ಪಶ್ಚಿಮ ಬಂಗಾಳ ಎಸ್ಐಆರ್| ಈವರೆಗೆ 14 ಲಕ್ಷ ಎಣಿಕೆ ನಮೂನೆಗಳನ್ನು ‘ಸಂಗ್ರಹಿಸಲಾಗದವು’ ಎಂದು ಗುರುತಿಸಿದ ಚುನಾವಣಾ ಆಯೋಗ
ಹೊಸದಿಲ್ಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈವರೆಗೆ ಸುಮಾರು 14 ಲಕ್ಷ ಎಣಿಕೆ ನಮೂನೆಗಳನ್ನು ‘ಸಂಗ್ರಹಿಸಲಾಗದವು’ ಎಂದು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಮತದಾರರು ಗೈರಾಗಿರಬಹುದು,ನಕಲು ಆಗಿರಬಹುದು, ನಿಧನರಾಗಿರಬಹುದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರಬಹುದು,ಹೀಗಾಗಿ ಈ ಎಣಿಕೆ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಯೋರ್ವರು ಹೇಳಿದರು. ‘ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ 13.92 ಲಕ್ಷ ಆಗಿತ್ತು ಮತ್ತು ಇದು ಪ್ರತಿದಿನವೂ ಏರುತ್ತಲೇ ಇರುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂದರು. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಫಾರ್ಮ್ಗಳನ್ನು ವಿತರಿಸುತ್ತಿದ್ದಾರೆ ಮತ್ತು ಅಗತ್ಯ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದೂ ಅವರು ತಿಳಿಸಿದರು. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗಾಗಿ 80,600ಕ್ಕೂ ಅಧಿಕ ಬಿಎಲ್ಒಗಳು,ಸುಮಾರು 8,000 ಮೇಲ್ವಿಚಾರಕರು,3,000 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು ಮತ್ತು 294 ಚುನಾವಣಾ ನೋಂದಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
\ಬುಲೆಟ್ ಮತ್ತು ಥಾರ್ ಓಡಿಸುವವರು ಗೂಂಡಾಗಳು\
ಈಗಿನ ಯುವಜನರಿಗೆ ಕಾರು, ಬೈಕು ಅಂದ್ರೆ ಒಂದು ರೀತಿ ಪಂಚಪ್ರಾಣ. ಬಹುತೇಕ ಯುವಕರ ದೊಡ್ಡ ಕನಸು ಅಂದ್ರೆ ಆ ಗಾಡಿ ತಗೋಬೇಕು, ಈ ಕಾರನ್ನು ಓಡಿಸಬೇಕು ಅನ್ನೋದು. ಇನ್ನು ಇತ್ತೀಚೆಗೆ ಯುವಜನರ ನೆಚ್ಚಿನ ವಾಹನಗಳಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಮಹೀಂದ್ರಾ ಕಂಪನಿಯ ಥಾರ್ ಮುಂಚೂಣಿಯಲ್ಲಿವೆ. ರಸ್ತೆಯಲ್ಲಿ ಬುಲೆಟ್ ಗಾಡಿ ಅಥವಾ ಥಾರ್ ಪಾಸಾದ್ರೆ ಸಾಕು ಎಂತಹವರೂ
BANTWALA | ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಬಂಟ್ವಾಳ: ಅಪರಿಚಿತ ಮಹಿಳೆಯೊಬ್ಬರ ಮೃತದೇಹ(Deadbody) ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಮೃತ ಮಹಿಳೆಗೆ ಸುಮಾರು 60 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರಿದ್ದಲ್ಲಿ ಬಂಟ್ವಾಳ ನಗರ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಸಂದೀಪ್ ಶೆಟ್ಟಿ ತಿಳಿಸಿದ್ದಾರೆ.
ಸಂಪಾದಕೀಯ | ಮತದಾರರ ಪಟ್ಟಿಯಲ್ಲಿ ಎಸ್ಐಆರ್ ರಕ್ತಪಾತ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Kasargod | ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ನಿಗೂಢ ಸಾವು
ಕಾಸರಗೋಡು: ಕಾಸರಗೋಡು ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ದೇಳಿ ನಿವಾಸಿ ಮುಬಶ್ಶಿರ್(30) ಮೃತಪಟ್ಟ ವಿಚಾರಣಾಧೀನ ಕೈದಿ. ಬುಧವಾರ ಮುಂಜಾನೆ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಮುಬಶ್ಶಿರ್ ನನ್ನು ಜೈಲು ಸಿಬ್ಬಂದಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ಬಂದಿಲ್ಲ. ಈ ಮಧ್ಯೆ ಇದೊಂದು ಕೊಲೆ ಕೃತ್ಯ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಮುಬಶ್ಶಿರ್ ವಿರುದ್ಧ 2016ರಲ್ಲಿ ಪೊಕ್ಸೊ ಪ್ರಕರಣವೊಂದು ದಾಖಲಾಗಿತ್ತು. ಈ ಮಧ್ಯೆ ವಿದೇಶಕ್ಕೆ ತೆರಳಿದ್ದ ಮುಬಶ್ಶಿರ್ ಎರಡು ತಿಂಗಳ ಹಿಂದೆ ಊರಿಗೆ ಮರಳಿದ್ದನು. ಇದನ್ನು ಅರಿತ ಪೊಲೀಸರು ನವಂಬರ್ ಐದರಂದು ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಮುಬಶ್ಶಿರ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಹಾಗೂ ಮಂಗಳವಾರ ಕುಟುಂಬಸ್ಥರು ಸಬ್ ಜೈಲಿಗೆ ಮುಬಶ್ಶಿರ್ ನನ್ನು ಸಂದರ್ಶಿಸಿದ್ದರು. ಈ ವೇಳೆ ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮುಬಶ್ಶಿರ್ ಸಾವಿನ ಅನುಮಾನ ವ್ಯಕ್ತ ಪಡಿಸಿರುವ ಕುಟುಂಬಸ್ಥರು ತನಿಖೆಗೆ ಒತ್ತಾಯಿಸಿದ್ದಾರೆ.
ಗೂಗಲ್ ಮೀಟ್ನಲ್ಲಿ ತಾಂತ್ರಿಕ ಸಮಸ್ಯೆ; ಆಫೀಸ್ ಮೀಟಿಂಗ್, ಆನ್ಲೈನ್ ಕ್ಲಾಸ್ ನಡೆಸಲಾಗದೆ ಪರದಾಟ
ಗೂಗಲ್ನ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ ಆದಂತಹ 'ಗೂಗಲ್ ಮೀಟ್' ಸೇವೆಯಲ್ಲಿ ಬುಧವಾರ ತಾಂತ್ರಿಕ ದೋಷ ಉಂಟಾಗಿದ್ದು,. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಬಳಕೆದಾರರು ಮೀಟಿಂಗ್ ಸೇರಲು ಅಸಾಧ್ಯವಾಗಿದೆ. ಇದರಿಂದ ಹಲವಾರಿ ಕೆಲಸ ಹಿಂದುಳಿಯಿತು ಎಂದು ಆನ್ಲೈನ್ನಲ್ಲಿ ಹಲವರು ಟೀಕೆ ಮಾಡಿದ್ದಾರೆ. ಬಹುತೇಕ ಬಳಕೆದಾರರಿಗೆ 502 ಎರರ್ ಸಂದೇಶ ಕಂಡುಬಂದಿದೆ. ಗೂಗಲ್ ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಸರಿಪಡಿಸುವ ಕಾರ್ಯ ನಡೆದಿದೆ ಮಾಹಿತಿ ಹಂಚಿಕೊಂಡಿದೆ.
Industrial Parks: ಕರ್ನಾಟಕದ 9 ಜಿಲ್ಲೆಗಳಿಗೆ ಗುಡ್ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!
ನವದೆಹಲಿ, ನವೆಂಬರ್ 26: ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಪ್ರಸ್ತಾಪಿತ ಕರ್ನಾಟಕದ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP- National Industrial Corridor Development Programme)) ಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ
ಸಂವಿಧಾನ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ: ಅಮಿತ್ ಶಾ
ಇಂದು ಭಾರತದ ಸಂವಿಧಾನ ದಿನ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂವಿಧಾನ ದಿನ ಆಚರಣೆಯನ್ನು ಪ್ರಾರಂಭಿಸಿ, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನಾಗರಿಕರ ಅರಿವನ್ನು ಹೆಚ್ಚಿಸಲು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಅಡಿಗೆ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ; ಟೆಸ್ಟ್ ಸೋಲಿನ ಬಗ್ಗೆ ಕೇಳಿದ್ರೆ ಬೇರೆಯೇ ಮಾತನಾಡುತ್ತಿರುವ ಗೌತಮ್ ಗಂಭೀರ್!
Gautam Gambhir Reaction- ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ತಂಡ 2-0 ವೈಟ್ ವಾಶ್ ಮುಖಭಂಗ ಅನುಭವಿಸಿದ ಬಳಿಕ ತರಬೇತುದಾರ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಸೋಲಿನ ಸಂಪೂರ್ಣ ಹೊಣೆಯನ್ನು ಸ್ವತಃ ಗಂಭೀರ್ ಅವರೇ ವಹಿಸಿಕೊಂಡಿದ್ದಾರೆ. ತಮ್ಮ ಭವಿಷ್ಯದ ನಿರ್ಧಾರವನ್ನು ಬಿಸಿಸಿಐಗೆ ಬಿಟ್ಟಿರುವ ಗಂಭೀರ್ ಅವರು ಇಂಗ್ಲೆಂಡ್ನಲ್ಲಿ ತಂದ ಯಶಸ್ಸನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಟೆಸ್ಟ್ ಆಡಲು ಬೇಕಿರುವುದು ದೊಡ್ಡ ಪ್ರತಿಭಾವಂತಕಲ್ಲ, ಕಠಿಣ ಮನೋಭಾವವಿರಬೇಕು ಎಂದಿದ್ದಾರೆ.
ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ವನ್ನು ಅಪಹಾಸ್ಯ ಮಾಡುವ ಸಂದೇಶವಿರುವ ಟಿ-ಶರ್ಟ್ ಧರಿಸಿದ ಫೋಟೋ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕಾಮ್ರಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಸೋಮವಾರ ಕಾಮ್ರಾ ಸಾಮಾಜಿಕ ಜಾಲತಾಣ X ನಲ್ಲಿ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಆರೆಸ್ಸೆಸ್ ಅನ್ನು ಅಪಹಾಸ್ಯ ಮಾಡಿದ್ದಾರೆ ಎನ್ನಲಾದ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ರಾಜಕೀಯವಾಗಿ ಚರ್ಚೆಗೆ ಕಾರಣವಾಯಿತು. “ಇಂತಹ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಂಚುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ” ಎಂದು ಬಿಜೆಪಿಯ ಹಿರಿಯ ನಾಯಕ ಚಂದ್ರಶೇಖರ್ ಬವಾಂಕುಲೆ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ಸಚಿವ ಸಂಜಯ್ ಶಿರ್ಸಾತ್, “ಹಿಂದೆಯೂ ಅವರು ಪ್ರಧಾನಿ ಮೋದಿ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡಿದ್ದರು. ಈಗ ನೇರವಾಗಿ ಆರೆಸ್ಸೆಸ್ ವಿರುದ್ಧ ಮಾತನಾಡಲು ಧೈರ್ಯ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಗಂಭೀರವಾಗಿ ಪ್ರತಿಕ್ರಿಯಿಸಬೇಕಾಗಿದೆ” ಎಂದು ಹೇಳಿದರು. “ಈ ವರ್ಷದ ಆರಂಭದಲ್ಲಿ ಶಿಂಧೆ ವಿರುದ್ಧ ಟೀಕೆ ಮಾಡಿದಾಗ ನಾವು ಪ್ರತಿಕ್ರಿಯಿಸಿದ್ದೇವೆ. ಈಗ ಸಂಘದ ವಿರುದ್ಧವೇ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಾರೆ” ಎಂದು ಅವರು ಉಲ್ಲೇಖಿಸಿದರು. ತಮ್ಮ ಸ್ಟ್ಯಾಂಡಪ್ ಕಾಮಿಡಿಗಳಲ್ಲಿ ರಾಜಕೀಯ ವ್ಯಂಗ್ಯಕ್ಕೆ ಪ್ರಸಿದ್ಧರಾಗಿರುವ ಕಾಮ್ರಾ, ಶಿಂಧೆ ಕುರಿತು ಮಾಡಿದ ಟೀಕೆಯಿಂದ ಹಿಂದೆಯೂ ವಿವಾದಕ್ಕೊಳಗಾಗಿದ್ದರು. ಮಾರ್ಚ್ನಲ್ಲಿ ನಡೆದ ತಮ್ಮ ಸ್ಟ್ಯಾಂಡ್-ಅಪ್ ಶೋದಲ್ಲಿ ಜನಪ್ರಿಯ ಹಿಂದಿ ಹಾಡಿನ ಸಾಹಿತ್ಯವನ್ನು ತಿದ್ದಿ, ಶಿಂಧೆ ಅವರ ರಾಜಕೀಯ ಜೀವನವನ್ನು ವ್ಯಂಗ್ಯವಾಡಿದ್ದರು. ಈ ಟೀಕೆಗೆ ಶಿವಸೇನೆಯ ಆಕ್ರೋಶಕ್ಕೆ ಕಾರಣವಾಗಿದ್ದವು.
ಪೋಕ್ಸೋ ಕೇಸ್: ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಖುಲಾಸೆ! ಕೋರ್ಟ್ನಿಂದ ಮಹತ್ವದ ತೀರ್ಪು
ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಡಾ. ಶಿವಮೂರ್ತಿ ಶರಣರನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ಶರಣರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಈ ಪ್ರಕರಣದ ವಿಚಾರಣೆ ದೀರ್ಘಕಾಲದ ನಂತರ ಇಂದು ಅಂತಿಮಗೊಂಡಿದೆ.
Kantara : ಚಿತ್ರಕಥೆಯ ಮೂಲ ಸ್ಪೂರ್ತಿ ಯಾವುದು - ಮಾಹಿತಿ ಬಹಿರಂಗಗೊಳಿಸಿದ ರಿಷಬ್ ಶೆಟ್ಟಿ
Rishab Sheety : ಕಾಂತಾರ ಚಿತ್ರದ ಮೂಲಕ ಮನೆಮಾತಾಗಿರುವ ರಿಷಬ್ ಶೆಟ್ಟಿ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಾತ್ರ ನಟಿಸುತ್ತೀರಾ ಎನ್ನುವ ಮಾಧ್ಯಮ ಸಂದರ್ಶನದ ಪ್ರಶ್ನೆಗೆ ಉತ್ತರಿಸಿದ ರಿಷಬ್, ಸಣ್ಣ ದೊಡ್ಡ ಸಿನಿಮಾ ಎನ್ನುವುದನ್ನು ನಿರ್ಧರಿಸುವುದು ಪ್ರೇಕ್ಷಕರೇ ಹೊರತು ನಾವಲ್ಲ ಎಂದಿದ್ದಾರೆ. ಜೊತೆಗೆ, ಚಿತ್ರದ ಕಥೆಗೆ ಮೂಲ ಸ್ಫೂರ್ತಿ ಯಾವುದು ಎನ್ನುವುದನ್ನು ವಿವರಿಸಿದ್ದಾರೆ.
