ವಿಜಯನಗರ | ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಎಂಜಿನಿಯರ್, ಅಕೌಂಟೆಂಟ್
ವಿಜಯನಗರ: ಲೋಕೋಪಯೋಗಿ ಇಲಾಖೆ (PWD)ಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಅಕೌಂಟೆಂಟ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಹೊಸಪೇಟೆ ಪಿಡಬ್ಲ್ಯುಡಿ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್(ಎಕ್ಸಿಕ್ಯೂಟಿವ್ ಎಂಜಿನಿಯರ್) ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹೂವಿನ ಹಡಗಲಿಯ ಮಹೇಶ್ ಹಲಗೇರಿ ಅವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ದೂರುದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಿದ್ದರು. ಬಿಲ್ ಪಾವತಿಸಲು ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಅವರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 1 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್.ಛಲವಾದಿ ಅವರ ನೇತೃತ್ವದಲ್ಲಿ ಪಿಐ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಸೇರಿದಂತೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು.
ʼಪ್ರಧಾನಿ ಆಸನದ ಬಳಿ ವಿಪಕ್ಷ ಸಂಸದೆಯರುʼ: ಸಂಸತ್ ನಲ್ಲಿನ ಗದ್ದಲದ ವೀಡಿಯೊ ಹಂಚಿಕೊಂಡ ಸಚಿವ ಕಿರಣ್ ರಿಜಿಜು
ಹೊಸದಿಲ್ಲಿ: ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ, ಕಾಂಗ್ರೆಸ್ ಪಕ್ಷದ ಸಂಸದೆಯರು ಪ್ರಧಾನಿಯವರ ಆಸನದ ಬಳಿ ಜಮಾಯಿಸಿರುವ ವೀಡಿಯೊವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೇರಾವ್ ಮಾಡಲು ವಿರೋಧ ಪಕ್ಷಗಳ ಸಂಸದರು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆ ನಾನು ಪ್ರಧಾನಿಗೆ ಲೋಕಸಭಾ ಕಲಾಪಕ್ಕೆ ಗೈರಾಗಿ ಎಂದು ಸಲಹೆ ನೀಡಿದ್ದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ನೀಡಿದ್ದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಿರಣ್ ರಿಜಿಜು, “ಕಾಂಗ್ರೆಸ್ ಪಕ್ಷವು ತನ್ನ ಬಹುತೇಕ ಸದಸ್ಯರ ದುರ್ನಡತೆಯ ಬಗ್ಗೆ ಹೆಮ್ಮೆ ಹೊಂದಿದೆ!! ಒಂದು ವೇಳೆ ನಾವು ಬಿಜೆಪಿ ಸಂಸದರನ್ನು ತಡೆಯದೇ, ಕಾಂಗ್ರೆಸ್ ನ ಮಹಿಳಾ ಸಂಸದರನ್ನು ಎದುರುಗೊಳ್ಳಲು ಅವಕಾಶ ನೀಡಿದ್ದರೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು. ನಮಗೆ ಸಂಸತ್ತಿನ ಘನತೆ ಹಾಗೂ ಪಾವಿತ್ರ್ಯವನ್ನು ಕಾಪಾಡುವ ಬಗ್ಗೆ ಅತಿಯಾದ ಕಾಳಜಿಯಿದೆ” ಎಂದು ಬರೆದುಕೊಂಡಿದ್ದಾರೆ. ‘ಏನು ಸರಿಯೆನಿಸುತ್ತದೊ ಅದನ್ನೇ ಮಾಡಿ” ಎಂಬ ಬ್ಯಾನರ್ ಹಿಡಿದುಕೊಂಡು, ಮಹಿಳಾ ಸಂಸದರು ಪ್ರಧಾನಿ ಆಸನದ ಬಳಿ ಜಮಾಯಿಸಿರುವುದನ್ನು ವೀಡಿಯೊದಲ್ಲಿದೆ. Congress Party is proud of the most degrading behavior by their MPs !! If we had not stopped all BJP MPs and allowed the Women MPs to confront Cong. MPs, it would have led to very ugly scene. We have very high consideration, to protect the dignity & sanctity of the Parliament. https://t.co/tRj5HjLKFH pic.twitter.com/aTmktk4Y7E — Kiren Rijiju (@KirenRijiju) February 10, 2026
ಚುನಾವಣೆಯ ಒಂದು ಭಾಗವನ್ನು ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಲಾಗುತ್ತಿದೆ: ಸಿಜೆಐ
ಹಿಮಂತ ಬಿಸ್ವ ಶರ್ಮ ವಿರುದ್ಧದ ‘ಪಾಯಿಂಟ್–ಬ್ಲಾಂಕ್’ ವೀಡಿಯೊ ಕುರಿತು ಸುಪ್ರಿಂ ಕೋರ್ಟ್ ಗೆ ತುರ್ತು ಅರ್ಜಿ
ಭಾರತ Vs ಪಾಕಿಸ್ತಾನ ಟಿ20 ಕದನ ಈ ಹಿಂದೆ ಯಾವಾಗೆಲ್ಲಾ ನಡೆದಿತ್ತು? ವಿಶ್ವಕಪ್ ಪಂದ್ಯಗಳಲ್ಲಿ ಏನಾಗಿತ್ತು?
Indo Pak Cricket Rivalry- ಏಕದಿನವಿರಲಿ, ಟಿ20 ಇರಲಿ, ಜಗತ್ತಿನ ಯಾವ ಮೂಲೆಯಲ್ಲಿ ಬೇಕಿದ್ದರೂ ಪಂದ್ಯ ನಡೆಯಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಎಂದ ಬಳಿಕ ಹೈವೋಲ್ಟೇಜ್ ಪಂದ್ಯವೇ ಆಗಿರುತ್ತದೆ. ಕಳೆದೊಂದು ದಶಕದಿಂದ ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲವಾಗಿದ್ದರಿಂದ ಕೇವಲ ಐಸಿಸಿ ಮತ್ತು ಎಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿರುತ್ತಾರೆ. ಇನ್ನೇನು ಫೆಬ್ರವರಿ 15ರಂದು ಇತ್ತಂಡಗಳು ಮತ್ತೆ ಎದುರುಗೊಳ್ಳಲಿವೆ. ಈ ಹಂತದಲ್ಲಿ ಈ ಹಿಂದಿನ ಫಲಿತಾಂಶಗಳ ಬಗ್ಗೆ ವಿಶ್ಲೇಷಣೆ.
ನಟಿ ಅದಿತಿ ಪ್ರಭುದೇವ ವೈರಲ್ ವಿಡಿಯೋ: ನಮ್ಮ ಪುಟ್ಟ ದೇವತೆಗೂ; ಅವಳ ಅಮ್ಮನಿಗೂ: ಕುಸುಮಾ ಆಯರಹಳ್ಳಿ ಬರಹ
Aditi Prabhu Deva's Viral Video: ನಟಿ ಅದಿತಿ ಪ್ರಭುದೇವ ಅವರು ಅವರ ಪುಟ್ಟ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋದ ಬಗ್ಗೆ ಲೇಖಕಿ, ಅಂಕಣಕಾರ್ತಿ ಪಿ. ಕುಸುಮಾ ಆಯರಹಳ್ಳಿ ಅವರ ಬರಹ ಇಲ್ಲಿದೆ. ಬಹುಶಃ ಅದೊಂದು ತಿನ್ನಿಸುವ ಆಟ. ಎರಡು ಬೌಲ್ ಅಕ್ಕಪಕ್ಕ ಉಲ್ಟಾ ಮಾಡಿಟ್ಟು
CBSE ಪರೀಕ್ಷೆಗೆ ಕ್ಷಣಗಣನೆ ಶುರು: ಕೊನೆಯ 7 ದಿನಗಳಲ್ಲಿ ಈ 6 'ಸ್ಮಾರ್ಟ್ ಟಿಪ್ಸ್' ಪಾಲಿಸಿ, ಟಾಪರ್ ಆಗಿ
ಬೆಂಗಳೂರು: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ನಡೆಸುವ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಇದೇ ಫೆಬ್ರವರಿ 17 ರಿಂದ ಆರಂಭವಾಗಲಿವೆ. ಪರೀಕ್ಷೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಸಹಜ. ಆದರೆ, ಈ ಕೊನೆಯ ಕ್ಷಣದಲ್ಲಿ ನೀವು ಎಷ್ಟು ಓದುತ್ತೀರಿ ಎನ್ನುವುದಕ್ಕಿಂತ, ಹೇಗೆ ಓದುತ್ತೀರಿ ಎಂಬುದು
ನೆಲ್ಲಿಕಾರು : 1.50 ಕೋ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆಗೆ ಶಾಸಕರಿಂದ ಶಿಲಾನ್ಯಾಸ
ಮೂಡುಬಿದಿರೆ: ಶಿತಾ೯ಡಿ-ಗುಂಡಾವು-ನೆಲ್ಲಿಕಾರು ಮುಖ್ಯ ರಸ್ತೆ 1.50 ಕೋ.ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿದ್ದು, ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರ ನೆಲ್ಲಿಕಾರು ಗ್ರಾಪಂನ ಗುಂಡಾವುನಲ್ಲಿ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಕೋಟ್ಯಾನ್, ಲೋಕೋಪಯೋಗಿ ಇಲಾಖೆಯ ಸಂಬಂಧಿಸಿದ ಶಿರ್ತಾಡಿ-ಹೊಸ್ಮಾರು ರಸ್ತೆಯು ಗುಂಡಾವಿನಂದ ತೀರ ಹದಗೆಟ್ಟಿದ್ದು ಇದನ್ನು ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ 1.2 ಕಿ.ಮೀ. ಉದ್ದಕ್ಕೆ 5.5 ಮೀ. ಅಗಲೀಕರಣಗೊಳಿಸಲಾಗುವುದು ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದರು. ನೆಲ್ಲಿಕಾರು ಗ್ರಾಪಂನ ಮಾಜಿ ಅಧ್ಯಕ್ಷರಾಗಿದ್ದ ಉದಯ ಪೂಜಾರಿ, ಜಯಂತ ಹೆಗ್ಡೆ, ಮಾಜಿ ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಸುಶೀಲಾ, ಆಶಾಲತಾ, ಊರಿನ ಹಿರಿಯರಾದ ಶಿವಪ್ಪ ಪೂಜಾರಿ, ಜಯ ಪೂಜಾರಿ, ಕಮಲ ಪೂಜಾರ್ತಿ, ಸ್ಥಳೀಯರಾದ ಗಣೇಶ್ ನೆಲ್ಲಿಕಾರು, ರಾಘು ಪೂಜಾರಿ ನೆಲ್ಲಿಕಾರು, ರಾಕೇಶ್ ಪೂಜಾರಿ ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.
ಬಜೆಟ್ ಸಿದ್ದತೆ ಸಭೆಗೆ ಡಿಕೆ ಶಿವಕುಮಾರ್ ಗೈರು: ಕಾರಣ ಕೊಟ್ಟ ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೂ ಅವರು ಹಾಜರಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಳಿ ಅನುಮತಿಯನ್ನು ಪಡೆದುಕೊಂಡು ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿದೆ. ಡಿಕೆ ಶಿವಕುಮಾರ್ ಅವರು ಅಸ್ಸಾಂ ವೀಕ್ಷಕರಾಗಿ ನೇಮಕಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ದಿಢೀರ್ ದೆಹಲಿಗೆ ತೆರಳಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
BENGALURU | ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಪೊಲೀಸ್ ದಾಳಿ
ಬೆಂಗಳೂರು, ಫೆ.10: ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಫುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಸಮೀಪದ ನಿವಾಸಿ ಪೀಟರ್ ಕ್ಯಾಡಿ ವಂಚನೆ ಎಸಗಿದ ಆರೋಪಿಯಾಗಿದ್ದಾನೆ. ಈತನ ಮನೆ ಮೇಲೆ ಇಂದು ಮುಂಜಾನೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸುಮಾರು ಹದಿನೈದು ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿರುವ ಪೀಟರ್ ಕ್ಯಾಡಿ ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದ. ಈತನಿಂದ 500ಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಲದ ಅಗತ್ಯ ಇರುವವರಿಗೆ ಗಾಳ ಹಾಕುತ್ತಿದ್ದ ಪೀಟರ್ ಕ್ಯಾಡಿ ತಾನು ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿಯಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಅರಂಭದಲ್ಲಿ ಈತ ಕೋಟ್ಯಂತರ ರೂಪಾಯಿ ಮೊತ್ತದ ಡಿಡಿಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ. ಈ ವಂಚನಾ ಜಾಲಕ್ಕೆ ಬಲಿ ಬೀಳುತ್ತಿದ್ದವರು ಖಾಲಿ ಚೆಕ್ ಹಾಳೆ ಮತ್ತು ಆಸ್ತಿ ಪತ್ರಗಳನ್ನು ನೀಡುತ್ತಿದ್ದರು. ಈ ಹಂತದಲ್ಲಿ ಕೋಟಿ- ಕೋಟಿ ಮೊತ್ತವನ್ನು ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಅಂತ ಪಡೆದುಕೊಂಡು ಸಾಲ ಕೊಡಿಸದೆ ಮೋಸ ಮಾಡುತ್ತಿದ್ದ. ಯಾರಾದರು ಕೊಟ್ಟ ಹಣ ವಾಪಸ್ ಕೇಳಿದರೆ ಅವರ ವಿರುದ್ಧ ಅವರೇ ಈ ಹಿಂದೆ ನೀಡಿದ್ದ ಚೆಕ್ ಮತ್ತು ಆಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದ ಈ ರೀತಿ 15ಕ್ಕಿಂತಲೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೀಟರ್ ಕ್ಯಾಡಿ ತಂಡದಲ್ಲಿ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಮತ್ತಿತರರು ಇದ್ದಾರೆ. ಈತನ ವಿರುದ್ಧದ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಸುಬ್ಬರಾವ್ ಗೆ ಒಂದು ಕೋಟಿ ರೂ. ವಂಚನೆ: ಕಳೆದ ವರ್ಷ ಸುಬ್ಬರಾವ್ ಎಂಬವರು ಪೀಟರ್ ಕ್ಯಾಡಿ ವಿರುದ್ಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಸುಬ್ಬರಾವ್ ಅವರ ಜಮೀನು ದಾಖಲೆ ಸರಿಪಡಿಸಿ ಅದನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 96 ಲಕ್ಷ ರೂ. ಹಪಡೆದುಕೊಂಡಿದ್ದ ಪೀಡರ್ ಕ್ಯಾಡಿ, ಆ ಬಳಿಕ ಮೋಸ ಮಾಡಿದ್ದ. ಕಮಿಷನ್ ಹೆಸರಿನಲ್ಲಿ ಸುಬ್ಬರಾವ್ ರಿಂದ ಚೆಕ್ ಪಡೆದಿದ್ದ ಪೀಟರ್ ಕ್ಯಾಡಿ ಬಳಿಕ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಕೇಸು ದಾಖಲಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಸಬ್ಬರಾವ್ ಅವರು ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈತನ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಸುಬ್ಬರಾವ್ ಪ್ರಕರಣದ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆ ಸಿಐಡಿ ಪೊಲೀಸರಿಗೆ ಪೀಟರ್ ಕ್ಯಾಡಿ ಮತ್ತು ಆತನ ತಂಡ ಹಲವಾರು ಉದ್ಯಮಿಗಳಿಗೆ ಸಾಳ ಕೊಡಿಸುವುದಾಗಿ, ಆಸ್ತಿ ಖರೀದಿಸಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿ ಐಶರಾಮಿ ಜೀವನ ನಡೆಸುತ್ತಿದ್ದ. ಪೀಟರ್ ಕ್ಯಾಡಿ ವಿರುದ್ಧ ಬೆಂಗಳೂರಿನ ಅಶೋಕ ನಗರ, ಜೀವನ್ ಭೀಮಾನಗರ, ಹಲಸೂರು, ಪುಲಿಕೇಶಿ ನಗರ, ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಅಚ್ಚರಿ ಏನೆಂದರೆ ಈತನಿಂದ ವಂಚನೆಗೆ ಒಳಗಾದವರು ಹಣ ವಾಪಸು ಕೇಳದಂತೆ ಅವರ ವಿರುದ್ಧವೇ 300ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಕೇಸು ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಉಚಿತ ChatGPT ಅವಧಿ ಮುಗಿದಿದೆ; ಜಾಹೀರಾತು ಜೊತೆಗೆ ಬಳಸಿ!
ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ. OpenAI ಫೆಬ್ರವರಿ 9ರಂದು ಸೋಮವಾರ ಬ್ಲಾಗ್ಪೋಸ್ಟ್ ಒಂದನ್ನು ಹಂಚಿಕೊಂಡು ChatGPT ಒಳಗೆ ಜಾಹೀರಾತು ನೀಡುವುದಾಗಿ ಘೋಷಿಸಿದೆ. ಉಚಿತವಾಗಿ ಜಾಟ್ಜಿಪಿಟಿ ಬಳಸುವವರು ಮತ್ತು ಚಾಟ್ಜಿಪಿಟಿ ಗೋ ಬಳಸುವವರಿಗೆ ಈ ಜಾಹೀರಾತುಗಳು ಕಾಣಿಸುತ್ತವೆ. ಆದರೆ ಚಾಟ್ಜಿಪಿಟಿ ಪ್ಲಸ್ ಮತ್ತು ಪ್ರೊನಲ್ಲಿ ಹಣ ಪಾವತಿಸಿ ಬಳಸುವ ಚಂದಾದಾರರಿಗೆ ಜಾಹೀರಾತುಗಳು ಕಾಣಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಚಾಟ್ಜಿಪಿಟಿ ಫಲಿತಾಂಶಗಳ ಮೇಲೆ ಪ್ರಭಾವ ಬೀರದು ಜಾಹೀರಾತುಗಳಿಂದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಕುರಿತ ಕಾಳಜಿ ಬ್ಗಗೆ ಪತ್ರಿಕಾ ಹೇಳಿಕೆಯಲ್ಲಿ OpenAI ಸ್ಪಷ್ಟಪಡಿಸಿದೆ. “ಚಾಟ್ಜಿಪಿಟಿ ನಿಮಗೆ ಕೊಡುವ ಉತ್ತರದ ಮೇಲೆ ಜಾಹೀರಾತುಗಳು ಪ್ರಭಾವ ಬೀರುವುದಿಲ್ಲ ಮತ್ತು ಚಾಟ್ ಜಿಪಿಟಿ ಜೊತೆಗೆ ನಿಮ್ಮ ಸಂಭಾಷಣೆಯನ್ನು ಜಾಹೀರಾತುದಾರರಿಂದ ಖಾಸಗಿಯಾಗಿ ಇಡುತ್ತೇವೆ. ಈ ಅನುಭವ ಸರಿಯಾಗಿರುತ್ತದೆ ಎನ್ನುವ ಬಗ್ಗೆ ನಾವೀಗ ಕಲಿಯುವುದು, ಕೇಳುವುದು ಮತ್ತು ಖಚಿತಪಡಿಸುವ ಕಲಿಕಾ ಹಂತದಲ್ಲಿದ್ದೇವೆ” ಎಂದು OpenAI ಹೇಳಿದೆ. ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ. ಆದರೆ ಜಾಹೀರಾತುದಾರರಿಗೆ ವ್ಯಕ್ತಿಗತ ಚಾಟ್ ಡೇಟಾಗೆ ಪ್ರವೇಶ ನೀಡುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಜಾಹೀರಾತು ಕುರಿತಂತೆ ಸ್ಪಷ್ಟತೆ ತಾಂತ್ರಿಕ ವಿಚಾರಕ್ಕೆ ಬಂದಲ್ಲಿ ಓಪನ್ಎಐನ ಜಾಹೀರಾತುಗಳನ್ನು ಸ್ಪಷ್ಟವಾಗಿ ‘ಪ್ರಾಯೋಜಿಸಲಾಗಿದೆ’ ಎಂದು ಲೇಬಲ್ ಮಾಡಿರಲಾಗುತ್ತದೆ. ಜಾಹೀರಾತು ಉತ್ತರದಿಂದ ಪ್ರತ್ಯೇಕವಾಗಿ ಕಾಣಿಸುತ್ತದೆ. ಸೂಕ್ಷ್ಮ ವಿಷಯಗಳಾದ ಆರೋಗ್ಯ, ಮಾನಸಿಕ ಆರೋಗ್ಯ ಅಥವಾ ರಾಜಕೀಯಗಳ ಜೊತೆಗೆ ಜಾಹೀರಾತುಗಳು ಇರದಂತೆ ಕಂಪನಿ ಸುರಕ್ಷಾ ಕವಚಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದೆ. ಚಾಟ್ಬೋಟ್ನಿಂದ ಜಾಹೀರಾತನ್ನು ಡಿಲೀಟ್ ಮಾಡುವ ಅವಕಾಶವೂ ದೊರೆಯಲಿದೆ. ಲಕ್ಷಾಂತರ ಜನರಿಗೆ AI ಉಚಿತವಾಗಿ ಬಳಸುವ ಅವಕಾಶ ನೀಡುವ ಉದ್ದೇಶದಿಂದ ಜಾಹೀರಾತು ಕಲ್ಪನೆಯನ್ನು ತರಲಾಗಿದೆ. ಈ ಬದಲಾವಣೆಗೆ ಗ್ರಾಹಕರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆಗಳಿಗೆ ಮುಕ್ತವಾಗಿರುವುದಾಗಿ ಓಪನ್ಎಐ ಹೇಳಿದೆ.
ಉಲ್ಟಾ ಹೊಡೆದ ಪಾಕ್ : ನಾಲ್ಕು ಗುಜರಾತಿಗಳ ಆಟಕ್ಕೆ ’PCB ಬುಗುರಿ’ - ಪಾಂಟಿಂಗ್, ಅಫ್ರಿದಿ ಲೇವಡಿ
India match against Pakistan in T20 : ಪಾಕಿಸ್ತಾನ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ಮಹಾನ್ ನಾಟಕಕ್ಕೆ ತೆರೆಬಿದ್ದಿದೆ. ನಿಗದಿಯಾದಂತೆ, ಪಾಕಿಸ್ತಾನವು ಭಾರತದ ವಿರುದ್ದದ ಪಂದ್ಯವನ್ನು ಫೆಬ್ರವರಿ ಹದಿನೈದರಂದು ಆಡುವ ನಿರ್ಧಾರಕ್ಕೆ ಬಂದಿದೆ. ಪಾಕಿಸ್ತಾನ, ಭಾರತದ ಜೊತೆ ಆಡುತ್ತೆ ಎನ್ನುವುದು ಮೊದಲೇ ಗೊತ್ತಿದ್ದ ವಿಚಾರ ಎಂದು ರಿಕಿ ಪಾಂಟಿಂಗ್ ಲೇವಡಿ ಮಾಡಿದ್ದಾರೆ. ಇನ್ನು, ಶಹೀದ್ ಅಫ್ರಿದಿ ಕೂಡಾ, ಪಿಸಿಬಿ ನಿರ್ಧಾರದ ವಿರುದ್ದ ಕಿಡಿಕಾರಿದ್ದಾರೆ.
ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ
ಹೊಸದಿಲ್ಲಿ: ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಶರ್ಮಾ ಮತ್ತು ಅವರ ಕುಟುಂಬದ ಸದಸ್ಯರು ರಾಜ್ಯಾದ್ಯಂತ ಸುಮಾರು 12,000 ಬಿಘಾ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗೊಗೊಯ್ ಕಳೆದ ವಾರ ಆರೋಪಿಸಿದ್ದರು. ಇದರ ಬೆನ್ನಲ್ಲೆ ಯಾವುದೇ ಪುರಾವೆಗಳಿಲ್ಲದೆ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಘೋಷಿಸಿದ್ದರು. ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ. ಪರಿಹಾರ ಕೋರಿ ನಾನು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಹಿಮಂತ ಬಿಸ್ವಾ ಶರ್ಮಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪುಸ್ತಕವನ್ನು ಪ್ರಕಟಿಸಿಲ್ಲ ಎಂಬ ʼಪೆಂಗ್ವಿನ್ʼ ಹೇಳಿಕೆ ಪ್ರಶ್ನಿಸಿದ ಕಾಂಗ್ರೆಸ್ ನಾಯಕ
ಉಚಿತ PSI ಕೋಚಿಂಗ್ | ಯಾರು ಅರ್ಜಿ ಸಲ್ಲಿಸಬಹುದು?
