MM Naravane: ಭಾರತ - ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದ ಬಗ್ಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರು ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ನಾವು ಬಿಡುಗಡೆಯೇ ಮಾಡಿಲ್ಲ ಎಂದು ಪೆಂಗ್ವಿನ್ ಸಂಸ್ಥೆ ಹೇಳಿತ್ತು. ಇದೀಗ ಈ ವಿಷಯದ ಬಗ್ಗೆ
DCM ಅಜಿತ್ ಪವಾರ್ ಸಾವು ಅಪಘಾತವಲ್ಲ: ಪ್ರಮುಖ 5 ಪ್ರಶ್ನೆಗಳನ್ನು ಮುಂದಿಟ್ಟ ರೋಹಿತ್ ಪವಾರ್! ಏನವು?
ಅಜಿತ್ ಪವಾರ್ ಅವರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಅಪಘಾತವೇ ಅಥವಾ ಪಿತೂರಿಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಅಗತ್ಯ ಇದ್ದರೆ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳ ನೆರವು ಪಡೆದು ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಫೆಬ್ರವರಿ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 10) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಕಲಬುರಗಿ | ಸಾರ್ವತ್ರಿಕ ಮುಷ್ಕರಕ್ಕೆ ಎಡಪಕ್ಷಗಳಿಂದ ಬೆಂಬಲ
ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಫೆ.12 ರಂದು ದೇಶದಾದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಡಪಕ್ಷಗಳು ಸಂಪೂರ್ಣ ಬೆಂಬಲ ನೀಡುತ್ತವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಸಿ) ಪಕ್ಷಗಳ ಕಲಬುರಗಿ ಘಟಕಗಳು ಪ್ರಕಟಣೆಯಲ್ಲಿ ತಿಳಿಸಿವೆ. ಕೇಂದ್ರ ಸರ್ಕಾರವು ದೇಶದ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಎಡಪಕ್ಷಗಳು ಆಗ್ರಹಿಸಿವೆ. ಇಂದಿನ ದಿನಗಳಲ್ಲಿ ಅನೇಕ ಇಲಾಖೆಗಳ ಉದ್ಯೋಗಿಗಳು ಖಾಯಂ ನೌಕರರಲ್ಲದೇ ಹೊರಗುತ್ತಿಗೆ ಹಾಗೂ ಗುತ್ತಿಗೆ ವ್ಯವಸ್ಥೆಯಲ್ಲಿ ಅತೀ ಕಡಿಮೆ ವೇತನಕ್ಕೆ ದುಡಿಯುವಂತಾಗಿದೆ. ಕಾರ್ಮಿಕರ ಶ್ರಮವನ್ನು ಬಿಟ್ಟಿಯಾಗಿಸುವಂತಹ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಕಾರ್ಮಿಕ ವಿರೋಧಿ ಕಾಯ್ದೆಗಳ ಮೂಲಕ ಕಾರ್ಪೊರೇಟ್ಗಳ ಸಂಪತ್ತನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ತೀವ್ರ ಬಡತನ, ನಿರುದ್ಯೋಗ ಹಾಗೂ ಅನಾರೋಗ್ಯ ಹೆಚ್ಚುತ್ತಿದೆ. ಜೊತೆಗೆ ವಿದ್ಯುತ್ ಮಸೂದೆ ಹಾಗೂ ಶಾಂತಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಎಡಪಕ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಮೂಲಕ 100 ದಿನಗಳ ಉದ್ಯೋಗ ಖಾತ್ರಿ ದೊರಕುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮನರೇಗಾ ಯೋಜನೆಗೆ ನೀಡುತ್ತಿದ್ದ ಬಜೆಟ್ನಲ್ಲಿ ತೀವ್ರ ಕಡಿತ ಮಾಡಿದ್ದು, ಇದೀಗ ಕಾಯ್ದೆಯನ್ನೇ ದುರ್ಬಲಗೊಳಿಸಿ ಅದರ ಹೆಸರನ್ನು ಬದಲಿಸಿ ವಿಬಿ ಗ್ರಾಮ್ಜಿ ಕಾಯ್ದೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿಯಲಾಗಿದೆ ಎಂದು ಆರೋಪಿಸಲಾಗಿದೆ. ಸಿಪಿಎಂ ಕಾರ್ಯದರ್ಶಿ ಕೆ.ನೀಲಾ, ಸಿಪಿಐ ಕಾರ್ಯದರ್ಶಿ ಮಹೇಶ ರಾಠೋಡ, ಹಾಗೂ ಎಸ್ಯುಸಿಐ (ಸಿ) ಪಕ್ಷದ ಕಾರ್ಯದರ್ಶಿ ಕೆ.ಆರ್. ವೀರಭದ್ರಪ್ಪ ಅವರು ಮುಷ್ಕರಕ್ಕೆ ಬೆಂಬಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.12: ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ
ಮಂಗಳೂರು, ಫೆ.10: ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಫೆ.12ರ ಅಖಿಲ ಭಾರತ ಸಾರ್ವತ್ರಿಕ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಮಂಗಳವಾರ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ಸಂಹಿತೆ ಜಾರಿಗೊಳಿಸಿ ಕಾರ್ಮಿಕರ ಕಾನೂನುಗಳನ್ನು ಶೈತ್ಯಾಗಾರದಲ್ಲಿ ಇಟ್ಟಿದೆ. ಕಾರ್ಮಿಕರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ ದೇಶದ ದುಡಿಯುವ ಜನರು ಒಂದಾಗಿ ಕಾರ್ಮಿಕ ಸಂಹಿತೆಯನ್ನು ವಿರೋಧಿಸಬೇಕಿದೆ ಎಂದರು. ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಖಜಾಂಚಿ ಶಮೀರ್ ಬೋಳಿಯಾರ್, ಪ್ರಮುಖರಾದ ಮಜೀದ್ ಉಳ್ಳಾಲಬೈಲ್, ಮೋಹನ್ ಕುಂಪಲ, ಅನಿಲ್, ಪದ್ಮನಾಭ, ಸಿದ್ದೀಕ್ ಬೆಂಗ್ರೆ, ಸಿರಾಜ್, ಶರಣಪ್ಪ, ಬಶೀರ್ ಪಾವೂರು ಪಾಲ್ಗೊಂಡಿದ್ದರು. *ಫೆ.12: ಹಳೆ ಬಂದರು ಸಗಟು ಮಾರುಕಟ್ಟೆ ಬಂದ್ ಅಖಿಲ ಭಾರತ ಕಾರ್ಮಿಕರ ಮುಷ್ಕರದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಫೇ.12ರಂದು ಮಾರುಕಟ್ಟೆಯಲ್ಲಿ ಯಾವುದೇ ಲೋಡಿಂಗ್, ಆನ್ಲೋಡಿಂಗ್ ಕೆಲಸಗಳು ನಡೆಯದೆ ಸಗಟು ಮಾರುಕಟ್ಟೆ ವ್ಯವಹಾರದಲ್ಲಿ ವ್ಯತ್ಯಯ ಆಗಲಿದೆ. ಲಾರಿ, ಟೆಂಪೊ ಮಾಲಕರು ಬಂದರಿನ ವರ್ತಕರು, ಗ್ರಾಹಕರು ಸಹಕರಿಸುವಂತೆ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮನವಿ ಮಾಡಿದ್ದಾರೆ.
Kalaburagi | ಸಾರ್ವತ್ರಿಕ ಮುಷ್ಕರಕ್ಕೆ ಜನವಾದಿ ಸಂಘಟನೆಯಿಂದ ಬೆಂಬಲ
ಕಲಬುರಗಿ: ಫೆ.12 ರಂದು ನಡೆಸಲು ಉದ್ದೇಶಿಸಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲಿಸಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ತಿಳಿಸಿದ್ದಾರೆ. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ನಾಲ್ಕು ಲೇಬರ್ ಕೋಡ್, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆದು ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂಬಂತೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ರೈತರ, ಕಾರ್ಮಿಕರ ಹಿತದೃಷ್ಟಿಯಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ : ಅರ್ಜಿ ಆಹ್ವಾನ
ಮಂಗಳೂರು,ಫೆ.10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿರುವ ತಾಲೂಕು ಮಟ್ಟದ ಪತ್ರಕರ್ತರು ವೃತ್ತಿನಿರತ ಚಟುವಟಿಕೆಗಳ ಸಂಬಂಧ ಆಯಾ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮಿಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟ್ಮೆಂಟ್ ಲಗತ್ತಿಸಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್ಲೈನ್ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ರಾಜ್ಯದ ಎಲ್ಲಾ ತಾಲೂಕುಗಳ ಅರ್ಹ ಪತ್ರಕರ್ತರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆ.12ರ ಮುಷ್ಕರಕ್ಕೆ ಸಿಪಿಎಂ ಬೆಂಬಲ
ಬೆಂಗಳೂರು : ದೇಶದ ದುಡಿಯುವ ಜನರ ಬದುಕನ್ನು ಅಸಹನೀಯಗೊಳಿಸುತ್ತಿರುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಕಾರ್ಮಿಕ, ರೈತ, ಕೂಲಿಕಾರ ಮತ್ತು ಸಮಾಜದ ಇತರ ಎಲ್ಲ ವಿಭಾಗಗಳನ್ನು ಪ್ರತಿನಿಧಿಸುವ ಸಂಘಟನೆಗಳು ಸೇರಿ ಕರೆ ನೀಡಿದ ಫೆ.12ರ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಎಂ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪಕ್ಷದ ಕಾರ್ಯದರ್ಶಿ ಕೆ.ಪ್ರಕಾಶ್ ತಿಳಿಸಿದ್ದಾರೆ. ಕಾರ್ಮಿಕರು ಹೋರಾಟಗಳಿಂದ ಪಡೆದ ಹಕ್ಕು ಮತ್ತು ಸವಲತ್ತುಗಳನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿರುವ ಕೇಂದ್ರ ಸರಕಾರ ಮತ್ತೊಂದು ಕಡೆ ಇಡೀ ದೇಶವನ್ನು ಸಾಮ್ರಾಜ್ಯಶಾಹಿಗಳ ಕೈಗೆ ಬೇಷರತ್ತಾಗಿ ಒಪ್ಪಿಸುತ್ತಿದೆ. ಸಾಮ್ರಾಜ್ಯಶಾಹಿ ಯುದ್ಧ ದಾಹಿ ಅಮೆರಿಕಾದ ಎದುರು ಮಂಡಿಯೂರಿರುವ ಕೇಂದ್ರ ಸರಕಾರ ದೇಶದೊಳಗೆ ಮತನಿರಪೇಕ್ಷ ತತ್ವಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕೋಮುದ್ವೇಷದ ತಾಣವಾಗಿಸುತ್ತಿದೆ ಎಂದಿದ್ದಾರೆ. ದೊಡ್ಡ ಬಂಡವಾಳಿಗರ ಮತ್ತು ವಿದೇಶಿ ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ದೇಶದ ದುಡಿಯುವ ವರ್ಗದ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿಕೊಡುತ್ತಿದೆ. ಕಾರ್ಮಿಕರ ಮೂಲಭೂತ ಹಕ್ಕಾಗಿರುವ ಸಂಘ ಕಟ್ಟಿಕೊಳ್ಳುವ ಹಕ್ಕನ್ನು ಮೊಟಕುಗೊಳಿಸುವ, ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳುವ ಮತ್ತು ಕೆಲಸದ ಭದ್ರತೆಯನ್ನು ನಾಮಾವಶೇಷ ಮಾಡುವ ಸಂಹಿತೆಗಳು ದೇಶದ ದುಡಿಯುವ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಜೊತೆಗೆ ಅವರ ಮೇಲೆ ಅವಲಂಬಿತರಾಗಿರುವ ಎಲ್ಲರನ್ನೂ ನಿರ್ದಯವಾಗಿ ಬೀದಿಗೆ ತಳ್ಳುವ ಪ್ರಯತ್ನವಿದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಕಾರ್ಮಿಕರ ಹಕ್ಕಿನ ಮೇಲಿನ ದಾಳಿ ಮಾತ್ರವಾಗಿರದೇ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಛಿದ್ರಗೊಳಿಸುವ ಪ್ರಯತ್ನವಾಗಿದ್ದು ಇದನ್ನು ಹಿಮ್ಮೆಟ್ಟಿಸದಿದ್ದಲ್ಲಿ ಇಡೀ ದೇಶದ ಜನರ ಬದುಕು ದುರ್ಭರವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ, ಸಾರ್ವಭೌಮ, ಮತನಿರಪೇಕ್ಷ ಭಾರತದ ದುಡಿಯುವ ಜನರ ಮತ್ತು ಆ ಮೂಲಕ ಇಡೀ ದೇಶದ ಜನರ ಬದುಕುವ ಹಕ್ಕುಗಳ ರಕ್ಷಣೆಗಾಗಿ ಫೆ.12ರ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ರಾಜ್ಯದ ಎಲ್ಲ ವಿಭಾಗದ ಜನರು ಸ್ವಯಂ ಪ್ರೇರಿತರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಾಶ್ ಕರೆ ನೀಡಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು: ಕೆ.ಟಿ. ತಿಪ್ಪೆಸ್ವಾಮಿ
ಮಕ್ಕಳ ರಕ್ಷಣಾ ನೀತಿ ಮತ್ತು ಹಕ್ಕುಗಳ ರಕ್ಷಣಾ ಕಾಯ್ದೆ ಕುರಿತು ಅರಿವು ಕಾರ್ಯಾಗಾರ
Kalaburagi | ಫೆ.26, 27ರಂದು ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ
ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಇದೇ ಫೆಬ್ರವರಿ 26ರ ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 27ರ ಬೆಳಿಗ್ಗೆ 6 ಗಂಟೆಯವರೆಗೆ ನಿರಂತರ 24 ಗಂಟೆಗಳ ಕಾಲ ನಡೆಸಲಾಗುತ್ತದೆ ಎಂದು ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತರರಾದ ಸುರೇಶ್ ಎಲ್. ಶರ್ಮಾ ತಿಳಿಸಿದ್ದಾರೆ. ಈ ಕಾರ್ಯಕ್ಕಾಗಿ ಕಲಬುರಗಿ ವೃತ್ತ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಲ್ಲಿ 194 ಗಣತಿ ಕೇಂದ್ರಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 266 ಗಣತಿ ಕೇಂದ್ರಗಳು ಸೇರಿ ಒಟ್ಟು 460 ಗಣತಿ ಕೇಂದ್ರಗಳನ್ನು ಗುರುತಿಸಲಾಗಿದೆ. ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಗಣತಿಯ ಉದ್ದೇಶಗಳು : ಪ್ರತಿ ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಅಳೆಯುವುದು, ರಸ್ತೆ ದುರಸ್ತಿ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯಗಳಿಗೆ ಮಾಹಿತಿ ಸಂಗ್ರಹ, ಸಂಚಾರದ ಪ್ರಮಾಣ ಆಧರಿಸಿ ಅಗಲಿಕರಣ ಯೋಜನೆ ರೂಪಿಸುವುದು, ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ನೆರವು, ಭವಿಷ್ಯದ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಆಧಾರ ಮಾಹಿತಿ ಒದಗಿಸುವುದು. ರಸ್ತೆ ಸಂಚಾರ ಗಣತಿ ವರದಿ ಆಧರಿಸಿ ಸರ್ಕಾರ ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
Kalaburagi | ಟಿಕೆಟ್ ರಹಿತ ಪ್ರಯಾಣ : ಪ್ರಯಾಣಿಕರಿಂದ 12,80,323 ರೂ. ದಂಡ ವಸೂಲಿ
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ತನ್ನ ತನಿಖಾ ತಂಡಗಳ ಮೂಲಕ 2025ರ ಆಗಸ್ಟ್ನಿಂದ ಡಿಸೆಂಬರ್ ತಿಂಗಳವರೆಗೆ ವ್ಯಾಪಕ ತಪಾಸಣಾ ಕಾರ್ಯಾಚರಣೆ ನಡೆಸಿ, ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸಿದ ಒಟ್ಟು 89,951 ವಾಹನಗಳನ್ನು ಪರಿಶೀಲಿಸಲಾಗಿದ್ದು, 7,634 ಪ್ರಕರಣಗಳು ಪತ್ತೆಯಾಗಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದ 5,920 ಪ್ರಯಾಣಿಕರಿಂದ 12,80,323 ರೂ. ಮೊತ್ತವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ. ಇದಲ್ಲದೆ, ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ 2,58,569 ರೂ. ಮೊತ್ತವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸಾರ್ವಜನಿಕರು ಬಸ್ನಲ್ಲಿ ಪ್ರಯಾಣಿಸುವಾಗ ತಪ್ಪದೇ ಟಿಕೆಟ್ ಅಥವಾ ಪಾಸ್ ಪಡೆದು ಪ್ರಯಾಣಿಸಬೇಕೆಂದು ಕಲಬುರಗಿ ಕೆಕೆಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಬಂಡೀಪುರ, ನಾಗರಹೊಳೆ ಪ್ರವಾಸಿಗರಿಗೆ 'Safari' ನಿರ್ಬಂಧ : ರಾಜ್ಯ ಅರಣ್ಯ ಇಲಾಖೆಗೆ 6 ಪ್ರಶ್ನೆಗಳು
Bandipur and Nagarahole Safari ban : ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ಸಫಾರಿ ನಿರ್ಬಂಧವನ್ನು ಹೇರಲಾಗಿದೆ. ಇಡೀ ದೇಶದಲ್ಲಿ ಅತ್ಯಂತ ಜನಪ್ರಿಯ ಪ್ರವಾಸೀ ತಾಣ ಇದಾಗಿದ್ದು, ಇಲಾಖೆಗೆ ಭರ್ಜರಿ ಆದಾಯವನ್ನು ತಂದು ಕೊಡುತ್ತಿತ್ತು. ಸಫಾರಿ ನಿರ್ಬಂಧದಿಂದ, ಪ್ರವಾಸೋದ್ಯಮಕ್ಕೆ ಭಾರೀ ಏಟು ಬಿದ್ದಿದೆ. ಈ ಸಂಬಂಧ ಆರು ಪ್ರಶ್ನೆಗಳು.
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಸಭೆ
ಮಂಗಳೂರು, ಫೆ.10: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರ ನೇತೃತ್ವದಲ್ಲಿ ಮಂಗಳೂರಿನ ಎಸ್ಡಿಪಿಐ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಿಳೆಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನ ಕೋಗಿಲು ಬಡಾವಣೆ ಹಾಗೂ ತನಿ ಸಾಂದ್ರದಲ್ಲಿ ಸರಕಾರ ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಿದ ಬಡ ಜನತೆಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕು. ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆಯು ಕಠಿಣವಾಗಿದೆ. ಉದ್ದೇಶಪೂರ್ವಕವಾಗಿ ಮಾತದಾನದ ಹಕ್ಕನ್ನು ಕಸಿಯುವ ಷಡ್ಯಂತ್ರವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದು ಜನತೆ ಭೀತಿಗೊಳಗಾಗಿದ್ದಾರೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಜರುಗಿಸಬೇಕು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಕೊರತೆಯನ್ನು ನೀಗಿಸಬೇಕು ಎಂದು ಸಭೆ ಒತ್ತಾಯಿಸಿತು. ವೀಕ್ಷಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ಮತ್ತು ವಿಶೇಷ ಆಹ್ವಾನಿತರಾಗಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯ ಕಣ್ಣೂರು ಭಾಗವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಝುಲೈಖಾ, ರಾಜ್ಯ ಸಮಿತಿ ಸದಸ್ಯರಾದ ರಮ್ಲತ್, ಜಬೀನಾ ಮೈಸೂರು, ನಾಝಿಯಾ ಉಡುಪಿ ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿದರು. ರಾಜ್ಯ ಕೋಶಾಧಿಕಾರಿ ಆಯಿಶಾ ಬೆಂಗಳೂರು ವಂದಿಸಿದರು.
ಹಾಸ್ಟೆಲ್ ಕಟ್ಟಡಗಳಿಗೆ ತ್ವರಿತ ಜಮೀನು ಮಂಜೂರು: ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ದ.ಕ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಬಡವರ ಬದುಕಿನೊಂದಿಗೆ ಸರಕಾರದ ಚೆಲ್ಲಾಟ ಬೇಡ: ಸುಶೀಲ ನಾಡ
ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಗೆ ಆಗ್ರಹಿಸಿ ಜಾಥ
ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ: ಸಿದ್ದರಾಮಯ್ಯ ಕ್ಷಮೆ ಕೇಳುವಂತೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹ
ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ತಿಮ್ಮಾಪುರ ಇಲಾಖೆಯಲ್ಲಿ 25 ಲಕ್ಷ ಕರೆನ್ಸಿ ಸಿಕ್ಕಿದೆ. ಎಲ್ಲೇ ಹೋದರೂ ಲಕ್ಷ ಲಕ್ಷ ಕರೆನ್ಸಿ ಸಿಗುತ್ತಿದೆ. ಅದಕ್ಕಾಗಿಯೇ ಸರಕಾರ, ಕರೆನ್ಸಿ ಮೂಲಕ ಭ್ರಷ್ಟಾಚಾರದ ಹಣ ಕೊಡುವಂತಿಲ್ಲ ಎಂಬ ತೀರ್ಮಾನಕ್ಕೆ ಬಂದ ಹಾಗಿದೆ. ಇನ್ನು ಮೇಲೆ ಬಂಗಾರದ ಮೂಲಕ ಭ್ರಷ್ಟಾಚಾರ ಎಂದು ನಿರ್ಧರಿಸಿದಂತಿದೆ. ಎಲ್ಲೆಡೆ ಬಂಗಾರ ಸಿಗುತ್ತಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದರು.
ರಾಜ್ಯದಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು, ದೇಶದ ಪ್ರಧಾನಿ ಮೋದಿಯವರ ವಿರುದ್ಧ ‘ಹೇಡಿ’ ಎಂಬ ಪದ ಬಳಸಿದ್ದು ಸರಿಯಲ್ಲ. ತಕ್ಷಣವೇ ಸಿಎಂ, ಮೋದಿಯವರ ಕ್ಷಮೆ ಕೇಳಬೇಕು’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಎಂ, ರಾಹುಲ್ ಗಾಂಧಿ ಓಲೈಕೆಗಾಗಿ, ತಾಳ್ಮೆ ಕಳೆದುಕೊಂಡು ಹೀಗೆ ಮಾತನಾಡುತ್ತಿದ್ದಾರಾ?. ಸಿಎಂ ಪದವಿಯಲ್ಲಿ ಇನ್ನೊಂದಷ್ಟು ದಿನ ಉಳಿಸಿಕೊಳ್ಳಲು ಹೀಗೆ ಮಾತಾಡಿದ್ದಾರಾ? ಎಂಬ ಬಗ್ಗೆ ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು. ಇಲಿ ಹಿಡಿಯುವ ಕೆಲಸ: ಅಧಿವೇಶನದಲ್ಲಿ ಇಷ್ಟು ದಿನ ನಡೆದಿದ್ದು, ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದ್ದಾರೆ. ವಿಬಿ-ಜಿ ರಾಮ್ ಜಿ ಕಾಯ್ದೆ ವಿರೋಧಿಸುವ ಕೆಲಸ ಮಾತ್ರ ಮಾಡಿದ್ದಾರೆ. ಜನರ ಸಮಸ್ಯೆ ಚರ್ಚೆ ಆಗಿಲ್ಲ. ಕಾಯ್ದೆ ಮೊದಲೇ ಅನುಮೋದನೆ ಪಡೆದ ಕಾರಣ ಇವರ ಇಷ್ಟು ದಿನದ ಶ್ರಮ ಕಸದ ಬುಟ್ಟಿಗೆ ಹೋಯಿತಲ್ಲವೇ? ಎಂದು ಕೇಳಿದರು. 2.80 ಲಕ್ಷ ಹುದ್ದೆಗಳು ಖಾಲಿ: ರಾಜ್ಯದಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಪರಿಶಿಷ್ಟರ ಒಳ ಮೀಸಲಾತಿ ಕಾಯ್ದೆ ಇನ್ನೂ ಊರ್ಜಿತ ಆಗಿಲ್ಲ. ನೀವು ಮಾಡಿದ್ದೇನು? ಎಂದು ಪ್ರಶ್ನಿಸಿದ ಅವರು, ಎಸ್ಸಿ-ಎಸ್ಟಿ ವರ್ಗದವರಿಗೆ ಕ್ರಮವಾಗಿ ಶೇ.17ರಷ್ಟು ಮತ್ತು ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಕಾನೂನು ಜಾರಿ ಮಾಡಿದ್ದನ್ನು ಏಕೆ ಊರ್ಜಿತ ಮಾಡಲಿಲ್ಲ ಎಂದು ಕೇಳಿದರು.
ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಅಹಿಂದ ಸಂಘಟನೆ ಆಗ್ರಹ
ಬೆಂಗಳೂರು : ‘ದಲಿತರು, ಶೋಷಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹಿಸಿದೆ. ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಸಂಘಟನೆ ಅಧ್ಯಕ್ಷ ಮೋಹನ್ ಕುಮಾರ್, ‘ಪಕ್ಷ ನಿಷ್ಠೆ, ಮೌಲ್ಯಾಧಾರಿತ ರಾಜಕಾರಣ ಹಾಗೂ ಸ್ವಚ್ಛ ರಾಜಕೀಯಕ್ಕೆ ಹೆಸರಾದ ಹರಿಪ್ರಸಾದ್ ಕೇವಲ ರಾಜಕೀಯ ನಾಯಕನಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ. ಸಾಮಾಜಿಕ, ಆರ್ಥಿಕ ಸಮೀಕ್ಷೆಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರ ನಿಲುವು ತಳೆದಿರುವವರು ಎಂದು ಉಲ್ಲೇಖಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರ ಬಿಂಧುವಾಗಿಸಿಕೊಂಡು ಅವರು ನಡೆಸಿರುವ ಹೋರಾಟ ಅಹಿಂದ ಚಳವಳಿಗೆ ಸ್ಪಷ್ಟ ದಿಕ್ಕು ನೀಡಿದೆ. ಹಿಂದುಳಿದ ವರ್ಗದ ಸಿಎಂ ಆಗಿರುವ ಸಿದ್ದರಾಮಯ್ಯರ ಆಡಳಿತಕ್ಕೆ ರಾಜಕೀಯ ಮತ್ತು ನೈತಿಕವಾಗಿ ಬಲ ನೀಡುತ್ತಾ, ಪಕ್ಷದ ಒಳಗೂ-ಹೊರಗೂ ಅಹಿಂದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರು. ಹೀಗಾಗಿ ಅವರು ಸಂಪುಟದಲ್ಲಿದ್ದರೆ ಸರಕಾರದ ವಿಶ್ವಾಸಾರ್ಹತೆ ಹೆಚ್ಚಿಸುವುದರ ಜೊತೆಗೆ, ಸ್ವಚ್ಛ ಆಡಳಿತಕ್ಕೆ ಹೆಸರು ತರಲಿದೆ ಎಂದು ಅವರು ತಿಳಿಸಿದ್ದಾರೆ. ಬಿ.ಕೆ.ಹರಿಪ್ರಸಾದ್ ಸಂಪುಟ ಸೇರಿದಲ್ಲಿ ಅದು ಸರಕಾರಕ್ಕೆ ಮಾತ್ರವಲ್ಲ, ಅಹಿಂದ ಸಂಘಟನೆಗಳಿಗೆ ಹೊಸ ಶಕ್ತಿ ತುಂಬಿದಂತೆ ಆಗಲಿದೆ. ಅಹಿಂದ ಸಮುದಾಯದ ಆಶಯಗಳು ಜನರಲ್ಲಿ ವಿಶ್ವಾಸ ಮೂಡಿಸಲಿವೆ. ಆದುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ವಿಳಂಬವಿಲ್ಲದೆ ಹರಿಪ್ರಸಾದ್ರನ್ನು ಸಂಪುಟಕ್ಕೆ ಸೇರಿಸಿಕೊಂಡು, ಡಿಸಿಎಂ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ | ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ನಾಯಕತ್ವ ಬದಲಾವಣೆ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು ಬಯಸಿದರೆ ಮಾತ್ರ ಹೊಸದಿಲ್ಲಿಗೆ ತೆರಳುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿದ ಸಭೆಯೊಂದು ದಿಲ್ಲಿಯಲ್ಲಿ ನಡೆಯುತ್ತಿದ್ದು, ಆ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅವರು ಬಜೆಟ್ ಸಿದ್ದತೆ ಸಂಬಂಧದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು. ಎಸ್ಐಆರ್: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್) ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಯಾವ ಸಂದರ್ಭಕ್ಕೆ ನೀಡಿದೆ ಎಂಬುದು ನನಗೆ ಗೊತ್ತಿಲ್ಲ. ಈ ಕುರಿತು ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅವರು ತಿಳಿಸಿದರು.
ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪ: 24 ಮಂದಿ ಆರೋಪಿಗಳ ಬಂಧನ, 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ
ಮಾದಕ ದ್ರವ್ಯಗಳ ಅಕ್ರಮ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 24 ಮಂದಿ ಆರೋಪಿಗಳ ಬಂಧನವಾಗಿದೆ. ಬಧಂಇ 2.08 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ತಮ್ಮ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಅಲ್ಲದೆ, ಡ್ರಗ್ಸ್ ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪೋಷಕರಿಗೆ ಮನವಿ ಮಾಡಿದ್ದಾರೆ.
ನಕಲಿ ಕರೆ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದ HDFC ಬ್ಯಾಂಕ್; ಇಮೇಲ್ ನಲ್ಲಿ ಏನಿದೆ?
