CPIMಗೆ ರಾಜೀನಾಮೆ ಬೆನ್ನಲ್ಲೆ ಮಮತಾ ಬ್ಯಾನರ್ಜಿಗೆ ಶ್ಲಾಘನೆ: ಪ್ರತಿಕುರ್ ರೆಹಮಾನ್ ಟಿಎಂಸಿಗೆ ಸೇರ್ಪಡೆ ಸಾಧ್ಯತೆ
ಕೋಲ್ಕತ್ತಾ: ಸಿಪಿಐ(ಎಂ)ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಯುವ ನಾಯಕ ಪ್ರತಿಕುರ್ ರೆಹಮಾನ್ ಗುರುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತು ಎಸ್ಐಆರ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೊರೆ ಹೋಗುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಸಿದ್ಧಾಂತ ಮತ್ತು ತತ್ವಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಪಕ್ಷದೊಳಗೆ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂದು ರೆಹಮಾನ್ ಆರೋಪಿಸಿದ್ದಾರೆ. ರೆಹಮಾನ್ ಅವರ ಹೇಳಿಕೆಗಳು ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸೇರುವ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಾರಿಗೆ ತಂದ ಲಕ್ಷ್ಮೀರ್ ಭಂಡಾರ್ ಯೋಜನೆಯಂತಹ ಸಾಮಾಜ ಕಲ್ಯಾಣ ಯೋಜನೆಗಳನ್ನು ಸಿಪಿಐಎಂ ತಪ್ಪಾಗಿ ವ್ಯಾಖ್ಯಾನಿಸಿತ್ತು. ಈ ಯೋಜನೆಗಳು ಬಡವರು ಮತ್ತು ದೀನದಲಿತ ಜನರಿಗೆ ಸಹಾಯ ಮಾಡುವುದಲ್ಲದೆ, ಈ ರಾಜ್ಯದ ಮಹಿಳೆಯರಿಗೆ ಆತ್ಮ ವಿಶ್ವಾಸವನ್ನೂ ನೀಡಿತ್ತು. ಬಳಿಕ ಪಕ್ಷವು ತನ್ನ ತಪ್ಪನ್ನು ಅರಿತುಕೊಂಡು ಇಂತಹ ಯೋಜನೆಗಳಿಗೆ ವಿರೋಧಿಸದಿರಲು ತೀರ್ಮಾನಿಸಿತು. ಇದರಿಂದ ನಾವು ಸಾಮಾನ್ಯ ಜನರಿಂದ ಎಷ್ಟು ದೂರವಾಗಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರೆಹಮಾನ್ ಗುರುವಾರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಎಸ್ಐಆರ್ ಮತ್ತು ಅದರ ಮೂಲಕ ಜನರಿಗೆ ನೀಡುವ ಕಿರುಕುಳದ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿ ತೆಗೆದುಕೊಂಡ ಕ್ರಮವನ್ನು ಪ್ರಶಂಸಿಸುವುದು ಯೋಗ್ಯವಾಗಿದೆ. ಟಿಎಂಸಿ, ಎಸ್ಐಆರ್ ವಿರೋಧಿ ಚಳುವಳಿಯಲ್ಲಿ CPI(M) ಗಿಂತ ಮೈಲುಗಳಷ್ಟು ಮುಂದಿದೆ ಎಂದು ಹೇಳಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂಡಿ. ಸಲೀಂ ಅವರನ್ನು ಟೀಕಿಸಿದ ರೆಹಮಾನ್, ಅವರನ್ನು ಗಬ್ಬರ್ ಸಿಂಗ್ ಎಂದು ಕರೆದರು ಮತ್ತು ಅವರು ಕೆಲವೇ ನಾಯಕರೊಂದಿಗೆ ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅವರಿಗೆ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರನ್ನು ಭೇಟಿ ಮಾಡಲು ಸಮಯವಿದೆ, ಆದರೆ ತಮ್ಮದೇ ಆದ ಕೆಳ ಹಂತದ ನಾಯಕರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಟೀಕಿಸಿದರು.
ಕುಡಿಯುವ ನೀರು, ವಿದ್ಯುತ್ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ ತಾಕೀತು: ಸಚಿವ ಬೋಸರಾಜು
ಮಾನ್ವಿ: ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಮಾನ್ವಿ, ಸಿರವಾರ ತಾಲೂಕಿನ ಅಧಿಕಾರಿಗಳು ಮತ್ತು ಪುರಸಭೆ ಮುಖ್ಯಾಧಿಕಾರಿ ಅವರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ತಡೆಯಲು ವಿದ್ಯುತ್ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಜೆಜೆಎಂ, ಅಮೃತಾಧಾರೆ ಯೋಜನೆ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ವೇಗ ಹೆಚ್ಚಿಸಬೇಕೆಂದು ತಾಲೂಕಾಡಳಿತ, ಪುರಸಭೆ, ತಾಪಂ, ಗ್ರಾಪಂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ 393 ಬೋರ್ ವೆಲ್ ಗಳು ಕಾರ್ಯನಿರ್ವಹಿಸುತ್ತಿದ್ದು ಮಾನ್ವಿ, ಸಿರವಾರ ತಾಲೂಕಿನಲ್ಲಿ 61 ಕೆರೆಗಳು ಹಾಗೂ 124 ಆರ್ ಓ ಪ್ಲಾಂಟ್ ಗಳಿವೆ. ಇವುಗಳಲ್ಲಿ ದುರಸ್ತಿ ಕಾರ್ಯ ಹಾಗೂ ಪ್ಲಸಿಂಗ್, ಪೈಪ್ ಲೈನ್ ಅಳವಡಿಕೆಗೆ ಈಗಾಗಲೇ ಸೂಚಿಸಿರುವಂತೆ ಅಧಿಕಾರಿಗಳ ತಂಡ ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು ಮತ್ತು ಅಗತ್ಯವಿದ್ದಲ್ಲಿ ಖಾಸಗಿ ಬೋರ್ ವೆಲ್ ಗಳ ಸಹಕಾರ ಪಡೆಯುವುದು ಸೇರಿದಂತೆ ಇತರ ನಿರ್ದೇಶನ ನೀಡಲಾಗಿದೆ ಎಂದರು. ಅದೇರೀತಿ ಮಾನ್ವಿ ಪುರಸಭೆ ವ್ಯಾಪ್ತಿಯಲ್ಲಿ 136 ಬೋರ್ ವೆಲ್ ಗಳಿದ್ದು, ಈ ಪೈಕಿ 93 ಬೋರ್ ವೆಲ್ ಗಳು ಕಾರ್ಯನಿರ್ವಹಿಸುತ್ತಿವೆ. 40 ಬೋರವೆಲ್ ದುರಸ್ತಿ ಮತ್ತು 42 ಬೋರ್ ವೆಲ್ ಗಳ ಪ್ಲಸಿಂಗ್ ಹಾಗೂ ಸಣ್ಣಪುಟ್ಟ ದುರಸ್ತಿ ಕಾರ್ಯ ಹಾಗೂ 4 ಟ್ಯಾಂಕರ್ ಗಳ ಸೌಲಭ್ಯವಿದೆ. ನದಿಯಿಂದ 6.5 ಮಿ.ಲೀ. ನೀರು ಹಾಗೂ ಕೆರೆ ನೀರಿನ ಸೌಕರ್ಯ ಜೊತೆಗೆ ಅಮೃತಾ ಯೋಜನೆಯಡಿ 65 ಕಿ.ಮೀ..ಪೈಪ್ ಲೈನ್ ಅಳವಡಿಕೆ ಹಾಗೂ 20 ಕೋಟಿ ರೂ. ವೆಚ್ಚದಲ್ಲಿ ಜಯನಗರ, ಎಪಿಎಂಸಿ ಬಳಿ ಓವರ್ ಹೆಡ್ ಟ್ಯಾಂಕಗಳ ನಿರ್ಮಾಣವಾದರೆ ಮಾನ್ವಿ ಪಟ್ಟಣದಲ್ಲಿ ಒಟ್ಟು 8 ಟ್ಯಾಂಕ್ ಗಳ ಸವಲತ್ತು ಲಭಿಸಲಿದೆ. ಜೆಜೆಎಂ ಯೋಜನೆಯಡಿ 6.5 ಎಂಎಲ್ ಡಿ ಹಾಗೂ ಕೃಷ್ಣಾ ನದಿಯಿಂದ 5.5 ಎಂಎಲ್ ಡಿ ಸೇರಿದಂತೆ ಒಟ್ಟು 12 ಎಂಎಲ್ ಡಿ ಜೊತೆಗೆ 135 ಲೀ.ನೀರಿನ ಸೌಲಭ್ಯ ಜನರಿಗೆ ದೊರೆಯಲಿದೆ. ಪಟ್ಟಣದ 7 ವಾರ್ಡುಗಳಲ್ಲಿ ರಾಜ್ಯ ಸರ್ಕಾರದ 12 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ಮಾನ್ವಿ ಪಟ್ಟಣದಲ್ಲಿ 45 ಎಲ್ಇಡಿ, 125 ಹೈಮಾಸ್ ಲೈಟ್, 134 ಡಿವೈಡರ್ ಲೈಟ್ ಮತ್ತು 4,350 ವಿದ್ಯುತ್ ಕಂಬಗಳ ಜೋಡಣೆ ಹಾಗೂ 45 ಹೈ ವೊಲ್ಟೇಜ್ ಹಾಗೂ 1298 ಎಲ್ಇಡಿ ಬಲ್ಬ್ ಅಳವಡಿಸುವುದು ಸೇರಿದಂತೆ ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರು, ವಿದ್ಯುತ್ ಸಮಗ್ರವಾದ ಸೌಲಭ್ಯ ಕಲ್ಪಿಸಲು ಕಂಕಣ ಬದ್ಧವಾಗಿರುವುದಾಗಿ ಸಚಿವ ಎನ್.ಎಸ್.ಬೋಸರಾಜು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಪೂರ್ ಸಾಬ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಮುಖಂಡರಾದ ಕೆ.ಬಸವಂತಪ್ಪ, ಸೈಯದ್ ನಝೀರುದ್ದೀನ್ ಖಾದ್ರಿ, ಮಹಾಂತೇಶಸ್ವಾಮಿ ರೌಡೂರು ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ | ದೇವಿನಗರ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿ; ಐವರು ಮಕ್ಕಳಿಗೆ ಗಂಭೀರ ಗಾಯ
ಕಲಬುರಗಿ: ಬೀದಿ ನಾಯಿಗಳ ದಾಳಿಯಿಂದಾಗಿ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇವಿನಗರ ಬಡಾವಣೆಯಲ್ಲಿ ನಡೆದಿದೆ. ದೇವಿನಗರ ಬಡಾವಣೆಯಲ್ಲಿ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿನಾಯಿಗಳು ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿವೆ. ನಾಯಿ ದಾಳಿ ನಡೆಸಿ, ಮಕ್ಕಳ ಕಣ್ಣು, ಕಿವಿ, ಎದೆ ಭಾಗಗಳಿಗೆ ಗಂಭೀರ ಗಾಯಗೊಳಿಸಿವೆ. ನಾಯಿ ದಾಳಿಗೆ ಒಳಗಾದ ಮಕ್ಕಳನ್ನು ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ತಡೆಯುವಂತೆ ಸ್ಥಳೀಯರು, ಪಾಲಿಕೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಬೋಂದೆಲ್ : ಮಹಿಳಾ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ
ವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಬೇಕು: ಗುಣವಂತ ವಿ.ಗುಣಗಿ
ಬಾಗಲಕೋಟೆ ಉದ್ವಿಗ್ನ: ಘಟನೆಗೆ ಕಾರಣ ಏನು, ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಎಚ್ಚರಿಕೆ ಕ್ರಮಗಳೇನು
ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ನಡೆದ ಅಹಿತರ ಘಟನೆ ಇದೀಗ ರಾಜ್ಯದ ಗಮನ ಸೆಳೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಿಡಿಗೇಡಿಗಳಿಗೆ ಸೂಕ್ತ ಕಾನೂನಿನ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. ಹಾಗಾದರೆ ಬಾಗಲಕೋಟೆಯಲ್ಲಿ ನಡೆದ ಘಟನೆ ಏನು? ಘಟನೆಗೆ ಕಾರಣ ಏನು ಹಾಗೂ ಸದ್ಯದ ಪರಿಸ್ಥಿತಿ ಹೇಗಿದೆ? ಯಾವ ರೀತಿಯಲ್ಲಿ ರಾಜಕೀಯ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಟಿವಿ ಸೌಂಡ್ ವಿಚಾರಕ್ಕೆ ಗಂಡನನ್ನೇ ಕೊಲೆ ಮಾಡಿದ ಪತ್ನಿ
ಗುಂಟೂರು, ಫೆಬ್ರವರಿ 20: ಸಾಮಾನ್ಯವಾಗಿ ದೊಡ್ಡ ದೊಡ್ಡ ಡೀಲ್ ವಿಚಾರವಾಗಿ ಕೊಲೆ ಮಾಡಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ, ಇದೀಗಟಿವಿ ಸೌಂಡ್ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿಯೇ ಗಂಡನಿಗೆ ಚಾಕು ಇರಿದು ಕೊಂದಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಗಂಟೂರಿನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಟಿವಿಯ ವಾಲ್ಯೂಮ್ ಕಡಿಮೆ ಮಾಡುವ ವಿಚಾರಕ್ಕೆ
ಭಟ್ಕಳ | ಮೀನುಗಾರಿಕಾ ಬಲೆಗೆ ಸಿಲುಕಿದ್ದ ಅಪರೂಪದ ಆಮೆಯನ್ನು ಕಾಪಾಡಿದ ‘ಜಸ್ಟ್ ಡೈವ್' ತಂಡ
ಭಟ್ಕಳ: ನೇತ್ರಾಣಿ ದ್ವೀಪದ ಸಮೀಪ ಮೀನುಗಾರಿಕೆ ಬಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಪರೂಪದ ಸಮುದ್ರ ಆಮೆಯನ್ನು ಮುರುಡೇಶ್ವರದ ಸ್ಕೂಬಾ ಡೈವಿಂಗ್ ತಂಡವೊಂದು ರಕ್ಷಿಸಿ, ಸುರಕ್ಷಿತವಾಗಿ ನೀರಿಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದೆ. ಮುರುಡೇಶ್ವರದ ಜಸ್ಟ್ ಡೈವ್’(Just Dive) ಸ್ಕೂಬಾ ಡೈವಿಂಗ್ ತಂಡವು ಪ್ರವಾಸಿಗರನ್ನು ನೇತ್ರಾಣಿ ದ್ವೀಪಕ್ಕೆ ಡೈವಿಂಗ್ ಗಾಗಿ ಕರೆದುಕೊಂಡು ಹೋಗಿತ್ತು. ಡೈವಿಂಗ್ ಮುಗಿಸಿಕೊಂಡು ಮರಳಿ ಮುರುಡೇಶ್ವರಕ್ಕೆ ಬರುವ ಮಾರ್ಗಮಧ್ಯೆ ಸಮುದ್ರದಲ್ಲಿ ಆಮೆಯೊಂದು ಮೀನುಗಾರಿಕಾ ಬಲೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ತಂಡದ ಸದಸ್ಯರು ಗಮನಿಸಿದರು. ತಕ್ಷಣವೇ ಬೋಟ್ ನಿಲ್ಲಿಸಿದ ತಂಡವು, ಆಮೆಯನ್ನು ಹಿಡಿದು ಅದಕ್ಕೆ ಬಿಗಿಯಾಗಿ ಸುತ್ತಿಕೊಂಡಿದ್ದ ಬಲೆಯನ್ನು ಜಾಗರೂಕತೆಯಿಂದ ಬಿಡಿಸಿದರು. ಬಲೆಯಿಂದ ಮುಕ್ತಗೊಂಡ ಆಮೆಯನ್ನು ಪುನಃ ಸಮುದ್ರಕ್ಕೆ ಬಿಡಲಾಯಿತು. ಸ್ಕೂಬಾ ಡೈವಿಂಗ್ ತಂಡದ ಈ ಸಮಯಪ್ರಜ್ಞೆಗೆ ಬೋಟ್ ನಲ್ಲಿದ್ದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PUTTUR | ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳ ಬಂಧನ
ಪುತ್ತೂರು: ನಿಷೇಧಿತ ಮಾದಕ ವಸ್ತು ಎಂಡಿಎಂ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರು ಯುವಕರನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕೋಝಿಕ್ಕೋಡ್ ಪೆರುವಾಯಲ್ ನಿವಾಸಿ ಮುಹಮ್ಮದ್ ಅಜ್ಜಲ್ ಸಿ.(30), ಕೊಯ್ಲಾಡಿ ನಿವಾಸಿ ಸಂಶೀರ್(27) ಹಾಗೂ ವಯನಾಡ್ ನಿವಾಸಿ ಇಸ್ಮಾಯೀಲ್(28) ಬಂಧಿತ ಆರೋಪಿಗಳು. ಇವರಿಂದ 55 ಗ್ರಾಂ ಎಂಡಿಎಂ ಮತ್ತು ಒಂದು ತಲುವಾರು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದ ವೇಳೆ ಖಚಿತ ಮಾಹಿತಿಯ ಆಧಾರದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪುತ್ತೂರು ಕಡೆಯಿಂದ ಬಂದ ಕೇರಳ ನೋಂದಣಿಯ ಕಾರೊಂದನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲಿಸಿದಾಗ ಮಾದಕ ವಸ್ತು ಮತ್ತು ಚಾಲಕನ ಸೀಟಿನ ಅಡಿಯಲ್ಲಿ ಒಂದು ತಲವಾರು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PUTTRU | ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳ ಬಂಧನ
ಪುತ್ತೂರು: ನಿಷೇಧಿತ ಮಾದಕ ವಸ್ತು ಎಂಡಿಎಂ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರು ಯುವಕರನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕೋಝಿಕ್ಕೋಡ್ ಪೆರುವಾಯಲ್ ನಿವಾಸಿ ಮುಹಮ್ಮದ್ ಅಜ್ಜಲ್ ಸಿ.(30), ಕೊಯ್ಲಾಡಿ ನಿವಾಸಿ ಸಂಶೀರ್(27) ಹಾಗೂ ವಯನಾಡ್ ನಿವಾಸಿ ಇಸ್ಮಾಯೀಲ್(28) ಬಂಧಿತ ಆರೋಪಿಗಳು. ಇವರಿಂದ 55 ಗ್ರಾಂ ಎಂಡಿಎಂ ಮತ್ತು ಒಂದು ತಲುವಾರು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದ ವೇಳೆ ಖಚಿತ ಮಾಹಿತಿಯ ಆಧಾರದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪುತ್ತೂರು ಕಡೆಯಿಂದ ಬಂದ ಕೇರಳ ನೋಂದಣಿಯ ಕಾರೊಂದನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲಿಸಿದಾಗ ಮಾದಕ ವಸ್ತು ಮತ್ತು ಚಾಲಕನ ಸೀಟಿನ ಅಡಿಯಲ್ಲಿ ಒಂದು ತಲವಾರು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸದಿಲ್ಲಿ: ‘ AI ಇಂಪ್ಯಾಕ್ಟ್ ಶೃಂಗಸಭೆ 2026’ರಲ್ಲಿ ತಂತ್ರಜ್ಞಾನ ಕ್ಷೇತ್ರದ ಉನ್ನತ ಸಿಇಒಗಳು ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಿ ಬೆಳವಣಿಗೆಯ ಕುರಿತು ಮಾತನಾಡುತ್ತಿದ್ದ ವೇಳೆ, ಭಾರತ–ಅಮೆರಿಕ ವ್ಯಾಪಾರ ಚೌಕಟ್ಟು ಒಪ್ಪಂದವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಶೃಂಗಸಭೆ ನಡೆಯುತ್ತಿದ್ದ ಸ್ಥಳದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಹೊರಭಾಗದಲ್ಲಿ ಏಕಾಏಕಿ ಘೋಷಣೆಗಳ ಶಬ್ದ ಕೇಳಿಬಂದಿತು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು NDTVಗೆ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಅಮೆರಿಕದೊಂದಿನ ಹೊಸ ವ್ಯಾಪಾರ ಒಪ್ಟಂದದಿಂದ ಭಾರತಕ್ಕೆ ನ್ಯಾಯಯುತ ಪ್ರಯೋಜನಗಳು ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಒಪ್ಪಂದದನ್ವಯ ದೇಶೀಯ ಕೈಗಾರಿಕೆ ಹಾಗೂ ಕೃಷಿ ವಲಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಮೊದಲಿನಿಂದಲೇ ಆಕ್ಷೇಪ ವ್ಯಕ್ತಪಡಿಸುತ್ತಿದೆ. AI ಶೃಂಗಸಭೆಯನ್ನು ಅಡ್ಡಿಪಡಿಸುವ ಪ್ರಯತ್ನವನ್ನು ದೇಶದ ಬೆಳವಣಿಗೆಯ ಕುರಿತು ಕಾಂಗ್ರೆಸ್ ನ ಹೊಟ್ಟಕಿಚ್ಚಿನ ಪರಿಣಾಮ ಎಂದು ಬಿಜೆಪಿ ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ವಕ್ತಾರ ನಳಿನ್ ಕೊಹ್ಲಿ, “ಕಾಂಗ್ರೆಸ್ ಗೆ AI ಎಂದರೆ ‘ಭಾರತ ವಿರೋಧಿ’. ಕಾಂಗ್ರೆಸ್ ಮತ್ತೊಮ್ಮೆ INCಯು ವಾಸ್ತವದಲ್ಲಿ ANC — ರಾಷ್ಟ್ರೀಯ ವಿರೋಧಿ ಕಾಂಗ್ರೆಸ್ ಎಂದು ಸಾಬೀತುಪಡಿಸಿದೆ. ಪ್ರತಿಭಟನಾಕಾರರು ಕೇವಲ ಶರ್ಟ್ ಧರಿಸದವರಲ್ಲ, ವ್ಯಕ್ತಿತ್ವವಿಲ್ಲದವರೂ ಆಗಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. #WATCH | Delhi: Indian Youth Congress workers staged a topless protest and chanted anti-Modi slogans at Bharat Mandapam (Source: Indian Youth Congress) pic.twitter.com/WCZgCMwkFZ — ANI (@ANI) February 20, 2026
Kerala story 2 | ದ್ವೇಷ ಪ್ರಚಾರದ ಚಿತ್ರಗಳ ವಿರುದ್ಧ ರ್ಯಾಪರ್ ವೇಡನ್ ಆಕ್ರೋಶ
ಚಿತ್ರ ನೋಡುತ್ತಿದ್ದರೆ ಅದರ ಹಿಂದೆ ಇರುವ ರಾಜಕೀಯವನ್ನೂ ಗಮನಿಸಬೇಕು ಎಂದು ಕರೆ ನೀಡಿದ ಗಾಯಕ
\ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು; ಸಿದ್ದರಾಮಯ್ಯ ಕನ್ನಡ ದ್ರೋಹಿ\
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಭಿಮಾನಿಗಳು ಕನ್ನಡರಾಮಯ್ಯ ಎಂದು ಕರೆಯುವುದು ಸಹ ಇದೆ. ಆದರೆ ಇದೀಗ ಜೆಡಿಎಸ್ ಪಕ್ಷವು ಕನ್ನಡ ದ್ರೋಹಿ ಸಿದ್ದರಾಮಯ್ಯ ಅವರೇ ಎಂದು ಹೇಳಿದೆ. ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ನಿತ್ಯ ಚಟುವಟಿಕೆಗಳಿಗೆ ಹಾಗೂ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರು ವೇತನಕ್ಕೂ ಪರದಾಡುವಂತಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ
ಡೊನಾಲ್ಡ್ ಟ್ರಂಪ್ ಸಾಮೂಹಿಕ ವಲಸಿಗರ ಬಂಧನ ನೀತಿಗೆ ಹಿನ್ನೆಡೆ; DHS ವಿರುದ್ಧ ಯುಎಸ್ ಕೋರ್ಟ್ ಕೆಂಡಾಮಂಡಲ!
ವಲಸೆರಹಿತ ಅಮೆರಿಕ ನಿರ್ಮಾಣಕ್ಕೆ ಕೈಹಾಕಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದಕ್ಕಾಗಿ ಕಠಿಣ ವಲಸೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಈ ವಲಸೆ ನೀತಿಗಳನ್ನು ಜಾರಿಗೆ ತರುತ್ತಿರುವ ಅಮೆರಿಕದ ವಲಸೆ ಇಲಾಖೆ, ವಲಸಿಗರು ಮಾತ್ರವಲ್ಲದೇ, ಸ್ಥಳೀಯ ಅಮೆರಿಕನ್ನರೊಂದಿಗೂ ಅಮಾನವೀಯ ವರ್ತನೆ ತೋರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀ ಟ್ರಂಪ್ ಆಡಳಿತ ವಲಿಸಗರ ಬಂಧನ ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿರುವ ಅಮೆರಿಕದ ಫೆಡರಲ್ ಜಿಲ್ಲಾ ನ್ಯಾಯಾಲಯ, ತನ್ನ ಹಿಂದಿನ ನಿರ್ಧಾರವನ್ನು ಪಾಲಿಸದ ವಲಸೆ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Donald Trump: ಯುವತಿ, ಮಹಿಳೆಯರೆಂದರೆ ನನಗೆ ತುಂಬಾ ಇಷ್ಟ; ಪುರುಷರೆಂದರೆ ಅಷ್ಟಕ್ಕಷ್ಟೇ: ಡೊನಾಲ್ಡ್ ಟ್ರಂಪ್
Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಡುವ ಕೆಲವು ಹೇಳಿಕೆಗಳು ಕೆಲವೊಮ್ಮೆ ವಿವಾದ, ಇನ್ನೂ ಕೆಲವೊಮ್ಮೆ ಹಾಸ್ಯದ ಬುಗ್ಗೆ ಮೂಡಿಸುವುದು ಸಹ ಇದೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಟ್ಟಿರುವ ಹೇಳಿಕೆಯೊಂದು ಹಾಸ್ಯ ಸ್ವರೂಪ ಪಡೆದುಕೊಂಡಿದೆ. ವಾಷಿಂಗ್ಟನ್ನಲ್ಲಿ ನಡೆದ ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಉತ್ತರ ಪ್ರದೇಶದ ಕೌಡಾ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಪ್ರಾಣಾಪಾಯವಾಗಿಲ್ಲ. ಮೀರತ್ ರೈಲ್ವೇ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪಾಕಿಸ್ತಾನದ ಅಧಿಕಾರಿಗಳು ಎಂದಿಗೂ ಪ್ರಮಾಣಿಕವಾಗಿರಲೂ ಸಾಧ್ಯವಿಲ್ಲ ಎಂದು ಹೊರಗಿನವರೇ ಇರಲಿ ಅಥವಾ ಸ್ವತಃ ನಮ್ಮವರೇ ಇರಲಿ ಎಂಬುವುದು ಸದ್ಯ ಲೋಕವೇ ತಿಳಿದಿರುವ ವಿಚಾರ. ಸದ್ಯ ಇದು ಮತ್ತೆ ಪ್ರೂವ್ ಆಗಿದ್ದು, ಇತ್ತೀಚೆಗೆ ಪಾಕ್-ಬಲೂಚ್ ನಡುವೆ ನಡೆದ ಸಂಘರ್ಷದಲ್ಲಿ ಬಲೂಚಿಗಳು ಸೆರೆಹಿಡಿದಿದ್ದು ಉಭಯಕಡೆಗಳಲ್ಲೂ ಸೆರೆಹಿಡಿದಿರುವ ಸಿಬ್ಬಂದಿಗಳನ್ನು ವಿನಿಮಯ ಮಾಡಿಕೊಳ್ಳಲು ಫೆ.22ಗಡುವು ನೀಡಿದೆ. ಆದ್ರೆ ಇತ್ತ ಪಾಕಿಸ್ತಾನ ಅವರ ನಮ್ಮ ಯೋಧರೇ ಅಲ್ಲ ಎಂದು ತಿರಸ್ಕರಿಸಿದ್ದು, ಬಲೂಚಿಗಳು ಆ ಸೈನಿಕರ ಬಳಿಯಿರುವ ಪಾಕ್ ಸೇನಾ ಐಡಿಕಾರ್ಡ ಗಳನ್ನು ಸಾಕ್ಷವಾಗಿ ತೋರಿಸಿ ಅವರು ಕಣ್ಣಿರಿಟ್ಟು ಗೋಗರೆಯುವ ವಿಡಿಯೋವನ್ನು ರಿಲೀಸ್ ಮಾಡಿ ಪಾಕ್ ಆಡಳಿತದ ನಿಜ ಬಣ್ಣ ತಮ್ಮ ಸೈನಿಕರಿಗೆ ಅರಿವಾಗುವಂತೆ ಮಾಡಿದೆ.
ಜೀವ ವರ್ಸಸ್ ಜೀವನ: ಸಫಾರಿ ಬಗ್ಗೆ ರೆಸಾರ್ಟ್ ಮಾಲೀಕರು ಹಾಗೂ ರೈತರ ಸಂಘರ್ಷ, ಬಂಡೀಪುರ ಬಿಕ್ಕಟ್ಟಿಗೆ ಪರಿಹಾರ ಏನು
ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಸಫಾರಿಗೆ ಅನುಮತಿ ನೀಡಿದ್ದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ರೆಸಾರ್ಟ್ ಮಾಲೀಕರು ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಂಡೀಪುರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಈ ಬಿಕ್ಕಟ್ಟಿಗೆ ಅರಣ್ಯ ಇಲಾಖೆ ಏನು ಕ್ರಮಗಳನ್ನು ಕೈಗೊಳ್ಳಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಫಾರಿ ಮುಂದುವರಿಯುತ್ತಾ? ಅಥವಾ ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ದಕ್ಷಿಣ ಭಾರತದ ಟಾಪ್ 50 ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೋಟೆಗೂ ಸ್ಥಾನ: ನಿಮ್ಮ ಜಿಲ್ಲೆ ಇದೆಯೇ? ಪರಿಶೀಲಿಸಿ
South India's richest districts: ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳ ಬಗ್ಗೆ ಕೇಳಿರುತ್ತೇವೆ. ಹಾಗೆಯೇ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ, ಹಣಕಾಸು ಸೇರಿದಂತೆ ಇನ್ನಿತರೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕವಾಗಿ ದಕ್ಷಿಣ ಭಾರತದ 50 ಶ್ರೀಮಂತ ಜಿಲ್ಲೆಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಕೂಡ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ, ನಿಮ್ಮ ಜಿಲ್ಲೆ ಇದೆಯೇ ಎಂದು ಪರಿಶೀಲಿಸಿ.
