SENSEX
NIFTY
GOLD
USD/INR

Weather

21    C
...

ಹ್ಯಾಟ್ರಿಕ್ ಡಕ್ ಹೊರತಾಗಿಯೂ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ ನಂಬರ್ 1! ಟಾಪ್ 5ರೊಳಗೆ ಇಶಾನ್ ಕಿಶನ್!

ICC T20 Rankings- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರು ಇದೀಗ ಬಿಡುಗಡೆಯಾಗಿರುವ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದೇವೇಳೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಬಳಿಕ ಮಿಂಚುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಗ್ರ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟಾಪ್ 10ರೊಳಗೆ ಭಾರತದ ನಾಲ್ವರು ಬ್ಯಾಟರ್ ಗಳು ಇದ್ದಾರೆ ಎಂಬುದು ವಿಶೇಷವಾಗಿದೆ.

ವಿಜಯ ಕರ್ನಾಟಕ 26 Feb 2026 12:35 am

ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಮಂದಿಗೆ ಸಚಿವ ಸ್ಥಾನ ನೀಡಬೇಕು: ಪ್ರದೀಪ್ ಈಶ್ವರ್

ಬೆಂಗಳೂರು: ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಮಂದಿಗೆ ಸಚಿವ ಸ್ಥಾನ ನೀಡಬೇಕು. ಈ ಸಂಬಂಧ ಹೈಕಮಾಂಡ್‍ಗೆ ಪತ್ರ ಬರೆದಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಗೆಲುವು ಸಾಧಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮೊದಲಿನಿಂದ ಬೇಡಿಕೆ ಇದೆ. ಈ ಸಂಬಂಧ ಸಹಿ ಸಂಗ್ರಹ ಮಾಡಿ ಹೈಕಮಾಂಡ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಜಾತಿ ಆಧಾರ, ಪ್ರಾದೇಶಿಕ ಆಧಾರದಲ್ಲಿ ಅರ್ಹರು ಇದ್ದಾರೆ ಎಂದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ಮೊದಲ ಬಾರಿ ಗೆಲುವು ಸಾಧಿಸಿದರೂ, ಬಲಿಷ್ಠ ವ್ಯಕ್ತಿಯನ್ನೆ ಸೋಲಿಸಿದ್ದೇನೆ. ಹೀಗಾಗಿ, ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ನುಡಿದರು. ಸಚಿವ ಸ್ಥಾನಕ್ಕಾಗಿ ವಿಧಾನ ಪರಿಷತ್ತು ಸದಸ್ಯರಿಂದಲೂ ಪತ್ರ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ 24 ವಿಧಾನ ಪರಿಷತ್ತಿನ ಸದಸ್ಯರು ಪತ್ರ ಬರೆದಿದ್ದು, ಸಂಪುಟದಲ್ಲಿ ಪರಿಷತ್ ಸದಸ್ಯರ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ, ನಿರುತ್ಸಾಹ ಭಾವನೆ ಉಂಟುಮಾಡುತ್ತೆ. ಹೀಗಾಗಿ, ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಪರಿಗಣಿಸುವಂತೆ ಕೋರಿದ್ದಾರೆ. 1907ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿಧಾನ ಪರಿಷತ್ತು, ಅತ್ಯಂತ ಹಳೆಯ ಪರಿಷತ್ತುಗಳಲ್ಲಿ ಒಂದಾಗಿದೆ. ಪರಿಷತ್ತಿನ ಸದಸ್ಯರು 10ರಿಂದ15 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ತಳಮಟ್ಟದ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಪ್ರತಿನಿಧಿಗಳು. ಶಾಸಕರಿಗೆ ಹೋಲಿಸಿದರೆ ವಿಧಾನ ಪರಿಷತ್ತು ಸದಸ್ಯರು ವ್ಯಾಪಕ ಮತದಾರರ ಮೇಲೆ ಪ್ರಭಾವ ಬೀರುತ್ತಾರೆ. ಪಕ್ಷದ ನೆಲೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಎಲ್ಲ ಪರಿಷತ್ತಿನ ಸದಸ್ಯರು ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಚಿವ ಸಂಪುಟ ಪುನರಚನೆ ವೇಳೆ ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು. ಸಂಪುಟದಲ್ಲಿ ಪರಿಷತ್ತಿನ ಸದಸ್ಯರಿಗೆ ಪ್ರಾತಿನಿಧ್ಯ ಇಲ್ಲದಿರುವುದು ಸದಸ್ಯರಲ್ಲಿ ಅಸಮಾನತೆ ಮತ್ತು ನಿರುತ್ಸಾಹದ ಭಾವನೆಯನ್ನು ಉಂಟುಮಾಡುತ್ತದೆ. ಇದು ಸದಸ್ಯರಿಗೆ ರಾಜಕೀಯ ನಿರೀಕ್ಷೆಗಳಿಲ್ಲ ಎಂಬ ಗ್ರಹಿಕೆಗೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಮರ್ಥ ನಾಯಕರು ವಿಧಾನಪರಿಷತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್‍ಗಳನ್ನು ಪಡೆಯಲು ಪ್ರೇರೇಪಿಸುತ್ತದೆ. ಅಲ್ಲದೆ, ಗುಂಪುಗಾರಿಕೆಗೆ ಕಾರಣವಾಗುತ್ತದೆ ಮತ್ತು ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 26 Feb 2026 12:21 am

ಮೈಸೂರು ನಗರ ಪೊಲೀಸರ ಕಾರ್ಯಾಚರಣೆ | 105 ಕಳವು ಪ್ರಕರಣ ಪತ್ತೆ: 2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದ ಆರು ತಿಂಗಳಲ್ಲಿ ನಡೆದ 105 ಕಳವು ಪ್ರಕರಣ ಪತ್ತೆಹಚ್ಚಿದ್ದು,  2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಒಂದು ದರೋಡೆ, ಒಂದು ದರೋಡೆಗೆ ಸಂಚು, ನಾಲ್ಕು ಸುಲಿಗೆ, 2 ಸರಗಳ್ಳತನ, 26 ಕನ್ನ ಕಳುವು, 1 ಅರಣ್ಯ ಕಾಯ್ದೆಯ ಪ್ರಕರಣದಿಂದ 2.92 ಕೋಟಿ ರೂ. ಮೌಲ್ಯದ 2.54 ಕೆಜಿ ಚಿನ್ನ, 5.312 ಕೆಜಿ ಬೆಳ್ಳಿ, 49 ದ್ವಿಚಕ್ರ ವಾಹನ, 3 ಕಾರು, 1 ಥಾರ್‌ ಜೀಪ್‌, 2 ಲಾರಿ, 1 ಗೂಡ್ಸ್‌ ವಾಹನ, 1 ಆಟೋ ರಿಕ್ಷಾ, 10.03 ಲಕ್ಷ ರೂ. ನಗದು, 33 ಕೆಜಿ ಗಂಧದ ಮರದ ತುಂಡು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು. ಸರಸ್ವತಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 8 ಕನ್ನ ಕಳವು ಪ್ರಕರಣ ಪತ್ತೆ ಹಚ್ಚಲಾಗಿದೆ. ಈ ಪೈಕಿ ಸೈಯದ್‌ ಅಲೀಂ ಎಂಬಾತನ ವಿರುದ್ಧ ರಾಜ್ಯದ ಮತ್ತು ಹೊರ ರಾಜ್ಯದ ವಿವಿಧೆಡೆ 69 ಪ್ರಕರಣ ದಾಖಲಾಗಿದ್ದು, 2013 ರಿಂದ ಈಚೆಗೆ ಕಳವು ಕೃತ್ಯದಲ್ಲಿ ತೊಡಗಿದ್ದಾನೆ ಎಂದರು. ಚಾಮರಾಜನಗರ ಮೂಲಕ ಕಳ್ಳ ಮಂಜ ಎಂಬಾತ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ. ಆತನ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಕುವೆಂಪುನಗರ ರಾಘವೇಂದ್ರಸ್ವಾಮಿ ಮಠ ಸೇರಿದಂತೆ ಎರಡು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ, ಹುಂಡಿ, ದೇವರ ತಾಳಿ ಮತ್ತಿತರ ಆಭರಣಗಳನ್ನು ಕಳವು ಮಾಡಿದ್ದಾಗಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು. ಪಾಲಿಟೆಕ್ನಿಕ್‌ ಒಂದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಮ್ಮ ಮನೆಯ ಸಮೀಪದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಮುರಿದು ಕಳವು ಮಾಡಿದ್ದ. ಈತನಿಂದ 25.08 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. ಉಳಿದಂತೆ ಮೇಟಗಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 17 ಆರೋಪಿಗಳು, ವಿಜನಯಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರು ಮಂದಿ, ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹನ್ನೊಂದು ಮಂದಿ ಮತ್ತು ನರಸಿಂಹರಾಜ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 9 ಮಂದಿ ಆರೋಪಿಗಳನ್ನು ಬಂಧಿಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು. ಫೆ. 24 ರಂದು ಉದಯಗಿರಿ ಪೊಲೀಸರು ರಾಜೀವನಗರ 2ನೇ ಹಂತದ ವರುಣ್‌ ಎಂಬಾತನನ್ನು ಬಂಧಿಸಿ ಆತನಿಂದ 24 ಕೆಜಿ 485 ಗ್ರಾಂ ಗಾಂಜಾ ಅಮಾನತ್ತುಪಡಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 22 ಎನ್‌.ಡಿ.ಪಿ.ಎಸ್‌ ಕಾಯ್ದೆ ಪ್ರಕರಣ ದಾಖಲಿಸಿ, 30,255 ಗ್ರಾಂ ಗಾಂಜಾ ಹಾಗೂ 311,579 ಮಿ.ಗ್ರಾಂ ಸಿಂಥೆಟಿಕ್‌ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 102 ಸೇವನೆ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 2025-26ನೇ ಸಾಲಿನಲ್ಲಿ 16 ಎನ್‌.ಡಿ.ಪಿ.ಎಸ್‌ ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದರು. ನಗರದಲ್ಲಿ ರೌಡಿ ಚಟುವಟಿಕೆ ನಿಯಂತ್ರಣದಲ್ಲಿಡುವ ಸಂಬಂಧ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಜನತಾ ಬಡಾವಣೆ ನಿವಾಸಿ ರೌಡಿ ಪಿ. ಗಣೇಶ್ (25)ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದ ಆದೇಶ ಹೊರಡಿಸಿರುವುದಾಗಿ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು. ಆಂಧ್ರ ಮೂಲದ ವ್ಯಕ್ತಿಯೊಬ್ಬ ಗೂಗಲ್‌ ಮೂಲಕ ಒಂಟಿ ಮನೆಯನ್ನು ಪತ್ತೆಹಚ್ಚಿ ಅವುಗಳನ್ನೇ ಗುರಿಯಾಗಿಸಿಕೊಂಡು ಒಬ್ಬನೇ ದಾಳಿ ಮಾಡಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸುಂದರ್ ರಾಜ್, ಎಸಿಪಿ ರವಿಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Feb 2026 12:15 am

Chikkamagaluru | ಕಾಡುಕೋಣ ದಾಳಿ; ರೈತನಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಕಾಫಿನಾಡಿನ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮುಂಡೋಳು ಗ್ರಾಮದಲ್ಲಿ ಬುಧವಾರ ಮುಂಜಾನೆ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ದಾಳಿಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಪ್ಪಗೌಡ (65) ಎಂಬವರು ಗಾಯಗೊಂಡ ಕೃಷಿಕ. ಬುಧವಾರ ಮುಂಜಾನೆ ಎಂದಿನಂತೆ ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ಇವರು, ಮೋಟಾರ್ ಸ್ಟಾರ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಹಿಂಬದಿಯಿಂದ ನುಗ್ಗಿ ಬಂದ ಕಾಡುಕೋಣ, ಕೊಂಬಿನಿಂದ ಶಿವಪ್ಪಗೌಡರ ಮೇಲೆ ಎಗರಿ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಶಿವಪ್ಪಗೌಡರ ತೊಡೆ ಹಾಗೂ ಬೆನ್ನಿನ ಭಾಗಕ್ಕೆ ಆಳವಾದ ಗಾಯಗಳಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಾಯಗಳ ಸ್ವರೂಪ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಅತ್ತ ಆನೆಗಳ ಹಿಂಡು, ಇತ್ತ ಕಾಡುಕೋಣಗಳ ದಾಳಿಯಿಂದ ಕೃಷಿಕರು ತೋಟದ ಕೆಲಸಕ್ಕೇ ಹೋಗದಂತಹ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಡುಕೋಣಗಳ ಹಾವಳಿ ತಡೆಗಟ್ಟಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 26 Feb 2026 12:08 am

ಅಮೆರಿಕ ಜೊತೆಗೆ ಇರಾನ್ ಸಂಧಾನ ಮಾತುಕತೆ, ಕೆಲವೇ ಹೊತ್ತಲ್ಲಿ ಸಭೆ ಆರಂಭ | USA And Iran

ಅಮೆರಿಕ ಮತ್ತೊಮ್ಮೆ ಇರಾನ್ ಜೊತೆಗೆ ಸಂಧಾನ ಸಭೆ ನಡೆಸಲು ಮುಂದೆ ಬಂದಿದೆ, ಇದೀಗ ಕಳೆದ ಕೆಲ ದಿನಗಳಲ್ಲಿ ನಡೆಯುತ್ತಿರುವ 3ನೇ ಸಭೆಗೆ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಅಮೆರಿಕ ಮತ್ತು ಇರಾನ್ ಯುದ್ಧಕ್ಕೆ ಸಜ್ಜಾಗಿವೆ ಎಂಬ ಭೀತಿ ನಡುವೆ, ಶಾಂತಿ ಮಾತುಕತೆ ಮಾಡಿಸಲು ಮಧ್ಯಪ್ರಾಚ್ಯದ ದೇಶಗಳು ಒದ್ದಾಡಿದ್ದವು. ಅದರಲ್ಲೂ ಓಮಾನ್ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ

ಒನ್ ಇ೦ಡಿಯ 25 Feb 2026 11:51 pm

Karnataka Jobs: ಸಿದ್ದರಾಮಯ್ಯ ಸರ್ಕಾರಕ್ಕೆ 'ದೂರುವ ಚಾಳಿ': ನಿರುದ್ಯೋಗದ ಬಗ್ಗೆ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ತಮ್ಮ ಸರ್ಕಾರದ ತಪ್ಪುಗಳಿದ್ದರೂ ಕೂಡ ಹಿಂದಿನ ಸರ್ಕಾರ ದೂರುವ ಚಾಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ ಎನ್ನುವ ಲೆಕ್ಕವನ್ನು ಕರುನಾಡಿನ ಯುವಜನರಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪ್ರತಿಕ್ರಿಯಿಸಿರುವ ಅವರು

ಒನ್ ಇ೦ಡಿಯ 25 Feb 2026 11:50 pm

ಬೆಂಗಳೂರಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತೀರೋ ಜೋಕೆ: ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂ ದಂಡ ವಸೂಲಿ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಇದೀಗ ಹದ್ದಿನ ಕಣ್ಣಿಟ್ಟಿರುವ ಘನತ್ಯಾಜ್ಯ ನಿರ್ವಹಣೆ ನಿಯಮಿತ ಈಗಾಗಲೇ 82 ಸಾವಿರ ಪ್ರಕರಣಗಳಲ್ಲಿ 3.6 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ. ಪ್ರತಿ ವಾರ್ಡ್ ನಲ್ಲೂ ಮಾರ್ಷಲ್ ಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಸ ಎಸೆವವರಿಗೆ ದಂಡ ಹಾಕಿ ಸ್ವಚ್ಛತೆಯ ಪಾಠ ಹೇಳುತ್ತಿದೆ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡುವವರಗೆ, ಉಗುಳುವವರಿಗೆ ಸಹ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.

ವಿಜಯ ಕರ್ನಾಟಕ 25 Feb 2026 11:43 pm

ರಷ್ಯಾ ವಿರುದ್ಧ ಉಕ್ರೇನ್ ಸೇನೆಯಿಂದ ದಾಳಿ, ಘಟನೆಯಲ್ಲಿ 7 ಜನ ಬಲಿ ಆರೋಪ | Ukraine Military

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 4 ವರ್ಷಗಳೇ ಮುಗಿದ ಹೋಗಿದ್ದು, ಇದೀಗ ಬರೋಬ್ಬರಿ ಅರ್ಧ ದಶಕ ಎಂದರೆ 5ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ ಈ ಯುದ್ಧ. ಹೀಗಿದ್ದಾಗ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಲು ಒಂದು ಕಡೆ ಅಮೆರಿಕ ಪರದಾಡುತ್ತಿದೆ. ಯುರೋಪ್ ದೇಶಗಳು ಉಕ್ರೇನ್‌ಗೆ ಸಹಾಯ ಮಾಡಿ ಮಾಡಿ ನಲುಗಿ ಹೋಗಿವೆ. ಇಂತಹ

ಒನ್ ಇ೦ಡಿಯ 25 Feb 2026 11:38 pm

ಗಾಝಾ ಶಾಂತಿ ಉಪಕ್ರಮವನ್ನು ಭಾರತ ಬೆಂಬಲಿಸುತ್ತದೆ: ಪ್ರಧಾನಿ ಮೋದಿ

► ಇಸ್ರೇಲ್ ಸಂಸತ್ತು ನೆಸ್ಸೆಟನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ► ಮೋದಿಗೆ ನೆಸ್ಸೆಟ್ ನ ಅತ್ಯುನ್ನತ ಗೌರವ ಪ್ರದಾನ

ವಾರ್ತಾ ಭಾರತಿ 25 Feb 2026 11:37 pm

ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಪಾಕಿಸ್ತಾನಕ್ಕೆ ಶುರುವಾಯ್ತು ಭಯ | PM Narendra Modi

ಕಳ್ಳನ ಮನಸ್ಸು ಹುಳ್ಳಗೆ ಅನ್ನೋ ಗಾದೆ ಮಾತಿನಂತೆ, ಉಗ್ರರ ಪೋಷಕ ದೇಶವಾಗಿರುವ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವುದಿಲ್ಲ ಅಂತಾ ಕಾಣುತ್ತದೆ. ಏಕೆಂದರೆ ಭಾರತ ಮತ್ತು ಇಸ್ರೇಲ್ ನಡುವೆ ಈಗ ಮಹತ್ವದ ಮಾತುಕತೆ ಆರಂಭ ಆಗಿದ್ದು, ಎರಡೂ ದೇಶಗಳು ದೊಡ್ಡ ಮಟ್ಟದಲ್ಲಿ ಒಪ್ಪಂದಕ್ಕೆ ಸಜ್ಜಾಗಿವೆ. ಇದೇ ಸಮಯದಲ್ಲಿ ಇಸ್ರೇಲ್ ಸರ್ಕಾರ ಕೂಡ ಪ್ರಧಾನಿ ಮೋದಿ ಅವರನ್ನು ಭರ್ಜರಿಯಾಗಿ

ಒನ್ ಇ೦ಡಿಯ 25 Feb 2026 11:24 pm

ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನದಂದೇ ಜನಿಸಿದ್ದ ಮೋದಿ: ಕನೆಸೆಟ್‌ ನಲ್ಲಿ ಭಾರತದ ಪ್ರಧಾನಿ ಹೇಳಿದ್ದೇನು?

PM Modi In Israel- ಭಯೋತ್ಪಾದನೆ ವಿಚಾರದಲ್ಲಿ ಇಸ್ರೇಲ್ ಮತ್ತು ಭಾರತಗಳೆರಡೂ ಸಮಾನ ದುಃಖಿಗಳಾಗಿದ್ದು ಉಗ್ರವಾದ ನಿಗ್ರಹದಲ್ಲಿ ಇಸ್ರೇಲ್ ಗೆ ಭಾರತ ಸಾಥ್ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಇಸ್ರೇಲ್ ಪ್ರವಾಸದಲ್ಲಿರುವ ಅವರು ಬುಧವಾರ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಮುಂಬಯಿ ಮೇಲಿನ (26/11) ಉಗ್ರರ ದಾಳಿ ಮತ್ತು ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ ದಾಳಿ ಮನುಕುಲವನ್ನು ಘಾಸಿಗೊಳಿಸಿದ ಕೃತ್ಯಗಳು ಎಂದು ಅವರು ತುಲನೆ ಮಾಡಿದರು.

ವಿಜಯ ಕರ್ನಾಟಕ 25 Feb 2026 11:11 pm

Cabinet Expansion: ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯ ಆಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Cabinet Expansion: ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಉದ್ಯೋಗ ಒದಗಿಸುವ ಭರವಸೆಯನ್ನು ಸರ್ಕಾರ ನೀಡುತ್ತದೆ. ಒಳಮೀಸಲಾತಿಯ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಯಿತು. ಪ್ರಸ್ತುತ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದರು. ಇನ್ನು ಚಿಕ್ಕಮಗಳೂರಿನಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಅವರು, ಆನೆ, ಚಿರತೆ

ಒನ್ ಇ೦ಡಿಯ 25 Feb 2026 11:00 pm

NZ Vs SL Highlights- ರಚಿನ್ ರವೀಂದ್ರ ಆಲ್ರೌಂಡ್ ಆಟಕ್ಕೆ ಆತಿಥೇಯ ಶ್ರೀಲಂಕಾ ಟೂರ್ನಿಯಿಂದಲೇ ಔಟ್! ಈಗ ಪಾಕ್ ಗೆ ಪುಕಪುಕ!

ಕೊಲಂಬೊದ ನಿಧಾನಗತಿಯ ಪಿಚ್ ನಲ್ಲಿ ಆರಂಭದಲ್ಲಿ ಎಡವಿದರೂ ಸಾವರಿಸಿಕೊಂಡು ಆಡಿದ ನ್ಯೂಜಿಲೆಂಡ್ ಆತಿಥೇಯ ಶ್ರೀಲಂಕಾವನ್ನು 61 ರನ್ ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೇವೇಳೆ ನ್ಯೂಜಿಲೆಂಡ್ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಪ್ರವೇಶಕ್ಕೆ ಆತಂಕವನ್ನು ಉಂಟುಮಾಡಿದೆ. ಪಾಕಿಸ್ತಾನ ತನ್ನ ಕೊನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಮಾತ್ರವಲ್ಲದೆ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದಲ್ಲಿ ಮಾತ್ರವೇ ಇದೀಗ ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶ ಇದೆ. ಇದೀಗ ಭರ್ಜರಿ ಫಾರ್ಮ್ ನಲ್ಲಿರುವ ನ್ಯೂಜಿಲೆಂಡ್ ತಂಡ ತನ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದಲ್ಲಿ ಪಾಕಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿದಲ್ಲಿ ಪಾಕಿಸ್ತಾನದ ಸೆಮಿಫೈನಲ್ ಹಾದಿ ಇದಕ್ಕಿಂತ ಸುಲಭವಿರುತ್ತಿತ್ತು. ಕೊಲಂಬೊದಲ್ಲಿ ನಡೆದ ನ ಸೂಪರ್ 8 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕುತ್ತಕವಾಗಿ ಶ್ರೀಲಂಕಾ ತಂಡ 10 ಓವರ್ ಗಳು ಮುಗಿದಾಗ 107 ರನ್ ಗಳಿಸಲು ಶಕ್ತವಾಯಿತು. () ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 168/7, ಮಿಚೆಲ್ ಸ್ಯಾಂಟ್ನರ್ 47(26), ಕೋಲ್ ಕೋಲ್ ಮೆಕೊಂಚಿ ನಾಟೌಟ್ 31(23), ರಚಿನ್ ರವೀಂದ್ರ 32(22). ಮಹೀಶ್ ತೀಕ್ಷಣ 30ಕ್ಕೆ 3, ದುಶ್ಮಂತ ಚಾಮಿರ 38ಕ್ಕೆ 3.

ವಿಜಯ ಕರ್ನಾಟಕ 25 Feb 2026 10:43 pm

ಧರ್ಮ, ಜಾತಿ ಆಧಾರವಾಗಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ಸಂವಿಧಾನದ ಉಲ್ಲಂಘನೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 25: ಭಾಷಣಗಳು, ಮೀಮ್ಸ್, ವ್ಯಂಗ್ಯಚಿತ್ರಗಳು ಅಥವಾ ದೃಶ್ಯಕಲೆಗಳ ಮೂಲಕ ಯಾವುದೇ ಸಮುದಾಯವನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವುದು ಸಾಂವಿಧಾನಿಕವಾಗಿ ಅನುಮತಿಸಲ್ಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಧರ್ಮ, ಜಾತಿ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ಸಂವಿಧಾನದ ಆತ್ಮಕ್ಕೆ ವಿರುದ್ಧ ಎಂದು ಪೀಠವು ಹೇಳಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ‘ಘೂಸ್ ಖೋರ್ ಪಾಂಡತ್’ ಚಿತ್ರದ ಶೀರ್ಷಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ ಈ ಮಹತ್ವದ ಅವಲೋಕನಗಳನ್ನು ದಾಖಲಿಸಿದ್ದಾರೆ. ನಿರ್ಮಾಪಕರು ಶೀರ್ಷಿಕೆಯನ್ನು ಬದಲಾಯಿಸಲು ಒಪ್ಪಿಕೊಂಡ ನಂತರ, ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಮುಕ್ತಾಯಗೊಳಿಸಿತು. ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಸಚಿವರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಇಂತಹ ನಡೆ ತಾಳಿದರೆ ಅದು ಇನ್ನಷ್ಟು ಗಂಭೀರ ವಿಷಯವಾಗುತ್ತದೆ. ಸಂವಿಧಾನವನ್ನು ಕಾಪಾಡುವ ಪ್ರಮಾಣವಚನ ಸ್ವೀಕರಿಸಿರುವವರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಮಾಡಿದ ಭಾಷಣಗಳ ಕುರಿತು ಉದ್ಭವಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಅಭಿಪ್ರಾಯಗಳು ಪ್ರಸ್ತುತತೆಯನ್ನು ಪಡೆದಿವೆ. ಭಾರತದ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಪೀಠವು ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದ್ವೇಷ ಭಾಷಣದ ಎಫ್‌ಐಆರ್ ಕೋರಿ ಸಲ್ಲಿಸಲಾದ ವಿಧಿ 32 ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿ, ಅರ್ಜಿದಾರರನ್ನು ಹೈಕೋರ್ಟ್‌ಗೆ ತೆರಳುವಂತೆ ಸೂಚಿಸಿತ್ತು. ಶೀರ್ಷಿಕೆ ಹಿಂತೆಗೆದುಕೊಳ್ಳಲ್ಪಟ್ಟ ಹಿನ್ನೆಲೆಯಲ್ಲಿ ಅಂತಿಮ ತೀರ್ಪಿನ ಅಗತ್ಯವಿಲ್ಲದಿದ್ದರೂ, ಭ್ರಾತೃತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಸಾಂವಿಧಾನಿಕ ತತ್ವಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನ್ಯಾಯಮೂರ್ತಿ ಭುಯಾನ್ ಅಭಿಪ್ರಾಯಪಟ್ಟರು. ಭ್ರಾತೃತ್ವವು ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿತ ಮೂಲಭೂತ ಮೌಲ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ವಿಧಿ 51A(e) ಪ್ರಕಾರ ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ವೈವಿಧ್ಯತೆಗಳನ್ನು ಮೀರಿ ಸಾಮರಸ್ಯ ಮತ್ತು ಸಹೋದರತ್ವವನ್ನು ಉತ್ತೇಜಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಭ್ರಾತೃತ್ವವನ್ನು ಸ್ವಾತಂತ್ರ್ಯ ಮತ್ತು ಸಮಾನತೆಯೊಂದಿಗೆ ಜೋಡಿಸಿದ್ದರು ಎಂದು ನ್ಯಾಯಮೂರ್ತಿ ಭುಯಾನ್ ಉಲ್ಲೇಖಿಸಿದರು. “ಭ್ರಾತೃತ್ವವೆಂದರೆ ಸಹಮಾನವರ ಬಗ್ಗೆ ಗೌರವದ ಮನೋಭಾವ. ಜಾತಿ, ಧರ್ಮ, ಭಾಷೆ ಬೇಧವಿಲ್ಲದೆ ಪರಸ್ಪರ ಗೌರವಿಸುವುದು ನಮ್ಮ ಸಾಂವಿಧಾನಿಕ ಧರ್ಮ,” ಎಂದು ಅವರು ಹೇಳಿದ್ದಾರೆ. ಪೌರತ್ವ ಕಾಯ್ದೆಯ ಸೆಕ್ಷನ್ 6A ಕುರಿತ ತೀರ್ಪನ್ನು ಉಲ್ಲೇಖಿಸಿ, ಸಮಾಜದೊಳಗಿನ ಎಲ್ಲಾ ವ್ಯಕ್ತಿಗಳಲ್ಲಿ ಸಹೋದರತ್ವದ ಭಾವನೆ ಬೆಳೆಸುವುದು ಭ್ರಾತೃತ್ವದ ಉದ್ದೇಶವೆಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ ಎಂದು ಅವರು ಸ್ಮರಿಸಿದರು. “ರಾಜ್ಯ ಅಥವಾ ರಾಜ್ಯೇತರ ವ್ಯಕ್ತಿಗಳಾಗಿರಲಿ, ಯಾವುದೇ ಮಾಧ್ಯಮದ ಮೂಲಕ ಸಮುದಾಯವನ್ನು ನಿಂದಿಸುವುದು ಸಾಂವಿಧಾನಿಕವಾಗಿ ಮಾನ್ಯವಲ್ಲ,” ಎಂದು ಪೀಠ ಸ್ಪಷ್ಟಪಡಿಸಿದೆ. ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಚಲನಚಿತ್ರ ನಿರ್ಮಾಪಕರಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಕಲಾತ್ಮಕ ಅಭಿವ್ಯಕ್ತಿ ಪ್ರಜಾಪ್ರಭುತ್ವ ಚರ್ಚೆಯ ಪ್ರಮುಖ ಅಂಗವಾಗಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ. “75 ವರ್ಷಗಳ ಹಳೆಯ ಗಣರಾಜ್ಯವು ಕವಿತೆ ಅಥವಾ ಹಾಸ್ಯದಿಂದ ಬೆದರಿಕೆಗೆ ಒಳಗಾಗುವಷ್ಟು ದುರ್ಬಲವಲ್ಲ. ಇದೇ ತತ್ವ ಚಿತ್ರ ಶೀರ್ಷಿಕೆಗೂ ಅನ್ವಯಿಸುತ್ತದೆ,” ಎಂದು ನ್ಯಾಯಮೂರ್ತಿ ಭುಯಾನ್ ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 25 Feb 2026 10:43 pm

ಲೆಂಟನ್ ಗಾಸ್ಪೆಲ್ ಕಾಮಿಕ್ಸ್ ಪುಸ್ತಕ ಬಿಡುಗಡೆ

ಮಂಗಳೂರು: ಮಕ್ಕಳಿಗೆ ಅನುಕೂಲಕರವಾದ ವಿಶಿಷ್ಟ ಲೆಂಟನ್ ಪ್ರಕಟಣೆ ‘ಲೆಂಟನ್ ಗಾಸ್ಪೆಲ್ ಕಾಮಿಕ್ಸ್’ ಪುಸ್ತಕವನ್ನು ಮಂಗಳೂರು ಬಿಕರ್ಣಕಟ್ಟೆಯ ಇನ್ಫಂಟ್ ಜೀಸಸ್ ಶ್ರೈನ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು. ಇನ್ಫೆಂಟ್ ಜೀಸಸ್ ಶ್ರೈನ್ ನಿರ್ದೇಶಕ ಫಾ. ಸ್ಟಿಫನ್ ಪಿರೆರಾ ಈ ಪುಸ್ತಕವು ಲೆಂಟ್ ಅವಧಿಯಲ್ಲಿ ಮಕ್ಕಳಿಗೆ ಸುವಾರ್ತೆ ಯನ್ನು ಆಕರ್ಷಕ ಹಾಗೂ ಅರ್ಥಪೂರ್ಣ ರೀತಿಯಲ್ಲಿ ತಿಳಿದುಕೊಳ್ಳಲು ಮತ್ತು ಅನುಭವಿಸಲು ಸಹಾಯ ಮಾಡುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು. ಈ ಪುಸ್ತಕವು ಮಕ್ಕಳನ್ನು ಯೇಸುವಿನ ಶಿಲುಬೆಯ ಕಡೆಗಿನ ಪ್ರಯಾಣವನ್ನು ತಿಳಿಯಲು , ಈಸ್ಟರ್ ಹಬ್ಬದ ಆನಂದ ವನ್ನು ಆಳವಾದ ಅರ್ಥದೊಂದಿಗೆ ಹಾಗೂ ಉತ್ಸಾಹದಿಂದ ಅನುಭವಿಸಲು ಪ್ರೇರೇಪಿಸುತ್ತದೆ ಎಂದು ಅವರು ತಿಳಿಸಿದರು.  ಧ್ಯಾನ ಸಾಧನಾ ನಿರ್ದೇಶಕರೂ ಹಾಗೂ ಲೇಖಕರೂ ಫಾ. ರಿಚರ್ಡ್ ಮಿನೆಜಸ್ ಅವರು, ಪ್ರತಿದಿನದ ಸುವಾರ್ತೆ ಯನ್ನು ಎರಡು ಭಾಗಗಳಲ್ಲಿ ನೀಡಲಾಗಿದೆ .ಮಕ್ಕಳಿಗೆ ಅರ್ಥವಾಗುವ ಕಥನ ರೂಪದಲ್ಲಿ ಮತ್ತು ಅವರ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಪ್ರಾಯೋಗಿಕ ಚಿಂತನೆ ರೂಪದಲ್ಲಿ. ಈ ಪುಸ್ತಕವು ಧಾರ್ಮಿಕ ರೂಪುಗೊಳಿಸು ವಿಕೆ ಮತ್ತು ಮಾನಸಿಕ ಅರಿವನ್ನು ಒಟ್ಟುಗೂಡಿಸಿ ಸಮಗ್ರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಫಾ. ಮೆಲ್ವಿನ್ ಡಿಕುನ್ಹಾ, , ಫಾ. ವಾಲ್ಟರ್ ಡಿ ಸೋಜ ಹಾಗೂ ಶ್ರೈನ್ ನಿರ್ದೇಶಕ ಫಾ. ಸ್ಟಿಫನ್ ಪಿರೆರಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 10:37 pm

ಎನ್‌ಐಟಿಕೆ ಸುರತ್ಕಲ್‌ನಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟನೆ

ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ ) ಸುರತ್ಕಲ್‌ನಲ್ಲಿ ಪ್ರತಿದಿನ ಒಂದು ಮಿಲಿಯನ್ ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕ ಮಂಗಳವಾರ ಆರಂಭಗೊಂಡಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ 1989ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ಯಾಚ್‌ನ ಎನ್‌ಐಟಿಕೆ ಹಳೆಯ ವಿದ್ಯಾರ್ಥಿ ಸುಧೀರ್ ಕುಮಾರ್ ಮತ್ತು ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ. ಬಿ. ರವಿ ನೆರವೇರಿಸಿದರು. ಎನ್‌ಐಟಿಕೆ ಹಳೆಯ ವಿದ್ಯಾರ್ಥಿಯಾಗಿರುವುದರಿಂದ ಈ ಯೋಜನೆಯನ್ನು ಎನ್‌ಐಟಿಕೆಯಲ್ಲಿ ಕೈಗೊಳ್ಳುವುದು ವಿಶೇಷ ಗೌರವವಾಗಿದೆ ಎಂದು ತಿಳಿಸಿದರು. ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು‘‘ಕಳೆದ ವರ್ಷ ಕ್ಯಾಂಪಸ್‌ನ ಉತ್ತರ-ಪೂರ್ವ ಭಾಗದಲ್ಲಿ ಸುಮಾರು 30 ಮಿಲಿಯನ್ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ಜಲಾಶಯವನ್ನು ನಿರ್ಮಿಸಲಾಗಿತ್ತು. ಈ ಶೋಧನಾ ಘಟಕವು ಅದರ ನೀರನ್ನು, ಹಾಗೆಯೇ ಕ್ಯಾಂಪಸ್‌ನ ಇತರ ಮೂಲಗಳಿಂದ ಪಡೆಯುವ ನೀರನ್ನು, ಬೇಸಿಗೆ ತಿಂಗಳಲ್ಲಿ ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಕೊರತೆಯನ್ನು ಪೂರೈಸಲು ಬಳಸಲು ಸಾಧ್ಯವಾಗುತ್ತದೆ.’’ ಅವರು ಹೇಳಿದರು ಈ ಘಟಕವು ಕ್ಯಾಂಪಸ್‌ನ ಟ್ಯೂಬ್‌ವೆಲ್‌ಗಳು ಮತ್ತು ಓಪನ್‌ವೆಲ್‌ಗಳಿಂದ ಪಂಪ್ ಮಾಡಲಾದ ಕಚ್ಚಾ ನೀರನ್ನು ಶುದ್ಧೀಕರಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ದೊರೆಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಪೆಟ್ರೋನೆಟ್‌ನ ತಾಂತ್ರಿಕ ಮುಖ್ಯಸ್ಥೆ ಸೈಸುಧಮ್ಯೀ, ಕಾರ್ಯಾಚರಣೆ ಮುಖ್ಯಸ್ಥ ಉದಯ ಪೈ, ಜೊತೆಗೆ ರಿಜಿಸ್ಟ್ರಾರ್ (ಪ್ರಭಾರ) ಪ್ರೊ.ಕುಮಾರ್ ಜಿ.ಎನ್, ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ. ವೆಂಕಟೇಶ ಪೆರುಮಾಳ್, ಹಳೆಯ ವಿದ್ಯಾರ್ಥಿ ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಪ್ರಸನ್ನ ಬೆಳೂರು, ಹಾಗೂ ಇತರ ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 25 Feb 2026 10:35 pm

ಅಮೆರಿಕದಲ್ಲಿ ಡೆಲಿಲಾ ಕಾನೂನು ತರಲು ಮುಂದಾದ ಟ್ರಂಪ್‌; ಕಾನೂನು ಜಾರಿಯಾದರೆ ಭಾರತೀಯ ಟ್ರಕ್ ಡ್ರೈವರ್‌ಗಳಿಗೆ ಸಂಕಷ್ಟ ಯಾಕೆ?

