SENSEX
NIFTY
GOLD
USD/INR

Weather

17    C
... ...View News by News Source

ಇಂಧನ ದುರಾಸೆ, ಮಾದಕ ದ್ರವ್ಯ ಭಯೋತ್ಪಾದನೆ ಅಲ್ಲ: ಟ್ರಂಪ್‌ಗೆ ತಿರುಗೇಟು ನೀಡಿದ ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ‌ ಡೆಲ್ಸಿ ರೊಡ್ರಿಗಸ್

ಕರಾಕಾಸ್: ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ನಿಕೋಲಸ್ ಮಡುರೊ ಆಡಳಿತಾವಧಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳು “ಸುಳ್ಳು ಹಾಗೂ ರಾಜಕೀಯ ಪ್ರೇರಿತ”ವೆಂದು ಅವರು ಹೇಳಿದ್ದಾರೆ. ವೆನೆಝುವೆಲಾದ ಸಂಸತ್ತಿನಲ್ಲಿ ಮಾತನಾಡಿದ ರೊಡ್ರಿಗಸ್, “ವೆನೆಝುವೆಲಾ ಇಂಧನ ಶಕ್ತಿಯ ಪ್ರಮುಖ ಕೇಂದ್ರ. ಇದೇ ಕಾರಣಕ್ಕೆ ನಮ್ಮ ದೇಶ ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಉತ್ತರದ ದೇಶಗಳ ಇಂಧನ ದುರಾಸೆಯೇ ಈ ಎಲ್ಲದಕ್ಕೂ ಮೂಲ ಕಾರಣ,” ಎಂದು ಹೇಳಿದರು. ವೆನೆಝುವೆಲಾ ಸರಕಾರದಿಂದ ಸಂಪೂರ್ಣ ಸಹಕಾರ ದೊರಕುತ್ತಿದೆ ಹಾಗೂ ದೇಶದ ತೈಲ ಸಂಪನ್ಮೂಲಗಳ ಮೇಲೆ ದೀರ್ಘಕಾಲ ನಿಯಂತ್ರಣ ಮುಂದುವರಿಯಲಿದೆ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ವೆನೆಝುವೆಲಾ ಅಮೆರಿಕಕ್ಕೆ ಬೇಕಾದ ಎಲ್ಲವನ್ನೂ ನೀಡುತ್ತಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರ” ಎಂದು ಸ್ಪಷ್ಟಪಡಿಸಿದರು. ಅಮೆರಿಕದೊಂದಿಗೆ ಯಾವುದೇ ಏಕಪಕ್ಷೀಯ ಒಪ್ಪಂದಗಳನ್ನು ತಳ್ಳಿಹಾಕಿದ ರೊಡ್ರಿಗಸ್, “ಎಲ್ಲರಿಗೂ ಲಾಭವಾಗುವ ಇಂಧನ ಸಂಬಂಧಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಸಹಕಾರವು ಸ್ಪಷ್ಟವಾಗಿ ನಿರ್ಧರಿಸಲಾದ ವಾಣಿಜ್ಯ ಒಪ್ಪಂದಗಳ ಆಧಾರದಲ್ಲೇ ನಡೆಯಬೇಕು” ಎಂದರು. ಈ ಹಿಂದೆ ಅಮೆರಿಕದೊಂದಿಗೆ ಸಂಬಂಧಗಳು ಹದಗೆಟ್ಟಿದ್ದರೂ, ವೆನೆಝುವೆಲಾದ ತೈಲ ಮಾರುಕಟ್ಟೆಯನ್ನು ಅಮೆರಿಕಕ್ಕೆ ತೆರೆಯುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು. ಮಡುರೊ ಅವರನ್ನು ಅಧಿಕಾರದಿಂದ ದೂರ ಮಾಡಲು ಅಮೆರಿಕ ನಡೆಸಿದ ಪ್ರಯತ್ನಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಕಪ್ಪು ಚುಕ್ಕೆ ಎಂದು ಹೇಳಿದ ಅವರು, ಅಮೆರಿಕದೊಂದಿಗೆ ವ್ಯಾಪಾರ ಮಾಡುವುದು “ಅಸಾಮಾನ್ಯವೂ ಅಲ್ಲ, ಅನಿಯಮಿತವೂ ಅಲ್ಲ” ಎಂದು ಒತ್ತಿ ಹೇಳಿದರು.

ವಾರ್ತಾ ಭಾರತಿ 8 Jan 2026 11:17 pm

Mudigere | ಮುತ್ತಿಗೆಪುರ ಸರಕಾರಿ ಶಾಲೆ ಮಕ್ಕಳಿಗೆ ವಿಮಾನಯಾನ ಭಾಗ್ಯ; ವಿದ್ಯಾರ್ಥಿಗಳ ಕನಸು ನನಸು ಮಾಡಿದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಯನ್ನೂ ಮೀರುವಂತೆ ವಿಭಿನ್ನ ಕಾರ್ಯವನ್ನು ಮಾಡಿದ್ದು, ಶಾಲೆಯ 32 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಅನುಭವ ನೀಡುವ ಮೂಲಕ ಸರಕಾರಿ ಶಾಲೆಯೊಂದು ಏರ್ ಟೂರ್ ಕರೆದುಕೊಂಡು ಹೋಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜ.7ರಂದು ಮುತ್ತಿಗೆಪುರ ಸರಕಾರಿ ಶಾಲೆಯಿಂದ ಹೊರಟ 32 ಮಕ್ಕಳು ಶಿಕ್ಷಕರೊಡನೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ವಿಮಾನ ಏರಿ ಬೆಂಗಳೂರು ತಲುಪಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣವನ್ನು ವೀಕ್ಷಿಸಿ ಅಲ್ಲಿಂದ ವಿಧಾನಸೌಧವನ್ನು ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ, ಬೆಂಗಳೂರು ಪ್ಯಾಲೇಸ್, ತಾರಾಲಯ ವೀಕ್ಷಿಸಿ ಅಲ್ಲಿಂದ ಅಂದು ರಾತ್ರಿ ವಾಹನದಲ್ಲಿ ಮುತ್ತಿಗೆಪುರ ಗ್ರಾಮವನ್ನು ತಲುಪಿದ್ದಾರೆ. ಈ ಮೂಲಕ ಏರ್ ಟೂರ್‌ನ ಅನುಭವವನ್ನು ಮಕ್ಕಳು ತಮ್ಮದಾಗಿಸಿಕೊಂಡಿದ್ದಾರೆ.   ವಿಮಾನ ಏರಿ ಪ್ರಯಾಣಿಸಬೇಕೆಂಬುದು ಮಕ್ಕಳ ಬಹುದಿನಗಳ ಕನಸಾಗಿತ್ತು. ನಾವೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ತಮ್ಮ ಕನಸನ್ನು ಮಕ್ಕಳು ಶಿಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಮಕ್ಕಳ ಕನಸನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ದಾನಿಗಳು ಆರ್ಥಿಕ ನೆರವು ನೀಡಿದ್ದು 2 ಲಕ್ಷ ರೂ. ವೆಚ್ಚದಲ್ಲಿ ಏರ್ ಟೂರ್ ಆಯೋಜಿಸಿ ಮಕ್ಕಳ ಕನಸನ್ನು ನನಸು ಮಾಡಿದ್ದಾರೆ. ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಕ ಸಂತೋಷ್ 10 ವಿದ್ಯಾರ್ಥಿಗಳ ಖರ್ಚು ವೆಚ್ವವನ್ನು ನೀಡಿದ್ದಾರೆ. ಒಟ್ಟಾರೆ ಎಳೆಯ ಮಕ್ಕಳ ಬಹುದಿನಗಳ ಕನಸು ಈ ಸರಕಾರಿ ಶಾಲೆ ನನಸಾಗಿಸಿದೆ. ಶಾಲೆಯಲ್ಲಿ 422 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 5, 6, 7ನೇ ತರಗತಿಯ 32 ಮಕ್ಕಳನ್ನು ಪೋಷಕರ ಒಪ್ಪಿಗೆಯ ಮೇರೆಗೆ ಈ ಏರ್ ಟೂರ್‌ಗೆ ಆಯ್ಕೆ ಮಾಡಲಾಗಿದೆ. ಶಾಲೆಯ ಈ ವಿಭಿನ್ನ ಪ್ರಯತ್ನಕ್ಕೆ ಗ್ರಾಮ ಪಂಚಾಯತ್, ಡಿಡಿಪಿಐ ತಿಮ್ಮರಾಜು, ಬಿಇಇ, ಶಿಕ್ಷಣ ಇಲಾಖೆಯೂ ಸಹಕಾರ ನೀಡಿದೆ ಎಂದು ಇಲ್ಲಿನ ಶಿಕ್ಷಕರು ಸ್ಮರಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಮಕ್ಕಳದಾಗಿತ್ತು. ಅವರು ನಮ್ಮೊಂದಿಗೆ ಹಂಚಿಕೊಂಡಾಗ ಏರ್‌ಟೂರ್ ಯೋಜನೆ ರೂಪಿಸಿದೆವು. ಶಿಕ್ಷಕರು, ಎಸ್‌ಡಿಎಂಸಿ ಹಾಗೂ ದಾನಿಗಳ ಸಹಕಾರದಿಂದ ಏರ್‌ಟೂರ್ ಏರ್ಪಡಿಸಲು ಸಾಧ್ಯವಾಯಿತು. 32 ಮಕ್ಕಳು ವಿಮಾನ ಪ್ರಯಾಣದ ಅನುಭವ ಪಡೆದುಕೊಂಡರು. ಮಕ್ಕಳಿಗೆ ವಿಭಿನ್ನವಾದ ಅನುಭವ ಹೊಂದಬೇಕೆಂಬ ಉದ್ದೇಶದಿಂದ ಏರ್‌ಟೂರ್ ಆಯೋಜನೆ ಮಾಡಲಾಗಿತ್ತು. ಮಕ್ಕಳ ಕನಸು ನನಸಾಗುವ ಜತೆಗೆ ಒಂದೊಳ್ಳೇ ಅನುಭವವನ್ನು ಪಡೆದುಕೊಂಡರು. ಎಸ್.ಭಾರತಿ, ಮುತ್ತಿಗೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು : ಖಾಸಗಿ ಶಾಲೆಗಳು ದಾಖಲಾತಿಗಾಗಿ ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿವೆ. ಆದರೆ, ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಹಿಂದುಳಿದ ವರ್ಗಗಳ ಮಕ್ಕಳಾಗಿದ್ದು, ಅವರಿಗೂ ವಿಭಿನ್ನ ಹಾಗೂ ಹೊಸ ಅನುಭವ ನೀಡುವ ಉದ್ದೇಶದಿಂದ ಏರ್‌ಟೂರ್ ಆಯೋಜಿಸಲಾಗಿತ್ತು. ಈ ಶಾಲೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿ ವರ್ಷವೂ ಒಂದೊಂದು ಹೊಸತನವನ್ನು ರೂಪಿಸುತ್ತಿದೆ. ಅದರಂತೆ ಏರ್‌ಟೂರ್ ಮೂಲಕ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ.

ವಾರ್ತಾ ಭಾರತಿ 8 Jan 2026 11:16 pm

ಅಮೆರಿಕದ ತೈಲ ದುರಾಸೆ ಖಂಡಿಸಿದ ವೆನೆಜುವೆಲಾ ಅಧ್ಯಕ್ಷೆ; ಸಮಾಜವಾದಿ ಪಥ ಬಿಡಲ್ಲ ಎಂದ ಡೆಲ್ಸಿ ರೊಡ್ರಿಗಸ್‌

ಅಮೆರಿಕದ ಇತ್ತೀಚಿನ ವೆನೆಜುವೆಲಾ ಮೇಲಿನ ದಾಳಿ ಮತ್ತು ಅಧ್ಯಕ್ಷರ ಬಂಧನವನ್ನು ಅಮೆರಿಕದ ತೈಲ ದುರಾಸೆ ಎಂದು ಕರೆದಿರುವ ಅಲ್ಲಿನ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌, ಡೊನಾಲ್ಡ್‌ ಟ್ರಂಪ್‌ ಅವರು ಮಾಡುತ್ತಿರುವ ಮಾದಕವಸ್ತು ಕಳ್ಳಸಾಗಾಣೆ ಆರೋಪಗಳು ಕೇವಲ ನೆಪ ಮಾತ್ರ ಎಂದು ಗುಡುಗಿದ್ದಾರೆ. ಅಮೆರಿಕವು ವೆನೆಜುವೆಲಾದ ತೈಲ ಕಬಳಿಸುವ ಹುನ್ನಾರ ನಡೆಸಿದ್ದು, ಇದಕ್ಕಾಗಿ ನಮ್ಮ ಅಧ್ಯಕ್ಷರನ್ನು ಸುಳ್ಳು ಆರೋಪದ ಮೇಲೆ ಬಂಧಿಸದೆ ಎಂದೂ ರೊಡ್ರಿಗಸ್‌ ಹರಿಹಾಯ್ದಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 8 Jan 2026 11:12 pm

ಭಾರತಕ್ಕೆ ಶೇ.500 ಸುಂಕಾಸ್ತ್ರ?: ರಶ್ಯ ನಿರ್ಬಂಧಗಳ ಮಸೂದೆಗೆ ಟ್ರಂಪ್ ಹಸಿರುನಿಶಾನೆ !

ಮುಂದಿನ ವಾರ ಸೆನೆಟ್‌ನಲ್ಲಿ ಮಂಡನೆ ಸಾಧ್ಯತೆ

ವಾರ್ತಾ ಭಾರತಿ 8 Jan 2026 11:11 pm

ಭಾರತೀಯರಿಗೆ ವೀಸಾ ನಿರ್ಬಂಧ ವಿಸ್ತರಿಸಿದ ಬಾಂಗ್ಲಾದೇಶ

ಢಾಕಾ, ಜ.8: ಬಾಂಗ್ಲಾದೇಶ ಭಾರತೀಯ ಪ್ರಜೆಗಳಿಗೆ ವೀಸಾ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. ಗುರುವಾರದಿಂದ ವೀಸಾ ಅಮಾನತು ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿರುವ ಬಾಂಗ್ಲಾದ ಉಪ ಹೈಕಮಿಷನ್‍ಗಳಿಗೆ ವಿಸ್ತರಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಭದ್ರತಾ ಸ್ಥಿತಿಗಳ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಭಾರತವು ಬಾಂಗ್ಲಾದ ಖುಲ್ನಾ ಮತ್ತು ರಾಜ್‍ಶಾಹಿ ನಗರದಲ್ಲಿನ ಎರಡು ವೀಸಾ ಅರ್ಜಿ ಕೇಂದ್ರಗಳನ್ನು ಮುಚ್ಚಿತ್ತು. ಅದರ ಮರುದಿನವೇ ಬಾಂಗ್ಲಾದೇಶದ ಹೈಕಮಿಷನ್ ಹೊಸದಿಲ್ಲಿಯಲ್ಲಿ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಇದೀಗ ಈ ಕ್ರಮವನ್ನು ಕೋಲ್ಕತಾ, ಮುಂಬೈ ಮತ್ತು ಚೆನ್ನೈ ನಗರಗಳಿಗೆ ವಿಸ್ತರಿಸಲಾಗಿದೆ. ಹೊಸ ಕ್ರಮಗಳ ಅಡಿಯಲ್ಲಿ ವ್ಯಾಪಾರ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಎಲ್ಲಾ ವೀಸಾ ವಿಭಾಗಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 8 Jan 2026 11:00 pm

Bengaluru | ವೆನೆಝುವೆಲಾ ಮೇಲಿನ ಅಮೆರಿಕಾ ದಾಳಿ ಖಂಡಿಸಿ ಎಡಪಕ್ಷಗಳ ಪ್ರತಿಭಟನೆ

ಬೆಂಗಳೂರು : ವೆನೆಝುವೆಲಾ ವಿರುದ್ಧ ಅಮೆರಿಕಾದ ಆಕ್ರಮಣ ಮತ್ತು ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣ, ಅಂತರ್ ರಾಷ್ಟ್ರೀಯ ಕಾನೂನು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಖಂಡಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಿಪಿಐ, ಸಿಪಿಎಂ, ಸಿಪಿಐ(ಎಂಎಲ್), ಎಸ್‍ಯುಸಿಐ ಹಾಗೂ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ, ವೆನೆಜುವೇಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿರುವುದು, ವೆನೆಜುವೇಲಾದ ಆಕ್ರಮಣದ ಹಿಂದಿನ ದುರುದ್ದೇಶವಾಗಿದೆ. ಆದ್ದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದ ಆಕ್ರಮಣವನ್ನು ಖಂಡಿಸಿ ವೆನೆಜುವೇಲಾದೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ, ಅಮೇರಿಕಾದಂತ ಬೃಹತ್ ರಾಷ್ಟ್ರದ ಅಧ್ಯಕ್ಷ ನೆರೆಯ ಸಣ್ಣದ ರಾಷ್ಟ್ರದ ಅಧ್ಯಕ್ಷರನ್ನು ಬೀದಿ ರೌಡಿಯಂತೆ ಅಪಹರಣ ಮಮಾಡುವುದು ನಾಗರೀಕತೆಗೆ ನಾಚಿಕೆಗೇಡಿನ ಸಂಗತಿ, ಇದು ಅಮೇರಿಕಾದ ಇವತ್ತಿನ ವಿದ್ಯಮಾನವಲ್ಲ. ಮೊದಲನೇ ಜಾಗತಿಕ ಯುದ್ಧದ ನಂತರ ಜಗತ್ತಿನ ಆರ್ಥಿಕತೆ ಮತ್ತು ಸಂಪತ್ತಿನ ಮೇಲೆ ನಿಯಂತ್ರಣ ಹೊಂದಬೇಕು ಎಂಬ ಸಾಮ್ರಾಜ್ಯಶಾಹಿ ಸಂಘರ್ಷದ ಮುಂದುವರಿದ ಭಾಗವಾಗಿದೆ ಎಂದು ಹೇಳಿದರು. ಇವತ್ತು ಜಗತ್ತಿನಾದ್ಯಂತ ಪ್ರಜಾಸತಾತ್ಮಕ ಶಕ್ತಿಗಳು ಹೋರಾಟ ಮಾಡಬೇಕಿದೆ. ಅಮೇರಿಕಾ ಸಾಮ್ರಾಜ್ಯಶಾಹಿಗೆ ಹಿಂದೆ ಅನೇಕ ದೇಶಗಳು ಎದುರಾಗಿ ನಿಂತಿದ್ದವು. ಅದರ ಭಾಗವಾಗಿದ್ದ ಭಾರತ ಇವತ್ತು ಮೌನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‍ಗಿಂತ ಭಿನ್ನವಾಗಿಲ್ಲ. ಅದೇ ಮನಸ್ಥಿತಿ ನಮ್ಮ ದೇಶದ ಪ್ರಧಾನಮಂತ್ರಿಗೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂಎಲ್-ಲಿಬರೇಶನ್) ಕಾರ್ಯದರ್ಶಿ ಕ್ಲಿಫ್ಟನ್ ಡಿ. ರೊಜಾರಿಯೋ, ಎಸ್‍ಯುಸಿಐ ಕಾರ್ಯದರ್ಶಿ ಉಮಾ, ಹಿರಿಯ ಮುಖಂಡ ಜಿ.ಎನ್.ನಾಗರಾಜ್, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಎನ್.ಗಾಯತ್ರಿ, ಇ.ಪಿ.ಮೆನನ್, ಅನಿಲ್, ಸೈಯ್ಯದ್ ಶಫಿ ವುಲ್ಲಾಖಾನ್ ಮತ್ತಿತರರು ಹಾಜರಿದ್ದರು.

ವಾರ್ತಾ ಭಾರತಿ 8 Jan 2026 10:50 pm

ವಿಟ್ಲ: ಕ್ರಿಮಿನಲ್ ಹಿನ್ನೆಲೆ; ಅಬ್ದುಲ್ ಖಾದರ್ ಗಡಿಪಾರು

ವಿಟ್ಲ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಿಮಿನಲ್ ಹಿನ್ನೆಲೆಯುಳ್ಳ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬಾತನನ್ನು ಗಡಿಪಾರು ಮಾಡಲಾಗಿದೆ. ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮ ನಿವಾಸಿ ಅಬ್ದುಲ್ ಖಾದರ್ ವಿರುದ್ಧ ಹಲ್ಲೆ, ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಏನ್ ಡಿ ಪಿ ಎಸ್ ಕಾಯ್ದೆಯಂತೆ 3 ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ದಾಖಲಾತಿ ಮೇಲೆ ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ ಮಂಗಳೂರು ರವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಸದರಿ ಆದೇಶದಂತೆ ಜನವರಿ 8ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 10:44 pm

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ | ಒಳಮೀಸಲಾತಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಂದ ಸಿಎಂಗೆ ಅಭಿನಂದನೆ

ಬೆಂಗಳೂರು : ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಬಳಿಕ ಮೊದಲ ಬಾರಿಗೆ ಅದರ ಸೌಲಭ್ಯವನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದ ವೈದ್ಯಕೀಯ ಸ್ನಾತಕೋತ್ತರ ಉನ್ನತ(ಎಂಎಸ್, ಎಂಡಿ) ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನಿಯೋಗ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಗುರುವಾರ ಇಲ್ಲಿನ ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರಿಗೆ ಸಿಹಿ ತಿನ್ನಿಸಿ, ಹೂವಿನ ಹಾರ, ಹೂವಿನ ಗುಚ್ಛ ಕೊಟ್ಟು ಕೃತಜ್ಞತೆ ಸಲ್ಲಿಸಲಾಯಿತು. ಮಾದಿಗ ಸಮುದಾಯಕ್ಕೆ ಉನ್ನತ ಶಿಕ್ಷಣ ಗಗನ ಕುಸಮವಾಗಿತ್ತು. ಅದರಲ್ಲೂ ಎಂಎಸ್, ಎಂಡಿ ಪ್ರವೇಶ ಪಡೆಯಲು ಸಾಧ್ಯವೇ ಇರಲಿಲ್ಲ. ಆದರೆ, ಒಳಮೀಸಲಾತಿ ಜಾರಿ ಬಳಿಕ ‘ನೀಟ್ ಪರೀಕ್ಷೆ’ ಬರೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳೆಲ್ಲರಿಗೂ ಮೊದಲ ಬಾರಿಗೆ ಪ್ರವೇಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು. ಮಕ್ಕಳು, ಮೂಳೆ, ನರರೋಗ ಸೇರಿ ಬಹಳ ಬೇಡಿಕೆ ಇರುವ ವಿಭಾಗಗಳೇ ನಮಗೆ ದೊರೆತಿವೆ. ಇದೆಲ್ಲ ಸಾಧ್ಯವಾಗಿದ್ದು ಒಳಮೀಸಲಾತಿ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯನವರಿಂದ. ವಿರೋಧಗಳು, ಗೊಂದಲಗಳ ಮಧ್ಯೆಯೂ ತಾವು ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ನಾವೆಲ್ಲರೂ ಕನಸಲ್ಲೂ ಕಾಣಲು ಸಾಧ್ಯವಾಗದ ಎಂಎಸ್, ಎಂಡಿ ಉನ್ನತ ಶಿಕ್ಷಣದ ಅತ್ಯುತ್ತಮ ವಿಭಾಗಗಳಿಗೆ ಆಯ್ಕೆಗೊಂಡಿದ್ದೇವೆ. ಅರ್ಜಿ ಸಲ್ಲಿಸಿದ ಬಹುತೇಕರಿಗೂ ಪ್ರವೇಶ ಸಿಕ್ಕಿದೆ ಎಂದು ಸಂಭ್ರಮಿಸಿದರು. ನ್ಯಾ.ನಾಗಮೋಹನ್ ದಾಸ್ ಆಯೋಗದ ಬಳಿಕ ಕೆಲ ಮಾರ್ಪಾಡು ಮಾಡಿ ಒಳಮೀಸಲಾತಿ ಜಾರಿಗೊಳಿಸಿದ ತಾವು, ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಕೈಗೊಂಡ ದಿಟ್ಟ ನಡೆಗೆ ಅನೇಕ ಅಡ್ಡಿ ಆತಂಕಗಳು ಎದುರಾಗಿದ್ದವು. ಅಲೆಮಾರಿ ಸಮುದಾಯ ಕೋರ್ಟ್ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಉದ್ಯೋಗ ನೇಮಕಾತಿಗೆ ತಡೆ ನೀಡಿದೆ. ಆದರೆ, ಶೈಕ್ಷಣಿಕ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಒಳಮೀಸಲಾತಿ ಜಾರಿ ಎಷ್ಟು ಉಪಯುಕ್ತವೆಂಬ ವಾಸ್ತವ ಸತ್ಯವನ್ನು ಮಾದಿಗ ಸಮುದಾಯದ ನಾವುಗಳು ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದೇ ಸಾಕ್ಷಿ ಎಂದರು. ಇಂತಹದ್ದೊಂದು ಅವಕಾಶ ಕಲ್ಪಿಸಿಕೊಟ್ಟ ತಮಗೆ ಮಾದಿಗ ಸಮುದಾಯ ಸದಾ ಕೃತಜ್ಞವಾಗಿರುತ್ತದೆ. ಅದರಲ್ಲೂ ನಾವುಗಳು ನಿಮ್ಮ ಕೊಡುಗೆ ಸದಾ ಸ್ಮರಿಸುತ್ತೇವೆ. ಜೊತೆಗೆ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ನಾವು ನಿಮ್ಮನ್ನು ಪ್ರತಿಕ್ಷಣ ನೆನಪು ಮಾಡಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಸಂಸ, ಮಾದಿಗ ಸೇರಿ ಅನೇಕ ಸಂಘಟನೆಗಳು ಮೂರವರೇ ದಶಕಗಳ ನಡೆಸಿದ ಹೋರಾಟದ ಫಲ ಹಾಗೂ ವಿರೋಧ ಲೆಕ್ಕಿಸದೆ ತಾವು ಒಳಮೀಸಲಾತಿ ಜಾರಿಗೊಳಿಸಿದ್ದರಿಂದ ನಿರೀಕ್ಷೆಗೂ ಮೀರಿ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಮೊದಲ ಬಾರಿಗೆ ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು. ಕೋರ್ಟ್‍ನಲ್ಲಿ ಉದ್ಯೋಗ ನೇಮಕಾತಿಗೆ ಇರುವ ತಡೆಯಾಜ್ಞೆ ತೆರವುಗೊಳಿಸಿದರೆ ಇದೇ ರೀತಿ ಮಾದಿಗ ಸಮುದಾಯ ಸರಕಾರಿ ಕೆಲಸವನ್ನು ಪಡೆದುಕೊಂಡು ಬದುಕು ಕಟ್ಟಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಶೀಘ್ರ, ತ್ವರಿತ ಕ್ರಮಕೈಗೊಳ್ಳಬೇಕು. ಮೀಸಲಾತಿ ಇದ್ದರೂ 101 ಜಾತಿಗಳ ಪೈಪೋಟಿಯಲ್ಲಿ ಮಾದಿಗರು ಉನ್ನತ ಶಿಕ್ಷಣ, ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಹಿಂದುಳಿಯುತ್ತಿದ್ದರು. ಈ ಸತ್ಯವನ್ನು ಅಂಕಿ-ಅಂಶಗಳ ಮೂಲಕ ಅರಿತು ಹೋರಾಟ ನಡೆಸಿದ್ದು ಹಾಗೂ ತಮ್ಮ ಬದ್ಧತೆ ಕಾರಣಕ್ಕೆ ಒಳಮೀಸಲಾತಿ ಜಾರಿಗೊಂಡಿದೆ. ಅದರ ಮೊದಲ ಫಲಾನುಭವಿಗಳು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸ ತಂದಿದೆ ಎಂದರು. ಒಳ್ಳೆಯ ವೈದ್ಯರಾಗಿ: ‘ಒಳಮೀಸಲಾತಿ ಜಾರಿ ಅನೇಕ ವರ್ಷಗಳ ಬೇಡಿಕೆ ಅಗಿತ್ತು. ಅದನ್ನು ನಾವುಗಳು ಜಾರಿಗೊಳಿಸಿ, ಕಾನೂನು ರೂಪ ನೀಡಿ ಅನುಷ್ಠಾ ಗೊಳಿಸಿದ್ದೇವೆ. ನೀವು ನನಗೆ ಸಿಹಿ ತಿನ್ನಿಸಿ, ಕೃತಜ್ಞತೆ ಸಲ್ಲಿಸಿರುವುದು ಖುಷಿ ಆಗಿದೆ. ಅದಕ್ಕಿಂತಲೂ ಹೆಚ್ಚು ಸಂತಸ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಉಂಟು ಮಾಡಿದೆ. ವ್ಯಾಸಂಗ ವೇಳೆ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಬಳಿಕ ಒಳ್ಳೆಯ ವೈದ್ಯರಾಗಿ ಸಮಾಜ ಸೇವೆ ಮಾಡಿ. ಆಗ ಒಳಮೀಸಲಾತಿ ಜಾರಿಗೊಳಿಸಿದ್ದು ಸಾರ್ಥಕ ಪಡೆದುಕೊಳ್ಳಲಿದೆ. ಅನೇಕ ಸಮುದಾಯಗಳು ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿದ್ದವು. ಒಳಮೀಸಲಾತಿ ಜಾರಿಯಿಂದ  ಸಮ ಸಮಾಜ ನಿರ್ಮಾಣಕ್ಕೆ ಸಹಕಾರದ ಜೊತೆಗೆ ಅಸ್ಪೃಶ್ಯ, ಹಿಂದುಳಿದ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ’ -ಸಿದ್ದರಾಮಯ್ಯ ಮುಖ್ಯಮಂತ್ರಿ

ವಾರ್ತಾ ಭಾರತಿ 8 Jan 2026 10:44 pm

ಅಫ್ಘಾನಿಸ್ತಾನದಲ್ಲಿ ಘರ್ಷಣೆ: ನಾಲ್ವರು ಮೃತ್ಯು, ಐವರಿಗೆ ಗಾಯ

ಕಾಬೂಲ್, ಜ.8: ಉತ್ತರ ಅಫ್ಘಾನಿಸ್ತಾನದಲ್ಲಿ ಚಿನ್ನದ ಗಣಿ ಕಂಪನಿಯ ನಿರ್ವಾಹಕರು ಹಾಗೂ ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ 4 ಮಂದಿ ಮೃತಪಟ್ಟಿದ್ದು, ಇತರ 5 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ತಖಾರ್ ಪ್ರಾಂತದ ಚಾಹ್ ಅಬ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು ಮೂವರು ಸ್ಥಳೀಯರು ಹಾಗೂ ಕಂಪನಿಯ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ. ಕಂಪೆನಿಯ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಸ್ಥಳೀಯನನ್ನು ಬಂಂಧಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 10:43 pm

ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಡಾ. ಗಣನಾಥ ಶೆಟ್ಟಿ

ಕಾರ್ಕಳ: ರೋಟರಿ ಕ್ಲಬ್ ವತಿಯಿಂದ ಸಂಭ್ರಮ - ಸಮ್ಮಿಲನ

ವಾರ್ತಾ ಭಾರತಿ 8 Jan 2026 10:40 pm

ಮದುವೆಗೆ ಸಿಕ್ಕ ಪೆರೋಲ್‌ ಮಧುಚಂದ್ರಕ್ಕಿಲ್ಲ! 'ದಾಂಪತ್ಯ ಸಾಂಗತ್ಯ’ದ ಅಡಿ ಅರ್ಜಿ ಸಲ್ಲಿಸಿದ್ದ ಅಪರಾಧಿ

ಕೊಲೆ ಆರೋಪದಲ್ಲಿ ಜೀವಾವಧಿಗೆ ಶಿಕ್ಷೆಗೊಳಗಾದ ಕೈದಿಯೊಬ್ಬನ ಮದುವೆಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು. ಇದೀಗ 'ಮಧುಚಂದ್ರ'ಕ್ಕೆ ಪೆರೋಲ್ ನೀಡಲು ನ್ಯಾಯಾಲಯವು ಆರು ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಲು ಸೂಚಿಸಿದೆ. ಈ ಹಿಂದೆ ಮದುವೆಗೆ ಪೆರೋಲ್ ಪಡೆದು ಮದುವೆಯಾಗಿದ್ದ ಕೈದಿ, ಇದೀಗ ದಾಂಪತ್ಯ ಸಾಂಗತ್ಯಕ್ಕೆ ಪೆರೋಲ್ ಕೋರಿದ್ದನು.