ಆಯ್ಕೆಯಾದ ಅಭ್ಯರ್ಥಿಗಳಿಗೆ 75 ದಿನಗಳ ಗುಣಮಟ್ಟ ತರಬೇತಿಯ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ಸರ್ಕಾರವೇ ನೀಡಲಿದೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನ ಪಿಎಸ್ಐ (PSI) ನೇಮಕಾತಿ ಪರೀಕ್ಷೆಗೆ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಂದ ಉಚಿತ ತರಬೇತಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ 75 ದಿನಗಳ ಗುಣಮಟ್ಟ ತರಬೇತಿಯ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ಸರ್ಕಾರವೇ ನೀಡಲಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: http://164.100.133.164:81/PSI_2526/App_form.aspx ಪ್ರಮುಖ ದಿನಾಂಕಗಳು • ಅಧಿಸೂಚನೆ ದಿನಾಂಕ : 02 ಫೆಬ್ರವರಿ 2026 • ಆನ್ಲೈನ್ ಅರ್ಜಿ ಆರಂಭ : 02 ಫೆಬ್ರವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ಫೆಬ್ರವರಿ 2026 • ಆಸಕ್ತ ಅಭ್ಯರ್ಥಿಗಳು ವಿವರಗಳಿಗೆ ಸಹಾಯವಾಣಿ 0850770004 ಅನ್ನು ಸಂಪರ್ಕಿಸಬಹುದು. ಯಾರು ಅರ್ಜಿ ಸಲ್ಲಿಸಬಹುದು ಜಾತಿವರ್ಗ : ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು ವಿದ್ಯಾರ್ಹತೆ : ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ವಯೋಮಿತಿ : ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. 27 ವಯಸ್ಸು ಮೀರಿರಬಾರದು. ಆದಾಯಮಿತಿ : ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ 8 ಲಕ್ಷ ರೂ. ಒಳಗಿರಬೇಕು ನಿವಾಸಿ : ಅಭ್ಯರ್ಥಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ತರಬೇತಿ ವಿವರ ಒಟ್ಟು 75 ದಿನಗಳ ಅವಧಿಗೆ ತರಬೇತಿ ನೀಡಲಾಗುವುದು. ಇಲಾಖೆಯು ರಾಜ್ಯದಾದ್ಯಂತ ಗುರುತಿಸಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಕೋಚಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಶುಲ್ಕ ಸಂಪೂರ್ಣ ಉಚಿತ. ಇದರ ಜೊತೆಗೆ ತರಬೇತಿ ಅವಧಿಯಲ್ಲಿ ಇರುವ ಊಟ ಮತ್ತು ವಸತಿ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಊಟ ಮತ್ತು ವಸತಿ ಬೇಡವಾದಲ್ಲಿ ಮಾಸಿಕ ಭತ್ಯೆ ನೀಡಲಾಗುತ್ತದೆ. ರಾಜ್ಯದ 4 ಕಂದಾಯ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ತರಬೇತಿ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮೈಸೂರು ವಿಭಾಗದಲ್ಲಿ ಮಾತ್ರ ತರಬೇತಿ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಪದವಿಯಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ. ಆದರೆ ಇಲಾಖೆಯಿಂದ ಯುಪಿಎಸ್ಸಿ/ಕೆಪಿಎಸ್ಸಿ/ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎಸ್ಎಸ್ಎಲ್ಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ವಿಶೇಷ ಚೇತನವಾದಲ್ಲಿ ಅದರ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳು.
ʼUS ವಾಣಿಜ್ಯ ಹಡಗುಗಳೇ ಇರಾನ್ ಜಲಪ್ರದೇಶದಿಂದ ದೂರವಿರಿʼ-ಅಮೆರಿಕಾ ಸಲಹೆ: ಶೀಘ್ರವೇ ಇರಾನ್ ಮೇಲೆ US ದಾಳಿ ಆಗಲಿದ್ಯಾ?
ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೆ ಅಮೆರಿಕಾ ಇರಾನ್ ಮೇಲೆ ಪೂರ್ಣ ಪ್ರಮಾಣದ ಯುದ್ದಕ್ಕೆ ಸಿದ್ದತೆ ನಡೆಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಈಗಾಗಲೇ ಯುಎಸ್ ನ ಬೃಹತ್ ನೌಕೆಗಳು ಇರಾನ್ ನ ಕರಾವಳಿಯತ್ತ ಶರವೇಗದಿಂದ ನುಗ್ಗುತ್ತಿದ್ದು, ಈ ನಡುವೆ ಇತ್ತೀಚೆಗಷ್ಟೇ ಯುಎಸ್ ಇರಾನ್ ನಲ್ಲಿರುವ ತನ್ನೆಲ್ಲಾ ಪ್ರಜೆಗಳು ಕೂಡಲೇ ದೇಶವನ್ನು ಬಿಟ್ಟು ಹೊರಡಿ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಸದ್ಯ ಇಗ ಮತ್ತೆ ಇರಾನ್ ಜಲ ಪ್ರದೇಶದ ಬಳಿಯಲ್ಲಿ ಸಾಗುವ ಅಮೆರಿಕಾದ ಎಲ್ಲಾ ವಾಣಿಜ್ಯ ಹಡಗುಗಳು ಇರಾನ್ ಜಲಪ್ರದೇಶದಿಂದ ದೂರವಿರುವಂತೆ ಆದೇಶಿಸಿದ್ದು,ಬದಲಾಗಿ ಒಮಾನ್ನ ಪ್ರಾದೇಶಿಕ ಸಮುದ್ರದ ಹತ್ತಿರ ಸಾಗಲು ಶಿಫಾರಸು ಮಾಡಿದೆ. ಇದು ಒಮಾನ್ ನಲ್ಲಿ ಉಭಯದೇಶಗಳ ಮಾತುಕತೆ ಬೆನ್ನಲ್ಲೆ, ಯುಎಸ್ ಇರಾನ್ ಮೇಲೆ ಯುದ್ದಕ್ಕೆ ಅಣಿಯಾಗುತ್ತಿರುವುದನ್ನು ತೋರಿಸುವಂತಿದೆ.
ಕೃಷಿ ಉಪನಿರ್ದೇಶಕರ ಕಚೇರಿ-2 ಸಿಂಧನೂರಿಗೆ ಸ್ಥಳಾಂತರಕ್ಕೆ ಮತ್ತೆ ಆದೇಶ
ಲಿಂಗಸುಗೂರು ಜನತೆಯಲ್ಲಿ ತೀವ್ರ ಆಕ್ರೋಶ
ಭಾರತದ ಕಲ್ಯಾಣ ಯೋಜನೆಗಳನ್ನು ಚುನಾವಣಾ ಅಸ್ತ್ರವನ್ನಾಗಿಸಲು ಮುಂದಾದ ಬಾಂಗ್ಲಾದೇಶ
ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತದ ಕಲ್ಯಾಣ ಯೋಜನೆಗಳು ಪ್ರತಿಧ್ವನಿಸಿದೆ. ಭಾರತದ ಕಲ್ಯಾಣ ಯೋಜನೆಗಳ ಎರವಲು ಪಡೆಯಲು ಬಾಂಗ್ಲಾದೇಶ ಮುಂದಾಗಿದೆ. ಬಾಂಗ್ಲಾದೇಶದ ಎರಡು ಪ್ರಮುಖ ಪಕ್ಷಗಳಾದ ತಾರಿಕ್ ರೆಹಮಾನ್ ಅವರ ಬಿಎನ್ಪಿ ಮತ್ತು ಜಮಾತ್-ಇ-ಇಸ್ಲಾಮಿಯ ತಮ್ಮ ಪ್ರಣಾಳಿಕೆಗಳಲ್ಲಿ ಭಾರತವನ್ನು ಅನುಸರಿಸುತ್ತಿದೆ.
ಪೆಟ್ರೋರಾಬಿಗ್ ನ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಯಾಗಿ 'ಅಲ್ ಮುಝೈನ್'ಗೆ ಪ್ರಶಸ್ತಿ
ಹೊಸದಿಲ್ಲಿ: ಪೆಟ್ರೋರಾಬಿಗ್ ನ 2025ರ ಮೆಗಾ ಟರ್ನ್ಅರೌಂಡ್ ಮುಖ್ಯ ಪ್ಯಾಕೇಜ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಯಾಗಿ 'ಅಲ್ ಮುಝೈನ್'ಗೆ ಪ್ರಶಸ್ತಿ ನೀಡಲಾಗಿದೆ. ಪೆಟ್ರೋರಾಬಿಗ್ ನ ಸಿಇಒ ಒಥಮಾನ್ ಅಲ್ ಘಮ್ದಿ ಅವರಿಂದ ಅಲ್ ಮುಝೈನ್ ಸಂಸ್ಥೆಯ ಪರವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಝಕರಿಯಾ ಬಜ್ಪೆ ಮತ್ತು ಟಿ.ವಿ.ದೀಪಕ್ ಸ್ವೀಕರಿಸಿದ್ದಾರೆ. ಸುರಕ್ಷತೆ, ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುವಿಕೆ ಸೇರಿದಂತೆ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಅಲ್ ಮುಝೈನ್ ಸಂಸ್ಥೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಿ. ಕೆಂಗಲ್ ಹನುಮಂತಯ್ಯ ಅವರು ರಾಜ್ಯ ಕಂಡ ಪ್ರಾಮಾಣಿಕ , ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ
ತ್ರಿವಳಿ ತಜ್ಞ ವೈದ್ಯರ ಕ್ರಮಬದ್ಧಗೊಳಿಸುವಿಕೆ ಕೈಬಿಡಲು ದಲಿತ ಸೇನೆ ಆಗ್ರಹ
ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ತ್ರಿವಳಿ ತಜ್ಞ ವೈದ್ಯರನ್ನು ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವುದನ್ನು ಕೈಬಿಡಬೇಕೆಂದು ದಲಿತ ಸೇನೆ ನಿಂಬರ್ಗಾ ಹೋಬಳಿ ವಲಯದ ಪದಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಿಂಬರ್ಗಾ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ತ್ರಿವಳಿ ತಜ್ಞ ವೈದ್ಯರನ್ನು ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವುದನ್ನು ದಲಿತ ಸೇನೆ ತೀವ್ರವಾಗಿ ಖಂಡಿಸಿದೆ. ನಿಂಬರ್ಗಾ ಗ್ರಾಮವು ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಇಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡವಿದೆ. ಸುತ್ತಮುತ್ತಲ 15ರಿಂದ 20 ಹಳ್ಳಿಗಳಿಗೆ ಇದು ಪ್ರಮುಖ ಆಸ್ಪತ್ರೆಯಾಗಿದ್ದು, ಇಂತಹ ಕೇಂದ್ರಕ್ಕೆ ತ್ರಿವಳಿ ತಜ್ಞ ವೈದ್ಯರ ಅಗತ್ಯವಿದೆ. ಆದ್ದರಿಂದ ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವ ಕ್ರಮವನ್ನು ಕೂಡಲೇ ಕೈಬಿಡಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸೇನೆ ನಿಂಬರ್ಗಾ ವಲಯ ಅಧ್ಯಕ್ಷ ಶಶಿಧರ್ ನವರಂಗ್, ಮೋಹನ್ ನಿರ್ಮಲಕರ್, ಶಿವಲಿಂಗ ಮಾಡ್ಯಾಳಕರ್, ಧರ್ಮರಾಜ ಕೋನಾ, ಶರಣಬಸಪ್ಪ ನಿರ್ಮಲಕರ್, ಸೂರ್ಯಕಾಂತ ಜಿಡಗಾ, ಸಂವಿಧಾನ ಸಾಗರ್, ದಶರಥ ಕಾಂಬಳೆ, ಚಿದಾನಂದ ಮುರಡಿ, ಅಮೃತ ಶಿರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
PM CARES ಬಗ್ಗೆ ಪ್ರಶ್ನೆ ಕೇಳಲು ಅವಕಾಶವಿಲ್ಲ ಎಂದ ಪ್ರಧಾನಿ ಕಚೇರಿ; ಲೋಕಸಭೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು?
PM CARES ನಿಧಿ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಮತ್ತು ರಾಷ್ಟ್ರೀಯ ರಕ್ಷಣಾ ನಿಧಿ (NDF) ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಪ್ರಧಾನಿ ಕಚೇರಿ (PMO) ಇತ್ತೀಚೆಗೆ ಲೋಕಸಭೆಯ ಸಚಿವಾಲಯಕ್ಕೆ ತಿಳಿಸಿದೆ. ಈ ನಿಧಿಗಳಲ್ಲಿರುವ ಹಣವು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದ ದೇಣಿಗೆ. ಇದು ಭಾರತದ ಸಂಚಿತ ನಿಧಿಯಿಂದ ಬಂದ ಹಣವಲ್ಲ. ಆದುದರಿಂದ ಇವು ಸರ್ಕಾರದ ನೇರ ನಿಯಮಾವಳಿಗಳಿಗೆ ಒಳಪಡುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ಹೇಳಿದೆ ಎಂದು ವರದಿಯಾಗಿದೆ. ಪ್ರಧಾನಿ ಕಚೇರಿಯು ಸಂಸತ್ತು ಏನು ಚರ್ಚಿಸಬಹುದು ಎಂಬುದನ್ನು ನಿಯಂತ್ರಿಸುವುದು ಗಂಭೀರವಾದ ಸಂಗತಿ. ಯಾಕೆಂದರೆ ಇದು ಚುನಾಯಿತ ಅಧಿಕಾರಿಗಳು ಸಾರ್ವಜನಿಕರ ಪರವಾಗಿ ಸರ್ಕಾರವನ್ನು ಸರಿಯಾಗಿ ಪ್ರಶ್ನಿಸುವುದನ್ನು ತಡೆಯುತ್ತದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಲೋಕಸಭೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಸರ್ಕಾರದ ಉತ್ತರಕ್ಕಾಗಿ ಸದನದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳಲ್ಲಿ ಸ್ವೀಕಾರಾರ್ಹ ಪ್ರಶ್ನೆಗಳಿಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪ್ರಶ್ನೆಗಳನ್ನು ಮೊದಲು ಲೋಕಸಭಾ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ನಿಯಮಗಳ ಪ್ರಕಾರ ಇದರ ಸ್ವೀಕಾರಾರ್ಹತೆಯನ್ನು ನಿರ್ಧರಿಸಲಾಗುತ್ತಿದೆ. ಅಂತಿಮ ನಿರ್ಧಾರವು ಸ್ಪೀಕರ್ ಅವರದ್ದಾಗಿರುತ್ತದೆ. ನಿಯಮ 41 ಪ್ರಕಾರ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯದ ಕುರಿತು ಮಾಹಿತಿಯನ್ನು ಪಡೆಯುವ ಉದ್ದೇಶಕ್ಕಾಗಿ ಪ್ರಶ್ನೆಯನ್ನು ಕೇಳಬಹುದು. ಅದನ್ನು ಸಚಿವರು ಕೇಳಬಹುದು. ನಂತರ ಪ್ರಶ್ನೆಯು 23 ಷರತ್ತುಗಳನ್ನು ಪೂರೈಸಬೇಕು. ಅಧಿಕೃತ ರಹಸ್ಯಗಳು ಅಥವಾ ನ್ಯಾಯಾಲಯದ ವ್ಯಾಪ್ತಿಯಲ್ಲಿರಬೇಕಾದ ವಿಷಯಗಳ ಬಗ್ಗೆ ಇರಬಾರದು ಇತ್ಯಾದಿ ಈ ಷರತ್ತುಗಳ ಪಟ್ಟಿಯಲ್ಲಿದೆ. ನಿಯಮ 41(2)(viii) ಇದು ಸರ್ಕಾರದ ಕೆಲಸವಲ್ಲದಿದ್ದರೆ, ಕೇಳಬೇಡಿ. ಈ ನಿಧಿಗಳು ಸ್ವಯಂಪ್ರೇರಿತ ದೇಣಿಗೆಗಳಿಂದ (ತೆರಿಗೆ ಹಣದಿಂದಲ್ಲ) ಮಾಡಲ್ಪಟ್ಟಿರುವುದರಿಂದ, ಅವು ಭಾರತ ಸರ್ಕಾರದ ವಿಷಯವಲ್ಲ. 41(2)(xvii) ಗಳ ಪ್ರಕಾರ ಭಾರತ ಸರ್ಕಾರಕ್ಕೆ ಪ್ರಾಥಮಿಕವಾಗಿ ಜವಾಬ್ದಾರರಲ್ಲದ ಸಂಸ್ಥೆಗಳು ಅಥವಾ ವ್ಯಕ್ತಿಗಳ ನಿಯಂತ್ರಣದಲ್ಲಿರುವ ವಿಷಯಗಳನ್ನು ಅದು ಎತ್ತಬಾರದು ಎಂದು PMO ವಾದಿಸುತ್ತಿದೆ. ಉಲ್ಲೇಖಿಸಲಾದ ಮೂರು ನಿಧಿಗಳು ಯಾವುವು? ಕೋವಿಡ್ ಸಾಂಕ್ರಾಮಿಕ ರೋಗದ ನಂತರ 2020 ಮಾರ್ಚ್ 27ರಂದು PM CARES ನಿಧಿಯನ್ನು ಸ್ಥಾಪಿಸಲಾಯಿತು. COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಪೀಡಿತರಿಗೆ ಪರಿಹಾರವನ್ನು ಒದಗಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಮೀಸಲಾದ ನಿಧಿಯನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, 'ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ (PM CARES ನಿಧಿ)' ಎಂಬ ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಎಂದು PM CARES ನಿಧಿಯ ಅಧಿಕೃತ ವೆಬ್ಸೈಟ್ ಹೇಳುತ್ತದೆ. ಈ ನಿಧಿಯನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ . ಅದರ ಟ್ರಸ್ಟ್ ಡೀಡ್ ಅನ್ನು ಮಾರ್ಚ್ 27, 2020 ರಂದು ಹೊಸದಿಲ್ಲಿಯಲ್ಲಿ ನೋಂದಣಿ ಕಾಯ್ದೆ, 1908 ರ ಅಡಿಯಲ್ಲಿ ನೋಂದಾಯಿಸಲಾಗಿದೆ. 2022-23 ರ PM CARES ನಿಧಿಯ ರಶೀದಿಗಳು ಮತ್ತು ಪಾವತಿ ಖಾತೆ ವರದಿಯ ಪ್ರಕಾರ, ಅದರ ಅಧಿಕೃತ ವೆಬ್ಸೈಟ್ನಲ್ಲಿ ಕೊನೆಯದಾಗಿ ಪ್ರಕಟವಾದ ಮಾಹಿತಿಯಂತೆ ಮಾರ್ಚ್ 2023 ರ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ 6,283.7 ಕೋಟಿ ರೂ.ಗಳಷ್ಟಿತ್ತು. ಜನವರಿ 2023 ರಲ್ಲಿ, ಕೇಂದ್ರವು ದಿಲ್ಲಿ ಹೈಕೋರ್ಟ್ಗೆ PM CARES ನಿಧಿಯನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ. ಇದನ್ನು ಸಂವಿಧಾನ ಅಥವಾ ಸಂಸತ್ತು ಅಥವಾ ರಾಜ್ಯವು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ರಚಿಸಲಾಗಿಲ್ಲ ಎಂದು ತಿಳಿಸಿತ್ತು. ಅದರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ನಿಧಿಯನ್ನು state” ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರವು ಈ ಹೇಳಿಕೆಯನ್ನು ನೀಡಿತ್ತು. ಕೇಂದ್ರವು ತನ್ನ ಅಫಿಡವಿಟ್ನಲ್ಲಿ ಟ್ರಸ್ಟ್ ಅನ್ನು ಯಾವುದೇ ಸರ್ಕಾರ ಅಥವಾ ಸರ್ಕಾರದ ಯಾವುದೇ ಸಂಸ್ಥೆ ಒಡೆತನದಲ್ಲಿರಲು ಅಥವಾ ನಿಯಂತ್ರಿಸಲು ಉದ್ದೇಶಿಸಿಲ್ಲ ಮತ್ತು ಸಾರ್ವಜನಿಕ ಹುದ್ದೆಗಳನ್ನು ಹೊಂದಿರುವವರನ್ನು ಒಳಗೊಂಡ ಟ್ರಸ್ಟಿಗಳ ಮಂಡಳಿಯ ಸಂಯೋಜನೆಯು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಎಂದು ಹೇಳಿದೆ. ಕಾನೂನು ಅಥವಾ ಸಂವಿಧಾನದ ಅಡಿಯಲ್ಲಿ ರಚಿಸಲಾಗಿಲ್ಲವಾದ್ದರಿಂದ PMCARES, RTI ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರವನ್ನು ರೂಪಿಸುವುದಿಲ್ಲ ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಆಗಸ್ಟ್ 18, 2020 ರಂದು, ಸುಪ್ರೀಂಕೋರ್ಟ್ PM CARES ನಿಧಿಯಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಗೆ (NDRF) ಹಣವನ್ನು ವರ್ಗಾಯಿಸುವ ಆದೇಶವನ್ನು ನಿರಾಕರಿಸಿತು. ಅವುಗಳು ವಿಭಿನ್ನ ಕಾರಣ ಮತ್ತು ಉದ್ದೇಶವನ್ನು ಹೊಂದಿರುವ ಎರಡು ವಿಭಿನ್ನ ನಿಧಿಗಳು ಹಾಗಾಗಿ ಅದನ್ನು ವರ್ಗಾಯಿಸುವಂತಿಲ್ಲ ಎಂದು ಹೇಳಿತು. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಂದ NDRF ನ ಲೆಕ್ಕಪರಿಶೋಧನೆಗೆ ಮಾರ್ಗಸೂಚಿಗಳು ನಿರ್ದಿಷ್ಟವಾಗಿ ಅವಕಾಶ ನೀಡುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ PM CARES ನಿಧಿಯು ಸ್ವಯಂಪ್ರೇರಿತ ದೇಣಿಗೆಗಳಿಂದ ಮಾತ್ರ ಹಣವನ್ನು ಪಡೆಯುವ ಖಾಸಗಿ ಟ್ರಸ್ಟ್ ಆಗಿರುವುದರಿಂದ ಲೆಕ್ಕಪರಿಶೋಧಿಸಲು ಅದಕ್ಕೆ ಯಾವುದೇ ಕಾನೂನು ಅಧಿಕಾರವಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಂದ್ರ (CPIL) ಎಂಬ NGO ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಪಿಎಂ ಕೇರ್ಸ್ ನಿಧಿಯಲ್ಲಿ ಸಂಗ್ರಹಿಸಲಾದ ನಿಧಿಗಳು ಸಂಪೂರ್ಣವಾಗಿ ವಿಭಿನ್ನ ನಿಧಿಗಳಾಗಿದ್ದು, ಅವು ಸಾರ್ವಜನಿಕ ದತ್ತಿ ಟ್ರಸ್ಟ್ನ ನಿಧಿಗಳಾಗಿವೆ. ಈ ಹಣವನ್ನು ಎನ್ಡಿಆರ್ಎಫ್ಗೆ ಕಾನೂನುಬದ್ಧವಾಗಿ ವರ್ಗಾಯಿಸಲಾಗುವುದಿಲ್ಲ ಎಂದಿತ್ತು. ಡಿಸೆಂಬರ್ 2020 ರಲ್ಲಿ, ಆರ್ಟಿಐ ದಾಖಲೆಗಳ ಆಧಾರದ ಮೇಲೆ The Indian Express ಮಾಡಿದ ವರದಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಲ್ಲಿ 2,400 ಕೋಟಿ ರೂ.ಗಳಿಗಿಂತ ಹೆಚ್ಚಾಗಿ, ವಿವಿಧ ವಲಯಗಳ 100 ಕ್ಕೂ ಹೆಚ್ಚು ಪಿಎಸ್ಯುಗಳು ಸಿಬ್ಬಂದಿ ವೇತನದಿಂದ ಸುಮಾರು 155 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ನಿಧಿಗೆ ನೀಡಿವೆ. ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ಸಾರ್ವಜನಿಕ ದೇಣಿಗೆಗಳೊಂದಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಅನ್ನು 1948 ರಲ್ಲಿ ಸ್ಥಾಪಿಸಲಾಯಿತು. ಇದರ ಸಂಪನ್ಮೂಲಗಳನ್ನು ಈಗ ಪ್ರಾಥಮಿಕವಾಗಿ ನೈಸರ್ಗಿಕ ವಿಕೋಪಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಮತ್ತು ಪ್ರಮುಖ ಅಪಘಾತಗಳು ಮತ್ತು ಗಲಭೆಗಳ ಸಂತ್ರಸ್ತರಿಗೆ ಸಹಾಯ ಮಾಡಲು ಬಳಸಿಕೊಳ್ಳಲಾಗುತ್ತಿದೆ. NDF ಅನ್ನು ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ. ಈ ನಿಧಿಯನ್ನು ಪ್ರಧಾನಮಂತ್ರಿಯವರು ಅಧ್ಯಕ್ಷರಾಗಿರುವ ಕಾರ್ಯಕಾರಿ ಸಮಿತಿಯು ನಿರ್ವಹಿಸುತ್ತದೆ. ಅದರ ಅಧಿಕೃತ ವೆಬ್ಸೈಟ್ ಪ್ರಕಾರ, ಪ್ರಧಾನಿ ಅಧ್ಯಕ್ಷರಾಗಿದ್ದು ರಕ್ಷಣಾ, ಹಣಕಾಸು ಮತ್ತು ಗೃಹ ಸಚಿವರು ಸದಸ್ಯರಾಗಿದ್ದಾರೆ. ಹಾಗಾದರೆ ಈ ಸಂಸ್ಥೆಗಳು ಭಾರತ ಸರ್ಕಾರದ ಕಾಳಜಿ ಅಲ್ಲವೇ? ಗಮನಿಸಬೇಕಾದ ಅಂಶವೆಂದರೆ ಇವುಗಳನ್ನು ಸರ್ಕಾರಿ ಸಂಸ್ಥೆಗಳಾಗಿ ನೋಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಸಂಸತ್ತಿನ ಕೆಲಸವಲ್ಲ. ಕಾರ್ಯಾಂಗವು ಒಂದು ನಿಲುವನ್ನು ತೆಗೆದುಕೊಳ್ಳಬಹುದು ಮತ್ತು ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು, ಆದರೆ ಈ ಸಂಸ್ಥೆಗಳು ಕೇಂದ್ರ ಸರ್ಕಾರದ ಭಾಗವಾಗಿದೆಯೇ ಎಂದು ನಿರ್ಧರಿಸಲು ಅವುಗಳ ಸ್ವರೂಪವನ್ನು ವ್ಯಾಖ್ಯಾನಿಸುವುದು ಶಾಸಕಾಂಗದ ಪಾತ್ರವಲ್ಲ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ನಲ್ಲಿ ಕೆಲಸ ಮಾಡುವ ಚಕ್ಷು ರಾಯ್ ಹೇಳಿರುವುದಾಗಿ The Indian Express ಉಲ್ಲೇಖಿಸಿದೆ. ಈ ಸಂಸ್ಥೆಗಳು ಆರ್ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿವೆಯೇ? ಎನ್ಡಿಎಫ್, ಮಾಹಿತಿ ಹಕ್ಕು ಕಾಯ್ದೆ2005 ರ ವ್ಯಾಪ್ತಿಯಲ್ಲಿದೆ. ಪಿಎಂ ಕೇರ್ಸ್ ಮತ್ತು ಪಿಎಂಎನ್ಆರ್ಎಫ್ ಎರಡರ ಸ್ಥಿತಿಯ ಕುರಿತಾದ ಪ್ರಕರಣಗಳು ದೆಹಲಿ ಹೈಕೋರ್ಟ್ನಲ್ಲಿದೆ. ಪಿಎಂ ಕೇರ್ಸ್ ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್ 1 ರಂದು ನಡೆಯಲಿದೆ. ಪ್ರಶ್ನೆಯನ್ನು ಸ್ವೀಕಾರಾರ್ಹವೆಂದು ಪರಿಗಣಿಸಿದರೆ ಏನಾಗುತ್ತದೆ? ಪ್ರಶ್ನೆ ಸ್ವೀಕಾರಾರ್ಹವಾದರೆ ಅದನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅದು ಪ್ರತಿಕ್ರಿಯಿಸಲು 15 ದಿನಗಳು ಬೇಕಾಗುತ್ತದೆ. ಒಂದು ನಿರ್ದಿಷ್ಟ ಪ್ರಶ್ನೆಯು ಸ್ವೀಕಾರಾರ್ಹತೆಯನ್ನು ನಿಯಂತ್ರಿಸುವ ಯಾವುದೇ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಸಚಿವಾಲಯ ಭಾವಿಸಿದರೆ, ಅಥವಾ ಅದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ವಿಷಯವನ್ನು ನಿರ್ವಹಿಸುತ್ತದೆ, ಅಥವಾ ಉತ್ತರವು ಮತ್ತೊಂದು ದೇಶದೊಂದಿಗೆ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿದರೆ, ಅದು ಅದನ್ನು ಸಚಿವಾಲಯಕ್ಕೆ ತೋರಿಸಿ ಅದನ್ನು ನಿರಾಕರಿಸಬಹುದು ಎಂದು ವಿನಂತಿಸಬೇಕು ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳಿದ್ದಾರೆ. ಲೋಕಸಭೆ ಸಚಿವಾಲಯ ಸ್ವೀಕರಿಸಿದ ಮತ್ತು ಉತ್ತರಿಸಿದ ಪ್ರಶ್ನೆಗಳ ಕುರಿತು ಡೇಟಾವನ್ನು ಪ್ರಕಟಿಸುತ್ತದೆ ಎಂದಿದ್ದಾರೆ ರಾಯ್ . ಪ್ರಶ್ನೆಗಳನ್ನು ಸ್ವೀಕರಿಸಬೇಡಿ ಎಂದು ಸರ್ಕಾರಿ ಸಂಸ್ಥೆಯು ಪೂರ್ವಭಾವಿಯಾಗಿ ಸಚಿವಾಲಯಕ್ಕೆ ಹೇಳಬಹುದೇ? ಹೀಗೆ ಆಗುವುದು ಅತೀ ಅಪರೂಪ. ಅನುಮತಿಗೆ ಸಂಬಂಧಿಸಿದ ನಿರ್ಧಾರವು ಸ್ಪೀಕರ್ಗೆ ಮಾತ್ರ ಬಿಟ್ಟದ್ದು. ಅಲ್ಲದೆ, ನಿರ್ಧಾರಗಳನ್ನು ನಿರ್ದಿಷ್ಟ ನಿಧಿಯಂತೆ ಸಂಪೂರ್ಣ ವಿಷಯಗಳ ಮೇಲೆ ಅಲ್ಲ, ವೈಯಕ್ತಿಕ ಪ್ರಶ್ನೆಯ ಅರ್ಹತೆಯ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ ಆಚಾರಿ.
