ಪದ್ಮ ಪ್ರಶಸ್ತಿಗಳು ಮತ್ತು ಚುನಾವಣಾ ರಾಜಕೀಯ
ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಭಾರತ ರತ್ನವೂ ಸೇರಿದಂತೆ ಎಲ್ಲ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಾಗೆ ನೋಡಿದರೆ, ಈ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಕ್ಷಾತೀತವಾಗಿ ಕೇವಲ ಸಾಧನೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ನೀಡಬೇಕು. ಆಗ ಆ ಪ್ರಶಸ್ತಿಗಳಿಗೂ ಗೌರವ ಮತ್ತು ಪ್ರಶಸ್ತಿ ಸ್ವೀಕರಿಸಿದವರಿಗೂ ಹೆಮ್ಮೆಯ ಭಾವ ಉಂಟಾಗುತ್ತದೆ. ‘ಭಾರತ ರತ್ನ’ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಕೇವಲ ಪ್ರತಿಭೆ ಮತ್ತು ಸಾಧನೆ ಆಧರಿಸಿ ನೀಡುವ ಪರಿಪಾಠ ನೆಹರೂ ಕಾಲದಿಂದಲೂ ಪಾಲಿಸಿಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸುದೀರ್ಘ ಕಾಲ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷವೂ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ನಿಷ್ಪಕ್ಷವಾಗಿ ನಡೆದುಕೊಂಡಿಲ್ಲ. ಆದರೆ ನರೇಂದ್ರ ಮೋದಿಯವರಷ್ಟು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಜಾಣ್ಮೆ ಪ್ರದರ್ಶಿಸಿಲ್ಲ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಜನಪ್ರಿಯ ನಟರೂ ಆಗಿದ್ದ ಎಂ.ಜಿ. ರಾಮಚಂದ್ರನ್ ಅವರಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ‘ಭಾರತ ರತ್ನ’ ನೀಡಲಾಯಿತು. ದುರಂತವೆಂದರೆ, ಅದೇ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡುವ ಜಾಣ್ಮೆ ಮತ್ತು ಔದಾರ್ಯ ತೋರಲಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನೇಕ ಅನರ್ಹರನ್ನು ಜಾತಿಯ ಕಾರಣಕ್ಕೆ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಪದ್ಮ ಪ್ರಶಸ್ತಿಗಳೂ ಅನರ್ಹರ ಪಾಲಾಗಿವೆ. ಸಿನೆಮಾದ ಜನಪ್ರಿಯತೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ‘ಭಾರತ ರತ್ನ’ ನೀಡುವುದಾದರೆ ಎಂ.ಜಿ. ರಾಮಚಂದ್ರನ್ ಅವರಿಗಿಂತ ಮೊದಲು ಎನ್.ಟಿ. ರಾಮರಾವ್, ಡಾ. ರಾಜ್ಕುಮಾರ್ ಮುಂತಾದವರಿಗೆ ಕೊಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಪರಿಗಣಿಸದೆ ಅನೇಕ ಅನರ್ಹರಿಗೆ ನೀಡುವ ಮೂಲಕ ಅದರ ಘನತೆ ಗೌರವ ಕಡಿಮೆ ಮಾಡಿತ್ತು. ವಿ.ಪಿ. ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂದಿನ ಸಮ್ಮಿಶ್ರ ಸರಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತು. ವ್ಯಂಗ್ಯವೆಂದರೆ ಆ ಸಮ್ಮಿಶ್ರ ಸರಕಾರದಲ್ಲಿ ಭಾರತೀಯ ಜನತಾ ಪಕ್ಷವೂ ಪಾಲುದಾರ ಆಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗಲೆಲ್ಲ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಕೇವಲ ಜಾತಿಯ ಕಾರಣಕ್ಕೆ ಅನರ್ಹರಿಗೆ ನೀಡಲಾಗಿದೆ. ಆದರೆ ನರೇಂದ್ರ ಮೋದಿಯವರು ‘ಭಾರತ ರತ್ನ’ ನೀಡುವಾಗಲಂತೂ ಚುನಾವಣಾ ರಾಜಕೀಯದ ಲಾಭ ಹಾನಿಗಳನ್ನು ಪ್ರಧಾನವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಅಸ್ಸಾಂ ಚುನಾವಣೆಯ ಸಂದರ್ಭದಲ್ಲಿ ಆ ರಾಜ್ಯದ ಹಿರಿಯ ಗಾಯಕ ಭೂಪೆನ್ ಹಝಾರಿಕ ಅವರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಲಾಗುತ್ತದೆ. ಭೂಪೆನ್ ಹಝಾರಿಕ ಅವರು ಲತಾ ಮಂಗೇಶ್ಕರ್ ಅವರಿಗೆ ಗುರು ಸಮಾನರು. ಆದರೆ ಲತಾ ಮಂಗೇಶ್ಕರ್ ಅವರಿಗೆ ಮೊದಲೇ ‘ಭಾರತ ರತ್ನ’ ನೀಡಲಾಗಿತ್ತು. ಮಹಾರಾಷ್ಟ್ರ ಚುನಾವಣೆ ಸಮೀಪಸುತ್ತಿದಂತೆ ಮೋದಿಯವರು ಜನಸಂಘದ ಸ್ಥಾಪಕ ನಾನಾಜಿ ದೇಶ್ಮುಖ್ ಅವರಿಗೆ ‘ಭಾರತ ರತ್ನ’ ದಯಪಾಲಿಸುತ್ತಾರೆ. ಬಿಹಾರ ಚುನಾವಣೆಗೂ ಮುಂಚೆ ಹಿರಿಯ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಮೋದಿ ಸರಕಾರ ‘ಭಾರತ ರತ್ನ’ ಪ್ರಕಟಿಸಿತ್ತು. ಲೋಕಸಭಾ ಚುನಾವಣೆಗೂ ಮುಂಚೆ ಹಿರಿಯ ರೈತ ನಾಯಕ ಚೌಧರಿ ಚರಣಸಿಂಗ್ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ಮೋದಿಯವರು ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸಿದರು. ‘ಭಾರತ ರತ್ನ’ ಮಾತ್ರವಲ್ಲ, ಪದ್ಮ ಪ್ರಶಸ್ತಿಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಮಹಾರಾಷ್ಟ್ರ ಚುನಾವಣೆ ಸಮೀಪಿಸಿದಾಗ ಶರದ್ ಪವಾರ್ ಅವರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿದರು. ಪಶ್ಚಿಮ ಬಂಗಾಳ ಚುನಾವಣೆಗೂ ಮುಂಚೆ ಕಮ್ಯುನಿಸ್ಟ್ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಪದ್ಮ ಗೌರವ ನೀಡಲು ಮುಂದಾಗಿದ್ದರು. ಆದರೆ ಬುದ್ಧದೇವ್ ಅವರು ಮೋದಿಯವರು ನೀಡುವ ರಾಜಕೀಯ ಗೌರವವನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ. ಪ್ರತೀ ಬಾರಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸುವಾಗ ಮೋದಿ-ಅಮಿತ್ ಶಾ ಅವರಿಗೆ ರಾಜಕೀಯ ಲಾಭ ಹಾನಿಗಳು ಮುಖ್ಯವಾಗಿರುತ್ತವೆ. ಮೋಹನ್ ಭಾಗವತ್ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರನ್ನು ಮೋದಿ-ಅಮಿತ್ ಶಾ ಜೋಡಿ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಸಂಘದ ಹಿರಿಯ ಮುಖಂಡರನ್ನು ಸಮಾಧಾನಪಡಿಸಲು ಪದ್ಮ ಪ್ರಶಸ್ತಿಗಳನ್ನು ಬಳಸಿಕೊಳ್ಳುತ್ತಾರೆ. ಸಂಘದ ಹಿರಿಯರು ಸೂಚಿಸಿದ ನಾಲ್ಕೆಂಟು ಜನರಿಗೆ ಪದ್ಮ ಪ್ರಶಸ್ತಿ ನೀಡಿದರೆ ಸಾಕು ಆನಂದ ತುಂದಿಲರಾಗುತ್ತಾರೆ. ಸಂಘದ ಹಿರಿಯರಲ್ಲಿ ಕೆಲವರು ತಮ್ಮ ಸಮುದಾಯಕ್ಕೆ ಸೇರಿದ ಸಾಹಿತಿ, ವಿಜ್ಞಾನಿ ಅಥವಾ ಕಲಾವಿದರ ಹೆಸರು ಸೂಚಿಸಿ ಸಮಾಧಾನಪಟ್ಟು ಕೊಳ್ಳುತ್ತಾರೆ. ಹಾಗಾಗಿಯೇ ಕಳೆದ ಹನ್ನೊಂದು ವರ್ಷಗಳಲ್ಲಿ ಸಂಘನಿಷ್ಠ ಕಲಾವಿದರು ಮತ್ತು ಬುದ್ಧಿಜೀವಿಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳು ಸಂದಿವೆ. ಬಿಜೆಪಿ ಪರ ಅಥವಾ ಸಂಘನಿಷ್ಠ ಪತ್ರಕರ್ತರು, ಸಮಾಜ ಸೇವಕರು, ಕಲಾವಿದರು ಪದ್ಮ ಪ್ರಶಸ್ತಿಗೆ ಭಾಜನರಾಗಿರುವುದು ಗಮನಿಸಬಹುದು. ಸಂಘನಿಷ್ಠರನ್ನು ಹೊರತು ಪಡಿಸಿ ಚುನಾವಣಾ ರಾಜಕೀಯ ಲೆಕ್ಕಾಚಾರದಲ್ಲಿ ಹಲವರಿಗೆ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಬಿಹಾರದ ಕರ್ಪೂರಿ ಠಾಕೂರ್ ಹೇಳಿಕೇಳಿ ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕ. ರಾಮಮನೋಹರ್ ಲೋಹಿಯಾ ಅವರ ಶಿಷ್ಯ. ಚುನಾವಣಾ ರಾಜಕೀಯ ಕಾರಣಕ್ಕೆ ಅವರಿಗೆ ‘ಭಾರತ ರತ್ನ’ ನೀಡಲಾಯಿತು. ಬಿಹಾರ ರಾಜ್ಯದಲ್ಲಿ ಕರ್ಪೂರಿ ಠಾಕೂರ್ ಅವರ ಶಿಷ್ಯ ಬಳಗ ಅಪಾರ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ಅವರ ಶಿಷ್ಯ. ಮೇಲ್ನೋಟಕ್ಕೆ ಮೋದಿ ನಡೆ ಗುಣಗ್ರಾಹಿ ಎನಿಸಿಕೊಂಡರೂ ಆಳದಲ್ಲಿ ಅದು ಅವಕಾಶವಾದಿ ಲೆಕ್ಕಾಚಾರ ಹೊಂದಿರುತ್ತದೆ. ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಐದು ಪದ್ಮ ವಿಭೂಷಣ, ಹದಿಮೂರು ಪದ್ಮಭೂಷಣ ಮತ್ತು 113 ಪದ್ಮಶ್ರೀ ಸೇರಿವೆ.ಗಮನಿಸಬೇಕಾದ ಸಂಗತಿಯೆಂದರೆ, ಐದು ಪದ್ಮವಿಭೂಷಣಗಳಲ್ಲಿ ಮೂರು ಕೇರಳ ರಾಜ್ಯದವರಿಗೆ ನೀಡಲಾಗಿದೆ. ಒಂದು ತಮಿಳುನಾಡು ರಾಜ್ಯದವರಿಗೆ ಇನ್ನೊಂದು ಮಹಾರಾಷ್ಟ್ರ ಅಂತ ತೋರಿಸಿದ್ದಾರೆ. ಆದರೆ ಹಿರಿಯ ಚಿತ್ರ ನಟ ಧರ್ಮೇಂದ್ರ ಮೂಲತಃ ಮಹಾರಾಷ್ಟ್ರದವರಲ್ಲ. ಹಿರಿಯ ಸಂಗೀತ ಕಲಾವಿದೆ ಎನ್. ರಾಜಮ್ಮ ಮೂಲತಃ ತಮಿಳುನಾಡಿನವರು. ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರನ್ನು ಉತ್ತರ ಪ್ರದೇಶದವರು ಎಂದು ಗುರುತಿಸಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಅಂದರೆ ಹನ್ನೊಂದು ಪದ್ಮ ಪ್ರಶಸ್ತಿಗಳು ಮಹಾರಾಷ್ಟ್ರ ರಾಜ್ಯದವರ ಪಾಲಾಗಿವೆ. ಆರೆಸ್ಸೆಸ್ ಹೆಡ್ಕ್ವಾರ್ಟರ್ ಇರುವುದು ಮಹಾರಾಷ್ಟ್ರದ ನಾಗಪುರದಲ್ಲಿ. ಸಂಘದ ಹಿರಿಯರು ನೀಡಿದ ಹೆಸರುಗಳನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಹನ್ನೊಂದು ಜನ ಪದ್ಮ ಪುರಸ್ಕೃತರು ಮಹಾರಾಷ್ಟ್ರದವರಿದ್ದಾರೆ. ಪಶ್ಚಿಮ ಬಂಗಾಳದ ಹನ್ನೊಂದು ಜನರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ ರಾಜ್ಯವು ಚುನಾವಣೆ ಎದುರಿಸುವ ಅತ್ಯಂತ ಮಹತ್ವದ ರಾಜ್ಯವಾಗಿದೆ. ಹಿರಿಯ ನಟ ಮಮ್ಮುಟ್ಟಿ ಕೇರಳ ರಾಜ್ಯದವರು. ಅವರನ್ನು ಈ ಬಾರಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಮಮ್ಮುಟ್ಟಿಯವರಿಗೆ ಎಂದೋ ಪದ್ಮವಿಭೂಷಣವೇ ನೀಡಿ ಗೌರವಿಸಬೇಕಿತ್ತು. ಅವರಿಗಿಂತ ಕಿರಿಯರಾದ ಮೋಹನ್ ಲಾಲ್, ಚಿರಂಜೀವಿ, ಕಮಲ್ ಹಾಸನ್ ಅವರಿಗೆ ಬಹಳ ಹಿಂದೆಯೇ ಪದ್ಮ ಭೂಷಣ ನೀಡಲಾಗಿದೆ. ಮಮ್ಮುಟ್ಟಿ ಮೊದಲಿನಿಂದಲೂ ಬಿಜೆಪಿ ಆರಾಧಕರಲ್ಲ. ಸಂಗೀತ ನಿರ್ದೇಶಕ ಇಳಯರಾಜ, ಚಿತ್ರನಟರಾದ ರಜನೀಕಾಂತ್, ಮೋಹನ್ ಲಾಲ್, ಗಾಯಕ ಯೇಸುದಾಸ್ ಮುಂತಾದವರು ಮೋದಿ ಭಕ್ತರು. ಆ ಕಾರಣಕ್ಕೆ ಅವರಿಗೆ ಈ ಹಿಂದೆಯೇ ಪದ್ಮ ಗೌರವ ಮತ್ತು ರಾಜಕೀಯ ಸ್ಥಾನಮಾನ ಸಂದಿವೆ. ಇಳಯರಾಜ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಬಿಜೆಪಿ ಸರಕಾರ ನಾಮಕರಣ ಮಾಡಿದೆ. ಕೇರಳದಲ್ಲಿ ಚುನಾವಣೆ ನಡೆಯುವ ಸಂದರ್ಭ ಎದುರಾಗಿದ್ದರಿಂದ ಅನಿವಾರ್ಯವಾಗಿ ಮಮ್ಮುಟ್ಟಿಯವರಿಗೆ ಪದ್ಮಭೂಷಣ ನೀಡಲಾಗಿದೆ. 2012ರಲ್ಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ದಶಕಗಳೇ ಕಳೆದಿವೆ. ಈಗ ಹಿರಿಯ ಚಿತ್ರ ನಟ ಮಮ್ಮುಟ್ಟಿ ಹೆಸರು ನೆನಪಿಗೆ ಬಂದಿದೆ. ಮಮ್ಮುಟ್ಟಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಮತ್ತು ಸೈದ್ಧಾಂತಿಕವಾಗಿ ಬಿಜೆಪಿಯನ್ನು ಇಷ್ಟಪಡದವರು. ಈ ಬಾರಿ ಕೇರಳದ ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ್ದ ಅಚ್ಯುತಾನಂದನ್ ತಮ್ಮ ಬದುಕಿನುದ್ದಕ್ಕೂ ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ತತ್ವಗಳನ್ನು ವಿರೋಧಿಸಿದವರು. ಮೋದಿ ಮತ್ತು ಅಮಿತ್ ಶಾ ಅವರಿಗೆ ಹೇಗಾದರೂ ಮಾಡಿ ಕೇರಳ ರಾಜ್ಯದಲ್ಲಿ ಕೇಸರಿ ಧ್ವಜ ಹಾರಿಸಬೇಕಿದೆ. ಹಾಗಾಗಿ ಅವರು ಕಮ್ಯುನಿಸ್ಟ್ ಪಕ್ಷವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ವಿಸ್ತಾರವಾಗಿದ್ದೇ ಕಮ್ಯುನಿಸ್ಟ್ ಕೋಟೆ ಛಿದ್ರಗೊಳಿಸಿದ್ದರಿಂದ. ಅಚ್ಯುತಾನಂದನ್ ಕುಟುಂಬವೂ ಪದ್ಮವಿಭೂಷಣ ಪ್ರಶಸ್ತಿ ಒಪ್ಪಿಕೊಂಡಿದೆ. ವಿ.ಎಸ್. ಅಚ್ಯುತಾನಂದನ್ ಕೇರಳದಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಳವ ಸಮುದಾಯಕ್ಕೆ ಸೇರಿದವರು. ಈ ಬಾರಿಯ ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ತದ್ವಿರುದ್ಧ ನಿಲುವು ಅನುಸರಿಸಲಾಗಿದೆ. ಒಂದಕ್ಕೊಂದು ತಾಳಮೇಳವೇ ಇಲ್ಲ. ವಿ. ಎಸ್. ಅಚ್ಯುತಾನಂದನ್ ಕಮ್ಯುನಿಸ್ಟ್ ಸಿದ್ಧಾಂತ ಅಪ್ಪಿಕೊಂಡವರು. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಆರೆಸ್ಸೆಸ್ ಮೂಲದವರು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದಾಗ ರಾತ್ರೊರಾತ್ರಿ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿ ಸರಕಾರ ಅತಂತ್ರಗೊಳಿಸಲು ಯತ್ನಿಸಿದವರು. ಜಾರ್ಖಂಡ್ನ ಹಿರಿಯ ನಾಯಕ ಶಿಬು ಸೊರೇನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಗಿದೆ. ಜೆಎಂಎಂ ಲಂಚ ಪ್ರಕರಣದಲ್ಲಿ ಶಿಬು ಸೂರೇನ್ ಆರೋಪಿಯಾಗಿದ್ದರು. ಶಿಬು ಸೊರೇನ್ ಅವರಿಗೆ ಪದ್ಮ ಗೌರವ ದಯಪಾಲಿಸಿದ್ದು ಮಾತ್ರ ರಾಜಕೀಯ ಕಾರಣಕ್ಕೆ. ದ್ವೇಷ ಭಾಷಣಕ್ಕೆ ಹೆಸರುವಾಸಿಯಾದ ವೆಲ್ಲಪಳ್ಳಿ ನಟೇಶನ್ ಅವರಿಗೆ ಪದ್ಮ ಗೌರವ ನೀಡಿದ್ದಾರೆ. ಒಟ್ಟು ಹದಿನಾಲ್ಕು ಜನರಿಗೆ ಮರಣೋತ್ತರವಾಗಿ ಪದ್ಮ ಗೌರವ ನೀಡಿದ್ದಾರೆ. ಅದರಲ್ಲಿ ಹಿರಿಯ ಚಿತ್ರ ನಟ ಧರ್ಮೇಂದ್ರ, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಪ್ರಮುಖರು. ಬಿಜೆಪಿ ಸಂಸದೆ ಹೇಮಾ ಮಾಲಿನಿಯವರ ಪತಿ ಧರ್ಮೇಂದ್ರ ಅವರಿಗೆ ಬದುಕಿದ್ದಾಗಲೇ ಪದ್ಮಭೂಷಣ ನೀಡಬಹುದಿತ್ತು. ಇನ್ನು ಕರ್ನಾಟಕದ ಎಂಟು ಜನರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶತಾವಧಾನಿ ಗಣೇಶ್ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಗಣೇಶ್ ಅವರಿಗಿಂತ ಹಿರಿಯರು ಹಲವರಿದ್ದಾರೆ. ಆದರೆ ಅವರ್ಯಾರೂ ಆರೆಸ್ಸೆಸ್ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡವರಲ್ಲ. ಜಿ.ಎಸ್. ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲರಂಥ ಹಿರಿಯ ಸಾಹಿತಿಗಳಿಗೆ ಸಿಗದ ಪದ್ಮಭೂಷಣ ಗೌರವ ಶತಾವಧಾನಿ ಗಣೇಶ್ ಅವರಿಗೆ ದೊರೆತಿದೆಯೆಂದರೆ ಅದನ್ನು ಅನುಮಾನದಿಂದಲೇ ನೋಡಬೇಕು. ಗಣೇಶ್ ಆಯ್ಕೆ ಅಪ್ಪಟ ಜಾತಿವಾದಿ ಆರೆಸ್ಸೆಸ್ ಮುಖಂಡರ ಆಯ್ಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಪದ್ಮ ಗೌರವಕ್ಕೆ ಭಾಜನರಾಗಿರುವ ಕರ್ನಾಟಕದ ಒಟ್ಟು ಎಂಟು ಜನರಲ್ಲಿ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಹಿಮೋಫಿಲಿ ವೈದ್ಯ ಡಾ. ಸುರೇಶ್ ಹನಗವಾಡಿ ಹೊರತು ಪಡಿಸಿದರೆ ಉಳಿದ ಆರು ಜನರು ಯಾವ ಮಾನದಂಡದಲ್ಲೂ ಜನ ಮೆಚ್ಚುವ ಸಾಧಕರಲ್ಲ. ಶುಭಾ ವೆಂಕಟೇಶ್ ಅಯ್ಯಂಗಾರ್, ಉದ್ಯಮಿ ಟಿ.ಟಿ. ಜಗನ್ನಾಥ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪದ್ಮ ಗೌರವಕ್ಕೆ ಪಾತ್ರರಾದ ಶಶಿಶೇಖರ ವೆಂಪತಿ ಪಕ್ಕಾ ಆರೆಸ್ಸೆಸ್ ಆಯ್ಕೆ. ಅಂಕೆಗೌಡರ ಬದಲಿಗೆ ಪುಸ್ತಕಮನೆ ಹರಿಹರಪ್ರಿಯರನ್ನು ಪದ್ಮ ಗೌರವಕ್ಕೆ ಆಯ್ಕೆ ಮಾಡಿದ್ದರೂ ಉತ್ತಮ ಆಯ್ಕೆ ಎನಿಸಿಕೊಳ್ಳುತ್ತಿತ್ತು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ ವಿಭಾಗದಲ್ಲಿ ಪದ್ಮಶ್ರೀಗೆ ಆಯ್ಕೆಯಾದ ಪ್ರಭಾಕರ್ ಕೋರೆ ಪದ್ಮ ಗೌರವಕ್ಕೆ ಕಳಂಕ. ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದವರು ಸಪ್ತರ್ಶಿಗಳು. ಎಸ್.ಎಸ್. ಬಸವನಾಳ, ಬಿ.ಬಿ. ಮಮದಾಪುರ, ಎಂ. ಆರ್. ಸಾಖರೆ, ಎಚ್.ಎಫ್. ಕಟ್ಟಿಮನಿ, ಬಿ.ಎಸ್. ಹಂಚಿನಾಳ, ಪಿ.ಆರ್. ಚಿಕೋಡಿ, ವಿ.ವಿ. ಪಾಟೀಲ್ ತ್ಯಾಗದ ಫಲವಾಗಿ ಸಂಸ್ಥೆ ಹುಟ್ಟಿಕೊಂಡಿತ್ತು. ರಾವ್ ಬಹಾದ್ದೂರ್ ಅರಟಾಳ ರುದ್ರಗೌಡರು, ರಾವ್ ಬಹಾದ್ದೂರ್, ವಿ.ಜಿ. ನಾಯಕ ಮತ್ತು ರಾವ್ ಬಹಾದ್ದೂರ್ ವೈಜಪ್ಪ ಅನಿಗೋಳ ಉದಾರವಾಗಿ ದಾನ ಮಾಡಿದ್ದರ ಪರಿಣಾಮವಾಗಿ ಆ ಸಂಸ್ಥೆ ಬೆಳೆದಿದೆ. ಪ್ರಭಾಕರ್ ಕೋರೆ ಲಾಭಕೋರ ಅಷ್ಟೇ. ಸ್ವಂತ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬೆಳೆಸಿದವರಿಗೆ ಈ ಪ್ರಶಸ್ತಿ ನೀಡಿದರೂ ಸಾರ್ಥಕ ಎನಿಸುತ್ತಿತ್ತು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ರಾಜಕೀಯವನ್ನೇ ಉಸಿರಾಡುವವರು. ಅವರಿಗೆ ಸಾಧಕರು ಬೇಕಾಗಿಲ್ಲ. ಎಲ್ಲವೂ ಬಿಕರಿಗೆ ಇಟ್ಟು ಚುನಾವಣೆ ಗೆಲ್ಲಬೇಕಿದೆ. ಪದ್ಮ ಗೌರವಗಳನ್ನು ಲಾಭಕ್ಕಾಗಿ ಹಂಚಿದ್ದಾರೆ. ಸಾಹಿತ್ಯ, ಕಲೆ, ನಿಜವಾದ ಸಮಾಜ ಸೇವೆ ಅವರಿಗೆ ಬೇಕಿಲ್ಲ. ಚುನಾವಣೆಯಲ್ಲಿ ಲಾಭ ತಂದುಕೊಡುವ ಸಾಧಕರಿಗೆ ಮಾತ್ರ ಮನ್ನಣೆ. ನಿಜವಾದ ಸಾಧಕರು ಪದ್ಮ ಗೌರವದಿಂದ ದೂರ ಉಳಿಯುವುದೇ ಲೇಸು.
ಸುನೇತ್ರಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನನಗೆ ತಿಳಿದಿಲ್ಲ: ಶರದ್ ಪವಾರ್
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವರದಿಗಳ ನಡುವೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ತಿಳಿದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನಮ್ಮ ಜೊತೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ಬಗ್ಗೆ ಪತ್ರಿಕೆ ವರದಿಗಳ ಮೂಲಕವೇ ತಿಳಿದುಕೊಂಡೆ ಎಂದು ಶರದ್ ಪವಾರ್ ಹೇಳಿದ್ದಾರೆ. “ಅಜಿತ್ ಪವಾರ್ ಅವರ ನಿಧನದ ನಂತರ, ಎನ್ಸಿಪಿ ಸುನೇತ್ರಾ ಪವಾರ್ ಅವರನ್ನು ತಮ್ಮ ಪಕ್ಷದ ನಾಯಕಿಯಾಗಿ ನೇಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಅವರ ಆಂತರಿಕ ವಿಷಯ. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಟುಂಬವಾಗಿ ನಾವು ಒಟ್ಟಿಗೆ ಇದ್ದೇವೆ. ಆದರೆ, ರಾಜಕೀಯ ಬೇರೆ ಬೇರೆ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು. ಎನ್ಸಿಪಿ ಎರಡೂ ಬಣಗಳ ವಿಲೀನದ ಮಾತುಕತೆ ಕಳೆದ ನಾಲ್ಕು ತಿಂಗಳಿನಿಂದ ಚರ್ಚೆಯಲ್ಲಿತ್ತು ಮತ್ತು ಅದು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂಬುದು ನಿಜ. ವಿಲೀನ ಮಾತುಕತೆಗೆ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಭಾಗಿಯಾಗಿದ್ದರು. ಈಗ ಅಜಿತ್ ಇಲ್ಲ, ಆದ್ದರಿಂದ ಎರಡೂ ಎನ್ಸಿಪಿಗಳ ವಿಲೀನವು ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
5 ವರ್ಷಗಳ ಬಳಿಕ ಸತತ 2 ಜನವರಿಯಲ್ಲಿ ಅತ್ಯುತ್ತಮ AQI ಪಡೆದ ದೆಹಲಿ: ಇಂದಿನ ವಾಯು ಗುಣಮಟ್ಟ ಹೇಗಿದೆ?
ದೆಹಲಿಯಲ್ಲಿ 5 ವರ್ಷಗಳ ಬಳಿಕ ಸತತ ಎರಡನೇ ಬಾರಿಗೆ ಜನವರಿ ತಿಂಗಳ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಈ ಜನವರಿಯಲ್ಲಿ 307ರ ಸರಾಸರಿ AQI ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಒಂದು ಕೊಂಚ ಕಡಿಮೆಯಿದ್ದರೂ, ಉತ್ತಮವಾಗಿದೆ. ಅಲ್ಲದೆ, 2025 ಹಾಗೂ 2026 ವರ್ಷದ ಮೊದಲ ತಿಂಗಳಿನಲ್ಲಿ ವಾಯುಗುಣಮಟ್ಟದಲ್ಲಿ ಸುಧಾರಣೆ ಕಾಣುವ ಮೂಲಕ 2022 ಬಳಿಕದ 2 ಉತ್ತಮ ವಾಯುಗುಣಮಟ್ಟ ತಿಂಗಳನ್ನು ಜನವರಿ ದಾಖಲಿಸಿದೆ. ಆದಾಗ್ಯೂ, ಇಂದಿನ ವಾಯುಗುಣ ಮಟ್ಟ ಮತ್ತೆ ಕಳಪೆಗೆ ಜಾರಿದ್ದು, AQI ಎಷ್ಟಿದೆ ನೋಡಿ..
ಸಂವಿಧಾನವೇ ರಾಚಯ್ಯ-ಕಾನೂನೇ ಕೊಡಲಿಯೆಂಬ ರೂಪಕ ಲ್ಯಾಂಡ್ ಲಾರ್ಡ್ ಸಿನೆಮಾ
ಲ್ಯಾಂಡ್ಲಾರ್ಡ್ ಸಿನೆಮಾದ ನಾಯಕ ರಾಚಯ್ಯ ಸಂವಿಧಾನದ ಸ್ವರೂಪವಾಗಿಯೂ, ಆತ ಬಳಸುವ ಕೊಡಲಿಯು ಸಂವಿಧಾನ ಜಾರಿ ಮಾಡುವ ಕಾನೂನಿನ ರೂಪಕವಾಗಿ ಕಲ್ಪಿಸಿಕೊಂಡರೆ, ಕತೆಯ ಗಾಂಭೀರ್ಯತೆ ನಮಗೆ ಅರ್ಥವಾಗುತ್ತಾ ಹೋಗುತ್ತದೆ. ಸಿನೆಮಾದಲ್ಲಿ ಪಾಳೆಗಾರ ಸಣ್ಣಧಣಿಯ ಮಾತಿನಿಂದ ಹೊರಡುವ ಕಾನೂನುಗಳು ಬದಲಾದರೂ ಕಟ್ಟಳೆಗಳು ಬದಲಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು. ಆದರೆ, ನಮ್ಮ ಗ್ರಾಮಕ್ಕಲ್ಲ. ಕೂಲಿಗೆ ಕಾಳು ಮಾತ್ರವೇ. ಆಳು ಆಳಾಗಿಯೇ ಇರಬೇಕೆಂದು ಧ್ವನಿಸುವ ಮಾತುಗಳು ಪಾಳೇಗಾರಿಕೆಯ ಜಡ್ಡುಗಟ್ಟಿದ ಮನಃಸ್ಥಿತಿ ಸುಲಭವಾಗಿ ಹೋಗುವಂತಹದ್ದಲ್ಲ. ಸಂವಿಧಾನ ಜಾರಿ ಮಾಡುವವರು ಕಾನೂನಿನಡಿ ತಪ್ಪೆಂದು ಕಂಡರೂ ಸೌಮ್ಯವಾದಿಗಳಾಗಿದ್ದರೆ, ಮೌನಿಗಳಾಗಿದ್ದರೆ ಶತಮಾನಗಳಿಂದ ಕಟ್ಟಿರುವ ಜಾತಿಯ, ಮೇಲು-ಕೀಳು, ಅಸ್ಪೃಶ್ಯತೆಯ ಜಿಡ್ಡು ಹೋಗಲಾರದು. ಅದಕ್ಕೆ ಸಂವಿಧಾನದಡಿಯಲ್ಲಿ ಕಠಿಣವಾದ ಶಿಕ್ಷೆ ನೀಡಿದರೆ ಮಾತ್ರವೇ ಅಂತಹ ಜಿಡ್ಡು ಕರಗಲು ಸಾಧ್ಯ ಎಂಬುದನ್ನು ನಾಯಕನೆಂಬ ಸಂವಿಧಾನವು ಕೊಡಲಿಯೆಂಬ ಕಠಿಣವಾದ ಕಾನೂನಿನ ಅಸ್ತ್ರವಾಗಿ ಝಳಪಿಸಲಾಗಿದೆ. ಲ್ಯಾಂಡ್ ಲಾರ್ಡ್ ಸಿನೆಮಾ ದೃಶ್ಯಗಳು 50-60ವರ್ಷದ ಹಿಂದಿನ ಕತೆಯಂತೆ ಭಾಸವಾಗಬಹುದು. ಆದರೆ, ಮಾನಸಿಕವಾಗಿ ನಮ್ಮ ಚಿಂತನೆಗಳು, ಆಲೋಚನೆಗಳು ಗತಕಾಲದ್ದೆ ಎಂಬುದನ್ನು ರಾಚಯ್ಯನ ಮಗಳು ನೆಲಕ್ಕೆ ಬಿದ್ದ ದೇವರ ವಸ್ತ್ರವನ್ನು ಎತ್ತಿ ಕೊಟ್ಟಿದ್ದಕ್ಕೆ ಮೈಲಿಗೆಯೆಂದು ಕಂಬಕ್ಕೆ ಕಟ್ಟಿಹಾಕಿ ಹೊಡೆಯುವಂತಹ ದೃಶ್ಯ, ನಮ್ಮ ಬಹುತೇಕ ಹಳ್ಳಿಗಳಲ್ಲಿ ಇವತ್ತಿಗೂ ಹೊಲೆಯ, ಮಾದಿಗರು ದೇವಸ್ಥಾನಕ್ಕೆ ಒಳಕ್ಕೆ ಪ್ರವೇಶಿದರೆ ದಂಡ ವಿಧಿಸುವಂತಹ ಶಿಕ್ಷೆಯಿದೆ ಎಂಬುದನ್ನು ಸಿನೆಮಾ ವೀಕ್ಷಕರ ಮನಸ್ಸಿಗೆ ನಾಟಿಸುವಲ್ಲಿ ಯಶಸ್ವಿಯಾಗಿದೆ. ಶೋಷಕರು ಯಾವತ್ತೂ ಅಲ್ಪಸಂಖ್ಯಾತರಾಗಿಯೇ ಇರುತ್ತಾರೆ. ಆದರೆ, ಅಧಿಕಾರ ಹಾಗೂ ಮನುವಾದಿ ಕಟ್ಟಳೆಗಳಿಂದ ಇಡೀ ಸಮುದಾಯವನ್ನು ಬೆದರಿಸುವಂತಹ, ಪ್ರಶ್ನಿಸುವವರನ್ನು ಇಲ್ಲವಾಗಿಸುವಂತಹ ಸಾವಿರಾರು ವರ್ಷಗಳಿಂದ ಇಂದಿಗೂ ನಡೆದುಕೊಂಡು ಬರುತ್ತಿರುವ ಅನೈತಿಕತೆಯನ್ನು ಚಿತ್ರದಲ್ಲಿ ಯಶಸ್ವಿಯಾಗಿ ಕಟ್ಟಿಕೊಡಲಾಗಿದೆ. ಸಣ್ಣಧಣಿಗಳ ಪಾಳೆಗಾರಿಕೆ, ಅವರನ್ನು ಬೆಂಬಲಿಸುವ ಒಂದಷ್ಟು ಶ್ರೀಮಂತ ಕುಟುಂಬಗಳು ಮಾತ್ರ ಇರುತ್ತವೆ. ಆದರೆ, ದುಡಿಯುವ, ಜೀತಗಾರಿಕೆಯ ಕಾರ್ಮಿಕ ವರ್ಗ ದೊಡ್ಡ ಸಂಖ್ಯೆಯಲ್ಲಿರುತ್ತದೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಹೊರತುಪಡಿಸಿ ಉಳಿದ ಕಾನ್ ಸ್ಟೇಬಲ್ ಹಾಗೂ ಪೊಲೀಸರು ಜನಪರವಾಗಿಯೇ ಇರುತ್ತಾರೆ. ಅಂದರೆ, ಸಿನೆಮಾದಲ್ಲಿ ಸಣ್ಣಧಣಿ ಹೇಳಿದಂತೆಯೇ ಕಾನೂನುಗಳು ಬದಲಾವಣೆಯಾದರೂ ಪಂಚಾಯತಿಯ ಕಟ್ಟಳೆಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬಹುಪಾಲನ್ನು ಪಡೆಯುವವರಾಗಿಯೂ, ಬಹುಸಂಖ್ಯಾತ ಶ್ರಮಿಕರು ಒಪ್ಪತ್ತಿನ ಊಟಕ್ಕೂ ಮತ್ತೊಬ್ಬರ ಮುಂದೆ ಕೈಚಾಚುವವರಾಗಿ ಇವತ್ತಿಗೂ ಮುಂದುವರೆದುಕೊಂಡು ಬರಲಾಗುತ್ತಿದೆ. ದುಡಿಯುವ ವರ್ಗಗಳ ಜೀವನ ಪ್ರೀತಿ, ಪರಸ್ಪರರ ನಡುವಿನ ಬಾಂಧವ್ಯದ ನೈಜತೆ ಕಾಣ್ತುಂಬಿ ಬರುವಂತಹದಾಗಿದೆ. ಧಣಿಗಳು ಒಡ್ಡುವ ಸವಾಲಿಗೆ ಹತ್ತು ಏಟಿನ ಬದಲಾಗಿ ಒಂದೇ ಏಟಿಗೆ ಭದ್ರವಾಗಿ ನೆಟ್ಟಿದ್ದ ಬಲಿಷ್ಟವಾದ ಮರದ ಕಂಬದ ತುಂಡನ್ನು ಕತ್ತರಿಸುವ ದೃಶ್ಯದಲ್ಲಿ ನಾಯಕನ ನಟನಾಗಿ ರಾಚಯ್ಯ, ತಾಯಿಯ ಪಾತ್ರದಲ್ಲಿ ಉಮಾಶ್ರೀಯ ಕೆಚ್ಚು, ಆರ್ಭಟ ನೋಡಿ ಕಣ್ತುಂಬಿಸಿಕೊಳ್ಳುವಂತಹ ಅನನ್ಯವಾದ ದೃಶ್ಯಗಳಾಗಿವೆ. ಧಣಿಗಳು ಒಡ್ಡಿದ ಸವಾಲಿನಲ್ಲಿ ಎರಡು ಎಕರೆ ಗೆದ್ದ ರಾಚಯ್ಯ ಹೊಲದಲ್ಲಿ ಆಳೆತ್ತರಕ್ಕೆ ಬೆಳೆ ಬೆಳೆದಿರುತ್ತಾನೆ. ಇದನ್ನು ಕಂಡ ರಾಚಯ್ಯ ತಾಯಿ ಪಡುವ ಸಂತೋಷ ನಿಜಕ್ಕೂ ಪಾಳೇಗಾರಿಕೆಯ ಮನಸುಗಳನ್ನು ಕರಗಿಸುವಂತಹದ್ದಾಗಿದೆ. ಆದರೆ, ಸಿನೆಮಾದ ಪಾಳೆಗಾರ ಧಣಿಗೆ ಮನಸು ಕರಗುವುದಿಲ್ಲ; ಅಸೂಯೆಯಿಂದ ನರಳಾಡುತ್ತಾನೆ. ಆ ಅಸೂಯೆಗೆ ಪುರೋಹಿತರು, ಆಳು ಆಳಾಗಿರಬೇಕೆ ಹೊರತು ಒಡೆಯನಾಗಬಾರದು. ಇದು ಕೇಡಿನ ಮುನ್ಸೂಚನೆಯೆಂಬ ಮನುವಾದಿ ಚಿಂತನೆಗಳು ಭಿತ್ತುತ್ತಾರೆ. ಧಣಿಯ ಪಾಳೆಗಾರಿಕೆ ಮನಃಸ್ಥಿತಿಯಿಂದ ರಾಚಯ್ಯನ ಹೊಲಕ್ಕೆ ದನಗಳನ್ನು ಬಿಟ್ಟು ಹಾಳು ಮಾಡುತ್ತಾನೆ. ಇಲ್ಲಿ ಧಣಿಗಳು ಹಾಗೂ ಪೂಜಾರಿಗಳ ಕೂತು ತಿನ್ನುವ ಮನಸ್ಥಿತಿ ಯಾವ ರೀತಿ ಆಲೋಚಿಸುತ್ತದೆ ಹಾಗೂ ದುಡಿದವರ ಜೀವನ ಪ್ರೀತಿ ಎಂತಹದ್ದು ಎಂಬುದನ್ನು ಸಿನೆಮಾ ದಲ್ಲಿ ಉಮಾಶ್ರೀ ಅವರ ಮನೋಜ್ಞ ಅಭಿನಯ, ಹಚ್ಚ ಹಸಿರಿನಿಂದ ಕಂಗೊಳಿಸುವ ಹೊಲಗಳು, ದುಡಿಮೆಯೇ ದೇವರೆಂದು ಬದುಕುವ ರಾಚಯ್ಯ, ಆತನ ಮುಗ್ಧತೆ, ಆ ಮುಗ್ಧತೆಯಲ್ಲಿ ಅಡಗಿರುವ ರೋಷ, ಕಿಚ್ಚಿ, ಸ್ವಾಭಿಮಾನವನ್ನು ಸಿನೆಮಾವನ್ನು ನೋಡಿಯೇ ಮನಸಿನಾಳಕ್ಕೆ ಬಿಟ್ಟುಕೊಳ್ಳಬೇಕು. ಇವತ್ತಿಗೂ ಪಾಳೇಗಾರಿಕೆ ಮನಃಸ್ಥಿತಿ ಹೊಂದಿರುವವರಿಗೆ ಕಣ್ತೆರಿಸುವಂತಹ ದೃಶ್ಯಗಳನ್ನು ಸಿನೆಮಾದಲ್ಲಿ ಅಂಧ ಹುಡುಗಿಯ(ಕಣ್ಣಿಲ್ಲದ) ಪಾತ್ರದಲ್ಲಿ ನಿರ್ದೇಶಕರು ಚಿತ್ರಿಸಿದ್ದಾರೆ. ವೈದ್ಯರು ನಿಮ್ಮ ಮಗಳಿಗೆ ಕಣ್ಣ ಬರಲ್ಲ ಅಂದಾಗ, ತನ್ನಪ್ಪ ಮಗಳನ್ನು ಹೆಗಲ ಮೇಲೆ ಹೊತ್ತು ಕಣ್ಣೀರಿಡುತ್ತಾ ಬರುವಾಗ, ಮಗಳು ಯಾಕಪ್ಪ ಅಳ್ತೀಯಾ, ನಂಗೆ ಎರಡು ಕಣ್ಣಿಲ್ಲದೇ ಇರಬಹುದು. ನಿನ್ನದು, ನಿಂಗವ್ವದು, ಭಾಗ್ಯಕ್ಕದು ಎಲ್ಲರ ಕಣ್ಣುಗಳು ನನ್ನವೇ ತಾನೆ ಅಪ್ಪ ಅನ್ನುವ ಮಾತು ಹಾಗೂ ಧನಿಗಳ ಕಡೆಯವರು ನಡೆಸಿದ ಅಪಘಾತದಲ್ಲಿ ತನ್ನ ಅಪ್ಪ ಆಸ್ಪತ್ರೆಯಲ್ಲಿ ಸತ್ತು ಮಲಗಿರುವಾಗ, ಆ ಬಗ್ಗೆ ತಿಳಿಯದ ಕಣ್ಣುಕಾಣದ ಮಗಳು ತನ್ನ ಅಪ್ಪನನ್ನು ಮುಟ್ಟಿ ರಕ್ತವನ್ನು ಸ್ಪರ್ಶಿಸಿ ಎಲ್ಲಿ ಬಿದ್ದು ಗಲೀಜು ಮಾಡಿಕೊಂಡಿದ್ದೀಯಾ ಅಪ್ಪ. ಅದ್ಕೆ ಹೆಚ್ಚು ಕುಡಿಬೇಡ ಎನ್ನುವುದು, ತನ್ನಪ್ಪ ಎಬ್ಬಿಸಿದರೂ ಎದ್ದೇಳದೆ ಇದ್ದಾಗ ನಿದ್ದೆ ಮಾಡ್ತಿದ್ದೀಯಾ. ಆದರೂ ನನ್ನ ಒಂದು ಮಾತಿಗೆ ಎದ್ದೇಳ್ತಿದ್ದೆ. ಓ ತುಂಬಾ ನಿದ್ದೆ ಬಂದಿದಿಯಾ ಮಲ್ಕೋ ಎನ್ನುವ ಮಾತಿನ ದೃಶ್ಯಗಳು ಎಂತಹ ಕಲ್ಲು ಹೃದಯದ ಮನಸನ್ನು ಕರಗಿಸುವಂತಹದ್ದಾಗಿದೆ. ಲ್ಯಾಂಡ್ ಲಾರ್ಡ್ ಸಿನೆಮಾ ಎಲ್ಲ ಜಾತಿಯ, ವರ್ಗದ, ಸ್ಥರದ, ವೃತ್ತಿಯ ಜನರು ತಮ್ಮ ಜೀವನಾನುಭವ, ತಿಳುವಳಿಕೆಗೆ ತಕ್ಕ ಹಾಗೆ ಕನೆಕ್ಟ್ ಮಾಡಿಕೊಳ್ಳಬಹುದು. ಪರಸ್ಪರರ ನಡುವೆ ಜೀವನ ಪ್ರೀತಿಯಿದ್ದರೆ ಮಾತ್ರ ಮನಸು ಅರಳಲು ಸಾಧ್ಯ ಎಂಬುದನ್ನು ರಾಚಯ್ಯನ ಹೆಂಡತಿ ನಿಂಗವ್ವನ ಪಾತ್ರವು ಮುದನೀಡುತ್ತದೆ. ಮನಸಿಗೆ ಹೊಸವಿಚಾರ, ಮಾನವೀಯ ಮೌಲ್ಯಗಳು ತಾಕದಿದ್ದರೆ, ಯಂತ್ರಗಳಾಗಿರುತ್ತೇವೆಯೇ ವಿನಃ ಮನುಷ್ಯರಾಗಿರುವುದಿಲ್ಲವೆಂದು ಸಣ್ಣಧಣಿ ಹಾಗೂ ಅವರ ಮನೆಯ ಹೆಂಗಸರ ಮುಖಭಾವ ಸಿನೆಮಾದಲ್ಲಿ ವಸ್ತುನಿಷ್ಟವಾಗಿ ವ್ಯಕ್ತವಾಗಿದೆ. ಸಮಾಜವು ಆಧುನಿಕ, ಮಾಹಿತಿ ತಂತ್ರಜ್ಞಾನದಿಂದ ಮೇಲ್ನೋಟಕ್ಕೆ ಎಷ್ಟೇ ಕಂಗೊಳಿಸಿದರೂ ಆಂತರ್ಯದಲ್ಲಿ ಅಸ್ಪೃಶ್ಯತೆಯನ್ನು ಬೆಂಬಲಿಸುವ, ಅಸೂಯೆ ಮನಸ್ಥಿತಿಯನ್ನು ಹೊಂದಿರುವ ಸಮುದಾಯ ಇರುವವರಿಗೆ ಚಲನೆಯಿಲ್ಲದೆ ಯಥಾಸ್ಥಿತಿಯಲ್ಲಿದ್ದು, ಕೊಳೆತು ನಾರುತ್ತಿರುತ್ತದೆ. ಇದಕ್ಕಿರುವ ಒಂದೇ ಔಷಧಿಯೆಂದರೆ ದೇಶದ ಪ್ರತಿಯೊಬ್ಬರು ಸಂವಿಧಾನದಡಿ ಬದುಕನ್ನು ಸಾಗಿಸುವುದೊಂದೆ ಪರಿಹಾರವೆಂದು ಲ್ಯಾಂಡ್ ಲಾರ್ಡ್ ಗಟ್ಟಿದನಿಯಲ್ಲಿ ಹೇಳಲು ಹೊರಟಿದೆ. ಅಂತಿಮವಾಗಿ ಲ್ಯಾಂಡ್ ಲಾರ್ಡ್ ಸಿನೆಮಾ ಕುರಿತು ಹೇಳುವುದಾದರೆ, ಹತ್ತಾರು ಸಿನೆಮಾಗೆ ಆಗುವಷ್ಟು ಕತೆಯ ಹಂದರವನ್ನು ಒಂದೇ ಸಿನೆಮಾದಲ್ಲಿ ಹೇಳಿಬಿಡಬೇಕೆಂಬ ಕಾತುರ, ಆತುರ ನಿರ್ದೇಶಕ ಜಡೇಶ್ ಅವರಿಗೆ ಯಾಕೆ ಬಂತೋ ಎಂಬುದನ್ನು ಅವರೇ ಹೇಳಬೇಕು. ಇನ್ನು ಸಂಭಾಷಣೆ ಮಾಸ್ತಿ ಸರ್ ಅವರ ತಂಡದ ಮಾನವೀಯ ಸೃಜನಶೀಲತೆಯನ್ನು ಸಿನೆಮಾ ನೋಡುವ ಮೂಲಕ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಎಲ್ಲ ಪಾತ್ರಗಳು ಪರಕಾಯ ಪ್ರವೇಶ ಮಾಡಿಕೊಂಡಂತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.