ಅಕ್ರಮ ವಲಸಿಗರಿಗೆ ವಾಣಿಜ್ಯ ಚಾಲನಾ ಪರವಾನಗಿ ನೀಡುವುದನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿರುವ ‘ಡೆಲಿಲಾ ಕಾನೂನು’ ಅನುಷ್ಠಾನಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಒತ್ತಾಯಿಸಿದ್ದಾರೆ. ಈ ಕ್ರಮವು ಸಾವಿರಾರು ಭಾರತೀಯ ಮೂಲದ ಚಾಲಕರ ಮೇಲೆ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ಚಾಲಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂನ್ 20, 2024ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಕೌಂಟಿಯ ಅಡೆಲಾಂಟೊದಲ್ಲಿ ಭಾರತೀಯ ಟ್ರಕ್ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಡೆಲಿಲಾ ಕೋಲ್ಮನ್ ಎಂಬ ಬಾಲಕಿಗೆ ಗಂಭೀರ ಗಾಯಗಳಾಗಿತ್ತು. ಈ ಬಾಲಕಿಯ ಹೆಸರನ್ನೇ ಈ ಕಾನೂನಿಗೆ ಇಡಲಾಗಿದೆ. ತಮ್ಮ ವಾರ್ಷಿಕ ಯುಎಸ್ ಸ್ಟೇಟ್ ಆಫ್ ದಿ ಯೂನಿಯನ್ ಉದ್ದೇಶಿಸಿ ನಡೆಸಿದ ಭಾಷಣದಲ್ಲಿ ಅಧ್ಯಕ್ಷ ಟ್ರಂಪ್ ಈ ಕಾನೂನು ಬಗ್ಗೆ ಉಲ್ಲೇಖಿಸಿದ್ದಾರೆ. ಯಾವುದೇ ರಾಜ್ಯವು ದಾಖಲೆರಹಿತ ಚಾಲಕರಿಗೆ ಚಾಲನಾ ಪರವಾನಗಿ ನೀಡುವುದನ್ನು ತಡೆಯಲು ಏಕೀಕೃತ ಪ್ರಯತ್ನದ ಬೇಡಿಕೆಯನ್ನು ಟ್ರಂಪ್ ಒತ್ತಾಯಿಸಿದ್ದಾರೆ. “ಇಂದು ರಾತ್ರಿ, ನಾನು ಪ್ರತಿಯೊಬ್ಬ ಜನಪ್ರತಿನಿಧಿಯನ್ನು ನನ್ನ ಆಡಳಿತದೊಂದಿಗೆ ಸೇರಿ ಮೂಲಭೂತ ತತ್ವವನ್ನು ಪುನರುಚ್ಚರಿಸುವಂತೆ ಆಹ್ವಾನಿಸುತ್ತಿದ್ದೇನೆ. ನೀವು ಈ ಹೇಳಿಕೆಯನ್ನು ಒಪ್ಪಿದರೆ, ಎದ್ದುನಿಂತು ನಿಮ್ಮ ಬೆಂಬಲವನ್ನು ತೋರಿಸಿ. ಅಮೆರಿಕನ್ ಸರ್ಕಾರದ ಮೊದಲ ಕರ್ತವ್ಯವೆಂದರೆ ಅಕ್ರಮ ವಿದೇಶಿಯರನ್ನಲ್ಲ, ಅಮೆರಿಕನ್ ನಾಗರಿಕರನ್ನು ರಕ್ಷಿಸುವುದು” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಯಾರು ಈ ಡೆಲಿಲಾ ಕೋಲ್ಮನ್? ಡೆಲಿಲಾ ಕೋಲ್ಮನ್ ಆರು ವರ್ಷದ ಬಾಲಕಿ. ಭಾರತೀಯ ಟ್ರಕ್ ಚಾಲಕನಿಂದ ಸಂಭವಿಸಿದ ಬಹುವಾಹನ ಅಪಘಾತದಲ್ಲಿ ಈಕೆಗೆ ಗಂಭೀರ ಗಾಯಗಳಾಗಿತ್ತು. ಅಪಘಾತದ ಸಮಯದಲ್ಲಿ ಕೋಲ್ಮನ್‌ಗೆ ಐದು ವರ್ಷ ವಯಸ್ಸಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ವಿಮಾನದ ಮೂಲಕ ಅಪಘಾತ ಸ್ಥಳದಿಂದ ಹೊರತರಲಾಗಿತ್ತು. ಈ ಅಪಘಾತದಲ್ಲಿ ಕೋಲ್ಮನ್‌ನ ಮೆದುಳು ಮತ್ತು ತಲೆಬುರುಡೆಗೆ ಗಾಯಗಳಾಗಿದ್ದು, ಎಲುಬು ಮುರಿದಿತ್ತು. ಆಕೆ ಮೂರು ವಾರಗಳ ಕಾಲ ಕೋಮಾದಲ್ಲಿದ್ದಳು. ನಂತರ ಆಕೆ ಕ್ರೇನಿಯೆಕ್ಟಮಿ (ತಲೆಬುರುಡೆಯ ಒಂದು ಭಾಗವನ್ನು ತೆಗೆಯುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಬೇಕಾಯಿತು. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಅಪಘಾತದ ನಂತರ ಕೋಲ್ಮನ್ ನಡೆಯಲು ಕಷ್ಟಪಡುತ್ತಿದ್ದಾಳೆ. ಆಕೆಗೆ ಆಹಾರ ಸೇವಿಸಲು ಆಗುತ್ತಿಲ್ಲ. ಅವಳಿಗೆ ಡಿಪ್ಲೆಜಿಕ್ ಸೆರೆಬ್ರಲ್ ಪಾಲ್ಸಿ ಇರುವುದಾಗಿ ಪತ್ತೆಯಾಗಿದೆ. ಅಧ್ಯಕ್ಷ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಕೋಲ್ಮನ್ ಕೂಡ ಭಾಗವಹಿಸಿದ್ದಾಳೆ. ತಮ್ಮ ಭಾಷಣದಲ್ಲಿ ಟ್ರಂಪ್, “ಡೆಲಿಲಾ ಎಂದಿಗೂ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ, ಉತ್ತಮ ಜೀವನವನ್ನು ನಡೆಸುವುದಿಲ್ಲ ಎಂದು ವೈದ್ಯರು ಹೇಳಿದರು. ಅವಳಿಗೆ ತಿನ್ನಲು ಸಹ ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲ ತೊಂದರೆಗಳನ್ನು ಅನುಭವಿಸಿಯೂ ಅವಳು ಈಗ ಮೊದಲ ತರಗತಿಯಲ್ಲಿದ್ದಾಳೆ, ನಡೆಯಲು ಕಲಿಯುತ್ತಿದ್ದಾಳೆ. ಅವಳು ಇಂದು ಸಂಜೆ ಆಕೆಯ ಅಪ್ಪ ಮಾರ್ಕಸ್ ಜೊತೆ ಇಲ್ಲಿದ್ದಾಳೆ. ಆತ ಅದ್ಭುತ ವ್ಯಕ್ತಿ. ಡೆಲಿಲಾ, ನೀವು ದೊಡ್ಡ ಪ್ರೇರಣೆ. ದಯವಿಟ್ಟು ಎಲ್ಲರೂ ಎದ್ದುನಿಲ್ಲಿ. ಧನ್ಯವಾದಗಳು, ಡೆಲಿಲಾ” ಎಂದು ಹೇಳಿದ್ದಾರೆ. ಆರೋಪಿ ಚಾಲಕ ಯಾರು? ಜೂನ್ 2024ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪರ್ತಾಪ್ ಸಿಂಗ್ ಎಂಬಾತ ಚಲಾಯಿಸುತ್ತಿದ್ದ 18 ಚಕ್ರದ ಟ್ರಕ್ ಒಂದಕ್ಕಿಂತ ಹೆಚ್ಚು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದ ಭಾರತೀಯ ವ್ಯಕ್ತಿಯಾಗಿರುವ ಪರ್ತಾಪ್ ಸಿಂಗ್ ಅಸುರಕ್ಷಿತ ವೇಗದಲ್ಲಿ ಚಾಲನೆ ಮಾಡಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ದರು. ಅವರನ್ನು ಆಗಸ್ಟ್ 2025ರಲ್ಲಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದರು. ಇದಕ್ಕೂ ಮುನ್ನ 2025ರ ಆಗಸ್ಟ್‌ನಲ್ಲಿ ಭಾರತದ 28 ವರ್ಷದ ಅಕ್ರಮ ವಲಸಿಗ ಹರ್ಜಿಂದರ್ ಸಿಂಗ್ ಫೋರ್ಟ್ ಪಿಯರ್ಸ್ ಬಳಿಯ “ಅಧಿಕೃತ ಬಳಕೆಗೆ ಮಾತ್ರ” ಪ್ರವೇಶ ದ್ವಾರದಲ್ಲಿ ಯು-ಟರ್ನ್ ಮಾಡಲು ಪ್ರಯತ್ನಿಸುವಾಗ ಫ್ಲೋರಿಡಾ ಟರ್ನ್‌ಪೈಕ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಅವರ ಸೆಮಿ-ಟ್ರಕ್ ಇಲ್ಲಿ ಸಿಕ್ಕಿಹಾಕಿಕೊಂಡು ಎಲ್ಲಾ ಲೇನ್‌ಗಳನ್ನು ನಿರ್ಬಂಧಿಸಿತು. ಇದರಲ್ಲಿ ಮಿನಿವ್ಯಾನ್ ಟ್ರೇಲರ್‌ಗೆ ಡಿಕ್ಕಿ ಹೊಡೆದು ಮೂವರು ಸಾವಿಗೀಡಾಗಿದ್ದರು. 2018ರಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ ಸಿಂಗ್ ಕ್ಯಾಲಿಫೋರ್ನಿಯಾಗೆ ತೆರಳಿದ್ದರು. ಅಲ್ಲಿ ಬಂಧನಕ್ಕೊಳಗಾದ ಅವರನ್ನು ಫ್ಲೋರಿಡಾಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅವರ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಅಪರಾಧ ಸಾಬೀತಾದರೆ, ಅವರು 45 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಕ್ರಮ ವಲಸಿಗರನ್ನು ಒಳಗೊಂಡ ಎರಡು ಪ್ರಮುಖ ಅಪಘಾತಗಳ ನಂತರ ವಾಣಿಜ್ಯ ಚಾಲನಾ ಪರವಾನಗಿಗಳ ವಿತರಣೆಯನ್ನು ನಿರ್ಬಂಧಿಸಲು ಅಮೆರಿಕ ನಿರ್ಧರಿಸಿತು. ಭಾರತೀಯ ವಲಸಿಗರ ಮೇಲೆ ಪರಿಣಾಮ ಡೊನಾಲ್ಡ್ ಟ್ರಂಪ್ ಆಡಳಿತವು ಹಿಂದೆ 2,400 ಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಿತ್ತು. ಜನವರಿ 2025ರಿಂದ ಜನವರಿ 2026ರವರೆಗೆ 2,400 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ ಅಥವಾ ಸ್ವದೇಶಕ್ಕೆ ಕಳುಹಿಸಲಾಗಿದೆ. 1.5 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಟ್ರಕ್ ಚಾಲಕರು ಅಮೆರಿಕದಲ್ಲಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ಹರಿಯಾಣದವರು ಎಂದು ವರದಿಯಾಗಿದೆ. ಆದಾಗ್ಯೂ, ಟ್ರಂಪ್ ತಮ್ಮ ಭಾಷಣದಲ್ಲಿ ಚಾಲಕರಿಗೆ ಇಂಗ್ಲಿಷ್ ಪ್ರಾವೀಣ್ಯತೆ ಇಲ್ಲದಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಹೆಚ್ಚಿನ ಅಕ್ರಮ ವಲಸಿಗರು ಇಂಗ್ಲಿಷ್ ಮಾತನಾಡುವುದಿಲ್ಲ. ಅವರಿಗೆ ರಸ್ತೆಗಳಲ್ಲಿನ ಗುರುತು ಫಲಕಗಳನ್ನು ಸಹ ಓದಲು ಬರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಕಳೆದ ವರ್ಷ ಅಮೆರಿಕದಾದ್ಯಂತ ಕಡ್ಡಾಯ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಸುಮಾರು 7,248 ವಾಣಿಜ್ಯ ಟ್ರಕ್ ಚಾಲಕರನ್ನು ಅನರ್ಹಗೊಳಿಸಲಾಗಿತ್ತು. ಇದರಲ್ಲಿ ಹೆಚ್ಚಿನವರು ಭಾರತೀಯ ಮೂಲದವರು ಎಂದು ವರದಿಯಾಗಿದೆ. ಭಾರತದ ಚಾಲಕರು ಒಳಗೊಂಡ ಹಲವಾರು ಅಪಘಾತಗಳ ನಂತರ ಯುಎಸ್ ಸಾರಿಗೆ ಇಲಾಖೆ (DOT) ಈ ಕ್ರಮ ಕೈಗೊಂಡಿತ್ತು. ಪಂಜಾಬ್ ಮತ್ತು ಹರಿಯಾಣದಿಂದ 1,30,000ರಿಂದ 1,50,000 ಟ್ರಕ್ ಚಾಲಕರು ಪ್ರಸ್ತುತ ಯುಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಅಮೆರಿಕಾದ ಪಂಜಾಬಿ ಟ್ರಕ್ಕರ್ಸ್ ಅಸೋಸಿಯೇಷನ್ ಅಂದಾಜಿಸಿದೆ. ಅವರಲ್ಲಿ ಹಲವರು ಹೊಸ ನಿಯಮಗಳಿಂದ ಪ್ರಭಾವಿತರಾಗಿದ್ದಾರೆ. 2025ರಿಂದ ಯುಎಸ್ ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (FMCSA) ಟ್ರಕ್ ಚಾಲಕರ ಭಾಷಾ ಕೌಶಲ್ಯದ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಫೆಡರಲ್ ನಿಯಂತ್ರಣ 49 ಸಿಎಫ್‌ಆರ್ 391.11(ಬಿ)(2) ಅಡಿಯಲ್ಲಿ ಅಧಿಕಾರಿಗಳು ಈಗ ರಸ್ತೆಬದಿಯ ತಪಾಸಣೆಯ ಸಮಯದಲ್ಲಿ ಕಡ್ಡಾಯ ಇಂಗ್ಲಿಷ್ ಭಾಷಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಸಂಚಾರ ಚಿಹ್ನೆಗಳನ್ನು ಅನುಸರಿಸಲು ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಅನ್ನು ಸಮರ್ಪಕವಾಗಿ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಯಾವುದೇ ವಾಣಿಜ್ಯ ಚಾಲಕನನ್ನು ಈಗ ಸ್ಥಳದಲ್ಲೇ ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಒಬಾಮಾ ಆಡಳಿತದ ಅವಧಿಯಲ್ಲಿ ಮತ್ತು 2016ರವರೆಗೆ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಚಾಲಕರನ್ನು ತಕ್ಷಣವೇ ಸೇವೆಯಿಂದ ತೆಗೆದುಹಾಕಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಜೂನ್ 25, 2026ರಿಂದ ಟ್ರಂಪ್ ಆಡಳಿತವು ಈ ಸಡಿಲಿಕೆಯನ್ನು ಕೊನೆಗೊಳಿಸಿದೆ. ಈಗ ಸಾರಿಗೆ ಇಲಾಖೆಯ ಹೊಸ ಆದೇಶಗಳ ಅಡಿಯಲ್ಲಿ ತಪಾಸಣೆಯ ಸಮಯದಲ್ಲಿ ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಯಾವುದೇ ಚಾಲಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ ಅಮೆರಿಕದಲ್ಲಿರುವ ಎಲ್ಲಾ ದಾಖಲೆರಹಿತ ವಲಸಿಗರಲ್ಲಿ ಸರಿಸುಮಾರು 4.8%ರಿಂದ 5% ರಷ್ಟು ಜನರು ಭಾರತದಿಂದ ಬಂದವರು. ಅಕ್ರಮ ವಲಸಿಗರ ಶೇಕಡಾವಾರು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಭಾರತವು ದಾಖಲೆರಹಿತ ವಲಸಿಗರ ಮೂರನೇ ಅತಿದೊಡ್ಡ ಮೂಲವಾಗಿದೆ.

ವಾರ್ತಾ ಭಾರತಿ 25 Feb 2026 10:30 pm

Urdu: ಆರೋಗ್ಯ ಇಲಾಖೆಯ ಉರ್ದು ಜಾಹೀರಾತು ವಿವಾದ: ಕನ್ನಡಪರ ಸಂಘಟನೆಗಳ ಆಕ್ಷೇಪ, ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು

Urdu: ಆರೋಗ್ಯ ಇಲಾಖೆಯು ಉರ್ದು ಭಾಷೆಯಲ್ಲಿ ನೀಡಿರುವ ಜಾಹೀರಾತು ತೀವ್ರ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ಜಾಹೀರಾತಿಗೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಈ ಜಾಹೀರಾತನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಕರ್ನಾಟಕ ಸರ್ಕಾರ ಕನ್ನಡ ಮರೆತುಬಿಟ್ರಾ,

ಒನ್ ಇ೦ಡಿಯ 25 Feb 2026 10:25 pm

ಕಸಾಪ ಅವ್ಯವಹಾರ ಸಾಬೀತು: ಆಡಳಿತಾಧಿಕಾರಿಯಿಂದ ಮಹೇಶ್ ಜೋಶಿಗೆ ನೋಟೀಸ್

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರಗಳು ಸಾಬೀತಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‍ನ ಆಡಳಿತಾಧಿಕಾರಿ ಮಹೇಶ್ ಜೋಶಿ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ. ಕಸಾಪದ ಅವ್ಯವಹಾರಗಳ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಸದರಿ ಅವ್ಯವಹಾರದ ಕುರಿತು ಕಾನೂನು ಕ್ರಮವಹಿಸುವಂತೆ ಸೂಚಿಸಿ ಕನ್ನಡ ಸಾಹಿತ್ಯ ಪರಿಷತ್‍ಗೆ ಪತ್ರ ಬರೆದಿದ್ದು, ಅದರಂತೆ ಮಹೇಶ್ ಜೋಶಿಗೆ ನೋಟೀಸ್ ನೀಡಿದ್ದಾರೆ. ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ, ಎಲ್ಲ ಕಾಮಗಾರಿಗಳನ್ನು ಪರಿಶೀಲಿಸಿ, ಸಲ್ಲಿಸಿರುವ ವರದಿಯಂತೆ 3,76,73,885 ರೂ.ಗಳ ಕಾಮಗಾರಿಗಳನ್ನು ನಾನ್ ಷೆಡ್ಯೂಲ್ ರೇಟ್‍ನಲ್ಲಿ, ಕೆಟಿಪಿಪಿ ನಿಯಮ ಉಲ್ಲಂಘಿಸಿ, ಕಾಮಗಾರಿಗಳ ನಿರ್ಮಾಣ ಮಾಡಿರುವುದು ಹಾಗೂ ಕಾಮಗಾರಿಗಳಲ್ಲಿ ಅಳತೆ ವ್ಯತ್ಯಾಸದ ಕಾರಣ 65,53,571 ರೂ. ಆರ್ಥಿಕ ನಷ್ಟ ಉಂಟುಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ 1,79,200 ರೂ., ಅಗ್ನಿಶಾಮಕ ಉಪಕರಣ ಖರೀದಿಯಲ್ಲಿ 1,75,452 ರೂ.ಗಳಂತೆ ಒಟ್ಟು 3,54,652 ರೂ.ಗಳನ್ನು ಹೆಚ್ಚುವರಿ ಮೊತ್ತವನ್ನು ಪಾವತಿಸಿ, ಸಾಹಿತ್ಯ ಪರಿಷತ್‍ಗೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ. ರವೀಂದ್ರ ಕುಲಕರ್ಣಿ ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ವಿದೇಶದಿಂದ ಅವರ ಸ್ವಂತ ಖರ್ಚಿನಲ್ಲಿ ಆಗಮಿಸಿದ್ದು, ಅವರ ಹೆಸರಿನಲ್ಲಿ 2,57,530ರೂ. ಬಿಲ್ ತೋರಿಸಿ ಹಣ ದುರುಪಯೋಗ ಮಾಡಿರುವುದು ಹಾಗೂ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಸಮ್ಮೇಳನದ ಆಹ್ವಾನ ಪತ್ರಿಕೆ ಮುದ್ರಣ ಮತ್ತು ಸನ್ಮಾನಿತರಿಗೆ ಸನ್ಮಾನಕ್ಕೆ ಸಂಬಂಧಿಸಿದ ಸಾಮಾಗ್ರಿಗಳ ಖರೀದಿಗಳಲ್ಲಿ ಒಟ್ಟು 86,57,321 ರೂ.ಹಣ ದುರುಪಯೋಗ ಪಡಿಸಿಕೊಂಡಿರುವುದು ಸಾಬೀತುಗೊಂಡಿರುತ್ತದೆ ಎಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಗುರುತಿನ ಕಾರ್ಡ್, ಸ್ಮಾರ್ಟ್ ಕಾರ್ಡ್ ತಯಾರಿಕೆಯಲ್ಲಿ 1,40,220 ರೂ. ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. ವಿಚಾರಣಾಂಶ-5, 6, 7, 8, 12 ಮತ್ತು 15ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಅವಕಾಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ವಿಚಾರಣೆಯಲ್ಲಿ ಸಾಬೀತುಗೊಂಡಿರುತ್ತದೆ ಎಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಸದರಿ ಉಲ್ಲಂಘನೆಗೆ ಕನ್ನಡ ಸಾಹಿತ್ಯ ಪರಿಷತ್‍ನ ಆ ಅವಧಿಯಲ್ಲಿನ ಅಧ್ಯಕ್ಷರನ್ನು ಜವಾಬ್ದಾರರನ್ನಾಗಿ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ಗೆ ಆರ್ಥಿಕ ನಷ್ಟ ಉಂಟುಮಾಡಿರುವುದು ವಿಚಾರಣಾ ವರದಿಯಲ್ಲಿ ಕಂಡು ಬಂದಿರುವ ಅಂಶಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ಸಂಖ್ಯೆ 7(8) ಮತ್ತು (9)ರಂತೆ ತಮ್ಮ ಮೇಲೆ ಏಕೆ ಕ್ರಮವಹಿಸಬಾರದು ಎಂಬುದಕ್ಕೆ ನಿಮ್ಮ ಸಮಜಾಯಿಷಿಕೆ ಏನಾದರೂ ಇದ್ದಲ್ಲಿ, ನೋಟೀಸ್ ಸ್ವೀಕರಿಸಿದ 7 ದಿನಗಳೊಳಗಾಗಿ ಲಿಖಿತ ಹೇಳಿಕೆ, ನೀಡಬೇಕು. ತಪ್ಪಿದ್ದಲ್ಲಿ, ಮುಂದಿನ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಬೈಲಾ, ಕ್ರಿಯಾ ಯೋಜನೆ ಅವಕಾಶವಿಲ್ಲದಿದ್ದರೂ ವಿದೇಶಿ ಪ್ರವಾಸ: ‘ಕನ್ನಡ ಸಾಹಿತ್ಯ ಪರಿಷತ್‍ನಿಂದ ವಿದೇಶಿ ಪ್ರವಾಸಕ್ಕೆ ಬೈಲಾ ಹಾಗೂ ಕ್ರಿಯಾ ಯೋಜನೆಯಲ್ಲಿ ಅವಕಾಶ ಇಲ್ಲದಿದ್ದರೂ, ಬಹರೇನ್ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಅಮೇರಿಕಾದ 12ನೆ ವಿಶ್ವ ಅಕ್ಕ ಕನ್ನಡ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಇವೆರಡರ ವೆಚ್ಚವನ್ನು ಸಂಘದವರೆ ಭರಿಸಿದ್ದರೂ, ತಾವು ಪರಿಷತ್‍ನಿಂದ ವಿಮಾನ ಟಿಕೆಟ್ ಮತ್ತು ವಸತಿ ವ್ಯವಸ್ಥೆ ಇವೆರಡರ ವೆಚ್ಚವನ್ನು ಪಡೆದಿರುವುದು ಹಾಗೂ ಇತರೆ ವಿದೇಶ ಪ್ರವಾಸ ಕೈಗೊಂಡು 26,70,052 ರೂ.ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿರುತ್ತದೆ. ಸದರಿ ಆರ್ಥಿಕ ನಷ್ಟಕ್ಕೆ ಕನ್ನಡ ಸಾಹಿತ್ಯ ಪರಿಷತ್‍ನ ಆ ಅವಧಿಯಲ್ಲಿನ ಅಧ್ಯಕ್ಷರನ್ನು ಜವಾಬ್ಧಾರರನ್ನಾಗಿ ಮಾಡಿ ವಿಚಾರಣಾ ವರದಿ ನೀಡಲಾಗಿದೆ’ ಎಂದು ಕಸಾಪ ಆಡಳಿತಾಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 10:23 pm

ಹಮಾಸ್ ಉಗ್ರರ ದಾಳಿ ಖಂಡಿಸಿದ ಪ್ರಧಾನಿ ಮೋದಿ, ಇಸ್ರೇಲ್ ಸಂಸತ್‌ನಲ್ಲಿ ಮಹತ್ವದ ಹೇಳಿಕೆ | PM Narendra Modi

ಇಸ್ರೇಲ್ &ಭಾರತದ ಸಂಬಂಧದಲ್ಲಿ ಮತ್ತೊಂದು ಐತಿಹಾಸಿಕ ದಿನ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸದಲ್ಲಿ ಇದ್ದಾರೆ. ಬರೋಬ್ಬರಿ 9 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಂಡಿದ್ದು, 2017 ಸಮಯದಲ್ಲಿ ಮೊದಲ ಬಾರಿಗೆ ಇಸ್ರೇಲ್‌ಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಮತ್ತೊಂದು ವಿಶೇಷತೆ ಏನೆಂದರೆ ಇಸ್ರೇಲ್ ನೆಸೆಟ್ ಅನ್ನ

ಒನ್ ಇ೦ಡಿಯ 25 Feb 2026 10:18 pm

ಉದ್ಯೋಗಿಗಳ ಮಕ್ಕಳ ಆರೈಕೆ ರಜೆ ಆ ಮಗುವಿನ ಹಕ್ಕು; ನಿರಾಕರಿಸದೆ ಮಂಜೂರು ಮಾಡಿ - ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಉದ್ಯೋಗಿಗಳ ಮಕ್ಕಳ ಆರೈಕೆ ರಜೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ. ಆ ರಜೆಯು ಮಗುವಿನ ಹಕ್ಕು ಎಂದು ಕೋರ್ಟ್‌ ಹೇಳಿದ್ದು, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ತಿಳಿಸಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗೆ ರಜೆ ನೀಡಲು ಸೂಚನೆ ನೀಡಿದೆ. ಕೋರ್ಟ್‌ನ ಆದೇಶವು ಉದ್ಯೋಗಸ್ಥ ಮಹಿಳೆಯರಿಗೆ ಸಹಕಾರಿಯಾಗಲಿದೆ.