ಚಾಮರಾಜನಗರ: ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಭಯವನ್ನು ಹೆಚ್ಚಿಸಿದೆ. ಬೆಂಗಳೂರು ದಕ್ಷಿಣ ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕನು ತನ್ನ ಕುಟುಂಬದೊಂದಿಗೆ ಪಾದಯಾತ್ರೆಗೆ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪಾದಯಾತ್ರಿಗಳು ಗುಂಪುಗುಂಪಾಗಿ ಸಾಗುತ್ತಿದ್ದ ಸಮಯದಲ್ಲೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ಬಾಲಕ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ಕು ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅರಣ್ಯ ಹಾಗೂ ಸಂಬಂಧಿತ ಪ್ರಾಧಿಕಾರದ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ. ದಾಳಿಯಿಂದ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ದೇಶದ ಗೆಲುವೋ ಅಥವಾ ವೈಫಲ್ಯವೋ?
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ದೇಶಕ್ಕೆ ಏನು ಪ್ರಯೋಜನ ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ. ವಿರೋಧ ಪಕ್ಷಗಳು ಸಹ ನಿರಂತರವಾಗಿ ಆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಅಮೆರಿಕಕ್ಕೆ ಮುಕ್ತಗೊಳಿಸಲಾಗಿದೆಯೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಈಗ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಹಲವಾರು ಅಂಶಗಳ ಬಗ್ಗೆ ಹೇಳಲಾಗಿದೆ. ಡೈರಿ, ಹಣ್ಣುಗಳು, ತರಕಾರಿಗಳು, ಮಸಾಲೆಗಳು ಮತ್ತು ಇತರ ಧಾನ್ಯಗಳನ್ನು ಸುಂಕ ವಿನಾಯಿತಿಯಿಂದ ರಕ್ಷಿಸುವ ಮೂಲಕ ದೇಶೀಯ ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಭಾರತ ಸರಕಾರ ಕೃಷಿ ವಲಯವನ್ನು ರೈತರಿಗೆ ಹಾನಿಯಾಗುವಂತೆ ಅಮೆರಿಕಕ್ಕೆ ಮುಕ್ತವಾಗಿಸಿದೆಯೇ ಎಂಬ ಪ್ರಶ್ನೆಯಿದೆ. ಒಪ್ಪಂದದ ಅಂತಿಮ ಕರಡೇನೂ ಇದಲ್ಲ. ಮೊದಲ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿನ ಒಂದು ಅಂಶವೆಂದರೆ, ರಶ್ಯದ ತೈಲದ ಮೇಲೆ ವಿಧಿಸಲಾಗಿದ್ದ ಶೇ. 25 ದಂಡನಾತ್ಮಕ ಸುಂಕ ತೆಗೆದುಹಾಕಲಾಗಿದೆ ಮತ್ತು ನಮ್ಮ ಮೇಲೆ ವಿಧಿಸಲಾಗಿದ್ದ ಶೇ. 25 ಸುಂಕವನ್ನು ಸಹ ತೆಗೆಯಲಾಗಿದ್ದು, ಅದನ್ನು ಈಗ ಶೇ. 18ಕ್ಕೆ ಇಳಿಸಲಾಗಿದೆ. ಜಪಾನ್ ಈಗಲೂ ಭಾರತಕ್ಕಿಂತ ಕಡಿಮೆ ಸುಂಕ ಹೊಂದಿದೆ ಎಂಬುದನ್ನು ಗಮನಿಸಬೇಕು. ಈಗ, ಮಧ್ಯಂತರ ಸುಂಕಗಳಿಂದ ಜವಳಿ ಮತ್ತು ಉಡುಪು ವಲಯಕ್ಕೆ ಪ್ರಯೋಜನವಾಗಬಹುದು. ಭಾರತಕ್ಕಿಂತ ಮೊದಲು ಬಾಂಗ್ಲಾದೇಶ ಯುಎಸ್ಗೆ ಸಿದ್ಧ ಉಡುಪುಗಳ ಅತಿದೊಡ್ಡ ರಫ್ತುದಾರ ದೇಶವಾಗಿತ್ತು. ಬಾಂಗ್ಲಾದೇಶದಲ್ಲಿ ಅಸ್ಥಿರತೆ ಉಂಟಾದಾಗ, ಭಾರತೀಯ ಜವಳಿ ವಲಯಕ್ಕೆ ಅಮೆರಿಕ ಮಾರುಕಟ್ಟೆ ವಲಯದಲ್ಲಿ ಉತ್ತಮ ಅವಕಾಶವಿದೆ ಎನ್ನಲಾಗಿದೆ. ಆದರೆ ಅದರ ಮೇಲೆ ಸುಂಕಗಳನ್ನು ವಿಧಿಸಲಾಯಿತು. ಈಗ ಜವಳಿ ವಲಯದ ಮೇಲಿನ ಸುಂಕಗಳು ಕ್ರಮೇಣ ಕಡಿಮೆಯಾಗುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇದಲ್ಲದೆ, ಚರ್ಮದ ಉತ್ಪನ್ನಗಳ ಮೇಲಿನ ಸುಂಕಗಳು ಸಹ ಕಡಿಮೆಯಾಗುತ್ತಿವೆ. ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಮೇಲಿನ ಸುಂಕಗಳನ್ನು ಸಹ ಶೇ. 18ಕ್ಕೆ ಇಳಿಸಲಾಗಿದೆ. ವಜ್ರದ ಮೇಲೆ ಶೂನ್ಯ ಸುಂಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದಲ್ಲದೆ, ಭಾರತೀಯ ಔಷಧ ವಲಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೆನೆರಿಕ್ ಔಷಧಿಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಬಹುದು ಎನ್ನಲಾಗುತ್ತಿದೆ. ಜವಳಿ ಮತ್ತು ಬಟ್ಟೆ ವ್ಯವಹಾರಕ್ಕೆ ಸಂಬಂಧಿಸಿದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಪ್ರಯೋಜನ ಪಡೆಯುತ್ತಾರೆ. ಚರ್ಮ ಮತ್ತು ಚರ್ಮದ ಶೂ ವ್ಯಾಪಾರಿಗಳು ಪ್ರಯೋಜನ ಪಡೆಯುತ್ತಾರೆ. ಯಂತ್ರೋಪಕರಣಗಳು, ಬಿಡಿಭಾಗಗಳು ಲಾಭ ಪಡೆಯುತ್ತವೆ.ಸಾವಯವ ರಾಸಾಯನಿಕಗಳು, ಎಲ್ಲ ಕರಕುಶಲ ವಸ್ತುಗಳ ಮೇಲೆ ಭಾರತ ಸುಂಕ ರಿಯಾಯಿತಿ ಪಡೆಯಲಿದೆ. ಅಂದರೆ, ಭಾರತೀಯ ರಫ್ತುದಾರರು ಗಮನಾರ್ಹ ಪ್ರಯೋಜನ ಪಡೆಯಬಹುದು. ಭಾರತ ಯುಎಸ್ನಿಂದ 500 ಬಿಲಿಯನ್ ಡಾಲರ್ ಇಂಧನ ಮತ್ತು ತಂತ್ರಜ್ಞಾನ ಖರೀದಿಸುವ ಭರವಸೆ ನೀಡಿದೆ. ಭಾರತದ ಕೃಷಿ ವಲಯ ಅಮೆರಿಕಕ್ಕೆ ತೆರೆದುಕೊಂಡಿದೆ ಎಂದು ಅಮೆರಿಕ ಪದೇ ಪದೇ ಹೇಳುತ್ತಿದೆ. ಇನ್ನೊಂದೆಡೆ, ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಒಣ ಡಿಸ್ಟಿಲರ್ ಧಾನ್ಯಗಳು, ತಾಜಾ ಹಾಗೂ ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಮೊದಲಾದವುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ. ದೊಡ್ಡ ವಿಷಯವೆಂದರೆ, ಅಮೆರಿಕ ಭಾರತದೊಂದಿಗೆ ತಂತ್ರಜ್ಞಾನ ವ್ಯಾಪಾರದ ಬಗ್ಗೆ ಹೇಳಿದೆ. ಅಮೆರಿಕನ್ ಕಂಪೆನಿಗಳು ಇಲ್ಲಿಗೆ ಬಂದು ಡೇಟಾ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಆದರೆ ಇದು ನಮ್ಮ ಖಾಸಗಿತನವನ್ನು, ಗೌಪ್ಯತೆಯನ್ನು ಮಾರಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬಹುದೇ ಎಂಬ ಆತಂಕವೂ ಇದೆ. ಕೃಷಿ ವಲಯ ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಅಥವಾ ಡೈರಿ ಉತ್ಪನ್ನಗಳನ್ನು ಅಮೆರಿಕಕ್ಕೆ ಮುಕ್ತಗೊಳಿಸಲಾಗಿಲ್ಲ ಎನ್ನಲಾಗುತ್ತಿದೆ. ಸದ್ಯ ಸ್ಪಷ್ಟತೆ ಇಲ್ಲದ ಎರಡು ವಿಷಯಗಳಿವೆ. ಮೊದಲನೆಯದಾಗಿ, ಎಲ್ಲಿಯೂ ರಶ್ಯ ತೈಲದ ಉಲ್ಲೇಖವಿಲ್ಲ ಎರಡನೆಯದಾಗಿ, ಕೆಲಸದ ವೀಸಾ ಆಗಿರುವ ಎಚ್1ಬಿ ವೀಸಾ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಇದು ಭಾರತೀಯ ತಂತ್ರಜ್ಞಾನ ವಲಯಕ್ಕೆ ಪ್ರಮುಖವಾಗಿರುವಾಗಲೂ ಇದರ ಬಗ್ಗೆ ಚರ್ಚೆ ಇಲ್ಲದೇ ಇರುವುದು ಪ್ರಶ್ನೆಗೆ ಕಾರಣವಾಗಿದೆ. ಭಾರತ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ಹಿಂಪಡೆಯಲು ಎಚ್1ಬಿ ವೀಸಾ ಒಂದು ಪ್ರಮುಖ ಮಾರ್ಗವಾಗಿತ್ತು. ಆದರೆ ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಭಾರತ ರಶ್ಯದಿಂದ ತೈಲ ಖರೀದಿಸುವುದಿಲ್ಲ ಎಂದು ಅಮೆರಿಕ ಹೇಳುತ್ತಿರುವಾಗ, ರಶ್ಯ ಅದರ ಬಗ್ಗೆ ಪ್ರತಿಕ್ರಿಯಿಸಿದೆ. ತೈಲ ಖರೀದಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಭಾರತ ಸರಕಾರದಿಂದ ಇನ್ನೂ ಯಾವುದೇ ಹೇಳಿಕೆ ಬಂದಿಲ್ಲ ಎಂದು ರಶ್ಯ ಹೇಳಿದೆ. ಆದರೆ ಮಧ್ಯಂತರ ಒಪ್ಪಂದದಲ್ಲಿ ರಶ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಭಾರತ ಸರಕಾರ ಹೇಳಿದಾಗಲೇ ಇದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಭಾರತದ ಮೇಲೆ ವಿಧಿಸಲಾದ ಶೇ. 50 ಸುಂಕ ಈಗ ಶೇ. 18ಕ್ಕೆ ಇಳಿದಿರುವುದನ್ನು ಬಹಳಷ್ಟು ಪ್ರಭಾವಿಗಳು ಭಾರತದ ಯಶಸ್ಸು ಎಂದು ಕರೆಯುತ್ತಿದ್ದಾರೆ. ಆದರೆ ಶೂನ್ಯ ಸುಂಕವಿದ್ದದ್ದು ಈಗ ಶೇ. 18 ಆಗಿದೆ. ಇದರ ಬಗ್ಗೆ ಏನನ್ನೂ ಹೇಳಲಾಗುತ್ತಿಲ್ಲ. ತಂತ್ರಜ್ಞಾನ, ಔಷಧ, ಜೆನೆರಿಕ್ ಔಷಧ ಇತ್ಯಾದಿ ಕ್ಷೇತ್ರಗಳು ಸುಂಕಗಳಿಗೆ ಒಳಪಟ್ಟಿರಲಿಲ್ಲ. ಒಂದೆಡೆ, ನಾವು ಗೆದ್ದಿದ್ದೇವೆ ಎಂದು ಹೇಳಲಾಗುತ್ತಿದೆ, ಮತ್ತೊಂದೆಡೆ, ನಾವು ಅಮೆರಿಕದ ಎದುರು ಮಣಿದಿದ್ದೇವೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಸತ್ಯವೇನು? ಈ ವ್ಯಾಪಾರ ಒಪ್ಪಂದದ ಬಗೆಗಿನ ದೊಡ್ಡ ಕಳವಳವೆಂದರೆ, ಅಮೆರಿಕ ನಮ್ಮ ಡೈರಿ ಮತ್ತು ಕೃಷಿ ಕ್ಷೇತ್ರಗಳಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂಬುದರ ಬಗೆಗಿನದು. ಅಮೆರಿಕಕ್ಕೆ ಭಾರತ ಸಂಪೂರ್ಣ ಮಾರುಕಟ್ಟೆಯನ್ನು ತೆರೆದಿಲ್ಲ ಎನ್ನಲಾಗುತ್ತಿದೆ. ಭಾರತಕ್ಕೆ ಈ ಒಪ್ಪಂದ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಈ ಮಧ್ಯಂತರ ಒಪ್ಪಂದ ಒಂದು ಮಾರ್ಗಸೂಚಿಯನ್ನು ನೀಡುತ್ತಿದೆ. ಆದರೆ ಮುಂದೆ ಡೈರಿ ವಲಯದಲ್ಲಿ ಏನಾಗಲಿದೆ ಎಂಬುದನ್ನು ನೊಡಬೇಕಿದೆ. ಡೈರಿ ವಲಯವನ್ನು ರಕ್ಷಿಸುವ ಉದ್ದೇಶವಿತ್ತು. ಆದರೆ, ಅದನ್ನು ಕನಿಷ್ಠ ಪಶು ಆಹಾರಕ್ಕೆ ಸಂಬಂಧಿಸಿದಂತೆ ತೆರೆಯಲಾಗಿದೆ. ಇನ್ನು, ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಸೋಯಾಬೀನ್ ಅನ್ನು ಆಮದು ಮಾಡಿಕೊಳ್ಳುತ್ತೇವೆ. ಹಾಗೆಯೇ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತೇವೆ. ನಮ್ಮ ದೇಶದಲ್ಲಿ ಬೆಳೆಯದ ಬಹಳಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಆಲಿವ್ ಎಣ್ಣೆ ಕೂಡ ಅದರಲ್ಲಿ ಸೇರಿದೆ. ಅದನ್ನು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಅಡುಗೆ ಎಣ್ಣೆಯಾಗಿ ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಕೃಷಿ ಕ್ಷೇತ್ರದ ಒಂದು ಸಣ್ಣ ಭಾಗವನ್ನು ಅಮೆರಿಕಕ್ಕೆ ತೆರೆಯಲಾಗಿದೆ ಎಂಬುದು ಗೊತ್ತಾಗುತ್ತದೆ. ಈ ಸಂಪೂರ್ಣ ಒಪ್ಪಂದದ ಕುರಿತ ಸ್ಪಷ್ಟ ಚಿತ್ರ ಇನ್ನೂ ಸಿಗುತ್ತಿಲ್ಲ. ಹಾಗಾಗಿ ಇದು ನಮ್ಮ ಗೆಲುವೋ ಅಥವಾ ವೈಫಲ್ಯವೋ ಎಂಬುದು ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮುಂದಾಗಿದ್ದು, ಈ ಬೆನ್ನಲ್ಲೆ, ಸದ್ಯ TMC ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿದೆ. ಸದ್ಯ ಕಾಂಗ್ರೆಸ್ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕುವುದಿಲ್ಲ ಎಂದು ತಿಳಿಸಿರುವ TMC ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿಪಕ್ಷಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಲು ಸ್ಪೀಕರ್ ಗೆ 3 ದಿನಗಳ ಕಾಲ ಅವಕಾಶ ನೀಡಿದ್ದು, ಕಾಲಮಿತಿಯೊಳಗೆ ಯಾವುದೇ ಸ್ಪಂದನೆ ಬರದೆ ಇದ್ದಾಗ ಮಾತ್ರವೇ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಹಲವು ಪಕ್ಷಗಳು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರೂ ಸಹ ಇದು ಕಾಂಗ್ರೆಸ್ ಗೆ ಒಂದು ಮಟ್ಟದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
ನೌಕರರು ಭವಿಷ್ಯ ನಿಧಿ (ಪಿಎಫ್) ಹಣವನ್ನು ತಮ್ಮ ಬ್ಯಾಂಕ್ಗಳಿಂದ ಯುಪಿಐ ವಾಪತಿ ಮೂಲಕ ಪಡೆದುಕೊಳ್ಳಬಹುದು. ಇದಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊರತರುತ್ತಿದೆ. ಹಣ ಎಷ್ಟಿದೆ ಎಂಬ ಮಾಹಿತಿ ಜತೆಗೆ ಹಲವು ಸೌಲಭ್ಯವನ್ನು ಈ ಅಪ್ಲಿಕೇಶನ್ ನೀಡಲಿದೆ. ಕೇವಲ 3 ದಿನಗಳಲ್ಲಿ ಹಣವನ್ನು ಪಡೆದುಕೊಳ್ಳಬಹುದು.
'ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ನಡೆಸಿ ಯಾರಿಗಾಗಿ ಆಸ್ತಿ ಸಂಪಾದಿಸುತ್ತಿದ್ದಾರೆ': ಪ್ರತಾಪ್ ಸಿಂಹ ಗಂಭೀರ ಆರೋಪ
ಸಿಎಂ ಸಿದ್ದರಾಮಯ್ಯ ಮಗನಿಂದಲೇ ಸಿದ್ದರಾಮಯ್ಯಗೆ ಕೆಟ್ಟ ಹೆಸರು ಬರುತ್ತಿದೆ, ವರ್ಗಾವಣೆ ದಂಧೆ ನಡೆಸಿ ತಂದೆಗೆ ಮುಜುಗರ ಆಗುವಂತೆ ನಡೆದುಕೊಳ್ತಿದ್ದಾರೆ, ಕಾಂಗ್ರೆಸ್ಗೆ ಹೀನಾಯ ಸೋಲು ಕಾದಿದೆ, ಮೈಸೂರು ಅಭಿವೃದ್ಧಿ ನಿರ್ಲಕ್ಷ್ಯ ಮಾಡಲಾಗ್ತಿದೆ ಎಂದು ಸಾಲು ಸಾಲು ಆರೋಪಗಳನ್ನು ಪ್ರತಾಪ್ ಸಿಂಹ ಮಾಡಿದ್ದಾರೆ.
ಪ್ರಭಾವಿ ಸಚಿವರ ವಿಧಾನಸೌಧದ ಕಚೇರಿಯಲ್ಲಿ ಕಳ್ಳತನ: ಚಿನ್ನಾಭರಣ, ನಗದು ಇದ್ದ ಕೈ ಚೀಲ ಮಾಯ
ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲೇ ಕಳ್ಳತನವಾಗಿದೆ. ಪ್ರಭಾವಿ ಸಚಿವರ ವಿಧಾನಸೌಧದ ಕಚೇರಿಯಲ್ಲಿ ಕಳ್ಳತನವಾಗಿದ್ದು, 300 ಗ್ರಾಂ ಚಿನ್ನಾಭರಣ ಹಾಗೂ ನಗದು ಇದ್ದ ಕೈ ಚೀಲ ಮಾಯವಾಗಿದೆ. ಈ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪಲ್ಲಿ ಸಿಬ್ಬಂದಿಯೊಬ್ಬನ ಬಂಧನ ಆಗಿದೆ. ಈಗಾಗಲೇ ಪೊಲೀಸರು ಈ ಸಂಬಂಧ ವಿಚಾರಣೆಯನ್ನು ಆರಂಭಿಸಿದ್ದು, ಕಚೇರಿ ಸಿಬ್ಬಂದಿಯಲ್ಲೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತಾದ ವಿವರ ಇಲ್ಲಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ; ಭಕ್ತರಲ್ಲಿ ಆತಂಕ
ಶಿವರಾತ್ರಿ ಜಾತ್ರೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.
