ಕಲಬುರಗಿ : ಭೀಕರ ರಸ್ತೆ ಅಪಘಾತ; ಮೂವರು ಬೈಕ್ ಸವಾರರು ಮೃತ್ಯು
ಕಲಬುರಗಿ: ರಸ್ತೆ ಅಪಘಾತವೊಂದರಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೇಡಂ ಪಟ್ಟಣದ ಸಮೀಪ ಮಂಗಳವಾರ ರಾತ್ರಿ ನಡೆದಿದೆ. ಪ್ರತ್ಯೇಕ ಎರಡು ಬೈಕ್ಗಳಲ್ಲಿ ಸಂಚರಿಸುತ್ತಿದ್ದ ಹಲಕರ್ಟಿ ಗ್ರಾಮದ ಮಹೇಶ್ (33), ಸೇಡಂ ಪಟ್ಟಣದ ನಿವಾಸಿಗಳಾದ ಸಂಜಯ್ (28) ಹಾಗೂ ಕಾಶಿನಾಥ್ (18) ಮೃತಪಟ್ಟವರು ಎಂದು ತಿಳಿದುಬಂದಿದೆ. ಕಲಬುರಗಿಯಿಂದ ಸೇಡಂ ಕಡೆಗೆ ತೆರಳುತ್ತಿದ್ದ ಲಾರಿಯು, ಸೇಡಂನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಎರಡು ಬೈಕ್ಗಳಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಲಾರಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆರ್ಯ–ದ್ರಾವಿಡ ವಿಭಜನೆ: Colonization ಕಥೆಯ ರಾಜಕೀಯ ನೆರಳು
ಲೋಕಸಭಾ ಕ್ಷೇತ್ರಗಳ ಮರುಹಂಚಿಕೆ ಚರ್ಚೆ ಆರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ತಲುಪಬಹುದು? ಆರ್ಯ-ದ್ರಾವಿಡ ಸಂಸ್ಕೃತಿಯ ತಾರತಮ್ಯಕ್ಕೆ ಕಾರಣವಾಗಬಹುದೇ? ನಾವು ತಿಳಿದಿರಬೇಕಾದ ಇತಿಹಾಸವೇನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚಿಕ್ಕಮಗಳೂರು: ಅಂಬೇಡ್ಕರ್ ಮೆರವಣಿಗೆ ಮೇಲೆ ಕಾರು ಚಲಾಯಿಸಿದ ಮದ್ಯ ವ್ಯಸನಿ, ಮಗು ಸಾವು, 7 ಮಂದಿಗೆ ಗಾಯ
ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ಅಂಬೇಡ್ಕರ್ ಮೆರವಣಿಗೆಯಲ್ಲಿದ್ದವರ ಮೇಲೆ ಕಾರು ಚಲಾಯಿಸಿದ್ದಾನೆ ಚಾಲಕ ಸುಧಾಕರ್. ಈ ಘಟನೆಯಲ್ಲಿ 7 ವರ್ಷದ ಬಾಲಕಿ ಸಾನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ನಿಶ್ಚಿತ್, ತೃಪ್ತಿ ಸೇರಿದಂತೆ ಒಟ್ಟು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕರ್ನಾಟಕ ತಂತ್ರಜ್ಞಾನ ಹಾಗೂ ತತ್ವಜ್ಞಾನ ಎರಡಕ್ಕೂ ಹೆಸರುವಾಸಿಯಾಗಿದ್ದು, ನನಗೆ ಸದಾ ಪ್ರೇರಣೆಯಾಗಿದೆ ಎಂದು ಪ್ರಧಾಣಿ ಮೋದಿ ಹೇಳಿದ್ದಾರೆ.
Gold Price: ಸತತ 2ನೇ ದಿನವು ಬಂಗಾರದ ಬೆಲೆ ಭಾರೀ ಏರಿಕೆ, ದಾಖಲೆ ಬರೆದ ಬೆಳ್ಳಿ
Gold and Silver Price Hit Record Today: ಚಿನ್ನದ ಆಭರಣಪ್ರಿಯರಿಗೆ ಮೇಲಿಂದ ಮೇಲೆ ದರ ಏರಿಕೆ ಬರೆ ಬೀಳುತ್ತಿದೆ. ಸತತ ಎರಡನೇ ದಿನವು (ಏಪ್ರಿಲ್ 15) ಬಂಗಾರದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿದೆ. ಕನಿಷ್ಠ ಮಟ್ಟದಲ್ಲಿ ಏರಿಕೆ ಆಗುತ್ತಿದ್ದ ಹಳದಿ ಲೋಹದ ಮೌಲ್ಯ ಮತ್ತೆ ಗಗನದತ್ತ ಮುಖ ಮಾಡಿದೆಸ. ಕೆಲವು ದಿನಗಳಿಂದ ತಟಸ್ಥವಾಗಿದ್ದ ಬೆಳ್ಳಿ
MLC ಅಬ್ದುಲ್ ಜಬ್ಬಾರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ (INC) ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ KPCC ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
CBSE 10th Results 2026: ಹತ್ತನೇ ತರಗತಿ ನಂತರ ನಿಮ್ಮ ಆಯ್ಕೆ ಏನಾಗಿರಬೇಕು? ಮುಂದಿನ ಹಾದಿ ಹೀಗಿರಲಿ
10ನೇ ತರಗತಿಯ ನಂತರ ಸರಿಯಾದ ವಿಭಾಗವನ್ನು ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನವನ್ನು ನಿರ್ಧರಿಸುವುದು ಸುಲಭವಾಗುತ್ತದೆ.CBSE ಅಥವಾ ಯಾವುದೇ ಬೋರ್ಡ್ ಆಗಿರಲಿ 10 ನೇ ತರಗತಿಯ ನಂತರ ಸ್ಟ್ರೀಮ್ ಅನ್ನು ಆಯ್ಕೆ ಮಾಡುವುದು ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಂತೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2026ನೇ ಸಾಲಿನ 10ನೇ ತರಗತಿಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.ಫಲಿತಾಂಶ
ಮುಂಬೈಗೆ ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ: ಅದಾನಿ ಎನರ್ಜಿಯಿಂದ 1,000 ಮೆಗಾವ್ಯಾಟ್ ಸಾಮರ್ಥ್ಯದ ಪವರ್ ಲಿಂಕ್ ಚಾಲನೆ
ಅದಾನಿ ಎನರ್ಜಿ ಸಲ್ಯೂಷನ್ಸ್ ಲಿಮಿಟೆಡ್ (ಎಇಎಸ್ಎಲ್), ಮುಂಬೈ ನಗರ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (ಎಂಎಂಆರ್) ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸಲು 1,000 ಮೆಗಾವ್ಯಾಟ್ ಸಾಮರ್ಥ್ಯದ ಹೈ-ವೋಲ್ಟೇಜ್ ಡೈರೆಕ್ಟ್ ಕರೆಂಟ್ ಟ್ರಾನ್ಸ್ಮಿಷನ್ ಲಿಂಕ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಮುಂಬೈ ಮಹಾನಗರಕ್ಕೆ ಪರಿಸರ ಸ್ನೇಹಿ ಮತ್ತು ಶುದ್ಧ ಇಂಧನದ ಪೂರೈಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹೊಸ
ವಾಯುಪಡೆಯ ತೇಜಸ್ ಎಂಜಿನ್ಗಳಿಗೆ ಭಾರತದಲ್ಲೇ ಡಿಪೋ: IAF ಜೊತೆ ಜಿಇ ಒಪ್ಪಂದ
ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ 'ತೇಜಸ್' ನಲ್ಲಿ ಬಳಕೆಯಾಗುವ F404-IN20 ಇಂಜಿನ್ಗಳ ಲಭ್ಯತೆ ಮತ್ತು ನಿರ್ವಹಣೆಗೆ ಉತ್ತೇಜನ ನೀಡಲು ರಕ್ಷಣಾ ಸಚಿವಾಲಯ ಪ್ಲ್ಯಾನ್ ಮಾಡಿಕೊಂಡಿದೆ. ಈ ಉದ್ದೇಶದಿಂದ ದೇಶದಲ್ಲಿ ಇಂಜಿನ್ಗಳ ನಿರ್ವಹಣೆ ಡಿಪೋ ಸೌಲಭ್ಯವನ್ನು ಸ್ಥಾಪಿಸಲು ಜಿಇ ಏರೋಸ್ಪೇಸ್ ಜೊತೆಗೆ ಭಾರತೀಯ ವಾಯುಪಡೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ವಿದೇಶಗಳ ಮೇಲಿನ ಅವಲಂಬನೆ ತಪ್ಪಲಿದೆ.
ಅಮೆರಿಕ–ಇರಾನ್ ಕದನ ವಿರಾಮ ಮಾತುಕತೆ ಇಫೆಕ್ಟ್; ಮತ್ತೆ ದುಬಾರಿಯಾದ ಚಿನ್ನ ಬೆಳ್ಳಿ
ಬುಧವಾರವೂ ಅಮೆರಿಕ–ಇರಾನ್ ಮಾತುಕತೆ ಪುನರಾರಂಭಿಸುವ ನಿರೀಕ್ಷೆಗಳ ಹಿನ್ನೆಲೆ ತೈಲದ ಬೆಲೆಗಳು ಕುಸಿದ ಪರಿಣಾಮ ಹಣದುಬ್ಬರದ ಕಳವಳ ಕಡಿಮೆಯಾಗಿದ್ದು, ಚಿನ್ನದ ಬೆಲೆಗಳು ಬಲ ಪಡೆದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಮಾತುಕತೆಗಳ ಆಶಾವಾದದ ನಡುವೆ ಚಿನ್ನದ ಬೆಲೆಗಳು ಏರಿಕೆ ಕಂಡಿವೆ. ಸಂಭಾವ್ಯ ರಾಜತಾಂತ್ರಿಕ ಒಪ್ಪಂದದ ಸೂಚನೆಗಳು ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದ ಪೂರೈಕೆ ಅಡಚಣೆ ಭಯವನ್ನು ಕಡಿಮೆ ಮಾಡಿದ್ದು, ಇದರಿಂದ ಕಚ್ಚಾ ತೈಲದ ಬೆಲೆ ಕುಸಿತವಾಗಿದೆ. ತೈಲದ ಬೆಲೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಹಿಂದಿನ ವಹಿವಾಟಿನಲ್ಲಿ ಒಂದು ವಾರದ ಕನಿಷ್ಠ ಮಟ್ಟಕ್ಕೆ ಇಳಿದಿದ್ದ ಚಿನ್ನದ ಬೆಲೆಗಳು ಮಂಗಳವಾರ ಚೇತರಿಸಿಕೊಂಡಿವೆ. ಬುಧವಾರವೂ ಮಾತುಕತೆಗಳ ನಿರೀಕ್ಷೆಯಿಂದ ತೈಲದ ಬೆಲೆ ಇಳಿಕೆಯಾಗಿದ್ದು, ಹಣದುಬ್ಬರದ ಆತಂಕ ಕಡಿಮೆಯಾಗಿ ಚಿನ್ನದ ಬೆಲೆಗಳಿಗೆ ಬೆಂಬಲ ದೊರೆತಿದೆ. ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಬೆಲೆಗಳು ಶೇ. 0.8ರಷ್ಟು ಏರಿಕೆ ಕಂಡಿವೆ. ►ಇಂದಿನ ಚಿನ್ನದ ದರ ಹೇಗಿದೆ? ಏಪ್ರಿಲ್ 15, ಬುಧವಾರ, ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 142 ರೂ. ಏರಿಕೆ ಕಂಡು, 10 ಗ್ರಾಂಗೆ 1,55,350 ರೂ.ಗೆ ತಲುಪಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 130 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,42,400 ರೂ. ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 106 ರೂ. ಏರಿಕೆ ಕಂಡು, 10 ಗ್ರಾಂಗೆ 1,16,510 ರೂ.ಗೆ ತಲುಪಿದೆ. ►ಮಂಗಳೂರಿನಲ್ಲಿ ಚಿನ್ನದ ದರ ಎಷ್ಟು? ಏಪ್ರಿಲ್ 15, ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ 15,535 (+142) ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ 14,240 (+130) ರೂ. ಮತ್ತು 18 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ 11,651 (+106) ರೂ. ದರಕ್ಕೆ ತಲುಪಿದೆ. ►ಬೆಳ್ಳಿಯ ದರದಲ್ಲಿ ಏರಿಕೆ ಮಾರ್ಚ್ ಆರಂಭದಲ್ಲಿ ಹೆಚ್ಚಿನ ಏರಿಳಿತವಿಲ್ಲದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 9ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿ ಇತ್ತು. ಏಪ್ರಿಲ್ ಆರಂಭದಲ್ಲಿ 2,50,000 ರೂ.ಗೆ ತಲುಪಿದ ನಂತರ, ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ. ಮಟ್ಟದಲ್ಲಿ ಸ್ಥಿರವಾಗಿತ್ತು. ಸೋಮವಾರ ಪ್ರತಿ ಗ್ರಾಂಗೆ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,55,000 ರೂ.ಗೆ ಇಳಿದ ಬೆಳ್ಳಿ ದರ, ಮಂಗಳವಾರವೂ ಅದೇ ಮಟ್ಟದಲ್ಲಿ ಮುಂದುವರಿಯಿತು. ಆದರೆ ಬುಧವಾರ ಪ್ರತಿ ಗ್ರಾಂಗೆ 15 ರೂ. ಏರಿಕೆ ಕಂಡು, ಪ್ರತಿ ಕೆಜಿಗೆ 2,70,000 ರೂ.ಗೆ ತಲುಪಿದೆ. ►ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು): ದಿಲ್ಲಿ: 24 ಕ್ಯಾರೆಟ್ 15,550 (+142) ರೂ., 22 ಕ್ಯಾರೆಟ್ 14,255 (+130) ರೂ. ಮುಂಬೈ: 24 ಕ್ಯಾರೆಟ್ 15,535 (+142) ರೂ., 22 ಕ್ಯಾರೆಟ್ 14,240 (+130) ರೂ. ಅಹಮದಾಬಾದ್: 24 ಕ್ಯಾರೆಟ್ 15,540 (+142) ರೂ., 22 ಕ್ಯಾರೆಟ್ 14,245 (+130) ರೂ. ಚೆನ್ನೈ: 24 ಕ್ಯಾರೆಟ್ 15,622 (+109) ರೂ., 22 ಕ್ಯಾರೆಟ್ 14,320 (+100) ರೂ. ಕೋಲ್ಕತ್ತಾ: 24 ಕ್ಯಾರೆಟ್ 15,535 (+142) ರೂ., 22 ಕ್ಯಾರೆಟ್ 14,240 (+130) ರೂ. ಹೈದರಾಬಾದ್: 24 ಕ್ಯಾರೆಟ್ 15,535 (+142) ರೂ., 22 ಕ್ಯಾರೆಟ್ 14,240 (+130) ರೂ. ಜೈಪುರ: 24 ಕ್ಯಾರೆಟ್ 15,550 (+142) ರೂ., 22 ಕ್ಯಾರೆಟ್ 14,255 (+130) ರೂ. ಚಂಡೀಗಢ: 24 ಕ್ಯಾರೆಟ್ 15,550 (+142) ರೂ., 22 ಕ್ಯಾರೆಟ್ 14,255 (+130) ರೂ. ಲಕ್ನೋ: 24 ಕ್ಯಾರೆಟ್ 15,550 (+142) ರೂ., 22 ಕ್ಯಾರೆಟ್ 14,255 (+130) ರೂ.
PM Modi: ಆದಿಚುಂಚನಗಿರಿ ಮಠಕ್ಕೆ 'ನಮೋ' ಭೇಟಿ: ಕರ್ನಾಟಕ ಸಂಸ್ಕೃತಿ, ಮಠದ ಸೇವೆಗೆ ಮೆಚ್ಚುಗೆ
ಮಂಡ್ಯ: ಕರ್ನಾಟಕ ತಂತ್ರಜ್ಞಾನ, ತತ್ವಜ್ಞಾನ ಎರಡನ್ನು ಸಮೃದ್ಧಿ ಹೊಂದಿದೆ. ಇಂದು ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ದರ್ಶನ ಪಡೆದಿದ್ದು ನನ್ನು ಪುಣ್ಯ, ನನ್ನ ಸೌಭಾಗ್ಯ. ಈ ಅನುಭವವನ್ನು ನಾನು ಎಂದಿಗೂ ಮರೆಯುವುದಿಲ್ಲ ಮಠದ ಪರಂಪರೆ ಸ್ಮರಿಸಿದರು. ಸಕ್ಕರೆ ನಾಡು ಮಂಡ್ಯ ನಾಡು. ಕಬ್ಬಿನಂತೆ ಮಂಡ್ಯದ ಜನರ ಮಾತು ಸಿಹಿ ಎಂದು ರಾಜ್ಯದ ಜನರನ್ನು ಪ್ರಧಾನಿ
ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ; ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು. ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ ಎಂದು barandbench ವರದಿ ಮಾಡಿದೆ. ಅಸ್ಸಾಂ ಪೊಲೀಸರು ದಾಖಲಿಸಿರುವ ಮಾನನಷ್ಟ, ನಕಲಿ ದಾಖಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಅಸ್ಸಾಂ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪವನ್ ಖೇರಾ ಅವರು ನಕಲಿ ದಾಖಲೆಗಳನ್ನು ನೀಡಿ ತೆಲಂಗಾಣ ಹೈಕೋರ್ಟ್ನ ನ್ಯಾಯವ್ಯಾಪ್ತಿಯನ್ನು ದುರುಪಯೋಗ ಮಾಡಿಕೊಂಡು ಜಾಮೀನು ಪಡೆದಿದ್ದಾರೆ ಎಂದು ವಾದಿಸಿದರು. ಪವನ್ ಖೇರಾ ಅವರು ತಮ್ಮ ಪತ್ನಿಯ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ತೆಲಂಗಾಣದಲ್ಲಿ ವಾಸಿಸುತ್ತಿರುವಂತೆ ತೋರಿಸಿದ್ದಾರೆ. ಆದರೆ ಅದೇ ದಾಖಲೆಗಳಲ್ಲಿ ಅವರ ಪತ್ನಿ ದಿಲ್ಲಿಯಲ್ಲೇ ವಾಸಿಸುತ್ತಿರುವುದು ಕಂಡು ಬರುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. “ಒಬ್ಬ ವ್ಯಕ್ತಿ ಬೇರೆ ಬೇರೆ ರಾಜ್ಯಗಳಲ್ಲಿ ಆಸ್ತಿ ಹೊಂದಿರುವುದರಿಂದ, ತಾನು ಇಚ್ಛಿಸಿದ ನ್ಯಾಯವ್ಯಾಪ್ತಿಯಲ್ಲಿ ಜಾಮೀನು ಪಡೆಯಲು ಅವಕಾಶ ಸಿಗುವುದಿಲ್ಲ. ಇದು ಕಾನೂನಿನ ದುರುಪಯೋಗ” ಎಂದು ತುಷಾರ್ ಮೆಹ್ತಾ ಹೇಳಿದರು. “ಆಧಾರ್ ಕಾರ್ಡ್ನ ಮುಂಭಾಗದಲ್ಲಿ ಖೇರಾ ಹೆಸರು ಇದ್ದರೂ, ಹಿಂಭಾಗದಲ್ಲಿ ಅವರ ಪತ್ನಿಯ ವಿಳಾಸ ಉಲ್ಲೇಖವಾಗಿದೆ. ಹೀಗಾಗಿ ನಕಲಿ ದಾಖಲೆ ಬಳಸಿ ತೆಲಂಗಾಣ ಹೈಕೋರ್ಟ್ ನ್ಯಾಯವ್ಯಾಪ್ತಿಯ ಲಾಭ ಪಡೆದಿರುವ ಸಾಧ್ಯತೆ ಇದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ, ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಜೊತೆಗೆ, ಪವನ್ ಖೇರಾ ಅವರು ಅಸ್ಸಾಂ ನ್ಯಾಯವ್ಯಾಪ್ತಿಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಮೂರು ವಾರಗಳಲ್ಲಿ ನೋಟಿಸ್ ಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ. ಇದಕ್ಕೂ ಮೊದಲು, ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಕುರಿತು ವಿದೇಶಿ ಪಾಸ್ಪೋರ್ಟ್ ಗಳು ಮತ್ತು ಬಹಿರಂಗಪಡಿಸದ ಆಸ್ತಿಗಳ ಬಗ್ಗೆ ಖೇರಾ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಎಪ್ರಿಲ್ 7ರಂದು ಅಸ್ಸಾಂ ಪೊಲೀಸರು ಖೇರಾ ಅವರ ದಿಲ್ಲಿ ನಿವಾಸಕ್ಕೆ ಭೇಟಿ ನೀಡಿದರೂ ಅವರು ಅಲ್ಲಿ ಇರಲಿಲ್ಲ. ನಂತರ ಖೇರಾ ಅವರು ನಿರೀಕ್ಷಣಾ ಜಾಮೀನು ಕೋರಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಕೆ.ಸುಜನಾ ಅವರು ಎಪ್ರಿಲ್ 10ರಂದು ಖೇರಾ ಅವರಿಗೆ ಒಂದು ವಾರದ ಅವಧಿಗೆ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು. ಆ ಅವಧಿಯಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಇದೀಗ ಆದೇಶಕ್ಕೆ ತಡೆ ನೀಡಲಾಗಿದೆ.
ತೈಲ ಕಂಪೆನಿಗಳಿಗೆ ಭಾರೀ ನಷ್ಟ: 5 ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ?
Price Hike after Election : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ, ಇದುವರೆಗೆ ತೈಲ ಕಂಪೆನಿಗಳು ದರವನ್ನು ಏರಿಸಲು ಹೋಗಿಲ್ಲ. ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಬೆಲೆ ಏರಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಚುನಾವಣೆ ಬೆನ್ನಲ್ಲೇ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರೀತಿಯ ಜಾಲಕ್ಕೆ ಬೀಳಿಸಿ ದೌರ್ಜನ್ಯ: ಅಮರಾವತಿಯಲ್ಲಿ ವಿಡಿಯೋ ವೈರಲ್ ಮಾಡಿದ್ದ ಆರೋಪಿ ಅರೆಸ್ಟ್
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ಮತ್ತು ಪರತ್ವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪರತ್ವಾಡ ನಿವಾಸಿಯಾದ 19 ವರ್ಷದ ಅಯಾನ್ ಅಹ್ಮದ್ ತನ್ವೀರ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದಾರೆ.
Narendra Modi: ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ 18 ಅಂಶ: ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ
Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಏಪ್ರಿಲ್ 15ರಂದು ಕರ್ನಾಟಕದ ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ಅವರು ಬೆಂಗಳೂರಿನ ಹೆಚ್ಎಎಲ್ (HAL) ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಈ ವೇಳೆ ಕರ್ನಾಟಕದ ಪ್ರಮುಖ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ 18
ಉಡುಪಿ: ಎಸ್ಐಆರ್ ವಿರೋಧಿಸಿ ‘ನಮ್ಮ ಮತ ನಮ್ಮ ಹಕ್ಕು’ ಒಕ್ಕೂಟದಿಂದ ಪ್ರತಿಭಟನೆ
ಉಡುಪಿ, ಎ.15: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ವಿರೋಧಿಸಿ ‘ನಮ್ಮ ಮತ ನಮ್ಮ ಹಕ್ಕು’ ಕರ್ನಾಟಕದ ನಾಗರಿಕ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಒಕ್ಕೂಟದ ಜಿಲ್ಲಾ ಸಂಚಾಲಕರಾದ, ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಜನರಲ್ಲಿ ತೀವ್ರ ಆತಂಕ ಹಾಗೂ ಗೊಂದಲ ಉಂಟಾಗಿದೆ. ಈಗಾಗಲೇ ಎಸ್ಐಆರ್ ನಡೆದಿರುವ 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಅನುಭವವು ಚುನಾವಣಾ ಪ್ರಜಾಸತ್ತೆಯ ಅಡಿಪಾಯವಾಗಿರುವ ಸಾರ್ವತ್ರಿಕ ಮತದಾನದ ಹಕ್ಕಿಗೆ ತೀವ್ರ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ನಡೆದ ಎಸ್ಐಆರ್ ಪ್ರಕ್ರಿಯೆಯು ಸಾಮೂಹಿಕವಾಗಿ ಮತದಾನದ ಹಕ್ಕನ್ನು ಕಿತ್ತುಕೊಂಡು ಜನರಲ್ಲೂ, ಬೂತ್ ಮಟ್ಟದ ಅಧಿಕಾರಗಳಲ್ಲೂ ತೀವ್ರ ತಳಮಳ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಜೆಗಳು ತಮ್ಮ ಸಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಜಿಲ್ಲಾಡಳಿತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೂ ಮುನ್ನ ಮಣಿಪಾಲದ ಕಾಯಿನ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಈ ಕುರಿತ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ, ಕರ್ನಾಟಕ ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಸಿಐಟಿಯು ಮುಖಂಡ ನರಸಿಂಹ ಎಚ್., ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷ ಚಾರ್ಲ್ಸ್ ಅ್ಯಂಬ್ಲರ್, ಫಾ.ವಿಲಿಯಂ ಮಾರ್ಟಿಸ್, ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಅರಾನ್ಹ, ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ರಾಜ್ಯ ಸಹ ಸಂಚಾಲಕಿ ರೋಶಿನಿ ಒಲಿವೆರಾ, ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಇಸ್ಮಾಯಿಲ್ ಆತ್ರಾಡಿ, ಸುಗಮ್ಯ ಮಹಿಳಾ ಸಂಘಟನೆಯ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಶಾರದಾ, ಪ್ರಮುಖರಾದ ವರೋನಿಕಾ ಕರ್ನೆಲಿಯೋ, ರಿಯಾಝ್ ಕೋಡಿ, ಇಸ್ಮಾಯಿಲ್ ಕಟಪಾಡಿ, ಇದ್ರೀಸ್ ಹೂಡೆ, ಝಫರುಲ್ಲಾ ಹೂಡೆ, ಉದ್ಯಾವರ ನಾಗೇಶ್ ಕುಮಾರ್, ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕವಾಗಿ ಮಾಹಿತಿ ಪ್ರಕಟಿಸಲು ಆಗ್ರಹ ಮ್ಯಾಪಿಂಗ್ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಸಾರ್ವಜನಿಕ ವಾಗಿ ಪ್ರಕಟಿಸಬೇಕು. ಮ್ಯಾಪಿಂಗ್ ಕಾರ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಇಆರ್ಓ, ಎಇಆರ್ಓ ಮತ್ತು ಬಿಎಲ್ಓಗಳ ಜೊತೆ ನಿಶ್ಚಿತ ಕಾಲಾವಧಿ ಅಂತರದಲ್ಲಿ ಸಭೆಗಳು ನಡೆಯಬೇಕು. ಇಡಿ ಎಸ್ಐಆರ್ ನಡಾವಳಿಗಳಲ್ಲಿ ಮತದಾರರಿಗೆ ಎದುರಾಗುವ ತೊಂದರೆಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸಿ, ತಮ್ಮ ಹೆಸರು ಹೊರಗುಳಿಯದಂತೆ ಖಾತ್ರಿ ಪಡಿಸಲು ಜಿಲ್ಲಾಡಳಿತವು ಸಾಕಷ್ಟು ಸಂಖ್ಯೆಯ ಸಹಾಯ ಕೊಠಡಿ ಹಾಗು ಸಹಾಯವಾಣಿಗಳನ್ನು ವ್ಯವಸ್ಥೆಗೊಳಿಸಬೇಕು. ಕರ್ನಾಟಕ ರಾಜ್ಯಾದ್ಯಂತ ‘ನಮ್ಮ ಮತ ನಮ್ಮ ಹಕ್ಕು’ ಒಕ್ಕೂಟದ ವತಿಯಿಂದ ಸರ್ವೋಚ್ಛ ನ್ಯಾಯಾಲಯದ ಮುಂದೆ ಎಸ್ಐಆರ್ ವಿರುದ್ಧ ಮಂಡಿತವಾಗಿರುವ ಎಲ್ಲ ಮೊಕ್ಕದ್ದಮೆಗಳು ಇತ್ಯಾರ್ಥವಾಗುವವರೆಗೂ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಕರ್ನಾಟಕದಲ್ಲಿ ನಡೆಯುವ ಪರಿಷ್ಕರಣೆಯು, ಮೊದಲ ಎರಡು ಹಂತಗಳ ಪರಿಷ್ಕರಣೆಗಳಲ್ಲಿ ಬೇರೆ ರಾಜ್ಯಗಳ ಜನ ಅನುಭವಿಸಿದ ಆತಂಕಕಾರಿ ಅನಾನುಕೂಲಗಳನ್ನು ನಿವಾರಿಸಿಕೊಂಡು, ಪರಿಷ್ಕರಣೆ ಆಗುವಂತೆ ಸರಕಾರವು ಗಮನ ಹರಿಸಬೇಕು ಎಂದು ಒಕ್ಕೂಟದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.15-ಬುಧವಾರ) ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದು, ಇದಕ್ಕೂ ಮೊದಲು ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತ ಕೋರಿದರು. ಈ ವೇಳೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 18 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ. ಈ ಮನವಿ ಪತ್ರದಲ್ಲಿರುವ ಅಂಶಗಳೇನು? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಅಮೆರಿಕಾದಲ್ಲಿನ ವಲಸೆ ನೀತಿಗಳು ಕಠಿಣವಾಗುತ್ತಿರುವ ಬೆನ್ನಲ್ಲೇ, ಇದೀಗ ಅಮೆರಿಕಾದ ಉಪಾಧ್ಯಕ್ಷ ಜೆ.ಡಿವಾನ್ಸ್ ಅಮೆರಿಕಾದ ಸಮಗ್ರ ಅಭಿವೃದ್ದಿಯಲ್ಲಿ ವಲಸಿಗರ ಅದರಲ್ಲೂ ಪ್ರಮುಖವಾಗಿ ಭಾರತೀಯರ ಕೊಡುಗೆ ಮಹತ್ವಪೂರ್ಣವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದರ ಜೊತೆಗೆ H-1B ವೀಸಾದಲ್ಲಿನ ದುರಪಯೋಗದ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು ವಲಸಿಗರು ಅಮೆರಿಕಾದ ಹಿತಾಸಕ್ತಿಗಳನ್ನು ಆದ್ಯತೆಯಾಗಿ ಪರಿಗಣಿಸಿ ಕೆಲಸ ಮಾಡಿದರೆ ವ್ಯವಸ್ಥೆ ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
AAP ಸಂಸದ ಅಶೋಕ್ ಮಿತ್ತಲ್ಗೆ ಸೇರಿದ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಲವ್ಲಿ ಗ್ರೂಪ್ ಸಂಸ್ಥೆಗಳ ಮೇಲೆ ED ದಾಳಿ
ಜಲಂಧರ್/ಚಂಡೀಗಢ: AAP ಸಂಸದ ಅಶೋಕ್ ಮಿತ್ತಲ್ ಗೆ ಸೇರಿದ ಪಂಜಾಬ್ ಪ್ರೊಫೆಷನಲ್ ವಿವಿ(LPU) ಮತ್ತು ಲವ್ಲಿ ಗ್ರೂಪ್ ನ ವ್ಯವಹಾರಿಕ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಬುಧವಾರ ಮುಂಜಾನೆ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪಗಳ ಸಂಬಂಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಜಲಂಧರ್ ಮತ್ತು ಚಂಡೀಗಢದ ED ತಂಡಗಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿವೆ. ಈ ಕಾರ್ಯಾಚರಣೆಗೆ ಸ್ಥಳೀಯ ಪೊಲೀಸರ ಸಹಾಯವನ್ನು ಕೇಳಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಮಾತ್ರವಲ್ಲದೆ, ಲವ್ಲಿ ಗ್ರೂಪ್ಗೆ ಸೇರಿದ ಅಂಗಡಿಗಳು, ಲವ್ಲಿ ಆಟೋ ಶೋರೂಂಗಳು, ದೂರ ಶಿಕ್ಷಣ ಕೇಂದ್ರಗಳು ಸೇರಿದಂತೆ ಹಲವು ಸ್ಥಳಗಳು ಹಾಗೂ ಸಂಸ್ಥೆಯ ಮಾಲಕರಾದ ಅಶೋಕ್ ಮಿತ್ತಲ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಅಶೋಕ್ ಮಿತ್ತಲ್ ಅವರು ಆಪ್ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದು, ಇತ್ತೀಚೆಗೆ ರಾಘವ್ ಛಡ್ಡಾ ಅವರನ್ನು ಬದಲಿಸಿ ರಾಜ್ಯಸಭೆಯ ಉಪ ನಾಯಕರಾಗಿ ನೇಮಕಗೊಂಡಿದ್ದರು. ಈ ನೇಮಕಾತಿಯ ಕೆಲವೇ ದಿನಗಳಲ್ಲೇ ಅವರೊಂದಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಈಡಿ ದಾಳಿ ನಡೆದಿದೆ.
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ
ಮಂಡ್ಯಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮಫದಿ ಆದಿಚುಂಚನಗಿರಿ ಮಠದ ಆವರಣದ ಕಾಲಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದರು.
ಅಮೆರಿಕ ಮತ್ತು ಇರಾನ್ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಸಜ್ಜಾಗಿರುವುದು, ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಇಂದು (ಏ.15-ಬುಧವಾರ) ಬೆಳಗ್ಗೆ ಮಾರುಕಟ್ಟೆ ತೆರೆದುಕೊಳ್ಳುತ್ತಿದ್ದಂತೇ, ಸೆನ್ಸೆಕ್ಸ್ ಮತ್ತು ನಿಫ್ಟಿ ಹಸಿರು ಬಣ್ಣದಲ್ಲಿ ವಹಿವಾಟು ಆರಂಭಿಸಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 1,400 ಪಾಯಿಂಟ್ಸ್ ಏರಿಕೆಯಾಗಿದ್ದರೆ, ನಿಫ್ಟಿ 50 350 ಪಾಯಿಂಟ್ಸ್ಗಳಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಮಾರುಕಟ್ಟೆಗೆ ಸದ್ಯ 9 ಲಕ್ಷ ಕೋಟಿ ರೂ. ಹರಿದುಬಂದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
Lok Sabha Expansion: 543ರಿಂದ 850ಕ್ಕೇರಲಿದೆ ಲೋಕಸಭೆ ಸದಸ್ಯ ಬಲ; ಇದು ಇತಿಹಾಸದಲ್ಲೇ ಅತಿದೊಡ್ಡ ವಿಸ್ತರಣೆ
ಕೇಂದ್ರ ಸರ್ಕಾರವು ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಇದು ಭಾರತೀಯ ಸಂಸದೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಚನಾತ್ಮಕ ಬದಲಾವಣೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಸ್ಥಾನಗಳನ್ನು ಏರಿಸುವ ಮೂಲಕ ದೇಶದ ರಾಜಕೀಯ ಪ್ರಾತಿನಿಧ್ಯದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಿಸಲು ಸರ್ಕಾರ ಯೋಜಿಸಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮತದಾರರಿಗೆ ಉತ್ತಮ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ
ಬೆಂಗಳೂರಿನ ಸುಡು ಬಿಸಿಲಿಗೆ ಹಸಿರು ನಾಶವೇ ಕಾರಣ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ!
ಇಂದು ಬಿಸಿಲಿನ ತಾಪಕ್ಕೆ ಬೆಂಗಳೂರು ಬೆಂದು ಹೋಗುತ್ತಿದೆ. ನಗರದ ಹಸಿರು ಹೊದಿಕೆ ದಿನೇದಿನೆ ಕ್ಷೀಣಿಸುತ್ತಿರುವುದು ಮತ್ತು ಹಿಂದೆಂದು ಕಾಣದ ಮಟ್ಟಕ್ಕೆ ಏರುತ್ತಿರುವ ತಾಪಮಾನವು ನಾಗರಿಕರನ್ನು ಹೈರಾಣಾಗಿಸಿದೆ. ಈ ಪರಿಸ್ಥಿತಿಗೆ ಕೇವಲ ಜಾಗತಿಕ ಹವಾಮಾನ ಬದಲಾವಣೆ ಮಾತ್ರವಲ್ಲದೆ, ದಶಕಗಳಿಂದ ನಡೆದ ಅವೈಜ್ಞಾನಿಕ ನಗರೀಕರಣವೇ ಮುಖ್ಯ ಕಾರಣವಾಗಿದೆ.
CBSE Results 2026: ಸಿಬಿಎಸ್ಇ 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದು ಹೇಗೆ?
CBSE Answer Sheet Photocopy 2026: CBSE 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿಯನ್ನು ಆನ್ಲೈನ್ನಲ್ಲಿ ಪಡೆಯುವುದು ಹೇಗೆ ?ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಇದಕ್ಕೆ ತಗಲುವ ಶುಲ್ಕಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಗಳು 10 ಮತ್ತು 12 ನೇ ತರಗತಿಯ ಉತ್ತರ ಪತ್ರಿಕೆಗಳ ಫೋಟೋ ಕಾಪಿಗೆ
CBSE 10 Results 2025: ಸಿಬಿಎಸ್ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ
CBSE 10th Results Updates: ಪ್ರಸ್ತಕ 2026ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 15) ಬಿಡುಗಡೆ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಮತ್ತು ಪೋಕಷರು ಸದರಿ ಫಲಿತಾಂಶವನ್ನು ಅಧಿಕೃತ www.cbse.gov.in ನಲ್ಲಿ ವೀಕ್ಷಿಸಬಹುದು. ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧಕರ ಪಟ್ಟಿಯನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ. ಅದರಲ್ಲಿ ಜಿಲ್ಲಾವಾರು
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕಾರ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಪಾಟ್ನಾದ ಲೋಕ ಭವನದಲ್ಲಿ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಸಾಮ್ರಾಟ್ ಚೌಧರಿಗೆ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಸಾಮ್ರಾಟ್ ಚೌಧರಿ ಬಿಹಾರದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಟ್ನಾದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಾಮ್ರಾಟ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಸಾರಿಗೆ ಸಿಬ್ಬಂದಿಗೆ ಕೋಟಿ ವಿಮೆ ‘ಕವಚ’ ; ಪ್ರೀಮಿಯಂ ಇಲ್ಲದೇ ಅಪಘಾತ ವಿಮೆ ಕಲ್ಪಿಸಿದ ವಾಕರಸಾಸಂ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ಜಾರಿಗೆ ತಂದಿರುವ ಒಂದು ಕೋಟಿ ರೂಪಾಯಿಗಳ ಅಪಘಾತ ವಿಮಾ ಯೋಜನೆಯು ನೌಕರರ ಪಾಲಿಗೆ ಸಂಜೀವಿನಿಯಂತಿದೆ. ಕರ್ತವ್ಯದ ಸಮಯದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗಳಿಂದ ಸಿಬ್ಬಂದಿಯ ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬೀಳದಂತೆ ಈ ಯೋಜನೆ ಭದ್ರತೆ ಒದಗಿಸುತ್ತದೆ.
