SENSEX
NIFTY
GOLD
USD/INR

Weather

26    C
...

BJPಯನ್ನು ಆರೆಸ್ಸೆಸ್ ನಿಯಂತ್ರಿಸುವುದಿಲ್ಲ : ಮೋಹನ್ ಭಾಗವತ್

ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘ  ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿಲ್ಲ. ಆದರೆ, ಬಿಜೆಪಿಯನ್ನು ವಿರೋಧಿಸುವವರು ಆರೆಸ್ಸೆಸ್ ಅನ್ನು ಕೂಡ ವಿರೋಧಿಸುತ್ತಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಸಂಘದ ಸ್ವಯಂಸೇವಕರು ಬಿಜೆಪಿಗೆ ಸೇರಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಆರೆಸ್ಸೆಸ್ ಬಿಜೆಪಿಯನ್ನು ನಿಯಂತ್ರಿಸುತ್ತದೆ ಎಂದು ಹೇಳುವುದು ತಪ್ಪು ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕಗಳ ಬಗ್ಗೆ ಪ್ರತಿಕ್ರಿಯಿಸಿದ ಮೋಹನ್ ಭಾಗವತ್ , ಅಮೆರಿಕ ತನ್ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಬಳಸಿಕೊಂಡು ದೇಶವನ್ನು ಮಂಡಿಯೂರಿಸಲು ಬಯಸುತ್ತಿದೆ. ಆದರೆ ಭಾರತ ಬಲಿಷ್ಠವಾಗಿದೆ ಎಂದು ಹೇಳಿದರು.

ವಾರ್ತಾ ಭಾರತಿ 19 Feb 2026 11:05 am

AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ

ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಧುನಿಕ ತಂತ್ರಜ್ಞಾನವನ್ನು ಮಾನವ ನಾಗರಿಕತೆಯ ಉನ್ನತಿಗಾಗಿ ಬಳಸುವುದು ಭಾರತದ ಉದ್ದೇಶ ಎಂದು ಸ್ಪಷ್ಟಪಡಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಭವಿಷ್ಯದ AI ನೀಲನಕ್ಷೆಯನ್ನು ತೆರೆದಿಟ್ಟಿದ್ದು, ಶೃಂಗಸಭೆಯಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯ ಕರ್ನಾಟಕ 19 Feb 2026 11:03 am

ಕಸದ ರಾಜಕೀಯ: ಆಡಳಿತ ವಿಪಕ್ಷದ ನಡುವೆ ಏಟು ಇದಿರೇಟು, ಏಸ್ಮಾ ಎಚ್ಚರಿಕೆ ಕೊಟ್ಟ ಡಿಕೆಶಿ! ಬಂಧನಕ್ಕೆ ಸಿದ್ದ ಎಂದ ಧೀರಜ್

ರಾಜ್ಯ ರಾಜಕೀಯದಲ್ಲಿ ಕಸದ ಜಟಾಪಟಿ ಜೋರಾಗಿದೆ. ಬೆಂಗಳೂರು ನಗರದ ಕಸವನ್ನು ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುವುದು ಡಿಸಿಎಂ ಡಿಕೆ ಶಿವಕುಮಾರ್ ಆರೋಪವಾಗಿದೆ. ಈ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರು ಬ್ಲ್ಯಾಕ್ ಮೇಲ್ ಮಾಡಿದರೆ ಏಸ್ಮಾ ಜಾರಿ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಡಿಸಿಎಂ ಡಿಕೆಶಿ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ವಿಜಯ ಕರ್ನಾಟಕ 19 Feb 2026 10:57 am

Farmers Marriage: ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ಸರ್ಕಾರಕ್ಕೆ ಶಾಸಕ ಡಾ. ಎಚ್.ಡಿ. ರಂಗನಾಥ್ ಪತ್ರ

Farmers Marriage: ಕರ್ನಾಟಕದಲ್ಲಿ ರೈತರ ಮದುವೆ ವಿಳಂಬವಾಗುತ್ತಿದೆ. ಕೃಷಿ ಮಾಡುತ್ತಿರುವ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ, ಹೀಗಾಗಿ ಮದುವೆ ವಿಳಂಬವಾಗುತ್ತಿದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಂಭೀರವಾಗಿ ಚರ್ಚೆ ಆಗುತ್ತಿರುವ ವಿಷಯಗಳಲ್ಲಿ ಒಂದಾಗಿದೆ. ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ಕೃಷಿ ಮಾಡುತ್ತಿರುವ ಯುವಕರಿಗೆ ಮದುವೆಗೆ ವಧು ಸಿಗುತ್ತಿಲ್ಲ ಎನ್ನುವುದು ಸಹ ಚರ್ಚೆ ಆಗುತ್ತಿದೆ. ಇದೀಗ ಕರ್ನಾಟಕದಲ್ಲಿ ರೈತರನ್ನು

ಒನ್ ಇ೦ಡಿಯ 19 Feb 2026 10:52 am

Epstein Files ವಿವಾದ : ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಿಂದ ಹೊರಗುಳಿದ ಬಿಲ್‌ ಗೇಟ್ಸ್‌

ಹೊಸದಿಲ್ಲಿ: ಎಪ್ಸ್ಟೀನ್ ಕಡತದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ಅವರ ಹೆಸರು ಕಾಣಿಸಿಕೊಂಡಿರುವುದರ ಕುರಿತು ಉಂಟಾದ ವಿವಾದದ ಮಧ್ಯೆ ದಿಲ್ಲಿಯಲ್ಲಿ ನಡೆಯುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬಿಲ್‌ ಗೇಟ್ಸ್ ಮುಖ್ಯ ಭಾಷಣ ಮಾಡುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ತಿಳಿಸಿದೆ. ಶೃಂಗಸಭೆಯಲ್ಲಿ ಗೇಟ್ಸ್ ಫೌಂಡೇಶನ್ ಪರವಾಗಿ ಸಂಸ್ಥೆಯ ಆಫ್ರಿಕಾ ಮತ್ತು ಭಾರತ ಘಟಕದ ಮುಖ್ಯಸ್ಥ ಅಂಕುರ್ ವೋರಾ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದೆ. ಎಐ ಶೃಂಗಸಭೆಯ ಪ್ರಮುಖ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಅವರು ಮುಖ್ಯ ಭಾಷಣ ಮಾಡುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ಎಕ್ಸ್‌ನಲ್ಲಿ  ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ. ದಿಲ್ಲಿಯ ಭಾರತ್ ಮಂಟಪದಲ್ಲಿ ಸೋಮವಾರ “ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026”(India AI Impact Summit 2026) ಆರಂಭವಾಯಿತು. ಭಾರತದಲ್ಲಿ ಮೊದಲ ಬಾರಿಗೆ ನಡೆದ ಈ ಸಭೆಯು ಭಾರತದ ಎಐ ಮತ್ತು ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್‌ನಲ್ಲಿ ಪ್ರಗತಿಯ ಮಹತ್ವದ ಗುರಿಯನ್ನು ಹೊಂದಿದೆ.

ವಾರ್ತಾ ಭಾರತಿ 19 Feb 2026 10:33 am

ಉತ್ತರ ಕಲಬುರಗಿಯಲ್ಲಿ ಹದಗೆಟ್ಟ ರಸ್ತೆಗಳು

► 5 ಕಿ.ಮೀ. ವ್ಯಾಪ್ತಿಯೊಳಗೆ ನಡೆದ ಅಪಘಾತಗಳಲ್ಲಿ 43 ಜನ ಮೃತ್ಯು► 258 ಮಂದಿಗೆ ಗಾಯ: ಆರ್‌ಟಿಐ ಮಾಹಿತಿಯಿಂದ ಬಹಿರಂಗ

ವಾರ್ತಾ ಭಾರತಿ 19 Feb 2026 10:30 am

ಜೆಫ್ರಿ ಎಪ್‌ಸ್ಟೀನ್ ಪ್ರಕರಣ: ಅಧಿಕಾರದ ಕರಾಳ ಹಾದಿ ಮತ್ತು ನೈತಿಕತೆಯ ಪತನ

ನಾಗರಿಕತೆಯ ಮುಖವಾಡದ ಹಿಂದಿನ ಕ್ರೌರ್ಯ ಇಂದಿನ ಆಧುನಿಕ ಜಗತ್ತು ತಾಂತ್ರಿಕವಾಗಿ ಮುಂದುವರಿದಿದೆ, ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಯಾಗಿವೆ ಮತ್ತು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಹೆಚ್ಚಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಅಮೆರಿಕದಂತಹ ಅತ್ಯಂತ ಪ್ರಭಾವಶಾಲಿ ರಾಷ್ಟ್ರದ ಎದೆಯೊಳಗೇ ದಶಕಗಳ ಕಾಲ ನಡೆದ ’ಜೆಫ್ರಿ ಎಪ್‌ಸ್ಟೀನ್’ ಪ್ರಕರಣವು ಇಡೀ ಮಾನವಕುಲ ತಲೆತಗ್ಗಿಸುವಂತೆ ಮಾಡಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಬಿಡುಗಡೆಯಾದ ‘ಎಪ್‌ಸ್ಟೀನ್ ಫೈಲ್ಸ್’ ಮತ್ತು ನೆಟ್‌ಫ್ಲಿಕ್ಸ್‌ನ ‘Jeffrey Epstein: Filthy Rich’ ಡಾಕ್ಯುಮೆಂಟರಿ ಸರಣಿಯು ಕೇವಲ ಒಂದು ಲೈಂಗಿಕ ಹಗರಣದ ಕಥೆಯನ್ನಷ್ಟೇ ಹೇಳುತ್ತಿಲ್ಲ; ಬದಲಾಗಿ ಅಧಿಕಾರ, ಹಣ ಮತ್ತು ಪ್ರಭಾವ ಹೇಗೆ ಕಾನೂನನ್ನು ಕುರುಡಾಗಿಸಬಹುದು ಎಂಬುದಕ್ಕೆ ಕಟು ಸಾಕ್ಷಿ ನುಡಿಯುತ್ತಿವೆ. ಇದು ಕೇವಲ ಒಬ್ಬ ವ್ಯಕ್ತಿಯ ಕಾಮದ ಪತನವಲ್ಲ, ಬದಲಾಗಿ ಜಾಗತಿಕ ವ್ಯವಸ್ಥೆಯ ನೈತಿಕ ಅಧಃಪತನದ ದ್ಯೋತಕವಾಗಿದೆ. ದಶಕಗಳ ಕಾಲ ಸಮಾಜದ ಕಣ್ಣಿಗೆ ಮಣ್ಣೆರಚಿ ನಡೆದ ಈ ಕೃತ್ಯಗಳು ಇಂದು ಹೊರಬರುತ್ತಿವೆ ಎಂದರೆ, ಅದರ ಹಿಂದೆ ದಮನಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ನೋವು ಮತ್ತು ವ್ಯವಸ್ಥೆಯ ಅಕ್ಷಮ್ಯ ಮೌನ ಅಡಗಿದೆ. ಅಧಿಕಾರಶಾಹಿ ಜಾಲ ಮತ್ತು ವ್ಯವಸ್ಥೆಯ ಉದ್ದೇಶಪೂರ್ವಕ ವೈಫಲ್ಯ ಜೆಫ್ರಿ ಎಪ್‌ಸ್ಟೀನ್ ಎಂಬ ‘ಹೈ-ಪ್ರೊಫೈಲ್’ ಫೈನಾನ್ಸಿಯರ್ ಸಮಾಜದಲ್ಲಿ ಅಪ್ರತಿಮ ಪ್ರತಿಷ್ಠಿತ ವ್ಯಕ್ತಿಯಾಗಿ ಮೆರೆಯುತ್ತಿದ್ದ. ಇವನ ಸಂಪರ್ಕಜಾಲವು ಎಷ್ಟೊಂದು ಬಲಿಷ್ಠವಾಗಿತ್ತೆಂದರೆ, ಅದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರು, ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ ಮತ್ತು ಬಿಲ್ ಗೇಟ್ಸ್‌ನಂತಹ ಜಾಗತಿಕ ಶತಕೋಟ್ಯಧಿಪತಿಗಳ ಹೆಸರುಗಳು ತಳುಕು ಹಾಕಿಕೊಂಡಿದ್ದವು. ಈತ ನಡೆಸುತ್ತಿದ್ದ ಲೈಂಗಿಕ ಕಳ್ಳಸಾಗಣೆ ಜಾಲವು 80 ಮತ್ತು 90ರ ದಶಕದಲ್ಲೇ ಬೇರುಬಿಟ್ಟಿತ್ತು. ವಿಸ್ಮಯವೆಂದರೆ, 2003ರಲ್ಲೇ ಈತನ ಬಗ್ಗೆ ಗಂಭೀರ ವರದಿಗಳು ಬಂದಿದ್ದವು ಮತ್ತು 2005ರಲ್ಲಿ 14 ವರ್ಷದ ಮಗುವಿನ ಮೇಲೆ ದೌರ್ಜನ್ಯ ಎಸಗಿದ ದೂರು ದಾಖಲಾಗಿದ್ದರೂ, ತನಿಖಾ ಸಂಸ್ಥೆಗಳು ನಿಗೂಢ ಮೌನ ತಾಳಿದ್ದವು. 2008ರಲ್ಲಿ ಈತ ಲೈಂಗಿಕ ಅಪರಾಧಕ್ಕಾಗಿ ಜೈಲಿಗೆ ಹೋದರೂ, ಕೇವಲ 13 ತಿಂಗಳುಗಳಲ್ಲಿ ಅತ್ಯಂತ ಸಡಿಲವಾದ ನಿಯಮಗಳಡಿ ಹೊರಬಂದದ್ದು ನ್ಯಾಯಾಂಗ ವ್ಯವಸ್ಥೆಗೆ ಎಸಗಿದ ಅತಿ ದೊಡ್ಡ ಅಪಮಾನವಾಗಿದೆ. ಅಧಿಕಾರದಲ್ಲಿರುವವರನ್ನು ವ್ಯವಸ್ಥೆಯು ಹೇಗೆ ಕಾಪಾಡುತ್ತದೆ ಎಂಬುದು ಈ ಪ್ರಕರಣದ ಅತ್ಯಂತ ಭೀಕರವಾದ ಭಾಗ. ಕಾನೂನು ಎಲ್ಲರಿಗೂ ಒಂದೇ ಎಂದು ನಾವು ಹೇಳಿಕೊಂಡರೂ, ಎಪ್‌ಸ್ಟೀನ್ ಪ್ರಕರಣದಲ್ಲಿ ಅದು ಸುಳ್ಳೆಂದು ಸಾಬೀತಾಗಿದೆ. ಪ್ರಭಾವಿಗಳು ತಪ್ಪು ಮಾಡಿದಾಗ ಅವರಿಗೆ ರಕ್ಷಾಕವಚವಾಗಿ ನಿಲ್ಲುವ ವ್ಯವಸ್ಥೆಯು, ಸಂತ್ರಸ್ತ ಮಹಿಳೆಯರ ಧ್ವನಿಯನ್ನು ಅಡಗಿಸಲು ಅವರ ಮೇಲೆ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಲೇ ಬಂದಿತು. ‘ಪಾಕೆಟ್ ಮನಿ’ ಎಂಬ ಆಮಿಷ ಮತ್ತು ಶೋಷಣೆಯ ಅಮಾನವೀಯ ಸ್ವರೂಪ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಸಂತ್ರಸ್ತರು ಹಂಚಿಕೊಂಡ ನೋವಿನ ಸಂಗತಿಗಳು ಎದೆ ನಡುಗಿಸುವಂತಿವೆ. ಕೇವಲ 15-17 ವರ್ಷದ ಬಡತನದ ಅಥವಾ ಕೌಟುಂಬಿಕ ಹಿನ್ನೆಲೆ ಸರಿಯಿಲ್ಲದ ಅಸಹಾಯಕ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು, ಮಸಾಜ್ ಮಾಡಿ ಪಾಕೆಟ್ ಮನಿ ಗಳಿಸಿ ಎಂಬ ಆಮಿಷ ಒಡ್ಡಲಾಗುತ್ತಿತ್ತು. ಇದು ಕೇವಲ ಒಬ್ಬ ವ್ಯಕ್ತಿಯ ವಿಕೃತ ಕಾಮವಲ್ಲ, ಬದಲಾಗಿ ಇದೊಂದು ವ್ಯವಸ್ಥಿತ ಸೆಕ್ಸ್ ಪಿರಮಿಡ್ ಸ್ಕೀಮ್ ಆಗಿತ್ತು. ಎಪ್‌ಸ್ಟೀನ್ ತನ್ನ ಖಾಸಗಿ ದ್ವೀಪದಲ್ಲಿ (Little St. James) ಹಿರಿಯ ನಾಯಕರಿಗೆ ಈ ಮಕ್ಕಳನ್ನು ‘ಸರಬರಾಜು’ ಮಾಡುವ ಮೂಲಕ ಜಾಗತಿಕ ರಾಜಕೀಯ ಮತ್ತು ಉದ್ಯಮ ರಂಗದ ಮೇಲೆಯೇ ಹಿಡಿತ ಸಾಧಿಸಿದ್ದ ಎಂಬ ಆಘಾತಕಾರಿ ಸತ್ಯಗಳು ಇಂದು ಹೊರಬರುತ್ತಿವೆ. ಇಲ್ಲಿ ಶೋಷಣೆಗೆ ಒಳಗಾದವರು ಕೇವಲ ವ್ಯಕ್ತಿಗಳಲ್ಲ, ಬದಲಾಗಿ ಒಂದು ಸಮಾಜವು ಹೆಣ್ಣಿಗೆ ನೀಡಬೇಕಾದ ಕನಿಷ್ಠ ಗೌರವದ ನಂಬಿಕೆಗಳು. ಅಧಿಕಾರದ ಮದವೇರಿದ ವ್ಯಕ್ತಿಗಳು ಹಣ ಮತ್ತು ಅಂತಸ್ತಿನ ಬಲದಿಂದ ಅಸಹಾಯಕ ಹೆಣ್ಣುಮಕ್ಕಳನ್ನು ತಮ್ಮ ವಿಕೃತ ಆಸೆಗಳಿಗೆ ಬಲಿಪಶುಗಳನ್ನಾಗಿ ಮಾಡಿಕೊಂಡರು. ಇದು ನಮ್ಮ ಆಧುನಿಕ ಸಮಾಜವು ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಎಷ್ಟು ದಯನೀಯ ಸ್ಥಿತಿಯಲ್ಲಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಭಾರತೀಯ ಸಮಾಜದ ಮೇಲೆ ಈ ಹಗರಣದ ಗಂಭೀರ ಪರಿಣಾಮಗಳು ಈ ಪ್ರಕರಣವನ್ನು ನಾವು ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಅತ್ಯಗತ್ಯ. ಭಾರತದಲ್ಲಿ ಮಹಿಳೆಯರು ದಶಕಗಳ ಹೋರಾಟದ ನಂತರ ಶಿಕ್ಷಣ, ಉದ್ಯೋಗ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ‘ಮುಕ್ತ ಜೀವನ’ದ ಹೆಸರಿನಲ್ಲಿ ನಡೆದ ಇಂತಹ ಭೀಕರ ಶೋಷಣೆಗಳು ಹೊರಬಂದಾಗ, ನಮ್ಮ ಸಮಾಜದ ಸಂಪ್ರದಾಯವಾದಿ ಮನಸ್ಥಿತಿ ಮತ್ತೆ ಹೆಣ್ಣುಮಕ್ಕಳನ್ನು ನಿಯಂತ್ರಿಸಲು ಮುಂದಾಗುವ ಅಪಾಯವಿದೆ. ನೋಡಿ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮುಕ್ತ ಸ್ವಾತಂತ್ರ್ಯ ಸಿಕ್ಕ ಹೆಣ್ಣುಮಕ್ಕಳಿಗೆ ಏನಾಯಿತು? ಎಂಬ ವಾದವನ್ನು ಮುಂದಿಟ್ಟುಕೊಂಡು, ಮತ್ತೆ ಹೆಣ್ಣಿನ ಮೇಲೆ ನಿರ್ಬಂಧಗಳ ಸರಮಾಲೆ ಹಾಕಲು ವ್ಯವಸ್ಥೆ ಪ್ರಯತ್ನಿಸಬಹುದು. ಈಗಾಗಲೇ ನಮ್ಮಲ್ಲಿ 30 ವರ್ಷದ ಸ್ವಾವಲಂಬಿ ಮಹಿಳೆಯೂ ಮನೆಯಿಂದ ಹೊರಹೋಗುವಾಗ ಹತ್ತಾರು ಪ್ರಶ್ನೆಗಳನ್ನು ಎದುರಿಸಬೇಕಾದ ಸ್ಥಿತಿಯಿದೆ. ಎಪ್‌ಸ್ಟೀನ್ ಪ್ರಕರಣವು ಅಂತಹ ‘ನಿರ್ಬಂಧದ ಆಲೋಚನೆ’ಗಳಿಗೆ ಪ್ರಬಲ ಅಸ್ತ್ರವಾಗುವ ಸಾಧ್ಯತೆಯಿದೆ. ನಾಗರಿಕ ಸಮಾಜದಲ್ಲಿ ಮಹಿಳೆಯರ ಅಸ್ಮಿತೆ ಮತ್ತು ಗೌರವ ಅತ್ಯಂತ ಪವಿತ್ರವಾದದ್ದು. ಈ ಪ್ರಕರಣವು ಆಧುನಿಕ ಹೆಣ್ಣುಮಕ್ಕಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಕಿತ್ತುಕೊಳ್ಳುವ ಅಥವಾ ಸಂಶಯದ ಕಣ್ಣಿನಿಂದ ನೋಡುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದರೆ ನೈಜ ದೋಷವಿರುವುದು ಹೆಣ್ಣಿನ ಸ್ವಾತಂತ್ರ್ಯದಲ್ಲಲ್ಲ, ಬದಲಾಗಿ ಅಧಿಕಾರದಲ್ಲಿರುವವರ ಅಹಂಕಾರ ಮತ್ತು ಕಾಮದ ವಿಕೃತಿಯಲ್ಲಿದೆ. ನಾಯಕತ್ವದ ಪತನ ಮತ್ತು ಸಮಾಜದ ನೈತಿಕ ಜವಾಬ್ದಾರಿ ಯಾವಾಗ ಸಮಾಜದಲ್ಲಿ ಧರ್ಮ, ನ್ಯಾಯ ಮತ್ತು ಸತ್ಯಕ್ಕಿಂತ ‘ಪ್ರಭಾವ’ ಅಥವಾ ‘ಹಣ’ ದೊಡ್ಡದಾಗುತ್ತದೆಯೋ, ಆಗ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗುತ್ತದೆ. ಎಪ್‌ಸ್ಟೀನ್ ಫೈಲ್ಸ್ ಮೂಲಕ ಹೊರಬರುತ್ತಿರುವ ಸತ್ಯಗಳು ಜಾಗತಿಕ ನಾಯಕತ್ವದ ನೈತಿಕ ಪತನವನ್ನು ಎತ್ತಿ ತೋರಿಸುತ್ತಿವೆ. ಅಧಿಕಾರ ಎಂಬುದು ಜನರ ರಕ್ಷಣೆಗಾಗಿ ಇರಬೇಕೇ ಹೊರತು ಶೋಷಣೆಗಲ್ಲ. ಈ ಇಡೀ ಪ್ರಕರಣವು ನಮಗೆ ನೀಡುವ ಎಚ್ಚರಿಕೆ ಏನೆಂದರೆ, ನಾವು ನಾಯಕ ಎಂದು ನಂಬುವ ವ್ಯಕ್ತಿಯ ಹಿಂದೆ ಅಡಗಿರುವ ಕ್ರೌರ್ಯದ ಬಗ್ಗೆ ಸದಾ ಜಾಗರೂಕರಾಗಿರಬೇಕು. ವ್ಯವಸ್ಥೆಯು ಇನ್ನು ಮುಂದೆಯಾದರೂ ಪ್ರಭಾವಿಗಳ ಗುಲಾಮನಾಗದೆ, ನ್ಯಾಯದ ದಾರಿಯಲ್ಲಿ ಸಾಗಿದಾಗ ಮಾತ್ರ ಸಂತ್ರಸ್ತರಿಗೆ ನಿಜವಾದ ನೆಮ್ಮದಿ ಸಿಗಲು ಸಾಧ್ಯ. ಎಪ್‌ಸ್ಟೀನ್ ಪ್ರಕರಣವು ಕೇವಲ ಅಮೆರಿಕದ ಸಮಸ್ಯೆಯಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಅಧಿಕಾರಶಾಹಿ ಅಹಂಕಾರದ ಪ್ರತಿಫಲವಾಗಿದೆ. ಈ ಹಗರಣದಲ್ಲಿ ಭಾಗಿಯಾದವರು ಸಾಮಾನ್ಯ ವ್ಯಕ್ತಿಗಳಲ್ಲ; ದೇಶಗಳನ್ನು ಮುನ್ನಡೆಸುವ ನಾಯಕರು ಮತ್ತು ಶತಕೋಟ್ಯಧಿಪತಿಗಳು. ಇವರೆಲ್ಲರೂ ಸೇರಿ ಹೆಣ್ಣುಮಕ್ಕಳನ್ನು ವಸ್ತುಗಳಂತೆ ಬಳಸುವ ಒಂದು ಜಾಲವನ್ನು ಸೃಷ್ಟಿಸಿಕೊಂಡಿದ್ದು ಇಡೀ ಮಾನವ ಇತಿಹಾಸದ ಕಪ್ಪು ಚುಕ್ಕೆಯಾಗಿದೆ. ನ್ಯಾಯದ ಹಾದಿಯಲ್ಲಿ ಒಂದು ಹೊಸ ಆರಂಭ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಎತ್ತಿ ಹಿಡಿಯುವುದು ಕೇವಲ ಕಾನೂನಿನ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ. ಎಪ್‌ಸ್ಟೀನ್ ಎಂಬ ಕರಾಳ ಅಧ್ಯಾಯವು ಮತ್ತೊಮ್ಮೆ ಇತಿಹಾಸದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವುದೇ ಸಂತ್ರಸ್ತರಿಗೆ ನಾವು ನೀಡಬಹುದಾದ ನಿಜವಾದ ನ್ಯಾಯ. ವ್ಯವಸ್ಥೆಯು ಹಣವಂತರ ಗುಲಾಮನಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ಧ್ವನಿಗೆ ಕಿವಿಗೊಡಬೇಕು. ಸ್ವಾತಂತ್ರ್ಯದ ಜೊತೆಗೆ ಸುರಕ್ಷಿತವಾದ ಪರಿಸರವನ್ನು ನಿರ್ಮಿಸುವುದು ಸರಕಾರದ ಆದ್ಯತೆಯಾಗಬೇಕು. ಜೆಫ್ರಿ ಎಪ್‌ಸ್ಟೀನ್ ಸಾವು ಈ ಪ್ರಕರಣಕ್ಕೆ ಅಂತ್ಯವಲ್ಲ, ಬದಲಾಗಿ ಇದು ಅಧಿಕಾರದ ಮದವೇರಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ನ್ಯಾಯವು ನಿಧಾನವಾಗಬಹುದು, ಆದರೆ ಅದು ಎಂದಿಗೂ ಪರಾಜಿತಗೊಳ್ಳಬಾರದು. ಭವಿಷ್ಯದ ಪೀಳಿಗೆಗೆ ನಾವು ನೀಡುವ ಸ್ವಾತಂತ್ರ್ಯವು ಸುರಕ್ಷತೆ ಮತ್ತು ನೈತಿಕತೆಯ ಅಡಿಪಾಯದ ಮೇಲೆ ನಿಂತಿರಬೇಕು. ಅಧಿಕಾರ ಮತ್ತು ನೈತಿಕತೆಯ ನಡುವಿನ ಈ ಸಂಘರ್ಷದಲ್ಲಿ ಅಂತಿಮವಾಗಿ ನ್ಯಾಯವೇ ಗೆದ್ದಾಗ ಮಾತ್ರ ನಾಗರಿಕ ಸಮಾಜಕ್ಕೆ ಅರ್ಥ ಸಿಗುತ್ತದೆ.

ವಾರ್ತಾ ಭಾರತಿ 19 Feb 2026 10:28 am

ಒಪ್ಪಂದವೇ ಬುದ್ಧಿವಂತರ ಲಕ್ಷಣ ಎಂದು ಇರಾನ್‌ ಗೆ US ಎಚ್ಚರಿಕೆ; ಯುದ್ಧಕ್ಕೆ ರೆಡಿ ಎಂದ ಇಸ್ರೇಲ್, ಇರಾನ್‌ಗೆ ರಷ್ಯಾ–ಚೀನಾ ಬೆಂಬಲ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಫಿಕ್ಸ್?

ಇರಾನ್‌-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್‌ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದಂತೆ, ಒಪ್ಪಂದ ಮಾಡಿಕೊಳ್ಳುವುದು ಇರಾನ್‌ ನ ಬುದ್ದಿವಂತಿಕೆಯನ್ನು ತೋರಿಸುತ್ತದೆ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ. ಈ ನಡುವೆ ಇಸ್ರೇಲ್‌ ಸಹ ಅಮೆರಿಕಾ ಬೆಂಬಲಕ್ಕೆ ನಿಂತಿದ್ದು ಯುದ್ದಕ್ಕೆ ರೆಡಿಯಾಗಿರಿ ಎಂದು ತನ್ನ ಸೇನೆಗೆ ಆದೇಶ ನೀಡಿದೆ. ಹೀಗಿರುವಾಗಲೇ ರಷ್ಯಾ ಹಾಗೂ ಚೀನಾ ಸಹ ಇರಾನ್‌ ಗೆ ಬೆಂಬಲವಾಗಿ ನಿಂತಿದ್ದು, ಯುದ್ದನೌಕೆಗಳನ್ನು ಕಳುಹಿಸಿದೆ ಎಂಬ ಮಾಹಿತಿ ಇದೆ. ಹೀಗೆ 2 ದೇಶಗಳ ನಡುವಿನ ಯುದ್ದ ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳು ಹಾಗೂ ಪರಸ್ಫರ ಬದ್ದವೈರಿಗಳ ನಡುವಿನ ಫೈಟ್‌ ಆಗಿ ಮಾರ್ಪಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಎಂದಿಗಿಂತ ಹೆಚ್ಚು ಯುದ್ದದ ವಾಸನೆ ಕಂಡುಬರುತ್ತಿದೆ.

ವಿಜಯ ಕರ್ನಾಟಕ 19 Feb 2026 10:28 am

ಕರ್ನಾಟಕದಲ್ಲಿ ಕನ್ನಡದ ಗೌರವ: ಸಹಬಾಳ್ವೆಗೆ ಸ್ಥಳೀಯ ಭಾಷೆ ಕಲಿಯುವುದು ಯಾಕೆ ಅಗತ್ಯ?

ಅದು 2001 ರ ಸಮಯ.ದೂರ ದೇಶದಲ್ಲಿ ಸಿಗುವ ಭಾರತೀಯರೆಲ್ಲರೂ ನನ್ನ ಬಂಧುಗಳು ಎನ್ನುವ ಭಾವನೆಯಿದ್ದ ಕಾಲ. ಇದರ ಜೊತೆಗೆ ಅಂದಿನ ದಿನದಲ್ಲಿ ಬಾರ್ಸಿಲೋನ ನಗರದಲ್ಲಿ ಭಾರತೀಯರು ಬೆರಳೆಣಿಕೆಯಲ್ಲಿದ್ದರು. ಇಂತಹ ಸಮಯದಲ್ಲಿ ಡೆಲ್ಲಿಯ ಹುಡುಗನೊಬ್ಬನ ಪರಿಚಯವಾಗಿತ್ತು. ಫೋನಿನಲ್ಲಿ ಮಾತಾಡಿದ್ದೆವು.ಅವನಿಗೆ ಕನ್ನಡ ಎಲ್ಲಿಂದ ಬರಬೇಕು ? ಹೀಗಾಗಿ ನಾನು ಅವನೊಂದಿಗೆ ಹಿಂದಿಯಲ್ಲಿ ಮಾತಾಡಿದ್ದೆ. ತಿಂಗಳುಗಳು ಕಳೆದು ಒಂದು ದಿನ ನೇರ

ಒನ್ ಇ೦ಡಿಯ 19 Feb 2026 10:18 am

ಬೀದರ್‌ನಲ್ಲಿದೆ ಕಲ್ಯಾಣ ಕರ್ನಾಟಕದ ಏಕೈಕ ಓಯಸ್ಟರ್ ಅಣಬೆ ಬೆಳೆ, ಬೀಜ ತಯಾರಿಕಾ ಕೇಂದ್ರ

ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಓಯಸ್ಟರ್ (ಸಿಂಪಿ) ಅಣಬೆ ಬೆಳೆ ಹಾಗೂ ಬೀಜ ತಯಾರಿಕಾ ಜೈವಿಕ ಕೇಂದ್ರ ಹೊಂದಿರುವ ಏಕೈಕ ಜಿಲ್ಲೆ ಬೀದರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಮಗ್ರ ಜೈವಿಕ ಕೇಂದ್ರದಲ್ಲಿ ಅಣಬೆ ಬೆಳೆಸುವುದರ ಜೊತೆಗೆ ರೈತರಿಗೆ ತರಬೇತಿ ಹಾಗೂ ಬೀಜ ವಿತರಣೆ ಕಾರ್ಯವೂ ನಡೆಯುತ್ತಿದೆ. ಬೀದರ್ ಸೇರಿದಂತೆ ಕಲಬುರಗಿ, ಯಾದಗಿರಿ, ಚಿಂಚೋಳಿ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಅಣಬೆ ಕೃಷಿಗೆ ಆಸಕ್ತಿ ಹೊಂದಿರುವ ರೈತರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ದೊರೆಯುತ್ತಿರುವುದರಿಂದ ಇತ್ತೀಚೆಗೆ ಅಣಬೆ ಬೆಳೆ ಕಡೆ ರೈತರ ಒಲವು ಹೆಚ್ಚುತ್ತಿದೆ. ಮಣ್ಣಿಲ್ಲದೆ ಬೆಳೆಸಬಹುದಾದ ಅಣಬೆ ಓಯಸ್ಟರ್(ಸಿಂಪಿ) ಅಣಬೆ ಬೆಳೆಸಲು ಮಣ್ಣಿನ ಅವಶ್ಯಕತೆ ಇಲ್ಲ. ಭತ್ತದ ಹುಲ್ಲು, ಗೋಧಿ ಹುಲ್ಲು ಅಥವಾ ಇತರೆ ಹೊಟ್ಟು, ಸ್ವಲ್ಪ ನೀರು ಹಾಗೂ ಅಣಬೆ ಬೀಜಗಳಿದ್ದರೆ ಸಾಕು. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಬೆಳೆಯಬಹುದಾದ್ದರಿಂದ ಇದು ಆರೋಗ್ಯಕರ ಆಹಾರವಾಗಿಯೂ ಪರಿಗಣಿಸಲಾಗುತ್ತಿದೆ. ಸಹಾಯಕ ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ್ ಮಾಹಿತಿ ನೀಡಿ, ಅಣಬೆ ಬೆಳೆಯಲು ಅಣಬೆ ಬೀಜ, ಕಚ್ಚಾ ವಸ್ತು (ಕಳವೆ ಹುಲ್ಲು, ಗೋಧಿ ಹುಲ್ಲು) ಹಾಗೂ 20ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಗತ್ಯ. ಸರಿಯಾದ ವಿಧಾನ ಅನುಸರಿಸಿದರೆ 21 ದಿನಗಳಲ್ಲಿ ಮೊಳಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಕಳವೆ ಹುಲ್ಲು ಅಥವಾ ಗೋಧಿ ಹುಲ್ಲನ್ನು 2-3 ಸೆಂ.ಮೀ ಅಳತೆಯಲ್ಲಿ ಕತ್ತರಿಸಿ 8-10 ಗಂಟೆ ನೀರಿನಲ್ಲಿ ನೆನೆಸಿ, ನಂತರ ಒಣಗಿಸಿ ಸ್ಟೆರಿಲೈಜೇಶನ್ ಮಾಡಿದ ಬಳಿಕ ಪಿಪಿ ಕವರ್‌ಗಳಲ್ಲಿ ಪದರಗಳಾಗಿ ಅಣಬೆ ಬೀಜದೊಂದಿಗೆ ತುಂಬಬೇಕು. ಕತ್ತಲಿನ ಕೋಣೆಯಲ್ಲಿ ಇಟ್ಟರೆ 21 ದಿನಗಳಲ್ಲಿ ಮೊಳಕೆ ಮೂಡಿ, 7-8 ದಿನಗಳಲ್ಲಿ ಸಂಪೂರ್ಣ ಬೆಳೆಯುತ್ತದೆ. ಒಂದು ಕೆ.ಜಿ. ಅಣಬೆ ಬೀಜದಿಂದ 5-6 ಕೆ.ಜಿ.ವರೆಗೆ ಇಳುವರಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಕಿಲೋಗೆ 400 ರೂ.ಕ್ಕಿಂತ ಹೆಚ್ಚು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯಕ್ಕೂ ಲಾಭ ಓಯಸ್ಟರ್ ಅಣಬೆ ಸೇವನೆಯಿಂದ ಕ್ಯಾನ್ಸರ್ ವಿರೋಧಿ ಗುಣಗಳು, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಅಂಶಗಳು ಇರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ರೈತರಿಗೆ ತರಬೇತಿ-ಬೀಜ ವಿತರಣೆ ಕಳೆದ ಮೂರು ವರ್ಷಗಳಿಂದ ಜೈವಿಕ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ನೀಡಲಾಗುತ್ತಿದೆ. ಕೊನೆಯ ಮೂರು ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಸಂಪರ್ಕಿಸಿದ್ದು, ಬೀದರ್ ನಗರದಲ್ಲೇ 10ರಿಂದ 15 ಮಂದಿ ಬೀಜ ಪಡೆದುಕೊಂಡಿದ್ದಾರೆ. ರೈತರಿಗೆ ತಲುಪಲು ವಾಟ್ಸಪ್ ಗುಂಪು ರಚಿಸಿ ಮಾಹಿತಿ ಹಂಚಲಾಗುತ್ತಿದೆ ಎಂದು ತೋಟಗಾರಿಕೆ ಜೈವಿಕ ಕೇಂದ್ರದ ಸಹಾಯಕ ನಿರ್ದೇಶಕ ನಿಲಂಜನ್ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ರೀತಿಯ ಜೈವಿಕ ಅಣಬೆ ಕೇಂದ್ರ ಒಂದೇ ಘಟಕವಾಗಿದ್ದು, ಇಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆಗಳಿಗೂ ಸೌಲಭ್ಯವಿದೆ. ನಾಲ್ಕು ಪ್ರಯೋಗಾಲಯಗಳನ್ನು ಹೊಂದಿರುವ ಈ ಕೇಂದ್ರವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೀದರ್‌ನಲ್ಲೇ ಬೀಜ ತಯಾರಿಕೆ ಓಯಸ್ಟರ್ ಅಣಬೆಯ ಬೀಜ ತಯಾರಿಕೆಯಾಗುವುದೂ ಇದೇ ಜೈವಿಕ ಕೇಂದ್ರದಲ್ಲಿ. ಜೋಳ ಅಥವಾ ಗೋಧಿಯನ್ನು ಬೇಯಿಸಿ, ಚಾಕ್ ಪೌಡರ್ ಹಾಗೂ ಜೀಪ್ಸಮ್ ಮಿಶ್ರಣ ಮಾಡಿ 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಟೆರಿಲೈಜೇಶನ್ ಮಾಡುವ ಮೂಲಕ ಗುಣಮಟ್ಟದ ಬೀಜವನ್ನು ತಯಾರಿಸಲಾಗುತ್ತಿದೆ. ಬೀದರ್‌ನ ರೈತರು ಅಣಬೆ ಕೃಷಿ ಬಗ್ಗೆ ಇನ್ನಷ್ಟು ಜಾಗೃತಿ ಹೊಂದಬೇಕು. ನಮ್ಮ ಕಚೇರಿಯನ್ನು ಸಂಪರ್ಕಿಸಿ ತರಬೇತಿ ಮತ್ತು ಬೀಜಗಳನ್ನು ಪಡೆದು ಲಾಭ ಪಡೆಯಬಹುದು. -ನಿಲಂಜನ್, ಸಹಾಯಕ ನಿರ್ದೇಶಕ ತೋಟಗಾರಿಕೆ ಜೈವಿಕ ಕೇಂದ್ರ

ವಾರ್ತಾ ಭಾರತಿ 19 Feb 2026 10:11 am

Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.