ವಿಜಯ ಕರ್ನಾಟಕ 8 Jan 2026 10:39 pm

ಮೈಲಾಪುರ | ಮೃತದೇಹ ಪತ್ತೆಗಾಗಿ ಮನವಿ

ಬಳ್ಳಾರಿ, ಜ.8: ಜಿಲ್ಲೆಯ ಮೈಲಾಪುರ ಗ್ರಾಮದ ಕಾಲುವೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿಲ್ಲ ಎಂದು ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ದಾರೆ. ಜ.4ರಂದು ಕುಮಾರ್ ಮತ್ತು ಮಲ್ಲಿಕಾರ್ಜುನ ನಗರದ ಇಂಡಸ್ಟ್ರಿಯಲ್ ಏರಿಯಾದ ಮುಂಡರಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ವಾಹನ ಕಾಲುವೆಗೆ ಉರುಳಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಕುಮಾರ್ ಎಂಬವರ ಚಾಲಕನ ಮೃತದೇಹ ಆಂಧ್ರಪ್ರದೇಶದ ಕಣೇಕಲ್ ಹತ್ತಿರದ ಮೈಲಾಪುರ ಗ್ರಾಮದ ಹತ್ತಿರದ ಕಾಲುವೆಯಲ್ಲಿ ದೊರೆತಿದೆ. ಆದರೆ ಮಲ್ಲಿಕಾರ್ಜುನರ ಮೃತ ದೇಹ ಪತ್ತೆಯಾಗಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ಮಲ್ಲಿಕಾರ್ಜುನ ಚಹರೆ: ಎತ್ತರ 5.9 ಅಡಿ, ತೆಳ್ಳನೆಯ ಮೈಕಟ್ಟು, ಉದ್ದನೆಯ ಮುಖ ಹಾಗೂ ಮೂಗು, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಕ್ರೀಮ್ ಬಣ್ಣದ ತುಂಬು ತೋಳಿನ ಅಂಗಿ, ಹಸಿರು ಬಣ್ಣದ ಕಟ್ ಬನಿಯನ್, ಆಕಾಶ ನೀಲಿ ಬಣ್ಣದ ನಿಕ್ಕರ್, ಖಾಕಿ ಪ್ಯಾಂಟ್ ಮತ್ತು ಸೊಂಟದಲ್ಲಿ ಲೆದರ್ ಬೆಲ್ಟ್ ಧರಿಸಿದ್ದಾರೆ. ವ್ಯಕ್ತಿಯ ಮೃತ ದೇಹದ ಮಾಹಿತಿ ಸಿಕ್ಕಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಐ ದೂ.08392-275722, ಮೊ.9480803048, ಬಳ್ಳಾರಿ ನಗರ ಡಿವೈಎಸ್ಪಿ ದೂ.08392-272322 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 10:37 pm

ಷರತ್ತಿಗೆ ಬದ್ಧವಾಗಿರುವುದಾಗಿ ನೀಡಿದ್ದ ಮುಚ್ಚಳಿಕೆಯನ್ನು ವಿನಯ್‌ ಕುಲಕರ್ಣಿ ಉಲ್ಲಂಘಿಸಿದ್ದಾರೆ : ಸಿಬಿಐ ವಾದ

ಬೆಂಗಳೂರು: ಕೊಲೆ ಪ್ರಕರಣದ ಸಾಕ್ಷಿಗಳನ್ನು ತಿರುಚುವುದಿಲ್ಲ ಎಂಬ ಮುಚ್ಚಳಿಕೆಯನ್ನು ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯಕ್ಕೆ ನೀಡಿದ್ದಾರೆಯೇ ಹೊರತು ಪ್ರಾಸಿಕ್ಯೂಷನ್‌ಗೆ ಅಲ್ಲ. ನ್ಯಾಯಾಲಯ ವಿಧಿಸುವ ಎಲ್ಲ ಷರತ್ತಿಗೆ ಬದ್ದವಾಗಿರುವುದಾಗಿ ಮುಚ್ಚಳಿಕೆ ನೀಡಿ, ಅವರೇ ಅದನ್ನು ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್‌ಗೆ ಸಿಬಿಐ ತಿಳಿಸಿತು. ಧಾರವಾಡದ ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಸಿಬಿಐ ಪರ ವಿಶೇಷ ಸರಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿ, ಸಾಕ್ಷಿಗಳ ವಿಚಾರಣೆಯಾಗಿರುವುದು ಬದಲಾದ ಪರಿಸ್ಥಿತಿ ಎಂದಾದರೆ ಆ ಸಾಕ್ಷಿಗಳು ಏನು ಹೇಳಿವೆ ಎಂಬುದನ್ನು ಪರಿಶೀಲಸದೇ ಜಾಮೀನು ಮಂಜೂರು ಮಾಡಲು ಆಧಾರವಾಗಲ್ಲ. ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಪಡಿಸಿದ ಬಳಿಕ ಏನಾಗಲಿದೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ತೀರ್ಪುಗಳಿಲ್ಲ ಎಂದರು. ಇದೇ ವೇಳೆ, ಪ್ರಕರಣದಲ್ಲಿ ಇನ್ನೂ 3 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂಬ ಮಾಹಿತಿ ಒಳಗೊಂಡ ಮೆಮೊ ಸಲ್ಲಿಸಿದ ಪ್ರಸನ್ನಕುಮಾರ್, ಮೆರಿಟ್ ಮೇಲೆ ನ್ಯಾಯಾಲಯಗಳು ವಿನಯ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ ಎಂಬ ವಿಚಾರವನ್ನೂ ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳು ಪ್ರತಿಕೂಲವಾಗಿದ್ದಾವೆಯೇ? ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ಎಲ್ಲರೂ ಅಲ್ಲ. ಕೆಲವರು ಬೆಂಬಲಿಸಿದ್ದಾರೆ ಮತ್ತೆ ಕೆಲವರು ವಿರುದ್ಧವಾಗಿದ್ದಾರೆ. ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸಿಪಿ ಶ್ರೇಣಿಯ ಅಧಿಕಾರಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ. ಆರಂಭದಲ್ಲಿ ಡಮ್ಮಿ ಆರೋಪಿಗಳು ಶರಣಾಗಿದ್ದರು. ಸಿಬಿಐ ತನಿಖೆ, ಆರೋಪ ಪಟ್ಟಿ ರದ್ದತಿ ಎಲ್ಲವನ್ನೂ ಪ್ರಶ್ನಿಸಿದ್ದ ವಿನಯ ಕುಲಕರ್ಣಿ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ ಎಂದು ವಿವರಿಸಿದರು. ಜಾಮೀನು ಒಂದು ವಿನಾಯಿತಿಯಾಗಿದ್ದು, ಆರೋಪಿ ವಿನಯ ಕುಲಕರ್ಣಿ ಅವರಿಗೆ ಅದನ್ನು ನೀಡಲಾಗಿತ್ತು. ಷರತ್ತು ಉಲ್ಲಂಘಿಸಿರುವುದರಿಂದ ಅವರು ಹೊರಗಿರಲು ಅರ್ಹರಲ್ಲ. ಅರ್ಜಿದಾರರಿಗೆ ನೀಡಿದ್ದ ವಿನಾಯಿತಿಗೆ ಅಪಚಾರವಾಗಿದೆ. ಆದ್ದರಿಂದ, ವಿನಯ ಕುಲಕರ್ಣಿ ಅವರಿಗೆ ಜಾಮೀನು ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಸಿಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ವಾರ್ತಾ ಭಾರತಿ 8 Jan 2026 10:36 pm

ಬಳ್ಳಾರಿ | ನಕಲಿ ವೈದ್ಯರ ಕ್ಲಿನಿಕ್‌ ಮುಟ್ಟುಗೋಲು

ಬಳ್ಳಾರಿ : ಜಿಲ್ಲೆಯ ವಿವಿಧೆಡೆ ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ. ನಗರದ ಮುಲ್ಲಂಗಿ ಸಂಜೀವಪ್ಪ ಬೀದಿಯ ಕೊಲ್ಮಿಚೌಕ್ ಸಮೀಪ ಫೈಲ್ಸ್ ವೈದ್ಯನೆಂದು ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಬಿಸ್ವಾಸ್ ಎಂಬ ವ್ಯಕ್ತಿ ನಡೆಸುತ್ತಿದ್ದ ಒಂದು ಕ್ಲಿನಿಕ್, ಕುಡುತಿನಿ ಗ್ರಾಮದಲ್ಲಿ ಕೇವಲ 10ನೇ ತರಗತಿ ಓದಿ ವೈದ್ಯ ಎಂದು ವಂಚಿಸುತ್ತಿದ್ದ ಆರೋಪದ ಮೇಲೆ ಎಮ್.ಡಿ ಗೌಸ್ ಎಂಬವರ ಕ್ಲಿನಿಕ್ ಮುಟ್ಟುಗೋಲು ಹಾಕಲಾಗಿದೆ. ಬಳ್ಳಾರಿಯ ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬುವವರು, ಬಿ.ಎ.ಎಮ್.ಎಸ್ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡುತ್ತಿದ್ದು, ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಮೇಲೆ ಇವರ ಎಮ್.ಜಿ. ಕ್ಲಿನಿಕ್ ಅನ್ನು ಕೂಡ ಮುಟ್ಟುಗೋಲು ಹಾಕಲಾಗಿದೆ. ದಾಳಿಯ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹೆಚ್ ಗೋಪಾಲ್, ಆರ್.ಬಿ.ಎಸ್.ಕೆ ಸಮಾಲೋಚಕ ಮನೋಹರ್ ಹಾಗೂ ವೈದ್ಯರು ಇದ್ದರು.

ವಾರ್ತಾ ಭಾರತಿ 8 Jan 2026 10:33 pm

ವಿಬಿ-ಜಿ ರಾಮ್ ಜಿ ಕಾಯ್ದೆ | ರಾಜ್ಯ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುವ ಅನ್ಯಾಯದ ಬಗ್ಗೆ 2 ದಿನಗಳ‌ ವಿಶೇಷ ಅಧಿವೇಶನ : ಡಿ.ಕೆ.ಶಿವಕುಮಾರ್

ಬೆಂಗಳೂರು: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ರಾಜ್ಯಗಳಿಗೆ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಲು 2 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿ, ವಿಬಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಇಂದು ಶಾಸಕರು, ಸಂಸದರ ಸಭೆ ನಡೆಸಲಾಗಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು, ಮನರೇಗಾ ವಾಪಸ್ ತರಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಸದ್ಯದಲ್ಲೇ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಹಾಗೂ ಬೂತ್ ಅಧ್ಯಕ್ಷರ ಸಭೆ ಕರೆಯಲಾಗುವುದು. ಕೇಂದ್ರ ಸರ್ಕಾರದ ಈ ಕಾನೂನು ದೇಶಕ್ಕೆ ಬಹು ದೊಡ್ಡ ಮಾರಕವಾಗಿದ್ದು, ಇದನ್ನು ತೆಗೆದುಹಾಕಿ, ಮನರೇಗಾ ಪುನಃ ಸ್ಥಾಪನೆಗೆ ಬೃಹತ್ ಹೋರಾಟ ನಡೆಸಲಾಗುವುದು. ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಜ. 26 ರಿಂದ ಫೆ. 2ರವರೆಗೆ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಉದ್ಯೋಗ ಕಾರ್ಡ್ ಹೊಂದಿರುವ ಕಾರ್ಮಿಕರ ಜತೆ ಈ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮೂರು ದಿನ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಾಗುವುದು. ಪ್ರತಿ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಮನರೇಗಾ ಬದಲಾವಣೆ ಮೂಲಕ 6000 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ನಮ್ಮ ರಾಜ್ಯದಿಂದ ಕಸಿದುಕೊಳ್ಳಲಾಗಿದೆ ಎಂದರು. ಇಷ್ಟು ದಿನ ಪಂಚಾಯ್ತಿಗಳು ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುತ್ತಿದ್ದವು. ಈಗ ದೆಹಲಿಯಿಂದ ನಿರ್ದೇಶನ ಮಾಡಿದ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಈ ಬದಲಾವಣೆ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸಬೇಕಿತ್ತು. ಈ ಬದಲಾವಣೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗ ಹಕ್ಕು ಕಸಿಯಲಾಗಿದೆ. ಸಂವಿಧಾನದ 73, 74ನೇ ತಿದ್ದುಪಡಿ ಪ್ರಕಾರದ ಹಕ್ಕನ್ನು ಕಸಿಯಲಾಗಿದೆ ಎಂದು ಆಗ್ರಹಿಸಿದರು. ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಒಂದು ವಾರದಲ್ಲಿ ಕೂಲಿ ಕೊಡುವ ಶಕ್ತಿ ಇತ್ತು. ಇದನ್ನೆಲ್ಲಾ ಮುಗಿಸಿ ಹೊಸ ರೂಪದಲ್ಲಿ ಅನ್ಯಾಯ ಮಾಡಿದ್ದಾರೆ. ಮನರೇಗಾದಲ್ಲಿ 90% ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ 60% ಕೇಂದ್ರ ಸರ್ಕಾರ, 40% ರಾಜ್ಯ ಸರ್ಕಾರ ಕೊಡಬೇಕು ಎಂದು ಬದಲಾವಣೆ ತಂದಿದ್ದಾರೆ. ಇದು ಒಕ್ಕೂಟ ವ್ಯವಸ್ಥೆ ವಿಚಾರವಾಗಿದ್ದು, ಈ ವಿಚಾರಗಳನ್ನ ರಾಜ್ಯಗಳ ಜೊತೆ ಚರ್ಚೆ ಮಾಡಬೇಕಿತ್ತು. ಇದನ್ನೆಲ್ಲಾ ಬಿಟ್ಟು ರಾತ್ರೊ, ರಾತ್ರಿ ಏಕಾಏಕಿಯಾಗಿ ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು. ಬಳ್ಳಾರಿ ಘಟನೆ ಬಗ್ಗೆ ಸಮಿತಿ ವರದಿ ಕೊಟ್ಟಿದೆ:   ಬಳ್ಳಾರಿ ಗಲಭೆ ಬಗ್ಗೆ ಕೇಳಿದಾಗ, ಬಳ್ಳಾರಿ ಘಟನೆ ಬಗ್ಗೆ ಸಮಿತಿ ವರದಿ ಕೊಟ್ಟಿದೆ. ವರದಿ ನೋಡಿದ ಬಳಿಕ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದರು.

ವಾರ್ತಾ ಭಾರತಿ 8 Jan 2026 10:30 pm

ಗಂಗಾವತಿ | ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ : ತಂದೆ, ಮಗಳು ಮೃತ್ಯು

ಗಂಗಾವತಿ : ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿಯಾಗಿ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ರಸ್ತೆಯ ಡಣಾಪುರ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಗಂಗಾವತಿ ತಾಲೂಕಿನ ಡಣಾಪುರ ನಿವಾಸಿಗಳಾದ ಗಾರೆ ಕೆಲಸ ಮಾಡುತ್ತಿದ್ದ ಖಾಜಾಸಾಬ್ (55) ಮತ್ತು ಅವರ ಪುತ್ರಿ, 8ನೇ ತರಗತಿ ವಿದ್ಯಾರ್ಥಿನಿ ಆಸೀನ್ ಖಾಜಾಸಾಬ್ (14) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ರಂಗಪ್ಪ ದೊಡ್ಡಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ವಾರ್ತಾ ಭಾರತಿ 8 Jan 2026 10:25 pm

ಮಹೇಂದ್ರ ಸಿಂಗ್ ಧೋನಿ ಮಹತ್ವದ ಹೆಜ್ಜೆ: ಭಾರತದಲ್ಲಿ ಪಾಡೆಲ್ ವಿಸ್ತರಣೆಗೆ ಮನ ಮಾಡಿದ ಕ್ಯಾಪ್ಟನ್ ಕೂಲ್!

ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ರೀಡೆಯಲ್ಲಿ ತಮ್ಮ ಹೂಡಿಕೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವರು ತಮ್ಮ '7ಪ್ಯಾಡೆಲ್ ಎಂಎಸ್ ಧೋನಿ'ಯನ್ನು ದೇಶದ ಪ್ರಮುಖ ಪಾಡೆಲ್ ಇಕೋಸಿಸ್ಟಮ್ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನ ಮಾಡಿದ್ದಾರೆ. ಈ ವಿಲೀನವು ದೇಶದಲ್ಲಿ ಪಾಡೆಲ್ ಕ್ರೀಡೆಯ ವಿಸ್ತರಣೆಗೆ ಮತ್ತಷ್ಟು ಉತ್ತೇಜನ ನೀಡಲಿದ್ದು ಮೆಟ್ರೋ ಸಿಟಿಯನ್ನೂ ದಾಟಿ ಮುನ್ನಡೆಯುವ ವಿಶ್ವಾಸ ಇದೆ. ಮುಂದಿನ ಒಂದು ವರ್ಷದಲ್ಲಿ 400-500 ಕೋರ್ಟ್‌ಗಳಿಗೆ ವಿಸ್ತರಿಸುವ ಗುರಿಯನ್ನೂ ಹೊಂದಿದೆ.

ವಿಜಯ ಕರ್ನಾಟಕ 8 Jan 2026 10:24 pm

I-PAC ಕಚೇರಿ ಮೇಲೆ ಈಡಿ ದಾಳಿ ವೇಳೆ ಫೈಲ್ ತೆಗೆದುಕೊಂಡು ಹೋದ ಮಮತಾ ಬ್ಯಾನರ್ಜಿ; ಫೈಲ್ ನಲ್ಲೇನಿತ್ತು?

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿಯಲ್ಲಿ ಗುರುವಾರ (ಜನವರಿ 08) ಶೋಧ ನಡೆಸಿದ್ದಾರೆ. ಈ ಶೋಧ ಕಾರ್ಯಾಚರಣೆ ವೇಳೆ ಅಲ್ಲಿಗೆ ಧಾವಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವಾರು ದಾಖಲೆಗಳನ್ನು ಹೊತ್ತುಕೊಂಡು ಹೊರನಡೆದಿದ್ದಾರೆ ಎಂದು ಈಡಿ ಅಧಿಕಾರಿಗಳು ಕಲ್ಕತ್ತಾ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಈ ನಡೆ ಚುನಾವಣೆ ಸಮೀಪಿಸುತ್ತಿರುವ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಇಡಿ ಸಲ್ಲಿಸಿರುವ ಅರ್ಜಿ ಬಗ್ಗೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈಡಿ ಶೋಧದ ವೇಳೆ ಏನೇನಾಯ್ತು? ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಐ-ಪಿಎಸಿ I-PAC (Indian Political Action Committee) ಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಏಕಕಾಲದಲ್ಲಿ ದಾಳಿ ನಡೆಸಿದೆ. ಲೌಡನ್ ಸ್ಟ್ರೀಟ್‌ನಲ್ಲಿರುವ (ಮಧ್ಯ ಕೋಲ್ಕತ್ತಾ) ಐ-ಪಿಎಸಿ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಸಾಲ್ಟ್ ಲೇಕ್‌ನಲ್ಲಿರುವ ಸಲಹಾ ಗುಂಪಿನ ಕಚೇರಿಯಲ್ಲಿ ಈಡಿ ಶೋಧ ನಡೆಸಿದೆ.ಐ-ಪಿಎಸಿ ವರ್ಷಗಳಿಂದ ಟಿಎಂಸಿಯೊಂದಿಗೆ ಸಂಬಂಧ ಹೊಂದಿದ್ದು, 2021ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಾಬಲ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರಶಾಂತ್ ಕಿಶೋರ್ ಈ ಹಿಂದೆ ಟಿಎಂಸಿಯ ಚುನಾವಣಾ ತಂತ್ರಗಳನ್ನು ನಿರ್ವಹಿಸುತ್ತಿದ್ದರು. ಆಮೇಲೆ ಅವರು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಐ-ಪಿಎಸಿಯಿಂದ ದೂರ ಸರಿದ ನಂತರ ಜೈನ್ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ಬೆಂಬಲ ನೀಡಲು ತೃಣಮೂಲ ಕಾಂಗ್ರೆಸ್ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪಿಎಸಿಯನ್ನು ನೇಮಿಸಿಕೊಂಡಿತ್ತು. 2021ರ ವಿಧಾನಸಭಾ ಚುನಾವಣೆಗಳು ಮತ್ತು ನಂತರದ ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ತೃಣಮೂಲ ತನ್ನ ಚುನಾವಣಾ ಮತ್ತು ರಾಜಕೀಯ ಕಾರ್ಯತಂತ್ರವನ್ನು ರೂಪಿಸಲು ಐ-ಪಿಎಸಿ ಸಹಾಯ ಮಾಡಿತ್ತು. ಪ್ರತೀಕ್ ಜೈನ್ ಯಾರು? ಪ್ರತೀಕ್ ಜೈನ್ ಎಂಜಿನಿಯರ್ ಆಗಿದ್ದು, ಈಗ ರಾಜಕೀಯ ಸಲಹೆಗಾರರಾಗಿದ್ದಾರೆ. 2015 ರಲ್ಲಿ ವಿನೇಶ್ ಚಾಂಡೆಲ್ ಮತ್ತು ರಿಷಿ ರಾಜ್ ಸಿಂಗ್ ಅವರೊಂದಿಗೆ ಐ-ಪ್ಯಾಕ್ ಅನ್ನು ಸ್ಥಾಪಿಸಿದ್ದು, ಜೈನ್ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಜೈನ್ ಅವರು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ (ಐಐಟಿ-ಬಿ) ಯಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಸಮಯದಲ್ಲಿ ಅವರು ಆಕ್ಸಿಸ್ ಮ್ಯೂಚುವಲ್ ಫಂಡ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು. ಪದವಿ ಪೂರ್ಣಗೊಳಿಸಿದ ನಂತರ, ಜೈನ್ ಅವರು ಡೆಲಾಯ್ಟ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶ್ಲೇಷಕರಾಗಿ ಕೆಲಸ ಮಾಡಿದರು. ಭಾರತದಲ್ಲಿ ಜವಾಬ್ದಾರಿಯುತ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 'ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನನ್ಸ್' ಎಂಬ ಎನ್‌ಜಿಒದ ಸ್ಥಾಪಕ ಸದಸ್ಯರಾಗಿದ್ದಾರೆ ಇವರು ಎಂದು ಅವರ ಲಿಂಕ್ಡ್ಇನ್ ಬಯೋದಲ್ಲಿ ಬರೆದಿದೆ. ಜೈನ್ ಅವರು ತೃಣಮೂಲ ಕಾಂಗ್ರೆಸ್‌ನ ಐಟಿ ಸೆಲ್‌ನ ಮುಖ್ಯಸ್ಥರೂ ಆಗಿದ್ದಾರೆ. ಜೈನ್ ನಿವಾಸದ ಮೇಲೆ ಈಡಿ ದಾಳಿ ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಕೆಲವು ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ನಿರ್ದಿಷ್ಟ ಪುರಾವೆಗಳನ್ನು ಉಲ್ಲೇಖಿಸಿ ಈಡಿ ಜೈನ್ ಅವರ ಮನೆಯ ಮೇಲೆ ದಾಳಿ ಮಾಡಿದೆ. ಕಲ್ಲಿದ್ದಲು ಕಳ್ಳಸಾಗಣೆಯಿಂದ ಬಂದ ಅಪರಾಧದ ಆದಾಯವನ್ನು ಜೋಡಿಸುವ ಸಂಬಂಧ ಹೊಂದಿರುವ ಒಬ್ಬ ಹವಾಲಾ ಆಪರೇಟರ್ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಹತ್ತಾರು ಕೋಟಿ ರೂಪಾಯಿಗಳ ವಹಿವಾಟುಗಳನ್ನು ಸುಗಮಗೊಳಿಸಿದ್ದಾನೆ ಎಂದು ಈಡಿ ಹೇಳಿದೆ. ದಾಳಿ ವೇಳೆ ಧಾವಿಸಿದ ಬಂಗಾಳ ಸಿಎಂ ಜೈನ್ ಅವರ ನಿವಾಸದಲ್ಲಿ ಈಡಿ ದಾಳಿ ನಡೆಯುತ್ತಿರುವಾಗ ಅಲ್ಲಿಗೆ ಮೊದಲು ತಲುಪಿದ್ದು ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ವಿನೀತ್ ಗೋಯಲ್. ಇದಾಗಿ ಸ್ವಲ್ಪ ಸಮಯದ ನಂತರ ಅಲ್ಲಿಗೆ ಮಮತಾ ಬ್ಯಾನರ್ಜಿ ಬಂದರು. ಕೆಲವು ನಿಮಿಷಗಳ ನಂತರ ಹೊರ ಬಂದ ಮಮತಾ ಅಸಮಾಧಾನಗೊಂಡಿದ್ದು ಸ್ಪಷ್ಟವಾಗಿತ್ತು. ಅವರ ಕೈಯಲ್ಲಿ ಹಸಿರು ಫೈಲ್ ಇತ್ತು. ಆಮೇಲೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಮತಾ, ಈಡಿ ಕ್ರಮವು ರಾಜಕೀಯ ಪ್ರೇರಿತ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ನಡೆದಿದೆ ಆರೋಪಿಸಿದರು. ತೃಣಮೂಲ ಪಕ್ಷದ ಚುನಾವಣಾ ತಂತ್ರ, 2026 ರ ಚುನಾವಣೆಗಳಿಗೆ ಅಭ್ಯರ್ಥಿಗಳ ಪಟ್ಟಿಗಳು ಮತ್ತು ಗೌಪ್ಯ ಪಕ್ಷದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ದಾಳಿಗಳಿಗೆ ಆದೇಶಿಸಲಾಗಿದೆ. ಪಕ್ಷದ ಚುನಾವಣಾ ತಂತ್ರಕ್ಕೆ ಸಂಬಂಧಿಸಿದ ಕಡತಗಳನ್ನು ಕದಿಯಲು ಈಡಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಂದೆಡೆ, ಅವರು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸುವ ಮೂಲಕ ಎಲ್ಲಾ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಅವರು ನನ್ನ ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಜೈನ್ ಅವರ ನಿವಾಸದಿಂದ ಹೊರಬಂದ ನಂತರ, ಮಮತಾ ಬ್ಯಾನರ್ಜಿ ಅಲ್ಲಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಐ-ಪಿಎಸಿಯ ಸಾಲ್ಟ್ ಲೇಕ್ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಎರಡನೇ ಈಡಿ ತಂಡವು ಶೋಧ ನಡೆಸುತ್ತಿತ್ತು. ಮಮತಾ ಹಿಂಬಾಗಿಲಿನ ಮೂಲಕ ಆವರಣವನ್ನು ಪ್ರವೇಶಿಸಿದ್ದು ಸುಮಾರು 15-20 ನಿಮಿಷಗಳ ನಂತರ ಅಲ್ಲಿಂದ ಹೊರ ಬಂದಿದ್ದಾರೆ. ಅವರೊಂದಿಗೆ, ಮುಖ್ಯಮಂತ್ರಿ ಕಚೇರಿಯ (ಸಿಎಮ್‌ಒ) ಅಧಿಕಾರಿಗಳು ಹಲವಾರು ಫೈಲ್‌ಗಳನ್ನು ಹೊತ್ತುಕೊಂಡು ಕಚೇರಿಯಿಂದ ಹೊರಬರುತ್ತಿರುವುದು ಕಂಡುಬಂದಿತು. ಈ ಫೈಲ್ ಗಳನ್ನು ಮಮತಾ ಅವರು ಬಂದಿದ್ದ ಮಹೀಂದ್ರಾ ಕಾರಿನ ಹಿಂದಿನ ಸೀಟಿನಲ್ಲಿ ಮತ್ತು ಬೂಟ್‌ನಲ್ಲಿ ಇರಿಸಲಾಗಿತ್ತು. ಬಲವಂತವಾಗಿ ಫೈಲ್‌ಗಳನ್ನು ತೆಗೆದುಕೊಳ್ಳಲಾಗಿದೆ ಮಮತಾ, ಅವರ ಸಹಾಯಕರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಬಲವಂತವಾಗಿ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸ್ಥೆ ಹೇಳಿಕೊಂಡಿದೆ. ಅದೇ ವೇಳೆ ದಾಳಿಗಳು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿರಿಸಿಕೊಂಡಿಲ್ಲ ಮತ್ತು ಚುನಾವಣೆಗಳಿಗೆ ಸಂಬಂಧಿಸಿಲ್ಲ ಎಂದು ಅದು ಹೇಳಿದೆ. ಏತನ್ಮಧ್ಯೆ ಅಧಿಕೃತ ತನಿಖಾ ಸ್ಥಳದಿಂದ ಫೈಲ್‌ಗಳನ್ನು ಪಡೆಯಲು ಮುಖ್ಯಮಂತ್ರಿಯೊಬ್ಬರು ಈ ರೀತಿ ಧಾವಿಸಿದ್ದು ಪಿತೂರಿಯನ್ನು ಸೂಚಿಸುತ್ತದೆ ಎಂದು ಬಿಜೆಪಿ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಮರೆಮಾಡಲು ಏನೂ ಇಲ್ಲದಿದ್ದರೆ, ಅಧಿಕೃತ ತನಿಖಾ ಸ್ಥಳದಿಂದ ಫೈಲ್‌ಗಳನ್ನು ಪಡೆಯಲು ಮುಖ್ಯಮಂತ್ರಿಯೊಬ್ಬರು ಈ ರೀತಿ ಯಾಕೆ ಹೆಣಗಾಡುತ್ತಾರೆ? ಈ ನಡವಳಿಕೆಯು ಆ ದಾಖಲೆಗಳಲ್ಲಿ ಏನೆಲ್ಲಾ ಅಡಗಿರಬಹುದು? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬೆಳವಣಿಗೆಗಳು ಮಮತಾ ಮತ್ತು ಅವರ ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ಫೈಲ್‌ಗಳ ವಿಷಯಗಳ ಬಗ್ಗೆ ತೀವ್ರ ಊಹಾಪೋಹಗಳಿಗೆ ಕಾರಣವಾಗಿವೆ. ಫೈಲ್‌ಗಳಲ್ಲಿ ಏನಿದೆ? ಮಮತಾ ಬ್ಯಾನರ್ಜಿ ಮತ್ತು ಅವರ ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ಫೈಲ್‌ಗಳಲ್ಲಿ ಏನಿದೆ ಎಂಬುದರ ಕುರಿತು ಹೆಚ್ಚು ತಿಳಿದಿಲ್ಲವಾದರೂ ವಿಡಿಯೋದಲ್ಲಿ ಕಾಣುವ ದೃಶ್ಯಗಳನ್ನು ನೋಡಿದರೆ ಒಂದರಲ್ಲಿ ಫೆಬ್ರವರಿ 2022 ಎಂದು ಗುರುತಿಸಲಾಗಿದೆ. ಇನ್ನೊಂದರಲ್ಲಿ ತೃಣಮೂಲ ನಾಯಕರ ಪ್ರಯಾಣ ದಾಖಲೆಗಳನ್ನು ವಿವರಿಸುವ ಹಲವಾರು ಕಾಗದಗಳಿವೆ. ಅಂತಹ ದಾಖಲೆಗಳಲ್ಲಿ ಮಹುವಾ ಮೊಯಿತ್ರಾ x 1 ಮತ್ತು ಫೆಬ್ರವರಿ 2, 2022 ರ ಪ್ರಯಾಣ ದಿನಾಂಕವನ್ನು ಉಲ್ಲೇಖಿಸಲಾಗಿದೆ. ಮೊಯಿತ್ರಾ ಕೃಷ್ಣನಗರದ ಸಂಸದೆಯಾಗಿದ್ದಾರೆ. ಫೈಲ್‌ಗಳಲ್ಲಿ ನಿಖರವಾಗಿ ಏನಿದೆ? ಅವುಗಳನ್ನು ಈಗಾಗಲೇ ಇಡಿ ವಶಪಡಿಸಿಕೊಂಡಿದೆಯೇ ಅಥವಾ ಏಜೆನ್ಸಿಯ ನಡೆಯುತ್ತಿರುವಾಗ ಅವುಗಳನ್ನು ತೆಗೆದುಕೊಳ್ಳಲಾಗಿದೆಯೇ? ಎಂಬುದು ಸದ್ಯ ತಿಳಿದು ಬಂದಿಲ್ಲ ತನಿಖೆಯಲ್ಲಿ 'ಹಸ್ತಕ್ಷೇಪ' ಎಂದ ಸುವೇಂದು ಮಮತಾ ಬ್ಯಾನರ್ಜಿ ಅವರು ಜೈನ್ ಅವರ ಮನೆಗೆ ಭೇಟಿ ನೀಡಿರುವುದು ಅಸಂವಿಧಾನಿಕ, ಕೇಂದ್ರ ಸಂಸ್ಥೆಯ ತನಿಖೆಯಲ್ಲಿ ಅವರು ಹಸ್ತಕ್ಷೇಪ ನಡೆಸಿದ್ದಾರೆ ಎಂದು ಹೇಳಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿಯ ವಿರುದ್ಧ ಈಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರ ಭೇಟಿ ಅನೈತಿಕ, ಅಸಂವಿಧಾನಿಕ ಮತ್ತು ಕೇಂದ್ರ ಸಂಸ್ಥೆಯ ತನಿಖೆಯಲ್ಲಿ ನೇರ ಹಸ್ತಕ್ಷೇಪ ಎಂದು ನಾನು ಭಾವಿಸುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುವೇಂದು ಹೇಳಿದ್ದಾರೆ. ಮಮತಾ ಆರೋಪಗಳಿಗೆ ಈಡಿ ಪ್ರತಿಕ್ರಿಯೆ ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳಿಗೆ ಜಾರಿ ನಿರ್ದೇಶನಾಲಯ ಪ್ರತಿಕ್ರಿಯಿಸಿದ್ದು, ಈ ಶೋಧಗಳು ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧದ ನಿಯಮಿತ ಕ್ರಮದ ಭಾಗವಾಗಿದೆ ಎಂದು ಹೇಳಿದೆ. ಸಾಂವಿಧಾನಿಕ ಅಧಿಕಾರಿಗಳು ಸೇರಿದಂತೆ ಕೆಲವು ವ್ಯಕ್ತಿಗಳು 2 ಆವರಣಗಳಿಗೆ (10 ರಲ್ಲಿ) ಬಂದು, ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಕ್ರಮವಾಗಿ ಒಳನುಗ್ಗಿ ದಾಖಲೆಗಳನ್ನು ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಂಸ್ಥೆ ಹೇಳಿದೆ. ಗೋವಾ ಚುನಾವಣೆಗಾಗಿ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ಗೆ ಅಪರಾಧದ ಆದಾಯ ಬಂದಿದೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಅದು ಆರೋಪಿಸಿದೆ. ಆಪಾದಿತ ಕಲ್ಲಿದ್ದಲು ಹಗರಣ ಯೋಜನೆಯ ಮೂಲಕ ಬಂದ ಅಪರಾಧದ ಆದಾಯವನ್ನು ಗೋವಾಕ್ಕೆ ಬಳಸಲಾಯಿತು. 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರ ಕೆಲಸಕ್ಕಾಗಿ ಐ-ಪ್ಯಾಕ್‌ಗೆ ನೀಡಲಾಯಿತು. ಹೆಚ್ಚಿನ ವಿವರಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಈಡಿ ಹೇಳಿದೆ. ಏತನ್ಮಧ್ಯೆ, ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕುಟುಂಬವು ಗುರುವಾರ ಜಾರಿ ನಿರ್ದೇಶನಾಲಯದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಮನೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಪ್ರಮುಖ ದಾಖಲೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದೆ.

ವಾರ್ತಾ ಭಾರತಿ 8 Jan 2026 10:13 pm

2021, 2022ರ ಡಾ. ರಾಜ್‌ಕುಮಾರ್, ವಿಷ್ಣುವರ್ಧನ ಪ್ರಶಸ್ತಿ ಪ್ರಕಟ: ಜಯಮಾಲಾ, ಸಾ.ರಾ.ಗೋವಿಂದ್, ಸುಂದರ್‌ರಾಜ್‌ಗೆ ಗೌರವ

ಕರ್ನಾಟಕ ಸರ್ಕಾರವು 2020 ಮತ್ತು 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ನಟಿ ಡಾ. ಜಯಮಾಲಾ, ನಿರ್ಮಾಪಕ ಸಾ.ರಾ. ಗೋವಿಂದ್‌, ನಿರ್ದೇಶಕ ಎಂ.ಎಸ್. ಸತ್ಯು, ಶಿವರುದ್ರಯ್ಯ, ಪ್ರಗತಿ ಅಶ್ವಥ್ ನಾರಾಯಣ್ ಹಾಗೂ ನಟ ಎಂ.ಕೆ. ಸುಂದರ್ ರಾಜ್‌ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಪ್ರತಿಯೊಂದು ಪ್ರಶಸ್ತಿಗೂ 5 ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.

ವಿಜಯ ಕರ್ನಾಟಕ 8 Jan 2026 10:10 pm

ತವರಿನ ತೊಟ್ಟಿಲು ಅನಾಥ; ಚಿನ್ನಸ್ವಾಮಿಗೆ ಮತ್ತೆಂದೂ ಮರಳದು ಆರ್‌ಸಿಬಿ? ಹೊಸ ಮನೆ ಬಹುತೇಕ ಫೈನಲ್‌!

ಅದು ಜೂನ್‌ 4, 2025. ಅಂದು ತಮ್ಮ ನೆಚ್ಚಿನ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದರು ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು. ಆದರೆ ಕ್ಷಣಾರ್ಧದಲ್ಲಿ ಈ ಸಂಭ್ರಮ ಸೂತಕವಾಗಿ ಬದಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆ, ಆರ್‌ಸಿಬಿಯ ಮೊಟ್ಟಮೊದಲ ಐಪಿಎಲ್‌ ಟ್ರೋಫಿಗೆ ರಕ್ತ ಅಂಟಿಸಿತ್ತು. ಈ ಘಟನೆ ಬಳಿಕ ಆರ್‌ಸಿಬಿ ಮತ್ತೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವಾಡುವ ಸಾಧ್ಯತೆ ಕಡಿಮೆ. ಅಲ್ಲದೇ ತಂಡ ತನಗಾಗಿ ಹೊಸ ಹೋಮ್‌ ಗ್ರೌಂಡ್‌ ಕೂಡ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.