ವಿಜಯ ಕರ್ನಾಟಕ 25 Feb 2026 10:13 pm

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯ ಮಹಿಳೆಯರ ಬದುಕು ಸುಧಾರಣೆ: ಲಕ್ಷ್ಮೀ ಹೆಬ್ಬಾಳ್ಕರ್

ಕಾರ್ಕಳ, ಫೆ.25: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಕಾರ್ಕಳದ ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವೆ, ಇದುವರೆಗೂ 26 ಕಂತಿನ ಹಣವನ್ನು 1.24 ಕೋಟಿ ಮಹಿಳೆಯರಿಗೆ ತಲಾ 52 ಸಾವಿರ ರೂಪಾಯಿಯಂತೆ ಹಾಕಿದ್ದೇವೆ ಎಂದು ವಿವರಿಸಿದರು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆದ್ದಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳು ಇದ್ದಾರೆ ಎಂದ ಸಚಿವೆ, ಕಾರ್ಕಳ ಕ್ಷೇತ್ರಾದ್ಯಂತ ಮನೆಮನೆಗೆ ತಿರುಗಿ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕಾರ್ಯಕರ್ತರು ಮಾಡಿದ್ದಾರೆ ಎಂದರು. ವೀರಪ್ಪ ಮೊಯ್ಲಿ ಅವರು ಕಿಸಾನ್ ಸಭಾ ಟ್ರಸ್ಟ್ ಮೂಲಕ ಆರಂಭಿಸಿದ ಮಹಾತ್ಮ ಗಾಂಧಿ ವಸತಿ ಶಾಲೆ ನಿಸ್ವಾರ್ಥತತೆಯಿಂದ ಕೆಲಸ ಮಾಡುತ್ತಿದೆ. ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಅವರು ನಮಗೆ ಆದರ್ಶ ಪ್ರಾಯರು ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಮಧು ಬಂಗಾರಪ್ಪ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 10:12 pm

ಏರ್ ಆಂಬ್ಯುಲೆನ್ಸ್ ದುರಂತದಲ್ಲಿ ಜಾರ್ಖಂಡ್ ದಂಪತಿ ಮೃತ್ಯು; ಅನಾಥರಾದ ಇಬ್ಬರು ಅಪ್ರಾಪ್ತರ ಮೇಲೆ ಕುಟುಂಬದ ಸಾಲದ ಋಣಭಾರ

ಲಾತಿಹಾರ್ (ಜಾರ್ಖಂಡ್), ಫೆ.25: ಗಂಡನ ಜೀವ ಉಳಿಸಲು ನಡೆಸಿದ ಹತಾಶ ಪ್ರಯತ್ನ ಕೊನೆಗೆ ದಂಪತಿಯ ದಾರುಣ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಜಾರ್ಖಂಡ್‌ನ ಲಾತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಗಂಭೀರವಾಗಿ ಸುಟ್ಟಗಾಯಗೊಂಡಿದ್ದ ಸಂಜಯ್ ಕುಮಾರ್ ಸಾ ಹಾಗೂ ಅವರ ಜೊತೆಗಿದ್ದ ಪತ್ನಿ ಅರ್ಚನಾ ದೇವಿ ಮೃತಪಟ್ಟಿದ್ದಾರೆ. ಈ ದುರಂತದಿಂದ ಇಬ್ಬರು ಅಪ್ರಾಪ್ತ ಮಕ್ಕಳು ಅನಾಥರಾಗಿದ್ದು, ಕುಟುಂಬದ ಸಾಲದ ಭಾರ ಬಿದ್ದಿದೆ. ಸಂಜಯ್ ಕುಮಾರ್ ಸಾ ಜಿಲ್ಲೆಯಲ್ಲೇ ರಸ್ತೆಬದಿಯ ಉಪಾಹಾರ ಗೃಹ (ಧಾಬಾ) ನಡೆಸುತ್ತಿದ್ದರು. ಫೆ.16ರಂದು ಅವರ ಧಾಬಾದಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಿ ಜೀವನೋಪಾಯವನ್ನು ಉಳಿಸಲು ಮುಂದಾದ ವೇಳೆ ಅವರು ತೀವ್ರ ಸುಟ್ಟಗಾಯಗಳಿಗೆ ಒಳಗಾದರು. ದೇಹದ ಶೇಕಡಾ 60ಕ್ಕೂ ಹೆಚ್ಚು ಭಾಗ ಸುಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ತಕ್ಷಣ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಕೆಲವೇ ದಿನಗಳಲ್ಲಿ ಚಿಕಿತ್ಸೆಗಾಗಿ ಸುಮಾರು 3.5 ಲಕ್ಷ ರೂಪಾಯಿ ವೆಚ್ಚವಾಯಿತು. ಆದರೂ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಗೆ ಸ್ಥಳಾಂತರಿಸಲು ಫೆಬ್ರವರಿ 22ರಂದು ವೈದ್ಯರು ಸಲಹೆ ನೀಡಿದರು. ದಿಲ್ಲಿಯ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ 5 ಲಕ್ಷ ರೂಪಾಯಿ ಮುಂಗಡ ಠೇವಣಿ ಕೇಳಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಸಂಜಯ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ರಸ್ತೆ ಮಾರ್ಗದ ಪ್ರಯಾಣ ಸಾಧ್ಯವಾಗಲಿಲ್ಲ. ವಿಮಾನದ ಮೂಲಕ ತುರ್ತು ವರ್ಗಾವಣೆ ಅಗತ್ಯವಾಯಿತು. ರಾಜ್ಯ ಸರ್ಕಾರದ ಏರ್ ಆಂಬ್ಯುಲೆನ್ಸ್ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದನೆ ದೊರಕಲಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಂತರ ಖಾಸಗಿ ಸಂಸ್ಥೆಯನ್ನು ಸಂಪರ್ಕಿಸಿದಾಗ ರಾಂಚಿಯಿಂದ ದಿಲ್ಲಿಗೆ ಏರ್ ಆಂಬ್ಯುಲೆನ್ಸ್ ಮೂಲಕ ಸಾಗಿಸಲು 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಲಾಯಿತು. ಆಸ್ಪತ್ರೆ ವೆಚ್ಚಗಳಿಂದಲೇ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ಈ ಮೊತ್ತ ಭಾರವಾಗಿತ್ತು. ಪತ್ನಿ ಅರ್ಚನಾ ದೇವಿ ತಮ್ಮ ಚಿನ್ನಾಭರಣಗಳನ್ನು ಅಡಮಾನ ಇಟ್ಟು, ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದರು. ತುರ್ತಾಗಿ ಹಣ ಪಾವತಿಸಿ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆದರೆ ಜೀವ ಉಳಿಸುವ ಆಸೆಯೊಂದಿಗೆ ಆರಂಭವಾದ ಹಾರಾಟವೇ ದುರಂತದಲ್ಲಿ ಅಂತ್ಯಗೊಂಡಿತು. ರಾಂಚಿಯಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಸಂಜಯ್ ಕುಮಾರ್ ಸಾ ಮತ್ತು ಅರ್ಚನಾ ದೇವಿ ಪ್ರಾಣ ಕಳೆದುಕೊಂಡರು. ಮನೆಯಲ್ಲಿ ಪೋಷಕರನ್ನು ಕಾಯುತ್ತಿದ್ದ ಇಬ್ಬರು ಅಪ್ರಾಪ್ತ ಮಕ್ಕಳು ಇಬ್ಬರು ಅನಾಥರಾಗಿದ್ದಾರೆ. ಅವರಿಬ್ಬರೂ ವಿದ್ಯಾರ್ಥಿಗಳು. ಚಿಕಿತ್ಸೆಗಾಗಿ ತೆಗೆದುಕೊಂಡ ಸಾಲ, ಅಡಮಾನ ಇಟ್ಟ ಆಭರಣಗಳು ಹಾಗೂ ಮಾರಾಟವಾದ ಭೂಮಿ ಕುಟುಂಬವನ್ನು ಆರ್ಥಿಕವಾಗಿ ಅವರನ್ನು ನಲುಗಿಸಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಭದ್ರತೆಗೆ ಸರ್ಕಾರ ತಕ್ಷಣ ನೆರವು ನೀಡಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 25 Feb 2026 10:07 pm

ಅಮೆರಿಕವನ್ನು ಹೊಡೆಯಬಹುದಾದ ಕ್ಷಿಪಣಿ ಅಭಿವೃದ್ಧಿಗೆ ಇರಾನ್ ಪ್ರಯತ್ನ: ಡೊನಾಲ್ಡ್ ಟ್ರಂಪ್ ಪ್ರತಿಪಾದನೆ

ವಾಷಿಂಗ್ಟನ್, ಫೆ.25: ಅಮೆರಿಕವನ್ನು ಹೊಡೆಯಬಹುದಾದ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಲು ಇರಾನ್ ಪ್ರಯತ್ನಿಸುತ್ತಿದೆ. ಜೊತೆಗೆ ಕಳೆದ ವರ್ಷ ಅಮೆರಿಕದ ದಾಳಿಗಳಿಗೆ ಗುರಿಯಾದ ಪರಮಾಣು ಕಾರ್ಯಕ್ರಮವನ್ನು ಮರು ನಿರ್ಮಾಣ ಮಾಡಲು ಕೆಲಸ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಯುರೋಪ್ ಮತ್ತು ಸಾಗರೋತ್ತರದ ನಮ್ಮ ನೆಲೆಗಳನ್ನು ಬೆದರಿಸುವ ಕ್ಷಿಪಣಿಗಳನ್ನು ಅವರು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ. ಮತ್ತು ಶೀಘ್ರದಲ್ಲೇ ಅಮೆರಿಕವನ್ನು ತಲುಪುವ ಕ್ಷಿಪಣಿಗಳನ್ನು ನಿರ್ಮಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕ ಸಂಸತ್ತಿನ ಜಂಟಿ ಸದನವನ್ನು ಉಲ್ಲೇಖಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ. 2035ರ ವೇಳೆಗೆ ಇರಾನ್ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಬಹುದು ಎಂದು 2025ರಲ್ಲಿ ಅಮೆರಿಕದ ರಕ್ಷಣಾ ಗುಪ್ತಚರ ಏಜೆನ್ಸಿ ಹೇಳಿತ್ತು. ಇರಾನ್‍ನ ಬಳಿ ಪ್ರಸ್ತುತ ಕಡಿಮೆ ಮತ್ತು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು (ಸುಮಾರು 3,000 ಕಿ.ಮೀ ದೂರದ ಗುರಿಗೆ ಅಪ್ಪಳಿಸುವ ಸಾಮಥ್ರ್ಯವಿರುವ) ಇವೆ. ಅಮೆರಿಕ ಖಂಡವು ಇರಾನ್‍ನ ಪಶ್ಚಿಮ ತುದಿಯಿಂದ ಸುಮಾರು 9,700 ಕಿ.ಮೀ ದೂರವಿದೆ. ಇರಾನ್‍ನ ಪರಮಾಣು ಕಾರ್ಯಕ್ರಮ, ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಜನವರಿಯಲ್ಲಿ ಇರಾನ್‍ನಲ್ಲಿ ನಡೆದ ಅಶಾಂತಿಯ ಸಂದರ್ಭದ ಸಾವು-ನೋವಿನ ಸಂಖ್ಯೆಯ ಬಗ್ಗೆ ಅವರು(ಅಮೆರಿಕ) ಆರೋಪಿಸುತ್ತಿರುವುದೆಲ್ಲಾ ದೊಡ್ಡ ಸುಳ್ಳುಗಳ ಪುನರಾವರ್ತನೆಯಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 25 Feb 2026 10:01 pm

ಹಕ್ಕಿ ಜ್ವರ | ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ, ಮೊಟ್ಟೆ ಆಮದಿಗೆ ಸೌದಿ ಅರೇಬಿಯಾ ನಿಷೇಧ

ರಿಯಾದ್, ಫೆ.25: ಹಕ್ಕಿ ಜ್ವರ ಮತ್ತು ಇತರ ಪ್ರಾಣಿಗಳ ರೋಗಗಳ ವಿರುದ್ದ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮತ್ತು ಮೊಟ್ಟೆ ಆಮದುಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಬಾಂಗ್ಲಾದೇಶ, ಚೀನ, ಇಂಡೊನೇಶ್ಯಾ, ಇರಾನ್, ಬ್ರಿಟನ್, ಭಾರತ ಸೇರಿದಂತೆ 40 ದೇಶಗಳ ಆಮದುಗಳ ಮೇಲೆ ಈ ನಿಷೇಧ ಅನ್ವಯಿಸುತ್ತದೆ. ಇದರ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 16 ಇತರ ದೇಶಗಳ ಮೇಲೆ ಭಾಗಷಃ ನಿಷೇಧ( ಕೆಲವು ನಗರಗಳ ಮೇಲೆ ಮಾತ್ರ) ಅನ್ವಯಿಸುತ್ತದೆ ಎಂದು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (ಎಸ್‍ಎಫ್‍ಡಿಎ) ಹೇಳಿದೆ.

ವಾರ್ತಾ ಭಾರತಿ 25 Feb 2026 9:59 pm

ಹಿರಿಯ ಸಿಪಿಐ ನಾಯಕ, ಶತಾಯುಷಿ ಆರ್. ನಲ್ಲಕನ್ನು ನಿಧನ

ಚೆನ್ನೈ,ಫೆ.25: ಹಿರಿಯ ಸಿಪಿಐ ನಾಯಕ ಆರ್.ನಲ್ಲಕನ್ನು (101) ಅವರು ಬುಧವಾರ ಇಲ್ಲಿಯ ರಾಜೀವ್‌ ಗಾಂಧಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಫೆ.1ರಂದು ನಲ್ಲಕನ್ನು ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ತಜ್ಞವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದ್ದರೂ ಅವರು ಸ್ಪಂದಿಸುತ್ತಿರಲಿಲ್ಲ ಮತ್ತು ಅವರ ಸ್ಥಿತಿಯು ಚಿಂತಾಜನಕಗೊಂಡಿತ್ತು. ಬುಧವಾರ ಅಪರಾಹ್ನ 1:55ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. 2023ರಲ್ಲಿ ಹಿರಿಯ ಸಿಪಿಎಂ ನಾಯಕ ಎನ್.ಶಂಕರಯ್ಯ ಅವರ ನಿಧನದ ಬಳಿಕ ನಲ್ಲಕನ್ನು ತಮಿಳನಾಡಿನಲ್ಲಿ ಕೊನೆಯ ಶತಾಯುಷಿ ಕಮ್ಯುನಿಸ್ಟ್ ನಾಯಕರಾಗಿದ್ದರು. ತನ್ನ ಸುಮಾರು ಎಂಟು ದಶಕಗಳ ರಾಜಕೀಯ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯ ಪ್ರತಿರೂಪವಾಗಿದ್ದರು. ಡಿ.26,1925ರಂದು ತೂತ್ತುಕುಡಿ ಜಿಲ್ಲೆಯ ಪೆರುಂಪತು ಗ್ರಾಮದಲ್ಲಿ ಜನಿಸಿದ್ದ ನಲ್ಲಕನ್ನು ಎಳವೆಯಲ್ಲೇ ಬಡತನ ಮತ್ತು ಶೋಷಣೆಯನ್ನು ಅನುಭವಿಸಿದ್ದರು. ಮಾರ್ಕ್ಸ್‌ವಾದಿ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದ ಅವರು 1946ರಲ್ಲಿ,ಭಾರತವು ಇನ್ನೂ ಬ್ರಿಟಷರ ಆಳ್ವಿಕೆಯಲ್ಲಿದ್ದಾಗಲೇ ಸಿಪಿಐ ಸೇರಿದ್ದರು. 1948ರಲ್ಲಿ ನೆಲ್ಲಾಯಿ ಒಳಸಂಚು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಏಳು ವರ್ಷಗಳ ಜೈಲುವಾಸದಲ್ಲಿ ಅವರು ಕ್ರೂರ ಹಿಂಸೆಯನ್ನು ಅನುಭವಿಸಿದ್ದರು. ಅಂತಹ ಕ್ರೂರ ಘಟನೆಯೊಂದರಲ್ಲಿ ಪೋಲಿಸನೋರ್ವ ನಲ್ಲಕನ್ನು ಅವರ ಮೀಸೆಯನ್ನು ಸಿಗರೇಟಿನಿಂದ ಸುಟ್ಟಿದ್ದು, ಆ ಬಳಿಕ ಅವರು ಎಂದೂ ಮೀಸೆಯನ್ನು ಬೆಳೆಸಿರಲಿಲ್ಲ. ನೂರು ವರ್ಷ ಪ್ರಾಯವಾದ ಬಳಿಕ ಮನೆಗೇ ಸೀಮಿತಗೊಳ್ಳುವವರೆಗೂ ನಲ್ಲಕನ್ನು ರೈತರು ಮತ್ತು ಕೃಷಿ ಕಾರ್ಮಿಕರ ಪರವಾಗಿ ಅವಿಶ್ರಾಂತ ಹೋರಾಟವನ್ನು ನಡೆಸಿದ್ದರು. ಕಟ್ಟಾ ಪರಿಸರವಾದಿಯಾಗಿದ್ದ ಅವರು ಕುಡಂಕುಳಂ ಪರಮಾಣು ವಿದುತ್ ಸ್ಥಾವರದಂತಹ ಯೋಜನೆಗಳನ್ನು ಬಲವಾಗಿ ವಿರೋಧಿಸಿದ್ದರು. ಅವರು 13 ವರ್ಷಗಳ ದೀರ್ಘ ಅವಧಿಗೆ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2022ರಲ್ಲಿ ರಾಜ್ಯ ಸರಕಾರವು ‘ಥಗೈಸಲ್ ತಮಿಳರ್’ ಪ್ರಶಸ್ತಿಯೊಂದಿಗೆ ನಲ್ಲಕನ್ನು ಅವರನ್ನು ಗೌರವಿಸಿತ್ತು. ಪ್ರಶಸ್ತಿಯ ಮೊತ್ತ 15 ಲ.ರೂ.ಗಳಿಗೆ ತನ್ನ ಸ್ವಂತದ 5,000 ರೂ.ಗಳನ್ನು ಸೇರಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು.

ವಾರ್ತಾ ಭಾರತಿ 25 Feb 2026 9:55 pm

ಕಾರ್ಕಳ: ಅಂಬೇಡ್ಕರ್ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಕಾರ್ಕಳ, ಫೆ.25: ತಾಲೂಕಿನ ಕಾಬೆಟ್ಟುವಿನಲ್ಲಿ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಭವ್ಯ ಹಾಗೂ ವಿನೂತನ ರೀತಿಯಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿಗಳು ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು. ಬಳಿಕ ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ವಿವಿಧ ದಲಿತ ಸಂಘಟನೆಗಳು ಹಾಗೂ ದಲಿತರಿಂದ ನೀಡಲಾದ ಮನವಿಗಳನ್ನು ಸ್ವೀಕರಿಸಿ, ಅವರೊಂದಿಗೆ ಸಂವಾದ ನಡೆಸಿದರು. ಅವರ ಹಲವು ಬೇಡಿಕೆಗಳು ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಆರ್. ಹೆಬ್ಬಾಳ್ಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಎಸ್ ಮಧು ಬಂಗಾರಪ್ಪ, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿವ ಜೆ.ಪಿ.ಹೆಗ್ಡೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಲಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ವೀರಪ್ಪ ಮೊಯಿಲಿ , ಉದಯ್ ಶೆಟ್ಟಿ ಮುನಿಯಾಲು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.    

ವಾರ್ತಾ ಭಾರತಿ 25 Feb 2026 9:55 pm

2025ರಲ್ಲಿ ಜಾಗತಿಕವಾಗಿ 129 ಪತ್ರಕರ್ತರ ಹತ್ಯೆ; ಈ ಪೈಕಿ 89ಕ್ಕೆ ಇಸ್ರೇಲ್ ಹೊಣೆ: CPJ ವರದಿ

ನ್ಯೂಯಾರ್ಕ್, ಫೆ.25: ಕಳೆದ ವರ್ಷ(2025) ಪತ್ರಕರ್ತರಿಗೆ ಅತ್ಯಂತ ಮಾರಣಾಂತಿಕ ವರ್ಷವಾಗಿದ್ದು 129 ಪತ್ರಕರ್ತರ ಹತ್ಯೆಯಾಗಿದೆ. ಇದರಲ್ಲಿ 89 ಹತ್ಯೆಗಳಿಗೆ ಇಸ್ರೇಲ್ ಹೊಣೆಯಾಗಿದೆ ಎಂದು ಜಾಗತಿಕ ಮಾಧ್ಯಮ ಕಾವಲು ಸಮಿತಿ `ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್'(ಸಿಪಿಜೆ) ಬುಧವಾರ ಬಿಡುಗಡೆಗೊಳಿಸಿದ ವಾರ್ಷಿಕ ವರದಿ ತಿಳಿಸಿದೆ. ಪತ್ರಕರ್ತರನ್ನು ಇಸ್ರೇಲ್ ನಿರಂತರ ಗುರಿಯಾಗಿಸಿದ ಕಾರಣ 2025 ಸತತ ಎರಡನೇ ವರ್ಷ ದಾಖಲೆ ಪತ್ರಕರ್ತರ ಸಾವಿಗೆ ಸಾಕ್ಷಿಯಾಗಿದೆ. ಪತ್ರಕರ್ತರ ರಕ್ಷಣೆಯಲ್ಲಿ ಸರಕಾರದ ನಾಯಕರ ನಿರಂತರ ವೈಫಲ್ಯದಿಂದಾಗಿ ಭಾರತ ಸೇರಿದಂತೆ ಯುದ್ದ ನಡೆಯುತ್ತಿಲ್ಲದ ರಾಷ್ಟ್ರಗಳಲ್ಲೂ ಪತ್ರಕರ್ತರ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ. ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ 2025ರ ಜನವರಿ 1ರಂದು ಸಂಭವಿಸಿದ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ಹತ್ಯೆಯನ್ನೂ ವರದಿ ಉಲ್ಲೇಖಿಸಿದೆ. ರಸ್ತೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಚಂದ್ರಾಕರ್ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಗುತ್ತಿಗೆದಾರರಿಗೆ ಸಂಬಂಧಿಸಿದ ಸ್ಥಳದಲ್ಲಿದ್ದ ತ್ಯಾಜ್ಯದ ತೊಟ್ಟಿಯಲ್ಲಿ ಚಂದ್ರಾಕರ್ ಮೃತದೇಹ ಪತ್ತೆಯಾಗಿತ್ತು. ಸುಡಾನ್‍ನಲ್ಲಿ 9 ಪತ್ರಕರ್ತರು, ಉಕ್ರೇನ್‍ನಲ್ಲಿ 4 ಪತ್ರಕರ್ತರ ಹತ್ಯೆಯಾಗಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಪತ್ರಕರ್ತರ ಬದುಕಿನ ಬಗ್ಗೆ ಮತ್ತು ಅವರನ್ನು ರಕ್ಷಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಇಸ್ರೇಲ್ ಅಪಾರ ನಿರ್ಲಕ್ಷ್ಯ ತೋರುತ್ತಿದೆ. ಅನೇಕ ಸಮಕಾಲೀನ ಪುರಾವೆಗಳು ಈಗ ನಾಶವಾಗಿರುವುದರಿಂದ ಗಾಝಾದಲ್ಲಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಗುರಿಯಾಗಿಸಿದ ಫೆಲೆಸ್ತೀನಿಯನ್ ಪತ್ರಕರ್ತರ ಸಂಖ್ಯೆ ಎಂದಿಗೂ ತಿಳಿಯದಿರಬಹುದು ಎಂದು ವರದಿ ಹೇಳಿದೆ. ಮಾಧ್ಯಮದ ಮೇಲಿನ ದಾಳಿಗಳು ಇತರ ಸ್ವಾತಂತ್ರ್ಯಗಳ ಮೇಲಿನ ದಾಳಿಯ ಪ್ರಮುಖ ಸೂಚಕವಾಗಿದೆ ಮತ್ತು ಈ ಹತ್ಯೆಗಳನ್ನು ತಡೆಗಟ್ಟಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ. ಸುದ್ದಿಯನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರ ಹತ್ಯೆಯಾದಾಗ ನಮಗೆಲ್ಲರಿಗೂ ಅಪಾಯವಿದೆ' ಎಂದು `ಸಿಪಿಜೆ'ಯ ಸಿಇಒ ಜೂಡಿ ಗಿನ್ಸ್‍ಬರ್ಗ್ ಹೇಳಿದ್ದಾರೆ.

ವಾರ್ತಾ ಭಾರತಿ 25 Feb 2026 9:52 pm

Kerala | ಕಣ್ಣೂರಿನಲ್ಲಿ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆ ವೇಳೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ಗೆ ಗಾಯ

ದಾಳಿಯ ಆರೋಪ ತಳ್ಳಿ ಹಾಕಿದ ಕೆಎಸ್‌ಯು, ‘ಅತ್ಯುತ್ತಮ ನಟಿ’ ಎಂದು ವ್ಯಂಗ್ಯ

ವಾರ್ತಾ ಭಾರತಿ 25 Feb 2026 9:50 pm

ದೇರಳಕಟ್ಟೆ: ʼಮೇಲ್ತೆನೆʼ ವತಿಯಿಂದ ಇಫ್ತಾರ್ ಕೂಟ

ದೇರಳಕಟ್ಟೆ,ಫೆ.25: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದರಮಾರೊ ಕೂಟ) ಇದರ ವತಿಯಿಂದ ನಾಟೆಕಲ್ ವಿಜಯನಗರದ ಇಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ಮಂಗಳವಾರ ಇಫ್ತಾರ್ ಕೂಟ ನಡೆಯಿತು. ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್ ಮತ್ತು ಮಾಜಿ ಅಧ್ಯಕ್ಷ ಟಿ. ಇಸ್ಮಾಯೀಲ್ ಮಾತನಾಡಿದರು. ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹೀಂ ನಡುಪದವು ಉಪಾಧ್ಯಕ್ಷ ಇಬ್ರಾಹಿಂ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿ ಸಿ.ಎಂ ಶರೀಫ್ ಪಟ್ಟೋರಿ, ಸದಸ್ಯರಾದ ಯೂಸುಫ್ ವಕ್ತಾರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಬಿ.ಎಂ. ಕಿನ್ಯ, ಅಬೂಬಕರ್ ಹೂಹಾಕುವ ಕಲ್ಲು, ಸಿದ್ದೀಕ್ ಎಸ್. ರಾಝ್, ಆಸೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:49 pm

ಕಲಬುರಗಿ | ಸಾಹಿತ್ಯದ ಜ್ಞಾನ ಹಂಚುತ್ತಿರುವುದು ಪ್ರಶಂಸನೀಯ : ಪ್ರೊ.ಎಸ್.ಎಂ.ಹಿರೇಮಠ

ಕನ್ನಡ ಸಾಹಿತ್ಯ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆ

ವಾರ್ತಾ ಭಾರತಿ 25 Feb 2026 9:44 pm

ವಿಶ್ವಗುರು ಫೋಟೋ ಸೇರಿಸಿ ಬಿಜೆಪಿ ಅವಧಿಯಲ್ಲಿ ಉರ್ದು ಜಾಹೀರಾತು ನೀಡಿಲ್ಲವೇ?: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯ ಉರ್ದು ಜಾಹೀರಾತಿಗೆ ಆಕ್ಷೇಪಿಸಿರುವ ಬಿಜೆಪಿ ವಿರುದ್ದ ಸಚಿವ ಆಕ್ರೋಶ

ವಾರ್ತಾ ಭಾರತಿ 25 Feb 2026 9:43 pm

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎನ್‍ಡಿಎ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಉದ್ದೇಶವಿದೆ: ಎಚ್.ಡಿ. ದೇವೇಗೌಡ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಹಾಗೂ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎನ್‍ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಉದ್ದೇಶವಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂಗಿತ ವ್ಯಕ್ತಪಡಿಸಿದ್ದಾರೆ. ಬುಧವಾರ ಜೆ.ಪಿ. ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷ. ಬಿಜೆಪಿ ರಾಷ್ಟ್ರೀಯ ಪಕ್ಷ. ಅವರು ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ಯಾವ ತೀರ್ಮಾನ ಮಾಡಿದ್ದಾರೆಂದು ಕಾದುನೋಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ ಎಂದರು. ‘ಜೆಡಿಎಸ್‍ನಲ್ಲಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಹುದ್ದೆ ಕೊಡುವುದಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರ ಆರೋಪದಲ್ಲಿ ಹುರುಳಿಲ್ಲ. ನನಗೆ ಇನ್ನೂ ನೆನಪಿನ ಶಕ್ತಿ ಇದೆ. ಪ್ರತಿಯೊಂದಕ್ಕೂ ಸಮಯ ಬಂದಾಗ ಪ್ರತಿಕ್ರಿಯಿಸುತ್ತೇನೆ ಎಂದ ಅವರು, ವಿಜಯಪುರದಲ್ಲಿ ಫೆ.27ರಂದು ಜೆಡಿಎಸ್ ಸಮಾವೇಶ ನಡೆಸಲಾಗುತ್ತದೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳಲು ನನಗೂ ಆಹ್ವಾನ ನೀಡಿದ್ದಾರೆ ಎಂದರು.

ವಾರ್ತಾ ಭಾರತಿ 25 Feb 2026 9:34 pm

ಸಮಾಜಮುಖಿ ಚಿಂತನೆಗೆ ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಇರಬೇಕು: ಸಿಎಂ ಸಿದ್ದರಾಮಯ್ಯ

ಕಾರ್ಕಳ ಕುಕ್ಕುಂದೂರಿನಲ್ಲಿ ಕಿಶನ್ ಸಭಾ ಸಭಾಂಗಣ ಉದ್ಘಾಟನೆ

ವಾರ್ತಾ ಭಾರತಿ 25 Feb 2026 9:32 pm

ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿರಂಗ ಆಗ್ರ ಸ್ಥಾನ ಪಡೆಯುತ್ತಿದೆ: ಎಚ್ ವಸಂತ ಬರ್ನಾಡ್

ಮುಲ್ಕಿ: ದೇಶದ ಆರ್ಥಿಕ ವ್ಯವಸ್ಥೆಗಳನ್ನು ಅವಲೋಕಿಸಿದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಗಳು ಬಲಿಷ್ಠವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಹಕಾರಿ ರಂಗವು ಎಲ್ಲಾ ಆರ್ಥಿಕ ವ್ಯವಸ್ಥೆಗೆ ನಾಯಕತ್ವ ವಹಿಸುವ ದಿನ ಹತ್ತಿರದಲ್ಲಿದೆ ಎಂದು ಪ್ರಿಯದರ್ಶಿನಿಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬರ್ನಾಡ್ ಹೇಳಿದ್ದಾರೆ. ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ನಡೆದ ಇಂಟರ್ಶಿಪ್ ತರಬೇತಿಯ ಎರಡನೇ ಹಂತದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಯುವಜನತೆ ಕೇವಲ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಮೊರೆ ಹೋಗದೆ ಸಹಕಾರಿ ಕ್ಷೇತ್ರದಲ್ಲಿ ಕೂಡ ತಮ್ಮ ಸೇವೆ ನೀಡಲು ಮುಂದಾಗಬೇಕು ಎಂದು ಯುವ ಜನತೆಗೆ ಕಿವಿಮಾತು ಹೇಳಿದರು. ಇದೇ ವೇಳೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸುದರ್ಶನ್ ಪಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕಿಗರಾದ ಲೋಲಾಕ್ಷಿ ಧನ್ಯವಾದ ಅರ್ಪಿಸಿದರು. ಸಾಲ ವಿಭಾಗದ ಪ್ರಬಂಧಕರಾದ ಅಕ್ಷತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 25 Feb 2026 9:28 pm

ಚಿತ್ತಾಪುರ | ‘ವಾರ್ತಾಭಾರತಿ’ ವರದಿ ಫಲಶ್ರುತಿ : ಟ್ರಾಫಿಕ್ ಸಮಸ್ಯೆ ಬಗೆಹರಿಸಿದ ಪಿಎಸ್'ಐ ಮಂಜುನಾಥ ರೆಡ್ಡಿ

ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ವೃತ್ತ, ಮಾರುಕಟ್ಟೆ ರಸ್ತೆ, ಕಪಡಾ ಬಜಾರ್, ನಾಗಾವಿ ವೃತ್ತದಲ್ಲಿ ಬುಧವಾರ ಬೆಳ್ಳಂ ಬೆಳ್ಳಗ್ಗೆ ಪಿಎಸ್ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಟ್ರಾಫಿಕ್ ಸಮಸ್ಯೆ ಬಗೆಹರಿಸಿದರು. ಫೆ.21 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ʼಚಿತ್ತಾಪುರದಲ್ಲಿ ತೀವ್ರಗೊಂಡ ಟ್ರಾಫಿಕ್ ಸಮಸ್ಯೆʼ ಎಂಬ ಶಿರ್ಷಿಕೆಯಡಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿದ ಪೊಲೀಸರು, ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದ ಬೈಕ್, ಟಂಟಂ, ಗೋಡ್ಸ್ ಆಟೋಗಳು, ಲಾರಿಗಳು ಸೇರಿದಂತೆ ಇನ್ನಿತರ ವಾಹನಗಳನ್ನು ತಡೆಹಿಡಿದರು. ಬುಧವಾರದ ಪಟ್ಟಣದಲ್ಲಿ ಸಂತೆ ಇರುವುದರಿಂದ ವಿವಿಧ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ವ್ಯಾಪಾರ ವಹಿವಾಟಿಗಾಗಿ ತರಕಾರಿ, ಬಟ್ಟೆಗಳು, ಚಪ್ಪಲಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ತಂದು ಮಾರಾಟ ಮಾಡಲು ಆಗಮಿಸಿ ರಸ್ತೆಯಲ್ಲಿಯೇ ಕುಳಿತು ಮಾರಾಟ ಮಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ತಮ್ಮ ತಮ್ಮ ಮಾರಾಟದ ವಸ್ತುಗಳನ್ನು ರಸ್ತೆ ಮುಂಭಾಗ ಬಿಟ್ಟು ರಸ್ತೆಯ ಪಕ್ಕದಲ್ಲಿ ಇಟ್ಟು ಮಾರಾಟ ಮಾಡಬೇಕೆಂದು ಆದೇಶಿಸಿದರು. ಅದಕ್ಕೆ ವ್ಯಾಪರಸ್ಥರು ಕೂಡ ಸಹಕರಿಸಿದರು. ನಾಗಾವಿ ಚೌಕ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವುದರ ಮೂಲಕ ತರಕಾರಿ ಮಾರುಕಟ್ಟೆ ಒಳಗಡೆ ಬರುವ ವಾಹನಗಳನ್ನು ತಡೆ ಹಿಡಿದು ಬೇರೆ ಮಾರ್ಗದ ರಸ್ತೆಯನ್ನು ಅನುಸರಿಸಲು ವಾಹನ ಸವಾರರಿಗೆ ತಿಳಿಸಲಾಯಿತು. ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ತರಕಾರಿ ಮಾರುಕಟ್ಟೆ ಒಳಗಡೆ ಪ್ರವೇಶವಿಲ್ಲ ಎನ್ನುವ ಬ್ಯಾನರ್ ಗಳನ್ನು ಹಾಕಲಾಗಿದೆ. ಹೀಗಾಗಿ ವಾಹನ ಸವಾರರು ಸಹಕರಿಸುವುದರ ಮೂಲಕ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಕಾರ್ಯಾಚರಣೆ ವೇಳೆ ಎಎಸ್ಐ ವಿಠ್ಠಲ್ ಬಿರಾದಾರ, ದತ್ತು, ಬಸವರಾಜ, ಅನೀಲ್, ರವಿ ಸೇರಿದಂತೆ ಇತರರು ಇದ್ದರು.  