ವಿಜಯ ಕರ್ನಾಟಕ 19 Feb 2026 10:01 am

ಆತ್ಮಜಾಗೃತಿ ಮತ್ತು ಸಚ್ಚಾರಿತ್ರ್ಯದ ಸತ್ಫಲ ನೀಡುವ ರಮದಾನ್

185ನೇ ವಚನದಲ್ಲಿ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದರ ಹಿಂದಿನ ಎರಡು ಔಚಿತ್ಯಗಳನ್ನು ತಿಳಿಸಲಾಗಿದೆ. ಮೊದಲನೆಯದು, ಕುರ್‌ಆನ್ ಮೂಲಕ ಸಾತ್ವಿಕ ಬದುಕು ಸಾಗಿಸುವುದಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಿದ್ದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸುವುದು. ಎರಡನೆಯದು, ಪ್ರಸ್ತುತ ಮಾರ್ಗದರ್ಶನದ ಪ್ರಕಾರ ಬದುಕು ಸಾಗಿಸಲು ಸಾಧ್ಯವಾಗುವುದಕ್ಕೆ ಬೇಕಾದ ಎಚ್ಚರ, ಶಿಸ್ತು, ಸಹನೆ, ಸಂಯಮಗಳನ್ನು ಬೆಳೆಸಿಕೊಳ್ಳುವುದು. ಅಂದರೆ, ಚಿತ್ತವನ್ನು ಪಳಗಿಸುವುದು, ಬದುಕಿನ ಎಲ್ಲ ಹಂತಗಳಲ್ಲೂ ಚಿತ್ತದ ಅಪೇಕ್ಷೆಗಳನ್ನು ಹತೋಟಿಯಲ್ಲಿಟ್ಟು ದೇವಾದೇಶಗಳನ್ನು ಪಾಲಿಸುವ ಸಾಮರ್ಥ್ಯವನ್ನು ಗಳಿಸುವುದು ಮತ್ತು ಆ ಮಟ್ಟದ ಸ್ವನಿಯಂತ್ರಣವನ್ನು ಸಾಧಿಸುವುದು. ಮಾನವ ಸಮಾಜ ಅಂದ ಮೇಲೆ ಅಲ್ಲಿ 1. ಆಹಾರ ಸೇವನೆ, 2. ಮಾತುಕತೆ, 3. ಧನಸಂಪಾದನೆ, 4. ಪ್ರೇಮ-ಕಾಮ - ಇವು ದೊಡ್ಡ ಪ್ರಮಾಣದಲ್ಲಿ ನಿತ್ಯ ನಡೆಯುವ ಕೆಲವು ಸಾಮಾನ್ಯ ಚಟುವಟಿಕೆಗಳು. ಈ ಚಟುವಟಿಕೆಗಳ ವಿಶೇಷತೆಯೇನೆಂದರೆ, ಸಮಾಜದಲ್ಲಿ ನಡೆಯುವ ಇತರ ಹೆಚ್ಚಿನ ನಿತ್ಯ ಚಟುವಟಿಕೆಗಳಿಗೂ ಇವುಗಳೊಂದಿಗೆ ಸಂಬಂಧವಿರುತ್ತವೆ. ಜಗತ್ತಿನ ಹೆಚ್ಚಿನ ಪ್ರಮುಖ ಧರ್ಮಗಳು ಈ ಪೈಕಿ ಯಾವುದೇ ಚಟುವಟಿಕೆಯನ್ನು ವಸ್ತುತಃ ಕೆಟ್ಟದೆಂದು ಕರೆದಿಲ್ಲ, ಅವುಗಳನ್ನು ನಿಷೇಧಿಸಿದ್ದಿಲ್ಲ. ಏಕೆಂದರೆ ಇವೆಲ್ಲಾ ಮಾನವನ ಅಗತ್ಯಗಳು. ಸಾಮಾನ್ಯವಾಗಿ, ವ್ಯಕ್ತಿಗಳ ಮತ್ತು ಸಮಾಜದ ಸ್ವಾಭಾವಿಕ ಅಗತ್ಯಗಳ ಮಿತಿಯಲ್ಲಿದ್ದು, ಸಮೂಹ ಹಿತಕ್ಕೆ ಪೂರಕವಾಗಿ ಮತ್ತು ನಿರ್ದಿಷ್ಟ ಇತಿಮಿತಿಗಳಿಗೆ ಬದ್ಧವಾಗಿದ್ದಷ್ಟು ಕಾಲ ಅವು ಎಲ್ಲರ ಪಾಲಿಗೆ ಹಿತಕರವಾಗಿಯೇ ಇರುತ್ತವೆ. ಆದರೆ ಇವೇ ಚಟುವಟಿಕೆಗಳು ಹಿತ-ಅಹಿತಗಳನ್ನು ಕಡೆಗಣಿಸಿ, ಇತಿಮಿತಿಗಳನ್ನು ಮೀರಿ, ನಿಯಮ-ನಿರ್ದೇಶನಗಳನ್ನು ಉಲ್ಲಂಘಿಸಿ ಕೇವಲ ಚಿತ್ತದ ಸಾರಥ್ಯದಲ್ಲಿ, ಸ್ವಾರ್ಥ ಕೇಂದ್ರಿತವಾಗಿ, ಸ್ವೇಚ್ಛಾನುಸಾರ ನಡೆಯತೊಡಗಿದರೆ ಅವುಗಳಲ್ಲಿರುವ ಹಿತವೆಲ್ಲಾ ಕರಗಿಹೋಗಿ, ಅಹಿತವೇ ದೈತ್ಯಾಕಾರದಲ್ಲಿ ಮೆರೆಯತೊಡಗುತ್ತದೆ. ಮಾನವ ಲೋಕದಲ್ಲಿ ಎಲ್ಲೆಂದರಲ್ಲಿ ವ್ಯಾಪಕವಾಗಿರುವ ಹೆಚ್ಚಿನೆಲ್ಲ ರೋಗ ರುಜಿನಗಳು, ದುಃಖ ದುಮ್ಮಾನಗಳು, ವೈಮನಸ್ಯ, ಜಗಳ, ವಿವಾದ, ಘರ್ಷಣೆ, ಯುದ್ಧ, ಹಾಗೆಯೇ ಅನ್ಯಾಯ-ಅಕ್ರಮ, ಅಸಮಾನತೆ, ಶೋಷಣೆ, ದಮನ ಇತ್ಯಾದಿಗಳನ್ನೆಲ್ಲಾ ನಾವು ತುಸು ಹತ್ತಿರದಿಂದ, ಸೂಕ್ಷ್ಮವಾಗಿ ನೋಡಿದರೆ ಅವುಗಳ ಹಿಂದೆ ಪ್ರಸ್ತುತ ಚಟುವಟಿಕೆಗಳ ಕರಾಳ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತವೆೆ. ಅದೇ ಕಾರಣಕ್ಕಿರಬಹುದು, ಜಗತ್ತಿನ ಹೆಚ್ಚಿನೆಲ್ಲ ಧರ್ಮಗಳಲ್ಲಿ ಮತ್ತು ಆಧ್ಯಾತ್ಮಿಕ ದರ್ಶನಗಳಲ್ಲಿ ಪ್ರಸ್ತುತ ನಾಲ್ಕು ಚಟುವಟಿಕೆಗಳಿಗೆ ಲಗಾಮು ಹಾಕುವುದಕ್ಕಾಗಿಯೇ 1. ನಿರಶನ (ಉಪವಾಸ), 2. ಮೌನ, 3. ದಾನ ಮತ್ತು 4. ನಿಷ್ಕಾಮ ಎಂಬ ಶಿಸ್ತು ಪ್ರಧಾನವಾದ ಆಚರಣೆಗಳನ್ನು ಪ್ರೋತ್ಸಾಹಿಸಲಾಗಿದೆ. ಪವಿತ್ರ ಕುರ್‌ಆನ್‌ನಲ್ಲಿ ರಮದಾನ್ (ರಮ್ಜಾನ್) ತಿಂಗಳುದ್ದಕ್ಕೂ ಕಡ್ಡಾಯವಾಗಿ ಪ್ರತಿದಿನ ಹಗಲೆಲ್ಲಾ ಉಪವಾಸ ಆಚರಿಸಬೇಕೆಂದು ಆದೇಶಿಸಲಾಗಿದೆ. ಉಪವಾಸವು ಸೂರ್ಯೋದಯಕ್ಕಿಂತ ಸುಮಾರು ಒಂದು ಗಂಟೆ ಮುನ್ನ ಆರಂಭವಾಗಿ ಸೂರ್ಯಾಸ್ತಮಾನದ ಬಳಿಕ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಆಹಾರ, ಪಾನೀಯಗಳ ಸೇವನೆ ಮತ್ತು ಲೈಂಗಿಕ ಚಟುವಟಿಕೆ ಸಂಪೂರ್ಣ ನಿಷಿದ್ಧ. ಹಾಗೆಯೇ ಉಪವಾಸದ ಅವಧಿಯನ್ನು ಗರಿಷ್ಠ ಮಟ್ಟದಲ್ಲಿ ದೇವ ಸ್ಮರಣೆ, ಆರಾಧನೆ, ಪ್ರಾರ್ಥನೆ, ಕೀರ್ತನೆ, ಪವಿತ್ರ ಕುರ್‌ಆನ್ ಪಠಣ, ಧರ್ಮೋಪದೇಶಗಳ ಅಧ್ಯಯನ, ಪ್ರವಾದಿವರ್ಯರ (ಸ) ವಚನಗಳು, ಉಪದೇಶಗಳು ಮತ್ತು ಅವರ ಹಾಗೂ ಅವರ ಮಹಾನ್ ಸಂಗಾತಿಗಳ ಆದರ್ಶ ಜೀವನದ ಕುರಿತಾದ ಜ್ಞಾನಾರ್ಜನೆ, ಆತ್ಮ ವಿಮರ್ಶೆ, ಆತ್ಮ ಚಿಂತನೆ, ಪಶ್ಚಾತ್ತಾಪ, ಕ್ಷಮಾಪಣೆ, ಪಾಪಪರಿಹಾರ, ಜನಸೇವೆ ಮುಂತಾದ ಚಟುವಟಿಕೆಗಳಲ್ಲಿ ಕಳೆಯಬೇಕು. ಐದು ಹೊತ್ತಿನ ಕಡ್ಡಾಯ ನಮಾಝ್‌ಗಳನ್ನು ಸಮಯಕ್ಕೆ ಸರಿಯಾಗಿ ಗರಿಷ್ಠ ಏಕಾಗ್ರತೆಯೊಂದಿಗೆ ಸಲ್ಲಿಸಬೇಕು. ಕಡ್ಡಾಯ ನಮಾಝ್ ಮಾತ್ರವಲ್ಲ, ಐಚ್ಛಿಕ ನಮಾಝ್‌ಗಳನ್ನೂ ಸಾಧ್ಯವಿದ್ದಷ್ಟು ಹೆಚ್ಚು ಸಲ್ಲಿಸಬೇಕು. ಗರಿಷ್ಠ ಪ್ರಮಾಣದಲ್ಲಿ ದಾನಧರ್ಮ ಮಾಡಬೇಕು. ಉಪವಾಸದಲ್ಲಿ ಕೇವಲ ಆಹಾರವನ್ನು ತ್ಯಜಿಸಿದರೆ ಸಾಲದು. ಎಲ್ಲ ಬಗೆಯ ಅನಗತ್ಯ ಮಾತುಗಳನ್ನು ಕೂಡಾ ವರ್ಜಿಸಬೇಕು. ಮಾತುಕತೆಗಳೆಲ್ಲವೂ ಕಟ್ಟುನಿಟ್ಟಾಗಿ ಸುಳ್ಳು, ಅಶ್ಲೀಲತೆ, ದ್ವೇಷ, ಅಸೂಯೆ, ಬಯ್ಗುಳ, ನಿಂದನೆ, ದೂಷಣೆ ಮುಂತಾದ ಎಲ್ಲ ಕೆಡುಕುಗಳಿಂದ ಸಂಪೂರ್ಣ ಮುಕ್ತವಾಗಿರಬೇಕು - ಹೀಗೆ ರಮದಾನ್ ತಿಂಗಳಲ್ಲಿ ಕೇವಲ ಉಪವಾಸ ಆಚರಿಸಿದರೆ ಸಾಲದು. ಅದರ ಜೊತೆಗೆ ಕೂಡಾ ಪಾಲಿಸಲೇಬೇಕಾದ ನಿಯಮ ನಿರ್ಬಂಧಗಳ ಒಂದು ಪಟ್ಟಿಯೇ ಇದೆ ಮತ್ತು ಆ ಪಟ್ಟಿ ಬಹಳ ದೀರ್ಘವಿದೆ.. ‘‘ಮನುಷ್ಯನು ಅತ್ಯಧಿಕ ಪಾಪಗಳನ್ನು ಮಾಡುವುದು ಮಾತಿನ ಮೂಲಕ’’ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ನಾಗರಿಕ ಸಮಾಜಗಳಲ್ಲಿ ಪ್ರಚಲಿತವಿದೆ. ಆದ್ದರಿಂದಲೇ ‘‘ಮಾತನ್ನು ಕೆಡುಕುಗಳಿಂದ ಮುಕ್ತವಾಗಿಡುವುದು ಹೇಗೆ?’’ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಲೇ ಬಂದಿದ್ದಾರೆ. ಹಾಗೆಯೇ, ‘‘ಅದಕ್ಕೆ ಮೌನವೊಂದೇ ಮಾರ್ಗ’’ ಎಂಬ ಉತ್ತರವೂ ಹೆಚ್ಚಿನೆಲ್ಲಾ ಸಮಾಜಗಳಲ್ಲಿ ಜನಪ್ರಿಯವಾಗಿದೆ. ಒಮ್ಮೆ ಪ್ರವಾದಿ ಮುಹಮ್ಮದ್ (ಸ) ‘‘ಮೌನವಾಗಿದ್ದವನು ಮೋಕ್ಷಪಡೆದನು’’ ಎಂದು ಹೇಳಿದ್ದರು (ಮುಸ್ನದ್ ಅಹ್ಮದ್). ಹಾಗೆಯೇ ಅವರು, ‘‘ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನು ಒಂದೋ ಹಿತ ಮತ್ತು ಒಳಿತಿನ ಮಾತನ್ನಾಡಬೇಕು. ಅನ್ಯತಃ ಮೌನವಾಗಿರಬೇಕು’’ ಎಂದಿದ್ದರು (ಬುಖಾರಿ). ಒಂದು ಸಂದರ್ಭದಲ್ಲಿ ಪ್ರವಾದಿ (ಸ) ಹೇಳಿದರು: ‘‘ಯಾರು ಸುಳ್ಳು ಮಾತನ್ನಾಡುವುದನ್ನು ಮತ್ತು ಸುಳ್ಳಿನ ಪ್ರಕಾರ ವರ್ತಿಸುವುದನ್ನು ಬಿಟ್ಟು ಬಿಡುವುದಿಲ್ಲವೋ ಅವನು (ಉಪವಾಸದ ಹೆಸರಲ್ಲಿ) ಅನ್ನ ಪಾನೀಯ ತ್ಯಾಗ ಮಾಡಬೇಕೆಂಬ ಯಾವ ಅಗತ್ಯವೂ ಅಲ್ಲಾಹನಿಗಿಲ್ಲ’’ (ಬುಖಾರಿ)ನಿಜವಾಗಿ, ಪ್ರವಾದಿ ಮುಹಮ್ಮದ್ (ಸ) ಅವರಿಗಿಂತ ಪೂರ್ವಕಾಲದ ಕೆಲವು ಧರ್ಮಸಂಹಿತೆಗಳಲ್ಲಿ ಮೌನವು ಉಪವಾಸದ ಅವಿಭಾಜ್ಯ ಭಾಗವಾಗಿತ್ತು. ಪುಣ್ಯ ಸಂಪಾದನೆ ಮತ್ತು ಪಾಪ ಪರಿಹಾರಕ್ಕಾಗಿ ನಿರ್ದಿಷ್ಟ ಕಾಲಾವಧಿಯ ಉಪವಾಸ ಆಚರಿಸುವಂತೆ, ಮೌನ ಆಚರಿಸುವ ಸಂಪ್ರದಾಯವೂ ಇತ್ತು. ಉಪವಾಸದ ಅದೇಶವು ಕುರ್‌ಆನ್‌ನ ಎರಡನೇ ಅಧ್ಯಾಯದಲ್ಲಿದೆ. ಕುರ್‌ಆನ್‌ನಲ್ಲಿರುವ ಒಟ್ಟು 114 ಅಧ್ಯಾಯಗಳ ಪೈಕಿ, ಜಗತ್ತಿನೆಲ್ಲೆಡೆಯ ಮುಸ್ಲಿಮರು ನಿತ್ಯ ಹಲವಾರು ಬಾರಿ ಪಠಿಸುವ, ಅದರ ಪ್ರಥಮ ಅಧ್ಯಾಯವು ‘ಅಲ್ ಫಾತಿಹಾ’ ಕೇವಲ 7 ವಚನಗಳಿರುವ ಅತ್ಯಂತ ಸಂಕ್ಷಿಪ್ತ ಅಧ್ಯಾಯಗಳಲ್ಲೊಂದು. ಅದೇವೇಳೆ 286 ವಾಕ್ಯಗಳಿರುವ, ‘ಅಲ್ ಬಕರಾ’ ಎಂಬ ಎರಡನೇ ಅಧ್ಯಾಯವು ಕುರ್‌ಆನ್‌ನ ಅತ್ಯಂತ ದೀರ್ಘ ಅಧ್ಯಾಯವಾಗಿದೆ. ಈ ಅಧ್ಯಾಯದ ವಿಶೇಷತೆ ಏನೆಂದರೆ ಇದರಲ್ಲಿ ಒಂದು ಪುಟ್ಟ ಕುಟುಂಬದೊಂದಿಗೆ ಆರಂಭವಾದ ಮಾನವ ಕುಲದ ಇತಿಹಾಸದ ಪ್ರಮುಖ ಮೈಲುಗಲ್ಲುಗಳನ್ನು, ಧರ್ಮದ ತಳಹದಿಗಳನ್ನು, ಅದರ ವಿಕಾಸದ ನಿರ್ಣಾಯಕ ಮಜಲುಗಳನ್ನು, ಧರ್ಮವು ಪ್ರತಿಪಾದಿಸುವ ಸಾರ್ವಕಾಲಿಕ ನೈತಿಕ ಮೌಲ್ಯಗಳನ್ನು ಮತ್ತು ಅದರ ಪ್ರಮುಖ ಆದೇಶಗಳನ್ನು ಹಾಗೂ ಮಹತ್ವದ ಕಾನೂನು - ನಿಯಮಗಳನ್ನು ಬಹಳ ಸಮಗ್ರ ರೂಪದಲ್ಲಿ ನಿರೂಪಿಸಲಾಗಿದೆ. ಈ ಅಧ್ಯಾಯದಲ್ಲಿ, ಉಪವಾಸಾಚರಣೆ ಕಡ್ಡಾಯವೆಂದು ಘೋಷಿಸಲು ಬಳಸಲಾಗಿರುವ ಶೈಲಿ, ಧಾಟಿ ಮತ್ತು ಅದರ ಜೊತೆಗೆ ನೀಡಲಾಗಿರುವ ಸಾಂದರ್ಭಿಕ ಆದೇಶಗಳು ಮತ್ತು ಮಾಹಿತಿಗಳು ವಿಚಾರ ಮತ್ತು ಚಿಂತನೆಗಳ ಒಂದು ವಿಶಾಲ ಪ್ರಪಂಚವನ್ನೇ ಓದುಗರ ಮುಂದೆ ತೆರೆದಿಡುತ್ತವೆ. ಇಲ್ಲಿ ಉಪವಾಸದ ಕುರಿತಾದ ನೇರ ಆದೇಶವು 183ನೇ ವಚನದಲ್ಲಿ ಪ್ರಕಟವಾಗಿದೆ. ಆದರೆ ಆ ಬಳಿಕ 188ನೇ ವಚನದ ತನಕ ಇರುವ ಎಲ್ಲ ವಚನಗಳು ಮತ್ತು ಅವುಗಳಲ್ಲಿರುವ ವ್ಯಕ್ತ ಹಾಗೂ ಸುಪ್ತವಾದ ಎಲ್ಲ ಆಶಯಗಳು, ನೇರ ಅಥವಾ ಪರೋಕ್ಷವಾಗಿ ಉಪವಾಸದ ಹಿಂದಿನ ಸ್ಫೂರ್ತಿ ಹಾಗೂ ಅದರ ಮೂಲ ಉದ್ದೇಶದ ಜೊತೆಗೆ ಬೆಸೆದುಕೊಂಡಿವೆ. ಪ್ರಸ್ತುತ ವಚನಗಳಲ್ಲಿರುವ ಕೆಲವು ಪ್ರಮುಖ ಪಾಠಗಳ ತಾತ್ಪರ್ಯ ಅಥವಾ ಸಂಕ್ಷಿಪ್ತ ಸಾರಾಂಶ ಹೀಗಿದೆ: * ಇಸ್ಲಾಮ್ ಧರ್ಮವನ್ನು ನಂಬಿರುವವರೇ, ಉಪವಾಸ ವೃತವನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಇದೊಂದು ನವೀನ ಆದೇಶವೇನಲ್ಲ. ನಿಮಗಿಂತ ಹಿಂದಿನ ಇತರ ಧರ್ಮಗಳ ಅನುಯಾಯಿಗಳ ಮೇಲೂ ಇದನ್ನು ಕಡ್ಡಾಯಗೊಳಿಸಲಾಗಿತ್ತು. ನೀವು ‘ತಕ್ವಾ’ವನ್ನು ಸಾಧಿಸಬೇಕೆಂಬುದೇ ಇದರ ಉದ್ದೇಶ. ಇದು 183ನೇ ವಚನದ ತಾತ್ಪರ್ಯ. ‘ತಕ್ವಾ’ ಎಂಬ ಪದವನ್ನು ಸಾಮಾನ್ಯವಾಗಿ ದೇವ ಭಯ ಅಥವಾ ಧರ್ಮನಿಷ್ಠೆ ಎಂದು ಅನುವಾದಿಸಲಾಗುತ್ತದೆ. ವಿವಿಧ ಕುರ್‌ಆನ್ ಭಾಷ್ಯ ಗ್ರಂಥಗಳಲ್ಲಿ ಈ ಕುರಿತು ಬಂದಿರುವ ವಿಶ್ಲೇಷಣೆಗಳಿಂದ ತಿಳಿಯುವಂತೆ ತಕ್ವಾ ಎಂಬ ಪದಕ್ಕೆ ಭಯ, ನಿಷ್ಠೆ, ಜಾಗೃತಿ, ಎಚ್ಚರ, ಏಕಾಗ್ರತೆ ಇತ್ಯಾದಿ ಅರ್ಥಗಳಿವೆ. ಈ ದೃಷ್ಟಿಯಿಂದ, ಉಪವಾಸದ ಉದ್ದೇಶ, ಆಮೂಲಕ ಮನುಷ್ಯನಲ್ಲಿ ಜಾಗೃತಿಯ ಸ್ಥಿತಿಯನ್ನು ಬೆಳೆಸುವುದಾಗಿದೆ. ಮನುಷ್ಯನು ತನ್ನ ಬಗ್ಗೆ, ತನ್ನ ಸೃಷ್ಟಿಕರ್ತನ ಬಗ್ಗೆ, ತನ್ನ ಕರ್ತವ್ಯಗಳು, ಬಾಧ್ಯತೆಗಳು, ಸಾಮರ್ಥ್ಯಗಳು, ಇತಿಮಿತಿಗಳು ಇತ್ಯಾದಿಗಳ ಬಗ್ಗೆ, ತನ್ನ ಸಹಜೀವಿಗಳ ಬಗ್ಗೆ, ಹೀಗೆ ತನ್ನೊಳಗಿನ ಮತ್ತು ಸುತ್ತಮುತ್ತಲ ಎಲ್ಲ ವಾಸ್ತವಗಳ ಬಗ್ಗೆ ಸದಾ ಜಾಗೃತನಾಗಿರಬೇಕು. ಎಚ್ಚರದ ಸ್ಥಿತಿಯಲ್ಲಿ ಮಾತ್ರ ಮನುಷ್ಯನು ಸುರಕ್ಷಿತನಾಗಿರಲು ಸಾಧ್ಯ. ಗರಿಷ್ಠ ಜಾಗೃತಿ ಹಾಗೂ ಎಚ್ಚರದ ಸ್ಥಿತಿಯಲ್ಲಿ ಮಾತ್ರ ಮನುಷ್ಯನು ತನ್ನೆಲ್ಲ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯ. ಎಚ್ಚರದ ಮಟ್ಟವನ್ನು ಕುಸಿಯಲು ಬಿಡುವುದೆಂದರೆ, ಪ್ರಮಾದಗಳ, ಕುಸಿತಗಳ ಹಾಗೂ ದುರಂತಗಳ ಮಾತ್ರವಲ್ಲ ಘೋರ ಅಪರಾಧಗಳ ಸರಮಾಲೆಯನ್ನು ಸ್ವಾಗತಿಸಿದಂತೆ. ಹೊಟ್ಟೆ ತುಂಬಿರುವ ಸ್ಥಿತಿಯು ನಿದ್ದೆಗೆ, ಅಮಲಿಗೆ ಮತ್ತು ಉನ್ಮಾದಕ್ಕೆ ಹತ್ತಿರವಿರುತ್ತದೆ. ಅದಕ್ಕೆ ಹೋಲಿಸಿದರೆ ಹಸಿದಿರುವ ಸ್ಥಿತಿಯು, ಜಾಗೃತಿ ಮತ್ತು ಎಚ್ಚರಕ್ಕೆ ನಿಕಟವಿರುತ್ತದೆ. ಇದುವೇ ಉಪವಾಸ ಮತ್ತು ‘ತಕ್ವಾ’ಗೆ ಇರುವ ಸಂಬಂಧ. * ಇಸ್ಲಾಮ್ ಧರ್ಮದಲ್ಲಿ ಉಪವಾಸ ಕೇವಲ ರಮದಾನ್ ಎಂಬ ಒಂದು ತಿಂಗಳಿಗೆ ಸೀಮಿತವಾಗಿಲ್ಲ. ರಮದಾನ್ ತಿಂಗಳಲ್ಲಿ ತಿಂಗಳುದ್ದಕ್ಕೂ ಪ್ರತಿದಿನ ಹಗಲಲ್ಲಿ ಉಪವಾಸ ಆಚರಿಸುವುದು ಕಡ್ಡಾಯ ಎಂಬುದು ಆ ತಿಂಗಳ ವಿಶೇಷತೆ. ಉಳಿದಂತೆ ವರ್ಷದ ಇತರ ಹೆಚ್ಚಿನ ದಿನಗಳಲ್ಲಿ ಐಚ್ಛಿಕ ಉಪವಾಸ ಆಚರಿಸುವುದನ್ನು ಪ್ರೋತ್ಸಾಹಿಸಲಾಗಿದೆ. ಉದಾ: ರಮದಾನ್ ತಿಂಗಳು ಮುಗಿದ ಬಳಿಕ ಆರಂಭವಾಗುವ ಶವ್ವಾಲ್ ತಿಂಗಳಲ್ಲಿ 6 ದಿನ, ದುಲ್ ಹಜ್ ತಿಂಗಳ ಮೊದಲ 9 ದಿನ, ಅದರಲ್ಲೂ ವಿಶೇಷವಾಗಿ 9ನೇ ದಿನ, ಮುಹರ‌್ರಮ್ ತಿಂಗಳಲ್ಲಿ ಮತ್ತು ವಿಶೇಷವಾಗಿ ಆ ತಿಂಗಳ 9 ಮತ್ತು 10ನೇ ಅಥವಾ 10 ಮತ್ತು 11ನೇ ದಿನ, ಶವ್ವಾಲ್ ತಿಂಗಳಲ್ಲಿ, ಹಿಜರಿ ಕ್ಯಾಲೆಂಡರ್‌ನ ಎಲ್ಲ ತಿಂಗಳುಗಳ 13, 14 ಮತ್ತು 15ನೇ ದಿನ, ಪ್ರತಿವಾರ ಸೋಮವಾರ ಮತ್ತು ಗುರುವಾರ, ಎಲ್ಲ ತಿಂಗಳುಗಳಲ್ಲಿ ಒಂದು ದಿನ ಬಿಟ್ಟು ಇನ್ನೊಂದು ದಿನ ಹೀಗೆ ನಿರ್ದಿಷ್ಟ ಹಾಗೂ ಅನಿರ್ದಿಷ್ಟವಾದ ವಿವಿಧ ದಿನಗಳಲ್ಲಿ ಐಚ್ಛಿಕ ಕರ್ಮದ ರೂಪದಲ್ಲಿ ಉಪವಾಸ ಆಚರಿಸುವುದನ್ನು ಪ್ರವಾದಿ (ಸ) ಪ್ರೋತ್ಸಾಹಿಸಿದ್ದರು. ವರ್ಷದ ಹೆಚ್ಚಿನ ದಿನಗಳಲ್ಲಿ ಪ್ರವಾದಿ (ಸ) ಉಪವಾಸ ಆಚರಿಸುತ್ತಿದ್ದರು. * ಕ್ರಿ.ಶ. ಏಳನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದರು (ಸ) ಅರೇಬಿಯದಲ್ಲಿ ಇಸ್ಲಾಮ್ ಧರ್ಮವನ್ನು ಪರಿಚಯಿಸುವುದಕ್ಕೆ ಮುನ್ನವೇ ಆ ನಾಡಿನಲ್ಲಿ ಒಂದು ಕ್ಯಾಲೆಂಡರ್ ಪ್ರಚಲಿತವಿತ್ತು. ರಮದಾನ್ ಎಂಬುದು ಆ ಕ್ಯಾಲೆಂಡರ್‌ನ 9ನೇ ತಿಂಗಳಾಗಿತ್ತು. ಆ ಕಾಲದಲ್ಲೂ ಒಂದಿಲ್ಲೊಂದು ವಿಧದಲ್ಲಿ ಉಪವಾಸದ ಆಚರಣೆ ಸಮಾಜದಲ್ಲಿ ಪರಿಚಿತವಾಗಿತ್ತು. ಇಸ್ಲಾಮ್ ಧರ್ಮದಲ್ಲಿ ಉಪವಾಸವನ್ನು ಒಂದು ಸಮಗ್ರ ಜೀವನ ವ್ಯವಸ್ಥೆಯ ಭಾಗವಾಗಿಸಿ ಅದಕ್ಕೆ ಒಂದು ಪೂರ್ಣ ಹಾಗೂ ಪಕ್ವ ಸ್ವರೂಪವನ್ನು ಒದಗಿಸಲಾಯಿತು. * ಉಪವಾಸ ಆಚರಿಸಬೇಕೆಂಬ ಆದೇಶ ಎಲ್ಲ ಮುಸ್ಲಿಮರಿಗೂ ಅನ್ವಯಿಸುತ್ತದೆ. ಆದರೆ 184 ಮತ್ತು 185ನೇ ವಚನದಲ್ಲಿ ಸ್ಪಷ್ಟಪಡಿಸಿರುವಂತೆ, ಉಪವಾಸ ಕಡ್ಡಾಯವಿರುವ ದಿನಗಳಲ್ಲಿ ಅನಾರೋಗ್ಯದ ಸ್ಥಿತಿಯಲ್ಲಿರುವವರು ಅಥವಾ ದೂರ ಪ್ರದೇಶಗಳ ಪ್ರಯಾಣದಲ್ಲಿರುವವರು ತಮ್ಮ ಉಪವಾಸವನ್ನು ಮುಂದೂಡಬಹುದು. ಅಂದರೆ ತಾವು ಮುಂದೂಡಿದ್ದ ಉಪವಾಸವನ್ನು ಆರೋಗ್ಯ ಮರಳಿದ ಬಳಿಕ ಅಥವಾ ಪ್ರಯಾಣ ಮುಗಿದ ಬಳಿಕ ಬೇರೆ ತಿಂಗಳುಗಳಲ್ಲಿ ಪೂರ್ತಿಗೊಳಿಸಬಹುದು. (ವೃದ್ಧಾಪ್ಯ ಅಥವಾ ನಿಶ್ಶಕ್ತಿಯ ಕಾರಣ) ಉಪವಾಸ ಆಚರಿಸಲು ಕಷ್ಟವಾಗಿರುವವರು ಅದಕ್ಕೆ ಪರಿಹಾರವಾಗಿ ಕನಿಷ್ಠ ಒಬ್ಬ ಬಡವನಿಗೆ ಭೋಜನ ನೀಡಬೇಕು. ಯಾರಾದರೂ ತಮ್ಮಿಚ್ಛೆಯಿಂದ ಇನ್ನೂ ಹೆಚ್ಚಿನವರಿಗೆ ಭೋಜನ ನೀಡಿದರೆ ಅದರಿಂದ ಅವನಿಗೆ ಹಿತವಾಗಲಿದೆ. ಆದರೂ ತಿಳಿದಿರಲಿ, ದಾನವು ಉಪವಾಸಕ್ಕೆ ಸಂಪೂರ್ಣ ಪರ್ಯಾಯವಲ್ಲ. * ವಿಶ್ವದ ಸೃಷ್ಟಿಕರ್ತನು ಮಾನವಕುಲವನ್ನುದ್ದೇಶಿಸಿ ನೀಡಿದ ತನ್ನ ಅಂತಿಮ, ಅಧಿಕೃತ ಮಾರ್ಗದರ್ಶನವೇ ಪವಿತ್ರ ಕುರ್‌ಆನ್. ಇದು ಹಂತಹಂತವಾಗಿ 23 ವರ್ಷಗಳ ಅವಧಿಯಲ್ಲಿ, ಸಣ್ಣ ಭಾಗಗಳ ರೂಪದಲ್ಲಿ, ಅನಾವರಣಗೊಂಡಿತ್ತು. ಅದರ ಅನಾವರಣದ ಪ್ರಕ್ರಿಯೆಯು ಆರಂಭವಾದದ್ದು ರಮದಾನ್ ತಿಂಗಳಲ್ಲಿ. ಕುರ್‌ಆನ್‌ನಲ್ಲಿ ಉಪವಾಸವನ್ನು ಆದೇಶಿಸುವಾಗ, ಈ ಅಂಶವನ್ನು ಪ್ರಸ್ತಾಪಿಸಿ, ಈ ತಿಂಗಳಲ್ಲಿ ಕುರ್‌ಆನ್ ಅನಾವರಣಗೊಂಡಿದ್ದಕ್ಕೆ ಮತ್ತು ಇದೇ ತಿಂಗಳಲ್ಲಿ ನಿತ್ಯ ಉಪವಾಸ ಆಚರಿಸಬೇಕೆಂಬ ಆದೇಶ ನೀಡಿರುವುದಕ್ಕೆ ಪರಸ್ಪರ ಗಾಢ ಸಂಬಂಧವಿದೆ ಎಂಬುದನ್ನು ಸೂಚಿಸಲಾಗಿದೆ. 185ನೇ ವಚನದಲ್ಲಿ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದರ ಹಿಂದಿನ ಎರಡು ಔಚಿತ್ಯಗಳನ್ನು ತಿಳಿಸಲಾಗಿದೆ. ಮೊದಲನೆಯದು, ಕುರ್‌ಆನ್ ಮೂಲಕ ಸಾತ್ವಿಕ ಬದುಕು ಸಾಗಿಸುವುದಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಿದ್ದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸುವುದು. ಎರಡನೆಯದು, ಪ್ರಸ್ತುತ ಮಾರ್ಗದರ್ಶನದ ಪ್ರಕಾರ ಬದುಕು ಸಾಗಿಸಲು ಸಾಧ್ಯವಾಗುವುದಕ್ಕೆ ಬೇಕಾದ ಎಚ್ಚರ, ಶಿಸ್ತು, ಸಹನೆ, ಸಂಯಮಗಳನ್ನು ಬೆಳೆಸಿಕೊಳ್ಳುವುದು. ಅಂದರೆ, ಚಿತ್ತವನ್ನು ಪಳಗಿಸುವುದು, ಬದುಕಿನ ಎಲ್ಲ ಹಂತಗಳಲ್ಲೂ ಚಿತ್ತದ ಅಪೇಕ್ಷೆಗಳನ್ನು ಹತೋಟಿಯಲ್ಲಿಟ್ಟು ದೇವಾದೇಶಗಳನ್ನು ಪಾಲಿಸುವ ಸಾಮರ್ಥ್ಯವನ್ನು ಗಳಿಸುವುದು ಮತ್ತು ಆ ಮಟ್ಟದ ಸ್ವನಿಯಂತ್ರಣವನ್ನು ಸಾಧಿಸುವುದು. ಸಂಕ್ಷಿಪ್ತವಾಗಿ, ಕುರ್‌ಆನ್ ಅನಾವರಣಗೊಂಡ ತಿಂಗಳಲ್ಲೇ, ಕುರ್‌ಆನ್‌ನ ಮಾರ್ಗದರ್ಶನದ ಪ್ರಕಾರ ಶಿಸ್ತಿನ ಬದುಕು ಸಾಗಿಸುವುದಕ್ಕೆ ಬೇಕಾದ ತರಬೇತಿಯನ್ನು ಒದಗಿಸುವ ಏರ್ಪಾಟು ಮಾಡಲಾಗಿದೆ. * ಇದೇ ವಚನ (185)ದಲ್ಲಿ ಕುರ್‌ಆನ್ ಅನ್ನು ‘ಮಾನವರಿಗೆಲ್ಲಾ ಮಾರ್ಗದರ್ಶಿ’ ಎಂದು ಪರಿಚಯಿಸಲಾಗಿದೆ. ದಿವ್ಯಮಾರ್ಗದರ್ಶನದ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ ಮತ್ತು ಅದು ಯಾವುದಾದರೂ ಒಂದು ವರ್ಗ ಅಥವಾ ಪಂಗಡಕ್ಕೆ ಸೇರಿದ ಸೊತ್ತಲ್ಲ ಎಂಬುದನ್ನು ಈಮೂಲಕ ಸ್ಪಷ್ಟಪಡಿಸಲಾಗಿದೆ. ಹಾಗೆಯೇ ‘‘ಅಲ್ಲಾಹನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ’’ ಎಂದು ಘೋಷಿಸುವ ಮೂಲಕ, ಧರ್ಮವೆಂದರೆ ಕೇವಲ ಒಂದು ನಿರ್ದಿಷ್ಟ ವರ್ಗದವರಿಗೆ ಮಾತ್ರ ಅರ್ಥವಾಗುವ ಮತ್ತು ಒಂದು ನಿರ್ದಿಷ್ಟ ವರ್ಗದವರು ಮಾತ್ರ ಪಾಲಿಸಬಹುದಾದ ತೀರಾ ಕಠಿಣ ಹಾಗೂ ಸಂಕೀರ್ಣ ವಿಷಯವೆಂಬ, ಪುರೋಹಿತರು ಸೃಷ್ಟಿಸಿದ ಮೌಢ್ಯವನ್ನು ಕೆಡವಿ ಹಾಕಲಾಗಿದೆ. ಸಾಲದ್ದಕ್ಕೆ, ‘‘ಅವನು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಯಸುವುದಿಲ್ಲ’’ ಎನ್ನುವ ಮೂಲಕ, ಧರ್ಮವನ್ನು, ಅದರ ವಿವಿಧ ಆದೇಶ, ಆಚರಣೆ ಮತ್ತು ಆದರ್ಶಗಳನ್ನೆಲ್ಲಾ ಕಠಿಣ ಕಗ್ಗಂಟುಗಳೆಂಬಂತೆ ಬಿಂಬಿಸುವ ಧರ್ಮೋದ್ಯಮಿಗಳ, ಶೋಷಕ ವಿದ್ವಾಂಸರು ಮತ್ತು ವಿಶ್ಲೇಷಕರ ದಂಧೆಯನ್ನು ಕಠಿಣಗೊಳಿಸಲಾಗಿದೆ. ಇದೇ ಅಧ್ಯಾಯದ ಕೊನೆಯಲ್ಲಿ ಕಂಡು ಬರುವ ‘‘ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ’’ (2:286) ಎಂಬ ಘೋಷಣೆ ಕೂಡಾ ಜನಸಾಮಾನ್ಯನನ್ನು ಪುರೋಹಿತರ ಹಂಗಿನಿಂದ ಮುಕ್ತಗೊಳಿಸಿ, ದೇವರಾಗಲಿ ಧರ್ಮವಾಗಲಿ ತನ್ನ ಎಟುಕಿಗೆ ಮೀರಿದ್ದಲ್ಲ ಎಂಬ ಆತ್ಮ ವಿಶ್ವಾಸವನ್ನು ಅವನಲ್ಲಿ ಮೂಡಿಸುತ್ತದೆ. * 186ನೇ ವಚನದಲ್ಲಿರುವ ‘‘(ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ (ಅವರಿಗೆ ತಿಳಿಸಿರಿ); ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಕೂಗುವಾತನು ನನ್ನನ್ನು ಕೂಗಿದಾಗ ನಾನು ಅದಕ್ಕೆ ಉತ್ತರ ನೀಡುತ್ತೇನೆ’’ ಎಂಬ ಪ್ರಕಟಣೆಯು ಮತ್ತೆ ಪೌರೋಹಿತ್ಯದ ಮೇಲೆ ಕೊಡಲಿ ಪ್ರಹಾರ ಮಾಡುತ್ತದೆ. ಜನಸಾಮಾನ್ಯನಲ್ಲಿ ದೇವರು ತನ್ನ ಸಮೀಪವೇ ಇದ್ದಾನೆ ಮತ್ತು ತಾನು ದೇವರ ಸಮೀಪವೇ ಇದ್ದೇನೆಂಬ ಅರಿವು ಹಾಗೂ ಸಂತೃಪ್ತಿಯನ್ನು ಬೆಳೆಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಈ ಅರಿವು ಗಾಢವಾದಷ್ಟು ಅದು ಅವನ ಚಾರಿತ್ರ್ಯದಲ್ಲಿ ಪ್ರತಿಬಿಂಬಿಸುತ್ತದೆ. ಹಾಗೆಯೇ ಈ ಅರಿವು ಪುರೋಹಿತವರ್ಗ ಮತ್ತು ಢೋಂಗಿ ಬಾಬಾಗಳು ಸಮಾಜದ ಮೇಲೆ ಹೇರುವ, ದೇವರು ಮತ್ತು ಮಾನವರ ನಡುವಣ ಮಧ್ಯಸ್ತಿಕೆಯ ಕೃತಕ ಗೋಡೆಗಳನ್ನು ಕೆಡವಿಹಾಕುತ್ತದೆ. * ಧರ್ಮಗಳನ್ನು ಶೋಷಣೆಗಾಗಿ ಬಳಸುವವರು ಜನರಲ್ಲಿ ಅನಗತ್ಯ ಪಾಪ ಪ್ರಜ್ಞೆಯನ್ನು ಬೆಳೆಸಲಿಕ್ಕಾಗಿ ಅವರ ಮನಸ್ಸುಗಳಲ್ಲಿ ಹಲವು ಮೌಢ್ಯಗಳನ್ನು ಬಿತ್ತುತ್ತಾರೆ. ಪಾಪವಲ್ಲದ ಕಾರ್ಯಗಳನ್ನು ಪಾಪಕೃತ್ಯಗಳೆಂದು ಕರೆಯುತ್ತಾರೆ. ಆ ಬಳಿಕ ಪಾಪ ಪರಿಹಾರದ ಹೆಸರಲ್ಲಿ ಮುಗ್ಧರನ್ನು ದೋಚಿ ತಾವು ಸಂಪನ್ನರಾಗಿ ಬಿಡುತ್ತಾರೆ. ರಮದಾನ್ ತಿಂಗಳ ಹಗಲಲ್ಲಿ ಉಪವಾಸ ಆಚರಿಸುತ್ತಿರುವಾಗ ಪತಿ-ಪತ್ನಿಯರ ಮಧ್ಯೆ ಲೈಂಗಿಕ ಸಂಪರ್ಕದ ಮೇಲೆ ನಿರ್ಬಂಧವಿದೆ. ಈ ನಿರ್ಬಂಧ ರಾತ್ರಿಗೆ ಅನ್ವಯವಾಗುವುದಿಲ್ಲ. ಆದರೆ ಪ್ರವಾದಿಯ ಕಾಲದಲ್ಲಿ ಕೆಲವರು, ರಾತ್ರಿಯ ವೇಳೆಯೂ ತಮ್ಮ ಪತ್ನಿಯ ಜೊತೆ ಸಂಪರ್ಕ ನಿಷಿದ್ಧ ಎಂದು ನಂಬಿಕೊಂಡಿದ್ದರು. ಆದರೂ ಸಾಮೀಪ್ಯ ಸಂಭವಿಸಿಬಿಟ್ಟಾಗ ತಮ್ಮ ಕಾಲ್ಪನಿಕ ಪಾಪದ ಕುರಿತು ಪಾಪಪ್ರಜ್ಞೆಯಿಂದ ನರಳುತ್ತಿದ್ದರು. ಕುರ್‌ಆನ್‌ನ ಪ್ರಸ್ತುತ 2ನೇ ಅಧ್ಯಾಯದ 187ನೇ ವಚನದಲ್ಲಿ ಈ ವಿಷಯದಲ್ಲಿ ಜನರಿಗಿದ್ದ ಗೊಂದಲವನ್ನು ನಿವಾರಿಸಲಾಯಿತು. ರಮದಾನ್ ತಿಂಗಳ ರಾತ್ರಿಗಳಲ್ಲಿ ಪತಿ-ಪತ್ನಿಯರು ನಿಕಟರಾಗುವುದರಲ್ಲಿ ಯಾವ ಪಾಪವೂ ಇಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ಸಾರಲಾಯಿತು. * 187ನೇ ವಚನದಲ್ಲಿ ‘ಈತಿಕಾಫ್’ನ ಪ್ರಸ್ತಾಪವಿದೆ. ‘ಈತಿಕಾಫ್’ ಅಂದರೆ ಒಂದು ನಿರ್ದಿಷ್ಟ ಅವಧಿಯ ತನಕ ಮಸೀದಿಯೊಳಗೆ ಸೀಮಿತರಾಗಿರುವುದು. ಶೌಚದ ಹೊರತು ಬೇರಾವ ಕಾರಣಕ್ಕೂ ಮಸೀದಿಯಿಂದ ಹೊರಬಾರದಿರುವುದು. ಪ್ರವಾದಿ (ಸ) ಮತ್ತು ಅವರ ಅನೇಕ ಸಂಗಾತಿಗಳು ರಮದಾನ್ ತಿಂಗಳ ಕೊನೆಯ 10 ದಿನಗಳನ್ನು ಮಸೀದಿಯಲ್ಲೇ ಕಳೆಯುತ್ತಿದ್ದರು. ಇದು ದೇವಧ್ಯಾನಕ್ಕೆ, ಆರಾಧನೆಗೆ ಮತ್ತು ಆತ್ಮಾವಲೋಕನಕ್ಕೆ ಮೀಸಲಾದ ಅವಧಿಯಾಗಿರುತ್ತದೆ. ಹೆಚ್ಚಿನ ಮಸೀದಿಗಳಲ್ಲಿ ಊರಿನ ಕೆಲವು ಮಂದಿ ಈ ರೀತಿ ರಮದಾನ್ ತಿಂಗಳ ಕೊನೆಯ 10 ದಿನಗಳನ್ನು ‘ಈತಿಕಾಫ್’ಗೆ ಮುಡಿಪಾಗಿಟ್ಟಿರುತ್ತಾರೆ. * 188ನೇ ವಚನದಲ್ಲಿ, ವ್ಯವಹಾರದಲ್ಲಿ ಸದಾಚಾರ ಪಾಲಿಸುವುದಕ್ಕೆ ಒತ್ತು ನೀಡಲಾಗಿದೆ. ಉಪವಾಸದ ಮೂಲಕ ಬಾಯಿ, ನಾಲಗೆ ಮತ್ತು ಚಿತ್ತದ ಮೇಲೆ ನಿಯಂತ್ರಣ ಸಾಧಿಸಿದರೆ ಸಾಲದು. ಆದಾಯವನ್ನು ಸನ್ಮಾರ್ಗದಲ್ಲಿ ಖರ್ಚು ಮಾಡಿದರೆ ಸಾಲದು. ಆದಾಯದ ಮೂಲಗಳ ಮೇಲೆ ಕಣ್ಣಿಟ್ಟಿರಬೇಕು. ಅಕ್ರಮ ಮಾರ್ಗದಿಂದ ಸಂಪಾದಿಸಿದ ಚಿಕ್ಕಾಸು ಕೂಡಾ ಆದಾಯದ ಭಾಗವಾಗಿರಬಾರದು. ಲೌಕಿಕ ಕಾನೂನುಗಳನ್ನು ತಿರುಚಿ, ಕಾನೂನು ಪಾಲಕರನ್ನು ನಂಬಿಸಿ ಅಥವಾ ಆಡಳಿತಗಾರರನ್ನು ವಂಚಿಸಿ ಇನ್ನೊಬ್ಬರಿಗೆ ಸೇರಬೇಕಾದ ಸೊತ್ತನ್ನು ಅಕ್ರಮವಾಗಿ ಕಬಳಿಸಲು ನಿಮಗೆ ಅವಕಾಶ ಸಿಕ್ಕರೂ ಹಾಗೆ ಮಾಡಬೇಡಿ. ದೇವರು ಮತ್ತು ಧರ್ಮದ ದೃಷ್ಟಿಯಲ್ಲಿ ಸಕ್ರಮ ಹಾಗೂ ನ್ಯಾಯೋಚಿತವಾಗಿರುವ ಆದಾಯವನ್ನು ಮಾತ್ರ ಸ್ವೀಕರಿಸಬೇಕು ಎಂದು ಎಚ್ಚರಿಸಲಾಗಿದೆ. * ಮುಸ್ಲಿಮ್ ಸಮಾಜದಲ್ಲಿ ರಮದಾನ್ ತಿಂಗಳೆಂಬುದು ಲೌಕಿಕತೆಯ ಇತಿಮಿತಿಗಳನ್ನು ನೆನಪಿಸಿ, ಅಧ್ಯಾತ್ಮದಲ್ಲಿ ಆಸಕ್ತಿ ಚಿಗುರಿಸುವ ತಿಂಗಳು. ಧನವ್ಯಾಮೋಹವನ್ನು ನಿಗ್ರಹಿಸಿ ಸಾಮಾಜಿಕ ಹೊಣೆಗಾರಿಕೆಗಳ ಬಗ್ಗೆ ಬದ್ಧತೆ ಬೆಳೆಸುವ ತಿಂಗಳು. ಈ ತಿಂಗಳು ಗರಿಷ್ಠ ಪ್ರಮಾಣದಲ್ಲಿ ದಾನ ಧರ್ಮ ಮಾಡುವ ಋತುವಾಗಿರುತ್ತದೆ. ನಿರ್ದಿಷ್ಟ ಮಿತಿಗಿಂತ ಅಧಿಕ ಸಂಪತ್ತುಳ್ಳವರು ತಮ್ಮ ಮೇಲೆ ಕಡ್ಡಾಯವಾಗಿರುವ ವಾರ್ಷಿಕ ಝಕಾತ್ ಮೊತ್ತವನ್ನು ಈ ತಿಂಗಳಲ್ಲೇ ಪಾವತಿಸಲು ಇಷ್ಟಪಡುತ್ತಾರೆ. ಕಡ್ಡಾಯವಲ್ಲದ ದಾನಕ್ಕೆ ‘ಸದಕ’ ಎನ್ನುತ್ತಾರೆ. ಅಂದರೆ ಅರ್ಹ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಗುರುತಿಸಿ, ‘ಸದಕ’ದ ಹೆಸರಲ್ಲಿ ಅವರಿಗೆ ಆರ್ಥಿಕ ನೆರವು ಒದಗಿಸುವ ಚಟುವಟಿಕೆಯು ಈ ತಿಂಗಳಲ್ಲಿ ಬಿರುಸಾಗಿ ನಡೆಯುತ್ತದೆ. ಪ್ರವಾದಿವರ್ಯರ ಕಾಲದಲ್ಲಿ ಈ ಚಟುವಟಿಕೆಯು ಸಾಮೂಹಿಕ ಸ್ತರದಲ್ಲಿ ಸಂಘಟಿತವಾಗಿ ನಡೆಯುತ್ತಿತ್ತು. ಸಂತಸದ ಸಂಗತಿ ಏನೆಂದರೆ ಇತ್ತೀಚೆಗೆ ಆ ಪರಂಪರೆ ಮತ್ತೆ ಜೀವ ಪಡೆಯುತ್ತಿದೆ. ಜಗತ್ತಿಗೆಲ್ಲಾ ಮಾರ್ಗದರ್ಶಿಯಾಗಿ ಬಂದ ಗ್ರಂಥ ಕುರ್‌ಆನ್. ಈ ಗ್ರಂಥ ಅನಾವರಣಗೊಂಡ ತಿಂಗಳನ್ನು ಮುಸ್ಲಿಮರು ತಮ್ಮ ವ್ಯಕ್ತಿಗತ ಹಾಗೂ ಸಾಮಾಜಿಕ ಬದುಕನ್ನು ದಿವ್ಯ ಮಾರ್ಗದರ್ಶನದ ಪ್ರಕಾರ, ಸತ್ಯ, ನ್ಯಾಯ ಮತ್ತು ಸಹತಾಪದಲ್ಲಿ ಅಧಿಷ್ಠಿತವಾದ ಜವಾಬ್ದಾರಿಯುತ ಹಾಗೂ ಶಿಸ್ತುಬದ್ಧವಾದ, ಸಂವೇದನಾಶೀಲ ಬದುಕಾಗಿ ಪರಿವರ್ತಿಸುವುದಕ್ಕೆ ಬೇಕಾದ ತರಬೇತಿ ಪಡೆಯುವ ತಿಂಗಳಾಗಿ ಆಚರಿಸುತ್ತಾರೆ.

