Tumkur | ಹೊಯ್ಸಳಕಟ್ಟೆಯಲ್ಲಿ ಅಪರೂಪದ ’ತುರುಗೋಳ್ ವೀರಗಲ್ಲು’ ಪತ್ತೆ
ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಐತಿಹಾಸಿಕ ಮಹತ್ವವಿರುವ ’ತುರುಗೋಳ್ ವೀರಗಲ್ಲು’ ಪತ್ತೆಯಾಗಿದೆ. ಇಲ್ಲಿನ ಬಸ್ ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ. ಪ್ರಾಚೀನ ಕಾಲದಲ್ಲಿ ಹಸುಗಳೇ ಅತಿ ದೊಡ್ಡ ಸಂಪತ್ತಾಗಿದ್ದವು. ಶತ್ರುಗಳು ಅಥವಾ ಕಳ್ಳರು ಗ್ರಾಮದ ಹಸುಗಳನ್ನು ಅಪಹರಿಸಲು ಬಂದಾಗ (ತುರುಗೋಳ್), ಅವುಗಳನ್ನು ರಕ್ಷಿಸಲು ಹೋರಾಡಿ ವೀರಮರಣವನ್ನಪ್ಪಿದ ವೀರನ ನೆನಪಿಗಾಗಿ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ. ವೀರಗಲ್ಲಿನಲ್ಲಿ ವೀರನೊಬ್ಬ ಕೈಯಲ್ಲಿ ಕೊಡಲಿಯನ್ನು ಹಿಡಿದು ನಿಂತಿರುವ ಚಿತ್ರವಿದೆ. ಅವನ ಹಿಂಭಾಗದಲ್ಲಿ ಹಸುಗಳು ಹಾಗೂ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಚಿತ್ರಗಳಿವೆ. ಇದು ಸೂರ್ಯ-ಚಂದ್ರರಿರುವವರೆಗೂ ಈ ವೀರನ ಕೀರ್ತಿ ಇರಲಿ ಎಂಬ ಆಶಯವನ್ನು ಸೂಚಿಸುತ್ತದೆ. ಈ ವೀರಗಲ್ಲಿನ ಕೆಳಭಾಗದಲ್ಲಿ ಎರಡು ಸಾಲುಗಳ ಹಳೆಯ ಕನ್ನಡ ಲಿಪಿಯ ಬರವಣಿಗೆಯಿದೆ. ಇದು 'ಒಡ್ಡಹಳ್ಳಿ' ಎಂಬ ಊರಿನ ವೀರನೊಬ್ಬ ಹಸುಗಳನ್ನು ರಕ್ಷಿಸುವ ಹೋರಾಟದಲ್ಲಿ ಮಡಿದ ಬಗ್ಗೆ ಮಾಹಿತಿ ನೀಡುತ್ತದೆ. ವೀರನ ಕುಟುಂಬಸ್ಥರ ಜೀವನೋಪಾಯಕ್ಕಾಗಿ ಹಾಗೂ ಸ್ಮಾರಕದ ಪೂಜೆಗಾಗಿ ಒಂದು ಸಲಗೆಯಷ್ಟು ಗದ್ದೆಯನ್ನು ದಾನವಾಗಿ ನೀಡಿದ್ದ ವಿವರವೂ ಈ ಶಾಸನದಲ್ಲಿದೆ. ಹಿಂದೆ ಗ್ರಾಮಸ್ಥರು ಇದನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ, ಮೂಲತಃ ಹೊಯ್ಸಲಕಟ್ಟೆ ಗ್ರಾಮದವರಾದ ಪ್ರಾಚಾರ್ಯೆ ಧರಣೇಂದ್ರ ಕುಮಾರಿ ಅವರು, ತಮ್ಮ ಬುಕ್ಕಾಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಜಂಟಿಯಾಗಿ ಇಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಧರಣೇಂದ್ರ ಕುಮಾರಿ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸತೀಶ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಸನದ ಮಹತ್ವವನ್ನು ಅಧ್ಯಯನ ಮಾಡಿದರು. ಈ ವೇಳೆ ಮಾತನಾಡಿದ ಸತೀಶ್ ಕುಮಾರ್ ನಾಯಕ್, ಊರಿನ ಇತಿಹಾಸವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಸ್ಮಾರಕಗಳು ನಮ್ಮ ಪೂರ್ವಜರ ಶೌರ್ಯಕ್ಕೆ ಸಾಕ್ಷಿಯಾಗಿವೆ, ಎಂದು ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಸತೀಶ್, ಮಹೇಶ್, ಶಾರ್ವರಿ ಮತ್ತು ನರೇಂದ್ರಬಾಬು ಅವರು ಈ ಸಂಶೋಧನಾ ಕಾರ್ಯದಲ್ಲಿ ಸಾಥ್ ನೀಡಿದರು.
Raichur | ಕುಡಿಯುವ ನೀರಿನ ಸಮಸ್ಯೆಯಾದರೆ ನೊಡಲ್ ಅಧಿಕಾರಿಗಳೆ ಹೊಣೆ : ಸಚಿವ ಶರಣಪ್ರಕಾಶ್ ಪಾಟೀಲ್
ರಾಯಚೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಹಿನ್ನೆಲೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಮಸ್ಯೆ ಕಂಡು ಬಂದ ತಕ್ಷಣ ಸ್ಪಂದಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸೂಚಿಸಿದರು. ನಗರದ ಯಕ್ಲಾಸಪೂರು ಬಳಿಯ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಹಲವು ಸಭೆಗಳು ನಡೆಸಲಾಗಿದೆ. ಶಾಸಕರು ಕೂಡ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ನೀರಿನ ಕೊರತೆ ಎದುರಾಗುವ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಬೇಸಿಗೆಯಲ್ಲಿ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು. ಜೊತೆಗೆ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ಶೇ.60ರಷ್ಟು ಹೆಚ್ಚು ಮಳೆಯಾಗಿದ್ದರೂ ಕೆಲ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಈಗಾಗಲೇ 1,000 ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಇದರ ಪರಿಣಾಮವಾಗಿ ಹಲವು ಗ್ರಾಮಗಳಲ್ಲಿ ಸುಧಾರಿತ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್, ತಹಶೀಲ್ದಾರ್ ಹಾಗೂ ಪುರಸಭೆ ಕಚೇರಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು. ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲೂ ನೇಮಕ ಮಾಡಲು ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ. ಮಾರ್ಚ್ನಿಂದ ಜೂನ್ ವರೆಗೆ ನೀರಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಂಬಂಧಿತ ಇಲಾಖೆಗಳೊಂದಿಗೆ ಪೂರ್ವಭಾವಿ ಸಭೆಗಳು ಈಗಾಗಲೇ ನಡೆದಿವೆ ಎಂದು ಸಚಿವರು ತಿಳಿಸಿದರು. ಶಾಸಕರಾದ ಡಾ.ಶಿವರಾಜ ಪಾಟತ, ಬಸನಗೌಡ ದದ್ದಲ್, ಹಂಪಯ್ಯ ನಾಯಮ ಸಾಹುಕಾರ್ ಜಿಲ್ಲಾಧಿಕಾರಿ ನಿತಿಶ್ ಕೆ, ಜಿ. ಪಂ ಸಿಇಒ ಈಶ್ವರ್ ಕುಮಾರ ಕಾಂದೂ, ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಇದ್ದರು
Raichur | ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ : 82 ಜನರ ವಿರುದ್ಧ ಪ್ರಕರಣ ದಾಖಲು
ಲಿಂಗಸುಗೂರು: ಅನುಮತಿ ಇಲ್ಲದೆ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ 82 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಡಿಒ ಶೋಭಾರಾಣಿ ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎ.3ರಂದು ಬೆಳಿಗ್ಗೆ 10.50ರ ಸುಮಾರಿಗೆ ಯಾವುದೇ ಪೂರ್ವಭಾವಿ ಅರ್ಜಿ ನೀಡದೆ, ಸ್ಪಷ್ಟ ಬೇಡಿಕೆ ತಿಳಿಸದೆ ಹಾಗೂ ಕಾಲಾವಕಾಶ ನೀಡದೇ 82 ಜನರು ಏಕಾಏಕಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಬೀಗ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಬೀಗದ ಕೀಲಿ ನೀಡದೆ ಇದ್ದುದರಿಂದ ಅನಿವಾರ್ಯವಾಗಿ ಅಧಿಕಾರಿಗಳು ಬೀಗ ಮುರಿದು ಕಚೇರಿಗೆ ಪ್ರವೇಶಿಸಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಮತ್ತೆ ಅಲ್ಲಿಗೆ ಬಂದ ಪ್ರತಿಭಟನಾಕಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಕೊಲೆ ಬೆದರಿಕೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಜಾಪುರ ಗ್ರಾಮದ ನಿಜಗುಣಿ ಗುಂಟೆ, ಗುರುಚರಣಧಾಮ್ ಸೇರಿದಂತೆ ಒಟ್ಟು 82 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Chamarajanagar | ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಚಾಮರಾಜನಗರ : ಹುಲಿಗಾಗಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಪಡಗೂರು ಗ್ರಾಮದ ರೈತ ಮಹಾದೇವಸ್ವಾಮಿ ಎಂಬವರ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ಸೆರೆ ಸಿಕ್ಕ ಚಿರತೆ ಅಂದಾಜು 4 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ. ಕಳೆದ ಹಲವು ದಿನಗಳಿಂದ ಪಡಗೂರು ಸುತ್ತಮುತ್ತಲು ರೈತರು ಹುಲಿ ಆತಂಕದಲ್ಲಿದ್ದರು. ತುಮಕೂರು ಮಾದರಿಯಲ್ಲಿ ಬೋನಿಟ್ಟು ಕರುವೊಂದನ್ನು ಕಟ್ಟಿಹಾಕಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಸದ್ಯ ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಅರಣ್ಯ ಇಲಾಖೆ ಬಿಟ್ಟಿದೆ. ಚಿರತೆ ಸೆರೆಯಾಗಿದೆ ಆದರೆ ಹುಲಿ ಆತಂಕ ಇನ್ನೂ ಇದ್ದು ಅರಣ್ಯ ಇಲಾಖೆಯು ಕೂಡಲೇ ಹುಲಿ ಸೆರೆಗೆ ಕ್ರಮವಹಿಸಬೇಕೆಂದು ರೈತ ಮುಖಂಡ ಪಡಗೂರು ಶಿವಕುಮಾರ್ ಆಗ್ರಹಿಸಿದ್ದಾರೆ.
ತೆರಿಗೆ ಸಂಗ್ರಹಣೆಯಲ್ಲಿ ಶೇ.100 ರಷ್ಟು ಸಾಧನೆ : ರಾಯಚೂರಿನ ಜಿ.ಪಂ. ಸಿಇಒ ಈಶ್ವರ್ ಕುಮಾರ್ಗೆ ಪ್ರಶಂಸೆ ಪತ್ರ
ರಾಯಚೂರು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಂದ 2025-26ನೇ ಸಾಲಿನಲ್ಲಿ ಶೇ.100ರಷ್ಟು ತೆರಿಗೆ ಸಂಗ್ರಹಣೆಯ ಗುರಿ ಸಾಧಿಸಿರುವುದು ಶ್ಲಾಘನೀಯ ಸಾಧನೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪ್ರಶಂಸಿಸಿದ್ದಾರೆ. ಈ ಸಂಬಂಧ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರಿಗೆ ಪ್ರಶಂಸಾ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಪರಿಶ್ರಮ, ಕಾರ್ಯನಿಷ್ಠೆ ಹಾಗೂ ಸಮನ್ವಯದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವ್ಯವಸ್ಥಿತ ಯೋಜನೆ, ಪರಿಣಾಮಕಾರಿ ಕಾರ್ಯತಂತ್ರ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸಿದ ಈ ಯಶಸ್ಸು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಮಹತ್ವದ ಸಾಧನೆಗೆ ನೇತೃತ್ವ ನೀಡಿದ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಎಲ್ಲಾ ಸಿಬ್ಬಂದಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿರುವ ಅವರು, ಈ ಸಾಧನೆಯನ್ನು ಮುಂದುವರಿಸಿಕೊಂಡು ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ಸಾಧಿಸುವಂತೆ ಆಶಿಸಿದ್ದಾರೆ.
Kalaburagi | ಎ.11ರಂದು ಅಭಿಮಾನದ ಅಂಬೇಡ್ಕರೋತ್ಸವ : ವಿಜಯಕುಮಾರ ತೇಗಲತಿಪ್ಪಿ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ನಮ್ಮ ಭೀಮ ಅಭಿಮಾನದ ಅಂಬೇಡ್ಕರೋತ್ಸವ ಎಂಬ ವಿಶೇಷ ಮತ್ತು ವೈವಿಧ್ಯಮಯ ಕಾರ್ಯಕ್ರಮವೊಂದನ್ನು ಎ.11 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ. ರಾಷ್ಟ್ರೀಯ ಚಿಂತನೆಯೊಂದಿಗೆ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಧೀಮಂತ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ಅವರ ಐತಿಹಾಸಿಕ ನಡೆಯನ್ನು ಇಂದು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಅವರು ವಿವರಿಸಿದರು. ಮೊದಲ ಭಾಗವಾಗಿ ಕನ್ನಡ ವಿದ್ವಾಂಸರೂ ಆದ ನ್ಯಾಯವಾದಿ ಸೇಡಂ ನ ಡಾ.ಜಗನ್ನಾಥ ತರನಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಮತೆಯ ಕಣ್ಣು ಎಂಬ ವಿಶೇಷ ಕವಿಗೋಷ್ಠಿ ನಡೆಯಲಿದ್ದು, ಅನುಭವಿ ಕವಿಗಳಾದ ನರಸಿಂಗರಾವ ಹೇಮನೂರ, ಲಕ್ಷ್ಮಿದೇವಿ ರತ್ನಾಗಿರಿ, ವಿದ್ಯಾಧರ ಕಾಂಬಳೆ, ಡಾ.ಕರುಣಾದೇವಿ ಜಮದರಖಾನಿ, ಡಾ.ರಾಜಶೇಖರ ಮಾಂಗ್, ವೆಂಕುಬಾಯಿ ರಜಪೂತ, ಪರಮಾನಂದ ಸರಸಂಬಿ, ಕವಿತಾ ಕಾವಳೆ ಅವರು ಡಾ.ಅಂಬೇಡ್ಕರ್ ರವರ ಚಿಂತನೆಗಳ ಕುರಿತು ಕವನ ವಾಚಿಸಲಿದ್ದಾರೆ. ಪಾಲಿಕೆ ಸದಸ್ಯ ವಿಶಾಲ ನವರಂಗ, ಆದರ್ಶ ಶಿಕ್ಷಕಿ ಗೀತಾ ಭರಣಿ ಉಪಸ್ಥಿತರಿರುವರು. ಜಿಲ್ಲೆಯ ಹದಿನೆಂಟು ಜನ ಸಮತಾಪ್ರಿಯರಿಗೆ ಭೀಮ ಪ್ರಿಯ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಮಂಡಳಿಯ ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ಪ್ರಾಧ್ಯಾಪಕ ಡಾ.ಕರಿಗೂಳೇಶ್ವರ ಅವರು ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ರಮೇಶ ಕಮಕನೂರ, ಗುಲ್ಬರ್ಗಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ಆರತಿ ರಾಠೋಡ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆ ಫಾತೀಮಾ ಶೇಖ್ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalaburagi | ಎ.9ರಂದು ಚಿತ್ತಾಪುರದಲ್ಲಿ ʼತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮʼ
ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ “ತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮ”ವನ್ನು ಎ.9ರಂದು ಗುರುವಾರ ಬೆಳಿಗ್ಗೆ 9.30 ಗಂಟೆಗೆ ಚಿತ್ತಾಪುರ ಬಸವೇಶ್ವರ ವೃತ್ತದ ಬಜಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಜೇವರ್ಗಿ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ಆರ್. ದೊಡ್ಡಮನಿ, ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಶಾಸಕರುಗಳಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಡಾ.ಅವಿನಾಶ ಉಮೇಶ್ ಜಾಧವ್, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ಸುನೀಲ್ ವಲ್ಯಪುರೆ, ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ಡಾ. ತಳವಾರ ಸಾಬಣ್ಣ, ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರು, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರಪಾಲಿಕೆ ಮಹಾಪೌರ ವರ್ಷಾ ರಾಜೀವ ಜಾನೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಿಲ್ಲಾ ಹಾಪಕಾಮ್ಸ್ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ಕುಮಾರ್ ಪಾಂಡೆ, ಬೆಂಗಳೂರಿನ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಜಹೀರಾ ನಸೀಮ್, ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಕಲಬುರಗಿ ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ.ಸುಶೀಲಾ ಹಾಗೂ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಪಾಂಡ್ವೆ ರಾಹುಲ್ ತುಕಾರಾಮ್, ಬೆಂಗಳೂರಿನ ತೋಟಗಾರಿಕೆ ಇಲಾಖೆಯ ನಿರ್ದೇಶಕ ಇಬ್ರಾಹಿಂ ಮೈಗೂರ ಹಾಗೂ ಬೆಂಗಳೂರಿನ ಲಾಲಬಾಗ (ತರಕಾರಿಗಳು) ಜಂಟಿ ನಿರ್ದೇಶಕರು ಹಾಗೂ ಕಲಬುರಗಿ ಜಿಲ್ಲಾ ನೋಡಲ್ ಅಧಿಕಾರಿ ಧನರಾಜ್ ಕೆ. ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಉಪಚುನಾವಣೆ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರಕ್ಕೆ ಜನ ಹೇಳುವ 'ಟಾಟಾ..ಟಾಟಾ..ಬೈ ಬೈ ಎಲೆಕ್ಷನ್': ಆರ್.ಅಶೋಕ್ ಭವಿಷ್ಯ
Karnataka By Election 2026: ಕರ್ನಾಟಕದಲ್ಲಿ ಈ ವರ್ಷದ ಉಪಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಕಳೆದ ಎರಡು ವಾರಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರ ತೆರಿಗೆ ಹೊರೆ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ದೂರುತ್ತಲೇ
Bidar | ಎ.20 ರಂದು ಬಸವಣ್ಣ ಜಯಂತಿ ಅದ್ದೂರಿಯಾಗಿ ಆಚರಿಸೋಣ: ಎಡಿಸಿ ಶಿವಾನಂದ್ ಕರಾಳೆ
ಬೀದರ್: ಎ.20 ರಂದು ನಡೆಯಲಿರುವ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಯಂತಿ ದಿನದಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಬಳಿಕ ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಬಸವಣ್ಣ ಜಯಂತಿಯ ಅಂಗವಾಗಿ ಎಲ್ಲಾ ಶಾಲಾ–ಕಾಲೇಜುಗಳಲ್ಲಿ ಭಾವಚಿತ್ರ ಪೂಜೆ ನಡೆಸಬೇಕು. ಜೊತೆಗೆ ಬಸವಣ್ಣನವರ ವಚನಗಳ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಮಹನೀಯರ ವೃತ್ತಗಳಿಗೆ ದೀಪಾಲಂಕಾರ, ರಸ್ತೆ ಸುತ್ತಮುತ್ತ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಮಹಾನಗರ ಪಾಲಿಕೆ ವತಿಯಿಂದ ಕಲ್ಪಿಸಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಸಭೆಯಲ್ಲಿ ಸಮಾಜದ ಮುಖಂಡರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶರಣಪ್ಪ ಕೊಟ್ಟಪಗೋಳ್, ಸಂಚಾರಿ ನಿರೀಕ್ಷಕ ರಮೇಶ್ ಮೈಲೂರಕರ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಬಸವಣ್ಣರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಡಾ.ರಜನೀಶ್ ವಾಲಿ, ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಶಶಿಧರ್ ಹೊಸಳ್ಳಿ, ಮುಖಂಡರಾದ ಬಸವರಾಜ್ ಧನ್ನೂರ್, ಶಿವಶರಣಪ್ಪಾ ವಾಲಿ, ಜಗನ್ನಾಥ್ ಹೆಬ್ಬಾಳೆ, ದೀಪಕ್ ವಾಲಿ, ಚಂದ್ರಶೇಖರ್ ಪಾಟೀಲ್ ಗಾದಗಿ, ಸೋಮಶೇಖರ್ ಪಾಟೀಲ್ ಗಾದಗಿ, ಮಹೇಶ್ ಗೋಳನಾಳಕರ್, ವಿಜಯಕುಮಾರ್ ಮಾಳಗೆ, ಮಾರುತಿ ಬೌದ್ಧೆ, ವಿಜಯಕುಮಾರ್ ಸೋನಾರೆ, ಅಭಿ ಕಾಳೆ, ಶಾಮಣ್ಣ ಬಾವಗಿ, ಶಿವಶಂಕರ್ ಟೋಕರೆ, ಓಂಪ್ರಕಾಶ್ ರೊಟ್ಟಿ, ಶಶಿಕುಮಾರ್ ಪಾಟೀಲ್ ಸಂಗಮ್, ಸಿದ್ರಾಮಯ್ಯ ಸ್ವಾಮಿ ಹಾಗೂ ಮಾಣಿಕೇಶ್ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಡು ಪ್ರಾಣಿಗಳಿಗೆ ಸಂತಾನಹರಣ ಚಿಕಿತ್ಸೆ! ಮಾನವ- ವನ್ಯಜೀವಿ ಸಂಘರ್ಷಕ್ಕೆ ಅಂತ್ಯ ಹಾಡಲು ಸರ್ಕಾರ ಚಿಂತನೆ
ಮಾನವ -ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೂ ನಡೆಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿ, ಕೆಲವು ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವೂ ಕಂಡು ಬರುತ್ತಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವಹಾನಿಯೂ ತಪ್ಪಬೇಕು. ಮಾನವರ ಜೀವ ಉಳಿಸುವ ಕೆಲಸವೂ ಆಗಬೇಕಿದೆ ಎಂದರು.
ಮೊದಲ ಜಯಕ್ಕಾಗಿ ಹಪಹಪಿಸುತ್ತಿರುವ ಕೋಲ್ಕತ್ತಾ ಈಗ ಲಖನೌ ವಿರುದ್ಧವಾದರೂ ಗೆಲ್ಲುತ್ತಾ? ಹೇಗಿದೆ ಈಡನ್ ಗಾರ್ಡನ್ಸ್ ಪಿಚ್?
KKR VS LSG Match Preview- ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಏಪ್ರಿಲ್ 9ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ರಿಷಭ್ ಪಂತ್ ಸಾರಥ್ಯದ ಲಖನೌ ತಮಗಂ ಸಿಕ್ಕ ಮೊದಲ ಗೆಲುವಿನ ಲಯವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಬ್ಯಾಟಿಂಗ್ಗೆ ಪೂರಕವಾಗಿರುವ ಈಡನ್ ಪಿಚ್ನಲ್ಲಿ ಗುರುವಾರ ಮಳೆ ಬಾರದೇ ಹೋದಲ್ಲಿ ಬೃಹತ್ ಮೊತ್ತ ಕಾಣಬಹುದು.