ವಾರ್ತಾ ಭಾರತಿ 25 Feb 2026 9:28 pm

Indonesia | ‘ಸೂಟ್‌ಕೇಸ್ ಹತ್ಯೆ’ ಪ್ರಕರಣ: 11 ವರ್ಷಗಳ ಬಳಿಕ ಅಮೆರಿಕ ಪ್ರಜೆ ಗಡೀಪಾರು

ಜಕಾರ್ತಾ, ಫೆ. 25: ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದ 2014ರ ‘ಬಾಲಿ ಸೂಟ್‌ಕೇಸ್ ಹತ್ಯೆ’ ಪ್ರಕರಣದಲ್ಲಿ 11 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಮೆರಿಕ ಪ್ರಜೆಯನ್ನು ಇಂಡೋನೇಶಿಯಾ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿ ದೇಶದಿಂದ ಗಡೀಪಾರು ಮಾಡಿದೆ.  ರಜಾಕಾಲದ ವೇಳೆ ತನ್ನ ಗೆಳತಿ ಹೀತರ್ ಮ್ಯಾಕ್ ಅವರ ತಾಯಿ ಶೀಲಾ ವಾನ್ ವೀಸ್–ಮ್ಯಾಕ್ ಅವರನ್ನು ಪೂರ್ವಯೋಜಿತವಾಗಿ ಹತ್ಯೆಗೈದ ಆರೋಪದಲ್ಲಿ ಟಾಮಿ ಶೇಫರ್ ಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದ ಕ್ರೂರ ಸ್ವರೂಪ ಹಾಗೂ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ತ್ಯಜಿಸಿದ ವಿಧಾನವು ವಿಶ್ವದ ಗಮನ ಸೆಳೆದಿತ್ತು. ಶೇಫರ್ ತನ್ನ ಶಿಕ್ಷೆಯ ಬಹುಭಾಗವನ್ನು ಪೂರ್ಣಗೊಳಿಸಿದ್ದಲ್ಲದೆ, ಉತ್ತಮ ನಡತೆಯ ಆಧಾರದ ಮೇಲೆ ಅನೇಕ ಕ್ಷಮಾದಾನಗಳನ್ನು ಪಡೆದಿದ್ದರಿಂದ, ಬಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅವನನ್ನು ಅಮೆರಿಕಕ್ಕೆ ವಾಪಸು ಕಳುಹಿಸಲಾಗಿದೆ ಎಂದು ವಲಸೆ ಪ್ರಧಾನ ನಿರ್ದೇಶನಾಲಯದ ಬಾಲಿ ಪ್ರಾಂತೀಯ ಕಚೇರಿಯ ಮುಖ್ಯಸ್ಥ ಫೆಲುಶಿಯ ಸೆಂಗ್ಕಿ ರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಗಸ್ಟ್ 2014ರಲ್ಲಿ ಐಷಾರಾಮಿ ಸೇಂಟ್ ರೆಗಿಸ್ ಬಾಲಿ ರೆಸಾರ್ಟ್ ಸಮೀಪ ನಿಲುಗಡೆ ಮಾಡಲಾಗಿದ್ದ ಟ್ಯಾಕ್ಸಿಯ ಹಿಂಭಾಗದಲ್ಲಿ ಚಿಕಾಗೊ ಮೂಲದ 62 ವರ್ಷದ ಶ್ರೀಮಂತ ಮಹಿಳೆ ವಾನ್ ವೀಸ್–ಮ್ಯಾಕ್ ಅವರ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು. ಈ ಬೆಳವಣಿಗೆ ದೇಶ–ವಿದೇಶಗಳಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಮೃತದೇಹ ಪತ್ತೆಯಾದ ಮರುದಿನವೇ ಆಗಷ್ಟೇ ಕೆಲವಾರಗಳ ಗರ್ಭಿಣಿಯಾಗಿದ್ದ 19 ವರ್ಷದ ಹೀತರ್ ಮ್ಯಾಕ್ ಹಾಗೂ 21 ವರ್ಷದ ಟಾಮಿ ಶೇಫರ್ ಅವರನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಹತ್ಯೆ ಪೂರ್ವಯೋಜಿತವಾಗಿದ್ದುದಾಗಿ ಬಹಿರಂಗವಾಗಿತ್ತು. ತನ್ನ ತಾಯಿಯ ಹತ್ಯೆಗೆ ನೆರವು ನೀಡಿದ ಆರೋಪದಲ್ಲಿ ಹೀತರ್ ಮ್ಯಾಕ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಏಳು ವರ್ಷಗಳ ಸೆರೆವಾಸ ಪೂರ್ಣಗೊಳಿಸಿದ ಬಳಿಕ, ಅಕ್ಟೋಬರ್ 2021ರಲ್ಲಿ ಆಕೆಯನ್ನು ಬಾಲಿಯಿಂದ ಗಡೀಪಾರು ಮಾಡಲಾಗಿತ್ತು. ನ್ಯಾಯಾಲಯದ ಮುಂದೆ ತಾನು ತಾಯಿಯ ಹತ್ಯೆಗೆ ಸಹಕರಿಸಿದ್ದು ಹಾಗೂ ಮೃತದೇಹವನ್ನು ತುಂಡುಮಾಡಿ ಸೂಟ್‌ಕೇಸ್‌ನಲ್ಲಿ ತುಂಬಲು ನೆರವಾದುದಾಗಿ ತಪ್ಪೊಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ, ಅಮೆರಿಕದ ಚಿಕಾಗೊದಲ್ಲಿ ಜನವರಿ 2024ರಲ್ಲಿ ಹೀತರ್ ಮ್ಯಾಕ್‌ಗೆ 26 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ವಾರ್ತಾ ಭಾರತಿ 25 Feb 2026 9:25 pm

ಅಂತರ್‌ರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ: ಬಾಲಕೃಷ್ಣ ಪೈಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಆಫಿಸರ್ಸ್‌ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷೆ ಸಜ್ಞಾ ಭಾಸ್ಕರ್ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ಸಜ್ಞಾ ಭಾಸ್ಕರ್ ಅವರು ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಮಾಸಾಚರಣೆ ಹಾಗೂ ಯೋಜನೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಮಾಜಕ್ಕೆ ಉತ್ತಮ, ನಿಸ್ವಾರ್ಥ, ಮತ್ತು ಪ್ರಾಮಾ ಣಿಕ ಸೇವಾ ಮನೋಭಾವದಿಂದ ಶ್ರೇಷ್ಠ ಕೊಡುಗೆ ನೀಡಿದವರನ್ನು ಗುರುತಿಸಿ, ಆಯ್ಕೆ ಮಾಡಿ ರೋಟರಿ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲಿ ಸಾಧಕರಾದ ಕಸ್ತೂರಿ ಬಾಲಕೃಷ್ಣ ಪೈ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೈ ಅವರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ವಲಯ ಸಹಾಯಕ ಗವರ್ನರ್ ಡಾ. ರವಿಶಂಕರ್ ರಾವ್‌ರವರು ಫೆ. 23 1905 ರಲ್ಲಿ ಶಿಕಾಗೋ (ಅಮೆರಿಕಾ) ನಗರದಲ್ಲಿ ಸ್ಥಾಪನೆಗೊಂಡು ಅದರ ಇತಿಹಾಸ, ಬೆಳವಣಿಗೆ, ಕೊಡುಗೆ ಮತ್ತು ವಿವಿಧ ಸಮಾಜ ಸೇವಾ ಸಾಧನೆಗಳ ಮಾಹಿತಿ ನೀಡಿದರು. ಸ್ಥಾಪನಾ ಅಧ್ಯಕ್ಷ ಡಾ. ರಂಜನ್‌ರವರು ತಮ್ಮ ಅಭಿನಂದನಾ ಭಾಷಣದಲ್ಲಿ ಪ್ರಶಸ್ತಿ ವಿಜೇತರ ಪರಿಚಯ ನೀಡಿ, ಅಭಿನಂದಿಸಿದರು. ವೇದಿಕೆಯಲ್ಲಿ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜೀರ್ ಪದ್ಮನಾಭ ನಾಯ್ಕ್ ವಂದಿಸಿದರು. 

ವಾರ್ತಾ ಭಾರತಿ 25 Feb 2026 9:23 pm

ಮಂಗಳೂರು ವಿ.ವಿ: ಮೂವರು ಸಾಧಕರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರಕಟ

ಕೊಣಾಜೆ, ಫೆ.25: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರ ’ಬಲಿಪ ಮಾರ್ಗ ಹಾಗೂ ಅಗರಿಮಾರ್ಗ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ , ಸ್ಮರಣಿಕೆ ಒಳಗೊಂಡಿದೆ. ಕಲಾವಿದರ ಪರಿಚಯ:- *ಕಪ್ಪೆಕೆರೆ ಸುಬ್ರಾಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ತಲೆಮಾರಿನ ಅಗ್ರಮಾನ್ಯ ಕಲಾವಿ ದರಾಗಿದ್ದಾರೆ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1947ರಲ್ಲಿ ಈಶ್ವರ ಹೆಗಡೆ-ಗೋಪಿ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ಅವರು ಹದಿನಾರರ ಹರೆಯದಲ್ಲೇ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿ ದರು. ಸರ್ವಾಂಗೀಣ ಕಲಾವಿದರಾಗಿ, ಶ್ರೇಷ್ಠ ಭಾಗವತರಾಗಿ ಗುರುತಿಸಿದ್ದಾರೆ. ಗುಂಡುಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆಗೈದ ಹಿರಿಯ ಕಲಾವಿದರಾಗಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಾಗವತ ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಮೇಳದ ತಿರುಗಾಟದ ಜೊತೆಗೆ ಯಕ್ಷಗಾನ ಗುರುಗಳಾಗಿ ಗುರುಪರಂಪರೆಯನ್ನು ಮೆರೆಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಯಕ್ಷಗಾನ ರಂಗದ ಹಿರಿಯ ಸಾಧಕರಾಗಿದ್ದಾರೆ. ಮಾಂಬಾಡಿ ನಾರಾಯಣ ಭಾಗವತರ ಪುತ್ರರಾಗಿ ತಂದೆಯ ಮಾರ್ಗದರ್ಶನದಲ್ಲಿ ಮುಂದುವರಿದು ಕಟೀಲು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.ಕಾಸರಗೋಡು, ದ.ಕ.ಜಿಲ್ಲೆಯ ನಾನಾ ಕಡೆ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯಂದಿರಿಗೆ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ. ಇವರಲ್ಲಿ ಕಲಿತ ಅನೇಕ ಶಿಷ್ಯರು ವೃತ್ತಿಪರ ಕಲಾವಿದರಾಗಿ, ಹವ್ಯಾಸಿ ಕಲಾವಿದರಾಗಿ ಸೇವೆಗೈಯ್ಯುತ್ತಿದ್ದಾರೆ. ಜಬ್ಬಾರ್ ಸಮೊ ಯಕ್ಷಗಾನ ರಂಗದ ಹಿರಿಯ ತಾಳಮದ್ದಳೆಯ ಅರ್ಥಧಾರಿಯಾಗಿರುವ ಜಬ್ಬಾರ್ ಸಮೊ ಸಂಪಾಜೆಯ ಮೊಯ್ದಿನ್ ಕುಂಞಿ ಹಾಗೂ ಬಿಪಾತುಮ್ಮ ದಂಪತಿಯ ಪುತ್ರರಾಗಿ 1963ರಲ್ಲಿ ಜನಿಸಿದರು. ಎಳವೆಯಲ್ಲಿಯೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದರು. ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ ಅವರ ಮೊದಲ ಗುರುವಾಗಿದ್ದು, ಆರಂಭದಲ್ಲಿ ದ್ರೋಣ, ಜಾಬಾಲಿ, ಈಶ್ವರ, ಸಂಜಯ, ಅಕ್ರೂರ, ಬ್ರಹ್ಮ, ಕಂಸ ಮೊದಲಾದ ಪಾತ್ರಗಳನ್ನು ಮಾಡಿದ್ದರು. 990ರ ಬಳಿಕ ತಾಳಮದ್ದಳೆಯಲ್ಲಿ ಭಾಗವಹಿಸಲು ಆರಂಭಿಸಿದ ಅವರು ವಾಲಿ, ಮಾಗಧ, ಕರ್ಣ, ಅರ್ಜುನ, ಶಲ್ಯ, ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ, ಭರತ, ಶತ್ರುಘ್ನ, ಹನುಮಂತ, ವೀರಮಣಿ, ಈಶ್ವರ, ಬಲರಾಮ, ರುಕ್ಮ, ಭೀಷ್ಮ, ಜಾಂಬವಂತ, ಶತ್ರುಪ್ರಸೂದನ, ಬಲಿ, ಶುಕ್ರಾಚಾರ್ಯ ಮುಂತಾದ ಪಾತ್ರಗಳು ಅವರಿಗೆ ಖ್ಯಾತಿಯನ್ನು ತಂದಿದೆ. ಅವರ ಪಾಂಡಿತ್ಯಪೂರ್ಣ ಸಂಭಾಷಣೆ, ಆಕರ್ಷಕ ಪದಪ್ರಯೋಗ ಮತ್ತು ಭಾವಪೂರ್ಣ ನಟನೆಯು ಅವರಿಗೆ ಎಲ್ಲಾ ಸಮುದಾಯಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. *ಬಲಿಪ ಮಾರ್ಗ’, ’ಅಗರಿ ಮಾರ್ಗ’ಕ್ಕೆ ಯಕ್ಷಮಂಗಳ ಕೃತಿ ಪ್ರಶಸ್ತಿ ’ಬಲಿಪ ಮಾರ್ಗ’ ಹಾಗೂ ’ಅಗರಿ ಮಾರ್ಗ’ ಕೃತಿಗಳ ಲೇಖಕರಾಗಿರುವ ಕೃಷ್ಣ ಪ್ರಕಾಶ ಉಳಿತ್ತಾಯರು ಹಿಮ್ಮೇಳ ಕಲಾವಿದರಾಗಿದ್ದಾರೆ. ಬಲಿಪ ಮಾರ್ಗ ಕೃತಿಯು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು ಹಾಗೂ ಕಿರಿಯ ಬಲಿಪ ನಾರಾಯಣ ಭಾಗವತರ ಬದುಕು, ಗಾನಮಾರ್ಗ ಇವುಗಳನ್ನು ಸುಂದರವಾಗಿ, ಅರ್ಥಪೂರ್ವಾಗಿ ನಿರೂಪಿಸುವ ಕೃತಿಯಾಗಿದೆ. ಅಗರಿ ಮಾರ್ಗ ಕೃತಿಯು ಅಗರಿ ಮಾರ್ಗ ಕೃತಿಯು ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ಯಕ್ಷಬ್ರಹ್ಮ ಎಂದು ಪ್ರಸಿದ್ದರಾದ ಅಗರಿಶ್ರೀನಿವಾಸ ಭಾಗವತರ ಬದುಕು, ಹಾಡುವ ಕ್ರಮ, ರಚನೆ, ಸಾಹಿತ್ಯ ವೈಶಿಷ್ಟ್ಯತೆಯನ್ನು ತೆರೆದಿಡುವ ಮಹತ್ವದ ಕೃತಿಯಾಗಿದೆ. ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲಿ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಪ್ರಶಸ್ತಿಗೆ ಸಾಧಕರನ್ನು ಶಿಫಾರಸು ಮಾಡಿದೆ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ಮಾರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಒಂದು ಕೋ.ರೂ. ಅನುದಾನ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ-ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ.ದಯಾನಂದ ಪೈ 1ಕೋ.ರೂ.ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಯಕ್ಷಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದಯಾನಂದ ಪೈ ಭಾಗವಹಿಸಲಿದ್ದು ಆ ದಿನ ಈ ಮೊತ್ತವನ್ನು ಹಸ್ತಾಂತರಿಸಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 9:16 pm

DPDP ಕಾಯ್ದೆ RTI ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆ–2023 ರ ಹಲವಾರು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಫೆ. 16ರಂದು ಒಪ್ಪಿಗೆ ನೀಡಿದೆ. ಸಂಸತ್ತಿನಲ್ಲಿ ಜಾರಿಯಾದ ನಿಬಂಧನೆಗಳ ಕುರಿತು ನಾವು ಆಲಿಸದೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಆರ್‌ಟಿಐ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫರ್ಮೇಷನ್ (NCPRI), ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಹಾಗೂ ತನಿಖಾ ಪತ್ರಕರ್ತರ ಗುಂಪಾದ ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಮೂರು ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರ್ಧರಿಸಿದೆ. ಡಿಪಿಡಿಪಿ ಕಾಯ್ದೆಯನ್ನು ಹೇಗೆ ರೂಪಿಸಲಾಯಿತು? ಪುಟ್ಟಸ್ವಾಮಿ (2017) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗೌಪ್ಯತೆಯ ಹಕ್ಕನ್ನು ಸಂವಿಧಾನದ ವಿಧಿ 21 (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (ವಿಧಿ 19) ಒಳಗೊಂಡಿರುವ ಪ್ರಮುಖ ಹಕ್ಕಾಗಿದೆ. ಈ ತೀರ್ಪಿನಲ್ಲಿ ಸರ್ಕಾರವು ದತ್ತಾಂಶ ಸಂರಕ್ಷಣಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು. ದತ್ತಾಂಶ ಸಂರಕ್ಷಣಾ ಚೌಕಟ್ಟಿನ ಕುರಿತು ಚರ್ಚಿಸಲು ಮತ್ತು ವರದಿ ನೀಡಲು ಸರ್ಕಾರ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಜುಲೈ 2018ರಲ್ಲಿ ತನ್ನ ವರದಿ ಹಾಗೂ ದತ್ತಾಂಶ ಸಂರಕ್ಷಣೆಯ ಕರಡು ಮಸೂದೆಯನ್ನು ಸಲ್ಲಿಸಿತು. ಬಳಿಕ, 2023ರ ಆಗಸ್ಟ್‌ನಲ್ಲಿ ಸಂಸತ್ತು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆ–2023 ಅನ್ನು ಅಂಗೀಕರಿಸಿತು. ಈ ಕಾಯ್ದೆ ವ್ಯಕ್ತಿಗಳ ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಈ ದತ್ತಾಂಶವನ್ನು ಅವರು ಇತರ ವ್ಯಕ್ತಿಗಳು, ಕಂಪೆನಿಗಳು ಹಾಗೂ ಸರ್ಕಾರಿ ಘಟಕಗಳೊಂದಿಗೆ ಹಂಚಿಕೊಳ್ಳುತ್ತಾರೆ. ವಿವಾದವೇನು? ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನಾಗರಿಕರಿಗೆ ಒದಗಿಸಲು 2005ರ ಮಾಹಿತಿ ಹಕ್ಕು (RTI) ಕಾಯ್ದೆ ಜಾರಿಗೆ ತರಲಾಯಿತು. DPDP ಕಾಯ್ದೆಯ ಸೆಕ್ಷನ್ 44(3) ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅನ್ನು ತಿದ್ದುಪಡಿ ಮಾಡುತ್ತದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಪ್ರಕಾರ, ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ನೀಡುವ ಮಾಹಿತಿಯಿಂದ ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದರೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಗಳು ಕಾಯ್ದೆಯ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನಿರಾಕರಿಸಬಹುದು. ಆದರೆ, DPDP ಕಾಯ್ದೆಯ ಸೆಕ್ಷನ್ 44(3)ರಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಇತರ ವಿಚಾರಗಳ ಉಲ್ಲೇಖಗಳನ್ನು ತೆಗೆಯಲಾಗಿದೆ. ಇದರ ಫಲವಾಗಿ ವ್ಯಕ್ತಿಯ “ವೈಯಕ್ತಿಕ ಮಾಹಿತಿ”ಯನ್ನು ತಡೆಹಿಡಿಯಲು ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆ. ಎನ್‌ಸಿಪಿಆರ್‌ಐ, ವೆಂಕಟೇಶ್ ನಾಯಕ್ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಲ್ಲಿಸಿದ ಅರ್ಜಿಗಳ ಪ್ರಮುಖ ಆಕ್ಷೇಪವೇ 2005ರ ಆರ್‌ಟಿಐ ಕಾಯ್ದೆಗೆ ಮಾಡಲಾದ ಈ ತಿದ್ದುಪಡಿ. ಈ ತಿದ್ದುಪಡಿಯ ಮೊದಲು, ಸಾರ್ವಜನಿಕ ಅಧಿಕಾರಿಗಳು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಿಸದಿದ್ದರೆ ಅಥವಾ ಅದು ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯ ಧಕ್ಕೆ ಉಂಟುಮಾಡುವಂತಿದ್ದರೆ ಮಾತ್ರ ಕಾಯ್ದೆಯಡಿ ವಿನಂತಿಸಿದ ವೈಯಕ್ತಿಕ ಮಾಹಿತಿಯನ್ನು ನಿರಾಕರಿಸಬಹುದಿತ್ತು. ತಿದ್ದುಪಡಿ ಮಾಡದ ಸೆಕ್ಷನ್ 8(1)(j) ಸಾರ್ವಜನಿಕ ಹಿತಾಸಕ್ತಿ ವಿನಾಯಿತಿಯನ್ನು ಒಳಗೊಂಡಿತ್ತು. ಮೂಲ ಆವೃತ್ತಿಯ ಪ್ರಕಾರ, ಮಾಹಿತಿಯನ್ನು ಖಾಸಗಿ ಎಂದು ಪರಿಗಣಿಸಿದ್ದರೂ ಸಹ, ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅದನ್ನು ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದರು. ವ್ಯಕ್ತಿಯ ಗೌಪ್ಯತೆಯನ್ನು ರಕ್ಷಿಸುವುದಕ್ಕಿಂತ ಮಾಹಿತಿಯನ್ನು ಹಂಚಿಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚು ಮಹತ್ವದ್ದು ಎಂದು ಅವರು ಭಾವಿಸಿದರೆ, ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿತ್ತು. ತಿದ್ದುಪಡಿ ಮಾಡಿದ ಸೆಕ್ಷನ್ 8(1)(j) ಈಗ ಯಾವುದೇ “ವೈಯಕ್ತಿಕ ಮಾಹಿತಿ”ಯನ್ನು ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ. ಎನ್‌ಸಿಪಿಆರ್‌ಐ ಪ್ರಕಾರ, ಈ ಬದಲಾವಣೆ ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ವ್ಯಕ್ತಿಯ ಗೌಪ್ಯತೆಯಿಗಿಂತ ಹೆಚ್ಚು ಮುಖ್ಯವೆಂದು ನಿರ್ಧರಿಸುವ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳಿಂದ ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರದ ತನಿಖೆಗಳು ಅಧಿಕಾರಿಗಳ ಆಸ್ತಿ ಬಹಿರಂಗಪಡಿಸುವಿಕೆ, ಸರ್ಕಾರಿ ಟೆಂಡರ್‌ಗಳ ವಿವರಗಳು ಹಾಗೂ ಆಂತರಿಕ ಕಚೇರಿ ಟಿಪ್ಪಣಿಗಳಂತಹ ದಾಖಲೆಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ದಾಖಲೆಗಳು ಸಾಮಾನ್ಯವಾಗಿ ಕೆಲವು ವೈಯಕ್ತಿಕ ಹೆಸರುಗಳು ಅಥವಾ ವಿವರಗಳನ್ನು ಒಳಗೊಂಡಿರುತ್ತವೆ. “ಸಾರ್ವಜನಿಕ ಹಿತಾಸಕ್ತಿ” ನಿಯಮವನ್ನು ತೆಗೆದುಹಾಕುವುದರಿಂದ, ಮಾಹಿತಿಯು ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಪಟ್ಟಿದ್ದರೂ ಸಹ, ಸರ್ಕಾರವು ಅದನ್ನು “ವೈಯಕ್ತಿಕ” ಎಂದು ಉಲ್ಲೇಖಿಸಿ ಮರೆಮಾಡುವ ಸಾಧ್ಯತೆ ಇದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವಾದಿಸಿದೆ. ಈ ತಿದ್ದುಪಡಿಯು ಸಂವಿಧಾನ ಉಲ್ಲಂಘನೆ ಎಂದು ಹಲವು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಪತ್ರಿಕೋದ್ಯಮದ ದೃಷ್ಟಿಕೋನದಿಂದ DPDP ಕಾಯ್ದೆ ದಿ ರಿಪೋರ್ಟರ್ಸ್ ಕಲೆಕ್ಟಿವ್ ಫೆಬ್ರವರಿ 16ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಜಾಪ್ರಭುತ್ವ, ಪಾರದರ್ಶಕತೆ ಹಾಗೂ ತನಿಖಾ ಪತ್ರಿಕೋದ್ಯಮದ ಮೇಲೆ ನೇರ ದಾಳಿ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ DPDP ಕಾಯ್ದೆಯನ್ನು ಪ್ರಶ್ನಿಸಿದ್ದೇವೆ ಎಂದು ತಿಳಿಸಿದೆ. DPDP ಕಾಯ್ದೆಯು ಪ್ರಸ್ತುತ ರೂಪದಲ್ಲಿ ಪ್ರಜಾಪ್ರಭುತ್ವವನ್ನು ಕುಗ್ಗಿಸುವ ಸಾಧ್ಯತೆ ಹೊಂದಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಡೇಟಾವನ್ನು ಸಂಗ್ರಹಿಸುವ ಅಥವಾ ಪತ್ರಿಕೋದ್ಯಮ ಅಭಿವ್ಯಕ್ತಿಗಳಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಂದರ್ಭಗಳಿಗೆ ಯಾವುದೇ ಸ್ಪಷ್ಟ ವಿನಾಯಿತಿ ಇಲ್ಲ. ಈ ವಿನಾಯಿತಿಯ ಕೊರತೆಯಿಂದ DPDP ಕಾಯ್ದೆಯ ರೂಪುರೇಷೆ ಅಸಂವಿಧಾನಿಕ, ಅಸಮಂಜಸ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. “ಸಾರ್ವಜನಿಕ ಹಿತಾಸಕ್ತಿ” ವಿನಾಯಿತಿ ಇಲ್ಲದಿದ್ದರೆ, ಸುದ್ದಿಗಾಗಿ ಡೇಟಾವನ್ನು ಸಂಗ್ರಹಿಸುವ ವರದಿಗಾರನನ್ನೇ ಕಾನೂನು ಉಲ್ಲಂಘಿಸಿದವನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದೆ ಏನಾಗಬಹುದು? ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಮಾಹಿತಿ ಹಕ್ಕನ್ನು ವಿಧಿ 19 ಮತ್ತು 21ರ ಅವಿಭಾಜ್ಯ ಅಂಗವೆಂದು ಪರಿಗಣಿಸಿದೆ. ಹಿಂದೆ ಅಧಿಕಾರಿಗಳ ಹಣಕಾಸು ದಾಖಲೆಗಳು ಮತ್ತು ಆಸ್ತಿ ಬಹಿರಂಗಪಡಿಸುವಿಕೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದರೆ RTI ಕಾಯ್ದೆಯಡಿ ಹಂಚಿಕೊಳ್ಳಲಾಗುತ್ತಿತ್ತು. ಇದು ಭ್ರಷ್ಟಾಚಾರ ಬಹಿರಂಗಪಡಿಸಲು ಪ್ರಮುಖ ಸಾಧನವಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಅಧಿಕಾರಿಗಳಿಗೆ ಈ ದಾಖಲೆಗಳನ್ನು “ವೈಯಕ್ತಿಕ ಮಾಹಿತಿ” ಎಂದು ಉಲ್ಲೇಖಿಸಿ ಮರೆಮಾಡುವ ಅವಕಾಶ ನೀಡುತ್ತದೆ. “ವೈಯಕ್ತಿಕ ಮಾಹಿತಿ”ಯ ಅರ್ಥವನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನ ಈ ಸಂಘರ್ಷವನ್ನು ಪರಿಹರಿಸಲು ಆರಂಭಿಕ ಹಂತವಾಗಬಹುದು. ಆದರೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ DPDP ಕಾಯ್ದೆಯಿಂದ ಮಾಡಲಾದ ಬದಲಾವಣೆಗಳನ್ನು ರದ್ದುಗೊಳಿಸಿ, ಸೆಕ್ಷನ್ 8(1)(j) ಅನ್ನು ಅದರ ಮೂಲ ರೂಪಕ್ಕೆ ಹಿಂತಿರುಗಿಸುವುದು. ಮೂಲ ನಿಯಮವು ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕು ಮತ್ತು ಅಧಿಕಾರಿಗಳ ಗೌಪ್ಯತೆಯ ನಡುವೆ ಸಮತೋಲನ ಸಾಧಿಸುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿತ್ತು. ಅದನ್ನು ಮರುಸ್ಥಾಪಿಸುವುದರಿಂದ ಗೌಪ್ಯತೆ ರಕ್ಷಣೆ ಹಾಗೂ ಪಾರದರ್ಶಕತೆ — ಎರಡನ್ನೂ ಸಮತೋಲನದಲ್ಲಿ ಉಳಿಸಬಹುದು.

ವಾರ್ತಾ ಭಾರತಿ 25 Feb 2026 9:15 pm

ಶೀಘ್ರದಲ್ಲೇ ಕ್ಯಾನ್ಸರ್, ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣ : ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಸುಮಾರು 76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 210 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆಯ ವಿಸ್ತರಣಾ ಕಟ್ಟಡವು ಆಗಸ್ಟ್ ಮಾಹೆಗೆ ಮತ್ತು 92 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ಬರುವ ಅಕ್ಟೋಬರ್ ಮಾಹೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು. ಬುಧವಾರ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಸುಟ್ಟು ಗಾಯಗಳ ಘಟಕ, ತೀವ್ರ ನಿಗಾ ಘಟಕ ಕಟ್ಟಡ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಕಾಲಾವಧಿವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ ಈಗಾಗಲೆ ಇರುವ ಕ್ಯಾನ್ಸರ್ ಆಸ್ಪತ್ರೆಯ 90 ಹಾಸಿಗೆ ಜೊತೆಗೆ 210 ಹಾಸಿಗೆ ಸೇರಿದಲ್ಲಿ 300 ಹಾಸಿಗೆ ಸಾಮರ್ಥ್ಯದೊಂದಿಗೆ ಕಲಬುರಗಿ ಕ್ಯಾನ್ಸರ್ ಆಸ್ಪತ್ರೆ ಉತ್ತರ ಕರ್ನಾಟಕದ ಸೆಂಟರ್ ಆಗಿ ಗುರುತಿಸಿಕೊಳ್ಳಲಿದೆ ಎಂದರು. 22 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ 50 ಹಾಸಿಗೆಯ ತೀವ್ರ ನಿಗಾ ಘಟಕ ಕಾಮಗಾರಿ ಸಹ ಅಕ್ಟೋಬರ್‌ನಲ್ಲಿ ಮುಗಿಯಲಿದೆ. 9.80 ಕೋಟಿ ರೂ. ಮೊತ್ತದ ಸಿವಿಲ್ ಕಾಮಗಾರಿ ಮತ್ತು 5 ಕೋಟಿ ರೂ. ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಾಪನೆಯಾಗುತ್ತಿರುವ 30 ಹಾಸಿಗೆಯ ಸುಟ್ಟ ಗಾಯ ಘಟಕ ಬಹುತೇಕ ಕಾಮಗಾರಿ ಮುಗಿದಿದ್ದು, ಮಂದಿನ ಎರಡು ತಿಂಗಳಿನಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು. ಇದಲ್ಲದೆ ಗುಲ್ಬರ್ಗಾ ವಿ.ವಿ. ಆವರಣದಲ್ಲಿ 92 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ತೆರೆಯಲಾಗುತ್ತಿದ್ದು, ಕೆಲಸ ಪ್ರಾರಂಭವಾಗಿದೆ. 50 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಸೆಂಟರ್ ಸ್ಥಾಪಿಸಲಾಗುತ್ತಿದೆ. 100 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ನಿಮ್ಹಾನ್ಸ್ ಶಾಖೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನಷ್ಟೆ ಕೆಲಸ ಆರಂಭವಾಗಬೇಕಿದೆ. ಒಟ್ಟಾರೆಯಾಗಿ ಕಲಬುರಗಿ ನಗರವರ‍್ನು ಮೆಡಿಕಲ್ ಹಬ್ ಮಾಡುವ ನಿಟ್ಟಿನಲ್ಲಿ ಬಡವರಿಗೆ ಏನೆಲ್ಲ ಮಾಡಲು ಸಾಧ್ಯವೆ ಎಲ್ಲಾ ವೈದ್ಯಕೀಯ ಸವಲತ್ತು ತರುವಂತ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು. ಗುಲ್ಬರ್ಗಾ ವಿ.ವಿ. ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ 120 ಕೊಟಿ ರೂ. ವೆಚ್ಚದಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ ನಗರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಐ.ಟಿ.ಐ ಉನ್ನತಿಕರಣ ಕಾಮಗಾರಿ ಸಹ ಪ್ರಗತಿಯಲ್ಲಿದೆ ಎಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದರು. ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಷ್ಟೆ ಜಾರಿಗೊಳಿಸಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಜೊತೆ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದೆ. ಇದ್ಕೆ ಸಾಕ್ಷಿ ಕಲಬುರಗಿ ಜಿಲ್ಲೆಯ ಈ ಕೆಲಸ ಕಾಮಗಾರಿಗಳೆ. ಹಣ ಇಲ್ಲದಿದ್ದರೆ ಇಷ್ಟೆಲ್ಲ ಕೆಲಸ ಕಾರ್ಯ ನಡೆಯುವುದಾದರು ಹೇಗೆ ಎಂದು ಸುದ್ದಿಗಾರರನ್ನು ಮರು ಪ್ರಶ್ನಿಸಿದ ಅವರು, ತಮ್ಮ ವೈದ್ಯಕೀಯ ಇಲಾಖೆಯಲ್ಲಿ ಯಾವುದೇ ಬಿಲ್ಲು ಪೆಂಡಿಂಗ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಟ್ರಾಮಾ ಸೆಂಟರ್ : ರಾಜ್ಯ ಸರ್ಕಾರವು ಮುಂದಿನ ಐದು ವರ್ಷದಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಈಗಾಗಲೆ ನಿರ್ಧರಿಸಿದ್ದು, ಹಂತ ಹಂತವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜು, ಟ್ರಾಮಾ ಸೆಂಟರ್ ತರಲಾಗಿತ್ತು. ಇತ್ತೀಚೆಗೆ ಸೂಪರ್ ಸ್ಪೆಷಾಲಿಟಿ ಲೋಕಾರ್ಪಣೆ ಮಾಡಿದ್ದೇವೆ, ಇದೀಗ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಹಂತದಲ್ಲಿದೆ. ಕನಕಪುರ, ರಾಮನಗರದಲ್ಲಿ ಇದೇ ವರ್ಷ ಹೊಸದಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಿದ್ದೇವೆ. 330 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬರುವಂತಹ ಆಯವ್ಯಯದಲ್ಲಿ ಇನ್ನಷ್ಟು ಯೋಜನೆಗಳು ಜಿಲ್ಲೆಗೆ ಘೋಷಣೆ ಮಾಡಲು ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್., ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಸ್ನಾ ರುಕಿಯಾ ರಬಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು. ತದನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಗತಿ ಪರಿಶೀಲನೆ ನಡೆಸಿದರು.