ವಿಜಯ ಕರ್ನಾಟಕ 8 Jan 2026 10:09 pm

ರಾಯಚೂರು | ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ : ರವೀಂದ್ರ ಜಲ್ದಾರ್

ರಾಯಚೂರು : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಪಾಲಿಸದೆ ಗೊಂದಲ ಸೃಷ್ಟಿಸಿದೆ ಎಂದು ಮಾದಿಗ, ಸಮಗಾರ, ಡೋಹರ ಮತ್ತು ಡಕ್ಕಲಿಗ ಉಪಜಾತಿ ಸಂಘಟನೆಗಳ ಒಕ್ಕೂಟದ ಸಂಚಾಲಕ ರವೀಂದ್ರ ಜಲ್ದಾರ್ ಆರೋಪಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹಂಚಿಕೆ ಮಾಡುವಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಈ ಶಿಫಾರಸ್ಸುಗಳನ್ನು ಜಾರಿಗೊಳಿಸದೆ, ತಾನೇ ತನಗೆ ಇಷ್ಟ ಬಂದಂತೆ ಮೀಸಲಾತಿ ಹಂಚಿಕೆ ಮಾಡಿ ಸಾಮಾಜಿಕ ನ್ಯಾಯ ನೀಡಿದ್ದೇನೆ ಎಂದು ಹೇಳುತ್ತಿರುವುದು ಹಸಿ ಸುಳ್ಳು ಎಂದು ಕಿಡಿಕಾರಿದರು. ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ಮಾದಿಗರಿಗೆ 6, ಛಲವಾದಿ ಸಂಬಂಧಿತ ಜಾತಿಗಳಿಗೆ 5, ಬೋವಿ-ಲಂಬಾಣಿ ಸೇರಿದಂತೆ ಇತರರಿಗೆ 4 ಹಾಗೂ ಅಲೆಮಾರಿಗಳಿಗೆ 1ರ ಅನುಪಾತದಲ್ಲಿ ಮೀಸಲು ಹಂಚಿಕೆ ಮಾಡಲು ಸೂಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ರಾಜಕೀಯ ಒತ್ತಡಕ್ಕೆ ಮಣಿದು ಮಾದಿಗ ಮತ್ತು ಛಲವಾದಿ ಸಮುದಾಯಗಳಿಗೆ ತಲಾ 6 ರಂತೆ ಸಮಾನ ಮೀಸಲು ನಿಗದಿಪಡಿಸಿದೆ. ಇದರಿಂದ ಮಾದಿಗ ಸಂಬಂಧಿತ ಜಾತಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಅವರು ದೂರಿದರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿದ್ದರೂ ಕೇವಲ 98 ಜಾತಿಗಳಿಗೆ ಮಾತ್ರ ಮೀಸಲು ಹಂಚಿಕೆ ಮಾಡಲಾಗಿದೆ. ಮಾದಿಗ ಸಂಬಂಧಿತ 29 ಉಪಜಾತಿಗಳ ಪೈಕಿ ಕೇವಲ 16 ಜಾತಿಗಳನ್ನು ಪ್ರವರ್ಗ-1ರಲ್ಲಿ ಪರಿಗಣಿಸಲಾಗಿದೆ. ಅರುಂಧತಿಯಾರ್, ಭಂಗಿ, ದಕ್ಕಲಿಗ ಸೇರಿದಂತೆ 13 ಜಾತಿಗಳನ್ನು ಪ್ರವರ್ಗ-3ಕ್ಕೆ ಸೇರಿಸಿ ಅಲೆಮಾರಿಗಳಿಗೆ ಮೀಸಲು ಸಿಗದಂತೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಸರ್ಕಾರವು ಯಾವುದೇ ವೈಜ್ಞಾನಿಕ ವಿಶ್ಲೇಷಣೆಯಿಲ್ಲದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮೀಸಲು ಹಂಚಿಕೆ ಮಾಡಿದೆ. ಮಾಹಿತಿ ಕೊರತೆಯಿಂದಾಗಿ ಕೆಲವರು ಇದನ್ನು ಸ್ವಾಗತಿಸುತ್ತಿರಬಹುದು, ಆದರೆ ವಾಸ್ತವದಲ್ಲಿ ಸಮಾಜಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ಕೂಡಲೇ ಲೋಪಗಳನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಎರಡನೇ ಹಂತದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಭೀಮಣ್ಣ ಮಂಚಾಲ, ಚಂದ್ರ ಭಂಡಾರಿ, ಭೀಮಯ್ಯ, ಜೆ.ಮೌನೇಶ, ಆಂಜನೇಯ, ಲಕ್ಷ್ಮಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 10:06 pm

ಮಾನವೀಯ ಮೌಲ್ಯದ ತಳಹದಿಯೊಂದಿಗೆ ದೇಶ ಕಟ್ಟೋಣ: ಮೌಲಾನ ಸೈಯದ್ ಅಬ್ದುಲ್ ಅಲಿ ಹಸನಿ ನದ್ವಿ

ಎಐಪಿಐಎಫ್ ವತಿಯಿಂದ ಚಿಂತನ - ಮಂಥನ ಕಾರ್ಯಕ್ರಮ

ವಾರ್ತಾ ಭಾರತಿ 8 Jan 2026 10:00 pm

ಶಹಾಪುರ | ಜಯಮ್ಮ ಸಾವು ಪ್ರಕರಣ : ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮಾದಿಗ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಶಹಾಪುರ: ಡಿ.24ರ, 2025 ರಂದು ಇಂದಿರಾನಗರದ ಖಾಸಗಿ ಜಮೀನಿನಲ್ಲಿ ಮೃತದೇಹ ಪತ್ತೆಯಾದ ಗೋಗಿ ಗ್ರಾಮದ ಜಯಮ್ಮ ಅವರ ಸಾವು ಮೇಲ್ನೋಟಕ್ಕೆ ಕೊಲೆಯಂತೆ ಕಂಡುಬರುತ್ತಿದೆ. ಈ ಪ್ರಕರಣವನ್ನು ತಕ್ಷಣವೇ ಸಿಒಡಿ (COD) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನಗರದ ಆದಿಜಾಂಬವ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಂತರ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಜಯಮ್ಮನ ಸಾವು ಅತ್ಯಂತ ಅನುಮಾನಾಸ್ಪದವಾಗಿದ್ದು, ಸಮಗ್ರ ತನಿಖೆ ನಡೆಸಿ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರಕರಣದ ಹಿನ್ನೆಲೆ ಮತ್ತು ದೂರು : ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಈ ಕುರಿತು ಯುಡಿಆರ್ (UDR) ಸಂಖ್ಯೆ 40/2025 ರಡಿ ಪ್ರಕರಣ ದಾಖಲಾಗಿದೆ. ಆದರೆ, ಶವ ಪತ್ತೆಯಾದ ಸ್ಥಿತಿಯನ್ನು ಗಮನಿಸಿದರೆ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ನಂತರ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ಶವವನ್ನು ನೇಣು ಹಾಕಿರುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆಯಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರುದ್ರಪ್ಪ ಹುಲಿಮನಿ, ವಾಸುದೇವ ಕಟ್ಟಿಮನಿ (ವಕೀಲರು), ಮಾನಪ್ಪ ವಠಾರ, ಮಲ್ಲಪ್ಪ ಉಲ್ಲಂಡಗೇರಿ, ಬಸವರಾಜ ಪೂಜಾರಿ, ಶಾಂತಪ್ಪ ಕಟ್ಟಿಮನಿ, ಶಿವಕುಮಾರ ದೊಡ್ಮನಿ, ವೆಂಕಟೇಶ ಆಲೂರು, ಹುಲಿಗಪ್ಪ ದೊಡ್ಡಮನಿ, ಬಸವರಾಜ ನಾಯ್ಕಲ್, ಚಂದಪ್ಪ ಹಲಗಿ, ಸಿದ್ದಪ್ಪ ಗೋನಲ್, ಶರಣಪ್ಪ ಸಾವೂರ, ಭೀಮರಾಯ ಕಾಂಗ್ರೆಸ್, ಭೀಮಾಶಂಕರ ಕಟ್ಟಿಮನಿ, ಲಕ್ಷ್ಮಣ ಶೆಟ್ಟಿಗೇರ, ವಿಜಯಕುಮಾರ ಎದುರುಮನೆ, ನಿಂಗಣ್ಣ ಕದ್ರಾಪುರ, ಮಲ್ಲಪ್ಪ ಕೊಂಬಿನ್, ಭೀಮರಾಯ ಹುಲಿಮನಿ, ಹುಸೇನಪ್ಪ ಗುತ್ತೇದಾರ್, ರೆಡ್ಡಿ ಸಗರಕರ್, ಪ್ರದೀಪ್ ಅಣಬಿ ಸೇರಿದಂತೆ ಸಮುದಾಯದ ನೂರಾರು ಮುಖಂಡರು ಭಾಗವಹಿಸಿದ್ದರು.  

ವಾರ್ತಾ ಭಾರತಿ 8 Jan 2026 9:56 pm

ಜ.10-11: ಮಂಗಳೂರು ಲಿಟ್ ಫೆಸ್ಟ್

ಮಂಗಳೂರು, ಜ.8: ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಭಾರತ್ ಫೌಂಡೇಷನ್‌ನ ಟ್ರಸ್ಟಿ ಸುನೀಲ್ ಕುಲಕರ್ಣಿ ತಿಳಿಸಿದ್ದಾರೆ. ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ , ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿಥಿಕ್ ಸೊಸೈಟಿಯ ರವಿ. ಎಸ್ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ. ಪದ್ಮಭೂಷಣ ಎಸ್.ಎಲ್. ಭೈರಪ್ಪ ಗೌರವಾರ್ಥ ಶತಾವಧಾನಿ ಆರ್ ಗಣೇಶ್ ಮತ್ತು ಜಿ.ಬಿ. ಹರೀಶರಿಂದ ವಿಶೇಷ ಗೋಷ್ಠಿ ನಡೆಯಲಿದೆ. ಲಿಟ್ ಫೆಸ್ಟ್‌ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ. ಆರ್ ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ಅವರು ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಎಎನ್‌ಐ ಸಂಪಾದಕೀಯ ನಿರ್ದೇಶಕರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಅವರು ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿ ದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬದುಕುಳಿದವರು ಕಂಡಂತೆ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ಖ್ಯಾತ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ವಿಶೇಷವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸ ಲಾಗಿದ್ದು, ಇಲ್ಲಿ ಅನೇಕ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ ಎಂದು ಸುನೀಲ್ ಕುಲಕರ್ಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಾರತ್ ಫೌಂಡೇಷನ್‌ನ ಸದಸ್ಯರಾದ ರಾಮದಾಸ್ ಕಟೀಲ್, ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 8 Jan 2026 9:53 pm

ಕೀಟನಾಶಕಗಳ ನಿರ್ವಹಣಾ ಮಸೂದೆ: ರೈತರು ಮತ್ತು ಕೈಗಾರಿಕೆಗಳಿಗೆ ಹೇಗೆ ಸಹಾಯ ಮಾಡುತ್ತದೆ ಈ ಹೊಸ ಕಾನೂನು?

ಭಾರತದ ಕೀಟನಾಶಕ ನಿಯಂತ್ರಣ ಚೌಕಟ್ಟಿನ ಪ್ರಮುಖ ಪರಿಷ್ಕರಣೆಯನ್ನು ಪ್ರಸ್ತಾಪಿಸುತ್ತಾ, ಕೇಂದ್ರ ಸರ್ಕಾರವು ಸಾರ್ವಜನಿಕ ಸಮಾಲೋಚನೆಗಾಗಿ ಕೀಟನಾಶಕ ನಿರ್ವಹಣಾ ಮಸೂದೆ, 2025ರ ಹೊಸ ಕರಡನ್ನು ಬಿಡುಗಡೆ ಮಾಡಿದೆ. ಇದು 57 ವರ್ಷ ಹಳೆಯದಾದ ಕೀಟನಾಶಕ ಕಾಯ್ದೆ, 1968 ಮತ್ತು ಕೀಟನಾಶಕ ನಿಯಮಗಳು, 1971 ಅನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಸಂಸತ್ತಿನಲ್ಲಿ ಇದನ್ನು ಅನುಮೋದಿಸುವ ಮೊದಲು ಮಸೂದೆಯನ್ನು ಪರಿಷ್ಕರಿಸಲು ಸಚಿವಾಲಯವು ಫೆಬ್ರವರಿ 4, 2026ರೊಳಗೆ ಎಲ್ಲಾ ಪಾಲುದಾರರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ ಎಂದು ಹೇಳಿಕೆ ತಿಳಿಸಿದೆ. ಪ್ರಸ್ತಾವಿತ ಮಸೂದೆಯು ಸೇವೆಗಳನ್ನು ಸುಧಾರಿಸಲು ಪಾರದರ್ಶಕತೆ ಮತ್ತು ಪತ್ತೆಹಚ್ಚುವಿಕೆಗೆ ನಿಬಂಧನೆಗಳನ್ನು ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಪರಿಚಯಿಸುತ್ತದೆ. ಹೆಚ್ಚಿನ ದಂಡಗಳ ಮೂಲಕ ನಕಲಿ ಕೀಟನಾಶಕಗಳ ಮೇಲೆ ಕಠಿಣ ನಿಯಂತ್ರಣಗಳನ್ನು ವಿಧಿಸುವಾಗ, ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮಸೂದೆಯು ಡಿಜಿಟಲ್ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಶಾಸಕಾಂಗ ಪೂರ್ವ ಸಮಾಲೋಚನೆಯ ಭಾಗವಾಗಿ, ಕರಡು ಮಸೂದೆಯು ಸಚಿವಾಲಯದ ವೆಬ್‌ಸೈಟ್ https://agriwelfare.gov.in ನಲ್ಲಿ ಲಭ್ಯವಿದೆ. ಪಾಲುದಾರರು ಮತ್ತು ಸಾರ್ವಜನಿಕ ಸದಸ್ಯರು pp1.pesticides@gov.in, rajbir.yadava@gov.in ಅಥವಾ jyoti.uttam@gov.in ಗೆ ಇಮೇಲ್‌ಗಳ ಮೂಲಕ MS Word ಅಥವಾ PDF ಸ್ವರೂಪದಲ್ಲಿ ಕಾಮೆಂಟ್‌ಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು. ಹೊಸ ಮಸೂದೆಯಲ್ಲೇನಿದೆ? ಕರಡು ಮಸೂದೆಯು ಕೀಟನಾಶಕಗಳ ಸಂಪೂರ್ಣ ಜೀವನಚಕ್ರವನ್ನು ಒಂದೇ, ಕೇಂದ್ರೀಕೃತ ನಿಯಂತ್ರಕ ಚೌಕಟ್ಟಿನ ಅಡಿಯಲ್ಲಿ ತರಲು ಪ್ರಯತ್ನಿಸುತ್ತದೆ. ಇದರಲ್ಲಿ ಉತ್ಪಾದನೆ, ಆಮದು, ಲೇಬಲಿಂಗ್, ಮಾರಾಟ, ಸಾಗಣೆ, ಬಳಕೆ ಮತ್ತು ವಿಲೇವಾರಿ ಸೇರಿದಂತೆ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯು ಒಳಗೊಂಡಿದೆ. ಇದು ಕೀಟನಾಶಕ ನಿಯಂತ್ರಣವನ್ನು ಕೇಂದ್ರ ನಿಯಂತ್ರಣದ ವಿಷಯವೆಂದು ಘೋಷಿಸುತ್ತದೆ. ಇಲ್ಲಿ ಕೇಂದ್ರ ಕೀಟನಾಶಕ ಮಂಡಳಿಯನ್ನು ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳ ಕುರಿತು ಸಲಹಾ ಸಂಸ್ಥೆಯಾಗಿ ಕಲ್ಪಿಸಲಾಗಿದೆ. ಅದೇ ವೇಳೆ, ನೋಂದಣಿ ಸಮಿತಿಯು (Registration Committee) ಕೀಟನಾಶಕ ನೋಂದಣಿಗಳನ್ನು ನೀಡುವ, ಪರಿಶೀಲಿಸುವ, ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಜವಾಬ್ದಾರಿಯುತ ಕಾರ್ಯನಿರ್ವಾಹಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಪೂರ್ವ ನೋಂದಣಿ ಇಲ್ಲದೆ ಯಾವುದೇ ಕೀಟನಾಶಕವನ್ನು ತಯಾರಿಸಲು ಅಥವಾ ಆಮದು ಮಾಡಿಕೊಳ್ಳಲು ಅನುಮತಿಸಲಾಗುವುದಿಲ್ಲ. ಇದು ನಕಲಿ ಕೀಟನಾಶಕಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಕೀಟನಾಶಕಗಳ ವಿವೇಚನಾರಹಿತ ಬಳಕೆಯು ರೈತರು ಮತ್ತು ಗ್ರಾಹಕರಿಬ್ಬರಿಗೂ ಹಾನಿ ಮಾಡುತ್ತದೆ. ಹಾಗಾಗಿ ಹೊಸ ಕಾನೂನಿಗೆ ಬೇಡಿಕೆ ಕೇಳಿಬಂದಿತ್ತು. ಇದೇ ವೇಳೆ, ಹೊಸ ಮಸೂದೆಯು ಕೃಷಿ ಸಮುದಾಯ ಮತ್ತು ಉದ್ಯಮ ಎರಡಕ್ಕೂ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ಕೀಟನಾಶಕ ನಿರ್ವಹಣಾ ಮಸೂದೆ, 2025ರ ಕರಡನ್ನು ಸರ್ಕಾರ ರೈತಕೇಂದ್ರಿತ ಎಂದು ಹೇಳಿದೆ. ಇದು ಕೀಟನಾಶಕ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆ ಮತ್ತು ಪತ್ತೆಹಚ್ಚುವಿಕೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ನೋಂದಣಿ, ಪರವಾನಗಿ, ತಪಾಸಣೆ ಮತ್ತು ದಾಖಲೆ ನಿರ್ವಹಣೆಗೆ ಡಿಜಿಟಲ್ ಪ್ರಕ್ರಿಯೆಗಳನ್ನು ಕಡ್ಡಾಯಗೊಳಿಸುತ್ತದೆ. ಕಾರ್ಯವಿಧಾನಗಳನ್ನು ಸುಗಮಗೊಳಿಸುವುದು ಮತ್ತು ರೈತರಿಗೆ ಸೇವಾ ವಿತರಣೆಯನ್ನು ಸುಧಾರಿಸುವುದು ಮಸೂದೆಯ ಉದ್ದೇಶವಾಗಿದೆ. ಕರಡು ಮಸೂದೆಯ ಪ್ರಮುಖ ಲಕ್ಷಣವೆಂದರೆ ನೋಂದಣಿಗಳ ಮೇಲೆ ಸಮಯಬದ್ಧವಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆ. ನೋಂದಣಿ ಸಮಿತಿಯು 12 ತಿಂಗಳೊಳಗೆ ಅರ್ಜಿಗಳನ್ನು ನಿರ್ಧರಿಸಬೇಕಾಗುತ್ತದೆ; ಇದನ್ನು 18 ತಿಂಗಳವರೆಗೆ ವಿಸ್ತರಿಸಬಹುದು. ಜೆನೆರಿಕ್ ಕೀಟನಾಶಕಗಳ ಸಂದರ್ಭದಲ್ಲಿ, ನಿಗದಿತ ಅವಧಿಯೊಳಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದು ನಿಯಂತ್ರಕ ವಿಳಂಬವನ್ನು ಕಡಿಮೆ ಮಾಡಲು ಮತ್ತು ಸ್ಪರ್ಧೆಯನ್ನು ಉತ್ತೇಜಿಸಲು ಉದ್ದೇಶಿತ ನಿಬಂಧನೆಯಾಗಿದೆ. ನಕಲಿ ಮತ್ತು ಕಳಪೆ ಗುಣಮಟ್ಟದ ಕೀಟನಾಶಕಗಳ ಮೇಲೆ ಕಠಿಣ ನಿಯಂತ್ರಣಗಳನ್ನು ಸಹ ಮಸೂದೆ ಪ್ರಸ್ತಾಪಿಸುತ್ತದೆ. ಕೆಲವು ಅಪರಾಧಗಳಿಗೆ ಸಂಯೋಜಿತ ಶಿಕ್ಷೆ (ಜೈಲು ಮತ್ತು ದಂಡ) ನಿಬಂಧನೆಗಳ ಜೊತೆಗೆ, ತಡೆಗಟ್ಟುವಿಕೆಯಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ದಂಡಗಳನ್ನು ಮಸೂದೆಯಲ್ಲಿ ಸೂಚಿಸಲಾಗಿದೆ. ಕಾನೂನಿನ ಚೌಕಟ್ಟಿನೊಳಗೆ ದಂಡ ರಚನೆಗಳನ್ನು ವ್ಯಾಖ್ಯಾನಿಸಲು ರಾಜ್ಯಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು. ರೈತರಿಗೆ ಗುಣಮಟ್ಟ-ಪ್ರಮಾಣೀಕೃತ ಉತ್ಪನ್ನಗಳು ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಲು ಕೀಟನಾಶಕ ಪರೀಕ್ಷಾ ಪ್ರಯೋಗಾಲಯಗಳ ಕಡ್ಡಾಯ ಮಾನ್ಯತೆಯನ್ನು ಪ್ರಸ್ತಾಪಿಸಲಾಗಿದೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ತನಿಖಾಧಿಕಾರಿಗಳು ಆವರಣವನ್ನು ಪ್ರವೇಶಿಸಲು, ದಾಸ್ತಾನು ವಶಪಡಿಸಿಕೊಳ್ಳಲು, ಮಾರಾಟವನ್ನು ನಿಲ್ಲಿಸಲು ಮತ್ತು ಪ್ರಯೋಗಾಲಯ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರುತ್ತಾರೆ. ಇವರು ಯಾವುದೇ ಹಂತದಲ್ಲಿ ನೋಂದಣಿಗಳನ್ನು ಪರಿಶೀಲಿಸಬಹುದು. ಹೊಸ ಪುರಾವೆಗಳು ಮಾನವನ ಆರೋಗ್ಯ, ಪ್ರಾಣಿಗಳು ಅಥವಾ ಪರಿಸರಕ್ಕೆ ಅಪಾಯವನ್ನು ಸೂಚಿಸಿದರೆ ನೋಂದಣಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು. ಒಮ್ಮೆ ರದ್ದುಗೊಳಿಸಿದ ನಂತರ, ಆ ಕೀಟನಾಶಕವನ್ನು ದೇಶಾದ್ಯಂತ ನಿಷೇಧಿತವೆಂದು ಪರಿಗಣಿಸಲಾಗುತ್ತದೆ. ಕೀಟನಾಶಕ ನಿರ್ವಹಣೆಯ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಬಲಪಡಿಸಲು ಕರಡು ಪ್ರಯತ್ನಿಸುತ್ತದೆ. ರೈತರಿಗೆ ಸುಲಭವಾಗಿ ಬದುಕುವುದು ಮತ್ತು ಸುಲಭವಾಗಿ ವ್ಯಾಪಾರ ಮಾಡುವುದು ನಡುವಿನ ಸಮತೋಲನವನ್ನು ಸಾಧಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈವಿಕ ಕೀಟನಾಶಕಗಳು, ಸಾಂಪ್ರದಾಯಿಕ ಅರಿವು ಆಧಾರಿತ ಉತ್ಪನ್ನಗಳು ಮತ್ತು ಸಮಗ್ರ ಕೀಟ ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸಲು ನಿಬಂಧನೆಗಳನ್ನು ಸಹ ಸೇರಿಸಲಾಗಿದೆ. ಭಾರತದ ಕೀಟನಾಶಕ ನಿರ್ವಹಣಾ ಮಸೂದೆಯು ಕೀಟನಾಶಕ ಕಾಯ್ದೆ, 1968ಗಿಂತ ಹೇಗೆ ಭಿನ್ನ? ಕೀಟನಾಶಕ ನಿರ್ವಹಣಾ ಮಸೂದೆ, 2025 ದೇಶವು 1968ರಲ್ಲಿ ಕೀಟನಾಶಕ ಕಾಯ್ದೆಯನ್ನು ಜಾರಿಗೆ ತಂದ ನಂತರ ಕೀಟನಾಶಕ ನಿಯಂತ್ರಣದಲ್ಲಿ ಕಂಡುಬರುವ ಅತ್ಯಂತ ಮಹತ್ವದ ಪರಿಷ್ಕರಣೆಯಾಗಿದೆ. ಹಳೆಯ ಕಾಯ್ದೆಯನ್ನು ಹಸಿರು ಕ್ರಾಂತಿಯ ಆರಂಭಿಕ ವರ್ಷಗಳಲ್ಲಿ ರೂಪಿಸಲಾಗಿತ್ತು. ತೀವ್ರ ಆಹಾರ ಕೊರತೆಯ ಸಮಯದಲ್ಲಿ ಕೀಟನಾಶಕಗಳ ತಯಾರಿಕೆ ಮತ್ತು ಮಾರಾಟವನ್ನು ನಿಯಂತ್ರಿಸಲು ಅದನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಹೊಸ ಮಸೂದೆಯು ಹೆಚ್ಚು ಸಂಕೀರ್ಣವಾದ ಕೃಷಿ ಮತ್ತು ಪರಿಸರ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. 1968ರ ಕಾನೂನು ಕೀಟನಾಶಕಗಳ ಮೇಲೆ ಸಂಕುಚಿತವಾಗಿ ಕೇಂದ್ರೀಕರಿಸಿದ್ದರೆ, ಹೊಸ ಮಸೂದೆಯು ಎಲ್ಲಾ ಕೀಟನಾಶಕಗಳನ್ನು—ರಾಸಾಯನಿಕ ಮತ್ತು ಜೈವಿಕ—ಒಂದೇ ನಿಯಂತ್ರಕ ಚೌಕಟ್ಟಿನ ಅಡಿಯಲ್ಲಿ ತರುತ್ತದೆ. ಇದರಲ್ಲಿ ಸಸ್ಯ ಬೆಳವಣಿಗೆ ನಿಯಂತ್ರಕಗಳು, ಕೊಯ್ಲಿನ ನಂತರದ ರಕ್ಷಕಗಳು, ಗೃಹಬಳಕೆಯ ಕೀಟನಾಶಕಗಳು ಮತ್ತು ಸಂಗ್ರಹಣೆ ಹಾಗೂ ಸಾಗಣೆಯ ಸಮಯದಲ್ಲಿ ಬಳಸುವ ವಸ್ತುಗಳು ಸೇರಿವೆ. ಹೊಸ ಮಸೂದೆಯು ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯನ್ನು ರಚಿಸುವ ಮೂಲಕ ನಿಯಂತ್ರಕ ನಿರ್ಧಾರ ತೆಗೆದುಕೊಳ್ಳುವಿಕೆಯಿಂದ ನೀತಿ ಸಲಹೆಯನ್ನು ಸ್ಪಷ್ಟವಾಗಿ ಪ್ರತ್ಯೇಕಿಸುತ್ತದೆ. ಮಂಡಳಿಯು ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳ ಬಗ್ಗೆ ಸರ್ಕಾರಗಳಿಗೆ ಸಲಹೆ ನೀಡಿದರೆ, ನೋಂದಣಿ ಸಮಿತಿಯು ಕೀಟನಾಶಕ ಅನುಮೋದನೆಗಳು, ವಿಮರ್ಶೆಗಳು ಮತ್ತು ರದ್ದತಿಗಳಿಗೆ ಗೇಟ್‌ಕೀಪರ್ ಆಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ನೋಂದಣಿ ಮತ್ತು ಪರವಾನಗಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಅನುಮೋದನೆಗಳಿಗಾಗಿ ಶಾಸನಬದ್ಧ ಸಮಯ ಮಿತಿಗಳನ್ನು ನಿಗದಿಪಡಿಸಲಾಗಿದೆ. ಜೆನೆರಿಕ್ ಕೀಟನಾಶಕಗಳಿಗೆ, ಅಧಿಕಾರಿಗಳು ನಿಗದಿತ ಅವಧಿಯೊಳಗೆ ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ ಮಸೂದೆಯು ‘ಡೀಮ್ಡ್ ನೋಂದಣಿ’ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಪ್ರಸ್ತಾವಿತ ಕಾನೂನು ಶ್ರೇಣೀಕೃತ ದಂಡಗಳನ್ನು ಪರಿಚಯಿಸುತ್ತದೆ. ಇದರಿಂದ ಸಣ್ಣ ಅಥವಾ ತಾಂತ್ರಿಕ ಉಲ್ಲಂಘನೆಗಳನ್ನು ಹಣಕಾಸಿನ ದಂಡದ ಮೂಲಕ ಪರಿಹರಿಸಲು ಅವಕಾಶ ಸಿಗುತ್ತದೆ. ಇದು ಕಿರುಕುಳವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ದುರ್ಬಲಗೊಳಿಸದೆ ವ್ಯವಹಾರ ಮಾಡುವ ವಾತಾವರಣವನ್ನು ಸುಧಾರಿಸಲು ಉದ್ದೇಶಿಸಲಾಗಿದೆ. ಅದೇ ಸಮಯದಲ್ಲಿ, ಗಂಭೀರ ಅಪರಾಧಗಳಿಗೆ ದಂಡಗಳನ್ನು ಗಮನಾರ್ಹವಾಗಿ ಬಲಪಡಿಸಲಾಗಿದೆ. ಅಕ್ರಮ ತಯಾರಿಕೆ, ಮಿಸ್‌ಬ್ರಾಂಡಿಂಗ್, ನೋಂದಾಯಿಸದ ಅಥವಾ ನಿಷೇಧಿತ ಕೀಟನಾಶಕಗಳ ಮಾರಾಟ, ಮತ್ತು ಸಾವು ಅಥವಾ ಗಂಭೀರ ಗಾಯಕ್ಕೆ ಕಾರಣವಾಗುವ ಉಲ್ಲಂಘನೆಗಳು ಭಾರೀ ದಂಡ, ಜೈಲು ಶಿಕ್ಷೆ ಹಾಗೂ ನೋಂದಣಿ ಮತ್ತು ಪರವಾನಗಿಗಳ ರದ್ದತಿಗೆ ಕಾರಣವಾಗುತ್ತವೆ. ಮಸೂದೆಯು ಕಣ್ಗಾವಲಿಗೆ ಹೆಚ್ಚಿನ ಒತ್ತು ನೀಡಿದ್ದು, ರಾಜ್ಯಗಳು ಕೀಟನಾಶಕ ವಿಷಪ್ರಕರಣಗಳನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ.