RSS ಅಕ್ಷರದ ಮೇಲೆ ನಾಯಿ ಮೂತ್ರವಿಸರ್ಜಿಸುವ ಟೀ ಶರ್ಟ್ ಧರಿಸಿದ ಕುನಾಲ್ ಕಾಮ್ರಾ; ಬಿಜೆಪಿ ಕೆಂಡಾಮಂಡಲ
ಆರ್ಎಸ್ಎಸ್ ಅನ್ನು ಅಣಕಿಸುವಂತಹ ಟೀ ಶರ್ಟ್ ಧರಿಸಿ, ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತೆ ವಿವಾದದಲ್ಲಿ ಸಿಲುಕಿದ್ದರೆ. ಆರ್ಎಸ್ಎಸ್ ಅಕ್ಷರದ ಮೇಲೆ ನಾಯಿಯೊಂದು ಮೂತ್ರ ವಿಸರ್ಜನೆ ಮಾಡುತ್ತಿರುವ ಟೀ ಶರ್ಟ್ ಧರಿಸಿ ಪೋಸ್ಟ್ ಹಂಚಿಕೊಂಡಿರುವ ಅವರು, ಇದು ಕಾಮಿಡಿ ಶೋನಲ್ಲಿ ಕ್ಲಿಕ್ಕಿಸಿದ ಫೋಟೋ ಅಲ್ಲ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯ ಸರಕಾರ ‘ಅಕ್ಕ’ ಪಡೆಯನ್ನು ಆರಂಭಿಸಿರುವುದು ಶ್ಲಾಘನೀಯ ಯೋಜನೆ. ಸಂಕಷ್ಟದಲ್ಲಿರುವ ಮಹಿಳೆ ಹಾಗೂ ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಉದ್ದೇಶದಿಂದ ‘ಅಕ್ಕ’ ಪಡೆಯನ್ನು ರಚಿಸಲಾಗಿದೆ. ಶಾಲೆ-ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ಹಾಸ್ಟೆಲ್ಗಳು ಮುಂತಾದ ಜನ ನಿಬಿಡ ಸ್ಥಳಗಳಲ್ಲಿ ಅಕ್ಕ ಪಡೆ ಕಾರ್ಯ ನಿರ್ವಹಿಸುವುದರಿಂದ ಮಹಿಳೆಯರು ಹಾಗೂ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಲಿದೆ. ಮಹಿಳೆ ಹಾಗೂ ಮಕ್ಕಳು ಇಂದು ಎಲ್ಲ ಸ್ಥಳಗಳಲ್ಲೂ ಒಂದಿಲ್ಲ ಒಂದು ರೀತಿಯ ಪೀಡನೆಗೆ ಒಳಗಾಗುತ್ತಿದ್ದಾರೆ. ಜನ ನಿಬಿಡ ಸ್ಥಳಗಳಾದ ಪೇಟೆ, ಜಾತ್ರೆ, ಉತ್ಸವಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಕೀಟಲೆ ಮಾಡುವುದು, ಅಸಭ್ಯ ವರ್ತನೆಗಳನ್ನು ತೋರುವ ಪುಂಡರು ಹೆಚ್ಚಿಕೊಂಡಿದ್ದಾರೆ. ಅನುಚಿತವಾದ ವರ್ತನೆ ತೋರಿ ಕ್ಷಣಮಾತ್ರದಲ್ಲಿ ಇವರು ಮಾಯವಾಗಿ ಬಿಡುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಅಸಹನೀಯವಾದ ಹಿಂಸೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ರಾತ್ರಿ ಇಡೀ ಬಸ್ಸು, ರೈಲುಗಳಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಪ್ರಯಾಣಿಸಬೇಕಾಗುತ್ತದೆ. ಅನಿವಾರ್ಯವಾಗಿ ಗಂಡಸರ ಪಕ್ಕ ಕುಳಿತುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಪುಂಡರು ತಮ್ಮ ಪಕ್ಕದಲ್ಲಿ ಕುಳಿತ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಎಲ್ಲರ ಕಣ್ಣಿಗೆ ಸಭ್ಯರಂತೆ ಕಾಣುವ ಇವರು ಯಾರಿಗೂ ಅನುಮಾನ ಬರದಂತೆ ತಮ್ಮ ತೆವಲನ್ನು ತೀರಿಸಿಕೊಳ್ಳುತ್ತಾರೆ. ಇದರಿಂದ ಪ್ರಯಾಣದುದ್ದಕ್ಕೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಹೆಣ್ಣು ಮಕ್ಕಳು. ಇಂತಹ ಹೇವರಿಕೆಯ ಸಂದರ್ಭಗಳಲ್ಲಿ ತಮಗಾಗುತ್ತಿರುವ ಹಿಂಸೆಯ ವಿರುದ್ಧ ಧ್ವನಿ ಎತ್ತಲೂ ಆಗದೆ ಖಂಡಿಸಲೂ ಧೈರ್ಯ ಸಾಲದೆ ಮರ್ಯಾದೆಗೆ ಹೆದರಿ ಸುಮ್ಮನಾಗುವವರೇ ಜಾಸ್ತಿ. ಈಗ ನಿಯೋಜಿಸಿರುವ ಯೋಜನೆಯನ್ನು ಜನ ನಿಬಿಡ ಸ್ಥಳಗಳ ಜೊತೆಗೆ ಪ್ರತೀ ಬಸ್ಸು, ರೈಲಿನ ಬೋಗಿಯೊಳಗಡೆ ಒಬ್ಬರು ಇಲ್ಲವೇ ಇಬ್ಬರ ‘ಅಕ್ಕ’ ಪಡೆಯನ್ನು ನಿಯೋಜಿಸುವ ಅಗತ್ಯವಿದೆ. ಇವರು ಕೇವಲ ಸಮವಸ್ತ್ರವನ್ನು ಧರಿಸಿ ಲಾಠಿ ಹಿಡಿದು ನಿಂತರಷ್ಟೇ ಸಾಲದು. ಬಸ್ಸು ಹಾಗೂ ರೈಲುಗಳಲ್ಲಿ ಅತ್ತಿಂದಿತ್ತ ಸಂಚರಿಸುತ್ತ ತಾವು ಯಾರು, ಯಾವ ಉದ್ದೇಶದಿಂದ ತಮ್ಮನ್ನು ನೇಮಿಸಲಾಗಿದೆ ಹಾಗೂ ಕಿರುಕುಳ ನೀಡುವ ದುರುಳರಿಗೆ ಯಾವ ಶಿಕ್ಷೆ ನೀಡಲಾಗುತ್ತದೆ ಎಂಬುದನ್ನು ಪ್ರಯಾಣಿಕರಿಗೆ ತಿಳಿಸಬೇಕು. ಹೆಣ್ಣು ಮಕ್ಕಳು ಪ್ರಯಾಣಿಸುವಾಗ ಯಾರಿಂದಲಾದರೂ ಪೀಡನೆಗೊಳಗಾದರೆ ಧೈರ್ಯದಿಂದ ‘ಅಕ್ಕ’ ಪಡೆಗೆ ತಕ್ಷಣ ತಿಳಿಸಬೇಕೆಂದು ಹೇಳಬೇಕು. ದುರ್ವರ್ತನೆ ತೋರುವ ಪುಂಡರು ಸಿಕ್ಕಿ ಬಿದ್ದಾಗ ಅವರನ್ನು ಬಂಧಿಸಿ ಕಾನೂನಿನ ಕೈಗೆ ಒಪ್ಪಿಸಿದಾಗ ಮಾತ್ರ ಈ ಯೋಜನೆಯ ಉದ್ದೇಶ ಸಫಲವಾಗಲು ಸಾಧ್ಯ. ‘ಅಕ್ಕ’ ಪಡೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಹೋದರಿಯರು ತಮ್ಮನ್ನು ತಾವು ರಕ್ಷಿಕೊಳ್ಳಲು ಲಾಠಿಯ ಜೊತೆಗೆ ಬಂದೂಕಿನಂತಹ ಆಯುಧಗಳನ್ನು ಕೊಟ್ಟಾಗ ಪುಂಡರ ಉಪಟಳಕ್ಕೆ ಕಡಿವಾಣ ಬೀಳಬಹುದು. ಈ ಹಿಂದೆ ‘ಅಕ್ಕ’ ಪಡೆಯನ್ನೇ ಹೋಲುವ ಓಬವ್ವ, ರಾಣಿ ಅಬ್ಬಕ್ಕ ಹಾಗೂ ಚೆನ್ನಮ್ಮ ಪಡೆಗಳು ಆಯ್ದ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇವುಗಳಿಂದ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲಾಗಲಿ ಅಥವಾ ದುರುಳರಿಗೆ ಬುದ್ಧಿ ಕಲಿಸುವಲ್ಲಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೇವಲ ಹೊಸ ಹೊಸ ಯೋಜನೆಗಳನ್ನು ಬೇರೆ ಬೇರೆ ಹೆಸರುಗಳಿಂದ ಹುಟ್ಟು ಹಾಕುವ ಬದಲು ಇರುವ ಯೋಜನೆಗಳನ್ನೇ ಇನ್ನಷ್ಟು ಬಿಗಿಗೊಳಿಸಿ ಅವಶ್ಯವಿರುವ ಬದಲಾವಣೆಗಳೊಂದಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಹಾಗೆಯೇ ತಮಗಾಗಿ ಯೋಜಿತಗೊಂಡ ಯೋಜನೆಗಳ ಕುರಿತು ಎಷ್ಟೋ ಜನರಿಗೆ ಅರಿವು ಇರುವುದಿಲ್ಲ. ಸಾರ್ವಜನಿಕರಿಗೆ ಈ ಯೋಜನೆಯ ಕುರಿತು ಅರಿವು ಮೂಡಿಸುವುದೂ ಅಷ್ಟೇ ಅವಶ್ಯವಿದೆ. ‘ಅಕ್ಕ’ ಪಡೆಯ ವಾಹನ ಕೇವಲ ಗಸ್ತು ತಿರುಗುವುದರಿಂದ ಅಪರಾಧಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗದು. ಆಯಕಟ್ಟಿನ ಸ್ಥಳಗಳಲ್ಲಿ ಸದಾ ಬೀಟ್ ಮಾಡುವುದರಿಂದ ಅಪರಾಧಿ ಪ್ರವೃತ್ತಿಯವರು ಅಪರಾಧವನ್ನೆಸಗಲು ಭಯ ಪಡುತ್ತಾರೆ. ಅಲ್ಲದೆ ಈ ಪಡೆ ಕರ್ತವ್ಯ ನಿರ್ವಹಿಸುವ ಅವಧಿ ಬೆಳಗಿನ ಏಳು ಗಂಟೆಯಿಂದ ರಾತ್ರಿ ಎಂಟು ಗಂಟೆಗೆ ನಿಗದಿ ಪಡಿಸಲಾಗಿದೆ. ಆದರೆ ಇಂದಿನ ದಿನಗಳಲ್ಲಿ ದುಡಿಯಲು ಹೋದ ಮಹಿಳೆಯರು ರಾತ್ರಿ ಎಂಟು ಗಂಟೆಯ ನಂತರವೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಾರೆ. ಕೆಲ ಹೆಣ್ಣು ಮಕ್ಕಳು ರಾತ್ರಿ ಪಾಳಿ ಮುಗಿಸಿ ತಡ ರಾತ್ರಿಯಲ್ಲಿ ಮನೆಗೆ ಮರಳುತ್ತಾರೆ. ರಾತ್ರಿ ಎಂಟರ ನಂತರವೇ ಮಹಿಳೆಯರು ಅಸುರಕ್ಷತೆಯ ಭಾವವನ್ನು ಅನುಭವಿಸುತ್ತಾರೆ ಹಾಗೂ ದೌರ್ಜನ್ಯಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅಕ್ಕ ಪಡೆಯ ಕೆಲಸದ ಅವಧಿಯನ್ನು ರಾತ್ರಿ ಎಂಟರ ಬದಲು ರಾತ್ರಿ ಹನ್ನೆರಡು ಗಂಟೆಗೆ ವಿಸ್ತರಿಸುವುದು ಉಚಿತ. ನೂರಾರು ಕೋಟಿ ಹಣವನ್ನು ಈ ಯೋಜನೆಗೆ ವ್ಯಯಿಸಲಾಗುತ್ತಿದ್ದು, ಅದರ ಉದ್ದೇಶ ಸರಿಯಾದ ರೂಪದಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಮಹಿಳೆಯರು ಕೂಡ ಈ ಯೋಜನೆಯ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಹತ್ತರ ಜೊತೆ ಹನ್ನೊಂದು ಎನ್ನುವಂತೆ ಈ ಯೋಜನೆ ಅನುಪಯುಕ್ತವಾಗಬಹುದು.
ಅಂಬೇಡ್ಕರ್ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು: ಸಿದ್ದರಾಮಯ್ಯ
ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದಿಂದ ಅನ್ನಭಾಗ್ಯ ತಂದೆ, ಯಾರ ಮನೆ ಮಕ್ಕಳೂ ಬರಿಗಾಗಲ್ಲಿ ಶಾಲೆಗೆ ಹೋಗಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ತಂದೆ. ಎಲ್ಲಾ ಭಾಗ್ಯಗಳ ಹಿಂದೆ ಹಾಗೂ ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎನ್ನುವ ಆಶಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಗದಿತ ಭಾರತ ಭೇಟಿ ಮುಂದೂಡಿಕೆಯಾಗಿದ್ದು, ಇದರ ಬೆನ್ನಿಗೇ, “ಭಾರತದಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ” ಎಂದು ಮಂಗಳವಾರ ನೆತನ್ಯಾಹು ಅವರ ಕಾರ್ಯಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಿದೆ. ಇದಕ್ಕೂ ಮುನ್ನ, ಭಾರತದಲ್ಲಿನ ಭದ್ರತಾ ಕಳವಳದಿಂದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಗದಿತ ಭಾರತ ಭೇಟಿ ಮುಂದೂಡಿಕೆಯಾಗಿದೆ ಎಂಬ ಊಹಾಪೋಹಗಳು ಹರಡಿದ್ದವು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಾರ್ಯಾಲಯ, “ಭಾರತದೊಂದಿಗೆ ಇಸ್ರೇಲ್ ಸಂಬಂಧ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ತುಂಬಾ ಬಲಿಷ್ಠವಾಗಿದೆ. ಪ್ರಧಾನಿ ಮೋದಿಯಡಿಯ ಭಾರತದ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ತುಂಬಾ ವಿಶ್ವಾಸ ಹೊಂದಿದ್ದಾರೆ. ನಮ್ಮ ತಂಡಗಳು ಹೊಸ ಭೇಟಿಯ ದಿನಾಂಕದ ಕುರಿತು ಸಮಾಲೋಚನೆ ನಡೆಸುತ್ತಿವೆ” ಎಂದು ಸ್ಪಷ್ಟಪಡಿಸಿದೆ. 2018ರ ನಂತರ ಇದೇ ಪ್ರಥಮ ಬಾರಿಗೆ ಡಿಸೆಂಬರ್ ತಿಂಗಳಲ್ಲಿ ಭಾರತ ಭೇಟಿ ನೀಡಬೇಕಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ದಿಲ್ಲಿಯಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತದಲ್ಲಿನ ಭದ್ರತಾ ವ್ಯವಸ್ಥೆ ಬಗೆಗಿನ ಕಳವಳದಿಂದ ತಮ್ಮ ಭಾರತ ಭೇಟಿಯನ್ನು ಮುಂದೂಡಿದ್ದಾರೆ ಎಂದು ಇಸ್ರೇಲ್ ನ ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಕಾರ್ಯಾಲಯದಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ. Prime Minister's Office: Israel’s bond with India and between Prime Minister Netanyahu and Prime Minister @narendramodi is very strong. The PM has full confidence in India’s security under PM Modi, and teams are already coordinating a new visit date. — Prime Minister of Israel (@IsraeliPM) November 25, 2025
ಭಾರತೀಯ ಸಂವಿಧಾನ ದಿನ: ನಾಗರಿಕರಿಗೊಂದು ಪತ್ರ ಬರೆದ ಪ್ರಧಾನಿ ಮೋದಿ; ಕರ್ತವ್ಯಗಳನ್ನು ಮನಸ್ಸಿನಿಂದ ಮಾಡಲು ಕರೆ
ಪ್ರಧಾನಿ ಮೋದಿ ಅವರು ಸಂವಿಧಾನ ದಿನದ ಅಂಗವಾಗಿ ನಾಗರಿಕರಿಗೆ ಪತ್ರ ಬರೆದು, ವಿಕಸಿತ ಭಾರತಕ್ಕಾಗಿ ಸಂವಿಧಾನದ ಕರ್ತವ್ಯಗಳನ್ನು ಮನಸಾರೆ ನಿರ್ವಹಿಸಲು ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನದ ಹಕ್ಕನ್ನು ಚಲಾಯಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಯುವಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದ್ದಾರೆ. ಪತ್ರದ ಸಾರಾಂಶ ಇಲ್ಲಿದೆ.
