SENSEX
NIFTY
GOLD
USD/INR

Weather

17    C
... ...View News by News Source

ಜಯನಗರ ಟ್ರಾಫಿಕ್‌ ನಿವಾರಣೆಗೆ ಶೀಘ್ರವೇ ಮುಕ್ತಿ; ಹೊಸ ಪಾರ್ಕಿಂಗ್‌ ನೀತಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗೆ ಪ್ಲ್ಯಾನ್

ಜಯನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಹತ್ವದ ಸಭೆ ನಡೆಸಿತು. ಹೊಸ ಪಾರ್ಕಿಂಗ್ ನೀತಿ, ರಸ್ತೆ ಉಬ್ಬುಗಳು, ಲೇನ್ ಮಾರ್ಕಿಂಗ್, ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಬೀದಿ ವ್ಯಾಪಾರಿ ವಲಯ ಗುರುತಿಸುವಿಕೆ, ಬಸ್ ತಂಗುದಾಣ ಸ್ಥಳಾಂತರ ಮತ್ತು ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಯುವ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ, ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.

ವಿಜಯ ಕರ್ನಾಟಕ 24 Jan 2026 6:33 am

ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಸಿಗಲಿದೆ ಪ್ರಮೋಷನ್‌; ದಶಕಗಳ ಹಳೆಯ ನಿಯಮಗಳಿಗೆ ತಿದ್ದುಪಡಿ

ರಾಜ್ಯ ಸರಕಾರ ಶಿಕ್ಷಕರ ಬಡ್ತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಸಿಗಲಿದೆ. 12 ವರ್ಷಗಳ ಸೇವೆ ಕಡ್ಡಾಯವಾಗಿದ್ದು, ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ವಿಜಯ ಕರ್ನಾಟಕ 24 Jan 2026 6:10 am

ಜೈಲಿನಲ್ಲಿ VIP ಸೌಲಭ್ಯಕ್ಕೆ ಬ್ರೇಕ್;‌ ʻಕೈದಿಗಳಿಗೆ ಮನೆಯೂಟ ನೀಡುವ ಸಂಬಂಧ ಮಾರ್ಗಸೂಚಿ ರೂಪಿಸಿʼ: ಹೈಕೋರ್ಟ್‌

ಕರ್ನಾಟಕದ ಜೈಲುಗಳಲ್ಲಿನ ಕೈದಿಗಳಿಗೆ ಮನೆಯ ಊಟ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಮನೆಯ ಊಟ ನೀಡುವ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದೆ. ಈ ವಿಚಾರಣೆ ಸಂಬಂಧ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಮನೆಯೂಟ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸಲು ಇದು ಸೂಕ್ತ ಸಮಯ ಎಂದು ಹೇಳಿದೆ. ಯಾವ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಲು ಸರ್ಕಾರಕ್ಕೆ ಸೂಚಿಸಲಾಗಿದೆ.

ವಿಜಯ ಕರ್ನಾಟಕ 24 Jan 2026 5:03 am

ʼಗೋ ಬ್ಯಾಕ್ ಗರ್ವನರ್ʼ ಅನ್ನೋದು ರಾಜಕೀಯ ನಾಟಕ: ಎಚ್.ಡಿ. ಕುಮಾರಸ್ವಾಮಿ

ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎರಡೂ ಮುಕ್ಕಾಲು ವರ್ಷದಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರಕಾರ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು. ಸಂಘರ್ಷಗಳಿಂದ ಸಮಸ್ಯೆ ಬಗೆಹರಿವುದಿಲ್ಲ. ರಾಜ್ಯ ಸರಕಾರ ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ಅವರು ಸಲಹೆ ನೀಡಿದರು. ಕರ್ನಾಟಕ ರಾಜ್ಯವೇ ನನ್ನ ರಾಜಕೀಯ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜೆಡಿಎಸ್ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಮ್ಮ ಪಕ್ಷ ಮುಗಿಸಬೇಕು ಎನ್ನುವುದೇ ಅರಿಗೆ ಚಿಂತೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಮಂಡ್ಯ ಜಿಲ್ಲೆಗೆ ಏನು ಮಾಡಬೇಕೆಂಬುದು ನನಗೆ ಗೊತ್ತಿದ್ದು, ಬೇರೆಯವರ ಸರ್ಟಿಫಿಕೇಟ್ ಬೇಕಿಲ್ಲ. ಮಂಡ್ಯದಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಅನವಶ್ಯಕ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಜೆಡಿಎಸ್‍ನ ಹಲವು ಮುಖಂಡರು ಉಪಸ್ಥಿತರಿದ್ದರು. “ಕಾಂಗ್ರೆಸ್‍ನ ಕೆಟ್ಟ ಆಡಳಿತವನ್ನು ಕಿತ್ತೊಗೆಯಲು ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಅದು ಇರುತ್ತದೆ. ಕಾರ್ಯಕರ್ತರು ಸ್ಥಾನಮಾನಕ್ಕಾಗಿ ಚರ್ಚೆ ಮಾಡುತ್ತಾರೆ. ಆ ಕುರಿತು ಅಂತಿಮವಾಗಿ ನಾವು ತೀರ್ಮಾನ ಮಾಡುತ್ತೇವೆ.” ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ವಾರ್ತಾ ಭಾರತಿ 24 Jan 2026 12:43 am

Chikkamagaluru | ಕಾಫಿನಾಡಿನ ಯುವಕನನ್ನು ವರಿಸಿದ ಚೀನಾ ಯುವತಿ

ಚಿಕ್ಕಮಗಳೂರು: ಚೀನಾ ದೇಶದ ಯುವತಿ ಜೇಡ್ ಮತ್ತು ಕಾಫಿನಾಡಿನ ಯುವಕ ರೂಪಕ್ ಪರಸ್ಪರ ಇಷ್ಟಪಟ್ಟು ಶುಕ್ರವಾರ ಸಪ್ತಪದಿ ತುಳಿದರು. ದಂಪತಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಗಣ್ಯರು ಹಾಗೂ ನೂರಾರು ಮಂದಿ ಶುಭಹಾರೈಸಿದರು. ಹಿರೇಗೌಜ ಗ್ರಾಮದ ಬಳಿ ಕಾಫಿ, ಅಡಿಕೆ, ತರಕಾರಿ ಕೃಷಿ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕಸ್ತೂರಿ ದಂಪತಿ ಪುತ್ರ ಕೆ.ಎಸ್.ರೂಪಕ್ ಸುಮಾರು ಏಳೆಂಟು ವರ್ಷದ ಹಿಂದೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಯುನಿರ್ವಸಿಟಿ ಆಫ್ ಕ್ವೀನ್ಸ್ ಲ್ಯಾಡ್‍ನಲ್ಲಿ ಎಂಬಿಎ ವ್ಯಾಸಂಗ ಮಾಡಿದವರು. ಚೀನಾ ದೇಶದ ಗಾಂಗ್‍ಜಾವ್ ಪಟ್ಟಣದ ಡಾ.ಜಿನ್‍ಚಾಂಗ್ ಲಯಾವ್ ಮತ್ತು ಡಾ.ಶಾಂಗ್‍ಕಿಯಾನ್ ವೈದ್ಯ‌ ದಂಪತಿ ಪುತ್ರಿ ಲೂ ವು (ಜೇಡ್) ಸಹ ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಬಂದಿದ್ದರು. ಇಬ್ಬರಿಗೂ ಪರಿಚಯವಾಗಿ ಪರಿಚಯ ಪ್ರೇಮವಾಗಿ ಪರಿವರ್ತನೆಗೊಂಡಿತು. ಶಿಕ್ಷಣದ ನಂತರ ರೂಪಕ್ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ನಗರವಾದ ಬ್ರೆಸ್‍ಬೈನ್‍ನಲ್ಲಿ ನೆಲೆಸಿ ಬ್ರೆಡ್ಸ್ ಗ್ರೂಫ್ ಫೈನಾಸ್ಷಿಯಲ್ ಕಂಟ್ರೋಲರ್ ಉದ್ಯೋಗ ನಿರ್ವಹಿಸುತ್ತಿದ್ದು, ಜೀಡ್‍ಕೂಡ ಲಿನೊವೋ ಕಂಪನಿಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರು, ಬಂಧು-ಮಿತ್ರರ ಆಶೀರ್ವಾದ ಪಡೆದು ವಿವಾಹವಾಗಲು ತೀರ್ಮಾನಿಸಿದ್ದಾರೆ.

ವಾರ್ತಾ ಭಾರತಿ 24 Jan 2026 12:35 am

ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ - ಏನಿದು ದಾಖಲೆ?

ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಡುವ ಮೂಲಕ 126 ಪಂದ್ಯಗಳೊಂದಿಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ, ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿನ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ವಿಜಯ ಕರ್ನಾಟಕ 24 Jan 2026 12:22 am

ದಾವೋಸ್‍ನಲ್ಲಿ ದೂರಸಂಪರ್ಕ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ದೈತ್ಯ ಕಂಪೆನಿಗಳ ಜೊತೆ ಸಚಿವ ಎಂ.ಬಿ.ಪಾಟೀಲ್ ಚರ್ಚೆ

ಬೆಂಗಳೂರು: ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೋರೇಷನ್ ಕರ್ನಾಟಕ ರಾಜ್ಯದಲ್ಲಿ ಜಾಗತಿಕ ಸಾಮಥ್ರ್ಯ ಕೇಂದ್ರ(ಜಿಸಿಸಿ)ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕದ ಜೊತೆಗೆ 25 ವರ್ಷಗಳ ಸುದೀರ್ಘ ಸಹಯೋಗ ಹೊಂದಿರುವ, ಬೆಂಗಳೂರಿನಲ್ಲಿ ತನ್ನ ಜಾಗತಿಕ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿರುವ ನೋಕಿಯಾ, 2ನೆ ಶ್ರೇಣಿಯ ನಗರಗಳೂ ಸೇರಿದಂತೆ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದೆ. ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ನೋಕಿಯಾದ ಉನ್ನತಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕಂಪೆನಿಯ ಭವಿಷ್ಯದ ವಿಸ್ತರಣಾ ಉಪಕ್ರಮಗಳಿಗೆ ಸರಕಾರದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಲಾಗಿದೆ’ ಎಂದು ಪಾಟೀಲ್ ತಿಳಿಸಿದರು. ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ‘ಯೆಸ್ ಬೆಂಗಳೂರು’ ಉಪಕ್ರಮವು ಜಾಗತಿಕ ಮಾನ್ಯತೆ ಪಡೆದ ಸರಕಾರ ಹಾಗೂ ಉದ್ಯಮ ಸಹಯೋಗದ ವೇದಿಕೆಯನ್ನಾಗಿ ಅಭಿವೃದ್ಧಿಪಡಿಸುವ ವಿಶ್ವ ಆರ್ಥಿಕ ವೇದಿಕೆಯ ‘ಯೆಸ್- ಬಿಎಲ್‍ಆರ್ ಅಪ್‍ಲಿಂಕ್’ ಉಪಕ್ರಮಕ್ಕೆ ರಾಜ್ಯ ಸರಕಾರದ ಅಗತ್ಯ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು. ‘ವಿಶ್ವ ಆರ್ಥಿಕ ವೇದಿಕೆಯ ಅಪ್‍ಲಿಂಕ್ ಮುಖ್ಯಸ್ಥ ಜಾನ್ ಡುಟೊನ್ ಅವರ ಜೊತೆಗಿನ ಸಭೆಯಲ್ಲಿ ಇದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ನಗರ ಕೇಂದ್ರೀತ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ನಗರಾಭಿವೃದ್ಧಿಗೆ ಕೊಡುಗೆ ನೀಡುವ ನವೋದ್ಯಮಗಳಿಗೆ ಹಣಕಾಸು ನೆರವು, ಉತ್ತೇಜನ, ಪ್ರಾಯೋಗಿಕ ಅವಕಾಶಗಳನ್ನು ಒದಗಿಸುವ ವಿಶಿಷ್ಟ ಉಪಕ್ರಮ ಇದಾಗಿದೆ. ಈ ಉಪಕ್ರಮವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಕರ್ನಾಟಕ ಸರಕಾರ ನೀಡಿರುವ ಬೆಂಬಲವನ್ನು ಡಬ್ಲ್ಯುಇಎಫ್ ಅಪ್‍ಲಿಂಕ್‍ನ ನಿಯೋಗವು ಶ್ಲಾಘಿಸಿದೆ’ ಎಂದು ಅವರು ತಿಳಿಸಿದರು. ‘ಕ್ವಿನ್ ಸಿಟಿ’ ಯೋಜನೆಯ ಭಾಗವಾಗುವ ಹಾಗೂ ವಿಸ್ತರಣೆ ಸಾಧ್ಯತೆಗಳ ಬಗ್ಗೆ ಸೈಬರ್ ಸುರಕ್ಷತೆಯ ಜಾಗತಿಕ ಕಂಪೆನಿ ಕ್ಲೌಡ್‍ಫ್ಲೇರ್‍ನ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗಿದೆ. ಕಂಪೆನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರದ ಅಗತ್ಯ ನೆರವಿನ ಭರವಸೆ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕವಾಗಿ ಅತ್ಯುತ್ತಮ ತಾಣವಾಗಿದೆಯೆಂದು ಕಂಪೆನಿಯ ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ಸ್ಟೆಫಾನಿ ಕೊಹೆನ್ ಅವರು ಗುಣಗಾನ ಮಾಡಿದ್ದಾರೆ’ ಎಂದು ಪಾಟೀಲ್ ತಿಳಿಸಿದರು. ಪಾಲುದಾರಿಕೆಗೆ ವಾಸ್ಟ್ ಸ್ಪೇಸ್ ಒಲವು: ಬಾಹ್ಯಾಕಾಶ ತಂತ್ರಜ್ಞಾನ, ಅತ್ಯಾಧುನಿಕ ತಯಾರಿಕೆ ಮತ್ತು ನಾವೀನ್ಯತೆ ಆಧಾರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿ ವಾಸ್ಟ್ ಸ್ಪೇಸ್ ಒಲವು ತೋರಿಸಿದೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್ ಪ್ರೈಸಿಸ್, ರಾಜ್ಯದ ಉದ್ದಿಮೆ ಹಾಗೂ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ. ಒಪ್ಪಂದಕ್ಕೆ ಆಸಕ್ತಿ: ರಾಜ್ಯ ಸರಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪೆನಿ ವೊಯೆಜರ್ ಟೆಕ್ನಾಲಜೀಸ್ ಕಂಪೆನಿ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನಾ ಉಪಕ್ರಮಗಳಿಗೆ ಸಂಬಂಧಿಸಿದಂತೆ ಇಸ್ರೋ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಮುಂದೆ ಬಂದಿದೆ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್‍ಬೌಮ್ ಅವರ ಜೊತೆಗಿನ ಭೇಟಿಯಲ್ಲಿ, ರಾಜ್ಯದ ಬಯೊಫಾರ್ಮಾ ವಲಯದಲ್ಲಿ ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಚರ್ಚಿಸಲಾಗಿದೆ’ ಎಂದು ಪಾಟೀಲ್ ತಿಳಿಸಿದರು. ಜಾಗತಿಕ ಕ್ಲೌಡ್ ಕಂಪೆನಿಗಳನ್ನು ರಾಜ್ಯಕ್ಕೆ ಆಕರ್ಷಿಸಲು ಅಮೆಜಾನ್ ವೆಬ್ ಸರ್ವಿಸಸ್ ಜೊತೆ ಚರ್ಚೆ ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ(ಇಎಫ್‍ಟಿಎ) ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯಲ್ಲಿನ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಜ್ಯ ಸರಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ. ಶುಕ್ರವಾರ ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಲಿಚೆಂಟೈನ್ ಪ್ರಧಾನಿ ಶ್ರೀಮತಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿಯಾಗಿ ಆ ದೇಶದ ಕೈಗಾರಿಕಾ ಪರಿಣತಿ, ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದ ಸದ್ಬಳಕೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಪಡಿಸಲು ಫಲಪ್ರದ ಚರ್ಚೆ ನಡೆಸಲಾಯಿತು. ವಾಣಿಜ್ಯ ಬಾಂಧವ್ಯ ಗಟ್ಟಿಗೊಳಿಸಲು ರಾಜ್ಯಕ್ಕೆ ಭೇಟಿ ನೀಬೇಕೆಂದು ಲಿಚೆಂಟೈನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ‘ಜಾಗತಿಕ ಕ್ಲೌಡ್ ಮತ್ತು ಮೂಲಸೌಲಭ್ಯ ಕಂಪೆನಿಗಳನ್ನು ಅಧಿಕ ಸಂಖ್ಯೆಯಲ್ಲಿ ರಾಜ್ಯಕ್ಕೆ ಆಕರ್ಷಿಸಲು ವಿಶ್ವದ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪೆನಿ ಅಮೆಜಾನ್ ವೆಬ್ ಸರ್ವಿಸಸ್‍ನ(ಎಡಬ್ಲ್ಯುಎಸ್)ಉಪಾಧ್ಯಕ್ಷ ಮೈಕಲ್ ಪುಂಕೆ ಅವರ ಜೊತೆ ವಿವರವಾಗಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇರುವ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲ ಸೌಲಭ್ಯಗಳ ಬಗ್ಗೆ ಮೈಕಲ್ ಪುಂಕ್ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಕ್ಲೌಡ್ ಮತ್ತು ಡೇಟಾ ಸೆಂಟರ್ ನಿರ್ವಹಿಸುವ ಕಂಪೆನಿಗಳ ಅಗತ್ಯಗಳನ್ನೆಲ್ಲ ಪೂರೈಸುವುದಾಗಿ ಸರಕಾರ ಭರವಸೆ ನೀಡಿದೆ’ ಎಂದು ಅವರು ನುಡಿದರು. ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲಭ್ಯ ಇರುವ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಮತ್ತು ಬಳಕೆಗೆ ಸನ್ನದ್ಧಸ್ಥಿತಿಯಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ರಾಜ್ಯದಲ್ಲಿನ ಉದ್ಯಮ ಸ್ನೇಹಿ ಪರಿಸರದ ಬಗ್ಗೆ ವಾಹನ ತಯಾರಿಕಾ ಕಂಪೆನಿ ವೋಲ್ವೊ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ. ತಯಾರಿಕೆ, ತಂತ್ರಜ್ಞಾನ ಮತ್ತು ಕುಶಲ ತಂತ್ರಜ್ಞರ ಲಭ್ಯತೆ ಬಳಸಿಕೊಂಡು ರಾಜ್ಯದಲ್ಲಿನ ವಾಹನ ತಯಾರಿಕೆ ಚಟುವಟಿಕೆಗಳನ್ನು ವಿಸ್ತರಿಸಲು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ವಾರ್ತಾ ಭಾರತಿ 24 Jan 2026 12:05 am

Donald Trump: ರಷ್ಯಾ ಅಧ್ಯಕ್ಷ ಪುಟಿನ್ ಕೊಟ್ಟ ಐಡಿಯಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಖುಷ್

ಅಮೆರಿಕ ಮತ್ತು ರಷ್ಯಾ ನಡುವೆ ಸಂಬಂಧ ಸರಿಯಿಲ್ಲ ಎನ್ನುವ ಮಾತುಗಳು ಈಗ ಸುಳ್ಳಾಗುತ್ತಿವೆ. ಈ ಪೈಕಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತೊಮ್ಮೆ ಸುಧಾರಣೆಯ ಹಾದಿ ಹಿಡಿದಿದೆ. ಅದರಲ್ಲೂ ಅತ್ತ ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡುವ ಸಮಯದಲ್ಲಿ ಕೂಡ ಅಮೆರಿಕ ಮತ್ತು

ಒನ್ ಇ೦ಡಿಯ 23 Jan 2026 11:55 pm

ರಾಷ್ಟ್ರೀಯ ಹಬ್ಬಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ

ಬೆಂಗಳೂರು: ಸರಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲಾ/ ಕಾಲೇಜುಗಳ ಇತರೆ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸದಂತೆ ಮಕ್ಕಳ ಮತ್ತು ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಾರೋಹಣ ಕಂಬದ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಮತ್ತು ಕಂಬವು ವಿದ್ಯುತ್ ತಂತಿಗಳನ್ನು ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಧ್ವಜಾರೋಹಣ ಕಂಬಕ್ಕೆ ಧ್ವಜವನ್ನು ಏರಿಸುವ ಅಥವಾ ಇಳಿಸುವ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು. ಧ್ವಜಾರೋಹಣಾ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧ್ವಜ ಸಿಕ್ಕಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಧ್ವಜಕಂಬಕ್ಕೆ ಹತ್ತಿಸಬಾರದು. ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಕಾರ್ಯಕ್ರಮದ ಮೊದಲು ಹಾಗೂ ಆಗಿಂದಾಗ್ಗೆ ಪರಿಶೀಲಿಸಬೇಕು. ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರ ಪದಾರ್ಥಗಳ ಶುಚಿತ್ವದ ಬಗ್ಗೆ ಪರಿಶೀಲಿಸಬೇಕು. ಆಹಾರವನ್ನು ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಕಾರ್ಯಕ್ರಮ ಸಂಯೋಜಕರು ಪರಿಶೀಲಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರದಲ್ಲಿ ಮಕ್ಕಳಿಗೆ ವಿತರಿಸಬೇಕು ಎಂದು ತಿಳಿಸಿದೆ.

ವಾರ್ತಾ ಭಾರತಿ 23 Jan 2026 11:49 pm

Kim Jong Un: ಟೆನ್ಷನ್ ಬಿಟ್ಟು ಸ್ಪಾ ಕಡೆ ಹೊರಟ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ವಿಡಿಯೋ ವೈರಲ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಷ್ಟು ಕ್ರೂರಿ, ಇಷ್ಟು ಕ್ರೂರಿ ಅಂತೆಲ್ಲಾ ಆಗಾಗ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅದರಲ್ಲೂ ಉತ್ತರ ಕೊರಿಯಾ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ನೀಡುವ ಶಿಕ್ಷೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅತ್ಯಂತ ಕ್ರೂರವಾಗಿ ಅಧಿಕಾರಿಗಳ ಕಥೆ ಮುಗಿಸಿದ ಹಿನ್ನೆಲೆ ಕೂಡ ಕಿಮ್ ಜಾಂಗ್ ಉನ್ ಆಡಳಿತಕ್ಕೆ ಇದೆ. ಹೀಗೆಲ್ಲಾ

ಒನ್ ಇ೦ಡಿಯ 23 Jan 2026 11:36 pm

ಹರಪನಹಳ್ಳಿ | ಶಾರ್ಟ್ ಸರ್ಕೂಟ್‌ನಿಂದ ಬೆಂಕಿ : 8 ಎಕರೆ ಮೆಕ್ಕೆಜೋಳ, 6 ಎಕರೆ ರಾಗಿ ಬಣವೆ ಸುಟ್ಟು ಭಸ್ಮ

ಹರಪನಹಳ್ಳಿ: ತಾಲೂಕಿನ ಸಮೀಪದ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಶಾರ್ಟ್ ಸರ್ಕೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ 11 ಕೆವಿ ವಿದ್ಯುತ್ ತಂತಿ ಕಣಕ್ಕೆ ಬಿದ್ದು, ಪಕ್ಕದಲ್ಲಿದ್ದ ಮೆಕ್ಕೆಜೋಳದ ಗುಡ್ಡೆಗಳು ಹಾಗೂ ರಾಗಿ ತೆನೆಯ ಬಣವೆಗಳಿಗೆ ಬೆಂಕಿ ಹತ್ತಿ ಭಾರೀ ಹಾನಿ ಸಂಭವಿಸಿದೆ. ಈ ಅವಘಡದಲ್ಲಿ 8 ಎಕರೆ ಮೆಕ್ಕೆಜೋಳ ಮತ್ತು 6 ಎಕರೆ ರಾಗಿ ತೆನೆಯ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ, ಅಷ್ಟರಲ್ಲೇ ಕಣದಲ್ಲಿ ಇಟ್ಟಿದ್ದ ಎತ್ತಿನ ಬಂಡಿ ಸೇರಿದಂತೆ ಕೃಷಿ ಸಲಕರಣೆಗಳು ಸಹ ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ. ಈ ಬೆಳೆಗಳು ಹುಲ್ಲುಮನಿ ಜಾತಪ್ಪ ಹಾಗೂ ಹುಲ್ಲುಮನಿ ನಾಗರಾಜ ಎಂಬ ಸಹೋದರ ರೈತರಿಗೆ ಸೇರಿದ್ದಾಗಿದ್ದು, ಬೆಂಕಿ ಅವಘಡದಿಂದ ಸುಮಾರು 13 ಲಕ್ಷ ರೂ. ಮೌಲ್ಯದ ಬೆಳೆ ಹಾಗೂ ಕೃಷಿ ಉಪಕರಣಗಳು ನಾಶವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ರೈತ ಹುಲ್ಲುಮನಿ ಜಾತಪ್ಪ, “ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಈಗಾಗಲೇ ಅತಿವೃಷ್ಟಿಯಿಂದ ಕೆಲ ಬೆಳೆ ಹಾನಿಯಾಗಿತ್ತು. ಉಳಿದಿದ್ದ ಮೆಕ್ಕೆಜೋಳ ಮತ್ತು ರಾಗಿ ಬಣವೆಗಳ ಮೇಲೆ ಹಳೆಯ ವಿದ್ಯುತ್ ತಂತಿ ಬಿದ್ದು ಸಂಪೂರ್ಣವಾಗಿ ಸುಟ್ಟುಹೋಯಿತು. ಕೃಷಿ ಸಾಲ ತೀರಿಸುವುದು ಮತ್ತು ಕುಟುಂಬ ನಿರ್ವಹಣೆ ಬಗ್ಗೆ ತೀವ್ರ ಚಿಂತೆ ಎದುರಾಗಿದೆ. ಸಂಬಂಧಿಸಿದ ಇಲಾಖೆ ನಷ್ಟಕ್ಕೆ ತಕ್ಕಂತೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 23 Jan 2026 11:34 pm

ಟ್ರಂಪ್ ಅವರ ಶಾಂತಿ ಮಂಡಳಿ ಆಹ್ವಾನ ತಿರಸ್ಕರಿಸಿದ ಸ್ಪೇನ್: ವರದಿ

ಮ್ಯಾಡ್ರಿಡ್, ಜ.23: ಗಾಝಾ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸುವುದಾಗಿ ಸ್ಪೇನ್ ಶುಕ್ರವಾರ ಹೇಳಿದೆ. ಟ್ರಂಪ್ ಅವರ ಕ್ರಮವು ಸ್ಪೇನ್ ದೀರ್ಘಾವಧಿಯಿಂದ ಬದ್ಧವಾಗಿರುವ ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥೆ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸ್ಪೇನ್‌ನ ಪ್ರಧಾನಮಂತ್ರಿ ಪೆಡ್ರೋ ಸ್ಯಾಂಚೆಸ್ ಹೇಳಿದ್ದಾರೆ. ಇದರೊಂದಿಗೆ ಸ್ಪೇನ್, ಫ್ರಾನ್ಸ್, ಜರ್ಮನಿ, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಸ್ಲೊವೇನಿಯಾ, ಇಟಲಿ ಮತ್ತು ಬ್ರಿಟನ್ ಅಧಿಕೃತವಾಗಿ ಗಾಝಾ ಶಾಂತಿ ಮಂಡಳಿಯಿಂದ ಹೊರಗೇ ಉಳಿದಂತಾಗಿದೆ.

ವಾರ್ತಾ ಭಾರತಿ 23 Jan 2026 11:30 pm

ಭಾರತ ಪ್ರವಾಸಕ್ಕೆ ನಿರಾಕರಿಸಿದ ಬಾಂಗ್ಲಾದೇಶ ವಿರುದ್ಧ ಕಠಿಣ ಕ್ರಮಕ್ಕೆ ಐಸಿಸಿ ಚಿಂತನೆ

ಹೊಸದಿಲ್ಲಿ, ಜ.23: ಮುಂಬರುವ 2026ರ ಆವೃತ್ತಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರವಾಸ ಕೈಗೊಳ್ಳಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಶುಕ್ರವಾರ ವರದಿ ಮಾಡಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಸ್ತುತ ದುಬೈನಲ್ಲಿ ಇದ್ದು, ಈ ವಿಚಾರದ ಕುರಿತು ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಭಾರತದಿಂದ ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ ಬಳಿಕ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್‌ ಗೆ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ಕಾಟ್‌ಲ್ಯಾಂಡ್ ತಂಡವು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ಬದಲಿಗೆ ಆಡುವ ಸಾಧ್ಯತೆಯಿದೆ. ಭಾರತಕ್ಕೆ ಪ್ರಯಾಣಿಸಲು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಬದಲಿ ತಂಡವನ್ನು ಆಡಿಸಲಾಗುವುದು ಎಂದು ಐಸಿಸಿ ಬುಧವಾರ ಬಾಂಗ್ಲಾದೇಶಕ್ಕೆ ಅಂತಿಮ ಎಚ್ಚರಿಕೆ ನೀಡಿತ್ತು. ಭಾರತದಲ್ಲಿ ಬಾಂಗ್ಲಾದೇಶ ಆಟಗಾರರು, ಅಧಿಕಾರಿಗಳು ಅಥವಾ ಅಭಿಮಾನಿಗಳ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ತಿಳಿಸಿರುವ ಐಸಿಸಿ, ಇದಕ್ಕೆ ಪ್ರತಿಕ್ರಿಯಿಸಲು ಗುರುವಾರದ ತನಕ ಬಾಂಗ್ಲಾದೇಶಕ್ಕೆ ಸಮಯ ನೀಡಿತ್ತು. “ನಮ್ಮ ಕ್ರಿಕೆಟಿಗರು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಭಾರತದಲ್ಲಿ ಆಡುವ ಬಗ್ಗೆ ಭದ್ರತಾ ಅಪಾಯಗಳ ಕುರಿತು ನಮ್ಮ ಆತಂಕ ನಿವಾರಣೆಯಾಗಿಲ್ಲ. ನಮ್ಮ ಇಡೀ ತಂಡ, ಪತ್ರಕರ್ತರು ಹಾಗೂ ಪ್ರೇಕ್ಷಕರ ಸುರಕ್ಷತೆ ಕುರಿತು ನಮಗೆ ಸಂಪೂರ್ಣ ಭರವಸೆ ಇಲ್ಲ. ನಾವು ವಿಶ್ವಾಸವನ್ನು ಕಳೆದುಕೊಂಡಿಲ್ಲ; ನಮ್ಮ ತಂಡ ಸಿದ್ಧವಾಗಿದೆ,” ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದಾರೆ. 2026ರ ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಯ ಸ್ವತಂತ್ರ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ)ಯನ್ನು ಸಂಪರ್ಕಿಸಿದೆ ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ. ಡಿಆರ್‌ಸಿಯನ್ನು ಸಂಪರ್ಕಿಸುವ ಮೂಲಕ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಐಸಿಸಿ ನಿರ್ಧಾರಕ್ಕೆ ಸವಾಲೊಡ್ಡಲು ಬಿಸಿಬಿ ಯತ್ನಿಸುತ್ತಿದೆ. ತನ್ನ ಅಧಿಕಾರ ವ್ಯಾಪ್ತಿಗೆ ಇದು ಬಾರದ ಕಾರಣ ಬಿಸಿಬಿಯ ಕೋರಿಕೆಯನ್ನು ಡಿಆರ್‌ಸಿ ಆಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಡಿಆರ್‌ಸಿ ನಮ್ಮ ವಿರುದ್ಧ ತೀರ್ಪು ನೀಡಿದರೆ, ಸ್ವಿಟ್ಸರ್‌ಲ್ಯಾಂಡ್‌ನಲ್ಲಿರುವ ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್) ಅನ್ನು ಸಂಪರ್ಕಿಸಲಾಗುವುದು ಎಂದು ಬಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ. ಬಿಸಿಬಿಯು ತನ್ನ ನಾಲ್ಕೂ ಗ್ರೂಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲು ಅನುಮತಿ ನೀಡುವಂತೆ ವಿನಂತಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಐಸಿಸಿ ಆಯೋಜಿತ ಪಂದ್ಯಗಳು ಹೈಬ್ರಿಡ್ ವ್ಯವಸ್ಥೆಯಲ್ಲಿ 2027ರ ತನಕ ತಟಸ್ಥ ತಾಣದಲ್ಲಿ ನಡೆಯಲಿವೆ.