ವಾರ್ತಾ ಭಾರತಿ 8 Jan 2026 9:53 pm

ಯಾದಗಿರಿ | ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾದ ಬಂಜಾರ ನೃತ್ಯ ತಂಡಕ್ಕೆ ಭವ್ಯ ಸನ್ಮಾನ

ಮನೆ ಬಾಗಿಲಿಗೆ ಬಂದು ಸಾಧಕರನ್ನು ಗೌರವಿಸಿದ ಉಮೇಶ್ ಮುದ್ನಾಳ

ವಾರ್ತಾ ಭಾರತಿ 8 Jan 2026 9:48 pm

ಅಮೆರಿಕ| ವಲಸೆ ಅಧಿಕಾರಿಯ ಗುಂಡೇಟಿನಿಂದ ಮಹಿಳೆ ಮೃತ್ಯು; ವ್ಯಾಪಕ ಪ್ರತಿಭಟನೆ

ನ್ಯೂಯಾರ್ಕ್, ಜ.8: ಅಮೆರಿಕಾದ ಮಿನ್ನಿಯಾಪೊಲೀಸ್ ನಗರದ ರಸ್ತೆಯಲ್ಲಿ ವಲಸೆ ಅಧಿಕಾರಿಯೊಬ್ಬರು ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ವ್ಯಾಪಕ ಪ್ರತಿಭಟನೆ ನಡೆದಿದ್ದು ಆಕೆ ದೇಶೀಯ ಭಯೋತ್ಪಾದಕಿ ಎಂಬ ಶ್ವೇತಭವನದ ಪ್ರತಿಪಾದನೆಯನ್ನು ಸ್ಥಳೀಯ ನಾಯಕರು ತಿರಸ್ಕರಿಸಿದ್ದಾರೆ. ಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಮಾಸ್ಕ್ ಧರಿಸಿದ್ದ ವಲಸೆ ಮತ್ತು ಸುಂಕ ಜಾರಿ ಏಜೆನ್ಸಿ(ಐಸಿಇ) ಅಧಿಕಾರಿಯೊಬ್ಬರು ಹೋಂಡಾ ಕಾರಿನತ್ತ ಮೂರು ಸುತ್ತು ಗುಂಡು ಹಾರಿಸಿದಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿರುವ, ಅಪಘಾತಕ್ಕೀಡಾದ ವಾಹನದಲ್ಲಿ ರಿನೀ ಅವರ ರಕ್ತಸಿಕ್ತ ದೇಹ ಬಿದ್ದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ದುರಂತದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಟ್ರಂಪ್ ಆಡಳಿತ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು ರಿನೀ ವಲಸೆ ಅಧಿಕಾರಿಯನ್ನು ಕೊಲ್ಲಲು ಪ್ರಯತ್ನಿಸಿದಾಗ ಅಧಿಕಾರಿ ಆತ್ಮರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಪ್ರತಿಪಾದಿಸಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಿನ್ನಿಯಾಪೊಲೀಸ್ ನಗರದ ಮೇಯರ್ ಜಾಕೊಬ್ ಫ್ರೆ `ಐಸಿಇ ತಕ್ಷಣ ನಗರದಿಂದ ನಿರ್ಗಮಿಸಬೇಕು' ಎಂದು ಆಗ್ರಹಿಸಿದ್ದಾರೆ. ಬಳಿಕ ಸಾವಿರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು ಐಸಿಇ ವಿರುದ್ದ ಘೋಷಣೆ ಕೂಗಿದರು. `ಪ್ರಾಣಹಾನಿ ಸಂಭವಿಸಿದ್ದು ನಿಜವಾಗಿಯೂ ದುರಂತವಾಗಿದೆ. ಆದರೆ ಇದು ದೇಶೀಯ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಯಾಗಿದ್ದು ರಿನೀ ಇಡೀ ದಿನ ಐಸಿಇ ಸಿಬ್ಬಂದಿಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತಾ ಬೆದರಿಕೆ ಒಡ್ಡುತ್ತಿದ್ದರು. ಬಳಿಕ ತನ್ನ ವಾಹನವನ್ನು ಅಧಿಕಾರಿಯತ್ತ ಅಪಾಯಕಾರಿಯಾಗಿ ನುಗ್ಗಿಸಿದ್ದರು ' ಎಂದು ಆಂತರಿಕ ಭದ್ರತಾ ಇಲಾಖೆಯ ಮುಖ್ಯಸ್ಥೆ ಕ್ರಿಸ್ಟಿ ನೊಯೆಮ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 8 Jan 2026 9:46 pm

ಆಸ್ಟ್ರೇಲಿಯ ಮಡಿಲಿಗೆ ಆ್ಯಶಸ್ ಕಪ್| ಇಂಗ್ಲೆಂಡ್ ವಿರುದ್ಧ ಸರಣಿ 4-1 ಅಂತರದಿಂದ ಕೈವಶ

ಸಿಡ್ನಿ, ಜ.8: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಐದು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಸರಣಿಯನ್ನು 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಪ್ರತಿಷ್ಠಿತ ಆ್ಯಶಸ್ ಕಪ್ ಅನ್ನು ತನ್ನಲ್ಲೆ ಉಳಿಸಿಕೊಂಡಿದೆ. ಇದರೊಂದಿಗೆ ಆತಿಥೇಯರು ವಿದಾಯದ ಪಂದ್ಯವನ್ನಾಡಿದ ಹಿರಿಯ ಕ್ರಿಕೆಟಿಗ ಉಸ್ಮಾನ್ ಖ್ವಾಜಾಗೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಐದನೇ ಹಾಗೂ ಕೊನೆಯ ದಿನದಾಟವಾದ ಗುರುವಾರ ಪಂದ್ಯ ಗೆಲ್ಲಲು 160 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದರೂ ಭೋಜನ ವಿರಾಮದ ನಂತರ ಗೆಲುವಿನ ದಡ ಸೇರಿತು. ಕ್ಯಾಮರೂನ್ ಗ್ರೀನ್ ಔಟಾಗದೆ 22 ಹಾಗೂ ಅಲೆಕ್ಸ್ ಕ್ಯಾರಿ ಔಟಾಗದೆ 16 ರನ್ ಗಳಿಸಿದರು. ಆಸ್ಟ್ರೇಲಿಯ ತಂಡವು ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್(29 ರನ್)ಹಾಗೂ ಜಾಕ್ ವೆದರಾಲ್ಡ್(34 ರನ್)ಅವರೊಂದಿಗೆ ನಾಯಕ ಸ್ಟೀವನ್ ಸ್ಮಿತ್(12 ರನ್)ಹಾಗೂ ಖ್ವಾಜಾ(6 ರನ್)ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಒಟ್ಟು 88 ಟೆಸ್ಟ್ ಪಂದ್ಯಗಳನ್ನು ಆಡಿರುವ ಖ್ವಾಜಾ ತನ್ನ ಕೊನೆಯ ಇನಿಂಗ್ಸ್‌ನಲ್ಲಿ ಕೇವಲ ಆರು ರನ್ ಗಳಿಸಿದರು. 20ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮಾರ್ನಸ್ ಲ್ಯಾಬುಶೇನ್ 37ರನ್ ಗಳಿಸಿದ್ದಾಗ ರನೌಟಾದರು. ಆಗ ಆಸ್ಟ್ರೇಲಿಯ ತಂಡವು 121 ರನ್‌ಗೆ ಐದನೇ ವಿಕೆಟ್ ಕಳೆದುಕೊಂಡಿತು. ಇದಕ್ಕೂ ಮೊದಲು ಇಂಗ್ಲೆಂಡ್ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ ಜೇಕಬ್ ಬೆಥೆಲ್ ಏಕಾಂಗಿ ಹೋರಾಟದ(154 ರನ್, 265 ಎಸೆತ, 15 ಬೌಂಡರಿ)ಹೊರತಾಗಿಯೂ 342 ರನ್‌ಗೆ ಸರ್ವಪತನಗೊಂಡಾಗ ಆಸ್ಟ್ರೇಲಿಯ ಗೆಲುವು ಸಾಧಿಸುವುದರಲ್ಲಿ ಸಂಶಯವೇ ಇರಲಿಲ್ಲ. ಪ್ರವಾಸಿ ಇಂಗ್ಲೆಂಡ್ ತಂಡವು ಪರ್ತ್ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 8 ವಿಕೆಟ್‌ಗಳಿಂದ ಸೋಲನುಭವಿಸಿ, ಅಡಿಲೇಡ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯವನ್ನು 82 ರನ್‌ನಿಂದ ಸೋತಾಗಲೇ ಸರಣಿ ಕೈಚೆಲ್ಲಿತ್ತು. ಮೆಲ್ಬರ್ನ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್ ಮರು ಹೋರಾಟ ನೀಡಿತ್ತು. 2010-11ರ ನಂತರ 15 ವರ್ಷಗಳಲ್ಲಿ ಮೊದಲ ಬಾರಿ ಆಸ್ಟ್ರೇಲಿಯದ ಮಣ್ಣಿನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿ ಇತಿಹಾಸ ನಿರ್ಮಿಸಿತ್ತು. ಆ್ಯಶಸ್ ಸರಣಿಗಾಗಿನ ಸಿದ್ಧತೆ ಕೊರತೆ, ಅಶಿಸ್ತು ಹಾಗೂ ಬೇಝ್‌ಬಾಲ್ ಶೈಲಿಯ ಕ್ರಿಕೆಟ್‌ನಿಂದಾಗ ತೀವ್ರ ಟೀಕೆಗೆ ಗುರಿಯಾಗಿದ್ದ ಇಂಗ್ಲೆಂಡ್ ತಂಡವು ಮೆಲ್ಬರ್ನ್‌ನಲ್ಲಿ ಗೆಲುವು ದಾಖಲಿಸಿ ಸಮಾಧಾನಪಟ್ಟುಕೊಂಡಿತ್ತು. ಆಸ್ಟ್ರೇಲಿಯ ನೆಲದಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಮೊದಲ ಗೆಲುವು ದಾಖಲಿಸಿತ್ತು. ಸಿಡ್ನಿಯಲ್ಲಿ ಕೊನೆಯ ದಿನದ ತನಕ ಹೋರಾಟ ನೀಡಿದರೂ ಗೆಲುವು ದಕ್ಕಲಿಲ್ಲ. ಸರಣಿಯಲ್ಲಿ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯ ಹೊರತಾಗಿಯೂ ಆಸ್ಟ್ರೇಲಿಯ ತಂಡವು ಆ್ಯಶಸ್ ಕಪ್ ಎತ್ತಿ ಹಿಡಿಯುವಲ್ಲಿ ಯಶಸ್ಸು ಕಂಡಿದೆ. ಹಿರಿಯ ಸ್ಪಿನ್ನರ್ ನಾಥನ್ ಲಿಯೊನ್ ಕೂಡ ಸೀಮಿತ ಕೊಡುಗೆ ನೀಡಿದ್ದರು. ಸುಮಾರು 8,60,000 ಕ್ರಿಕೆಟ್ ಅಭಿಮಾನಿಗಳು ಆ್ಯಶಸ್ ಸರಣಿಯನ್ನು ವೀಕ್ಷಿಸಿದ್ದರು. ಸಿಡ್ನಿ ಪಂದ್ಯವೊಂದರಲ್ಲೇ 2,11,302 ಜನರು ಆಗಮಿಸಿದ್ದರು. ಮಾತಿನ ಚಕಮಕಿ: ರನ್ ಚೇಸ್ ಆರಂಭದಲ್ಲೇ ಬ್ರೆಂಡನ್ ಕಾರ್ಸ್ ಎಸೆತವನ್ನು ಎರಡು ಬಾರಿ ಬೌಂಡರಿ ಗೆರೆ ದಾಟಿಸಿದ ಹೆಡ್ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರು. ವೆದರಾಲ್ಡ್ ಅವರು ಜೋಶ್ ಟೊಂಗ್ ವಿರುದ್ಧ ಬೌಂಡರಿ ಗಳಿಸಿದರು. ವೆದರಾಲ್ಡ್ 16ರನ್ ಗಳಿಸಿದ್ದಾಗ ಡಿಆರ್‌ಎಸ್‌ನಿಂದ ಔಟಾಗುವುದರಿಂದ ಬಚಾವಾದರು. ಆಗ ಕೋಪಗೊಂಡ ಕಾರ್ಸ್ ಅವರು ಆನ್‌ಫೀಲ್ಡ್ ಅಂಪೈರ್‌ಗೆ ದೂರು ನೀಡಿದರು. ಈ ವೇಳೆ ಸ್ಟೋಕ್ಸ್ ಹಾಗೂ ಕಾರ್ಸ್ ಅವರು ವೆದರಾಲ್ಡ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇಂಗ್ಲೆಂಡ್ ಕೊನೆಗೂ ಹೆಡ್ ವಿಕೆಟನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಹೆಡ್ ಅವರು ಟೊಂಗ್ ಎಸೆತವನ್ನು ಕೆಣಕಲು ಹೋಗಿ ಕಾರ್ಸ್‌ಗೆ ಕ್ಯಾಚ್‌ನೀಡಿದರು. ವೆದರಾಲ್ಡ್ ಅವರು ಟೊಂಗ್ ಬೌಲಿಂಗ್‌ನಲ್ಲಿ ಮ್ಯಾಥ್ಯೂ ಪಾಟ್ಸ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಸ್ಮಿತ್ ಅವರು ವಿಲ್ ಜಾಕ್ಸ್ ಅವರ ಸ್ಪಿನ್ ಮೋಡಿಗೆ ಮರುಳಾಗಿ ಕ್ಲೀನ್‌ಬೌಲ್ಡಾದರು. ಖ್ವಾಜಾ ಅವರು ಟೊಂಗ್‌ಗೆ ಕ್ಲೀನ್‌ಬೌಲ್ಡ್ ಆಗಿ ಪೆವಿಲಿಯನ್‌ಗೆ ವಾಪಸಾಗುತ್ತಿದ್ದಾಗ ಇಂಗ್ಲೆಂಡ್ ಆಟಗಾರರು ಗೌರವ ರಕ್ಷೆ ನೀಡಿದರು. ಇಂಗ್ಲೆಂಡ್ 342 ರನ್‌ಗೆ ಆಲೌಟ್: ಇದಕ್ಕೂ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿ 119 ರನ್ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ತಂಡವು ನಿನ್ನೆಯ ಮೊತ್ತಕ್ಕೆ ಕೇವಲ 40 ರನ್ ಸೇರಿಸಿ ಆಲೌಟಾಯಿತು. ಮೂರನೇ ಕ್ರಮಾಂಕದ ಬ್ಯಾಟರ್ ಬೆಥೆಲ್ 142 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಎರಡು ರನ್ ಗಳಿಸಿದ ಬೆಥೆಲ್ 150 ರನ್ ಪೂರೈಸಿದರು. ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಕ್ಯಾರಿಗೆ ವಿಕೆಟ್ ಒಪ್ಪಿಸಿದ ಬೆಥೆಲ್ ಅವರ 265 ಎಸೆತಗಳ ಮ್ಯಾರಥಾನ್ ಇನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು. ಟೊಂಗ್(6 ರನ್)ವಿಕೆಟನ್ನು ಪಡೆದ ಸ್ಟಾರ್ಕ್ ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್‌ಗೆ ತೆರೆ ಎಳೆದರು. ಪಾಟ್ಸ್ ಔಟಾಗದೆ 18 ರನ್ ಗಳಿಸಿದರು. ಸ್ಟಾರ್ಕ್ ಅವರು ಸರಣಿಯಲ್ಲಿ 31ನೇ ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. 156 ರನ್ ಗಳಿಸಿದ್ದಲ್ಲದೆ, 31 ವಿಕೆಟ್‌ಗಳನ್ನು ಉರುಳಿಸಿರುವ ಸ್ಟಾರ್ಕ್ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಐದನೇ ಪಂದ್ಯದಲ್ಲಿ 163 ಹಾಗೂ 29 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಶತಕದ ಬಲದಿಂದ 384 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡವು ಹೆಡ್ ಹಾಗೂ ಸ್ಮಿತ್ ಶತಕಗಳ ಸಹಾಯದಿಂದ ಮೊದಲ ಇನಿಂಗ್ಸ್‌ನಲ್ಲಿ 567 ರನ್ ಕಲೆ ಹಾಕಿತ್ತು.

ವಾರ್ತಾ ಭಾರತಿ 8 Jan 2026 9:43 pm

ಉಡುಪಿಯ ಕಾರೂರು ಗ್ರಾಮದಲ್ಲಿ ಐದು ಮಂಗಗಳ ಸಾವು - ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಂಗಡಿಯಲ್ಲಿ ಐದು ಮಂಗಗಳು ಸಾವನ್ನಪ್ಪಿದ್ದು, ಮಂಗನ ಕಾಯಿಲೆ (KFD) ಆತಂಕ ಹೆಚ್ಚಿಸಿದೆ. ಆರೋಗ್ಯ ಮತ್ತು ಅರಣ್ಯ ಇಲಾಖೆಗಳು ಮಾದರಿಗಳನ್ನು ಸಂಗ್ರಹಿಸಿದ್ದರೂ, ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಮಂಗಗಳು ಸಾವನ್ನಪ್ಪಿದ್ದವು, ಇದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ವಿಜಯ ಕರ್ನಾಟಕ 8 Jan 2026 9:42 pm

ದ.ಕ. ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮುಂದೂಡಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲೆಯ ಸಹಯೋಗದೊಂದಿಗೆ ಜನವರಿ 13 ಮತ್ತು 14 ರಂದು ನಿಗದಿಪಡಿಸಲಾಗಿದ್ದ 2025- 26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ಕ್ರೀಡಾಕೂಟವನ್ನು ಜ. 22 ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಾಗೂ ಸಾಂಸ್ಕತಿಕ ಸ್ಪರ್ಧೆಗಳನ್ನು ಜ. 23 ರಂದು ಬೆಳಗ್ಗೆ 9 ಗಂಟೆಗೆ ನಗರದ ಸರಕಾರಿ ನೌಕರರ ಸಭಾ ಭವನದಲ್ಲಿ ಆಯೋಜಿಸಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Jan 2026 9:35 pm

ಜ.10ರಂದು ಸಿಎಂ ಸಿದ್ದರಾಮಯ್ಯ ದ.ಕ. ಜಿಲ್ಲೆಗೆ ಭೇಟಿ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಸಂಜೆ 5ಕ್ಕೆ ಮಂಗಳೂರು ವಿಮಾನ ನಿಲ್ದಾಣ ಆಗಮನ, 5:30- ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ ಕಾರ್ಯಕ್ರಮ (ಹೋಟೆಲ್ ಅವತಾರ್, ಅತ್ತಾವರ), ರಾತ್ರೆ 7: ಪಿಲಿಕುಳದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಪಡಿಸಿದ ಪಿಲಿಕುಳ ರೆಸಾರ್ಟ್ ಉದ್ಘಾಟನಾ ಸಮಾರಂಭ. ರಾತ್ರಿ ನಗರದಲ್ಲಿ ವಾಸ್ತವ್ಯ. ಜನವರಿ 11 ರಂದು ಬೆಳಗ್ಗೆ 11:10 - ಮಂಗಳೂರಿನಿಂದ ಬೆಂಗಳೂರಿಗೆ ಮುಖ್ಯಮಂತ್ರಿಗಳು ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 9:31 pm

ಪೆರ್ನೆ: ನೆಡುತೋಪಿನಲ್ಲಿ ಕಾಡ್ಗಿಚ್ಚು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ, ಬಿಳಿಯೂರು ಗ್ರಾಮದ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು, ಕುಂಕಂತೋಟ ಎಂಬಲ್ಲಿ ಕಾಡ್ಗಿಚ್ಚು ಪ್ರಸಹರಿಸಿ ಭಾರೀ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗಿಡಾದ ಘಟನೆ ಗುರುವಾರ ಸಂಭವಿಸಿದೆ. ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಪ್ರಸಹರಿಸಿ ಬಿಳಿಯೂರು , ಕೋಡಿಂಬಾಡಿ ಪ್ರದೇಶದ ಗೇರು ಅಭಿವೃದ್ಧಿ ನಿಗಮದ ನೆಡುತೋಪು ಪ್ರದೇಶವನ್ನು ಆವರಿಸಿತು. ಇದರಿಂದಾಗಿ ಈ ಪ್ರದೇಶದಲ್ಲಿದ್ದ ಸಾವಿರಾರು ಗೇರು ಮರಗಳು ಇನ್ನಿತರ ಕಾಡು ಮರಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಠ ಸಂಭವಿಸಿದೆ. ಅಗ್ನಿ ನಿಯಂತ್ರಿಸಲು ಮುಂದಾಗಿದ್ದ ವೇಳೆ ಹಾವು ಕಡಿತ: ಕಾಡ್ಗಿಚ್ಚು ಪ್ರಸಹರಿಯುತ್ತಿದ್ದಂತೆಯೇ ಬೆಂಕಿಯನ್ನು ನಂದಿಸಲು ಮುಂದಾದ ಗೇರು ಅಭಿವೃದ್ಧಿ ನಿಗಮ, ಅರಣ್ಯ ಇಲಾಖಾಧಿಕಾರಿಗಳ ತಂಡ , ಮತ್ತು ಸ್ಥಳೀಯರು ಅಗ್ನಿಶಾಮಕ ದಳದ ಸಹಾಯ ಪಡೆದು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರು. ಈ ವೇಳೆ ಅರಣ್ಯ ವೀಕ್ಷಕ ಶೇಖರ ಪೂಜಾರಿಯವರು ಬೆಂಕಿಯನ್ನು ನಿಯಂತ್ರಿಸುತ್ತಿದ್ದ ವೇಳೆ ಕಾಡ್ಗಿಚ್ಚಿನ ಕೆನ್ನಾಲೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೆಡುತೋಪು ಅಧೀಕ್ಷಕ ರವಿಪ್ರಸಾದ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕಾಂತರಾಜು, ಸುಧೀರ್ ಹೆಗ್ಡೆ, ಉಲ್ಲಾಸ್ ಮೊದಲಾದವರು ಭಾಗವಹಿಸಿದ್ದರು. ಪುತ್ತೂರಿನ ಅಗ್ನಿಶಾಮಕ ದಳ ಹಲವು ಬಾರಿ ನೀರು ತುಂಬಿಸಿ ಕೊಂಡು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸಿತ್ತು. ಕಾಡ್ಗಿಚ್ಚು ಪ್ರಸಹರಿಸಿದ ಸ್ಥಳದ ಬಳಿ ಜನವಸತಿ ಇದ್ದ ಕಾರಣ ಹೆಚ್ಚಿನ ಅನಾಹುತ ಆಗದಂತೆ ಸ್ಥಳೀಯರು ಮತ್ತು ಇಲಾಖಾಧಿಕಾರಿಗಳು ಕಾಳಜಿ ವಹಿಸಿ ಶ್ರಮಿಸಿದರು. 

ವಾರ್ತಾ ಭಾರತಿ 8 Jan 2026 9:27 pm

ಬೆಂಗಳೂರು - ಮಂಗಳೂರು ಹೆಚ್ಚುವರಿ ರೈಲಿಗಾಗಿ ಸಂಸದರಿಗೆ ಮನವಿ

ಮಂಗಳೂರು: ಬೆಂಗಳೂರು- ಮಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿಯು ದಕ್ಷಿಣ ಕನ್ನಡ ಸಂಸದರಿಗೆ ಮನವಿ ಮಾಡಿದೆ. ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಹಾಗೂ ಕಾರ್ಯದರ್ಶಿ ಅನಿಲ್ ಹೆಗ್ಡೆ ಜ.6ರಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಮಂಗಳೂರು ಭಾಗದ ರೈಲ್ವೆ ಸಂಬಂಧಿತ ವಿವಿಧ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕೆಲವು ದಿನಗಳಿಂದ ಬೆಂಗಳೂರು-ಕಣ್ಣೂರು ರೈಲು ನಿರಂತರವಾಗಿ ವಿಳಂಬವಾಗಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈಲಿನ ಸಮಯ ಪಾಲನೆ ಸುಧಾರಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಪ್ರಸ್ತಾವಿತ ಮಂಗಳೂರು-ರಾಮೇಶ್ವರ ಸಾಪ್ತಾಹಿಕ ರೈಲನ್ನು ಶೀಘ್ರ ಆರಂಭಿಸಬೇಕು ಹಾಗೂ ಇದೇ ರೈಲಿನ ಬೋಗಿಗಳನ್ನು ಉಪಯೋಗಿಸಿ ವಾರಕ್ಕೆ ಒಂದು ಬಾರಿ ಮಂಗಳೂರು- ಭಾವನಗರ ರೈಲು ಸೇವೆಯನ್ನು ಪ್ರಾರಂಭಿಸಬೇಕೆಂದು ಸಂಸದರನ್ನು ಆಗ್ರಹಿಸಿದರು. ಪ್ರಸ್ತಾವಿತ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲನ್ನು ಆರಂಭಿಸುವಾಗ, ಈಗ ಬೆಂಗಳೂರು- ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಮಾರ್ಪಾಡು ಮಾಡದೆ ಹಾಗೂ ಅವುಗಳ ಓಡಾಟಕ್ಕೆ ವ್ಯತ್ಯಯವಾಗದಂತೆ ಹೊಸ ರೈಲಿನ ವೇಳಾಪಟ್ಟಿಯನ್ನು ರೂಪಿಸಬೇಕೆಂದು ಸಮಿತಿ ಆಗ್ರಹಿಸಿದರು. ಮಂಗಳೂರು ಸೆಂಟ್ರಲ್ ಮುಖಾಂತರ ಸಂಚರಿಸುತ್ತಿರುವ ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು- ಮುರುಡೇಶ್ವರ ರೈಲುಗಳ ಇಂದಿನ ಮಾರ್ಗ ಮತ್ತು ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಸಂಸದರಿಗೆ ವಿನಂತಿಸಿದರು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಹೊಸ ಸ್ಟೇಬ್ಲಿಂಗ್ ಲೈನ್ ಕಾಮಗಾರಿ ಹಾಗೂ ಮಂಗಳೂರು ಸೆಂಟ್ರಲ್-ಮಂಗಳೂರು ಜಂಕ್ಷನ್ ನಡುವೆ ಬಾಕಿ ಇರುವ 1.6ಕಿ ಮೀ ಹೊಸ ಜೋಡಿ ಹಳಿಗಳ ನಿರ್ಮಾಣದ ವಿಚಾರವನ್ನು ಸಂಸದರ ಗಮನಕ್ಕೆ ತಂದಾಗ, ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. *ವಿಶ್ವ ದರ್ಜೆಯ ನಿಲ್ದಾಣ ನಿರ್ಮಾಣ ಶೀಘ್ರ ಆರಂಭ: ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಪ್ರಸ್ತಾವಿತ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ವಿಶ್ವ ದರ್ಜೆ ಮಟ್ಟದ ನಿಲ್ದಾಣವಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Jan 2026 9:25 pm

ʼವಿಬಿ-ಜಿ ರಾಮ್ ಜಿʼ ಕಾಯ್ದೆ ವಿರುದ್ಧ ನ್ಯಾಯಾಲಯ, ಬೀದಿ-ಬೀದಿಯಲ್ಲಿ ಹೋರಾಟ : ಡಿ.ಕೆ.ಶಿವಕುಮಾರ್

ಬೆಂಗಳೂರು : ಕೇಂದ್ರ ಸರಕಾರದ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಕಾನೂನು ಹಾಗೂ ಬೀದಿಗಿಳಿದು ಹೋರಾಟ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ಜಾರಿ ಕಷ್ಟ. ಮನರೇಗಾ ಯೋಜನೆಯಲ್ಲಿ ಕಾಮಗಾರಿ ಆಯ್ಕೆ ಮಾಡುವ ಅಧಿಕಾರ ಪಂಚಾಯಿತಿಗಳ ಬಳಿ ಇತ್ತು. ಈಗ ದಿಲ್ಲಿಯಿಂದ ತೀರ್ಮಾನ ಆಗುತ್ತದೆ ಎಂದರು. ಶೇ.40ರಷ್ಟು ಅನುದಾನ ಭರಿಸಲು ಯಾವುದೇ ರಾಜ್ಯಗಳಿಂದ ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರಕಾರ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು. ರಾಜ್ಯಗಳ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಿದ್ದಾರೆ. ಇದರ ವಿರುದ್ಧ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪ್ರತಿ ಪಂಚಾಯತಿಯಲ್ಲಿ ಸಭೆ ನಡೆಸುತ್ತೇವೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇದು ಉದ್ಯೋಗ ಹಕ್ಕಿನ ವಿಚಾರ. ಜೀವನೋಪಾಯದ ಅಧಿಕಾರ ಮೊಟಕು ಸಹಿಸಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಯಾವುದೇ ಪಂಚಾಯಿತಿಯಾದರೂ ಇದನ್ನು ಅರಗಿಸಿಕೊಳ್ಳಲು ಆಗದು. ಎಲ್ಲಾ ಪಂಚಾಯಿತಿಯಲ್ಲಿ ಈ ಕಾಯ್ದೆ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಜೋಶಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸವೇ ಗೊತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಆರಂಭವಾದ ಪತ್ರಿಕೆ. ಇದು ದೇಶದ ಇತಿಹಾಸದ ಭಾಗವಾಗಿದೆ. ಪ್ರಹ್ಲಾದ್ ಜೋಶಿ ಅವರಾಗಲಿ, ಅವರ ಪಕ್ಷವಾಗಲಿ ಯಾವುದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿಲ್ಲ. ಅವರು, ಅವರ ಪಕ್ಷದವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಹೀಗಾಗಿ ಅವರಿಗೆ ಅರಿವಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷ’ -ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ವಾರ್ತಾ ಭಾರತಿ 8 Jan 2026 9:21 pm

ಉಡುಪಿ: ಜ.10ರಿಂದ ಪವರ್ ಫುಡ್ ಕಾರ್ನಿವಲ್

ಉಡುಪಿ, ಜ.8: ಉಡುಪಿಯ ಮಹಿಳಾ ಉದ್ಯಮಿಗಳ ಸಂಘಟನೆಯಾದ ‘ಪವರ್’ ವತಿಯಿಂದ ಪವರ್ ಫುಡ್ ಕಾರ್ನಿವಲ್ -ಆಹಾರ ಮೇಳ- ಜ.10 ಮತ್ತು 11ರಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ ನಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಹಾಗೂ ಫುಡ್ ಕಾರ್ನಿವಲ್‌ನ ಅಧ್ಯಕ್ಷೆಯಾದ ಪ್ರಿಯಾ ಎಸ್. ಕಾಮತ್ ತಿಳಿಸಿದ್ದಾರೆ. ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಹೊಸ ಪರಿಕಲ್ಪನೆ ಯೊಂದಿಗೆ ಪವರ್ ಫುಡ್ ಕಾರ್ನಿವಲ್‌ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಸ್ಥಳೀಯ ಆಹಾರ ಉದ್ಯಮಿಗಳು, ಮಹಿಳಾ ಆಹಾರ ಉದ್ಯಮಿಗಳು, ಹೊಸ ಜಿಲ್ಲೆಗಳ ಆಹಾರ ಉದ್ಯಮಿಗಳು ತಮ್ಮ ಪ್ರಾದೇಶಿಕ ಉತ್ಪನ್ನಗಳೊಂದಿಗೆ ಭಾಗವಹಿಸಲಿದ್ದಾರೆ ಎಂದರು. ಈ ಆಹಾರ ಮೇಳದಲ್ಲಿ 60ಕ್ಕೂ ಅಧಿಕ ಸ್ಟಾಲ್‌ಗಳಿರುತ್ತವೆ. ಸಸ್ಯಾಹಾರ ಹಾಗೂ ಮಾಂಸಾಹಾರಗಳೆರಡರಲ್ಲೂ 100ಕ್ಕೂ ಅಧಿಕ ವೈವಿಧ್ಯಮಯ ತಿಂಡಿಗಳು, ಉತ್ಪನ್ನಗಳು, ಚಾಟ್ಸ್‌ಗಳು, ಐಸ್‌ಕ್ರೀಮ್‌ಗಳು ಇಲ್ಲಿ ಲಭ್ಯವಾಗಲಿವೆ. ಇದು ಬೆಳಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆಯವೆರೆಗೆ ತೆರೆದಿರುತ್ತವೆ ಎಂದು ಕಾರ್ಯಕ್ರಮ ಸಂಯೋಜಕಿಯಾಗಿರುವ ರೇಣು ಜಯರಾಮ್ ತಿಳಿಸಿದರು. ಇದು ಕೇವಲ ಮಹಿಳಾ ಉದ್ಯಮಿಗಳಿಗೆ ಮಾತ್ರವಲ್ಲ. ಎಲ್ಲರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಜ.10ರಂದು ಬೆಳಗ್ಗೆ 11:30ಕ್ಕೆ ಫುಡ್ ಬ್ಲಾಗರ್ ಗಳು ಸೇರಿ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದ ರೇಣು ಜಯರಾಮ್ ತಿಳಿಸಿದರು. ಆಹಾರ ಮೇಳದ ಅಧಿಕೃತ ಸಭಾ ಕಾರ್ಯಕ್ರಮ ಜ.11ರ ಸಂಜೆ 5:30ಕ್ಕೆ ನಡೆಯಲಿದೆ. ಇದರಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ಯಶಪಾಲ್ ಸುವರ್ಣ, ಜಿಪಂ ಸಿಇಓ ಪ್ರತೀಕ್ ಬಾಯಲ್, ನಗರಸಭಾ ಪೌರಾಯುಕ್ತ ಮಹಂತೇಶ್ ಹಂಗರಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್, ಡಿಐಸಿಯ ನಾಗರಾಜ್ ನಾಯಕ್, ಉದ್ಯಮಿಗಳಾದ ಸಂಧ್ಯಾ ಕಾಮತ್, ಹರಿಪ್ರಸಾದ್ ರೈ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪವರ್‌ನ ಪದಾಧಿಕಾರಿಗಳಾದ ತೃಪ್ತಿ ನಾಯಕ್, ಪ್ರದರ್ಶನ ಸಂಯೋಜಕಿ ಶಾಲಿನಿ ಬಂಗೇರ, ಮಾರ್ಕೆಟಿಂಗ್ ಸಂಯೋಜಕಿ ರೇವತಿ ನಾಡಗೀರ್ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 9:20 pm

ಜ.9: ಶೀರೂರುಶ್ರೀಗಳ ಪುರಪ್ರವೇಶ: ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ

ಉಡುಪಿ, ಜ.8: ಜ.17 ಮತ್ತು 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿಯವರು ಪುರಪ್ರವೇಶ ನಿಮಿತ್ತ ಶೋಭಾಯಾತ್ರೆ ಮೆರವಣಿಗೆ ಕಾರ್ಯಕ್ರಮ ಜ.9ರಂದು ಕುಂಜಿಬೆಟ್ಟು ಕಡಿಯಾಳಿ ಬಳಿ ಅಪರಾಹ್ನ 3 ಗಂಟೆಗೆ ನಡೆಯಲಿರು ವುದರಿಂದ ನಗರದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಪುರ ಮೆರವಣಿಗೆಯು ಶಾರದಾ ಕಲ್ಯಾಣ ಮಂಟಪದಿಂದ ರಾ.ಹೆ. 169(ಎ) ಮಾರ್ಗವಾಗಿ ಶಿರಿಬೀಡು ಜಂಕ್ಷನ್ ತಲುಪಿ ಅಲ್ಲಿಂದ ಸರ್ವಿಸ್ ಬಸ್ ನಿಲ್ದಾಣ, ತ್ರಿವೇಣಿ ಜಂಕ್ಷನ್, ಕನಕದಾಸ ರಸ್ತೆ ಮಾರ್ಗವಾಗಿ ರಥಬೀದಿ ತಲುಪಲಿದೆ. ಆದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಪರಾಹ್ನ 1:00ರಿಂದ ಸಂಜೆ 7:00ಗಂಟೆಯವರೆಗೆ ಬದಲಿ ವ್ಯವಸ್ಥೆ ಮಾಡಿ ಆದೇಶ ಹೊರಡಿಸಲಾಗಿದೆ. ಮೆರವಣಿಗೆ ಮಾರ್ಗದಲ್ಲಿ ಅಪರಾಹ್ನ 1ರಿಂದ ಸಂಜೆ 7ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. *ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವ ವಾಹನಗಳು ಎಂಜಿಎಂ ಎದುರಿನ ಸುನಾಗ್ ಆಸ್ಪತ್ರೆ ಬಳಿ ಎಡ ತಿರುವು ಪಡೆದು ಸುದೀಂದ್ರ ಕಲ್ಯಾಣ ಮಂಟಪ ಮಾಗವಾಗಿ ಎಸ್.ಕೆ.ಎಂ. ಬಳಿ ಎಡ ತಿರುವು ಪಡೆದು ಬೀಡಿನಗುಡ್ಡೆ- ಚಿಟ್ಪಾಡಿ- ಅಮ್ಮಣ್ಣಿ ರಾಮಣ್ಣ ಹಾಲ್ ಮುಂದಿನ ರಸ್ತೆಯಿಂದ ಮಿಷನ್ ಕಾಂಪೌಂಡ್- ಜೋಡುಕಟ್ಟೆ ತಲುಪಿ ಉಡುಪಿ ನಗರಕ್ಕೆ ಆಗಮಿಸಬೇಕು. *ಶಿರಿಬೀಡು ಜಂಕ್ಷನ್‌ನಿಂದ ಕಿದಿಯೂರು ಹೊಟೇಲ್ ಮೂಲಕ ಸರ್ವಿಸ್ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯಲ್ಲಿ ಮೆರವಣಿಗೆ ಪ್ರವೇಶಿಸುವ ಸಮಯದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. *ಮಂಗಳೂರು ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಓಲ್ಡ್ ಡಯಾನ ಸರ್ಕಲ್‌ನಿಂದ ಮಿತ್ರ ಪ್ರಿಯಾ ಜಂಕ್ಷನ್ ಮೂಲಕ ಚಿತ್ತರಂಜನ್ ಸರ್ಕಲ್, ಸಂಸ್ಕೃತ ಕಾಲೇಜು ಜಂಕ್ಷನ್, ಜಾಮೀಯಾ ಮಸೀದಿ ಜಂಕ್ಷನ್‌ನಿಂದ ತಿರುವು ಪಡೆದು ಸರ್ವಿಸ್ ಬಸ್ ನಿಲ್ದಾಣ ತಲುಪಬೇಕು. ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Jan 2026 9:18 pm

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ | ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಪ್ರಸ್ತಾಪಿತ ‘ಮಲೆಯಾಳಿ ಭಾಷಾ ಮಸೂದೆ-2025’ ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆಕ್ಷೇಪಿಸಿದ್ದಾರೆ. ಗುರುವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ‘ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್‍ರನ್ನು ಆಗ್ರಹಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮಥ್ರ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಅವರು ಟೀಕಿಸಿದ್ದಾರೆ. ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇ.70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ‘ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು. ಕೇರಳ ಸರಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ’ -ಸಿದ್ದರಾಮಯ್ಯ, ಮುಖ್ಯಮಂತ್ರಿ

ವಾರ್ತಾ ಭಾರತಿ 8 Jan 2026 9:16 pm

ದುಬ್ಬನಶಶಿಯ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದುಬ್ಬನಶಶಿಯ ಕಡಲ ತೀರದಲ್ಲಿ ಸಮುದ್ರ ಕೊರತೆ ಪ್ರತಿಬಂಧಕ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಂಟ್ವಾಳ ತಾಲೂಕಿನ ಸರಪಾಡಿ ಮತ್ತು ಇತರೆ 95 ಜನವಸತಿಗಳಿಗೆ 16.70 ಕೋಟಿ ರೂ.,ಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದರು. 2024-2026ನೆ ಸಾಲಿನ ಪಿಎಂ-ಅಭಿಮ್ ಯೋಜನೆಯಡಿ ರಾಜ್ಯಾದಾಧ್ಯಂತ 196 ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು 12.74 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲು ಘಟನೋತ್ತರ ಅನುಮೋದನೆ ನೀಡಲಾಗಿದೆ. ಅದೇ ರೀತಿ, ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣ ಖರೀದಿಗೆ 4 ಕೋಟಿ ರೂ., ಅನುದಾನ ಮೀಸಲಿಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ವಾರ್ತಾ ಭಾರತಿ 8 Jan 2026 9:08 pm

ನೀಲಾವರ: ರಸ್ತೆ ಬದಿ ಪ್ರದೇಶ ಬೆಂಕಿಗಾಹುತಿ

ಬ್ರಹ್ಮಾವರ, ಜ.8: ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಹೋಗುವ ರಸ್ತೆ ಬದಿಯ ಹುಲ್ಲು ಪ್ರದೇಶದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಸಿಕೊಂಡಿದ್ದು, ಹಲವು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ನೀಲಾವರದ ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಬೆಂಕಿ ಕೆನ್ನಾಲಿಗೆ ಇಡೀ ಪರಿಸರಕ್ಕೆ ಹಬ್ಬಿತು. ಇದರಿಂದ ಪರಿಸರದಲ್ಲಿದ್ದ ಪೈನಾಪಲ್ ತೋಟ ಹಾಗೂ ಒಣ ಹುಲ್ಲು, ಗಿಡ ಗಂಟಿಗಳು ಸುಟ್ಟು ಕರಕಲಾಗಿವೆ. ಅದೇ ರೀತಿ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ವಾಹನ, ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಯಿತು. ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ.