ಎಡಪದವು ತಲವಾರು ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಭೇಟಿಯಾದ ಮಿಥುನ್ ರೈ
ಮೂಡುಬಿದಿರೆ : ಎಡಪದವಿನಲ್ಲಿ ಸೋಮವಾರ ತಲವಾರು ದಾಳಿಗೆ ಒಳಗಾಗಿ ಮೂಡುಬಿದಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರುವೈಲ್ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿಯಾದರು. ತಪ್ಪಿತಸ್ಥ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ಈ ಸಂದಭ೯ದಲ್ಲಿ ಮುಖಂಡರಾದ ಪ್ರವೀಣ್ ಕುಮಾರ್, ಅನೀಶ್ ಡಿ'ಸೋಜಾ, ರಾಜೇಶ್ ಕಡಲಕೆರೆ, ಸಂದೀಪ್ ಆಲಂಗಾರು, ಪೂರ್ಣಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಹಾಸ್ಟೆಲ್, ಕಾಲೇಜು ಲೈಬ್ರರಿಗಳಲ್ಲಿ ಸಂವಿಧಾನ ಕೃತಿ ಒದಗಿಸಿ: ಸಮಾಜ ಕಲ್ಯಾಣ ಇಲಾಖೆಗೆ ಸ್ಪೀಕರ್ ಯು.ಟಿ.ಖಾದರ್ ನಿರ್ದೇಶನ
ಮಂಗಳೂರು, ನ.26: ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳು ಹಾಗೂ ಸರಕಾರಿ ಕಾಲೇಜುಗಳ ಗ್ರಂಥಾಲಯದಲ್ಲಿ ಸಂವಿಧಾನ ಕೃತಿ ಲಭ್ಯವಾಗುವಂತೆ ಮಾಡಿ ಮಕ್ಕಳು ಅದನ್ನು ಓದುವಂತೆ ಪ್ರೋತ್ಸಾಹಿಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ನಿರ್ದೇಶನ ನೀಡಿದ್ದಾರೆ. ಉರ್ವಾಸ್ಟೋರ್ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಸಂವಿಧಾನ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಯಾರು ಇತಿಹಾ ತಿಳಿಯುತ್ತಾರೆಯೋ ಅವರಿಂದ ಇತಿಹಾಸ ನಿರ್ಮಾಣ ಸಾಧ್ಯವಾಗುತ್ತದೆ. ಇತಿಹಾಸ ನಿರ್ಮಾಮದ ವ್ಯಕ್ತಿತ್ವ ಬರಬೇಕಾದರೆ ಇತಿಹಾಸವನ್ನು ಕಲಿತುಕೊಳ್ಳುವುದು ಅಗತ್ಯ. ದೇಶದ ರೈತರು, ಬಡವರು, ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ವಿದ್ಯಾರ್ಥಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಿರ್ಭೀತಿಯಿಂದ ಓಡಾಡಲು ಕಾರಣ ಸಂವಿಧಾನ ನಮಗೆ ನೀಡಿರುವ ಹಕ್ಕುಗಳು. ಆ ಹಕ್ಕುಗಳನ್ನು ಅರಿತುಕೊಂಡು ಸಮಾಜ ಹಾಗೂ ದೇಶದ ಒಳಿತಿಗೆ ಪೂರಕವಾಗಿ ಅವುಗಳನ್ನು ಬಳಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಸಂವಿಧಾನವನ್ನು ಅರಿತುಕೊಳ್ಳುವುದು ಬಹು ಮುಖ್ಯ ಎಂದವರು ಹೇಳಿದರು. ದೇಶದಲ್ಲಿ ಯಾವುದೇ ಸರಕಾರ ಆಡಳಿತದಲ್ಲಿದ್ದರೂ ಸಂವಿಧಾನದ ತತ್ವಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿದಾಗ ದೇಶ ಬಲಿಷ್ಟವಾಗುತ್ತದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಜತೆಗೆ ಮಹಾತ್ಮ ಗಾಂಧಿ ಹಾಗೂ ಬಿ.ಆರ್. ಅಂಬೇಡ್ಕರ್ ಓದಿದರೆ ವಿದ್ಯಾರ್ಥಿಗಳು ಭವಿಷ್ಯದ ಸತ್ಪ್ರಜೆಗಳಾಗಲು ಸಾಧ್ಯ. ಇಂದು ಅತ್ಯಧಿಕ ಶಿಕ್ಷಣ ಪಡೆದವರೇ ಭ್ರಷ್ಟಾಚಾರ, ಉಗ್ರ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಈ ಮಹಾತ್ಮರ ಜತೆಗೆ ಸಂವಿಧಾನದ ಪುಸ್ತಕಗಳನ್ನು ಓದಲು ಅವಕಾಶ ನೀಡದಿರುವುದು ಎಂದವರು ಹೇಳಿದರು. ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ನಾವು ಬಾಯಿಗೆ ಬಂದಂತೆ ಮಾತನಾಡುದಲ್ಲ. ಇಂತಹ ಅಸಂಬಂಧ ಮಾತುಗಳಿಂದಲೇ ಇಂದು ಸಮಸ್ಯೆಗಳು ಸೃಷ್ಟಿಯಾಗಿ ಅವುಗಳನ್ನು ಬಗೆಹರಿಸುವುದರಲ್ಲಿಯೇ ಕಾಲಹರಣವಾಗುತ್ತಿದೆ. ನಾವು ಆಡುವ ಹಾಗೂ ಮಾಡುವ ಪ್ರತಿಯೊಂದು ಮಾತು ಹಾಗೂ ಕಾರ್ಯಗಳು ದೇಶದ ಹಿತರಕ್ಕೆ ಪೂರಕವಾಗಿದ್ದರೆ ದೇಶ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿರಲಿದೆ. ಆ ಜವಾಬ್ಧಾರಿಯುತ ಕೆಲಸವನ್ನು ನಾವು ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ಅಂಗವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಭಾಷಣ, ಚಿತ್ರಕಲೆ ಹಾಗೂ ಫೋಟೋಗ್ರಫಿ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯತ್ ಆವರಣದಿಂದ ಡಾ. ಅಂಬೇಡ್ಕರ್ ಭವನದವರೆಗೆ ‘ಸಂವಿಧಾನ ಜಾಥಾ’ ನಡೆಯಿತು. ಭಾರತ ಮಾತೆ, ಕೈಯ್ಯಲ್ಲಿ ಸಂವಿಧಾನ ಹಿಡಿದ ಅಂಬೇಡ್ಕರ್, ಮಹಾತ್ಮಗಾಂಧಿ ಸಹಿತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳೊಂದಿಗೆ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಗೋಕರ್ಣನಾಥ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ ಉಪಸ್ಥಿತರಿದ್ದರು. ಆರಂಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ಹೇಮಲತಾ ಸ್ವಾಗತಿಸಿದರು.
BELAGAVI | ಮಹಾಂತೇಶ ಬೀಳಗಿ ಅಪಘಾತದಲ್ಲಿ ಮೃತ್ಯು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಆದೇಶ
ಬೆಳಗಾವಿ: ಕಲಬುರಗಿ ಜಿಲ್ಲೆಯ ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ. ಈ ಕುರಿತು ರಾಜ್ಯಸರ್ಕಾರದ ಪರವಾಗಿ ಸಿಆಸುಇ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ-1(ಪ್ರ) ಬಾಣದರಂಗಯ್ಯ.ಎನ್.ಆರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಮಹಾಂತೇಶ ಬೀಳಗಿ, ಹಿರಿಯ ಭಾರತೀಯ ಆಡಳಿತ ಸೇವೆ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ, ಇವರು ದಿನಾಂಕ:25.11.2025ರಂದು ನಿಧನರಾಗಿರುತ್ತಾರೆ. ಸದರಿಯವರ ನಿಧನಕ್ಕೆ ಸರ್ಕಾರವು ತೀವು ಸಂತಾಪವನ್ನು ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮೃತದೇಹವನ್ನು ಅವರ ಹುಟ್ಟೂರಾದ ರಾಮದುರ್ಗ ಪಟ್ಟಣದ ನವಿಪೇಟಕ್ಕೆ ತರಲಾಗಿದೆ. ಕಲುಬರಗಿಯಿಂದ ರಾಮದುರ್ಗಕ್ಕೆ ತಲುಪಿದ ಮೃತದೇಹವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಸ್ವೀಕರಿಸಿದರು. ರಾಮದುರ್ಗದ ಪಂಚಗಟ್ಟಿ ಮಠದಲ್ಲಿ ಅಪರಾಹ್ನ 2ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ, ರೈತರನ್ನು ಮರೆತ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ನಿಮ್ಮ ಹೃದಯಹೀನ ಸರ್ಕಾರಕ್ಕೆ ಅನ್ನದಾತನ ಬದುಕಿಗಿಂತ ಅಧಿಕಾರವೇ ಮುಖ್ಯವಾಯಿತಾ? ಕರ್ನಾಟಕದ ಇತಿಹಾಸದಲ್ಲಿ ರೈತರ ನೋವಿಗೆ ಸ್ಪಂದಿಸದ ಈ ರೀತಿಯ ಸಂವೇದನಾರಹಿತ ಸರ್ಕಾರ ಕಂಡರಲಿಲ್ಲ. ಕೊಟ್ಟ ಮಾತಿನಂತೆ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕಿದ್ದ ಕಾಂಗ್ರೆಸ್ ಸರ್ಕಾರ ಇಂದು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ. ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎನ್ನುವಂತಿದೆ ಸಿದ್ದರಾಮಯ್ಯ ಸರ್ಕಾರದ ನಡೆ ಎಂದು ವಿಪಕ್ಷ ನಾಯಕ ಆರ್ ಆಶೋಕ್ ವಾಗ್ದಾಳಿ ನಡೆಸಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ಹಾಸನ | ಲಂಚ ಸ್ವೀಕರಿಸಿದ ಆರೋಪ; ಅರಣ್ಯ ಸಂಚಾರಿ ದಳದ ಎಸಿಎಫ್ ಲೋಕಾಯುಕ್ತ ಬಲೆಗೆ
ಹಾಸನ: ಲಂಚ ಸ್ವೀಕರಿಸಿದ ಆರೋಪದಡಿ ಅರಣ್ಯ ಸಂಚಾರಿ ದಳದ ಎಸಿಎಫ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸಿಎಫ್ ಸತೀಶ್ ಬಂಧಿತ ಆರೋಪಿ. ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಎಸಿಎಫ್ ಸತೀಶ್ ಅವರನ್ನು ತಡರಾತ್ರಿ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಸೀಕೆರೆ ಮೂಲದ ಜ್ಯೋತಿಷಿ ಅಖಿಲೇಶ್ ಅವರಿಂದ ಮೊದಲು ₹5,000 ಬಳಿಕ ₹10,000 ಗೂಗಲ್ ಪೇ ಮೂಲಕ ಲಂಚ ಪಡೆದಿದ್ದರು ಎನ್ನಲಾಗಿದೆ. ವೈಲ್ಡ್ಲೈಫ್ ಅಪರಾಧ ಸಂಬಂಧಿತ ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವೆ ಎಂದು ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ. ಲೋಕಾಯುಕ್ತ ಇಲಾಖೆ ತನಿಖೆಯನ್ನು ಚುರುಕುಗೊಳಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.
ಲಂಡನ್ನಲ್ಲಿರುವ ಅರುಣಾಚಲ ಮೂಲದ ಮಹಿಳೆಯನ್ನು ಚೀನಾ 18 ಗಂಟೆ ಬಂಧಿಸಿ, ಕಿರುಕುಳ ನೀಡಿದ್ದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಚೀನಾದ ಈ ಕ್ರಮವು ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಭಾರತ ಹೇಳಿದೆ. ಅತ್ತ ಚೀನಾ ಸಹ ಪತ್ರಿಕಾಗೋಷ್ಠಿ ನಡೆಸಿದ್ದು, ಅರುಣಾಚಲ ಪ್ರದೇಶ ಚೀನಾದ ಭೂಭಾಗ ಎಂದು ಮತ್ತೊಮ್ಮೆ ಹಗಲು ಕನಸು ಕಾಣುವ ಹೇಳಿಕೆ ನೀಡಿದೆ.ಹೀಗೆ ಚೀನಾ ತನ್ನ ಹಳೆಯ ವಾದವನ್ನು ಪುನರುಚ್ಚರಿಸಿದ್ದು, ಈಗ ತಾನೇ ಪುನಶ್ಚೇತನಗೊಳ್ಳುತ್ತಿರುವ ದ್ವೀಪಕ್ಷೀಯ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿದೆ.
ಮೈಸೂರು : ಮಾರಕಾಸ್ತ್ರಗಳಿಂದ ಇರಿದು ಯುವಕನ ಹತ್ಯೆ
ಮೈಸೂರು, ನ.26: ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಕೊಲೆಯಾದ ಯುವಕನನ್ನು ಸಯ್ಯದ್ ಸುಫಿಯಾನ್ (19) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ 5.40 ಗಂಟೆ ಸಮಯದಲ್ಲಿ ಸ್ನೇಹಿತನ ಜೊತೆ ಟೀ ಕುಡಿಯಲು ಹೋಗಿದ್ದ ವೇಳೆ ಅಲ್ಲೇ ಇದ್ದ ಇತರ ಸ್ನೇಹಿತರೊಂದಿಗೆ ಜಗಳವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮದ್ಯವಸನಿಗಳಾದ ಇಬ್ಬರು ಯುವಕರು ಚಾಕುವಿನಿಂದ ಇರಿದಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಯುವಕನ ಎದೆ ಮತ್ತು ಬೆನ್ನಿನ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರೂ ಯಾರೊಬ್ಬರೂ ಈತನ ಸಹಾಯಕ್ಕೆ ಬರಲಿಲ್ಲ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಸಹಾಯಕ್ಕಾಗಿ ಅಂಗಲಾಚಿದರೂ ಯಾವೊಬ್ಬ ನಾಗರೀಕರೂ ಸಹಾಯ ಮಾಡಲಿಲ್ಲ. ರಸ್ತೆಯಲ್ಲೆ ನರಳಾಡಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಎಲ್ಲಾ ಸನ್ನಿವೇಶಗಳ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಉದಯಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪತಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ, 89.25ಕ್ಕಿಂತ ಕೆಳಕ್ಕಿಳಿದ ಭಾರತೀಯ ಕರೆನ್ಸಿ
ನವೆಂಬರ್ 26ರಂದು ನಡೆದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 3 ಪೈಸೆ ಕುಸಿತ ಕಂಡು 89.25 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ 100ರ ಗಡಿಗಿಂತ ಕೆಳಗೆ ಇಳಿದಿದ್ದರೂ, ದೇಶೀಯವಾಗಿ ಆಮದುದಾರರಿಂದ ಡಾಲರ್ಗೆ ಹೆಚ್ಚುತ್ತಿರುವ ಬೇಡಿಕೆಯು ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತಿದೆ. ಇದೇ ವೇಳೆ, ಅಮೆರಿಕದ ಫೆಡರಲ್ ರಿಸರ್ವ್ ಮುಂದಿನ ತಿಂಗಳು ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆಯೂ ಇದೆ.