ವಾರ್ತಾ ಭಾರತಿ 23 Jan 2026 11:30 pm

ಮೆಡಿಟರೇನಿಯನ್ ಸಮುದ್ರದಲ್ಲಿ ರಶ್ಯದಿಂದ ಬರುತ್ತಿದ್ದ ತೈಲ ಟ್ಯಾಂಕರ್ ವಶಕ್ಕೆ ಪಡೆದ ಫ್ರಾನ್ಸ್ ನೌಕಾಪಡೆ

ಟ್ಯಾಂಕರ್ ವಶಕ್ಕೆ ಪಡೆದ ಫ್ರಾನ್ಸ್ ನೌಕಾಪಡೆ

ವಾರ್ತಾ ಭಾರತಿ 23 Jan 2026 11:29 pm

ಕಲಬುರಗಿ | 9 ರೈಲ್ವೆ ನೌಕರರಿಗೆ ʼವಿಶಿಷ್ಟ ರೈಲು ಸೇವಾ ಪುರಸ್ಕಾರʼ

ಕಲಬುರಗಿ : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನಲ್ಲಿರುವ ಕೇಂದ್ರ ರೈಲ್ವೆ ಆಡಿಯಟೋರಿಯಂನಲ್ಲಿ ನಡೆದ ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ 70ನೇ ವಿಶಿಷ್ಟ ರೈಲು ಸೇವಾ ಪುರಸ್ಕಾರ–2025 ಸಮಾರಂಭದಲ್ಲಿ ಸೋಲಾಪುರ ರೈಲ್ವೆ ವಿಭಾಗವು ವರ್ಕ್ಸ್ ಎಫಿಷಿಯನ್ಸಿ ಶೀಲ್ಡ್ ಹಾಗೂ ಟ್ರಾಕ್ ಮಷಿನ್ ಶೀಲ್ಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಮಹಾಪ್ರಬಂಧಕ ವಿವೇಕ್ ಕುಮಾರ್ ಗುಪ್ತ ಅವರು ಸೋಲಾಪುರ ವಿಭಾಗದ 9 ಮಂದಿ ರೈಲ್ವೆ ನೌಕರರಿಗೆ “ವಿಶಿಷ್ಟ ರೈಲು ಸೇವಾ ಪುರಸ್ಕಾರ” ಪ್ರದಾನ ಮಾಡಿ ಮಾತನಾಡಿದರು. ಸಾರ್ವಜನಿಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆ ಒದಗಿಸಲು ರೈಲ್ವೆ ಇಲಾಖೆ 2026ರಲ್ಲಿ 52 ವಾರಗಳಿಗೆ 52 ಸುಧಾರಣಾ ಯೋಜನೆಗಳನ್ನು ಜಾರಿಗೆ ತರಬೇಕು. ಜೊತೆಗೆ ಸುರಕ್ಷತೆಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ, ನಿರ್ವಹಣಾ ಕ್ರಮಗಳ ಉನ್ನತಿ ಹಾಗೂ ಸಿಬ್ಬಂದಿ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು. ವಿಭಾಗೀಯ ಹಿರಿಯ ಹಣಕಾಸು ವ್ಯವಸ್ಥಾಪಕ ಆದಿತ್ಯ ತ್ರಿಪಾಠಿ, ರೈಲು ಟಿಕೆಟ್ ಪರಿಶೀಲಕರಾದ ರಾಹುಲ್ ಸುಧಾಮ್ ಕಂಬ್ಳೆ, ಸಂತೋಷ ವಿತ್ತಲ್ ಕಟ್ಕರೆ, ಹಂದರ್ಗುಳೆ ವಿಶಾಲ್ ಸೂರ್ಯಕಾಂತ್, ಅಖಿಲ್ ಬಶೀರ್ ಶೇಖ್, ಮಹಬೂಬ್ ಕೆ. ನದಾಫ್, ಸಂಜೀವಕುಮಾರ್, ವೈಜನಾಥರಾವ್ ಅರ್ಧಪುರೇ, ವಿಜಯ ಸೂರ್ಯಭಾನ್ ಯಾದವ್, ರವೀಂದ್ರ ಶಂಕರ್ ರಾಥೋಡ್ ಸೇರಿದಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಾ. ಸುಜೀತ್ ಮಿಶ್ರಾ ಅವರ ನೇತೃತ್ವದ ತಂಡವು ಪ್ರಶಸ್ತಿಗಳನ್ನು ಸ್ವೀಕರಿಸಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮಹಾಪ್ರಬಂಧಕರಾದ ಪ್ರತೀಕ್ ಗೋಸ್ವಾಮಿ, ಪಿ.ಪಿ. ಪಾಂಡೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಡಿಆರ್‌ಎಂಗಳು, ಸೆಂಟ್ರಲ್ ರೈಲ್ವೆ ಮಹಿಳಾ ಕಲ್ಯಾಣ ಸಂಘದ ಪ್ರತಿನಿಧಿಗಳು ಹಾಗೂ ರೈಲ್ವೆ ಯೂನಿಯನ್ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Jan 2026 11:23 pm

ʼಗಮ್ಮತ್ ಕಲಾವಿದರ್ ಯುಎಇʼ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ದುಬೈ: ಯುಎಇಯ ಪ್ರಸಿದ್ಧ ತುಳು ನಾಟಕ ತಂಡ ʼಗಮ್ಮತ್ ಕಲಾವಿದರ್ ಯುಎಇʼ 2011ರಲ್ಲಿ ಸ್ಥಾಪನೆಗೊಂಡು ತುಳು ರಂಗಭೂಮಿಯನ್ನು ಸಕ್ರಿಯವಾಗಿ ಮರಳುನಾಡಿನಲ್ಲಿ ಬೆಳೆಸಿಕೊಂಡು ಬರುತ್ತಿದ್ದು, ಗುಣಮಟ್ಟದ ನಾಟಕ ಪ್ರದರ್ಶನಗಳು, ಪರಿಪಕ್ವವಾದ ಅಭಿನಯಗಳ ಮೂಲಕ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ತಾಯ್ನಾಡಿನ ತುಳು ರಂಗಭೂಮಿಯಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ. ರಂಗಭೂಮಿಯ ಚಟುವಟಿಕೆಗಳಷ್ಟೇ ಅಲ್ಲದೆ, ಗಮ್ಮತ್ ಕಲಾವಿದರ್ ಯುಎಇ ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಸ್ವದೇಶದಲ್ಲಿನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಸಾಂಸ್ಕೃತಿಕ ಪ್ರಚಾರದ ಜೊತೆಗೆ ಅರ್ಥಪೂರ್ಣ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುಂದುವರೆಸುತ್ತಿರುವುದು ಗಮನಾರ್ಹ ಅಂಶ. ಗಮ್ಮತ್ ಕಲಾವಿದರ್ ಯುಎಇ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ, 2026–27 ಅವಧಿಯ ನೂತನ ಕಾರ್ಯಕಾರಿ ಸಮಿತಿಯನ್ನು ಜ.18ರಂದು ದುಬೈಯ ಬರ್ ದುಬೈಯಲ್ಲಿರುವ ಗ್ರ್ಯಾಂಡ್ ಎಕ್ಸೆಲ್ಸಿಯರ್ ಹೋಟೆಲ್‌ನ ಘಜಲ್ ರೆಸ್ಟೋರೆಂಟ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ರಚಿಸಲಾಯಿತು. ವಾರ್ಷಿಕ ಸಭೆಯು ಸಂಸ್ಥೆಯ ಗೌರವ ಪೋಷಕರು ಹಾಗೂ ಕನ್ನಡ ಚಿತ್ರ ನಿರ್ಮಾಪಕರಾದ ಹರೀಶ್ ಬಂಗೇರ ಹಾಗೂ ನಾಟಕ ನಿರ್ದೇಶಕ “ರಂಗಸಾರಥಿ”ವಿಶ್ವನಾಥ್ ಶೆಟ್ಟಿ ಅವರು ಮಾರ್ಗದರ್ಶನ ಜರುಗಿದ್ದು, ಸಭೆಯಲ್ಲಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದರಾದ ವಾಸು ಕುಮಾರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಟಕ ಹಾಗೂ ಯಕ್ಷಗಾನ ಕಲಾವಿದೆಯಾದ ಸಮಂತಾ ಗಿರೀಶ್ ಅವರನ್ನು ಕಾರ್ಯದರ್ಶಿಯಾಗಿ, ಹಾಗೂ ಅನುಭವೀ ರಂಗಕಲಾವಿದೆಯಾದ ಜೆನೆಟ್ ಸಿಕ್ವೇರಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಹರೀಶ್ ಬಂಗೇರ ಅವರು ಪೋಷಕರಾಗಿ ಮುಂದುವರಿಯಲಿದ್ದು, ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ತಂಡದ ಕಲಾತ್ಮಕ ಮಾರ್ಗದರ್ಶನವನ್ನು ಮುಂದುವರಿಸಲಿದ್ದಾರೆ. ನೂತನ ಅಧ್ಯಕ್ಷರಾದ ವಾಸು ಕುಮಾರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮರಳುನಾಡಿನಲ್ಲಿ ತುಳು ರಂಗಭೂಮಿಯ ಬೆಳವಣಿಗೆ ಹಾಗೂ ತುಳು ಸಂಸ್ಕೃತಿಯ ಸಂರಕ್ಷಣೆಗೆ ಪೋಷಕರು , ತುಳು ರಂಗಭೂಮಿ ಅಭಿಮಾನಿಗಳು , ಸದಸ್ಯರು ಮತ್ತು ಹಿತೈಷಿಗಳು ತಮ್ಮ ಸಹಕಾರ ಮತ್ತು ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 23 Jan 2026 11:19 pm

ಕಲಬುರಗಿ | ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮುಖ್ಯ ಶಿಕ್ಷಕರು ಶ್ರಮಿಸಿ : ಬಿ.ಫೌಝಿಯಾ ತರನ್ನುಮ್

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ

ವಾರ್ತಾ ಭಾರತಿ 23 Jan 2026 11:19 pm

ಡಾ. ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ, ಬಿಲ್ಲವರಿಂದ ಗೌರವ ಸನ್ಮಾನ

ಕಲಬುರಗಿ: ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವ ಡಾ. ಪ್ರಣವಾನಂದ ಶ್ರೀಗಳು ಗಂಗಾವತಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಲಬುರಗಿಯ ಈಡಿಗ ನಾಯಕರು ಭವ್ಯ ಸ್ವಾಗತ ಕೋರಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಚಿತ್ತಾಪುರದ ಕರದಾಳದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ 6ರಂದು ಆರಂಭಗೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಸುಮಾರು 700 ಕಿ.ಮೀ ದೂರದ ಪಾದಯಾತ್ರೆ, 16 ದಿನಗಳ ನಂತರ ಜನವರಿ 21ರಂದು ಗಂಗಾವತಿ ಪಟ್ಟಣ ತಲುಪಿತು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ವತಿಯಿಂದ ಡಾ. ಪ್ರಣವಾನಂದ ಶ್ರೀಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ. ಕಡೇಚೂರ್, ಪ್ರವೀಣ ಜತ್ತನ್, ಅಂಬಯ್ಯ ಗುತ್ತೇದಾರ್ (ಇಬ್ರಾಹಿಂಪುರ್), ಈ. ತಿಮ್ಮಪ್ಪ (ಗಂಗಾವತಿ), ಡಾ. ಸದಾನಂದ ಪೆರ್ಲ, ಸುರೇಶ್ ಗುತ್ತೇದಾರ್ (ಮಟ್ಟೂರು), ನಾರಾಯಣ ಗುತ್ತೇದಾರ್ (ಬೆಳಗಾವಿ), ಸಂತೋಷ್ ಚೌಧರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ವೇಳೆ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ್ ಅವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು.

ವಾರ್ತಾ ಭಾರತಿ 23 Jan 2026 11:13 pm

ಚಾರ್ಮಾಡಿ ಘಾಟಿಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪದ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್‌ಗಳಿಂದ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಿರುವಿನಲ್ಲಿ ಉರುಳಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಯಿತು.

ವಾರ್ತಾ ಭಾರತಿ 23 Jan 2026 11:13 pm

ಸೇಡಂ | ವಾಣಿಜ್ಯ ಮಳಿಗೆಗಳ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

ಸೇಡಂ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರದಿಂದ ಬೃಹತ್ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಿಸುವ ಮೂಲಕ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದ ಸಮೀಪ, ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕೆಆರ್‌ಐಡಿಎಲ್ ವತಿಯಿಂದ ಸುಮಾರು 2.99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ಕಟ್ಟಡಕ್ಕೆ ಅನುದಾನ ಒದಗಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಇದಕ್ಕೆ ಕಾಯಕಲ್ಪ ನೀಡಲು ವಿಫಲವಾಗಿತ್ತು. ಇದೀಗ ಮತ್ತೆ ನಾನು ಚುನಾಯಿತನಾಗಿ ಬಂದ ಬಳಿಕ ಈ ಕಟ್ಟಡವನ್ನು ಸಾರ್ವಜನಿಕರಿಗೆ ಸಮರ್ಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. ಈ ಕಟ್ಟಡದಲ್ಲಿ ಒಟ್ಟು 42 ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಜೊತೆಗೆ ಖಾಲಿ ಜಾಗವನ್ನೂ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಲಾಗಿದ್ದು, ನಿಯಮಾನುಸಾರ ಬಾಡಿಗೆದಾರರಿಗೆ ಮಳಿಗೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಇಇ ನೀಲಕಂಡ ರಾಠೋಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ನಾಗೇಶ್ವರಾವ ಮಾಲೀಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್ ಸೇರಿದಂತೆ ಜಗದೇವಪ್ಪ ಪಾಟೀಲ್ ಕೊಂಕನಹಳ್ಳಿ, ವೆಂಕಟೇಶ ನಾಡೇಪಲ್ಲಿ, ಶರಣಗೌಡ ನಾಚವಾರ, ಗುರುನಾಥರೆಡ್ಡಿ ಪಾಟೀಲ್, ಶ್ರೀನಿವಾಸ ಪ್ಯಾಟಿ, ಮಹ್ಮದ್ ಗೌಸ, ದೀಪಕ ಎಂ.ಜಿ, ಶ್ರೀನಿವಾಸರೆಡ್ಡಿ ಕೋಲಕುಂದಾ, ಸಂತೋಷ ತಳವಾರ, ಬಸವರಾಜ ಮಾಲೀಪಾಟೀಲ್ ಊಡಗಿ, ನೀಲಕಂಠ ಹಂಗನಹಳ್ಳಿ, ಜಗದೇವಯ್ಯ ಬಂಡಾ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Jan 2026 11:09 pm

US Military: ಇರಾನ್ ಕಡೆಗೆ ನುಗ್ಗುತ್ತಿರುವ ಅಮೆರಿಕದ ಬೃಹತ್ ಸೇನೆ, ಟ್ರಂಪ್ ಹೇಳಿಕೆ ನಂತರ ತಲ್ಲಣ

ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಇನ್ನೇನು ತಣ್ಣಗೆ ಆಗಿದೆ ಬಿಡು ಅನ್ನುವಷ್ಟರಲ್ಲೇ ಮತ್ತೆ ಇಬ್ಬರೂ ಕದನಕ್ಕೆ ಸಜ್ಜಾದಂತೆ ಕಾಣುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರು ಇರಾನ್ ವಿರುದ್ಧ ಈಗ ಸಾಕಷ್ಟು ಆಕ್ರೋಶಗೊಂಡಿದ್ದು ಯಾವುದೇ ಸಮಯದಲ್ಲಿ ಎರಡೂ ದೇಶಗಳ ನಡುವೆ ಬೃಹತ್ ಯುದ್ಧ ಆರಂಭ ಆಗುವ ಲಕ್ಷಣ ಗೋಚರಿಸುತ್ತಿದೆ. ಒಂದು ಕಡೆ ಇರಾನ್ ಕೆಲವು ದಿನಗಳ ಹಿಂದಷ್ಟೇ ಆಂತರಿಕ

ಒನ್ ಇ೦ಡಿಯ 23 Jan 2026 11:06 pm

Vijayapura | ಕಳವು, ವಂಚನೆ ಪ್ರಕರಣ: 14 ಮಂದಿಯ ಬಂಧನ; 1.17 ಕೋಟಿ ರೂ. ಮೌಲ್ಯದ ಸೊತ್ತು ವಶ

ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಅಂದಾಜು 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 20 ಲಕ್ಷ ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಹಾಗೂ 39 ಮೋಟಾರ್ ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 1,17,00,000 ರೂ. ಮೌಲ್ಯದ ವಸ್ತಗಳನ್ನು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 48 ಪ್ರಕರಣ ಬೇಧಿಸುವಲ್ಲಿ ಇಲಾಖೆಯ ಸಿಬ್ಬಂದಿ ಪ್ರಯತ್ನ ಅನನ್ಯ, ಕಳೆದ ಕೆಲವು ದಿನಗಳಿಂದ ಸರಿಸುಮಾರು 2 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಹಾಗೂ ಬಂಗಾರವನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಳಿ ನೀಡುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ ಮುಂತಾದವರು ಇದ್ದರು. ಮೋಟರ್ ಬೈಕ್ ಕಳ್ಳತನ: ಮೂವರ ಬಂಧನ ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿವಿಧ ಬೈಕ್ ಕಳ್ಳತನದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸಿದ್ರಾಮ ಅರಕೇರಿ(25), ಮಂಜುನಾಥ ಉಕ್ಕಲಿ(29), ಆಕಾಶ ಮಠಪತಿ(20) ಎಂದು ಗುರುತಿಸಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ಒಟ್ಟು 20 ಮೋಟಾರ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಪೊಲೀಸ್ ತನಿಖಾ ತಂಡ ಅಲಿಯಾಬಾದ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಮೂವರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಅವರನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಅವರು ತಿಳಿಸಿದ್ದಾರೆ. ಬಸ್‌ನಲ್ಲಿ ಚಿನ್ನ ಕಳ್ಳತನ ಪ್ರಕರಣ : ಐವರ ಬಂಧನ ಕಳೆದ 2025 ರ ಮೇ 30 ರಂದು ವಿಜಯಪುರ-ತಾಳಿಕೋಟೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ್(33), ಅಂಕುಶ ಸಾಹೇಬರಾವ್ ಜಾಧವ(40), ಗೋವರ್ಧನ ವಿಠ್ಠಲ ಪವಾರ(48), ರಜನಿ ಶಿವು ಭೋವಿ(38), ಮಂಜು ಪ್ರಶಾಂತ ಭೋಯ್ರ (30), ಶಿವು ರಾಜಣ್ಣ ಬೋವಿ(42) ಬಂಧಿತ ಆರೋಪಿಗಳು. ಆರೋಪಿತರ ಪತ್ತೆಗಾಗಿ ರಚನೆ ಮಾಡಲಾಗಿದ್ದ ವಿಶೇಷ ತನಿಖಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಮುಳವಾಡ ಕ್ರಾಸ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರು ನಿಲ್ಲಿಸದೆ ಆರೋಪಿತರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಬಂಗಾರದ ನಾಣ್ಯ ಹೆಸರಲ್ಲಿ ವಂಚನೆ : ನಾಲ್ವರ ಬಂಧನ ನಿಧಿ ಇದೆ ಎಂದು ನಂಬಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಮೇ.8 ರಂದು ಈ ಪ್ರಕರಣ ದಾಖಲಾಗಿದ್ದು, ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ 26 ಲಕ್ಷ ರೂ. ಹಣ ಪಡೆದುಕೊಂಡು ಮೋಸ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯನಗರದ ಹಣಮಂತ ಯಾನೆ ಸಂತೋಷ ಲಾಲ ಮಾನಪ್ಪ ಯಾನೆ ಲಕ್ಷ್ಮಣ ಕೊರಚರ(28), ರಾಜಾ ಗೋವಿಂದ ಯಾನೆ ವೆಂಕಟೇಶ ಕಾವಾಡಿ(26), ಹರೀಶ ಚೌಡಪ್ಪ ಕೊರಚರ(30), ಚೀರಂಜೀವಿ ದುರ್ಗಪ್ಪ ಕೊರಚರ (27) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಮೋಸ ಮಾಡಿ ತೆಗೆದುಕೊಂಡು ಹೋದ 20 ಲಕ್ಷ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.

ವಾರ್ತಾ ಭಾರತಿ 23 Jan 2026 11:02 pm

ಕಲಬುರಗಿ | ಅಂತರ್ ರಾಜ್ಯ ಕಳ್ಳನ ಬಂಧನ ; 7.35 ಲಕ್ಷ ಮೌಲ್ಯದ 18 ಬೈಕ್ ವಶ: ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ, ಜ.23: ಮಹಾರಾಷ್ಟ್ರ ಗಡಿಭಾಗದ ಅಫಜಲಪುರ, ಆಳಂದ ಸೇರಿದಂತೆ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನ ಬಳಿಯಿಂದ 7.35 ಲಕ್ಷ ಮೌಲ್ಯದ 18 ಬೈಕ್ ಗಳನ್ನು ವಶಕ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ಅಫಜಲಪುರ ತಾಲೂಕಿನ ಬಡದಾಳ ತಾಂಡಾದ ಸಂಜಯ ಖೇಮು ಚವ್ಹಾಣ ಬಂಧಿತ ಆರೋಪಿ. ಆರೋಪಿಯು ಕದ್ದ ಬೈಕ್‌ಗಳನ್ನು ಅಫಜಲಪುರದ ಮಲ್ಲಾಬಾದ್ ಗ್ರಾಮದ ಪರಶುರಾಮ ಅಲಿಯಾಸ್ ಸುನೀಲ್ ಎಂಬಾತನಿಗೆ ಮಾರಾಟ ಮಾಡಲು ನೀಡಿದ್ದ. ಮಾಹಿತಿ ಆಧಾರದ ಮೇಲೆ ಪರಶುರಾಮನ ಶೆಡ್‌ನಲ್ಲಿ ಇಡಲಾಗಿದ್ದ ಸ್ಥಳಕ್ಕೆ ಹೋಗಿ ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪರಶುರಾಮ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಶುಕ್ರವಾರ ಜಿಲ್ಲಾ ಪೊಲೀಸ್ ಭವನದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅತನೂರ ಗ್ರಾಮದ ಭೀಮರಾಯ ಜಮಾದಾರ ಎನ್ನುವರು ತಮ್ಮ ಬೈಕ್ ಕಳ್ಳತನವಾಗಿದೆ ಎಂದು ರೇವೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖಾ ತಂಡ ರಚಿಸಲಾಗಿತ್ತು. ಆಳಂದ ಉಪವಿಭಾಗದ ಡಿಎಸ್ಪಿ ತಮ್ಮರಾಯ ಪಾಟೀಲ್, ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ಹಾಗೂ ರೇವೂರ ಪಿಎಸ್‌ಐ ವಾತ್ಸಲ್ಯ ಅವರ ನೇತೃತ್ವದ ತಂಡವು ಶೋಧ ನಡೆಸಿ, ಆರೋಪಿಯನ್ನು ಬಂಧಿಸಿ, ಎರಡು ರಾಯಲ್ ಎನ್ ಫಿಲ್ಡ್ ಬುಲೆಟ್ ಸೇರಿ 18 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಡ್ಡೂರು ಶ್ರೀನಿವಾಸಲು ತಿಳಿಸಿದರು. ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಎಂಟು ಪ್ರಕರಣ ದಾಖಲಾಗಿದ್ದು, ಉಳಿದ ವಾಹನಗಳ ವಾರಸುದಾರ ಬಗ್ಗೆ ಪತ್ತೆ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ವಾತ್ಸಲ್ಯ ಮತ್ತಿತ್ತರ ಹಾಜರಿದ್ದರು.

ವಾರ್ತಾ ಭಾರತಿ 23 Jan 2026 10:57 pm

ಅಮೆರಿಕ | ವಲಸೆ ಅಧಿಕಾರಿಗಳಿಂದ ಶಿಶು ವಿಹಾರದಿಂದ ವಾಪಸಾಗುತ್ತಿದ್ದ 5 ವರ್ಷದ ಬಾಲಕನ ಬಂಧನ!

ನ್ಯೂಯಾರ್ಕ್, ಜ.23: ಅಮೆರಿಕಾದ ಮಿನ್ನೆಸೋಟದಲ್ಲಿ ಶಿಶುವಿಹಾರದಿಂದ ಮನೆಗೆ ವಾಪಸಾಗುತ್ತಿದ್ದ ಐದು ವರ್ಷದ ಬಾಲಕನನ್ನು ವಲಸೆ ಅಧಿಕಾರಿಗಳು ಬಂಧಿಸಿ, ಆತನನ್ನು ತಂದೆ ಅಡ್ರಿಯಾನ್ ಕೊನೆಜೊ ಜೊತೆಗೆ ಟೆಕ್ಸಾಸ್‌ ನಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಶಾಲಾ ಅಧಿಕಾರಿಗಳು ಮತ್ತು ಕುಟುಂಬದ ವಕೀಲರು ತಿಳಿಸಿದ್ದಾರೆ. ಬಾಲಕನನ್ನು ಲಿಯಾಮ್ ಕೊನೆಜೊ ರಮೋಸ್ ಎಂದು ಗುರುತಿಸಲಾಗಿದ್ದು, ಇತ್ತೀಚಿನ ವಾರಗಳಲ್ಲಿ ಮಿನ್ನೆಸೋಟ ಹಾಗೂ ಸಮೀಪದ ಪ್ರದೇಶಗಳಲ್ಲಿ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ನಾಲ್ಕನೇ ವಿದ್ಯಾರ್ಥಿಯಾಗಿದ್ದಾನೆ. ಅಧಿಕಾರಿಗಳು ಮನೆಯೊಳಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು, ಮನೆಯ ಬಾಗಿಲು ತಟ್ಟುವಂತೆ ಬಾಲಕನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬಾಗಿಲು ತೆರೆಯಬೇಡ ಎಂದು ಮನೆಯೊಳಗೆ ಇದ್ದ ತನ್ನ ಪತ್ನಿಗೆ ಅಡ್ರಿಯಾನ್ ಕೊನೆಜೊ ತಿಳಿಸಿದ್ದರಿಂದ ಆಕೆ ಬಾಗಿಲು ತೆರೆಯಲಿಲ್ಲ. ಐದು ವರ್ಷದ ಬಾಲಕನನ್ನು ಬಂಧಿಸಿದ್ದು ಏಕೆ? ಈ ಮಗುವನ್ನೂ ಕ್ರಿಮಿನಲ್ ಎಂದು ಗುರುತಿಸಲಾಗಿದೆಯೇ? ಎಂದು ಕೊಲಂಬಿಯಾ ಹೈಟ್ಸ್ ಪಬ್ಲಿಕ್ ಶಾಲೆಯ ಕರೆಸ್ಪಾಂಡೆಂಟ್ ಝಿನಾ ಸ್ಟೆನ್ವಿಕ್ ಪ್ರಶ್ನಿಸಿದ್ದಾರೆ. ಈ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ವಲಸೆ ಅಧಿಕಾರಿಗಳು ಮಗುವನ್ನು ಬಂಧಿಸಿಲ್ಲ ಎಂದು ಆಂತರಿಕ ಭದ್ರತಾ ಇಲಾಖೆಯ ವಕ್ತಾರೆ ಟ್ರಿಷಿಯಾ ಮೆಕ್‌ಲಾಗ್ಲಿನ್ ಹೇಳಿದ್ದಾರೆ. ವಲಸೆ ಅಧಿಕಾರಿಗಳನ್ನು ಕಂಡೊಡನೆ ಅಡ್ರಿಯಾನ್ ತನ್ನ ಮಗನನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದಾಗ ಅಧಿಕಾರಿಗಳು ಅಡ್ರಿಯಾನ್‌ನ್ನು ಬಂಧಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 23 Jan 2026 10:48 pm

Pakistan | ಮಾನವ ಹಕ್ಕುಗಳ ಕಾರ್ಯಕರ್ತೆ ಬಂಧನ

ಇಸ್ಲಾಮಾಬಾದ್, ಜ.23: ಇಸ್ಲಾಮಾಬಾದಿನ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಪಾಕಿಸ್ತಾನದ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತೆ ಝೈನಾಬ್ ಮಜಾರಿ–ಹಜೀರ್ ಮತ್ತು ಅವರ ಪತಿ, ವಕೀಲ ಹಾದಿ ಅಲಿ ಚಟ್ಟಾ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ದಂಪತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮಿಲಿಟರಿಯನ್ನು ಕಟುವಾಗಿ ಟೀಕಿಸುತ್ತಿದ್ದ ಝೈನಾಬ್ ಅವರನ್ನು ಬಂಧಿಸಿರುವುದನ್ನು ಅವರ ತಾಯಿ, ಇಮ್ರಾನ್ ಖಾನ್ ಸರಕಾರದಲ್ಲಿ ಸಚಿವರಾಗಿದ್ದ ಡಾ. ಶಿರೀನ್ ಮಜಾರಿ ದೃಢಪಡಿಸಿದ್ದಾರೆ.

ವಾರ್ತಾ ಭಾರತಿ 23 Jan 2026 10:48 pm

ಕಲಬುರಗಿ | ತೊಗರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಧರಣಿ ತಾತ್ಕಾಲಿಕ ಹಿಂದಕ್ಕೆ

ಕಲಬುರಗಿ, ಜ.23: ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಎರಡನೇ ದಿನಕ್ಕೆ(ಶುಕ್ರವಾರ) ತಾತ್ಕಾಲಿಕವಾಗಿ ಮೊಟಕುಗೊಂಡಿದೆ. ಗುರುವಾರ ಬೆಳಗ್ಗೆಯಿಂದ ಪ್ರಾರಂಭವಾದ ರೈತರ ಧರಣಿಯು ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಮಧ್ಯಾಹ್ನದ ವೇಳೆಯಲ್ಲಿ ರೈತ ಮುಖಂಡರು ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿಲ್ಲಿಸುವ ಮೂಲಕ ರಸ್ತಾ ರೋಕೋ ಚಳುವಳಿ ನಡೆಸಿದರು. ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆ ಆಲಿಸಿದರು. ಇದೇ ಸಮಯದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟರು. ಈ ಮೇರೆಗೆ ರೈತರು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾ ಘೋಷಿಸಿದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು. ತೊಗರಿ ಈ ಭಾಗದ ವಾಣಿಜ್ಯ ಬೆಳೆ ಆಗಿದ್ದಲ್ಲದೆ ಆರ್ಥಿಕತೆ ನಿರ್ಧರಿಸುವ ಬೆಳೆಯಾಗಿದೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ವೀರಣ್ಣ ಗಂಗಾಣಿ, ಸಿದ್ದಪ್ಪ ಕಲಶೆಟ್ಟಿ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು. ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ : ತೊಗರಿಗೆ ಬೆಂಬಲ ಬೆಲೆ ಘೋಷಣೆ ಆಗಬೇಕು. ಬೆಳೆ ವಿಮೆ ಕೂಡಲೇ ಬಿಡುಗಡೆಗೊಳಿಸಬೇಕು. ಒಂದು ವೇಳೆ ಜನವರಿ 26ರೊಳಗೆ ಈಡೇರಿಸದೇ ಇದ್ದರೆ ಮತ್ತೆ ಹೋರಾಟ ಕೈಗೊಳ್ಳಲಾಗುವುದು. 26 ರ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅದರಂತೆಯೇ ರಿಂಗ್ ರಸ್ತೆಗಳಲ್ಲಿ ರಸ್ತಾ ರೋಕೋ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಕರೆಪ್ಪ ಕರಗೊಂಡ, ಭೀಮಾಶಂಕರ ಮಾಡ್ಯಾಳ ಮತ್ತಿತರರು ತಿಳಿಸಿದ್ದಾರೆ.    

ವಾರ್ತಾ ಭಾರತಿ 23 Jan 2026 10:42 pm

ದಾವೋಸ್‌ನಲ್ಲಿ ರಾಜಕೀಯ–ಉದ್ಯಮ ನಾಯಕರನ್ನು ಭೇಟಿಯಾದ ಎಕ್ಸ್‌ಪರ್ಟೈಸ್ ಕಂಪೆನಿ ಮುಖ್ಯಸ್ಥರು

ದಾವೋಸ್ (ಸ್ವಿಟ್ಜರ್ಲೆಂಡ್): ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ವಾರ್ಷಿಕ ಸಭೆಯಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿಯ ಉನ್ನತ ಮಟ್ಟದ ನಿಯೋಗ ಭಾಗವಹಿಸಿ, ಭಾರತೀಯ ರಾಜಕೀಯ ನಾಯಕರು ಹಾಗೂ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿತು. ಜಾಗತಿಕ ಪಾಲುದಾರಿಕೆಗಳನ್ನು ವಿಸ್ತರಿಸುವುದು ಹಾಗೂ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ ಈ ಸಂವಾದಗಳು ನಡೆದವು. ಎಕ್ಸ್‌ಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಆಶಿಫ್ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಮುಹಮ್ಮದ್ ಅನ್ಶಿಫ್ ಅವರನ್ನು ಒಳಗೊಂಡ ನಿಯೋಗವು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕ ವಿಧಾನಸಭಾ ಸದಸ್ಯ ಎನ್.ಎ. ಹ್ಯಾರಿಸ್, ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀಧರ್ ಬಾಬು ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿತು. ಇದಲ್ಲದೆ, ಬುರ್ಜೀಲ್ ಹೋಲ್ಡಿಂಗ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಶಂಶೀರ್ ವಯಲಿಲ್, ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ರೆಡ್ಡಿ ಹಾಗೂ ಜನರಲ್ ಕ್ಯಾಟಲಿಸ್ಟ್‌ನ ಸಿಇಒ ಹೇಮಂತ್ ತನೇಜಾ ಸೇರಿದಂತೆ ಪ್ರಮುಖ ಉದ್ಯಮ ನಾಯಕರೊಂದಿಗೂ ಸಮಾಲೋಚನೆ ನಡೆಯಿತು. ಈ ಚರ್ಚೆಗಳು ಆರೋಗ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ಸಹಯೋಗ - ಸಾಧ್ಯತೆಗಳ ಮೇಲೆ ಕೇಂದ್ರೀಕೃತವಾಗಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಎಕ್ಸ್‌ಪರ್ಟೈಸ್ ಕಂಪೆನಿಯ ಸಿಇಒ ಮುಹಮ್ಮದ್ ಆಶಿಫ್, “WEF ದಾವೋಸ್ 2026ರಲ್ಲಿ ನಮ್ಮ ಭಾಗವಹಿಸುವಿಕೆಯು ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ನವೀನತೆಯನ್ನು ಉತ್ತೇಜಿಸುವ ಉಪ ಕ್ರಮಗಳತ್ತ ಕಂಪೆನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ರಾಜಕೀಯ ನಾಯಕರು ಮತ್ತು ಸರ್ಕಾರದ ಪ್ರತಿನಿಧಿಗಳ ಜೊತೆ ನಡೆದ ಸಂವಾದಗಳು ವಿಸ್ತರಣೆ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿವೆ” ಎಂದರು. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ಹಿರಿಯ ರಾಜಕೀಯ - ಸರಕಾರದ ಪ್ರತಿನಿಧಿಗಳು, ಜಾಗತಿಕ ಸಿಇಒಗಳು ಹಾಗೂ ವಿವಿಧ ದೇಶಗಳ ಉದ್ಯಮ ನಾಯಕರು ಭಾಗವಹಿಸುತ್ತಾರೆ. ಅಂತರರಾಷ್ಟ್ರೀಯ ಆರ್ಥಿಕ ಸವಾಲುಗಳು, ಹೂಡಿಕೆ ಅವಕಾಶಗಳು ಹಾಗೂ ಸುಸ್ಥಿರ ಬೆಳವಣಿಗೆ ಕುರಿತ ಚರ್ಚೆಗೆ ಇದು ಪ್ರಮುಖ ವೇದಿಕೆಯಾಗಿದೆ. ಈ ಸಭೆಯಲ್ಲಿ ನಡೆದ ಸಂವಾದಗಳು ಆದ್ಯತೆಯ ವಲಯಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿಯ ಹಾಜರಾತಿಯನ್ನು ಬಲಪಡಿಸುವತ್ತ ಗಮನಹರಿಸಿವೆ. ಕಂಪೆನಿಯ CSO ಮುಹಮ್ಮದ್ ಅನ್ಶಿಫ್ ಮಾತನಾಡಿ, “ಉದ್ಯಮ ವಲಯದ ನಾಯಕರು ಹಾಗೂ ನೀತಿ ನಿರೂಪಕರೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸಲು WEF ದಾವೋಸ್ ಬಲವಾದ ವೇದಿಕೆಯನ್ನು ಒದಗಿಸಿದೆ. ಅದರಲ್ಲಿ ಭಾಗವಹಿಸಿರುವುದು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಕಂಪೆನಿಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿವೆ” ಎಂದು ಹೇಳಿದರು. ಸೌದಿ ಅರೇಬಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಂಗಳೂರು ಮೂಲದ ಎಕ್ಸ್‌ಪರ್ಟೈಸ್ ಗ್ರೂಪ್ ಜಾಗತಿಕ ಕೈಗಾರಿಕಾ ಹಾಗೂ ಮೂಲಸೌಕರ್ಯ ಸೇವೆ ಪೂರೈಕೆದಾರ ಸಂಸ್ಥೆಯಾಗಿದ್ದು, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಹೊಂದಿದೆ.

ವಾರ್ತಾ ಭಾರತಿ 23 Jan 2026 10:34 pm

ಖ್ಯಾತ ಗಾಯಕಿ ಎಸ್.ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ

ಮೈಸೂರು: ಖ್ಯಾತ ಚಲನಚಿತ್ರ ಗಾಯಕಿ ಎಸ್.ಜಾನಕಿ ಅವರ ಪುತ್ರ ಮುರಳಿ ಕೃಷ್ಣ (55) ನಿಧನರಾಗಿದ್ದಾರೆ. ಅವರು ಮೈಸೂರಿನ ಬೋಗಾದಿಯಲ್ಲಿ ತನ್ನ ತಾಯಿ ಎಸ್.ಜಾನಕಿ ಅವರೊಂದಿಗೆ ವಾಸವಾಗಿದ್ದರು. ಅನಾರೋಗ್ಯಕ್ಕೀಡಾಗಿದ್ದ ಅವರು ಜ.21 ರ ಬುಧವಾರ ರಾತ್ರಿ ಅವರ ನಿವಾಸದಲ್ಲೇ ಅಸುನೀಗಿದ್ದಾರೆ. ಮೃತರು ತಾಯಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.22 ರ ಗುರುವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 23 Jan 2026 10:34 pm

Adani Green Energy: 9M FY26ರಲ್ಲಿ ಅದಾನಿ ಗ್ರೀನ್ ಎನರ್ಜಿ ವಿದ್ಯುತ್ ಮಾರಾಟದಲ್ಲಿ 37% ವಾರ್ಷಿಕ ಬೆಳವಣಿಗೆ ದಾಖಲಿಸಿದೆ

ಅಹಮದಾಬಾದ್: ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ (RE) ಕಂಪನಿಯಾಗಿದೆ. ಡಿಸೆಂಬರ್ 31, 2025ಕ್ಕೆ ಕೊನೆಗೊಳ್ಳುವ ಅವಧಿಗೆ ಆರ್ಥಿಕ ಪ್ರಗತಿ ವರದಿಯನ್ನು ಪ್ರಕಟಿಸಿದೆ. ಇದು ಬಲವಾದ ಬೆಳವಣಿಗೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಹಣಕಾಸು ಕಾರ್ಯಕ್ಷಮತೆ - Q3 & 9M FY26: ಅದಾನಿ ಗ್ರೀನ್ ಎನರ್ಜಿ

ಒನ್ ಇ೦ಡಿಯ 23 Jan 2026 10:30 pm

ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ವತಿಯಿಂದ ನಶೆ ಮುಕ್ತ ಸಮಾಜ ಅಭಿಯಾನ

ಸುರತ್ಕಲ್: ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ಇದರ ಆಶ್ರಯದಲ್ಲಿ ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನವು ಶುಕ್ರವಾರ ರಾತ್ರಿ ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೃಷ್ಣಾಪುರ ಮುಸ್ಲಿಂ ಜಮಾಅತ್ ನ‌ ಖಾಝಿ ಅಲ್‌ ಹಾಜ್ ಇ. ಕೆ. ಇಬ್ರಾಹಿಂ ಮದನಿ ಅವರು ಉದ್ಘಾಟಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾದ ಸುರತ್ಕಲ್ ಝೋನ್ ಅಧ್ಯಕ್ಷ ಎ. ಪಿ. ಅಬ್ದುಲ್ಲ ಮದನಿ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ. ಕಾಟಿಪಳ್ಳ ರೇಂಜ್ ಅಧ್ಯಕ್ಷ ಅಸ್ಸಯ್ಯದ್ ಝೈನುಲ್ ಆಬಿದೀನ್ ಅಲ್‌ಹಾದೀ ತಂಙಳ್ ದುಆ ನೆರವೇರಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋಮ್‌ ಪ್ರಧಾ‌ನ‌ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಅವರು ಸ್ವಾಗತ ಭಾಷಣ ಗೈದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಅಲವಿ ಸಖಾಫಿ ಕೊಳತ್ತೂರು ಅವರು “ಆಹ್ವುಸ್ಸುನ್ನ ವಲ್ ಜಮಾಅ:” ವಿಷಯದ ಕುರಿತು ಮುಖ್ಯ ಪ್ರಭಾಷಣ ಗೈದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಫಿಲ್ ಸುಫ್ಯಾನ್ ಸಖಾಫಿ, ಮೂಡಬಿದ್ರೆ ಅವರು “ಅಮಲು ಪದಾರ್ಥಗಳ ದುಷ್ಪರಿಣಾಮಗಳು” ಕುರಿತು ಉಪನ್ಯಾಸ ನೀಡಿದರು. ಮಾಜಿ ಶಾಸಕ ಮೊಯ್ದಿನ್‌ ಬಾವ, ಮುಹಮ್ಮದ್ ಆಲಿ ರೂಮಿ, ಕೃಷ್ಣಾಪುರ ಬದ್ರಿಯಾ ಜುಮ್ ಮಸ್ಜಿದ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಝಾಕಿರ್ ಹುಸೈನ್, ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ರಹ್ಮತುಲ್ಲಾ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಮಂಗಳ ಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಎಸ್.ಎಮ.ಎ. ಕಾಟಿಪಳ್ಳ ರೀಜನಲ್ ಅಧ್ಯಕ್ಷ ಸಿ. ಅಬ್ದುಲ್ ಹಮೀದ್ ಮಂಗಳಪೇಟೆ, ಕೃಷ್ಣಾಪುರ ಈದ್ಗಾ ಜುಮಾ‌ ಮಸೀದಿಯ ಅಧ್ಯಕ್ಷ ಅಬ್ದುಲ್ ಹಕ್, ಕೃಷ್ಣಾಪುರ ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಟಿ. ಎಂ., ಸುರತ್ಕಲ್ ಝೋನ್ ಸುನ್ನಿ ಜಂಇಯ್ಯತುಲ್ ಉಲಮಾದ ಕಾರ್ಯಾಧ್ಯಕ್ಷ ಕೆ. ಕೆ. ಮುಹಹಿಯುದ್ದೀನ್ ಕಾಮಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಆತ್ ನ ಸುರತ್ಕಲ್ ಝೋನ್ ಅಧ್ಯಕ್ಷ ಲುಕ್ಮಾನಿಯಾ ಇಸ್ಮಾಈಲ್ ಮುಸ್ಲಿಯಾರ್, ಎಸ್.ವಿ. ಎಸ್. ಸುರತ್ಕಲ್ ಝೋನ್‌ ಅಧ್ಯಕ್ಷ ಅಬ್ದುನ್ನಾಸಿರ್ ಮದನಿ ಸೂರಿಂಜೆ, ಎಸ್.ಜೆ.ಎಂ. ಸುರತ್ಕಲ್ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಮದನಿ, ಎಸ್.ಜೆ.ಎಂ.‌ಕಿನ್ನಿಗೋಳಿ ರೇಂಜ್ ಅಧ್ಯಕ್ಷ ಇಬ್ರಾಹೀಂ ಫಾಳಲಿ, ಎಸ್.ಎಂ.ಎ. ಸುರತ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್, ಎಸ್.ಎಂ.ಎ. ಸುರತ್ಕಲ್ ರೀಜನಲ್ ಅಧ್ಯಕ್ಷ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಎಸ್.ಎಂ.ಎ. ಕಿನ್ನಿಗೋಳಿ ರೀಜನಲ್ ಅಧ್ಯಕ್ಷ ಅಬ್ದುರಝಾಕ್ ಮುಕ್ಕ, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಅಧ್ಯಕ್ಷ ಅಬ್ದುರಶೀದ್ ಸಅದಿ ಅಂಗರಗುಂಡಿ, ಕೃಷ್ಣಾಪುರ ಕೇಂದ್ರ ಅಲ್ ಮದ್ರಸತುಲ್ ಬದ್ರಿಯಾದ ಅಧ್ಯಕ್ಷ ಅಬ್ದುಲ್ ಹಕೀಂ ಫಾಲ್ಕನ್, ಕೃಷ್ಣಾಪುರ ತ್ವಯಿಬಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ತಾಜ್ ಫಿಶ್, ಮಸ್ಜಿದುಲ್ ಹುದಾ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ದುಲ್ ಖಾದಿರ್, ಮೈಂದಗುರಿ ನೂರುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಹನೀಫ್, ಮುಕ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ. ಎಂ. ಹಸನ್, ಕೋಟೆ ಆಯಿಷಾ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ರಝಾಕ್, ಬದ್ರಿಯಾ ನಗರ ಮಸ್ಜಿದುನ್ನೂರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್, ಕುಳಾಯಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಮ್ಮಿಯಾಝ್ ಅಹ್ಮದ್, ಅನ್ಸಾರಿಯಾ ಜುಮಾ‌ ಮಸೀದಿಯ ಅಧ್ಯಕ್ಷ ಝುಬೈರ್, ಜನತಾ ಕಾಲನಿ ಶಾಝುಲಿ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅಶ್ರಫ್, ಗುತ್ತಕಾಡು ಖಿಲ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಟಿ.ಎ. ಹನೀಫ್, ಪುನರೂರು ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ, ಕಾನ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್, ಸುರತ್ಕಲ್ ಮುಹಿಯುದ್ದೀನ್ ಕೇಂದ್ರ ಜುಮಾ‌ ಮಸೀದಿಯ ಅಧ್ಯಕ್ಷ ಮುಸ್ತಫಾ, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಸೂರಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ಎ. ಜಲೀಲ್, 62ನೇ ತೋಕೂರು ಜುಮಾ‌ ಮಸೀದಿಯ ಅಧ್ಯಕ್ಷ ಎಂ. ಮಯ್ಯದ್ದಿ, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ನೂರಾನಿಯ, ಎಸ್.ಕೋಡಿ ಇಖ್ಲಾಸ್ ಜುಮಾ ಮಸೀದಿಯ ಅಧ್ಯಕ್ಷ ರಿಝ್ವಾನ್, ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಪ್ಲವರ್, ಸಸಿಹಿತ್ಲು ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, 10ನೇ ತೋಕೂರು ಜಾಮಿಯಾ ಮೊಹಲ್ಲಾ ನೂರುಲ್ ಹುದಾ ಅರೇಬಿಕ್ ಮದ್ರಸದ ಅಧ್ಯಕ್ಷ ಟಿ. ಎಂ. ಹಸನಬ್ಬ, ಚೇಳಾಯರು ಖುವ್ವತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮುಹಮ್ಮದ್, ಸ್ವಾತ ಸಮಿತಿಯ ಚೆಯರ್ ಮೆನ್ ಎಂ.ಎಸ್. ಶರೀಫ್ ಕೃಷ್ಣಾಪುರ, ಚೀಫ್ ಕನ್ವೀನರ್ ಉಮರುಲ್ ಫಾರೂಖ್ ಸಖಾಫಿ, ಫೈನಾಲ್ಸ್ ಕನ್ವೀನರ್ ಸ್ವಾದಿಕ್ ಈದ್ಗಾ ಮೊದಲಾದವರು ಉಪಸ್ಥಿತರಿದ್ದರು. ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನದ ಪ್ರಯುಕ್ತ ಸಂಜೆಯ ವೇಳೆ 30 ಮದ್ರಸಗಳ ಮಕ್ಕಳಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಕಾಲ್ನಡಿಗೆ ಜಾಥಾ ನಡೆಯಿತು. ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಬೃಹತ್ ಪರದೆಯ ಮೂಲಕ ವಿವರಣೆ ಹಾಗೂ ಪ್ರತಿಜ್ಞಾ ಬೋಧನೆ ನಡೆಯಿತು.

ವಾರ್ತಾ ಭಾರತಿ 23 Jan 2026 10:22 pm

ಕಲಬುರಗಿ | 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ ಅಧಿಕಾರಿ

ಕಲಬುರಗಿ: ಹೊಲದ ಪಹಣಿಯಲ್ಲಿ ತಪ್ಪಾಗಿ ದಾಖಲಾಗಿದ್ದ ಹೆಸರನ್ನು ಸರಿಪಡಿಸಿಕೊಡುವುದಾಗಿ ಹೇಳಿ 10,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಜೇವರ್ಗಿ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಫ್‌ಡಿಎ ಸತೀಶ್ ರಾಠೋಡ ಬಂಧಿತ ಆರೋಪಿಯಾಗಿದ್ದಾರೆ. ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಶಿವಕುಮಾರ ಬಸಪ್ಪ ಹೆಗಡೆ ಅವರ ಮಾವ ಪಾಂಡುರಂಗ ಅವರ ಹೆಸರಿನಲ್ಲಿರುವ ಹಂಚಿನಾಳ ಗ್ರಾಮದ ಕೃಷಿ ಭೂಮಿಯ ಪಹಣಿಯಲ್ಲಿ ತಪ್ಪಾಗಿ ದಾಖಲಾಗಿದ್ದ ಹೆಸರನ್ನು ತಿದ್ದುಪಡಿ ಮಾಡಿ, ತಹಶೀಲ್ದಾರ್ ಸಹಿ ಪಡೆದು ಸಹಾಯಕ ಆಯುಕ್ತರಿಗೆ ಫೈಲ್ ಕಳುಹಿಸುವುದಾಗಿ ಹೇಳಿ ಆರೋಪಿಯು 10 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ಅವರ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪೂರ್ಣಗೊಂಡ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಯುಕ್ತ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 23 Jan 2026 10:19 pm

ನಿಟ್ಟೆ: 'ಸಂವಹನ ಮತ್ತು ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್ಸ್' ಕಾರ್ಯಾಗಾರ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ಚಾಪ್ಟರ್ ಹಾಗೂ ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ ವಿಭಾಗದ ಸಹಯೋಗ ದೊಂದಿಗೆ ಸಂವಹನ ಮತ್ತು ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು - 5ಜಿಯಿಂದ 6ಜಿ ಕಡೆಗೆ ಹಾದಿ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು  ಡಿ.ಆರ್.ಡಿ.ಒ ದ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಲ್ಆರ್ಡಿಇ) 'ಜಿ' ವಿಜ್ಞಾನಿ ಮತ್ತು ಬೆಂಗಳೂರಿನ ಐಇಇಇ ಎಪಿ/ಎಂಟಿಟಿ-ಎಸ್ ಜಂಟಿ ಘಟಕದ ಅಧ್ಯಕ್ಷ ಡಾ.ಅಶುತೋಷ್ ಕೇದಾರ್ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವೈರ್ ಲೆಸ್ ಸಂವಹನ ತಂತ್ರಜ್ಞಾನಗಳಲ್ಲಿನ ತ್ವರಿತ ಪ್ರಗತಿಯ ಬಗ್ಗೆ ಮಾತನಾಡಿದರು ಮತ್ತು ರಾಡಾರ್ ಮತ್ತು ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನೆಯಲ್ಲಿ ತಮ್ಮ ವ್ಯಾಪಕ ಅನುಭವದ ಒಳನೋಟಗಳನ್ನು ಹಂಚಿಕೊಂಡರು. ಜಾಗತಿಕ ತಾಂತ್ರಿಕ ಬೆಳವಣಿಗೆಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಸಂಶೋಧನೆ, ನಾವೀನ್ಯತೆ ಮತ್ತು ವೃತ್ತಿಪರ ಸಂಸ್ಥೆಗಳಾದ ಐಇಇಇಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು, ಸುಧಾರಿತ ಸಂವಹನ ತಂತ್ರಜ್ಞಾನಗಳ ಮಹತ್ವ ಮತ್ತು ಶೈಕ್ಷಣಿಕ ಸಂಸ್ಥೆಗಳು 5ಜಿ ವಿಕಾಸ ಮತ್ತು 6ಜಿ ಕಡೆಗೆ ಮಾರ್ಗಸೂಚಿಯಂತಹ ಉದಯೋನ್ಮುಖ ಪ್ರವೃತ್ತಿಗಳೊಂದಿಗೆ ಬೋಧನೆ ಮತ್ತು ಸಂಶೋಧನೆಯನ್ನು ಹೊಂದಿಸುವ ಅಗತ್ಯವನ್ನು ವಿವರಿಸಿದರು. ಭವಿಷ್ಯದ ತಾಂತ್ರಿಕ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಉದ್ಯಮ-ಶೈಕ್ಷಣಿಕ ಸಹಯೋಗದ ಪಾತ್ರವನ್ನು ಅವರು ತಿಳಿಸಿದರು. ವೇದಿಕೆಯಲ್ಲಿ ಗೌರವ ಅತಿಥಿಯಾಗಿ ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಮಹೇಶ್ ಎ, ಕಾಲೇಜಿನ ಐಇಇಇ ಕೌನ್ಸಿಲರ್ ಡಾ. ವಾಸುದೇವ, ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ವಿದ್ಯಾರ್ಥಿ ನಾಯಕ ಅದ್ವೈತ್ ಸ್ವಾಗತಿಸಿದರು. ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ಅಧ್ಯಾಪಕ ಸಲಹೆಗಾರ ಡಾ.ಪರ್ವೀಜ್ ಶರೀಫ್ ಬಿ.ಜಿ ಕಾರ್ಯಾಗಾರದ ಬಗೆಗೆ ವಿವರಿಸಿದರು. ವಿದ್ಯಾರ್ಥಿ ಉಪನಾಯಕ ಫರಾನ್ ವಂದಿಸಿದರು. ವಿದ್ಯಾರ್ಥಿನಿ ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಕಾಲ, ಕಾರ್ಯಾಗಾರವು ಪ್ರಖ್ಯಾತ ಶಿಕ್ಷಣ ತಜ್ಞರು ಮತ್ತು ಉದ್ಯಮ ತಜ್ಞರ ಆಕರ್ಷಕ ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಶುತೋಷ್ ಕೇದಾರ್ ಸೇರಿದ್ದಾರೆ; ಡಾ. ಸುಕೋಮಲ್ ಡೇ, ಸಹಪ್ರಾಧ್ಯಾಪಕರು, ಐಐಟಿ ಪಾಲಕ್ಕಾಡ್ ಮತ್ತು ಅಧ್ಯಕ್ಷರು, ಐಇಇಇ ಎಪಿ-ಎಸ್ ಚಾಪ್ಟರ್, ಕೇರಳ ವಿಭಾಗ; ಡಾ. ಗೌತಮ್ ಸಿಂಹ, ಸಹಪ್ರಾಧ್ಯಾಪಕರು, ಎಂಐಟಿ ಮಣಿಪಾಲ; ಡಾ.ಜಿ.ಶ್ರೀಕಾಂತ್ ರೆಡ್ಡಿ, ಸಹಪ್ರಾಧ್ಯಾಪಕರು, ಐಐಟಿ ಪಾಲಕ್ಕಾಡ್; ಡಾ.ಮಹೇಶ್ ಎ, ಸಹಪ್ರಾಧ್ಯಾಪಕರು, ಆರ್.ವಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು; ಗಿರೀಶ್ ಬಾಳಿಗ, ಜನರಲ್ ಮ್ಯಾನೇಜರ್ - ಇಂಡಸ್ಟ್ರಿ ಮಾರ್ಕೆಟಿಂಗ್, ಕೀಸೈಟ್ ಟೆಕ್ನಾಲಜೀಸ್, ಬೆಂಗಳೂರು; ಡಾ.ಪ್ರವೀಣ್ ಕುಮಾರ್, ಸಹಾಯಕ ಪ್ರಾಧ್ಯಾಪಕರು, ಎಂಐಟಿ ಮಣಿಪಾಲ್; ಮತ್ತು ಡಾ. ಪರ್ವೀಜ್ ಶರೀಫ್ ಬಿ.ಜಿ, ಬೋಧಕ ಸಲಹೆಗಾರ, ಎಂಟಿಟಿಎಸ್ ಎಸ್ಬಿಸಿ, ನಿಟ್ಟೆ ಭಾಗವಹಿಸುವರು.

ವಾರ್ತಾ ಭಾರತಿ 23 Jan 2026 10:14 pm

ಎಸ್ಸೆಸ್ಸೆಲ್ಸಿ: ಅತಿ ಹೆಚ್ಚು ಅಂಕ ಪಡೆದವಧಿರಿಧಿಗೆ ಲ್ಯಾಪ್‌ಟಾಪ್‌ ಬದಲು ಹಣ

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬದಲಾಗಿ ಹಣ ನೀಡಲು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಟ್ಟು 3.25 ಕೋಟಿ ರೂ.ಗಳನ್ನು 758 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ನಂತೆ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.

ವಿಜಯ ಕರ್ನಾಟಕ 23 Jan 2026 10:11 pm

ಟಿವಿಯಲ್ಲಿ ಕೋಮು ಉದ್ವಿಗ್ನತೆ ಉತ್ತೇಜಿಸುವ ಕಾರ್ಯಕ್ರಮಗಳ ಪ್ರಸಾರ; NBDSA ಕೈಗೊಂಡ ಕ್ರಮಗಳೇನು?

ಕಳೆದ ಮೂರು ವರ್ಷಗಳಲ್ಲಿ ಖಾಸಗಿ ದೂರದರ್ಶನ ಮತ್ತು ಡಿಜಿಟಲ್ ಸುದ್ದಿ ಪ್ರಸಾರಕರಿಗೆ ಭಾರತದ ಸ್ವಯಂ-ನಿಯಂತ್ರಣ ಪ್ರಾಧಿಕಾರ ನೀಡಿದ ಆದೇಶಗಳಲ್ಲಿ ಸುಮಾರು ಶೇ.60ರಷ್ಟು ಕೋಮು ಸಾಮರಸ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ್ದಾಗಿ ಅಧಿಕೃತ ದಾಖಲೆಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ದೇಶಾದ್ಯಂತ ಖಾಸಗಿ ಟಿವಿ ಮತ್ತು ಡಿಜಿಟಲ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್‌ (NBDA) ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಯಾದ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ಈ ಆದೇಶಗಳನ್ನು ಹೊರಡಿಸಿದೆ. ಜನವರಿ 1, 2023 ರಿಂದ ಡಿಸೆಂಬರ್ 31, 2025ರ ನಡುವೆ NBDSA ಒಟ್ಟು 54 ಆದೇಶಗಳನ್ನು ಹೊರಡಿಸಿದೆ. ಇವುಗಳಲ್ಲಿ ನೀತಿ ಸಂಹಿತೆ ಮತ್ತು ಪ್ರಸಾರ ಮಾರ್ಗಸೂಚಿಗಳ ಉಲ್ಲಂಘನೆಗಾಗಿ 43 ಪ್ರಕರಣಗಳಲ್ಲಿ ಪ್ರಸಾರಕರಿಗೆ ದಂಡ ವಿಧಿಸಲಾಗಿದೆ. ಅವುಗಳಲ್ಲಿ 32 ಪ್ರಕರಣಗಳು ನಿರ್ದಿಷ್ಟವಾಗಿ ಸುದ್ದಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸ್ಟೀರಿಯೋಟೈಪ್‌ಗಳು ಹಾಗೂ ಪ್ರಚೋದನಕಾರಿ ಪರಿಭಾಷೆಯ ಬಳಕೆ ಸೇರಿದಂತೆ ಕೋಮು ಸಾಮರಸ್ಯ ಉಲ್ಲಂಘನೆಗೆ ಸಂಬಂಧಿಸಿದ್ದಾಗಿವೆ. ಭೂ ಅತಿಕ್ರಮಣ, ಮಹಿಳೆಯರ ಸುರಕ್ಷತೆ, ಆಹಾರ ನೈರ್ಮಲ್ಯ ಮತ್ತು ಜನಸಂಖ್ಯಾ ಬದಲಾವಣೆಯಂತಹ ವಿಷಯಗಳನ್ನು ಹೈಲೈಟ್ ಮಾಡಲು ಪೂರ್ವಪ್ರತ್ಯಯವಾಗಿ “ಜಿಹಾದ್” ಪದವನ್ನು ಬಳಸಿರುವುದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಅಂತರಧರ್ಮೀಯ ಸಂಬಂಧಗಳು, ಭೂ ವಿವಾದಗಳು, ಆಹಾರ ನೈರ್ಮಲ್ಯ ಮತ್ತು ಅಪರಾಧದಂತಹ ವಿಷಯಗಳನ್ನು ತೋರಿಸಲು “ಲವ್ ಜಿಹಾದ್”, “ಲ್ಯಾಂಡ್ ಜಿಹಾದ್” ಮತ್ತು “ಥೂಕ್ ಜಿಹಾದ್” ಮುಂತಾದ ಪದಗಳನ್ನು ಪದೇಪದೇ ಬಳಸಿರುವುದನ್ನು ದಾಖಲೆಗಳು ಉಲ್ಲೇಖಿಸುತ್ತವೆ. ಅಲ್ಪಸಂಖ್ಯಾತ ಸಮುದಾಯಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಆಯ್ದ ದತ್ತಾಂಶ ಅಥವಾ ಪರಿಶೀಲಿಸದ ಹಕ್ಕುಗಳನ್ನು ಬಳಸಲಾಗಿದೆ ಎಂದು ಹಲವು ಪ್ರಕರಣಗಳಲ್ಲಿ ಕಂಡುಬಂದಿದ್ದು, ಇದು ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಒಟ್ಟು 37 ಪ್ರಕರಣಗಳಲ್ಲಿ, ಪ್ರಸಾರಕರಿಗೆ ತಮ್ಮ ವೇದಿಕೆಗಳಿಂದ ಆಕ್ಷೇಪಾರ್ಹ ವಿಷಯವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ. ನಿಯಮಗಳ ಅಡಿಯಲ್ಲಿ ಹಣಕಾಸಿನ ದಂಡ ವಿಧಿಸಲು ಅವಕಾಶವಿದ್ದರೂ, ಕೇವಲ ಆರು ಸಂದರ್ಭಗಳಲ್ಲಿ ಮಾತ್ರ ದಂಡ ವಿಧಿಸಲಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು 3.2 ಲಕ್ಷ ರೂ.ನಷ್ಟು ದಂಡ ಸಂಗ್ರಹಿಸಲಾಗಿದೆ. 2025ರಲ್ಲಿ ಹೊರಡಿಸಲಾದ 19 ಆದೇಶಗಳಲ್ಲಿ ಒಂದಲ್ಲಿಯೂ ದಂಡ ವಿಧಿಸಲಾಗಿಲ್ಲ. ಕುಂದುಕೊರತೆ ಪರಿಹಾರ ಪ್ರಕ್ರಿಯೆಯಲ್ಲಿನ ಕಾರ್ಯವಿಧಾನ ವಿಳಂಬಗಳನ್ನೂ ವಿಶ್ಲೇಷಣೆ ಎತ್ತಿ ತೋರಿಸಿದೆ. ದೂರು ಸಲ್ಲಿಸಿದ ದಿನದಿಂದ ಅಂತಿಮ ಆದೇಶ ಹೊರಬರುವವರೆಗೆ ಸರಾಸರಿ 11ರಿಂದ 12 ತಿಂಗಳುಗಳ ಸಮಯ ತೆಗೆದುಕೊಂಡಿದ್ದು, ಈ ಅವಧಿಯಲ್ಲಿ ವಿವಾದಿತ ವಿಷಯ ಸಾರ್ವಜನಿಕ ವಲಯದಲ್ಲೇ ಉಳಿದಿತ್ತು. ಟೈಮ್ಸ್ ನೌ ನವಭಾರತ್ ಅತಿ ಹೆಚ್ಚು ಪ್ರತಿಕೂಲ ಆದೇಶಗಳನ್ನು ದಾಖಲಿಸಿದ್ದು, ವಿಷಯ ತೆಗೆದುಹಾಕಲು 16 ನಿರ್ದೇಶನಗಳನ್ನು ಪಡೆದಿದೆ. ನಂತರ ನ್ಯೂಸ್ 18 ಇಂಡಿಯಾ ಹಾಗೂ ಝೀ ನ್ಯೂಸ್ ಸ್ಥಾನ ಪಡೆದಿವೆ. ಪರಿಶೀಲಿಸದ ಹಕ್ಕುಗಳ ಆಧಾರದ ಮೇಲೆ ಅಂತರ್ಧರ್ಮೀಯ ವಿವಾಹಗಳನ್ನು “ಲವ್ ಜಿಹಾದ್” ಎಂದು ಸಾಮಾನ್ಯೀಕರಿಸಿದ ಪ್ರಕರಣದಲ್ಲಿ ಟೈಮ್ಸ್ ನೌ ನವಭಾರತ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೋಮು ಸೌಹಾರ್ದತೆಗೆ ಸಂಬಂಧಿಸಿದ 39 ದೂರುಗಳಲ್ಲಿ 32 ಸೇರಿ, ಒಟ್ಟು 54 ದೂರುಗಳಲ್ಲಿ ನೀತಿ ಸಂಹಿತೆ ಮತ್ತು ಪ್ರಸಾರ ಮಾರ್ಗಸೂಚಿಗಳ ಉಲ್ಲಂಘನೆಗಾಗಿ NBDSA ಕ್ರಮ ಕೈಗೊಂಡಿದೆ. ಉಳಿದ 11 ಆದೇಶಗಳಲ್ಲಿ ದಂಡ ವಿಧಿಸಲಾಗಿಲ್ಲ; ಕಾರಣಗಳಲ್ಲಿ ಉಲ್ಲಂಘನೆ ಕಂಡುಬರದಿರುವುದು, ಉಲ್ಲಂಘನೆ ಗಂಭೀರವಾಗಿರದಿರುವುದು, ಈಗಾಗಲೇ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿರುವುದು ಅಥವಾ ವಿಷಯ ನ್ಯಾಯಾಲಯದ ಮುಂದೆ ಬಾಕಿ ಇರುವುದು ಸೇರಿವೆ. 54 ಪ್ರಕರಣಗಳಲ್ಲಿ 37 ಪ್ರಕರಣಗಳಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವಂತೆ ನಿರ್ದೇಶಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಆರು ಸಂದರ್ಭಗಳಲ್ಲಿ ಮಾತ್ರ ಆರ್ಥಿಕ ದಂಡ ವಿಧಿಸಲಾಗಿದ್ದು, ಒಟ್ಟು 3.2 ಲಕ್ಷ ದಂಡ ಸಂಗ್ರಹವಾಗಿದೆ. 2025ರಲ್ಲಿ ಹೊರಡಿಸಿದ 19 ಆದೇಶಗಳಲ್ಲಿ ಒಂದಲ್ಲಿಯೂ ದಂಡ ವಿಧಿಸಲಾಗಿಲ್ಲ. ಕೋಮು ಸೌಹಾರ್ದತೆಗೆ ಸಂಬಂಧಿಸಿದ ಪ್ರಕರಣಗಳು ಜನಸಂಖ್ಯಾ ಸ್ಫೋಟ ಅಥವಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಜನಸಂಖ್ಯಾ ಬದಲಾವಣೆಯ ನಿರೂಪಣೆಯನ್ನು ಪ್ರಚೋದಿಸುವ ಟಿವಿ ಸುದ್ದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ 9 ಪ್ರಕರಣಗಳು. ಅವುಗಳಲ್ಲಿ ಎರಡು ಭೂ ಅತಿಕ್ರಮಣ ಸಮಸ್ಯೆಗೆ ಸಂಬಂಧಿಸಿ “ಭೂ ಜಿಹಾದ್” ಎಂಬ ಪದವನ್ನು ಬಳಸಿವೆ. ಕನಿಷ್ಠ 9 ಪ್ರಕರಣಗಳು “ಲವ್ ಜಿಹಾದ್” ನಿರೂಪಣೆಯ ಮೇಲೆ ಕೇಂದ್ರೀಕೃತವಾಗಿದ್ದು, ಅಂತರಧರ್ಮೀಯ ಸಂಬಂಧಗಳು ಅಥವಾ ಮಹಿಳೆಯರ ಮೇಲಿನ ಅಪರಾಧಗಳನ್ನು ಪಿತೂರಿಗಳಾಗಿ ಚಿತ್ರಿಸಲಾಗಿದೆ. ಆಹಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ “ಥೂಕ್ (ಉಗುಳು) ಜಿಹಾದ್” ಪದ ಬಳಕೆಯಾಗಿದೆ. ಇನ್ನು ನಾಲ್ಕು ಪ್ರಕರಣಗಳಲ್ಲಿ ಅಂತರರಾಷ್ಟ್ರೀಯ ಘಟನೆಗಳಾದ ಇಸ್ರೇಲ್–ಹಮಾಸ್ ಸಂಘರ್ಷವನ್ನು ಉಲ್ಲೇಖಿಸಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ಸ್ಥಳೀಯ ನಿರೂಪಣೆಗಳನ್ನು ರೂಪಿಸಲಾಗಿದೆ. ಚುನಾವಣಾ ಆಯೋಗವು ಒಂದೇ ಒಂದು ಸಂದರ್ಭದಲ್ಲಿ, ನ್ಯೂಸ್ 18 ಇಂಡಿಯಾದ ರಾಮ ನವಮಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿಪಿಐ ನೀಡಿದ ದೂರನ್ನು ರವಾನಿಸಿದೆ. ದಿಲ್ಲಿ ವಿಧಾನಸಭಾ ಚುನಾವಣೆಯ (2025) ಸಂದರ್ಭದಲ್ಲಿ ಈ ಕಾರ್ಯಕ್ರಮವು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. “ರಾಮ್‌ನಿಂದ ಬಿಜೆಪಿಯ ಮತ ಹಂಚಿಕೆಯಲ್ಲಿ ಹೆಚ್ಚಳ ಮತ್ತು ಕಾಂಗ್ರೆಸ್‌ನ ಕುಸಿತ” ಎಂಬ ಪರಸ್ಪರ ಸಂಬಂಧವನ್ನು ನಿರೂಪಕರು ವಿವರಿಸಿದ ರೀತಿಯಲ್ಲಿ NBDSA ದೋಷ ಕಂಡಿದೆ. ವಿರೋಧ ಪಕ್ಷಗಳು ಮತ್ತು ಕ್ವೀರ್ ಸಮುದಾಯದ ವಿರುದ್ಧದ ರಾಜಕೀಯ ಪಕ್ಷಪಾತ, ಜಾತಿ ಹಾಗೂ ಬುಡಕಟ್ಟು ಗುರುತಿಗೆ ಸಂಬಂಧಿಸಿದ ಅವಮಾನಕರ ಭಾಷೆ, ದಾರಿತಪ್ಪಿಸುವ ಮತ್ತು ಮಾನಹಾನಿಕರ ವಿಷಯ ಪ್ರಸಾರಕ್ಕೆ ಸಂಬಂಧಿಸಿದ ಹಲವು ದೂರುಗಳನ್ನೂ NBDSA ನಿರ್ಣಯಿಸಿದೆ. ಟೈಮ್ಸ್ ನೌ ನವಭಾರತ್ 16 ಆದೇಶಗಳೊಂದಿಗೆ ಕಾರ್ಯಕ್ರಮ ಡಿಲೀಟ್ ಮಾಡುವುದರಲ್ಲಿ ಅಗ್ರಸ್ಥಾನದಲ್ಲಿದ್ದು, ಅದರಲ್ಲಿ ಒಂದು ದಂಡವೂ ಸೇರಿದೆ. ನ್ಯೂಸ್ 18 ಇಂಡಿಯಾ ಎಂಟು ಆದೇಶಗಳೊಂದಿಗೆ (ನಾಲ್ಕು ದಂಡಗಳೊಂದಿಗೆ) ನಂತರದ ಸ್ಥಾನದಲ್ಲಿದ್ದು, ಜೀ ನ್ಯೂಸ್ ಐದು ಆದೇಶಗಳೊಂದಿಗೆ ಕಾರ್ಯಕ್ರಮಗಳನ್ನು ತೆಗೆದುಹಾಕಿದೆ. ಜನಸಂಖ್ಯಾ ಬೆಳವಣಿಗೆ ಕಾನೂನುಬದ್ಧ ಕಾಳಜಿಯ ವಿಷಯವಾದರೂ, ಅದನ್ನು ವಸ್ತುನಿಷ್ಠವಾಗಿ ನಿರ್ವಹಿಸಬೇಕು ಎಂದು ಪ್ರಾಧಿಕಾರ ತನ್ನ ಆದೇಶಗಳಲ್ಲಿ ಹೇಳಿದೆ. ಸ್ಪಷ್ಟ ಪುರಾವೆಗಳಿಲ್ಲದೆ ನಿರ್ದಿಷ್ಟ ಸಮುದಾಯವನ್ನು ದೂಷಿಸಲು ಆಯ್ದ ದತ್ತಾಂಶವನ್ನು ಬಳಸುವುದನ್ನು ಅದು ಖಂಡಿಸಿದ್ದು, ಅಂತಹ ಪ್ರಕರಣಗಳನ್ನು “ಲವ್ ಜಿಹಾದ್” ಎಂದು ಹೇಳುವುದು ಅಥವಾ ಇಡೀ ಸಮುದಾಯವನ್ನು ಗುರಿಯಾಗಿಸುವುದು ಅನುಚಿತ ಎಂದು ಸ್ಪಷ್ಟಪಡಿಸಿದೆ. NBDSA ಆದೇಶಗಳನ್ನು ಪಾಲಿಸಿದ್ದಾರೆಯೇ ಮತ್ತು ಯಾವ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂಬ ಪ್ರಶ್ನೆಗೆ, ನ್ಯೂಸ್ 18 ನೆಟ್‌ವರ್ಕ್ ವಕ್ತಾರರು NBDSA ಹೊರಡಿಸಿದ ಆದೇಶಗಳನ್ನು ಪಾಲಿಸಲಾಗಿದೆ ಎಂದು ಹೇಳಿದ್ದಾರೆ. ಟೈಮ್ಸ್ ನೌ ನವಭಾರತ್ ಮತ್ತು ಜೀ ನ್ಯೂಸ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪ್ರಾಧಿಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಅಧ್ಯಕ್ಷತೆಯಲ್ಲಿರುವ ಈ ಪ್ರಾಧಿಕಾರದಲ್ಲಿ ಎಂಟು ಇತರ ಸದಸ್ಯರಿದ್ದು, ಅವರಲ್ಲಿ ನಾಲ್ವರು ನಿವೃತ್ತ ಐಎಎಸ್ ಅಥವಾ ಐಎಫ್‌ಎಸ್ ಅಧಿಕಾರಿಗಳಾದ ಸ್ವತಂತ್ರ ಸದಸ್ಯರು ಮತ್ತು ನಾಲ್ವರು ಟಿವಿ ಸುದ್ದಿ ವಾಹಿನಿಗಳ “ಸಂಪಾದಕ ಸದಸ್ಯರು” ಸೇರಿದ್ದಾರೆ. ಪ್ರಾಧಿಕಾರ ಕನಿಷ್ಠ ಎರಡು ತಿಂಗಳಿಗೊಮ್ಮೆ ಸಭೆ ಸೇರುತ್ತದೆ ಮತ್ತು ಎಲ್ಲ ನಿರ್ಧಾರಗಳನ್ನು ಒಮ್ಮತದಿಂದ ತೆಗೆದುಕೊಳ್ಳಲಾಗುತ್ತದೆ. ಸ್ವತಂತ್ರ ಸದಸ್ಯರಲ್ಲಿ ಮಾಜಿ ಐಎಎಸ್ ಅಧಿಕಾರಿಗಳಾದ ಡಾ. ನಸೀಮ್ ಜೈದಿ, ವೃಂದಾ ಸರೂಪ್, ಜೆ.ಎಸ್. ದೀಪಕ್ ಮತ್ತು ಮಾಜಿ ಐಎಫ್‌ಎಸ್ ಅಧಿಕಾರಿ ನವತೇಜ್ ಸರ್ನಾ ಇದ್ದಾರೆ. ಸಂಪಾದಕ ಸದಸ್ಯರಾಗಿ ಸನ್ ನ್ಯೂಸ್ ಪ್ರಧಾನ ಸಂಪಾದಕ ಎಂ. ಗುಣಶೇಖರನ್, ಎನ್‌ಡಿಟಿವಿ ಹಿರಿಯ ವ್ಯವಸ್ಥಾಪಕ ಸಂಪಾದಕ ವೈಶಾಲಿ ಸೂದ್, ಟೈಮ್ಸ್ ನೌ ನವಭಾರತ್ ವ್ಯವಸ್ಥಾಪಕ ಸಂಪಾದಕ ರಂಜಿತ್ ಕುಮಾರ್ ಮತ್ತು ಸಾಕ್ಷಿ ಟಿವಿ ವ್ಯವಸ್ಥಾಪಕ ಸಂಪಾದಕ ಯಾದಗಿರಿ ರೆಡ್ಡಿ ಕಂಚರ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳು, ಯಾವುದೇ ಧಾರ್ಮಿಕ ಗುಂಪಿನ ಸೂಕ್ಷ್ಮತೆಯನ್ನು ಅವಹೇಳನ ಮಾಡುವ ಅಥವಾ ಅಪರಾಧ ಮಾಡುವ ಅಥವಾ ಜಗಳ ಸೃಷ್ಟಿಸುವ ವಿಷಯವನ್ನು ವರದಿ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಷರತ್ತು ವಿಧಿಸುತ್ತವೆ. ಏಪ್ರಿಲ್ 2008ರಲ್ಲಿ ಜಾರಿಗೆ ಬಂದ ಹಾಗೂ ಡಿಸೆಂಬರ್ 2024ರಲ್ಲಿ ಕೊನೆಯದಾಗಿ ತಿದ್ದುಪಡಿ ಮಾಡಲಾದ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ನಿಯಮಗಳ ಅಡಿಯಲ್ಲಿ NBDSA ಶ್ರೇಣೀಕೃತ ದಂಡ ವ್ಯವಸ್ಥೆಯನ್ನು ಅನುಸರಿಸುತ್ತದೆ. ಮೊದಲ ಉಲ್ಲಂಘನೆಗೆ ರೂ.2 ಲಕ್ಷದವರೆಗೆ, ಎರಡನೇ ಉಲ್ಲಂಘನೆಗೆ 5 ಲಕ್ಷ ರೂ.ವರೆಗೆ, ಮೂರನೇ ಉಲ್ಲಂಘನೆಗೆ 10 ಲಕ್ಷ ರೂ. ದವರೆಗೆ ಹಾಗೂ ನಾಲ್ಕನೇ ಉಲ್ಲಂಘನೆಗೆ ಚಾನೆಲ್ ವಹಿವಾಟಿನ ಶೇ.1ರಷ್ಟು (ಗರಿಷ್ಠ 25 ಲಕ್ಷ ರೂ.) ದಂಡ ವಿಧಿಸುವ ವ್ಯವಸ್ಥೆಯಿದೆ. NBDSA ಎರಡು ಹಂತದ ದೂರು ಪರಿಹಾರ ವ್ಯವಸ್ಥೆ ಹೊಂದಿದೆ. ದೂರುಗಳನ್ನು ಮೊದಲು ಪ್ರಸಾರಕರಿಗೆ 15 ದಿನಗಳಲ್ಲಿ ಸಲ್ಲಿಸಬೇಕು. ಪರಿಹಾರವಾಗದಿದ್ದರೆ ಮುಂದಿನ 15 ದಿನಗಳಲ್ಲಿ ಪ್ರಾಧಿಕಾರಕ್ಕೆ ವರ್ಗಾಯಿಸಬಹುದು. ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಹೊರಡಿಸಿದ ಎಲ್ಲ ಆದೇಶಗಳು ವೈಯಕ್ತಿಕ ದೂರುಗಳಿಂದಲೇ ಉದ್ಭವಿಸಿವೆ. NBDSA ತನ್ನ ತೀರ್ಪು ಪ್ರಕ್ರಿಯೆ ನ್ಯಾಯಯುತ ಮತ್ತು ಒಮ್ಮತದ ಆಧಾರದ ಮೇಲೆ ನಡೆಯುತ್ತದೆ ಎಂದು ಸಮರ್ಥಿಸಿಕೊಂಡಿದೆ. ಆದರೆ ಸೀಮಿತ ದಂಡ ಮೊತ್ತಗಳು ಮತ್ತು ದೀರ್ಘಾವಧಿಯ ವಿಚಾರಣೆ ಪ್ರಕ್ರಿಯೆ ಸ್ವಯಂ-ನಿಯಂತ್ರಣದ ಪರಿಣಾಮಕಾರಿತ್ವವನ್ನು ಕುಂದಿಸುತ್ತದೆ ಹಾಗೂ ಅದರ ಪ್ರತಿಬಂಧಕ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಮಾಧ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 23 Jan 2026 10:10 pm