ವಾರ್ತಾ ಭಾರತಿ 8 Jan 2026 9:07 pm

Explained- ಆ್ಯಶಸ್ ಬಳಿಕ WTC ಅಂಕಪಟ್ಟಿಯಲ್ಲಿ ಆಸೀಸ್ ನಾಗಾಲೋಟ; ಇನ್ನು ಟೀಂ ಇಂಡಿಯಾಗೆ ಸುಲಭವಿದೆಯೇ ಫೈನಲ್ ಟಿಕೆಟ್?

World Test Championship- ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವುದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಕ್ರಿಕೆಟ್ ಜನಕ ದೇಶವಾದ ಇಂಗ್ಲೆಂಡ್ 7ನೇ ಸ್ಥಾನಕ್ಕೆ ಕುಸಿದಿದ್ದರೆ, 6ನೇ ಸ್ಥಾನದಲ್ಲಿರುವ ಭಾರತ ಅಗ್ರ 2 ಸ್ಥಾನಕ್ಕೇರಲು ಭಾರೀ ಕಸರತ್ತು ನಡೆಸಬೇಕಿದೆ. ಭಾರತ ಈವರೆಗೆ ಆಡಿರುವುದು 9 ಪಂದ್ಯ, ಬಾಕಿ ಉಳಿದಿರುವ ಅಷ್ಟೇ ಪಂದ್ಯಗಳಲ್ಲಿ ಭಾರತ ತಂಡ ಫೈನಲ್ ಆಡಬೇಕಾದರೆ ಕನಿಷ್ಠ ಎಷ್ಟು ಗೆಲ್ಲಬೇಕು? ಇಲ್ಲಿದೆ ಸಂಪೂರ್ಣಲೆಕ್ಕಾಚಾರ.

ವಿಜಯ ಕರ್ನಾಟಕ 8 Jan 2026 9:06 pm

ಬೈಕ್ ಡಿಕ್ಕಿ: ಪಾದಚಾರಿ ಮೃತ್ಯು

ಪಡುಬಿದ್ರಿ, ಜ.8 ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಯೋವೃದ್ದರೊಬ್ಬರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಉಚ್ಚಿಲ ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಪಣಿಯೂರು ಸೆಂಟರ್ ನಿವಾಸಿ ಸದಾಶಿವ ಕೋಟ್ಯಾನ್(65) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದಾಗ ಬೈಕ್, ರಸ್ತೆ ದಾಟುತ್ತಿದ್ದ ಸದಾಶಿವ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಮೂಳೂರಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಿಂದ ಹೊಟೇಲಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 8 Jan 2026 9:04 pm

ಕಸಾಪದ ಕುರಿತು ವಾಸ್ತವಾಂಶ ವರದಿ ಸಲ್ಲಿಸುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಮಹೇಶ್ ಜೋಶಿ ಡಿ.31ರಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ತಿಳಿಸಿದ್ದಾರೆ. ಆದ್ದರಿಂದ ಕಸಾಪದ ಕುರಿತು ವಾಸ್ತವಾಂಶ ವರದಿ ಸಲ್ಲಿಸುವಂತೆ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರ ಸಚಿವಾಲಯ ತಿಳಿಸಿದೆ. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪತ್ರ ಬರೆದಿದ್ದು, ಮಹೇಶ್ ಜೋಶಿ ಹಾಗೂ ಕಸಾಪದ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1960ರ ಕಲಂ 25ರ ಅಡಿಯಲ್ಲಿ ವಿಚಾರಣೆ ನಡೆಸುತ್ತಿರುವ ವಿಚಾರಣಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರವು, ರಾಜಕೀಯ ಪ್ರೇರಿತ ಮತ್ತು ಪ್ರಭಾವಿ ದೂರುದಾರರ ಒತ್ತಡದಿಂದಾಗಿ ಈ ವಿಷಯದಲ್ಲಿ ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಹೇಶ್ ಜೋಶಿ ಅವರು ಆರೋಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಎಚ್.ಪಿ.ನಾಗರಾಜಯ್ಯ ಅವರ ಪ್ರಕರಣದಲ್ಲಿ ಮಾಡಿದಂತೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ಸಮಿತಿಯಿಂದ ವಿಚಾರಣೆಯನ್ನು ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ. ರಾಜ್ಯಪಾಲರ ನಿರ್ದೇಶನದ ಮೇರೆಗೆ ಸದರಿ ಅರ್ಜಿಯ ಬಗ್ಗೆ ವರದಿ ಕೋರಲು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡುತ್ತಿದ್ದೇನೆ. ಆದ್ದರಿಂದ, ಪರಿಶೀಲಿಸಿ, ಶೀಘ್ರವಾಗಿ ವಾಸ್ತವಾಂಶದ ವರದಿಯನ್ನು ಸಲ್ಲಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Jan 2026 9:01 pm

ಛತ್ರಪತಿ ಶಿವಾಜಿ ಬಗ್ಗೆ 20 ವರ್ಷಗಳ ಹಿಂದೆ ಪ್ರಕಟಿಸಿದ್ದ ಪುಸ್ತಕದ ಬಗ್ಗೆ ಈಗ ಕ್ಷಮಾಪಣೆ ಕೇಳಿದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ

ಮರಾಠಿಗರ ಹೆಮ್ಮೆಯ ಮಹಾರಾಜರಾದ ಛತ್ರಪತಿ ಶಿವಾಜಿಯವರ ಕುರಿತಂತೆ 20 ವರ್ಷಗಳ ಹಿಂದೆ, ಅಂದರೆ, 2003ರಲ್ಲಿ ತಾನು ಪ್ರಕಟಿಸಿದ್ದ ಪುಸ್ತಕವೊಂದರ ಬಗ್ಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಇಂಡಿಯಾ ಸಂಸ್ಥೆ ಸಾರ್ವಜನಿಕವಾಗಿ ಕ್ಷಮೆ ಕೋರಿದೆ. 2003ರಲ್ಲಿ ಪ್ರಕಟವಾಗಿದ್ದ ಶಿವಾಜಿ: ದ ಹಿಂದೂ ಕಿಂ ಇನ್ ಇಸ್ಲಾಮಿಕ್ ಇಂಡಿಯಾ ಎಂಬ ಪುಸ್ತಕ ಪ್ರಕಟಿಸಿದ್ದು ಅದರ ಕೆಲವು ಪುಟಗಳಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಉಲ್ಲೇಖಿಸಿತ್ತು ಎಂದು ಪ್ರಕರಣ ದಾಖಲಾಗಿತ್ತು. ಈಗ ಬಾಂಬೆ ಹೈಕೋರ್ಟ್ ಆದೇಶದ ಪ್ರಕಾರ ಆ ಸಂಸ್ಥೆಯು ಪ್ರಕಟಣೆಯನ್ನು ನೀಡಿದೆ.

ವಿಜಯ ಕರ್ನಾಟಕ 8 Jan 2026 9:01 pm

ರೈಲು ಢಿಕ್ಕಿ: ಯುವಕ ಮೃತ್ಯು

ಕುಂದಾಪುರ, ಜ.8: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿ ಎಂಬಲ್ಲಿ ಜ.8ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಹಟ್ಟಿಯಂಗಡಿಯ ಜನಾರ್ದನ(39) ಎಂದು ಗುರುತಿಸ ಲಾಗಿದೆ. ಬೆಂಗಳೂರಿನಲ್ಲಿ ಕಂಪೆನಿಯ ಕೆಲಸವನ್ನು ಮಾಡಿಕೊಂಡಿದ್ದ ಇವರು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ಹಟ್ಟಿಯಂಗಡಿ ಸ್ವೀಲ್ ಬ್ರಿಡ್ಜ್ ಸಮೀಪ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನಾರ್ದನ ಅವರಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್‌ಪ್ರೆಸ್ ರೈಲು ಆಕಸ್ಮಿಕವಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 8 Jan 2026 8:55 pm

‘ಕೋಗಿಲು ಬಡಾವಣೆ’ ಹಣ ಪಡೆದು ಅನಧಿಕೃತವಾಗಿ ನಿವೇಶನ ಹಂಚಿದ ಆರೋಪ : ಇಬ್ಬರ ಬಂಧನ

ಬೆಂಗಳೂರು : ಕೋಗಿಲು ಬಡಾವಣೆಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ನಿವಾಸಿಗಳಿಂದ ಹಣ ಪಡೆದು ಅನಧಿಕೃತವಾಗಿ ನಿವೇಶನ ಹಂಚಿರುವ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(ಬಿಎಸ್‍ಡಬ್ಲ್ಯೂಎಂಎಲ್)ನ ಇಂಜಿನಿಯರ್ ಸಂತೋಷ್‌ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಜಯ್ ಹಾಗೂ ವಾಸೀಂ ಬೇಗ್ ಎಂಬವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ರಾಬಿನ್ ಹಾಗೂ ಮುನಿ ಆಂಜಿನಪ್ಪ ಎಂಬವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಕಾರಿ ಜಾಗವನ್ನು ಅತಿಕ್ರಮಣ ಮಾಡುವುದಲ್ಲದೆ ನಕಲಿ ದಾಖಲಾತಿ ಸೃಷ್ಟಿಸಿ ಜನರಿಗೆ ನಿವೇಶನಗಳನ್ನು ಹಂಚಿ ಆರೋಪಿಗಳು ಹಣ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ನಿವೇಶನ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಪಡೆದು ಸರಕಾರಿ ಜಾಗದಲ್ಲಿ ನಿವೇಶನ ನೀಡಿದ್ದರು. ಇದುವರೆಗೆ ಎಷ್ಟು ಮಂದಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ? ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಕೋಗಿಲು ಬಡಾವಣೆ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಡಿ.20ರಂದು ತೆರವುಗೊಳಿಸಲಾಗಿತ್ತು. ಪರಿಶೀಲನೆ ವೇಳೆ ಕೆಲವರು ಜಾಗ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ಮೋಸ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ನಿವೇಶನ ಹಂಚುವ ಸಂಬಂಧ ಕೆಲವು ಜನರಿಗೆ ಕೆಲ ದಾಖಲಾತಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. ಹಣ ನೀಡಿ ವಂಚನೆಗೊಳಗಾದವರಿಗೆ ದೂರು ನೀಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 8 Jan 2026 8:55 pm

2025ರಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳ ನೋಂದಣಿಗೆ ಸೂಚನೆ

ಉಡುಪಿ, ಜ.8: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ 2025ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟ ಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ದಲ್ಲಿ ಪ್ರತೀ ಶೀರ್ಷಿಕೆಯ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ, ಜನವರಿ 31ರೊಳಗೆ ನೋಂದಣಿಮಾಡಿಸಿಕೊಳ್ಳಬೇಕು. ಹೀಗೆ ನೋಂದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಮೂಲಕ ಆಯ್ಕೆಗಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸ ಲಾಗುವುದಿಲ್ಲ. ಹೊರರಾಜ್ಯಗಳಲ್ಲಿ 2025ನೇ ಸಾಲಿನಲ್ಲಿ ಮುದ್ರಣಗೊಂಡು ಪ್ರಕಟ ವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾಷೆಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಕೇಂದ್ರ /ಆಯಾ ರಾಜ್ಯ ಸರ್ಕಾರ ದಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ, ನೋಂದಣಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ಮತ್ತು ಪುಸ್ತಕದ ಒಂದು ಪ್ರತಿಯನ್ನು ಜನವರಿ 31ರೊಳಗೆ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸಬೇಕು. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದು. ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಇಚ್ಛಿಸುವ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಯವರು ನಿಗದಿತ ಅವಧಿಯೊಳಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ನೋಂದಣಿ ಅಧಿನಿಯಮದಡಿ ನಿಯಮಾನುಸಾರ ಪುಸ್ತಕಗಳನ್ನು ಸಲ್ಲಿಸಬೇಕು. ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಅಥವಾ ಉಡುಪಿ ನಗರ ಕೇಂದ್ರ ಗ್ರಂಥಾಲಯ ಕಚೇರಿ ದೂ.ಸಂಖ್ಯೆ:0820-2523395 ಅನ್ನು ಸಂಪರ್ಕಿಸಬಹುದು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 8:46 pm

ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನಿರ್ಲಕ್ಷ್ಯ ಬೇಡ: ಮನು ಪಟೇಲ್

ರಾ. ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟನೆ

ವಾರ್ತಾ ಭಾರತಿ 8 Jan 2026 8:43 pm

ವೆನೆಝುವೆಲಾದಲ್ಲಿ ಟ್ರಂಪ್ ಕಾರ್ಯಾಚರಣೆ| ಅಮೆರಿಕಾದ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಸಂಸದರಿಂದ ಸಿದ್ದತೆ

ವಾಷಿಂಗ್ಟನ್, ಜ.8: ವೆನೆಝುವೆಲಾದಲ್ಲಿ ಟ್ರಂಪ್ ಅವರಿಂದ ಬಲದ ಬಳಕೆಯನ್ನು ಸೀಮಿತಗೊಳಿಸುವ ಉದ್ದೇಶದ ನಿರ್ಣಯವನ್ನು ಅಮೆರಿಕಾದ ಸಂಸತ್ತಿನಲ್ಲಿ ಮಂಡಿಸಲು ಕೆಲವು ಸಂಸದರು ಯೋಜಿಸುತ್ತಿರುವುದಾಗಿ ವರದಿಯಾಗಿದೆ. ವೆನೆಝುವೆಲಾ ಅಧ್ಯಕ್ಷ ಮಡುರೊ ಮತ್ತವರ ಪತ್ನಿಯನ್ನು ಸೆರೆಹಿಡಿಯುವ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿ ಟ್ರಂಪ್ ಆಡಳಿತವು ಸಂಸತ್ತಿನ ದಾರಿತಪ್ಪಿಸಿದೆ. ಆದ್ದರಿಂದ ಸಂಸತ್ತಿನ ಅನುಮೋದನೆ ಪಡೆಯದೆ ವೆನೆಝುವೆಲಾದಲ್ಲಿ ಮತ್ತೆ ಮಿಲಿಟರಿ ಕಾರ್ಯಾಚರಣೆ ನಡೆಸುವುದರಿಂದ ಅಧ್ಯಕ್ಷ ಟ್ರಂಪ್‍ರನ್ನು ತಡೆಯುವ ಉದ್ದೇಶದ ನಿರ್ಣಯವನ್ನು ಮಂಡಿಸುವುದಾಗಿ ರಿಪಬ್ಲಿಕನ್ ಸಂಸದ ರ್ಯಾಂಡ್ ಪಾಲ್ ಹೇಳಿದ್ದಾರೆ.

ವಾರ್ತಾ ಭಾರತಿ 8 Jan 2026 8:41 pm

ಹುಣಸಗಿಯಲ್ಲಿ ಜ.9ರಂದು ಪ್ರಥಮ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಹುಣಸಗಿ: ಪಟ್ಟಣದ ಯುಕೆಪಿ (UKP) ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ 'ಕೊಡೇಕಲ್ಲ ಬಸವೇಶ್ವರ ಪ್ರಧಾನ ವೇದಿಕೆ'ಯಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 5 ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ತಿಳಿಸಿದರು. ಶುಕ್ರವಾರ(ಜ.9) ಬೆಳಿಗ್ಗೆ ಸಮ್ಮೇಳನದ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ಪರಿಷತ್‌ ಧ್ವಜಾರೋಹಣದ ಬಳಿಕ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ವಿರೇಶ ಹಳ್ಳುರ ಅವರನ್ನು ಅಲಂಕೃತ ವಾಹನದಲ್ಲಿ ಕರೆದುಕೊಂಡು ಬರಲಾಗುತ್ತದೆ. ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ, ಕುದುರೆ ಕುಣಿತ, ಮೂರು ಹಲಗೆ ವಾದನ ಕಲಾತಂಡಗಳು, ಲೇಜಿಮು ಕುಣಿತ ಸೇರಿದಂತೆ ಇತರ ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ಅಲ್ಲದೇ ಮಹಿಳೆಯ ಪೂರ್ಣಕುಂಭ ಹಾಗೂ ಶಾಲಾ ಮಕ್ಕಳ ಆಕರ್ಷಕ ಮೆರವಣಿಗೆ ಇದೆ ಎಂದು ವಿವರಿಸಿದರು. ಹುಣಸಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶುಕ್ರವಾರ ಬೆಳಿಗ್ಗೆ ರಾಷ್ಟ್ರಧ್ವಜ ಹಾಗೂ ಪರಿಷತ್ ಧ್ವಜಾರೋಹಣದ ನಂತರ, ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ವಿರೇಶ ಹಳ್ಳೂರ ಅವರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಗುವುದು. ಈ ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ, ಕುದುರೆ ಕುಣಿತ, ಮೂರು ಹಲಗೆ ವಾದನ, ಲೇಜಿಮ್ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಶಾಲಾ ಮಕ್ಕಳ ಪೂರ್ಣಕುಂಭ ಹೊತ್ತ ಮೆರವಣಿಗೆ ಆಕರ್ಷಣೀಯವಾಗಿರಲಿದೆ. ಮೆರವಣಿಗೆಗೆ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಚಾಲನೆ ನೀಡಲಿದ್ದಾರೆ. ಸಮ್ಮೇಳನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಮರೇಶ ಯಾತಗಲ್ಲ ಉದ್ಘಾಟಿಸಲಿದ್ದು, ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಂಸದ ಜಿ. ಕುಮಾರ ನಾಯಕ ಅವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಿದ್ದಾರೆ. ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿ.ಇ. ಪಾಟೀಲ, ಚಂದ್ರಶೇಖರ ಪಾಟೀಲ, ಶಶೀಲ ನಮೋಶಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ನಾಯಕ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಸ್.ಪಿ. ದಯಾನಂದ, ವಿಠ್ಠಲ ಯಾದವ ಹಾಗೂ ಪದ್ಮಶ್ರೀ ಡಾ. ಕೆ. ಪದ್ದಯ್ಯ ಆಗಮಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಮೊದಲ ಗೋಷ್ಠಿಯಲ್ಲಿ ನಾಗಪ್ಪ ಅಡಿಕ್ಯಾಳ ಅವರು ಸಮ್ಮೇಳನಾಧ್ಯಕ್ಷ ವಿರೇಶ ಹಳ್ಳೂರ ಅವರ 'ಬದುಕು-ಬರಹ'ದ ಕುರಿತು ಮಾತನಾಡಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಭೀಮಾಶಂಕರ ಜೋಶಿ ಅವರು 'ಹುಣಸಗಿ ತಾಲ್ಲೂಕಿನ ಸಾಹಿತ್ಯ ಮತ್ತು ಸಂಸ್ಕೃತಿ' ಕುರಿತು ವಿಷಯ ಮಂಡಿಸಲಿದ್ದಾರೆ. ಸಿದ್ಧರಾಮ ಹೊನಕಲ್ಲ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವೆಂಕಟಗಿರಿ ದೇಶಪಾಂಡೆ ವಿವರಿಸಿದರು.

ವಾರ್ತಾ ಭಾರತಿ 8 Jan 2026 8:37 pm

ವೆನೆಝುವೆಲಾದ ತೈಲ ರಫ್ತು ಮೇಲೆ ನಿಯಂತ್ರಣ: ಟ್ರಂಪ್ ಸರಕಾರ ಘೋಷಣೆ

ವಾಷಿಂಗ್ಟನ್, ಜ.8: ಮುಂದಿನ ದಿನಗಳಲ್ಲಿ ವೆನೆಝುವೆಲಾದ ತೈಲದ ಮಾರಾಟವನ್ನು ನಿಯಂತ್ರಿಸಲು ಮತ್ತು ಆದಾಯವನ್ನು ಅಮೆರಿಕಾದ ಖಾತೆಗಳಲ್ಲಿ ಜಮೆಗೊಳಿಸಲು ಟ್ರಂಪ್ ಆಡಳಿತ ಯೋಜಿಸಿದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಹೇಳಿದ್ದು ವೆನೆಝುವೆಲಾದ ತೈಲ ಸಂಪನ್ಮೂಲಕ್ಕೆ ಸಂಬಂಧಿಸಿ ಅಮೆರಿಕಾದ ಕಾರ್ಯತಂತ್ರದ ಕುರಿತು ಸ್ಪಷ್ಟ ಸೂಚನೆ ನೀಡಿದ್ದಾರೆ. ವೆನೆಝುವೆಲಾದ ತೈಲ ಮಾರಾಟದ ಮೇಲೆ ಅಮೆರಿಕಾದ ದಿಗ್ಬಂಧನದ ಹಿನ್ನೆಲೆಯಲ್ಲಿ ಕಚ್ಛಾತೈಲಗಳು ಅಲ್ಲಿನ ಸಂಗ್ರಹಣೆಯಲ್ಲಿವೆ. ಆರಂಭದಲ್ಲಿ ಅದನ್ನು ತೆರವುಗೊಳಿಸಿ ಮಾರಾಟ ಮಾಡಬೇಕಾಗಿದೆ. ವೆನೆಝುವೆಲಾದಿಂದ ಬರುವ ಕಚ್ಛಾತೈಲಗಳನ್ನು ನಾವು ಮಾರುತ್ತೇವೆ. ನಂತರ ಅನಿರ್ದಿಷ್ಟವಾಗಿ ವೆನೆಝುವೆಲಾದ ತೈಲ ಉತ್ಪಾದನೆಯನ್ನು ನಾವು ಮಾರಾಟ ಮಾಡುತ್ತೇವೆ. ನಾವು ಯಾರೊಬ್ಬರ ಹಣವನ್ನೂ ಕದಿಯುತ್ತಿಲ್ಲ. ಜಾಗತಿಕ ಕಚ್ಛಾ ತೈಲ ಮಾರುಕಟ್ಟೆಯಲ್ಲಿ ವೆನೆಝುವೆಲಾದ ತೈಲ ಮಾರಾಟವನ್ನು ಪುನರಾರಂಭಿಸಲಿದ್ದೇವೆ. ವೆನೆಝುವೆಲಾದ ಹೆಸರಿನಲ್ಲಿ ಅಮೆರಿಕಾದಲ್ಲಿ ತೆರೆಯುವ ಖಾತೆಗಳಲ್ಲಿ ಹಣವನ್ನು ಜಮೆಗೊಳಿಸುತ್ತೇವೆ ಮತ್ತು ಈ ಹಣವನ್ನು ವೆನೆಝುವೆಲಾ ಜನತೆಯ ಪ್ರಯೋಜನಕ್ಕೆ ಬಳಸುತ್ತೇವೆ ಎಂದು ಕ್ರಿಸ್ ರೈಟ್ ಹೇಳಿದ್ದಾರೆ. ವೆನೆಝುವೆಲಾದ ತೈಲ ಮೂಲಸೌಕರ್ಯಗಳನ್ನು ಪುನರ್ನಿಮಿಸಲು ಮತ್ತು ಉತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಅಮೆರಿಕಾದ ಇಂಧನ ಕಂಪನಿಗಳಿಗೆ ಟ್ರಂಪ್ ಆಡಳಿತ ಒತ್ತಾಯಿಸುತ್ತಿರುವುದಾಗಿ ವರದಿಯಾಗಿದೆ. ಪ್ರಯತ್ನದ ಭಾಗವಾಗಿ ವೆನೆಝುವೆಲಾದ ತೈಲ ಕ್ಷೇತ್ರದ ಮೇಲಿನ ನಿರ್ಬಂಧಗಳನ್ನು ಅಮೆರಿಕಾ ಎಚ್ಚರಿಕೆ ವಹಿಸಿ ಹಿಂತೆಗೆದುಕೊಳ್ಳುತ್ತಿದೆ ಎಂದು ಇಂಧನ ಇಲಾಖೆಯ ಮೂಲಗಳು ಹೇಳಿವೆ. ವೆನೆಝುವೆಲಾ ಸುಮಾರು 50 ದಶಲಕ್ಷ ಬ್ಯಾರಲ್‍ಗಳಷ್ಟು (ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 2.8 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ) ತೈಲವನ್ನು ಅಮೆರಿಕಾಕ್ಕೆ ಮಾರಾಟ ಮಾಡಲು ಬಿಟ್ಟುಕೊಡುತ್ತದೆ ಎಂದು ಮಂಗಳವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ವೆನೆಝುವೆಲಾದ ಕಚ್ಛಾತೈಲದ ಮಾರಾಟ ಪ್ರಕ್ರಿಯೆಗೆ ಅಮೆರಿಕಾ ಈಗಾಗಲೇ ಚಾಲನೆ ನೀಡಿದ್ದು ಇದರಿಂದ ಬರುವ ಆದಾಯವನ್ನು ಅಮೆರಿಕಾದ ಖಜಾನೆ ಖಾತೆಯಲ್ಲಿ ಜಮೆಗೊಳಿಸಲಾಗುವುದು. ಈ ಕ್ರಮವು ವೆನೆಝುವೆಲಾ ಮತ್ತು ಅಮೆರಿಕಾ ಎರಡೂ ದೇಶಗಳ ಜನತೆಗೆ ಪ್ರಯೋಜನವಾಗಲಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಮೆರಿಕಾದ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್, ಕೊನೊಕೊಫಿಲಿಪ್ಸ್ ಮತ್ತಿತರ ಸಂಸ್ಥೆಗಳ ಸೊತ್ತುಗಳನ್ನು ಸುಮಾರು 20 ವರ್ಷಗಳ ಹಿಂದೆ ಮಡುರೋ ಅವರ ಪೂರ್ವಾಧಿಕಾರಿಗಳು ರಾಷ್ಟ್ರೀಕರಣಗೊಳಿಸಿದ್ದರು. ವೆನೆಝುವೆಲಾದ ತೈಲ ಮಾರಾಟದಿಂದ ಬರುವ ಆದಾಯದಲ್ಲಿ ಈ ಕಂಪನಿಗಳಿಗೆ ಪರಿಹಾರ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲೆವಿಟ್ `ಇದು ದೀರ್ಘಾವಧಿಯಲ್ಲಿ ಗಮನ ಹರಿಸಬೇಕಿರುವ ವಿಷಯವಾಗಿದೆ' ಎಂದರು. ಬೃಹತ್ ಕಚ್ಛಾತೈಲ ನಿಕ್ಷೇಪ ವಿಶ್ವದಲ್ಲಿ ಬೃಹತ್ ಕಚ್ಛಾತೈಲ ನಿಕ್ಷೇಪ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ವೆನೆಝುವೆಲಾ ಗುರುತಿಸಿಕೊಂಡಿದೆ. ಆದರೆ ಭ್ರಷ್ಟಾಚಾರ, ಹೂಡಿಕೆಯ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದರ ಉತ್ಪಾದನೆಯು ದಿನಕ್ಕೆ 10 ಲಕ್ಷ ಬ್ಯಾರೆಲ್‍ಗಿಂತ ಕಡಿಮೆಯಿದೆ. ಅತೀ ಶೀಘ್ರದಲ್ಲೇ ದಿನಕ್ಕೆ ಹಲವಾರು ಲಕ್ಷ ಬ್ಯಾರೆಲ್ ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕಾ ಉದ್ದೇಶಿಸಿದೆ.

ವಾರ್ತಾ ಭಾರತಿ 8 Jan 2026 8:36 pm

ವೆನೆಜುವೆಲಾ ತೈಲದ ಮೇಲೆ ಅನಿರ್ದಿಷ್ಟಾವಧಿ ನಿಯಂತ್ರಣ ಘೋಷಿಸಿದ ಅಮೆರಿಕ; ಆದಾಯ ಯುಎಸ್‌ ಖಜಾನೆಗೆ!

ಏನೆಂದು ನಾ ಹೇಳಲಿ.. ಮಾನವನ ಆಸೆಗೆ ಕೊನೆಯೆಲ್ಲಿ? ಎಂಬ ನಮ್ಮ ಅಣ್ಣಾವ್ರ ಹಾಡು ಸಾರ್ವಕಾಲಿಕ ಸತ್ಯ. ಇದಕ್ಕೆ ವೆನೆಜುವೆಲಾ ತೈಲ ರಫ್ತಿನ ಮೇಲೆ ಅಮೆರಿಕ ಅನಿರ್ದಿಷ್ಟಾವಧಿ ನಿಯಂತ್ರಣ ಹೇರಿರುವುದು ಸಾಕ್ಷಿ ಒದಗಿಸಿದೆ. ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿರುವ ಅಮೆರಿಕ ಈಗ ಆ ದೇಶದ ತೈಲ ರಫ್ತಿನ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ. ಅಲ್ಲದೇ ಈ ರಫ್ತಿನ ಲಾಭವನ್ನು ಅಮೆರಿಕ ತನ್ನ ಖಜಾನೆಗೆ ತುಂಬಿಸಿಕೊಳ್ಳಲಿದೆ. ಅಮೆರಿಕದ ಈ ನಿರ್ಧಾರ ಜಾಗತಿಕ ವಿರೋಧ ಎದುರಿಸುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 8 Jan 2026 8:35 pm

VB - G RAM G : ಕಾಯ್ದೆ ಜಾರಿಯ ಹಿಂದಿನ ಮೂಲ ಉದ್ದೇಶವನ್ನು ಬಹಿರಂಗ ಪಡಿಸಿದ ಕೇಂದ್ರ ಸರ್ಕಾರ

VB G Act : ಗರಿ ಗರಿ ಅಂಗಿ ಹಾಕಿದವರಿಗೆ ದುಡ್ಡು ಸಿಗದು, ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನುಮುಂದೆ ದುಡ್ಡು ಸಿಗುವುದಿಲ್ಲ ಎಂದು ಪ್ರಲ್ಹಾದ ಜೋಶಿ ಹೇಳಿದರು.

ವಿಜಯ ಕರ್ನಾಟಕ 8 Jan 2026 8:34 pm

ಜನಗಣತಿಯ ಮೊದಲ ಹಂತ| ಎಪ್ರಿಲ್‌ನಿಂದ ಸೆಪ್ಟೆಂಬರ್‌ರವರೆಗೆ ಮನೆಗಣತಿ

ಹೊಸದಿಲ್ಲಿ,ಜ.8: 2027ರಲ್ಲಿ ಭಾರತದ ಜನಗಣತಿಯನ್ನು ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಬುಧವಾರ ಇನ್ನೊಂದು ಹೆಜ್ಜೆಯನ್ನು ಇರಿಸಿದೆ. 2026ರ ಎಪ್ರಿಲ್ ಹಾಗೂ ಸೆಪ್ಟೆಂಬರ್ ನಡುವೆ ಮನೆಗಳ ಪಟ್ಟಿ ಮಾಡುವಿಕೆಗೆ ಚಾಲನೆ ನೀಡಲಿದ್ದು ತರುವಾಯ 2027ರಲ್ಲಿ ಜನಗಣತಿ ನಡೆಯಲಿದೆ. ಕೇಂದ್ರ ಸರಕಾರವು ಬುಧವಾರ ಹೊರಡಿಸಿದ ಔಪಚಾರಿಕ ಅಧಿಸೂಚನೆಯ ಪ್ರಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಸರಕಾರಗಳು 2026ರ ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಮನೆಗಳ ಪಟ್ಟಿ ಮಾಡುವಿಕೆ ಹಾಗೂ ಮನೆಗಣತಿಯನ್ನು ನಡೆಸಲಿದೆ. ಇದು ಜನಗಣತಿಯ ಮೊದಲ ಹಂತವಾಗಿದ್ದು ಮನೆಗಳು ಹಾಗೂ ಮೂಲಭೂತ ಸೌಕರ್ಯಗಳ ದಾಖಲೀಕರಣ ನಡೆಯಲಿದೆ. ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. 2025ರ ಜೂನ್ 16ರಂದು ಈ ಬಗ್ಗೆ ಕೇಂದ್ರ ಸರಕಾರವು ಗೆಝೆಟ್‌ನಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿದ್ದು, 2027ರ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿರುವುದಾಗಿ ತಿಳಿಸಿದೆ. ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಲಡಾಕ್ ಹಾಗೂ ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಹಿಮಚ್ಚಾದಿತ ಪ್ರದೇಶಗಳಲ್ಲಿ ಕೆಲವು ತಿಂಗಳುಗಳು ಮುಂಚಿತವಾಗಿ ಅಂದರೆ 2026ರ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಪ್ರತಿಯೊಂದು ಮನೆಯ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾತ್ಮುಕ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಮತ್ತಿತರ ವಿವರಗಳನ್ನು ಕಲೆಹಾಕಲಾಗುವುದು. 2027ರ ಜನಗಣತಿಗಾಗಿ ಕೇಂದ್ರ ಸರಕಾರವು ಬಜೆಟ್‌ನಲ್ಲಿ 11,718 ಕೋಟಿ ರೂ. ಅನುದಾನಕ್ಕೆ ತನ್ನ ಅನುಮೋದನೆ ನೀಡಿದೆ. ಜನಗಣತಿಯನ್ನು ಈ ಹಿಂದೆ 2011ರಲ್ಲಿ ನಡೆಸಲಾಗಿತ್ತು.