ಸಿಎಂ ಬದಲಿಸಲು ಶಾಸಕ ದೆಹಲಿ ಹೋಟೆಲ್ಗಳಲ್ಲಿ ಸೇರಿದ್ದಾರೆ: ನಿಖಿಲ್ ಕುಮಾರಸ್ವಾಮಿ
ರಾಜ್ಯ ಕಾಂಗ್ರೆಸ್ನಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಬದಲಾವಣೆ ವಿಚಾರವಾಗಿ ನಾಯಕರ ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ. ಸದ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ರಾಜಕಾರಣವು ದೆಹಲಿ ಅಂಗಳದಲ್ಲಿದೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿರುವ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಬೆಂಬಲಿತ ಶಾಸಕರು ದೆಹಲಿಗೆ ಗುಂಪು ಗುಂಪಾಗಿ ತೆರಳಿ ಹೈಕಮಾಂಡ್ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಹರಪನಹಳ್ಳಿ| ಭಾಗ್ಯದ ಬಳೇಗಾರ ಖ್ಯಾತಿಯ ಗುಡಿಹಳ್ಳಿ ಮೂಲೆಮನಿ ಬಸವರಾಜಪ್ಪ ನಿಧನ
ವಿಜಯನಗರ: ಹರಪನಹಳ್ಳಿ ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಮೂಲೆಮನಿ ಬಸವರಾಜಪ್ಪ (72) ಅವರು ಬುಧವಾರ ನಿಧನರಾದರು. ಮೂಲೆಮನಿ ಬಸವರಾಜಪ್ಪ ಅವರು ಮೂಲ ಬಳೆ ಮಾರುವ ಕೆಲಸದಲ್ಲಿ ನಿರತರಾಗಿದ್ದರು. ಇವರು ಸುತ್ತಳ್ಳಿಯ ಭಾಗ್ಯದ ಬಳೇಗಾರ ಎಂದೇ ಪ್ರಸಿದ್ದಿ ಪಡೆದಿದ್ದರು. ಮೃತರು ಪತ್ನಿ ಹಾಗೂ ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಣಹವೆ ಮುಂದುವರಿಯಲಿದೆ. ವಾರಾಂತ್ಯದಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೆನ್ಯಾರ್ ಚಂಡಮಾರುತದಿಂದ ಸದ್ಯಕ್ಕೆ ಚಳಿ ಕಡಿಮೆಯಾಗಲಿದೆ. ಆದರೆ ಡಿಸೆಂಬರ್ 1 ರಿಂದ ಕರ್ನಾಟಕದಾದ್ಯಂತ, ವಿಶೇಷವಾಗಿ ಉತ್ತರ ಒಳನಾಡಿನಲ್ಲಿ ಚಳಿ ಭಾರಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೊಪ್ಪಳ : ಹಾಸ್ಟೆಲ್ನಲ್ಲಿ ಬಾಲಕಿಗೆ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಸತಿ ನಿಲಯವೊಂದರಲ್ಲಿ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ ವಸತಿ ನಿಲಯದ ಆವರಣದಲ್ಲೇ ನಡೆದಿದೆ. ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಬಾಲಕಿಯನ್ನು ಗರ್ಭಿಣಿಯಾಗಿಸಿದ ಯುವಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಸತಿ ನಿಲಯದ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದೆ.
3ನೇ ದಿನಕ್ಕೆ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ: ನ.27ರಂದು ವಿಕಾಸ ಸೌಧದಲ್ಲಿ ಕಾರ್ಮಿಕ ಇಲಾಖೆ ಸಭೆ
ಮಂಗಳೂರು, ನ. 26: ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್ ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿ ಮೊತ್ತವನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳೂರು ಮಿನಿವಿಧಾನ ಸೌಧದ ಎದುರು ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಬೀಡಿ ಕಾರ್ಮಿಕರು ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಈ ನಡುವೆ ರಾಜ್ಯ ಕಾರ್ಮಿಕ ಇಲಾಖೆಯು ನ. 27ರಂದು ವಿಕಾಸಸೌಧದಲ್ಲಿ ಸಭೆಯನ್ನು ಆಯೋಜಿಸಿದೆ. ಕಾರ್ಮಿಕ ಸಚಿವರ ನಿರ್ದೇಶನದ ಮೇರಗೆ ಬೀಡಿ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ, ಬಾಕಿ ವೇತನ ಪಾವತಿಸುವ ಹಾಗೂ ಇತರ ಸಮಸ್ಯೆಗಳ ಕುರಿತು ಚರ್ಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಸಂಜೆ 4 ಗಂಟೆಗೆ ಅಗತ್ಯ ಮಾಹಿತಿಗಳೊಂದಿಗೆ ಹಾಜರಿರುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್, ಕರ್ನಾಟಕ ಬೀಡಿ ಇಂಡಸ್ಟ್ರೀಸ್ ಅಸೋಸಿಯೇಶನ್, ಸಣ್ಣ ಬೀಡಿ ಮಾಲಕರ ಸಂಘಗಳ ಪ್ರತಿನಿಧಿಗಳಿಗೆ ಸಭೆಯ ಸೂಚನಾ ಪತ್ರ ರವಾನಿಸಿದೆ. ರಾಜ್ಯ ಸರಕಾರ 2018ರ ಎಪ್ರಿಲ್ ನಲ್ಲಿ ಬೀಡಿ ಕಾರ್ಮಿಕರ ಕನಿಷ್ಟಕೂಲಿ ಅಧಿಸೂಚನೆ ಹೊರಡಿಸಿತ್ತು. ಸಾವಿರ ಬೀಡಿಗೆ ಆ ಸಮಯದಲ್ಲಿ 210 ರೂ. ಹಾಗೂ ಬೆಲೆ ಏರಿಕೆ ಸೂಚ್ಯಂಕದ ಮೇರೆಗೆ ಪಾಯಿಂಟ್ಗೆ 4 ಪೈಸೆಯಂತೆ ತುಟ್ಟಿಭತ್ತೆ ಸೇರಿ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ನೀಡಬೇಕಿದ್ದರೂ ಈವರೆಗೂ ನೀಡಿಲ್ಲ. 2025ರ ಫೆಬ್ರವರಿಯಲ್ಲಿ ಹೊಸ ಕನಿಷ್ಠ ಕೂಲಿಯನ್ನು ಕರ್ನಾಟಕ ಸರಕಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಕನಿಷ್ಠ ಕೂಲಿ ನಿಗದಿಗೆ ಸೆಕ್ಷನ್ 5(1ಎ) ಅನ್ವಯ ಸಮಿತಿ ರಚಿಸಿದ್ದು, ಸಮಿತಿಯ ತೀರ್ಮಾನದಂತೆ 2024ರ ಎಪ್ರಿಲ್ 1ರಿಂದ ಸಾವಿರ ಬೀಡಿಗೆ 270 ರೂ. ಕನಿಷ್ಠ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್ ಗೆ 3 ಪೈಸೆಯಂತೆ ಅಧಿಸೂಚನೆ ನೀಡಿತ್ತು. ಆ ಪ್ರಕಾರ ಸಾವಿರ ಬೀಡಿಗೆ 301.92 ರೂ.ಗಳಂತೆ ಬೀಡಿ ಕಾರ್ಮಿಕರಿಗೆ ಮಾಲಕರು ವೇತನ ನೀಡಬೇಕು. ಆದರೆ ಬೀಡಿ ಮಾಲಕರು ಸಾವಿರ ಬೀಡಿಗೆ 284.88 ರೂ.ನಂತೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಕಾರ್ಮಿಕ ಇಲಾಖೆಯು ಬೆಂಗಳೂರಿನ ವಿಕಾಸಸೌಧದಲ್ಲಿ ನ.27ರಂದು ಸಂಜೆ 4 ಗಂಟೆಗೆ ಸಭೆ ಆಯೋಜಿಸಿದೆ. ಸಭೆಯಲ್ಲಿ ಸಿಐಟಿಯುನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆದರೆ ಧರಣಿ ಮುಂದುವರಿಯಲಿದೆ. ಕಳೆದ ಆರು ವರ್ಷಗಳಿಂದ ಬೀಡಿ ಕಾರ್ಮಿಕರು ಬಾಕಿ ಕನಿಷ್ಠ ವೇತನಕ್ಕಾಗಿ ಕಾಯುತ್ತಿದ್ದಾರೆ. ಅದು ಸಿಗುವವರೆಗೆ ಧರಣಿ ಮುಂದುರಿಸಲಾಗುವುದು.’ ಸುನೀಲ್ ಕುಮಾರ್, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿಐಟಿಯು.
ಜಾರ್ಜ್, ಜಮೀರ್, ಸತೀಶ್ ಜಾರಕಿಹೊಳಿ: ಸಿದ್ದು ಆಪ್ತರ ಜೊತೆಗೆ ಡಿಕೆಶಿ ಮಾತುಕತೆ, ಅಸಲಿ ಉದ್ದೇಶ ಏನು
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತ್ಯೇಕವಾಗಿ ಭೇಟಿ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿವರಾದ ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಹಾಗೂ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ. ಹಾಗಾದರೆ ಈ ಮಾತುಕತೆಯ ಅಸಲಿ ಉದ್ದೇಶ ಏನು ಎಂಬ ಕತೂಹಲಗಳು ಇದೀಗ ಉಂಟಾಗಿವೆ. ಮತ್ತಷ್ಟು ಮಾಹಿತಿ ಇಲ್ಲಿದೆ.
KALABURAGI | ಜೇವರ್ಗಿ ರಸ್ತೆ ಅಪಘಾತ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಷೇರುಪೇಟೆಯಲ್ಲಿ ಗೂಳಿ ಅಬ್ಬರ: 950 ಅಂಕ ಜಿಗಿದ ಸೆನ್ಸೆಕ್ಸ್, ದಿಢೀರ್ ಏರಿಕೆಗೆ ಇಲ್ಲಿವೆ 5 ಕಾರಣ
ಭಾರತೀಯ ಷೇರುಪೇಟೆಯು ಬುಧವಾರದಂದು ಬಲವಾದ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 950ಕ್ಕೂ ಹೆಚ್ಚು ಅಂಕ ಗಳಿಕೆ ಕಂಡಿದೆ. ನಿಫ್ಟಿ 26,200ರ ಗಡಿ ತಲುಪಿದ್ದು, ಅಮೆರಿಕದ ಫೆಡ್ ಬಡ್ಡಿ ದರ ಕಡಿತದ ಬಲವಾದ ನಿರೀಕ್ಷೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 63 ಡಾಲರ್ಗಿಂತ ಕೆಳಗೆ ಕುಸಿದಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಮತ್ತು ಐಸಿಐಸಿಐ ಬ್ಯಾಂಕ್ನಂತಹ ಹೆವಿವೇಯ್ಟ್ ಷೇರುಗಳಲ್ಲಿ ಕಂಡುಬಂದ ಖರೀದಿ ಭರಾಟೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮರುಪ್ರವೇಶ ಮಾರುಕಟ್ಟೆಯ ಏರಿಕೆಗೆ ಇಂಬು ನೀಡಿದೆ.
ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ವಿರುದ್ಧ 2-0 ಅಂತರದಿಂದ ಕ್ಲೀನ್ ಸ್ವೀಪ್
ಗುವಾಹಟಿ: ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವಿನ ದ್ವಿತೀಯ ಮತ್ತು ಅಂತಿಮ ಟೆಸ್ಟ್ ನಲ್ಲಿ ಭಾರತ ತಂಡ 408 ರನ್ ಗಳ ಬೃಹತ್ ಮೊತ್ತದ ಅಂತರದಲ್ಲಿ ಪರಾಭಗೊಂಡಿದ್ದು, 25 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡ 2-0 ಅಂತರದ ಟೆಸ್ಟ್ ಸರಣಿ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಸರ್ಕಾರ ನಾಗರಿಕರಿಗಾಗಿ ಹಲವಾರು ಯೋಜನೆಗಳು ಹಾಗೂ ಸೇವೆಗಳನ್ನು ಒದಗಿಸುತ್ತಿದೆ. ಆದರೆ, ಬಹುತೇಕರಿಗೆ ಮಾಹಿತಿಯ ಕೊರತೆಯ ಕಾರಣ ಅವುಗಳ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಮಾಹಿತಿ ಹಾಗೂ ಸೇವೆಗಳು ಒಂದೆದೆ ಲಭ್ಯವಾಗಿಸುವ ನಿಟ್ಟಿನಿಂದ ಸರ್ಕಾರ ಉಮಂಗ್ (UMANG) ಎಂಬ ವೇದಿಕೆಯನ್ನು ಕಲ್ಪಸಿದೆ. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾದ ಉಮಂಗ್ (ಯೂನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್) ಆ್ಯಪ್, ನಾಗರಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪಕ ಶ್ರೇಣಿಯ ಇ-ಆಡಳಿತ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ರೂಪಿಸಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಉಮಂಗ್ ತಂತ್ರಾಂಶ? ಇದನ್ನು ಬಳಕೆ ಮಾಡುವುದು ಹೇಗೆ? ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.
ಗೆಳೆತನಕ್ಕೆ ಮತ್ತೊಂದು ಹೆಸರೇ ಮಹಾಂತೇಶ್ ಬೀಳಗಿ; ಬಾಲ್ಯ ಸ್ನೇಹಿತ ರಾಜೇಶ್ ಬೀಳಗಿ ಅವರ ಅಂತರಾಳದ ಮಾತುಗಳು
ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ, ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಐಎಎಸ್ ಅಧಿಕಾರಿಯ ಅಕಾಲಿಕ ನಿಧನದಿಂದ, ಅವರ ಹುಟ್ಟೂರು ರಾಮದುರ್ಗ ದು:ಖದ ಮಡುವಿನಲ್ಲಿದೆ. ಈ ಮಧ್ಯೆ ಮಹಾಂತೇಶ್ ಬೀಳಗಿ ಅವರ ಬಾಲ್ಯಸ್ನೇಹಿತ ರಾಜೇಶ್ ಬೀಳಗಿ ಅವರು, ತಮ್ಮಿಬ್ಬರ ಗೆಳೆತನವನ್ನು ನೆನೆದು ಭಾವುಕರಾಗಿದ್ದಾರೆ. ವಿಜಯ ಕರ್ನಾಟಕ ವೆಬ್ನೊಂದಿಗೆ ಮಾತನಾಡುತ್ತಾ, ರಾಜೇಶ್ ಬೀಳಗಿ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
ದಾವಣಗೆರೆ | ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತ್ಯು
ದಾವಣಗೆರೆ : ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರಾಜೇಶ್ವರಿ ಮತ್ತು ಮಂಜುನಾಥ ದಂಪತಿಯ ಮೂರು ಮಕ್ಕಳಲ್ಲಿ ಕೊನೆಯವಳಾದ ವೇದಾ ಮೃತಪಟ್ಟ ಮಗು. ನ.25 ಮಂಗಳವಾರ ಬೆಳಗ್ಗೆ ಮಕ್ಕಳಾದ ರೋಜಾ, ರೋಹಿಣಿ, ವೇದಾ ಮನೆಯ ಮುಂದೆ ಆಡುತ್ತಿದ್ದರು. ಮನೆಕೆಲಸದಲ್ಲಿದ್ದ ತಾಯಿ ರಾಜೇಶ್ವರಿ ಸ್ವಲ್ಪ ಸಮಯದ ನಂತರ ಮನೆಯ ಹೊರಗಡೆ ಬಂದು ನೋಡಿದಾಗ ವೇದಾಳು ಸ್ಥಳದಲ್ಲಿ ಇರಲಿಲ್ಲ. ಹುಡುಕುತ್ತಾ ಮನೆಯ ಹಿಂದೆ ಇರುವ ಬಚ್ಚಲಿಗೆ ಹೋಗಿ ನೋಡಿದಾಗ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಳು. ತಕ್ಷಣವೇ ಗಂಡನನ್ನು ಕರೆದು ಮಗುವನ್ನೆತ್ತಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ವೇದಾ ಮನೆಯಲ್ಲಿ ಆಟ ಆಡುತ್ತಾ ಮನೆಯ ಹಿಂದಿನ ಬಚ್ಚಲು ಮನೆ ಕಡೆಗೆ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರು ತುಂಬಿದ ಪಾತ್ರೆಗೆ ಬಿದ್ದು ಮೇಲೆ ಎದ್ದು ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ. ನನ್ನ ಮಗಳು ಮೃತಪಟ್ಟಿರುವ ಬಗ್ಗೆ ನಮಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ ಎಂದು ತಂದೆ ಮಂಜುನಾಥ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ 25000 ರೂ ಸಹಾಯಧನ ನೀಡಿದರು. ಈ ವೇಳೆ ಮಾತನಾಡಿದ ಅವರು, ಮನೆಯಲ್ಲಿ ಪೋಷಕರು ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳಲ್ಲಿಯೂ ಮಕ್ಕಳನ್ನು ಜಾಗ್ರತೆಯಿಂದ ನೊಡಿಕೊಳ್ಳಬೇಕು ಎಂದು ಸಲಹೆನೀಡಿದರು.