Central Board of Secondary Education: ಭಾರತದಾದ್ಯಂತ ಲಕ್ಷಾಂತರ 10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಒಂದೇ ಬೋರ್ಡ್ ಪರೀಕ್ಷೆಗಳ ಸೆಟ್ ನಿರ್ಣಾಯಕ ಪಾತ್ರವನ್ನು ವಹಿಸಿದೆ. ತಿಂಗಳುಗಳ ಕಾಲ ನಡೆದ ತಯಾರಿಯು ಒಂದು ನಿರ್ಣಾಯಕ ಫಲಿತಾಂಶದಲ್ಲಿ ಕೊನೆಗೊಂಡಿದೆ. ಸಿಬಿಎಸ್ಇ ಬೋರ್ಡ್ ವ್ಯವಸ್ಥೆಯು ಇದೀಗ ಗಮನಾರ್ಹ ಬದಲಾವಣೆಗೆ ಒಳಗಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ವರ್ಷಕ್ಕೆ ಎರಡು
ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ EDಯಿಂದ ಪ್ರತೀಕ್ ಜೈನ್ ಸಂಬಂಧಿಕರಿಗೆ ಸಮನ್ಸ್; ಸೇಡಿನ ಕ್ರಮ ಎಂದು ಆರೋಪಿಸಿದ TMC
ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯದ(ED) ಕ್ರಮಗಳು ತೀವ್ರಗೊಳ್ಳುತ್ತಿರುವ ನಡುವೆ, I-PAC ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಪ್ರತೀಕ್ ಜೈನ್ ಅವರ ಸಹೋದರ ಪುಲ್ಕಿತ್ ಜೈನ್ ಹಾಗೂ ಅವರ ಪತ್ನಿ ಬಾರ್ಬಿ ಜೈನ್ ಅವರಿಗೆ ಎ.15ರಂದು ದಿಲ್ಲಿಯ ED ಕಚೇರಿಯ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಪ್ರತೀಕ್ ಜೈನ್ ನಿವಾಸ ಹಾಗೂ ಸಂಬಂಧಿತ ಸ್ಥಳಗಳಲ್ಲಿ ED ಶೋಧ ಕಾರ್ಯಾಚರಣೆ ನಡೆಸಿತ್ತು. ಶೋಧದ ವೇಳೆ ಜೈನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಗೆ ತೆರಳಿದ ಬಳಿಕ ದಾಳಿಯನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪುಲ್ಕಿತ್ ಜೈನ್ ಮತ್ತು ಬಾರ್ಬಿ ಜೈನ್ ಹೊಂದಿದ್ದಾರೆ ಎಂಬ ಶಂಕೆಯ ಮೇರೆಗೆ, ತನಿಖೆಯ ಸಮಯದಲ್ಲಿ ಅವರ ಹೆಸರುಗಳು ಹೊರಬಂದಿವೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮವು ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ED ಕೈಗೊಂಡಿರುವ ವ್ಯಾಪಕ ಕಾರ್ಯಾಚರಣೆಯ ಭಾಗವೆಂದು ಹೇಳಲಾಗುತ್ತಿದೆ. ಇದೇ ಪ್ರಕರಣದಲ್ಲಿ I-PAC ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ವಿನೇಶ್ ಚಾಂಡೆಲ್ ಅವರ ಬಂಧನದ ಬೆನ್ನಲ್ಲೇ ಈ ಸಮನ್ಸ್ ಜಾರಿಯಾಗಿದೆ. ಸಂಸ್ಥೆಯ ಸ್ಥಾಪಕ, ನಿರ್ದೇಶಕ ಹಾಗೂ 33% ಷೇರುದಾರರಾಗಿರುವ ಚಾಂಡೆಲ್ ಅವರನ್ನು ಎ.13, 2026ರಂದು ದಿಲ್ಲಿಯಲ್ಲಿರುವ ED ಪ್ರಧಾನ ಕಚೇರಿಯ ತನಿಖಾ ಘಟಕವು 2002ರ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಿತು. ದಿಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಈ ಬಂಧನ ನಡೆದಿದೆ. ED ತಿಳಿಸಿರುವಂತೆ, I-PAC ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಹಲವು ಹಣಕಾಸು ಅಕ್ರಮಗಳು ಬೆಳಕಿಗೆ ಬಂದಿವೆ. ಲೆಕ್ಕಪತ್ರಗಳಲ್ಲಿ ದಾಖಲಿಸದ ನಿಧಿಗಳ ಸ್ವೀಕೃತಿ, ವ್ಯವಹಾರವಿಲ್ಲದ ಅಸುರಕ್ಷಿತ ಸಾಲಗಳ ಸ್ವೀಕಾರ, ನಕಲಿ ಇನ್ ವಾಯ್ಸ್ ಗಳ ವಿತರಣೆ ಹಾಗೂ ಮೂರನೇ ವ್ಯಕ್ತಿಗಳ ಮೂಲಕ ಹಣ ವರ್ಗಾವಣೆ ಮಾಡಿರುವ ಆರೋಪಗಳು ಇದರಲ್ಲಿ ಸೇರಿವೆ. ಇದರ ನಡುವೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಕ್ರಮಗಳನ್ನು ರಾಜಕೀಯ ಸೇಡಿನ ಭಾಗವೆಂದು ಆರೋಪಿಸಿದೆ. ಚುನಾವಣೆಗೆ ಮುನ್ನ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ನಡೆಯುತ್ತಿದೆ ಎಂದು ಟಿಎಂಸಿ ಟೀಕಿಸಿದೆ.
Gold Rate Rise: ಚಿನ್ನದ ಬೆಲೆ ಮತ್ತೆ ಏರಿಕೆ, 1.55 ಲಕ್ಷ ರೂಪಾಯಿಗೇರಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯೂ ಭಾರಿ ಏರಿಕೆ
ಚಿನ್ನ ಬೆಳ್ಳಿಯ ದರದಲ್ಲಿ ಇಂದು ಮತ್ತೆ ಹೆಚ್ಚಳ ಕಂಡಿದ್ದು, ಜಾಗತಿಕ ಅನಿಶ್ಚಿತತೆ, ತೈಲ ಬೆಲೆ ಏರಿಕೆಯೇ ಇದರ ಮೇಲೆ ಪ್ರಭಾವ ಬಿದ್ದಿದೆ. ಚಿನ್ನಾಭರಣ ಪ್ರಿಯರಿಗೆ ಮತ್ತೆ ಭಾರಿ ತುಟ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.
‘ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರ ಇರಬಾರದು’: ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ
ಹೊಸದಿಲ್ಲಿ: ಇರಾನ್ ವಿಚಾರವಾಗಿ ಪೋಪ್ ಲಿಯೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಟ್ರೂತ್ ಸೋಶಿಯಲ್ನಲ್ಲಿ ಮತ್ತೊಂದು ಹೇಳಿಕೆ ನೀಡಿದ್ದಾರೆ. “ಇರಾನ್ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ. ಇರಾನ್ ಬಳಿ ಪರಮಾಣು ಬಾಂಬ್ ಇರಬಾರದು. ಈ ವಿಷಯವನ್ನು ಪೋಪ್ ಲಿಯೋ ಗಮನಿಸಬೇಕು,” ಎಂದು ಟ್ರಂಪ್ ಅವರು ಹೇಳಿದ್ದಾರೆ. “ಅಮೆರಿಕ ಹಿಂತಿರುಗಿದೆ!” ಎಂದೂ ಅವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಪ್ ಲಿಯೋ ಅವರನ್ನು “ಅಪರಾಧದ ಮೇಲೆ ದುರ್ಬಲ” ಹಾಗೂ “ವಿದೇಶಾಂಗ ನೀತಿಯ ಮೇಲೆ ಭಯಾನಕ” ಎಂದು ಟೀಕಿಸಿದ್ದರು. ಅಮೆರಿಕದಲ್ಲಿ ಜನಿಸಿದ ಮೊದಲ ಪೋಪ್ ಆಗಿರುವ ಪೋಪ್ ಲಿಯೋ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಟೀಕಿಸಿದ್ದರು. ಇದಾದ ಬಳಿಕ ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡಿದೆ. ಟ್ರಂಪ್ ಆಡಳಿತದ ಬಗ್ಗೆ “ನನಗೆ ಯಾವುದೇ ಭಯವಿಲ್ಲ” ಎಂದು ಪೋಪ್ ಲಿಯೋ ಹೇಳಿದ್ದಾರೆ. ಯುದ್ಧದ ಭೀಕರತೆಯನ್ನು ಖಂಡಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ, ಜನವರಿಯಲ್ಲಿ ಇರಾನ್ನಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗಳ ವೇಳೆ 42,000 ಜನರು ಮೃತಪಟ್ಟಿದ್ದಾರೆ ಎಂಬ ಟ್ರಂಪ್ ಹೇಳಿಕೆಗೆ ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಇರಾನ್ ಸರಕಾರದ ಪ್ರಕಾರ 3,117 ಜನರು ಮೃತಪಟ್ಟಿದ್ದಾರೆ. ದೇಶದ ಹೊರಗಿನ ಕೆಲವು ಸಂಘಟನೆಗಳು ಈ ಸಂಖ್ಯೆಯನ್ನು ಸುಮಾರು 7,007 ಎಂದು ಅಂದಾಜಿಸಿವೆ. ಇರಾನ್ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಮೈ ಸೊಟೊ ಅವರ ಪ್ರಕಾರ ಕನಿಷ್ಠ 5,000 ಜನರು ಮೃತಪಟ್ಟಿದ್ದು, ನಿಜವಾದ ಸಾವಿನ ಸಂಖ್ಯೆ 20,000ರಷ್ಟಿರಬಹುದೆಂದು ಅಂದಾಜಿಸಲಾಗಿದೆ. ಇದೇ ವೇಳೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ತಿಳಿಸಿದೆ.
ಸೋಲಿಗರು ಎಂಬ ಬಿಳಿಗಿರಿ ರಂಗಯ್ಯನ ಭಾವಂದಿರು..!
ಸೋಲಿಗರದು ವಿಶಿಷ್ಟವಾದ ಜೀವನ ವಿಧಾನ. ತಲೆತಲಾಂತರಗಳಿಂದಲೂ ಇವರು ಕಾಡನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡ ಕಾರಣ ಇವರ ಜೀವನ ವಿಧಾನದಲ್ಲಿ ಕಾಡಿನ ಸಹಜ ರೀತಿನೀತಿಗಳಿವೆ. ಕಾಡಿನಲ್ಲಿ ಬದುಕಲಿಕ್ಕೆ ಬೇಕಾದ ಸರಳತೆ ಮತ್ತು ಸಂಕೀರ್ಣತೆಗಳೂ ಇವರ ಜೀವನ ವಿಧಾನದಲ್ಲಿವೆ. ಪೋಡಿನ ಸಹಜೀವನ, ಇವರ ಆಚರಣೆಗಳು, ಕಾಡಿನ ಮೇಲಿನ ಪ್ರೀತಿ ಇವೆಲ್ಲ ಇವರ ಬದುಕನ್ನು ಸುಂದರವಾಗಿ ರೂಪಿಸಿವೆ. ಸೋಲಿಗ ಸಮುದಾಯದ ಹೆಸರು ಕರ್ನಾಟಕ ದಲ್ಲಿ ಹೆಚ್ಚು ಪರಿಚಿತವಾದ ಬುಡಕಟ್ಟಿನ ಹೆಸರು. ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರ ಪೋಡುಗಳು ಹೆಚ್ಚು ಇರುವುದರಿಂದಲೂ, ಸೋಲಿಗರ ಹೆಣ್ಣುಮಗಳೊಂದಿಗಿನ ಬಿಳಿಗಿರಿ ರಂಗಯ್ಯನ ಪ್ರೇಮ ಪ್ರಸಂಗ ಹೆಚ್ಚು ಜನಜನಿತ ವಾಗಿ ಅದೊಂದು ಜಾನಪದ ಕತೆಯಾಗಿ ಹರಡಿರುವುದರಿಂದಲೂ ಸೋಲಿಗ ಸಮುದಾಯದ ಬಗ್ಗೆ ಕರ್ನಾಟಕದಲ್ಲಿ ಸಾಕಷ್ಟು ಜನಕ್ಕೆ ಅರಿವಿದೆ. ಒಮ್ಮೆ ಬಿಳಿಗಿರಿ ರಂಗಯ್ಯಸ್ವಾಮಿ ಕಾಡಲ್ಲಿ ಅಲೆಯುವಾಗ ಸೋಲಿಗರ ಬೊಮ್ಮೇಗೌಡನ ಮಗಳಾದ ಕುಸುಮಾಲೆಯನ್ನು ನೋಡುತ್ತಾರೆ. ಬಿಳಿಗಿರಿ ರಂಗಯ್ಯನಿಗೆ ಆಗಲೇ ಇಬ್ಬರು ಹೆಂಡತಿಯರಿದ್ದರೂ ಬುಡಕಟ್ಟು ಸುಂದರಿ ಕುಸುಮಾಲೆಯ ಸೌಂದರ್ಯಕ್ಕೆ ಮರುಳಾಗಿ ಮೋಹಗೊಂಡು ಕುಸುಮಾಲೆಯನ್ನು ಅಪಹರಿಸಿ ಮದುವೆಯಾಗುತ್ತಾರೆ. ಈ ಕಾರಣಕ್ಕೆ ಬಿಳಿಗಿರಿ ರಂಗಯ್ಯನನ್ನು ಇಂದಿಗೂ ಸೋಲಿಗರು ತಮ್ಮ ಭಾವ ಎಂದೇ ಭಾವಿಸಿದ್ದಾರೆ. ಅಪ್ಪಟ ಆದಿವಾಸಿಗಳಾದ ಸೋಲಿಗರು ಬಿಳಿಗಿರಿ ರಂಗಯ್ಯನನ್ನು ತಮ್ಮ ಮನೆ ಅಳಿಯನನ್ನಾಗಿ ಮಾಡಿಕೊಂಡಿರುವುದು, ಸೋಲಿಗರ ಬುಡಕಟ್ಟು ಸಂಸ್ಕೃತಿಯಲ್ಲಿ ಪ್ರೇಮ ವಿವಾಹ, ಗಂಧರ್ವ ವಿವಾಹಗಳನ್ನು ಆ ಕಾಲದಲ್ಲೇ ಮಾನ್ಯ ಮಾಡಿರುವುದು ಆ ಸಮುದಾಯದ ಜಾತ್ಯತೀತತೆ ಮತ್ತು ಪ್ರಗತಿಪರ ಮೌಲ್ಯಗಳನ್ನು ತೋರುತ್ತದೆ. ಸೋಲಿಗ ಸಮುದಾಯ ಕರ್ನಾಟಕದಲ್ಲಿರುವ ಬುಡಕಟ್ಟುಗಳಲ್ಲಿ ಪ್ರಮುಖವಾದುದು. ಪಾರಂಪರಿಕವಾಗಿ ಕಾಡಲ್ಲೇ ಹುಟ್ಟಿ ಬೆಳೆದ ವಿಶಿಷ್ಟ ಬುಡಕಟ್ಟಿದು. ಇದೇ ಪರಿಸರದಲ್ಲಿ ಬದುಕಿರುವ ಜೇನುಕುರುಬ, ಬೆಟ್ಟಕುರುಬ, ಯರವರಿಗೆ ಹೋಲಿಸಿದಲ್ಲಿ ಸೋಲಿಗರಿಗೆ ಮುಖ್ಯ ಪ್ರವಾಹದ ಜತೆಗಿನ ಒಡನಾಟ ಹೆಚ್ಚು ಆದರೆ ಈ ಒಡನಾಟ ಸೋಲಿಗರ ಆದಿವಾಸಿತನವನ್ನು ಘಾಸಿಗೊಳಿಸಿಲ್ಲ ಎಂದು ಡಾ.ಹಿ.ಚಿ.ಬೋರಲಿಂಗಯ್ಯ ಮತ್ತು ಎ.ಎಸ್.ಪ್ರಭಾಕರ ಸಂಪಾದಿಸಿರುವ ‘ಕರ್ನಾಟಕ ಬುಡಕಟ್ಟು ಕೋಶ’ ಎಂಬ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಬುಡಕಟ್ಟು ಸಮುದಾಯವೊಂದು ಅನ್ಯ ಪ್ರಭಾವಗಳಿಗೆ ಮುಖಾಮುಖಿಯಾಗುತ್ತ ತನ್ನ ಅನನ್ಯತೆಯನ್ನು ಕಾಯ್ದುಕೊಳ್ಳುತ್ತಲೇ ಇರುತ್ತದೆ ಎನ್ನುವುದಕ್ಕೆ ನಮ್ಮ ಸೋಲಿಗರನ್ನು ಉದಾಹರಿಸಬಹುದು. ಬಿಳಿಗಿರಿರಂಗಸ್ವಾಮಿಯ ಪ್ರಸಂಗವಿದ್ದಂತೆಯೇ ಸೋಲಿಗರ ಮೂಲಪುರುಷ ಎಂದೇ ಭಾವಿಸಲ್ಪಡುವ ನೀಲಯ್ಯ ಸಂಕಮ್ಮರ ಕತೆಯಲ್ಲಿ ಮಲೆ ಮಾದೇಶ್ವರ ನೀಲಯ್ಯನ ಪುರುಷಾಧಿಕಾರವನ್ನು ನಾಶಮಾಡಿ ಸಂಕಮ್ಮನ ಹೆಣ್ತನವನ್ನು ಎತ್ತಿ ಹಿಡಿಯುವ ರೋಚಕ ಜಾನಪದ ಕತೆಗಳಿವೆ. ಇದು ಮಹಿಳೆಯರ ಕುರಿತು ಒಂದು ಬುಡಕಟ್ಟು ಸಮುದಾಯಕ್ಕಿರುವ ಉನ್ನತ ಮೌಲ್ಯಗಳು ಇಲ್ಲಿ ಎದ್ದು ಕಾಣುತ್ತವೆ. ಬಹುಷ ಸೋಲಿಗರಲ್ಲಿ ಇದ್ದಷ್ಟು ಜಾನಪದ ಕತೆಗಳು, ಹಾಡುಗಳು ಮಿಕ್ಕ ಯಾವ ಬುಡಕಟ್ಟುಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಇಲ್ಲವೇನೋ ಎನಿಸುತ್ತೆ! ಮೈಸೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಬಿಳಿಗಿರಿರಂಗನ ಬೆಟ್ಟ, ಮಲೆ ಮಾದೇಶ್ವರ ಬೆಟ್ಟ, ಯಳಂದೂರು, ಹುಣಸೂರು ಮತ್ತು ಹೆಗ್ಗಡದೇವನಕೋಟೆಯ ಸುತ್ತಲಿನ ಕಾಡು ಮತ್ತು ಕಾಡಂಚಲ್ಲಿ ಬಹುತೇಕ ಸೋಲಿಗ ಸಮುದಾಯ ನೆಲೆಸಿದೆ. ಇವರು ವಾಸಿಸುವ ಸ್ಥಳಗಳಿಗೆ ಪೋಡು ಎನ್ನುತ್ತಾರೆ. ಸಾಮಾನ್ಯವಾಗಿ ಕಣಿವೆಗಳಲ್ಲಿ, ನೀರು ಹರಿವ ಜಾಗಗಳಲ್ಲಿ ಹುಲ್ಲಿನ ಗುಡಿಸಲುಗಳನ್ನು ಹಾಕಿಕೊಂಡು ಸೋಲಿಗರು ಪೋಡುಗಳನ್ನು ಕಟ್ಟಿಕೊಂಡು ವಾಸಿಸುತ್ತಾರೆ. ಒಮ್ಮೆ ಸೋಲಿಗರ ಬದುಕುಗಳನ್ನು ಹತ್ತಿರದಿಂದ ನೋಡುತ್ತಾ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಪೋಡುಗಳನ್ನು ಹೊಕ್ಕುತ್ತಾ ಹೊರಟು ದಟ್ಟಕಾಡಿನ ನಡುವೆ, ನೂರಾರು ವರ್ಷ ಪ್ರಾಯದ ಪ್ರಾಚೀನ ಸಂಪಿಗೆ ಮರವೊಂದನ್ನು ಕಂಡೆ. ‘ದೊಡ್ಡಸಂಪಿಗೆ’ ಎಂದು ಕರೆಯಲಾಗುವ ಆ ಮರಕ್ಕೆ ಸೋಲಿಗರು ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತಿದ್ದುದನ್ನು ಕಂಡೆ, ಆ ಮರದ ಪಕ್ಕ ನೀರಿನ ಜರಿಯೊಂದು ಹರಿಯುತ್ತದೆ. ಅಲ್ಲಿನ ಗುಡ್ಡದ ಮೇಲೆ ಒಂದೆರಡು ಸೋಲಿಗ ಕುಟುಂಬಗಳು ಗುಡಿಸಲು ಹಾಕಿಕೊಂಡು ಸಂಸಾರ ಮಾಡಿಕೊಂಡಿದ್ದವು. ನಾನು ಆ ಗುಡಿಸಲ ಒಳಹೊಕ್ಕು ಅವರನ್ನು ಮಾತಾಡಿಸಿದೆ. ತಿನ್ನಲು ಪ್ರೀತಿಯಿಂದ ಪರಂಗಿ ಹಣ್ಣು ಕೊಟ್ಟರು. ಕಾಡಲ್ಲಿ ಬೆಳೆದಿದ್ದರಿಂದಲೋ ಏನೋ ಪರಂಗಿಹಣ್ಣು ವಿಶೇಷ ರುಚಿಯಿಂದ ಕೂಡಿತ್ತು. ‘‘ಈ ಕಾಡಿನ ನಡುವೆ ಒಂದೆರಡು ಕುಟುಂಬಗಳಷ್ಟೇ ಯಾಕೆ ಇದ್ದೀರಿ..?’’ ಎಂದೆ. ಅವರು ದೊಡ್ಡಸಂಪಿಗೆ ಮರವನ್ನು ತೋರಿಸಿ, ‘‘ಈ ಮರ ನಮ್ಮ ಪೂರ್ವಿಕರು, ಅನಾದಿಕಾಲದಿಂದಲೂ ನಮ್ಮ ತಾತಮುತ್ತಾತಂದಿರು ಈ ನಮ್ಮ ದೊಡ್ಡಸಂಪಿಗೆ ಎಂಬ ಪೂರ್ವಿಕರೊಂದಿಗೆ ಬದುಕಿಬಾಳಿ ಹೋಗಿದ್ದಾರೆ, ನಾವೂ ಕೂಡ ಈ ದೊಡ್ಡಸಂಪಿಗೆ ಮರವೆಂಬ ಈ ಪೂರ್ವಿಕರನ್ನು ನೋಡಿಕೊಂಡು ಅವರೊಂದಿಗೆ ಇಲ್ಲೇ ಬದುಕುತ್ತಿದ್ದೇವೆ..’’ ಎಂದರು. ಮರವೊಂದನ್ನು ತಮ್ಮ ಪೂರ್ವಿಕರು ಎಂದು ಭಾವಿಸುವ ಸೋಲಿಗ ಸಮುದಾಯದ ಬುಡಕಟ್ಟು ಸಂಸ್ಕೃತಿಯನ್ನು ಕಂಡು ದಂಗುಬಡಿದುಹೋದೆ! ಸೋಲಿಗರಲ್ಲಿ ಐದು ಕುಲದವರು ಮತ್ತು ಏಳು ಕುಲದವರು ಎಂಬ ಎರಡು ಪಂಗಡಗಳಿವೆ. ಐದು ಕುಲದವರಲ್ಲಿ ಹೊಂಗೆಲದ ಕುಲ, ಅಲುರು ಕುಲ, ಬೆಲ್ಲದ ಕುಲ, ಸೂರ್ಯ ಕುಲ, ತೆನೇರ ಕುಲ ಎಂದಿದ್ದರೆ, ಏಳು ಕುಲದವರಲ್ಲಿ ಜೇನು ಕುಲ ಮತ್ತು ಕುಂಬಳು ಕುಲ ಎಂಬ ಎರಡು ಟಿಸಿಲುಗಳು ಮಾತ್ರ ಇವೆ. ಈ ಕುಲಗಳಲ್ಲಿ ಮದುವೆಯ ಒಳಸಂಬಂಧಗಳು ಏರ್ಪಡುವುದಿಲ್ಲ. ಬುಡಕಟ್ಟು ಸಮುದಾಯಗಳಲ್ಲಿ ಇಂತಹ ಕುಲಭೇದಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸೋಲಿಗರು ಮೂಲತಃ ಕೃಷಿಕರು, ಮೂಲ ದಿಂದಲೂ ಇವರು ಕೆತ್ಲು ಬೇಸಾಯ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಬೇಸಾಯದಲ್ಲಿ ಬರುವ ಧಾನ್ಯ ವರ್ಷವಿಡೀ ಆಗುವುದಿಲ್ಲ. ಈ ಕಾರಣಕ್ಕೆ ಕಾಡಿನ ಉಪ ಉತ್ಪನ್ನಗಳನ್ನು ಆಹಾರಕ್ಕಾಗಿ ಸಂಗ್ರಹಿಸುತ್ತಾರೆ. ರಾಗಿ ಇವರ ಪ್ರಮುಖ ಬೆಳೆ, ರಾಗಿಯೊಂದಿಗೆ ಇತರ ಸಣ್ಣಪುಟ್ಟ ಧಾನ್ಯಗಳನ್ನು ಬೆಳೆಯುತ್ತಾರೆ. ಸೋಲಿಗರದು ವಿಶಿಷ್ಟವಾದ ಜೀವನ ವಿಧಾನ. ತಲೆತಲಾಂತರಗಳಿಂದಲೂ ಇವರು ಕಾಡನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡ ಕಾರಣ ಇವರ ಜೀವನ ವಿಧಾನದಲ್ಲಿ ಕಾಡಿನ ಸಹಜ ರೀತಿನೀತಿಗಳಿವೆ. ಕಾಡಿನಲ್ಲಿ ಬದುಕಲಿಕ್ಕೆ ಬೇಕಾದ ಸರಳತೆ ಮತ್ತು ಸಂಕೀರ್ಣತೆಗಳೂ ಇವರ ಜೀವನ ವಿಧಾನದಲ್ಲಿವೆ. ಪೋಡಿನ ಸಹಜೀವನ, ಇವರ ಆಚರಣೆಗಳು, ಕಾಡಿನ ಮೇಲಿನ ಪ್ರೀತಿ ಇವೆಲ್ಲ ಇವರ ಬದುಕನ್ನು ಸುಂದರವಾಗಿ ರೂಪಿಸಿವೆ. ಒಟ್ಟಂದದಲ್ಲಿ ಇವರು ಸದಾಕಾಲ ಕ್ರಿಯಾಶೀಲವಾಗಿರಲು ಪೋಡಿನ ಸಹಜೀವನ ಒತ್ತಾಸೆಯಾಗಿದೆ. ಇವರದೇ ಆದ ದೈವಿಕ ಆಚರಣೆಗಳು, ವಿಧಿವಿಶೇಷಗಳು ಕಾಲಾಂತರದಲ್ಲಿ ರೂಪುಗೊಳ್ಳುತ್ತಾ ಬಂದಿವೆ. ಸೋಲಿಗರ ಮುಖ್ಯ ದೈವ ಬಿಳಿಗಿರಿರಂಗಯ್ಯಸ್ವಾಮಿ, ಇವರ ಜತೆಗೆ ಮಲೆ ಮಾದೇಶ್ವರ, ಜಡೇಸ್ವಾಮಿ, ಬಸವೇಶ್ವರ, ದೊಡ್ಡಸಂಪಿಗೆ ಮತ್ತು ಚಿಕ್ಕಸಂಪಿಗೆ ದೇವರುಗಳನ್ನು ಆರಾಧಿಸುತ್ತಾರೆ. ಸೋಲಿಗರು ಸಹಜವಾಗಿ ಮುಖ್ಯವಾಹಿನಿಯ ಕೆಲ ಹಬ್ಬಗಳನ್ನು ಆಚರಿಸುತ್ತಾರೆ, ಆದರೆ ‘ರೊಟ್ಟಿ ಹಬ್ಬ’ ಮಾತ್ರ ಕೃಷಿಬೆಳೆಯ ಸಮೃದ್ಧಿಯನ್ನು ಸಾಮುದಾಯಿಕವಾಗಿ ಆಚರಿಸುವ ಹಬ್ಬ. ಸಂಕ್ರಾಂತಿಯ ನಂತರದ ಸುಗ್ಗಿ ಕಾಲದಲ್ಲಿ ಕೃಷಿ ಚಟುವಟಿಕೆಗಳ ಬಿಡುವಿನ ನಡುವೆ ಇಡೀ ಸಮುದಾಯ ಕೂಡಿ ಸಂಭ್ರಮದಿಂದ ಆಚರಿಸುವ ಹಬ್ಬವಿದು. ಪೋಡಿನ ದೇವಾಲಯದ ಮುಂದೆ ಹಾಕಿದ ಕೊಂಡದಲ್ಲಿ ಹಸಿ ಹಿಟ್ಟನ್ನು ಎಲೆಗಳ ಮೇಲೆ ಬೇಯಿಸಿ ರೊಟ್ಟಿ ತಯಾರಿಸಲಾಗುತ್ತದೆ. ಹೀಗೆ ತಯಾರಿಸಿದ ರೊಟ್ಟಿಗೆ ಸೋರೆಕಾಯಿ ಮತ್ತು ಕುಂಬಳಕಾಯಿ ಪಲ್ಯ ತಯಾರಾಗುತ್ತದೆ. ಹಬ್ಬದಲ್ಲಿ ವಿಶೇಷ ಪಾತ್ರ ವಹಿಸುವ ತಮ್ಮಡಿ ಬಂದು ರೊಟ್ಟಿ ಮತ್ತು ಪಲ್ಯಗಳನ್ನು ಐದು ಎಲೆಗಳ ಮೇಲೆ ಎಡೆ ಹಾಕಿ ದೇವರಿಗೆ ಅರ್ಪಿಸುತ್ತಾನೆ. ದೇವರು ಬಂದು ತಿನ್ನುವುದನ್ನು ನೋಡದಂತೆ ಎಲ್ಲರೂ ಎಡೆಗೆ ಬೆನ್ನು ತಿರುಗಿಸಿ ನಿಲ್ಲುತ್ತಾರೆ. ನಂತರ ದೇವರಿಗೆ ತಮ್ಮ ಕಷ್ಟಸುಖಗಳನ್ನು ನಿವೇದಿಸುತ್ತಾರೆ. ಅಂದಿನ ರಾತ್ರಿ ಗೋರುಕಾನ ಕುಣಿತ ಇರುತ್ತದೆ. ಹೀಗೆ ಎಲ್ಲರೂ ನರ್ತಿಸುತ್ತಾ ಊಟ ಮಾಡುತ್ತಾ ರೊಟ್ಟಿಹಬ್ಬವನ್ನು ಸಂಭ್ರಮಿಸುತ್ತಾರೆ. ಹೊಸರಾಗಿ ಹಬ್ಬ ಅಂತಲೂ ಕೃಷಿಗೆ ಸಂಬಂಧಿಸಿದಂತಹ ಹಬ್ಬವನ್ನು ಸೋಲಿಗರು ಆಚರಿಸುತ್ತಾರೆ. ಈ ಹಬ್ಬದಲ್ಲಿ ರಾಗಿಯಿಂದ ತಯಾರಿಸಿದ ಅನೇಕ ತಿಂಡಿ, ತಿನಿಸುಗಳನ್ನು ದೇವರಿಗೆ ಎಡೆ ಹಾಕಿ ಹಬ್ಬ ಮಾಡುತ್ತಾರೆ. ಸೋಲಿಗರೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಸುದರ್ಶನ್ ಈ ಸಮುದಾಯದಲ್ಲಿ ಅತ್ಯಂತ ಪ್ರೀತಿಪಾತ್ರರು. ಸೋಲಿಗ ಸಮುದಾಯ ಕುಂತು ಹೆರಿಗೆ ಮಾಡಿಸುವ ಬುಡಕಟ್ಟು ಅರಿವಿನ ಸುಲಭ ವಿಧಾನವನ್ನು ಜಗತ್ತಿಗೆ ತಿಳಿಸಿ ಹೇಳಿದವರು ಇವರು. ಸಿಕಲ್ ಸೆಲ್ ಕಾಯಿಲೆಯಿಂದ ನರಳುತ್ತಿದ್ದ ಸೋಲಿಗರನ್ನು ಈ ಕಾಯಿಲೆಯಿಂದ ಪಾರು ಮಾಡಿದ ಕೀರ್ತಿ ಇವರದು. ಇಷ್ಟೆಲ್ಲಾ ಹಿನ್ನೆಲೆಯಿರುವ ಸೋಲಿಗರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಇವರಿಗೆ ಇಂದಿಗೂ ಸರಿಯಾದ ಸೂರಿಲ್ಲ, ಶಿಕ್ಷಣವಿಲ್ಲ, ಆರೋಗ್ಯವಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ಸೋಲಿಗರಿಗೆ ಸರಕಾರಿ ಉದ್ಯೋಗ ದಲ್ಲಿ ಮತ್ತು ರಾಜಕೀಯ ಅಧಿಕಾರದಲ್ಲಿ ಇಂದಿಗೂ ಪ್ರಾತಿನಿಧ್ಯವಿಲ್ಲ ಎನ್ನುವುದು ದುರಂತ.
ಮುಸ್ಲಿಮರ ವಿರುದ್ಧ ಮಾತ್ರ ಕಾಂಗ್ರೆಸ್ ಕ್ರಮವೇ?
