಾಯಗೊಂಡಿದ್ದಾರೆ.

ವಾರ್ತಾ ಭಾರತಿ 3 Apr 2026 9:43 pm

ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ‘ಹಿಟ್‌ಲಿಸ್ಟ್’ನಲ್ಲಿ ಗಲ್ಫ್‌ನ 8 ಸೇತುವೆಗಳು

ಟೆಹ್ರಾನ್, ಎ.3: ಕರಾಜ್‌ ನ B1 ಸೇತುವೆಯ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಗಲ್ಫ್ ಪ್ರದೇಶದ ಪ್ರಮುಖ ಸೇತುವೆಗಳನ್ನು ‘ಹಿಟ್‌ಲಿಸ್ಟ್’ನಲ್ಲಿ ಸೇರಿಸಲಾಗಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ. ಕುವೈತ್, ಬಹ್ರೇನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ದೇಶಗಳ ಸೇತುವೆಗಳನ್ನು ಇರಾನ್ ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ. ಗುರುವಾರ ಇರಾನ್‌ನ ಕರಾಜ್ ನಗರದಲ್ಲಿರುವ B1 ಸೇತುವೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಭಾರೀ ಹಾನಿಯಾಗಿದೆ. ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ದಾಳಿಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, “ಅಪೂರ್ಣ ಸೇತುವೆಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದರಿಂದ ಇರಾನಿಯನ್ನರನ್ನು ಶರಣಾಗತಿಗೆ ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 9:39 pm

Jammu and Kashmir | ಗಾಂದರ್ಬಲ್ ಎನ್‌ಕೌಂಟರ್; ನ್ಯಾಯಾಂಗ ತನಿಖೆಗೆ ಆದೇಶ

ಶ್ರೀನಗರ, ಎ.3: ಗಾಂದರ್ಬಲ್ ಜಿಲ್ಲೆಯ ಅರಹ್ಮಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಈ ಪ್ರಕರಣದ ಕುರಿತು ಕೂಲಂಕಷ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ 7 ದಿನಗಳೊಳಗೆ ಗೃಹ ಇಲಾಖೆಗೆ ವರದಿ ಸಲ್ಲಿಸುವಂತೆ ಜಿಲ್ಲಾ ದಂಡಾಧಿಕಾರಿಗೆ ಸೂಚಿಸಲಾಗಿದೆ. ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ರಶೀದ್ ಅಹ್ಮದ್ ಮುಘಲ್ ಹತ್ಯೆಯಾಗಿದ್ದಾರೆ ಎಂಬ ಸೇನೆಯ ಹೇಳಿಕೆಯನ್ನು ಕುಟುಂಬ ಸದಸ್ಯರು ವಿರೋಧಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ. ರಶೀದ್‌ಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಕುಟುಂಬ ಹೇಳಿದೆ. “ರಶೀದ್ ಮಾರ್ಚ್ 31ರಂದು ಬೆಳಗ್ಗೆ ಮನೆಯಿಂದ ತೆರಳಿದ್ದ. ಆದರೆ ಹಿಂದಿರುಗಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು” ಎಂದು ಸಹೋದರ ಏಜಾಝ್ ಅಹ್ಮದ್ ಮುಘಲ್ ತಿಳಿಸಿದ್ದಾರೆ. “ನಂತರ ಶ್ರೀನಗರದಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ರಶೀದ್‌ ನ ಮೃತದೇಹವನ್ನು ಗುರುತಿಸಿದೆ” ಎಂದೂ ಅವರು ಹೇಳಿದ್ದಾರೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ಉತ್ತರ ಕಾಶ್ಮೀರದಲ್ಲಿ ದಫನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತ್ಯಕ್ರಿಯೆಗೆ ಮೃತದೇಹ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕುಟುಂಬ ಆಗ್ರಹಿಸಿದೆ. ಕುಟುಂಬದ ಪ್ರಕಾರ, ರಶೀದ್ ವಿದ್ಯಾವಂತನಾಗಿದ್ದು ಎಂಕಾಂ ಪದವಿ ಪಡೆದಿದ್ದ. ಸ್ಥಳೀಯರಿಗೆ ದಾಖಲೆ ಸಂಬಂಧಿತ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 3 Apr 2026 9:37 pm

ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿದ ಇರಾನ್, ಪೈಲಟ್ ವಶಕ್ಕೆ: ವರದಿ

ಟೆಹ್ರಾನ್, ಎ.3: ಪಶ್ಚಿಮ ಇರಾನ್‌ನಲ್ಲಿ ಶುಕ್ರವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಾಯುಪಡೆಯು ಅಮೆರಿಕದ ಎಫ್-35 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು, ಅದರ ಪೈಲಟ್ ಐಆರ್‌ಜಿಸಿಯ ವಶದಲ್ಲಿರುವ ಸಾಧ್ಯತೆಯಿದೆ ಎಂದು ಇರಾನ್‌ ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ ಸರ್ಕಾರದ ಮೂಲಗಳು ಸಹ ಪೈಲಟ್ ಸೆರೆಹಿಡಿಯಲ್ಪಟ್ಟಿದ್ದಾನೆ ಎಂದು ಖಚಿತಪಡಿಸಿವೆ. ಈ ಮಧ್ಯೆ, ಅಮೆರಿಕದ ಪೈಲಟ್‌ ನ್ನು ಜೀವಂತವಾಗಿ ಸೆರೆಹಿಡಿದವರಿಗೆ ಅಮೂಲ್ಯ ಬಹುಮಾನ ನೀಡುವುದಾಗಿ ಇರಾನ್‌ನ ಸ್ಥಳೀಯ ಟಿವಿ ವಾಹಿನಿ ಘೋಷಿಸಿದೆ.