ಫೋನ್ ಪೇ ಮೂಲಕ ಯುಪಿಐ ಬಳಸುವವರು ಈ ಸುದ್ದಿ ಮಿಸ್ ಮಾಡಬೇಡಿ, ಬಹುಮುಖ್ಯ ಮಾಹಿತಿ ಇಲ್ಲಿದೆ | Biometric UPI Payments
ಹಣ ತೆಗೆದುಕೊಂಡು ಹೋಗಿ ಶಾಪಿಂಗ್ ಮಾಡುವುದು &ವಸ್ತುಗಳನ್ನು ಖರೀದಿ ಮಾಡುವುದು ಆಧುನಿಕ ಕಾಲದಲ್ಲಿ ಮುಗಿದು ಹೋಗಿರುವ ಅಧ್ಯಾಯ. ಬಹುತೇಕ ಎಲ್ಲಾ ಕಡೆಯೂ ಯುಪಿಐ ಹಾಗೂ ಕಾರ್ಡ್ ಮೂಲಕವೇ ಎಲ್ಲಾ ವಹಿವಾಟು ಡಿಜಿಟಲ್ ಜಗತ್ತಿನಲ್ಲಿ ನಡೆದು ಹೋಗುತ್ತದೆ. ಅದರಲ್ಲೂ ಫೋನ್ಪೇ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬಹುತೇಕರು ಇದನ್ನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತಾರೆ. ಹೀಗಿದ್ದಾಗಲೇ ಇನ್ನುಮುಂದೆ ನೀವು ಯುಪಿಐ
ಆಲಮೇಲ ವಾರ್ಡ್ ನಂ.1ರಲ್ಲಿ ನರಕಸದೃಶ ಪರಿಸ್ಥಿತಿ
ಆರು ತಿಂಗಳಿಗೊಮ್ಮೆ ಚರಂಡಿ ಸ್ವಚ್ಛತೆ; ಸಾರ್ವಜನಿಕರ ಆಕ್ರೋಶ
ರಫೇಲ್ ಒಪ್ಪಂದಕ್ಕೆ ವಿರೋಧ ಏಕೆ ಎಂದೇ ಅರ್ಥವಾಗುತ್ತಿಲ್ಲ; ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಬಾಣದ ಗುರಿ ತಪ್ಪಲಿಲ್ಲ!
ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮನಗಳನ್ನು ಖರೀದಿಸುವ ಭಾರತ ಸರ್ಕಾರದ ನಿರ್ಧಾರವನ್ನು, ಇಲ್ಲಿನ ವಿಪಕ್ಷಗಳು ಟೀಕಿಸುತ್ತಿವೆ. ಕೆಲವರು ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದರೆ, ಮತ್ತೂ ಕೆಲವರು ಒಪ್ಪಂದವನ್ನು ಹಗರಣ ಎಂದು ಕರೆಯುತ್ತಿದ್ದಾರೆ. ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್, ರಫೇಲ್ ಒಪ್ಪಂದ ವಿರೋಧಿಗಳ ವಿರುದ್ಧ ಹರಿಹಾಯ್ದಿದ್ದಾರೆ. ರಫೇಲ್ ಯುದ್ಧ ವಿಮಾನಗಳು ಭಾರತದ ಸೈನ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದಿರುವ ಮ್ಯಾಕ್ರನ್, ಭಾರತದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ. ಇಲ್ಲಿದೆ ಮಾಹಿತಿ.
Chhattisgarh | ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಬೆಂಕಿ ಹಚ್ಚಿದ ಯುವಕ: ವೀಡಿಯೊ ವೈರಲ್
ರಾಯಪುರ: ಛತ್ತೀಸ್ಗಢದ ರಾಯ್ಪುರ ನಗರದ ಪೆಟ್ರೋಲ್ ಬಂಕ್ನಲ್ಲಿ ಧೂಮಪಾನ ಮಾಡಬಾರದೆಂದು ಹೇಳಿದ್ದಕ್ಕೆ ಯುವಕನೋರ್ವ ಬೈಕ್ ಗೆ ಪೆಟ್ರೋಲ್ ತುಂಬಿಸುವಾಗ ಪೈಪ್ಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಪೆಟ್ರೋಲ್ ತುಂಬಿಸುತ್ತಿದ್ದ ಬೈಕ್ ಮತ್ತು ಪೆಟ್ರೋಲ್ ಬಂಕ್ಗೆ ಬೆಂಕಿ ತಗುಲಿದೆ. ಘಟನೆಯ ವೀಡಿಯೊ ವೈರಲ್ ಆಗಿದೆ. ಈ ಘಟನೆ ಗುರುವಾರ ಸಂಜೆ ಉರ್ಲಾ ಪ್ರದೇಶದ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂಬ ಇಬ್ಬರು ಬೈಕ್ಗೆ ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್ಗೆ ಬಂದಿದ್ದರು. ಇಮ್ರಾನ್ ಬೈಕ್ ನಲ್ಲಿ ಕುಳಿತಿದ್ದರೆ, ಧರ್ಮೇಂದ್ರ ಪಕ್ಕದಲ್ಲಿ ನಿಂತಿದ್ದನು. ಇಂಧನ ಟ್ಯಾಂಕ್ ತೆರೆಯುತ್ತಿದ್ದಾಗ ಧರ್ಮೇಂದ್ರ ಸಿಗರೇಟು ಸೇದಲು ಯತ್ನಿಸಿದ್ದಾನೆ. ಈ ವೇಳೆ ಪೆಟ್ರೋಲ್ ಬಂಕ್ನಲ್ಲಿ ಧೂಮಪಾನ ಮಾಡಬಾರದೆಂದು ಆತನಿಗೆ ಹೇಳಲಾಗಿದೆ. ಕೋಪಗೊಂಡ ಧರ್ಮೇಂದ್ರ ಇಂಧನ ತುಂಬುತ್ತಿದ್ದ ಪೈಪ್ಗೆ ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್ ಪಂಪ್ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿಯನ್ನು ನಂದಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಪೆಟ್ರೋಲ್ ಪಂಪ್ ಮ್ಯಾನೇಜರ್ ನೀಡಿದ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಉರ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. छत्तीसगढ़ के रायपुर में पेट्रोल पंप पर सिगरेट पीने से मना करने पर धर्मेंद्र ने लाइटर से पंप के नोजल पाइप में आग लगा दी। pic.twitter.com/zuGvvVgOkF — गुरु प्रसाद यादव, लखनऊ (@guruprasadyada5) February 20, 2026
Gold Price Feb 20: ಚಿನ್ನದ ಬೆಲೆ ಮತ್ತೆ ಇಳಿಕೆ; ಬೆಳ್ಳಿ ಯಥಾಸ್ಥಿತಿ, ಇಂದಿನ ಚಿನ್ನ - ಬೆಳ್ಳಿ ಬೆಲೆ ವಿವರ
Gold Price Feb 20: ಚಿನ್ನದ ಬೆಲೆ ಶುಕ್ರವಾರ ಇಳಿಕೆಯಾಗಿದ್ದು, ಚಿನ್ನದ ಬೆಲೆ ಕಡಿಮೆ ಆಗುವುದು ಮುಂದುವರಿದಿದೆ. ಸತತ ನಾಲ್ಕು ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ಬೆಲೆಯು ಗುರುವಾರ ಹೆಚ್ಚಳವಾಗಿತ್ತು. ಇದೀಗ ಶುಕ್ರವಾರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಫೆಬ್ರವರಿ 20ರಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ವಿವರ
34 ನೆಕ್ಕಿಲಾಡಿ | ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ
ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಮಸೀದಿ ಹಿಂಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು, ನದಿಯಲ್ಲಿರುವ ಗಿಡ-ಗಂಟಿಗಳ ನಡುವೆ ಸಿಲುಕಿಕೊಂಡಿದೆ. ಮೃತದೇಹವು ನದಿಯಲ್ಲಿ ಬೇರೆಲ್ಲಿಂದಲೋ ತೇಲಿಬಂದಿರುವ ಶಂಕೆ ವ್ಯಕ್ತವಾಗಿದೆ.
ʼಡಬಲ್ ಲುಕ್ ನಲ್ಲಿ ಯಶ್ʼ: 'ಟಾಕ್ಸಿಕ್' ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ
ಹಿಂಸೆಯ ವಿಜೃಂಭಣೆ ನಡುವೆ ಯಶ್ ಅವರ ಡಬಲ್ ಲುಕ್ ರಿಲೀಸ್ ಮಾಡಿದ ಚಿತ್ರತಂಡ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. 15 ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಈ ಬಾರಿಯ ಟೀಸರ್ ನಲ್ಲಿ ಯಶ್ ಅವರ ಎರಡು ಲುಕ್ ಬಹಿರಂಗವಾಗಿದೆ. ಯಶ್ ಯಂಗ್ ಲುಕ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ರಾಯ ಮತ್ತು ರಾಯನ ಮಗ ಎರಡು ಪಾತ್ರದಲ್ಲಿ ಯಶ್ ನಟಿಸಿರುವ ಸಾಧ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. It’s Gonna Get Crazyyyy !!! #ToxicTeaser Out now! Kannada - https://t.co/UTLyUWmDVn Hindi - https://t.co/XDSCoKkM8N Telugu - https://t.co/T5O6bZlVDv Tamil - https://t.co/2791WiqPGd Malayalam - https://t.co/CM9pkqutTU #Toxic In Cinemas Worldwide from 19-03-2026 #ToxicTheMovie … pic.twitter.com/iOiOLNv2bW — Yash (@TheNameIsYash) February 20, 2026 ಈ ಬಾರಿಯ ಟೀಸರ್ ನಲ್ಲಿ ಸಂಭಾಷಣೆಯೂ ಇದೆ. ‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಅದಕ್ಕೆ ಉತ್ತರವಾಗಿ, “ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ’ ಎಂದು ರಾಯ ಹೇಳುತ್ತಾನೆ. ಉಳಿದಂತೆ ಟೀಸರ್ ನಲ್ಲಿ ಹಿಂಸೆಯೇ ವಿಜೃಂಭಿಸಿದೆ. ‘ಟಾಕ್ಸಿಕ್’ ಸಿನಿಮಾ 2026 ಮಾರ್ಚ್ 19ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ‘ಧುರಂಧರ್’ ಸೀಕ್ವೆಲ್ನೊಂದಿಗೆ ಸಿನಿಮಾ ಪೈಪೋಟಿ ನಡೆಸಲಿದೆ. ಹೀಗಾಗಿ ಈ ಬಾರಿಯ ಟೀಸರ್ ನ ಸಂಭಾಷಣೆಗಳು ‘ಧುರಂಧರ್-2’ ವಿರುದ್ಧ ಹೇಳಿರಬಹುದು ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೂ ಮೊದಲು, 2026ರ ಜನವರಿ 8ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು, ಚಿತ್ರತಂಡ ನಾಯಕನ ನಟನನ್ನು ರಾಯ ಎಂದು ಪರಿಚಯಿಸುವ ಪಾತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್ನಲ್ಲಿ, ಯಶ್ ಸ್ಮಶಾನದಲ್ಲಿ ಗನ್ ಹಿಡಿದು ನಿರ್ಭಯವಾಗಿ ನಡೆಯುತ್ತಿರುವುದನ್ನು ತೋರಿಸಲಾಗಿತ್ತು. ಗುಂಡೇಟಿನ ಸದ್ದುಗಳು ಪ್ರತಿಧ್ವನಿಸುತ್ತಿತ್ತು. ಆ ವಿಡಿಯೋ ಕೂಡ ಭಾರಿ ಸಂಚಲನ ಸೃಷ್ಟಿಸಿತ್ತು. ಅದಾಗ್ಯೂ, ಕೆಲವು ದೃಶ್ಯಗಳು ಆಕ್ಷೇಪಾರ್ಹವೆಂದು ಭಾವಿಸಿದ ಕೆಲ ಗುಂಪುಗಳು ದೂರುಗಳನ್ನು ಸಲ್ಲಿಸಿದ್ದು, ಚಿತ್ರ ವಿವಾದವನ್ನೂ ಎದುರಿಸಿದೆ. ಗೀತು ಮೋಹನ್ದಾಸ್ ಮತ್ತು ಯಶ್ ಸೇರಿ ಬರೆದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ್ ಮತ್ತು ಯಶ್ ನಿರ್ಮಿಸಿರುವ ಬಿಗ್ ಬಜೆಟ್ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
VITTAL | ಅಂಗನವಾಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ: ತೀವ್ರ ಗಾಯ
ವಿಟ್ಲ: ಅಂಗನವಾಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಬೋಳಂತೂರು ನಾರ್ಶ ಬಂಗಾರಕೋಡಿ ನಿವಾಸಿ ರಿಯಾಝ್ ಎಂಬವರ ಪುತ್ರಿ ರಿಜಿಲಾ ಸಾರಮ್ಮ ಗಾಯಗೊಂಡ ಮಗು. ಮನೆಯ ಸಮೀಪವೇ ಅಂಗನವಾಡಿ ಕೇಂದ್ರವಿದ್ದು, ಗುರುವಾರ ಬೆಳಗ್ಗೆ ರಿಜಿಲಾ ಒಬ್ಬಳೇ ಅಂಗನವಾಡಿಗೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿನಾಯಿಯೊಂದು ಏಕಾಏಕಿ ದಾಳಿ ಮಾಡಿದೆ. ಇದರಿಂದ ಮಗುವಿನ ಮುಖ ಸಹಿತ ಇಡೀ ದೇಹದ ಮೇಲೆ ತೀವ್ರ ಗಾಯಗಳಾಗಿವೆ. ಮುಖದ ಮೇಲೆ ತೀವ್ರತರದ ಗಾಯಗಳಾಗಿದ್ದು, ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹಾಸನದಲ್ಲಿ ಗಾಂಜಾ ಮಾರಾಟ ಯತ್ನ ವಿಫಲ: ಒಬ್ಬನ ಬಂಧನ
ಲಕ್ಷಾಂತರ ಮೌಲ್ಯದ ಮಾದಕ ವಸ್ತು ವಶ,
ಬಾಗಲಕೋಟೆ | ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಆರೋಪಿಯ ಬಂಧನ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿಯ ಬಂಧನ: ಎಸ್ಪಿ
Biryani: ಭರ್ಜನಿ ಬಿರಿಯಾನಿ ಮಾರಾಟವಾದರೂ 70 ಸಾವಿರ ಕೋಟಿ ರೂ. ಮೋಸ GST 2.0: ರಾಜಾರಾಂ ತಲ್ಲೂರು ಬರಹ
Biryani: ಭಾರತದಲ್ಲಿ ಬಿರಿಯಾನಿಗೆ ಭರ್ಜರಿ ಡಿಮ್ಯಾಂಡ್ ಇದೆ. ಆದರೆ ಇದೀಗ ಬಿರಿಯಾನಿ ಮಾರಾಟದಲ್ಲಿ ಆಗಿರುವ ದೊಡ್ಡ ಮೋಸ ಜಾಲವೊಂದು ಬಹಿರಂಗವಾಗಿದೆ. ಭರ್ಜನಿ ಬಿರಿಯಾನಿ ಮಾರಾಟವಾದರೂ 70 ಸಾವಿರ ಕೋಟಿ ರೂ. ಮೋಸ GST 2.0: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಬಿರಿಯಾನಿ 2025ರ ಆರಂಭದಲ್ಲಿ GST 2.0 ಆವೃತ್ತಿಯಲ್ಲಿ ಅನುಷ್ಠಾನದ ಎರಡನೇ ಹಂತವಾದ
2028 ರ ವಿಧಾನಸಭಾ ಚುನಾವಣೆ: ತುಮಕೂರು ದೋಸ್ತಿಯಲ್ಲಿ ಶುರುವಾಯ್ತು ಟಿಕೆಟ್ ಕುಸ್ತಿ
2028 ರ ವಿಧಾನಸಭಾ ಚುನಾವಣೆಗೆ ‘ದೋಸ್ತಿ’ಯಲ್ಲಿ ಟಿಕೆಟ್ ಕುಸ್ತಿ ಶುರುವಾಗಿದೆ. ತುರುವೇಕೆರೆಯಲ್ಲಿ ಮೈತ್ರಿ ನಾಯಕರು ಬಹಿರಂಗ ಜಟಾಪಟಿಗೆ ಇಳಿದಿದ್ದಾರೆ. ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಮುಂದಿನ ಚುನಾವಣೆಗೆ ಮೈತ್ರಿ ಅಭ್ಯರ್ಥಿ ತಾವೇ ಎಂದು ಘೋಷಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಶಾಸಕ, ಬಿಜೆಪಿಯ ಮಸಾಲ ಜಯರಾಂ ಬಿಜೆಪಿ ಅಥವಾ ಎನ್ಡಿಎಯಿಂದ ನನಗೆ ಈಗಾಗಲೇ ಹೈಕಮಾಂಡ್ ಭರವಸೆ ದೊರೆತಿದೆ ಎಂದಿದ್ದಾರೆ. ಹೀಗಾಗಿ ಮೈತ್ರಿ ನಾಯಕರಲ್ಲಿ ಫೈಟ್ ಶುರುವಾಗಿದೆ.
ಶಿಕ್ಷಣದ ಹರಿವು: ಪ್ರಾಚೀನದಿಂದ ಆಧುನಿಕ ಭಾರತದವರೆಗೆ ಪರಿವರ್ತನೆಯ ಪಯಣ
ವಡಗಲಪುರ: ಭಾರತದಲ್ಲಿ ಶಿಕ್ಷಣದ ಪರಿವರ್ತನೆ ಪ್ರಾಚೀನ ಕಾಲದಿಂದ ಇಂದಿನ ಆಧುನಿಕ ಯುಗದವರೆಗೆ ನಿರಂತರವಾಗಿ ರೂಪಾಂತರಗೊಂಡ ಪಯಣವಾಗಿದ್ದು,ಸಮಾಜ ಪರಿವರ್ತನೆಯ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಶಿಕ್ಷಣದ ಬೇರುಗಳು ಸಿಂಧೂ ನಾಗರಿಕತೆಯ ಕಾಲಘಟ್ಟದವರೆಗೆ ಹಿಂತಿರುಗುತ್ತವೆ.ಆ ಕಾಲದಲ್ಲಿ ಚಿಹ್ನೆಗಳು ಮತ್ತು ಚಿತ್ರಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಪದ್ಧತಿ ಇತ್ತು. ನಂತರ ಆರ್ಯರ ಆಗಮನದಿಂದ ವೇದಗಳು, ಉಪನಿಷತ್ತುಗಳು ರಚನೆಯಾಗಿ, ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಉದಯಿಸಿವೆ. ಆದರೆ ಆ ಕಾಲದಲ್ಲಿ ಶಿಕ್ಷಣವು ಮುಖ್ಯವಾಗಿ ಬ್ರಾಹ್ಮಣರು ಮತ್ತು ರಾಜವಂಶಗಳಿಗೆ ಸೀಮಿತವಾಗಿತ್ತು. ಮಠಗಳು, ದೇವಾಲಯಗಳು ಹಾಗೂ ಗುರುಕುಲಗಳು ಶಿಕ್ಷಣ ಕೇಂದ್ರಗಳಾಗಿದ್ದವು. ಮುಂದೆ ರಾಜಮಹಾರಾಜರ ಆಶ್ರಯದಲ್ಲಿ ನಳಂದಾ ವಿಶ್ವವಿದ್ಯಾಲಯ, ವಿಕ್ರಮಶೀಲ ವಿಶ್ವವಿದ್ಯಾಲಯ, ವಲ್ಲಭಿ ವಿಶ್ವವಿದ್ಯಾಲಯ ಮೊದಲಾದ ಮಹಾವಿದ್ಯಾಲಯಗಳು ಬೆಳೆಯುವಂತಾಯಿತು. ಆದರೂ ಶಿಕ್ಷಣವು ಉನ್ನತ ವರ್ಗಕ್ಕೆ ಮಾತ್ರ ಸೀಮಿತವಾಗಿಯೇ ಉಳಿಯಿತು. ಮಧ್ಯಯುಗದಲ್ಲಿ ಮುಸ್ಲಿಂ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಮತ್ತು ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಮದರಸಾಗಳಲ್ಲಿ ಧರ್ಮ, ಸಾಹಿತ್ಯ, ಗಣಿತ ಮತ್ತು ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿತ್ತು. ೧೨ನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯಲ್ಲಿ ಅಕ್ಕಮಹಾದೇವಿ ಸೇರಿದಂತೆ ಮಹಿಳೆಯರೂ ಸಕ್ರಿಯವಾಗಿ ಭಾಗವಹಿಸಿದ್ದು ಶಿಕ್ಷಣದ ಜನಸಾಮಾನ್ಯೀಕರಣಕ್ಕೆ ದಾರಿಯಾಯಿತು. ಬ್ರಿಟಿಷರ ಆಗಮನದೊಂದಿಗೆ ಆಂಗ್ಲ ಶಿಕ್ಷಣಪದ್ಧತಿ ಪರಿಚಯವಾಯಿತು. ರಾಜಾ ರಾಮಮೋಹನ ರಾಯ್ ಅವರ ಪ್ರಯತ್ನಗಳಿಂದ 1817ರಲ್ಲಿ ಕಲ್ಕತ್ತಾದಲ್ಲಿ‘Hindu College' ಸ್ಥಾಪನೆಯಾಯಿತು. ನಂತರ 1857ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ಉನ್ನತ ಶಿಕ್ಷಣಕ್ಕೆ ದಾರಿ ತೆರೆದವು. ಸಾಮಾಜಿಕ ಸುಧಾರಣೆಯಲ್ಲಿ ಜ್ಯೋತಿರಾವ್ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳ ಪಾತ್ರ ಮಹತ್ವದ್ದು. 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣಕ್ಕೆ ಬುನಾದಿ ಹಾಕಿದರು. ಬರೋಡಾ ಸಂಸ್ಥಾನದ ಮಹಾರಾಜ ಸಯ್ಯಾಜಿ ರಾವ್ ಗಾಯಕವಾಡ್ III ವಿದ್ಯಾರ್ಥಿವೇತನ ವ್ಯವಸ್ಥೆ ಆರಂಭಿಸಿದ ಪರಿಣಾಮ ಡಾ. ಬಿ.ಆರ್.ಅಂಬೇಡ್ಕರ್ಉನ್ನತ ಶಿಕ್ಷಣ ಪಡೆದು ಸಂವಿಧಾನ ರಚನೆಗೆ ಮಹತ್ವದ ಕೊಡುಗೆ ನೀಡಿದರು. ಸ್ವಾತಂತ್ರ್ಯ ನಂತರ 1948ರ ರಾಧಾಕೃಷ್ಣನ್ ಆಯೋಗ ಮತ್ತು 196466ರ ಕೊಠಾರಿ ಆಯೋಗಗಳ ಶಿಫಾರಸ್ಸುಗಳಿಂದ 10+2+3 ಶಿಕ್ಷಣ ಪದ್ಧತಿ ರೂಪುಗೊಂಡಿತು. 1968, 1986 ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಸಮಗ್ರ ಸುಧಾರಣೆಗಳನ್ನು ತಂದವು. 2009ರ ಶಿಕ್ಷಣ ಹಕ್ಕು ಕಾಯ್ದೆ (ಖಖಿಇ) 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಖಚಿತಪಡಿಸಿತು. National Education Policy 2020 ಬಹುಶಾಖಾ ಶಿಕ್ಷಣ, ತಂತ್ರಜ್ಞಾನ ಬಳಕೆ ಮತ್ತು ಮಾತೃಭಾಷೆಗೆ ಒತ್ತು ನೀಡಿದೆ. DIKSHA ಮತ್ತು SWAYAM ವೇದಿಕೆಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲಾಗಿದೆ. ಇಂದು ಭಾರತದಲ್ಲಿ ಸುಮಾರು 14.7 ಲಕ್ಷ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣವು ಸಮಗ್ರ ಅಭಿವೃದ್ಧಿಗೆ ದಾರಿಯಾಗುತ್ತಿದೆ. ಸಮಾಜ ಪರಿವರ್ತನೆಗೆ ಶಿಕ್ಷಣವೇ ಶಕ್ತಿಯುತ ಸಾಧನವಾಗಿದ್ದು, ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಶಿಕ್ಷಣವು ಕೇವಲ ಶಾಲಾ-ಕಾಲೇಜುಗಳಲ್ಲಿನಔಪಚಾರಿಕ ಕಲಿಕೆಯಷ್ಟೇ ಅಲ್ಲ, ಜೀವನಪರ್ಯಂತದ ಅನೌಪಚಾರಿಕ ಅನುಭವಗಳ ಸಮಗ್ರ ರೂಪವಾಗಿದೆ. ಇದು ವಿಮರ್ಶಾತ್ಮಕ ಚಿಂತನೆ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ.