ಮುಸ್ಲಿಮ್ ನಾಯಕರೆಂದರೆ ಕಾಂಗ್ರೆಸ್ ಪಕ್ಷಕ್ಕೆ ಕೇವಲವಾಗಿ ಹೋಗಿದೆ. ಕಾಂಗ್ರೆಸ್ನಲ್ಲಿನ ಮುಸ್ಲಿಮ್ ನಾಯಕರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಜೊತೆ ಸರಿಸಮಾನವಾಗಿ ಕುಳಿತು ಮಾತುಕತೆ ನಡೆಸುವ ಶಕ್ತಿ ಬಂದೊಡನೆ ಪಕ್ಷದಲ್ಲಿ ಹೇಗಾದರೂ ಮಾಡಿ ಮೂಲೆಗುಂಪು ಮಾಡುವ ಕಸರತ್ತು ಪ್ರಾರಂಭವಾಗಿ ಬಿಡುತ್ತದೆ. ಸಿ.ಕೆ. ಜಾಫರ್ ಶರೀಫ್, ರೋಷನ್ ಬೇಗ್, ಸಿ.ಎಂ. ಇಬ್ರಾಹೀಂ ಮತ್ತು ಇತ್ತೀಚೆಗೆ ಝಮೀರ್ ಅಹ್ಮದ್ ಹಾಗೂ ನಸೀರ್ ಅಹ್ಮದ್ ಅವರನ್ನು ಪಕ್ಷ ಮತ್ತು ರಾಜ್ಯ ನಾಯಕರು ನಡೆಸಿಕೊಂಡ ಮತ್ತು ನಡೆಸಿಕೊಳ್ಳುತ್ತಿರುವ ರೀತಿಯೇ ಇದಕ್ಕೆ ಉದಾಹರಣೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಯಿಂದಾಗಿ ಪ್ರಾರಂಭವಾಗಿರುವ ರಾಜಕೀಯ ಬೆಳವಣಿಗೆಗಳು ಕೇವಲ ಆ ಕ್ಷೇತ್ರದ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಸೀಮಿತವಾಗಿಲ್ಲ. ಬದಲಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟು ಹಾಗೂ ದ್ವಂದ್ವಗಳಿಗೆ ಸಂಬಂಧಿಸಿದೆ. ಉಪ-ಚುನಾವಣೆಯ ಅಂತಿಮ ಫಲಿತಾಂಶಕ್ಕೂ ಮುಂಚೆಯೇ ರಿಝ್ವಾನ್ ಅರ್ಷದ್ ಹಾಗೂ ಸಲೀಮ್ ಅಹ್ಮದ್ ಅವರು ನಡೆಸಿದ ಮಾಧ್ಯಮ ಸಂವಾದವು ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ನ ಸೋಲು ಖಚಿತವೆಂಬ ಸಂದೇಶವನ್ನು ರಾಜ್ಯದ ಜನರಿಗೆ ರವಾನಿಸಿದಂತಿದೆ. ಅಲ್ಲದೆ ಪಕ್ಷವು ಸಿದ್ದು ಡಿ.ಕೆ. ಬಣದ ಆಂತರಿಕ ಕಚ್ಚಾಟಗಳಿಂದಲೇ ದುರ್ಬಲಗೊಳ್ಳುತ್ತಿರುವುದೂ ಬಹಿರಂಗಗೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪಕ್ಷವು ಎಂದಿನಂತೆಯೇ ಮತ್ತೊಮ್ಮೆ ತನ್ನದೇ ಪಕ್ಷದ ಮುಸ್ಲಿಮ್ ನಾಯಕತ್ವವನ್ನು ವ್ಯವಸ್ಥಿತವಾಗಿ ಮುಗಿಸಿಹಾಕುವ ಎಲ್ಲಾ ತಯಾರಿ ಮಾಡಿಕೊಂಡಂತಿದೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಅತ್ಯಂತ ಸಮಸ್ಯಾತ್ಮಕವಾದದ್ದು ದಾವಣಗೆರೆ ದಕ್ಷಿಣ ಕ್ಷೇತ್ರದ ಸ್ಥಳೀಯ ಜನರ, ಕಾರ್ಯಕರ್ತರ ಭಾವನೆಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡದೆ, ಪಕ್ಷಕ್ಕಾಗಿ ದುಡಿಯದ, ಕ್ಷೇತ್ರದಲ್ಲಿ ಸುತ್ತಾಡದ, ಜನಸಂಪರ್ಕವೇ ಇಲ್ಲದ, ಯಾವುದೇ ಅನುಭವವೇ ಇಲ್ಲದ ಶಾಮನೂರು ಕುಟುಂಬದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು. ಕುಟುಂಬ ರಾಜಕಾರಣದಿಂದಾಗಿ ಬೇಸತ್ತು ವಿನಯ್ಕುಮಾರ್ರಂತಹ ವಿದ್ಯಾವಂತ, ಹಿಂದುಳಿದ ವರ್ಗದ, ಜಾತ್ಯತೀತ ತತ್ವದಡಿ ನಂಬಿಕೆಯ ಯುವಕ ಬೇರೆ ಯಾವುದೇ ದಾರಿಯಿಲ್ಲದೆ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೇರುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷವೇ ಸೃಷ್ಟಿಸಿದೆ. ಜಬ್ಬಾರ್ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೆಚ್ಚು ಕಡಿಮೆ 40 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷವು ಒಬ್ಬರನ್ನು ಶಾಸಕರನ್ನಾಗಿ ಮಾಡುತ್ತದೆ, ಮಂತ್ರಿಗಿರಿಯನ್ನೂ ನೀಡುತ್ತದೆ, ಅವರ ಹೆಂಡತಿಯನ್ನು ಸಂಸದರನ್ನಾಗಿಯೂ ಮಾಡುತ್ತದೆ. ಅಷ್ಟೇ ಅಲ್ಲದೆ ಮಗನನ್ನೂ ಶಾಸಕನನ್ನಾಗಿ ಮಾಡಲೂ ತಯಾರಾಗಿದೆ. ಆದರೆ ಮತ್ತೊಬ್ಬ ಕಾರ್ಯಕರ್ತನಿಗೆ ಬಿ-ಫಾರ್ಮ್ ಪಡೆಯುವುದೇ ಯುದ್ಧವಾಗಿ ಹೋಗಿದೆ. ಇದು ನಿಜವಾಗಲೂ ಸಮಸಮಾಜದ ಪಾರದರ್ಶಕ ರಾಜಕಾರಣವೇ? ಇಂತಹ ಕ್ರಮಗಳಿಂದ ಪಕ್ಷ ಮತ್ತೆ ಅಧಿಕಾರದಲ್ಲಿ ಬರಲು ಸಾಧ್ಯವೇ? ಕಾಂಗ್ರೆಸ್ ಪಕ್ಷದೊಳಗೆ ಬೇರೂರಿರುವ ಫ್ಯೂಡೆಲ್ ಮನಸ್ಥಿತಿಯ ನಾಯಕರಿಗೆ ನೀರೆರೆಯುವ ಕೆಲಸ ನಿಲ್ಲಿಸಬೇಕಾಗಿದೆ. ಉಪಚುನಾವಣೆಗಿಂತ ಮುಂಚಿನ ಹಾಗೂ ನಂತರದ ರಾಜ್ಯ ಕಾಂಗ್ರೆಸ್ ಪಕ್ಷದ ನಡವಳಿಕೆ ನೋಡಿದರೆ ಅದು ಕೇವಲ ಶಾಮನೂರು ಕುಟುಂಬದ ಹಿತಾಸಕ್ತಿಗಾಗಿಯೇ ಶ್ರಮಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ವೇಳೆ ಕೆಲ ಮುಸ್ಲಿಮ್ ನಾಯಕರು ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬುದು ನಿಜವೇ ಆಗಿದ್ದರೆ, ಅದಕ್ಕೆ ಆಧಾರಗಳಿದ್ದರೆ ಕ್ರಮವಾಗಲಿ. ಆದರೆ ಅದಕ್ಕಿಂತಲೂ ಮುಂಚೆ ಹಿಂದೆ ಜರುಗಿದ ವಿವಿಧ ಚುನಾವಣೆಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ ಪಕ್ಷದ ಇತರ ನಾಯಕರ ವಿರುದ್ಧವೂ ಕ್ರಮವಾಗಲಿ. 2013ರಲ್ಲಿ ಜಿ. ಪರಮೇಶ್ವರ್ ಅವರನ್ನು, ವಿಧಾನ ಪರಿಷತ್ ಚುನಾವಣೆಯಲ್ಲಿ ಇಕ್ಬಾಲ್ ಅಹಮದ್ ಸರಡಗಿ ಅವರನ್ನು, ಜಾಫರ್ ಷರೀಫ್ರ ಮೊಮ್ಮಗ ಸಿ.ಕೆ. ಅಬ್ದುಲ್ ರಹ್ಮಾನ್ ಶರೀಫ್ ಅವರನ್ನು, ಗಂಗಾವತಿ ಕ್ಷೇತ್ರದ ಇಕ್ಬಾಲ್ ಅನ್ಸಾರಿಯವರನ್ನು, ಬೆಂಗಳೂರು ಸೆಂಟ್ರಲ್ನಲ್ಲಿ ಮನ್ಸೂರ್ ಅಲಿ ಖಾನ್ ಅವರನ್ನು ಹಾಗೂ ರಾಯಚೂರು ನಗರ ಕ್ಷೇತ್ರದ ಸೈಯದ್ ಯಾಸೀನ್ ಅವರನ್ನು, ವಿಜಯಪುರ ನಗರ ಕ್ಷೇತ್ರದ ಮಕಬೂಲ್ ಬಾಗವಾನ್ ಹಾಗೂ ಅಬ್ದುಲ್ ಹಮೀದ್ ಮುಶ್ರೀಫ್ ಅವರನ್ನು ಪದೇ-ಪದೇ ಸೋಲಿಸಲು ಶ್ರಮಿಸಿದ ಕಾಂಗ್ರೆಸ್ ಪಕ್ಷದೊಳಗಿನ ನಾಯಕರು ಯಾರು? ಇವರ ವಿರುದ್ಧ ಪಕ್ಷವಿರೋಧಿ ಚಟುವಟಿಕೆಯ ವರದಿ ಹೈಕಮಾಂಡ್ ಕೈಗೆ ತಲುಪಿಲ್ಲವೇ? ಇವರೆಲ್ಲರ ವಿರುದ್ಧ ಯಾವ-ಯಾವ ರೀತಿಯ ಕ್ರಮವಾಗಿದೆ? ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಬಲಿಷ್ಠ ಸಮುದಾಯಕ್ಕೆ ಸೇರಿದ ನಾಯಕರು ಪಾಲ್ಗೊಂಡಿದ್ದರೆ ಕ್ರಮಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ನ ಬೆನ್ನುಮೂಳೆ ಮುರಿದು ಬೀಳುತ್ತದೆಯೇ? ಒಂದೆಡೆ ರಾಹುಲ್ ಗಾಂಧಿ ಆರೆಸ್ಸೆಸ್, ಬಿಜೆಪಿಯನ್ನು ತಮ್ಮ ಸೈದ್ಧಾಂತಿಕ ಎದುರಾಳಿ ಎನ್ನುವುದು ಇನ್ನೊಂದೆಡೆ ಅವರದೇ ಪಕ್ಷದ ಸುರ್ಜೆವಾಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕುರಿತು ದ್ವೇಷ ಕಾರುವ ವಿಶ್ವೇಶ್ವರ್ ಭಟ್ರವರ ಮನೆಗೆ ಭೇಟಿ ನೀಡಿ ತಿಂಡಿ ಸವಿಯುವುದು. ಒಂದೆಡೆ ರಾಹುಲ್ ಗಾಂಧಿ ದೇಶಾದ್ಯಂತ ಜಾತಿಸಮೀಕ್ಷೆಗಾಗಿ ಹೋರಾಡುವುದು, ಮತ್ತೊಂದೆಡೆ ಶಾಮನೂರು ಶಿವಶಂಕರಪ್ಪ ಜಾತಿ ಸಮೀಕ್ಷೆ ವಿರೋಧಿಸುವುದು ಮತ್ತು ಯಡಿಯೂರಪ್ಪ ಅವರ ಮಕ್ಕಳನ್ನು ಚುನಾವಣೆಯಲ್ಲಿ ಗೆಲ್ಲಿಸಲು ಬಹಿರಂಗವಾಗಿ ಕರೆ ನೀಡುವುದು ಕಾಂಗ್ರೆಸ್ ಪಕ್ಷಕ್ಕೆ ಪಕ್ಷ ವಿರೋಧಿ ಎನಿಸುವುದಿಲ್ಲವೇ? ಕಾಂಗ್ರೆಸ್ನ ಶಾಸಕರನ್ನು ಖರೀದಿಸಿ ಸರಕಾರಗಳನ್ನು ಬೀಳಿಸಿದ ಕೀರ್ತಿ ಹೊಂದಿರುವ ಅಮಿತ್ ಶಾರೊಟ್ಟಿಗೆ ಇಶಾ ಫೌಂಡೇಶನ್ನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ವೇದಿಕೆ ಹಂಚಿಕೊಂಡಿದ್ದು ಪಕ್ಷದ ನೀತಿಗೆ ಹೊಂದುವಂತಹದ್ದೇ? ರಾಹುಲ್ ಗಾಂಧಿ ತನ್ನ ಭಾಷಣಗಳಲ್ಲಿ ನಿರಂತರವಾಗಿ ಅದಾನಿ-ಅಂಬಾನಿಯವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬ ಸಮೇತ ಅನಂತ್ ಅಂಬಾನಿ ಮದುವೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡಿದ್ದು ಪಕ್ಷದ ಹಿತವನ್ನು ಕಾಯಲೇ? ಇದೆಲ್ಲದಕ್ಕಾಗಿಯೇ ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗದ ಜನರು ಮತ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆಯೇ? ತನ್ನ ಬೆಂಬಲಿಗರೊಂದಿಗೆ ಸಿ.ಎಂ. ಬದಲಾವಣೆ ಹೇಳಿಕೆಗಳನ್ನು ಪದೇ-ಪದೇ ಕೊಡಿಸುವ ಡಿ.ಕೆ. ಶಿವಕುಮಾರ್ ಯಾವ ಪಕ್ಷದ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ? ಇವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾಕಿನ್ನು ಯಾವುದೇ ಕ್ರಮಕೈಗೊಂಡಿಲ್ಲ? 2021ರಲ್ಲಿ ಕೆಪಿಸಿಸಿ ಕಚೇರಿಯ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಎಂ.ಎ. ಸಲೀಮ್ ಹಾಗೂ ವಿ.ಎಸ್. ಉಗ್ರಪ್ಪ ನಡುವೆ ಡಿ.ಕೆ. ಶಿವಕುಮಾರ್ ಕುರಿತು ನಡೆದ ಚರ್ಚೆಯು ಅಕಸ್ಮಾತ್ ಮೈಕ್ ಆನ್ ಇದ್ದದ್ದರಿಂದ ರೆಕಾರ್ಡ್ ಆಗಿ ಮಾಧ್ಯಮಗಳಲ್ಲಿ ಲೀಕ್ ಆದಾಗಲೂ ಕಾಂಗ್ರೆಸ್ ಬಲಿಪಡೆದದ್ದು ಮುಸ್ಲಿಮ್ ನಾಯಕನನ್ನೇ. ಆದರೆ, ಉಗ್ರಪ್ಪ ವಿರುದ್ಧ ಇಂದಿಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ನ ಶಕ್ತಿಯು ಕೇವಲ ಮುಸ್ಲಿಮ್ ನಾಯಕರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಸೀಮೀತವಾಗಿದೆಯೇ? ದಾವಣಗೆರೆ ಉಪ-ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾದ ಬಳಿಕದ ಚಟುವಟಿಕೆಗಳನ್ನು ಗಮನಿಸಿದರೆ ಮುಸ್ಲಿಮ್ ನಾಯಕರ ನಡುವೆಯೇ ಒಗ್ಗಟ್ಟಿನ ಸಮಸ್ಯೆಯಿರುವುದು ಬೆಳಕಿಗೆ ಬರುತ್ತಿದೆ. ಮಂತ್ರಿಮಂಡಲ ಪುನರ್ರಚನೆಯಲ್ಲಿ ಸ್ಥಾನ ಪಡೆಯಲಿರುವ ಜೂನಿಯರ್ ನಾಯಕರಿಗೆ ಸೀನಿಯರ್ ಲೀಡರ್ಗಳ ತೇಜೋವಧೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷವನ್ನು ಆಗ್ರಹಿಸುವ ಟೂಲ್ ಕಿಟ್ನ್ನು ಪಕ್ಷವೇ ನೀಡಿದ್ದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ. ಸಾಮಾನ್ಯವಾಗಿ ಪಕ್ಷ ವಿರೋಧಿ ಚಟುವಟಿಕೆಗಳ ವಿಷಯಗಳನ್ನು ನೋಡಿಕೊಳ್ಳಲು ಪಕ್ಷದಲ್ಲಿ ಶಿಸ್ತುಸಮಿತಿ ಎಂಬುದೊಂದು ಇರುತ್ತದೆ. ಆ ಸಮಿತಿಗೆ ಸಂಬಂಧಿಸಿದವರು ಹೇಳಿಕೆ ನೀಡಲಿ, ಮಾಧ್ಯಮದ ಮುಂದೆ ಚರ್ಚಿಸಲಿ, ಆದರೆ ಮುಸ್ಲಿಮ್ ನಾಯಕರ ವಿರುದ್ಧ ಅದೇ ಸಮುದಾಯದ ನಾಯಕರನ್ನು ಬಳಸಿಕೊಳ್ಳಬೇಕಾದ ಜರೂರತ್ತಾದರೂ ಏನಿತ್ತು? ಇದೇ ಅಲ್ಲವೇ ಬ್ರಿಟಿಷರ ಒಡೆದಾಳುವ ನೀತಿ? ಮುಸ್ಲಿಮ್ ನಾಯಕರೆಂದರೆ ಕಾಂಗ್ರೆಸ್ ಪಕ್ಷಕ್ಕೆ ಕೇವಲವಾಗಿ ಹೋಗಿದೆ. ಕಾಂಗ್ರೆಸ್ನಲ್ಲಿನ ಮುಸ್ಲಿಮ್ ನಾಯಕರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಜೊತೆ ಸರಿಸಮಾನವಾಗಿ ಕುಳಿತು ಮಾತುಕತೆ ನಡೆಸುವ ಶಕ್ತಿ ಬಂದೊಡನೆ ಪಕ್ಷದಲ್ಲಿ ಹೇಗಾದರೂ ಮಾಡಿ ಮೂಲೆಗುಂಪು ಮಾಡುವ ಕಸರತ್ತು ಪ್ರಾರಂಭವಾಗಿ ಬಿಡುತ್ತದೆ. ಸಿ.ಕೆ. ಜಾಫರ್ ಶರೀಫ್, ರೋಷನ್ ಬೇಗ್, ಸಿ.ಎಂ. ಇಬ್ರಾಹೀಂ ಮತ್ತು ಇತ್ತೀಚೆಗೆ ಝಮೀರ್ ಅಹ್ಮದ್ ಹಾಗೂ ನಸೀರ್ ಅಹ್ಮದ್ ಅವರನ್ನು ಪಕ್ಷ ಮತ್ತು ರಾಜ್ಯ ನಾಯಕರು ನಡೆಸಿಕೊಂಡ ಮತ್ತು ನಡೆಸಿಕೊಳ್ಳುತ್ತಿರುವ ರೀತಿಯೇ ಇದಕ್ಕೆ ಉದಾಹರಣೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಮುಸ್ಲಿಮರನ್ನು ರಾಜ್ಯ-ರಾಷ್ಟ್ರಮಟ್ಟದ ನಾಯಕರನ್ನಾಗಿ ಬೆಳೆಯಲು ಉಳಿಯಲು ಬಿಡುತ್ತಿಲ್ಲ. ಏಕೆಂದರೆ ಯಾರಾದರೂ ಒಬ್ಬ ಮುಸ್ಲಿಮ್ ನಾಯಕ ಬಲಿಷ್ಠನಾಗಿ ಬಿಟ್ಟರೆ ರಾಜ್ಯದ 150ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಭಾವ ಬೀರಬಲ್ಲ ಶಕ್ತಿ ಬೆಳೆದುಬಿಡುತ್ತದೆ. ಮುಂದಿನ ದಿನಗಳಲ್ಲಿ ಗೃಹಮಂತ್ರಿ ಸ್ಥಾನವನ್ನೋ, ಉಪಮುಖ್ಯಮಂತ್ರಿ ಸ್ಥಾನವನ್ನೋ, ಹೆಚ್ಚು ಟಿಕೆಟ್ಗಳನ್ನೋ, ಹೆಚ್ಚು ಸಚಿವ ಸ್ಥಾನಗಳನ್ನೋ ನೀಡಬೇಕಾಗಬಹುದಾದ ಇಕ್ಕಟ್ಟನ್ನು ಪಕ್ಷ ಎದುರಿಸಬಹುದು ಅಥವಾ ಮುಸ್ಲಿಮ್ ನಾಯಕರು ಬಲಿಷ್ಠಗೊಂಡು ಇತರ ಪಕ್ಷಗಳಿಗೆ ಹೋದರೆ ತಮ್ಮ ಸಾಂಪ್ರದಾಯಿಕ ವೋಟ್ ಬ್ಯಾಂಕಿಗೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಮುಸ್ಲಿಮ್ ನಾಯಕತ್ವವನ್ನು ಆರಂಭದಲ್ಲಿಯೇ ಚಿವುಟಿ ಹಾಕುತ್ತಾ ಬರಲಾಗಿದೆ. ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ವಿಚಾರಕ್ಕೆ ಬಂದರೆ ಬಿಜೆಪಿ ಎಷ್ಟೋ ವಾಸಿ, ಮುಸ್ಲಿಮರ ವೋಟ್ಗಳೇ ಬೇಡ ವೆಂದು ನೇರವಾಗಿ ಹೇಳುತ್ತದೆ. ಹಾಗೆಯೇ ರಾಜಕೀಯ ಪ್ರಾತಿನಿಧ್ಯವೂ ನಿರಾಕರಿಸುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ವೋಟ್ ಮಾತ್ರ ಬೇಕು, ಅದೇ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯದ ವಿಚಾರ ಬಂದಾಗ ಪಕ್ಷದಲ್ಲಿ ಮುಸ್ಲಿಮರ ವಿರುದ್ಧ ಅಸ್ಪಶ್ಯತೆಯನ್ನು ಆಚರಿಸಲಾಗುತ್ತದೆ. ಸರಿಯಾದ ರೀತಿಯಲ್ಲಿ ರಾಜಕೀಯ ವಿಶ್ಲೇಷಣೆಯನ್ನು ಮಾಡಿದರೆ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷದಿಂದ ಏನೇನೂ ಸಿಕ್ಕಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಂದ ಎಲ್ಲವೂ ಪಡೆದುಕೊಂಡಿದೆ. ಮುಸ್ಲಿಮರ ಜನಸಂಖ್ಯೆಗನುಗುಣವಾಗಿ ಟಿಕೆಟ್ಗಳೂ ಸಿಕ್ಕಿಲ್ಲ, ಸಚಿವ ಸ್ಥಾನಗಳೂ ಸಿಕ್ಕಿಲ್ಲ. ಟಿಕೆಟ್ ಪಡೆದ ಅಭ್ಯರ್ಥಿಗಳೂ ಸಹ ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಿಂದಾಗಿ ಗೆದ್ದಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ಕಾರಣಕ್ಕಲ್ಲ. ಮುಸ್ಲಿಮರ ಮತಗಳು ಕಡಿಮೆಯಿರುವ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಇತರ ಸಮುದಾಯದ ಮತಗಳನ್ನು ಕೊಡಿಸಿ ಗೆಲ್ಲಿಸುವ ತಾಕತ್ತು ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಇಲ್ಲವೆನ್ನುವುದು ಬೆಳಕಿನಷ್ಟೇ ಸತ್ಯ. ಇದು ಕಾಂಗ್ರೆಸ್ನ ಸೋಕಾಲ್ಡ್ ಜಾತ್ಯತೀತ ಸಿದ್ಧಾಂತಕ್ಕೆ ಕನ್ನಡಿಯಂತಿದೆ. ಕಾಂಗ್ರೆಸನ್ನು ನಂಬಿ ಜೆಡಿಎಸ್ನಿಂದ ವಿಮುಖವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಬೇರೆ ಪರ್ಯಾಯವೇ ಇಲ್ಲದಂತಾಗಿದೆ. ಜೆಡಿಎಸ್ ಹೇಗೆಯೇ ಇರಲಿ ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ವಿಚಾರ ಬಂದಾಗ ಕಾಂಗ್ರೆಸ್ಗಿಂತಲೂ ನೂರು ಪಟ್ಟು ಉತ್ತಮ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನಾದರೂ ಕರ್ನಾಟಕದ ಮುಸ್ಲಿಮ್ ಸಮುದಾಯ ಕಾಂಗ್ರೆಸ್ಗೆ ನೀಡಿದ ಹೋಲ್ಸೇಲ್ ಬೆಂಬಲವನ್ನು ಮರುಪರಿಶೀಲಿಸಿ ಮುಂದಿನ ಚುನಾವಣೆಗಳಿಗೆ ತಯಾರಾಗಬೇಕಿದೆ. ಜೆಡಿಎಸ್ಗೆ ಮರಳುವುದು ಸರಿಯೆನಿಸದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ನಡವಳಿಕೆಯಿಂದ ಬೇಸತ್ತು ಮುಸ್ಲಿಮರು ಎಸ್ಡಿಪಿಐ ಹಾಗೂ ಉವೈಸಿಯ ಪಕ್ಷಗಳೆಡೆ ಮುಖಮಾಡಿದರೆ ಅದಕ್ಕೆ ಕಾಂಗ್ರೆಸ್ಪಕ್ಷ ಹಾಗೂ ಅದರ ನಾಯಕರೇ ಹೊಣೆಯಾಗಲಿದ್ದಾರೆ. ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸ ಲಾಗಿದೆ. ಇದರ ವಿರುದ್ಧ ಮುಸ್ಲಿಮ್ ಸಮುದಾಯವು ತನ್ನ ಆಕ್ರೋಶವನ್ನು ಹೊರಹಾಕದೆ ಇರಲಾರದು. ನಸೀರ್ ಅಹ್ಮದ್ ಅವರಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿದೆ. ಹೀಗೆ ಸಮುದಾಯದ ಮನ್ನಣೆ ಹಾಗೂ ಗೌರವವನ್ನು ಗಳಿಸಿದ ನಸೀರ್ ಅಹ್ಮದ್ರಂತಹ ನಾಯಕರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರೆ ಪಕ್ಷಕ್ಕೇ ನಷ್ಟವಾಗಲಿದೆ ಎಂಬ ಕನಿಷ್ಠ ಅರಿವು ಸಿದ್ದರಾಮಯ್ಯ ಅವರಿಗೆ ಇಲ್ಲದಿರುವುದು ದುರಂತ. ದಾವಣಗೆರೆಯಲ್ಲಿನ ಬಂಡಾಯವನ್ನು ಶಮನ ಮಾಡುವಂತೆ ಸಿದ್ದರಾಮಯ್ಯ ನೀಡಿದ ಆಜ್ಞೆಯನ್ನು ಝಮೀರ್ ಅಹ್ಮದ್ ಹಾಗೂ ನಸೀರ್ ಅಹ್ಮದ್ ಪಾಲಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯ ಅವರ ಅಹಂಗೆ ಧಕ್ಕೆಯಾಗಿದೆ. ಇಬ್ಬರನ್ನು ಹಣಿಯಲು ಮತ್ತಿಬ್ಬರು ಮುಸ್ಲಿಮ್ ಮುಖಂಡರನ್ನು ಸಿದ್ದರಾಮಯ್ಯ ಅವರೇ ಬಳಸುತ್ತಿದ್ದಾರೆಯೇ ಎಂಬ ಅನುಮಾನ ಸಮುದಾಯದ ಜನರಲ್ಲಿ ಮೂಡುತ್ತಿದೆ. ಪಕ್ಷದ ಆಂತರಿಕ ರಾಜಕೀಯವನ್ನು ಸರಿಪಡಿಸದೆ, ಮತ್ತಷ್ಟು ಗುಂಪುಗಾರಿಕೆಯನ್ನು ಸೃಷ್ಟಿಸಿ ಒಂದು ಗುಂಪನ್ನು ಮತ್ತೊಂದು ಗುಂಪಿನ ವಿರುದ್ಧ ಎತ್ತಿಕಟ್ಟುವುದು ಪಕ್ಷದ ಹಿತಾಸಕ್ತಿ ಕಾಪಾಡಲಿದೆಯೇ? ಹೇಗಿದ್ದರೂ ಇದು ತನ್ನ ಕೊನೆಯ ಚುನಾವಣೆ ಯಾರೇನು ಮಾಡಿಯಾರು ಎಂಬ ಉಡಾಫೆಯೇ? ತನ್ನನ್ನು ನಂಬಿದ, ಬೆಂಬಲಿಸಿದ, ಎರಡೆರಡು ಬಾರಿ ಮುಖ್ಯಮಂತ್ರಿಯಾಗಲು ಜೊತೆ ನಿಂತ ಸಮುದಾಯದ, ಅದರ ಪ್ರಾತಿನಿಧ್ಯದ ಕುರಿತು ಸಿದ್ದರಾಮಯ್ಯ ಅವರಿಗೆ ಯಾವುದೇ ಜವಾಬ್ದಾರಿ, ಕಾಳಜಿಯಿಲ್ಲವೆ? ಒಂದು ವೇಳೆ ದಾವಣಗೆರೆ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಸೋತಲ್ಲಿ ಅದರ ಹೊಣೆಯನ್ನು ಕೇವಲ ಮುಸ್ಲಿಮರ ತಲೆಗೆ ಕಟ್ಟದೆ ಇತರ ವಿಷಯಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ದಾವಣಗೆರೆಯ ಕುರುಬ ಸಮುದಾಯದ ಯುವನಾಯಕ ವಿನಯ್ ಕುಮಾರ್ ಬಿಜೆಪಿ ಬೆಂಬಲಿಸಿದ್ದಕ್ಕೆ ಕುರುಬ ಸಮುದಾಯದ ದೊಡ್ಡ ಸಂಖ್ಯೆಯ ಮತಗಳು ಬಿಜೆಪಿಗೆ ಹೋಗಿರುವ ಸಾಧ್ಯತೆಗಳು ಇವೆ. ಕುರುಬ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಸೋತ ಸಿದ್ದರಾಮಯ್ಯ ಸೋಲಿನ ಹೊಣೆ ಹೊತ್ತುಕೊಳ್ಳುವರೆ? ಬಿಜೆಪಿಯಿಂದ ದಲಿತ ಅಭ್ಯರ್ಥಿಯು ಕಣದಲ್ಲಿದ್ದರಿಂದ ಕಾಂಗ್ರೆಸ್ನ ದಲಿತ ಮತಗಳೂ ಸಹ ಬಿಜೆಪಿಗೆ ಹೋಗಿರುವ ಎಲ್ಲಾ ಲಕ್ಷಣಗಳಿವೆ. ಕಾಂಗ್ರೆಸ್ ಪರವಿದ್ದ ಲಿಂಗಾಯತರೂ, ವಿಶೇಷವಾಗಿ ಯುವ ಮತದಾರರು, ಕುಟುಂಬ ರಾಜಕಾರಣದಿಂದ ಬೇಸತ್ತು ಬಿಜೆಪಿಗೆ ಮತ ನೀಡಿರುವ ಸಾಧ್ಯತೆಗಳೂ ಹೆಚ್ಚಿವೆ. ಇವೆಲ್ಲವು ತಳಮಟ್ಟದಲ್ಲಿ ನಡೆದ ಸತ್ಯಾಸತ್ಯತೆಗಳು. ಇವುಗಳನ್ನು ನಿರ್ಲಕ್ಷಿಸಿ ಕೇವಲ ಮುಸ್ಲಿಮರ ತಲೆಗೆ ಸೋಲು ಕಟ್ಟುವುದು ಸರಿಯೇ?. ದಾವಣಗೆರೆ ಉಪ-ಚುನಾವಣೆಯಿಂದಾಗಿ ಎದುರಾಗಿರುವ ಬಿಕ್ಕಟ್ಟಿನ ಸಂದರ್ಭವು ಕಾಂಗ್ರೆಸ್ ಪಕ್ಷಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಮಯವಾಗಿದೆ. ಒಂದು ರಾಜಕೀಯ ಪಕ್ಷವು ವಿಶ್ವಾಸ, ಪ್ರಾತಿನಿಧ್ಯ ಹಾಗೂ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬಲ್ಲ ಒಗ್ಗಟ್ಟಿನ ಮಂತ್ರದ ಆಧಾರದಲ್ಲಿ ಬೆಳೆಯುತ್ತದೆಯೇ ಹೊರತು ಕೇವಲ ಸಿದ್ಧಾಂತದ ಆಧಾರದಲ್ಲಲ್ಲ.
ಮಕ್ಕಳ ಶಿಕ್ಷಣಕ್ಕೂ ‘ಟೋಕನ್’ ಸಂಸ್ಕೃತಿ!
ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣ ಎಂಬುದು ಅರಿವಿನ ದೀವಿಗೆಯಾಗುವ ಬದಲಿಗೆ, ಮಾರುಕಟ್ಟೆಯ ಒಂದು ಬೆಲೆಬಾಳುವ ಸರಕಾಗಿ ರೂಪಾಂತರಗೊಂಡಿರುವುದು ಅತ್ಯಂತ ಆತಂಕಕಾರಿ ವಿದ್ಯಮಾನ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಂತೂ ನಮ್ಮ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಚುಚ್ಚುತ್ತಿವೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ, ರಾತ್ರಿಯಿಡೀ ಖಾಸಗಿ ಶಾಲೆಗಳ ಕಾಂಪೌಂಡ್ ಹೊರಗೆ ಮಲಗಿ, ಕೇವಲ ಒಂದು ಪ್ರವೇಶ ಅರ್ಜಿಗಾಗಿ ಅಥವಾ ‘ಟೋಕನ್’ ಪಡೆಯಲು ಹಂಬಲಿಸುವ ಪೋಷಕರ ದಂಡನ್ನು ನೋಡಿದಾಗ ನಮಗೆ ದಿಗಿಲುಂಟಾಗುತ್ತದೆ. ವಿಪರ್ಯಾಸವೆಂದರೆ, ಈ ಎಲ್ಲಾ ಸರ್ಕಸ್ ನಡೆಯುತ್ತಿರುವುದು ಯಾವುದೋ ಉನ್ನತ ಸಂಶೋಧನಾ ಸಂಸ್ಥೆಯ ಪ್ರವೇಶಕ್ಕಲ್ಲ; ಬದಲಾಗಿ ಇನ್ನೂ ಸರಿಯಾಗಿ ಮಾತನಾಡಲು ಕಲಿಯದ ಅಂಬೆಗಾಲಿಡುವ ಮಕ್ಕಳ ಎಲ್.ಕೆ.ಜಿ., ಯು.ಕೆ.ಜಿ. ಅಥವಾ ಪ್ರೀ-ಕೆಜಿ ಪ್ರವೇಶಕ್ಕಾಗಿ! ಹಳ್ಳಿಗಾಡಿನ ಮುಗ್ಧ ರೈತರು, ದಿನಗೂಲಿ ನೌಕರರು ಮತ್ತು ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ‘ಟೋಕನ್ ಸಂಸ್ಕೃತಿ’ಗೆ ಬಲಿಯಾಗುತ್ತಿದ್ದಾರೆ. ತಮ್ಮ ಊರಿನಲ್ಲೇ ಇರುವ, ವಿಶಾಲವಾದ ಮೈದಾನ ಮತ್ತು ಅನುಭವವಿರುವ ಶಿಕ್ಷಕರಿರುವ ಸರಕಾರಿ ಶಾಲೆಗಳು ಹಾಗೂ ಅಂಗನ ವಾಡಿಗಳನ್ನು ಕಡೆಗಣಿಸಿ, ಕೇವಲ ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಬಿದ್ದು ಖಾಸಗಿ ಶಾಲೆಗಳ ಮುಂದೆ ಭಿಕ್ಷುಕರಂತೆ ನಿಲ್ಲುವ ಈ ಪ್ರವೃತ್ತಿ ನಮ್ಮ ಸಾಂಸ್ಕೃತಿಕ ಪತನದ ಸಂಕೇತವೂ ಹೌದು. ಈ ಪ್ರವೇಶ ಪ್ರಕ್ರಿಯೆಯ ಹಿಂದೆ ಇರುವ ಹಪಹಪಿ ಎಂತಹದ್ದೆಂದರೆ, ಮಗು ತಾಯಿಯ ಗರ್ಭದಲ್ಲಿರುವಾಗಲೇ ಪೋಷಕರು ಯಾವ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಸೀಟು ಸಿಗಬಹುದು ಎಂದು ಲೆಕ್ಕಾಚಾರ ಹಾಕುತ್ತಿರುತ್ತಾರೆ. ಪ್ರೀ-ಕೆಜಿಗೆ ಮಗುವನ್ನು ಸೇರಿಸಲು ರಾತ್ರಿಯಿಡೀ ಶಾಲೆಯ ಗೇಟಿನ ಮುಂದೆ ಮಲಗುವ ಪೋಷಕರಿಗೆ ತಾವು ಮಾಡುತ್ತಿರುವುದು ಸಾಹಸ ಎಂದು ಅನ್ನಿಸಬಹುದು, ಆದರೆ ವಾಸ್ತವದಲ್ಲಿ ಇದು ಶಿಕ್ಷಣ ವ್ಯವಸ್ಥೆಯ ದಯನೀಯ ವೈಫಲ್ಯ. ಈ ದುರಾಸೆಯ ಬೆನ್ನುಹತ್ತಿದ ಪೋಷಕರು ಗಮನಿಸದ ಸತ್ಯವೆಂದರೆ, ಖಾಸಗಿ ಶಾಲೆಗಳಲ್ಲಿ ಸಿಗುತ್ತಿರುವುದು ಕೇವಲ ಪುಸ್ತಕದ ಬದನೆಕಾಯಿಯೇ ಹೊರತು ಜೀವನದ ಮೌಲ್ಯಗಳಲ್ಲ. ಶಿಕ್ಷಣ ಎಂಬುದು ಕೇವಲ ಅಂಕಗಳ ಪಟ್ಟಿಯಲ್ಲ, ಅದು ಮಗುವಿನ ಸರ್ವತೋಮುಖ ಬೆಳವಣಿಗೆಯ ಸಾಧನವಾಗಿರಬೇಕು. ಆದರೆ ಇಂದು ಖಾಸಗಿ ಶಾಲೆಗಳು ತಲೆಯೆತ್ತಿರುವುದು ಕೇವಲ ಹಣ ಮಾಡುವ ಉದ್ದೇಶದಿಂದ ಮಾತ್ರ. ಅಲ್ಲಿ ಅಂಕಗಳಿಗಾಗಿ ಮಕ್ಕಳನ್ನು ಯಂತ್ರಗಳನ್ನಾಗಿ ಮಾಡಲಾಗುತ್ತದೆ; ಕಂಠಪಾಠದ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ, ಮಗುವಿನ ಸೃಜನಶೀಲತೆಯನ್ನು ಚಿವುಟಿ ಹಾಕಲಾಗುತ್ತಿದೆ. ಎಲ್ಕೆಜಿಯ ಮಗುವಿನ ಬೆನ್ನಿನ ಮೇಲೆ ಹತ್ತಾರು ಪುಸ್ತಕಗಳ ಹೊರೆ ಹೊರಿಸುವುದೇ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ನಾವು ಕೂಲಂಕಷವಾಗಿ ಗಮನಿಸಿದರೆ, ಸರಕಾರಿ ಶಾಲೆಗಳಲ್ಲಿರುವ ಅರ್ಹ ಶಿಕ್ಷಕರು ಬೇರೆಲ್ಲೂ ಸಿಗುವುದಿಲ್ಲ. ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಬರುವ ಸರಕಾರಿ ಶಿಕ್ಷಕರಿಗೆ ವಿಷಯದ ಮೇಲೆ ಅತೀವ ಹಿಡಿತವಿರುತ್ತದೆ. ಆದರೆ, ಖಾಸಗಿ ಶಾಲೆಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುವ ಅಲ್ಪ ಅನುಭವದ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಆದರೂ ಪೋಷಕರು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡುತ್ತಿರುವುದು ಯಾಕೆ? ಇಲ್ಲಿ ಕೇವಲ ‘ಬಾಹ್ಯ ಮೆರುಗು’ ಕೆಲಸ ಮಾಡುತ್ತಿದೆ. ಬಣ್ಣಬಣ್ಣದ ಯೂನಿಫಾರ್ಮ್, ಟೈ, ಬೆಲ್ಟ್, ಶೂಗಳು ಮತ್ತು ಹವಾನಿಯಂತ್ರಿತ ಬಸ್ಸುಗಳು ಪೋಷಕರ ಕಣ್ಣನ್ನು ಕುರುಡು ಮಾಡಿವೆ. ಮಗು ಅಕ್ಷರ ಕಲಿಯುವುದಕ್ಕಿಂತ ಹೆಚ್ಚಾಗಿ ಅದು ಯಾವ ಬಸ್ಸಿನಲ್ಲಿ ಹೋಗುತ್ತಿದೆ ಎಂಬುದು ಇಂದಿನ ಪೋಷಕರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಪ್ರತಿಷ್ಠೆಯು ಹಳ್ಳಿಯ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಲು ದಾರಿಯಾಗುತ್ತಿದೆ. ಗ್ರಾಮದ ಮಧ್ಯಭಾಗದಲ್ಲಿದ್ದ ಶಾಲೆಗಳು ಇಂದು ವಿದ್ಯಾರ್ಥಿಗಳಿಲ್ಲದೆ ಸ್ಮಶಾನ ಮೌನ ತಾಳುತ್ತಿವೆ. ಹಳ್ಳಿಯ ರೈತರು ತಮಗಿರುವ ಕಲ್ಪಿತ ಇಂಗ್ಲಿಷ್ ವ್ಯಾಮೋಹದಿಂದಾಗಿ ತಮ್ಮ ಸಂಸ್ಕೃತಿ ಮತ್ತು ಭಾಷೆಯ ಬೇರುಗಳನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಪ್ರೀ-ಕೆಜಿ ಹಂತದಲ್ಲೇ ಲಕ್ಷಾಂತರ ರೂಪಾಯಿ ಡೊನೇಷನ್ ಪಡೆಯುವ ಈ ಖಾಸಗಿ ಸಂಸ್ಥೆಗಳು ನಿಜಕ್ಕೂ ಮಗುವಿನ ಭವಿಷ್ಯ ರೂಪಿಸುತ್ತಿವೆಯೇ ಅಥವಾ ಪೋಷಕರ ಜೇಬಿಗೆ ಕತ್ತರಿ ಹಾಕುತ್ತಿದೆೆಯೇ? ಪ್ರವೇಶಕ್ಕಾಗಿ ಟೋಕನ್ ವಿತರಿಸುವ ಈ ಕ್ರಮವೇ ಅತ್ಯಂತ ಅವಮಾನಕರ. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಶಿಕ್ಷಣವು ಇಂದು ಸಾಲಿನಲ್ಲಿ ನಿಂತು ಟೋಕನ್ ಪಡೆಯುವ ಸರಕಾಗಿರುವುದು ವಿಪರ್ಯಾಸ. ಖಾಸಗಿ ಶಾಲೆಗಳು ಇಂದು ‘ಅಂಕಗಳ ಕಾರ್ಖಾನೆ’ಗಳಾಗಿವೆ. ಪ್ರತೀ ಮಗುವನ್ನೂ ಒಂದೇ ಅಚ್ಚಿನಲ್ಲಿ ಹಾಕಲು ಪ್ರಯತ್ನಿಸುತ್ತವೆ. ಅಲ್ಲಿ ಮಗುವಿನ ವೈಯಕ್ತಿಕ ಆಸಕ್ತಿಗಳಿಗೆ ಬೆಲೆಯಿಲ್ಲ. ಕೇವಲ ಹಣ ಪಾವತಿಸುವ ಗ್ರಾಹಕರಂತೆ ಪೋಷಕರನ್ನು ಕಾಣಲಾಗುತ್ತದೆ. ಸರಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ, ಬಿಸಿಯೂಟ ಮತ್ತು ಉತ್ತಮ ಪರಿಸರವಿದ್ದರೂ, ಜನರು ಮಾತ್ರ ಭ್ರಮೆಯ ಲೋಕದಲ್ಲಿ ತೇಲುತ್ತಿದ್ದಾರೆ. ಶಿಕ್ಷಣವು ವ್ಯಾಪಾರವಾದಾಗ ಅಲ್ಲಿ ಮಾನವೀಯತೆ ಸತ್ತುಹೋಗುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಪವಿತ್ರ ಸಂಬಂಧವು ಕೇವಲ ಆರ್ಥಿಕ ವ್ಯವಹಾರವಾಗಿ ಉಳಿಯುತ್ತದೆ. ಶಿಕ್ಷಣವು ಕೇವಲ ಹೊಟ್ಟೆಪಾಡಿನ ಹಾದಿಯಾಗಬಾರದು, ಅದು ಬದುಕುವ ದಾರಿಯಾಗಬೇಕು. ಖಾಸಗಿ ಶಾಲೆಗಳ ಮೋಹಕ್ಕೆ ಬಿದ್ದು ನಮ್ಮ ಅಸ್ಮಿತೆಯಾದ ಸರಕಾರಿ ಶಾಲೆಗಳನ್ನು ಕಳೆದುಕೊಳ್ಳುವುದು ದ್ರೋಹಕ್ಕೆ ಸಮಾನ. ಈ ‘ಟೋಕನ್ ಸಂಸ್ಕೃತಿ’ಗೆ ಇಂದೇ ತಿಲಾಂಜಲಿ ಹಾಡಬೇಕಿದೆ. ಎಲ್.ಕೆ.ಜಿ., ಯು.ಕೆ.ಜಿ. ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಯ ಇಲಿ ಓಟಕ್ಕೆ ನೂಕುವ ಬದಲು, ಅವರಿಗೆ ಆಟವಾಡಲು ಬಿಡಿ. ಪೋಷಕರಲ್ಲಿ ಜಾಗೃತಿ ಮೂಡಬೇಕಿದೆ; ಅಂಕಗಳಿಗಿಂತ ಅರಿವು ದೊಡ್ಡದು ಎಂಬುದು ಅರ್ಥವಾಗಬೇಕಿದೆ. ಪೋಷಕರು ಟೋಕನ್ಗಾಗಿ ಸಾಲಿನಲ್ಲಿ ನಿಲ್ಲುವ ಶ್ರಮವನ್ನು ತಮ್ಮ ಗ್ರಾಮದ ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಮೀಸಲಿಟ್ಟರೆ, ಪ್ರತಿಯೊಂದು ಹಳ್ಳಿಯ ಶಾಲೆಯೂ ವಿಶ್ವವಿದ್ಯಾನಿಲಯವಾಗಬಲ್ಲದು.