‘ಜನನಾಯಗನ್’ ಸೆನ್ಸಾರ್ ವಿವಾದ: ಜ. 27ರಂದು ಮದ್ರಾಸ್ ಹೈಕೋರ್ಟ್‌ನಿಂದ ತೀರ್ಪು

ಚೆನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ನಟಿಸಿರುವ ಬಹು ನಿರೀಕ್ಷಿತ ‘ಜನನಾಯಗನ್’ ಚಿತ್ರಕ್ಕೆ 16 ವರ್ಷ ಮೇಲ್ಪಟ್ಟವರು ವೀಕ್ಷಿಸಲು ಅನುವಾಗುವಂತೆ ಯು/ಎ ಪ್ರಮಾಣ ಪತ್ರ ನೀಡುವಂತೆ ಜ. 9ರಂದು ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಲ್ಲಿಸಿರುವ ಮೇಲ್ಮನವಿಯ ಕುರಿತು ಜನವರಿ 27ರಂದು ತೀರ್ಪು ಪ್ರಕಟಿಸಲು ಮದ್ರಾಸ್ ಹೈಕೋರ್ಟ್ ಪ್ರಥಮ ವಿಭಾಗೀಯ ಪೀಠ ಸಜ್ಜಾಗಿದೆ. ಮುಖ್ಯ ನ್ಯಾಯಮೂರ್ತಿ ಮಣೀಂದರ್ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನು ಒಳಗೊಂಡ ನ್ಯಾಯಪೀಠ, ಜನವರಿ 20ರಂದು ಕಾಯ್ದಿರಿಸಿದ್ದ ತೀರ್ಪನ್ನು ಜನವರಿ 27ರಂದು ಪ್ರಕಟಿಸಲಿದೆ. ಸಿಬಿಎಫ್‌ಸಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ. ಆರ್. ಸುಂದರೇಶನ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಪರ ಹಿರಿಯ ವಕೀಲ ಸತೀಶ್ ಪರಾಸರನ್, ಅವರಿಗೆ ನೆರವು ನೀಡಿದ ವಿಜಯನ್ ಸುಬ್ರಮಣಿಯನ್ ಅವರ ವಾದ–ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. ವಾದ–ಪ್ರತಿವಾದದ ವೇಳೆ, ಸಿಬಿಎಫ್‌ಸಿಗೆ ಪ್ರತಿಪ್ರಮಾಣ ಪತ್ರ ಸಲ್ಲಿಸಲು ಅವಕಾಶ ನೀಡದೆ, ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿ ವಿಲೇವಾರಿಯಲ್ಲಿ ಏಕಸದಸ್ಯ ಪೀಠದ ತೀರ್ಪು ಸಮರ್ಥನೀಯವಾಗಿದೆಯೇ ಎಂಬುದನ್ನು ದಾಖಲಿಸಲು ಮಾತ್ರ ಮೊದಲಿಗೆ ತಮ್ಮ ವಾದಗಳನ್ನು ಮಂಡಿಸಬೇಕೆಂದು ವಿಭಾಗೀಯ ನ್ಯಾಯಪೀಠ ಎರಡೂ ಕಡೆಯ ವಾದಿಗಳಿಗೆ ಒತ್ತಿ ಹೇಳಿತ್ತು.

ವಾರ್ತಾ ಭಾರತಿ 23 Jan 2026 10:09 pm

ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ: ಯು.ಟಿ ಖಾದರ್

ಮೂಡುಬಿದಿರೆ : ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಕಾಲೇಜು ಯಾವ ರೀತಿ ಮಾರ್ಗದರ್ಶಿಯಾಯಿತು ಎಂದು ವಿವರಿಸಿದರು. ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಾವು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕರು ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ನಮ್ಮ ಪೋಷಕರನ್ನೂ ಕರೆಸಿ ಬುದ್ದಿ ಹೇಳಿದ್ದರಿಂದಲೇ ಸಮಾಜದಲ್ಲಿ ಈ ಸಾಧನೆಯೊಂದಿಗೆ ಗುರುತಿಸುವಂತಾಗಿದೆ. ಮಹಾವೀರ ಕಾಲೇಜು ವಿದ್ಯಾರ್ಥಿ ಗಳಾಗಿದ್ದವರು ಇಂದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಕಾಲೇಜು ನಮಗೆ ಅಂದು ಕಲಿಸಿಕೊಟ್ಟ ಪಾಠ ಇಂದಿಗೂ ದಾರಿದೀವಿಗೆಯಾಗಿದ್ದು ಸದಾ ನೆನಪಿನಲ್ಲುಳಿಯುವಂತಹುದು. ಮಹಾವೀರ ಕಾಲೇಜು ವಜ್ರಮಹೋತ್ಸವ ಆಚರಿಸುತ್ತಿರುವ ಈ ವರ್ಷದಲ್ಲಿ ಕಾಲೇಜಿನ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ, ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಹೇಳಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾವೀರ ಕಾಲೇಜು ಈ ಭಾಗದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿಗೆ ಹಳೆ ವಿದ್ಯಾರ್ಥಿಗಳ ಯಶೋಗಥೆಗಳೇ ಸಾಕ್ಷಿಯಾಗಿದೆ ಎಂದರು. ಯಾವುದೇ ರೀತಿಯಲ್ಲೂ ಲಾಭ ದಾಯಕವಲ್ಲದ ಶಿಕ್ಷಣ ಇಂದಿನಂತೆ ಉದ್ಯಮವೂ ಆಗಿರದ ಆ ಕಾಲಘಟ್ಟದಲ್ಲಿ ಕೇವಲ ಈ ಭಾಗದ ಮಕ್ಕಳ ಕಾಲೇಜು ಶಿಕ್ಷಣಕ್ಕಾಗಿ ಮಣಿಪಾಲ್ ಸಮೂಹದಿಂದ ಆರಂಭಗೊಂಡಿದ್ದ ಕಾಲೇಜು ಸಹಸ್ರ ಸಹಸ್ರ ಮಕ್ಕಳ ಬದುಕನ್ನು ರೂಪಿ ಸಿದೆ. ಟಿ.ಎಂ.ಎ ಪೈ, ಎಸ್.ಎನ್ ಮೂಡುಬಿದಿರೆ ಮೊದಲಾದವರು ಅವಿಭಜಿತ ದಕ್ಷಿಣ ಕನ್ನಡದ ಹಲವು ಪಟ್ಟಣಗಳಲ್ಲಿ ಅಲಭ್ಯವಾಗಿದ್ದ ಕಾಲೇಜನ್ನು ಮೂಡುಬಿದಿರೆಯಲ್ಲಿ ಆರಂಭಿಸಿ, ಯಶಸ್ವಿ ಸಭಾಧ್ಯಕ್ಷರೆನಿಸಿಕೊಂಡಿರುವ ಯು.ಟಿ ಖಾದರ್ ಅವರಂತೆ ಸಹಸ್ರಾರು ಜನರ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಅವರನ್ನು ವಜ್ರಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲ ಸೇರಿ ಸ್ಮರಿಸಬೇಕಿದೆ. ಕಾಲೇಜು ಶಿಕ್ಷಣ ಬಡ ಮಕ್ಕಳ ಕಾಲೇಜು ಶಿಕ್ಷಣದ ಕನಸು ನನಸು ಮಾಡುತ್ತಿದೆ ಎಂದರು. ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ಕಾಲೇಜಿನ ಪ್ರಸ್ತುತ ಕಾರ್ಯಕ್ರಮಗಳನ್ನು ಪರಿಚಯಿಸಿ ಬಡ ಮಕ್ಕಳ ಕಾಲೇಜು ಶಿಕ್ಷಣ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಜೊತೆಗೆ ಕಾಲೇಜಿನ ಅಭಿವೃದ್ಧಿ ಕೆಲಸಗಳಲ್ಲಿ ಹಳೆ ವಿದ್ಯಾರ್ಥಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಮಾತನಾಡಿ, ರಾಜ್ಯದ ಮತ್ತು ಮುಂಬೈ, ಕೇರಳ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳನ್ನೂ ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು ಎಲ್ಲಾ ಪ್ರಮುಖ ನಗರ ಗಳಲ್ಲೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಸುವುದಾಗಿ ತಿಳಿಸಿದರು. ಅನಿತಾ ಸುರೇಂದ್ರ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿಗಳು ಕಾಲೇಜು ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದರು.  

ವಾರ್ತಾ ಭಾರತಿ 23 Jan 2026 10:05 pm

ಯುದ್ದನೌಕೆಗಳ ಸಮೂಹ ಇರಾನಿನತ್ತ ಸಾಗುತ್ತಿದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜ.23: ಇರಾನಿನ ಮೇಲೆ ಒತ್ತಡವನ್ನು ಮುಂದುವರಿಸುವ ಕ್ರಮವಾಗಿ ಅಮೆರಿಕಾದ ಬೃಹತ್ ಯುದ್ದನೌಕೆಗಳ ಸಮೂಹವು ಇರಾನಿನತ್ತ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ʼಪಡೆಗಳ ಅಗತ್ಯಬಾರದು ಎಂಬ ವಿಶ್ವಾಸವಿದ್ದರೂ ಇರಾನ್ ರಾಷ್ಟ್ರದೊಳಗಿನ ಘಟನೆಗಳು ಅಂತಾರಾಷ್ಟ್ರೀಯ ಪರಿಶೀಲನೆಯನ್ನು ಮುಂದುವರಿಸುತ್ತಿರುವುದರಿಂದ ನೌಕಾಪಡೆ ನಿಯೋಜನೆ ಅಗತ್ಯವಾಗಿದೆ. ನಮ್ಮ ಬಹಳಷ್ಟು ಹಡಗುಗಳು ಆ ದಿಕ್ಕಿನತ್ತ ಸಾಗುತ್ತಿವೆ. ಬಲ ಪ್ರಯೋಗಕ್ಕೆ ಆಸ್ಪದ ನೀಡುವಂತಹ ಘಟನೆ ಸಂಭವಿಸದು ಎಂದು ಆಶಿಸುತ್ತೇವೆ. ಆದರೆ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡುತ್ತೇವೆ. ಯುದ್ದನೌಕೆಗಳ ಸಮೂಹವು ಆ ದಿಕ್ಕಿನತ್ತ ಸಾಗುತ್ತಿದೆ. ಬಹುಶಃ ಅವುಗಳನ್ನು ನಾವು ಬಳಸಬೇಕಾಗಿಲ್ಲ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಯುಎಸ್‍ಎಸ್ ಅಬ್ರಹಾಂ ಲಿಂಕನ್ ಹಾಗೂ ಹಲವಾರು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳು ಮಧ್ಯಪ್ರಾಚ್ಯಕ್ಕೆ ಆಗಮಿಸಲಿವೆ. ಹಲವು ನೌಕೆಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ ಮತ್ತು ಇರಾನಿನಲ್ಲಿನ ಬೆಳವಣಿಗೆಗಳನ್ನು ಅಮೆರಿಕಾ ನಿಕಟವಾಗಿ ಗಮನಿಸುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

ವಾರ್ತಾ ಭಾರತಿ 23 Jan 2026 10:04 pm

ಜಪಾನ್ ಸಂಸತ್ತನ್ನು ವಿಸರ್ಜಿಸಿದ ಪ್ರಧಾನಿ ಸನೇ ಟಕೈಚಿ

  ಟೋಕಿಯೊ, ಜ.23: ಜಪಾನ್ ಪ್ರಧಾನಿ ಸನೇ ಟಕೈಚಿ ಶುಕ್ರವಾರ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಮೂಲಕ ಫೆಬ್ರವರಿ 8ರ ಕ್ಷಿಪ್ರ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ. 465 ಸದಸ್ಯ ಬಲದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಪತ್ರವನ್ನು ಸಂಸತ್ತಿನ ಸ್ಪೀಕರ್ ಓದಿ ಹೇಳಿದಾಗ ಸದಸ್ಯರು ಸ್ವಾಗತಿಸಿದರು. 12 ದಿನಗಳ ಚುನಾವಣಾ ಪ್ರಚಾರ ಕಾರ್ಯಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರಕಿದೆ. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿರುವ ಟಕೈಚಿ ಕೇವಲ ಮೂರು ತಿಂಗಳು ಅಧಿಕಾರದಲ್ಲಿದ್ದು ಕ್ಷಿಪ್ರ ಚುನಾವಣೆ ನಡೆಸುವ ಇಂಗಿತವನ್ನು ಸೋಮವಾರ ವ್ಯಕ್ತಪಡಿಸಿದ್ದರು.

ವಾರ್ತಾ ಭಾರತಿ 23 Jan 2026 9:57 pm

ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಸೇರಿದ 'ಮಾಡೆಲ್ ಮನೆ'ಗೆ ಬೆಂಕಿ !

ಘಟನೆಗೆ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೇ ಕಾರಣ : ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪ

ವಾರ್ತಾ ಭಾರತಿ 23 Jan 2026 9:56 pm

ಜ.26ರಿಂದ ಕಾರ್ಮಿಕ ಸಂಹಿತೆಗಳ ವಿರುದ್ಧ ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ

ಮಂಗಳೂರು, ಜ.23: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ ಮತ್ತು ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆ.12ರಂದು ರೈತ ಕಾರ್ಮಿಕರ ನೇತೃತ್ವ ದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜ.26ರಿಂದ 29ರವರೆಗೆ ದ.ಕ.ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ. ಜ.26ರಂದು ಬೆಳ್ತಂಗಡಿ, ಜ.27ರಂದು ಮೂಡುಬಿದಿರೆ, ಜ.28ರಂದು ಮುಲ್ಕಿಯಿಂದ ಪಾದಯಾತ್ರೆ ಹೊರಡಲಿದೆ. ಜ.29ರಂದು ಬೆಳಗ್ಗೆ 10ಕ್ಕೆ ಈ ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಕ್ಲಾಕ್ ಟವರ್ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 23 Jan 2026 9:51 pm

ಆಶಾ ಪಂಡಿತ್

ಮಂಗಳೂರು,ಜ.23:ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದ ನಗರದ ನಾಗುರಿ ನಿವಾಸಿ ಆಶಾ ಪಂಡಿತ್ (63) ಜ.23ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಗರದ ನಾಗರಿ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಸಕ್ರಿಯರಾಗಿದ್ದರು. ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.

ವಾರ್ತಾ ಭಾರತಿ 23 Jan 2026 9:46 pm

ಮಂಗಳೂರು: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಖ್ಯಾತಿ ಪಡೆದಿದ್ದ ಆಶಾ ಪಂಡಿತ್ ನಿಧನ

ಮಂಗಳೂರು,ಜ.23: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದ ನಗರದ ನಾಗುರಿ ನಿವಾಸಿ ಆಶಾ ಪಂಡಿತ್ (63) ಜ.23ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಗರದ ನಾಗರಿ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಸಕ್ರಿಯರಾಗಿದ್ದರು. ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.

ವಾರ್ತಾ ಭಾರತಿ 23 Jan 2026 9:46 pm

ಉತ್ತರಪ್ರದೇಶ| ಕಾರು ಹೊಂಡಕ್ಕೆ ಬಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟ ಪ್ರಕರಣ: ಇಬ್ಬರು ಬಿಲ್ಡರ್‌ಗಳ ಬಂಧನ

ನೊಯ್ಡಾ,ಜ.23: ಉತ್ತರಪ್ರದೇಶದ ನೊಯ್ಡಾದಲ್ಲಿ ನಿರ್ಮಾಣಹಂತದ ಕಟ್ಟಡವೊಂದರ ಸಮೀಪ ನೀರು ತುಂಬಿದ ಹೊಂಡಕ್ಕೆ ಕಾರು ಬಿದ್ದು, 27ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟ ಘಟನೆಗೆ ಸಂಬಂಧಿಸಿ ನಗರ ಪೊಲೀಸರು ಶುಕ್ರವಾರ ಇನ್ನಿಬ್ಬರು ಬಿಲ್ಡರ್‌ಗಳನ್ನು ಬಂಧಿಸಿದ್ದಾರೆ. ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟಮಂಜಿನ ನಡುವೆ ಕಾರು ಚಲಾಯಿಸುತ್ತಾ ನೊಯ್ಡಾದಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆಯ ಕಡಿದಾದ ತಿರುವಿನಲ್ಲಿ ಈ ದುರಂತ ಸಂಭವಿಸಿತ್ತು. ಬಂಧಿತರನ್ನು ಫರೀದಾಬಾದ್ ನಿವಾಸಿ ರವಿ ಬನ್ಸಾಲ್ ಹಾಗೂ ಗಾಝಿಯಾಬಾದ್ ನಿವಾಸಿ ಸಚಿನ್ ಕರಣ್‌ವಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಅವಘಡ ನಡೆದ ಸ್ಥಳ ಜೊತೆ ನಂಟು ಹೊಂದಿರುವ ರಿಯಲ್ ಎಸ್ಟೇಟ್ ಕಂಪೆನಿಯಾದ ಲೋಟಸ್ ಗ್ರೀನ್ ಕನ್‌ಸ್ಟ್ರಕ್ಷನ್ಸ್‌ನ ಪದಾಧಿಕಾರಿಗಳಾಗಿದ್ದಾರೆ ಮತ್ತು ಈ ನಿವೇಶನದ ಪಾಲುದಾರಿಕೆ ಹೊಂದಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Jan 2026 9:41 pm

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ| ಸಾಗರ್ ಗೋರ್ಖೆ, ರಮೇಶ್ ಘಾಯ್‌ಚೋರ್‌ಗೆ ಜಾಮೀನಿನ ಮೇಲೆ ಬಿಡುಗಡೆ

ಮುಂಬೈ,ಜ.23: 2018ರ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಸಾಗರ್ ಗೋರ್ಖೆ ಹಾಗೂ ರಮೇಶ್ ಘಾಯ್‌ಚೋರ್ ಅವರನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಸಾಂಸ್ಕೃತಿಕ ಸಂಘಟನೆ ‘ಕಬೀರ್ ಕಲಾ ಮಂಚ್’ನ ಕಲಾವಿದರಾದ ಇವರು ದೀರ್ಘಾವಧಿಯ ಜೈಲುವಾಸ ಅನುಭವಿಸಿದ್ದಾರೆಂಬ ನೆಲೆಯಲ್ಲಿ ಅವರನ್ನು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ಅಂಗವಾಗಿ 2018ರ ಜನವರಿ 1ರಂದು ಪುಣೆ ಸಮೀಪ ಎಲ್ಗಾರ್ ಪರಿಷದ್ ಆಯೋಜಿಸಿದ ಸಮಾವೇಶದ ಮರುದಿನ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದರು. ಎಲ್ಗಾರ್ ಪರಿಷತ್ ಸಂಘಟನೆಯು, ಜಾತಿ ಹಿಂಸಾಚಾರದ ಕಿಡಿಹಚ್ಚಲು ಹಾಗೂ ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಮಾವೋವಾದಿಗಳು ನಡೆಸಿದ ಸಂಚಿನ ಭಾಗವಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ ಆರೋಪಿಸಿದೆ. ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಗೋರ್ಖೆ ಹಾಗೂ ಘಾಯ್‌ಚೋರ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ತಮಗೆ ಜಾಮೀನು ಬಿಡುಗಡೆ ನಿರಾಕರಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇವರಿಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ನಡೆಸಿತ್ತು. ತಲಾ 1 ಲಕ್ಷ ರೂ. ವೈಯಕ್ತಿಕ ಮುಚ್ಚಳಿಕೆ ಹಾಗೂ ಅಷ್ಟೇ ಮೊತ್ತದ ಖಾತರಿ ಪಡೆದ ಬಳಿಕ ಗೋರ್ಕೆ ಹಾಗೂ ಘಾಯ್‌ಚೋರ್ ಅವರನ್ನು ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ಪ್ರತಿ ತಿಂಗಳ ಮೊದಲ ಸೋಮವಾರ ಮುಂಬೈಯಲ್ಲಿರುವ ಎನ್‌ಐಎ ಕಚೇರಿಗೆ ಹಾಜರಾಗುವಂತೆಯೂ ಆರೋಪಿಗಳಿಗೆ ನಿರ್ದೇಶನ ನೀಡಿದೆ.

ವಾರ್ತಾ ಭಾರತಿ 23 Jan 2026 9:36 pm

ವಾಯುಮಾಲಿನ್ಯ| ಉತ್ಪಾದನಾ ಘಟಕ ಮುಚ್ಚಲು ನಿರ್ಣಯ: ಪಲಿಮಾರು ಗ್ರಾಮಸಭೆ

ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕದಿಂದ ಸುತ್ತಮುತ್ತ ವಾಯುಮಾಲಿನ್ಯ ಉಂಟಾಗುತಿದ್ದು, ಘಟಕವನ್ನು ಮುಚ್ಚವಂತೆ ಶುಕ್ರವಾರ ಪಲಿಮಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದು, ಬಳಿಕ ಘಟಕವನ್ನು ಮುಚ್ಚಲು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಘಟಕದ ದುರ್ವಾಸನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ನಡಾವಳಿಯಂತೆ 2024ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಂಸ್ಕರಣಗಾರವನ್ನು ಸ್ಥಗಿತಗೊಳಿಸಿ ಅಗತ್ಯ ಕ್ರಮ ಕೈಗೊಂಡು ತಜ್ಞರ ಶಿಪಾರಸಿನಂತೆ ಪುನರಾರಂಭಕ್ಕೆ ನಿರ್ದೇಶಿಸಿದ್ದರು. ಆದರೆ ತಜ್ಞರ ಸಮಿತಿ ವರದಿ ಬರುವ ಮೊದಲೇ ಘಟಕ ಪುನರಾರಂಭಿಸಿ ಜಿಲ್ಲಾಧಿಕಾರಿ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರಾದ ದಿನೇಶ್ ಪಲಿಮಾರು, ಲಕ್ಷ್ಮಣ ಎಲ್ ಶೆಟ್ಟಿವಾಲ್, ಸಂದೀಪ್ ಪಲಿಮಾರು ಮತ್ತಿತರರು ದೂರಿದರು. ಗ್ರಾಮಸ್ಥರು ಘಟಕದ ವಿರುದ್ಧ ತುರ್ತು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಆಗಮಿಸುವಂತೆ ಒತ್ತಾಯಿಸಿದರು. ಸಭೆಗೆ ಆಗಮಿಸಿದ ತಹಸೀಲ್ದಾರ್ ಅನಂತಶಂಕರ ಬಿ. ಗ್ರಾಪಂ ನಿರ್ಣಯ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸೂಚಿಸಿದರು. ಅ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ಭರವಸೆ ನೀಡಿದರು. ಪಲಿಮಾರಿನ ಸರ್ಕಾರಿ ಶಾಲೆಯೊಂದು ಘಟಕದ ಸಿಎಸ್‍ಆರ್ ಪಡೆದುಕೊಂಡಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಮುಂದಿನ ದಿನಗಳಲ್ಲಿ ಶಾಲೆಗೆ ಯಾವುದೇ ರೀತಿಯ ಸಹಕಾರ ನೀಡದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲೆಯಿಂದ ವರದಿ ಪಡೆದುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಯವರು ಎಸ್‍ಡಿಎಂಸಿ ಬೇಡಿಕೆಯಂತೆ ಕಂಪೆನಿ ಸಿಎಸ್‍ಆರ್ ಪಡೆದುಕೊಂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಡುಬಿದ್ರಿ ಚಿಕ್ಕಲ್‍ಗುಡ್ಡ ರಾಜ್ಯ ಹೆದ್ದಾರಿ ಸಂಪರ್ಕಿಸುವ ಅಡ್ವೆ ಹಾಗೂ ಅವರಾಲು ಮಟ್ಟು ರಸ್ತೆ ತೀರಾ ನಾದುರಸ್ತಿ ಯಲ್ಲಿದ್ದು, ಹಲವು ದಶಕಗಳಿಂದ ಮನವಿ ನೀಡಿದ್ದರೂ, ಅಭಿವೃದ್ಧಿ ಕಾಣದಿರುವ ಬಗ್ಗೆ ಅ ಭಾಗದ ಗ್ರಾಮಸ್ಥರು ಗ್ರಾಮಾಡಳಿತವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ದೊಡ್ಡ ಮೊತ್ತದ ಅನುದಾನ ಅಗತ್ಯವಿರುವ ಕಾರಣ ಶಾಸಕರ ಇಲ್ಲವೇ ಸಂಸದರ ಅನುದಾನ ಪಡೆಯಲು ಮನವಿ ಮಾಡಲಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ನೀಡಿದ ಅರ್ಜಿಯನ್ನು ಶಾಸಕರ ಗಮನಕ್ಕೂ ತರುವುದಾಗಿ ನೋಡೆಲ್ ಅಧಿಕಾರಿ ಯಲ್ಲಮ್ಮ ತಿಳಿಸಿದರು. ಜನರ ವಿರೋಧದ ನಡುವೆಯೂ ಅವರಾರು ಮಟ್ಟುವಿನಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಪರವಾನಿಗೆ ನೀಡಿರುವ, ಪಲಿಮಾರು ಆಟೋ ನಿಲ್ದಾಣ ಬಳಿ ಇಂಟರ್‍ಲಾಕ್ ಅಳವಡಿಕೆಯಲ್ಲಿ ಆಗಿರುವ ದುಂದುವೆಚ್ಚ ಬಗ್ಗೆ ಸಂದೀಪ್ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ಪಿಡಿಒ ಸತೀಶ್ ಆರ್. ಜಿ. ಸಮಜಾಯಿಷಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಎಂ. ಹುಸೇನ್, ಫಿಲೋಮಿನಾ, ರೀನಾ, ಅಮೃತಾ, ಸುಧಾಕರ ಶೆಟ್ಟಿ, ಪುಷ್ಪಲತಾ, ಶಿವಪುತ್ರ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಶಿಕ್ಷಣ ಇಲಾಖೆ ರಮಣಿ ಉಪಸ್ಥಿತರಿದ್ದರು. ಗಿರೀಶ್ ವರದಿ ವಾಚಿಸಿದರು.