ರಾಜ್ಯ ಸರಕಾರ ಈ ಬಾರಿಯ ಬಜೆಟ್ನಲ್ಲಿ ಗಮನಿಸಬೇಕಾದ ಅಂಶಗಳು
NRLM ನಮ್ಮ ರಾಜ್ಯದಲ್ಲೂ ಅತೀ ದೊಡ್ಡ ಮಹಿಳೆಯರ platform ಆಗಿದ್ದು ಅದರ ಮೂಲಕ ಆರ್ಥಿಕ ಒಳಗೊಳ್ಳುವಿಕೆಯ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಕರ್ನಾಟಕ ಸರಕಾರ ಈ NRLM=KSRLPS ಸಂಜೀವಿನಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರಕಾರವೂ ಇದೇ ಧೋರಣೆಯನ್ನು ಈ ಹಿಂದೆ ಹೊಂದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದರ ಸಾಮರ್ಥ್ಯವನ್ನು ಅರಿತು ಪ್ರಜ್ಞಾಪೂರ್ವಕವಾಗಿ ಯಥೇಚ್ಛ ಅನುದಾನವನ್ನೂ ನೀಡುತ್ತಿದೆಯಲ್ಲದೆ ಹೊಸ ಹೊಸ ಆರ್ಥಿಕ ಆದಾಯ ಆಧಾರಿತ ಕಾರ್ಯಕ್ರಮಗಳನ್ನು ಮುಂದಿಡುತ್ತಿದೆ. ಈ ಮಹಿಳಾ ವೇದಿಕೆಯನ್ನು ಚೆನ್ನಾಗಿ ಪೋಷಿಸಿದ ಕೇರಳ, ತೆಲಂಗಾಣ, ಆಂಧ್ರ ಮತ್ತು ಬಿಹಾರ ರಾಜ್ಯಗಳ ಆಳುವವರು ರಾಜಕೀಯವಾಗಿಯೂ ಸುಭದ್ರ ನೆಲೆಯನ್ನು ಪಡೆದುಕೊಂಡಿದ್ದಾರೆ. (ಬಿಹಾರದಲ್ಲಿ ಮೊನ್ನೆ ಮೊನ್ನೆ ರೂ. ಹತ್ತು ಸಾವಿರದಷ್ಟು ಹಂಚಿದ್ದು ಇದೇ ಆಜೀವಿಕಾ ಮಹಿಳೆಯರ ಕಿರು ಉದ್ಯಮ ಪ್ರೋತ್ಸಾಹದ ಹೆಸರಿನಲ್ಲಿ.) ಕರ್ನಾಟಕದಲ್ಲಿ ಈ ಸಂಜೀವಿನಿ ಕೌಶಲ್ಯಾಭಿವೃದ್ಧಿ ಕೈ ಕೆಳಗಿದೆ! ಆದರೆ ಇದು ಕೆಲಸ ಮಾಡುತ್ತಿರುವುದು ಅಕ್ಷರಶಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ. ಈ ಅಭಿಯಾನ ಗ್ರಾಮೀಣ ಜೀವನೋಪಾಯಗಳ ಅಭಿವೃದ್ಧಿಗೆ ಬೇಕಾದ ಕೌಶಲ್ಯ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಬಗ್ಗೆ ಇದೆಯಷ್ಟೇ ಹೊರತು ಈಗ ನಿರ್ವಚನಗೊಂಡಿರುವ ಕೌಶಲ್ಯಾಭಿವೃದ್ಧಿಗೂ ಇದಕ್ಕೂ ಸಂಬಂಧವೇ ಇಲ್ಲ. ಸ್ಕಿಲ್ ಇಂಡಿಯಾ ಎಂಬ ಪುಂಗಿಯ ವಿಸ್ತರಣೆಯಾಗಿ ನಮ್ಮ ರಾಜ್ಯದಲ್ಲಿ ಕೌಶಲ್ಯ ಇಲಾಖೆ ಇದೆ. ಇದರ ಸಾಧನೆಗಳಲ್ಲಿ ಅರೆಬರೆ ತರಬೇತಿ, ಭ್ರಷ್ಟಾಚಾರಗಳ ಹೆಜ್ಜೆ ಗುರುತು ಇದೆಯೇ ಹೊರತು. ಗಂಭೀರ ಸಾಧನೆಗಳ ಪುರಾವೆ ಇಲ್ಲ. ಇರಲಿ. ಆದ್ದರಿಂದ ಸಂಜೀವಿನಿಯನ್ನು ಕೇಂದ್ರೀಕರಿಸಿ ಅದರ ಬಗ್ಗೆ ಗಮನ ನೀಡಲು ಮೊದಲು ಇದನ್ನು ಗ್ರಾ.ಪಂ.ರಾ.ಇಲಾಖೆಯಡಿ ತರಬೇಕಿದೆ. NRLM ಬಗ್ಗೆ ಮೋದಿಯವರೂ ಉದಾಸೀನ ತಾಳಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಅಭಿಯಾನಕ್ಕೆ ದುಡ್ಡು ಸುರಿಯುತ್ತಿದ್ದಾರೆ. ಕೆಲವು ಪ್ರಸ್ತುತಿ ಗಮನಿಸಿ: * ಈಗಾಗಲೇ ಕೇಂದ್ರ ಸರಕಾರವು ಪ್ರತೀ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ ರೂ.20 ಲಕ್ಷದಷ್ಟು ಸುತ್ತು ನಿಧಿಯನ್ನು ನೀಡಿದ್ದು ಅದು ಆಂತರಿಕ ಸಾಲ ನೀಡಿಕೆಗೆ ಬಳಕೆಯಾಗುತ್ತಿದೆ. ಹಲವಾರು ಗ್ರಾಮ ಪಂಚಾಯತ್ ಒಕ್ಕೂಟಗಳಲ್ಲಿ ಈ ನಿಧಿ ಮೂರ್ನಾಲ್ಕು ಪಟ್ಟು ಬೆಳೆದಿದೆ. * ಹಾಗೆಯೇ ಉತ್ಪಾದಕ ಗುಂಪುಗಳಿಗೆ ತಲಾ ರೂ.75 ಸಾವಿರದಷ್ಟು ಅನುದಾನ ನೀಡುವ ಯೋಜನೆಯೂ ಇದೆ. ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಕಿರು ಉದ್ಯಮಗಳಿಗೆ ಬೇಕಾದ workshed/ resource centreಗೆ ಕೇಂದ್ರ ಸರಕಾರ ರೂ.40 ಲಕ್ಷದಷ್ಟು ನೀಡುವ ಪ್ರಸ್ತಾವ ಮುಂದಿರಿಸಿದೆ. * ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಹೈನುಗಾರಿಕೆ ಯನ್ನು ಕೈಗೊಳ್ಳಲು ಈಗಾಗಲೇ ಕೆಎಂಎಫ್ ಮೂಲಕ ಕ್ಷೀರ ಸಂಜೀವಿನಿ ಹೆಸರಿನಲ್ಲಿ ಸಾವಿರಾರು ಮಹಿಳೆಯರನ್ನು ತರಬೇತುಗೊಳಿಸಿದ್ದಲ್ಲದೇ ಅವರಿಗೆ ಹಸು ಕೊಡಿಸಿ ಹಾಲನ್ನು ಖರೀದಿ ಮಾಡುವ ಜವಾಬ್ದಾರಿಯನ್ನೂ ಕೆಎಂಎಫ್ ನಿರ್ವಹಿಸುತ್ತಿದೆ. ಇದರೊಂದಿಗೆ ಈಗ ‘ಲಖ್ಪತಿ ದೀದಿ’ ಎಂಬ ಯೋಜನೆಯ ಮುಖಾಂತರ ಗ್ರಾಮೀಣ ಮಹಿಳೆಯೊಬ್ಬಳ ಆದಾಯವನ್ನು ಕೃಷಿ ಅಥವಾ ಕೃಷಿಯೇತರ ಕಿರು ಉದ್ಯಮಗಳ ಮೂಲಕ ವರ್ಷಕ್ಕೆ ಒಂದು ಲಕ್ಷ ರೂ. ಆದಾಯ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ. ಕರ್ನಾಟಕ್ಕೆ ನಿಗದಿಪಡಿಸಿರುವ ಗುರಿ ಅಂದಾಜು 8 ಲಕ್ಷ ಅಂದರೆ ಒಂದು ಪಂಚಾಯತ್ಗೆ 140. ಇಷ್ಟು ದೊಡ್ಡ ಮಟ್ಟದ initiative ಸಂಜೀವಿನಿ ಮೂಲಕ ನಡೆಯುತ್ತಿರುವಾಗ ರಾಜ್ಯ ಸರಕಾರ ಇದರ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸದೇ ಇರುವುದು ಅಚ್ಚರಿ ತರುತ್ತಿದೆ. ಸಾಂದರ್ಭಿಕವಾಗಿ ಸರಕಾರ ಗಮನಿಸಬೇಕಾದ್ದು ಮನರೇಗಾದ ಮಹಿಳಾ ಕಾರ್ಮಿಕರು ಮತ್ತು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರೂ ಈ ಒಕ್ಕೂಟದ ಭಾಗವೇ. ಆದರೆ ಈಗ ಅಧಿಕೃತ platform ಇರುವುದು ಸಂಜೀವಿನಿಯಲ್ಲಿ ಮಾತ್ರ. ಪುಣ್ಯವಶಾತ್ ಬಿಹಾರದಲ್ಲಿ ಆದಷ್ಟು ವೇಗದಲ್ಲಿ ಇಲ್ಲಿ ಇವು ಯಾವುವೂ ನಿರೀಕ್ಷಿತ ಸಾಧನೆ ಮಾಡಿಲ್ಲ!! ಟಾರ್ಗೆಟನ್ನು ಕಾಲಮಿತಿಯಲ್ಲಿ ಸಾಧಿಸುವುದನ್ನು ಹೇರಿ ಅದು ಆಗಿದೆ ಎಂಬಂಥಾ ಅಂಕಿ-ಅಂಶಗಳನ್ನು ಅಪ್ಲೋಡ್ ಮಾಡುವ ಕ್ರಮವಷ್ಟೇ ಇಲ್ಲಿದೆ. * ಈ ಲಖ್ಪತಿ ದೀದಿ ಎಂಬ ಯೋಜನೆಯ ಟಾರ್ಗೆಟ್ ಗಮನಿಸಿ. ರಾಜ್ಯಕ್ಕೆ ನಿಗದಿಸಿದ ಗುರಿ 8 ಲಕ್ಷ. (ಇದು ವಾಸಿ! ಒಡಿಶಾದಂತಹ ರಾಜ್ಯ 25 ಲಕ್ಷ ಮಹಿಳೆಯರನ್ನು ಎರಡೇ ವರ್ಷಗಳಲ್ಲಿ ಕಿರು ಉದ್ಯಮ/ ಕೃಷಿ/ ಕೃಷಿ ಪೂರಕ ಚಟುವಟಕೆಗಳ ಮೂಲಕ ಲಕ್ಷಾಧಿಪತಿ ಮಾಡುವ ಟಾರ್ಗೆಟ್ ಹೊಂದಿದೆ. ನಾನೇ ರಾಜ್ಯದ ಈ ಅಭಿಯಾನದ ಸ್ಟಾಫ್ಗೆ ತರಬೇತಿ ನೀಡುವಾಗ ಹಲವಾರು ಮಂದಿ ತಾಲೂಕು ಮಟ್ಟದ ಸಿಬ್ಬಂದಿ ಇದು ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಕೇಳಿದ್ದರು. ಒಂದು ಪಂಚಾಯತ್ಲ್ಲಿ 150 ಉದ್ಯಮಶೀಲ ಮಹಿಳೆಯರ ಉದ್ಯಮಗಳು ಯಾವುವು? ಹಪ್ಪಳ-ಸೆಂಡಿಗೆ, ಸಾಂಬಾರು ಪುಡಿಯನ್ನು ಎಷ್ಟು ಮಂದಿ ಮಾಡುವುದು? ಒಂದು ತಾಲೂಕಲ್ಲಿ 30-40 ಪಂಚಾಯತ್ಗಳಿದ್ದು ಅಂದಾಜು 6-7 ಸಾವಿರ ಕಿರು ಉದ್ಯಮಗಳನ್ನು ಒಂದು ತಾಲೂಕು ಸುಸ್ಥಿರವಾಗಿ ನಡೆಸಿಕೊಂಡು ಹೋಗುವುದು ಸಾಧ್ಯವೇ? ಒಂದೊಂದಕ್ಕೂ ಕನಿಷ್ಠ 2 ಲಕ್ಷ ರೂ. ಬಂಡವಾಳ ಬೇಕೆಂದರೂ ಒಂದೊಂದು ತಾಲೂಕಿಗೂ ನೂರು ಕೋಟಿ ಸಾಲ ನೀಡಿಕೆ ಸಾಧ್ಯವಾಗಬೇಕು. ಈ ಅಸಂಬದ್ಧತೆ ಎಲ್ಲರಿಗೂ ಗೊತ್ತು. ಆದರೆ ದಿಲ್ಲಿಗೂ ಗೊತ್ತು. ಇಡೀ ಯೋಜನೆ ಸುಳ್ಳಿನ ಇಸ್ಪೀಟು ಕಾರ್ಡಿನ ಕಟ್ಟಡವಾಗುವ ಸಾಧ್ಯತೆ ನಿಚ್ಚಳವಾಗಿದೆ. ವಿಷಯ ಅದಲ್ಲ. ಇದನ್ನು ಮುಂದಿಟ್ಟು ತನ್ನ ಪ್ರಚಾರದ ಯಂತ್ರದ ಮೂಲಕ ಇದೊಂದು ಯಶಸ್ವಿ ಸಂಗತಿ ಎಂದು ಬಿಂಬಿಸಿಕೊಳ್ಳುವುದರಲ್ಲಿ ಮೋದಿ ಸರಕಾರ ಯಶಸ್ವಿಯಾಗಬಹುದು ಈ ಹಿನ್ನೆಲೆಯಲ್ಲಿ NRLMನ ಬಾಹುಳ್ಯವನ್ನೂ ಅದರ ವ್ಯಾಪ್ತಿಯನ್ನೂ ಸರಕಾರ ಗಮನಿಸಿ ಅದರ ಮೂಲಕ ಮಹಿಳೆಯನ್ನು ಕೇಂದ್ರೀಕರಿಸಿದ ಯೋಜನೆಗಳನ್ನು ಸಾದರಪಡಿಸಬೇಕಿದೆ. ಈಗ ವಿವಿಧ ನಿಗಮಗಳ ಮೂಲಕ ಕುರಿ-ಕೋಳಿ ಸಾಕಣೆಯ ಅನುದಾನಗಳೆಲ್ಲಾ ಕರ್ಪೂರ ಉರಿಸಿದಂತೆ ಯಾವ ಕುರುಹೂ ಉಳಿಸದೇ ಹೋಗಿದೆ. ಸರಕಾರಕ್ಕೆ ಯಾವುದೇ ಬಗೆಯ ಸಾಧನೆಯ ಕುರುಹು ಕೂಡಾ ಅಲ್ಲಿ ಕಂಡಿಲ್ಲ. ಆದ್ದರಿಂದ ಇವೆಲ್ಲವನ್ನೂ ಮರು ರಚನೆ ಮಾಡಿ ಸಂಜೀವಿನಿ ಪ್ಲಾಟ್ ಫಾರ್ಮ್ನ್ನು ಉಪಯೋಗಿಸಿಕೊಂಡು ಸರಕಾರವು ಹೊಸ ಕಾರ್ಯಕ್ರಮಗಳನ್ನು ಯೋಜಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಸೇರಿಸಬಹುದಾದ ಕೆಲವು NRLM ಕೇಂದ್ರಿತ ಕಾರ್ಯಕ್ರಮಗಳನ್ನು ಮುಂದಿಡಲು ಬಯಸುತ್ತೇನೆ. ಕೆಲವು ಸಲಹೆಗಳು: * ಮಹಿಳಾ ಸ್ವಸಹಾಯ ಒಕ್ಕೂಟಗಳಿಗೆ ಮಾರುಕಟ್ಟೆಗೆ ಉತ್ಪನ್ನ ಸಾಗಣೆಗೆ ನಾಲ್ಕು ಚಕ್ರದ ಕಿರು ಸಾಗಣೆ ವಾಹನದ ಸೌಲಭ್ಯ ಶಕ್ತಿ ಯೋಜನೆಯಿಂದ ಮಹಿಳೆಯರೂ ಮಾರುಕಟ್ಟೆಯ ಮುಖ ನೋಡಿದ್ದಾರೆ. ಆದರೆ ಹಳ್ಳಿಗಳ ಕೃಷಿ ಉತ್ಪನ್ನಗಳ ಸಂಗ್ರಹಣೆ ಇನ್ನೂ ಖಾಸಗಿ ಏಜೆಂಟನ ಕೈಯಲ್ಲೇ ಇದೆ. ಈ ದೃಷ್ಟಿಯಿಂದ ಸಂಜೀವಿನಿಯ ಗ್ರಾಮಮಟ್ಟದ ಒಕ್ಕೂಟಗಳಿಗೆ ಕಿರು ನಾಲ್ಕು ಚಕ್ರದ ಸರಕು ವಾಹನವೊಂದನ್ನು ಕೃಷಿ ಉತ್ಪನ್ನ ಸಂಗ್ರಹ ಮತ್ತು ಮಾರುಕಟ್ಟೆಗೆ ರವಾನೆ ಉದ್ದೇಶದಿಂದ ಕ್ರಮ ಕೈಗೊಳ್ಳಬಹುದು. ಸರಕಾರ ಇದಕ್ಕೆ ನಿಬಡ್ಡಿ ಸಾಲ ಒದಗಿಸಿದರೂ(ಸಬ್ಸಿಡಿ) ಸಾಕು. * ಕಿರು ಎಣ್ಣೆ ಗಾಣ ಮತ್ತು ಧಾನ್ ಸಂಸ್ಕರಣಾ ಘಟಕ: ಇದೇ ಒಕ್ಕೂಟದ ಮೂಲಕ ಕಿರು ಎಣ್ಣೆ ಗಾಣ ಮತ್ತು ದ್ವಿದಳ ಧಾನ್ಯ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ನೀಡಬಹುದು.ಅಸಲಿಗೆ ಮೌಲ್ಯವರ್ಧನೆ ಎಂಬ ಮರೀಚಿಕೆಯ ಬೆನ್ನು ಹತ್ತುವುದು ಬರೀ ಭ್ರಾಂತು. ಅದಾನಿಯೂ ಮಾಡುವುದು ಕಾಳಿನಿಂದ ಎಣ್ಣೆ, ಕಾಳಿನಿಂದ ಬೇಳೆ, ಅಷ್ಟೆ. ಇದನ್ನು ಸಣ್ಣ ಪ್ರಮಾಣದಲ್ಲಿ ಸ್ಥಾಪಿಸುವುದು ಕಷ್ಟವೇನಲ್ಲ. * ಕೆವಿಕೆಗಳ ಮುಖಾಂತರ ಕೃಷಿ ಕ್ಲಿನಿಕ್: ಮೈಸೂರಿನ ಜೆಎಸ್ಎಸ್ಕೆವಿಕೆ ಮಾದರಿಯಲ್ಲಿ ಕೃಷಿ ಕ್ಲಿನಿಕ್ಗಳನ್ನು ಆಯಾ ಕೆವಿಕೆಗಳು ನಗರದ ಮುಖ್ಯ ಭಾಗದಲ್ಲಿ ಆರಂಭಿಸಲು ಬೇಕಾದ ಕಿರು ಅನುದಾನ ನೀಡಬಹುದು. ಒಂದೊಂದು ಕೆವಿಕೆಗೂ ತಲಾ 25 ಲಕ್ಷ ನೀಡಿದರೂ ಈ ವಿಸ್ತರಣೆ, ಮಾಹಿತಿ ಮತ್ತು ಅಧಿಕೃತ ಔಷಧಿ, ಗೊಬ್ಬರಗಳ ಕೇಂದ್ರ ಸೃಷ್ಟಿಯಾದರೆ ರೈತರು ಹೆಚ್ಚು ಅನುಕೂಲ ಪಡೆಯಬಹುದು. ಇದರೊಂದಿಗೇ ಈಗಾಗಲೇ ಇರುವ ಕೃಷಿ ಸಖಿ ಮಾದರಿ ಪಶು ಸಖಿಯಷ್ಟು ಆಳವಾಗಿ ಊರಿಲ್ಲ. ಯಾಕೆಂದರೆ ಪ್ರಸ್ತಾವಿತ ಎಲ್ಲಾ ತರಬೇತಿಗಳೂ ನಡೆದಿಲ್ಲ. ಆದರೂ ಈ ಕೃಷಿ ಸಖಿಯರ ಮುಖಾಂತರ ಕೆವಿಕೆಗಳು ರೈತರ ಸಮಸ್ಯೆಗಳನ್ನು ತರಿಸಿಕೊಂಡು ಪರಿಹಾರ ಸೂಚಿಸಬಹುದು. * ಕೆಎಂಎಫ್ ಮೂಲಕ ಸುಸ್ಥಿರ ಕೃಷಿ ತರಬೇತಿ- ಸಂಜೀವಿನಿ ಸಹಯೋಗ: ಈಗಾಗಲೇ ಸಂಜೀವಿನಿ ಸಹಯೋಗದೊಂದಿಗೆ ಕೆಎಂಎಫ್ ಕ್ಷೀರ ಸಂಜೀವಿನಿ ಯೋಜನೆಯನ್ನು ಮಾಡುತ್ತಿದೆ. ಗ್ರಾಮೀಣ ಮಹಿಳೆಯರಿಗೆ ಹಸು ಸಾಕಣೆಯ ತರಬೇತಿ ಕೊಡುವ ಕೆಎಂಎಫ್ ಒಂದು ಹೆಜ್ಜೆ ಮುಂದಿಟ್ಟರೆ ಸುಸ್ಥಿರ ಕೃಷಿಯ ಪಾಠ ಹೇಳುವ ವೇದಿಕೆಯನ್ನು ಸೃಷ್ಟಿ ಮಾಡಬಹುದು. ಇದಕ್ಕೆ ಪ್ರತ್ಯೇಕ ಯೋಜನೆಯೇ ಬೇಕಿಲ್ಲ. ಸುಸ್ಥಿರ ಕೃಷಿ ಸಂಜೀವಿನಿಯ ಮೂಲ ಪ್ರಸ್ತುತಿ ಕೂಡಾ. ಕೆಎಂಎಫ್- ಸಂಜಿವಿನಿ ಸುಸ್ಥಿರ ಕೃಷಿ ಸಹಯೋಗೀ ಅಭಿಯಾನವನ್ನು ಸರಕಾರ 5 ಕೋಟಿ ಅನುದಾನ ಸಹಾಯದೊಂದಿಗೆ ಪ್ರೋತ್ಸಾಹಿಸಬಹುದು. * ಕೃಷಿ ಇಲಾಖೆಯ ವಿವಿಧ ವಸ್ತು ವಿಶೇಷಗಳನ್ನು ಸಬ್ಸಿಡಿಯಲ್ಲಿ ನೀಡುವ ಯೋಜನೆಯಲ್ಲಿ ಈ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಆದ್ಯತೆ ನೀಡಬೇಕು ಇದರ ಹೊರತಾಗಿ ಇನ್ನೂ ಒಂದೆರಡು ಸಂರಚನಾತ್ಮಕ ಸುಧಾರಣೆಗಳನ್ನು ಸರಕಾರ ಬಜೆಟ್ ಘೋಷಣೆ ಮೂಲಕ ಮಾಡಬೇಕಾಗಿದೆ. 1. ರೈತ ಉತ್ಪಾದಕ ಸಂಸ್ಥೆಗಳ ಕುರಿತಂತೆ 2. ಸೆಕೆಂಡರಿ ಕೃಷಿ ನಿರ್ದೇಶನಾಲಯ ಕುರಿತಂತೆ * ರೈತ ಉತ್ಪಾದಕ ಸಂಘಗಳ ಸ್ಥಾಪನೆಯಲ್ಲಿ ಏಕೀಕೃತ ವ್ಯವಸ್ಥೆ ಇಲ್ಲ. ಈ ಸಂಸ್ಥೆಗಳು ಬಹುತೇಕ ತನ್ನದೇ ಉತ್ಪನ್ನಗಳ ಮಾರಾಟದ ಬದಲು ಗೊಬ್ಬರ - ಕೀಟನಾಶಕಗಳ ಮಾರಾಟದ ಏಜೆಂಟುಗಳಾಗಿವೆ; ಅಷ್ಟೇ ಅಲ್ಲ. ಸಂಗ್ರಾಹಕ ಏಜೆಂಟರಾಗಿವೆ (Procuring agents). ಈ ಸಂಸ್ಥೆಗಳನ್ನು ಕೆಎಂಎಫ್ ಮಾದರಿಯಲ್ಲಿ ರಾಜ್ಯಮಟ್ಟದ ಒಕ್ಕೂಟವಾಗಿ ಮಾಡಿದಲ್ಲಿ ಸಂಸ್ಥೆಗಳ ದಕ್ಷತೆ ಹೆಚ್ಚುತ್ತದೆ. ಪರಸ್ಪರ ಸ್ಪರ್ಧಿಸುವ ಅನಾರೋಗ್ಯಕರ ಪೈಪೋಟಿಯೂ ತಪ್ಪುತ್ತದೆ. ಈ ಒಕ್ಕೂಟಕ್ಕೆ ಉತ್ಪನ್ನಗಳ ದಾಖಲೀಕರಣ ಮತ್ತು SಔP ನಿರ್ದಿಷ್ಟಪಡಿಸುವ mandate ನೀಡಬೇಕಿದೆ ಸೆಕೆಂಡರಿ ಕೃಷಿ ನಿರ್ದೇಶನಾಲಯವೊಂದನ್ನು ಹಿಂದಿನ ಸರಕಾರ ಆತುರಾತುರವಾಗಿ ಆರಂಭಿಸಿದ್ದು ಅದಕ್ಕೆ ಅನುದಾನವೂ ಸಾಕಷ್ಟು ದೊರಕಿಲ್ಲ. ಅಷ್ಟೇ ಅಲ್ಲ ಅದರ mandate ಕೂಡಾ ಸ್ಪಷ್ಟವಾಗಿಲ್ಲ. ಅಷ್ಟಿಷ್ಟು ಮೌಲ್ಯ ವರ್ಧನೆಯ ಚಿಲ್ಲರೆ ಪ್ರಸ್ತುತಿಗಳನ್ನು ಈ ನಿರ್ದೇಶನಾಲಯ ಮಾಡುತ್ತಿದ್ದು ಇದನ್ನು ಮುಚ್ಚಬಹುದಾಗಿದೆ. ಇಲ್ಲಾ, ಇದಕ್ಕೆ ಕೆವಿಕೆ ಮತ್ತಿತರ ಸಂಸ್ಥೆಗಳು ಮಾಡುತ್ತಿರುವ ಮೌಲ್ಯವರ್ಧನಾ ಕಸರತ್ತಿನಲ್ಲಿ duplication ಇಲ್ಲದಂತೆ streamline ಮಾಡಿ Monitoring and evaluation ಜವಾಬ್ದಾರಿಯನ್ನು ಸ್ಪಷ್ಟ ವಿವರಗಳೊಂದಿಗೆ ನೀಡಬೇಕು. ಈ ನಿರ್ದೇಶನಾಲಯವು ರಾಜ್ಯದ ವಿವಿಧ ಸಂಸ್ಥೆಗಳ ಕೆಲಸಗಳನ್ನು ಏಕೀಭೂತಗೊಳಿಸಿದರೂ ಸಾಕು. ಕೇಂದ್ರ ಸರಕಾರದ ಕೆಲವು ಯೋಜನೆಗಳ ಪೈಕಿ ‘ಒಂದು ಜಿಲ್ಲೆ ಒಂದು ಬೆಳೆ’ ಎಂಬುದು ಅಪದ್ಧ ಯೋಜನೆಯಾಗಿದ್ದು ಇದರಿಂದ ಆಯಾ ಜಿಲ್ಲೆಗಳಿಗೆ ಯಾವುದೇ ರೀತಿಯ ಪ್ರಯೋಜನ ಆಗಿರುವ ಪುರಾವೆ ಇಲ್ಲ. ಅಷ್ಟೇಕೆ ರೈತರು ಅಪಾರವಾಗಿ ಬೆಳೆದು ನಷ್ಟ ಅನುಭವಿಸಿರುವ ಉದಾಹರಣೆಗಳಿವೆ. ಆದ್ದರಿಂದ ಈ ಯೋಜನೆಯ ಬಗ್ಗೆ ಒಂದು ಮೌಲ್ಯಮಾಪನವನ್ನು ಮಾಡಿಸಬೇಕು.
“ದೊಡ್ಡ ಕಾರ್ಯಕ್ರಮಗಳಲ್ಲಿ ಕೆಲವು ಲೋಪಗಳು ಸಹಜ”: AI ಶೃಂಗಸಭೆಯನ್ನು ಶ್ಲಾಘಿಸಿದ ಸಂಸದ ಶಶಿ ತರೂರ್
ಎಐ ಶೃಂಗಸಭೆಯಲ್ಲಿನ ಅವ್ಯವಸ್ಥೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ಮೆಸ್ಕಾಂ ಮಾಣಿ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ಸತೀಶ್ ಪೂಜಾರಿ ನೇಮಕ
ಬಂಟ್ವಾಳ : ಮೆಸ್ಕಾಂ ಮಾಣಿ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಚ್ಚಿದಾನಂದ (ಸತೀಶ್) ಪೂಜಾರಿ ಅವರನ್ನು ನೇಮಕಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಸತೀಶ್ ಪೂಜಾರಿ ಅವರು ಕಳೆದ ಬಾರಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾಗಿ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ, ದ್ವಿತೀಯ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ
ಪೀಡೆನಾಶಕಗಳ ಶೇಷಾಂಶ ಇರುವ ಆಹಾರಗಳು ಆರೋಗ್ಯದ ಮೇಲೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಪೆಸ್ಟಿಸೈಡ್ ಆಕ್ಷನ್ ನೆಟ್ವರ್ಕ್-ಇಂಡಿಯಾ(ಪಿಎಎನ್-ಇಂಡಿಯಾ)ದ ಅಧ್ಯಯನದ ಪ್ರಕಾರ, ದೇಶದಲ್ಲಿ ಬಳಸುತ್ತಿರುವ 56 ಕೀಟನಾಶಕಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ; 38 ಪ್ರತಿರಕ್ಷಣ ವ್ಯವಸ್ಥೆಗೆ ಧಕ್ಕೆ ಹಾಗೂ 81 ಅಂತಸ್ರಾವಕ ಗ್ರಂಥಿ/ಹಾರ್ಮೋನ್ಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ. ಇವು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಸಂಜ್ಞಾನಾತ್ಮಕ ಕ್ರಿಯೆಗಳ ಮೇಲೆ ವಿಪರಿಣಾಮ ಬೀರುತ್ತವೆ. ಆಹಾರಧಾನ್ಯ ಮತ್ತು ಬೇಳೆಕಾಳುಗಳಿಗೆ ಹೋಲಿಸಿದರೆ, ತರಕಾರಿಗಳಲ್ಲಿ ಕೀಟನಾಶಕಗಳ ಶೇಷಾಂಶ ಹೆಚ್ಚು ಇರುತ್ತದೆ. ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ. ‘ನಮ್ಮದು ಕೃಷಿ ಪ್ರಧಾನ ದೇಶ’ ಎಂಬ ಮಾತು ಕ್ಲೀಷೆ ಆಗಿದೆ. ಆದರೆ, ಕೃಷಿಕರಿಗೆ ಏನು ಕೊಟ್ಟಿದ್ದೇವೆ ಮತ್ತು ಅವರ ಕುರಿತ ನಮ್ಮ ನಿಲುವು ಏನಿದೆ? ಇತ್ತೀಚಿನ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಕೃಷಿಕರ ಮೇಲೆ ಆಗುವ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಸಚಿವ ಪಿಯೂಷ್ ಗೋಯಲ್ ಅವರ ‘ಹತ್ತಿಯನ್ನು ಆಮದು ಮಾಡಿಕೊಂಡು, ಸಿದ್ಧ ಉಡುಪುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದರೆ ಬಾಂಗ್ಲಾಕ್ಕೆ ಸಿಕ್ಕಿದಂತೆ ಶೂನ್ಯ ಅನುರೂಪ(ರೆಸಿಪ್ರೋಕಲ್)ಸುಂಕ ಸೌಲಭ್ಯ ಸಿಗುತ್ತದೆ’ ಎಂಬ ಮಾತಿಗೆ ಹತ್ತಿ ಬೆಳೆಗಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ದೇಶದಲ್ಲಿ 2025-26ರಲ್ಲಿ ಹತ್ತಿ ಉತ್ಪಾದನೆ 29.22 ದಶಲಕ್ಷ ಬೇಲ್(1 ಬೇಲ್ಗೆ 170 ಕೆಜಿ) ಮತ್ತು ಅಮೆರಿಕದಲ್ಲಿ 2024-25ರಲ್ಲಿ 14.41 ದಶಲಕ್ಷ ಬೇಲ್(1 ಬೇಲ್=217 ಕೆಜಿ) ಹತ್ತಿ ಉತ್ಪಾದನೆಯಾಗಿದೆ. ಬೀಜ, ಕೀಟನಾಶಕ ಮತ್ತು ಕಾರ್ಮಿಕ ವೇತನ ಹೆಚ್ಚಳದಿಂದ ಹತ್ತಿ ಕೃಷಿ ಲಾಭದಾಯಕವಾಗಿಲ್ಲ; ಆಮದಿನಿಂದ ದೇಶಿ ರೈತರು ಅನಿರ್ಬಂಧಿತ ಜಾಗತಿಕ ಸ್ಪರ್ಧೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಇದರಿಂದ ದೇಶಿ ಹತ್ತಿ ಬೆಲೆ ಕುಸಿಯುತ್ತದೆ ಮತ್ತು ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಬೇಳೆಕಾಳುಗಳ ಆಮದಿಗೆ ಶೂನ್ಯ ಸುಂಕದ ರಿಯಾಯಿತಿ ನೀಡಿದರೆ ತೊಗರಿ, ಉದ್ದು, ಹೆಸರು ಬೆಳೆಗಾರರು ಏನಾಗಬೇಕು? ಕಾಕತಾಳೀಯ ಎನ್ನುವಂತೆ ಸೋಯಾ ಬೆಲೆ ಕುಸಿದಿದೆ. ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಇದು ಒಂದು ಆಯಾಮ. ಇನ್ನೊಂದು ಆಯಾಮವೆಂದರೆ ಹವಾಮಾನ ಬದಲಾವಣೆ, ಭೂ ಹಿಡುವಳಿ ಕುಸಿತ, ನೀರು/ವಿದ್ಯುತ್ ಕೊರತೆ, ಇಳುವರಿ ಕುಸಿತ, ಬ್ಯಾಂಕ್ ಸಾಲ ಅಲಭ್ಯತೆ, ಸಬ್ಸಿಡಿ ವಿತರಣೆಯಲ್ಲಿ ಗೊಂದಲ ಹಾಗೂ ಬೀಜ-ಕೂಲಿ ವೆಚ್ಚ ಹೆಚ್ಚಳದಿಂದ ಕೃಷಿ ಅನುತ್ಪಾದಕವಾಗಿ ಪರಿಣಮಿಸಿದೆ. ಒಂದರ್ಥದಲ್ಲಿ ಜೂಜು. ಹೀಗಿದ್ದರೂ, ಶೇ.70ರಷ್ಟು ಗ್ರಾಮೀಣ ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ ಮತ್ತು ಶೇ. 86ರಷ್ಟು ರೈತರ ಹಿಡುವಳಿ 2 ಹೆಕ್ಟೇರಿಗಿಂತ ಕಡಿಮೆ ಇದೆ. ಕೃಷಿ ಭೂಮಿಯಲ್ಲಿ ಶೇ. 55ರಷ್ಟು ಮಳೆಯಾಧರಿತ; ಆದರೆ, ಈ ಭೂಮಿ ಶೇ. 46ರಷ್ಟು ಆಹಾರ ಧಾನ್ಯ ಮತ್ತು ಶೇ. 60ರಷ್ಟು ಮೇವು ಉತ್ಪಾದಿಸುತ್ತದೆ. ಸಣ್ಣ/ಮಧ್ಯಮ ರೈತರು ಒಟ್ಟು ಉತ್ಪಾದನೆಯಲ್ಲಿ ಶೇ. 70ರಷ್ಟು ತರಕಾರಿ ಹಾಗೂ ಶೇ. 50ಕ್ಕಿಂತ ಹೆಚ್ಚು ಹಣ್ಣು/ದ್ವಿದಳ ಧಾನ್ಯ ಬೆಳೆಯುತ್ತಾರೆ. ಆದರೆ, ದುರ್ಬಲ ಪೂರೈಕೆ ಸರಪಳಿ, ಮೌಲ್ಯವರ್ಧನೆ ಸಮಸ್ಯೆ ಮತ್ತು ಸಣ್ಣ ಹಿಡುವಳಿಯಿಂದಾಗಿ ಉತ್ಪನ್ನಗಳನ್ನು ಮಾರಲು ಪರದಾಡುತ್ತಿದ್ದಾರೆ. ಹೇಗಾದರೂ ಸರಿ, ಬೆಳೆಯನ್ನು ಉಳಿಸಿಕೊಂಡು ಬದುಕು ನೀಗಿಸಲೇಬೇಕಾದ ತುರ್ತಿನಲ್ಲಿ ರಸಗೊಬ್ಬರ ಮತ್ತು ಪೀಡೆನಾಶಕಗಳ ಅತಿ ಬಳಕೆ ಆಗುತ್ತಿದೆ. ಇದರಿಂದ ಆಹಾರ ವಿಷವಾಗಿದೆ ಮತ್ತು ರಫ್ತು ಮಾಡಿದ ಉತ್ಪನ್ನಗಳಲ್ಲಿ ಕೀಟನಾಶಕಗಳ ಶೇಷಾಂಶದಿಂದ ದೇಶಿ ಉತ್ಪನ್ನಗಳು ನಿಷೇಧ-ನಿರ್ಬಂಧಕ್ಕೆ ಪಕ್ಕಾಗುತ್ತಿವೆ. ಸರಪಳಿ ಪ್ರತಿಕ್ರಿಯೆ ನವೆಂಬರ್ 14, 2023ರಂದು ಯುರೋಪಿಯನ್ ಕಮಿಷನ್, ಜರ್ಮನಿಗೆ ರಫ್ತಾಗಿದ್ದ ಅರಿಶಿನದ ಪುಡಿಯಲ್ಲಿ ಹಲವು ದೇಶಗಳಲ್ಲಿ ನಿಷೇಧಿತ ಕ್ಲೋರ್ಪೈರಿಫಾಸ್ ಕೀಟನಾಶಕದ ಶೇಷಾಂಶ ಇದೆ ಎಂದು ಹೇಳಿತು. ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಿ ಈ ಕೀಟನಾಶಕವನ್ನು ಯುರೋಪಿನಲ್ಲಿ ನಿಷೇಧಿಸಲಾಗಿದೆ. 2020ರಲ್ಲಿ ದೇಶದಲ್ಲಿ ನಿಷೇಧಿಸಲು ಉದ್ದೇಶಿಸಿದ್ದ 27 ಅತಿ ವಿಷಯುಕ್ತ ಪೀಡೆನಾಶಕಗಳಲ್ಲಿ ಕ್ಲೋರ್ಪೈರಿಫಾಸ್ ಕೂಡ ಒಂದು. ಆದರೆ, ಸರಕಾರ ಉದ್ಯಮದ ವಿರೋಧದ ಹಿನ್ನೆಲೆಯಲ್ಲಿ ಉಲ್ಟಾ ಹೊಡೆದು, ನಿಷೇಧವನ್ನು 4 ಕೀಟನಾಶಕಗಳಿಗೆ ಸೀಮಿತಗೊಳಿಸಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಮಾಹಿತಿ ಪ್ರಕಾರ, 2020-21ರಲ್ಲಿ 63,000 ಟನ್ ಪೀಡೆನಾಶಕಗಳು ಬಳಕೆಯಾಗಿವೆ. ಬಿತ್ತನೆ ಬೀಜಗಳನ್ನು ಕೀಟನಾಶಕದಲ್ಲಿ ಅದ್ದುವ ಮೂಲಕ ಆರಂಭಗೊಳ್ಳುವ ಈ ಕ್ರಿಯೆ, ಕಟಾವಿನವರೆಗೆ ಮುಂದುವರಿಯುತ್ತದೆ. ಹವಾಮಾನ ಬದಲಾವಣೆಯಿಂದ ಹೊಸ ಕೀಟ-ರೋಗಗಳು ಹೆಚ್ಚಿದ್ದು, ಅದಕ್ಕೆ ಅನುಗುಣವಾಗಿ ಪೀಡೆನಾಶಕ ಬಳಕೆಯೂ ಹೆಚ್ಚಿದೆ. ಕೃಷಿ ದುಬಾರಿಯಾಗಿರುವುದರಿಂದ, ಬೆಳೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಪೀಡೆನಾಶಕಗಳ ಶೇಷಾಂಶ ಇರುವ ಆಹಾರಗಳು ಆರೋಗ್ಯದ ಮೇಲೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಪೆಸ್ಟಿಸೈಡ್ ಆಕ್ಷನ್ ನೆಟ್ವರ್ಕ್-ಇಂಡಿಯಾ(ಪಿಎಎನ್-ಇಂಡಿಯಾ)ದ ಅಧ್ಯಯನದ ಪ್ರಕಾರ, ದೇಶದಲ್ಲಿ ಬಳಸುತ್ತಿರುವ 56 ಕೀಟನಾಶಕಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ; 38 ಪ್ರತಿರಕ್ಷಣ ವ್ಯವಸ್ಥೆಗೆ ಧಕ್ಕೆ ಹಾಗೂ 81 ಅಂತಸ್ರಾವಕ ಗ್ರಂಥಿ/ಹಾರ್ಮೋನ್ಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ. ಇವು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಸಂಜ್ಞಾನಾತ್ಮಕ ಕ್ರಿಯೆಗಳ ಮೇಲೆ ವಿಪರಿಣಾಮ ಬೀರುತ್ತವೆ. ಆಹಾರಧಾನ್ಯ ಮತ್ತು ಬೇಳೆಕಾಳುಗಳಿಗೆ ಹೋಲಿಸಿದರೆ, ತರಕಾರಿಗಳಲ್ಲಿ ಕೀಟನಾಶಕಗಳ ಶೇಷಾಂಶ ಹೆಚ್ಚು ಇರುತ್ತದೆ. ಆಹಾರ ಧಾನ್ಯಗಳಲ್ಲಿ ಇರಬಹುದಾದ ಗರಿಷ್ಠ ಶೇಷಾಂಶ ಮಟ್ಟ(ಎಂಆರ್ಎಲ್)ವನ್ನು ನಿಗದಿಪಡಿಸಲಾಗಿದೆ. ವರ್ಗೀಕರಣ ಮತ್ತು ಮಾರುಕಟ್ಟೆಯ ಅಗಾಧತೆ ಪೀಡೆನಾಶಕಗಳು ಎನ್ನುವುದು ಕೀಟನಾಶಕ, ಕಳೆನಾಶಕ, ಶಿಲೀಂಧ್ರನಾಶಕ, ದಂಶಕ ನಾಶಕ, ಚಿಗಟ ಮತ್ತು ದುಂಡು-ಜಂತು ಹುಳನಾಶಕಗಳನ್ನು ಒಳಗೊಂಡ ಗುಂಪು. ಇವುಗಳಲ್ಲಿ 3 ವಿಧ; ನಿರ್ದಿಷ್ಟ ಗುರಿ ಇರುವಂಥವು (ಉದಾಹರಣೆಗೆ, ಕೀಟನಾಶಕ, ಸಸ್ಯನಾಶಕ, ಶಿಲೀಂಧ್ರನಾಶಕ), ಪ್ರತಿಕ್ರಿಯೆ ವಿಧಾನ (ನರ ವಿಷ, ಬೆಳವಣಿಗೆ ನಿಯಂತ್ರಕ ಇತ್ಯಾದಿ) ಮತ್ತು ರಾಸಾಯನಿಕ ರಚನೆ (ಉದಾ: ಆರ್ಗಾನೋಫಾಸ್ಫೇಟ್, ಪೈರೆಥ್ರಾಯ್ಡ್ಸ್ ಇತ್ಯಾದಿ). ಹೆಚ್ಚು ಬಳಕೆಯಲ್ಲಿರುವ ಮಾನೊಕ್ರೊಟೋಫಾಸ್(ಪಕ್ಷಿಗಳು/ಮನುಷ್ಯರಿಗೆ ತೀವ್ರ ವಿಷಕರ; ಸೆಪ್ಟಂಬರ್ 2023ರಲ್ಲಿ ನಿಷೇಧಿಸಲಾಯಿತು), ಪೈರೆಥ್ರಾಯ್ಡ್ಸ್(ಬವಳಿ ಬರುವಿಕೆ/ ಪ್ರಜ್ಞೆ ತಪ್ಪುವಿಕೆಯಲ್ಲದೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ) ಹಾಗೂ ಶಿಲೀಂಧ್ರನಾಶಕಗಳು ಕಣ್ಣು ಮತ್ತು ಚರ್ಮಕ್ಕೆ ಹಾನಿಕರ. ಪೀಡೆನಾಶಕ ಉದ್ಯಮ ಅಗಾಧವಾದದ್ದು; ಜಗತ್ತಿನಲ್ಲಿ ವರ್ಷಕ್ಕೆ 3 ಶತ ಕೋಟಿ ಟನ್ ಪೀಡೆನಾಶಕ ಬಳಕೆಯಾಗುತ್ತಿದ್ದು, ಇದರ ಮೌಲ್ಯ 40 ಶತಕೋಟಿ ಡಾಲರ್. ಏಶ್ಯದಲ್ಲಿ ಭಾರತಕ್ಕೆ ಮೂರನೇ ಸ್ಥಾನ. ನಮ್ಮ ದೇಶದಲ್ಲಿ 339 ಪೀಡೆನಾಶಕಗಳು ನೋಂದಣಿಯಾಗಿವೆ. ಇವುಗಳಲ್ಲಿ 118ನ್ನು ಅತಿ ಹೆಚ್ಚು ಅಪಾಯಕಾರಿ(ಎಚ್ಎಚ್ಪಿಎಸ್) ಎಂದು ವರ್ಗೀಕರಿಸಲಾಗಿದೆ ಎಂದು ಪೆಸ್ಟಿಸೈಡ್ ಆಕ್ಷನ್ ನೆಟ್ವರ್ಕ್ ಇಂಡಿಯಾ ಹೇಳುತ್ತದೆ. ಈ ವಲಯವನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (ಸಿಐಬಿಆರ್ಸಿ) ನಿಯಂತ್ರಿಸುತ್ತದೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಕೀಟಗಳಿಂದ ಅಂದಾಜು ಶೇ.30ರಷ್ಟು ಬೆಳೆ ಹಾನಿ ಆಗುತ್ತಿದೆ ಮತ್ತು ಇದರ ಮೌಲ್ಯ 90,000 ಕೋಟಿ ರೂ. 2024ರಲ್ಲಿ ಮಾರಾಟವಾದ ಪೀಡೆನಾಶಕಗಳ ಮೊತ್ತ 31,600 ಕೋಟಿ ರೂ. ಮತ್ತು ವಾರ್ಷಿಕ ಬೆಳವಣಿಗೆ ಶೇ.8 ಇದೆ. 2018ರಿಂದ ಪೀಡೆನಾಶಕಗಳ ಆಮದು ಶೇ.15ರಷ್ಟು ಹೆಚ್ಚಿದೆ. ಕೃಷಿ ಭೂಮಿಯ ಶೇ.40ರಷ್ಟರಲ್ಲಿ ಮತ್ತು ಶೇ.50ರಷ್ಟು ತರಕಾರಿ-ಹಣ್ಣುಗಳ ಕೃಷಿಯಲ್ಲಿ ಪೀಡೆನಾಶಕಗಳು ಬಳಕೆಯಾಗುತ್ತಿವೆ. ರಾಜ್ಯಗಳಲ್ಲಿ ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ. ಆನಂತರ ಉತ್ತರಪ್ರದೇಶ, ಪಂಜಾಬ್, ತೆಲಂಗಾಣ, ಹರ್ಯಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ಕರ್ನಾಟಕ (ವಾರ್ಷಿಕ 1,669 ಮೆಟ್ರಿಕ್ ಟನ್). ರಾಜ್ಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು- ಗ್ಲೈಫೋಸೇಟ್ ಶೇ. 41 ಮತ್ತು ಶೇ. 71, ಎಮಾಮಾಕ್ಟಿನ್ ಬೆಂಜೋಯೇಟ್ ಶೇ. 5, ಕೊರಾಜೆನ್ ಶೇ. 18.5 ಮತ್ತು ಪೆಕ್ಸಾಲಾನ್ ಶೇ. 10 (ಮಾಹಿತಿ; ಡಿಪಿಪಿಕ್ಯುಎಸ್-ಸಸ್ಯ ರಕ್ಷಣೆ, ಸಂಪರ್ಕರೋಧ ಹಾಗೂ ಸಂಗ್ರಹಣೆ ನಿರ್ದೇಶನಾಲಯ). ಮಳೆ ಬಂದಾಗ ಇಲ್ಲವೇ ನೀರು ಹರಿಸಿದಾಗ, ಬೆಳೆಗೆ ಹೊಡೆದ ಪೀಡೆನಾಶಕಗಳು ಭೂಮಿಯಲ್ಲಿ ಇಂಗಿ ಅಂತರ್ಜಲವನ್ನು ವಿಷಮಯಗೊಳಿಸುತ್ತಿವೆ. ಸರಕಾರದ ಉಪಕ್ರಮಗಳು ಎಪ್ರಿಲ್-ಮೇ 1958ರಲ್ಲಿ ಕೇರಳ ಮತ್ತು ಮದ್ರಾಸ್ (ಈಗ ತಮಿಳುನಾಡು)ನಲ್ಲಿ ಸಂಭವಿಸಿದ ವಿಷಪ್ರಾಶನ ಘಟನೆಯಲ್ಲಿ 100ಕ್ಕೂ ಹೆಚ್ಚು ಜನ ಸಾವಿಗೀಡಾದರು. ಗೋಧಿಯನ್ನು ಸಾಗಿಸುವಾಗ ಪ್ಯಾರಾಥಿಯಾನ್(ಇನ್ನೊಂದು ಹೆಸರು-ಫಾಲಿಡಾಲ್. ಒಂದು ಆರ್ಗನೊಫಾಸ್ಫೇಟ್ ಕೀಟನಾಶಕ) ಮಿಶ್ರಗೊಂಡಿದ್ದು ದುರಂತಕ್ಕೆ ಕಾರಣ. ಈ ಪ್ರಕರಣವು ಕೀಟನಾಶಕಗಳ ಕಾಯ್ದೆ 1968 ಜಾರಿಗೆ ಕಾರಣವಾಯಿತು. ಈಗ ಕೀಟನಾಶಕಗಳ ಸಂಖ್ಯೆ ಹೆಚ್ಚಿರುವುದರಿಂದ, ಆ ಕಾಯ್ದೆ ಅಪ್ರಸ್ತುತವಾಗಿದೆ. ಪಿಎಎನ್-ಇಂಡಿಯಾ ಆರ್ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ವ್ಯಾಪಕವಾಗಿ ಬಳಕೆಯಲ್ಲಿರುವ 62 ಕೀಟನಾಶಕಗಳು ‘ಪರಿಭಾವಿತ ನೋಂದಣಿ’ ಆಗಿದ್ದು, ಇವುಗಳಿಗೆ ಎಂಆರ್ಎಲ್ ನಿಗದಿಗೊಳಿಸಿಲ್ಲ. 2008ರಲ್ಲಿ ಕೀಟನಾಶಕ ಕಾಯ್ದೆಯನ್ನು ಉತ್ತಮಗೊಳಿಸುವ ಪ್ರಯತ್ನ ನಡೆಯಿತು. ಕೆಲವು ಉತ್ತಮ ಅಂಶಗಳಿದ್ದ ಕೀಟನಾಶಕ ಮಸೂದೆ 2020ನ್ನು ಉದ್ಯಮದ ಒತ್ತಡದಿಂದ ಬದಿಗೊತ್ತಿ, ಸ್ಥಾಯಿ ಸಮಿತಿಗೆ ರವಾನಿಸಲಾಯಿತು; ಕಡತ ಈವರೆಗೆ ಮಿಸುಕಾಡಿಲ್ಲ. ಇದರಿಂದ 1968ರಿಂದ ಬಳಕೆಯಲ್ಲಿರುವ ಕೀಟನಾಶಕಗಳಲ್ಲದೆ, ನೋಂದಣಿಯೇ ಆಗದವನ್ನೂ ಯಥೇಚ್ಛವಾಗಿ ಬಳಸಲಾಗುತ್ತಿದೆ. ಕೇಂದ್ರ ಸರಕಾರ 2005-06ರಲ್ಲಿ ಕೀಟನಾಶಕಗಳಲ್ಲಿ ಶೇಷಾಂಶದ ಪರಾಮರ್ಶೆಗೆ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿತು. 20 ವರ್ಷಗಳ ಬಳಿಕವೂ ಈ ಸಂಬಂಧ ಸಾಕಷ್ಟು ದತ್ತಾಂಶ ಸಂಗ್ರಹವಾಗಿಲ್ಲ; ಇದೊಂದು ಗಂಭೀರ ಸಮಸ್ಯೆ ಆಗಿದ್ದರೂ, ನಿರ್ಲಕ್ಷಿಸಲಾಗಿದೆ. ದಿಲ್ಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ಐಎಆರ್ಐ) ನೇತೃತ್ವದಲ್ಲಿ ಕೀಟನಾಶಕ ಶೇಷಾಂಶ ಕುರಿತ ಅಖಿಲ ಭಾರತ ಕಾರ್ಯಜಾಲ ಯೋಜನೆ(ಎಐಎನ್ಪಿ-ಪಿ ಆರ್) ಚಾಲ್ತಿಯಲ್ಲಿದೆ. 2019ರಲ್ಲಿ ಭಾರತೀಯ ಆಹಾರ ಸುರಕ್ಷೆ ಮತ್ತು ಪ್ರಮಾಣಕ ಪ್ರಾಧಿಕಾರ(ಎಫ್ಎಸ್ಎಸ್ಎಐ) ಪರಿಶೀಲಿಸಿದ ತರಕಾರಿ, ಹಣ್ಣು, ಸಂಬಾರ ಪದಾರ್ಥ, ಕರಿಬೇವು, ಅಕ್ಕಿ, ಗೋಧಿ, ಬೇಳೆ ಕಾಳು, ಮೊಟ್ಟೆ, ಮಾಂಸ ಮತ್ತು ನೀರಿನ 23,660 ಮಾದರಿಗಳಲ್ಲಿ ಶೇ.20ರಲ್ಲಿ(4,510) ಕೀಟನಾಶಕ ಶೇಷಾಂಶ ಪತ್ತೆಯಾಯಿತು. ಆದರೆ, ಇದರಲ್ಲಿ ಕೇವಲ ಶೇ.2.2ರಷ್ಟರಲ್ಲಿ ಮಾತ್ರ ಶೇಷಾಂಶವು ಗರಿಷ್ಠ ಮಟ್ಟವನ್ನು ಮೀರಿದೆ ಎಂದಿತು. ಸಮಸ್ಯೆ ಏನೆಂದರೆ, ದೇಶ ನಿಗದಿಪಡಿಸಿರುವ ಎಂಆರ್ಎಲ್, ಅಮೆರಿಕ/ಯುರೋಪ್ ನಿಗದಿಪಡಿಸಿರುವ ಸುರಕ್ಷಾ ಮಿತಿಗೆ ಅನುಗುಣವಾಗಿಲ್ಲ. ಇದರಿಂದ ದೇಶದಿಂದ ರಫ್ತಾದ ಉತ್ಪನ್ನಗಳು ವಿದೇಶದಲ್ಲಿ ನಿರ್ಬಂಧ/ನಿಷೇಧಕ್ಕೆ ಒಳಗಾಗುತ್ತಿವೆ. ಇದರ ಜೊತೆಗೆ, ಬೇರೆ ದೇಶಗಳಲ್ಲಿ ನಿಷೇಧಿಸಿದ ಅಥವಾ ನಿರ್ಬಂಧಿಸಿರುವ ಕೀಟನಾಶಕಗಳು ಆಮದಾಗುತ್ತಿವೆ. 2013ರಲ್ಲಿ 66 ಕೀಟನಾಶಕಗಳ ಪರಾಮರ್ಶನಕ್ಕೆ ನೇಮಿಸಿದ ಸಮಿತಿ, 2015ರಲ್ಲಿ ನೀಡಿದ ಹಲವು ಶಿಫಾರಸುಗಳು ಕಡತದಲ್ಲೇ ಉಳಿದುಕೊಂಡಿವೆ. 2022ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯವು 46 ಪೀಡೆನಾಶಕಗಳನ್ನು ಹಾಗೂ 5 ಪೀಡೆನಾಶಕಗಳ ಆಮದು ನಿಷೇಧಿಸಿತು; 8ರ ನೋಂದಣಿ ಹಿಂಪಡೆಯಿತು ಹಾಗೂ 9ರ ಬಳಕೆ ಮೇಲೆ ಮಿತಿ ಹೇರಿತು. ಸಮಸ್ಯೆಯ ಅಗಾಧತೆಯನ್ನು ಪರಿಗಣಿಸಿದರೆ, ಇದು ಏನೇನೂ ಸಾಲದು. ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯ ಎನ್ನಲಾದ ಜೈವಿಕ ಕೀಟನಾಶಕಗಳು ಕೂಡ ದುರ್ಬಲ ನಿಯಂತ್ರಣ ವ್ಯವಸ್ಥೆಯಿಂದ ಸಮಸ್ಯೆ ಸೃಷ್ಟಿಸಿವೆ. ಹಲವು ಕೀಟನಾಶಕಗಳನ್ನು ಮಿಶ್ರಗೊಳಿಸಿ, ‘ಸ್ವಾಭಾವಿಕ ಕೀಟನಾಶಕ’ ಎಂದು ಮಾರಲಾಗುತ್ತಿದೆ. ಜೊತೆಗೆ, ಇವು ದುಬಾರಿ ಕೂಡ. ಅಕ್ರಮ ಇಲ್ಲವೇ ನಕಲು ಕೀಟನಾಶಕಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ವಿಚಕ್ಷಣ ದಳಕ್ಕೆ ದೂರುಗಳು ಹೆಚ್ಚುತ್ತಲೇ ಇವೆ. ಆದರೆ, ದಂಧೆ ಮಾತ್ರ ನಿಂತಿಲ್ಲ. ಕೀಟನಾಶಕಗಳಲ್ಲಿ ವಿಷ ವಸ್ತು ‘ನಿಗದಿಪಡಿಸಿದ ಮಿತಿ’ಯಲ್ಲಿ ಇದ್ದರೂ, ಅದರಿಂದ ಜೈವಿಕ ವೈವಿಧ್ಯಕ್ಕೆ ಹಾನಿ ತಪ್ಪುವುದಿಲ್ಲ; ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಎರೆಹುಳು, ಅಕಶೇರುಕಗಳು ಹಾಗೂ ಶಿಲೀಂಧ್ರಗಳ ಮೇಲೆ ವಿಪರಿಣಾಮ ಬೀರುತ್ತದೆ. ಕೀಟನಾಶಕಗಳ ಬಳಕೆ, ದುಷ್ಪರಿಣಾಮ ಕುರಿತ ಮಾಹಿತಿಯಲ್ಲಿ ಪಾರದರ್ಶಕತೆ ಇಲ್ಲ. ಕೀಟನಾಶಕಗಳ ಅಧಿಕ ಬಳಕೆಯನ್ನು ತಡೆಯಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಜನವರಿ 2023ರಲ್ಲಿ ಎಫ್ಎಸ್ಎಸ್ಎಐಗೆ ನೋಟಿಸ್ ನೀಡಿತ್ತು. ಪ್ರಾಧಿಕಾರ ಈ ಸಂಬಂಧ ಆಯೋಗಕ್ಕೆ ವರದಿ ಸಲ್ಲಿಸಿತು; ಆದರೆ, ವರದಿ ಬಹಿರಂಗಗೊಳ್ಳಲಿಲ್ಲ. ಕೀಟನಾಶಕ ಶೇಷಾಂಶ ಕುರಿತು ನಿಯತವಾಗಿ ಪರಾಮರ್ಶನ ನಡೆಯದೆ ಇರುವುದರಿಂದ, ಅಮೆರಿಕದ ರಾಪಿಡ್ ಅಲರ್ಟ್ ಸಿಸ್ಟಮ್ ಫಾರ್ ಫುಡ್ ಆಂಡ್ ಫೀಡ್(ಆರ್ಎಎಸ್ಎಫ್ಎಫ್) ಅಥವಾ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ನೀಡುವ ಮಾಹಿತಿಯನ್ನೇ ಅವಲಂಬಿಸ ಬೇಕಾಗಿ ಬಂದಿದೆ. ಅಮೆರಿಕ ಮತ್ತು ಯುರೋಪಿನಲ್ಲಿ ನಿಕೋಟಿನಾಯ್ಡ್(ಇವು ಪರಾಗಸ್ಪರ್ಶ ಮಾಡುವ ದುಂಬಿಗಳಿಗೆ ಅಪಾಯಕರ)ಗಳನ್ನು ನಿರ್ಬಂಧಿಸಲಾಗಿದೆ; ಯುರೋಪ್ ನಿಗದಿಪಡಿಸಿದಕ್ಕಿಂತ ಅಧಿಕ ನಿಕೋಟಿನಾಯ್ಡ್ ಅಂಶ ಇರುವ ಕೀಟನಾಶಕಗಳ ರಫ್ತು ನಿಷೇಧಿಸಿದೆ. ನಮ್ಮಲ್ಲೂ ನಕಲು ಪೀಡೆನಾಶಕಗಳನ್ನು ತೊಡೆಯಲು ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಬೇಕು; ಲಾಬಿಗೆ ಮಣಿಯದೆ ಅಪಾಯಕರ ಪೀಡೆನಾಶಕಗಳನ್ನು ನಿಷೇಧಿಸಬೇಕು. ಅವುಗಳ ಬಳಕೆಯಿಂದ ಜನಾರೋಗ್ಯ ಮತ್ತು ಜೈವಿಕ ವೈವಿಧ್ಯಕ್ಕೆ ತಗಲುವ ಧಕ್ಕೆ ಬಗ್ಗೆ ರೈತರು ಮತ್ತು ಗ್ರಾಹಕರಲ್ಲಿ ಅರಿವು ಮೂಡಿಸಬೇಕು. ರಾಸಾಯನಿಕ ಕೃಷಿಯ ವ್ಯಾಪ್ತಿಯನ್ನು ಪರಿಗಣಿಸಿದರೆ, ಸಾವಯವ ಕೃಷಿಯನ್ನು ಉತ್ತೇಜಿಸಲು ನಡೆದಿರುವ ಪ್ರಯತ್ನಗಳು ಸಾಲದು. ರೈತರ ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಲೆ ನೀಡಿದರೆ, ಅವರ ಸಬಲೀಕರಣ ತನ್ನಿಂತಾನೇ ಆಗುತ್ತದೆ. ‘2022-23ರೊಳಗೆ ರೈತರ ಆದಾಯ ದುಪ್ಪಟ್ಟು’ ಘೋಷಣೆ ಇಲ್ಲವೇ ನೇರ ನಗದು ವರ್ಗಾವಣೆ ಮೂಲಕ ಬಿಡಿಗಾಸು ಹಂಚುವುದರಿಂದ ರಾಜಕೀಯ ಪಕ್ಷಗಳಿಗೆ ಪ್ರಯೋಜನ ಆಗಬಹುದು; ಆದರೆ, ರೈತರ ಉದ್ಧಾರ ಸಾಧ್ಯವಿಲ್ಲ. ಜನರಿಗೆ ಸುರಕ್ಷಿತ ಆಹಾರದ ಹಕ್ಕು ಇದೆ; ಇದಕ್ಕಾಗಿ ಅವರಲ್ಲಿ ಜಾಗೃತಿ ಮೂಡಬೇಕಿದೆ. ಅವರು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಕು.
ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಇಂದು (ಫೆ.20-ಶುಕ್ರವಾರ) ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ದಾಖಲಾಗಿದೆ.ಈ ನಿರಂತರ ಏರಿಕೆ ಗ್ರಾಹಕರ ಬೇಸರಕ್ಕೆ ಕಾರಣವಾಗಿದ್ದು, ಬೆಲೆ ಇಳಿಕೆಯತ್ತ ಮುಖ ಮಾಡುವುದನ್ನು ಕಾಯುತ್ತಿದ್ದಾರೆ. ಇಲ್ಲಿದೆ ಮಹಿತಿ.
ಅಮೆರಿಕಾ ಹಾಗೂ ಇರಾನ್ ನಡುವೆ ಸಂಘರ್ಷ ಸದ್ಯ ಯುದ್ದ ಕಾಲಕ್ಕೆ ನಾಂದಿ ಹಾಡುತ್ತಿದ್ದು, ಈ ನಡುವೆ ಇರಾನ್ 10-15ದಿನಗಳೊಳಗೆ ಒಪ್ಪಂದ ಮಾಡಿಕೊಳ್ಳಬೇಕು ಇಲ್ಲದಿದ್ದರೆ, ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಯುದ್ದ ಆರಂಭಿಸಲು ಟ್ರಂಪ್ ಡೆಡ್ ಲೈನ್ ಕೊಟ್ಟಿದ್ದಾರೆ. ಈ ಕುರಿತು ಬೋರ್ಡ್ ಆಫ್ ಪೀಸ್ ನಲ್ಲಿ ಮಾತನಾಡಿ ಯುದ್ದ ಅಥವಾ ಒಪ್ಪಂದ ಎರಡೂ ಆಯ್ಕೆಗಳು ಇರಾನ್ ಕೈಯಲ್ಲಿವೆ ಎಂದು ಸ್ಪಷ್ಟಪಡಿಸಿದ್ದು, ಇರಾನ್ ಅಮೆರಿಕಾದ ಒಪ್ಫಂದಕ್ಕೆ ಒಪ್ಪಿಕೊಳ್ಳದೇ ಇದ್ದು, ಹಠಕ್ಕೆ ಬಿದ್ದಂತೆ ಕಾಣಿಸುತ್ತಿದ್ದ, ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಯುದ್ದದ ಹೊಗೆ ಹರಡಲು ಆರಂಭವಾಗಿದ್ದು, ಮುಂದಿನ 10-15ದಿನಗಳ ಬಳಿಕ ಏನಾಗಲಿದೆ ಎಂದು ಕಾದುನೋಡಬೇಕಷ್ಟೆ.
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಜಾರಿ
ಬಾಗಲಕೋಟೆ: ಶಿವಾಜಿ ಜಯಂತಿಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಶಹರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಗಲಕೋಟೆ ನಗರದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಶಹರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿಯಲ್ಲಿ ಫೆಬ್ರವರಿ 19ರ ಮಧ್ಯರಾತ್ರಿಯಿಂದ ಫೆಬ್ರವರಿ 24ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಸಂತೋಷ ಬಿ. ಜಗಲಾಸರ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಬಾಗಲಕೋಟೆ ಶಹರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು, ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಹಾಗೂ ಅನುಮತಿ ಇಲ್ಲದೆ ಯಾವುದೇ ಸಭೆ, ಸಮಾರಂಭ, ಧರಣಿ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮೆರವಣಿಯಲ್ಲಿದ್ದವರ ಮೇಲೆ ಕಲ್ಲು ಬಿದ್ದಿಲ್ಲ: ಎಸ್ಪಿ ಮೆರವಣಿಗೆ ವೇಳೆ ಎರಡು ಕಲ್ಲು ತೋರಿ ಬಂದಿದ್ದು ನಿಜ. ಆದರೆ ಕಲ್ಲಿನಿಂದ ಮೂರ್ತಿಗೆ ಅಥವಾ ಮೆರವಣಿಗೆಯಲ್ಲಿದ್ದವರಿಗೆ ತೊಂದರೆ ಆಗಿಲ್ಲ ಮೆರವಣಿಗೆಗೆ ಬಂದೋಬಸ್ತ್ ಕಲ್ಪಿಸಿದ್ದ ಪೊಲೀಸರ ಮೇಲೆ ಕಲ್ಲು ಬಿದ್ದಿದ್ದು ಏನು ಆಗಿಲ್ಲ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ವೀಡಿಯೊ ವೀಕ್ಷಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿವುದು ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ. ಘಟನೆ ಹಿನ್ನೆಲೆ: ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ಕಿಲ್ಲಾ ಅಂಬಾ ಭವಾನಿ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ನಗರ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆಯ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಅದು ಪೊಲೀಸರ ಮೇಲೆ ಬಿದ್ದಿದೆ. ಈ ವಿಷಯ ಬಹಿರಂಗವಾಗುತ್ತಲೇ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅಸ್ಸಾಂ ಚುನಾವಣೆ ಅಖಾಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭರ್ಜರಿ ಎಂಟ್ರಿ, ಹೊಸ ಆಟ ಶುರು... Karnataka DCM
ಚುನಾವಣೆ ಪರ್ವ ಮತ್ತೆ ಶುರುವಾಗಿ ದೇಶದಲ್ಲಿ ಒಂದೇ ಬಾರಿಗೆ 4 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಕ್ಕೆ ಮತದಾನ ಇನ್ನೇನು 2 ತಿಂಗಳಲ್ಲಿ ನಡೆಯಲಿದೆ. ಅದರಲ್ಲೂ ಈ ಬಾರಿಯ ಚುನಾವಣೆ ಬಿಜೆಪಿ ನೇತೃತ್ವದ ಎನ್ಡಿಎ &ವಿರೋಧ ಪಕ್ಷಗಳ ಒಕ್ಕೂಟದ ನಡುವೆ ನೇರ ರಾಜಕೀಯ ಯುದ್ಧವಾಗಿ ತಿರುವನ್ನು ಪಡೆಯುತ್ತಿದೆ. ಈ ಪೈಕಿ ಅಸ್ಸಾಂ ಚುನಾವಣೆ ಅಖಾಡ ರಂಗೇರಿದ್ದು,
ಎಲ್ಲಡೆ AI ಸೃಷ್ಟಿಸಿದ ಕ್ರಾಂತಿ : ’ಬಾಬಾ ವಂಗಾ’ ಭವಿಷ್ಯವಾಣಿಗೆ ಉದ್ಯೋಗಿಗಳಲ್ಲಿ ಶುರುವಾಯ್ತು ಹೊಸ ಭ್ರಾಂತಿ
AI and Baba Vanga Prediction : ದೇಶಾದ್ಯಂತ ಕೃತಿಕ ಬುದ್ದಿಮತ್ತೆ ಸದ್ದನ್ನು ಮಾಡುತ್ತಿದೆ, ಎಲ್ಲಡೆ AI ನದ್ದೇ ಸುದ್ದಿ. ಬಲ್ಗೇರಿಯಾದ ಅಂಧ ಮಹಿಳೆ, ಬಾಬಾ ವಂಗಾ ಹಿಂದೆ ನುಡಿದಿದ್ದಾರೆ ಎನ್ನಲಾಗುತ್ತಿರುವ ಭವಿಷ್ಯ ಮತ್ತೆ ಸದ್ದನ್ನು ಮಾಡಲಾರಂಭಿಸಿದೆ. ಇದಕ್ಕೆ ಪೂರಕ್ಕೆ ಎನ್ನುವಂತೆ ಎಐ ಆರ್ಭಟದಿಂದ, ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಆತ್ಮಸ್ವಾಭಿಮನ ಮಾರಿಕೊಂಡವರ ಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಮಂಡಿಯೂರಿರು ವಶೆಹಬಾಜ್ ಷರೀಫ್, ಸಾರ್ವಜನಿಕ ವೇದಿಕೆಯಲ್ಲಿ ಅವರು ಹೇಳಿದ ಹಾಗೆ ಕೇಳಲಾರಂಭಿಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಗಾಜಾ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ, ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಡೊನಾಲ್ಡ್ ಟ್ರಂಪ್ ಅವರು ಶೆಹಬಾಜ್ ಷರೀಫ್ ಅವರಿಗೆ ಎದ್ದು ನಿಲ್ಲುವಂತೆ ಸೂಚಿಸಿದ್ದಾರೆ.