ಬಿಜೆಪಿ ಅಪಸ್ವರಕ್ಕೆ ನಿತೀಶ್ ಕುಮಾರ್ ಮದ್ದು : ಕೊನೇ ಕ್ಷಣದಲ್ಲಿ ರಾಜೀನಾಮೆ ನೀಡುವುದನ್ನೇ ವಿಳಂಬ ಮಾಡಿದ್ದೇಕೆ?
Bihar New CM : ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ, ಏಪ್ರಿಲ್ ಹದಿನೈದರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಾಮ್ರಾಟ್, ಆಯ್ಕೆಯ ಸಂಬಂಧ ಬಿಜೆಪಿಯಲ್ಲೇ ಗೊಂದಲವಿತ್ತು. ಈ ಹಿನ್ನಲೆಯಲ್ಲಿ ನಿತೀಶ್ ಕುಮಾರ್ ತಾನು ರಾಜೀನಾಮೆ ನೀಡುವುದನ್ನೇ ವಿಳಂಬ ಮಾಡಿದರು ಎಂದು ವರದಿಯಾಗಿದೆ.
ಸಂಘಪರಿವಾರ ಅಂಬೇಡ್ಕರ್ ಬಗ್ಗೆ ಈಗ ಇದ್ದಕ್ಕಿದ್ದಂತೆ ತೋರುತ್ತಿರುವ ಪ್ರೀತಿ ಧೃತರಾಷ್ಟ್ರ ಪ್ರೀತಿ. ಮಾಡುತ್ತಿರುವುದು ಧೃತರಾಷ್ಟ್ರ ಆಲಿಂಗನ! ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ಅಂಬೇಡ್ಕರ್ ಬದುಕನ್ನು ಮತ್ತು ಚಿಂತನೆಯನ್ನು ಬ್ರಾಹ್ಮಣವಾದಿ ಹಿಂದುತ್ವಕ್ಕೆ ಒಗ್ಗಿಸುವ ರೀತಿಯಲ್ಲಿ ಅಪಪ್ರಚಾರದ ಸುನಾಮಿಯನ್ನೇ ಎಬ್ಬಿಸಿದ್ದಾರೆ. ಕನ್ನಡದಲ್ಲೂ ಅಂಬೇಡ್ಕರ್ರನ್ನು ಹಿಂದುತ್ವವಾದಿ ಸಾವರ್ಕರ್ ಮತ್ತು ಆರೆಸ್ಸೆಸ್ನ ಸೈದ್ಧಾಂತಿಕ ಸಹಚರವೆಂಬಂತೆ ಚಿತ್ರಿಸುವ ಅತ್ಯಂತ ಕೀಳು ದರ್ಜೆಯ ಪುಸ್ತಕಗಳು ಒಂದಾದಮೇಲೆ ಒಂದರಂತೆ ಪ್ರಕಟವಾಗುತ್ತಿವೆ.. ಅದರ ಪೌರೋಹಿತ್ಯವನ್ನು ಮಾಜಿ ಅಂಬೇಡ್ಕರ್ವಾದಿ ನಾಯಕರುಗಳೇ ವಹಿಸುತ್ತಿದ್ದಾರೆ. ಸಂಘಪರಿವಾರ ತನ್ನ ರಾಜಕೀಯ- ಸೈದ್ಧಾಂತಿಕ ವಿರೋಧಿಗಳನ್ನು ಸೋಲಿಸಲು ಮೂರು ತಂತ್ರಗಳನ್ನು ಬಳಸುತ್ತಾ ಬಂದಿದೆ. ಮೊದಲನೆಯದಾಗಿ ಸಂಘಿಗಳು ತಮ್ಮ ರಾಜಕೀಯ-ಸೈದ್ಧಾಂತಿಕ ಎದುರಾಳಿಗಳನ್ನು ದೇಶದ ಶತ್ರುಗಳಂತೆ ಚಿತ್ರಿಸುತ್ತದೆ. ಅದು ವಿಫಲವಾದರೆ ಎರಡನೆಯದಾಗಿ ಅವರ ಬಗ್ಗೆ ವರ್ತಮಾನದಲ್ಲಿ ಯಾವ ಚರ್ಚೆಯನ್ನೂ ಮಾಡದೆ ಜನಮಾನಸದಿಂದ ಮರೆಸಿಬಿಡಲು ಯತ್ನಿಸುತ್ತದೆ. ಅದೂ ಸಾಧ್ಯವಾಗದಿದ್ದರೆ ಮೂರನೆಯದಾಗಿ ಅವರನ್ನು ಹಿಂದುವೀಕರಿಸಿ, ಬ್ರಾಹ್ಮಣೀಕರಿಸಿ ದೈವತ್ವಕ್ಕೇರಿಸಿ ಅವರ ಚಿಂತನೆಗಳನ್ನು ಕೊಂದು ಹಾಕಲು ಮುಂದಾಗುತ್ತದೆ. ಏಕೆಂದರೆ ದೇಶದ ಬ್ರಾಹ್ಮಣವಾದಿ ಶೋಷಕ ಪರಂಪರೆಯನ್ನು ಆಮೂಲಾಗ್ರವಾಗಿ ಬಯಲುಗೊಳಿಸಿದ ಮತ್ತು ಬ್ರಾಹ್ಮಣವಾದಕ್ಕೆ ಪರ್ಯಾಯವಾಗಿ ಸಮಾನತಾವಾದಿ ಬುದ್ಧನ ಪರಂಪರೆಯನ್ನು ಪುನರುತ್ಥಾನ ಗೊಳಿಸಿದ ಅಂಬೇಡ್ಕರ್ ಮತ್ತವರ ಚಿಂತನೆಗಳೇ ಬ್ರಾಹ್ಮಣವಾದಿ ಹಿಂದುತ್ವವಾದಿಗಳಿಗೆ ಆಗಲೂ ಈಗಲೂ ಬಹುದೊಡ್ಡ ಸವಾಲು. ಹೀಗಾಗಿಯೇ ಸಂಘಿಗಳು ಇತ್ತೀಚಿನವರೆಗೂ ಮೊದಲೆರಡು ತಂತ್ರಗಳನ್ನು ಬಳಸಿ ಅಂಬೇಡ್ಕರ್ರನ್ನು ಇಲ್ಲವಾಗಿಸಲು ಪ್ರಯತ್ನಿಸಿದರು. ಅದು ವಿಫಲವಾಗುತ್ತಿದ್ದಂತೆ ಇದೀಗ ಮೂರನೇ ತಂತ್ರ ಪ್ರಯೋಗಿಸುತ್ತಿದ್ದಾರೆ. ಮೂರನೆಯದು ಧೃತರಾಷ್ಟ್ರ ಆಲಿಂಗನವಿದ್ದಂತೆ! ಕುರುಕ್ಷೇತ್ರ ಯುದ್ಧ ಮುಗಿದ ನಂತರ ದುರ್ಯೋಧನನನ್ನೂ ಒಳಗೊಂಡಂತೆ ತನ್ನೆಲ್ಲ ಮಕ್ಕಳನ್ನು ಕಳೆದುಕೊಂಡ ಧೃತರಾಷ್ಟ್ರ ಅದಕ್ಕೆ ಪ್ರಧಾನ ಕಾರಣನಾದ ಭೀಮನ ಬಗ್ಗೆ ಅಪಾರ ಆಕ್ರೋಶದಿಂದ ಕುದಿಯುತ್ತಿದ್ದನಂತೆ. ಆದರೂ ವೀರ ಭೀಮನನ್ನು ಒಮ್ಮೆ ಅಪ್ಪಿಕೊಳ್ಳಬೇಕೆಂದು ಕರೆಕಳಿಸಿದನಂತೆ. ಅದರ ಉದ್ದೇಶ ಪ್ರೀತಿ ನಟಿಸಿ ಅಪ್ಪಿಕೊಂಡು ನಡುಮುರಿದು ಕೊಲ್ಲುವುದಾಗಿದ್ದಂತೆ. ಸಂಘಪರಿವಾರ ಅಂಬೇಡ್ಕರ್ ಬಗ್ಗೆ ಈಗ ಇದ್ದಕ್ಕಿದ್ದಂತೆ ತೋರುತ್ತಿರುವ ಪ್ರೀತಿ ಧೃತರಾಷ್ಟ್ರ ಪ್ರೀತಿ. ಮಾಡುತ್ತಿರುವುದು ಧೃತರಾಷ್ಟ್ರ ಆಲಿಂಗನ! ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ಅಂಬೇಡ್ಕರ್ ಬದುಕನ್ನು ಮತ್ತು ಚಿಂತನೆಯನ್ನು ಬ್ರಾಹ್ಮಣವಾದಿ ಹಿಂದುತ್ವಕ್ಕೆ ಒಗ್ಗಿಸುವ ರೀತಿಯಲ್ಲಿ ಅಪಪ್ರಚಾರದ ಸುನಾಮಿಯನ್ನೇ ಎಬ್ಬಿಸಿದ್ದಾರೆ. ಕನ್ನಡದಲ್ಲೂ ಅಂಬೇಡ್ಕರ್ರನ್ನು ಹಿಂದುತ್ವವಾದಿ ಸಾವರ್ಕರ್ ಮತ್ತು ಆರೆಸ್ಸೆಸ್ನ ಸೈದ್ಧಾಂತಿಕ ಸಹಚರವೆಂಬಂತೆ ಚಿತ್ರಿಸುವ ಅತ್ಯಂತ ಕೀಳು ದರ್ಜೆಯ ಪುಸ್ತಕಗಳು ಒಂದಾದಮೇಲೆ ಒಂದರಂತೆ ಪ್ರಕಟವಾಗುತ್ತಿವೆ.. ಅದರ ಪೌರೋಹಿತ್ಯವನ್ನು ಮಾಜಿ ಅಂಬೇಡ್ಕರ್ವಾದಿ ನಾಯಕರುಗಳೇ ವಹಿಸುತ್ತಿದ್ದಾರೆ. ಇಂದು ಸಂಘಿಗಳ ಕೈಯಲ್ಲೇ ರಾಜಕೀಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಧಿಕಾರವಿರುವುದರಿಂದ ನಾಳೆ ಸಂಘಿಗಳ ಅಬದ್ಧಗಳೇ ಅಧಿಕೃತ ಸತ್ಯಗಳಾಗಿಬಿಡುತ್ತಿದೆ. ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಅವರು ಎಸಗಿದ ಅಪರಾಧಗಳೆಲ್ಲ ನ್ಯಾಯೋಚಿತ ಕ್ರಮಗಳೆಂದು ಮಾನ್ಯತೆ ಪಡೆದು ಬಿಡುತ್ತಿದೆ. ಆ ಮೂಲಕ ದಮನಿತ ಸಮುದಾಯಗಳು ಅಂಬೇಡ್ಕರ್ ಒದಗಿಸಿದ ಇತಿಹಾಸದ ಬೇರುಗಳಿಂದಲೂ ವಂಚಿತರಾಗಿ ಮತ್ತೊಮ್ಮೆ ಬ್ರಾಹ್ಮಣಶಾಹಿ ಹಿಂದುತ್ವದ ಮೇಲೆ ಅವಲಂಬಿಸುವಂತಾಗುತ್ತದೆ. ಆದ್ದರಿಂದ ಸಂಘಿಗಳ ಅಂಬೇಡ್ಕರ್ ದ್ವೇಷದ ಇತಿಹಾಸವನ್ನು ಮತ್ತೆ ಮತ್ತೆ ನೆನಪಿಕೊಳ್ಳುವ ಅಗತ್ಯವಿದೆ. ‘‘ಅಂಬೇಡ್ಕರ್ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ’’-ಹಿಂದೂ ಮಹಾಸಭಾ 1935 ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸುವ ತನಕ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಅಸ್ಪಶ್ಯರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಕಾಂಗ್ರೆಸ್ ನಾಯಕರು ಕೂಡಾ ದಲಿತರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ 1932ರ ದುಂಡು ಮೇಜಿನ ಪರಿಷತ್ನ ಒಪ್ಪಂದಗಳು ಶಾಸನ ಸಭೆಗಳಲ್ಲಿ ಕೋಮುವಾರು ಜನಸಂಖ್ಯಾಧಾರಿತ ಪ್ರಾತಿನಿಧ್ಯವನ್ನು ಘೋಷಿಸಿತೋ, ಆಗ ಹಿಂದೂಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಯಿತು. ಅಸ್ಪಶ್ಯರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದೂ ಮಹಾ ಸಭಾದ ಆತಂಕವನ್ನು ಹೆಚ್ಚಿಸಿತು. ಈ ಅನಿವಾರ್ಯತೆ ಸೃಷ್ಟಿಯಾಗುವ ಕೇವಲ ಎರಡು ವಾರಗಳ ಮುನ್ನವೂ ಹಿಂದೂ ಸಭಾದ ನಾಯಕ ಮೂಂಜೆ ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾರೆ: ‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ’’ ಇದು ಹಿಂದೂ ಸಭಾದ ಮೂಂಜೆ ಹಿಂದೂ ಧರ್ಮವನ್ನು ತೊರೆಯುವ ಸನ್ನಾಹದಲ್ಲಿದ್ದ ಮತ್ತು ಇತರ ದಲಿತರಿಗೂ ಪ್ರೇರಣೆ ನೀಡುತ್ತಿದ್ದ ಅಂಬೇಡ್ಕರ್ ಅವರನ್ನು ಗಮನದಲ್ಲಿಟ್ಟುಕೊಂಡು ಹಾಕಿದ ಬೆದರಿಕೆ. ಹಾಗೆ ನೋಡಿದರೆ 1932ರ ಪೂನ ಒಪ್ಪಂದದಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ದಲಿತ ದ್ರೋಹಿ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರ ಹಿಂದೂ ಮಹಾಸಭಾದ ನಾಯಕರಾಗಿದ್ದ ಮದನ ಮೋಹನ ಮಾಳವೀಯ ಸಹ ಒಬ್ಬರು. ಆದರೂ ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು: ‘‘....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’’ (Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ ‘‘the Moonje-Ambedkar Pact’’ ಎಂಬ ಉಲ್ಲೇಖ) ವಿಕೃತ ಅಂಬೇಡ್ಕರ್ ಎಂದಿದ್ದ ಸಂಘಿ ಗೋಳ್ವಾಲ್ಕರ್ ಅಷ್ಟು ಮಾತ್ರವಲ್ಲ. ಬ್ರಾಹ್ಮಣಶಾಹಿಯ ದ್ರೋಹವನ್ನು ಬಯಲು ಮಾಡುವ ಅಂಬೇಡ್ಕರ್ ಅವರ ಪ್ರತಿಯೊಂದು ಕ್ರಮವನ್ನು ಸಂಘಿಗಳು ದ್ವೇಷಿಸುತ್ತಾರೆ. ಉದಾಹರಣೆಗೆ 1927ರಲ್ಲಿ ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ಸ್ತೂಪಕ್ಕೆ ಹೋಗಿ ಅಲ್ಲಿ ಬ್ರಾಹ್ಮಣಶಾಹಿ ಪೇಶ್ವೆಗಳ ವಿರುದ್ಧ ಸಮರ ಹೂಡಿ ಹುತಾತ್ಮರಾದ ದಲಿತ ಯೋಧರಿಗೆ ನಮನ ಸಲ್ಲಿಸುತ್ತಾರೆ ಮತ್ತು ಅದು ಭಾರತದ ಇತಿಹಾಸದಲ್ಲಿ ಆಂತರಿಕ ವಸಾಹತುಶಾಹಿಯಾಗಿರುವ ಬ್ರಾಹ್ಮಣಶಾಹಿಯ ವಿರುದ್ಧ ಹೂಡಿದ ಸ್ವಾತಂತ್ರ್ಯ ಸಂಗ್ರಾಮವೆಂದು ಬಣ್ಣಿಸುತ್ತಾರೆ. ಆದರೆ ಅಂಬೇಡ್ಕರ್ ಅವರ ಈ ಬ್ರಾಹ್ಮಣಶಾಹಿ ವಿರೋಧದಿಂದ ಕನಲುವ ಸಂಘಪರಿವಾರದ ಸರಸಂಘಚಾಲಕ ಗೋಳ್ವಾಲ್ಕರ್ ಅಂಬೇಡ್ಕರ್ ಅವರ ನಿಲುವನ್ನು ವಿಕೃತಿ ಎಂದು ನಿಂದಿಸುತ್ತಾ ಹೀಗೆ ಬರೆಯುತ್ತಾರೆ. ‘‘... ಹಾಲಿ ಜಾತಿ ವಿಕೃತಿಗಳನ್ನು ಮೀರಿ ಎಲ್ಲರೊಡನೆ ಒಂದುಗೂಡಬೇಕೆಂಬ ಹೊಣೆಗಾರಿಕೆಯು ಕೆಲವೇ ಕೆಲವು ಜಾತಿ ವಿರೋಧಿ ಉತ್ಸಾಹಿಗಳ ಹೃದಯದಲ್ಲಿ ಮಾತ್ರ ಕಂಡುಬರುತ್ತದೆ. ವಾಸ್ತವವಾಗಿ ಜಾತಿ ವಿರೋಧ ಎಂಬುದನ್ನು ಬಹುಪಾಲು ನಾಯಕರು ತಮ್ಮದೇ ಜಾತಿ ಜನರಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಮುಖವಾಡವಾಗಿ ಬಳಸುತ್ತಿದ್ದಾರೆ. ಈ ವಿಷವು ನಮ್ಮ ರಾಜಕಾರಣದಲ್ಲಿ ಎಷ್ಟು ಆಳವಾಗಿ ಹೊಕ್ಕಿಬಿಟ್ಟಿದೆ ಎಂಬುದಕ್ಕೆ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಪೂನಾದ ಬಳಿ ಬ್ರಿಟಿಷರು ಪೇಶ್ವೆಗಳ ವಿರುದ್ಧ ಗಳಿಸಿದ ಜಯದ ಸ್ಮಾರಕವಾಗಿ 1818ರಲ್ಲಿ ಸ್ಥಾಪಿಸಿರುವ ಒಂದು ವಿಜಯಸ್ತಂಭವಿದೆ. ಒಬ್ಬ ಪ್ರಖ್ಯಾತ ಹರಿಜನ ನಾಯಕರು ಒಮ್ಮೆ ಈ ಸ್ತಂಭದ ಕೆಳಗೆ ತನ್ನ ಜಾತಿಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಬ್ರಾಹ್ಮಣರಾದ ಪೇಶ್ವೆಗಳನ್ನು ಸೋಲಿಸುವಲ್ಲಿ ತಮ್ಮ ಜನರೇ ದೊಡ್ಡ ಪಾತ್ರವನ್ನು ವಹಿಸಿದ್ದರಿಂದ, ಈ ಸ್ತಂಭವು ಬ್ರಾಹ್ಮಣರ ವಿರುದ್ಧ ಹರಿಜನರ ವಿಜಯವನ್ನು ಸೂಚಿಸುವ ಸ್ತಂಭವಾಗಿದೆ ಎಂದು ಅವರು ಹೇಳಿದ್ದರು. ಒಬ್ಬ ದೊಡ್ಡ ನಾಯಕರು ನಮ್ಮ ಗುಲಾಮಗಿರಿಯ ಸಂಕೇತವನ್ನು ನಮ್ಮ ವಿಜಯದ ಸಂಕೇತವೆಂದು ಬಣ್ಣಿಸುವುದನ್ನು ಹಾಗೂ ವಿದೇಶಿಯರ ಗುಲಾಮರಾಗಿ ನಮ್ಮದೇ ಅಣ್ಣತಮ್ಮಂದಿರ ವಿರುದ್ಧ ಸಮರ ನಡೆಸಿದ ಹೀನಾಯ ಕೃತ್ಯವನ್ನು ಒಂದು ಹಿರಿಮೆಯೆಂದು ಬಣ್ಣಿಸುವುದನ್ನು ಕೇಳಿಸಿಕೊಂಡರೆ ಹೃದಯ ಹೆಪ್ಪುಗಟ್ಟುತ್ತದೆ. ಆ ನಾಯಕರ ಕಣ್ಣುಗಳು ದ್ವೇಷದಿಂದ ಎಷ್ಟು ಕುರುಡಾಗಿದೆಯೆಂದರೆ ಆ ಯುದ್ಧದಲ್ಲಿ ಗೆದ್ದವರು ಯಾರು ಮತ್ತು ಸೋತವರು ಯಾರು ಎಂಬುದನ್ನೂ ಕೂಡ ಗುರುತಿಸಲಾಗದಷ್ಟು ಕುರುಡಾಗಿದೆ...’’ ಎಂಥಾ ವಿಕೃತಿ ..! (Bucnh Of Thoughts, p.111) ಅಷ್ಟು ಮಾತ್ರವಲ್ಲ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗೆಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ. (https://thewire.in/politics/rss-ambedkar-camaraderie-fictional-narratives) ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ- ಬಿಜೆಪಿ ! ಇದೆಲ್ಲ ಇತಿಹಾಸ. ತೀರಾ ಇತ್ತೀಚೆಗೆ ಅಂದರೆ ದಲಿತ ಬಂಧು ಎಂದು ಪೋಸು ಕೊಡುತ್ತಿರುವ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ 14 ವರ್ಷ ಆಳ್ವಿಕೆ ಮಾಡಿದಾಗಲೂ ಅಂಬೇಡ್ಕರ್ ಅವರನ್ನು ಕೋರ್ಟು-ಕಚೇರಿಗಳಿಗಿರಲಿ ಶಾಸನಸಭೆ ಮತ್ತು ಶಾಲೆಗಳಲ್ಲೂ ಬಿಟ್ಟುಕೊಂಡಿರಲಿಲ್ಲ. ಗುಜರಾತಿನ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕೆ ಹಾಕಲಾಗುತ್ತಿಲ್ಲವೆಂದು ಕೇಳಿ ಗುಜರಾತಿನ ದಲಿತ್ ಅಧಿಕಾರ್ ಮಂಚ್ನ ಕೀರ್ತಿ ರಾಥೋಡ್ಅವರು ಸರಕಾರಕ್ಕೆ ಅರ್ಜಿ ಹಾಕಿದ್ದರು. ಅದಕ್ಕೆ ೨೦೨೦ರ ಡಿಸೆಂಬರ್ನಲ್ಲಿ ಉತ್ತರಿಸಿರುವ ಆಗಿನ ಬಿಜೆಪಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು: ‘‘ಸರಕಾರಿ ಕಚೇರಿಗಳಲ್ಲಿ ಯಾವ ರಾಷ್ಟ್ರ ನಾಯಕರ ಫೋಟೋಗಳನ್ನು ತೂಗುಹಾಕಬೇಕೆಂಬ ಬಗ್ಗೆ 1996ರ ಸುತ್ತೋಲೆಯೊಂದಿದೆ. (ಪ್ರಥಮ ಬಿಜೆಪಿ ಸರಕಾರ ಹೊರಡಿಸಿದ್ದು..) ಅದರಲ್ಲಿ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರನ್ನು ಸೇರಿಸಲಾಗಿಲ್ಲ. ನಮ್ಮ ಸರಕಾರ ಅದೇ ಪಟ್ಟಿಯನ್ನು ಮುಂದುವರಿಸುವ ತೀರ್ಮಾನ ಮಾಡಿದೆ. ಮೋದಿ ಸರಕಾರದ ಪ್ರಕಾರ ಗುಜರಾತಿನ ಸರಕಾರಿ ಕಚೇರಿಗಳಲ್ಲಿ ಇರಬೇಕಾದ ರಾಷ್ಟ್ರೀಯ ನಾಯಕರು: ಗಾಂಧಿ, ನೆಹರೂ, ಪಟೇಲ್, ಹಾಲಿ ರಾಷ್ಟ್ರಪತಿ, ಹಾಲಿ ಪ್ರಧಾನಿ, ಭಾರತ್ ಮಾತಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಶಾಮ ಪ್ರಸಾದ ಮುಖರ್ಜಿ ಮಾತ್ರವಂತೆ!! ಅಗ್ರಮಾನ್ಯ ರಾಷ್ಟ್ರ ನಾಯಕ ಅಂಬೇಡ್ಕರ್ ಬಿಜೆಪಿ ಪಟ್ಟಿಯಲ್ಲಿ ಇಲ್ಲವೇ ಇಲ್ಲ!! 1990ರಲ್ಲಿ ಅಂಬೇಡ್ಕರ್ ಅವರಿಗೆ ವಿ.ಪಿ. ಸಿಂಗ್ ಭಾರತ ರತ್ನ ಪ್ರಶಸ್ತಿ ಕೊಡಲೂ ಹಾಗೂ ಸಂಸತ್ ಭವನದಲ್ಲಿ 1990ರಲ್ಲಿ ಅಂಬೇಡ್ಕರ್ ಫೋಟೊ ಅನಾವರಣ ಮಾಡಲು ತಾನು ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ 2012ರಲ್ಲಿ ಕೊಟ್ಟ ಉತ್ತರವಿದು. ಇದರ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ2020ರ ಡಿಸೆಂಬರ್ ನಲ್ಲಿ ಗುಜರಾತ್ ಸರಕಾರದ ಸ್ಪಷ್ಟೀಕರಣ ಕೇಳಿದೆ. ಆದರೆ ಅದು ಉತ್ತರ ಕೊಡುವ ಗೋಜಿಗೂ ಹೋಗಿಲ್ಲ. (https://indianexpress.com/article/cities/ahmedabad/photos-in-govt-offices-8-figure-in-official-list-ambedkar-not-yet-in/) ಇಷ್ಟು ಮಾತ್ರವಲ್ಲದೆ ಅಂಬೇಡ್ಕರ್ ಬದುಕಿ ಬಾಳಿದ ಐದು ಸ್ಥಳಗಳನ್ನು ಪಂಚಕ್ಷೇತ್ರಗಳೆಂದು ಬ್ರಾಹ್ಮಣೀಯ ನಾಮಕರಣ ಮಾಡಿರುವ ಬಿಜೆಪಿ ಗುಜರಾತಿನಲ್ಲಿ ಅಂಬೇಡ್ಕರ್ ಬಗ್ಗೆ ಇರುವ ಪಠ್ಯದಲ್ಲಿ ಅಂಬೇಡ್ಕರ್ ಬೌದ್ಧಕ್ಕೆ ಮರಳಿದಾಗ ಬೋಧಿಸಿದ 22 ಪ್ರತಿಜ್ಞೆಗಳನ್ನೇ ತೆಗೆದುಹಾಕಿದೆ. ಜಾತಿ ವಿನಾಶದ ಅಂಬೇಡ್ಕರ್-ಜಾತಿಯನ್ನು ರಕ್ಷಿಸಲು ಹುಟ್ಟಿಕೊಂಡ ಆರೆಸ್ಸೆಸ್ ಈ ದೇಶದ ಜನ ಮನುಷ್ಯರಾಗಬೇಕೆಂದರೆ, ನಾಗರಿಕರಾಗಬೇಕೆಂದರೆ, ನಾವು ಒಂದು ಪ್ರಜಾತಂತ್ರವಾಗಬೇಕೆಂದರೂ ಸಹ ಜಾತಿ ವಿನಾಶ ಅತ್ಯಗತ್ಯ ಎಂದಿದ್ದರು ಅಂಬೇಡ್ಕರ್. ಆದರೆ ಸಂಘ ಪರಿವಾರ ಜಾತಿಯೇ ಈ ದೇಶದ ಅಸ್ಮಿತೆಯೆನ್ನುತ್ತದೆ. ಜಾತಿ ವಿನಾಶವಾದರೆ ಈ ದೇಶವೇ ವಿನಾಶವಾಗುತ್ತದೆ ಎಂದು ಪ್ರತಿಪಾದಿಸುತ್ತದೆ! ಉದಾಹರಣೆಗೆ ಆರೆಸ್ಸೆಸ್ನ ಮುಖಪತ್ರಿಕೆ Organiser ಪ್ರಕಾರ: ‘‘...ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ’’ (The Organiser, 26 January 1962) ಅದೇ ಪತ್ರಿಕೆಯ ಮತ್ತೊಂದು ಸಂಚಿಕೆಯಲ್ಲಿ ಜಾತಿಯಿಂದಲೇ ಈ ದೇಶದ ಉಳಿವು ಎಂದು ಆರೆಸ್ಸೆಸ್ ಹೀಗೆ ಪ್ರತಿಪಾದಿಸುತ್ತದೆ: ‘‘ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಆಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿಪ್ರಾಂತಗಳು ಪ್ರಧಾನವಾಗಿ ಹಿಂದೂವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು’’ (ಆನಂದ್ ತೇಲ್ತುಂಬ್ಡೆ ಯವರು ಸಂಪಾದಿಸಿರುವ HINDUTVA AND DALITS ಗ್ರಂಥದಲ್ಲಿ ಉಲ್ಲೇಖಿತ) ಆರೆಸ್ಸೆಸ್ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ್ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ: ‘‘ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ’’ ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಛ ಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು. (upadhya, P. Bhishikar, Pandit Deendayal Upadhyaya: Ideology and Perception?Concept of the Rashtra, vol. ೫) ಮನುಸ್ಮತಿ ಸುಟ್ಟ ಅಂಬೇಡ್ಕರ್-ಮನುಸ್ಮತಿಯೇ ಸಂವಿಧಾನವೆಂದ ಆರೆಸ್ಸೆಸ್-ಸಾವರ್ಕರ್ 1927ರ ಡಿಸೆಂಬರ್ನಲ್ಲಿ ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪಶ್ಯತೆಯ ಮೂಲ ಹಿಂದೂ ಧರ್ಮದಲ್ಲಿದೆಯೆಂದೂ, ಅದರ ಸಾರ ಮನುಸ್ಮತಿಯಲ್ಲಿದೆಯೆಂದೂ, ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟ ಪಡಿಸಿದ್ದರು. ಇಂಥ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ಕಿರ್ಲೋಸ್ಕರ್ ಲೇಖನದಲ್ಲಿ ಹೀಗೆ ಬರೆಯುತ್ತಾರೆ: ‘‘ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮತಿಯೇ ಹಿಂದೂ ಕಾನೂನು ಕೂಡಾ ಆಗಿದೆ. ಹಾಗೂ ಇದು ಹಿಂದೂ ದೇಶವಾಗಿದೆ’’ಎಂದು ಘೋಷಿಸುತ್ತಾರೆ. (VD Savarkar, `Women in Manusmriti' in Savarkar Samagar (collection of Savarkar's writings in Hindi), ಆದರೆ ಮನುಸ್ಮತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪಶ್ಯ ವಿರೋಧಿಯಾಗಿದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ: ‘‘ ..ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಮತಿಯಲ್ಲಿ ಪ್ರತಿಗಾಮಿ ಎಂದು ಕಂಡುಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು ಎಂದು ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ. ಇದು ಆರೆಸ್ಸೆಸ್. ಇದು ಸಾವರ್ಕರ್. ಇದು ಅವರು ಬಯಸುವ ಬ್ರಾಹ್ಮಣ ಭಾರತ. ಸಂಘಿಗಳ ಧೃತರಾಷ್ಟ್ರ ಆಲಿಂಗನದಿಂದ ಹೊರಬರದೆ ಭಾರತಕ್ಕೆ ವಿಮೋಚನೆಯಿಲ್ಲ.
ಚತ್ತೀಸ್ಗಢ| ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 14ಕ್ಕೆ ಏರಿಕೆ
ರಾಯ್ಪುರ: ಚತ್ತೀಸ್ಗಢದ ಶಕ್ತಿ ಜಿಲ್ಲೆಯ ಸಿಂಘಿತಾರಿ ಗ್ರಾಮದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಗಂಭೀರ ಕೈಗಾರಿಕಾ ದುರಂತಗಳಲ್ಲಿ ಒಂದು ಎಂದು ಪರಿಗಣಿಸಿರುವ ಈ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾರ್ಮಿರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ನಿಂದ ಟರ್ಬೈನ್ಗೆ ಹೆಚ್ಚಿನ ಒತ್ತಡದ ಉಗಿಯನ್ನು ಸಾಗಿಸುವ ಟ್ಯೂಬ್ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದೆ. ಸುದ್ದಿ ತಿಳಿದ ತಕ್ಷಣ ತುರ್ತು ಪ್ರತಿಕ್ರಿಯೆ ತಂಡಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ತೈಲ ಬೆಲೆಗಳು ನೀವು ಊಹಿಸಿದಂತೆ ಯಾಕೆ ಇಲ್ಲ, ಜಾಗತಿಕ ತೈಲ ಬೆಲೆಯಲ್ಲಿ ಯಾವ ರೀತಿ ಬದಲಾವಣೆ ಆಗುತ್ತಿರುತ್ತದೆ?