Lokasabha | ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನೋಟಿಸ್ ; 118 ಸದಸ್ಯರಿಂದ ಸಹಿ, ಹೊರಗುಳಿದ ಟಿಎಂಸಿ
ಹೊಸದಿಲ್ಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಪಕ್ಷ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟಿಸ್ ಸಲ್ಲಿಸಿದ್ದು, ಇದರಿಂದ ಸಂಸತ್ತಿನಲ್ಲಿ ಸರ್ಕಾರ–ಪ್ರತಿಪಕ್ಷಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸಂಸತ್ತಿನ ಕಲಾಪಕ್ಕೆ ನಿರಂತರ ಅಡಚಣೆಗಳ ನಡುವೆ ಈ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕರಾದ ಕೆ. ಸುರೇಶ್ ಮತ್ತು ಮುಹಮ್ಮದ್ ಜಾವೇದ್ ಸದನದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಸಲ್ಲಿಸಿದ್ದಾರೆ. ಈ ನೋಟಿಸ್ ಗೆ 118 ಸಂಸದರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಕ್ರಮದಿಂದ ದೂರ ಉಳಿದು, ಸಹಿ ಮಾಡಿದವರ ಪಟ್ಟಿಯಲ್ಲಿ ಸೇರಿಲ್ಲ. “ಕಾರ್ಯವಿಧಾನ ನಿಯಮಗಳ 94(ಸಿ) ಅಡಿಯಲ್ಲಿ ಇಂದು ಮಧ್ಯಾಹ್ನ 1.14ಕ್ಕೆ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನೋಟಿಸ್ ಸಲ್ಲಿಸಿದ್ದೇವೆ” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತಿಳಿಸಿದ್ದಾರೆ. ಅವಿಶ್ವಾಸ ಗೊತ್ತುವಳಿಗೆ ಈ ಹಂತದಲ್ಲಿ ಬೆಂಬಲ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ನೇತೃತ್ವದ ಕಾರ್ಯತಂತ್ರದಿಂದ ಪಕ್ಷ ಹೊರಗುಳಿದಿದೆ ಎಂದು ಮೂಲಗಳು ಹೇಳಿವೆ. “ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಪಕ್ಷದ ಬೇಡಿಕೆಗಳ ಕುರಿತು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿ, ಪ್ರತಿಕ್ರಿಯಿಸಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ನಾವು ಪ್ರಸ್ತಾಪಿಸಿದ್ದೇವೆ. ಕಾಂಗ್ರೆಸ್ ತಕ್ಷಣವೇ ನೋಟಿಸ್ ನೀಡಿದರೆ ಟಿಎಂಸಿ ಸಹಿ ಮಾಡುವುದಿಲ್ಲ. ಆದರೆ ವಿರೋಧ ಪಕ್ಷದ ಮನವಿಗೆ ಸ್ಪೀಕರ್ ಸ್ಪಂದಿಸದಿದ್ದರೆ, ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲು ಸಿದ್ಧರಾಗಿದ್ದೇವೆ” ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.
BCCI ಗುತ್ತಿಗೆ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ B ದರ್ಜೆ: ಕಾರಣವೇನು?
ಹೊಸದಿಲ್ಲಿ: ಟೀಂ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇತ್ತೀಚಿನ ಬಿಸಿಸಿಐ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ B ದರ್ಜೆಗೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೆ, ಚಾಲ್ತಿಯಲ್ಲಿದ್ದ 7 ಕೋಟಿ ರೂ. ಶುಲ್ಕ ಹೊಂದಿದ್ದ A+ ದರ್ಜೆಯನ್ನೂ ಬಿಸಿಸಿಐ ರದ್ದುಗೊಳಿಸಿದೆ. ಸೋಮವಾರ 30 ಪುರುಷರು ಹಾಗೂ 21 ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ A, B ಮತ್ತು C ಪ್ರವರ್ಗದ ಗುತ್ತಿಗೆಯನ್ನು ನೀಡಿದೆ. ನೂತನ ಕೇಂದ್ರ ಗುತ್ತಿಗೆಗೆ ಪ್ರದರ್ಶನ ಹಾಗೂ ಹಿಂದಿನ ಋತುವಿನಲ್ಲಿ ಆಡಿರುವ ಪಂದ್ಯಗಳ ಸಂಖ್ಯೆಯನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಎರಡು ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕರಾದ ಶುಭಮನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಟೆಸ್ಟ್ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು A ದರ್ಜೆಯಲ್ಲೇ ಉಳಿಸಿಕೊಳ್ಳಲಾಗಿದೆ. ಆದರೆ, ಮೂರು ಪ್ರವರ್ಗದ ಗುತ್ತಿಗೆ ಶುಲ್ಕವನ್ನು ಬಿಸಿಸಿಐ ಉಲ್ಲೇಖಿಸಿಲ್ಲ. A+ ದರ್ಜೆಯನ್ನು ರದ್ದುಗೊಳಿಸಲಾಗಿದ್ದು, ಈ ಹಿಂದಿನ ಋತುಗಳಲ್ಲಿ A ದರ್ಜೆಗೆ 5 ಕೋಟಿ ರೂ. ಮೌಲ್ಯ, B ದರ್ಜೆಗೆ 3 ಕೋಟಿ ರೂ. ಮೌಲ್ಯ ಹಾಗೂ ಸಿ ದರ್ಜೆಗೆ 1 ಕೋಟಿ ರೂ. ಮೌಲ್ಯವನ್ನು ನಿಗದಿಗೊಳಿಸಲಾಗಿತ್ತು. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಹಾಗೂ T20 ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿರುವುದರಿಂದ, ಅವರೀಗ ಏಕದಿನ ಮಾದರಿಯ ಆಟಗಾರರಾಗಿ ಬದಲಾಗಿದ್ದಾರೆ. ಹೀಗಾಗಿ, ಮಾನದಂಡದ ಪ್ರಕಾರ, ಅವರನ್ನು ಉನ್ನತ ದರ್ಜೆಯಿಂದ ಹಿಂಬಡ್ತಿ ನೀಡಲಾಗಿದೆ.
ಬೆಂಗಳೂರು | ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು!
ಬೆಂಗಳೂರು: ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವಾಗಿರುವುದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿರುವ ವಿಧಾನಸೌಧ ಪೊಲೀಸರು ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ಅಲ್ಲೇ ಮರೆತು ಹೋಗಿದ್ದರು. ಮರು ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರ ಆಂಟೋನಿ ಎಂಬಾತ ಬ್ಯಾಗ್ ಕೊಂಡೊಯ್ದಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹಲವೆಡೆ ಫೆ.11 ಕ್ಕೆ ವಿದ್ಯುತ್ ವ್ಯತ್ಯಯ: ನಿಮ್ಮ ಪ್ರದೇಶಕ್ಕಿದೆಯಾ ಕರೆಂಟ್? ಚೆಕ್ ಮಾಡಿ
ಬೆಸ್ಕಾಂ ವಿದ್ಯುತ್ ಕಡಿತವಾಗುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಜನ ಕರೆಂಟ್ ಇಲ್ಲದೆ, ಪರದಾಡಬಾರದೆಂದು ಮುನ್ನೆಚ್ಚರಿಕೆಯನ್ನು ಕೊಟ್ಟಿರುವ ಬೆಸ್ಕಾಂ, ಬುಧವಾರದಂದು ಬೆಳಗ್ಗೆ 11 ರಿಂದ 3 ಗಂಟೆವರೆಗೆ ವಿದ್ಯುತ್ ಕಟ್ ಆಗುವ ಸ್ಥಳಗಳ ಮಾಹಿತಿ ನೀಡಿದೆ.
'ಜನ ನಾಯಗನ್' ಚಿತ್ರ ಬಿಡುಗಡೆಗೆ ಕಾನೂನು ಹೋರಾಟ: ಪ್ರಕರಣ ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ
ನಟ, ರಾಜಕಾರಣಿ ವಿಜಯ್ ಅವರ ‘ಜನ ನಾಯಗನ್’ ಚಿತ್ರದ ನಿರ್ಮಾಪಕರು ಸೆನ್ಸಾರ್ ಬೋರ್ಡ್ (ಸಿಬಿಎಫ್ಸಿ) ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಈ ದೂರಿನ ವಿಚಾರಣೆ ಇಂದು ನಡೆಯಿತು. ಮದ್ರಾಸ್ ಹೈಕೋರ್ಟ್ನಲ್ಲಿ ಏಕ ಪೀಠದ ನ್ಯಾಯಮೂರ್ತಿ ಪಿಟಿ ಆಶಾ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಕೋಟ | ಕ್ರಿಕೆಟ್ ಆನ್ ಲೈನ್ ಬೆಟ್ಟಿಂಗ್: ಆರೋಪಿಯ ಬಂಧನ
ಕೋಟ: ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಸಮೀಪದ ಪಾಂಡೇಶ್ವರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಓರ್ವ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ನಿವಾಸಿ ಮನಿತ್(26) ಎಂದು ಗುರುತಿಸಲಾಗಿದೆ. ಫೆ.9ರಂದು ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಉಪ ನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು, ಬೆಟ್ಟಿಂಗ್ ನಡೆಸುತ್ತಿದ್ದ ಮನಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಶದಲ್ಲಿದ್ದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸುತ್ತಿದ್ದ ಐ ಫೋನ್ ಮೊಬೈಲ್ ಹಾಗೂ ಬೆಟ್ಟಿಂಗ್ ಹಣ 800 ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ಒಮಾನ್ - ಝಿಂಬಾಬ್ವೆ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಮೊಬೈಲ್ ನಲ್ಲಿರುವ ಆನ್ ಲೈನ್ ಅಪ್ಲಿಕೇಶನ್ ಮೂಲಕ ಸಂಘಟಿತವಾಗಿ ಇತರರೊಂದಿಗೆ ಸೇರಿಕೊಂಡು ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
CHAMARAJANAGARA | ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ
ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಪಾದಯಾತ್ರೆಗಾಗಿ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪಾದಯಾತ್ರಿಗಳು ಗುಂಪುಗುಂಪಾಗಿ ಸಾಗುತ್ತಿದ್ದ ವೇಳೆ ಚಿರತೆ ಬಾಲಕನ ಮೇಲೆ ಎರಗಿದೆ. ದಾಳಿಯ ವೇಳೆ ಬಾಲಕ ಜೋರಾಗಿ ಕಿರುಚಿಕೊಂಡಿದ್ದರಿಂದ ಬೆದರಿದ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ಘಟನೆಯಿಂದ ಪಾದಯಾತ್ರಿಗಳಲ್ಲಿ ಮತ್ತೆ ಚಿರತೆ ಭೀತಿ ಉಂಟಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ವರು ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅರಣ್ಯ ಹಾಗೂ ಸಂಬಂಧಿತ ಪ್ರಾಧಿಕಾರದ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ. ದಾಳಿಯಿಂದ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗಿರುವ ಖುಷಿಯಲ್ಲೇ ತೇಲಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಶೂನ್ಯ ಸುಂಕದ ಭರವಸೆಯನ್ನು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಆದರೆ ಈ ಕುರಿತು ಶ್ವೇತಭವನವು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಉಭಯ ದೇಶಗಳ ನಡುವೆ ಆಗಿರುವ ವ್ಯಾಪಾರ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಒದಗಿಸಿದೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ, 1.4 ಶತಕೋಟಿ ಜನಸಂಖ್ಯೆಯ ಭಾರತೀಯ ಮಾರುಕಟ್ಟೆಗೆ ಅಮೆರಿಕನ್ ಸರಕುಗಳಿಗೆ ಪ್ರವೇಶ ನೀಡಲಿದೆ ಎಂದು ವೈಟ್ಹೌಸ್ ಸಂತಸ ವ್ಯಕ್ತಪಡಿಸಿದೆ.
ಬ್ರಿಟನ್ಗೆ ಮೊದಲ ಮುಸ್ಲಿಂ ಪ್ರಧಾನಿ?; ಕೀರ್ ಸ್ಟಾರ್ಮರ್- ಎಪ್ಸ್ಟೀನ್ ಹಗರಣದ ಮಧ್ಯೆ ಮುನ್ನೆಲೆಯಲ್ಲಿ ಶಬಾನಾ ಮಹಮೂದ್
ಬ್ರಿಟನ್: ಅಮೆರಿಕಕ್ಕೆ ಬ್ರಿಟಿಷ್ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿ ನಂತರ ತೆಗೆದುಹಾಕುವ ನಿರ್ಧಾರದ ವಿವಾದದ ನಂತರ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಈ ಮಧ್ಯೆ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರ ಹೆಸರು ಬ್ರಿಟನ್ ಪ್ರಧಾನಿ ಹುದ್ದೆಗೆ ಕೇಳಿ ಬಂದಿದೆ. ಪೀಟರ್ ಮ್ಯಾಂಡೆಲ್ಸನ್, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಎಂಬ ಆರೋಪವು ವಿವಾದಕ್ಕೆ ಕಾರಣವಾಗಿತ್ತು. ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಮಧ್ಯೆ ಅವರ ಆಪ್ತ ಸಹಾಯಕ ಮಾರ್ಗನ್ ಮೆಕ್ಸ್ವೀನಿ ರಾಜೀನಾಮೆ ನೀಡಿದ್ದಾರೆ. ಅವರು ಮ್ಯಾಂಡೆಲ್ಸನ್ ಅವರ ನೇಮಕಾತಿಯಲ್ಲಿ ತಮ್ಮ ಪಾತ್ರಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರಿಟನ್ ಪ್ರಧಾನಮಂತ್ರಿಯವರ ಸಂವಹನ ವಿಭಾಗದ ಮುಖ್ಯಸ್ಥ ಟಿಮ್ ಆಲನ್ ಕೂಡ ಹುದ್ದೆ ತೊರೆದಿದ್ದಾರೆ. ಇದರಿಂದ ಬ್ರಿಟನ್ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗಿದೆ. ಒಂದು ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಯುಕೆ ಪ್ರಧಾನಿ ಹುದ್ದೆಗೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಶಬಾನಾ ಮಹಮೂದ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದರೆ ಪಾಕಿಸ್ತಾನ ಮೂಲದ ಯುಕೆಯ ಮೊದಲ ಪ್ರಧಾನಿಯಾಗಿ ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆಯಾಗಿ ಇತಿಹಾಸ ನಿರ್ಮಾಣವಾಗಲಿದೆ. ಶಬಾನಾ ಮಹಮೂದ್ ಯಾರು? 2010 ರಿಂದ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರು ಲೇಬರ್ ಪಕ್ಷದ ಅತ್ಯಂತ ಸಮರ್ಥ ಮತ್ತು ಪ್ರಭಾವಿ ನಾಯಕರಲ್ಲಿ ಓರ್ವರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ವೃತ್ತಿಯಿಂದ ಬ್ಯಾರಿಸ್ಟರ್ ಆಗಿರುವ ಅವರು, 2010ರಲ್ಲಿ ಸಂಸತ್ತಿಗೆ ಪ್ರವೇಶಿಸಿದ ಲೇಬರ್ ಪಕ್ಷದ ಮೊದಲ ಮುಸ್ಲಿಂ ಮಹಿಳಾ ಸಂಸದರಲ್ಲಿ ಒಬ್ಬರಾಗಿದ್ದರು. ಮೊದಲ ಬಾರಿಯೇ ಶಾಡೋ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದು ಪಕ್ಷದೊಳಗೆ ತಮ್ಮದೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಲೇಬರ್ ಪಕ್ಷ ಅಧಿಕಾರಕ್ಕೆ ಮರಳಿದ ನಂತರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಮಹಮೂದ್, ಸರಕಾರದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ. ಪೊಲೀಸ್, ರಾಷ್ಟ್ರೀಯ ಭದ್ರತೆ, ವಲಸೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಬಾನಾ ಮಹಮೂದ್ ಅವರು ಬ್ರಿಟಿಷ್ ಮುಸ್ಲಿಂ ಗುರುತು, ಕಾರ್ಮಿಕ ವರ್ಗ ಮತ್ತು ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸುವಲ್ಲಿ ಶಿಕ್ಷಣ ವಹಿಸಿದ ಪಾತ್ರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
ಬೆಂಗಳೂರಿನ ವಿಧಾನಸೌಧದ ಬಳಿಯಿರುವ ಪ್ರತಿಷ್ಠಿತ ರಾಡಿಸನ್ ಹೋಟೆಲ್ ನಲ್ಲಿ ಕೆನಡಾ ಮೂಲದ ಮಹಿಳೆಯೊಬ್ಬರಿಗೆ ಹೋಟೆಲ್ ನ ಖಾಸಗಿ ಸ್ಪಾದಲ್ಲಿ ಮಸಾಜ್ ಸೇವೆ ವೇಳೆ ಥೆರಪಿಸ್ಟ್ ಒಬ್ಬರೂ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆಕೆ ಬಟ್ಟೆ ಬದಲಾಯಿಸುವ ಸಮಯದಲ್ಲಿ ಬಾಗಿಲನ್ನು ತೆರೆದಿದ್ದು, ಇದರಿಂದಾಗಿ ಆಕೆ ಮಾನಸಿಕವಾಗಿ ಆಘಾತಕ್ಕೆ ಒಳಾಗಿದ್ದು, ಹೋಟೆಲ್ ಆಡಳಿತ ಮಂಡಳಿಗೆ ವಿಷಯ ತಿಳಿಸಿದಾಗ್ಯೂ, ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರು ನೀಡಿರುವ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್ ಆಡಳಿತ ಮಂಡಳಿ ಆರೋಪಗಳನ್ನು ನಿರಾಕರಿಸಿದ್ದು, ಇದೊಂದು ಸುಲಿಗೆಯ ಪ್ರಯತ್ನ ಎಂದು ತಿಳಿಸಿದ್ದಾರೆ.
Silver Price: ಬೆಳ್ಳಿ ದರದಲ್ಲಿ ಇಂದು ರೂ.10,000 ಕುಸಿತ, ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು: ಗ್ರಾಹಕರು ಹಾಗೂ ಹೂಡಿಕೆದಾರರು ನಿರಂತರವಾಗಿ ಕೆಲವು ವಾರಗಳಿಂದ ಚಿನ್ನ-ಬೆಳ್ಳಿ ದರದ ಮೇಲಾಗುತ್ತಿರುವ ಏರಿಕೆ ಹಾಗೂ ಇಳಿಕೆ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಇವುಗಳ ದರದಲ್ಲಿ ಏರಿಳಿತ ಇವತ್ತಿಗೂ ಮುಂದುವರಿದಿದೆ. ಇಂದು ಮಂಗಳವಾರ (ಫೆಬ್ರವರಿ 10) ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಇಳಿಕೆ ಆಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತೆ, ವಿದೇಶಿ
ಸ್ಥಿರವಾದ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?
ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಹಣದುಬ್ಬರ ಹಾಗೂ ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಕಳೆದ ವಾರಾಂತ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ, ಸೋಮವಾರದಿಂದ ಅಲ್ಪ ಏರಿಕೆ ಕಂಡಿತ್ತು. ಮಂಗಳವಾರ ಬೆಲೆ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ಸೋಮವಾರ ಮತ್ತೆ 5,000 ಡಾಲರ್ ಗಳಿಗೆ ಬಂದು ನಿಂತಿದೆ. ಮಂಗಳವಾರವೂ ಇದೇ ಬೆಲೆ ಮುಂದುವರಿದಿದೆ. ಫೆಬ್ರವರಿ ಮೊದಲ ವಾರದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಚಂಚಲತೆ ಕಂಡಿತ್ತು. ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಚಿನ್ನದ ದರ ಪ್ರತಿ ಔನ್ಸ್ ಗೆ 4,988.60 ಡಾಲರ್ ಗೆ ಕುಸಿದಿತ್ತು. ಬೆಳ್ಳಿ ಕೂಡ ಪ್ರತಿ ಔನ್ಸ್ ಗೆ 77.525 ಡಾಲರ್ ಗೆ ಕೊನೆಗೊಂಡಿತ್ತು. ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಸೀಸನ್ನ ಬೆಲೆಗಳು, ಹಣದುಬ್ಬರ ಮತ್ತು ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಅಧಿಕ ಹಣದುಬ್ಬರ ದರಗಳು ಚಿನ್ನದ ಬೇಡಿಕೆಯನ್ನು ಏರಿಸುತ್ತವೆ. ಬೇಡಿಕೆ ಏರುತ್ತಿದ್ದಂತೆ ಬೆಲೆಯೂ ಏರುತ್ತದೆ. ಭೌಗೋಳಿಕ-ರಾಜಕೀಯ ಪರಿಸ್ಥಿತಿಗಳ ಹೊರತಾಗಿಯೂ ಚಿನ್ನದ ಅಂತರರಾಷ್ಟ್ರೀಯ ಸ್ಪಾಟ್ ಬೆಲೆಯು ಭಾರತದಲ್ಲಿ ಚಿನ್ನದ ಲೋಹದ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದು ಫೆಬ್ರವರಿ 10ರಂದು ದೇಸಿ ಮಾರುಕಟ್ಟೆಯಲ್ಲಿ ಬೆಳ್ಳಿ ಕೊಂಚ ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 3,00100 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,57,920 ರೂ. ಮತ್ತು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,44,760 ರೂ. ಗೆ ತಲುಪಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ನ ಚಿನ್ನದ ಬೆಲೆ 1,58,070 ರೂ. ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಮೌಲ್ಯ 1,44,910 ರೂ. ಇದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಫೆಬ್ರವರಿ 10ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ಥಿರವಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,791 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,475 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,844 ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಏರಿಕೆಯಾಗಿತ್ತು. ಇದೀಗ ಸೋಮವಾರ ಮತ್ತು ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಅಲ್ಪ ಏರಿದ ಬೆಳ್ಳಿ ಕೆಜಿಗೆ 3,00,100 ಲಕ್ಷ ರೂ. ಗೆ ಬಂದು ನಿಂತಿದೆ.
ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ: ಖ್ಯಾತ ನಟಿ ತಮನ್ನಾ ಪ್ರಚಾರ ರಾಯಭಾರಿ
ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷ, ಶಾಸನ ಪತ್ತೆ
ಬೀದರ್ : ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಚಾಲುಕ್ಯರ ಕಾಲದ ಶಾಸನ ಒಂದು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಭವಾನಿ ದೇವಸ್ಥಾನದ ಹಿಂದುಗಡೆ ಗ್ರಾಮಸ್ಥರು ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಡುಗೆ ಮಾಡುವುದಕ್ಕಾಗಿ ಜಾಗ ಸ್ವಚ್ಛಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಶಿವಲಿಂಗ, ನಾಗ ಸರ್ಪ, ಶಿಲಾಶಾಸನದ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ. ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ, ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಗ್ರಾಮದಲ್ಲಿ ಇನ್ನಷ್ಟು ಶಿಲಾಶಾಸನಗಳು, ಮೂರ್ತಿಗಳು ಪತ್ತೆಯಾಗುವ ಶಂಕೆ ಇದ್ದು, ಗ್ರಾಮಸ್ಥರು ಸಂಶೋಧನೆಗೆ ಒತ್ತಾಯಿಸಿದ್ದಾರೆ. ಈ ಹಿಂದೆ ಸುಮಾರು 7-8 ವರ್ಷಗಳ ಹಿಂದೆ ಗ್ರಾಮದಲ್ಲಿ ವಿಷ್ಣುವಿನ ವಿಗ್ರಹ, ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ 108 ದೇವಸ್ಥಾನಗಳು ಇದ್ದು, ನೆಲ ಅಗೆಯುವಾಗ ಅಲ್ಲಲ್ಲಿ ಪುರಾತನ ಶಿಲ್ಪಕಲೆಗಳು, ವಿಗ್ರಹಗಳು ಪತ್ತೆಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದ ಮದ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯರು ಕಟ್ಟಿಸಿದ ಐತಿಹಾಸಿಕ ಶಿವನ ದೇವಸ್ಥಾನ ಇದೆ. ಹಾಗಾಗಿ ನೂತನ ಕಟ್ಟಡ, ಮನೆ ನಿರ್ಮಾಣ ಸಮಯದಲ್ಲಿ ವಿಗ್ರಹ, ಶಾಸನಗಳು ಪತ್ತೆಯಾಗುತ್ತಿವೆ. ಹಾಗಾಗಿ ನಾರಾಯಣಪುರದಲ್ಲಿ ಉತ್ಖನನ ಮಾಡಿ ಇತಿಹಾಸ ಬಿಚ್ಚಿಡ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಹೈಕಮಾಂಡ್ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿಕೆಶಿ ಖಡಕ್ ವಾರ್ನಿಂಗ್
ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಹೈಕಮಾಂಡ್ ನಾಯಕರು ಕೊಟ್ಟಿರುವ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತಾಗಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಕುರಿತಾಗಿ ನೀಡಿರುವ ಹೇಳಿಕೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದರು. ಈ ಕುರಿತಾಗಿ ಅವರು ಏನು ಮಾತನಾಡಿದ್ದಾರೆ ಎಂಬ ಮತ್ತಷ್ಟು ಮಾಹಿತಿ ಇಲ್ಲಿದೆ.