ವಾರ್ತಾ ಭಾರತಿ 25 Feb 2026 9:13 pm

ಬಾರಾಮತಿ ವಿಮಾನ ದುರಂತ | ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಣೆ: ರೋಹಿತ್ ಪವಾರ್ ಆರೋಪ

ಮುಂಬೈ, ಫೆ. 25: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾದ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಬುಧವಾರ ಆರೋಪಿಸಿದ್ದಾರೆ. ಈ ನಿರಾಕರಣೆ ಅಪಘಾತದ ಸುತ್ತಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಸರಕಾರ ಹಾಗೂ ಸರಕಾರದ ವ್ಯವಸ್ಥೆ ಯಾರನ್ನೋ ರಕ್ಷಿಸುವಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ರೋಹಿತ್ ಪವಾರ್, ‘‘ಅಜಿತ್‌ದಾದಾ ಅವರ ವಿಮಾನ ಅಪಘಾತದ ಕುರಿತು ಸೂಕ್ತ ಕ್ರಮಕ್ಕಾಗಿ ಕಾಯುತ್ತಿರುವಾಗ, ನಿನ್ನೆ ಬಂದ ಡಿಜಿಸಿಎ ವರದಿ ವಿಎಸ್‌ಆರ್ ಕಂಪೆನಿಯ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಿದೆ’’ ಎಂದು ತಿಳಿಸಿದ್ದಾರೆ. ಆದುದರಿಂದ ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ತಾನು ಪಕ್ಷದ ಎಂಎಲ್‌ಸಿ ಅಮೋಲ್ ವಿಟ್ಕಾರಿ, ಇದ್ರೀಸ್ ನಾಯ್ಕ್ವಾಡಿ, ಶಾಸಕ ಸಂದೀಪ್ ಕ್ಷೀರನಗರ್ ಅವರೊಂದಿಗೆ ದಕ್ಷಿಣ ಮುಂಬೈನ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ತೆರಳಿ ಬಿಎನ್‌ಎಸ್ ನಿಯಮದ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.  

ವಾರ್ತಾ ಭಾರತಿ 25 Feb 2026 9:09 pm

Kalaburagi | ಗುಣಮಟ್ಟದ ಶಿಕ್ಷಣಕ್ಕೆ ಶರಣ ಸಂಸ್ಥಾನದ ಕೊಡುಗೆ ಅಪಾರ : ಡಾ.ದಾಕ್ಷಾಯಿಣಿ ಎಸ್.ಅಪ್ಪ

ಗೋದುತಾಯಿ ಕಾಲೇಜಿನಲ್ಲಿ ಬಿ.ಎಸ್ಸಿ ಲ್ಯಾಬ್ ಉದ್ಘಾಟನೆ

ವಾರ್ತಾ ಭಾರತಿ 25 Feb 2026 9:09 pm

ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು, ಆದ್ಯತೆ ಮೇರೆಗೆ ಮಂಜೂರು ಮಾಡಬೇಕು: ಹೈಕೋರ್ಟ್

ಬೆಂಗಳೂರು: ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಎನ್ನುವುದು ಮಗುವಿನ ಹಕ್ಕು. ಬೇರೆ ಎಲ್ಲ ರಜೆಗಳನ್ನು ನೀಡುವ ವಿವೇಚನಾ ಅಧಿಕಾರ ಉದ್ಯೋಗದಾತರಿಗೆ ಇದೆಯಾದರೂ, ಸಿಸಿಎಲ್‌ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಕೇಂದ್ರ ಸರ್ಕಾರದ ಸೆಂಟರ್‌ ಫಾರ್‌ ಡೆವಲಪಮೆಂಟ್‌ ಆಫ್‌ ಅಡ್ವಾನ್ಸ್ಡ್ ಕಂಪ್ಯೂಟಿಂಗ್‌ನಲ್ಲಿ (ಸಿಡಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಯೊಬ್ಬರಿಗೆ ಸಿಸಿಎಲ್ ಮಂಜೂರು ಮಾಡುವಂತೆ ನಿರ್ದೇಶಿಸಿದೆ‌. ಕವಿತಾ ವಡ್ಡೆ ಎಂಬವರಿಗೆ ಮಕ್ಕಳ ಆರೈಕೆ ರಜೆ ನೀಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಫೆಬ್ರವರಿ 5ರಂದು ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ತಾಯಿಯ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಆದ್ದರಿಂದ, ಸಿಸಿಎಲ್‌ ಮಗುವಿನ ಹಕ್ಕೆಂದು ಅಭಿಪ್ರಾಯಪಟ್ಟು ಸಿಎಟಿ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಕವಿತಾ ವಡ್ಡೆ ಅವರಿಗೆ ಫೆಬ್ರವರಿ 6ರಿಂದ ಅನ್ವಯವಾಗುವಂತೆ ಮೇ 20ರವರೆಗೆ ಸಿಸಿಎಲ್ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಉದ್ಯೋಗಿಗಳಿಗೆ ಇತರ ಎಲ್ಲ ರಜೆಗಳನ್ನು ಮಂಜೂರು ಮಾಡುವುದು ಅಥವಾ ಬಿಡುವುದು ಉದ್ಯೋಗದಾತರ ವಿವೇಚನೆಗೆ ಬಿಟ್ಟಿದ್ದು. ಆದರೆ, ಮಕ್ಕಳ ಆರೈಕೆ ರಜೆಯ ವಿಚಾರ ಬಂದಾಗ ಅದರಲ್ಲಿ ವಿವೇಚನೆ ಅಧಿಕಾರದ ಪ್ರಶ್ನೆಯೇ ಇಲ್ಲ. ಅದು ಮಕ್ಕಳ ಆರೈಕೆಗೆಂದೇ ಮೀಸಲಿರುವುದರಿಂದ ಅದನ್ನು ನೀಡಲೇಬೇಕಾಗುತ್ತದೆ. ಮಕ್ಕಳಿಗೆ ತಾಯಿಯ ಆರೈಕೆ ಬೇಕಾಗುತ್ತದೆ. ಆದ್ದರಿಂದ, ತಾಯಿ ಸಿಸಿಎಲ್‌ ಅನ್ನು ತನ್ನ ಹಕ್ಕನ್ನಾಗಿ ಕೋರಬಹುದು ಎಂದು ನ್ಯಾಯಪೀಠ ಆದೇಶಿಸಿದೆ. ಪ್ರಕರಣವೇನು? ಕೇಂದ್ರ ಸರ್ಕಾರಿ ನಿಯಮದಲ್ಲಿ ಅಪ್ರಾಪ್ತ ಮಕ್ಕಳ ಆರೈಕೆಗಾಗಿ ಸೇವಾವಧಿಯಲ್ಲಿ 730 ದಿನ ಸಿಸಿಎಲ್‌ ರಜೆ ಪಡೆಯಲು ಮಹಿಳಾ ಉದ್ಯೋಗಿ ಮತ್ತು ಒಂಟಿ ಪೋಷಕ ಪುರುಷ ಉದ್ಯೋಗಿಗೆ ಅವಕಾಶವಿದೆ. ಅದರಂತೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಾಕ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ತಮ್ಮ ಮಗನ 10ನೇ ತರಗತಿ ಪರೀಕ್ಷೆಗೆ ನೆರವಾಗಲು 5 ತಿಂಗಳು ಸಿಸಿಎಲ್‌ ಕೋರಿದ್ದರು. ಆದರೆ, ಆ ಮನವಿ ನಿರಾಕರಿಸಿ ಕೇವಲ 18 ದಿನ ಮಾತ್ರ ರಜೆ ನೀಡಲಾಗಿತ್ತು. ಇದನ್ನು ಕವಿತಾ ಸಿಎಟಿಯಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಸಿಎಟಿಯ ನ್ಯಾಯಾಂಗ ಸದಸ್ಯೆ ಎಸ್‌. ಸುಜಾತಾ ಹಾಗೂ ಆಡಳಿತ ಸದಸ್ಯ ಡಾ. ಸಂಜೀವ್‌ ಕುಮಾರ್‌ ಅವರಿದ್ದ ಪೀಠ ಕವಿತಾ ಅವರಿಗೆ ಸಿಸಿಎಲ್‌ ರಜೆ ನೀಡಲೇಬೇಕೆಂದು ಫೆ.5ರಂದು ಆದೇಶಿಸಿತ್ತು. ಅಲ್ಲದೆ, ಸಂಸ್ಥೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ ಎಂಬ ಸಂಸ್ಥೆಯ ವಾದವನ್ನು ಒಪ್ಪಲಾಗದು. ಸಿಸಿಎಲ್‌ ಇರುವುದೇ ಮಕ್ಕಳ ಆರೈಕೆಗೆ, ಅರ್ಜಿದಾರರು ಎಲ್ಲ ರೀತಿಯಲ್ಲೂ ಸಿಸಿಎಲ್‌ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿದಾರರ ಪುತ್ರ 10ನೇ ತರಗತಿಯಲ್ಲಿ ಓದುತ್ತಿದ್ದು, ಇದು ಮಗುವಿನ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಆಡಳಿತಾತ್ಮಕ ತೊಂದರೆ ಮತ್ತು ಮಾನವ ಸಂಪನ್ಮೂಲ ಕೊರತೆ ಕಾರಣಗಳಿಂದ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿತ್ತು. ಕವಿತಾ ಪರ ಪರ ವಾದ ಮಂಡಿಸಿದ್ದ ವಕೀಲ ಕೆ. ಸತೀಶ್‌ ಭಟ್‌, ಅಡ್ವಾನ್ಸಿಂಗ್‌ ಕಂಪ್ಯೂಟಿಂಗ್‌ ಕೇಂದ್ರದ ಉದ್ಯೋಗಿಯಾರುವ ಕವಿತಾ ಅವರು 5 ತಿಂಗಳು ಸಿಸಿಎಲ್‌ ಕೋರಿದರೆ ಕೇವಲ 18 ದಿನಗಳ ರಜೆ ನಿಡಲಾಗಿದೆ. ಇದು ಕೇಂದ್ರೀಯ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದ್ದು, ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿದೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಅರ್ಜಿದಾರರು ರಜೆಯ ವಿಚಾರಕ್ಕೆ ಒತ್ತಡದಲ್ಲಿದ್ದಾರೆ. ಅಪ್ರಾಪ್ತ ಮಕ್ಕಳ ಹಕ್ಕು ರಕ್ಷಿಸಲು ಈ ನಿಯಮವನ್ನು ರೂಪಿಸಲಾಗಿದೆ. ಮಗುವಿನ ಅಭಿವೃದ್ದಿಗೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಫೆಬ್ರವರಿ 6 ರಿಂದ ಮೇ 20ರವರೆಗೆ ರಜೆ ನೀಡಲು ಸಿಎಟಿ ಆದೇಶಿಸಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ವಾರ್ತಾ ಭಾರತಿ 25 Feb 2026 9:08 pm

ನಾಟಕಗಳು ಸಮಾಜವನ್ನು ಎಚ್ಚರಿಸುತ್ತವೆ: ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ, ಫೆ.25: ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಸಿ ಕೊಡುವ ನಾಟಕಗಳು ಸಮಾಜವನ್ನು ಸದಾ ಎಚ್ಚರಿಸುತ್ತಿರುತ್ತವೆ. ಸರಿದಾರಿಯಲ್ಲಿ ನಡೆಯಲು ಬೆಳಕು ತೋರುತ್ತವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ನಾಲ್ಕನೇ ದಿನ ಬುಧವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ ಮತ್ತು ಬೆಳೆಯುತ್ತದೆ. ಒಗ್ಗಟ್ಟಿಲ್ಲದೇ ಹೋದರೆ ಬೆಳೆಯಲು ಸಾಧ್ಯವಿಲ್ಲ. ಸಂಘಟನೆ ಮಾಡುವುದು ಯಾವಾಗಲೂ ಕಷ್ಟದ ವಿಚಾರ. ಶ್ರಮವಹಿಸುವ ಸದಸ್ಯರು ಇರಬೇಕು. ಹಣ ಬೇಕು. ಪ್ರೇಕ್ಷಕರ ಪ್ರೋತ್ಸಾಹವೂ ಇರಬೇಕು. ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ರಂಗಸಾಧಕ ಗೌರವ ಸ್ವೀಕರಿಸಿದ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಮಾತನಾಡಿ, ತುಳುಕೂಟದವರು ನಡೆಸುವ ತುಳು ನಾಟಕ ಸ್ಪರ್ಧೆಯಿಂದಾಗಿ ಅನೇಕ ತಂಡಗಳು ಉಳಿದು ಬೆಳೆದಿವೆ. ತುಳುನಾಡಿನಲ್ಲಿರುವ ಕಲೆ ಬೇರೆಲ್ಲೂ ಸಿಗುವುದಿಲ್ಲ. ಅಭಿಮಾನಿಗಳ ಪ್ರೋತ್ಸಾಹದಿಂದ ಕಲಾವಿದರು ಬೆಳೆದಿದ್ದಾರೆ ಎಂದು ಹೇಳಿದರು. ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ ಮಾತನಾಡಿ, ನಾಟಕ ಅಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ. ಸಿನಿಮಾ ತಾರೆಯರಿಗಿಂತ ನಾಟಕ ಕಲಾವಿದರ ಶ್ರಮ ಅಪಾರವಾದುದು. ನಾಟಕ ಕಲೆ ಶ್ರೇಷ್ಠ ಕಲೆ. ಯುವಜನರು ಇದರಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಡೆಂಟಾಕೇರ್ ಉಡುಪಿಯ ಡಾ.ವಿಜಯೇಂದ್ರ ಮಾತನಾಡಿ ದರು. ಸೌಹಾರ್ದ ಸಂಘ ನಿಯಮಿತದ ಅಧ್ಯಕ್ಷ ಬಿ.ಜಿ.ಸುಬ್ಬರಾವ್, ಮಲ್ಪೆ ಮತ್ಸ್ಯ ರಾಜ್ ಗ್ರೂಪ್‌ನ ಅಭಿನಂದನ್ ಕೆ.ಕೋಟ್ಯನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು. ವಿದ್ದು ಉಚ್ಚಿಲ್ ಸ್ವಾಗತಿಸಿದರು. ರಾಗಿಣಿ ಹರೀಶ್ ವಂದಿಸಿದರು, ಕಾರ್ತಿಕ್ ಪ್ರಭು, ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 25 Feb 2026 9:07 pm

ಹರಪನಹಳ್ಳಿ | ರಾಜ್ಯ ಹೆದ್ದಾರಿ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಗಮ: ಶಾಸಕಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ  : ‘ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣದಿಂದ ಮೂರು ಜಿಲ್ಲೆಗಳ ಸಾರಿಗೆ ಸಂಪರ್ಕ ವ್ಯವಸ್ಥೆ ಸುಗಮವಾಗಲಿದೆ’ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು. ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪೇಟೆಯಲ್ಲಿ ಡಿಎಂಎಫ್ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ 6 ಶಾಲಾ ಕೊಠಡಿಗಳು ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ರಂಗಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಲಿಯಲು ಯೋಗ್ಯ ವಾತಾವರಣ ಸೃಷ್ಟಿಯಾದರೆ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು. ಕಲಿಕೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು. ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿಕೊಂಡು ಭವಿಷ್ಯದಲ್ಲಿ ಅದನ್ನು ಆರಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಹರಪನಹಳ್ಳಿ ನಗರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿ ದುರಸ್ತಿ ಕಾಣದೆ ಅಪಘಾತಗಳು ಹೆಚ್ಚಾಗುತ್ತಿವೆ. ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಸಂಸದೆಗೆ ಮನವಿ ಮಾಡಿದರು. ತಾಲೂಕಿಗೆ ಹೆಚ್ಚಿನ ಸಂಸದರ ಅನುದಾನ ದೊರೆತರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಇಓ ಎಚ್ ಲೇಪಾಕ್ಷಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಹಿರಿಯ ಮುಖ್ಯ ಶಿಕ್ಷಕ ಪಾಂಡಪ್ಪ ಬಡಿಗೇರ, ಸಿಆರ್‌ಪಿಗಳಾದ ಮೈಲಾರಿ, ಸಲೀಂ, ಶಿಕ್ಷಕರಾದ ಎನ್ ಜಿ ಚಿದಾನಂದಪ್ಪ, ಮಂಜಪ್ಪ ಬಣಕಾರ, ಶಿವಯೋಗಿ ಎಸ್ , ನಾಗರತ್ನಮ್ಮ, ಮಂಗಳ ಗೌರಮ್ಮ, ಶಾರದಮ್ಮ, ಮಂಜುಳ ಎಂ ಎಸ್, ಎಚ್ ಎಂ ವಿಜಯಕುಮಾರಿ, ಕೊಟ್ರಮ್ಮ ಎಂ, ಕುಬೇರಗೌಡ, ದೇವೇಂದ್ರಗೌಡ, ಮೈದೂರು ರಾಮಣ್ಣ, ನಜೀರ್ ಸಾಹೇಬ್, ಸೇರಿದಂತೆ ಇತರರಿದ್ದರು.

ವಾರ್ತಾ ಭಾರತಿ 25 Feb 2026 9:06 pm

ಟಿ-20 ವಿಶ್ವಕಪ್ | ಇಂಗ್ಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ ಸೆಮಿ ಫೈನಲ್ ತಲುಪುವುದೇ?

ಕೊಲಂಬೊ, ಫೆ.25: ಪಾಕಿಸ್ತಾನ ತಂಡವನ್ನು ಮಂಗಳವಾರ ಸೂಪರ್-8 ಪಂದ್ಯದಲ್ಲಿ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿರುವ ಮೊದಲ ತಂಡ ಎನಿಸಿಕೊಂಡಿದೆ. ಈ ಫಲಿತಾಂಶದಿಂದಾಗಿ ಪಾಕಿಸ್ತಾನ ತಂಡದ ಸೆಮಿ ಫೈನಲ್ ವಿಶ್ವಾಸಕ್ಕೆ ತೀವ್ರ ಹಿನ್ನಡೆಯಾಗಿದೆ ಇಂಗ್ಲೆಂಡ್ ವಿರುದ್ಧ ಸೋಲು ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯ ಮಳೆಗಾಹುತಿಯಾದ ಕಾರಣ ಪಾಕಿಸ್ತಾನ ತಂಡದ ಸೆಮಿ ಫೈನಲ್ ಹಾದಿ ದುರ್ಗಮವಾಗಿದೆ. ಗ್ರೂಪ್-2ರಲ್ಲಿ ಖಾಲಿ ಇರುವ ಒಂದು ಸೆಮಿ ಫೈನಲ್ ಸ್ಥಾನಕ್ಕಾಗಿ ಪಾಕಿಸ್ತಾನ, ಶ್ರೀಲಂಕಾ, ನ್ಯೂಝಿಲ್ಯಾಂಡ್ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡವು ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ಪಾಕಿಸ್ತಾನ ತಂಡ ಶ್ರೀಲಂಕಾವನ್ನು ಮಣಿಸಿದರೂ ಟೂರ್ನಿಯಿಂದ ನಿರ್ಗಮಿಸಲಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡವು ಎರಡೂ ಪಂದ್ಯಗಳನ್ನು ಸೋತರೆ, ಪಾಕಿಸ್ತಾನ ತಂಡವು ಲಂಕಾ ವಿರುದ್ಧ ಗೆಲುವು ದಾಖಲಿಸಿದರೆ ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ನ್ಯೂಝಿಲ್ಯಾಂಡ್ ತಂಡ ಒಂದು ಪಂದ್ಯ ಸೋತರೂ ಪಾಕಿಸ್ತಾನಕ್ಕೆ ಅವಕಾಶ ಸಿಗಲಿದೆ. ಆದರೆ ಇದು ನೆಟ್‌ರನ್‌ರೇಟ್ ಆಧರಿಸಿದೆ. ಇಂಗ್ಲೆಂಡ್ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತಿರುವ ಪಾಕಿಸ್ತಾನದ ನೆಟ್‌ರನ್‌ರೇಟ್ ಕೂಡ ಹೆಚ್ಚಾಗಿಲ್ಲ. 8ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡದ 4 ವಿಕೆಟ್‌ಗಳನ್ನು ಉರುಳಿಸಿದ್ದ ಪಾಕಿಸ್ತಾನ ಆ ನಂತರ ತನ್ನ ಹಿಡಿತ ಕಳೆದುಕೊಂಡಿತು.

ವಾರ್ತಾ ಭಾರತಿ 25 Feb 2026 9:05 pm

ಮೇ ತಿಂಗಳಲ್ಲಿ ಪ್ರಥಮ ಬಾರಿಗೆ ವಿಧಾನಸೌಧದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಉಭಯ ತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆ ಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸ ಲಾಗುವುದೆಂದು ವಿಧಾನಸೌಧದ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ನಿಯೋಗದ ಮನವಿಗೆ ಸ್ಪಂದಿಸಿದ ಸ್ಪೀಕರ್ ಯು.ಟಿ.ಖಾದರ್, ಶಾಸಕರು ಮತ್ತು ಪರಿಷತ್ ಸದಸ್ಯರು ವೀಕ್ಷಿಸಲು ಅನುಕೂಲವಾಗುವ ಹಾಗೆ ಹೆಸರಾಂತ ಯಕ್ಷಗಾನ ಕಲಾವಿದರನ್ನು ಒಳಗೊಂಡ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್., ಸದಸ್ಯರು ಗಳಾದ ಕೊಪ್ಪಲ ಮೋಹನ್ ಕದ್ರಿ, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ ಎ.ಆರ್. ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:05 pm

ಉದ್ಯೋಗ ಭರ್ತಿ; ಬಜೆಟ್‌ನಲ್ಲಿ ಘೋಷಣೆ: ಸಿಎಂ ಸಿದ್ದರಾಮಯ್ಯ

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಪ್ರತಿಭಟನೆ

ವಾರ್ತಾ ಭಾರತಿ 25 Feb 2026 9:02 pm

ಕೊಟ್ಟೂರು | ಕಳಪೆ ಕಾಮಗಾರಿ ನೆಪದಲ್ಲಿ ಗುತ್ತಿಗೆದಾರರಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ: ಶಾಸಕ ನೇಮಿರಾಜ್ ನಾಯ್ಕ್

ಕೊಟ್ಟೂರು : ಪಟ್ಟಣದಲ್ಲಿ ನಡೆಯುತ್ತಿರುವ ಪ್ರಜಾಸೌಧ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ ಎಂದು ಶಾಸಕ ಶಾಸಕ ಕೆ.ನೇಮಿರಾಜ್ ನಾಯ್ಕ್ ತಿಳಿಸಿದ್ದಾರೆ. ಪ್ರಜಾಸೌಧ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಾಮಗಾರಿ ಕಳಪೆಯಾಗಿದೆ ಎಂದು ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು. ಕಾಮಗಾರಿ ಸ್ಥಳಕ್ಕೆ ಪದೇಪದೆ ಆಗಮಿಸಿ ಸಂಘಟನೆಗಳ ಹೆಸರಿನಲ್ಲಿ ತೊಂದರೆ ನೀಡುವುದು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಬೇಡಿಕೆ ಇಡುವುದು ಸರಿಯಲ್ಲ ಎಂದು ಹೇಳಿದರು. ಇಂತಹ ಚಟುವಟಿಕೆಗಳು ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಜಾಸೌಧ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಪಟ್ಟು ಅನುದಾನ ತಂದಿರುವುದಾಗಿ ತಿಳಿಸಿ, ಕ್ಷೇತ್ರದ ಅಭಿವೃದ್ಧಿಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮರೇಶ ಜಿ.ಕೆ., ಪಪಂ ಮುಖ್ಯಾಧಿಕಾರಿ ನಸರುಲ್ಲಾ, ತಾಪಂ ಇಒ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಶಿವಾನಂದ ಬಾವಿಕಟ್ಟಿ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 9:00 pm

ಬಳ್ಳಾರಿ | ಡಿಪ್ಲೋಮಾ ಕಾಲೇಜು ಮುಂಭಾಗ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಬಳ್ಳಾರಿ/ ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಬಸ್‌ಗಳು ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವತಿಯಿಂದ ಬುಧವಾರ ಕಂಪ್ಲಿ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಂಪ್ಲಿಯಿಂದ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಹಾಗೂ ಹೊಸಪೇಟೆಯಿಂದ ಕಂಪ್ಲಿಗೆ ಬರುವ ಬಸ್‌ಗಳನ್ನು ಡಿಪ್ಲೋಮಾ ಕಾಲೇಜು ಮುಂಭಾಗದಲ್ಲಿ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ದೂರದೂರಿನಿಂದ ಬರುವ ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು ಡಿಪೋ ನಿಯಂತ್ರಣಾಧಿಕಾರಿಗೆ ಎಚ್ಚರಿಕೆ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕಂಪ್ಲಿ ಬಸ್ ಸ್ಟ್ಯಾಂಡ್ ನಿಯಂತ್ರಣಾಧಿಕಾರಿ ಆದಿಶೇಷ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಬಿವಿಪಿ ಸದಸ್ಯ ಸಪ್ತಗಿರಿ ಮಂಚಿಕಂಠಿ ಮಾತನಾಡಿ, ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಾಳ್ವರ ಭರತ್, ವಿದ್ಯಾರ್ಥಿಗಳಾದ ಕಾರ್ತಿಕ್, ಶಶಾಂಕ್, ರಾಮು, ಅನು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಾರ್ತಾ ಭಾರತಿ 25 Feb 2026 8:57 pm

ಅಕ್ರಮ ಹಣ ವರ್ಗಾವಣೆ ಪ್ರಕರಣ | ಅನಿಲ್ ಅಂಬಾನಿಯ 3,716 ಕೋಟಿ ರೂ.ಮೌಲ್ಯದ ಮುಂಬೈ ನಿವಾಸವನ್ನು ಜಪ್ತಿ ಮಾಡಿದ ಈಡಿ

ಹೊಸದಿಲ್ಲಿ,ಫೆ.25: ಕೈಗಾರಿಕೋದ್ಯಮಿ ಅನಿಲ್ ಅಂಬಾನಿಯವರ ಗ್ರೂಪ್ ಕಂಪೆನಿ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಭಾಗಿಯಾಗಿರುವ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯವು (ಈ.ಡಿ) ಅವರ 3,716 ಕೋಟಿ ರೂ.ಮೌಲ್ಯದ ಮುಂಬೈ ನಿವಾಸ ‘ಅಬೋಡ್’ನ್ನು ಜಪ್ತಿ ಮಾಡಿದೆ. ಮುಂಬೈನ ಪಾಲಿಹಿಲ್ ಪ್ರದೇಶದಲ್ಲಿರುವ 66 ಮೀ.ಎತ್ತರದ ಐಷಾರಾಮಿ ಆಸ್ತಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿದವು. ಇದರೊಂದಿಗೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 15,700 ಕೋ.ರೂ.ಗೇರಿದೆ. 66ರ ಹರೆಯದ ಅಂಬಾನಿ ಎರಡನೇ ಸುತ್ತಿನ ವಿಚಾರಣೆಗಾಗಿ ದಿಲ್ಲಿಯಲ್ಲಿ ಈ.ಡಿ.ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಅವರು ಆಗಸ್ಟ್ 2025ರಲ್ಲಿ ಈ.ಡಿ.ಯ ಮುಂದೆ ಮೊದಲ ಬಾರಿಗೆ ಹಾಜರಾಗಿದ್ದು,ಪಿಎಂಎಲ್‌ಎ ಅಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಆರ್‌ಕಾಮ್ ವಂಚನೆ ಆರೋಪಕ್ಕೆ ನಂಟು ಜಪ್ತಿ ಕ್ರಮವು ಆರ್‌ಕಾಮ್‌ನಿಂದ ಹಣಕಾಸು ಅಕ್ರಮಗಳು ಮತ್ತು ಸಾಲದ ಹಣದ ದುರ್ಬಳಕೆ ಆರೋಪಗಳ ಕುರಿತು ಈ.ಡಿ.ನಡೆಸುತ್ತಿರುವ ವ್ಯಾಪಕ ತನಿಖೆಯ ಭಾಗವಾಗಿದೆ. ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿಂದ ವಂಚನೆ, ಲಂಚ ಮತ್ತು ಬ್ಯಾಂಕ್ ಸಾಲಗಳ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಈಡಿ ಅಂಬಾನಿ ವಿರುದ್ಧ ತನಿಖೆ ನಡೆಸುತ್ತಿದೆ. ಈ.ಡಿ.ಪಿಎಂಎಲ್‌ಎದ ಕಲಂ 17ರಡಿ ಗ್ರೂಪ್‌ಗೆ ಸಂಬಂಧಿಸಿದ ಕಂಪೆನಿಗಳು ಮತ್ತು ಅಧಿಕಾರಿಗಳಿಗೆ ಸೇರಿದ 35ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಕಾರ್ಯಾಚರಣೆಯು 50ಕ್ಕೂ ಅಧಿಕ ಕಂಪನಿಗಳಿಗೆ ವಿಸ್ತರಿಸಿದ್ದು, ಮುಂಬೈ ಮತ್ತು ದಿಲ್ಲಿಗಳಲ್ಲಿ 25ಕ್ಕೂ ಅಧಿಕ ವ್ಯಕ್ತಿಗಳನ್ನು ಪ್ರಶ್ನಿಸಲಾಗಿದೆ. 3,000 ಕೋ.ರೂ.ಸಾಲ ದುರ್ಬಳಕೆ ಆರೋಪ ಬಲ್ಲ ಮೂಲಗಳ ಪ್ರಕಾರ 2017 ಮತ್ತು 2019ರ ನಡುವೆ ಅಂಬಾನಿಗೆ ಸಂಬಂಧಿಸಿದ ಕಂಪೆನಿಗಳು ಯೆಸ್ ಬ್ಯಾಂಕ್‌ನಿಂದ ಪಡೆದಿದ್ದ 3,000 ಕೋ.ರೂ.ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸುವಲ್ಲಿ ಕೈಜೋಡಿಸಿದ್ದವು ಎನ್ನುವುದನ್ನು ಪ್ರಾಥಮಿಕ ತನಿಖೆಯು ಸೂಚಿಸಿದೆ. ಹಣವನ್ನು ಶೆಲ್ ಕಂಪನಿಗಳ ಮೂಲಕ ರವಾನಿಸಲಾಗಿತ್ತೇ ಮತ್ತು ರೌಂಡ್-ಟ್ರಿಪ್ (ಹಣವನ್ನು ಇನ್ನೊಂದು ದೇಶಕ್ಕೆ ಕಳುಹಿಸಿ ಅದನ್ನು ವಿದೇಶಿ ಹೂಡಿಕೆ ಅಥವಾ ಬೇರೆ ರೂಪದಲ್ಲಿ ಮೂಲದೇಶಕ್ಕೆ ಮರಳಿಸುವುದು) ವಿಧಾನವನ್ನು ಬಳಸಲಾಗಿತ್ತೇ ಎನ್ನುವುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಿಂದಿನ ದಿನಾಂಕಗಳ ಸಾಲ ಅನುಮೋದನೆ ವರದಿ ಪತ್ರ,ಸೂಕ್ತ ವಿವೇಚನೆಯಿಲ್ಲದೆ ಸಾಲಗಳ ಮಂಜೂರಾತಿ ಮತ್ತು ಸಾಲ ಅನುಮೋದನೆಗೊಳ್ಳುವ ಮುನ್ನವೇ ಹಣ ಬಿಡುಗಡೆ ಆರೋಪಗಳ ಕುರಿತೂ ಕಳವಳಗಳೂ ವ್ಯಕ್ತವಾಗಿವೆ. ಸಾಲ ವಿತರಣೆಗೆ ಸ್ವಲ್ಪ ಮೊದಲು ಯೆಸ್ ಬ್ಯಾಂಕಿನ ಪ್ರವರ್ತಕರಿಗೆ ಸಂಬಂಧಿಸಿದ ಸಂಸ್ಥೆಗಳು ಹಣವನ್ನು ಸ್ವೀಕರಿಸಿದ್ದವು ಎಂದು ಆರೋಪಿಸಲಾಗಿರುವುದರಿಂದ ಸಂಭಾವ್ಯ ಕಮಿಷನ್ ವ್ಯವಸ್ಥೆಯ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಸೆಬಿ, ನ್ಯಾಷನಲ್ ಫೈನಾನ್ಸಿಯಲ್ ರಿಪೋರ್ಟಿಂಗ್ ಅಥಾರಿಟಿ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ಸಂಸ್ಥೆಗಳು ತನಿಖೆಗೆ ಪೂರಕ ಮಾಹಿತಿಗಳನ್ನು ಹಂಚಿಕೊಂಡಿವೆ.