ವಾರ್ತಾ ಭಾರತಿ 3 Apr 2026 9:35 pm

Hubballi | ಜಿಮ್ ತರಬೇತುದಾರನಿಗೆ ಹಲ್ಲೆ ವಿಚಾರ; ವೈಯಕ್ತಿಕ ಕಾರಣಗಳ ಹಿನ್ನೆಲೆ ಸಂಘರ್ಷ : ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಹುಬ್ಬಳ್ಳಿ : ಜಿಮ್‌ ತರಬೇತುದಾರನಿಗೆ ಹಲ್ಲೆ ನಡೆಸಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ. ಜಿಮ್‌ ನಲ್ಲಿ ಪರಿಚಯವಾಗಿದ್ದ ಯುವಕ-ಯುವತಿಯ ನಡುವಿನ ಸ್ನೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು, ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಎಂಬ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಮತ್ತು ಸಮೀರ್ ನಡುವೆ ಜಿಮ್‌ ನಲ್ಲಿ ಪರಿಚಯವಾಗಿದ್ದು, ಅದನ್ನೇ ʼಲವ್ ಜಿಹಾದ್ʼ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಯುವಕನ ಮನೆ ಬಳಿ ಸುಮಾರು ಜನರು ಹೋಗಿ, ʼನಮ್ಮ ಹುಡುಗಿ ಜೊತೆ ಯಾಕೆ ನೀನು ಹೆಚ್ಚು ವಿಶ್ವಾಸದಿಂದ ಇದ್ದೀಯಾʼ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅಲ್ಲಿ ಸಂಘರ್ಷವಾಗಿದೆ. ಬಳಿಕ ಯುವಕನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ ಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಯುವಕನನ್ನು ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಹುಡುಗನ ಕಡೆಯವರು ಹುಡುಗಿ ಮನೆ ಬಳಿ ಹೋಗಿದ್ದಾರೆ. ಅಲ್ಲಿಯೂ ಕೂಡ ಸಂಘರ್ಷ ನಡೆದಿದೆ. ಒಬ್ಬನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನಾವು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಸಂಘರ್ಷ ಆಗಿದೆ. ಹುಡುಗನ ಕಡೆಯವರು ಹೇಳುವ ಪ್ರಕಾರ ಹುಡುಗಿ ನಮಗೆ ಪರಿಚಯ ಎಲ್ಲ ಇತ್ತು, ಆದರೆ ಯಾಕೆ ಈ ರೀತಿ ಆಗಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಮನೆಗಳ ಹತ್ತಿರ ಗುಂಪುಗಳಲ್ಲಿ ಹೋಗಿರುವುದು ತಪ್ಪು. ಅದಕ್ಕೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಬಣ್ಣ ಬೆಳೆಯುವಂತದ್ದು ಮಾಡಬಾರದು. ಅಲ್ಲಿ ಆಗಿರುವ ಘಟನೆಗೆ ಅನುಗುಣವಾಗಿ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದ್ದು, ಸಮೀರ್‌ ನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎಂದು ಆರೋಪಿಸಿ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಯುವತಿ ಮನೆಯವರು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಕುಟುಂಬಗಳು ಕಿಮ್ಸ್‌ಗೆ ದಾಖಲಾಗಿದ್ದು, ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಎರಡು ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ►ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ: ಯುವತಿ ಆರೋಪ ಈ ಸಂಬಂಧ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಸಮೀರ್‌ನ ಅಕ್ಕ ನನ್ನ ಸ್ನೇಹಿತೆ. ಅವರಿಂದ ಸಮೀರ್ ಪರಿಚಯವಾಗಿತ್ತು. ಅವನ ಅಕ್ಕನ ಜೊತೆಗೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ , ವೀಕೆಂಡ್ ಪಾರ್ಟಿಗೆ ಹೋಗಿದ್ದೆವು. ಆಗ ಸಮೀರ್ ಕೂಡ ಬಂದಿದ್ದ. ಇದಾದ ಮೇಲೆ ಸಮೀರ್ ಆತ್ಮೀಯನಾದ. ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಮತ್ತು ಬರುವ ಪಾನೀಯ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ಅದನ್ನು ವೀಡಿಯೊ ಮಾಡಿದ್ದಾನೆ. ಇದು ನನಗೆ ಗೊತ್ತಿರಲಿಲ್ಲ. ವೀಡಿಯೊ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ► ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ : ಸಮೀರ್ ಸಹೋದರಿ ಈ ಕುರಿತು ಪ್ರತಿಕ್ರಿಯಿಸಿದ ಸಮೀರ್ ಸಹೋದರಿ, ಸಮೀರ್ ಜೊತೆಗೆ ಯುವತಿಗೆ ಸ್ನೇಹ ಇತ್ತು. ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ಕೆಲವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನು ಅಪಹರಣ ಮಾಡಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್‌ ಗೆ ಹೋಗುತ್ತಿದ್ದೆವು. ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಅಪಹರಣ ಮಾಡಿದ್ದಾರೆ. ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ. ದನದ ಶೆಡ್ಡಿಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ದೆವು. ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ತಮ್ಮನನ್ನು ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 9:33 pm