ನಾಯಿಯಿಂದ ಕಚ್ಚಿಸಿಕೊಳ್ಳಬೇಡಿ ಹುಷಾರ್: ರಾಜ್ಯದಲ್ಲಿ ರೇಬಿಸ್ನಿಂದ 2 ವರ್ಷಗಳಲ್ಲಿ 129 ಮಂದಿ ಸಾವು
ರಾಜ್ಯದಲ್ಲಿ ರೇಬಿಸ್ ರೋಗದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆ ಯಾಗಿದೆ. ಕಳೆದ ಎರಡು ವರ್ಷಗಳಲ್ಲಿ 129 ಮಂದಿ ರೇಬಿಸ್ ಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳ ಹಾವಳಿ ಮತ್ತು ನಾಯಿ ಕಡಿತದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಚಾಟಿ ಬೀಸಿತ್ತು. ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಆದರೆ ಪ್ರಾಣಿ ದಯಾ ಸಂಘಗಳು ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡುತ್ತಿದೆ. ಹಾಗಾಗಿ ಇವುಗಳ ನಿಯಂತ್ರಣವೂ ಸವಾಲಾಗಿದೆ.
ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಇಷ್ಟೊಂದು ವಿರೋಧವೇಕೆ?
ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಸಾಮಾನ್ಯ ವರ್ಗದವರಿಂದ ವ್ಯಕ್ತವಾಗುತ್ತಿರುವ ಇಷ್ಟೊಂದು ವಿರೋಧ, ಕೇವಲ ಒಂದು ನಿಯಮಾವಳಿಯ ದೋಷಗಳ ಕುರಿತು ಮಾತ್ರವಲ್ಲ; ಅದು ಭಾರತೀಯ ಸಮಾಜದಲ್ಲಿ ಸಮಾನತೆ ಎಂಬ ಕಲ್ಪನೆಗೆ ಎದುರಾಗುತ್ತಿರುವ ಆಳವಾದ ಪ್ರತಿರೋಧದ ಪ್ರತಿಬಿಂಬವಾಗಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಮುಂದುವರಿದಿರುವ ಜಾತಿ ಆಧಾರಿತ ತಾರತಮ್ಯವನ್ನು ತಡೆಯುವ ಉದ್ದೇಶದಿಂದ ರೂಪುಗೊಂಡಿರುವ ‘University Grants Commission (Promotion of Equity in Higher Education Institutions) 2026’ Regulations’ ಎಂಬ ನಿಯಮಾವಳಿಯು ಅತ್ಯಂತ ಮಹತ್ವದ ಸುಧಾರಣೆಯಾಗಿದೆ. ಆದರೆ ಈ ನೀತಿ ಪ್ರಕಟವಾದ ತಕ್ಷಣವೇ, ಕೆಲವು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದು, ಕೇವಲ ಒಂದು ಆಡಳಿತಾತ್ಮಕ ನಿರ್ಧಾರಕ್ಕೆ ಪ್ರತಿಕ್ರಿಯೆಯಷ್ಟೇ ಅಲ್ಲ. ಅದು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸರ್ವಾಧಿಕಾರದ ಭಾವನೆ, ಅದನ್ನು ಕಳೆದುಕೊಳ್ಳುವ ಭಯ ಮತ್ತು ಸಮಾನತೆಯ ಅರ್ಥದ ಕುರಿತು ಇರುವ ತಪ್ಪುಗ್ರಹಿಕೆಗಳ ಪ್ರತಿಫಲವಾಗಿದೆ. ‘ಸಮಾನತೆ’ ಎಂಬ ಪದವೇ ಕೆಲವರಲ್ಲಿ ಅಸಹನೆ ಮತ್ತು ಆತಂಕವನ್ನು ಹುಟ್ಟುಹಾಕುತ್ತಿರುವುದು, ಈ ವಿರೋಧದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಸೂಚಕವಾಗಿದೆ. ಸಾಮಾನ್ಯ ವರ್ಗದವರ ವಿರೋಧದ ಮೊದಲ ಮತ್ತು ಪ್ರಮುಖ ಕಾರಣವೆಂದರೆ ‘ರಿವರ್ಸ್ ಡಿಸ್ಕ್ರಿಮಿನೇಷನ್’ ಎಂಬ ಭಾವನೆ. ಅಂದರೆ, ಈ ನಿಯಮಾವಳಿ ಜಾರಿಯಾದರೆ ತಮ್ಮ ಮೇಲೆ ಅನ್ಯಾಯ ನಡೆಯುತ್ತದೆ, ತಮ್ಮ ಮಾತುಗಳಿಗೆ ಮಹತ್ವ ಕಡಿಮೆಯಾಗುತ್ತದೆ ಹಾಗೂ ತಮ್ಮ ವಿರುದ್ಧ ಸುಳ್ಳು ದೂರುಗಳು ದಾಖಲಾಗುವ ಸಾಧ್ಯತೆ ಇದೆ ಎಂಬ ಆತಂಕ. ಆದರೆ ಈ ಭಯ ವಾಸ್ತವದ ಮೇಲೆ ಆಧಾರಿತವೇ ಅಥವಾ ದಶಕಗಳಿಂದ ನಿರ್ವಿಘ್ನವಾಗಿ ಅನುಭವಿಸುತ್ತ ಬಂದಿರುವ ಅಧಿಕಾರ ಮತ್ತು ಪ್ರಾಬಲ್ಯಕ್ಕೆ ಬಂದಿರುವ ಸವಾಲಿನ ಪ್ರತಿಕ್ರಿಯೆಯೇ ಎಂಬ ಪ್ರಶ್ನೆಯನ್ನು ಇಲ್ಲಿ ಗಂಭೀರವಾಗಿ ಪರಿಶೀಲಿಸಬೇಕಾಗುತ್ತದೆ. ಯುಜಿಸಿ 2026 ನಿಯಮಾವಳಿ ಯಾವುದೇ ಒಂದು ವರ್ಗದ ವಿರುದ್ಧ ಕ್ರಮಕೈಗೊಳ್ಳಲು ರೂಪಿಸಲ್ಪಟ್ಟದ್ದಲ್ಲ; ಅದು ಜಾತಿ, ಲಿಂಗ, ಅಂಗವಿಕಲತೆ ಮೊದಲಾದ ಆಧಾರಗಳಲ್ಲಿ ನಡೆಯುವ ತಾರತಮ್ಯವನ್ನು ತಡೆಯಲು ಹಾಗೂ ಸಂಸ್ಥೆಗಳೊಳಗೆ ಜವಾಬ್ದಾರಿತನವನ್ನು ಸ್ಥಾಪಿಸಲು ಉದ್ದೇಶಿತವಾದ ಸಾಂಸ್ಥಿಕ ವ್ಯವಸ್ಥೆಯಾಗಿದೆ. ಆದರೂ, ಈ ನೀತಿಯನ್ನು ‘‘ನಮ್ಮ ವಿರುದ್ಧದ ಕಾನೂನು’’ ಎಂದು ಅರ್ಥೈಸಿಕೊಳ್ಳುವ ಮನೋಭಾವವೇ, ಸಮಾನತೆ ಎಂಬ ಸಂವಿಧಾನಾತ್ಮಕ ಮೌಲ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಇನ್ನೂ ಜೀವಂತವಾಗಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಇರುವ ಗಟ್ಟಿಯಾದ ನಿರಾಕರಣೆ. ‘‘ಇಂದಿನ ಕಾಲದಲ್ಲಿ ಜಾತಿಯೇ ಇಲ್ಲ’’, ‘‘ವಿಶ್ವವಿದ್ಯಾನಿಲಯಗಳು ಸಂಪೂರ್ಣ ಸಮಾನತೆಯ ಸ್ಥಳಗಳು’’ ಎಂಬಂತಹ ವಾದಗಳು ಸಾರ್ವಜನಿಕ ಚರ್ಚೆಗಳಲ್ಲಿ ನಿರಂತರವಾಗಿ ಕೇಳಿಬರುತ್ತವೆ. ಆದರೆ ಈ ಹೇಳಿಕೆಗಳ ಹಿಂದೆ ಅಡಗಿರುವ ವಾಸ್ತವವೇನೆಂದರೆ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇತರ ಹಿಂದುಳಿದ ಸಮುದಾಯಗಳ ಅನೇಕ ವಿದ್ಯಾರ್ಥಿಗಳು ದಶಕಗಳಿಂದ ಅವಮಾನ, ನಿರ್ಲಕ್ಷ್ಯ, ಶೈಕ್ಷಣಿಕ ಬಹಿಷ್ಕಾರ ಹಾಗೂ ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ರೋಹಿತ್ ವೇಮುಲಾ ಅವರಂತಹ ಪ್ರಕರಣಗಳು ಕೇವಲ ವೈಯಕ್ತಿಕ ದುರಂತಗಳಲ್ಲ; ಅವು ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಆಳವಾಗಿ ನೆಲೆಯೂರಿರುವ ವ್ಯವಸ್ಥಾತ್ಮಕ ಅಸಮಾನತೆಯ ಕಠಿಣ ಪ್ರತೀಕಗಳಾಗಿವೆ. ಈ ವಾಸ್ತವವನ್ನು ಎದುರಿಸಿ ಒಪ್ಪಿಕೊಳ್ಳುವ ಧೈರ್ಯವಿಲ್ಲದ ಮನಃಸ್ಥಿತಿಯಿಂದಲೇ, ಸಮಸ್ಯೆಯೇ ಇಲ್ಲ ಎಂದು ಹೇಳುವ ಮನೋಭಾವದಿಂದಲೇ ಯುಜಿಸಿ ನೀತಿಗೆ ವಿರೋಧ ಮೂಡುತ್ತಿದೆ. ಸಾಮಾನ್ಯ ವರ್ಗದ ವಿರೋಧದ ಹಿಂದೆ ಮತ್ತೊಂದು ಪ್ರಮುಖ ಅಂಶವೆಂದರೆ ‘ಮೆರಿಟ್’ ಎಂಬ ಪದದ ಬಳಕೆ. ಮೆರಿಟ್ ಅನ್ನು ಕೇವಲ ಅಂಕಗಳು, ರ್ಯಾಂಕ್ಗಳು ಮತ್ತು ಪರೀಕ್ಷಾ ಫಲಿತಾಂಶಗಳಿಗೆ ಸೀಮಿತಗೊಳಿಸಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಗಂಭೀರವಾಗಿ ಪ್ರಶ್ನಿಸಬೇಕಾದುದು ಏನೆಂದರೆ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳ ಮಧ್ಯೆ ಬೆಳೆದ ವಿದ್ಯಾರ್ಥಿಯ ಸಾಧನೆ ಮತ್ತು ಎಲ್ಲಾ ಸೌಲಭ್ಯಗಳು, ಮಾರ್ಗದರ್ಶನ ಹಾಗೂ ಭದ್ರತೆ ಲಭ್ಯವಿದ್ದ ಪರಿಸರದಲ್ಲಿ ಬೆಳೆದ ವಿದ್ಯಾರ್ಥಿಯ ಸಾಧನೆ ಒಂದೇ ತೂಕದ್ದೇ ಎಂಬುದು. ಈ ಮೂಲಭೂತ ಪ್ರಶ್ನೆಯನ್ನು ‘ಮೆರಿಟ್’ ಎಂಬ ಘೋಷಣೆಯ ಹಿಂದೆ ಮರೆಮಾಚಲಾಗುತ್ತಿದೆ. ಯುಜಿಸಿ 2026 ನಿಯಮಾವಳಿ ಮೆರಿಟ್ ಅನ್ನು ರದ್ದುಪಡಿಸುವುದಿಲ್ಲ; ಬದಲಾಗಿ ಮೆರಿಟ್ ಅರಳಲು ಅಡ್ಡಿಯಾಗುವ ತಾರತಮ್ಯ, ಭಯ ಮತ್ತು ಅವಮಾನಗಳ ವಾತಾವರಣವನ್ನು ನಿವಾರಿಸುವುದೇ ಅದರ ನೈಜ ಉದ್ದೇಶ. ಆದರೆ ಈ ಸೂಕ್ಷ್ಮ ಹಾಗೂ ನ್ಯಾಯಸಮ್ಮತ ಅರ್ಥವನ್ನು ಗ್ರಹಿಸದೆ, ಮೆರಿಟ್ಗೆ ಧಕ್ಕೆ ಎಂಬ ಸರಳ ಘೋಷಣೆಯಡಿ ವಿರೋಧವನ್ನು ಸಂಘಟಿಸಲಾಗುತ್ತಿರುವುದು, ಚರ್ಚೆಯನ್ನು ವಾಸ್ತವದಿಂದ ಭಾವನಾತ್ಮಕ ದಿಕ್ಕಿಗೆ ತಳ್ಳುತ್ತಿರುವುದನ್ನು ಸೂಚಿಸುತ್ತದೆ. ಇದಲ್ಲದೆ, ಹೊಸ ನಿಯಮಾವಳಿಯಲ್ಲಿ ದೂರುಗಳಿಗಾಗಿ 24x7 ಹೆಲ್ಪ್ಲೈನ್, ಆನ್ಲೈನ್ ಪೋರ್ಟಲ್, ಇಕ್ವಿಟಿ ಸಮಿತಿಗಳು ಹಾಗೂ ಸಮಯಬದ್ಧ ತನಿಖಾ ವ್ಯವಸ್ಥೆಗಳನ್ನು ಒಳಗೊಂಡಿರುವುದರಿಂದ, ‘ಸುಳ್ಳು ದೂರುಗಳ ಭಯ’ವನ್ನು ಉದ್ದೇಶಪೂರ್ವಕವಾಗಿ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ಸಮರ್ಥನೆಯಂತೆ ಕಾಣಿಸಿದರೂ, ವಾಸ್ತವದಲ್ಲಿ 2012ರ ಹಿಂದಿನ ಯುಜಿಸಿ ಮಾರ್ಗಸೂಚಿಗಳು ಕೇವಲ ಸಲಹಾತ್ಮಕ ಸ್ವರೂಪದಲ್ಲಿದ್ದ ಕಾರಣ, ಅನೇಕ ನಿಜವಾದ ದೂರುಗಳು ದಾಖಲೆಯಾಗದೆ ಅಥವಾ ದಾಖಲಾಗಿದ್ದರೂ ನಿರ್ಲಕ್ಷ್ಯಗೊಳ್ಳುತ್ತಿದ್ದವು ಎಂಬ ಕಠಿಣ ಸತ್ಯವನ್ನು ಮರೆಮಾಚಲಾಗುತ್ತಿದೆ. 2026ರ ನಿಯಮಾವಳಿ ಹೆಚ್ಚು ಕಠಿಣವಾಗಿ ಕಾಣಿಸುವುದಕ್ಕೆ ಮೂಲ ಕಾರಣವೇ ಇಷ್ಟು ವರ್ಷಗಳ ಕಾಲ ಮುಂದುವರಿದ ನಿರ್ಲಕ್ಷ್ಯ, ಹೊಣೆಗಾರಿಕೆಯ ಕೊರತೆ ಮತ್ತು ಶಿಕ್ಷೆಯಿಲ್ಲದ ಸಂಸ್ಕೃತಿ. ಈ ಹಿನ್ನೆಲೆಯನ್ನು ಪರಿಗಣಿಸದೆ, ಹೊಸ ವ್ಯವಸ್ಥೆಯನ್ನು ‘ಅತಿಯಾದ ಕಠಿಣತೆ’ ಎಂದು ಬಣ್ಣಿಸುವುದು, ವಾಸ್ತವದಲ್ಲಿ ನ್ಯಾಯವನ್ನು ವಿಳಂಬಗೊಳಿಸಿದ್ದ ಹಳೆಯ ವ್ಯವಸ್ಥೆಯನ್ನು ರಕ್ಷಿಸಲು ನಡೆಯುತ್ತಿರುವ ಪ್ರಯತ್ನವಾಗಿಯೇ ಕಾಣಿಸುತ್ತದೆ. ಈ ವಿರೋಧದ ಹಿಂದೆ ರಾಜಕೀಯ ಹಾಗೂ ಸಂಘಟನೆಗಳ ಪ್ರಭಾವವೂ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವು ವಿದ್ಯಾರ್ಥಿ ಸಂಘಟನೆಗಳು ಈ ವಿಚಾರವನ್ನು ಸಾಮಾಜಿಕ ನ್ಯಾಯದ ಮೂಲಭೂತ ಚರ್ಚೆಯಿಂದ ಉದ್ದೇಶಪೂರ್ವಕವಾಗಿ ಬೇರ್ಪಡಿಸಿ, ‘ವರ್ಗಾಧಾರಿತ ಆತಂಕ’ ಎಂಬ ಭಾವನೆಯನ್ನು ಬೆಳೆಸುವ ಪ್ರಯತ್ನ ನಡೆಸುತ್ತಿವೆ. ಪರಿಣಾಮವಾಗಿ, ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿ ಒಂದು ಅಗತ್ಯವಾದ ಆಡಳಿತಾತ್ಮಕ ಹಾಗೂ ಸಾಂಸ್ಥಿಕ ವ್ಯವಸ್ಥೆಯ ಸುಧಾರಣೆಯಾಗಿ ಕಾಣಿಸಿಕೊಳ್ಳಬೇಕಿದ್ದದ್ದು, ರಾಜಕೀಯ ಸಂಘರ್ಷ ಮತ್ತು ಧ್ರುವೀಕರಣದ ವಿಷಯವಾಗಿ ರೂಪಾಂತರಗೊಂಡಿದೆ. ವಾಸ್ತವದಲ್ಲಿ ಈ ನಿಯಮಾವಳಿ ಯಾವುದೇ ಒಂದು ವರ್ಗದ ವಿರುದ್ಧವಲ್ಲ; ಅದು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಜವಾಬ್ದಾರಿತನ ಮತ್ತು ಹೊಣೆಗಾರಿಕೆಯನ್ನು ವಿಧಿಸುವ ಉದ್ದೇಶವನ್ನು ಹೊಂದಿದೆ. ಆದರೆ ಚರ್ಚೆಯನ್ನು ನಿರಂತರವಾಗಿ ಭಾವನಾತ್ಮಕ ಮತ್ತು ರಾಜಕೀಯದ ದಿಕ್ಕಿಗೆ ತಳ್ಳುವುದರಿಂದ, ಸಮಸ್ಯೆಯ ಮೂಲವಾದ ಜಾತಿ ಆಧಾರಿತ ತಾರತಮ್ಯ ಹಿನ್ನಲೆಯಲ್ಲಿ ಮರೆತು ಹೋಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗುತ್ತದೆ. ಇನ್ನೊಂದು ಗಂಭೀರ ಅಂಶವೆಂದರೆ, ಅನೇಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತಮ್ಮದೇ ಆದ ಸವಲತ್ತುಗಳನ್ನು ‘ಸಾಮಾನ್ಯ’ ಎಂದು ಪರಿಗಣಿಸಿದ್ದಾರೆ. ಹಾಸ್ಟೆಲ್ಗಳಲ್ಲಿ ಅವಮಾನಿಸಲ್ಪಡದಿರುವುದು, ತರಗತಿಯಲ್ಲಿ ಶಿಕ್ಷಕರಿಂದ ತಿರಸ್ಕಾರಕ್ಕೊಳಗಾಗದಿರುವುದು ಅಥವಾ ಅನುಮಾನಿಸಲ್ಪಡದಿರುವುದು, ಆಡಳಿತ ಮಂಡಳಿಯಿಂದ ಅನುಮಾನಾಸ್ಪದವಾಗಿ ನೋಡಲ್ಪಡದಿರುವುದು, ಇವೆಲ್ಲವೂ ಎಲ್ಲರಿಗೂ ಸಮಾನ ಅವಕಾಶಗಳಂತೆ ಕಾಣಿಸಬಹುದು. ಆದರೆ ವಾಸ್ತವದಲ್ಲಿ, ಇವು ಸವಲತ್ತುಗಳು. ಈ ಸವಲತ್ತುಗಳ ಅಸ್ತಿತ್ವವನ್ನು ಗುರುತಿಸುವ ಅರಿವು ಇಲ್ಲದೆ, ಸಮಾನತೆಯನ್ನು ಸ್ಥಾಪಿಸಲು ತೆಗೆದುಕೊಂಡ ಕ್ರಮಗಳನ್ನು ‘ಹೆಚ್ಚುವರಿ ಸವಲತ್ತುಗಳು’ ಅಥವಾ ‘ಹೆಚ್ಚುವರಿ ಪ್ರಯೋಜನಗಳು’ ಎಂದು ನೋಡಲಾಗುತ್ತಿದೆ. ಯುಜಿಸಿಯ ತಾರತಮ್ಯ ವಿರೋಧಿ ನೀತಿಯ ವಿರುದ್ಧ ವ್ಯಕ್ತಪಡಿಸಲಾದ ಅಸಹನೆ ಮತ್ತು ವಿರೋಧವನ್ನು ಮತ್ತಷ್ಟು ತೀವ್ರಗೊಳಿಸುತ್ತಿರುವುದು ಈ ಮನೋಭಾವವೇ. ವಾಸ್ತವವಾಗಿ ಗಮನಿಸಿದರೆ, ಯುಜಿಸಿ 2026 ನಿಯಮಾವಳಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಮಾನವೀಯ, ಹೆಚ್ಚು ಜವಾಬ್ದಾರಿಯುತ ಮತ್ತು ಹೆಚ್ಚು ಸಂವಿಧಾನಾತ್ಮಕ ದಿಕ್ಕಿನಲ್ಲಿ ರೂಪಿಸುವ ಗಂಭೀರ ಪ್ರಯತ್ನವಾಗಿದೆ. ಇದು ಕೇವಲ ಎಸ್ಸಿ, ಎಸ್ಟಿ ಅಥವಾ ಒಬಿಸಿ ಸಮುದಾಯಗಳಿಗೆ ಮಾತ್ರ ಸೀಮಿತವಾದ ನೀತಿಯಲ್ಲ; ಲಿಂಗ ಅಲ್ಪಸಂಖ್ಯಾತರು, ಅಂಗವಿಕಲರು ಹಾಗೂ ಆನ್ಲೈನ್ ಮತ್ತು ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಸಮಾನ ರಕ್ಷಣೆ ಮತ್ತು ಗೌರವವನ್ನು ಒದಗಿಸುವುದೇ ಇದರ ವ್ಯಾಪ್ತಿ. ಆದರೆ ವಿರೋಧದ ಚರ್ಚೆಗಳಲ್ಲಿ ಈ ಸಮಗ್ರ ಮತ್ತು ಸಮಾವೇಶಾತ್ಮಕ ಸ್ವರೂಪವು ಸಂಪೂರ್ಣವಾಗಿ ಹಿನ್ನೆಲೆಯಲ್ಲಿ ಸರಿದಿದೆ. ಅದರ ಬದಲು, ನೀತಿಯನ್ನು ‘ನಮ್ಮ ವಿರುದ್ಧ’ ಎಂಬ ಸೀಮಿತ ಮತ್ತು ಆತ್ಮರಕ್ಷಣಾತ್ಮಕ ದೃಷ್ಟಿಕೋನದಿಂದಲೇ ನೋಡಲಾಗುತ್ತಿದ್ದು, ಇದು ಸಂವಿಧಾನಾತ್ಮಕ ಸಮಾನತೆಯ ಮೂಲ ಉದ್ದೇಶವನ್ನು ಮರೆಮಾಚುತ್ತಿರುವುದನ್ನು ತೋರಿಸುತ್ತದೆ. ಒಟ್ಟಾರೆ, ಯುಜಿಸಿ ತಾರತಮ್ಯ ತಡೆಗಟ್ಟುವ ನೀತಿಗೆ ಸಾಮಾನ್ಯ ವರ್ಗದವರಿಂದ ವ್ಯಕ್ತವಾಗುತ್ತಿರುವ ಇಷ್ಟೊಂದು ವಿರೋಧ, ಕೇವಲ ಒಂದು ನಿಯಮಾವಳಿಯ ದೋಷಗಳ ಕುರಿತು ಮಾತ್ರವಲ್ಲ; ಅದು ಭಾರತೀಯ ಸಮಾಜದಲ್ಲಿ ಸಮಾನತೆ ಎಂಬ ಕಲ್ಪನೆಗೆ ಎದುರಾಗುತ್ತಿರುವ ಆಳವಾದ ಪ್ರತಿರೋಧದ ಪ್ರತಿಬಿಂಬವಾಗಿದೆ. ಸಮಾನತೆ ಎಂದರೆ ಅಧಿಕಾರ ಅಥವಾ ಅವಕಾಶಗಳನ್ನು ಕಸಿದುಕೊಳ್ಳುವುದು ಅಲ್ಲ; ಅದು ದಶಕಗಳಿಂದ ಮುಂದುವರಿದಿರುವ ಅಸಮಾನತೆಗಳನ್ನು ಸರಿಪಡಿಸುವ ಸಂವಿಧಾನಾತ್ಮಕ ಪ್ರಕ್ರಿಯೆ. ಈ ಮೂಲ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಯುವ ತನಕ, ಇಂತಹ ನ್ಯಾಯೋಚಿತ ನೀತಿಗಳು ವಿರೋಧವನ್ನು ಎದುರಿಸುತ್ತಲೇ ಇರುತ್ತವೆ. ಆದರೆ ಇತಿಹಾಸವು ಸ್ಪಷ್ಟವಾಗಿ ಹೇಳುವುದೇನೆಂದರೆ, ಸಾಮಾಜಿಕ ನ್ಯಾಯದ ದಾರಿಯಲ್ಲಿ ನಡೆದ ಪ್ರತಿಯೊಂದು ಮಹತ್ವದ ಸುಧಾರಣೆಯೂ ಮೊದಲಿಗೆ ವಿರೋಧವನ್ನೇ ಕಂಡಿದೆ. ಆ ಅರ್ಥದಲ್ಲಿ, ಯುಜಿಸಿ 2026 ನಿಯಮಾವಳಿಯೂ ಅದೇ ಇತಿಹಾಸಾತ್ಮಕ ಹಾದಿಯಲ್ಲಿ ಸಾಗುತ್ತಿದ್ದು, ದೀರ್ಘಾವಧಿಯಲ್ಲಿ ಅದು ಹೆಚ್ಚು ಸಮಾನ, ಮಾನವೀಯ ಮತ್ತು ನ್ಯಾಯಸಮ್ಮತ ಉನ್ನತ ಶಿಕ್ಷಣ ವ್ಯವಸ್ಥೆಗೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ಹೊಂದಿರುವುದನ್ನು ಪ್ರಜ್ಞಾವಂತ ನಾಗರಿಕರು ಮರೆಯಬಾರದು.
Aadhaar Online: ಆಧಾರ್ ಕಾರ್ಡ್ ತಿದ್ದುಪಡಿ ಈಗ ಮತ್ತಷ್ಟು ಸುಲಭ, ಸರ್ಕಾರದಿಂದ ಗುಡ್ ನ್ಯೂಸ್
ಆಧಾರ್ ಕಾರ್ಡ್ ಭಾರತೀಯರ ಪಾಲಿಗೆ ಒಂದು ದೊಡ್ಡ ಶಕ್ತಿ ಇದ್ದಂತೆ, ಈ ಮೊದಲು ಎಲ್ಲಾ ಗುರುತಿನ ಚೀಟಿ ಹೊತ್ತುಕೊಂಡು ಸಾಗಬೇಕಿತ್ತು. ಆದರೆ ಈಗ ಆಧಾರ್ ಕಾರ್ಡ್ ಒಂದು ಇದ್ದರೆ ಬಹುತೇಕ ಎಲ್ಲಾ ಕೆಲಸಗಳು ಆಗಿಬಿಡುತ್ತದೆ. ಹೀಗಿದ್ದಾಗ ಆಧಾರ್ ಕಾರ್ಡ್ ಸೇವೆಯನ್ನು ಸರ್ಕಾರ ಇನ್ನಷ್ಟು ಉತ್ತಮಗೊಳಿಸಲು ಪ್ಲಾನ್ ಮಾಡುತ್ತಿದೆ, ಈ ಕಾರಣಕ್ಕೆ ಭಾರತ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್
ಕೇರಳ: ಎಲ್ಡಿಎಫ್ ನೇತೃತ್ವದಲ್ಲಿ ಉತ್ತರ ವಲಯ ಅಭಿವೃದ್ಧಿ ಜಾಥಾ ನಾಳೆ ಆರಂಭ
ಕುಂಬಳೆಯಿಂದ ಜಾಥಾ ಪ್ರಾರಂಭ; ಫೆ.1ರಂದು ಸಿಎಂ ಪಿಣರಾಯಿ ವಿಜಯನ್ ಚಾಲನೆ
ಜಂಟಿ ಅಧಿವೇಶನದಲ್ಲಿ ವಿಪಕ್ಷ ಮೇಲುಗೈ? ಸರ್ಕಾರವನ್ನು ಕಟ್ಟಿಹಾಕಲು ಕಮಲ, ದಳ ಆಗಿದ್ಯಾ ಯಶಸ್ವಿ
ಜನವರಿ 22 ರಿಂದ ಜಂಟಿ ಅಧಿವೇಶನ ಆರಂಭಗೊಂಡಿದೆ. ಈ ಬಾರಿಯ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ವೇದಿಕೆಯಾಗುತ್ತಿದೆ. ಈ ಹಿಂದಿನ ಅಧಿವೇಶನದಲ್ಲಿ ಬಿಜೆಪಿ ಅಬ್ಬರ ನಿರೀಕ್ಷೆಯಷ್ಟು ಇರಲಿಲ್ಲವಾದರೂ, ಈ ಬಾರಿ ಸದನದಲ್ಲಿ ತಕ್ಕಮಟ್ಟಿನಲ್ಲಿ ಸದ್ದು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವೂ ಪ್ರತ್ಯುತ್ತರ ನೀಡುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಸದನದಲ್ಲಿ ವಾಕ್ಸಮರ ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ. ಈ ಕುರಿತಾದ ಒಂದಷ್ಟು ವಿವರಗಳು ಇಲ್ಲಿವೆ.
ರಾಯಚೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಅಗತ್ಯ: ನ್ಯಾ. ಮಾರುತಿ ಬಾಗಡೆ
ನ್ಯಾಯಮೂರ್ತಿಗಳ ವರ್ಗಾವಣೆಯಲ್ಲಿ ಸರಕಾರದ್ದೇನು ಉಸಾಬರಿ?
ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ. ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು, ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ. ‘‘ಒಬ್ಬರು ನಿರ್ದಿಷ್ಟ ನ್ಯಾಯಮೂರ್ತಿಗಳ ಅಥವಾ ನ್ಯಾಯಪೀಠದ ಎದುರು ಒಂದು ಪ್ರಕರಣ ಲಿಸ್ಟ್ ಆದ ತಕ್ಷಣ, ಅದರ ತೀರ್ಪು ಹೀಗೇ ಇರಲಿದೆ ಎಂಬ ತೀರ್ಮಾನಕ್ಕೆ ಜನರು ಬರಲು ಸಾಧ್ಯವಾಗುತ್ತದೆ ಎಂದರೆ, ಅದು ನ್ಯಾಯಾಂಗಕ್ಕೆ ಮತ್ತು ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ದುಃಖಕರವಾದ ದಿನ.’’ ‘‘ನಮ್ಮ ನ್ಯಾಯಾಲಯಗಳನ್ನು ಅಪಾಯದಿಂದ ರಕ್ಷಿಸಲು ಅರೆಸೈನಿಕ ಪಡೆಗಳನ್ನು ನೇಮಿಸಬೇಕಾಗಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯ ಇರುವುದು ನ್ಯಾಯಾಂಗದ ಒಳಗಿನಿಂದಲೇ.’’ ‘‘ನ್ಯಾಯಮೂರ್ತಿಯೊಬ್ಬರು ಸರಕಾರಕ್ಕೆ ಅವಗುಣವಾಗಬಲ್ಲ ತೀರ್ಪು ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ, ಆ ನ್ಯಾಯಮೂರ್ತಿಯವರ ವರ್ಗಾವಣೆಯನ್ನು ಒಕ್ಕೂಟ ಸರಕಾರವು ಮರುಪರಿಶೀಲಿಸಲು ಕೋರಿಕೊಂಡ ಮೇರೆಗೆ ಕೊಲೀಜಿಯಂ ಒಂದು ಹೈಕೋರ್ಟ್ನಿಂದ ಇನ್ನೊಂದು ಹೈಕೋರ್ಟ್ಗೆ ಯಾಕೆ ವರ್ಗಾಯಿಸಬೇಕು? ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ?’’ *** ಇಂತಹ ಸಿಡಿಗುಂಡಿನಂತಹ ಪ್ರಶ್ನೆಗಳನ್ನು ಕೇಳಿರುವುದು ಯಾರೋ ಹಾದಿಬೀದಿಯಲ್ಲಿ ನಿಂತು ಕಟ್ಟೆಪಂಚಾಯ್ತಿಕೆ ಮಾಡುತ್ತಿರುವವರಲ್ಲ. ಭಾರತದ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರ ಪ್ರಶ್ನೆಗಳಿವು. ಜನವರಿ 24ರಂದು ಪುಣೆಯ ILS ಕಾನೂನು ಕಾಲೇಜಿನಲ್ಲಿ ‘‘ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾತಾಂತ್ರಿಕ ಆಡಳಿತ’’ ಎಂಬ ವಿಚಾರದಲ್ಲಿ ದತ್ತಿನಿಧಿ ಉಪನ್ಯಾಸದ ವೇಳೆ ಅವರು ಆಡಿದ ಮಾತುಗಳಿವು. ಆರೋಗ್ಯವಂತ ಮಾಧ್ಯಮಗಳಿರುವ ಯಾವುದೇ ನಾಡಿನಲ್ಲಿ ಆದ್ಯತೆಯ ಸುದ್ದಿಯಾಗಿ, ದೇಶದಾದ್ಯಂತ ಚರ್ಚೆ ಆಗಬೇಕಾಗಿದ್ದಂತಹ ಗಂಭೀರ ಸಂಗತಿ ಇದು. ಆದರೆ, ಈ ಸುದ್ದಿಯನ್ನು ಭಕ್ತಿ-ಭುಕ್ತಿಗಳ ಮಹಾರಾಶಿಯಲ್ಲಿ ಹುದುಗಿಸಿಟ್ಟು ‘ಸಬ್ ಚೆಂಗಾಸಿ’ ಎಂದು ಷರಾ ಬರೆಯಲಾಗಿದೆ. ನ್ಯಾ. ಭುಯಾನ್ ಅವರು 34 ನ್ಯಾಯಮೂರ್ತಿಗಳಿರುವ ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಹಿರಿತನದ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿರುವವರು. 2023 ಜುಲೈ 14ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಆಗಿ ನೇಮಕಗೊಂಡಿರುವ ಅವರು, 2029ರ ಆಗಸ್ಟ್ ಒಂದರಂದು ನಿವೃತ್ತರಾಗಲಿದ್ದಾರೆ. ದುರದೃಷ್ಟವಶಾತ್, ಅವರು ಹಿರಿತನದ ಪಟ್ಟಿಯ ಆಧಾರದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಸಾಧ್ಯತೆಗಳು ಇಲ್ಲ. *** 2014ರಿಂದ ಈಚೆಗೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಒಳಗಿನಿಂದ ಸಂವಿಧಾನ ಪರ ಚಡಪಡಿಕೆಗಳು ಹಲವು ಬಾರಿ ತಲೆಯೆತ್ತಿವೆಯಾದರೂ, ಅವು ಯಾವುವೂ ಜನಸಾಮಾನ್ಯರ ಮನಸ್ಸಿಗೆ ನಾಟದಂತೆ ಆರ್ಕೆಸ್ಟ್ರೇಟೆಡ್ ಪ್ರಯತ್ನಗಳ ಮೂಲಕ ಶ್ರಮಿಸಲಾಗಿದೆ. ನ್ಯಾಯಾಧೀಶರ ನೇಮಕದ ಹೊಣೆ ಹೊತ್ತಿರುವ ಕೊಲಿಜಿಯಂ ಅಪಾರದರ್ಶಕವಾಗಿರುವುದು ಮತ್ತು ಅದರ ಮೇಲೆ ರಾಜಕೀಯಸ್ಥರ ಪ್ರಭಾವ ಹೆಚ್ಚುತ್ತಿರುವ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಎದ್ದದ್ದಿದೆ. ಅಂತಹ ಕೆಲವು ಸನ್ನಿವೇಶಗಳನ್ನು ಗಮನಿಸೋಣ. 2014ರಲ್ಲಿ ಭಾರತ ಸರಕಾರವು ಸಂವಿಧಾನಕ್ಕೆ 99ನೇ ತಿದ್ದುಪಡಿ (124 ಎ,ಬಿ,ಸಿ ವಿಧಿಗಳಿಗೆ) ಮಾಡಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಸ್ಥಾಪನೆಗೆ ಮುಂದಾದಾಗ, ಅದನ್ನು ಸುಪ್ರೀಂ ಕೋರ್ಟ್ ‘ಅಸಾಂವಿಧಾನಿಕ’ ಎಂದು ಘೋಷಿಸಿ, 2015ರ ಅಕ್ಟೋಬರ್ 16ರಂದು ವಜಾಗೊಳಿಸಿತ್ತು. ಆ ನ್ಯಾಯಪೀಠದ ಭಾಗವಾಗಿದ್ದ ನ್ಯಾ. ಜುಸ್ತಿ ಚಲಮೇಶ್ವರ ಅವರು, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಡೆಸುವ ಕೊಲಿಜಿಯಂ ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಲಿಖಿತವಾಗಿ ದಾಖಲಿಸದಿದ್ದರೆ, ತಾನು ಆ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. 2018ರಲ್ಲಿ, ನ್ಯಾ. ಮದನ್ ಲೊಕೂರ್ ಅವರು ಕೊಲಿಜಿಯಂ ಸದಸ್ಯರಾಗಿದ್ದಾಗ, ಇಬ್ಬರು ನ್ಯಾಯಮೂರ್ತಿಗಳನ್ನು (ನ್ಯಾ.ಪ್ರದೀಪ್ ನಂದ್ರಜೋಗ್, ನ್ಯಾ. ರಾಜೇಂದ್ರ ಮೆನನ್) ಸುಪ್ರೀಂ ಕೋರ್ಟ್ ಗೆ ನೇಮಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಆ ನಿರ್ಣಯ ಸಾರ್ವಜನಿಕಗೊಳ್ಳದೆ ನನೆಗುದಿಗೆ ಬಿದ್ದಿತ್ತು, ಕಡೆಗೆ ನ್ಯಾ.ಲೊಕೂರ್ ಅವರು ನಿವೃತ್ತರಾದ ಬಳಿಕ, ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿತ್ತು. ನ್ಯಾ. ಲೊಕೂರ್ ಅವರು ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ನ್ಯಾ. ಆರ್.ಎಫ್. ನಾರಿಮನ್ ಅವರು ಕೊಲೀಜಿಯಂ ಸದಸ್ಯರಾಗಿದ್ದಾಗ, ನ್ಯಾ. ಅಖಿಲ್ ಖುರೇಷಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗಳನ್ನು ಹಿರಿತನಕ್ಕೆ ಪರಿಗಣಿಸಿದ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಪ್ರಕರಣದಲ್ಲೂ ಕೊಲಿಜಿಯಂ ಸುದೀರ್ಘ ವಿಳಂಬನೀತಿ ಅನುಸರಿಸಿತ್ತು. ಒಡಿಶಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ನ್ಯಾ. ಎಸ್. ಮುರಳೀಧರ್ ಅವರನ್ನು ಅವರ ಹಿರಿತನದ ಹೊರತಾಗಿಯೂ ಸುಪ್ರೀಂ ಕೋರ್ಟ್ಗೆ ನೇಮಕ ಮಾಡಲು ನಿರ್ಲಕ್ಷ್ಯ ತೋರಲಾಗಿತ್ತು. ಇಂತಹ ಬೆಳಕಿಗೆ ಬಂದ, ಬರದ ಹತ್ತಾರು ಪ್ರಕರಣಗಳಿವೆ. ತೀರಾ ಇತ್ತೀಚೆಗಿನ ಎರಡು ಘಟನೆಗಳು ನ್ಯಾಯಾಂಗದಲ್ಲಿ ಶಾಸಕಾಂಗದ ಸಂವಿಧಾನಬಾಹಿರ ಹಸ್ತಕ್ಷೇಪದ ಸನ್ನಿವೇಶವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಕಳೆದ ವರ್ಷ (2025) ಆಗಸ್ಟ್ 29ರಂದು, ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ. ವಿ.ಎಂ. ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ಗೆ ಅಸಹಜವೆನ್ನಿಸುವಷ್ಟು ವೇಗದಲ್ಲಿ (ನಾಲ್ಕೇ ದಿನಗಳಲ್ಲಿ) ನೇಮಕ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾ. ಬಿ. ಆರ್. ಗವಾಯಿ ಅವರ ಅಧ್ಯಕ್ಷತೆಯ ಕೊಲಿಜಿಯಂನ ಈ ತೀರ್ಮಾನಕ್ಕೆ, ಕರ್ನಾಟಕ ಮೂಲದ ಮತ್ತು ಶೀಘ್ರವೇ ಸ್ವತಃ ಮುಖ್ಯ ನ್ಯಾಯಮೂರ್ತಿ ಆಗಲಿರುವ ನಾ. ಬಿ.ವಿ. ನಾಗರತ್ನ ಅವರು ಭಿನ್ನಮತವನ್ನು ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಅವರ ಈ ಭಿನ್ನಮತ ಸಾರ್ವಜನಿಕವಾಗಿ ಪ್ರಕಟಗೊಂಡಿಲ್ಲವಾದರೂ, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವಿಚಾರಗಳು ಸುಪ್ರೀಂ ಕೋರ್ಟ್ ನ ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕಾಂಗದ ಹಸ್ತಕ್ಷೇಪದ ಬಗ್ಗೆ ಬೊಟ್ಟು ಮಾಡಿವೆ. ಗುಜರಾತ್ ಮೂಲದ ನ್ಯಾಯಮೂರ್ತಿಗಳಿಗೆ (ನ್ಯಾ.ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಎನ್. ವಿ. ಅಂಜಾರಿಯಾ) ಹೆಚ್ಚಿನ ಮಣೆ, ಬೆನ್ನುಬೆನ್ನಿಗೆ ಇಬ್ಬರು ಗುಜರಾತ್ ಮೂಲದ ನ್ಯಾಯಾಧೀಶರೇ ಮುಖ್ಯ ನ್ಯಾಯಮೂರ್ತಿಗಳಾಗಲಿರುವುದು, ಮಹಿಳಾ ನ್ಯಾಯಮೂರ್ತಿಗಳ ಹಿರಿತನ ಕಡೆಗಣಿಸಿರುವುದು ಮತ್ತಿತರ ಐದು ಕಾರಣಗಳನ್ನು ಮುಂದಿಟ್ಟಿವೆ. ಹಾಲಿ ಶಾಸಕಾಂಗದ ಮುಖ್ಯಸ್ಥರ ಗುಜರಾತ್ ಮೂಲವನ್ನು ಗಮನಿಸಿದರೆ, ಈ ಹಸ್ತಕ್ಷೇಪಗಳು ಗಂಭೀರ ಸ್ವರೂಪದವು ಅನ್ನಿಸದಿರುವುದಿಲ್ಲ. ಆದರೆ, ನ್ಯಾ. ನಾಗರತ್ನ ಅವರ ಕಳವಳಗಳಿಗೆ ಉತ್ತರ ದೊರೆತಿಲ್ಲ. (ಆಧಾರ: Supreme Court Observer) ಕಳೆದ ವಾರ ನ್ಯಾ. ಭುಯಾನ್ ಅವರು ಸಾರ್ವಜನಿಕವಾಗಿ ಎತ್ತಿರುವ ಪ್ರಶ್ನೆಯೂ ಗಂಭೀರ ಸ್ವರೂಪದ್ದು. 2025ರ ಆಗಸ್ಟ್ 25-26ರ ಸಭೆಯಲ್ಲಿ ಕೊಲಿಜಿಯಂ, 14 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಯ ಬಗ್ಗೆ ನಿರ್ಣಯವನ್ನು ಪ್ರಕಟಿಸಿತ್ತು. ಅದರಲ್ಲಿ, ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಅತುಲ್ ಶ್ರೀಧರನ್ ಅವರನ್ನು ಮಧ್ಯಪ್ರದೇಶದಿಂದ ಛತ್ತೀಸ್ಗಡಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಈ ಹಿಂದೆ ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದಾಗ, ಕೆಲವು ತೀರ್ಪುಗಳ ಮೂಲಕ ಶಾಸಕಾಂಗದ ಅಸಂತೋಷಕ್ಕೆ ಗುರಿ ಆಗಿದ್ದ ಅವರ ವರ್ಗಾವಣೆಯನ್ನು ಶಾಸಕಾಂಗ ತಡೆಹಿಡಿದಿತ್ತು ಮತ್ತು 2025ರ ಅಕ್ಟೋಬರ್ 14ರಂದು ಕೊಲಿಜಿಯಂ ಸಭೆಯಲ್ಲಿ ಅವರ ವರ್ಗಾವಣೆಯ ನಿರ್ಣಯವನ್ನು ಬದಲಿಸಿ, ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಈ ಕುರಿತ ಪ್ರಕಟಣೆಯಲ್ಲಿ ‘ಸರಕಾರದ ಮರುಪರಿಶೀಲನೆ ಕೋರಿಕೆಯ ಮೇರೆಗೆ’ (On reconsideration sought by the Government) ಎಂದು ದಾಖಲಿಸಲಾಗಿದೆ. ಈ ವಿಚಾರವನ್ನೇ ನ್ಯಾ. ಭುಯಾನ್ ತನ್ನ ಉಪನ್ಯಾಸದಲ್ಲಿ ಎತ್ತಿರುವುದು. ನ್ಯಾ. ಅತುಲ್ ಶ್ರೀಧರನ್ ಪ್ರಕರಣದಲ್ಲಿ ಕೊಲಿಜಿಯಂ ಲಿಖಿತವಾಗಿಯೇ ಭಾರತ ಸರಕಾರವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ದಾಖಲಿಸಿದೆ (ಚಿತ್ರ ನೋಡಿ). ಸರಕಾರವೊಂದು ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಹದ್ದುಮೀರಿ ಹೀಗೆ ವರ್ತಿಸಿರುವುದರ ಹೊರತಾಗಿಯೂ ಅದು ಗಮನಾರ್ಹ ಸುದ್ದಿ ಆಗಿಲ್ಲ ಎಂಬುದು ದೇಶ ಆತಂಕ ಪಡಬೇಕಾದ ಸಂಗತಿ. ನ್ಯಾಯಾಂಗವನ್ನು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕಾದುದು ಸರಕಾರವೊಂದರ ಸಾಂವಿಧಾನಿಕ ಬದ್ಧತೆ. ನ್ಯಾ. ಭುಯಾನ್ ಅವರು ತಮ್ಮ ಪ್ರಖರ ಮಾತುಗಳಲ್ಲಿ, ‘‘ನ್ಯಾಯಾಧೀಶರಾಗಿ ನಾವು ಯಾವುದೇ ಭಯ, ಪಕ್ಷಪಾತ, ರಾಗ-ದ್ವೇಷಗಳಿಲ್ಲದೆ ಕಾರ್ಯಾಚರಿಸುವ ಪ್ರತಿಜ್ಞೆ ಸ್ವೀಕರಿಸಿರುತ್ತೇವೆ. ಅದನ್ನು ಪಾಲಿಸುವುದು ನಮ್ಮ ಕರ್ತವ್ಯ. ನ್ಯಾಯಾಂಗ ತನ್ನ ನಂಬಿಗಸ್ಥಿಕೆಯನ್ನು ಕಳೆದುಕೊಂಡರೆ, ಪ್ರಜಾತಂತ್ರದಲ್ಲಿ ಏನೂ ಉಳಿದಿರುವುದಿಲ್ಲ. ನ್ಯಾಯಮೂರ್ತಿಗಳು ಉಳಿದುಕೊಂಡಿರಬಹುದು, ತೀರ್ಪುಗಳು ಬರಬಹುದು ಆದರೆ, ನ್ಯಾಯಾಂಗದ ಆತ್ಮವೇ ಉಳಿದಿರುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನವೇ ಪರಮೋಚ್ಚ. ಪಾರ್ಲಿಮೆಂಟು ಸಾರ್ವಭೌಮ ಅಲ್ಲ ಎಂಬ ವಾಸ್ತವವೇ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಮೂಲ ತಿರುಳು. ನಿಯಂತ್ರಣ ಮತ್ತು ಸಂತುಲನಗಳಿದ್ದಾಗ ಮಾತ್ರ ಪ್ರಜಾತಾಂತ್ರಿಕ ಸಂಸ್ಥೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆಯುವುದು ಸಾಧ್ಯವಾಗುತ್ತದೆ. ಸಂಖ್ಯಾಬಲ, ಬಹುಮತ, ಅಧಿಕಾರಗಳ ಬಲದಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಲ್ಡೋಜ್ ಮಾಡಿಕೊಂಡು ಹೋಗುವ ಅಪಾಯ ತಪ್ಪುತ್ತದೆ.’’ ಎಂದು ಪುಣೆಯ ಉಪನ್ಯಾಸದಲ್ಲಿ ಹೇಳಿದ್ದರು. ಆಸಕ್ತರು ಅವರ ಪೂರ್ಣ ಉಪನ್ಯಾಸವನ್ನು ಇಲ್ಲಿ ಕೇಳಬಹುದು: https://www.youtube.com/watch?v=TSvJFZ873Fw
ಕೋಲ್ಕತ್ತಾದಲ್ಲಿನ ಆನಂದಪುರದಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಕಾರ್ಮಿಕರು ಸಾವನ್ನಪ್ಪಿದ್ದರು. ಇನ್ನು ಇಪ್ಪತ್ತೇಳು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೊದಲು ಪುಷ್ಪಾಂಜಲಿ ಡೆಕೋರೇಟರ್ಸ್ ಎಂಬ ಕಂಪನಿಯ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಆಮೇಲೆ ಅದು ಪಕ್ಕದಲ್ಲೇ ಇದ್ದ ಮೋಮೋ ಕಂಪನಿಗೆ ಹೊತ್ತಿಕೊಂಡಿತು. ಸದ್ಯ ಪ್ರಧಾನಿ ಮೋದಿ ಅವರು ಮೃತರ ಕುಟುಂಬಸ್ಥರಿಗೆ ಪರಿಹಾರ ಹಣ ಘೋಷಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯಪಾಲರು ಅಗ್ನಿ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಪಾಲಿಸಲು ಸೂಚನೆ ನೀಡಿದ್ದಾರೆ.
ಅಮೆರಿಕಾದ ಕಠಿಣ ಸುಂಕ ನೀತಿಯಿಂದಾಗಿ ಮಿತ್ರರಾಷ್ಟ್ರಗಳು ಚೀನಾದತ್ತ ಮುಖ ಮಾಡುತ್ತಿರುವುದು ಅಧ್ಯಕ್ಷ ಟ್ರಂಪ್ಗೆ ಚಿಂತೆ ಮೂಡಿಸಿದೆ. 8 ವರ್ಷಗಳ ಬಳಿಕ ಮೊದಲ ಬಾರಿಗೆ ಯುಕೆ ಪ್ರಧಾನಿಯೊಬ್ಬರು ಚೀನಾ ಪ್ರವಾಸ ಬೆಳೆಸಿದ್ದಾರೆ. ಯುಕೆ ಪ್ರಧಾನಿ ಕೀವ್ ಸ್ಟಾರ್ಮರ್ ಚೀನಾದೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.ಅಲ್ಲದೆ, ಕೆನಡಾ ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದರ ಬಗ್ಗೆಯೂ ಸಹ ಟ್ರಂಪ್ ತಮ್ಮ ವಿರೋಧ ವ್ಯಕ್ತಪಡಿಸಿ ಇದು ಸರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಟ್ರಂಪ್ ನ ಈ ಹೇಳಿಕೆಗಳು ಯುಕೆ ಕೆನಡಾಗೆ ಅಪಾಯವೋ ಅಥವಾ ಚೀನಾದೊಂದಿಗೆ ಒಪ್ಪಂದಗಳಿಂದ ಅಮೆರಿಕಾಗೆ ಅಪಾಯವೋ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ, ನಿವೃತ್ತ ನೌಕರರು ಹಾಗೂ ಸಾಧಕರಿಗೆ ಅಭಿನಂದನೆ
ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ 2023–24 ಹಾಗೂ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನಿವೃತ್ತ ಸರ್ಕಾರಿ ನೌಕರರು ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭವು ಫೆಬ್ರವರಿ 1ರಂದು (ರವಿವಾರ) ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ಯು. ರಾಜೇಶ್ ನಾಯಕ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗಣ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್. ಅವರು ಸಾಧಕರನ್ನು ಅಭಿನಂದಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಜಿ. ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ತಾರಾನಾಥ ಸಾಲ್ಯಾನ್ ಪಿ., ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷ ಪಿ. ಲೋಕನಾಥ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ವಿಷಯವನ್ನು ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಇಬ್ಬರು IAS ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; KPTCL ಎಂಡಿ ಏಕಾಏಕಿ ಎತ್ತಂಗಡಿ!
ಕರ್ನಾಟಕ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಅವರು ಕೆಪಿಟಿಸಿಎಲ್ ಎಂಡಿ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲಿದ್ದಾರೆ.
IAS Transfer: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ, ಸಿಎಂ ಸಭೆಗೆ ಗೈರಾಗಿದ್ದು ಮುಳುವಾಯಿತೇ?
ಬೆಂಗಳೂರು: ಕರ್ನಾಟಕದಲ್ಲಿ ಇಂಧನ ಸಚಿವರ ರಾಜೀನಾಮೆ ಕುರಿತು ಚರ್ಚೆಗಳು ನಡೆದ ಬೆನ್ನಲ್ಲೆ ರಾಜ್ಯ ಸರ್ಕಾರದಲ್ಲಿ ಒಂದಷ್ಟು ಬೆಳವಣಿಗೆ ನಡೆದಿವೆ. ಆ ಪೈಕಿ ಐಎಎಸ್ ಅಧಿಕಾರಿ ವರ್ಗಾವಣೆಯು ಒಂದು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಜನವರಿ 30ರ ಶುಕ್ರವಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರ ಮುಂದಿನ ಆದೇಶವರೆಗೆ ಕರ್ನಾಟಕ ವಿದ್ಯುತ್
CJ Roy Death: ಉದ್ಯಮಿ ರಾಯ್ ಆತ್ಮಹತ್ಯೆ ಬಗ್ಗೆ ತನಿಖೆ: ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ರಾಮನಗರ: ಐಟಿ ದಾಳಿ ವೇಳೆ ಉದ್ಯಮಿ ಸಿ.ಜೆ. ರಾಯ್ಆ ತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ಗನ್ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕನಕೋತ್ಸವದ ವೇಳೆ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ
ಬಿರಿಯಾನಿ ತಿಂದಕ್ಕೆ ಬಂದ ಭಾರೀ ಟೀಕೆಗೆ ಡಾಲಿ ಧನಂಜಯ ಖಡಕ್ ಉತ್ತರ! ಜಾತಿ, ಊಟದ ಬಗ್ಗೆ ಏನಂದ್ರು ನಟ?
ನಟ ಡಾಲಿ ಧನಂಜಯ ಮಾಂಸಾಹಾರ ಸೇವನೆ ವಿವಾದಕ್ಕೆ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಆಹಾರದ ಆಯ್ಕೆ ವೈಯಕ್ತಿಕ ಎಂದಿದ್ದಾರೆ. ಸ್ನೇಹಿತನ ಹೋಟೆಲ್ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಡವರ ಮಕ್ಕಳ ಬೆಳೆಯಬೇಕು ಎಂಬ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ಹುಣಸೆನಾಡು ಕೂಡ್ಲಗಿಯಲ್ಲಿ ಹುಣಸೆ ಹಂಗಾಮು ಶುರು: ಅಧಿಕ ಇಳುವರಿಯಿಂದ ಹುಣಸೆ ರೈತರ ಮೊಗದಲ್ಲಿ ಮೂಡಿದ ಸಂತಸ
ಹುಣಸೆ ನಾಡು ಕೂಡ್ಲಿಗಿ ತಾಲೂಕಿನಲ್ಲಿ ಹುಣಸೆ ಹಣ್ಣಿನ ಸೀಜನ್ ಆರಂಭವಾಗಿದ್ದು, ಅಧಿಕ ಇಳುವರಿಯಿಂದ ವ್ಯಾಪಾರಿಗಳು, ಮಾಲೀಕರು ಸಂತಸಗೊಂಡಿದ್ದಾರೆ. ಕಾರ್ಮಿಕರು ಮರಗಳಿಂದ ಹಣ್ಣು ಕೀಳುವ ಕಾಯಕದಲ್ಲಿ ನಿರತರಾಗಿದ್ದು, ಬೇಸಿಗೆಯ 3-4 ತಿಂಗಳು ಕೆಲಸ ಸಿಗುವ ಅವಕಾಶವಿದೆ. ಗುಡೇಕೋಟೆಯಲ್ಲಿ ದೇಶದ ಮೊದಲ ಹುಣಸೆ ಸಂಸ್ಕರಣ ಘಟಕ ಸ್ಥಾಪನೆಯಾಗಿರುವುದು ರೈತರಿಗೆ ಅನುಕೂಲವಾಗಿದ್ದು, ಈ ಬಾರಿ ಹುಣಸೆಗೆ ಉತ್ತಮ ಲಾಭ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಉತ್ತರಾಖಂಡ: ಬಲವಂತದ ವಿವಾಹ, ಲಿವ್ಇನ್ ಸಂಬಂಧಕ್ಕೆ 7 ವರ್ಷ ಜೈಲು!
ಡೆಹ್ರಾಡೂನ್: ಕಟ್ಟುನಿಟ್ಟಿನ ದಂಡನಾ ಕ್ರಮಗಳನ್ನು ಒಳಗೊಂಡ ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮವಾಗಿ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್ಇನ್ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿ ಕಾನೂನಿನ ಅನ್ವಯ, ಬಲವಂತ, ಒತ್ತಡ ಅಥವಾ ವಂಚನೆಯ ಮೂಲಕ ವಿವಾಹ ಅಥವಾ ಲಿವ್ಇನ್ ಸಂಬಂಧಕ್ಕೆ ದಬ್ಬಾಳಿಕೆ ಮಾಡಿದರೆ, ಅಂಥ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಿವಾಹಿತ ವ್ಯಕ್ತಿಯೊಬ್ಬನು ಕಾನೂನಾತ್ಮಕ ವಿಚ್ಛೇದನ ಪಡೆಯದೇ ಎರಡನೇ ವಿವಾಹ ಮಾಡಿಕೊಂಡರೆ ಅಥವಾ ಲಿವ್ಇನ್ ಸಂಬಂಧ ಬೆಳೆಸಿದರೆ, ಅದನ್ನು ಅಪರಾಧ ಕೃತ್ಯವೆಂದು ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ. ಅಂತೆಯೇ, ಈಗಾಗಲೇ ಒಂದು ಲಿವ್ಇನ್ ಸಂಬಂಧ ಹೊಂದಿರುವ ವ್ಯಕ್ತಿ ಮತ್ತೊಂದು ಲಿವ್ಇನ್ ಸಂಬಂಧ ಹೊಂದಿರುವುದು ಸಾಬೀತಾದಲ್ಲಿ, ಅವನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನವರೊಂದಿಗೆ ಲಿವ್ಇನ್ ಸಂಬಂಧ ಹೊಂದಿದರೆ, ಆರು ತಿಂಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಶಿಕ್ಷೆಯನ್ನು ಇನ್ನೊಂದು ತಿಂಗಳು ವಿಸ್ತರಿಸಬಹುದು. ವಿವಾಹ ಅಥವಾ ಲಿವ್ಇನ್ ಸಂಬಂಧಕ್ಕಾಗಿ ಸುಳ್ಳು ಮಾಹಿತಿ ನೀಡಿದರೆ ಅಥವಾ ವಾಸ್ತವಾಂಶಗಳನ್ನು ಮುಚ್ಚಿಟ್ಟರೆ, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೆ, ತಿದ್ದುಪಡಿ ಕಾನೂನಿನ ಪ್ರಕಾರ ಅಕ್ರಮ ವಿಧಾನದಲ್ಲಿ ವಿಚ್ಛೇದನ ಪಡೆದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬಾಲ್ಯವಿವಾಹ ನಿರ್ಬಂಧ ಕಾಯ್ದೆ–2006ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ.
ಬೇಸಿಗೆಗೂ ಮುನ್ನವೇ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ ಲಗ್ಗೆ; ನಿರ್ಜಲೀಕರಣ ನೀಗಿಸುವ ಈ ಹಣ್ಣಿನ ಬೆಲೆ ಹೇಗಿದೆ?
ಚನ್ನಪಟ್ಟಣದಲ್ಲಿ ಬೇಸಿಗೆಗೂ ಮೊದಲೇ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಬಂದಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳು ಹಾಗೂ ಹಣ್ಣುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ಪಕ್ಕದ ರಾಜ್ಯಗಳಿಂದ ಕಲ್ಲಂಗಡಿ ತರಿಸುತ್ತಿದ್ದಾರೆ. ಕಲ್ಲಂಗಡಿ ಹಣ್ಣು ದಾಹ ತೀರಿಸುವುದಲ್ಲದೆ, ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
Karnataka Weather: ಮುಂದಿನ 7 ದಿನ ವ್ಯಾಪಕ ಬಿಸಿಲು ಮುನ್ಸೂಚನೆ, ಕನಿಷ್ಠ ತಾಪಮಾನಲ್ಲಿ 3-5 ಡಿಸೆ ಇಳಿಕೆ
ಬೆಂಗಳೂರು: ಕರ್ನಾಟಕದ ಹಲವೆಡೆ ಬೆಳಗ್ಗೆ ಚಳಿ ಮತ್ತು ಮಂಜಿನ ವಾತಾವರಣ ಕಂಡು ಬರಲಿದೆ. ಇಂದು ಭಾನುವಾರ (ಜನವರಿ 31) ದಿಂದ ರಾಜ್ಯದೆಲ್ಲಡೆ ಒಣಹವೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಸೇರಿ ಹಲವೆಡೆ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆದರೂ ಸಹಿತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದ್ದು, ಶುಷ್ಕ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರಿನಲ್ಲಿ
‘ಗಂಭೀರ’ ಒತ್ತಡ: ಭಾರತದ ಕ್ರಿಕೆಟ್ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಹೇಳಿದ್ದೇನು?
ಭಾರತ ಕ್ರಿಕೆಟ್ ತಂಡ ಗಂಭೀರ ಪ್ರಕ್ಷುಬ್ಧ ಸ್ಥಿತಿಯನ್ನು ಎದುರಿಸುತ್ತಿರುವ ನಡುವೆಯೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ 0–2 ಅಂತರದಲ್ಲಿ ಟೆಸ್ಟ್ ಸರಣಿ ಸೋಲು ಅನುಭವಿಸಿರುವುದಲ್ಲದೆ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲೂ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಗಂಭೀರ್ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಗಂಭೀರ್ ಅವರ ಅಧಿಕಾರಾವಧಿಯಲ್ಲಿ ಮಿಶ್ರ ಫಲಿತಾಂಶಗಳು ದಾಖಲಾಗಿದ್ದರೂ, ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಭಾರತದ ಪತನ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೆ ಕುಸಿದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇವೆಲ್ಲದರ ನಡುವೆಯೂ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಗೆಲುವುಗಳು ಗಂಭೀರ್ ಅವಧಿಯ ಧನಾತ್ಮಕ ಅಂಶಗಳಾಗಿ ಹೊರಹೊಮ್ಮಿವೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿನ ಪತನ ಈ ಎಲ್ಲಾ ಯಶಸ್ಸುಗಳನ್ನು ಮಸುಕುಗೊಳಿಸಿದೆ. ಇಂಗ್ಲೆಂಡ್ ವಿರುದ್ಧ 2–2 ಡ್ರಾ ಸಾಧಿಸುವ ಮೂಲಕ ಶುಭಾರಂಭದ ಸಂಕೇತ ಕಂಡುಬಂದಿದ್ದರೂ, ನಂತರ ಎದುರಾದ ಎರಡು ಕ್ಲೀನ್ಸ್ವೀಪ್ ಸೋಲುಗಳು ದೊಡ್ಡ ಆಘಾತಕ್ಕೆ ಕಾರಣವಾಗಿವೆ. ಇಂತಹದೇ ಪರಿಸ್ಥಿತಿಯನ್ನು ನಾಯಕತ್ವದ ಆರಂಭಿಕ ಹಂತದಲ್ಲಿ ಎದುರಿಸಿದ್ದ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವೂಮಾ, ಭಾರತದ ಇತ್ತೀಚಿನ ಸಾಧನೆಯನ್ನು ವಿಶ್ಲೇಷಿಸುತ್ತಾ ಭಾರತದ ಅಗ್ನಿಪರೀಕ್ಷೆ ಇನ್ನೂ ಮುಗಿದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಮುಖ್ಯ ಕೋಚ್ ಮೇಲೆ ‘ಗಂಭೀರ’ ಒತ್ತಡ ಇದೆ. ಆದರೆ ಅವರು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಭಾರತದ ತಂಡದ ಆಳತೆ, ಗಂಭೀರ್ ಅವರ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಲ್ಲದು ಎಂದು ಬವೂಮಾ ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ಓವರ್ ಪಂದ್ಯಗಳಲ್ಲಿ ಭಾರತಕ್ಕೆ ಸಂಪನ್ಮೂಲಗಳ ಆಯ್ಕೆ ಹೇರಳವಾಗಿದೆ. 2026ರ ಟಿ20 ವಿಶ್ವಕಪ್ ಭಾರತದ ಪಾಲಿಗೆ ಅನುಕೂಲಕರವಾಗಿದೆ. ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಚ್ಚಿನ ಜವಾಬ್ದಾರಿ ಹೊತ್ತಿರುವುದರಿಂದ, ಗಂಭೀರ್ ಅವರ ಸ್ಥಾನಮಾನ ಕುರಿತು ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಕಠಿಣ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿವರಿಸಿದ್ದಾರೆ.
11ನೇ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ಜೊಕೊವಿಕ್
ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಹಿರಿಯ ಆಟಗಾರ ನೊವಾಕ್ ಜೊಕೊವಿಕ್ ಎದುರಾಳಿ ಜನ್ನಿಕ್ ಸಿನ್ನರ್ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್ಗೆ ರಹದಾರಿ ಪಡೆದರು. ಐದು ಸೆಟ್ಗಳ ಸುಧೀರ್ಘ ಪಂದ್ಯದಲ್ಲಿ ವಿಶ್ವದ ನಂಬರ್ 2 ಆಟಗಾರ ಸಿನ್ನರ್ ಮೊದಲ ಹಾಗೂ ಮೂರನೇ ಸೆಟ್ ಗೆದ್ದರು. ಹತ್ತು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ಎರಡು ಬಾರಿ ಸೋಲಿನ ದವಡೆಯಿಂದ ಚೇತರಿಸಿಕೊಂಡು ಹಾಲಿ ಚಾಂಪಿಯನ್ ವಿರುದ್ಧ 3-6, 6-3, 4-6, 6-4, 6-4 ಅಂತರದ ಜಯ ಸಾಧಿಸಿದರು. ಇದರೊಂದಿಗೆ ವಿಶ್ವದ 4ನೇ ಕ್ರಮಾಂಕದ ಆಟಗಾರ ಹನ್ನೊಂದನೇ ಬಾರಿಗೆ ಫೈನಲ್ ತಲುಪಿದರು. ಇದು ಕಳೆದ ಎರಡು ವರ್ಷದಲ್ಲಿ ಸಿನ್ನರ್ ವಿರುದ್ಧ ಜೊಕೊವಿಕ್ ಅವರ ಮೊದಲ ಜಯವಾಗಿದೆ. ಮೊದಲ ಸೆಮಿಫೈನಲ್ನಲ್ಲಿ ಅಲೆಕ್ಸಾಂಡರ್ ಝೆರೆವ್ ವಿರುದ್ಧ ಜಯ ಸಾಧಿಸಿ ಫೈನಲ್ಗೇರಿದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಕಾರ್ಲೋಸ್ ಅಲ್ಕರಾಝ್ ವಿರುದ್ಧ ಜೊಕೊವಿಕ್ ಫೈನಲ್ನಲ್ಲಿ ಸೆಣೆಸಲಿದ್ದಾರೆ. ಪಂದ್ಯದಲ್ಲಿ 18 ಬ್ರೇಕ್ಪಾಯಿಂಟ್ ಎದುರಿಸಿದ ಜೊಕೊವಿಕ್ 16ನ್ನು ಉಳಿಸಿಕೊಂಡು ಅದ್ಭುತ ಪ್ರದರ್ಶನ ತೋರಿದರು. ಭಾರಿ ಒತ್ತಡದ ಪಂದ್ಯದಲ್ಲಿ ಮೊದಲ ಸೆಟ್ನಲ್ಲಿ ಹಲವು ಬಾರಿ ಬ್ರೇಕ್ಪಾಯಿಂಟ್ನಿಂದ ಬಚಾವ್ ಆದರು. 15-40, 0-40 ಹಿನ್ನಡೆಯಿಂದಲೂ ಚೇತರಿಸಿಕೊಂಡು ಪಾಯಿಂಟ್ ಉಳಿಸಿಕೊಳ್ಳುವ ಛಾತಿ ತೋರಿದರು.
ಚಿನ್ನ ಬೆಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದ ಒಂದೆಡೆ ಜನ ಸಾಮಾನ್ಯರು ಚಿನ್ನ ಖರೀದಿಸಲು ಯೋಚಿಸುವಂತಾದರೆ, ಇನ್ನೊಂದೆಡೆ ಆಭರಣ ವ್ಯಾಪಾರಕ್ಕೂ ಇದು ಹೊಡೆತ ನೀಡಿದೆ. ಇದಕ್ಕೆ ಪರಿಹಾರವಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಆಭರಣ ತಯಾರಿಕೆ ವಲಯದ ಮಾಲೀಕರು 14 ಕ್ಯಾರೆಟ್ ಚಿನ್ನದ ಒಡವೆಗಳನ್ನು ಪರಿಚಯಿಸಲು ಮುಂದಾಗಿದ್ದಾರೆ. ಈ ಕುರಿತು ಕೇಂದ್ರದ ಬಳಿ ಮನವಿ ಮಾಡಲು ಸಹ ಮುಂದಾಗಿದ್ದು, ಇದು ಜಾರಿಯಾದರೆ ಬೆಲೆ ಅರ್ಧಕ್ಕರ್ಧ ಇಳಿಯಲಿದೆ. ಕೇಂದ್ರ ಬಜೆಟ್ ನಂತರ ಮುಂದಿನ ನಡೆ ನಿರ್ಧಾರವಾಗಲಿದೆ. ಒಂದು ವೇಳೆ, ಈ 14 ಕ್ಯಾರಟ್ ಚಿನ್ನದ ಆಭರಣಗಳೆನಾದರೂ ಮಾರುಕಟ್ಟೆಗೆ ಬಂದರೆ, ಚಿನ್ನಕೊಳ್ಳುವ ಜನಸಾಮನ್ಯರಿಗೆ ಅಲ್ಪಮಟ್ಟಿಗೆ ಹೊರೆ ತಪ್ಪಲಿದೆ.
ಮಹಾರಾಷ್ಟ್ರ: ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಇಂದು ಪ್ರಮಾಣ ವಚನ
ಮುಂಬೈ : ಜ. ಅಜಿತ್ ಪವಾರ್ ಅವರ ಪತ್ನಿಯಾದ ಸುನೇತ್ರಾ ಪವಾರ್ ಅವರು ಇಂದು (ಶನಿವಾರ) ಸಂಜೆ 5 ಗಂಟೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್ಸಿಪಿ ಮೂಲಗಳು ತಿಳಿಸಿವೆ. ಫೆಬ್ರವರಿ 7ರಂದು ನಡೆಯಲಿರುವ ಪುಣೆ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಂದಿನ ರಾಜಕೀಯ ದಿಕ್ಕು ನಿರ್ಧರಿಸುವ ಉದ್ದೇಶದಿಂದ ಹಿರಿಯ ನಾಯಕರು ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರಸ್ತಾವನೆಯ ಬಳಿಕ ಪವಾರ್ ಕುಟುಂಬದೊಳಗೆ ಚರ್ಚೆಗಳು ನಡೆದಿದ್ದು, ಆಲೋಚನೆಗಳ ನಂತರ ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಎನ್ಸಿಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ನಾಯಕ ಛಗನ್ ಭುಜಬಲ್, ಶನಿವಾರವೇ ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ. ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನು ತಾತ್ಕಾಲಿಕವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಳಿಯೇ ಉಳಿಸಲಾಗುತ್ತದೆ. ಬಜೆಟ್ ಅಧಿವೇಶನದ ನಂತರ ಈ ಖಾತೆಯನ್ನು ಎನ್ಸಿಪಿಗೆ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚಿನ್ನ-ಬೆಳ್ಳಿಗೆ ಭಾರಿ ಬೆಲೆ; ಮಂಗಳೂರಿನಲ್ಲಿ ಖದೀಮರ ಕೈ ಚಳಕ ಶುರು, ದೈವಸ್ಥಾನ-ದೇವಸ್ಥಾನಗಳೇ ಟಾರ್ಗೆಟ್
ಚಿನ್ನ, ಬೆಳ್ಳಿ, ಪಂಚಲೋಹಗಳ ಬೆಲೆ ಏರಿಕೆಯಿಂದಾಗಿ ದೇವಸ್ಥಾನ, ದೈವಸ್ಥಾನಗಳನ್ನು ಗುರಿಯಾಗಿಸಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕುಳಾಯಿ, ಕದ್ರಿ, KSRTC ಬಸ್ ಕ್ಯಾಬಿನ್ನಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ವರದಿಯಾಗಿವೆ. ಹಿರಿಯರಿಂದ ಬಳುವಳಿಯಾಗಿ ಬಂದ ಲೋಹದ ವಸ್ತುಗಳೂ ಈಗ ಚಿನ್ನದಂತೆ ಬೆಲೆ ಬಾಳುತ್ತಿವೆ.