ವಾರ್ತಾ ಭಾರತಿ 8 Jan 2026 8:32 pm

ಹುಣಸಗಿ | ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಹುಣಸಗಿ: ಸೇವಾ ನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಮಾಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೊಡೇಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಬೋಧನೆ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳೂರ ಮಾತನಾಡಿ, ರಾಜ್ಯ ಸಂಘದ ನಿರ್ದೇಶನದಂತೆ ಇಂದು ತಾಲ್ಲೂಕಿನಾದ್ಯಂತ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ನಿಯಮವನ್ನು ಸಡಿಲಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುವುದರ ಜೊತೆಗೆ, ಸರ್ಕಾರವು ಹಾಲಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸೂಕ್ತ ಕಾನೂನು ತಿದ್ದುಪಡಿ ತರಬೇಕು. ಇದರೊಂದಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಗುತ್ತಿಗೆ ಆಧಾರದ ಶಿಕ್ಷಕರ ನೇಮಕಾತಿ ಕೈಬಿಟ್ಟು, ಕಾಯಂ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಾಜಿ ಮಲಂಗ್ ಬಿಜಲಿ, ಚನ್ನಯ್ಯ ವಸ್ತ್ರದ, ಬಸಪ್ಪ ದೊರಿ, ಓಂಕಾರ, ಗಿರಿಜಾ ಪಾಟೀಲ್, ನೀಲಮ್ಮ ಹಾವೇರಿ, ರಾಚಮ್ಮ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 8:26 pm

ದೇಶಾದ್ಯಂತ 450 ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮೋದನೆ

ಹೊಸದಿಲ್ಲಿ, ಜ.8: ಅರ್ಹ ವೈದ್ಯರುಗಳ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) 2025-26ನೇ ಸಾಲಿನ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿಯಾಗಿ 450 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ ಅನುಮೋದನೆಯನ್ನು ನೀಡಿದೆ. ದೇಶಾದ್ಯಂತ ವೈದ್ಯಕೀಯ ಕಾಲೇಜುಗಳು ಸಲ್ಲಿಸಿದ ಮನವಿಗಳನ್ನು ಪರಿಶೀಲನೆ ನಡೆಸಿದ ಬಳಿಕ ವೈದ್ಯಕೀಯ ಮೌಲ್ಯಮಾಪನ ಹಾಗೂ ರೇಟಿಂಗ್ ಮಂಡಳಿ (ಎಂಎಆರ್‌ಬಿ)ಯ ಮೊದಲ ಅನುಮೋದನಾ ಸಮಿತಿಯು ಈ ಕ್ರಮವನ್ನು ಕೈಗೊಂಡಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಸೆಕ್ಷನ್ 28(5)ರಡಿ ಪ್ರದತ್ತವಾದ ಅಧಿಕಾರದಡಿ ಆಯೋಗವು ಸ್ನಾತಕೋತ್ತರ ಸೀಟುಗಳ ಸಂಖ್ಯೆಯಲ್ಲಿ ಏರಿಕೆ ಮಾಡಿದೆ. ಜನರಲ್ ಮೆಡಿಸಿನ್, ರೇಡಿಯೊ ಡಯಾಗ್ನಸಿಸ್, ಚರ್ಮರೋಗಶಾಸ್ತ್ರ (ಡಿವಿಎಲ್), ಜನರಲ್ ಸರ್ಜರಿ, ಪ್ರಸೂತಿ ಹಾಗೂ ಸ್ತ್ರೀರೋಗ, ಶಿಶು ವೈದ್ಯಕೀಯ, ಮನೋರೋಗ, ನೇತ್ರ ಅಧ್ಯಯನ ಶಾಸ್ತ್ರ, ತುರ್ತು ವೈದ್ಯಶಾಸ್ತ್ರ ಹಾಗೂ ಅರಿವಳಿಕೆ ಶಾಸ್ತ್ರ ಸೇರಿದಂತೆ ಹಲವಾರು ಕ್ಲಿನಿಕಲ್ ಹಾಗೂ ನಾನ್-ಕ್ಲಿನಿಕಲ್ ಸ್ನಾತೆಕೋತ್ತರ ಅಧ್ಯಯನ ಕ್ಷೇತ್ರಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ವಾರ್ತಾ ಭಾರತಿ 8 Jan 2026 8:24 pm

ಸಿರುಗುಪ್ಪ | ಬಿ.ಎಂ. ಸೂಗೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಪೀರಮ್ಮ ಹೊನ್ನೂರು ಸಾಬ್ ಅವಿರೋಧ ಆಯ್ಕೆ

ಸಿರುಗುಪ್ಪ: ತಾಲ್ಲೂಕಿನ ಬಿ.ಎಂ. ಸೂಗೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪೀರಮ್ಮ ಹೊನ್ನೂರು ಸಾಬ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಥಳೀಯ ಶಾಸಕ ಬಿ.ಎಂ.ನಾಗರಾಜ್ ಅವರ ಆಪ್ತರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಎಂ.ಮಾರುತಿ ವರಪ್ರಸಾದ ರೆಡ್ಡಿ ಅವರ ನೇತೃತ್ವದಲ್ಲಿ, ಪೀರಮ್ಮ ಅವರು ನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯ ಸರ್ವ ಸದಸ್ಯರ ಒಮ್ಮತದ ಮೇರೆಗೆ ಇವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಚುನಾವಣಾ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಹಾಗೂ ಗ್ರಾಮ ಪಂಚಾಯತ್‌ ವಿಸ್ತರಣಾಧಿಕಾರಿ ವೀರನಗೌಡ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು. ಆಯ್ಕೆಯ ಬಳಿಕ ಚುನಾವಣಾ ಅಧಿಕಾರಿಗಳು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಇದೇ ವೇಳೆ ನೂತನ ಅಧ್ಯಕ್ಷೆ ಪೀರಮ್ಮ ಅವರು ಚುನಾವಣಾ ಅಧಿಕಾರಿಗಳು, ಪೊಲೀಸ್ ಇಲಾಖೆಯ ಎಎಸ್ಐ ವೆಂಕಟರಮಣ, ಸಿಬ್ಬಂದಿ ಚಿನ್ನಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪಿ. ಹುಸೇನಪ್ಪ ನಾಯಕ, ಸಿ. ಗಿರೀಶ್ ಗೌಡ, ಸಿ. ಚೆನ್ನ ಬಸವರೆಡ್ಡಿ, ಸಿ.ಎಚ್. ಕೇಶಪ್ಪ ನಾಯಕ್ ಸೇರಿದಂತೆ ಅನೇಕ ಮುಖಂಡರನ್ನು ಗೌರವಿಸಿದರು. ಕಾರ್ಯಕ್ರಮದ ನಂತರ ನೂತನ ಅಧ್ಯಕ್ಷರು ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂಭ್ರಮಾಚರಣೆಯಲ್ಲಿ ಬಿ.ಎಂ. ಸೂಗೂರು, ಇಟಿಗೆಹಾಳು, ಅಲಬನೂರು, ನಾಗರಹಾಳು, ವೆಂಕಟಾಪುರ ಹಾಗೂ ನಾಡಂಗ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಮತ್ತು ಪಂಚಾಯಿತಿಯ ಹಾಲಿ ಹಾಗೂ ಮಾಜಿ ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 8:16 pm

ಚತ್ತೀಸ್‌ಗಢದ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ವಿಸ್ತರಣೆಗೆ ಕೇಂದ್ರದ ಅಸ್ತು

ಹೊಸದಿಲ್ಲಿ,ಜ.8: ಚತ್ತೀಸ್‌ಗಡದ ಬೈಲಾದಿಲಾ ಮೀಸಲು ಅರಣ್ಯದ 874.924 ಹೆಕ್ಟೇರ್ ಪ್ರದೇಶದಲ್ಲಿ ಸರಕಾರಿ ಸ್ವಾಮ್ಯದ ಎನ್‌ಎಂಡಿಸಿಯು ಕಬ್ಬಿಣದ ಆದಿರಿನ ಗಣಿಗಾರಿಕೆಯನ್ನು ವಿಸ್ತರಿಸುವುದಕ್ಕಾಗಿ ಪರಿಸರ ಅನುಮೋದನೆ ( ಇಸಿ) ನೀಡುವಂತೆ ಕೇಂದ್ರ ಪರಿಸರ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ. ಬೈಲಾದಿಲಾ ಕಬ್ಬಿಣದ ಆದಿರು ಗಣಿಯ ನಿಕ್ಷೇಪ 11ರಲ್ಲಿ ಗಣಿಗಾರಿಕೆಯನ್ನು ನಡೆಸಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರ ಸಮಿತಿ (ಇಎಸಿ)ಯು ಅನುಮೋದನೆ ನೀಡಿದೆ. ಕಬ್ಬಿಣದ ಆದಿರಿನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕವಾಗಿ 11:30 ದಶಲಕ್ಷಟನ್‌ಗಳಿಂದ (ಎಂಟಿಪಿಎ) 14.50 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವ ಹಾಗೂ ತ್ಯಾಜ್ಯ ಉತ್ಖನನವನ್ನು 2.70 ಎಂಟಿಪಿಎನಿಂದ 15.39 ಎಂಟಿಪಿಎಗೆ ವಿಸ್ತರಿಸುವ ಉದ್ದೇಶದಿಂದ ಈ ಶಿಫಾರಸು ಮಾಡಲಾಗಿದೆ. ಪರ್ವತವಲಯದಲ್ಲಿರುವ ಬೈಲಾದಿಲಾ ಮೀಸಲು ಅರಣ್ಯ ಪ್ರದೇಶವು ಉನ್ನತ ದರ್ಜೆಯ ಕಬ್ಬಿಣ ಅದಿರಿಗೆ ಖ್ಯಾತವಾಗಿದೆ. ಈ ಪ್ರದೇಶವು 558.84 ದಶಲಕ್ಷ ಟನ್(ಎಂಟಿ) ಕಬ್ಬಿಣದ ಆದಿರನ್ನು ಒಳಗೊಂಡಿದೆ. ಎನ್‌ಎಂಡಿಸಿಯು ಈ ಹಿಂದೆಯೂ ಬೈಲಾದಿಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯ ವಿಸ್ತರಣೆಗಾಗಿ 2020 ಮಾರ್ಚ್‌ನಲ್ಲಿ ಕೇಂದ್ರ ಸರಕಾರದಿಂದ ಪಾರಿಸಾರಿಕ ಅನುಮೋದನೆಯನ್ನು ಪಡೆದಿದ್ದು, 17 ವರ್ಷಗಳವರೆಗೆ ಊರ್ಜಿತದಲ್ಲಿರಲಿದೆ ಹಾಗೂ 2037ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಎನ್‌ಎಂಡಿಸಿಯ ಗಣಿಗಾರಿಕೆಯ ವಿಸ್ತರಣೆಯ ಪ್ರಸ್ತಾವವು ಪಾರಿಸಾರಿಕವಾಗಿ ಅದರಲ್ಲೂ ವಿಶೇಷವಾಗಿ ಪುರಾತನ ಮರಗಳು ಹಾಗೂ ಸ್ಥಳೀಯ ಜಲಮೂಲಗಳ ಸುರಕ್ಷತೆಯ ಕುರಿತು ಕಳವಳಗಳಿಗೆ ಕಾರಣವಾಗಿದೆ. ಎನ್‌ಎಂಡಿಸಿಯ ಗಣಿಗಾರಿಕಾ ವಿಸ್ತರಣೆಗೆ ಅನುಮೋದನೆ ದೊರೆಯುವುದನ್ನು ನಿರೀಕ್ಷಿಸಿದ್ದ ಸ್ಥಳೀಯ ಯುವಜನರು ದಾಂತೆವಾಡ ಮತ್ತಿತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ವಾರ್ತಾ ಭಾರತಿ 8 Jan 2026 8:16 pm

ದಿಲ್ಲಿಯ ಮಸೀದಿ ನಿವೇಶನ ನೆಲಸಮಕ್ಕೆ ‘ಕರಾಳ’ ವಕ್ಫ್ ತಿದ್ದುಪಡಿ ಕಾಯ್ದೆಯೇ ಕಾರಣ: ಅಸಾದುದ್ದೀನ್ ಉವೈಸಿ ಆರೋಪ

ಛತ್ರಪತಿ ಸಾಂಭಾಜಿನಗರ (ಮಹಾರಾಷ್ಟ್ರ),ಜ.8: ದಿಲ್ಲಿಯ ತುರ್ಕ್‌ಮನ್‌ಗೇಟ್ ಸಮೀಪದಲ್ಲಿರುವ ವಕ್ಫ್ ಮಾಲಕತ್ವದ ಆಸ್ತಿಯ ಭಾಗವೊಂದನ್ನು ನೆಲಸಮಗೊಳಿಸಿರುವುದಕ್ಕೆ ಕರಾಳವಾದ ವಕ್ಫ್ ತಿದ್ದುಪಡಿ ಕಾಯ್ದೆಯೇ ಕಾರಣವೆಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್ ಉವೈಸಿ ಗುರುವಾರ ಆಪಾದಿಸಿದ್ದಾರೆ. ತುರ್ಕ್‌ಮ್ಯಾನ್ ಗೇಟ್ ಸಮೀಪದ ಮಸೀದಿಯ ಆಸ್ತಿಯನ್ನು ನೆಲಸಮಗೊಳಿಸಲಾಗಿದೆ. 1970ರ ಅಧಿಸೂಚನೆ ಪ್ರಕಾರ ಇದೊಂದು ವಕ್ಫ್ ಆಸ್ತಿಯಾಗಿದೆ. ಸಂಸತ್‌ನಲ್ಲಿ ವಕ್ಫ್ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ನಡೆದಿರುವ ಈ ನೆಲಸಮ ಅಭಿಯಾನವು ಕೇವಲ ಆರಂಭವಷ್ಟೇ ಆಗಿದೆ. ದೇಶದ ಆಗುಹೋಗುಗಳನ್ನು ಜನರು ಅರಿತುಕೊಳ್ಳಬೇಕು ಹಾಗೂ ಅವರು ತಮ್ಮ ಮತಗಳ ಆಡಳಿತರೂಢ ಪಕ್ಷಗಳಿಗೆ ಬಲವಾದ ಸಂದೇಶವನ್ನು ನೀಡಬೇಕು ಎಂದರು. 1970ರಲ್ಲಿ ಪ್ರಕಟಿಸಲಾದ ಗಝೆಟ್ ಅಧಿಸೂಚನೆಯಲ್ಲಿ ಇದೊಂದು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದ್ದರೂ ಹೈಕೋರ್ಟ್ ತಪ್ಪಾದ ಆದೇಶವನ್ನು ಹೊರಡಿಸಿದೆ ಎಂದವರು ಆಪಾದಿಸಿದರು. ಹೈಕೋರ್ಟ್ ಆದೇಶದ ಪುನರ್‌ಪರಿಶೀಲನೆ ಕೋರುವ ಅರ್ಜಿಯನ್ನು ಸಲ್ಲಿಸದೆ ಇರುವ ಮೂಲಕ ದಿಲ್ಲಿ ವಕ್ಫ್ ಮಂಡಳಿಯು ಸಮರ್ಪಕವಾದ ಕಾನೂನುಕ್ರಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದೀಗ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆಹೋಗಲಾಗುವುದು ಎಂದು ಉವೈಸಿ ತಿಳಿಸಿದರು. ಈ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕನಾಥ ಶಿಂಧೆ, ಅಜಿತ್ ಪವಾರ್ ಹಾಗೂ ಚಂದ್ರಬಾಬು ನಾಯ್ಡು ಅವರ ಬೆಂಬಲದೊಂದಿಗೆ ರೂಪಿಸಿದ್ದಾರೆ. ನಮ್ಮ ಮಸೀದಿಗಳು ಹಾಗೂ ಕಬರಸ್ತಾನಗಳನ್ನು ಕಸಿದುಕೊಳ್ಳಲು ಇದನ್ನು ಬಳಸಲಾಗುತ್ತಿದೆ. ದಿಲ್ಲಿಯಲ್ಲಿ ನಡೆದಿರುವುದು ಕೇವಲ ಆರಂಭವಷ್ಟೇ’’ಎಂದು ಉವೈಸಿ ತಿಳಿಸಿದರು. ಜನವರಿ 15ರಂದು ನಡೆಯಲಿರುವ ಮಹಾರಾಷ್ಟ್ರದ ನಗರಾಡಳಿತ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಅವರ ನೇತೃತ್ವದ ಪಕ್ಷಗಳನ್ನು ವಿರೋಧಿಸುವಂತೆ ಉವೈಸಿ ಮತದಾರರಿಗೆ ಕರೆ ನೀಡಿದರು. ಈ ಕಾಯ್ದೆಯ ಜಾರಿಗೆ ಕಾರಣರಾದವರ ವಿರುದ್ಧ ಜನತೆ ಮತ ಚಲಾಯಿಸಬೇಕು ಹಾಗೂ ತಮ್ಮ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕಾದರೆ ಅವರು ಎಜಂಐಎಂ ಜೊತೆಗೆ ನಿಲ್ಲಬೇಕೆಂದು ಉವೈಸಿ ಆಗ್ರಹಿಸಿದರು. ದಿಲ್ಲಿಯ ರಾಮಲೀಲಾ ಮೈದಾನ ಪ್ರದೇಶದಲ್ಲಿರುವ ಫೈಝೆ ಇಲಾಹಿ ಮಸೀದಿಯ ಸಮೀಪ ಮಂಗಳವಾರ ಹಾಗೂ ಬುಧವಾರದ ಮಧ್ಯ ರಾತ್ರಿ ನಡೆಸಲಾದ ಒತ್ತುವರಿ ವಿರೋಧಿ ಕಾರ್ಯಾಚರಣೆಯು ಪ್ರತಿಭಟನೆಗೆ ಕಾರಣವಾಯಿತು. . ತುರ್ಕ್‌ಮ್ಯಾನ್ ಗೇಟ್‌ನ ಎದುರಿಗಿರುವ ಮಸೀದಿಯನ್ನು ನೆಲಸಮಗೊಳಿಸಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಉದ್ರಿಕ್ತ ಜನರು ಪೊಲೀಸರೆಡೆಗೆ ಕಲ್ಲುತೂರಾಟ ನಡೆಸಿದ್ದರು.

ವಾರ್ತಾ ಭಾರತಿ 8 Jan 2026 8:05 pm

ಬೆಂಗಳೂರಿನ ಥಣಿಸಂದ್ರದಲ್ಲಿ ಏಕಾಏಕಿ 60ಕ್ಕೂ ಅಧಿಕ ಮನೆಗಳ ತೆರವು

ಕನಿಷ್ಠ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ಸಮಯ ನೀಡದೆ, ಮನೆಗಳ ನೆಲಸಮ : ಸಂತ್ರಸ್ತರ ಅಳಲು

ವಾರ್ತಾ ಭಾರತಿ 8 Jan 2026 8:05 pm

ವಿಜಯನಗರ ಜಿಲ್ಲೆಯಲ್ಲಿ ಅಕ್ಕ ಪಡೆ ಯೋಜನೆಗೆ ಜಿಲ್ಲಾಧಿಕಾರಿಯಿಂದ ಚಾಲನೆ

ಹೊಸಪೇಟೆ (ವಿಜಯನಗರ): ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ನೆರವು ಹಾಗೂ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಅಕ್ಕ ಪಡೆಗೆ ಚಾಲನೆ ನೀಡಲಾಯಿತು. ನಗರದ ಜಿಲ್ಲಾ ಆಡಳಿತ ಕಚೇರಿಯ ಮುಂಭಾಗದಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮಣ್ಣಿಕೇರಿ ಅವರು ಈ ವಿಶೇಷ ಪಡೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಯವರು, ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು 'ಅಕ್ಕ ಪಡೆ'ಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯದ ಸೇವೆಯ ಆಶಯದೊಂದಿಗೆ ಈ ಪಡೆ ರೂಪಿತವಾಗಿದ್ದು, ಸಮಾಜದಲ್ಲಿ ಸುರಕ್ಷತಾ ಘಟಕವಾಗಿ ಹಾಗೂ ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಮ್ಮದ್ ಅಕ್ರಂ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್.ಜಾಹ್ನವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 8:03 pm

ಕುಂದಾಪುರ| ಏಷ್ಯಾಕಪ್ ಟಿ-20 ಕ್ರಿಕೆಟ್‌ಗೆ ಕೆರಾಡಿಯ ಸನಿತ್ ಶೆಟ್ಟಿ ಆಯ್ಕೆ

ಭಾರತದ ಕಿವುಡರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಏಕೈಕ ಕನ್ನಡಿಗ

ವಾರ್ತಾ ಭಾರತಿ 8 Jan 2026 8:02 pm

ಜ.10ರಂದು ಹೊನ್ನಾಳದಲ್ಲಿ ಧಾರ್ಮಿಕ ಸಮ್ಮೇಳನ

ಬ್ರಹ್ಮಾವರ, ಜ.8: ಜಮೀಯತೆ ಅಹ್ಲೆ ಹದೀಸ್ ಹೊನ್ನಾಳ ಘಟಕದ ವತಿಯಿಂದ ಹಾಗೂ ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲಾ ಸಮಿತಿಯ ಅಧೀನದಲ್ಲಿ ಇಝಾಹಾರ್-ಎ-ಹಕ್ ಶೀರ್ಷಿಕೆಯಡಿ ಧಾರ್ಮಿಕ ಸಮ್ಮೇಳನವನ್ನು ಜ.10ರಂದು ಸಂಜೆ 4 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಹೊನ್ನಾಳದಲ್ಲಿ ಆಯೋಜಿಸಲಾಗಿದೆ. ಮುಖ್ಯ ಪ್ರವಚನಕಾರರಾಗಿ ಮುಂಬೈಯ ಶೇಖ್ ಡಾ.ಫಾರೂಕ್ ಅಬ್ದುಲ್ಲಾಹ್ ನಾರಾಯಣಪುರಿ ಮದನಿ, ಯು.ಪಿ.ಯ ಶೇಖ್ ಅಬ್ದುಲ್ ಗಫ್ಫಾರ್ ಸಲಫಿ, ರಾಯದುರ್ಗದ ಶೇಖ್ ವಸೀಮ್ ಜಾಮಿಯಿ ಮದನಿ, ಉಡುಪಿಯ ಶೇಖ್ ಮುಹಮ್ಮದ್ ಆಸೀಫ್ ಜಾಮಿಯಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲಾಧ್ಯಕ್ಷ ಅತೀಫ್ ಹುಸೈನ್ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಯುಎಇಯ ಉದ್ಯಮಿಗಳಾದ ಇಫ್ತೀಕಾರ್ ಅಹಮದ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 8 Jan 2026 7:51 pm

ಮುಂದುವರೆದ ಕೊರಗರ ಧರಣಿ: ಅಲ್ಪಸಂಖ್ಯಾತರ ವೇದಿಕೆ ಬೆಂಬಲ

ಉಡುಪಿ, ಜ.8: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 25ನೆ ದಿನವಾದ ಗುರುವಾರವೂ ಮುಂದುವರೆದಿದೆ. ಕೊರಗ ಸಮುದಾಯ ಈ ನ್ಯಾಯಯುತ ಬೇಡಿಕೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ನಿಯೋಗ ಧರಣಿ ಸ್ಥಳಕ್ಕೆ ಭೇಟಿ ನೀಡಿತು. ಕೊರಗ ಸಮುದಾಯ ಜನಸಂಖ್ಯೆ ದಿನದಿಂದ ದಿನಕ್ಕೆ ತಮ್ಮ ಸಮುದಾಯ ನಶಿಸಿ ಹೋಗುತ್ತಿದ್ದು, ಈಗ ಕೇವಲ 14,000 ಜನಸಂಖ್ಯೆ ಮಾತ್ರ ಉಳಿದಿದೆ. ಇದಕ್ಕೆ ಕಾರಣ ಆ ಸಮುದಾಯದ ವರಿಗೆ ಯಾವುದೇ ರೀತಿಯ ಉತ್ತಮ ದರ್ಜೆಯ ಉದ್ಯೋಗ ಇಲ್ಲದೆ ಇರುವುದು. ಪದವಿ ಮಾಡಿದವರು ಕೂಡ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದು, ಕುಡಿಯುವ ದುಶ್ಚಟಕ್ಕೆ ಬಲಿಯಾಗಿ 35-40 ವರ್ಷ ದಲ್ಲಿಯೇ ಅನಾರೋಗ್ಯಪೀಡಿತರಾಗಿ ಸಾಯುತ್ತಿರುವುದಾಗಿ ಕೊರಗ ಮುಖಂಡರು ನಿಯೋಗಕ್ಕೆ ತಿಳಿಸಿದರು. ಅದಕ್ಕಾಗಿ ಹಲವು ವರ್ಷಗಳಿಂದ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗ ನೇರ ನೇಮಕಾತಿಯಿಂದ ನೀಡುವ ಬೇಡಿಕೆ ಸಲ್ಲಿಸಿದ್ದೇವೆ. ಸರಕಾರದ ಹಿರಿಯ ನಾಯಕರು ಕೇವಲ ಮನವಿ ಪಡೆದು ಭರವಸೆ ಮಾತ್ರ ನೀಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಇಲ್ಲಿ ಧರಣಿ ಮಾಡುತ್ತಿದ್ದೇವೆ ಎಂದು ಮುಖಂಡರು ನಿಯೋಗಕ್ಕೆ ಮಾಹಿತಿ ನೀಡಿದರು. ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್ ಮಾತನಾಡಿ, ನಮ್ಮ ವೇದಿಕೆ ಸಂಪೂರ್ಣವಾಗಿ ತಮಗೆ ಬೆಂಬಲ ನೀಡುತ್ತದೆ ಮತ್ತು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾವು ಸಹ ಮನವಿ ನಿಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವೇದಿಕೆಯ ಕಾರ್ಯದರ್ಶಿ ಝಫರುಲ್ಲಾ ಟಿ.ಎಂ. ಹೂಡೆ, ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಹುಸೈನ್ ಕಟಪಾಡಿ, ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ, ಉಪಾಧ್ಯಕ್ಷೆ ಶಾಂತಿ ಪಿರೇರಾ, ಮೇರಿ ಡಿಸೋಜ, ಗ್ಲಾಡ್ನನ್ ಕರ್ಕಡ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 8 Jan 2026 7:49 pm

ಕಲಬುರಗಿ | ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯ ಬಂಧನ

ಕಲಬುರಗಿ: ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೋರ್ವನನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ ಅಶೋಕ್ ಯಮನಯ್ಯ ಗುತ್ತೇದಾರ್ (30) ಬಂಧಿತ ವ್ಯಕ್ತಿ. ಈತನಿಂದ ಒಂದು ನಾಡ ಪಿಸ್ತೂಲು ಹಾಗೂ ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಅಶೋಕ್, ರಾಜಸ್ಥಾನದಿಂದ ನಾಡ ಪಿಸ್ತೂಲನ್ನು ಅಕ್ರಮವಾಗಿ ತಂದು ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಈತ ಪಿಸ್ತೂಲ್ ಹಿಡಿದುಕೊಂಡು ತನ್ನ ಸ್ನೇಹಿತರ ಮುಂದೆ ತೋರಿಸಿದ್ದ ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 8 Jan 2026 7:48 pm

ಉಡುಪಿ: ಪಿಂಚಣಿಗಾಗಿ 2 ವರ್ಷಗಳಿಂದ ವೃದ್ಧರೊಬ್ಬರಿಂದ ಕಚೇರಿ ಅಲೆದಾಟ !

► ಇನ್ನೂ ಬಾರದ ಕುಟುಂಬ ಪಿಂಚಣಿ ► ಅಧಿಕಾರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ

ವಾರ್ತಾ ಭಾರತಿ 8 Jan 2026 7:45 pm

ಉತ್ತರ ಪ್ರದೇಶ|ನಿವೃತ್ತ ಸೈನಿಕನ ಮೇಲೆ ಬಿಜೆಪಿ ನಾಯಕರಿಂದ ಹಲ್ಲೆ ಆರೋಪ: ವೈರಲ್ ವೀಡಿಯೊಗೆ ತೀವ್ರ ಆಕ್ರೋಶ

ಲಕ್ನೋ, ಜ. 8: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿವೃತ್ತ ಸೈನಿಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ಶಕ್ತಿಯ ದುರುಪಯೋಗ ಹಾಗೂ ನಿವೃತ್ತ ಯೋಧರಿಗೆ ನೀಡಬೇಕಾದ ಗೌರವದ ಕುರಿತು ಈ ಘಟನೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಎಂದು newsable.asianetnews.com ವರದಿ ಮಾಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಬಿಜೆಪಿ ನಾಯಕರೆಂದು ಗುರುತಿಸಲಾದ ಚೇತನ್ ಬಿಶ್ತ್ ಹಾಗೂ ಪಕ್ಷದ ಮಾಜಿ ಮಂಡಲ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ಲಕ್ನೋ ನಗರದ ಕುರ್ಸಿ ರಸ್ತೆ ಪ್ರದೇಶದಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿದೆ. ಸ್ಥಳೀಯರ ಪ್ರಕಾರ, ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಪುರಾನ್ ಸಿಂಗ್ ಅಧಿಕಾರಿ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಇಬ್ಬರು ಆರೋಪಿಗಳು ನಿವೃತ್ತ ಯೋಧನನ್ನು ನೆಲಕ್ಕೆ ತಳ್ಳಿ ಪದೇಪದೇ ಹೊಡೆದಿದ್ದಾರೆ. ಘಟನೆ ನಡೆದ ವೇಳೆ ಸುತ್ತಮುತ್ತಲಿದ್ದ ನಿವಾಸಿಗಳು ಆಘಾತಗೊಂಡಿದ್ದು, ಹಲ್ಲೆ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ಒಮ್ಮೆ ದೇಶದ ಗಡಿಗಳನ್ನು ರಕ್ಷಿಸಿದ ನಿವೃತ್ತ ಸೈನಿಕನ ಮೇಲೆ ಈ ರೀತಿಯ ವರ್ತನೆ ನಡೆದಿರುವುದು “ಸಮವಸ್ತ್ರಕ್ಕೆ ಸಲ್ಲಬೇಕಾದ ಗೌರವಕ್ಕೆ ಧಕ್ಕೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರೆಡ್ಡಿಟ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಬಳಕೆದಾರರು ಈ ಘಟನೆಯನ್ನು “ಮುಕ್ತ ಗೂಂಡಾಗಿರಿ” ಎಂದು ಕರೆದಿದ್ದು, ಪ್ರಭಾವ ಮತ್ತು 'ಅಧಿಕಾರ' ಬಳಸಿಕೊಂಡು ಕಾನೂನನ್ನು ಲೆಕ್ಕಿಸದೆ ವರ್ತಿಸುವ ಪ್ರವೃತ್ತಿಯನ್ನು ಪ್ರಶ್ನಿಸಿದ್ದಾರೆ. ನಿವೃತ್ತ ಸೈನಿಕ ಸಂಘಟನೆಗಳು ಹಾಗೂ ಸಾರ್ವಜನಿಕರು, ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 8 Jan 2026 7:42 pm

Adani: ಅದಾನಿ ಕಂಪನಿಯ ₹1000 ಎನ್‌ಸಿಡಿ ಹಂಚಿಕೆ 45 ನಿಮಿಷದಲ್ಲಿ ಪೂರ್ಣ, ದಾಖಲೆ

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಕಂಪನಿಯು ಇತ್ತೀಚೆಗೆ ಘೋಷಿಸಿದಂತೆ ಸಾರ್ವಜನಿಕ ಪರಿವರ್ತನೀಯವಲ್ಲದೇಡಿಬೆಂಚರ್‌ಗಳ (NCD) ವಿತರಣೆಯನ್ನು ಆರಂಭಿಸಿತ್ತು. 1,000 ಕೋಟಿ ರೂಪಾಯಿ ಮೌಲ್ಯದ ಎನ್‌ಸಿಡಿ ವಿತರಣೆ ಆರಂಭಿಸಿದ ಕೇವಲ 45 ನಿಮಿಷಗಳಲ್ಲಿ ಮುಕ್ತಾಯಗೊಂಡವು. ತ್ವರಿತವಾಗಿ ಎನ್‌ಸಿಡಿ ಚಂದಾದಾರಿಕೆ ಪೂರ್ಣಗೊಂಡಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ವರದಿ ತಿಳಿಸಿದೆ. ಎನ್‌ಸಿಡಿ ವಿತರಣೆ ಆರಂಭದ ಮೊದಲ ಹತ್ತು ನಿಮಿಷದಲ್ಲಿ 500 ಕೋಟಿ ರೂಪಾಯಿಗಳ

ಒನ್ ಇ೦ಡಿಯ 8 Jan 2026 7:41 pm

ಕಲಬುರಗಿ | ಟಂಟಂ ಪಲ್ಟಿ : 7 ವಿದ್ಯಾರ್ಥಿಗಳು ಸೇರಿ 8 ಮಂದಿಗೆ ಗಾಯ

ಕಲಬುರಗಿ(ಕಾಳಗಿ): ಸರಕಾರಿ ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಟಂಟಂ ವಾಹನವೊಂದು ಪಲ್ಟಿಯಾಗಿ ಏಳು ವಿದ್ಯಾರ್ಥಿಗಳು ಸೇರಿ ಎಂಟು ಮಂದಿಗೆ ಗಾಯಗೊಂಡಿರುವ ಘಟನೆ ಕಾಳಗಿ ತಾಲೂಕಿನ ರೇವಗ್ಗಿ ಗುಡ್ಡದ ಕಮಾನ್ ಬಳಿ ಗುರುವಾರ ನಡೆದಿದೆ. ಘಟನೆಯಲ್ಲಿ ಹಲಚೇರಾ ಗ್ರಾಮದ ವೃದ್ಧೆ ಬಸಮ್ಮ ವಿಶ್ವನಾಥ ಸೇರಿ (65) ಹಾಗೂ ಬುಗಡಿತಾಂಡಾದ 9ನೇ ತರಗತಿ ಬಾಲಕಿ ಪ್ರಿಯಾಂಕಾ ರವಿ (15) ಎಂಬುವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗೋಗಿ ಗ್ರಾಮದ 1ನೇ ತರಗತಿ ಬಾಲಕಿ ಸಮೃದ್ಧಿ ವಿನೋದ (7), ಬುಗಡಿ ತಾಂಡಾದ ಪಿಯುಸಿ ವಿದ್ಯಾರ್ಥಿನಿಯರಾದ ಸುಮಿತ್ರಾ ತಾರಾಸಿಂಗ್ ಚವಾಣ್ (18), ಗೀತಾ ರವಿ ರಾಠೋಡ (18), 10ನೇ ತರಗತಿಯ ನಿಶಾ ರಮೇಶ ರಾಠೋಡ (16) ಮತ್ತು 9ನೇ ತರಗತಿಯ ನಿಖಿತಾ ಮೋಹನ ರಾಠೋಡ (15), ನಿಶಾ ರಾಮು ರಾಠೋಡ (15) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಅರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ‌ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬುಗಡಿ ತಾಂಡದಿಂದ ರೇವಗ್ಗಿ ಗುಡ್ಡದ ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳನ್ನು ಬಿಡಲು ಗುರುವಾರ ಬೆಳಗ್ಗೆ ಬರುತ್ತಿದ್ದ ಟಂಟಂ ವಾಹನದ ಮುಂದೆ ಬೆಕ್ಕು ಅಡ್ಡ ಬಂದಿದ್ದು, ಬೆಕ್ಕಿನ ಪ್ರಾಣ ಉಳಿಸಲು ಹೋಗಿ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದ ಕಮಾನ್ ಮುಂದೆ ಟಂಟಂ ಪಲ್ಟಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಬಿ.ಕೆ., ಎಎಸ್ಐ ಜಗನ್ನಾಥ, ಸಿಬ್ಬಂದಿ ಶ್ರೀಕಾಂತಯ್ಯಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದು, ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಾರ್ತಾ ಭಾರತಿ 8 Jan 2026 7:39 pm

ವಿಜಯನಗರ | ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳ್ ತಾಂಡ ಮತ್ತು ಮರಬ್ಬಿಹಾಳ್ ಗ್ರಾಮಗಳಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು AIDSO ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಕಾನೂನು ಬದ್ಧಗೊಳಿಸುವ ಮತ್ತು 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲ್ಪಡುವ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಆಗ್ರಹಿಸಿ  ಪ್ರತಿಭಟನೆ ನಡೆಸಿದರು. ವಿಜಯನಗರ ಜಿಲ್ಲಾ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರವಿಕಿರಣ್ ಜೆ.ಪಿ. ಮಾತನಾಡಿ, ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಎಂಬ ನೆಪದಲ್ಲಿ ಸರ್ಕಾರ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಮರಬ್ಬಿಹಾಳ್ ತಾಂಡ ಹಾಗೂ ಮರಬ್ಬಿಹಾಳ್ ಈ ಗ್ರಾಮಗಳಲ್ಲೇ ಶಾಲೆ ಇರುವುದರಿಂದ ಇಲ್ಲಿನ ಮಕ್ಕಳು ಓದುತ್ತಿದ್ದಾರೆ. ಈ ಶಾಲೆಗಳು ಉಳಿದರೆ ಮಾತ್ರ ಈ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ. ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ದೂರದ ಊರಿಗೆ ಹೋಗಿ ಓದಲು ಒತ್ತಾಯಿಸುವುದು ಖಂಡನೀಯ ಎಂದರು. ಶಿಕ್ಷಣ ಸಚಿವರು ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿದ್ದರೂ, ಖಾಸಗಿ ಶಾಲೆಗಳ ಪರವಾಗಿ ಕೆಲಸ ಮಾಡಲಾಗಿದೆ. 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 21 ಸಾವಿರಕ್ಕೂ ಹೆಚ್ಚು ಕೊಠಡಿಗಳು ದುರಸ್ತಿ ಆಗಬೇಕಿವೆ. ಮೊದಲು ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ AIDSO ಜಿಲ್ಲಾ ಜಂಟಿ ಕಾರ್ಯದರ್ಶಿಯಾದ ಆದಿತ್ಯ, SDMC ಅಧ್ಯಕ್ಷರಾದ ಹುಲುಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಲುಗಪ್ಪ, AIDYO ಸದಸ್ಯರಾದ ಶ್ರೀನಿವಾಸ್, ಊರಿನ ಗ್ರಾಮಸ್ಥರು, ಹಿರಿಯರು ಮತ್ತು ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು.