ಗ್ರಾಹಕರಿಗೆ ಇಮೇಲ್ ಸಂದೇಶ ಕಳುಹಿಸಿರುವ HDFC ಹೊಸ ವಂಚನೆ ಜಾಲವೊಂದರ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದೆ. HDFC ಬ್ಯಾಂಕ್ ತನ್ನ ಗ್ರಾಹಕರಿಗೆ ನಕಲಿ ಕರೆಯ ಬಗ್ಗೆ ಎಚ್ಚರವಿರುವಂತೆ ಸಂದೇಶ ಕಳುಹಿಸಿದೆ. ನಕಲಿ ಕರೆಗೆ ಬಲಿ ಬೀಳದೆ ನಿಮ್ಮ ಕಾರ್ಡ್ ವಿವರಗಳನ್ನು ಸುರಕ್ಷಿತವಾಗಿಡಿ ಎಂದು ಸಂಸ್ಥೆ ಹೇಳಿದೆ. ಗ್ರಾಹಕರಿಗೆ ಇಮೇಲ್ ಸಂದೇಶ ಕಳುಹಿಸಿರುವ HDFC ಹೊಸ ವಂಚನೆ ಜಾಲವೊಂದರ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದೆ. ವಂಚಕರು ಗ್ರಾಹಕರಿಗೆ ನಕಲಿ IVR (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಕರೆಗಳು ಸ್ವಯಂಚಾಲಿತ ದೂರವಾಣಿ ವ್ಯವಸ್ಥೆಗಳಾಗಿದ್ದು, ಅವು ಕರೆ ಮಾಡುವವರನ್ನು ರೆಕಾರ್ಡ್ ಮಾಡಿದ ಸಂದೇಶದೊಂದಿಗೆ ಸ್ವಾಗತಿಸಿ ಮೆನುಗಳಲ್ಲಿ ನ್ಯಾವಿಗೇಟ್ ಮಾಡಲು ಕೀಪ್ಯಾಡ್ ಅಥವಾ ಧ್ವನಿ ಆಜ್ಞೆಗಳನ್ನು ಬಳಸಲು ಪ್ರೇರೇಪಿಸುತ್ತವೆ) ಕರೆಗಳನ್ನು ಮಾಡುತ್ತಿರುವ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದೆ. “HDFC ಬ್ಯಾಂಕ್ ನಿಂದ ಕರೆ ಮಾಡಿದಂತೆ ನಕಲಿ ಕರೆ ಮಾಡಿ ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವಂತೆ ಮಾಡುತ್ತದೆ. ಅಥವಾ ಕರೆಯ ಸಂದರ್ಭದಲ್ಲಿ ಫೋನ್ ಬ್ಯಾಂಕಿಂಗ್ ಪಾಸ್ವರ್ಡ್ ಹಾಕುವಂತೆ ಮಾಡುತ್ತಿದ್ದಾರೆ” ಎಂದು ಸಂಸ್ಥೆ ಎಚ್ಚರಿಸಿದೆ. ಇಂತಹ ಕರೆಗಳಿಗೆ ಪ್ರತಿಕ್ರಿಯೆ ತೋರಿಸಿದರೆ ಅನಧಿಕೃತ ವ್ಯವಹಾರಗಳು ನಡೆಯಬಹುದು, ಹಣ ಕಳೆದುಕೊಳ್ಳಬಹುದು ಅಥವಾ ನಿಮ್ಮ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳಬಹುದು. ಈ ಕರೆಗಳು “ದೊಡ್ಡ ಹಣದ ವ್ಯವಹಾರ”ವನ್ನು ಉಲ್ಲೇಖಿಸುತ್ತವೆ ಮತ್ತು ನೀವು ಅದನ್ನು ದೃಢೀಕರಿಸುವುದು ಅಥವಾ ರದ್ದು ಮಾಡುವಂತೆ ಹೇಳುತ್ತವೆ. ಇಂತಹ ವಂಚನೆಯಿಂದ ಸ್ವತಃ ರಕ್ಷಿಸಿಕೊಳ್ಳಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ ಎಂದು ಬ್ಯಾಂಕ್ ಹೇಳಿದೆ: ► ಕರೆಯನ್ನು ಪರಿಶೀಲಿಸಿ : ಬಂದ ಕರೆ ಅಧಿಕೃತವೇ ಎಂದು ಪರಿಶೀಲಿಸಿ ದೃಢೀಕರಿಸಿ ಮತ್ತು ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ► ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಪರೀಕ್ಷಿಸಿ : ಯಾವುದೇ ಅನಧಿಕೃತ ಚಟುವಟಿಕೆ ಆಗದಿರುವಂತೆ ನಿಯಮಿತವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ವಿಶ್ಲೇಷಿಸಿ. ► ನಿಮ್ಮ ಫೋನ್ ಗೆ ಹೆಚ್ಚುವರಿ ಭದ್ರತೆ ಒದಗಿಸಲು ಎರಡು-ಹಂತದ ದೃಢೀಕರಣವನ್ನು ನೀಡಿ. ► ಧ್ವನಿಯ ಉಚ್ಛಾರ ಗಮನಿಸಿ : ವಿದೇಶಿ ಉಚ್ಛಾರಗಳನ್ನು ಗಮನಿಸಿ. ಅದು ವಂಚನೆಯ ಚಿಹ್ನೆಯಾಗಿರಬಹುದು. ► ಸಂಪರ್ಕವನ್ನು ನವೀಕರಿಸಿ : ಬ್ಯಾಂಕಿಂಗ್ ವ್ಯವಹಾರದ ಅಲರ್ಟ್ಗಳನ್ನು ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆ ನವೀಕರಿಸಿರುವುದನ್ನು ಖಚಿತಪಡಿಸಿ. ► ವಂಚನೆಯ ಪ್ರಯತ್ನಗಳನ್ನು ವರದಿ ಮಾಡಿ: ಶಂಕಿತ ನಕಲಿ ಕರೆ, ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಸಂದೇಶ ಬಂದರೆ ವರದಿ ಮಾಡಿ. ಸಂಚಾರ್ ಸಾಥಿ ಆ್ಯಪ್ https://sancharsaathi.gov.in/ (Chakshu portal) ಮೂಲಕವೂ ವರದಿ ಮಾಡಬಹುದು. ಸಂತ್ರಸ್ತರಾಗಿದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಕರೆ ಮಾಡಿ ಅಥವಾ https://cybercrime.gov.in/ ಗೆ ವರದಿ ಮಾಡಿ ಅಥವಾ 1930 ಗೆ ಕರೆ ಮಾಡಿ.
Kalaburagi | ಹೊಲದಲ್ಲಿ ಕುರಿ ಮೇಯಿಸಿದ ವಿಚಾರಕ್ಕೆ ಮಾರಕಾಸ್ತ್ರದಿಂದ ದಾಳಿ: ಕುರಿಗಾಯಿ ಗಂಭೀರ ಗಾಯ
ಕಲಬುರಗಿ: ಹೊಲದ ಮಾಲೀಕನೋರ್ವ ಮಾರಕಾಸ್ತ್ರದಿಂದ ಕುರಿಗಾಯಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ. ದಾಳಿಯಲ್ಲಿ ಕುರಿಗಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯ ಮಾನೆದ ದೊಡ್ಡಿ ಗ್ರಾಮದ ಪಾಂಡು ಅರ್ಜುನ್ ಸುಳ್ಳೆ (38) ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಖಜೂರಿ ಗ್ರಾಮದ ಸುಧೀರ್ ಪ್ರಕಾಶ್ ವಾರಿಕ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವುದಾಗಿ ಗಾಯಾಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಾಂಡು ಅರ್ಜುನ್ ಸುಳ್ಳೆ ಅವರು ಕುರಿಗಳನ್ನು ಮೇಯಿಸುತ್ತಾ ಖಜೂರಿ ಗ್ರಾಮದ ತೊಗರಿ ಹೊಲಕ್ಕೆ ಕುರಿಗಳನ್ನು ಬಿಟ್ಟಿದ್ದ ವೇಳೆ, ಸ್ಥಳಕ್ಕೆ ಬಂದ ಸುಧೀರ್ ವಾರಿಕ್ ನಿಂದಿಸುತ್ತಾ ಧಿಡೀರ್ ಹರಿತವಾದ ಆಯುಧದಿಂದ ಕುತ್ತಿಗೆಗೆ ಬೀಸಿದನು. ಪಾಂಡು ತಪ್ಪಿಸಿಕೊಂಡ ಕಾರಣ ಕುತ್ತಿಗೆಗೆ ಬಾರದಿದ್ದರೂ, ಭುಜ ಭಾಗದಲ್ಲಿ ಗಂಭೀರ ಗಾಯವಾಗಿದೆ. ಬಳಿಕ ಸ್ಥಳದಿಂದ ಓಡಿ ಪಾರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಮನವಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪಾಂಡು ಅರ್ಜುನ್ ಸುಳ್ಳೆ ಅವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
12ನೇ ತರಗತಿ ಪಾಸಾದವರಿಗೆ ಕೌಶಲ್ಯಾಭಿವೃದ್ಧಿ ಸಚಿವಾಲಯದಿಂದ BFSI ವಲಯದಲ್ಲಿ ಉಚಿತ ಆನ್ಲೈನ್ ಇಂಟರ್ನ್ಶಿಪ್ ಅವಕಾಶ
ನವದೆಹಲಿ: ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಯುತ ಅಭ್ಯರ್ಥಿಗಳ ಬೇಡಿಕೆ ಹೆಚ್ಚುತ್ತಿರುವ ಈ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (Ministry of Skill Development and Entrepreneurship) ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯದಲ್ಲಿ ಉಚಿತ ಆನ್ಲೈನ್ ಇಂಟರ್ನ್ಶಿಪ್ಗಳನ್ನು ಘೋಷಿಸಿದೆ. ವಿಶೇಷವೆಂದರೆ, ಕನಿಷ್ಠ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಕೂಡ
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಬೂಸ್ಟ್: 2025-26 ನೇ ಸಾಲಿನಲ್ಲಿ 33,371 ಕೋಟಿ ರಾಜಸ್ವ ಸಂಗ್ರಹ
ಅಬಕಾರಿ ಇಲಾಖೆಯ ಸನ್ನದು ನವೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಮಾಡುವ ಪದ್ಧತಿ ರೂಡಿಯಲ್ಲಿತ್ತು. ಇಲ್ಲೂ ಸಹ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೂಡಲೇ ಇದನ್ನು ಮನಗೊಂಡು ಅಬಕಾರಿ ಇಲಾಖೆಯಲ್ಲಿ ಬರುವ ಸನ್ನದು ನವೀಕರಣವನ್ನು 5 ವರ್ಷಕ್ಕೊಮ್ಮೆ ಮಾಡಲಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲವೆಂಬುದು ಅತ್ಯಂತ ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಸಚಿವ ಆರ್ ಬಿ ತಿಮ್ಮಾಪೂರಾ ತಿಳಿಸಿದ್ದಾರೆ. ಈ ವರ್ಷ ಅಂದರೆ 2025-26ನೇ ವರ್ಷ ಸನ್ನದು ನವೀಕರಣದಲ್ಲಿ ಮುಂಬರುವ 5 ವರ್ಷಕ್ಕೆ ಅಂದರೆ 2030ರ ತನಕ ಯಾವುದೇ ನವೀಕರಣ ಪ್ರಕ್ರಿಯೆ ಈ ಸನ್ನದುಗಳಿಗೆ ಅವಶ್ಯವಿರುವುದಿಲ್ಲ ಎಂದಿದ್ದಾರೆ.
ಕಲಬುರಗಿ | ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ಪ್ರತಿಭಟನೆ
ಕಲಬುರಗಿ: ಸಾಮ್ರಾಜ್ಯಶಾಹಿ ಅಮೆರಿಕದ ಒತ್ತಡದಿಂದ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಭಾರತೀಯ ಕಾರ್ಮಿಕ ಸಂಘಟನೆಗಳ ಕೇಂದ್ರ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ (ಎಎಐಕೆಎಸ್) ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಬಿ.ಸಜ್ಜನ್ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಕಪಕ್ಷೀಯವಾಗಿ ಭಾರತದ ಮೇಲೆ ವ್ಯಾಪಾರ ಒಪ್ಪಂದ ಘೋಷಣೆ ಮಾಡಿರುವುದು ಖಂಡನೀಯ. ಅದಕ್ಕೆ ಯಾವುದೇ ಪ್ರತ್ಯುತ್ತರ ನೀಡದೇ ಮೌನ ಅನುಮೋದನೆ ನೀಡಿರುವುದು ಶರಣಾಗತಿಯ ಸಂಕೇತವಾಗಿದೆ ಎಂದು ಆರೋಪಿಸಿದರು. ಈ ರೀತಿಯ ಒಪ್ಪಂದವು ಭಾರತದ ಆರ್ಥಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದರು. ಅಮೆರಿಕದ ದುಬಾರಿ ಇಂಧನ, ಕೃಷಿ ಉತ್ಪನ್ನಗಳು, ಕಲ್ಲಿದ್ದಲು, ತಂತ್ರಜ್ಞಾನ ಮತ್ತು ಸೈನಿಕ ಉತ್ಪನ್ನಗಳನ್ನು ಖರೀದಿಸಲು ಬದ್ಧರಾಗಿರುವುದು ದೇಶದ ಆರ್ಥಿಕತೆಗೆ ಹೊರೆ ಆಗಲಿದೆ. ರಷ್ಯಾದಂತಹ ವಿಶ್ವಾಸಾರ್ಹ ಮೂಲಗಳಿಂದ ಅಗ್ಗದ ತೈಲ ಖರೀದಿಯನ್ನು ತ್ಯಜಿಸುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಅಮೆರಿಕದೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದಿಂದ ಭಾರತೀಯ ಕೈಗಾರಿಕೆ, ಉದ್ಯೋಗ, ಜೀವನೋಪಾಯ ಹಾಗೂ ಗ್ರಾಹಕರ ಖರೀದಿ ಸಾಮರ್ಥ್ಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾಗಯ್ಯ ಸ್ವಾಮಿ, ಶೇಖಮ್ಮ ಕುರಿ, ಸೈಯದ್ ಹುಸೇನ್, ಮುಹಮ್ಮದ್ ತಸ್ಲೀಮ್ ಅಹ್ಮದ್, ಗೌರಮ್ಮ ಪಾಟೀಲ್, ಜಾವೇದ್ ಹುಸೇನ್, ಜಾಫರ್ ಬಬ್ಲೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Viral Video: ಬ್ಯಾಂಕ್: ಕನ್ನಡದಲ್ಲಿ ಮಾತನಾಡಿ ಎಂದ ಗ್ರಾಹಕ: ಕಂಪನಿಗೆ ಕರೆ ಮಾಡಿ ದೂರು ನೀಡಿದ ಸಿಬ್ಬಂದಿ
ಬೆಳಗಾವಿ: ಕನ್ನಡದಲ್ಲಿ ವ್ಯವಹರಿಸಿ ಎಂದು ಬ್ಯಾಂಕ್ ಸಿಬ್ಬಂದಿಗೆ ಮನವಿ ಮಾಡಿದ ಗ್ರಾಹಕನ ಮೇಲೆಯೇ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ದೂರು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ಮನವಿ ಮಾಡಿದ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ. Belagavi - ಬೆಳಗಾವಿ ಎನ್ನುವ ಖಾತೆಯಿಂದ ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋವನ್ನು
ಕಲಬುರಗಿ | ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ: ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಆನೆಕಾಲು ರೋಗ (ಲಿಂಫ್ಯಾಟಿಕ್ ಫಿಲೇರಿಯಾಸಿಸ್) ನಿರ್ಮೂಲನೆಗಾಗಿ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಕ್ಯಾತ್ನಾಳ ಅವರು, ಜನರು ಆರೋಗ್ಯ ಕಾರ್ಯಕರ್ತರೊಂದಿಗೆ ಸಹಕರಿಸಿ ಔಷಧ ಸೇವಿಸುವ ಮೂಲಕ ಕಲಬುರಗಿ ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತ ಜಿಲ್ಲೆಯಾಗಿ ರೂಪಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಡಣಿ–ಹಿರೇ ಸಾವಳಗಿ ಗ್ರಾಮ ಪಂಚಾಯತ್ ಪಿಡಿಓ ಗಾಯತ್ರಿ ತೆಗ್ಗಳ್ಳಿ ಮಾತನಾಡಿ, ಆನೆಕಾಲು ರೋಗ ನಿರ್ಮೂಲನೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಜಾಗೃತಿ ಹಾಗೂ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ RCHO ಡಾ. ಸಿದ್ದು ಪಾಟೀಲ್, ಕಾರ್ಯಕ್ರಮ ಅಧಿಕಾರಿ ಡಾ. ರಾಕೇಶ್ ಕಾಂಬ್ಳೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಾರುತಿರಾವ್ ಕಾಂಬ್ಳೆ, ವೈದ್ಯಾಧಿಕಾರಿ ಡಾ. ಸಂಗೀತಾ ಮಹಾಲೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಚಾಮರಾಜ್ ದೊಡ್ಡಮನಿ ಉಪಸ್ಥಿತರಿದ್ದರು. ಹಾಗೂ ಎಚ್.ಎಸ್. ಪವಾರ್, ಕಯ್ಯುಮ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ವಿನಾಯಕ ಜೋಶಿ ಸ್ವಾಗತಿಸಿದರು. ಕರಣಿಕ್ ಕೊರೆ ವಂದಿಸಿದರು.
Mrinank Sharma Clarification- ಎಐ ದೈತ್ಯ ಕಂಪನಿ ಅಂಥ್ರೋಪಿಕ್ ನಲ್ಲಿ ಮಹತ್ವದ ಹುದ್ದೆ ನಿಭಾಯಿಸುತ್ತಿದ್ದ ಮೃಣಾಂಕ್ ಶರ್ಮಾ ಅವರು ಇದೀಗ ಏಕಾಏಕಿ ರಾಜೀನಾಮೆ ಸಲ್ಲಿಸಿರುವುದು ಅಚ್ಚರಿಕೆ ಕಾರಣವಾಗಿದೆ. ಮಾತ್ರವಲ್ಲದೆ ಅವರು ನೀಡಿದ ಕಾರಣ ಮತ್ತು ಎಚ್ಚರಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿವೆ. ವಾರದ ಹಿಂದಷ್ಟೇ ಎಐ ತಜ್ಞರಾದ ಹರ್ಷ ಮೆಹ್ತಾ ಮತ್ತು ಎಐ ವಿಜ್ಞಾನಿ ಬೆಹ್ನಮ್ ನೆಯ್ಶಾಬರ್ ಅವರು ಆಂಥ್ರೋಪಿಕ್ ಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಮೃಣಾಂಕ್ ತೊರೆದಿದ್ದಾರೆ. ಅವರ ಮುಂದಿನ ಯೋಜನೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ.
ಕಲಬುರಗಿ | ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಾಯಕ ಶರಣರ ಜಯಂತಿ ಆಚರಣೆ
ಕಲಬುರಗಿ: ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಶ್ರೀ ಕಾಯಕ ಶರಣರ ಜಯಂತೋತ್ಸವ ಆಚರಿಸಲಾಯಿತು. ಈ ವೇಳೆ ಡಿ.ಎಸ್ ಲಕ್ಷ್ಮಣ ಶೃಂಗೇರಿ, ಪಿ.ಡಿ ಜಗದೇವಪ್ಪ ಅವರು ಫೋಟೋ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕಿ ಮಧುಮತಿ, ಎ.ಎಸ್ ರೇವಣಸಿದ್ಧಪ್ಪ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಹಾಬಾದ್ | ಪ್ರಕೃತಿ ನಾಶವಾದರೆ ಮಾನವ ಕುಲಕ್ಕೆ ಪೆಟ್ಟು: ಬಸವರಾಜ ಮತ್ತಿಮಡು
ಶಹಾಬಾದ್: ಪ್ರಕೃತಿ ನಾಶವಾದರೆ ಮಾನವಕುಲಕ್ಕೆ ಗಂಭೀರ ಪೆಟ್ಟು ಆಗಲಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ನಗರದ ವಡ್ಡರಸಂಘ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮರಗಳಿಗೆ ಮಾನವನ ಅಗತ್ಯವಿಲ್ಲ, ಆದರೆ ಮಾನವನಿಗೆ ಮರಗಳು ವರವಾಗಿವೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು ಅತ್ಯಾವಶ್ಯಕ ಎಂದು ಹೇಳಿದರು. ಮರವಿಲ್ಲದ ನಾಡು ನರಕಸದೃಶವಾಗುತ್ತದೆ. ಪರಿಸರ ನಾಶವಾದರೆ ಇಡೀ ಮನುಕುಲಕ್ಕೆ ಅಪಾಯ ಎದುರಾಗುತ್ತದೆ. ಜಗತ್ತು ಇಂದು ಹೆಚ್ಚುತ್ತಿರುವ ಉಷ್ಣತೆಯಿಂದ ಅಪಾಯದ ಅಂಚಿನತ್ತ ಸಾಗುತ್ತಿದೆ. ಪ್ರಕೃತಿಮಾತೆ ನಮ್ಮನ್ನು ರಕ್ಷಿಸುತ್ತಾಳೆ. ಪ್ರಕೃತಿ ಎಂದರೆ ಪಂಚಭೂತಗಳ ಸಮನ್ವಯ. ಆದರೆ ಮಾನವ ಭೂಮಿಯನ್ನು ಹಾಳು ಮಾಡುತ್ತಾ ಅಂತರ್ಜಲ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಗಿಡಮರಗಳು ಇಲ್ಲದಾದರೆ ಮಾನವನು ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಚಂದ್ರಕಾಂತ ಗೊಬ್ಬೂರಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿರೇಂದ್ರ ಪಾಟೀಲ ರಾಯಕೊಡ, ಗೋವಿಂದ ಕುಸಾಳೆ, ಕನಕಪ್ಪ ದಂಡಗುಲಕರ, ನಾಗರಾಜ ಮೇಲಗಿರಿ ಹಾಗೂ ಶಾಲೆಯ ಮುಖ್ಯಗುರು ಸಿದ್ದರಾಮ, ರಮೇಶ ಗೋಟೆಕರ ವೇದಿಕೆಯ ಮೇಲಿದ್ದರು. ಅಣವೀರ ಇಂಗಿನಶೆಟ್ಟಿ ,ಅನೀಲ ಬೊರಗಾಂಕರ, ಭೀಮರಾವ ಸಾಳುಂಕೆ, ಅರುಣ ಪಟ್ಟಣಕರ, ಶಿವಕುಮಾರ ಇಂಗಿನಶೆಟ್ಟಿ, ಶಿವಗೌಡ ಪಾಟೀಲ, ಮಹದೇವ ಗೊಬ್ಬೂರಕರ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ,ದಿನೇಶ ಗೌಳಿ, ನಾರಾಯಣ ಕಂದಕೂರ, ರಾಜು ಮಾನೆ, ಕಾಶಣ್ಣ ಚನ್ನೂರ, ಶರಣಪ್ಪ ಕೊಡದೂರ, ಬಸವರಾಜ ಬಿರಾದಾರ, ರವಿ ರಾಠೋಡ, ಜಗದೆವ ಸುಬೆದಾರ, ಅನಿಲದತ್ತ, ಸಾಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ದುರ್ಗಪ್ಪ ಪವಾರ ,ಶರಣು ವಸ್ರ್ತದ,ಅಶೋಕ ಜಿಂಗಾಡೆ, ಮೊಹನ ಗಂಟ್ಲಿ, ಅಮರ ಕೊರೆ, ಶಿವಕುಮಾರ ಮೆತ್ರೆ, ಶ್ರೀನಿವಾಸ ನೆದಲಗಿ, ಶ್ರೀನಿವಾಸ ದೇವಕರ, ಭೀಮಯ್ಯ ಗುತ್ತೆದಾರ, ರೇವಣಸಿದ್ದ ಮತ್ತಿಮಡು, ಅವಿನಾಶ್ ಸಾಳುಂಕೆ, ಲೊಹಿತ ಮಳಖೇಡ, ಸುರೇಂದ್ರ ಗೌಳಿ, ಮಹಾಂತ ಪಾಟೀಲ, ಅಶೋಕ ದೇವಕರ, ವೀರೆಶ ನಾಲವಾರ, ಗೋಪಾಲ ದೆವಕರ, ಮನೋಜ ದಂಡಗುಲಕರ, ಅರುಣ ಸಾತ್ಯಾಳ, ಅಂಬಣ್ಣ ಕೊಳಸನೂರ, ಲಕ್ಷ್ಮಣ ಬೊರಗಿ, ಶೀವು, ಕ್ರಿಷ್ಣಾ ದೇವಕರ, ನಾಗೇಶ ದೊತ್ರೆ, ಅನೀಲ ದೊಡಮನಿ, ಶೆಟ್ಟೆಪ್ಪ ಪವಾರ, ಮಲ್ಲಿಕಾರ್ಜುನ ದೊತ್ರೆ, ಚಂದು ದೇವಕರ, ಶಿವು ನಾಯಕೊಡಿ, ಶಶಿಕಲಾ ಸಜ್ಜನ,ನೀಲಗಂಗಮ್ಮ ಗಂಟ್ಲಿ, ನಂದಾ ಗುಡೂರ, ಪದ್ಮಾ ಕಟಗೆ, ವಿಜಯಲಕ್ಷ್ಮಿ ನಂದಿ, ರೇಖಾ ಅಡಕಿ, ರತ್ನಾ ಬಿರಾದಾರ, ಬಸಮ್ಮ ನಂದಿ, ಜಯಶ್ರೀ ಜಿಂಗಾಡೆ, ನಂದಾ ಹಂಚಾಟೆ, ಮಹಂತಮ್ಮ ಹಿರೆಮಠ, ಶಾಲೆಯ ವಿದ್ಯಾರ್ಥಿಗಳು ಇದ್ದರು. ದೇವದಾಸ ಜಾಧವ ನಿರೂಪಿಸಿದರು. ಗೋವಿಂದ ಕುಸಾಳೆ ಸ್ವಾಗತಿಸಿದರು. ಶರಣು ಕೌಲಗಿ ವಂದಿಸಿದರು.
ಕರ್ನಾಟಕದ ಇಬ್ಬರು IAS, IPS ಅಧಿಕಾರಿಗಳ ವರ್ಗಾವಣೆ: ಹೊಸ ಡಿಸಿ, ಎಸ್ಪಿ ನೇಮಿಸಿ ಸರ್ಕಾರ ಆದೇಶ; ಎಲ್ಲೆಲ್ಲಿ ಬದಲಾವಣೆ?
ಕರ್ನಾಟಕದ ಒಬ್ಬ ಐಪಿಎಸ್ ಹಾಗೂ ಒಬ್ಬ ಐಎಎಸ್ ಅಧಿಕಾರಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಾವಣಗೆರೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಬದಲಾವಣೆಯಾಗಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ಹೊಸಬರನ್ನು ನೇಮಕ ಮಾಡಲಾಗಿದೆ. ಇನ್ನು ಹೊಸ ವರ್ಷದಿಂದೀಚೆಗೆ ಸಾಲು ಸಾಲಾಗಿ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗುತ್ತಲೇ ಇದೆ.
Kalaburagi | ಗನ್ ತೋರಿಸಿ ಡ್ಯಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ : ವೀಡಿಯೊ ವೈರಲ್ !
ಕಲಬುರಗಿ : ಶಾಸಕರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡರೊಬ್ಬರು ಗನ್ ತೋರಿಸಿ ಡ್ಯಾನ್ಸ್ ಮಾಡಿದ್ದಾರೆನ್ನಲಾದ ವೀಡಿಯೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಮತೀನ್ ಪಟೇಲ್ ಎಂಬವರು ಇತ್ತೀಚೆಗೆ ಕಲಬುರಗಿ ನಗರದ ಕಾರ್ಯಕ್ರಮವೊಂದರಲ್ಲಿ ಗನ್ ತೋರಿಸಿ, ಡ್ಯಾನ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಿಕ್ಲು ಶಿವು ಕೊಲೆ ಪ್ರಕರಣ; ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬಿಜೆಪಿ ಶಾಸಕನಿಗೆ ಬಂಧನದ ಭೀತಿ
ಗೋವಾದ ಬೀಚ್ಗಳಲ್ಲಿ ಅನುಮತಿಯಿಲ್ಲದೆ ಪ್ರವಾಸಿಗರ ಫೋಟೊ ತೆಗೆದರೆ ಬಂಧನ!
ಪಣಜಿ: ರಾಜ್ಯದ ಕರಾವಳಿ ಪ್ರದೇಶದ ಕಡಲತೀರಗಳಲ್ಲಿ ವಿದೇಶಿ ಮಹಿಳಾ ಪ್ರವಾಸಿಗರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಒಪ್ಪಿಗೆಯಿಲ್ಲದೆ ಅವರ ಫೋಟೊ ಮತ್ತು ಸೆಲ್ಫಿಗಳನ್ನು ತೆಗೆಯುವುದು ಕಂಡುಬಂದರೆ ಅವರನ್ನು ಗೋವಾ ಪೊಲೀಸರು ಬಂಧಿಸಲಿದ್ದಾರೆ. ಉತ್ತರ ಗೋವಾದ ಬಾಗಾ ಬೀಚ್ನಲ್ಲಿ ಕೆಲವು ಪ್ರವಾಸಿಗರ ಅನುಮತಿಯಿಲ್ಲದೆ ಅವರ ಪೋಟೊ ತೆಗೆದು ಕಿರುಕುಳ ನೀಡಿದ ಆರೋಪಲ್ಲಿ ತಮಿಳುನಾಡಿನ ಇಬ್ಬರು ಪ್ರವಾಸಿಗರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಬಿಎನ್ಎಸ್ಎಸ್ ಸೆಕ್ಷನ್ 170 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ಯಾಲಂಗುಟ್ ಬೀಚ್ನಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಈಜುತ್ತಿದ್ದಾಗ ಅವರ ವೀಡಿಯೊಗಳನ್ನು ತೆಗೆದಿದ್ದಕ್ಕಾಗಿ ಅಲಿಸ್ಟೊ ಲೋಬೊ ಎಂದು ಗುರುತಿಸಲಾದ ಮತ್ತೊಬ್ಬ ಆರೋಪಿಯ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ. ಆರೋಪಿಯು ಮಹಿಳೆಯ ಸಮ್ಮತಿ ಪಡೆಯದೆ ವೀಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಗೋವಾದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕಳಂಕ ತರುವಂತೆ ಮಾಡಿದ್ದಾನೆ ಹಾಗೂ ಮಹಿಳೆಯ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ, ಬೀಚ್ನಲ್ಲಿ ರಷ್ಯಾದ ಪ್ರಜೆಯೊಬ್ಬರಿಗೆ ಕಿರುಕುಳ ನೀಡಿದ್ದಕ್ಕಾಗಿ ಒಡಿಶಾದ ಇಬ್ಬರು ಪ್ರವಾಸಿಗರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಪ್ರಾಮಾಣಿಕತೆಗೆ ಬೆಲೆ ತೆರಬೇಕಾಗುತ್ತದೆ ಎಂದ ದೀಪಕ್
ವಿಜಯನಗರ | ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಎಂಜಿನಿಯರ್, ಅಕೌಂಟೆಂಟ್
ವಿಜಯನಗರ: ಲೋಕೋಪಯೋಗಿ ಇಲಾಖೆ (PWD)ಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಅಕೌಂಟೆಂಟ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಹೊಸಪೇಟೆ ಪಿಡಬ್ಲ್ಯುಡಿ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್(ಎಕ್ಸಿಕ್ಯೂಟಿವ್ ಎಂಜಿನಿಯರ್) ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹೂವಿನ ಹಡಗಲಿಯ ಮಹೇಶ್ ಹಲಗೇರಿ ಅವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ದೂರುದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಿದ್ದರು. ಬಿಲ್ ಪಾವತಿಸಲು ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಅವರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 1 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್.ಛಲವಾದಿ ಅವರ ನೇತೃತ್ವದಲ್ಲಿ ಪಿಐ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಸೇರಿದಂತೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು.