ವಾರ್ತಾ ಭಾರತಿ 23 Jan 2026 9:35 pm

ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಿರೋಧವಿಲ್ಲ: ಗೋಪಾಲ ಪೂಜಾರಿ

ಕುಂದಾಪುರ, ಜ.23: ಸಿದ್ದಾಪುರ ಏತ ನೀರಾವರಿ ಯೋಜನೆಗೆ ನನ್ನ ವಿರೋಧವಿಲ್ಲ ಎಂಬುದು ಈ ಹಿಂದೆ ಸ್ಪಷ್ಟಪಡಿ ಸಲಾಗಿದೆ. ವಾರಾಹಿ ಯೋಜನೆ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ಕಾಮಗಾರಿ ನಡೆದರೆ ವಾರಾಹಿ ನದಿಪಾತ್ರದ ಜನರಿಗೆ ನೀರಿಲ್ಲದಾಗುತ್ತದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ ಎಲ್ಲರಿಗೂ ನೀರು ಸಿಗಬೇಕೆನ್ನುವುದೇ ಕಳಕಳಿ. ಸ್ಥಳಿಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುಗಿಸಲು ಬಿಜೆಪಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು, ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬೈಂದೂರು ಶಾಸಕರು ಮಾಡಿದ ಆರೋಪಗಳಿಗೆ ಉತ್ತರ ನೀಡಿದರು. ಹಲವಾರು ಅಣೆಕಟ್ಟು ತಂದು ಹಾಕಿದ್ದೇನೆ ಎಂದು ಶಾಸಕರು ಹೇಳಿದ್ದು, ಅದು ಯಾವುದು ಎಂದು ಅವರೇ ಪಟ್ಟಿಕೊಡಬೇಕು. ತಾನು ಶಾಸಕನಾಗಿದ್ದಾಗ ಸುಬ್ಬರಾಡಿ, ರಾಜಾಡಿ, ಆಜ್ರಿ, ಹೆಮ್ಮಾಡಿಕಟ್ಟು, ಶಾರದಾಪುರ, ಬಿಜೂರು ಅಣೆಕಟ್ಟಿಗೆ ಅನುದಾನ ಮಂಜೂರಾಗಿದ್ದು ಸೌಕೂರು ಏತನೀರಾವರಿ ಡಿಪಿಆರ್ ಆಗಿತ್ತು. ಈಗಿನ ಶಾಸಕರು ಮಾಡಿದ್ದು ಯಾವುದು ಎಂದು ಹೇಳಲಿ ಎಂದು ಸವಾಲು ಹಾಕಿದರು. ಈಗ ಸಿದ್ದಾಪುರದ ಶೇ.70 ಭಾಗಕ್ಕೆ ವಾರಾಹಿ ನೀರಿಲ್ಲ. ಬಲದಂಡೆ ಯೋಜನೆ, ಶಂಕರನಾರಾಯಣ, ಅಂಪಾರು ಭಾಗದ ನೀರಿಗೂ ಸಮಸ್ಯೆ ಆಗುತ್ತದೆ. ಹೊಳೆಶಂಕರನಾರಾಯಣ ದೇವಸ್ಥಾನ ಸಹಿತ ಅಣೆಕಟ್ಟಿನ ಕೆಳಭಾಗದ ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ 2023ರಲ್ಲಿ ನೀಡಿದ್ದ ಪತ್ರವನ್ನು 2025ರಲ್ಲಿ ನೆನಪಿಸಿದ್ದೆ. ಅದಕ್ಕಾಗಿ ತಜ್ಞರ ಸಮಿತಿ ನೇಮಿಸಿದ್ದು ಅದರಲ್ಲಿ ಸುರತ್ಕಲ್ ಎನ್‌ಐಟಿಕೆಯವರನ್ನೂ ಸೇರಿಸಬೇಕು ಎನ್ನುವ ಒತ್ತಾಯವು ನನ್ನದಿದೆ ಎಂದರು. ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ವಾರಾಹಿ ಮೂಲಯೋಜನೆಯಂತೆ 38 ಸಾವಿರ ಎಕರೆಗೆ ನೀರು ಹೋಗ ಬೇಕು. ಈಗ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ನಡೆದರೆ ಮೂಲಯೋಜನೆಯಂತೆ ನೀರು ಸಿಗುವುದಿಲ್ಲ. ಈಗ ಅಣೆಕಟ್ಟಿಗೆ ಅಪಾಯ ಆಗುವಂತೆ ಕಲ್ಲು ಸ್ಫೋಟ ನಡೆಯುತ್ತಿದೆ. ಸೌಕೂರು ಏತ ನೀರಾವರಿಯಿಂದ 8 ಗ್ರಾಮಗಳಿಗೆ ನೀರು ಹೋಗುತ್ತದೆ. ಈಗ ಆದ ವಾರಾಹಿ ಕಾಮಗಾರಿಯಿಂದ ಕೋಟೇಶ್ವರ ವರೆಗೆ ನೀರು ಹೋಗುತ್ತದೆ ಎಂದು ತಿಳಿಸಿದರು. ವಾರಾಹಿ ಮೂಲಯೋಜನೆಯಂತೆ ಎಲ್ಲರಿಗೂ ನೀರು ಕೊಡಿ ಎನ್ನುವ ಸಲುವಾಗಿ ಜ.25ರಂದು ಕಂಡ್ಲೂರಿನಲ್ಲಿ ಬೆಳಗ್ಗೆ ವಾರಾಹಿ ನದಿ ನೀರು ಬಳಕೆದಾರರ ಜನಾಂದೋಲನ ಸಭೆ ಆಯೋಜಿಸಲಾಗಿದೆ. ಹೋರಿಯಬ್ಬೆ ಡ್ಯಾಂನ ಕೆಳ ಭಾಗದ ಮಚ್ಚಟ್ಟು, ಅಮಾಸೆಬೈಲು, ರಟ್ಟಾಡಿ, ಹಾಲಾಡಿ, 76 ಹಾಲಾಡಿ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಜಪ್ತಿ, ಬಳ್ಕೂರು, ಬಸ್ರೂರು, ಹಟ್ಟಿಕುದ್ರು, ಆನಗಳ್ಳಿ, ಗುಲ್ವಾಡಿ, ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಹಳ್ನಾಡು, ಕಾವ್ರಾಡಿಯ ರೈತರಿಗೆ ಸಮಸ್ಯೆ ಆಗಲಿದೆ. ಸಿದ್ದಾಪುರಕ್ಕೆ ಏತ ನೀರಾವರಿ ಬೇಕು ಎನ್ನುವುದು ನಮ್ಮ ಆಗ್ರಹ ಎಂದರು. ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಬೈಂದೂರು, ವಿಜಯ ಪುತ್ರನ್, ಸುದೇಶ್ ಶೆಟ್ಟಿ ಗುಲ್ವಾಡಿ, ಶ್ರೀನಿವಾಸ ಸೌಡ, ಅಕ್ಷಯ್ ಶೆಟ್ಟಿ, ಯೋಗೇಶ್ ಪೂಜಾರಿ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Jan 2026 9:30 pm

ಕಾರ್ಕಳ| ಭೀಕರ ರಸ್ತೆ ಅಪಘಾತ; ಮೃತರ ಸಂಖ್ಯೆ 4ಕ್ಕೆ ಏರಿಕೆ, 9 ಮಂದಿಗೆ ಗಾಯ

ಕಾರ್ಕಳ, ಜ.23: ಖಾಸಗಿ ಬಸ್ ಹಾಗೂ ತೂಫಾನ್ ವಾಹನಗಳ ಮಧ್ಯೆ ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ 2.50ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮಗು ಸಹಿತ 9 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ(50) ಎಂದು ಗುರುತಿಸಲಾಗಿದೆ. ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ. ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದು ಇವರಲ್ಲಿ ತೀವ್ರವಾಗಿ ಗಾಯ ಗೊಂಡ ಐದು ಮಂದಿ ಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಗು ಅಪಾಯ ದಿಂದ ಪಾರಾಗಿದ್ದು, ಉಳಿದ ಗಾಯಾಳು ಗಳನ್ನು ಕಾರ್ಕಳದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಗುಲ್ಬರ್ಗದಿಂದ ತೂಫಾನ್ ವಾಹನದಲ್ಲಿ ಹೊರಟಿದ್ದರು. ಉಡುಪಿಗೆ ಬಂದ ಅವರು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಧರ್ಮಸ್ಥಳಕ್ಕೆ ಹೊರಟಿದ್ದರು. ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇವರ ತೂಫಾನ್ ವಾಹನಕ್ಕೆ, ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಅತೀವೇಗದಿಂದ ಬರುತ್ತಿದ್ದ ಖಾಸಗಿ ಬಸ್, ತಿರುವಿನಲ್ಲಿ ರಸ್ತೆಯ ಬಲಭಾಗಕ್ಕೆ ಬಂದು ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ತುಫಾನ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡರೆ ನ್ನಲಾಗಿದೆ. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಲ್ಲಮ್ಮ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಪುಲ್ಕೆರಿ ಬೈಪಾಸ್‌ನಿಂದ ಮಾಳ ಘಾಟ್‌ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾಗಿ ಕುಂಟುತ್ತಾ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಹಲವಾರು ಅಪಘಾತ ನಡೆಯುತ್ತಿವೆ. ಆದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತುಕೊಳ್ಳುತ್ತಿಲ್ಲ. ಇದರಿಂದ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 23 Jan 2026 9:27 pm

ಪಿಎಸ್‌ಜಿಐಸಿ, ನಾಬಾರ್ಡ್ ಉದ್ಯೋಗಿಗಳ ವೇತನ ಏರಿಕೆ, ಪಿಂಚಣಿ ಪರಿಷ್ಕರಣೆಗೆ ಕೇಂದ್ರದ ಅಸ್ತು

ಹೊಸದಿಲ್ಲಿ, ಜ.23: ದೀರ್ಘಾವಧಿಯಿಂದ ಬಾಕಿಯಿರುವ ಸಾರ್ವಜನಿಕ ರಂಗದ ಜನರಲ್ ಇನ್ಶೂರೆನ್ಸ್ ಕಂಪೆನಿಗಳು (ಪಿಎಸ್‌ಜಿಐಸಿ) ಹಾಗೂ ಕೃಷಿ,ಗ್ರಾಮೀಣ ಅಭಿವೃದ್ಧಿಗಾಗಿನ ರಾಷ್ಟ್ರೀಯ ಬ್ಯಾಂಕ್ (ನಾಬಾರ್ಡ್) ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ನಾಬಾರ್ಡ್‌ನ ನಿವೃತ್ತ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆಯನ್ನು ಮಂಜೂರು ಮಾಡಿದೆ. ಸುಮಾರು 46,332 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ನಡೆಯು ಸೇವಾವಧಿಯಲ್ಲಿ ಪಿಂಚಣಿದಾರರ ಸುದೀರ್ಘ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡು ಅವರ ಆರ್ಥಿಕ ಕ್ಷೇಮ ಹಾಗೂ ಸಾಮಾಜಿಕ ಭದ್ರತೆಗೆ ರಾಜ್ಯ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಪಿಎಸ್‌ಜಿಐಸಿಗಳ ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ 2022ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಾರ್ವಜನಿಕರಂಗದ ವಿಮಾ ಕಂಪೆನಿಗಳ ಉದ್ಯೋಗಿಗಳ ವೇತನ ಪರಿಷ್ಕರಣೆಯಾಗಲಿದೆ. ಇದರಿಂದಾಗಿ ಮೂಲವೇತನ, ತುಟ್ಟಿಭತ್ತೆಯಲ್ಲಿ ಶೇ.14 ಹೆಚ್ಚಳ ಸೇರಿದಂತೆ ಒಟ್ಟಾರೆ ವೇತನದಲ್ಲಿ 12.41 ಶೇ.ಏರಿಕೆಯಾಗಲಿದೆ. 43,247 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. 2010ರ ಎಪ್ರಿಲ್ 1ರ ಆನಂತರ ಸೇರ್ಪಡೆಗೊಂಡ ಸಿಬ್ಬಂದಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಉದ್ಯೋಗದಾತರ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಏಕರೂಪವಾಗಿ ಶೇ.30ರಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ 14,615 ಮಂದಿ ಕುಟುಂಬ ಪಿಂಚಣಿದಾರರು ಪಡೆಯಲಿದ್ದಾರೆ. ಕೇಂದ್ರದ ಬೊಕ್ಕಸಕ್ಕೆ 8,170 ಕೋಟಿ ರೂ. ಹೊರೆ ಬೀಳಲಿದೆ. ನಾಬಾರ್ಡ್ ಉದ್ಯೋಗಿಗಳ ವೇತನ, ಭತ್ತೆಯಲ್ಲಿ ಶೇ.20 ಹೆಚ್ಚಳ ನಾಬಾರ್ಡ್‌ನ ಗ್ರೂಪ್ ಎ, ಬಿ ಮತ್ತು ಸಿ ಉದ್ಯೋಗಿಗಳ ವೇತನ ಹಾಗೂ ಭತ್ತೆಗಳಲ್ಲಿ ಶೇ.20ರಷ್ಟು ಏರಿಕೆಯನ್ನು ಮಾಡಲಾಗಿದ್ದು, 3800 ಮಂದಿ ಸೇವಾ ನಿರತರು ಹಾಗೂ ಮಾಜಿ ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಪಿಂಚಣಿ ಪರಿಷ್ಕರಣೆಯಿಂದಾಗಿ ನಿವೃತ್ತರ ಮೂಲ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯು ಮಾಜಿ ಆರ್‌ಬಿಐ-ನಬಾರ್ಡ್ ನಿವೃತ್ತರಿಗೆ ಸರಿಸಮವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿವೃತ್ತರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಮೂಲ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಹಾರದ ಮೇಲಿನ ಶೇ.10ರಷ್ಟು ಏರಿಕೆ ಮಾಡಲಾಗಿದೆ. 2022ರ ನವೆಂಬರ್ 1ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. 22,580 ಪಿಂಚಣಿದಾರರು ಹಾಗೂ 8189 ಕುಟುಂಬ ಪಿಂಚಣಿದಾರರು ಸೇರಿದಂತೆ ಒಟ್ಟು 30,769 ಮಂದಿ ಪ್ರಯೋಜನ ಪಡೆಯಲಿದ್ದಾರೆ. ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರವಾದ ಆರ್ಥಿಕ ಬೆಳವಣಿಗೆಗೆ ಆಧಾರವಾಗಿರುವ ಸಂಸ್ಥೆಗಳನ್ನು ಬಲಪಡಿಸುವ ಬದ್ಧತೆಯನ್ನು ತಾನು ಹೊಂದಿರುವುದಾಗಿ ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

ವಾರ್ತಾ ಭಾರತಿ 23 Jan 2026 9:26 pm

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಮುಂಬೈ,ಜ.23: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಬರುತ್ತಿದ್ದು, ಶುಕ್ರವಾರ 91.99 ರೂ.ಗೆ ಇಳಿದಿದ್ದು, ಸಾರ್ವಕಾಲಿಕವಾಗಿ ಅತ್ಯಧಿಕ ಕುಸಿತವನ್ನು ಕಂಡಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ 91.88 ರೂ.ಗೆ ಸ್ಥಿರಗೊಂಡಿದೆ. ವಿದೇಶಿ ಹೂಡಿಕೆದಾರರು ಅತ್ಯಧಿಕ ಪ್ರಮಾಣದಲ್ಲಿ ಶೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡುವ ಕುರಿತ ಅನಿಶ್ಚಿತತೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. ಗುರುವಾರದಂದು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 7 ಪೈಸೆಯಷ್ಟು ಕುಸಿತವನ್ನು ಕಂಡಿದ್ದು, 91.58 ರೂ. ಆಗಿತ್ತು. ಜನವರಿ 21ರಂದು ರೂಪಾಯಿ ಮೌಲ್ಯವು 91.65 ಆಗಿದ್ದು, ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಕುಸಿತವಾಗಿತ್ತು.

ವಾರ್ತಾ ಭಾರತಿ 23 Jan 2026 9:24 pm

Ukraine Peace Plan: ಅರಬ್ ನೆಲದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 4 ವರ್ಷ ಮುಗಿಯುತ್ತಿದೆ, ಈ ಇಬ್ಬರ ಕದನ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ವಿನಾಶಕ್ಕೆ ಕೂಡ ಕಾರಣವಾಗಿದೆ. ಹೀಗಾಗಿಯೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರು.

ಒನ್ ಇ೦ಡಿಯ 23 Jan 2026 9:22 pm

ಜ.25ರಂದು ಎಂ.ಎಂ.ಹೆಗ್ಡೆ ಪ್ರಶಸ್ತಿ ಪ್ರದಾನ

ಉಡುಪಿ, ಜ.23: ಯಕ್ಷಗಾನ ಕೇಂದ್ರ ಇಂದ್ರಾಳಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ ಇದರ 53ನೇ ವಾರ್ಷಿಕೋತ್ಸವ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಹಯೋಗದಲ್ಲಿ ಜ.25ರ ರವಿವಾರ ಅಪರಾಹ್ನ 3:00ಗಂಟೆಗೆ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಹೆಯ ಪ್ರೊವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್, ನಿವೃತ್ತ ಇಂಜಿನಿಯರ್ ವೈ. ಸೀತಾರಾಮ ಶೆಟ್ಟಿ ಉಪಸ್ಥಿತರಿವರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ವೇಷಧಾರಿ ಚಂದ್ರಗೌಡ ಗೋಳಿಕೆರೆ ಇವರಿಗೆ ಎಂ.ಎಂ ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ ಹಾಗೂ ಸರ್ಟಿಫಿ ಕೇಟ್ ಕೋರ್ಸ್‌ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಮತ್ತು ಸಂಜೆ 6:00ರಿಂದ ಕೇಂದ್ರದ ವಿದ್ಯಾರ್ಥಿ ಗಳಿಂದ ‘ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನವಿರುತ್ತದೆ ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 23 Jan 2026 9:21 pm

ಜನಾರ್ದನ ರೆಡ್ಡಿ-ಶ್ರೀರಾಮುಲುಗೆ ಸೇರಿದ ಬಳ್ಳಾರಿ ಮಾಡೆಲ್ ಹೌಸ್‌ಗೆ ಬೆಂಕಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್‌ನವರು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಂಜೆ ಸುಮಾರು 6:30ಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಬಹುಪಾಲು ಸುಟ್ಟು ಹೋಗಿದೆ. ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಇದರಿಂದಾಗಿ ನಗರದಲ್ಲಿ ಮತ್ತೆ ರಾಜಕೀಯ ಕಿಚ್ಚು ಜೋರಾಗಿದೆ.

ವಿಜಯ ಕರ್ನಾಟಕ 23 Jan 2026 9:19 pm

ನಿಟ್ಟೆ: ಸರಿತಾ ಶೆಟ್ಟಿಗೆ ಪಿಹೆಚ್.ಡಿ ಪದವಿ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರಿತಾ ಶೆಟ್ಟಿ ಅವರು ‘ಡೆವಲಪ್ಮೆಂಟ್ ಆಫ್ ನ್ಯಾಚುರಲ್ ಲ್ಯಾಂಗ್ವೇಜ್ ಡಯಲಾಗ್ ಸಿಸ್ಟಮ್ ಫಾರ್ ಕನ್ನಡ ಲ್ಯಾಂಗ್ವೇಜ್ ಇನ್ ಹೆಲ್ತ್ ಕೇರ್ ಡೊಮೈನ್’ ಎಂಬ ವಿಷಯ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಸರಿತಾ ಅವರು ಕಂಪ್ಯೂಟರ್ ಸಾಯನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಸಾರಿಕಾ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಇವರು ನಿಟ್ಟೆಯ ಚಂದ್ರಹಾಸ ಶೆಟ್ಟಿ ಹಾಗೂ ಕುಮುದಾ ಶೆಟ್ಟಿ ದಂಪತಿಯ ಅವಳಿ ಪುತ್ರಿಯರಲ್ಲಿ ಒಬ್ಬರು. ಇವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿದ್ದ ದಿ.ಎನ್. ವಿನಯ ಹೆಗ್ಡೆ ಭರಿಸಿದ್ದರು. ಸರಿತಾ ಮಂಗಳೂರಿನ ಎಂಆರ್‌ಪಿಎಲ್. ಉದ್ಯೋಗಿ ಪ್ರಸನ್ನ ಕುಮಾರ್ ಶೆಟ್ಟಿ ಇವರ ಪತ್ನಿ.

ವಾರ್ತಾ ಭಾರತಿ 23 Jan 2026 9:18 pm

ಅಮೆರಿಕ ಜವಳಿ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರಧಾನಿ ಮೋದಿ ಹೊಣೆ: ರಾಹುಲ್ ಗಾಂಧಿ

ಹೊಸದಿಲ್ಲಿ,ಜ.23: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ‘ಸತ್ತ ಆರ್ಥಿಕತೆ’ ದಾಳಿಯನ್ನು ಶುಕ್ರವಾರ ಪುನರಾರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಮೆರಿಕದ ಭಾರೀ ಸುಂಕಗಳು ಭಾರತದ ಜವಳಿ ಕ್ಷೇತ್ರದ ಬೀರಿರುವ ಪ್ರತಿಕೂಲ ಪರಿಣಾಮವನ್ನು ಉಲ್ಲೇಖಿಸಿದ್ದಾರೆ. ಉದ್ಯೋಗ ನಷ್ಟ ಮತ್ತು ರಫ್ತುದಾರರಿಗೆ ಎದುರಾಗಿರುವ ಹೆಚ್ಚುತ್ತಿರುವ ಅನಿಶ್ಚಿತತೆಗಳ ನಡುವೆ ಸರಕಾರದ ನಿಷ್ಕ್ರಿಯತೆಯನ್ನು ಆರೋಪಿಸಿರುವ ಅವರು, ಇದಕ್ಕಾಗಿ ಮೋದಿಯವರನ್ನು ಹೊಣೆಯಾಗಿಸಿದ್ದಾರೆ. ‘ಅಮೆರಿಕದ ಶೇ.50ರಷ್ಟು ಸುಂಕಗಳು ಮತ್ತು ಅನಿಶ್ಚಿತತೆ ಭಾರತದ ಜವಳಿ ರಫ್ತುದಾರರನ್ನು ತೀವ್ರವಾಗಿ ಬಾಧಿಸುತ್ತಿವೆ. ಉದ್ಯೋಗ ನಷ್ಟಗಳು, ಫ್ಯಾಕ್ಟರಿಗಳ ಮುಚ್ಚುವಿಕೆಗಳು ಮತ್ತು ತಗ್ಗಿದ ಬೇಡಿಕೆಗಳು ನಮ್ಮ ‘ಸತ್ತ ಆರ್ಥಿಕತೆ’ಯ ವಾಸ್ತವವಾಗಿವೆ’ ಎಂದು ರಾಹುಲ್ ಎಕ್ಸ್‌ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ತೀವ್ರ ಪರಿಣಾಮದ ಹೊರತಾಗಿಯೂ ಸರಕಾರವು ಬಿಕ್ಕಟ್ಟಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ. 4.5 ಕೋಟಿಗೂ ಅಧಿಕ ಉದ್ಯೋಗಗಳು ಮತ್ತು ಲಕ್ಷಾಂತರ ಉದ್ಯಮಗಳು ಅಪಾಯದಲ್ಲಿದ್ದರೂ ಮೋದಿ ಯಾವುದೇ ಪರಿಹಾರವನ್ನು ನೀಡಿಲ್ಲ,ಅವರು ಸುಂಕಗಳ ಬಗ್ಗೆ ಮಾತೇ ಆಡಲಿಲ್ಲ. ಮೋದಿಜಿ, ನೀವೇ ಹೊಣೆಯಾಗಿದ್ದೀರಿ, ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಗಮನ ಹರಿಸಿ ಎಂದು ವಿಪಕ್ಷ ನಾಯಕ ರಾಹುಲ್ ಬರೆದಿದ್ದಾರೆ. ಈ ಹಿಂದೆ ಭಾರತದ ಆರ್ಥಿಕತೆಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀಕ್ಷ್ಣ ಟೀಕೆಯನ್ನು ಪ್ರತಿಧ್ವನಿಸಿದ್ದ ರಾಹುಲ್, ಭಾರತದ ಆರ್ಥಿಕತೆಯು ಸತ್ತಿದೆ ಮತ್ತು ಈ ಸ್ಥಿತಿಗೆ ಮೋದಿ ಸರಕಾರದ ನೀತಿಗಳೇ ಕಾರಣ ಎಂದು ಹೇಳಿದ್ದರು.

ವಾರ್ತಾ ಭಾರತಿ 23 Jan 2026 9:14 pm

Uttar Pradesh | ರಾಜಕೀಯ ಪೋಸ್ಟ್‌ಗಳಿಗಾಗಿ 14 ವರ್ಷದ ಬಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಯೋಗಿ ಸರಕಾರ!

ಲಕ್ನೊ: ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸರ್ಕಾರದ ನೀತಿಗಳು ಹಾಗೂ ಸಾಮಾಜಿಕ–ಆರ್ಥಿಕ ಪರಿಸ್ಥಿತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತಿದ್ದ 14 ವರ್ಷದ ಬಾಲಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಬಾಲಕನನ್ನು ಅಶ್ವಮಿತ್ ಗೌತಮ್ ಎಂದು ಗುರುತಿಸಲಾಗಿದೆ. ಅಶ್ವಮಿತ್ ಗೌತಮ್‌ನ ಆನ್‌ಲೈನ್ ಚಟುವಟಿಕೆಗಳ ಕುರಿತು ಲಕ್ನೊ ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಬಾಲಕನ ವಿರುದ್ಧ ಹೇರಿರುವ ನಿರ್ದಿಷ್ಟ ಸೆಕ್ಷನ್‌ಗಳು ಅಥವಾ ದೂರುದಾರರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ರಾಜ್ಯ ಸರ್ಕಾರದ ಕುರಿತು ಮಾಡಿದ್ದ ವಿಮರ್ಶಾತ್ಮಕ ಪೋಸ್ಟ್‌ಗೆ ಈ ಪ್ರಕರಣ ಸಂಬಂಧಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ. ಗಮನಾರ್ಹ ಪ್ರಮಾಣದ ಫಾಲೋವರ್‌ಗಳನ್ನು ಹೊಂದಿರುವ ಅಶ್ವಮಿತ್ ಗೌತಮ್, ತನ್ನ ದೀರ್ಘಾವಧಿಯ ವಿಶ್ಲೇಷಣಾತ್ಮಕ ವೀಡಿಯೊಗಳಲ್ಲಿ ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚ, ಯುವಜನರಲ್ಲಿನ ನಿರುದ್ಯೋಗ, ಹಿಗ್ಗುತ್ತಿರುವ ಸಾಮಾಜಿಕ ಅಸಮಾನತೆ ಹಾಗೂ ದಲಿತರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಚರ್ಚಿಸುತ್ತಿದ್ದ ಎನ್ನಲಾಗಿದೆ. ಯಾವುದೇ ಸ್ಕ್ರಿಪ್ಟ್ ಇಲ್ಲದ ಈತನ ವೀಡಿಯೊಗಳು ಉತ್ತರ ಪ್ರದೇಶದಾದ್ಯಂತ ಇರುವ ಯುವ ಪ್ರೇಕ್ಷಕರ ಗಮನ ಸೆಳೆದಿವೆ. ಅಪ್ರಾಪ್ತ ಬಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಚಾಲನೆ ನೀಡಿರುವುದಕ್ಕೆ ನಾಗರಿಕ ಸಂಘಟನೆಗಳ ಸದಸ್ಯರು, ಡಿಜಿಟಲ್ ಹಕ್ಕುಗಳ ಕಾರ್ಯಕರ್ತರು ಹಾಗೂ ವಿರೋಧ ಪಕ್ಷಗಳ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಾಲಕನ ರಾಜಕೀಯ ಅಭಿವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಹಲವರು ಪ್ರಶ್ನಿಸಿದ್ದು, ಇದನ್ನು ಕಾನೂನು ಜಾರಿ ಕ್ರಮಕ್ಕಿಂತಲೂ ಬೆದರಿಕೆಯಾಗಿ ಅವರು ಆಕ್ಷೇಪಿಸಿದ್ದಾರೆ. ಅಶ್ವಮಿತ್ ಗೌತಮ್ ಯಾವುದೇ ಹಿಂಸೆಗೆ ಅಥವಾ ದ್ವೇಷಕ್ಕೆ ಪ್ರಚೋದನೆ ನೀಡಿಲ್ಲ. ಆತನ ವೀಡಿಯೊ ತುಣುಕುಗಳಿಗೆ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ರಕ್ಷಣೆ ಇದೆ ಎಂದು ಅಶ್ವಮಿತ್ ಗೌತಮ್ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ನೈಜ ಪ್ರಜಾತಂತ್ರದಲ್ಲಿ ಉದ್ಯೋಗ, ಹಣದುಬ್ಬರ ಹಾಗೂ ಸಾಮಾಜಿಕ ನ್ಯಾಯದ ಕುರಿತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಅಪರಾಧವಲ್ಲ ಎಂದು ಅವರು ವಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ವಾರ್ತಾ ಭಾರತಿ 23 Jan 2026 9:10 pm

ಜಮ್ಮುಕಾಶ್ಮೀರ ಗುಂಡಿನ ಕಾಳಗ| ಕಥುವಾದಲ್ಲಿ ಜೈಷ್ ಭಯೋತ್ಪಾದಕನ ಹತ್ಯೆ

ಹೊಸದಿಲ್ಲಿ,ಜ.23: ಕಥುವಾದ ಬಿಲಾವರ್ ಪ್ರದೇಶದಲ್ಲಿ ಶುಕ್ರವಾರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜೈಷ್‌ ಮುಹಮ್ಮದ್‌ಗೆ ಸೇರಿದ ಭಯೋತ್ಪಾದಕನೋರ್ವ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸೇನೆ ಮತ್ತು ಸಿಆರ್‌ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮುಕಾಶ್ಮೀರ ಪೊಲೀಸರ ಸಣ್ಣ ತಂಡವೊಂದು ಓರ್ವ ಪಾಕಿಸ್ತಾನಿ ಜೈಷ್ ಭಯೋತ್ಪಾದಕನ್ನು ಹೊಡೆದುರುಳಿಸಿದೆ ಎಂದು ಜಮ್ಮು ಐಜಿಪಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಥುವಾದಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

ವಾರ್ತಾ ಭಾರತಿ 23 Jan 2026 9:07 pm

ವಾಯುಮಾಲಿನ್ಯ ಸಮಸ್ಯೆ| ನೀವು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ: ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ತರಾಟೆ, ವೇತನ ಸ್ಥಗಿತ ಎಚ್ಚರಿಕೆ

ಮುಂಬೈ,ಜ.23: ವಾಯುಮಾಲಿನ್ಯವನ್ನು ತಗ್ಗಿಸುವಂತೆ ತನ್ನ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮುನ್ಸಿಪಲ್ ಅಧಿಕಾರಿಗಳನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಉಚ್ಚ ನ್ಯಾಯಾಲಯವು,‌ ಅವರೂ ಇದೇ ಅಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ ಮತ್ತು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ ಎಂದು ಬೆಟ್ಟು ಮಾಡಿತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿತು. ನ್ಯಾಯಾಲಯವು ಪದೇ ಪದೇ ಹೊರಡಿಸಿದ್ದ ಆದೇಶಗಳನ್ನು ಪಾಲಿಸದ್ದಕ್ಕಾಗಿ ಮತ್ತು ಹದಗೆಡುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲಗೊಂಡಿದ್ದಕ್ಕಾಗಿ ಮುಂಬೈ ಮತ್ತು ನವಿ ಮುಂಬೈ ಮಹಾನಗರ ಪಾಲಿಕೆಗಳ ಆಯುಕ್ತರ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಮುಖ್ಯ ನ್ಯಾಯಾಧೀಶ ಶ್ರೀ ಚಂದ್ರಶೇಖರ್‌ ಮತ್ತು ನ್ಯಾ.ಸುಮನ್ ಶ್ಯಾಮ್ ಅವರ ಪೀಠವು ಎಚ್ಚರಿಕೆ ನೀಡಿತು. ‘ಮುಂಬೈನಲ್ಲಿರುವ ಪ್ರತಿಯೊಬ್ಬರಂತೆಯೇ ಮುನ್ಸಿಪಲ್ ಅಧಿಕಾರಿಗಳೂ ಅಶುದ್ಧ ವಾಯುವನ್ನು ಉಸಿರಾಡುತ್ತಿದ್ದಾರೆ. ನೀವು ಅನ್ಯಗ್ರಹದಲ್ಲಿ ವಾಸವಾಗಿಲ್ಲ. ನಾವೆಲ್ಲ ಇದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ’ ಎಂದು ಪೀಠವು ಹೇಳಿತು. ಮುಂದಿನ ವಿಚಾರಣೆಯು ಜ.27ರಂದು ನಡೆಯಲಿದೆ. 2023ರಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುನ್ಸಿಪಲ್ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು.

ವಾರ್ತಾ ಭಾರತಿ 23 Jan 2026 9:07 pm

ಮುಡಾ ಪ್ರಕರಣ: 20.85 ಕೋಟಿ ರೂ. ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಈಡಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ), ಬೆಂಗಳೂರು ವಲಯ ಕಚೇರಿ ಅಧಿಕಾರಿಗಳ ತಂಡ 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ತಾತ್ಕಾಲಿಕ ಜಪ್ತಿಗೊಂಡ ಆಸ್ತಿಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆಗೊಂಡ 6 ಮುಡಾ ನಿವೇಶನಗಳು, 3 ಇತರೆ ಮಾದರಿ ಆಸ್ತಿಗಳು ಹಾಗೂ ಒಂದು ವಾಣಿಜ್ಯ ಕಟ್ಟಡ ಸೇರಿವೆ. ಜನವರಿ 21ರಂದು ಈಡಿ ದಾಳಿಯನ್ನು ನಡೆಸಿದೆ. ಮೈಸೂರಿನಲ್ಲಿ ದಾಖಲಾಗಿದ್ದ ಮುಡಾ ಪ್ರಕರಣದ ಎಫ್‍ಐಆರ್ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಭೂಸ್ವಾಧೀನಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆ) ನಿಯಮಗಳು-2009 (2015ರ ತಿದ್ದುಪಡಿ ಸಹಿತ) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಯಂ ಭೂಸರಣಿ ಪ್ರೋತ್ಸಾಹ ಯೋಜನೆ) ನಿಯಮಗಳು-1991ರ ಘೋರ ಉಲ್ಲಂಘನೆಯೊಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಈಡಿ ಹೇಳಿದೆ. ಇದೇ ವೇಳೆ, ಮುಡಾ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವಿನ ಸಂಬಂಧ ಹಾಗೂ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಹಾಗೂ ಲೇಔಟ್ ಅನುಮೋದನೆಗಾಗಿ ನಗದು ಪಾವತಿ ನಡೆದಿರುವುದಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಈ.ಡಿ. ತಿಳಿಸಿದೆ. ಇದಕ್ಕೂ ಮುನ್ನ, ಈಡಿ 283 ಕಾನೂನುಬಾಹಿರ ಮುಡಾ ನಿವೇಶನಗಳು ಮತ್ತು ಮೂರು ಜನರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿತ್ತು. ನಿವೇಶನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು 16.09.2025ರಂದು ಪಿಎಂಎಲ್‍ಎ ಅಡಿಯಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈವರೆಗೆ ಈ ಪ್ರಕರಣದಲ್ಲಿ ಸುಮಾರು 460 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿ ಇದಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 23 Jan 2026 9:05 pm

ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಆರೋಪ: ಅನಿಲ್‌ ಅಂಬಾನಿ, ADAGಗೆ ಮತ್ತೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್

ಹೊಸದಿಲ್ಲಿ,ಜ.23: ಅನಿಲ್‌ ಧೀರುಭಾಯಿ ಅಂಬಾನಿ ಗ್ರೂಪ್ (ADAG) ಮತ್ತು ಅದರ ಸಮೂಹ ಕಂಪೆನಿಗಳು ಭಾಗಿಯಾಗಿರುವ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಂಬಾನಿ ಮತ್ತು ADAGಗೆ ಹೊಸದಾಗಿ ನೋಟಿಸ್‌ಗಳನ್ನು ಹೊರಡಿಸಿದೆ. ಆರೋಪಿಸಲಾಗಿರುವ ವಂಚನೆ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ) ನಡೆಸುತ್ತಿರುವ ತನಿಖೆಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಹತ್ತು ದಿನಗಳಲ್ಲಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು. ಅರ್ಜಿದಾರರಾದ ಮಾಜಿ ಕೇಂದ್ರ ಕಾರ್ಯದರ್ಶಿ ಇಎಎಸ್ ಶರ್ಮಾ ಸಲ್ಲಿಸಿರುವ ಪಿಐಎಲ್‌ನ ನೋಟಿಸ್‌ಗಳನ್ನು ಅಂಬಾನಿ ಮತ್ತು ADAGಗೆ ಈಗಾಗಲೇ ಜಾರಿಗೊಳಿಸಲಾಗಿದೆ ಎನ್ನುವುದನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು ಗಮನಕ್ಕೆ ತೆಗೆದುಕೊಂಡಿತು. ಪೀಠವು ಪಿಐಎಲ್‌ಗೆ ಸಂಬಂಧಿಸಿದಂತೆ ಕಳೆದ ವರ್ಷದ ನ.18ರಂದು ಕೇಂದ್ರ, ಸಿಬಿಐ, ಈ.ಡಿ., ಅನಿಲ್ ಅಂಬಾನಿ ಮತ್ತು ADAGಗೆ ನೋಟಿಸ್‌ಗಳನ್ನು ಹೊರಡಿಸಿತ್ತು. ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಮತ್ತು ತಮ್ಮ ಉತ್ತರಗಳನ್ನು ಸಲ್ಲಿಸಲು ತಾನು ಅನಿಲ್‌ ಅಂಬಾನಿ ಮತ್ತು ADAGಗೆ ಕೊನೆಯ ಅವಕಾಶವನ್ನು ನೀಡುತ್ತಿರುವುದಾಗಿ ಪೀಠವು ಸ್ಪಷ್ಟಪಡಿಸಿತು. ಮುಂದಿನ ವಿಚಾರಣೆಯನ್ನು ಹತ್ತು ದಿನಗಳ ಬಳಿಕ ನಿಗದಿಗೊಳಿಸಲಾಗಿದೆ.