ಹಾರ್ಮುಝ್‌ ಜಲಸಂಧಿಯಲ್ಲಿ ವಿಶ್ವಸಂಸ್ಥೆ ಮಿಲಿಟರಿ ಕ್ರಮಕ್ಕೆ ರಷ್ಯ, ಚೀನಾ, ಫ್ರಾನ್ಸ್ ವಿರೋಧ

ವಿಶ್ವಸಂಸ್ಥೆ, ಎ.3: ಹಾರ್ಮುಝ್‌ ಜಲಸಂಧಿಯನ್ನು ಪುನಃ ತೆರೆಯಲು ಮಿಲಿಟರಿ ಕ್ರಮಕ್ಕಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುವ ಗುರಿಯನ್ನು ಹೊಂದಿರುವ ಅರಬ್ ಉಪಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯ, ಚೀನಾ ಮತ್ತು ಫ್ರಾನ್ಸ್ ತಡೆಯಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹಾರ್ಮುಝ್‌ ಜಲಸಂಧಿಯಲ್ಲಿ ಭದ್ರತೆ ಖಾತರಿಪಡಿಸುವ ಪ್ರಸ್ತಾಪವನ್ನು ಒಳಗೊಂಡಿರುವ ಕರಡು ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ರಷ್ಯ ಮತ್ತು ಚೀನಾ ಆಕ್ಷೇಪ ಎತ್ತಿದ ಬಳಿಕ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಆರಂಭಿಕ ಕರಡು ನಿರ್ಣಯವು ಹಾರ್ಮುಝ್‌ ಜಲಸಂಧಿ, ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಮಾರ್ಗವನ್ನು ಸುರಕ್ಷಿತಗೊಳಿಸಲು ಮತ್ತು ಸಂಚಾರದಲ್ಲಿ ಹಸ್ತಕ್ಷೇಪದ ಪ್ರಯತ್ನಗಳನ್ನು ತಡೆಯಲು ಎಲ್ಲಾ ‘ಅಗತ್ಯ ವಿಧಾನಗಳನ್ನು ಬಳಸಲು’ (ಸಂಭಾವ್ಯ ಮಿಲಿಟರಿ ಕ್ರಮಗಳನ್ನು ಒಳಗೊಂಡಂತೆ) ದೇಶಗಳಿಗೆ ಅವಕಾಶ ನೀಡುತ್ತಿತ್ತು. ಆದರೆ ವೀಟೊ ಅಧಿಕಾರ ಹೊಂದಿರುವ ರಷ್ಯ, ಚೀನಾ ಮತ್ತು ಫ್ರಾನ್ಸ್ ‘ಬಲ ಪ್ರಯೋಗ’ದ ಉಲ್ಲೇಖವನ್ನು ವಿರೋಧಿಸಿವೆ. ಪರಿಷ್ಕರಿಸಿದ ಕರಡು ನಿರ್ಣಯದಲ್ಲಿ ‘ಆಕ್ರಮಣಕಾರಿ ಮಿಲಿಟರಿ ಕ್ರಮವನ್ನು ಅನುಮತಿಸುವ’ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಹಾರ್ಮುಝ್‌ ಜಲಸಂಧಿ ಹಾಗೂ ಪಕ್ಕದ ನೀರಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ರಕ್ಷಣಾತ್ಮಕ ವಿಧಾನಗಳನ್ನು ಬಳಸಲು ಮತ್ತು ಕನಿಷ್ಠ 6 ತಿಂಗಳ ಅವಧಿಗೆ ಅಂತಾರಾಷ್ಟ್ರೀಯ ಸಂಚಾರದಲ್ಲಿ ಹಸ್ತಕ್ಷೇಪಗಳನ್ನು ತಡೆಯಲು ಅವಕಾಶ ನೀಡಲಾಗಿದೆ.

ವಾರ್ತಾ ಭಾರತಿ 3 Apr 2026 9:31 pm

ಅಮೆರಿಕದಲ್ಲಿ ʼತಲೆದಂಡʼ | ಮುಂದಿನ ಸರದಿ ಕಾಶ್ ಪಟೇಲ್, ತುಳಸಿ ಗ್ಯಾಬರ್ಡ್?