ವಾರ್ತಾ ಭಾರತಿ 25 Feb 2026 8:56 pm

`ನನ್ನನ್ನು ಮತ್ತು ನನ್ನ ಮುಗ್ಧ ಮಗನನ್ನು ನಿಂದಿಸಿದ್ರೆ ವಿಶ್ವಕಪ್ ಸಿಗುತ್ತಾ?': ಪಾಕ್ ಫ್ಯಾನ್ಸ್ ಗೆ ಸಲ್ಮಾನ್ ಆಘಾ ಪತ್ನಿ ಕ್ಲಾಸ್

Salman Agha Wife Sabba Manzer- ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಅಲ್ಲಿನ ಅಭಿಮಾನಿಗಳು ವಿಪರೀತ ಸಿಟ್ಟಿಗೆದ್ದಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿ ಕುಟುಂಬದವರನ್ನೆಲ್ಲಾ ನಿಂದಿಸುತ್ತಿದ್ದಾರೆ. ತಮ್ಮನ್ನು ಮತ್ತು ತಮ್ಮ ಪುತ್ರನನ್ನು ನೆಟ್ಟಿಗರು ನಿಂದಿಸಿರವುದಕ್ಕೆ ಇದೀಗ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಪತ್ನಿ ಸಭಾ ಮನ್ಸರ್ ಅವರು ತಿರುಗೇಟು ನೀಡಿದ್ದಾರೆ.

ವಿಜಯ ಕರ್ನಾಟಕ 25 Feb 2026 8:53 pm

ವಾಟ್ಸ್‌ಆ್ಯಪ್ ಸಂದೇಶ ರವಾನೆಗೆ ಮೊಬೈಲ್‌ನಲ್ಲಿ ಸಿಮ್ ಇರಲೇಬೇಕು : ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ

ಹೊಸದಿಲ್ಲಿ, ಫೆ. 25: ನೋಂದಾಯಿತ ಸಿಮ್ ಮೊಬೈಲ್ ಫೋನ್‌ನಲ್ಲಿ ಇದ್ದರೆ ಮಾತ್ರ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಮುಂತಾದ ಸಂದೇಶವಾಹಕ ಆ್ಯಪ್‌ಗಳು ಕಾರ್ಯನಿರ್ವಹಿಸಬೇಕು ಹಾಗೂ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಸಂದೇಶವಾಹಕ ವೆಬ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಮರುದೃಢೀಕರಣ ಮಾಡಬೇಕು ಎಂಬ ನಿಯಮವನ್ನು ಸರಕಾರ ಸಡಿಲಿಸುವುದಿಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಬುಧವಾರ ಸ್ಪಷ್ಟಪಡಿಸಿದ್ದಾರೆ. ವರಮಾನಕ್ಕಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಹೇಳಿದ್ದಾರೆ. ‘‘ಕಂಪ್ಯೂಟರ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವ ವೆಬ್‌ಸೈಟ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಲಾಗೌಟ್ ಆಗಬೇಕು ಎಂಬ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ಯೋಚಿಸಿಲ್ಲ. ನಿಯಮಗಳು ಹೇಗಿದ್ದವೋ ಹಾಗೆಯೇ ಇರುತ್ತವೆ’’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧ್ಯಾ ಹೇಳಿದರು. ಆರು ಗಂಟೆಗಳಿಗೊಮ್ಮೆ ಲಾಗೌಟ್ ಆಗುವ ನಿಯಮವು ವೆಬ್ ಮತ್ತು ಆ್ಯಪ್‌ಗಳ ಕಂಪ್ಯೂಟರ್ ಮಾದರಿಗಳ ವರ್ಚುವಲ್ ಸಂಪರ್ಕಗಳಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಮೊಬೈಲ್ ಫೋನ್‌ಗಳಲ್ಲಿರುವ ನೇರ ಸಂಪರ್ಕಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಿಯಮಗಳನ್ನು ಅಳವಡಿಸಿಕೊಳ್ಳಲು ವಿಧಿಸಲಾಗಿರುವ ಫೆಬ್ರವರಿ 28ರ ಗಡುವಿನ ಯಾವುದೇ ವಿಸ್ತರಣೆಯನ್ನು ದೂರಸಂಪರ್ಕ ಇಲಾಖೆ ತಳ್ಳಿಹಾಕಿದೆ. ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಹೊರಡಿಸಿದ ನಿರ್ದೇಶನಗಳ ಪ್ರಕಾರ, ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮುಂತಾದ ಒಟಿಟಿ ಸಂದೇಶವಾಹಕ ವೇದಿಕೆಗಳು ಬಳಕೆದಾರರ ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಒಂದು ವೇಳೆ, ಫೋನ್‌ನಿಂದ ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ, ಆ ಫೋನ್‌ನಲ್ಲಿ ಆ್ಯಪ್ ಸ್ಥಗಿತಗೊಳ್ಳಬೇಕು.

ವಾರ್ತಾ ಭಾರತಿ 25 Feb 2026 8:53 pm

ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ಗಂಗೊಳ್ಳಿ, ಫೆ.25: ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಸುಧಾಕರ ಶೇರುಗಾರ(37) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.24ರಂದು ರಾತ್ರಿ ವೇಳೆ ಮನೆಯ ಎದುರಿನ ಜಗಲಿಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ: ವಿಪರೀತ ಮದ್ಯಪಾನ ಮಾಡಿಕೊಂಡಿದ್ದ ಶಿರ್ವ ಗ್ರಾಮದ ಚಂದ್ರಶೇಖರ(48) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.24ರಂದು ಮಧ್ಯಾಹ್ನ ಮಲಗುವ ಕೋಣೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Feb 2026 8:51 pm

ರಸ್ತೆ ಬದಿಯ ತೋಡಿಗೆ ಬಿದ್ದ ಸ್ಕೂಟಿ: ಸವಾರ ಮೃತ್ಯು

ಕುಂದಾಪುರ, ಫೆ.25: ಸ್ಕೂಟಿಯೊಂದು ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯ ಸಾಗಿನಗುಡ್ಡೆ ಬಸ್ ನಿಲ್ದಾಣದ ಸಮೀಪ ಫೆ.24ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಪ್ರತಾಪ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರದಲ್ಲಿ ಕಿರಣಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ರಾತ್ರಿ ಬ್ರಹ್ಮಾವರದಿಂದ ಮನೆ ಕಡೆಗೆ ಸ್ಕೂಟಿಯಲ್ಲಿ ಕೃಷಿ ಸಾಮಗ್ರಿ ಯಾದ ಹಾರೆ, ಪಿಕಾಸಿ ಮತ್ತು ಪ್ಲಾಸ್ಟಿಕ್ ಬುಟ್ಟಿ ಇಟ್ಟುಕೊಂಡು ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಸ್ಕೂಟಿ ಆಯತಪ್ಪಿ, ಸ್ಕಿಡ್ ಆಗಿ ರಸ್ತೆ ಬದಿ ಹೊಂಡದಂತ್ತಿರುವ ತೋಡಿಗೆ ಬಿತ್ತೆನ್ನಲಾಗಿದೆ. ಇದರಿಂದ ಸ್ಕೂಟಿಯಲ್ಲಿದ್ದ ಕೃಷಿ ಸಲಕರಣೆ ಪ್ರತಾಪ್ ಶೆಟ್ಟಿ ಅವರ ತಲೆಗೆ ತಾಗಿತ್ತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಇವರು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Feb 2026 8:51 pm

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ | 9 ಆರೋಪಿಗಳ ಖುಲಾಸೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ, ಫೆ. 25: ಕನ್ನಡದ ವರ ನಟ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ 9 ಮಂದಿಯನ್ನು ಖುಲಾಸೆಗೊಳಿಸಿ ಗೋಪಿಚೆಟ್ಟಿಪಾಳಯಂ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ಎತ್ತಿ ಹಿಡಿದಿದೆ. ಈರೋಡ್ ಜಿಲ್ಲೆಯ ತಲವಾಡಿ ಸಮೀಪದ ದೊಡ್ಡಗಾಜನೂರುನಲ್ಲಿರುವ ತೋಟದ ಮನೆಯಿಂದ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಹಾಗೂ ಅವನ ಸಹಚರರು 2000 ಜುಲೈ 30ರಂದು ಅಪಹರಣಗೈದಿದ್ದರು. ರಾಜ್‌ಕುಮಾರ್ ಅವರ ಬಿಡುಗಡೆಗೆ ವೀರಪ್ಪನ್‌ನೊಂದಿಗೆ ಮಾತುಕತೆ ನಡೆಸಲು ತಮಿಳುನಾಡು ಹಾಗೂ ಕರ್ನಾಟಕ ಸರಕಾರ ಎರಡು ತಂಡಗಳನ್ನು ಕಾಡಿಗೆ ಕಳುಹಿಸಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್‌ಕುಮಾರ್ ಅವರನ್ನು 108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವೀರಪ್ಪನ್ ಹಾಗೂ ಅವರ ಸಹಚರ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್ ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿ ರಾಮನ್, ಮಾರನ್, ಸೆಲ್ವನ್, ಅಮರ್ತಲಿಂಗಂ, ನಾಗರಾಜ್ ಸೇರಿದಂತೆ 14 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಿದ್ದರು ಹಾಗೂ ಬಂಧಿಸಿದ್ದರು. ಅನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ವಿಚಾರಣೆ ಗೋಪಿಚೆಟ್ಟಿಪಾಳಯಂನ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 2004ರಲ್ಲಿ ಆರೋಪ ಪಟ್ಟಿ ಸಲ್ಲಿಸುವ ಮುನ್ನ ವೀರಪ್ಪನ್ ಹಾಗೂ ಆತನ ಇಬ್ಬರು ಸಹಚರರಾದ ಸೇಥುಕುಳಿ ಗೋವಿಂದನ್ ಹಾಗೂ ಚಂದ್ರಗೌಡನನ್ನು ವಿಶೇಷ ಕಾರ್ಯ ಪಡೆ ಎನ್‌ಕೌಂಟರ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೈದಿತ್ತು. ಇನ್ನೋರ್ವ ಸಹಚರ ಮಲ್ಲು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ. ರಮೇಶ್ ನಾಪತ್ತೆಯಾಗಿದ್ದ. ಉಳಿದ 9 ಮಂದಿ ಪ್ರಕರಣದ ವಿಚಾರಣೆಗಾಗಿ 18 ವರ್ಷಗಳಿಂದ ಗೋಪಿಚೆಟ್ಟಿಪಾಳಯಂ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. 2018 ಸೆಪ್ಟಂಬರ್ 25ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಗೋಪಿಚೆಟ್ಟಿಪಾಳಯಂ ನ್ಯಾಯಾಲಯದ ನ್ಯಾಯಮೂರ್ತಿ ಮಣಿ ಅವರು ವೀರಪ್ಪನ್‌ನ 9 ಮಂದಿ ಸಹಚರರಾದ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಾಂದಿರಾಮನ್, ಮಾರನ್, ಸೆಲ್ವಂ, ಅಮರ್ತಲಿಂಗಂ ಹಾಗೂ ನಾಗರಾಜ್‌ನನ್ನು ಖುಲಾಸೆಗೊಳಿಸಿದರು. ಈ ತೀರ್ಪಿನ ವಿರುದ್ಧ ತಮಿಳುನಾಡು ಪೊಲೀಸರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವೇಲ್ಮುರುಗನ್ ಹಾಗೂ ಎಂ. ಜ್ಯೋತಿರಾಮನ್ ವಿಚಾರಣೆ ನಡೆಸಿದರು. ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಪೀಠ ಇಂದು ತೀರ್ಪು ನೀಡಿತು. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂದು ಹೇಳಿತು.

ವಾರ್ತಾ ಭಾರತಿ 25 Feb 2026 8:49 pm

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹೆರಿಟೇಜ್ ಜ್ಯುವೆಲ್ಲರಿ ಶೋ ಚಾಲನೆ

ಉಡುಪಿ, ಫೆ.25: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶೋರೂಂನಲ್ಲಿ ಮಾ.5ರವರೆಗೆ ಹಮ್ಮಿಕೊಳ್ಳ ಲಾಗಿರುವ ಹೆರಿಟೇಜ್ ಜ್ಯುವೆಲ್ಲರಿ ಶೋಗೆ ಬುಧವಾರ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಹಕರಾದ ಪೂಜಾ ಹೆಗ್ಡೆ ಹಾಗೂ ಪ್ರವೀಣ ಸುಕುಮಾರ್ ಶೆಟ್ಟಿ ಹೆರಿಟೇಜ್ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಪೂಜಾ ಹೆಗ್ಡೆ, ಮಲಬಾರ್ ಗೋಲ್ಡ್‌ನಲ್ಲಿ ವಿಭಿನ್ನ ಚಿನ್ನಾಭರಣಗಳ ಸಂಗ್ರಹ ಇದೆ. ಇಲ್ಲಿನ ಸೇವೆ ಗ್ರಾಹಕ ಸ್ನೇಹಿಯಾಗಿದೆ ಎಂದರು. ಸಿಬ್ಬಂದಿ ನಿತ್ಯಾನಂದ ಹೆರಿಟೇಜ್ ಜ್ಯುವೆಲ್ಲರಿ ಬಗ್ಗೆ ಮಾಹಿತಿ ನೀಡಿದರು. ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ವ್ಯವಸ್ಥಾಪಕ ಮುಸ್ತಫಾ ಏ.ಕೆ., ಮಾರುಕಟ್ಟೆ ಉಸ್ತುವಾರಿ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಸಿಬ್ಬಂದಿ ವಿಘ್ವೇಶ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 25 Feb 2026 8:49 pm

ಆಳಂದ | ಬೆಲ್ಲ ತಯಾರಿಕಾ ಘಟಕ ವೀಕ್ಷಿಸಿದ ಜಿಲ್ಲಾಧಿಕಾರಿ

ಕಲಬುರಗಿ: ಜಿಲ್ಲಾಧಿಕಾರಿ ಬಿ‌.ಫೌಝಿಯಾ ತರನ್ನುಮ್ ಅವರು ಮಂಗಳವಾರ ಆಳಂದ ತಾಲೂಕು ಪ್ರವಾಸ ಕೈಗೊಂಡಿದ್ದು, ತಾಲೂಕಿನ ಗೋಳಾ ಗ್ರಾಮಕ್ಕೆ‌ ಭೇಟಿ ನಿಡಿ ಬೆಲ್ಲ ತಯಾರಿಸುವ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಲ್ಲ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ತಯಾರಿಕೆ ವಿಧಾನಗಳನ್ನು ಕುರಿತು ರೈತರಿಂದ‌ ಮಾಹಿತಿ ಪಡೆದುಕೊಂಡರು. ನಂತರ ಕಲಬುರಗಿ ತಾಲೂಕಿನ ಕಪನೂರ ಗ್ರಾಮಕ್ಕೆ ಭೇಟಿ ನೀಡಿ ಭೂ ಪರಿವರ್ತನೆ ಕೋರಿ ಬಂದಿರುವ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಆಳಂದ ತಹಶೀಲ್ದಾರ್, ಇನ್ನಿತರ ಅಧಿಕಾರಿಗಳು ಇದ್ದರು.

ವಾರ್ತಾ ಭಾರತಿ 25 Feb 2026 8:49 pm

ಕಲಬುರಗಿ | ಕಳ್ಳತನ ಪ್ರಕರಣ; ಇಬ್ಬರ ಬಂಧನ, 26.54 ಲಕ್ಷ ರೂ. ಮೌಲ್ಯದ ಸ್ವತ್ತು ವಶ: ಎಸ್ಪಿ ಅಡ್ಡೂರು ಶ್ರೀನಿವಾಸಲು

ಕಲಬುರಗಿ: ಸೇಡಂ ಹಾಗೂ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಯನ್ನು ವಶಕ್ಕೆ ಪಡೆದು ಅವರಿಂದ 26.54 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ. ಬುಧವಾರ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಂ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಮಳಖೇಡ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ಡಿಡಿಮನಿ ಹಾಗೂ ಪಿಎಸ್ಐ, ಸಿಬ್ಬಂದಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆಳಂದ ತಾಲೂಕಿನ ಝಳಕಿ ತಾಂಡಾದ ನಿವಾಸಿ ಕರಣ ರಂಗು ಪವಾರ್ ಹಾಗೂ ಅದೇ ತಾಲೂಕಿನ ಕಂಸರ ನಾಯಕ ತಾಂಡಾದ ರಾಮದಾಸ ಗಂಗಾರಾಮ ಚವ್ಹಾಣ ಎಂಬಾತರನ್ನು ಬಂಧಿಸಿದ್ದು, ಇನ್ನೂ ಮೂವರ ಪತ್ತೆಗೆ ಜಾಲ ಬೀಸಲಾಗಿದೆ ಎಂದರು. ಫೆ.17ರಂದು ಸೇಡಂ ಪಟ್ಟಣದ ಬಸ್ ನಿಲ್ದಾಣ, ಜಿ.ಕೆ ಕ್ರಾಸ್ ಮಾರ್ಗದಲ್ಲಿ ಹಾದುಹೋಗುವಾಗ ವ್ಯಕ್ತಿಗಳಿಬ್ಬರೂ ಪೊಲೀಸ್ ಸಮವಸ್ತ್ರ ಧರಿಸಿದ್ದವರನ್ನು ನೋಡಿ ಮರೆಮಾಚುತ್ತಿದ್ದರು. ಸಂಶಯಾಸ್ಪದರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರಿಂದ 25.57 ಲಕ್ಷ ರೂ. ಮೌಲ್ಯದ 15.5 ಗ್ರಾಂ. ಬಂಗಾರದ ಆಭರಣಗಳು ಹಾಗೂ 96,900 ಮೌಲ್ಯದ 340 ಗ್ರಾಂ. ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು. ಬಂಧಿತ ಇಬ್ಬರ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ನಾಲ್ಕು ವರ್ಷದಿಂದ ಆಗಾಗ ಹಗಲು ಮತ್ತು ರಾತ್ರಿ ಸಮಯದಲ್ಲಿ ಕೀಲಿ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ದಿಡಿಮನಿ, ಸೇಡಂ ಪಿಎಸ್ಐ ಉಪೇಂದ್ರಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 8:44 pm

ಪಶ್ಚಿಮದಂಡೆಯಲ್ಲಿ ರಾಜತಾಂತ್ರಿಕ ಸೇವೆ ಒದಗಿಸಲು ಅಮೆರಿಕ ಕ್ರಮ

ಜೆರುಸಲೇಂ, ಫೆ.25: ಅಮೆರಿಕ ಈ ವಾರ ಪಶ್ಚಿಮದಂಡೆಯ ವಸಾಹತುಗಳಲ್ಲಿ ಸ್ಥಳದಲ್ಲಿಯೇ ಪಾಸ್‍ಪೋರ್ಟ್ ಸೇವೆಗಳನ್ನು ಒದಗಿಸುತ್ತದೆ. ಆಕ್ರಮಿತ ಪ್ರದೇಶದಲ್ಲಿ ವಸಾಹತುಗಾರರಿಗೆ ಇದೇ ಮೊದಲ ಬಾರಿ ಅಮೆರಿಕದ ಕಾನ್ಸುಲರ್ ಅಧಿಕಾರಿಗಳು ಈ ರೀತಿಯ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಇಸ್ರೇಲ್‍ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಘೋಷಿಸಿದೆ. ಶುಕ್ರವಾರ ಜೆರುಸಲೇಂನ ಎಫ್ರಾತ್ ವಸಾಹತುಗಳಲ್ಲಿನ ಅಮೆರಿಕನ್ ಪ್ರಜೆಗಳಿಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸುವ ಕಾರ್ಯಕ್ರಮವಿದೆ. ಇದು ಎಲ್ಲಾ ಅಮೆರಿಕನ್ ಪ್ರಜೆಗಳನ್ನು ತಲುಪುವ `ಫ್ರೀಡಮ್ 250' ಉಪಕ್ರಮದ ಭಾಗವಾಗಿದೆ ಎಂದು ರಾಯಭಾರಿ ಕಚೇರಿ ಹೇಳಿದೆ. ಇದು ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಳನ್ನು ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಮತ್ತಷ್ಟು ಕ್ರಮಗಳನ್ನು ಸೂಚಿಸುತ್ತದೆ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತುಗಳು ಶಾಂತಿಗೆ ಅಡ್ಡಿಯಾಗಿವೆ ಎಂಬ ಅಮೆರಿಕದ ವಿದೇಶಾಂಗ ನೀತಿಯನ್ನು ಮುರಿದಿದೆ. ಫೆಲೆಸ್ತೀನಿಯನ್ ನಗರ ರಮಲ್ಲಾ, ಪಶ್ಚಿಮದಂಡೆಯ ಬೀಟಾರ್ ಇಲ್ಲಿಟ್‍ನ ವಸಾಹತು, ಜೆರುಸಲೇಂ, ಹೈಫಾ, ನೆತನ್ಯಾ ಮತ್ತು ಬೀಟ್ ಶೆಮೆಶ್ ನಗರಗಳಲ್ಲಿಯೂ ಕಾನ್ಸುಲರ್ ಕಾರ್ಯಕ್ರಮಗಳು ನಡೆಯಲಿವೆ. ಆದರೆ ದಿನಾಂಕವನ್ನು ಘೋಷಿಸಲಾಗಿಲ್ಲ. `ಪಶ್ಚಿಮದಂಡೆಯಲ್ಲಿ ಅಮೆರಿಕನ್ ಪ್ರಜೆಗಳಿಗೆ ಕಾನ್ಸುಲರ್ ಸೇವೆಗಳನ್ನು ವಿಸ್ತರಿಸುವ ಐತಿಹಾಸಿಕ ನಿರ್ಧಾರವನ್ನು' ಸ್ವಾಗತಿಸುವುದಾಗಿ ಇಸ್ರೇಲ್ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ವಾರ್ತಾ ಭಾರತಿ 25 Feb 2026 8:43 pm

ಭಾರತ ಮತ್ತು ಇತರ ದೇಶಗಳೊಂದಿಗೆ ಪ್ರಾದೇಶಿಕ ಮೈತ್ರಿ : ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಖಂಡಿಸುವ ನಿರ್ಣಯ ಅಂಗೀಕರಿಸಿದ ಪಾಕಿಸ್ತಾನ ಸಂಸತ್‍

ಇಸ್ಲಮಾಬಾದ್, ಫೆ.25: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಇಸ್ರೇಲ್ ಭೇಟಿಗೆ ಪಾಕಿಸ್ತಾನದ ರಾಜಕೀಯ ವಲಯ ಮತ್ತು ಮಾಧ್ಯಮಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಸ್ರೇಲ್ ಮತ್ತು ಹೊಸದಿಲ್ಲಿ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಸರಕಾರ ಕಳವಳ ವ್ಯಕ್ತಪಡಿಸಿದೆ. ಭಾರತ ಮತ್ತು ಇತರ ದೇಶಗಳೊಂದಿಗೆ ಪ್ರಾದೇಶಿಕ ಮೈತ್ರಿ ಸಾಧಿಸುವ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಪಾಕಿಸ್ತಾನದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದ್ದು ಇದು ಮುಸ್ಲಿಮ್ ರಾಷ್ಟ್ರಗಳ ವಿರುದ್ದದ ಪಿತೂರಿಯಾಗಿದೆ ಎಂದು ಸಂಸದರು ಟೀಕಿಸಿದ್ದಾರೆ. `ಪ್ರಸ್ತಾವಿತ ಒಕ್ಕೂಟವು ಪ್ರಾದೇಶಿಕ ಶಾಂತಿ ಮತ್ತು ಜಾಗತಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದ್ದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಇಸ್ರೇಲ್ ಬಣಗಳನ್ನು ರೂಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಭೇಟಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಭಾರತ- ಇಸ್ರೇಲ್ ಸಹಭಾಗಿತ್ವವು ಪಾಕಿಸ್ತಾನ ಮತ್ತು ಚೀನಾವನ್ನು ಗುರಿಯಾಗಿಸಿದ ಕಾರ್ಯತಂತ್ರದ ಉಪಕ್ರಮವಾಗಿದೆ. ಎರಡು ದೇಶಗಳ ನಡುವಿನ ರಕ್ಷಣಾ ಮತ್ತು ಗುಪ್ತಚರ ಸಂಬಂಧಗಳನ್ನು ವಿಸ್ತರಿಸುವುದರಿಂದ ಪ್ರಾದೇಶಿಕ ಶಕ್ತಿಯ ಸಮತೋಲನ ಬದಲಾಗಬಹುದು ಎಂದು ಪ್ರತಿಪಾದಿಸಲಾಗಿದೆ.

ವಾರ್ತಾ ಭಾರತಿ 25 Feb 2026 8:36 pm

ಹಂಪಿ ಕನ್ನಡ ವಿ.ವಿಯ ನಾಡೋಜ ಗೌರವ ತಿರಸ್ಕಾರಿಸಿಲ್ಲ; ಆ ವ್ಯಕ್ತಿಯಿಂದ ಸ್ವೀಕರಿಸಲು ಸಿದ್ಧನಿರಲಿಲ್ಲ: ಸಾಹಿತಿ ಡಾ.ಜಿ. ರಾಮಕೃಷ್ಣ

ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ್ದ ನಾಡೋಜ ಗೌರವವನ್ನು ಪದವಿಯನ್ನು ನಿರಾಕರಣೆ ಮಾಡಿಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ ಎಂದು ಸಾಹಿತಿ, ಪ್ರಾಧ್ಯಪಕ ಡಾ.ಜಿ ರಾಮಕೃಷ್ಣ (Ramakrishna Gampalahalli)ಗಂಪಲಹಳ್ಳಿ ಅವರು ಹೇಳಿದ್ದಾರೆ. ಈ ವಿಚಾರವಾಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಒನ್ ಇ೦ಡಿಯ 25 Feb 2026 8:33 pm

ದೇವದುರ್ಗ | ಕರಾಟೆ ಕಟಾ ಸ್ಪರ್ಧೆಯಲ್ಲಿ ಡಾನ್ ಬೊಸ್ಕೋ ವಿದ್ಯಾರ್ಥಿಗಳ ಸಾಧನೆ

ದೇವದುರ್ಗ : 2ನೇ ಕಲ್ಯಾಣ ಕರ್ನಾಟಕ ಕ್ರೀಡಾ ಕರಾಟೆ ಅಸೋಸಿಯೇಷನ್ ವತಿಯಿಂದ ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಫೆಬ್ರವರಿ 21 ಮತ್ತು 22ರಂದು ನಡೆದ 2026ನೇ ಸಾಲಿನ ಚಾಂಪಿಯನ್ ಕರಾಟೆ ಕಟಾ ಸ್ಪರ್ಧೆಯಲ್ಲಿ ದೇವದುರ್ಗ ತಾಲೂಕಿನ ಡಾನ್ ಬೊಸ್ಕೋ ಸಂಸ್ಥೆಯ 15 ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ಯುವರಾಜ ಎಸ್, ವರದ, ಮೌನೇಶ್, ಫಯಾಜ್ ಎಂ.ಡಿ. ಬಾಲೆಪಿರ್, ಭಾರ್ಗವ್, ಭಾರತ ಕುಮಾರ, ಸವಿ, ಸಾತ್ವಿಕ್, ಅಶ್ವಿತಾ ಪಿ, ಅಭಯ್ ರಾಜ್ ಮಲ್ಲಿಕಾರ್ಜುನ, ಶ್ರೇಯಸ್ ಪಾಟೀಲ್ ಮಲ್ಲಿಕಾರ್ಜುನ, ಲಲಿತ್, ಪವನ್ ಕುಮಾರ, ಸುಹಾನ್ ವಿಜೇತರಾಗಿದ್ದಾರೆ. ತರಬೇತುದಾರ ನಾಗರಾಜ ಅಕ್ಕರಕಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ತಯಾರಿ ನಡೆಸಿದ್ದರು. ಡಾನ್ ಬೊಸ್ಕೋ ಶಾಲೆಯ ಪ್ರಾಂಶುಪಾಲರು, ಶಾಲಾ ಆಡಳಿತ ಮಂಡಳಿ, ಗುರುವೃಂದ ಹಾಗೂ ಪಾಲಕರ ಸಹಕಾರದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.