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ಆರು ವಾರಗಳಲ್ಲಿ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿವೆ. ಇದು ಇಂಧನ ಬೆಲೆ ಏರಿಕೆಗೆ ಕಾರಣವಾಗಿದ್ದು ಪ್ರಪಂಚದಾದ್ಯಂತದ ಮನೆಗಳಿಗೆ ಇದರ ಬಿಸಿ ತಟ್ಟಿದೆ. ಆರು ವಾರಗಳ ಮಿಲಿಟರಿ ಕಾರ್ಯಾಚರಣೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ನೌಕಾ ದಿಗ್ಬಂಧನವನ್ನು ಪ್ರಸ್ತಾಪಿಸಿದ ನಂತರ ತೈಲ ಬೆಲೆಗಳು ರವಿವಾರ ಬ್ಯಾರೆಲ್ಗೆ 8% ರಷ್ಟು ಏರಿಕೆಯಾಗಿ 103 ಡಾಲರ್ ತಲುಪಿತು. ತೈಲ ವ್ಯಾಪಾರವನ್ನು ವಿಶಾಲವಾಗಿ ಎರಡು ವಿಭಿನ್ನ ಮಾರುಕಟ್ಟೆಗಳಾಗಿ ವಿಂಗಡಿಸಬಹುದು. ಒಂದು ಭೌತಿಕ ಮಾರಾಟ ಮತ್ತು ಇನ್ನೊಂದು ಭವಿಷ್ಯದ ತೈಲ ವಿತರಣೆಗಾಗಿ ಒಪ್ಪಂದಗಳು, ಇದನ್ನು ಫ್ಯೂಚರ್ಸ್ ಎಂದು ಕರೆಯಲಾಗುತ್ತದೆ. ಯುದ್ಧದ ಆರಂಭ ಮತ್ತು ಇರಾನ್ನ ಹಾರ್ಮುಜ್ ಜಲಸಂಧಿಯ ಪರಿಣಾಮಕಾರಿ ದಿಗ್ಬಂಧನದ ನಂತರ, ಈ ಮಾರುಕಟ್ಟೆಗಳಲ್ಲಿ ಬೆಲೆಗಳು ಗಣನೀಯವಾಗಿ ಭಿನ್ನವಾಗಿವೆ. ವಿಶ್ಲೇಷಕರು ಹೇಳುವ ಪ್ರಕಾರ ಇದು ಪೂರೈಕೆಯ ಗ್ರಹಿಕೆಗಳು ಮತ್ತು ನೆಲದ ಮೇಲಿನ ವಾಸ್ತವತೆಯ ನಡುವೆ ಬೆಳೆಯುತ್ತಿರುವ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತದೆ. ►ಭೌತಿಕ ಮತ್ತು ಭವಿಷ್ಯದ ತೈಲ ಬೆಲೆಗಳ ನಡುವಿನ ವ್ಯತ್ಯಾಸವೇನು? ತೈಲವನ್ನು ತ್ವರಿತ ವಿತರಣೆಗಾಗಿ ಸ್ಥಳದಲ್ಲೇ ಖರೀದಿಸಲಾಗಿದೆಯೇ ಅಥವಾ ಭವಿಷ್ಯದ ಒಪ್ಪಂದದ ಮೂಲಕ ತಿಂಗಳುಗಳ ಮುಂಚಿತವಾಗಿ ಖರೀದಿಸಲಾಗಿದೆಯೇ ಎಂಬುದನ್ನು ಅವಲಂಬಿಸಿ ವಿಭಿನ್ನವಾಗಿ ಬೆಲೆ ನಿಗದಿಪಡಿಸಲಾಗುತ್ತದೆ. ಸ್ಪಾಟ್ ಬೆಲೆಗಳಿಗೆ ಪ್ರಮುಖ ಅಂತರರಾಷ್ಟ್ರೀಯ ಮಾನದಂಡವೆಂದರೆ ಡೇಟೆಡ್ ಬ್ರೆಂಟ್, ಇದು ಮುಂದಿನ 10 ರಿಂದ 30 ದಿನಗಳಲ್ಲಿ ಸಾಗಣೆಗೆ ನಿಗದಿಪಡಿಸಲಾದ ತೈಲದ ಪ್ರತಿ ಬ್ಯಾರೆಲ್ ಬೆಲೆಯನ್ನು ಪ್ರತಿಬಿಂಬಿಸುತ್ತದೆ. ಯಾರಾದರೂ ತಕ್ಷಣದ ವಿತರಣೆಗಾಗಿ ತೈಲವನ್ನು ಬಯಸಿದರೆ ಸ್ಪಾಟ್ ಬೆಲೆ ಮುಖ್ಯ ಎಂದು ಅಲ್ ಜಝೀರಾ ಜತೆ ಮಾತನಾಡಿದ ಹಣಕಾಸು ಸೇವಾ ಸಂಸ್ಥೆಯಾದ ರೇಮಂಡ್ ಜೇಮ್ಸ್ & ಅಸೋಸಿಯೇಟ್ಸ್ನ ಹೂಡಿಕೆ ತಂತ್ರಜ್ಞ ಪಾವೆಲ್ ಮೊಲ್ಚನೋವ್ ಹೇಳಿದ್ದಾರೆ. ಬ್ರೆಂಟ್ ಫ್ಯೂಚರ್ಗಳು ಹಣಕಾಸು ಉತ್ಪನ್ನಗಳಾಗಿವೆ. ಅವು ತಿಂಗಳುಗಳು ಅಥವಾ ವರ್ಷಗಳ ನಂತರ ಲೋಡ್ ಆಗಬೇಕಾದ ತೈಲದ ಬೆಲೆಯನ್ನು ಪ್ರತಿಬಿಂಬಿಸುತ್ತವೆ. ಪ್ರಾಥಮಿಕ ಮಾನದಂಡವೆಂದರೆ ಮುಂಗಡ-ತಿಂಗಳ ಬ್ರೆಂಟ್ ಕಚ್ಚಾ ತೈಲ ನಿರಂತರ ಒಪ್ಪಂದ. ಇದು ಪ್ರಸ್ತುತ ಮೇ ತಿಂಗಳಲ್ಲಿ ಬರಬೇಕಾದ ವಿತರಣೆಗಳನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಡೇಟೆಡ್ ಬ್ರೆಂಟ್ ಅಲ್ಪಾವಧಿಯ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಬ್ರೆಂಟ್ ಫ್ಯೂಚರ್ಗಳು ಭವಿಷ್ಯದ ಬೆಲೆ ನಿರೀಕ್ಷೆಗಳ ಮಾಪಕವಾಗಿದೆ. ಭವಿಷ್ಯದ ಬೆಲೆಯು ಸುದ್ದಿ ವರದಿಗಳು ಮತ್ತು ಸರ್ಚ್ ಇಂಜಿನ್ ಫಲಿತಾಂಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆಲೆಯಾಗಿದೆ. ►ಬೆಲೆಗಳಲ್ಲಿ ಬದಲಾವಣೆ ಸಾಮಾನ್ಯವಾಗಿ ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಾಗುವ ಹಾರ್ಮುಝ್ ಜಲಸಂಧಿಯನ್ನು ಇರಾನ್ ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿರುವುದು ಅತಿದೊಡ್ಡ ಇಂಧನ ಅಡಚಣೆಗಳಿಗೆ ಕಾರಣವಾಗಿದೆ. ಕಳೆದ ವಾರದ ಆರಂಭದಿಂದ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ದುರ್ಬಲವಾದ ಕದನ ವಿರಾಮ ಅಸ್ತಿತ್ವದಲ್ಲಿದ್ದರೂ, ಶನಿವಾರ ಕೇವಲ 17 ಹಡಗುಗಳು ಜಲಸಂಧಿಯನ್ನು ಸಾಗಿಸಿವೆ ಎಂದು ಕಡಲ ಗುಪ್ತಚರ ಸಂಸ್ಥೆ ವಿಂಡ್ವರ್ಡ್ ತಿಳಿಸಿದೆ. ಇದು ಯುದ್ಧದ ಮೊದಲು ಸರಿಸುಮಾರು 130 ದೈನಂದಿನ ಸಾಗಣೆಗಳಿಂದ ಕಡಿಮೆಯಾಗಿದೆ. ಸೌದಿ ಅರೇಬಿಯಾದಂತಹ ದೇಶಗಳು ಪರ್ಯಾಯ ಪೂರೈಕೆ ಮಾರ್ಗಗಳನ್ನು ಹೆಚ್ಚಿಸಿದ್ದರೂ, ಮಾರುಕಟ್ಟೆ ಗುಪ್ತಚರ ಪೂರೈಕೆದಾರ ಕೆಪ್ಲರ್ನ ಇತ್ತೀಚಿನ ಅಂದಾಜಿನ ಪ್ರಕಾರ, ಜಾಗತಿಕ ಆರ್ಥಿಕತೆಯು ಇನ್ನೂ ಸುಮಾರು 8 ಮಿಲಿಯನ್ ಬ್ಯಾರೆಲ್ಗಳ ದೈನಂದಿನ ಕೊರತೆಯನ್ನು ಎದುರಿಸುತ್ತಿದೆ. ಸ್ಪಾಟ್ ಮತ್ತು ಫ್ಯೂಚರ್ ಬೆಲೆಗಳು ಭಿನ್ನವಾಗಿರುವುದು ಅಸಾಮಾನ್ಯವಲ್ಲದಿದ್ದರೂ, ಸಂಘರ್ಷ ಪ್ರಾರಂಭವಾದಾಗಿನಿಂದ ಎರಡರ ನಡುವಿನ ಅಂತರವು ಹೆಚ್ಚು ವಿಸ್ತರಿಸಿದೆ. ಕಳೆದ ವಾರ ದಿನಾಂಕ ನಿಗದಿಯಾಗಿದ್ದ ಬ್ರೆಂಟ್ ಬೆಲೆ ಬ್ಯಾರೆಲ್ಗೆ 144 ಡಾಲರ್ ಗಿಂತ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಬ್ರೆಂಟ್ ಫ್ಯೂಚರ್ಗಳ ಬೆಲೆಗಿಂತ ಸುಮಾರು 35 ಡಾಲರ್ ಹೆಚ್ಚಾಗಿದೆ. ಅಂತರವು ನಿರಂತರವಾಗಿ ಏರಿಳಿತವಾಗುತ್ತಿದ್ದರೂ, ಸ್ಪಾಟ್ ಬೆಲೆ ಅಂದಿನಿಂದ ಫ್ಯೂಚರ್ಗಳ ಬೆಲೆಗಿಂತ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯ ಹರಡುವಿಕೆಯು ತೈಲದ ಭೌತಿಕ ಕೊರತೆಯನ್ನು ಸೂಚಿಸುತ್ತದೆ, ಇದು ಸುದ್ದಿಗಳಲ್ಲಿ ವರದಿಯಾದ ಸಾಧಾರಣ ಬೆಲೆ ಏರಿಕೆಗಿಂತ ಹೆಚ್ಚು ತೀವ್ರವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಸ್ಪಾಟ್ ಬೆಲೆ ಮತ್ತು ಮುಂದಿನ ತಿಂಗಳ ಭವಿಷ್ಯದ ಬೆಲೆಗಳು ಸರಿಸುಮಾರು ಸಮಾನವಾಗಿರುತ್ತದೆ.ಯಾಕೆಂದರೆ ಇಂದಿನ ತೈಲವು ಒಂದು ತಿಂಗಳ ನಂತರ ತೈಲಕ್ಕೆ ಹೋಲಿಸಿದರೆ ಕಡಿಮೆ ಅಥವಾ ಯಾವುದೇ ಹೆಚ್ಚುವರಿ ಮೌಲ್ಯವನ್ನು ಹೊಂದಿರುವುದಿಲ್ಲ . ಹಾರ್ಮುಜ್ ಜಲಸಂಧಿಯು ಬಹುತೇಕ ಸ್ಥಗಿತಗೊಂಡಿರುವುದರಿಂದ ತೈಲ ಮಾರುಕಟ್ಟೆಯು ಪ್ರಸ್ತುತ ಭೌತಿಕ ಪೂರೈಕೆ ಕೊರತೆಯನ್ನು ಎದುರಿಸುತ್ತಿದೆ. ಆದ್ದರಿಂದ ಖರೀದಿದಾರರು ಪ್ರಸ್ತುತ ಲಭ್ಯವಿರುವ ತೈಲಕ್ಕಾಗಿ ಭಾರಿ ಪ್ರೀಮಿಯಂ ಪಾವತಿಸಲು ಸಿದ್ಧರಿದ್ದಾರೆ ಅಂತಾರೆ ಮೊಲ್ಚನೋವ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವ ಅನುಭವಿ ತೈಲ ವ್ಯಾಪಾರಿ ಆದಿ ಇಮ್ಸಿರೋವಿಕ್, ಇಂಧನ ಕೊರತೆಯ ವ್ಯಾಪ್ತಿಯನ್ನು ನೀತಿ ನಿರೂಪಕರು ಸಂಪೂರ್ಣವಾಗಿ ಮೆಚ್ಚಿಕೊಂಡಿಲ್ಲ ಎಂದು ಹೇಳಿದರು. ಅಲ್ ಜಝೀರಾ ಜೊತೆ ಮಾತನಾಡಿದ ಇಮ್ಸಿರೋವಿಕ್, ಹೆಚ್ಚಿನ ಸರ್ಕಾರಗಳು ಪ್ರಸ್ತುತ ಇಂಧನ ಆಘಾತವನ್ನು ಕಡಿಮೆ ಅಂದಾಜು ಮಾಡುತ್ತಿವೆ. ಪಡಿತರ ಮತ್ತು ತ್ಯಾಜ್ಯ ಕಡಿತದ ಬಗ್ಗೆ ಅಧಿಕಾರಿಗಳು ನಾಗರಿಕರಿಗೆ ಪೂರ್ವಭಾವಿಯಾಗಿ ಸಲಹೆ ನೀಡಬೇಕು. ನೀತಿಯು ನಡವಳಿಕೆಯಲ್ಲಿ ಬದಲಾವಣೆಯನ್ನು ಉಂಟುಮಾಡದಿದ್ದರೆ, ಬೆಲೆ ಏರಿಕೆಯು ಅಂತಿಮವಾಗಿ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ►ಎರಡು ಬೆಲೆಗಳು ಏಕೆ ಇಷ್ಟೊಂದು ಭಿನ್ನ? ಮಾರುಕಟ್ಟೆಯ ಕಾರ್ಯವೈಖರಿಯನ್ನು ನಿಖರವಾಗಿ ಹೇಳುವುದು ಕಷ್ಟಕರವಾಗಿದ್ದರೂ, ವ್ಯಾಪಾರಿಗಳು ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಪಣತೊಟ್ಟಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಟ್ರಂಪ್ ಆಡಳಿತದ ಅನಿಶ್ಚಿತತೆಯಿಂದಾಗಿ ಭವಿಷ್ಯದ ಮಾರುಕಟ್ಟೆಗಳು ಯಾವಾಗಲೂ ಸ್ಪಾಟ್ ಬೆಲೆಗಳನ್ನು ಅನುಸರಿಸುತ್ತಿರಲಿಲ್ಲ. ಬೆದರಿಕೆಗಳು ಮತ್ತು ವಿವಾದಾತ್ಮಕ ನೀತಿಗಳ ಬಗ್ಗೆ ಹಿಂದೆ ಸರಿಯುವ ಯುಎಸ್ ಅಧ್ಯಕ್ಷರ ಗ್ರಹಿಕೆಯ ಪ್ರವೃತ್ತಿಯನ್ನು ಸೂಚಿಸುವ TACO (Trump Always Chickens Out) ಯಾವಾಗಲೂ ವ್ಯಾಪಾರಿಗಳ ಮನಸ್ಸಿನಲ್ಲಿ ಸುಪ್ತವಾಗಿದ್ದು ಹೂಡಿಕೆದಾರರನ್ನು ದೀರ್ಘಾವಧಿಯ ಹೆಚ್ಚಿನ ಬೆಲೆಗಳ ಮೇಲೆ ಬೆಟ್ಟಿಂಗ್ ಮಾಡುವ ಬಗ್ಗೆ ಎಚ್ಚರದಿಂದಿರಿಸುತ್ತದೆ ಎಂದು ಇಮ್ಸಿರೋವಿಕ್ ಹೇಳಿದ್ದಾರೆ. ಬೆಲೆ ಸ್ಥಿರತೆಯ ಮರಳುವಿಕೆಯು ಇರಾನ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಸಡಿಲಿಸುವುದು ಮತ್ತು ಹಡಗು ಕಂಪನಿಗಳು ಸಾಗಣೆಗೆ ಸುರಕ್ಷಿತವಾಗಿದೆ ಎಂಬ ವಿಶ್ವಾಸವನ್ನು ಪಡೆಯುವುದರ ಮೇಲೆ ಅವಲಂಬಿತವಾಗಿರುತ್ತದೆ. ಆ ಎರಡೂ ಚಲನಶೀಲತೆಗಳನ್ನು ಒಟ್ಟುಗೂಡಿಸಿ, ಸಂಚಾರದಲ್ಲಿ ಎರಡು ಮೂರು ತಿಂಗಳ ಚೇತರಿಕೆಯ ಅವಧಿಯನ್ನು ನಾವು ಕಲ್ಪಿಸಿಕೊಳ್ಳುತ್ತೇವೆ. ಸುಧಾರಣೆ ನಿಧಾನವಾಗಿ ಪ್ರಾರಂಭವಾಗಿ ನಂತರ ವೇಗಗೊಳ್ಳುತ್ತದೆ. ಹೆಚ್ಚಿನ ಟ್ಯಾಂಕರ್ಗಳು ಕೊಲ್ಲಿಯನ್ನು ಪ್ರವೇಶಿಸುತ್ತಿದ್ದಂತೆ, ತೈಲ ರಫ್ತಿನಲ್ಲಿ ಅನುಗುಣವಾದ ಚೇತರಿಕೆ ಕಂಡುಬರಬೇಕು ಎಂದು ರೇಮಂಡ್ ಜೇಮ್ಸ್ & ಅಸೋಸಿಯೇಟ್ಸ್ನ ತಂತ್ರಜ್ಞ ಮೊಲ್ಚನೋವ್ ಅಭಿಪ್ರಾಯಪಟ್ಟಿದ್ದಾರೆ. ಕೃಪೆ: aljazeera.com
ಕರಾವಳಿಯಲ್ಲಿ ಬಿಸಿಲ ಝಳಕ್ಕೆ ಹೈರಾಣಾದ ಜನ: ಅನಾರೋಗ್ಯದಿಂದ ರಕ್ಷಿಸಿಕೊಳ್ಳಲು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಅಗತ್ಯ?
ಕರಾವಳಿ ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉರಿಬಿಸಿಲಿನಿಂದಾಗಿ ಮೋಡ ಕವಿದ ವಾತವರಣವಿದ್ದರೂ ಸಹ ಬಿಸಿ ಗಾಳಿ ಬೀಸುತ್ತಿದೆ. ಅಷ್ಟೇ ಅಲ್ಲದೇ, ದಕ್ಷಿಣ ಕನ್ನಡದಲ್ಲಿ ಶೇ.93 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.98ರಷ್ಟು ಮಳೆ ಕೊರತೆ ದಾಖಲಾಗಿದ್ದು, ತೀವ್ರಬಿಸಿಲಿನಿಂದಾಗಿ ಆರೋಗ್ಯ ಸಮಸ್ಯೆಗಳು ಏರಿಕೆಯಾಗುತ್ತಿದ್ದು, ವೈರಲ್, ಫಂಗಲ್ ಮತ್ತು ಚರ್ಮದ ಸೋಂಕು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ. ಈ ಕುರಿತಂತೆ ಏನೆಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂಬುದರ ಮಾಹಿತಿ ಇಲ್ಲಿದೆ..
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ತಾಪಮಾನ ಏರಿಕೆ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಬಿಸಿಲು ಹೆಚ್ಚಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿ ಹಾಗೂ ತೇವಾಂಶದ ವಾತಾವರಣ ಇರಲಿದ್ದು, ಏಪ್ರಿಲ್ 15 ರಂದು ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇಸ್ರೇಲ್ ಹಾಗೂ ಲೆಬನಾನ್ ದೇಶಗಳು ಮೊದಲ ಬಾರಿಗೆ ನೇರ ರಾಜತಾಂತ್ರಿಕ ಮಾತುಕತೆಗಳು ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದೆ. ಈ ಮಾತುಕತೆಗಳನ್ನು US ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಐತಿಹಾಸಿಕ ಎಂದು ಕರೆದಿದ್ದಾರೆ. ಆದಾಗ್ಯೂ, ಲೆಬನಾನ್ ನ ಹೆಜ್ಬೊಲ್ಲಾ ಪಡೆಗಳು ಈ ಮಾತುಕತೆಗಳನ್ನು ವಿರೋಧಿಸಿದ್ದು, ಇಸ್ರೇಲ್ ನೊಂದಿಗೆ ಲೆಬನಾನ್ ಸರ್ಕಾರ ಮಾಡಿಕೊಳ್ಳುವ ಯಾವುದೇ ಒಪ್ಪಂದವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ..
2 ವರ್ಷದ ಹಿಂದಿನ ನನ್ನ ಭವಿಷ್ಯ ನಿಜವಾಗುತ್ತಿದೆ - R ಅಶೋಕ: ಅಂದು ಹೇಳಿದ್ದೇನು, ಈಗ ಆಗುತ್ತಿರುವುದೇನು?
Muslim Appeasement : ಅಲ್ಪಸಂಖ್ಯಾತ ಸಮುದಾಯದ ಅತಿಯಾದ ಓಲೈಕೆ ಮುಂದೊಂದು ದಿನ ಮುಳುವಾಗಲಿದೆ ಎಂದು ನಾನು ಹೇಳಿದ್ದೆ, ಅದು ಈಗ ನಿಜವಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಪ್ರಧಾನಮಂತ್ರಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಕಾರ್ಯಕ್ರಮದ ಸಿದ್ದತೆಯನ್ನು ಪರಿಶೀಲಿಸಲು, ಆರ್.ಅಶೋಕ ಅಲ್ಲಿಗೆ ಹೋಗಿದ್ದರು. ಆವೇಳೆ, ತಮ್ಮ ಹಿಂದಿನ ಮಾತನ್ನು ಪುನರುಚ್ಚಿಸಿದ್ದಾರೆ.
Rajat Patidar: ವಿರಾಟ್ ಕೊಹ್ಲಿ ಎಲ್ಎಸ್ಜಿ ವಿರುದ್ಧ ಆಡುವುದಿಲ್ಲವೇ? ನಾಯಕ ರಜತ್ ಪಾಟಿದಾರ್ ಮಹತ್ವದ ಮಾಹಿತಿ
Rajat Patidar: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಗಾಯದ ಕಾರಣ ಪೀಲ್ಡಿಂಗ್ಗೆ ಬರಲಿಲ್ಲ. ಇದು ಬುತೇಕರಲ್ಲಿ ಅವರು ಮುಂದಿ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನುವ ಗೊಂದಲ ಸೃಷ್ಟಿಯಾಗಿತ್ತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಮಾಹಿತಿ ಮಹತ್ವದ
ಮೊದಲು ಹೋಟೆಲ್ ಅಯ್ತು, ಇದೀಗ ಆಟೋ ಚಾಲಕರಿಗೆ ಗ್ಯಾಸ್ ಸಿಗದೆ ಪರದಾಡಬೇಕಾದ ಸ್ಥಿತಿ ಬಂದಿದೆ. ಗ್ಯಾಸ್ ಪೂರೈಕೆಯಿಲ್ಲದೆ ಆಟೋ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಎಲ್ಲಾದರೂ ಗ್ಯಾಸ್ ಸಿಗುತ್ತೆಂದರೆ ಸುಮಾರು ದೂರ ಹೋಗಿ , ಸರತಿ ಸಾಲಲ್ಲಿ ನಿಂತು ಗ್ಯಾಸ್ ತುಂಬಿಸಿಕೊಂಡು ನಷ್ಟದಲಲ್ಏ ಜೀವನ ಸಾಗಿಸುವಂತಾಗಿದೆ ಎನ್ನುತ್ತಿದ್ದಾರೆ ಆಟೋ ಚಾಲಕರು.
ಅಂಡಮಾನ್ ಸಮುದ್ರದಲ್ಲಿ ವಲಸಿಗರಿದ್ದ ದೋಣಿ ದುರಂತ: 250ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಕಣ್ಮರೆ
ಪೋರ್ಟ್ ಬ್ಲೇರ್, ಎ. 15: ಅಂಡಮಾನ್ ಸಮುದ್ರದಲ್ಲಿ ವಲಸಿಗರನ್ನು ಹೊತ್ತ ದೋಣಿ ಮುಳುಗಿದ ಪರಿಣಾಮ ಸುಮಾರು 250 ರೋಹಿಂಗ್ಯಾ ನಿರಾಶ್ರಿತರು ಹಾಗೂ ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿರುವ ದಾರುಣ ಘಟನೆ ನಡೆದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ ಎಂದು Aljazeera ಮತ್ತು BBC ವರದಿ ಮಾಡಿದೆ. ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ತೆರಳುತ್ತಿದ್ದ ದೋಣಿ ಭಾರೀ ಬಿರುಗಾಳಿಗೆ ಹಾಗೂ ಅತಿಯಾದ ಜನದಟ್ಟಣೆಯಿಂದಾಗಿ ಸಮುದ್ರದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (UNHCR) ಹಾಗೂ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿವೆ. ದೋಣಿ ಮಗುಚಿದ ನಿಖರ ಸಮಯ ಇನ್ನೂ ಸ್ಪಷ್ಟವಾಗಿಲ್ಲ. ಎ.9 ರಂದು ಬಾಂಗ್ಲಾದೇಶ ಕೋಸ್ಟ್ ಗಾರ್ಡ್ (BCG) ಸಮುದ್ರದಲ್ಲಿ ತೇಲುತ್ತಿದ್ದ ಒಂಭತ್ತು ಮಂದಿಯನ್ನು ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾರೆ. ಡ್ರಮ್ ಗಳು ಹಾಗೂ ದಿಮ್ಮಿಗಳನ್ನು ಹಿಡಿದು ತೇಲುತ್ತಿದ್ದವರನ್ನು ಗುರುತಿಸಿ ಆಳವಾದ ನೀರಿನಿಂದ ರಕ್ಷಿಸಲಾಗಿದೆ ಎಂದು BCG ವಕ್ತಾರ ಲೆಫ್ಟಿನೆಂಟ್ ಕಮಾಂಡರ್ ಶಬ್ಬೀರ್ ಆಲಮ್ ಸುಜನ್ ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಆರು ಮಂದಿಯನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬದುಕುಳಿದವರಲ್ಲಿ ಒಬ್ಬರಾದ ರಫೀಕುಲ್ ಇಸ್ಲಾಂ, ಮಲೇಷ್ಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಕಳ್ಳಸಾಗಣೆದಾರರು ತಮ್ಮನ್ನು ದೋಣಿಗೆ ಕರೆದೊಯ್ದರು ಎಂದು ಹೇಳಿದ್ದಾರೆ. “ಟ್ರಾಲರ್(ಮೀನುಗಾರಿಕಾ ದೋಣಿ)ನೊಳಗಿನ ಜನದಟ್ಟಣೆಯಿಂದ 25ರಿಂದ 30 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದರು. ದೋಣಿಯಿಂದ ಚೆಲ್ಲಿದ ಇಂಧನದಿಂದ ನನಗೆ ಸುಟ್ಟ ಗಾಯಗಳಾಗಿವೆ. ದೋಣಿ ಮುಳುಗಿದ ನಂತರ ಸುಮಾರು 36 ಗಂಟೆಗಳ ಕಾಲ ಸಮುದ್ರದಲ್ಲಿ ತೇಲುತ್ತಾ ಬದುಕುಳಿದಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಮ್ಯಾನ್ಮಾರ್ ನಲ್ಲಿ ಕಿರುಕುಳ ಮತ್ತು ಹಿಂಸಾಚಾರಕ್ಕೆ ಒಳಗಾಗಿರುವ ರೋಹಿಂಗ್ಯಾಗಳು ವರ್ಷಗಳಿಂದ ಪಲಾಯನ ಮಾಡುತ್ತಿದ್ದಾರೆ. ವಿಶೇಷವಾಗಿ 2017ರಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆ ಕ್ರಮದ ಬಳಿಕ 7.3 ಲಕ್ಷ ಮಂದಿ ಬಾಂಗ್ಲಾದೇಶಕ್ಕೆ ಶರಣಾಗಿದ್ದಾರೆ. ಮ್ಯಾನ್ಮಾರ್ ಸರ್ಕಾರವು ರೋಹಿಂಗ್ಯಾಗಳಿಗೆ ಪೌರತ್ವ ನಿರಾಕರಿಸಿರುವುದರಿಂದ ಅವರ ಸ್ಥಿತಿ ಇನ್ನಷ್ಟು ದುಸ್ಥರವಾಗಿದೆ. ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಕಳಪೆ ಜೀವನ ಪರಿಸ್ಥಿತಿಗಳು ಹಾಗೂ ಕುಗ್ಗುತ್ತಿರುವ ಮಾನವೀಯ ನೆರವು ಕಾರಣದಿಂದ ಅನೇಕರು ಮಲೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಅಪಾಯಕಾರಿ ಸಮುದ್ರ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಇಂತಹ ದೋಣಿಗಳು ಸಾಮಾನ್ಯವಾಗಿ ಸಣ್ಣದಾಗಿದ್ದು, ಅತಿಯಾದ ಜನಸಂದಣಿ ಹೊಂದಿವೆ; ಆಹಾರ, ಶುದ್ಧ ನೀರು ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಪಾಯ ಹೆಚ್ಚುತ್ತಿದೆ. ಗಮ್ಯಸ್ಥಾನ ತಲುಪುವ ಮೊದಲೇ ಅವರು ದುರಂತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ದುರಂತವು ರೋಹಿಂಗ್ಯಾಗಳ ದೀರ್ಘಕಾಲದ ಸ್ಥಳಾಂತರದ ಭೀಕರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ ಎಂದು UNHCR ತಿಳಿಸಿದೆ. ರಖೈನ್ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರದಿಂದ ಸುರಕ್ಷಿತ ವಾಪಸ್ಸಿನ ನಿರೀಕ್ಷೆ ಕ್ಷೀಣಿಸುತ್ತಿದೆ ಎಂದು ಸಂಸ್ಥೆಗಳು ತಿಳಿಸಿವೆ. ರೋಹಿಂಗ್ಯಾ ನಿರಾಶ್ರಿತರು ಹಾಗೂ ಅವರನ್ನು ಆಶ್ರಯಿಸಿರುವ ಬಾಂಗ್ಲಾದೇಶದ ಸಮುದಾಯಗಳಿಗೆ ತುರ್ತು ನೆರವು ಒದಗಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಸಂಸ್ಥೆಗಳು ಮನವಿ ಮಾಡಿವೆ. ಜೊತೆಗೆ, ಮ್ಯಾನ್ಮಾರ್ನಲ್ಲಿ ಸ್ಥಳಾಂತರದ ಮೂಲ ಕಾರಣಗಳನ್ನು ಪರಿಹರಿಸಿ, ರೋಹಿಂಗ್ಯಾಗಳು ಸುರಕ್ಷಿತವಾಗಿ ಹಾಗೂ ಗೌರವಯುತವಾಗಿ ತಮ್ಮ ತವರೂರಿಗೆ ಮರಳಲು ಅನುಕೂಲಕರ ಪರಿಸ್ಥಿತಿಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ
Akshaya Tritiya Special: ಅಕ್ಷಯ ತೃತೀಯಕ್ಕೆ ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಏಪ್ರಿಲ್ 19ರಂದು ಈ ಬಾರಿಯ ಅಕ್ಷಯ ತೃತೀಯ ಆಚರಣೆ ಇದೆ. ಅಕ್ಷಯ ತೃತೀಯದ ದಿನ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಲೋಹಗಳನ್ನು ಖರೀದಿ ಮಾಡುವುದು ಒಳ್ಳೆಯದು ಹಾಗೂ ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಆಭರಣಗಳ ವಿನ್ಯಾಸದಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು
ಎಲ್ಲರ ಕಿಸೆ ಸುಡುತ್ತಿದೆ ಮಧ್ಯಪ್ರಾಚ್ಯ ಸಂಘರ್ಷ
ಮಧ್ಯಪ್ರಾಚ್ಯದ ಪ್ರಸ್ತುತ ಬಿಕ್ಕಟ್ಟು ಭಾರತೀಯರ ಅಡುಗೆಮನೆಗೆ ನೇರವಾದ ಹೊಡೆತ ನೀಡುತ್ತಿರುವುದು ಸುಳ್ಳಲ್ಲ. ಯುದ್ಧದ ಭೀತಿಯಿಂದಾಗಿ ಜಾಗತಿಕ ಪೂರೈಕೆ ಸರಪಳಿ ಏರುಪೇರಾಗುತ್ತಿದ್ದು, ಇದು ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಭಾರತವು ತನ್ನ ಅಗತ್ಯದ ಶೇ. 50 ಕ್ಕಿಂತ ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಸಾರಿಗೆ ವೆಚ್ಚ ಹೆಚ್ಚಾದ ಪರಿಣಾಮ, ಖಾದ್ಯ ತೈಲದ ಬೆಲೆಗಳು ಈಗಾಗಲೇ ಶೇ. 7 ಕ್ಕಿಂತ ಹೆಚ್ಚು ಏರಿಕೆಯಾಗಿವೆ.
ಜಿಲ್ಲಾ ನ್ಯಾಯಾಲಯಗಳ ತೀರ್ಪು ಜಾರಿ ಕೋರಿದ 10 ಲಕ್ಷ ಅರ್ಜಿಗಳು ವಿಚಾರಣೆಗೆ ಬಾಕಿ!
ಹೊಸದಿಲ್ಲಿ: ಜಿಲ್ಲಾ ನ್ಯಾಯಾಲಯಗಳ ತೀರ್ಪು ಜಾರಿಗೆ ನಿರ್ದೇಶನ ನೀಡುವಂತೆ ಕೋರಿದ 10 ಲಕ್ಷಕ್ಕೂ ಅಧಿಕ ಅರ್ಜಿಗಳು ವಿಚಾರಣೆಗೆ ಬಾಕಿ ಇರುವುದನ್ನು ಸುಪ್ರೀಂಕೋರ್ಟ್ ಬಹಿರಂಗಪಡಿಸಿದೆ. ಈ ಪೈಕಿ ಎಂಟು ಲಕ್ಷ ಅರ್ಜಿಗಳು ಆರು ತಿಂಗಳಿಗಿಂತಲೂ ಹಳೆಯವು. ಇದು ತೀರಾ ಆತಂಕಕಾರಿ ಮತ್ತು ಅಸಮಾಧಾನಕರ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಇವುಗಳ ಪರಿಣಾಮಕಾರಿ ಹಾಗೂ ತ್ವರಿತ ವಿಲೇವಾರಿಗೆ ವ್ಯವಸ್ಥೆ ಜಾರಿಗೊಳಿಸುವಂತೆ ಹೈಕೋರ್ಟ್ ಗಳಿಗೆ ಆದೇಶ ನೀಡಿದೆ. ಪ್ರಮುಖವಾಗಿ ಆಸ್ತಿ ವ್ಯಾಜ್ಯಗಳು ಸೇರಿದಂತೆ ಸಿವಿಲ್ ಪ್ರಕರಣಗಳಲ್ಲಿ ತಮ್ಮ ಪರ ತೀರ್ಪು ಪಡೆದಲ್ಲಿಗೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ; ಬಹುತೇಕ ಪ್ರಕರಣಗಳಲ್ಲಿ ವಿಜೇತ ಕಕ್ಷಿದಾರರು ನ್ಯಾಯಾಲಯ ಆದೇಶದ ಅನುಷ್ಠಾನವನ್ನು ಕೋರಿ ಮತ್ತೆ ನ್ಯಾಯಾಲಯದ ಕಟ್ಟೆ ಏರಬೇಕಾಗುತ್ತದೆ. ಆದೇಶ ಜಾರಿ ಅರ್ಜಿ ಸಲ್ಲಿಸಿ ಪ್ರತಿವಾದಿಗಳು ನ್ಯಾಯಾಲಯ ತೀರ್ಪು ಜಾರಿಗೆ ಬದ್ಧರಾಗಲು ವಿಫಲರಾಗಿದ್ದಾರೆ ಎನ್ನುವುದನ್ನು ಕೋರ್ಟ್ ಗಮನಕ್ಕೆ ತರಬೇಕಾಗುತ್ತದೆ. ನ್ಯಾಯಾಲಯದಲ್ಲಿ ತಮ್ಮ ಪರ ತೀರ್ಪುಬಂದರೂ, ಅದು ಹಲವು ವರ್ಷಗಳ ಬಳಿಕವೂ ಫಲ ನೀಡದಾಗ ಅರ್ಜಿದಾರರು ತೀರ್ಪು ಜಾರಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ಇದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಸುಪ್ರೀಂ ಪೀಠ ಅಭಿಪ್ರಾಯಪಟ್ಟಿದೆ. ಆರು ತಿಂಗಳ ಒಳಗಾಗಿ ಇಂಥ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಪೀಠ ನಿರ್ದೇಶಿಸಿದೆ. ಬಾಕಿ ಪ್ರಕರಣಗಳ ಅಂಕಿ ಅಂಶವನ್ನು ಪರಿಶೀಲಿಸಿದ ಬಳಿಕ, ಸದ್ಯಕ್ಕೆ ಪರಿಸ್ಥಿತಿ ತೀರಾ ಆತಂಕಕಾರಿ ಮತ್ತು ಅಸಮಾಧಾನಕಾರಿ. ಆರು ತಿಂಗಳಿಗಿಂತಲೂ ಧೀರ್ಘಕಾಲದಿಂದ ಬಾಕಿ ಇರುವ 7,95,981 ಪ್ರಕರಣಗಳು ಇವೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಆದಾಗ್ಯೂ ಆದೇಶ ಜಾರಿಗೆ ಜಿಲ್ಲಾ ನ್ಯಾಯಾಂಗ ವ್ಯವಸ್ಥೆ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿದ ನ್ಯಾಯಪೀಠ, ಕಳೆದ ಆರು ತಿಂಗಳಲ್ಲಿ 4.3 ಲಕ್ಷ ಇಂಥ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2025ರ ಮಾರ್ಚ್ ನಲ್ಲಿ ನೀಡಿದ ಸೂಚನೆಯ ಅನ್ವಯ ಒಂದು ವರ್ಷದಲ್ಲಿ ಸುಮಾರು 7.7 ಲಕ್ಷ ಬಾಕಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದೆ.
ಆರ್ಸಿಬಿಯ ಇಂದಿನ ಪಂದ್ಯದಲ್ಲಿ ಕೊಹ್ಲಿ ಆಡುತ್ತಾರೆಯೇ? ಇಲ್ಲಿದೆ ಲೇಟೆಸ್ಟ್ ಮಾಹಿತಿ..