AI ಸಾಂಗ್ ನಿಂದ ಮೋಸ ಹೋದ್ರಾ BTS V? ಹೊಸ ಚರ್ಚೆ ಹುಟ್ಟುಹಾಕಿದ V ಇನ್ ಸ್ಟಾಗ್ರಾಂ ಪೋಸ್ಟ್, ಏನಿದು ಕಥೆ?
BTS Vನ ಇತ್ತೀಚಿನ ಪೋಸ್ಟ್ ಸದ್ಯ V AI ತಂತ್ರಜ್ಞಾನದಿಂದ ಮೋಸ ಹೋಗಿದ್ದಾರಾ ಎಂಬ ಚರ್ಚೆ ಮೂಡುವಂತೆ ಮಾಡಿದೆ. ಇದಕ್ಕೆ ಕಾರಣ ಇತ್ತಿಚೆಗೆ V ಹಂಚಿಕೊಂಡ ಪೋಸ್ಟ್ನಲ್ಲಿ ಸಾಮಗ್ ವೊಂದನ್ನು ಹಂಚಿಕೊಂಡಿದ್ದು, ಇದರ ಬೆನ್ನು ನಿದ್ದ ಆರ್ಮಿಗಳು ಇದು AI ಜೆನೆರೇಟೆಡ್ ಸಾಂಗ್ ಆಗಿದ್ದು, ಇದರ ಕಂಪೋಸರ್ ಕೂಡ AI ಆರ್ಟಿಸ್ಟ್ ಎಂಬ ಸತ್ಯ ತಿಳಿದುಕೊಂಡಿದ್ದಾರೆ. ಆದರೆ BTS ಯಾವಾಗಲೂ AI ಜನೆರೇಟೆಡ್ ಮ್ಯೂಸಿಕ್ ವಿರುದ್ದ ಧ್ವನಿ ಎತ್ತಿದ್ದಾರೆ. ಹಾಗಾಗಿ V ಬಹುಶಃ ಇದು AI ಜೆನೆರೇಟೆಡ್ ಸಾಂಗ್ ಎಂದು ತಿಳಿಯದೇ ಮೋಸ ಹೋಗಿದ್ದಾರೆ ಎಂಬ ಚರ್ಚೆ ಹುಟ್ಟುಹಾಕಿದೆ.
ʼಪ್ರಧಾನಿ ಆಸನದ ಬಳಿ ವಿಪಕ್ಷ ಸಂಸದೆಯರುʼ: ಸಂಸತ್ ನಲ್ಲಿನ ಗದ್ದಲದ ವೀಡಿಯೊ ಹಂಚಿಕೊಂಡ ಸಚಿವ ಕಿರಣ್ ರಿಜಿಜು
ಹೊಸದಿಲ್ಲಿ: ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ, ಕಾಂಗ್ರೆಸ್ ಪಕ್ಷದ ಸಂಸದೆಯರು ಪ್ರಧಾನಿಯವರ ಆಸನದ ಬಳಿ ಜಮಾಯಿಸಿರುವ ವೀಡಿಯೊವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೇರಾವ್ ಮಾಡಲು ವಿರೋಧ ಪಕ್ಷಗಳ ಸಂಸದರು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆ ನಾನು ಪ್ರಧಾನಿಗೆ ಲೋಕಸಭಾ ಕಲಾಪಕ್ಕೆ ಗೈರಾಗಿ ಎಂದು ಸಲಹೆ ನೀಡಿದ್ದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ನೀಡಿದ್ದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಿರಣ್ ರಿಜಿಜು, “ಕಾಂಗ್ರೆಸ್ ಪಕ್ಷವು ತನ್ನ ಬಹುತೇಕ ಸದಸ್ಯರ ದುರ್ನಡತೆಯ ಬಗ್ಗೆ ಹೆಮ್ಮೆ ಹೊಂದಿದೆ!! ಒಂದು ವೇಳೆ ನಾವು ಬಿಜೆಪಿ ಸಂಸದರನ್ನು ತಡೆಯದೇ, ಕಾಂಗ್ರೆಸ್ ನ ಮಹಿಳಾ ಸಂಸದರನ್ನು ಎದುರುಗೊಳ್ಳಲು ಅವಕಾಶ ನೀಡಿದ್ದರೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು. ನಮಗೆ ಸಂಸತ್ತಿನ ಘನತೆ ಹಾಗೂ ಪಾವಿತ್ರ್ಯವನ್ನು ಕಾಪಾಡುವ ಬಗ್ಗೆ ಅತಿಯಾದ ಕಾಳಜಿಯಿದೆ” ಎಂದು ಬರೆದುಕೊಂಡಿದ್ದಾರೆ. ‘ಏನು ಸರಿಯೆನಿಸುತ್ತದೊ ಅದನ್ನೇ ಮಾಡಿ” ಎಂಬ ಬ್ಯಾನರ್ ಹಿಡಿದುಕೊಂಡು, ಮಹಿಳಾ ಸಂಸದರು ಪ್ರಧಾನಿ ಆಸನದ ಬಳಿ ಜಮಾಯಿಸಿರುವುದನ್ನು ವೀಡಿಯೊದಲ್ಲಿದೆ. Congress Party is proud of the most degrading behavior by their MPs !! If we had not stopped all BJP MPs and allowed the Women MPs to confront Cong. MPs, it would have led to very ugly scene. We have very high consideration, to protect the dignity & sanctity of the Parliament. https://t.co/tRj5HjLKFH pic.twitter.com/aTmktk4Y7E — Kiren Rijiju (@KirenRijiju) February 10, 2026
ಭಾರತ Vs ಪಾಕಿಸ್ತಾನ ಟಿ20 ಕದನ ಈ ಹಿಂದೆ ಯಾವಾಗೆಲ್ಲಾ ನಡೆದಿತ್ತು? ವಿಶ್ವಕಪ್ ಪಂದ್ಯಗಳಲ್ಲಿ ಏನಾಗಿತ್ತು?
Indo Pak Cricket Rivalry- ಏಕದಿನವಿರಲಿ, ಟಿ20 ಇರಲಿ, ಜಗತ್ತಿನ ಯಾವ ಮೂಲೆಯಲ್ಲಿ ಬೇಕಿದ್ದರೂ ಪಂದ್ಯ ನಡೆಯಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಎಂದ ಬಳಿಕ ಹೈವೋಲ್ಟೇಜ್ ಪಂದ್ಯವೇ ಆಗಿರುತ್ತದೆ. ಕಳೆದೊಂದು ದಶಕದಿಂದ ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲವಾಗಿದ್ದರಿಂದ ಕೇವಲ ಐಸಿಸಿ ಮತ್ತು ಎಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿರುತ್ತಾರೆ. ಇನ್ನೇನು ಫೆಬ್ರವರಿ 15ರಂದು ಇತ್ತಂಡಗಳು ಮತ್ತೆ ಎದುರುಗೊಳ್ಳಲಿವೆ. ಈ ಹಂತದಲ್ಲಿ ಈ ಹಿಂದಿನ ಫಲಿತಾಂಶಗಳ ಬಗ್ಗೆ ವಿಶ್ಲೇಷಣೆ.
ನಟಿ ಅದಿತಿ ಪ್ರಭುದೇವ ವೈರಲ್ ವಿಡಿಯೋ: ನಮ್ಮ ಪುಟ್ಟ ದೇವತೆಗೂ; ಅವಳ ಅಮ್ಮನಿಗೂ: ಕುಸುಮಾ ಆಯರಹಳ್ಳಿ ಬರಹ
Aditi Prabhu Deva's Viral Video: ನಟಿ ಅದಿತಿ ಪ್ರಭುದೇವ ಅವರು ಅವರ ಪುಟ್ಟ ಮಗಳೊಂದಿಗೆ ಕಳೆದ ಸುಂದರ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋದ ಬಗ್ಗೆ ಲೇಖಕಿ, ಅಂಕಣಕಾರ್ತಿ ಪಿ. ಕುಸುಮಾ ಆಯರಹಳ್ಳಿ ಅವರ ಬರಹ ಇಲ್ಲಿದೆ. ಬಹುಶಃ ಅದೊಂದು ತಿನ್ನಿಸುವ ಆಟ. ಎರಡು ಬೌಲ್ ಅಕ್ಕಪಕ್ಕ ಉಲ್ಟಾ ಮಾಡಿಟ್ಟು
CBSE ಪರೀಕ್ಷೆಗೆ ಕ್ಷಣಗಣನೆ ಶುರು: ಕೊನೆಯ 7 ದಿನಗಳಲ್ಲಿ ಈ 6 'ಸ್ಮಾರ್ಟ್ ಟಿಪ್ಸ್' ಪಾಲಿಸಿ, ಟಾಪರ್ ಆಗಿ
ಬೆಂಗಳೂರು: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ನಡೆಸುವ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಇದೇ ಫೆಬ್ರವರಿ 17 ರಿಂದ ಆರಂಭವಾಗಲಿವೆ. ಪರೀಕ್ಷೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಸಹಜ. ಆದರೆ, ಈ ಕೊನೆಯ ಕ್ಷಣದಲ್ಲಿ ನೀವು ಎಷ್ಟು ಓದುತ್ತೀರಿ ಎನ್ನುವುದಕ್ಕಿಂತ, ಹೇಗೆ ಓದುತ್ತೀರಿ ಎಂಬುದು
ಬೃಹತ್ ಮೊತ್ತಕ್ಕೆ ಚಿತ್ರದ ವಿತರಣಾ ಹಕ್ಕುಗಳನ್ನು ಮಾರುತ್ತಿರುವ ‘ಟಾಕ್ಸಿಕ್’!
ಕೆಜಿಎಫ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಳಿಕ ನಟ ಯಶ್ ಮೊತ್ತ ಮೊದಲ ಬಾರಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ 2026 ಮಾರ್ಚ್ 19ರಂದು ಯುಗಾದಿಗೆ ಬಿಡುಗಡೆಯಾಗುತ್ತಿದೆ. ‘ಟಾಕ್ಸಿಕ್’ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನು ಬರೆಯುವಂತೆ ಕಾಣಿಸುತ್ತಿದೆ. ವಿತರಣೆಯ ಹಕ್ಕುಗಳ ಮಾರಾಟ ಜೊತೆಗೆ ಒಟಿಟಿ ಹಕ್ಕುಗಳಲ್ಲಿ ‘ಟ್ಯಾಕ್ಸಿಕ್’ ಹೊಸ ಮೈಲಿಗಲ್ಲು ಸಾಧಿಸುವಂತೆ ತೋರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಭಾಷೆಗಳಲ್ಲಿ ‘ಟಾಕ್ಸಿಕ್’ ವಿತರಣೆಯ ಹಕ್ಕನ್ನು ಅತಿ ದೊಡ್ಡ ಮೊತ್ತಕ್ಕೆ PharsFilm ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಕೆಜಿಎಫ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಳಿಕ ನಟ ಯಶ್ ಮೊತ್ತ ಮೊದಲ ಬಾರಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ 2026 ಮಾರ್ಚ್ 19ರಂದು ಯುಗಾದಿಗೆ ಬಿಡುಗಡೆಯಾಗುತ್ತಿದೆ. YASH - 'TOXIC': PHARS FILMS LOCKS OVERSEAS DEAL FOR A HISTORIC AMOUNT – *ONLY INDIAN LANGUAGES*... #Toxic has been acquired by #PharsFilm [ #PHF ] – one of the most reputed names in Overseas distribution – for a historic price. Importantly, this landmark deal is exclusively for… pic.twitter.com/At3d3CEcJQ — taran adarsh (@taran_adarsh) February 10, 2026 ಪ್ರಮುಖ ಅಂತರರಾಷ್ಟ್ರೀಯ ಚಲನಚಿತ್ರ ವಿತರಣಾ ಕಂಪನಿಯಾಗಿರುವ ಫಾರ್ಸ್ ಫಿಲ್ಮ್ ಅನ್ನು ಅಹ್ಮದ್ ಗೋಲ್ಚಿನ್ 1964ರಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಹಾಲಿವುಡ್, ಬಾಲಿವುಡ್ ಮತ್ತು ಮಲಯಾಳಂ ಚಿತ್ರಗಳನ್ನು ವಿಶ್ವಾದ್ಯಂತ ವಿತರಿಸುತ್ತದೆ. ಇದೀಗ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ವಿತರಣಾ ಹಕ್ಕನ್ನು ಫಾರ್ಸ್ ಫಿಲ್ಮ್ ತೆಗೆದುಕೊಂಡಿದೆ. ಈ ವ್ಯವಹಾರವು ಸಂಪೂರ್ಣವಾಗಿ ಟಾಕ್ಸಿಕ್ ಅನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಪಡೆದುಕೊಳ್ಳಲಾಗಿದೆ. ಇಂಗ್ಲಿಷ್ ಭಾಷಾ ಹಕ್ಕನ್ನು ಇನ್ನೂ ವಿತರಿಸಲಾಗಿಲ್ಲ. ಬಿಡುಗಡೆಗೆ ಮೊದಲೇ ‘ಟಾಕ್ಸಿಕ್’ 650 ಕೋಟಿ ರೂ.ಗೂ ಮೀರಿದ ವ್ಯವಹಾರ ನಡೆಸಿದೆ ಎಂದು ವರದಿಯಾಗಿದೆ. ವಿತರಣೆ, ಒಟಿಟಿ ಹಕ್ಕುಗಳು, ಆಡಿಯೊ ಹಕ್ಕುಗಳು ಸೇರಿದಂತೆ ಹಲವು ಹಕ್ಕುಗಳ ಒಟ್ಟು ಮೊತ್ತ ಬಿಡುಗಡೆ ಮಾಡುವ ಮೊದಲೇ ಇನ್ಯಾವುದೇ ಕನ್ನಡ ಸಿನಿಮಾಗೆ ಬಂದಿರಲಿಲ್ಲ. ಆಂಧ್ರ-ತೆಲಂಗಾಣ ವಿತರಣೆ: ಈಗಾಗಲೇ ‘ಟಾಕ್ಸಿಕ್’ ಚಿತ್ರ ಬಿಡುಗಡೆಗೆ ಮೊದಲೇ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣೆಯ ಹಕ್ಕುಗಳನ್ನು ಐತಿಹಾಸಿಕ ದರಕ್ಕೆ ಮಾರಾಟ ಮಾಡಿದೆ. ತೆಲುಗಿನಲ್ಲಿ ಪ್ರಮುಖ ವಿತರಕ ಮತ್ತು ನಿರ್ಮಾಪಕ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್ ಸಂಸ್ಥೆಯು ವಿತರಣೆ ಹಕ್ಕುಗಳನ್ನು ಖರೀದಿಸಿದೆ. ಅದಕ್ಕಾಗಿ ಅವರು ಬರೋಬ್ಬರಿ 120 ಕೋಟಿ ರೂ. ಮೊತ್ತವನ್ನು ನೀಡಿದ್ದಾರೆ. ತೆಲುಗು ಭಾಷೆಗೆ ಹೊರತಾದ ಚಿತ್ರ ಆಂಧ್ರ-ತೆಲಂಗಾಣ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ವಿತರಣೆಯಾಗಿಲ್ಲ. ಟಾಕ್ಸಿಕ್’ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಲು ನೆಟ್ಫ್ಲಿಕ್ಸ್, ಝೀ5, ಅಮೆಝಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳು ಸ್ಪರ್ಧಿಸುತ್ತಿವೆ. ಈ ವೇದಿಕೆಗಳು ಸಿನಿಮಾಗೆ 300 ಕೋಟಿ ರೂ. ನೀಡಲು ಮುಂದಾಗಿವೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ತಮಿಳುನಾಡು ಮತ್ತು ಕೇರಳದಲ್ಲೂ ಬೇಡಿಕೆ: ‘ಟಾಕ್ಸಿಕ್’ ಸಿನಿಮಾಗೆ ತಮಿಳುನಾಡು ಮತ್ತು ಕೇರಳದಲ್ಲೂ ಬೇಡಿಕೆ ಸೃಷ್ಟಿಯಾಗಿದೆ. ತಮಿಳುನಾಡಿನ ವಿತರಣೆ ಹಕ್ಕುಗಳನ್ನು ಸನ್ ನೆಟ್ವರ್ಕ್ ಪಡೆಯುವ ಸಾಧ್ಯತೆಯಿದೆ, ಕೇರಳದಲ್ಲಿ ದುಲ್ಕರ್ ಸಲ್ಮಾನ್ ಅಥವಾ ಪೃಥ್ವಿರಾಜ್ ಸುಕುಮಾರನ್ ವಿತರಣೆ ಸಂಸ್ಥೆಗಳು ಹಕ್ಕುಗಳಿಗಾಗಿ ಬೇಡಿಕೆ ಇಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ ದಾಸ್ ಮತ್ತು ಯಶ್ ಸೇರಿ ಕಥೆ ಬರೆದಿದ್ದಾರೆ. ಗೀತು ಮೋಹನ್ ದಾಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣವನ್ನು ರಾಜೀವ್ ರವಿ ನಿರ್ವಹಿಸಿದ್ದರೆ, ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ. ಸಂಕಲನ ಜವಾಬ್ದಾರಿಯನ್ನು ಉಜ್ವಲ್ ಕುಲಕರ್ಣಿ ಗಮನಿಸಿದ್ದಾರೆ. ಸಾಹಸ ದೃಶ್ಯಗಳಿಗಾಗಿ ಹಾಲಿವುಡ್ನ ಪ್ರಸಿದ್ಧ ಸ್ಟಂಟ್ ನಿರ್ದೇಶಕ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. ಇದರಿಂದ ಚಿತ್ರದ ಸಾಹಸ ದೃಶ್ಯಗಳು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಮೂಡಿ ಬರುತ್ತವೆಂಬ ನಿರೀಕ್ಷೆ ಇದೆ. ವೆಂಕಟ ನಾರಾಯಣ್ ಸಿನಿಮಾ ನಿರ್ಮಿಸಿದ್ದಾರೆ.
ನೆಲ್ಲಿಕಾರು : 1.50 ಕೋ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆಗೆ ಶಾಸಕರಿಂದ ಶಿಲಾನ್ಯಾಸ
ಮೂಡುಬಿದಿರೆ: ಶಿತಾ೯ಡಿ-ಗುಂಡಾವು-ನೆಲ್ಲಿಕಾರು ಮುಖ್ಯ ರಸ್ತೆ 1.50 ಕೋ.ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿದ್ದು, ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರ ನೆಲ್ಲಿಕಾರು ಗ್ರಾಪಂನ ಗುಂಡಾವುನಲ್ಲಿ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಕೋಟ್ಯಾನ್, ಲೋಕೋಪಯೋಗಿ ಇಲಾಖೆಯ ಸಂಬಂಧಿಸಿದ ಶಿರ್ತಾಡಿ-ಹೊಸ್ಮಾರು ರಸ್ತೆಯು ಗುಂಡಾವಿನಂದ ತೀರ ಹದಗೆಟ್ಟಿದ್ದು ಇದನ್ನು ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ 1.2 ಕಿ.ಮೀ. ಉದ್ದಕ್ಕೆ 5.5 ಮೀ. ಅಗಲೀಕರಣಗೊಳಿಸಲಾಗುವುದು ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದರು. ನೆಲ್ಲಿಕಾರು ಗ್ರಾಪಂನ ಮಾಜಿ ಅಧ್ಯಕ್ಷರಾಗಿದ್ದ ಉದಯ ಪೂಜಾರಿ, ಜಯಂತ ಹೆಗ್ಡೆ, ಮಾಜಿ ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಸುಶೀಲಾ, ಆಶಾಲತಾ, ಊರಿನ ಹಿರಿಯರಾದ ಶಿವಪ್ಪ ಪೂಜಾರಿ, ಜಯ ಪೂಜಾರಿ, ಕಮಲ ಪೂಜಾರ್ತಿ, ಸ್ಥಳೀಯರಾದ ಗಣೇಶ್ ನೆಲ್ಲಿಕಾರು, ರಾಘು ಪೂಜಾರಿ ನೆಲ್ಲಿಕಾರು, ರಾಕೇಶ್ ಪೂಜಾರಿ ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.
ಬಜೆಟ್ ಸಿದ್ದತೆ ಸಭೆಗೆ ಡಿಕೆ ಶಿವಕುಮಾರ್ ಗೈರು: ಕಾರಣ ಕೊಟ್ಟ ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೂ ಅವರು ಹಾಜರಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಳಿ ಅನುಮತಿಯನ್ನು ಪಡೆದುಕೊಂಡು ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿದೆ. ಡಿಕೆ ಶಿವಕುಮಾರ್ ಅವರು ಅಸ್ಸಾಂ ವೀಕ್ಷಕರಾಗಿ ನೇಮಕಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ದಿಢೀರ್ ದೆಹಲಿಗೆ ತೆರಳಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
BENGALURU | ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಪೊಲೀಸ್ ದಾಳಿ
ಬೆಂಗಳೂರು, ಫೆ.10: ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಫುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಸಮೀಪದ ನಿವಾಸಿ ಪೀಟರ್ ಕ್ಯಾಡಿ ವಂಚನೆ ಎಸಗಿದ ಆರೋಪಿಯಾಗಿದ್ದಾನೆ. ಈತನ ಮನೆ ಮೇಲೆ ಇಂದು ಮುಂಜಾನೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸುಮಾರು ಹದಿನೈದು ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿರುವ ಪೀಟರ್ ಕ್ಯಾಡಿ ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದ. ಈತನಿಂದ 500ಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಲದ ಅಗತ್ಯ ಇರುವವರಿಗೆ ಗಾಳ ಹಾಕುತ್ತಿದ್ದ ಪೀಟರ್ ಕ್ಯಾಡಿ ತಾನು ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿಯಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಅರಂಭದಲ್ಲಿ ಈತ ಕೋಟ್ಯಂತರ ರೂಪಾಯಿ ಮೊತ್ತದ ಡಿಡಿಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ. ಈ ವಂಚನಾ ಜಾಲಕ್ಕೆ ಬಲಿ ಬೀಳುತ್ತಿದ್ದವರು ಖಾಲಿ ಚೆಕ್ ಹಾಳೆ ಮತ್ತು ಆಸ್ತಿ ಪತ್ರಗಳನ್ನು ನೀಡುತ್ತಿದ್ದರು. ಈ ಹಂತದಲ್ಲಿ ಕೋಟಿ- ಕೋಟಿ ಮೊತ್ತವನ್ನು ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಅಂತ ಪಡೆದುಕೊಂಡು ಸಾಲ ಕೊಡಿಸದೆ ಮೋಸ ಮಾಡುತ್ತಿದ್ದ. ಯಾರಾದರು ಕೊಟ್ಟ ಹಣ ವಾಪಸ್ ಕೇಳಿದರೆ ಅವರ ವಿರುದ್ಧ ಅವರೇ ಈ ಹಿಂದೆ ನೀಡಿದ್ದ ಚೆಕ್ ಮತ್ತು ಆಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದ ಈ ರೀತಿ 15ಕ್ಕಿಂತಲೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೀಟರ್ ಕ್ಯಾಡಿ ತಂಡದಲ್ಲಿ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಮತ್ತಿತರರು ಇದ್ದಾರೆ. ಈತನ ವಿರುದ್ಧದ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಸುಬ್ಬರಾವ್ ಗೆ ಒಂದು ಕೋಟಿ ರೂ. ವಂಚನೆ: ಕಳೆದ ವರ್ಷ ಸುಬ್ಬರಾವ್ ಎಂಬವರು ಪೀಟರ್ ಕ್ಯಾಡಿ ವಿರುದ್ಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಸುಬ್ಬರಾವ್ ಅವರ ಜಮೀನು ದಾಖಲೆ ಸರಿಪಡಿಸಿ ಅದನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 96 ಲಕ್ಷ ರೂ. ಹಪಡೆದುಕೊಂಡಿದ್ದ ಪೀಡರ್ ಕ್ಯಾಡಿ, ಆ ಬಳಿಕ ಮೋಸ ಮಾಡಿದ್ದ. ಕಮಿಷನ್ ಹೆಸರಿನಲ್ಲಿ ಸುಬ್ಬರಾವ್ ರಿಂದ ಚೆಕ್ ಪಡೆದಿದ್ದ ಪೀಟರ್ ಕ್ಯಾಡಿ ಬಳಿಕ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಕೇಸು ದಾಖಲಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಸಬ್ಬರಾವ್ ಅವರು ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈತನ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಸುಬ್ಬರಾವ್ ಪ್ರಕರಣದ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆ ಸಿಐಡಿ ಪೊಲೀಸರಿಗೆ ಪೀಟರ್ ಕ್ಯಾಡಿ ಮತ್ತು ಆತನ ತಂಡ ಹಲವಾರು ಉದ್ಯಮಿಗಳಿಗೆ ಸಾಳ ಕೊಡಿಸುವುದಾಗಿ, ಆಸ್ತಿ ಖರೀದಿಸಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿ ಐಶರಾಮಿ ಜೀವನ ನಡೆಸುತ್ತಿದ್ದ. ಪೀಟರ್ ಕ್ಯಾಡಿ ವಿರುದ್ಧ ಬೆಂಗಳೂರಿನ ಅಶೋಕ ನಗರ, ಜೀವನ್ ಭೀಮಾನಗರ, ಹಲಸೂರು, ಪುಲಿಕೇಶಿ ನಗರ, ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಅಚ್ಚರಿ ಏನೆಂದರೆ ಈತನಿಂದ ವಂಚನೆಗೆ ಒಳಗಾದವರು ಹಣ ವಾಪಸು ಕೇಳದಂತೆ ಅವರ ವಿರುದ್ಧವೇ 300ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಕೇಸು ದಾಖಲಿಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಉಚಿತ ChatGPT ಅವಧಿ ಮುಗಿದಿದೆ; ಜಾಹೀರಾತು ಜೊತೆಗೆ ಬಳಸಿ!
ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ. OpenAI ಫೆಬ್ರವರಿ 9ರಂದು ಸೋಮವಾರ ಬ್ಲಾಗ್ಪೋಸ್ಟ್ ಒಂದನ್ನು ಹಂಚಿಕೊಂಡು ChatGPT ಒಳಗೆ ಜಾಹೀರಾತು ನೀಡುವುದಾಗಿ ಘೋಷಿಸಿದೆ. ಉಚಿತವಾಗಿ ಜಾಟ್ಜಿಪಿಟಿ ಬಳಸುವವರು ಮತ್ತು ಚಾಟ್ಜಿಪಿಟಿ ಗೋ ಬಳಸುವವರಿಗೆ ಈ ಜಾಹೀರಾತುಗಳು ಕಾಣಿಸುತ್ತವೆ. ಆದರೆ ಚಾಟ್ಜಿಪಿಟಿ ಪ್ಲಸ್ ಮತ್ತು ಪ್ರೊನಲ್ಲಿ ಹಣ ಪಾವತಿಸಿ ಬಳಸುವ ಚಂದಾದಾರರಿಗೆ ಜಾಹೀರಾತುಗಳು ಕಾಣಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಚಾಟ್ಜಿಪಿಟಿ ಫಲಿತಾಂಶಗಳ ಮೇಲೆ ಪ್ರಭಾವ ಬೀರದು ಜಾಹೀರಾತುಗಳಿಂದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಕುರಿತ ಕಾಳಜಿ ಬ್ಗಗೆ ಪತ್ರಿಕಾ ಹೇಳಿಕೆಯಲ್ಲಿ OpenAI ಸ್ಪಷ್ಟಪಡಿಸಿದೆ. “ಚಾಟ್ಜಿಪಿಟಿ ನಿಮಗೆ ಕೊಡುವ ಉತ್ತರದ ಮೇಲೆ ಜಾಹೀರಾತುಗಳು ಪ್ರಭಾವ ಬೀರುವುದಿಲ್ಲ ಮತ್ತು ಚಾಟ್ ಜಿಪಿಟಿ ಜೊತೆಗೆ ನಿಮ್ಮ ಸಂಭಾಷಣೆಯನ್ನು ಜಾಹೀರಾತುದಾರರಿಂದ ಖಾಸಗಿಯಾಗಿ ಇಡುತ್ತೇವೆ. ಈ ಅನುಭವ ಸರಿಯಾಗಿರುತ್ತದೆ ಎನ್ನುವ ಬಗ್ಗೆ ನಾವೀಗ ಕಲಿಯುವುದು, ಕೇಳುವುದು ಮತ್ತು ಖಚಿತಪಡಿಸುವ ಕಲಿಕಾ ಹಂತದಲ್ಲಿದ್ದೇವೆ” ಎಂದು OpenAI ಹೇಳಿದೆ. ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ. ಆದರೆ ಜಾಹೀರಾತುದಾರರಿಗೆ ವ್ಯಕ್ತಿಗತ ಚಾಟ್ ಡೇಟಾಗೆ ಪ್ರವೇಶ ನೀಡುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಜಾಹೀರಾತು ಕುರಿತಂತೆ ಸ್ಪಷ್ಟತೆ ತಾಂತ್ರಿಕ ವಿಚಾರಕ್ಕೆ ಬಂದಲ್ಲಿ ಓಪನ್ಎಐನ ಜಾಹೀರಾತುಗಳನ್ನು ಸ್ಪಷ್ಟವಾಗಿ ‘ಪ್ರಾಯೋಜಿಸಲಾಗಿದೆ’ ಎಂದು ಲೇಬಲ್ ಮಾಡಿರಲಾಗುತ್ತದೆ. ಜಾಹೀರಾತು ಉತ್ತರದಿಂದ ಪ್ರತ್ಯೇಕವಾಗಿ ಕಾಣಿಸುತ್ತದೆ. ಸೂಕ್ಷ್ಮ ವಿಷಯಗಳಾದ ಆರೋಗ್ಯ, ಮಾನಸಿಕ ಆರೋಗ್ಯ ಅಥವಾ ರಾಜಕೀಯಗಳ ಜೊತೆಗೆ ಜಾಹೀರಾತುಗಳು ಇರದಂತೆ ಕಂಪನಿ ಸುರಕ್ಷಾ ಕವಚಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದೆ. ಚಾಟ್ಬೋಟ್ನಿಂದ ಜಾಹೀರಾತನ್ನು ಡಿಲೀಟ್ ಮಾಡುವ ಅವಕಾಶವೂ ದೊರೆಯಲಿದೆ. ಲಕ್ಷಾಂತರ ಜನರಿಗೆ AI ಉಚಿತವಾಗಿ ಬಳಸುವ ಅವಕಾಶ ನೀಡುವ ಉದ್ದೇಶದಿಂದ ಜಾಹೀರಾತು ಕಲ್ಪನೆಯನ್ನು ತರಲಾಗಿದೆ. ಈ ಬದಲಾವಣೆಗೆ ಗ್ರಾಹಕರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆಗಳಿಗೆ ಮುಕ್ತವಾಗಿರುವುದಾಗಿ ಓಪನ್ಎಐ ಹೇಳಿದೆ.
ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ
ಹೊಸದಿಲ್ಲಿ: ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಶರ್ಮಾ ಮತ್ತು ಅವರ ಕುಟುಂಬದ ಸದಸ್ಯರು ರಾಜ್ಯಾದ್ಯಂತ ಸುಮಾರು 12,000 ಬಿಘಾ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿರುವ ಗೊಗೊಯ್ ಕಳೆದ ವಾರ ಆರೋಪಿಸಿದ್ದರು. ಇದರ ಬೆನ್ನಲ್ಲೆ ಯಾವುದೇ ಪುರಾವೆಗಳಿಲ್ಲದೆ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಘೋಷಿಸಿದ್ದರು. ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ. ಪರಿಹಾರ ಕೋರಿ ನಾನು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಹಿಮಂತ ಬಿಸ್ವಾ ಶರ್ಮಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪುಸ್ತಕವನ್ನು ಪ್ರಕಟಿಸಿಲ್ಲ ಎಂಬ ʼಪೆಂಗ್ವಿನ್ʼ ಹೇಳಿಕೆ ಪ್ರಶ್ನಿಸಿದ ಕಾಂಗ್ರೆಸ್ ನಾಯಕ
ಉಚಿತ PSI ಕೋಚಿಂಗ್ | ಯಾರು ಅರ್ಜಿ ಸಲ್ಲಿಸಬಹುದು?
ಆಯ್ಕೆಯಾದ ಅಭ್ಯರ್ಥಿಗಳಿಗೆ 75 ದಿನಗಳ ಗುಣಮಟ್ಟ ತರಬೇತಿಯ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ಸರ್ಕಾರವೇ ನೀಡಲಿದೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನ ಪಿಎಸ್ಐ (PSI) ನೇಮಕಾತಿ ಪರೀಕ್ಷೆಗೆ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಂದ ಉಚಿತ ತರಬೇತಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ 75 ದಿನಗಳ ಗುಣಮಟ್ಟ ತರಬೇತಿಯ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ಸರ್ಕಾರವೇ ನೀಡಲಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: http://164.100.133.164:81/PSI_2526/App_form.aspx ಪ್ರಮುಖ ದಿನಾಂಕಗಳು • ಅಧಿಸೂಚನೆ ದಿನಾಂಕ : 02 ಫೆಬ್ರವರಿ 2026 • ಆನ್ಲೈನ್ ಅರ್ಜಿ ಆರಂಭ : 02 ಫೆಬ್ರವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ಫೆಬ್ರವರಿ 2026 • ಆಸಕ್ತ ಅಭ್ಯರ್ಥಿಗಳು ವಿವರಗಳಿಗೆ ಸಹಾಯವಾಣಿ 0850770004 ಅನ್ನು ಸಂಪರ್ಕಿಸಬಹುದು. ಯಾರು ಅರ್ಜಿ ಸಲ್ಲಿಸಬಹುದು ಜಾತಿವರ್ಗ : ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು ವಿದ್ಯಾರ್ಹತೆ : ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ವಯೋಮಿತಿ : ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. 27 ವಯಸ್ಸು ಮೀರಿರಬಾರದು. ಆದಾಯಮಿತಿ : ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ 8 ಲಕ್ಷ ರೂ. ಒಳಗಿರಬೇಕು ನಿವಾಸಿ : ಅಭ್ಯರ್ಥಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ತರಬೇತಿ ವಿವರ ಒಟ್ಟು 75 ದಿನಗಳ ಅವಧಿಗೆ ತರಬೇತಿ ನೀಡಲಾಗುವುದು. ಇಲಾಖೆಯು ರಾಜ್ಯದಾದ್ಯಂತ ಗುರುತಿಸಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಕೋಚಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಶುಲ್ಕ ಸಂಪೂರ್ಣ ಉಚಿತ. ಇದರ ಜೊತೆಗೆ ತರಬೇತಿ ಅವಧಿಯಲ್ಲಿ ಇರುವ ಊಟ ಮತ್ತು ವಸತಿ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಊಟ ಮತ್ತು ವಸತಿ ಬೇಡವಾದಲ್ಲಿ ಮಾಸಿಕ ಭತ್ಯೆ ನೀಡಲಾಗುತ್ತದೆ. ರಾಜ್ಯದ 4 ಕಂದಾಯ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ತರಬೇತಿ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮೈಸೂರು ವಿಭಾಗದಲ್ಲಿ ಮಾತ್ರ ತರಬೇತಿ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಪದವಿಯಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ. ಆದರೆ ಇಲಾಖೆಯಿಂದ ಯುಪಿಎಸ್ಸಿ/ಕೆಪಿಎಸ್ಸಿ/ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎಸ್ಎಸ್ಎಲ್ಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ವಿಶೇಷ ಚೇತನವಾದಲ್ಲಿ ಅದರ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳು.
ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಸಿಂದಗಿ, ಇಂಡಿ ತಾಲೂಕುಗಳನ್ನು ಪಶ್ಚಿಮದಲ್ಲಿಯೂ, ನಿಝಾಮ ಆಡಳಿತದ ಪ್ರಭಾವವುಳ್ಳ ಕೆಲ ತಾಲೂಕುಗಳನ್ನು ಉತ್ತರದಲ್ಲಿಯೂ, ಪೂರ್ವಕ್ಕೆ ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟ ಕಲಬುರಗಿ ನಗರವನ್ನೂ ಹೊಂದಿದ್ದ ಅಂದಿನ ಅಫಜಲಪುರ ಪೈಗಾ (ಇಂದಿನ ಅಫಜಲಪುರ ತಾಲೂಕು) ಸುಮಾರು 91 ಹಳ್ಳಿಗಳ ವಿಶಾಲ ಪ್ರದೇಶ. ಇದು ಅಪಾರವಾದ ಐತಿಹಾಸಿಕ ಶಿಲ್ಪ ಸೌಂದರ್ಯದ ಸ್ಥಳಗಳನ್ನು , ನದಿ, ಬಯಲುಗಳನ್ನು ಹೊಂದಿ ಸಂಶೋಧನೆಗೆ ಸವಾಲಾಗಿ ನಿಂತಿದೆ. ಉತ್ತರದಲ್ಲಿ ಹೈದರಾಬಾದ್ನಿಂದ ಮುಂಬೈಗೆ ಹೋಗುವ ರೈಲು ಹಳಿಗಳ ಆಸುಪಾಸಿನಲ್ಲಿ ಮಹಾರಾಷ್ಟ್ರದ ಗಡಿಯಿದೆ. ಇದರಿಂದ ಬೇರ್ಪಡುವ ಅಫಜಲಪುರ ತಾಲೂಕಿಗೆ ಈ ರೈಲು ಹಳಿಗಳೇ ಉತ್ತರ ದಿಕ್ಕಿನ ಸೀಮೆಯಾಗಬಹುದು. ಈ ಭಾಗದಲ್ಲಿ ಒಂದೇ ಹಳ್ಳಿ ಅರ್ಧ ಮಹಾರಾಷ್ಟ್ರ ಗಡಿಯಲ್ಲೂ, ಇನ್ನರ್ಧ ಕರ್ನಾಟಕ ಭಾಗದಲ್ಲಿಯೂ ಇರುವುದು ವಿಸ್ಮಯದ ಸಂಗತಿಯಾಗಿದೆ. ದಕ್ಷಿಣದಲ್ಲಿರುವ ಭೀಮಾನದಿ ವಿಜಯಪುರ ಜಿಲ್ಲೆಯಿಂದ ಅಫಜಲಪುರ ತಾಲೂಕನ್ನು ಬೇರ್ಪಡಿಸುತ್ತದೆ. ಭಾಷಾವಾರು ಪ್ರಾಂತಗಳ ವಿಂಗಡಣೆ ಕಾಲದಲ್ಲಿ ಈ ರೀತಿಯ ಭೌಗೋಳಿಕ ಚೌಕಟ್ಟು ಪಡೆದುಕೊಂಡಿತ್ತು ಅಫಜಲಪುರ ತಾಲೂಕು. 1948 ಸೆಪ್ಟೆಂಬರ್ 18ರವರೆಗೆ ಹೈದರಾಬಾದ್ ನಿಝಾಮನ ಪದತಲಕ್ಕೆ ತನ್ನ ಆಡಳಿತವನ್ನು ಅರ್ಪಿಸಿಕೊಂಡಿತ್ತು ಅಫಜಲಪುರ. ಅಂದಿನ ಹುಮನಾಬಾದ್ ಅಫಜಲಪುರಕ್ಕೆ ತಾಲೂಕಾದರೆ ಲಾತೂರ್ ಅಫಜಲಪುರದ ಜಿಲ್ಲೆಯಾಗಿತ್ತು. ಅಫಜಲಪುರ ಹೋಬಳಿಯ ಜೊತೆಗೆ ಮಣೂರ-ಮಾಶಾಳ, ದೇವಲ ಗಾಣಗಾಪುರ ಹೋಬಳಿಗಳು ಹುಮ್ನಾಬಾದ್ ತಾಲೂಕಿಗೆ ಸಂಬಂಧಪಟ್ಟಿದ್ದವು. ಇಂದಿನ ಅಫಜಲಪುರ ಪ್ರದೇಶದ ವ್ಯಾಜ್ಯಗಳೆಲ್ಲವೂ ರೇವೂರ್ (ಬಿ) ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಲಾತೂರ್ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುತ್ತಿದ್ದವು. ಉರ್ದು ಆಡಳಿತ ಭಾಷೆ ಆಗಿತ್ತು. ಆದರೆ ಸಾಮಾನ್ಯ ಜನರು ಅತ್ತ ಉರ್ದು ಕಲಿಯಲಾಗದೆ ಕನ್ನಡ ಬಿಡಲಾಗದೆ ತಮ್ಮ ವ್ಯವಹಾರ, ವಾಣಿಜ್ಯ, ಅಡತಿ ವ್ಯವಹಾರ, ಗ್ರಾಮೀಣ ಭಾಗದ ಆಸ್ತಿ ವ್ಯವಹಾರ, ಹೊಲ-ಮನೆ ಖರೀದಿ, ಅಡವು ಕರಾರು ಪತ್ರ ಮುಂತಾದವುಗಳನ್ನು ಮರಾಠಿ ಭಾಷೆಯಲ್ಲಿ ನಡೆಸಿ, ಕೊನೆಗೆ ಮೋಡಿ ಲಿಪಿಯಲ್ಲಿ ದಾಖಲಿಸಿಡುತ್ತಿದ್ದರು. ಇದು ಬಹುಶಃ 1980ರವರೆಗೂ ಈ ಭಾಗದಲ್ಲಿ ಶ್ರೀಸಾಮಾನ್ಯರ ಆಡಳಿತ ವೈಖರಿಯಾಗಿತ್ತು. ಗೋಕಾಕ್ ಚಳುವಳಿ ನಂತರ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದ ಯುವ ಜನಾಂಗ ಕರ್ನಾಟಕ ಸರಕಾರದಲ್ಲಿ ನೌಕರಿಗೆ ಸೇರಿದ ನಂತರವೇ ಕನ್ನಡ ಭಾಷೆ ಅಫಜಲಪುರದಲ್ಲಿ ಬಳಕೆಗೆ ಬಂದದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ 2/3 ಭಾಗದಲ್ಲಿ ಸ್ಥಳೀಯ ಸಂಸ್ಥಾನಿಕರ ಆಡಳಿತವಿತ್ತು. ದೇಶದ 556ಕ್ಕೂ ಹೆಚ್ಚು ಸಂಸ್ಥಾನಗಳರಾಜರು ಬ್ರಿಟಿಷರಿಂದ ನಿಯಂತ್ರಿಸಲ್ಪಡುತ್ತಿದ್ದರು. ಅವುಗಳಲ್ಲಿ ಬ್ರಿಟಿಷರೊಂದಿಗೆ ಅತ್ಯಂತ ಸಖ್ಯದೊಂದಿಗೆ ವ್ಯಾಪಾರ ಸಂಬಂಧ ಗಳನ್ನು ಇರಿಸಿಕೊಂಡಿದ್ದ ವಿಶಾಲವಾದ ಶ್ರೀಮಂತ ಸಂಸ್ಥಾನ ಹೈದರಾಬಾದ್ ನಿಝಾಮನದ್ದಾಗಿತ್ತು. ಬ್ರಿಟಿಷ್ ಪ್ರತಿನಿಧಿ ರೆಸಿಡೆಂಟ್ ಬಹಾದ್ದೂರನನ್ನು ಆಡಳಿತ ಸಲಹೆಗಾರನಾಗಿ ಇಟ್ಟುಕೊಂಡಿದ್ದ ನಿಝಾಮ ದೊರೆ ಮೀರ್ ಉಸ್ಮಾನ್ ಅಲಿಖಾನ್ ಬಹದ್ದೂರ್ 1947ರ ಜೂನ್ 16ರಂದು ಹೈದರಾಬಾದ್ ರಾಜ್ಯದ ಸ್ವತಂತ್ರ ದೊರೆ ಎಂದು ಘೋಷಿಸಿಕೊಂಡನು. ಅಂದಿನಿಂದ 1948ರ ಸೆಪ್ಟೆಂಬರ್ 18ವರೆಗೆ ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಕರ್ನಾಟಕದ ಜೊತೆ ಒಂದುಗೂಡುವುದಕ್ಕಾಗಿ ಇಲ್ಲಿನ ಜನತೆ ಮಾಡಿದ ತ್ಯಾಗ ಬಲಿದಾನಗಳು ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳಷ್ಟು ಎಂದರೆ ಉತ್ಪ್ರೇಕ್ಷೆ ಎನಿಸಬಹುದು. ಆದರೆ ಇಲ್ಲಿನ ಜನರ ಪಾಡು ಕಣ್ಣಾರೆ ಕಂಡವರಿಗೆ ಅತಿಶಯೋಕ್ತಿ ಅಲ್ಲ. ಇಂಥ ಮಹಾನ್ ಸಂಘರ್ಷದಲ್ಲಿ ಈ ಭಾಗದ ಪ್ರತಿ ಗ್ರಾಮದ ಪ್ರತಿನಿಧಿಗಳು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಭಾಗವಹಿಸಿದ್ದು ಸಹಜವಾಗಿದೆ. ಹೇಳಿದರೆ ಗ್ರಾಮಕ್ಕೊಂದು ಗಾಥೆಯಾಗಬಹುದು. ಹೈದರಾಬಾದ್ ಕರ್ನಾಟಕದ ವಿಮೋಚನೆಯ ಹೋರಾಟದ ದೀಪ ಹೊತ್ತಿದ್ದೇ ಅಫಜಲಪುರ ಪ್ರದೇಶದಲ್ಲಿ ಎಂಬುವುದು ಸತ್ಯವಾದ ಮಾತು. ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ತಮ್ಮ ಬದುಕೆಲ್ಲ ದುಡಿದ ಮಹಾನುಭಾವರಾದ ಸ್ವಾಮಿ ರಮಾನಂದ ತೀರ್ಥರು ಹುಟ್ಟಿದ್ದು, ಅವರ ತಾಯಿಯ ತವರುಮನೆಯಾದ ಅಫಜಲಪುರ ತಾಲೂಕಿನ ಚಿನಮಳ್ಳಿಯಲ್ಲಿ. 1938ರಲ್ಲಿ ಮುಂಚೂಣಿಗೆ ಬಂದ ‘ವಂದೇ ಮಾತರಂ’ ಚಳುವಳಿಗೆ ಬಾಲಗಂಗಾಧರನಾಥ ತಿಲಕ್ ಮತ್ತು ಹರಡೇಕರ ಮಂಜಪ್ಪನವರು, ಪಂಡಿತ್ ತಾರಾನಾಥರು ಕೊಟ್ಟ ಹೊಸ ರಾಷ್ಟ್ರೀಯವಾದದ ಸತ್ಯಾಗ್ರಹ ಸಿದ್ಧಾಂತದ ಕಾರ್ಯಸೂಚಿಗಳು ಸ್ಫೂರ್ತಿಯಾಗಿದ್ದವು. ಅದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸ್ವಾಮಿ ರಮಾನಂದ ತೀರ್ಥರ ನಾಯಕತ್ವ ಮತ್ತು ಆರ್ಯ ಸಮಾಜ, ಹಿಂದೂ ಮಹಾಸಭಾಗಳು ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾದವು. ಜನರಲ್ಲಿ ಒಕ್ಕೂಟ ರಾಷ್ಟ್ರದ ತುರ್ತನ್ನು ಮನಗಾಣಿಸಿದ್ದವು. ಇದನ್ನು ಕಂಡ ರಜಾಕಾರರು ನಿಝಾಮನು ಮುಸ್ಲಿಮ್ ಪ್ರಪಂಚದ ಅನಭಿಷಕ್ತ ದೊರೆ ಎಂದು ಶಸ್ತ್ರಾಸ್ತ್ರಗಳ ಮೂಲಕ ಹೋರಾಡಿ ಒಕ್ಕೂಟ ಚಳುವಳಿಯನ್ನು ಹತ್ತಿಕ್ಕಲು ಸನ್ನದ್ದನಾದ. ಇದೇ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸರ ಆಜಾದ್ ಹಿಂದ್ ಫೌಜ್ನಲ್ಲಿ ತರಬೇತಿ ಪಡೆದು ಭೂಗತರಾದ ಯೋಧರು ರಾಷ್ಟ್ರೀಯ ಚಳುವಳಿಗಾಗಿ ಕ್ರಿಯಾಶೀಲರಾಗಿದ್ದಾರೆ ಎಂಬ ವದಂತಿಯನ್ನು ನಂಬಿದ ನಿಝಾಮ ಸರಕಾರ ಗಾಂಧಿ ಟೋಪಿ ಧರಿಸಿದವರನ್ನೆಲ್ಲ ದಸ್ತಗಿರಿ ಮಾಡಿ ವಿಚಾರಣೆ ನಡೆಸತೊಡಗಿತು. ಇದರ ಪರಿಣಾಮವಾಗಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ರಾತೋ ರಾತ್ರಿ ಭೀಮಾನದಿ ದಾಟಿಸಿ ಅಂಗ್ರೇಜಿ ಆಡಳಿತವಿರುವ ಪ್ರದೇಶಕ್ಕೆ ಗಡಿಪಾರು ಮಾಡಿದರು. ಇವರಲ್ಲಿ ಭೋಸಗಾ, ಉಡಚಣ ಹಟ್ಟಿ , ಕರಜಗಿ, ಮಣೂರ, ಮಾಶಾಳ ಗ್ರಾಮಗಳ ವಾಸಸ್ಥರು ಪ್ರಮುಖವಾಗಿ ತೊಂದರೆಗೆ ಒಳಗಾದರು. ಈ ಸಂದರ್ಭದಲ್ಲಿ ಅಂದರೆ 1948ರಲ್ಲಿ ಆಳಂದ ಹುಮನಾಬಾದ್ಗಳಲ್ಲಿ ನಿಜಾಮ ಪ್ರಭುತ್ವವನ್ನು ಧಿಕ್ಕರಿಸುವ ಜನರು ಹೈದರಾಬಾದ್ ಸಂಸ್ಥಾನದ ಕುರುಹಾದ ಆಸಫಝಾ ಧ್ವಜವನ್ನು ಕೆಳಗಿಳಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಚಳುವಳಿಯಲ್ಲಿ ಭಾಗವಹಿಸಿದವರನ್ನೆಲ್ಲ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಇಂಥ ಸಂದರ್ಭದಲ್ಲಿ ಬಂಧಿಯಾದವರನ್ನು ನಿಝಾಮರು ರಾಜದಾದ್ಯಂತ ವಿವಿಧೆಡೆ 325 ಜೈಲುಗಳಲ್ಲಿ ಇರಿಸಿದರು. ಸಣ್ಣ ಕೋಣೆಗಳಲ್ಲಿ ಹತ್ತಾರು ಜನರನ್ನು ತುರುಕಿ ಸ್ವಾತಂತ್ರ್ಯ ಯೋಧರನ್ನು ನರಕಯಾತನೆಗೆ ಗುರಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಉಡಚಣ ಹಟ್ಟಿಯ ತುಕಾರಾಂ ಗೋವಿಂದ್ ಕಾಳೆ ಅವರು ಸೋಲಾಪುರದ ಬಟ್ಟೆ ಗಿರಣಿಯ ಕಾರ್ಮಿಕನಾಗಿ ಭೂಗತ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿದ್ದಾಗ ನಿಝಾಮ ಸೇನಾಧಿಕಾರಿಯ ಗುಂಡೇಟಿಗೆ ಗುರಿಯಾದರು. ಅದೃಷ್ಟವಶಾತ್ ಕಾಲಿಗೆ ಗುಂಡು ತಗುಲಿ ಬದುಕಿ ಉಳಿದರು. ಅದರಂತೆ ಗಾಣಗಾಪುರದ ಇಟಗಾ ಗ್ರಾಮದಲ್ಲಿ 1948ರಲ್ಲಿ ಸ್ಥಾಪಿತವಾದ ಸ್ವಾತಂತ್ರ್ಯ ಹೋರಾಟಗಾರರ ಶಿಬಿರದಲ್ಲಿ ಸುಮಾರು 70 ಹಳ್ಳಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ವಹಿಸಿಕೊಂಡು ಗ್ರಾಮ ರಾಜ್ಯವನ್ನು ಸ್ಥಾಪಿಸಿದ್ದರು. ಸಿಂದಗಿ, ದುಧನಿ ಗ್ರಾಮಗಳು ಅಫಜಲಪುರಕ್ಕೆ ಹತ್ತಿರದ ಶಿಬಿರ ಕೇಂದ್ರಗಳಾಗಿದ್ದವು. ಸರ್ದಾರ್ ಶರಣಗೌಡ ಇನಾಮ್ದಾರ್, ದತ್ತಾತ್ರೇಯರಾವ್ ಅವರಾದಿ ಮತ್ತು ಚಂದ್ರಶೇಖರ ಪಾಟೀಲ್ ಈ ಶಿಬಿರಗಳ ಶಿಬಿರಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಫಜಲಪುರ ನಗರದಲ್ಲಿ ನಿಝಾಮ ಸೇನೆ ಜಮಾವಣೆಯಾಗಿತ್ತು. ನಿಝಾಮ ಸೈನಿಕರನ್ನು ಎದುರಿಸಲು ಅಫಜಲಪುರ ಮತ್ತು ದೇವಣಗಾಂವ್ ಮಧ್ಯದಲ್ಲಿ ಹರಿಯುವ ಭೀಮಾ ದಡದಲ್ಲಿ ಎರಡೂ ಕಡೆಯಿಂದ ಗುಂಡಿನ ಸುರಿಮಳೆ ನಡೆಯಿತು. ಅಫಜಲಪುರದಲ್ಲಿನ ನಿಝಾಮ ಸೇನಾ ಜಮಾವಣೆಯನ್ನು ಚದುರಿಸಲು ಸಿಂದಗಿಯ ವಿಮೋಚನಾ ಚಳುವಳಿಗಾರರು ದೇವಣಗಾಂವ್ನಿಂದ ಗುಂಡಿನ ಸುರಿಮಳೆಗೈದರು. 1948ರಲ್ಲಿ ನಡೆದ ಚಳುವಳಿ ಸೇನಾ ಕಾರ್ಯಾಚರಣೆ ಈ ಭಾಗದಲ್ಲಿಒಂದು ಐತಿಹಾಸಿಕ ಮೈಲುಗಲ್ಲು. ಭಾರತ ಪಾಕಿಸ್ತಾನಗಳ ವಿಭಜನೆ ಉತ್ತರ ಭಾರತದ ಜನಜೀವನದ ಮೇಲೆ ಹೇಗೆ ಮರೆಯಲಾಗದ ಪ್ರಭಾವ ಬೀರಿದೆಯೋ ಹಾಗೆ ಈ ಭಾಗದಲ್ಲಿ ಈ ಜನ ಚಳುವಳಿ ಕೂಡ ಪ್ರಭಾವ ಬೀರಿದೆ. ಆದರೆ ಕರ್ನಾಟಕದ ಇತಿಹಾಸ ಎಂದು ಬರೆಯಲಾಗಿರುವ ಶಾಲಾ ಪಠ್ಯಪುಸ್ತಕಗಳಲ್ಲಿ ಮಾತ್ರ ಒಂದು ಪರಿಚ್ಛೇದದಷ್ಟು ಸ್ಥಾನ ಕೂಡಾ ಈ ಚಳುವಳಿಗೆ ಸಿಕ್ಕಿಲ್ಲ ಎಂಬುದು ಮಾತ್ರ ಚಿಂತೆಗೀಡು ಮಾಡುವ ವಿಷಯ. ಒಂದು ಯುದ್ಧ ಮುಗಿದು ಮತ್ತೊಂದು ಯುದ್ಧ ಆರಂಭ ಆಗುವ ಅವಧಿಯೇ ಶಾಂತಿ ಸಮಯ ಎಂದು ಕರೆಯಲಾಗುತ್ತದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ ಕೂಡ ಶಾಂತಿ ಸಮಯಕ್ಕಾಗಿ ಕಾದಿತ್ತು. ಸ್ವಾತಂತ್ರ್ಯ ಚಳುವಳಿಯ ನಾಯಕರೆಲ್ಲ ನಿಝಾಮ ಸರಕಾರದ ವಂಚನೆಯಿಂದ ಜೈಲಿನಲ್ಲಿ ಇರುವಾಗಲೇ ಸಮಯ ಸಾಧಕರು ನಡೆಸಿದ ದುಷ್ಕೃತ್ಯಗಳಿಂದಾಗಿ ಚಳುವಳಿಯು ಕೋಮುದಳ್ಳುರಿ ಸ್ವರೂಪ ಪಡೆಯುವ ಅಪಾಯ ಬಂದು ಒದಗಿತು. ಹೈದರಾಬಾದ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ರಜಾಕಾರರ ಹಾವಳಿ ಕ್ರೂರ ಸ್ವರೂಪ ಪಡೆಯುತ್ತಿರುವುದನ್ನು ಕಂಡುಕೊಂಡ ಅಂದಿನ ಉಪ ಪ್ರಧಾನಮಂತ್ರಿ ಸರದಾರ ವಲ್ಲಭಭಾಯಿ ಪಟೇಲರು 1948ರ ಸೆಪ್ಟಂಬರ್ 13ರಂದು ಪೊಲೀಸ್ ಕಾರ್ಯಾಚರಣೆಗೆ ಆಜ್ಞೆ ಮಾಡಿದರು. ಜನರಲ್ ಚೌಧರಿಯವರ ನಾಯಕತ್ವದಲ್ಲಿ ಭಾರತೀಯ ಸೇನೆ ನಿಝಾಮ ರಾಜ್ಯವನ್ನು ಎಂಟು ದಿಕ್ಕಿನಿಂದ ದಾಳಿ ಮಾಡಿತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಸಮಾಜಘಾತುಕ ಶಕ್ತಿಗಳು ಅಪಜಲಪುರ ಸುತ್ತಲಿನ ಭಾಗದಲ್ಲಿ ತಲೆಯೆತ್ತಿದವು. ಉತ್ತರ ಭಾರತದಿಂದ ಆಗಮಿಸಿದ ಸೇನಾ ಪಡೆಯನ್ನು ಗೊಂದಲಕ್ಕೀಡು ಮಾಡಿ ತಮ್ಮ ವೈಯಕ್ತಿಕ ದ್ವೇಷ ಸಾಧಿಸಲು ನಕಲಿ ಚಳುವಳಿಕಾರರು ಹಳ್ಳಿ ಹಳ್ಳಿಗಳಲ್ಲೆಲ್ಲ ಹುಟ್ಟಿಕೊಂಡರು. ಹೊಲ ಮನೆಗಳ ವ್ಯಾಜ್ಯದ ಕ್ಷುಲ್ಲಕ ಜಗಳಗಳನ್ನು ಮುಂದೆ ಮಾಡಿ ದ್ವೇಷ ಸಾಧಿಸತೊಡಗಿದರು. ಸೇನೆಯ ಕಾರ್ಯಾಚರಣೆಯಲ್ಲಿ ಹಲವಾರು ರಜಾಕಾರರು ದಮನಕ್ಕೆ ಈಡಾದದ್ದು ಸಮರ್ಪಕವಾದ ಕಾರ್ಯವಾಗಿತ್ತು. ಆದರೆ ರಜಾಕಾರರು ಕೇವಲ ಒಂದೇ ಕೋಮಿನವರಾಗಿರಲಿಲ್ಲ. ರಜಾಕಾರರು ನಿಝಾಮ ಸರಕಾರವನ್ನು ಬೆಂಬಲಿಸುವ ಸಂಘಟನೆಎಂದು ಅರಿತಿದ್ದ ಕೆಲವರು ಖಾಸಿಂ ರಜವಿ ತಲೆತಪ್ಪಿಸಿ ಪಾಕಿಸ್ತಾನಕ್ಕೆ ಓಡಿ ಹೋಗುವವರೆಗೆ ರಜಾಕಾರರಾಗಿಯೂ ನಂತರ ಚಳುವಳಿಕಾರರಾಗಿಯೂ ಬಣ್ಣ ಬದಲಿಸಿದರು. ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಸೈನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಅಮಾಯಕರನ್ನು ಬಲಿಪೀಠಕ್ಕೆ ಏರಿಸಿದರು. ಒಂದು ಕೋಮಿಗೆ ಸೇರಿದ ಅಮಾಯಕ ಜನರನ್ನು ರಜಾಕಾರರು ಅಲ್ಲದಿದ್ದರೂ ಸೇನಾ ಕಾರ್ಯಾಚರಣೆಯಲ್ಲಿ ದಂಡನೆಗೆ ಗುರಿ ಮಾಡಿದರು. ಅಫಜಲಪುರ ತಾಲೂಕಿನಲ್ಲಿ ಹೊಳಿ ಭಾಸಗಿ ಗ್ರಾಮದ ಮೌಲಾ, ಬಾಷಾ ಮತ್ತು ಸೈಫನ್ ಎಂಬವರು ಸೇನಾ ಕಾರ್ಯಾಚರಣೆಗೆ ಗುರಿಯಾದರು. ಮತೋಳಿ ಗ್ರಾಮದ ಹಸನ್ ಪಟೇಲ್ ಎಂಬವರನ್ನು ದುಧನಿ ರಸ್ತೆಯಲ್ಲಿರುವ ಚಿಂಚೋಳಿ ಗ್ರಾಮದ ಕರಿಕಖದ್ದಿ ಹತ್ತಿರ ಕತ್ತರಿಸಿ ಹಾಕಲಾಯಿತು. ಇಂಥ ಹತ್ತು ಹಲವು ಉದಾಹರಣೆಗಳು ಅಫಜಲಪುರದ ಸುತ್ತಮುತ್ತಲು ಕೇಳಿ ಬರುತ್ತವೆ. ಇತ್ತ ಬಿಜಾಪುರದ ಆದಿಲಶಾಹಿ ಆಡಳಿತ ಮತ್ತು ಹೈದರಾಬಾದ್ ನಿಝಾಮನ ಆಡಳಿತಗಳ ನಡುವಿದ್ದ ಅಫಜಲಪುರ ಪ್ರದೇಶದ ಮುಸ್ಲಿಮರು ಪ್ರಚೋದಿತರಾದ ಭಾರತ ಒಕ್ಕೂಟ ಸೈನಿಕರ ಕೆಂಗಣ್ಣಿಗೆ ಗುರಿಯಾದದ್ದು ಸಹಜವಾಗಿತ್ತು. ಇಲ್ಲಿನ ಅನೇಕ ಮನೆಗಳು ಲೂಟಿಗೆ ಒಳಗಾದವು. ಸಾವಿರಾರು ಮುಸ್ಲಿಮರು ಪ್ರಾಣಭಯದಿಂದ ಅದುವರೆಗೂ ಪ್ರಭುತ್ವ ನಡೆಸಿದ್ದ ನಿಝಾಮನ ಮೊರೆ ಹೋಗಲು ಹೈದಾರಾಬಾದಿನತ್ತ ಗುಳೇ ಹೋದರು. ನಿಝಾಮನ ಶರಣಾಗತಿ ಪ್ರಕಟವಾಗಿ ಸೇನಾ ಕಾರ್ಯ ಆಚರಣೆ ಹಿಂದಕ್ಕೆ ಪಡೆದಾಗ ದಾರಿಯಲ್ಲಿ ತಾವು ಇದ್ದಲ್ಲಿಯೇ ಪ್ರಯಾಣ ಮೊಟಕುಗೊಳಿಸಿ ಹತ್ತಿರದ ಊರುಗಳಲ್ಲಿ ನೆಲೆಗೊಂಡರು. ಅಫಜಲಪುರದ ಮಟ್ಟಿಗೆ ಹೈದರಾಬಾದ್ ವಿಮೋಚನಾ ಚಳುವಳಿಯು ಬೆಳಕಿಗಿಂತ ಬಿಸಿಲಿನ ಝಳವಾಗಿ ಪರಿಣಮಿಸಿದ್ದು ಸುಳ್ಳಲ್ಲ. 1948ರ ಸೆಪ್ಟೆಂಬರ್ 13ರಂದು ಕೇಂದ್ರ ಗೃಹ ಸಚಿವಾಲಯದಿಂದ ಹೊರಟ ಸೇನಾ ಕಾರ್ಯಾಚರಣೆ ಆಜ್ಞೆ 1948ರ ಸೆಪ್ಟಂಬರ್ 18ವರೆಗೆ ಮುಂದುವರಿಯಿತು. ಅನೇಕ ಮುಸ್ಲಿಮರು ತಲೆ ಮರೆಸಿಕೊಂಡಿದ್ದರು. ಹಾಗೆ ತಲೆ ಕಾಯ್ದ ಹಿಂದೂಗಳನ್ನು ಅವರು ಇಂದಿಗೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಒಂದು ಕೋಮಿಗೆ ಸೇರಿದ ಅಮಾಯಕರನ್ನು ರಜಾಕಾರರು ಅಲ್ಲದಿದ್ದರೂ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ದಂಡನೆಗೆ ಗುರಿ ಮಾಡಿದರು. ಅಫಜಲಪುರ ತಾಲೂಕಿನಲ್ಲಿ ಹೊಳಿ ಭಾಸಗಿ ಗ್ರಾಮದ ಮೌಲಾ, ಬಾಷಾ ಮತ್ತು ಸೈಫನ್ ಎಂಬವರು ಸೇನಾ ಕಾರ್ಯಾಚರಣೆಗೆ ಗುರಿಯಾದರು. ಮತೋಳಿ ಗ್ರಾಮದ ಹಸನ್ ಪಟೇಲ್ ಎಂಬವರನ್ನು ಕರಿಕಖದ್ದಿ ಹತ್ತಿರ ಕತ್ತರಿಸಿ ಹಾಕಲಾಯಿತು. ಇಂಥ ಹತ್ತು ಹಲವು ಉದಾಹರಣೆಗಳು ಅಫಜಲಪುರದ ಸುತ್ತಮುತ್ತಲು ಕೇಳಿ ಬರುತ್ತವೆ.