ವಾರ್ತಾ ಭಾರತಿ 23 Jan 2026 9:05 pm

Jacob & Coದಿಂದ 13.7 ಕೋಟಿ ರೂ. ಮೌಲ್ಯದ ವಂತಾರ ವಾಚ್ ಬಿಡುಗಡೆ; ಐಷಾರಾಮಿ ವಾಚ್‌ಗಳು ಇಷ್ಟೊಂದು ದುಬಾರಿ ಯಾಕೆ?

ಐಷಾರಾಮಿ ವಾಚ್ ತಯಾರಕ ಜಾಕೋಬ್ & ಕಂಪೆನಿ ಜನವರಿ 21ರಂದು ‘ಒಪೆರಾ ವಂತಾರ ಗ್ರೀನ್ ಕ್ಯಾಮೊ’ (Opera Vantara Green Camo) ವಾಚ್ ಅನ್ನು ಬಿಡುಗಡೆ ಮಾಡಿದೆ. ಇದರ ಮೌಲ್ಯ 1.5 ಮಿಲಿಯನ್ ಡಾಲರ್‌ (ಸುಮಾರು 13.7 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಈ ವಾಚ್, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ನೇತೃತ್ವದ ಗುಜರಾತ್‌ನಲ್ಲಿರುವ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣಾ ಕೇಂದ್ರ ‘ವಂತಾರ’ದಿಂದ ಪ್ರೇರಿತವಾಗಿದೆ. ಜಾಕೋಬ್ & ಕಂಪೆನಿಯ ಒಪೆರಾ ಕಲೆಕ್ಷನ್‌ನ ಈ ವಾಚ್‌ನಲ್ಲಿ ಡಯಲ್‌ನ ಮಧ್ಯಭಾಗದಲ್ಲಿ ಸಿಂಹ ಮತ್ತು ಬಂಗಾಳ ಹುಲಿಯ ಮಿನಿಯೇಚರ್ ಅಳವಡಿಸಲಾಗಿದೆ. ಅನಂತ್ ಅಂಬಾನಿ ಅವರ ಪುಟ್ಟ ಪುತ್ಥಳಿಯೂ ಇದರಲ್ಲಿ ಸೇರಿದೆ. ಇದೇ ವೇಳೆ, ಕೇಸ್ ಮತ್ತು ಡಯಲ್ ಅನ್ನು 397 ರತ್ನದಕಲ್ಲುಗಳಿಂದ ಅಲಂಕರಿಸಲಾಗಿದೆ. ಇದರಲ್ಲಿ ಡೆಮಂಟಾಯ್ಡ್ ಗಾರ್ನೆಟ್‌ಗಳು, ಟ್ಸಾವೊರೈಟ್‌ಗಳು, ಹಸಿರು ನೀಲಮಣಿಗಳು ಮತ್ತು ಬಿಳಿ ವಜ್ರಗಳು ಸೇರಿವೆ. ಒಟ್ಟು ರತ್ನಗಳ ತೂಕ 21.98 ಕ್ಯಾರೆಟ್‌. ಜಾಕೋಬ್ & ಕಂಪೆನಿ ಇಂತಹ ವಿಶೇಷ ಕೈಗಡಿಯಾರಗಳನ್ನು ತಯಾರಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಸಂಸ್ಥೆ ರಾಮ ಜನ್ಮಭೂಮಿ ಆವೃತ್ತಿಯ ಕೈಗಡಿಯಾರವನ್ನೂ ಬಿಡುಗಡೆ ಮಾಡಿತ್ತು. ‘ಐಷಾರಾಮಿ’ ವಾಚ್‌ಗಳು ದುಬಾರಿ ಯಾಕೆ? ಐಷಾರಾಮಿ ಕೈಗಡಿಯಾರಗಳು ಅವುಗಳ ಚಲನ ವ್ಯವಸ್ಥೆ, ಬಳಸುವ ವಸ್ತುಗಳು ಮತ್ತು ಉತ್ಪಾದನಾ ವಿಧಾನಗಳ ಕಾರಣದಿಂದ ಸಾಮಾನ್ಯ ವಾಚ್‌ಗಳಿಗಿಂತ ಭಿನ್ನವಾಗಿವೆ. ಸಾಮೂಹಿಕ ಉತ್ಪಾದನೆಯ ಕ್ವಾರ್ಟ್ಜ್ ಗಡಿಯಾರಗಳಿಗಿಂತ ಭಿನ್ನವಾಗಿ, ಈ ಕೈಗಡಿಯಾರಗಳನ್ನು ನೂರಾರು ಘಟಕಗಳನ್ನು ಬಳಸಿ ಜೋಡಿಸಲಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಯಿಂದಲೇ ನಿರ್ಮಿಸಲಾಗುತ್ತದೆ. ಟೂರ್‌ಬಿಲ್ಲನ್‌ಗಳು (ಸಂಕೀರ್ಣ ತಿರುಗುವ ವ್ಯವಸ್ಥೆ), ನಿಮಿಷ ಪುನರಾವರ್ತಕಗಳು ಮತ್ತು ಶಾಶ್ವತ ಕ್ಯಾಲೆಂಡರ್‌ಗಳಂತಹ ಅತ್ಯಂತ ಸಂಕೀರ್ಣ ಘಟಕಗಳನ್ನು ಈ ಗಡಿಯಾರಗಳು ಒಳಗೊಂಡಿರುತ್ತವೆ. ಇವುಗಳಿಗೆ ಪರಿಣತ ಎಂಜಿನಿಯರಿಂಗ್ ಜ್ಞಾನ ಮತ್ತು ವಿಶೇಷ ಗಡಿಯಾರ ತಯಾರಿಕಾ ಕೌಶಲ್ಯ ಅಗತ್ಯವಿರುತ್ತದೆ. ಆದ್ದರಿಂದ, ಐಷಾರಾಮಿ ಕೈಗಡಿಯಾರಗಳ ಬೆಲೆ ಅವುಗಳಲ್ಲಿ ಬಳಸಿದ ವಸ್ತುಗಳಿಗೆ ಮಾತ್ರ ಸೀಮಿತವಾಗದೆ, ಶ್ರಮ, ಬ್ರ್ಯಾಂಡ್ ಇತಿಹಾಸ ಮತ್ತು ಮುಖ್ಯವಾಗಿ ವಿರಳತೆಯನ್ನು ಪ್ರತಿಬಿಂಬಿಸುತ್ತದೆ. ಐಷಾರಾಮಿ ವಾಚ್‌ಗಳ ಪಟ್ಟಿಯಲ್ಲಿ ಸ್ಥಾಪಿತ ಸ್ವಿಸ್ ಬ್ರ್ಯಾಂಡ್‌ಗಳ ಯಾಂತ್ರಿಕ ಕೈಗಡಿಯಾರಗಳ ಬೆಲೆ ಸಾಮಾನ್ಯವಾಗಿ ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇನ್ನು ಬೆಸ್ಪೋಕ್ ಅಥವಾ ಅತ್ಯಂತ ಸಂಕೀರ್ಣ ವಾಚ್‌ಗಳು ಕೋಟಿಗಟ್ಟಲೆ ಬೆಲೆ ಹೊಂದಿರುತ್ತವೆ. ಜಾಗತಿಕ ಐಷಾರಾಮಿ ಕೈಗಡಿಯಾರ ಮಾರುಕಟ್ಟೆಯಲ್ಲಿ ಯಾವ ಬ್ರ್ಯಾಂಡ್‌ಗಳು ಪ್ರಾಬಲ್ಯ ಹೊಂದಿವೆ? ಜಾಗತಿಕವಾಗಿ ಐಷಾರಾಮಿ ಕೈಗಡಿಯಾರ ಉದ್ಯಮವು ದಶಕಗಳು, ಕೆಲವೊಮ್ಮೆ ಶತಮಾನಗಳ ಇತಿಹಾಸ ಹೊಂದಿರುವ ಸ್ವಿಸ್ ತಯಾರಕರ ಸಣ್ಣ ಗುಂಪಿನಿಂದಲೇ ಆಳಲ್ಪಡುತ್ತಿದೆ. ರೋಲೆಕ್ಸ್ ಆದಾಯದ ದೃಷ್ಟಿಯಿಂದ ಅತಿದೊಡ್ಡ ಕಂಪೆನಿಯಾಗಿಯೇ ಉಳಿದಿದೆ. ಇವುಗಳನ್ನು ಮರುಮಾರಾಟಗಾರರಿಂದ ಖರೀದಿಸಿದರೂ ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ. ರೋಲೆಕ್ಸ್ ಸೀಮಿತ ಪ್ರಮಾಣದಲ್ಲಿ ಮಾತ್ರ ವಾಚ್‌ಗಳನ್ನು ಬಿಡುಗಡೆ ಮಾಡುವುದರಿಂದ ಖರೀದಿದಾರರು ದೀರ್ಘಕಾಲ ಕಾಯಬೇಕಾಗುತ್ತದೆ. ಪಾಟೆಕ್ ಫಿಲಿಪ್, ಆಡೆಮರ್ಸ್ ಪಿಗುಯೆಟ್ ಮತ್ತು ವಾಚೆರಾನ್ ಕಾನ್ಸ್ಟಾಂಟಿನ್ ಕಡಿಮೆ ಪ್ರಮಾಣದಲ್ಲಿ ಕೈಗಡಿಯಾರಗಳನ್ನು ಉತ್ಪಾದಿಸುತ್ತವೆ. ಆದರೆ ಇವುಗಳ ಬೆಲೆ ಅತ್ಯಂತ ದುಬಾರಿಯಾಗಿರುತ್ತದೆ. ಒಮೆಗಾ, ಜೇಗರ್-ಲೀಕೌಲ್ಟ್ರೆ, ಐಡಬ್ಲ್ಯೂಸಿ ಮತ್ತು ಬ್ರೆಗುಯೆಟ್‌ನಂತಹ ಬ್ರ್ಯಾಂಡ್‌ಗಳು ದುಬಾರಿ ಪಟ್ಟಿಯ ಮಧ್ಯಮ ವಿಭಾಗದಲ್ಲಿದ್ದು, ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಉತ್ಪಾದನಾ ಸಾಮರ್ಥ್ಯವನ್ನು ಒದಗಿಸುತ್ತವೆ. ಜಾಕೋಬ್ & ಕೋ ಈ ಪಟ್ಟಿಯ ಅಗ್ರ ತುದಿಯಲ್ಲಿ ನಿಂತಿದ್ದು, ಅಲ್ಟ್ರಾ-ಲೋ-ವಾಲ್ಯೂಮ್ ಹಾಗೂ ಅತ್ಯಾಕರ್ಷಕ ಕೈಗಡಿಯಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಗಡಿಯಾರ ಮತ್ತು ಆಭರಣಗಳ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತದೆ. ಭಾರತದಲ್ಲಿ ಐಷಾರಾಮಿ ಕೈಗಡಿಯಾರಗಳ ಮಾರುಕಟ್ಟೆ ಎಷ್ಟು ದೊಡ್ಡದು? ಭಾರತವು ಉನ್ನತ ಮಟ್ಟದಲ್ಲಿ ದೊಡ್ಡ ದೇಶೀಯ ಐಷಾರಾಮಿ ಕೈಗಡಿಯಾರ ತಯಾರಿಕಾ ಉದ್ಯಮವನ್ನು ಹೊಂದಿಲ್ಲ. ಅಧಿಕೃತ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟವಾಗುವ ಆಮದು ಮಾಡಿದ ಸ್ವಿಸ್ ಬ್ರ್ಯಾಂಡ್‌ಗಳಿಂದ ಮಾರುಕಟ್ಟೆ ಬಹುತೇಕ ಸಂಪೂರ್ಣವಾಗಿ ನಿಯಂತ್ರಿತವಾಗಿದೆ. ಭಾರತದಲ್ಲಿ ಪ್ರವೇಶ ಮಟ್ಟದ ಐಷಾರಾಮಿ ಯಾಂತ್ರಿಕ ಕೈಗಡಿಯಾರಗಳ ಬೆಲೆ ಸಾಮಾನ್ಯವಾಗಿ ರೂ.3–5 ಲಕ್ಷದಿಂದ ಆರಂಭವಾಗುತ್ತದೆ. ರೋಲೆಕ್ಸ್, ಪಾಟೆಕ್ ಫಿಲಿಪ್ ಅಥವಾ ಆಡೆಮರ್ಸ್ ಪಿಗುಯೆಟ್‌ನ ಐಕಾನಿಕ್ ಮಾದರಿಗಳು ಸಾಮಾನ್ಯವಾಗಿ 10 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯ ಹೊಂದಿರುತ್ತವೆ. ಎಥೋಸ್ ಮತ್ತು ದಿ ವಾಚ್ ಲ್ಯಾಬ್‌ನಂತಹ ಚಿಲ್ಲರೆ ವ್ಯಾಪಾರಿಗಳು ರೋಲೆಕ್ಸ್, ಒಮೆಗಾ, ಹ್ಯೂಬ್ಲಾಟ್, ಬಲ್ಗರಿ, ಬ್ರೈಟ್ಲಿಂಗ್, ಗಿರಾರ್ಡ್-ಪೆರೆಗಾಕ್ಸ್, ಜೆನಿತ್ ಮತ್ತು ಜಾಕೋಬ್ & ಕೋ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳನ್ನು ಭಾರತದ ಪ್ರೀಮಿಯಂ ವಿಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಲ್ಟ್ರಾ-ಪ್ರೀಮಿಯಂ ವಾಚ್‌ಗಳ ಬೆಲೆ ಕೋಟಿಗಳಲ್ಲಿ ಇರುತ್ತದೆ. ಇವು ಅತ್ಯಂತ ಅಪರೂಪವಾಗಿದ್ದು, ಸಾಮಾನ್ಯವಾಗಿ ಪ್ರೀ-ಆರ್ಡರ್ ಅಥವಾ ಸೀಮಿತ ಆವೃತ್ತಿಗಳಾಗಿರುತ್ತವೆ. ಇಂತಹ ವಾಚ್‌ಗಳು ಪ್ರಮಾಣಿತ ಚಿಲ್ಲರೆ ಮಾರ್ಗಗಳ ಮೂಲಕ ಮಾರಾಟವಾಗುವ ಬದಲು ಖಾಸಗಿಯಾಗಿ ವ್ಯವಹರಿಸಲಾಗುತ್ತವೆ. ಭಾರತದಲ್ಲಿ ಐಷಾರಾಮಿ ಕೈಗಡಿಯಾರಗಳನ್ನು ಯಾರು ಖರೀದಿಸುತ್ತಾರೆ? ಅವುಗಳಿಗೆ ಏಕೆ ಬೇಡಿಕೆ ಇದೆ? ಖರೀದಿದಾರರನ್ನು ಸಾಮಾನ್ಯವಾಗಿ ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯವರು ಸಂಗ್ರಹಕಾರರು. ಇವರು ಕೇವಲ ಬ್ರ್ಯಾಂಡ್‌ಗೆ ಮಾತ್ರ ಸೀಮಿತರಾಗದೆ, ಒಳಗಿನ ಸೂಕ್ಷ್ಮ ಚಲನ ವ್ಯವಸ್ಥೆ, ನಿರ್ದಿಷ್ಟ ಮಾದರಿ ಸಂಖ್ಯೆ ಮತ್ತು ಇತಿಹಾಸದ ಮೇಲೂ ಗಮನ ಹರಿಸುತ್ತಾರೆ. ಕರಕುಶಲತೆಯ ಮೇಲಿನ ಪ್ರೀತಿಯಿಂದ ಅವರು ಕೈಗಡಿಯಾರಗಳನ್ನು ಖರೀದಿಸುತ್ತಾರೆ. ಈ ಗಡಿಯಾರಗಳು ದಶಕಗಳವರೆಗೆ ಮೌಲ್ಯ ಕಾಪಾಡಿಕೊಳ್ಳುತ್ತವೆ ಎಂಬ ನಂಬಿಕೆ ಇವರದಲ್ಲಿದೆ. ಎರಡನೆಯವರು ಶ್ರೀಮಂತರು. ಇವರು ಕೈಗಡಿಯಾರಗಳನ್ನು ತಮ್ಮ ಸ್ಥಾನಮಾನ ಅಥವಾ ವೈಯಕ್ತಿಕ ಮೈಲಿಗಲ್ಲುಗಳ ಸಂಕೇತವಾಗಿ ಪರಿಗಣಿಸುತ್ತಾರೆ. ಮೂರನೆಯವರು ಹೂಡಿಕೆದಾರರು. ದ್ವಿತೀಯ ಮಾರುಕಟ್ಟೆಯಲ್ಲಿ ಕೆಲವು ಮಾದರಿಗಳ ಮರುಮಾರಾಟ ಸಾಮರ್ಥ್ಯ ಇವರನ್ನು ಕೈಗಡಿಯಾರಗಳತ್ತ ಆಕರ್ಷಿಸುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಸಂಪತ್ತು ಮತ್ತು ಜಾಗತಿಕ ಐಷಾರಾಮಿ ಬಳಕೆಯ ಮೇಲಿನ ಒಡ್ಡಿಕೊಳ್ಳುವಿಕೆಯಿಂದ ಬೇಡಿಕೆಯೂ ವಿಸ್ತರಿಸಿದೆ. ಆದರೂ, ಮಾಲೀಕತ್ವವು ವ್ಯಾಪಾರ ಕುಟುಂಬಗಳು, ಹಿರಿಯ ಕಾರ್ಪೊರೇಟ್ ಕಾರ್ಯನಿರ್ವಾಹಕರು, ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳಲ್ಲಿ ಹೆಚ್ಚಿನ ಮಟ್ಟಿಗೆ ಸೀಮಿತವಾಗಿದೆ. ಸೀಮಿತ ಆವೃತ್ತಿಯ ಐಷಾರಾಮಿ ಗಡಿಯಾರ ಎಂದರೇನು? ಸೀಮಿತ ಆವೃತ್ತಿಯ (ಲಿಮಿಟೆಡ್ ಎಡಿಷನ್) ವಾಚ್‌ಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಕೆಲವೊಮ್ಮೆ ವಿಶ್ವಾದಾದ್ಯಂತ 10 ಕ್ಕಿಂತ ಕಡಿಮೆ ವಾಚ್‌ಗಳನ್ನೇ ತಯಾರಿಸಲಾಗುತ್ತದೆ. ಉತ್ಪಾದನೆ ಮುಗಿದ ನಂತರ ಅದನ್ನು ಮತ್ತೆ ತಯಾರಿಸಲಾಗುವುದಿಲ್ಲ. ಇದರಿಂದ ಬ್ರ್ಯಾಂಡ್ ಸ್ಥಾನಮಾನವನ್ನು ಕಾಪಾಡಲು ಮತ್ತು ಸಂಗ್ರಹ ಮೌಲ್ಯವನ್ನು ಹೆಚ್ಚಿಸಲು ಉದ್ದೇಶಪೂರ್ವಕ ಕೊರತೆಯನ್ನು ಸೃಷ್ಟಿಸಲಾಗುತ್ತದೆ. ನಿರ್ದಿಷ್ಟ ವಾರ್ಷಿಕೋತ್ಸವಗಳು, ಪಾಲುದಾರಿಕೆಗಳು ಮತ್ತು ವಿಷಯಾಧಾರಿತ ಅಂಶಗಳಿಗೆ ಹೊಂದುವಂತೆ ಈ ವಾಚ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಉದಾಹರಣೆಗೆ, ವಂತಾರ ಗಡಿಯಾರವು ಅದರ ವಿಶಿಷ್ಟ ವಿನ್ಯಾಸ ವೈಶಿಷ್ಟ್ಯಗಳ ಮೂಲಕ ಸಂರಕ್ಷಣಾ ಪ್ರಯತ್ನಗಳಿಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತದೆ; ಅದನ್ನು ನಕಲು ಮಾಡುವುದು ಸಾಧ್ಯವಿಲ್ಲ. ಹೀಗಾಗಿ, ವಾಚ್‌ಗಳ ಕೊರತೆ ಬೆಲೆ ನಿಗದಿ ಮತ್ತು ಗ್ರಹಿಕೆ ಎರಡರ ಮೇಲೂ ಪರಿಣಾಮ ಬೀರುತ್ತದೆ. ಸೀಮಿತ ಉತ್ಪಾದನೆಯು ಸಾಮೂಹಿಕ ಉತ್ಪಾದನೆಯಲ್ಲಿ ಸಾಧ್ಯವಿಲ್ಲದ ಕಾರ್ಮಿಕ-ತೀವ್ರ ತಂತ್ರಗಳನ್ನು ಬಳಸಲು ಬ್ರ್ಯಾಂಡ್‌ಗಳಿಗೆ ಅವಕಾಶ ನೀಡುತ್ತದೆ. ಸಮಯ ತೋರಿಸುವುದು ಮಾತ್ರವೇ ಗಡಿಯಾರದ ಮುಖ್ಯ ಉದ್ದೇಶವಾಗಿರುವ ಹಂತವನ್ನು ಮಾರುಕಟ್ಟೆ ಬಹಳ ಹಿಂದೆಯೇ ದಾಟಿದೆ. ಖರೀದಿದಾರರಿಗೆ ಕೊರತೆಯು ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಬ್ರ್ಯಾಂಡ್‌ಗಳಿಗೆ ಇದು ಬೆಲೆ ನಿಗದಿಪಡಿಸುವ ಶಕ್ತಿಯನ್ನು ಒದಗಿಸುತ್ತದೆ.

ವಾರ್ತಾ ಭಾರತಿ 23 Jan 2026 9:00 pm

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: ಯೂನಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಷೇಕ್ ಹಸೀನಾ ಅವರು, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು 'ವಿದೇಶಿ ಸೇವೆ ಸಲ್ಲಿಸುವ ಕೀಲುಗೊಂಬೆ ಆಡಳಿತ' ಎಂದು ತೀವ್ರವಾಗಿ ಟೀಕಿಸಿದ್ದಾರೆ. ದೇಶವು ಭಯೋತ್ಪಾದನೆ, ಅರಾಜಕತೆ ಮತ್ತು ಪ್ರಜಾಪ್ರಭುತ್ವದ ಗಡಿಪಾರಿನ ಯುಗಕ್ಕೆ ತಳ್ಳಲ್ಪಟ್ಟಿದೆ ಎಂದು ಆರೋಪಿಸಿ, ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಲು ಅವರು ಕರೆ ನೀಡಿದ್ದಾರೆ.

ವಿಜಯ ಕರ್ನಾಟಕ 23 Jan 2026 8:59 pm

ಕರಾವಳಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಹಿರಿದು: ನಬಾರ್ಡ್ ಡಿಜಿಎಂ ಯೋಗೇಶ್

ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘಕ್ಕೆ ನಾಬಾರ್ಡ್ ತಂಡದ ಭೇಟಿ

ವಾರ್ತಾ ಭಾರತಿ 23 Jan 2026 8:56 pm

Gold Collection: ಅಮೆರಿಕದ ಬಳಿ ಇದೆ 8000 ಟನ್ ಚಿನ್ನ: ಇದು ವಿಶ್ವದ ಅತಿಹೆಚ್ಚು ಸಂಗ್ರಹ, ಭಾರತದ ಬಳಿ ಎಷ್ಟಿದೆ

ಚಿನ್ನದ ಬೆಲೆಯು ಈಗ ಗಗನಮುಖಿಯಾಗಿದೆ. ಈ ರೀತಿ ಇರುವಾಗಲೇ ವಿಶ್ವದ ದೊಡ್ಡಣ್ಣ, ಸೂಪರ್ ನೇಷನ್ ಎನ್ನುವ ಅಮೆರಿಕದ ಬಳಿ ಎಷ್ಟಿದೆ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ಬಳಿ ಎಷ್ಟಿದೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ವಿವಿಧ ದೇಶಗಳು ತಮ್ಮ ಖಜಾನೆಯಲ್ಲಿ ಟನ್‌ಗಟ್ಟಲೆ ಚಿನ್ನವನ್ನು ಖರೀದಿ ಮಾಡಿಕೊಂಡು ಇರಿಸಿಕೊಂಡಿವೆ. ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಹೇಗೆ

ಒನ್ ಇ೦ಡಿಯ 23 Jan 2026 8:45 pm

ಪ.ಜಾತಿ ಯುವಕರಿಗೆ ಉಚಿತ ಜಿಮ್ ತರಬೇತಿಗೆ ಅರ್ಜಿ ಆಹ್ವಾನ

ಉಡುಪಿ, ಜ.23: ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಉಪ ಯೋಜನೆಯಡಿ ಯುವ ಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯ ಯುವಕ ರಿಗೆ 45 ದಿನಗಳ ಉಚಿತ ಜಿಮ್ ತರಬೇತಿ ಶಿಬಿರವನ್ನು ಫೆಬ್ರವರಿ 1ರಿಂದ ಮಾರ್ಚ್ 17ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಎಸೆಸೆಲ್ಸಿ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ಪರಿಶಿಷ್ಟ ಜಾತಿಯ ಅರ್ಹ ಯುವಕರು ಪ್ರಸ್ತಾವನೆ ಗಳನ್ನು ಸಲ್ಲಿಸಲು ಜನವರಿ 30 ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯ ವಾಣಿ ಸಂಖ್ಯೆ: 155265 ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 23 Jan 2026 8:44 pm

ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಾದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು ಕಾಂಗ್ರೆಸ್ ಪಕ್ಷದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಶುಕ್ರವಾರ ಈ ಸಂಬಂಧ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರಾಗಿರುವ ಕೆ.ರೆಹ್ಮಾನ್ ಖಾನ್ ಅವರು ಆದೇಶ ಹೊರಡಿಸಿದ್ದು, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಬಂದಿರುವ ಆರೋಪವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Jan 2026 8:42 pm

ಗಾಜಾ ಶಾಂತಿ ಮಂಡಳಿ ಸ್ಥಾಪಿಸಿದ ಕೂಡಲೇ ಇರಾನ್ ಮೇಲೆ ಅಟ್ಯಾಕ್ ಮಾಡಲು ಸಿದ್ಧವಾದ ಅಮೆರಿಕ!

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಮಂಡಳಿ ಸ್ಥಾಪಿಸಿದ ಬೆನ್ನಲ್ಲೇ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಹೇಳಿಕೆ ನೀಡಿದ್ದಾರೆ. ಯುದ್ಧನೌಕೆಗಳು, ಕ್ಷಿಪಣಿ ವಿಧ್ವಂಸಕ ನೌಕೆಗಳು, ಫೈಟರ್ ಜೆಟ್‌ಗಳು ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಪಶ್ಚಿಮ ಏಷ್ಯಾಕ್ಕೆ ರವಾನಿಸಲಾಗಿದೆ. ಇರಾನ್‌ನಲ್ಲಿನ ಪ್ರತಿಭಟನೆಗಳು ಮತ್ತು ಪರಮಾಣು ಕಾರ್ಯಕ್ರಮದ ಕಾರಣ ಈ ಸಿದ್ಧತೆ ನಡೆದಿದೆ.

ವಿಜಯ ಕರ್ನಾಟಕ 23 Jan 2026 8:40 pm

ಅಮೆರಿಕದ ಸಮನ್ಸ್ ವರದಿಗಳ ನಡುವೆ ನೆಲ ಕಚ್ಚಿದ ಅದಾನಿ ಗ್ರೂಪ್ ಶೇರುಗಳು: ಶೇ.14.5ರವರೆಗೆ ಕುಸಿತ

ಹೊಸದಿಲ್ಲಿ,ಜ.23: ವಂಚನೆ ಆರೋಪ ಮತ್ತು 265 ಶತಕೋಟಿ ಡಾಲರ್ ಲಂಚ ಪ್ರಕರಣದಲ್ಲಿ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಯುಎಸ್ ಎಸ್‌ಇಸಿ) ನ್ಯಾಯಾಲಯದ ಅನುಮತಿಯನ್ನು ಕೋರಿದೆ ಎಂಬ ವರದಿಗಳ ನಡುವೆ ಶುಕ್ರವಾರ ಅದಾನಿ ಗ್ರೂಪ್‌ನ ಶೇರುಗಳು ಶೇ.14.5ರವರೆಗೆ ಕುಸಿದಿವೆ. ಗ್ರೂಪ್‌ನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ಪ್ರೈಸಸ್‌ನ ಶೇರುಗಳು ಶೇ.10.65ರಷ್ಟು ಕುಸಿದು 1,864.20 ರೂ.ಗೆ ತಲುಪಿದ್ದರೆ, ಅದಾನಿ ಪವರ್ 132.96 ರೂ.ಗೆ(ಶೇ.5.65 ನಷ್ಟ),ಅದಾನಿ ಪೋರ್ಟ್ಸ್ 1,308.40 ರೂ.ಗೆ (ಶೇ.7.48 ನಷ್ಟ),ಅದಾನಿ ಟೋಟಲ್ ಗ್ಯಾಸ್ 517.45 ರೂ.ಗೆ (ಶೇ.5.57 ನಷ್ಟ) ಕುಸಿದಿವೆ. ಡಿಸೆಂಬರ್ 2024ರ ತ್ರೈಮಾಸಿಕದಲ್ಲಿ 474 ಕೋ.ರೂ.ಗಳ ನಿವ್ವಳ ಲಾಭವನ್ನು ಗಳಿಸಿದ್ದ ಅದಾನಿ ಗ್ರೀನ್ ಎನರ್ಜಿ ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಕೇವಲ ಐದು ಕೋ.ರೂ.ಗಳ ಕ್ರೋಡೀಕೃತ ನಿವ್ವಳ ಲಾಭವನ್ನು ವರದಿ ಮಾಡಿದ ಬಳಿಕ ಅದರ ಶೇರಿನ ಬೆಲೆ 772.80 ರೂ.ಗೆ (ಶೇ.14.54 ನಷ್ಟ) ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್‌ನ ಶೇರುಗಳ ಬೆಲೆ 812.70 ರೂ.ಗೆ (ಶೇ.12.12 ನಷ್ಟ) ಕುಸಿದಿದೆ. ಡಿಸೆಂಬರ್ 2024ರ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ವಿತ್ತವರ್ಷದ ಇದೇ ಅವಧಿಯಲ್ಲಿ ಅದರ ಕ್ರೋಡೀಕೃತ ನಿವ್ವಳ ಲಾಭ ಶೇ.8ಕ್ಕೂ ಅಧಿಕ ಕುಸಿದು 574.06 ಕೋ.ರೂ.ಆಗಿದೆ. ಅದಾನಿ ಗ್ರೂಪ್‌ನ ಅಂಬುಜಾ ಸಿಮೆಂಟ್ಸ್ 518.60 ರೂ.ಗೆ( ಶೇ.5.12 ನಷ್ಟ) ಮತ್ತು ಎನ್‌ಡಿಟಿವಿ 81.12 ರೂ.ಗೆ (ಶೇ.4.71 ನಷ್ಟ) ಕುಸಿದಿವೆ. ಸಾಂಘಿ ಇಂಡಸ್ಟ್ರೀಸ್ 60.44 ರೂ.ಗೆ( ಶೇ.5.80 ನಷ್ಟ) ಮತ್ತು ಎಸಿಸಿ 1678.90 ರೂ.ಗೆ (ಶೇ.2.85 ನಷ್ಟ) ಕುಸಿದಿವೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಇಂದು ಶೇ.0.94 ನಷ್ಟದೊಂದಿಗೆ 81,537.70 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ.0.95 ನಷ್ಟದೊಂದಿಗೆ 25,048.65ರಲ್ಲಿ ಮುಕ್ತಾಯಗೊಂಡಿವೆ. ವರದಿಗಳ ಪ್ರಕಾರ ಗೌತಮ ಅದಾನಿ ಮತ್ತು ಸಾಗರ ಅದಾನಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಭಾರತೀಯ ಅಧಿಕಾರಿಗಳಿಂದ ನೆರವು ಪಡೆಯಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಬ್ರೂಕ್ಲಿನ್‌ನಲ್ಲಿಯ ನ್ಯಾಯಾಲಯಕ್ಕೆ ತಿಳಿಸಿರುವ ಯುಸ್ ಎಸ್‌ಇಸಿ,ಹೀಗಾಗಿ ಇಮೇಲ್ ಮೂಲಕ ಅವರಿಗೆ ಸಮನ್ಸ್ ಜಾರಿಗೊಳಿಸಲು ಅನುಮತಿಯನ್ನು ಕೋರಿದೆ. ಅಮೆರಿಕದಲ್ಲಿ 2024ರಲ್ಲಿ ಮೊಕದ್ದಮೆ ದಾಖಲಾಗಿದ್ದು,ಗೌತಮ ಅದಾನಿ ಮತ್ತು ಸಾಗರ್‌ ಅದಾನಿ ಅವರು ಅದಾನಿ ಗ್ರಿನ್ ಎನರ್ಜಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಯುಎಸ್ ಸೆಕ್ಯೂರಿಟಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾರ್ತಾ ಭಾರತಿ 23 Jan 2026 8:38 pm

Indian Rupee: 1 ಡಾಲರ್‌ಗೆ 91.95 ರೂಪಾಯಿ, ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕ ಕುಸಿತ

ಭಾರತದ ರೂಪಾಯಿ ಮೌಲ್ಯ ಇಂದು ಐತಿಹಾಸಿಕ ಮಟ್ಟಕ್ಕೆ ಕುಸಿತ ಕಂಡಿದೆ, ಒಂದು ಕಡೆ ಷೇರುಪೇಟೆ ಕುಸಿದಿರುವ ಬೇಸರದ ನಡುವೆಯೇ ಇದೀಗ ರೂಪಾಯಿ ಮೌಲ್ಯ ಕೂಡ ಇಳಿಕೆಯಾಗಿದೆ. ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣುತ್ತಾ ಇದೆ. ಹಲವಾರು ಕಾರಣಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದ್ದು, ಇಂದು 1 ಡಾಲರ್ ಎದುರಿಗೆ ಬರೋಬ್ಬರಿ