ವಾರ್ತಾ ಭಾರತಿ 8 Jan 2026 7:34 pm

ಭಟ್ಕಳ: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಭಟ್ಕಳ: ಮೂರು ದಶಕಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಗೀತಾ ನಗರ ನಿವಾಸಿ, ಮೂಲತಃ ಭಟ್ಕಳ ಸುಲ್ತಾನ್ ಸ್ಟ್ರೀಟ್‌ನ ಜಾವೇದ್ ಹಮೀದ್ ಖಾಜಿಯಾ (55) ಬಂಧಿತ ಆರೋಪಿ. ಈತ ಇತ್ತೀಚೆಗೆ ಥಾಣೆಯ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ 1996ರಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ (Arms Act) ಅಡಿಯಲ್ಲಿ (ಗುನ್ನಾ ನಂ. 74/1996) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿದ ನಂತರ ನ್ಯಾಯಾಲಯಕ್ಕೆ ಹಾಜರಾಗದೆ, 30 ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ವಿವರ ಆರೋಪಿಯ ಪತ್ತೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಖಚಿತ ಸುಳಿವುಗಳ ಆಧಾರದಲ್ಲಿ ಜನವರಿ 7, 2026ರಂದು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಜನವರಿ 8ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸ್ ತಂಡಕ್ಕೆ ಶ್ಲಾಘನೆ ಭಟ್ಕಳ ಶಹರ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಪಿಎಸ್ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದ ತಂಡದಲ್ಲಿ ಎಎಸ್ಐ ಅಂತೋನ್ ಫರ್ನಾಂಡಿಸ್, ಸಿಬ್ಬಂದಿಗಳಾದ ಗಿರೀಶ್ ಅಂಕೋಲೆಕರ್, ದೀಪಕ್ ಎಸ್. ನಾಯ್ಕ್ ಮತ್ತು ಮಹಾಂತೇಶ್ ಹಿರೇಮಠ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೀರ್ಘಕಾಲದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ವಾರ್ತಾ ಭಾರತಿ 8 Jan 2026 7:33 pm

MGNREGA ರದ್ದತಿ ವಿರೋಧಿಸಿ ಸಚಿವ ಸಂಪುಟ ಸಭೆಯಲ್ಲಿ 5 ನಿರ್ಣಯಗಳು; ಕೇಂದ್ರದ ವಿರುದ್ಧ ಸಮರಕ್ಕೆ ಸಿದ್ದತೆ!

ಮನರೇಗಾ ಕಾಯಿದೆ ರದ್ದತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ, ವಿಬಿ ಜಿ ರಾಮ್‌ ಜಿ ಕಾಯಿದೆಯನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ. ಅಲ್ಲದೇ ಮನರೇಗಾ ಕಾಯಿದೆ ರದ್ದತಿ ವಿರೋಧಿಸಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ವಿಬಿ ಜಿ ರಾಮ್‌ ಜಿ ಕಾಯಿದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ ಮಾಡಲಾಗಿದೆ. ವಿಬಿ ಜಿ ರಾಮ್‌ ಜಿ ಕಾಯಿದೆಯ ವಿರುದ್ಧ ರಾಜ್ಯ ಸರ್ಕಾರದ ಈ ನಿರ್ಧಾರ ಕುತೂಹಲ ಕೆರಳಿಸಿದೆ.

ವಿಜಯ ಕರ್ನಾಟಕ 8 Jan 2026 7:32 pm

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನೋಟಕ್ಕೆ ಬ್ರೇಕ್ ಹಾಕಿದ RCBಯ ವೆಂಕಟೇಶ್ ಅಯ್ಯರ್!

Karnataka Vs Madhya Pradesh- ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟಕ್ಕೆ ಮಧ್ಯಪ್ರದೇಶ ತಡೆ ಹಾಕಿದೆ. ಶಿವಾಂಗ್ ಕುಮಾರ್ ಅವರ ಮಾರಕ ದಾಳಿಯಿಂದ ಕರ್ನಾಟಕ ತಂಡ 207 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮಧ್ಯಪ್ರದೇಶ 7 ವಿಕೆಟ್ ಗಳಿಂದ ಸುಲಭವಾಗಿ ಗೆಲುವು ಸಾಧಿಸಿತು. ಮಾಯಾಂಕ್ ಅಗರ್ವಾಲ್ ತಂಡ ಈಗಾಗಲೇ 6 ಗೆಲುವುಗಳಿಂದ 24 ಅಂಕಗಳನ್ನು ಗಳಿಸಿದ್ದು ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ನಾಟೌಕ್ ಹಂತ ಪ್ರವೇಶಿಸಿದೆ.

ವಿಜಯ ಕರ್ನಾಟಕ 8 Jan 2026 7:22 pm

33 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 31 ಜೀವಾವಧಿ ಕೈದಿಗಳು ಹಾಗೂ ಇಬ್ಬರು ಶಿಕ್ಷಾ ಕೈದಿಗಳು ಸೇರಿದಂತೆ ಒಟ್ಟು 33 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ 33 ಕೈದಿಗಳನ್ನು ಬಿಡುಗಡೆಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದ್ದು, ಅದರಂತೆ ಶೀಘ್ರದಲ್ಲಿಯೇ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ‘ಅಕ್ಕ ಪಡೆ’ ಯೋಜನೆಯನ್ನು ಒಳಾಡಳಿತ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ 31 ಜಿಲ್ಲೆ ಹಾಗೂ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನು ಅರಿವು, ಜಾಗೃತಿ ಶಿಕ್ಷಣ, ತಕ್ಷಣದ ರಕ್ಷಣೆ ಮತ್ತು ನೆರವು ನೀಡುವ ಉದ್ದೇಶದಿಂದ ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಾರ್ತಾ ಭಾರತಿ 8 Jan 2026 7:20 pm

ಕಲಬುರಗಿ | ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ : ಸವಾರ ಮೃತ್ಯು

ಕಲಬುರಗಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಡಿ ಗ್ರೂಪ್ ನೌಕರರೊಬ್ಬರು ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಬಳಿ ನಡೆದಿದೆ. ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ, ನೆಲೋಗಿ ಗ್ರಾಮದ ನಿವಾಸಿ ಬಸವರಾಜ ಹೂಗಾರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಝಾಕೀರ್ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕೆತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಬಸವರಾಜ್ ಹೂಗಾ‌ರ್ ಅವರು ತಮ್ಮ ಕೆಲಸ ಮುಗಿಸಿ ಪ್ರತಿನಿತ್ಯದಂತೆ ಜೇವರ್ಗಿ ಪಟ್ಟಣದಿಂದ ಸ್ವಗ್ರಾಮ ನೆಲೋಗಿಗೆ ಹೊರಟಿದ್ದರು. ರಸ್ತೆ ಮಧ್ಯೆ ನಿಲ್ಲಿಸಿದ ಲಾರಿಗೆ ಢಿಕ್ಕಿಯಾಗಿ ಸ್ಥಳದಲ್ಲೇ ಗಂಭೀರ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 8 Jan 2026 7:13 pm

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ | ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ದೂರು; ಡಿಜಿಪಿಗೆ ಪತ್ರ

ಬೆಂಗಳೂರು : ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೆ, ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕೂಡ ಬರೆಯಲಾಗಿದೆ. ಬಿಜೆಪಿ ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಪೊಲೀಸ್ ಸಿಬ್ಬಂದಿ ಬಂಧಿಸುವ ವೇಳೆ ಆಕೆಯ ಬಟ್ಟೆ ಹರಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲಾಗಿದೆ. ಇಂತಹ ಘಟನೆಗಳು ಮಹಿಳೆಯ ಘನತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಲಿಂಗಾಧಾರಿತ ಹಿಂಸೆಯಿಂದ ರಕ್ಷಿಸುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಯೋಗವು ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಆಯೋಗವು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ಪತ್ರ ಬರೆದಿದ್ದು, ಪ್ರಕರಣದ ಕುರಿತು ಎಫ್‍ಐಆರ್ ದಾಖಲಾಗಿರದಿದ್ದಲ್ಲಿ ಕೂಡಲೇ ದಾಖಲಿಸಬೇಕು. ಲಭ್ಯವಿರುವ ವಿಡಿಯೋ ಸಾಕ್ಷ್ಯಗಳ ಪರಿಶೀಲನೆ ಸೇರಿದಂತೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು. ದುಷ್ಕೃತ್ಯ ನಡೆದಿರುವುದು ಸಾಬೀತಾದಲ್ಲಿ, ಸಂಬಂಧಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತೆಗೆ ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪುನರ್ವಸತಿ ಹಾಗೂ ಕಾನೂನಿನ ಪ್ರಕಾರ ಪರಿಹಾರ ದೊರಕುವಂತೆ ಖಚಿತಪಡಿಸಬೇಕು ಎಂದು ಪ್ರಕಟನೆಯಲ್ಲಿ ಒತ್ತಾಯಿಸಿದೆ. ಐದು ದಿನದೊಳಗೆ ವರದಿ ಸಲ್ಲಿಸಲು ಸೂಚನೆ: ಈ ಪ್ರಕರಣದ ಕುರಿತು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಐದು ದಿನಗಳೊಳಗೆ ವಿವರವಾದ ವರದಿಯನ್ನು ಸಲ್ಲಿಸಬೇಕೆಂದು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ.

ವಾರ್ತಾ ಭಾರತಿ 8 Jan 2026 7:11 pm

ಲಿವಿನ್ ಅಪ್ಪ, ಪತಂಗದಂಥ ಅಮ್ಮ, ಮಗನ ಬದುಕು ಅಯೋಮಯ: ಡಾ ರೂಪಾ ರಾವ್ ಬರಹ

ಬೆಂಗಳೂರು: ಮನುಷ್ಯ ಹುಟ್ಟಿನೊಂದಿಗೆ ಪೋಷಕರ ಜೊತೆ ಬೆಳೆಯುತ್ತಾನೆ. ಹೆತ್ತವರು, ಕುಟುಂಬಸ್ಥರಿಂದ ಸಂಸ್ಕಾರ ಕಲಿಯುತ್ತಾನೆ. ಇದು ಸಮಾಜ, ಸಂಬಂಧಗಳ ಮಹತ್ವ ತಿಳಿದು ಬದುಕು ಕಟ್ಟಿಕೊಳ್ಳಲು ಪೂರಕವಾಗುತ್ತದೆ. ಆದರೆ ಕೆಲವೊಂದು ಸಂಬಂಧಗಳಲ್ಲಿ ಹೆತ್ತವರು ಮಕ್ಕಳನ್ನು ನಡು ನೀರಲ್ಲಿ ಕೈ ಬಿಟ್ಟು ಬಿಡುತ್ತಾರೆ. ಅಪ್ಪ, ಅಮ್ಮ ಸಂಸ್ಕಾರ ರಹಿತರಾದರೆ ಅಂತವರ ಮಕ್ಕಳಾಗಿ ಹುಟ್ಟಿದ ತಪ್ಪಿಗೆ ಅವರು ಪಡಬಾರದ ಪಾಡು ಪಡುತ್ತಾರೆ. ಸಂಬಂಧ,

ಒನ್ ಇ೦ಡಿಯ 8 Jan 2026 7:08 pm

ಕಂಪ್ಲಿ | ಎನ್‌ಪಿಎಸ್ ರದ್ದು, ಒಪಿಎಸ್ ಮರುಜಾರಿಗೆ ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ಕಂಪ್ಲಿ : ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಗುರುವಾರ ಶಾಲೆಗಳಲ್ಲಿ ಕಪ್ಪುಪಟ್ಟಿ ಧರಿಸಿ ಪಾಠ ಬೋಧನೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪಟ್ಟಣದ ಸತ್ಯನಾರಾಯಣಪೇಟೆಯ ಟಿ.ಎಲ್.ಸಿ ಕೇಂದ್ರದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸೇವಾನಿರತ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್ ಆದೇಶ ಶಿಕ್ಷಕರಿಗೆ ತೀವ್ರ ನೋವುಂಟು ಮಾಡಿದೆ. ಈ ಕುರಿತು ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು. ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಮಾಡಬಾರದು ಎಂದು ಆಗ್ರಹಿಸಿದರು. ಗುತ್ತಿಗೆ ಆಧಾರದ ನೇಮಕಾತಿಗಳನ್ನು ಕೈಬಿಟ್ಟು ಕಾಯಂ ನೇಮಕಾತಿಗೆ ಆದ್ಯತೆ ನೀಡಬೇಕು. ದೇಶದ ಎಲ್ಲ ಶಿಕ್ಷಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೇಂದ್ರ ಸರ್ಕಾರದ ವೇತನ ಮಾದರಿಯನ್ನು ರಾಜ್ಯದ ಶಿಕ್ಷಕರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿದರು. ಅಖಿಲ ಭಾರತ ಶಿಕ್ಷಕರ ಸಂಘಟನೆಗಳು ಹಾಗೂ ರಾಜ್ಯ–ಜಿಲ್ಲಾ ಜಂಟಿ ಕ್ರಿಯಾ ಸಮಿತಿಗಳ ಸೂಚನೆಯಂತೆ ರಾಜ್ಯದಾದ್ಯಂತ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಕಪ್ಪುಪಟ್ಟಿ ಧರಿಸಿ ಶಾಲೆಗೆ ಹಾಜರಾಗಿ ಪಾಠ ಬೋಧನೆ ಮಾಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸುನಿತಾ ಪೂಜಾರ, ಉಪಾಧ್ಯಕ್ಷೆ ನಾಗಮ್ಮ, ಜಿಲ್ಲಾ ನಾಮನಿರ್ದೇಶಿತ ಸದಸ್ಯ ಚಂದ್ರಶೇಖರ, ಶಿಕ್ಷಣ ಸಂಯೋಜಕ ರೇವಣ್ಣ, ಸಿಆರ್ಪಿಗಳಾದ ಭೂಮೇಶ, ಕರುಣಾಕರ್ ಆಚಾರ್, ರೇಣುಕಾರಾಧ್ಯ ಸೇರಿದಂತೆ ಶಿಕ್ಷಕರಾದ ಭವ್ಯ, ಪಂಪಯ್ಯ, ವೀರಕುಮಾರ್, ಖಲೀಲ್, ಸಂಗನಗೌಡ, ಹನುಮನಗೌಡ, ಮೂರ್ತಿ, ವಿರೂಪಾಕ್ಷಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಮ್ಮಿಗನೂರಿನಲ್ಲಿ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ಪಾಠ ಬೋಧನೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಬಿ.ಎಸ್. ಸದ್ದುಜಾತಪ್ಪ ಹಾಗೂ ಶಿಕ್ಷಕರಾದ ಎಸ್. ರಾಮಪ್ಪ, ಮಂಜುನಾಥ, ದೇವರಾಜ್, ಲೋಕೇಶ್, ಸುಧಾ, ಪ್ರಮೀಳಾ, ರಜಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ವೇಳೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಮ್ಮಿಗನೂರಿನಲ್ಲಿ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ಪಾಠ ಬೋಧನೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಬಿ.ಎಸ್. ಸದ್ದುಜಾತಪ್ಪ ಹಾಗೂ ಶಿಕ್ಷಕರಾದ ಎಸ್. ರಾಮಪ್ಪ, ಮಂಜುನಾಥ, ದೇವರಾಜ್, ಲೋಕೇಶ್, ಸುಧಾ, ಪ್ರಮೀಳಾ, ರಜಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು.

ವಾರ್ತಾ ಭಾರತಿ 8 Jan 2026 7:07 pm

ಪಂಜಾಬ್ ನ ಕಬಡ್ಡಿ ಆಟಗಾರರ ಹತ್ಯೆ; ಆಟದಲ್ಲಿಯೂ ಗ್ಯಾಂಗ್ ವಾರ್, ಬೆಟ್ಟಿಂಗ್ ದಂಧೆಗಳದ್ದೇ ಪ್ರಾಬಲ್ಯ!

ದಶಕಗಳಿಂದ ಕಬಡ್ಡಿ ಆಟ ಪಂಜಾಬ್‌ನ ಗ್ರಾಮೀಣ ಜೀವನದ ಪ್ರಮುಖ ಭಾಗವಾಗಿದೆ. ಪಂಜಾಬ್ ನಲ್ಲಿ ಧಾರ್ಮಿಕ ಜಾತ್ರೆಗಳು ಮತ್ತು ಹಳ್ಳಿಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕಬಡ್ಡಿ ಅವಿಭಾಜ್ಯ ಅಂಗವಾಗಿದೆ. ಕಳೆದ ತಿಂಗಳು ಮೊಹಾಲಿಯಲ್ಲಿ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಕಬಡ್ಡಿ ಆಟಗಾರ ಕನ್ವರ್ ದಿಗ್ವಿಜಯ್ ಸಿಂಗ್ (ಅಲಿಯಾಸ್ ರಾಣಾ ಬಾಲಚೌರಿಯಾ) , 2026 ಜನವರಿ 5ರಂದು ಮಾಜಿ ಕಬಡ್ಡಿ ಆಟಗಾರ ಗಗನ್‌ದೀಪ್ ಸಿಂಗ್ ಹತ್ಯೆ ನಡೆದಿದೆ. ಇಲ್ಲಿ ಕಬಡ್ಡಿ ಈಗ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಇದು ವ್ಯವಹಾರವಾಗಿದ್ದು ಹಣ, ಬೆಟ್ಟಿಂಗ್ ಸಿಂಡಿಕೇಟ್‌ಗಳು, ಪ್ರತಿಸ್ಪರ್ಧಿ ಒಕ್ಕೂಟಗಳು ಮತ್ತು ಗ್ಯಾಂಗ್ ಸ್ಟರ್ ಎಲ್ಲರೂ ಇದರಲ್ಲಿ ಪಾಲನ್ನು ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಐದು ಕಬಡ್ಡಿ ಆಟಗಾರರು ಮತ್ತು ಪ್ರವರ್ತಕರನ್ನು ಹತ್ಯೆ ಮಾಡಲಾಗಿದೆ. ಇದು ಸಾಂಪ್ರದಾಯಿಕ ಕ್ರೀಡೆಯು ಗ್ಯಾಂಗ್ ಪೈಪೋಟಿ, ಹಣ ಬಲ ಮತ್ತು ಸಂಘಟಿತ ಅಪರಾಧಗಳಲ್ಲಿ ಹೇಗೆ ಆಳವಾಗಿ ಸಿಲುಕಿಕೊಂಡಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ► ಬೆಳೆಯುತ್ತಿರುವ ಉದ್ಯಮವಾಗಿ ಪರಿವರ್ತನೆ 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದಲ್ಲಿ ಸಂಘಟಕರು ಸಾಂಪ್ರದಾಯಿಕ ಬಹುಮಾನಗಳ ಬದಲಿಗೆ ಲಕ್ಷಾಂತರ ರೂಪಾಯಿಗಳ ನಗದು ಬಹುಮಾನಗಳನ್ನು ನೀಡಲು ಪ್ರಾರಂಭಿಸಿದರು. ಇದು ಕಡಿಮೆ ಉದ್ಯೋಗ ಆಯ್ಕೆಗಳನ್ನು ಹೊಂದಿದ್ದ ರಾಜ್ಯದ ಗ್ರಾಮೀಣ ಯುವಕರಿಗೆ ಹೊಸ ಅವಕಾಶವನ್ನು ಒದಗಿಸಿತು. ಕಬಡ್ಡಿ ಅವರಿಗೆ ತ್ವರಿತವಾಗಿ ಹಣ ಗಳಿಸುವ ಮಾರ್ಗವಾಗಿ ಕಾಣಿಸಿತು. ಈ ಬದಲಾವಣೆಯನ್ನು ಬೆಂಬಲಿಸಲು ಸ್ಥಳೀಯ ಉದ್ಯಮಿಗಳು, ಸಾಗಣೆದಾರರು, ರಿಯಲ್ ಎಸ್ಟೇಟ್ ಆಟಗಾರರು ಮುಂತಾದ ಪ್ರಾಯೋಜಕರು ವೈಯಕ್ತಿಕ ತಂಡಗಳನ್ನು ಬೆಂಬಲಿಸಲು ಪ್ರಾರಂಭಿಸಿದರು. ಡೋಬಾದಲ್ಲಿ ವಿಶೇಷವಾಗಿ ಎನ್‌ಆರ್‌ಐಗಳು ನಡೆಸುವ ಪಂದ್ಯಾವಳಿಗಳು ಕ್ರೀಡೆ ರೀತಿಯನ್ನೇ ಬದಲಾಯಿಸಿದವು. 2000 ರ ದಶಕದ ಆರಂಭದಲ್ಲಿ ಎನ್‌ಆರ್‌ಐಗಳು ಕಬಡ್ಡಿಗೆ ದೊಡ್ಡ ಮೊತ್ತವನ್ನೇ ಸುರಿದರು. 2013-14ರಲ್ಲಿ ಜಗದೀಶ್ ಭೋಲಾ ಮಾದಕವಸ್ತು ಜಾಲದಿಂದಾಗಿ ಸ್ವಲ್ಪ ಸಮಯದ ವಿರಾಮದ ನಂತರ ಹಲವಾರು ಎನ್‌ಆರ್‌ಐ ಕಬಡ್ಡಿ ಪ್ರವರ್ತಕರು, ಮಾಜಿ ಆಟಗಾರರು ಅಥವಾ ಪಂದ್ಯಾವಳಿ ಸಂಘಟಕರ ಮೇಲೆ ಆರೋಪ ಹೊರಿಸಲಾಯಿತು. ಆದರೆ ಹಣ ಬೇರೆ ಬೇರೆ ಮಾರ್ಗಗಳ ಮೂಲಕ ಹರಿದು ಬಂತು ಎಂದು ಗುರ್ಮೀತ್ ಚೌಹಾಣ್ ಡಿಐಜಿ (ಗ್ಯಾಂಗ್‌ಸ್ಟರ್ ವಿರೋಧಿ ಕಾರ್ಯಪಡೆ) ಹೇಳಿದ್ದಾರೆ . ಮುಂದಿನ ವರ್ಷಗಳಲ್ಲಿ ಈ ಕ್ರೀಡೆಯು ಇನ್ನಷ್ಟು ಲಾಭದಾಯಕವಾಯಿತು. ಇಲ್ಲಿ ಬಹುಮಾನದ ಹಣದ ಜೊತೆಗೆ ಟ್ರ್ಯಾಕ್ಟರ್‌ಗಳು, ಕಂಬೈನ್ ಹಾರ್ವೆಸ್ಟರ್‌ಗಳು ಮತ್ತು ರಾಯಲ್ ಎನ್‌ಫೀಲ್ಡ್ ಮೋಟಾರ್‌ಬೈಕ್‌ಗಳಂತಹ ವಾಹನಗಳನ್ನು ನೀಡಲಾಗುತ್ತಿದೆ. ಬಹಳಷ್ಟು ಟ್ರ್ಯಾಕ್ಟರ್ ಕಂಪನಿಗಳು ಕಾರ್ಯಕ್ರಮಗಳು ಮತ್ತು ಬಹುಮಾನಗಳನ್ನು ಪ್ರಾಯೋಜಿಸುವುದನ್ನು ನೀವು ನೋಡಬಹುದು. ಅವರೆಲ್ಲರೂ ಗ್ರಾಮೀಣ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಉತ್ತಮ ಆಟಗಾರರಿಗೆ ಟ್ರ್ಯಾಕ್ಟರ್‌ಗಳು, ಎಸ್‌ಯುವಿಗಳನ್ನು ನೀಡಲಾಗುತ್ತದೆ. ಇದು ಬಹಳ ಸಮಯದಿಂದ ನಡೆಯುತ್ತಿದೆ ಎಂದು ಚೌಹಾಣ್ ಹೇಳಿದ್ದಾರೆ. ರಾಣಾ ಬಾಲಚೌರಿಯಾ ಹತ್ಯೆ ಪ್ರಕರಣದಿಂದಾಗಿ ಸೋಹಾನಾ ಪಂದ್ಯಾವಳಿ ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದಿತ್ತು. ಇದರಲ್ಲಿಯೂ ಟ್ರ್ಯಾಕ್ಟರ್ ಮತ್ತು ವಿವಿಧ ಪಂದ್ಯಗಳಿಗೆ ಹಲವಾರು ಲಕ್ಷ ರೂಪಾಯಿ ಬಹುಮಾನಗಳ ಆಫರ್ ಮಾಡಲಾಗಿತ್ತು ಎಂದು ಕಬಡ್ಡಿ ತರಬೇತುದಾರ ಹರ್‌ಪ್ರೀತ್ ಸಿಂಗ್ ಬಾಬಾ ಹೇಳಿದ್ದಾರೆ. ►ಕ್ರೀಡೆಗಾಗಿ ಎಷ್ಟು ಹಣ ಖರ್ಚಾಗುತ್ತದೆ? ಆರು ದಶಕಗಳಲ್ಲಿ ಕಬಡ್ಡಿ ಕುರಿತು ಐದು ಪುಸ್ತಕಗಳನ್ನು ಬರೆದಿರುವ ಪ್ರಿನ್ಸಿಪಾಲ್ ಸರ್ವಾನ್ ಸಿಂಗ್, ಪಂಜಾಬ್‌ನಲ್ಲಿ ಪಂದ್ಯ ನಡೆದರೆ ರೂ. 1 ಲಕ್ಷದಿಂದ ರೂ. 40 ಲಕ್ಷದವರೆಗೆ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ, ಒಂದು ಪಂದ್ಯಾವಳಿಗೆ 100,000 ಪೌಂಡ್ ವೆಚ್ಚವಾಗಬಹುದು. ಟೊರೊಂಟೊದಲ್ಲಿ 400,000 ರಿಂದ 500,000 ಡಾಲರ್ ವರೆಗೆ ಖರ್ಚಾಗುತ್ತದೆ. ಈ ಕ್ರೀಡೆಯ ಮೌಲ್ಯ ವಾರ್ಷಿಕವಾಗಿ ಸುಮಾರು ರೂ. 100 ಕೋಟಿಗಳಷ್ಟಿದ್ದು, ಟೂರ್ನಮೆಂಟ್ ಟ್ರೋಫಿಗಳು ಮಾತ್ರ ರೂ. 10 ಕೋಟಿಗಳಷ್ಟಿವೆ. ಪಂಜಾಬ್ ಸರ್ಕಾರವೂ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. 2013 ರಲ್ಲಿ ಎಸ್‌ಎಡಿ-ಬಿಜೆಪಿ ಆಡಳಿತದ ಭಾಗವಾಗಿದ್ದ ಉಪ ಮುಖ್ಯಮಂತ್ರಿ ಸುಖ್‌ಬೀರ್ ಬಾದಲ್ ರೂ. 7 ಕೋಟಿಗಳ ನಗದು ಪ್ರಶಸ್ತಿಗಳನ್ನು ಘೋಷಿಸಿದ್ದರು. ಇದು ಕಬಡ್ಡಿ ಪಂದ್ಯಕ್ಕೆ ಇತರ ಯಾವುದೇ ರಾಜ್ಯ ಅಥವಾ ಒಕ್ಕೂಟ ನೀಡುವ ಹಣಕ್ಕಿಂತ ಹೆಚ್ಚಿನದ್ದಾಗಿದೆ . ರಾಜ್ಯದಲ್ಲಿ ಮಾದಕ ದ್ರವ್ಯಗಳ ವಿರುದ್ಧದ ಹೋರಾಟದ ನಡುವೆಯೂ ಅಂದಿನ ಸರ್ಕಾರವು ಕ್ರೀಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಆದಾಗ್ಯೂ, 2017 ರಲ್ಲಿ ಸರ್ಕಾರ ಬದಲಾದ ನಂತರ ಈ ಸರ್ಕಾರಿ ಪಂದ್ಯಾವಳಿಗಳನ್ನು ನಿಲ್ಲಿಸಲಾಯಿತು. ಪ್ರೊ ಕಬಡ್ಡಿ ಲೀಗ್‌ನ ಇತ್ತೀಚಿನ ಆವೃತ್ತಿಯು ಈ ಏರುತ್ತಿರುವ ವೆಚ್ಚಗಳನ್ನು ಪ್ರತಿಬಿಂಬಿಸುತ್ತದೆ. ಜೂನ್ 2025 ರಲ್ಲಿ ನಡೆದ ಸೀಸನ್ 12 ಹರಾಜಿನಲ್ಲಿ 121 ಆಟಗಾರರನ್ನು ಖರೀದಿಸಲು ಸುಮಾರು 37.90 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅತ್ಯಂತ ದುಬಾರಿ ಆಟಗಾರ ಮೊಹಮ್ಮದ್ ರೆಝಾ ಶಾಡ್ಲೌಯಿ ಅವರನ್ನು ಗುಜರಾತ್ ಜೈಂಟ್ಸ್ 2.23 ಕೋಟಿ ರೂ.ಗೆ ಖರೀದಿಸಿದೆ. ► ಬೆಟ್ಟಿಂಗ್ ದಂಧೆ ಬೆಟ್ಟಿಂಗ್ ದಂಧೆ ಪ್ರೊ ಕಬಡ್ಡಿ ಲೀಗ್ ಮಟ್ಟದಲ್ಲಿ ಮಾತ್ರವಲ್ಲದೆ ನೂರಾರು ಪ್ರೇಕ್ಷಕರನ್ನು ಆಕರ್ಷಿಸುವ ಗ್ರಾಮೀಣ ವಲಯದ ಪಂದ್ಯಾವಳಿಗಳಲ್ಲಿಯೂ ನಡೆಯುತ್ತದೆ. ರೈಡ್ ಫಿಕ್ಸ್ ಮಾಡುವ ಮೂಲಕ ಅಥವಾ ತಂಡದ ನಿಯೋಜನೆಗಳ ಮೂಲಕ ಪಂದ್ಯದ ಫಲಿತಾಂಶಗಳ ಮೇಲೆ ಬೆಟ್ಟಿಂಗ್ ದಂಧೆ ಪರಿಣಾಮ ಬೀರುತ್ತದೆ ಎಂದು ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಇದನ್ನು ಅನುಸರಿಸಲು ನಿರಾಕರಿಸಿದರೆ, ಅವರು ಬೆದರಿಕೆ ಮತ್ತು ದೈಹಿಕ ದಾಳಿಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ಬೆಟ್ಟಿಂಗ್ ಆನ್‌ಲೈನ್‌ನಲ್ಲಿ ನಡೆಯುವ ಕಾರಣ ಯಾರು ಮಾಡುತ್ತಾರೆ ಎಂಬುದು ಗೊತ್ತಾಗುವುದಿಲ್ಲ ಎಂದು ಹೆಸರು ಹೇಳಲು ಬಯಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ʼಇಂಡಿಯನ್ ಎಕ್ಸ್ ಪ್ರೆಸ್ʼ  ವರದಿ ಮಾಡಿದೆ. ಕ್ರೀಡೆಯ ಮೇಲೆ ಪ್ರಾಬಲ್ಯ ಸಾಧಿಸಲು ಹಲವಾರು ಗ್ಯಾಂಗ್ ಸ್ಟರ್ ಗಳು ಪೈಪೋಟಿ ನಡೆಸುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಮತ್ತೊಬ್ಬ ಪೊಲೀಸ್ ಅಧಿಕಾರಿ ʼದಿ ಇಂಡಿಯನ್ ಎಕ್ಸ್‌ಪ್ರೆಸ್‌ʼಗೆ ನೀಡಿದ ಮಾಹಿತಿಯ ಪ್ರಕಾರ, ಈ ಗ್ಯಾಂಗ್ ಸ್ಟರ್ ಗಳು ಪಂದ್ಯಾವಳಿಯ ಸಂಘಟನೆಯ ಎಲ್ಲಾ ಅಂಶಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ, ಸೆಲೆಬ್ರಿಟಿ ಅತಿಥಿಗಳಿಂದ ಹಿಡಿದು ಬಹುಮಾನ ವಿತರಣೆಯವರೆಗೆ ಎಲ್ಲವನ್ನೂ ಇವರು ನಿರ್ದೇಶಿಸುತ್ತಾರೆ. ಪ್ರಾಯೋಜಕರು, ಹೆಚ್ಚಾಗಿ ಕೈಗಾರಿಕೋದ್ಯಮಿಗಳು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳಾಗಿದ್ದು ಹಿಂಸಾಚಾರದ ಬೆದರಿಕೆಯಿಂದ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುತ್ತಾರೆ. ಇದರಿಂದಾಗಿ ಗ್ಯಾಂಗ್‌ಗಳು ಜಾಹೀರಾತುಗಳು ಮತ್ತು ಪ್ರಚಾರಗಳ ಮೂಲಕ ಕಾನೂನುಬದ್ಧವಾಗಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಅವಕಾಶ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ. ಗ್ಯಾಂಗ್ ನಡುವಿನ ದ್ವೇಷ ಮತ್ತೊಂದು ಸಮಸ್ಯೆಯಾಗಿದ್ದು, ಬಂಬಿಹಾ ಗುಂಪು ಮತ್ತು ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್‌ನಂತಹ ಗ್ಯಾಂಗ್‌ಗಳು ಭಯ ಮತ್ತು ದುಷ್ಕೃತ್ಯ, ಅಪರಾಧಗಳ ಮೂಲಕ ತಮ್ಮ ಬ್ರ್ಯಾಂಡ್ ಅನ್ನು ನಿರ್ಮಿಸಲು ಈ ಪೈಪೋಟಿಯಲ್ಲಿ ತೊಡಗಿದೆ. ಕಬಡ್ಡಿ ಪಂದ್ಯಗಳು ಸಾಮಾನ್ಯವಾಗಿ ಚಿಕ್ಕದಾಗಿ ಅನಿರೀಕ್ಷಿತವಾಗಿರುತ್ತವೆ. ಆಟದ ಫಲಿತಾಂಶವು ರೈಡ್ ಮೇಲೆ ಅವಲಂಬಿಸಿರುತ್ತದೆ. ಇದು ಕ್ರೀಡೆಯನ್ನು ಬೆಟ್ಟಿಂಗ್‌ಗೆ ಸೂಕ್ತವಾಗಿಸುತ್ತದೆ. ಗ್ರಾಮ ಮಟ್ಟದ ಕಬಡ್ಡಿ ಪಂದ್ಯಾವಳಿಯು ಕ್ರಿಕೆಟ್ ಪಂದ್ಯದಂತೆ ವಿಶಿಷ್ಟವಾದ ನಿರಂತರ ಪರಿಶೀಲನೆಯನ್ನು ಹೊಂದಿರುವುದಿಲ್ಲ, ಇದು ಮ್ಯಾಚ್ ಫಿಕ್ಸಿಂಗ್ ಸಾಧ್ಯತೆಯನ್ನು ಸಕ್ರಿಯಗೊಳಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಕಬಡ್ಡಿ ಆಟಗಾರರ ಕಳಪೆ ಆರ್ಥಿಕ ಸ್ಥಿತಿಯನ್ನು ಬೆಟ್ಟಿಂಗ್ ದಂಧೆಯವರು ಬಳಸಿಕೊಂಡು ಆಟಗಾರರಿಗೆ ಪ್ರಮುಖ ಕ್ಷಣಗಳಲ್ಲಿ ಕಳಪೆ ಪ್ರದರ್ಶನ ನೀಡಲು ಅಥವಾ ಸೋಲಲು ಹಣ ನೀಡಲಾಗುತ್ತದೆ. ಬೆಟ್ಟಿಂಗ್ ಸ್ಥಳೀಯವಾಗಿದ್ದು ನಗದು ಆಧಾರಿತವಾಗಿದೆ. ಇದನ್ನು ಪತ್ತೆಹಚ್ಚುವುದು ಕಷ್ಟ. ►ಇಲ್ಲಿವರೆಗೆ ಹತ್ಯೆಯಾದ ಕಬಡ್ಡಿ ಆಟಗಾರರು ಜನವರಿ 5, 2026 ಗಗನ್‌ದೀಪ್ ಸಿಂಗ್ (ಬಾಬಾ): ಲುಧಿಯಾನದ ಮಾರುಕಟ್ಟೆಯಲ್ಲಿ ಹಗಲು ಹೊತ್ತಿನಲ್ಲಿ ಗುಂಡು ಹಾರಿಸಿ ಕೊಲ್ಲಲಾಯಿತು. ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ, ಗುರ್ಸೇವಕ್ ಮತ್ತು ಆತನ ಜತೆಗಾರರು ತನ್ನ ಆಪ್ತ ಸ್ನೇಹಿತ ಏಕಮ್‌ಗೆ ಕಿರುಕುಳ ನೀಡುವುದನ್ನು ಗಗನ್‌ದೀಪ್ ಆಕ್ಷೇಪಿಸಿದ್ದರು. ಈ ಗಲಾಟೆಯಲ್ಲಿ ಏಕಮ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರೂ, ಗಗನ್‌ದೀಪ್ ಗುಂಡು ತಗಲಿ ಸಾವಿಗೀಡಾಗಿದ್ದರು. ಡಿಸೆಂಬರ್ 15, 2025, ರಾಣಾ ಬಾಲಚೌರಿಯಾ: ಮೊಹಾಲಿಯಲ್ಲಿ ಪಂದ್ಯಾವಳಿಯ ಸಮಯದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ದಾಳಿಕೋರರು ಸೆಲ್ಫಿ ಕೇಳುತ್ತಿರುವ ಅಭಿಮಾನಿಗಳಂತೆ ಬಂದು ಗುಂಡಿಕ್ಕಿದ್ದರು. ಬಂಬಿಹಾ ಗ್ಯಾಂಗ್ (ಡೋನಿ ಬಾಲ್) ಈ ಹೊಣೆಯನ್ನು ಹೊತ್ತುಕೊಂಡಿದೆ. ನವೆಂಬರ್ 4, 2025 ಗುರ್ವಿಂದರ್ ಸಿಂಗ್: ಸಾಮ್ರಾಲಾ, ಲುಧಿಯಾನದಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದಾಗ ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದ ಮೂಲಕ ಈ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಅಕ್ಟೋಬರ್ 31, 2025, ತೇಜ್‌ಪಾಲ್ (ತೇಜ) ಸಿಂಗ್: 25 ವರ್ಷದ ಆಟಗಾರ ಸಿಂಗ್ ಅವರನ್ನು ಹಗಲು ಹೊತ್ತಿನಲ್ಲಿ ಗುಂಡು ಹಾರಿಸಿ ಕೊಲ್ಲಲಾಯಿತು. ಈ ಪ್ರಕರಣ ವೈಯಕ್ತಿಕ ದ್ವೇಷ ಮತ್ತು ಸ್ಥಳೀಯ ಕ್ರೀಡೆಗಳಿಗೆ ಸಂಬಂಧಿಸಿದ ವಿವಾದಗಳಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ. ಎಪ್ರಿಲ್ 2022, ಧರ್ಮಿಂದರ್ ಸಿಂಗ್, ಪಟಿಯಾಲ, ಸ್ಥಳೀಯ ಕಬಡ್ಡಿ ಕ್ಲಬ್‌ನ ಅಧ್ಯಕ್ಷ: ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಪಂಜಾಬ್ ವಿಶ್ವವಿದ್ಯಾಲಯದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಮಾರ್ಚ್ 14, 2022 ಸಂದೀಪ್ ನಂಗಲ್ ಅಂಬಿಯನ್ : ಪಂದ್ಯದ ವೇಳೆ ಅಂತರರಾಷ್ಟ್ರೀಯ ತಾರೆಯಾಗಿದ್ದ ಅಂಬಿಯನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಕೊಲೆಯು ಕೆನಡಾ ಮೂಲದ ಪ್ರವರ್ತಕರು ಮತ್ತು ಬಾಂಬಿಹಾ ಗ್ಯಾಂಗ್‌ನ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿತು. ► ಆಡಳಿತ ಮಂಡಳಿ ಇಲ್ಲ ಪಂಜಾಬ್ ನಲ್ಲಿ ಏಕೀಕೃತ ಆಡಳಿತ ಮಂಡಳಿಯ ಅನುಪಸ್ಥಿತಿ ಇಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ. ಸೊಸೈಟೀಸ್ ಕಾಯ್ದೆಯಡಿಯಲ್ಲಿ ಯಾರಿಗೆ ಬೇಕಾದರೂ ಒಕ್ಕೂಟವನ್ನು ನೋಂದಾಯಿಸಬಹುದು. ಆದಾಗ್ಯೂ, ಈ ಒಕ್ಕೂಟಗಳು ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (AKFI) ನೊಂದಿಗೆ ಸಂಯೋಜಿತವಾಗಿಲ್ಲ. AKFI ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಶನ್ (IKF), ಏಷ್ಯನ್ ಕಬಡ್ಡಿ ಫೆಡರೇಶನ್ (AKF) ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ನೊಂದಿಗೆ ಸಂಯೋಜಿತವಾಗಿದೆ . ಇದು ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆ. ಪಂಜಾಬ್‌ನಲ್ಲಿ, ಅವರ ರಾಜಕೀಯ ಅಥವಾ ವೈಯಕ್ತಿಕ ಮಾರ್ಗಗಳನ್ನು ಪ್ರತಿಬಿಂಬಿಸುವ ಬಹು ಒಕ್ಕೂಟಗಳನ್ನು ರಚಿಸಲಾಗಿದೆ. ಪ್ರತಿಯೊಂದು ಒಕ್ಕೂಟವು ತನ್ನದೇ ಆದ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ, ತನ್ನದೇ ಆದ ತಂಡಗಳನ್ನು ಆಯ್ಕೆ ಮಾಡುತ್ತದೆ ಮತ್ತು ತನ್ನದೇ ಆದ ನಿಯಮಗಳನ್ನು ಅನುಸರಿಸುತ್ತದೆ. ಹೀಗಾಗಿ, ಯಾವುದೇ ಪ್ರಮಾಣಿತ ನೀತಿ ಸಂಹಿತೆ ಇಲ್ಲಿ ಇಲ್ಲ. ಆಟಗಾರರಿಗೆ ಸರಿಯಾದ ಒಪ್ಪಂದಗಳಿಲ್ಲ ಮತ್ತು ಯಾವುದೇ ಶಿಸ್ತಿನ ವ್ಯವಸ್ಥೆ ಇಲ್ಲ. ಫಿಕ್ಸಿಂಗ್ ಅಥವಾ ಹಿಂಸಾಚಾರದ ಆರೋಪಗಳು ಹೊರಹೊಮ್ಮಿದಾಗ, ಯಾವುದೇ ಒಂದೇ ಪ್ರಾಧಿಕಾರವು ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿರಲಿಲ್ಲ. ಇದರಿಂದಾಗಿ ಅಕ್ರಮ ಹಣವು ಅನಿಯಂತ್ರಿತವಾಗಿ ಹರಿದುಬರುತ್ತದೆ.