Basavakalyan | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯಿಸಿ ಮನವಿ
ಬಸವಕಲ್ಯಾಣ : ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕು ಎಂದು ಬಹುಜನ ಸಮಾಜದ ಪಕ್ಷದಿಂದ ಒತ್ತಾಯಿಸಿದರು. ತಾಲೂಕು ಅಬಕಾರಿ ಅಧಿಕಾರಿಗೆ ಬುಧವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಬಸವಕಲ್ಯಾಣ ತಾಲೂಕಿನ ಗ್ರಾಮಗಳಾದ ಕಿಟ್ಟಾ, ಹಾರಕೂಡ, ಗೋಕುಳ, ಪ್ರತಾಪೂರ ಹಾಗೂ ಮುಡಬಿ ಸೇರಿದಂತೆ ಬಹುತೇಕ ಎಲ್ಲಾ ಗ್ರಾಮಗಳ ಕಿರಾಣಾ ಅಂಗಡಿ, ಪಾನ್ ಡಬ್ಬಾಗಳಲ್ಲಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಕ್ರಮ ಮದ್ಯ ಮಾರಾಟದಿಂದ ಬಡ ಜನರ ಜೀವನ ನರಕವಾಗುತ್ತಿದೆ. ವಿಶೇಷವಾಗಿ, ಕಾಲೇಜು ವಿದ್ಯಾಥಿಗಳು, ದಿನಗೂಲಿ ಕಾರ್ಮಿಕರು ಮತ್ತು ಬಡ ಕುಟುಂಬಗಳು ಈ ಅನಾಹುತದಿಂದ ಹೆಚ್ಚು ಬಾಧಿತರಾಗುತ್ತಿದ್ದಾರೆ. ಅಕ್ರಮ ಮದ್ಯದ ಲಭ್ಯತೆಯಿಂದ ಯುವಕರು ದುಶ್ಚಟಗಳ ಕಡೆಗೆ ಆಕರ್ಷಿತರಾಗಿ, ತಮ್ಮ ಶಿಕ್ಷಣ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬಗಳಲ್ಲಿ ಕಲಹಗಳು, ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಲಾಗಿದೆ. ಈ ಗಂಭೀರ ಸಮಸ್ಯೆಯನ್ನು ಗಮನಿಸಿ, ಬಸವಕಲ್ಯಾಣ ತಾಲೂಕಿನ ಗ್ರಾಮಿಣ ಭಾಗದಲ್ಲಿ ತಕ್ಷಣ ಪರಿಶೀಲನೆ ನಡೆಸಬೇಕು. ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ತಮ್ಮ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಶಂಕರ್ ಫುಲೆ, ಮಕ್ಬುಲಸಾಬ್, ರಮೇಶ್ ರಾಠೋಡ್, ರವಿ ಉದಾತೆ, ಮಸ್ತಾಸಾಬ್ ಲದಾಫ್, ಮಾರುತಿ ಮೇಕಾಲೆ, ಸಚಿನ್ ಕಾಂಬ್ಳೆ, ಮಹಾದೇವ್ ಗಾಯಕ್ವಾಡ್, ದಿಲೀಪ್ ಶಿರೊಳೆ ಹಾಗೂ ಚಂದ್ರಕಾಂತ್ ಲಂಗಡೆ ಸೇರಿದಂತೆ ಹಲವರಿದ್ದರು.
Chittapur | ಅದ್ದೂರಿಯಾಗಿ ಜರುಗಿದ ಶರಣಬಸವೇಶ್ವರ ರಥೋತ್ಸವ
ಚಿತ್ತಾಪುರ : ಪಟ್ಟಣದ ವರುಣ ನಗರದಲ್ಲಿರುವ ಶರಣಬಸವೇಶ್ವರರ ಜಾತ್ರೆಯ ನಿಮಿತ್ತ ರಥೋತ್ಸವ ಕಾರ್ಯಕ್ರಮವು ಶಿವಶಂಕರ ಮಠದ ಪೀಠಾಧಿಪತಿ ಶಿವಶಂಕರ ಶಿವಾಚಾರ್ಯರ ನೇತೃತ್ವದಲ್ಲಿ ಮಂಗಳವಾರ ಸಂಜೆ ಅಪಾರ ಭಕ್ತರ ಹರ್ಷೋದ್ಘಾರ, ಜಯಘೋಷ, ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆ ಕರ್ತೃ ಗದ್ದುಗೆಯಲ್ಲಿ ಶರಣಬಸವೇಶ್ವರರ ಮೂರ್ತಿಗೆ ವಿವಿಧ ಬಣ್ಣದ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮೂರ್ತಿಗೆ ಅಭಿಷೇಕ, ಪೂಜೆ ಕಾರ್ಯಕ್ರಮ ಸಂಪ್ರದಾಯದಂತೆ ಜರುಗಿತು. ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದಿಂದ ರಥದ ಕಳಸವನ್ನು ಮೆರವಣಿಗೆ, ಓಂಕಾರೇಶ್ವರ ರೇಷ್ಮೆ ಅವರ ಮನೆಯಿಂದ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ, ಎಚ್.ರಾಜಶೇಖರ ರೆಡ್ಡಿ ಅವರ ಮನೆಯಿಂದ ಕುಂಭದ ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ರಥಕ್ಕೆ ಕಳಸಾರೋಹಣೆ ನೆರವೇರಿಸಿ ರಥೋತ್ಸವ ಕಾರ್ಯಕ್ರಮ ಜರುಗಿತು. ರಥೋತ್ಸವ ಸಂಭ್ರಮ ಕಣ್ಮುಂಬಿಕೊಳ್ಳಲು ದೇವಸ್ಥಾನದ ಆವರಣದಲ್ಲಿ ಸಂಜೆ ಅಪಾರ ಜನರು, ಭಕ್ತರು ಕಿಕ್ಕಿರಿದು ನೆರೆದಿದ್ದರು. ಜಾತ್ರೆ ರಥೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಮುಖಂಡರು, ಅಭಿಮಾನಿಗಳು ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಇದ್ದರು.
ಕ್ಲೋಸಿಂಗ್ ಬೆಲ್ ಸಮಯದಲ್ಲೂ ಸೆನ್ಸೆಕ್ಸ್, ನಿಫ್ಟಿ ಉತ್ತಮ ವಹಿವಾಟು; ಮತ್ತಷ್ಟು ಭದ್ರವಾಗಲಿ ನಿಮ್ಮ ಹೂಡಿಕೆ ಕಪಾಟು
ನಿರಂತರವಾಗಿ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಏರಿಕೆಯತ್ತ ಮುಖ ಮಾಡಿದೆ. ಇಂದು (ಏ.8-ಬುಧವಾರ) ಮಾರುಕಟ್ಟೆ ಕ್ಲೋಸಿಂಗ್ ಬೆಲ್ ಸಮಯದಲ್ಲಿ ಸೆನ್ಸೆಕ್ಸ್ ಶೇ. 3.95ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ. 3.78ರಷ್ಟು ಏರಿಕೆ ಕಂಡಿದೆ. ಇಂದಿನ ವಹಿವಾಟು ಹಸಿರು ಬಣ್ಣದಲ್ಲಿ ಮುಕ್ತಾಯವಾಗಿರುವುದು ಹೂಡಿಕೆದಾರರಲ್ಲಿ ಭಾರೀ ಸಂತಸ ಮೂಡಿಸಿದೆ. ಒಟ್ಟು 16 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭ ದಾಖಲಾಗಿದೆ.
ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಇನ್ನೆಷ್ಟು ದಿನ? ಭವಿಷ್ಯ ನುಡಿದ ಸಚಿವ ಎಂಬಿ ಪಾಟೀಲ್
State BJP President : ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಎರಡೂ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿಜಯೇಂದ್ರ ಅಂತಹ ಲೀಡರ್ ಆಗಿದ್ದರೆ, ಬಿಜೆಪಿಗೆ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್, ಅವರ ಅವಶ್ಯಕತೆ ಏನಿತ್ತು ಎಂದು ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ.
Viral News: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದ ಕಳ್ಳ, ಹೈದರಾಬಾದ್ ಟ್ರಾಫಿಕ್ ಪೊಲೀಸ್ ಟ್ರೋಲ್
Hyderabad Viral News: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಸಿಕ್ಕಿಬಿದ್ದ ಘಟನೆ ನಡೆದಿದೆ. ಸಾಮಾನ್ಯವಾಗಿ ಕಳ್ಳರನ್ನು ಪೊಲೀಸರು ಹುಡುಕುವುದಕ್ಕೆ ಭಾರೀ ಸರ್ಕಸ್ ಮಾಡುವುದು/ ಬಲೆ ಬೀಸುವುದಕ್ಕೆ ವಿವಿಧ ಮಾರ್ಗಗಳನ್ನು ಅನುಸರಿಸುವುದು ಇದೆ. ಆದರೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಈ ವಿಷಯವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಹೈದರಾಬಾದ್ ಪೊಲೀಸರು
ನಾಳೆ(ಎ.9) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ (ಎ.9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಗೊಳ್ಳಲಿದೆ. ಗುರುವಾರ ಮಧ್ಯಾಹ್ನ 3.00 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದ್ದು, ಸದರಿ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಲಿಯಿಂದ ರವಾನಿಸಲಾಗುವುದು. ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ನಾಳೆ ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗುವುದು. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಂಡಳಿಯ ಪ್ರಕಟನೆ ತಿಳಿಸಿದೆ. ರಾಜ್ಯದಲ್ಲಿ ನಾಳೆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವುದರಿಂದ, ಮತದಾನದ ಪ್ರಕ್ರಿಯೆಗಳು ಮುಕ್ತಾಯವಾದ ನಂತರ ಸಂಜೆ ವೇಳೆಗೆ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
ತಡಿಯಂಡಮೋಲ್ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡು 72 ಗಂಟೆಗಳ ಕಾಲ ಕಳೆದ ಶರಣ್ಯ ರೋಚಕ ಸಾಹಸಗಾಥೆ!
ಕೊಡಗಿನ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಲ್ ಬೆಟ್ಟದ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿದ ಕೇರಳದ ಟೆಕ್ಕಿ ಶರಣ್ಯ ಅವರ ಈ ಸಾಹಸಗಾಥೆಯು ಮನುಷ್ಯನ ಮನೋಬಲಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 2 ರಂದು 15 ಜನರ ತಂಡದೊಂದಿಗೆ ಚಾರಣಕ್ಕೆ ತೆರಳಿದ್ದ ಶರಣ್ಯ , ಮರಳಿ ಬರುವಾಗ ಅಜಾಗರೂಕತೆಯಿಂದ ದಾರಿ ತಪ್ಪಿ ತಂಡದಿಂದ ಬೇರ್ಪತ್ತಿದ್ದರು. ಅವರ ಬಳಿ ಕೇವಲ 500 ಮಿಲಿ ಲೀಟರ್ ನೀರು ಮಾತ್ರವಿದ್ದು, ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆದ ಕಾರಣ ಅವರು ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು.ಅಂತಹ ಸಂಧರ್ಭದಲ್ಲಿ ಅವ್ರು ತೋರಿದ ಧೈರ್ಯ ಮೆಚ್ಚತಕ್ಕದ್ದು.
US-ಇರಾನ್ ಕದನವಿರಾಮ ಸ್ವಾಗತಿಸಿದ ಭಾರತ: ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ವಾಣಿಜ್ಯ ಸಂಚಾರಕ್ಕೆ ಕರೆ
ಮಧ್ಯಪ್ರಾಚ್ಯ ಸಂಘರ್ಷಕ್ಕೆ 2ವಾರಗಳ ಕದನವಿರಾಮ ಘೋಷಿಸಿರುವ ಇರಾನ್ ಹಾಗೂ ಅಮೆರಿಕಾದ ನಡೆಯನ್ನು ಭಾರತ ಸ್ವಾಗತಿಸಿದ್ದು, ಈ ಕುರಿತು ಭಾರತದ ವಿದೇಶಾಂಗ ಇಲಾಖೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು, ಈ ಕದನವಿರಾಮ ಹೊರ್ಮುಜ್ ಜಲಸಂಧಿಯಲ್ಲಿ ಜಾಗತಿಕ ವಾಣಿಜ್ಯ ಸಂಚಾರವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
Lockup Death: ತಮಿಳುನಾಡು ಲಾಕಪ್ ಡೆತ್ ಪ್ರಕರಣ: 9 ಪೊಲೀಸ್ ಗಲ್ಲಿಗೇರಲು ಕಾರಣರಾದ ಪ್ರಮುಖ ಸಾಕ್ಷಿ ಹೆಡ್ ಕಾನ್ಸ್ಟೇಬಲ್ ರೇವತಿ. ರಾಮ್ ಸೇ (Ram Say) ಅವರ ಬರಹ ಇಲ್ಲಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳಂ ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು ಪೊಲೀಸರನ್ನು ಗಲ್ಲಿಗೇರಿಸಲು ಕಾರಣರಾದ ಪ್ರಮುಖ ಸಾಕ್ಷಿ ಹೆಡ್ ಕಾನ್ಸ್ಟೇಬಲ್ ರೇವತಿ. ಒಂದು
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ರಾಣಾ ಅಯ್ಯೂಬ್ ವಿರುದ್ಧ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ: ಪತ್ರಕರ್ತೆ ರಾಣಾ ಅಯ್ಯೂಬ್ ಅವರ ‘ಎಕ್ಸ್’ ಖಾತೆಯಲ್ಲಿ ಪ್ರಕಟವಾದ ಕೆಲ ಟ್ವೀಟ್ ಗಳು ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಿದ್ದು, ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅವುಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ. ಅಮಿತಾ ಸಚ್ದೇವಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರ ಪೀಠ, ಪ್ರಶ್ನಾರ್ಹ ಟ್ವೀಟ್ ಗಳು ಅವಹೇಳನಕಾರಿ, ಪ್ರಚೋದನಕಾರಿ ಹಾಗೂ ಕೋಮು ಸೂಕ್ಷ್ಮತೆಯನ್ನು ಹಾನಿಗೊಳಿಸುವ ಸ್ವರೂಪದಲ್ಲಿವೆ ಎಂದು ಅಭಿಪ್ರಾಯಪಟ್ಟಿತು. ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ, ಎಕ್ಸ್ ಕಾರ್ಪ್, ದಿಲ್ಲಿ ಪೊಲೀಸರು ಹಾಗೂ ರಾಣಾ ಅಯ್ಯೂಬ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ನಾಳೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣ ತುರ್ತು ಸ್ವರೂಪದ್ದಾಗಿರುವುದರಿಂದ, ಸಂಬಂಧಿತ ದಾಖಲೆಗಳನ್ನು ಎಕ್ಸ್ ಗೆ ಕಳುಹಿಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅವಮಾನಕಾರಿ ಮತ್ತು ಪ್ರಚೋದನಕಾರಿ ಟ್ವೀಟ್ ಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಅಗತ್ಯವಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಪೀಠ ತಿಳಿಸಿದೆ. ಅರ್ಜಿದಾರರಾದ ಅಮಿತಾ ಸಚ್ ದೇವಾ, 2013ರಿಂದ 2017ರ ಅವಧಿಯಲ್ಲಿ ಪ್ರಕಟವಾದ ಆರು ಟ್ವೀಟ್ ಗಳು ಹಿಂದೂ ದೇವತೆಗಳನ್ನು ಅವಮಾನಿಸುವಂತಿದ್ದು, ಸಾವರ್ಕರ್ ಹಾಗೂ ಭಾರತೀಯ ಸೇನೆಯ ಮಾನಹಾನಿಗೂ ಕಾರಣವಾಗಿವೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಚ್ ದೇವಾ ಅವರು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ ನಲ್ಲಿ ದೂರು ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295ಎ ಮತ್ತು 505 ಅಡಿಯಲ್ಲಿ ಪ್ರಾಥಮಿಕ ಅಪರಾಧ ತೋರುತ್ತದೆ ಎಂದು ಹೇಳಿ ಎಫ್ಐಆರ್ ದಾಖಲಿಸಲು ಆದೇಶಿಸಿತ್ತು. ಇದೀಗ ಹೈಕೋರ್ಟ್ ಗೆ ಸಲ್ಲಿಸಿದ ಹೊಸ ಅರ್ಜಿಯಲ್ಲಿ, ಆಕ್ಷೇಪಾರ್ಹ ಟ್ವೀಟ್ ಗಳನ್ನು ತಕ್ಷಣ ಅಳಿಸುವಂತೆ ಕೋರಲಾಗಿದ್ದು, ಅವು ಇನ್ನೂ ಸಾರ್ವಜನಿಕವಾಗಿ ಲಭ್ಯವಿದ್ದು ಧಾರ್ಮಿಕ ಭಾವನೆಗಳಿಗೆ ಹಾನಿ ಉಂಟುಮಾಡುವುದರ ಜೊತೆಗೆ ಕೋಮು ಸಾಮರಸ್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಎಕ್ಸ್ ನ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸಂಪರ್ಕಿಸಿದರೂ, ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿರುವ ಕಾರಣ, ಮನವಿಯನ್ನು ಪುರಸ್ಕರಿಸದೇ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ದಿಲ್ಲಿ ಪೊಲೀಸರು ಸಲ್ಲಿಸಿದ ವರದಿಯಲ್ಲಿ, ರಾಣಾ ಅಯ್ಯೂಬ್ ಅವರ ಎಕ್ಸ್ ಖಾತೆ ಹಾಗೂ ಸಂಬಂಧಿತ ಟ್ವೀಟ್ಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಲಾಗಿತ್ತು. ಕೆಲವು ಪೋಸ್ಟ್ಗಳು ಈಗ ಲಭ್ಯವಿಲ್ಲವೆಂದೂ ಉಲ್ಲೇಖಿಸಲಾಗಿತ್ತು. ದೂರಿನ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಸಚ್ ದೇವಾ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156(3) ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅಯ್ಯೂಬ್ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯದ ನಿರ್ದೇಶಿಸುವಂತೆ ಕೋರಿದ್ದಾರೆ.
ಕದನ ವಿರಾಮ ಘೋಷಣೆ ಬೆನ್ನಲ್ಲೆ ವಾಯುಪ್ರದೇಶವನ್ನು ತೆರೆಯುವುದಾಗಿ ಘೋಷಿಸಿದ ಇರಾಕ್
ಬಾಗ್ದಾದ್: ಅಮೆರಿಕ–ಇರಾನ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸ್ಥಿತಿ ಸಾಮಾನ್ಯವಾಗುತ್ತಿದ್ದಂತೆ, ಇರಾಕ್ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆಯುವುದಾಗಿ ಘೋಷಿಸಿದೆ. ಇರಾಕ್ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದ ವಾಯುಪ್ರದೇಶ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳನ್ನು ತಕ್ಷಣದಿಂದಲೇ ಕಾರ್ಯಾಚರಣೆಗೆ ಮುಕ್ತಗೊಳಿಸಿರುವುದಾಗಿ ತಿಳಿಸಿದೆ. ಇರಾಕಿ ಸುದ್ದಿ ಸಂಸ್ಥೆ(INA)ಗೆ ನೀಡಿದ ಹೇಳಿಕೆಯಲ್ಲಿ, “ಪರಿಸ್ಥಿತಿ ಸ್ಥಿರಗೊಂಡು ಸಾಮಾನ್ಯ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ, ಇಂದಿನಿಂದ ವಾಯು ಸಂಚಾರಕ್ಕೆ ಇರಾಕ್ ವಾಯುಪ್ರದೇಶವನ್ನು ಪುನಃ ತೆರೆಯಲು ನಿರ್ಧರಿಸಲಾಗಿದೆ” ಎಂದು ಪ್ರಾಧಿಕಾರ ತಿಳಿಸಿದೆ. ಈ ಕ್ರಮದಡಿಯಲ್ಲಿ, ನಿಗದಿತ ನಿಯಮಗಳು ಮತ್ತು ಸೂಚನೆಗಳಿಗೆ ಅನುಗುಣವಾಗಿ ಓವರ್ ಫ್ಲೈಟ್ ಗಳು, ಟೇಕ್ ಆಫ್ಗಳು ಮತ್ತು ಲ್ಯಾಂಡಿಂಗ್ ಗಳು ಸೇರಿದಂತೆ ಎಲ್ಲಾ ನಾಗರಿಕ ವಿಮಾನಗಳ ಸಂಚಾರವನ್ನು ಮರುಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ವಾಯು ಸಂಚಾರವು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, “ವಾಯು ಸುರಕ್ಷತೆ ಮತ್ತು ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸಂಬಂಧಿತ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಮುಂದುವರಿಸಲಾಗುವುದು” ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
Kalaburagi | ಲಂಚ ಪ್ರಕರಣ: ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಾರಾಗೃಹ ಶಿಕ್ಷೆ, 20 ಸಾವಿರ ದಂಡ ವಿಧಿಸಿದ ಕೋರ್ಟ್
ಕಲಬುರಗಿ : ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 20,000 ದಂಡ ವಿಧಿಸಿದೆ. ಪ್ರಕರಣದ ವಿವರಗಳ ಪ್ರಕಾರ, ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದ ನಿವಾಸಿ ಹಣಮಂತ ತಳವಾರ ಅವರು ತಮ್ಮ ತಂದೆಯ ಹೆಸರಿನ ಇನಾಮ ಜಮೀನಿನ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ ಜಮಾದಾರರನ್ನು ಸಂಪರ್ಕಿಸಿದ್ದರು. ಈ ವೇಳೆ ಆರೋಪಿಯು 15,000 ಲಂಚದ ಬೇಡಿಕೆ ಇಟ್ಟಿದ್ದು, ಮೊದಲು 6,000 ಸ್ವೀಕರಿಸಿದ್ದಾರೆ. ನಂತರ ಉಳಿದ 9,000 ಸ್ವೀಕರಿಸುವ ವೇಳೆ ಜೇವರ್ಗಿಯ ಮಿನಿ ವಿಧಾನಸೌಧದ ಟೀ ಸ್ಟಾಲ್ನಲ್ಲಿ ಲೋಕಾಯುಕ್ತ (ಎ.ಸಿ.ಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಸಂಬಂಧ 2017ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ, ಪಿ.ಸಿ.ಕಾಯ್ದೆಯ ಕಲಂ 7 ಹಾಗೂ 13(1)(ಡಿ) ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಅಶೋಕ್ ಚಾಂದಕವಠೆ ಅವರು ವಾದ ಮಂಡಿಸಿದ್ದರು. ಲೋಕಾಯುಕ್ತ ಪೊಲೀಸರ ಸಿಬ್ಬಂದಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ವಿಚಾರಣೆಗೆ ಸಹಕರಿಸಿದರು.
ಎತ್ತಿನಹೊಳೆ ಸೆಸ್ಕ್ಗೆ 232.10 ಕೋಟಿ ರೂ.ಹೊರೆ ; ಪಂಚ ಗ್ಯಾರಂಟಿಯ ಎಫೆಕ್ಟ್?
ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯು ಚಾಲನೆಗೊಂಡಿದ್ದರೂ, ಅದಕ್ಕೆ ವಿದ್ಯುತ್ ಪೂರೈಸುತ್ತಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಈಗ ಆರ್ಥಿಕ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್ 2024 ರಲ್ಲಿ ಯೋಜನೆಯ ಮೊದಲ ಹಂತ ಉದ್ಘಾಟನೆಗೊಂಡಾಗಿನಿಂದ ಸೆಸ್ಕ್ ನಿರಂತರವಾಗಿ ವಿದ್ಯುತ್ ಒದಗಿಸುತ್ತಿದೆ. ಆದರೆ ಈವರೆಗೆ ಬಳಕೆಯಾದ ವಿದ್ಯುತ್ಗಾಗಿ ಬರಬೇಕಿದ್ದ ಒಟ್ಟು 232.10 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಬಾಕಿ ಉಳಿದಿದೆ.