ಒನ್ ಇ೦ಡಿಯ 23 Jan 2026 8:34 pm

ಜ.24ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಗೆ ಭೇಟಿ

ಉಡುಪಿ, ಜ.23: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲಕ್ಷ್ಮೀ ಹೆಬ್ಬಾಳ್ಕರ್ ಜ.24ರ ಶನಿವಾರ ಸಂಜೆ 7:00ಗಂಟೆಗೆ ಉಡುಪಿಗೆ ಆಗಮಿಸಿ ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರು ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜ.25ರಂದು ಅಪರಾಹ್ನ 1:00ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಸಚಿವರು, ಸಂಜೆ 4ಗಂಟೆಗೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸ್ವರಾಜ್ ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7:00ಕ್ಕೆ ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯುವ ಬೈಂದೂರು ಉತ್ಸವ-2026ರಲ್ಲಿ ಭಾಗವಹಿಸುವರು. ಜ.26ರಂದು ಬೆಳಗ್ಗೆ 8:30ಕ್ಕೆ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. 9:00ಗಂಟೆಗೆ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸ ಲಾಗುವ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಅಪರಾಹ್ನ 1:30ಕ್ಕೆ ಚಿಕ್ಕಮಗಳೂರಿನ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಡಿ.27ರಂದು ಬೆಳಗ್ಗೆ 7:00ಗಂಟೆಗೆ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 23 Jan 2026 8:32 pm

ಉಡುಪಿ: ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ

ಜ.26ರಿಂದ 28ರವರೆಗೆ 26 ಜಾತಿಯ ಹೂವುಗಳ ಪ್ರದರ್ಶನ

ವಾರ್ತಾ ಭಾರತಿ 23 Jan 2026 8:27 pm

ದ್ವೇಷದ ಉಚ್ಚಾಟನೆಗೆ ಬೈಂದೂರು ಶಾಸಕ ಗಂಟಿಹೊಳೆ ಕಾರಣ: ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆರೋಪ

ಬೈಂದೂರು: ಕಳೆದ 13 ವರ್ಷಗಳಿಂದ ಹಗಲಿರುಳು ಬಿಜೆಪಿ ಪಕ್ಷ ಸಂಘಟನೆಗಾಗಿ ದುಡಿದು ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಯಾವುದೇ ತಪ್ಪು ಮಾಡದೆ ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಚಾಟಿಸಿ ’ಪೊಲಿಟಿಕಲ್ ಮರ್ಡರ್’ ಮಾಡಲಾಗಿದೆ. ಈ ದ್ವೇಷದ ಉಚ್ಚಾಟನೆಗೆ ಬೈಂದೂರು ಹಾಲಿ ಶಾಸಕ ಗುರುರಾಜ ಗಂಟಿಹೊಳೆ ಕಾರಣ. ಈ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಉಚ್ಚಾಟನೆ ಮಾಡಬೇಕಾಗಿರುವುದು ಬೈಂದೂರು ಶಾಸಕರನ್ನು ಎಂದು ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಟೀಕಿಸಿದ್ದಾರೆ. ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ ವಿಚಾರದಲ್ಲಿ ಅವರು ಬೈಂದೂರು ರೈತ ಕಛೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು. ಬಿಜೆಪಿ ಪಕ್ಷದ ನಿಯಮದ ಪ್ರಕಾರ ನನ್ನ ಉಚ್ಚಾಟನೆಯಾಗಿಲ್ಲ. ಹಲವಾರು ದಶಕಗಳಿಂದ ರೈತಪರ ಹೋರಾಟ, ಪಕ್ಷ ಸಂಘಟನೆಯಲ್ಲಿ ಮುನ್ನೆಲೆಯಾಗಿ ತೊಡಗಿಸಿಕೊಂಡವರಿಗೆ ಹೀಗಾದರೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಗತಿಯೇನು. ರೈತರ ಪರವಾಗಿ ಹೋರಾಟ ಮಾಡಿರುವುದು ಪಕ್ಷ ವಿರೋಧಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು. ಶಾಸಕ ಗಂಟಿಹೊಳೆ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ. ಬಡವರ ಮನೆ ಹುಡುಗ ಗೆಲ್ಲಬೇಕೆಂದು ಹಗಲು-ರಾತ್ರಿ ದುಡಿದೆವು. ಮನೆ, ವಾರ್ಡ್ ಗೊತ್ತಿಲ್ಲದರನ್ನು ಗೆಲ್ಲಿಸಿದ್ದು ಬಡವರ ಮನೆ ಹುಡುಗ ಈಗ ಶ್ರೀಮಂತರ ಮನೆ ಪಾಲಾಗಿದ್ದಾರೆ ಎಂದ ಅವರು, ನಮ್ಮನ್ನು ತಡೆಯುವರು ಯಾರೂ ಇಲ್ಲ. ನಾನು ಹಿಂದೆ ಕೂಡ ಬಿಜೆಪಿ. ಮುಂದೆಯೂ ಬಿಜೆಪಿ ಎಂದರು. ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ರೈತರು ಮಾಡುತ್ತಿರುವ ಹೋರಾಟ 124 ದಿನ ಪೂರೈಸಿದೆ. ಸರಕಾರ, ಜಿಲ್ಲಾಡಳಿತ ರೈತರ ಬೇಡಿಕೆ ಈಡೇರಿಸುವ ಹಂತದಲ್ಲಿದ್ದರು ಕೂಡ ಯಾವುದೋ ಹಿತಾಸಕ್ತಿ ಕಾರಣಕ್ಕೆ ಅದಕ್ಕೂ ತಡೆಯೊಡ್ಡಿ ರೈತರಿಗೆ ನ್ಯಾಯ ಸಿಗದಿರುವಂತೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಬೈಂದೂರು ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕಳೆದ ಬಾರಿ ಉತ್ಸವದ ಹೆಸರಿನಲ್ಲಿ ವಿದೇಶದಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ಬಾರಿಯೂ ಉತ್ಸವ ಮಾಡಲಾಗುತ್ತಿದೆ. ಈ ಉತ್ಸವದಿಂದ ಬೈಂದೂರಿನ ಜನರಿಗೆ ಏನು ಲಾಭ ಇಲ್ಲ. ಇವರ ಉತ್ಸವ ರೈತರ ಹೆಣದ ಮೇಲೆ ನಡೆಯುವ ನೈತಿಕತೆಯಿಲ್ಲದ ಉತ್ಸವವಾಗಿದೆ. ಆದುದರಿಂದ ಈ ಉತ್ಸವಕ್ಕೆ ಬರುವ ಸಚಿವರು, ವಿವಿಧ ನಾಯಕರುಗಳು ಪರಾಮರ್ಷಿಸಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಂದಾಪುರ ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಯುವಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಪ್ರಮುಖರಾದ ಲಿಮೋನ್ ಅತ್ಯಾಡಿ, ಭಾಸ್ಕರ ಮರಾಠಿ ಗಂಗನಾಡು ಇದ್ದರು. ‘ಶಾಸಕ ನನ್ನ ಮೇಲೆ ಕೈ ಮಾಡಿದ್ದರು’ ಮಣಿಪಾಲದಲ್ಲಿ ಬೈಂದೂರು ಶಾಸಕ ಗಂಟಿಹೊಳೆ ಸಂಸದ ಹಾಗೂ ಇತರ ಶಾಸಕರುಗಳ ಎದುರೇ ನನ್ನ ಕುತ್ತಿಗೆಗೆ ಕೈಹಾಕಿ ತಳ್ಳಿದರು. ಒಬ್ಬ ಶಾಸಕ ಮಂಡಲ ಅಧ್ಯಕ್ಷನ ಮೇಲೆ ಕೈ ಮಾಡಿರುವುದು ಶಾಸಕರ ರಾಜಕೀಯ ದುರಾಸೆಯ ವರ್ತನೆ ಎಂದು ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೆಳ್ತಂಗಡಿ, ಪುತ್ತೂರು, ಬಳ್ಳಾರಿ ರಿಜೆಕ್ಟೆಡ್ ಪೀಸ್‌ಗಳನ್ನು ಖುರ್ಚಿ ಮೇಲೆ ಕೂರಿಸಿ ಬೈಂದೂರಿನ ಸ್ವಾಭಿಮಾನಿ ಕಾರ್ಯಕರ್ತರನ್ನು ಆಳಲು ಹೊರಟಾಗ ವಿರೋಧಿಸಬೇಕಾಯಿತು. ಪಕ್ಷ ಯಾರ ಮನೆಯ ಆಸ್ತಿಯಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ನನ್ನ ಸಂಬಂಧ ಹಾಳು ಮಾಡುವ ಸಲುವಾಗಿ ಅವರ ಲೀಡ್ ಕಮ್ಮಿ ಮಾಡುವ ಹುನ್ನರವೂ ನಡೆದಿತ್ತು ಎಂದು ಅವರು ಆರೋಪಿಸಿದರು. ‘ಬರಿಗಾಲ ಸಂತ ಹೇಳಿಕೊಂಡು ಗುರುರಾಜ್ ಗಂಟಿಹೊಳೆ ಶಾಸಕರಾಗಿ ಬಂದ ಮೇಲೆ ಬೈಂದೂರಿಗೆ ಬರಗಾಲ ಬಂದಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸೂಕ್ತ ಸಮಯದಲ್ಲಿ ಎಲ್ಲಾ ದಾಖಲೆ ಬಹಿರಂಗ ಪಡಿಸಲಾಗುವುದು’ -ದೀಪಕ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಬೈಂದೂರು ಬಿಜೆಪಿ ಮಂಡಲ

ವಾರ್ತಾ ಭಾರತಿ 23 Jan 2026 8:24 pm

ಭೋಜಶಾಲಾ-ಕಮಾಲ್ ಮಸೀದಿ ಸಂಕೀರ್ಣದಲ್ಲಿ ಶಾಂತಿಯುತವಾಗಿ ನಡೆದ ಹಿಂದುಗಳ ಪೂಜೆ, ಮುಸ್ಲಿಮರ ನಮಾಝ್‌

ಧಾರ್,ಜ.23: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಸಂಕೀರ್ಣವು ಶುಕ್ರವಾರ ಶಾಂತಿಯುತವಾಗಿದ್ದು, ವಸಂತ ಪೂರ್ಣಿಮೆ ಪ್ರಯುಕ್ತ ಹಿಂದುಗಳು ಪೂಜೆಯನ್ನು ಸಲ್ಲಿಸಿದರು. ಇದೇ ವೇಳೆ ಸಂಕೀರ್ಣದ ಇನ್ನೊಂದು ಭಾಗದಲ್ಲಿ ಮುಸ್ಲಿಮರು ನಮಾಝ್‌ ಮಾಡಿದರು. ನಸುಕಿನಲ್ಲಿ ಭಾರೀ ಭದ್ರತೆಯ ನಡುವೆ ಆರಂಭಗೊಂಡಿದ್ದ ಪೂಜೆ ಸೂರ್ಯಾಸ್ತದ ವೇಳೆಗೆ ಅಂತ್ಯಗೊಂಡಿತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಂತೆ ಮುಸ್ಲಿಮರು ತಮಗೆ ನಿಗದಿಗೊಳಿಸಲಾಗಿದ್ದ ಸ್ಥಳದಲ್ಲಿ ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ನಮಾಝ್‌ ಸಲ್ಲಿಸಿದರು ಎಂದು ಜಿಲ್ಲಾಡಳಿತವು ಹೇಳಿಕೆಯಲ್ಲಿ ತಿಳಿಸಿದೆ. ನಗರದಲ್ಲಿ ಸುಮಾರು 8,000 ಪೊಲೀಸ್‌ ಮತ್ತು ಅರೆ ಸೇನಾಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ವರ್ಷ ವಸಂತ ಪಂಚಮಿ ಶುಕ್ರವಾರವೇ ಬಂದಿದ್ದರಿಂದ ಸಂಭಾವ್ಯ ಸಂಘರ್ಷವನ್ನು ತಪ್ಪಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಉಭಯ ಸಮುದಾಯಗಳಿಗೆ ಸಮಯವನ್ನು ನಿಗದಿಗೊಳಿಸಿತ್ತು. ಹಿಂದುಗಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಅಪರಾಹ್ನ ಒಂದರಿಂದ ಮೂರು ಗಂಟೆಯವರೆಗೆ ಮುಸ್ಲಿಮರು ನಮಾಝ್‌ ಮಾಡಲು ಅನುಮತಿ ನೀಡಿತ್ತು. ಸೂರ್ಯೋದಯದ ವೇಳೆಗೆ ಕೇಸರಿ ಧ್ವಜಗಳು ಮತ್ತು ಹೂವುಗಳಿಂದ ಅಲಂಕೃತವಾಗಿದ್ದ ಐತಿಹಾಸಿಕ ಸ್ಥಳದಲ್ಲಿ ಭಕ್ತರು ಸಮಾವೇಶಗೊಂಡಿದ್ದರು. ಸ್ಥಳೀಯ ಸಂಘಟನೆ ಭೋಜ ಉತ್ಸವ ಸಮಿತಿ ಸದಸ್ಯರು ವೈದಿಕ ಮಂತ್ರಗಳ ಪಠಣದ ನಡುವೆ ಸರಸ್ವತಿ ದೇವಿಯ ಚಿತ್ರವನ್ನು ಪ್ರತಿಷ್ಠಾಪಿಸುವ ಮೂಲಕ ಪೂಜೆಯನ್ನು ಆರಂಭಿಸಿದರು. ಹವನ ಕುಂಡದಲ್ಲಿ ಆಹುತಿಗಳನ್ನು ಸಲ್ಲಿಸುವ ಮೂಲಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಪೂಜೆಗೆ ಚಾಲನೆ ನೀಡಲಾಗಿತ್ತು. ಸಂಕೀರ್ಣದ ಮೂಲೆಮೂಲೆಯಲ್ಲಿಯೂ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರವನ್ನು ವಹಿಸಿದ್ದರು.

ವಾರ್ತಾ ಭಾರತಿ 23 Jan 2026 8:23 pm

ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಬಹುಮುಖಿ ಕಾರ್ಯತಂತ್ರ; ರಸ್ತೆ ಸುರಕ್ಷತೆಗೆ ತಂತ್ರಜ್ಞಾನದ ಬಳಕೆ ಹೇಗೆ?

ಭಾರತದಲ್ಲಿ ಪ್ರತಿ ವರ್ಷ 4.6 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.6 ಲಕ್ಷಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇಗಳು ಹೆಚ್ಚಾಗುತ್ತಿದ್ದಂತೆ, ಮೂಲಸೌಕರ್ಯ ವಿಸ್ತರಣೆ ಮಾತ್ರ ಸುರಕ್ಷಿತ ಚಾಲನೆಗೆ ಸಾಕಾಗುವುದಿಲ್ಲ ಎಂದು ನೀತಿ ನಿರೂಪಕರು ಒಪ್ಪಿಕೊಂಡಿದ್ದಾರೆ. ವಿಸ್ತರಣೆಯನ್ನು ಮೀರಿ, ವ್ಯವಸ್ಥಿತ ಸುರಕ್ಷತಾ ಸುಧಾರಣೆಗೆ ಹೆದ್ದಾರಿಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಹೇಗೆ ಮೇಲ್ವಿಚಾರಣೆ ಮಾಡಲಾಗಿದೆ, ಹೇಗೆ ನಿರ್ವಹಿಸಲಾಗಿದೆ ಎಂಬುದನ್ನು ಸರಕಾರ ಈಗ ಮರುಪರಿಶೀಲಿಸುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ( MoRTH) ಹೆದ್ದಾರಿ ಸುರಕ್ಷತೆ ಏಕೆ ಆದ್ಯತೆಯಾಗಿದೆ? ಅದರ ಬಹುಮುಖಿ ಕಾರ್ಯತಂತ್ರವು ಜೀವಗಳನ್ನು ಉಳಿಸುವ ಗುರಿಯನ್ನು ಹೇಗೆ ಹೊಂದಿದೆ ಎಂಬುದನ್ನು ನೋಡೋಣ. ಹೆದ್ದಾರಿ ಸುರಕ್ಷತೆಯು MoRTH ಗೆ ಆದ್ಯತೆ ಭಾರತದ ರಸ್ತೆ ನೆಟ್‌ವರ್ಕ್‌ ನ ಕೇವಲ 2–3% ರಷ್ಟಿರುವ ರಾಷ್ಟ್ರೀಯ ಹೆದ್ದಾರಿಗಳು ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಹೆಚ್ಚಿನ ವೇಗ, ಅನಿಯಂತ್ರಿತ ಪ್ರವೇಶ ಬಿಂದುಗಳು, ಮಿಶ್ರ ಸಂಚಾರ, ಪಾದಚಾರಿಗಳು ಮತ್ತು ಪ್ರಾಣಿಗಳ ಒಳನುಗ್ಗುವಿಕೆ, ರಾತ್ರಿ ಹೊತ್ತು ಕಡಿಮೆ ಗೋಚರತೆ ಹಾಗೂ ವಿಳಂಬವಾದ ತುರ್ತು ಪ್ರತಿಕ್ರಿಯೆ ಅನೇಕ ಕಾರಿಡಾರ್‌ಗಳನ್ನು ಅಪಘಾತದ ತಾಣಗಳಾಗಿ ಪರಿವರ್ತಿಸಿವೆ. ಜನಸಂಖ್ಯೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಸುಮಾರು 66% ಮಂದಿ 18–45 ವಯೋಮಾನದವರು. ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ರಸ್ತೆ ಸುರಕ್ಷತೆಯನ್ನು ಕೇವಲ ಸಾರಿಗೆ ಸಮಸ್ಯೆಯಾಗಿ ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಕಾಳಜಿಯನ್ನಾಗಿ ಮಾಡುತ್ತದೆ. ಚಾಲಕರನ್ನು ಮಾತ್ರ ದೂಷಿಸುವುದು ನಿಷ್ಪರಿಣಾಮಕಾರಿ ಎಂದು MoRTH ಅಭಿಪ್ರಾಯಪಟ್ಟಿದೆ. ಬದಲಾಗಿ, ಮನುಷ್ಯರಿಂದಾಗುವ ತಪ್ಪುಗಳು ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡದಂತೆ ತಡೆಯುವ ಗುರಿಯೊಂದಿಗೆ ‘ಸುರಕ್ಷಿತ ವ್ಯವಸ್ಥೆ’ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ. ಅಪಘಾತಗಳನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ? ತಂತ್ರಜ್ಞಾನ ಬಳಸಿ ಅಪಘಾತ ತಡೆಗಟ್ಟುವಿಕೆ ಈಗ MoRTH ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ. ನೈಜ-ಸಮಯದ ವೇಗ ಮೇಲ್ವಿಚಾರಣೆ, ಘಟನೆ ಪತ್ತೆ ಮತ್ತು ಸ್ವಯಂಚಾಲಿತ ಜಾರಿಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಟೆಲಿಜೆಂಟ್ ಸಾರಿಗೆ ನಿರ್ವಹಣಾ ವ್ಯವಸ್ಥೆಗಳನ್ನು (ITMS) ಅಳವಡಿಸಲಾಗುತ್ತಿದೆ. AI-ಸಕ್ರಿಯ ಕ್ಯಾಮೆರಾಗಳು ಅತಿ ವೇಗ, ಲೇನ್ ಉಲ್ಲಂಘನೆ ಮತ್ತು ಸೀಟ್ ಬೆಲ್ಟ್ ಅನುಸರಣೆಯನ್ನು ಪತ್ತೆ ಮಾಡುತ್ತವೆ. ಆರಂಭಿಕ ಯೋಜನೆಗಳಲ್ಲಿ ಹೈ-ಸ್ಪೀಡ್ ಕಾರಿಡಾರ್‌ಗಳಲ್ಲಿ ವಾಹನದಿಂದ ವಾಹನಕ್ಕೆ ಹಾಗೂ ವಾಹನದಿಂದ ಮೂಲಸೌಕರ್ಯಕ್ಕೆ ಸಂವಹನ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುತ್ತಿದೆ. ಗಮನಾರ್ಹ ಉದಾಹರಣೆಯಾಗಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜೈಪುರ–ಆಗ್ರಾ ಮತ್ತು ಜೈಪುರ–ರೇವಾರಿ ಕಾರಿಡಾರ್‌ ಗಳಲ್ಲಿ ಜನವರಿ 2026ರಿಂದ ನೈಜ ಸಮಯದ ಬೀದಿ ದನ ಎಚ್ಚರಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಜಾನುವಾರುಗಳಿರುವ ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಚಾಲಕರಿಗೆ 10 ಕಿ.ಮೀ ಮುಂಚಿತವಾಗಿ ಸ್ಥಳಾಧಾರಿತ SMS ಹಾಗೂ ಧ್ವನಿ ಎಚ್ಚರಿಕೆಗಳು ಲಭಿಸುತ್ತವೆ. ವಾಹನವನ್ನು ನಿಧಾನಗೊಳಿಸಲು ಇವು ಸಹಾಯಕವಾಗಿದ್ದು, ಆಯಾಸವಾಗದಂತೆ ಪ್ರತಿ 30 ನಿಮಿಷಗಳಿಗೊಮ್ಮೆ ಮಾತ್ರ ಎಚ್ಚರಿಕೆ ನೀಡಲಾಗುತ್ತದೆ. ಮಂಜು ಆವರಿತ ಪರಿಸ್ಥಿತಿಗಳಲ್ಲಿ ಅಪಾಯ ತಗ್ಗಿಸಲು ಪ್ರತಿಫಲಿತ ಗುರುತುಗಳು, ಸೋಲಾರ್ ಬ್ಲಿಂಕರ್‌ಗಳು, ಸುಧಾರಿತ ಸಂಕೇತಗಳು, ವೇರಿಯಬಲ್ ಮೆಸೇಜ್ ಸೈನ್‌ಬೋರ್ಡ್‌ಗಳು ಹಾಗೂ ಪೊಲೀಸ್ ಮತ್ತು ಆಂಬ್ಯುಲೆನ್ಸ್‌ಗಳನ್ನು ಒಳಗೊಂಡ ಜಂಟಿ ತುರ್ತು ಕಾರ್ಯಾಚರಣೆಗಳನ್ನು ಬಳಸಲಾಗುತ್ತಿದೆ. 2019ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿಯಲ್ಲಿ ಇಲೆಕ್ಟ್ರಾನಿಕ್ ಜಾರಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಸ್ಪೀಡ್ ಕ್ಯಾಮೆರಾಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ವ್ಯವಸ್ಥೆಗಳು, CCTV, ಕ್ರ್ಯಾಶ್ ಬ್ಯಾರಿಯರ್‌ಗಳು ಹಾಗೂ 2025–26ರ SASCI ಯೋಜನೆಯಡಿ 3,000 ಕೋಟಿ ರೂ. ಹಂಚಿಕೆಯೊಂದಿಗೆ ಇ-ಚಲನ್ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ. ಹೆದ್ದಾರಿ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗುತ್ತಿದೆ? ಎಲ್ಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿನ್ಯಾಸ, ನಿರ್ಮಾಣ ಹಾಗೂ ಕಾರ್ಯಾಚರಣೆಯ ಹಂತಗಳಲ್ಲಿ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಯನ್ನು MoRTH ಕಡ್ಡಾಯಗೊಳಿಸಿದೆ. ಅಪಘಾತ-ಪೀಡಿತ ಸ್ಥಳಗಳನ್ನು ಸುಧಾರಿತ ಜ್ಯಾಮಿತಿ, ಸರ್ವೀಸ್ ರಸ್ತೆಗಳು, ಅಪಘಾತ ತಡೆಗೋಡೆಗಳು, ಪಾದಚಾರಿ ದಾಟುವಿಕೆಗಳು ಮತ್ತು ಸ್ಪಷ್ಟ ಸೂಚನಾ ಫಲಕಗಳೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತಿದೆ. ಹೊಸ ಎಕ್ಸ್‌ಪ್ರೆಸ್‌ವೇಗಳು ಮಧ್ಯದ ತಡೆಗೋಡೆಗಳು, ವಿಶಾಲ ಶೋಲ್ಡರ್‌ಗಳು, ಸುರಕ್ಷಿತ ಇಳಿಜಾರುಗಳು ಹಾಗೂ ಪ್ರವೇಶ-ನಿಯಂತ್ರಿತ ವಿನ್ಯಾಸಗಳನ್ನು ಹೆಚ್ಚಾಗಿ ಅನುಸರಿಸುತ್ತಿವೆ. ವೇಗದ ಸಂಚಾರದೊಂದಿಗೆ ಸಂಘರ್ಷ ಕಡಿಮೆ ಮಾಡಲು ವಾಸಸ್ಥಳಗಳ ಬಳಿ ಪಾದಚಾರಿ ಅಂಡರ್‌ಪಾಸ್‌ಗಳು ಮತ್ತು ಸರ್ವೀಸ್ ಲೇನ್‌ ಗಳಿಗೆ ಆದ್ಯತೆ ನೀಡಲಾಗುತ್ತಿದೆ. ವನ್ಯಜೀವಿ-ಸೂಕ್ಷ್ಮ ವಲಯಗಳಲ್ಲಿ ನಾವೀನ್ಯತೆ ಸ್ಪಷ್ಟವಾಗಿದೆ. ವೀರಾಂಗಣ ದುರ್ಗಾವತಿ ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿ, NHAI ಭಾರತದ ಮೊದಲ ‘ಟೇಬಲ್-ಟಾಪ್ ರೆಡ್ ಮಾರ್ಕಿಂಗ್’ ಪರಿಚಯಿಸಿದೆ. ಇದು ಎತ್ತರದ ಕೆಂಪು ಥರ್ಮೋಪ್ಲಾಸ್ಟಿಕ್ ಮೇಲ್ಮೈಯಾಗಿದ್ದು, ವಾಹನಗಳನ್ನು ನಿಧಾನಗೊಳಿಸಲು ದೃಶ್ಯ ಮತ್ತು ಸ್ಪರ್ಶ ಸೂಚನೆಗಳನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಪ್ರಾಣಿಗಳ ಅಂಡರ್‌ಪಾಸ್‌ಗಳು, ಫೆನ್ಸಿಂಗ್, ಸೌರ ಬೆಳಕು ಹಾಗೂ ಕ್ಯಾಮೆರಾ ಮೇಲ್ವಿಚಾರಣೆಯೂ ಇದೆ. ನಿರ್ಮಾಣ ಗುಣಮಟ್ಟವನ್ನು ಸುಧಾರಿಸಲು NHAI ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಗುತ್ತಿಗೆದಾರರ ಕಾರ್ಯಕ್ಷಮತೆಯೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಟೋಲ್ ಮತ್ತು ಹೆದ್ದಾರಿ ಕಾರ್ಯಾಚರಣೆಗಳನ್ನು ಹೇಗೆ ಮರುವಿನ್ಯಾಸಗೊಳಿಸಲಾಗುತ್ತಿದೆ? ಟೋಲ್ ಪ್ಲಾಝಾಗಳು ಬಹುಕಾಲದಿಂದ ದಟ್ಟಣೆ ಮತ್ತು ಅಪಾಯಕಾರಿ ಲೇನ್ ಬದಲಾವಣೆಗಳಿಗೆ ಕಾರಣವಾಗಿವೆ. MoRTH ಈಗ ನಗದುರಹಿತ, ಪ್ರಯಾಣಿಕ ಸ್ನೇಹಿ ಟೋಲಿಂಗ್ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಆಗಸ್ಟ್ 2025ರಲ್ಲಿ ಪ್ರಾರಂಭವಾದ FASTag ವಾರ್ಷಿಕ ಪಾಸ್ ಮೂಲಕ, 1,150 ಟೋಲ್ ಪ್ಲಾಜಾಗಳಲ್ಲಿ ರೂ.3,000ಕ್ಕೆ 200 ಪ್ರಯಾಣಗಳು ಅಥವಾ ಒಂದು ವರ್ಷದ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನವೆಂಬರ್ 2025ರ ವೇಳೆಗೆ 36 ಲಕ್ಷಕ್ಕೂ ಹೆಚ್ಚು ಪಾಸ್‌ಗಳು ಮಾರಾಟವಾಗಿವೆ. UPI ಟೋಲ್ ಪಾವತಿಗಳ ಮೇಲಿನ ಸರ್‌ಚಾರ್ಜ್ ಕಡಿತಗೊಳಿಸಿರುವುದು ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡಿದ್ದು, ನಗದು ಬಳಕೆಯನ್ನು ಕಡಿಮೆ ಮಾಡಿದೆ. FASTag ಹಾಗೂ ANPR ಆಧಾರಿತ ಬಹು-ಲೇನ್ ಮುಕ್ತ ಹರಿವಿನ (MLFF) ಟೋಲಿಂಗ್ ವ್ಯವಸ್ಥೆಯತ್ತ ಭಾರತ ಸಾಗುತ್ತಿದೆ. ಮೊದಲ MLFF ಕಾರಿಡಾರ್ 2026ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಬಳಕೆದಾರರಿಗೆ ಕೇವಲ 50% ಟೋಲ್ ಶುಲ್ಕ ವಿಧಿಸುವ ನಿಯಮ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಬಲಪಡಿಸುತ್ತದೆ. ಅಪಘಾತಗಳ ನಂತರದ ಪ್ರತಿಕ್ರಿಯೆ ಅಪಘಾತದ ತೀವ್ರತೆಯಿಗಿಂತಲೂ ವೈದ್ಯಕೀಯ ಆರೈಕೆಯ ವಿಳಂಬವೇ ಅನೇಕ ಸಾವುಗಳಿಗೆ ಕಾರಣವಾಗುತ್ತಿದೆ. MoRTHನ ಅಪಘಾತಾನಂತರದ ತಂತ್ರ ‘ಗೋಲ್ಡನ್ ಅವರ್’ ಮೇಲೆ ಕೇಂದ್ರೀಕೃತವಾಗಿದೆ. ರಾಹ್-ವೀರ್ (Good Samaritan) ಯೋಜನೆಯಡಿ, ಅಪಘಾತ ಪೀಡಿತರನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುವ ನಾಗರಿಕರಿಗೆ ಪ್ರತಿ ಘಟನೆಗೆ 25,000 ರೂ. ಪ್ರೋತ್ಸಾಹಧನ ಹಾಗೂ ಕಾನೂನು ರಕ್ಷಣೆಯನ್ನು ಒದಗಿಸಲಾಗುತ್ತದೆ. ಇತರ ಕ್ರಮಗಳಲ್ಲಿ ನಗದುರಹಿತ ಚಿಕಿತ್ಸೆ ಯೋಜನೆ, ಟ್ರಾಮಾ ಕೇರ್ ಸೆಂಟರ್‌ಗಳು, 112 ತುರ್ತು ಸೇವೆಗಳೊಂದಿಗೆ ಏಕೀಕರಣ ಮತ್ತು e-DAR ಡಿಜಿಟಲ್ ಅಪಘಾತ ವರದಿ ವೇದಿಕೆಯ ಕಡ್ಡಾಯ ಬಳಕೆ ಸೇರಿವೆ. ರಾಜ್ಯಗಳು, ಜಿಲ್ಲೆಗಳು ಮತ್ತು ನಾಗರಿಕರ ಪಾತ್ರ ರಸ್ತೆ ಸುರಕ್ಷತೆ ಸಮಕಾಲೀನ ವಿಷಯವಾಗಿದ್ದು, ಕೇಂದ್ರ–ರಾಜ್ಯ ಸಮನ್ವಯ ಅಗತ್ಯವಾಗಿದೆ. ಜನವರಿ 2026ರಲ್ಲಿ ಕೇಂದ್ರ ಸಾರಿಗೆ ಸಚಿವರು ಜಾರಿ, ಡಿಜಿಟಲೀಕರಣ ಮತ್ತು ಶಾಸನಾತ್ಮಕ ಸುಧಾರಣೆಗಳನ್ನು ಒಟ್ಟುಗೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ‘ಸಡಕ್ ಮಿತ್ರ’ ಯುವ ಸ್ವಯಂಸೇವಕರಿಗೆ ಅಪಘಾತ ತಾಣಗಳನ್ನು ಗುರುತಿಸಿ ಪ್ರತಿಕ್ರಿಯೆ ಕಾರ್ಯಾಚರಣೆಗಳಿಗೆ ನೆರವಾಗುವ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರವ್ಯಾಪಿ ಸಡಕ್ ಸುರಕ್ಷಾ ಅಭಿಯಾನವು ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಸುರಕ್ಷಿತ ಚಾಲನೆಯನ್ನು ಉತ್ತೇಜಿಸುತ್ತದೆ. ಚಾಲಕರ ತರಬೇತಿಯನ್ನು ಆಧುನಿಕ ಸಂಸ್ಥೆಗಳು ಮತ್ತು ಸಿಮ್ಯುಲೇಟರ್‌ಗಳ ಮೂಲಕ ನವೀಕರಿಸಲಾಗುತ್ತಿದೆ. ಅದೇ ವೇಳೆ, ಭಾರತ್ NCAP ರೇಟಿಂಗ್‌ಗಳು, ಕಡ್ಡಾಯ ಏರ್‌ಬ್ಯಾಗ್‌ಗಳು, ABS ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹಂತ ಹಂತವಾಗಿ ಅಳವಡಿಸುವ ಮೂಲಕ ವಾಹನ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಲಾಗುತ್ತಿದೆ. 2030ರೊಳಗೆ ರಸ್ತೆ ಅಪಘಾತ ಸಾವುಗಳನ್ನು 50% ಕಡಿಮೆ ಮಾಡುವ ಗುರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಅವರು, ಫೆಬ್ರವರಿ 2020ರಲ್ಲಿ ನಡೆದ ರಸ್ತೆ ಸುರಕ್ಷತೆ ಕುರಿತ 3ನೇ ಜಾಗತಿಕ ಸಚಿವರ ಸಮ್ಮೇಳನದಲ್ಲಿ ಅಂಗೀಕರಿಸಲಾದ ಸ್ಟಾಕ್‌ಹೋಮ್ ಘೋಷಣೆಯಂತೆ, 2030ರೊಳಗೆ ರಸ್ತೆ ಸಂಚಾರ ಸಾವುಗಳು ಮತ್ತು ಗಾಯಗಳನ್ನು 50% ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಮಾಹಿತಿಯಂತೆ, 2024ರ ಕ್ಯಾಲೆಂಡರ್ ವರ್ಷದಲ್ಲಿ ದೇಶದಲ್ಲಿ ವರದಿಯಾದ ಒಟ್ಟು ರಸ್ತೆ ಅಪಘಾತ ಸಾವುಗಳ ಸಂಖ್ಯೆ 1,77,177. ಇದರಲ್ಲಿ e-DAR ಪೋರ್ಟಲ್‌ನಿಂದ ಪಡೆದ ಪಶ್ಚಿಮ ಬಂಗಾಳದ ಮಾಹಿತಿಯೂ ಸೇರಿದೆ ಎಂದು ಅವರು ಹೇಳಿದ್ದಾರೆ. 2023ರಲ್ಲಿ ದೇಶಾದ್ಯಂತ 4,80,583 ರಸ್ತೆ ಅಪಘಾತಗಳು ವರದಿಯಾಗಿದ್ದು, 1,72,890 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 4,62,825 ಮಂದಿ ಗಾಯಗೊಂಡಿದ್ದಾರೆ. 2024ರ ವಿಶ್ವ ರಸ್ತೆ ಅಂಕಿಅಂಶಗಳ ಪ್ರಕಾರ, ಪ್ರತಿ ಲಕ್ಷ ಜನಸಂಖ್ಯೆಗೆ ಮರಣ ಪ್ರಮಾಣ ಚೀನಾದಲ್ಲಿ 4.3, ಅಮೆರಿಕದಲ್ಲಿ 12.76 ಆಗಿದ್ದು, ಭಾರತದಲ್ಲಿ ಇದು 11.89 ಆಗಿದೆ. ರಸ್ತೆ ಸುರಕ್ಷತೆ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಣ, ಇಂಜಿನಿಯರಿಂಗ್ (ರಸ್ತೆ ಮತ್ತು ವಾಹನ ಎರಡೂ), ಜಾರಿ ಮತ್ತು ತುರ್ತು ಆರೈಕೆ ಎಂಬ 4Eಗಳ ಆಧಾರದ ಮೇಲೆ ಸರಕಾರ ಬಹುಮುಖಿ ಕಾರ್ಯತಂತ್ರ ರೂಪಿಸಿದೆ. ಅದರಂತೆ, ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Jan 2026 8:19 pm