ವಾಶಿಂಗ್ಟನ್: ಟ್ರಂಪ್ ಆಡಳಿತದ ಉನ್ನತ ಸ್ತರದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿದ್ದು, ಮುಂದಿನ ಸುತ್ತಿನಲ್ಲಿ ಅಧ್ಯಕ್ಷ ಟ್ರಂಪ್ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ನ್ಯಾಶನಲ್ ಇಂಟೆಲಿಜನ್ಸ್ ನಿರ್ದೇಶಕಿ ತುಳಸಿ ಗ್ಯಾಬರ್ಡ್ ಅವರನ್ನು ವಜಾಗೊಳಿಸುವ ಸಾಧ್ಯತೆ ಬಗ್ಗೆ ಊಹಾಪೋಹಗಳು ಹರಡಿವೆ. ಮುಂದಿನ ಸುತ್ತಿನಲ್ಲಿ ಕಾಶ್ ಪಟೇಲ್, ಸೇನಾ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕೋಲ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚವೇಝ್-ಡೆರೆಮರ್ ಅವರನ್ನು ವಜಾಗೊಳಿಸುವ ಸಾಧ್ಯತೆ ಕುರಿತು ಆಂತರಿಕ ವಲಯದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ‘ದ ಅಟ್ಲಾಂಟಿಕ್’ ವರದಿ ತಿಳಿಸಿದೆ. ಆದರೆ ಇದು ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಷಯದಲ್ಲಿ ಅಧ್ಯಕ್ಷ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಇವರ ಕಾರ್ಯನಿರ್ವಹಣೆಯ ಮೇಲೂ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ‘‘ಸಂಪೂರ್ಣ ಪುನರ್‌ರಚನೆ’’ಯ ಭಾಗವಾಗಿ ಪಟೇಲ್ ಅವರನ್ನು ತಕ್ಷಣವೇ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಕನ್ಸರ್ವೇಟಿವ್ ವೀಕ್ಷಕ ಕೈಲ್ ಸೆರಾಫಿನ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:28 pm

Uttar Pradesh | ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪತಿ!

ಬಹರಾಯಿಚ್, ಎ. 3: ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ತನ್ನ ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಹತ್ಯೆಗೈಯಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ನಾನ್ಪಾರ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಹಾಗೂ ಆರೋಪಿ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ರಾಮ್‌ಗಾಂವ್ ಪ್ರದೇಶದ ಮುಸಲ್ಲಂಪುರ ಗ್ರಾಮದ ನಿವಾಸಿ ರಹೀಸ್ ಎಂದು ಗುರುತಿಸಲಾಗಿದೆ. ಈತ ನನ್ಪಾರದ ನಿವಾಸಿ ರೇಷ್ಮಾರನ್ನು ವರ್ಷದ ಹಿಂದೆ ವಿವಾಹವಾಗಿದ್ದ. ವಿವಾದಗಳ ಕಾರಣಕ್ಕೆ ಅವರಿಬ್ಬರು ಪ್ರತ್ಯೇಕವಾಗಿದ್ದರು. ಅವರ ವಿಚ್ಛೇದನ ನ್ಯಾಯಾಲಯದಲ್ಲಿ ಜನವರಿಯಲ್ಲಿ ಅಂತ್ಯಗೊಂಡಿತ್ತು. ನಂತರ ರೇಷ್ಮಾ ಅವರು ತಮ್ಮ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಬುಧವಾರ ನನ್ಪಾರಕ್ಕೆ ಬಂದಿದ್ದಾನೆ. ಮನೆಗೆ ಹಿಂದಿರುಗುತ್ತಿದ್ದ ತನ್ನ ಮಾಜಿ ಪತ್ನಿಯನ್ನು ಲಕ್ಷ್ಮಣಪುರ ಮತೇಹಿ ಗ್ರಾಮದ ಬಳಿ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಹಿಂಸಾಚಾರಕ್ಕೆ ತಿರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ರಹೀಸ್ ತನ್ನ ಮೋಟಾರು ಸೈಕಲ್‌ನಿಂದ ಮಾಜಿ ಪತ್ನಿಗೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಅಳುವುದನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದರು. ಕೋಪೋದ್ರಿಕ್ತರಾದ ಗುಂಪು ಆರೋಪಿಗೆ ಥಳಿಸಿತು. ಇದರಿಂದ ರಹೀಸ್ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಪಹುಪ್ ಸಿಂಗ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:26 pm

Madhya Pradesh | ವಿಧಾನಸಭೆಯಿಂದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅನರ್ಹ

ಭೋಪಾಲ, ಎ. 3: ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ಮಧ್ಯ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ ಈ ವಿಷಯದ ಕುರಿತು ಚರ್ಚೆ ನಡೆದ ಬಳಿಕ ವಿಧಾನಸಭೆಯ ಅಧಿಕಾರಿಗಳು ದತಿಯಾ ವಿಧಾನಸಭಾ ಕ್ಷೇತ್ರದಿಂದ ಭಾರ್ತಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ದತಿಯಾ ಕ್ಷೇತ್ರದಲ್ಲಿ ಭಾರ್ತಿ ಅವರು ಮಧ್ಯ ಪ್ರದೇಶದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಅವರನ್ನು ಸೋಲಿಸಿದ್ದರು. ವಂಚನೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ಭಾರ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ದತಿಯಾ ಸ್ಥಾನವನ್ನು ಖಾಲಿ ಎಂದು ಘೋಷಿಸಿರುವ ಆದೇಶವನ್ನು ಉಲ್ಲೇಖಿಸಿ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಶರ್ಮಾ ಅವರು ಏಪ್ರಿಲ್ 2ರಂದು ರಾತ್ರಿ ಅಧಿಸೂಚನೆ ಹೊರಡಿಸಿದರು. ಶುಕ್ರವಾರ ಬೆಳಗ್ಗೆ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ವಾರ್ತಾ ಭಾರತಿ 3 Apr 2026 9:22 pm