ಬೈಂದೂರು | ಉಪ್ಪುಂದ-ಬಿಜೂರು ರಾ.ಹೆದ್ದಾರಿಯ ಸೇತುವೆ ಮೇಲೆ ಹೊತ್ತಿ ಉರಿದ ಲಾರಿ!
ಬೈಂದೂರು: ಲಾರಿಯೊಂದು ಆಕಸ್ಮಿಕ ಬೆಂಕಿಯಿಂದಾಗಿ ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಗುರುವಾರ ಮಧ್ಯರಾತ್ರಿ ಸುಮಾರಿಗೆ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಸಂಭವಿಸಿದೆ. ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು ರಾತ್ರಿ 1 ಗಂಟೆ ಸುಮಾರಿಗೆ ಯಡ್ತರೆ ಬೈಪಾಸ್ನಿಂದ ಮುಂದಕ್ಕೆ ಸಾಗಿ ಬಿಜೂರು ಬಳಿ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಲಾರಿ ಚಾಲಕ ಚಂದ್ರಕಾಂತ್ ಎನ್ನುವರು ಅಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆ ಲಾರಿಗೆ ಬೆಂಕಿ ಹಿಡಿದು ಹೊತ್ತಿ ಉರಿದ ಕಾರಣ ಒಂದಷ್ಟು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಯಡ್ತರೆ ಜಂಕ್ಷನ್ ಬಳಿ ತಿರುವು ನೀಡಿ ವಾಹನಗಳು ಹೆದ್ದಾರಿಯ ಇನ್ನೊಂದು ರಸ್ತೆ ಮೂಲಕ ಸಾಗಲು ಅನುವು ಮಾಡಿಕೊಟ್ಟರು. ಬೈಂದೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕರಾದ ಶ್ರೀನಿವಾಸ ಪೂಜಾರಿ, ರವೀಂದ್ರ ಎಸ್. ದೇವಾಡಿಗ, ಚಾಲಕ ಲೋಕೇಶ್ ಎಸ್., ಅಗ್ನಿಶಾಮಕರಾದ ಸುರೇಶ್ ಪಟಗಾರ, ಸಚಿನ್ ಮೊದಲಾದವರು ಸತತ ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳೀಯ ಸಾರ್ವಜನಿಕರು ಸಹಕರಿಸಿದರು.
BELAGAVI | ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಮಚ್ಚೆ ಗ್ರಾಮದಲ್ಲಿ ಘಟನೆ
ಬೆಳಗಾವಿ: ಸಮೀಪದ ಮಚ್ಚೆ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಮೊದಲಿನಿಂದಲೇ ರಾಯಣ್ಣ ಅವರ ಮೂರ್ತಿ ಕಪ್ಪು ಬಣ್ಣದಲ್ಲಿರುವುದರಿಂದ, ಅದರ ಮೇಲೆಯೇ ಕರಿ ಮಸಿ ಸುರಿದಿದ್ದನ್ನು ತಕ್ಷಣ ಯಾರೂ ಗಮನಿಸಿರಲಿಲ್ಲ. ಆದರೆ ರಾತ್ರಿ ವೇಳೆ ಗ್ರಾಮದ ಕೆಲವು ಯುವಕರ ಗಮನಕ್ಕೆ ಈ ವಿಚಾರ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳಕ್ಕೆ ಸೇರಿ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಅಧಿಕಾರಿಗಳನ್ನು ಸುತ್ತುವರಿದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. “ರಾಯಣ್ಣ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ; ಅವರು ನಮ್ಮ ಅಸ್ತಿತ್ವದ ಸಂಕೇತ. ಅವರ ಪ್ರತಿಮೆಗೆ ಅವಮಾನ ಮಾಡುವ ಕೃತ್ಯವನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಕ್ಷಣ ಆರೋಪಿಗಳನ್ನು ಬಂಧಿಸಬೇಕು” ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದರು. ಮುಂಜಾಗೃತಾ ಕ್ರಮವಾಗಿ ಮಚ್ಚೆ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆಗೆ ಬ್ರೇಕ್ ಹಾಕು ಜೊತೆಜೊತೆಗೆ ವಿದ್ಯುತ್ ಬಿಲ್ ಕಡಿತಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಸ್ಟರ್ ಪ್ಲ್ಯಾನ್ ಹಾಕಿದ್ದು, ಸೌರ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಿ ಇಲಾಖೆಯ ಅಡಿಯಲ್ಲಿರುವ ಸುಮಾರು 2,659 ವಿದ್ಯಾರ್ಥಿ ನಿಲಯಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಮಾಸಿಕವಾಗಿ ವಿದ್ಯುತ್ ವೆಚ್ಚದಲ್ಲಿ ಬರೋಬ್ಬರಿ 82ಲಕ್ಷ ಉಳಲಿತಾಯ ಮಾಡಲು ಸಿದ್ದತೆ ನಡೆಸುತ್ತಿದೆ.
ಭಾರತದ ಟಾಪ್ 10 ಶ್ರೀಮಂತ ರಾಜ್ಯಗಳ ಪಟ್ಟಿ: ಕರ್ನಾಟಕದ ಸ್ಥಾನ ಏನು? ಇಲ್ಲಿವೆ ಅಂಕಿಅಂಶಗಳು
India's Top 10 Richest States: ಭಾರತದಲ್ಲಿ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲ ರಾಜ್ಯಗಳು ಮುಂಚೂಣಿಯಲ್ಲಿವೆ. ಜಿಡಿಪಿ ಅಳತೆ ಮೂಲಕ ಪರಿಶೀಲಿಸಿದಾಗ ಈ ರಾಜ್ಯಗಳು ಕೈಗಾರಿಕೆ, ಕೃಷಿ ಮತ್ತು ಮೂಲಭೂತ ಸೌಕರ್ಯದ ಬೆಳವಣಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಇದೀಗ ದೇಶದ ಟಾಪ್ 10 ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ. ಹಾಗಾದ್ರೆ, ಕರ್ನಾಟಕದ
ಫೆಬ್ರವರಿ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 20) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್ಪಿ ತಲೆಗೆ ಗಾಯ, ನಿಷೇಧಾಜ್ಞೆ ಜಾರಿ!
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ, ಕಿಡಿಗೇಡಿಗಳು ಶಿವಾಜಿ ಭಾವಚಿತ್ರದ ಮೇಲೆ ಚಪ್ಪಲಿ ಎಸೆದು ಕಲ್ಲು ತೂರಾಟ ನಡೆಸಿದ್ದಾರೆ. ಶಾಂತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಲಾಗಿದ್ದು, ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಅವರ ತಲೆಗೆ ಪೆಟ್ಟು ಬಿದ್ದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ನಾರಾಯಣನ ಮಹಿಮೆಗಳನ್ನು ಸಾರುವ ಪುರಂದರದಾಸರ ವಿಶೇಷ ರಚನೆ: ಹಾಡು ಹಳತು ಭಾವ ನವೀನ ಸಂಚಿಕೆ- 125
ಪುರಂದರ ದಾಸರ ಕೀರ್ತನೆಗಳಲ್ಲಿ ವಿಶೇಷವಾದ ಮಹಾವಿಷ್ಣುವಿನ ದಶಾವತಾರಗಳ ಬಗ್ಗೆ ರಚಿಸಿದ ಕೀರ್ತನೆಯ ಭಾವಾರ್ಥವನ್ನು ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವಿವರಿಸಿದ್ದಾರೆ ನೋಡಿ.
ಭಾರತದ ಅಕ್ಕಿಗೆ ವಿಶ್ವಸಂಸ್ಥೆ ಫಿದಾ: 5ವರ್ಷಗಳ ಐತಿಹಾಸಿಕ MoU - ರೈತರ ಪಾಲಿಗೆ ಶುಕ್ರದೆಸೆಯ ಅಧ್ಯಾಯ
India and United Nation MoU: ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ದಾಪುಗಾಲು ಹಾಕುತ್ತಿರುವ ಭಾರತ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವರ್ಷಕ್ಕೆ ಎರಡು ಲಕ್ಷ ಮೆಟ್ರಿಕ್ ಟನ್ ಅಕ್ಕಿ ರಫ್ತು ಒಪ್ಪಂದ ಇದಾಗಿದೆ.
ಶಕ್ತಿ ಯೋಜನೆ: ಜನವರಿ ಅಂತ್ಯಕ್ಕೆ 17,088.33 ಕೋಟಿ ರೂ. ವೆಚ್ಚ
ಸರಕಾರದಿಂದ 12,632.11 ಕೋಟಿ ರೂ. ಮರು ಪಾವತಿ, 4,456.22 ಕೋಟಿ ರೂ. ಬಾಕಿ
Explained: ಗಾಜಾ ಶಾಂತಿ ಮಂಡಳಿ ಮೊದಲ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದ ಭಾರತ; ಶಾಶ್ವತ ಸ್ಥಾನ ಸನ್ನಿಹಿತ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಗಾಜಾ ಶಾಂತಿ ಮಂಡಳಿ, ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ತನ್ನ ಮೊಟ್ಟಮೊದಲ ಸಭೆಯನ್ನು ಪೂರ್ಣಗೊಳಿಸಿದೆ. ಭಾರತವು ಈ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದ್ದು, ಭಾರತೀಯ ರಾಯಭಾರ ಕಚೇರಿಯ ಉಸ್ತುವಾರಿ ಅಧಿಕಾರಿ ನಮ್ಗ್ಯಾ ಸಿ ಖಂಪಾ ಅವರು ವೀಕ್ಷಕರಾಗಿ ಭಾಗವಹಿಸಿದ್ದರು. ಗಾಜಾ ಶಾಂತಿ ಮಂಡಳಿಯ ಖಾಯಂ ಸದಸ್ಯತ್ವ ಪಡೆಯುವಂತೆ ಅಮೆರಿಕ ಮಾಡಿರುವ ಮನವಿಯನ್ನು ಪರಿಶೀಲಿಸುವುದಾಗಿ ಭಾರತ ಹೇಳಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಜಗತ್ತು ಕೃತಕ ಬುದ್ಧಿಮತ್ತೆಗೆ ತೆರೆದುಕೊಳ್ಳುತ್ತಿರುವ ದಿನಗಳಲ್ಲಿ ಭಾರತ ಅದರ ನಾಯಕತ್ವವನ್ನು ವಹಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಿದೆ. ಅದರ ಭಾಗವಾಗಿಯೇ ರಾಷ್ಟ್ರ ರಾಜಧಾನಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗ ಸಭೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಎಐಯು ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತವು ಎಐ ತಂತ್ರಜ್ಞಾನದ ಯುಗದ ಮುಂಚೂಣಿಯಲ್ಲಿರಬೇಕಾದುದು ಅತ್ಯಗತ್ಯವಾಗಿದೆ. ಅದಕ್ಕೆ ಅಗತ್ಯವಿರುವ ಪ್ರತಿಭೆಗಳು ಮತ್ತು ಪೂರಕವಾಗಿರುವ ಇನ್ನಿತರ ಸಂಪನ್ಮೂಲಗಳು ಭಾರತದಲ್ಲಿ ವೆ. ಆದರೆ ಅವನ್ನು ಬಳಸಿ ಈ ದೇಶವನ್ನು ಆಧುನಿಕತೆಯೆಡೆಗೆ ಮುನ್ನಡೆಸುವ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಗಂಜಲ ಮತ್ತು ವಿಜ್ಞಾನವನ್ನು ಜೊತೆಯಾಗಿ ಕೊಂಡೊಯ್ಯುವ ರಾಜಕೀಯ ನಾಯಕರ ವಿರೋಧಾಭಾಸಗಳು ಭಾರತವನ್ನು ವಿಶ್ವದ ಮುಂದೆ ಪದೇ ಪದೇ ತಲೆತಗ್ಗಿಸುವಂತೆ ಮಾಡುತ್ತಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಈ ವಿರೋಧಾಭಾಸ ನೀತಿಗಳೇ ಬಹುದೊಡ್ಡ ಅಡ್ಡಿಯಾಗಿವೆ. ಅಗಾಧ ದತ್ತಾಂಶಗಳೇ ಭಾರತದ ಅತಿದೊಡ್ಡ ಆಸ್ತಿ. ಇವುಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಎಐಯಲ್ಲಿ ಭಾರತ ಮುನ್ನುಗ್ಗಬೇಕಾಗಿದೆ. ಆದರೆ, ಇಂದು ಭಾರತದ ದತ್ತಾಂಶಗಳನ್ನೇ ಅಮೆರಿಕದಂತಹ ದೇಶಗಳಿಗೆ ಅಡವಿಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದು ನಿಜವೇ ಆಗಿದ್ದರೆ, ಇಂದು ಎಐ ಶೃಂಗಸಭೆಯ ಹೆಸರಿನಲ್ಲಿ ಸಂಭ್ರಮಿಸುವ ಭಾರತದ ಈ ಸಂಭ್ರಮ ಹೆಚ್ಚು ಸಮಯ ಬಾಳಲಾರದು. ಭಾರತದ ದತ್ತಾಂಶಗಳ ಮೇಲೆ ಅಮೆರಿಕದಂತಹ ದೇಶಗಳು ನಿಯಂತ್ರಣ ಸಾಧಿಸಿದರೆ ಅದು ಭಾರತದ ಎಲ್ಲ ಕ್ಷೇತ್ರಗಳ ಮೇಲೂ ಅಪಾಯಕಾರಿ ಪರಿಣಾಮ ಬೀರಬಹುದು. ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಹೊತ್ತಿಗೆ ಭಾರತವು ವಿಜ್ಞಾನ, ತಂತ್ರಜ್ಞಾನಗಳಲ್ಲಿ ಪೂರ್ಣಪ್ರಮಾಣದಲ್ಲಿ ಸ್ವಂತಿಕೆಯನ್ನು ಸಾಧಿಸುತ್ತದೆ ಎಂಬ ನಿರೀಕ್ಷೆಯನ್ನು ಜನರು ಇಟ್ಟಿದ್ದರು. ಅದಕ್ಕೆ ಪುಷ್ಟಿಕೊಡುವಂತೆಯೇ ಮೇಕ್ ಇನ್ ಇಂಡಿಯಾದಂತಹ ಯೋಜನೆಗಳನ್ನೂ ಅವರು ಘೋಷಿಸಿದ್ದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಮೋದಿಯ ಮೇಕ್ ಇನ್ ಇಂಡಿಯಾ ಸಂಪೂರ್ಣ ವಿಫಲವಾಗಿದೆ. ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ವಿದೇಶಿ ಕಂಪೆನಿಗಳು ಭಾರತವನ್ನು ಲೂಟಿ ಹೊಡೆಯುತ್ತಿವೆ. ಇತ್ತ ಸ್ವದೇಶಿ ಹೆಸರಿನಲ್ಲಿ ಭಾರತದೊಳಗೆ ಪತಂಜಲಿಯಂತಹ ನಕಲಿ ಬಾಬಾಗಳು ಸರಕಾರದ ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ. ಸ್ವಾಮಿಗಳು, ಬಾಬಾಗಳು ಸರಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ನೆಹರೂ, ಇಂದಿರಾಗಾಂಧಿಯಂತಹ ಹಿರಿಯ ನಾಯಕರು ನಿರ್ಮಿಸಿದ ಅಪ್ಪಟ ಭಾರತೀಯ ಸಂಸ್ಥೆಗಳು ಕಳೆದ ಹತ್ತು ವರ್ಷಗಳಲ್ಲಿ ಹಿನ್ನಡೆ ಅನುಭವಿಸಿದ್ದು ಅದಾನಿ, ಅಂಬಾನಿಯಂತಹ ಉದ್ಯಮಿಗಳು ಆಕಾಶದೆತ್ತರ ಬೆಳೆದು ನಿಂತಿದ್ದಾರೆ. ಇಂತಹ ಹೊತ್ತಿನಲ್ಲಿ, ಎಐ ಇಂಪ್ಯಾಕ್ಟ್ ಶೃಂಗ ಸಭೆ ಎಷ್ಟರಮಟ್ಟಿಗೆ ಭಾರತಕ್ಕೆ ಪೂರಕವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಭಾರತದ ಸಾಮಾಜಿಕ ವಲಯಗಳ ಮೇಲೆ ತನ್ನ ನಿಯಂತ್ರಣಗಳನ್ನು ಸಾಧಿಸಿಕೊಳ್ಳಲು ವಿದೇಶಿ ಕಂಪೆನಿಗಳು ಈ ಶೃಂಗಸಭೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆೆ ಎನ್ನುವುದು ಹುರುಳಿಲ್ಲದ ಆರೋಪವೇನೂ ಅಲ್ಲ. ಇದೇ ಸಂದರ್ಭದಲ್ಲಿ ಈ ಎಐ ಇಂಪ್ಯಾಕ್ಟ್ ಶೃಂಗಸಭೆಯ ಹತ್ತು ಹಲವು ಅವ್ಯವಸ್ಥೆಗಳು, ಸೃಷ್ಟಿಯಾದ ಗೊಂದಲಗಳು ಭಾರತದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಿವೆ. ಮೊದಲ ದಿನವೇ ಸ್ಟಾಲ್ಗಳಲ್ಲಿ ಕೇಳಿ ಬಂದ ಕಳ್ಳತನಗಳ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಯಿತು. ಎಐಯಲ್ಲಿ ಮುಖ್ಯವಾಗಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಅನ್ವೇಷಕರಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಉದ್ಯಮಿಗಳು ಮತ್ತು ರಾಜಕಾರಣಿಗಳೇ ವಿಜೃಂಭಿಸಿದರು. ಈ ಸಂದರ್ಭದಲ್ಲಿ ಅನ್ವೇಷಕರಿಗೆ ಬೇಕಾಗಿದ್ದ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಎಐ ಜ್ಞಾನವಿಲ್ಲದ ಅಧಿಕಾರಿಗಳು, ಮಧ್ಯವರ್ತಿಗಳು, ಕನ್ಸಲ್ಟೆಂಟ್ಗಳ ಮುಂದೆ ಅಸಲಿ ಸಂಶೋಧಕರು ಬಾಯಿಯಿಲ್ಲದೆ ಮೂಕರಾಗಬೇಕಾಯಿತು. ಭಾರತದ ಎಐ ಸಂಶೋಧನೆಗಳು ಸುದ್ದಿಯಾಗಬೇಕಾದ ಜಾಗದಲ್ಲಿ ಗಲ್ಗೋಟಿಯಾಸ್ ವಿವಿಯ ನಕಲಿ ಸಂಶೋಧನೆಗಳು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾದವು. ಇಂತಹ ಹಲವು ‘ಗಲ್ಗೋಟಿಯಾಸ್’ಗಳು ಈ ಸಭೆಯಲ್ಲಿ ನಿಜವಾದ ಪ್ರತಿಭೆಗಳ ಅವಕಾಶಗಳನ್ನು ನುಂಗಿ ಹಾಕಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಚೀನಾ ನಿರ್ಮಿತ ರೋಬೊಟ್ನ್ನು ತಾನೇ ಅಭಿವೃದ್ಧಿಪಡಿಸಿದ್ದಾಗಿ ಮಾಧ್ಯಮಗಳ ಮುಂದೆ ಹೇಳಿ ಭಾರತವನ್ನು ವಿಶ್ವದ ಮುಂದೆ ತಲೆತಗ್ಗಿಸುವಂತೆ ಈ ವಿಶ್ವವಿದ್ಯಾನಿಲಯ ಮಾಡಿತು. ವಿವಾದಿತ ರೋಬೊಟ್ ಯುನಿಟ್ರೀ ಗೋ 2 ಆಗಿದ್ದು ಇದನ್ನು ಚೀನಾ ಕಂಪೆನಿ ತಯಾರಿಸಿದೆ. ಭಾರತದಲ್ಲಿ ಇದನ್ನು ಆನ್ಲೈನ್ನಲ್ಲಿ ಸುಮಾರು 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಗಲ್ಗೋಟಿಯಾಸ್ ವಿವಿಯು ಇದಕ್ಕೆ ‘ಓರಿಯನ್’ ಎಂದು ಹೆಸರಿಟ್ಟು ತನ್ನ ವಿಶ್ವವಿದ್ಯಾನಿಲಯದ ಸಂಶೋಧನೆ ಎಂದು ಹೇಳಿಕೊಂಡು ನಗೆ ಪಾಟಲಿಗೀಡಾಯಿತು. ಅಷ್ಟೇ ಅಲ್ಲ, ದಕ್ಷಿಣ ಕೊರಿಯಾದ ಸಾಕರ್ಡ್ರೋನ್ನ್ನು ತಾನೇ ನಿರ್ಮಿಸಿರುವುದಾಗಿ ಹೇಳಿ ಅದರಲ್ಲೂ ಗೋಲ್ಮಾಲ್ ನಡೆಸಿ ಸಿಕ್ಕಿ ಬಿದ್ದಿದೆ. ಇದೀಗ ನೋಡಿದರೆ ಈ ವಿಶ್ವವಿದ್ಯಾನಿಲಯದ ಈ ಗೋಲ್ಮಾಲ್ ಆಕಸ್ಮಿಕ ಏನೂ ಅಲ್ಲ. ಈ ಗೋಲ್ಮಾಲ್ನ ಹಿಂದೆ ಸರಕಾರದ ಕೊಡುಗೆಯೂ ಸಾಕಷ್ಟಿದೆ ಎನ್ನುವುದು ಬೆಳಕಿಗೆ ಬರುತ್ತಿದೆ. 2011ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾನಿಲಯವನ್ನು ಸಾಕಿ ಬೆಳೆಸಿದ್ದೇ ಮೋದಿ ನೇತೃತ್ವದ ಸರಕಾರ. 2015ರಲ್ಲಿ ಈ ವಿಶ್ವವಿದ್ಯಾನಿಲಯ ಕೇಂದ್ರ ಸರಕಾರದಿಂದ ‘ಎಕ್ಸೆಲೆನ್ಸಿ ಇನ್ ಅಕಾಡಮೀಸ್’ಗೆ ಭಾಜವಾಯಿತು. ಕೊರೋನ ಕಾಲದಲ್ಲಿ ಇದೇ ವಿಶ್ವವಿದ್ಯಾನಿಲಯದ ಸಂಶೋಧಕನೊಬ್ಬ ‘ತಟ್ಟೆ ಲೋಟ ಬಡಿಯುವುದರಿಂದ ವೈರಸ್ನ್ನು ನಾಶ ಪಡಿಸಬಹುದು’ ಎನ್ನುವ ವಿಷಯದಲ್ಲಿ ಪ್ರಬಂಧ ಬರೆದು ಕುಖ್ಯಾತನಾಗಿದ್ದ. ಈ ವಿಶ್ವವಿದ್ಯಾನಿಲಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗಿ ಮೋದಿಯ ಪರವಾಗಿ ವಿದ್ಯಾರ್ಥಿಗಳಿಂದ ಪ್ರಚಾರ ಮಾಡಿಸಿತ್ತು. ಇಂತಹ ಹಿನ್ನೆಲೆಯಿರುವ ವಿಶ್ವವಿದ್ಯಾನಿಲಯದಿಂದ ಈ ದೇಶ ಇನ್ನೇನನ್ನು ನಿರೀಕ್ಷಿಸಬಹುದು? ಇಂದು ಈ ವಿಶ್ವವಿದ್ಯಾನಿಲಯ 3,000 ಕೋಟಿ ರೂಪಾಯಿಯ ಸೊತ್ತನ್ನು ಹೊಂದಿದೆ ಎನ್ನಲಾಗುತ್ತಿದ್ದು, ಸರಕಾರದಿಂದ ಇದು ಪಡೆದುಕೊಂಡಿರುವ ಸವಲತ್ತುಗಳು ತನಿಖೆಗೆ ಅರ್ಹವಾಗಿವೆ. ವಿಪರ್ಯಾಸವೆಂದರೆ, ಇಂತಹ ಗಲ್ಗೋಟಿಯಾಸ್ಗಳು ಭಾರತದಲ್ಲಿ ನೂರಾರಿವೆ. ಸ್ವದೇಶಿ ಉತ್ಪನ್ನದ ಹೆಸರಿನಲ್ಲಿ ಪತಂಜಲಿಯಂತಹ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿಗಳ ಸಬ್ಸಿಡಿಗಳನ್ನು ಸರಕಾರದಿಂದ ಪಡೆದಿವೆೆ. ನೂರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ತನ್ನದಾಗಿಸಿವೆೆ. ಸರಕಾರಿ ಆಸ್ಪತ್ರೆಗಳಿಗೆ, ಅಲೋಪತಿ ಔಷಧಿಗಳಿಗೆ ಬಳಕೆಯಾಗಬೇಕಾದ ಸಾವಿರಾರು ಕೋಟಿ ರೂಪಾಯಿಗಳನ್ನು ಆಯುಷ್ ಹೆಸರಿನಲ್ಲಿ ಇಂತಹ ಸಂಸ್ಥೆಗಳು ಲೂಟಿ ಹೊಡೆಯುತ್ತಿವೆ. ಕೊರೋನ ಕಾಲದಲ್ಲಿ ಪತಂಜಲಿಯು ‘ಕೊರೋನಕ್ಕೆ ಔಷಧಿ ಸಂಶೋಧನೆ’ ಮಾಡಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿತ್ತು. ಹಸುವಿನ ಸೆಗಣಿ ಬಳಸಿ ಕ್ಯಾನ್ಸರ್ಗೆ ಔಷಧಿ ಕಂಡು ಹುಡುಕಲು ಉತ್ತರ ಪ್ರದೇಶದ ಜಬಲ್ಪುರದಲ್ಲಿರುವ ವಿಶ್ವವಿದ್ಯಾನಿಲಯಕ್ಕೆ ಸರಕಾರ ಸುಮಾರು ಮೂರೂವರೆ ಕೋಟಿ ರೂಪಾಯಿಯನ್ನು ಸುರಿದಿತ್ತು. ಆದರೆ ಪರಿಣಾಮ ಮಾತ್ರ ಶೂನ್ಯ. ಇದೇ ಸಂದರ್ಭದಲ್ಲಿ ಇಸ್ರೋ ಸಿಬ್ಬಂದಿಯ ಕೋಟ್ಯಂತರ ರೂಪಾಯಿಯನ್ನು ಸರಕಾರ ಬಾಕಿ ಉಳಿಸಿದೆ. ವಿಜ್ಞಾನಿಗಳಿಗೆ, ಅವರ ಸಂಶೋಧನೆಗಳಿಗೆ ಅಗತ್ಯ ಹಣವನ್ನು ನೀಡಲು ಸರಕಾರ ವಿಫಲವಾಗುತ್ತಿದೆ. ಈ ಎಲ್ಲ ಕಾರಣಗಳಿಂದಲೇ ಚೀನಾದ ರೋಬೊಟ್ ನಾಯಿಗಳಿಂದ ಭಾರತ ಕಚ್ಚಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಇಂತಹ ಗಲ್ಗೋಟಿಯಾಸ್ಗಳ ನಕಲಿ ನಾಯಿಗಳಿಗೆ ವೆಚ್ಚ ಮಾಡುವುದನ್ನು ನಿಲ್ಲಿಸಿ ಸರಕಾರ ಅರ್ಹ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಣ ಒದಗಿಸಬೇಕಾಗಿದೆ. ಆಗ ನಿಜವಾದ ಅರ್ಥದಲ್ಲಿ ಭಾರತವು ಎಐ ಕ್ರಾಂತಿಯ ನಾಯಕನಾಗಿ ಹೊರಹೊಮ್ಮಬಹುದು.