ವಾರ್ತಾ ಭಾರತಿ 25 Feb 2026 8:32 pm

ಪ್ರಧಾನಿ ಮೋದಿಯ ಸೆನೆಟ್ ಭಾಷಣ ಬಹಿಷ್ಕಾರಕ್ಕೆ ಮುಂದಾದ ಇಸ್ರೇಲ್‍ನ ವಿರೋಧ ಪಕ್ಷ

ಟೆಲ್ ಅವೀವ್, ಫೆ.25: ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಇಸ್ರೇಲ್‍ನ ವಿರೋಧ ಪಕ್ಷಗಳು ಮುಂದಾಗಿವೆ. ಸಂಸತ್ತಿನ ಸ್ಪೀಕರ್ ಅಮಿರ್ ಒಹಾನಾ ಮತ್ತು ವಿರೋಧ ಪಕ್ಷಗಳ ಸಂಸದರ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ವಿರೋಧ ಪಕ್ಷದ ಸಂಸದರು ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸುಪ್ರೀಂಕೋರ್ಟ್ ಮುಖ್ಯಸ್ಥ ಐಸಾಕ್ ಅಮಿಟ್‍ರನ್ನು ನಿರಾಕರಿಸುವ ಸ್ಪೀಕರ್ ನಿರ್ಧಾರದ ಬಗ್ಗೆ ವಿರೋಧ ಪಕ್ಷದ ಸಂಸದರು ಅಸಮಾಧಾನ ಹೊಂದಿದ್ದಾರೆ. ಈ ನಿರ್ಧಾರವು ನ್ಯಾಯಾಂಗದಲ್ಲಿ ಬದಲಾವಣೆ ತರುವ ಮತ್ತು ಸುಪ್ರೀಂಕೋರ್ಟ್‍ನ ಮುಖ್ಯಸ್ಥರು ಹಾಗೂ ಅಟಾರ್ನಿ ಜನರಲ್ ಅವರ ಅಧಿಕಾರವನ್ನು ಪ್ರಶ್ನಿಸುವ ನೆತನ್ಯಾಹು ಸರಕಾರದ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ವಿರೋಧ ಪಕ್ಷ ಟೀಕಿಸಿದೆ. ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಥಮ ಭಾರತೀಯ ನಾಯಕ ಎಂಬ ದಾಖಲೆಗೆ ಮೋದಿ ಪಾತ್ರವಾಗಲಿದ್ದಾರೆ. `ಸ್ಪೀಕರ್ ಸುಪ್ರೀಂಕೋರ್ಟ್‍ನ ಮುಖ್ಯಸ್ಥರನ್ನು ಆಹ್ವಾನಿಸಿದರೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಾವು ಬಯಸಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಯಾಯಿರ್ ಲಾಪಿಡ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 25 Feb 2026 8:31 pm

ಮಸ್ಕಿ | ಕೂಲಿ ಪಾವತಿಯಲ್ಲಿ ಅನ್ಯಾಯ ಆರೋಪ: ವಟಗಲ್‌ ಗ್ರಾಪಂ ಎದುರು ಪ್ರತಿಭಟನೆ

ಮಸ್ಕಿ : ತಾಲೂಕಿನ ವಟಗಲ್ ಗ್ರಾಮ ಪಂಚಾಯಿತಿ ಎದುರು ವಿಬಿ ಜಿ ರಾಮ್‌ ಜಿ ಕೂಲಿಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ.ನಂ. 170ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು 14 ದಿನಗಳ ಕಾಲ ನಿರ್ವಹಿಸಿದ ಕೂಲಿಕಾರರಿಗೆ ನಿತ್ಯ ಕೇವಲ 60 ರೂ. ರಂತೆ ಕೂಲಿ ಪಾವತಿ ಮಾಡಲಾಗಿದೆ. ಇದು ಕಾರ್ಮಿಕರ ಮೇಲೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಧಿಕಾರಿಗಳು ಯಂತ್ರ ಬಳಸಿ ಹೆಚ್ಚಿನ ಕಾಮಗಾರಿ ಮಾಡಿಸಿಕೊಂಡು ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಜೊತೆಗೆ ಕೂಲಿ ಪಾವತಿಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಕೂಲಿಕಾರರು ದೂರಿದರು. ಕಾರ್ಮಿಕ ಸುಭಾಷ್‌ಚಂದ್ರ ಕಡಬೂರು ಮಾತನಾಡಿ, ನಿತ್ಯ ಕನಿಷ್ಠ 370 ರೂ. ಕೂಲಿ ಪಾವತಿಸಬೇಕು. ಕಾಮಗಾರಿ ಸ್ಥಳದಲ್ಲಿ ಶಾಮಿಯಾನ ಹಾಕಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೆ ಸ್ಥಳಕ್ಕೆ ಹೋಗಿ ಬರಲು ಆಟೊ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನೆರಳು ಮತ್ತು ಕುಡಿಯುವ ನೀರಿನ ಕೊರತೆಯಿಂದ ಕಾರ್ಮಿಕರಿಗೆ ತೊಂದರೆ ಉಂಟಾಗಿದೆ. ಒಂದು ತಿಂಗಳಿಂದ ಕುಡಿಯುವ ನೀರು ಒದಗಿಸಿಲ್ಲ ಎಂದು ಲಕ್ಷ್ಮೀ ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಲಿಖಿತ ಭರವಸೆ ನೀಡದ ಕಾರಣ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಈ ವೇಳೆ ಅಮರೇಶ ಸಾನಬಾಳ, ಬಸವರಾಜ, ಮೌನೇಶ, ಹುಲ್ಲೂರು, ಮಲ್ಲಯ್ಯ, ಶರಣಬಸಪ್ಪ, ಮಹಾಂತಪ್ಪ, ಮರಿದೇವಪ್ಪ, ಯಲ್ಲಪ್ಪ, ಕನಕಪ್ಪ ನಾಯಕ, ಯಲ್ಲಮ್ಮ, ಶಂಕ್ರಮ್ಮ, ನೀಲಮ್ಮ, ಗಂಗಮ್ಮ, ಚನ್ನಮ್ಮ, ಶಾಂತಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 25 Feb 2026 8:29 pm

ಇಸ್ರೇಲ್‍ನೊಂದಿಗಿನ ಶಾಶ್ವತ ಸ್ನೇಹವನ್ನು ಭಾರತ ಗೌರವಿಸುತ್ತದೆ : ಪ್ರಧಾನಿ ನರೇಂದ್ರ ಮೋದಿ

ಟೆಲ್‍ಅವೀವ್, ಫೆ.25: ಇಸ್ರೇಲ್ ಜೊತೆಗಿನ ಶಾಶ್ವತ ಮತ್ತು ಆಳವಾದ ಸ್ನೇಹವನ್ನು ಭಾರತ ಗೌರವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಎರಡು ದಿನಗಳ ಇಸ್ರೇಲ್ ಭೇಟಿಗಾಗಿ ಬುಧವಾರ ಟೆಲ್‍ಅವೀವ್‍ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತವರ ಪತ್ನಿ ಸಾರಾ ನೆತನ್ಯಾಹು ಹಾರ್ದಿಕವಾಗಿ ಸ್ವಾಗತಿಸಿದರು. ಇಸ್ರೇಲ್ ಮತ್ತು ಭಾರತದ ನಡುವಿನ ಬಾಂಧವ್ಯವು ಇಬ್ಬರು ಜಾಗತಿಕ ನಾಯಕರ ನಡುವಿನ ಪ್ರಬಲ ಮೈತ್ರಿಯಾಗಿದೆ. ನಾವೀನ್ಯತೆ, ಭದ್ರತೆ ಮತ್ತು ಹಂಚಿಕೆಯ ಕಾರ್ಯತಂತ್ರದ ದೃಷ್ಟಿಯಲ್ಲಿ ನಾವು ಪಾಲುದಾರರಾಗಿದ್ದೇವೆ. ಒಟ್ಟಾಗಿ ನಾವು ಸ್ಥಿರತೆ ಮತ್ತು ಅಭಿವೃದ್ಧಿಗೆ ಬದ್ಧವಾಗಿರುವ ರಾಷ್ಟ್ರಗಳ ಒಕ್ಕೂಟವನ್ನು ನಿರ್ಮಿಸುತ್ತಿದ್ದೇವೆ' ಎಂದು ಬೆಂಜಮಿನ್ ನೆತನ್ಯಾಹು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಬಲಪಡಿಸುವ ಮಾತುಕತೆ ಮತ್ತು ಫಲಪ್ರದ ಫಲಿತಾಂಶಗಳನ್ನು ನಿರೀಕ್ಷಿಸುತ್ತಿರುವುದಾಗಿ ಈ ಸಂದರ್ಭ ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಳವಾದ ವೈಯಕ್ತಿಕ ಸಂಬಂಧವು ಎರಡೂ ರಾಷ್ಟ್ರಗಳ ನಡುವಿನ ಸ್ಥಿರ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಇಸ್ರೇಲ್‌ ಪ್ರಧಾನಿಯವರ ಕಚೇರಿ ಹೇಳಿದೆ. 9 ವರ್ಷಗಳಲ್ಲಿ ಇಸ್ರೇಲ್‍ಗೆ ತನ್ನ ಮೊದಲ ಭೇಟಿಯಲ್ಲಿ ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಕೃತಕ ಬುದ್ದಿಮತ್ತೆ (ಎಐ) ಮತ್ತು ರಕ್ಷಣಾ ಕ್ಷೇತ್ರಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ.

ವಾರ್ತಾ ಭಾರತಿ 25 Feb 2026 8:29 pm

Raichur | ಎಸೆಸೆಲ್ಸಿ ವಿದ್ಯಾರ್ಥಿಗಳು ಮೊಬೈಲ್, ಟಿವಿಯಿಂದ ದೂರವಿರಲು ಜಿ.ಪಂ ಸಿಇಓ ಈಶ್ವರ ಕುಮಾರ್ ಕಾಂದೂ ಸಲಹೆ

ರಾಯಚೂರು : ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಸಲಹೆ ನೀಡಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಶಿಕ್ಷಕರಷ್ಟೇ ಅಲ್ಲ, ಪೋಷಕರ ಪ್ರೋತ್ಸಾಹ ಮತ್ತು ಬೆಂಬಲವೂ ಅತಿ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆಯು ಭಯದ ವಿಷಯವಾಗಬಾರದು. ಮಕ್ಕಳ ಮೇಲೆ ಹೆಚ್ಚಿನ ಅಂಕಗಳ ಒತ್ತಡ ಹೇರದೆ, “ನಿನ್ನ ಅತ್ಯುತ್ತಮ ಪ್ರಯತ್ನ ಮಾಡು, ನಾವು ನಿನ್ನ ಜೊತೆಯಲ್ಲಿದ್ದೇವೆ” ಎಂಬ ಭರವಸೆ ನೀಡಬೇಕು ಎಂದು ತಿಳಿಸಿದ್ದಾರೆ. ಮಗುವಿಗೆ ಮನೆಯಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು. ಓದುತ್ತಿರುವಾಗ ಟಿವಿ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಏಕಾಗ್ರತೆಯಿಂದ ಓದಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪರೀಕ್ಷಾ ಸಮಯದಲ್ಲಿ ಪೌಷ್ಟಿಕ ಆಹಾರ, ಸಾಕಷ್ಟು ಕುಡಿಯುವ ನೀರು ನೀಡಬೇಕು. ಮಗು ಕನಿಷ್ಠ 6–7 ಗಂಟೆಗಳ ನಿದ್ರೆ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿದ್ರೆ ಕಡಿಮೆಯಾದರೆ ಮರೆವು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ನಿಗದಿತ ಸಮಯದಲ್ಲಿ ಓದು, ಮಧ್ಯೆ ಅಲ್ಪ ವಿರಾಮ, ಅರ್ಥ ಮಾಡಿಕೊಂಡು ಓದುವ ಅಭ್ಯಾಸ ಬೆಳೆಸಬೇಕು ಎಂದು ತಿಳಿಸಿದರು. ಮೊಬೈಲ್, ಟಿವಿ, ವ್ಯಾಟ್ಸ್‌ಆಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ಅಡ್ಡಿಯಾಗುತ್ತವೆ. ಆದ್ದರಿಂದ ಪರೀಕ್ಷೆ ಮುಗಿಯುವವರೆಗೂ ಅವುಗಳಿಂದ ದೂರವಿರಿಸಿ, ಅಗತ್ಯವಿದ್ದರೆ ಶೈಕ್ಷಣಿಕ ಕಾರಣಕ್ಕಾಗಿ ಮಾತ್ರ ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಲು ಅವಕಾಶ ನೀಡಬೇಕು ಎಂದು ಹೇಳಿದರು. ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ ಇದೆ. ಅಂಕಗಳು ಮಾತ್ರ ಜೀವನವಲ್ಲ; ಶ್ರದ್ಧೆ ಮತ್ತು ಪರಿಶ್ರಮ ಜೀವನದ ಯಶಸ್ಸಿಗೆ ಮುಖ್ಯ ಎಂದು ತಿಳಿಸಿ, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.

ವಾರ್ತಾ ಭಾರತಿ 25 Feb 2026 8:26 pm

‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ಕೇರಳ ಹೈಕೋರ್ಟ್ ಮಧ್ಯಂತರ ತಡೆ

ಅರ್ಜಿದಾರರು ವ್ಯಕ್ತಪಡಿಸಿದ ಆತಂಕ ಬಹುಶಃ ನಿಜವಾಗಿರಬಹುದು ಎಂದ ನ್ಯಾಯಾಲಯ

ವಾರ್ತಾ ಭಾರತಿ 25 Feb 2026 8:19 pm

ಯಾದಗಿರಿ | ಬಾಲಕಿಯೊಡನೆ ಅನುಚಿತ ವರ್ತನೆ ಆರೋಪ : ಸ್ವ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗದಿಂದ ದೂರು ದಾಖಲು

ಯಾದಗಿರಿ : ಶಹಾಪುರ ತಾಲೂಕಿನ ಮಹಲ್ ರೋಜಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಹಿನ್ನೆಲೆಯಲ್ಲಿಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಹೇಳಲಾಗಿರುವ ವಿಡಿಯೋ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾದ ನಂತರ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡಿದೆ. ವೈರಲ್ ವಿಡಿಯೋವನ್ನು ಪರಿಶೀಲಿಸಿ, ಕೈಗೊಂಡ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆಯೋಗ ಪತ್ರ ರವಾನಿಸಿದೆ.

ವಾರ್ತಾ ಭಾರತಿ 25 Feb 2026 8:18 pm

ರಣಜಿ ಫೈನಲ್ | ಕರ್ನಾಟಕದ ವಿರುದ್ದ ಜಮ್ಮು-ಕಾಶ್ಮೀರ 527/6 : ಪರಾಸ್, ಕನ್ಹಯ್ಯ, ಸಾಹಿಲ್ ಅರ್ಧಶತಕ

ಹುಬ್ಬಳ್ಳಿ, ಫೆ.25: ನಾಯಕ ಪರಾಸ್ ಡೋಗ್ರಾ(70 ರನ್, 166 ಎಸೆತ, 8 ಬೌಂಡರಿ), ಕನ್ಹಯ್ಯ ವಧಾವನ್(70 ರನ್, 109 ಎಸೆತ, 9 ಬೌಂಡರಿ)ಹಾಗೂ ಸಾಹಿಲ್ ಲೋಟ್ರಾ(ಔಟಾಗದೆ 57 ರನ್, 93 ಎಸೆತ, 7 ಬೌಂಡರಿ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡ ಕರ್ನಾಟಕ ತಂಡದ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ಬುಧವಾರ ಎರಡನೇ ದಿನದಾಟವು ಮಂದಬೆಳಕಿನಿಂದಾಗಿ ಬೇಗನೆ ಕೊನೆಗೊಂಡಾಗ ಜಮ್ಮು-ಕಾಶ್ಮೀರ ತಂಡವು 156 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 527 ರನ್ ಕಲೆ ಹಾಕಿದೆ. ಸಾಹಿಲ್ ಹಾಗೂ ಆಲ್‌ರೌಂಡರ್ ಅಬೀದ್ ಮುಷ್ತಾಕ್(ಔಟಾಗದೆ 20 ರನ್, 31 ಎಸೆತ)ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 56 ರನ್ ಸೇರಿಸಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದ್ದಾರೆ. ಹುಬ್ಬಳ್ಳಿ ಕ್ರಿಕೆಟ್ ಮೈದಾನದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ವಿಕೆಟ್ ಪಡೆಯಲು ಪರದಾಟ ನಡೆಸುತ್ತಿರುವ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ಪರ ಪ್ರಸಿದ್ಧ ಕೃಷ್ಣ(3-90)ಯಶಸ್ವಿ ಪ್ರದರ್ಶನ ನೀಡಿದ್ದಾರೆ. ವಿದ್ಯಾಧರ ಪಾಟೀಲ್(1-104), ಶಿಖರ್ ಶೆಟ್ಟಿ(1-112)ಹಾಗೂ ಶ್ರೇಯಸ್ ಗೋಪಾಲ್(1-130)ತಲಾ ಒಂದು ವಿಕೆಟ್‌ಗಳನ್ನು ಪಡೆದಿದ್ದಾರೆ. ಜಮ್ಮು-ಕಾಶ್ಮೀರ ತಂಡವು 2 ವಿಕೆಟ್‌ಗಳ ನಷ್ಟಕ್ಕೆ 284 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಶತಕವೀರ ಶುಭಮ್ ಪುಂದಿರ್ ನಿನ್ನೆಯ ಮೊತ್ತಕ್ಕೆ 4 ರನ್ ಸೇರಿಸಿ ವಿದ್ಯಾಧರ ಪಾಟೀಲ್‌ಗೆ ವಿಕೆಟ್ ಒಪ್ಪಿಸಿದರು. ಔಟಾಗದೆ 52 ರನ್ ಗಳಿಸಿದ್ದ ಅಬ್ದುಲ್ ಸಮದ್ ಕೂಡ ಹೆಚ್ಚು ಹೊತ್ತು ನಿಲ್ಲದೆ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ನಾಯಕ ಪರಾಸ್ ಡೋಗ್ರಾ ಹಾಗೂ ಕನ್ಹಯ್ಯ ವಧಾವನ್ ಐದನೇ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 417ಕ್ಕೆ ತಲುಪಿಸಿದರು. ವಂಶಜ್ ಶರ್ಮಾ ಗಾಯಗೊಂಡ ಕಾರಣ ಕೊನೆಯ ಕ್ಷಣದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಸೇರಿಕೊಂಡಿರುವ ಸಾಹಿಲ್ ಲೋಟ್ರಾ ಅವರು ತನಗೆ ಲಭಿಸಿದ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಕಳೆದ ವಾರ ರಣಜಿ ಟೂರ್ನಿಯಲ್ಲಿ 10,000 ರನ್ ಕ್ರಮಿಸಿರುವ ಡೋಗ್ರಾ ಅವರು ಈ ವರ್ಷದ ರಣಜಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 8:12 pm

T20 World Cup | ನಾಳೆ ಝಿಂಬಾಬ್ವೆ ವಿರುದ್ಧ ಭಾರತಕ್ಕೆ ನಿರ್ಣಾಯಕ ಪಂದ್ಯ

ಚೆನ್ನೈ, ಫೆ.25: ಟೀಮ್ ಇಂಡಿಯಾದ ಪಾಲಿಗೆ ನೈಜ ವಿಶ್ವಕಪ್ ಸವಾಲು ಇದೀಗ ಎದುರಾಗಿದ್ದು, ಏಕಾಏಕಿ ಎಲ್ಲವೂ ಅದರ ನಿಯಂತ್ರಣ ತಪ್ಪಿಹೋಗಿದೆ. ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೂಪರ್-8 ಪಂದ್ಯದಲ್ಲಿ 76 ರನ್‌ಗಳಿಂದ ಸೋತ ನಂತರ ಭಾರತ ತಂಡವು ನಾಕೌಟ್ ಮೂಡ್‌ಗೆ ಹೊರಳುವಂತಾಗಿದೆ. ಹಾಲಿ ಚಾಂಪಿಯನ್ ಭಾರತ ತಂಡ ಗುರುವಾರ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಪಂದ್ಯವು ಆತಿಥೇಯರ ಪಾಲಿಗೆ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವಾಗಿದೆ. ಮಾರ್ಚ್ 1ರಂದು ಕೋಲ್ಕತಾದಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಭಾರತದ ಕೊನೆಯ ಸೂಪರ್-8 ಪಂದ್ಯವು ಕ್ವಾರ್ಟರ್ ಫೈನಲ್ ಸ್ವರೂಪ ಪಡೆದಿದೆ. ಗುರುವಾರ ಮಧ್ಯಾಹ್ನ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಮತ್ತೊಂದು ಸೂಪರ್-8 ಪಂದ್ಯದಲ್ಲಿ ವೆಸ್ಷ್‌ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದರೆ ಭಾರತ ತಂಡಕ್ಕೆ ಸೆಮಿ ಫೈನಲ್ ತಲುಪಲು ಎರಡು ಪಂದ್ಯಗಳ ಗೆಲುವು ಸಾಕಾಗುವುದಿಲ್ಲ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ತಂಡವನ್ನು ಸೋಲಿಸಿದರೆ ಭಾರತ ಸೆಮಿ ಫೈನಲ್ ವಿಶ್ವಾಸ ಗರಿಗೆದರಲಿದೆ. ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು ಹಾಗೂ ವೆಸ್ಟ್‌ಇಂಡೀಸ್ ತಂಡವು ಝಿಂಬಾಬ್ವೆ ವಿರುದ್ಧ 107 ರನ್‌ಗಳ ಅಂತರದಿಂದ ಜಯ ಸಾಧಿಸಿರುವುದು ಭಾರತದ ಸೆಮಿ ಫೈನಲ್ ವಿಶ್ವಾಸದ ಮೇಲೆ ಗದಾ ಪ್ರಹಾರ ಮಾಡಿದೆ. ಹೀನಾಯ ಸೋಲಿನಿಂದಾಗಿ ನೆಟ್‌ರನ್‌ರೇಟ್‌ಗೆ ಹಾನಿಯಾಗಿರುವುದು ಭಾರತ ತಂಡದ ಗಾಢ ಚಿಂತೆಗೆ ಕಾರಣವಾಗಿದೆ. ಸದ್ಯ ಗ್ರೂಪ್-1ರಲ್ಲಿ ಭಾರತದ ನೆಟ್‌ರನ್‌ರೇಟ್ -3.800 ಆಗಿದೆ. ಇದು ವೆಸ್ಟ್‌ಇಂಡೀಸ್(-5.350)ಹಾಗೂ ದಕ್ಷಿಣ ಆಫ್ರಿಕಾ(+3.800)ತಂಡಗಳಿಗಿಂತ ಕಳಪೆಯಾಗಿದೆ. ಸೂರ್ಯಕುಮಾರ್ ಬಳಗಕ್ಕೆ ಕೇವಲ ಎರಡು ಪಂದ್ಯಗಳು ಆಡಲು ಬಾಕಿ ಉಳಿದಿದೆ. ಈ ಎರಡು ಪಂದ್ಯಗಳನ್ನು ಸುಮ್ಮನೆ ಗೆದ್ದರೆ ಸಾಲದು ದೊಡ್ಡ ಅಂತರದಿಂದ ಗೆಲುವು ಸಾಧಿಸಿ ನೆಟ್‌ರನ್‌ರೇಟ್ ಹೆಚ್ಚಿಸಿಕೊಳ್ಳಬೇಕು. ಇತರ ಫಲಿತಾಂಶಗಳು ಅದರ ಪರವಾಗಿರುವ ವಿಶ್ವಾಸದಲ್ಲಿರಬೇಕು. ಭಾರತದ ಮುಂದಿನ ಹಾದಿ ಮೇಲ್ನೋಟಕ್ಕೆ ನೇರವಾಗಿದ್ದರೂ, ನಿಜವಾಗಿಯೂ ಕಠಿಣವಾಗಿದೆ. ಝಿಂಬಾಬ್ವೆ ಹಾಗೂ ವೆಸ್ಟ್‌ಇಂಡೀಸ್ ತಂಡಗಳನ್ನು ಸೋಲಿಸಿದರೆ ನಾಲ್ಕು ಅಂಕಗಳನ್ನು ತಲುಪಬಹುದು. ಅದರೆ, ತ್ರಿಕೋನ ಸ್ಪರ್ಧೆಯಲ್ಲಿ ನೆಟ್ ರನ್‌ರೇಟ್ ನಿರ್ಣಾಯಕ ಅಂಶವಾಗಿರುವ ಕಾರಣ ಈ ಎರಡು ಗೆಲುವು ಮುಂದಿನ ಸುತ್ತು ತಲುಪಲು ಸಾಕಾಗದು. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್‌ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳನ್ನು ಸೋಲಿಸಿದರೆ, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಆದರೆ ದಕ್ಷಿಣ ಆಫ್ರಿಕಾ ಒಂದು ಪಂದ್ಯದಲ್ಲಿ ಸೋತರೆ, ಮೂರು ತಂಡಗಳು ನಾಲ್ಕು ಅಂಕಗಳನ್ನು ಗಳಿಸುತ್ತವೆ. ಆಗ ಸೆಮಿ ಫೈನಲ್‌ಗೆ ತೆರಳುವ ತಂಡವನ್ನು ನೆಟ್ ರನ್‌ರೇಟ್ ಮೂಲಕ ನಿರ್ಧರಿಸಲಾಗುತ್ತದೆ. ಹೀಗಾಗಿ ಭಾರತದ ಗೆಲುವಿನ ಅಂತರ ನಿರ್ಣಾಯಕವಾಗಿದೆ. ಝಿಂಬಾಬ್ವೆ ವಿರುದ್ಧ ಕಡಿಮೆ ಅಂತರದಿಂದ ಗೆದ್ದರೆ ಸಾಲದು, ಆಗಿರುವ ಹಾನಿಯನ್ನು ಸರಿಪಡಿಸಲು ಭಾರೀ ಗೆಲುವಿನ ಅಗತ್ಯವಿದೆ. ಭಾರತ ತಂಡ ಏನು ಮಾಡಬೇಕು: ತಕ್ಷಣಕ್ಕೆ ಚೆನ್ನೈನಲ್ಲಿ ಗುರುವಾರ ನಡೆಯಲಿರುವ ಝಿಂಬಾಬ್ವೆ ತಂಡದ ವಿರುದ್ದ ಪಂದ್ಯದತ್ತ ಗಮನ ನೀಡಬೇಕು. 80ರಿಂದ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆಲುವು ದಾಖಲಿಸಿದರೆ, ಭಾರತ ರನ್‌ರೇಟ್ ಸುಧಾರಣೆಯಾಗಲಿದೆ. ಸೆಮಿ ಫೈನಲ್ ವಿಶ್ವಾಸವೂ ವೃದ್ದಿಯಾಗಲಿವೆ. ಭಾರತ ತಂಡದ ಭವಿಷ್ಯವು ಗುರುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ-ವೆಸ್ಟ್‌ಇಂಡೀಸ್ ತಂಡಗಳ ಫಲಿತಾಂಶ ಅವಲಂಬಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಅಂದುಕೊಂಡಂತೆ ಏನೂ ನಡೆದಿರಲಿಲ್ಲ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನಾಲ್ಕನೇ ಬಾರಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದಾರೆ. ಕಳೆದ ವರ್ಷ ಏಶ್ಯಕಪ್ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ತಿಲಕ್ ವರ್ಮಾ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ನಾಯಕ ಸೂರ್ಯಕುಮಾರ್ ಅಮೆರಿಕ ವಿರುದ್ಧದ ಪಂದ್ಯದ ನಂತರ ಸಿಡಿದೆದ್ದಿಲ್ಲ. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ಪೈಕಿ ಮೂವರು ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಒಂದು ವೇಳೆ ಸಂಜು ಸ್ಯಾಮ್ಸನ್‌ರನ್ನು ತಿಲಕ್‌ಗಿಂತ ಮೊದಲೇ ಬ್ಯಾಟಿಂಗ್‌ಗ ಇಳಿಸಿದರೆ, ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಗುತ್ತದೆ. ಸಂಜು ಈ ತನಕ ಲಭಿಸಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿಲ್ಲ. ಗುರುವಾರದ ಪಂದ್ಯದಲ್ಲಿ ವಾಶಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಬಹುದು. ದಕ್ಷಿಣ ಆಫ್ರಿಕಾ ವಿರುದ್ದ ಅಕ್ಷರ್‌ಗೆ ವಿಶ್ರಾಂತಿ ನೀಡಿದ್ದ ಭಾರತದ ನಿರ್ಧಾರ ತಿರುಗುಬಾಣವಾಗಿತ್ತು. ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ತಂಡಗಳನ್ನು ಗ್ರೂಪ್ ಹಂತದಲ್ಲಿ ಮಣಿಸಿ ಸೂಪರ್-8 ಹಂತಕ್ಕೇರಿದ್ದ ಝಿಂಬಾಬ್ವೆ ತಂಡ ಮುಂಬೈನಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಿಂದ ಸೋಲನುಭವಿಸಿ ಹಿನ್ನಡೆ ಕಂಡಿದೆ. ಚೆನ್ನೈನ ಪಿಚ್ ಮುಂಬೈನ ವಾಂಖೆಡೆ ಪಿಚ್‌ಗಿಂತ ಹೆಚ್ಚು ಭಿನ್ನವಾಗಿಲ್ಲ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತದ ಇಬ್ಬರು ಬಿಗ್ ಹಿಟ್ಟರ್‌ಗಳು ಅಬ್ಬರಿಸಿದರೆ ಝಿಂಬಾಬ್ವೆ ತಂಡದಲ್ಲಿ 200 ಪ್ಲಸ್ ಸ್ಕೋರ್ ಬೆನ್ನಟ್ಟುವ ಬ್ಯಾಟರ್‌ಗಳ ಕೊರತೆ ಇದೆ. ಝಿಂಬಾಬ್ವೆ ತಂಡದಲ್ಲಿ ವಿಲಕ್ಷಣ ಸ್ಪಿನ್ನರ್ ಸಿಕಂದರ್ ರಝಾ ಹಾಗೂ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರಬಾನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮುಂಬೈನಲ್ಲಿ ಈ ಇಬ್ಬರು ಬೌಲರ್‌ಗಳು 7 ಓವರ್‌ಗಳಲ್ಲಿ 94 ರನ್ ನೀಡಿದ್ದರು. ಭಾರತೀಯ ಪವರ್‌ಹಿಟ್ಟರ್‌ಗಳು ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರಲು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ತಂಡಗಳು ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಸಂಜು ಸ್ಯಾಮ್ಸನ್, 3. ಇಶಾನ್ ಕಿಶನ್(ವಿಕೆಟ್‌ಕೀಪರ್), 4. ಸೂರ್ಯಕುಮಾರ(ನಾಯಕ), 5. ಶಿವಂ ದುಬೆ, 6. ಹಾರ್ದಿಕ್ ಪಾಂಡ್ಯ, 7. ರಿಂಕು ಸಿಂಗ್/ತಿಲಕ್ ವರ್ಮಾ,8. ಅಕ್ಷರ್ ಪಟೇಲ್,9. ಅರ್ಷದೀಪ ಸಿಂಗ್, 10. ವರುಣ್ ಚಕ್ರವರ್ತಿ, 11. ಜಸ್‌ಪ್ರಿತ್ ಬುಮ್ರಾ. ಝಿಂಬಾಬ್ವೆ(ಸಂಭಾವ್ಯ): 1. ಮಾರುಮಾನಿ(ವಿಕೆಟ್‌ಕೀಪರ್), 2. ಬ್ರಿಯಾನ್ ಬೆನೆಟ್, 3. ಡಿಯೋನ್ ಮೈಯರ್ಸ್, 4. ರಯಾನ್ ಬರ್ಲ್, 5. ಸಿಕಂದರ್ ರಝಾ(ನಾಯಕ), 6. ಟೋನಿ ಮುನ್ಯೊಂಗ, 7.ತಾಶಿಂಗಾ ಮುಸೆಕಿವಾ, 7. ಬ್ರಾಡ್ ಇವಾನ್ಸ್, 9. ಗ್ರೇಮ್ ಕ್ರೀಮರ್,10.ಬ್ಲೆಸ್ಸಿಂಗ್ ಮುಝರಬಾನಿ 11. ರಿಚರ್ಡ್ ನಗಾರವಾ

ವಾರ್ತಾ ಭಾರತಿ 25 Feb 2026 8:09 pm

ಯಾದಗಿರಿ | ಭೀಮಾ ನದಿಯಲ್ಲಿ ಮುಳುಗಿ ಬಾಲಕಿ ಮೃತ್ಯು

ಯಾದಗಿರಿ: ವಡಗೇರಾ ತಾಲೂಕಿನ ಬೆನಕನಹಳ್ಳಿ ಸಮೀಪದ ಭೀಮಾನದಿಯಲ್ಲಿ ಏಳು ವರ್ಷದ ಬಾಲಕಿಯೊಬ್ಬಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಜೋಳದಡಗಿ ಗ್ರಾಮದ ಮರೇಮ್ಮ (7) ಎಂದು ಗುರುತಿಸಲಾಗಿದೆ. ಮೀನುಗಾರ ಕೊಂಡಪ್ಪ ಹಾಗೂ ತಾಯಮ್ಮ ದಂಪತಿ ಪುತ್ರಿ ಮರೇಮ್ಮಳೊಂದಿಗೆ ಬೆನಕನಹಳ್ಳಿ ಗ್ರಾಮದ ಮಾರೇಮ್ಮ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ತಾಯಿ ತಾಯಮ್ಮ ಬಟ್ಟೆ ತೊಳೆಯಲು ನದಿ ತೀರಕ್ಕೆ ಹೋಗಿದ್ದಾಗ, ಮರೇಮ್ಮಳ ಕೈಗೆ ಮೊಬೈಲ್ ನೀಡಿ ಬಟ್ಟೆ ತೊಳೆಯುತ್ತಿದ್ದರೆಂದು ತಿಳಿದುಬಂದಿದೆ. ಮೊಬೈಲ್ ನೋಡುತ್ತಾ ನದಿಗೆ ಇಳಿದ ಬಾಲಕಿ ಆಕಸ್ಮಿಕವಾಗಿ ನೀರು ಪಾಲಾಗಿದ್ದಾಳೆ ಎನ್ನಲಾಗಿದೆ. ಬಾಲಕಿ ಮುಳುಗುತ್ತಿದ್ದಂತೆ ಸ್ಥಳೀಯರು ರಕ್ಷಿಸಿ ತಕ್ಷಣ ಬೆಂಡಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಾರ್ತಾ ಭಾರತಿ 25 Feb 2026 8:08 pm

ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದ ರಿಂಕು ಸಿಂಗ್

ಹೊಸದಿಲ್ಲಿ, ಫೆ.25: ಎಡಗೈ ಬ್ಯಾಟರ್ ರಿಂಕು ಸಿಂಗ್ ಭಾರತೀಯ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಬುಧವಾರ ಬಹಿರಂಗಪಡಿಸಿದ್ದಾರೆ. ‘‘ರಿಂಕು ಸಿಂಗ್ ಬುಧವಾರ ಸಂಜೆ ತಂಡವನ್ನು ಸೇರಿಕೊಂಡಿದ್ದಾರೆ. ಅವರ ತಂದೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ತುರ್ತಾಗಿ ತಮ್ಮ ಮನೆಗೆ ತೆರಳಿದ್ದರು’’ಎಂದು ಬುಧವಾರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೋಟಕ್ ಹೇಳಿದ್ದಾರೆ. ಭಾರತ ತಂಡವು ಚೆನ್ನೈನಲ್ಲಿ ಗುರುವಾರ ಝಿಂಬಾಬ್ವೆ ತಂಡದ ವಿರುದ್ದ ನಿರ್ಣಾಯಕ ಸೂಪರ್-8 ಪಂದ್ಯವನ್ನು ಆಡಲಿದೆ. ಕೌಟುಂಬಿಕ ಕಾರಣಕ್ಕೆ ರಿಂಕು ಸಿಂಗ್ ಅವರು ಮಂಗಳವಾರ ತಮ್ಮ ನಿವಾಸಕ್ಕೆ ಧಾವಿಸಿದ್ದರು. ಹೀಗಾಗಿ ಅವರು ಮಂಗಳವಾರ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ತಂಡದ ನೆಟ್ ಅಭ್ಯಾಸದಲ್ಲಿ ಭಾಗಿಯಾಗಿರಲಿಲ್ಲ. ಉಳಿದ ಆಟಗಾರರು ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ರಿಂಕು ಅವರ ತಂದೆ ಖಾನ್‌ಚಾಂದ್ ಸಿಂಗ್ ಅವರು ಎನ್‌ಸಿಆರ್‌ನ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದರು. ಹೀಗಾಗಿ ರಿಂಕು ತಕ್ಷಣವೇ ತಂದೆಯನ್ನು ನೋಡಲು ದಿಲ್ಲಿಗೆ ತೆರಳಿದ್ದರು. ರಿಂಕು ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳಿಂದ ಸೋತಿರುವ ಸೂಪರ್ 8 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹೊಸದಿಲ್ಲಿಯಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ನಡೆದ ಗ್ರೂಪ್ ಪಂದ್ಯದಲ್ಲಿ ಆರು ರನ್ ಗಳಿಸಿ ಔಟಾಗಿದ್ದರು. ಇದಕ್ಕೂ ಮೊದಲು ಪಾಕಿಸ್ತಾನದ ವಿರುದ್ಧ 11, ನಮೀಬಿಯಾ ವಿರುದ್ಧ್ದ 1 ಹಾಗೂ ಅಮೆರಿಕದ ವಿರುದ್ಧ ಆರು ರನ್ ಗಳಿಸಿದ್ದರು.