ಅಮೆರಿಕ–ಇರಾನ್ ನಡುವಿನ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದ ಜಪಾನ್, ಇಂಡೋನೇಷ್ಯಾ
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ಜಪಾನ್ ಮತ್ತು ಇಂಡೋನೇಷ್ಯಾ ಸ್ವಾಗತಿಸಿವೆ. ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಯವೊನೆ ಮೆವೆಂಗ್ ಕಾಂಗ್ ಈ ಕುರಿತು ಪ್ರತಿಕ್ರಿಯಿಸಿ, ಸಂಘರ್ಷದಲ್ಲಿರುವ ಎಲ್ಲಾ ಪಕ್ಷಗಳು ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ. ಜಪಾನ್ ಸರಕಾರ ಈ ಬೆಳವಣಿಗೆಯನ್ನು ‘ಸಕಾರಾತ್ಮಕ ನಡೆ’ ಎಂದು ಅಭಿಪ್ರಾಯಪಟ್ಟಿದೆ. ಟೋಕಿಯೊದಲ್ಲಿ ಮಾತನಾಡಿದ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಮಿನೋರು ಕಿಹರಾ, “ಈ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಅಂತಿಮ ಒಪ್ಪಂದಕ್ಕಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ; ವದಂತಿಗಳಿಗೆ ಕಿವಿಗೊಡಬೇಡಿ : ಆಹಾರ, ನಾಗರಿಕ ಸರಬರಾಜು ಇಲಾಖೆ
ಬೆಂಗಳೂರು : ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ. ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ. ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಕಳೆದ ಐದು ದಿನಗಳ ಪೂರೈಕೆ ವಿವರ: ಕಳೆದ ಏಪ್ರಿಲ್ 2 ರಿಂದ ಏಪ್ರಿಲ್ 6 ರವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ. ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರಕಾರ ಮನವಿ ಮಾಡಿದೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ
ಬೆಂಗಳೂರು: ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಮಂಗಳವಾರ (ಏ.7) ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇಂದು ಬುಧವಾರ ಮನೆ ಮನೆ ಮತಯಾಚನೆಗೆ ಅವಕಾಶ ಇದೆ. ನಾಯಕರೆಲ್ಲರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಗುರುವಾರ ಏಪ್ರಿಲ್ 9 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆವರೆಗೆ 6 ಗಂಟೆವರೆಗೆ ಮತದಾನ ಜರುಗಲಿದೆ. ಚುನಾವಣೆ
Mohsina Kidwai: ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ, ಗಣ್ಯರ ಸಂತಾಪ
ನವದೆಹಲಿ: ಕೇಂದ್ರದ ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮೊಹ್ಸಿನಾ ಕಿದ್ವಾಯಿ (94) ಅವರು ನಿಧನರಾಗಿದ್ದಾರೆ. ಅವರಿಗೆ ಕರ್ನಾಟಕದ ಸಚಿವರು ಸೇರಿದಂತೆ ದೇಶಾದ್ಯಂತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬುಧವಾರ ಬೆಳಗ್ಗೆ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿಝಾಮುದ್ದಿನ್ ನಲ್ಲಿರುವ ದಫನ ಭೂಮಿಯಲ್ಲಿ ಸಂಜೆ
ಸಂಪಾದಕೀಯ | ಸಂವಿಧಾನ ‘ಲಾಕಪ್ಡೆತ್’ಗೆ ಬಲಿಯಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎ.11-12: ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ
ಮಂಗಳೂರು, ಎ.8: ದ.ಕ. ಜಿಲ್ಲಾ ಪಂಜ ಕುಸ್ತಿ ಸಂಘದ ಆಶ್ರಯದಲ್ಲಿ ಎ. 11 ಮತ್ತು 12ರಂದು ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ ಪುರಭವನದಲ್ಲಿ ನಡೆಯಲಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸಂಘದ ಕಾರ್ಯದರ್ಶಿ ರೇಮಂಡ್ ಡಿಸೋಜಾ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ 180 ಮಂದಿ ಕುಸ್ತಿ ಸ್ಪರ್ಧಿಗಳು ನೋಂದಾಯಿಸಿದ್ದು, 250ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪುರುಷರು, ಮಹಿಳೆಯರು ಮತ್ತು ವಿಕಲ ಚೇತನರಿಗೆ ವಿವಿಧ ದೇಹದಾರ್ಢ್ಯ ಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು. ಈ ಸ್ಪರ್ಧೆಯ ಯಶಸ್ಸಿನ ಆಧಾರದಲ್ಲಿ ಮುಂದೆ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಮಂಗಳೂರಿನಲ್ಲಿಯೇ ನಡೆಸುವ ಚಿಂತನೆ ಇದೆ. ಸ್ಪರ್ಧೆ ಎ. 11ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸುವರು. ಎ. 12ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಧ ಅಧ್ಯಕ್ಷ ಸುನಿಲ್ ಕ್ಸೇವಿಯರ್ ತಿಳಿಸಿದರು. ಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಶೆಣೈ, ಕೋಶಾಧಿಕಾರಿ ಸುಜಿತ್ ಕುಮಾರ್, ಆನಂದ ಸೋನ್ಸ್ ಉಪಸ್ಥಿತರಿದ್ದರು.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೊ ದರವನ್ನು ಶೇಕಡಾ 5.25 ರಲ್ಲೇ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ, ಗೃಹ ಸಾಲ ಪಡೆದವರ ಮತ್ತು ಪಡೆಯಲಿರುವವರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಎಂದರೆ, ಗೃಹ ಸಾಲಗಳು ಮತ್ತಷ್ಟು ಅಗ್ಗವಾಗುತ್ತವೆಯೇ? ಇದಕ್ಕೆ ನೇರ ಉತ್ತರ 'ಇಲ್ಲ'. ಆದರೆ, ಇದರ ಹಿಂದಿರುವ ಲೆಕ್ಕಾಚಾರಗಳು ಸಾಕಷ್ಟು ಕುತೂಹಲಕಾರಿಯಾಗಿವೆ. ಬಡ್ಡಿ
ಮಂಗಳೂರು : ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ
ಎ. 10ರಂದು ಮುಹೂರ್ತ ಮತ್ತು ಲಾಂಛನ ಬಿಡುಗಡೆ
ರಾಯಗಢ: ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಘರ್ಷಣೆ ನಡೆದು ಹಲವು ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದಾಗಿನಿಂದಲೂ ಈ ಪ್ರಾಂತ್ಯದಲ್ಲಿ ಪ್ರಕ್ಷುಬ್ಧತೆ ತಲೆದೋರಿದೆ. ಅಂದಾಜು 311 ದಶಲಕ್ಷ ಟನ್ ಬಾಕ್ಸೈಟ್ ನಿಕ್ಷೇಪ ಹೊಂದಿದೆ ಎಂದು ಹೇಳಲಾಗಿರುವ ಸಿಜಿಮಲಿಯಲ್ಲಿ ಗಣಿಗಾರಿಕೆ ನಡೆಸುವುದರಿಂದ, ದೀರ್ಘಕಾಲೀನ ಜಲ ಮೂಲಗಳು ಬತ್ತಿ ಹೋಗಲಿದ್ದು, ತಮ್ಮ ಜೀವನೋಪಾಯದ ಮೇಲೆ ಗಂಭೀರ ಪರಿಣಾಮವುಂಟಾಗಲಿದೆ ಎಂದು ಬುಡಕಟ್ಟು ಸಮುದಾಯಗಳು ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಮುಂಜಾನೆ ನಮ್ಮನ್ನು ಮನೆಗಳಿಂದ ಹೊರಬರುವಂತೆ ಸೂಚಿಸಿದ ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಯಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಕೆ. ಕುಮಾರ್, “ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಪೊಲೀಸ್ ತಂಡವೊಂದು ಜಾಮೀನು ರಹಿತ ವಾರೆಂಟ್ ಅನ್ನು ಜಾರಿ ಮಾಡಲು ಕುಟಮಲ್ ಗ್ರಾಮಕ್ಕೆ ತೆರಳಿತ್ತು. ದಿಢೀರನೆ ಗ್ರಾಮಸ್ಥರು ನಮ್ಮ ಮೇಲೆ ದಾಳಿ ನಡೆಸಿದರು. ಉಪವಿಭಾಗಾಧಿಕಾರಿ ಸೇರಿದಂತೆ ಸುಮಾರು 58 ಮಂದಿ ಪೊಲೀಸ್ ಸಿಬ್ಬಂದಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಆರು ಪೊಲೀಸ್ ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿರುವುದರಿಂದ, ಅವರನ್ನು ವಿಶಾಖಪಟ್ಟಣಂಗೆ ರವಾನಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಪೊಲೀಸರಿಂದ ಲಾಠಿ ಏಟು ತಿಂದು ಗಾಯಗೊಂಡ 8 ಗ್ರಾಮಸ್ಥರ ಸ್ಥಿತಿ ಗಂಭೀರವಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಬಾಗಲಕೋಟೆ: ಪ್ರೇಯಸಿಯ ಆತ್ಮಹತ್ಯೆ ಸುದ್ದಿ ತಿಳಿದು ಪ್ರಿಯಕರನೂ ಆತ್ಮಹತ್ಯೆ
ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಮದುವೆ ವಿಚಾರವಾಗಿ ಮನೆಯವರ ವಿರೋಧ ಎದುರಿಸಿದ ಹಿನ್ನೆಲೆಯಲ್ಲಿ, ಇಬ್ಬರು ಪ್ರೇಮಿಗಳು ಚರ್ಚೆ ನಡೆಸುವ ವೇಳೆ ಗಲಾಟೆ ಉಂಟಾಗಿ ವೈಮನಸ್ಸು ಉಂಟಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಪವಿತ್ರಾ ರಾಜಶೇಖರ ಒಂಟಿ (19) ಎಂದು ಗುರುತಿಸಲಾಗಿದೆ. ಈ ಘಟನೆ ಬಗ್ಗೆ ತಿಳಿದು ಭಯಗೊಂಡ ಪ್ರಿಯಕರ ಕಾರ್ತಿಕ್ ಚನ್ನಪ್ಪ ನಾಯಕ (21) ಕೂಡ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊದಲೇ ಇಬ್ಬರ ನಡುವೆ ಗಲಾಟೆ ನಡೆದಿದ್ದ ಹಿನ್ನೆಲೆ ಇಬ್ಬರೂ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಯುವತಿಯ ಪಾಲಕರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
ಬಾಗಲಕೋಟೆ ಉಪಚುನಾವಣೆ: ನಾಳೆ ಮತದಾನ
ಬಾಗಲಕೋಟೆ: ಬಾಗಲಕೋಟೆ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂತ ಸಿದ್ಧತೆಗಳು ಪೂರ್ಣಗೊಂಡಿವೆ. ನವನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಮತಗಟ್ಟೆಗಳಿಗೆ ನಿಯೋಜಿಸಲಾದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, ಮತಗಟ್ಟೆ ಕೇಂದ್ರಗಳಿಗೆ ಒಟ್ಟು 1,564 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 332 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, 322 ಮತಗಟ್ಟೆ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ ಸುಮಾರು 1,500 ಮತದಾನ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿಗಳಿಗೆ ಬಸ್ ಹಾಗೂ ಕ್ರೂಸರ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಭವಾನಿಪುರ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಕೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಭದ್ರಕೋಟೆಯಾದ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಬುಧವಾರ ಬೆಳಿಗ್ಗೆ ಅಲಿಪುರ ಸರ್ವೆ ಕಟ್ಟಡದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಪತ್ರವನ್ನು ಹಸ್ತಾಂತರಿಸಿದ ಅವರಿಗೆ, ಆಪ್ತ ಸಚಿವ ಫಿರ್ಹಾದ್ ಹಕೀಮ್ ಮತ್ತು ನೂರಾರು ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಇರಾನ್ ನಿಂದ ಕೂಡಲೇ ನಿರ್ಗಮಿಸಿ: ಕದನವಿರಾಮದ ಬೆನ್ನಲ್ಲೇ, ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ
ಮಧ್ಯಪ್ರಾಚ್ಯದಲ್ಲಿ 2ವಾರಗಳ ಕದನವಿರಾಮ ಘೋಷಣೆ ಬೆನ್ನಲ್ಲೇ, ಇರಾನ್ ನಲ್ಲಿರುವ ಭಾರತೀಯರು ಕೂಡಲೇ ರಾಯಭಾರ ಕಚೇರಿ ತಿಳಿಸುವ ಮಾರ್ಗದ ಮೂಲಕ ದೇಶವನ್ನು ತೊರೆಯಿರಿ ಎಂದು ಟೆಹ್ರಾನ್ ನಲ್ಲಿನ ಭಾರತೀಯರ ರಾಯಭಾರ ಕಚೇರಿ ಆದೇಶ ನೀಡಿದೆ. ಅಲ್ಲದೆ, ಈ ಸಮಯದಲ್ಲಿ ಅನುಮತಿಯಿಲ್ಲದೆ, ಯಾವುದೇ ಅಂತರಾಷ್ಟ್ರೀಯ ಗಡಿಗಳನ್ನು ದಾಟಬೇಡಿ ಎಂದಿದ್ದು, ತುರ್ತು ಸಂಪರ್ಕ ಸಂಖ್ಯೆಯನ್ನು ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ...
ಮಂಗಳೂರು: ನದಿಯಲ್ಲಿ ಮೃತದೇಹ ಪತ್ತೆ; ಕೊಲೆ ಶಂಕೆ
ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯ ಬಳಿಯ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತರನ್ನು ನಾಸೀರ್ ಯಾನೆ ‘ದಕ್ಕೆ ನಾಸೀರ್’ ಎಂದು ಗುರುತಿಸಲಾಗಿದೆ. ನಾಸೀರ್ ವಿರುದ್ಧ ಹಲವಾರು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಮೃತನ ಹಣೆ ಹಾಗೂ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿರುವುದರಿಂದ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ದಕ್ಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದಲ್ಲಿರುವ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಮಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ನಡೆದ ಎರಡನೇ ಕೊಲೆ ಪ್ರಕರಣವಾಗಿದೆ.
ಅಮೆರಿಕ-ಇರಾನ್ ನಡುವೆ ಪಾಕಿಸ್ತಾನದ ಸಂಧಾನ; ಇಸ್ಲಾಮಾಬಾದ್ ನಂಬಲು ಏನು ಕಾರಣ? 24 ಗಂಟೆಗಳಲ್ಲಿ ನಡೆದಿದ್ದಿಷ್ಟು
ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆವಹಿಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿಕೆ ನೀಡಿದ್ದಾಗ, ಅದನ್ನು ಗಂಭೀರವಾಗಿ ಪರಿಗಣಿಸಿದ ದೇಶಗಳ ಸಂಖ್ಯೆ ಕಡಿಮೆ. ಖುದ್ದು ಇರಾನ್ ಕೂಡ ಪಾಕಿಸ್ತಾನದ ಮಧ್ಯಸ್ಥಿಕಗೆ ಆಫರ್ ತಿರಸ್ಕರಿಸಿತ್ತು. ಆದರೀಗ ಅದೇ ಇರಾನ್, ಅಮೆರಿಕದೊಂದಿಗಿನ ಎರಡು ವಾರಗಳ ಕದನ ವಿರಾಮ ಒಪ್ಪಂದ ಜಾರಿಯಾಗುವಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ಹೇಳುತ್ತಿದೆ. ಈ ದಿಢೀರ್ ನಿಲುವು ಬದಲಾವಣೆಗೆ ಏನು ಕಾರಣ? ಅಮೆರಿಕ ಕೂಡ ಮಾತುಕತೆಯಲ್ಲಿ ಪಾಕಿಸ್ತಾನವನ್ನು ನೆಚ್ಚಿಕೊಂಡಿದ್ದೇಗೆ? ಇಲ್ಲಿದೆ ಮಾಹಿತಿ.
Iran War: ನಾವು ನೋಡುತ್ತಿರುವುದು ನಿಜವಾದ ಯುದ್ಧವೇ, ಅಥವಾ ಯುದ್ಧದಂತೆ ಕಾಣುವ ಒಂದು ಸಂಕೀರ್ಣ ರಾಜಕೀಯ ಆಟವೇ?
ಮಧ್ಯಪ್ರಾಚ್ಯ ಯುದ್ಧದ ಉದ್ದೇಶದ ಕುರಿತು ಲೇಖಕರು ಹೊಸ ನೋಟ ಕೊಟ್ಟಿದ್ದು, ಬೇರೆ ಬೇರೆ ಉದ್ದೇಶ ಸಾಧನೆಯ ಫಲವಾಡಿ ಯುದ್ಧ ರೂಪುಗೊಂಡಿರವ ಬಗ್ಗೆ ವಿವರಿಸಿದ್ದಾರೆ.
ಇರಾನ್ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸಿದ HE ಪದ: ಇದು ಉದ್ದೇಶಪೂರ್ವಕವೇ? ಮಂಜುನಾಥ ಕೊಳ್ಳೇಗಾಲ ವಿಶ್ಲೇಷಣೆ
ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಪರವಾಗಿ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರು ಬಿಡುಗಡೆ ಮಾಡಿದ್ದಾರೆ ಎನ್ನಲಾದ ಅಧಿಕೃತ ಹೇಳಿಕೆಯೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಒಂದೆಡೆ ಚರ್ಚೆಗಳು ನಡೆಯುತ್ತಿರುವಾಗಲೇ, ಇದರಲ್ಲಿ ಬಳಕೆಯಾಗಿರುವ ಒಂದು ನಿರ್ದಿಷ್ಟ ಪದವೀಗ ಎಲ್ಲರ ಗಮನ ಸೆಳೆದಿದೆ. ಪಾಕಿಸ್ತಾನದ ಪ್ರಧಾನಿ ಷರೀಫ್ ಹಾಗೂ
Chikkamagaluru | ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಕೇರಳದ ಮೂಲದ ಬಾಲಕಿ ನಾಪತ್ತೆ; ತೀವ್ರ ಶೋಧ
ಚಿಕ್ಕಮಗಳೂರು : ಕಾಫಿನಾಡಿನ ಪ್ರವಾಸಿ ತಾಣ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದು, ಕುಟುಂಬದವರು ಹಾಗೂ ಪೊಲೀಸರು ತೀವ್ರ ಹುಟುಕಾಟ ನಡೆಸಿದ್ದಾರೆ. ನಂದನಾ ನಾಪತ್ತೆಯಾದ ಬಾಲಕಿ ಎಂದು ತಿಳಿದು ಬಂದಿದೆ. ಸುಮಾರು 40 ಮಂದಿ ಪ್ರವಾಸಿಗರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ, ಮಂಗಳವಾರ ಸಂಜೆ ನಿಗೂಢವಾಗಿ ಕಾಣೆಯಾಗಿದ್ದಾಳೆ. ನಿನ್ನೆ ಮಧ್ಯರಾತ್ರಿವರೆಗೂ ಹುಡುಕಿದರೂ ಬಾಲಕಿಯ ಸುಳಿವು ಸಿಕ್ಕಿಲ್ಲ. ಮಧ್ಯರಾತ್ರಿ ಒಂದು ಗಂಟೆವರೆಗೆ ಜಿಲ್ಲಾಡಳಿತದ 30ಕ್ಕೂ ಹೆಚ್ಚು ಸಿಬ್ಬಂದಿ ಶೋಧ ನಡೆಸಿದ್ದರು. ಆದರೆ ಭಾರೀ ಕತ್ತಲು ಕವಿದ ಕಾರಣ ರಾತ್ರಿ 1ರ ಬಳಿಕ ಸಿಬ್ಬಂದಿಗಳು ವಾಪಸ್ ಬಂದಿದ್ದರು. ಇಂದು(ಬುಧವಾರ) ಮತ್ತೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಡ್ರೋನ್ ಮೂಲಕ ಬಾಲಕಿ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದೆ.
ರಾಜ್ಯದಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ! ತಜ್ಞರ ವರದಿಯಲ್ಲಿದೆ ಮಹತ್ವದ ಮಾಹಿತಿ
ವೈಜ್ಞಾನಿಕ ಜಲ ನಿರ್ವಹಣೆ, ಕೆರೆಗಳ ಪುನರುಜ್ಜೀವನ ಯೋಜನೆಗಳು ಮತ್ತು ಕರ್ನಾಟಕದಾದ್ಯಂತ ಜಲ ಸಂರಕ್ಷಣಾ ರಚನೆಗಳ ನಿರ್ಮಾಣದ ಮೂಲಕ, ಅಂತರ್ಜಲದ ಮರುಪೂರಣವನ್ನು ಹೆಚ್ಚಿಸಲಾಗಿದೆ. ಅಲ್ಲದೇ, ಜನಜಾಗೃತಿಯ ಅಭಿಯಾನದ ಮೂಲಕ ಅತಿಯಾದ ಬಳಕೆಯನ್ನು ನಾವು ಯಶಸ್ವಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದಲ್ಲದೆ, ನಮ್ಮ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದ್ದು, ಕೆರೆ-ಕುಂಟೆಗಳ ಮೂಲಕ ಆಗುವ ಮರುಪೂರಣ ಶೇ. . ರಷ್ಟು ಹೆಚ್ಚಾಗಿದೆ. ಸಾಲಿನ ದತ್ತಾಂಶಗಳಿಗೆ ಹೋಲಿಸಿದರೆ ತಾಲೂಕುಗಳ ಅಂತರ್ಜಲ ಸ್ಥಿತಿಗತಿಯಲ್ಲಿ ಸುಧಾರಣೆ ಕಂಡುಬಂದಿದೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇರಾನ್ ಹಾಗೂ ಅಮೆರಿಕಾ ತಾತ್ಕಾಲಿಕ ಬ್ರೇಕ್ ನೀಡಿದ್ದು, 2 ವಾರಗಳ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಈ ಮೂಲಕ ಪ್ರಾದೇಶಿಕವಾಗಿ ಮಿಲಿಟರಿ ಕಾರ್ಯಚರಣೆ ಸ್ಥಗಿತಗೊಳಿಸಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ರಾಜತಾಂತ್ರಿಕ ಮಾತುಕತೆಗೆ ಮುಂದಾಗಿದೆ. ಆದಾಗ್ಯೂ, ಇದು ತಾತ್ಕಾಲಿಕವಾಗಿದು, ಯುದ್ಧದ ಶಾಶ್ವತ ಅಂತ್ಯವಲ್ಲ. ಅದು ನಡೆಯಬೇಕಾದರೆ,ಒಪ್ಪಂದಕ್ಕೆ ಬರಬೇಕಾಗುತ್ತದೆ ಎಂಬುದನ್ನು ಉಭಯರು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ, ಈ ಕದನವಿರಾಮದ ಪ್ರಮುಖ ಅಂಶಗಳೇನು? ಯುದ್ಧದ ಶಾಶ್ವತ ಅಂತ್ಯಕ್ಕೆ ಇರುವ ಸವಾಲುಗಳೇನು? ಎಂಬ ಮಾಹಿತಿ ಇಲ್ಲಿದೆ..
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ರಿಸಲ್ಟ್ ದಿನ ಕೊನೆಗೂ ಅನೌನ್ಸ್ ಆಗಿದ್ದು, ನಾಳೆ ಅಂದರೆ, ಏಪ್ರಿಲ್ 9 ಗುರುವಾರ ಸಂಜೆಯ ಬಳಿಕ ಘೋಷಣೆಯಾಗಲಿದೆ.
ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, 4 ಮಂದಿಯ ನಿರ್ಧಾರವೇ ಅಂತಿಮ: ಪ್ರಿಯಾಂಕ್ ಖರ್ಗೆ ಸ್ಪಷ್ಟ ನುಡಿ
ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಸೇರಿದಂತೆ ರಾಜ್ಯ ಕಾಂಗ್ರೆಸ್ಗೆ ಸಂಬಂಧಿಸಿದಂತೆ ಏನೇ ಬೆಳವಣಿಗೆಗಳು ನಡೆದರೂ 4 ಮಂದಿಯ ನಿರ್ಧಾರವೇ ಅಂತಿಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಕುರಿತಾಗಿ ಅವರು ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದರು. ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದನೆ ಮಾಡುವುದು ಪೂರೈಕೆ ಮಾಡುವುದು ರಾಜ್ಯ ಸರ್ಕಾರದ ಹಿಡಿತದಲ್ಲಿಲ್ಲ. ಬದಲಾಗಿ, ಎಲ್ಲವೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದರು. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರಕಾರ ಮೀನಮೇಷ , ತಣ್ಣಗಾದ ಸಂಘಟನೆಗಳ ರೋಷಾವೇಷ
ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ವೇತನ ಪರಿಷ್ಕರಣೆ ಹಾಗೂ ಬಾಕಿ ಹಣದ ಬಿಡುಗಡೆ ವಿಚಾರವು ಸದ್ಯಕ್ಕೆ ತಾರ್ಕಿಕ ಅಂತ್ಯ ಕಾಣದ ಎಳೆದಾಟದಂತಾಗಿದೆ. ಹಲವು ವರ್ಷಗಳಿಂದ ನೌಕರರು ತಮ್ಮ ಬೇಡಿಕೆಗಳಿಗಾಗಿ ಪಟ್ಟು ಹಿಡಿಯುತ್ತಿದ್ದರೆ, ಸರ್ಕಾರ ಮಾತ್ರ ಭರವಸೆಗಳಿಗಷ್ಟೇ ಸೀಮಿತವಾಗುತ್ತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಎಂಟಿಸಿ ನೌಕರರಿಗೆ ಶೇ. 3 ಹಾಗೂ ಇತರ ನಿಗಮಗಳಿಗೆ ಶೇ. 5 ರಷ್ಟು ವೇತನ ಹೆಚ್ಚಳದ ಪ್ರಸ್ತಾವನೆ ಬಂದರೂ, ನೌಕರರ ಸಂಘಟನೆಗಳು ಇದಕ್ಕೆ ಒಪ್ಪದ ಕಾರಣ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.
ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಒಂದೇ ದಿನ ಬಾಕಿ: ಕೈ, ಕಮಲ ಅಂತಿಮ ಹಂತದ ಕಸರತ್ತು ಏನೇನು
ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಒಂದೇ ದಿನ ಬಾಕಿ ಇದೆ. ಈ ನಡುವೆ ಕೊನೆಯ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸುತ್ತಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡರೂ ಮತದಾರರ ಮನವೋಲಿಸಲು ಆಂತರಿಕವಾಗಿ ಪ್ರಯತ್ನ ನಡೆಸಲಾಗುತ್ತಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ಹಾಗೂ ಬಂಡಾಯ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆ ಗಮನ ಸೆಳೆಯುತ್ತಿದೆ. ಹಾಗಾದರೆ ಯಾವ ರೀತಿಯಲ್ಲಿ ಸ್ಥಿತಿ - ಗತಿ ಇದೆ? ಕ್ಷೇತ್ರದಲ್ಲಿ ಯಾರಿಗೆ ಪ್ಲಸ್ ಹಾಗೂ ಯಾರಿಗೆ ಮೈನಸ್ ? ವಿವರ ಇಲ್ಲಿದೆ.
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಶಿವಮೊಗ್ಗ: ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತನನ್ನು ಸೀಬಿನಕೆರೆಯ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಇವರು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ಅಕ್ಷಯ್ ನದಿಗೆ ಈಜಲು ತೆರಳಿದ್ದು, ನದಿತಟದ ಕಲ್ಲು ಬಂಡೆಯ ಮೇಲೆ ಬಟ್ಟೆ, ಚಪ್ಪಲಿ ಮತ್ತು ಮೊಬೈಲ್ ಇಟ್ಟು ನೀರಿಗೆ ಇಳಿದಿದ್ದರು. ಬಹಳ ಸಮಯವಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ಬುಧವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯ ನಡೆಸಿ, ಯುವಕ ನದಿಗೆ ಇಳಿದಿದ್ದ ಸ್ಥಳದ ಸಮೀಪದಲ್ಲೇ ಮೃತದೇಹವನ್ನು ಪತ್ತೆಹಚ್ಚಿದರು. ಮೃತ ಅಕ್ಷಯ್ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯು ಬೇರೆಯವರ ಹೆಸರಿನಲ್ಲಿ ನೋಂದಾಯಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿಲ್ಲಿ ವಿಧಾನಸಭಾ ಸಂಕೀರ್ಣದಲ್ಲಿ ಭದ್ರತಾ ಲೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಸಂಕೀರ್ಣದಲ್ಲಿ ಸಂಭವಿಸಿದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. “ವಿಧಾನಸಭೆಯ ಸಂಕೀರ್ಣದಲ್ಲಿ ಭದ್ರತಾಲೋಪಕ್ಕೆ ಸಂಬಂಧಿಸಿ ಮೇಲ್ನೋಟದಲ್ಲಿ ತಪ್ಪುಗಳು ಕಂಡು ಬಂದ ಹಿನ್ನೆಲೆ ಭದ್ರತಾ ವಿಭಾಗದ ಓರ್ವ ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತಿನಲ್ಲಿರಿಸಲಾಗಿದೆ” ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ ದಿಲ್ಲಿ ವಿಧಾನಸಭೆಯ ಸಂಕೀರ್ಣದ ಕಬ್ಬಿಣದ ಗೇಟ್ ಮುರಿದು ಒಳಗೆ ನುಗ್ಗಿದ್ದಾನೆ. ಇದನ್ನು ಪ್ರಮುಖ ಭದ್ರತಾ ಲೋಪ ಎಂದು ಪರಿಗಣಿಸಲಾಗಿದೆ.
ಯುದ್ಧದಿಂದ ವಿನಾಶ, ಶಾಂತಿಯಿಂದ ಸಮೃದ್ಧಿ ಎಂಬುದು ಅದೆಷ್ಟು ಸತ್ಯ ನೋಡಿ. ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಒಪ್ಪಂದ ಜಾರಿಯಾಗುತ್ತಿದ್ದಂತೇ, ಭಾರತೀಯ ಷೇರು ಮಾರುಕಟ್ಟೆ ನಳನಳಿಸಲಾರಂಭಿಸಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹಸಿರು ಬಣ್ಣಕ್ಕೆ ತಿರುಗಿದ್ದು, ಹೂಡಿಕದಾರ ಉತ್ತಮ ಲಾಭ ಗಳಿಸುತ್ತಿದ್ದಾನೆ. ಮಧ್ಯಪ್ರಾಚ್ಯದಲ್ಲಿ ಮೂಡಿರುವ ಈ ತಾತ್ಕಾಲಿಕ ಶಾಂತಿ, ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಸತತ ಕುಸಿತದ ನಂತರ ಏರಿದ ಚಿನ್ನ-ಬೆಳ್ಳಿ ಬೆಲೆ: ಇಂದಿನ ದರವೆಷ್ಟು?
ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಶೇ 2.50ರಷ್ಟು ಏರಿಕೆ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಜಾಗತಿಕ ಅಮೂಲ್ಯ ಲೋಹಗಳ ಮಾರುಕಟ್ಟೆಗಳಲ್ಲಿ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. ಎರಡೂ ಕಡೆಗಳಿಂದ ಕದನ ವಿರಾಮಕ್ಕೆ ತೀರ್ಮಾನವಾಗಿದೆ ಎಂದು ಟ್ರಂಪ್ ಅವರು ಘೋಷಿಸುತ್ತಲೇ ತೈಲ ಬೆಲೆಗಳು ಕುಸಿದವು. ಅದೇ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಪ್ರಾರಂಭವಾಯಿತು. ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಶೇ 2.50ರಷ್ಟು ಏರಿಕೆ ಕಂಡುಬಂದಿದೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 8ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 398 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,53,820 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 365 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,41,000 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 299 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,15,370 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 8ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,382 (+398) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,100 (+365) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,537 (+299) ರೂ. ಬೆಲೆಗೆ ತಲುಪಿದೆ. ಬೆಳ್ಳಿ ದರ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 9ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದ ನಂತರ ನಿನ್ನೆಯವರೆಗೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಬೆಳ್ಳಿಯ ಬೆಲೆ, ಇದೀಗ ಬುಧವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 10ರೂ. ಏರಿಕೆಯಾಗಿರುವ ಬೆಳ್ಳಿ ಪ್ರತಿ ಕೆಜಿಗೆ 2,60,000 ರೂ.ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,397 (+398) ರೂ., 22 ಕ್ಯಾರೆಟ್ ಚಿನ್ನದ ದರ 14,115 (+365) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,382 (+398) ರೂ., 22 ಕ್ಯಾರೆಟ್ ಚಿನ್ನದ ದರ 14,100 (+365) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,387 (+398) ರೂ., 22 ಕ್ಯಾರೆಟ್ ಚಿನ್ನದ ದರ 14,105 (+365) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,491 (+371) ರೂ., 22 ಕ್ಯಾರೆಟ್ ಚಿನ್ನದ ದರ 14,200 (+340) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,382 (+398) ರೂ., 22 ಕ್ಯಾರೆಟ್ ಚಿನ್ನದ ದರ 14,100 (+365) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,382 (+398) ರೂ., 22 ಕ್ಯಾರೆಟ್ ಚಿನ್ನದ ದರ 14,100 (+365) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,397 (+398) ರೂ., 22 ಕ್ಯಾರೆಟ್ ಚಿನ್ನದ ದರ 14,115 (+365) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,397 (+398) ರೂ., 22 ಕ್ಯಾರೆಟ್ ಚಿನ್ನದ ದರ 14,115 (+365) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,397 (+398) ರೂ., 22 ಕ್ಯಾರೆಟ್ ಚಿನ್ನದ ದರ 14,115 (+365) ರೂ.
ಮಧ್ಯಪ್ರಾಚ್ಯದಲ್ಲಿನ ಯುದ್ಧಕ್ಕೆ 2ವಾರಗಳ ಕಾಲ ಅಮೆರಿಕಾ-ಇರಾನ್ ಕದನವಿರಾಮ ಘೋಷಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಈ ಕ್ರಮವನ್ನು ಬೆಂಬಲಿಸುವುದಾಗಿ ಮತ್ತು ಇರಾನ್ ಮೇಲಿನ ದಾಳಿಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಆದಾಗ್ಯೂ, ಈ ಕದನವಿರಾಮ ಒಪ್ಪಂದ ಲೆಬನಾನ್ ಪ್ರಾಂತ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳುವ ಮೂಲಕ ಅಲ್ಲಿನ ದಾಳಿಗಳನ್ನು ಮುಂದುವರೆಸಿದೆ. ಈ ಕುರಿತ ವರದಿ ಇಲ್ಲಿದೆ..
ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್–ಒಮಾನ್ ಒಪ್ಪಿಗೆ
ಟೆಹ್ರಾನ್/ಮಸ್ಕತ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಕೈಗೊಳ್ಳಲಾದ ಎರಡು ವಾರಗಳ ಕದನ ವಿರಾಮ ಒಪ್ಪಂದದ ಭಾಗವಾಗಿ, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ಮತ್ತು ಒಮಾನ್ ದೇಶಗಳಿಗೆ ಅವಕಾಶ ನೀಡಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ. ಈ ಕುರಿತು AP ಉಲ್ಲೇಖಿಸಿದ ಪ್ರಕಾರ, ಶುಲ್ಕದಿಂದ ಸಂಗ್ರಹವಾಗುವ ಹಣವನ್ನು ಇರಾನ್ ಯುದ್ಧಾನಂತರದ ಪುನರ್ ನಿರ್ಮಾಣ ಕಾರ್ಯಗಳಿಗೆ ಬಳಸಿಕೊಳ್ಳಲಿದೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಒಮಾನ್ ತನ್ನ ಪಾಲಿನ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ. ಮಾತುಕತೆಗಳಲ್ಲಿ ನೇರವಾಗಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು, ಆಂತರಿಕ ಚರ್ಚೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನ ಮೇಲೆ ಮಾಹಿತಿ ನೀಡಿದ್ದಾರೆ ಎಂದು ಎಪಿ ತಿಳಿಸಿದೆ. ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ಮತ್ತು ಒಮನ್ ದೇಶಗಳು ಪ್ರಾದೇಶಿಕ ಹಕ್ಕುಗಳನ್ನು ಹಂಚಿಕೊಂಡಿವೆ.
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಹಾಗೂ ಯುದ್ಧದ ಭೀತಿಯ ನಡುವೆ, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಸ್ಥಿತಿ ತೀರಾ ಹಾಸ್ಯಾಸ್ಪದವಾಗಿದೆ. ಒಂದು ಕಾಲದಲ್ಲಿ ಅಮೆರಿಕದ ಮಿತ್ರರಾಷ್ಟ್ರ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ, ಇದೀಗ ಸಂಪೂರ್ಣವಾಗಿ ಅಮೆರಿಕದ ಕೈಗೊಂಬೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಕೃಷ್ಣಭಟ್ ಅವರು ತಮ್ಮ ಬರಹದಲ್ಲಿ ಪಾಕಿಸ್ತಾನದ ಈ ದಯನೀಯ ಶರಣಾಗತಿಯನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಒಂದು
ಕೇಂದ್ರದ ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯ ನಾಯಕಿ ಮೊಹ್ಸಿನಾ ಕಿದ್ವಾಯಿ ನಿಧನ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನರಾಗಿದ್ದಾರೆ. 94 ವರ್ಷದ ಮೊಹ್ಸಿನಾ ಕಿದ್ವಾಯಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಬುಧವಾರ ಬೆಳಿಗ್ಗೆ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅವರ ಅಳಿಯ ರಾಝಿ ಉರ್ ರೆಹಮಾನ್ ಕಿದ್ವಾಯಿ ತಿಳಿಸಿದ್ದಾರೆ. ನಿಝಾಮುದ್ದೀನ್ನಲ್ಲಿರುವ ದಫನ ಭೂಮಿಯಲ್ಲಿ ಸಂಜೆ 5 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಬಾರಾಬಂಕಿ ಮೂಲದ ಮೊಹ್ಸಿನಾ ಕಿದ್ವಾಯಿ ಅವರು ರಾಜೀವ್ ಗಾಂಧಿ ಸರಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಅವರು ಲೋಕಸಭೆ ಮತ್ತು ರಾಜ್ಯಸಭೆಯನ್ನು ಹಲವು ಬಾರಿ ಪ್ರತಿನಿಧಿಸಿದ್ದರು. ಕಿದ್ವಾಯಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ
ವಾಷಿಂಗ್ಟನ್/ಬಗ್ದಾದ್: ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇರಾಕ್ ನಿಂದ ವರದಿ ಮಾಡುತ್ತಿದ್ದ ವೇಳೆ ಕಿಟೆಲ್ಸನ್ ಅವರನ್ನು ಕೆಲವು ದಿನಗಳ ಹಿಂದೆ ಅಪಹರಿಸಲಾಗಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇರಾಕ್ನ ಶಿಯಾ ಸಶಸ್ತ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ, ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡುವುದಾಗಿ ಮೊದಲು ಘೋಷಿಸಿತ್ತು. ಆದರೆ, ಅವರು ತಕ್ಷಣವೇ ಇರಾಕ್ ತೊರೆಯುವ ಷರತ್ತಿನ ಮೇಲೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈ ಘೋಷಣೆಯ ಕೆಲವೇ ಗಂಟೆಗಳ ಬಳಿಕ, ಕಿಟೆಲ್ಸನ್ ಬಿಡುಗಡೆಗೊಂಡಿರುವುದಾಗಿ ರೂಬಿಯೊ ಅಧಿಕೃತವಾಗಿ ಪ್ರಕಟಿಸಿದರು. ಕಿಟಲ್ಸನ್ ಅವರ ಆರೋಗ್ಯ ಸ್ಥಿತಿ ಹಾಗೂ ಅವರು ಈಗಿರುವ ಸ್ಥಳದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.
ಶಾಸಕರಿಗೆ IPL ಫ್ರೀ ಟಿಕೆಟ್: ಪ್ರಗತಿಪರರು ಕೇಳಲು ಮರೆತ ಇನ್ನೆರಡು ಪ್ರಶ್ನೆಗಳು!
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲಾ ಜನಪ್ರತಿನಿಧಿ ಶಾಸಕರು KSCA ಸಂಸ್ಥೆ ಬಿಡಿಗಾಸಿನ ಶುಲ್ಕ ಕಟ್ಟುತ್ತಿರುವುದರಿಂದ ಶಾಸಕರಿಗೆ ಉಚಿತ ಟಿಕೆಟ್ ಬೇಕೆಂದು ಕೇಳಿದರೇ ವಿನಾ, ಉಳಿದೆಲ್ಲಾ ಜನರ ಆಸ್ತಿಗಳ ಮೇಲೆ ವರ್ಷದಿಂದ ವರ್ಷಕ್ಕೆ ತೆರಿಗೆ ಮತ್ತಿತರ ಶುಲ್ಕಗಳು ಹೆಚ್ಚಿಸುತ್ತಿರುವಾಗ ನೂರಾರು ಕೋಟಿ ರೂ. ವಾರ್ಷಿಕ ಲಾಭವಿರುವ KSCA ಸಂಸ್ಥೆ 57 ವರ್ಷಗಳಷ್ಟು ಹಿಂದೆ ನಿಗದಿಯಾದ ಶುಲ್ಕವನ್ನು ಕಟ್ಟುತ್ತಿರುವುದೇಕೆ ಎಂಬ ಪ್ರಶ್ನೆಯನ್ನು ಕೇಳಲಿಲ್ಲ! ಕರ್ನಾಟಕದ ಶಾಸನ ಸಭೆಯ ಈ ಬಾರಿಯ ಅಧಿವೇಶನವು ಒಂದು ವಿಷಯದಲ್ಲಿ ಮಾತ್ರ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಅತ್ಯಪರೂಪದ ಮೈತ್ರಿಗೆ ಸಾಕ್ಷಿಯಾಯಿತು. ಬೆಂಗಳೂರಿನ KSCAಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ ಈ ಸಾಲಿನ IPL ಕ್ರಿಕೆಟ್ ಮ್ಯಾಚ್ಗಳಿಗೆ ಶಾಸಕರಿಗೆ ಮತ್ತು ಅವರ ಮನೆಯವರಿಗೆ ಉಚಿತ ಟಿಕೆಟ್ ಕೊಡಬೇಕೆನ್ನುವ ಆಗ್ರಹವನ್ನು ಪಕ್ಷಾತೀತವಾಗಿ ಮತ್ತು ಒಕ್ಕೊರಲಿನಿಂದ ಮಾಡಲಾಯಿತು. ಕಾಂಗ್ರೆಸ್ನ ವಿಜಯ್ ಕಾಶಪ್ಪನವರ್ ಪ್ರಾರಂಭಿಸಿದ ಈ ‘ಚರ್ಚೆಯಲ್ಲಿ’ ಶಾಸಕರಿಗೆ ಸಾಮಾನ್ಯ ಜನರಿಂದ ಪ್ರತ್ಯೇಕವಾದ ವಿಶೇಷ ಆವರಣವನ್ನು ಸ್ಟೇಡಿಯಂನಲ್ಲಿ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು! ಸದನದಲ್ಲಿ ವಿರೋಧಪಕ್ಷದ ನಾಯಕ ಅಶೋಕ್ ಅವರು ಕೂಡಲೇ ಕಾಂಗ್ರೆಸ್ ಶಾಸಕರ ಜೊತೆಗೂಡಿದರು. ಸರಕಾರಕ್ಕೆ ಕೇವಲ ಎಕರೆಗೆ 1,600 ರೂ. ಶುಲ್ಕ ಪಾವತಿಸುವ KSCAಗೆ ಶಾಸಕರಿಗೆ ಉಚಿತ ಟಿಕೆಟ್ ಕೊಡುವ ಕರ್ತವ್ಯವಿದೆ ಎಂಬಂತೆ ಆಗ್ರಹಿಸಿದರು. ಕೂಡಲೇ ಶಾಸಕರೆಲ್ಲರೂ ಅನುಭವಿಸುತ್ತಿರುವ ಈ ಅನ್ಯಾಯಕ್ಕೆ ಕೂಡಲೇ ಸ್ಪಂದಿಸಿದ ಸ್ಪೀಕರ್ ಖಾದರ್ ಅವರು ಸರಕಾರದ ಜೊತೆ ಮಾತನಾಡಿ ಈ ಅನ್ಯಾಯವನ್ನು ಪರಿಹರಿಸುವುದಾಗಿ ಹೇಳಿದರು. ಸರಕಾರದ ಪರವಾಗಿ ಉಪಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ KSCAಯ ಹೊಸ ಅಧ್ಯಕ್ಷ ಕ್ರಿಕೆಟಿಯರ್ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿ KSCA ಆಡಳಿತ ಮಂಡಳಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಈ ಸೀಸನ್ನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಆಹ್ವಾನ ಕೊಟ್ಟರು. ಹಾಗೆಯೇ ಉಪಮುಖ್ಯಮಂತ್ರಿ ಡಿಕೆಶಿ ಅವರ ಮಧ್ಯಸ್ಥಿಕೆಯಲ್ಲಿ ಮೊದಲ ಪಂದ್ಯಕ್ಕೆ ಎಲ್ಲಾ ಶಾಸಕರಿಗೆ ತಲಾ ಎರಡು ಉಚಿತ ಟಿಕೆಟ್ಗಳನ್ನು, ಆ ನಂತರದ ಪಂದ್ಯಗಳಿಗೆ ತಲಾ ಮೂರು ಟಿಕೆಟ್ಗಳನ್ನು ಕೊಡಲು ಒಪ್ಪಿಕೊಂಡು ಎಲ್ಲವೂ ಸುಖ್ಯಾಂತ್ಯವಾಗಿ RCB ತನ್ನ ಮೊದಲ ಮ್ಯಾಚನ್ನೂ ಕೂಡ ಭರ್ಜರಿಯಾಗಿ ಗೆದ್ದುಬಿಟ್ಟಿತು. ಆದರೆ ಈ ಇಡೀ ವಿದ್ಯಮಾನದಲ್ಲಿ ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ಕೇಳಬೇಕಾದ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳಲೇ ಇಲ್ಲ. ಪ್ರಗತಿಪರರು ಈ ಪ್ರಕ್ರಿಯೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಮತ್ತು ಕೆಲವು ಮಾಧ್ಯಮಗಳು ಅನಗತ್ಯವಾಗಿ ಎಬ್ಬಿಸಿದ ಎಲೈಟ್ ಸಂಸ್ಕೃತಿಯ ಚರ್ಚೆಯ ಹಿಂದಿನ ಬ್ರಾಹ್ಮಣ್ಯವನ್ನು ಸಕಾರಣವಾಗಿ ಪ್ರಶ್ನಿಸಿದರು. ಆದರೆ ಅದರೊಂದಿಗೆ ಈ ವಿದ್ಯಮಾನದಲ್ಲಿ ಕೇಳಬೇಕಿದ್ದ ಇನ್ನೂ ಎರಡು ಪ್ರಶ್ನೆಗಳನ್ನು ಕೇಳಲು ಮರೆತರು. ಅಥವಾ ಅದಕ್ಕೆ ಕೊಡಬೇಕಿದ್ದಷ್ಟು ಮಹತ್ವವನ್ನು ಕೊಡಲಿಲ್ಲ. ಕುಲೀನರ ಒಕ್ಕಣ್ಣ ಸೆಲೆಕ್ಟಿವ್ ವಿಮರ್ಶೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲು ಬಂದಾಗ ಹಲವಾರು ಫೋಟೊಗಳನ್ನು ತೆಗೆದುಕೊಳ್ಳುವುದು ಸಹಜ. ಅದರಲ್ಲಿ ಕೆಲವು KSCAಯ ಎಲ್ಲ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳು ಹಾಗೂ ಇತರರು ಕೂತು ಚರ್ಚಿಸುತ್ತಿರುವ ಫೋಟೊಗಳು ಇದ್ದವು ಹಾಗೂ ಮುಖ್ಯಮಂತ್ರಿ ಕೂತಿರುವಾಗ ವೆಂಕಟೇಶ್ ಪ್ರಸಾದ್ ಕೈಮುಗಿದು ಪ್ರವೇಶಿಸುತ್ತಿರುವ ಫೋಟೊ ಕೂಡ ಇತ್ತು. ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ‘‘ಪ್ರಖ್ಯಾತ ಆಟಗಾರ ಬಂದಾಗ ಮುಖ್ಯಮಂತ್ರಿ ಎದ್ದು ಗೌರವ ತೋರದೆ ತಮ್ಮ ಪಕ್ಷಕ್ಕೆ ಸಹಜವಾದ ಅಹಂಕಾರ ತೋರಿದ್ದಾರೆ’’ ಎಂದು ಟ್ವೀಟಿಸಿದರು. ಅದನ್ನೇ ಹಲವಾರು ಪತ್ರಿಕೆಗಳು ದೊಡ್ಡ ಮಟ್ಟದಲ್ಲಿ ಬೇಜವಾಬ್ದಾರಿಯಿಂದ ಚರ್ಚಿಸಿದವು. ಪತ್ರಿಕೆಗಳ ಮತ್ತು ಬಿಜೆಪಿ ಸಂಸದರ ಇಂಥಾ ಅಸಂಬದ್ಧ ಮತ್ತು ಅರ್ಧಸತ್ಯದ ಪ್ರಚಾರದ ವಿರುದ್ಧ ಹಲವಾರು ಪ್ರಗತಿಪರರು ಸಹಜವಾಗಿಯೇ ಸಕಾರಣ ಪ್ರತಿವಿಮರ್ಶೆ ಮಾಡಿದರು ಮತ್ತು ರಾಷ್ಟ್ರದ ಅಧ್ಯಕ್ಷೆ ಮುರ್ಮು ಅವರನ್ನೇ ನಿಲ್ಲಿಸಿ ಮಾತಾಡುವ, ತನಗಿಂತ ಹಿರಿಯರಾದ ಅಡ್ವಾಣಿಯವರನ್ನೇ ಅಗೌರವಿಸುವ ಪ್ರಧಾನಿ ಮೋದಿಯವರ ಫೋಟೊಗಳನ್ನು ಹಾಕಿ ಈ ಬಗ್ಗೆ ಮೌನವೇಕೆ ಮತ್ತು ಸೆಲೆಕ್ಟಿವ್ ವಿಮರ್ಶೆ ಏಕೆ ಎಂದು ಸಕಾರಣವಾಗಿ ಪ್ರಶ್ನಿಸಿದರು. ಅದು ಸರಿಯಾಗಿಯೇ ಇತ್ತು. ಆದರೆ ಅಲ್ಲಿಂದಾಚೆಗೆ ಈ ಪ್ರಕರಣ ಎತ್ತುವ ಇನ್ನೆರಡು ಗಂಭೀರ ಮೂಲಭೂತ ಪ್ರಜಾತಾಂತ್ರಿಕ ಪ್ರಶ್ನೆಗಳನ್ನು ಪ್ರಗತಿಪರರು ಮುಖ್ಯವೆಂದು ಪರಿಗಣಿಸಲಿಲ್ಲ. ಮತ್ತೊಂದು ಕಡೆ ಮತ್ತೊಬ್ಬ ಬಿಜೆಪಿ ಶಾಸಕ ಸ್ವಘೋಷಿತ ಸಜ್ಜನ ರಾಜಕಾರಣಿ ಸುರೇಶ್ ಕುಮಾರ್ ಅವರು ತನಗೆ ಉಚಿತ ಟಿಕೆಟ್ಗಳು ಬೇಡವೆಂದೂ, ಶಾಸಕರಿಗೆ ಉಚಿತ ಟಿಕೆಟ್ ಕೊಡುವುದು ವಿಲಾಸಿ ಸಂಸ್ಕೃತಿಯ ಭಾಗವೆಂದೂ, ತಾನದಕ್ಕೆ ವಿರುದ್ಧವೆಂದು ಘೋಷಿಸಿ ಪತ್ರಿಕೆಗಳಲ್ಲಿ ಬಹಳಷ್ಟು ಮೈಲೇಜ್ ಕೂಡ ಗಿಟ್ಟಿಸಿದರು ಮತ್ತು ಇಡೀ ವಿಷಯವನ್ನು ಒಂದು ಸಂಸ್ಕೃತಿಯ ವಿಷಯವ್ನಾಗಿಸಿ ಇದರ ಹಿಂದಿನ ಡೆಮಾಕ್ರಸಿ ಮತ್ತು ಕಾರ್ಪೊರೇಟೋಕ್ರಸಿಗಳ ದುಷ್ಟ ಮೈತ್ರಿಯ ರಾಜಕೀಯ-ಆರ್ಥಿಕ ವಿಷಯವನ್ನು ಗೌಣಗೊಳಿಸಿದರು ಮತ್ತು ಈ ಮಹಾಶಯರು ತಮ್ಮ ನಾಯಕರು ವಿಧಾನಸಭೆಯಲ್ಲಿ ಉಚಿತ ಟಿಕೆಟಿಗಾಗಿ ಆಗ್ರಹಿಸುತ್ತಿದ್ದಾಗ ಸುಮ್ಮನಿದ್ದರು! ವಾಸ್ತವದಲ್ಲಿ ಈ ಪ್ರಕರಣವು: 1) ಕ್ರಿಮಿನಲ್ ಆರೋಪದ ವಿಚಾರಣೆಯಿನ್ನೂ ನಡೆಯುತ್ತಿರುವ ಪ್ರಕರಣದ ಆರೋಪಿಯಿಂದ ಸಾರ್ವಜನಿಕ ಪ್ರತಿನಿಧಿಗಳು ಪಕ್ಷಾತೀತವಾಗಿ ರುಷುವತ್ತನ್ನು ಬಹಿರಂಗವಾಗಿ ಪಡೆದುಕೊಂಡು ನಿಷ್ಪಕ್ಷ ನ್ಯಾಯದಾನಕ್ಕೆ ಅಡ್ಡಿಯಾಗುತ್ತಿರುವ ಗಂಭೀರ ಅಪರಾಧವಾಗಿದೆ ಹಾಗೂ ಆ ಅಪರಾಧವನ್ನು ನಾರ್ಮಲೈಸ್ ಮಾಡುವ ಪ್ರಜಾತಂತ್ರ ವಿರೋಧಿ ಕಾರ್ಪೊರೇಟ್ ರಾಜಕಾರಣವೂ ಆಗಿದೆ. 2) ಅದಕ್ಕಿಂತ ಮುಖ್ಯವಾಗಿ ಬಡಜನರಿಗೆ ಉಚಿತ ಅಕ್ಕಿ ಕೊಟ್ಟರೆ ಫ್ರೀಬೀ ಎಂದು ಹಂಗಿಸುವ ಪ್ರಜಾಪ್ರತಿನಿಧಿಗಳು ವರ್ಷಕ್ಕೆ ಸಾವಿರಾರು ಕೋಟಿ ಲಾಭವಿರುವ KSCA ಸಂಸ್ಥೆ ಕೇವಲ ಎಕರೆಗೆ 1,600 ರೂ. ಮಾತ್ರ ಶುಲ್ಕ ಪಾವತಿಸಿ ಬೊಕ್ಕಸಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಪ್ರಶ್ನಿಸದಷ್ಟು ಮಟ್ಟಿಗೆ ಕಾರ್ಪೊರೇಟ್ ಫ್ರೀಬಿಗಳು ಕಾನೂನು ಬದ್ಧವಾಗಿ ಬಿಟ್ಟಿರುವ ಪಕ್ಷಾತೀತ ದುರಂತವನ್ನು ಸೂಚಿಸುತ್ತದೆ. ಫ್ರೀ ಟಿಕೆಟ್ಟೊ? ಕಾರ್ಪೊರೇಟ್ ಕ್ರಿಮಿನಲ್ಗಳು ಕೊಟ್ಟ ಲಂಚವೋ? ಕಳೆದ ವರ್ಷ ನಡೆದ IPLನಲ್ಲಿ RCB ಟ್ರೊಫಿ ಪಡೆದ ಸಮಾರಂಭವನ್ನು KSCA ಸ್ಟೇಡಿಯಂನಲ್ಲಿ ನಡೆಸುವಾಗ ಸರಕಾರ, KSCA ಮತ್ತು RCB ತೋರಿದ ಕ್ರಿಮಿನಲ್ ಬೇಜವಾಬ್ದಾರಿಯಿಂದಾಗಿ 11 ಯುವ ಕ್ರೀಡೋತ್ಸಾಹಿಗಳು ತುಳಿತಕ್ಕೊಳಗಾಗಿ ಸತ್ತರು. ಅವಘಡದಲ್ಲಿ IPL ನಡೆಯಲಿರುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ನಿರ್ವಾಹಕ-ಮಾಲಕರಾಗಿರುವ KSCA (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ಮುಖ್ಯಸ್ಥರುಗಳು ಆರೋಪಿಗಳಾಗಿದ್ದಾರೆ. ಅವರ ಮೇಲಿನ ಆರೋಪದ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಿ ಕೋರ್ಟಿನಲ್ಲಿ ಸಂತ್ರಸ್ತರ ಪರವಾಗಿ ವಾದಿಸಬೇಕಿರುವ ಸರಕಾರಕ್ಕೂ ಈ ಅವಘಡದಲ್ಲಿ ಪಾಲಿದೆ. ಆದರೆ ಸರಕಾರವೇ ಆರೋಪಿಯಿಂದ ಬಹಿರಂಗವಾಗಿ ಇಡೀ ಶಾಸಕಾಂಗಕ್ಕೆ ಫ್ರೀ ಟಿಕೆಟ್ ಎಂಬ ಕಾಣಿಕೆಯನ್ನು ಕೊಡಿಸುತ್ತಿದೆ. ಇದನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಸಂಪೂರ್ಣವಾಗಿ ಈ ಇದು ಕ್ರಿಮಿನಲ್ ಅಪರಾಧವೇ ಅಲ್ಲವೆಂಬಂತೆ ಅದನ್ನು ಸಹಜೀಕರಿಸುತ್ತಿದೆ. ಹೀಗಾಗಿ ಇದು ಮಾಧ್ಯಮಗಳಿಗೂ ವಿಷಯವಲ್ಲ. ಹೀಗಾಗಿ ಸರಕಾರ ಮತ್ತು ಕಾರ್ಪೊರೇಟ್ಗಳ ಕ್ರಿಮಿನಲ್ ಬೇಜವಾಬ್ದಾರಿಯನ್ನು ಇಡೀ ವ್ಯವಸ್ಥೆಯೇ ಅಪರಾಧವೇ ಅಲ್ಲವೆಂಬಂತೆ ಮುಚ್ಚಿಹಾಕುತ್ತಿದೆ. ಈ ಹಿಂದೆಯೂ ಇದೇ ಬಗೆಯ ವ್ಯವಸ್ಥಿತ ಯೋಜನೆಗಳೇ ಭೋಪಾಲ್, ವಿಶಾಖಪಟ್ಟಣ ಅಥವಾ ಇನ್ನಿತರ ಕಡೆಗಳಲ್ಲಿ ಕ್ರಿಮಿನಲ್ ಬೇಜವಾಬ್ದಾರಿಯಿಂದಾಗಿ ಸಂಭವಿಸಿದ ಅಪರಾಧಗಳನ್ನು ಉದ್ದೇಶಪೂರಿತ ಅಪರಾಧವಲ್ಲವೆಂಬ ಮುಸುಕಿನಲ್ಲಿ ಅಪರಾಧದ ಪ್ರಮಾಣವನ್ನೇ ಕುಬ್ಜಗೊಳಿಸಿದರು. ಆದರೆ ಈ ಎಲ್ಲಾ ಕ್ರಿಮಿನಲ್ ಬೇಜವಾಬ್ದಾರಿಗಳ ಹಿಂದೆ ಇದ್ದದ್ದು ಕಾರ್ಪೊರೇಟ್ಗಳ ಲಾಭದ ದುರಾಸೆ. ಮುನ್ನೆಚ್ಚರಿಕೆಗೆ ಮಾಡಲೇಬೇಕಾದ ಹಣವನ್ನು ಉಳಿತಾಯ ಮಾಡಿ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳುವ ಲಾಲಸೆ. ಆದ್ದರಿಂದಲೇ ಇವು ಕಾರ್ಪೊರೇಟ್ಗಳು ಸರಕಾರದ ಕುಮ್ಮಕ್ಕಿನೊಂದಿಗೆ ಅಥವಾ ಪರೋಕ್ಷ ಸಹಕಾರದೊಂದಿಗೆ ಲಾಭದ ದುರಾಸೆಗಾಗಿ ನಡೆದ ವ್ಯವಸ್ಥಿತ ಕೊಲೆಗಳೇ. ಹೀಗಾಗಿ ಇದು ಕೇವಲ ವಿಲಾಸಿ ಸಂಸ್ಕೃತಿಯ ವಿಷಯವಲ್ಲ. ಬದಲಿಗೆ ಕ್ರಿಮಿನಲ್ ಅಪರಾಧ. ಇದನ್ನು ಆಗದಂತೆ ತಡೆಯುವ ಜವಾಬ್ದಾರಿ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳೆಲ್ಲರ ಮೇಲೂ ಇದೆ. ಆದ್ದರಿಂದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪಡೆದುಕೊಂಡಿರುವ ಸ್ಥಾನಗಳ ಕರ್ತವ್ಯವನ್ನು ನಿಭಾಯಿಸದೆ ತಮ್ಮ ಅಧಿಕಾರಸ್ಥಾನ ಬಳಸಿ ಅಧಿಕೃತವಾಗಿ ಉಚಿತ ಟಿಕೆಟ್ ಪಡೆದುಕೊಳ್ಳುವವರೆಲ್ಲಾ ಅಪರಾಧಿಗಳೇ ಅಲ್ಲವೇ? ಬಹಿರಂಗ ಭ್ರಷ್ಟಾಚಾರವಲ್ಲವೇ? ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ್ತು ಸರಕಾರದ ಅಪರಾಧ ಹೆಚ್ಚಿನದು. ಆದರೆ ಕಳೆದ ವರ್ಷ ಬಿಜೆಪಿ ಪಕ್ಷ ಸಹ ಇಂತಹ ಅವಘಡ ನಡೆಯದಂತೆ ಸೂಕ್ತ ಎಚ್ಚರಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಸರಕಾರವನ್ನು ಎಚ್ಚರಿಸದೆ ರಾಜಕೀಯ ಲಾಭಕ್ಕಾಗಿ ಐಪಿಎಲ್ ಸಮಾರಂಭ ನಡೆಯಲೇ ಬೇಕೆಂದು ಅವಘಡ ನಡೆಯುವ ತನಕ ಒತ್ತಾಯಿಸುತ್ತಲೇ ಇತ್ತು. ಅವಘಡ ನಡೆದ ಮೇಲೆ ಮಾತು ಬದಲಾಯಿಸಿತು. ಈಗ ಆರೋಪಿಗಳ ಬಳಿ ಫ್ರೀ ಟಿಕೆಟ್ ಪಡೆಯಬಾರದೆಂದು ಒತ್ತಾಯಿಸದೆ ಅದನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಪ್ರತಿಪಾದಿಸುತ್ತಿದೆ. ಆರೋಪಿ ಸಂಸ್ಥೆಯೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡು ಅಪರಾಧವನ್ನು ಗೌಣಗೊಳಿಸುತ್ತಿದೆ. ಆರೋಪದ ಸಂಬಂಧಿಗಳಿಗೆ ಗೌರವ ಡಾಕ್ಟರೇಟ್! KSCA ಮತ್ತು RCB ಮತ್ತು ಸರಕಾರದ ಈ ಜಂಟಿ ಕಾರ್ಪೊರೇಟ್ ಅಪರಾಧವನ್ನು ಗೌಣಗೊಳಿಸುವತ್ತ ಕಾಂಗ್ರೆಸ್ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಆರೋಪಕ್ಕೆ ಶಿಕ್ಷೆ ವಿಧಿಸುವತ್ತ ಸಹಕರಿಸದೆ ಆರೋಪ ಸಂಭವಿಸಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾದ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಗೌರವಿಸುತ್ತಿದೆ. ಬೆಂಳೂರಿನ ನಗರ ವಿಶ್ವವಿದ್ಯಾನಿಲಯವು ಅದರ ಸಿಂಡಿಕೇಟ್ ಒಪ್ಪಿಗೆ ಮತ್ತು ಒತ್ತಡಗಳೊಂದಿಗೆ ಈ ಬಾರಿ ಹಲವು ಗೌರವ ಡಾಕ್ಟರೆಟ್ಗಳನ್ನು ಘೋಷಿಸಿದೆ. ಅದರಲ್ಲಿ ಕಳೆದ ವರ್ಷದ ಅವಘಡದ ಬಗ್ಗೆ ಮುಖ್ಯಮಂತ್ರಿಗಳಿಗೆ ಸರಿಯಾದ ಪೂರ್ವ ಸಲಹೆಗಳನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಕಳೆದುಕೊಂಡ ಶಾಸಕ ಗೋವಿಂದರಾಜ್ ಕೂಡ ಒಬ್ಬರು. ಹಾಗೆಯೇ ಈ ಅವಘಡ ಸಂಭವಿಸಿದಾಗ ಪದಾಧಿಕಾರಿಯಾಗಿರದಿದ್ದರೂ ಈಗ ಆರೋಪಿ KSCA ಸಂಸ್ಥೆಯ ಅಧ್ಯಕ್ಷರಾಗಿರುವ ವೆಂಕಟೇಶ್ ಪ್ರಸಾದ್ ಅವರಿಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದೆ. ಇವೆಲ್ಲವೂ ಕಾರ್ಪೊರೇಟ್ ಅಪರಾಧಗಳನ್ನು ಸಮಾಜದ ಕಣ್ಣಿನಲ್ಲಿ ಅಪರಾಧವೇ ಅಲ್ಲವೆಂದು ಬಿಂಬಿಸುವ ರಾಜಕೀಯವಲ್ಲವೇ? ಕಾಂಗ್ರೆಸ್ನ ಇಂತಹ ಕ್ರಮಗಳ ಬಗ್ಗೆ ಬಿಜೆಪಿಯ ಸಂಪೂರ್ಣ ಸಹಕಾರವೂ ಕೂಡ ಕಾರ್ಪೊರೇಟ್ ಹಿತಾಸಕ್ತಿಯನ್ನು ಕಾಯುವುದೇ ಹಿಂದುತ್ವದ ಮತ್ತು ಪಕ್ಷಾತೀತ ರಾಜಕೀಯ ಸಂಸ್ಕೃತಿ ಎಂಬುದನ್ನು ಸಾರಿ ಹೇಳುತ್ತಿಲ್ಲವೇ? ಈ ಕಾರಣದಿಂದಲೇ ಬಿಜೆಪಿಯನ್ನೂ ಒಳಗೊಂಡಂತೆ ಯಾವುದೇ ಪಕ್ಷದ ಯಾರೊಬ್ಬರೂ ಸಹ ಸದನದಲ್ಲಿ ಈ ಸಾಲಿನಲ್ಲಿ ಐಪಿಎಲ್ ಅವಘಡವಿಲ್ಲದೆ ನಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆಗೆ ಒತ್ತಾಯಿಸಲಿಲ್ಲ! ಏಕೆಂದರೆ ಕಾರ್ಪೊರೇಟ್ ಅಪರಾಧಗಳು ಜನಮಾನಸದಿಂದ ಮರೆಯಾಗಬೇಕು ಮತ್ತು ಅವುಗಳ ಲಾಭ ಲಾಲಸೆಗಳೇ ಅಭಿವೃದ್ಧಿಯೆಂಬ ಗೌರವವನ್ನು ಪಡೆಯಬೇಕಲ್ಲವೇ? ಸಾವಿರ ಕೋಟಿ ಲಾಭವಿರುವ ಸಂಸ್ಥೆಗೆ 1,600 ರೂ. ಮಾತ್ರ ಬಾಡಿಗೆ ಏಕೆ? ಸದನದಲ್ಲಿ IPLಗೆ ಫ್ರೀ ಟಿಕೆಟ್ ಬೇಕೆಂದು ವಿರೋಧ ಪಕ್ಷದ ನಾಯಕ ಅಶೋಕ್ ಅವರು ವೀರಾವೇಶದಿಂದ ಆಗ್ರಹಿಸುವಾಗ ಕರ್ನಾಟಕದ ಜನತೆಗೆ ಒಂದು ಮಾಹಿತಿಯನ್ನು ನೀಡಿಬಿಟ್ಟರು. ಅದೇನೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲೋಸುಗ ಸರಕಾರವು KSCA (Karnataka State Cricket Association) ಸಂಸ್ಥೆಗೆ 1969ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ 16 ಎಕರೆ ವಿಸ್ತೀರ್ಣದ ಜಮೀನನ್ನು ವರ್ಷಕ್ಕೆ ಎಕರೆಗೆ ಕೇವಲ 1,600 ರೂ. ದರದಲ್ಲಿ ವಹಿಸಿಕೊಡಲಾಯಿತು. ಅದೇ ಇಂದಿನ ಚಿನ್ನಸ್ವಾಮಿ ಸ್ಟೇಡಿಯಂ. ಆದರೆ 57 ವರ್ಷಗಳ ನಂತರ ಈಗಲೂ ಈ ಸಂಸ್ಥೆ ಸರಕಾರಕ್ಕೆ ಕಟ್ಟುತ್ತಿರುವುದು ಎಕರೆಗೆ ಕೇವಲ 1,600 ರೂ.ನಂತೆ ಕೇವಲ ವಾರ್ಷಿಕ 19,000 ರೂ. ಬಾಡಿಗೆ ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ IPL ನಡೆಯುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಿರ್ವಹಿಸುವ KSCA ಸಂಸ್ಥೆಗೆ ವಾರ್ಷಿಕ 100 ಕೋಟಿಗೂ ಹೆಚ್ಚು ಆದಾಯವಿದೆ. 2023-24ರ ಆಡಿಟ್ ವರದಿಯ ಪ್ರಕಾರ ಆ ಸಾಲಿನಲ್ಲಿ 34 ಕೋಟಿಗೂ ಹೆಚ್ಚು ನಿವ್ವಳ ಲಾಭವಾಗಿದೆ. ( https://www.ksca.cricket/wp.../uploads/2024/12/AGM-Book.pdf ) ಆದರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲಾ ಜನಪ್ರತಿನಿಧಿ ಶಾಸಕರು KSCA ಸಂಸ್ಥೆ ಬಿಡಿಗಾಸಿನ ಶುಲ್ಕ ಕಟ್ಟುತ್ತಿರುವುದರಿಂದ ಶಾಸಕರಿಗೆ ಉಚಿತ ಟಿಕೆಟ್ ಬೇಕೆಂದು ಕೇಳಿದರೇ ವಿನಾ, ಉಳಿದೆಲ್ಲಾ ಜನರ ಆಸ್ತಿಗಳ ಮೇಲೆ ವರ್ಷದಿಂದ ವರ್ಷಕ್ಕೆ ತೆರಿಗೆ ಮತ್ತಿತರ ಶುಲ್ಕಗಳು ಹೆಚ್ಚಿಸುತ್ತಿರುವಾಗ ನೂರಾರು ಕೋಟಿ ರೂ. ವಾರ್ಷಿಕ ಲಾಭವಿರುವ KSCA ಸಂಸ್ಥೆ 57 ವರ್ಷಗಳಷ್ಟು ಹಿಂದೆ ನಿಗದಿಯಾದ ಶುಲ್ಕವನ್ನು ಕಟ್ಟುತ್ತಿರುವುದೇಕೆ ಎಂಬ ಪ್ರಶ್ನೆಯನ್ನು ಕೇಳಲಿಲ್ಲ! ವಾರ್ಷಿಕ ನೂರು ಕೋಟಿ ಆದಾಯವಿರುವ ಸಂಸ್ಥೆ ಕೇವಲ 19,000 ರೂ. ಶುಲ್ಕ ಕಟ್ಟಿ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ ಬಗ್ಗೆ ಪಕ್ಷಾತೀತ ಮೌನ ವಹಿಸಿದ್ದೂ ಕೂಡ ಕಾರ್ಪೊರೇಟ್ ಪರ ಆರ್ಥಿಕತೆಯ ಸಂಸ್ಕೃತಿಯ ಕಾರಣಕ್ಕೆ ಅಲ್ಲವೇ? ಬಡವರಿಗೆ ಸಾಲ ಮನ್ನಾ ಮಾಡಿದರೆ, ರಿಯಾಯಿತಿ ದರದಲ್ಲಿ ಸೇವೆಗಳನ್ನು ನೀಡಿದರೆ ಅವನ್ನು ಫ್ರೀಬಿ ಎಂದು ಹಂಗಿಸುವ ಕೋರ್ಟ್ಗಳು, ಬಿಜೆಪಿಗಳು ಕಾರ್ಪೊರೇಟುಗಳಿಗೆ ಕೊಡುತ್ತಿರುವ ಈ ಪುಕ್ಕಟೆ ದಾನವನ್ನು ಫ್ರೀಬಿ ಎಂದೇಕೆ ವಿರೋಧಿಸುವುದಿಲ್ಲ? KSCAಗೆ ನೂರಾರು ಕೋಟಿ ರೂ. ಲಾಭ ಬರುತ್ತಿರುವುದಕ್ಕೆ ಕಾರಣ ಈಗ ಕ್ರಿಕೆಟ್ ಕೇವಲ ಒಂದು ಆಟವಾಗಿ ಉಳಿದಿಲ್ಲ. ಅದೊಂದು ಕ್ರೀಡಾ ಉದ್ಯಮವಾಗಿದೆ. ಅದರಲ್ಲೂ ಅದರ IPL ಸ್ವರೂಪ ಸಂಪೂರ್ಣ ವಾಣಿಜ್ಯ ಉದ್ದೇಶದಿಂದಲೇ ಕೂಡಿದೆ. ಅದಕ್ಕೆ ತಕ್ಕಂತೆ ಆಟದ ಚಹರೆಗಳನ್ನು ಬದಲಿಸಲಾಗಿದೆ ಮತ್ತು ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಗಳು ಈಗ ನೇರವಾಗಿ ಅವನ್ನು ಪ್ರಾಯೋಜಿಸಿ ನೂರಾರು ಕೋಟಿ ಹಣ ಲಾಭ ಸೂರೆ ಹೊಡೆಯುತ್ತಿವೆ. ಹಾಗೆ ಲಾಭ ಸೂರೆ ಹೊಡೆಯಲು ಅತ್ಯಗತ್ಯವಾಗಿ ಬೇಕಿರುವುದು ಉನ್ಮಾದ ಸೃಷ್ಟಿ. ಉನ್ಮಾದ ಹೆಚ್ಚಾದಷ್ಟೂ ಜನ ಎಲ್ಲವನ್ನು ಮರೆತು ಐಪಿಎಲ್ ಸುತ್ತ ನೆರೆಯುತ್ತಾರೆ. ಅದು ಪ್ರದರ್ಶನ ಉದ್ಯಮಗಳಲ್ಲಿರುವ ಸಂಸ್ಥೆಗಳಿಗೆ ಕೋಟಿ ಕೋಟಿ ಲಾಭವನ್ನು ತಂದುಕೊಡುತ್ತವೆ. ಆದರೆ ಅಂಥ ಉನ್ಮಾದಗಳೇ ಹೋದವರ್ಷ ನಡೆದಂತ ಅವಘಡಗಳಿಗೂ ಕಾರಣವಾಗುತ್ತವೆ. ಒಂದು ಜನಪರ ಸರಕಾರ ಇಂತಹ ಉದ್ಯಮಗಳಿಗೆ ಮತ್ತು ಅದರ ಲಾಭಗಳಿಗೆ ಕಡಿವಾಣ ಹಾಕಬೇಕು. ಆದರೆ ನಮ್ಮ ದೇಶದ ದುರಂತವೇನೆಂದರೆ ವರ್ಷಕ್ಕೆ ನೂರಾರು ಕೋಟಿ ರೂ. ಲಾಭ ಮಾಡುವ KSCA ಮತ್ತು ವರ್ಷಕ್ಕೆ 16,000-20,000 ಕೋಟಿ ರೂ. ಆದಾಯ ಗಳಿಸುವ ಇದರ ಮಾತೃ ಸಂಸ್ಥೆ BCCI ಎರಡೂ ಕೂಡ ತಮ್ಮನ್ನು ತಾವು ಚಾರಿಟೇಬಲ್ ಸಂಸ್ಥೆ ಎಂದು ಘೋಷಿಸಿಕೊಂಡು ಆದಾಯ ತೆರಿಗೆ ಕಾಯ್ದೆ 12ರ ಅನ್ವಯ ಆದಾಯ ತೆರಿಗೆ ವಿನಾಯಿತಿ ಪಡೆಯುತ್ತಿವೆ. ಇದರ ಬಗ್ಗೆ ವಿಐಪಿ ಸಂಸ್ಕೃತಿಯ ವಿರೋಧಿಯೆಂದು ಹೇಳಿಕೊಳ್ಳುವ ಬಿಜೆಪಿಗಳಾಗಲೀ, ಕಾಂಗ್ರೆಸ್ನ ಸಮಾಜವಾದಿ ನಾಯಕಗಣವಾಗಲಿ ಮೌನವೇಕೆ? ವರ್ಷಕ್ಕೆ 20,000 ಕೋಟಿ ರೂ. ಆದಾಯ ಮತ್ತು 2024ರ ಸಾಲಿನಲ್ಲಿ 4,000 ಕೋಟಿಗೂ ಹೆಚ್ಚು ನಿವ್ವಳ ಲಾಭ ಮಾಡಿರುವ BCCI ಸಂಸ್ಥೆಗೆ ಬಿಜೆಪಿಯ ನಂ. 2 ನಾಯಕ ಅಮಿತ್ ಶಾ ಮಗನೇ ನಿಯಂತ್ರಕ. ಹಾಗಿದ್ದರೂ ವಿಲಾಸಿ ಸಂಸ್ಕೃತಿ ವಿರೋಧಿ ಬಿಜೆಪಿ ಪಕ್ಷ BCCI ಗೆ ತೆರಿಗೆ ರಿಯಾಯಿತಿ ಮುಂದುವರಿಸಿರುವುದೇಕೆ? ವಿರೋಧ ಪಕ್ಷಗಳು ಮೌನವಾಗಿರುವುದೇಕೆ? ಇತ್ತೀಚೆಗೆ ಮೋದಿ ಸರಕಾರ ಇಂಥ ಕಾರ್ಪೊರೇಟಿಗರಿಗೆ ಅನುಕೂಲ ಮಾಡಿಕೊಡಲೆಂದೇ ‘ವಿವಾದ್ ಸೆ ವಿಶ್ವಾಸ್’ ನೀತಿಯನ್ನು ಜಾರಿಗೆ ತಂದಿದೆ. ಅದನ್ನು ಬಳಸಿಕೊಂಡು ಅಲ್ಲಿ BCCI ಮತ್ತು ಇಲ್ಲಿ KSCA ಮಾಡಿದ ಎಲ್ಲಾ ನೇರ ತೆರಿಗೆ ವಂಚನೆಗಳನ್ನು ಮನ್ನಾ ಮಾಡಿಬಿಡಲಾಯಿತು. ಇದು IPL ಫ್ರೀ ಟಿಕೆಟ್ಗಿಂತ ಘೋರ ಕಾರ್ಪೊರೇಟ್ ಪರ ಸಂಸ್ಕೃತಿಯಲ್ಲವೇ? ಮೇಲಾಗಿ ಕಾರ್ಪೊರೇಟ್ ಪರವಾಗಿ ಜನರಿಗೆ ಮಾಡುತ್ತಿರುವ ದ್ರೋಹವಲ್ಲವೇ? ಹೀಗಾಗಿ ಅದು ದೇಶದ್ರೋಹವೇ ಅಲ್ಲವೇ? ಬಿಜೆಪಿಯ ಸೋಗಲಾಡಿ ಸಜ್ಜನಿಕೆ ಮತ್ತು ವಿಐಪಿ ಸಂಸ್ಕೃತಿಯ ಸೋಗಲಾಡಿ ವಿರೋಧಗಳಷ್ಟೆ ಅಥವಾ ಅದಕ್ಕಿಂತ ಆಳದ ಈ ದ್ರೋಹಗಳು ಅಪಾಯಕಾರಿಯಲ್ಲವೇ? ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಗಳ ಪಕ್ಷಾತೀತ ಸಮ್ಮತಿ ದೇಶದ ಪ್ರಜಾತಂತ್ರಕ್ಕೆ ಮುಳುವಾಗುವುದಿಲ್ಲವೇ? ಜಸ್ಟ್ ಆಸ್ಕಿಂಗ್.