ʼUS ವಾಣಿಜ್ಯ ಹಡಗುಗಳೇ ಇರಾನ್ ಜಲಪ್ರದೇಶದಿಂದ ದೂರವಿರಿʼ-ಅಮೆರಿಕಾ ಸಲಹೆ: ಶೀಘ್ರವೇ ಇರಾನ್ ಮೇಲೆ US ದಾಳಿ ಆಗಲಿದ್ಯಾ?
ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೆ ಅಮೆರಿಕಾ ಇರಾನ್ ಮೇಲೆ ಪೂರ್ಣ ಪ್ರಮಾಣದ ಯುದ್ದಕ್ಕೆ ಸಿದ್ದತೆ ನಡೆಸುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಈಗಾಗಲೇ ಯುಎಸ್ ನ ಬೃಹತ್ ನೌಕೆಗಳು ಇರಾನ್ ನ ಕರಾವಳಿಯತ್ತ ಶರವೇಗದಿಂದ ನುಗ್ಗುತ್ತಿದ್ದು, ಈ ನಡುವೆ ಇತ್ತೀಚೆಗಷ್ಟೇ ಯುಎಸ್ ಇರಾನ್ ನಲ್ಲಿರುವ ತನ್ನೆಲ್ಲಾ ಪ್ರಜೆಗಳು ಕೂಡಲೇ ದೇಶವನ್ನು ಬಿಟ್ಟು ಹೊರಡಿ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಸದ್ಯ ಇಗ ಮತ್ತೆ ಇರಾನ್ ಜಲ ಪ್ರದೇಶದ ಬಳಿಯಲ್ಲಿ ಸಾಗುವ ಅಮೆರಿಕಾದ ಎಲ್ಲಾ ವಾಣಿಜ್ಯ ಹಡಗುಗಳು ಇರಾನ್ ಜಲಪ್ರದೇಶದಿಂದ ದೂರವಿರುವಂತೆ ಆದೇಶಿಸಿದ್ದು,ಬದಲಾಗಿ ಒಮಾನ್ನ ಪ್ರಾದೇಶಿಕ ಸಮುದ್ರದ ಹತ್ತಿರ ಸಾಗಲು ಶಿಫಾರಸು ಮಾಡಿದೆ. ಇದು ಒಮಾನ್ ನಲ್ಲಿ ಉಭಯದೇಶಗಳ ಮಾತುಕತೆ ಬೆನ್ನಲ್ಲೆ, ಯುಎಸ್ ಇರಾನ್ ಮೇಲೆ ಯುದ್ದಕ್ಕೆ ಅಣಿಯಾಗುತ್ತಿರುವುದನ್ನು ತೋರಿಸುವಂತಿದೆ.
ಕೃಷಿ ಉಪನಿರ್ದೇಶಕರ ಕಚೇರಿ-2 ಸಿಂಧನೂರಿಗೆ ಸ್ಥಳಾಂತರಕ್ಕೆ ಮತ್ತೆ ಆದೇಶ
ಲಿಂಗಸುಗೂರು ಜನತೆಯಲ್ಲಿ ತೀವ್ರ ಆಕ್ರೋಶ
ಭಾರತದ ಕಲ್ಯಾಣ ಯೋಜನೆಗಳನ್ನು ಚುನಾವಣಾ ಅಸ್ತ್ರವನ್ನಾಗಿಸಲು ಮುಂದಾದ ಬಾಂಗ್ಲಾದೇಶ
ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತದ ಕಲ್ಯಾಣ ಯೋಜನೆಗಳು ಪ್ರತಿಧ್ವನಿಸಿದೆ. ಭಾರತದ ಕಲ್ಯಾಣ ಯೋಜನೆಗಳ ಎರವಲು ಪಡೆಯಲು ಬಾಂಗ್ಲಾದೇಶ ಮುಂದಾಗಿದೆ. ಬಾಂಗ್ಲಾದೇಶದ ಎರಡು ಪ್ರಮುಖ ಪಕ್ಷಗಳಾದ ತಾರಿಕ್ ರೆಹಮಾನ್ ಅವರ ಬಿಎನ್ಪಿ ಮತ್ತು ಜಮಾತ್-ಇ-ಇಸ್ಲಾಮಿಯ ತಮ್ಮ ಪ್ರಣಾಳಿಕೆಗಳಲ್ಲಿ ಭಾರತವನ್ನು ಅನುಸರಿಸುತ್ತಿದೆ.
ಪೆಟ್ರೋರಾಬಿಗ್ ನ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಯಾಗಿ 'ಅಲ್ ಮುಝೈನ್'ಗೆ ಪ್ರಶಸ್ತಿ
ಹೊಸದಿಲ್ಲಿ: ಪೆಟ್ರೋರಾಬಿಗ್ ನ 2025ರ ಮೆಗಾ ಟರ್ನ್ಅರೌಂಡ್ ಮುಖ್ಯ ಪ್ಯಾಕೇಜ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಯಾಗಿ 'ಅಲ್ ಮುಝೈನ್'ಗೆ ಪ್ರಶಸ್ತಿ ನೀಡಲಾಗಿದೆ. ಪೆಟ್ರೋರಾಬಿಗ್ ನ ಸಿಇಒ ಒಥಮಾನ್ ಅಲ್ ಘಮ್ದಿ ಅವರಿಂದ ಅಲ್ ಮುಝೈನ್ ಸಂಸ್ಥೆಯ ಪರವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಝಕರಿಯಾ ಬಜ್ಪೆ ಮತ್ತು ಟಿ.ವಿ.ದೀಪಕ್ ಸ್ವೀಕರಿಸಿದ್ದಾರೆ. ಸುರಕ್ಷತೆ, ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುವಿಕೆ ಸೇರಿದಂತೆ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಅಲ್ ಮುಝೈನ್ ಸಂಸ್ಥೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತ್ರಿವಳಿ ತಜ್ಞ ವೈದ್ಯರ ಕ್ರಮಬದ್ಧಗೊಳಿಸುವಿಕೆ ಕೈಬಿಡಲು ದಲಿತ ಸೇನೆ ಆಗ್ರಹ
ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ತ್ರಿವಳಿ ತಜ್ಞ ವೈದ್ಯರನ್ನು ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವುದನ್ನು ಕೈಬಿಡಬೇಕೆಂದು ದಲಿತ ಸೇನೆ ನಿಂಬರ್ಗಾ ಹೋಬಳಿ ವಲಯದ ಪದಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಿಂಬರ್ಗಾ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ತ್ರಿವಳಿ ತಜ್ಞ ವೈದ್ಯರನ್ನು ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವುದನ್ನು ದಲಿತ ಸೇನೆ ತೀವ್ರವಾಗಿ ಖಂಡಿಸಿದೆ. ನಿಂಬರ್ಗಾ ಗ್ರಾಮವು ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಇಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡವಿದೆ. ಸುತ್ತಮುತ್ತಲ 15ರಿಂದ 20 ಹಳ್ಳಿಗಳಿಗೆ ಇದು ಪ್ರಮುಖ ಆಸ್ಪತ್ರೆಯಾಗಿದ್ದು, ಇಂತಹ ಕೇಂದ್ರಕ್ಕೆ ತ್ರಿವಳಿ ತಜ್ಞ ವೈದ್ಯರ ಅಗತ್ಯವಿದೆ. ಆದ್ದರಿಂದ ತಾಲೂಕಾ ಆಸ್ಪತ್ರೆಗೆ ಕ್ರಮಬದ್ಧಗೊಳಿಸುವ ಕ್ರಮವನ್ನು ಕೂಡಲೇ ಕೈಬಿಡಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸೇನೆ ನಿಂಬರ್ಗಾ ವಲಯ ಅಧ್ಯಕ್ಷ ಶಶಿಧರ್ ನವರಂಗ್, ಮೋಹನ್ ನಿರ್ಮಲಕರ್, ಶಿವಲಿಂಗ ಮಾಡ್ಯಾಳಕರ್, ಧರ್ಮರಾಜ ಕೋನಾ, ಶರಣಬಸಪ್ಪ ನಿರ್ಮಲಕರ್, ಸೂರ್ಯಕಾಂತ ಜಿಡಗಾ, ಸಂವಿಧಾನ ಸಾಗರ್, ದಶರಥ ಕಾಂಬಳೆ, ಚಿದಾನಂದ ಮುರಡಿ, ಅಮೃತ ಶಿರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
PM CARES ಬಗ್ಗೆ ಪ್ರಶ್ನೆ ಕೇಳಲು ಅವಕಾಶವಿಲ್ಲ ಎಂದ ಪ್ರಧಾನಿ ಕಚೇರಿ; ಲೋಕಸಭೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು?
PM CARES ನಿಧಿ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಮತ್ತು ರಾಷ್ಟ್ರೀಯ ರಕ್ಷಣಾ ನಿಧಿ (NDF) ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಪ್ರಧಾನಿ ಕಚೇರಿ (PMO) ಇತ್ತೀಚೆಗೆ ಲೋಕಸಭೆಯ ಸಚಿವಾಲಯಕ್ಕೆ ತಿಳಿಸಿದೆ. ಈ ನಿಧಿಗಳಲ್ಲಿರುವ ಹಣವು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದ ದೇಣಿಗೆ. ಇದು ಭಾರತದ ಸಂಚಿತ ನಿಧಿಯಿಂದ ಬಂದ ಹಣವಲ್ಲ. ಆದುದರಿಂದ ಇವು ಸರ್ಕಾರದ ನೇರ ನಿಯಮಾವಳಿಗಳಿಗೆ ಒಳಪಡುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ಹೇಳಿದೆ ಎಂದು ವರದಿಯಾಗಿದೆ. ಪ್ರಧಾನಿ ಕಚೇರಿಯು ಸಂಸತ್ತು ಏನು ಚರ್ಚಿಸಬಹುದು ಎಂಬುದನ್ನು ನಿಯಂತ್ರಿಸುವುದು ಗಂಭೀರವಾದ ಸಂಗತಿ. ಯಾಕೆಂದರೆ ಇದು ಚುನಾಯಿತ ಅಧಿಕಾರಿಗಳು ಸಾರ್ವಜನಿಕರ ಪರವಾಗಿ ಸರ್ಕಾರವನ್ನು ಸರಿಯಾಗಿ ಪ್ರಶ್ನಿಸುವುದನ್ನು ತಡೆಯುತ್ತದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಲೋಕಸಭೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಸರ್ಕಾರದ ಉತ್ತರಕ್ಕಾಗಿ ಸದನದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳಲ್ಲಿ ಸ್ವೀಕಾರಾರ್ಹ ಪ್ರಶ್ನೆಗಳಿಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪ್ರಶ್ನೆಗಳನ್ನು ಮೊದಲು ಲೋಕಸಭಾ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ನಿಯಮಗಳ ಪ್ರಕಾರ ಇದರ ಸ್ವೀಕಾರಾರ್ಹತೆಯನ್ನು ನಿರ್ಧರಿಸಲಾಗುತ್ತಿದೆ. ಅಂತಿಮ ನಿರ್ಧಾರವು ಸ್ಪೀಕರ್ ಅವರದ್ದಾಗಿರುತ್ತದೆ. ನಿಯಮ 41 ಪ್ರಕಾರ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯದ ಕುರಿತು ಮಾಹಿತಿಯನ್ನು ಪಡೆಯುವ ಉದ್ದೇಶಕ್ಕಾಗಿ ಪ್ರಶ್ನೆಯನ್ನು ಕೇಳಬಹುದು. ಅದನ್ನು ಸಚಿವರು ಕೇಳಬಹುದು. ನಂತರ ಪ್ರಶ್ನೆಯು 23 ಷರತ್ತುಗಳನ್ನು ಪೂರೈಸಬೇಕು. ಅಧಿಕೃತ ರಹಸ್ಯಗಳು ಅಥವಾ ನ್ಯಾಯಾಲಯದ ವ್ಯಾಪ್ತಿಯಲ್ಲಿರಬೇಕಾದ ವಿಷಯಗಳ ಬಗ್ಗೆ ಇರಬಾರದು ಇತ್ಯಾದಿ ಈ ಷರತ್ತುಗಳ ಪಟ್ಟಿಯಲ್ಲಿದೆ. ನಿಯಮ 41(2)(viii) ಇದು ಸರ್ಕಾರದ ಕೆಲಸವಲ್ಲದಿದ್ದರೆ, ಕೇಳಬೇಡಿ. ಈ ನಿಧಿಗಳು ಸ್ವಯಂಪ್ರೇರಿತ ದೇಣಿಗೆಗಳಿಂದ (ತೆರಿಗೆ ಹಣದಿಂದಲ್ಲ) ಮಾಡಲ್ಪಟ್ಟಿರುವುದರಿಂದ, ಅವು ಭಾರತ ಸರ್ಕಾರದ ವಿಷಯವಲ್ಲ. 41(2)(xvii) ಗಳ ಪ್ರಕಾರ ಭಾರತ ಸರ್ಕಾರಕ್ಕೆ ಪ್ರಾಥಮಿಕವಾಗಿ ಜವಾಬ್ದಾರರಲ್ಲದ ಸಂಸ್ಥೆಗಳು ಅಥವಾ ವ್ಯಕ್ತಿಗಳ ನಿಯಂತ್ರಣದಲ್ಲಿರುವ ವಿಷಯಗಳನ್ನು ಅದು ಎತ್ತಬಾರದು ಎಂದು PMO ವಾದಿಸುತ್ತಿದೆ. ಉಲ್ಲೇಖಿಸಲಾದ ಮೂರು ನಿಧಿಗಳು ಯಾವುವು? ಕೋವಿಡ್ ಸಾಂಕ್ರಾಮಿಕ ರೋಗದ ನಂತರ 2020 ಮಾರ್ಚ್ 27ರಂದು PM CARES ನಿಧಿಯನ್ನು ಸ್ಥಾಪಿಸಲಾಯಿತು. COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಪೀಡಿತರಿಗೆ ಪರಿಹಾರವನ್ನು ಒದಗಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಮೀಸಲಾದ ನಿಧಿಯನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, 'ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ (PM CARES ನಿಧಿ)' ಎಂಬ ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಎಂದು PM CARES ನಿಧಿಯ ಅಧಿಕೃತ ವೆಬ್ಸೈಟ್ ಹೇಳುತ್ತದೆ. ಈ ನಿಧಿಯನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ . ಅದರ ಟ್ರಸ್ಟ್ ಡೀಡ್ ಅನ್ನು ಮಾರ್ಚ್ 27, 2020 ರಂದು ಹೊಸದಿಲ್ಲಿಯಲ್ಲಿ ನೋಂದಣಿ ಕಾಯ್ದೆ, 1908 ರ ಅಡಿಯಲ್ಲಿ ನೋಂದಾಯಿಸಲಾಗಿದೆ. 2022-23 ರ PM CARES ನಿಧಿಯ ರಶೀದಿಗಳು ಮತ್ತು ಪಾವತಿ ಖಾತೆ ವರದಿಯ ಪ್ರಕಾರ, ಅದರ ಅಧಿಕೃತ ವೆಬ್ಸೈಟ್ನಲ್ಲಿ ಕೊನೆಯದಾಗಿ ಪ್ರಕಟವಾದ ಮಾಹಿತಿಯಂತೆ ಮಾರ್ಚ್ 2023 ರ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ 6,283.7 ಕೋಟಿ ರೂ.ಗಳಷ್ಟಿತ್ತು. ಜನವರಿ 2023 ರಲ್ಲಿ, ಕೇಂದ್ರವು ದಿಲ್ಲಿ ಹೈಕೋರ್ಟ್ಗೆ PM CARES ನಿಧಿಯನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ. ಇದನ್ನು ಸಂವಿಧಾನ ಅಥವಾ ಸಂಸತ್ತು ಅಥವಾ ರಾಜ್ಯವು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ರಚಿಸಲಾಗಿಲ್ಲ ಎಂದು ತಿಳಿಸಿತ್ತು. ಅದರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ನಿಧಿಯನ್ನು state” ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರವು ಈ ಹೇಳಿಕೆಯನ್ನು ನೀಡಿತ್ತು. ಕೇಂದ್ರವು ತನ್ನ ಅಫಿಡವಿಟ್ನಲ್ಲಿ ಟ್ರಸ್ಟ್ ಅನ್ನು ಯಾವುದೇ ಸರ್ಕಾರ ಅಥವಾ ಸರ್ಕಾರದ ಯಾವುದೇ ಸಂಸ್ಥೆ ಒಡೆತನದಲ್ಲಿರಲು ಅಥವಾ ನಿಯಂತ್ರಿಸಲು ಉದ್ದೇಶಿಸಿಲ್ಲ ಮತ್ತು ಸಾರ್ವಜನಿಕ ಹುದ್ದೆಗಳನ್ನು ಹೊಂದಿರುವವರನ್ನು ಒಳಗೊಂಡ ಟ್ರಸ್ಟಿಗಳ ಮಂಡಳಿಯ ಸಂಯೋಜನೆಯು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಎಂದು ಹೇಳಿದೆ. ಕಾನೂನು ಅಥವಾ ಸಂವಿಧಾನದ ಅಡಿಯಲ್ಲಿ ರಚಿಸಲಾಗಿಲ್ಲವಾದ್ದರಿಂದ PMCARES, RTI ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರವನ್ನು ರೂಪಿಸುವುದಿಲ್ಲ ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಆಗಸ್ಟ್ 18, 2020 ರಂದು, ಸುಪ್ರೀಂಕೋರ್ಟ್ PM CARES ನಿಧಿಯಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಗೆ (NDRF) ಹಣವನ್ನು ವರ್ಗಾಯಿಸುವ ಆದೇಶವನ್ನು ನಿರಾಕರಿಸಿತು. ಅವುಗಳು ವಿಭಿನ್ನ ಕಾರಣ ಮತ್ತು ಉದ್ದೇಶವನ್ನು ಹೊಂದಿರುವ ಎರಡು ವಿಭಿನ್ನ ನಿಧಿಗಳು ಹಾಗಾಗಿ ಅದನ್ನು ವರ್ಗಾಯಿಸುವಂತಿಲ್ಲ ಎಂದು ಹೇಳಿತು. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಂದ NDRF ನ ಲೆಕ್ಕಪರಿಶೋಧನೆಗೆ ಮಾರ್ಗಸೂಚಿಗಳು ನಿರ್ದಿಷ್ಟವಾಗಿ ಅವಕಾಶ ನೀಡುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ PM CARES ನಿಧಿಯು ಸ್ವಯಂಪ್ರೇರಿತ ದೇಣಿಗೆಗಳಿಂದ ಮಾತ್ರ ಹಣವನ್ನು ಪಡೆಯುವ ಖಾಸಗಿ ಟ್ರಸ್ಟ್ ಆಗಿರುವುದರಿಂದ ಲೆಕ್ಕಪರಿಶೋಧಿಸಲು ಅದಕ್ಕೆ ಯಾವುದೇ ಕಾನೂನು ಅಧಿಕಾರವಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಂದ್ರ (CPIL) ಎಂಬ NGO ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಪಿಎಂ ಕೇರ್ಸ್ ನಿಧಿಯಲ್ಲಿ ಸಂಗ್ರಹಿಸಲಾದ ನಿಧಿಗಳು ಸಂಪೂರ್ಣವಾಗಿ ವಿಭಿನ್ನ ನಿಧಿಗಳಾಗಿದ್ದು, ಅವು ಸಾರ್ವಜನಿಕ ದತ್ತಿ ಟ್ರಸ್ಟ್ನ ನಿಧಿಗಳಾಗಿವೆ. ಈ ಹಣವನ್ನು ಎನ್ಡಿಆರ್ಎಫ್ಗೆ ಕಾನೂನುಬದ್ಧವಾಗಿ ವರ್ಗಾಯಿಸಲಾಗುವುದಿಲ್ಲ ಎಂದಿತ್ತು. ಡಿಸೆಂಬರ್ 2020 ರಲ್ಲಿ, ಆರ್ಟಿಐ ದಾಖಲೆಗಳ ಆಧಾರದ ಮೇಲೆ The Indian Express ಮಾಡಿದ ವರದಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಲ್ಲಿ 2,400 ಕೋಟಿ ರೂ.ಗಳಿಗಿಂತ ಹೆಚ್ಚಾಗಿ, ವಿವಿಧ ವಲಯಗಳ 100 ಕ್ಕೂ ಹೆಚ್ಚು ಪಿಎಸ್ಯುಗಳು ಸಿಬ್ಬಂದಿ ವೇತನದಿಂದ ಸುಮಾರು 155 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ನಿಧಿಗೆ ನೀಡಿವೆ. ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ಸಾರ್ವಜನಿಕ ದೇಣಿಗೆಗಳೊಂದಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಅನ್ನು 1948 ರಲ್ಲಿ ಸ್ಥಾಪಿಸಲಾಯಿತು. ಇದರ ಸಂಪನ್ಮೂಲಗಳನ್ನು ಈಗ ಪ್ರಾಥಮಿಕವಾಗಿ ನೈಸರ್ಗಿಕ ವಿಕೋಪಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಮತ್ತು ಪ್ರಮುಖ ಅಪಘಾತಗಳು ಮತ್ತು ಗಲಭೆಗಳ ಸಂತ್ರಸ್ತರಿಗೆ ಸಹಾಯ ಮಾಡಲು ಬಳಸಿಕೊಳ್ಳಲಾಗುತ್ತಿದೆ. NDF ಅನ್ನು ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ. ಈ ನಿಧಿಯನ್ನು ಪ್ರಧಾನಮಂತ್ರಿಯವರು ಅಧ್ಯಕ್ಷರಾಗಿರುವ ಕಾರ್ಯಕಾರಿ ಸಮಿತಿಯು ನಿರ್ವಹಿಸುತ್ತದೆ. ಅದರ ಅಧಿಕೃತ ವೆಬ್ಸೈಟ್ ಪ್ರಕಾರ, ಪ್ರಧಾನಿ ಅಧ್ಯಕ್ಷರಾಗಿದ್ದು ರಕ್ಷಣಾ, ಹಣಕಾಸು ಮತ್ತು ಗೃಹ ಸಚಿವರು ಸದಸ್ಯರಾಗಿದ್ದಾರೆ. ಹಾಗಾದರೆ ಈ ಸಂಸ್ಥೆಗಳು ಭಾರತ ಸರ್ಕಾರದ ಕಾಳಜಿ ಅಲ್ಲವೇ? ಗಮನಿಸಬೇಕಾದ ಅಂಶವೆಂದರೆ ಇವುಗಳನ್ನು ಸರ್ಕಾರಿ ಸಂಸ್ಥೆಗಳಾಗಿ ನೋಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಸಂಸತ್ತಿನ ಕೆಲಸವಲ್ಲ. ಕಾರ್ಯಾಂಗವು ಒಂದು ನಿಲುವನ್ನು ತೆಗೆದುಕೊಳ್ಳಬಹುದು ಮತ್ತು ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು, ಆದರೆ ಈ ಸಂಸ್ಥೆಗಳು ಕೇಂದ್ರ ಸರ್ಕಾರದ ಭಾಗವಾಗಿದೆಯೇ ಎಂದು ನಿರ್ಧರಿಸಲು ಅವುಗಳ ಸ್ವರೂಪವನ್ನು ವ್ಯಾಖ್ಯಾನಿಸುವುದು ಶಾಸಕಾಂಗದ ಪಾತ್ರವಲ್ಲ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ನಲ್ಲಿ ಕೆಲಸ ಮಾಡುವ ಚಕ್ಷು ರಾಯ್ ಹೇಳಿರುವುದಾಗಿ The Indian Express ಉಲ್ಲೇಖಿಸಿದೆ. ಈ ಸಂಸ್ಥೆಗಳು ಆರ್ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿವೆಯೇ? ಎನ್ಡಿಎಫ್, ಮಾಹಿತಿ ಹಕ್ಕು ಕಾಯ್ದೆ2005 ರ ವ್ಯಾಪ್ತಿಯಲ್ಲಿದೆ. ಪಿಎಂ ಕೇರ್ಸ್ ಮತ್ತು ಪಿಎಂಎನ್ಆರ್ಎಫ್ ಎರಡರ ಸ್ಥಿತಿಯ ಕುರಿತಾದ ಪ್ರಕರಣಗಳು ದೆಹಲಿ ಹೈಕೋರ್ಟ್ನಲ್ಲಿದೆ. ಪಿಎಂ ಕೇರ್ಸ್ ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್ 1 ರಂದು ನಡೆಯಲಿದೆ. ಪ್ರಶ್ನೆಯನ್ನು ಸ್ವೀಕಾರಾರ್ಹವೆಂದು ಪರಿಗಣಿಸಿದರೆ ಏನಾಗುತ್ತದೆ? ಪ್ರಶ್ನೆ ಸ್ವೀಕಾರಾರ್ಹವಾದರೆ ಅದನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅದು ಪ್ರತಿಕ್ರಿಯಿಸಲು 15 ದಿನಗಳು ಬೇಕಾಗುತ್ತದೆ. ಒಂದು ನಿರ್ದಿಷ್ಟ ಪ್ರಶ್ನೆಯು ಸ್ವೀಕಾರಾರ್ಹತೆಯನ್ನು ನಿಯಂತ್ರಿಸುವ ಯಾವುದೇ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಸಚಿವಾಲಯ ಭಾವಿಸಿದರೆ, ಅಥವಾ ಅದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ವಿಷಯವನ್ನು ನಿರ್ವಹಿಸುತ್ತದೆ, ಅಥವಾ ಉತ್ತರವು ಮತ್ತೊಂದು ದೇಶದೊಂದಿಗೆ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿದರೆ, ಅದು ಅದನ್ನು ಸಚಿವಾಲಯಕ್ಕೆ ತೋರಿಸಿ ಅದನ್ನು ನಿರಾಕರಿಸಬಹುದು ಎಂದು ವಿನಂತಿಸಬೇಕು ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳಿದ್ದಾರೆ. ಲೋಕಸಭೆ ಸಚಿವಾಲಯ ಸ್ವೀಕರಿಸಿದ ಮತ್ತು ಉತ್ತರಿಸಿದ ಪ್ರಶ್ನೆಗಳ ಕುರಿತು ಡೇಟಾವನ್ನು ಪ್ರಕಟಿಸುತ್ತದೆ ಎಂದಿದ್ದಾರೆ ರಾಯ್ . ಪ್ರಶ್ನೆಗಳನ್ನು ಸ್ವೀಕರಿಸಬೇಡಿ ಎಂದು ಸರ್ಕಾರಿ ಸಂಸ್ಥೆಯು ಪೂರ್ವಭಾವಿಯಾಗಿ ಸಚಿವಾಲಯಕ್ಕೆ ಹೇಳಬಹುದೇ? ಹೀಗೆ ಆಗುವುದು ಅತೀ ಅಪರೂಪ. ಅನುಮತಿಗೆ ಸಂಬಂಧಿಸಿದ ನಿರ್ಧಾರವು ಸ್ಪೀಕರ್ಗೆ ಮಾತ್ರ ಬಿಟ್ಟದ್ದು. ಅಲ್ಲದೆ, ನಿರ್ಧಾರಗಳನ್ನು ನಿರ್ದಿಷ್ಟ ನಿಧಿಯಂತೆ ಸಂಪೂರ್ಣ ವಿಷಯಗಳ ಮೇಲೆ ಅಲ್ಲ, ವೈಯಕ್ತಿಕ ಪ್ರಶ್ನೆಯ ಅರ್ಹತೆಯ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ ಆಚಾರಿ.