ಮುಗಿಯದ ಗೋಳು, ಪಡಿತರ ಹಳೆಯ ಕಾರ್ಡಿಗೆ ಅಸ್ತು, ಹೊಸದಕ್ಕೆ ಸುಸ್ತೋ ಸುಸ್ತು!
ಮೂರು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ನಿಯಮಾನುಸಾರ ಹಂಚಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ವರ್ಷಗಳಿಂದ ಎಪಿಎಲ್ ಸೇರಿ ಹೊಸ ಅರ್ಜಿಗೆ ಅವಕಾಶ ನೀಡುತ್ತಿಲ್ಲ. ಇದು ಜನರಲ್ಲಿ ನಿರಾಸೆ ಮೂಡಿಸಿದೆ. ಪಡಿತರ ಕಾರ್ಡಿಗಾಗಿ ಅರ್ಜಿದಾರರು ದಿನ ಬೆಳಗಾದರೆ ಆಹಾರ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ.
PUTTUR | ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರಿಗೆ ಪ್ರಸ್ತಾವ: ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ
ಪುತ್ತೂರು: ಪುತ್ತೂರಿನ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಒಳಮೊಗ್ರು ಗ್ರಾಮದ ಹೊಸಮನೆ ನಿವಾಸಿ ಅಜಿತ್ ರೈ ವಿರುದ್ಧ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಸಂಬಂಧ ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಫೆ.25ರಂದು ವಿಚಾರಣೆ ನಡೆಯಲಿದೆ. ಆದ್ದರಿಂದ ಅಜಿತ್ ರೈ ಸ್ವಯಂ ಅಥವಾ ನ್ಯಾಯವಾದಿಯ ಮೂಲಕ ವಿಚಾರಣೆಗೆ ಹಾಜರಾಗಬೇಕು. ತಪ್ಪಿದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪ ವಿಭಾಗೀಯ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಅಮೆರಿಕಾ ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಒಪ್ಪಂದಕ್ಕೆ ಉಭಯ ದೇಶಗಳು ದಾರಿಗಳನ್ನು ಹುಡುಕುತ್ತಿದ್ದೆ, ಆದರೆ ಇರಾನ್ ದೇವಪ್ರಭುತ್ವನ್ನು ಕೊನೆಗೊಳಿಸುವಲ್ಲಿ ಅಮೆರಿಕಾ ಇರಾನ್ ಜನತೆಯ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಶೆ ಮೂಡುವಂತೆ ಮಾಡಿದ್ದು, ಈ ಕುರಿತು ಇರಾನ್ ಮೂಲದ ವ್ಯಕ್ತಿಯೊಬ್ಬ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ನೊಂದಿಗೆ ಒಪ್ಪಂದ ಮಾಡಿಕೊಳ್ಳದೆ, ಅವರನ್ನು ದಮನಮಾಡಿ ಜನತೆಗೆ ಸಹಾಯಮಾಡಿ ಅವರನ್ನು ಈ ನರಕದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋ ಹಂಚಿಕೊಂಡ ಕೆಲ ಹೊತ್ತಿನಲ್ಲೇ ಆತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು, ಇರಾನ್ ಜನತೆಯನ್ನು ಮುಕ್ತಗೊಳಿಸುವಂತೆ ಕೊನೆ ಕ್ಷಣದಲ್ಲಿ ಆತ ಟ್ರಂಪ್ ಗೆ ಹೇಳಿದ್ದೇನು ನೋಡಿ..
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿ.ಕೆ.ಶಿವಕುಮಾರ್
ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ
Gold Rate Fall : ಡಾಲರ್ ಮೌಲ್ಯ ಹೆಚ್ಚಳ, ಚಿನ್ನದ ಬೆಲೆ ಏರಿಕೆಗೆ ಬ್ರೇಕ್: ಕುಸಿದ ಬೆಳ್ಳಿ ಬೆಲೆ
ಜನಸಾಮಾನ್ಯರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದ್ದು, ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಕುಸಿತ ಕಂಡು ಬಂದಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಹೂಡಿಕೆದಾರರ ಪ್ರಾಫಿಟ್ ಬುಕ್ಕಿಂಗ್ ಪ್ರಕ್ರಿಯೆಯಿಂದ ಬೆಲೆ ಇಳಿಕೆ ಕಾಣುತ್ತಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಕಡಿಮೆ ಆದ ಕಾರಣ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ಕೊಲ್ಹಾರ : ಒಡೆದು ಹೋದ ಕಾಲುವೆ; ಬೆಳೆದ ಅಪಾರ ಬೆಳೆ ನಾಶ
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಫೆ. 25ರಂದು ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ
ಕಾರ್ಕಳ: ಫೆಬ್ರವರಿ 25ರಂದು ಕಾರ್ಕಳದ ಕುಕ್ಕುಂದೂರು ಕಿಸಾನ್ ಸಭಾಂಗಣದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ನ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆಗೆ ಗ್ಯಾರಂಟಿ ಯೋಜನೆಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು. ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗಾಗಿ ಕಿಸಾನ್ ಸಭಾ ಶಾಲೆಯನ್ನು ಅಂದಿನ ದಿನಗಳಲ್ಲಿ ಸ್ಥಾಪಿಸಲಾಗಿತ್ತು. ಜೊತೆಗೆ ರೈತರ ಪರವಾಗಿ ಕಾರ್ಕಳದ ಮೂಲೆಮೂಲೆಗಳಲ್ಲಿ ಹೋರಾಟ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಾಪನೆಯಾದ ಕಿಸಾನ್ ಸಭಾ ಸಭಾಂಗಣವು ಇದೀಗ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಹೇಳಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಜನಪರ ಯೋಜನೆಗಳ ಮೂಲಕ ಜನಮನ ಗೆದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಚಾರವಾಗಿದೆ. ಮಾನ್ಯ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪೀನಾಥ್ ಭಟ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಬ್ಲಾಕ್ ಉಪಾಧ್ಯಕ್ಷರಾದ ಜಾರ್ಜ್ ಕ್ಯಾಸ್ತಲಿನೊ, ಅಬ್ದುಲ್ ಸಾಣೂರು, ಅಜಿತ್ ಹೆಗ್ಡೆ ಮಾಳ, ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ಮಲಿಕ್ ಅತ್ತೂರು, ಸಿರಿಯಣ್ಣ ಶೆಟ್ಟಿ, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಸ್ವಾಗತಿಸಿ, ಶೇಖ್ ಶಬೀರ್ ಮಿಯ್ಯಾರು ಧನ್ಯವಾದ ಸಲ್ಲಿಸಿದರು.
ಬೆಳ್ತಂಗಡಿ ಅಪಹರಣ ಯತ್ನ ಪ್ರಕರಣಕ್ಕೆ ತಿರುವು: ಸ್ವಯಂ ಕೈ ಕುಯ್ದುಕೊಂಡು ಕತೆ ಕಟ್ಟಿದ ಕಾಲೇಜು ವಿದ್ಯಾರ್ಥಿನಿ?
ಬೆಳ್ತಂಗಡಿ : ಬೆಳ್ತಂಗಡಯಲ್ಲಿ ಸೋಮವಾರ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಅಪಹರಿಸಲು ಯತ್ನಿಸಿದ ಪ್ರಕರಣ ತಿರುವು ಪಡೆದಿದ್ದು, ಇಡೀ ಪ್ರಕರಣವೇ ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸೋಮವಾರ ದಿನವಿಡೀ ಕಾರ್ಯಾಚರಣೆ ನಡೆಸಿದರೂ ವಿದ್ಯಾರ್ಥಿನಿ ಹೇಳಿದಂತಹ ಯಾವುದೇ ಓಮ್ನಿ ಕಾರು ಪರಿಸರದಲ್ಲಿ ಓಡಾಡಿರುವುದು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಲಕಂಷ ತನಿಖೆ ನಡೆಸಿದಾಗ ಅಪಹರಣ ಯತ್ನ, ಚೂರಿ ಇರಿತದಂತಹ ಯಾವುದೇ ಘಟನೆ ನಡೆದಿಲ್ಲ. ಅದು ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿದಬಂದಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ತಾನೇ ಬ್ಲೇಡ್ ನಿಂದ ಕೈಗೆ ಇರಿದು ಅಪಹರಣದ ನಾಟಕವಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಒಟ್ಟು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಮಾನವತೆಗೆ ಒತ್ತುಕೊಟ್ಟು ಬೆಳೆದ ಮಕ್ಕಳು ಸಮಾಜಕ್ಕೆ ವರ: ಜ್ಯೋತಿ ಗುರುಪ್ರಸಾದ್
ಕಾರ್ಕಳ: ಚಿತ್ರಕಲೆ ಬೆಳೆಸುವ ಸೃಜನಶೀಲ ಶಕ್ತಿ ನೋವನ್ನು ನಲಿವನ್ನಾಗಿ ಪರಿವರ್ತಿಸಲು ಕಲಿಸುತ್ತದೆ. ಇಂದು ಚಿತ್ರ ಬರೆಯಲು ಕುಳಿತಿರುವ ಮಕ್ಕಳ ಭವಿಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಉಜ್ವಲವಾಗಲಿ. ಪೋಷಕರು ಮಕ್ಕಳಲ್ಲಿ ಸಹಜವಾಗಿ ಅರಳುವ ಪ್ರತಿಭೆಯನ್ನು ಪೋಷಿಸಿ, ಹೃದಯವಂತಿಕೆ ಮತ್ತು ಮಾನವತೆಗೆ ಒತ್ತುಕೊಟ್ಟು ಬೆಳೆಸಿದಾಗ ಮಾತ್ರ ಅವರು ಸಮಾಜಕ್ಕೂ ಮಾನವಕುಲಕ್ಕೂ ವರವಾಗಿ ಪರಿಣಮಿಸುತ್ತಾರೆ ಎಂದು ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಹೇಳಿದರು. ಅವರು ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಪೆರ್ವಾಜೆ ಸಭಾಂಗಣದಲ್ಲಿ ಕಾರ್ಕಳ ಟೈಗರ್ಸ್, ಹೊಸಸಂಜೆ ಬಳಗ, ಜೆಸಿಐ ಕಾರ್ಕಳ ಹಾಗೂ ಮಾನಸ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೂರ್ಣಪ್ರಜ್ಞ ಸ್ಮರಣಾರ್ಥ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಕಾರ್ತಿಕ್ ರಾವ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಜೆಸಿಐ ಅಧ್ಯಕ್ಷ ಅವಿನಾಶ್ ಶೆಟ್ಟಿ, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ದುರ್ಗದ ಕೃಷಿಕ ದಿನೇಶ್ ಗೋರೆ, ಪೆರ್ವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು, ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರಾಯ ನಾಯಕ್, ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ ಇಂದಿರಾ ಪಿ. ನಾಯಕ್, ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ಐವರು ವಿದ್ಯಾರ್ಥಿಗಳು ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಛಾಯಾಗ್ರಾಹಕ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿದರು. ಧಾರಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ರಮ್ಯಾ ಪೂಜಾರಿ ವಂದಿಸಿದರು.
ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ
ಕಾರ್ಕಳ: ಹಿಂದೂ ಸಮಾಜದ ಭದ್ರ ಬುನಾದಿ ಎಂದರೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹಾಗೂ ಕೂಡು ಕುಟುಂಬ ವ್ಯವಸ್ಥೆಯೇ ಅತ್ಯಂತ ಪ್ರಾಮುಖ್ಯವಾಗಿವೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಇಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಹಾಗೂ ಗುರುಕುಲ ಮಾದರಿಯ ಶಿಕ್ಷಣ ಸಂಪೂರ್ಣವಾಗಿ ನಶಿಸಿಹೋಗಿದೆ. ಕೂಡು ಕುಟುಂಬ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಇದರಿಂದ ಸದಸ್ಯರೆಲ್ಲರೂ ಪರಸ್ಪರ ಬೆರತು ಸಾಮಾಜಿಕವಾಗಿ ಸಮರ್ಥರಾಗುತ್ತಿದ್ದರು. ಆದರೆ ಇಂದು ಅಣ್ಣ-ತಮ್ಮಂದಿರು, ಗಂಡ-ಹೆಂಡತಿಯರೂ ಕೂಡ ಒಟ್ಟಿಗೆ ಇರದ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕಿನ್ನಿಗೋಳಿ ‘ಯುಗಪುರುಷ’ ಪತ್ರಿಕೆಯ ಸಂಪಾದಕ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಶಾಂತ್ ಕಾಮತ್ (ಕಾರ್ಕಳ), ಎಂಆರ್ಪಿಎಲ್–ಒಎನ್ಜಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸಾದ್ ಎನ್. ಅಂಚನ್, ಉದ್ಯಮಿ ಬೋಜ ಸುವರ್ಣ (ಸೂರತ್), ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಉದ್ಯಮಿ ಭಾಸ್ಕರ್ ಶೆಟ್ಟಿ ಸಂಕಲಕರಿ ಹಾಗೂ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು. ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಯ ಕಲಾವಿದರು, ಉಡುಪಿ ಇವರಿಂದ “ಚಿಟ್ಟೆ” ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಎಂಬಿಬಿಎಸ್ ಸೀಟುಗಳ ಹೆಚ್ಚಳದಿಂದ ಮಾತ್ರ ಏನಾದರೂ ಉಪಯೋಗ ಇದೆಯೆ?
ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಸರಕಾರ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 1,37,000ಕ್ಕೆ ಹೆಚ್ಚಿಸಿದೆ ಎಂದು ಜೋರಾಗಿ ಹೇಳುತ್ತದೆ. ಆದರೆ ಸಂಸದೀಯ ಸಮಿತಿ ಖಾಸಗಿ ವೈದ್ಯಕೀಯ ಶಿಕ್ಷಣದ ವೆಚ್ಚ ಒಂದು ಕೋಟಿ ರೂ.ಗೆ ಏರಿದೆ ಎಂದು ಹೇಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಮಂತ್ರಿಗಳು ತಮ್ಮ ಭಾಷಣಗಳಲ್ಲಿ ಎಷ್ಟು ಸರಕಾರಿ ಸೀಟುಗಳಿವೆ, ಎಷ್ಟು ಖಾಸಗಿ ಸೀಟುಗಳಿವೆ ಮತ್ತು ಆ ಸೀಟುಗಳಿಗೆ ಶುಲ್ಕ ಎಷ್ಟೆಷ್ಟು ಎಂದು ಪ್ರತ್ಯೇಕವಾಗಿ ಏಕೆ ಹೇಳುವುದಿಲ್ಲ? 18,000 ಪಿಜಿ ಸೀಟುಗಳು ಖಾಲಿಯಾಗಿ ಉಳಿದಿರುವುದು ಏಕೆ ಎಂದು ಸರಕಾರ ಹೇಳುವುದಿಲ್ಲ. ಕೋಟಿಗಟ್ಟಲೆ ಫೀಸು ಕೊಟ್ಟರೂ ಶಿಕ್ಷಣ ಕಳಪೆ ಮಟ್ಟದ್ದಾಗಿಯೇ ಉಳಿದಿದೆ. 68,000 ಪಿಜಿ ಸೀಟುಗಳು ಮತ್ತು 2,00,000ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ಇದ್ದಾರೆ. ಇದೆಲ್ಲದರ ನಡುವೆಯೂ ಸೀಟು ಹೆಚ್ಚಳದ ಘೋಷಣೆ ಮಾಡಲಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 818ಕ್ಕೆ ಏರಿದೆ ಎಂದು ಸರಕಾರ ಜೋರಾಗಿ ಘೋಷಿಸುತ್ತದೆ. ಆದರೆ ವೈದ್ಯಕೀಯ ವೆಚ್ಚಗಳು ವಿಶ್ವದಲ್ಲೇ ಅತಿ ಹೆಚ್ಚು ಎಂಬುದರ ಬಗ್ಗೆ ಅದು ಹೇಳುವುದೇ ಇಲ್ಲ. ಆರೋಗ್ಯಕ್ಕಾಗಿ ಮಾಡುವ ಖರ್ಚು ಪ್ರತೀ ವರ್ಷ ಶೇ.15ರಷ್ಟು ಏರುತ್ತದೆ. ಪ್ರಸ್ತುತ, ಭಾರತ ಸರಕಾರ ಆರೋಗ್ಯದ ಮೇಲೆ ಜಿಡಿಪಿಯ ಶೇ.1ರಷ್ಟನ್ನೂ ಖರ್ಚು ಮಾಡುವುದಿಲ್ಲ. ಆದರೆ ಶೇ.2.5 ಗುರಿ ಮಾತ್ರ ಇದೆ. ಅದು ಸುಮ್ಮನೆ ಹೇಳಿಕೊಳ್ಳಲಿಕ್ಕೆ ಒಂದು ಗುರಿ ಮಾತ್ರ ಎನ್ನುವುದು ಸ್ಪಷ್ಟವಾಗುತ್ತಿದೆ. ವರದಿಗಳ ಪ್ರಕಾರ, ಆಸ್ಪತ್ರೆ ವೆಚ್ಚಗಳಿಂದಾಗಿಯೇ ಭಾರತೀಯರು ಈ ವರ್ಷ ಇನ್ನಷ್ಟು ಬಡವರಾಗುವ ಸಾಧ್ಯತೆ ಇದೆ. ಹೀಗೆಲ್ಲ ಇರುವಾಗ, ಬಜೆಟ್ನಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಕೋಟಿ ಕೋಟಿ ಲೆಕ್ಕದಲ್ಲಿ ಕಡಿತ ಮಾಡಲಾಗುತ್ತಿದೆ. ಇನ್ನೊಂದೆಡೆ, ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕಕರೇ ಇಲ್ಲ. ಛತ್ತೀಸ್ಗಡದ 10 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 332 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ವ್ಯವಸ್ಥೆ ಕುಸಿದಿದೆ. 19 ಕಾಲೇಜುಗಳ ಪೈಕಿ 7ರಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕಲಿಸಲು ಸಾಕಷ್ಟು ಶಿಕ್ಷಕರಿದ್ದಾರೆ. ಉಳಿದ 12 ಕಾಲೇಜುಗಳು ಶಿಕ್ಷಕರ ತೀವ್ರ ಕೊರತೆ ಎದುರಿಸುತ್ತಿವೆ. ಶಿವಪುರ ಮತ್ತು ಸಿಂಗೋಲಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿನ ಶೇ.90 ಹುದ್ದೆಗಳು ಖಾಲಿ ಇವೆ. ಸಾಗರ್-ಚಿಂದ್ವಾರ ವೈದ್ಯಕೀಯ ಕಾಲೇಜುಗಳಲ್ಲಿ ಶೇ.50 ಹುದ್ದೆಗಳು ಖಾಲಿ ಇವೆ. ಇದು ಈ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳ ದಾರುಣ ಸ್ಥಿತಿಯಾಗಿದೆ. ಪ್ರಾಧ್ಯಾಪಕರಿಲ್ಲದೆ, ಸಹಾಯಕ ಪ್ರಾಧ್ಯಾಪಕರಿಲ್ಲದೆ, ಬರೀ ಕಾಲೇಜುಗಳನ್ನು ನಿರ್ಮಿಸಲು ಬಯಸಿದರೆ ಏನಾಗುತ್ತದೆ? ಎಂಬಿಬಿಎಸ್ ಸೀಟುಗಳ ಸಂಖ್ಯೆ ಲಕ್ಷಾಂತರಕ್ಕೆ ಹೆಚ್ಚಾಗುತ್ತದೆ. ಇದನ್ನು ತನ್ನ ಸಾಧನೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತದೆ. ಇದರಿಂದ ಏನಾದರೂ ಉಪಯೋಗ ಇದೆಯೆ? ಅದೇ ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗ ಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಈಗ ಬೋಧನಾ ಅನುಭವವಿಲ್ಲದ ವೈದ್ಯರನ್ನು ಸಹ ಅಸೋಸಿಯೇಟ್ ಪ್ರೊಫೆಸರ್ಗಳನ್ನಾಗಿ ಮಾಡಲು ಅವಕಾಶ ನೀಡಲಾಗಿದೆ. ಯಾರಾದರೂ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ಅವರನ್ನು ಹಿರಿಯ ರೆಸಿಡೆನ್ಸಿ ಇಲ್ಲದೆ ಸಹಾಯಕ ಪ್ರಾಧ್ಯಾಪಕರನ್ನಾಗಿ ಮಾಡಬಹುದು. ಪರಿಸ್ಥಿತಿ ಹೀಗಾದರೆ, ಇದು ಎಲ್ಲಿಗೆ ಮುಟ್ಟಬಹುದು ಎಂಬುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್ಎಐಎಂಎ) 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು.ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ 2,000 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಿಂದ ಬಂದವರು. ಕೇವಲ ಶೇ.71 ವಿದ್ಯಾರ್ಥಿಗಳು ಮಾತ್ರ ರೋಗಿಗಳನ್ನು ನೋಡಲು ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ.ಕೇವಲ ಶೇ.54 ವಿದ್ಯಾರ್ಥಿಗಳು ಮಾತ್ರ ತರಗತಿಗಳು ನಿಯಮಿತವಾಗಿ ನಡೆಯುತ್ತಿವೆ ಮತ್ತು ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಅರ್ಧದಷ್ಟು ವಿದ್ಯಾರ್ಥಿಗಳು ತಮ್ಮ ಸ್ಟೈಪೆಂಡ್ ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲಿಲ್ಲ. ಶೇ.55 ಜನರು ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದ್ದಾರೆ. ಶೇ.74 ಜನರು ತಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡರು. ಆರೋಗ್ಯ ಸಚಿವರು ಇದನ್ನು ಏಕೆ ಪರಿಹರಿಸುವುದಿಲ್ಲ? ಪ್ರಧಾನಿ ಏಕೆ ಇದನ್ನು ಗಮನಿಸುವುದಿಲ್ಲ? ವೈದ್ಯರಿಗೆ ಅವರ ಸ್ಟೈಪೆಂಡ್ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ಏನು ಮಾಡುತ್ತಿದ್ದಾರೆ? ಇದು ವೈದ್ಯಕೀಯ ಶಿಕ್ಷಣದ ಸ್ಥಿತಿ. ಪ್ರವೇಶ ನೀಡುವ ಮೂಲಕ ಪೋಷಕರು ಮತ್ತು ಮಕ್ಕಳನ್ನು ಸಮಾಧಾನಪಡಿಸಲು ಶಿಕ್ಷಕರಿಲ್ಲದೆ ಕಾಲೇಜುಗಳನ್ನು ತೆರೆಯಲಾಗುತ್ತಿದೆ. 12 ವರ್ಷಗಳಲ್ಲಿ, ದೇಶದಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 157 ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಲಾಗಿದೆ. ಆದರೆ ಇವುಗಳಲ್ಲಿ ಕೇವಲ 137 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸರಕಾರ ವೈದ್ಯಕೀಯ ಕಾಲೇಜುಗಳ ಲೆಕ್ಕ ಕೊಡುವಾಗ 323 ದಂತ ಮತ್ತು 942 ಆಯುಷ್ ಸಂಸ್ಥೆಗಳನ್ನು ಸರಿಸಿ, ಕಾಲೇಜುಗಳ ಸಂಖ್ಯೆ 2,045 ಎಂದು ಹೇಳುತ್ತಿದೆ. ಸಂಖ್ಯೆ ದೊಡ್ಡದಾಗಿ ಕಾಣುವಂತೆ ಮಾಡಲು, ಆಯುಷ್ ಸಂಸ್ಥೆಗಳ ಹೆಸರುಗಳನ್ನು ಸಹ ಸೇರಿಸಲಾಗಿದೆ.ಸರಕಾರಿ ಆಸ್ಪತ್ರೆಗೆ ಕೆಲ ಉಪಕರಣಗಳು, ಕೆಲ ಪೀಠೋಪಕರಣಗಳು ಮತ್ತು ಕೆಲ ಕೊಠಡಿಗಳನ್ನು ಸೇರಿಸಿ, ಅದನ್ನು ವೈದ್ಯಕೀಯ ಕಾಲೇಜು ಎನ್ನಲಾಗುತ್ತಿದೆ. ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಈಗಿರುವ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಕಳೆದ ಎಪ್ರಿಲ್ನಲ್ಲಿ ಸಂಸತ್ತಿನಲ್ಲಿ ಹೇಳಲಾಯಿತು. ಈ ಯೋಜನೆಯಡಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಪ್ರತೀ ಸೀಟಿಗೆ 1.2 ಕೋಟಿ ವೆಚ್ಚದ ಮಿತಿಯೊಂದಿಗೆ ಸೌಲಭ್ಯ ನೀಡಲಾಗುತ್ತದೆ. ದೊಡ್ಡ ಘೋಷಣೆಗಳನ್ನು ಮಾಡಲಾಗುತ್ತಿದೆ, ಆದರೆ ಯಾವುದೇ ಕೆಲಸ ಆಗುತ್ತಿಲ್ಲ. ದರ್ಭಾಂಗಾ ಏಮ್ಸ್ ಅನ್ನು 10 ವರ್ಷಗಳ ಹಿಂದೆ ಘೋಷಿಸಲಾಯಿತು. ಅದರ ಮುಖ್ಯ ದ್ವಾರವನ್ನು ಮಾತ್ರ ನಿರ್ಮಿಸಲಾಗಿದೆ. ಸರಕಾರ ಆರೋಗ್ಯಕ್ಕಾಗಿ ಜಿಡಿಪಿಯ ಶೇ. 2ನ್ನು ಸಹ ಖರ್ಚು ಮಾಡದಿದ್ದರೆ ಇದಾವುದೂ ಆಗುವುದಿಲ್ಲ. ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಿಸಲು ಈ ಸರಕಾರಕ್ಕೆ 11 ವರ್ಷಗಳು ಬೇಕಾದವು. 11 ವರ್ಷಗಳಲ್ಲಿ, 66,842 ಸೀಟುಗಳನ್ನು ಸೇರಿಸಲಾಗಿದೆ. ಆದರೆ, ಇವುಗಳಲ್ಲಿ ಎಷ್ಟು ಖಾಸಗಿ ಸೀಟುಗಳು ಎಂಬುದು ತಿಳಿಯುವುದಿಲ್ಲ. ಇವುಗಳಿಗೆ ಕೋಟ್ಯಂತರ ರೂ. ಶುಲ್ಕ ಇರುತ್ತದೆ. ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ, ಭಾರತದಲ್ಲಿ 10 ಲಕ್ಷ ಜನರಿಗೆ ಸರಾಸರಿ 75 ಎಂಬಬಿಎಸ್ ಸೀಟುಗಳಿವೆ. ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಈ ಸಂಖ್ಯೆ 150ಕ್ಕಿಂತ ಹೆಚ್ಚು. ಆದರೆ ಬಿಹಾರಕ್ಕೆ ಬಂದರೆ, 10 ಲಕ್ಷ ಜನರಿಗೆ ಕೇವಲ 21 ಸೀಟುಗಳಿವೆ. ಅದೇ ಬಿಹಾರದಲ್ಲಿ ಒಬ್ಬ ವ್ಯಕ್ತಿ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಅಧ್ಯಾಪಕರ ವೇತನ ಖಾಸಗಿ ಆಸ್ಪತ್ರೆಗಳಿಗಿಂತ ಶೇ. 30ರಿಂದ 50ರಷ್ಟು ಕಡಿಮೆ ಎಂದು ನೀತಿ ಆಯೋಗ ಅಂದಾಜಿಸಿದೆ. ವೈದ್ಯರು ಕಡಿಮೆ ವೇತನದ ಕಾರಣಕ್ಕೆ ತಮ್ಮ ಕೆಲಸ ಬಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇದು ವರ್ಷಗಳಿಂದಲೂ ನಡೆಯುತ್ತಿದೆ. ಸಾವಿರಾರು ಕೋಟಿ ರೂ.ಗಳ ಹಗರಣಗಳು ನಡೆಯುತ್ತಲೇ ಇವೆ.ವೈದ್ಯರಿಗೆ ಉತ್ತಮ ಸಂಬಳ ನೀಡುವ ಬಗ್ಗೆ ಮಾತ್ರ ಸರಕಾರ ತಲೆಬಿಸಿ ಮಾಡಿಕೊಳ್ಳುತ್ತಲೇ ಇಲ್ಲ. ಹೀಗಿರುವಾಗ, ಬರೀ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎನ್ನುವುದರಿಂದ ಏನು ಉಪಯೋಗ? ವೈದ್ಯರ ಸಂಖ್ಯೆ ಕಡಿಮೆಯಿದೆ ಎನ್ನುವುದು ಮಾತ್ರವಲ್ಲ, ಶಿಕ್ಷಣದ ಗುಣಮಟ್ಟ ಕೂಡ ಕಳಪೆ. ನೂರಾರು ರೋಗಿಗಳನ್ನು ಆಕರ್ಷಿಸುವ ಅನೇಕ ಖಾಸಗಿ ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. ಈ ನಿರ್ವಹಣಾ ವಿಧಾನ ಮತ್ತು ಅನುಭವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಏಕೆ ಸೀಮಿತವಾಗಿದೆ? ಇದರ ಆಧಾರದ ಮೇಲೆ, ಸರಕಾರಿ ಆಸ್ಪತ್ರೆ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಇಲ್ಲಿನ ವ್ಯವಸ್ಥೆಯಿಂದ ಬೇಸತ್ತ ಜನರು ಮತ್ತೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಅವರ ದುಡಿಮೆಯೆಲ್ಲ ಅಲ್ಲಿಯೇ ಖರ್ಚಾಗುತ್ತದೆ. ಸರಕಾರಿ ಆಸ್ಪತ್ರೆಗಳನ್ನು ಇನ್ನೂ ಉದ್ದೇಶಪೂರ್ವಕವಾಗಿ ಕಳಪೆ ಸ್ಥಿತಿಯಲ್ಲಿ ಇರಿಸಲಾಗಿದೆಯೇ? ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೂ, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಅನೇಕ ವೈದ್ಯರಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶ ಬಿಟ್ಟುಕೊಡುತ್ತಾರೆ. ಹಾಳಾಗುತ್ತಿರುವ ಅದೇ ಸರಕಾರಿ ಆಸ್ಪತ್ರೆಗಳಲ್ಲಿ, ಸರಕಾರಕ್ಕಾಗಿ ಅಲ್ಲ, ಜನರಿಗಾಗಿ ಕೆಲಸ ಮಾಡುವ ಅದ್ಭುತ ವೈದ್ಯರೂ ಇದ್ದಾರೆ. ಅವರು ಬಡವರ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾದರೆ, ಸರಕಾರ ಅಂಥ ವೈದ್ಯರಿಗೆ ಉತ್ತಮ ವಾತಾವರಣ ಒದಗಿಸಲು ಏಕೆ ಯತ್ನಿಸುತ್ತಿಲ್ಲ? ವೈದ್ಯಕೀಯ ಸಂಶೋಧನೆಯೂ ಕೆಟ್ಟ ಸ್ಥಿತಿಯಲ್ಲಿದೆ. ಅಮೆರಿಕ ತನ್ನ ಜಿಡಿಪಿಯ ಶೇ.0.65 ಅನ್ನು ಆರೋಗ್ಯ ರಕ್ಷಣೆ ಸಂಶೋಧನೆಗೆ ಖರ್ಚು ಮಾಡುತ್ತದೆ. ಬ್ರಿಟನ್ ಶೇ.0.44 ಅನ್ನು ಖರ್ಚು ಮಾಡುತ್ತದೆ. ಆದರೆ ಭಾರತ ತನ್ನ ಜಿಡಿಪಿಯ ಶೇ.0.02ರಷ್ಟನ್ನು ಮಾತ್ರ ವೈದ್ಯಕೀಯ ಸಂಶೋಧನೆಗೆ ಖರ್ಚು ಮಾಡುತ್ತಿದೆ. ವೈದ್ಯಕೀಯ ಕಾಲೇಜುಗಳು ಮತ್ತು ಶಿಕ್ಷಣದ ಮಹತ್ವವನ್ನು ಸರಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಕ್ಯಾನ್ಸರ್ ವೆಚ್ಚ ಎಷ್ಟು ಹೆಚ್ಚಾಗಿದೆ? ಲ್ಯಾನ್ಸೆಟ್ ವರದಿ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಹೊರೆ ಹೆಚ್ಚುತ್ತಿದೆ ಮತ್ತು ರೋಗಿಗಳ ಮೇಲಿನ ಆರ್ಥಿಕ ಹೊರೆಯೂ ಹೆಚ್ಚುತ್ತಿದೆ. ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ರೋಗಿ ಪ್ರತೀ ಖಾಸಗಿ ಆಸ್ಪತ್ರೆಗೆ 39,000ರಿಂದ 93,000 ರೂಪಾಯಿಗಳವರೆಗೆ ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ 74,000 ಜನರು ಕ್ಯಾನ್ಸರ್ನಿಂದ ಸಾಯುತ್ತಾರೆ. ಭಾರತದಲ್ಲಿ ಸರಾಸರಿ ಮಾಸಿಕ ವೇತನ 12,000 ರೂಪಾಯಿ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದೇ ಸಲಕ್ಕೆ 40,000 ರೂ. ಪಾವತಿಸಬೇಕಾದರೆ, ಚಿಕಿತ್ಸೆ ಹೇಗೆ ಕೊಡಿಸಬಹುದು? ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.ಆದರೂ, ಈ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಚರ್ಚೆಯೆಲ್ಲವೂ ಹಿಂದೂ ರಾಷ್ಟ್ರದ ಕಲ್ಪನೆಗೆ ಸೀಮಿತವಾಗಿರುವಾಗ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಯಾರಿಗೆ ಬೇಕಾಗಿದೆ?
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ತುಂಬಲಿದೆ ಆರು ವರ್ಷ: ಸುದೀರ್ಘ ಅವಧಿಯಲ್ಲಿ ಮಾಡಿರುವ ಸಾಧನೆಗಳೇನು
ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ಆರು ವರ್ಷ ತುಂಬಲಿದೆ. ಕಳೆದ ಆರು ವರ್ಷಗಳಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದು ಹಾಗೂ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳು ಇವೆ. ಈ ಹಿಂದೆ ಅವರ ಕುರಿತಾಗಿ ಕಾಂಗ್ರೆಸ್ ನಾಯಕರಿಬ್ಬರು ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಏನೆಲ್ಲಾ ಗಮನ ಸೆಳೆಯುವ ಕೆಲಸಗಳನ್ನು ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
PANಗೆ ಹೊಸ ನಿಯಮ : ಪ್ರಸ್ತಾವಿತ ಆದಾಯ ತೆರಿಗೆ ನಿಯಮ - 2026ರ ಪ್ರಕಾರ, ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ಹಣವನ್ನು ಬ್ಯಾಂಕ್’ಗೆ ಕಟ್ಟಬಹುದು, ಎಷ್ಟು ವಿದ್’ಡ್ರಾ ಮಾಡಿಕೊಳ್ಳಬಹುದು ಮುಂತಾದ ನಿಯಮಗಳು, ಏಪ್ರಿಲ್ ಒಂದರಿಂದ ಬದಲಾಗುವ ಸಾಧ್ಯತೆಯಿದೆ. ಈ ಸಂಬಂಧ, ಕರಡು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸದ್ಯ, ಐವತ್ತು ಸಾವಿರದ ಲಿಮಿಟ್ ಇದಕ್ಕೆ ಇದೆ.
WPL RCB 2026: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಹಿನ್ನೆಲೆ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದವು. ಇದರ ನಡುವೆಯೇ ಇದೀಗ ಈ ಜಯಕ್ಕೆ ಧಾರ್ಮಿಕ ಅರ್ಥ ನೀಡಿರುವುದು ವಿವಾದ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ
ಕರಾವಳಿ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿಯಲ್ಲಿ ಪೊಲೀಸರು ಆದೆಷ್ಟೇ ಪ್ರಯತ್ನ ಮಾಡಿದಾಗ್ಯೂ, ಡ್ರಗ್ಸ್ ಜಾಲ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಇತ್ತೀಚೆಗೆ ಕಾಲೇಜುಗಳಲ್ಲಿ ಕ್ಯೂಆರ್ ಅಳವಡಿಕೆ ಎಂಬ ವಿನೂತನ ಪ್ರಯೋಗ ಮಾಡಿದ್ದರು. ಸದ್ಯ ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊಕಿದ್ದು, ಇದರ ವ್ಯಾಪ್ತಿಯನ್ನು ಸಾರ್ವಜನಿಕ ಸ್ಥಳಗಳು ಸೇರಿದಂತೆ ಮನೆ ಮನೆಗೂ ತಲುಪಿಸು ಕಾರ್ಯಕ್ಕೆ ಮಂಗಳೂರು ಪೊಲೀಸರು ಮುಂದಾಗಿದ್ದು, ಜಿಲ್ಲೆಯೆಲ್ಲೆಡೆ ಬರೋಬ್ಬರಿ ಸಾವಿರ ಕ್ಯೂಆರ್ ಅಳವಡಿಕೆಗೆ ಸಜ್ಜಾಗಿದ್ದು, ಮಾದಕ ಜಾಲದ ಬೆನ್ನು ಮೂಳೆ ಮುರಿಯಲು ಪಣತೊಟ್ಟಿದೆ. ಏನಿದು ಡ್ರಗ್ಸ್ ತಡೆಗೆ ಕ್ಯೂಆರ್ ಅಳವಡಿಕೆ ಅಭಿಯಾನ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಮಾಹಿತಿ ಇಲ್ಲಿದೆ..
ಸಂಪಾದಕೀಯ | ಕುಸಿಯುತ್ತಿರುವ ಅಂತರ್ಜಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸದನದಲ್ಲಿ ಗದ್ದಲ ಉಂಟು ಮಾಡಿದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಿ: ಲೋಕಸಭಾ ಸ್ಪೀಕರ್ಗೆ ಬಿಜೆಪಿ ಸಂಸದೆಯರಿಂದ ಪತ್ರ
ಹೊಸದಿಲ್ಲಿ: ಸಂಸತ್ತಿನಲ್ಲಿ ಫೆಬ್ರವರಿ 4ರ ಗದ್ದಲಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅವರ ಮೇಜಿನ ಮೇಲೆ ಹತ್ತುವುದು, ಕಾಗದಪತ್ರಗಳನ್ನು ಹರಿದು ಸ್ಪೀಕರ್ ಕಡೆಗೆ ಎಸೆಯುವುದು, ಪ್ರಧಾನಿಯವರ ಆಸನಕ್ಕೆ ಮುತ್ತಿಗೆ ಹಾಕುವಂತಹ ಹೇಯ ಕೃತ್ಯಗಳನ್ನು ಎಸಗಿರುವ ವಿರೋಧ ಪಕ್ಷದ ಸಂಸದರ ವಿರುದ್ಧ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ. ಫೆಬ್ರವರಿ 4ರಂದು ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಲೋಕಸಭೆಯ ಘನತೆ ಮತ್ತು ಪಾವಿತ್ರ್ಯವನ್ನು ಎತ್ತಿಹಿಡಿದ ಮತ್ತು ರಕ್ಷಿಸಿದ ನಿಮ್ಮ ಅನುಕರಣೀಯ ವಿಧಾನಕ್ಕೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಲೋಕಸಭೆಯಲ್ಲಿ ನಡೆದ ಆತಂಕಕಾರಿ ಘಟನೆಗಳು ಎಲ್ಲರನ್ನೂ ತೀವ್ರವಾಗಿ ಕಳವಳಗೊಳಿಸಿವೆ. ಏಕೆಂದರೆ ಈ ಪರಿಸ್ಥಿತಿ ಗಂಭೀರ ಮತ್ತು ಅಹಿತಕರ ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆ ಇತ್ತು. ಆ ದಿನ, ಇಡೀ ಸದನ ಮತ್ತು ಇಡೀ ರಾಷ್ಟ್ರವು ಲೋಕಸಭೆಯಲ್ಲಿ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗೆ ಸಾಕ್ಷಿಯಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದನಕ್ಕೆ ಪ್ರಧಾನಿ ಗೈರು ಹಾಜರಾಗಿರುವ ವಿಚಾರವಾಗಿ ಸ್ಪೀಕರ್ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವುದನ್ನು ಇದಕ್ಕೂ ಮೊದಲು ಕಾಂಗ್ರೆಸ್ ಸಂಸದೆಯರು ಖಂಡಿಸಿದ್ದರು.
Karnataka Weather: ರಾಜ್ಯದ ಒಳನಾಡಿನೆಲ್ಲಡೆ ಕವಿದ ಇಬ್ಬನಿ, ತಾಪಮಾನ ಹೆಚ್ಚಳದ ಮುನ್ಸೂಚನೆ, ಅಲರ್ಟ್
ಬೆಂಗಳೂರು: ಕರ್ನಾಟಕದಾದ್ಯಂತ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ರಾಜ್ಯದ ಉತ್ತರ ಒಳನಾಡಿನೆಲ್ಲಡೆ ಇಂದು ಮಂಗಳವಾರ ಇಬ್ಬನಿ ಕವಿದಿದ್ದು ಕಂಡು ಬಂತು. ಇದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆಯ ಮುನ್ಸೂಚನೆಯಾಗಿದೆ. ವಾಡಿಕೆಯಂತೆ ಶಿವರಾತ್ರಿ ಸಮೀಪಿಸುತ್ತಿದ್ದಂತೆ ಒಣಹವೆ ಪ್ರಮಾಣ ಏರಿಕೆ ಆಗುತ್ತದೆ. ಇದೇ ತಿಂಗಳಾಂತ್ಯಕ್ಕೆ ಬಿಸಿಲಿನ ಅಬ್ಬರ
ರಾಜ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿನ ಅಪಘಾತ ವಲಯಗಳನ್ನು ಪತ್ತೆ ಹಚ್ಚಲು ವಾಕರಸಾ ಸಂಸ್ಥೆ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಈ ಭಾಗದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನೊಳಗೊಂಡಂತೆ ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಬರೋಬ್ಬರಿ 150 ಆ್ಯಕ್ಸಿಡೆಂಟ್ ಝೋನ್ ಗಳು ಪತ್ತೆಯಾಗಿದೆ. ಸದ್ಯ ಈ ಕುರಿತ ಜಿಲ್ಲಾವಾರು ಪಟ್ಟಿಯನ್ನು ಪಿಡಬ್ಲ್ಯುಡಿ ಸಚಿವ ಸಚಿವ ಸತೀಶ ಜಾರಕಿಹೊಳಿ ನೀಡಿದ್ದು, ಅಪಘಾತ ವಲಯದಲ್ಲಿ ನ್ಯೂನ್ಯತೆಗಳಿಂದಾಗಿ ಈ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ಸರಿಪಡಿಸುವಂತೆ ಮನವಿಮಾಡಿದ್ದಾರೆ. ಯಾವ ಜಿಲ್ಲೆಯಲ್ಲಿ ಎಷ್ಟು ಅಪಘಾತ ವಲಯಗಳಿವೆ ಎಂಬ ಕುರಿತ ವರದಿ ಇಲ್ಲಿದೆ.
SIR ಪ್ರಕ್ರಿಯೆಗೆ ಅಡ್ಡಿ ಸಲ್ಲದು - ರಾಜ್ಯಗಳಿಗೆ ಸುಪ್ರೀಂಕೋರ್ಟ್ ವಾರ್ನಿಂಗ್ : ದೀದಿಗೆ ಹಿನ್ನಡೆ, EC ಮೇಲುಗೈ?
Supreme Court warning to All States : ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದು ಎಲ್ಲಾ ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೇಸ್ ವಿಚಾರಣೆ ಸಂಬಂಧ, ಸುಪ್ರೀಂ, ಇದೇ ಮಾತನ್ನು ಅವರಿಗೂ ಹೇಳಿದೆ.
ಕನ್ನಡತಿ ಶ್ರೇಯಾಂಕಾ ಪಾಟೀಲ್, ಇಶನ್ ಕಿಶನ್, ಮೊಹಮ್ಮದ್ ಶಮಿ ಸೇರಿ ಹಲವರಿಗೆ ಯಾವುದೇ ಗ್ರೇಡ್ ನೀಡದ ಬಿಸಿಸಿಐ
BCCI: ಬಿಸಿಸಿಐ ಕೆಂದ್ರ ಒಪ್ಪಂದದ ಪಟ್ಟಿಯಿಂದ ಮಹಿಳಾ ಕ್ರಿಕೆಟ್ನ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸೇರಿ ಹಲವರನ್ನು ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ಸ್ಟಾರ್ ಆಟಗಾರರಾದ ಇಶಾನ್ ಕಿಶನ್, ಮಹಮದ್ ಶಮಿ ಸೇರಿದಂತೆ ಹಲವರನ್ನು ಎಲ್ಲಾ ಗ್ರೇಡ್ನಿಂದ ಕೈಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೇಂದ್ರ ಒಪ್ಪಂದ
Bharat Taxi: ರಾಜ್ಯದಲ್ಲಿ ವಾಹನ್-4 ಮೂಲಕ 'ಭಾರತ್ ಟ್ಯಾಕ್ಸಿ' ಜಾರಿಗೆ ಆಗ್ರಹ: ರಾಮಲಿಂಗಾ ರೆಡ್ಡಿ ಭರವಸೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆ 'ಭಾರತ್ ಟ್ಯಾಕ್ಸಿ' ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ. ಕರ್ನಾಟಕ
ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗ ದೇಶದ ಎಲ್ಲ ಹೆಂಗಳೆಯರಿಗೂ ಒಂದು ಧೈರ್ಯ. ಧರಿಸಿರುವ ಆಭರಣ ಸಂಪತ್ತಿನಂತೆ, ಲಕ್ಷಾಂತರ ರೂ.ಗಳ ಸಂಗ್ರಹದಂತೆ ಅವರಿಗೆ ತೋರುತ್ತಿದೆ. ಮನೆ ಕಟ್ಟಲು, ಕಾರಿನ ಸಾಲ ತೀರಿಸಲು, ಇನ್ಯಾವುದೇ ಆಪತ್ಕಾಲದಲ್ಲಿಯೂ ಬಂಗಾರ ನೀಡುತ್ತಿರುವ ಧೈರ್ಯ ಅಪಾರ. ನಮ್ಮ ಸ್ತ್ರೀಯರು ಅವರಿಗೆ ಅರಿವಿಲ್ಲದೆ ಈಗ ಲಕ್ಷಾಧಿಪತಿಗಳು! ಭಾರತದ ಮನೆಮನೆಗಳ ಕಪಾಟು ಮತ್ತು ಲಾಕರ್ಗಳಲ್ಲಿ 34,600 ಟನ್ ಬಂಗಾರ ಅಡಗಿದೆಯೆಂದರೆ ಅದೇನು ಕಡಿಮೆಯೇ? ಇದೆಲ್ಲ ಸಾಧ್ಯವಾಗಿದ್ದು ನಮ್ಮ ಅಮ್ಮ, ಮಡದಿ, ಅಕ್ಕತಂಗಿಯರಿಂದ..