ಚಿನ್ನ ಬೆಳ್ಳಿ ದರ ಇಂದು ದಿಢೀರನೆ ಭಾರಿ ಏರಿಕೆಯಾಗಿದೆ. 2 ವಾರಗಳ ಕಾಲ ಕದನ ವಿರಾಮ ಘೋಷಿಸಿ, ಇರಾನ್ - ಅಮೆರಿಕ ಒಪ್ಪಂದ ಮಾಡಿಕೊಂಡ ಹಿನ್ನೆಲೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ,
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ
Gold Rate April 8: ಸತತ ಮೂರು ವಾರಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಇರಾನ್ - ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಯುದ್ಧಕ್ಕೆ 2 ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಕಚ್ಚಾ ತೈಲದ
ಮಂಗಳೂರು: ನದಿ ಜಾಗವೇ ಒತ್ತುವರಿ, ಒಡಲು ಸೇರುತ್ತಿದೆ ಬಿಲ್ಡಿಂಗ್ ತ್ಯಾಜ್ಯ
ಮಂಗಳೂರು ನಗರದ ಸುಲ್ತಾನ್ ಬತ್ತೇರಿ ಸಮೀಪದ ಮೊಗವೀರ ಮಹಾಸಭಾ ಕಟ್ಟಡ ಸಮೀಪ ನದಿಗಳಿಗೆ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುರಿದು ಒತ್ತುವರಿ ಮಾಡಲಾಗುತ್ತಿದೆ. ಬೋಳೂರು ಪಾರ್ಕ್ಗೆ ತಾಗಿಕೊಂಡೇ ನದಿಯುದ್ದಕ್ಕೂ ಮಣ್ಣು, ತ್ಯಾಜ್ಯಗಳನ್ನು ಟಿಪ್ಪರ್ಗಳಲ್ಲಿ ತಂದು ಸುರಿಯಲಾಗುತ್ತಿದೆ. ಸುಲ್ತಾನ್ ಬತ್ತೇರಿ-ಬೆಂಗರೆ ಸೇತುವೆ ನಿರ್ಮಾಣವಾಗುತ್ತಿರುವ ಪರಪ್ಪು ಪ್ರದೇಶದಲ್ಲೂ ಭಾರಿ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುರಿದು ನದಿ ಒತ್ತುವರಿ ಮಾಡಲಾಗಿದೆ.
ಬುಟ್ಟಿಯಿಂದ ಹೊರ ಬರಲಿಲ್ಲ ಟ್ರಂಪಣ್ಣನ ಹಾವು: ಬಿಎಂ ಹನೀಫ್ ಬರಹ
ಮಧ್ಯಪ್ರಾಚ್ಯದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಯುದ್ಧದ ಭೀತಿಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿಢೀರ್ ಆಗಿ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಈ ಘೋಷಣೆಯು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಇದೊಂದು ಶಾಶ್ವತ ವಿರಾಮವಾಗಲಿ ಎಂಬುದು ಶಾಂತಿಪ್ರಿಯರ ಆಶಯವಾಗಿದೆ. ಆದರೆ, ಮಂಗಳವಾರ ರಾತ್ರಿಯವರೆಗೂ ಕೇಳಿಬರುತ್ತಿದ್ದ ಯುದ್ಧದ
ದಾವಣಗೆರೆ ಪ್ರಚಾರ ಅಂತ್ಯ : ಕಾಂಗ್ರೆಸ್ ಆಂತರಿಕ ಸಮೀಕ್ಷೆ ಬಹಿರಂಗ ಪಡಿಸಿದ ಡಿಕೆಶಿ - ಏನಿದೆ ವರದಿಯಲ್ಲಿ?
Davanagere Congress Internal Report : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ (ಏಪ್ರಿಲ್ 7) ಮುಕ್ತಾಯಗೊಂಡಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದ್ದು, ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಬಹಿರಂಗ ಪ್ರಚಾರ ಮುಕ್ತಾಯದ ನಂತರ ಕಾಂಗ್ರೆಸ್ ಆಂತರಿಕ ಸಮೀಕ್ಷೆಯ ವರದಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಬಹಿರಂಗ ಪಡಿಸಿದ್ದಾರೆ.
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್
IIT Baba Love Story: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುದ್ದಿಯಾಗಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಮೊನಾಲಿಸಾ ಭೋಂಸ್ಲೆ ಈಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊನಾಲಿಸಾ ಭೋಸ್ಲೆ ಕಳೆದ ವರ್ಷ ನಡೆದ ಮಹಾ
ಅಗ್ಗದ ಅತ್ತರು ಮಾರುವ ಗೋಸಂಗಿ ಸಮುದಾಯ
ಮೂಲತಃ ಅಗ್ಗವಾದ ಅತ್ತರು ಅಥವಾ ಸೆಂಟ್ ಅನ್ನು ಬೀದಿಬೀದಿ ಸುತ್ತಿ ಮಾರುವ ಕಾಯಕದ ಗೋಸಂಗಿ ಸಮುದಾಯದವರು ಈಗ ಇತರ ಸೌಂದರ್ಯವರ್ಧಕಗಳನ್ನು ಮಾರುವುದರಿಂದ ಹಿಡಿದು, ಒಳನಾಡ ಮೀನುಗಾರಿಕೆ, ಚಿಂದಿ ಆಯುವುದು ಮುಂತಾದ ಕೆಲಸಗಳನ್ನು ಮಾಡಿ ಜೀವನ ಮಾಡುತ್ತಾರೆ. ‘‘ನಮ್ಮ ಹಿರಿಯರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಿಂದ ಈ ಕಡೆಗೆ ವಲಸೆ ಬಂದವರು. ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ನಾವು ದಿನನಿತ್ಯ ದುಡಿಯದಿದ್ದರೆ ಪ್ರಪಂಚಾನೇ ನಡೆಯಲ್ಲ. ಉಪವಾಸ ಬೀಳಬೇಕಾಗುತ್ತದೆ, ಬೆಳಗಿನ ಜಾವ ಐದಾರು ಗಂಟೆಗೆ ಎದ್ದು ಒಂದೊಂದು ಟೋಳಿಯಲ್ಲಿ ಏಳೆಂಟು ಹೆಣ್ಣುಮಕ್ಕಳು ಕೂಡಿಕೊಂಡು ಬಗಲಾಗ ಜೋಳಿಗೆ ಹಾಕಿಕೊಂಡು ಕೈಯಾಗ ಒಂದು ಕೋಲು ಹಿಡಕೊಂಡು ಚಿಂದಿ, ಪ್ಲಾಸ್ಟಿಕ್ ಚೀಲ ಆಯ್ದು ಜೋಳಿಗೆ ತುಂಬಿಸಿತ್ತೇವು. ಜೋಳಿಗೆ ತುಂಬಿದ ಮ್ಯಾಲ ಎಲ್ಲರೂ ಕೂಡಿಕೊಂಡು, ಪ್ಲಾಸ್ಟಿಕ್ ಕೊಳ್ಳುವ ಅಂಗಡಿಗೆ ಹೋಗ್ತೀವಿ, ಅವರು ಕಾಟ ಮಾಡಿ ಮಾಲ ತಗೊಂಡು ರೊಕ್ಕಾ ಕೊಡ್ತಾರ. ಕನಿಷ್ಠ ಒಬ್ಬೊಬರಿಗೆ ಎರಡರಿಂದ ಮೂರು ನೂರು ರೂಪಾಯಿಗಳು ಸಿಗುತ್ತವೆ. ಇದರಿಂದ ನಮ್ಮ ಜೀವನ ನಡೆಯುತ್ತೆ’’ ಎಂದು ಗೋಸಂಗಿ ಸಮುದಾಯದ ಕುರಿತು ಸಂಶೋಧನಾತ್ಮಕ ಪುಸ್ತಕ ಬರೆದಿರುವ ಡಾ. ಹರಿಲಾಲ ಪವಾರರಿಗೆ ಧಾರವಾಡದ ಲಕ್ಷ್ಮೀಸಿಂಗನಕೇರಿಯ ಬಳಿಯಿರುವ ಜೋಪಡಪಟ್ಟಿ ಆಶ್ರಯ ಮನೆಗಳಲ್ಲಿರುವ ಗೋಸಂಗಿ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಗೋಸಂಗಿ ಸಮುದಾಯದ ಇಂದಿನ ಪರಿಸ್ಥಿತಿ ಕುರಿತು ಹೀಗೆ ಹೇಳುತ್ತಾರೆ. ಮೂಲತಃ ಅಗ್ಗವಾದ ಅತ್ತರು ಅಥವಾ ಸೆಂಟ್ ಅನ್ನು ಬೀದಿಬೀದಿ ಸುತ್ತಿ ಮಾರುವ ಕಾಯಕದ ಗೋಸಂಗಿ ಸಮುದಾಯದವರು ಈಗ ಇತರ ಸೌಂದರ್ಯವರ್ಧಕಗಳನ್ನು ಮಾರುವುದರಿಂದ ಹಿಡಿದು, ಒಳನಾಡ ಮೀನುಗಾರಿಕೆ, ಚಿಂದಿ ಆಯುವುದು ಮುಂತಾದ ಕೆಲಸಗಳನ್ನು ಮಾಡಿ ಜೀವನ ಮಾಡುತ್ತಾರೆ. ಹಿಂದೊಮ್ಮೆ ಬಳ್ಳಾರಿಯ ಕಂಪ್ಲಿ ಕಡೆಯಿಂದ ಬರುವಾಗ ಗೋಸಂಗಿ ಕಾಲನಿ ಒಂದರಲ್ಲಿ ನಮ್ಮನ್ನು ಅನೇಕ ಮನೆಗಳಿಗೆ ಚಾವಡೆ ಲೋಕೇಶ್ ಕರೆದೊಯ್ದಿದ್ದರು. ಪ್ರತೀಮನೆಯಲ್ಲೂ ನಾವು ಪೆಟ್ಟಿಗೆಗಳಲ್ಲಿ ತುಂಬಿದ್ದ ಅತ್ತರು ಅಥವಾ ಸೆಂಟ್ ಬಾಟಲಿಗಳನ್ನು ನೋಡಿದ್ದೆವು. ಗಮಗಮ ಅತ್ತರು ಮಾರುವ ಇವರ ಬದುಕುಗಳು ಮಾತ್ರ ಗಮಗೊಡುತ್ತಿರಲಿಲ್ಲ. ಇವರ ಬಡತನ ಕಣ್ಣಿಗೆ ರಾಚುತಿತ್ತು. ಗೋಸಂಗಿಗಳನ್ನು ಗ್ಯಾಸರು, ಗೇಸರು, ಗೋಸಾವಿ, ಗೋಸಾಯಿ, ಗೋಸ್ ಅಥವಾ ಯಾಸ, ಗೋಸ್ಯಾ, ಗೋಸ್ಕಾ, ಗೋಸಿಕಾ, ಕೋಸಂಗಿ, ಕೋಸಿಕೋಲು, ಗೋಹಿಂಸಕ, ಗೋಸಂಗುಲು, ಗೋಸರ, ಗೋಸಿಕೊಳ್ಳು, ಪೇಗಲೊಳ್ಳು, ಪಂಥಗೊಳ್ಳು, ಕೈಂಕ, ಗೋಸಂಗೊಳ್ಳು, ಗೋಸಂಗಾಳ್ಳು, ಗೋಸ್ಟಿಕ, ಗೋವಳೀಗ ಮುಂತಾಗಿ ಅನೇಕ ಹೆಸರುಗಳಿಂದ ಅನೇಕ ಭಾಗಗಳಲ್ಲಿ ಕರೆಯುತ್ತಾರೆ. ಚರ್ಮಕಾರ ಕುಶಲ ಕರ್ಮಿಗಳಾದ ಗೋಸಂಗಿಗಳು ಉತ್ತರ ಭಾರತದಲ್ಲಿದ್ದಷ್ಟು ಕಾಲ ಗೋವುಗಳ ಸಾಕಣೆಯೊಂದಿಗೆ ಚರ್ಮದ ಪರಿಕರಗಳನ್ನು ತಯಾರಿಸುವ ಚಮ್ಮಾರಿಕೆಯ ಕಸುಬನ್ನು ತಮ್ಮ ವೃತ್ತಿಯನ್ನಾಗಿ ಅವಲಂಬಿಸಿದ್ದರು. ಚರ್ಮಕಾರಿಕೆಯು ಪಶುಪಾಲಕ ವೃತ್ತಿಯ ಭಾಗವಾಗಿ ಗೋಸಂಗಿಗಳಿಗೆ ಒಲಿದ ಕುಶಲ ಕಲೆ. ಇವರು ಚರ್ಮಕಾರರಾದ್ದರಿಂದ ಚಮ್ಮಾರಿಕೆಗೆ ಬೇಕಾದ ಚರ್ಮವನ್ನು ಪಡೆಯಲು ಹರಿತವಾದ ಆಯುಧದಿಂದ ದನಗಳನ್ನು ಕಡಿದು ಚರ್ಮವನ್ನು ಸುಲಿಯುತ್ತಿದ್ದರೆಂದು ವಡ್ಡಗೆರೆ ನಾಗರಾಜಯ್ಯ ಅವರು ‘ಗೋಸಂಗಿ ಗುಡಿಗರ್ಭದಲ್ಲಿ ಉರಿಯುವ ರಾಗದೀಪ’ ಎಂಬ ಬರಹದಲ್ಲಿ ನಮೂದಿಸಿದ್ದಾರೆ. ಗೋಸಂಗಿಗಳದು ಬಹು ಸಂಸ್ಕೃತಿಗಳ ಸಮಾಜವಾಗಿದ್ದು ಇವರಲ್ಲಿನ ಕೆಲ ಹೆಸರುಗಳು ಪರಿಗಣನೆಗೆ ಬಾರದೆ ತಪ್ಪು ತಪ್ಪಾಗಿ ನಮೂದಾಗಿರುವ ಅನೇಕ ಹೆಸರುಗಳಿವೆ. ಇವರು ಅಪ್ಪಟ ಅಲೆಮಾರಿಗಳಾದ್ದರಿಂದ ಇವರ ಗಣತಿಯೂ ಸ್ಪಷ್ಟವಾಗಿ ನಡೆದಿಲ್ಲ. ಈ ಕಾರಣಕ್ಕೆ ಇವರ ಅಸ್ಮಿತೆಯೇ ಇಲ್ಲದಂತಾಗುತ್ತಿದೆ. ಈ ಸಮುದಾಯ ಕೂಡ ಇತರ ಕೆಲ ಅಲೆಮಾರಿ ಸಮುದಾಯಗಳಂತೆ ‘ಐಡೆಂಟಿಟಿ ಕ್ರೈಸಿಸ್’ನಿಂದ ನರಳುತ್ತಿದೆ. ಹೀಗೆ ನಿರ್ದಿಷ್ಟ ಗುರುತಿಗೆ ಸಿಗದೆ ಬಹು ನಾಮಗಳಿಗೆ ಒಳಗಾಗುವುದರಿಂದ ಆಗುವ ಅಪಾಯಗಳ ಅರಿವಿಲ್ಲದೆಯೇ ಈ ಸಮುದಾಯ ಬದುಕುತ್ತಿದೆ. ಈ ಕಾರಣಕ್ಕೆ ನಿರ್ದಿಷ್ಟವಾಗಿ ಅತ್ತರ್ವಾಲ ಸಮುದಾಯದವರೂ ಕೂಡ ತಮ್ಮನ್ನು ಗೋಸಂಗಿ ಎಂತಲೇ ಕರೆದುಕೊಳ್ಳುತ್ತಾರೆ. ಮತ್ತೇ ಕೆಲವರು ಗೋಸಾವಿ, ಹಿಂದೂ ಮರಾಠ, ರಜಪೂತ, ಮರಾಠ, ಗಂಧದೆಣ್ಣೆಯವರು, ಗೋಸಾಯಿ, ಡುಂಗ್ರಿ ಗರಾಸಿಯಾ ಅವರೂ ಕೂಡ ಕೆಲವೊಮ್ಮೆ ತಮ್ಮನ್ನು ಗೋಸಂಗಿಗಳು ಎಂದೇ ಗುರುತಿಸಿಕೊಳ್ಳುತ್ತಾರೆ. ಇದರಿಂದಾಗಿ ಗೋಸಂಗಿಗಳಿಗೆ ಸಿಗಬೇಕಾದ ಸರಕಾರದ ಅನುದಾನ, ಸವಲತ್ತು ಮತ್ತು ಮೀಸಲಾತಿಗಳನ್ನು ಈ ಇತರ ಸಮುದಾಯದವರು ಪಡೆಯುತ್ತಿದ್ದಾರೆ. ಮೊದಲು ಭಾರತ ಸರಕಾರ 1936ರಲ್ಲಿ ಬಳ್ಳಾರಿ, ಮೈಸೂರು ಮತ್ತು ಕೆನರಾ ಜಿಲ್ಲೆಗಳಲ್ಲಿ ಮಾತ್ರ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದರು. ನಂತರ 1976ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಸಂಗಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಯಿತು. ಗೋಸಂಗಿ ಸಮುದಾಯದವರು ಆಚರಿಸುವ ಹಿಂದೂ ಹಬ್ಬಗಳಲ್ಲಿ ದಸರಾ ಹಬ್ಬ ಬಹಳ ಪ್ರಮುಖವಾದುದು. ತಮ್ಮ ಅಲೆಮಾರಿ ಬದುಕಿನಿಂದಾಗಿ ದೇಶಾಂತರ ಹೋಗಿದ್ದವರು ದಸರಾ ಹಬ್ಬಕ್ಕೆ ಹತ್ತು ದಿನ ಮುಂಚಿತವಾಗಿ ಬಂದು ತಮ್ಮ ಮೂಲ ಸ್ಥಳವನ್ನು ಸೇರಿಕೊಳ್ಳುತ್ತಾರೆ. ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸುವ ಇವರು ತಮ್ಮ ಬೀದಿ, ಗಲ್ಲಿಗಳನ್ನು ಗುಡಿಸಿ ಸಾರಿಸಿ ತಮ್ಮ ಟೆಂಟು, ಗುಡಾರ, ಮನೆಮಠಗಳನ್ನು ಸ್ವಚ್ಛಗೊಳಿಸಿ ಒಂಭತ್ತು ದಿನಗಳ ಕಾಲ ಕಾಳಿಕಾದೇವಿಯ ಮೂರ್ತಿಯನ್ನು ತಮ್ಮ ತಮ್ಮ ಜಗಲಿಗಳ ಮೇಲಿಟ್ಟು ಹೂಹಣ್ಣುಗಳಿಂದ ಸಿಂಗರಿಸಿ, ಕಳಸ ಇಟ್ಟು, ಸಿಹಿ ಅಡುಗೆಯ ಎಡೆ ಹಾಕಿ ಅತ್ಯಂತ ಭಕ್ತಿಭಾವದಿಂದ ಪೂಜಿಸುತ್ತಾರೆ. ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನೂ ಕೂಡ ಇದೇ ರೀತಿ ಆಚರಿಸುತ್ತಾರೆ. ಗೋಸಂಗಿ ಸಮುದಾಯದ ಕೆಲವರು ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ನಾಟಿ ವೈದ್ಯಕೀಯವನ್ನೂ ಮಾಡುತ್ತಾರೆ. ಮತ್ತೆ ಕೆಲವರು ಮಾಟಮಂತ್ರಗಳನ್ನೂ ಮಾಡುತ್ತಾರೆ. ಗೋಸಂಗಿ ಸಮುದಾಯದವರಿಗೆ ತಮ್ಮದೇ ಆದ ಮರಗು ಭಾಷೆಯೊಂದಿದೆ. ಈ ಬಾಷೆಯ ಮೇಲೆ ಸಂಸ್ಕೃತ, ಮರಾಠಿ, ಹಿಂದಿ, ಬಂಜಾರ, ರಾಜಸ್ಥಾನಿ, ಗುಜರಾತಿ, ಉರ್ದು ಭಾಷೆಗಳ ಪ್ರಭಾವ ಇದೆ. ಗೋಸಂಗಿಗಳು ತಮ್ಮ ಗೋಸಂಗಿ ಭಾಷೆಯಲ್ಲೇ ಹಾಡು, ಕವನ ಮುಂತಾದ ಸಾಹಿತ್ಯಿಕ ರಚನೆಗಗಳನ್ನು ಮಾಡಿದ್ದಾರೆ. ತುಳಜಾಪುರದ ಅಂಬಾಭವಾನಿ, ಸೌದತ್ತಿ ಎಲ್ಲಮ್ಮ, ಸಿರ್ಸಿಯ ಮಾರಿಕಾಂಬೆ, ದುರ್ಗಾಂಬ, ಆದಿಶಕ್ತಿ ಮುಂತಾದ ಸ್ತ್ರೀ ದೇವತೆಗಳ ಕುರಿತು ತಾವೇ ಹಾಡುಗಳನ್ನು ಕಟ್ಟಿ ಸುಶ್ರಾವ್ಯವಾಗಿ ಹಾಡುತ್ತಾರೆ. ಗೋಸಂಗಿಗಳ ಮೂಲ ಪುರಾಣವನ್ನು ಹುಡುಕುತ್ತಾ ಹೋದರೆ ಆದಿಜಾಂಬವ ಮುನಿಗೆ ಸಂಬಂಧ ಬರುತ್ತದೆ. ಆದಿಜಾಂಬವ ಮುನಿಯ ಮಗ ‘ಹಾಲಮುನಿ’ಯಿಂದ ತಮ್ಮ ವಂಶ ಬಂದಿದೆ ಎಂದು ಹೇಳುತ್ತಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಗೋಸಂಗಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆಗಬೇಕಿದೆ, ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪೌರಾಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಈ ಸಮುದಾಯಕ್ಕೆ ನ್ಯಾಯಬದ್ಧವಾಗಿ ಕೊಡಬೇಕಾದ ಸವಲತ್ತು, ಅನುದಾನ, ಮೀಸಲಾತಿ ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಬೇಕಿದೆ.
ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ: ಶಾಶ್ವತ ಶಾಂತಿಗೆ ಗುಟೆರೆಸ್ ಕರೆ
ವಾಷಿಂಗ್ಟನ್/ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವೆ ಘೋಷಿಸಲಾದ ಎರಡು ವಾರಗಳ ಕದನ ವಿರಾಮವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ವಾಗತಿಸಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ. “ಈ ಪ್ರದೇಶದಲ್ಲಿ ಶಾಶ್ವತ ಮತ್ತು ಸಮಗ್ರ ಶಾಂತಿಗೆ ದಾರಿ ಮಾಡಿಕೊಡಲು, ಅಂತರರಾಷ್ಟ್ರೀಯ ಕಾನೂನಿನಡಿ ತಮ್ಮ ಬಾಧ್ಯತೆಗಳನ್ನು ಪಾಲಿಸುವುದರ ಜೊತೆಗೆ ಕದನ ವಿರಾಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಗುಟೆರೆಸ್ ಮೂರು ದೇಶಗಳಿಗೆ ಕರೆ ನೀಡಿದ್ದಾರೆ. “ನಾಗರಿಕರ ಜೀವ ರಕ್ಷಣೆ ಹಾಗೂ ಮಾನವೀಯ ಸಂಕಷ್ಟವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಯುದ್ಧಗಳನ್ನು ಅಂತ್ಯಗೊಳಿಸುವುದು ತುರ್ತು ಅಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವೈಯಕ್ತಿಕ ರಾಯಭಾರಿ ಜೀನ್ ಅರ್ನಾಲ್ಟ್ ಶಾಶ್ವತ ಶಾಂತಿ ಸಾಧನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಬೆಂಬಲ ನೀಡಲು ಈ ಪ್ರದೇಶದಲ್ಲೇ ಇರುವುದಾಗಿ ಡುಜಾರಿಕ್ ಸ್ಪಷ್ಟಪಡಿಸಿದ್ದಾರೆ.
ಇರಾನ್ Vs ಅಮೆರಿಕ, ಇಸ್ರೇಲ್ ನಡುವೆ ಎರಡು ವಾರಗಳ ಕಾಲಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಮೂರು ವಾರಗಳ ನಂತರ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಇರಾನ್ ಮೇಲಿನ ದಾಳಿಯನ್ನು ಟ್ರಂಪ್ ನಿಲ್ಲಿಸುತ್ತಿದ್ದಂತೆ ಚಿನ್ನ ಮೂರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವಾರಗಳ ಕಾಲ ಇರಾನ್ ಮೇಲಿನ
Ambani: ಕೇರಳದ ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ ₹18 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ
ಮುಂಬೈ: ದೇಶದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದರು. ಎರಡೂ ದೇವಾಲಯಗಳಿಗೆ ಒಟ್ಟು 6
ಸಿಲಿಂಡರ್, ಇಂಧನ ಸಂಗ್ರಹ ಮಾಹಿತಿ ಪಡೆಯಲು ಅಧಿಕಾರಿಗಳ ಪರದಾಟ ; ಜನಪ್ರತಿನಿಧಿಗಳಿಂದ ಪ್ರಭಾವ
ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಮತ್ತು ಸಿಲಿಂಡರ್ ಕೊರತೆಯಾಗದಂತೆ ಹಾಗೂ ಕಾಳಸಂತೆ ಮಾರಾಟ ತಡೆಯಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿದಿನದ ದಾಸ್ತಾನು ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ, ಆದರೆ ನಿಖರ ಮಾಹಿತಿ ಕಲೆ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪ್ರಸ್ತುತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಕೊಪ್ಪಳ : ಅಕ್ರಮ ಮರಳುಗಾರಿಕೆ ಪತ್ತೆ; ಇಬ್ಬರ ವಿರುದ್ಧ ಎಫ್ಐಆರ್ ದಾಖಲು
ಕೊಪ್ಪಳ: ತಾಲೂಕಿನ ಕೋಳೂರು ಹತ್ತಿರದ ಹಿರೇಹಳ್ಳ ಪಕ್ಕದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕೃತ ಮರಳು ಗುತ್ತಿಗೆದಾರರಿಗೆ ನಿಗದಿಪಡಿಸಿದ ಪ್ರದೇಶವನ್ನು ಮೀರಿ, ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ತಹಶೀಲ್ದಾರರು, ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ದಾಳಿ ನಡೆಸಿದರು. ದಾಳಿಯ ವೇಳೆ ಹಿಟಾಚಿ ಹಾಗೂ ಬೋಟ್ಗಳ ಮೂಲಕ ಮರಳುಗಾರಿಕೆ ನಡೆಯುತ್ತಿರುವುದು ಪತ್ತೆಯಾಯಿತು. ಈ ಸಂಬಂಧ ಮುರುಗಪ್ಪ ವಣಕೇರಿ ಮತ್ತು ನೀಲೇಶ್ ಮದರಖಂಡಿ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ; ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!
ವಾಷಿಂಗ್ಟನ್/ಜೆರುಸಲೇಮ್: ಇರಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ ಸೂಚಿಸಿದೆ. ಆದರೆ ಈ ಕದನ ವಿರಾಮ ಒಪ್ಪಂದವು ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ಪ್ರಧಾನಿ ಕಚೇರಿ ಪ್ರಕಟಿಸಿದ ಹೇಳಿಕೆಯಲ್ಲಿ, “ಇರಾನ್ ತಕ್ಷಣವೇ ಜಲಸಂಧಿಗಳನ್ನು ತೆರೆಯಬೇಕು ಹಾಗೂ ಅಮೆರಿಕ, ಇಸ್ರೇಲ್ ಮತ್ತು ಪ್ರದೇಶದ ಇತರ ದೇಶಗಳ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು” ಎಂಬ ಷರತ್ತಿನಡಿ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದಲ್ಲದೆ, ಇರಾನ್ ಮುಂದಿನ ದಿನಗಳಲ್ಲಿ ಪರಮಾಣು, ಕ್ಷಿಪಣಿ ಹಾಗೂ ಬೆದರಿಕೆಗಳನ್ನು ಉಂಟುಮಾಡದಂತೆ ಖಚಿತಪಡಿಸಿಕೊಳ್ಳಲು ಅಮೆರಿಕ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ. ಈ ಗುರಿಗಳನ್ನು ಮುಂಬರುವ ಮಾತುಕತೆಗಳಲ್ಲಿ ಸಾಧಿಸಲು ಅಮೆರಿಕ ಇಸ್ರೇಲ್ ಗೆ ತಿಳಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೂ, ಎರಡು ವಾರಗಳ ಕದನ ವಿರಾಮವು ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಪಾಕಿಸ್ತಾನದ ಪ್ರಧಾನಮಂತ್ರಿ ಈ ಕದನ ವಿರಾಮವು ಲೆಬನಾನ್ ಗೂ ಅನ್ವಯಿಸುತ್ತದೆ ಎಂದು ಹೇಳಿದ್ದರೂ, ಇಸ್ರೇಲ್ ಈ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದೆ.
ಸಂವಿಧಾನ ‘ಲಾಕಪ್ಡೆತ್’ಗೆ ಬಲಿಯಾಗದಿರಲಿ
ಆರು ವರ್ಷಗಳ ಹಿಂದೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡಿನ ತೂತ್ತುಕ್ಕುಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರ ಸಾತ್ತಾನ್ಕ್ಕುಳಂ ಪೊಲೀಸ್ ಕಸ್ಟಡಿ ಸಾವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕಣದಲ್ಲಿ ಆರೋಪಿಗಳೆಂದು ಗುರುತಿಸಿಕೊಂಡಿದ್ದ ಒಂಭತ್ತು ಪೊಲೀಸರಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪು ಹಲವು ಕಾರಣಗಳಿಗೆ ಮಹತ್ವಪೂರ್ಣವಾದುದಾಗಿದೆ. ಇದು ದೇಶದೊಳಗಿರುವ ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಕೈಯಲ್ಲಿರುವ ಕಾನೂನನ್ನು ದುರುಪಯೋಗಗೊಳಿಸಿ ಅದನ್ನು ಅಮಾಯಕರ ಮೇಲೆ ಬಳಸುವ ಪೊಲೀಸರ ಪ್ರವೃತ್ತಿಗೆ ಸಣ್ಣದೊಂದು ಕಡಿವಾಣ ಬಿದ್ದರೂ ಈ ತೀರ್ಪು ಸಾರ್ಥಕವಾಗುತ್ತದೆ. ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗುತ್ತದೆ. ಆರೋಪಿಗಳ ಆರೋಪ ಸಾಬೀತಾಗುವ ಮೊದಲೇ ಅವರಿಗೆ ಶಿಕ್ಷೆಯನ್ನು ಘೋಷಿಸುವ ಪೊಲೀಸರೂ ಈ ತೀರ್ಪಿನಿಂದ ಕಲಿಯಬೇಕಾದುದು ಬಹಳಷ್ಟಿದೆ. ತೂತ್ತುಕ್ಕುಡಿ ಪ್ರಕರಣದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದ ತಂದೆ-ಮಗ ಯಾವುದೇ ಮಹದಾಪರಾಧವನ್ನು ಮಾಡಿರಲಿಲ್ಲ. 2020ರಲ್ಲಿ ಕೊರೋನ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ನ್ನು ಉಲ್ಲಂಘಿಸಿದ್ದೇ ಇವರು ಎಸಗಿದ ಅಪರಾಧವಾಗಿತ್ತು. ಸಾತ್ತಾನ್ಕ್ಕುಳಂನಲ್ಲಿ ತಮ್ಮ ಅಂಗಡಿಯನ್ನು ನಿಗದಿತ ಅವಧಿಯನ್ನು ಮೀರಿ ತೆರೆದಿಡುವ ಮೂಲಕ ಪಿ. ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್ ಕೋವಿಡ್ ಲಾಕ್ಡೌನ್ನ್ನು ಉಲ್ಲಂಘಿಸಿದ್ದರು ಎನ್ನುವುದು ಪೊಲೀಸರ ಆರೋಪವಾಗಿತ್ತು. ಈ ಕಾರಣಕ್ಕಾಗಿ 2020 ಜೂನ್ 19ರಂದು ಪೊಲೀಸರು ಇವರನ್ನು ಬಂಧಿಸಿ ಲಾಕಪ್ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಇಬ್ಬರೂ ಜೂ.22ರಂದು ಆಸ್ಪತ್ರೆಗೆ ದಾಖಲಾದ ಬೆನ್ನಿಗೇ ಕೊನೆಯುಸಿರೆಳೆದಿದ್ದರು. ಈ ಪ್ರಕರಣ ತಮಿಳುನಾಡಿನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಚರ್ಚೆಯ ವಿಷಯವಾಯಿತು. ಈ ಪ್ರಕರಣದ ಜೊತೆಗೇ ಕೊರೋನವನ್ನು ನಿರ್ವಹಿಸುವ ಅಧಿಕಾರವನ್ನು ಕೇಂದ್ರ ಸರಕಾರ ಪೊಲೀಸರಿಗೆ ನೀಡಿರುವುದನ್ನು ಜನರು ಪ್ರಶ್ನಿಸತೊಡಗಿದರು. ಇಡೀ ಪ್ರಕರಣದಲ್ಲಿ ಒಂದು ಸಮಾಧಾನಕರ ಅಂಶವೆಂದರೆ, ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯ ಸಾಕ್ಷ್ಯವೇ ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಕಾರಣವಾಯಿತು ಎನ್ನುವುದು. ಕೊರೋನಾ ಕಾಲದ ‘ಲಾಕ್ಡೌನ್’ ಇಡೀ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣ ಮಾಡಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರಿಂದ ಸಂಭವಿಸಿದ ಕಾನೂನಿನ ದುರ್ಬಳಕೆ ಲಾಕ್ಡೌನ್ ಸಂದರ್ಭದಲ್ಲೂ ನಡೆಯಿತು. ಒಂದೆಡೆ ಕೊರೋನ ಸಾಂಕ್ರಾಮಿಕ ರೋಗ. ಅವಶ್ಯ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೂ ಬೀದಿಗಿಳಿಯಲು ಜನಸಾಮಾನ್ಯರು ಹೆದರುವಂತಹ ಸನ್ನಿವೇಶ. ನಗರದಲ್ಲಿ ವಲಸೆ ಕಾರ್ಮಿಕರಂತೂ ನಿರುದ್ಯೋಗದಿಂದ ತತ್ತರಿಸಿ, ಹಸಿವಿನಿಂದ ಕಂಗೆಟ್ಟ ಕಾಲ. ತಮ್ಮ ಊರುಗಳಿಗೆ ಮರಳುವುದೂ ಅವರಿಗೆ ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ಬೀದಿಯಲ್ಲಿ ಮನುಷ್ಯರನ್ನು ಕಂಡರೆ ಪೊಲೀಸರು ಕ್ರಿಮಿನಲ್ಗಳನ್ನು ಕಂಡಂತಾಡುತ್ತಿದ್ದರು. ಪೊಲೀಸರ ಲಾಠಿಗಳಿಗೆ ಹೆದರುತ್ತಲೇ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿತ್ತು. ಪೊಲೀಸ್ ಲಾಠಿಗಳಿಂದ ಕೊರೋನ ವೈರಸನ್ನು ಎದುರಿಸಿದ್ದ ಏಕೈಕ ದೇಶ ನಮ್ಮದು. ರಾಜಕಾರಣಿಗಳ ರಾಜಕೀಯ ರ್ಯಾಲಿಗಳು, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಶಕ್ತಿಹೀನವಾಗುತ್ತಿದ್ದ ಈ ಲಾಠಿಗಳಿಗೆ ಬಡ ಕಾರ್ಮಿಕರು, ಸಣ್ಣ ಪುಟ್ಟ ದಿನಸಿ ಅಂಗಡಿಗಳ ಮಾಲಕರನ್ನು ಕಂಡ ಕೂಡಲೇ ಶಕ್ತಿ ಬಂದು ಬಿಡುತ್ತಿತ್ತು. ತೂತ್ತುಕ್ಕುಡಿ ದುರಂತ, ಲಾಕ್ಡೌನಲ್ಲಿ ದೇಶಾದ್ಯಂತ ಕೆಲವು ಪೊಲೀಸರು ಪ್ರದರ್ಶಿಸಿದ ಕ್ರೌರ್ಯಗಳ ಸ್ಯಾಂಪಲ್ ಆಗಿತ್ತು. ರಾತ್ರಿಯಿಡೀ ಈ ಇಬ್ಬರು ಅಮಾಯಕರ ಮೇಲೆ ಬರ್ಬರವಾಗಿ ದೌರ್ಜನ್ಯವೆಸಗಿದ ಪೊಲೀಸ್ ಸಿಬ್ಬಂದಿ ಯಾವುದೇ ಸೈಕೋಪಾತ್ಗಳಿಗಿಂತ ಕಡಿಮೆಯಿರಲಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಕಾರಣಕ್ಕಾಗಿ ಭಾರತದ ಪೊಲೀಸ್ ವ್ಯವಸ್ಥೆ ಜಗತ್ತಿನಲ್ಲೇ ಕುಖ್ಯಾತಿಯನ್ನು ಪಡೆದಿದೆ. ಲಾಕಪ್ ಡೆತ್ ಭಾರತಕ್ಕೆ ಹೊಸತೇನೂ ಅಲ್ಲ. ಶಂಕಿತ ಭಯೋತ್ಪಾದಕರೆಂದು ಒಂದು ನಿರ್ದಿಷ್ಟ ಸಮುದಾಯದ ಜನರನ್ನು ವಿಚಾರಣೆಗೆಂದು ಠಾಣೆಗೆ ಕರೆಸಿ, ಬಳಿಕ ಅವರು ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ಪ್ರಕರಣಗಳು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿರುತ್ತವೆ. 2025-26ರ ಒಂದು ವರ್ಷದಲ್ಲಿ ಭಾರತದಲ್ಲಿ ಒಟ್ಟು 170 ಪೊಲೀಸ್ ಕಸ್ಟಡಿ ಸಾವುಗಳು ವರದಿಯಾಗಿವೆ. ಆದರೆ ಸಾವುಗಳ ಬಗ್ಗೆ ಬಹುತೇಕ ಪ್ರಕರಣಗಳನ್ನು ಪೊಲೀಸ್ ಇಲಾಖೆ ತನಿಖೆಯಾಗದಂತೆ ನೋಡಿಕೊಂಡಿದೆ. 2025ರ ಅಂಕಿಅಂಶಗಳನ್ನು ನೋಡಿದರೆ, ಬಿಹಾರದಲ್ಲಿ ಅತಿ ಹೆಚ್ಚು ಲಾಕಪ್ಡೆತ್ಗಳು ಸಂಭವಿಸಿವೆ. ಇದರ ಬಳಿಕ ರಾಜಸ್ಥಾನ, ಮೂರನೇ ಸ್ಥಾನವನ್ನು ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಂಜಾಬ್ ಹಂಚಿಕೊಂಡಿವೆ. 2020ರಿಂದ 2022ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 4,484 ಕಸ್ಟಡಿ ಸಾವುಗಳು ದಾಖಲಾಗಿವೆ. 2016ರಿಂದ 2022ರ ಅವಧಿಯಲ್ಲಿ ಈ ಸಂಖ್ಯೆ 11,656 ಆಗಿತ್ತು. ಈ ಕಸ್ಟಡಿ ಸಾವುಗಳಿಗೆ ಸಂಬಂಧಿಸಿ ಪೊಲೀಸರಿಗೆ ಶಿಕ್ಷೆಯಾದದ್ದು ತೀರಾ ಕಡಿಮೆ. ಕಳೆದ ಐದು ವರ್ಷಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ವರದಿ ಹೇಳುತ್ತದೆ. ಪೊಲೀಸ್ ಅಧಿಕಾರಿಗಳ ಕೈಯಲ್ಲಿ ಎಡವಟ್ಟುಗಳು ಸಂಭವಿಸಿದಾಗ ಅವರನ್ನು ರಕ್ಷಿಸಲು ಇಡೀ ಪೊಲೀಸ್ ಇಲಾಖೆಯೇ ಒಂದಾಗುವುದರಿಂದ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಪೊಲೀಸರು ನೀಡಿದ ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯ ತೀರ್ಪು ನೀಡಬೇಕಾದುದರಿಂದ ಆರೋಪಿಗಳು ನುಣುಚಿಕೊಳ್ಳುವುದು ಸುಲಭವಾಗುತ್ತದೆ. ಸಿಬಿಐಯಂತಹ ಸಂಸ್ಥೆಗಳು ತನಿಖೆ ನಡೆಸಿದಾಗ ಮಾತ್ರ ಕೆಲವೊಮ್ಮೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ. ವಿಪರ್ಯಾಸವೆಂದರೆ ಅತಿ ಹೆಚ್ಚು ಲಾಕಪ್ಡೆತ್ಗಳು ನಡೆಯುತ್ತಿರುವ ರಾಜ್ಯಗಳಾಗಿ ಗುರುತಿಸಲ್ಪಟ್ಟಿರುವ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಕ್ರಿಮಿನಲ್ಗಳಿಗಾಗಿ ಗುರುತಿಸಲ್ಪಡುತ್ತಿವೆ. ಇತ್ತೀಚಿನ ದಿನಗಳಲ್ಲಿ, ಈ ಲಾಕಪ್ ಡೆತ್ಗಳು ಬೇರೆ ಬೇರೆ ರೂಪಗಳನ್ನು ಪಡೆಯುತ್ತಿವೆ. ನ್ಯಾಯಾಲಯ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸುವ ಮುನ್ನವೇ ಪೊಲೀಸರು ಸ್ಥಳೀಯ ಜಿಲ್ಲಾಡಳಿತದ ಸಹಕಾರದಿಂದ ಆರೋಪಿಗಳ ನಿವಾಸಗಳ ಮೇಲೆ ಬುಲ್ಡೋಜರ್ ಹರಿಸುವುದು ಸಂವಿಧಾನದ ಲಾಕಪ್ ಡೆತ್ ಎಂದೇ ಕರೆಯಬೇಕಾಗುತ್ತದೆ. ನಾಳೆ ಆರೋಪಿ ನಿರಪರಾಧಿಯೆಂದು ನ್ಯಾಯಾಲಯ ಘೋಷಿಸಿದರೆ ಈ ಬುಲ್ಡೋಜರ್ ಕಾರ್ಯಾಚರಣೆ ಎಸಗಿದ ಪೊಲೀಸರನ್ನು ಶಿಕ್ಷಿಸುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಉತ್ತರ ಭಾರತದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಪೊಲೀಸ್ ಎನ್ಕೌಂಟರ್ಗಳು ಲಾಕಪ್ ಡೆತ್ನ ಇನ್ನೊಂದು ಮುಖವೇ ಆಗಿದೆ. ಉತ್ತರ ಪ್ರದೇಶ ಇಂತಹ ಎನ್ಕೌಂಟರ್ಗಳಿಗೆ ಕುಖ್ಯಾತವಾಗಿದೆ. ಅಷ್ಟೇ ಅಲ್ಲ, ನ್ಯಾಯಾಲಯ ಕೆಲವೊಂದು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ಸತಾಯಿಸುತ್ತಿರುವುದು ಅನೇಕ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ್ದ ಫಾದರ್ ಸ್ಟಾನ್ಸ್ ಸ್ವಾಮಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿ, ಅವರು ಜೈಲಿನಲ್ಲಿ ತೀವ್ರ ಅನಾರೋಗ್ಯಕ್ಕೀಡಾದಾಗಲೂ ಜಾಮೀನು ಒದಗಿಸದ, ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೆ ಸೂಕ್ತ ಆರೋಗ್ಯ ಸೌಲಭ್ಯವನ್ನು ಒದಗಿಸದ ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ನ್ಯಾಯ ವ್ಯವಸ್ಥೆ ಯೇ ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು. ಇನ್ನೂ ವಿಚಾರಣಾಧೀನ ಕೈದಿಯಾಗಿದ್ದ ಅವರ ಸಾವಿನ ನೈತಿಕ ಹೊಣೆಯನ್ನು ಈವರೆಗೆ ಯಾರೂ ಹೊತ್ತಿಲ್ಲ. ಸಂವಿಧಾನದ ಈ ಬರ್ಬರ ಕಗ್ಗೊಲೆಯಲ್ಲಿ ನ್ಯಾಯಾಲಯವೂ ಪರೋಕ್ಷವಾಗಿ ಶಾಮೀಲಾಗಿರುವಾಗ ಯಾರ ಬಳಿ ನ್ಯಾಯವನ್ನು ಅಪೇಕ್ಷಿಸಬೇಕು ಎನ್ನುವುದು ತಿಳಿಯದೆ ನ್ಯಾಯ ದೇವತೆ ಕಂಗಾಳಾಗಿದ್ದಾಳೆ. ದೇಶದಲ್ಲಿ ಸಂವಿಧಾನವೇ ಲಾಕಪ್ಡೆತ್ಗೆ ಬಲಿಯಾಗುತ್ತಿರುವಾಗ ತೂತ್ತುಕ್ಕುಡಿ ತೀರ್ಪು ಪೊಲೀಸರ ವರ್ತನೆಯಲ್ಲಿ ಬದಲಾವಣೆಯನ್ನು ತರಬಹುದು ಎಂದು ನಿರೀಕ್ಷಿಸುವುದು ಸಾಧ್ಯವೆ?