ಕುವೈತ್, ಬಹ್ರೈನ್ ಮತ್ತು ಜೋರ್ಡಾನ್‌ ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ: ಇರಾನ್

ಟೆಹರಾನ್: ಕುವೈತ್, ಬಹ್ರೈನ್ ಮತ್ತು ಜೋರ್ಡಾನ್ ಸೇರಿದಂತೆ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕ ಸಂಬಂಧಿತ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಪ್ರಕಟಣೆಯಲ್ಲಿ ತಿಳಿಸಿದೆ ಎಂದು Tasnim News Agency ವರದಿ ಮಾಡಿದೆ. ಇಸ್ಫಹಾನ್ ಮತ್ತು ಖುಝೆಸ್ತಾನ್‌ ನಲ್ಲಿರುವ ಇರಾನ್‌ನ ಕೈಗಾರಿಕೆಗಳು ಮತ್ತು ಉಕ್ಕಿನ ಕಾರ್ಖಾನೆಗಳ ಮೇಲೆ ಹಾಗೂ ಕರಾಜ್‌ ನಲ್ಲಿರುವ B-1 ಸೇತುವೆಯ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಮೆರಿಕ ಪಡೆಗಳಿಗೆ ಸಂಬಂಧಿಸಿದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ಹೇಳಿದೆ. “ಇಂದು ಬೆಳಗ್ಗಿನಿಂದ ಪ್ರಾರಂಭವಾಗಿ, ಜೋರ್ಡಾನ್‌ ನಲ್ಲಿರುವ ಅಮೆರಿಕ ಸೇನಾ ಪಡೆಗಳಿಗೆ ಸಂಬಂಧಿಸಿದ ಸಾಧನಗಳ ಗೋದಾಮುಗಳು ಹಾಗೂ ಅವುಗಳ ವಾಸ್ತವ್ಯ ಮತ್ತು ನೆರವಿನ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಇದರೊಂದಿಗೆ, ಕುವೈತ್‌ನ ಆರಿಫ್ ಜಾನ್ ಶಿಬಿರದಲ್ಲಿರುವ ಅಮೆರಿಕ ಸಶಸ್ತ್ರ ಬ್ರಿಗೇಡ್‌ನ ಯಾಂತ್ರಿಕ ತುಕಡಿಯ ಮೇಲೆಯೂ ದಾಳಿ ನಡೆಸಲಾಗಿದೆ” ಎಂದು ಪ್ರಕಟಣೆಯಲ್ಲಿ ಇರಾನ್ ತಿಳಿಸಿದೆ. “ಬಹ್ರೈನಲ್ಲಿರುವ ಅಮೆರಿಕ ಸೇನಾ ಕೈಗಾರಿಕೆಗಳಿಗೆ ನೆರವು ನೀಡುತ್ತಿದ್ದ ಅಲ್ಯೂಮಿನಿಯಂ ಕುಲುಮೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಯನ್ನೂ ನಡೆಸಲಾಗಿದೆ” ಎಂದು ಇರಾನ್ ಹೇಳಿದೆ.

ವಾರ್ತಾ ಭಾರತಿ 3 Apr 2026 9:19 pm

ಉಡುಪಿ: ಎ.4ರಂದು ಪಿಪಿಸಿಯಲ್ಲಿ ರಾ.ವಿಜ್ಞಾನ, ತಂತ್ರಜ್ಞಾನ ಸಮ್ಮೇಳನ; ವಿಜ್ಞಾನಿಗಳೊಂದಿಗೆ ಸಂವಾದ

ಉಡುಪಿ, ಎ.3: ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಕಾಲೇಜಿನ ವಿಜ್ಞಾನ ಸಂಘದ ಮಾರ್ಗ ದರ್ಶನದಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಹಾಗೂ ವಿಜ್ಞಾನಿಗಳ ಸಮಾವೇಶ ಎ.4ರಂದು ಕಾಲೇಜಿನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಬೆಂಗಳೂರಿನ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್) ನಿವೃತ್ತ ನಿರ್ದೇಶಕ ಹಾಗೂ ಬ್ರಹ್ಮೋಸ್ ಕ್ಷಿಪಣಿಯ ವಿಜ್ಞಾನಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಹ್ಲಾದ್ ರಾಮರಾವ್, ಇಸ್ರೋ ಸಂಸ್ಥೆಯ ನಿವೃತ್ತ ಅಂತರಿಕ್ಷ ವಿಜ್ಞಾನಿ ಬೆಂಗಳೂರಿನ ಡಾ.ಬಿ.ಆರ್.ಗುರುಪ್ರಸಾದ್, ಬೆಂಗಳೂರು ಜೆಎಸ್‌ಸಿಎಎಸ್‌ಆರ್‌ನ ಡೀನ್ ಪ್ರೊ.ವಿದ್ಯಾಧಿರಾಜ್ ಎನ್.ಎಸ್., ಜೆಎನ್‌ಸಿಎಎಸ್‌ಆರ್‌ನ ಸಂಶೋಧಕರು ಹಾಗೂ ವಿಜ್ಞಾನ ಸಂವಹನಕಾರರಾದ ಡಾ.ವಿನಾಯಕ ಕೆ.ಪತ್ತಾರ್ ಅವರು ಉಪಸ್ಥಿತರಿರುವರು. ಸಮ್ಮೇಳನದ ಉದ್ಘಾಟನೆ ಬೆಳಗ್ಗೆ 10:00ಗಂಟೆಗೆ ನಡೆಯಲಿದ್ದು, ಪ್ರೊ.ವಿದ್ಯಾಧಿರಾಜ ಎನ್.ಎಸ್. ಅವರು ಕ್ವಾಟಂಮ್ ಫಿಸಿಕ್ಸ್ ಕುರಿತಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ 1:30ರ ಅಧಿವೇಶನದಲ್ಲಿ ಡಾ.ಬಿ.ಆರ್.ಗುರುಪ್ರಸಾದ್ ಅವರು ಆಂತರಿಕ್ಷ ವಿಜ್ಞಾನ ಸಂಶೋದನೆ ಕುರಿತು ಹಾಗೂ ಬಳಿಕ ಡಾ.ಪ್ರಹ್ಲಾದ್ ರಾಮರಾವ್ ಅವರೊಂದಿಗೆ ವಿದ್ಯಾರ್ಥಿ- ವಿಜ್ಞಾನಿಗಳ ಸಂವಾದ ನಡೆಯಲಿದೆ. ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ವಿಜ್ಞಾನಿಗಳನ್ನು ಸನ್ಮಾನಿಸಲಿದ್ದಾರೆ. ಜೊತೆಗೆ ಪೂರ್ಣ ಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರೂ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಪಶ್ಚಿಮ ಘಟ್ಟ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಪ್ರೊ.ಎನ್.ಎ.ಮಧ್ಯಸ್ಥರಿಗೆ ಸನ್ಮಾನವೂ ನಡೆಯಲಿದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Apr 2026 9:19 pm

ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್‌ಗಢಕ್ಕೆ 9ನೇ ಸ್ಥಾನ

Khelo India Tribal Games 2026: ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026ರಲ್ಲಿ ಕರ್ನಾಟಕ 23 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಒಡಿಶಾ ಮತ್ತು ಜಾರ್ಖಂಡ್ ಕ್ರಮವಾಗಿ 21 ಚಿನ್ನ ಮತ್ತು 16 ಚಿನ್ನದೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಪಶ್ಚಿಮ ಬಂಗಾಳವು ಪುರುಷರ ಫುಟ್‌ಬಾಲ್‌ನಲ್ಲಿ 21 ಚಿನ್ನ ಮತ್ತು 16 ಚಿನ್ನದೊಂದಿಗೆ ಚಿನ್ನ ಗೆದ್ದಿದೆ, ಫೈನಲ್‌ನಲ್ಲಿ ಛತ್ತೀಸ್‌ಗಢವನ್ನು

ಒನ್ ಇ೦ಡಿಯ 3 Apr 2026 9:18 pm

ಮಧ್ಯಪ್ರಾಚ್ಯ ಸಂಘರ್ಷ | ಯುದ್ಧ ಅಂತ್ಯಗೊಳಿಸುವಂತೆ ಇಸ್ರೇಲ್‌ ಅಧ್ಯಕ್ಷ ಹೆರ್ಝೋಗ್‌ ಗೆ ಪೋಪ್ ಲಿಯೊ ಮನವಿ

ರೋಮ್, ಎ.3: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಪೋಪ್ ಲಿಯೊ XIV ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಝೋಗ್ ಅವರಿಗೆ ಮನವಿ ಮಾಡಿದ್ದಾರೆ. ಈಸ್ಟರ್ ಹಬ್ಬದ ಸಂದರ್ಭದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ, ಪ್ರಸ್ತುತ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಎಲ್ಲಾ ಸಾಧ್ಯವಾದ ರಾಜತಾಂತ್ರಿಕ ಮಾರ್ಗಗಳನ್ನು ತೆರೆದಿಡುವ ಅಗತ್ಯತೆಯನ್ನು ಪೋಪ್ ಒತ್ತಿಹೇಳಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Apr 2026 9:12 pm

NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ; ತನ್ನದೇ ಪದವಿಗಳನ್ನು ನೀಡುವ ಅಧಿಕಾರ