ಹೊಸದಿಲ್ಲಿ: ಪ್ರಸಕ್ತ ಐಪಿಎಲ್ ಋತುವಿನಲ್ಲಿ ಆರಂಭದಿಂದಲೇ ಮಿಂಚುತ್ತಿರುವ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಕಾಲು ನೋವಿನ ಕಾರಣದಿಂದ ಮೈದಾನದಿಂದ ಹೊರನಡೆದ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರೆಯೇ ಇಲ್ಲವೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು. ಬುಧವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕೆ ಇಳಿಯುತ್ತಾರೆಯೇ ಎಂಬ ಕುತೂಹಲಕ್ಕೆ ಇದೀಗ ಉತ್ತರ ದೊರಕಿದೆ. ಕೊಹ್ಲಿ ಮಂಗಳವಾರ ತರಬೇತಿ ಸೆಷನ್ನಲ್ಲಿ ಕಾಣಿಸಿಕೊಂಡಿದ್ದು, ತೀವ್ರ ಅಭ್ಯಾಸ ನಡೆಸಿದರು ಮತ್ತು ಸಹ ಆಟಗಾರರೊಂದಿಗೆ ಸಂಭಾಷಣೆಯಲ್ಲಿ ನಿರತರಾಗಿದ್ದರು. ಎಂದಿನಂತೆ ತಂಡದ ಇತರ ಸದಸ್ಯರೊಂದಿಗೆ ನವಿರು ಹಾಸ್ಯದ ಕ್ಷಣಗಳನ್ನು ಹಂಚಿಕೊಂಡರು. ಆದರೆ ಸ್ಟಾರ್ ಆಟಗಾರನ ಎಡ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿರುವುದು ಕಂಡುಬಂದಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಎಲ್ಎಸ್ಜಿ ಜಾಲತಾಣ ಹ್ಯಾಂಡಲ್ನಿಂದ ಹಂಚಿಕೆಯಾಗಿರುವ ವಿಡಿಯೋದಲ್ಲಿ, ಎಡ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದ ಕೊಹ್ಲಿ ಮೈದಾನದಲ್ಲಿ ನಡೆಯುತ್ತ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರೊಂದಿಗೆ ಮಾತುಕತೆ ನಡೆಸಿದರು. ಎಲ್ಎಸ್ಜಿ ಬೆಂಬಲ ಸಿಬ್ಬಂದಿಯ ತಂಡದಲ್ಲಿರುವ ವಿಲಿಯಮ್ಸನ್ ಅವರನ್ನು ಅಭಿನಂದಿಸಿದ್ದು ಮಾತ್ರವಲ್ಲದೆ, ಎಲ್ಎಸ್ಜಿ ನಾಯಕ ರಿಷಭ್ ಪಂತ್ ಅವರನ್ನು ಆಲಿಂಗಿಸಿರುವುದು ಬಿಂಬಿತವಾಗಿದೆ. ಬ್ಯಾಂಡೇಜ್ ಸುತ್ತಿರುವುದು ಕಾಣಿಸಿದರೂ, ಕೊಹ್ಲಿ ನೆಟ್ ಅಭ್ಯಾಸದಲ್ಲಿ ಸುಧೀರ್ಘ ಸಮಯವನ್ನು ಕಳೆಯುತ್ತ ಬ್ಯಾಟಿಂಗ್ ಸೆಷನ್ನಲ್ಲಿ ಪಾಲ್ಗೊಂಡಿರುವುದು ತಕ್ಷಣದ ಆತಂಕವನ್ನು ದೂರಮಾಡಿದೆ. ಪ್ರಸಕ್ತ ಐಪಿಎಲ್ನ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ 59.66 ಸರಾಸರಿಯೊಂದಿಗೆ 162.72 ಸ್ಟ್ರೈಕ್ ರೇಟ್ ಸಹಿತ 179 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದು, ಗರಿಷ್ಠ ಅಜೇಯ 69 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 38 ಎಸೆತಗಳಲ್ಲಿ 50 ರನ್ ಗಳಿಸಿದ್ದರು.
ರಾಜ್ಯದಲ್ಲಿ ಮೇ 29ರಿಂದಲೇ 2026-27ನೇ ಹೊಸ ಶೈಕ್ಷಣಿಕ ವರ್ಷ ಆರಂಭ, ಈ ಬಾರಿ ದಸರಾಗೆ ಬರೋಬ್ಬರಿ 19 ದಿನ ರಜೆ
ಬೆಂಗಳೂರು: ಬೇಸಿಗೆ ರಜೆಯ ಮಜಾ ಅನುಭವಿಸುತ್ತಿರುವ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ಪ್ರಕಟಿಸಿದೆ. 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಮುಂಬರುವ 2026-27ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ನೂತನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ,
ನೀರವ್ ಮೋದಿ ಗಡೀಪಾರು ಪ್ರಕ್ರಿಯೆ ಪೂರ್ಣಗೊಳಿಸಲು ಲಂಡನ್ಗೆ ತೆರಳಿದ ಸಿಬಿಐ ತಂಡ
ಹೊಸದಿಲ್ಲಿ: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರ ವ್ಯಾಪಾರಿ ನೀರವ್ ಮೋದಿಯ ಗಡೀಪಾರು ವಿಧಿವಿಧಾನವನ್ನು ಪೂರ್ಣಗೊಳಿಸುವ ಸಲುವಾಗಿ ಸಿಬಿಐ ತಂಡ ಹಾಗೂ ಕಾನೂನು ತಜ್ಞರ ತಂಡ ಲಂಡನ್ಗೆ ತೆರಳಿದೆ. ಬ್ರಿಟನ್ನಲ್ಲಿ ನೆಲೆಸಿರುವ ಆರೋಪಿಗೆ ಗಡೀಪಾರು ವಿರುದ್ಧದ ಎಲ್ಲ ಕಾನೂನು ಸಾಧ್ಯತೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಾಂಗ ಅಧಿಕಾರಿಗಳೊಂದಿಗೆ ಚರ್ಚಿಸಲು ತಂಡ ಲಂಡನ್ಗೆ ತೆರಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬ್ರಿಟನ್ ಕೋರ್ಟ್ ನೀಡಿದ ಗಡೀಪಾರು ಆದೇಶದ ವಿಚಾರಣೆಯನ್ನು ಮರುಾರಂಭಿಸುವಂತೆ ಕೋರಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಆಫ್ ಜಸ್ಟಿಸ್, ಕಿಂಗ್ಸ್ ಬೆಂಚ್ ವಿಭಾಗ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಆರೋಪಿಯ ಗಡೀಪಾರು ವಿಧಿವಿಧಾನಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯ ಅಂಗವಾಗಿ ಸಿಬಿಐ ತಂಡ ಲಂಡನ್ಗೆ ತೆರಳಿದೆ. ಪ್ರಕರಣವನ್ನು ರಹಸ್ಯ ಪ್ರಕರಣವೆಂದು ಪರಿಗಣಿಸಿರುವ ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ನ್ಯಾಯಾಲಯದ ನೆರವು ಕೋರಿ ನೀರವ್ ಮೋದಿ ಫ್ರಾನ್ಸ್ನಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆಯೂ ಸಿಬಿಐ ತಂಡ ಉನ್ನತ ಕಾನೂನು ತಜ್ಞರೊಂದಿಗೆ ಚರ್ಚಿಸಲಿದೆ. ಇದರ ವಿಚಾರಣೆ ಭಾರತೀಯ ಅಧಿಕಾರಿಗಳ ಸಮ್ಮುಖದಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಸ್ಟ್ರಾಸ್ಬರ್ಗ್ನಲ್ಲಿ ನಡೆಯಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬ್ರಿಟನ್ ಕೋರ್ಟ್ನಲ್ಲಿ ಇರುವ ನೀರವ್ ಮೋದಿಯ ಗಡೀಪಾರು ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಎನ್ಬಿ ಬ್ಯಾಂಕ್ಗೆ 6,400 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪವನ್ನು ನೀರವ್ ಮೋದಿ ಎದುರಿಸುತ್ತಿದ್ದಾನೆ. 2019ರಲ್ಲಿ ಆರೋಪಿಯನ್ನು ಬ್ರಿಟನ್ನಲ್ಲಿ ಬಂಧಿಸಲಾಗಿದ್ದು, ಆತನ ಗಡೀಪಾರಿಗೆ ಬ್ರಿಟನ್ ಕೋರ್ಟ್ ಅನುಮತಿ ನೀಡಿದೆ ಹಾಗೂ ಆತನ ಎಲ್ಲ ಮನವಿಗಳನ್ನು ತಿರಸ್ಕರಿಸಿದೆ.
ಬಾಗಲಕೋಟೆ : ಕಾದ ಕೆಂಡವಾದ ಧರೆ, 45 ° ಸೆಲ್ಸಿಯಸ್ ದಾಖಲು, ಏ. 18 ರವರೆಗೆ ಮುಂದುವರೆಯುವ ಸಾಧ್ಯತೆ
ಬೇಸಿಗೆಯ ತಾಪವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭೂಮಿಯು ಅಕ್ಷರಶಃ ಕೆಂಡದಂತಾಗುತ್ತಿದೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆ ಸೃಷ್ಟಿಸಿದ್ದ ತಂಪು ಈಗ ಮಾಯವಾಗಿದ್ದು, ದಾಖಲೆ ಮಟ್ಟದಲ್ಲಿ ಏರುತ್ತಿರುವ ಉಷ್ಣಾಂಶವು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಸಾಮಾನ್ಯವಾಗಿ 30 ರಿಂದ 36 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತಿದ್ದ ತಾಪಮಾನವು ಈಗ ಆ ಮಿತಿಯನ್ನು ಮೀರಿ ಏರುತ್ತಿದೆ.
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಬೇಸಿಗೆಯಲ್ಲೂ ಮಳೆಗಾಲದಂತಹ ಅನುಭವ ಆಗಿತ್ತು. ಇದೀಗ ಬಿರು ಬೇಸಿಗೆ, ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದ್ದು, ರಾಜ್ಯಾದ್ಯಂತ ಉರಿಬಿಸಿಲಿನ ಅನುಭವವಾಗುತ್ತಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಅತ್ಯದಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಒಂದೇ ದಿನದಲ್ಲಿ ಸಾಮಾನ್ಯಕ್ಕಿಂತ 4.1 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ಏರಿಕೆ ಆಗಿದೆ. ರಾಜ್ಯಾದ್ಯಂತ ಬಿಸಿಲಿನ ತಾಪ,
ಯುದ್ಧ ಆರಂಭ ಆದಾಗಿನಿಂದ ಹರ್ಮುಜ್ ಬಳಸಿ ಬರುವ ಆಮದಿನ ಹಡಗುಗಳು ಅಲ್ಲೇ ಬಾಕಿಯಾಗಿವೆ. ಹೊರಟಿದ್ದ 23 ಹಡಗುಗಳ ಪೈಕಿ 15 ಹಡಗುಗಳು ಾಲ್ಲೇ ಇದ್ದು, ಆಹಾರ-ನೀರು ಸಂಗ್ರಹ ಖಾಲಿ ಆಗಿ ಸಿಬ್ಬಂದಿಗಳು ಆತಂಕ ಎದುರಿಸುತ್ತಿದ್ದಾರೆ. ಭಾರತ- ಇರಾನ್ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದನ್ನೇ ಎದುರು ನೋಡುತ್ತಿದ್ದಾರೆ.
Hassan | ವಿದ್ಯಾರ್ಥಿಗಳ ನ್ಯಾಯ ನಿರ್ಲಕ್ಷಿಸಿದ ವಾರ್ಡನ್ ವಿರುದ್ಧ ಕ್ರಮ
ʼವಾರ್ತಾಭಾರತಿʼ ಫಲಶ್ರುತಿ
ಸರ್ಕಾರಿ ಭೂಮಿ ಒತ್ತುವರಿ ಆರೋಪ; ಪರಕಾಲ ಸ್ವಾಮಿ ಮಠದ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
ಬೆಂಗಳೂರು: ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯ ಐತಿಹಾಸಿಕ ಭೂ ವರಾಹಸ್ವಾಮಿ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ವಿರುದ್ಧ ಸರ್ಕಾರಿ ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಸದ್ಯ ಆ ಮಠದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ಮೌಖಿಕವಾಗಿ ಆದೇಶಿಸಿದೆ. ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ಆಡಳಿತಾಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೇವಾಲಯದ ದೈನಂದಿನ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗಲು ಮಠಕ್ಕೆ ಅಧಿಕಾರಿಗಳು ಯಾವುದೇ ರೀತಿಯ ನಿರ್ಬಂಧ ವಿಧಿಸಬಾರದು ಎಂದು ಆದೇಶಿಸಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಕಂದಾಯ ಇಲಾಖೆ, ಪ್ರಾದೇಶಿಕ ಆಯುಕ್ತರು, ಮಂಡ್ಯ ಜಿಲ್ಲಾಧಿಕಾರಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಆಕ್ಷೇಪಣೆಗಳಲ್ಲಿದ್ದರೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. ಹೈಕೋರ್ಟ್ ಆದೇಶದಲ್ಲೇನಿದೆ? ಅರ್ಜಿದಾರ ಮಠದಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯ ತಹಸೀಲ್ದಾರ್ ಆ ಬಗ್ಗೆ ತನಿಖೆ ನಡೆಸಿದ್ದಾರೆ ಮತ್ತು ದೂರಿನಲ್ಲಿ ಹೇಳಿದ್ದಂತೆ ಯಾವುದೇ ರೀತಿಯ ಒತ್ತುವರಿ ಆಗಿಲ್ಲವೆಂದು ವರದಿ ನೀಡಿದ್ದಾರೆ. ಆದರೂ, ಹಿಂದಿನ ದೂರುದಾರರು ಎರಡನೇ ಬಾರಿ ಒತ್ತುವರಿ ಬಗ್ಗೆ ಮತ್ತೊಂದು ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದ್ದರು. ಹಿಂದೆ ಹೈಕೋರ್ಟ್ ಆ ರೀತಿ ಸಮಿತಿ ರಚನೆಯನ್ನು ರದ್ದುಗೊಳಿಸಿತ್ತು. ನ್ಯಾಯಾಲಯ ಅರ್ಜಿದಾರರ ಪರ ಆದೇಶ ನೀಡಿದ್ದರೂ ಸಹ ಮತ್ತೊಮ್ಮೆ ದೂರುದಾರರು ಅದೇ ಅಂಶಗಳನ್ನು ಮುಂದಿಟ್ಟುಕೊಂಡು ದೂರು ನೀಡಿದ್ದಾರೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಆದೇಶದಲ್ಲಿ ದಾಖಲಿಸಿದೆ. ಎಲ್ಲ ವಾದ ಆಲಿಸಿದ ಬಳಿಕ ಅರ್ಜಿದಾರರ ವಾದದಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎನಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದಿನ ಆದೇಶದವರೆಗೆ ಹೊಸದಾಗಿ ಹೊರಡಿಸಿರುವ ತನಿಖಾ ನೋಟಿಸ್ಗೆ ತಡೆ ನೀಡಲಾಗುವುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅರ್ಜಿದಾರರ ವಾದ: ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, 2025ರಲ್ಲಿ ಹೈಕೋರ್ಟ್ ಮಠದ ಪರವಾಗಿ ಅದೇಶ ನೀಡಿದ್ದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಮತ್ತೆ ಮಠದ ವಿರುದ್ಧ ಒತ್ತುವರಿ ತೆರವು ಪ್ರಕ್ರಿಯೆ ಆರಂಭಿಸಿದ್ದಾರೆ. ಆದ್ದರಿಂದ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಆರಂಭಿಸಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಕೋರಿದರು. ಪರಕಾಲ ಮಠ 1817ರಿಂದಲೂ ಭೂ ವರಾಹಸ್ವಾಮಿ ದೇವಾಲಯದ ನಿರ್ವಹಣೆ ಹೊಣೆಯನ್ನು ಹೊತ್ತಿದ್ದು, ಮೈಸೂರಿನ ರಾಜಮನೆತನವೇ ದೇವಾಲಯದ ಆಡಳಿತವನ್ನು ಮಠದ ಸುರ್ಪದಿಗೆ ವಹಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮೂವರು ನ್ಯಾಯಾಂಗ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆ; ಕೇಂದ್ರಕ್ಕೆ ಸುಪ್ರೀಂ ಕೊಲಿಜಿಯಂ ಶಿಫಾರಸು
ಬೆಂಗಳೂರು: ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ನ್ಯಾಯಾಂಗ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ಮಂಗಳವಾರ ನಡೆದ ಕೊಲಿಜಿಯಂ ಸಭೆಯಲ್ಲಿ ನ್ಯಾಯಾಂಗ ಅಧಿಕಾರಿಗಳಾದ ರಾಜೇಶ್ವರಿ ನಾರಾಯಣ ಹೆಗ್ಡೆ, ಕೆದಂಬಾಡಿ ಗಣೇಶ್ ಶಾಂತಿ ಹಾಗೂ ಮಹದೇವಪ್ಪ ಬೃಂಗೇಶ್ ಅವರಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಹೈಕೋರ್ಟ್ನ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿದ್ದು, ಸದ್ಯ 45 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 17 ಹುದ್ದೆ ಖಾಲಿ ಇದ್ದು, ಒಂದು ವೇಳೆ ಕೊಲಿಜಿಯಂ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ಮೂವರನ್ನೂ ನೇಮಕ ಮಾಡಿದರೆ ಇನ್ನೂ 14 ಹುದ್ದೆಗಳು ಖಾಲಿ ಇರಲಿವೆ.
ಮಹಿಳಾ ಉದ್ಯೋಗಿಯೊಂದಿಗೆ ಅನುಚಿತ ವರ್ತನೆ ಆರೋಪ: ಖಾಸಗಿ ಆಸ್ಪತ್ರೆಯ ಮುಖ್ಯಸ್ಥನ ವಿರುದ್ಧ ಎಫ್ಐಆರ್
ಬೆಂಗಳೂರು : ಮಹಿಳಾ ಉದ್ಯೋಗಿಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದಡಿ ಖಾಸಗಿ ಆಸ್ಪತ್ರೆಯ ಮುಖ್ಯಸ್ಥನ ವಿರುದ್ಧ ಇಲ್ಲಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 30 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರು ಆಧರಿಸಿ, ಖಾಸಗಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ರಾಕೇಶ್ ಜಯಪ್ರಕಾಶ್ ಎಂಬುವವರ ವಿರುದ್ಧ ಲೈಂಗಿಕ ಅಪರಾಧ ಹಾಗೂ ಮಹಿಳೆ ಗೌರವಕ್ಕೆ ಧಕ್ಕೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಚ್ಎಸ್ಆರ್ ಲೇಔಟ್ನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ 9 ತಿಂಗಳಿಂದ ಸಂತ್ರಸ್ತ ಮಹಿಳೆಯು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಕೇಶ್, ಕೆಲಸದ ವೇಳೆ ನನ್ನೊಂದಿಗೆ ಲೈಂಗಿಕವಾಗಿ ಮಾತನಾಡಿ ಅನುಚಿತ ವರ್ತನೆ ತೋರಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ತನ್ನೊಂದಿಗೆ ಲೈಂಗಿಕ ರೀತಿ ಅನುಚಿತವಾಗಿ ಮಾತನಾಡಿ, ಹೆಣ್ಣಿನ ಗೌರವಕ್ಕೆ ಧಕ್ಕೆ ತಂದಿರುವ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬೆಂಗಳೂರು : ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ. ಈ ಸಂಬಂಧ ಉಭಯ ಶಾಸಕರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಶ್ರೀಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ' ನೀಡಬೇಕೆಂಬುದು ಕೋಟ್ಯಂತರ ಭಕ್ತರ ಹಾಗೂ ಕನ್ನಡಿಗರ ಆಶಯವಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ. ಇಂದು ಆದಿಚುಂಚನಗಿರಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು ಸುಮಾರು 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಇವರ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಅವರ ಶೈಕ್ಷಣಿಕ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 60ಕ್ಕೂ ಹೆಚ್ಚು ವೇದ, ಆಗಮ ಹಾಗೂ ಸಂಸ್ಕೃತ ಪಾಠಶಾಲೆಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಉಳಿವಿಗಾಗಿ ಶ್ರೀಗಳು ಶ್ರಮಿಸಿದ್ದಾರೆ. ಗ್ರಾಮೀಣ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಲು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ಆರೋಗ್ಯ ಕಾಪಾಡಿದ್ದಾರೆ ಎಂದು ಶಾಸಕರು ಸ್ಮರಿಸಿದ್ದಾರೆ. ಜಾತಿ-ಮತದ ಭೇದವಿಲ್ಲದೆ ಲಕ್ಷಾಂತರ ಜನರಿಗೆ ಅನ್ನದಾಸೋಹ, ವಸತಿ ಮತ್ತು ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಎ.15ರಂದು ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳಿಗೆ ‘ಭಾರತ ರತ್ನ' ನೀಡುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು. ಶೀಘ್ರವಾಗಿ ಪ್ರಶಸ್ತಿ ಘೋಷಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ತಲುಪಿಸಿದ ಶ್ರೀಗಳ ಸೇವೆಗೆ ‘ಭಾರತ ರತ್ನ' ಗೌರವ ಸಲ್ಲುವುದು ಸಮಸ್ತ ಕನ್ನಡಿಗರಿಗೆ ಸಲ್ಲುವ ಗೌರವವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶರತ್ ಬಚ್ಚೇಗೌಡ ಹಾಗೂ ದಿನೇಶ್ ಗೂಳಿಗೌಡ ಕೋರಿದ್ದಾರೆ.
ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತ ಕಟ್ಟಬೇಕು: ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಪ್ರಸ್ತುತ ಜನಕೇಂದ್ರಿತವಾದ ಯೋಚನೆಗಳು ಹಿನ್ನಲೆಗೆ ಸರಿಯುತ್ತಿರುವಾಗ ನಾವೆಲ್ಲರೂ ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂಭಾಗ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಮದ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ವಾದ ಸಂಚಿಕೆ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟ ರಾಷ್ಟ್ರೀಯವಾದ ಜನಕೇಂದ್ರಿತ ರಾಷ್ಟ್ರೀಯವಾದ. ಅದಕ್ಕಿಂತ ಹಿಂದೆ ಇದ್ದಂತ ರಾಷ್ಟ್ರೀಯವಾದಗಳೆಲ್ಲವೂ ಮತಕೇಂದ್ರಿತ ರಾಷ್ಟ್ರೀಯವಾದಗಳು. ಈಗಲೂ ಅನೇಕರು ಮತಕೇಂದ್ರಿತವಾದ ಭಾರತವನ್ನು ಕಟ್ಟಲು ಹೊರಡುತ್ತಿದ್ದಾರೆ ಎಂದರು. ಅಂಬೇಡ್ಕರ್ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಯಾಕೆಂದರೆ ಒಂದೆಡೆಯಲ್ಲಿ ಭಾರತದ ಸಂವಿಧಾನವನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿದೆ. ಸಂವಿಧಾನವನ್ನು ಇಟ್ಟುಕೊಂಡು ಸಂವಿಧಾನ ವಿರುದ್ಧದ ಚಳವಳಿಗಳು, ಕೆಲಸಗಳು ನಡೆಯುತ್ತಿವೆ. ಸಂವಿಧಾನದಲ್ಲಿ ಹೇಳಿದ ಅನುಚ್ಛೇದ 14, ಅನುಚ್ಛೇದ 15, ಅನುಚ್ಛೇದ 16ರಲ್ಲಿರುವ ಆಶಯಗಳನ್ನು ಈವತ್ತಿನ ಸಮಾಜ ಅಂಗೀರಿಸುತ್ತಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು. ಮುಸ್ಲಿಮ್ರು ಇಂತಹ ಕಡೆ ಅಂಗಡಿ ಇಡಬೇಕು, ಇಡಬಾರದು ಎನ್ನುವುದು ನಿರ್ಣಯ ಆಗುತ್ತಿದೆ. ಕಾನೂನುಗಳು ಇದ್ದವರಿಗೆ ಒಂದು ಇಲ್ಲದಿರುವರಿಗೆ ಒಂದು, ಹಿಂದುಗಳಿಗೊಂದು, ಮುಸಲ್ಮಾನರಿಗೊಂದು ಹೀಗಾಗಿದೆ. ಜನಗಳಿಗೆ ನ್ಯಾಯಾಂಗದ ಮೇಲೆ ನಂಬಿಕೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ ಚಿಂತನೆಗಳು ಗಟ್ಟಿಯಾಗಿ ಹಿಡಿದುಕೊಂಡು, ಅದನ್ನು ವರ್ತಮಾನಕ್ಕೆ ಒಗ್ಗಿಸುವ ಮತ್ತು ನಮ್ಮ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿ ಜನಗಳ ಹತ್ತಿರ ತೆಗೆದುಕೊಂಡು ಹೋಗಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. ಈ ಕೆಲಸವನ್ನು ಮಾಡುವುದಕ್ಕೆ ನಮಗೆ ದೊಡ್ಡಶಕ್ತಿಯಾಗಿ ಹಿನ್ನಲೆಯಲ್ಲಿರುವುದು ಅಂಬೇಡ್ಕರ್ ಅವರು. ನಮ್ಮನ್ನು ಕೈ ಹಿಡಿದು ಮುನ್ನಡಿಸುವ ಶಕ್ತಿ ಇರುವುದು ನಿಜವಾದ ಅರ್ಥದಲ್ಲಿ ಸಂವಿಧಾನ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ದಲಿತರು ಚಾರಿತ್ರಕವಾಗಿ ದೇಶವನ್ನು ನಡೆಸುವ ಹಕ್ಕಿದೆ. ಯಾಕೆಂದರೆ ಅತ್ಯಂತ ಶೋಷಿತರು. ಅವರು ಜವಾಬ್ದಾರಿಯಿಂದ ವರ್ತಿಸಬೇಕು. ಅದನ್ನು ಬೇಕಾಬಿಟ್ಟಿಯಾಗಿ ನಾಯಕತ್ವ ಸಿಕ್ಕಿದೆ ಎಂದು ಬೇರೆ ನಾಯಕತ್ವಗಳ ಜೊತೆಗೆ ಹೋಲಿಸಿಕೊಂಡು ಮಾಡುವ ಪ್ರಶ್ನೆಯಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್, ಲೇಖಕ ಡಾ.ನಟರಾಜ್ ಹುಳಿಯಾರ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶೋಷಿತ ವರ್ಗಗಳ ಒಡಕು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ : ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ಶೋಷಿತ ವರ್ಗಗಳು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸುತ್ತಿದ್ದರು. ಆದರೆ ಈಗ ಶೋಷಿತ ವರ್ಗಗಳಲ್ಲಿಯೇ ಒಡಕು ಉಂಟಾಗುತ್ತಿದೆ. ಇದು ಬಾಬಾ ಸಾಹೇಬರಿಗೆ ಮಾಡುವ ದೊಡ್ಡ ಅವಮಾನ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮಂಗಳವಾರ ವಿಧಾನಸೌಧ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಬಹುಜನರಾಗಿರುವ ಕೆಳ ವರ್ಗಗಳ ಒಗ್ಗಟ್ಟನ್ನು ಒಡೆಯುವುದೇ ಮನುವಾದಿಗಳ ಮೊದಲ ಆದ್ಯತೆ ಆಗಿದೆ. ಬಹುಜನರು ಒಗ್ಗಟ್ಟಾಗಿ ಇಲ್ಲದೇ ಹೋದರೆ ಮುಂದೆ ಶೋಷಿತ ವರ್ಗಗಳು ನಾಯಿನರಿಗಳಂತೆ ಬದುಕಬೇಕಾಗುತ್ತದೆ ಎಂದು ಅವರು ಹೇಳಿದರು. ಲಂಡನ್ನಿನ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ ದಾಖಲೆ ಈಗಲೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಇದೆ. ಇನ್ನು ದೇಶದ ಬಹು ಜನರ ಬದುಕಿನ ಆಶಯಕ್ಕೆ ವಿರುದ್ಧವಾಗಿ ಧಾರ್ಮಿಕ ವಿಷದ ಕಂತೆಯಾಗಿದ್ದ ಮನುಸ್ಮೃತಿಯನ್ನು ಬಾಬಾ ಸಾಹೇಬರು ಸುಟ್ಟಿದ್ದಾರೆ. ಕುಡಿಯುವ ನೀರಿಗಾಗಿ ನಡೆದ ಜಗತ್ತಿನ ಮೊದಲ ಹೋರಾಟವಾದ ಮಹಾಡ್ ಚಳುವಳಿಯ ನೇತೃತ್ವವನ್ನು ಅವರು ವಹಿಸಿದ್ದರು. ಬಹು ಜನರ ಪರವಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಬಹುದೊಡ್ಡ ಧರ್ಮಯುದ್ಧ ಮಾಡಿದ ಜಗತ್ತಿನ ಮಹಾನ್ ನಾಯಕ ಎಂದರೆ ಅದು ಬಾಬಾ ಸಾಹೇಬರು ಎಂದು ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
Bengaluru | ಹೆತ್ತ ಮಗಳ ಕೊಲೆಗೈದು ತಾಯಿಯೂ ಆತ್ಮಹತ್ಯೆ!
ಬೆಂಗಳೂರು : ಹೆತ್ತ ಮಗಳನ್ನೇ ಕೊಲೆಗೈದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ವರದಿಯಾಗಿದೆ. ಕಾರುಣ್ಯಾ(17) ಹತ್ಯೆಯಾದ ಮಗಳು, ಸುವರ್ಣಾ(40) ಆತ್ಮಹತ್ಯೆ ಮಾಡಿಕೊಂಡ ತಾಯಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎ.14ರಂದು ಸುಮಾರು 11 ಗಂಟೆ ವೇಳೆಗೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ಬಳಿಯಿರುವ ಮನೆಯಲ್ಲಿ ಕುಟುಂಬಸ್ಥರು ಇರುವ ಸಂದರ್ಭದಲ್ಲೇ ತಾಯಿ ಸುವರ್ಣ ತನ್ನ ಹದಿಹರೆಯದ ಪುತ್ರಿ ಕಾರುಣ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆ ಬಳಿಕ ತಾನು ಕೂಡ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ವೈಟ್ಫೀಲ್ಡ್ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ಮಣಿಪುರದ ಬಿಷ್ಣುಪುರದಲ್ಲಿ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರ ಘರ್ಷಣೆ; ನಾಲ್ವರ ಬಂಧನ
ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿ
ಬೆಳಗಾವಿಯಲ್ಲಿ ಮರ್ಯಾದೆಗೇಡು ಹತ್ಯೆ; ಮುಚ್ಚಿಹಾಕಿದ್ದ ಪ್ರಕರಣ ಬಯಲಿಗೆ
ಬೆಳಗಾವಿ : ಮದುವೆಯಾಗಿರುವ ಮಗಳು ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕೆ ಮಗಳನ್ನು ಕೊಲೆ ಮಾಡಿ, ಬಳಿಕ ಸುಟ್ಟು ಹಾಕಿರುವ ಮರ್ಯಾದೆಗೇಡು ಹತ್ಯೆ ಬೆಳಗಾವಿಯಲ್ಲಿ ನಡೆದಿರುವುದು ವರದಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮೊಟ್ಟ ಮೊದಲ ಮರ್ಯಾದೆಗೇಡು ಹತ್ಯೆ ಇದು. ತನ್ನ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಗೆ ವಿಷ ಕುಡಿಸಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಮುಚ್ಚಿಹಾಕಲಾಗಿದ್ದ ಪ್ರಕರಣವನ್ನು ಪೊಲೀಸ್ ಇನ್ಸ್ಪೆಕ್ಟರ್ ಜಾವೀದ್ ಮುಶಾಪುರೆ ಚಾಣಾಕ್ಷತನದಿಂದ ಬಯಲಿಗೆಳೆದಿದ್ದಾರೆ. ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದ, 24 ವರ್ಷದ ಸತ್ಯವ್ವ ಸಂತೋಷ ಹೆಳವಿ ಕೊಲೆಯಾದವರು. ಸತ್ಯವ್ವಳಿಗೆ ರಾಯಬಾಗ ತಾಲೂಕಿನ ಹಣಬರಟ್ಟಿಯ ಸಂತೋಷ ಹೆಳವಿ ಎನ್ನುವವನ ಜೊತೆ ಮದುವೆಯಾಗಿತ್ತು. ಆದರೆ ನದಿಗುಡಿ ಕ್ಷೇತ್ರದ ಕೃಷ್ಣಾ ಸಹದೇವ ಪಾಟೀಲ ಎಂಬಾತನನ್ನು ಪ್ರೀತಿಸುತ್ತಿದ್ದ ಆಕೆ, ಇತ್ತೀಚೆಗೆ ತನ್ನ ಪತಿಯನ್ನು ಬಿಟ್ಟು ಆತನ ಜೊತೆ ಹೋಗಿದ್ದಳು. ಇದರಿಂದ ತಮ್ಮ ಕುಟುಂಬದ ಮರ್ಯಾದೆ ಹರಾಜಾಗಿದೆ ಎಂದು ಆಕ್ರೋಶಗೊಂಡಿದ್ದ ತವರು ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಮಾರ್ಚ್ 13ರಂದು ಸತ್ಯವ್ವಳನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದ ಶಿರೋಳಕ್ಕೆ ಕರೆದುಕೊಂಡು ಹೋಗಿ ಟೆಂಟ್ ಹಾಕಿ ಇಟ್ಟುಕೊಂಡು ಸತತ ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ತಮ್ಮದೇ ಜಾತಿಯ ಬೇರೆ ಹುಡುಗನ ಜೊತೆ ಮದುವೆ ಮಾಡುವುದಾಗಿ ಹೇಳಿದರು. ಆದರೂ ಒಪ್ಪದಿದ್ದಾಗ ಅರಗಕ್ಕೆ ಕರೆದುಕೊಂಡು ಹೋಗಿ ಆಕೆಗೆ ಮಧ್ಯರಾತ್ರಿ ಬಲವಂತವಾಗಿ ವಿಷ ಕುಡಿಸಿ, ಆಕೆಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಅರಗದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡು ಅಮಾನವೀಯ ಕೃತ್ಯ ಬಯಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹೆಳವರ (46), ಸಹೋದರ ಶಾನೂರ ಸದಾಶಿವ ಹೆಳವರ (35) ಮತ್ತು ಬಾವ ಮೊರಬದ ಕಲ್ಲಪ್ಪ ಮಾಯಪ್ಪ ಹೆಳವಿ (40) ಇವರನ್ನು ಬಂಧಿಸಲಾಗಿದೆ. ಪತ್ತೆಯಾಗಿದ್ದೇ ರೋಚಕ : ಈ ಪ್ರಕರಣ ಪತ್ತೆಯಾಗಿದ್ದೇ ರೋಚಕ. ಸಂಪೂರ್ಣ ಮುಚ್ಚಿಹೋಗಿದ್ದ ಪ್ರಕರಣದ ಸುಳಿವು ಪಡೆದ ಯಮಕನಮರಡಿ ಪೊಲೀಸ್ ಇನ್ಸ್ಪೆಕ್ಟರ್ ಜಾವೀದ್ ಅತ್ಯಂತ ಚಾಣಾಕ್ಷತನದಿಂದ ಬಯಲು ಮಾಡಿದ್ದಾರೆ. ಎಲ್ಲ ರೀತಿಯ ಪ್ರಯತ್ನದ ನಂತರ ಅಂತಿಮವಾಗಿ ಯುವತಿಯ ತಾಯಿಯನ್ನು ಭೇಟಿ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.ಬಳಿಕ ಮನವೊಲಿಸಿದ್ದಾರೆ. ಆಗ ಅಳಲು ಆರಂಭಿಸಿದ ಆ ತಾಯಿ, ಎಲ್ಲ ಕಥೆಯನ್ನು ಬಿಚ್ಚಿಟ್ಟಳು.
IPL 2026 | ಸ್ಯಾಮ್ಸನ್, ಬ್ರೆವಿಸ್, ಆಯುಷ್ ಸಂಘಟಿತ ಪ್ರದರ್ಶನ: ಕೆಕೆಆರ್ ವಿರುದ್ಧ ಸಿಎಸ್ಕೆ ಜಯಭೇರಿ
ಚೆನ್ನೈ: ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್(48 ರನ್, 32 ಎಸೆತ, 4 ಬೌಂಡರಿ,3 ಸಿಕ್ಸರ್), ಡೆವಾಲ್ಡ್ ಬ್ರೆವಿಸ್(41 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ಆಯುಷ್ ಮ್ಹಾತ್ರೆ(38 ರನ್, 17 ಎಸೆತ, 6 ಬೌಂಡರಿ,2 ಸಿಕ್ಸರ್) ಅವರ ಸಂಘಟಿತ ಪ್ರದರ್ಶನ, ನೂರ್ ಅಹ್ಮದ್(3-21) ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 32 ರನ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಸಿಎಸ್ಕೆ ಎರಡನೇ ಗೆಲುವು ದಾಖಲಿಸಿದರೆ, ಕೆಕೆಆರ್ ಸೋಲಿನ ಸುಳಿಯಿಂದ ಹೊರಬರುವಲ್ಲಿ ವಿಫಲವಾಯಿತು. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 22ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸಿಎಸ್ಕೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 192 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ಯಾವ ಹಂತದಲ್ಲೂ ಹೋರಾಟ ನೀಡದೆ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೆಕೆಆರ್ ಪರ ರಮಣ್ದೀಪ್ ಸಿಂಗ್(35 ರನ್, 23 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ರೋವ್ಮನ್ ಪೊವೆಲ್(ಔಟಾಗದೆ 31, 22 ಎಸೆತ), ನಾಯಕ ರಹಾನೆ(28 ರನ್, 22 ಎಸೆತ), ರಘುವಂಶಿ(27 ರನ್, 19 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. ಸಿಎಸ್ಕೆ ಪರ ನೂರ್ ಅಹ್ಮದ್(3-21)ಯಶಸ್ವಿ ಪ್ರದರ್ಶನ ನೀಡಿದರು. ಅನ್ಶುಲ್ ಕಾಂಬೋಜ್ (2-32)ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಸ್ಯಾಮ್ಸನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಋತುರಾಜ್ ಗಾಯಕ್ವಾಡ್(7 ರನ್)ಬೇಗನೆ ಔಟಾದರು. ಆಗ ಎರಡನೇ ವಿಕೆಟ್ಗೆ 47 ರನ್ ಸೇರಿಸಿದ ಸ್ಯಾಮ್ಸನ್ ಹಾಗೂ ಆಯುಷ್ ತಂಡವನ್ನು ಆಧರಿಸಿದರು. ಆಯುಷ್ ಹಾಗೂ ಸ್ಯಾಮ್ಸನ್ ಔಟಾದಾಗ ಸಿಎಸ್ಕೆ 111 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ನಾಲ್ಕನೇ ವಿಕೆಟ್ಗೆ 51 ರನ್ ಜೊತೆಯಾಟದಲ್ಲಿ ಭಾಗಿಯಾದ ಬ್ರೆವಿಸ್ ಹಾಗೂ ಸರ್ಫರಾಝ್ ಖಾನ್(23 ರನ್, 18 ಎಸೆತ)ತಂಡದ ಮೊತ್ತವನ್ನು ಹೆಚ್ಚಿಸಿದರು. ಶಿವಂ ದುಬೆ(ಔಟಾಗದೆ 13 ರನ್)ಹಾಗೂ ಓವರ್ಟನ್(ಔಟಾಗದೆ 7) ಸಿಎಸ್ಕೆ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ವಿಫಲರಾದರು. ಕೆಕೆಆರ್ ಪರ ಕಾರ್ತಿಕ್ ತ್ಯಾಗಿ(2-35)ಯಶಸ್ವಿ ಪ್ರದರ್ಶನ ನೀಡಿದರು.