ಚಾಮರಾಜನಗರ: ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಭಯವನ್ನು ಹೆಚ್ಚಿಸಿದೆ. ಬೆಂಗಳೂರು ದಕ್ಷಿಣ ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕನು ತನ್ನ ಕುಟುಂಬದೊಂದಿಗೆ ಪಾದಯಾತ್ರೆಗೆ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪಾದಯಾತ್ರಿಗಳು ಗುಂಪುಗುಂಪಾಗಿ ಸಾಗುತ್ತಿದ್ದ ಸಮಯದಲ್ಲೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ಬಾಲಕ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ಕು ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅರಣ್ಯ ಹಾಗೂ ಸಂಬಂಧಿತ ಪ್ರಾಧಿಕಾರದ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ. ದಾಳಿಯಿಂದ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಗನ್ ಹಿಡಿದು ಡ್ಯಾನ್ಸ್ ಮಾಡಿದ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ ಮತಿನ್ ಪಟೇಲ್: ಕಲಬುರಗಿಯ ವಿಡಿಯೋ ವೈರಲ್
ಸಾರ್ವಜನಿಕವಾಗಿ ಶಸ್ತ್ರಾಸ್ತ್ರದ ಪ್ರದರ್ಶನ ಅಪರಾಧವಾಗಿದ್ದರೂ, ನಿಯಮ ಗಾಳಿಗೆ ತೂರಿ ಮದುವೆ ಸಮಾರಂಭದಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ಶಾಸಕರ ಆಪ್ತನಿಗೆಈಗ ಕಾನೂನು ಸಂಕಟ ಎದುರಾಗಿದೆ. ಪೊಲೀಸರು ಮತಿನ್ ಪಟೇಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ದೇಶದ ಗೆಲುವೋ ಅಥವಾ ವೈಫಲ್ಯವೋ?
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ದೇಶಕ್ಕೆ ಏನು ಪ್ರಯೋಜನ ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ. ವಿರೋಧ ಪಕ್ಷಗಳು ಸಹ ನಿರಂತರವಾಗಿ ಆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ಕೃಷಿ ಮತ್ತು ಡೈರಿ ಕ್ಷೇತ್ರಗಳನ್ನು ಅಮೆರಿಕಕ್ಕೆ ಮುಕ್ತಗೊಳಿಸಲಾಗಿದೆಯೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಈಗ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಹಲವಾರು ಅಂಶಗಳ ಬಗ್ಗೆ ಹೇಳಲಾಗಿದೆ. ಡೈರಿ, ಹಣ್ಣುಗಳು, ತರಕಾರಿಗಳು, ಮಸಾಲೆಗಳು ಮತ್ತು ಇತರ ಧಾನ್ಯಗಳನ್ನು ಸುಂಕ ವಿನಾಯಿತಿಯಿಂದ ರಕ್ಷಿಸುವ ಮೂಲಕ ದೇಶೀಯ ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಭಾರತ ಸರಕಾರ ಕೃಷಿ ವಲಯವನ್ನು ರೈತರಿಗೆ ಹಾನಿಯಾಗುವಂತೆ ಅಮೆರಿಕಕ್ಕೆ ಮುಕ್ತವಾಗಿಸಿದೆಯೇ ಎಂಬ ಪ್ರಶ್ನೆಯಿದೆ. ಒಪ್ಪಂದದ ಅಂತಿಮ ಕರಡೇನೂ ಇದಲ್ಲ. ಮೊದಲ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿನ ಒಂದು ಅಂಶವೆಂದರೆ, ರಶ್ಯದ ತೈಲದ ಮೇಲೆ ವಿಧಿಸಲಾಗಿದ್ದ ಶೇ. 25 ದಂಡನಾತ್ಮಕ ಸುಂಕ ತೆಗೆದುಹಾಕಲಾಗಿದೆ ಮತ್ತು ನಮ್ಮ ಮೇಲೆ ವಿಧಿಸಲಾಗಿದ್ದ ಶೇ. 25 ಸುಂಕವನ್ನು ಸಹ ತೆಗೆಯಲಾಗಿದ್ದು, ಅದನ್ನು ಈಗ ಶೇ. 18ಕ್ಕೆ ಇಳಿಸಲಾಗಿದೆ. ಜಪಾನ್ ಈಗಲೂ ಭಾರತಕ್ಕಿಂತ ಕಡಿಮೆ ಸುಂಕ ಹೊಂದಿದೆ ಎಂಬುದನ್ನು ಗಮನಿಸಬೇಕು. ಈಗ, ಮಧ್ಯಂತರ ಸುಂಕಗಳಿಂದ ಜವಳಿ ಮತ್ತು ಉಡುಪು ವಲಯಕ್ಕೆ ಪ್ರಯೋಜನವಾಗಬಹುದು. ಭಾರತಕ್ಕಿಂತ ಮೊದಲು ಬಾಂಗ್ಲಾದೇಶ ಯುಎಸ್ಗೆ ಸಿದ್ಧ ಉಡುಪುಗಳ ಅತಿದೊಡ್ಡ ರಫ್ತುದಾರ ದೇಶವಾಗಿತ್ತು. ಬಾಂಗ್ಲಾದೇಶದಲ್ಲಿ ಅಸ್ಥಿರತೆ ಉಂಟಾದಾಗ, ಭಾರತೀಯ ಜವಳಿ ವಲಯಕ್ಕೆ ಅಮೆರಿಕ ಮಾರುಕಟ್ಟೆ ವಲಯದಲ್ಲಿ ಉತ್ತಮ ಅವಕಾಶವಿದೆ ಎನ್ನಲಾಗಿದೆ. ಆದರೆ ಅದರ ಮೇಲೆ ಸುಂಕಗಳನ್ನು ವಿಧಿಸಲಾಯಿತು. ಈಗ ಜವಳಿ ವಲಯದ ಮೇಲಿನ ಸುಂಕಗಳು ಕ್ರಮೇಣ ಕಡಿಮೆಯಾಗುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇದಲ್ಲದೆ, ಚರ್ಮದ ಉತ್ಪನ್ನಗಳ ಮೇಲಿನ ಸುಂಕಗಳು ಸಹ ಕಡಿಮೆಯಾಗುತ್ತಿವೆ. ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಮೇಲಿನ ಸುಂಕಗಳನ್ನು ಸಹ ಶೇ. 18ಕ್ಕೆ ಇಳಿಸಲಾಗಿದೆ. ವಜ್ರದ ಮೇಲೆ ಶೂನ್ಯ ಸುಂಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದಲ್ಲದೆ, ಭಾರತೀಯ ಔಷಧ ವಲಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೆನೆರಿಕ್ ಔಷಧಿಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಬಹುದು ಎನ್ನಲಾಗುತ್ತಿದೆ. ಜವಳಿ ಮತ್ತು ಬಟ್ಟೆ ವ್ಯವಹಾರಕ್ಕೆ ಸಂಬಂಧಿಸಿದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಪ್ರಯೋಜನ ಪಡೆಯುತ್ತಾರೆ. ಚರ್ಮ ಮತ್ತು ಚರ್ಮದ ಶೂ ವ್ಯಾಪಾರಿಗಳು ಪ್ರಯೋಜನ ಪಡೆಯುತ್ತಾರೆ. ಯಂತ್ರೋಪಕರಣಗಳು, ಬಿಡಿಭಾಗಗಳು ಲಾಭ ಪಡೆಯುತ್ತವೆ.ಸಾವಯವ ರಾಸಾಯನಿಕಗಳು, ಎಲ್ಲ ಕರಕುಶಲ ವಸ್ತುಗಳ ಮೇಲೆ ಭಾರತ ಸುಂಕ ರಿಯಾಯಿತಿ ಪಡೆಯಲಿದೆ. ಅಂದರೆ, ಭಾರತೀಯ ರಫ್ತುದಾರರು ಗಮನಾರ್ಹ ಪ್ರಯೋಜನ ಪಡೆಯಬಹುದು. ಭಾರತ ಯುಎಸ್ನಿಂದ 500 ಬಿಲಿಯನ್ ಡಾಲರ್ ಇಂಧನ ಮತ್ತು ತಂತ್ರಜ್ಞಾನ ಖರೀದಿಸುವ ಭರವಸೆ ನೀಡಿದೆ. ಭಾರತದ ಕೃಷಿ ವಲಯ ಅಮೆರಿಕಕ್ಕೆ ತೆರೆದುಕೊಂಡಿದೆ ಎಂದು ಅಮೆರಿಕ ಪದೇ ಪದೇ ಹೇಳುತ್ತಿದೆ. ಇನ್ನೊಂದೆಡೆ, ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಒಣ ಡಿಸ್ಟಿಲರ್ ಧಾನ್ಯಗಳು, ತಾಜಾ ಹಾಗೂ ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಮೊದಲಾದವುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ. ದೊಡ್ಡ ವಿಷಯವೆಂದರೆ, ಅಮೆರಿಕ ಭಾರತದೊಂದಿಗೆ ತಂತ್ರಜ್ಞಾನ ವ್ಯಾಪಾರದ ಬಗ್ಗೆ ಹೇಳಿದೆ. ಅಮೆರಿಕನ್ ಕಂಪೆನಿಗಳು ಇಲ್ಲಿಗೆ ಬಂದು ಡೇಟಾ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಆದರೆ ಇದು ನಮ್ಮ ಖಾಸಗಿತನವನ್ನು, ಗೌಪ್ಯತೆಯನ್ನು ಮಾರಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬಹುದೇ ಎಂಬ ಆತಂಕವೂ ಇದೆ. ಕೃಷಿ ವಲಯ ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಅಥವಾ ಡೈರಿ ಉತ್ಪನ್ನಗಳನ್ನು ಅಮೆರಿಕಕ್ಕೆ ಮುಕ್ತಗೊಳಿಸಲಾಗಿಲ್ಲ ಎನ್ನಲಾಗುತ್ತಿದೆ. ಸದ್ಯ ಸ್ಪಷ್ಟತೆ ಇಲ್ಲದ ಎರಡು ವಿಷಯಗಳಿವೆ. ಮೊದಲನೆಯದಾಗಿ, ಎಲ್ಲಿಯೂ ರಶ್ಯ ತೈಲದ ಉಲ್ಲೇಖವಿಲ್ಲ ಎರಡನೆಯದಾಗಿ, ಕೆಲಸದ ವೀಸಾ ಆಗಿರುವ ಎಚ್1ಬಿ ವೀಸಾ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಇದು ಭಾರತೀಯ ತಂತ್ರಜ್ಞಾನ ವಲಯಕ್ಕೆ ಪ್ರಮುಖವಾಗಿರುವಾಗಲೂ ಇದರ ಬಗ್ಗೆ ಚರ್ಚೆ ಇಲ್ಲದೇ ಇರುವುದು ಪ್ರಶ್ನೆಗೆ ಕಾರಣವಾಗಿದೆ. ಭಾರತ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ಹಿಂಪಡೆಯಲು ಎಚ್1ಬಿ ವೀಸಾ ಒಂದು ಪ್ರಮುಖ ಮಾರ್ಗವಾಗಿತ್ತು. ಆದರೆ ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಭಾರತ ರಶ್ಯದಿಂದ ತೈಲ ಖರೀದಿಸುವುದಿಲ್ಲ ಎಂದು ಅಮೆರಿಕ ಹೇಳುತ್ತಿರುವಾಗ, ರಶ್ಯ ಅದರ ಬಗ್ಗೆ ಪ್ರತಿಕ್ರಿಯಿಸಿದೆ. ತೈಲ ಖರೀದಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಭಾರತ ಸರಕಾರದಿಂದ ಇನ್ನೂ ಯಾವುದೇ ಹೇಳಿಕೆ ಬಂದಿಲ್ಲ ಎಂದು ರಶ್ಯ ಹೇಳಿದೆ. ಆದರೆ ಮಧ್ಯಂತರ ಒಪ್ಪಂದದಲ್ಲಿ ರಶ್ಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಭಾರತ ಸರಕಾರ ಹೇಳಿದಾಗಲೇ ಇದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಭಾರತದ ಮೇಲೆ ವಿಧಿಸಲಾದ ಶೇ. 50 ಸುಂಕ ಈಗ ಶೇ. 18ಕ್ಕೆ ಇಳಿದಿರುವುದನ್ನು ಬಹಳಷ್ಟು ಪ್ರಭಾವಿಗಳು ಭಾರತದ ಯಶಸ್ಸು ಎಂದು ಕರೆಯುತ್ತಿದ್ದಾರೆ. ಆದರೆ ಶೂನ್ಯ ಸುಂಕವಿದ್ದದ್ದು ಈಗ ಶೇ. 18 ಆಗಿದೆ. ಇದರ ಬಗ್ಗೆ ಏನನ್ನೂ ಹೇಳಲಾಗುತ್ತಿಲ್ಲ. ತಂತ್ರಜ್ಞಾನ, ಔಷಧ, ಜೆನೆರಿಕ್ ಔಷಧ ಇತ್ಯಾದಿ ಕ್ಷೇತ್ರಗಳು ಸುಂಕಗಳಿಗೆ ಒಳಪಟ್ಟಿರಲಿಲ್ಲ. ಒಂದೆಡೆ, ನಾವು ಗೆದ್ದಿದ್ದೇವೆ ಎಂದು ಹೇಳಲಾಗುತ್ತಿದೆ, ಮತ್ತೊಂದೆಡೆ, ನಾವು ಅಮೆರಿಕದ ಎದುರು ಮಣಿದಿದ್ದೇವೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಸತ್ಯವೇನು? ಈ ವ್ಯಾಪಾರ ಒಪ್ಪಂದದ ಬಗೆಗಿನ ದೊಡ್ಡ ಕಳವಳವೆಂದರೆ, ಅಮೆರಿಕ ನಮ್ಮ ಡೈರಿ ಮತ್ತು ಕೃಷಿ ಕ್ಷೇತ್ರಗಳಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂಬುದರ ಬಗೆಗಿನದು. ಅಮೆರಿಕಕ್ಕೆ ಭಾರತ ಸಂಪೂರ್ಣ ಮಾರುಕಟ್ಟೆಯನ್ನು ತೆರೆದಿಲ್ಲ ಎನ್ನಲಾಗುತ್ತಿದೆ. ಭಾರತಕ್ಕೆ ಈ ಒಪ್ಪಂದ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಈ ಮಧ್ಯಂತರ ಒಪ್ಪಂದ ಒಂದು ಮಾರ್ಗಸೂಚಿಯನ್ನು ನೀಡುತ್ತಿದೆ. ಆದರೆ ಮುಂದೆ ಡೈರಿ ವಲಯದಲ್ಲಿ ಏನಾಗಲಿದೆ ಎಂಬುದನ್ನು ನೊಡಬೇಕಿದೆ. ಡೈರಿ ವಲಯವನ್ನು ರಕ್ಷಿಸುವ ಉದ್ದೇಶವಿತ್ತು. ಆದರೆ, ಅದನ್ನು ಕನಿಷ್ಠ ಪಶು ಆಹಾರಕ್ಕೆ ಸಂಬಂಧಿಸಿದಂತೆ ತೆರೆಯಲಾಗಿದೆ. ಇನ್ನು, ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಸೋಯಾಬೀನ್ ಅನ್ನು ಆಮದು ಮಾಡಿಕೊಳ್ಳುತ್ತೇವೆ. ಹಾಗೆಯೇ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತೇವೆ. ನಮ್ಮ ದೇಶದಲ್ಲಿ ಬೆಳೆಯದ ಬಹಳಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಆಲಿವ್ ಎಣ್ಣೆ ಕೂಡ ಅದರಲ್ಲಿ ಸೇರಿದೆ. ಅದನ್ನು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಅಡುಗೆ ಎಣ್ಣೆಯಾಗಿ ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಕೃಷಿ ಕ್ಷೇತ್ರದ ಒಂದು ಸಣ್ಣ ಭಾಗವನ್ನು ಅಮೆರಿಕಕ್ಕೆ ತೆರೆಯಲಾಗಿದೆ ಎಂಬುದು ಗೊತ್ತಾಗುತ್ತದೆ. ಈ ಸಂಪೂರ್ಣ ಒಪ್ಪಂದದ ಕುರಿತ ಸ್ಪಷ್ಟ ಚಿತ್ರ ಇನ್ನೂ ಸಿಗುತ್ತಿಲ್ಲ. ಹಾಗಾಗಿ ಇದು ನಮ್ಮ ಗೆಲುವೋ ಅಥವಾ ವೈಫಲ್ಯವೋ ಎಂಬುದು ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮುಂದಾಗಿದ್ದು, ಈ ಬೆನ್ನಲ್ಲೆ, ಸದ್ಯ TMC ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿದೆ. ಸದ್ಯ ಕಾಂಗ್ರೆಸ್ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕುವುದಿಲ್ಲ ಎಂದು ತಿಳಿಸಿರುವ TMC ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿಪಕ್ಷಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಲು ಸ್ಪೀಕರ್ ಗೆ 3 ದಿನಗಳ ಕಾಲ ಅವಕಾಶ ನೀಡಿದ್ದು, ಕಾಲಮಿತಿಯೊಳಗೆ ಯಾವುದೇ ಸ್ಪಂದನೆ ಬರದೆ ಇದ್ದಾಗ ಮಾತ್ರವೇ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಹಲವು ಪಕ್ಷಗಳು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರೂ ಸಹ ಇದು ಕಾಂಗ್ರೆಸ್ ಗೆ ಒಂದು ಮಟ್ಟದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
ನೌಕರರು ಭವಿಷ್ಯ ನಿಧಿ (ಪಿಎಫ್) ಹಣವನ್ನು ತಮ್ಮ ಬ್ಯಾಂಕ್ಗಳಿಂದ ಯುಪಿಐ ವಾಪತಿ ಮೂಲಕ ಪಡೆದುಕೊಳ್ಳಬಹುದು. ಇದಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊರತರುತ್ತಿದೆ. ಹಣ ಎಷ್ಟಿದೆ ಎಂಬ ಮಾಹಿತಿ ಜತೆಗೆ ಹಲವು ಸೌಲಭ್ಯವನ್ನು ಈ ಅಪ್ಲಿಕೇಶನ್ ನೀಡಲಿದೆ. ಕೇವಲ 3 ದಿನಗಳಲ್ಲಿ ಹಣವನ್ನು ಪಡೆದುಕೊಳ್ಳಬಹುದು.
'ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ದಂಧೆ ನಡೆಸಿ ಯಾರಿಗಾಗಿ ಆಸ್ತಿ ಸಂಪಾದಿಸುತ್ತಿದ್ದಾರೆ': ಪ್ರತಾಪ್ ಸಿಂಹ ಗಂಭೀರ ಆರೋಪ
ಸಿಎಂ ಸಿದ್ದರಾಮಯ್ಯ ಮಗನಿಂದಲೇ ಸಿದ್ದರಾಮಯ್ಯಗೆ ಕೆಟ್ಟ ಹೆಸರು ಬರುತ್ತಿದೆ, ವರ್ಗಾವಣೆ ದಂಧೆ ನಡೆಸಿ ತಂದೆಗೆ ಮುಜುಗರ ಆಗುವಂತೆ ನಡೆದುಕೊಳ್ತಿದ್ದಾರೆ, ಕಾಂಗ್ರೆಸ್ಗೆ ಹೀನಾಯ ಸೋಲು ಕಾದಿದೆ, ಮೈಸೂರು ಅಭಿವೃದ್ಧಿ ನಿರ್ಲಕ್ಷ್ಯ ಮಾಡಲಾಗ್ತಿದೆ ಎಂದು ಸಾಲು ಸಾಲು ಆರೋಪಗಳನ್ನು ಪ್ರತಾಪ್ ಸಿಂಹ ಮಾಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ; ಭಕ್ತರಲ್ಲಿ ಆತಂಕ
ಶಿವರಾತ್ರಿ ಜಾತ್ರೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.
Lokasabha | ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನೋಟಿಸ್ ; 118 ಸದಸ್ಯರಿಂದ ಸಹಿ, ಹೊರಗುಳಿದ ಟಿಎಂಸಿ
ಹೊಸದಿಲ್ಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಪಕ್ಷ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟಿಸ್ ಸಲ್ಲಿಸಿದ್ದು, ಇದರಿಂದ ಸಂಸತ್ತಿನಲ್ಲಿ ಸರ್ಕಾರ–ಪ್ರತಿಪಕ್ಷಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸಂಸತ್ತಿನ ಕಲಾಪಕ್ಕೆ ನಿರಂತರ ಅಡಚಣೆಗಳ ನಡುವೆ ಈ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕರಾದ ಕೆ. ಸುರೇಶ್ ಮತ್ತು ಮುಹಮ್ಮದ್ ಜಾವೇದ್ ಸದನದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಸಲ್ಲಿಸಿದ್ದಾರೆ. ಈ ನೋಟಿಸ್ ಗೆ 118 ಸಂಸದರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಕ್ರಮದಿಂದ ದೂರ ಉಳಿದು, ಸಹಿ ಮಾಡಿದವರ ಪಟ್ಟಿಯಲ್ಲಿ ಸೇರಿಲ್ಲ. “ಕಾರ್ಯವಿಧಾನ ನಿಯಮಗಳ 94(ಸಿ) ಅಡಿಯಲ್ಲಿ ಇಂದು ಮಧ್ಯಾಹ್ನ 1.14ಕ್ಕೆ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನೋಟಿಸ್ ಸಲ್ಲಿಸಿದ್ದೇವೆ” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತಿಳಿಸಿದ್ದಾರೆ. ಅವಿಶ್ವಾಸ ಗೊತ್ತುವಳಿಗೆ ಈ ಹಂತದಲ್ಲಿ ಬೆಂಬಲ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ನೇತೃತ್ವದ ಕಾರ್ಯತಂತ್ರದಿಂದ ಪಕ್ಷ ಹೊರಗುಳಿದಿದೆ ಎಂದು ಮೂಲಗಳು ಹೇಳಿವೆ. “ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಪಕ್ಷದ ಬೇಡಿಕೆಗಳ ಕುರಿತು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿ, ಪ್ರತಿಕ್ರಿಯಿಸಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ನಾವು ಪ್ರಸ್ತಾಪಿಸಿದ್ದೇವೆ. ಕಾಂಗ್ರೆಸ್ ತಕ್ಷಣವೇ ನೋಟಿಸ್ ನೀಡಿದರೆ ಟಿಎಂಸಿ ಸಹಿ ಮಾಡುವುದಿಲ್ಲ. ಆದರೆ ವಿರೋಧ ಪಕ್ಷದ ಮನವಿಗೆ ಸ್ಪೀಕರ್ ಸ್ಪಂದಿಸದಿದ್ದರೆ, ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಲು ಸಿದ್ಧರಾಗಿದ್ದೇವೆ” ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.
BCCI ಗುತ್ತಿಗೆ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ B ದರ್ಜೆ: ಕಾರಣವೇನು?
ಹೊಸದಿಲ್ಲಿ: ಟೀಂ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇತ್ತೀಚಿನ ಬಿಸಿಸಿಐ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ B ದರ್ಜೆಗೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೆ, ಚಾಲ್ತಿಯಲ್ಲಿದ್ದ 7 ಕೋಟಿ ರೂ. ಶುಲ್ಕ ಹೊಂದಿದ್ದ A+ ದರ್ಜೆಯನ್ನೂ ಬಿಸಿಸಿಐ ರದ್ದುಗೊಳಿಸಿದೆ. ಸೋಮವಾರ 30 ಪುರುಷರು ಹಾಗೂ 21 ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ A, B ಮತ್ತು C ಪ್ರವರ್ಗದ ಗುತ್ತಿಗೆಯನ್ನು ನೀಡಿದೆ. ನೂತನ ಕೇಂದ್ರ ಗುತ್ತಿಗೆಗೆ ಪ್ರದರ್ಶನ ಹಾಗೂ ಹಿಂದಿನ ಋತುವಿನಲ್ಲಿ ಆಡಿರುವ ಪಂದ್ಯಗಳ ಸಂಖ್ಯೆಯನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಎರಡು ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕರಾದ ಶುಭಮನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಟೆಸ್ಟ್ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು A ದರ್ಜೆಯಲ್ಲೇ ಉಳಿಸಿಕೊಳ್ಳಲಾಗಿದೆ. ಆದರೆ, ಮೂರು ಪ್ರವರ್ಗದ ಗುತ್ತಿಗೆ ಶುಲ್ಕವನ್ನು ಬಿಸಿಸಿಐ ಉಲ್ಲೇಖಿಸಿಲ್ಲ. A+ ದರ್ಜೆಯನ್ನು ರದ್ದುಗೊಳಿಸಲಾಗಿದ್ದು, ಈ ಹಿಂದಿನ ಋತುಗಳಲ್ಲಿ A ದರ್ಜೆಗೆ 5 ಕೋಟಿ ರೂ. ಮೌಲ್ಯ, B ದರ್ಜೆಗೆ 3 ಕೋಟಿ ರೂ. ಮೌಲ್ಯ ಹಾಗೂ ಸಿ ದರ್ಜೆಗೆ 1 ಕೋಟಿ ರೂ. ಮೌಲ್ಯವನ್ನು ನಿಗದಿಗೊಳಿಸಲಾಗಿತ್ತು. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಹಾಗೂ T20 ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿರುವುದರಿಂದ, ಅವರೀಗ ಏಕದಿನ ಮಾದರಿಯ ಆಟಗಾರರಾಗಿ ಬದಲಾಗಿದ್ದಾರೆ. ಹೀಗಾಗಿ, ಮಾನದಂಡದ ಪ್ರಕಾರ, ಅವರನ್ನು ಉನ್ನತ ದರ್ಜೆಯಿಂದ ಹಿಂಬಡ್ತಿ ನೀಡಲಾಗಿದೆ.
ಮೈತ್ರಿ ಮಂತ್ರ, ಕುರ್ಚಿ ತಂತ್ರ : 2028ಕ್ಕಾಗಿ ರೆಡಿಯಾಯಿತು ಕುಮಾರಸ್ವಾಮಿ ಹೊಸ ಬ್ಲೂಪ್ರಿಂಟ್ ಸೂತ್ರ?
HD Kumaraswamy Ghar Vapsi : ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಮುಂಬರುವ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಹೇಗಿರಬೇಕು, ಹೇಗೆ ಹೋರಾಟ ನಡೆಸಬೇಕು, ಹೇಗೆ ಕಾರ್ಯತಂತ್ರ ರೂಪಿಸಿಕೊಳ್ಳಬೇಕು ಎನ್ನುವ ಬ್ಲೂಪ್ರಿಂಟ್ ಅನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರೆಡಿ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯ ವೇಳೆ, ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
ಬೆಂಗಳೂರು | ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು!
ಬೆಂಗಳೂರು: ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವಾಗಿರುವುದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿರುವ ವಿಧಾನಸೌಧ ಪೊಲೀಸರು ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ಅಲ್ಲೇ ಮರೆತು ಹೋಗಿದ್ದರು. ಮರು ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರ ಆಂಟೋನಿ ಎಂಬಾತ ಬ್ಯಾಗ್ ಕೊಂಡೊಯ್ದಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹಲವೆಡೆ ಫೆ.11 ಕ್ಕೆ ವಿದ್ಯುತ್ ವ್ಯತ್ಯಯ: ನಿಮ್ಮ ಪ್ರದೇಶಕ್ಕಿದೆಯಾ ಕರೆಂಟ್? ಚೆಕ್ ಮಾಡಿ
ಬೆಸ್ಕಾಂ ವಿದ್ಯುತ್ ಕಡಿತವಾಗುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಜನ ಕರೆಂಟ್ ಇಲ್ಲದೆ, ಪರದಾಡಬಾರದೆಂದು ಮುನ್ನೆಚ್ಚರಿಕೆಯನ್ನು ಕೊಟ್ಟಿರುವ ಬೆಸ್ಕಾಂ, ಬುಧವಾರದಂದು ಬೆಳಗ್ಗೆ 11 ರಿಂದ 3 ಗಂಟೆವರೆಗೆ ವಿದ್ಯುತ್ ಕಟ್ ಆಗುವ ಸ್ಥಳಗಳ ಮಾಹಿತಿ ನೀಡಿದೆ.