ದಾವಣಗೆರೆ | ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು
ದಾವಣಗೆರೆ : ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರಾಜೇಶ್ವರಿ ಮತ್ತು ಮಂಜುನಾಥ ದಂಪತಿಯ ಮೂರು ಮಕ್ಕಳಲ್ಲಿ ಕೊನೆಯವಳಾದ ವೇದಾ ಮೃತಪಟ್ಟ ಮಗು. 03 ಜನ ಮಕ್ಕಳಿದ್ದು ಮೊದಲನೇ ಮಗಳು ರೋಜಾ, ಎರಡನೆಯವರು ರೋಹಿಣಿ, ಮೂರನೇಯವಳು ವೇದಾ ಈ ಮೂರು ಜನ ಮಕ್ಕಳು ನ.25 ಮಂಗಳವಾರ ಬೆಳಗ್ಗೆ ಮಕ್ಕಳಾದ ರೋಜಾ, ರೋಹಿಣಿ, ವೇದಾ ಮನೆಯ ಮುಂದೆ ಆಡುತ್ತಿದ್ದರು. ಮನೆಕೆಲಸದಲ್ಲಿದ್ದ ತಾಯಿ ರಾಜೇಶ್ವರಿ ಸ್ವಲ್ಪ ಸಮಯದ ನಂತರ ಮನೆಯ ಹೊರಗಡೆ ಬಂದು ನೋಡಿದಾಗ ವೇದಾಳು ಸ್ಥಳದಲ್ಲಿ ಇರಲಿಲ್ಲ. ಹುಡುಕುತ್ತಾ ಮನೆಯ ಹಿಂದೆ ಇರುವ ಬಚ್ಚಲಿಗೆ ಹೋಗಿ ನೋಡುವಾಗ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಳು. ತಕ್ಷಣವೇ ಗಂಡನನ್ನು ಕರೆದು ಮಗುವನ್ನೆತ್ತಿ ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ವೇದಾ ಮನೆಯಲ್ಲಿ ಆಟ ಆಡುತ್ತಾ ಮನೆಯ ಹಿಂದಿನ ಬಚ್ಚಲು ಮನೆ ಕಡೆಗೆ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರು ತುಂಬಿದ ಪಾತ್ರೆಗೆ ಬಿದ್ದು ಮೇಲೆ ಎದ್ದು ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ. ನನ್ನ ಮಗಳು ಮೃತಪಟ್ಟಿರುವ ಬಗ್ಗೆ ನಮಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ ಎಂದು ತಂದೆ ಮಂಜುನಾಥ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ 25000 ರೂ ಸಹಾಯಧನ ನೀಡಿದರು. ಈ ವೇಳೆ ಮಾತನಾಡಿದ ಅವರು, ಮನೆಯಲ್ಲಿ ಪೋಷಕರು ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳಲ್ಲಿಯೂ ಮಕ್ಕಳನ್ನು ಜಾಗ್ರತೆಯಿಂದ ನೊಡಿಕೊಳ್ಳಬೇಕು ಎಂದು ಸಲಹೆನೀಡಿದರು.
BELAGAVI | ಮಹಾಂತೇಶ ಬೀಳಗಿ ಅಪಘಾತಕ್ಕೆ ಬಲಿ: ಹುಟ್ಟೂರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ
ಬೆಳಗಾವಿ: ಕಲಬುರಗಿ ಜಿಲ್ಲೆಯ ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮೃತದೇಹವನ್ನು ಅವರ ಹುಟ್ಟೂರಾದ ರಾಮದುರ್ಗ ಪಟ್ಟಣದ ನವಿಪೇಟಕ್ಕೆ ತರಲಾಗಿದೆ. ಕಲುಬರಗಿಯಿಂದ ರಾಮದುರ್ಗಕ್ಕೆ ತಲುಪಿದ ಮೃತದೇಹವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಸ್ವೀಕರಿಸಿದರು. ರಾಮದುರ್ಗದ ಪಂಚಗಟ್ಟಿ ಮಠದಲ್ಲಿ ಅಪರಾಹ್ನ 2ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಾಂತೇಶ ಬೀಳಗಿಯವರ ಅಕಾಲಿಕ ಮೃತ್ಯು ಕಾರಣ ಊರಿಡೀ ಶೋಕಾತಪ್ತವಾಗಿದೆ. ಕುಟುಂಬಸ್ಥರ ಆಕ್ರಂದನ, ಹಾಗೂ ಗಣ್ಯರಿಂದ ಸಂತಾಪ ಸೂಚನೆಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ದರ್ಶನದ ಬಳಿಕ, ಹಲಗತ್ತಿ ಸಮೀಪದ ಫಾರ್ಮ್ ಹೌಸ್ ನಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ, ಅವರ ಚಿಕ್ಕಪ್ಪನ ಮಕ್ಕಳಾದ ಶಂಕರ್ ಬೀಳಗಿ ಮತ್ತು ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾಂತೇಶ ಬೀಳಗಿ ಅವರ ಕಾರು ಚಾಲಕ ರಾಜು ಹಾಗೂ ಈರಣ್ಣ ಶಿರಸಂಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಪೈಕಿ ಈರಣ್ಣ ಶಿರಸಂಗಿ ಚಿಕಿತ್ಸೆ ಫಲಿಸದೇ ಮಂಗಳವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್ಪೋರ್ಟ್ ಹೊಂದಿದ್ದ ನೇಪಾಳಿ ಮಹಿಳೆ ಬಂಧನ
ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಭಾರತೀಯ ಪಾಸ್ಪೋರ್ಟ್ ಬಳಸಿ ಒಮಾನ್ಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ನೇಪಾಳಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಜಲ್ ಎಂಬ ಹೆಸರಿನಲ್ಲಿ ಹಿಮಾಚಲ ಪ್ರದೇಶದ ನಕಲಿ ವಿಳಾಸದೊಂದಿಗೆ ಭಾರತೀಯ ಪಾಸ್ಪೋರ್ಟ್ ಪಡೆದಿದ್ದ ಆಕೆ, ಅಧಿಕಾರಿಗಳ ಅನುಮಾನಕ್ಕೆ ಗುರಿಯಾಗಿ ಸಿಕ್ಕಿಬಿದ್ದಿದ್ದಾಳೆ. ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪ್ರಯಾಣಿಸಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹೇಳಿದ್ದನ್ನು ಸಾಧಿಸಿ ತೋರಿಸಿದ ಟೆಂಬಾ ಬವುಮಾ; ಗುವಾಹಟಿಯಲ್ಲೂ ಭಾರತಕ್ಕೆ ಅವಮಾನಕಾರಿ ಸೋಲು; ಸರಣಿ ವೈಟ್ ವಾಶ್!
ಹೇಳಿದ್ದನ್ನು ಮಾಡಿಯೇ ತೋರಿಸಿದ್ದಾರೆ ಟೆಂಬಾ ಬವುಮಾ. ಭಾರತದಲ್ಲೇ ಭಾರತವನ್ನು 2-0 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ತವರಿನಲ್ಲಿ ಅನುಭವಿಸುತ್ತಿರುವ ಮೂರನೇ ವೈಟ್ ವಾಶ್. ಪ್ರವಾಸಿ ದಕ್ಷಿಣ ಆಫ್ರಿಕಾದ ವಿರುದ್ಧ ಕೋಲ್ಕತಾದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್ ಗಳ ಆಘಾತಕಾರಿ ಸೋಲನುಭವಿಸಿತ್ತು. ಇದೀಗ ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಧಿಕಾರಯುತವಾಗಿ 408 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ರವಾಸಿ ತಂಡ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು. ಗುವಾಹಟಿಯಲ್ಲಿ ನಡೆದದಲ್ಲಿ ಗೆಲ್ಲಲು 549 ರನ್ ಗಳ ಕಠಿಣ ಗುರಿ ಪಡೆದಿದ್ದ ಭಾರತ ತಂಡ ಅಂತಿಮವಾಗಿ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ತಂಡದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ(54) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಂಗಳವಾರ ಸಂಜೆ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದ ಭಾರತ ತಂಡ ಬುಧವಾರ ಆ ಮೊತ್ತಕ್ಕೆ ಮತ್ತೆ 113 ರನ್ ಪೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಯಾವ ಹಂತದಲ್ಲೂ ಭಾರತ ತಂಡದ ಬ್ಯಾಟರ್ ಗಳು ದಿಟ್ಟತನದ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಲೇ ಇಲ್ಲ. ಕಡೇ ಪಕ್ಷ ಡ್ರಾ ಮಾಡುವ ಗೋಜಿಗೂ ಹೋಗಲಿಲ್ಲ. 2000ದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೇ ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಅನುಭವಿಸಿದ್ದ ಭಾರತ ತಂಡ, ಅದಾಗಿ 24 ವರ್ಷದ ಬಳಿಕ ಅಂದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ತವರಿಲ್ಲಿ 3-0 ಅಂತರದಲ್ಲಿ ಮುಖಭಂಗಕ್ಕೀಡಾಗಿತ್ತು. ಕಳೆದ ತಿಂಗಳಷ್ಟೇ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರು ಕಳೆದ ವರ್ಷ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಸಾಧಿಸಿದ್ದನ್ನೇ ಈಗ ನಾವು ಮತ್ತೆ ಸಾಧಿಸುವುದಾಗಿ ಸವಾಲು ಹಾಕಿದ್ದರು. ಆಗ ಎಲ್ಲರೂ ಈ ಮಾತಿಗೆ ನಕ್ಕಿದ್ದರು. ಆದರೆ ಇದೀಗ ಅವರು ತಾವು ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ತಮ್ಮ ತಂಡವೇಕೆ ಟೆಸ್ಟ್ ಕ್ರಿಕೆಟ್ ನಲ್ಲಿ ವಿಶ್ವ ಚಾಂಪಿಯನ್ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಸಂವಿಧಾನವು ನಮ್ಮ ದೇಶದ ಆತ್ಮವಿದ್ದಂತೆ: ಶಿವರಾಜ ಗುರಿಕಾರ್
ಗಂಗಾವತಿ: ನಗರದ ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಬುಧವಾರ ಆಚರಿಸಲಾಯಿತು. ಈ ವೇಳೆ ಪ್ರಭಾರ ಪ್ರಾಂಶುಪಾಲ ಶಿವರಾಜ ಗುರಿಕಾರ್ ಮಾತನಾಡಿ, ಸಂವಿಧಾನವು ನಮ್ಮ ದೇಶದ ಆತ್ಮವಿದ್ದಂತೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರದಲ್ಲಿ ಸಂವಿಧಾನವು ಜನಸಾಮಾನ್ಯರಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುತ್ತದೆ ಎಂದರು. ಸಂವಿಧಾನ ದಿನದ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಪ್ರಾಧ್ಯಪಕ ಡಾ.ಮಮ್ತಾಜ್ ಬೇಗಂ, ಮಂಜುನಾಥ ಬಳ್ಳಾಪುರು, ಅಣ್ಣೋಜಿ ರೆಡ್ಡಿ, ರವಿಕುಮಾರ್, ಉಪನ್ಯಾಸಕ ಚೆನ್ನಬಸಪ್ಪ, ತಾಯಪ್ಪ ಮರ್ಚಡ್, ಪಂಚಾಕ್ಷರಯ್ಯ, ಸೋಮಶೇಖರ, ಶಿವುಕುಮಾರ್ ಇತರರು ಇದ್ದರು.
Volcano Eruption: ಜ್ವಾಲಾಮುಖಿ ಸ್ಫೋಟದ ಪರಿಣಾಮ ಹಲವು ವಿಮಾನಗಳ ಹಾರಾಟ ರದ್ದು!
12,000 ವರ್ಷಗಳ ನಂತರ ಇಥಿಯೋಪಿಯಾ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಜಗತ್ತಿನಲ್ಲಿ ನಾನಾ ರೀತಿಯ ಸಮಸ್ಯೆ ಎದುರಾಗಿದೆ. ಭೀಕರವಾಗಿ ಸ್ಫೋಟಗೊಂಡಿರುವ ಈ ಜ್ವಾಲಾಮುಖಿ ಭಾರಿ ದೊಡ್ಡ ಪ್ರಮಾಣದಲ್ಲಿ ಬೂದಿ ಹೊರಗೆ ಹಾಕುತ್ತಿದೆ. ಹೀಗಾಗಿ ಈಗ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಜ್ವಾಲಾಮುಖಿ ಸ್ಫೋಟ ಪರಿಣಾಮ ಭಾರತದಲ್ಲೂ ಮಾಲಿನ್ಯ ಸೇರಿದಂತೆ ವಿಷಗಾಳಿ ಭೀತಿ ಎದುರಾಗಿದೆ. ಅದರಲ್ಲೂ
ರೈಲುಗಳಲ್ಲಿ ಹಲಾಲ್ ಮಾಂಸ ಮಾತ್ರ ಬಳಕೆ | ಮೇಲ್ನೋಟಕ್ಕೆ ಮಾನವ ಹಕ್ಕುಗಳ ಉಲ್ಲಂಘನೆ: ರೈಲ್ವೆಗೆ NHRC ನೋಟಿಸ್
ಹೊಸದಿಲ್ಲಿ: ರೈಲುಗಳಲ್ಲಿ ಮಾಂಸಾಹಾರಿ ಭಕ್ಷ್ಯಗಳಲ್ಲಿ ಹಲಾಲ್ ಪ್ರಮಾಣೀಕೃತ ಮಾಂಸವನ್ನು ಮಾತ್ರ ಬಳಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರೈಲ್ವೆ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು barandbench.com ವರದಿ ಮಾಡಿದೆ. ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಅವರಿದ್ದ ಪೀಠವು, ಹಲಾಲ್ ಮಾಂಸವನ್ನು ಮಾತ್ರ ಬಳಕೆ ಮಾಡುವ ಪ್ರಕ್ರಿಯೆ ಮೂಲಭೂತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಮಾಂಸ ವ್ಯಾಪಾರದಲ್ಲಿ ಸಾಂಪ್ರದಾಯಿಕವಾಗಿ ತೊಡಗಿರುವ ಪರಿಶಿಷ್ಟ ಜಾತಿ ಹಿಂದೂ ಸಮುದಾಯಗಳು ಹಾಗೂ ಇತರ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಆಯೋಗವು ಉಲ್ಲೇಖಿಸಿದೆ. ರೈಲ್ವೆಯು ಎಲ್ಲಾ ಧರ್ಮಗಳಿಗೆ ಸೇರಿದ ಪ್ರಯಾಣಿಕರ ಆಹಾರ ಆಯ್ಕೆಗಳನ್ನು ಗೌರವಿಸಬೇಕು ಎಂದು NHRC ಅಭಿಪ್ರಾಯಪಟ್ಟಿದೆ. “ಹಲಾಲ್ ಮಾಂಸವನ್ನು ಮಾತ್ರ ಬಳಕೆ ಮಾಡುವ ಅಭ್ಯಾಸವು ಹಿಂದೂ ಎಸ್ಸಿ ಸಮುದಾಯಗಳು ಹಾಗೂ ಇತರ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಮೇಲ್ನೋಟಕ್ಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ,” ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ರೈಲ್ವೆಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸುವ ನೀತಿ ಧಾರ್ಮಿಕ ನಂಬಿಕೆಗಳಿಗೆ ತಕ್ಕಂತೆ ಆಹಾರ ಪಡೆಯುವ ಪ್ರಯಾಣಿಕರ ಹಕ್ಕುಗಳನ್ನೂ ಉಲ್ಲಂಘಿಸಿದಂತಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಿಶೇಷವಾಗಿ ಹಿಂದೂ ಮತ್ತು ಸಿಖ್ ಧರ್ಮಕ್ಕೆ ಸೇರಿದ ಪ್ರಯಾಣಿಕರಿಗೆ ಅವರ ಧಾರ್ಮಿಕ ಆಚರಣೆಗಳಿಗೆ ಹೊಂದುವ ಆಹಾರ ಲಭ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ರೈಲುಗಳಲ್ಲಿ ಹಲಾಲ್ ಪ್ರಮಾಣಿತ ಆಹಾರ ಮಾತ್ರ ನೀಡುತ್ತಿರುವುದು ಭಾರತದ ಸಂವಿಧಾನದ ವಿಧಿ 14, 15, 19(1)(g), 21 ಮತ್ತು 25 ಅಡಿಯಲ್ಲಿ ಸಮಾನತೆ, ತಾರತಮ್ಯರಹಿತತೆ, ವೃತ್ತಿಸ್ವಾತಂತ್ರ್ಯ, ಘನತೆಯೊಂದಿಗೆ ಬದುಕುವ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ. ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1993 ರ ಸೆಕ್ಷನ್ 12 ಅನ್ವಯ, NHRC ಈ ದೂರನ್ನು ಪರಿಗಣಿಸಿದ್ದು, ರೈಲ್ವೆ ಮಂಡಳಿಯಿಂದ ಎರಡು ವಾರಗಳ ಒಳಗೆ ಕ್ರಮ ಕೈಗೊಂಡಿರುವ ವರದಿ ಸಲ್ಲಿಸಲು ಸೂಚಿಸಿದೆ.