Vijayapura | ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ಪುತ್ರನ ಕೊಲೆ
ವಿಜಯಪುರ : ʼನೋಡಲು ತನ್ನಂತಿಲ್ಲʼ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪುತ್ರನನ್ನೇ ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಳೆದ ಮಾ. 15ರಂದು ಈ ಘಟನೆ ನಡೆದಿದೆ. ಈ ಮೊದಲು ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟಿದ್ದ ಕುಟುಂಬಸ್ಥರೇ ಇದೀಗ ತಂದೆಯೇ ಪುತ್ರನನ್ನು ಕೊಂದಿದ್ದಾನೆಂದು ದೂರು ದಾಖಲಿಸಿದ್ದು, ಇಡೀ ಪ್ರಕರಣ ರೋಚಕ ತಿರುವು ಪಡೆದಿದೆ. ಘಟನೆ ಹಿನ್ನೆಲೆ: ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಮಾ. 15ರಂದು ತನ್ನ ಆರು ವರ್ಷದ ಪುತ್ರ ಸಿದ್ಧಾರ್ಥನನ್ನು ಶಾಲೆಗೆ ಸೇರಿಸುವುದಾಗಿ ಮನೆಯಿಂದ ಕರೆದೊಯ್ದಿದ್ದಾನೆ. ಬಳಿಕ ಮನೆಗೆ ಬಂದು ಮಗನನ್ನು ಶಾಲೆಗೆ ಸೇರಿಸಿದ್ದಾಗಿ ತಿಳಿಸಿದ್ದಾನೆ. ಎ.1ರಂದು ಸಿದ್ಧಾರ್ಥನ ಜನ್ಮ ದಿನವಿದ್ದು, ಆಚರಣೆಗಾಗಿ ಕರೆತರಲು ಮಲ್ಲಿಕಾರ್ಜುನನ ಪತ್ನಿ ಭಾಗ್ಯಶ್ರೀ ದುಂಬಾಲು ಬಿದ್ದಿದ್ದಾಳೆ. ಕಡೇ ಪಕ್ಷ ಫೋನ್ ಮಾಡಿಯಾದರೂ ಮಗನೊಂದಿಗೆ ಮಾತನಾಡಿಸು ಎಂದು ಒತ್ತಾಯಿಸಿದ ಬಳಿಕ, ಯಾರ ಜೊತೆಗೋ ಮಾತನಾಡಿಸಿದ್ದು, ಮಗನ ಕೈಗೆ ಮೊಬೈಲ್ ಕೊಡುವಂತೆ ಹೇಳಿದಾಗ ಆತ ಮಾತನಾಡಲು ನಿರಾಕರಿಸುತ್ತಿರುವುದಾಗಿ ಅಪರಿಚಿತರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಭಾಗ್ಯಶ್ರೀ ಮಗನನ್ನು ಕರೆದುಕೊಂಡು ಬರೋಣವೆಂದು ಒತ್ತಾಯಿಸಿದ್ದು, ಮಲ್ಲಿಕಾರ್ಜುನ ಬೈಕ್ ಮೇಲೆ ಕರೆದೊಯ್ದು ಸಿಂದಗಿ ಬಸ್ ನಿಲ್ದಾಣ ಮತ್ತಿತರ ಕಡೆ ಸುತ್ತಾಡಿಸಿ ಬಂದಾಳ ಗ್ರಾಮದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿಸಿದ್ದಾನೆ. ವಾಪಸ್ ನಾಗಠಾಣಕ್ಕೆ ಬರುತ್ತಿರಬೇಕಾದರೆ ಮಾರ್ಗಮಧ್ಯೆ ಭಾಗ್ಯಶ್ರೀ ಹಠ ಹಿಡಿದಿದ್ದಾರೆ. ಆದರೆ ಮಲ್ಲಿಕಾರ್ಜುನ ನನ್ನನ್ನು ಕ್ಷಮಿಸು ಎಂದಷ್ಟೇ ಹೇಳಿದ್ದಾನೆ. ಬಳಿಕ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಹಿರಿಯರು ಸತ್ಯ ಬಾಯಿ ಬಿಡುವಂತೆ ಒತ್ತಾಯಿಸತೊಡಗಿದ್ದಾಗ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ಅನಂತರ ಪೊಲೀಸರು ಕರೆತಂದು ವಿಚಾರಣೆ ನಡೆಸಲಾಗಿ ಸತ್ಯ ಬಯಲಾಗಿದೆ. ಕರಾಡದಲ್ಲಿ ಕೊಲೆ: ಮಾ. 16ರಂದು ಮಹಾರಾಷ್ಟ್ರದ ಕರಾಡ ಬಳಿಯ ಕೃಷ್ಣಾ ನದಿಯಲ್ಲಿ ಪುತ್ರನನ್ನು ಕೊಂದು ಎಸೆದಿರುವ ಮಲ್ಲಿಕಾರ್ಜುನ ಬಳಿಕ ಸತ್ಯ ಮರೆಮಾಚಲು ಹಲವು ಕಸರತ್ತು ನಡೆಸಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಕರಾಡದಲ್ಲಿ ಬಾಲಕನೋರ್ವನ ಮೃತದೇಹ ಪತ್ತೆಯಾಗಿದ್ದು, ಮೃತದೇಹ ಪರಿಶೀಲಿಸಲಾಗಿ ಸಿದ್ಧಾರ್ಥನದ್ದೇ ಎಂದು ಗೊತ್ತಾಗಿದೆ.
ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಕೈಚಳಕಕ್ಕೆ ಸುಸ್ತಾದ ಕೋಲ್ಕತ್ತಾ; ಚೆನ್ನೈ ಸೂಪರ್ ಕಿಂಗ್ಸ್ ಗೆ ಸತತ ಎರಡನೇ ಜಯಭೇರಿ
ಪ್ರಾರಂಭದ 2 ಪಂದ್ಯಗಳನ್ನು ಸತತವಾಗಿ ಸೋತು ಸಂಪೂರ್ಣ ಕಳೆಗುಂದಿದ್ದ ತಂಡ ಇದೀಗ ನಿರಂತರ ಎರಡನೇ ಜಯ ಗಳಿಸುವ ಮೂಲಕ ತನ್ನ ವೈಭವದ ದಿನಗಳನ್ನು ಮತ್ತೆ ಕಾಣುವ ಮುನ್ಸೂಚನೆ ನೀಡಿದೆ. ಎಡಗೈ ರಿಸ್ಟ್ ಸ್ಪಿನ್ನರ್ ನೂರ್ ಅಹ್ಮದ್ ಅವರ ಬಿಗು ದಾಳಿಯ ಪರಿಣಾಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 32 ರನ್ ಗಳಿಂದ ಸೋಲಿಸಿತು. ಈ ಮೂಲಕ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವುಗಳನ್ನು ಕಂಡಿರುವ ಋತುರಾಜ್ ಗಾಯಕ್ವಾಡ್ ಬಳಗ ಒಟ್ಟು 4 ಅಂಕಗಳೊಂದಿಗೆ ಯಲ್ಲಿ 9ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದೆ. ಇನ್ನು ಈವರೆಗೆ ಆಡಿರುವ ಪಂದ್ಯಗಳಲ್ಲಿ ಒಂದು ಗೆಲುವನ್ನೂ ಕಾಣದಿರುವ ಕೋಲ್ಕತಾ ಕೊನೇ ಸ್ಥಾನಿಯಾಗಿಯೇ ಉಳಿದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಏಪ್ರಿಲ್ 14ರ ಮಂಗಳವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 192 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ಕಳೆದುಕೊಂಡು ಕೇವಲ 160 ರನ್ ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ()
RCB Playing 11 Prediction: ಎಲ್ಎಸ್ಜಿ ವಿರುದ್ಧ ಆರ್ಸಿಬಿ ಪ್ಲೇಯಿಂಗ್ 11 ಭವಿಷ್ಯ
RCB Playing 11: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ. ಬುಧವಾರ (ಏಪ್ರಿಲ್ 15) ತವರು ಮೈದಾನ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜಸ್ಥಾನ್ ರಾಯಲ್ಸ್ ವಿರುದ್ಧದ
ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ತಕ್ಷಣ ನಡೆಯಲಿ: ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹ
ಮಂಗಳೂರು : ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ತಕ್ಷಣ ಕ್ರಮಕೈ ಗೊಳ್ಳಬೇಕು ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಸುಮಾರು 2133 ಕೋಟಿ ರೂ. ಅನುದಾನ ವನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಣ ಮಾರ್ಚ್ ಅಂತ್ಯದವರೆಗೂ ಬಂದಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ನಡೆಸಿ ಆರ್ಥಿಕ ಸಂಕಷ್ಟ ಕ್ಕೀಡಾಗಿವೆ ಎಂದು ಅವರು ಹೇಳಿದರು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ನಡೆಸದೇ ಇರುವುದರಿಂದ ಹಾಗೂ ಆಯಾ ಕಾಲಕ್ಕೆ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡದಿರುವುದರಿಂದ ಈ ಅನುದಾನ ತಡೆಹಿಡಿಯಲಾಗಿದೆ ಎಂದು ಆಯೋಗವೇ ಕಾರಣ ನೀಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರ ಇದೆ ಎಂಬ ಕಾರಣ ನೀಡುವುದಾದರೆ, ರಾಜ್ಯದ 27 ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೇರಳ ಮತ್ತು ತಮಿಳು ನಾಡು ರಾಜ್ಯಗಳಿಗೆ ಅನುದಾನ ಬಿಡುಗಡೆ ಯಾಗಿದೆ ಎಂದರು. ಈ ಹಿನ್ನಲೆಯಲ್ಲಿ ಕೇರಳ ರಾಜ್ಯದ ಮಾದರಿಯನ್ನು ಅನುಸರಿಸಿ ತಕ್ಷಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಯನ್ನು ನಡೆಸಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ಕೇರಳ ಮಾದರಿಯಾಗಿದೆ. ಅಲ್ಲಿ ಪ್ರತಿ 5ವರ್ಷಗಳಿಗೊಮ್ಮೆ ಚುನಾವಣೆ ನಡೆಸುತ್ತಾರೆ. ರಾಜ್ಯದಲ್ಲಿ ಈ ಮಾದರಿ ಅನುಸರಿಸಲಿ ಎಂದವರು ಆಗ್ರಹಿಸಿದರು. ಈ ಕುರಿತು ಸ್ಥಳೀಯ ಸಂಸದರು, ವಿಧಾನ ಸಭಾ ಸದಸ್ಯರು,ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮೌನವಾಗಿರುವುದನ್ನು ಅವರು ಆಕ್ಷೇಪಿಸಿದರು. ಕೇಂದ್ರ ಸರ್ಕಾರವು ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಆಡಳಿತ ಇಲ್ಲದಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತ ಇರುವುದರಿಂದ ಹಣ ಬಿಡುಗಡೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಚುನಾವಣೆಗಳನ್ನು ನಡೆಸದೇ ಆರು ವರ್ಷಗಳಾಗಿದ್ದು, ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ತಕ್ಷಣ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ದಾವಣಗೆರೆಯಲ್ಲಿ ಎಸ್ಡಿಪಿಐ ಗೆಲ್ಲುವ ವಿಶ್ವಾಸವಿದ್ದು, ಎಲ್ಲಾ ಜಾತಿ-ಧರ್ಮದ ಜನರು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮುಸ್ಲಿಂ ಮತಗಳು ಹಾಗೂ ಶೇ.75 ಅಹಿಂದ ಮತಗಳಿವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಜನರು ಎಸ್ಡಿಪಿಐ ಪರ ಮತ ಚಲಾಯಿ ಸಿದ್ದಾರೆ ಎಂದು ಹೇಳಿದರು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸೋಲಿನ ಭೀತಿಯಿಂದ ಉಂಟಾದ ಹತಾಶೆಯ ಪ್ರತಿಕ್ರಿಯೆಗಳಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕತ್ವವನ್ನು ದುರ್ಬಲ ಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಹಿಂದಿನ ಕೆಲವು ಘಟನೆಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳದ ಕಾಂಗ್ರೆಸ್ ನಾಯಕತ್ವದ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಂಟ್ವಾಳದ ಮಾಜಿ ಕಾಂಗ್ರೆಸ್ ಶಾಸಕರು ಪರಾಭವ ಗೊಂಡಾಗ, ಪಕ್ಷ ವಿರೋಧಿ ಚಟುವಟಿಕೆ ನಡೆದ ಕಾರಣ ಸೋಲಾಗಿದೆ ಎಂದು ಆರೋಪ ಕೇಳಿ ಬಂದರೂ ಯಾರಾ ಮೇಲು ಕ್ರಮ ಆಗಿಲ್ಲ ,2018 ರ ಸಮ್ಮಿಶ್ರ ಸರಕಾರದ 14 ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷ ವಿರೋಧವಾಗಿ ನಡೆದು ಕೊಂಡಾಗಲೂ ಯಾರ ಮೇಲೂ ಕ್ರಮ ಆಗಿಲ್ಲ ಹಾಗೂ ಇತರರ ಹಲವು ಸಂದರ್ಭಗಳಲ್ಲಿ ಆರೋಪಗಳಿದ್ದರೂ ಕಾಂಗ್ರೆಸ್ ಪಕ್ಷದಿಂದ ಕ್ರಮ ಕೈಗೊಳ್ಳಲಾಗಿಲ್ಲ ಆದರೆ ಈಗ ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಭಾವಿ ನಾಯಕರ ಮೇಲೆ ಆರೋಪಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಟೀಕಿಸಿದರು. ಇದೀಗ ಮುತ್ಸದ್ಧಿ ರಾಜಕಾರಣಿ ನಸೀರ್ ಅಹ್ಮದ್ ಮೇಲೂ ಕ್ರಮ ಕೈಗೊಳ್ಳು ತ್ತಿರುವುದು ಪ್ರಶ್ನಾರ್ಹ ವಾಗಿದೆ. ಯುವಜನತೆ ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತ ಬೇಕು. ದಾವಣಗೆರೆ ಚುನಾವಣೆ ಒಂದು ಸ್ಯಾಂಪಲ್ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ರಾಜಕೀಯ ಬದಲಾವ ಣೆಗಳು ಕಾಣಿಸಿ ಕೊಳ್ಳಲಿವೆ ಎಂದು ಹೇಳಿದರು. ಮಂಗಳೂ ರಿನಲ್ಲಿ ಯಂಗ್ ಡೆಮಾಕ್ರಟಿಕ್ ಯುವ ಘಟಕವನ್ನು ಉದ್ಘಾಟಿಸಲಾಗಿದ್ದು, 15 ದಿನಗಳಲ್ಲಿ ಸಮಿತಿ ರಚನೆಗೊಳ್ಳಲಿದೆ ಎಂದರು. ದಾವಣ ಗೆರೆಯಲ್ಲಿ ಎಸ್ಡಿಪಿಐ ಗೆಲ್ಲುವ ವಿಶ್ವಾಸವಿದ್ದು, ಎಲ್ಲಾ ಜಾತಿ-ಧರ್ಮದ ಜನರು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯ ಅತ್ತಾವುಲ್ಲಾ ಜೋಕಟ್ಟೆ, ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು ಮೊದಲಾದವರು ಉಪಸ್ಥಿತರಿದ್ದರು.
RCB Vs LSG: ಬೆಂಗಳೂರಿನಲ್ಲಿ ಆರ್ಸಿಬಿ-ಎಲ್ಎಸ್ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?
RCB VS LSG IPL 2026: ಐಪಿಎಲ್ 2026ರ 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಸತತ ಎರಡನೇ ಜಯದ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ, ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಹಾಗಾದ್ರೆ, ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ?
ತಿರುವನಂತಪುರಂ: ಕೇರಳದಲ್ಲಿ ವಿಧಾನಸಭಾ ಚುನಾವಣಾ ಕಾವು ಏರಿರುವ ಬೆನ್ನಿಗೇ, ಚುನಾವಣಾ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸಲು ಇವಿಎಂ ಸಂಗ್ರಹ ಕೇಂದ್ರಗಳ ಸುತ್ತ ಕಟ್ಟೆಚ್ಚರ ವಹಿಸಬೇಕು ಹಾಗೂ ನಿರಂತರವಾಗಿ ನಿಗಾವಹಿಸಬೇಕು ಎಂದು ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಯುಡಿಎಫ್ ಮೈತ್ರಿಕೂಟದ ಎಲ್ಲ 140 ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟ್ ಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಯುಡಿಎಫ್ ಮುಖ್ಯಸ್ಥರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಹಾಲಿ ನಿಯಮಗಳತ್ತ ಬೊಟ್ಟು ಮಾಡಿರುವ ವಿ.ಡಿ.ಸತೀಶನ್, ಇವಿಎಂ ಸ್ಟ್ರಾಂಗ್ ರೂಂಗಳಲ್ಲಿ ಅಳವಡಿಸಲಾಗಿರುವ ನಿಗಾವಣೆ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸುವ ನಿಯಂತ್ರಣ ಕೊಠಡಿಗಳಿಗೆ ಅಭ್ಯರ್ಥಿಗಳು ತಮ್ಮ ಪ್ರತಿನಿಧಿಗಳನ್ನು ನಿಯೋಜಿಸಬಹುದಾಗಿದೆ ಎಂದು ಹೇಳಿದ್ದಾರೆ. ಈ ಸೌಲಭ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು, ಪ್ರಕ್ರಿಯೆಗಳ ಕಣ್ಣಿಡಲು ದಿನದ 24 ಗಂಟೆಯೂ ತಮ್ಮ ನಿಯೋಜಿತ ಪ್ರತಿನಿಧಿಗಳು ಅಲ್ಲಿ ಹಾಜರಿರುವುದನ್ನು ಖಾತರಿಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ. ಇದನ್ನು ಜಾರಿಗೆ ತರಲು ಸಂಬಂಧಿತ ಜಿಲ್ಲಾಧಿಕಾರಿಗಳಿಂದ ಅಗತ್ಯ ಪರವಾನಗಿಯನ್ನು ಪಡೆಯುವಂತೆ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಗಳು ಹಾಗೂ ಅವರ ಮುಖ್ಯ ಚುನಾವಣಾ ಏಜೆಂಟ್ ಗಳಿಗೆ ಅವರು ಸೂಚಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಂಬಿಕೆಯನ್ನು ಮರುಸ್ಥಾಪಿಸಲು ನಿಯಂತ್ರಣ ಕೊಠಡಿಗಳಲ್ಲಿ ಯುಡಿಎಫ್ ಪ್ರತಿನಿಧಿಗಳ ಅಡಚಣೆರಹಿತ ಉಪಸ್ಥಿತಿ ಅತ್ಯಗತ್ಯವಾಗಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.
Odisha | ವಸತಿ ಶಾಲೆಯಲ್ಲಿ ಊಟ ಸೇವಿಸಿದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ವಿದ್ಯಾರ್ಥಿನಿ ಮೃತ್ಯು
ಮಯೂರ್ ಭಂಜ್ (ಒಡಿಶಾ): ಸರಕಾರಿ ಆದಿವಾಸಿ ವಸತಿ ಶಾಲೆಯೊಂದರಲ್ಲಿ ಊಟ ಸೇವಿಸಿದ ಐದನೆ ತರಗತಿಯ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದಿದೆ. ರವಿವಾರ ಬೆಳಗ್ಗೆ ಕಾಕಬಂಧ ಆಶ್ರದಮ್ ಶಾಲೆಯಲ್ಲಿ ಪೂರೈಸಿದ ಹಳಸಿದ ಅನ್ನ, ಹಿಸುಕಿದ ಆಲೂಗಡ್ಡೆ ಹಾಗೂ ಮಾವಿನ ಕಾಯಿ ಚಟ್ಟಿ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣವೇ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ 67 ವಿದ್ಯಾರ್ಥಿಗಳನ್ನು ಬಾರಿಪಾದದಲ್ಲಿರುವ ಪಿಎಂಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಯೂರ್ ಭಂಜ್ ಜಿಲ್ಲಾಧಿಕಾರಿ ಹೇಮಾ ಕಾಂತ್ ಸೇ, “ಸೋಮವಾರ ಐದನೆ ತರಗತಿಯ ರುಪಾಲಿ ಬೆಸ್ರಾ ಎಂಬ ವಿದ್ಯಾರ್ಥಿಯನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಬೇಕಾಯಿತು. ನಿರಂತರ ವೈದ್ಯಕೀಯ ಆರೈಕೆಯ ಹೊರತಾಗಿಯೂ ಆಕೆ ಮಂಗಳವಾರ ಮೃತಪಟ್ಟಳು” ಎಂದು ತಿಳಿಸಿದ್ದಾರೆ. “ಸದ್ಯ 66 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ 41 ವಿದ್ಯಾರ್ಥಿಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಮುದಾಯ ಆರೋಗ್ಯಕ್ಕೆ ಕೇಂದ್ರಕ್ಕೆ ಒಂದು ವೈದ್ಯಕೀಯ ತಂಡವನ್ನು ರವಾನಿಸಲಾಗಿದ್ದು, ಮತ್ತೊಂದು ತಂಡ ಶಾಲೆಯಲ್ಲಿ ಮೊಕ್ಕಾಂ ಹೂಡಿದೆ” ಎಂದು ಅವರು ಹೇಳಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಶಾಲೆಯ ಅಧಿಕೃತ ಖಾದ್ಯ ಪಟ್ಟಿಯಲ್ಲಿ ಈ ಆಹಾರ ಪದಾರ್ಥವನ್ನು ಉಲ್ಲೇಖಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಮುಖ್ಯೋಪಾಧ್ಯಾಯರು ಖಾದ್ಯ ಪಟ್ಟಿಯಲ್ಲಿಲ್ಲದ ಆಹಾರವನ್ನು ಪೂರೈಸಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದರಿಂದ, ಈ ವಿಷಯದ ಕುರಿತು ಪೊಲೀಸ್ ತನಿಖೆಯಲ್ಲದೆ ಸ್ವತಂತ್ರ ತನಿಖೆಯನ್ನೂ ನಡೆಸಲಾಗುವುದು. ಈ ಘಟನೆಗೆ ಕಾರಣರಾದ ಶಿಕ್ಷಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ. ಮೃತ ವಿದ್ಯಾರ್ಥಿನಿಯ ತಾಯಿ ನೀಡಿದ ದೂರನ್ನು ಆಧರಿಸಿ ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ, ಗ್ರಾಮಸ್ಥರು ರಾಸ್ ಗೋವಿಂದ್ ಪುರ್-ಜಲೇಶ್ವರ್ ರಸ್ತೆಯನ್ನು ಮುಚ್ಚಿ, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಈ ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮುಖ್ಯ ಶಿಕ್ಷಕ ಜಯಂತ್ ಕುಮಾರ್ ಪಾಣಿಗ್ರಾಹಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರಕಾರ 7 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಒಡಿಶಾ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಕೃಷ್ಣ ಚಂದ್ರ ಮಹಾಪಾತ್ರ, ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಪೋಷಕರೊಂದಿಗೆ ಮಾತುಕತೆ ನಡೆಸಿದರು.
ಪಿಎಸ್ಎಲ್ನಿಂದ ಝಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರ್ಬನಿ ಎರಡು ವರ್ಷ ನಿಷೇಧ
ಕರಾಚಿ: ಝಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರ್ಬನಿ ಅವರನ್ನು ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಭಾಗವಹಿಸದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ)ಮಂಗಳವಾರ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಮುಝರ್ಬನಿ 2026ರ ಋತುವಿನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿ ಪರ ಸಹಿ ಹಾಕಿದ್ದರು. ಆ ನಂತರ ಪಿಎಸ್ಎಲ್ ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(ಐಪಿಎಲ್)ಭಾಗವಹಿಸಿದ್ದಾರೆ. ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಗಿಂತ ಮೊದಲು ವೇಗದ ಬೌಲರ್ ಮುಝರ್ಬನಿ ಅವರನ್ನು ಐಪಿಎಲ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ‘ಶಿಸ್ತು ಸಮಿತಿಯು ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಝಿಂಬಾಬ್ವೆಯ ಕ್ರಿಕೆಟಿಗ ಬ್ಲೆಸ್ಸಿಂಗ್ ಮುಝರ್ಬನಿ ಅವರನ್ನು ಎಚ್ಬಿಎಲ್ ಪಿಎಸ್ಎಲ್ನ ಮುಂದಿನ ಎರಡು ಆವೃತ್ತಿಗಳಲ್ಲಿ ಭಾಗವಹಿಸಲು ಅನರ್ಹ ಎಂದು ಘೋಷಿಸಿದೆ. ಈ ನಿಷೇಧ ತಕ್ಷಣದಿಂದ ಜಾರಿಗೆ ಬರಲಿದೆ. ಮುಝರ್ಬನಿ ವರ್ತನೆಯು ಲೀಗ್ನ ವೃತ್ತಿಪರ ಚೌಕಟ್ಟನ್ನು ದುರ್ಬಲಗೊಳಿಸುತ್ತದೆ’ ಎಂದು ಪಿಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ. 29ರ ವಯಸ್ಸಿನ ಮುಝರ್ಬನಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತಾನಾಡಿದ ಎರಡನೇ ಐಪಿಎಲ್ ಪಂದ್ಯದಲ್ಲಿ 41 ರನ್ಗೆ ನಾಲ್ಕು ವಿಕೆಟ್ಗಳನ್ನು ಉರುಳಿಸಿದ್ದರು.
ಈ ಮೊಹ್ಸಿನ್ ನಖ್ವಿ ಮಾಡುವ ಜೋಕ್ ಗಳು ಒಂದೆರಡಲ್ಲ. ಇಲ್ಲವಾದಲ್ಲಿ ಪಾಕಿಸ್ತಾನದಲ್ಲಿ ಪಿಎಸ್ ಎಲ್ ಗೆ ಜನ ಭಾರತಕ್ಕೂ ಏನು ಸಂಬಂಧ? ಪತ್ರಕರ್ತನೊಬ್ಬ ಅಲ್ಲಿನ ಕ್ರಿಕೆಟ್ ಲೀಗ್ ಗೆ ಜನರ ಬರುವಿಕೆಗೆ ನಿಷೇಧ ಯಾಕೆ ಎಂದು ಕೇಳಿದರೆ, ನಖ್ವಿ ಮಾತ್ರ ಚಿತ್ರ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ.. ಪಾಕಿಸ್ತಾನದ ಇಂಧನ ಕೊರತೆಯಿಂದಾಗಿ ಪಿಎಸ್ಎಲ್ (PSL) ಪಂದ್ಯಗಳಿಗೆ ಪ್ರೇಕ್ಷಕರಿಲ್ಲಗೆ ನಿರ್ಬಂಧ ಹೇರಿರುವ ಬಗ್ಗೆ ಅವರು ಭಾರತದಲ್ಲಿ ಪೆಟ್ರೋಲ್ ಕೊರತೆಯಿದೆ ಎಂದು ನೀಡಿದ ಆಧಾರರಹಿತ ಹೇಳಿಕೆ ನಗೆಪಾಟಲಿಗೀಡಾಗಿದೆ. ಭಾರತದಲ್ಲಿ ಇಂಧನ ಪೂರೈಕೆ ಸ್ಥಿರವಾಗಿದ್ದರೂ, ನಖ್ವಿ ಹಸಿ ಸುಳ್ಳು ಹೇಳಿದ್ದಾರೆಂದು ನೆಟ್ಟಿಗರು ಹಾಗೂ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ: 4 ಅಂಶಗಳ ಶಾಂತಿ ಪ್ರಸ್ತಾಪ ಮುಂದಿರಿಸಿದ ಚೀನಾ
ಬೀಜಿಂಗ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಉದ್ದೇಶದ 4 ಅಂಶಗಳ ಪ್ರಸ್ತಾಪವನ್ನು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮುಂದಿರಿಸಿದ್ದಾರೆ ಎಂದು `ಕ್ಸಿನ್ಹುವ ಸುದ್ದಿಸಂಸ್ಥೆ' ಮಂಗಳವಾರ ವರದಿ ಮಾಡಿದೆ. ಯುಎಇ ನಾಯಕರೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಜಿಂಪಿಂಗ್ ಈ ಯೋಜನೆಯನ್ನು ಮುಂದಿರಿಸಿದ್ದಾರೆ. ಯೋಜನೆಯು ಮಧ್ಯಪ್ರಾಚ್ಯದ ದೇಶಗಳ ನಡುವೆ ಶಾಂತಿಯುತ ಸಹಬಾಳ್ವೆಯ ಪ್ರಾಮುಖ್ಯತೆಯನ್ನು ಎತ್ತಿತೋರಿಸಿದೆ. ರಾಷ್ಟ್ರಗಳು ಪರಸ್ಪರರ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮಗಳನ್ನು ತಪ್ಪಿಸಬೇಕು. ಪ್ರದೇಶದಾದ್ಯಂತ ಅಭಿವೃದ್ಧಿ ಮತ್ತು ಭದ್ರತಾ ನೀತಿಗಳ ನಡುವೆ ಉತ್ತಮ ಸಮನ್ವಯ ಇರಬೇಕು. ಅಂತರರಾಷ್ಟ್ರೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದ್ದು ಈ ಆದ್ಯತೆಗಳ ಮೂಲಕ ದೀರ್ಘಾವಧಿಯ ಸ್ಥಿರತೆಯನ್ನು ಸಾಧಿಸಬಹುದು ಎಂದು ಚೀನಾ ಪ್ರತಿಪಾದಿಸಿದೆ.
ಅಮೆರಿಕದ ವ್ಯವಹಾರಗಳಿಂದ ದೂರ ಇರಬೇಕು: ಪೋಪ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಆಗ್ರಹ
ವಾಶಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೋಪ್ ಲಿಯೊ ನಡುವೆ ಬಹಿರಂಗ ವಾಗ್ಯುದ್ಧದ ನಡುವೆಯೇ, ಪೋಪ್ ಅವರು ನೈತಿಕತೆಗೆ ಬದ್ಧರಾಗಿರಬೇಕು ಮತ್ತು ಅಮೆರಿಕದ ವ್ಯವಹಾರಗಳಿಂದ ದೂರ ಇರಬೇಕು ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಆಗ್ರಹಿಸಿದ್ದಾರೆ. ಕೆಲವು ವಿಷಯಗಳಲ್ಲಿ ನೈತಿಕತೆಯ ವಿಷಯಕ್ಕೆ ಬದ್ಧವಾಗಿರುವುದು ವ್ಯಾಟಿಕನ್ಗೆ ಒಳ್ಳೆಯದು. ಕ್ಯಾಥೊಲಿಕ್ ಚರ್ಚ್ಗಳಲ್ಲಿ ಏನು ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂದು ವ್ಯಾನ್ಸ್ ಹೇಳಿರುವುದಾಗಿ ವರದಿಯಾಗಿದೆ. ಪೋಪ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿರುವುದನ್ನು ಒಪ್ಪುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ವ್ಯಾನ್ಸ್ `ಅಮೆರಿಕದ ಅಧ್ಯಕ್ಷರು ಅಮೆರಿಕಾದ ಸಾರ್ವಜನಿಕ ನೀತಿಯನ್ನು ನಿರ್ದೇಶಿಸಲು ಬಿಡಬೇಕು. ಇಬ್ಬರ ನಡುವಿನ ಬಿಕ್ಕಟ್ಟಿನ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ' ಎಂದು ಉತ್ತರಿಸಿದರು. ಈ ಮಧ್ಯೆ, ಶಾಂತಿಗಾಗಿ ಕರೆ ನೀಡಿರುವ ಪೋಪ್ರನ್ನು ಗುರಿಯಾಗಿಸುವ ಮೂಲಕ ಟ್ರಂಪ್ ಪೋಪ್ ಅವರನ್ನು ಅವಮಾನಿಸಿದ್ದಾರೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಖಂಡಿಸಿದ್ದಾರೆ.
ಉಪ್ಪಿನಂಗಡಿ| ಕಂತು ಬಾಕಿಯಿರಿಸಿದ ಕೊಠಡಿಗಳಿಗೆ ಪಂಚಾಯತ್ನಿಂದ ಬೀಗ
ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳ ಏಲಂ ಬಿಡ್ನಲ್ಲಿ ಪಡೆದ ಅಂಗಡಿ ಕೋಣೆಗಳ ಕಂತು ಬಾಕಿ ಇರಿಸಿದ್ದ 20 ಅಂಗಡಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗ್ರಸ್ ಮಂಗಳವಾರ ಬೀಗ ಜಡಿದಿದ್ದಾರೆ. ಏಲಂ ಪ್ರಕ್ರಿಯೆಯಲ್ಲಿ ಪಡೆದುಕೊಂಡ ಅಂಗಡಿ ಕೊಠಡಿಗಳ ಬಿಡ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದ್ದು, ಇದರಂತೆ ಹಲವರು ಉಳಿಕೆ ಮೊತ್ತದ ಕಂತುಗಳನ್ನು ಪಾವತಿಸದೆ ಪಂಚಾಯತ್ ಆಡಳಿತದ ವಿನಂತಿಗಳನ್ನು ಕಡೆಗಣಿಸುತ್ತಾ ಬಂದಿದ್ದರು ಎಂದು ತಿಳಿದುಬಂದಿದೆ. ಬಾಕಿಯಾದ ಮೊತ್ತವನ್ನು ಪಾವತಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ಪಂದಿಸದ ವ್ಯಕ್ತಿಗಳ ಅನುಭೋಗ ದಲ್ಲಿರುವ ಅಂಗಡಿ ಕೊಠಡಿಗಳಿಗೆ ಸರಕಾರಿ ರಜಾ ದಿನವಾದ ಮಂಗಳವಾರದಂದು ಮುಂಜಾನೆಯಿಂದಲೇ ಬೀಗ ಜಡಿಯುವ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ನಿಕಟಪೂರ್ವ ಪಂಚಾಯತ್ ಸದಸ್ಯರು ಅನುಭೋಗದಾರರಾಗಿರುವ ಅಂಗಡಿ ಕೊಠಡಿಗಳು ಸೇರಿದ್ದು, ಅವರ ಅಂಗಡಿಗಳಿಗೂ ಬೀಗ ಜಡಿಯುವ ಮೂಲಕ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿದೆ ಎಂಬ ಸಂದೇಶವನ್ನು ನೀಡಿದ್ದಾರೆ. ಮೊತ್ತ ಬಾಕಿ ಇರಿಸಲಾದ ಅಂಗಡಿಗಳಿಗೆ ಪಂಚಾಯತ್ ಆಡಳಿತದಿಂದಲೇ ಒಂದು ಬೀಗ ಜಡಿದು ಎಚ್ಚರಿಕೆ ನೋಟೀಸು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿತ್ತು.
ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರಿಗೆ ಅವರು ನೀಡಿದ ಎಚ್ಚರಿಕೆ ಭೀತಿಯ ವಾತಾವರಣ ಸೃಷ್ಟಿಸುವಂತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ಸಂದರ್ಭದಲ್ಲೇ ಸಾಮೂಹಿಕ ಮತದಾರರ ಹಕ್ಕು ನಿರಾಕರಣೆಯ ಕುರಿತು ಕಳವಳಗಳು ವ್ಯಕ್ತವಾಗುತ್ತಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ನಂದಿಗ್ರಾಮ ಕ್ಷೇತ್ರವನ್ನು ಉಲ್ಲೇಖಿಸಿದ ಅವರು, ಸಾವಿರಾರು ವಲಸೆ ಕಾರ್ಮಿಕರು ಗುಜರಾತ್, ಮಹಾರಾಷ್ಟ್ರ ಹಾಗೂ ಒಡಿಶಾ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಹೇಳಿದರು. “ನಂದಿಗ್ರಾಮದ 30,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಗುಜರಾತ್ ನಲ್ಲಿ 1,100 ಮುಸ್ಲಿಂ ಯುವಕರು, ಒಡಿಶಾದಲ್ಲಿ 800, ಮಹಾರಾಷ್ಟ್ರದಲ್ಲಿ 3,300 ಮಂದಿ ವಾಸಿಸುತ್ತಿದ್ದಾರೆ. ಈ ರಾಜ್ಯಗಳಲ್ಲಿ ಯಾರ ಸರ್ಕಾರವಿದೆ? ಬಿಜೆಪಿ ಸರ್ಕಾರ. ತಪ್ಪು ಮಾಡಬೇಡಿ. ನಿಮ್ಮ ನಡೆ ಸರಿಪಡಿಸಿಕೊಳ್ಳಿ. ಮೇ 4 (ಎಣಿಕೆ ದಿನ) ನಂತರ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ನೀವು ‘ಜಾಯ್ ಬಾಂಗ್ಲಾ’ ಎಂದು ಹೇಳಬಹುದು, ಆದರೆ ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ,” ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಾಬಿತ್ರ ಕರ್, ಸುವೇಂದು ಅವರ ರಾಜಕೀಯ ಶೈಲಿ ಬೆದರಿಕೆ ಮತ್ತು ಭೀತಿಯ ಮೇಲೆ ಆಧಾರಿತವಾಗಿದೆ ಎಂದು ಆರೋಪಿಸಿದರು. “ಚುನಾಯಿತ ಪ್ರತಿನಿಧಿಯಾಗಿ ತನ್ನ ಕ್ಷೇತ್ರದ ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಆದರೆ ಅವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಂದಿಗ್ರಾಮದ ಜನರು ಇವಿಎಂನಲ್ಲಿ ಅವರ ಬೆದರಿಕೆಗಳಿಗೆ ತಕ್ಕ ಉತ್ತರ ನೀಡುತ್ತಾರೆ,” ಎಂದು ಹೇಳಿದರು. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಇದರ ಮಧ್ಯೆ, ʼಟೈಮ್ಸ್ ಆಫ್ ಇಂಡಿಯಾʼ ವರದಿಯಲ್ಲಿ ಉಲ್ಲೇಖಿಸಲಾದ ಅಧ್ಯಯನದ ಪ್ರಕಾರ, ನಂದಿಗ್ರಾಮದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳಲ್ಲಿ 95.5 ಶೇಕಡಾ ಮುಸ್ಲಿಮರದ್ದಾಗಿದ್ದು, ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಕೇವಲ 25 ಶೇಕಡಾ ಮಾತ್ರವಾಗಿದೆ. ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆ ಸಬರ್ ಇನ್ಸ್ಟಿಟ್ಯೂಟ್ ವರದಿ ಪ್ರಕಾರ, ತೆಗೆದುಹಾಕಲಾದ ಹೆಸರುಗಳಲ್ಲಿ ಕೇವಲ 4.5 ಶೇಕಡಾ ಮಾತ್ರ ಮುಸ್ಲಿಮೇತರರಿಗೆ ಸೇರಿದ್ದವು ಎಂದು ತಿಳಿಸಲಾಗಿದೆ.
IPL 2026| ಕೆಕೆಆರ್ ಪಾಳಯಕ್ಕೆ ಮರಳಿದ ವರುಣ್ ಚಕ್ರವರ್ತಿ
ಚೆನ್ನೈ: ಬೆರಳು ನೋವಿನಿಂದಾಗಿ ಹಿಂದಿನ ಎರಡು ಪಂದ್ಯಗಳಿಂದ ವಂಚಿತರಾಗಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ವಾಪಸಾಗಿದ್ದಾರೆ. ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕೆಕೆಆರ್ನ ಮೊದಲ ಆಡುವ 11ರ ಬಳಗದಲ್ಲಿ ನವದೀಪ್ ಸೈನಿ ಬದಲಿಗೆ ವರುಣ್ ಅವಕಾಶ ಪಡೆದಿದ್ದಾರೆ. ಕೆಕೆಆರ್ ತಂಡವು ಈ ವರ್ಷದ ಐಪಿಎಲ್ನಲ್ಲಿ ಮೊದಲ ಗೆಲುವಿನತ್ತ ಚಿತ್ತ ಹರಿಸಿದೆ. ಕೆಕೆಆರ್ ಎದುರಾಳಿ ಆತಿಥೇಯ ಚೆನ್ನೈ ತಂಡವು ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿತ್ತು. ಸಿಎಸ್ಕೆ ತಂಡವು ಯಾವುದೇ ಬದಲಾವಣೆ ಮಾಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಕೀಲ್ ಹುಸೇನ್ಗೆ ಅವಕಾಶ ನೀಡಬಹುದು.
Sindhanur | ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಯುವತಿಯ ರಕ್ಷಣೆ, ಮೂವರ ಬಂಧನ
ಸಿಂಧನೂರು: ತಾಲ್ಲೂಕಿನ ವಿರುಪಾಪೂರು ಸೀಮಾದ ನ್ಯಾಷನಲ್ ಲೇಔಟ್ನ ಶೆಡ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವ ಯುವತಿಯನ್ನು ರಕ್ಷಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಅರುಣಾಂಕ್ಷು ಗಿರಿ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವಿನಾಯಕ ಹಾಗೂ ಪಿಎಸ್ಐ ಮೌನೇಶ ರಾಠೋಡ್ ನೇತೃತ್ವದ ತಂಡ ದಾಳಿ ನಡೆಸಿತು. ದಾಳಿಯ ವೇಳೆ ಯುವತಿಯನ್ನು ರಕ್ಷಿಸಲಾಗಿದ್ದು, ಗಂಗಾನಗರದ ವಿಜಯಕುಮಾರ, ಗಂಗಾಧರ್ ಹಾಗೂ ಮಹಿಬೂಬಿಯಾ ಕಾಲೋನಿಯ ಶ್ಯಾಮಣ್ಣರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ವಿಜಯಕುಮಾರ ಪಂಪಣ್ಣ ತನ್ನ ಸ್ವಂತ ವಾಸಕ್ಕಾಗಿ ಶೆಡ್ ಅನ್ನು ಬಾಡಿಗೆಗೆ ಪಡೆದುಕೊಂಡು, ಬಡತನದಲ್ಲಿರುವ ಮಹಿಳೆಯರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣದ ಆಮಿಷ ತೋರಿಸಿ, ತನ್ನ ಪರಿಚಯದ ಪುರುಷರಿಗೆ ಮಹಿಳೆಯರ ಫೋಟೋಗಳನ್ನು ಕಳುಹಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ.
Raichur | ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ
ರಾಯಚೂರು: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ವೀರಹನುಮಾನ, ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಸಂಪೂರ್ಣವಾಗಿ ಪ್ರಸ್ತುತವಾಗದಿರುವುದು ನೋವಿನ ಸಂಗತಿ ಎಂದು ಹೇಳಿದರು. ಅಂಬೇಡ್ಕರ್ ಅವರು ಹಿಂದೂ ಕೋಡ್ ಕಾನೂನು ರೂಪಿಸಿದ ಮಹನೀಯರಾಗಿದ್ದು, ತಮ್ಮ ತತ್ವಗಳಿಗೆ ವಿರುದ್ಧವಾಗಿ ಬಂದ ವಿರೋಧದ ಹಿನ್ನೆಲೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ ಧೀರ ವ್ಯಕ್ತಿ. ಅವರ ಯಶಸ್ಸಿನ ಮೂಲ ಆತ್ಮವಿಶ್ವಾಸವಾಗಿದ್ದು, ಅವರು “ಗ್ರೇಟೆಸ್ಟ್ ಇಂಡಿಯನ್” ಎಂದರು. ಶಿಕ್ಷಣ ಪ್ರೇಮಿ ಹಾಗೂ ನಿವೃತ್ತ ಉಪನಿರ್ದೇಶಕಿ ಆರ್. ಇಂದಿರಾ ಮಾತನಾಡಿ, ಅಂಬೇಡ್ಕರ್ ಅವರ ದಿನವನ್ನು ಜ್ಞಾನ ದಿನವನ್ನಾಗಿ ಆಚರಿಸುವುದು ಸಾರ್ಥಕ ಎಂದರು. ಅಂಬೇಡ್ಕರ್ ಅವರ ಚಿಂತನೆಗಳು ಒಂದು ವರ್ಗಕ್ಕೆ ಸೀಮಿತವಾಗದೆ ವಿಶ್ವಮಟ್ಟದಲ್ಲಿ ಪ್ರಸ್ತುತವಾಗಿವೆ. ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಮಾಜದ ಎಲ್ಲ ವರ್ಗಗಳ ಹಕ್ಕುಗಳಿಗಾಗಿ ಅವರು ಧ್ವನಿ ಎತ್ತಿದ ಮಹಾನ್ ನಾಯಕರು ಎಂದು ಕೊಂಡಾಡಿದರು. ಹಿರಿಯ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎಂದು ಹೇಳಿದರು. ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಸಂದೇಶಗಳು ನವ ಸಮಾಜ ನಿರ್ಮಾಣಕ್ಕೆ ದಿಕ್ಕು ತೋರಿಸುತ್ತವೆ. ರಾಯಚೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಸಹ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ವಹಿಸಿಕೊಂಡು, ಅಂಬೇಡ್ಕರ್ ಅವರ ವಿಚಾರಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಜನತೆ ಅವರ ಚಿಂತನೆಗಳ ಅಧ್ಯಯನ ಮಾಡುವುದು ಅಗತ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಡಾ. ರೇಖಾ ಪಾಟೀಲ್ ನಿರೂಪಿಸಿದರೆ, ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ್ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ, ಯುವ ಸಾಹಿತಿ ಈರಣ್ಣ ಬೆಂಗಾಲಿ, ಜಿಕಸಾಪ ಸಂಘಟನಾ ಕಾರ್ಯದರ್ಶಿ ರಾಮಣ್ಣ ಬೋಯೇರ್, ತಾ ಕ ಸಾ ಪ ಗೌರವ ಕಾರ್ಯದರ್ಶಿ ರಾವುತರವ್ ಬರೂರ, ತಾ ಕ ಸಾ ಪ ಗೌರವಗೌರವ ಕೋಶಾಧ್ಯಕ್ಷ ಸೈಯದ್ ಹಫೀಜುಲ್ಲ ಖಾದರಿ, ತಾ ಕ ಸಾ ಪ ಮಹಿಳಾ ಪ್ರತಿನಿಧಿ ದೇವೇಂದ್ರಮ್ಮ , ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಆಹ್ವಾನಿತರಾದ ಕೆ. ವೀರೇಶ ಬಾಬು, ವಿದ್ಯಾಸಾಗರ್ ಚಿಮಣಗೇರಿ, ವೆಂಕಣ್ಣ, ಶರಣಗೌಡ, ಸಾಯಿ ಸಾಗರ್, ರಾಜು ಸೇರಿದಂತೆ ಸಾಹಿತಿಗಳು ಕವಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಸೇಡಂ | ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ : ಅದ್ಧೂರಿ ರಥೋತ್ಸವ
ಸೇಡಂ: ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವವು ಮಂಗಳವಾರ ಭಕ್ತಿಭಾವ, ಸಂಪ್ರದಾಯ ಮತ್ತು ವೈಭವದ ಸಮನ್ವಯವಾಗಿ ಕಂಗೊಳಿಸಿತು. ಜಾತ್ರೆಯ ಅಂಗವಾಗಿ ಅಗ್ಗಿ ಪ್ರವೇಶ ಹಾಗೂ ರಥೋತ್ಸವ ಕಾರ್ಯಕ್ರಮಗಳು ಭಾರೀ ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿದವು. ಬೆಳಿಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಹಬ್ಬದ ವಾತಾವರಣ ಆವರಿಸಿತ್ತು. ಬೆಳಗ್ಗೆ ಶ್ರೀ ಕೊತ್ತಲ ಬಸವೇಶ್ವರರಿಗೆ ವಿಶೇಷ ಅಭಿಷೇಕ, ಮಹಾಪೂಜೆ, ಪುಷ್ಪಾಲಂಕಾರ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಾಂಗಣವು ಹೂವುಗಳು, ತೋರಣಗಳು ಮತ್ತು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡು ಭಕ್ತರ ಗಮನ ಸೆಳೆಯಿತು. ಬೆಳಗ್ಗೆ ಜರುಗಿದ ಅಗ್ಗಿ ಪ್ರವೇಶ ಕಾರ್ಯಕ್ರಮ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ಭಕ್ತರು ಅಗ್ನಿಕುಂಡದ ಮೇಲೆ ನಡೆದು ತಮ್ಮ ನಂಬಿಕೆ ಮತ್ತು ಭಕ್ತಿಯನ್ನು ಮೆರೆದರು. ಮಹಿಳೆಯರು, ಯುವಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಗ್ನಿಕುಂಡದ ಸುತ್ತ ಭಕ್ತರ ಜೈಕಾರಗಳು ಧಾರ್ಮಿಕ ಘೋಷಣೆಗಳು ಮೊಳಗಿದವು. ಸಂಜೆ ವೇಳೆಗೆ ನಡೆದ ರಥೋತ್ಸವ ಮತ್ತೊಂದು ವೈಭವದ ಕ್ಷಣವಾಗಿತ್ತು. ವಿಶೇಷವಾಗಿ ಅಲಂಕೃತಗೊಂಡ ಭವ್ಯ ರಥಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಾವಿರಾರು ಭಕ್ತರು ಕೊತ್ತಲ ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳ ನಡುವೆ ರಥವನ್ನು ಎಳೆದರು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಭಾವ ಮೆರೆದರು. ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದು, ಸಂಚಾರ ನಿಯಂತ್ರಣ, ಕುಡಿಯುವ ನೀರು, ಆರೋಗ್ಯ ಸೇವೆಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿ, ಶಿವಶಂಕರ ಮಠದ ಶ್ರೀ ಶಿವಶಂಕರೇಶ್ವರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಶಿವುಕುಮಾರ ಪಾಟೀಲ್ ತೆಲ್ಕೂರ್, ಸಂತೋಷಿರಾಣಿ ಪಾಟೀಲ್ ತೆಲ್ಕೂರ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸಿಲ್ದಾರ್ ಶ್ರೀಯಾಂಕ ಧನಶ್ರೀ, ಸಿದ್ದಪ್ಪ ತಳ್ಳಳ್ಳಿ, ಬಸವರಾಜ ತಡಕಲ್, ನಾಗೇಂದ್ರಪ್ಪ ಡೊಳ್ಳಾ, ರಾಜಶೇಖರ ನಿಲಂಗಿ, ಶಿವುಕುಮಾರ ಬೊಳಶೆಟ್ಟಿ, ಸಮಾಜದ ಹಿರಿಯರು ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ನೋಂದಣಿ ಮಾಡಲು ಎ.17ರ ವರೆಗೆ ಅವಕಾಶ
ಬೆಂಗಳೂರು : 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿಯನ್ನು ಮಾಡಿಕೊಳ್ಳಲು ಎ.17ರವರೆಗೆ ಅವಕಾಶ ಕಲ್ಪಿಸಲಾಗಿದ್ದು, 2026ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮುಖಾಂತರ http://tinyurl.com/mvp9k6es ಲಿಂಕ್ ಬಳಸಿ ಅಥವಾ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು 2026ರಲ್ಲಿ ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರಗಳಿಂದ ಪರೀಕ್ಷೆಗೆ ಗೈರುಹಾಜರಾದ ವಿದ್ಯಾರ್ಥಿಗಳನ್ನು ತಮ್ಮ ಲಾಗಿನ್ ಮುಖಾಂತರ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 2026 ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2ಕ್ಕೆ ನೋಂದಾಯಿಸಬಹುದು. ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರುಗಳ ಲಾಗಿನ್ ನಲ್ಲಿ ಲಭ್ಯಗೊಳಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. ವೇಳಾಪಟ್ಟಿ: ದ್ವಿತೀಯ ಪಿಯುಸಿ ಪರೀಕ್ಷೆ-2ಯ ವೇಳಾಪಟ್ಟಿ ಪ್ರಕಟವಾಗಿದ್ದು, ಎ.30ರಂದು ಕನ್ನಡ ಮತ್ತು ಅರೇಬಿಕ್ ಭಾಷೆ, ಮೇ 1ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ರಸಾಯನಶಾಸ್ತ್ರ, ಮೇ 4ರಂದು ಇಂಗ್ಲೀಷ್, ಮೇ 5ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ, ಮೇ 6ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 7ರಂದು ಇತಿಹಾಸ, ಗಣಿತ ಮತ್ತು ಗೃಹವಿಜ್ಞಾನ, ಮೇ 8ರಂದು ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ (ಎಲೆಕ್ಟ್ರಾನಿಕ್ಸ್) ಮತ್ತು ಗಣಕ ವಿಜ್ಞಾನ, ಮೇ 9ರಂದು ಹಿಂದಿ, ಮೇ 11ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 12ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ. ಮೇ 13ರಂದು ಬೆಳಗ್ಗೆ 10 ದಿಂದ ಮಧ್ಯಾಹ್ನ 1ರವರೆಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.15ರವರೆಗೆ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಮುಂತಾದ ವೃತ್ತಿಪರ ವಿಷಯಗಳ ಪರೀಕ್ಷೆಗಳು ಜರುಗಲಿವೆ.
ಸೇಡಂ | ಅಗ್ನಿ ಅವಘಡ ಪೀಡಿತರಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿಂದ ಧನಸಹಾಯ
ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿಗಾಹುತಿಯಾದ ಬಸವರಾಜ ಅರಿಕೇರಿ ಅವರ ಮನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಅಗ್ನಿ ಅವಘಡದಿಂದ ಸಂಭವಿಸಿದ ಹಾನಿಯ ಕುರಿತು ತಾಲೂಕು ಆಡಳಿತದಿಂದ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಘಟನೆಗೆ ನಿಖರ ಕಾರಣ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವೇಳೆ ಸಚಿವರು ಪೀಡಿತ ಕುಟುಂಬಕ್ಕೆ ವೈಯಕ್ತಿಕ ಧನಸಹಾಯ ನೀಡಿದರು. ಕಾಂಗ್ರೆಸ್ ಮುಖಂಡ ಸತೀಶರೆಡ್ಡಿ ಪಾಟೀಲ ರಂಜೋಳ ಅವರು ಸರ್ಕಾರದ ಮಟ್ಟದಲ್ಲಿ ಸಮರ್ಪಕ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು. ಈಗಾಗಲೇ ತಹಸೀಲ್ದಾರ್ಗೆ ಅಗತ್ಯ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ವರದಿ ಆಧರಿಸಿ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ದಾವಣಗೆರೆ ದಕ್ಷಿಣ ಉಪ ಚುನಾವಣೆ ಬಂಡಾಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ನಾಯಕರಲ್ಲಿ 2 ನೇ ತಲೆ ದಂಡವಾಗಿದೆ. ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇತ್ತ ಇನ್ನೊಂದೆಡೆ ಹೈಕಮಾಂಡ್ಗೆ ಆಡಿಯೋ ದಾಖಲೆ ಸೇರಿದ್ದು, ಸಚಿವ ಜಮೀರ್ ಅಹ್ಮದ್ಗೆ ಆತಂಕ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಬೇಟಿ ಮಾಡಿದ ಸಚಿವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ.
Wadi | ತಮ್ಮ ಪಾಂಡಿತ್ಯದಿಂದ ಭಾರತದ ಚರಿತ್ರೆ ಬದಲಾಯಿಸಿದ ಅಂಬೇಡ್ಕರ್ : ಮನೋಜಕುಮಾರ
ವಾಡಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಅಪಾರ ವಿದ್ವತ್ತು ಹಾಗೂ ಪಾಂಡಿತ್ಯದಿಂದ ಭಾರತ ಚರಿತ್ರೆಯನ್ನು ಬದಲಾಯಿಸಿದ ಮಹಾನ್ ದರ್ಶನಿಕ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ನಿರ್ಮಾಣ ಮಾಡುವ ಸಂದರ್ಭದಲ್ಲಿ, ಬಾಬಾ ಸಾಹೇಬರ ಆರೋಗ್ಯ ತುಂಬಾ ಹದಗೆಟ್ಟಿತ್ತು. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಆದರೆ, ವೈದ್ಯರ ಸಲಹೆ ನಿರಾಕರಿಸಿದ ಭಾಬಾ ಸಾಹೇಬರು ದಿನದಲ್ಲಿ 18 ಗಂಟೆ ಶ್ರಮವಹಿಸಿ ಜಗತ್ತಿಗೆ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದರು ಎಂದರು. ಈ ವೇಳೆ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಶಿವಾನಂದ ನಿಂಬರಗಾ, ಮನೋಜಕುಮಾರ ಹೀರೋಳ್ಳಿ, ಬಸವರಾಜ ಪೂಜಾರಿ, ಸ್ಥಳೀಯ ಮುಖಂಡರಾದ ಚಂದ್ರಸೇನ ಮೇನಗಾರ, ಶರಣು ನಾಟೇಕರ, ಶರಣಬಸ್ಸು ಸಿರೂರಕರ, ನಾಗೇಂದ್ರ ಜಯಗಂಗಾ, ಮೊಹಮ್ಮದ್ ಗೌಸ್, ಲತಾಮಣಿ, ಬಸಮ್ಮ ಪಾಟೀಲ, ಪೂಜಾ ಫುಲಾರೆ, ಶಿವಕಾಂತಮ್ಮ ಎಸ್ ,ರೇಣು ಪ್ರಧಾನಿ, ರೇಖಾ ಮರೆತೂರ, ವಿರೂಪಾಕ್ಷ, ಮಲ್ಲಿಕಾರ್ಜುನ ಯಳಸಂಗಿ, ಅರುಣಕುಮಾರ ಮೈನಾಳಕರ, ಹರಿ ಗಲಾಂಡೆ, ಜ್ಯೋತಿ ಗುತ್ತೇದಾರ, ರಾಹುಲ ಹುಗ್ಗಿ, ವಿಶ್ವನಾಥ ಭಾಗೋಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಜರೀನಾ ಬೇಗಮ್, ಅಬ್ರಾಹಿಂ ರಾಜಣ್ಣ, ಮಲ್ಲಯ್ಯ ಗುತ್ತೇದಾರ, ಸ್ಯಾಮ್ಸನ್ ಐ ಸೇರಿದಂತೆ ಹಲವರು ಇದ್ದರು.
ಸಚಿವ ಸಂಪುಟ ಪುನರ್ ರಚನೆ: ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕರು
ಬೆಂಗಳೂರು : ಉಪಚುನಾವಣೆ ಬೆನ್ನಲ್ಲೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಮಾಡಲಾಗಿದೆ. ಈ ಮಧ್ಯೆ ಸಂಪುಟ ಪುನರ್ ರಚನೆಗೆ ಆಗ್ರಹಿಸಿ 30ಕ್ಕೂ ಅಧಿಕ ಮಂದಿ ಕಾಂಗ್ರೆಸ್ನ ಹಿರಿಯ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಖುದ್ದು ಭೇಟಿ ಮಾಡಿದ್ದ ಶಾಸಕರಾದ ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಟಿ.ಬಿ.ಜಯಚಂದ್ರ, ಪುಟ್ಟರಂಗ ಶೆಟ್ಟಿ, ಷಡಕ್ಷರಿ ಸೇರಿ ಹಿರಿಯ ಶಾಸಕರು, ‘ಸಚಿವ ಸಂಪುಟದಲ್ಲಿ ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿ ಮಾಡಲಿದ್ದು, ಸಂಪುಟ ಪುನರ್ ರಚನೆ ಸಂಬಂಧ ಅವರಿಗೂ ಮನವರಿಕೆ ಮಾಡಿಕೊಡಲಿದ್ದಾರೆ. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ 2028ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗಲಿದೆ ಎಂದು ಶಾಸಕರು ಕೋರಿದ್ದಾರೆ ಎಂದು ಗೊತ್ತಾಗಿದೆ. ‘ಸಚಿವ ಸಂಪುಟ ಪುನರ್ ರಚನೆ ಮಾಡುವ ಸಂಬಂಧ ಹೈಕಮಾಂಡ್ಗೆ ಮನವರಿಕೆ ಮಾಡಿಕೊಡಲು ಹಿರಿಯ ಶಾಸಕರು ಹೊಸದಿಲ್ಲಿಗೆ ಆಗಮಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೇವೆ. ಈಗಾಗಲೇ ಮೂರು ವರ್ಷ ಅವಧಿ ಮುಗಿದಿದ್ದು, ಮುಂದಿನ ಎರಡು ವರ್ಷಗಳ ಅವಧಿಗೆ ಹಿರಿಯ ಶಾಸಕರಿಗೆ ಅವಕಾಶ ಕೊಡಬೇಕು’ -ಟಿ.ಬಿ.ಜಯಚಂದ್ರ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ
ತಮಿಳುನಾಡು ಚುನಾವಣೆ | ಟಿವಿಕೆ ಅಧಿಕಾರಕ್ಕೆ ಬಂದರೆ ರೈತರ ಬೆಳೆ ಸಾಲ ಮನ್ನಾ: ನಟ ವಿಜಯ್ ಭರವಸೆ
ತಿರುಪ್ಪುರ (ತ.ನಾಡು),ಎ.14: ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ರೈತರ ಬೆಳೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಮಂಗಳವಾರ ಭರವಸೆ ನೀಡಿದ ಟಿವಿಕೆ ಮುಖ್ಯಸ್ಥ ವಿಜಯ್ ಅವರು,ರಾಜ್ಯದಲ್ಲಿ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಮುಚ್ಚುಗಡೆಗಾಗಿ ಡಿಎಂಕೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಜಯ್, ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಸಂಪೂರ್ಣವಾಗಿ ಮತ್ತು ಐದು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವವರಿಗೆ ಶೇ.50ರಷ್ಟು ಬೆಳೆ ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಪ್ರತಿ ಕ್ವಿಂಟಲ್ ಭತ್ತಕ್ಕೆ 3,500 ರೂ. ಮತ್ತು ಪ್ರತಿ ಟನ್ ಕಬ್ಬಿಗೆ 4,500 ರೂ.ಗಳ ಬೆಲೆಗಳನ್ನು ಒದಗಿಸುವುದಾಗಿಯೂ ಅವರು ಆಶ್ವಾಸನೆ ನೀಡಿದರು. ಡಿಎಂಕೆ ಆಡಳಿತದಲ್ಲಿ ರಾಜ್ಯದಲ್ಲಿ ಹಲವಾರು ಎಂಎಸ್ಎಂಇಗಳು ಮುಚ್ಚಲ್ಪಟ್ಟಿದ್ದು,ಇದು ದೇಶದಲ್ಲಿಯೇ ಎರಡನೇ ಗರಿಷ್ಠ ಪ್ರಮಾಣವಾಗಿದೆ ಎಂದು ವಿಜಯ ಆರೋಪಿಸಿದರು.
ಕೊಂಕಣ ರೈಲ್ವೆ: ಬೈಂದೂರಿನಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣಕ್ಕೆ ಪ್ರಸ್ತಾವನೆ
ಉಡುಪಿ, ಎ.14: ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳನ್ನು -ಉತ್ತರ ಕನ್ನಡ, ಉಡುಪಿ ಮತ್ತು ಕಾರವಾರ- ಹಾದುಹೋಗುವ ಕೊಂಕಣ ರೈಲ್ವೆಯ 251.76 ಮಾರ್ಗದಲ್ಲಿ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿ.(ಆರ್ಸಿಎಲ್) 2025-26ನೇ ಸಾಲಿನಲ್ಲಿ 8.69 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನೂ 8.72 ಕೋಟಿ ರೂ. ವೆಚ್ಚದ ಕಾಮಗಾರಿ ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ನಿಗಮ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಲ್ಲದೇ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣದಲ್ಲಿ ಹೊಸದಾಗಿ ಕ್ರಾಸಿಂಗ್ ಸ್ಟೇಶನ್ನ ನಿರ್ಮಾಣದ ಪ್ರಸ್ತಾಪವನ್ನು ರೂಪಿಸಲಾಗಿದೆ. ಸದ್ಯ ಇದು ರೈಲುಗಳ ನಿಲುಗಡೆಯ ನಿಲ್ದಾಣ ಆಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪ್ರಮುಖ ತೀರ್ಥಯಾತ್ರಾ ಸ್ಥಳವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಅತೀ ಸಮೀಪದ ರೈಲು ನಿಲ್ದಾಣವಾಗಿದೆ. ಹೀಗಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹೆಚ್ಚುಕಮ್ಮಿ ಎಲ್ಲಾ ಎಕ್ಸ್ಪ್ರೆಸ್ ರೈಲುಗಳು ಇಲ್ಲಿ ನಿಲುಗಡೆಯನ್ನು ಹೊಂದಿವೆ. ಬೈಂದೂರನ್ನು ಕ್ರಾಸಿಂಗ್ ಸ್ಟೇಶನ್ ಆಗಿ ಅಭಿವೃದ್ಧಿ ಪಡಿಸುವುದರಿಂದ ಇನ್ನಷ್ಟು ರೈಲುಗಳು ಇಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ನಿಗಮ ಹೇಳಿದೆ. ರಾಜ್ಯ ಕರಾವಳಿಯ ಉತ್ತರ ಕನ್ನಡದ ಅಸ್ನೋಟಿಯಿಂದ ಮಂಗಳೂರಿನ ತೋಕೂರುವರೆಗಿನ 251.76ಕಿ.ಮೀ. ರೈಲು ಮಾರ್ಗದಲ್ಲಿ ಈಗಾಗಲೇ ಹಲವು ಕಾಮಗಾರಿಗಳನ್ನು ಈ ವರ್ಷ ಪೂರ್ಣಗೊಳಿಸಲಾಗಿದ್ದು, ಇನ್ನಷ್ಟು ಕಾಮಗಾರಿ ನಡೆಯುತ್ತಿದೆ. ಪಶ್ಚಿಮ ಘಟ್ಟದ ಉದ್ದಕ್ಕೂ ತಪ್ಪಲಿನಲ್ಲಿ ಸಾಗುವಂತೆ ಇರುವ ಈ ರೈಲು ಮಾರ್ಗದಲ್ಲಿ 23 ಕ್ರಾಸಿಂಗ್ ಸ್ಟೇಶನ್ಗಳು ಎರಡು ಎರಡು ನಿಲುಗಡೆ ಸ್ಟೇಶನ್ಗಳು, 11ಕಿ.ಮೀ. ಉದ್ದದ 13 ಸುರಂಗಗಳು, 50 ಪ್ರಮುಖ ಸೇತುವೆಗಳು, 42 ಲೆವೆಲ್ ಕ್ರಾಸಿಂಗ್ಗಳು, 140 ರೋಡ್ ಓವರ್ ಮತ್ತು ಅಂಡರ್ ಬ್ರಿಜ್ಗಳು, 17 ಫುಟ್ಓವರ್ ಬ್ರಿಜ್ಗಳಿವೆ. 2025-26ನೇ ಸಾಲಿನಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಗಳನ್ನು ಉನ್ನತೀಕರಿಸಲು ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇವುಗಳಲ್ಲಿ ಕುಮಟಾದಲ್ಲಿ ನಿರ್ಮಾಣ ಗೊಂಡ ಉನ್ನತ ಮಟ್ಟದ ಪ್ಲಾಟ್ಫಾರಂ, ಭಟ್ಕಳ ನಿಲ್ದಾಣದ ಪ್ಲಾಟ್ಫಾರಂನ ವಿಸ್ತರಣೆ, ಗೋಕರ್ಣದಲ್ಲಿ ಪ್ಲಾಟ್ಫಾರಂ ಅಭಿವೃದ್ಧಿ, ಕಾರವಾರ, ಮುರ್ಡೇಶ್ವರ, ಉಡುಪಿಗಳಲ್ಲಿ ಹೊಸ ನಾಮಫಲಕ, ಉಡುಪಿ, ಮುಲ್ಕಿ, ಸುರತ್ಕಲ್ ನಿಲ್ದಾಣಗಳಲ್ಲಿ ಪ್ಲಾಟ್ಫಾರಂಗಳ ಮೇಲ್ಚಾವಣಿ ಹಾಗೂ ತಂಗುದಾಣಗಳ ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೇ ಉಡುಪಿ ಮತ್ತು ಮುರ್ಡೇಶ್ವರಗಳಲ್ಲಿ ಹೊಸ ಶೌಚಾಲಯಗಳ ಬ್ಲಾಕ್ಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಉಡುಪಿಯಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ (ಒಎಸ್ಒಪಿ) ಕಿಯೋಸ್ಕ್ನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ 8.72 ಕೋಟಿ ರೂ. ಮೊತ್ತದ ಕಾಮಗಾರಿ ಅನುಷ್ಠಾನ ಹಂತದಲ್ಲಿದೆ. ಇವುಗಳಲ್ಲಿ ಉಡುಪಿಯಲ್ಲಿ ಎಕ್ಸಿಕ್ಯೂಟಿವ್ ಲಾಂಜ್ನ ವಿಸ್ತರಣೆ, ಮುಲ್ಕಿಯಲ್ಲಿ ಉನ್ನತ ಮಟ್ಟದ ಪ್ಲಾಟ್ಫಾರಂ ರಚನೆ, ಪಡುಬಿದ್ರಿಯಲ್ಲಿ ಪ್ಲಾಟ್ಫಾರಂನ ವಿಸ್ತರಣೆ ಹಾಗೂ ಉಡುಪಿಯಲ್ಲಿ ಹೊಸದಾಗಿ ಮೂರು ಲಿಫ್ಟ್ಗಳ ಅಳವಡಿಕೆ, ಗೋಕರ್ಣದಲ್ಲಿ ಫುಟ್ಓವರ್ ಬ್ರಿಜ್ ನಿರ್ಮಾಣ ಸೇರಿವೆ ಎಂದು ನಿಗಮದ ಹೇಳಿಕೆ ತಿಳಿಸಿದೆ. ಇನ್ನು 2026-27ನೇ ಸಾಲಿನ ಬಜೆಟ್ನಲ್ಲಿ 4.52 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳ ಒದಗಿಸಲು ಮಂಜೂರು ಮಾಡಲಾಗಿದೆ. ಇವುಗಳಲ್ಲಿ ಬಾರಕೂರು ನಿಲ್ದಾಣದಲ್ಲಿ ಉನ್ನತ ಮಟ್ಟದ ಪ್ಲಾಟ್ಫಾರಂ ರಚನೆ, ಮುಲ್ಕಿ ನಿಲ್ದಾಣದಲ್ಲಿ ಹೊಸ ಫುಟ್ಓವರ್ ಬ್ರಿಜ್ ನಿರ್ಮಾಣ, ಮಿರ್ಜಾನಾ ಮತ್ತು ಬಿಜೂರು ನಿಲ್ದಾಣಗಳಲ್ಲಿ ತಂಗುದಾಣಗಳ ರಚನೆಯೊಂದಿಗೆ ವಿವಿಧ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯಗಳ ಸುಧಾರಣೆಯೂ ಸೇರಿವೆ. 22.80 ಕೋಟಿ ರೂ. ಯೋಜನೆ: ಕೊಂಕಣ ರೈಲ್ವೆಯು ಮುಂದಿನ ಐದು ವರ್ಷಗಳ ಅವಧಿಗೆ 22.80 ಕೋಟಿ ರೂ.ಗಳ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಸ್ತಾಪವನ್ನು ಹಾಕಿಕೊಂಡಿದೆ. ಇವುಗಳಲ್ಲಿ ಉಡುಪಿ, ಸುರತ್ಕಲ್ ಹಾಗೂ ಮಂಕಿ ನಿಲ್ದಾಣಗಳ ಪ್ಲಾಟ್ಫಾರಂಗಳಿಗೆ ಮೇಲ್ಚಾವಣಿ (ರೂಫಿಂಗ್) ನಿರ್ಮಾಣ ಸೇರಿದೆ. ಹೊನ್ನಾವರ ಮತ್ತು ಗೋಕರ್ಣ ರೋಡ್ ನಿಲ್ದಾಣಗಳ ಪ್ಲಾಟ್ಫಾರಂಗಳನ್ನು ಉನ್ನತ ಮಟ್ಟದ ಪ್ಲಾಟ್ಫಾರಂ ಆಗಿ ಅಭಿವೃದ್ಧಿ, ಹೊನ್ನಾವರ ದಲ್ಲಿ ಫುಟ್ಓವರ್ ಬ್ರಿಜ್ ನಿರ್ಮಾಣ, ಉಡುಪಿ, ಕುಂದಾಪುರಗಳಲ್ಲಿ ಬಯೋಟಾಯ್ಲೆಟ್ ನಿರ್ಮ್ಣ, ಕುಮಟ ಮತ್ತು ಗೋಕರ್ಣ ರೋಡ್ಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಸೇರಿವೆ. ಕೊಂಕಣ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣದ ಅತ್ಯುನ್ನತ ಅನುಭವ ನೀಡಲು ಕಾರವಾರ, ಉಡುಪಿ ಮತ್ತು ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣಗಳಲ್ಲಿ ಎಕ್ಸಿಕ್ಯೂಟಿವ್ ಲಾಂಜ್, ಉಡುಪಿ, ಬೈಂದೂರು ಹಾಗೂ ಕಾರವಾರ ನಿಲ್ದಾಣಗಳಲ್ಲಿ ರೆಸ್ಟೋರೆಂಟ್ಗಳ ನಿರ್ಮಾಣವೂ ಸೇರಿವೆ ಎಂದು ಕೆಆರ್ಸಿಎಲ್ ಪ್ರಕಟಣೆ ತಿಳಿಸಿದೆ. ಕರಾವಳಿಯ ರೈಲು ಪ್ರಯಾಣಿಕರಿಗೆ ಕಳೆದ ಮೂರು ವರ್ಷಗಳಲ್ಲಿ ಮೂರು ಹೊಸ ರೈಲು ಸಂಪರ್ಕಗಳನ್ನು ನೀಡಲಾ ಗಿದೆ. ಇವುಗಳಲ್ಲಿ ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್- ಮುರ್ಡೇಶ್ವರ ನಡುವೆ ಎಕ್ಸ್ಪ್ರೆಸ್ (2023ರ ಸೆ.16ರಿಂದ), ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವೆ ವಂದೇಭಾರತ್ ಎಕ್ಸ್ಪ್ರೆಸ್(2023ರ ಡಿ.30) ಹಾಗೂ ಕಾಚಿಗುಡ- ಮುರ್ಡೇಶ್ವರ- ಕಾಚಿಗುಡ ಎಕ್ಸ್ಪ್ರೆಸ್ನ್ನು ಮಂಗಳೂರು ಸೆಂಟ್ರಲ್- ಮುರ್ಡೇಶ್ವರಕ್ಕೆ 2024ರ ಅ.11ರಿಂದ) ವಿಸ್ತರಣೆ ಸೇರಿವೆ. ಅಲ್ಲದೇ ಹಲವು ಹೊಸರಾಜ್ಯದ ರೈಲುಗಳಿಗೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

34 C