ವಾರ್ತಾ ಭಾರತಿ 19 Feb 2026 9:57 am

ನವಿ ಮುಂಬೈನಲ್ಲಿ ಫೆಡೆಕ್ಸ್‌ನ ಅತ್ಯಾಧುನಿಕ ಏರ್ ಕಾರ್ಗೋ ಹಬ್: 6,000 ಉದ್ಯೋಗಗಳ ಸೃಷ್ಟಿಸುವ ಗುರಿ

ಜಾಗತಿಕ ಲಾಜಿಸ್ಟಿಕ್ಸ್ ಪ್ರಮುಖ ಕಂಪನಿ ಫೆಡೆಕ್ಸ್, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಸ್ವಯಂಚಾಲಿತ ಏರ್ ಕಾರ್ಗೋ ಹಬ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ಭಾರತದ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ, ಅಂತಾರಾಷ್ಟ್ರೀಯ ವ್ಯಾಪಾರ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ಕಂಪನಿ 2,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದೆ. ಈ ಹೊಸ ಏರ್ ಕಾರ್ಗೋ ಹಬ್

ಒನ್ ಇ೦ಡಿಯ 19 Feb 2026 9:48 am

ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 130ಕ್ಕೆ ಏರುವ ನಿರೀಕ್ಷೆ; ಸಮೀಕರಣ ಬದಲಾದರೆ ಒಬ್ಬರಿಗೆ ಕಷ್ಟ, ಮತ್ತೊಬ್ಬರಿಗೆ ಇಷ್ಟ

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಶೀಘ್ರದಲ್ಲೇ ಸಂಖ್ಯಾಬಲಗಳು ಏರುಪೇರಾಗುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸಂಖ್ಯಾಬಲ ಹೆಚ್ಚಾಗುವ ನಿರೀಕ್ಷೆ ಇದೆ. ಈ ಸಂಖ್ಯಾ ಬದಲಾವಣೆ ಆಡಳಿತ ಮತ್ತು ವಿಪಕ್ಷ ಮೈತ್ರಿಕೂಟದ ಯೋಜನೆಗಳ ಮೇಲೆ ಖಂಡಿತವಾಗಿ ಪರಿಣಾಮ ಬೀರಲಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ನಿರೀಕ್ಷಿತ ಸಂಖ್ಯಬಲ ದೊರೆತರೆ, ತನ್ನ ಮಹತ್ವಾಕಾಂಕ್ಷಿ ಮಸೂದೆಗಳನ್ನು ಪಾಸು ಮಾಡಿಸಿಕೊಳ್ಳುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸರಳವಾಗಲಿದೆ.

ವಿಜಯ ಕರ್ನಾಟಕ 19 Feb 2026 9:41 am

“ಜಗತ್ತಿನ ಪಾಲಿಗೆ ಕಾಮಧೇನುವಾದ ಶ್ರೀರಾಮಕೃಷ್ಣಾರು” : ಜಯಂತಿಯ ಸಂದರ್ಭದಲ್ಲಿ ನೆನೆಯಬೇಕಾದುದೇನು..

ಶ್ರೀರಾಮಕೃಷ್ಣ ಪರಮಹಂಸರು ಒಬ್ಬರು ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದು ಹೇಗೆ, ಅವರ ಸಂದೇಶಗಳು ಜೀವನವನ್ನು ಸುಗಮಗೊಳಿಸುವುದು ಹೇಗೆ ಎಂಬ ವಿವರವನ್ನು ಲೇಖಕರಾದ ಗೀತಾ ಪ್ರವೀಣ್ ಭಟ್ ಇಲ್ಲಿ ವಿವರಿಸಿದ್ದಾರೆ.

ವಿಜಯ ಕರ್ನಾಟಕ 19 Feb 2026 9:00 am

ಅಪರಾಧ ಸುದ್ದಿ: ತೀರ್ಥಹಳ್ಳಿ: ಪ್ರೀತಿಗೆ ನಿರಾಕರಣೆ; ಯುವತಿಗೆ ಚಾಕು ಇರಿತ, ನರಸಿಂಹರಾಜಪುರದಲ್ಲಿ ಆನೆ ದಾಳಿಗೆ 8 ಜನ ಬಲಿ

ತೀರ್ಥಹಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಚುಚ್ಚಿ, ಹಲ್ಲೆ ಮಾಡಿದ ಘಟನೆ ತೀರ್ಥಹಳ್ಳಿ ಭಾಗದಲ್ಲಿ ನಡೆದಿದೆ. ತೂದೂರು ಗ್ರಾಮದ ನಿವಾಸಿಯಾದ ಸ್ವರೂಪ್ ಕಳೆದ ಆರು ತಿಂಗಳಿನಿಂದ ಅಪೂರ್ವ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಗೂ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಕೂಡ ಈ ಹಿಂದೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಒನ್ ಇ೦ಡಿಯ 19 Feb 2026 8:34 am

ಭಾರತಕ್ಕೆ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ ಸ್ವಿಡನ್‌ ಉಪ ಪ್ರಧಾನಿ; ಎಬ್ಬಾ ಬುಷ್‌ ಹೊಗಳಿಕೆ ಅಬ್ಬಬ್ಬಾ

ಭಾರತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅನೇಕ ಜಾಗತಿಕ ನಾಯಕರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚುತ್ತಾರೆ.ಈ ಸಾಲಿಗೆ ಇದೀಗ ಸ್ವಿಡನ್‌ ಉಪ ಪ್ರಧಾನಿ ಎಬ್ಬಾ ಬುಷ್‌ ಕೂಡ ಸೇರಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಗುಣ ನನ್ನನ್ನು ಬಹುವಾಗಿ ಆಕರ್ಷಿಸಿದೆ ಎಂದು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾಗವಹಿಸಿರುವ ಎಬ್ಬಾ ಬುಷ್‌, ಭಾರತ AI ಶೃಂಗಸಭೆಯ ನಾಯಕತ್ವವಹಿಸಿರುವುದು ಸಂತಸದ ಸಂಗತಿ ಎಂದಿದ್ದಾರೆ.

ವಿಜಯ ಕರ್ನಾಟಕ 19 Feb 2026 8:31 am

ಶಿವಾಜಿಯನ್ನು ಟಿಪ್ಪುವಿಗೆ ಯಾಕೆ ಹೋಲಿಸಬಾರದು?

ಮಾಲೆಗಾಂವ್ ಉಪಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹ್ಮದ್ ಅವರು ತಮ್ಮ ಕಚೇರಿಯಲ್ಲಿ ಟಿಪ್ಪು ಫೋಟೊ ನೇತು ಹಾಕಿರುವುದನ್ನು ವಿರೋಧಿಸಿ ಇತ್ತೀಚೆಗೆ ಬಿಜೆಪಿ ಮತ್ತು ಶಿವಸೇನೆಯ ಮುಖಂಡರು ಗದ್ದಲ ಎಬ್ಬಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಬಳಿಕ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮಹಾರಾಷ್ಟ್ರದ ಕಾಂಗ್ರೆಸ್ ಹರ್ಷವರ್ಧನ ಸಪ್ಕಾಲ್ ಅವರು, ಛತ್ರಪತಿ ಶಿವಾಜಿ ಅವರ ಫೋಟೊಗಳನ್ನು ಕೊಠಡಿಗಳಲ್ಲಿ ಹಾಕಬಹುದಾದರೆ, ಟಿಪ್ಪುವಿನ ಫೋಟೊವನ್ನು ಯಾಕೆ ಹಾಕಬಾರದು ಎಂಬ ಅರ್ಥದಲ್ಲಿ ಮಾತನಾಡಿದರು. ಛತ್ರಪತಿ ಶಿವಾಜಿಯು ಶೌರ್ಯ ಮತ್ತು ಸ್ವರಾಜ್ಯದ ಕಲ್ಪನೆಯನ್ನು ಎತ್ತಿ ಹಿಡಿದ ರೀತಿಯಲ್ಲೇ ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಸ್ವರಾಜ್ಯಕ್ಕಾಗಿ ಹೋರಾಡಿದರು. ಶಿವಾಜಿ ಆದರ್ಶವಾಗಿರುವಂತೆಯೇ ಟಿಪ್ಪು ಅವರ ತ್ಯಾಗ, ಶೌರ್ಯ, ಬಲಿದಾನಗಳು ನಮಗೆ ಆದರ್ಶವಾಗಿದೆ. ಅವರು ಎಂದಿಗೂ ವಿಷಕಾರಿ ಸಿದ್ಧಾಂತಗಳನ್ನು ಸ್ವೀಕರಿಸಲಿಲ್ಲ. ಹೀಗಾಗಿ ಶೌರ್ಯದ ಸಂಕೇತವಾಗಿ ನಾವು ಟಿಪ್ಪು ಸುಲ್ತಾನರನ್ನು ಶಿವಾಜಿ ಮಹಾರಾಜರೊಂದಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಸಪ್ಕಾಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇನ್ನಷ್ಟು ದಾಂಧಲೆಗಳಿಗೆ ಕಾರಣವಾಯಿತು. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪುಣೆಯಲ್ಲಿ ರಂಪಾಟ ನಡೆಸಿದರು. ಇವರು ಬೀದಿಗಿಳಿದು ನಡೆಸಿದ ದಾಂಧಲೆಗೆ 9 ಮಂದಿ ಗಾಯಗೊಂಡಿದ್ದಾರೆ. ಹೇಳಿಕೆ ನೀಡಿದ ಸಪ್ಕಾಲ್ ವಿರುದ್ಧ ಬಿಜೆಪಿ ಪುಣೆಯ ನಗರ ಅಧ್ಯಕ್ಷ ಧೀರಜ್ ಘಾಟೆ ಅವರು ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಕೆಲವು ಟಿ.ವಿ. ಮಾಧ್ಯಮಗಳು ಟಿಪ್ಪು ಫೋಟೊ ಹಾಕಿದ್ದನ್ನು ಮಹದಾಪರಾಧವೋ ಎಂಬಂತೆ ಬಿಂಬಿಸಿವೆ. ಇದು ರಾಜ ಪ್ರಭುತ್ವ ಅಳಿದು ಪ್ರಜೆಗಳೇ ಪ್ರಭುಗಳಾಗಿರುವ ಕಾಲ. ಇಂತಹ ಕಾಲಘಟ್ಟದಲ್ಲಿ ಜನಪ್ರತಿನಿಧಿಗಳ ಕಚೇರಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಅಳಿದು ಹೋದ ರಾಜರ ಪೋಟೊಗಳಿಗೆ ಆದ್ಯತೆ ನೀಡದೆ ಗಾಂಧಿ, ಅಂಬೇಡ್ಕರ್, ನೆಹರೂ ಅವರಂತಹ ನಾಯಕರ ಫೋಟೊಗಳಿಗೆ ಅದ್ಯತೆ ನೀಡಬೇಕು. ಗಾಂಧಿ, ಅಂಬೇಡ್ಕರ್ ಫೋಟೊಗಳು ಸತ್ಯ, ಅಹಿಂಸೆ, ಸಂವಿಧಾನದ ಆಶಯಗಳನ್ನು ಪ್ರತಿನಿಧಿಸುತ್ತವೆ. ಆದರೆ ಇಂದು ಸರಕಾರಿ ಕಚೇರಿಗಳಲ್ಲಿ ಸಂತರು, ರಾಜರು, ಬೇರೆ ಬೇರೆ ದೇವರುಗಳ ಫೋಟೊಗಳು ಗೋಡೆ ತುಂಬಾ ರಾರಾಜಿಸುತ್ತಿರುತ್ತವೆ. ಇವುಗಳ ಮಧ್ಯೆ ಗಾಂಧಿ, ಅಂಬೇಡ್ಕರ್‌ಗಳು ಇದ್ದೂ ಇಲ್ಲದವರಂತೆ ಬದುಕುತ್ತಿದ್ದಾರೆ. ಹಾಗೆಯೇ ಬೇರೆ ಬೇರೆ ರಾಜ್ಯಗಳು ತಮ್ಮ ಇತಿಹಾಸ ಪರಂಪರೆಗಳನ್ನು ಸಾರುವ ನಾಯಕರು, ವ್ಯಕ್ತಿಗಳ ಫೋಟೊಗಳಿಗೆ ಅದ್ಯತೆ ನೀಡುತ್ತವೆ. ಮಹಾರಾಷ್ಟ್ರ ಶಿವಾಜಿಗೆ ಆದ್ಯತೆ ನೀಡಿದರೆ ಕರ್ನಾಟಕ ಬಸವಣ್ಣ, ಟಿಪ್ಪು, ನಾಲ್ವಡಿ ಕೃಷ್ಣರಾಜರಂತಹ ನಾಯಕರಿಗೆ ಆದ್ಯತೆ ನೀಡುತ್ತಾ ಬಂದಿದೆ. ಇಂದು ಶಿವಾಜಿ ಮತ್ತು ಟಿಪ್ಪು ಕೇವಲ ಆಯಾ ರಾಜ್ಯಗಳಿಗೆ ಸೀಮಿತರಾಗಿ ಉಳಿದರೆ ಬೇರೆ ಬೇರೆ ಕಾರಣಗಳಿಗಾಗಿ ಗಡಿಗಳನ್ನು ಮೀರಿ ವಿಸ್ತರಿಸಿಕೊಂಡಿದ್ದಾರೆ. ಶಿವಾಜಿಯನ್ನಾಗಲಿ, ಟಿಪ್ಪು ಸುಲ್ತಾನನನ್ನಾಗಲಿ ಇಂದು ಭಾರತದ ಒಂದು ಸಮುದಾಯ ಎತ್ತಿ ಹಿಡಿದಿರುವುದು ಅವರು ಮೊಗಲರೊಂದಿಗೆ ಅಥವಾ ಬ್ರಿಟಿಷರೊಂದಿಗೆ ಹೋರಾಡಿದರು ಎನ್ನುವ ಒಂದೇ ಕಾರಣಕ್ಕಾಗಿ ಅಲ್ಲ. ಬ್ರಿಟಿಷರೊಂದಿಗೆ ಟಿಪ್ಪುವಿನಂತೆ ಮಹಾರಾಷ್ಟ್ರದ ಪೇಶ್ವೆಗಳೂ ಹೋರಾಡಿದ್ದಾರೆ. ಆದರೆ ಟಿಪ್ಪು ಮರಾಠರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಶಿವಾಜಿ, ಟಿಪ್ಪು ಮೊದಲಾದ ಅರಸರು ರಾಜರಾಗಿದ್ದರೂ ತಳಸ್ತರದ ಜನರಿಗಾಗಿ ಅವರು ಮಾಡಿದ ಕೆಲಸ ಕಾರ್ಯಗಳಿಗಾಗಿ ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ಶಿವಾಜಿ ಮೊಗಲರೊಂದಿಗೆ ಹೋರಾಡುತ್ತಿದ್ದಾಗ ಅವರಿಗೆ ಬೆಂಗಾವಲಾಗಿ ನಿಂತವರು ಮುಸ್ಲಿಮರು ಮತ್ತು ಮಹಾರ್ ದಲಿತರು. ಆತನ ಅಂಗರಕ್ಷಕರಾಗಿಯೂ ದಲಿತರು ಮತ್ತು ಮುಸ್ಲಿಮರ ಹೆಸರುಗಳೇ ಪ್ರಮುಖವಾಗಿ ಕೇಳಿ ಬರುತ್ತವೆೆ. ಶಿವಾಜಿಯ ಸೇನಾದಳಗಳ 11 ಮುಖ್ಯಸ್ಥರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರು. ಶಿವಾಜಿಯನ್ನು ಫುಲೆ ಅವರು ‘ಕೃಷಿಕರ ದೊರೆ’ ಎಂದು ಕರೆಯುತ್ತಾರೆ. ಆತ ತನ್ನ ಸೇನೆಯಲ್ಲಿ ಎಲ್ಲ ವರ್ಗದವರನ್ನು ಸಂಘಟಿಸಿ ಮೊಗಲರ ವಿರುದ್ಧ ಹೋರಾಟ ಮಾಡಿದ್ದ ಮಾತ್ರವಲ್ಲ, ಎಲ್ಲ ಜಾತಿ, ಧರ್ಮೀಯರಿಗೂ ಗರಿಷ್ಠ ಮಟ್ಟದಲ್ಲಿ ಸಮಾನ ನ್ಯಾಯವನ್ನು ನೀಡಲು ತನ್ನ ಆಡಳಿತದಲ್ಲಿ ಪ್ರಯತ್ನಿಸಿದ್ದ. ಟಿಪ್ಪುವಿಗೆ ವಂಚಿಸಿದಂತೆಯೇ ಶಿವಾಜಿಗೂ ಅವನ ಅಕ್ಕಪಕ್ಕದಲ್ಲಿದ್ದವರೇ ವಂಚಿಸಿದರು. ಆತನ ಪಟ್ಟಾಭಿಷೇಕಕ್ಕೆ ಮೇಲ್‌ಜಾತಿಯ ಜನರು ಅಡ್ಡಿಯಾದರು. ಈ ಕಾರಣಕ್ಕೆ ಮೊದಲ ಬಾರಿಯ ಪಟ್ಟಾಭಿಷೇಕವನ್ನು ಮೇಲ್‌ಜಾತಿಯ ಜನರು ತಿರಸ್ಕರಿಸಿದರು. ಈ ಕಾರಣಕ್ಕಾಗಿಯ ಎರಡನೆ ಬಾರಿ ಪಟ್ಟಾಭಿಷೇಕವನ್ನು ಮಾಡಬೇಕಾಯಿತು. ಆತನ ಪುತ್ರ ಸಂಭಾಜಿಯನ್ನು ಮೊಗಲರಿಗೆ ಬಲಿಕೊಟ್ಟು ಸಾಮ್ರಾಜ್ಯವನ್ನು ಹಂತಹಂತವಾಗಿ ಪೇಶ್ವೆಗಳು ತಮ್ಮ ಕೈವಶ ಮಾಡಿಕೊಂಡರು. ದಲಿತರು, ಮುಸ್ಲಿಮರು ಮತ್ತು ಹಿಂದುಳಿದವರ್ಗದ ಸಮುದಾಯವನ್ನು ಸಂಘಟಿಸಿ ಶಿವಾಜಿ ಕಟ್ಟಿದ ಸಾಮ್ರಾಜ್ಯ ಬಳಿಕ ಪೇಶ್ವೆಗಳ ಜಾತೀಯವಾದಕ್ಕೆ ಬಲಿಯಾಗಿ ನಾಶವಾಯಿತು. ಪೇಶ್ವೆಗಳ ಜಾತೀಯತೆಯಿಂದ ಸಿಡಿದ ಮಹಾರ್ ದಲಿತರು ಅನಿವಾರ್ಯವಾಗಿ ಬ್ರಿಟಿಷರ ಜೊತೆಗೆ ಕೈ ಜೋಡಿಸಿದರು. ಶಿವಾಜಿಯನ್ನು ಆತ ರಾಜನೆನ್ನುವ ಕಾರಣಕ್ಕೋ, ಆತ ಮೊಗಲ ವಿರುದ್ಧ ಯುದ್ಧ ಮಾಡಿದ ಕಾರಣಕ್ಕೋ ಸ್ಮರಿಸುವುದಕ್ಕಿಂತ ಆತ ಶೋಷಿತ ಸಮುದಾಯಕ್ಕಾಗಿ ಮಾಡಿದ ಕೆಲಸ ಕಾರ್ಯಗಳಿಗಾಗಿ ಜನರು ಇಂದಿಗೂ ನೆನೆಯುತ್ತಾರೆ. ಆ ಕಾರಣಕ್ಕಾಗಿಯೇ ಆತ ಮಹಾರಾಷ್ಟ್ರದ ಪರಂಪರೆಯ ಭಾಗವಾಗಿರುವುದು. ಮಹಾರಾಷ್ಟ್ರ ಗಡಿಯನ್ನು ಮೀರಿ ಹಲವು ರಾಜ್ಯಗಳಿಗೆ ಅವನ ಹೆಸರು ವಿಸ್ತರಿಸಿಕೊಂಡಿರುವುದು ಇದೇ ಕಾರಣಕ್ಕೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದೇನೋ ನಿಜ. ಬಹುತೇಕ ರಾಜರು ಅಂದು ತಮ್ಮ ತಮ್ಮ ಸಾಮ್ರಾಜ್ಯಗಳನ್ನು ಉಳಿಸಿ ಬೆಳೆಸುವ ಕಾರಣಕ್ಕಾಗಿ ಯುದ್ಧಗಳನ್ನು ಮಾಡಿದ್ದರು. ಟಿಪ್ಪು ಕೂಡ ಅವರಲ್ಲೊಬ್ಬ. ಆದರೆ ಆ ಕಾಲದಲ್ಲಿ ಟಿಪ್ಪು ನೀಡಿದ್ದ ಜನಪ್ರಿಯ ಆಡಳಿತ, ಶೋಷಿತ ಸಮುದಾಯದ ಏಳಿಗೆಗಾಗಿ ಹಮ್ಮಿಕೊಂಡ ಯೋಜನೆಗಳು ಇಂದಿಗೂ ಸ್ಮರಣೀಯವಾಗಿವೆೆ. ದಲಿತರಿಗೆ ಮತ್ತು ಹಿಂದುಳಿದವರಿಗೆ ಮೊದಲ ಬಾರಿ ಕೃಷಿ ಭೂಮಿ ಹಂಚಿದ್ದು ಟಿಪ್ಪುಸುಲ್ತಾನ್. ಹಿಂದೂ-ಮುಸ್ಲಿಮರು ಎನ್ನದೆ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡು ಅನುದಾನಗಳನ್ನು ನೀಡಿದ. ಇಂದಿಗೂ ನಾಡಿನ ಹಲವು ದೇವಸ್ಥಾನಗಳು ಆರತಿಯ ಸಂದರ್ಭದಲ್ಲಿ ಟಿಪ್ಪುವನ್ನು ಸ್ಮರಿಸುತ್ತವೆ. ಟಿಪ್ಪು ಬರೇ ಕರ್ನಾಟಕಕ್ಕೆ ಅಥವಾ ಭಾರತಕ್ಕೆ ಸೀಮಿತವಾದ ವ್ಯಕ್ತಿಯಾಗಿ ಉಳಿದಿಲ್ಲ. ಆಗಿನ ಕಾಲದಲ್ಲೇ ಟಿಪ್ಪುವಿನ ಹೋರಾಟವನ್ನು ಅಮೆರಿಕದ ಕ್ರಾಂತಿಕಾರರು ನೆನೆದುಕೊಂಡಿದ್ದರು. ಟಿಪ್ಪು ತನ್ನ ರಾಜನೀತಿಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದ. ಆತ ಕೃಷಿ, ವಾಣಿಜ್ಯ ಕ್ಷೇತ್ರಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಶ್ರಮಿಸಿದ್ದ. ಆತನ ರಾಕೆಟ್ ಕನಸಿಗಾಗಿ ನಾಸಾ ಇಂದಿಗೂ ಟಿಪ್ಪುವನ್ನು ಸ್ಮರಿಸುತ್ತಿದೆ. ಅಮೆರಿಕದಂತಹ ದೇಶಗಳು ಟಿಪ್ಪುವಿನ ಸಾಧನೆಯನ್ನು ಸ್ಮರಿಸುವಾಗ ಭಾರತ ಕ್ಷುದ್ರ ರಾಜಕೀಯ ಕಾರಣಗಳಿಗಾಗಿ ಟಿಪ್ಪುವಿನ ವಿರುದ್ಧ ಅಪಪ್ರಚಾರಗಳನ್ನು ಮಾಡುವುದು ನಮ್ಮ ಇತಿಹಾಸ, ಪರಂಪರೆಗೆ ಬಗೆಯುವ ದ್ರೋಹವಾಗಿದೆ. ಟಿಪ್ಪುವನ್ನು ಸ್ಮರಿಸಿದಷ್ಟೂ ಭಾರತದ ಅದರಲ್ಲೂ ಕರ್ನಾಟಕದ ಹಿರಿಮೆ ದೇಶವಿದೇಶಗಳಿಗೆ ಹರಡುತ್ತದೆ. ಇಂತಹ ಒಬ್ಬ ದೂರದೃಷ್ಟಿಯುಳ್ಳ, ಸರ್ವಧರ್ಮ ಪ್ರಿಯನಾಗಿರುವ, ಧೀರನಾಗಿರುವ ಅರಸ ನಮ್ಮ ರಾಜ್ಯದಲ್ಲಿ ಆಗಿಹೋಗಿರುವುದು ನಮ್ಮ ಇತಿಹಾಸ, ಪರಂಪರೆಯ ಹೆಗ್ಗಳಿಕೆಯಾಗಿದೆ. ಆ ಹೆಗ್ಗಳಿಕೆಯನ್ನು ಧರ್ಮ, ರಾಜಕೀಯದ ಹೆಸರಿನಲ್ಲಿ ಅಳಿಸಲು ಮುಂದಾಗುವುದು ಎಂದರೆ, ನಾವು ನಮ್ಮದೇ ಪರಂಪರೆಯ ಹಿರಿಮೆಗಳಿಗೆ ಧಕ್ಕೆ ತರುವುದು ಎಂದು ಅರ್ಥ. ಪ್ರಜೆಗಳೇ ಪ್ರಭುಗಳಾಗಿರುವ ದಿನಗಳಲ್ಲಿ ಯಾವುದೇ ಸರಕಾರಿ ಕಚೇರಿಗಳಲ್ಲಿ ರಾಜರ ಫೋಟೊಗಳನ್ನು ಅಳವಡಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗೆ ಅರ್ಥವಿದೆ. ಆದರೆ ಒಂದೆಡೆ ಶಿವಾಜಿ, ರಾಣಾಪ್ರತಾಪರಂತಹ ರಾಜರುಗಳ ಫೋಟೊಗಳನ್ನು ತಮ್ಮ ಕಚೇರಿ ಗೋಡೆಗಳಲ್ಲಿ ತೂಗು ಹಾಕುತ್ತಾ ಟಿಪ್ಪುವಿನಂತಹ ವಿಶ್ವ ಹೆಮ್ಮೆ ಪಡುವ ವ್ಯಕ್ತಿತ್ವವೊಂದರ ಫೋಟೊ ಅಳವಡಿಸುವುದರ ಕಡೆಗೆ ಬೆರಳು ತೋರಿಸುವುದು ಶಿವಾಜಿ, ಟಿಪ್ಪುವಿಗೆ ವಂಚಿಸಿದ ಮೀರ್ ಸಾದಿಕ್, ಪೂರ್ಣಯ್ಯ, ಪೇಶ್ವೆಗಳ ಸಮಯ ಸಾಧಕತನವನ್ನು ಮೀರಿದ್ದಾಗಿದೆ.

ವಾರ್ತಾ ಭಾರತಿ 19 Feb 2026 8:30 am

ಟಿ20 ವಿಶ್ವಕಪ್ : ಗುಂಪು ಹಂತದಲ್ಲಿ ಅಜೇಯ ಭಾರತಕ್ಕೆ ಸೂಪರ್ 8ರಲ್ಲಿ ಕಠಿಣ ಸವಾಲು

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಭಾರತ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್ 8 ಹಂತಕ್ಕೆ ತಲುಪಿದೆ. ಆದರೆ ಭಾರತದ ಸಂಪೂರ್ಣ ಬ್ಯಾಟಿಂಗ್ ಶಕ್ತಿ ಇನ್ನೂ ಪ್ರದರ್ಶನಗೊಂಡಿಲ್ಲ ಎನ್ನುವುದು ವಾಸ್ತವ. ದ್ವಿಪಕ್ಷೀಯ ಸರಣಿಗಳಲ್ಲಿ ಕಂಡುಬಂದ ಬ್ಯಾಟಿಂಗ್ ಕಸುವು ಬಹುರಾಷ್ಟ್ರಗಳ ಟೂರ್ನಿಯಲ್ಲಿ ಕಾಣಿಸುತ್ತಿಲ್ಲ ಹಾಗೂ ನಿರೀಕ್ಷಿತ ಪ್ರದರ್ಶನವೂ ದೊರೆಯುತ್ತಿಲ್ಲ. ಭಾರತ ಎಲ್ಲ ನಾಲ್ಕೂ ಪಂದ್ಯಗಳಲ್ಲಿ ಪ್ರತ್ಯೇಕ ಹೀರೊಗಳು ಅಪಾಯಕಾರಿ ಪರಿಸ್ಥಿತಿಯಿಂದ ತಂಡವನ್ನು ಬಚಾವ್ ಮಾಡಿದ್ದು, ಸೂಪರ್ 8 ಹಂತದಲ್ಲಿ ಅತಿಥೇಯ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ನಮೀಬಿಯಾ ವಿರುದ್ಧ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನ ವಿರುದ್ಧ ಇಶಾನ್ ಹಾಗೂ ಬುಧವಾರ ಅಹ್ಮದಾಬಾದ್‌ನಲ್ಲಿ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಆಪದ್ಭಾಂಧವರಾಗಿದ್ದಾರೆ. ಭಾರತ ಆರಂಭಿಕ ಆಟಗಾರರ ಸಮಸ್ಯೆಯನ್ನು ಎದುರಿಸುತ್ತಿದ್ದು, ವಿಶ್ವದ ನಂ.1 ಆಟಗಾರ ಅಭಿಷೇಕ್ ಶರ್ಮಾ ಟೂರ್ನಿಯಲ್ಲಿ ಇದುವರೆಗೆ ಒಂದೂ ರನ್ ಗಳಿಸಿಲ್ಲ. ಇದರಿಂದ ತಿಲಕ್ ವರ್ಮಾ ಬೇಗನೇ ಕ್ರೀಸ್‌ಗೆ ಬರಬೇಕಾದ ಪರಿಸ್ಥಿತಿ ಉಂಟಾಗುತ್ತಿದ್ದು, ಇನಿಂಗ್ಸ್‌ಗೆ ವೇಗ ನೀಡುವುದು ಸಾಧ್ಯವಾಗುತ್ತಿಲ್ಲ. ಸೂರ್ಯಕುಮಾರ್ ಯಾದವ್ ಅವರ ಕಾದುನೋಡುವ ಪ್ರವೃತ್ತಿಯಿಂದಾಗಿ ಮಧ್ಯಮ ಓವರ್‌ಗಳಲ್ಲಿ ಭಾರತವನ್ನು ಕಟ್ಟಿಹಾಕುವ ತಂತ್ರವನ್ನು ವಿರೋಧಿ ತಂಡಗಳು ಹೆಣೆದಿವೆ. ಆದ್ದರಿಂದ ಕೆಳಕ್ರಮಾಂಕದ ಆಟಗಾರರು ಬಿರುಸಿನ ಹೊಡೆತಗಳನ್ನು ಪ್ರದರ್ಶಿಸಬೇಕಾಗಿದೆ. ಇಶಾನ್ ಮೂಲತಃ ರಭಸದ ಹೊಡೆತಗಳಿಗೆ ಹೆಸರುವಾಸಿಯಾಗಿದ್ದರೂ, ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಐದನೇ ಓವರ್‌ನಲ್ಲಿ ಅವರು ನಿರ್ಗಮಿಸಿದ ಬಳಿಕ ವಿರೋಧಿ ತಂಡ ತಿಲಕ್ ವರ್ಮಾ–ಎಸ್‌ಕೆವೈ ಜೋಡಿಯ ಮೇಲೆ ನಿಯಂತ್ರಣ ಹೇರಿತು. ಈ ಜೋಡಿ 28 ಎಸೆತಗಳನ್ನು ಎದುರಿಸಿ ಕೇವಲ 30 ರನ್ ಗಳಿಸಲು ಸಾಧ್ಯವಾಯಿತು. ಬೌಂಡರಿಗಳು ಬರಿದಾಗಿ ಹತಾಶೆಯ ಹೊಡೆತಗಳು ಅನಿವಾರ್ಯವಾದವು. ತಿಲಕ್ ವರ್ಮಾ 27 ಎಸೆತಗಳಲ್ಲಿ 31 ರನ್ ಹಾಗೂ ಎಸ್‌ಕೆವೈ 28 ಎಸೆತಗಳಲ್ಲಿ 34 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರನ್ ಬರ ಎದುರಿಸುತ್ತಿದ್ದಾಗ ಶಿವಂ ದುಬೆ ತಂಡವನ್ನು ಬಚಾವ್ ಮಾಡಿದರು. ಆರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಭಾರತದ ಇನಿಂಗ್ಸ್‌ಗೆ ಶಕ್ತಿ ತುಂಬಿದರು.

ವಾರ್ತಾ ಭಾರತಿ 19 Feb 2026 8:20 am

ಪತ್ನಿಯನ್ನು ಹತ್ಯೆಗೈದು ಬಂಧನಕ್ಕಾಗಿ ಕಾದು ಕುಳಿತ ಇಸ್ರೋ ಮಾಜಿ ಅಧಿಕಾರಿ!

ಬೆಂಗಳೂರು: ಪತ್ನಿಯ ಕುತ್ತಿಗೆಯನ್ನು ಟವೆಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದ ಇಸ್ರೋದ ಮಾಜಿ ಅಧಿಕಾರಿ, ಪೊಲೀಸರು ಬಂದು ಬಂಧಿಸುವವರೆಗೂ ಕೃತ್ಯ ಎಸಗಿದ ಕೊಠಡಿಯಲ್ಲೇ ಕಾದು ಕುಳಿತ ಅಪರೂಪದ ಪ್ರಕರಣ ವರದಿಯಾಗಿದೆ. ದಕ್ಷಿಣ ಬೆಂಗಳೂರಿನ ಬೊಮ್ಮನಹಳ್ಳಿಯ ವರ್ಚೊಸೊ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಿವಾಸಿ ನಾಗೇಶ್ವರ ರಾವ್ ಆರೋಪಿ. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ರಾವ್ ಆತ್ಮಹತ್ಯೆಗೂ ಪ್ರಯತ್ನಿಸಿದ್ದ ಎನ್ನಲಾಗಿದೆ. ಪತ್ನಿ ಸಂಧ್ಯಾ ಶ್ರೀಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಪತ್ನಿಯ ಕುತ್ತಿಗೆಯನ್ನು ಟವೆಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾಗಿ ಪೊಲೀಸರು ಹೇಳಿದ್ದಾರೆ. ಕೃತ್ಯ ಎಸಗಿದ ಬಳಿಕ ಮನೆಯಲ್ಲೇ ಉಳಿದುಕೊಂಡ ರಾವ್, ಪರಿಚಿತರನ್ನು ಸಂಪರ್ಕಿಸಿದ್ದು, ಆ ವ್ಯಕ್ತಿ ಬೆಳಿಗ್ಗೆ 11 ಗಂಟೆಯ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ಆರೋಪಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದು, ಹತಾಶನಾಗಿದ್ದ ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಈ ಕಾರಣದಿಂದ ಪತ್ನಿಯ ಮೇಲೆ ದಾಳಿ ಮಾಡಿದ. ಹತ್ಯೆಗೆ ಇತರ ಯಾವುದೇ ಕಾರಣ ಇದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದು ವೈಟ್ಫೀಲ್ಡ್ ಡಿಸಿಪಿ ಸೈದುಲು ಅದವತ್ ಹೇಳಿದ್ದಾರೆ.