ಶೇ 200ರ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರಿಂದ ಭಾರತ-ಪಾಕ್ ಯುದ್ಧ ಸ್ಥಗಿತ: ಟ್ರಂಪ್
ಹೊಸದಿಲ್ಲಿ: ಶಾಂತಿ ಸಂಧಾನ ಮಾತುಕತೆಗಾಗಿ ಸುಂಕ ಕೇಂದ್ರೀಕೃತ ದೃಷ್ಟಿಕೋನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ವಿಶ್ವಸಂಸ್ಥೆಯ ಚೌಕಟ್ಟನ್ನು ಹೋಲುವ ತಮ್ಮದೇ ಶೈಲಿಯ ಶಾಂತಿಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, 2025ರ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಘರ್ಷದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಯುದ್ಧ ಮುಂದುವರಿಸಿದರೆ ಉಭಯ ದೇಶಗಳ ಮೇಲೆ 200 ಶೇಕಡ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಸಮ್ಮುಖದಲ್ಲೇ ಟ್ರಂಪ್ ಈ ವಿಚಾರ ಬಹಿರಂಗಪಡಿಸಿದರು. ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ತಾವೇ ಹೊಗಳಿಕೊಂಡ ಟ್ರಂಪ್, ಇದನ್ನು ದೃಢೀಕರಿಸಲು ಶಾಂತಿ ಯತ್ನದ ಬಗೆಗಿನ ಷರೀಫ್ ಹೇಳಿಕೆಯನ್ನು ಉಲ್ಲೇಖಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸುವ ಮೂಲಕ 2.5 ಕೋಟಿ ಜನರ ಜೀವವನ್ನು ಟ್ರಂಪ್ ರಕ್ಷಿಸಿದರು ಎಂದು ಸಿಬ್ಬಂದಿ ಮುಖ್ಯಸ್ಥರ ಸಮ್ಮುಖದಲ್ಲೇ ಪಾಕಿಸತಾನದ ಪ್ರಧಾನಿ ಹೇಳಿಕೆ ನೀಡಿದ್ದಾರೆ..ಯುದ್ಧ ರಭಸದಿಂದ ನಡೆಯುತ್ತಿತ್ತು..ವಿಮಾನಗಳನ್ನು ಹೊಡೆದು ಉರುಳಿಸಲಾಗುತ್ತಿತ್ತು. ಇಬ್ಬರ ಜತೆಯೂ ದೂರವಾಣಿ ಸಂಭಾಷಣೆ ನಡೆಸಿದೆ. ಮೋದಿಯವರನ್ನು ನಾನು ಚೆನ್ನಾಗಿ ಬಲ್ಲೆ.. ಸಂಘರ್ಷ ಬಗೆಹರಿಸಿಕೊಳ್ಳದಿದ್ದರೆ ನಿಮ್ಮ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದಿಢೀರನೇ ಒಪ್ಪಂದ ಕುದುರಿತು. ನೀವು ಯುದ್ಧ ಮುಂದುವರಿಸಿದರೆ ಇಬ್ಬರ ದೇಶಗಳ ಮೇಲೂ ಶೇಕಡ 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಅವರಿಬ್ಬರೂ ಯುದ್ಧ ಮುಂದುವರಿಸಲು ಬಯಸಿದ್ದರು. ಆದರೆ ಹಣದ ವಿಚಾರ ಬಂದಾಗ, ಹಣಕ್ಕೆ ಸಮಾನ ಯಾವುದೂ ಇಲ್ಲ ಎಂದು ಟ್ರಂಪ್ ವಿವರಿಸಿದರು. ದೊಡ್ಡ ಪ್ರಮಾಣದ ಹಣ ನಷ್ಟವಾಗುವ ವಿಚಾರ ಬಂದಾಗ, ಯುದ್ಧ ಮುಂದುವರಿಸಲು ಬಯಸುವುದಿಲ್ಲ ಎನ್ನುವುದು ನನ್ನ ಭಾವನೆ. 11 ವಿಮಾನಗಳನ್ನು ಹೊಡೆದು ಉರುಳಿಸಲಾಗಿತ್ತು. ತೀರಾ ದುಬಾರಿ ವಿಮಾನಗಳು ಎಂದು ಬಣ್ಣಿಸಿದರು. ಜಾಗತಿಕ ಶಾಂತಿಯನ್ನು ಸ್ಥಾಪಿಸುವ ಉದ್ದೇಶದ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ ಟ್ರಂಪ್ ಈ ಭಾಷಣ ಮಾಡಿದರು. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ಮಂಡಳಿಯ ಸದಸ್ಯತ್ವಕ್ಕೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ತಕ್ಷಣವೇ ಮಂಡಳಿಯ ಸದಸ್ಯತ್ವ ಪಡೆದಿದೆ. ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಲು ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ನೀಡಿದ ಹೇಳಿಕೆಯಿಂದ ಭಾರತ ಇದುವರೆಗೂ ಅಂತರ ಕಾಯ್ದುಕೊಂಡು ಬಂದಿದೆ.
Karnataka Rain: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಸಾಧ್ಯತೆ: ಐಎಂಡಿ
Karnataka Rain Alert: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಒಣಹವೆ ಮುಂದುವರಿದಿದ್ದು, ಚಳಿ ಪ್ರಮಾಣ ಅಲ್ಪ ಇಳಿಕೆಯಾಗಿದೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಆಗುವ ನಿರೀಕ್ಷೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹಿಂದೂ ಮಹಾಸಾಗರ ಮತ್ತು ಅದಕ್ಕೆ ಹೊಂದಿಕೊಂಡಿರುವ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ, ಮುಂಬರುವ ಏಪ್ರಿಲ್ನಲ್ಲಿ ಮೂರನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿದೆ. ಈ ಕುರಿತು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ದಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕದಲ್ಲೂ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಕೆಂಪು ಚಿನ್ನದ ಘಾಟು: ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ದರ 90,000 ರೂಪಾಯಿ
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಬ್ಯಾಡಗಿ ಮೆಣಸಿನಕಾಯಿ ಬಿತ್ತನೆ ಈ ವರ್ಷ ಅಷ್ಟಾಗಿ ಆಗಿಲ್ಲ. ಆದರೆ ಬೆಳೆದ ರೈತರಿಗೆ ಉತ್ತಮ ಇಳುವರಿ ಬಂದಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಬ್ಯಾಡಗಿ ಮೆಣಸಿನಕಾಯಿಗೆ ಐತಿಹಾಸಿಕ ದಾಖಲೆಯ ಗರಿಷ್ಠ ದರ ಲಭಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಯುವ ರೈತರ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಬಂಗಾರದ ಬೆಲೆ ಪಡೆದಿದ್ದಾರೆ.
ಕರ್ನಾಟಕದ ದೇಗುಲಗಳಲ್ಲಿ ಶೂಟಿಂಗ್ಗೆ ಬ್ರೇಕ್ ! ಅನುಮತಿ ಪಡೆದು, ಶುಲ್ಕ ಕಟ್ಟಿದ್ರೆ ಮಾತ್ರ ಅವಕಾಶ
ದೇಗುಲಗಳಲ್ಲಿ ಸುದ್ದಿ ಂಆಧ್ಯಮಗಳಿಗೂ ಸೇರಿದಂತೆ, ಸಿನಿಂಆ-ಧಾರವಾಹಿ-ಯೂಟ್ಯೂಬ್ ಚಾನೆಲ್ಗಳು ಹೀಗೆ ಯಾರಿಗೂ ಶೂಟಿಂಗ್ ಮಾಡುವ ಅವಕಾಶ ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ. ಅನಿವಾರ್ಯವಿದ್ದರೆ ಮೊದಲೇ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಏನೆಲ್ಲಾ ನಿಯಮಗಳಿವೆ ? ಇಲ್ಲಿದೆ ನೋಡಿ ವಿವರ
ಮೈಸೂರಿನಲ್ಲಿ ಶೀಘ್ರವೇ ಕಿದ್ವಾಯಿ ಆಸ್ಪತ್ರೆ; ಬೆಂಗಳೂರು ಅಲೆದಾಟದಿಂದ ದೊರೆಯಲಿದೆ ಮುಕ್ತಿ
ಮೈಸೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂಬರುವ ನವೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು, ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ. ಇದರಿಂದ ಚಿಕಿತ್ಸೆಗಾಗಿ ಪ್ರತಿಬಾರಿ ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆ ತಪ್ಪಲಿದ್ದು, ಕಾಮಗಾರಿ ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದಾರೆ. ಆರಂಭದಲ್ಲಿ 100 ಬೆಡ್ ಸೌಲಭ್ಯ ಕಲ್ಪಿಸಿ ನಂತರ ಅದನ್ನು 350 ಬೆಡ್ಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಪುನರಾರಂಭ; ಡಿಕೆ ಶಿವಕುಮಾರ್-ಧೀರಜ್ ಮುನಿರಾಜು ಟಾಕ್ ವಾರ್ ಅಂತ್ಯ?
ಆಡಳಿತ ಮತ್ತು ವಿಪಕ್ಷ ನಡುವೆ ಕಸದ ರಾಜಕೀಯಕ್ಕೆ ಕಾರಣವಾಗಿದ್ದ ರಾಜಧಾನಿ ಬೆಂಗಳೂರು ಕಸ ವಿಲೇವಾರಿ ವಿವಾದ ತಣ್ಣಗಾದ ಲಕ್ಷಣ ಕಂಡುಬರುತ್ತಿದೆ. ಕಸ ವಿಲೇವಾರಿಗೆ ಅಡ್ಡಿಪಡಿಸಿದ್ದ ಗ್ರಾಮಗಳಲ್ಲಿ ವಿಲೇವಾರಿ ಕಾರ್ಯ ಮತ್ತೆ ಆರಂಭವಾಗಿದ್ದು, ಕಸದ ಟ್ರಕ್ಗಳ ಓಡಾಟ ಕಂಡುಬರುತ್ತಿದೆ. ಆದರೆ ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಧೀರಜ್ ಮುನಿರಾಜು ನಡುವಿನ ವಾಕ್ಸಮರ ಮುಂದುವರೆದಿದ್ದು, ಇಬ್ಬರೂ ತಮ್ಮ ವಾದಗಳಿಗೆ ಅಂಟಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಲಿಂಗಾಯತ-ಗಾಣಿಗ ಪ್ರತ್ಯೇಕ ಗುರುತುಗಳಲ್ಲ; ಹೈಕೋರ್ಟ್
ಬೆಂಗಳೂರು : 'ಲಿಂಗಾಯತ' ಮತ್ತು 'ಗಾಣಿಗ' ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಗಾಣಿಗ ಜಾತಿಯು ವಿಶಾಲವಾದ ಲಿಂಗಾಯತ ಸಮುದಾಯದೊಳಗಿನ ವಿಶಿಷ್ಟ ಉಪ ಜಾತಿಯಾಗಿದೆ ಎಂದು ಹೇಳಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಸುಳ್ಳು ಗಾಣಿಗ-ಲಿಂಗಾಯತ ಜಾತಿ ಮಾನ್ಯತೆ ಪ್ರಮಾಣಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ಆಕ್ಷೇಪಿಸಿ ಪೊಲೀಸ್ ಕಾನ್ಸ್ಟೆಬಲ್ ಟಿ.ಎನ್. ಜಗದೀಶ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಲಿಂಗಾಯತ ಮತ್ತು ಗಾಣಿಗ ಪರಸ್ಪರ ಪ್ರತ್ಯೇಕವಾಗಿಲ್ಲ. ವಿಶಾಲವಾದ ಲಿಂಗಾಯತ ಪಂಗಡ ಅಸ್ತಿತ್ವದಲ್ಲಿರುವಾಗ ತಮ್ಮ ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ-ಪಂಗಡಗಳನ್ನು ಸೇರಿಸುವ ಮೂಲಕ ಲಿಂಗಾಯತ ಸಮುದಾಯವು ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಲಿಂಗಾಯತ (ಧಾರ್ಮಿಕ ಸಮುದಾಯ) ಮತ್ತು ಗಾಣಿಗ (ಎಣ್ಣೆ ತೆಗೆಯುವವರು) ಪರಸ್ಪರ ಪ್ರತ್ಯೇಕ ಗುರುತುಗಳು, ಗಾಣಿಗ ಎನ್ನುವುದಿ ವಿಶಾಲ ಲಿಂಗಾಯತ/ವೀರಶೈವ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದಾದ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ. ಧಾರ್ಮಿಕ ನೆಲೆಯಲ್ಲಿ ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು. ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ. ಗುರುತುಗಳ ಸಹಬಾಳ್ವೆ ಕಾನೂನು ಸಾಧ್ಯತೆಯ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನೇಮಕಾತಿ ಎತ್ತಿಹಿಡಿದ ನ್ಯಾಯಾಲಯ: ಮೂರನೇ ಪ್ರತಿವಾದಿ ರಾಜಕುಮಾರ್ ವೈ. ಬೀಳಗಿ ಸರ್ಕಾರಿ ಅಧಿಕಾರಿಯಾಗಿ 15 ವರ್ಷ ಕರ್ತವ್ಯ ನಿರ್ವಹಿಸಿದ್ದು, ಸೇವಾವಧಿಯು ಜಾತಿ ಅಸ್ಮಿತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲವಾದರೂ, ಸಾಕ್ಷ್ಯಗಳ ದಾಖಲೆಗಳು ಜಾತಿ ಅಸ್ಮಿತೆಯನ್ನು ಗಣನೀಯವಾಗಿ ನಿರೂಪಿಸುತ್ತಿರುವಾಗ ಮತ್ತು ಯಾವುದೇ ವಂಚನೆಯನ್ನು ಪ್ರದರ್ಶಿಸದಿರುವಾಗ ನ್ಯಾಯಾಂಗ ಸಂಯಮದ ಅಗತ್ಯವನ್ನು ಬಲಪಡಿಸುತ್ತವೆ. ಸಾಕ್ಷ್ಯಾಧಾರದ ಶ್ರೇಣಿಗೆ ಸಂಬಂಧಿಸಿದ ವ್ಯಾಖ್ಯಾನಾತ್ಮಕ ವಿವಾದದ ಆಧಾರದ ಮೇಲೆ ಅಂತಹ ದೀರ್ಘಕಾಲದ ಸೇವೆಯನ್ನು ಕದಲಿಸುವುದು ನ್ಯಾಯಿಕ ಉದ್ದೇಶಕವನ್ನು ಮುನ್ನಡೆಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಬೀಳಗಿ ಅವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗದಲ್ಲಿ ಪಿಎಸ್ಐ ಆಗಿ ಅವರು ಮಾಡಿದ 15 ವರ್ಷಗಳ ಸೇವೆಯನ್ನು ಪರಿಗಣಿಸಿ, ಅವರ ನೇಮಕಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಪ್ರಕರಣವೇನು? ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಅರ್ಜಿದಾರರಾದ ಟಿ.ಎನ್. ಜಗದೀಶ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಬಾಗಲಕೋಟೆಯ ರಾಜಕುಮಾರ್ ವೈ. ಬೀಳಗಿ ಇತರ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಲಿಂಗಾಯತ-ಗಾಣಿಗ ಸಮುದಾಯಕ್ಕೆ ನೀಡಲಾಗುವ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು, ಲಿಂಗಾಯತ-ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರ ನೀಡುವ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಜಗದೀಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ: ಸಬ್ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲು
ಬೆಂಗಳೂರು : ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಸಿದ ಆರೋಪದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಆರೋಪಿಯೇ ದೂರು ದಾಖಲಿಸಿದ್ದಾರೆ. ದೂರುದಾರ ಅವಿನಾಶ್ ಎಂಬಾತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಅನುಮತಿ ಪಡೆದು ಮಾಗಡಿ ರಸ್ತೆ ಠಾಣೆ ಸಬ್ ಇನ್ಸ್ಪೆಕ್ಟರ್ ಕೌಶಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಗೋವಿಂದರಾಜನಗರ ಠಾಣೆ ಪೊಲೀಸರಿಗೆ ಒಪ್ಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏನಿದು ಪ್ರಕರಣ?: ಅಗ್ರಹಾರ ದಾಸರಹಳ್ಳಿ ನಿವಾಸಿಯಾಗಿರುವ ಅವಿನಾಶ್ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಸಂಬಂಧ ಕಳೆದ ವರ್ಷ ಜನವರಿಯಲ್ಲಿ ಅವಿನಾಶ್ ಹಾಗೂ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಸೈ ಕೌಶಿಕ್ ಆರೋಪಿತರನ್ನು ವಶಕ್ಕೆ ಪಡೆದಿದ್ದರು. ಬಂಧನ ಭೀತಿಯಿಂದ ಅವಿನಾಶ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ವಿಚಾರಣೆಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಿದ್ದರು. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಅವಿನಾಶ್ ಆರೋಪಿಸಿದ್ದಾರೆ.
ಜಾಗತಿಕ ‘ಸ್ವಾನ್' ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ
ಬೆಂಗಳೂರು : ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ 'ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಮ್'(ಸ್ವಾನ್) ತನ್ನ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ'ಯನ್ನು ಪ್ರಕಟಿಸಿದ್ದು, ಈ ಜಾಗತಿಕ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದ ತಜ್ಞರು ಸಮಿತಿಯಲ್ಲಿದ್ದಾರೆ. 2026ರ ಜೂ.2 ರಿಂದ ಜೂ.4 ರವರೆಗೆ ಅಮೆರಿಕದ ಫ್ಲೋ ರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ'ದಲ್ಲಿ ಸಮಿತಿಯ ಸದಸ್ಯರು ‘ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ’ ಎಂಬ ವಿಷಯದ ಮೇಲೆ ಸಲಹೆಗಳನ್ನು ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಪ್ರವೃತ್ತಿಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಉದ್ಯಮಕ್ಕೆ ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾಗಿರುವ ಈ ತಂಡ, ‘ಸ್ವಾನ್'ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ. ಇತ್ತೀಚೆಗೆ ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ-ಆಧಾರಿತ ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ನೇರ ಮನ್ನಣೆ ದೊರೆತಿದೆ. ಅವರ ಪ್ರಯತ್ನಗಳಿಂದಾಗಿ ಬೆಂಗಳೂರು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಭಾರತ ದೇಶದ ನೀರಿನ ಸವಾಲುಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಸಹಕಾರಿಯಾಗಿದೆ. ಜಾಗತಿಕವಾಗಿ ಸ್ಮಾರ್ಟ್ ವಾಟರ್ ವ್ಯವಸ್ಥೆಯನ್ನು ರೂಪಿಸುವಲ್ಲಿ 'ಸ್ವಾನ್' ಸಂಸ್ಥೆಯ ದೂರದೃಷ್ಟಿ ನನಗೆ ಅತ್ಯಂತ ಇಷ್ಟವಾಗಿದೆ. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ. -ಡಾ. ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ
Chikkamagaluru | ಬೈಕ್ಗೆ ಅಡ್ಡಗಟ್ಟಿ ಯುವಕನ ಮೇಲೆ ಅನೈತಿಕ ಪೊಲೀಸ್ ಗಿರಿ; ಮೂವರು ಆರೋಪಿಗಳ ಬಂಧನ
ಚಿಕ್ಕಮಗಳೂರು, ಫೆ.19 : ಮುಸ್ಲಿಮ್ ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಎಂಬ ಕಾರಣಕ್ಕೆ ತಂಡವೊಂದು ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಗುರುವಾರ ನಡೆದಿರುವುದು ವರದಿಯಾಗಿದೆ. ಈ ಸಂಬಂಧ 7 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬಳು ಯುವಕನಿಗೆ ಮೊಬೈಲ್ ಕರೆ ಮಾಡಿ ತನ್ನನ್ನು ಮಾರ್ಕೆಟ್ ರಸ್ತೆಯಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ಬೈಕ್ನಲ್ಲಿ ಬಿಡುವಂತೆ ಕೇಳಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಬೈಕ್ನಲ್ಲಿ ಮಾರ್ಕೆಟ್ ಗೆ ತೆರಳಿದ ಯುವಕ, ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ ಯುವಕರ ತಂಡವೊಂದು ಬೈಕನ್ನು ಅಡ್ಡಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ನಡೆಸಿ ಅನೈತಿಕ ಪೊಲೀಸ್ಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಈ ವೇಳೆ ಯುವತಿ ಮನೆಗೆ ತೆರಳಿದ್ದಳು. ಯುವಕನ ಪೋಷಕರು ಹಾಗೂ ತಂಡದ ನಡುವೆ ವಾದ ಪ್ರತಿವಾದಗಳು ನಡೆದಿದ್ದು, ನಂತರ ಯುವಕನನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ವೇಳೆ 30ಕ್ಕೂ ಹೆಚ್ಚು ತಂಡದವರು ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ನಯಾಝ್, ತಬ್ರೀಝ್, ಮುಹಮ್ಮದ್ ಹನೀಫ್ ಎಂಬವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶಾಂತಿ ಮಾತುಕತೆ ವಿಫಲ ಎಂದ ಉಕ್ರೇನ್ ಅಧ್ಯಕ್ಷ, ಯುದ್ಧಕ್ಕೆ ಬ್ರೇಕ್ ಬೀಳುವುದೇ ಅನುಮಾನ | Ukraine And Russia
ಸ್ವಿಝರ್ಲ್ಯಾಂಡ್ನ ಜಿನೆವಾದಲ್ಲಿ ಇತ್ತೀಚೆಗೆ ರಷ್ಯಾ ಮತ್ತು ಉಕ್ರೇನ್ ಶಾಂತಿ ಒಪ್ಪಂದಕ್ಕಾಗಿ ಮಾತುಕತೆ ನಡೆಸಿದ್ದವು. ಶಾಂತಿ ಮಾತುಕತೆ ಮೂಲಕ ಯುದ್ಧ ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ಜೊತೆಗೆ ಅಮೆರಿಕದ ಅಧಿಕಾರಿಗಳು ಕೂಡ ಊಟ ಹಾಗೂ ನಿದ್ದೆ ಬಿಟ್ಟು ಒದ್ದಾಡಿದ್ದರು. ಹೀಗೆ ಗಂಟೆ ಗಂಟೆ ಚರ್ಚೆ ಮಾಡಿ, ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಪ್ರಯತ್ನ ಮಾಡಿದ್ದರೂ
Kalaburagi | ಅಂಜುಮನ್ ಏ ಖಜಾಅತ್ ಅಧ್ಯಕ್ಷರಾಗಿ ಖಾಜಿ ಮುಹಮ್ಮದ್ ಆದಮ್ ಫಾರೂಖಿ ಅವಿರೋಧ ಆಯ್ಕೆ
ಕಲಬುರಗಿ: ಕರ್ನಾಟಕ ಅಂಜುಮನ್ -ಏ ಖಜಾಅತ್ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕದ ಖಾಜಿಗಳ ಸಭೆ ನಡೆಯಿತು. ಸಭೆಯಲ್ಲಿ ಅಂಜುಮನ್ -ಏ -ಖಜಾಯತ್ ಕರ್ನಾಟಕದ ಅಧ್ಯಕ್ಷರನ್ನಾಗಿ ಖಾಜಿ ಕೆಂಭಾವಿ & ಹುಣಸಗಿ ಖಾಜಿ ಮುಹಮ್ಮದ್ ಆದಮ್ ಫಾರೂಖಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ರಾಯಚೂರಿನ ಖಾಜಿಗಳ ಅಧ್ಯಕ್ಷರಾದ ಖಾಜಿ ಮುಹಮ್ಮದ್ ಹಮೀದ್ ಅಲಿ ಸಿದ್ದಿಕಿ ಅವರ ನೇತೃತ್ವದಲ್ಲಿ ನಡೆದ ಉಪಾಧ್ಯಕ್ಷರನ್ನಾಗಿ ಖಾಜಿ ಮಿರ್ ಇಬ್ರಾಹಿಂ ಅಲಿ, ಸೈಯದ್ ಗೌಸುದ್ದಿನ್, ಕಾರ್ಯದರ್ಶಿಯಾಗಿ ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ಜಂಟಿ ಕಾರ್ಯದರ್ಶಿರಾಗಿ ಖಾಜಿ ಜಮೀರ್ ಅಹ್ಮದ್, ಖಜಾಂಚಿಯಾಗಿ ಖಾಜಿ ಆಜಾಮ್ ಸಿದ್ದಿಕಿ, ಖಾಜಿ ಸೈಯದ್ ಇಮ್ರಾನ್ ಸೇರಿದಂತೆ ಕಲ್ಯಾಣ ಕರ್ನಾಟಕದ ಅಂಜುಮನ್ ನ ಸದಸ್ಯರು ಖಾಜಿ ಮುಕ್ರಮ, ಖಾಜಿ ಸೈಯದ್ ಶಂಶಾಲಾಮ್ ಹುಸೈನಿ, ಖಾಜಿ ಶಂಶುದ್ದಿನ್, ಖಾಜಿ ಕೌತಾಲ್, ಖಾಜಿ ಆಸೀಫ ಜಿಲಾನಿ, ಖಾಜಿ ಅಬ್ದುಲ್ ಖಾಲೀಕ್, ಖಾಜಿ ಉತಕುರ್, ಖಾಜಿ ಹಾಫಿಜ್ ಮುಹಮ್ಮದ್, ಯುನೂಸ್, ಖಾಜಿ ಮೌಲಾನ ಜಮೀರ್ ಅಹ್ಮದ್, ಖಾಜಿ ಸಿರಾಜುದ್ದಿನ್ ತಿರಂದಾಸ್ ಸೇರಿದಂತೆ ಮುಂತಾದವರು ಇದ್ದರು.
ಪಾಕಿಸ್ತಾನದ ಕರಾಚಿ ದುರಂತಕ್ಕೆ ಮಕ್ಕಳು ಸೇರಿ 16 ಜನ ಬಲಿ, ಅನುಮಾನ ಮೂಡಿಸಿದ ಘಟನೆ | Pakistan Military
ಪಾಕಿಸ್ತಾನದ ಕರಾಚಿ ವಸತಿ ಸಮುಚ್ಚಯ ಒಂದರಲ್ಲಿ ಇದೀಗ ಭೀಕರ ದುರಂತ ಸಂಭವಿಸಿದ್ದು, ಇದೇ ದುರಂತಕ್ಕೆ ಸುಮಾರು 16 ಪಾಕಿಸ್ತಾನಿ ಪ್ರಜೆಗಳು ಬಲಿಯಾಗಿದ್ದಾರೆ. ಮಹಿಳೆಯರು &ಮಕ್ಕಳೂ ಸೇರಿ ಒಟ್ಟಾರೆ 16 ಜನ ದುರಂತದಲ್ಲಿ ಜೀವ ಬಿಟ್ಟಿದ್ದಾರೆ. ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣ ಎಂಬ ಮಾಹಿತಿ ಈಗ ಪ್ರಾಥಮಿಕ ಹಂತದಲ್ಲಿ ಸಿಕ್ಕಿದ್ದರೂ ದುರಂತದ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಾ
ವಿಜಯನಗರ | ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಸಿಬ್ಬಂದಿ ವಸತಿಗೃಹಕ್ಕೆ ಶಾಸಕರಿಂದ ಭೂಮಿ ಪೂಜೆ
ವಿಜಯನಗರ (ಹೊಸಪೇಟೆ): ನಗರದ ಜಂಬುನಾಥ ರಸ್ತೆಯಲ್ಲಿರುವ Dr. A. P. J. Abdul Kalam Residential School ನಲ್ಲಿ ವಸತಿ ಶಾಲೆ ಸಿಬ್ಬಂದಿಗಾಗಿ ವಸತಿಗೃಹ ಕಟ್ಟಡ ನಿರ್ಮಾಣಕ್ಕೆ ಗುರುವಾರ ಶಾಸಕ ಹೆಚ್.ಆರ್. ಗವಿಯಪ್ಪ ಭೂಮಿ ಪೂಜೆ ನೆರವೇರಿಸಿದರು. ಸುಮಾರು 6.33 ಕೋಟಿ ರೂ. ವೆಚ್ಚದಲ್ಲಿ ಎರಡು ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಕಟ್ಟಡದಲ್ಲಿ 1 ಬಿಹೆಚ್ಕೆ ಹೊಂದಿರುವ 12 ಕೋಣೆಗಳು ಹಾಗೂ ಮತ್ತೊಂದು ಕಟ್ಟಡದಲ್ಲಿ 2 ಬಿಹೆಚ್ಕೆ ಹೊಂದಿರುವ 12 ಕೋಣೆಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 7 ರಿಂದ 8 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸಮರ್ಪಕ ವಸತಿ ಸೌಲಭ್ಯಗಳ ಕೊರತೆಯಿಂದ ಅನೇಕರು ಬಳ್ಳಾರಿಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 5 ರಿಂದ 6 ಸಾವಿರ ವಸತಿ ನಿಲಯಗಳ ಅವಶ್ಯಕತೆ ಇರುವುದಾಗಿ ತಿಳಿಸಿದ ಅವರು, ಕಳೆದ ಎರಡು ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 9 ವಸತಿ ನಿಲಯಗಳು ಹಾಗೂ ಪೊಲೀಸ್ ಇಲಾಖೆಗೆ 100 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಸಿಬ್ಬಂದಿ ವಸತಿ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಹೇಳಿದರು. ಪ್ರಸ್ತುತ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿಯುತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಶಾಲಾ ಆವರಣದಲ್ಲಿ ಹೈಮಾಸ್ಟ್ ದೀಪ ಹಾಗೂ ಸಿಸಿಟಿವಿ ಅಳವಡಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಕುಡಿಯುವ ನೀರಿನ ಸಮಸ್ಯೆ ಹಾಗೂ ವಸತಿ ನಿಲಯಗಳ ಶೌಚಾಲಯಗಳ ದುರಸ್ಥಿ ಕುರಿತು ವಿದ್ಯಾರ್ಥಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ಣಗೊಂಡ ವಸತಿ ನಿಲಯ ಹಾಗೂ ಬೋಧನಾ ಕೊಠಡಿಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್ ಖರಂಗಿ, ಪ್ರಾಂಶುಪಾಲ ಪರಶುರಾಮ್ ಸೇರಿದಂತೆ ವಸತಿ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯನಗರ | ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು: ಡಿಸಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ (ಹೊಸಪೇಟೆ): ಫೆ.28ರಿಂದ ಮಾ.17ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಬಂದೋಬಸ್ತ್ ಹಾಗೂ ಪ್ರಶ್ನೆಪತ್ರಿಕೆಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪರೀಕ್ಷಾ ಮುಖ್ಯಸ್ಥರನ್ನು ಹೊರತುಪಡಿಸಿ ಇತರರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೇಂದ್ರಗಳಿಗೆ ಹಾಜರಾಗಬೇಕು. ಸಾರಿಗೆ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಸಂಜೆ ಪರಿಹಾರ ಬೋಧನೆ ಹಾಗೂ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ. ಜಿಲ್ಲೆ ರಾಜ್ಯ ಮಟ್ಟದಲ್ಲಿ ಮೊದಲ 15 ಸ್ಥಾನಗಳೊಳಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪರೀಕ್ಷೆಯನ್ನು ಹಬ್ಬದಂತೆ ಭಯವಿಲ್ಲದೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 23 ಕೇಂದ್ರಗಳಲ್ಲಿ 14,801 ವಿದ್ಯಾರ್ಥಿಗಳು : ಜಿಲ್ಲೆಯಲ್ಲಿ ಒಟ್ಟು 23 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 7,235 ಬಾಲಕಿಯರು ಮತ್ತು 5,143 ಬಾಲಕರು ಸೇರಿದಂತೆ ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 12,378 ಹೊಸ ವಿದ್ಯಾರ್ಥಿಗಳು, 1,915 ಪುನರಾವರ್ತಿತರು, 500 ಖಾಸಗಿ ಅಭ್ಯರ್ಥಿಗಳು ಹಾಗೂ 8 ಮಂದಿ ವಿಷಯಾಧಾರಿತ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆಯಲಿದ್ದಾರೆ. 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ : ಪರೀಕ್ಷಾ ದಿನಗಳಲ್ಲಿ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದ್ದು, ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಡಿಡಿಪಿಯು ನಾಗರಾಜ್ ಹವಾಲ್ದಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅಮೆರಿಕ ಸೇನೆಯ ದಾಳಿ ಭೀತಿಯಲ್ಲಿ, ಸೇನಾ ನೆಲೆಗಳ ಬಳಿ ಸಿಮೆಂಟ್ ಗೋಡೆ ಕಟ್ಟಿಸುತ್ತಿದೆ ಇರಾನ್ | US Military
ಇರಾನ್ &ಅಮೆರಿಕ ನಡುವೆ ಮುಂದಿನ ಶನಿವಾರದಿಂದ ಯುದ್ಧ ಶುರುವಾಗುವ ಆತಂಕ ಈಗ ಆವರಿಸಿದೆ ಹಾಗೂ ಜಗತ್ತಿನಾದ್ಯಂತ ಈ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ ಕಾರ್ಯಾಚರಣೆ ಶುರು ಮಾಡಿದರೆ ಅದರಿಂದ ಆಗುವ ಅಪಾಯಗಳ ಬಗ್ಗೆ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸಂಭಾವ್ಯ ದಾಳಿ ಎದುರಿಸಲು ಇರಾನ್ ಸರ್ಕಾರ
ಅಫಜಲಪುರ | ಕಾರಭೋಸಗಾ ಕಾಡಸಿದ್ದೇಶ್ವರ ದೇವರ ಜಾತ್ರೆ ಸಂಪನ್ನ
ಅಫಜಲಪುರ: ತಾಲೂಕಿನ ಸುಕ್ಷೇತ್ರ ಅಮರ್ಜಾ ನದಿ ತೀರದ ಕಾರಭೋಸಗಾ ಗ್ರಾಮದ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ತೆರೆ ಕಂಡಿತ್ತು. ಮಂಗಳವಾರ ಸಾಯಂಕಾಲ ಐದು ದಿನಗಳ ಕಾಲ ಪ್ರತಿಷ್ಠಾಪಿಸಿದ ನಂದಿ ಕೋಲುಗಳು ಅಮರ್ಜಾ ನದಿ ತೀರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಹತ್ತಿರದ ಹೊಲದಲ್ಲಿ ರಾತ್ರಿಯಿಂದ ಬೆಳಗಿನ ಜಾವ ಗೀಗೀ ಪದಗಳ ಹಾಡಕಿ ಜರುಗಿದವು. ಬೆಳಗಿನ ಜಾವ ನಂದಿ ಕೋಲುಗಳಿಗೆ ಹೂ ಮೂಡಿಸುವ ಕಾರ್ಯಕ್ರಮವು ಸಿಡಿ ಮದ್ದುಗಳ ನಡುವೆ ಚಿತ್ತಾಕರ್ಷಕ ಬೆಳಕಿನಲ್ಲಿ ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ಗ್ರಾಮದ ಅಗಸಿ ಬಳಿ ಬಂದು ಮತ್ತೆ ಅರ್ಥಗರ್ಭಿತ ವಾದ ಗೀಗೀ ಪದಗಳ ಹಾಡಿಕೆ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಮತ್ತು ನಂದಿ ಕೋಲುಗಳು ಮೆರವಣಿಗೆ ಜೋತೆಗೆ ತನಾರತಿ ಹೋತ್ತ ಮೂವತ್ತೈದರ ಗ್ರಾಮದ ಶ್ರೀ ಮಠಕ್ಕೆ ಬಂದು ಐದು ಸುತ್ತು ಹಾಕುವ ಮೂಲಕ ಹರಕೆ ತೀರಿಸಿದರು. ನಂತರ ಉರುಳು ಸೇವೆ ಸಲ್ಲಿಸಿದ ನಂತರ ಜಾವಳ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಎರಡು ದಿನಗಳ ಕಾಲ ನಡೆದ ಜಾತ್ರೆ ಮಹಾಮಂಗಳಾರತಿಯೊಂದಿಗೆ ಅಸಂಖ್ಯಾತ ಭಕ್ತರು ಮತ್ತು ಶ್ರೀಮಠದ ಪೀಠಾಧಿಪತಿಗಳ ಸಮ್ಮುಖದಲ್ಲಿ ತೆರೆ ಬಿದ್ದಿದೆ.