ಹೊಸದಿಲ್ಲಿ, ಎ.3: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಗೆ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಔಪಚಾರಿಕವಾಗಿ ಘೋಷಿಸಲಾಗಿದ್ದು, ಅದು ತನ್ನದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ NCERTಯನ್ನು ಅದರ ಆರು ಘಟಕಗಳೊಂದಿಗೆ ಡೀಮ್ಡ್ ವಿವಿಯಾಗಿ ಘೋಷಿಸಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ. ಈ ಘಟಕಗಳಲ್ಲಿ ಅಜ್ಮೇರ್, ಭೋಪಾಲ, ಭುವನೇಶ್ವರ, ಮೈಸೂರು ಮತ್ತು ಶಿಲ್ಲಾಂಗ್‌ ನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಹಾಗೂ ಭೋಪಾಲದ ಪಂಡಿತ ಸುಂದರಲಾಲ್ ಶರ್ಮಾ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ವೊಕೇಷನಲ್ ಎಜ್ಯುಕೇಷನ್ ಸೇರಿವೆ. ಶಾಲಾ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿರುವ NCERT, ಶೈಕ್ಷಣಿಕ ಸಂಶೋಧನೆ ಮತ್ತು ನವೀನತೆ, ಪಠ್ಯಕ್ರಮ ಅಭಿವೃದ್ಧಿ ಹಾಗೂ ಪಠ್ಯ ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ‘ಡೆ ನೊವೊ’ ವರ್ಗದಲ್ಲಿ NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ ನೀಡಿಕೆಯನ್ನು ಅನುಮೋದಿಸಿತ್ತು. ಡೆ-ನೊವೊ ಡೀಮ್ಡ್ ವಿವಿಯು ಡೀಮ್ಡ್-ಟು-ಬಿ ವಿವಿಯಾಗಿ ಹೊಸ ಸಂಸ್ಥೆಯನ್ನು ಸ್ಥಾಪಿಸಲು UGCಗೆ ಅರ್ಜಿ ಸಲ್ಲಿಸಬಹುದು. ಹೊಸ ಸಂಸ್ಥೆಯು ಅಸ್ತಿತ್ವದಲ್ಲಿರುವ ಯಾವುದೇ ಸಂಸ್ಥೆ ನೀಡದ ವಿಶಿಷ್ಟ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುತ್ತದೆ. NCERT ಯಾವುದೇ ವಾಣಿಜ್ಯಿಕ ಮತ್ತು ಲಾಭಾರ್ಜಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು; ಎಲ್ಲಾ ಶೈಕ್ಷಣಿಕ ಕೋರ್ಸ್‌ಗಳು ಅಥವಾ ಕಾರ್ಯಕ್ರಮಗಳು UGC ಹಾಗೂ ಶಾಸನಬದ್ಧ ಸಂಸ್ಥೆಗಳು ಅಥವಾ ಮಂಡಳಿಗಳು ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂಬುದನ್ನು ಸೇರಿದಂತೆ ಹಲವು ಷರತ್ತುಗಳನ್ನು ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾಗಿದೆ.

ವಾರ್ತಾ ಭಾರತಿ 3 Apr 2026 9:09 pm

ದಿಢೀರ್ ಚೀನಾದತ್ತ ದಿಕ್ಕು ಬದಲಿಸಿದ ಇರಾನ್‌ ನಿಂದ ಭಾರತಕ್ಕೆ ಸಾಗುತ್ತಿದ್ದ ಕಚ್ಚಾ ತೈಲ ಟ್ಯಾಂಕರ್