ವಾರ್ತಾ ಭಾರತಿ 19 Feb 2026 8:20 am

​​ಚಿತ್ರದುರ್ಗದ ರೈತನ ಮಗನಿಗೆ ಒಲಿದ ನ್ಯಾಯಾಧೀಶ ಹುದ್ದೆ: ಪುತ್ತೂರಲ್ಲಿ ಬಡವರ ಮನೆಯಿಂದ ಮೂಡಿ ಬಂದ ನ್ಯಾಯಾಧೀಶೆ

ಛಲವೊಂದಿದ್ದರೆ ಯಾವುದೇ ಕಷ್ಟಗಳನ್ನು ದಾಟಬಹುದು ಎಂಬುದಕ್ಕೆ ಇಲ್ಲಿದೆ ಇಬ್ಬರ ಉದಾಹರಣೆ, ಕಷ್ಟಪಟ್ಟು ಓದಿ ನ್ಯಾಯಾಧೀಶರಾದ ಇಬ್ಬರ ಹಿನ್ನೆಲೆಯೂ ಬಡತನವಾಗಿತ್ತು. ಆದರೆ ಇದು ವರ ಸಾಧನೆಗೆ ಅಡ್ಡಿಯಾಗಿಲ್ಲ.

ವಿಜಯ ಕರ್ನಾಟಕ 19 Feb 2026 8:12 am

Karnataka Rain: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ 3 ದಿನಗಳಲ್ಲಿ 5 ಜಿಲ್ಲೆಗಳಲ್ಲಿ ಮಳೆ: ಐಎಂಡಿ

Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಮೂರು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ. ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ

ಒನ್ ಇ೦ಡಿಯ 19 Feb 2026 8:10 am

ಅಮೆರಿಕದಲ್ಲಿ ಭೀಕರ ಹಿಮಪಾತ; 8 ಮಂದಿ ಮೃತ್ಯು

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾ ಲೇಕ್ ತಹೋಯ್ ಸಮೀಪ ಸಂಭವಿಸಿದ ಭೀಕರ ಹಿಮಪ್ರವಾಹದ ವೇಳೆ ನಾಪತ್ತೆಯಾಗಿದ್ದ ಎಂಟು ಮಂದಿ ಹಿಮಜಾರುಗರ (ಸ್ಕೀಯರ್ಸ್) ಮೃತದೇಹವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದು ಕಳೆದ 50 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಹಿಮಪ್ರವಾಹ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನಾಪತ್ತೆಯಾದವರ ರಕ್ಷಿಸುವ ಕಾರ್ಯಾಚರಣೆಯನ್ನು ಆ ಬಳಿಕ ಪತ್ತೆ ಕಾರ್ಯಾಚರಣೆಯಾಗಿ ಪರಿವರ್ತಿಸಲಾಯಿತು. ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಇತರ ಆರು ಮಂದಿಯನ್ನು ಮಂಗಳವಾರ ಸೀರ್ರಾ ನೆವಾಡಾ ಪರ್ವತದಲ್ಲಿ ಪ್ರಬಲ ಚಳಿಗಾಳಿಯ ವೇಳೆ ರಕ್ಷಿಸಲಾಗಿದೆ ಎಂದು ನೆವಾಡ ಕೌಂಟಿ ಶೆರೀಫ್ ಶನ್ನಾನ್ ಮೂನ್ ಹೇಳಿದ್ದಾರೆ. ಎಲ್ಲ ಹಿಮಜಾರುಗರು ಬಿಕಾನ್ಗಳನ್ನು ಹೊಂದಿದ್ದರು; ಆದರೆ ಹಿಮಪ್ರವಾಹದ ಏರ್ಬ್ಯಾಗ್ಗಳನ್ನು ಹೊಂದಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ರಕ್ಷಿಸಲ್ಪಟ್ಟ ಆರು ಮಂದಿ ಶೂನ್ಯ ಡಿಗ್ರಿಗಿಂತ ಕಡಿಮೆ ತಾಪಮಾನದ ಪ್ರದೇಶದಲ್ಲಿ ಬಿಡಾರ ಹೂಡಿದ್ದರು ಹಾಗೂ ಮೂವರು ಮೃತಪಟ್ಟವರ ಸ್ಥಳಗಳನ್ನು ಗುರುತಿಸಿದರು. ಪರಿಹಾರ ತಜ್ಞರು ಎರಡು ಮೈಲು ದೂರ ಹಿಮವನ್ನು ಕತ್ತರಿಸಿಕೊಂಡು ಅವರಿದ್ದ ಪ್ರದೇಶಕ್ಕೆ ತೆರಳಿ ಮತ್ತೊಂದು ಹಿಮಬಂಡೆ ಜಾರುವುದನ್ನು ತಪ್ಪಿಸಲು ಪ್ರಯತ್ನ ಮಾಡಿದರು. ಬದುಕಿ ಉಳಿದಿರುವ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂನ್ ವಿವರಿಸಿದರು. ಹಿಮಪ್ರವಾಹವನ್ನು ಕೆಲವರು ನೋಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಅದು ಎಲ್ಲವನ್ನೂ ಹಿಂದಿಕ್ಕಿದೆ ಎಂದು ಕ್ಯಾಪ್ಟನ್ ರಸೆಲ್ ಗ್ರೀನ್ ವಿವರಿಸಿದ್ದಾರೆ. ಎಂಟು ಮಂದಿ ಸಂತ್ರಸ್ತರು ಕೂಡಾ ಅಕ್ಕಪಕ್ಕದಲ್ಲೇ ಇದ್ದರು ಹಾಗೂ ಮೂವರು ಗೈಡ್ಗಳಿದ್ದರು. ಅವರ ದೇನಗಳನ್ನು ಅಪಾಯಕಾರಿ ಪರಿಸ್ಥಿತಿಯಿಂದಾಗಿ ಇನ್ನೂ ಹೊರತೆಗೆದಿಲ್ಲ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 19 Feb 2026 7:50 am

2025ರಲ್ಲಿ 2,500ಕ್ಕೂ ಹೆಚ್ಚು ಭಾರತೀಯರನ್ನು ತೆಗೆದುಹಾಕಿದ ಕೆನಡಾ; ವಲಸೆ ನೀತಿಯಲ್ಲಿ ಅಮೆರಿಕವೇ ಮಾದರಿ!

ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕವನ್ನು ಮಾದರಿಯನ್ನಾಗಿಸಿಕೊಂಡಿರುವ ಕೆನಡಾ, ತನ್ನ ವಲಸೆ ನೀತಿಯಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಅದರಂತೆ 2025ರಲ್ಲಿ ಕೆನಡಾ ಬರೋಬ್ಬರಿ 18,500ಕ್ಕೂ ಹೆಚ್ಚು ವಲಸಿಗರನ್ನು ತೆಗೆದುಹಾಕಿದ್ದು, ಇದರಲ್ಲಿ 2,500ಕ್ಕೂ ಹೆಚ್ಚು ಜನರು ಎಂದು ಕೆನಡಿಯನ್ ಬಾರ್ಡರ್ ಸರ್ವೀಸಸ್ ಏಜೆನ್ಸಿ ಮಾಹಿತಿ ನೀಡಿದೆ. ಕೆನಡಾದಲ್ಲಿ ವಲಿಗರನ್ನು ಹೊರಹಾಕುವಿಕೆ ಅಥವಾ ತೆಗೆದುಹಾಕುವಿಕೆ ಪ್ರಕ್ರಿಯೆ ಅತ್ಯಂತ ಕಠಿಣವಾಗಿದ್ದು, ಮೂರು ಹಂತದ ವಿಶಿಷ್ಟ ನಿಯಮಗಳು ಜಾರಿಯಲ್ಲಿವೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 19 Feb 2026 7:43 am

KSRTC Strike: ಸಾರಿಗೆ ಬಸ್‌ಗಳ ಸಂಚಾರ ಯಥಾಸ್ಥಿತಿ, ಮುಷ್ಕರದ ಬಗ್ಗೆ ನಿಲ್ಲದ ಆತಂಕ

KSRTC Strike: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸಾರಿಗೆ ಬಸ್‌ಗಳ ಸಂಚಾರ ಯಥಾಸ್ಥಿತಿ ಮುಂದುವರಿದಿದೆ. ಆದರೆ ಮುಷ್ಕರದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮುಂದುವರಿದಿದೆ. 38 ತಿಂಗಳ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಇಂದಿನಿಂದ (ಫೆಬ್ರವರಿ 19 ಗುರುವಾರ) ಮುಷ್ಕರ ಪ್ರಾರಂಭವಾಗಬೇಕಾಗಿತ್ತು.

ಒನ್ ಇ೦ಡಿಯ 19 Feb 2026 7:38 am

ಕೌಟುಂಬಿಕ ಹಿಂಸೆ ಕಾನೂನುಬದ್ಧಗೊಳಿಸಿದ ತಾಲಿಬಾನ್;‌ ಹೆಂಡತಿಯ ಮೂಳೆ ಮುರಿಯದ ಹಾಗೆ ಗಂಡ ಹೊಡೆಯಬಹುದಂತೆ!

ಜಗತ್ತು ಒಂದು ದಿಕ್ಕಿನತ್ತ ಸಾಗಿದರೆ ಅಫ್ಘಾನಿಸ್ತಾನ ಮತ್ತೊಂದು ದಿಕ್ಕಿನೆಡೆ ಸಾಗುತ್ತದೆ. ಜಗತ್ತು ಆಧುನಿಕತೆಗಾಗಿ ಹಾತೋರೆದರೆ, ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿ ಮಧ್ಯಯುಗೀನ ಕಾಲಕ್ಕೆ ಹಿಂತಿರುಗಲು ತುದಿಗಾಲ ಮೇಲೆ ನಿಂತಿರುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ ಅಫ್ಘಾನಿಸ್ತಾನದಲ್ಲಿ ಹೊಸ ದಂಡ ಸಂಹಿತೆ ಜಾರಿಗೊಳಿಸಿರುವ ತಾಲಿಬಾನ್‌, ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ. ಗಂ ತನ್ನ ಹೆಂಡತಿಯ ಮೂಳೆ ಮುರಿಯದ ರೀತಿಯಲ್ಲಿ ಹೊಡೆಯಲು ಅನುಮತಿ ನೀಡಲಾಗಿದ್ದು, ಮಕ್ಕಳ ಮೇಲೂ ಕೈ ಮಾಡಲು ಅನುಮತಿಸಲಾಗಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 19 Feb 2026 6:46 am

ಎಸ್ಸೆಸ್ಸೆಲ್ಸಿಗೂ ಬಂತು ಚಿನ್ನದ ಪದಕ ಬಹುಮಾನ : ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ಶಿಕ್ಷಕರಿಂದ ಘೋಷಣೆ

ವಿದ್ಯಾರ್ಥಿಗಳು ಛಲದಿಂದ ಓದಿ ಶಾಲೆ-ಊರು-ಜಿಲ್ಲೆಗೆ ಕೀರ್ತಿ ತರಬೇಕೆಂಬ ಉದ್ದೇಶದಿಂದ ಬಾಗಲಕೋಟೆಯ ಅಮೀನಗಡದ ಶಾಲೆಯಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಸರಿ ಉತ್ತರೆ ಕೊಟ್ಟರೆ ನಗದು ಬಹುಮಾನ ನೀಡಲಾಗುತ್ತಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ 625 ಅಂಕ ಗಳಿಸಿದರೆ ಹಲವಾರ ಗಿಫ್ಟ್ ಗಳನ್ನು ಘೋಷಿಸಲಾಗಿದೆ ನೋಡಿ.

ವಿಜಯ ಕರ್ನಾಟಕ 19 Feb 2026 6:45 am

ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು ಅಭಿವೃದ್ಧಿಯನ್ನೂ ಕುಂಠಿತಗೊಳಿಸುತ್ತಿದೆ. ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ, ಕಾಮಗಾರಿಗೆ ವೇಗ ನೀಡದ ರೈಲ್ವೆ ಇಲಾಖೆ ಮುಂತಾದ ಅನೇಕ ಕಾರಣಗಳಿಂದ ಮಹತ್ವಾಕಾಂಕ್ಷಿ ಯೋಜನೆಗಳು ಇನ್ನೂ ಅನುಷ್ಠಾನದ ಹಂತದಲ್ಲೇ ಇದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 19 Feb 2026 5:08 am

ಬೆಂಗಳೂರಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್ ಅಡಿ ಚಿಕಿತ್ಸೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಅಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಸೈಂಟ್ ಜಾನ್ ಮೆಡಿಕಲ್ ಕಾಲೇಜು, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು, ಕೆಂಪೇಗೌಡ ಮೇಡಿಕಲ್ ಕಾಲೇಜು(ಕಿಮ್ಸ್) ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳಲ್ಲಿ ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಅಡಿ ಸಾರ್ವಾಜನಿಕರಿಗೆ ಸರಕಾರಿ ದರಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ ಚಿಕಿತ್ಸೆ ನೀಡಲು ಈ ಮೆಡಿಕಲ್ ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ. ಈ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ಗೆ ಹಂಚಿಕೆಯಾದ ಆಯವ್ಯಯ ಅನುದಾನದಲ್ಲಿ ಭರಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 19 Feb 2026 12:36 am

ಬಿಜೆಪಿಯ ಸುಳ್ಳಿನ ಕಾರ್ಖಾನೆಗೆ ಕನ್ನಡಿಗರು ಮರುಳಾಗುವುದಿಲ್ಲ : ದಿನೇಶ್ ಗುಂಡೂರಾವ್

ಬೆಂಗಳೂರು : ಅಧಿಕಾರವಿಲ್ಲದೆ ಹತಾಶೆಗೊಂಡಿರುವ ಆರ್.ಅಶೋಕ್ ಮತ್ತು ತಂಡ ದಿನಕ್ಕೊಂದು ಸುಳ್ಳಿನ ಕಂತೆ ಬಿಚ್ಚಿಡುತ್ತಿದೆ. ಅಂಕಿ-ಅಂಶಗಳ ಅರಿವಿಲ್ಲದೆ, ಜನರ ದಿಕ್ಕು ತಪ್ಪಿಸುವ ಬಿಜೆಪಿಯ ‘ಸುಳ್ಳಿನ ಫ್ಯಾಕ್ಟರಿ'ಗೆ ಕನ್ನಡಿಗರು ಎಂದಿಗೂ ಮರುಳಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಪೋಸ್ಟರ್‍ಗಳ ಮೂಲಕ ಕಲ್ಪನಾಲೋಕ ಸೃಷ್ಟಿಸಿ, ಬಿಜೆಪಿಯ ಆಡಳಿತ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಲು ನಡೆಸುತ್ತಿರುವ ಗಿಮಿಕ್‍ಗಳು ಸಫಲವಾಗುವುದಿಲ್ಲ. ನಾವು ಮನೆ ಮನೆಗೆ ತೆರಳಿ ಆರೋಗ್ಯ ಭದ್ರತೆ ನೀಡುತ್ತಿದ್ದರೆ, ಬಿಜೆಪಿಯವರು ಸುಳ್ಳುಗಳ ಭದ್ರಕೋಟೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ. ಔಷಧಿಗಳಿಲ್ಲದೇ ಆಸ್ಪತ್ರೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಬಿಜೆಪಿ ನಾಯಕರಿಗೆ ‘ಸುಳ್ಳು’ ಹೇಳುವುದೇ ಒಂದು ಚಟವಾಗಿಬಿಟ್ಟಿದೆ. ನಮ್ಮ ಸರಕಾರದ ಕಾರ್ಯವೈಖರಿ ಮತ್ತು ಪಾರದರ್ಶಕತೆ ಕನ್ನಡಿಗರ ಮುಂದಿದೆ. ಈಗಾಗಲೇ 496 ಔಷಧಿಗಳ ಟೆಂಡರ್ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗುತ್ತಿದೆ ಹಾಗೂ 99 ಔಷಧಿಗಳಿಗೆ ಈಗಾಗಲೇ ಎನ್‍ಒಎ ನೀಡಲಾಗಿದೆ ಎಂದು ತಿಳಿಸಿದ್ದಾರೆ. ತುರ್ತು ಸಂದರ್ಭ ಎದುರಾದರೆ ಎದೆಗುಂದದೆ ಎದುರಿಸಲು 30 ಕೋಟಿ ರೂ. ವೆಚ್ಚದಲ್ಲಿ ಜನೌಷಧಿ ಮೂಲಕ ಮಧ್ಯಂತರ ಪೂರೈಕೆಗೂ ನಾವು ಸನ್ನದ್ಧರಾಗಿದ್ದೇವೆ. ನಾಲ್ಕು ವಿಶೇಷ ತಂಡಗಳು ಹಗಲಿರುಳು ಶ್ರಮಿಸುತ್ತಿದ್ದು, ಇಡೀ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಚುರುಕುಗೊಳಿಸಿವೆ. ನಮ್ಮಲ್ಲಿ ದಾಸ್ತಾನು ಲಭ್ಯವಿದೆ, ಪ್ರಕ್ರಿಯೆ ಪಾರದರ್ಶಕವಾಗಿದೆ ಎಂಬುದು ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ನಾಯಕರಿಗೆ ತಿಳಿದಿರಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆರ್.ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷದವರಿಗೆ ಯಾವುದಾದರೂ ಖಾಯಿಲೆ ಇದ್ದರೆ ಒಮ್ಮೆ ನಮ್ಮ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ. ಆಗ ನಮ್ಮ ಸೇವೆ ಮತ್ತು ಔಷಧಿಗಳ ಲಭ್ಯತೆ ನಿಮ್ಮ ಮನಸ್ಸಿಗೆ ಅರಿವಾಗುತ್ತದೆ. ಸುಮ್ಮನೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಟ್ವೀಟ್(ಎಕ್ಸ್ ಪೋಸ್ಟ್) ಮಾಡುವ ಬದಲು, ಜನರ ಮಧ್ಯೆ ಬಂದು ಸತ್ಯ ನೋಡಿ. ನಿಮ್ಮ ಹತಾಶೆಗೆ ಸೂಕ್ತ ಚಿಕಿತ್ಸೆ ನಮ್ಮ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ. ಜನರ ಕಣ್ಣಿಗೆ ಮಂಕುಬೂದಿ ಎರಚುವ ನಿಮ್ಮ ವಿಫಲ ಪ್ರಯತ್ನಗಳನ್ನು ಇನ್ನಾದರೂ ನಿಲ್ಲಿಸಿ. ಬೇರೆಯವರ ರಾಜೀನಾಮೆ ಕೇಳುವ ಮುನ್ನ, ನೀವು ಹೇಳಿದ ಸರಣಿ ಸುಳ್ಳುಗಳಿಗೆ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ. ಸತ್ಯಕ್ಕೆ ಸಾವಿಲ್ಲ, ಬಿಜೆಪಿ ಸುಳ್ಳಿಗೆ ಉಳಿಗಾಲವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Feb 2026 12:33 am

ರಾಜ್ಯದ ಎಲ್ಲಾ ರಕ್ತ ಕೇಂದ್ರಗಳಿಗೆ ಮಾನ್ಯತೆ ಕಡ್ಡಾಯ: ಸರಕಾರ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ರಕ್ತ ಕೇಂದ್ರಗಳು ಆಸ್ಪತ್ರೆಗಳ ಮತ್ತು ಆರೋಗ್ಯ ಸೇವೆ ಒದಗಿಸುವವರಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಮಂಡಳಿ(ಎನ್‍ಎಬಿಎಚ್) ಮತ್ತು ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳಲ್ಲಿ(ಎನ್‍ಕ್ಯೂಎಎಸ್) ಮಾನ್ಯತೆಯನ್ನು ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರಿ ರಕ್ತ ಕೇಂದ್ರಗಳು ಎನ್‍ಕ್ಯೂಎಎಸ್ ಮಾನ್ಯತೆಯನ್ನು ಪಡೆಯಬೇಕು. ಸರಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ರಕ್ತ ಕೇಂದ್ರಗಳು ಎನ್‍ಎಬಿಎಚ್ ಅಥವಾ ಎನ್‍ಕ್ಯೂಎಎಸ್ ಮಾನ್ಯತೆಯನ್ನು ಪಡೆಯಬೇಕು. ಎಲ್ಲಾ ಖಾಸಗಿ ರಕ್ತ ಕೇಂದ್ರಗಳು ಎನ್‍ಎಬಿಎಚ್ ಮಾನ್ಯತೆಯನ್ನು ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಕ್ತ ಕೇಂದ್ರಗಳು, ಒಂದು ವರ್ಷದೊಳಗೆ ಮತ್ತು ಹೊಸದಾಗಿ ಪರವಾನಗಿ ಪಡೆಯುವ ರಕ್ತ ಕೇಂದ್ರಗಳು, ಪರವಾನಗಿ ಪಡೆದ ಎರಡು ವರ್ಷದೊಳಗಾಗಿ ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಸದರಿ ಮಾನ್ಯತೆಗೆ ತಗಲುವ ವೆಚ್ಚವನ್ನು ರಕ್ತ ಕೇಂದ್ರಗಳೇ ಭರಿಸಬೇಕು. ಆದೇಶದನ್ವಯ ಮಾನ್ಯತೆಯನ್ನು ಪಡೆಯದಿದ್ದಲ್ಲಿ, ರಕ್ತ ಕೆಂದ್ರದ ಪರವಾನಗಿಯನ್ನು ತಡೆಹಿಡಿಯಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ.

ವಾರ್ತಾ ಭಾರತಿ 19 Feb 2026 12:26 am

ನೆಲ-ಜಲ-ಭಾಷೆಗಾಗಿ ಪ್ರಾಣವನ್ನೇ ಮುಡುಪಾಗಿಟ್ಟವರು ಡಾ.ಎಂ.ಚಿದಾನಂದಮೂರ್ತಿ : ಹಂಪನಾ

ಬೆಂಗಳೂರು : ಕನ್ನಡ ನೆಲ-ಜಲ-ಭಾಷೆಯ ವಿಚಾರಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ಅಪರೂಪದ ಬರಹಗಾರ ಡಾ.ಎಂ. ಚಿದಾನಂದಮೂರ್ತಿ ಅವರು ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ವೈಚಾರಿಕತೆಗೆ ಕೊಟ್ಟ ಕೊಡುಗೆ ಅನನ್ಯವಾದದ್ದು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ತಿಳಿಸಿದ್ದಾರೆ. ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಡಾ.ಎಂ.ಚಿದಾನಂದಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿದಾನಂದಮೂರ್ತಿ ಅವರು ಕನ್ನಡ ಸಾಹಿತ್ಯಲೋಕಕ್ಕೆ ಕೊಟ್ಟ ಕೊಡುಗೆಯನ್ನು ಒಂದು ಹಿಡಿತದಲ್ಲಿ ಅಳತೆ ಮಾಡಲಾಗದು. ಸೃಜನಶೀಲ, ಸೃಜನೇತರ ಬರಹಗಳ ಜೊತೆ ಜೊತೆಗೆ ಅವರ ಸಂಶೋಧನಾ ವಿಚಾರ ವೈಖರಿಯು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಚಿದಾನಂದಮೂರ್ತಿ ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕೃತಿ ಸಂಶೋಧಕರ ಪಾಲಿಗೆ ಭಗವದ್ಗೀತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಪರಿಚಾರಿಕೆಗೆ ಚಿದಾನಂದಮೂರ್ತಿ ಅವರ ಕೊಡುಗೆ ಬಹಳ ದೊಡ್ಡದು. ಅವರೊಬ್ಬ ಒಳ್ಳೆಯ ಅಧ್ಯಾಪಕ. ಬರಹ ಮತ್ತು ಬದುಕನ್ನು ಒಂದೇ ಎಂದು ಭಾವಿಸಿದ ಅಪರೂಪದ ಚೈತನ್ಯ. ಅವರು ಕೊಟ್ಟ ಬೆಳಕು ಕನ್ನಡ ಸಾಹಿತ್ಯವನ್ನು ಬಹಳ ಕಾಲ ಬೆಳಗುತ್ತದೆ ಎಂದು ಹೇಳಿದರು. ಹಿರಿಯ ಲೇಖಕ ಡಾ.ಬಸವರಾಜ ಕಲ್ಗುಡಿ ಮಾತನಾಡಿ, ಡಾ.ಎಂ. ಚಿದಾನಂದಮೂರ್ತಿ ಅವರು ಬಹುಮುಖಿ ಸಂವೇದನೆ ಮತ್ತು ಬಹುಮುಖಿ ಚಿಂತನೆಯುಳ್ಳ ಅಪರೂಪದ ವ್ಯಕ್ತಿ. ಅವರು ಬರೆದ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದು, ಈಗ ನಾವು 15 ಸಂಪುಟಗಳಲ್ಲಿ ಅವರ ಕೃತಿಗಳನ್ನು ವಿಂಗಡಿಸಿದ್ದೇವೆ. ಆದರೆ ಅಪ್ರಕಟಿತವಾದ ಇನ್ನೂ ಬಹುದೊಡ್ಡ ಸಾಹಿತ್ಯ ಭಂಡಾರವೇ ಅವರ ಬಳಿ ಇದೆ. ಪುಸ್ತಕ ಪ್ರಾಧಿಕಾರ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಡಾ. ಚಿದಾನಂದಮೂರ್ತಿಯವರನ್ನು ಗೌರವಿಸುವ ಕೆಲಸ ಮಾಡಿದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದೆ. ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ ಹಾಗೂ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮಗಳಿಗೆ ದೊಡ್ಡಮಟ್ಟದ ಯಶಸ್ಸು ಸಿಕ್ಕಿದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸುತ್ತಿರುವ ಪುಸ್ತಕಗಳ ಮಾರಾಟ ಪ್ರಮಾಣವನ್ನು ಸಹ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇವೆ. ದೇವಾಲಯಗಳ ಹುಂಡಿಗಳಿಗೆ ಹಣಹಾಕುವ ಜನ ಪುಸ್ತಕಕೊಳ್ಳಲು ಹಿಂದುಮುಂದು ನೋಡುತ್ತಾರೆ. ಇಂತಹ ಭಾವನೆ ಬದಲಾಗಬೇಕು. ಮನೆಗೊಂದು ಪೂಜಾ ಕೊಠಡಿ ಇರುವಂತೆ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಎಂ.ಚಿದಾನಂದಮೂರ್ತಿ ಅವರ ಪುತ್ರ ವಿನಯ್ ಚಿದಾನಂದಮೂರ್ತಿ, ಪದ್ಮಶ್ರೀ ಪುರಸ್ಕøತ ಡಾ.ಸಿ.ಆರ್.ಚಂದ್ರಶೇಖರ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ನಿವೇದಿತ ಹೊನ್ನತ್ತಿ, ಟಿ.ಎಸ್.ಶ್ರೀಕಂಠಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಸಿ.ಕುಶಾಲ, ಲಕ್ಷ್ಮಣ ಕೊಡಸೆ, ಬಿ.ಎಚ್.ನಿರಗುಡಿ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Feb 2026 12:22 am

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ : ಪೊಲೀಸ್ ಹೊರಠಾಣೆ ಉದ್ಘಾಟನೆ

ಮಂಗಳೂರು : ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೀಸಲು ಪೊಲೀಸ್ ಹೊರಠಾಣೆಯನ್ನು ಮಂಗಳವಾರ ಉದ್ಘಾಟಿಸಿದರು. ವಿಮಾನ ನಿಲ್ದಾಣದ ನಿರ್ಗಮನ ಟೋಲ್ ಗೇಟ್‌ನ ಪಕ್ಕದಲ್ಲಿರುವ ಹೊರಠಾಣೆಯು ಯಾವುದೇ ಭದ್ರತೆ ಅಥವಾ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ನೆರವಾಗಲಿದೆ. ಈ ಉಪಕ್ರಮವು ವಿಮಾನ ನಿಲ್ದಾಣ ನಿರ್ವಹಣೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ , ವಿಮಾನ ನಿಲ್ದಾಣ ಭದ್ರತಾ ಗುಂಪು ಘಟಕ ಮತ್ತು ಮಂಗಳೂರು ನಗರ ಪೊಲೀಸರು ಸೇರಿದಂತೆ ವಿವಿಧ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವುದನ್ನು ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ , ಡಿಸಿಪಿ ರವಿಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಪೂರ್, ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Feb 2026 12:17 am

ರಾಜ್ಯ ಸರಕಾರ ಎಸ್‍ಐಆರ್ ವಿರುದ್ಧ ನಿರ್ಣಯ ತೆಗೆದುಕೊಳ್ಳಲು ಆಗ್ರಹ

ಬೆಂಗಳೂರು : ಮತದಾನದ ಹಕ್ಕು ಮತ್ತು ಪೌರತ್ವದ ಹಕ್ಕುಗಳನ್ನು ರಕ್ಷಿಸಲು ವಿಶೇಷ ತೀವ್ರ ಪರಿಷ್ಕರಣೆಯ (ಎಸ್‍ಐಆರ್) ವಿರುದ್ಧ ರಾಜ್ಯ ಸರಕಾರ ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ನಿರ್ಣಯವನ್ನು ಅಂಗೀಕರಿಸುವಂತೆ ನನ್ನ ಮತ, ನನ್ನ ಹಕ್ಕು ಸಂಘಟನೆ ಆಗ್ರಹಿಸಿದೆ. ಬುಧವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಎಐಸಿಸಿಟಿಯುನ ಕ್ಲಿಫ್ಟನ್ ರೊಝಾರಿಯೋ, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ನಾವೆದ್ದು ನಿಲ್ಲದಿದ್ದರೆ ಸಂಘಟನೆಯ ಮಮತಾ ಯಾಜಮಾನ್, ವಕೀಲ ವಿನಯ್ ಶ್ರೀನಿವಾಸ್, ಪಿಯುಸಿಎಲ್‍ನ ಐಶ್ವರ್ಯ, ಖಲೀಲ್ ಉಲ್ಲಾ, ನಿಶಾ ಗೂಳೂರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅಸಂವಿಧಾನಿಕ ಎಸ್‍ಐಆರ್ ಪ್ರಕ್ರಿಯೆಯಿಂದಾಗಿ ದೇಶಾದ್ಯಂತ ಕೋಟ್ಯಂತರ ಮತದಾರರು ತಮ್ಮ ಮತದಾನದ ಹಕ್ಕು ಮತ್ತು ಪೌರತ್ವದ ಹಕ್ಕನ್ನು ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆಯು ಶೀಘ್ರದಲ್ಲೇ ರಾಜ್ಯಕ್ಕೂ ಬರುವ ಸಾಧ್ಯತೆಯಿದೆ. ವಿರೋಧ ಪಕ್ಷಗಳು ಆಳುವ ಇತರ ರಾಜ್ಯ ಸರಕಾರಗಳು ತಮ್ಮ ಜನರಿಗೆ ರಕ್ಷಣೆ ನೀಡುತ್ತಿವೆ. ಆದರೆ ಕರ್ನಾಟಕ ಸರಕಾರ ಎಸ್‍ಐಆರ್ ಪ್ರಕ್ರಿಯೆಯಿಂದ ರಾಜ್ಯದ ಮಹಿಳೆಯರು, ಬಡ ಕಾರ್ಮಿಕರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕಿಗೆ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯಾದ್ಯಂತ 2-3 ತಿಂಗಳಿಂದ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದ್ದರೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಮತದಾರರ ಪಟ್ಟಿಗಳ ಮ್ಯಾಪಿಂಗ್ ಹೇಗೆ ನಡೆಯುತ್ತದೆ, ತಮ್ಮ ಹೆಸರುಗಳು ಸೇರ್ಪಡೆಯಾಗಲು ಮತ್ತು ಹೊರಗುಳಿಯದಂತೆ ನೋಡಿಕೊಳ್ಳಲು ಏನು ಮಾಡಬೇಕು, ಮ್ಯಾಪಿಂಗ್ ಪ್ರಕ್ರಿಯೆಯ ವೇಳಾಪಟ್ಟಿ ಏನು, ಬಿಎಲ್‍ಒ, ಎಇಆರ್‍ಒ ಗಳು, ಮತ್ತು ಇಆರ್‍ಒ ಗಳಿಗೆ ಮ್ಯಾಪಿಂಗ್ ಅಭ್ಯಾಸವನ್ನು ನಡೆಸಲು ಹೇಗೆ ತರಬೇತಿ, ಸೂಚನೆ ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೋರಾಟಗಾರರು ತಿಳಿಸಿದರು. 2026ರ ಫೆ.13ರ ಹೊತ್ತಿಗೆ ಕರ್ನಾಟಕದಲ್ಲಿ ಶೇ.67.2 ರಷ್ಟು ಮತದಾರರ ಪಟ್ಟಿ ಮ್ಯಾಪಿಂಗ್ ಕೆಲಸ ಮುಗಿದಿದೆ. ಆದರೆ, ಈ ಕೆಲಸ ಹೇಗೆ ನಡೆಯುತ್ತಿದೆ ಮತ್ತು ಅದರ ಪ್ರಗತಿ ಏನು ಎಂಬುದರ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಜನರಿಗೆ ಯಾವುದೇ ಮಾಹಿತಿ ನೀಡಿಲ್ಲ. ಕೋಟ್ಯಂತರ ಮತದಾರರ ಮೇಲೆ ಪರಿಣಾಮ ಬೀರುವ ಇಂತಹ ಪ್ರಮುಖ ವಿಷಯದಲ್ಲಿ ಪಾರದರ್ಶಕತೆ ಇಲ್ಲದಿರುವುದು, ಮಾಹಿತಿ ನೀಡಲು ನಿರಾಕರಿಸುತ್ತಿರುವುದು ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಮತ್ತು ಮುಖ್ಯ ಚುನಾವಣಾಧಿಕಾರಿಗಳು ಮ್ಯಾಪಿಂಗ್ ಕೆಲಸದಲ್ಲಿ ಮತದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಕೂಡಲೇ ನಾಗರಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಸಭೆ ಕರೆಯಬೇಕು. ಈ ಸಮಸ್ಯೆಗಳು ಬಗೆಹರಿಯುವವರೆಗೆ ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ಆರಂಭಿಸಲು ಬಿಡಬಾರದು. ಪ್ರಸ್ತುತ ನಡೆಯುತ್ತಿರುವ ಮ್ಯಾಪಿಂಗ್ ಕೆಲಸದ ಬಗ್ಗೆ ಜಿಲ್ಲಾವಾರು ಮತ್ತು ಬೂತ್‍ವಾರು ವಿವರಗಳನ್ನು ಪ್ರಕಟಿಸಬೇಕು. ಎಷ್ಟು ಜನರ ಹೆಸರುಗಳು ಸೇರ್ಪಡೆಯಾಗಿವೆ, ಎಷ್ಟು ಜನರ ಹೆಸರುಗಳು ಬಿಟ್ಟುಹೋಗಿವೆ ಎಂಬ ಮಾಹಿತಿ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು. ಹೆಸರು ಬಿಟ್ಟುಹೋಗಿದ್ದರೆ ಅದಕ್ಕೆ ಕಾರಣ ತಿಳಿಸಬೇಕು. ಸಂಬಂಧಿಸಿದ ಎಲ್ಲ ಅಧಿಕೃತ ಆದೇಶ ಮತ್ತು ಸುತ್ತೋಲೆಗಳನ್ನು ಜನರಿಗೆ ತಲುಪುವಂತೆ ಪ್ರಕಟಿಸಬೇಕು. ಎಸ್‍ಐಆರ್‍ನ ಮೊದಲ ಮತ್ತು ಎರಡನೇ ಹಂತದಲ್ಲಿ ಇತರ ರಾಜ್ಯಗಳು ಎದುರಿಸಿದ ತಪ್ಪುಗಳು ಇಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯಬೇಕು. ಸರಕಾರಿ ಆಡಿಟ್ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯ 'ಸಾಮಾಜಿಕ ಆಡಿಟ್' ನಡೆಸಲು ಅದೇಶ ನೀಡಬೇಕು ಎಂದು ಹೇಳಿದರು. ಎಸ್‍ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಅನೇಕ ಪ್ರಕರಣಗಳು ಬಾಕಿ ಇರುವುದರಿಂದ ತೀರ್ಪು ಬರುವವರೆಗೆ ರಾಜ್ಯದಲ್ಲಿ ಎಸ್‍ಐಆರ್ ಜಾರಿ ತಡೆಯಬೇಕು. ಮತದಾರರ ಹೆಸರುಗಳು ಅನಗತ್ಯವಾಗಿ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಲು, ನಾಗರಿಕ ಸಂಘಟನೆಗಳಿಗೆ, ರಾಜಕೀಯ ಪಕ್ಷಗಳ ಏಜೆಂಟ್‍ಗಳಿಗೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ವಾರ್ತಾ ಭಾರತಿ 19 Feb 2026 12:17 am

ತಾಯಿ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ: ಡಾ.ದಾಕ್ಷಾಯಿಣಿ ಅಪ್ಪ

ಹಾರಕೂಡ ಮಠದಲ್ಲಿ ಅವ್ವ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ 18 Feb 2026 11:58 pm

ವೈದ್ಯಕೀಯ ಸಂಸ್ಥೆಗಳಿಗೆ 2006ರಿಂದಲೇ ಎನ್‌ಪಿಎಸ್ ಅನ್ವಯಿಸಲು ಕೋರಿ ಅರ್ಜಿ; ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ರಾಜ್ಯದ ಸರಕಾರಿ ವೈದ್ಯಕೀಯ, ದಂತ ವೈದ್ಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 2020ರ ಬದಲಿಗೆ 2006ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ವಯಿಸಲಿದೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಾಕ ಡಾ. ಮುಹಮ್ಮದ್ ಆರಿಫ್ ಸೇರಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥ ವೈದ್ಯರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ 45 ಮಂದಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು. ಮನವಿ ಏನು? ರಾಜ್ಯ ಸರಕಾರ 2006ರಿಂದ ಎನ್‌ಪಿಎಸ್ ಅನುಷ್ಠಾನಗೊಳಿಸಿದೆ. 2016ರಲ್ಲಿ ಯೋಜನೆಯನ್ನು ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳು, ನಿಗಮ, ಮಂಡಳಿ, ಸೊಸೈಟಿಗಳು, ವಿವಿಗಳ ನೌಕರಿಗೂ ವಿಸ್ತರಿಸಲಾಗಿತ್ತು. ಆದರೆ, 2020ರ ಆಗಸ್ಟ್ 27ರಂದು ಆದೇಶ ಹೊರಡಿಸಿ, ಈ ಆದೇಶ ಹೊರಡಿಸಿದ ನಂತರದಿಂದ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಇದು ಕಾನೂನು ಬಾಹಿರವಾಗಿದ್ದು, 2020ರ ಆದೇಶ ರದ್ದುಪಡಿಸಬೇಕು. ರಾಜ್ಯದ ಸರಕಾರಿ ವೈದ್ಯಕೀಯ, ದಂತ ವೈದ್ಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 2006ರ ಏಪ್ರಿಲ್ 1ರಿಂದ ಎನ್‌ಪಿಎಸ್ ಅನ್ವಯವಾಗಲಿದೆ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಾರ್ತಾ ಭಾರತಿ 18 Feb 2026 11:53 pm

24 ನಾಗರಿಕ ನಿವೇಶನಗಳು ಕಾಂಗ್ರೆಸ್ ಕಚೇರಿಗಾಗಿ ಬಳಕೆ: ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ: ಪ್ರಹ್ಲಾದ್ ಜೋಶಿ ಗರಂ

ಬೆಂಗಳೂರು: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದರ ಬೆನ್ನಲ್ಲೆ ಸದ್ಯ ನಾಗರಿಕರಿಗೆ ಸಿಗಬೇಕಿದ್ದ ಎರಡು ಡಜನ್ ಸಿಎ ನಿವೇಶನಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದ್ದು, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು

ಒನ್ ಇ೦ಡಿಯ 18 Feb 2026 11:51 pm

ವಿಜಯನಗರ | ವಿಕಲಚೇತನ ಪ್ರವಾಸಿಗರ ಹಿತದೃಷ್ಟಿಯಿಂದ ಬ್ಯಾಟರಿಚಾಲಿತ ವಾಹನಗಳಿಗೆ ರ‍್ಯಾಂಪ್ ಅಳವಡಿಕೆ

ವಿಜಯನಗರ: ವಿಶ್ವ ಪರಂಪರೆ ಹಂಪಿಯ ವಿಜಯ ವಿಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ವಿದ್ಯುತ್ ಚಾಲಿತ ವಾಹನಗಳಿಗೆ ವಿಶೇಷಚೇತನ ಸ್ನೇಹಿಯಾಗಿಸಲು ವಿದ್ಯುತ್ ಚಾಲಿತ ವಾಹನಗಳಿಗೆ ಹಿಂಭಾಗದಲ್ಲಿ ಹೆಚ್ಚುವರಿಯಾಗಿ ರ‍್ಯಾಂಪ್ ಅಳವಡಿಸಲಾಗಿದೆ. ವಿಶೇಷಚೇತನರು ತಮ್ಮ ವೀಲ್ ಚೇರ್ ಗಳನ್ನು ಬಳಸಿ ಬ್ಯಾಟರಿಚಾಲಿತ ವಾಹನದಲ್ಲಿ ಕೂಡಲು ಅನುಕೂಲವಾಗಲಿದ್ದು. ಆ ಮೂಲಕ ಪ್ರವಾಸಿ ತಾಣವಾದ ವಿಜಯ ವಿಠಲ ದೇವಸ್ಥಾನ ಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ನೋಂಗ್ಜಾಯ್ ಮೊಹ್ಮದ್ ಅಲಿ ಅಕ್ರಂ ಷಾ ತಿಳಿಸಿದರು. ಹಂಪಿಯಲ್ಲಿ ವಿಶೇಷಚೇತನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ, ತಾಲೂಕು ಪಂಚಾಯತಿಯ ಇಒ ಅವರಿಗೆ 2018-2019 ನೇ ಆದಿಭಾರ ಶುಲ್ಕ ಯೋಜನೆಯ ಉಳಿಕೆ ಅನುದಾನದಲ್ಲಿ ರ‍್ಯಾಂಪ್ ಅಳವಡಿಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ 20 ವಾಹನಗಳ ಪೈಕಿ 6 ಬ್ಯಾಟರಿಚಾಲಿತ ವಾಹನಗಳಿಗೆ ಅಳವಡಿಸಲಾಗಿದ್ದು, ವಿಶೇಷಚೇತನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದರು. ಜಿಲ್ಲಾ ಪಂಚಾಯತ್ ಸಿಇಓ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವಿಶೇಷಚೇತನರಿಂದ ಭರಪೂರ ಮೆಚ್ಚಗೆ ವ್ಯಕ್ತವಾಗುತ್ತಿದೆ.