ವಾರ್ತಾ ಭಾರತಿ 25 Feb 2026 8:05 pm

ರಾಂಚಿಯಲ್ಲಿ ಪತನಗೊಂಡ Air Ambulance 6,600 ಗಂಟೆ ಹಾರಾಟ ನಡೆಸಿತ್ತು : ಮಾಹಿತಿ ನೀಡಿದ ಅಧಿಕಾರಿಗಳು

ರಾಂಚಿ, ಫೆ. 25: ರಾಂಚಿಯಲ್ಲಿ ಪತನಗೊಂಡು ಏಳು ಜನರ ಸಾವಿಗೆ ಕಾರಣವಾದ ‘ಬೀಚ್‌ಕ್ರಾಫ್ಟ್’ ವಿಮಾನವು 39 ವರ್ಷ ಹಳೆಯದಾಗಿತ್ತು ಹಾಗೂ ಅದು 6,600 ಗಂಟೆ ಹಾರಾಟ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಳು ಆಸನಗಳ ವಿಮಾನವು ಸೋಮವಾರ ರಾತ್ರಿ ರಾಂಚಿಯಿಂದ ದಿಲ್ಲಿಗೆ ಓರ್ವ ರೋಗಿ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಒಯ್ಯುತ್ತಿದ್ದಾಗ ಜಾರ್ಖಂಡ್‌ನ ಚಾತ್ರ ಜಿಲ್ಲೆಯಲ್ಲಿ ಪತನಗೊಂಡಿತ್ತು. ದುರಂತದಲ್ಲಿ 41 ವರ್ಷದ ರೋಗಿ, ಓರ್ವ ವೈದ್ಯ, ಓರ್ವ ವೈದ್ಯಕೀಯ ಸಿಬ್ಬಂದಿ, ಇಬ್ಬರು ಸಹಾಯಕರು, ಪೈಲಟ್ ವಿವೇಕ್ ವಿಕಾಸ್ ಭಗತ್ ಮತ್ತು ಫಸ್ಟ್ ಆಫಿಸರ್ ಸವ್ರಾಜ್‌ದೀಪ್ ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ. ಪೈಲಟ್ ಭಗತ್ 1,400 ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದರೆ, ಫಸ್ಟ್ ಆಫಿಸರ್ 450 ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದಾರೆ. ‘‘ಬೀಚ್‌ಕ್ರಾಫ್ಟ್ ಸಿ90ಎ (ಕಿಂಗ್ ಏರ್) ಅವಳಿ ಇಂಜಿನ್‌ಗಳ ವಿಮಾನವನ್ನು 1987ರಲ್ಲಿ ನಿರ್ಮಿಸಲಾಗಿತ್ತು ಹಾಗೂ ಅಪಘಾತದ ವೇಳೆಗೆ ಅದು ಸುಮಾರು 6,610 ಗಂಟೆಗಳ ಹಾರಾಟವನ್ನು ನಡೆಸಿತ್ತು’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘‘ಎರಡೂ ಇಂಜಿನ್‌ಗಳು ತಲಾ ಸುಮಾರು 2,500 ಗಂಟೆಗಳನ್ನು ಪೂರ್ತಿಗೊಳಿಸಿವೆ. ಅವರ ಹೊಸ ವಾಯುಕ್ಷಮತೆ ತಪಾಸಣೆ ಪ್ರಮಾಣಪತ್ರ (ಎಆರ್‌ಸಿ)ವನ್ನು ಜನವರಿ 21ರಂದು ನೀಡಲಾಗಿತ್ತು ಹಾಗೂ ಅದು ಒಂದು ವರ್ಷದ ವಾಯಿದೆ ಹೊಂದಿತ್ತು’’ ಎಂದು ಅವರು ತಿಳಿಸಿದ್ದಾರೆ. ವಿಮಾನವು ಸೋಮವಾರ ಸಂಜೆ 7:11ರ ಸುಮಾರಿಗೆ ರಾಂಚಿಯ ಬಿರ್ಸಾ ಮುಂಡ ವಿಮಾನ ನಿಲ್ದಾಣದಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. 23 ನಿಮಿಷಗಳ ಬಳಿಕ ವಿಮಾನದ ಸಂವಹನ ಮತ್ತು ರೇಡಾರ್ ಸಂಪರ್ಕ ಕಡಿತಗೊಂಡಿತು. ವಿಮಾನವು ಬಳೀಕ ಚಾತ್ರ ಜಿಲ್ಲೆಯ ಸಿಮಾರಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಅಪ್ಪಳಿಸಿತು.

ವಾರ್ತಾ ಭಾರತಿ 25 Feb 2026 8:02 pm

ವಿಜಯನಗರ | ಎಬಿವಿಪಿ ಕಾರ್ಯಕರ್ತರಿಂದ ಅಝೀಂ ಪ್ರೇಮ್ ಜಿ ವಿವಿಗೆ ನುಗ್ಗಿ ದಾಂಧಲೆ ಆರೋಪ : ಎಸ್‌ಎಫ್‌ಐ ಖಂಡನೆ

ವಿಜಯನಗರ / ಹೊಸಪೇಟೆ : ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸರ್ಜಾಪುರ ಬಳಿಯಿರುವ ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಗೆ 20 ಜನರ ಎಬಿವಿಪಿ ಸದಸ್ಯರ ಗುಂಪು ಅಕ್ರಮವಾಗಿ ಪ್ರವೇಶಿಸಿ ವಿಶ್ವವಿದ್ಯಾಲಯದ ಆಸ್ತಿಗಳನ್ನು ಧ್ವಂಸಗೊಳಿಸಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಎಸ್‌ಎಫ್‌ಐ ಖಂಡನೆ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ನಾವು ನಿಲ್ಲುತ್ತೇವೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ. ಮಂಗಳವಾರ ಸಂಜೆ ಕಾಶ್ಮೀರ ವಿಷಯದ ಕುರಿತು ಅನೌಪಚಾರಿಕ ಚರ್ಚೆ ನಡೆಯಲಿದೆ ಎಂಬ ವರದಿ ಹರಿದಾಡಿದ್ದರೂ, ವಿಶ್ವವಿದ್ಯಾಲಯದಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗಿರಲಿಲ್ಲ ಎಂದು ಆಡಳಿತ ಸ್ಪಷ್ಟಪಡಿಸಿದೆ. ಸಂಜೆ 5 ಗಂಟೆ ಸುಮಾರಿಗೆ ಎಬಿವಿಪಿ ಸದಸ್ಯರು ಕ್ಯಾಂಪಸ್‌ಗೆ ನುಗ್ಗಿ ಗದ್ದಲ ಸೃಷ್ಟಿಸಿ ಆಸ್ತಿಪಾಸ್ತಿಗೆ ಹಾನಿ ಮಾಡಿ, ಭದ್ರತಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಮ್ಮ ಕ್ಯಾಂಪಸ್‌ನಲ್ಲಿ ಹೊರಗಿನ ಗುಂಪು ನಡೆಸಿದ ಗದ್ದಲ ಮತ್ತು ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಯಾವುದೇ ಕಾರ್ಯಕ್ರಮ ನಡೆದಿಲ್ಲ” ಎಂದು ವಿಶ್ವವಿದ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಯ ಸಂಬಂಧ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳ ಗುಂಪನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಸಾಮಾನ್ಯ. ಇದು ವಿದ್ಯಾರ್ಥಿಗಳ ತಿಳುವಳಿಕೆಯನ್ನು ವಿಸ್ತರಿಸುವ ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಎಸ್‌ಎಫ್‌ಐ ಅಭಿಪ್ರಾಯಪಟ್ಟಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಸೇರಿದಂತೆ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಇಂತಹ ಘಟನೆಗಳು ನಡೆದಿರುವುದನ್ನು ಉಲ್ಲೇಖಿಸಿ, ಕ್ಯಾಂಪಸ್‌ಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಲಾಗಿದೆ. ಅಝೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ನಡೆದ ದಾಳಿಯ ಕುರಿತು ಸಮಗ್ರ ತನಿಖೆ ನಡೆಸಿ, ಆಸ್ತಿಧ್ವಂಸ ಹಾಗೂ ಹಲ್ಲೆ ಆರೋಪದ ಮೇಲೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಪಸ್ ಡೆಮಾಕ್ರಸಿ ಉಳಿಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್, ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ವಾರ್ತಾ ಭಾರತಿ 25 Feb 2026 8:02 pm

ಕೈಗಾರಿಕೆ, ವಾಣಿಜ್ಯ ಇಲಾಖೆ ನಿವೃತ್ತ ನೌಕರರ ವಿಭಾಗ ಮಟ್ಟದ ಸಮಾವೇಶ

ಉಡುಪಿ, ಫೆ.25: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ನೌಕರರ ಸಂಘದ ವತಿಯಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲೆಗಳ ವಿಭಾಗ ಮಟ್ಟದ ಸಮಾವೇಶವನ್ನು ಬುಧವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸ ಲಾಗಿತ್ತು. ಸಮಾವೇಶವನ್ನು ಕಾರವಾರ ಹಾಗೂ ಉಡುಪಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ನಾಗರಾಜು ವಹಿಸಿದ್ದರು. ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೆಶಕ ಸೀತಾರಾಮ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಕೆ.ಬಿ.ಮುನಿ ವೆಂಕಟಸ್ವಾಮಿ, ಡಾ.ಚೌಡಯ್ಯ, ಎಂ. ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ನರಸಿಂಹ ಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿ ಪಿ.ಆರ್ಮುಗಂ ಉಡುಪಿ ಉಪಸ್ಥಿತರಿದ್ದರು. ಸಂಘದ ಸದಸ್ಯರಿಗೆ ಜೆ.ಸಿ.ರಾಘವೇಂದ್ರ ಭಟ್ ಹಿರಿಯ ನಾಗರಿಕರಿಗೆ ಜೀವನೋತ್ಸವ ಮತ್ತು ಪ್ರೇರಣಾತ್ಮಕ ವಿಷಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 75 ವರ್ಷ ಪೂರೈಸಿದ ಸಂಘದ ಸದಸ್ಯರನ್ನು ಸನ್ಮಾನಿಸಲಾ ಯಿತು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಅಪರ ನಿರ್ದೇಶಕ ರಮಾನಂದ ನಾಯಕ್ ಸ್ವಾಗತಿಸಿದರು. ಗೋವಿಂದರಾಜು ವಂದಿಸಿದರು. ಸಿ.ಹನುಮೇಗೌಡ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 25 Feb 2026 7:54 pm

ಕೆಳ ಗುಣಮಟ್ಟದ ಹಾಲು ಸ್ವೀಕರಿಸಲು ಅವಕಾಶ: ರವಿರಾಜ್ ಹೆಗ್ಡೆ

ಉಡುಪಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟನೆ

ವಾರ್ತಾ ಭಾರತಿ 25 Feb 2026 7:53 pm

ಬಾಲಕಿ ಜತೆ ಅನುಚಿತ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು! ತನಿಖೆ ನಡೆಸಲು ಎಸ್‌ಪಿಗೆ ಪತ್ರ

ಮಲ್ಲಿಕಾರ್ಜುನ ಮುತ್ಯಾ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿ ಜತೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಸದ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೂರು ದಾಖಲು ಮಾಡಿಕೊಂಡಿದೆ. ಈ ಬಗ್ಗೆ ತನಿಖೆ ನಡೆಸಿ ಎಸ್‌ಪಿ ವರದಿ ನೀಡಲು ಕೋರಿದೆ.

ವಿಜಯ ಕರ್ನಾಟಕ 25 Feb 2026 7:46 pm

ಎಲ್ಲ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಾವು ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಸರಕಾರ ವ್ಯಾಪ್ತಿಯಲ್ಲಿರುವ ಎಲ್ಲ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಾವು ಬದ್ಧವಾಗಿದ್ದು, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರ ಉದ್ಯೋಗ ಸಮಸ್ಯೆಗಳ ಕುರಿತು ಅರಿವಿದೆ. ಈ ಹಿಂದೆ ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, ಎಲ್ಲವನ್ನು ಸರಿಪಡಿಸಿಕೊಂಡು ನೇಮಕಾತಿ ಆಗಲಿದೆ ಎಂದು ತಿಳಿಸಿದರು. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದ ಅವರು, ಸಂವಿಧಾನ ಪ್ರಕಾರವೇ ನೇಮಕಾತಿ ನಡೆಯಲಿದೆ. ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಅದು ನ್ಯಾಯಾಲಯದ ಮೇಲೆ ನಿರ್ಧಾರ ಆಗುತ್ತೆ. ಇನ್ನೂ ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ನಮ್ಮ ಸರಕಾರ ಕ್ರಮ ಕೈಗೊಂಡಿದೆ. ಬೇರೆ ಏನಿದ್ದರೂ ಪರಿಶೀಲಿಸುತ್ತೇವೆ ಎಂದರು. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಉದ್ಯೋಗ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಎಷ್ಟು ಹಗರಣಗಳು ಆಗಿವೆ ಎಂಬುವುದು ಅರಿವಿದೆ. ಬಿಜೆಪಿ ಯಾರಿಗೆ ಹುದ್ದೆ ಮಾರಾಟ ಮಾಡಿದೆ ಎಂಬುವುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವಾರ್ತಾ ಭಾರತಿ 25 Feb 2026 7:43 pm

Kerala | ಹೊಸ ಸರಕಾರಿ ಶಾಲಾಕಾಲೇಜುಗಳಿಗೆ ಧರ್ಮಾಧಾರಿತ ಹೆಸರುಗಳನ್ನಿಡದಂತೆ ನಿಷೇಧ ವಿಧಿಸಿದ ಸರಕಾರ

ತಿರುವನಂತಪುರ,ಫೆ.25: ಕೇರಳದಲ್ಲಿ ಇನ್ನು ಮುಂದೆ ಹೊಸ ಸರಕಾರಿ ಶಾಲೆಗಳು, ಕಾಲೇಜುಗಳು,ವಿವಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಧರ್ಮಾಧಾರಿತ ಹೆಸರುಗಳನ್ನು ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಸರಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗೆ ಧರ್ಮಾಧಾರಿತ ಹೆಸರನ್ನು ಇರಿಸಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಂಗಳವಾರ ಅಧಿಕೃತ ಹೇಳಿಕೆಯು ತಿಳಿಸಿದೆ. ಮೂಲಗಳ ಪ್ರಕಾರ,ಸರಕಾರಿ ಶಿಕ್ಷಣ ಸಂಸ್ಥೆಗಳು ಜಾತ್ಯತೀತವಾಗಿ ಉಳಿಯುವಂತೆ ಮತ್ತು ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ. ಸರಕಾರದ ನಿರ್ಧಾರವು ಭವಿಷ್ಯದಲ್ಲಿ ಸ್ಥಾಪನೆಯಾಗುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಸರಕಾರಿ ಶಿಕ್ಷಣ ಸಂಸ್ಥೆಗಳ ಹೆಸರುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕ್ರಮವು ಸಭೆಯಲ್ಲಿ ಸಂಪುಟವು ಅನುಮೋದಿಸಿದ ಸರಣಿ ನೀತಿ ಕ್ರಮಗಳ ಭಾಗವಾಗಿದೆ. ಸಂಪುಟವು ನ್ಯಾ.ಜೆ.ಬಿ.ಕೋಶಿ ಆಯೋಗದ ವರದಿಗೂ ತಾತ್ವಿಕ ಅನುಮೋದನೆಯನ್ನು ನೀಡಿದೆ ಮತ್ತು ವರದಿಯನ್ನು ಅಧಿಕೃತವಾಗಿ ಪ್ರಕಟಿಸಲು ನಿರ್ಧರಿಸಿದೆ. ಕೇರಳದಲ್ಲಿಯ ಕ್ರೈಸ್ತ ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನಕ್ಕಾಗಿ ನ್ಯಾ.ಕೋಶಿ ಆಯೋಗವನ್ನು ನೇಮಿಸಲಾಗಿತ್ತು.

ವಾರ್ತಾ ಭಾರತಿ 25 Feb 2026 7:30 pm

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ನೇತೃತ್ವದಲ್ಲಿ ಕಾರ್ಮಿಕರ ಧರಣಿ

ಮಂಗಳೂರು, ಫೆ.25: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಆಗ್ರಹಿಸಿ ಕಾರ್ಮಿಕರು ಬುಧವಾರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಬಳಿ ಧರಣಿ ನಡೆಸಿದರು. ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾರ್ಮಿಕ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯ ಕಾರ್ಮಿಕ ಸಚಿವರಿಗೆ ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ಖಂಡಿಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ , ಧರಣಿಯ ನೇತೃತ್ವವನ್ನು ಬಿಎಮ್‌ಎಸ್ ಜಿಲ್ಲಾ ಅಧ್ಯಕ್ಷ, ವಕೀಲರಾದ ಅನಿಲ್ ಕುಮಾರ್ ಯು ವಹಿಸಿದ್ದರು. ಇಪಿಎಸ್ -95 ಕನಿಷ್ಠ ಪಿಂಚಣಿ ರೂ. 7,500ಕ್ಕೆ ಹೆಚ್ಚಳ ಮತ್ತು ದರ ಏರಿಕೆ ಭತ್ಯೆ ಜಾರಿ, ಇಎಸ್‌ಐ ಮತ್ತು ಇಪಿಎಫ್ ವೇತನ ಮಿತಿ ಹೆಚ್ಚಳ. ಆಶಾ, ಅಂಗನವಾಡಿ, ಮಧ್ಯಾಹ್ನ ಊಟ ಹಾಗೂ ಎನ್‌ಎಚ್‌ಎಂ ಯೋಜನಾ ಕಾರ್ಮಿಕರ ಗೌರವಧನ ಹೆಚ್ಚಿಸಿ ನಿಯಮಿತಗೊಳಿಸುವುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಾಕಿ ವೇತನ ಪಾವತಿ. ಕರ್ನಾಟಕ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ತಕ್ಷಣ ಪಾವತಿ., ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ಕುರಿತು ತನಿಖಾ ಸಮಿತಿ ರಚಿಸುವಂತೆ ಮನವಿ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಸರಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಕಾರ್ಮಿಕರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಾತ್ಮಕ ಹಾಗೂ ಕಾನೂನುಬದ್ಧ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ಬಳಿಕ ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಕೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಉಪ ಆಯುಕ್ತರಾದ ಅಂಕಿತ್ ಸಿಂಗ್ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಅನಿಲ್ ಕುಮಾರ್ ಯು ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ವಿಜಯಲಕ್ಷ್ಮ್ಮಿ, ಗೋಪಾಲಕೃಷ್ಣ, ರೋಹಿತಾಶ್ವ, ಉದಯ ಕುಮಾರ್, ವಿಗ್ನೇಶ್, ವೈ ಸುಧೀಂದ್ರ, ನಿತ್ಯಾನಂದ ಪೈ, ರಂಜನ್, ಶಶಿಧರ್, ಉದಯ, ರವೀಂದ್ರ, ದಿಲಾಕ್ಷಿ, ಉಷಾ ರೂಪೇಶ್, ರಘುಪತಿ, ಹರೀಶ್ ಜಿ.ಕೆ ಹಾಗೂ ವಿವಿಧ ವಲಯಗಳ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Feb 2026 7:30 pm

Bihar | ಮದುವೆ ಮಂಟಪದಲ್ಲೇ ಮದುಮಗಳಿಗೆ ಗುಂಡಿಕ್ಕಿ ಹತ್ಯೆಗೆ ಯತ್ನಿಸಿದ ಪ್ರೇಮಿ

ಪಾಟ್ನಾ,ಫೆ.25: ಮದುವೆ ಮಂಟಪದಲ್ಲೇ ಮದುಮಗಳಿಗೆ ಆಕೆಯ ಪ್ರೇಮಿಯೆನ್ನಲಾದ ಯುವಕನೋರ್ವ ಗುಂಡು ಹಾರಿಸಿದ ಘಟನೆ ಮಂಗಳವಾರ ರಾತ್ರಿ ಬಕ್ಸರ್ ಜಿಲ್ಲೆಯ ಚೌತಾದಲ್ಲಿ ಸಂಭವಿಸಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಆಕೆ ಇನ್ನೊಬ್ಬನೊಂದಿಗೆ ಮದುವೆಯಾಗುವುದನ್ನು ಸಹಿಸದೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆರತಿ ಕುಮಾರಿ (18) ಮದುವೆಯನ್ನು ಆಕೆಯ ಅತ್ತಿಗೆಯ ನಿವಾಸದಲ್ಲಿ ಆಯೋಜಿಸಲಾಗಿತ್ತು. ವಧು-ವರ ಪರಸ್ಪರ ಮಾಲೆಗಳನ್ನು ತೊಡಿಸುತ್ತಿದ್ದಾಗ ಹಠಾತ್ ವೇದಿಕೆಗೆ ನುಗ್ಗಿದ ಮುಸುಕುಧಾರಿ ಯುವಕ ತೀರ ಹತ್ತಿರದಿಂದ ಆರತಿಯ ಹೊಟ್ಟೆಗೆ ಗುಂಡು ಹಾರಿಸಿದ್ದ. ಏಕಾಏಕಿ ಸಂಭವಿಸಿದ ಘಟನೆಯಿಂದ ಅತಿಥಿಗಳು ದಿಗ್ಭ್ರಮೆಗೊಂಡಿದ್ದರು. ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ ಆರತಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಮನೆಯ ನಿವಾಸಿ ದೀನಬಂಧು(22) ಎಂಬಾತ ತನಗೆ ಗುಂಡು ಹಾರಿಸಿದ್ದಾಗಿ ಆರತಿ ತಿಳಿಸಿದ್ದಾಳೆ. ದೀನಬಂಧು ಕಳೆದರೆಡು ವರ್ಷಗಳಿಂದಲೂ ಆರತಿಯ ಜೊತೆ ಸ್ನೇಹದಿಂದಿದ್ದ. ಆದರೆ ಮದುವೆಯಾಗುವ ಆತನ ಪ್ರಸ್ತಾವವನ್ನು ಆರತಿ ತಿರಸ್ಕರಿಸಿದ್ದಳು. ತನ್ನ ಮಗ ಮತ್ತು ಆರತಿಯ ಪ್ರೀತಿಯ ಬಗ್ಗೆ ತನಗೆ ತಿಳಿದಿಲ್ಲ ಎಂದು ದೀನಬಂಧುವಿನ ತಂದೆ ರಾಮಶಂಕರ ಚೌಧರಿ ಹೇಳಿಕೊಂಡಿದ್ದಾರೆ. ದೀನಬಂಧು ಈ ಹಿಂದೆ ಮದ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ತನಿಖೆಯನ್ನು ಆರಂಭಿಸಿರುವ ಪೋಲಿಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ತ್ವರಿತ ಕ್ರಮಕ್ಕಾಗಿ ಮತ್ತು ಆರತಿಗೆ ನ್ಯಾಯಕ್ಕಾಗಿ ಆಕೆಯ ಕುಟುಂಬವು ಆಗ್ರಹಿಸಿದೆ.

ವಾರ್ತಾ ಭಾರತಿ 25 Feb 2026 7:30 pm

Andhra Pradesh | ಕಲಬೆರಕೆ ಹಾಲು ಕುಡಿದು ನಾಲ್ವರು ಮೃತ್ಯು: ಘಟನೆ ಕುರಿತು ವರದಿ ಕೇಳಿದ ಎಫ್‌ಎಸ್‌ಎಸ್‌ಎಐ

ಅಮರಾವತಿ,ಫೆ.25: ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತಪಟ್ಟ ಮತ್ತು ಸುಮಾರು 15 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ರಾಜ್ಯ ಸರಕಾರಕ್ಕೆ ಸೂಚಿಸಿದ್ದು, ಪರಿಸ್ಥಿತಿಯ ಮೇಲೆ ನಿಗಾಯಿರಿಸಿದೆ. ಶಂಕಿತ ಕಲಬೆರಕೆ ಹಾಲಿನಲ್ಲಿ ಈವರೆಗೆ ಯೂರಿಯಾದ ಕುರುಹುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹಾಲಿನ ಸೇವನೆಯು ಪೀಡಿತ ವ್ಯಕ್ತಿಗಳಲ್ಲಿ ಹಠಾತ್ ಮೂತ್ರಪಿಂಡ ಸಮಸ್ಯೆಗಳಿಗೆ ಕಾರಣವಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಕೊರುಕೊಂಡ ಮಂಡಲ ವ್ಯಾಪ್ತಿಯ ನರಸಾಪುರಂ ಗ್ರಾಮದ ಹಾಲು ವ್ಯಾಪಾರಿಯನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು, ಆತನ ಅನಧಿಕೃತ ಡೇರಿ ಘಟಕವನ್ನು ಮುಚ್ಚಿಸಿದ್ದಾರೆ. ವ್ಯಾಪಾರಿಯು ಹಾಲು ಮಾರಾಟ ಮಾಡಿದ್ದ 105 ಮನೆಗಳ ಪೈಕಿ 75 ಮನೆಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಶಂಕಿತ ಅಸ್ವಸ್ಥತೆಗೆ ಕಾರಣಗಳನ್ನು ತಿಳಿದುಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಕೀರ್ತಿ ಚೆಕೂರಿ ತಿಳಿಸಿದರು. ಈ ನಡುವೆ ಪೊಲೀಸರು ವ್ಯಾಪಾರಿಯ ಫ್ರೀಝರ್‌ನಿಂದ ರಾಸಾಯನಿಕ ಶೀತಕದ ಸೋರಿಕೆ ಸಾವುಗಳಿಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 25 Feb 2026 7:30 pm

Raichur | ಮಸ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ರೈತರ ಪ್ರತಿಭಟನೆ

ರಾಯಚೂರು : ಮಸ್ಕಿ ತಾಲೂಕಿನ ಗೋನವಾರ ಸಮೀಪದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜಮೀನುಗಳಿಗೆ ಹೋಗುವ ಗ್ರಾಮೀಣ ರಸ್ತೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹೆದ್ದಾರಿ ನಿರ್ಮಾಣ ಜಮೀನು ರಸ್ತೆ ವಂಚಿತ ರೈತರ ಹೋರಾಟ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಗೋನವಾರ ಗ್ರಾಮ ವ್ಯಾಪ್ತಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಭಾರತ ಮಾಲಾ ಯೋಜನೆಯಡಿ 748ಎ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಜನೆ ಸ್ವಾಗತಾರ್ಹವಾದರೂ, ಗ್ರಾಮದ ಶೇ.90ರಷ್ಟು ಜಮೀನುಗಳಿಗೆ ಹೋಗುವ ರಸ್ತೆಗಳು ತೊಂದರೆಯಾಗುತ್ತಿವೆ ಎಂದು ರೈತರು ಆರೋಪಿಸಿದರು. ಸರ್ಜಾಪುರ, ಕುಪ್ಪಗುಡ್ಡ ಸೇರಿದಂತೆ ಇತರೆ ಗ್ರಾಮಗಳಿಗೆ ಕೃಷಿ ಪರಿಕರ ಸಾಗಿಸಲು ಒಂದು ರಸ್ತೆ, ಚಿಕ್ಕಹೆಸರೂರು ಮತ್ತು ಇತರೆ ಪಟ್ಟಣಗಳಿಗೆ ಹೋಗಲು ಮುಂಡರಗಿ ರಸ್ತೆ ಸೇರಿದಂತೆ ಒಟ್ಟು ಮೂರು ರಸ್ತೆಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಎಲ್ಲಾ ರಸ್ತೆಗಳಿಂದ ಜಮೀನುಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಂಡರ್ ಪಾಸ್ ನಿರ್ಮಾಣ ಮಾಡಬಾರದು. ರೈತರು ಹೆದ್ದಾರಿ ದಾಟಲು ದೊಡ್ಡ ಸೇತುವೆ ನಿರ್ಮಿಸಿದರೆ ಅನುಕೂಲವಾಗುತ್ತದೆ. ರಸ್ತೆಗೆ ಅಡ್ಡವಾಗಿ ಗೋಡೆ ನಿರ್ಮಿಸಿದರೆ ಕಿಲೋಮೀಟರ್‌ಗಳಷ್ಟು ಸುತ್ತಿಕೊಂಡು ಜಮೀನುಗಳಿಗೆ ಹೋಗಬೇಕಾಗಿ ಬಂದು ತೊಂದರೆ ಉಂಟಾಗುತ್ತದೆ ಎಂದು ರೈತರು ದೂರಿದರು. ಪ್ರತಿಭಟನೆಯಲ್ಲಿ ಶರಣಪ್ಪ ಉದ್ಬಾಳ, ಎನ್.ಎಸ್. ವೀರೇಶ, ವಿನೋದ್, ಮಲ್ಲನಗೌಡ, ಅಮರೇಗೌಡ ಮಾಳಾಪೂರ, ತಿರುಪತಿ ಗೋನವಾರ, ಸಿದ್ರಾಮಪ್ಪ ಕೆಲ್ಲೂರು, ಬಹುದ್ದೂರು ಸಾಬ್, ದೇವರೆಡ್ಡಿ ಮೇಟಿ, ಅಮರೇಶ ಗೌಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 25 Feb 2026 7:29 pm

ಸಿಂಧನೂರು | ವಿದ್ಯಾರ್ಥಿಯ ಕೂದಲು ಕತ್ತರಿಸಿದ ಶಿಕ್ಷಕರು: ಪಾಲಕರ ಆಕ್ರೋಶ

ಸಿಂಧನೂರು : ಕಟಿಂಗ್ ಸರಿ ಇಲ್ಲ ಎಂದು ವಿದ್ಯಾರ್ಥಿಯ ತಲೆ ಕೂದಲು ಕತ್ತರಿಸಿದ ಶಿಕ್ಷಕರ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ. ನಗರದ ಹೋಲಿಫ್ಯಾಮಿಲಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಮುಹಮ್ಮದ್‌ ತಾಹೇರ್ ಎನ್ನುವ ವಿದ್ಯಾರ್ಥಿಗೆ ಅದೇ ಶಾಲೆಯ ಶಿಕ್ಷಕಿ ಹಾಗೂ ಶಾಲೆಯ ಫಾದರ್ ಸೇರಿಕೊಂಡು ತಲೆ ಕೂದಲು ಕತ್ತರಿಸಿ ಅವಮಾನವೀಯವಾಗಿ ನಡೆದುಕೊಂಡಿದ್ದು, ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಪುತ್ರನ ತಲೆ ಕೂದಲು ಕತ್ತರಿಸಿದ ಹಿನ್ನಲೆ ಪಾಲಕರು ಶಿಕ್ಷಕರಿಗೆ ಈ ಬಗ್ಗೆ ವಿಚಾರಿಸಲು ಶಾಲೆಗೆ ಭೇಟಿ ನೀಡಿದಾಗ ಶಾಲೆಯ ಫಾದರ್ ಜ್ಞಾನಪ್ರಕಾಶ ಅವರು ಪಾಲಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿ ತಂದೆ ಮುಹಮ್ಮದ್‌ ಮುಸ್ತಫಾ ಆರೋಪಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಾರ್ತಾ ಭಾರತಿ 25 Feb 2026 7:24 pm

Viral Video: ವಿದೇಶಿ ಪ್ರಜೆಗೆ ಸೆಕ್ಸ್‌ ಆಫರ್ ಮಾಡಿದ ಆಟೋ ಚಾಲಕ: ಇಲ್ಲಿದೆ ವೈರಲ್ ವಿಡಿಯೋ

Viral Video: ದೆಹಲಿಯ ಆಟೋ ಚಾಲಕನೊಬ್ಬ ವಿದೇಶಿ ಪ್ರಜೆಗೆ ಸೆಕ್ಸಿ ಆಫರ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ಚಾಲಕ ಈ ಭಾಗದಲ್ಲಿ ಒಳ್ಳೆಯ ಹುಡುಗಿಯರು ಸಿಗುತ್ತಾರೆ ಟ್ರೈ ಮಾಡುತ್ತೀರಾ ಅಂತ ಕೇಳಿರುವುದು ಇದೆ. ಈ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಣ್ಣ ವಯಸ್ಸಿನ ಹುಡುಗಿಯರು ಸಿಗುತ್ತಾರೆ ಒಮ್ಮೆ

ಒನ್ ಇ೦ಡಿಯ 25 Feb 2026 7:24 pm

2028 ಕ್ಕೆ ಎಚ್‌ಡಿಕೆ ಮೈತ್ರಿ ಸಿಎಂ ; ನಿಖಿಲ್‌ ಕುಮಾರಸ್ವಾಮಿ ವಿಶ್ವಾಸ

ಬನ್ನೂರಿನಲ್ಲಿ ‘ಜನರೊಂದಿಗೆ ಜನತಾದಳ’ ಜೆಡಿಎಸ್‌ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, 2028 ಕ್ಕೆ ರಾಜ್ಯದಲ್ಲಿ ಮೈತ್ರಿಕೂಟದಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯ ಕರ್ನಾಟಕ 25 Feb 2026 7:21 pm