ಸಿಗರೇಟು ಉತ್ಪಾದಕ ಕಂಪನಿಗೆ KSPCB ಶಾಕ್; ಪೈಲಟ್ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ಹಿನ್ನೆಲೆ ನೋಟಿಸ್ ಜಾರಿ
ಬೆಂಗಳೂರಿನಲ್ಲಿ ಸಿಗರೇಟು ತುಂಡುಗಳ ಸಂಗ್ರಹ ಮತ್ತು ವಿಲೇವಾರಿಗಾಗಿ ಪ್ರಾಯೋಗಿಕ ಯೋಜನೆ ಜಾರಿಗೆ ತರಲು ಕೆಎಸ್ಪಿಸಿಬಿ ಸಿಗರೇಟು ತಯಾರಕ ಕಂಪನಿಗೆ ನಿರ್ದೇಶಿಸಿತ್ತು. ಆದರೂ, ಕಂಪನಿ ನಿರ್ಲಕ್ಷ್ಯ ತೋರಿದ ಕಾರಣ ಕೆಎಸ್ಪಿಸಿಬಿ ನೋಟಿಸ್ ನೀಡಿದೆ. ಸಿಗರೇಟು ತುಂಡುಗಳು ಅಪಾಯಕಾರಿ ತ್ಯಾಜ್ಯವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯದಂತೆ ಪರಿಗಣಿಸಲಾಗುತ್ತದೆ. ಇವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ʻಮಹಾʼ ರಾಜಕಾರಣದಲ್ಲಿ ಹೊಸ ಇತಿಹಾಸ; ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಇಂದು(ಜ.31) ಸಂಜೆಯೇ ಪದಗ್ರಹಣ
ಮಹಾರಾಷ್ಟ್ರದಲ್ಲಿ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂದು ಸಂಜೆ 5ಕ್ಕೆ ಅವರು ಸುನೇತ್ರಾ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಟ ಗೋವಿಂದಾ ಆಗ್ರಾಗೆ ಭೇಟಿ ನೀಡಿದಾಗ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರು ದಿವಾಳಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದ ನಿಯಮಗಳ ಕಾರಣದಿಂದಾಗಿ ಅವರು ಟ್ಯಾಕ್ಸಿ ಬಳಸಬೇಕಾಯಿತು ಎಂದು ಸ್ಪಷ್ಟನೆ ನೀಡಲಾಗಿದೆ. ಅವರ ಬಳಿ ಐಷಾರಾಮಿ ಕಾರುಗಳಿದ್ದು, ಹೋಟೆಲ್ ನಲ್ಲಿ ಕಾಯುತ್ತಿವೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ; ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
ಬೆಂಗಳೂರು : ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗದು ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, 'ಭಜರಂಗಿ ಗೋ ಕಳ್ಳರು' ಎಂಬ ಹೆಸರಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಿಂದೂ ದೇವತೆಗಳು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಪ್ರಕರಣ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಕರಯಾ ಗ್ರಾಮದ ಸಿರಾಜುದ್ದೀನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಹೈಕೋರ್ಟ್ ಆದೇಶವೇನು? ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರವೃತ್ತಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಮತ್ತು ತನಿಖಾಧಿಕಾರಿಯು ಗ್ರೂಪ್ನ ಎಲ್ಲ ನಿರ್ವಾಹಕರ (ಅಡ್ಮಿನ್) ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ. ಇಂಥ ವಾಟ್ಸ್ಆ್ಯಪ್ ಗ್ರೂಪ್ನ ಸದಸ್ಯರೂ ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಪ್ರಕರಣವಿನ್ನೂ ತನಿಖಾ ಹಂತದಲ್ಲಿದ್ದು, ತನಿಖೆಯಿಂದ ಯಾವ ವಿಚಾರಗಳು ಹೊರಬರಲಿವೆ ಎಂದು ಇನ್ನೂ ತಿಳಿಯಬೇಕಿದೆ. ಈ ರೀತಿಯ ಗುರುತರ ಗುಣಲಕ್ಷಣಗಳ ಅಪರಾಧದ ತನಿಖೆಯನ್ನು ಮಧ್ಯದಲ್ಲೇ ತಡೆಯಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಇದೇ ವೇಳೆ, ಇದು 2021ರ ಅಪರಾಧ ಕೃತ್ಯವಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಶೀಘ್ರ ತನಿಖೆ ಮುಕ್ತಾಯಗೊಳಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರತಿಭಾವಂತ ಉದ್ಯೋಗಿಗಳಿಗೆ ಸೂಕ್ತ ವೇತನ ನೀಡಿ ಉಳಿಸಿಕೊಳ್ಳಲು ಮುಂದಾಗಬೇಕು : ಡಾ.ಶರಣಪ್ರಕಾಶ ಪಾಟೀಲ್
ಬೆಂಗಳೂರು : ಪ್ರತಿಭಾವಂತ ಕಾರ್ಮಿಕರಿಗೆ ಸೂಕ್ತ ವೇತನ ನೀಡಬೇಕಾದ ಅಗತ್ಯವಿದೆ. ಇಂತಹವರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಶುಕ್ರವಾರ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ ಎಂಎಸ್ಎಂಇ ಮತ್ತು ಉದ್ಯೋಗಾವಕಾಶಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಎಸ್ಎಂಇ ವಲಯದಲ್ಲಿ ಕಡಿಮೆ ವೇತನ ಇರುವ ಬಗ್ಗೆ ಮಾಹಿತಿ ಬಂದಿದೆ. ಬೆಂಗಳೂರಿನಂತಹ ನಗರದಲ್ಲಿ ಉದ್ಯೋಗಿಗಳು ಯೋಗ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಗೌರವಾನ್ವಿತ ವೇತನವನ್ನು ಎಂಎಸ್ಎಂಇಗಳು ನೀಡಬೇಕು ಎಂದು ಸಲಹೆ ಮಾಡಿದರು. ಕರ್ನಾಟಕದ ಎರಡನೇ ಮತ್ತು ಮೂರನೇ ಹಂತದ ಪ್ರದೇಶಗಳಲ್ಲಿ ಕೌಶಲ್ಯಪೂರ್ಣ ಮತ್ತು ಅರ್ಹ ಉದ್ಯೋಗಿಗಳು ಬೆಂಗಳೂರಿನಲ್ಲಿ ಉದ್ಯೋಗಗಳನ್ನು ತ್ಯಜಿಸಿ ತವರು ಸ್ಥಳಗಳಿಗೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲಬುರಗಿಯ ವ್ಯಕ್ತಿಯು ಕೇವಲ 20 ಸಾವಿರ ರೂ.ಮಾಸಿಕ ಸಂಬಳದೊಂದಿಗೆ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು? ಎಂದು ಅವರು ಪ್ರಶ್ನಿಸಿದರು. ಹಲವಾರು ಎಂಎಸ್ಎಂಇ ಕೈಗಾರಿಕೋದ್ಯಮಿಗಳು ಕೌಶಲ್ಯಪೂರ್ಣ ಕಾರ್ಮಿಕರ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಈಗಿರುವ ಉದ್ಯೋಗಿಗಳು ದೊಡ್ಡ ಕೈಗಾರಿಕೆಗಳಿಗೆ ಸೇರಲು ಹೋಗುತ್ತಿದ್ದಾರೆ ಎಂಬ ವಿಷಯದ ಬಗ್ಗೆಯೂ ಚರ್ಚೆಯಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಎಂಎಸ್ಎಂಇಗಳು ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತರು. ಆದಾಗ್ಯೂ, ಕಡಿಮೆ ವೇತನದಿಂದ ಪ್ರತಿಭೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ತಂತ್ರಜ್ಞಾನ ವಲಯವು ನೀಡುವ ಸಂಬಳವನ್ನು ನೀಡಬೇಕೆಂದು ಹೇಳುತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಘನತೆಯಿಂದ ಬದುಕಲು ಉದ್ಯೋಗಿಗಳಿಗೆ ಅವರ ಕೌಶಲ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ವೇತನ ನೀಡಬೇಕು ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಕೈಗಾರಿಕೆಗಳಿಗೆ ವೈವಿಧ್ಯಮಯ ಮತ್ತು ನಿರ್ದಿಷ್ಟ ಕೌಶಲ್ಯ ಹೊಂದಿರುವ ಕಾರ್ಮಿಕರ ಅಗತ್ಯವಿದೆ. ನಮ್ಮ ಇಲಾಖೆಯು ಎಂಎಸ್ಎಂಇಗಳ ಅಗತ್ಯಗಳನ್ನು ಪೂರೈಸುವ ವಿಶೇಷ, ವಲಯ-ನಿರ್ದಿಷ್ಟ ಉದ್ಯೋಗ ಮೇಳಗಳನ್ನು ಆಯೋಜಿಸುತ್ತದೆ ಎಂದು ಸಚಿವರು ಭರವಸೆ ನೀಡಿದರು. ಈ ವೇಳೆ ಸಿಐಐನ ರವೀಂದ್ರ ಶ್ರೀಕಂಠನ್, ಸ್ಯಾಮ್ ಚೆರಿಯನ್, ರವಿ ರಾಘವನ್ ಮತ್ತು ಸೊಲೊಮನ್ ಪುಷ್ಪರಾಜ್ ಹಾಜರಿದ್ದರು.
ದಲಿತ ರಾಜಕಾರಣಿಗಳ ವಿರುದ್ಧ ರಾಜಕೀಯ ಷಡ್ಯಂತ್ರ : ಡಾ.ಎಲ್.ಹನುಮಂತಯ್ಯ
ಬೆಂಗಳೂರು : ರಾಜ್ಯದಲ್ಲಿ ದಲಿತ ಶಾಸಕ, ಸಚಿವರುಗಳನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷದವರು ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಆರೋಪ ಮಾಡಿದ್ದಾರೆ. ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಸಮುದಾಯ ನಾಯಕರು ಏನಾದರೂ ತಪ್ಪು ಮಾಡಿದ್ದರೆ, ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ದಲಿತರ ಮೇಲೆ ವಿನಾಕಾರಣ ವೈಯುಕ್ತಿಕ ದಾಳಿ ಮಾಡುವ ಪ್ರಯತ್ನಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಯುವ ಸಚಿವ ಪ್ರಿಯಾಂಕ್ ಖರ್ಗೆ ಸಂವಿಧಾನ ಹಾಗೂ ಕಾಂಗ್ರೆಸ್ ಸಿದ್ದಾಂತದ ಪರ ಹೋರಾಟ ಮಾಡುತ್ತಿದ್ದಾರೆ. ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಯಾವುದೇ ತಪ್ಪು ಇಲ್ಲದಿದ್ದರೂ ಭ್ರಷ್ಟಚಾರ ಅರೋಪದಲ್ಲಿ ಸಿಲುಕಿಸಿ ಅವರಿಂದ ರಾಜಿನಾಮೆ ಪಡೆಯುವ ಹುನ್ನಾರ ನಡೆಯುತ್ತಿದೆ. ವಿಪಕ್ಷದವರು ದಲಿತ ನಾಯಕರನ್ನು ಮುಂದಿಟ್ಟುಕೊಂಡು ಆಪಾದನೆ ಮಾಡುತ್ತಿದ್ದಾರೆ ಎಂದು ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ತನಿಖೆಯಾಗಲಿ. ಆರ್.ಬಿ.ತಿಮ್ಮಾಪುರ ಸಚಿವರಾದ ಮೇಲೆ ಅಬಕಾರಿ ಇಲಾಖೆಯಲ್ಲಿ ಸುಧಾರಣೆ ತಂದಿದ್ದಾರೆ. ನಗರ ಪ್ರದೇಶದಲ್ಲಿ 5ವರ್ಷ ಮೇಲ್ಪಟ್ಟು ಕೆಲಸ ಮಾಡುವವರಿಗೆ ವರ್ಗಾವಣೆ ಮಾಡಲಾಗಿದೆ. ಆದರೂ ಅವರ ವಿರುದ್ಧ ಜಾತಿ ರಾಜಕೀಯ ಹುನ್ನಾರ ನಡೆಯುತ್ತಿರುವುದು ಬೇಸರ. ಇಲಾಖೆಯ ಕೆಲವು ಅಧಿಕಾರಿಗಳು ಷಡ್ಯಂತ್ರ ಮಾಡಿ ಅವರ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆಂಬ ಸಂದೇಹವಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ನಾಯಕರು ದಲಿತ ನಾಯಕರನ್ನು ದೂಷಿಸುವ ಸಲುವಾಗಿ, ಪಕ್ಷದಲ್ಲಿ ದಲಿತರನ್ನು ನೇಮಿಸಿಕೊಂಡು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಗಾಂಧೀಜಿಗೆ ಅವಹೇಳನ ಮಾಡುತ್ತಾ, ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಾ ಪ್ರಜಾಪ್ರಭತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅಧಿಕಾರಿಗಳ ಷ್ರಡ್ಯಂತ್ರ, ಜಾತಿ ರಾಜಕೀಯ, ದಲಿತ ಸಚಿವರನ್ನು ತುಳಿಯಲು ಪ್ರಯತ್ನಿಸುತ್ತಿರುವರ ವಿರುದ್ದ ನಮ್ಮ ಹೋರಾಟ ಎಂದಿಗೂ ಇದ್ದೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖೆಗಳಲ್ಲಿ ಭ್ರಷ್ಟಾ ಚಾರ ನಡೆಯುತ್ತಿದ್ದರೆ, ತನಿಖೆ ನಡೆಸಬೇಕು ಎಂದು ಹನುಮಂತಯ್ಯ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಗೌತಮ್ ಕೆ.ವಿ, ರಾಜು ಕಡಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಟ್ಟಹಲಸೂರು-ರಾಜಾನುಕುಂಟೆ ಭೂಸ್ವಾಧೀನ ಕೈಬಿಡಿ : ರೈತ ಸಂಘ
ಹಣ್ಣು, ಸೊಪ್ಪು, ತರಕಾರಿ ಪ್ರದರ್ಶಿಸಿ ಕೃಷಿ ಸಂಸ್ಕೃತಿ ಉಳಿಸಲು ಆಗ್ರಹ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ | ರಾಜೀವ್ ಗೌಡಗೆ ಷರತ್ತುಬದ್ಧ ಜಾಮೀನು
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಮಾಜಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಶುಕ್ರವಾರ ಜೆಎಂಎಫ್ಸಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದು, ಸುಮಾರು 13 ದಿನಗಳ ಬಳಿಕ ಕೇರಳ ಗಡಿ ಪ್ರದೇಶದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದರು.ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಜೀವ್ ಗೌಡ ಪರವಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದರು. ಬಿಡುಗಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್ ಗೌಡ, ಸತ್ಯ ಮತ್ತು ನ್ಯಾಯಕ್ಕೆ ನಾನು ಸದಾ ತಲೆಬಾಗುತ್ತೇನೆ. ಜಾಮೀನು ಸಿಕ್ಕಿರುವುದು ಖುಷಿ ತಂದಿದೆ ಎಂದರು.
Mysuru | ಸಹಬಾಳ್ವೆ, ಸಮಾನತೆ, ಸೌಹಾರ್ದಕ್ಕಾಗಿ ನಡಿಗೆ
ಮೈಸೂರು : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮ ದಿನದ ಅಂಗವಾಗಿ ದೇಶವನ್ನು ಸರ್ವಜನಾಂಗದ ತೋಟವನ್ನಾಗಿಸಿ ಸಹಬಾಳ್ವೆ, ಸಮಾನತೆ, ಸೌಹಾರ್ದ ನಿರ್ಮಾಣದ ಆಶಯದಲ್ಲಿ ಶುಕ್ರವಾರ ಮೈಸೂರು ನಗರದಲ್ಲಿ ಸೌಹಾರ್ದ ನಡಿಗೆ ಜಾಥಾ ನಡೆಯಿತು. ಸೌಹಾರ್ದ ಕರ್ನಾಟಕ ಮೈಸೂರು ಘಟಕದ ವತಿಯಿಂದ ಸೇಂಟ್ ಫಿಲೋಮಿನಾ ಚರ್ಚ್ನಿಂದ ನಡಿಗೆ ಹೊರಟು, ಆಝಾಮ್ ಮಸೀದಿ, ಅಶೋಕ ರಸ್ತೆ ಮೂಲಕ ಗಾಂಧಿ ಚೌಕದ ಗಾಂಧಿ ಪ್ರತಿಮೆ ತಲುಪಿತು. ನಡಿಗೆಯಲ್ಲಿ ಪಾಲ್ಗೊಂಡವರು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಆಶಯದ ವಿವಿಧ ಪ್ಲೇಕಾರ್ಡ್ಗಳನ್ನು ಹಿಡಿದು ಗಮನಸೆಳೆದರು. ಚಿಕ್ಕಗಡಿಯಾರ ವೃತ್ತದಲ್ಲಿ ಹಿರಿಯ ರಂಗಕರ್ಮಿ ರಂಗಕರ್ಮಿ ಎನ್.ಜನಾರ್ದನ್ (ಜನ್ನಿ) ಮತ್ತು ದೇವಾನಂದ ವರ ಪ್ರಸಾದ್ ಅವರ ತಂಡದವರು ಸೌಹಾರ್ದ ಗೀತೆ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಸಾಹಿತಿ, ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಮಾತನಾಡಿ, ನಾವೆಲ್ಲರೂ ಸೇರಿ ಪ್ರೀತಿಯ ಸ್ನೇಹದ ಸಂಬಂಧ ರಚಿಸಬೇಕು. ಇದಕ್ಕಿರುವ ಅಡ್ಡಿಗಳನ್ನು ಪ್ರಶ್ನಿಸಿ ಅದನ್ನು ಮೀರುತ್ತ ಸಾಗಬೇಕು ಎಂದು ಹೇಳಿದರು. ಒಡನಾಡಿಯ ಸ್ಟ್ಯಾನ್ಲಿ ಮಾತನಾಡಿ, ಸತ್ಯ, ಅಹಿಂಸೆ ಉಸಿರಾಡುತ್ತ ಬ್ರಿಟಿಷರಿಂದ ಬಿಡುಗಡೆಗೊಳಿಸಿ ಬಾಪು ಹತ್ಯೆಯು ಸತ್ಯ, ಅಹಿಂಸೆ ಮತ್ತು ಕಾರುಣ್ಯದ ಮೇಲೆ ನಡೆದ ಗುಂಡಿನ ದಾಳಿಯಾಗಿದೆ. ಸಾಮರಸ್ಯದಿಂದ ಬದುಕು ಬಹಳ ಹದಗೆಟ್ಟು ದುರಿತ ದಿನದಲ್ಲಿ ಬದುಕುತ್ತಿದ್ದೇವೆ. ಧರ್ಮಗಳನ್ನು ಭ್ರಷ್ಟಗೊಳಿಸಿ ಮತಾಂಧೆ ಎದ್ದು ಕಾಣುತ್ತಿದೆ. ಸಾಂಸ್ಥಿಕ ಧರ್ಮಗಳ ಮೇಲೆ ನಂಬಿಕೆ ಹೋಗುವಂತೆ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಧರ್ಮ ರಾಜಕಾರಣ ಒಳಗಣ್ಣಿನಿಂದ ನೋಡುತ್ತ ಒಟ್ಟಾಗಿ ಪ್ರಶ್ನಿಸಬೇಕು ಎಂದರು. ಹೋರಾಟಗಾರ್ತಿ ಸವಿತಾ ಮಲ್ಲೇಶ್ ಮಾತನಾಡಿದರು. ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು, ಕರ್ನಾಟಕ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ,ಪ್ರಗತಿ ಪರ ಚಿಂತಕ ಪ್ರೊ.ಕಾಳಚೆನ್ನೇಗೌಡ, ಪಂಡಿತಾರಾಧ್ಯ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್, ವಕೀಲ ಪುನೀತ್, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ಗೋಪಿನಾಥ್, ಪ್ರಭಾಕರ್, ಶ್ರೀದೇವಿ, ಲತಾ ಕೆ.ಬಿದ್ದಪ್ಪ, ಜಯರಾಂ, ಕೆ.ಬಸವರಾಜು, ಚಿರಾಗ್ ಮೂರ್ತಿ, ಹಣ್ಣಪ್ಪ, ನೂರ್ ಮರ್ಚೆಂಟ್, ಎನ್.ವಿಜಯಕುಮಾರ್, ಸುಬ್ರಹ್ಮಣ್ಯ, ಚೌಡಳ್ಳಿ ಜವರಯ್ಯ, ಶ್ರೀಧರ್, ಅಯ್ಯಪ್ಪ ಹೂಗಾರ್, ಡಿ.ಅಭಿ, ಚೇತನ್, ರಾಜೇಂದ್ರ, ನೆಲೆ ಹಿನ್ನೆಲೆ ಗೋಪಾಲ್, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಕುಮಾರ್, ರಘು, ಮಂಜುನಾಥ್, ರಾಘು, ಶ್ರೀಕಂಠ, ಪ್ರಕಾಶ್, ಕೋಚನಹಳ್ಳಿ ಮಹೇಶ್, ಶಿವಣ್ಣ ನಾಯಕ, ಪ್ರೇಮ್ ರಾಜ್, ಜೆ.ರಘು ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುವ ವಸ್ತುಗಳು ಸಿಕ್ಕಿಲ್ಲ : ಜಿ.ಪರಮೇಶ್ವರ್
ಮೈಸೂರು : ಮೈಸೂರು ನಗರದಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳು ಸಿಕ್ಕಿಲ್ಲ. ಎನ್ಸಿಬಿ ಅಧಿಕಾರಿಗಳ ಮೈಸೂರಿನಲ್ಲಿ ದಾಳಿ ಫಾಲೋಅಫ್ ಕೇಸ್ ಅಷ್ಟೇ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಿನಾಯಿಲ್ ತಯಾರು ಮಾಡುವ ಫ್ಯಾಕ್ಟರಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಡ್ರಗ್ಸ್ ಸಂಬಂದ ಪಟ್ಟ ಯಾವ ರಾ ಮೆಟಿರಿಯಲ್ಸ್ ಸಿಕ್ಕಿಲ್ಲ. ಅಲ್ಲಿ ಸಿಕ್ಕ ಆರೋಪಿಗಳ ಸಂಬಂಧಿಕರು ಇಲ್ಲಿದ್ದಾರೆ. ಹೀಗಾಗಿ ವಿಚಾರಣೆ ಮಾಡಿದ್ದಾರೆ. ಇಲ್ಲಿ ಯಾರನ್ನು ಸಹ ವಶಕ್ಕೆ ಪಡೆದಿಲ್ಲ ಎಂದು ಹೇಳಿದರು. ಜಾರ್ಜ್ ರಾಜೀನಾಮೆ ಕೊಡಲು ಮುಂದಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಕಾರಣಕ್ಕೆ ಕೆಲವು ಸ್ನೇಹಿತರು ಇದನ್ನ ಹಬ್ಬಿಸಿದ್ದಾರೆ. ಅಂತಹ ಘಟನೆ ನಡೆದಿಲ್ಲ. ಸ್ನೇಹಿತರು ಬಹಳಷ್ಟು ಜನ ಇದ್ದಾರೆ, ಒಲ್ಡ್ ಮತ್ತು ನ್ಯೂ ಫ್ರೆಂಡ್ಸ್ ಎಲ್ಲರೂ ಈ ರೀತಿ ಹಬ್ಬಿಸಿದ್ದಾರೆ. ಇಂತಹ ಘಟನೆ ಯಾವುದು ನಡೆದಿಲ್ಲ. ಈ ಬಗ್ಗೆ ಜಾರ್ಜ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದೆಲ್ಲಾ ಊಹಾಪೋಹಾ ಅಷ್ಟೇ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ʼಬಳ್ಳಾರಿ ಗಲಾಟೆʼ ವಿಚಾರ ಸದ್ದು | ಜನಾರ್ದನ ರೆಡ್ಡಿ-ಬಿ.ನಾಗೇಂದ್ರ ಸವಾಲು-ಪ್ರತಿಸವಾಲು
ಬೆಂಗಳೂರು : ಬಳ್ಳಾರಿ ಗಲಾಟೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಸದ್ದು ಮಾಡಿದ್ದು, ಕಾಂಗ್ರೆಸ್ ಸದಸ್ಯ ಬಿ.ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಸವಾಲು ಪ್ರತಿಸವಾಲು ಕಂಡುಬಂತು. ಶುಕ್ರವಾರ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಬಿ.ನಾಗೇಂದ್ರ, ಜನಾರ್ದನ ರೆಡ್ಡಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಬ್ಯಾನರ್ ಹಾಕಿದ್ದು ತಪ್ಪು ಎಂದು ಸಿಎಂ ಹೇಳಿದ್ದಾರೆ ಎಂದಿದ್ದಾರೆ. ಆದರೆ ಸಿಎಂ ಆ ರೀತಿಯಾಗಿ ಹೇಳಿಲ್ಲ ಎಂದು ಉಲ್ಲೇಖಿಸಿದರು. ವಾಲ್ಮೀಕಿ ಬ್ಯಾನರ್ ತೆಗೆದುಹಾಕಿ ಬಿಜೆಪಿ ಪರ ಘೋಷಣೆ ಕೂಗಿದ್ದಾರೆ. ಗಲಾಟೆ ತಡೆಯಲು ಪೊಲೀಸರು ಕೆಲಸ ಮಾಡಿದ್ದಾರೆ. ಗಲಾಟೆ ಆದ ಸಮಯದಲ್ಲಿ ನೋಡಲು ಹೆಚ್ಚು ಜನರು ಬಂದಿರುತ್ತಾರೆ. ಘಟನೆ ಬಳಿಕ ಗೃಹ ಮಂತ್ರಿಗಳು ತೀವ್ರ ರೀತಿಯಲ್ಲಿ ಗಮನ ಹರಿಸಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡಿದರೂ ಯಾರೂ ತೊಂದರೆ ಮಾಡಲಿಲ್ಲ. ನಾವು ತಕರಾರು ಎತ್ತಲಿಲ್ಲ. ಆದರೆ ಭಾಷಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಾಡಿ ಹೊಡೆಯುತ್ತೇವೆ ಎಂದೆಲ್ಲಾ ಭಾಷಣದಲ್ಲಿ ಹೇಳಿದ್ದಾರೆ. ಹೀಗೆ, ಹೇಳುವ ಮೂಲಕ ಮತ್ತೆ ರಿಪಬ್ಲಿಕ್ ಬಳ್ಳಾರಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಬಳ್ಳಾರಿ ಘರ್ಷಣೆ ಬಗ್ಗೆ ಸದ್ದುಗದ್ದಲ ಉಂಟಾಯಿತು. ಬಳಿಕ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಬಂಧನ ಮಾಡದಿದ್ದರೆ ಪಾತಾಳದಲ್ಲಿದ್ದರೂ ಹುಡುಕಿ ತರುತ್ತೇವೆ ಎಂದಿದ್ದೇವೆ. ರಿಪಬ್ಲಿಕ್ ಆಫ್ ಬಳ್ಳಾರಿ ಪದ ಪ್ರಯೋಗ ಬೇಡ. ಶ್ರೀರಾಮುಲು ಯಾವ ಎಚ್ಚರಿಕೆಯನ್ನೂ ಕೊಟ್ಟಿಲ್ಲ. ಪೆಟ್ರೋಲ್ ಬಾಂಬ್ ಹಾಕಲು ಮುಂದಾದರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದರೆ ನೀನು ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದರೆ ಹೇಗೆ? ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಸಚಿವ ಕೃಷ್ಣ ಭೈರೇಗೌಡ, ಶಿವಲಿಂಗೇಗೌಡ ಸೇರಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಜನಾರ್ದನ ರೆಡ್ಡಿ ಸವಾಲ್ ಸ್ವೀಕರಿಸಿದ ನಾಗೇಂದ್ರ, ವಾಲ್ಮೀಕಿ ಸಮಾಜ ನಮ್ಮ ಸಮಾಜ. ನಮ್ಮ ಸಮಾಜದ ಜನ ನಮ್ಮ ಜೊತೆಗೆ ಇದ್ದಾರೆ. ವಾಲ್ಮೀಕಿ ಭಾವಚಿತ್ರ ಇರುವ ಬ್ಯಾನರ್ ಕೆಳಗೆ ಹಾಕಿ ತುಳಿದಿದ್ದಾರೆ. ಇದು ಸರಿಯಲ್ಲ ಎಂದರು.
ಟಿ20 ವಿಶ್ವಕಪ್ ಗೂ ಮುನ್ನ ಕೊನೇ ಬಾರಿ ಟೀಂ ಇಂಡಿಯಾ ಪ್ರಯೋಗ; ಸಂಜು ಸ್ಯಾಮ್ಸನ್ ಗೆ ತವರೂರಲ್ಲೇ ಸತ್ವ ಪರೀಕ್ಷೆ!
ಐಸಿಸಿ ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆದ 5 ಪಂದ್ಯಗಳ ಟಿ20 ಸರಣಿ ಇದೀಗ ಕೊನೇ ಘಟ್ಟಕ್ಕೆ ಬಂದು ನಿಂತಿದೆ. ಸರಣಿಯ ಅಂತಿಮ ಪಂದ್ಯ ಜನವರಿ 31 ಶನಿವಾರದಂದು ತಿರುವನಂತಪರದಲ್ಲಿ ನಡೆಯಲಿದ್ದು ಚುಟುಕು ಕ್ರಿಕೆಟ್ ವಿಶ್ವಕಪ್ ಗೂ ಮುನ್ನ ತಂಡದಲ್ಲಿ ಪ್ರಯೋಗ ನಡೆಸಲು ಅಂತಿಮ ಅವಕಾಶವಾಗಿದೆ. ಈಗಾಗಲೇ ಸರಣಿಯನ್ನು 3-1 ಅಂತರಿಂದ ಗೆದ್ದುಕೊಂಡಿರುವ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ತವಕದಲ್ಲಿದೆ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಗೆದ್ದಿರುವ ನ್ಯೂಜಿಲೆಂಡ್ ಅದೇ ಓಘವನ್ನು ಮುಂದವರಿಸಲು ಪ್ರಯತ್ನಿಸಲಿದೆ. ಏತನ್ಮಧ್ಯೆ ಎಲ್ಲರ ಕಣ್ಣು ಇದೀಗ ಲೋಕಲ್ ಬಾಯ್ ಸಂಜು ಸ್ಯಾಮ್ಸನ್ ಮೇಲೆ ನೆಟ್ಟಿದೆ. ಶುಭಮನ್ ಗಿಲ್ ಗೆ ಟಿ20 ತಂಡದಿಂದ ಗೇಟ್ ಪಾಸ್ ಸಿಕ್ಕಿದ ಹಿನ್ನೆಲೆಯಲ್ಲಿ ಕೇರಳ ಮೂಲದ ಅವರಿಗೆ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಆದರೆ ಕಳೆದ 4 ಪಂದ್ಯಗಳಲ್ಲೂ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ವಿಶಾಖಪಟ್ಟಣದಲ್ಲಿ ನಡೆದ 4ನೇ ಪಂದ್ಯದಲ್ಲಿ ಅವರ 24 ರನ್ ಗಳಿಸಿ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದರು. ಆದರೆ ಅಗ್ಗಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು.ಹೀಗಾಗಿ ಕೇರಳದವರೇ ಆದ ಸಂಜು ಸ್ಯಾಮ್ಸನ್ ಅವರು ಅಂತಿಮ ಪಂದ್ಯದಲ್ಲಿ ಮಿಂಚುವರೆಂಬ ನಿರೀಕ್ಷೆ ಕ್ರಿಕೆಟ್ ಪ್ರೇಮಿಗಳಿಗಿದೆ. ಟಿ20 ವಿಶ್ವಕಪ್ ಗೂ ಮೊದಲು ಅವರು ತಮ್ಮ ಫಾರ್ಮ್ ಸಾಬೀತು ಪಡಿಸುವ ಒತ್ತಡದಲ್ಲಿದ್ದಾರೆ. ಇಲ್ಲವಾದಲ್ಲಿ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಉತ್ತಮ ಫಾರ್ಮ್ ನಲ್ಲಿದ್ದು ಅವರನ್ನು ತಂಡದ ಮ್ಯಾನೇಜ್ ಮೆಂಟ್ ಮುಂದುವರಿಸುವ ಕುರಿತು ಚಿಂತನೆ ನಡೆಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ.ಗೊಂಡಿದ್ದರು. ಅವರು ತಿರುವನಂತಪುರದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಾತ್ರಿಯಿಲ್ಲ. ಏನೇ ಆದರೂ ಸಂಜು ಸ್ಯಾಮ್ಸನ್ ಅವರು ಉತ್ತಮ ಪ್ರದರ್ಶನ ತೋರಿದಲ್ಲಿ ಮಾತ್ರ ವಿಶ್ವಕಪ್ ತಂಡದಲ್ಲಿ ಸ್ಥಾನ ಖಾತ್ರಿಯಾಗಲಿದೆ. ಏತನ್ಮಧ್ಯೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಫಾರ್ಮ್ ಕಂಡುಕೊಂಡಿರುವುದು ಖುಷಿಯ ಸಂಗತಿಯಾಗಿದೆ. ಹೇಗಿದೆ ಪಿಚ್? ಹೇಗಿರುತ್ತೆ ಹವಾಮಾನ? ತಿರುವನಂತಪುರ ಕ್ರೀಡಾಂಗಣದ ಪಿಚ್ ಶನಿವಾರ ದೊಡ್ಡ ಮೊತ್ತವನ್ನೇ ಕಾಣುವ ಎಲ್ಲಾ ಸಾಧ್ಯತೆಗಳಿವೆ. ಈ ಹಿಂದಿನ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಇಲ್ಲಿ 4 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು ಕೊನೆಯ 2 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಇನ್ನು ತಿರುವನಂತಪುರದಲ್ಲಿ ತಾಪಮಾಮ 25 ರಿಂದ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆ ಆಗುವ ಸಾಧ್ಯತೆಯಿಲ್ಲ. ಗಾಳಿಯಲ್ಲಿ ಹೆಚ್ಚಿನ ತೇವಾಂಶ ಇರುವುದು ಇತ್ತಂಡಗಳಿಗೂ ಸವಾಲಾಗಬಹುದು. ಇನ್ನು ರಾತ್ರಿ ಪಂದ್ಯ ನಡೆಯುವ ಕಾರಣದಿಂದ ಪಿಚ್ ಮೇಲೆ ತೇವಾಂಶ ಸಂಗ್ರಹವಾಗುವುದರಿಂದ ಬ್ಯಾಟರ್ ಗಳಿಗೆ ಬಹಳ ಅನುಕೂಲ ಮಾಡಿ ಕೊಡುವ ನಿರೀಕ್ಷೆ ಇದೆ. ಹೀಗಾಗಿ ಟಾಸ್ ಗೆದ್ದವರು ಚೇಸಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಭಾರತ ಸಂಭಾವ್ಯ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ , ಅರ್ಶ್ದೀಪ್ ಸಿಂಗ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ನ್ಯೂಜಿಲೆಂಡ್ ಸಂಭಾವ್ಯ ಇಲೆವನ್ ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಝಾಕ್ ಫೌಲ್ಕ್ಸ್, ಮೈಕಲ್ ಬ್ರಾಸ್ ವೆಲ್, ಕೈಲ್ ಜಾಮಿಸನ್, ಜಾಕೋಬ್ ಡಫಿ
Bengaluru | ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕ; ಪ್ರಕರಣ ದಾಖಲು
ಬೆಂಗಳೂರು : ಇಲ್ಲಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಹುಸಿ ಬಾಂಬ್ ಬೆದರಿಕೆ ಹಾಕಿದ ಸನ್ನಿವೇಶ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾದ ಘಟನೆ ಶುಕ್ರವಾರ ವರದಿಯಾಗಿದೆ. ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಲು ಆಗಮಿಸಿದ್ದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದಾನೆ. ಆರೋಪಿಯನ್ನು ಬೆಂಗಳೂರು ಮೂಲದ ಅಬು ಅಖಿಲ್ ಅಝರ್ಚಾದ್ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ವಿಮಾನ ನಿಲ್ದಾಣ ಪ್ರವೇಶದ ವೇಳೆ ಭದ್ರತಾ ನಿಯಮಾನುಸಾರ ಎರಡು ಹಂತಗಳಲ್ಲಿ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಆರೋಪಿ ಅಬು ಅಖಿಲ್ ತನ್ನ ಬ್ಯಾಗ್ನಲ್ಲಿ ಎರಡು ಸಣ್ಣ ಬಾಂಬ್ಗಳಿವೆ ಎಂದು ಹೇಳಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿದ್ದಾನೆ ಎನ್ನಲಾಗಿದೆ. ಬಾಂಬ್ ಬೆದರಿಕೆ ವಿಚಾರ ತಿಳಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, ಬ್ಯಾಗ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ, ವಿಮಾನ ನಿಲ್ದಾಣದ ಭದ್ರತೆಗೆ ಗಂಭೀರ ಬೆದರಿಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Donald Trump: ರಷ್ಯಾ ಮತ್ತು ಉಕ್ರೇನ್ ಕದನ ವಿರಾಮ ಘೋಷಣೆ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ವದ ಮಾಹಿತಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಂದುಕೊಂಡ ಕೆಲಸ ಸಾಧಿಸುವ ತನಕ ಕೂಡ ಪದೇ ಪದೇ ಅದೇ ವಿಚಾರ ಜಪ ಮಾಡುತ್ತಾ ಇರುತ್ತಾರೆ. ಇದರಿಂದ ಎಷ್ಟೋ ಕೆಲಸಗಳು ಆಗಿಯೂ ಹೋಗಿವೆ, ಹೀಗಿದ್ದಾಗ ರಷ್ಯಾ &ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಮಾತನಾಡಿದ್ದರು. ಅದರಲ್ಲೂ, ಕದನ ವಿರಾಮ ಘೋಷಣೆ
ಕಾಸರಗೋಡು| ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಕಟ್ಟೆಚ್ಚರದ ಕಣ್ಗಾವಲು ಇರಿಸಲಾಗಿದೆ. ಶುಕ್ರವಾರ ಸಂಜೆ ಇಮೇಲ್ ಸಂದೇಶವೊಂದು ತಲುಪಿದ್ದು, ಕೂಡಲೇ ಪೊಲೀಸ್ ಇಲಾಖೆ ಪೂರ್ಣ ಕಟ್ಟೆಚ್ಚರ ವಹಿಸಿದೆ. ಮಾಹಿತಿ ತಲುಪಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ವ್ಯಾಪಕ ತಪಾಸಣೆ ನಡೆಸಿದರು. ತಪಾಸಣೆಯ ಸಮಯದಲ್ಲಿ ಬಾಂಬ್ ಇರುವ ಯಾವುದೇ ಸುಳಿವುಗಳು ಕಂಡು ಬಂದಿಲ್ಲವಾದರೂ, ಅಧಿಕಾರಿಗಳು ಕಟ್ಟೆಚ್ಚರದಲ್ಲಿದ್ದಾರೆ. ಬಾಂಬ್ ಬೆದರಿಕೆ ಇರುವ ಇಮೇಲ್ ಸಂದೇಶವು ಉಕ್ರೇನ್ನಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಸಂದೇಶದ ಮೂಲವನ್ನು ಸಹ ತನಿಖೆ ಮಾಡಲಾಗುತ್ತಿದೆ. ಇತ್ತೀಚೆಗೆ, ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಬೆದರಿಕೆ ಸಂದೇಶವೂ ಬಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಅವರ ತೀವ್ರ ಹೋರಾಟದ ಬಳಿಕವೂ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಗುಜರಾತ್ ಜೈಂಟ್ಸ್ 2026 ಟೂರ್ನಿಯ ಪ್ಲೇಆಫ್ ಪ್ರವೇಶಿಸಿದೆ. ಆಡಿದ 8 ಪಂದ್ಯಗಳಿಂದ 6 ಗೆಲುವುಗಳಿಂದ 12 ಅಂಕಗಳನ್ನು ಗಳಿಸಲು ಯಶಸ್ವಿಯಾಗಿದ್ದ ಪ್ರಥಮ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತ್ತು. ಇದೀಗ ಅಷ್ಟೇ ಪಂದ್ಯಗಳಿಂದ 5 ಗೆಲವುಗಳೊಂದಿಗೆ 10 ಅಂಕಗಳನ್ನು ಪಡೆದಿರುವ ಗುಜರಾತ್ ಜೈಂಟ್ಸ್ ದ್ವಿತೀಯ ಸ್ಥಾನಿಯಾಗಿ ಪ್ರೇ ಆಫ್ ಗೆ ನೆಗೆದಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದ್ದರೂ ಅದರ ಪ್ಲೇ ಆಫ್ ಆಸೆ ಇನ್ನೂ ಜೀವಂತವಾಗಿದೆ. ಶನಿವಾರ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ದಿಲ್ಲಿ ವಾರಿಯರ್ಸ್ ತಂಡವನ್ನು ಯುಪಿ ವಾರಿಯರ್ಸ್ ಸೋಲಿಸಿದಲ್ಲಿ ಮೂರೂ ತಂಡಗಳ ಅಂಕಗಳು 6 ಆಗಲಿದ್ದು ಆಗ ರನ್ ರೇಟ್ ಆಧಾರದಲ್ಲಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಒಂದು ವೇಳೆ ದಿಲ್ಲಿ ವಾರಿಯರ್ಸ್ ಅಂತಿಮ ಪಂದ್ಯ ಗೆದ್ದಿದ್ದೇ ಆದಲ್ಲಿ 8 ಅಂಕಗಳೊಂದಿಗೆ ಅದೇ 3ನೇ ಸ್ಥಾನಿಯಾಗಲಿದೆ. ಹರ್ಮನ್ ಪ್ರೀತ್ ಕೌರ್ ಏಕಾಂಗಿ ಹೋರಾಟ ಶುಕ್ರವಾರ ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ 20 ಓವರ್ ಗಳು ಮುಗಿದಾಗ 7 ವಿಕೆಟ್ ನಷ್ಟಕ್ಕೆ ಕೇವಲ 156 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಏಕಾಂಗಿ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು 48 ಎಸೆತಗಳಿಂದ 82 ರನ್ ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದವು. ಗುಜರಾತ್ ಪರ ಸೋಫಿ ಡಿವೈನ್ ಮತ್ತು ಜಾರ್ಜಿಯಾ ವೆರ್ಹಾಮ್ ಅವರು ತಲಾ 2 ವಿಕೆಟ್ ಕಬಳಿಸಿದರು. ಈ ಹಿಂದೆ ನಡೆದ ಸೆಣೆಸಾಟದಲ್ಲಿ ಎದುರು ಗುಜರಾತ್ ಜೈಂಟ್ಸ್ ತಲೆಬಾಗಿತ್ತು. ಆದರೆ ಈ ಬಾರಿ ನಾಯಕಿಗೆ ಉಳಿದ ಆಟಗಾರರಿಂದ ಸಾಥ್ ಸಿಗದ್ದರಿಂದ ಪರಾಭವ ಅನುಭವಿಸಬೇಕಾಯಿತು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಜೈಂಟ್ಸ್ ಪರ ನಾಯಕಿ ಆಶ್ಲೆ ಗಾರ್ಡನರ್ ಮತ್ತ ಜಾರ್ಜಿಯಾ ವರ್ಹಾಮ್ ಅವರು ಅಂತಿಮ ಓವರ್ ಗಳಲ್ಲಿ ಆಕ್ರಮಣಕಾರಿ ಆಟವಾಡಿದರು. ಹೀಗಾಗಿ ತಂಡ ಗೌರವಯುತ ಮೊತ್ತ ತಲುಪಲು ಸಾಧ್ಯವಾಯಿತು. ಮುಂಬೈ ಪರ ಅಮೇಲಿಯಾ ಕೌರ್ 2 ವಿಕೆಟ್ ಎಗರಿಸಿದರು. ಆಲ್ರೌಂಡ್ ಪ್ರದರ್ಶನ ನೀಡಿದ ಜಾರ್ಜಿಯಾ ವರ್ಹಾಮ್ ಅವರು ಪಂದ್ಯಶ್ಕೇಷ್ಠ ಪ್ರಶಸ್ತಿ ಪಡೆದರು. ಸಂಕ್ಷಿಪ್ತ ಸ್ಕೋರ್ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 167/4, ಆ್ಯಶ್ಲೆ ಗಾರ್ಡನರ್ 46(28), ಜಾರ್ಜಿಯಾ ವರ್ಹಾಮ್ 44(26), ಸೋಫಿ ಡಿವೈನ್ 25(21), ಅಮೇಲಿಯಾ ಕೆರ್ 28ಕ್ಕೆ 2, ಶಬ್ನಿಮ್ ಇಸ್ಮಾಯಿಲ್ 29ಕ್ಕೆ 1. ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 156/7, ಹರ್ಮನ್ ಪ್ರೀತ್ ಕೌರ್ 82(48), ಸಜೀವನ್ ಸಜನಾ 28(25), ಅಮೇಲಿಯಾ ಕೆರ್ರ್ 20(16), ಸೋಫಿ ಡಿವೈನ್ 23ಕ್ಕೆ 2, ಜಾರ್ಜಿಯಾ ವಾರ್ಹಾಮ್ 26ಕ್ಕೆ 2.