ರಾಹುಲ್ ಗಾಂಧಿ ಜೊತೆಗೆ ಒನ್ ಟು ಒನ್ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ: ಮಾಹಿತಿ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ರಾಜ್ಯದ ರಾಜಕೀಯ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರಬಾರದು. ಎಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡಬೇಕು. ಸಿದ್ದರಾಮಯ್ಯ ನಮ್ಮ ಸಿಎಂ ಹಾಗೂ ಡಿಕೆಶಿ ನಮ್ಮ ಡಿಸಿಎಂ ಹಾಗೂ ಅಧ್ಯಕ್ಷರು. ಇವರ ಹೊರತಾಗಿಯೂ ಅಂದ್ರೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಹೊಸ ಅಧ್ಯಕ್ಷರ ಬಗ್ಗೆಯೂ ಹೈಕಮಾಂಡೇ ತೀರ್ಮಾನ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ಪ್ರವಾಸದ ಬಗ್ಗೆ ಅವರು ಮಾತನಾಡಿ, ರಾಹುಲ್ ಗಾಂಧಿ ಜೊತೆಗೆ ಏನೆಲ್ಲಾ ಚರ್ಚೆ ಆಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದರು.
ಆಸ್ಪತ್ರೆಯಿಂದ ಮನೆಗೆ ಮರಳಿದ ಶ್ರೀನಿವಾಸ್ ಮಂದಾನ; ಮುಂದೂಡಲ್ಪಟ್ಟ ಸ್ಮೃತಿ ವಿವಾಹ ದಿನಾಂಕದ ಬಗ್ಗೆ ಕುಟುಂಬ ಮೌನ
Smriti Mandhana Father Illness- ಭಾರತ ಮಹಿಳಾ ತಂಡದ ಕ್ರಿಕೆಟಿಗ ಸ್ಮೃತಿ ಮಂದಾನ ಅವರ ವಿವಾಹದ ದಿನದಂದೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ತಂದೆ ಶ್ರೀನಿವಾಸ್ ಮಂದಾನ ಅವರುಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಮೃತಿ ಮಂದಾನ ಅವರ ವಿವಾಹದ ಹೊಸ ದಿನಾಂಕವನ್ನು ಕುಟುಂಬ ಇನ್ನೂ ಪ್ರಕಟಿಸಿಲ್ಲ. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಪಲಾಶ್ ಮುಚ್ಚಲ್ ಅವರ ಆರೋಗ್ಯದ ವಿಚಾರವಾಗಿ ಯಾವುದೇ ಮಾಹಿತಿ ಲಭಿಸಿಲ್ಲ.
ಮುರುಘಾ ಶ್ರೀ ಪೋಕ್ಸೋ ಕೇಸ್: ಮಧ್ಯಾಹ್ನ 2.45ಕ್ಕೆ ತೀರ್ಪು ಮುಂದೂಡಿಕೆ, ಕೋರ್ಟ್ಗೆ ಹಾಜರಾದ ಶರಣರು
ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶರಣರು ಸೇರಿದಂತೆ ಪ್ರಕರಣದ ಪ್ರಮುಖ ಆರೋಪಿಗಳು ಚಿತ್ರದುರ್ಗದ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಆದರೆ, ಬೆಳಿಗ್ಗೆ ಪ್ರಕಟವಾಗಬೇಕಿದ್ದ ತೀರ್ಪನ್ನು ನ್ಯಾಯಾಧೀಶರು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ.
Karnataka Rails: ನಾಳೆಯಿಂದ 2026 ಮಾರ್ಚ್ವರೆಗೆ ಹಲವು ರೈಲುಗಳು ಭಾಗಶಃ ರದ್ದು! ಯಾವುವು? ಕಾರಣವೇನು..
Train Cancellations List: ಕರ್ನಾಟಕದ ಮಟ್ಟಿಗೆ ರೈಲು ಸಂಚಾರದಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಇತ್ತೀಚೆಗೆ ಬೆಳಂದೂರು ಮಾರ್ಗದಲ್ಲಿ ಒಂದಷ್ಟು ಕಾಮಗಾರಿ ಹಿನ್ನೆಲೆ ರೈಲುಗಳು ರದ್ದಾಗಿದ್ದವು. ಇದೀಗ ನವೆಂಬರ್ 27ರಿಂದ ಮಾರ್ಚ್ 2026ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿವಿಧ ಮಾರ್ಗದ ಹತ್ತಾರು ರೈಲುಗಳ ಸಂಚಾರ ರದ್ದು ಮತ್ತು ಭಾಗಶಃ ರದ್ದಾಗಿದೆ. ರೈಲಿನ ನಿಯಂತ್ರಣ ಸಹ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ
ಬಿಲಾಸ್ಪುರದಲ್ಲಿ ದಂಪತಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಹಾಸಿಗೆಯ ಮೇಲೆ ಮೃತಪಟ್ಟಿದ್ದು, ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಡೆಗಳ ಮೇಲೆ ಲಿಪ್ಸ್ಟಿಕ್ನಿಂದ ಬರೆದ ಸಂದೇಶಗಳು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ರಾಜೇಶ್ ವಿಶ್ವಾಸ್ ಎಂಬುವರ ಹೆಸರನ್ನು ಉಲ್ಲೇಖಿಸಿ, ವೈವಾಹಿಕ ಜೀವನದಲ್ಲಿ ಸಮಸ್ಯೆ ಸೃಷ್ಟಿಸಿದ್ದಾಗಿ ಆರೋಪಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್ | ಸಿಎಂ ಬದಲಾವಣೆಯಾದರೆ ಹೋರಾಟ: ಬಸವರಾಜ ಮಾಳಗೆ
ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಹೋರಾಟ ನಡೆಸಲಾಗುವುದು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ ಎಚ್ಚರಿಸಿದ್ದಾರೆ. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಮಂಗಳವಾರ ಕರೆ ಸುದ್ದಿಗೋಷ್ಠಿಯಲ್ಲಿ ಡೆಸಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಶೋಷಿತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಮೀಸಲಾತಿ ಸಿಗಬೇಕೆಂದು ಸಮೀಕ್ಷೆ ಮಾಡಿಸಲಾಗಿತ್ತು. ಸದ್ಯ ಸಿಎಂ ಸಿದ್ಧರಾಮಯ್ಯರನ್ನು ಕೆಳಗಿಳಿಸಿ ಕಾಂತರಾಜು ವರದಿ ಮೂಲೆಗುಂಪು ಮಾಡುವ ಪ್ರಯತ್ನ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಇದಕ್ಕೆಲ್ಲ ಡಿ.ಕೆ ಶಿವಕುಮಾರ ಅವರೇ ಕಾರಣ ಎಂದು ಆರೋಪಿಸಿದರು. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಕಾಂತರಾಜು ವರದಿ ಜಾರಿಯಾಗುತ್ತದೆ ಎನ್ನುವ ವಿಶ್ವಾಸ ನಮಗಿಲ್ಲ. ಶೋಷಿತರಿಗೆ, ದಲಿತರಿಗೆ, ಹಿಂದುಳಿದವರಿಗೆ ಮೇಲೆತ್ತುವ ಕಾರ್ಯ ಮಾಡುತ್ತಾರೆ ಎನ್ನುವ ಭರವಸೆಯಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ದಲಿತರು ಮತ ಹಾಕಿದ್ದಾರೆ. 16 ಬಾರಿ ಬಜೆಟ್ ಮಂಡನೆ ಮಾಡಿ, ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸೂತ್ರ ಅಳವಡಿಸಿಕೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದ ತುಂಬಾ ದಂಗೆಗಳಾಗುತ್ತವೆ. ಪ್ರತಿಭಟನೆಗಳು ನಡೆಯುತ್ತವೆ ಎಂದು ಎಚ್ಚರಿಸಿದರು. ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಬೆಲ್ದಾರ್ ಮಾತನಾಡಿ, ಇಂದು ರಾಜ್ಯದಲ್ಲಿ ಮನುವಾದಿಗಳ ಮತ್ತು ಸಂವಿಧಾನದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಅವರ ನೇತೃತ್ವವನ್ನು ಒಪ್ಪಿ ಜನ ಮತ ಹಾಕಿದ್ದಾರೆ. ಈಗ ಷಡ್ಯಂತ್ರದಿಂದ ಅವರನ್ನು ಕೆಳಗಿಳಿಸಿ ಅರಾಜಕತೆ, ಅಶಾಂತಿ ಮೂಡಿಸುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ನಂತರ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಕಾಂಗ್ರೇಸ್ ಹೈಕಮಾಂಡ ಸದ್ಯ ನಡೆಯುತ್ತಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿಯ ಮುಖಂಡ ರಮೇಶ ಡಾಕುಳಗಿ ಮಾತನಾಡಿ, 2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಬಿಹಾರದಲ್ಲಿ ಕಾಂಗ್ರೆಸ್ ಆದ ಗತಿಯೇ ರಾಜ್ಯದಲ್ಲೂ ಆಗುತ್ತದೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ, ಉಭಯ ಒಕ್ಕೂಟದ ಮುಖಂಡ ತಾನಾಜಿ ಸಗರ, ತುಕಾರಾಮ ಚಿಮಕೊಡೆ, ಸುಭಾಷ ಹಮಿಲಪುರೆ, ಶೈಲೇಂದ್ರ ಹಿಬಾರೆ, ಶಾಂತಕುಮಾರ್, ರಾಜಕುಮಾರ್, ಪುಂಡಲಿಕರಾವ ಹಾಗೂ ಪ್ರದೀಪ ನಾಟೆಕಾರ್ ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಅತ್ಯಂತ ದಕ್ಷ ಅಧಿಕಾರಿಯಾಗಿ ಹೆಸರುಗಳಿಸಿದ್ದ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನ, ಅವರ ಬಂಧು-ಬಳಗ ಮಾತ್ರವಲ್ಲದೇ, ಸ್ನೇಹಿತರು ಮತ್ತು ಅವರಿಗೆ ಅಕ್ಷರ ಜ್ಞಾನ ಹೇಳಿಕೊಟ್ಟ ಗುರುಗಳನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಮಹಾಂತೇಶ್ ಬೀಳಗಿ ಅವರ ಬಾಲ್ಯದ ದಿನಗಳು, ಓರ್ವ ವಿದ್ಯಾರ್ಥಿಯಾಗಿ ಮಹಾಂತೇಶ್ ಬೀಳಗಿ ಅವರ ಏಳಿಗೆಯ ಬಗ್ಗೆ, ಅವರ ಗುರುಗಳಾದ ರಾಮದುರ್ಗದ ರಾಜಶೇಖರ್ ಜಿರಂಕಳಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 26ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಸದ್ಯ ಮಳೆ ಆರ್ಭಟ ಕಡಿಮೆ ಆಗಿದೆ. ಈಗಾಗಲೇ ಮುಂಗಾರು ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 26) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ ಸೇರಿ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು ಮಳೆ
RSSಗೆ ಫಂಡಿಂಗ್ ಎಲ್ಲಿಂದ ? ಸಂಘದ ಮುಖ್ಯಸ್ಥರ ಸಮ್ಮುಖದಲ್ಲೇ, ಯೋಗಿ ಆದಿತ್ಯನಾಥ್ ಮಹತ್ವದ ಅಪ್ಡೇಟ್ಸ್
Funding for RSS : ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಣ ಬರುತ್ತಿರುವುದು ಎಲ್ಲಿಂದ ಎನ್ನುವ ವಿಚಾರದ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿವರಣೆಯನ್ನು ನೀಡಿದ್ದಾರೆ. ಅಯೋಧ್ಯ ಶ್ರೀರಾಮ ಮಂದಿರದ ರಾಮಧ್ವಜ ಆರೋಹಣ ಕಾರ್ಯಕ್ರಮದಲ್ಲಿ ಈ ಬಗ್ಗೆ ಯೋಗಿ, ವಿವರಣೆಯನ್ನು ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು.. ಇಲ್ಲದೇ ಹೋದರೆ...: ಸ್ಪೋಟಕ ಭವಿಷ್ಯ
ಮೈಸೂರು, ನವೆಂಬರ್ 26: ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕದನ ಕೋಲಾಹಲಕಾರಿ ತಿರುವು ಪಡೆಯುತ್ತಿದೆ. ಎರಡು ಬಣಗಳ ನಡುವೆ ಮುಖ್ಯಮಂತ್ರಿ ಕುರ್ಚಿ ಕದನ ಮುಂದುವರೆದಿದ್ದು, ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಶಾಸಕರ ಬಲಾಬಲ ಪ್ರದರ್ಶನ ಶುರುವಾಗಿದೆ. ಈ ಮಧ್ಯೆ ನಾಡಿನ ಹಲವು ಮಠಾಧೀಶರು, ಧಾರ್ಮಿಕ ಮುಖಂಡರು ಕೂಡ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಲಲಿತಾ
26/11 ಮುಂಬೈ ಭಯೋತ್ಪಾದಕ ದಾಳಿಗೆ 17 ವರ್ಷ; ಗೇಟ್ವೇ ಆಫ್ ಇಂಡಿಯಾದಲ್ಲಿ ಸ್ಮರಣೆ ಮತ್ತು ಪ್ರತಿಜ್ಞಾ ಸಮಾರಂಭ