ವಾರ್ತಾ ಭಾರತಿ 18 Feb 2026 11:50 pm

ವಿಜಯನಗರ | ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ ಯೋಜನೆ: ಹತ್ತು ಸಾವಿರ ಫಲಾನುಭವಿಗಳು ನೋಂದಣಿ ಗುರಿ

ಜಿಲ್ಲಾ ಮಟ್ಟದ ಸಭೆಯಲ್ಲಿ ಡಿಸಿ ಅಭಿಪ್ರಾಯ

ವಾರ್ತಾ ಭಾರತಿ 18 Feb 2026 11:47 pm

ಜಮಖಂಡಿ-ಮೀರಜ್ ಹೆದ್ದಾರಿಯಲ್ಲಿ ಅಪಘಾತ; ಒಂದೇ ಕುಟುಂಬದ ಮೂವರ ಮೃತ್ಯು

ಬೆಳಗಾವಿ : ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದಾರುಣ ಅಂತ್ಯ ಕಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಪತಿ, ಪತ್ನಿ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಿರೇಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ ಕುಂದ್ರಾಳಿ (27) ಮತ್ತು ಮಗು ಆರಾಧ್ಯ ಕುಂದ್ರಾಳಿ (7) ಎಂದು ಗುರುತಿಸಲಾಗಿದೆ. ಮೂವರು ಮಹಾರಾಷ್ಟ್ರದ ಮೀರಜ್ ನಗರದಿಂದ ಜಮಖಂಡಿ ಕಡೆಗೆ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹಾರುಗೇರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲಾರಿ ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಪತ್ತೆ ಮಾಡುವ ಪ್ರಯತ್ನ ಮುಂದುವರಿದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ವಾರ್ತಾ ಭಾರತಿ 18 Feb 2026 11:40 pm

ಸರ್ಕಾರಿ ನೌಕರರ ಬೇಡಿಕೆಗಳು ಸರಕಾರದ ಮಟ್ಟದಲ್ಲಿ ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ : ಸಿ.ಎಸ್.ಷಡಾಕ್ಷರಿ

ಭಾಲ್ಕಿಯಲ್ಲಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಗೆ ಸನ್ಮಾನ

ವಾರ್ತಾ ಭಾರತಿ 18 Feb 2026 11:40 pm

8ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಭರ್ಜರಿ ಸುದ್ದಿ ಸಾಧ್ಯತೆ... 8th Pay Commission

8ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರಿ ನೌಕರರು ಸಿಹಿಸುದ್ದಿ ಸಿಗಲಿದೆ ಎಂದು ಕಾಯುತ್ತಿದ್ದಾರೆ. ಅದರಲ್ಲೂ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ವಿಚಾರದಲ್ಲಿ ತಮಗೆ ಸರ್ಕಾರದ ನಿರ್ಧಾರ ದೊಡ್ಡ ರಿಲ್ಯಾಕ್ಸ್ ನೀಡಬಹುದು ಎಂದು ಚಿಂತಿಸುತ್ತಿದ್ದರು. ಇಂತಹ ಸಮಯದಲ್ಲಿ 2026ರ ಜನವರಿ 1 ರಿಂದ ಅನ್ವಯ ಆಗುವಂತೆ 8ನೇ ಕೇಂದ್ರ ವೇತನ ಆಯೋಗ ಜಾರಿಗೆ ಬಂದಿತ್ತು, ಆದರೆ ಹೊಸ

ಒನ್ ಇ೦ಡಿಯ 18 Feb 2026 11:37 pm

ಮಹಿಳೆಯರಿಗೆ ಉಚಿತ ಬಸ್ `ಶಕ್ತಿ' ಯೋಜನೆ- ನಿಗಮಕ್ಕೆ ಸರ್ಕಾರ ನೀಡಬೇಕಾದ ಬಾಕಿ ಹಣವೆಷ್ಟು?: ಮಾಹಿತಿ ಕೇಳಿದೆ ಹೈಕೋರ್ಟ್

Karnataka High Court To State Government- ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಇದೀಗ ಶಕ್ತಿ ಯೋಜನೆ ವಿಚಾರವಾಗಿ ಸರ್ಕಾರದ ಬಳಿ ಮಾಹಿತಿ ಕೇಳಿದೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ಹೇಗೆ ಕೆಲಸ ಮಾಡುತ್ತಿದೆ? ಉಚಿತ ಟಿಕೆಟ್ ನ ಹಣ ಸರ್ಕಾರ ಯಾವ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ? ಎಷ್ಟು ಬಾಕಿ ಉಳಿಸಿಕೊಂಡಿದೆ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

ವಿಜಯ ಕರ್ನಾಟಕ 18 Feb 2026 11:32 pm

ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಲಿ: ಭೀಮಾ

ಬೀದರ್: ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಹಾಗೆಯೇ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಪ್ರತಿ ವರ್ಷ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಸಂಘದ ಸದಸ್ಯ ಭೀಮಾ ಅವರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರರಿಗೆ ಸರ್ಕಾರ ಮನೆಗಳು ಒದಗಿಸಬೇಕು. ನಮ್ಮ ಸಮುದಾಯದವರಿಗೆ ಮನೆ, ಜಾಗ ಇಲ್ಲ. ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಾಡಿಗೆ ಮನೆ ಸಿಗುವುದು ನಮಗೆ ಕಷ್ಟ ಇದೆ. ಬಾಡಿಗೆ ಮನೆ ನೀಡಿದರು ಕೂಡ ಮನೆ ಮಾಲೀಕರು ನಮ್ಮಿಂದ ಸಾಮಾನ್ಯ ಜನರು ನೀಡುವಕ್ಕಿಂತ ಹೆಚ್ಚಿನ ಬಾಡಿಗೆ ಕೇಳುತ್ತಾರೆ. ನಮಗೆ ಸೂರು ಇರದ ಕಾರಣ ಸರ್ಕಾರ ನಮಗೆ ಮನೆಗಳು ಕಟ್ಟಿ ಕೊಡಬೇಕು ಎಂದರು. ಚುನಾವಣೆ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 200 ಕೋಟಿ ರೂ. ಮಿಸಲಿಡುವುದಾಗಿ ಹೇಳಲಾಗಿತ್ತು. ಆದರೆ ಕಳೆದ ಎರಡು ವರ್ಷದಿಂದ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೂಡ ರಚಿಸುವುದಾಗಿ ಹೇಳಿದ್ದರು. ಅದು ಕೂಡ ಇಲ್ಲಿವರೆಗೆ ರಚಿಸಲಿಲ್ಲ. ನಾವು ಪದೇ ಪದೇ ಪತ್ರಿಕಾಗೋಷ್ಠಿ ನಡೆಸುವುದು, ಮನವಿ ಪತ್ರ ಸಲ್ಲಿಸುವುದರ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಹೇಶ್ ಗೊರನಾಳಕರ್ ಅವರು ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 200 ಕೋಟಿ ರೂ. ಮೀಸಲೀಡಲಾಗುವುದು ಎಂದು ಹೇಳಲಾಗಿತ್ತು. ಸಿದ್ದರಾಮಯ್ಯ ನವರು ಗ್ಯಾರಂಟಿ ಯೋಜನೆ ತಂದಿದ್ದಕ್ಕೆ ಸ್ವಾಗತಿಸಿ ಅಭಿನಂದನೆ ಹೇಳುತ್ತೇವೆ. ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯವು ಸಾರ್ವಜನಿಕ ಸಮುದಾಯದಿಂದ ತುಂಬಾ ದೂರ ಇದೆ. ಅವರನ್ನು ಅವರ ಕುಟುಂಬದವರೇ ಸಹಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನ ಲಿಂಗತ್ವ ಅಲ್ಪಸಂಖ್ಯಾತರರು ಇದ್ದಾರೆ. ಹಾಗಾಗಿ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಾಡಿ ಅವರ ಅಭಿವೃದ್ಧಿಗೆ ಸಹಕಾರವಾಗಬೇಕು. ಅವರಿಗೆ ಸ್ವಯಂ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಜಗದೀಶ್ವರ್ ಬಿರಾದಾರ್ ಅವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರರಿಗೆ ಸಮಾಜ ಸ್ವೀಕರಿಸುತ್ತಿಲ್ಲ. ಈ ಅಮಾನವಿಯತೆ ತಡೆಗಟ್ಟಲು ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ವಾರ್ತಾ ಭಾರತಿ 18 Feb 2026 11:29 pm

ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ: ಯುಗಾದಿ ಬಳಿಕ ಅವರಾಗಿಯೇ ಬಿಟ್ಟರೆ ಆಗುತ್ತೆ!

ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾಎ. ಅವರಾಗಿಯೇ ಬಿಟ್ಟರೆ ಮಾತ್ರ ಆಗುತ್ತದೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಆಯ್ತು, ಬಜೆಟ್‌ ಆಯ್ತು, ಯುಗಾದಿಯೂ ಆಗಲಿದೆ. ರಾಜಕೀಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಇನ್ನು ಮಳೆ ಬೆಳೆ ಕರ್ನಾಟಕಕ್ಕೆ ಉತ್ತಮವಾಗಿರಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 18 Feb 2026 11:24 pm

ವಿಬಿ-ಜಿ ರಾಮ ಜಿ ಕುರಿತು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ : ಶಾಸಕ ಸಿದ್ದು ಪಾಟೀಲ್

ಬೀದರ್ : ವಿಬಿ-ಜಿ ರಾಮ ಜಿ ಯೋಜನೆಯು ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಕಾರ್ಮಿಕ ಹಾಗೂ ಗ್ರಾಮೀಣ ಜನತೆಗೆ ನೇರ ಲಾಭ ನೀಡುವ ಉದ್ದೇಶ ಹೊಂದಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಿಲ್ ಬಗ್ಗೆ ಜನರನ್ನು ಉದ್ದೇಶ ಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದು, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬೀಳುತ್ತದೆ ಎಂಬ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಕಿಡಿ ಕಾರಿದರು. ಹುಮನಾಬಾದ್ ನ ಕ್ಷೇತ್ರದ ಸಿಂದಬಂದಗಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಮಂಡಲ ವತಿಯಿಂದ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ನಡೆಸಿದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಬಿಲ್‌ನಡಿ ಕಾರ್ಮಿಕ ಕೆಲಸದ ದಿನಗಳು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ತಂತ್ರಜ್ಞಾನ ಬಳಕೆಯ ಮೂಲಕ ಪಾರದರ್ಶಕತೆ ಹೆಚ್ಚಿಸಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಒದಗಿಸುವುದರ ಜೊತೆಗೆ, ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಸುಸೂತ್ರ ವ್ಯವಸ್ಥೆಯನ್ನು ಈ ಯೋಜನೆ ಮೂಲಕ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಗ್ರಾಮದ ಜನರ ಕುಂದುಕೊರತೆಗಳು ಆಲಿಸಿದ ಅವರು, ಸಮಸ್ಯೆಗಳು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಅನಿಲ್ ಪಸರ್ಗಿ , ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿಶ್ವನಾಥ್ ಮಾಡಗುಳ್, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅರುಣ್ ಬಾವಗಿ, ಸಂತೋಷ್ ಪಾಟೀಲ್, ಮಂಡಲ ಕಾರ್ಯದರ್ಶಿ ರವಿ ಹೊಸಳ್ಳಿ , ಗೋಪಾಲಕೃಷ್ಣ ಮೊಹಾಳೆ, ಪಕ್ಷದ ಮುಖಂಡರಾದ ಸೋಮು ಮರಖಲ್, ರಾಮರೆಡ್ಡಿ ಪಾಟೀಲ್, ರವಿ ನಿಜಾಂಪುರೆ, ನಾಗೇಶ್ ಒಂಟಿ, ವೈಜಿನಾಥ್ ನಿಂಗರೆಡ್ಡಿ , ಅಜಯ್ ಭೋವಿ ಹಾಗೂ ಕಂಟೆಪ್ಪ ನಿಂಗರೆಡ್ಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 18 Feb 2026 11:23 pm

ಡಾ. ತುಂಬೆ ಮೊಯ್ದೀನ್ ಗೆ Entrepreneur Middle Eastನ ʼThe 100 NRIʼś ಪಟ್ಟಿಯಲ್ಲಿ ಸ್ಥಾನ

ದುಬೈ: ತುಂಬೆ ಗ್ರೂಪ್ನ ಸಂಸ್ಥಾಪಕರಾದ ಡಾ. ತುಂಬೆ ಮೊಯ್ದೀನ್ ಅವರು Entrepreneur Middle Eastನ ಈ ವರ್ಷದ ಮಧ್ಯಪ್ರಾಚ್ಯದ ಪ್ರತಿಷ್ಠಿತ “The 100 NRIʼSʼ ” ಪಟ್ಟಿಯಲ್ಲಿಸ್ಥಾನ ಪಡೆದಿದ್ದಾರೆ. ವಾರ್ಷಿಕವಾಗಿ ಪ್ರಕಟವಾಗುವ ಈ ಪಟ್ಟಿಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 100 ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿಗಳನ್ನು ಗುರುತಿಸುತ್ತದೆ. ಪಟ್ಟಿಯಲ್ಲಿ ಝಕರಿಯಾ ಜೋಕಟ್ಟೆ, ಆಶಿಶ್ ಕೋಶಿ, ದೀಪಕ್ ಬಬಾನಿ, ಪಂಕಜ್ ಕುಂದ್ರ್, ಫೈಝಲ್ ಇ. ಕೊಟ್ಟಿಕೊಲ್ಲನ್, ಡಾ. ವಿವೇಕ್ ಒಬೆರಾಯ್ ಮತ್ತು ಪ್ರಶಾಂತ್ ಗೋಯೆಂಕಾ ಸೇರಿದಂತೆ ಅನೇಕ ಗಣ್ಯ ಉದ್ಯಮಿಗಳ ಹೆಸರಿವೆ. ದಿವಂಗತ ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಪುತ್ರರಾದ ಡಾ. ತುಂಬೆ ಮೊಯ್ದೀನ್ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಉನ್ನತ ಶಿಕ್ಷಣ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಮನ್ನಣೆ ಗಳಿಸಿದ್ದಾರೆ. 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. View this post on Instagram A post shared by Entrepreneur Middle East (@entmagazineme) 1997ರಲ್ಲಿ ಡಾ. ಮೊಯ್ದೀನ್ ಅವರು ತುಂಬೆ ಗ್ರೂಪ್ ಅನ್ನು ಸ್ಥಾಪಿಸಿದರು. ಮೆಡಿಕಲ್ ಎಜುಕೇಷನ್, ಆರೋಗ್ಯ ಸೇವೆಗಳು ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿಸ್ತರಿಸಿರುವ ಈ ಅಂತರ ರಾಷ್ಟ್ರೀಯ ಸಂಸ್ಥೆಯು ಈಗ ಗಮನಾರ್ಹವಾಗಿದೆ. 1998ರಲ್ಲಿ ಡಾ. ಮೊಯ್ದೀನ್ ಅವರು ಯುಎಇನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅಜ್ಮಾನ್ ಆಡಳಿತದಿಂದ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯರಾಗಿದ್ದಾರೆ. ಇಂದು ಅದು ದೇಶಾದ್ಯಂತ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ವೈದ್ಯಕೀಯ ಕೇಂದ್ರಗಳು ಮತ್ತು ಔಷಧಾಲಯಗಳ ಜಾಲವನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿ ಬೆಳೆದಿದೆ. ಡಾ. ಮೊಯ್ದೀನ್ ಅವರ ಸಾಧನೆಗಳನ್ನು ಫೋರ್ಬ್ಸ್ ಮಿಡಲ್ ಈಸ್ಟ್ ಮತ್ತು ಅರೇಬಿಯನ್ ಬಿಸಿನೆಸ್ ಸೇರಿದಂತೆ ಗೌರವಾನ್ವಿತ ಅಂತರರಾಷ್ಟ್ರೀಯ ಪ್ರಕಟಣೆಗಳು ಗುರುತಿಸಿವೆ. ಅವರು ಅಂತರರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಅಕಾಡೆಮಿ (ಐಎಂಎಸ್ಎ)ಯಿಂದ ಗೌರವ ಫೆಲೋಶಿಪ್ ಹಾಗೂ ಅಮಿಟಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ತುಂಬೆ ಗ್ರೂಪ್ ಸಂಸ್ಥೆಗಳು 100ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳು ಮತ್ತು ಆರೋಗ್ಯ ವೃತ್ತಿಪರರಿಗೆ ಸೇವೆ ಸಲ್ಲಿಸುತ್ತಿದ್ದು, ಸಂಶೋಧನೆ ಆಧಾರಿತ ಆರೋಗ್ಯ ರಕ್ಷಣಾ ಸೇವೆಗಳನ್ನು ನೀಡುತ್ತಿವೆ. ಡಾ. ಮೊಯ್ದೀನ್ ಅವರನ್ನು ಗಲ್ಫ್ ಪ್ರದೇಶದ ಅತ್ಯಂತ ಪ್ರಭಾವಶಾಲಿ ಅನಿವಾಸಿ ಭಾರತೀಯರಲ್ಲಿ ಒಬ್ಬರು. ಅವರನ್ನು ಬ್ಯಾರಿ ಸಮುದಾಯದ ಗೌರವಾನ್ವಿತ ಧ್ವನಿ ಹಾಗೂ ಪ್ರಮುಖ ಮುಸ್ಲಿಂ ಉದ್ಯಮಿ ಮತ್ತು ಶಿಕ್ಷಣತಜ್ಞ ಎಂದು ಪರಿಗಣಿಸಲಾಗಿದೆ.

ವಾರ್ತಾ ಭಾರತಿ 18 Feb 2026 11:12 pm

ಸಾರಿಗೆ ನಿಗಮಗಳ ನೌಕರರ 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಒಪ್ಪಿಗೆ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಧಿಕಾರಿ, ನೌಕರರ ಒಟ್ಟು 26 ತಿಂಗಳ ಹಿಂಬಾಕಿ ವೇತನ 1239.47 ಕೋಟಿ ರೂ.ಬಿಡುಗಡೆ ಮಾಡಲು ಸರಕಾರ ಒಪ್ಪಿಗೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸಮಿತಿಯ ಶಿಫಾರಸ್ಸಿನಂತೆ 2022ರ ಜ.1 ರಿಂದ 2023ರ ಫೆ.28ರವರೆಗೆ 14 ತಿಂಗಳ ವರೆಗಿನ ಹಿಂಬಾಕಿ ವೇತನ ನೀಡಲು ಒಪ್ಪಿಗೆ ನೀಡಿ, ತತ್ಸಂಬಂಧ ತಗಲುವ ವೆಚ್ಚ 718.93 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರಕಾರವು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ. ಉಳಿದ 24 ತಿಂಗಳಲ್ಲಿ 2020ರ ಜ.1 ರಿಂದ ಡಿ.31ರವರೆಗೆ 12 ತಿಂಗಳ ವೇತನ ಹಿಂಬಾಕಿ ಮೊತ್ತ 520.54 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ವೇತನ ಹೆಚ್ಚಳ : ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ 2025ರ ಎ.1 ರಿಂದ ಜಾರಿಗೆ ಬರುವಂತೆ ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಪರಿಷ್ಕರಿಸಬೇಕು ಎನ್ನುವ ಸಂಬಂಧ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ಮತ್ತು ಸಂಧಾನ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಮಿಕ ಸಂಘಟನೆಗಳು ಹಾಗೂ ಅಧಿಕಾರಿ, ನೌಕರ ಬಂಧುಗಳು ನಾವು ಜಾರಿಗೊಳಿಸಿರುವ ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಆದೇಶವನ್ನು ಒಪ್ಪಿಕೊಂಡು ಸಹಕರಿಸುವಂತೆ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 18 Feb 2026 11:10 pm

ಝಕರಿಯಾ ಜೋಕಟ್ಟೆಗೆ Entrepreneur Middle Eastನ ʼThe 100 NRIʼs ಪಟ್ಟಿಯಲ್ಲಿ ಸ್ಥಾನ

ಜುಬೈಲ್ (ಸೌದಿ ಅರೇಬಿಯ): ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಮೂಲದ ಉದ್ಯಮಿ ಹಾಗೂ ALMUZAIN ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಸ್ಥಾಪಕರಾದ ಝಕರಿಯಾ ಜೋಕಟ್ಟೆ ಅವರು Entrepreneur Middle Eastನ ಈ ವರ್ಷದ ಮಧ್ಯಪ್ರಾಚ್ಯದ ಪ್ರತಿಷ್ಠಿತ “The 100 NRIʼSʼ ” ಪಟ್ಟಿಯಲ್ಲಿಸ್ಥಾನ ಪಡೆದಿದ್ದಾರೆ. ಎಂಟ್ರಪ್ರೈನರ್ ಮಿಡ್ಲ್ ಈಸ್ಟ್ ಪ್ರಕಟಿಸುವ ವಾರ್ಷಿಕ ವಿಶೇಷ ಪಟ್ಟಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿರುವ 100 ಅತ್ಯುತ್ತಮ ಅನಿವಾಸಿ ಭಾರತೀಯ ಉದ್ಯಮಿಗಳನ್ನು ಗುರುತಿಸಲಾಗುತ್ತದೆ. ಈ ಪಟ್ಟಿಯಲ್ಲಿ ಝಕರಿಯಾ ಜೋಕಟ್ಟೆ ಅವರು ಸ್ಥಾನ ಪಡೆದಿದ್ದಾರೆ. ಝಕರಿಯಾ ಜೋಕಟ್ಟೆ ಅವರೊಂದಿಗೆ ಡಾ. ವಿವೇಕ್ ಒಬೆರಾಯ್, ಪ್ರಶಾಂತ್ ಗೋಯೆಂಕಾ, ಡಾ. ತುಂಬೆ ಮೊಯಿದೀನ್ ಹಾಗೂ ಫೈಝಲ್ ಇ. ಕೊಟ್ಟಿಕೊಲ್ಲನ್ ಸೇರಿದಂತೆ ಹಲವು ಪ್ರಮುಖ NRI ಉದ್ಯಮಿಗಳ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬ್ಯಾರಿ ಸಮುದಾಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರ ವಲಯದಲ್ಲಿಯೂ ಝಕರಿಯಾ ಜೋಕಟ್ಟೆ ಖ್ಯಾತರಾಗಿದ್ದಾರೆ. View this post on Instagram A post shared by Entrepreneur Middle East (@entmagazineme) ಝಕರಿಯಾ ಜೋಕಟ್ಟೆ ಅವರು ಮೇ 10, 1958ರಂದು ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆಯಲ್ಲಿ ಹಾಜಿ ಶೇಕುಂಞ ಮತ್ತು ಖತಿಜಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ತಮ್ಮ ಅಜ್ಜ ದಿವಂಗತ ಝಕರಿಯಾ ಹಾಜಿ ಅವರ ಹೆಸರನ್ನೇ ಅವರಿಗೆ ಇಡಲಾಗಿತ್ತು. ಗೇಣಿ ಗುತ್ತು ಕುಟುಂಬದವರಾದ ಅವರು ಈಗಿನ ಬಜ್ಪೆಯಲ್ಲಿ ಹೆಸರುವಾಸಿಯಾಗಿದ್ದರು. ಝಕರಿಯಾ ಅವರು ಪ್ರಸಿದ್ಧ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಪೋಷಕರು ಹಾಗೂ ಒಡಹುಟ್ಟಿದವರ ಜವಾಬ್ದಾರಿ ಹೊತ್ತುಕೊಂಡ ಅವರು ಮೊದಲಿಗೆ ಮನೆ–ಮನೆಗೆ ಬೆಲ್ಲ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದರು. ಬಳಿಕ 1971ರಲ್ಲಿ ನ್ಯೂ ಮಂಗಳೂರು ಬಂದರಿನಲ್ಲಿ ವೆಲ್ಡಿಂಗ್ ಸಹಾಯಕರಾಗಿ ಕೇವಲ 4 ರೂ.ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಇದೇ ಅನುಭವವು ಸೌದಿ ಮೂಲದ ಡ್ರೆಡ್ಜಿಂಗ್ ಕಂಪೆನಿಯಲ್ಲಿ ಅವಕಾಶ ಒದಗಿಸಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸಿಗೆ ದಾರಿ ಮಾಡಿಕೊಟ್ಟಿತು. ಸೌದಿ ಅರೇಬಿಯಾದ ಆರಂಭಿಕ ದಿನಗಳಲ್ಲಿ 21 ಮಹಡಿಗಳ ಕಟ್ಟಡಗಳಿಗೆ ಸಿಮೆಂಟ್ ಹೊರುವುದು, ರಸ್ತೆ ಕಾಂಕ್ರೀಟ್ ಕೆಲಸಗಳಲ್ಲಿ ಸಹಾಯ ಮಾಡುವುದು ಸೇರಿದಂತೆ ಕಠಿಣ ಕೆಲಸಗಳನ್ನು ಝಕರಿಯಾ ಅವರು ಮಾಡಿದರು. ಸವಾಲುಗಳ ನಡುವೆಯೂ ಹೊಸ ಕೌಶಲ್ಯಗಳನ್ನು ಕಲಿಯುತ್ತಾ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮುಂದುವರಿದರು. ನಂತರ ಡಚ್ ಕೈಗಾರಿಕಾ ಸೇವಾ ಕಂಪೆನಿಗೆ ಸೇರ್ಪಡೆಗೊಂಡ ಅವರು 500 ಅರ್ಜಿದಾರರಲ್ಲಿ ಆಯ್ಕೆಯಾದ 13 ಮಂದಿಯಲ್ಲಿ ಒಬ್ಬರಾಗಿದ್ದರು. ಆರು ತಿಂಗಳಲ್ಲಿ ಹಾಲೆಂಡ್ ನಲ್ಲಿ ತರಬೇತಿ ಪಡೆದು, ಮುಂದಿನ ಎರಡು ವರ್ಷಗಳಲ್ಲಿ ಐದು ಬಡ್ತಿಗಳನ್ನು ಗಳಿಸಿ ಸಂಸ್ಥೆಯ ಉನ್ನತ ಹುದ್ದೆ ತಲುಪಿದರು. ಈ ಅನುಭವವೇ 1996ರಲ್ಲಿ ALMUZAIN ಸಂಸ್ಥೆ ಸ್ಥಾಪಿಸಲು ಪ್ರೇರಣೆಯಾಯಿತು. ಇಂದು ಈ ಸಂಸ್ಥೆ ಸೌದಿ ಅರೇಬಿಯಾದ ಪೆಟ್ರೋಕೆಮಿಕಲ್ ಮತ್ತು ರಿಫೈನರಿ ವಲಯಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಕೈಗಾರಿಕಾ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ ALMUZAIN ಸಂಸ್ಥೆಯಲ್ಲಿ ಸುಮಾರು 7,000 ಗುತ್ತಿಗೆ ಕಾರ್ಮಿಕರು ಉದ್ಯೋಗದಲ್ಲಿದ್ದು, ಅವರಲ್ಲಿ ಹಲವರು ದೇಶದ ಕರಾವಳಿ ಭಾಗದವರೇ ಆಗಿದ್ದಾರೆ. 2026ರೊಳಗೆ ಸಂಸ್ಥೆಯು 15,000 ಉದ್ಯೋಗಿಗಳನ್ನು ಹೊಂದುವ ಗುರಿ ಹೊಂದಿದೆ. ಝಕರಿಯಾ ಜೋಕಟ್ಟೆ ಈಗಾಗಲೇ ಸುಮಾರು 1,500 ಕನ್ನಡಿಗರಿಗೆ ಉದ್ಯೋಗಾವ ಕಾಶ ಕಲ್ಪಿಸಿದ್ದು, 200ಕ್ಕೂ ಹೆಚ್ಚು ಕಂಪೆನಿಗಳಿಗೆ ಸಹಾಯ ಮಾಡಿದ್ದಾರೆ. ಉದ್ಯಮದ ಹೊರತಾಗಿಯೂ ಝಕರಿಯಾ ಜೋಕಟ್ಟೆ ಅವರು ಸೌದಿ ಅರೇಬಿಯಾದ ಅನಿವಾಸಿ ಭಾರತೀಯರ ಕಲ್ಯಾಣ ಹಾಗೂ ಮಹಿಳೆಯರ ಉದ್ಯೋಗಾವಕಾಶ ಹೆಚ್ಚಾಗುವಂತೆ ಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಝರಾ ಚಾರಿಟೇಬಲ್ ಫೌಂಡೇಶನ್ ಮೂಲಕ ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿ ರುವ ಅವರು ಮಂಗಳೂರಿನ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ ಖಾದಿಸಾ ಸ್ಥಾಪನೆಗೆ ಕೊಡುಗೆ ನೀಡಿರುವ ಅವರು ಹಿದಾಯ ಟ್ರಸ್ಟ್ ನ ಮಾಜಿ ಅಧ್ಯಕ್ಷರು. ಕೊಡುಗೈ ದಾನಿಯಾಗಿರುವ ಅವರಿಗೆ ಸ್ಟಾರ್ ಆಫ್ ಬ್ಯಾರೀಸ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಯಶಸ್ವಿ ಅನಿವಾಸಿ ಭಾರತೀಯ ಉದ್ಯಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಯುವಜನ ಶಿಕ್ಷಣ ಹಾಗೂ ಸಮುದಾಯ ಜಾಗೃತಿಗೆ ಒತ್ತು ನೀಡುವ ಅವರು ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಮುಸ್ಲಿಂ ಕುಟುಂಬಗಳು ಮಕ್ಕಳಿಗೆ ಧಾರ್ಮಿಕ ಹಾಗೂ ಜಾತ್ಯತೀತ ಶಿಕ್ಷಣ ಎರಡಕ್ಕೂ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುತ್ತಾರೆ. ಝಕರಿಯಾ ಜೋಕಟ್ಟೆ ಅವರಿಗೆ 2025ರಲ್ಲಿ ಅನಿವಾಸಿ ಭಾರತೀಯ ವಿಭಾಗದಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಾರ್ತಾ ಭಾರತಿ 18 Feb 2026 11:07 pm

ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವನ್ನೆ ಘಟಕವಾಗಿಸಲು ನಿರ್ಧಾರ : ಎಚ್.ಸಿ.ಮಹದೇವಪ್ಪ

ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಭಿನ್ನ ಅಭಿಪ್ರಾಯಗಳು ಬಲವಾಗಿ ಅಸ್ತಿತ್ವದಲ್ಲಿ ಇರುವ ಸಂದರ್ಭದಲ್ಲೇ ನಮ್ಮ ಸರಕಾರವು ಸುಪ್ರಿಂ ಕೋರ್ಟ್ ನ ಆದೇಶಕ್ಕೆ ಅನ್ವಯವಾಗಿ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 101 ಪರಿಶಿಷ್ಟ ಸಮುದಾಯಗಳನ್ನು ಎ.ಬಿ.ಸಿ ಎಂದು ವರ್ಗೀಕರಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ ನಂತರದಲ್ಲಿ ಇನ್ನಷ್ಟು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಈ ಬಗ್ಗೆ ವಿವಿಧ ಪರಿಶಿಷ್ಟ ಜಾತಿಯ ಯುವಕರು ಮತ್ತು ತಜ್ಞರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ, ಮತ್ತೆ ಕೆಲವರು ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ನ್ಯಾಯದ ಪ್ರಶ್ನೆ ಬಂದಾಗ, ಸಮಚಿತ್ತವಾಗಿ ಎಲ್ಲವನ್ನೂ ಕೇಳಿ, ಪರಾಮರ್ಶಿಸಿ, ನ್ಯಾಯವನ್ನು ನಿರ್ಧರಿಸಬೇಕಾದ್ದು ಯಾವುದೇ ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ ಎಂಬ ಸಂಗತಿಯನ್ನು ನಾನು ಸದಾ ನಂಬುತ್ತೇನೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ನೇಮಕಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಹಲವು ವಿದ್ಯಾರ್ಥಿಗಳು ಮತ್ತು ಯುವಕರು ಎತ್ತಿರುವ ತಾಂತ್ರಿಕ ಸವಾಲುಗಳು ನ್ಯಾಯಯುತವಾಗಿದ್ದು, ಒಳ ಮೀಸಲಾತಿಯ ಸಂದರ್ಭದಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.  ಈಗ ಒಳ ಮೀಸಲಾತಿ ಹಂಚಿಕೆಯಲ್ಲಿ ಎ.ಬಿ.ಸಿ ಎಂದು ವಿಭಾಗ ಮಾಡಿ, ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ವಿಷಯ ವಿಭಾಗವಾರು (Department wise recruitment) ನೇಮಕಾತಿ ಸಂದರ್ಭದಲ್ಲಿ, ಒಂದೊಂದೇ ಹುದ್ದೆಗಳು ಇರುವೆಡೆ ಕೇವಲ ಒಳ ಮೀಸಲಾತಿ ಗುಂಪಿನ ಎ ವರ್ಗಕ್ಕೆ ಮಾತ್ರವೇ ಉದ್ಯೋಗ ದೊರೆತು, ಮಿಕ್ಕ ಎರಡೂ ವರ್ಗವು ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೀಗಾಗಿ ನ್ಯಾಯ ಹಂಚಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಹಂಚಿಕೆ ಮಾಡಲಾಗಿರುವ ಒಳ ಮೀಸಲಾತಿಯ ಮೂಲ ಆಶಯಕ್ಕೇ ಇಲ್ಲಿ ಧಕ್ಕೆ ಆಗುತ್ತಿದ್ದು ಇದನ್ನು ಸರಿಪಡಿಸಬೇಕೆಂಬುದು ಬಿ ಮತ್ತು ಸಿ ವರ್ಗದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಬೇಡಿಕೆ ಆಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಆಗ ಮೂರೂ ವರ್ಗಗಳಿಗೂ ಕೂಡ ಅವಕಾಶ ದೊರೆಯುತ್ತದೆ ಎಂಬುದು ಪರಿಶಿಷ್ಟ ಸಮುದಾಯಗಳ ಬೇಡಿಕೆ ಆಗಿದ್ದು, ಅದು ನ್ಯಾಯ ಸಮ್ಮತವೂ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಹೀಗಾಗಿ ಸಂಪುಟ ಉಪ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜನರ ಉದ್ಯೋಗ ಭವಿಷ್ಯಕ್ಕೆ ನ್ಯಾಯಯುತವಾಗಿ ಅನುಕೂಲ ಆಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಘಟಕವಾಗಿಸುವ ಬಗ್ಗೆ ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳ ರೂಪುರೇಷೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸಮಾನವಾದ ನ್ಯಾಯ ಹಂಚಿಕೆಗೆ ಪರ್ಯಾಯ ಇಲ್ಲದ ಕಾರಣದಿಂದ ಇದೇ ಮಾರ್ಗದ ಅನುಸರಣೆಯು ಸೂಕ್ತವಾಗಿದ್ದು ಯಾರಿಗೂ ತೊಂದರೆ ಆಗದಂತೆ ಪರಿಶಿಷ್ಟ ಸಮುದಾಯಗಳ ಸಮಾನ ನ್ಯಾಯ ಹಂಚಿಕೆಗೆ ಸರಕಾರ ಬದ್ಧವಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 11:06 pm

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್ ಏರಿಕೆ ಆಗುವ ಸಾಧ್ಯತೆ, ಕಾರಣ ಇಲ್ಲಿದೆ... Strait Of Hormuz

ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು, ಬೆಳ್ಳಿ ಬೆಲೆ ಮುಗಿಲು ಮುಟ್ಟಿದ್ದಕ್ಕೆ ಕಳೆದ ಕೆಲವು ದಿನಗಳಿಂದ ಜನರು ಚಿಂತೆ ಮಾಡುವಂತೆ ಆಗಿತ್ತು. ಆದರೆ ಇದೀಗ ಚಿನ್ನ &ಬೆಳ್ಳಿ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿದು ಬೀಳುತ್ತಿದೆ. ಇದಕ್ಕೆಲ್ಲಾ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಭೀತಿ ಕಾರಣ ಎನ್ನಲಾಗಿತ್ತು, ಹೀಗಿದ್ದಾಗ ಎಲ್ಲಾ ಸರಿ

ಒನ್ ಇ೦ಡಿಯ 18 Feb 2026 11:05 pm

ಸಿಂಧನೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶಕ್ಕೆ; ಐವರ ವಿರುದ್ಧ ಪ್ರಕರಣ ದಾಖಲು

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಬರುವ ಕುರಿ ಸಂತೆ ಮಾರುಕಟ್ಟೆ ಆವರಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆಯ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು 120 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಐವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ದಾಖಲಾತಿಗಳಿಲ್ಲದೇ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಒಂದು ಲಾರಿಯಿಂದ ಮತ್ತೊಂದಿಗೆ ಲಾರಿಗೆ ಲೋಡ್ ಮಾಡಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 120 ಕ್ವಿಂಟಲ್ ತೂಕದ ಬಾಯಿಕಟ್ಟಿದ ಚೀಲ ಹಾಗೂ ಅಕ್ರಮ ಸಾಗಾಣಿಕೆಗೆ ಬಳಕೆಯಾದ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆಹಾರ ನಿರೀಕ್ಷಕ ಹನುಮೇಶ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಇಮಾಮ್‌ಸಾಬ್, ಗುರುರಾಜ್ ಶೆಟ್ಟಿ ಪೋತ್ನಾಳ, ಲಾರಿ ಚಾಲಕ ಮಿರಜಾ ಖಾಸೀಂಉಲ್‌ಹಖ್ ಹಾಗೂ ಎರಡು ಲಾರಿಗಳ ಮಾಲಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 18 Feb 2026 11:03 pm

ರಾಯಚೂರು | ಜೆಡಿಎಸ್‌ ಮುಖಂಡರ ಮೇಲೆ ಸುಳ್ಳು ಪ್ರಕರಣ ಆರೋಪ: ಪ್ರತಿಭಟನೆ

ರಾಯಚೂರು: ಜೆಡಿಎಸ್ ಮುಖಂಡರ ವಿರುದ್ಧ ಸುಳ್ಳು ಹಾಗೂ ರಾಜಕಿಯ ಪ್ರೇರಿತ ಪ್ರಕರಣವನ್ನು ದಾಖಲು ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಗಂಜ್‌ ವೃತ್ತದ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಎಸ್ ಪಿ ಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ ವಿರುದ್ದ ಕಾಂಗ್ರೆಸ್ ಮುಖಂಡ ಜಿ.ತಿಮ್ಮಾರೆಡ್ಡಿ ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆಮೂಲಕ ಮುಂದಿನ ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧಿಸದಂತೆ ಭಯ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು. ಕೆಲ ಯುವಕರನ್ನು ಬಳಸಿಕೊಂಡು ಬಿ ತಿಮ್ಮಾರೆಡ್ಡಿ ಅವರು ಸುಳ್ಳು ದೂರುಗಳು ದಾಖಲಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಜೆಡಿಎಸ್ ಮುಖಂಡರ ಮೇಲೆ ನಿರಂತರವಾಗಿ ಸುಳ್ಳು ದೂರುಗಳು ದಾಖಲಿಸುತ್ತಿದ್ದು, ಮುಂದಿನ ಮಹಾ ನಗರ ಪಾಲಿಕೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ, ಮಾನಸಿಕವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುಳ್ಳು ದೂರುಗಳನ್ನು ದಾಖಲಿಸಲು ಕಾಂಗ್ರೆಸ್ ಮುಖಂಡರ ತಂಡ ಪೋಲಿಸರ ಮೇಲೆ ಒತ್ತಡ ಹಾಕುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದರು. ಜಿಲ್ಲೆಯಲ್ಲಿ ಮಟಕಾ, ಅಕ್ರಮ ಮರಳು, ಗಾಂಜಾ ನಡೆಯುತ್ತಿದ್ದು ತಡೆಗೆ ಪೋಲಿಸರು ವಿಫಲರಾಗಿದ್ದಾರೆ. ಇಂತಹವುಗಳಿಗೆ ಕಡಿವಾಣ ಹಾಕದೇ ಸುಳ್ಳು ಪ್ರಕರಣ ದಾಖಲಿಸುವಲ್ಲಿ ನಿರತರಾಗಿದ್ದ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಶಂಕರ ವಕೀಲ, ರಾಮನಗೌಡ ಏಗನೂರು, ಸಣ್ಣ ನರಸಿಂಹ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ನರಸಪ್ಪ, ಜಂಬುನಾಥ ಯಾದವ್, ಎಸ್ ರಾಜು, ಈರಣ್ಣ ಯಾದವ್ ಇದ್ದರು.