ಸಚಿವ ತಿಮ್ಮಾಪುರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ; ವಿಧಾನಸಭೆಯ ಅರ್ಧದಿನದ ಕಲಾಪ ಬಲಿ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಸಚಿವ ಆರ್.ಬಿ. ತಿಮ್ಮಾಪುರ್ ಕೂಡಲೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಧರಣಿ ನಡೆಸಿದ ಪರಿಣಾಮ ಶುಕ್ರವಾರ ವಿಧಾನಸಭೆಯ ಅರ್ಧದಿನದ ಕಲಾಪ ಬಲಿಯಾಯಿತು. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಚರ್ಚಿಸಲು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಆದರೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿದ ಬಳಿಕ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಅಬಕಾರಿ ಸಚಿವರ ವಿಚಾರದಲ್ಲಿ ಮಾತನಾಡಲು ಅವಕಾಶ ನೀಡಿ ಎಂದರು. ಇದಕ್ಕೆ ದನಿಗೂಡಿಸಿದ ಸುನೀಲ್ ಕುಮಾರ್, ನಿಲುವಳಿ ಸೂಚನೆ ಮೇರೆಗೆ ಚರ್ಚೆಗೆ ವಿರೋಧ ಪಕ್ಷದ ನಾಯಕರು ಪತ್ರ ಕೊಟ್ಟಿದ್ದಾರೆ. ನಮಗೆ ಗೊತ್ತಿಲ್ಲದೆ ಅದನ್ನು ನಿಯಮ 69ಕ್ಕೆ ಪರಿವರ್ತನೆ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಸ್ತಾವನೆ ಮಾಡಲು ಅವಕಾಶ ನೀಡಿ ಎಂದು ಹೇಳಿದರು. ವಿಪಕ್ಷ ನಾಯಕರು ಬೆಳಗ್ಗೆ ಈ ವಿಚಾರ ಪ್ರಸ್ತಾವನೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಈ ವಿಷಯವನ್ನು ಮಾತನಾಡಿ, ಇಲ್ಲವೇ ಅದನ್ನು ನಿಯಮ 69ರಡಿ ಪರಿವರ್ತಿಸಿ ನೀಡುವುದಾಗಿ ಹೇಳಿದ್ದೇನೆ ಎಂದು ಸ್ಪೀಕರ್ ಉತ್ತರಿಸಿದರು. ಕೇರಳ ಹಾಗೂ ತಮಿಳುನಾಡು ರಾಜ್ಯದ ಚುನಾವಣೆಗಳಿಗೆ ಇಲ್ಲಿ ಭ್ರಷ್ಟಾಚಾರ ಮಾಡಿ ಅನುಕೂಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುನೀಲ್ ಕುಮಾರ್ ದೂರಿದರು. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಏರ್ಪಟ್ಟಿತು. ಕೇರಳ ಹಾಗೂ ತಮಿಳುನಾಡು ಚುನಾವಣೆಗಳಿಗೆ ಇಲ್ಲಿಂದ ಹಣ ಹೋಗುತ್ತಿರುವುದು ನಿಜ. ಸರಕಾರಕ್ಕೆ ಧೈರ್ಯವಿದ್ದರೆ ಈ ಬಗ್ಗೆ ಉತ್ತರ ಕೊಡಲಿ ಎಂದು ಅಶೋಕ್ ಹೇಳಿದರು. ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿ, ಆಧಾರ ರಹಿತವಾಗಿ ಸದನದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸುನೀಲ್ ಕುಮಾರ್ ಗೆ ಮಾತನಾಡಲು ಅವಕಾಶ ನೀಡಬೇಡಿ ಎಂದರು. ಇದಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ದನಿಗೂಡಿಸಿದರು. ಅಬಕಾರಿ ಇಲಾಖೆಯಲ್ಲಿ ಯಾವ ರೀತಿ ಲೂಟಿ ಹೊಡೆಯಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ನನ್ನ ಬಳಿ ಈ ಸಂಬಂಧ ಪೆನ್‍ಡ್ರೈವ್ ಹಾಗೂ ದಾಖಲೆಗಳು ಇವೆ. ನಾನು ಮಾಡುತ್ತಿರುವ ಆರೋಪ ಸುಳ್ಳಾದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಹಿಂದಿನ ಸರಕಾರದಲ್ಲಿ ಈಶ್ವರಪ್ಪ ವಿಚಾರ ಬಂದಾಗ ನೀವೆ ವಿಪಕ್ಷದ ಉಪನಾಯಕರಾಗಿ ಬಂದು ಇಲ್ಲಿ ಪ್ರತಿಭಟನೆ ಮಾಡಿದ್ದೀರಾ. ಈಗ ನಮಗೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಗೆ ಅಶೋಕ್ ಒತ್ತಾಯಿಸಿದರು. ಸಿ.ಸಿ.ಪಾಟೀಲ್ ಏನೋ ವಿಡಿಯೋ ನೋಡಿದರು ಎಂದು ರಾಜೀನಾಮೆ ಪಡೆದರು, ಆಮೇಲೆ ತನಿಖೆ, ಈಶ್ವರಪ್ಪ ಪ್ರಕರಣದಲ್ಲಿ ಮೊದಲು ರಾಜೀನಾಮೆ ಆಮೇಲೆ ತನಿಖೆ. ಕಾಂಗ್ರೆಸ್ ಸರಕಾರದಲ್ಲಿ ಇದೊಂದು ವಿಶೇಷ ಪ್ರಕರಣವೇ, ಬಿಜೆಪಿಯವರು ಮೊದಲು ರಾಜೀನಾಮೆ ನೀಡಬೇಕು, ಕಾಂಗ್ರೆಸ್ ನವರು ರಾಜೀನಾಮೆ ನೀಡಬಾರದು ಇದು ಎಂತಹ ನ್ಯಾಯ?. ಅಬಕಾರಿ ಸಚಿವರು ಮೊದಲು ರಾಜೀನಾಮೆ ನೀಡಲಿ, ಆನಂತರ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು. ಎ.ಎಸ್.ಪೊನ್ನಣ್ಣಗೆ ಸ್ಪೀಕರ್ ಮಾತನಾಡಲು ಅವಕಾಶ ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅಬಕಾರಿ ಸಚಿವರಿಗೆ ಧಿಕ್ಕಾರಗಳನ್ನು ಕೂಗಿದರು. ಆನಂತರ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು. ಸದನ ಪುನಃ ಸಮಾವೇಶಗೊಳ್ಳುತ್ತಿದ್ದಂತೆ ಮತ್ತೆ ಗದ್ದಲದ ವಾತಾವರಣ ಏರ್ಪಟ್ಟಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನೀಡದಿದ್ದರೆ ರಾಜ್ಯಪಾಲರಿಗೆ ಅವಮಾನ ಮಾಡಿದಂತೆ ಎಂದು ಸ್ಪೀಕರ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಈಗಾಗಲೆ ನೀವು ಅವಮಾನ ಮಾಡಿ ಆಗಿದೆ. ಇನ್ನೇನು ಉಳಿದಿದೆ. ಸಂಪುಟದಲ್ಲಿ ಇಂತಹ ಭ್ರಷ್ಟ ಸಚಿವರು ಇರಬಾರದು. ಅಬಕಾರಿ ಸಚಿವರು ರಾಜೀನಾಮೆ ನೀಡುವವರೆಗೆ ನಾವು ಧರಣಿ ಹಿಂಪಡೆಯುವುದಿಲ್ಲ ಎಂದು ಹೇಳಿದರು. ಗದ್ದಲದ ನಡುವೆ ಪೊನ್ನಣ್ಣ ಮಾತನಾಡಲು ಯತ್ನಿಸಿದರು. ಆದರೆ, ಪರಿಸ್ಥಿತಿ ತಿಳಿಯಾಗದಿದ್ದರಿಂದ ಸ್ಪೀಕರ್ ಸದನವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸೇರುವಂತೆ ಮುಂದೂಡಿದರು.

ವಾರ್ತಾ ಭಾರತಿ 23 Jan 2026 8:16 pm

“ಇದು Ai ವೀಡಿಯೊ ಅಲ್ಲ”: ಇಂಗ್ಲೀಷ್‌ನಲ್ಲೂ ಬಂತು ರವೀಶ್ ಕುಮಾರ್ ವಿಡಿಯೋ

“ನಾನು ರವೀಶ್ ಕುಮಾರ್. ನಾನೇ ಮಾತನಾಡುತ್ತಿದ್ದೇನೆ. ಇದು Ai ವೀಡಿಯೊ ಅಲ್ಲ. ಇದು ನಿಜವಾದ ವೀಡಿಯೊ…” ಎಂದು ಆರಂಭವಾಗುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ ವೀಡಿಯೊ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾಯಿತು. ಈ ವೀಡಿಯೊದ ವಿಶೇಷವೆಂದರೆ, ಅದು ಹಿಂದಿ ಭಾಷೆಯಲ್ಲಿ ಅಲ್ಲ; ಇದೇ ಮೊದಲ ಬಾರಿ ರವೀಶ್ ಕುಮಾರ್ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದಾರೆ. ಯೂಟ್ಯೂಬ್‌ನಲ್ಲಿನ ಪತ್ರಕರ್ತರ ಪೈಕಿ ಅತ್ಯಂತ ಜನಪ್ರಿಯರಾಗಿರುವ ರವೀಶ್ ಕುಮಾರ್, ದಶಕಗಳ ಕಾಲ ಹಿಂದಿ ಪತ್ರಕರ್ತರಾಗಿ ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. NDTVಗೆ ರಾಜೀನಾಮೆ ನೀಡಿದ ಬಳಿಕ ಅವರು ಯೂಟ್ಯೂಬ್ ಮೂಲಕ ಜನರನ್ನು ತಲುಪುತ್ತಿದ್ದಾರೆ. ರವೀಶ್ ಕುಮಾರ್ ಅವರ ಅಧಿಕೃತ ಯೂಟ್ಯೂಬ್ ಚಾನಲ್ Ravish Kumar Officialಗೆ ಪ್ರಸ್ತುತ ಒಂದು ಕೋಟಿ ನಲವತ್ತೆರಡು ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿದ್ದಾರೆ. ವಿಶಿಷ್ಟ ಶೈಲಿಯ ವಿಶ್ಲೇಷಣೆ ಹಾಗೂ ನಿರೂಪಣೆಯೊಂದಿಗೆ, ಹಿಂದಿ ಭಾಷೆಯನ್ನು ಬಳಸುವ ಅವರ ಮಾತಿನ ಶೈಲಿ ಅಪಾರ ಜನಪ್ರಿಯತೆ ಪಡೆದಿದೆ. ಹಿಂದಿಯಲ್ಲಿ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇಂಗ್ಲೀಷ್‌ನಲ್ಲಿ ಬಿಡುಗಡೆಯಾದ ಈ ವೀಡಿಯೊದಲ್ಲಿ ಅವರು ಯಾವುದೇ ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ವಿಷಯದ ವಿಶ್ಲೇಷಣೆ ಮಾಡಿಲ್ಲ. ಬದಲಾಗಿ, ಇಂಗ್ಲೀಷ್‌ನಲ್ಲಿ ಮಾತನಾಡಬೇಕೆಂಬ ವೀಕ್ಷಕರ ಬೇಡಿಕೆ, ಆ ಭಾಷೆಯಲ್ಲಿ ಮಾತನಾಡುವಾಗ ಎದುರಾಗುವ ಸವಾಲುಗಳು ಹಾಗೂ ಅದಕ್ಕಾಗಿ ಅಗತ್ಯವಿರುವ ತಯಾರಿ ಕುರಿತು ಮಾತನಾಡಿದ್ದಾರೆ. ಇಂಗ್ಲೀಷ್‌ನಲ್ಲಿ ಮಾತನಾಡುವ ತಮ್ಮ ಶೈಲಿ ವೀಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ. NDTV ಹಿಂದಿ ಚಾನಲ್ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡ ರವೀಶ್ ಕುಮಾರ್, ಆರಂಭದಲ್ಲಿ ತಮ್ಮ ವಿಶಿಷ್ಟ ವರದಿಗಾರಿಕೆಯಿಂದ, ನಂತರ ವಿಶ್ಲೇಷಣಾ ಕಾರ್ಯಕ್ರಮಗಳ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ಅವರ ಪತ್ರಿಕೋದ್ಯಮ ಸೇವೆಗೆ ಪ್ರತಿಷ್ಠಿತ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ. ಇಂಗ್ಲೀಷ್‌ನಲ್ಲಿ ವೀಡಿಯೊ ಪ್ರಕಟಿಸಿರುವುದು, ರವೀಶ್ ಕುಮಾರ್ ಅವರ ಪತ್ರಿಕೋದ್ಯಮ ವೃತ್ತಿಯಲ್ಲಿನ ಹೊಸ ಪ್ರಯೋಗವಾಗಿ ಗಮನ ಸೆಳೆದಿದೆ.

ವಾರ್ತಾ ಭಾರತಿ 23 Jan 2026 8:15 pm

ರಕ್ತದೊತ್ತಡದ ಔಷಧಿಗಳು ಕಿಡ್ನಿಗೆ ಸಮಸ್ಯೆ ಒಡ್ಡುತ್ತವೆಯೇ?

BPಗೆ ಔಷಧ ನಿಲ್ಲಿಸುವ ಮುನ್ನ...

ವಾರ್ತಾ ಭಾರತಿ 23 Jan 2026 8:10 pm

ಹಣ ಹೂಡಿಕೆ ಹೆಸರಿನಲ್ಲಿ 18.59 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಜ.23: ಟ್ರೆಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇರ್ಕಾಡಿ ಗ್ರಾಮದ ರವೀಂದ್ರ (31) ಎಂಬವರನ್ನು ಎಂಟು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿ 2004 ಎಂಬ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದು, ಈ ಗ್ರೂಪ್‌ನಲ್ಲಿ ಟ್ರೇಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದಲ್ಲಿ ಹಣ ಗಳಿಸುವ ವಿಧಾನದ ಬಗ್ಗೆ ಹೇಳಿ ಕೊಡುವುದಾಗಿ ಮೆಸೇಜ್ ಕಳುಹಿಸಿಸುತ್ತಿದ್ದರು. ನಂತರ ರವೀಂದ್ರ ಅವರ ವೈಯಕ್ತಿಕ ಟೆಲಿಗ್ರಾಂ ಐಡಿಗೆ ಮೆಸೇಜ್ ಮಾಡಿ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡುವಂತೆ ತಿಳಿದ್ದು, ಅದರಂತೆ ಅವರು ಅಕೌಂಟ್ ಕ್ರಿಯೆಟ್ ಮಾಡಿದ್ದರು. ಟ್ರೇಡಿಂಗ್‌ನಲ್ಲಿ ಲಾಭಾಂಶ ಗಳಿಸುವ ಅಪರಿಚಿತ ವ್ಯಕ್ತಿ ಮಾತು ನಂಬಿದ ರವೀಂದ್ರ, ಅವರು ಹೇಳಿದ ವಿವಿಧ ಖಾತೆ ಗಳಿಗೆ ಒಟ್ಟು 18,59,500ರೂ. ಹಣವನ್ನು ವರ್ಗಾವಣೆ ಮಾಡಿದರು. ಆದರೆ ಆರೋಪಿಗಳು ಈವರೆಗೆ ರವೀಂದ್ರ ಹಾಕಿದ ಹಣವನ್ನಾಗಲಿ ಅಥವಾ ಲಾಭದ ಹಣವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 23 Jan 2026 8:10 pm

ಕೋಳಿ ಅಂಕ: ಆರು ಮಂದಿ ಬಂಧನ

ಬೈಂದೂರು, ಜ.23: ಕೋಳಿ ಅಂಕಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬೈಂದೂರು ಬಂಧಿಸಿರುವ ಘಟನೆ ಕಳವಾಡಿ ಕಂಬಳಗದ್ದೆ ಎಂಬಲ್ಲಿ ಜ.22ರಂದು ಸಂಜೆ ವೇಳೆ ನಡೆದಿದೆ. ಕಾಲ್ತೋಡು ಗ್ರಾಮದ ಅಣ್ಣಪ್ಪ(44), ನಾರಾಯಣ ಪೂಜಾರಿ(34), ಮುದೂರು ಗ್ರಾಮದ ಕೃಷ್ಣ ಪೂಜಾರಿ(38), ಯಡ್ತರೆ ಗ್ರಾಮದ ಮಂಜುನಾಥ ಪೂಜಾರಿ(39), ಸೂರಕುಂದದ ಪ್ರವೀಣ್ ಶೆಟ್ಟಿ, ಶಿವ ದೇವಾಡಿಗ ಬಂಧಿತ ಆರೋಪಿಗಳು. ಇವರಿಂದ 1200ರೂ. ಮೌಲ್ಯದ 2 ಕೋಳಿಗಳು, ಎರಡು ಕೋಳಿ ಕತ್ತಿ ಮತ್ತು 600ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 23 Jan 2026 8:03 pm

ಬ್ರಹ್ಮಾವರ: ಲಾರಿಯಡಿ ಸಿಲುಕಿ ಬೈಕ್ ಸವಾರ ದಾರುಣ ಮೃತ್ಯು

ಬ್ರಹ್ಮಾವರ, ಜ.23: ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ.23ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಉಪ್ಪೂರು ಗ್ರಾಮದ ಕೆ.ಜಿ ರೋಡ್ ಜಂಕ್ಷನ್ ಡಿವೈಡರ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಬ್ರಹ್ಮಾವರ ಮಟಪಾಡಿಯ ಅಭಿಷೇಕ್ ಡಿ.ನಾಯ್ಕ(27) ಎಂದು ಗುರುತಿಸಲಾಗಿದೆ. ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಬೆಳಗ್ಗೆ ತನ್ನ ಬೈಕಿನಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಬರುತ್ತಿದ್ದರು. ಇದೇ ಸಂದರ್ಭ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿದನು. ಇದರ ಪರಿಣಾಮ ಲಾರಿಯ ಎಡಬದಿಯ ಮಧ್ಯದ ಚಕ್ರ ಅಭಿಷೇಕ್ ನಾಯ್ಕ ಅವರ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಅಭಿಷೇಕ್ ನಾಯ್ಕ ಲಾರಿಯ ಚಕ್ರದ ಅಡಿ ಸಿಲುಕಿಕೊಂಡಿದ್ದು, ಅಪಘಾತದ ಭೀಕರತೆಗೆ ಅಭಿಷೇಕ್ ದೇಹದಿಂದ ತಲೆ ಪ್ರತ್ಯೇಕಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಶವ ತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳ ಕಾಡು ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 23 Jan 2026 8:02 pm

ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಹಮ್ಮದ್ ನೇಮಕ

ಉಡುಪಿ, ಜ.23: ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಹಮ್ಮದ್ ಇಬ್ರಾಹಿಂ ಸಾಹೇಬ್ ಅವರನ್ನು ನೇಮಕ ಮಾಡ ಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕ ಪ್ರಸಾದ್‌ರಾಜ್ ಕಾಂಚನ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಶಿಫಾರಿಸ್ಸಿನಂತೆ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಆದೇಶದಂತೆ ಇವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ವಾರ್ತಾ ಭಾರತಿ 23 Jan 2026 7:59 pm

ಪ್ರೇಮಾ ಶೆಟ್ಟಿ

ಉಡುಪಿ, ಜ.23: ಕಾಡುಬೆಟ್ಟು ಪ್ರಗತಿನಗರ ನಿವಾಸಿ ಸುಬ್ಬಣ್ಣ ರೈ ಅವರ ಪತ್ನಿ ಪತ್ನಿ ಪ್ರೇಮಾ ಶೆಟ್ಟಿ(56) ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಇಎಸ್‌ಐ ಆಸ್ಪತ್ರೆಯಲ್ಲಿ ಹಿರಿಯ ಮೆಡಿಸಿನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಪತಿ, ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ವಾರ್ತಾ ಭಾರತಿ 23 Jan 2026 7:57 pm

‘ಯುವ ಆಯೋಗ’ ಸ್ಥಾಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಉಡುಪಿ, ಜ.23: ಕರ್ನಾಟಕದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕೆಂದು ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಉಡುಪಿ ವತಿಯಿಂದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರು ವಾಸಿಸುತ್ತಿದ್ದು, ಅವರು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ನಾಮಾಜಿಕ ಭದ್ರತೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಪ್ರತಿನಿಧಿತ್ವದ ಕೊರತೆ ಮುಂತಾದ ಗಂಭೀರ ಸಮಸ್ಯೆ ಗಳು ಯುವಜನರಲ್ಲಿ ಹೆಚ್ಚುತ್ತಿವೆ. 2022ರಲ್ಲಿ ರಾಜ್ಯ ಯುವ ನೀತಿ ಇದ್ದರೂ ಸಹ, ಅದರ ಪರಿಣಾಮಕಾರಿ ಅನುಷ್ಠಾನ, ವಿವಿಧ ಇಲಾಖೆಗಳ ಯುವ ಕಾರ್ಯಕ್ರಮಗಳ ಸಮನ್ವಯ, ಯುವಜನರ ಅಹವಾಲುಗಳ ಪರಿಹಾರ ಹಾಗೂ ಸಾಕ್ಷಾಧಾರಿತ ನೀತಿ ಶಿಫಾರಸು ಗಳನ್ನು ನೀಡುವ ಕಾನೂನುಬದ್ದ ಸಂಸ್ಥೆ ರಾಜ್ಯದಲ್ಲಿ ಪ್ರಸ್ತುತ ಇಲ್ಲ. ಇದರಿಂದ ಯುವ ಕಲ್ಯಾಣ ಕ್ಷೇತ್ರದಲ್ಲಿ ಗಂಭೀರ ಸಂಸ್ಥಾತ್ಮಕ ಶೂನ್ಯತೆ ಉಂಟಾಗಿದೆ. ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಅವು ಯುವ ಕಲ್ಯಾಣ, ಉದ್ಯೋಗ ಮಾರ್ಗದರ್ಶನ, ಮಾನಸಿಕ ಆರೋಗ್ಯ, ಮಾದಕ ವಸ್ತು ತಡೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಹೆಚ್ಚಿನ ಯುವಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯಕ್ಕೂ ಸಹ ಇಂತಹ ಅಯೋಗದ ಅಗತ್ಯ ತೀವ್ರವಾಗಿದೆ. ಕರ್ನಾಟಕ ರಾಜ್ಯ ಯುವ ಆಯೋಗವು ಯುವ ನಾಗರಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ಪಾರದರ್ಶಕತೆ, ಭಾಗವಹಿಸುವಿಕೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವುದರ ಜೊತೆಗೆ ಯುವ ಜನರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬಲ್ಲದು. ಆದ್ದರಿಂದ, ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆಗಾಗಿ ಅಗತ್ಯ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಾಲಿಡಾರಿಟಿ ರಾಜ್ಯಾ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ, ಜಿಲ್ಲಾ ಸಮಿತಿ ಸದಸ್ಯರಾದ ಝಕ್ರಿಯಾ ನೇಜಾರು ಹಾಗೂ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Jan 2026 7:54 pm

ಅಫಜಲಪುರ | ಚಂದ್ರಶೇಖರ ಕರಜಗಿಗೆ ʼಅಫಜಲ್ ಸೇವಾ ಪ್ರಶಸ್ತಿʼ ಪ್ರದಾನ

ಅಫಜಲಪುರ: ಅಫಜಲ್ ಖಾನ್ ಟ್ರಸ್ಟ್ ವತಿಯಿಂದ ಕೊಡಮಾಡುವ ಅಫಜಲ್ ಸೇವಾ ಪ್ರಶಸ್ತಿಯನ್ನು ಸಮಾಜಸೇವಕ ಚಂದ್ರಶೇಖರ ಕರಜಗಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಕ್ಸೂದ್ ಜಾಗಿರದಾರ್‌ ಅವರು, 2019ರಲ್ಲಿ ಅಫಜಲ್ ಖಾನ್ ಟ್ರಸ್ಟ್ ನೋಂದಣಿ ಮಾಡಿಸಿ ಇಲ್ಲಿವರೆಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಹೇಳಿದರು. ಇತ್ತೀಚಿಗೆ ನಡೆದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಫಜಲ್ ಖಾನ್ ಟ್ರಸ್ಟ್ ವತಿಯಿಂದ 2026ನೇ ಸಾಲಿನ ಮೊದಲ ಸಾಧಕ ಎಂದು ಗುರುತಿಸಿ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕರಜಗಿ ಅವರು ಉತ್ತಮ ಸಮಾಜ ಸೇವೆ ಮಾಡುತ್ತಾ ಬಂದಿರುವುದು ಮಳೇಂದ್ರ ಶಿವಾಚಾರ್ಯರ ಮಠಕ್ಕೂ ಕೀರ್ತಿ ತಂದಿದ್ದಾರೆ. ಇವರ ಸಾಮಾಜಿಕ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮುರುಘೇಂದ್ರ ಮಸಳಿ, ಬಾಬುಮೀಯಾ ಫುಲಾರಿ, ಚನ್ನು ಮನಿಯಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Jan 2026 7:52 pm

ಚಿತ್ತಾಪುರ | ಸಚಿವ ಆ‌ರ್.ಬಿ.ತಿಮ್ಮಾಪುರ ವಿರುದ್ಧದ ಲಂಚದ ಆರೋಪ ಸತ್ಯಕ್ಕೆ ದೂರ : ಮಾರುತಿ ಹುಳಗೋಳಕ‌ರ್

ಚಿತ್ತಾಪುರ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿರುದ್ಧದ ಲಂಚದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಾರುತಿ ಹುಳಗೋಳಕ‌ರ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಚಿವ ತಿಮ್ಮಾಪುರ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಬಿಜೆಪಿಯಿಂದ ನಡೆಯುತ್ತಿರುವ ಹುನ್ನಾರವಾಗಿದೆ, ಸಚಿವರ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಚಿವರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರ ವಿರುದ್ಧದ ಆರೋಪಗಳು ಆಧಾರರಹಿತ ಎಂದು ತಿಳಿಸಿದ್ದಾರೆ. ಬೆಂಗಳೂರಿನ ನಿವಾಸಿ ಲಕ್ಷ್ಮೀನಾರಾಯಣ ಎಂಬುವವರು ಮೈಕ್ರೋ ಬ್ರೂವರಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆರಂಭಿಸಲು ಪರವಾನಗಿ ಪಡೆಯುವ ಸಲುವಾಗಿ ಅಬಕಾರಿ ಇಲಾಖೆ ಅಧಿಕಾರಿಗಳಾದ ಡಿ.ಸಿ. ಜಗದೀಶ್ ನಾಯ್ಕ ಹಾಗೂ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ ವೇಳೆ, ಪರವಾನಗಿಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ. ನಂತರ ಯಾರಿಗೆ ಎಷ್ಟು ಪಾಲು ಎಂಬ ಕುರಿತು ಚರ್ಚೆ ನಡೆದಾಗ, ಲಂಚ ಪಡೆಯುವ ದುರುದ್ದೇಶದಿಂದ ತಪ್ಪಾಗಿ ಸಚಿವರು ಹಾಗೂ ಅವರ ಪುತ್ರನ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ದುರುದ್ದೇಶಪೂರಿತ ಆರೋಪಗಳನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಮಾರುತಿ ಹುಳಗೋಳಕರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Jan 2026 7:48 pm

ಕಲಬುರಗಿ | ಜ.24 ರಂದು ʼಪುಸ್ತಕ ಪರಿಚಯʼ ಕಾರ್ಯಕ್ರಮ: ಅಪ್ಪಾರಾವ್‌ ಅಕ್ಕೋಣೆ

ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ ವತಿಯಿಂದ ನಾಳೆ ಜ.24 ರಂದು ಸಂಜೆ 5ಗಂಟೆಗೆ ಪುಸ್ತಕ ಪರಿಚಯ ಕಾರ್ಯಕ್ರಮವು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಾವ್‌ ಅಕ್ಕೋಣೆ ಅವರು ತಿಳಿಸಿದ್ದಾರೆ. ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಅವರು ರಚಿಸಿದ ಮಿಸ್ಸಳ ಭಾಜಿ ಮತ್ತು ಇತರ ಲಲಿತ ಪ್ರಬಂಧಗಳುಎಂಬ ಪ್ರಬಂಧ ಸಂಕಲನ ಕುರಿತು ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಪ್ರೊ.ಲಿಂಗಪ್ಪ ಗೋನಾಲರು ಅವಲೋಕನ ಮಾಡುವರು. ಹಿರಿಯ ಸಾಹಿತಿಗಳಾದ ಡಾ.ಜಯದೇವಿ ಗಾಯಕವಾಡ, ಡಾ.ಚಿ.ಸಿ.ನಿಂಗಣ್ಣ ಮತ್ತು ಪ್ರೊ.ಶಾಂತಲಿಂಗಪ್ಪ ಪಾಟೀಲ ಅವರು ಪುಸ್ತಕ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸುವರು, ಸದರಿ ಸಂಘದ ಉಪಾಧ್ಯಕ್ಷರಾದ ಡಾ.ಸ್ವಾಮಿರಾವ ಕುಲಕರ್ಣಿಯವರು ಮತ್ತು ಲೇಖಕರಾದ ಶ್ರೀನಿವಾಸ ಜಾಲವಾದಿಯವರು ಉಪಸ್ಥಿತರಿರುವರು.  ಸಾಹಿತ್ಯದ ಆಸಕ್ತರು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Jan 2026 7:43 pm

Gold Atm: ಎಟಿಎಂನಿಂದ ಇನ್ಮುಂದೆ ಚಿನ್ನ ಮಾರಾಟ - ಖರೀದಿ ಮಾಡಬಹುದು, ದಕ್ಷಿಣ ಭಾರತದ ಈ ನಗರದಲ್ಲಿ ಮೊದಲ ಪ್ರಯೋಗ

ಹೈದರಾಬಾದ್: ಭಾರತೀಯರಿಗೆ ಚಿನ್ನದ ಬಗ್ಗೆ ವಿಶೇಷ ಒಲವು ಇದೆ. ಭಾರತೀಯರು ಚಿನ್ನದ ಖರೀದಿ ಮಾಡುವುದರ ಹಿಂದಿನ ಉದ್ದೇಶಗಳಲ್ಲಿ ಸಂಕಷ್ಟದ ಕಾಲದಲ್ಲಿ ಚಿನ್ನದಿಂದ ಸಹಾಯವಾಗಲಿದೆ. ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಅಡಮಾನ ಇರಿಸಿ, ಹಣ ಪಡೆಯಬಹುದು ಎನ್ನುವುದು ಸಹ ಇದರಲ್ಲಿ ಒಂದು. ಇದೀಗ ಚಿನ್ನವನ್ನು ಅಡಮಾನ ಇರಿಸುವುದಕ್ಕೆ ಸಂಬಂಧಿಸಿದಂತೆ ಎಟಿಎಂ ಪರಿಚಯಿಸಲಾಗಿದೆ. ಎಲ್ಲಿ ಹಾಗೂ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ

ಒನ್ ಇ೦ಡಿಯ 23 Jan 2026 7:40 pm

ಉಡುಪಿ| ಲೋಕಾಯುಕ್ತ ಹೆಸರಿನಲ್ಲಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನ: ಪ್ರಕರಣ ದಾಖಲು

ಉಡುಪಿ, ಜ23: ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಕಪಿಲ್‌ದೇವ್ ಎಸ್.ಗೋಡೆಮನೆ ಎಂಬವರಿಗೆ ಜ.19ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚೆಲುವರಾಜ್ ಎಂದು ಹೇಳಿಕೊಂಡು ಕರೆ ಮಾಡಿದ್ದನು. ನಿಮ್ಮ ವಿರುದ್ಧ ಇಮೇಲ್ ಮುಖಾಂತರ ದೂರು ಬಂದಿದ್ದು, ಈ ದೂರನ್ನು ಬಗೆಹರಿಸಿಕೊಳ್ಳಿ, ನಿರಾಕರಿಸಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ಮಾಡುವುದಾಗಿ ಹೇಳಿದ್ದರು. ತದನಂತರ ಇನ್ನೊಬ್ಬ ವ್ಯಕ್ತಿಗೆ ಫೋನ್ ಕರೆ ಕೊಟ್ಟಿದ್ದು, ಆತನು ನಾನು ಇಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈಗಾಗಲೇ ನಮ್ಮ ಅಧಿಕಾರಿಯು ತಿಳಿಸಿದಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದನು. ಕಪಿಲ್‌ದೇವ್ ಈ ಬಗ್ಗೆ ಖಚಿತಪಡಿಸಿಕೊಳ್ಳಲು ಉಡುಪಿ ಲೋಕಯುಕ್ತ ಕಚೇರಿಗೆ ಹೋಗಿ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದರು. ಆ ಹೆಸರಿನ ವ್ಯಕ್ತಿಗಳು ನಮ್ಮ ಕಚೇರಿಯಲಿಲ್ಲ ಹಾಗೂ ನಿಮಗೆ ಬಂದಂತಹ ಕರೆ ನಮ್ಮ ಕಚೇರಿಯಿಂದಲ್ಲ ಎಂದು ಲೋಕಾಯುಕ್ತ ಕಚೇರಿಯವರು ತಿಳಿಸಿದರು. ಆದುದರಿಂದ ಕರೆ ಮಾಡಿದ ವ್ಯಕ್ತಿಗಳು ವಂಚನೆ ಮಾಡಲು ಯತ್ನಿಸಿರುವುದು ತಿಳಿದುಬಂದಿದೆ. ಅದರಂತೆ ಕಪಿಲ್‌ದೇವ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

ವಾರ್ತಾ ಭಾರತಿ 23 Jan 2026 7:27 pm

ಕಲಬುರಗಿ | ಕ್ರೀಡಾ ಚಟುವಟಿಕೆಗಳಿಗೂ ಮಹತ್ವ ನೀಡಿ: ವರ್ಷಾ ರಾಜೀವ ಜಾನೆ

ಸಂವಿಧಾನ ಪ್ರೀಮಿಯರ್ ಲೀಗ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ವಾರ್ತಾ ಭಾರತಿ 23 Jan 2026 7:26 pm

ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಎಂಟ್ರಿ ; ಯಾವ ಕ್ಷೇತ್ರದಿಂದ, ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ

ರಾಮನಗರ: ರಾಜ್ಯ ರಾಜಕಾರಣಕ್ಕೆ ಹೆಚ್‌ ಡಿ ಕುಮಾರಸ್ವಾಮಿ ಬರ್ತಾರಾ, ಕ್ಷೇತ್ರಕ್ಕೆ ಬರ್ತಾರ ಅಂತ ಚರ್ಚೆ.ಮೊದಲು ರಾಜ್ಯಕ್ಕೆ ಬರ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡಿಡಿದುಕೊಳ್ಳೊಣ. ಬಳಿಕ ಯಾವ ಕ್ಷೇತ್ರಕ್ಕೆ ಬರ್ತಾರೆ ಅನ್ನೋದು ತೀರ್ಮಾನ ಆಗುತ್ತೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಈ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಕುಮಾರಣ್ಣ

ಒನ್ ಇ೦ಡಿಯ 23 Jan 2026 7:24 pm