Raichur | ಪಾಲಿಕೆಯ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ : ಹಳೆಯ ದಾಖಲೆಗಳು ಭಸ್ಮ
ರಾಯಚೂರು: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ರಾತ್ರಿ 9 ಗಂಟೆಗೆ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಳೆಯ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಪಾಲಿಕೆಯ ಮೊದಲನೇ ಮಹಡಿಯಲ್ಲಿ ಕಂದಾಯ ವಿಭಾಗದ ಬಳಿ ಹೊರಗೆ ಕಟ್ಟಿಗೆಯ ಅಲ್ಮಾರಿಯಲ್ಲಿ ಇಡಲಾಗಿದ್ದ ಹಳೆಯ ದಾಖಲೆಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು ಪೊಲೀಸರಿಂದ ಸಮಯೋಚಿತ ಕ್ಷಿಪ್ರ ಕ್ರಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ
Bengaluru Police Quick Operation-ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 9.30ರ ಸುಮಾರಿಗೆ ಮಹಿಳೆಯೊಬ್ಬರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 112 ಕ್ಕೆ ಕರೆ ಮಾಡಿದ್ದರು. ಫೋನ್ ಲೊಕೇಶನ್ ಅನ್ನು ಕಂಡು ಹಿಡಿದ ಪೊಲೀಸರು ಬೆಳ್ಳಂದೂರು ಕರೆ ಸಮೀಪ ತಡಕಾಡಿದಾಗ ಮಹಿಳೆ ಆತ್ಮಹತ್ಯೆಗೆ ಸಿದ್ಧವಾಗಿರುವಾಗಲೇ ರಕ್ಷಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಗೂಡ್ಸ್ ಟೆಂಪೊ ಹತ್ತಿಸಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಜಾಲದಿಂದ ವರದಿಯಾಗಿದೆ.
Raichur | ಗೋರ್ಕಲ್ನಲ್ಲಿ ಇನಾಂಭೂಮಿ ವಂಚನೆ ಆರೋಪ: ತನಿಖೆಗೆ ಎಐಕೆಎಸ್ ಆಗ್ರಹ
ರಾಯಚೂರು: ಮಾನವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಬಜಂತ್ರಿ ಸಮುದಾಯಕ್ಕೆ ನೀಡಲಾಗಿದ್ದ ಇನಾಂಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಮೂಲಕ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಬಡ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಎಐಕೆಎಸ್ ರಾಜ್ಯ ಸಂಚಾಲಕ ಬಿ. ಬಸವಲಿಂಗಪ್ಪ ಆಗ್ರಹಿಸಿದರು. ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರ್ಕಲ್ ಗ್ರಾಮದ ಶ್ರೀ ವೇಂಕಟೇಶ್ವರ ದೇವಸ್ಥಾನ ಹೆಸರಿನ ಖಿದಮತ್ ಇನಾಂಭೂಮಿಯ ಸರ್ವೆ ನಂ. 647/1 ರಲ್ಲಿ 3.24 ಎಕರೆ ಭೂಮಿಯನ್ನು ದಿ. ಮಲ್ಲಪ್ಪ ಹುಲಿಗೆಪ್ಪ ಅವರಿಗೆ ನೀಡಲಾಗಿತ್ತು. ಅವರ ನಿಧನದ ನಂತರ ಪತ್ನಿ ಯಲ್ಲಮ್ಮ ಅವರಿಗೆ ನಿಯಮಾನುಸಾರ ಇನಾಂ ಪಟ್ಟಾ ವರ್ಗಾವಣೆ ಆಗಿತ್ತು ಎಂದರು. ಯಲ್ಲಮ್ಮ ಅವರಿಗೆ ಗಂಡು ಸಂತಾನ ಇರದೇ ನಾಲ್ಕು ಪುತ್ರಿಯರು ಇದ್ದರು. 2017ರ ಏಪ್ರಿಲ್ 18ರಂದು ಕುಟುಂಬಕ್ಕೆ ಸಂಬಂಧವಿಲ್ಲದ ಬೇರೆ ಜಾತಿಯವರು ಜಿಪಿಎ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಂತರ 2017ರ ಡಿಸೆಂಬರ್ 23ರಂದು ಪುತ್ರಿಯರು ಪೋತಿ ವಿರಾಸತ್ ಅರ್ಜಿಯನ್ನು ಮಾನವಿ ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದರೂ, ಗ್ರಾಮ ಲೆಕ್ಕಾಧಿಕಾರಿ 10 ಸಾವಿರ ರೂ. ಹಣವನ್ನು ಫೋನ್ಪೇ ಮೂಲಕ ಪಡೆದುಕೊಂಡಿದ್ದಾರೆ ಎಂದು ದೂರಿದರು. ಕಂದಾಯ ಇಲಾಖೆ ಅಧಿಕಾರಿಗಳು ಮೃತ ಯಲ್ಲಮ್ಮಳ ಆಧಾರ ಕಾರ್ಡ್ ಹಾಗೂ ಮಹಿಳೆಯರ ಹೆಬ್ಬಟ್ಟು ಸಹಿಯನ್ನು ದುರುಪಯೋಗಪಡಿಸಿಕೊಂಡು ಆಸ್ತಿ ವರ್ಗಾವಣೆ ಮಾಡಿ ಪಹಣಿ ನೀಡಿರುವುದು ಗಂಭೀರ ವಂಚನೆ ಎಂದು ಹೇಳಿದರು. ಸಂಬಂಧವಿಲ್ಲದ ವ್ಯಕ್ತಿಗಳಾದ ಈರಣ್ಣ ಹನುಮಯ್ಯ, ಸಾಬಯ್ಯ ತಂದೆ ಹನುಮಯ್ಯ, ವಿರೇಶ ಹುಸೇನಪ್ಪ ಹಾಗೂ ಜಯಮ್ಮ ಯಂಕೋಬ್ ಹೆಸರಿಗೆ ಹಕ್ಕು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರವಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ವಂಚಿತ ದಲಿತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಸಂತ್ರಸ್ತ ಕುಟುಂಬಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮುದಕಪ್ಪ ನಾಯಕ, ರವಿಕುಮಾರ ಹಾಗೂ ಸಂತ್ರಸ್ತ ಮಹಿಳೆಯರಾದ ಹುಲಿಗೆಮ್ಮ, ದ್ಯಾವಮ್ಮ, ಲಕ್ಷ್ಮೀ, ಶಾಂಭವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ; ಮೇ 5ರಿಂದ ವಿಚಾರಣೆ
ಹೊಸದಿಲ್ಲಿ, ಫೆ.19: ಪೌರತ್ವ ತಿದ್ದುಪಡಿ ಕಾಯ್ದೆ–2019 (CAA) ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮೇ 5ರಿಂದ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿತು. ಮೇ 5ರಿಂದ ಆರಂಭವಾಗುವ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಅರ್ಜಿಗಳನ್ನು ಪರಿಗಣಿಸಿದ ಪೀಠ, ವಿಚಾರಣೆಯ ವೇಳಾಪಟ್ಟಿಯನ್ನು ನಿಗದಿಪಡಿಸಿತು. ಈ ಅರ್ಜಿ 2024ರ ಮಾರ್ಚ್ 19ರಂದು ಈ ಹಿಂದೆ ವಿಚಾರಣೆಗೆ ಪಟ್ಟಿ ಆಗಿತ್ತು. ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು, ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ಆಲಿಸಬೇಕೆಂದು ಮನವಿ ಮಾಡಿದರು. ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಹಾಗೂ ಇಂಟರ್ಲೈನ್ ಪರ್ಮಿಟ್ ವ್ಯವಸ್ಥೆಯಿಂದ ಉದ್ಭವಿಸುವ ಪ್ರಶ್ನೆಗಳು ವಿಭಿನ್ನವಾಗಿರುವುದರಿಂದ ಪ್ರತ್ಯೇಕ ವಿಚಾರಣೆ ಅಗತ್ಯ ಎಂದು ಅವರು ಹೇಳದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2020ರ ಜನವರಿಯ ಆದೇಶದಂತೆ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ವಿಷಯಗಳನ್ನು ಇತರ ಅರ್ಜಿಗಳಿಂದ ಬೇರ್ಪಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ದೇಶದ ಉಳಿದ ಭಾಗಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಮೊದಲು ಆಲಿಸಿ, ಬಳಿಕ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಸಿಜೆಐ ಸೂಚಿಸಿದರು. ನ್ಯಾಯಾಲಯದ ಸೂಚನೆಯಂತೆ ಮೇ 5 ಮತ್ತು 6ರಂದು ಅರ್ಜಿಯ ಅರ್ಧ ದಿನದ ವಿಚಾರಣೆ ನಡೆಯಲಿದೆ. ಮೇ 6ರ ದ್ವಿತೀಯಾರ್ಧ ಹಾಗೂ ಮೇ 7ರಂದು ಪ್ರತಿವಾದಿಗಳ ವಾದಗಳು ಕೇಳಲಾಗುತ್ತದೆ. ಮೇ 12ರಂದು ಪ್ರತಿವಾದಗಳ ವಿಚಾರಣೆ ಮುಂದುವರಿಯಲಿದೆ. CAA–2019 ಪ್ರಕಾರ, 2014ರ ಡಿಸೆಂಬರ್ 31ರೊಳಗೆ ಮಾನ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ಪಡೆಯಲು ಅವಕಾಶ ನೀಡಲಾಗಿದೆ. ಇಂತಹವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಮತ್ತು ಇತರ ನೆರೆಯ ರಾಷ್ಟ್ರಗಳಿಂದ ಸಂಘರ್ಷಕ್ಕೊಳಗಾಗಿ ಬಂದ ನಿರಾಶ್ರಿತರನ್ನು ಪರಿಗಣಿಸದಿರುವುದು ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವೆಂದು ಅರ್ಜಿದಾರರು ವಾದಿಸಿದ್ದಾರೆ. 2024ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೆ ನಿಯಮಗಳನ್ನು ಅಧಿಸೂಚನೆ ಮಾಡಿ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿತ್ತು. CAA ನಿಯಮಗಳು–2024ನ್ನೂ ಪ್ರಶ್ನಿಸಲಾಗಿದ್ದರೂ, ಅವುಗಳ ವಿಚಾರಣೆ ಇನ್ನೂ ನಡೆಯಬೇಕಿದೆ. ಅಸ್ಸಾಂನ ಅರ್ಜಿದಾರರು CAA ಅಸ್ಸಾಂ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಜೊತೆಗೆ, ಕೇರಳ ರಾಜ್ಯವು ಶಾಸನವನ್ನು ಪ್ರಶ್ನಿಸಿ ಮೊಕದ್ದಮೆ ಹೂಡಿದೆ. ಕೇಂದ್ರ ಸರ್ಕಾರವು, ಈ ಕಾಯ್ದೆಯಿಂದ ಯಾವುದೇ ಭಾರತೀಯ ನಾಗರಿಕನ ಪೌರತ್ವಕ್ಕೆ ಧಕ್ಕೆಯಾಗುವುದಿಲ್ಲ; ನಿರ್ದಿಷ್ಟ ವರ್ಗಗಳಿಗೆ ರಿಯಾಯಿತಿ ನೀಡಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
ಮಂಗಳೂರು| ಕೇಬಲ್ ಕಳವು ಪ್ರಕರಣ: ಬಿಎಸ್ಎನ್ಎಲ್ ಉದ್ಯೋಗಿಗಳ ಸಹಿತ ಮೂವರ ಬಂಧನ
ಮಂಗಳೂರು, ಫೆ.19: ನಗರದ ಪಾಂಡೇಶ್ವರದ ಬಿಎಸ್ಎನ್ಎಲ್ ಇಲಾಖೆಗೆ ಸಂಬಂಧಿಸಿದ ಕೇಬಲ್ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ಎನ್ಎಲ್ ಉದ್ಯೋಗಿಗಳ ಸಹಿತ ಮೂವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೂಲತಃ ಮೂಡಿಗೆರೆ ತಾಲೂಕಿನ ಪ್ರಸಕ್ತ ಎಕ್ಕೂರಿನಲ್ಲಿ ವಾಸವಾಗಿರುವ ಕೇಬಲ್ ಜಾಯಿಂಟರ್ ಕೆಲಸ ಮಾಡುತ್ತಿರುವ ಮಂಜುನಾಥ ಡಿ. (29) ಮತ್ತು ಮೂಲತಃ ಕೇರಳ ಕಣ್ಣೂರಿನ ಪ್ರಸಕ್ತ ಮಾರ್ನಮಿಕಟ್ಟೆಯಲ್ಲಿ ವಾಸವಾಗಿರುವ ಟೆಲಿಕಾಂ ಟೆಕ್ನಿಶಿಯನ್ ಕೆಲಸ ಮಾಡುತ್ತಿರುವ ಕೆ.ಕೆ.ಚಾಮಿ (59) ಹಾಗೂ ಮೂಲತಃ ಹಾಸನ ಜಿಲ್ಲೆಯ ಪ್ರಸಕ್ತ ಪಂಪ್ವೆಲ್ನಲ್ಲಿ ವಾಸವಾಗಿರುವ ಅಸಿಸ್ಟೆಂಟ್ ಆಫೀಸ್ ಸುಪರ್ವೈಸರ್ ಆಗಿರುವ ತನ್ವೀರ್ ಪಾಷಾ (50) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ 45 ಕೆ.ಜಿ ತಾಮ್ರದ ಕೇಬಲ್ ಹಾಗೂ ಅವುಗಳನ್ನು ಮಾರಾಟ ಮಾಡಿ ಬಂದ 10 ಲಕ್ಷ ರೂ.ವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ನಿಂದ ಈ ವರ್ಷದ ಫೆಬ್ರವರಿ 14ರವರೆಗೆ ಸುಮಾರು 70 ಲಕ್ಷ ರೂ. ಮೌಲ್ಯದ ಕೇಬಲನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಫೆ.16ರಂದು ಬಿಎಸ್ಎನ್ಎಲ್ ಜೂನಿಯರ್ ಟೆಲಿಕಾಂ ಅಧಿಕಾರಿ ವಿನೋದ ಶೇಖರ್ ನಾಯ್ಕ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೇಕಡಾ 5ರಷ್ಟು ಮೀಸಲಾತಿ ರದ್ದು, ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಸೌಲಭ್ಯ ನಿಲ್ಲಿಸಿದೆ ಈ ರಾಜ್ಯ... Muslim Quota
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕರ್ನಾಟಕದ ನೆರೆ ರಾಜ್ಯದಲ್ಲಿ ದೊಡ್ಡ ವಿವಾದ ಭುಗಿಲೆದ್ದು, ರಾಜಕೀಯ ಚರ್ಚೆಗಳು ಕೂಡ ಜೋರಾಗಿದ್ದವು. ಚುನಾವಣೆಗೆ ಕೂಡ ಇದೇ ಅಸ್ತ್ರ ಬಳಸಿಕೊಂಡು ಸೋಲು &ಗೆಲುವಿನ ಲೆಕ್ಕಾಚಾರ ಕೂಡ ಆರಂಭ ಆಗಿತ್ತು. ಸುಮಾರು 12 ವರ್ಷಗಳ ಕಾಲ ನಡೆದುಕೊಂಡು ಬಂದ ಈ ತಿಕ್ಕಾಟ ಈಗ ದಿಢೀರ್ ಅಂತ್ಯವಾಗಿದೆ. ಅಂದಹಾಗೆ ಮಹಾರಾಷ್ಟ್ರ ರಾಜ್ಯದಲ್ಲಿ
ದಿಲ್ಲಿಯಲ್ಲಿ ಇ-ತ್ಯಾಜ್ಯ ಮರುಬಳಕೆ ಕೇಂದ್ರಗಳ ಕೊರತೆ: CPCB ವರದಿ
ಹೊಸದಿಲ್ಲಿ: ವಿದ್ಯುನ್ಮಾನ ಅಥವಾ ಇ-ತ್ಯಾಜ್ಯ ಮರುಬಳಕೆ ಸೌಲಭ್ಯಗಳಿಲ್ಲದ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿಯೂ ಒಂದಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದರೊಂದಿಗೆ, ಅಂತಾರಾಜ್ಯ ಇ-ತ್ಯಾಜ್ಯ ಸಾಗಣೆಯ ಕುರಿತು ರಾಷ್ಟ್ರ ರಾಜಧಾನಿ ದಿಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದೂ ತಿಳಿಸಿದೆ. ಆದರೆ, ವಿದ್ಯುಚ್ಛಕ್ತಿ ಮತ್ತು ವಿದ್ಯುನ್ಮಾನ ಸಾಧನಗಳ ಎಲ್ಲಾ 106 ಪ್ರವರ್ಗಗಳನ್ನು ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022ರ ಅಡಿ ಇ-ತ್ಯಾಜ್ಯಗಳಾಗಿ ಸಂಪೂರ್ಣವಾಗಿ ಪಟ್ಟಿ ಮಾಡಿರುವ ಏಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಪೈಕಿ ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯೂ ಒಂದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಇ-ತ್ಯಾಜ್ಯ ನಿರ್ವಹಣೆ ವಿಷಯದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇದಕ್ಕೂ ಮುನ್ನ ಹಸಿರು ನ್ಯಾಯಮಂಡಳಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೈಗೊಂಡ ಕ್ರಮದ ಕುರಿತು ವರದಿ ಕೋರಿತ್ತು. ಫೆಬ್ರವರಿ 12ರ ತನ್ನ ಆದೇಶದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಉತ್ತರಾಖಂಡ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ಸ್ವೀಕರಿಸಿದೆ ಎಂಬುದನ್ನು ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿದೆ. ದಿಲ್ಲಿ ಸೇರಿದಂತೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇ-ತ್ಯಾಜ್ಯ ಮರುಬಳಕೆ ಸೌಲಭ್ಯಗಳ ಕೊರತೆಯನ್ನು ಹೊಂದಿವೆ ಎಂದೂ ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮಾನ್ ಮೊರ್ಕೆಲ್ ಭಾರತದ ಕೋಚ್, ದಕ್ಷಿಣ ಆಫ್ರಿಕಾಗೆ ಅಣ್ಣ ಅಲ್ಬೀ ತರಬೇತಿ; ಯಾರಿಗೆ ಬೆಂಬಲ ಎಂಬುದೇ ತಾಯಿಗೆ ಗೊಂದಲ!
ದೊಡ್ಡ ಮಗ ಒಂದು ತಂಡ, ಸಣ್ಣ ಮಗ ಮತ್ತೊಂದು ತಂಡ! ಹೀಗಾದರೆ ತಾಯಿ ಆದವಳು ಯಾರನ್ನು ಬೆಂಬಲಿಸಬೇಕು ಹೇಳಿ? ಇಂಥಹದ್ದೊಂದು ಸಮಸ್ಯೆ ಎದುರಾಗಿರುವುದು ಭಾರತ ತಂಡದ ಬೌಲಿಂಗ್ ಕೋಚ್ ಮಾನ್ ಮೊರ್ಕೆಲ್ ಅವರ ತಾಯಿ ಮರಿಯಾನಾ ಮೊರ್ಕೆಲ್ ಅವರಿಗೆ.ಅವರ ಹಿರಿಯ ಪುತ್ರ ಅಲ್ಬೀ ಮೊರ್ಕೆಲ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಕನ್ಸಲ್ಟೆಂಟ್ ಕೋಚ್. ಇಬ್ಬರೂ ಸಹ ಆಡಿದ್ದಾರೆ. ಇದೀಗ ಫೆಬ್ರವರಿ 22 ಭಾನುವಾರದಂದು ಅಹ್ಮದಾಬಾದ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಪಂದ್ಯ ನಡೆಯುವಾಗ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯುವಾಗ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಪ್ರಿಯೋರಿಯಾದಲ್ಲಿ ನೆಲೆಸಿರುವ ತಾಯಿಗೆ ಸಂಕಟ. ಮನೆಯ ಸದಸ್ಯರೆಲ್ಲರಿಗೂ ಗೊಂದಲ. ಪರಸ್ಪರ ವಿಚಾರ ವಿನಿಮಯ ಇಲ್ಲ ಈ ಬಗ್ಗೆ ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಅಲ್ಬೀ ಮೊರ್ಕೆಲ್ ಅವರನ್ನು ನೀವು ಮಾನ್ ಜೊತೆ ಕೋಚಿಂಗ್ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ. ``ಇಲ್ಲ, ಈ ಸಂದರ್ಭದಲ್ಲಿ ನಾವು ಪರಸ್ಪರ ಮಾತೇ ಆಡುವುದಿಲ್ಲ. ನನ್ನ ಪ್ರಕಾರ ನಮಗಿಂತಲೂ ನಮ್ಮ ತಾಯಿ ತುಂಬಾ ತಲೆ ಬಿಸಿ ಮಾಡುತ್ತಿರುತ್ತಾರೆ. ದಕ್ಷಿಣ ಆಫ್ರಿಕಾವನ್ನು ಬೆಂಬಲಿಸಬೇಕೋ ಅಥವಾ ಭಾರತವನ್ನೋ ಎಂಬ ಬಗ್ಗೆ ಗೊಂದಲದಲ್ಲಿರುತ್ತಾರೆ ವಿನೋದ ಮಾಡಿದರು. ನಾವು ಅತ್ಯಂತ ಕಠಿಣವಾದ ಗುಂಪಿನಲ್ಲಿದ್ದೆವು. ಆದರೆ ವಿಶ್ವಕಪ್ ನ ನಿಜವಾದ ಸವಾಲು ಈಗ ಪ್ರಾರಂಭವಾಗಿದೆ ಎಂಬುದು ನನ್ನ ಅನಿಸಿಕೆ. ಈಗ ನಾವು ಭಾರತ, ಜಿಂಬಾಬ್ನೆ ಮತ್ತು ವೆಸ್ಟ್ ಇಂಡೀಸ್ ಅನ್ನು ಎದುರಿಸಬೇಕಿದೆ. ಹಾಗಾಗಿ ಇದು ಕಠಿಣ ಹಂತ. ಮೂರೂ ಉತ್ತಮ ಪಂದ್ಯಗಳಾಗಲಿವ. ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಇಲ್ಲಿ ಕಠಿಣ ಸವಾಲನ್ನು ಮೀರಿ ನಿಲ್ಲಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಒತ್ತಡ ನಿಭಾಯಿಸುವ ಶಕ್ತಿಯಿದೆ ನಮ್ಮ ಬಳಿ ಅತ್ಯಂತ ಅನುಭವಿ ಬೌಲರ್ ಗಳ ಸಮೂಹವಿದೆ. ಅದೇ ರೀತಿ ಬ್ಯಾಟಿಂಗ್ ಸಹ ಉತ್ತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇರಬಹುದು, ಐಪಿಎಲ್ ಇರಬಹುದು ಅಥವಾ ಇನ್ನಾವುದೇ ಲೀಗ್ ಗಳಲ್ಲಿ ನಮ್ಮ ಹುಡುಗರು ಒತ್ತಡದ ಕ್ಷಣಗಳನ್ನು ನಿಭಾಯಿಸಿದ್ದಾರೆ. ಇದು ಸ್ವಲ್ಪ ವಿಭಿನ್ನವಾಗಿದ್ದರೂ ಇದನ್ನು ಚೆನ್ನಾಗಿ ನಿಭಾಯಿಸಬಲ್ಲರು. ಹೀಗಾಗಿ ನಾನು ಜಾಸ್ತಿ ಚಿಂತಿಸುತ್ತಿಲ್ಲ ಎಂದು ತಿಳಿಸಿದರು. ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದ ಅಲ್ಬೀ ಮೊರ್ಕೆಲ್ ಅವರು 2004ರಿಂದ 2012ರವರೆಗೆ ದಕ್ಷಿಣ ಆಪ್ರಿಕಾ ತಂಡದ ಭಾಗವಾಗಿದ್ದರು. ಒಂದು ಟೆಸ್ಟ್, 58 ಅಂತಾರಾಷ್ಟ್ರೀಯ ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದರು. ಇನ್ನು ಅವರ ಸಹೋದರ 2006ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಾನ್ ಮೊರ್ಕೆಲ್ ಅವರು 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿದ್ದರು.
ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಡೇವಿಡ್ ಸಿಕ್ವೇರಾ ಅವರ ಆರೋಗ್ಯ ವಿಚಾರಿಸಿದ ಸ್ಪೀಕರ್ ಯುಟಿ ಖಾದರ್
ಉಡುಪಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಉದ್ಯೋಗಿ ಖ್ಯಾತ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಇವರು ತೀವ್ರ ಬೆನ್ನು ನೋವಿನಿಂದ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಚಾರ ತಿಳಿದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕೋಟೇಶ್ವರಕ್ಕೆ ಆಗಮಿಸಿ ಡೇವಿಡ್ರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ತಮ್ಮ ಹಳೆಯ ರಾಜಕೀಯ ಓಡಾಟದ ದಿನಗಳನ್ನು ನೆನಪಿಸಿಕೊಂಡು ಸಮಾಜಕ್ಕೆ ತಮ್ಮಂತಹ ಸಮಾಜ ಸೇವಕರ ಅಗತ್ಯವಿದ್ದು ಶೀಘ್ರ ಗುಣಮುಖವಾಗಲೆಂದು ಯುಟಿ ಖಾದರ್ ಹಾರೈಸಿದರು.
ಕೊಲ್ಲೂರು: ಪ್ರಾಮಾಣಿಕತೆಗೆ ನಿದರ್ಶನವಾದ ಎರಡು ಘಟನೆ; ಸಾರ್ವಜನಿಕರಿಂದ ಶ್ಲಾಘನೆ
ಕುಂದಾಪುರ, ಫೆ.19: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್ ಫೋನ್, ನಗದನ್ನು ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಒಂದೇ ದಿನದಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಗುರುವಾರ) ವರದಿಯಾಗಿದೆ. ಘಟನೆಯೊಂದರಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಸುಮಾರು 15 ಸಾವಿರ ರೂಪಾಯಿ ನಗದು ಹಣವಿದ್ದ ಬ್ಯಾಗನ್ನು ಹೆಸರು ಹೇಳಲು ಇಚ್ಚಿಸದ ಪ್ರವಾಸಿಗರೊಬ್ಬರು ತಂದು ಠಾಣೆಗೆ ಒಪ್ಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಭಿಷೇಕ್ ಎಂಬ ಕೇರಳದ ಕೊಲ್ಲಂ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ನಿಯ ಸುಮಾರು 3 ಸಾವಿರ ರೂ. ನಗದು ಮತ್ತು ಐಫೋನ್ ಮೊಬೈಲ್ ಇದ್ದ ಬ್ಯಾಗನ್ನು ಕೊಡಚಾದ್ರಿ ಜೀಪ್ ಚಾಲಕ ಮುದೂರಿನ ಶರತ್ ಎನ್ನುವರು ಠಾಣೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಯಲ್ಲಿ ನಗ-ನಗದು ಕಳೆದುಕೊಂಡವರಿಗೆ ಅವರ ವಸ್ತುಗಳನ್ನು ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ಹಸ್ತಾಂತರಿಸಿದ್ದು ಪ್ರವಾಸಿಗ ಮತ್ತು ಜೀಪ್ ಚಾಲಕರ ಪ್ರಾಮಾಣಿಕತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆ ಪುನರಾರಂಭ: ಆರೋಗ್ಯ ಇಲಾಖೆ ಸ್ಪಷ್ಟನೆ
ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಸಂಸ್ಥೆಯು ಫೆ.18ರಿಂದ ಸೇವೆಗಳನ್ನು ನಿಲ್ಲಿಸಿದ್ದು, ರಾಜ್ಯ ಸರಕಾರವು ಪರ್ಯಾಯ ವ್ಯವಸ್ಥೆಯನ್ನು ಮಾಡಿದೆ. ಹಾಗೆಯೇ ಎರಡು ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆ ಪುನರಾರಂಭವಾಗಲಿದೆ ಎಂದು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ. ಗುರುವಾರ ಆರೋಗ್ಯ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ರಾಜ್ಯ ಸರಕಾರವು 2017ರಿಂದ ರಾಜ್ಯದ 13 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಸೇವೆಯನ್ನು ನೀಡಲು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ರೋಗಿಗಳಿಗೆ ಉಚಿತವಾಗಿ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಶೇ.30ರಷ್ಟು ಸಹಾಯಧನದೊಂದಿಗೆ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದೆ. ಸರಕಾರವು 2019ರಿಂದ 143 ಕೋಟಿ ರೂ. ಪಾವತಿ ಉಳಿಸಿಕೊಂಡಿದೆ ಎಂದು ಖಾಸಗಿ ಸಂಸ್ಥೆ ಆರೋಪಿಸಿದೆ. ಈ ಆರೋಪ ಆಧಾರರಹಿತವಾಗಿದ್ದು, ಈ ಮೊತ್ತವನ್ನು ಪಾವತಿಸಲಾಗುವುದಿಲ್ಲ. ಸಿಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಸೇವೆಗಳನ್ನು ಒದಗಿಸಲು ಕರ್ನಾಟಕ ಸರಕಾರವು ಸಾಕಷ್ಟು ಹಣವನ್ನು ಹೊಂದಿದೆ. ಸರಿಯಾದ ಪಾವತಿಗಳನ್ನು ಮಾತ್ರ ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಈಗ ಖಾಸಗಿ ಸಂಸ್ಥೆಯು ಸ್ಕ್ಯಾನಿಂಗ್ ಸೇವೆಗಳನ್ನು ನಿಲ್ಲಿಸಿದೆ. ಆದರೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಎಂಪನೆಲ್ ಮಾಡಲಾದ ಸರಕಾರಿ/ಖಾಸಗಿ ವೈದ್ಯಕೀಯ ಕಾಲೇಜುಗಳು/ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯು ಹೇಳಿದೆ.