'ಜನ ನಾಯಗನ್' ಚಿತ್ರ ಬಿಡುಗಡೆಗೆ ಕಾನೂನು ಹೋರಾಟ: ಪ್ರಕರಣ ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ
ನಟ, ರಾಜಕಾರಣಿ ವಿಜಯ್ ಅವರ ‘ಜನ ನಾಯಗನ್’ ಚಿತ್ರದ ನಿರ್ಮಾಪಕರು ಸೆನ್ಸಾರ್ ಬೋರ್ಡ್ (ಸಿಬಿಎಫ್ಸಿ) ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಈ ದೂರಿನ ವಿಚಾರಣೆ ಇಂದು ನಡೆಯಿತು. ಮದ್ರಾಸ್ ಹೈಕೋರ್ಟ್ನಲ್ಲಿ ಏಕ ಪೀಠದ ನ್ಯಾಯಮೂರ್ತಿ ಪಿಟಿ ಆಶಾ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಕೋಟ | ಕ್ರಿಕೆಟ್ ಆನ್ ಲೈನ್ ಬೆಟ್ಟಿಂಗ್: ಆರೋಪಿಯ ಬಂಧನ
ಕೋಟ: ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಸಮೀಪದ ಪಾಂಡೇಶ್ವರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಓರ್ವ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ನಿವಾಸಿ ಮನಿತ್(26) ಎಂದು ಗುರುತಿಸಲಾಗಿದೆ. ಫೆ.9ರಂದು ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಉಪ ನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು, ಬೆಟ್ಟಿಂಗ್ ನಡೆಸುತ್ತಿದ್ದ ಮನಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಶದಲ್ಲಿದ್ದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸುತ್ತಿದ್ದ ಐ ಫೋನ್ ಮೊಬೈಲ್ ಹಾಗೂ ಬೆಟ್ಟಿಂಗ್ ಹಣ 800 ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ಒಮಾನ್ - ಝಿಂಬಾಬ್ವೆ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಮೊಬೈಲ್ ನಲ್ಲಿರುವ ಆನ್ ಲೈನ್ ಅಪ್ಲಿಕೇಶನ್ ಮೂಲಕ ಸಂಘಟಿತವಾಗಿ ಇತರರೊಂದಿಗೆ ಸೇರಿಕೊಂಡು ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗಿರುವ ಖುಷಿಯಲ್ಲೇ ತೇಲಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಶೂನ್ಯ ಸುಂಕದ ಭರವಸೆಯನ್ನು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಆದರೆ ಈ ಕುರಿತು ಶ್ವೇತಭವನವು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಉಭಯ ದೇಶಗಳ ನಡುವೆ ಆಗಿರುವ ವ್ಯಾಪಾರ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಒದಗಿಸಿದೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ, 1.4 ಶತಕೋಟಿ ಜನಸಂಖ್ಯೆಯ ಭಾರತೀಯ ಮಾರುಕಟ್ಟೆಗೆ ಅಮೆರಿಕನ್ ಸರಕುಗಳಿಗೆ ಪ್ರವೇಶ ನೀಡಲಿದೆ ಎಂದು ವೈಟ್ಹೌಸ್ ಸಂತಸ ವ್ಯಕ್ತಪಡಿಸಿದೆ.
ಬ್ರಿಟನ್ಗೆ ಮೊದಲ ಮುಸ್ಲಿಂ ಪ್ರಧಾನಿ?; ಕೀರ್ ಸ್ಟಾರ್ಮರ್- ಎಪ್ಸ್ಟೀನ್ ಹಗರಣದ ಮಧ್ಯೆ ಮುನ್ನೆಲೆಯಲ್ಲಿ ಶಬಾನಾ ಮಹಮೂದ್
ಬ್ರಿಟನ್: ಅಮೆರಿಕಕ್ಕೆ ಬ್ರಿಟಿಷ್ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿ ನಂತರ ತೆಗೆದುಹಾಕುವ ನಿರ್ಧಾರದ ವಿವಾದದ ನಂತರ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಈ ಮಧ್ಯೆ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರ ಹೆಸರು ಬ್ರಿಟನ್ ಪ್ರಧಾನಿ ಹುದ್ದೆಗೆ ಕೇಳಿ ಬಂದಿದೆ. ಪೀಟರ್ ಮ್ಯಾಂಡೆಲ್ಸನ್, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಎಂಬ ಆರೋಪವು ವಿವಾದಕ್ಕೆ ಕಾರಣವಾಗಿತ್ತು. ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಮಧ್ಯೆ ಅವರ ಆಪ್ತ ಸಹಾಯಕ ಮಾರ್ಗನ್ ಮೆಕ್ಸ್ವೀನಿ ರಾಜೀನಾಮೆ ನೀಡಿದ್ದಾರೆ. ಅವರು ಮ್ಯಾಂಡೆಲ್ಸನ್ ಅವರ ನೇಮಕಾತಿಯಲ್ಲಿ ತಮ್ಮ ಪಾತ್ರಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರಿಟನ್ ಪ್ರಧಾನಮಂತ್ರಿಯವರ ಸಂವಹನ ವಿಭಾಗದ ಮುಖ್ಯಸ್ಥ ಟಿಮ್ ಆಲನ್ ಕೂಡ ಹುದ್ದೆ ತೊರೆದಿದ್ದಾರೆ. ಇದರಿಂದ ಬ್ರಿಟನ್ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗಿದೆ. ಒಂದು ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಯುಕೆ ಪ್ರಧಾನಿ ಹುದ್ದೆಗೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಶಬಾನಾ ಮಹಮೂದ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದರೆ ಪಾಕಿಸ್ತಾನ ಮೂಲದ ಯುಕೆಯ ಮೊದಲ ಪ್ರಧಾನಿಯಾಗಿ ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆಯಾಗಿ ಇತಿಹಾಸ ನಿರ್ಮಾಣವಾಗಲಿದೆ. ಶಬಾನಾ ಮಹಮೂದ್ ಯಾರು? 2010 ರಿಂದ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರು ಲೇಬರ್ ಪಕ್ಷದ ಅತ್ಯಂತ ಸಮರ್ಥ ಮತ್ತು ಪ್ರಭಾವಿ ನಾಯಕರಲ್ಲಿ ಓರ್ವರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ವೃತ್ತಿಯಿಂದ ಬ್ಯಾರಿಸ್ಟರ್ ಆಗಿರುವ ಅವರು, 2010ರಲ್ಲಿ ಸಂಸತ್ತಿಗೆ ಪ್ರವೇಶಿಸಿದ ಲೇಬರ್ ಪಕ್ಷದ ಮೊದಲ ಮುಸ್ಲಿಂ ಮಹಿಳಾ ಸಂಸದರಲ್ಲಿ ಒಬ್ಬರಾಗಿದ್ದರು. ಮೊದಲ ಬಾರಿಯೇ ಶಾಡೋ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದು ಪಕ್ಷದೊಳಗೆ ತಮ್ಮದೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಲೇಬರ್ ಪಕ್ಷ ಅಧಿಕಾರಕ್ಕೆ ಮರಳಿದ ನಂತರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಮಹಮೂದ್, ಸರಕಾರದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ. ಪೊಲೀಸ್, ರಾಷ್ಟ್ರೀಯ ಭದ್ರತೆ, ವಲಸೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಬಾನಾ ಮಹಮೂದ್ ಅವರು ಬ್ರಿಟಿಷ್ ಮುಸ್ಲಿಂ ಗುರುತು, ಕಾರ್ಮಿಕ ವರ್ಗ ಮತ್ತು ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸುವಲ್ಲಿ ಶಿಕ್ಷಣ ವಹಿಸಿದ ಪಾತ್ರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
ಬೆಂಗಳೂರಿನ ವಿಧಾನಸೌಧದ ಬಳಿಯಿರುವ ಪ್ರತಿಷ್ಠಿತ ರಾಡಿಸನ್ ಹೋಟೆಲ್ ನಲ್ಲಿ ಕೆನಡಾ ಮೂಲದ ಮಹಿಳೆಯೊಬ್ಬರಿಗೆ ಹೋಟೆಲ್ ನ ಖಾಸಗಿ ಸ್ಪಾದಲ್ಲಿ ಮಸಾಜ್ ಸೇವೆ ವೇಳೆ ಥೆರಪಿಸ್ಟ್ ಒಬ್ಬರೂ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆಕೆ ಬಟ್ಟೆ ಬದಲಾಯಿಸುವ ಸಮಯದಲ್ಲಿ ಬಾಗಿಲನ್ನು ತೆರೆದಿದ್ದು, ಇದರಿಂದಾಗಿ ಆಕೆ ಮಾನಸಿಕವಾಗಿ ಆಘಾತಕ್ಕೆ ಒಳಾಗಿದ್ದು, ಹೋಟೆಲ್ ಆಡಳಿತ ಮಂಡಳಿಗೆ ವಿಷಯ ತಿಳಿಸಿದಾಗ್ಯೂ, ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರು ನೀಡಿರುವ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್ ಆಡಳಿತ ಮಂಡಳಿ ಆರೋಪಗಳನ್ನು ನಿರಾಕರಿಸಿದ್ದು, ಇದೊಂದು ಸುಲಿಗೆಯ ಪ್ರಯತ್ನ ಎಂದು ತಿಳಿಸಿದ್ದಾರೆ.
ಲಂಡನ್: ಅಮೆರಿಕದಲ್ಲಿ ಶಿಕ್ಷೆಗೊಳಗಾದ ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಮಾಜಿ ಅಧಿಕಾರಿಯ ವಿಚಾರವಾಗಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಹುದ್ದೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪ್ರತಿಕ್ರಿಯಿಸಿದ ಸ್ಟಾರ್ಮರ್, ದೇಶದ ನಾಯಕತ್ವ ಹಾಗೂ ಜವಾಬ್ದಾರಿಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಇತ್ತೀಚೆಗೆ ಬಹಿರಂಗವಾದ ಎಪ್ಸ್ಟೀನ್ ಫೈಲ್ ಗಳ ಹಿನ್ನೆಲೆಯಲ್ಲಿ 2024ರಲ್ಲಿ ಯುನೈಟೆಡ್ ಸ್ಟೇಟ್ಸ್ ಗೆ ಯುಕೆ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಿಸಿದ್ದ ನಿರ್ಧಾರಕ್ಕೆ ಲೇಬರ್ ಪಕ್ಷದ ಕೆಲ ಸದಸ್ಯರಿಂದಲೇ ಟೀಕೆ ವ್ಯಕ್ತವಾಗಿದೆ. ಎಪ್ಸ್ಟೀನ್ ಜೊತೆಗಿನ ಸಂಪರ್ಕಗಳ ಮಾಹಿತಿ ಇದ್ದರೂ ಮ್ಯಾಂಡೆಲ್ಸನ್ ಅವರಿಗೆ ಮಹತ್ವದ ರಾಜತಾಂತ್ರಿಕ ಹುದ್ದೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ನೇಮಕಾತಿ ಹಿನ್ನೆಲೆ ಲೇಬರ್ ಪಕ್ಷದ ಕೆಲ ಶಾಸಕರು ಸ್ಟಾರ್ಮರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸ್ಕಾಟ್ಲೆಂಡ್ ಲೇಬರ್ ನಾಯಕ ಅನಸ್ ಸರ್ವರ್, “ತಪ್ಪುಗಳ ಪುನರಾವರ್ತನೆಯ ಬಳಿಕ ನಾಯಕತ್ವ ಬದಲಾವಣೆ ಅಗತ್ಯವಾಗಿದೆ. ಡೌನಿಂಗ್ ಸ್ಟ್ರೀಟ್ ನಲ್ಲಿ ಹೊಸ ನಾಯಕತ್ವ ಬರಬೇಕು” ಎಂದು ಹೇಳಿದ್ದಾರೆ. ►ಹುದ್ದೆ ತ್ಯಜಿಸುವುದಿಲ್ಲ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ನಡುವೆಯೂ ಸ್ಟಾರ್ಮರ್ “ಹುದ್ದೆ ತ್ಯಜಿಸಲು ಸಿದ್ಧರಿಲ್ಲ” ಎಂದು ಸ್ಪಷ್ಟಪಡಿಸಿದರು. ಸಂಸತ್ತಿನಲ್ಲಿ ಲೇಬರ್ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, “ನಾನು ಭಾಗವಹಿಸಿದ ಪ್ರತಿಯೊಂದು ಹೋರಾಟದಲ್ಲೂ ಗೆದ್ದಿದ್ದೇನೆ” ಎಂದು ಹೇಳಿದರು. “ನಮ್ಮ ದೇಶವನ್ನು ಬದಲಾಯಿಸುವ ಅವಕಾಶಕ್ಕಾಗಿ ಹೋರಾಟ ನಡೆಸಿದ ನಂತರ, ಜನಾದೇಶ ಹಾಗೂ ದೇಶದತ್ತ ಇರುವ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಇತರರು ಮಾಡಿದಂತೆ ದೇಶವನ್ನು ಕೆಟ್ಟ ದಿನಗಳೆಡೆಗೆ ತಳ್ಳುವುದಿಲ್ಲ. ಇದು ನನ್ನ ಹೋರಾಟ ಮಾತ್ರವಲ್ಲ, ನಮ್ಮೆಲ್ಲರ ಹೋರಾಟ” ಎಂದು ಹೇಳಿದರು. ಡೌನಿಂಗ್ ಸ್ಟ್ರೀಟ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಸರ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲೇಬರ್ ಪಕ್ಷದ ವಕ್ತಾರರು, “ಸ್ಟಾರ್ಮರ್ ಅವರಿಗೆ ಬ್ರಿಟಿಷ್ ಜನರಿಂದ ಸ್ಪಷ್ಟವಾದ ಐದು ವರ್ಷಗಳ ಜನಾದೇಶವಿದೆ. ಬದಲಾವಣೆ ತರುವ ಕಾರ್ಯ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ. ►ರಾಜೀನಾಮೆಗಳ ಸರಣಿ ಎಪ್ಸ್ಟೀನ್ ಫೈಲ್ ಗಳ ವಿವಾದದ ನಡುವೆ ರಾಜೀನಾಮೆಗಳ ಸರಣಿಯೂ ಮುಂದುವರಿದಿದೆ. ಯುಕೆಯ ಸಂವಹನ ಮುಖ್ಯಸ್ಥ ಟಿಮ್ ಅಲನ್ ಹಾಗೂ ಪ್ರಧಾನಿಯ ಆಪ್ತ ಸಹಾಯಕ, ಮಾಜಿ ಡೌನಿಂಗ್ ಸ್ಟ್ರೀಟ್ ಮುಖ್ಯಸ್ಥ ಮಾರ್ಗನ್ ಮೆಕ್ಸ್ವೀನಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಮೆಕ್ಸ್ವೀನಿ ರವಿವಾರ ರಾಜೀನಾಮೆ ನೀಡಿ, ಪೀಟರ್ ಮ್ಯಾಂಡೆಲ್ಸನ್ ಅವರನ್ನು ರಾಜತಾಂತ್ರಿಕ ಹುದ್ದೆಗೆ ಆಯ್ಕೆ ಮಾಡಲು ತಾವು ಸಲಹೆ ನೀಡಿದ್ದನ್ನು ಒಪ್ಪಿಕೊಂಡರು. ಸೋಮವಾರ ಟಿಮ್ ಅಲನ್ ಕೂಡ ರಾಜೀನಾಮೆ ನೀಡಿ, “ಹೊಸ ನಂ.10 ತಂಡ ನಿರ್ಮಿಸಲು ಅವಕಾಶ ಕಲ್ಪಿಸಲು ಕೆಳಗಿಳಿಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ►ಸ್ಟಾರ್ಮರ್ ಗೆ ಬೆಂಬಲ ಲೇಬರ್ ಪಕ್ಷದ ಕೆಲ ಹಿರಿಯ ನಾಯಕರು ಸ್ಟಾರ್ಮರ್ ಪರವಾಗಿ ಬಹಿರಂಗ ಬೆಂಬಲ ಸೂಚಿಸಿದ್ದಾರೆ. ಉಪ ಪ್ರಧಾನಿ ಡೇವಿಡ್ ಲ್ಯಾಮಿ, ಹಣಕಾಸು ಸಚಿವೆ ರಾಚೆಲ್ ರೀವ್ಸ್, ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಸೇರಿದಂತೆ ಹಲವರು ಪ್ರಧಾನಿಯ ಬೆಂಬಲಕ್ಕೆ ನಿಂತಿದ್ದಾರೆ. ಡೇವಿಡ್ ಲ್ಯಾಮಿ ಎಕ್ಸ್ ನಲ್ಲಿ, “ಬ್ರಿಟನ್ ಅನ್ನು ಬದಲಾಯಿಸುವ ನಮ್ಮ ಧ್ಯೇಯದಿಂದ ಬೇರೆಡೆಗೆ ಸೆಳೆಯಲು ಅವಕಾಶ ಕೊಡಬಾರದು” ಎಂದು ಬರೆದಿದ್ದಾರೆ. ಲೇಬರ್ ಸರ್ಕಾರ ಉದ್ಯೋಗ ಹಕ್ಕುಗಳ ಕಾಯ್ದೆ, ಬಾಡಿಗೆದಾರರ ಹಕ್ಕುಗಳು, ಉಚಿತ ಶಾಲಾ ಊಟ ಸೇರಿದಂತೆ ಹಲವು ಸಾಮಾಜಿಕ ಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಯುಕೆ ಮಾಜಿ ಉಪ ಪ್ರಧಾನಿ ಏಂಜೆಲಾ ರೇನರ್, ಮ್ಯಾಂಡೆಲ್ಸನ್–ಎಪ್ಸ್ಟೀನ್ ಸಂಬಂಧ “ಆಘಾತಕಾರಿ” ಎಂದರೂ, ಸರ್ಕಾರದ ಸಾಮಾಜಿಕ ಕಲ್ಯಾಣ ಕ್ರಮಗಳನ್ನು ಮೆಚ್ಚಿ ಸ್ಟಾರ್ಮರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಕೂಡ ಜಾಗತಿಕ ವೇದಿಕೆಯಲ್ಲಿ ಈ ಸಮಯದಲ್ಲಿ ಸ್ಟಾರ್ಮರ್ ನಾಯಕತ್ವ ಅಗತ್ಯವಿದೆ ಎಂದು ಹೇಳಿದ್ದಾರೆ. 2008ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಳಿಕವೂ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕ ಮುಂದುವರಿಸಿದ್ದ ಹಿನ್ನೆಲೆಯಲ್ಲಿ, ಪೀಟರ್ ಮ್ಯಾಂಡೆಲ್ಸನ್ ಅವರನ್ನು ಕಳೆದ ವರ್ಷ ಅಮೆರಿಕದ ರಾಯಭಾರಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಜನವರಿ 30ರಂದು ಅಮೆರಿಕ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ಹೊಸ ಫೈಲ್ ಗಳು ಮ್ಯಾಂಡೆಲ್ಸನ್–ಎಪ್ಸ್ಟೀನ್ ಸಂಪರ್ಕಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದು, ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಳೆದ ವಾರ ಸ್ಟಾರ್ಮರ್, ಎಪ್ಸ್ಟೀನ್ ಸಂತ್ರಸ್ತರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, “ನ್ಯಾಯ ವಿಳಂಬವಾಗುವುದನ್ನೂ ನಿರಾಕರಿಸಲ್ಪಡುವುದನ್ನೂ ನಾವು ಕಂಡಿದ್ದೇವೆ” ಎಂದು ಹೇಳಿದರು. ಮ್ಯಾಂಡೆಲ್ಸನ್ ಸರ್ಕಾರವನ್ನು ದಾರಿ ತಪ್ಪಿಸಿದ್ದರೆಂಬ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದರೂ, ಅವು ಯಾವಾಗ ಹೊರಬರುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಇದೇ ವೇಳೆ, ಸಂವೇದನಾಶೀಲ ಮಾಹಿತಿ ಹಂಚಿಕೆ ಆರೋಪದ ಹಿನ್ನೆಲೆ ಮ್ಯಾಂಡೆಲ್ಸನ್ ವಿರುದ್ಧ ಪೊಲೀಸ್ ತನಿಖೆ ಮುಂದುವರಿದಿದೆ.
Silver Price: ಬೆಳ್ಳಿ ದರದಲ್ಲಿ ಇಂದು ರೂ.10,000 ಕುಸಿತ, ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು: ಗ್ರಾಹಕರು ಹಾಗೂ ಹೂಡಿಕೆದಾರರು ನಿರಂತರವಾಗಿ ಕೆಲವು ವಾರಗಳಿಂದ ಚಿನ್ನ-ಬೆಳ್ಳಿ ದರದ ಮೇಲಾಗುತ್ತಿರುವ ಏರಿಕೆ ಹಾಗೂ ಇಳಿಕೆ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಇವುಗಳ ದರದಲ್ಲಿ ಏರಿಳಿತ ಇವತ್ತಿಗೂ ಮುಂದುವರಿದಿದೆ. ಇಂದು ಮಂಗಳವಾರ (ಫೆಬ್ರವರಿ 10) ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಇಳಿಕೆ ಆಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತೆ, ವಿದೇಶಿ
ಸ್ಥಿರವಾದ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?
ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಹಣದುಬ್ಬರ ಹಾಗೂ ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಕಳೆದ ವಾರಾಂತ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ, ಸೋಮವಾರದಿಂದ ಅಲ್ಪ ಏರಿಕೆ ಕಂಡಿತ್ತು. ಮಂಗಳವಾರ ಬೆಲೆ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ಸೋಮವಾರ ಮತ್ತೆ 5,000 ಡಾಲರ್ ಗಳಿಗೆ ಬಂದು ನಿಂತಿದೆ. ಮಂಗಳವಾರವೂ ಇದೇ ಬೆಲೆ ಮುಂದುವರಿದಿದೆ. ಫೆಬ್ರವರಿ ಮೊದಲ ವಾರದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಚಂಚಲತೆ ಕಂಡಿತ್ತು. ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಚಿನ್ನದ ದರ ಪ್ರತಿ ಔನ್ಸ್ ಗೆ 4,988.60 ಡಾಲರ್ ಗೆ ಕುಸಿದಿತ್ತು. ಬೆಳ್ಳಿ ಕೂಡ ಪ್ರತಿ ಔನ್ಸ್ ಗೆ 77.525 ಡಾಲರ್ ಗೆ ಕೊನೆಗೊಂಡಿತ್ತು. ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಸೀಸನ್ನ ಬೆಲೆಗಳು, ಹಣದುಬ್ಬರ ಮತ್ತು ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಅಧಿಕ ಹಣದುಬ್ಬರ ದರಗಳು ಚಿನ್ನದ ಬೇಡಿಕೆಯನ್ನು ಏರಿಸುತ್ತವೆ. ಬೇಡಿಕೆ ಏರುತ್ತಿದ್ದಂತೆ ಬೆಲೆಯೂ ಏರುತ್ತದೆ. ಭೌಗೋಳಿಕ-ರಾಜಕೀಯ ಪರಿಸ್ಥಿತಿಗಳ ಹೊರತಾಗಿಯೂ ಚಿನ್ನದ ಅಂತರರಾಷ್ಟ್ರೀಯ ಸ್ಪಾಟ್ ಬೆಲೆಯು ಭಾರತದಲ್ಲಿ ಚಿನ್ನದ ಲೋಹದ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದು ಫೆಬ್ರವರಿ 10ರಂದು ದೇಸಿ ಮಾರುಕಟ್ಟೆಯಲ್ಲಿ ಬೆಳ್ಳಿ ಕೊಂಚ ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 3,00100 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,57,920 ರೂ. ಮತ್ತು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,44,760 ರೂ. ಗೆ ತಲುಪಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ನ ಚಿನ್ನದ ಬೆಲೆ 1,58,070 ರೂ. ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಮೌಲ್ಯ 1,44,910 ರೂ. ಇದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಫೆಬ್ರವರಿ 10ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ಥಿರವಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,791 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,475 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,844 ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಏರಿಕೆಯಾಗಿತ್ತು. ಇದೀಗ ಸೋಮವಾರ ಮತ್ತು ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಅಲ್ಪ ಏರಿದ ಬೆಳ್ಳಿ ಕೆಜಿಗೆ 3,00,100 ಲಕ್ಷ ರೂ. ಗೆ ಬಂದು ನಿಂತಿದೆ.
ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ: ಖ್ಯಾತ ನಟಿ ತಮನ್ನಾ ಪ್ರಚಾರ ರಾಯಭಾರಿ
ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷ, ಶಾಸನ ಪತ್ತೆ
ಬೀದರ್ : ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಚಾಲುಕ್ಯರ ಕಾಲದ ಶಾಸನ ಒಂದು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಭವಾನಿ ದೇವಸ್ಥಾನದ ಹಿಂದುಗಡೆ ಗ್ರಾಮಸ್ಥರು ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಡುಗೆ ಮಾಡುವುದಕ್ಕಾಗಿ ಜಾಗ ಸ್ವಚ್ಛಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಶಿವಲಿಂಗ, ನಾಗ ಸರ್ಪ, ಶಿಲಾಶಾಸನದ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ. ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ, ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಗ್ರಾಮದಲ್ಲಿ ಇನ್ನಷ್ಟು ಶಿಲಾಶಾಸನಗಳು, ಮೂರ್ತಿಗಳು ಪತ್ತೆಯಾಗುವ ಶಂಕೆ ಇದ್ದು, ಗ್ರಾಮಸ್ಥರು ಸಂಶೋಧನೆಗೆ ಒತ್ತಾಯಿಸಿದ್ದಾರೆ. ಈ ಹಿಂದೆ ಸುಮಾರು 7-8 ವರ್ಷಗಳ ಹಿಂದೆ ಗ್ರಾಮದಲ್ಲಿ ವಿಷ್ಣುವಿನ ವಿಗ್ರಹ, ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ 108 ದೇವಸ್ಥಾನಗಳು ಇದ್ದು, ನೆಲ ಅಗೆಯುವಾಗ ಅಲ್ಲಲ್ಲಿ ಪುರಾತನ ಶಿಲ್ಪಕಲೆಗಳು, ವಿಗ್ರಹಗಳು ಪತ್ತೆಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದ ಮದ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯರು ಕಟ್ಟಿಸಿದ ಐತಿಹಾಸಿಕ ಶಿವನ ದೇವಸ್ಥಾನ ಇದೆ. ಹಾಗಾಗಿ ನೂತನ ಕಟ್ಟಡ, ಮನೆ ನಿರ್ಮಾಣ ಸಮಯದಲ್ಲಿ ವಿಗ್ರಹ, ಶಾಸನಗಳು ಪತ್ತೆಯಾಗುತ್ತಿವೆ. ಹಾಗಾಗಿ ನಾರಾಯಣಪುರದಲ್ಲಿ ಉತ್ಖನನ ಮಾಡಿ ಇತಿಹಾಸ ಬಿಚ್ಚಿಡ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮುಗಿಯದ ಗೋಳು, ಪಡಿತರ ಹಳೆಯ ಕಾರ್ಡಿಗೆ ಅಸ್ತು, ಹೊಸದಕ್ಕೆ ಸುಸ್ತೋ ಸುಸ್ತು!
ಮೂರು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ನಿಯಮಾನುಸಾರ ಹಂಚಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ವರ್ಷಗಳಿಂದ ಎಪಿಎಲ್ ಸೇರಿ ಹೊಸ ಅರ್ಜಿಗೆ ಅವಕಾಶ ನೀಡುತ್ತಿಲ್ಲ. ಇದು ಜನರಲ್ಲಿ ನಿರಾಸೆ ಮೂಡಿಸಿದೆ. ಪಡಿತರ ಕಾರ್ಡಿಗಾಗಿ ಅರ್ಜಿದಾರರು ದಿನ ಬೆಳಗಾದರೆ ಆಹಾರ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ.
PUTTUR | ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರಿಗೆ ಪ್ರಸ್ತಾವ: ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ
ಪುತ್ತೂರು: ಪುತ್ತೂರಿನ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಒಳಮೊಗ್ರು ಗ್ರಾಮದ ಹೊಸಮನೆ ನಿವಾಸಿ ಅಜಿತ್ ರೈ ವಿರುದ್ಧ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಸಂಬಂಧ ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಫೆ.25ರಂದು ವಿಚಾರಣೆ ನಡೆಯಲಿದೆ. ಆದ್ದರಿಂದ ಅಜಿತ್ ರೈ ಸ್ವಯಂ ಅಥವಾ ನ್ಯಾಯವಾದಿಯ ಮೂಲಕ ವಿಚಾರಣೆಗೆ ಹಾಜರಾಗಬೇಕು. ತಪ್ಪಿದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪ ವಿಭಾಗೀಯ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಅಮೆರಿಕಾ ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಒಪ್ಪಂದಕ್ಕೆ ಉಭಯ ದೇಶಗಳು ದಾರಿಗಳನ್ನು ಹುಡುಕುತ್ತಿದ್ದೆ, ಆದರೆ ಇರಾನ್ ದೇವಪ್ರಭುತ್ವನ್ನು ಕೊನೆಗೊಳಿಸುವಲ್ಲಿ ಅಮೆರಿಕಾ ಇರಾನ್ ಜನತೆಯ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಶೆ ಮೂಡುವಂತೆ ಮಾಡಿದ್ದು, ಈ ಕುರಿತು ಇರಾನ್ ಮೂಲದ ವ್ಯಕ್ತಿಯೊಬ್ಬ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ನೊಂದಿಗೆ ಒಪ್ಪಂದ ಮಾಡಿಕೊಳ್ಳದೆ, ಅವರನ್ನು ದಮನಮಾಡಿ ಜನತೆಗೆ ಸಹಾಯಮಾಡಿ ಅವರನ್ನು ಈ ನರಕದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋ ಹಂಚಿಕೊಂಡ ಕೆಲ ಹೊತ್ತಿನಲ್ಲೇ ಆತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು, ಇರಾನ್ ಜನತೆಯನ್ನು ಮುಕ್ತಗೊಳಿಸುವಂತೆ ಕೊನೆ ಕ್ಷಣದಲ್ಲಿ ಆತ ಟ್ರಂಪ್ ಗೆ ಹೇಳಿದ್ದೇನು ನೋಡಿ..
ARAI: ಮಂಡ್ಯದಲ್ಲಿ 100 ಎಕರೆ ಭೂಮಿ ಲಭ್ಯವಿದ್ದು ಪರಿಶೀಲನೆಗೆ ಬನ್ನಿ: ಎಚ್ಡಿಕೆಗೆ ಎಂಬಿ ಪಾಟೀಲ್ ಪತ್ರ
ಮಂಡ್ಯ: ಜಿಲ್ಲೆಯಲ್ಲಿ ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ ನಿರ್ಮಾಣಕ್ಕೆ ಜಾಗ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ 100ಕ್ಕೂ ಅಧಿಕ ಎಕರೆ ಭೂಮಿ ಲಭ್ಯವಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ಪತ್ರ ಬರೆದಿದ್ದಾರೆ.