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ
ನವದೆಹಲಿ / ವಾಷಿಂಗ್ಟನ್: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಹಾಗೂ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಹಾಗೂ ಇರಾನ್ ನಡುವೆ ದಿಢೀರ್ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ, ಕಚ್ಚಾ ತೈಲ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 20ರಷ್ಟು ಭಾರೀ ಕುಸಿತ ಉಂಟಾಗಿದೆ. ಮಂಗಳವಾರದ ವಹಿವಾಟಿನ ಆರಂಭದಲ್ಲಿ ಪ್ರತಿ ಬ್ಯಾರೆಲ್ಗೆ 117.63 ಡಾಲರ್ನಷ್ಟಿದ್ದ ತೈಲ ಬೆಲೆ, ಕದನ ವಿರಾಮದ ಘೋಷಣೆಯಾಗುತ್ತಿದ್ದಂತೆ
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ
Iran 10 Demands: ಅಮೆರಿಕ, ಇಸ್ರೇಲ್ Vs ಇರಾನ್ಗಳ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ಸಂಬಂಧಿಸಿದಂತೆ ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಈ ಕದನ ವಿರಾಮ ಘೋಷಣೆ ಆಗಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ನ ಸಹ ದೃಢಪಡಿಸಿದೆ. ಇದೀಗ ಇರಾನ್ 10 ಷರತ್ತುಗಳನ್ನು ವಿಧಿಸಿದೆ. ಆ ಷರುತ್ತುಗಳೇನು ಇದಕ್ಕೆ ಅಮೆರಿಕದ
ವಿಜಯಪುರ: ಸರಕಾರಿ ಕಚೇರಿಗಳ ವೇಳೆ ಬದಲಾದರೂ ಅಧಿಕಾರಿಗಳಿಗೆ ತಪ್ಪದ ಬಿಸಿಲ ಬೇಗೆ!
ತೀವ್ರವಾದ ಬಿಸಿಲಿನ ಬೇಗೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದ್ದು, ಇದು ದೂರದ ಊರುಗಳಿಂದ ಪ್ರಯಾಣಿಸುವ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಬಸವನಬಾಗೇವಾಡಿಯಂತಹ ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ, ವಿಜಯಪುರದಂತಹ ಜಿಲ್ಲಾ ಕೇಂದ್ರಗಳಲ್ಲಿ ವಾಸವಿರುವ ಸಿಬ್ಬಂದಿಗಳು ಮಧ್ಯಾಹ್ನ 1:30ಕ್ಕೆ ಕೆಲಸ ಮುಗಿಸಿ ಸುಡುವ ಬಿಸಿಲಿನಲ್ಲಿಯೇ ಮನೆಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಗಲ್ಫ್ ಬಿಟ್ಟು ಅಮೆರಿಕ ತೊಲಗಲೇಬೇಕು; ಪಟ್ಟು ಬಿಡದ ಇರಾನ್
ಎ. 10ರಿಂದ ಪಾಕಿಸ್ತಾನದಲ್ಲಿ ಕದನ ವಿರಾಮ ಮಾತುಕತೆ; ಇರಾನ್ ಹೇಳಿದ 10 ಅಂಶಗಳ ಯೋಜನೆಯಲ್ಲೇನಿದೆ?
ಮೈಸೂರು : ನಿಮ್ಹಾನ್ಸ್ ಕಾಮಗಾರಿಗೆ ತಡೆ, ರೈತರ ಆಕ್ರೋಶ
ಮೈಸೂರು ತಾಲೂಕಿನ ಗುಡುಮಾದನಹಳ್ಳಿಯ ಸುಮಾರು 20 ಎಕರೆ ಫಲವತ್ತಾದ ಜಮೀನಿನಲ್ಲಿ ನಿಮ್ಹಾನ್ಸ್ ಘಟಕ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಂಜಾನೆ ಕಾಮಗಾರಿ ಆರಂಭಿಸಲು ಬಂದಿದ್ದ ಜೆಸಿಬಿ ಯಂತ್ರಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತರು ತಡೆದು ವಾಪಸ್ ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ
Karnataka Rain: ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. ಚಂಡಮಾರುತ ಪ್ರಸರಣದ ಪ್ರಭಾವದಿಂದಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಗಂಗಾನದಿಯ ಪಶ್ಚಿಮ ಬಂಗಾಳದಿಂದ
Iran-US-Israel War: ಸುದ್ದಿ ವಾಹಿನಿಗಳ TRP ಸ್ಥಗಿತ ಆದೇಶವನ್ನು ಮತ್ತೆ 4 ವಾರ ವಿಸ್ತರಿಸಿದ ಕೇಂದ್ರ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಸುದ್ದಿ ವಾಹಿನಿಗಳು ಅತಿಯಾದ ರೋಚಕತೆ ಹಾಗೂ ಊಹಾಪೋಹಗಳಿಂದ ಕೂಡಿದ ವರದಿಗಳನ್ನು ಪ್ರಸಾರ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ಸುದ್ದಿ ವಾಹಿನಿಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ಪ್ರಕಟಣೆಯನ್ನು ಸ್ಥಗಿತಗೊಳಿಸುವ ಆದೇಶವನ್ನು ಇನ್ನೂ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮಾರ್ಚ್
ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಆರ್ಆರ್
ಗುವಾಹತಿ: ಮಳೆಬಾಧಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 27 ರನ್ ಗಳಿಂದ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ನಡೆದ 11 ಓವರ್ ಗಳ ಪಂದ್ಯದಲ್ಲಿ ಆರ್ಆರ್ 27 ರನ್ ಅಂತರದ ಜಯ ಸಾಧಿಸಿತು. ಕೇವಲ 32 ಎಸೆತಗಳಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಹಿತ 77 ರನ್ ಸಿಡಿಸಿದ ಯಶಸ್ವಿ ಜೈಸ್ವಾಲ್ ವಿಜಯದ ರೂವಾರಿ ಎನಿಸಿದರು. ಕೇವಲ 14 ಎಸೆತಗಳಲ್ಲಿ 39 ರನ್ ಸಿಡಿಸಿದ ಹದಿಹರೆಯದ ತಾರೆ ವೈಭವ್ ಸೂರ್ಯವಂಶಿ ಜತೆಗೆ ಜೈಸ್ವಾಲ್ ಮೊದಲ ವಿಕೆಟ್ ಗೆ ಮಿಂಚಿನ 80 ರನ್ ಸೇರಿಸಿದರು. ಈ ಭದ್ರಬುನಾದಿಯೊಂದಿಗೆ ಆರ್ಆರ್ ತಂಡ ನಿಗದಿತ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಮಳೆಯಿಂದಾಗಿ ಪಂದ್ಯ ಎರಡೂವರೆ ಗಂಟೆಯಷ್ಟು ತಡವಾಗಿ ಆರಂಭವಾಯಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮೊದಲ ಐದು ಓವರ್ ಗಳಲ್ಲೇ ಪತನ ಕಂಡು ಕೇವಲ 5 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಲು ಸಾಧ್ಯವಾಯಿತು. ರಿಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಒಂದಂಕಿ ದಾಟಲು ವಿಫಲರಾದರು. ದ್ವಿತೀಯಾರ್ಧದಲ್ಲಿ ಸ್ವಲ್ಪ ಪ್ರತಿರೋಧ ಕಂಡುಬಂದರೂ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸತತ ಮೂರು ಗೆಲುವಿನೊಂದಿಗೆ ಆರ್ಆರ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸೋಮವಾರ ಪಂಜಾಬ್ ಮತ್ತು ಕೊಲ್ಕತ್ತಾ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಮತ್ತೊಂದು ಅಜೇಯ ತಂಡವಾದ ಪಂಜಾಬ್ 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ನಿವ್ವಳ ರನ್ರೇಟ್ ನಲ್ಲೂ ರಾಜಸ್ಥಾನ (+2.403) ಇತರ ತಂಡಗಳಿಂದ ಮುಂದಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ ನಾಲ್ಕು ಅಂಕಗಳನ್ನು ಗಳಿಸಿದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ.
ಅನಿವಾರ್ಯವಾಗಿ ಕದನ ವಿರಾಮ ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ವರದಿ
ವಾಷಿಂಗ್ಟನ್: ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೇರೆ ಉತ್ತಮ ಆಯ್ಕೆಗಳು ಇರಲಿಲ್ಲ ಎಂದು ವಿದೇಶಾಂಗ ನೀತಿ ತಜ್ಞರು ವಿಶ್ಲೇಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ. Aljazeeraಗೆ ನೀಡಿದ ಸಂದರ್ಶನದಲ್ಲಿ ಕ್ವಿನ್ಸಿ ಇನ್ಸ್ಟಿಟ್ಯೂಟ್ ನ ಟ್ರಿಟಾ ಪಾರ್ಸಿ ಅವರು, ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ವಿಸ್ತೃತ ಯುದ್ಧಕ್ಕೆ ಮುಂದಾದರೆ ಅದು “ಟ್ರಂಪ್ ಕುರ್ಚಿ ಅಲುಗಾಡುವುದರಲ್ಲಿತ್ತು. ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುತ್ತಿತ್ತು” ಎಂದು ಅವರು ಉಲ್ಲೇಖಿಸಿದರು. ಇರಾನ್ ನ ಇಂಧನ ಸಂಪನ್ಮೂಲಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿದರೆ, ಇರಾನ್ GCC ರಾಷ್ಟ್ರಗಳ ಮೇಲೆ ಪ್ರತೀಕಾರ ದಾಳಿ ನಡೆಸುವ ಸಾಧ್ಯತೆ ಇತ್ತು. ಇದರಿಂದ ಇನ್ನಷ್ಟು ಗಂಭೀರ ಇಂಧನ ಬಿಕ್ಕಟ್ಟು ಉಂಟಾಗುತ್ತಿತ್ತು ಎಂದು ಅವರು ಎಚ್ಚರಿಸಿದರು. ಈ ಪರಿಸ್ಥಿತಿಯಲ್ಲಿ ಟ್ರಂಪ್ ಕದನ ವಿರಾಮ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು ಎಂದು ಪಾರ್ಸಿ ಅಭಿಪ್ರಾಯಪಟ್ಟರು. “ಒಪ್ಪಂದವು ತಮ್ಮ ಷರತ್ತುಗಳ ಮೇಲೆ ಆಗಿದೆ ಎಂಬ ಭಾವನೆ ಮೂಡಿಸಲು ಟ್ರಂಪ್ ಮುಂಚಿತವಾಗಿ ತೀವ್ರ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಮಾತುಕತೆಗಳು ಇರಾನ್ ಸೂಚಿಸಿದ 10 ಅಂಶಗಳ ಯೋಜನೆ ಆಧಾರಿತವಾಗಿವೆ. ಆ ಯೋಜನೆ ಹೆಚ್ಚು ಸಮಂಜಸವಾಗಿದೆ,” ಎಂದು ಅವರು ಉಲ್ಲೇಖಿಸಿದರು.
Iran-US War: ಇರಾನ್ - ಅಮೆರಿಕ ಕದನ ವಿರಾಮ, ಏಪ್ರಿಲ್ 10ಕ್ಕೆ ಪಾಕ್ನಲ್ಲಿ ಮಾತುಕತೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Iran-US War: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ನಿಂತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿರುವುದಾಗಿ ಇರಾನ್ ಸಹ ಘೋಷಣೆ ಮಾಡಿದೆ.
ಹಾರ್ಮುಝ್ ಜಲಸಂಧಿ ಮುಕ್ತಗೊಳಿಸುವ ನಿರ್ಣಯದ ವಿರುದ್ಧ ಭದ್ರತಾ ಮಂಡಳಿ ಸಭೆಯಲ್ಲಿ ವಿಟೊ ಚಲಾಯಿಸಿದ ರಷ್ಯಾ, ಚೀನಾ
ವಿಶ್ವಸಂಸ್ಥೆ: ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸುವ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮಂಡಿಸಿದ ನಿರ್ಣಯದ ವಿರುದ್ಧ ರಷ್ಯಾ ಹಾಗೂ ಚೀನಾ ವಿಟೊ ಅಧಿಕಾರ ಚಲಾಯಿಸಿವೆ. ಈ ಪ್ರಮುಖ ಶಿಪ್ಪಿಂಗ್ ಲೇನ್ ಸುರಕ್ಷತೆ ದೃಷ್ಟಿಯಿಂದ ಗಲ್ಫ್ ದೇಶದ ಅಪೇಕ್ಷಿತ ಹಸಿರು ದೀಪ ಬಳಕೆಗೆ ಸಂಬಂಧಿಸಿದಂತೆ ನಿರ್ಣಯದ ಕರಡನ್ನು ಈ ಮೊದಲೇ ದುರ್ಬಲಗೊಳಿಸಿದ ಹೊರತಾಗಿಯೂ ನಿರ್ಣಯದ ಮೇಲೆ ಉಭಯ ದೇಶಗಳು ವಿಟೊ ಅಧಿಕಾರ ಚಲಾಯಿಸಿದವು. ಬಹರೈನ್ ಈ ನಿರ್ಣಯದ ಕರಡು ಸಿದ್ಧಪಡಿಸಿದ್ದು, ಅಮೆರಿಕ ಇದನ್ನು ಬೆಂಬಲಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯದ ಪರ 11 ಮತಗಳು ಚಲಾಯಿಸಲ್ಪಟ್ಟವು. ಎರಡು ಮತಗಳು ವಿರುದ್ಧವಾಗಿ ಚಲಾವಣೆಯಾದರೆ, ಎರಡು ದೇಶಗಳು ಮತದಾನದಿಂದ ಹೊರಗುಳಿದವು. ಈ ಫಲಿತಾಂಶದ ಬಗ್ಗೆ ಗಲ್ಫ್ ದೇಶಗಳಿಗೆ ತೀವ್ರ ವಿಷಾದವಿದೆ ಎಂದು ಬಹರೈನ್ ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಝಯಾನಿ ಹೇಳಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ಕಳೆದ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ಆರಂಭಿಸಿದ ಬೆನ್ನಲ್ಲೇ ಪ್ರಮುಖ ಹಾರ್ಮುಝ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಜಲಸಂಧಿಯನ್ನು ಇರಾನ್ ಮುಕ್ತಗೊಳಿಸದಿದ್ದರೆ ಇಡೀ ಮನುಕುಲವೇ ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವು ಮುಕ್ತಾಯಕ್ಕೆ ಕೆಲವೇ ಗಂಟೆಗಳ ಮೊದಲು ಈ ಮತದಾನ ನಡೆಯಿತು.
ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಹೇಳಿಕೆಯನ್ನು ರಿಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್/ಟೆಹ್ರಾನ್: ಅಮೆರಿಕದೊಂದಿಗೆ ಕದನ ವಿರಾಮ ಒಪ್ಪಂದದ ಕುರಿತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೀಡಿದ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶದಿಂದ ಪಾಕಿಸ್ತಾನದ “ಅವಿಶ್ರಾಂತ ಪ್ರಯತ್ನಗಳಿಗೆ” ಟೆಹ್ರಾನ್ ಪರವಾಗಿ ಅರಾಘ್ಚಿ “ಕೃತಜ್ಞತೆ ಮತ್ತು ಮೆಚ್ಚುಗೆ” ವ್ಯಕ್ತಪಡಿಸಿ ಪೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. “ಇರಾನ್ ವಿರುದ್ಧದ ದಾಳಿಗಳನ್ನು ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ,” ಎಂದು ಅರಾಘ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ಎರಡು ವಾರಗಳ ಅವಧಿಯಲ್ಲಿ ಇರಾನ್ ಸೈನ್ಯದ ಸಮನ್ವಯದೊಂದಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವುದು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದರು.
ದಾವಣಗೆರೆ ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ: ಕಡೇ ದಿನ ಬಿಜೆಪಿ, ಕಾಂಗ್ರೆಸ್ ರ್ಯಾಲಿ, ಇನ್ನು ಮನೆ, ಮನೆ ಪ್ರಚಾರ
ದಾವಣಗೆರೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದಿನಿಂದ ಮನೆಮನೆ ಪ್ರಚಾರ ನಡೆಯಲಿದೆ. ವೋಟರ್ಸ್ ಅಲ್ಲದ ಪರಊರಿನ ನಾಯಕರು ಕ್ಷೇತ್ರ ತೊರೆದಿದ್ದಾರೆ. ಕೇಂದ್ರ ಸಚಿವರೂ ಕೂಡಾ ದಾವಣಗೆರೆಯಲ್ಲೇ 10 ದಿನ ಬೀಡು ಬಿಟ್ಟು ಪ್ರಚಾರ ನಡೆಸಿದ್ದಾರೆ.
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು
Iran Ceasefire: ಮಧ್ಯಪ್ರಾಚ್ಯದ ಇರಾನ್ನ ಮೇಲೆ ಅಮೆರಿಕ ವಿಷಕಾರಿ ಬಾಂಬ್ ದಾಳಿ (ನ್ಯೂಕ್ಲಿಯರ್ ಮಾದರಿ) ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ಬಾಂಬ್ ದಾಳಿಯನ್ನು ಮಂಗಳವಾರ ರಾತ್ರಿ 8ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5.30)ಕ್ಕೆ ನಡೆಸುವುದಾಗಿ ಗಡುವು ನಿಗದಿ ಮಾಡಲಾಗಿತ್ತು. ಇದೀಗ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಭಾರೀ ಬಾಂಬ್ ದಾಳಿ ಮಾಡುವ ಪ್ರಸ್ತಾವನೆಯನ್ನು ಹಿಂಪಡೆದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ
ಇರಾನ್ ಮೇಲಿನ ದಾಳಿ ನಿಲ್ಲಿಸಿದರೆ ಕಾರ್ಯಾಚರಣೆ ಸ್ಥಗಿತ: ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದೇನು?
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿಯನ್ನು ಶಮನಗೊಳಿಸುವ ದಿಸೆಯಲ್ಲಿ ಇರಾನ್ ಮಹತ್ವದ ಘೋಷಣೆ ಮಾಡಿದ್ದು, ತನ್ನ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಿದಲ್ಲಿ ರಕ್ಷಣಾತ್ಮಕ ಸೈನಿಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಇರಾನ್ ಇಸ್ಲಾಮಿಕ್ ಗಣರಾಜ್ಯದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಣೆ ನೀಡಿದ್ದು, ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನದ ಪ್ರಧಾನ ಮಂತ್ರಿ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಮುನೀರ್ ತೋರಿದ ಅವಿರತ ಪ್ರಯತ್ನಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಷರೀಫ್ ಅವರ ಟ್ವೀಟ್ನಲ್ಲಿ ವ್ಯಕ್ತವಾದ ಸೌಹಾರ್ದಯುತ ಮನವಿಗೆ ಪ್ರತಿಕ್ರಿಯೆಯಾಗಿ, ಅಮೆರಿಕದ 15 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಮಾತುಕತೆ ನಡೆಸುವ ವಿನಂತಿ ಹಾಗೂ ಮಾತುಕತೆಗಳಿಗೆ ಆಧಾರವಾಗಿ ಇರಾನ್ ಮಂಡಿಸಿದ 10 ಅಂಶಗಳ ಪ್ರಸ್ತಾವನೆಯ ಸಾಮಾನ್ಯ ಚೌಕಟ್ಟನ್ನು ಸ್ವೀಕರಿಸುವ ಕುರಿತು ಅಮೆರಿಕ ಅಧ್ಯಕ್ಷರು ಮಾಡಿದ ಘೋಷಣೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ವಿರುದ್ಧದ ದಾಳಿಗಳನ್ನು ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ, ಎರಡು ವಾರಗಳ ಅವಧಿಗೆ ಇರಾನ್ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯ ಸಾಧಿಸಿ, ತಾಂತ್ರಿಕ ಮಿತಿಗಳನ್ನು ಸರಿಯಾಗಿ ಪರಿಗಣಿಸುವ ಮೂಲಕ ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ. Statement on behalf of the Supreme National Security Council of the Islamic Republic of Iran: pic.twitter.com/cEtBNCLnWT — Seyed Abbas Araghchi (@araghchi) April 7, 2026
ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ: ಇರಾನ್ ಭರವಸೆ
ಟೆಹ್ರಾನ್: ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಕಾಲ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಇರಾನ್ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು, “ಇರಾನ್ ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯ ಸಾಧಿಸಿ ಹಾಗೂ ತಾಂತ್ರಿಕ ಮಿತಿಗಳನ್ನು ಪರಿಗಣಿಸಿದರೆ ಹಾರ್ಮುಝ್ ಮೂಲಕ ಸುರಕ್ಷಿತ ಮಾರ್ಗ ಒದಗಿಸಲಾಗುತ್ತದೆ” ಎಂದು ಹೇಳಿದ್ದಾರೆ. ಇದೇ ವೇಳೆ, ಇರಾನ್ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಿದಲ್ಲಿ ದೇಶದ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿವೆ ಎಂದು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಸ್ಪಷ್ಟಪಡಿಸಿದೆ ಎಂದು ಅರಾಘ್ಚಿ ಅವರು ತಿಳಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆ ನಡುವೆಯೇ ಹಾರ್ಮುಝ್ ಜಲಸಂಧಿಯ ಕುರಿತ ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
Iran-US-Israel War: ಇರಾನ್ ದೇಶದ ಮೇಲೆ ಇನ್ನೇನು ಬಾಂಬ್ ದಾಳಿಗಳನ್ನು ಅಮೆರಿಕ ಮಾಡಿಯೇ ಬಿಡಲಿದೆ ಎನ್ನುವಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಿದ್ದಾರೆ. ಆ ದೇವರು ಇರಾನ್ ಜನರನ್ನು ಆಶೀರ್ವದಿಸಲಿ; ಈ ರಾತ್ರಿಯೇ ಸಮಸ್ತ ಇರಾನ್ ನಾಗರಿಕತೆ ಸರ್ವನಾಶವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಕದನ

35 C