ಹೊಸದಿಲ್ಲಿ, ಎ.3: ಅಮೆರಿಕವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ ನಿಂದ ಭಾರತಕ್ಕೆ ಕಚ್ಚಾ ತೈಲವನ್ನು ತರುತ್ತಿದ್ದ ಟ್ಯಾಂಕರ್, ಪಯಣದ ಮಧ್ಯೆ ತನ್ನ ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್‌ ನ ದತ್ತಾಂಶಗಳು ತೋರಿಸಿವೆ. ದತ್ತಾಂಶಗಳ ಪ್ರಕಾರ, 2025ರಲ್ಲಿ ಅಮೆರಿಕದಿಂದ ನಿರ್ಬಂಧಿಸಲ್ಪಟ್ಟಿದ್ದ ‘ಪಿಂಗ್ ಷನ್’ ಹಡಗು ಸುಮಾರು ಆರು ಲಕ್ಷ ಬ್ಯಾರೆಲ್ ಇರಾನ್ ತೈಲವನ್ನು ಹೊತ್ತಿದ್ದು, ಈಗ ಚೀನಾದ ಡೊಂಗ್ಯಾಂಗ್ ಕಡೆಗೆ ಸಾಗುತ್ತಿರುವ ಸಂಕೇತವನ್ನು ತೋರಿಸುತ್ತಿದೆ. ಈ ಟ್ಯಾಂಕರ್ ವಾರದ ಆರಂಭದಲ್ಲಿ ಗುಜರಾತಿನ ವಾಡಿನಾರ್ ಅನ್ನು ತನ್ನ ಗಮ್ಯಸ್ಥಾನವಾಗಿ ಪಟ್ಟಿ ಮಾಡಿತ್ತು. ಅಮೆರಿಕವು ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ 30 ದಿನಗಳ ವಿನಾಯಿತಿ ನೀಡಿದ ಬಳಿಕ, ಭಾರತೀಯ ಸಂಸ್ಕರಣಾಗಾರಗಳು ನಿರ್ಬಂಧದಿಂದಾಗಿ ಸಮುದ್ರದಲ್ಲಿ ಬಾಕಿಯಾಗಿದ್ದ ಹಡಗುಗಳಲ್ಲಿನ ಇರಾನ್ ತೈಲವನ್ನು ಖರೀದಿಸಲು ಅವಕಾಶಗಳನ್ನು ಅನ್ವೇಷಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. 2019ರಲ್ಲಿ ಅಮೆರಿಕದ ಕಠಿಣ ನಿರ್ಬಂಧಗಳು ಜಾರಿಯಾದಾಗ ಭಾರತವು ಇರಾನಿನಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿತ್ತು. ‘ಪಿಂಗ್ ಷನ್’ ಟ್ಯಾಂಕರ್ ಭಾರತವನ್ನು ತಲುಪಿದ್ದರೆ, ಅದು ಕಳೆದ ಏಳು ವರ್ಷಗಳಲ್ಲಿ ಇರಾನಿನಿಂದ ದೇಶಕ್ಕೆ ಬಂದ ಮೊದಲ ಕಚ್ಚಾ ತೈಲ ಆಮದಾಗಿರುತ್ತಿತ್ತು. ಕೆಪ್ಲರ್‌ ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಅವರ ಪ್ರಕಾರ, ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುವ ಮೊದಲು ಮೂರು ದಿನಗಳ ಕಾಲ ಹಡಗು ವಾಡಿನಾರ್ ಮಾರ್ಗದಲ್ಲೇ ಚಲಿಸುತ್ತಿತ್ತು. ಮಾರ್ಗ ಬದಲಾವಣೆ ಪಾವತಿ ಸಂಬಂಧಿತ ಕಳವಳಗಳಿಗೆ ಸಂಬಂಧಿಸಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಮಾರಾಟಗಾರರು ತಮ್ಮ ನಿಬಂಧನೆಗಳನ್ನು ಕಠಿಣಗೊಳಿಸುತ್ತಿದ್ದು, ಹಿಂದಿನ 30–60 ದಿನಗಳ ಸಾಲ ಸೌಲಭ್ಯದಿಂದ ದೂರ ಸರಿದು ಮುಂಗಡ ಅಥವಾ ಅಲ್ಪಾವಧಿಯ ಪಾವತಿಯನ್ನು ಹೆಚ್ಚಾಗಿ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಾಣಿಜ್ಯ ಹಡಗುಗಳಿಗೆ ಕಡ್ಡಾಯವಾಗಿರುವ ಆಟೊಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಮ್ (AIS) ತೋರಿಸುವ ಗಮ್ಯಸ್ಥಾನ ಅಂತಿಮವಾಗಿರುವುದಿಲ್ಲ ಮತ್ತು ಯಾನದ ಯಾವುದೇ ಹಂತದಲ್ಲಿ ಬದಲಾಗಬಹುದು. ಹಡಗು ಆರಂಭದಲ್ಲಿ ಸೂಚಿಸಿದ್ದ ವಾಡಿನಾರ್ ಬಂದರುದಲ್ಲಿ ರಷ್ಯಾ ಬೆಂಬಲಿತ ನಯಾರಾ ಎನರ್ಜಿ ನಿರ್ವಹಿಸುತ್ತಿರುವ ವಾರ್ಷಿಕ 20 ಮಿಲಿಯನ್ ಟನ್ ಸಾಮರ್ಥ್ಯದ ಸಂಸ್ಕರಣಾಗಾರವಿದೆ. ಹಣಪಾವತಿ ಸಮಸ್ಯೆಗಳು ಬಗೆಹರಿದರೆ, ಟ್ಯಾಂಕರ್ ಮತ್ತೆ ಭಾರತೀಯ ಸಂಸ್ಕರಣಾಗಾರದತ್ತ ದಿಕ್ಕು ಬದಲಿಸುವ ಸಾಧ್ಯತೆ ಇದೆ ಎಂದು ರಿಟೋಲಿಯಾ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:07 pm

ವಿಜಯಪುರ ಏರ್‌ಪೋರ್ಟ್‌ ಆರಂಭದ ಬಗ್ಗೆ ಮಾಹಿತಿ ಹಂಚಿಕೊಂಡ MB ಪಾಟೀಲ್; ವಿಮಾನಯಾನ ಕಂಪನಿಗಳ ಜತೆ ಮಾತುಕತೆ

ವಿಜಯಪುರದಲ್ಲಿ ನಿರ್ಮಾಣವಾಗಿರುವ ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಇದ್ದು, ಹೊರಬಿದ್ದ ತಕ್ಷಣ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈಗಾಗಲೇ ವಿಮಾನ ಯಾವ ಕಂಪನಿಗಳ ಜತೆ ಮಾತುಕತೆಯನ್ನು ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 3 Apr 2026 9:03 pm

ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು?

ಕರ್ನಾಟಕ ಸೇರಿದಂತೆ ದೇಶದಲ್ಲಿ ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಿಸಿಲಿನ ತಾಪಕ್ಕೆ ಜನರು ಫ್ಯಾನ್ಸ್ ಕೂಲರ್, ಎಸಿಗಳ ಮೊರೆ ಹೋಗುತ್ತಿದ್ದಾರೆ. ಕೆಲವರಲ್ಲಿ 'ಏರ್ ಕೂಲರ್ ಉತ್ತಮವೋ' ಅತವಾ 'ಎಸಿ (ಏರ್ ಕಂಡಿಷನರ್)' ಉತ್ತಮವೋ? ಯಾವುದು ಆಯ್ಕೆ ಮಾಡುವುದೆಂಬ ಗೊಂದಲ ಇದೆ. ಏರ್ ಕೂಲರ್‌ಗಳು ಬಜೆಟ್‌ ಸ್ನೆಹಿ ಆಯ್ಕೆ ಹೌದಾದರೂ, ಏರ್ ಕಂಡಿಷನರ್‌ ಹೆಚ್ಚು ಆರಾಮದಾಯಕ, ತಂಪು ಅನುಭವ ನೀಡುತ್ತವೆ.

ಒನ್ ಇ೦ಡಿಯ 3 Apr 2026 9:00 pm