ವಾರ್ತಾ ಭಾರತಿ 8 Jan 2026 6:58 pm

ಕಲಬುರಗಿಯಲ್ಲಿ ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಪುತ್ಥಳಿ ಸ್ಥಾಪನೆಗೆ ಸಚಿವ ಸಂಪುಟ ತೀರ್ಮಾನ

ಬೆಂಗಳೂರು : ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಪುತ್ಥಳಿಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಕೆಕೆಆರ್‍ಡಿಬಿ ವತಿಯಿಂದ ಒದಗಿಸುವ 50 ಕೋಟಿ ರೂ., ಮೊತ್ತದಲ್ಲಿ ಕಲಬುರಗಿಯಲ್ಲಿ ನೂತನ ಮೆಗಾ ಡೈರಿ ಪ್ರಾರಂಭಿಸುವ ಕಾಮಗಾರಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು. ಕಲಬುರಗಿಯಲ್ಲಿ ಕೆಕೆಆರ್‍ಡಿಬಿ ವತಿಯಿಂದ ಪ್ರಾದೇಶಿಕ ಸಹಕಾರ ಭವನವನ್ನು ನಿರ್ಮಿಸುವ ಕಾಮಗಾರಿಯ ಕ್ರಿಯಾ ಯೋಜನೆಗೆ ಹಾಗೂ ಕಲಬುರಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಎರಡನೆ ಹಂತದಲ್ಲಿ 66.75 ಕೋಟಿ ರೂ., ವೆಚ್ಚದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ವಾರ್ತಾ ಭಾರತಿ 8 Jan 2026 6:57 pm

ವಂಚನೆಯನ್ನು ಆರಂಭದಲ್ಲೇ ಗುರುತಿಸಿ; ಆನ್‌ಲೈನ್‌ ಸಂಬಂಧದಲ್ಲಿ ಜಾಗರೂಕತೆ ವಹಿಸಿ!

ಸಂತ್ರಸ್ತರ ಮೇಲೆ ಸೂಕ್ಷ್ಮ ಮಾಹಿತಿ ಅಥವಾ ಹಣ ಕಳುಹಿಸುವಂತೆ ಒತ್ತಡ ಹೇರಲಾಗುತ್ತದೆ. ಎಚ್ಚರವಾಗಿರುವುದೇ ಶೋಷಣೆಯಿಂದ ತಪ್ಪಿಸಿಕೊಳ್ಳುವ ಉತ್ತಮ ಉಪಾಯ! ಇತ್ತೀಚೆಗೆ ಐಸಿಐಸಿಐ ಬ್ಯಾಂಕ್ ತಮ್ಮ ಗ್ರಾಹಕರಿಗೆ ಆನ್ಲೈನ್ ಸಂಬಂಧಗಳ ಬಗ್ಗೆ ಎಚ್ಚರಿಸಿದೆ. ಆನ್ಲೈನ್ ಸಂಬಂಧಗಳಿಂದ ಹಣ ದೋಚುವುದು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯ ಇಮೇಲ್ ನಲ್ಲಿ ಇರುವ ವಿವರಗಳೇನು? ಆನ್ಲೈನ್ ಸಂಬಂಧಗಳು ಪ್ರಶಂಸೆ ಮತ್ತು ಮೆಚ್ಚುಗೆಗಳಿಂದ ಆರಂಭವಾಗುತ್ತದೆ. ಆದರೆ ಬಹುತೇಕರಿಗೆ ಅದು ಹಣಕಾಸು ಮತ್ತು ಭಾವಾತ್ಮಕ ವಂಚನೆಗಳ ಮೂಲಕ ಕೊನೆಗೊಳ್ಳುತ್ತಿದೆ. ಆನ್ಲೈನ್ ಉದ್ದಕ್ಕೂ ವಂಚನೆಯ ಜಾಲವೇ ಹರಡಿದೆ. ಆರಂಭದಲ್ಲಿ ಬಹಳ ಜಾಣತನದಿಂದ ವಿಶ್ವಾಸವನ್ನು ಬೆಳೆಸಲಾಗುತ್ತದೆ. ಭಾವನಾತ್ಮಕ ಸಂಬಂಧ ಬೆಸೆಯಲಾಗುತ್ತದೆ. ನಂತರ ಸಂತ್ರಸ್ತರ ಮೇಲೆ ಸೂಕ್ಷ್ಮ ಮಾಹಿತಿ ಅಥವಾ ಹಣ ಕಳುಹಿಸುವಂತೆ ಒತ್ತಡ ಹೇರಲಾಗುತ್ತದೆ. ಎಚ್ಚರವಾಗಿರುವುದೇ ಶೋಷಣೆಯಿಂದ ತಪ್ಪಿಸಿಕೊಳ್ಳುವ ಉತ್ತಮ ಉಪಾಯ! ಆರಂಭದಲ್ಲಿಯೇ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ! ►ಮಾತನಾಡಿದ ಕೆಲವೇ ದಿನಗಳಲ್ಲಿ ಭಾವನಾತ್ಮಕವಾಗಿ ಒಲಿಸಿಕೊಂಡು ಪ್ರೀತಿಯ ಮಾತನಾಡುವವರು ಮತ್ತು ಪರಿಚಯ ವಿಧಿಲಿಖಿತವೆಂದು ಹೇಳುವುದು ಮತ್ತು ಆತ್ಮಸಂಗಾತಿ ಎಂದು ಮೆಚ್ಚುಗೆ ವ್ಯಕ್ತಪಡಿಸುವವರ ಬಗ್ಗೆ ಎಚ್ಚರವಿರಲಿ. ►ವೀಡಿಯೊ ಕಾಲ್ ಮಾಡಲು ಇಷ್ಟಪಡದವರು ಮತ್ತು ಭೇಟಿಯಾಗಲು ಹಿಂಜರಿಯುವವರ ಬಗ್ಗೆ ಜಾಗರೂಕತೆ ವಹಿಸಿ. ►ಎಂದಿಗೂ ಯಾರಿಗೂ ಹಣ ಕಳುಹಿಸಬೇಡಿ. ಕ್ರಿಪ್ಟೊ ಅಥವಾ ಉಡುಗೊರೆ ಕಾರ್ಡ್ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಕೊಡಬೇಡಿ. ►ನಾಟಕೀಯ ಕತೆಗಳನ್ನು ಹೇಳಿದರೆ ಎಚ್ಚರವಹಿಸಿ. ತುರ್ತು ವೈದ್ಯಕೀಯ ಅಗತ್ಯ, ಹಿಂದಿನ ಸಂಬಂಧದಿಂದ ನೋವನ್ನು ವಿವರಿಸುವುದು, ಪ್ರಯಾಣ ಮಾಡುವಾಗ ಸಿಕ್ಕಿಹಾಕಿಕೊಂಡಿರುವುದು, ಕಸ್ಟಮ್ ಸಮಸ್ಯೆ ಅಥವಾ ಹೂಡಿಕೆ ಅವಕಾಶಗಳ ಬಗ್ಗೆ ಗ್ಯಾರಂಟಿ ಕೊಡುವುದು ಇತ್ಯಾದಿ. ಆನ್ಲೈನ್ ಬಳಕೆಯಲ್ಲಿ ಸ್ವಯಂರಕ್ಷಣೆ ಮುಖ್ಯ: ► ಪ್ರೊಫೈಲ್ ಫೋಟೋಗಳನ್ನು ಕದಿಯಲಾಗಿದೆಯೇ ಎಂದು ಗಮನಿಸಲು ರಿವರ್ಸ್ ಇಮೇಜ್ ಸರ್ಚ್ ಬಳಸಿ ಪರಿಶೀಲಿಸಿ. ► ವೈಯಕ್ತಿಕ ಮಾಹಿತಿ ಕಳುಹಿಸಬೇಡಿ. ಬಹಳ ಆತ್ಮೀಯವೆನಿಸಿದ ಮಾಹಿತಿ ಅಥವಾ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳದಂತೆ ಜಾಗರೂಕತೆವಹಿಸಿ. ► ಅನುಮಾನಾಸ್ಪದ ಆ್ಯಪ್ ಗಳನ್ನು ಡೌನ್ಲೋಡ್ ಮಾಡಬೇಡಿ. ಅಥವಾ ಟ್ರೇಡಿಂಗ್, ಕ್ರಿಪ್ಟೊ ಅಥವಾ ಹೂಡಿಕೆ ವೇದಿಕೆಗಳಿಗೆ ಸಂಬಂಧಿಸಿದ ಪರಿಶೀಲಿಸದೆ ಇರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ವಂಚನೆ ಕಂಡುಬಂದರೆ ವರದಿ ಮಾಡಲೇಬೇಕು ► ಹಣ ಕೇಳುವುದು, ತುರ್ತಾಗಿ ಮಾಡುವಂತೆ ಹೇಳುವುದು ಅಥವಾ ರಹಸ್ಯ ಕಾಪಾಡಲು ಹೇಳಿದರೆ ವಂಚನೆ ಎಂದು ಖಚಿತವಾಗಲಿದೆ. ► ಆನ್ಲೈನ್ ವಂಚನೆಯನ್ನು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ cybercrime.gov.in ಇಲ್ಲಿಗೆ ವರದಿ ಮಾಡಿ. ಅಗತ್ಯವಿದ್ದರೆ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ಅಥವಾ ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ ಬ್ಯಾಂಕ್ನ ಸಹಾಯವಾಣಿ 1800 2662ಗೆ ಕರೆ ಮಾಡಿ. ನೀವು ದುರುದ್ದೇಶಪೂರಿತ/ಫಿಶಿಂಗ್/ಅನುಮಾನಾಸ್ಪದ ಇ-ಮೇಲ್‌ಗಳು ಅಥವಾ ಕರೆಗಳನ್ನು ಸ್ವೀಕರಿಸಿದ್ದರೆ, ದಯವಿಟ್ಟು ಸಂಚಾರ್ ಸಾಥಿಗೆ sancharsaathi.gov.in ಇಲ್ಲಿ ವರದಿ ಮಾಡಬಹುದು ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ antiphishing@icicibank.com ಗೆ ವರದಿ ಮಾಡಬಹುದು.

ವಾರ್ತಾ ಭಾರತಿ 8 Jan 2026 6:55 pm

‘ಎ-ಖಾತಾ’ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

ಬೆಂಗಳೂರು : ರಾಜ್ಯ ವ್ಯಾಪ್ತಿ ಅನಧೀಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ ಸೇರಿದಂತೆ ವಿವಿಧ ಜಾಗಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ‘ಎ-ಖಾತಾ’ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಾಯ್ದೆಯನ್ನು ಉಲ್ಲಂಘಿಸಿ, ಅನಧೀಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಅಪಾರ್ಟ್‍ಮೆಂಟ್, ಫ್ಲಾಟ್‍ಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಎ-ಖಾತಾ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು. ಈ ಪ್ರಸ್ತಾವನೆಯು ಅನಧಿಕೃತ ಬೆಳವಣಿಗೆಗಳನ್ನು ನಿಯಂತ್ರಿಸಲು, ಸಾರ್ವಜನಿಕ ಹಿತದೃಷ್ಟಿ ಹಾಗೂ ನಾಗರೀಕ ಸ್ನೇಹಿ ಸುಧಾರಣೆಗಳನ್ನು ಆಡಳಿತ ವ್ಯವಸ್ಥೆಯಲ್ಲಿ ತರುವ ಉದ್ದೇಶ ಹೊಂದಿವೆ. ವಿನ್ಯಾಸಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿ, ಪರಭಾರೆ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳನ್ನು ಕಾನೂನು ವ್ಯಾಪ್ತಿಗೆ ತರುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ಉಲ್ಲೇಖಿಸಿದರು. ಅದೇ ರೀತಿ, ಹೊಳೆನರಸೀಪುರ ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯ 12.30 ಕೋಟಿ ರೂ., ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ. ತುಮಕೂರಿನ ಶಿರಾ ತಾಲೂಕು, ಕಲ್ಲುಕೋಟೆ ಗ್ರಾಮದಲ್ಲಿ ಹಾಗೂ ರಾಯಚೂರಿನ ಸಿರವಾರ ತಾಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ ಗೆ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿ ಅಡಿ ಚಾಮರಾಜನಗರ ತಾಲೂಕಿನ 166 ಗ್ರಾಮಗಳಿಗೆ 33.04 ಕೋಟಿ ರೂ. ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ 27.38 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಆಡಳಿತ ಭವನ ನಿರ್ಮಾಣದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು 70.70 ಕೋಟಿ ರೂ., ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಪ್ರತಿ 1 ಗಂಟೆಗೆ 2 ಮೆಟ್ರಿಕ್ ಟನ್ ಸಾಬೂನು ತಯಾರಿಸುವ ಯಂತ್ರ: ‘ಕೆಎಸ್‍ಡಿಎಲ್ ಸಂಸ್ಥೆಯ ಬೆಂಗಳೂರು ಸಂಕೀರ್ಣದ ಉತ್ಪಾದನಾ ಸ್ಥಾವರದಲ್ಲಿ ಪ್ರತಿ ಗಂಟೆಗೆ ಎರಡು ಮೆಟ್ರಿಕ್ ಟನ್ ಸಾಬೂನು ತಯಾರಿಸುವ ನೂತನ ಯಂತ್ರೋಪಕರಣ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ’ -ಎಚ್.ಕೆ.ಪಾಟೀಲ್, ಕಾನೂನು ಸಚಿವ

ವಾರ್ತಾ ಭಾರತಿ 8 Jan 2026 6:53 pm

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ರಾಜ್ಯಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು: ಕರ್ನಾಟಕ ಸರ್ಕಾರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಬಿ ಖಾತಾಗೆ ಎ ಖಾತಾ ಮಾನ್ಯತೆ ನೀಡಲು ಗುರುವಾರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಎಚ್.ಕೆ.

ಒನ್ ಇ೦ಡಿಯ 8 Jan 2026 6:47 pm

ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಅಧಿಕಾರಿ; ಟ್ರಂಪ್‌ ಆಡಳಿತದ ʻಅಸಲಿ ಉದ್ದೇಶʼದ ವಿರುದ್ಧ ಸಿಡಿದೆದ್ದ ಅಮೆರಿಕನ್ನರು!

ಅತಿಯಾದರೆ ಅಮೃತವೂ ವಿಷವಿದ್ದಂತೆ ಎನ್ನುವಂತೆ, ಟ್ರಂಪ್‌ ಆಡಳಿತದ ಕಠಿಣ ವಲಸೆ ತಪಾಸಣೆ ಇದೀಗ ಸ್ಥಳೀಯ ಅಮೆರಿಕನ್ನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಅಧಿಕಾರಿಯ ಗುಂಡೇಟಿಗೆ ಮಹಿಳೆಯೋರ್ವಳು ಬಲಿಯಾಗಿದ್ದು, ಐಸಿಇ ವಿರುದ್ಧ ಮಿನ್ನಿಯಾಪೋಲಿಸ್‌ ಜನರು ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ. ತಪಾಸಣೆ ವೇಳೆ ಸಹಕರಿಸದ ಕಾರಣ ನೀಡಿ ಯುಎಸ್‌ ಕಸ್ಟಮ್ಸ್‌ ಮತ್ತು ವಲಸೆ ಅಧಿಕಾರಿಯೋರ್ವ, ರೆನೀ ನಿಕೋಲ್‌ ಗುಡ್‌ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಈ ಕುರಿತು ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 8 Jan 2026 6:46 pm

Shreyanka Patil: ಡಬ್ಲ್ಯೂಪಿಎಲ್‌ ಆರಂಭಕ್ಕೂ ಮುನ್ನ ಆರ್‌ಸಿಬಿ ಆಲ್‌ರೌಂಡರ್ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೇಳಿಕೆ ಭಾರೀ ವೈರಲ್‌

Shreyanka Patil: ಡಬ್ಲ್ಯೂಪಿಎಲ್ 2026 ಹಬ್ಬ ಜನವರಿ 9ರ ಶುಕ್ರವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಕರ್ನಾಟಕದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ಇದೀಗ ಬೆಂಗಳೂರು ತಂಡದ ಆಲ್‌ರೌಂಡರ್ ಕನ್ನಡತಿ ಶ್ರೇಯಾಂಕ ಪಾಟೀಲ್‌ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶ್ರೇಯಾಂಕ ಪಟೀಲ್ ಕಳೆದ

ಒನ್ ಇ೦ಡಿಯ 8 Jan 2026 6:43 pm

Madhav Gadgil: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಮಾಧವ ಗಾಡ್ಗೀಳ್ ಪ್ರಸ್ತಾಪಿಸಿದ್ದ ಮಾರ್ಗಸೂಚಿ ಹೀಗಿದೆ

ಪರಿಸರ ಮತ್ತು ಪರಿಸರ ಸಂರಕ್ಷಣೆಯ ಕುರಿತು ಭಾರತದ ಪ್ರಮುಖ ಧ್ವನಿಗಳಲ್ಲಿ ಒಬ್ಬರಾದ ಮಾಧವ ಗಾಡ್ಗಿಲ್ ಅವರು ಬುಧವಾರ ತಡರಾತ್ರಿ ಪುಣೆಯಲ್ಲಿ ಅನಾರೋಗ್ಯದ ಹಿನ್ನೆಲೆ ನಿಧನರಾಗಿದ್ದಾರೆ. ಪರಿಸರ ಸಂರಕ್ಷಣೆ, ವನ್ಯಜೀವಿ ನಿರ್ವಹಣೆ ಮತ್ತು ಆರ್ಥಿಕ ಅಭಿವೃದ್ಧಿಯ ಒತ್ತಡಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತು ಆಗಾಗ್ಗೆ ಧ್ವನಿ ಎತ್ತುತ್ತಿದ್ದ ಗಾಡ್ಗಿಲ್ ಸರ್ಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಸಾರ್ವಜನಿಕ

ಒನ್ ಇ೦ಡಿಯ 8 Jan 2026 6:36 pm

‘ಜನ ನಾಯಗನ್’ ಸಿನಿಮಾ ಬಿಡುಗಡೆ ಮುಂದೂಡಿಕೆ; ಕಾರಣವೇನು?

ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಸಿಗದೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದೆ ತಮಿಳು ನಟ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದೆ. ಜನವರಿ 9ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ಸೆನ್ಸಾರ್ ಬೋರ್ಡ್ ಮತ್ತು ಸಿನಿಮಾ ತಂಡದ ನಡುವಿನ ಸಂಘರ್ಷದ ನಡುವೆ ನ್ಯಾಯಾಲಯದ ತೀರ್ಪು ವಿಳಂಬವಾಗಿ ಬಿಡುಗಡೆ ಮುಂದೂಡಿದೆ. ಈ ಕುರಿತು ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿ ಹೇಳಿಕೆ ನೀಡಿದೆ. ಜನನಾಯಗನ್ ಬಿಡುಗಡೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಥಿಯೇಟರ್ ಮಾಲಕರು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಟಿಕೆಟ್ ಗಳನ್ನು ಮಾರಿದ್ದರು. ಬಿಡುಗಡೆಯ ಮೊದಲು ಸಮಸ್ಯೆ ಇತ್ಯರ್ಥವಾಗುವ ನಂಬಿಕೆಯಿತ್ತು. ಆದರೆ ಕೆವಿಎನ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಬಿಡುಗಡೆ ದಿನವೇ ಜನವರಿ 9ರಂದು ಮದ್ರಾಸ್ ಹೈಕೋರ್ಟ್ ನಲ್ಲಿ ವಿಚಾರಣೆಯಿದೆ. ಹೀಗಾಗಿ ಜನವರಿ 9ರಂದು ಬಿಡುಗಡೆ ಸಾಧ್ಯವಾಗಲಿಲ್ಲ. ಮುಂಗಡವಾಗಿ ಖಾದಿರಿಸಿದ ಟಿಕೆಟುಗಳು ರದ್ದಾಗಿವೆ. “ನಮ್ಮ ನಿಯಂತ್ರಣವನ್ನು ಮೀರಿದ ಸನ್ನಿವೇಶ ಎದುರಾಗಿರುವ ಕಾರಣ ಭಾರವಾದ ಹೃದಯದಲ್ಲಿ ಸಂಬಂಧಿತರಿಗೆ ಸುದ್ದಿಯನ್ನು ತಿಳಿಸುತ್ತಿದ್ದೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ನಲ್ಲಿ ಕೆವಿಎನ್ ಪ್ರೊಡಕ್ಷನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ನಿರ್ಮಾಣ ಸಂಸ್ಥೆ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಅಮೆರಿಕ, ಯುರೋಪ್ ಮತ್ತು ಮಲೇಷ್ಯಗಳ ವಿತರಕರು ಬಿಡುಗಡೆ ದಿನಾಂಕವನ್ನು ಮುಂದೂಡಿರುವುದನ್ನು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳ ಮೂಲಕ ಖಚಿತಪಡಿಸಿದ್ದಾರೆ. ಸೆನ್ಸಾರ್ ಬೋರ್ಡ್ ಪ್ರಮಾಣಪತ್ರವನ್ನು ಪಡೆಯಲು ವಿಫಲ ಸಿನಿಮಾಗೆ ಸೆನ್ಸರ್ ಬೋರ್ಡ್ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ ಕೆವಿಎನ್ ಪ್ರೊಡಕ್ಷನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾಗೆ ‘UA 16+’ ಪ್ರಮಾಣಪತ್ರ ನೀಡಬೇಕು ಎಂದು ಸಿನಿಮಾ ತಂಡ ಕೇಳಿಕೊಂಡಿದೆ. ನ್ಯಾಯಾಲಯದ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿದೆ. ಜಾಗತಿಕವಾಗಿ ಥಿಯೇಟರ್ ಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿತ್ತು. ಹೀಗಾಗಿ ಸಿನಿಮಾ ಬಿಡುಗಡೆಯ ಅನಿಶ್ಚಿತತೆಯ ನಂತರ ತಮಿಳುನಾಡಿನಾದ್ಯಂತ ಥಿಯೇಟರ್ ಮಾಲೀಕರು ಟಿಕೆಟ್ ದುಡ್ಡು ಮರುಪಾವತಿಸುವುದಾಗಿ ಹೇಳಿದ್ದಾರೆ. ಆದರೆ ಅನೇಕ ಕಡೆ ಸರ್ಕಾರ ಹೇರಿದ ಮಿತಿಯನ್ನು ಮೀರಿ ಖಾಳಸಂತೆಯಲ್ಲಿ ಪ್ರತಿ ಟಿಕೆಟ್ ಗೆ ರೂ 5000ಕ್ಕೂ ಮೀರಿ ಟಿಕೆಟ್ಗಳು ಮಾರಾಟವಾಗಿದ್ದವು. ‘ಜನ ನಾಯಗನ್’ ಅಬ್ಬರದ ರಾಜಕೀಯ- ಆಕ್ಷನ್ ಸಿನಿಮಾ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುತ್ತ ಹೆಣೆದ ಕತೆಯಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಕ್ತಿಯುತ ರಾಜಕೀಯ ಜಾಲದ ವಿರುದ್ಧ ಹೋರಾಡುವ ಕತೆಯಿದೆ. ಮುಂಗಡ ಟಿಕೆಟುಗಳು ಮಾರಾಟವಾಗಿ ‘ಜನನಾಯಗನ್’ ಸಿನಿಮಾದ ಮೇಲೆ ನಿರೀಕ್ಷೆ ಉತ್ತುಂಗದಲ್ಲಿರುವಾಗಲೇ ಬಿಡುಗಡೆ ಮುಂದೂಡಲಾಗಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ. ವಿನೋತ್ ನಿರ್ದೇಶನ ಹಾಗೂ ವೆಂಕಟ್ ಕೆ ನಾರಾಯಣ ಅವರ ನಿರ್ಮಾಣದಲ್ಲಿ ಬರುವ ವಿಜಯ್ ಅಭಿನಯದ ಕೊನೆಯ ಚಿತ್ರವಿದು. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರ ಬಳಗವಿದೆ.

ವಾರ್ತಾ ಭಾರತಿ 8 Jan 2026 6:36 pm

ಕಲಬುರಗಿ | ಕರ್ನಾಟಕದ ಕೇಂದ್ರೀಯ ವಿವಿ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕಲ್ಯಾಣ ಕರ್ನಾಟಕಕ್ಕೆ ಶೇ.8 ರಷ್ಟು ಸೀಟ್ ಮೀಸಲು: ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ

ವಾರ್ತಾ ಭಾರತಿ 8 Jan 2026 6:35 pm

ವಿಶ್ವಸಂಸ್ಥೆಯ ಮಹತ್ವದ ವೇದಿಕೆಗಳಿಂದ ಹಿಂದೆ ಸರಿದ ಅಮೆರಿಕ; ಭಾರತ-ಚೀನಾಗೆ ಶೇ 500 ಸುಂಕ ಬೆದರಿಕೆ

ಭಾರತದ ಮೇಲೆ ಶೇ 500ರಷ್ಟು ತೆರಿಗೆ ಬೆದರಿಕೆ

ವಾರ್ತಾ ಭಾರತಿ 8 Jan 2026 6:19 pm

ಐ-ಪ್ಯಾಕ್ ಸಂಸ್ಥೆ ಮೇಲಿನ ED ರೈಡ್ ಆದಾಗ ಮಮತಾ ಬ್ಯಾನರ್ಜಿಯ ಟಿಎಂಸಿಗೂ ಲಿಂಕ್ ಏನು?

ಭಾರತದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳತನ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. I-PAC ಸಹ-ಸಂಸ್ಥಾಪಕ ಪ್ರತ್ಯು ಜೈನ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದ್ದಾರೆ. ಚುನಾವಣೆ ಹತ್ತಿರವಿರುವಾಗ ಈ ಬೆಳವಣಿಗೆಗಳು ಮಹತ್ವ ಪಡೆದುಕೊಂಡಿವೆ.

ವಿಜಯ ಕರ್ನಾಟಕ 8 Jan 2026 6:18 pm