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿ.ಕೆ.ಶಿವಕುಮಾರ್
ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ
Gold Rate Fall : ಡಾಲರ್ ಮೌಲ್ಯ ಹೆಚ್ಚಳ, ಚಿನ್ನದ ಬೆಲೆ ಏರಿಕೆಗೆ ಬ್ರೇಕ್: ಕುಸಿದ ಬೆಳ್ಳಿ ಬೆಲೆ
ಜನಸಾಮಾನ್ಯರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದ್ದು, ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಕುಸಿತ ಕಂಡು ಬಂದಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಹೂಡಿಕೆದಾರರ ಪ್ರಾಫಿಟ್ ಬುಕ್ಕಿಂಗ್ ಪ್ರಕ್ರಿಯೆಯಿಂದ ಬೆಲೆ ಇಳಿಕೆ ಕಾಣುತ್ತಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಕಡಿಮೆ ಆದ ಕಾರಣ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ಕೊಲ್ಹಾರ : ಒಡೆದು ಹೋದ ಕಾಲುವೆ; ಬೆಳೆದ ಅಪಾರ ಬೆಳೆ ನಾಶ
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಫೆ. 25ರಂದು ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ
ಕಾರ್ಕಳ: ಫೆಬ್ರವರಿ 25ರಂದು ಕಾರ್ಕಳದ ಕುಕ್ಕುಂದೂರು ಕಿಸಾನ್ ಸಭಾಂಗಣದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ನ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆಗೆ ಗ್ಯಾರಂಟಿ ಯೋಜನೆಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು. ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗಾಗಿ ಕಿಸಾನ್ ಸಭಾ ಶಾಲೆಯನ್ನು ಅಂದಿನ ದಿನಗಳಲ್ಲಿ ಸ್ಥಾಪಿಸಲಾಗಿತ್ತು. ಜೊತೆಗೆ ರೈತರ ಪರವಾಗಿ ಕಾರ್ಕಳದ ಮೂಲೆಮೂಲೆಗಳಲ್ಲಿ ಹೋರಾಟ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಾಪನೆಯಾದ ಕಿಸಾನ್ ಸಭಾ ಸಭಾಂಗಣವು ಇದೀಗ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಹೇಳಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಜನಪರ ಯೋಜನೆಗಳ ಮೂಲಕ ಜನಮನ ಗೆದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಚಾರವಾಗಿದೆ. ಮಾನ್ಯ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪೀನಾಥ್ ಭಟ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಬ್ಲಾಕ್ ಉಪಾಧ್ಯಕ್ಷರಾದ ಜಾರ್ಜ್ ಕ್ಯಾಸ್ತಲಿನೊ, ಅಬ್ದುಲ್ ಸಾಣೂರು, ಅಜಿತ್ ಹೆಗ್ಡೆ ಮಾಳ, ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ಮಲಿಕ್ ಅತ್ತೂರು, ಸಿರಿಯಣ್ಣ ಶೆಟ್ಟಿ, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಸ್ವಾಗತಿಸಿ, ಶೇಖ್ ಶಬೀರ್ ಮಿಯ್ಯಾರು ಧನ್ಯವಾದ ಸಲ್ಲಿಸಿದರು.
ಬೆಳ್ತಂಗಡಿ ಅಪಹರಣ ಯತ್ನ ಪ್ರಕರಣಕ್ಕೆ ತಿರುವು: ಸ್ವಯಂ ಕೈ ಕುಯ್ದುಕೊಂಡು ಕತೆ ಕಟ್ಟಿದ ಕಾಲೇಜು ವಿದ್ಯಾರ್ಥಿನಿ?
ಬೆಳ್ತಂಗಡಿ : ಬೆಳ್ತಂಗಡಯಲ್ಲಿ ಸೋಮವಾರ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಅಪಹರಿಸಲು ಯತ್ನಿಸಿದ ಪ್ರಕರಣ ತಿರುವು ಪಡೆದಿದ್ದು, ಇಡೀ ಪ್ರಕರಣವೇ ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸೋಮವಾರ ದಿನವಿಡೀ ಕಾರ್ಯಾಚರಣೆ ನಡೆಸಿದರೂ ವಿದ್ಯಾರ್ಥಿನಿ ಹೇಳಿದಂತಹ ಯಾವುದೇ ಓಮ್ನಿ ಕಾರು ಪರಿಸರದಲ್ಲಿ ಓಡಾಡಿರುವುದು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಲಕಂಷ ತನಿಖೆ ನಡೆಸಿದಾಗ ಅಪಹರಣ ಯತ್ನ, ಚೂರಿ ಇರಿತದಂತಹ ಯಾವುದೇ ಘಟನೆ ನಡೆದಿಲ್ಲ. ಅದು ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿದಬಂದಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ತಾನೇ ಬ್ಲೇಡ್ ನಿಂದ ಕೈಗೆ ಇರಿದು ಅಪಹರಣದ ನಾಟಕವಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಒಟ್ಟು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಮಾನವತೆಗೆ ಒತ್ತುಕೊಟ್ಟು ಬೆಳೆದ ಮಕ್ಕಳು ಸಮಾಜಕ್ಕೆ ವರ: ಜ್ಯೋತಿ ಗುರುಪ್ರಸಾದ್
ಕಾರ್ಕಳ: ಚಿತ್ರಕಲೆ ಬೆಳೆಸುವ ಸೃಜನಶೀಲ ಶಕ್ತಿ ನೋವನ್ನು ನಲಿವನ್ನಾಗಿ ಪರಿವರ್ತಿಸಲು ಕಲಿಸುತ್ತದೆ. ಇಂದು ಚಿತ್ರ ಬರೆಯಲು ಕುಳಿತಿರುವ ಮಕ್ಕಳ ಭವಿಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಉಜ್ವಲವಾಗಲಿ. ಪೋಷಕರು ಮಕ್ಕಳಲ್ಲಿ ಸಹಜವಾಗಿ ಅರಳುವ ಪ್ರತಿಭೆಯನ್ನು ಪೋಷಿಸಿ, ಹೃದಯವಂತಿಕೆ ಮತ್ತು ಮಾನವತೆಗೆ ಒತ್ತುಕೊಟ್ಟು ಬೆಳೆಸಿದಾಗ ಮಾತ್ರ ಅವರು ಸಮಾಜಕ್ಕೂ ಮಾನವಕುಲಕ್ಕೂ ವರವಾಗಿ ಪರಿಣಮಿಸುತ್ತಾರೆ ಎಂದು ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಹೇಳಿದರು. ಅವರು ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಪೆರ್ವಾಜೆ ಸಭಾಂಗಣದಲ್ಲಿ ಕಾರ್ಕಳ ಟೈಗರ್ಸ್, ಹೊಸಸಂಜೆ ಬಳಗ, ಜೆಸಿಐ ಕಾರ್ಕಳ ಹಾಗೂ ಮಾನಸ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೂರ್ಣಪ್ರಜ್ಞ ಸ್ಮರಣಾರ್ಥ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಕಾರ್ತಿಕ್ ರಾವ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಜೆಸಿಐ ಅಧ್ಯಕ್ಷ ಅವಿನಾಶ್ ಶೆಟ್ಟಿ, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ದುರ್ಗದ ಕೃಷಿಕ ದಿನೇಶ್ ಗೋರೆ, ಪೆರ್ವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು, ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರಾಯ ನಾಯಕ್, ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ ಇಂದಿರಾ ಪಿ. ನಾಯಕ್, ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ಐವರು ವಿದ್ಯಾರ್ಥಿಗಳು ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಛಾಯಾಗ್ರಾಹಕ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿದರು. ಧಾರಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ರಮ್ಯಾ ಪೂಜಾರಿ ವಂದಿಸಿದರು.
ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ
ಕಾರ್ಕಳ: ಹಿಂದೂ ಸಮಾಜದ ಭದ್ರ ಬುನಾದಿ ಎಂದರೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹಾಗೂ ಕೂಡು ಕುಟುಂಬ ವ್ಯವಸ್ಥೆಯೇ ಅತ್ಯಂತ ಪ್ರಾಮುಖ್ಯವಾಗಿವೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಇಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಹಾಗೂ ಗುರುಕುಲ ಮಾದರಿಯ ಶಿಕ್ಷಣ ಸಂಪೂರ್ಣವಾಗಿ ನಶಿಸಿಹೋಗಿದೆ. ಕೂಡು ಕುಟುಂಬ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಇದರಿಂದ ಸದಸ್ಯರೆಲ್ಲರೂ ಪರಸ್ಪರ ಬೆರತು ಸಾಮಾಜಿಕವಾಗಿ ಸಮರ್ಥರಾಗುತ್ತಿದ್ದರು. ಆದರೆ ಇಂದು ಅಣ್ಣ-ತಮ್ಮಂದಿರು, ಗಂಡ-ಹೆಂಡತಿಯರೂ ಕೂಡ ಒಟ್ಟಿಗೆ ಇರದ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕಿನ್ನಿಗೋಳಿ ‘ಯುಗಪುರುಷ’ ಪತ್ರಿಕೆಯ ಸಂಪಾದಕ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಶಾಂತ್ ಕಾಮತ್ (ಕಾರ್ಕಳ), ಎಂಆರ್ಪಿಎಲ್–ಒಎನ್ಜಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸಾದ್ ಎನ್. ಅಂಚನ್, ಉದ್ಯಮಿ ಬೋಜ ಸುವರ್ಣ (ಸೂರತ್), ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಉದ್ಯಮಿ ಭಾಸ್ಕರ್ ಶೆಟ್ಟಿ ಸಂಕಲಕರಿ ಹಾಗೂ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು. ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಯ ಕಲಾವಿದರು, ಉಡುಪಿ ಇವರಿಂದ “ಚಿಟ್ಟೆ” ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಎಂಬಿಬಿಎಸ್ ಸೀಟುಗಳ ಹೆಚ್ಚಳದಿಂದ ಮಾತ್ರ ಏನಾದರೂ ಉಪಯೋಗ ಇದೆಯೆ?
ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಸರಕಾರ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 1,37,000ಕ್ಕೆ ಹೆಚ್ಚಿಸಿದೆ ಎಂದು ಜೋರಾಗಿ ಹೇಳುತ್ತದೆ. ಆದರೆ ಸಂಸದೀಯ ಸಮಿತಿ ಖಾಸಗಿ ವೈದ್ಯಕೀಯ ಶಿಕ್ಷಣದ ವೆಚ್ಚ ಒಂದು ಕೋಟಿ ರೂ.ಗೆ ಏರಿದೆ ಎಂದು ಹೇಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಮಂತ್ರಿಗಳು ತಮ್ಮ ಭಾಷಣಗಳಲ್ಲಿ ಎಷ್ಟು ಸರಕಾರಿ ಸೀಟುಗಳಿವೆ, ಎಷ್ಟು ಖಾಸಗಿ ಸೀಟುಗಳಿವೆ ಮತ್ತು ಆ ಸೀಟುಗಳಿಗೆ ಶುಲ್ಕ ಎಷ್ಟೆಷ್ಟು ಎಂದು ಪ್ರತ್ಯೇಕವಾಗಿ ಏಕೆ ಹೇಳುವುದಿಲ್ಲ? 18,000 ಪಿಜಿ ಸೀಟುಗಳು ಖಾಲಿಯಾಗಿ ಉಳಿದಿರುವುದು ಏಕೆ ಎಂದು ಸರಕಾರ ಹೇಳುವುದಿಲ್ಲ. ಕೋಟಿಗಟ್ಟಲೆ ಫೀಸು ಕೊಟ್ಟರೂ ಶಿಕ್ಷಣ ಕಳಪೆ ಮಟ್ಟದ್ದಾಗಿಯೇ ಉಳಿದಿದೆ. 68,000 ಪಿಜಿ ಸೀಟುಗಳು ಮತ್ತು 2,00,000ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ಇದ್ದಾರೆ. ಇದೆಲ್ಲದರ ನಡುವೆಯೂ ಸೀಟು ಹೆಚ್ಚಳದ ಘೋಷಣೆ ಮಾಡಲಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 818ಕ್ಕೆ ಏರಿದೆ ಎಂದು ಸರಕಾರ ಜೋರಾಗಿ ಘೋಷಿಸುತ್ತದೆ. ಆದರೆ ವೈದ್ಯಕೀಯ ವೆಚ್ಚಗಳು ವಿಶ್ವದಲ್ಲೇ ಅತಿ ಹೆಚ್ಚು ಎಂಬುದರ ಬಗ್ಗೆ ಅದು ಹೇಳುವುದೇ ಇಲ್ಲ. ಆರೋಗ್ಯಕ್ಕಾಗಿ ಮಾಡುವ ಖರ್ಚು ಪ್ರತೀ ವರ್ಷ ಶೇ.15ರಷ್ಟು ಏರುತ್ತದೆ. ಪ್ರಸ್ತುತ, ಭಾರತ ಸರಕಾರ ಆರೋಗ್ಯದ ಮೇಲೆ ಜಿಡಿಪಿಯ ಶೇ.1ರಷ್ಟನ್ನೂ ಖರ್ಚು ಮಾಡುವುದಿಲ್ಲ. ಆದರೆ ಶೇ.2.5 ಗುರಿ ಮಾತ್ರ ಇದೆ. ಅದು ಸುಮ್ಮನೆ ಹೇಳಿಕೊಳ್ಳಲಿಕ್ಕೆ ಒಂದು ಗುರಿ ಮಾತ್ರ ಎನ್ನುವುದು ಸ್ಪಷ್ಟವಾಗುತ್ತಿದೆ. ವರದಿಗಳ ಪ್ರಕಾರ, ಆಸ್ಪತ್ರೆ ವೆಚ್ಚಗಳಿಂದಾಗಿಯೇ ಭಾರತೀಯರು ಈ ವರ್ಷ ಇನ್ನಷ್ಟು ಬಡವರಾಗುವ ಸಾಧ್ಯತೆ ಇದೆ. ಹೀಗೆಲ್ಲ ಇರುವಾಗ, ಬಜೆಟ್ನಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಕೋಟಿ ಕೋಟಿ ಲೆಕ್ಕದಲ್ಲಿ ಕಡಿತ ಮಾಡಲಾಗುತ್ತಿದೆ. ಇನ್ನೊಂದೆಡೆ, ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕಕರೇ ಇಲ್ಲ. ಛತ್ತೀಸ್ಗಡದ 10 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 332 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ವ್ಯವಸ್ಥೆ ಕುಸಿದಿದೆ. 19 ಕಾಲೇಜುಗಳ ಪೈಕಿ 7ರಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕಲಿಸಲು ಸಾಕಷ್ಟು ಶಿಕ್ಷಕರಿದ್ದಾರೆ. ಉಳಿದ 12 ಕಾಲೇಜುಗಳು ಶಿಕ್ಷಕರ ತೀವ್ರ ಕೊರತೆ ಎದುರಿಸುತ್ತಿವೆ. ಶಿವಪುರ ಮತ್ತು ಸಿಂಗೋಲಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿನ ಶೇ.90 ಹುದ್ದೆಗಳು ಖಾಲಿ ಇವೆ. ಸಾಗರ್-ಚಿಂದ್ವಾರ ವೈದ್ಯಕೀಯ ಕಾಲೇಜುಗಳಲ್ಲಿ ಶೇ.50 ಹುದ್ದೆಗಳು ಖಾಲಿ ಇವೆ. ಇದು ಈ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳ ದಾರುಣ ಸ್ಥಿತಿಯಾಗಿದೆ. ಪ್ರಾಧ್ಯಾಪಕರಿಲ್ಲದೆ, ಸಹಾಯಕ ಪ್ರಾಧ್ಯಾಪಕರಿಲ್ಲದೆ, ಬರೀ ಕಾಲೇಜುಗಳನ್ನು ನಿರ್ಮಿಸಲು ಬಯಸಿದರೆ ಏನಾಗುತ್ತದೆ? ಎಂಬಿಬಿಎಸ್ ಸೀಟುಗಳ ಸಂಖ್ಯೆ ಲಕ್ಷಾಂತರಕ್ಕೆ ಹೆಚ್ಚಾಗುತ್ತದೆ. ಇದನ್ನು ತನ್ನ ಸಾಧನೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತದೆ. ಇದರಿಂದ ಏನಾದರೂ ಉಪಯೋಗ ಇದೆಯೆ? ಅದೇ ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗ ಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಈಗ ಬೋಧನಾ ಅನುಭವವಿಲ್ಲದ ವೈದ್ಯರನ್ನು ಸಹ ಅಸೋಸಿಯೇಟ್ ಪ್ರೊಫೆಸರ್ಗಳನ್ನಾಗಿ ಮಾಡಲು ಅವಕಾಶ ನೀಡಲಾಗಿದೆ. ಯಾರಾದರೂ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ಅವರನ್ನು ಹಿರಿಯ ರೆಸಿಡೆನ್ಸಿ ಇಲ್ಲದೆ ಸಹಾಯಕ ಪ್ರಾಧ್ಯಾಪಕರನ್ನಾಗಿ ಮಾಡಬಹುದು. ಪರಿಸ್ಥಿತಿ ಹೀಗಾದರೆ, ಇದು ಎಲ್ಲಿಗೆ ಮುಟ್ಟಬಹುದು ಎಂಬುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್ಎಐಎಂಎ) 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು.ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ 2,000 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಿಂದ ಬಂದವರು. ಕೇವಲ ಶೇ.71 ವಿದ್ಯಾರ್ಥಿಗಳು ಮಾತ್ರ ರೋಗಿಗಳನ್ನು ನೋಡಲು ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ.ಕೇವಲ ಶೇ.54 ವಿದ್ಯಾರ್ಥಿಗಳು ಮಾತ್ರ ತರಗತಿಗಳು ನಿಯಮಿತವಾಗಿ ನಡೆಯುತ್ತಿವೆ ಮತ್ತು ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಅರ್ಧದಷ್ಟು ವಿದ್ಯಾರ್ಥಿಗಳು ತಮ್ಮ ಸ್ಟೈಪೆಂಡ್ ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲಿಲ್ಲ. ಶೇ.55 ಜನರು ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದ್ದಾರೆ. ಶೇ.74 ಜನರು ತಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡರು. ಆರೋಗ್ಯ ಸಚಿವರು ಇದನ್ನು ಏಕೆ ಪರಿಹರಿಸುವುದಿಲ್ಲ? ಪ್ರಧಾನಿ ಏಕೆ ಇದನ್ನು ಗಮನಿಸುವುದಿಲ್ಲ? ವೈದ್ಯರಿಗೆ ಅವರ ಸ್ಟೈಪೆಂಡ್ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ಏನು ಮಾಡುತ್ತಿದ್ದಾರೆ? ಇದು ವೈದ್ಯಕೀಯ ಶಿಕ್ಷಣದ ಸ್ಥಿತಿ. ಪ್ರವೇಶ ನೀಡುವ ಮೂಲಕ ಪೋಷಕರು ಮತ್ತು ಮಕ್ಕಳನ್ನು ಸಮಾಧಾನಪಡಿಸಲು ಶಿಕ್ಷಕರಿಲ್ಲದೆ ಕಾಲೇಜುಗಳನ್ನು ತೆರೆಯಲಾಗುತ್ತಿದೆ. 12 ವರ್ಷಗಳಲ್ಲಿ, ದೇಶದಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 157 ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಲಾಗಿದೆ. ಆದರೆ ಇವುಗಳಲ್ಲಿ ಕೇವಲ 137 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸರಕಾರ ವೈದ್ಯಕೀಯ ಕಾಲೇಜುಗಳ ಲೆಕ್ಕ ಕೊಡುವಾಗ 323 ದಂತ ಮತ್ತು 942 ಆಯುಷ್ ಸಂಸ್ಥೆಗಳನ್ನು ಸರಿಸಿ, ಕಾಲೇಜುಗಳ ಸಂಖ್ಯೆ 2,045 ಎಂದು ಹೇಳುತ್ತಿದೆ. ಸಂಖ್ಯೆ ದೊಡ್ಡದಾಗಿ ಕಾಣುವಂತೆ ಮಾಡಲು, ಆಯುಷ್ ಸಂಸ್ಥೆಗಳ ಹೆಸರುಗಳನ್ನು ಸಹ ಸೇರಿಸಲಾಗಿದೆ.ಸರಕಾರಿ ಆಸ್ಪತ್ರೆಗೆ ಕೆಲ ಉಪಕರಣಗಳು, ಕೆಲ ಪೀಠೋಪಕರಣಗಳು ಮತ್ತು ಕೆಲ ಕೊಠಡಿಗಳನ್ನು ಸೇರಿಸಿ, ಅದನ್ನು ವೈದ್ಯಕೀಯ ಕಾಲೇಜು ಎನ್ನಲಾಗುತ್ತಿದೆ. ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಈಗಿರುವ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಕಳೆದ ಎಪ್ರಿಲ್ನಲ್ಲಿ ಸಂಸತ್ತಿನಲ್ಲಿ ಹೇಳಲಾಯಿತು. ಈ ಯೋಜನೆಯಡಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಪ್ರತೀ ಸೀಟಿಗೆ 1.2 ಕೋಟಿ ವೆಚ್ಚದ ಮಿತಿಯೊಂದಿಗೆ ಸೌಲಭ್ಯ ನೀಡಲಾಗುತ್ತದೆ. ದೊಡ್ಡ ಘೋಷಣೆಗಳನ್ನು ಮಾಡಲಾಗುತ್ತಿದೆ, ಆದರೆ ಯಾವುದೇ ಕೆಲಸ ಆಗುತ್ತಿಲ್ಲ. ದರ್ಭಾಂಗಾ ಏಮ್ಸ್ ಅನ್ನು 10 ವರ್ಷಗಳ ಹಿಂದೆ ಘೋಷಿಸಲಾಯಿತು. ಅದರ ಮುಖ್ಯ ದ್ವಾರವನ್ನು ಮಾತ್ರ ನಿರ್ಮಿಸಲಾಗಿದೆ. ಸರಕಾರ ಆರೋಗ್ಯಕ್ಕಾಗಿ ಜಿಡಿಪಿಯ ಶೇ. 2ನ್ನು ಸಹ ಖರ್ಚು ಮಾಡದಿದ್ದರೆ ಇದಾವುದೂ ಆಗುವುದಿಲ್ಲ. ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಿಸಲು ಈ ಸರಕಾರಕ್ಕೆ 11 ವರ್ಷಗಳು ಬೇಕಾದವು. 11 ವರ್ಷಗಳಲ್ಲಿ, 66,842 ಸೀಟುಗಳನ್ನು ಸೇರಿಸಲಾಗಿದೆ. ಆದರೆ, ಇವುಗಳಲ್ಲಿ ಎಷ್ಟು ಖಾಸಗಿ ಸೀಟುಗಳು ಎಂಬುದು ತಿಳಿಯುವುದಿಲ್ಲ. ಇವುಗಳಿಗೆ ಕೋಟ್ಯಂತರ ರೂ. ಶುಲ್ಕ ಇರುತ್ತದೆ. ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ, ಭಾರತದಲ್ಲಿ 10 ಲಕ್ಷ ಜನರಿಗೆ ಸರಾಸರಿ 75 ಎಂಬಬಿಎಸ್ ಸೀಟುಗಳಿವೆ. ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಈ ಸಂಖ್ಯೆ 150ಕ್ಕಿಂತ ಹೆಚ್ಚು. ಆದರೆ ಬಿಹಾರಕ್ಕೆ ಬಂದರೆ, 10 ಲಕ್ಷ ಜನರಿಗೆ ಕೇವಲ 21 ಸೀಟುಗಳಿವೆ. ಅದೇ ಬಿಹಾರದಲ್ಲಿ ಒಬ್ಬ ವ್ಯಕ್ತಿ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಅಧ್ಯಾಪಕರ ವೇತನ ಖಾಸಗಿ ಆಸ್ಪತ್ರೆಗಳಿಗಿಂತ ಶೇ. 30ರಿಂದ 50ರಷ್ಟು ಕಡಿಮೆ ಎಂದು ನೀತಿ ಆಯೋಗ ಅಂದಾಜಿಸಿದೆ. ವೈದ್ಯರು ಕಡಿಮೆ ವೇತನದ ಕಾರಣಕ್ಕೆ ತಮ್ಮ ಕೆಲಸ ಬಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇದು ವರ್ಷಗಳಿಂದಲೂ ನಡೆಯುತ್ತಿದೆ. ಸಾವಿರಾರು ಕೋಟಿ ರೂ.ಗಳ ಹಗರಣಗಳು ನಡೆಯುತ್ತಲೇ ಇವೆ.ವೈದ್ಯರಿಗೆ ಉತ್ತಮ ಸಂಬಳ ನೀಡುವ ಬಗ್ಗೆ ಮಾತ್ರ ಸರಕಾರ ತಲೆಬಿಸಿ ಮಾಡಿಕೊಳ್ಳುತ್ತಲೇ ಇಲ್ಲ. ಹೀಗಿರುವಾಗ, ಬರೀ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎನ್ನುವುದರಿಂದ ಏನು ಉಪಯೋಗ? ವೈದ್ಯರ ಸಂಖ್ಯೆ ಕಡಿಮೆಯಿದೆ ಎನ್ನುವುದು ಮಾತ್ರವಲ್ಲ, ಶಿಕ್ಷಣದ ಗುಣಮಟ್ಟ ಕೂಡ ಕಳಪೆ. ನೂರಾರು ರೋಗಿಗಳನ್ನು ಆಕರ್ಷಿಸುವ ಅನೇಕ ಖಾಸಗಿ ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. ಈ ನಿರ್ವಹಣಾ ವಿಧಾನ ಮತ್ತು ಅನುಭವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಏಕೆ ಸೀಮಿತವಾಗಿದೆ? ಇದರ ಆಧಾರದ ಮೇಲೆ, ಸರಕಾರಿ ಆಸ್ಪತ್ರೆ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಇಲ್ಲಿನ ವ್ಯವಸ್ಥೆಯಿಂದ ಬೇಸತ್ತ ಜನರು ಮತ್ತೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಅವರ ದುಡಿಮೆಯೆಲ್ಲ ಅಲ್ಲಿಯೇ ಖರ್ಚಾಗುತ್ತದೆ. ಸರಕಾರಿ ಆಸ್ಪತ್ರೆಗಳನ್ನು ಇನ್ನೂ ಉದ್ದೇಶಪೂರ್ವಕವಾಗಿ ಕಳಪೆ ಸ್ಥಿತಿಯಲ್ಲಿ ಇರಿಸಲಾಗಿದೆಯೇ? ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೂ, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಅನೇಕ ವೈದ್ಯರಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶ ಬಿಟ್ಟುಕೊಡುತ್ತಾರೆ. ಹಾಳಾಗುತ್ತಿರುವ ಅದೇ ಸರಕಾರಿ ಆಸ್ಪತ್ರೆಗಳಲ್ಲಿ, ಸರಕಾರಕ್ಕಾಗಿ ಅಲ್ಲ, ಜನರಿಗಾಗಿ ಕೆಲಸ ಮಾಡುವ ಅದ್ಭುತ ವೈದ್ಯರೂ ಇದ್ದಾರೆ. ಅವರು ಬಡವರ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾದರೆ, ಸರಕಾರ ಅಂಥ ವೈದ್ಯರಿಗೆ ಉತ್ತಮ ವಾತಾವರಣ ಒದಗಿಸಲು ಏಕೆ ಯತ್ನಿಸುತ್ತಿಲ್ಲ? ವೈದ್ಯಕೀಯ ಸಂಶೋಧನೆಯೂ ಕೆಟ್ಟ ಸ್ಥಿತಿಯಲ್ಲಿದೆ. ಅಮೆರಿಕ ತನ್ನ ಜಿಡಿಪಿಯ ಶೇ.0.65 ಅನ್ನು ಆರೋಗ್ಯ ರಕ್ಷಣೆ ಸಂಶೋಧನೆಗೆ ಖರ್ಚು ಮಾಡುತ್ತದೆ. ಬ್ರಿಟನ್ ಶೇ.0.44 ಅನ್ನು ಖರ್ಚು ಮಾಡುತ್ತದೆ. ಆದರೆ ಭಾರತ ತನ್ನ ಜಿಡಿಪಿಯ ಶೇ.0.02ರಷ್ಟನ್ನು ಮಾತ್ರ ವೈದ್ಯಕೀಯ ಸಂಶೋಧನೆಗೆ ಖರ್ಚು ಮಾಡುತ್ತಿದೆ. ವೈದ್ಯಕೀಯ ಕಾಲೇಜುಗಳು ಮತ್ತು ಶಿಕ್ಷಣದ ಮಹತ್ವವನ್ನು ಸರಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಕ್ಯಾನ್ಸರ್ ವೆಚ್ಚ ಎಷ್ಟು ಹೆಚ್ಚಾಗಿದೆ? ಲ್ಯಾನ್ಸೆಟ್ ವರದಿ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಹೊರೆ ಹೆಚ್ಚುತ್ತಿದೆ ಮತ್ತು ರೋಗಿಗಳ ಮೇಲಿನ ಆರ್ಥಿಕ ಹೊರೆಯೂ ಹೆಚ್ಚುತ್ತಿದೆ. ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ರೋಗಿ ಪ್ರತೀ ಖಾಸಗಿ ಆಸ್ಪತ್ರೆಗೆ 39,000ರಿಂದ 93,000 ರೂಪಾಯಿಗಳವರೆಗೆ ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ 74,000 ಜನರು ಕ್ಯಾನ್ಸರ್ನಿಂದ ಸಾಯುತ್ತಾರೆ. ಭಾರತದಲ್ಲಿ ಸರಾಸರಿ ಮಾಸಿಕ ವೇತನ 12,000 ರೂಪಾಯಿ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದೇ ಸಲಕ್ಕೆ 40,000 ರೂ. ಪಾವತಿಸಬೇಕಾದರೆ, ಚಿಕಿತ್ಸೆ ಹೇಗೆ ಕೊಡಿಸಬಹುದು? ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.ಆದರೂ, ಈ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಚರ್ಚೆಯೆಲ್ಲವೂ ಹಿಂದೂ ರಾಷ್ಟ್ರದ ಕಲ್ಪನೆಗೆ ಸೀಮಿತವಾಗಿರುವಾಗ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಯಾರಿಗೆ ಬೇಕಾಗಿದೆ?

25 C