ವಾರ್ತಾ ಭಾರತಿ 18 Feb 2026 10:52 pm

T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶಿಸಿದೆ. ಆಡಿದ 4 ಪಂದ್ಯಗಳಲ್ಲಿ ಒಂದು ಗೆಲುವಿನ ಸವಿಯೊಂದಿಗೆ ನೆದರ್ಲೆಂಡ್ ತಂಡ ಈ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ. ಬುಧವಾರ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಇದಕ್ಕುತ್ತರವಾಗಿ ನೆದರ್ಲೆಂಡ್ ತಂಡ ಅಷ್ಟೇ ಓವರ್ ಗಳು ಮುಗಿದಾಗ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಲಷ್ಟೇ ಶಕ್ತವಾಯಿತು. ()ಗೆಲ್ಲಲು ಸ್ಪರ್ಧಾತ್ಮಕ ಗುರಿ ಪಡೆದ ನೆದರ್ಲೆಂಡ್ ತಂಡ ನಿಧಾನಗತಿಯ ಆರಂಭ ಪಡೆಯಿತು. ಪವರ್ ಪ್ಲೇನಲ್ಲಿ 6 ರನ್ ನಂತೆ ಗಳಿಸಿದ ಮಿಚೆಲ್ ಲೆವಿಟ್(24) ಮತ್ತು ಮ್ಯಾಕ್ಸ್ ಒಡೌಡ್(20) ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಬಾಸ್ ಡಿ ಲೀಡ್ (33) ಮತ್ತು ಕೋಲಿನ್ ಆ್ಯಕರ್ ಮನ್ (23) ರನ್ ಗಳಿಕೆಗೆ ವೇಗ ನೀಡಿದರು. ಅಂತಿಮ ಹಂತದಲ್ಲಿ ಝ್ಯಾಕ್ ಲಯನ್(26) ಮತ್ತು ನೋಚ್ ಕ್ರೋಸ್ (ನಾಟೌಟ್ 25) ಅಂತಿಮ ಹಂತದಲ್ಲಿ ಉತ್ತಮ ಪ್ರಯತ್ನ ನಡೆಸಿದರೂ ಭಾರತದ ಬೌಲರ್ ಗಳು ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ಓವರ್ ನಲ್ಲೇ ಅನ್ನು ಖಾತೆ ತೆರೆವ ಮುನ್ನವೇ ಕಳೆದುಕೊಂಡಿತು. ಒಂದು ಹಂತದಲ್ಲಿ ಭಾರತ ತಂಡ8 ಓವರ್ ನಲ್ಲಿ 69 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಶಿವಂ ದುಬೆ(66) ಅವರ ಅರ್ಧಶತಕದಿಂದಾಗಿ ತಂಡ ಉತ್ತಮ ಮೊತ್ತ ಕಲೆ ಹಾಕುವಂತಾಯಿತು. 31 ಎಸೆತಗಳನ್ನು ಎದುರಿಸದ ಅವರು 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಗಳನ್ನು ಬಾರಿಸಿದರು. ಸೂರ್ಯಕುಮಾರ್ ಯಾದವ್(34), ತಿಲಕ್ ವರ್ಮಾ(31) ಮತ್ತು ಹಾರ್ದಿಕ್ ಪಾಂಡ್ಯ(30) ತಂಡಕ್ಕೆ ಉಪಯುಕ್ತ ಯೋಗದಾನ ನೀಡಿದರು. ಅರ್ಧಶತಕದೊಂದಿಗೆ 2 ವಿಕೆಟ್ ಸಹ ಪಡೆದ ಶಿವಂ ದುಬೆ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 193/6, ಶಿವಂ ದುಬೆ 66(31), ಸೂರ್ಯಕುಮಾರ್ ಯಾದವ್ 34(28), ತಿಲಕ್ ವರ್ಮಾ 31(27), ಹಾರ್ದಿಕ್ ಪಾಂಡ್ಯ 30(21), ಲೋಗನ್ ವ್ಯಾನ್ ಬೀಕ್ 56ಕ್ಕೆ 3, ಆರ್ಯನ್ ದತ್ 19ಕ್ಕೆ 2, ಕೈಲ್ ಕ್ಲೈನ್ 38ಕ್ಕೆ 1. ನೆದರ್ಲೆಂಡ್ 20 ಓವರ್ ಗಳಲ್ಲಿ 176/7, ಬಾಸ್ ಡಿ ಲೀಡ್ 33(23), ಕೋಲಿನ್ ಆ್ಯಕರ್ ಮನ್ 23(15), ಝ್ಯಾಕ್ ಲಯನ್ ಕ್ಯಾಚೆ 26(16), ನೋ ಕ್ರೋಸ್ ನಾಟೌಟ್ 25(12), ವರುಣ್ ಚಕ್ರವರ್ತಿ 14ಕ್ಕೆ 3, ಶಿವಂ ದುಬೆ 35ಕ್ಕೆ 2, ಬುಮ್ರಾ 17ಕ್ಕೆ 1.

ವಿಜಯ ಕರ್ನಾಟಕ 18 Feb 2026 10:51 pm

ನೈಜೀರಿಯಾ| ಗಣಿಯಲ್ಲಿ ಸ್ಫೋಟ; 38 ಮಂದಿ ಮೃತ್ಯು

ಅಬುಜ, ಫೆ.18: ನೈಜೀರಿಯಾದ ಪ್ಲ್ಯಾಟ್ಯೂ ರಾಜ್ಯದ ಬಷರ್ ಜಿಲ್ಲೆಯ ಸೀಸದ ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದು ಇತರ 27 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ. ಗಣಿಯ ಆಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಣಿ ಕುಸಿದಿದೆ. ಕನಿಷ್ಠ 38 ಮಂದಿ ಮೃತಪಟ್ಟಿದ್ದು ಗಾಯಗೊಂಡಿದ್ದ 27 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 18 Feb 2026 10:46 pm

ಜಪಾನ್ ಪ್ರಧಾನಿಯಾಗಿ ಸನೇ ಟಕೈಚಿ ಮರು ನೇಮಕ

ಟೋಕಿಯೊ, ಫೆ.18: ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ 10 ದಿನಗಳ ಬಳಿಕ ಜಪಾನ್ ಸಂಸತ್ತಿನ ಕೆಳಮನೆಯು ಸನೆ ಟಕೈಚಿ ಅವರನ್ನು ಬುಧವಾರ ದೇಶದ ಪ್ರಧಾನಿಯಾಗಿ ಮರು ನೇಮಕಗೊಳಿಸಿದೆ. ಜಪಾನ್‍ನ ಮೊದಲ ಮಹಿಳಾ ಪ್ರಧಾನಿಯಾಗಿ ಕಳೆದ ಅಕ್ಟೋಬರ್‌ನಲ್ಲಿ ನೇಮಕಗೊಂಡಿದ್ದ 64 ವರ್ಷದ ಟಕೈಚಿ, ಫೆಬ್ರವರಿ 8ರಂದು ಸಂಸತ್ತಿನ ಕೆಳಮನೆಗೆ ನಡೆದಿದ್ದ ಚುನಾವಣೆಯಲ್ಲಿ ತಮ್ಮ ಪಕ್ಷ ಮೂರನೇ ಎರಡು ಬಹುಮತ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವಾರ್ತಾ ಭಾರತಿ 18 Feb 2026 10:42 pm

ಸ್ತನ ಹಿಡಿಯುವುದು, ಪೈಜಾಮದ ದಾರ ಎಳೆಯುವುದು ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 17: ಸ್ತನ ಹಿಡಿಯುವುದು ಹಾಗೂ ಪೈಜಾಮದ ದಾರವನ್ನು ಎಳೆಯುವುದು ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಕೇವಲ ‘ಅತ್ಯಾಚಾರಕ್ಕೆ ನಡೆಸಿದ ಸಿದ್ಧತೆ’ ಎಂಬ ಅಲಹಾಬಾದ್ ಉಚ್ಚ ನ್ಯಾಯಾಲಯದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯ ಅವರನ್ನು ಒಳಗೊಂಡ ಪೀಠ, ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಿರ ತತ್ವಗಳ ತಪ್ಪಾದ ಅನ್ವಯದ ಕಾರಣದಿಂದಾಗಿ ಈ ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ಮರು ದಾಖಲಿಸುವಂತೆ ಸೂಚಿಸಿತು.

ವಾರ್ತಾ ಭಾರತಿ 18 Feb 2026 10:39 pm

ಸಂಚಾರ ಅಡ್ಡಿ, ನಮಾಝ್ ನಡುವೆ ನಂಟು ಕಲ್ಪಿಸಿ ವೀಡಿಯೊ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಹೊಸದಿಲ್ಲಿ, ಫೆ. 17: ಜಮ್ಮು ಹಾಗೂ ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆಯನ್ನು ಟ್ರಕ್ ಚಾಲಕರೊಬ್ಬರು ನಮಾಝ್ ಮಾಡುವುದಕ್ಕೆ ತಪ್ಪಾಗಿ ನಂಟು ಕಲ್ಪಿಸುವ ಪರಿಶೀಲಿಸದ ವೀಡಿಯೊವನ್ನು ಪ್ರಸಾರ ಮಾಡಿರುವುದಕ್ಕೆ ಸುದ್ದಿ ಪ್ರಸಾರ ಹಾಗೂ ಡಿಜಿಟಲ್ ಗುಣಮಟ್ಟಗಳ ಪ್ರಾಧಿಕಾರ ಝೀ ನ್ಯೂಸ್‌ಗೆ 1 ಲಕ್ಷ ರೂ. ತಂಡ ವಿಧಿಸಿದೆ. ಮುಸ್ಲಿಂ ಟ್ರಕ್ ಚಾಲಕನೊಬ್ಬ ಪ್ರಾರ್ಥನೆ ಮಾಡಲು ಹೆದ್ದಾರಿಯ ಮಧ್ಯದಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪ್ರತಿಪಾದಿಸುವ ವೀಡಿಯೊವನ್ನು ಚಾನೆಲ್ ಪ್ರಸಾರ ಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ, ಸತ್ಯ ಶೋಧನೆ ಹಾಗೂ ಸಂಚಾರ ಸಲಹೆಗಳ ಪ್ರಕಾರ, ತೀವ್ರ ಹವಾಮಾನ ವೈಪರಿತ್ಯ ಹಾಗೂ ಭೂಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಝೀ ಟಿವಿಯು ದಿನನಿತ್ಯದ ಸಂಚಾರ ಅಡಚಣೆಯನ್ನು ಕೋಮವಾದೀಕರಿಸಿತು. ಪರಿಶೀಲಿಸದ ಸಾಮಾಜಿಕ ಮಾಧ್ಯಮದ ವೀಡಿಯೊ ತುಣಕನ್ನು ಕಾರಣವೆಂದು ಪ್ರಸಾರ ಮಾಡಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಝೀ ನ್ಯೂಸ್, ಪ್ರಸಾರದ ಸಂದರ್ಭ ವೀಡಿಯೊ ವೈರಲ್ ಆಗಿತ್ತು ಹಾಗೂ ಪರಿಶೀಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಸಾಮಾಜಿಕ ಮಾಧ್ಯಮದ ಅಂಶವನ್ನು ವರದಿ ಮಾಡಿರುವುದಾಗಿ ಝೀ ನ್ಯೂಸ್ ಒಪ್ಪಿಕೊಂಡಿದೆ. ಅಲ್ಲದೆ, ನಕಲಿ ಎಂದು ಕಂಡು ಬಂದ ಕೂಡಲೇ ವೀಡಿಯೊವನ್ನು ಅಳಿಸಲಾಗಿದೆ ಎಂದು ಅದು ತಿಳಿಸಿದೆ. ಪ್ರಸಾರಕರು ಪರಿಶೀಲಿಸದ ಸಾಮಾಜಿಕ ಮಾಧ್ಯಮದ ವಿಷಯವನ್ನು ಬಳಸಿರುವುದು ಗಂಭೀರ ಲೋಪವಾಗಿದೆ ಹಾಗೂ ಇದು ನೀತಿ ಸಂಹಿತೆ ಅಡಿಯಲ್ಲಿ ನಿಖರತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಡಿಜಿಟಲ್ ಮಾನದಂಡ ಪ್ರಾಧಿಕಾರ ಅಭಿಪ್ರಾಯಿಸಿದೆ.

ವಾರ್ತಾ ಭಾರತಿ 18 Feb 2026 10:37 pm

Bengaluru | ʼನಾನು ಸತ್ತರೆ ನಿನ್ನ ನೋಡಿಕೊಳ್ಳುವರು ಯಾರುʼ ಎಂದು ಪತ್ನಿಯ ಹತ್ಯೆಗೈದ ಇಸ್ರೋ ನಿವೃತ್ತ ನೌಕರ

ಬೆಂಗಳೂರು : ಇಸ್ರೋ ನಿವೃತ್ತ ನೌಕರನೊಬ್ಬ ತನ್ನ ಪತ್ನಿಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಾಥಮಿಕ ವಿಚಾರಣೆ ವೇಳೆ ‘ನಾನು ಸತ್ತರೆ ನಿನ್ನ ನೋಡಿಕೊಳ್ಳುವರು ಯಾರು’ ಎನ್ನುವ ಭೀತಿಯಿಂದ ಕೃತ್ಯವೆಸಗಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದ ಸಂಧ್ಯಾಶ್ರೀ (65) ಪತಿಯಂದಲೇ ಕೊಲೆಯಾದವರು. ಮೂಲತಃ ಆಂಧ್ರಪ್ರದೇಶದ ವಿಜಯವಾಡ ಮೂಲದ ನಾಗೇಶ್ವರ್ ರಾವ್ (72) ಇಸ್ರೋ ನಿವೃತ್ತ ನೌಕರ ಆಗಿದ್ದಾರೆ. ಹಲವು ವರ್ಷಗಳಿಂದ ಪತ್ನಿ ಸಂಧ್ಯಾಶ್ರೀ ಅವರೊಂದಿಗೆ ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳವಾಗಿದೆ. ಕೋಪದಲ್ಲಿ ತಾಳ್ಮೆ ಕಳೆದುಕೊಂಡ ನಾಗೇಶ್ವರ್ ರಾವ್ ಟವಲ್‍ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಾಗೇಶ್ವರ್ ರಾವ್ ಯೋಚಿಸಿ ವಿಫಲಗೊಂಡು ಪತ್ನಿ ಕೊಲೆ ಮಾಡಿರುವ ವಿಷಯವನ್ನು ಪಕ್ಕದ ಮನೆಗೆ ಕರೆ ಮಾಡಿ ತಿಳಿಸಿದ್ದಾನೆ. ನೆರೆಮನೆ ನಿವಾಸಿ ಬಂದು ನೋಡಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ನಾಗೇಶ್ವರ್ ರಾವ್‍ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ. ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ. ನಾಗಲೇಶ್ವರ ರಾವ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 10:36 pm

ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದ ಉಕ್ರೇನ್ | Ukraine And Russia

ಉಕ್ರೇನ್ ಈಗ ರೊಚ್ಚಿಗೆದ್ದು, ರಷ್ಯಾ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದು ಕೂತಿದೆ. ತಮ್ಮ ಮೇಲೆ ಈ ರೀತಿ ಘೋರವಾಗಿ ದಾಳಿ ಮಾಡುತ್ತಿರುವ ರಷ್ಯಾಗೆ ಹೇಗಾದರೂ ಮಾಡಿ ಸೂಕ್ತ ಪಾಠ ಕಲಿಸಬೇಕು, ಆ ಮೂಲಕ ರಿವೇಂಜ್ ತೆಗೆದುಕೊಳ್ಳಬೇಕು ಎಂಬುದು ಉಕ್ರೇನ್ ಪ್ಲಾನ್. ಆದರೆ ಪದೇ ಪದೇ ಉಕ್ರೇನ್‌ನ ಈ ಪ್ಲಾನ್ ಕೈಕೊಡುತ್ತಿದೆ. ಇಷ್ಟೆಲ್ಲದರ ನಡುವೆ ಒತ್ತಡದ ಪರಿಣಾಮ ರಷ್ಯಾ

ಒನ್ ಇ೦ಡಿಯ 18 Feb 2026 10:36 pm

ರಣಜಿ ಟ್ರೋಫಿ ಮೊದಲ ಸೆಮಿಫೈನಲ್: ಕರ್ನಾಟಕಕ್ಕೆ 802 ರನ್‌ಗಳ ಬೃಹತ್ ಮುನ್ನಡೆ

ಲಕ್ನೋ, ಫೆ. 18: ರಣಜಿ ಟ್ರೋಫಿ ಮೊದಲ ಸೆಮಿಫೈನಲ್‌ನ ನಾಲ್ಕನೇ ದಿನವಾದ ಬುಧವಾರ ಉತ್ತರಾಖಂಡದ ವಿರುದ್ಧ ಕರ್ನಾಟಕ ಸಂಪೂರ್ಣ ಮೇಲುಗೈ ಸಾಧಿಸಿದೆ. ದಿನದಾಟದ ಕೊನೆಯಲ್ಲಿ ಕರ್ನಾಟಕ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 299 ರನ್ ಗಳಿಸಿದೆ ಹಾಗೂ ಒಟ್ಟಾರೆ 802 ರನ್‌ಗಳ ಬೃಹತ್ ಮುನ್ನಡೆಯಲ್ಲಿದೆ. ಬುಧವಾರ ಉತ್ತರಾಖಂಡವು ತನ್ನ ಮೊದಲ ಇನಿಂಗ್ಸನ್ನು ಐದು ವಿಕೆಟ್‌ಗಳ ನಷ್ಟಕ್ಕೆ 149 ಇದ್ದಲ್ಲಿಂದ ಮುಂದುವರಿಸಿತು. 52 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಲಕ್ಷ್ಯ ರೈಚಂದಾನಿ 55 ರನ್ ಗಳಿಸಿ ನಿರ್ಗಮಿಸಿದರು. 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಸೌರಭ್ ರಾವತ್ ಕೂಡ 14 ರನ್ ಗಳಿಸಿ ಬೇಗನೇ ನಿರ್ಗಮಿಸಿದರು. ಜಗದೀಶ ಸುಚಿತ್ 21 ರನ್‌ಗಳ ದೇಣಿಗೆಯನ್ನು ನೀಡಿದರು. ಕೊನೆಯಲ್ಲಿ ಪ್ರತಿಹೋರಾಟದ ನೇತೃತ್ವವನ್ನು ವಹಿಸಿಕೊಂಡ ಆದಿತ್ಯ ರಾವತ್ 45 ರನ್ ಗಳಿಸಿ ಔಟಾಗದೆ ಉಳಿದರು. ಕರ್ನಾಟಕದ ಪರವಾಗಿ ವಿದ್ಯಾಧರ ಪಾಟೀಲ್ ಮತ್ತು ವಿಜಯಕುಮಾರ್ ವೈಶಾಖ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಶ್ರೇಯಸ್ ಗೋಪಾಲ್ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಬಳಿಕ, ಕರ್ನಾಟಕವು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದ ಕೊನೆಯ ವೇಳೆಗೆ ರವಿಚಂದ್ರನ್ ಸ್ಮರಣ್‌ರ ಶತಕದ ನೆರವಿನಿಂದ ಆರು ವಿಕೆಟ್‌ಗಳ ನಷ್ಟಕ್ಕೆ 299 ರನ್ ಗಳಿಸಿತು. ಕೃತಿಕ್ ಕೃಷ್ಣ 52 ರನ್‌ಗಳನ್ನು ಗಳಿಸಿದರೆ, ಕೆ.ಎಲ್. ರಾಹುಲ್ 70 ರನ್‌ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಉತ್ತರಾಖಂಡದ ಪರವಾಗಿ ಅಭಯ್ ನೇಗಿ ಮತ್ತು ಮಯಾಂಕ್ ಮಿಶ್ರಾ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಕರ್ನಾಟಕವು ತನ್ನ ಮೊದಲ ಇನಿಂಗ್ಸ್‌ನಲ್ಲಿ ನಾಯಕ ದೇವದತ್ತ ಪಡಿಕ್ಕಲ್‌ರ 232 ರನ್‌ಗಳ ನೆರವಿನಿಂದ 736 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದೆ. ಈಗ ಅದು ಒಟ್ಟಾರೆ 802 ರನ್‌ಗಳ ಬೃಹತ್ ಮುನ್ನಡೆಯಲ್ಲಿದೆ.

ವಾರ್ತಾ ಭಾರತಿ 18 Feb 2026 10:29 pm

ಕೋಝಿಕ್ಕೋಡ್ ಮೂಲದ ಕಂಪನಿ ಸಿಬ್ಬಂದಿಗೆ ಕೋಟ್ಯಾಂತರ ರೂ. ಮೌಲ್ಯದ ಉಡುಗೊರೆ ನೀಡಿದೆ

ಕೋಝಿಕ್ಕೋಡ್: ನಿಷ್ಠಾವಂತ ಉದ್ಯೋಗಿಗಳನ್ನು ಗೌರವಿಸುವ ವಿಚಾರದಲ್ಲಿ ಕೇರಳ ಮೂಲದ 'ಹೈಲೈಟ್ ಗ್ರೂಪ್' ಹೊಸ ಇತಿಹಾಸ ಬರೆದಿದೆ. ತನ್ನ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂಸ್ಥೆಯು ತನ್ನ ಸಿಬ್ಬಂದಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಉದ್ಯೋಗಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: ರೇಂಜ್ ರೋವರ್ ನಿಂದ ಕ್ರೆಟಾವರೆಗೆ ಬಿಸಿನೆಸ್ ಲೈನ್

ಒನ್ ಇ೦ಡಿಯ 18 Feb 2026 10:29 pm

ಟಿ20 ವಿಶ್ವಕಪ್| ನಮೀಬಿಯ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು

ಕೊಲಂಬೊ, ಫೆ. 18: ನಮೀಬಿಯ ವಿರುದ್ಧದ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬುಧವಾರ 102 ರನ್‌ಗಳ ಭರ್ಜರಿ ಅಂತರದಿಂದ ಗೆದ್ದಿದೆ ಹಾಗೂ ಆ ಮೂಲಕ ಸೂಪರ್ ಎಂಟು ಹಂತಕ್ಕೆ ತೇರ್ಗಡೆಗೊಂಡಿದೆ. ಪಾಕಿಸ್ತಾನವು ಸೂಪರ್ 8ಕ್ಕೆ ಅರ್ಹತೆ ಗಳಿಸಿದ ಕೊನೆಯ ತಂಡವಾಗಿದೆ. ಸಾಹಿಬ್‌ಝಾದ ಫರ್ಹಾನ್ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕದ ಮೂಲಕ ಪಾಕಿಸ್ತಾನದ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಹಾಗೂ ಪಾಕಿಸ್ತಾನದ ಸ್ಪಿನ್ನರ್‌ಗಳು ಶಿಸ್ತುಬದ್ಧ ಬೌಲಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಫರ್ಹಾನ್ 58 ಎಸೆತಗಳಲ್ಲಿ 100 ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಗೆಲ್ಲಲು 20 ಓವರ್‌ಗಳಲ್ಲಿ 200 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದ ನಮೀಬಿಯ ತಂಡವು 17.3 ಓವರ್‌ಗಳಲ್ಲಿ 97 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ, ಆರಂಭಿಕ ಬ್ಯಾಟರ್ ಲೋರನ್ ಸ್ಟೀನ್‌ಕಂಪ್ (22 ಎಸೆತಗಳಲ್ಲಿ 23 ರನ್) ಮತ್ತು ಅಲೆಕ್ಸಾಂಡರ್ ಬಸಿಂಗ್ ವೋಲ್ಶೆಂಕ್ (20 ಎಸೆತಗಳಲ್ಲಿ 20 ರನ್)ರನ್ನು ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳಿಗೆ ಎರಡಂಕಿಯ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಪರವಾಗಿ ಶದಬ್ ಖಾನ್ 19 ರನ್‌ಗಳನ್ನು ಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರೆ, ಉಸ್ಮಾನ್ ತಾರಿಖ್ 16 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಇದಕ್ಕೂ ಮೊದಲು, ಟಾಸ್ ಗೆದ್ದ ಪಾಕಿಸ್ತಾನ ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು ಹಾಗೂ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿತು. ಫರ್ಹಾನ್ 38 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಆದರೆ, ನಂತರ ಕೇವಲ 20 ಎಸೆತಗಳಲ್ಲಿ ಶತಕವನ್ನು ತಲುಪಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಫರ್ಹಾನ್ ಪುರುಷರ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ಎರಡನೇ ಕ್ರಿಕೆಟಿಗನಾದರು. ಇದಕ್ಕೂ ಮೊದಲು ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿರುವ ಪಾಕಿಸ್ತಾನದ ಆಟಗಾರನೆಂದರೆ ಅಹ್ಮದ್ ಶೆಹ್ಝಾದ್. ಅವರು 2014ರಲ್ಲಿ ಮೀರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಫರ್ಹಾನ್‌ರ ಇನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳಿದ್ದವು. ಅವರು ನಾಯಕ ಸಲ್ಮಾನ್ ಅಲಿ ಅಘ (23 ಎಸೆತಗಳಲ್ಲಿ 38 ರನ್) ಮತ್ತು ಶದಬ್ ಖಾನ್ (22 ಎಸೆತಗಳಲ್ಲಿ 36 ರನ್ ಔಟಾಗದೆ) ಜೊತೆಗೆ ಕ್ರಮವಾಗಿ 67 ಮತ್ತು 81 ರನ್‌ಗಳ ಜೊತೆಯಾಟವಾಡಿದರು.

ವಾರ್ತಾ ಭಾರತಿ 18 Feb 2026 10:26 pm

ಪಶ್ಚಿಮ ಏಶ್ಯಾಕ್ಕೆ ಅಮೆರಿಕದ 50ಕ್ಕೂ ಹೆಚ್ಚು ಯುದ್ದವಿಮಾನ ನಿಯೋಜನೆ: ವರದಿ

ವಾಷಿಂಗ್ಟನ್, ಫೆ.18: ಇರಾನ್‍ನೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಪಶ್ಚಿಮ ಏಶ್ಯಾದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಅಮೆರಿಕ ಹೆಚ್ಚಿಸಿದ್ದು 50ಕ್ಕೂ ಹೆಚ್ಚು ಯುದ್ದ ವಿಮಾನಗಳನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹೊಸದಾಗಿ ಸಮರಾಭ್ಯಾಸ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕಳೆದ 24 ಗಂಟೆಗಳೊಳಗೆ ಅಮೆರಿಕ 50ಕ್ಕೂ ಅಧಿಕ ಯುದ್ದ ವಿಮಾನಗಳನ್ನು ಪಶ್ಚಿಮ ಏಶ್ಯಾದತ್ತ ರವಾನಿಸಿದೆ. ಎಫ್-16, ಎಫ್-22 ಮತ್ತು ಎಫ್-35 ಮುಂತಾದ ಅತ್ಯಾಧುನಿಕ ಯುದ್ದ ವಿಮಾನಗಳು ಇದರಲ್ಲಿ ಸೇರಿವೆ ಎಂದು ಅಮೆರಿಕದ ಮೂಲಗಳನ್ನು ಉಲ್ಲೇಖಿಸಿ `ಜೆರುಸಲೇಂ ಪೋಸ್ಟ್ ' ವರದಿ ಮಾಡಿದೆ. ಅಮೆರಿಕದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‍ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ `ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನಾಪಡೆಯನ್ನು ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷರು ಹೇಳುತ್ತಲೇ ಬಂದಿದ್ದಾರೆ. ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಗೂ ಕೆಲವೊಮ್ಮೆ ಮತ್ತೆ ಮೇಲೇಳದಷ್ಟು ಬಲವಾದ ಹೊಡೆತ ಬೀಳಬಹುದು' ಎಂದು ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 18 Feb 2026 10:24 pm

ಉಕ್ರೇನ್ ಮೇಲೆ ಟ್ರಂಪ್ ಅನಗತ್ಯ ಒತ್ತಡ ಹೇರುತ್ತಿದ್ದಾರೆ : ವೊಲೊದಿಮಿರ್ ಝೆಲೆನ್‍ಸ್ಕಿ

ಕೀವ್, ಫೆ.18: ರಶ್ಯದೊಂದಿಗೆ ಶಾಂತಿ ಮಾತುಕತೆಯಲ್ಲಿ ಕೆಲವು ರಿಯಾಯಿತಿಗಳನ್ನು ನೀಡಲು ಉಕ್ರೇನ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಬುಧವಾರ ಹೇಳಿದ್ದು, ಹೆಚ್ಚಿನ ಪ್ರದೇಶಗಳನ್ನು ಬಿಟ್ಟುಕೊಡಲು ಉಕ್ರೇನಿಯನ್ನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಹೊಂದಾಣಿಕೆ ಮಾಡುವಂತೆ ಟ್ರಂಪ್ ಪದೇ ಪದೇ ಉಕ್ರೇನ್‍ಗೆ ಆಗ್ರಹಿಸುವುದು ಸರಿಯಲ್ಲ. ರಶ್ಯದ ಮೇಲೆಯೂ ಅವರು ಒತ್ತಡ ಹೇರಬೇಕು ಎಂದು ಝೆಲೆನ್‍ಸ್ಕಿ ಆಗ್ರಹಿಸಿರುವುದಾಗಿ `ಆಕ್ಸಿಯೊಸ್' ವರದಿ ಮಾಡಿದೆ. ಒಪ್ಪಂದದತ್ತ ಉಕ್ರೇನ್ ತ್ವರಿತವಾಗಿ ಸಾಗಬೇಕು. ಯುದ್ದ ನಿಲ್ಲಬೇಕಾದರೆ ಉಕ್ರೇನ್ ವೇಗವಾಗಿ ಮಾತುಕತೆ ನಡೆಸಬೇಕು ಎಂಬ ಟ್ರಂಪ್ ಹೇಳಿಕೆಗೆ ಝೆಲೆನ್‍ಸ್ಕಿ `ಇದು ಅವರ ತಂತ್ರಗಳು. ನಿರ್ಧಾರವಲ್ಲ ಎಂದು ಭಾವಿಸುತ್ತೇನೆ' ಎಂದು ಪ್ರತಿಕ್ರಿಯಿಸಿದರು. ರಶ್ಯಕ್ಕಿಂತ ಉಕ್ರೇನ್‍ನ ಮೇಲೆ ಒತ್ತಡ ಹೇರುವುದು ರಾಜಕೀಯವಾಗಿ ಅಮೆರಿಕಕ್ಕೆ ಸುಲಭವಾಗಿರಬಹುದು. ಆದರೆ ತಾನು ಒತ್ತಡಕ್ಕೆ ಬಾಗುವುದಿಲ್ಲ. ಪೂರ್ವ ಡೊನ್ಬಾಸ್ ವಲಯದಲ್ಲಿ ಹೆಚ್ಚುವರಿ ಪ್ರದೇಶವನ್ನು ಉಕ್ರೇನ್ ಬಿಟ್ಟುಕೊಡಬೇಕೆಂಬ ಯಾವುದೇ ಪ್ರಸ್ತಾಪವನ್ನು ಸ್ಥಳೀಯರು ತಿರಸ್ಕರಿಸುತ್ತಾರೆ. ಭಾವನಾತ್ಮಕವಾಗಿ ಅಲ್ಲಿನ ಜನರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರು ಅಮೆರಿಕವನ್ನು ಕ್ಷಮಿಸುವುದಿಲ್ಲ. ರಶ್ಯ ಈಗಾಗಲೇ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಮೀರಿ ಇನ್ನಷ್ಟು ಭೂಮಿಯನ್ನು ಉಕ್ರೇನಿಯನ್ನರು ಏಕೆ ಒಪ್ಪಿಸಬೇಕು ಎಂದು ಅರ್ಥವಾಗುತ್ತಿಲ್ಲ. ಇದು ನಮ್ಮ ದೇಶದ ಭಾಗವಾಗಿದೆ. ಇವರು ನಮ್ಮ ಪ್ರಜೆಗಳು, ನಮ್ಮ ಧ್ವಜ, ನಮ್ಮ ಭೂಮಿ' ಎಂದು ಝೆಲೆನ್‍ಸ್ಕಿ ಹೇಳಿದ್ದು ಪ್ರಸ್ತುತ ಮುಂಚೂಣಿಯಲ್ಲಿ ಯುದ್ದವನ್ನು ಸ್ಥಗಿತಗೊಳಿಸುವ ಶಾಂತಿ ಒಪ್ಪಂದವು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಂಗೀಕರಿಸಲ್ಪಟ್ಟರೆ ಸ್ವೀಕಾರಾರ್ಹವಾಗಿರುತ್ತದೆ ಎಂದಿದ್ದಾರೆ.

ವಾರ್ತಾ ಭಾರತಿ 18 Feb 2026 10:20 pm

ತಾಲೂಕು ಘೋಷಣೆಗೆ ಆಗ್ರಹಿಸಿ ಮುದಗಲ್ ಬಂದ್

ಲಿಂಗಸುಗೂರು: ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಬುಧುವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ,ಕೆಲಕಾಲ ರಸ್ತೆ ತಡೆ ನಡೆಸಿದರು. ಬಂದ್ ಕರೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸದಸ್ಯ ಅಶೋಕಗೌಡ ಪಾಟೀಲ್, ಪಟ್ಟಣ ಸುತ್ತ ಮುತ್ತಲಿನ 60 ಗ್ರಾಮಗಳು, 18 ತಾಂಡಾಗಳಿಗೆ ಕೇಂದ್ರ ಬಿಂದುವಾಗಿದ್ದು, ಎರಡು ರಾಜ್ಯ ಹೆದ್ದಾರಿ ಹೊಂದಿದೆ. ತಾಲೂಕು ಕೇಂದ್ರವಾಗಲು ಬೇಕಾದ ಮೂಲ ಅರ್ಹತೆ ಹೊಂದಿದ್ದು, ಪುರಸಭೆ, ಕಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಪ್ರಸಾರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಟ್ರಜರಿ ಆಫೀಸ್, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡ ತಹಸಿಲ್ ಕಚೇರಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳು ಇಲ್ಲಿವೆ. ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಈ ಹಿಂದೆ ಹುಂಡೆಕಾರ್, ಗದ್ದಿಗೌಡರ್, ವಾಸುದೇವ ಸಮಿತಿಗಳು ಪಟ್ಟಣ ತಾಲೂಕು ಕೇಂದ್ರವಾಗಲು ಯೋಗ್ಯವಾಗಿದ್ದು,ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ದಿ.ಎಂ.ಗಂಗಣ್ಣನವರ ನೇತೃತ್ವದಲ್ಲಿ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಸ್ವಾಭಿಮಾನಿ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ವ್ಯಾಪಾರಸ್ಥರ ಸಂಘ,ಕಾರ್ಮಿಕ ಸಂಘಟನೆ, ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬಂದ್ ಗೆ ಬೆಂಬಲಿಸಿದರು. ಮನವಿ ಸ್ವೀಕರಿಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಕಾಂಗ್ರೆಸ್ ಸರಕಾರ ಮುದಗಲ್ ಅನ್ನು ಹೊಸ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ಹಾಗೂ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಅನುಧಾನ ಮೀಸಲಿಡಬೇಕು ಎಂದು ಈಗಾಗಲೇ ಅಧಿವೇಶನದಲ್ಲಿ ಹಲವು ಬಾರಿ ಪ್ರಸ್ತಾಪಿಸಿದರೂ ಸರಕಾರ ಕಿಂಚಿತ್ತೂ ಗಮನಹರಿಸಿಲ್ಲ. ಬಜೆಟ್ ಅಧೀವೇಶನಕ್ಕೂ ಮುಂಚೆ ಹೋರಾಟಗಾರ ಜತೆ ನಾನು ಕೂಡಾ ಭಾಗವಹಿಸಿ ಮುಖ್ಯಮಂತ್ರಿಗಳಲ್ಲಿ ಹಾಗೂ ಕಂದಾಯ ಸಚಿವರಲ್ಲಿ ಮನವಿಗೂ ಸಿದ್ದ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪುರುರಾಜಸಿಂಗ್ ಸೊಲಂಕಿ, ಕೃಷ್ಣಾ ಚಲುವಾದಿ, ಮೈಬೂಬಸಾಬ, ಕಡ್ಡಿಪುಡಿ, ಶರಣಪ್ಪ ಕಟ್ಟಿಮನಿ, ಮೌನೇಶ ಶಿವನಗುತ್ತಿ, ರಹೀಮ್ ಷಾ, ಬಸವರಾಜ ಬಂಕ ದಮನಿ ಸೇರಿ ಇತರರು ಇದ್ದರು.

ವಾರ್ತಾ ಭಾರತಿ 18 Feb 2026 10:20 pm

T20 World Cup- ಸೂಪರ್ 8 ಹಂತಕ್ಕೆ ವೇದಿಕೆ ಸಿದ್ಧ; ಟೀಂ ಇಂಡಿಯಾ ಪಂದ್ಯಗಳು ಯಾವಾಗ? ಹೀಗಿದೆ ವೇಳಾಪಟ್ಟಿ

ಐಸಿಸಿ ನ ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಾ ಬಂದಿದ್ದು ನಾಲ್ಕೂ ಬಣಗಳ ಮೊದಲೆರಡು ಸ್ಥಾನಿಗಳು ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೀಗಾಗಿ ಸೂಪರ್ 8 ಹಂತದ ಯೂ ಬಿಡುಗಡೆಯಾಗಿದೆ. ಎ ಬಣದಿಂದ ಪ್ರಥಮ ಸ್ಥಾನಿಯಾಗಿ ಭಾರತ ತಂಡ ಮತ್ತು ದ್ವಿತೀಯ ಸ್ಥಾನಿಯಾಗಿ ಪಾಕಿಸ್ತಾನ ಸೂಪರ್ 8 ಹಂತಕ್ಕೇರಿವೆ. ಅದೇ ರೀತಿಯ ಬಿ ಗುಂಪಿನಿಂದ ಕ್ರಮವಾಗಿ ಶ್ರೀಲಂಕಾ, ಜಿಂಬಾಬ್ವೆ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಗಳು ಮೊದಲೆರಡು ಸ್ಥಾನಗಳಲ್ಲಿ ಸೂಪರ್ 8 ಹಂತಕ್ಕೇರಿ ನಿಂತಿವೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ತಂಡವಾಗಿರುವ . ಇದೀಗ ಸೂಪರ್ 8 ಹಂತಕ್ಕೇರಿದ 8 ತಂಡಗಳನ್ನು 2 ಬಣಗಳಲ್ಲಿ ವಿಂಗಡಿಸಲಾಗಿದೆ. ಎಕ್ಸ್ ಬಣದಲ್ಲಿ ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳಿವೆ. ಅದೇ ರೀತಿ ವೈ ಬಣದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಇರಲಿವೆ. ಪ್ರತಿಯೊಂದು ತಂಡ ತನ್ನ ಬಣದಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ ಆಡಬೇಕಿದೆ. ಅಂದರೆ ಸೂಪರ್ 8 ಹಂತದಲ್ಲಿ ಪ್ರತಿಯೊಂದು ತಂಡಕ್ಕೂ 3 ಪಂದ್ಯಗಳು ಸಿಗಲಿವೆ. ಬಣದಲ್ಲಿ ಮೊದಲೆರಡು ಸ್ಥಾನ ಪಡೆದವರು ಸೆಮಿಫೈನಲ್ ಪ್ರವೇಶಿಸಲಿದ್ದಾರೆ. ಎ ಬಣದಲ್ಲಿ ಪ್ರಥಮ ಸ್ಥಾನಿಯಾಗಿರುವ ಭಾರತ ತಂಡ ದಕ್ಷಿಣ ಆಫ್ರಿಕಾ, ಜಿಂಬಾಬ್ನೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ. () ಸೂಪರ್ 8 ಹಂತದ ವೇಳಾಪಟ್ಟಿ ದಿನಾಂಕ ಪಂದ್ಯ ಸಮಯ ಸ್ಥಳ ಪೆಬ್ರವರಿ 21 ಶನಿವಾರ ನ್ಯೂಜಿಲೆಂಡ್ Vs ಪಾಕಿಸ್ತಾನ ಸಂಜೆ 7.00 ಕೊಲಂಬೊ ಫೆಬ್ರವರಿ 22 ಭಾನುವಾರ ಶ್ರೀಲಂಕಾ Vs ಇಂಗ್ಲೆಂಡ್ ಮಧ್ಯಾಹ್ನ 3.00 ಕ್ಯಾಂಡಿ * ಫೆಬ್ರವರಿ 22 ಭಾನುವಾರ ಭಾರತ Vs ದಕ್ಷಿಣ ಆಫ್ರಿಕಾ ಸಂಜೆ 7.00 ಅಹ್ಮದಾಬಾದ್ ಫೆಬ್ರವರಿ 23 ಸೋಮವಾರ ವೆಸ್ಟ್ ಇಂಡೀಸ್ Vs ಜಿಂಬಾಬ್ವೆ ಸಂಜೆ 7.00 ಮುಂಬೈ ಫೆಬ್ರವರಿ 24 ಮಂಗಳವಾರ ಇಂಗ್ಲೆಂಡ್ Vs ಪಾಕಿಸ್ತಾನ ಸಂಜೆ 7.00 ಕ್ಯಾಂಡಿ ಫೆಬ್ರವರಿ 25 ಬುಧವಾರ ಶ್ರೀಲಂಕಾ Vs ನ್ಯೂಜಿಲೆಂಡ್ ಸಂಜೆ 7.00 ಕೊಲಂಬೊ ಫೆಬ್ರವರಿ 26 ಗುರುವಾರ ದಕ್ಷಿಣ ಆಫ್ರಿಕಾ Vs ವೆಸ್ಟ್ ಇಂಡೀಸ್ ಸಂಜೆ 3.00 ಅಹ್ಮದಾಬಾದ್ * ಫೆಬ್ರವರಿ 26 ಗುರುವಾರ ಭಾರತ Vs ಜಿಂಬಾಬ್ವೆ ಸಂಜೆ 7.00 ಚೆನ್ನೈ ಫೆಬ್ರವರಿ 27 ಶುಕ್ರವಾರ ಇಂಗ್ಲೆಂಡ್ Vs ನ್ಯೂಜಿಲೆಂಡ್ ಸಂಜೆ 7.00 ಕೊಲಂಬೊ ಫೆಬ್ರವರಿ 28 ಶನಿವಾರ ಶ್ರೀಲಂಕಾ Vs ಪಾಕಿಸ್ತಾನ ಸಂಜೆ 7.00 ಕ್ಯಾಂಡಿ ಮಾರ್ಚ್ 1 ಭಾನುವಾರ ದಕ್ಷಿಣ ಆಫ್ರಿಕಾ Vs ಜಿಂಬಾಬ್ವೆ ಸಂಜೆ 3.00 ದಿಲ್ಲಿ * ಮಾರ್ಚ್ 1 ಭಾನುವಾರ ಭಾರತ vs ವೆಸ್ಟ್ ಇಂಡೀಸ್ ಸಂಜೆ 7.00 ಕೋಲ್ಕತಾ ಭಾರತದ ಪಂದ್ಯಗಳು ಯಾವಾಗ? ವೇಳಾಪಟ್ಟಿಯ ಪ್ರಕಾರ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 22ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇನ್ನು ಪೆಬ್ರವರಿ 26ರಂದು ಜಿಂಬಾಬ್ವೆ ಮತ್ತು ಮಾರ್ಚ್ 1ರಂದು ಕೊನೇ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಪ್ರತಿಯೊಂದು ಸೂಪರ್ 8 ಬಣದಲ್ಲೂ ಕನಿಷ್ಠ 2 ಪಂದ್ಯ ಗೆದ್ದ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲಿದೆ. ಅಂಕಗಳು ಸಮನಾದರೆ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ. ಮಾರ್ಚ್ 4ರಂದು ಮೊದಲ ಸೆಮಿಫೈನಲ್, ಮಾರ್ಚ್ 5ರಂದು ದ್ವಿತೀಯ ಸೆಮಿಫೈನಲ್ ಮತ್ತು ಮಾರ್ಚ್ 8ರಂದು ಫೈನಲ್ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳೂ ಸ್ಟಾರ್ ಸ್ಪೋರ್ಟ್ಸ್ ನೆಟವರ್ಕ್ ಮತ್ತು ಜಿಯೋ ಸ್ಟಾರ್ ಆ್ಯಪ್ ಗಳಲ್ಲಿ ನೇರಪ್ರಸಾರ ಆಗಲಿವೆ.