ಗಾಂಧೀಜಿ ಬರೆದಿರುವ ‘ನನ್ನ ಸತ್ಯಾನ್ವೇಷಣೆ’ ದೇಶದ ನೈತಿಕ ಹೋರಾಟದ ದಾಖಲೆ : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬರೆದಿರುವ ‘ನನ್ನ ಸತ್ಯಾನ್ವೇಷಣೆ’ ಕೃತಿ ಕೇವಲ ಆತ್ಮಚರಿತ್ರೆ ಮಾತ್ರವಲ್ಲ, ಅದು ಒಬ್ಬ ವ್ಯಕ್ತಿಯ ಜೀವನ ಕಥೆಗೆ ಮಾತ್ರ ಸೀಮಿತವಾಗುವುದಿಲ್ಲ, ನನ್ನ ಪ್ರಕಾರ ಅದು ಒಂದು ದೇಶದ ನೈತಿಕ ಹೋರಾಟದ ದಾಖಲೆ ಅಂತಲೇ ಭಾವಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಗರದ ಪುರಭವನದಲ್ಲಿ ಜನಮುಖಿ ಶೋಷಿತರ ಪರವಾದ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಅವರ ಹುತಾತ್ಮ ದಿನ ಹಾಗೂ ‘ನನ್ನ ಸತ್ಯಾನ್ವೇಷಣೆ’ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿ ತಮ್ಮ ತಪ್ಪುಗಳನ್ನು ಎಂದು ಮುಚ್ಚಿಡಲಿಲ್ಲ. ತಮ್ಮ ದೌರ್ಬಲ್ಯಗಳನ್ನು ಮರೆಮಾಚಲೂ ಇಲ್ಲ. ಯಾಕೆಂದರೆ ಅವರಿಗೆ ಗೊತ್ತಿತ್ತು ಸತ್ಯ ಎಂಬುದು ಒಂದಲ್ಲ ಒಂದು ದಿನ ಹೊರಗಡೆ ಬರುತ್ತದೆಂದು. ಹಾಗಾಗಿ ಅವರು ತಮ್ಮ ಇಡೀ ಬದಕನ್ನೇ ನನ್ನ ಸತ್ಯಾನ್ವೇಷಣೆ ಎಂದು ಕರೆದರು ಎಂದರು. ಗಾಂಧೀಜಿ ಈ ಪುಸ್ತಕದಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ತಮ್ಮ ಧರ್ಮವನ್ನು ಪ್ರಶ್ನಿಸುತ್ತಾರೆ. ತಮ್ಮ ಆಸೆಗಳನ್ನು, ತಮ್ಮ ಖಾಸಗೀತನದ ಜೀವನವನ್ನು, ತಮ್ಮ ರಾಜಕೀಯ ನಿಲುವನ್ನೂ ಪರೀಕ್ಷೆಗೆ ಒಡ್ಡುತ್ತಾರೆ. ಆ ಮೂಲಕ ತನ್ನೊಳಗಿನ ಸತ್ಯದ ಅನ್ವೇಷಣೆಯ ಹುಡುಕಾಟಕ್ಕಾಗಿ ತೆರೆದುಕೊಳ್ಳುತ್ತಾರೆ. ಮಹಾತ್ಮರು ಮತ್ತೆ ಹುಟ್ಟಬಹುದು. ಆದರೆ ಮತ್ತೊಬ್ಬ ಗಾಂಧಿ ಹುಟ್ಟಲು ಸಾಧ್ಯವಿಲ್ಲ. ಇತ್ತೀಚಿಗೆ ನಾನು ಸಂದರ್ಶನದಲ್ಲಿ ಹೇಳಿದ್ದೆ. ಗಾಂಧಿಗೆ ಗಾಂಧಿಯೇ ಸಾಟಿ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸದ ಕಲಿಕೆಯನ್ನು ಮಾಡಿರಬಹುದು. ಆದರೆ ಜೀವಿಸಿದ್ದು ಈ ನೆಲದಲ್ಲಿ ಎಂದು ಹರಿಪ್ರಸಾದ್ ತಿಳಿಸಿದರು. ಇಂದು ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಸುಳ್ಳುಗಳನ್ನೇ ವೈಭವೀಕರಿಸಲಾಗುತ್ತಿದೆ. ಗಾಂಧಿ ಸ್ವತಂತ್ರ ಚಳುವಳಿಗೆ ನೀಡಿದ ನಾಯಕತ್ವ, ಅದನ್ನ ನಡೆಸಿದ ರೀತಿ ಜಗತ್ತಿನ ಯಾವ ವಿಮೋಚನಾ ಚಳಿಯಲ್ಲೂ ಇಂತಹ ಐತಿಹಾಸಿಕ ಪುರುಷನನ್ನು ನೋಡಲು ಸಾಧ್ಯವಿಲ್ಲ. ಸ್ವತಂತ್ರ ಚಳುವಳಿಯ ಜೊತೆ ಜೊತೆಗೆ ಈ ನೆಲದಲ್ಲಿ ಶತಮಾನಗಳಿಂದಲೂ ಸಂಸ್ಕೃ ತಿಯ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಧರ್ಮದ ಕಾರಣಕ್ಕಾಗಿ ನಡೆಯುತ್ತಿದ್ದ ಮೌಢ್ಯ, ಅಂಧಶ್ರದ್ದೇ, ಅಸ್ಪೃ ಷ್ಯತೆ, ತಾರತಮ್ಮಗಳ ವಿರುದ್ಧ ನಡೆಸಿದ ಹೋರಾಟ ಇತಿಹಾಸದಲ್ಲಿ ದಾಖಲಾಗಿದೆ ಎಂದು ಹರಿಪ್ರಸಾದ್ ಹೇಳಿದರು. ಕಾರ್ಯಕ್ರಮದಲ್ಲಿ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಜನಮುಖಿ ವೇದಿಕೆಯ ಅಧ್ಯಕ್ಷ ಡಾ.ಕೆ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಎಂ.ರಘುನಂದನ್, ಖಜಾಂಚಿ ಡಾ.ಪಿ.ಬಿ. ಜಯಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
US Military: ಇರಾನ್ ನೆಲದಲ್ಲಿ ಸೇನಾ ಕಾರ್ಯಾಚರಣೆಗೆ ಅಮೆರಿಕ ಪ್ಲಾನ್, ಪರಮಾಣು ಆತಂಕ ಶುರು
ಮಧ್ಯಪ್ರಾಚ್ಯ ಭಾಗ ಯಾವ ಕ್ಷಣದಲ್ಲಿ ಹೊತ್ತಿ ಉರಿಯುತ್ತೋ, ಆ ಮೂಲಕ ಯಾವಾಗ ರಣಭೀಕರ ಕಾಳಗ ಶುರುವಾಗುತ್ತೋ ಗೊತ್ತಿಲ್ಲ. ಈಗಾಗಲೇ, ಭಾರಿ ದೊಡ್ಡ ಪ್ರಮಾಣದಲ್ಲಿ ಸೇನೆ ಕಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸದ್ದಡಗಿಸಲು ಪ್ಲಾನ್ ಮಾಡಿದ್ದಾರೆ. ಈ ಸೇನಾ ಕಾರ್ಯಾಚರಣೆ ಬಗ್ಗೆ ಸ್ವತಃ ಅಮೆರಿಕದ ಮಿತ್ರ ರಾಷ್ಟ್ರಗಳಲ್ಲೇ ಭಾರಿ ಗೊಂದಲ ಮೂಡಿದೆ. ಹೀಗಿದ್ದರೂ ತಮ್ಮ
ಕನಕಗಿರಿ | ಸೇವಾ ಕೇಂದ್ರ, ಬೇಕರಿಯಲ್ಲಿ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕನಕಗಿರಿ : ಪಟ್ಟಣದ ನವಲಿ ರಸ್ತೆಯಲ್ಲಿರುವ ಎಸ್ಬಿಐ ಸೇವಾ ಕೇಂದ್ರ ಹಾಗೂ ಹಿರೇಖೇಡ ರಸ್ತೆಯಲ್ಲಿರುವ ಬೇಕರಿಗೆ ಶುಕ್ರವಾರ ತಡರಾತ್ರಿ ಕಳ್ಳರು ಸೆಟ್ರಸ್ ಮುರಿದು ಕಳ್ಳತನ ನಡೆಸಿದ ಘಟನೆ ನಡೆದಿದೆ. ಬೋಲೆರೋ ಪಿಕ್ಅಪ್ ಗೂಡ್ಸ್ ವಾಹನದಲ್ಲಿ ಬಂದಿರುವ ಮೂವರು ಕಳ್ಳರು ಎರಡು ಸ್ಥಳಗಳಲ್ಲಿ ಕಳ್ಳತನ ನಡೆಸಿರುವುದು ತಿಳಿದು ಬಂದಿದೆ. ಕಬ್ಬಿಣದ ರಾಡ್ ಬಳಸಿ ಶಟರ್ ಮುರಿಯುತ್ತಿರುವುದು, ಒಬ್ಬ ಯುವಕ ಕೈಯಲ್ಲಿ ಚಾಕು ಹಿಡಿದು ಸುತ್ತಾಡುತ್ತಿರುವುದು ಹಾಗೂ ಮತ್ತೊಬ್ಬನು ವಾಹನ ಚಾಲನೆ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೇಕರಿ ಹಾಗೂ ಸೇವಾ ಕೇಂದ್ರದ ಮುಂದೆ ಇಬ್ಬರು ಮುಸುಕುಧಾರಿಗಳಾಗಿ ಕಾಣಿಸಿಕೊಂಡು ಹಣ ದೋಚಿರುವುದು ದೃಢಪಟ್ಟಿದೆ. ಬೇಕರಿಯಿಂದ ಗುಡ್ಡೇ ಬಿಸ್ಕೀಟ್ ಪ್ಯಾಕೆಟ್ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಎಸ್ಬಿಐ ಸೇವಾ ಕೇಂದ್ರದ ಮಾಲೀಕ ವೀರೇಶ ಅವರು ತಮ್ಮ ಕೇಂದ್ರದಿಂದ ₹1.60 ಲಕ್ಷ ನಗದು ಹಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ .
UK Trade: ಬ್ರಿಟನ್ ವಿರುದ್ಧ ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್ ಆಡಳಿತ, ಚೀನಾ ಜೊತೆ ಸ್ನೇಹವೇ ಮುಳುವಾಯ್ತು
ಅಮೆರಿಕ ಮತ್ತು ಬ್ರಿಟನ್ ನಡುವೆ ಇದೀಗ ಕಿಚ್ಚು ಹೊತ್ತಿಕೊಂಡಿದೆ, ಸ್ಟಾರ್ಮರ್ ಅವರ ಪ್ರವಾಸ ಮತ್ತು ಚೀನಾದಲ್ಲಿ ನಡೆದಿರುವ ಒಪ್ಪಂದಗಳ ಬಗ್ಗೆ ಇದೀಗ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಗರಂ ಆಗಿದೆ. ಅಲ್ಲದೆ ಸ್ಟಾರ್ಮರ್ ಅವರ ಚೀನಾ ಪ್ರವಾಸ ಮತ್ತು ಅದರ ಉದ್ದೇಶಗಳ ಬಗ್ಗೆ ಶ್ವೇತಭವನಕ್ಕೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದಾರೆ ಟ್ರಂಪ್ರ ಆಡಳಿತದ ಅಧಿಕಾರಿಗಳು. ಈ
ವಿದೇಶಿಯರಿಗೆ ವೀಸಾ ವಿಸ್ತರಣೆ ಅಥವಾ ನಿರಾಕರಣೆ ಕೇಂದ್ರದ ಸಾರ್ವಭೌಮ ಹಕ್ಕು, ವಿವರಣೆ ನೀಡುವ ಅಗತ್ಯವಿಲ್ಲ: ಹೈಕೋರ್ಟ್
ಬೆಂಗಳೂರು : ವಿದೇಶಿಯರಿಗೆ ವೀಸಾ ವಿಸ್ತರಣೆ ಅಥವಾ ನಿರಾಕರಣೆಗೆ ಕೇಂದ್ರ ಸರ್ಕಾರ ವಿವರಣೆ ನೀಡಬೇಕಿಲ್ಲ. ಅದು ಕೇಂದ್ರ ಸರ್ಕಾರದ ಸಾರ್ವಭೌಮ ಹಕ್ಕಾಗಿದೆ ಎಂದು ಹೈಕೋರ್ಟ್ ಹೇಳಿದೆ. ಮಾದಕ ವಸ್ತುಗಳ ಮಾರಾಟ, ನಕಲಿ ಮತ್ತು ಅವಧಿ ಮೀರಿದ ವೀಸಾ ಬಳಸಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾದ ಮೂವರು ಬಂಧನದಿಂದ ಬಿಡುಗಡೆ ಕೋರಿ ಮತ್ತು ವೀಸಾ ವಿಸ್ತರಣೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿದೇಶಿಯರು ವೀಸಾ ಅಥವಾ ಅದರ ನವೀಕರಣ ಕುರಿತು ಒತ್ತಾಯಿಸುವ ಯಾವುದೇ ಹಕ್ಕು ಹೊಂದಿಲ್ಲ. ವೀಸಾ ವಿಸ್ತರಿಸುವುದು ಅಥವಾ ನಿರಾಕರಿಸುವುದು ಸಾರ್ವಭೌಮ ಹಕ್ಕಾಗಿದ್ದು, ವೀಸಾ ನಿರಾಕರಿಸುವುದಕ್ಕೆ ವಿವರಣೆಯನ್ನು ಕೇಂದ್ರ ಸರ್ಕಾರ ನೀಡಬೇಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿ ವಿದೇಶಿಯರ ಕಾಯ್ದೆ ಸೆಕ್ಷನ್ 3(2)(ಇ) ಜತೆಗೆ ಫಾರಿನರ್ಸ್ ಆರ್ಡರ್ ಸೆಕ್ಷನ್ 11(2)ಕ್ಕೆ ಅಡಿ 2024ರ ಡಿಸೆಂಬರ್ 23ರಂದು ನಿರ್ಬಂಧ ಆದೇಶ ಹೊರಡಿಸಲಾಗಿದ್ದು, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಹೊರಡಿಸಿರುವ ನಿರ್ಬಂಧ ಆದೇಶವು ಭಾರತ ಸಂವಿಧಾನದ ಪರಿಚ್ಛೇದ 14 ಮತ್ತು 21ರ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ನೈಜೀರಿಯಾ ಮೂಲದ ಒಬಿನ್ನಾ ಜೆರೆಮಿಯಾ ಒಕಾಫೋರ್ ಮತ್ತು ಜಾನ್ ಅಡೆಕ್ವ್ಯಾಗ್ ವಂಡೆಫಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ. ಹೈಕೋರ್ಟ್ ಹೇಳಿದ್ದೇನು? ವಿದೇಶಿಯರನ್ನು ಭಾರತದಿಂದ ಗಡಿಪಾರು ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಇಲ್ಲಿನ ಸರ್ಕಾರ ಅಂಥ ಆದೇಶ ಮಾಡಿದರೆ ಅದನ್ನು ವಿದೇಶಿಯರು ಅನುಪಾಲಿಸಬೇಕು. ಭಾರತದಾದ್ಯಂತ ಓಡಾಡಲು ಮತ್ತು ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಅಧಿಕಾರ ಭಾರತದ ಪ್ರಜೆಗಳಿಗೆ ಮಾತ್ರ ಇದೆಯೇ ಹೊರತು ವಿದೇಶಿಗರಿಗೆ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬೆಂಗಳೂರಿನ ಚಾಮುಂಡಿನಗರದ ಫಾತಿಮಾ ರಿಜ್ವಾನ್ ನಿವಾಸದಲ್ಲಿ ವಿದೇಶಿಗರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ನೈಜೀರಿಯಾದ ಮಹಿಳೆಯೊಬ್ಬರು ದೇಶದಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಆಕ್ಷೇಪಾರ್ಹವಾದ ಮನೆಯಲ್ಲಿ ಮಹಿಳೆಯ ಜತೆ ಇತರ ಮೂವರು ನೈಜೀರಿಯಾದ ಪ್ರಜೆಗಳು ನೆಲೆಸಿದ್ದು, ಅವರ ವೀಸಾ ಸಹ ಮುಗಿದಿತ್ತು. ಅಕ್ರಮವಾಗಿ ಅವರು ಅಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ವೀಸಾ ರದ್ದಾದ ಬಳಿಕ ವೀಸಾ ಪಡೆಯುವುದು ಅಥವಾ ಅದರ ವಿಸ್ತರಣೆ ಕೋರುವ ಸಂಬಂಧ ಮೇಲ್ಮನವಿದಾರರಿಗೆ ಯಾವುದೇ ಅಧಿಕಾರವಿಲ್ಲ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲದೇ ಇರುವುದರಿಂದ ಮೇಲ್ಮನವಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹಾಲಿ ಪ್ರಕರಣದಲ್ಲಿ ವೀಸಾ ಅವಧಿ ಮುಗಿಯುವುದಕ್ಕೂ ಮುನ್ನ ಅದನ್ನು ರದ್ದುಪಡಿಸಲಾಗಿದೆ. ಆದ್ದರಿಂದ, ನಿಸ್ಸಂಶಯವಾಗಿ ಓಡಾಟಕ್ಕೆ ವಿಧಿಸಿರುವ ನಿರ್ಬಂಧವು ಮೇಲ್ಮನವಿದಾರರ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ನೆಲೆಯಲ್ಲಿ ಕನಿಷ್ಠ ನ್ಯಾಯಯುತ ಪ್ರಕ್ರಿಯೆ ಪಾಲಿಸುವುದು ಅಗತ್ಯ. ಮೇಲ್ಮನವಿದಾರರಿಗೆ ನಿರ್ಬಂಧ ಆದೇಶದ ಬಗ್ಗೆ ಮಾಹಿತಿ ನೀಡಬೇಕಿತ್ತು. ಕನಿಷ್ಠ ಅವರಿಗೆ ಮನವಿ ಸಲ್ಲಿಸುವ ಅವಕಾಶವೊಂದನ್ನು ನೀಡಬೇಕಿತ್ತು ಎಂದೂ ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಆರೋಪಿಗಳು ಸದ್ಯ ಬೆಂಗಳೂರಿನ ಲಗ್ಗೆರೆಯ ಆಸರೆ ಫೌಂಡೇಶನ್ ಟ್ರಸ್ಟ್ನಲ್ಲಿ ಇದ್ದಾರೆ.
ಗಡಿಪಾರು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ; ಶನಿವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶನಿವಾರಕ್ಕೆ ಮುಂದೂಡಿದ. ಪುತ್ತೂರು ಉಪ ವಿಭಾಗಾಧಿಕಾರಿ 2025ರ ಡಿಸೆಂಬರ್ 17ರಂದು ಹೊರಡಿಸಿರುವ ಆದೇಶ ರದ್ದುಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ ಮಹೇಶ್ ತಿಮರೋಡಿ ಅವರ ಆಕ್ಷೇಪಣೆ ಪರಿಗಣಿಸದೆ ಗಡಿಪಾರು ಆದೇಶ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸರ್ಕಾರಿ ಅಭಿಯೋಜಕರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕೆ ಒಂದು ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು 2025ರ ನವೆಂಬರ್ 17ರಂದು ಭಾಗಶಃ ಪುರಸ್ಕರಿಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗಡಿಪಾರು ಆದೇಶ ಹೊರಡಿಸುವ ಮುನ್ನ ತಿಮರೋಡಿ ಅವರಿಗೆ ವಿವರಣೆ ಹಾಗೂ ಮನವಿ ಸಲ್ಲಿಸಲು ಸೂಕ್ತ ಅವಕಾಶ ನೀಡದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ, ಗಡಿಪಾರು ಆದೇಶ ರದ್ದುಪಡಿಸಲಾಗುತ್ತಿದೆ ಎಂದು ಆದೇಶಿಸಿತ್ತು. ಜತೆಗೆ, ಪ್ರಕರಣವನ್ನು ಪುತ್ತೂರು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿದ್ದ ನ್ಯಾಯಾಲಯ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ಅರ್ಜಿದಾರರ ಅಹವಾಲನ್ನೂ ಆಲಿಸಿ, ನಂತರ ಸೂಕ್ತ ಕಾರಣಗಳೊಂದಿಗೆ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿತ್ತು. ಹೈಕೋರ್ಟ್ ನಿರ್ದೇಶನದಂತೆ ಪ್ರಕರಣವನ್ನು ಹೊಸದಾಗಿ ಪರಿಗಣಿಸಿದ್ದ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಡಿಸೆಂಬರ್ 17ರಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ತಿಮರೋಡಿ ಮತ್ತೊಮ್ಮೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅಮೆರಿಕದಲ್ಲಿ ವಂಚನೆ ಪ್ರಕರಣ | ಡೊನಾಲ್ಡ್ ಟ್ರಂಪ್ ಪರ ವಾದಿಸುವ ವಾಲ್ ಸ್ಟ್ರೀಟ್ ವಕೀಲರನ್ನು ನೇಮಿಸಿಕೊಂಡ ಗೌತಮ್ ಅದಾನಿ
ಮುಂಬೈ: ಅಮೆರಿಕ ಪ್ರಾಧಿಕಾರಗಳು ಸ್ಥಗಿತಗೊಂಡಿದ್ದ ತಮ್ಮ ವಿರುದ್ಧ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ಹೊರಿಸಿದ್ದ ವಂಚನೆ ಪ್ರಕರಣವನ್ನು ಮುಂದುವರಿಸಲು ಪಟ್ಟು ಹಿಡಿದಿರುವುದರಿಂದ, ಗೌತಮ್ ಅದಾನಿ ವಾಲ್ ಸ್ಟ್ರೀಟ್ನ ಪ್ರಖ್ಯಾತ ವಕೀಲರನ್ನು ತಮ್ಮ ಪರವಾಗಿ ಅಧಿಕೃತವಾಗಿ ನೇಮಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ, ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ದಾವೆಯಲ್ಲಿ ತಮ್ಮ ಪರ ವಾದಿಸಲು ಇತ್ತೀಚೆಗೆ ರಾಬರ್ಟ್ ಗಿಯುಫ್ರಾ ಜೂನಿಯರ್ ಅವರನ್ನು ನೇಮಿಸಿಕೊಂಡಿದ್ದಾರೆ. ಅತ್ಯಂತ ಪ್ರತಿಷ್ಠಿತ ಹಣಕಾಸು ಪ್ರಕರಣಗಳನ್ನು ಪ್ರತಿನಿಧಿಸುವ ರಾಬರ್ಟ್ ಗಿಯುಫ್ರಾ ಜೂನಿಯರ್, ಸುಲ್ಲಿವಾನ್ ಆ್ಯಂಡ್ ಕ್ರಾಮ್ವೆಲ್ ಕಾನೂನು ಸಂಸ್ಥೆಯ ಸಹ ಅಧ್ಯಕ್ಷರಾಗಿದ್ದು, ಡೊನಾಲ್ಡ್ ಟ್ರಂಪ್ ಅವರನ್ನು ಕ್ರಿಮಿನಲ್ ಅಪರಾಧದಿಂದ ಮುಕ್ತಗೊಳಿಸುವ ಪ್ರಕರಣದಲ್ಲೂ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕುರಿತು ಸುಳ್ಳು ಹಾಗೂ ದಾರಿ ತಪ್ಪಿಸುವ ಭರವಸೆಗಳನ್ನು ನೀಡುವ ಮೂಲಕ ಅಮೆರಿಕ ಸೆಕ್ಯುರಿಟೀಸ್ ಕಾನೂನುಗಳನ್ನು ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಉಲ್ಲಂಘಿಸಿದ್ದಾರೆ ಎಂದು 2014ರಲ್ಲಿ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ದಾವೆ ಹೂಡಿತ್ತು. ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ನ ಸಿವಿಲ್ ದಾವೆಯೊಂದಿಗೆ, ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಫೆಡರಲ್ ಪ್ರಾಸಿಕ್ಯೂಟರ್ಗಳು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು 250 ದಶಲಕ್ಷ ಡಾಲರ್ ಲಂಚ ನೀಡುವ ಯೋಜನೆಗೆ ನೆರವು ನೀಡಿದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸಿದ್ದರು. ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಇಬ್ಬರೂ ಭಾರತದಲ್ಲೇ ಉಳಿದುಕೊಂಡಿರುವುದರಿಂದ ಕ್ರಿಮಿನಲ್ ಹಾಗೂ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ಪ್ರಕರಣಗಳೆರಡೂ ಸ್ಥಗಿತಗೊಂಡಿದ್ದವು. ಆದರೆ, ದಾವೆಯ ಕುರಿತು ಅದಾನಿಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಪರ್ಯಾಯ ಕ್ರಮಗಳನ್ನು ಬಳಸುವಂತೆ ಕಳೆದ ವಾರ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ಅಮೆರಿಕ ನ್ಯಾಯಾಧೀಶರೊಬ್ಬರಿಗೆ ಸೂಚಿಸಿತ್ತು. ಇಮೇಲ್ ಬಳಸಿಕೊಳ್ಳಲು ಹಾಗೂ ಅದಾನಿಯನ್ನು ಪ್ರತಿನಿಧಿಸುತ್ತಿರುವ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಅನುಮತಿ ನೀಡುವಂತೆ ಅದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ನ ಈ ನಡೆಯ ಹಿನ್ನೆಲೆಯಲ್ಲಿ ಜನವರಿ 23ರಂದು ಅದಾನಿ ಷೇರುಗಳ ಒಟ್ಟು ಮೌಲ್ಯದಲ್ಲಿ 13 ಶತಕೋಟಿ ಡಾಲರ್ನಷ್ಟು ಮೌಲ್ಯ ಕೊಚ್ಚಿಕೊಂಡು ಹೋಗಿತ್ತು. ಹೀಗಿದ್ದರೂ, ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ. ಅದಾನಿಗಳಿಗೆ ದಾವೆಯ ಅಧಿಕೃತ ನೋಟಿಸ್ ಜಾರಿಗೊಳಿಸುವ ಪ್ರಯತ್ನಗಳಿಗೆ ಭಾರತದಲ್ಲಿ ಹಿನ್ನಡೆಯಾಗಿದೆ ಎಂದು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ಹೇಳಿದೆ. ಸಾಮಾನ್ಯವಾಗಿ, ದೂರನ್ನು ಪ್ರತಿವಾದಿಗಳಿಗೆ ಸೂಕ್ತವಾಗಿ ಅಧಿಸೂಚನೆ ಮಾಡುವವರೆಗೆ ದಾವೆಯನ್ನು ಮುಂದುವರಿಸಲು ಸಾಧ್ಯವಿಲ್ಲ. “ಗಿಯುಫ್ರಾ ನಮ್ಮನ್ನು ಸಂಪರ್ಕಿಸಿದ್ದು, ನಾನು ಗೌತಮ್ ಅದಾನಿಯನ್ನು ಪ್ರತಿನಿಧಿಸುತ್ತೇನೆ ಹಾಗೂ ದಾವೆಯನ್ನು ಅವರ ಪರವಾಗಿ ಸ್ವೀಕರಿಸಲು ಬಯಸುತ್ತೇನೆ ಎಂದು ನಮಗೆ ತಿಳಿಸಿದ್ದಾರೆ” ಎಂದು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಬಳಿಕ, ಭಾರತದಲ್ಲಿರುವ ಇಬ್ಬರೂ ಅದಾನಿಗಳ ವಿರುದ್ಧ ವಿಚಾರಣೆಯನ್ನು ಹೇಗೆ ಮುಂದುವರಿಸಬೇಕು ಎಂಬ ಕುರಿತು ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ನೊಂದಿಗೆ ಸಂಧಾನ ನಡೆಸಲು ಗಿಯುಫ್ರಾ ನ್ಯಾಯಾಲಯದ ಬಳಿ ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನಿಕೊಲಾಸ್ ಗರುಫಿಯಾಸ್ ಅವರು, ಶುಕ್ರವಾರ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ಮನವಿಯ ಕುರಿತು ತೀರ್ಪು ನೀಡಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ಗಿಯುಫ್ರಾ ಹಾಗೂ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ನಿರಾಕರಿಸಿವೆ. ಸೌಜನ್ಯ:The Print
Telangana Nurse: 25 ವರ್ಷದ ನರ್ಸ್ ಕಡೆಯಿಂದ ಭೀಕರ ಕೃತ್ಯ, ಅಪ್ಪ-ಅಮ್ಮನ ಜೀವ ತೆಗೆದ ಆರೋಪ
ಅಪ್ಪ &ಅಮ್ಮ ದೇವರ ಸ್ವರೂಪ ಅಂತಾರೆ, ಅಲ್ಲದೆ ದೇವರು ಎಲ್ಲಾ ಕಡೆ ಇರಲು ಆಗೋದಿಲ್ಲ ಅಂತಾ ತಾಯಿಯನ್ನು ಜೊತೆಗೆ ಬಿಟ್ಟು ಹೋಗಿದ್ದಾನೆ ಎಂಬ ಮಾತು ಕೂಡ ಪೋಷಕರ ಮಹತ್ವ ಸಾರುತ್ತದೆ. ಆದರೆ ಹೀಗಿದ್ದಾಗ 25 ವರ್ಷದ ನರ್ಸ್ ಒಬ್ಬಳು ತನ್ನ ಹೆತ್ತ ಅಪ್ಪ &ಅಮ್ಮನಿಗೆ ಲೀಥಾಲ್ ಇಂಜಕ್ಷನ್ ನೀಡಿ ಕೊಲೆ ಮಾಡಿದರೆ, ಈ ಘಟನೆ
ಕಲಬುರಗಿ | ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ನಿಗದಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹ
ಕಲಬುರಗಿ: ರೈತರ ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ನಿಯೋಗ ಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಪ್ರಭು ಪಾಟೀಲ್ ಒತ್ತಾಯಿಸಿದ್ದಾರೆ. ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ತೊಗರಿ ನಮ್ಮ ಭಾಗದ ವಾಣಿಜ್ಯ ಬೆಳೆಯಾದರೂ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಿಸುತ್ತಿಲ್ಲ. ಇಂದು ಕೇಂದ್ರ 12 ಸಾವಿರ ರೂ. ಕ್ವಿಂಟಾಲ್ ತೊಗರಿಗೆ ನಿಗದಿಪಡಿಸಿದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇದನ್ನೇ ಕೇಂದ್ರಕ್ಕೆ ಮನವರಿಕೆ ಮಾಡಲು ನಾವು ನಿಯೋಗ ಹೋಗಬೇಕು ಎಂದರು. ತೊಗರಿ ವಿಚಾರದಲ್ಲಿ ಕೇಂದ್ರ ಸರಕಾರ ಕೇವಲ ವರ್ತಕರ ಪರ ನೋಡುತ್ತಿದೆಯೇ ಹೊರತು ರೈತರ ಪರವಾಗಿಲ್ಲ. ರೈತರು ಮುಷ್ಕರ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು. ತೊಗರಿ ಬೇಸಾಯ, ಆಗುವ ವೆಚ್ಚ, ಫಸಲು, ಇಳುವರಿ ಇತ್ಯಾದಿ ವಿಚಾರಗಳಿರುವ ಸಮಗ್ರ ವರದಿ ಜೊತೆಗೇ ಶೀಘ್ರ ಕೇಂದ್ರಕ್ಕೆ ನಿಯೋಗ ಹೋಗಬೇಕು. ನಾವೆಲ್ಲರೂ ರೈತರ ಮಕ್ಕಳು, ಇದರಿಂದ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಸಿಗುವಂತಾದಲ್ಲಿ ರೈತರಿಗೆ ಅನುಕೂಲವಾಗವಲಿದೆ ಎಂದು ಅಲ್ಲಂಪ್ರಭು ಪಾಟೀಲ್ ತಿಳಿಸಿದರು.
‘ರಬ್ಬರ್ಗೆ ಬೆಂಬಲ ಬೆಲೆ-ವಿಮೆ ಸೌಲಭ್ಯ’ | ರಬ್ಬರ್ ಮಂಡಳಿ ಕ್ರಮ ಕೈಗೊಳ್ಳಬೇಕು : ಎಸ್.ಎಸ್.ಮಲ್ಲಿಕಾರ್ಜುನ್
ಬೆಂಗಳೂರು : ರಬ್ಬರ್ ಬೆಳೆಯುವ ರೈತರು ತೊಂದರೆಗಳನ್ನು ಅನುಭವಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ರಬ್ಬರ್ಗೆ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಕೃಷಿ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಲು ಇರುವ ಸಾಧ್ಯತೆ ಬಗ್ಗೆ ರಬ್ಬರ್ ಮಂಡಳಿಯು ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯೆ ಭಾಗೀರಥಿ ಮುರುಳ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಬ್ಬರ್ ಬೆಳೆಯು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿದ್ದು, ಪ್ಲಾಂಟೇಷನ್ ಬೆಳೆಯಾಗಿದೆ. ಈ ಬೆಳೆಯು ಕೇಂದ್ರ ಸರಕಾರದ ಸಂಸ್ಥೆಯಾದ ರಬ್ಬರ್ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, ರಬ್ಬರ್ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ರಬ್ಬರ್ ಮಂಡಳಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ರಬ್ಬರ್ ಮಾರುಕಟ್ಟೆ ಕುರಿತಂತೆ ನೈಸರ್ಗಿಕ ರಬ್ಬರ್ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಸರಬರಾಜು ಮೇಲೆ ಅವಲಂಬಿತವಾಗಿದೆ. ಅಲ್ಲದೆ, ಅಂತರ್ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದೊರೆಯುವ ರಬ್ಬರ್ ಬೆಲೆಯು ಸಹ ಸ್ಥಳೀಯ ರಬ್ಬರ್ ಮೇಲೆ ಪ್ರಭಾವ ಬೀರುತ್ತದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು. ನೈಸರ್ಗಿಕ ರಬ್ಬರ್ ಮೇಲೆ ವಿಧಿಸುವ ಆಮದು ಸುಂಕ ಸಹ ದರಗಳನ್ನು ನಿರ್ಧರಿಸುತ್ತದೆ. ರಬ್ಬರ್ ಉತ್ಪನ್ನವು ಕೈಗಾರಿಕಾ ಉದ್ದೇಶಗಳಿಗೆ ವಿನಿಯೋಗವಾಗುತ್ತದೆ. ಹೀಗಾಗಿ, ವಾಣಿಜ್ಯ ಬೆಳೆಯಾದ ರಬ್ಬರ್ನ ಬೆಲೆ ವಿಷಯವು ಬಹುಪಾಲು ಕೇಂದ್ರ ರಬ್ಬರ್ ಮಂಡಳಿ ಹಾಗೂ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅವರು ಹೇಳಿದರು.
ರಾಯಚೂರು | ಶಾರ್ಟ್ ಸರ್ಕ್ಯೂಟ್ನಿಂದ ದನದ ಶೆಡ್ಗೆ ಬೆಂಕಿ: ಹಸು ಸಾವು, ವ್ಯಕ್ತಿಗೆ ಗಂಭೀರ ಗಾಯ
ರಾಯಚೂರು : ರಾಯಚೂರು ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ದನದ ಶೆಡ್ಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡು, ಒಂದು ಹಸು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಾತ್ರಿ 7.30ರ ಸುಮಾರಿಗೆ ಸಂಭವಿಸಿದ ಈ ಅವಘಡದಲ್ಲಿ ಗಾಯಗೊಂಡ ವ್ಯಕ್ತಿಯನ್ನು ದೊಡ್ಡ ಮಲ್ಲಯ್ಯ (65) ಎಂದು ಗುರುತಿಸಲಾಗಿದೆ. ದನದ ಶೆಡ್ನಲ್ಲೇ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮವಾಗಿ ಅವರ ಎದೆ ಹಾಗೂ ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಘಟನೆ ಬಳಿಕ ಸ್ಥಳೀಯರು ತಕ್ಷಣ ಆಂಬುಲೆನ್ಸ್ಗೆ ಮಾಹಿತಿ ನೀಡಿ, ಗಾಯಾಳುವನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಎಫ್ಎಸ್ಒ ರಾಜು, ಎಫ್ಡಿ ಬಸವರಾಜ, ರಾಘವೇಂದ್ರ ಹಾಗೂ ನಾಗರಾಜ ಭಾಗವಹಿಸಿದ್ದರು.
ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ.ನಷ್ಟ ಉಂಟಾಗಲು ಕಾಂಗ್ರೆಸ್ ಸರಕಾರ ಕಾರಣ : ವೇದವ್ಯಾಸ ಕಾಮತ್
ಬೆಂಗಳೂರು : ರಾಜ್ಯಕ್ಕೆ 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲ ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. ಈ ನಷ್ಟಕ್ಕೆ ಕೇಂದ್ರ ಸರಕಾರವಲ್ಲ, ರಾಜ್ಯದ ಕಾಂಗ್ರೆಸ್ ಸರಕಾರವೃ ಕಾರಣ ಎಂದು ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ದೂರಿದರು. ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾ.ಪಂ.ಯಿಂದ ಜಿಲ್ಲಾ ಪಂಚಾಯಿತಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳನ್ನೆ ಈ ಸರಕಾರ ನಡೆಸಿಲ್ಲ. ಸ್ಥಳೀಯ ಮಟ್ಟದಲ್ಲಿ ಚುನಾಯಿತ ಸಂಸ್ಥೆಗಳು ಇರದೆ ಅನುದಾನ ಪಡೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. ಸರಕಾರ ಸ್ಥಳೀಯ ಚುನಾವಣೆಗಳನ್ನು ನಡೆಸದೆ ಹೋದರೆ, 15ನೆ ಹಣಕಾಸು ಆಯೋಗದಲ್ಲಿ ನಷ್ಟ ಉಂಟಾಗಿರುವುದಲ್ಲ, 16ನೆ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಬರಬೇಕಾದ ಅನುದಾನ ಕೈ ತಪ್ಪುತ್ತದೆ. ಅದಕ್ಕೆ ಈ ಸರಕಾರದ ನಿರ್ಲಕ್ಷ್ಯ ಕಾರಣವಾಗುತ್ತದೆ ಎಂದು ವೇದವ್ಯಾಸ ಕಾಮತ್ ದೂರಿದರು. ನನ್ನ ಕ್ಷೇತ್ರದಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಕಾಮಗಾರಿಗೆ ಶಿಲಾನ್ಯಾಸ ಮಾಡಿಲ್ಲ. ಅಭಿವೃದ್ಧಿಗೆ ಒಂದು ರೂಪಾಯಿ ನೀಡಿಲ್ಲ. ಎಸ್ಸಿಎಸ್ಪಿ-ಟಿಎಸ್ಪಿ ಹಣದಲ್ಲಿ ಭಾರಿ ಭ್ರಷ್ಟಾಚಾರ ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ನೀಡಿಲ್ಲ. ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ.ಬಾಕಿ ನೀಡದಷ್ಟು ಈ ಸರಕಾರ ದಿವಾಳಿಯಾಗಿದೆ. ಎರಡೂವರೆ ವರ್ಷದಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಭ್ರಷ್ಟಾಚಾರ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಅಧಿಕಾರಿಗಳು ಆಯಾಕಟ್ಟಿನ ಜಾಗಕ್ಕೆ ಕೋಟ್ಯಂತರ ರೂ.ಗಳನ್ನು ಪಾವತಿಸಿ ಬಂದಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆಗುತ್ತಿವೆ. ಸರಕಾರಿ ಕಚೇರಿಗಳಲ್ಲಿನ ಹೊಸ ನಿಯಮಗಳಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು. ಮಂಗಳೂರು ಜೈಲಿನಲ್ಲಿ ಅಳವಡಿಸಿರುವ ಜಾಮರ್ನಿಂದಾಗಿ ಸುತ್ತಲಿನ 2.5 ಕಿ.ಮೀ ಪರಿಸರದಲ್ಲಿ ಸಮಸ್ಯೆ ಉಂಟಾಗಿದೆ. ಜಾಮರ್ ಅನ್ನು ತೆರವು ಮಾಡಿ ಎಂದು ಸರಕಾರಕ್ಕೆ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ನಗರದಲ್ಲಿ ಡ್ರಗ್ಸ್ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ದೂರಿದರು. ಮಂಗಳೂರಿನಲ್ಲಿ ಮೀನುಗಾರರ ಸುರಕ್ಷತೆಗಾಗಿ ‘ಸೀ ಆ್ಯಂಬುಲೆನ್ಸ್’ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ದುರ್ಬೀನು ಹಾಕಿ ಹುಡುಕಿದರೂ ನಮಗೆ ಅದು ಕಾಣಿಸುತ್ತಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು.
ಶಹಾಪುರ | ಗ್ರಾಮದ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ : ಲವೀಶ್ ಒರಡಿಯಾ
ಶಹಾಪುರ: ಗ್ರಾಮದ ಸ್ವಚ್ಛತೆ, ನೈರ್ಮಲ್ಯ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಜ.30ರಂದು ಶಹಾಪುರ ತಾಲೂಕಿನ ಬೀರನೂರು ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ, ಗ್ರಾಮದ ಸಾರ್ವಜನಿಕರ ಕುಂದು-ಕೊರತೆಗಳ ಅಹ್ವಾಲುಗಳನ್ನು ಪರಿಶೀಲಿಸಿದ ಅವರು, ಗ್ರಾಮದಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಿ ಎಂದರು. ಚರಂಡಿಗಳಲ್ಲಿ ನೀರು ನಿಲ್ಲಂದತೆ ತುಂಬಿದ ಹೂಳನ್ನು ತೆಗೆದು ಸ್ವಚ್ಛಗೊಳಿಸಿ, ನಳಗಳ ಮೂಲಕ ಪೂರೈಕೆ ಮಾಡುವ ಕುಡಿಯುವ ನೀರು, ಟ್ಯಾಪ್ ಇಲ್ಲದ ನಳಗಳಿಂದ ಸೂರಿಕೆಯಾಗುವುದನ್ನು ತಡೆಯಲು ನಳದ ಮಾಲಕರಿಗೆ ಟ್ಯಾಪ್ ಅಳವಡಿಕೆ ಮಾಡಿ, ನೀರು ಪೊಲಾಗದಂತೆ ನೀಗಾವಹಿಸಿ ಎಂದು ತಿಳಿಸಲು ಸೂಚಿಸಿದರು. ಬಳಿಕ, ಬೀರನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡದ ಭೌತಿಕ ಸ್ಥಿತಿ ವೀಕ್ಷಿಸಿದರು. ಈ ವೇಳೆ ಶಹಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಸಹಾಯಕ ನಿರ್ದೇಶಕರಾದ ಶಾರದಮ್ಮ ನಾಗ್ಲೋಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಶಂಕರ, ಬೀರನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ ಮೌರ್ಯ, ನರೇಗಾ ಸಹಾಯಕ ಇಂಜಿನಿಯರ್ ವೆಂಕಟರಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಮರೆಪ್ಪ ಬೇಗಾರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಬೀದರ್ | ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಿ : ಮಾಣಿಕರಾವ್ ಪಾಟೀಲ್
ಬೀದರ್, ಜ.30: ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಕ್ರಮವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್ ಹೇಳಿದ್ದಾರೆ. ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ಸಾರ್ವಜನಿಕರ ಮೇಲಿನ ನಾಯಿಗಳ ದಾಳಿಯನ್ನು ತಡೆಯಬೇಕು. ಸಾರ್ವಜನಿಕ ಶೌಚಾಲಯಗಳು ಮುಕ್ತ ಉಪಯೋಗಕ್ಕೆ ಅನುವುಮಾಡಿಕೊಡಬೇಕು. ಕರ ವಸೂಲಾತಿಗೆ ಹೆಚ್ಚು ಒತ್ತು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸಂಜುಕುಮಾರ್ ಹಾಗೂ ಸುದೇಶ್ ಕೊಡೆ, ಅಧಿಕಾರಿಗಳು ಉಪಸ್ಥಿತರಿದ್ದರು.
ಬೀದರ್ | ವಿಬಿ ಜಿ ರಾಮ್ ಜಿ ಮಸೂದೆ ಹಿಂಪಡೆದು ಮನರೇಗಾ ಪುನರ್ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ
ಬೀದರ್ : ವಿಬಿ ಜಿ ರಾಮ್ ಜಿ ಮಸೂದೆಯನ್ನು ಹಿಂಪಡೆದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನು (ಮನರೇಗಾ)ಯನ್ನು ಪುನರ್ಸ್ಥಾಪಿಸಬೇಕು ಎಂದು ಆಗ್ರಹಿಸಿ ಮನರೇಗಾ ಉಳಿಸಿ ಆಂದೋಲನದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಮನರೇಗಾ ಕಾರ್ಮಿಕರು, ವಿಬಿ ಜಿ ರಾಮ್ ಜಿ ಮಸೂದೆ ವಿರೋಧಿಸಿ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ, ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕಾಗಿದ್ದ ಮನರೇಗಾ ಕಾನೂನನ್ನು ರದ್ದುಗೊಳಿಸಿ, ಉದ್ಯೋಗವನ್ನು ಕೇಂದ್ರ ಸರ್ಕಾರದ ಮರ್ಜಿಗೆ ಒಳಪಡಿಸುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿಸುವ ವಿಬಿ ಜಿ ರಾಮ್ ಜಿ ಕಾನೂನಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ತಿಳಿಸಲಾಗಿದೆ. ಕನಿಷ್ಠ ವೇತನದ ಹಕ್ಕನ್ನು ಬದಿಗೊತ್ತಿ, ಕೇಂದ್ರ ಸರ್ಕಾರವೇ ನಿರ್ಧರಿಸುವ ವೇತನ ಹಾಗೂ ಕೆಲಸ ಕಾಮಗಾರಿಗಳ ಮೂಲಕ ವಲಸೆಯನ್ನು ಉತ್ತೇಜಿಸಿ, ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಪೂರೈಸುವ ಈ ಕಾನೂನನ್ನು ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದರು. ಇದೇ ವೇಳೆ, ಜ.26ರಂದು ನಡೆದ ಗ್ರಾಮಸಭೆಯಲ್ಲಿ ಹೊಸ ಕಾನೂನು ವಿರೋಧಿಸಿ ಸರ್ವಾನುಮತದಿಂದ ಠರಾವು ಅಂಗೀಕರಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಬೇಡಿಕೆ ಆಧಾರಿತ, ಸಾರ್ವತ್ರಿಕ ಹಾಗೂ ಉದ್ಯೋಗದ ಹಕ್ಕು ಒದಗಿಸುವ ಮನರೇಗಾ ಕಾನೂನನ್ನು ಮರುಸ್ಥಾಪಿಸಬೇಕು ಹಾಗೂ ವಿಬಿ ಜಿ ರಾಮ್ ಜಿ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಪ್ನದೀಪಾ, ಗೀತಾ, ಸುಶೀಲಾ, ಸುರೇಖಾ, ರೇಷ್ಮಾ, ಲೋಕೇಶ್ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು : ‘ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ಮಾಡಲು ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕರೇ ಸಾಕು. ತಾವು ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ. ಅದನ್ನು ಬಿಟ್ಟು ನಿರಂತರವಾಗಿ ಟ್ವೀಟ್ ಮಾಡುತ್ತಲೇ ಇರುತ್ತೀರಾ?’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉದ್ಯಮಿ ಮೋಹನ್ ದಾಸ್ ಪೈ ಅವರನ್ನು ಪ್ರಶ್ನಿಸಿದ್ದಾರೆ. ಶುಕ್ರವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ರಾಮಲಿಂಗಾರೆಡ್ಡಿ, ‘ನಿಮ್ಮ(ಮೋಹನ್ದಾಸ್ ಪೈ) ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ, ಅದು ಮೂಲಭೂತವಾಗಿ ಹಠಮಾರಿ ಧೋರಣೆಯನ್ನು ಹೊಂದಿದೆ. ನೀವು ಬ್ಯಾಲೆನ್ಸ್ ಶೀಟ್ ಅನ್ನು ನೋಡುತ್ತೀರಿ. ಆದರೆ ನಾನು 1.5 ಕೋಟಿ ನಾಗರಿಕರನ್ನು ನೋಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ. ‘ನಾವು ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ಯ ಮೂಲಕ ಮಹಿಳೆಯರಿಗೆ 650 ಕೋಟಿಗೂ ಅಧಿಕ ಉಚಿತ ಪ್ರಯಾಣವನ್ನು ನೀಡಿದ್ದೇವೆ. ಇದು ಕೇವಲ ‘ಯೋಜನೆ’ ಅಲ್ಲ, ಬದಲಾಗಿ ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಚಲನಶೀಲತೆಯ ನೇತೃತ್ವದ ಆರ್ಥಿಕ ಸಬಲೀಕರಣವಾಗಿದೆ’ ಎಂದು ಅವರು ಗಮನ ಸೆಳೆದಿದ್ದಾರೆ. ‘ರಾಜ್ಯದಲ್ಲಿ ಶೇ.98 ಹಳ್ಳಿಗಳು ಬಸ್ ಸಂಪರ್ಕವನ್ನು ಹೊಂದಿವೆ. ದೂರದ ಹಳ್ಳಿಯ ವಿದ್ಯಾರ್ಥಿ ಮತ್ತು ಗ್ರಾಮೀಣ ನಾಗರಿಕರಿಗೆ ಬಸ್ ಸೇವೆಯನ್ನು ಕಲ್ಪಿಸುತ್ತಿರುವುದರಿಂದ ಶೇ.30ರಷ್ಟು ಮಾರ್ಗಗಳಲ್ಲಿ ನಷ್ಟವಾಗುತ್ತಿವೆ. ಶೇ.30ರಷ್ಟು ಲಾಭವೂ ಇಲ್ಲ ನಷ್ಟವೂ ಇಲ್ಲದಂತಾಗಿದೆ. ಉಳಿದ ಶೇ.40ರಷ್ಟು ಪ್ರಯಾಣದ ಮಾರ್ಗಗಳು ಲಾಭವನ್ನು ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ 26,054 ಸರಕಾರಿ ಬಸ್ಗಳನ್ನು ಕಾರ್ಯಚರಣೆ ನಡೆಸುತ್ತಿವೆ. ಬೆಂಗಳೂರಿನಲ್ಲಿಯೇ ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. ನಗರದಲ್ಲಿ 1,686 ಎಲೆಕ್ಟ್ರಿಕ್ ಬಸ್ಗಳನ್ನು ಒಳಗೊಂಡಂತೆ 7,108 ಬಸ್ಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲಿದ್ದು, ಇದು ಭಾರತದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದೆ. ಈ ಪ್ರಮಾಣ ಮತ್ತು ದಕ್ಷತೆಗೆ ಹೊಂದಿಕೆಯಾಗುವ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ಒಂದೇ ಒಂದು ನಗರ ಅಥವಾ ರಾಜ್ಯವನ್ನು ನನಗೆ ತೋರಿಸಿ ಎಂದು ಅವರು ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ. ಖಾಸಗಿ ಮಾಲತ್ವದಲ್ಲಿ ನಡೆಯುವ ಉದ್ಯಮಗಳು ಲಾಭದ ಕುಸಿತ ಕಂಡ ತಕ್ಷಣ ಮುಚ್ಚುತ್ತವೆ. ಆದರೆ ದಿನಗೂಲಿ ಪಡೆಯುವ ಬೆಂಗಳೂರಿನ ಸಾಮಾನ್ಯ ವ್ಯಕ್ತಿಗೆ ಅದು ಹೇಗೆ ಸಹಾಯ ಮಾಡುತ್ತದೆ? ಖಾಸಗಿ ಏಕಸ್ವಾಮ್ಯವು ಬಡವರ ಮೇಲೆ ಹೊರೆ ಹಾಕಲಿದೆ. ಸಾರ್ವಜನಿಕ ಸಾರಿಗೆ ಒಂದು ಹಕ್ಕು, ಐಷಾರಾಮಿ ಅಲ್ಲ ಅವರು ಹೇಳಿದ್ದಾರೆ. Mr. @TVMohandasPai , Our BMTC MD is enough to handle a face-to-face debate with you on any platform. Kindly come and discuss the facts with them directly. Are you ready to step up, or will you just keep tweeting? Your view is not just biased—it is fundamentally dogmatic. You… https://t.co/F2nR7Tk1yN — Ramalinga Reddy (@RLR_BTM) January 29, 2026 ‘ಬಿಜೆಪಿ ಅಧಿಕಾರಾವಧಿಯಲ್ಲಿ (2019-2023), ಸಾರಿಗೆ ನಿಗಮಗಳು ಶೋಚನೀಯ ಸ್ಥಿತಿಯಲ್ಲಿದ್ದಾಗ, ನೀವು ಒಂದೇ ಒಂದು ಪ್ರಶ್ನೆಯನ್ನು ಏಕೆ ಎತ್ತಲಿಲ್ಲ? ಜನಪರ ಸರಕಾರ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ನಿಮ್ಮ ‘ಕಾರ್ಪೊ ರೇಟ್ ಕಾಳಜಿ’ ಏಕೆ ಎಚ್ಚೆತ್ತುಕೊಳ್ಳುತ್ತದೆ?’ -ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಬಸ್ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಇದೆ. ಸಾರ್ವಜನಿಕ ವಲಯದ ಉದ್ಯಮಗಳು(ಪಿಎಸ್ಯು)ಮಾತ್ರ ಕೆಲಸ ಮಾಡುತ್ತವೆ ಎಂಬ ಮೂಢನಂಬಿಕೆಯ ಮನೋಭಾವದಿಂದಾಗಿ ವೈಫಲ್ಯ ಉಂಟಾಗಿದೆ. ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಈ ಕೊರತೆಯನ್ನು ನಿವಾರಿಸಲು ಖಾಸಗಿ ಬಸ್ ಸೇವೆಗಳಿಗೆ ಅವಕಾಶ ನೀಡಬೇಕು’ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಕೊಪ್ಪಳ : ರಸ್ತೆ ಅಪಘಾತ; 15ಕ್ಕೂ ಹೆಚ್ಚು ಕುರಿಗಳ ಸಾವು
ಕೊಪ್ಪಳ, ಜ.30: ಲಾರಿ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹಾದ ಪರಿಣಾಮ 15ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಸಂಭವಿಸಿದೆ. ಕೊಪ್ಪಳ ತಾಲೂಕಿನ ಶಾಪುರ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ಕೆಳಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಲಾರಿ ವೇಗವಾಗಿ ಬಂದ ಪರಿಣಾಮ ಕುರಿಗಳ ಗುಂಪಿನ ಮೇಲೆ ಹಾದಿದೆ ಎನ್ನಲಾಗಿದೆ. ಘಟನೆಯಲ್ಲಿ ಸುಮಾರು 10 ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಶಾಪುರ ಗ್ರಾಮದ ಚಂದ್ರು ಎಂಬ ಕುರಿಗಾಹಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಕುರಿಗಾಹಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಾದಗಿರಿ | ಎಂಎಸ್ಪಿ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನ
ಯಾದಗಿರಿ : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನ ಹಾಗೂ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ರೈತರು ದೀರ್ಘಕಾಲ ಚಳುವಳಿ ನಡೆಸಿ ಸರ್ಕಾರದ ಗಮನ ಸೆಳೆದರೂ, ಎಂಎಸ್ಪಿ ಖಾತರಿ ಕುರಿತು ಸ್ಪಷ್ಟ ಕಾನೂನು ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ಅವರು 131 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದು, ಬಳಿಕ ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ ವರದಿ ಸಲ್ಲಿಸಲಾಗಿದೆ. ಆ ಸಮಿತಿಯು ಎಂಎಸ್ಪಿ ಖಾತರಿ ಕಾಯ್ದೆ ಅಗತ್ಯ ಎಂದು ಶಿಫಾರಸು ಮಾಡಿದೆ ಎಂದು ಹೇಳಿದರು. ಇದಲ್ಲದೆ, ಕೃಷಿ ವಿಷಯಕ್ಕೆ ಸಂಬಂಧಿಸಿದ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯೂ ರೈತರ ಪರವಾಗಿ ವರದಿ ನೀಡಿ ಎಂಎಸ್ಪಿ ಖಾತರಿ ಕಾನೂನು ಜಾರಿಗೆ ಬೆಂಬಲ ಸೂಚಿಸಿದೆ. ಆದರೂ ಕೇಂದ್ರ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಎಂಎಸ್ಪಿ ಖಾತರಿ ಕಾನೂನು ಇಲ್ಲದಿರುವುದರಿಂದ ದೇಶದ ರೈತರಿಗೆ ವರ್ಷಕ್ಕೆ ಸುಮಾರು 15 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು. ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 7ರಿಂದ ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆ ಕೇರಳ, ಪುದುಚೇರಿ, ತಮಿಳುನಾಡು ಮೂಲಕ ಕರ್ನಾಟಕ ಪ್ರವೇಶಿಸಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಮಾರ್ಗ ಮಧ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಂದ ಸಹಿ ಸಂಗ್ರಹಿಸಲಾಗುವುದು. ಸುಮಾರು 40 ದಿನಗಳ ಕಾಲ ನಡೆಯುವ ಈ ಯಾತ್ರೆ ಕಾಶ್ಮೀರ ತಲುಪಲಿದೆ ಎಂದು ವಿವರಿಸಿದರು. ಮಾ.19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶವ್ಯಾಪಿ ರೈತ ಮಹಾಸಭೆ ನಡೆಯಲಿದ್ದು, ಸಂಗ್ರಹಿಸಿದ ಸಹಿಗಳ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ಯಾತ್ರೆಯು ಫೆ.10ರಂದು ಚಾಮರಾಜನಗರ, 11ರಂದು ಮೈಸೂರು–ಮಂಡ್ಯ–ರಾಮನಗರ ಹಾಗೂ 12ರಂದು ಬೆಂಗಳೂರು–ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರ ಪ್ರದೇಶಕ್ಕೆ ತೆರಳಲಿದೆ. ರಾಜ್ಯದ ಎಲ್ಲಾ ರೈತ ಸಂಘಟನೆಗಳ ಮುಖಂಡರು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿ ತಮ್ಮ ತಮ್ಮ ಭಾಗದ ರೈತರಿಂದ ಸಹಿ ಸಂಗ್ರಹಿಸಿ ಯಾತ್ರಾ ಮುಖಂಡರಿಗೆ ಒಪ್ಪಿಸಬೇಕು ಎಂದು ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಶಿವಶರಣಪ್ಪ, ಯಲ್ಲಪ್ಪ ಮಲ್ಲಿಬಾವಿ, ಕೊಟ್ರೇಶ್ ಚೌದರಿ, ಬಸವರೆಡ್ಡಿ ಪಾಟೀಲ್, ಬಸವರಾಜ ದಳಪತಿ, ವೆಂಕಟರಾಮರೆಡ್ಡಿ, ಚಂದ್ರಶೇಖರ್ ಸಾಹುಕಾರ್, ದೇವೇಂದ್ರಪ್ಪ ಚಂದಲಾಪುರ, ಅಶೋಕ್ ಚೌದರಿ, ಚಾಂದ್ ಹುಸೇನ್, ಶ್ಯಾಮಪ್ಪ ಚಂಡಿಕೆರಿ, ಹನುಮಂತ ವೆಂಕಟಾಪುರ, ಕೊಟ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಳೆದ ವರ್ಷ ಭುಗಿಲೆದ್ದಿದ್ದ ತಿರುಪತಿ ಲಡ್ಡು ಕಲಬೆರೆಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ನೆಲ್ಲೂರು ನ್ಯಾಯಾಲಯಕ್ಕೆ ಜ. 30ರಂದು ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಸಿಲ್ಲ. ಆದರೆ, ಸಸ್ಯಜನ್ಯ ಎಣ್ಣೆ ಬಳಸಿ ಕಲಬೆರಕೆ ತುಪ್ಪ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದೆ.
ಟಿ20 ವಿಶ್ವಕಪ್ ಗೆ ಮ್ಯಾಚ್ ರೆಫ್ರಿ- ಅಂಪೈರ್ ಗಳ ಪ್ರಕಟಿಸಿದ ಐಸಿಸಿ; ಜಾವಗಲ್ ಶ್ರೀನಾಥ್ ತಂಡದಲ್ಲಿರುವ ಏಕೈಕ ಕನ್ನಡಿಗ
ಟಿ20 ವಿಶ್ವಕಪ್ ಟೂರ್ನಿಗೆ ಇದೀಗ ತೀರ್ಪುಗಾರರ ಪಟ್ಟಿಯನ್ನು ಐಸಿಸಿ ಇದೀಗ ಪ್ರಕಟಿಸಿದೆ. ಕರ್ನಾಟಕದ ಹೆಮ್ಮೆಯ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಆರು ಮಂದಿ ಮ್ಯಾಚ್ ರೆಫರಿಗಳ ತಂಡದಲ್ಲಿ ಆಯ್ಕೆಯಾಗಿದ್ದಾರೆ. ನಿತಿನ್ ಮೆನನ್, ಜಯರಾಮನ್ ಮದನಗೋಪಾಲ್, ಕೆಎನ್ ಅನಂತಪದ್ಮನಾಭನ್ ಅವರು ಆನ್-ಫೀಲ್ಡ್ ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿರುವ ಭಾರತೀಯರು. ಉದ್ಘಾಟನಾ ಪಂದ್ಯಕ್ಕೆ ಕುಮಾರ ಧರ್ಮಸೇನ ಮತ್ತು ವೇಯ್ನ್ ನೈಟ್ಸ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಫೆಬ್ರವರಿ 15ರಂದು ನಡೆಯಲಿರುವ ಭಾರತ Vs ಪಾಕಿಸ್ತಾನ ಪಂದ್ಯಕ್ಕೆ ಕುಮಾರ ಧರ್ಮಸೇನ ಮತ್ತು ಇಲ್ಲಿಂಗ್ ವರ್ಥ್ ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರಾಯಚೂರು | ಎಸ್ಟಿ ಹಕ್ಕು ರಕ್ಷಣೆಗೆ ಆಗ್ರಹ: ಫೆ.2 ರಿಂದ ಎಸ್ಟಿ ಶಾಸಕರ ಮನೆ ಮುಂದೆ ಪ್ರತಿಭಟನೆ
ರಾಯಚೂರು : ಪರಿಶಿಷ್ಟ ಪಂಗಡದ ಜನರ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಫೆ.2ರಿಂದ 6ರವರೆಗೆ ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗೆದ್ದಿರುವ ಪರಿಶಿಷ್ಟ ಪಂಗಡದ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರು ತಿಳಿಸಿದರು. ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸಮಾನತೆ ಹಕ್ಕಿನಡಿ ಪರಿಶಿಷ್ಟ ಪಂಗಡದ 51 ಉಪಜಾತಿಗಳಿಗೆ ಮೀಸಲಾತಿ ನೀಡಲಾಗಿದ್ದರೂ, ಮೀಸಲಾತಿಯಿಂದ ಗೆದ್ದು ಶಾಸಕರಾದವರು ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸದೇನದಲ್ಲೂ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿಯ ದುರ್ಬಳಕೆ ನಡೆಯುತ್ತಿದ್ದು, ಇದ್ರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಹಿಂದುಳಿದ ವರ್ಗಗಳಲ್ಲಿರುವ ಕೆಲ ಜಾತಿಗಳಿಂದ ಸుమಾರು 2.5 ಲಕ್ಷಕ್ಕೂ ಹೆಚ್ಚು ಮಂದಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿ ಸ್ಥಗಿತಗೊಂಡಿದೆ. ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರೋತ್ಸಾಹ ಧನ ಹಾಗೂ ಸಹಾಯಧನ ನೀಡಲಾಗುತ್ತಿಲ್ಲ. ಪಿಎಚ್ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಹಾಗೂ ವಸತಿ ಭತ್ಯೆ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು. ಫೆ.2 ರಂದು ದೇವದುರ್ಗ ಶಾಸಕರ ಮನೆ ಮುಂದೆ, ಫೆ.3 ರಂದು ಸುರುಪುರ ಶಾಸಕರ ಮನೆ ಮುಂದೆ, 4 ರಂದು ರಾಯಚೂರು ಗ್ರಾಮೀಣ ಶಾಸಕರ ಮನೆ ಮುಂದೆ, 5 ರಂದು ಮಾನ್ವಿ, 6 ರಂದು ಮಸ್ಕಿ ಶಾಸಕ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ಎಸ್ಟಿ ನಿಗಮದಲ್ಲಿ ಹಣವಿಲ್ಲದ ಸ್ಥಿತಿ ನಿರ್ಮಿಸಿದೆ ಎಂದು ಆರೋಪಿಸಿದ ಅವರು, ಸಮಾಜದ ಕೆಲ ಶಾಸಕರೇ ಅನುದಾನದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು. ಪ್ರತ್ಯೇಕ ಸಚಿವಾಲಯ ಇದ್ದರೂ ಸಚಿವರಾಗಿದ್ದ ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭು ಹುಲಿನಾಯಕ, ರಾಚಣ್ಣ ನಾಯಕ, ಮಾನಸಯ್ಯ ನಾಯಕ, ದೊಡ್ಡಯ್ಯ ನಾಯಕ, ಶರಣಪ್ಪ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು ಜಿಲ್ಲಾ ಉತ್ಸವ–2026 : ಫೆ.6ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
ರಾಯಚೂರು :ರಾಯಚೂರು ಜಿಲ್ಲಾ ಉತ್ಸವ–2026ರ ಹಿನ್ನೆಲೆಯಲ್ಲಿ ಜಿಲ್ಲೆಯ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಹಾಗೂ ಡಿಡಿಯು–ಜಿಕೆವೈ ಯೋಜನೆಯಡಿ ಜಿಲ್ಲಾ ಮಟ್ಟದ ಒಂದು ದಿನದ ಉದ್ಯೋಗ ಮೇಳವನ್ನು ಫೆ.6ರಂದು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದ ಯಶಸ್ಸಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವರಾಜ ಅವರು ಸೂಚಿಸಿದರು. ಜ.30ರಂದು ನಗರದ ಜಿಲ್ಲಾ ಪಂಚಾಯತ್ನ ಜಲ ನಿರ್ಮಲ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಳವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಮೇಳದ ವೇದಿಕೆ ಹಾಗೂ ಸುತ್ತಮುತ್ತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು. ಮೇಳದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಸಾಮಾನ್ಯ ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಅರೆವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ನೂರಾರು ಉದ್ಯೋಗದಾತರು/ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಇನ್ನೂ ಹೆಚ್ಚಿನ ಕಂಪನಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜನವರಿ 30ರ ಬೆಳಿಗ್ಗೆ 10 ಗಂಟೆಯ ವೇಳೆಗೆ 4,967 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ. ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ನೀಡಲಾಗುವುದು ಎಂದು ಹೇಳಿದರು. ಉದ್ಯೋಗಾಕಾಂಕ್ಷಿಗಳು https://udyogamela.ksdckarnataka.com ಜಾಲತಾಣದ ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದು. ಅದೇ ರೀತಿ ಉದ್ಯೋಗದಾತರು/ಕಂಪನಿಗಳು ತಮ್ಮಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯೊಂದಿಗೆ https://employer.ksdckarnataka.com/login ಜಾಲತಾಣದಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದು. ಈ ಕುರಿತು ಹೆಚ್ಚಿನ ಪ್ರಚಾರ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರಾಜಕುಮಾರ್ ಪಾಟೀಲ್, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯವಸ್ಥಾಪಕ ಸಂತೋಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಕಾರ್ಯದರ್ಶಿ ಜಂಬಣ್ಣ, ಎಸ್ಬಿಐ ಆರ್ಸೆಟ್ ನಿರ್ದೇಶಕ ವಿಜಯಕುಮಾರ್, ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳ ಮುಖ್ಯಸ್ಥರಾದ ಶಿವರಾಜ ಕುಮಾರ್, ರುದ್ರಗೌಡ, ಹೈದರಾಸಾಬ್, ತೋಮಸಪ್ಪ, ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಯಚೂರು | ಬಿಸಿಯೂಟ ನೌಕರರಿಂದ ಪ್ರತಿಭಟನೆ
ರಾಯಚೂರು: ಸರಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತರಕಾರಿ, ಬಾಳೆಹಣ್ಣು ಹಾಗೂ ಮೊಟ್ಟೆಗಳ ಸರಬರಾಜನ್ನು ಸ್ವ-ಸಹಾಯ ಗುಂಪುಗಳಿಗೆ ನೀಡಲು ಜಿಲ್ಲಾ ಪಂಚಾಯತ್ ಮುಂದಾಗಿರುವ ನಿರ್ಧಾರವನ್ನು ಖಂಡಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಜಿಲ್ಲಾ ಸಮಿತಿಯಿಂದ ಶುಕ್ರವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ 24 ವರ್ಷಗಳಿಂದ ಅತಿ ಕಡಿಮೆ ಸಂಬಳಕ್ಕೆ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊತ್ತು ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರ ಶ್ರಮವನ್ನು ಕಡೆಗಣಿಸಿ, ಯಾವುದೇ ಪೂರ್ವ ಚರ್ಚೆ ನಡೆಸದೇ ಸ್ವ-ಸಹಾಯ ಗುಂಪುಗಳಿಗೆ ಸರಬರಾಜು ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸಂಪೂರ್ಣವಾಗಿ ನೌಕರ ವಿರೋಧಿ ನಡೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈವರೆಗೆ ಶಾಲಾ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಬಿಸಿಯೂಟ ನೌಕರರೇ ತರಕಾರಿ, ಹಣ್ಣು ಹಾಗೂ ಮೊಟ್ಟೆಗಳನ್ನು ಖರೀದಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದ್ದರು. ಈ ವ್ಯವಸ್ಥೆ ಸುಗಮವಾಗಿ ನಡೆಯುತ್ತಿರುವಾಗಲೇ ಹೊಸದಾಗಿ ಸ್ವ-ಸಹಾಯ ಗುಂಪುಗಳನ್ನು ತರುವ ಮೂಲಕ ಯೋಜನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಮ್ಮ ಮಾತನಾಡಿ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಬಿಸಿಯೂಟ ನೌಕರರಲ್ಲಿ ಬಹುಪಾಲು ಮಹಿಳೆಯರೇ ಇರುವುದನ್ನು ಅಧಿಕಾರಿಗಳು ಮರೆತಿದ್ದಾರೆ. ಈ ನಿರ್ಧಾರದಿಂದ ನಮ್ಮ ಉದ್ಯೋಗ ಭದ್ರತೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂದು ಹೇಳಿದರು. ಹೀಗಾಗಿ ಸ್ವ-ಸಹಾಯ ಗುಂಪುಗಳಿಗೆ ತರಕಾರಿ, ಬಾಳೆಹಣ್ಣು ಹಾಗೂ ಮೊಟ್ಟೆಗಳ ಸರಬರಾಜು ನೀಡುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಸಂಘಟನೆ ಒತ್ತಾಯಿಸಿತು. ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಪ್ರಧಾನ ಕಾರ್ಯದರ್ಶಿ ಮರಿಯಮ್ಮ, ಜಿಲ್ಲಾ ಅಧ್ಯಕ್ಷೆ ರೆಣುಕಮ್ಮ, ಸಿಐಟಿಯು ಜಿಲ್ಲಾ ಅಧ್ಯಕ್ಷ ಹೆಚ್. ಪದ್ಮ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಖಜಾಂಚಿ ಮುಹಮ್ಮದ್ ಹನೀಫ್ ಸೇರಿದಂತೆ ಅನೇಕ ಬಿಸಿಯೂಟ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ : ಜ್ಯೋತಿ ರಥಯಾತ್ರೆಗೆ ಸಿದ್ಧತೆ
ರಾಯಚೂರು :ರಾಯಚೂರು ಜಿಲ್ಲೆಯಲ್ಲಿ 2026ರ ಫೆಬ್ರ.5, 6 ಮತ್ತು 7 ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಡೆಯುವ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜ್ಯೋತಿ ರಥಯಾತ್ರೆಯು ಮಾನವಿ, ಸಿಂಧನೂರು, ಮಸ್ಕಿ, ಲಿಂಗಸೂರು, ಕವಿತಾಳ, ದೇವದುರ್ಗ, ಗಬ್ಬೂರು, ಅರಕೇರಾ, ಸಿರವಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ರಾಯಚೂರು ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ನಾನಾ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಈ ರಥಯಾತ್ರೆ ಆಯೋಜಿಸಲಾಗಿದೆ. ಫೆ.1 ರಂದು ಬೆಳಿಗ್ಗೆ 10 ಗಂಟೆಗೆ ರಾಯಚೂರು ನಗರದ ಕರ್ನಾಟಕ ಸಂಘದಿಂದ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಭಾಗವಹಿಸಬೇಕು. ಜೊತೆಗೆ ಶಾಲಾ–ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಮನವಿ ಮಾಡಿದ್ದಾರೆ.
Delhi ಗಲಭೆ ಪ್ರಕರಣ | ಖಾಲಿದ್ ಸೈಫಿಗೆ ಮಧ್ಯಂತರ ಜಾಮೀನು
ಹೊಸದಿಲ್ಲಿ, ಜ. 30: 2020ರ ಈಶಾನ್ಯ ದಿಲ್ಲಿ ಗಲಭೆ ಪ್ರಕರಣದ ಆರೋಪಿಯಾಗಿರುವ ಖಾಲಿದ್ ಸೈಫಿಗೆ ದಿಲ್ಲಿ ನ್ಯಾಯಾಲಯ 13 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಸೇರಿದಂತೆ ಹಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಸೋದರಳಿಯನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಾಗೂ ಕುಟುಂಬದೊಂದಿಗೆ ರಮಝಾನ್ ಆಚರಿಸಲು ‘ಯುನೈಟೆಡ್ ಎಗೈನ್ಸ್ಟ್ ಹೇಟ್’ನ ಸ್ಥಾಪಕ ಸೈಫಿ ಅವರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ನಡೆಸಿದರು. ನ್ಯಾಯಾಲಯವು ಅವರಿಗೆ 2026ರ ಫೆಬ್ರವರಿ 6ರಿಂದ ಫೆಬ್ರವರಿ 13ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಜೊತೆಗೆ 20,000 ರೂ. ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಎರಡು ಶ್ಯೂರಿಟಿಗಳನ್ನು ಸಲ್ಲಿಸಲು ಸೂಚಿಸಿದೆ.
ಕಳವಳ ಹೆಚ್ಚಿಸಿದ ನಿಫಾ ವೈರಸ್ ಸೋಂಕು: ಏನಿದು? ರೋಗ ಲಕ್ಷಣಗಳೇನು?
ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಸೋಂಕು ಚೀನಾ ಹಾಗೂ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಳವಳ ಹೆಚ್ಚಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕಾರ್ಯಾಚರಣೆಗಳನ್ನು ಬಿಗಿಗೊಳಿಸಲು ಪ್ರೇರೇಪಿಸಿದೆ. 2025 ಡಿಸೆಂಬರ್ ನಿಂದ ಪಶ್ಚಿಮ ಬಂಗಾಳದಲ್ಲಿ ಎರಡು ದೃಢಪಟ್ಟ ನಿಫಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಭಾರತದ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಸಚಿವಾಲಯವು ಸೋಂಕಿತ ವ್ಯಕ್ತಿಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ದೃಢಪಟ್ಟ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 196 ಸಂಪರ್ಕಿತರಲ್ಲಿ ಯಾರಿಗೂ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಮತ್ತು ಎಲ್ಲರೂ ವೈರಸ್ ಗೆ ನಕಾರಾತ್ಮಕ ಫಲಿತಾಂಶ ಪಡೆದಿದ್ದಾರೆ. ಪರಿಸ್ಥಿತಿ ನಿರಂತರ ಮೇಲ್ವಿಚಾರಣೆಯಲ್ಲಿದ್ದು, ಅಗತ್ಯವಿರುವ ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ►ಏನಿದು ನಿಫಾ ವೈರಸ್? ನಿಫಾ ವೈರಸ್ (NiV) ಒಂದು ಪ್ರಾಣಿಜನ್ಯ ವೈರಸ್ ಆಗಿದ್ದು, ಇದು ಮುಖ್ಯವಾಗಿ ಬಾವಲಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಬಾವಲಿಗಳ ಲಾಲಾರಸ, ಮೂತ್ರ ಅಥವಾ ಮಲದ ಮೂಲಕ ವೈರಸ್ ಹರಡಬಹುದು. ಕಲುಷಿತ ಆಹಾರ ಉತ್ಪನ್ನಗಳ ಸೇವನೆಯಿಂದ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸಹ ಸೋಂಕು ಹರಡುವ ಸಾಧ್ಯತೆ ಇದೆ. ನಿಫಾ ವೈರಸ್ ಮಾರಕವಾಗಬಹುದಾದದು. ವೈರಸ್ ಸಾಮಾನ್ಯವಾಗಿ ಮಾನವ ದೇಹದಲ್ಲಿ ಐದು ರಿಂದ 14 ದಿನಗಳವರೆಗೆ ಇಂಕ್ಯುಬೇಷನ್ ಅವಧಿಯಲ್ಲಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಮಾನವರಲ್ಲಿ ತೀವ್ರ ಉಸಿರಾಟದ ತೊಂದರೆಗಳು ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ತೀವ್ರ ಪ್ರಕರಣಗಳಲ್ಲಿ ಜ್ವರ ಮತ್ತು ತಲೆನೋವಿನಿಂದ ಆರಂಭವಾಗಿ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ) ಉಂಟಾಗಬಹುದು ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಹಾಗೂ ನಾಗಾಸಾಕಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಖ್ವಾಝಾ ಅಬ್ಬಾಸ್ ತಿಳಿಸಿದ್ದಾರೆ. ಸೆಳವು ಮತ್ತು ಮಾನಸಿಕ ಗೊಂದಲವೂ ರೋಗ ಲಕ್ಷಣಗಳಾಗಿದ್ದು, ತೀವ್ರ ಪ್ರಕರಣಗಳಲ್ಲಿ ರೋಗಿಗಳು 24 ರಿಂದ 48 ಗಂಟೆಗಳೊಳಗೆ ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ನಿಫಾ ವೈರಸ್ ಸೋಂಕಿನ ಪ್ರಕರಣ ಮರಣ ಪ್ರಮಾಣ ಶೇಕಡಾ 40 ರಿಂದ 75ರ ನಡುವೆ ಇದೆ ಎಂದು ಅಬ್ಬಾಸ್ ಹೇಳಿದ್ದಾರೆ. ಆದಾಗ್ಯೂ, ವೈರಸ್ ನ ಮೂಲ ಸಂತಾನೋತ್ಪತ್ತಿ ಸಂಖ್ಯೆ (R₀) ಸಾಮಾನ್ಯವಾಗಿ ಒಂದಕ್ಕಿಂತ ಕಡಿಮೆ ಇರುವುದರಿಂದ, ಮಾನವನಿಂದ ಮಾನವನಿಗೆ ಸೀಮಿತವಾಗಿ ಮಾತ್ರ ಹರಡುತ್ತದೆ. ಇದರಿಂದ ವೈರಸ್ ವ್ಯಾಪಕ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ►ಹಿಂದಿನ ಪ್ರಕರಣಗಳು 1998ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಹಂದಿ ಸಾಕಾಣಿಕೆದಾರರು ಮತ್ತು ಕಟುಕರು ಸೋಂಕಿತ ಹಂದಿಗಳಿಂದ ನಿಫಾ ವೈರಸ್ ಗೆ ತುತ್ತಾಗಿದ್ದರು. ಕನಿಷ್ಠ 250 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 100ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದರು. 2014ರಲ್ಲಿ ಫಿಲಿಪೈನ್ಸ್ನಲ್ಲಿ ಕುದುರೆಗಳನ್ನು ಕೊಲ್ಲುವುದು ಹಾಗೂ ಸೋಂಕಿತ ಕುದುರೆ ಮಾಂಸ ಸೇವನೆಯೊಂದಿಗೆ ಸಂಬಂಧಿಸಿದ ನಿಫಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. 2001ರಿಂದ ದಕ್ಷಿಣ ಏಷ್ಯಾದಲ್ಲಿ, ವಿಶೇಷವಾಗಿ ಬಾಂಗ್ಲಾದೇಶ ಮತ್ತು ಭಾರತದಲ್ಲಿ ವಿರಳವಾದರೂ ಪುನರಾವರ್ತಿತ ನಿಫಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಬಾಂಗ್ಲಾದೇಶದಲ್ಲಿ ಕಲುಷಿತ ಕಚ್ಚಾ ತಾಳೆ ರಸ ಸೇವನೆ, ಸೋಂಕಿತ ವ್ಯಕ್ತಿಗಳ ಸ್ರವಿಸುವಿಕೆ ಹಾಗೂ ವಿಸರ್ಜನೆಗಳೊಂದಿಗೆ ನಿಕಟ ಸಂಪರ್ಕ, ಮತ್ತು ರೋಗಿಗಳನ್ನು ಆರೈಕೆ ಮಾಡುವ ಸಂದರ್ಭಗಳಲ್ಲಿ ಸೋಂಕು ಹರಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. WHO ಪ್ರಕಾರ, ಭಾರತದಲ್ಲಿ ಮೊದಲ ನಿಫಾ ಪ್ರಕರಣಗಳು 2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲಾಗಿದ್ದವು. 2001ರಲ್ಲಿ ರಾಜ್ಯದ ಸಿಲಿಗುರಿ ನಗರದಲ್ಲಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹರಡಿದ್ದು, ಅಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಶೇಕಡಾ 75ರಷ್ಟು ಆಸ್ಪತ್ರೆ ಸಿಬ್ಬಂದಿ ಅಥವಾ ಸಂದರ್ಶಕರಲ್ಲೇ ಕಂಡುಬಂದಿತ್ತು. 2018ರಲ್ಲಿ ಕೇರಳದಲ್ಲಿ ನಿಫಾ ಸೋಂಕಿನಿಂದ ಡಝನ್ ಗಟ್ಟಲೆ ಸಾವುಗಳು ವರದಿಯಾಗಿದ್ದು, ಈ ಪ್ರದೇಶವನ್ನು ಈಗ ವೈರಸ್ ಗೆ ಜಗತ್ತಿನ ಅತ್ಯಧಿಕ ಅಪಾಯ ಪ್ರದೇಶವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಸೋಂಕು ಹರಡುವ ನಿಖರ ಕಾರಣಗಳು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಕೆಲ ವೈದ್ಯಕೀಯ ತಜ್ಞರು ಬಾವಲಿಗಳ ಲಾಲಾರಸ ಅಥವಾ ಮೂತ್ರದಿಂದ ಕಲುಷಿತಗೊಂಡ ಹಣ್ಣುಗಳ ಸೇವನೆಯಿಂದ ಸೋಂಕು ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ, ವೈರಸ್ ಪ್ರಾಥಮಿಕವಾಗಿ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ; ಕೆಲ ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇದೆ. ಅಬ್ಬಾಸ್ ಅವರ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಕಂಡುಬಂದ ಸೋಂಕಿನ ಮೂಲ ಕುರಿತು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ದೃಢಪಟ್ಟ ಎರಡು ಪ್ರಕರಣಗಳೂ ಒಂದೇ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬಂದಿರುವುದರಿಂದ, ಸೋಂಕಿತ ಆದರೆ ರೋಗನಿರ್ಣಯವಾಗದ ರೋಗಿಯಿಂದ ಆಸ್ಪತ್ರೆಯೊಳಗಿನ ಹರಡುವಿಕೆಯ ಸಾಧ್ಯತೆಯನ್ನು ಇದು ಸೂಚಿಸುತ್ತದೆ. ►ಇತ್ತೀಚಿನ ಸಾಂಕ್ರಾಮಿಕವನ್ನು ಹೇಗೆ ನಿರ್ವಹಿಸಲಾಗುತ್ತಿದೆ? 2007ರ ನಂತರ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಮೊದಲ ನಿಫಾ ಪ್ರಕರಣಗಳಾಗಿರುವುದರಿಂದ ಇತ್ತೀಚಿನ ಸಾಂಕ್ರಾಮಿಕ ಮಹತ್ವ ಪಡೆದಿದೆ. ವರ್ಧಿತ ಕಣ್ಗಾವಲು, ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಕ್ಷೇತ್ರ ತನಿಖೆಗಳನ್ನು ಕೈಗೊಳ್ಳಲಾಗಿದ್ದು, ಸಕಾಲಿಕ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಡಿಸೆಂಬರ್ನಿಂದ ಇದುವರೆಗೆ ಎರಡಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ►ವೈರಸ್ ಗೆ ಲಸಿಕೆ ಇದೆಯೇ? ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಿಫಾ ವೈರಸ್ ಸೋಂಕಿಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಬಾಂಗ್ಲಾದೇಶದಲ್ಲಿ ನಿಫಾ ವೈರಸ್ ಲಸಿಕೆಯ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುತ್ತಿದ್ದು, 2025 ಡಿಸೆಂಬರ್ನಲ್ಲಿ ಎರಡನೇ ಹಂತದ ಪ್ರಯೋಗಗಳನ್ನು ಆರಂಭಿಸಿದೆ. ಅನುಮೋದಿತ ಲಸಿಕೆಗಳಿಲ್ಲದ ಹಿನ್ನೆಲೆಯಲ್ಲಿ, ವೈದ್ಯರು ರಿಬಾವಿರಿನ್ನಂತಹ ಆಂಟಿವೈರಲ್ ಔಷಧಗಳೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 1999ರಲ್ಲಿ ಮಲೇಷ್ಯಾದಲ್ಲಿ ಸಂಭವಿಸಿದ ನಿಫಾ ಸಾಂಕ್ರಾಮಿಕದ ವೇಳೆ ರಿಬಾವಿರಿನ್ ಅನ್ನು ಕಡಿಮೆ ಸಂಖ್ಯೆಯ ರೋಗಿಗಳಲ್ಲಿ ಬಳಸಲಾಗಿತ್ತು; ಆದರೆ ಅದರ ಪರಿಣಾಮಕಾರಿತ್ವ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಹೇಳಿವೆ. ಪ್ರಾಣಿಗಳ ಮೇಲೆ ನಡೆದ ಪ್ರಯೋಗಗಳಲ್ಲಿ ರೆಮ್ಡೆಸಿವಿರ್ ಔಷಧವು ನಿಫಾ ವೈರಸ್ ತಡೆಗೆ ಸಹಾಯಕವಾಗಿರುವುದು ಕಂಡುಬಂದಿದೆ. 2023ರಲ್ಲಿ ಕೇರಳದಲ್ಲಿ ನಿಫಾ ಸೋಂಕಿಗೆ ರೆಮ್ಡೆಸಿವಿರ್ ಬಳಸಲಾಗಿದ್ದು, ಪ್ರಕರಣ ಮರಣ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ►ನಿಫಾ ವೈರಸ್ಗಾಗಿ ತಪಾಸಣೆ ಕ್ರಮಗಳು ಥೈಲ್ಯಾಂಡ್, ಇಂಡೋನೇಷ್ಯಾ, ನೇಪಾಳ ಮತ್ತು ಮಲೇಷ್ಯಾ ದೇಶಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿವೆ. ನಿಫಾ ಪೀಡಿತ ದೇಶಗಳಿಂದ ಬರುವ ವಿಮಾನಗಳಿಗೆ ವಿಶೇಷ ಪಾರ್ಕಿಂಗ್ ಬೇಗಳನ್ನು ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ವಲಸೆಗೆ ಮುನ್ನ ಆರೋಗ್ಯ ಘೋಷಣೆ ನಮೂನೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಥೈಲ್ಯಾಂಡ್ ಆರೋಗ್ಯ ಸಚಿವಾಲಯ ತಿಳಿಸಿದೆ. ಬ್ಯಾಂಕಾಕ್ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಜ್ವರ ಹಾಗೂ ಇತರ ಲಕ್ಷಣಗಳ ಪತ್ತೆಗೆ ಥರ್ಮಲ್ ಸ್ಕ್ಯಾನರ್ಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿಯ ಕ್ರಮಗಳನ್ನು ಮಲೇಷ್ಯಾ, ಇಂಡೋನೇಷ್ಯಾ ಮತ್ತು ನೇಪಾಳವೂ ಜಾರಿಗೊಳಿಸಿವೆ. ಪಶ್ಚಿಮ ಬಂಗಾಳಕ್ಕೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮ್ಯಾನ್ಮಾರ್ ಸಲಹೆ ನೀಡಿದ್ದು, ಚೀನಾ ತನ್ನ ಗಡಿ ಪ್ರದೇಶಗಳಲ್ಲಿ ರೋಗ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಿದೆ. ►ವೈರಸ್ ಹರಡುವಿಕೆಯನ್ನು ತಡೆಯುವ ಮಾರ್ಗಗಳು ವಿಮಾನ ನಿಲ್ದಾಣಗಳ ತಪಾಸಣೆಯ ಜೊತೆಗೆ, ಉತ್ತಮ ನೈರ್ಮಲ್ಯ, ಸರಿಯಾದ ಗಾಳಿಚಲನೆ, ಜನಸಂದಣಿಯನ್ನು ತಪ್ಪಿಸುವುದು, ಅನಾರೋಗ್ಯದಲ್ಲಿದ್ದಾಗ ಮನೆಯಲ್ಲಿಯೇ ಇರುವುದು, ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ. WHO ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಖರ್ಜೂರದ ರಸ ಮತ್ತು ಇತರ ತಾಜಾ ಆಹಾರಗಳಿಗೆ ಬಾವಲಿಗಳ ಪ್ರವೇಶವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ತಿಳಿಸಿದೆ. ರಸ ಸಂಗ್ರಹಣಾ ಸ್ಥಳಗಳಲ್ಲಿ ರಕ್ಷಣಾತ್ಮಕ ಹೊದಿಕೆಗಳನ್ನು ಬಳಸುವುದು, ಹೊಸದಾಗಿ ಸಂಗ್ರಹಿಸಿದ ಖರ್ಜೂರದ ರಸವನ್ನು ಕುದಿಸುವುದು, ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯುವುದು, ಬಾವಲಿಗಳು ಕಚ್ಚಿದ ಗುರುತು ಇರುವ ಹಣ್ಣುಗಳನ್ನು ಸೇವಿಸದಿರುವುದು ಅಗತ್ಯ ಎಂದು WHO ಸಲಹೆ ನೀಡಿದೆ. ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ಕೊಲ್ಲುವ ಸಂದರ್ಭದಲ್ಲಿ ಕೈಗವಸುಗಳು ಹಾಗೂ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಬೇಕು. ಆರೋಗ್ಯ ವ್ಯವಸ್ಥೆಗಳಲ್ಲಿ ವೈರಸ್ ಹರಡುವಿಕೆಯನ್ನು ತಡೆಯಲು ಪ್ರಮಾಣಿತ ಮುನ್ನೆಚ್ಚರಿಕೆಗಳ ಜೊತೆಗೆ ಸಂಪರ್ಕ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಫಾ ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಅಸುರಕ್ಷಿತ ದೈಹಿಕ ಸಂಪರ್ಕವನ್ನು ತಪ್ಪಿಸಬೇಕು ಹಾಗೂ ರೋಗಿಗಳನ್ನು ಭೇಟಿ ಮಾಡಿದ ನಂತರ ಅಥವಾ ಆರೈಕೆ ಮಾಡಿದ ಬಳಿಕ ನಿಯಮಿತವಾಗಿ ಕೈ ತೊಳೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
ಕಲಬುರಗಿ | ಆರೆಸ್ಸೆಸ್ ಇಡೀ ಮಾನವಕುಲದ ವಿರೋಧಿ : ಚಿಂತಕ ಆರ್.ಕೆ.ಹುಡಗಿ
ʼಸಹಬಾಳ್ವೆಯ ಸಂಚುಗಾರಕ್ಕೆ 100 ವರ್ಷʼ ವಿಚಾರ ಸಂಕಿರಣ
ವೆನೆಝುವೆಲಾ ಮೇಲಿನ ನಿರ್ಬಂಧ ಸಡಿಲಿಸಿದ ಟ್ರಂಪ್: ಅಮೆರಿಕಾ ಸಂಸ್ಥೆಗಳಿಗೆ ತೈಲ ಖರೀದಿಗೆ ಅವಕಾಶ
ವಾಷಿಂಗ್ಟನ್, ಜ.30: ವೆನೆಝುವೆಲಾ ತೈಲ ಉದ್ಯಮದ ಮೇಲಿನ ಪ್ರಮುಖ ನಿರ್ಬಂಧವನ್ನು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಸಡಿಲಿಸಿದ್ದು ಅಮೆರಿಕನ್ ಸಂಸ್ಥೆಗಳು ವೆನೆಝುವೆಲಾದ ಕಚ್ಛಾ ತೈಲವನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ಸಂಸ್ಕರಿಸಲು ಅವಕಾಶ ನೀಡಿದೆ. ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣದ ಕಚೇರಿಯು ನೀಡುವ ಲೈಸೆನ್ಸ್ನಲ್ಲಿ ಹೊಸ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿಲ್ಲ. ಇದಕ್ಕೆ ಪ್ರತ್ಯೇಕ ಅನುಮೋದನೆ ಬೇಕಾಗುತ್ತದೆ. ಚೀನಾ, ಇರಾನ್, ಉತ್ತರ ಕೊರಿಯಾ, ಕ್ಯೂಬಾ ಮತ್ತು ರಶ್ಯ ರಾಷ್ಟ್ರಗಳ ವ್ಯಕ್ತಿಗಳು ಮತ್ತು ಸಂಸ್ಥೆಗಳ ಒಳಗೊಳ್ಳುವಿಕೆಯನ್ನು ನಿರ್ಬಂಧಿಸಲಾಗಿದೆ. 2019ರಲ್ಲಿ ವೆನೆಝುವೆಲಾದ ಇಂಧನ ಕ್ಷೇತ್ರದ ಮೇಲೆ ಅಮೆರಿಕಾ ಕಠಿಣ ನಿರ್ಬಂಧ ವಿಧಿಸಿದ ನಂತರ ನಿರ್ಬಂಧ ಸಡಿಲಿಕೆಗೆ ಸಂಬಂಧಿಸಿದ ಪ್ರಮುಖ ಕ್ರಮ ಇದಾಗಿದೆ. ಜನವರಿ 3ರಂದು ಅಮೆರಿಕಾ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ವೆನೆಝುವೆಲಾ ಅಧ್ಯಕ್ಷರನ್ನು ಸೆರೆ ಹಿಡಿದ ನಂತರ ವೆನೆಝುವೆಲಾದ ತೈಲ ಆದಾಯವನ್ನು ಅಮೆರಿಕಾ ನಿಯಂತ್ರಿಸುತ್ತದೆ ಎಂದು ಟ್ರಂಪ್ ಘೋಷಿಸಿದ್ದರು.
ಲಕ್ನೋ, ಜ. 30: ನಿರ್ದಿಷ್ಟ ಆದೇಶಗಳನ್ನು ಜಾರಿಗೊಳಿಸುವಂತೆ ನ್ಯಾಯಾಧೀಶರ ಮೇಲೆ, ನಿರ್ದಿಷ್ಟವಾಗಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಸಿಜೆಎಂ) ಮೇಲೆ ಉತ್ತರಪ್ರದೇಶ ಪೊಲೀಸರು ನಿರಂತರ ಒತ್ತಡ ಹೇರುತ್ತಿದ್ದಾರೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ಅಭಿಪ್ರಾಯಿಸಿದೆ. ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರ ಏಕಸದಸ್ಯ ಪೀಠ, ಉತ್ತರಪ್ರದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ರಾಜ್ಯದ ಪರವಾಗಿ ಹಾಜರಾದ ವಕೀಲರಿಗೆ ತಿಳಿಸಿದರು. ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರ ವಿಚಾರಣೆ ಸಂದರ್ಭ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಹಾಗೂ ಅಂತಹ ಘಟನೆಯನ್ನು ಗುಂಡಿನ ಚಕಮಕಿ ಎಂದು ಬಿಂಬಿಸುವ ಪ್ರವೃತ್ತಿಯನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮವನ್ನು ವಿವರಿಸಲು ವೀಡಿಯೊ ಕಾನ್ಪರೆನ್ಸ್ ಮೂಲಕ ಹಾಜರಾಗಲು ಈ ಅಧಿಕಾರಿಗಳಿಗೆ ಸೂಚಿಸಿದ್ದರು. ವಿಚಾರಣೆ ಸಂದರ್ಭ ಪೊಲೀಸ್ ಅಧಿಕಾರಿಗಳು, ಮುಖ್ಯವಾಗಿ ಸೇವೆಗೆ ಹೊಸದಾಗಿ ಸೇರ್ಪಡೆಯಾದ ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರ ಮೇಲೆ ಒತ್ತಡ ಹೇರುತ್ತಾರೆ. ಜಿಲ್ಲಾ ಮಟ್ಟದ ವಿಚಾರಣಾ ನ್ಯಾಯಾಲಯಗಳಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡ ಹೇರುವುದು ಹೆಚ್ಚಾಗಿ ಕಂಡು ಬರುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಕೆಲವೊಮ್ಮೆ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಕೊಠಡಿಗೆ ಪ್ರವೇಶಿಸಿ ನ್ಯಾಯಾಧೀಶರಿಗೆ ಒತ್ತಡ ಹೇರುವ ಬಗ್ಗೆ ಬಾರ್ ಅಸೋಸಿಯೇಷನ್ಗಳ ಮುಖ್ಯಸ್ಥರಿಂದ ಮಾಹಿತಿ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಅಮೆರಿಕನ್ ದಾಳಿ ಭೀತಿ| ಸಾವಿರ ಡ್ರೋನ್ಗಳನ್ನು ನಿಯೋಜಿಸಿದ ಇರಾನ್: ವರದಿ
ಟೆಹ್ರಾನ್, ಜ.30: ಸಂಭಾವ್ಯ ಅಮೆರಿಕನ್ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ಇರಾನ್ ತನ್ನ ಸಶಸ್ತ್ರ ಪಡೆಗಳಾದ್ಯಂತ ಸರಿಸುಮಾರು 1000 ಹೊಸ ಕಾರ್ಯತಂತ್ರದ ಡ್ರೋನ್ಗಳನ್ನು ನಿಯೋಜಿಸಿದೆ. ಮಿಲಿಟರಿ ರಹಸ್ಯಗಳನ್ನು ಕಾಪಾಡುವ ಸಲುವಾಗಿ ಡ್ರೋನ್ ನಿಯೋಜನೆಯ ಯಾವುದೇ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಇರಾನ್ನ ಸರ್ಕಾರಿ ಸ್ವಾಮ್ಯದ `ತಸ್ನಿಮ್' ಸುದ್ದಿಸಂಸ್ಥೆ ವರದಿ ಮಾಡಿದೆ. ವಿಮಾನವಾಹಕ ಯುದ್ದನೌಕೆ ಅಬ್ರಹಾಂ ಲಿಂಕನ್ ನೇತೃತ್ವದ ಸಮರ ನೌಕೆಗಳ ಪಡೆಯು ಇರಾನಿನ ಮೇಲೆ ಕಳೆದ ಜೂನ್ನಲ್ಲಿ ನಡೆಸಿದ ಕಾರ್ಯಾಚರಣೆಗಿಂತಲೂ ಭೀಕರ ದಾಳಿ ನಡೆಸಲು ಸಜ್ಜಾಗಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹಿನ್ನೆಲೆಯಲ್ಲಿ ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿ ಹೇಳಿದೆ.
ಗುಡ್ನ್ಯೂಸ್: 2 ಸಾವಿರ ಹುದ್ದೆ ಭರ್ತಿಗೆ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ; ಯಾವೆಲ್ಲಾ ಹುದ್ದೆ?
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 2 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜು ಮತ್ತು ಯುವಿಸಿಇ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಗುವಾಹಟಿ: ಬಾಂಗ್ಲಾದೇಶದ ನುಸುಳುಕೋರರನ್ನು ಒಬ್ಬೊಬ್ಬರಂತೆ ಗುರುತಿಸಲು ಸತತ ಮೂರನೇ ಅವಧಿಗೆ ಬಿಜೆಪಿಗೆ ಮತ ನೀಡಿ ಎಂದು ಚುನಾವಣಾ ರಾಜ್ಯವಾದ ಅಸ್ಸಾಂನ ಮತದಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. 2014ರಿಂದ ಹಾಗೂ ಅದಕ್ಕೂ ಮುಂಚಿನಿಂದಲೂ ಅಮಿತ್ ಶಾ ಅವರು ಅಸ್ಸಾಂ ಜನತೆಗೆ ನೀಡುತ್ತಾ ಬಂದಿರುವ ಚುನಾವಣಾ ಭರವಸೆಯಿದು. ಪೂರ್ವ ಅಸ್ಸಾಂನಲ್ಲಿರುವ ದಿಬ್ರುಗಢ ಹಾಗೂ ನಂತರ ಉತ್ತರ ಅಸ್ಸಾಂನ ಧೇಮಜಿಯಲ್ಲಿ ಆಯೋಜನೆಗೊಂಡಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅಮಿತ್ ಶಾ, “ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನುಸುಳುವಿಕೆಯನ್ನು ತಡೆಗಟ್ಟಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಈಗಾಗಲೇ ರಾಜ್ಯದೊಳಗೆ ನುಸುಳಿರುವ ಮತ್ತು ಭೌಗೋಳಿಕ ಬೆದರಿಕೆ ಒಡ್ಡುತ್ತಿರುವ ನುಸುಳುಕೋರರನ್ನು ನಾವು ಗುರುತಿಸುತ್ತೇವೆ. ಬಿಜೆಪಿ ಸರಕಾರವನ್ನು ಮೂರನೇ ಬಾರಿಗೆ ಚುನಾಯಿಸಿ. ಈಗಾಗಲೇ ರಾಜ್ಯದಲ್ಲಿ ನೆಲೆಸಿರುವ ಯಾವುದೇ ನುಸುಳುಕೋರನನ್ನೂ ನಾವು ಬಿಡುವುದಿಲ್ಲ. ಒಬ್ಬೊಬ್ಬರನ್ನೇ ಗುರುತಿಸಿ, ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ. ಈ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ” ಎಂದು ಘೋಷಿಸಿದರು. ದಿಬ್ರುಗಢದಲ್ಲಿ ಎರಡನೇ ವಿಧಾನಸಭೆ ಕಟ್ಟಡಕ್ಕೆ ಅಡಿಗಲ್ಲು ಹಾಕಿದ ಅಮಿತ್ ಶಾ, ಧೇಮಜಿಯಲ್ಲಿ ಆಯೋಜನೆಗೊಂಡಿದ್ದ ಅಸ್ಸಾಂನ ಪ್ರಮುಖ ಆದಿವಾಸಿ ಸಮುದಾಯವಾದ ಮಿಸಿಂಗ್ ಸಮುದಾಯದ 10ನೇ ಮಿಸಿಂಗ್ ಯುವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. “ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷವು ಅಸ್ಸಾಂನಲ್ಲಿ ನುಸುಳುವಿಕೆಗೆ ಅವಕಾಶ ನೀಡಿತು ಮತ್ತು ಅಧಿಕಾರದಲ್ಲಿರಲು ಅವರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿತು. ಆದರೆ ಇಂದು ನಮ್ಮ ಸರಕಾರವು 1.26 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಹಾಗೂ ಸರಕಾರಿ ಭೂಮಿಯನ್ನು ಬಾಂಗ್ಲಾದೇಶದ ನುಸುಳುಕೋರರಿಂದ ಮುಕ್ತಗೊಳಿಸಿದೆ” ಎಂದು, ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ತೆರವು ಕಾರ್ಯಾಚರಣೆಯನ್ನು ಉಲ್ಲೇಖಿಸಿ ಹೇಳಿದರು. ಅವರನ್ನು ಬಿಜೆಪಿ ನುಸುಳುಕೋರರು ಎಂದು ಪರಿಗಣಿಸಿದೆ. “ನುಸುಳುಕೋರರು ಶ್ರೀಮಂತ ಸಂಕರ್ ದೇವ್ ಅವರ ಜನ್ಮಭೂಮಿ ಹಾಗೂ ಕಾಝಿರಂಗ ರಾಷ್ಟ್ರೀಯ ಉದ್ಯಾನವನವನ್ನೂ ಬಿಟ್ಟಿಲ್ಲ. ಅವರು ಘೇಂಡಾಮೃಗಗಳನ್ನೂ ಗುರಿಯಾಗಿಸಿಕೊಂಡು ಅವುಗಳನ್ನು ಹತ್ಯೆಗೈದಿದ್ದಾರೆ. ಭೌಗೋಳಿಕ ಬೆದರಿಕೆ ನಿಲ್ಲಲೇಬೇಕು. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಅಸ್ಸಾಂ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.
ಕಲಬುರಗಿ | ಫೆ.1ರಂದು ಸಂಕ್ರಮಣ ಕಲಾ ಸಂವಾದ : ಬಸವರಾಜ ಜಾನೆ
ಕಲಬುರಗಿ : ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಆಶ್ರಯದಲ್ಲಿ ನಗರದ ಕನ್ನಡ ಭವನ ಸುವರ್ಣ ಸಭಾ ಭವನದಲ್ಲಿ ಫೆ.1 ರಂದು ಬೆಳಿಗ್ಗೆ 10.30 ಗಂಟೆಗೆ ಸಂಕ್ರಮಣ ಕಲಾ ಸಂವಾದ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಸದಸ್ಯ ಸಂಚಾಲಕ ಬಸವರಾಜ ಜಾನೆ ತಿಳಿಸಿದ್ದಾರೆ. ಗುಲ್ಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ ಉದ್ಘಾಟಿಸಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ದಿ ಆರ್ಟ ಇಂಟಿಗ್ರೇಷನ್ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಎಂ.ಎಚ್.ಬೆಳಮಗಿ, ಪತ್ರಕರ್ತ ಸಂಗಮನಾಥ ರೇವತಗಾಂವ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಯುಕೆ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಅವರು ವಚನಗಳಲ್ಲಿ ದೃಶ್ಯಕಲೆಯ ಪರಿಕಲ್ಪನೆ ಹಾಗೂ ಬಾಗಲಕೋಟೆ ಚಿತ್ರಕಲಾಶಿಕ್ಷಕ ಲಕ್ಷ್ಮಣ ಲಕ್ಷ್ಮಣ ಬದಾಮಿ ಅವರು ಸಮಕಾಲಿನ ಕಲೆ ಮತ್ತು ಕಾವ್ಯ ವಿಷಯ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಗೌರವ ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ ಉಪಸ್ಥಿತರಿರಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಸಂವಾದ ಕಾರ್ಯಕ್ರಮ ನಂತರ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ ಅವರು ಕಲಾವಿದರೊಂದಿಗೆ ಕಲಾಕ್ಷೇತ್ರ ಹಾಗೂ ವಿಭಾಗ ಮಟ್ಟದ ಕಲಾಮೇಳ ಆಯೋಜಿಸುವ ಕುರಿತು ಚರ್ಚೆ ಮಾಡಲಿದ್ದಾರೆ. ನಗರದ ಸಮಸ್ತ ಕಲಾವಿದರು ಚಿತ್ರಕಲಾ ಶಿಕ್ಷಕ-ಶಿಕ್ಷಕಿಯರು, ಕಲಾಸಕ್ತರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಚಾಲಕ ಬಸವರಾಜ ಜಾನೆ ತಿಳಿಸಿದ್ದಾರೆ.
ಟಿ-20 ವಿಶ್ವಕಪ್| ಅಮೆರಿಕದ ಕ್ರಿಕೆಟ್ ತಂಡ ಪ್ರಕಟ: ಮೊನಂಕ್ ಪಟೇಲ್ ನಾಯಕ
ವಾಶಿಂಗ್ಟನ್, ಜ.30: ಮುಂಬರುವ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ಗಾಗಿ ಅಮೆರಿಕ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಮೊನಂಕ್ ಪಟೇಲ್ ಅಮೆರಿಕ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 2024ರಲ್ಲಿ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡಿದ 10 ಪ್ರಮುಖ ಆಟಗಾರರು ಈಗಿನ ತಂಡದಲ್ಲಿದ್ದಾರೆ. 2024ರ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಗೆಲುವು ಸೇರಿದಂತೆ ಸೂಪರ್-8 ಹಂತದಲ್ಲಿ ನೀಡಿದ್ದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕಪ್ಗೆ ಅಮೆರಿಕ ತಂಡ ನೇರ ಅರ್ಹತೆ ಪಡೆದಿತ್ತು. ಎರಡನೇ ಬಾರಿ ಟಿ-20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ನಾಯಕ ಪಟೇಲ್ರಲ್ಲದೆ, ಜೆಸ್ಸಿ ಸಿಂಗ್, ಆಂಡ್ರೀಸ್ ಗೌಸ್, ಮಿಲಿಂದ ಕುಮಾರ್, ಶಯನ್ ಜಹಾಂಗೀರ್, ಹರ್ಮೀತ್ ಸಿಂಗ್, ನೋಸ್ತುಶ್ ಕೆಂಜಿಗೆ, , ಶಾಡ್ಲಿ ವ್ಯಾನ್ ಶಾಲ್ಕ್ವಿಕ್,, ಸೌರಭ್ ನೇತ್ರಾವಲ್ಕರ್ ಹಾಗೂ ಅಲಿ ಖಾನ್ ಕಳೆದ ಆವೃತ್ತಿಯ ವಿಶ್ವಕಪ್ನಲ್ಲೂ ಭಾಗವಹಿಸಿದ್ದರು. ಹರ್ಮೀತ್, ಮಿಲಿಂದ್ ಹಾಗೂ ಸೌರಭ್ಗೆ ಭಾರತದಲ್ಲಿ ವಯೋಮಿತಿ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅನುಭವವಿದೆ. ಇದರಿಂದ ಅಮೆರಿಕ ತಂಡಕ್ಕೆ ಲಾಭವಾಗಬಹುದು. 2024ರ ಆವೃತ್ತಿಯ ವಿಶ್ವಕಪ್ನಲ್ಲಿ ವಿಕೆಟ್ಕೀಪರ್-ಬ್ಯಾಟರ್ ಗೌಸ್ ಆರು ಇನಿಂಗ್ಸ್ಗಳಲ್ಲಿ 219 ರನ್ ಗಳಿಸಿ ಅಮೆರಿಕದ ಪರ ಸರ್ವಾಧಿಕ ಸ್ಕೋರ್ ಗಳಿಸಿದ್ದರು. ಸೌರಭ್ ನೇತ್ರಾವಲ್ಕರ್ ಆರು ವಿಕೆಟ್ಗಳನ್ನು ಉರುಳಿಸಿದ್ದರು. ಶುಭಮನ್ ರಂಜನೆ ಐಸಿಸಿ ಟೂರ್ನಿಯಲ್ಲಿ ತನ್ನ ಚೊಚ್ಚಲ ಟಿ-20 ಪಂದ್ಯವನ್ನಾಡಲಿದ್ದಾರೆ. ಮುಹಮ್ಮದ್ ಮುಹ್ಸಿನ್ ಹಾಗೂ ಶೆಹಾನ್ ಜಯಸೂರ್ಯ ಅಮೆರಿಕದ ಪರ ಮೊದಲ ಅಂತರ್ರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ. ಪುಣೆ ಮೂಲದ ಶುಭಮ್ ಅಮೆರಿಕದ ಪರ ನಾಲ್ಕು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಅಮೆರಿಕ ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಹಾಗೂ ನಮೀಬಿಯಾ ತಂಡಗಳನ್ನು ಎದುರಿಸಲಿದೆ. ಅಮೆರಿಕ ತಂಡವು ಫೆ.7ರಂದು ಮುಂಬೈನಲ್ಲಿ ಭಾರತ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಅಮೆರಿಕದ ವಿಶ್ವಕಪ್ ತಂಡ: ಮೊನಂಕ್ ಪಟೇಲ್(ನಾಯಕ), ಜೆಸ್ಸಿ ಸಿಂಗ್,ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೇಜ ಮುಕ್ಕಮಲಾ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತುಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸೌರಭ್ ನೇತ್ರಾವಲ್ಕರ್, ಅಲಿ ಖಾನ್, ಮುಹಮ್ಮದ್ ಮುಹ್ಸಿನ್, ಶುಭಮ್ ರಂಜನೆ.
ರಣಜಿ| ಪಂಜಾಬ್ ವಿರುದ್ಧ ಕರ್ನಾಟಕಕ್ಕೆ 255/6: ಕೆ.ಎಲ್.ರಾಹುಲ್ ಅರ್ಧಶತಕ
ಮೊಹಾಲಿ, ಜ.30: ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ (59 ರನ್, 87 ಎಸೆತ, 9 ಬೌಂಡರಿ)ಹಾಗೂ ಮಯಾಂಕ್ ಅಗರ್ವಾಲ್(46 ರನ್, 64 ಎಸೆತ, 6 ಬೌಂಡರಿ)ಮೊದಲ ವಿಕೆಟ್ಗೆ 102 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ ಕರ್ನಾಟಕ ಕ್ರಿಕೆಟ್ ತಂಡವು ಆತಿಥೇಯ ಪಂಜಾಬ್ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದೆ. ಶುಕ್ರವಾರ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 255 ರನ್ಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿದೆ. ಆಲ್ರೌಂಡರ್ ಶ್ರೇಯಸ್ ಗೋಪಾಲ್(ಔಟಾಗದೆ 42 ರನ್, 124 ಎಸೆತ, 3 ಬೌಂಡರಿ)ಹಾಗೂ ಬೌಲರ್ ವಿದ್ಯಾಧರ ಪಾಟೀಲ್(ಔಟಾಗದೆ 23, 56 ಎಸೆತ, 4 ಬೌಂಡರಿ)ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ಏಳನೇ ವಿಕೆಟ್ಗೆ 42 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿತು. 9 ವಿಕೆಟ್ಗಳ ನಷ್ಟಕ್ಕೆ 303 ರನ್ನಿಂದ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡವು ನಿನ್ನೆಯ ಮೊತ್ತಕ್ಕೆ ಕೇವಲ ಆರು ರನ್ ಸೇರಿಸಿ ಆಲೌಟಾಯಿತು. ಔಟಾಗದೆ 77 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಎಮನ್ಜೋತ್ ಸಿಂಗ್ 83 ರನ್ ಗಳಿಸಿ ಕರ್ನಾಟಕದ ಯಶಸ್ವಿ ಬೌಲರ್ ವಿದ್ಯಾಧರ ಪಾಟೀಲ್ಗೆ(4-52) ವಿಕೆಟ್ ಒಪ್ಪಿಸಿದರು. ಶ್ರೇಯಸ್ ಗೋಪಾಲ್ (3-48)ಹಾಗೂ ಮುಹ್ಸಿನ್ ಖಾನ್(2-85)ಐದು ವಿಕೆಟ್ಗಳನ್ನು ಹಂಚಿಕೊಂಡರು. ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಪರ 21.3 ಓವರ್ಗಳಲ್ಲಿ 102 ರನ್ ಕಲೆ ಹಾಕಿದ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಅಗರ್ವಾಲ್, ರಾಹುಲ್ ಹಾಗೂ ನಾಯಕ ದೇವದತ್ತ ಪಡಿಕ್ಕಲ್(9 ರನ್)ಔಟಾದಾಗ ಕರ್ನಾಟಕ 137 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಆರ್. ಸ್ಮರಣ್(9 ರನ್),ಕೆ.ವಿ. ಅನೀಶ್(32 ರನ್, 75 ಎಸೆತ)ಹಾಗೂ ಕೃತಿಕ್ ಕೃಷ್ಣ(28 ರನ್, 83 ಎಸೆತ)ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪಂಜಾಬ್ ತಂಡದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಹರ್ಪ್ರೀತ್ ಬ್ರಾರ್(4-101)ಯಶಸ್ವಿ ಪ್ರದರ್ಶನ ನೀಡಿದರು. ಸುಖದೀಪ್ ಸಿಂಗ್(1-22)ಹಾಗೂ ಎಮನ್ಜೋತ್ ಸಿಂಗ್(1-55)ತಲಾ ಒಂದು ವಿಕೆಟ್ಗಳನ್ನು ಕಬಳಿಸಿದರು.