ಲಿಂಗಸುಗೂರು | ಬಾಲ್ಯ ವಿವಾಹ ಮುಕ್ತ ತಾಲೂಕು ಮಾಡಲು ಸರ್ವರ ಪಾತ್ರ ಅಗತ್ಯ : ಸುಜಾತ ಹೂನೂರು
ಲಿಂಗಸುಗೂರು: ತಾಲೂಕನ್ನು ಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿ ರೂಪಿಸಲು ಎಲ್ಲರ ಪಾತ್ರ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರು ಹೇಳಿದರು. ತಾಲೂಕಿನ ಕಸ್ತೂರಬಾ ಗಾಂಧಿ ಬಾಲಕಿಯರ ವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆ ಬಯ್ಯಾಪೂರಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಲಿಂಗಸುಗೂರು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು POCSO Act ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಬಾಲ್ಯ ವಿವಾಹ’ ಪದ್ಧತಿ ಮಕ್ಕಳ ಬಾಲ್ಯವನ್ನು ಹಾಳುಮಾಡುವ ಸಾಮಾಜಿಕ ಪಿಡುಗಾಗಿದೆ. ಇದನ್ನು ನಿರ್ಮೂಲನೆಗೊಳಿಸಲು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು. ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು. ಮಕ್ಕಳಿಗೆ ಕಾನೂನಿನ ಬಗ್ಗೆ ಸಮಗ್ರ ಅರಿವು ಇರಬೇಕು. ಕಾನೂನು ತೊಡಕುಗಳಿಗೆ ಸಿಕ್ಕಿಕೊಳ್ಳದೆ ಸತ್ಪ್ರಜೆಯಾಗಿ ಬದುಕಬೇಕು ಎಂದು ಸಲಹೆ ನೀಡಿದರು. ಮಕ್ಕಳು ದೇಶದ ಭವಿಷ್ಯವಾಗಿದ್ದು, ತಮ್ಮ ಹಕ್ಕುಗಳು ಹಾಗೂ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಇತ್ತೀಚೆಗೆ ಹುಡುಗರ ಮೇಲೆಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹೆಚ್ಚಿನ ಗಮನ ವಹಿಸಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ ಪಿ.ಎಸ್.ಐ ಮುದಗಲ್, ಶಿವಶಂಕರ ಹೆಚ್. ಪ್ರಭಾರಿ ಮುಖ್ಯಗುರು, ಶಿಕ್ಷಕಿ ಪಾರ್ವತಿ, ಶಿಕ್ಷಣ ಸಂಯೋಜಕ ಮಹಾಂತೇಶ ಬಳ್ಳೋಳ್ಳಿ, ಅಪ್ಪಣ್ಣ ಎ.ಆರ್. ಹವಾಲ್ದಾರ, ವಿಜಯ ಮೇಟಿ, ಜಿ. ಸೌಂಧರಿ, ಸೈಯದ್ ವದುದ್, ವೀರೇಶ ಹಡಪಾದ, ಜರ್ತಾನ ಅಫ್ರೀನ್, ಮೈಬೂಬಸಾಬ ಬಾಗವಾನ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಯಚೂರು | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಫೆ.19ರಂದು ರಾಯಚೂರು ಗ್ರಾಮೀಣ ಕ್ಷೇತ್ರದ ಗಧಾರ, ಉಪ್ರಾಳ ಗೊಡಿಹಾಳ ಹಾಗೂ ರಾಮನಗರ ಕ್ಯಾಂಪ್ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗಧಾರ ಗ್ರಾಮದಲ್ಲಿ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಅದೇ ಗ್ರಾಮದಿಂದ ಮಂಜರ್ಲಾ ವರೆಗೆ ಸುಮಾರು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಅನುದಾನದಡಿ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೂ ಭೂಮಿಪೂಜೆ ನಡೆಯಿತು. ಅದೇ ವೇಳೆ 2 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಮೈಕ್ರೋ ಅನುದಾನದಡಿ ನಿರ್ಮಿಸಲಾದ ಪ್ರೌಢಶಾಲಾ ಕಟ್ಟಡವನ್ನು ಉದ್ಘಾಟಿಸಲಾಯಿತು. ಉಪ್ರಾಳ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಎಸ್ಟಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಉಪ್ರಾಳ ಗೊಡಿಹಾಳ ಗ್ರಾಮದಲ್ಲಿ 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 3 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ರಾಮನಗರ ಕ್ಯಾಂಪ್ ಗ್ರಾಮದಲ್ಲಿ 59 ಲಕ್ಷ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ನಿರ್ಮಿಸಲಾದ 4 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಗಳ ಹಿರಿಯ ಮುಖಂಡರು, ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರಕ್ಷಣಾ ಸಾಧನ, ಮುಂಜಾಗ್ರತೆ ಇಲ್ಲದೆ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುವ ಕಾರ್ಯ; ಆಗದಿರಲಿ ಪ್ರಾಣಕ್ಕೆ ಸಂಚಕಾರ
ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಮೃತಪಟ್ಟ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಹೀರಾಪೂರ ಪ್ರದೇಶದ ಬಬಲಾದ ರಸ್ತೆ ಸಮೀಪ ಮಾದರಸನಹಳ್ಳಿಯಲ್ಲಿ ಫೆ. 18ರಂದು ನಡೆದಿದೆ. ಮೃತರನ್ನು ಹೀರಾಪೂರ ವ್ಯಾಪ್ತಿಯ ಮಾದರಸನಹಳ್ಳಿಯ ನಿವಾಸಿ ಶಿವಕುಮಾರ್ ನಂದೂರಕರ್ (52) ಹಾಗೂ ಇಂದಿರಾ ನಗರದ ನಿವಾಸಿ ರತನ್ ಭುಜಂಗರಾವ ಹೊಟ್ಕರ್ (60) ಎಂದು ಗುರುತಿಸಲಾಗಿದೆ. ಶಿವಕುಮಾರ್ ಮತ್ತು ರತನ್ ಸ್ನೇಹಿತರಾಗಿದ್ದು, ಶಿವಕುಮಾರ್ ಅವರ ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ರತನ್ ಮೊದಲು ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಾಗ ಉಸಿರುಗಟ್ಟಿದೆ. ಆತನನ್ನು ರಕ್ಷಿಸಲು ಶಿವಕುಮಾರ್ ಟ್ಯಾಂಕ್ ಗೆ ಇಳಿದಿದ್ದು, ವಿಷಕಾರಿ ಅನಿಲ ಸೇವನೆಯಿಂದ ಇಬ್ಬರೂ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಅಶೋಕ್ ನಗರ ಪೊಲೀಸರು ಇದನ್ನು ಅಸ್ವಾಭಾವಿಕ ಸಾವಿನ ಪ್ರಕರಣವೆಂದು ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಸರಿಯಾದ ಸುರಕ್ಷತಾ ಪ್ರೋಟೋಕಾಲ್ ಗಳನ್ನು ಅನುಸರಿಸಲಾಗಿದೆಯೇ ಮತ್ತು ಕಾರ್ಮಿಕರಿಗೆ ರಕ್ಷಣಾ ಸಾಧನಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ದುರಂತವು ನೈರ್ಮಲ್ಯ ಕಾರ್ಮಿಕರು ಎದುರಿಸುತ್ತಿರುವ ಅಪಾಯವನ್ನು ಮತ್ತು ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸುವಾಗ ಸುರಕ್ಷತಾ ಪ್ರೋಟೋಕಾಲ್ಗಳ ತುರ್ತು ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಮೀಥೇನ್, ಹೈಡ್ರೋಜನ್ ಸಲ್ಫೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ನಂತಹ ಅಪಾಯಕಾರಿ ಅನಿಲಗಳು ಇರುವ ಸಾಧ್ಯತೆ ಇದೆ; ಇವು ಸೀಮಿತ ಸ್ಥಳಗಳಲ್ಲಿ ಕೆಲವೇ ನಿಮಿಷಗಳಲ್ಲಿ ಪ್ರಾಣಕ್ಕೆ ಸಂಚಕಾರವಾಗಬಹುದು. ►ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ ಸಂಭವಿಸಿದ ದುರಂತಗಳು 2025 ಅಕ್ಟೋಬರ್ 20ರಂದು ಹಿಸಾರ್ ಜಿಲ್ಲೆಯ ಹನ್ಸಿಯಲ್ಲಿರುವ ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಗರ್ಹಿ ಗ್ರಾಮದ ಸೋಮೀರ್ ಮತ್ತು ಜಮಾವರಿ ಗ್ರಾಮದ ವೀರೇಂದರ್ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಒಳಚರಂಡಿ ಮೋಟಾರ್ ದೋಷಗೊಂಡಿದ್ದರಿಂದ ಇಬ್ಬರೂ ಟ್ಯಾಂಕ್ ಒಳಗೆ ಇಳಿದಿದ್ದರು. ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಟ್ಯಾಂಕ್ ಗೆ ಇಳಿದ ತಕ್ಷಣ ಒಬ್ಬ ಕಾರ್ಮಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಸಹೋದ್ಯೋಗಿ ಇಳಿದಾಗ ಆತನು ಕೂಡ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಈ ಘಟನೆ ನಡೆದ ಆರು ವಾರಗಳ ನಂತರ ಹರಿಯಾಣ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. 2025 ಮೇ 27ರಂದು ಜೈಪುರದ ಸೀತಾಪುರ ಕೈಗಾರಿಕಾ ಪ್ರದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಕಣಗಳನ್ನು ಹೊರತೆಗೆಯಲು ಸೆಪ್ಟಿಕ್ ಟ್ಯಾಂಕ್ ಗೆ ಇಳಿದಿದ್ದ ನಾಲ್ವರು ವ್ಯಕ್ತಿಗಳು ವಿಷಕಾರಿ ಹೊಗೆಯಿಂದ ಸಾವಿಗೀಡಾದ ಘಟನೆ ವರದಿಯಾಗಿತ್ತು. ಸಂಜೀವ್ ಪಾಲ್, ಹಿಮಾಂಶು ಸಿಂಗ್, ರೋಹಿತ್ ಪಾಲ್ ಮತ್ತು ಅರ್ಪಿತ್ ಯಾದವ್ ಎಂಬ ಕಾರ್ಮಿಕರು 10 ಅಡಿ ಆಳದ ಟ್ಯಾಂಕ್ ಗೆ ಇಳಿದಿದ್ದರು. ಮೊದಲಿಗೆ ಇವರು ಟ್ಯಾಂಕ್ ಗೆ ಇಳಿಯಲು ನಿರಾಕರಿಸಿದ್ದರು. ಆದರೆ ಹೆಚ್ಚುವರಿ ಹಣ ನೀಡುವುದಾಗಿ ಕಂಪೆನಿ ಭರವಸೆ ನೀಡಿದ ಬಳಿಕ ಇಳಿದಿದ್ದರು ಎನ್ನಲಾಗಿದೆ. 2025 ಮೇ 23ರಂದು ಬಿಕಾನೇರ್ನ ಉಣ್ಣೆಯ ಉಡುಪು ಘಟಕದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿದ್ದರು. ಕರ್ಣಿ ಕೈಗಾರಿಕಾ ಪ್ರದೇಶದ ಭವಾನಿ ಉಣ್ಣೆ ಮಿಲ್ ನಲ್ಲಿ ಈ ದುರಂತ ಸಂಭವಿಸಿದೆ. ಉಣ್ಣೆಯ ದಾರಗಳನ್ನು ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಪ್ರಕ್ರಿಯೆಯಿಂದ ಟ್ಯಾಂಕ್ ತ್ಯಾಜ್ಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಅಲ್ಲಿ ಸಂಗ್ರಹವಾದ ವಿಷಕಾರಿ ಅನಿಲವನ್ನು ಉಸಿರಾಡಿ ಸಾಗರ್ (32), ಅನಿಲ್ (30) ಮತ್ತು ಗಣೇಶ್ ಕರ್ಣಿ (28) ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2025 ಮೇ 16ರಂದು ಗುಜರಾತ್ ನ ಅಹಮದಾಬಾದ್ ನಗರದ ಡ್ಯಾನಿಲಿಮ್ಡಾ ಪ್ರದೇಶದ ಜೀನ್ಸ್ ತೊಳೆಯುವ ಘಟಕದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೂವರು ಕಾರ್ಮಿಕರು ವಿಷಕಾರಿ ಅನಿಲವನ್ನು ಉಸಿರಾಡಿ ಸಾವಿಗೀಡಾಗಿದ್ದರು. ಕಾರ್ಮಿಕರಾದ ಪ್ರಕಾಶ್ ಪರ್ಮಾರ್, ವಿಶಾಲ್ ಠಾಕೋರ್ ಮತ್ತು ಸುನಿಲ್ ರಥ್ವಾ ಟ್ಯಾಂಕ್ ಗೆ ಇಳಿದಿದ್ದು, ಅಲ್ಲಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. 2025 ನವೆಂಬರ್ 4ರಂದು ನೋಯ್ಡಾದ ಸೆಕ್ಟರ್ 63ರ ಛೋತ್ಪುರ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ 7 ಅಡಿ ಆಳದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಅದರೊಳಗೆ ಬಿದ್ದು ಇಬ್ಬರು ಸಹೋದರರು ಸಾವಿಗೀಡಾದ ಘಟನೆ ವರದಿಯಾಗಿದೆ. ಮನೆಯ ಒಳಚರಂಡಿ ಪೈಪ್ಲೈನ್ ಕೆಟ್ಟುಹೋಗಿದ್ದರಿಂದ ಅದನ್ನು ಸರಿಪಡಿಸಲು ಚಂದ್ರಭನ್ ಮತ್ತು ರಾಜು ಮ್ಯಾನ್ ಹೋಲ್ ಅನ್ನು ಭಾಗಶಃ ತೆರೆದಿದ್ದರು. ಸ್ವಚ್ಛಗೊಳಿಸುವಾಗ ಚಂದ್ರಭನ್ ಕಾಲು ಜಾರಿ ಬಿದ್ದಿದ್ದು, ಕಿರಿಯ ಸಹೋದರ ರಾಜು ರಕ್ಷಿಸಲು ಪ್ರಯತ್ನಿಸಿದರೂ ಇಬ್ಬರೂ ಟ್ಯಾಂಕ್ ಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2025 ಅಕ್ಟೋಬರ್ನಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನದಲ್ಲಿ ತಮಿಳುನಾಡು ಮೂಲದ ಮೂವರು ಕಾರ್ಮಿಕರು ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದು ಸಾವಿಗೀಡಾಗಿದ್ದರು. ಅದೇ ವರ್ಷ ಡಿಸೆಂಬರ್ನಲ್ಲಿ ತೆಲಂಗಾಣದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಅನ್ಯರಾಜ್ಯದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಕಳೆದ ವರ್ಷ ಜೂನ್ ನಲ್ಲಿ ಉತ್ತರಪ್ರದೇಶದ ಪಿಲಿಭಿತ್ ನಲ್ಲಿ ತಮ್ಮ ಮನೆಯ ಹೊರಗಿರುವ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ಮೂವರು ಸದಸ್ಯರು ಸಾವಿಗೀಡಾಗಿದ್ದರು. ಭಾರತದಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ವೇಳೆ 2023ರಲ್ಲಿ 63 ಮಂದಿ, 2024ರಲ್ಲಿ 50 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ಕನಿಷ್ಠ 347 ಜನರು ಸಾವನ್ನಪ್ಪಿದ್ದಾರೆ ಎಂದು 2025ರಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾದರೆ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ಅಪಘಾತದಿಂದ ಅಂಗವೈಕಲ್ಯ ಉಂಟಾದರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಕನಿಷ್ಠ 10 ಲಕ್ಷ ರೂ. ಪರಿಹಾರ ಪಾವತಿಸಬೇಕು. ಅಂಗವೈಕಲ್ಯ ಶಾಶ್ವತ ಸ್ವರೂಪದ್ದಾಗಿದ್ದರೆ ಕನಿಷ್ಠ ಪರಿಹಾರವನ್ನು 20 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ ಎಂದು ಕಳೆದ ವರ್ಷ ಬಲರಾಮ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತಿಳಿಸಿತ್ತು.
ಉಡುಪಿ| ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ, ಫೆ.19: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಾಡಿಗಾರಿನ ರಾಘವೇಂದ್ರ (36) ಹಾಗೂ ಪೆರ್ಡೂರು ಕುಂಜದಕಟ್ಟೆ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಎಂದು ಗುರುತಿಸಲಾಗಿದೆ. ಫೆ.17ರ ರಾತ್ರಿ 10:30ರ ಸುಮಾರಿಗೆ ರಾಘವೇಂದ್ರ ಮತ್ತು ಸುಧೀಂದ್ರ ಅವರು ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 5, 12ರಂತೆ ಪ್ರಕರಣ ದಾಖಲಾಗಿತ್ತು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರ ನಿರ್ದೇಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹಿರಿಯಡಕ ಠಾಣೆಯ ಪೊಲೀಸರು ರಾಘವೇಂದ್ರ (36) ಮತ್ತು ಸುಧೀಂದ್ರ ಶೆಟ್ಟಿ ಬಾಬು (36) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಲ್ಲದೇ ಅವರು ಕೃತ್ಯಕ್ಕೆ ಬಳಸಿದ ಅಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Yadgiri | ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆ : ಪಾಲಕರಿಗೆ ಸಚಿವರಿಂದ ಪತ್ರ
ಯಾದಗಿರಿ: ಜಿಲ್ಲೆಯ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕ-ಪೋಷಕರಿಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ 10ನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತವಾಗಿದ್ದು, ಇನ್ನೂ ಸುಮಾರು 40 ದಿನಗಳಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಅವಧಿಗೆ ಮುನ್ನ ಹಾಗೂ ನಂತರ ವಿಶೇಷ ತರಗತಿಗಳು, ಘಟಕ ಪರೀಕ್ಷೆಗಳು, ಪರೀಕ್ಷಾ ಭಯ ನಿವಾರಣೆಗೆ ಆಪ್ತ ಸಮಾಲೋಚನೆ, ಮುಖ್ಯ ಘಟಕಾಂಶಗಳ ಪುನರಾವರ್ತನೆ ಹಾಗೂ ರಾತ್ರಿ ತರಗತಿಗಳ ಮೂಲಕ ಪೂರಕ ಶೈಕ್ಷಣಿಕ ವಾತಾವರಣ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದಿರುವ 40 ದಿನಗಳಲ್ಲಿ ವಿದ್ಯಾರ್ಥಿಗಳನ್ನು ಕೃಷಿ ಅಥವಾ ಮನೆ ಕೆಲಸಗಳಲ್ಲಿ ತೊಡಗಿಸಬಾರದು. ಟಿ.ವಿ. ಮತ್ತು ಮೊಬೈಲ್ ಬಳಕೆ ನಿಯಂತ್ರಿಸಿ, ಪ್ರತಿದಿನ ಶಾಲೆಗೆ ಕಳುಹಿಸಿ, ಓದಿಗೆ ಪ್ರೋತ್ಸಾಹ ನೀಡಿ ಮನೆಯಲ್ಲಿ ಉತ್ತಮ ಅಧ್ಯಯನ ವಾತಾವರಣ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಅವರು ಪತ್ರದಲ್ಲಿ ಕರೆ ನೀಡಿದ್ದಾರೆ.
ಉಕ್ರೇನ್ ಆಹಾರ ಸರಬರಾಜು ಮಾರ್ಗಕ್ಕೆ ಪೆಟ್ಟು, ಅದಿರು ರಫ್ತಿಗೂ ಅಡ್ಡಿ ಮಾಡಿದ ರಷ್ಯಾ ದಾಳಿ | Ukraine And Russia
ರಷ್ಯಾ ಸೇನೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮಾಡುತ್ತಾ ಉಕ್ರೇನ್ ದೇಶದ ಆಹಾರ ಸರಪಳಿಗೆ ದೊಡ್ಡ ಪೆಟ್ಟು ಕೊಡುತ್ತಿದೆ. ಇದರ ಜೊತೆಗೆ ಅದಿರು ರಫ್ತು ಕೂಡ ಬಂದ್ ಆಗುವಂತೆ ಮಾಡಿದ್ದು, ಬಂದರು ಪ್ರದೇಶಗಳ ಮೇಲೆ ನಡೆದಿರುವ ರಷ್ಯಾ ದಾಳಿಯಿಂದ ಇದೀಗ ಉಕ್ರೇನ್ ಪರದಾಡುತ್ತಿದೆ. ಹೀಗೆ ಕಳೆದ 4 ವರ್ಷಗಳಿಂದ ನಿರಂತರವಾಗಿ ನಡೆದ ಯುದ್ಧ ಘೋರ ವಾತಾವರಣ ಸೃಷ್ಟಿಸಿದೆ.
Bidar | ಒಳಮೀಸಲಾತಿಯ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಅನಿಲಕುಮಾರ್ ಬೆಲ್ದಾರ್
ಬೀದರ್ : ಒಳಮೀಸಲಾತಿ ಕುರಿತ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆಗೆ ಹಳೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇಲ್ಲವಾದರೆ ಬಲಗೈ ಜಾತಿಗಳ ಒಕ್ಕೂಟದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್ ಎಚ್ಚರಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯನ್ನು ಗುಂಪು-ಎ, ಬಿ, ಸಿ ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ಒಳಮೀಸಲಾತಿ ಕಾರಣದಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಸ್ತುತ ಪದ್ದತಿ ಬಲಗೈ ಸಮುದಾಯಗಳಿಗೆ ಅನ್ಯಾಯಕಾರಿಯಾಗಿದ್ದು, ಮುಖ್ಯಮಂತ್ರಿ ತಕ್ಷಣ ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ ಮಾತನಾಡಿ, ಪರಿಶಿಷ್ಟ ಜಾತಿಯ ಎಲ್ಲಾ ಪ್ರವರ್ಗಗಳಿಗೆ ನಿಗದಿತ ಪ್ರಮಾಣದಲ್ಲಿ ಮೀಸಲಾತಿ ಹಂಚಿಕೆ ಆಗುವಂತೆ ನೇಮಕಾತಿ ಪ್ರಾಧಿಕಾರ ರಚಿಸಿ, ಹುದ್ದೆಗಳನ್ನು ಕ್ರೂಢೀಕರಣದ ಮೂಲಕ ಭರ್ತಿ ಮಾಡಬೇಕು ಎಂದರು. ವಿಶ್ವವಿದ್ಯಾಲಯಗಳಲ್ಲಿ ವಿಭಾಗಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸುವುದರಿಂದ ಗುಂಪು-ಎ ಗೆ ಹೆಚ್ಚಿನ ಹುದ್ದೆಗಳು ಮೀಸಲಾಗುತ್ತಿದ್ದು, ಗುಂಪು-ಬಿ ಮತ್ತು ಸಿ ಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ, ಶೀಘ್ರ ಪರಿಹಾರ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ಮಾತನಾಡಿ, ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ದು ಅವೈಜ್ಞಾನಿಕ ಒಳಮೀಸಲಾತಿ ಜಾರಿ ಮಾಡಬಾರದು ಎಂದು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ್ ದೀನೆ, ಡಿಎಸ್ಎಸ್ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಬಿವಿಪಿ ಅಧ್ಯಕ್ಷ ಸಂದೀಪ್ ಕಾಂಟೆ, ಬಿವಿಎಸ್ ಅಧ್ಯಕ್ಷ ಪ್ರದೀಪ್ ನಾಟೇಕರ್, ಅಂಬಾದಾಸ್ ಗಾಯಕವಾಡ್, ಪುಟ್ಟು ದೀನೆ, ದಿಲೀಪ್ ಭೋಸ್ಲೆ, ರಮೇಶ್ ಪಾಸ್ವಾನ್, ಸೂರ್ಯಕಾಂತ್ ಸಾದೂರೆ, ಗೌರಿಶಂಕರ ವಾಘಮಾರೆ ಹಾಗೂ ಭೀಮರಾವ್ ಸೇರಿದಂತೆ ಇತರರು ಇದ್ದರು.
ಕಾಪು: ಯುವಕನ ಕೊಲೆ ಯತ್ನ ಪ್ರಕರಣ; ಆರೋಪಿಗೆ ಜೈಲುಶಿಕ್ಷೆ, ದಂಡ
ಉಡುಪಿ, ಫೆ.19: ಕ್ಷುಲ್ಲಕ ಕಾರಣಕ್ಕೆ ಕಾಪು ತಾಲೂಕು ಕೋಟೆ ಗ್ರಾಮದ ಯುವಕನೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ತೀರ್ಪು ಪ್ರಕಟಿಸಿದ್ದಾರೆ. ಅಭಿಷೇಕ್ ಶ್ರೀಯಾನ್ ಎಂಬಾತ ಪ್ರಕರಣದ ದೋಷಿಯಾಗಿದ್ದು ಕೊಲೆಯತ್ನ ಅಪರಾದಕ್ಕೆ 3 ವರ್ಷ 10 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ. ಇದೇ ಕೃತ್ಯದಡಿ ದಾಖಲಾದ ಇತರ ಮೂರು ವಿವಿಧ ಅಪರಾಧಗಳಿಗೆ ಒಟ್ಟು 30 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆರೋಪಿಯಿಂದ ವಸೂಲಾದ ದಂಡದ ಹಣದ ಪೈಕಿ 45 ಸಾವಿರ ರೂ. ಹಣವನ್ನು ದೂರುದಾರನಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಘಟನೆ ಹಿನ್ನೆಲೆ: 2021ರ ಜೂನ್ 22 ರಂದು ಕಾಪು ತಾಲೂಕು ಕೋಟೆ ಗ್ರಾಮದ ನಿವಾಸಿಯಾದ ಶರತ್ ದೇವಾಡಿ ಗನು ತನ್ನ ಸ್ನೇಹಿತನ ಹುಟ್ಟು ಹಬ್ಬವನ್ನು ಆಚರಿಸಲು ಸ್ನೇಹಿತರೊಂದಿಗೆ ಕೋಟೆ ಗ್ರಾಮದ ಪಾಪನಾಶಿನಿ ಹೊಳೆಯ ಬದಿಯಲ್ಲಿ ಕೂಡಿಕೊಂಡು ಮಾತನಾಡಿಕೊಂಡಿರುವಾಗ ರಾತ್ರಿ ಸುಮಾರು 11:00 ಗಂಟೆಯ ಸಮಯಕ್ಕೆ ಆರೋಪಿ ಅಭಿಷೇಕ್ ಶ್ರೀಯಾನ್ ಬೈಕ್ನಲ್ಲಿ ಬಂದು ಶರತ್ ದೇವಾಡಿಗನ ಬಳಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಶರತ್ಗೆ ಇರಿದಿದ್ದ. ಅಲ್ಲೇ ಇದ್ದ ಆತನ ಸ್ನೇಹಿತರು ಶರತ್ ರಕ್ಷಣೆಗೆ ಬಂದಿದ್ದರು. ಚೂರಿಯನ್ನು ಅಲ್ಲಿಯೇ ಎಸೆದು ಬೈಕಿನಲ್ಲಿ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಶರತ್ನನ್ನು ಸ್ನೇಹಿತರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು 7 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿ ಚೇತರಿಸಿಕೊಂಡಿದ್ದ. ಈ ಬಗ್ಗೆ ಶರತ್ ದೇವಾಡಿಗ ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕಾಪು ಪೊಲೀಸ್ ಠಾಣೆ ಅಂದಿನ ಪಿಎಸ್ಐ ರಾಘವೇಂದ್ರ ಸಿ. ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ಅವರು ವಾದ ಮಂಡಿಸಿದ್ದರು.
ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟ| ಫೆ.21ಕ್ಕೆ ಮಹಿಳೆಯರ ಸಮಾವೇಶ
ಉಡುಪಿ, ಫೆ.19: ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ 5ನೇ ಕರ್ನಾಟಕ ರಾಜ್ಯ ಎಲ್ಲೈಸಿ ದುಡಿಯುವ ಮಹಿಳೆಯರ ಸಮಾವೇಶವು ಉಡುಪಿ ನಗರದ ಲಿಕೋ ಬ್ಯಾಂಕ್ನ ವಜ್ರಮಹೋತ್ಸವ ಕಟ್ಟಡದಲ್ಲಿ ಫೆ.21ರಂದು ನಡೆಯಲಿದೆ. ಸಮಾವೇಶವನ್ನು ಕನ್ನಡ ಲೇಖಕಿ, ಕವಿ ಮತ್ತು ಪ್ರಗತಿಪರ ಶಿಕ್ಷಣ ತಜ್ಞರಾಗಿರುವ ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ವಿನಯ ಒಕ್ಕುಂದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ಎನ್. ರವೀಂದ್ರನಾಥ್, ಜತೆ ಕಾರ್ಯದರ್ಶಿ ಕೆ ಗೋಪಾಲ್ ಹಾಗೂ ಉಪಾಧ್ಯಕ್ಷ ಎಂ. ರವಿ ಅಲ್ಲದೇ ರಾಜ್ಯ ಮಹಿಳಾ ಉಪ ಸಮಿತಿ ಸಂಚಾಲಕಿ ಎಚ್.ಆರ್. ಗಾಯತ್ರಿ ಉಪಸ್ಥಿತರಿರುವರು. ದಕ್ಷಿಣ ಮಧ್ಯ ವಲಯ ವಿಮಾ ನೌಕರ ಒಕ್ಕೂಟದ ಅಧ್ಯಕ್ಷ ಪಿ ಸತೀಶ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಕರ್ನಾಟಕದ ಭಾರತೀಯ ಜೀವವಿಮಾ ನಿಗಮದ ಎಂಟು ವಿಭಾಗಗಳಿಂದ ಸುಮಾರು 200 ಮಹಿಳಾ ಪ್ರತಿನಿಧಿಗಳು ಹಾಗೂ ಸಹೋದರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

30 C