ವಿಜಯ ಕರ್ನಾಟಕ 18 Feb 2026 10:15 pm

ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ ಸ್ಟೀರಿಂಗ್ ಹಿಡಿದ ಅಪ್ರಾಪ್ತರು; ಐಷಾರಾಮಿ ಕಾರುಗಳ ವೇಗಕ್ಕೆ ಬಲಿಯಾದ ಅಮಾಯಕರ ಜೀವಗಳು

ತಲೆಗೆ ಗಂಭೀರ ಗಾಯವಾಗಿದ್ದರಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದೆ. ತೋಳುಗಳು, ಪಕ್ಕೆಲುಬುಗಳು ಮುರಿದಿವೆ. ಕಳೆದ ವಾರ ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ 23 ವರ್ಷದ ಸಾಹಿಲ್ ಧನೇಶ್ರಾ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾದ ವಿಷಯ ಇದು. ಫೆಬ್ರವರಿ 3ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಿಲ್ಲಿಯ ದ್ವಾರಕಾ ನಿವಾಸಿ ಸಾಹಿಲ್ ಸಾವಿಗೀಡಾಗಿದ್ದರು. ಮಗನ ಸಾವಿನ ಬಗ್ಗೆ ಕಣ್ಣೀರಿಟ್ಟ ತಾಯಿ, “ನಾನು ನನ್ನ ಮಗ ಸಾಹಿಲ್ ಧನೇಶ್ರಾನನ್ನು ಕಳೆದುಕೊಂಡೆ. 23 ವರ್ಷದ ಪ್ರತಿಭಾನ್ವಿತ ಹುಡುಗ ಆತ. ನಾನು ಸಿಂಗಲ್ ಮದರ್. ನನ್ನ ಮಗನನ್ನು ಸ್ಕಾರ್ಪಿಯೋ ಬಲಿತೆಗೆದುಕೊಂಡಿತು. ಕಾರು ಚಲಾಯಿಸುತ್ತಿದ್ದವನಿಗೆ ಚಾಲನಾ ಪರವಾನಗಿ ಇರಲಿಲ್ಲ. ಅವನ ಸಹೋದರಿ ಕಾರಿನಲ್ಲಿ ರೀಲ್ಗಳನ್ನು ಮಾಡುತ್ತಿದ್ದಾಗ ಅವನು ವೇಗವಾಗಿ ಕಾರು ಚಲಾಯಿಸುತ್ತಿದ್ದ. ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ತನಿಖೆಯ ಭಾಗವಾಗಿ ಈ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 3ರಂದು ಅಪಘಾತವಾದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಾಹಿಲ್ ಅವರನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆತರಲಾಯಿತು. ಮಧ್ಯಾಹ್ನ 1.54ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಾಹಿಲ್ಗೆ ಅಪಘಾತದಲ್ಲಿ ಹಲವು ಗಾಯಗಳಾಗಿವೆ ಎಂದು ಕಂಡುಬಂದಿದೆ. ಆತನ ಹೊಟ್ಟೆ, ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ತೀವ್ರ ರಕ್ತಸ್ರಾವ ಮತ್ತು ಪ್ರಮುಖ ಅಂಗಗಳಿಗೆ ಗಂಭೀರ ಗಾಯಗಳಾಗಿದ್ದ ಕಾರಣ ಸಾಹಿಲ್ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ►ಅಪಘಾತ ಸಂಭವಿಸಿದ್ದು ಹೇಗೆ? ಪೊಲೀಸರ ಪ್ರಕಾರ, ಫೆಬ್ರವರಿ 3ರಂದು ಬೆಳಿಗ್ಗೆ 11.57ರ ಸುಮಾರಿಗೆ ಅಪಘಾತದ ಬಗ್ಗೆ ಅವರಿಗೆ ಪಿಸಿಆರ್ ಕರೆ ಬಂದಿದೆ. ಸ್ಥಳಕ್ಕೆ ತಲುಪಿದಾಗ ಸ್ಕಾರ್ಪಿಯೋ, ಸ್ವಿಫ್ಟ್ ಡಿಜೈರ್ ಟ್ಯಾಕ್ಸಿ ಮತ್ತು ಮೋಟಾರ್ ಸೈಕಲ್ ಅಪಘಾತವಾಗಿರುವುದು ಕಂಡಿದೆ. ಈ ಅಪಘಾತದಲ್ಲಿ ಸಾಹಿಲ್ ಎಂದು ಗುರುತಿಸಲಾದ ಮೋಟಾರ್ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು, ನಂತರ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಡಿಝೈರ್ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಟ್ಯಾಕ್ಸಿ ಚಾಲಕ ಅಜಿತ್ ಸಿಂಗ್ ಅವರನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಕಾರ್ಪಿಯೋ ಚಾಲಕನನ್ನು 17 ವರ್ಷದ ಬಾಲಕ ಎಂದು ಗುರುತಿಸಲಾಗಿದ್ದು, ಆತನಿಗೆ ಚಾಲನಾ ಪರವಾನಗಿ ಇರಲಿಲ್ಲ. ಆತ ಅಪ್ರಾಪ್ತ ವಯಸ್ಕ. ಹಾಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ ಅಬ್ಸರ್ವೇಷನ್ ಹೋಮ್ಗೆ ಕಳುಹಿಸಲಾಗಿತ್ತು. ಫೆಬ್ರವರಿ 10ರಂದು ಆತನಿಗೆ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಜಾಮೀನು ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವಾಹನಗಳನ್ನು ವಶಪಡಿಸಿಕೊಂಡು ಅವುಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ವೈದ್ಯಕೀಯ–ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಾಹಿಲ್ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಷಾದ ವ್ಯಕ್ತಪಡಿಸಿದ ಆರೋಪಿಯ ಅಪ್ಪ ಸಾಹಿಲ್ ಧನೇಶ್ರಾ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ ಎಂದು ಆರೋಪಿಯ ಅಪ್ಪ ಹೇಳಿದ್ದಾರೆ. ಅಪಘಾತಕ್ಕೀಡಾದ ವಾಹನವು ತಮ್ಮ ವಾಣಿಜ್ಯ ಸಾರಿಗೆ ವ್ಯವಹಾರಕ್ಕೆ ಸೇರಿದ್ದಾಗಿದೆ. “ನನ್ನ 17ರ ಹರೆಯದ ಮಗ ವಾಹನ ಚಾಲನೆ ಮಾಡಿದ್ದ. ನನ್ನ ಮಗ ಕಾರು ಚಲಾಯಿಸುತ್ತಿದ್ದಾನೆಂದು ನನಗೆ ತಿಳಿದಿರಲಿಲ್ಲ. ನನ್ನ ಮಗಳನ್ನು ಡ್ರಾಪ್ ಮಾಡಲು ಆತ ಹೋಗುತ್ತಿದ್ದ. ಅಪಘಾತ ಸಂಭವಿಸಿದ್ದರ ಬಗ್ಗೆ ನನಗೆ ವಿಷಾದವಿದೆ. ಸಂತ್ರಸ್ತರ ಕುಟುಂಬ ಎಷ್ಟು ನೋವು ಅನುಭವಿಸುತ್ತಿರಬಹುದು ಎಂದು ನಾನು ಊಹಿಸಬಲ್ಲೆ. ನನ್ನ ಮಗ ಮತ್ತು ಮಗಳು ಕಾರಿನಲ್ಲಿದ್ದರು. ಘಟನೆ ನಡೆದಾಗ ನಾನು ಊರಲ್ಲಿರಲಿಲ್ಲ. ನನ್ನ ಮಗ ತುಂಬಾ ನೊಂದಿದ್ದಾನೆ. ನಾವು ಪೊಲೀಸರೊಂದಿಗೆ ಸಹಕರಿಸಿದ್ದೇವೆ. ಪೊಲೀಸರು ನನ್ನಿಂದ ದಾಖಲೆಗಳನ್ನು ಕೇಳಿದರು. ನಾವು ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ನನ್ನ ಮಗಳು ರೀಲ್ ಮಾಡುತ್ತಿರಲಿಲ್ಲ, ಅದೊಂದು ಸಣ್ಣ ವೀಡಿಯೋ ಆಗಿತ್ತು. ನಡೆದಿರುವ ಘಟನೆ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ. ಅಪಘಾತಕ್ಕೆ ಕಾರಣವಾದ ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಅಪ್ರಾಪ್ತನನ್ನು ಘಟನಾ ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 281 (ನಿರ್ಲಕ್ಷ್ಯದ ಚಾಲನೆ), 106(1) (ಸಾವಿಗೆ ಕಾರಣವಾಗುವ ನಿರ್ಲಕ್ಷ್ಯ) ಮತ್ತು 125(ಎ) (ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಉಪ ಪೊಲೀಸ್ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ಅವರು ಅಪ್ರಾಪ್ತ ಚಾಲಕನ ತಂದೆಯ ವಿರುದ್ಧ 1988ರ ಎಂವಿ ಕಾಯ್ದೆಯ ಸೆಕ್ಷನ್ 199ಎ (ಅಪ್ರಾಪ್ತ ವಯಸ್ಕ ಸಂಚಾರ ಅಪರಾಧ ಎಸಗಿದಾಗ ಪೋಷಕರು ಅಥವಾ ವಾಹನ ಮಾಲೀಕರು ಹೊಣೆಗಾರರು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ದೇಶದಲ್ಲಿ ನಡೆದ ಐಷಾರಾಮಿ ಕಾರು ಅಪಘಾತಗಳು 1. 1999 BMW ಪ್ರಕರಣ 1999 ಜನವರಿ 10ರಂದು ದಿಲ್ಲಿಯಲ್ಲಿ BMW E38 ಕಾರಿನ ಹಿಟ್ ಅಂಡ್ ರನ್ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದರು. ನೌಕಾಪಡೆ ಮುಖ್ಯಸ್ಥರ ಮೊಮ್ಮಗ ಹಾಗೂ ಪ್ರಸಿದ್ಧ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಅವರ ಪುತ್ರ ಸಂಜೀವ್ ನಂದಾ ಲೋಧಿ ರಸ್ತೆಯಲ್ಲಿ ಕಾರು ಚಲಾಯಿಸಿ ಏಳು ಜನರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ನಂತರ ನಂದಾ ಸ್ಥಳದಿಂದ ಪರಾರಿಯಾಗಿದ್ದರು. ಸಹ–ಆರೋಪಿ ರಾಜೀವ್ ಗುಪ್ತಾ ಮತ್ತು ಇತರರು ಸಾಕ್ಷ್ಯವನ್ನು ನಾಶಮಾಡಲು ಕಾರನ್ನು ತೊಳೆಯುತ್ತಿದ್ದರು ಎಂಬುದು ಪುರಾವೆಗಳಿಂದ ತಿಳಿದುಬಂದಿತ್ತು. 2008ರಲ್ಲಿ ವಿಚಾರಣಾ ನ್ಯಾಯಾಲಯವು ನಂದಾ ಅವರನ್ನು ಸೆಕ್ಷನ್ 304(II) IPC ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಸಾಕ್ಷ್ಯ ತಿರುಚಿದ್ದಕ್ಕಾಗಿ ಇತರರಿಗೂ ಶಿಕ್ಷೆ ವಿಧಿಸಲಾಯಿತು. 2009ರಲ್ಲಿ ಮೇಲ್ಮನವಿ ಬಳಿಕ ದಿಲ್ಲಿ ಹೈಕೋರ್ಟ್ 304A IPC ಪ್ರಕಾರ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿತು. ಪ್ರಕರಣದ ಸ್ಥಿತಿ: 2012ರಲ್ಲಿ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದು, 50 ಲಕ್ಷ ರೂ. ದಂಡ ಮತ್ತು ಎರಡು ವರ್ಷಗಳ ಸಮುದಾಯ ಸೇವೆ ಮಾಡುವಂತೆ ನಿರ್ದೇಶಿಸಿತು. 2. ಒಂದು ದಿನದಲ್ಲಿ ಜಾಮೀನು ಪಡೆದ ಲಂಬೋರ್ಗಿನಿ ಚಾಲಕ 2025 ಮಾರ್ಚ್ 30ರಂದು ನೋಯ್ಡಾದ ಸೆಕ್ಟರ್ 94ರಲ್ಲಿ ನಿರ್ಮಾಣ ಹಂತದ ಸಂಕೀರ್ಣದ ಪಕ್ಕದ ಫುಟ್ಪಾತ್ನಲ್ಲಿ ಕೆಂಪು ಲಂಬೋರ್ಗಿನಿ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ವೀಡಿಯೋ ವೈರಲ್ ಆಗಿತ್ತು. ಚಾಲಕ “ಇಲ್ಲಿ ಯಾರಾದರೂ ಸತ್ತಿದ್ದಾರೆಯೇ?” ಎಂದು ಉಡಾಫೆಯಿಂದ ಕೇಳುತ್ತಿರುವ ದೃಶ್ಯ ಗಮನ ಸೆಳೆದಿತ್ತು. ನಂತರ ತಾನು ಕಾರನ್ನು ಪರೀಕ್ಷಿಸುತ್ತಿದ್ದೆ ಎಂದಿದ್ದ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದರು. ಪ್ರಕರಣದ ಸ್ಥಿತಿ: ಮಾರ್ಚ್ 31, 2025ರಂದು ಆರೋಪಿಗೆ ಜಾಮೀನು ನೀಡಲಾಯಿತು. 3. BMW ಹಿಟ್–ಅಂಡ್–ರನ್ ಪ್ರಕರಣ (ಮುಂಬೈ) ಜುಲೈ 9, 2024ರಂದು ಮುಂಬೈನ ವರ್ಲಿಯಲ್ಲಿ BMW ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಶಿವಸೇನಾ ನಾಯಕನ ಮಗ ಮಿಹಿರ್ ಶಾ ಬಂಧಿತರಾದರು. ಕಾವೇರಿ ನಖ್ವಾ (45) ಸಾವಿಗೀಡಾಗಿ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದರು. ಮಹಿಳೆಯನ್ನು ಸುಮಾರು 1.5 ಕಿಮೀ ದೂರ ಕಾರಿನ ಬಾನೆಟ್ ಮೇಲೆ ಎಳೆದೊಯ್ಯಲಾಗಿದೆ ಎಂದು ಆರೋಪವಿತ್ತು. ಪ್ರಕರಣದ ಸ್ಥಿತಿ: ಮಿಹಿರ್ ಶಾ ಮತ್ತು ಚಾಲಕ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಸೆಂಬರ್ 2025ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. 4. 2024 ಪುಣೆ ಪೋರ್ಷೆ ಕಾರು ಅಪಘಾತ 2024 ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ 17 ವರ್ಷದ ಬಾಲಕ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರು ಚಲಾಯಿಸಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಸಾವಿಗೀಡಾದರು. ಆರಂಭದಲ್ಲಿ ಜೆಜೆಬಿ ಸೌಮ್ಯ ಷರತ್ತುಗಳೊಂದಿಗೆ ಜಾಮೀನು ನೀಡಿತ್ತು. ರಾಷ್ಟ್ರವ್ಯಾಪಿ ಆಕ್ರೋಶದ ಬಳಿಕ ಜಾಮೀನು ರದ್ದು ಮಾಡಿ ಅಬ್ಸರ್ವೇಷನ್ ಹೋಮ್ಗೆ ಕಳುಹಿಸಲಾಯಿತು. ಪೋಷಕರು ಹಾಗೂ ಬಾರ್ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು. ಪ್ರಕರಣದ ಸ್ಥಿತಿ: “ಘೋರ ಅಪರಾಧ” ಎಂದು ಪರಿಗಣಿಸದ ಕಾರಣ ಅಪ್ರಾಪ್ತನಾಗಿ ವಿಚಾರಣೆ ಮುಂದುವರಿಯಿತು. ನವೆಂಬರ್ 2025ರಲ್ಲಿ ಆರೋಪಿಯ ತಾಯಿಗೆ ಮಧ್ಯಂತರ ಜಾಮೀನು ನೀಡಲಾಯಿತು. ರಕ್ತದ ಮಾದರಿ ತಿರುಚಿದ ಆರೋಪದ ಮೂವರಿಗೆ ಫೆಬ್ರವರಿಯಲ್ಲಿ ಜಾಮೀನು ನೀಡಲಾಯಿತು. 5. ಕಾನ್ಪುರ ಲಂಬೋರ್ಗಿನಿ ಅಪಘಾತ 2026 ಫೆಬ್ರವರಿ 8ರಂದು ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲಂಬೋರ್ಗಿನಿ ರೆವೆಲ್ಟೊ ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡರು. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹೊರಬಿದ್ದವು. ಪ್ರಕರಣದ ಸ್ಥಿತಿ: ಆರಂಭದಲ್ಲಿ “ಅಪರಿಚಿತ ವ್ಯಕ್ತಿ” ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ನಂತರ ಶಿವಂ ಮಿಶ್ರಾ ಹೆಸರು ಸೇರಿಸಲಾಯಿತು. ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 18 Feb 2026 10:14 pm

ಪೌರ ಕಾರ್ಮಿಕರ ಶ್ರಮದ ಮೇಲೆ ಆಡಳಿತದ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಪಿ.ರಘು ಕಠಿಣ ಎಚ್ಚರಿಕೆ

ಯಾದಗಿರಿ: ನಗರಗಳ ಸ್ವಚ್ಛತೆ ಪೌರ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ಆದರೆ ಅವರ ವೇತನ, ಮೂಲ ಸೌಲಭ್ಯಗಳ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದು ಅಕ್ಷಮ್ಯ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಇಲ್ಲಿನ ಜಿಲ್ಲಾ ಆಡಿಟೋರಿಯಂ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಸರ್ವೇಕ್ಷಣಾ ಸಮಿತಿ ಸದಸ್ಯರು, ಪೌರ ಕಾರ್ಮಿಕ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸ್ವಚ್ಛತಾಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಶಹಾಪುರ ಹಾಗೂ ಸುರಪುರ ನಗರಸಭೆಗಳಲ್ಲಿ ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಪಿ. ರಘು, ಸುರಪುರ ನಗರಸಭೆಯಲ್ಲಿ ಸುಮಾರು 2 ಕೋಟಿ ರೂ. ಬಿಲ್ ಬಾಕಿ ಇದ್ದರೂ ಕೇವಲ 20 ಲಕ್ಷ ರೂ. ತೆರಿಗೆ ಸಂಗ್ರಹವಾಗಿರುವುದನ್ನು ಉಲ್ಲೇಖಿಸಿ, “ಇಂತಹ ಆಡಳಿತ ವೈಫಲ್ಯದಿಂದ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ” ಎಂದು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದರು. ಗುರುಮಠಕಲ್ ಪುರಸಭೆಯಲ್ಲಿ ಪೌರ ಕಾರ್ಮಿಕರಿಗೆ ರೆಸ್ಟ್ ರೂಮ್ ಸೇರಿದಂತೆ ಮೂಲ ಸೌಲಭ್ಯಗಳೇ ಇಲ್ಲದಿರುವುದು, ಸುರಪುರ ನಗರಸಭೆಯಲ್ಲಿ ವೇತನ ಪಾವತಿ ಸಂಪೂರ್ಣ ವಿಳಂಬವಾಗಿರುವುದು ಸಭೆಯಲ್ಲಿ ಬೆಳಕಿಗೆ ಬಂತು. ಒಟ್ಟು 42 ಲಕ್ಷ ರೂ. ವೇತನ ಬಾಕಿ ಇರುವುದಾಗಿ ತಿಳಿದುಬಂದಿದ್ದು, ಗುರುಮಠಕಲ್ ಪುರಸಭೆಯಲ್ಲಿ 2025ರ ಜುಲೈ ತಿಂಗಳಿಂದಲೇ ವೇತನ ಪಾವತಿ ಆಗಿಲ್ಲ ಎಂಬ ವಿಚಾರ ತಿಳಿದ ಪಿ. ರಘು, ಕಾರಣ ಕೇಳಿ ತಕ್ಷಣ ನೋಟಿಸ್ ನೀಡಬೇಕು ಹಾಗೂ ದಾಖಲೆ ಸಮೇತ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದುಡಿಯುವ ಸಫಾಯಿ ಕಾರ್ಮಿಕರಿಗೆ ಗ್ರಾಮಸ್ಥರಿಂದ ಕಿರುಕುಳ ನೀಡಲಾಗುತ್ತಿದ್ದು, ಪಿಡಿಒಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಸಭಾಂಗಣದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಹಾಜರಿದ್ದುದನ್ನು ಕಂಡ ಪಿ. ರಘು, ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆಯೇ ಸಿಡಿಮಿಡಿಗೊಂಡರು. ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರಿಲ್ಲದೆ ನಗರ, ತಾಲೂಕುಗಳು ಸ್ವಚ್ಛವಾಗಿರಲು ಸಾಧ್ಯವೇ ಇಲ್ಲ. ಆದರೆ ಅವರನ್ನೇ ನಿರ್ಲಕ್ಷ್ಯ ಮಾಡುವ ಮನಸ್ಥಿತಿ ಬದಲಾಗಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾ ಅಧಿಕಾರಿ ಮಹಾದೇವಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸೇರಿದಂತೆ ಶಹಾಪುರ, ಸುರಪುರ ನಗರಸಭೆ ಆಯುಕ್ತರು ಹಾಗೂ ಜಿಲ್ಲೆಯ ವಿವಿಧ ಪುರಸಭೆಗಳ ಆಯುಕ್ತರು ಉಪಸ್ಥಿತರಿದ್ದರು. ಕಾರ್ಮಿಕರಿಗೆ ವಿಮಾ ಸೌಲಭ್ಯ, ಹೊರಗುತ್ತಿಗೆ ನೌಕರರಿಗೂ ವಿಮೆ ಕಲ್ಪಿಸುವುದು, ಬಳಿಚಕ್ರ ಗ್ರಾಮದಲ್ಲಿ ಪೌರ ಕಾರ್ಮಿಕರ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದು, ವಡಗೇರಾ ಗ್ರಾಮದಲ್ಲಿ ಮಹಿಳಾ ಪೌರ ಕಾರ್ಮಿಕರಿಂದ ಅಕ್ರಮವಾಗಿ ಕಸ ಹೊರಿಸುವ ಪ್ರಕರಣ, ರಾಮಸಮುದ್ರದಲ್ಲಿ ವೇತನ ವಿಳಂಬ, ಐಡಿ ವಿತರಣೆ, ಗೃಹಭಾಗ್ಯ ಯೋಜನೆಯಡಿ ಮನೆ-ನಿವೇಶನ ಬೇಡಿಕೆ ಸೇರಿದಂತೆ ಹಲವು ದೂರುಗಳು ಸಭೆಯಲ್ಲಿ ದಾಖಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. -ಪಿ ರಘು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ

ವಾರ್ತಾ ಭಾರತಿ 18 Feb 2026 10:08 pm

ತಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪತ್ನಿಯ ಕೊಂದ ಇಸ್ರೋ ನಿವೃತ್ತ ನೌಕರ! ಬೆಂಗಳೂರಿನಲ್ಲಿ ಘಟನೆ

ಇಸ್ರೋ ಮಾಜಿ ನೌಕರನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ನಾಗಲೇಶ್ವರರಾವ್‌ ಕೊಲೆ ಆರೋಪಿ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರರಾವ್ ತಾನು ಸತ್ತರೇ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ವಿಜಯ ಕರ್ನಾಟಕ 18 Feb 2026 10:07 pm

AI ಶೃಂಗಸಭೆ | ಚೀನಾದಲ್ಲಿ ತಯಾರಾದ ರೋಬೋಡಾಗ್ ತನ್ನದೆಂದು ಪ್ರದರ್ಶಿಸಿದ ವಿವಾದ: ಕ್ಷಮೆಯಾಚಿದ ಗಾಲ್ಗೋಟಿಯಾಸ್ ವಿವಿ

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಚೀನಾದಲ್ಲಿ ತಯಾರಾದ ರೋಬೋಟಿಕ್ ನಾಯಿಯನ್ನು ತನ್ನದೇ ಸಾಧನೆಯೆಂಬಂತೆ ಪ್ರದರ್ಶಿಸಿದ್ದ ಆರೋಪಕ್ಕೆ ಗುರಿಯಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಿಂದ ಸ್ಟಾಲ್ ತೆರವುಗೊಳಿಸಿರುವುದಾಗಿ ಸಂಸ್ಥೆಯು ತಿಳಿಸಿದೆ. ಎರಡು ದಿನಗಳಲ್ಲಿ ಮೂರನೇ ಬಾರಿ ಸ್ಪಷ್ಟೀಕರಣ ನೀಡಿರುವ ವಿಶ್ವವಿದ್ಯಾಲಯ, ಈ ಬಾರಿ ತನ್ನ ಸಂವಹನ ವಿಭಾಗದ ಮುಖ್ಯಸ್ಥೆ ನೇಹಾ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅವರು ತಿಳಿವಳಿಕೆ ಇಲ್ಲದವರು, ಮಾಧ್ಯಮಗಳೊಂದಿಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಆಮದು ಮಾಡಿಕೊಂಡ ಸಾಧನವನ್ನು ತನ್ನದೇ ಅವಿಷ್ಕಾರ ಎಂದು ತಪ್ಪಾಗಿ ಹೇಳಿಕೊಂಡ ಆರೋಪ ಎದುರಿಸುತ್ತಿರುವ ಸಂಸ್ಥೆ, ನೇಹಾ ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಉತ್ಸಾಹದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ಚೀನಾದ ಯುನಿಟ್ರೀ ಸಂಸ್ಥೆ ತಯಾರಿಸಿದ AI ಚಾಲಿತ ರೋಬೋಟಿಕ್ ನಾಯಿಯನ್ನು USD 2,800 (ಸುಮಾರು ₹2.3 ಲಕ್ಷ) ಬೆಲೆಗೆ ಮಾರಾಟ ಮಾಡಿದ್ದಾಗಿ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ಉಂಟಾಯಿತು. ರೋಬೊಡಾಗನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. X ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹಿಂದಿನ ಹೇಳಿಕೆಯಲ್ಲಿ, ರೋಬೋಡಾಗ್ ಅನ್ನು ಯುನಿಟ್ರೀಯಿಂದ ಖರೀದಿಸಿ ಕಲಿಕೆಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿತ್ತು. ವಿದ್ಯಾರ್ಥಿಗಳು ಇದರೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ನಾವು ಈ ರೋಬೋಡಾಗ್ ನಿರ್ಮಿಸಿಲ್ಲ, ಹಾಗೆ ಎಂದಿಗೂ ಹೇಳಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ವಿವಾದದ ಹಿನ್ನೆಲೆ ವಿಶ್ವವಿದ್ಯಾಲಯವನ್ನು AI ಶೃಂಗಸಭೆಯಿಂದ ತಕ್ಷಣ ಸ್ಟಾಲ್ ಖಾಲಿಮಾಡಿಕೊಂಡು ತೆರಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಹೊರಬಂದಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಆಯೋಜಕರ ಭಾವನೆಗೆ ಗೌರವ ಸೂಚಿಸಿ ಆವರಣವನ್ನು ಖಾಲಿ ಮಾಡಿರುವುದಾಗಿ ಅದು ತಿಳಿಸಿದೆ. ವಿವಾದ ಹೆಚ್ಚುತ್ತಿದ್ದಂತೆ, AI ಶೃಂಗಸಭೆಯಲ್ಲಿ ಪ್ರದರ್ಶಕರು ತಮ್ಮದಲ್ಲದ ಉತ್ಪನ್ನಗಳನ್ನು ಪ್ರದರ್ಶಿಸಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 18 Feb 2026 10:03 pm

ʼವಿಕಸಿತ್‌ ಭಾರತ್‌- 2047’ ಸಾಕಾರಗೊಳಿಸಲು ಬ್ಯಾಂಕ್‌ಗಳ ಪಾತ್ರ ಪ್ರಮುಖ: ದೇಬಾಶೀಷ್‌ ಪಾಂಡ

ಮಂಗಳೂರು,ಫೆ.18; ಧೇಶದ ವಿಕಸಿತ್‌ ಭಾರತ್‌- 2047’ ಸಾಕಾರ. ಗೊಳಿಸಲು ಬ್ಯಾಂಕ್‌ಗಳ ಪಾತ್ರ ಮಹತ್ವ ದ್ದಾಗಿದ್ದು, ದೇಶದ ಆರ್ಥಿಕ ವಿಕಾಸದಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಮಾಜಿ ಐಎಎಸ್‌ ಅಧಿಕಾರಿ, ನೀತಿ ಸುಧಾರಕ ದೇಬಾಶೀಷ್‌ ಪಾಂಡ ಸಲಹೆ ನೀಡಿದ್ದಾರೆ. ಅವರು ಬುಧವಾರ ನಗರದ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಿಕಸಿತ್‌ ಭಾರತ್‌- 2047: ಹಣಕಾಸು ಸೇವೆಗಳ ಪಾತ್ರ’ ದ ಕುರಿತು ಪ್ರಧಾನ ಉಪನ್ಯಾಸ ನೀಡುತ್ತಾ, ಭಾರತವು ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ, ಈ ದೇಶ ವಿಶ್ವದ ವೇಗವಾಗಿ ಬೆಳೆಯು ತ್ತಿರುವ ಆರ್ಥಿಕತೆ ಆಗಲಿದೆ ಎಂದು ಹಿಂದೆ ನಾವು ಊಹಿಸಿರಲಿಲ್ಲ.ಆದರೆ ಈ ಸಾಧನೆ ಆಗಿದೆ. ನಾವು ವಿಕಸಿತ್‌ ಭಾರತ್‌ ಎಂಬ ಮಹಾ ದೃಷ್ಟಿಯತ್ತ ಸಾಗುತ್ತಿದ್ದೇವೆ. ಈ ಪರಿಕಲ್ಪನೆ ಯನ್ನು ಸಾಕಾರಗೊಳಿಸುವುದು ಸಂಘ ಸಂಸ್ಥೆ ಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನೂ ಸರಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಇದಕ್ಕೆ ದೀರ್ಘಕಾಲಿಕ, ಉನ್ನತ ವೇಗದ ಕಾರ್ಯೋನ್ಮುಖತೆಯೊಂದಿಗೆ ಉತ್ಪಾದಕತೆ, ಬಂಡವಾಳದ ದಕ್ಷತೆ ಮತ್ತು ಕಾರ್ಯಗತ ಸಾಮರ್ಥ್ಯ ಹೆಚ್ಚಳ, ಆರ್ಥಿಕ ಸ್ಥಿರತೆ, ಶಕ್ತಿಶಾಲಿಯಾದ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯ ಬೇಕಾಗುತ್ತದೆ. ಈ ಸವಾಲು ಗಳನ್ನು ಎದುರಿಸಬೇಕಾ ಗಿದೆ ಎಂದು ದೇಬಾಶೀಷ್‌ ಹೇಳಿದರು. ಬ್ಯಾಂಕ್‌ಗಳು ಗುರಿ ಕೇವಲ ಲಾಭ ಗಳಿಕೆಯಲ್ಲ, ತನ್ನ ಮೂಲ ಧ್ಯೇಯ ವಾದ ಸಾಮಾಜಿಕ ಪರಿವರ್ತನೆಯ ಕೆಲಸ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಹಣಕಾಸಿನ ವಿವಿಧ ಮಾದರಿ ಗಳ ಕಾರ್ಯಯೋಜನೆಯ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದರು.ಆಧುನಿಕ ಡಿಜಿಟಲ್ ಯುಗದಲ್ಲಿ ಚೆಕ್‌ಬುಕ್ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವೀಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆಯಾಗಿದೆ, ಕೃತಕ ಬುದ್ಧಿ ಮತ್ತೆ ಬಾಗಿಲು ತಟ್ಟುತ್ತಿದೆ. ಇಂತಹ ತಂತ್ರಜ್ಞಾನ ಹೇಗೆ ಬಳಕೆ ಮಾಡಬೇಕು ಎಂಬುದು ನಮ್ಮ ವಿವೇಚನೆಯ ಮೇಲಿದೆ. ಈ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯ; ಅದಕ್ಕೆ ಹೊಂದಿ ಕೊಳ್ಳ‌ ಬೇಕಾಗಿದೆ ಎಂದು ಅವರು ಹೇಳಿದರು. ಕರ್ಣಾಟಕ ಬ್ಯಾಂಕ್‌ನ ಕಳೆದ 102 ವರ್ಷಗಳ ಪಯಣ, ಮೈಲುಗಲ್ಲುಗಳ ಕಾಲಘಟ್ಟದಲ್ಲಿ ನಡೆದ ಬದಲಾವ ಣೆಗಳು ಪ್ರೇರಣಾದಾ ಯಕವಾಗಿವೆ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣೆಯ ಮೈಲುಗಲ್ಲು ಎಂದು ನೋಡುವುದಲ್ಲ. ಇದು ಸಂಸ್ಥೆಯ ಬಗ್ಗೆ ಒಂದು ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ. ಈ ಮೂಲಕ ಒಂದು ಪರಂಪರೆಯನ್ನು ಗೌರವಿಸುತ್ತಿದ್ದೀರಿ. ಕರ್ಣಾಟಕ ಬ್ಯಾಂಕ್‌ನ ಮ್ಯೂಸಿಯಂಗೆ ಭೇಟಿ ನೀಡಿದಾಗ ಸ್ಥಾಪಕ ಮಹನೀಯರ ಜೀವನಯಾನ, ಅವರ ಮೌಲ್ಯ ವ್ಯವಸ್ಥೆ ಮತ್ತು ಬ್ಯಾಂಕಿನ ಆರಂಭದಿಂದ ಇಂದಿನ ಮಹತ್ತರ ಸಾಧನೆವರೆಗೆ ನಡೆದ ಬೆಳವಣಿಗೆ ಯನ್ನು ನೋಡುವ ಅವಕಾಶ ದೊರೆತದ್ದು ಸೌಭಾಗ್ಯ ಎಂದು ದೇಬಾಶೀಷ್‌ ಹೇಳಿದರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಮಾತನಾಡುತ್ತಾ, ವಿಕಸಿತ್‌ ಭಾರತ್‌ ದೃಷ್ಟಿಕೋನವು ಬ್ಯಾಂಕ್‌ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್‌ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್‌ ಭಾರತ್‌ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದರು. ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್‌ ಕರ್ಣಾಟಕ ಬ್ಯಾಂಕ್ ಭವಿಷ್ಯದ ಲ್ಲಿ ಇನ್ನಷ್ಟು ತಂತ್ರಜ್ಞಾನದ ಅಳವಡಿಕೆ ಯೊಂದಿಗೆ ಸಾಗಲಿದೆ,ಬ್ಯಾಂಕಿನ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಬ್ಯಾಂಕ್‌ನ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ ಎಂದು ಹೇಳಿದರು.ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿ,ಸಮಾರಂಭದಲ್ಲಿ ದೇಬಾಶೀಷ್‌ ಪಾಂಡರನ್ನು ವೇದಿಕೆ ಯಲ್ಲಿ ಸನ್ಮಾನಿಸ ಲಾಯಿತು ಬಳಿಕ ‘ನಾರಿ ತರಂಗಿಣಿ’ ಸಂಗೀತ ಕಛೇರಿ ನಡೆಯಿತು.

ವಾರ್ತಾ ಭಾರತಿ 18 Feb 2026 9:59 pm

ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಪರಿವರ್ತನೆ ಸಾಧ್ಯ: ಶಾಸಕ ತುನ್ನೂರ

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಲ್ಲಿ ಕೂಡ ಹಲವಾರು ಪ್ರತಿಭೆಗಳಿರುತ್ತವೆ, ಅವರು ಮಹಿಳಾ ಸಂಘಗಳನ್ನು ಕಟ್ಟಿಕೊಂಡು ಸ್ವಾವಲಂಬನೆ ಬದುಕು ಸಾಗಿಸಲು ಶ್ರಮಿಸುತ್ತಿದ್ದಾರೆ, ಅವರು ಆರ್ಥಿಕವಾಗಿ ಸದೃಡರಾದಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ಬುಧವಾರ ನಗರದ ತಮ್ಮ ಜನಸಂಪರ್ಕ ಕಛೇರಿಯಲ್ಲಿ ಕೃಷಿ ಇಲಾಖೆ ಮತ್ತು ಜಲಾಯನ ಅಭಿವೃದ್ಧಿ ಇಲಾಖೆ ಯಾದಗಿರಿ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿಯಲ್ಲಿ ಮಂಜೂರಾದ ಯಾದಗಿರಿ ಮತಕ್ಷೇತ್ರದ 55 ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ತಲಾ 50 ಸಾವಿರ ರೂ. ಸುತ್ತು ನಿಧಿ ಪ್ರಮಾಣ ಪತ್ರಗಳನ್ನು ಮಹಿಳೆಯರಿಗೆ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ಎಲ್ಲಾ ವರ್ಗದ ಕುಟುಂಬಗಳ ಓರ್ವ ಮಹಿಳೆಗೆ ಗೃಹ ಲಕ್ಷ್ಮೀ ಯೋಜನೆ ಮೂಲಕ ತಿಂಗಳಿಗೆ ತಲಾ 2 ಸಾವಿರ ಕೌಟುಂಬಿಕ ನಿರ್ವಹಣೆಗಾಗಿ ನೀಡುತ್ತಿದೆ, ಜೊತೆಗೆ ಹಲವಾರು ಯೋಜನೆಗಳ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೋತ್ಸಾಹ ಧನವನ್ನು ಕೂಡ ಮಹಿಳಾ ಸಂಘಗಳಿಗೆ ನೀಡುವ ಮೂಲಕ ಅವರಿಗೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು. ಎಲ್ಲಾ ಮಹಿಳೆಯರು ದಯವಿಟ್ಟು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಿ, ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಗಮನ ಹರಿಸಬೇಕು, ಅವರು ವಯಸ್ಕರಾಗುವ ಮುನ್ನ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಹಂಪಣ್ಣ ಮಾತನಾಡಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ಹಾಗೂ ಮಹಿಳೆಯರಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಸಹಾಯಕ ಕೃಷಿ ನಿರ್ದೇಶಕ ಸುರೇಶ, ಕೃಷಿ ಅಧಿಕಾರಿಗಳಾದ ಯಾಮರಡ್ಡಿ, ನರೇಶ, ಅಯಣ್ಣ ಸೇರಿದಂತೆ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:57 pm

ಪ್ರಗತಿಪರ ಕೃಷಿಕ, ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ ನಿಧನ

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೋಡಪದವು ನಿಟಿಲೆ ನಿವಾಸಿ, ಪ್ರಗತಿಪರ ಕೃಷಿಕ, ಸಂಶೋಧಕ, ಮೊಕ್ತೇಸರ ನಿಟಿಲೆ ಮಹಾಬಲೇಶ್ವರ ಭಟ್(70) ಅವರು ಫೆ.18ರಂದು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೋಡಪದವು ಶ್ರೀ ವೀರಾಂಜನೇಯ ಕ್ಷೇತ್ರದ ಮೊಕ್ತೇಸರರಾಗಿದ್ದ ಅವರು ಕಾಳುಮೆಣಸು ಬಿಡಿಸುವ ಯಂತ್ರವನ್ನು ಸಂಶೋಧನೆ ಮಾಡಿದ್ದರು. ಕೃಷಿಕರಿಗೆ ಬೇಕಾದ ಹಲವು ಯಂತ್ರ, ಶ್ರಮ ಉಳಿಸುವ ಉಪಕರಣಗಳ ಸಾಲನ್ನೇ ಕೊಟ್ಟ ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ ಅವರು ತನ್ನ ಕೃಷಿ ಭೂಮಿಯಲ್ಲಿ ಅವಶ್ಯವಿರುವ ಸೇತುವೆಯನ್ನು ಸಿಮೆಂಟ್ ಪೈಪ್ ಆಧಾರಿತ ಸೇತುವೆಯಾಗಿ, ತಡೆಗಟ್ಟವಾಗಿ ನಿರ್ಮಿಸಿದ್ದು ಆಕರ್ಷಕ ಮತ್ತು ಉಪಯುಕ್ತವಾಗಿತ್ತು. ಕಾಸರಗೋಡು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಮೆಚ್ಚಿಕೊಂಡು, ಅದನ್ನು ಅನುಸರಿಸಿ, ಕಾಸರಗೋಡಿನಲ್ಲಿ ನೂರಾರು ಪೈಪುಗಟ್ಟಗಳ ರಚನೆ ಸಾಧ್ಯವಾಗಿದೆ. ಅವರು 2007ರಲ್ಲಿ ಕಾಳುಮೆಣಸು ಆಯುವ ಯಂತ್ರ, 2012ರಲ್ಲಿ ಕೊಕ್ಕೋ ಬೀಜ ಪ್ರತ್ಯೇಕಿಸುವ ಯಂತ್ರ, 2013ರಲ್ಲಿ ಅಡಿಕೆ ಸುಲಿಯುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದರು. ಕೇರಳ ಸರಕಾರದ ಖ್ಯಾತ ಕೃಷಿ ವಸ್ತುಪ್ರದರ್ಶನ 'ವೈಗಾ'ಕ್ಕಾಗಿಯೇ ಇವರು ತಯಾರಿಸಿದ ಎಲ್ಲ ಯಂತ್ರೋಪಕರಣಗಳನ್ನು ಮಳಿಗೆ ಇಟ್ಟಿದ್ದರು. ಇವರಿಗೆ 2007ರಲ್ಲಿ ಕೃಷಿ ಪಂಡಿತ ಪ್ರಶಸ್ತಿ, 2012ರಲ್ಲಿ ಸಮೃದ್ಧಿ ಪ್ರಶಸ್ತಿ, 2015ರಲ್ಲಿ ದ.ಕ.ಜಿ.ಕಸಾಪ ಪ್ರಶಸ್ತಿ, 2018ರಲ್ಲಿ ಹವ್ಯಕ ರತ್ನ ಪ್ರಶಸ್ತಿ, 2019ರಲ್ಲಿ ಕ್ಯಾಂಪ್ಕೋ ಪ್ರಶಸ್ತಿ ಮತ್ತು ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ವಾರ್ತಾ ಭಾರತಿ 18 Feb 2026 9:54 pm

ಪೌರ ಕಾರ್ಮಿಕರಿಗೆ ಮೂಲಸೌಕರ್ಯ, ನೇರ ನೇಮಕಕ್ಕೆ ಆಗ್ರಹ: ಡಿಎಸ್ಎಸ್ ಮನವಿ

ಯಾದಗಿರಿ: ಯಾದಗಿರಿ ನಗರಸಭೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರಿಗೆ ಮನವಿ ಸಲ್ಲಿಸಿದರು. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿಯೇ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹವೇ ಇಲ್ಲದೆ ಇರುವುದರಿಂದ ಕೂಡಲೇ ವಿಶ್ರಾಂತಿ ಗೃಹ ನಿರ್ಮಿಸಬೇಕು, ಅಲ್ಲದೆ, ಪೌರ ಕಾರ್ಮಿಕರಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಜನಾಂಗದವರನ್ನು ನೇರವಾಗಿ ನೇಮಕ ಮಾಡಬೇಕು. ಅನಕ್ಷರಸ್ಥರಾಗಿದ್ದರೂ ವರ್ಷಗಳಿಂದ ಮಲ-ಮೂತ್ರ ಎತ್ತುವಂತಹ ಕಠಿಣ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಜೆನ್ಸಿ ಮೂಲಕ ನೇಮಕ ಮಾಡುತ್ತಿರುವುದರಿಂದ ಅವರಿಗೆ ಸಮರ್ಪಕ ವೇತನ ಹಾಗೂ ಪಿಎಫ್ ಸೌಲಭ್ಯ ದೊರಕುತ್ತಿಲ್ಲ. ಹೀಗಾಗಿ ಇಲಾಖೆಯಿಂದಲೇ ನೇರ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಮವಸ್ತ್ರ ನೀಡಬೇಕು. ಜೊತೆಗೆ ಶೂ, ಹ್ಯಾಂಡ್ ಗ್ಲೋವ್ಸ್, ಸ್ಯಾನಿಟೈಸರ್, ಸೋಪ್ ಮುಂತಾದ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು. ಆದರೆ ಇದುವರೆಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ದೂರಿದರು. ಇನ್ನು ಕಾರ್ಮಿಕರಿಗೆ ನೀಡಬೇಕಾದ ಕುಡಿಯುವ ನೀರು, ಉಪಹಾರ ಮತ್ತು ಊಟ ಸರಿಯಾಗಿ ನೀಡುತ್ತಿಲ್ಲ; ಇದರಲ್ಲಿ ಅವ್ಯವಹಾರ ನಡೆಯುತ್ತಿದ್ದು, ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ಟೋಬರ್ 2ರಂದು ಗಾಂಧಿ ವೃತ್ತದಲ್ಲಿ ಸ್ವಚ್ಛತೆ ಹಾಗೂ ದೀಪಾಲಂಕಾರ ಕಾರ್ಯ ನಡೆದಿಲ್ಲ, ಸಂಬಂಧಪಟ್ಟ ಜವಾನರು ಹಾಗೂ ಎಸ್‌.ಐ. ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಪೌರ ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ನಿಂಗಣ್ಣ ಬೀರನಾಳ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕು ಸಂಚಾಲಕರಾದ ಆಂಜನೇಯ ಬಳಿಚಕ್ರ, ಅನೀಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:54 pm