ಉಡುಪಿ ಜಿಲ್ಲಾ ಸರಕಾರಿ ವಕೀಲರಿಂದ ಕರ್ತವ್ಯಲೋಪ; ವಿಚಾರಣೆಯ ಬಳಿಕ ಸೂಕ್ತ ಕ್ರಮ: ಸರಕಾರದ ಹೇಳಿಕೆ
ಉಡುಪಿ, ಜ.30: 2021-23ನೇ ಸಾಲಿನಲ್ಲಿ ಉಡುಪಿಯ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸುತಿದ್ದ ಅವಧಿಯಲ್ಲಿ ನ್ಯಾಯಾಲಯದ ತನಿಖೆಯಲ್ಲಿರುವ ವಿವಿಧ ಪ್ರಕರಮಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸದಿರುವುದ ರಿಂದ ಸರಕಾರಕ್ಕೆ ಹಿನ್ನಡೆಯಾಗಿ ಕರ್ತವ್ಯಲೋಪ ಎಸಗಿರುವ ಕುರಿತು ಸ್ವೀಕೃತ ವಾದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತಿದ್ದು, ವರದಿ ಸ್ವೀಕೃತವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಧಾನಪರಿಷತ್ನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿದ ಕಾನೂನು ಸಚಿವರು, ಈ ಬಗ್ಗೆ ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದರು. ದೂರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸರಕಾರಿ ವಕೀಲರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣಾ ವರದಿ ಸ್ವೀಕೃತವಾದ ಬಳಿಕ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು. ಎ.ಸಂತೋಷ್ ಹೆಬ್ಬಾರ್ ಅವರು 2021-23ರ ಅವಧಿಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ನ್ಯಾಯಾಲಯಗಳಲ್ಲಿ ತನಿಖಾ ಹಂತದಲ್ಲಿ ಇದ್ದ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸದೇ ಇರುವ ಕುರಿತು ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿ ಗಮನ ಸೆಳೆದಿದ್ದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಸಂತೋಷ್ ಹೆಬ್ಬಾರ್ ಅವರು ಎಷ್ಟು ಪ್ರಕರಣಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಿಲ್ಲ ಎಂಬುದನ್ನು ಹಾಗೂ ಇದರಿಂದ ಸರಕಾರಕ್ಕೆ ಉಂಟಾಗಿರುವ ನಷ್ಟದ ಕುರಿತು ವಿಚಾರಣೆ ನಡೆಸಿ ವಿಚಾರಣಾ ವರದಿಯಲ್ಲಿ ಸಲ್ಲಿಸುವಂತೆ ಇದೇ ಜ.22ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ಜಿಲ್ಲಾ ಸರಕಾರಿ ವಕೀಲರು ಹಾಗೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಜ.22ರಂದೇ ಬರೆದ ಪತ್ರದಲ್ಲಿ ಕೋರಲಾಗಿದೆ. ದೂರಿಗೆ ಸಂಬಂಧಿಸಿದಂತೆ ವಿಚಾರಣಾ ವರದಿ, ಮಾಹಿತಿ ಸ್ವೀಕೃತವಾದ ಬಳಿಕ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಹಿಂದಿನ ಸರಕಾರಿ ವಕೀಲರಿಂದ ಕರ್ತವ್ಯಲೋಪದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವರು, ಐವನ್ ಡಿಸೋಜರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಐಟಿ ದಾಳಿ ಸಂದರ್ಭದಲ್ಲಿ ಕಾನ್ಫಿಡೆನ್ಸ್ ಗ್ರೂಪ್ ಮಾಲೀಕ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿರುವುದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಘಟನೆಗೆ ಕೇಂದ್ರ ಸರ್ಕಾರದ ತೆರಿಗೆ ಭಯೋತ್ಪಾದನೆ ಕಾರಣ ಎಂದಿರುವ ಯೂತ್ ಕಾಂಗ್ರೆಸ್, ಕರ್ನಾಟಕದ ಉದ್ಯಮಿಗಳಿಗೆ ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಐಟಿ-ಇಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ. ಅಲ್ಲದೇ ಗುಜರಾತ್ ಉದ್ಯಮಗಳಿಗೆ ಕೋಟಿ ಕೋಟಿ ಹಣ ಲೂಟಿ ಹೊಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದೂ ಯೂತ್ ಕಾಂಗ್ರೆಸ್ ಹರಿಹಾಯ್ದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ವೆಸ್ಟ್ಇಂಡೀಸ್ ವಿರುದ್ಧ 43 ಎಸೆತಗಳಲ್ಲಿ ಟಿ-20 ಶತಕ| ಹಲವು ದಾಖಲೆಗಳನ್ನು ಮುರಿದ ಕ್ವಿಂಟನ್ ಡಿಕಾಕ್
ಕೇಪ್ಟೌನ್, ಜ.30: ಸೆಂಚೂರಿಯನ್ನಲ್ಲಿ ನಡೆದ ವೆಸ್ಟ್ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಮಿಂಚಿನ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ತನ್ನ ದೇಶದ ಸಾರ್ವಕಾಲಿಕ ಟಿ-20 ರನ್ ದಾಖಲೆಯನ್ನು ಮುರಿದರು. ಟ್ವೆಂಟಿ-20 ವಿಶ್ವಕಪ್ಗೆ ದಿನಗಣನೆ ಆರಂಭವಾಗಿರುವಾಗಲೇ ಐತಿಹಾಸಿಕ ಸಾಧನೆ ಮಾಡಿದರು. ಗುರುವಾರ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ವಿಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ಡಿಕಾಕ್ ಈ ಮಹತ್ವದ ಮೈಲಿಗಲ್ಲು ತಲುಪಿದರು.ಡಿಕಾಕ್ ಅವರ ಈ ಶತಕವು ದಕ್ಷಿಣ ಆಫ್ರಿಕಾ ತಂಡಕ್ಕೆ ಏಳು ವಿಕೆಟ್ಗಳ ಗೆಲುವು ತಂದುಕೊಟ್ಟಿದೆ. ಡಿಕಾಕ್ ಜಾಗತಿಕ ಪಂದ್ಯಾವಳಿಗಿಂತ ಮೊದಲು ಎದುರಾಳಿ ತಂಡಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು. 430 ಪಂದ್ಯಗಳಲ್ಲಿ 31.46ರ ಸರಾಸರಿಯಲ್ಲಿ 139.10ರ ಸ್ಟ್ರೈಕ್ರೇಟ್ನಲ್ಲಿ 12,113 ರನ್ ಗಳಿಸಿರುವ ಡಿಕಾಕ್ ಸದ್ಯ ದಕ್ಷಿಣ ಆಫ್ರಿಕಾದ ಟಿ-20 ರನ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಚುಟುಕು ಮಾದರಿಯಲ್ಲಿ ಡಿಕಾಕ್ ಅವರ ದಾಖಲೆ ಸ್ಥಿರತೆಯನ್ನು ವ್ಯಾಖ್ಯಾನಿಸುತ್ತದೆ. ಅವರ ಎಂಟು ಟಿ-20 ಶತಕಗಳು ಹಾಗೂ 81 ಅರ್ಧಶತಕಗಳು ವರ್ಷಗಳ ನಿರಂತರ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳ ಪೈಕಿ ಡೇವಿಡ್ ಮಿಲ್ಲರ್ ಮಾತ್ರ 2017ರಲ್ಲಿ ಬಾಂಗ್ಲಾದೇಶದ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಡೆವಾಲ್ಡ್ ಬ್ರೆವಿಸ್ ಕಳೆದ ವರ್ಷ ಆಸ್ಟ್ರೇಲಿಯದ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ವೆಸ್ಟ್ಇಂಡೀಸ್ ವಿರುದ್ಧ ಡಿಕಾಕ್ ಗಳಿಸಿದ ಶತಕಕ್ಕಿಂತ ವೇಗವಾಗಿದೆ. ಟಿ-20 ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಎರಡು ಬಾರಿ 200ಕ್ಕೂ ಅಧಿಕ ರನ್ ಚೇಸ್ ಮಾಡುವಾಗ ಡಿಕಾಕ್ ಶತಕ ಗಳಿಸಿದ್ದಾರೆ. ಇದರಲ್ಲಿ 250 ಪ್ಲಸ್ ಚೇಸ್ ಕೂಡ ಸೇರಿದೆ. ಟಿ-20 ಇನಿಂಗ್ಸ್ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ದಕ್ಷಿಣ ಆಫ್ರಿಕಾ ಆಟಗಾರರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದಾರೆ. 10 ಸಿಕ್ಸರ್ಗಳನ್ನು ಸಿಡಿಸಿ ರೀಝಾ ಹೆಂಡ್ರಿಕ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ರಿಚರ್ಡ್ ಲೇವಿ 2012ರಲ್ಲಿ 13 ಸಿಕ್ಸರ್ಗಳನ್ನು ಸಿಡಿಸಿದ್ದು, ಈಗಲೂ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಡೇವಿಡ್ ಮಿಲ್ಲರ್ ಹಾಗೂ ರಿಲೀ ರೊಸ್ಸೌ ನಂತರ ಟಿ-20 ಕ್ರಿಕೆಟ್ನಲ್ಲಿ ಹಲವು ಶತಕಗಳನ್ನು ಗಳಿಸಿದ ದಕ್ಷಿಣ ಆಫ್ರಿಕಾದ ಮೂರನೇ ಆಟಗಾರನಾಗಿದ್ದಾರೆ. ಡಿಕಾಕ್ ಪುರುಷರ ಟಿ-20 ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು(8)ಗಳಿಸಿದ ನಿಯೋಜಿತ ವಿಕೆಟ್ಕೀಪರ್ ಆಗಿದ್ದಾರೆ. ಒಂದೇ ಮೈದಾನದಲ್ಲಿ ಎರಡು ಬಾರಿ ಟಿ-20 ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಹಾಗೂ ಕಾಲಿನ್ ಮುನ್ರೊ ನಂತರ ವಿಶ್ವದ ಎರಡನೇ ಆಟಗಾರನಾಗಿದ್ದಾರೆ. ಟಿ-20 ಮಾದರಿಯ ಕ್ರಿಕೆಟ್ನಲ್ಲಿ ಪ್ರತ್ಯೇಕ ನಾಲ್ಕು ಬಾರಿ ದಕ್ಷಿಣ ಆಫ್ರಿಕಾದ ಪರ 150ಕ್ಕೂ ಅಧಿಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ವೆಸ್ಟ್ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ 49 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಹಿತ 115 ರನ್ ಗಳಿಸಿರುವ ಡಿಕಾಕ್ ದಕ್ಷಿಣ ಆಫ್ರಿಕಾ ತಂಡವು ಕೇವಲ 17.3 ಓವರ್ಗಳಲ್ಲಿ 222 ರನ್ ಚೇಸ್ ಮಾಡುವಲ್ಲಿ ನೆರವಾಗಿದ್ದರು. ಈ ಗೆಲುವಿನ ಮೂಲಕ ಇನ್ನೂ ಪಂದ್ಯ ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಉಳಿಸಿಕೊಂಡ ಒಲಿವಿಯಾ, ಜಾನ್ ಪೀರ್ಸ್
ಮೆಲ್ಬರ್ನ್, ಜ.30: ಫ್ರೆಂಚ್ ಜೋಡಿ ಕ್ರಿಸ್ಟಿನಾ ಮ್ಲಾಡೆನೋವಿಕ್ ಹಾಗೂ ಮ್ಯಾನುಯೆಲ್ ಗಿನಾರ್ಡ್ರನ್ನು ಮಣಿಸಿದ ಆಸ್ಟ್ರೇಲಿಯದ ಒಲಿವಿಯಾ ಗಾಡೆಕಿ ಹಾಗೂ ಜಾನ್ ಪೀರ್ಸ್ 37 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ಜೋಡಿ ಎನಿಸಿಕೊಂಡರು. ವೈಲ್ಡ್ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶಿಸಿದ್ದ ಒಲಿವಿಯಾ ಹಾಗೂ ಜಾನ್ ಪೀರ್ಸ್ ಫ್ರೆಂಚ್ ಜೋಡಿಯನ್ನು 4-6, 6-3(10-8) ಅಂತರದಿಂದ ಮಣಿಸಿದರು. 1989ರ ನಂತರ ಈ ಸಾಧನೆ ಮಾಡಿದ ಮೊದಲ ಮಿಕ್ಸೆಡ್ ಟೀಮ್ ಎನಿಸಿಕೊಂಡರು. 37 ವರ್ಷಗಳ ಹಿಂದೆ ಜಾನಾ ನೊವೊಟ್ನಾ ಹಾಗೂ ಜಿಮ್ ಪುಗ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರು. ಒಲಿವಿಯಾ ಹಾಗೂ ಜಾನ್ ಪೀರ್ಸ್ 62 ವರ್ಷಗಳ ನಂತರ ಮಿಕ್ಸೆಡ್ ಡಬಲ್ಸ್ ಟ್ರೋಫಿಯನ್ನು ಉಳಿಸಿಕೊಂಡ ಆಸ್ಟ್ರೇಲಿಯದ ಮೊದಲ ಜೋಡಿ ಎನಿಸಿಕೊಂಡರು. 62 ವರ್ಷಗಳ ಹಿಂದೆ ಮಾರ್ಗರೆಟ್ ಕೋರ್ಟ್ ಹಾಗೂ ಕೆನ್ ಫ್ಲೆಚರ್ ಈ ಸಾಧನೆ ಮಾಡಿದ್ದರು. ‘‘ಈಗ ನಾವು ಈ ಸ್ಥಾನದಲ್ಲಿರುವುದನ್ನು ನಂಬಲಾಗುತ್ತಿಲ್ಲ. ಈ ವರ್ಷ ಮತ್ತೊಮ್ಮೆ ಟ್ರೋಫಿಯನ್ನು ಗೆದ್ದಿರುವುದು ಅದ್ಭುತ ಸಾಧನೆ. ನಾವು ಈ ಸಾಧನೆ ಮಾಡಬಲ್ಲೆವು ಎಂದು ಗೊತ್ತಿತ್ತು’’ ಎಂದು ಪೀರ್ಸ್ ಜೊತೆ ಎರಡನೇ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿರುವ ಗಾಡೆಕಿ ಹೇಳಿದ್ದಾರೆ. ಗಾಡೆಕಿ ಪಾಲಿಗೆ ಇದು ನಾಲ್ಕನೇ ಪ್ರಶಸ್ತಿಯಾಗಿದೆ. ‘‘ಒಮ್ಮೆ ಗ್ರ್ಯಾನ್ಸ್ಲಾಮ್ ಗೆಲ್ಲುವುದು ತುಂಬಾ ಕಷ್ಟಕರ. ಆದರೆ ಅದನ್ನು ಉಳಿಸಿಕೊಳ್ಳುವುದು ಅತ್ಯಂತ ದೊಡ್ಡ ಗುರಿಯಾಗಿದೆ. ಕೆಲವು ತಿಂಗಳ ಹಿಂದೆ ನಾನು ಕಷ್ಟಪಟ್ಟು ನಡೆಯುತ್ತಿದ್ದೆ. ನಾನು ಊರುಗೋಲುಗಳನ್ನು ಬಳಸುತ್ತಿದ್ದೆ. ಗಿನಾರ್ಡ್ ನನ್ನ ಮೇಲೆ ನಂಬಿಕೆ ಇಟ್ಟು ಯೋಜನೆ ರೂಪಿಸಿದರು.ಅವರು ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು’’ಎಂದು ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ನಲ್ಲಿ 9 ಬಾರಿ ಗ್ರ್ಯಾನ್ಸ್ಲಾಮ್ ಗೆದ್ದಿರುವ ಮ್ಲಾಡೆನೋವಿಕ್ ಹೇಳಿದ್ದಾರೆ.
2026 ಇಂಡಿಯಾ ಎನರ್ಜಿ ವೀಕ್: ಎಂಆರ್ಪಿಎಲ್ ಗೆ ಎರಡು ಎಫ್ಐಪಿಐ ಪ್ರಶಸ್ತಿ
ಮಂಗಳೂರು: ಭಾರತದ ತೈಲ ಮತ್ತು ಅನಿಲ ವಲಯವನ್ನು ಪ್ರತಿನಿಧಿಸುವ ಉನ್ನತ ಕೈಗಾರಿಕಾ ಸಂಸ್ಥೆಯಾಗಿರುವ ಭಾರತೀಯ ಪೆಟ್ರೋಲಿಯಂ ಉದ್ಯಮದ ಒಕ್ಕೂಟದ ಸಿಪಿಎಸ್ ಇ ' ಎ 'ವಿಭಾಗದ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಂಗಸಂಸ್ಥೆ ಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆ ಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್), 2026 ರ ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) ಸಂದರ್ಭದಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ (ಎಫ್ಐಪಿಐ) ಪ್ರಶಸ್ತಿಗಳಲ್ಲಿ ಎರಡು ಪ್ರಮುಖ ಪ್ರಶಸ್ತಿಗಳಿಸಿದೆ. ಸಂಸ್ಕರಣಾ ನಾವೀನ್ಯತೆ ಮತ್ತು ಸ್ಥಳೀಯ ತಾಂತ್ರಿಕ ಪ್ರಗತಿಯಲ್ಲಿ ಸಂಸ್ಥೆಯ ನಿರಂತರ ಶ್ರೇಷ್ಠತೆಯನ್ನು ಗುರುತಿಸಿ, (ಎಂಆರ್ ಪಿಎಲ್) ಗೆ 2025 ರ (ಎಫ್ ಐ ಪಿಐ) ಇನ್ನೋವೇಟರ್ ಆಫ್ ದಿ ಇಯರ್ (ತಂಡ) ಪ್ರಶಸ್ತಿಯನ್ನು ನೀಡಲಾಯಿತು. ಇದರ ಜೊತೆಗೆ, ಎಂಆರ್ ಪಿಎಲ್ ನ ಆರ್. ಕಾರ್ತಿಕ್ ಅವರಿಗೆ ತೈಲ ಉದ್ಯಮದಲ್ಲಿ ವರ್ಷದ ಯುವ ಸಾಧಕ (ಪುರುಷ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಇದು ಕೆಳಮಟ್ಟದ ತೈಲ ಮತ್ತು ಅನಿಲ ವಲಯ ದಲ್ಲಿ ನಾವೀನ್ಯತೆಗಾಗಿ ಅವರ ಅತ್ಯುತ್ತಮ ವೈಯಕ್ತಿಕ ಕೊಡುಗೆಯನ್ನು ಗುರುತಿಸುತ್ತದೆ.ಎಫ್ ಐ ಪಿಐ ವರ್ಷದ ನವೋದ್ಯಮಿ (ತಂಡ) ಪ್ರಶಸ್ತಿಯನ್ನು ಎಂಆರ್ ಪಿಎಲ್ ನ ನ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರ್ ಶ್ಯಾಮ ಪ್ರಸಾದ್ ಕಾಮತ್ ಮತ್ತು ನಿರ್ದೇಶಕ (ಸಂಸ್ಕರಣಾಗಾರ) ನಂದಕುಮಾರ್ ವೇಲಾಯುಧನ್ ಪಿಳ್ಳೈ ಅವರು ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ಗೌರವಾನ್ವಿತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಇದುಭಾರತೀಯ ಇಂಧನ ವಾರ (ಐಇಡಬ್ಲ್ಯು) ಭಾರತದ ಪ್ರಮುಖ ಜಾಗತಿಕ ಇಂಧನ ಕಾರ್ಯಕ್ರ ಮವಾಗಿದ್ದು, ಇಂಧನ ಭದ್ರತೆ ಮತ್ತು ಇಂಧನ ಪರಿವರ್ತನೆಯ ಭವಿಷ್ಯವನ್ನು ರೂಪಿಸಲು ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ತಂತ್ರಜ್ಞಾನ ಪೂರೈಕೆದಾರರ ಒಕ್ಕೂಟದ ಕಾರ್ಯಕ್ರಮ,ಮತ್ತು ಈ ಒಕ್ಕೂಟ ಭಾರತೀಯ ಪೆಟ್ರೋಲಿಯಂ ಉದ್ಯಮದ ಒಕ್ಕೂಟ.ಭಾರತದ ತೈಲ ಮತ್ತು ಅನಿಲ ವಲಯವನ್ನು ಪ್ರತಿನಿಧಿಸುವ ಉನ್ನತ ಕೈಗಾರಿಕಾ ಸಂಸ್ಥೆಯಾಗಿದ್ದು, ನೀತಿ ವಕಾಲತ್ತು, ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಸಂಘಟನೆಯಾಗಿದೆ. ಇದರೊಂದಿಗೆ ಎಂಆರ್ ಪಿಎಲ್ ಕಳೆದ ನಾಲ್ಕು ವರ್ಷಗಳಲ್ಲಿ ಐದನೇ ಬಾರಿಗೆ ಭಾರತ ಸರ್ಕಾರದಿಂದ ಪರಿಷ್ಕರಣೆಯಲ್ಲಿ ನಾವೀನ್ಯತೆ ಪ್ರಶಸ್ತಿಗಳನ್ನು ಗೆದ್ದಂತಾಗಿದೆ.ಇದು ಪ್ರಕ್ರಿಯೆಯ ಶ್ರೇಷ್ಠತೆ, ಕಾರ್ಯಾಚರಣೆಯ ದಕ್ಷತೆ ಮತ್ತು ತಂತ್ರಜ್ಞಾನ-ಚಾಲಿತ ಬೆಳವಣಿಗೆಯ ಮೇಲೆ ಅದರ ಸ್ಥಿರ ಗಮನವನ್ನು ಒತ್ತಿಹೇಳುತ್ತದೆ. ಈ ಸಾಧನೆಯ ಕುರಿತು ಪ್ರತಿಕ್ರಿಯಿಸುತ್ತಾ, ಎಂಆರ್ ಪಿಎಲ್ ನ ಉನ್ನತ ಆಡಳಿತ ಮಂಡಳಿ ಹೀಗೆ ಹೇಳಿದೆ:ಈ ಪ್ರಶಸ್ತಿಗಳು ಎಂಆರ್ ಪಿಎಲ್ ನ ಆಳವಾಗಿ ಬೇರೂರಿ ರುವ ನಾವೀನ್ಯತೆ ಮತ್ತು ತಂಡದ ಕೆಲಸ ಕಾರ್ಯ ಕ್ಷಮತೆಗೆ ಸಾಕ್ಷಿಯಾಗಿದೆ. ನಮ್ಮ ಜನರು ಸ್ಥಳೀಯ ಪರಿಹಾರಗಳು, ಡಿಜಿಟಲೀಕರಣ ಮತ್ತು ಸುಸ್ಥಿರ ಸಂಸ್ಕರಣಾ ಅಭ್ಯಾಸಗಳ ಮೂಲಕ ಗಡಿಗಳನ್ನು ದಾಟುತ್ತಲೇ ಇದ್ದಾರೆ. ಎಫ್ ಐ ಪಿಐ ಮತ್ತು ಇಂಡಿಯಾ ಎನರ್ಜಿ ವೀಕ್ನಂತಹ ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸುವಿಕೆಯು ಭಾರತದ ಇಂಧನ ಭದ್ರತೆಯನ್ನು ಬೆಂಬಲಿಸುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸ್ವಚ್ಛ ಮತ್ತು ಹೆಚ್ಚು ಸ್ಥಿತಿಸ್ಥಾಪಕ ಇಂಧನ ಭವಿಷ್ಯದತ್ತ ಪರಿವರ್ತನೆಯನ್ನು ಮುನ್ನಡೆಸುತ್ತದೆ ಭಾರತದ ಕೆಳಮಟ್ಟದ ಇಂಧನ ಪರಿಸರ ವ್ಯವಸ್ಥೆಯಲ್ಲಿಎಂಆರ್ ಪಿಎಲ್ ಪ್ರಮುಖ ಪಾತ್ರವನ್ನು ವಹಿಸುವುದನ್ನು ಮುಂದುವರೆಸಿದೆ, ರಾಷ್ಟ್ರೀಯ ಆದ್ಯತೆಗಳೊಂದಿಗೆ ಜೋಡಣೆಯಲ್ಲಿ ವಿಶ್ವ ದರ್ಜೆಯ ಇಂಧನಗಳು ಮತ್ತು ಪೆಟ್ರೋಕೆ ಮಿಕಲ್ಗಳನ್ನು ತಲುಪಿಸಲು ನಾವೀನ್ಯತೆ, ಪ್ರಮಾಣ ಮತ್ತು ಸುಸ್ಥಿರತೆಯನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಮೊದಲ ಬಾರಿ ಫೈನಲ್ಗೆ ತಲುಪಿದ ಅಲ್ಕರಾಝ್
ಮೆಲ್ಬರ್ನ್, ಜ.30: ಐದು ಸೆಟ್ಗಳ ಸೆಮಿ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ರನ್ನು ಮಣಿಸಿದ ಕಾರ್ಲೊಸ್ ಅಲ್ಕರಾಝ್ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 22ರ ವಯಸ್ಸಿನ ಸ್ಪೇನ್ ಆಟಗಾರ ಅಲ್ಕರಾಝ್ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪಂದ್ಯಾವಳಿಗಳಲ್ಲಿ ಫೈನಲ್ಗೆ ತಲುಪಿದ ಕಿರಿಯ ವಯಸ್ಸಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ ಕಿರಿಯ ಆಟಗಾರ ಎನಿಸಿಕೊಳ್ಳಲು ಅಲ್ಕರಾಝ್ ಇನ್ನೊಂದು ಪಂದ್ಯದಲ್ಲಿ ಗೆಲ್ಲುವ ಅಗತ್ಯವಿದೆ. ಶುಕ್ರವಾರ ಐದು ಗಂಟೆ ಹಾಗೂ 27 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಅಲ್ಕರಾಝ್ ಅವರು ಜರ್ಮನಿ ಆಟಗಾರ ಝ್ವೆರೆವ್ರನ್ನು 6-4, 7-6(5), 6-7(3), 6-7(4), 7-5 ಸೆಟ್ಗಳ ಅಂತರದಿಂದ ಮಣಿಸಿದರು. ಆರಂಭದಲ್ಲಿ ಪ್ರಾಬಲ್ಯ ಮೆರೆದ ಅಲ್ಕರಾಝ್, ಪಂದ್ಯವು ನಾಟಕೀಯ ತಿರುವು ಪಡೆಯುವ ಮೊದಲು ಬೇಗನೆ ಗೆಲುವು ದಾಖಲಿಸುವ ವಿಶ್ವಾಸ ಮೂಡಿಸಿದ್ದರು. ಮೂರನೇ ಸೆಟ್ನ 9ನೇ ಗೇಮ್ನಲ್ಲಿ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡು ಕುಂಟ ತೊಡಗಿದರು. ಆಗ ಟ್ರೈನರ್ರಿಂದ ವೈದ್ಯಕೀಯ ಉಪಚಾರ ಪಡೆದು ಚೇತರಿಸಿಕೊಂಡರು. ಝ್ವೆರೆವ್ ಅವರು ಪಂದ್ಯಕ್ಕೆ ಅಡಚಣೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯಾವಳಿಯ ಅಧಿಕಾರಿಯ ಬಳಿ ತನ್ನ ಹತಾಶೆ ತೋಡಿಕೊಂಡರು. ನಾಲ್ಕು ಗಂಟೆಗೂ ಅಧಿಕ ಸಮಯ ಸಾಗಿದ ಪಂದ್ಯದಲ್ಲಿ ವಿಶ್ವದ ನಂ.3ನೇ ಆಟಗಾರ ಹಾಗೂ 2025ರ ಆಸ್ಟ್ರೇಲಿಯನ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದ ಝ್ವೆರೆವ್ ನಾಲ್ಕನೇ ಸೆಟ್ನಲ್ಲಿ ಹಿಡಿತ ಸಾಧಿಸಿದರು. ಟೈಬ್ರೇಕರ್ನ ಮೂಲಕ 7-6(4)ಅಂತರದಿಂದ ಜಯಶಾಲಿಯಾಗಿ ಪಂದ್ಯವನ್ನು ಐದನೇ ಹಾಗೂ ನಿರ್ಣಾಯಕ ಸೆಟ್ಗೆ ವಿಸ್ತರಿಸಿದರು. 2026ರ ಪಂದ್ಯಾವಳಿಯಲ್ಲಿ ಸೆಂಟರ್ ಕೋರ್ಟ್ನಲ್ಲಿ ಇದೇ ಮೊದಲ ಬಾರಿ ಐದು ಸೆಟ್ಗಳ ಪಂದ್ಯವನ್ನು ಆಡಲಾಯಿತು. ಐದನೇ ಗೇಮ್ ಅನ್ನು 7-5ರಿಂದ ರೋಚಕವಾಗಿ ಗೆದ್ದುಕೊಂಡ ಅಲ್ಕರಾಝ್ ಅವರು ಫೈನಲ್ಗೆ ಟಿಕೆಟ್ ಗಿಟ್ಟಿಸಿಕೊಂಡರು. ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಅಥವಾ10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ.
ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳ್ಳತನ: ಲಕ್ಷಾಂತರ ರೂ. ಮೌಲ್ಯದ ನಗನಗದು ಸಹಿತ ಸೊತ್ತು ಕಳವು
ಕಾಪು, ಜ.30: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆ ಸಮೀಪದ ಮನೆಗೆ ಜ.29ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ದಿವಾಕರ ಶೆಟ್ಟಿ ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದರು. ಮಧ್ಯರಾತ್ರಿಯ ನಂತರ ಮನೆಯ ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು, ಮನೆಯನ್ನು ಜಾಲಾಡಿದ್ದಾರೆ. ಮನೆಯ ಸಿಸಿ ಕೆಮೆರಾದ ದಿಕ್ಕನ್ನು ಬದಲಿಸಿ, ಕೃತ್ಯ ಎಸಗಿರುವ ಕಳ್ಳರು ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ. ಕಪಾಟಿನಲ್ಲಿದ್ದ ಸುಮಾರು 30ಗ್ರಾಂ ಚಿನ್ನಾಭರಣ, ಸುಮಾರು 9 ಲಕ್ಷ ರೂ ನಗದು, ಬೆಳ್ಳಿಯ ತಂಬಿಗೆಗಳು, 3 ಲಕ್ಷ ರೂ. ಮೌಲ್ಯದ 3 ವಾಚ್ ಗಳು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ಹರಿವಾಣಗಳು ಸಹಿತ 19.05 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆಂದು ದೂರಲಾಗಿದೆ. ಮನೆಯ ಮೇಲಿನ ಮಹಡಿಯಲ್ಲಿ ದಿವಾಕರ ಶೆಟ್ಟಿ ಅವರ ನಿಕಟ ವ್ಯಕ್ತಿ ಮಲಗಿದ್ದು, ಅವರಿಗೆ ಈ ಯಾವುದೇ ಕೃತ್ಯ ಗಮನಕ್ಕೆ ಬಂದಿರಲಿಲ್ಲ. ಆ ವ್ಯಕ್ತಿ ಮಲಗಿದ್ದ ಕೋಣೆಗೂ ಕಳ್ಳರು ಬಂದು ಜಾಲಾಡಿದ್ದರೆನ್ನಲಾಗಿದೆ. ಅಲ್ಲದೆ ವರ ಮೊಬೈಲ್ನ್ನು ಕಳ್ಳರು ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆದಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು, ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಎಸೈ ತೇಜಸ್ವಿ, ಬೆರಳಚ್ಚು ವಿಭಾಗದ ನಿರೀಕ್ಷಕಿ ಮೋಹಿನಿ ಸಹಿತ ಕಾಪು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪಡುಬಿದ್ರಿಯ ಪಾದೆಬೆಟ್ಟು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಡರಾತ್ರಿ ನುಗ್ಗಿದ ಕಳ್ಳರು 1500ರೂ. ನಗದನ್ನು ಕಳವುಗೈದಿರುವ ಬಗ್ಗೆ ವರದಿಯಾಗಿದೆ. ಕಳ್ಳರು ಎರಡು ಕಾಣಿಕೆ ಡಬ್ಬಿಗಳು, ಒಂದು ಕಾಲು ದೀಪ ಹಾಗೂ ಒಂದು ಮುಟ್ಟುಕತ್ತಿಗಳನ್ನು ಹೊರಗೆ ತಂದು, ಕಾಲು ದೀಪ, ಮುಟ್ಟುಕತ್ತಿಗಳನ್ನು ಬಳಸಿ ಡಬ್ಬಿಗಳನ್ನು ಒಡೆದು ನಗದು ಕಳವು ಮಾಡಿದ್ದಾರೆಂದು ದೂರಲಾಗಿದೆ.
ಅಧಿಕಭಾರ, ಸ್ಪೀಡ್ಗವರ್ನರ್: 21 ವಾಹನಗಳ ವಿರುದ್ಧ ಪ್ರಕರಣ
ಉಡುಪಿ, ಜ.30: ಅಧಿಕಭಾರ ಹಾಗೂ ಸ್ಪೀಡ್ ಗವರ್ನರ್ ಅಳವಡಿಸಿಕೆ ಸಂಬಂಧಿಸಿ ಮರಳು, ಕಲ್ಲು, ಮಣ್ಣು ಸಾಗಾಟದ ವಾಹನಗಳ ತಪಾಸಣೆ ಕಾರ್ಯ ಜಿಲ್ಲೆಯಾದ್ಯಂತ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಅಧಿಕಭಾರದ ವಾಹನ ಚಲಾವಣೆ, ಜಿಲ್ಲಾಡಳಿತದ ಆದೇಶದಂತೆ ಸ್ಪೀಡ್ ಗವರ್ನರ್ ಅಳವಡಿಕೆಯ ಬಗ್ಗೆ ಜಿಲ್ಲೆಯಾದ್ಯಂತ ಒಟ್ಟು 1665 ವಾಹನಗಳನ್ನು ಪರಿಶೀಲಿಸಲಾಗಿದ್ದು, ಇವುಗಳಲ್ಲಿ ಒಟ್ಟು 21 ವಾಹನಗಳ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕೇಂದ್ರದಿಂದ ಗಾಂಧಿ ಹೆಸರು ಅಳಿಸುವ ಹುನ್ನಾರ: ಜಯಪ್ರಕಾಶ್ ಹೆಗ್ಡೆ
ಬ್ರಹ್ಮಾವರ, ಜ.30: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯ ಹೆಸರಿನಲ್ಲಿ ಬದಲಾ ವಣೆ ಮಾಡುವುದರ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ನಿಧಾನವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು. ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಆಶ್ರಯದಲ್ಲಿ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಮನ್ ರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿನಗಳ ಉದ್ಯೋಗ ಲಭಿಸಬೇಕು ಎನ್ನುವ ಉದ್ಧೇಶದಿಂದ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದನ್ನು ಹಂತಹಂತವಾಗಿ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರಕಾರ ಹೊಂದಿದೆ. ಇಷ್ಟೊಂದು ಒಳ್ಳೆಯ ಯೋಜನೆಯನ್ನು ಮಹಾತ್ಮಗಾಂಧಿ ಯೋಜನೆಗೆ ರಾಮ ಹೆಸರು ಇಡುವ ಬದಲು ರಾಮನ ಹೆಸರಿನಲ್ಲೆ ಹೊಸತಾದ ಯೋಜನೆಯನ್ನು ಪ್ರತಿಯೊಬ್ಬರೂ ಒಪ್ಪುತ್ತಿದ್ದೇವು ಎಂದರು. ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ಕಾಂಚನ್ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ಉತ್ತಮ ವಾಗಿ ಬದುಕಬೇಕು ಎನ್ನುವ ಉದ್ದೇಶದಿಂದ 2005ರಲ್ಲಿ ಮನಮೋಹನ್ ಸಿಂಗ್, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು. ದೇಶದ ಬಡ ಜನರ ಹಸಿವು ನೀಗಿಸಲು ಈ ಯೋಜನೆ ಸಹಕಾರಿ ಯಾಗಿತ್ತು. ದೇಶದಲ್ಲಿ ಬಡಜನರು ಉದ್ದಾರವಾಗದೆ ಶ್ರೀಮಂತರೇ ಬೆಳೆಯಬೇಕು ಎನ್ನುವ ಆರ್ಎಸ್ಎಸ್ ತತ್ವವನ್ನು ಬಿಜೆಪಿ ಸರಕಾರ ಕಾರ್ಯರೂಪಕ್ಕೆ ತರಲು ಹೊರಟಿದೆ. ಬಡವರನ್ನು ತುಳಿಯಲು ಪ್ರತಯ್ನಿಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂತು ನೋಡಲ್ಲ, ಬದಲಾಗಿ ಉಗ್ರ ಪ್ರತಿಭಟನೆ ನಡಸಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳಕೆಬೈಲ್, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರಾಘವೇಂದ್ರ ಶೆಟ್ಟಿ, ಭುಜಂಗ ಶೆಟ್ಟಿ, ರೋಶನ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ಪ್ರಶಾಂತ್ ಪೂಜಾರಿ, ಸಜ್ಜನ್ ಶೆಟ್ಟಿ, ಅಮೃತ್ ಶೆಣೈ, ದಿನಕರ ಹೇರೂರು, ಮುರಳಿ ಶೆಟ್ಟಿ, ಯತೀಶ್ ಕರ್ಕೇರಾ, ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಮುನ್ನ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆಕಾಶವಾಣಿ ಸರ್ಕಲ್ ಮಾರ್ಗವಾಗಿ ಹೊರಟು ರಥಬೀದಿ ರಸ್ತೆಯ ಮೂಲಕ ಬಸ್ ನಿಲ್ದಾಣದ ತನಕ ಪಾದಯಾತ್ರೆಯನ್ನು ನಡೆಸಲಾಯಿತು. ‘ಕೇವಲ ಭಾಷಣಗಳನ್ನು ಮಾಡುವ ಬದಲು ಈ ಯೋಜನೆಯನ್ನು ಅಳಿಸಿ ಹಾಕುತ್ತಿರುವ ಕುರಿತು ಹಳ್ಳಿ ಹಳ್ಳಿಗಳಲ್ಲಿ ಚರ್ಚೆ ನಡೆಯಬೇಕು. ಬಿಜೆಪಿಗರು ಮಹಾತ್ಮಗಾಂಧಿಯವರ ಹೆಸರನ್ನಷ್ಟೇ ಬದಲಾಯಿಸಬಹುದು ಆದರೆ ಜನರ ಮನಸ್ಸಿನಿಂದ ಅವರನ್ನು ಅಳಿಸಲು ಸಾಧ್ಯವಿಲ್ಲ. ವಿಶೇಷ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯ ಹೆಸರನ್ನು ಬದಲಿಸಲು ಹೊರಟಿರುವ ಬಿಜೆಪಿಗರ ನಿರ್ಧಾರ ಖಂಡನೀಯ’ -ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು
ನಿಟ್ಟೆ: ‘ಎಐ ಫಾರ್ ಸಸ್ಟೇನಬಿಲಿಟಿ’ ಕುರಿತ ಅಂ.ರಾಷ್ಟ್ರೀಯ ಸಮ್ಮೇಳನ
ನಿಟ್ಟೆ, ಜ.30: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯ ದಲ್ಲಿ ‘ಸಸ್ಟೇನಬಿಲಿಟಿ ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್ನಲ್ಲಿ ಎಐ (ಕೃತಕ ಬುದ್ಧಿಮತ್ತೆ)’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಕಾಲೇಜಿನ ವಿದ್ಯಾರ್ಥಿ ಸಂಶೋಧನಾ ವೇದಿಕೆ (ಎನ್ಎಫ್ಆರ್ಎಫ್) ವತಿಯಿಂದ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳೇ ಮುನ್ನಡೆಸಿದ ಮೊದಲ ಪ್ರಯತ್ನ ಇದಾಗಿತ್ತು. ಹೊಸದಿಲ್ಲಿಯ ತೈಪೆ ಎಕನಾಮಿಕ್ ಅಂಡ್ ಕಲ್ಚರಲ್ ಸೆಂಟರ್ (ಟಿಇಸಿಸಿ) ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕೌನ್ಸಿಲರ್ ಹಾಗೂ ನಿರ್ದೇಶಕ ಡಾ. ಲಂಗ್-ಜೀ ಯಾಂಗ್ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಇತ್ತೀಚಿನ ಪ್ರಗತಿಗಳನ್ನು, ವಿಶೇಷವಾಗಿ ಸಿಎಂಓಎಸ್-ಎಂಇಎಂಎಸ್ ಏಕೀಕರಣವನ್ನು ವಿವರಿಸಿ, ಬಯೋಇನ್ಪಾಯರ್ಡ್ ಇಂಟಲಿಜೆಂಟ್ ಸಿಸ್ಟಮ್ಸ್ನ ಸ್ಥಿರ ಹಾಗೂ ಸಮರ್ಥ ಪರಿಹಾರಗಳನ್ನು ಒದಗಿಸುವಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ, ಎಐ ಎಂಬುದು ಸಸ್ಟೇನೆಬಲ್ ಅಭಿವೃದ್ಧಿ ಮತ್ತು ನವೀನತೆಯ ಪ್ರಮುಖ ಚಾಲಕಶಕ್ತಿಯೆಂದು ತಿಳಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ.ಪ್ರವೀಣಕುಮಾರ್ ಶೆಟ್ಟಿ ತಮ್ಮ ಭಾಷಣದಲ್ಲಿ ನಿಟ್ಟೆ ವಿದ್ಯಾರ್ಥಿ ಸಂಶೋಧನಾ ವೇದಿಕೆಯನ್ನು ಕಾಲೇಜಿನಲ್ಲಿ ಸ್ಥಾಪಿಸುವುದರ ಹಿನ್ನೆಲೆ ಹಾಗೂ ಮಹತ್ವವನ್ನು ವಿವರಿಸಿದರು. ಎನ್ಎಂಎಎಂಐಟಿ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾಗತಿಕ ಸಂಶೋಧನೆಯಲ್ಲಿ ಇರುವ ಬದ್ಧತೆಯನ್ನು ಪುನರುಚ್ಚರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಡಿಮ್ಡ್ ವಿವಿಯ ಕುಲಪತಿ ಪ್ರೊ. (ಡಾ.) ಎಂ. ಎಸ್. ಮೂಡಿತ್ತಾಯ ಮಾತನಾಡಿ ಜಾಗತಿಕ ಸವಾಲುಗಳಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿ ನೇತೃತ್ವದ ಸಂಶೋಧನೆ ಮತ್ತು ಅಂತರಶಾಸ್ತ್ರೀಯ ಸಹಕಾರ ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಎನ್ಎಂಎಎಂಐಟಿ ವಿದ್ಯಾರ್ಥಿ ಸಂಶೋಧನಾ ವೇದಿಕೆಯ ಅಧಿಕೃತ ಉದ್ಘಾಟನೆ ಹಾಗೂ ಸಮ್ಮೇಳನದ ಕಾರ್ಯಸೂಚಿಯ ಬಿಡುಗಡೆ ನಡೆಯಿತು. ಸಮ್ಮೇಳನದಲ್ಲಿ ಐದು ಪ್ರಮುಖ ವಿಭಾಗಗಳಲ್ಲಿ ತಾಂತ್ರಿಕ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ನಡೆದವು. ವಿದ್ಯಾರ್ಥಿ ಅಧ್ಯಕ್ಷ ನಂದನ್ ಪೈ ಅತಿಥಿಗಳನ್ನು ಸ್ವಾಗತಿಸಿದರೆ, ಎಂಸಿಎ ವಿಭಾಗದ ಸಹಪ್ರಾಧ್ಯಾಪಕಿ ಡಾ. ಮಂಗಳಾ ಶೆಟ್ಟಿ ಸಮ್ಮೇಳನದ ಕುರಿತು ಪರಿಚಯ ನೀಡಿದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಎಸ್. ಎಸ್. ರಾಮಕೃಷ್ಣ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸಾಯನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಶಾಂಕ್ ಶೆಟ್ಟಿ ವಂದಿಸಿದರು.
ಹೋಂ ವರ್ಕ್ ಮಾಡದ 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಶಾಲೆಯ ಎಚ್ಆರ್ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಆತಂಕಗೊಂಡ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ. ಶಿಕ್ಷಕಿ ಹಾಗೂ ಎಚ್ಆರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

23 C