ನೆಟ್ಲಮುಡ್ನೂರು : ಉಮ್ರಾ ಯಾತ್ರಿ ಇಬ್ರಾಹಿಂ ನಿಧನ
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಇಬ್ರಾಹಿಂ (65) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ಮಕ್ಕಾದಲ್ಲಿ ಮೃತಪಟ್ಟರು. ಫೆ.01ರಂದು ಪತ್ನಿ ಹಾಗೂ ಕುಟುಂಬಿಕರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ ಅವರು ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ತುಸು ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಅನುದಾನ ಬಳಕೆ
ಬೆಂಗಳೂರು, ಫೆ.9: ಮೂರು ತಿಂಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಬರೋಬ್ಬರಿ 4.95 ಕೋಟಿ ರೂ. ವೆಚ್ಚವಾಗಿದೆ. ಆದರೆ ಈ ಅನುದಾನವನ್ನು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನವನ್ನು ಬಳಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದ ಕೋಟ್ಯಂತರ ರೂ. ಅನುದಾನವು ಕಾಗದದಲ್ಲಷ್ಟೇ ಉಳಿದಿದೆ. ಆದರೆ ಮುಖ್ಯಮಂತ್ರಿಯ ಸಮಾವೇಶಕ್ಕೆ ಇದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಈ ಬಗ್ಗೆ ಪ್ರತಿಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಕೊಪ್ಪಳದಲ್ಲಿ 2025ರ ಅಕ್ಟೋಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 4.95 ಕೋಟಿ ರೂ.ಯಷ್ಟು ವೆಚ್ಚವನ್ನು ಹಿಂದುಳಿದ ವರ್ಗ ಗಳಡಿಯಲ್ಲಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ ಅನುದಾನವನ್ನು ಖರ್ಚು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷಗಳಾದರೂ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಈ ಮಧ್ಯೆ ಕೊಪ್ಪಳದ ಕಾರ್ಯಕ್ರಮಕ್ಕೆ 4.95 ಕೋಟಿ ರೂ.ಯನ್ನು ವಿವಿಧ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ಬಿಡುಗಡೆಗೆ ಬಾಕಿ ಇರುವ ಮೊತ್ತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯು ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಸೂಚಿಸಿದೆ. 2026ರ ಫೆಬ್ರವರಿ 6ರಂದು ಆರ್ಥಿಕ ಇಲಾಖೆಯು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ. ಇದರ ಪ್ರತಿಯು he-file.inಗೆ ಲಭ್ಯವಾಗಿದೆ. ಬಳಕೆಯಾಗದ ‘ಗಂಗಾ ಕಲ್ಯಾಣ’ ಅನುದಾನ: ಬಹುತೇಕವಾಗಿ ಎಲ್ಲ ನಿಗಮಗಳಲ್ಲಿಯೂ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ನಿಗದಿಪಡಿಸಿದ ಅನುದಾನದಲ್ಲಿ ಹೆಚ್ಚು ಹಣ ಉಳಿದಿದೆ. ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿಯಂತೂ ಕೊಟ್ಟ ಅನುದಾನದಲ್ಲಿ ಒಂದು ರೂ. ಕೂಡ ಖರ್ಚಾಗಿಲ್ಲ. 2024-25ನೇ ಸಾಲಿನಲ್ಲಿ ಈ ಯೋಜನೆಗೆ 5.37 ಕೋಟಿ ರೂ. ನೀಡಲಾಗಿತ್ತು. ಅಷ್ಟೂ ಅನುದಾನ ಉಳಿಕೆಯಾಗಿತ್ತು. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ‘ಜೀಜಾವು ಜಲ ಭಾಗ್ಯ ಯೋಜನೆ’ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಾಗಿ ಅತ್ಯಂತ ಹೆಚ್ಚು ಅಂದರೆ 28.62 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ ಖರ್ಚಾಗಿದ್ದು ಮಾತ್ರ 11.25 ಲಕ್ಷ ರೂ. ಹೀಗಾಗಿ 28.50 ಕೋಟಿ ರೂ. ಅನುದಾನ ಹಾಗೆಯೇ ಉಳಿಕೆಯಾಗಿತ್ತು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 5.15 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2.59 ಕೋಟಿ ರೂ. ಮಾತ್ರ ಖರ್ಚಾಗಿದೆ. ಹೀಗಾಗಿ 2.55 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 2 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 45 ಲಕ್ಷ ರೂ. ಮಾತ್ರ ಖರ್ಚಾಗಿದ್ದು, 1.55 ಕೋಟಿ ರೂ. ಅನುದಾನ ಉಳಿಕೆಯಾಗಿತ್ತು. ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 7.54 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.18 ಕೋಟಿ ರೂ. ಖರ್ಚಾಗಿದೆ. 2.36 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಯನ್ನು 2024-25ನೇ ಸಾಲಿನಲ್ಲಿ ಜಾರಿಗೇ ತಂದಿರಲಿಲ್ಲ. ಹೀಗಾಗಿ ಅನುದಾನವನ್ನು ಕೂಡ ನಿಗದಿಪಡಿಸಿರಲಾಗಿರಲಿಲ್ಲ. ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ ಮಾತ್ರ ಈ ಯೋಜನೆಯಡಿ ನಿಗದಿಯಾಗಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿದೆ. ಒಟ್ಟು 20.52 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 20.26 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಕೇವಲ 26 ಸಾವಿರ ರೂ. ಮಾತ್ರ ಉಳಿಕೆಯಾಗಿದೆ. ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 13 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಇನ್ನೂ ಹಂಚಿಕೆ ನಡೆಯುತ್ತಿರುವುದರಿಂದ ಉಳಿದ ಹಣದ ಮಾಹಿತಿ ಲಭ್ಯವಾಗಿರಲಿಲ್ಲ. ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ನಿಗದಿಪಡಿಸಲಾಗಿದ್ದ 8 ಕೋಟಿ ರೂ. ಅನುದಾನದಲ್ಲಿ ಅಷ್ಟೂ ಅನುದಾನ ಉಳಿಕೆಯಾಗಿತ್ತು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು 2024ರ ನವೆಂಬರ್ನಲ್ಲಿ ನೇಮಕ ಮಾಡಲಾಗಿದೆ. ಈ ನಿಗಮಕ್ಕೆ 2024-25ನೇ ಸಾಲಿನಲ್ಲಿ ಏಳು ಯೋಜನೆಗಳಿಗಾಗಿ 12.04 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಸ್ವಾವಲಂಬಿ ಸಾರಥಿ ಯೋಜನೆಗೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ನಿಗದಿಪಡಿಸಿದ್ದ ಅನುದಾನ ಮಾತ್ರ ಸಂಪೂರ್ಣವಾಗಿ ಬಳಕೆಯಾಗಿತ್ತು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವಿಜಯಾನಂದ ಎಸ್ ಕಾಶಪ್ಪನವರ್ ಅವರನ್ನು 2024ರ ಫೆಬ್ರವರಿಯಲ್ಲಿಯೇ ನೇಮಕ ಮಾಡಲಾಗಿದೆ. ಈ ನಿಗಮದ ಮೂಲಕ 10 ಯೋಜನೆಗಳು ಜಾರಿಗೆ ಬಂದಿದ್ದು, ಒಟ್ಟು 94.85 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 21.78 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಸ್ವಾವಲಂಬಿ ಸಾರಥಿ ಯೋಜನೆಗೆ 29.58 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 21.12 ಕೋಟಿ ರೂ. ಖರ್ಚಾಗಿದೆ. 8.46 ಕೋಟಿ ರೂ. ಅನುದಾನ ಉಳಿದಿತ್ತು. ಜೀವಜಲ ಯೋಜನೆಗೆ 33.01 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.93 ಕೋಟಿ ರೂ. ಉಳಿಕೆಯಾಗಿತ್ತು. ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ಗಳಿಗೆ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯಾದ ‘ಬಸವ ಬೆಳಗು’ ಯೋಜನೆಗೆ 9.92 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.93 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಇದೇ ನವೀಕರಣ ಯೋಜನೆಗೆ 10 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಅದರಲ್ಲಿಯೂ 94 ಲಕ್ಷ ರೂ. ಅನುದಾನ ಉಳಿಕೆಯಾಗಿತ್ತು.
ಇನ್ನೂ ಬೇಸಿಗೆ ಆರಂಭವಾಗಿಲ್ಲ. ನೀರಿಗಾಗಿ ಈಗಲೇ ಪರದಾಟ ಆರಂಭವಾಗಿದೆ. ರಾಜ್ಯದ ಮಾತ್ರವಲ್ಲ ದೇಶದ ಬಹುತೇಕ ನಗರಗಳು, ಸಣ್ಣಪುಟ್ಟ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವು ನಗರಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕಾಗಿದೆ. ಬೋರ್ವೆಲ್ಗಳು ಬತ್ತಿ ಹೋಗುತ್ತಿವೆ. ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಈ ಜಲಕ್ಷಾಮ ನೈಸರ್ಗಿಕ ವಿಕೋಪ ಎಂದು ನಾವು ಉಪೇಕ್ಷೆ ಮಾಡಬೇಕಿಲ್ಲ. ಎಲ್ಲವನ್ನೂ ನಿಸರ್ಗದ ಮೇಲೆ ಹಾಕಿ ನಾವು ನಮ್ಮ ಹೊಣೆಯನ್ನು ಹಾರಿಸಿಕೊಳ್ಳುವಂತಿಲ್ಲ. ಲಂಗುಲಗಾಮಿಲ್ಲದ ಅವೈಜ್ಞಾನಿಕ ನಗರೀಕರಣ, ನಾಗರಿಕ ಸಮಾಜದ ನಿರ್ಲಕ್ಷ್ಯ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಸರಕಾರಗಳು ಕೈಗೊಳ್ಳುತ್ತಿರುವ ವಿನಾಶಕಾರಿ ಯೋಜನೆಗಳು ಇವೆಲ್ಲದರ ಪರಿಣಾಮವಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ತೀವ್ರ ಜಲಕ್ಷಾಮದ ಬಗ್ಗೆ ಈಗಾಗಲೇ ಕಳವಳಕಾರಿ ಮುನ್ಸೂಚನೆಗಳು ಬರುತ್ತಿವೆ. ಕುಸಿಯುತ್ತಿರುವ ಈ ಅಂತರ್ಜಲಕ್ಕೆ ಜಾಗತಿಕ ತಾಪಮಾನದ ಏರಿಕೆ ಕೂಡ ಒಂದು ಕಾರಣ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಹಾಗೆಂದು ಎಲ್ಲವನ್ನೂ ತಾಪಮಾನದ ಮೇಲೆ ಹಾಕಿ ನಮ್ಮ ಲೋಪಗಳನ್ನು ಮುಚ್ಚಿಕೊಳ್ಳುವಂತಿಲ್ಲ. ದೇಶದ ಬಹುತೇಕ ದೊಡ್ಡ ನಗರಗಳು ಈಗ ಜನಸಂಖ್ಯೆಯ ಭಾರದಿಂದ ತತ್ತರಿಸಿ ಹೋಗುತ್ತಿವೆ. ನಗರಗಳು ಬೆಳೆದಂತೆ ಹೊಸ, ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಹೆಚ್ಚಿನ ಬಡಾವಣೆಗಳು ಕೆರೆಗಳ ಸಮಾಧಿಯ ಮೇಲೆ ಎದ್ದು ನಿಲ್ಲುತ್ತಿವೆ. ಒಂದು ಕಾಲದಲ್ಲಿ ಕೆರೆಗಳ ನಗರವೆಂದು ಹೆಸರಾಗಿದ್ದ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಈಗ ಹಾಹಾಕಾರ ಆರಂಭವಾಗಿದೆ. ಉದ್ಯಾನ ನಗರಿ ಬೆಂಗಳೂರು ಈಗ ಕಾಂಕ್ರಿಟ್ ಕಾಡಾಗಿ ಬದಲಾವಣೆಯಾಗಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹುತೇಕ ಕಡೆ ಅದರಲ್ಲೂ ನಗರ ಪ್ರದೇಶದಲ್ಲಿ ಕೆರೆಗಳು ಒತ್ತುವರಿಯಾಗಿವೆ. ನಮ್ಮ ಹಿರಿಯರು ದೂರ ದೃಷ್ಟಿಯಿಂದ ಒಂದು ಊರಿಗೆ ದೊಡ್ಡ ಕೆರೆ, ಸಣ್ಣ ಕೆರೆ ಎಂದು ಎರಡೆರಡು ಕೆರೆಗಳನ್ನು ಕಟ್ಟಿಸುತ್ತಿದ್ದರು. ಅವುಗಳು ಬೇಸಿಗೆ, ಚಳಿಗಾಲಗಳಲ್ಲೂ ಹಳ್ಳಿಗರ ಬಾಯಾರಿಕೆಯನ್ನು ಇಂಗಿಸುತ್ತಿದ್ದವು. ಒಂದು ಕೆರೆಯ ನೀರು ಬತ್ತಿ ಹೋದರೆ, ಇನ್ನೊಂದು ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಇವು ಕೇವಲ ಬಾಯಾರಿಕೆ ಇಂಗಿಸುವ ನೀರಿನ ಮೂಲಗಳಾಗಿರಲಿಲ್ಲ. ಅವು ಅಂತರ್ಜಲವನ್ನು ಮರು ಪೂರಣಗೊಳಿಸುವ ಶ್ವಾಸಕೋಶಗಳಾಗಿದ್ದವು. ಈಗ ಆ ಶ್ವಾಸಕೋಶಗಳನ್ನೇ ಒತ್ತುವರಿ ಮಾಡಿಕೊಂಡು ಮುಚ್ಚಿ ಹಾಕಿದ ಮೇಲೆ ಅಂತರ್ಜಲ ಸುರಕ್ಷಿತವಾಗಿ ಇರಲು ಹೇಗೆ ಸಾಧ್ಯ? ಮಳೆ ನೀರು ಕೊಯ್ಲುನಂಥ ಹಲವಾರು ಯೋಜನೆಗಳು ಕೇವಲ ಕಾಗದದಲ್ಲಿವೆ. ಅವುಗಳ ಅನುಷ್ಠಾನದ ಆಸಕ್ತಿ ಸರಕಾರಿ ಅಧಿಕಾರಿಗಳಿಗೂ ಇಲ್ಲ, ಸಾರ್ವಜನಿಕರಿಗೂ ಇಲ್ಲ. ಇದು ಇಂದಿನ ಸ್ಥಿತಿ. ಅತಿಯಾದ ಅಂತರ್ಜಲ ಬಳಕೆ ಹಾಗೂ ಅದನ್ನು ಮರು ಪೂರಣ ಮಾಡುವಲ್ಲಿ ತೋರಿಸುತ್ತಿರುವ ನಿರಾಸಕ್ತಿಯಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಅಂತರ್ಜಲ ಶೂನ್ಯ ಮಟ್ಟಕ್ಕೆ ತಲುಪುವ ಅಪಾಯ ಎದುರಾಗಿದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಗ್ರಾಮೀಣ ಪ್ರದೇಶದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ನಗರ ಮತ್ತು ಗ್ರಾಮವೆನ್ನದೆ ಎಲ್ಲ ಕಡೆ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ಭೂಮಿಯೊಳಗಿನ ಕೊನೆಯ ಒಂದು ಹನಿಯೂ ಉಳಿಯುವ ಸಾಧ್ಯತೆ ಇಲ್ಲ. ಕೊಳವೆ ಬಾವಿಗಳ ದುಸ್ಥಿತಿ ಇದಾದರೆ, ಕೈಗಾರಿಕೋದ್ಯಮಗಳ ರಾಸಾಯನಿಕ ತ್ಯಾಜ್ಯದಿಂದಾಗಿ ವಿಪರೀತ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ನದಿಗಳ ನೀರು ಬಳಕೆಗೆ ಉಪಯೋಗವಿಲ್ಲದ ಸ್ಥಿತಿ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಇದು ಪ್ರಶ್ನೆ ಮಾತ್ರವಲ್ಲ, ಇದು ನಮ್ಮ ಸರಕಾರದ ಮುಂದಿರುವ ಅನಿವಾರ್ಯತೆಯೂ ಆಗಿದೆ. ಸರಕಾರ ಕಾಟಾಚಾರಕ್ಕೆ ಯೋಜನೆಯೊಂದನ್ನು ಘೋಷಿಸಿ ಬಿಟ್ಟರೆ ಮುಗಿಯುವುದಿಲ್ಲ. ಈ ಸಮಸ್ಯೆಯಿಂದ ಪಾರಾಗಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಕೆರೆಗಳ ಹೂಳೆತ್ತುವುದು, ಕಾಲುವೆಗಳನ್ನು ಸ್ವಚ್ಛವಾಗಿಡುವುದು, ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಕೊಯ್ಲನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ. ಇದರಲ್ಲಿ ಜನಸಾಮಾನ್ಯರ ತಪ್ಪು ಅಷ್ಟಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಲಾಭಕೋರ ಪ್ರವೃತ್ತಿಯಿಂದಾಗಿ ನಮ್ಮ ಬೆಟ್ಟ, ಗುಡ್ಡಗಳು ನಾಶವಾಗುತ್ತಿವೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಯ ಪರಿಣಾಮವಾಗಿ ಪರಿಸ್ಥಿತಿ ಬಿಗಡಾಯಿಸಿದೆ.ಗಿಡ, ಮರಗಳನ್ನು ಕಡಿದು ನಮ್ಮ ಕಾಡುಗಳನ್ನು ಈಗಾಗಲೇ ವಿನಾಶದ ಅಂಚಿಗೆ ತಂದು ನಿಲ್ಲಿಸಲಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ನೀರಿನ ಬಳಕೆ ಮಿತಿ ಮೀರಿದೆ. 2030ರ ವೇಳೆಗೆ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಬೆಂಗಳೂರು ಸೇರಿದಂತೆ ದೇಶದ 21 ಮಹಾ ನಗರಗಳು ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿವೆ. ನಮ್ಮ ಕುಡಿಯುವ ನೀರಿನ ಮೇಲೆಯೂ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಹಿಡಿತ ಸಾಧಿಸಿವೆ. ನಾಗಪುರ ಸೇರಿದಂತೆ ಕೆಲವು ನಗರಗಳ ಕುಡಿಯುವ ನೀರಿನ ಪೂರೈಕೆಯನ್ನು ವಿದೇಶಿ ಕಾರ್ಪೊರೇಟ್ ಕಂಪೆನಿಗಳು ನಿಯಂತ್ರಿಸುತ್ತಿವೆ. ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಅವರ ಪ್ರಕಾರ ದೇಶದಲ್ಲಿ ದಿನಕ್ಕೆ 2,500 ಮಂದಿ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ವಾಸ್ತವವಾಗಿ ಜನಸಾಮಾನ್ಯರ ಬಾಯಾರಿಕೆಯನ್ನು ಇಂಗಿಸಬೇಕಾದ ನೀರು ಅತ್ಯಂತ ಅಗ್ಗದ ಬೆಲೆಗೆ ಬಂಡವಾಳಶಾಹಿಗಳ ಮಾಲಕತ್ವದ ಕೈಗಾರಿಕೆಗಳ ಪಾಲಾಗುತ್ತಿದೆ. ನಮ್ಮ ರಾಜ್ಯದ ಅನೇಕ ಕೈಗಾರಿಕೆಗಳು ಅತ್ಯಂತ ಅಗ್ಗದ ಬೆಲೆಗೆ ನೀರನ್ನು ಖರೀದಿಸುತ್ತಿವೆ. ಅನೇಕ ಕೈಗಾರಿಕೆಗಳು ಒಂದು ಸಾವಿರ ಲೀಟರ್ ನೀರಿಗೆ ಕೇವಲ 10 ರೂಪಾಯಿಗಳನ್ನು ಪಾವತಿಸುತ್ತಿವೆ. ನೀರು, ಭೂಮಿ ಸೇರಿದಂತೆ ಇಳೆಯ ಸಕಲ ಸಂಪನ್ಮೂಲಗಳು ಕೇವಲ ಕೆಲವು ಜನರಿಗೆ ಮಾತ್ರ ಸೇರಿದವುಗಳಲ್ಲ. ಸಕಲ ಜೀವಿಗಳಿಗೆ ಇದರ ಮೇಲೆ ಹಕ್ಕಿದೆ. ಈ ಸಂಪನ್ಮೂಲಗಳು ಯಾರೊಬ್ಬರ ಖಾಸಗಿ ಸೊತ್ತಾಗಬಾರದು. ಆದರೆ ನಾವು ಈ ಪರಿ ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಸುತ್ತಾ ಹೋದರೆ ಮುಂದಿನ ಪೀಳಿಗೆಗೆ ಬಂಜರು ಭೂಮಿಯನ್ನು ಬಿಟ್ಟು ಹೋಗಬೇಕಾಗುತ್ತದೆ.ಹಾಗಾಗಿ ಎಲ್ಲರಿಗೂ ಸೇರಿದ ನೀರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸಂಕಲ್ಪ ಮಾಡಬೇಕಾಗಿದೆ.
ದಾಳಿಂಬೆ ಉದಾಹರಣೆ ನೀಡಿ ಪಾಕಿಸ್ತಾನ ಸೇನೆ ಟೀಕಿಸಿದ ಮೌಲಾನಾ ಫಜ್ಲುರ್ ರೆಹಮಾನ್; ಇದಕ್ಕಿಂತ ಅವಮಾನ ಬೇಕಾ?
ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸುವ ಮತ್ತು ಭಾರತದ ಪರ ಹೇಳಿಕೆಗಳನ್ನು ನೀಡುವ ಜಮಿಯತ್ ಉಲೇಮಾ-ಇ-ಇಸ್ಲಾಂ (ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ಮತ್ತೊಮ್ಮೆ ಪಾಕಿಸ್ತಾನ ಸೇನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನ ಗಡಿಯಲ್ಲಿ ಉಗ್ರರ ಉಪಟಳವನ್ನು ನಿಗ್ರಹಿಸುವಲ್ಲಿ ಪಾಕ್ ಸೇನೆ ವಿಫಲವಾಗಿದೆ ಎಂದಿರುವ ಫಜ್ಲುರ್ ರೆಹಮಾನ್, ಪಾಕ್-ಅಫ್ಘಾನ್ ಗಡಿಯಲ್ಲಿ ಒಂದು ದಾಳಿಂಬ ಹಣ್ಣೂ ಕೂಡ ಸೇನೆಯ ಕಣ್ತಪ್ಪಿಸಿ ಒಳಬರುವಂತಿಲ್ಲ. ಆದರೆ ಉಗ್ರರು ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಆಡಲು ಪಾಕ್ ಸರ್ಕಾರ ಅನುಮತಿ
ಹೊಸದಿಲ್ಲಿ: ಭಾರತ ವಿರುದ್ಧ ಈ ತಿಂಗಳ 15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ಈ ಸಂಬಂಧ ರಾಷ್ಟ್ರೀಯ ತಂಡ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧ ಪಂದ್ಯ ಆಡಲು ಅನುಮತಿ ನೀಡಿದ್ದು, ಪಂದ್ಯದ ವೇಳಾಪಟ್ಟಿಯನ್ನು ತಾನು ಗೌರವಿಸುವುದಾಗಿ ಸ್ಪಷ್ಟಪಡಿಸಿದೆ. ಪಂದ್ಯ ಬಹಿಷ್ಕರಿಸುವುದರಿಂದ ಪಾಕಿಸ್ತಾನದ ಮೇಲಾಗುವ ಸಂಭಾವ್ಯ ಹಣಕಾಸು ಪರಿಣಾಮದ ಬಗ್ಗೆ ಐಸಿಸಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಇದೀಗ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ. ಫೋರ್ಸ್ ಮಜೂರ್ ನಿಯಮಾವಳಿಯ ಆಧಾರದಲ್ಲಿ ಕೊನೆಕ್ಷಣದಲ್ಲಿ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ ನಿರ್ಧರಿಸಿತ್ತು. ಅನಿಶ್ಚಿತ ಸಂದರ್ಭಗಳಲ್ಲಿ ಪಾಲುದಾರ ದೇಶ ತನ್ನ ಗುತ್ತಿಗೆ ಹೊಣೆಗಾರಿಕೆಯನ್ನು ಈಡೇರಿಸದಿರಲು ಅವಕಾಶವಿದೆ. ಪಾಕಿಸ್ತಾನದ ಘನ ಪ್ರಧಾನಿ ಶ್ರೀ ಶೆಹಬಾಝ್ ಷರೀಫ್ ಅವರಿಗೆ ಪಿಸಿಬಿ ಅಧ್ಯಕ್ಚ ಶ್ರೀ ಮೊಹ್ಸಿನ್ ನಖ್ವಿಯವರು ಅಧಿಕೃತವಾಗಿ ಪಿಸಿಬಿ, ಬಿಸಿಬಿ ಹಾಗೂ ಐಸಿಸಿ ನಡುವೆ ನಡೆದ ಸುಧೀರ್ಘ ಚರ್ಚೆಯ ವಿವರ ನೀಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಿಸಿಬಿಗೆ ಮಾಡಿಕೊಂಡಿದ್ದ ಮನವಿಯನ್ನು ಪಾಕ್ ಸರ್ಕಾರ ಪರಾಮರ್ಶಿಸಿದ್ದು, ಶ್ರೀಲಂಕಾ, ಯುಎಇ ಹಾಗೂ ಇತರ ಸದಸ್ಯದೇಶಗಳ ಬೆಂಬಲವನ್ನು ಕೂಡಾ ಪರಾಮರ್ಶಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
T20 World Cup: ಭಾರತ ವಿರುದ್ಧ ಪಂದ್ಯವಾಡಲು ಪಿಸಿಬಿಗೆ ಪಾಕ್ ಸರ್ಕಾರ ನಿರ್ದೇಶನ, ಬಿಕ್ಕಟ್ಟು ಅಂತ್ಯವಾಗಿದ್ದೇಗೆ?
ನವದೆಹಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ನಲ್ಲಿ ಭಾರತ ವಿರುದ್ಧ ಆಟವಾಡಲ್ಲ ಎಂದು ಬಹಿಷ್ಕಾರ ನಿರ್ಧಾರ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪಾಕ್ ಸರ್ಕಾರ ಪಂದ್ಯದಲ್ಲಿ ಭಾಗವಹಿಸಲು ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೆ ಇದೇ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಮ್ಯಾಚ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗೆ ಆಗಲಿವೆ. ಈ ಮೂಲಕ ಒಂದು ವಾರದಿಂದ
ಅಮೆರಿಕ-ಬಾಂಗ್ಲಾದೇಶ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ, ಶೇ. 19ಕ್ಕೆ ಸುಂಕ ಇಳಿಕೆ; ಭಾರತಕ್ಕೆ ಏನು ಸಂದೇಶ?
ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿತ್ತು. ಇದಿಗ ಇಂತದ್ದೇ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೂ ಜಾರಿಗೊಳಿಸಿರುವ ಅಮೆರಿಕ, ಬಾಂಗ್ಲಾದೇಶಿ ಸರಕುಗಳ ಮೇಲಿನ ಸುಂಕವನ್ನು ಶೇ. 19ಕ್ಕೆ ಇಳಿಕೆ ಮಾಡಿದೆ. ಘೋಷಿತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶದ ಜವಳಿ ಉಡುಪುಗಳು ಅಮೆರಿಕದ ಸುಂಕದಿಂದ ವಿನಾಯಿತಿ ಪಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಮೈಸೂರು ಸ್ಯಾಂಡಲ್ ಸೋಪ್ಗೆ ನಟಿ ತಮನ್ನಾ 2 ವರ್ಷ ರಾಯಭಾರಿ, 2 ಕಡೆ ಹೊಸ ಘಟಕ ಸ್ಥಾಪನೆ: ಎಂಬಿ ಪಾಟೀಲ್
ಬೆಂಗಳೂರು: ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ನಕಲು ತಡೆಗಟ್ಟಿರುವ ರಾಜ್ಯ ಸರ್ಕಾರ ಇದೀಗ ಈ ಉತ್ಪನ್ನ ತಯಾರಿಕೆಯ ಎರಡು ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಹೊಸ ರೂಪ ಪಡೆದ ಈ ಉತ್ಪನ್ನದ ಪ್ರಚಾರದ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಈ ಹಿಂದೆ
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ 2027ರ ಅಂತ್ಯಕ್ಕೆ ಹರಿಯುತ್ತಾ ಎತ್ತಿನಹೊಳೆ?
ಚಿಕ್ಕಬಳ್ಳಾಪುರದಲ್ಲಿ ಸಚಿವರು ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿದ್ದು, ಮುಂದಿನ ವರ್ಷವೇ ಸರ್ಕಾರ ಕೊಟ್ಟ ಮಾತಿನಂತೆ ಎತ್ತಿನಹೊಳೆ ಬಯಲು ಸೀಮೆಗೆ ಹರಿಯುವುದು ಖಾತ್ರಿ ಎಂದಾದರೂ, ವಿರೋಧ ಪಕ್ಷಗಳು ಇದು ಅಸಾಧ್ಯವೆಂದೇ ಹೇಳುತ್ತಿದೆ. ಸದ್ಯಕ್ಕಾಗಿರುವ ಬೆಳವಣಿಗೆಗಳು ಏನೇನು ಎಂಬ ಮಾಹಿತಿ ಇಲ್ಲಿವೆ.
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ; ಯಾವೆಲ್ಲಾ ಕಾಮಗಾರಿ ಸ್ಥಗಿತ?
ಪರಿಸರವಾದಿಗಳ ಹೋರಾಟ ಮತ್ತು ರಾಜವಂಶಸ್ಥರ ತೀವ್ರ ವಿರೋಧದ ಬಳಿಕ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳನ್ನು ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. 2025ರಲ್ಲಿ ಆರಂಭಿಸಿದ್ದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಲ್ಟಿಪರ್ಪಸ್ ಏರಿಯಾ ಅಭಿವೃದ್ಧಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ವಾದ-ವಿವಾದ ಆಲಿಸಿದ ನ್ಯಾಯಾಲಯ, ಬೆಟ್ಟದಲ್ಲಿ ಒಂದು ಕಾಮಗಾರಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ನಾಯಕತ್ವ ಮಹತ್ವಾಕಾಂಕ್ಷೆ; ಬಜೆಟ್ ಪೂರ್ವ ಸಭೆ ಬಿಟ್ಟು ದೆಹಲಿಗೆ ಹೊರಟ ಡಿಸಿಎಂ ಡಿಕೆ ಶಿವಕುಮಾರ್!
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಅಂತ್ಯವೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ದಿನನಿತ್ಯವೂ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಸಿಎಂ ಕರೆದಿರುವ ಇಲಾಖಾವಾರು ಬಜೆಟ್ ಪೂರ್ವ ಸಿದ್ಧತಾ ಸಭೆ ಬಿಟ್ಟು, ಡಿಸಿಎಂ ದೆಹಲಿ ಪ್ರವಾಸ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ. ತಮ್ಮ ದೆಹಲಿ ಪ್ರವಾಸದ ಬಗ್ಗೆ ಗುಟ್ಟು ಬಿಟ್ಟುಕೊಡದೇ, ಡಿಕೆ ಶಿವಕುಮಾರ್ ಅವರು ಕುತೂಹಲನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಹಾಲಿನ ಪ್ರೋತ್ಸಾಹಧನ ಲೀಟರ್ಗೆ 2 ರೂ. ಹೆಚ್ಚಳಕ್ಕೆ ಚಿಂತನೆ; ಬಮೂಲ್ ಅಧ್ಯಕ್ಷ ಡಿಕೆ ಸುರೇಶ್
ರಾಜ್ಯ ಸರ್ಕಾರವು ಪ್ರತಿ ಲೀಟರ್ಗೆ ಹಾಲಿಗೆ ಪ್ರಸ್ತುತ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು 2 ರೂ.ಗೆ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ. ರೈತರು ಹೈನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿರುವ ಅವರು, ಕರ್ನಾಟಕದಲ್ಲಿ ಹಾಲು ಉತ್ಪಾದನೆ ಗುರಿಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಹಾಲಿಗೆ ಪ್ರೋತ್ಸಾಹಧನ ಹೆಚ್ಚಿಸುವ ಕುರಿತು ಡಿಕೆ ಸುರೇಶ್ ನೀಡಿರುವ ಹೇಳಿಕೆ ಇಲ್ಲಿದೆ.
ವೃದ್ಧ ತಂದೆಯ ಆರೈಕೆ ಮಾಡದ ಪುತ್ರಿಯರು, 2.4 ಎಕರೆ ಜಮೀನಿನ ಗಿಫ್ಟ್ ಡೀಡ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ಜೀವನದ ಸಂಧ್ಯಾಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದ ವೃದ್ಧರೊಬ್ಬರು, ನಂತರ ಪುತ್ರಿಯರು ತಮ್ಮನ್ನು ನಿರಾಶ್ರಿತನನ್ನಾಗಿ ಮಾಡಿದ್ದ ಹಿನ್ನೆಲೆಯಲ್ಲಿ ಗಿಫ್ಟ್ ಡೀಡ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹಿರಿಯ ನಾಗರಿಕರಿಗೆ ಅವರ ವೃದ್ಧಾಪ್ಯದಲ್ಲಿ ಮಕ್ಕಳು ಆರೈಕೆ ಮಾಡದ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ (84) ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯನ್ಯಾಯಪೀಠ, 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಪಡಿಸಿದೆ. ಪ್ರಕರಣವೇನು? ಸುಮಾರು 2.4 ಎಕರೆ ಕೃಷಿ ಭೂಮಿ ಹೊಂದಿದ್ದ ವೆಂಕಟಯ್ಯ, ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಆನಂತರ, ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರಲ್ಲದೆ, ಹಿರಿಯ ನಾಗರಿಕರ ಕಾಯ್ದೆಯಡಿ, ಗಿಫ್ಟ್ ಡೀಡ್ ರದ್ದು ಕೋರಿ ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿದ್ದ ನ್ಯಾಯಮಂಡಳಿ, ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧವನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತ್ತು. ಈ ಆದೇಶವನ್ನು ಜಿಲ್ಲಾಧಿಕಾರಿ ಸಹ ಎತ್ತಿಹಿಡಿದಿದ್ದರು. ಇದರಿಂದ, ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದೆಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆನು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೈಕೋರ್ಟ್ ಹೇಳಿದ್ದೇನು? ಅಧಿಕಾರಿಗಳು ಅಳವಡಿಸಿಕೊಂಡ ವ್ಯಾಖ್ಯಾನವನ್ನು ಒಪ್ಪದ ನ್ಯಾಯಪೀಠ, ಗಿಫ್ಟ್ ಡೀಡ್ನಲ್ಲಿ ಸ್ಪಷ್ಟವಾದ ನಿರ್ವಹಣಾ ಷರತ್ತು ಕಾಯ್ದೆಯ ಸೆಕ್ಷನ್ 23(1) ರಡಿಯಲ್ಲಿ ಕಡ್ಡಾಯ ಅವಶ್ಯಕತೆಯಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಎದುರಾದರೆ, ಅವುಗಳ ಸಂಗತಿಗಳು, ಸಂದರ್ಭಗಳು ಮತ್ತು ನಡವಳಿಕೆಯಿಂದ ಊಹಿಸಬಹುದು ಎಂದು ಹೇಳಿದೆ. ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ಕಾನೂನುಬದ್ಧವಾಗಿ ದೋಷಪೂರಿತ ಮತ್ತು ಕಾಯ್ದೆಯ ತಪ್ಪು ತಿಳುವಳಿಕೆ ಆಧರಿಸಿವೆ. ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮಹಿಳಾ ಸಿಬ್ಬಂದಿಗೆ ಋತುಚಕ್ರದ ರಜೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 23ಕ್ಕೆ ಮುಂದೂಡಿದೆ. ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿದಾರರೊಬ್ಬರ ಪರ ವಕೀಲರು, ರಾಜ್ಯದ ಮಹಿಳಾ ನೌಕರರಿಗೆ ಮಾಸಿಕ 1 ದಿನದ ವೇತನಸಹಿತ ರಜೆಯಂತೆ ವಾರ್ಷಿಕ 12 ಋತುಚಕ್ರದ ರಜೆ ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಯಾವುದೇ ತಡೆಯಾಜ್ಞೆ ನೀಡಿರದ ಕಾರಣ ಸಮಸ್ಯೆಯಾಗುತ್ತಿದೆ. ಆದ್ದರಿಂದ, ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.
5 ವರ್ಷಗಳಲ್ಲಿ 3.4 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ: ದಕ್ಷಿಣ ಕನ್ನಡದಲ್ಲೇ ಅತಿ ಹೆಚ್ಚು ಕೇಸ್
ಮಂಗಳೂರು: ಕರ್ನಾಟಕದ ಆರೋಗ್ಯ ವಲಯಕ್ಕೆ ಎಚ್ಚರಿಕೆಯ ಗಂಟೆಯೆಂಬಂತೆ, ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ದತ್ತಾಂಶಗಳ ಪ್ರಕಾರ, 2020-21 ರಿಂದ 2024-25ರ ಅವಧಿಯಲ್ಲಿ ದಕ್ಷಿಣ ಕನ್ನಡ, ಕಲಬುರಗಿ ಮತ್ತು ಹಾಸನ ಜಿಲ್ಲೆಗಳು ಕ್ಯಾನ್ಸರ್ ಪತ್ತೆ ಹಚ್ಚುವಿಕೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿವೆ. ಬಾಯಿ, ಗರ್ಭಕಂಠ ಮತ್ತು
Epstein files | ಎಪ್ಸ್ಟೀನ್ ಬಳಿ ಪತ್ತೆಯಾದ ಕಾಬಾದ ಪವಿತ್ರ ಬಟ್ಟೆ ‘ಕಿಸ್ವಾ’!
ಆಕ್ರೋಶ ವ್ಯಕ್ತಪಡಿಸಿದ ಜಾಗತಿಕ ಮುಸ್ಲಿಂ ಸಮುದಾಯ
ವಿಜಯನಗರ | ಫೆ.21ರಂದು ಬೃಹತ್ ಉದ್ಯೋಗ ಮೇಳ : 50ಕ್ಕೂ ಹೆಚ್ಚು ಕಂಪನಿಗಳು ಭಾಗಿ
ವಿಜಯನಗರ (ಹೊಸಪೇಟೆ), ಫೆ.09: ಫೆಬ್ರವರಿ 21ರಂದು ನಗರದ ವಿಜಯನಗರ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ವಿಜಯನಗರ ಕಾಲೇಜುಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಪ್ರತಿಷ್ಠಿತ ಎಂಎನ್ಸಿ ಕಂಪನಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗೆ ಉತ್ತಮ ಅವಕಾಶ ಕಲ್ಪಿಸಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು. 18ರಿಂದ 35 ವರ್ಷದೊಳಗಿನ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಇಂಜಿನಿಯರಿಂಗ್, ಬಿಕಾಂ, ಬಿಎಸ್ಸಿ, ಬಿಎ, ಬಿಬಿಎ, ಬಿಎಚ್ಎಂ, ಎಂಕಾಂ, ಎಂಬಿಎ, ಎಂಎಸ್ಸಿ, ಎಂಎ ಪದವಿ ಪಡೆದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉದ್ಯೋಗ ಮೇಳದ ಕರಪತ್ರ ಬಿಡುಗಡೆಗೊಳಿಸಿದರು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಕಾಲೇಜನ್ನು ಅಥವಾ ದೂರವಾಣಿ ಸಂಖ್ಯೆ 7975278783, 9986779624 ಅನ್ನು ಸಂಪರ್ಕಿಸಬಹುದು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮಹ್ಮದ್ ಅಲಿ ಅಕ್ರಂ ಷಾ, ವಿಜಯನಗರ ಕಾಲೇಜು ಅಧ್ಯಕ್ಷ ಮೆಟ್ರಿ ಮಲ್ಲಿಕಾರ್ಜುನ, ಪ್ರಾಂಶುಪಾಲ ಎ. ಮಹಾಂತೇಶ್ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಹೇಶ್ ಜೋಶಿಯನ್ನು ಬಂಧಿಸಲು ಸರಕಾರ ಪ್ರಯತ್ನ ಮಾಡುತ್ತಿದೆ : ಜೋಶಿ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಬಂಧಿಸಲು ರಾಜ್ಯ ಸರಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಜೋಶಿ ಪರ ವಕೀಲರು ಹೈಕೋರ್ಟ್ಗೆ ಮೌಖಿಕವಾಗಿ ತಿಳಿಸಿದರು. ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಮಹೇಶ್ ಜೋಶಿ ಪರ ಹಿರಿಯ ವಕೀಲ ಜಯಕುಮಾರ್ ಎ. ಪಾಟೀಲ್ ಅವರು, ನ್ಯಾಯಾಲಯದಲ್ಲಿ ಅರ್ಜಿ ಬಾಕಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಅಧಿಕೃತವಾಗಿ ಕಚೇರಿಯಲ್ಲಿ ಇಡಲಾಗಿದೆ. ಅದನ್ನು ತೆಗೆದುಕೊಳ್ಳಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದರು. ಆಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಜೋಶಿ ಬಂದು ಅದನ್ನು ಪಡೆದುಕೊಳ್ಳಬಹುದು. ಅದನ್ನು ಎಲ್ಲಿಡಲಾಗಿದೆ ಎಂಬುದು ಅವರಿಗೇ ಗೊತ್ತಿದೆ ಎಂದರು. ಈ ವೇಳೆ ಪಾಟೀಲ್ ಅವರು, ಅರ್ಜಿದಾರರು ಅಲ್ಲಿಗೆ ಹೋಗುವುದಿಲ್ಲ, ಹೋದರೆ ಈ ದಾಖಲೆಯನ್ನು ತಿರುಚಲಾಗಿದೆ ಎನ್ನುತ್ತಾರೆ. ದಾಖಲೆ ತಿರುಚುವ ಸಾಧ್ಯತೆ ಇದೆ ಎಂದು ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಅಲ್ಲಿ ಅರ್ಜಿದಾರರು ಹಾಜರಿರುತ್ತಾರೆ, ಸರ್ಕಾರ/ಆಡಳಿತಾಧಿಕಾರಿ ಅದನ್ನು ಶೋಧಿಸಿಕೊಡಲಿ. ಅರ್ಜಿದಾರರು ದಾಖಲೆಗಳನ್ನು ತಿರುಚಿದ್ದು, ಮುಂದೆಯೂ ತಿರುಚುವ ಸಾಧ್ಯತೆ ಎನ್ನುವುದು ಸರ್ಕಾರದ ವಾದವಾಗಿದೆ. ಅರ್ಜಿದಾರರು ಇದ್ದಾಗ ದಾಖಲೆಗಳು ಕಬೋರ್ಡ್ನಲ್ಲಿ ಇದ್ದವು, ಈಗ ಅಲ್ಲಿಲ್ಲ. ಅದೆಲ್ಲವನ್ನೂ ಬಂಡಲ್ ಮಾಡಿದ್ದಾರೆ. ಅರ್ಜಿದಾರರು ಮುಟ್ಟಿದರೆ ಬೇರೇನೋ ಮಾಡಿದ್ದಾರೆ ಎಂದು ಹೇಳುವ ಸಾಧ್ಯತೆ ಇದೆ. ಅರ್ಜಿದಾರರನ್ನು ಬಂಧಿಸಲು ಬೇಕಾದ ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿದೆ. ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ಅವರು ಆರೋಪಿಸಬಹುದು ಎಂದರು. ಇದಕ್ಕೆ ನ್ಯಾಯಪೀಠ, ನೀವು ಅಲ್ಲಿ ಹೋಗದಿದ್ದರೆ ಆ ಪತ್ರಗಳು ಹೇಗೆ ಸಿಗುತ್ತವೆ? ಅದು ಎಲ್ಲಿದೆ ಎಂಬುದು ಸರ್ಕಾರಕ್ಕೆ ಏನು ಗೊತ್ತಿದೆ. ಸರ್ಕಾರದ ಉಸ್ತುವಾರಿಯಡಿ ನೀವು ಅಲ್ಲಿಗೆ ಹೋಗಿ ನಿಮ್ಮ ದಾಖಲೆ ಪಡೆಯಬಹುದು. ಶೋಧಿಸಿ ನಿಮಗೆ ಕೊಡಿ ಎಂದು ಸರ್ಕಾರಕ್ಕ ನಿರ್ದೇಶಿಸಿಲಾಗದು. ಕಸಾಪದಲ್ಲಿ ವಿಡಿಯೊ ಕ್ಯಾಮರಾ ಇದೆಯಲ್ಲವೇ? ಅದರಲ್ಲಿ ರೆಕಾರ್ಡ್ ಆಗುವುದಿಲ್ಲವೇ ಅದನ್ನು ನೀವು ಬಳಕೆ ಮಾಡಬಹುದಲ್ಲವೇ? ಎಂದು ಹೇಳಿತು. ಅಂತಿಮವಾಗಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.
ವಿಜಯನಗರ | ಹಂಪಿ ಉತ್ಸವಕ್ಕೆ ಎಲ್ಲರ ಸಹಕಾರ ಅಗತ್ಯ: ಡಿಸಿ
ವಿಜಯನಗರ : ಹಂಪಿ ಉತ್ಸವ ಫೆ. 13ರಿಂದ 15ರವರೆಗೆ ಆಯೋಜಿಸಲಾಗಿದ್ದು, ಉತ್ಸವದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಂಪಿ ಉತ್ಸವದ ಅಂಗವಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ 3 ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಡಿಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಜಿ.ಎಸ್.ರಮೇಶ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ಬೀದರ್ | ಫೆ.12ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರ : ಬಾಬುರಾವ್ ಹೊನ್ನಾ
ಬೀದರ್ : ಫೆ.12ರಂದು ಜಿಲ್ಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ ತಿಳಿಸಿದರು. ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳು ಸೇರಿ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು. ಕೇಂದ್ರ ಸರ್ಕಾರ ಅಮೇರಿಕಾದೊಂದಿಗೆ ಕೃಷಿ ಒಪ್ಪಂದ ಮಾಡಿಕೊಂಡಿರುವುದು, ವಿದ್ಯುತ್ ಖಾಸಗಿಕರಣ, ಕಾರ್ಪೊರೇಟ್ ಕಂಪನಿಗಳ ಬೀಜ ಬಳಕೆ ಕಡ್ಡಾಯಗೊಳಿಸುವ ಬೀಜ ಕಾಯಿದೆ ಸೇರಿದಂತೆ ಹಲವು ನೀತಿಗಳ ವಿರುದ್ಧ ಈ ಹೋರಾಟ ನಡೆಯುತ್ತಿದೆ. ರೈತರಿಗೆ ಹಾನಿ ಉಂಟುಮಾಡುವ ಎಲ್ಲಾ ಕಾನೂನುಗಳನ್ನು ವಾಪಸ್ಸು ಪಡೆಯಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಹೋರಾಟ ದೇಶವ್ಯಾಪಿಯಾಗಿ ನಡೆಯುತ್ತಿದ್ದು, ಕೆಲವು ರಾಜ್ಯಗಳಲ್ಲಿ ರೈಲು ತಡೆ, ಪಾದಯಾತ್ರೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಚೊಂಡಿ, ಬಸವರಾಜ್ ಅಷ್ಟೂರೆ, ಶಾಂತಮ್ಮ ಮೂಲಗೆ, ವಾಮನರಾವ್, ಖಮರ್ ಪಟೇಲ್, ಶಫಿಯತ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Belagavi | ಮಹಿಳಾ ಅಧಿಕಾರಿಯ ಖಾಸಗಿ ವೀಡಿಯೊ ಸೆರೆ ಪ್ರಕರಣ; ಮತ್ತೊಬ್ಬ ಆರೋಪಿಯ ಬಂಧನ
ಬೆಳಗಾವಿ : ಮಹಿಳಾ ಅಧಿಕಾರಿಯ ನಿವಾಸದಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಖಾಸಗಿತನದ ದೃಶ್ಯಗಳನ್ನು ಸೆರೆಹಿಡಿದು 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತನನ್ನು ಮಹಿಳಾ ಅಧಿಕಾರಿಯ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ನೌಕರ ವಿನೋದ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮೂವರು ಯೂಟ್ಯೂಬರ್ಗಳಾದ ಗೋಕಾಕನ ಅಬ್ದುಲ್ ರಷೀದ್, ನಝರ್ ಅಹ್ಮದ್ ಮಕಾನದಾರ, ಸಮೀರ್ ನಿಸಾರ್ ಅಹ್ಮದ್ ಶೇಖ್, ಘಟಪ್ರಭಾದ ಮುಹಮ್ಮದ್ ದಿಲಾವರ ನಝೀರ್ ಅಹ್ಮದ್ ಬಾಳೇಕುಂದ್ರಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಇಂಡಿಯನ್ ಮುಸ್ಲಿಮ್ಸ್ ಫಾರ್ ಪ್ರೊಗ್ರೆಸ್ ಆ್ಯಂಡ್ ರಿಫಾರ್ಮ್ಸ್ ನಿಯೋಗದಿಂದ ಕೇಂದ್ರ ರಕ್ಷಣಾ ಸಚಿವರ ಭೇಟಿ
ಏಕತೆ, ಸಾಮಾಜಿಕ ಸೌಹಾರ್ದ ಪ್ರಜಾಪ್ರಭುತ್ವದ ಶಕ್ತಿಗೆ ಮೂಲಾಧಾರ : ರಾಜನಾಥ್ ಸಿಂಗ್
ಬೀದರ್ | ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳಾಗಿ ಮಾಡಬೇಕು : ಮಾಲಾ ಬಿ.ನಾರಾಯಣರಾವ್
ಐಡಿಯಲ್ ಗ್ಲೋಬಲ್ ಶಾಲೆಯ ಸಿಲ್ವರ್ ಜುಬಿಲಿ ಆಚರಣೆ
ಯಶಸ್ವಿಯಾದ ರಾಯಚೂರು ಉತ್ಸವ | ಸಚಿವ ಎನ್ಎಸ್ ಬೋಸರಾಜು ಅವರಿಂದ ಶ್ಲಾಘನೆ
ರಾಯಚೂರು: ʼಎಡೆದೊರೆ ನಾಡುʼ ರಾಯಚೂರು (ದೋ-ಅಬ್) ಪ್ರದೇಶದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮರುಕಳಿಸುವ ಹಾಗೂ ಸ್ಥಳೀಯ ಕಲೆ ಮತ್ತು ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಫೆ.5, 6 ಮತ್ತು 7ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ʼರಾಯಚೂರು ಉತ್ಸವ–2026ʼ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಹಾಗೂ ಆಯೋಜಕರಿಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ–ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅಭಿನಂದನೆ ಸಲ್ಲಿಸಿದ್ದಾರೆ. ನಾಡಹಬ್ಬದ ಸಂಭ್ರಮದಂತೆ ನಡೆದ ಉತ್ಸವದಲ್ಲಿ ಜಿಲ್ಲೆಯ ಜನತೆ ನಿರೀಕ್ಷೆಗೂ ಮೀರಿದ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿರುವುದು ಸಂತಸದ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವು ರಾಯಚೂರು ಜಿಲ್ಲೆಯ ಜನರ ಬಹುದಿನದ ಕನಸಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಿಸ್ತಿನಿಂದ ಮತ್ತು ಸುವ್ಯವಸ್ಥಿತವಾಗಿ ನಡೆದಿರುವುದು ವಿಶೇಷ. ಉತ್ಸವದ ಯಶಸ್ಸಿಗೆ ಅಚ್ಚುಕಟ್ಟಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ ಜಿಲ್ಲಾಡಳಿತ, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

28 C