Kalaburagi | ಅನ್ಯ ತಾಲೂಕಿಗೆ ಅನುದಾನ ವರ್ಗಾವಣೆ ಪ್ರಕರಣ: ಐವರು ಇಂಜಿನಿಯರ್‌ಗಳ ಅಮಾನತು

ಕಲಬುರಗಿ: ಕೆಕೆಆರ್‌ಡಿಬಿಯಿಂದ ಮಂಜೂರಾದ ಅನುದಾನ ಅನ್ಯ ತಾಲೂಕಿಗೆ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಐವರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಿಗಮದ ಎಇಇ ಅರುಣಕುಮಾರ ಅವರು ಚಿಂಚೋಳಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದರು. ಚಿಂಚೋಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅನುದಾನ ವರ್ಗಾವಣೆಯಿಂದ ಅಪೂರ್ಣವಾಗಿರುವ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಿರುವ ಬಗ್ಗೆ ಚರ್ಚೆಯ ವೇಳೆಯಲ್ಲಿ ಅರುಣಕುಮಾರ ಅವರು ಮಾಹಿತಿ ನೀಡಿದರು. ಇದೇ ವೇಳೆಯಲ್ಲಿ ಮಾತನಾಡಿದ ಶಾಸಕ ಅವಿನಾಶ್ ಜಾಧವ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಾಗ ನಾನೇ ಖುದ್ದಾಗಿ ನಿಗಮದ ಎಂ.ಡಿ ಅವರನ್ನು ಭೇಟಿ ಮಾಡಿ ತಿಳಿಸಿದ್ದೇನೆ. ಯಾವ ಕ್ರಮವೂ ಜರುಗಿಸಿರಲಿಲ್ಲ. ಆಗ ಚಿಂಚೋಳಿ ಜನರೊಂದಿಗೆ ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದಾಗ ತನಿಖೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಎಸ್‌ಐಟಿ ರಚನೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದರು. ಜಲ್ ಜೀವನ ಮಿಷನ್ ಯೋಜನೆಯಡಿ 108 ಕೋಟಿ ರೂ. ಖರ್ಚು ಮಾಡಿ ಸುಮಾರು 118 ಕಾಮಗಾರಿ ಮುಗಿಸಲಾಗಿದೆ. ಇದರಲ್ಲಿ ಒಂದಾದರೂ ನಮಗೆ ತೋರಿಸಿ ಎಂದಾಗ ಇಂಜಿನಿಯರ್‌ ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಶಾಸಕರು ಮತ್ತು ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಮಾಲಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ತಾ.ಪಂ ಇಒ ಸಂತೋಷ ಚವ್ಹಾಣ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ವಾರ್ತಾ ಭಾರತಿ 18 Feb 2026 9:49 pm

ಧ್ವನಿ ಇಲ್ಲದವರ ಪರ ಸಂಘಟನೆಗಳು ನಿಲ್ಲಬೇಕು: ಜೇರಟಗಿಯ ಶ್ರೀಗಳು

ಇಮ್ಮಡಿ ಪುಲಕೇಶಿ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ 18 Feb 2026 9:45 pm

ಸುರತ್ಕಲ್‌ ವಿಷನ್‌ ಕಮಿಟಿ ವತಿಯಿಂದ ರಂಝಾನ್‌ ಕಿಟ್‌ ವಿತರಣೆ

ಮಂಗಳೂರು: ಸುರತ್ಕಲ್‌ ವಿಷನ್‌ ಕಮಿಟಿ ವತಿಯಿಂದ ರಂಝಾನ್‌ ಕಿಟ್‌ ವಿತರಣೆ-2026 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸುರತ್ಕಲ್‌ ಜಮಾತಿನ ಅರ್ಹ ಕುಟಂಬಗಳಿಗೆ ಹಾಗೂ ಜಮಾತಿನ ಅಧೀನದಲ್ಲಿರುವ ಎಲ್ಲಾ ಮಸೀದಿಗಳ ಉಸ್ತಾದರು ಗಳನ್ನೊಳಗೊಂಡು ಒಟ್ಟು 150 ರಂಝಾನ್‌ ಕಿಟ್‌ಗಳನ್ನು ವಿತರಿಸಲಾಯಿತು. ರಂಝಾನ್‌ ಕಿಟ್‌ಗೆ ಸಹಾಯ ನೀಡಿದ SVC ಯ ಸದಸ್ಯರಿಗೆ ಹಾಗೂ ಕಿಟ್ ವಿತರಣೆಗೆ ಸಹಕರಿಸಿದ ಊರಿನ ಸಹೋದರರಿಗೂ ಸುರತ್ಕಲ್‌ ವಿಷನ್‌ ಕಮಿಟಿ ಪರವಾಗಿ ಧನ್ಯವಾದ ಸಲ್ಲಿಸಲಾಯಿತು ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಮುಸ್ತಫ ಸುರತ್ಕಲ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವಾರ್ತಾ ಭಾರತಿ 18 Feb 2026 9:36 pm

Aland | ಮುಸ್ಲಿಂ ಸಮುದಾಯ ಸೇರಿ ಸರ್ವ ಸಮಾಜದ ರಕ್ಷಣೆಯೇ ನನ್ನ ಮೊದಲ ಆದ್ಯತೆ: ಸುಭಾಷ ಗುತ್ತೇದಾರ

ಆಳಂದ: ತಾಲೂಕಿನಲ್ಲಿ ಮುಸ್ಲಿಂ ಸಮುದಾಯ ಸೇರಿ ಸರ್ವ ಸಮಾಜದವರಿಗೂ ಯಾವುದೇ ರೀತಿಯ ತೊಂದರೆ ಎದುರಾಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕಕ್ಕೆ ನೇಮಕಗೊಂಡ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಅಲ್ಪಸಂಖ್ಯಾತರ ವಿರೋಧಿ ಎಂಬ ಅಪಪ್ರಚಾರಕ್ಕೆ ಯಾವುದೇ ಆಸ್ಪದವಿಲ್ಲ. ಬಿಜೆಪಿ ಸರ್ವ ಸಮಾಜದ ಹಿತ, ಸಮಾನ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಪಕ್ಷವಾಗಿದೆ ಎಂದರು. ಕಳೆದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಮತ್ತು ಅಲ್ಪಸಂಖ್ಯಾತರ ನಡುವಿನ ವಿಶ್ವಾಸಕ್ಕೆ ಭದ್ರ ಅಡಿಪಾಯವಾಗಿದೆ. ಇದೇ ಕಾರಣದಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪಕ್ಷದತ್ತ ಆಕರ್ಷಿತರಾಗಿ ಸೇರ್ಪಡೆಯಾಗುತ್ತಿದ್ದಾರೆ. ಮುಂದೆಯೂ ಮುಸ್ಲಿಂ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ಕಾಳಜಿ ವಹಿಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವೆ ಎಂದು ಭರವಸೆ ನೀಡಿದರು. ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುವ ಮುಖಂಡ ಸಲೀಂ ಜಮಾದಾರ ಅವರನ್ನು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ ಹಾಗೂ ನಿಂಬರಗಾ ಜಿಪಂ ಕ್ಷೇತ್ರದ ಮಾಜಿ ಸದಸ್ಯೆಯ ಪತಿ ಮಹಿಬೂಬ ಆಳಂದ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ಕಿಣ್ಣಿಸುಲ್ತಾನ ಗ್ರಾಪಂ ಮಾಜಿ ಅಧ್ಯಕ್ಷ ಮಹಿಬೂಬ ಶೇಖ್ ಭಾಷಾ ಅವರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಿದರು. ಇದಲ್ಲದೆ, ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಮೈನಾರಿಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿ ಮಹಿಬೂಬ್ ಜಮಾದಾರ (ನಿಂಬರಗಾ), ಸಲೀಂ ಜಮಾದಾರ (ಆಳಂದ) ಹಾಗೂ ಕಾರ್ಯದರ್ಶಿಯಾಗಿ ಮನೋಜ ಕಾಸರ (ಸಾವಳೇಶ್ವರ) ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಳಂದ ಬಿಜೆಪಿ ಮಂಡಲದ ವತಿಯಿಂದ ಮೈನಾರಿಟಿ ಮೋರ್ಚಾ ಅಧ್ಯಕ್ಷರಾಗಿ ಮಹಿಬೂಬ್ ಭಾಷಾ ಶೇಖ್ ಸೇರಿದಂತೆ ಮೈನಾರಿಟಿ ಮೋರ್ಚಾದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆ, ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರನ್ನು ಮೈನಾರಿಟಿ ಮೋರ್ಚಾದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮುಖಂಡ ಮಲ್ಲಣ್ಣ ನಾಗೂರೆ, ಶರಣಪ್ಪ ಸಂಜುವಾಡ, ಎಸ್‌ಸಿ ಮೋರ್ಚಾ ಮುಖಂಡ ಸುನಿಲ ಹಿರೋಳಿಕರ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 18 Feb 2026 9:33 pm

ಉಬಾರ್ ಡೋನರ್ಸ್‍ನಿಂದ ರಂಝಾನ್ ಕಿಟ್, ಹೊಲಿಗೆ ಯಂತ್ರ ವಿತರಣೆ

ಉಪ್ಪಿನಂಗಡಿ: ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ, ಈ ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಅಂಗ ಸಂಸ್ಥೆಯಾದ ಉಬಾರ್ ಡೋನರ್ಸ್ ಹೆಲ್ಫ್ ಲೈನ್ ಉಪ್ಪಿನಂಗಡಿಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಸಮಯದಲ್ಲಿ ಅರ್ಹರಿಗೆ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ಹಾಗೂ ಎರಡನೇ ಹಂತದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಉಪ್ಪಿನಂಗಡಿಯ ಕೆಂಪಿಮಜಲಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಲೀಕುದ್ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷ ಎಚ್. ಯೂಸುಫ್ ಹಾಜಿ ಮಾತನಾಡಿ, ರಂಝಾನ್ ಸಮಯದಲ್ಲಿ ಅರ್ಹರಿಗೆ ಆಹಾರವನ್ನು ತಲುಪಿಸುತ್ತಿರುವ ಉತ್ತಮವಾದ ಕಾರ್ಯ. ಈ ಸಂಸ್ಥೆಯು ಕ್ರೀಡೆಯನ್ನು ಸಂಘಟಿಸುತ್ತಿರುವುದಲ್ಲದೆ, ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಯನ್ನು ಸಹ ಮುಂದಕ್ಕೆ ನೀವು ಮಾಡಿ ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕೆಂದು ಅವರು ಹೇಳಿದರು. ಹಿರಿಯ ಸಹಕಾರಿ, ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಇಂತಹ ಕಾರ್ಯಕ್ಕೆ ದೇವರ ಅನುಗ್ರಹ ಸದಾ ಇರುತ್ತದೆ ಎಂದರು. ಸಂಸ್ಥೆಯ ಸದಸ್ಯ ನಝೀರ್ ಹೊಸಮೊಗ್ರು ಮಾತನಾಡಿ, ಶೈಕ್ಷಣಿಕ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಹಿತಿ ಶಿಬಿರವನ್ನು ಆಯೋಜಿಸಲು ಸಂಸ್ಥೆ ಹಾಕಿಕೊಂಡ ಯೋಜನೆಯ ಬಗ್ಗೆ ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿ, ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಮೂಲಕ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ನಡೆಸಲಾಗುತ್ತಿದ್ದರೆ, ಉಬಾರ್ ಡೋನರ್ಸ್ ಮೂಲಕ ಕಳೆದ 11 ವರ್ಷಗಳಿಂದ ವಿವಿಧ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯ ಸಮಾಜ ಮುಖಿ ಕಾರ್ಯಗಳಿಗೆ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಮ್ಮ ಸಂಸ್ಥೆಯ ಸಮಾಜಸೇವಾ ಚಟುವಟಿಕೆಗಳನ್ನು ಪರಿಗಣಿಸಿ ಕಳೆದ ಬಾರಿ ಸಂಸ್ಥೆಯು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ಬಡವರು ಆರ್ಥಿಕವಾಗಿ ಸಬಲರಾಗಬೇಕು. ಅವರಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಬಾರಿ ನಾವು ಅರ್ಹರಿಗೆ ಉಚಿತವಾಗಿ ಟೈಲರಿಂಗ್ ಮೆಷಿನ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಎರಡನೇ ಹಂತವಾಗಿ ಈ ಬಾರಿಯೂ ಅರ್ಹರಿಗೆ ಅದನ್ನು ನೀಡಲಿದ್ದೇವೆ ಎಂದರು. ಬಿಲಾಲ್ ಮಸೀದಿ ಕಡವಿನಬಾಗಿಲು ಇದರ ಖತೀಬ್ ಇಸ್ಮಾಯಿಲ್ ರಿಝ್ವಿಯವರು ದುವಾಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ನಿಕಟಪೂರ್ವ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭು, ಮಾಲೀಕುದ್ದೀನಾರ್ ಮಸೀದಿಯ ಕಾರ್ಯದರ್ಶಿ ಶುಕೂರ್ ಹಾಜಿ, ಪ್ರಮುಖರಾದ ಇಸುಬು ಪೆದಮಲೆ, ಹಮೀದ್ ಎಂ.ಜಿ. ಸಿಟಿ ಸೆಂಟರ್, ಮುಸ್ತಫಾ ಡಬಲ್, ಇಸ್ಮಾಯಿಲ್ ತಂಙಳ್, ಅಶ್ರಫ್ ಹಾಜಿ ಸಿಟಿ, ಹಾರೂನ್ ಅಗ್ನಾಡಿ, ರವೂಫ್ ಹಾಜಿ ಯು.ಟಿ., ಅದ್ದು ಬಜಾರ್, ಮಹಮ್ಮದ್ ಕೆಂಪಿ, ಅಶ್ರಫ್ ಡಿಸೈನ್, ಬಶೀರ್ ಪೆರಿಯಡ್ಕ, ಸಿದ್ದೀಕ್ ನಿರಾಜೆ, ಶುಕೂರ್ ಕುಪ್ಪೆಟ್ಟಿ, ಇಸಾಕ್ ಹಳೆಗೇಟು, ಆಚಿ ಇಬ್ರಾಹಿಂ, ಖಲಂದರ್ ಕೊಳ್ಳೆಜಾಲ್, ರಹಿಮಾನ್ ಪೆÇರುಂಕಾಜೆ, ಮುನೀರ್ ಎನ್ಮಾಡಿ, ಜಮಾಲ್ ಕೆಂಪಿ, ಸಿದ್ದೀಕ್ ಕೆಂಪಿ, ಫೌಝರ್ ಯು.ಟಿ., ಇಕ್ಬಾಲ್ ಹಳೆಗೇಟು, ಅನೀಸ್ ಗಾಂಧಿಪಾರ್ಕ್, ಶಾನಿಲ್ ಬಸ್ತಿಕ್ಕಾರ್, ಮನ್ಸೂರ್ ಕುದ್ಲೂರ್, ರಫೀಕ್ ಮಾಸ್ಟರ್, ಸಿದ್ದೀಕ್ ಹ್ಯಾಪಿ ಟೈಮ್ಸ್, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ಸಿಟಿ, ಸಮದ್ ಕೆಂಪಿ, ಲತೀಫ್ ಕುದ್ಲೂರ್, ಫಯಾಝ್ ಯು.ಟಿ., ಮಹಮ್ಮದ್ ಕಡವಿನಬಾಗಿಲು ಮತ್ತಿತರರು ಪಾಲ್ಗೊಂಡಿದ್ದರು. ಸಂಸ್ಥೆಯ ಗೌರವ ಸಲಹೆಗಾರ ಮಹಮ್ಮದ್ ತೌಸೀಫ್ ಯು.ಟಿ. ಮತ್ತು ಇರ್ಷಾದ್ ಯು.ಟಿ. ಹಾಗೂ ಜಲೀಲ್ ಮುಕ್ರಿಯವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಈ ಬಾರಿ ಉಪ್ಪಿನಂಗಡಿ, ಮಠ, ಬೆದ್ರೋಡಿ, ಗೋಳಿತ್ತೊಟ್ಟು, ಪೆರಿಯಡ್ಕ, ಕೆಮ್ಮಾರ, ಕೊಯಿಲ, ಆತೂರು, 34 ನೆಕ್ಕಿಲಾಡಿ, ಶಾಂತಿನಗರ, ಕೋಡಿಂಬಾಡಿ, ಕರ್ವೇಲು, ಬಿಳಿಯೂರು, ಕರಾಯ, ಕಲ್ಲೇರಿ, ತಣ್ಣೀರುಪಂಥ, ಕಳೆಂಜಿಬೈಲು, ತೆಕ್ಕಾರು, ಇಳಂತಿಲ, ಬಂದಾರು, ಅಂಡೆತ್ತಡ್ಕ, ಬಟ್ಲಡ್ಕ ಪ್ರದೇಶದ 624 ಅರ್ಹ ಮನೆಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ವಿತರಿಸಲಾಯಿತು. ಎರಡನೇ ಹಂತವಾಗಿ ಈ ಬಾರಿ 24 ಮಂದಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ವಾರ್ತಾ ಭಾರತಿ 18 Feb 2026 9:31 pm

KSRTC ಸೇರಿ 4 ಸಾರಿಗೆ ನಿಗಮಗಳ ನೌಕರರಿಗೆ ಗುಡ್‌ನ್ಯೂಸ್‌: 26 ತಿಂಗಳ ಬಾಕಿ ವೇತನ ಬಿಡುಗಡೆಗೆ ಕರ್ನಾಟಕ ಸರ್ಕಾರ ಆದೇಶ

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 26 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆದೇಶ ಮಾಡಿದೆ. 2025 ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಚರ್ಚೆಗೆ ಮಾತುಕತೆಗೆ ಚಾಲನೆ ನೀಡಲು ನಿರ್ಧರಿಸಿದೆ. ಈ ಮೂಲಕ ಗುರುವಾರ ಕರೆಕೊಟ್ಟಿದ್ದ ಬೆಂಗಳೂರು ಚಲೋಯಿಂದ ಸಾರಿಗೆ ನೌಕರರು ಹಿಂದೆ ಸರಿಯುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 18 Feb 2026 9:29 pm

ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 37,337 ಮಂದಿ ಅಭ್ಯರ್ಥಿಗಳು

ಮಂಗಳೂರು, ಫೆ.18: ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18,745 ವಿದ್ಯಾರ್ಥಿಗಳು ಮತ್ತು 18592 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 37,337 ಮಂದಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 15 ಸರಕಾರಿ, 22 ಖಾಸಗಿ ಮತ್ತು 22 ಅನುದಾನರಹಿತ ಖಾಸಗಿ ಕಾಲೇಜುಗಳು ಸೇರಿದಂತೆ 59 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು 21, ಬಂಟ್ವಾಳ 6, ಬೆಳ್ತಂಗಡಿ 8, ಪುತ್ತೂರು 5, ಸುಳ್ಯ 2, ಕಡಬ 5, ಮೂಡಬಿದ್ರೆ 6, ಉಳ್ಳಾಲ 4, ಮೂಲ್ಕಿ ತಾಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. *ವಿಜ್ಞಾನ ವಿಭಾಗದಲ್ಲಿ ಗರಿಷ್ಠ: ದ.ಕ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 18,559 ಮಂದಿ (ವಿದ್ಯಾರ್ಥಿಗಳು 8983 ಮತ್ತು ವಿದ್ಯಾರ್ಥಿನಿಯರು 9,576) , ರೆಗ್ಯುಲರ್ 18401 (ಗಂ .8,901 ಮತ್ತು ಹೆ. 9,500), ರಿಪೀಟರ್ 158 ಮಂದಿ *ಕಲಾವಿಭಾಗ: 3,724: ಕಲಾವಿಭಾಗದಲ್ಲಿ 3,724 ಮಂದಿ. ಈ ಪೈಕಿ ವಿದ್ಯಾರ್ಥಿನಿಯರು 2,047 ಮತ್ತು ವಿದ್ಯಾರ್ಥಿಗಳು 1,677, ರೆಗ್ಯುಲರ್ 3,326 ಮಂದಿ , ರಿಪೀಟರ್ 92ಮತ್ತು ಖಾಸಗಿ 306 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. *ವಾಣಿಜ್ಯ ವಿಭಾಗದಲ್ಲಿ 15,054: ವಾಣಿಜ್ಯ ವಿಭಾಗದಲ್ಲಿ 15,054 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿ ದ್ದಾರೆ. ವಿದ್ಯಾರ್ಥಿಗಳು 8,085 ಮತ್ತು ವಿದ್ಯಾರ್ಥಿನಿಯರು 6969ಮಂದಿ. ಖಾಸಗಿ 988 ಮತ್ತು ರಿಪೀಟರ್ 207 ಮಂದಿ ಎಂದು ಡಿಸಿ ದರ್ಶನ್ ಎಚ್‌ವಿ ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ಸಾಗಾಣಿಕೆಗಾಗಿ ಒಟ್ಟು 16 ಮಾರ್ಗಗಳನ್ನು ಕಲ್ಪಿಸಲಾ ಗಿದೆ, ತ್ರಿಸದಸ್ಯ ಸಮಿತಿ ಸದಸ್ಯರನ್ನೊಳಗೊಂಡ 16 ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಪರೀಕ್ಷಾ ಕೇಂದ್ರಗಳ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣವನ್ನು ಪಡೆಯಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗಾಗಿ ತ್ರಿಸದಸ್ಯ ಸಮಿತಿ ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆ ಮತ್ತು ಜಿಲ್ಲಾ ಜಾಗೃತದಳದ ಸದಸ್ಯರುಗಳಿಗೆ ವಾಹನ ವ್ಯವಸ್ಥೆ ಹಾಗೂ ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಕೆಎಸ್‌ಇಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿವರ್ಗದ ಬಯೋಮೆಟ್ರಿಕ್ ಹಾಜರಾತಿಗೆ ನೋಂದಣಿ ವ್ಯವಸ್ಥೆ ಮಾಡಲಾಗಿದೆ.ಪರೀಕ್ಷಾ ಕೇಂದ್ರಗಳಿಗೆ ಗೌಪ್ಯವಸ್ತುಗಳನ್ನು ವಿತರಿಸುವ ಚಟುವಟಿಕೆಗಳನ್ನು ಖಜಾನೆಯ ಒಳಗೆ ಮತ್ತು ಹೊರಗೆ 24*7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 2026 ಫೆ. 28ರಿಂದ ಮಾ.17 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ರ ಜಿಲ್ಲಾ ವ್ಯಾಪ್ತಿಯ 59 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ನುಡಿದರು. ಪರೀಕ್ಷಾ ಅವಧಿಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. *ಎಸ್‌ಎಸ್‌ಎಲ್‌ಸಿಗೆ 29,397 ಅಭ್ಯರ್ಥಿಗಳು:ದ.ಕ. ಜಿಲ್ಲೆಯಲ್ಲಿ ಮಾ.18ರಿಂದ ಆರಂಭವಾಗಲಿರುವ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 29, 397 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ರೆಗ್ಯುಲರ್ 27,633, ಖಾಸಗಿ 979, ರೆಗ್ಯುಲರ್ ರಿಪೀಟರ್ 632, ರಿಪೀಟರ್ ಖಾಸಗಿ 153 ಆಗಿದ್ದು, ಜಿಲ್ಲೆಯ ಒಟ್ಟು 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಸಿ ದರ್ಶನ್ ಎಚ್‌ವಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. 22 ಕ್ಲಸ್ಟರ್ ಹಾಗೂ 38 ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 22 ಕ್ಲಸ್ಟರ್ ಗಳಲ್ಲಿ 53 ಪರೀಕ್ಷಾ ಕೇಂದ್ರಗಳಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಸುಮಾರು 1265 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. .ಪ್ರತೀ ಪರೀಕ್ಷಾ ಕೇಂದ್ರಕ್ಕೆ ಓರ್ವ ಕೇಂದ್ರ ಮುಖ್ಯ ಅಧೀಕ್ಷಕರು, ಓರ್ವ ಅಭಿರಕ್ಷಕರು, ಓರ್ವ ಸ್ಥಾನೀಯ ಜಾಗೃತ ದಳದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 350 ಕ್ಕಿಂತ ಹೆಚ್ಚು ಮಕ್ಕಳಿದ್ದ ಕೇಂದ್ರಗಳಿಗೆ ಓರ್ವ ಉಪ ಮುಖ್ಯ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಗಾಳಿ ಬೆಳಕು ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಮಕ್ಕಳು ಪರೀಕ್ಷೆಯನ್ನು ಹಬ್ಬವೆಂದು ಪರಿಗಣಿಸಿ ಪರೀಕ್ಷೆಗೆ ಹಾಜರಾಗಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ವಿಕಲ ಚೇತನ ಮಕ್ಕಳಿಗೆ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ, ಮಂಡಳಿ ನಿಗದಿಪಡಿ ಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಗತ್ಯ ಭದ್ರತಾ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ 2 ಪೂರ್ವಸಿದ್ಧತಾ ಪರೀಕ್ಷೆಗಳ ಮೂಲಕ ಮಕ್ಕಳಿಗೆ ಪರೀಕ್ಷೆಗೆ ತಯಾರಾಗಲು ಮಾರ್ಗದರ್ಶನ ನೀಡಲಾಗಿದ್ದು ಫೆ.23 ರಿಂದ 3ನೇ ಹಾಗೂ ಅಂತಿಮ ಸಿದ್ಧತಾ ಪರೀಕ್ಷೆ ನಡೆಯಲಿದೆ ಎಂದು ಡಿಸಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ದ.ಕ.ಜಿ.ಪಂ ಸಿಇಒ ವಿನಾಯಕ ನರ್ವಾಡೆ, ದ.ಕ.ಜಿಲ್ಲಾ ಎಸ್ಪಿ ಡಾ.ಅರುಣ್, ಡಿಡಿಪಿಐ ಶಶಿಧರ್ ಜಿ.ಎಸ್, ಡಿಡಿಪಿಯು ರಾಜೇಶ್ವರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:28 pm

’ಅರಕಾನಟ್-ಹಿಸ್ಟರಿ, ಕಾನ್ಸ್ಟಿಟುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿ ಬಿಡುಗಡೆ

ಮಂಗಳೂರು: ’ಅರಕಾನಟ್-ಹಿಸ್ಟರಿ,ಕಾನ್ಸ್ಟಿಟುಯೆಂಟ್, ಕ್ಯಾನ್ಸರ್ ಆಂಡ್ ಬಿಯಾಂಡ್’ ಕೃತಿ ಬಿಡುಗಡೆ ಕಾರ್ಯಕ್ರಮವು ಬುಧವಾರ ಕ್ಯಾಂಪ್ಕೋ ಸಂಸ್ಥೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಡಿಕೆಯ ಬಗ್ಗೆ ವಿವಿಧ ಅಪಸ್ವರಗಳು ಕೇಳಿ ಬರುತ್ತಿರುವ ಸಂದರ್ಭ ಅಡಿಕೆಯ ಕುರಿತಂತೆ ನಡೆಯುವ ಸಂಶೋಧನೆಗಳಿಗೆ ಕ್ಯಾಂಪ್ಕೊ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ದೇಶದ 10 ಶ್ರೀಮಂತ ಜಿಲ್ಲೆಗಳಲ್ಲಿ ದ.ಕ. ಜಿಲ್ಲೆ ಎಂಟನೇ ಸ್ಥಾನದಲ್ಲಿದೆ ಎಂಬುದು ಇತ್ತೀಚೆಗೆ ವರದಿಯಾಗಿದೆ. ಈ ಸ್ಥಾನ ಪಡೆಯಲು ಅಡಿಕೆಯೇ ಪ್ರಮುಖವಾಗಿದೆ. ಇಲ್ಲಿನ ಜನ ಜೀವನ, ಸಂಸ್ಕೃತಿ, ಆಚಾರ-ವಿಚಾರ, ಶಿಕ್ಷಣ ಸಹಿತ ಇಡೀ ವ್ಯವಸ್ಥೆಯ ಹಿಂದೆ ಅಡಿಕೆ ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಅರೆಕಾನಟ್ ಕೃತಿ ಪೂರಕವಾಗಿದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು. ಸಂಶೋಧಕ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಕೃತಿಯಲ್ಲಿ ಅಡಿಕೆಯ ಇತಿಹಾಸ, ಆರ್ಥಿಕ ಸ್ಥಿತಿಗತಿ, ಅಡಿಕೆಯ ಗುಣಗಳು, ಕ್ಯಾನ್ಸರ್‌ಕಾರಕವೋ ಅಲ್ಲವೋ ಎನ್ನುವ ಬಗ್ಗೆ ವಿವರವಿದೆ. ಈ ಕೃತಿಯು ಅಡಿಕೆ ಬೆಳೆಯ ಬಗ್ಗೆ ಸುಪ್ರೀಂಕೋರ್ಟ್, ವಿಶ್ವ ಆರೋಗ್ಯ ಸಂಸ್ಥೆಯ ಮುಂದೆ ವಾದ ಮಂಡಿಸಲು ನೆರವಾಗಲಿದೆ. ಈ ಸಂಶೋಧನೆ ಇಲ್ಲಿಗೆ ನಿಲ್ಲದೆ ಅಡಿಕೆ ಬೆಳಗಾರರ ಹಿತ ಕಾಯುವ ನಿಟ್ಟಿನಲ್ಲಿ ಮುಂದುವರೆಯಬೇಕು ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಸೇರಿಸಬೇಕು. ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯದಿದ್ದಲ್ಲಿ ರಾಜ್ಯದ 28 ಸಂಸದರನ್ನು ಕಳೆದುಕೊಳ್ಳುತ್ತೇವೆ ಎನ್ನುವ ವಿಚಾರ ಬಂದಾಗ ಈ ಸಮಸ್ಯೆಗೆ ಸರಕಾರ ಪರಿಹಾರ ನೀಡಲು ಸಾಧ್ಯ. ಅಡಕೆಯಿಂದ ಸರಕಾರಕ್ಕೆ ಆದಾಯ ಬರುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ, ಹಣದ ಚಲಾವಣೆಯಾಗುತ್ತದೆ. ದ.ಕ.ದಲ್ಲಿ ಬ್ಯಾಂಕ್, ಶಿಕ್ಷಣ ಸಂಸ್ಥೆಗಳು ಅಡಿಕೆಯಿಂದಾಗಿಯೇ ಬೆಳೆದಿದೆ. ಅಡಿಕೆ ಸೋತಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಸೋಲಲಿವೆ ಎಂದು ಡಾ. ವಿಘ್ನೇಶ್ವರ ವರ್ಮುಡಿ ಅಭಿಪ್ರಾಯಪಟ್ಟರು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಅಡಿಕೆ ದೇಶದಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಅಡಿಕೆ ಕ್ಯಾನ್ಸರ್‌ಕಾರಕವೆಂಬ ಚರ್ಚೆಯ ಅನುಮಾನಗಳನ್ನು ಈ ಕೃತಿ ಹೋಗಲಾಡಿಸಲಿದೆ. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಇದರಲ್ಲಿ ಅಡಕವಾಗಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆ ಗಳಿಗೆ ಎನ್‌ಐಟಿಕೆ ನೆರವಾಗಲಿದೆ ಎಂದರು. ಕೃತಿಕಾರ ಹಾಗೂ ಎನ್‌ಐಟಿಕೆ ಇಂಜಿನಿಯರ್ ಡಾ. ಪ್ರಸನ್ನ ಬೇಲೂರು ಮಾತನಾಡಿ, ನಾನು ಸ್ವತಃ ಅಡಿಕೆ ಬೆಳೆಗಾರನಾಗಿದ್ದು, ಆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದೇನೆ. ಅಡಿಕೆಯ ಬಗ್ಗೆ ಅಪಸ್ವರಗಳು ಕೇಳಿ ಬಂದಾಗ ಬೆಳೆಗಾರ ಹಾಗೂ ಸಂಶೋಧಕನಾಗಿ ಸುಮ್ಮನಿರಲು ಸಾಧ್ಯವಾಗಲಿಲ್ಲ. ಕೋವಿಡ್ ಸಂದರ್ಭ ಬಳಸಿಕೊಂಡು ಎನ್‌ಐಟಿಕೆ ಸಹಕಾರದೊಂದಿಗೆ ಸಂಶೋಧನೆ ನಡೆಸಲು ಆರಂಭಿಸಿದೆ. ರಾಜ್ಯದ ವಿವಿಧ ಕಡೆ ಅಧ್ಯಯನ ನಡೆಸಿ ಇಂಗ್ಲಿಷ್‌ನಲ್ಲಿ ಕೃತಿಯನ್ನು ಹೊರತಂದಿದ್ದೇನೆ. ಮುಂದೆ ಕನ್ನಡದಲ್ಲೂ ಕೃತಿಯನ್ನು ಹೊರ ತರುವ ಉದ್ದೇಶ ಇದೆ ಎಂದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು. ಗೋವಿಂದ ಭಟ್ ಕೃತಿಕಾರರ ಪರಿಚಯ ಮಾಡಿದರು. ಕ್ಯಾಂಪ್ಕೊ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಸ್ವಾಗತಿಸಿದರು. ಡಿಜಿಎಂ ಶ್ಯಾಮ್ ವಂದಿಸಿದರು. ಮುಖ್ಯ ವ್ಯವಸ್ಥಾಪಕ ಜಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 18 Feb 2026 9:24 pm

ಇರಾನ್ ನಾಯಕರಿಗೆ ಎಚ್ಚರಿಕೆ ನೀಡಲು ಶಕ್ತಿಶಾಲಿ ಯುದ್ಧ ವಿಮಾನಗಳನ್ನು ಕಳುಹಿಸಿದ ಅಮೆರಿಕ | US Military

ಇರಾನ್ ಕೊನೆಗೂ ಮಂಡಿಯೂರಿ ಕೂರುವಂತೆ ಮಾಡುತ್ತಿದೆ ಅಮೆರಿಕ, ಅದರಲ್ಲೂ ತನ್ನ ಬಳಿ ಇದ್ದ ಎಲ್ಲಾ ಶಕ್ತಿಶಾಲಿ ಅಸ್ತ್ರಗಳನ್ನು ಹೊರಗೆ ತೆಗೆಯಲು ಅಮೆರಿಕ ಸೇನೆ ಸಜ್ಜಾಗಿದೆ. ಈಗಾಗಲೇ ಯುದ್ಧ ನೌಕೆ ಹಾಗೂ ಶಕ್ತಿಶಾಲಿ ಕ್ಷಿಪಣಿಗಳನ್ನು ಇರಾನ್ ಹತ್ತಿರಕ್ಕೆ ಕಳುಹಿಸಿದ್ದ ಅಮೆರಿಕ ಮಿಲಿಟರಿ, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಜಗತ್ತಿನ ಅತಿ ಶಕ್ತಿಶಾಲಿ ಯುದ್ಧ ವಿಮಾನಗಳು ಎಂದು ಕರೆಯುವ ಎಫ್-22

ಒನ್ ಇ೦ಡಿಯ 18 Feb 2026 9:23 pm

KSRTC STRIKE: ರಾಮಲಿಂಗಾ ರೆಡ್ಡಿ ಗುಡ್‌ನ್ಯೂಸ್; ನೌಕರರ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆಗೆ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುವ ಒಂದು ಮುನ್ನವೇ ಸಂಧಾನಕ್ಕೆ ಸರ್ಕಾರ ಮುಂದಾಗಿದೆ. ಈವರೆಗೂ ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ. ಗುರುವಾರ (ಫೆ.19) ಹಮ್ಮಿಕೊಂಡ ರಾಜ್ಯ ಸಾರಿಗೆ ಮುಷ್ಕರದ

ಒನ್ ಇ೦ಡಿಯ 18 Feb 2026 9:22 pm

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಕಾಲ್ನಡಿಗೆ ಜಾಥ

ಮಂಗಳೂರು, ಫೆ.18: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಜನಜಾಗೃತಿ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಮನಪಾ ಕಚೇರಿವರೆಗೆ ಬುಧವಾರ ಕಾಲ್ನಾಡಿಗೆ ಜಾಥಾ ನಡೆಯಿತು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸ್ವತಃ ರಾಜೀವ್ ಗಾಂಧಿಯೇ ಸರಕಾರ ಒಂದು ರೂಪಾಯಿ ಕೊಟ್ರೆ ಅದರಲ್ಲಿ ಕೆಲವೇ ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ಹೇಳಿ ವೈಫಲ್ಯ ವ್ಯಕ್ತಪಡಿಸಿದ್ದರು. ಆದರೆ ಈಗ ಒಂದೇ ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಆಸ್ಪದವಿಲ್ಲದೆದೇ ನರೇಂದ್ರ ಮೋದಿ ಸರಕಾರ ಆಡಳಿತ ನಡೆಸುತ್ತಿದೆ. ಅದರ ಮುಂದುವರಿದ ಭಾಗವೇ ವಿಬಿ ಜಿ ರಾಮ್ ಜಿ. ಆಗಿದೆ. ಆದರೆ ವಿಧಿಯಿಲ್ಲದೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ವಿಬಿ-ಜಿ ರಾಮ್ ಜಿ ಕಾಯ್ದೆ ಮೂಲಕ ಬಡವರಿಗೆ ದುಡಿಯಲು ಹೆಚ್ಚಿನ ಅವಕಾಶ ನೀಡಿದರೂ ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದಾರೆ ಎಂದರೆ ಅವರ ಉದ್ದೇಶ ಬೇರೆ ಏನೋ ಇದೆ. ದುಡಿಯುವ ದಿನವನ್ನು 100ರಿಂದ 125ಕ್ಕೆ ಏರಿಸಿದ್ದು ತಪ್ಪಾ? ಇದರಿಂದ ಕಾಂಗ್ರೆಸ್ಸಿಗೆ ಏನು ತೊಂದರೆ? ಬಡ ಜನರ ಅಭಿವೃದ್ಧಿಗಾಗಿರುವ ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುವ ಕಾಂಗ್ರೆಸ್ಸಿಗರನ್ನು ನಂಬಬೇಕಿಲ್ಲ ಎಂದರು. ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ತಿಲಕ್‌ರಾಜ್ ಕೃಷ್ಣಾಪುರ, ಪೂರ್ಣಿಮಾ ಎಂ., ಸಂಜಯ್ ಪ್ರಭು, ಶಾನವಾಝ್, ಜಗನ್ನಾಥ್, ಸುಧೀರ್ ಶೆಟ್ಟಿ ಕಣ್ಣೂರು, ನಂದನ್ ಮಲ್ಯ, ವಸಂತ್ ಜೆ.ಪೂಜಾರಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಜಗೋಪಾಲ್ ರೈ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 9:15 pm

ನಿಮ್ಮ ಕಸ, ಅನುದಾನ ಎರಡೂ ಬೇಡ; ಎಚ್ಚರಿಕೆ, ಬೆದರಿಕೆಗೆ ನಾನು ಜಗ್ಗಲ್ಲ - ಡಿಕೆ ಶಿವಕುಮಾರ್‌ಗೆ ಧೀರಜ್ ಮುನಿರಾಜು ಟಾಂಗ್

ಬೆಂಗಳೂರು ಕಸ ವಿಲೇವಾರಿ ಮಾಡುವುದನ್ನ ತಡೆ ಹಿಡಿದ ಬಿಜೆಪಿ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದು, ನಾವು ಯಾವ ಎಚ್ಚರಿಕೆ, ಬೆದರಿಕೆಗೂ ಜಗ್ಗಲ್ಲ ಎಂದು ಹೇಳಿದ್ದಾರೆ. ದೊಡ್ಡಬಳ್ಳಾಪುರಕ್ಕೆ ನಿಮ್ಮ ಕಸವೂ ಬೇಡ, ಅನುದಾನವು ಬೇಡ ಎಂದಿದ್ದಾರೆ.

ವಿಜಯ ಕರ್ನಾಟಕ 18 Feb 2026 9:14 pm

ಮಂಗಳೂರು: ಯುವಕ ಆತ್ಮಹತ್ಯೆ

ಮಂಗಳೂರು, ಫೆ.18: ನಗರದ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಕೈ ಕೊಯ್ದುಕೊಂಡು ಬಳಿಕ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪೆರುವಾಡ್ ನಿವಾಸಿ ರೋಶನ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕದ್ರಿ ಪಾರ್ಕ್ ಬಳಿಯ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಈತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಮಂಗಳವಾರ ರಾತ್ರಿ ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ 10 ಗಂಟೆಯಾದರೂ ಕೊಠಡಿಯಿಂದ ಯುವಕ ಹೊರಗೆ ಬಾರದ ಕಾರಣ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ರಕ್ತದಲ್ಲಿ ಹುಡುಗಿಯೊಬ್ಬಳ ಹೆಸರನ್ನು ಬರೆದಿದ್ದ ಈತ ಆತ್ಮಹತ್ಯೆಗೆ ಮುನ್ನ ಇದು ನನ್ನ ಕೊನೆಯ ಸ್ಟೇಟಸ್ ಅಂತ ಹಾಕಿದ್ದ ಎನ್ನಲಾಗಿದೆ. ಈ ಹಿಂದೆಯೂ ಒಂದು ಬಾರಿ ಈತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 9:13 pm

ಕಡಲ ತಟ ಭದ್ರತೆ ಬಗ್ಗೆ ಜಾಗೃತಿ ಉದ್ದೇಶ: ಸಂದೀಪ್ ಚಕ್ರವರ್ತಿ

ಉಡುಪಿ ಜಿಲ್ಲೆಯನ್ನು ಹಾದುಹೋದ ವಂದೇ ಮಾತರಂ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

ವಾರ್ತಾ ಭಾರತಿ 18 Feb 2026 9:11 pm