26/11 ಮುಂಬೈ ಭಯೋತ್ಪಾದಕ ದಾಳಿಯ 17ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರೀಯ ಭದ್ರತಾ ಪಡೆ 'ನೆವರ್ಎವರ್' ಎಂಬ ಶೀರ್ಷಿಕೆಯಡಿ ಸ್ಮರಣೆ ಮತ್ತು ಪ್ರತಿಜ್ಞಾ ಸಮಾರಂಭವನ್ನು ಆಯೋಜಿಸಿದೆ. ಈ ದಾಳಿಯ ಸಂಚುಕೋರ ತಹವ್ವುರ್ ರಾಣಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಮೆರಿಕಾದಿಂದ ಹೆಚ್ಚಿನ ಮಾಹಿತಿ ಕೋರಿದೆ. ಭಯೋತ್ಪಾದನೆಯ ವಿರುದ್ಧ ಭಾರತದ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಪುನರುಚ್ಚರಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಶುರುವಾದಾಗಿನಿಂದ ಕೋಲ್ಕತಾ ಮತ್ತಿತರ ಭಾಗಗಳ ಹಲವಾರು ಪ್ರದೇಶಗಳಲ್ಲಿ, ಹೆಚ್ಚಿನ ಮುಸ್ಲಿಮ್ ಜನಸಂಖ್ಯೆ ಇರುವಲ್ಲೆಲ್ಲ ಅವರು ಬಾಂಗ್ಲಾದೇಶೀಯರು ಎಂದು ಕಥೆ ಕಟ್ಟುವುದು ಜೋರಾಗಿದೆ. ಕೋಲ್ಕತಾ ನಗರದ ಪಕ್ಕದಲ್ಲಿರುವ ನ್ಯೂ ಟೌನ್ನಂತಹ ಪ್ರದೇಶಗಳಲ್ಲಿ ಇಂಥ ಗೊಂದಲ ತೀವ್ರವಾಗಿದೆ. ಮಡಿಲ ಮೀಡಿಯಾಗಳಂತೂ ಎಲ್ಲವನ್ನೂ ಕೋಮುದೃಷ್ಟಿಯಿಂದ ನೋಡುತ್ತ್ತಾ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಇದು ಇಲ್ಲಿನ ಜನರಲ್ಲಿ ಪೌರತ್ವವನ್ನೇ ಕಳೆದುಕೊಳ್ಳುವ ಭಯವನ್ನು ಹುಟ್ಟುಹಾಕಿದೆ. ಎಸ್ಐಆರ್ ಬಗ್ಗೆ ಈಗಾಗಲೇ ಇರುವ ತಕರಾರುಗಳು ಹಲವು. ಬಿಹಾರದಲ್ಲಿ ನುಸುಳುಕೋರರ ವಿರುದ್ಧ ಎಂಬಂತೆ ಅದನ್ನು ಬಿಂಬಿಸುತ್ತ, ಕಡೆಗೆ ಯಾವ ನುಸುಳುಕೋರರೂ, ಯಾವ ವಿದೇಶೀಯರು ಪತ್ತೆಯಾಗದೇ ಹೋದದ್ದು ತಿಳಿದೇ ಇದೆ. ಈಗ ಅದೇ ವರಸೆಯನ್ನು ಪಶ್ಚಿಮ ಬಂಗಾಳದಲ್ಲಿ ಬಳಸಲಾಗುತ್ತಿದೆ. ಅಲ್ಲಿ ಮುಸ್ಲಿಮರನ್ನು ಎಸ್ಐಆರ್ ಹೆಸರಲ್ಲಿ ಗುರಿ ಮಾಡಲಾಗುತ್ತಿದೆ ಮತ್ತಿದು ನಿಜವಾಗಿಯೂ ಅಪಾಯಕಾರಿಯಾಗಿದೆ. ಮುಖ್ಯವಾಗಿ, ಮುಸ್ಲಿಮರೇ ಹೆಚ್ಚಿರುವ ಕೋಲ್ಕತಾದ ನ್ಯೂ ಟೌನ್ ಮತ್ತು ಗುಲ್ಶನ್ ಕಾಲನಿ ನಿವಾಸಿಗಳನ್ನು ಬಾಂಗ್ಲಾದೇಶೀಯರು ಎಂದು ಮಡಿಲ ಮೀಡಿಯಾಗಳು ಬಿಂಬಿಸುತ್ತಿರುವುದು ಆ ಜನರನ್ನು ಕಂಗೆಡಿಸಿದೆ. ಮೀಡಿಯಾಗಳ ನದರಿಗೆ ಬೀಳುವುದನ್ನು ತಪ್ಪಿಸಲು ಅವರೆಲ್ಲ ಕೆಲಸಕ್ಕೂ ಹೋಗದೆ ಮನೆಯೊಳಗೇ ಉಳಿಯುತ್ತಿದ್ದಾರೆ. ಮುನ್ನೂರು ನಾನೂರು ರೂಪಾಯಿಗೆ ದಿನವಿಡೀ ದುಡಿಯಬೇಕಾದ ಅವರು ಮನೆಗಳಿಗೆ ಬೀಗ ಹಾಕಿ ಕೆಲಸಕ್ಕೆ ಹೋದರೆ, ಎಸ್ಐಆರ್ ಗೆ ಹೆದರಿ ಓಡಿಹೋಗಿರುವ ಬಾಂಗ್ಲಾದೇಶೀಯರ ಮನೆಗಳು ಇವು ಎಂದು ಮಡಿಲ ಮೀಡಿಯಾದವರು ಕಥೆ ಹೆಣೆಯುತ್ತಿರುವ ಬಗ್ಗೆ ‘ದಿ ಕ್ವಿಂಟ್’ ವರದಿ ಮಾಡಿದೆ. ವರದಿಯ ಪ್ರಕಾರ, ತಾವು ಬಡವರು ಮತ್ತು ಮುಸ್ಲಿಮರು ಎಂಬ ಕಾರಣದಿಂದಾಗಿಯೇ ತಮ್ಮನ್ನು ಬಾಂಗ್ಲಾದೇಶೀಯರು ಎಂದು ಜರೆಯಲಾಗುತ್ತಿದೆ ಎಂಬುದು ಆ ಜನರ ಸಂಕಟವಾಗಿದೆ. ವಾಸ್ತವ ಏನೆಂದರೆ, ತಮ್ಮ ಕುಟುಂಬಗಳು ತಲೆಮಾರುಗಳಿಂದಲೂ ಈ ಸ್ಲಂಗಳಲ್ಲಿ ವಾಸಿಸುತ್ತಿವೆ ಎನ್ನುತ್ತಾರೆ ಅವರು. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಶುರುವಾದಾಗಿನಿಂದ ಕೋಲ್ಕತಾ ಮತ್ತಿತರ ಭಾಗಗಳ ಹಲವಾರು ಪ್ರದೇಶಗಳಲ್ಲಿ, ಹೆಚ್ಚಿನ ಮುಸ್ಲಿಮ್ ಜನಸಂಖ್ಯೆ ಇರುವಲ್ಲೆಲ್ಲ ಅವರು ಬಾಂಗ್ಲಾದೇಶೀಯರು ಎಂದು ಕಥೆ ಕಟ್ಟುವುದು ಜೋರಾಗಿದೆ. ಕೋಲ್ಕತಾ ನಗರದ ಪಕ್ಕದಲ್ಲಿರುವ ನ್ಯೂ ಟೌನ್ನಂತಹ ಪ್ರದೇಶಗಳಲ್ಲಿ ಇಂಥ ಗೊಂದಲ ತೀವ್ರವಾಗಿದೆ. ಮಡಿಲ ಮೀಡಿಯಾಗಳಂತೂ ಎಲ್ಲವನ್ನೂ ಕೋಮುದೃಷ್ಟಿಯಿಂದ ನೋಡುತ್ತ್ತಾ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಇದು ಇಲ್ಲಿನ ಜನರಲ್ಲಿ ಪೌರತ್ವವನ್ನೇ ಕಳೆದುಕೊಳ್ಳುವ ಭಯವನ್ನು ಹುಟ್ಟುಹಾಕಿದೆ. ನ್ಯೂ ಟೌನ್ ಸುತ್ತಮುತ್ತಲಿನ ಕೊಳೆಗೇರಿ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮ್ ನುಸುಳುಕೋರರು ವಾಸಿಸುತ್ತಿದ್ದಾರೆ ಎಂದು ಮಿಡಿಯಾಗಳು ಅರಚಾಡತೊಡಗಿದಾಗ ಈ ಜನರ ಭಯ ಹೆಚ್ಚಾಯಿತು. ಸ್ಲಂಗಳಿಗೆ ನುಗ್ಗಿದ ಮಿಡಿಯಾಗಳು ಆ ನಿವಾಸಿಗಳ ದಾಖಲೆಗಳನ್ನು ಕೇಳಲು ಶುರು ಮಾಡಿದವೆಂಬುದು ನಿಜಕ್ಕೂ ಆಘಾತಕಾರಿ. ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದವರು ಯಾವುದೇ ದಾಖಲೆಗಳನ್ನು ಕೇಳುವಂತಿರಲಿಲ್ಲ. ಹಾಗಿದ್ದೂ, ಟಿ.ವಿ. ಪತ್ರಕರ್ತರು ದಾಖಲೆ ಕೇಳತೊಡಗಿದ್ದು ವಿಚಿತ್ರವಾಗಿತ್ತು. ಹಾಗೆ ದಾಖಲೆ ಕೇಳಿದ್ದಕ್ಕೆ ಅಲ್ಲಿನ ಜನ ಆಕ್ಷೇಪ ಎತ್ತಿದ ಕೂಡಲೇ, ಅವರನ್ನು ಬಾಂಗ್ಲಾದೇಶಿಗಳು, ರೊಹಿಂಗ್ಯಾ ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟುವುದು ನಡೆಯಿತು. ಹಾಗಾದರೆ ನ್ಯೂ ಟೌನ್ನಲ್ಲಿರುವ ಈ ಸ್ಲಂಗಳು ನಿಜವಾಗಿಯೂ ಬಾಂಗ್ಲಾದೇಶಿಗಳ ನೆಲೆಯೆ? ವರದಿ ಉಲ್ಲೇಖಿಸುವ ಪ್ರಕಾರ, ನ್ಯೂ ಟೌನ್ ನಿರ್ಮಾಣಕ್ಕೆ 1990ರ ದಶಕದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಭೂಮಿ ಕೂಡ ಒಂದು ಕಾಲದಲ್ಲಿನ ಜಮೀನ್ದಾರರಾಗಿದ್ದ ಹಾಜಿ ಬಾದ್ಶಾ ಅಲಿ ಅವರ ಕುಟುಂಬದ ಒಡೆತನದಲ್ಲಿದ್ದುದಾಗಿತ್ತು. ಆ ಕುಟುಂಬದ ಸದಸ್ಯರು ಇನ್ನೂ ಈ ಪ್ರದೇಶದಲ್ಲಿ ಇದ್ದಾರೆ. ಬಾದ್ಶಾ ಅಲಿಯ ಮೊಮ್ಮಗ ಮುಹಮ್ಮದ್ ಶಾ ಆಲಂ, ಟಿಎಂಸಿ ನಾಯಕರಾಗಿದ್ದಾರೆ. ಐತಿಹಾಸಿಕವಾಗಿ, ಈ ಎಲ್ಲಾ ಪ್ರದೇಶಗಳಲ್ಲಿ ಮುಸ್ಲಿಮರೇ ಹೆಚ್ಚಿದ್ದರು. ನ್ಯೂ ಟೌನ್ ನಿರ್ಮಾಣದ ನಂತರ ಅವರಲ್ಲಿ ಹಲವರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದರು. ಕೆಲವರು ರಿಕ್ಷಾ ಎಳೆಯುತ್ತಾರೆ, ಕೆಲವರು ಕಸ ಸಂಗ್ರಹಿಸುತ್ತಾರೆ, ಕೆಲವರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ, ಅವರನ್ನು ಬಾಂಗ್ಲಾದೇಶೀಯರು ಎಂದು ಕರೆಯುವುದು ಅನ್ಯಾಯ ಎಂದು ಮುಹಮ್ಮದ್ ಶಾ ಆಲಂ ಹೇಳುವುದನ್ನು ವರದಿ ಉಲ್ಲೇಖಿಸಿದೆ. ‘‘ನಾವು ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವಷ್ಟು ಶಕ್ತರಲ್ಲ. ನಾವು ಬಡವರು, ಹಾಗಾಗಿಯೇ ನಮಗೆ ಕಿರುಕುಳ ನೀಡುವುದು ಸುಲಭ’’ ಎಂದು ಅಲ್ಲಿನ ನಿವಾಸಿಗಳು ಸಂಕಟ ವ್ಯಕ್ತಪಡಿಸುತ್ತಾರೆ. ಮುಸ್ಲಿಮರು ಮಾತ್ರವೇ ಈ ಕಿರುಕುಳಕ್ಕೆ ಬಲಿಯಾಗಿಲ್ಲ. ಸಣ್ಣ ಸಂಬಳಕ್ಕೆ ದುಡಿಯುತ್ತ್ತಾ, ಮನೆಗೆ ಹಣ ಕಳಿಸಬೇಕಾದ ಅನಿವಾರ್ಯತೆಯಿರುವ ಸ್ವೀಟಿ ಮೊಂಡಲ್ ಅವರಂಥವರು ಕೂಡ ಈ ಸ್ಲಂನಲ್ಲಿ ವಾಸಿಸುತ್ತಿದ್ದಾರೆ. ಅವರು ಹೂಗ್ಲಿಯವರು. ಈಗ ಅಲ್ಲಿನವರೆಲ್ಲರನ್ನೂ ಬಾಂಗ್ಲಾದೇಶಿಗಳು ಎಂದು ಕರೆಯಲಾಗುತ್ತಿರುವಾಗ, ಇರುವ ಕೆಲಸವನ್ನೂ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭಯ ಅಂಥವರನ್ನು ಕಾಡುತ್ತಿದೆ. ಇಲ್ಲಿ ಇರುವ ಅನೇಕರು ಹೂಗ್ಲಿಯ ಖಾನಕುಲ್ನವರು. ಮತ್ತೆ ಕೆಲವರು ಬಿಹಾರದ ದರ್ಭಂಗಾದವರು. ಆದರೆ ಅವರನ್ನೆಲ್ಲ ಬಾಂಗ್ಲಾದೇಶಿಗಳು ಎಂದು ಆರೋಪಿಸಲಾಗುತ್ತಿರುವುದು ಮಾತ್ರ ವಿಚಿತ್ರವಾಗಿದೆ. ಕೋಲ್ಕತಾದಲ್ಲಿ ಮುಸ್ಲಿಮರು ಹೆಚ್ಚಿರುವ ಮತ್ತೊಂದು ಪ್ರದೇಶ ಗುಲ್ಶನ್ ಕಾಲನಿಯಲ್ಲಿ ಕೂಡ ಇಂಥದೇ ಭಯ ಹರಡಲಾಗುತ್ತಿದೆ. ಗುಲ್ಶನ್ ಕಾಲನಿ ಬೂತ್ ಅನ್ನು ಹೊಸದಾಗಿ ರಚಿಸಲಾಗಿದೆ ಎಂದು ನಿವಾಸಿಗಳು ವಾದಿಸುತ್ತಾರೆ. ಎಲ್ಲಾ ನಿವಾಸಿಗಳು ಇನ್ನೂ ಈ ಬೂತ್ನ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಂಡಿಲ್ಲ. ಇಲ್ಲಿಯವರೆಗೆ, ಈ ಪ್ರದೇಶದ ನಿವಾಸಿಗಳು ಪಶ್ಚಿಮ ಚೌಬಾಗಾ ಪ್ರದೇಶದ ನಾಲ್ಕೈದು ಬೂತ್ಗಳಲ್ಲಿ ಮತ ಚಲಾಯಿಸುತ್ತಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಬೂತ್ನಲ್ಲಿ ಮತದಾನ ನಡೆಯಲಿದೆ. ಬಾಂಗ್ಲಾದೇಶ ಅಥವಾ ಪೂರ್ವ ಪಾಕಿಸ್ತಾನದಿಂದ ಬಹಳ ಹಿಂದೆಯೇ ವಲಸೆ ಬಂದ ಕೆಲವು ಜನರು ಮಾರ್ಟಿನ್ ಪ್ಯಾರಾದಲ್ಲಿ ವರ್ಷಗಳಿಂದ ವಾಸಿಸುತ್ತಿದ್ದಾರೆ. ಎಡರಂಗ ಸರಕಾರದ ಅವಧಿಯಲ್ಲಿ, ಹಲವಾರು ನಿರಾಶ್ರಿತ ಕುಟುಂಬಗಳಿಗೆ ಈ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು.ಆದರೂ, ಬಾಂಗ್ಲಾದೇಶದವರು ಎಂಬ ಆರೋಪಗಳನ್ನು ಈ ನಿವಾಸಿಗಳು ವಿರೋಧಿಸುತ್ತಾರೆ. ಇಲ್ಲಿರುವ ಹೆಚ್ಚಿನ ಜನರು ಬಿಹಾರ, ಉತ್ತರ ಪ್ರದೇಶ ಮತ್ತು ದಿಲ್ಲಿಯ ಉರ್ದು ಮಾತನಾಡುವ ಜನರಾಗಿದ್ದಾರೆ. ಹೀಗೆ ಇಲ್ಲಿನ ಬಡ ಮುಸ್ಲಿಮರನ್ನು ಬಾಂಗ್ಲಾದೇಶೀಯರು ಎನ್ನಲಾಗುತ್ತಿರುವ ಬಗ್ಗೆ ಟಿಎಂಸಿ ನಾಯಕ ಅರೂಪ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ರಾಜ್ಯಾದ್ಯಂತ ದ್ವೇಷ ಪ್ರಚಾರ ಮತ್ತು ತಪ್ಪು ಮಾಹಿತಿ ಹರಡಲು ಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ದಿಲ್ಲಿಯಲ್ಲಿ ಮತ ಚಲಾಯಿಸಿದವರಿಗೇ ಬಿಹಾರದಲ್ಲೂ ಮತ ಚಲಾಯಿಸಲು ಅವಕಾಶ ಕೊಡುತ್ತಿರುವಾಗ, ಬಂಗಾಳದ ನ್ಯೂ ಟೌನ್ ಮತ್ತು ಗುಲ್ಶನ್ ಕಾಲನಿಯಂಥ ಪ್ರದೇಶಗಳಲ್ಲಿನ ಭಾರತೀಯರನ್ನು ಬಾಂಗ್ಲಾದೇಶಿಗಳು ಎಂದು ಲೇಬಲ್ ಮಾಡಲಾಗುತ್ತಿರುವುದು ವಿಪರ್ಯಾಸ. ನ್ಯೂ ಟೌನ್ನಲ್ಲಿ ಅಕ್ರಮ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಎಂಬ ವದಂತಿಯನ್ನು ಮೊದಲು ಹರಡಿದವರು ಅಮಿತ್ ಮಾಳವೀಯ. ನಂತರ ಅದು ಜೋರಾಗಿ ವ್ಯಾಪಿಸತೊಡಗಿತು. ಈ ಪ್ರದೇಶಗಳಲ್ಲಿ ನಿಜವಾಗಿಯೂ ನುಸುಳುಕೋರರು ಇದ್ದರೆ, ಬಿಎಸ್ಎಫ್ ಏನು ಮಾಡುತ್ತಿದೆ? ಒಳನುಸುಳುಕೋರರು ರಾಜ್ಯದೊಳಗೆ ಬರಲು ಅವರೇಕೆ ಅವಕಾಶ ನೀಡುತ್ತಿದ್ದಾರೆ? ಇಂಥ ಪ್ರಶ್ನೆಗಳಿಗೆ ಬಿಜೆಪಿ ಜಾಣ ಮೌನ ವಹಿಸುತ್ತದೆ. ಚುನಾವಣೆಗೆ ಮುನ್ನ ಇದು ಖಂಡಿತವಾಗಿಯೂ ಭಯ ಹುಟ್ಟಿಸುವ ಪ್ರಚಾರವಾಗಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಹೆದರಿಸುವುದು ಇದರ ಉದ್ದೇಶ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಕೋಲ್ಕತಾ ಹೈಕೋರ್ಟ್ ವಕೀಲ ಸಮೀಮ್ ಅಹ್ಮದ್ ಹೇಳುವುದನ್ನು ವರದಿ ಉಲ್ಲೇಖಿಸಿದೆ. ಈ ಜನರನ್ನು ಭಯಭೀತಗೊಳಿಸಲಾಗುತ್ತಿದೆ ಮತ್ತು ಅವರು ಬಿಜೆಪಿಯನ್ನು ಬೆಂಬಲಿಸಿದರೆ, ಅವರ ಪೌರತ್ವ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪರೋಕ್ಷವಾಗಿ ಹೇಳಲಾಗುತ್ತಿದೆ. ಅವರು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ, ಅವರ ಬದುಕನ್ನು ಅತಂತ್ರವಾಗಿಸಲಾಗುತ್ತದೆ ಎಂದು ವಕೀಲ ಸಮೀಮ್ ಅಹ್ಮದ್ ಹೇಳುತ್ತಾರೆ. ಅವರ ಪ್ರಕಾರ, ನ್ಯೂ ಟೌನ್ ಸೇರಿದಂತೆ ಈ ಪ್ರದೇಶಗಳಲ್ಲಿನ ಹೆಚ್ಚಿನ ಬಡ ಜನರು ಭಾರತೀಯ ಮುಸ್ಲಿಮರು ಎಂದು ಮಾಧ್ಯಮಕ್ಕೂ ಚೆನ್ನಾಗಿ ಗೊತ್ತಿದೆ. ಆದರೂ ಅವರಿಗೆ ಸತತ ಕಿರುಕುಳ ನೀಡಲಾಗುತ್ತಿದೆ. ಅವರು ಯಾವಾಗಲೂ ಒತ್ತಡದಲ್ಲಿ ಇರುವಂತೆ ಮಾಡಲಾಗುತ್ತಿದೆ ಮತ್ತು ಸುರಕ್ಷಿತವಾಗಿರಲು ಬಿಜೆಪಿಗೆ ಶರಣಾಗಲಿ ಎಂದು ಬಯಸಲಾಗುತ್ತದೆ ಎಂಬುದು ಅಹ್ಮದ್ ಅಭಿಪ್ರಾಯ. ಸಾಮಾಜಿಕ ಕಾರ್ಯಕರ್ತೆ ಸುಗತಾ ರಾಯ್ ಹೇಳುವ ಪ್ರಕಾರ, ಗಡಿ ದಾಟಿ 30-50 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅನೇಕರು ರಾಜ್ಯಾದ್ಯಂತ ಇದ್ದಾರೆ. ಅವರು ಈ ದೇಶದಲ್ಲಿ ಕೆಲಸ ಮಾಡಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಭೂಮಿ ಖರೀಸಿದ್ದಾರೆ, ಮನೆ ಕಟ್ಟಿದ್ದಾರೆ. ಆದರೆ ಇಂದು ಅವರನ್ನು ಕೆಲವು ದಾಖಲೆಗಳು ಇಲ್ಲದ ಕಾರಣಕ್ಕೆ ದೇಶದಿಂದ ಹೊರ ಹಾಕಿದರೆ, ಅವರು ಎಲ್ಲಿಗೆ ಹೋಗುತ್ತಾರೆ? ಎಂಬುದು ರಾಯ್ ಪ್ರಶ್ನೆ. ಅಹ್ಮದ್ ಅವರು ಹೇಳುವಂತೆ, ಅಲ್ಪಸಂಖ್ಯಾತರು ಸೇರಿದಂತೆ ಬಡ ಜನರ ದೊಡ್ಡ ಭಾಗವನ್ನು ದೇಶವಿಲ್ಲದ ಕಾರ್ಮಿಕರನ್ನಾಗಿ ಮಾಡುವುದು ಬಿಜೆಪಿಯ ಉದ್ದೇಶ. ಏಕೆಂದರೆ ಅವರಿಗೆ ಪೌರತ್ವ ಹಕ್ಕುಗಳಿಲ್ಲದೇ ಇದ್ದಾಗ ಅವರನ್ನು ಸುಲಭವಾಗಿ ಶೋಷಿಸಬಹುದು ಎಂಬುದು ಅದರ ಲೆಕ್ಕಾಚಾರ ಎನ್ನುತ್ತಾರೆ ಅವರು. ಎಸ್ಐಆರ್ ಮೂಲಕ ಏನೆಲ್ಲ ನಡೆಯುತ್ತಿದೆ ಎಂಬುದಕ್ಕೆ ಇದು ಕರಾಳ ನಿದರ್ಶನ.
ನೂತನ ವೈಜ್ಞಾನಿಕತೆ ಪುರಾತನ ಸಂಸ್ಕೃತಿಯ ಸಂಗಮವೇ ಸನಾತನ : ಇಂಡ್ಲವಾಡಿಯಲ್ಲಿ ಶ್ರೀ ರವಿ ಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿ ಶಂಕರ್ ಗುರೂಜಿ ಅವರು ಹಲವಾರು ದಶಕಗಳಿಂದ ತಳಸಮುದಾಯವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮತ್ತು ಸನಾತನ ಧರ್ಮವನ್ನು ಪಸರಿಸುವ ದೃಷ್ಟಿಯಿಂದ ಹಳ್ಳಿಹಳ್ಳಿಗೆ ಸಂಚರಿಸುತ್ತಿದ್ದಾರೆ ಮತ್ತು ಸತ್ಸಂಗ ಆಯೋಜಿಸುತ್ತಿದ್ದಾರೆ. ಇಂಥದೇ ಒಂದು ಮಹಾ ಸತ್ಸಂಗ ಜಿಗಣಿ ಮತ್ತು ಹಾರೋಹಳ್ಳಿ ರಸ್ತೆಯಲ್ಲಿರುವ ಇಂಡ್ಲವಾಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಗುರುವರ್ಯರು, ನೂತನ ವೈಜ್ಞಾನಿಕತೆ ಮತ್ತು ಪುರಾತನ ಸಂಸ್ಕೃತಿಯ ಸಂಗಮವೇ ಸನಾತನ ಧರ್ಮದ ಅಡಿಪಾಯ ಎಂದು ಉಪದೇಶಿಸಿದರು.
ಸಂವಿಧಾನ ದಿನ | ಮೊದಲ ಬಾರಿಯ ಮತದಾರರನ್ನು ಗೌರವಿಸಿ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ
ಹೊಸದಿಲ್ಲಿ: ಮತದಾನದ ಹಕ್ಕು ಪ್ರಜಾಪ್ರಭುತ್ವದ ಹೃದಯಸ್ವರೂಪವಾಗಿದ್ದು, ಪ್ರತಿಯೊಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.18 ವರ್ಷ ತುಂಬಿ ಮೊದಲ ಬಾರಿಗೆ ಮತ ಚಲಾಯಿಸಲಿರುವ ಯುವ ಮತದಾರರನ್ನು ಗೌರವಿಸುವ ಮೂಲಕ ಶಾಲೆಗಳು ಮತ್ತು ಕಾಲೇಜುಗಳು ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸಂವಿಧಾನ ದಿನದ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಪತ್ರ ಬರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾಗರಿಕ ಕರ್ತವ್ಯಗಳ ಪಾಲನೆಯೇ ಪ್ರಮುಖ ಅಡಿಪಾಯ ಎಂದು ಒತ್ತಿ ಹೇಳಿದ್ದಾರೆ. ಮಹಾತ್ಮ ಗಾಂಧಿಯವರ “ಕರ್ತವ್ಯಗಳಿಂದಲೇ ಹಕ್ಕುಗಳ ಸೃಷ್ಟಿ” ಎಂಬ ವಾಕ್ಯವನ್ನು ಉಲ್ಲೇಖಿಸಿದ ಮೋದಿ ಅವರು, ಕರ್ತವ್ಯಪಾಲನೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಗಟ್ಟಿಯಾದ ನೆಲೆಗಟ್ಟನ್ನು ಹಾಕುತ್ತದೆ ಎಂದರು. “ಇಂದು ಕೈಗೊಳ್ಳುತ್ತಿರುವ ನೀತಿಗಳು ಮತ್ತು ನಿರ್ಧಾರಗಳು ಮುಂದಿನ ಪೀಳಿಗೆಯ ಜೀವನವನ್ನು ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ವಿಕಸಿತ ಭಾರತದ ದೃಷ್ಟಿಯತ್ತ ನಾವು ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ನಾಗರಿಕರು ತಮ್ಮ ಕರ್ತವ್ಯಗಳನ್ನು ಗುರಿಯಾಗಿರಿಸಿಕೊಳ್ಳಬೇಕು” ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ. ಸಂವಿಧಾನ ಮಾನವ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅತ್ಯಂತ ಮಹತ್ವ ನೀಡುತ್ತದೆ ಎಂದು ಅವರು X ನಲ್ಲಿನ ತಮ್ಮ ಖಾತೆಯಲ್ಲಿ ಪ್ರತ್ಯೇಕವಾಗಿ ಬರೆದಿದ್ದು, “ನಮ್ಮ ಸಂವಿಧಾನವು ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನೆನಪಿಸುತ್ತದೆ. ಈ ಕರ್ತವ್ಯಗಳೇ ಬಲಿಷ್ಠ ಪ್ರಜಾಪ್ರಭುತ್ವದ ಮೂಲತತ್ವ” ಎಂದು ಹೇಳಿದ್ದಾರೆ. ಸಂವಿಧಾನದ ನಿರ್ಮಾತೃಗಳಿಗೆ ಗೌರವ ಸಲ್ಲಿಸಿದ ಪ್ರಧಾನಿ, “ವಿಕಸಿತ ಭಾರತ ನಿರ್ಮಾಣದ ನಮ್ಮ ಯತ್ನಕ್ಕೆ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಸದಾ ಪ್ರೇರಣೆ” ಎಂದು ತಿಳಿಸಿದ್ದಾರೆ. On Constitution Day, wrote a letter to my fellow citizens in which I’ve highlighted about the greatness of our Constitution, the importance of Fundamental Duties in our lives, why we should celebrate becoming a first time voter and more… https://t.co/i6nQAfeGyu — Narendra Modi (@narendramodi) November 26, 2025
ಬಡಗು ತಿಟ್ಟು ಯಕ್ಷಗಾನದ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ
Kandavara Raghurama Shetty- ಖ್ಯಾತ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನವೆಂಬರ್ 26ರಂದು ನಿಧನರಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಇವರು ಪ್ರಸಂಗಕರ್ತ, ಅರ್ಥಧಾರಿ, ರಂಗಕರ್ಮಿಯಾಗಿ ಗುರುತಿಸಿಕೊಂಡಿದ್ದರು. ಶಿಕ್ಷಕರಾಗಿ 35 ವರ್ಷ ಸೇವೆ ಸಲ್ಲಿಸಿ 'ಮಾದರೀ ಶಿಕ್ಷಕ' ಪ್ರಶಸ್ತಿ ಪಡೆದಿದ್ದರು. 'ಚೆಲುವೆ ಚಿತ್ರಾವತಿ', 'ರತಿ ರೇಖಾ' ಮುಂತಾದ ಪ್ರಸಿದ್ಧ ಪ್ರಸಂಗಗಳನ್ನು ರಚಿಸಿದ್ದರು. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಗಲುವಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಅತ್ಯಾಚಾರ: ಪ್ರಕರಣ ವಾಪಸ್ ಪಡೆಯುವಂತೆ ತಂದೆಗೆ ಒತ್ತಡ
ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ತಂದೆ, ಪ್ರಕರಣ ವಾಪಸ್ ಪಡೆಯುವಂತೆ ಬೆದರಿಕೆ ಎದುರಿಸುತ್ತಿದ್ದಾರೆ. ಇಬ್ಬರು ಅಪರಿಚಿತರು ತಮ್ಮನ್ನು ಸಂಪರ್ಕಿಸಿ, ಪ್ರಕರಣ ಹಿಂಪಡೆಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಬೆದರಿಕೆಗಳ ಹೊರತಾಗಿಯೂ, ಕುಟುಂಬವು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ.
ಜಾಗತಿಕ ಬಂಟರ ಒಕ್ಕೂಟದಿಂದ ಸಾಧಕರಿಗೆ ಸನ್ಮಾನ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು
ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುವ ಸಂವಿಧಾನ ದಿನವು, 1949 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ಮಹತ್ವದ ದಿನವಾಗಿದೆ. ಈ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 2015 ರಲ್ಲಿ ಭಾರತ ಸರ್ಕಾರವು ಈ ದಿನವನ್ನು ಘೋಷಿಸಿತು. 2025 ರ ಥೀಮ್ ನಮ್ಮ ಸಂವಿಧಾನ – ನಮ್ಮ ಸ್ವಾಭಿಮಾನ ಎಂಬುದ್ದಾಗಿದ್ದು, ಈ ದಿನದಂದು ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ಸಂಸತ್ತಿನಲ್ಲಿ ಮುಖ್ಯ ಕಾರ್ಯಕ್ರಮಗಳು ನಡೆಯುತ್ತವೆ
ULLALA | ಅಪಘಾತದಲ್ಲಿ ಗಾಯಗೊಂಡಿದ್ದ ಕಿನ್ಯದ ಯುವಕ ಮೃತ್ಯು
ಉಳ್ಳಾಲ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿನ್ಯದ ಮೀಂಪ್ರಿ ಎಂಬಲ್ಲಿನ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಮಂಜನಾಡಿ ಇಬ್ರಾಹೀಂ ಮದನಿ ಕಾಮಿಲ್ ಸಖಾಫಿ ಎಂಬವರ ಪುತ್ರ ಜಲಾಲುದ್ದೀನ್ ಹುಮೈದಿ(28) ಮೃತಪಟ್ಟವರು. ಉಡುಪಿ ಖಾಝಿ ಶೈಖುನಾ ಮಾಣಿ ಉಸ್ತಾದ್ ರ ಮೊಮ್ಮಗರಾಗಿರುವ ಜಲಾಲುದ್ದೀನ್ ಹುಮೈದಿ ಇತ್ತೀಚೆಗೆ ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರಳೆದಿದ್ದಾರೆ. ಪ್ರತಿಭಾನ್ವಿತ ಯುವ ವಿದ್ವಾಂಸರಾಗಿದ್ದ ಜಲಾಲುದ್ದೀನ್ ಹುಮೈದಿಯವರು ಉಪ್ಪಳ್ಳಿ ಶಾದುಲಿ ಜುಮಾ ಮಸೀದಿಯಲ್ಲಿ ಸೇವಾ ನಿರತರಾಗಿದ್ದರು. ಮೃತರು ತಂದೆ ತಾಯಿ, ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಇಂದು(ನ.26) ಅಸರ್ ನಮಾಝ್ ಬಳಿಕ ಕಿನ್ಯ ಬುಖಾರಿ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವೃದ್ಧ ದಂಪತಿಯ ಪೋಷಣೆಯಲ್ಲಿರುವ ಮೂವರು ಮಕ್ಕಳಿಗೆ ಬೇಕಿದೆ ಅಭಯ ಹಸ್ತ
ಕಲಬುರಗಿ : ಉತ್ತರ ಕರ್ನಾಟಕದ ಏಕೈಕ ಶುಷ್ಕ ಅರಣ್ಯ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಂಚೋಳಿ ವನ್ಯಜೀವಿಧಾಮದ ಪ್ರದೇಶ ಹಲವು ಸಮಸ್ಯೆಗಳಿಂದ ಕೂಡಿದೆ. ಸದ್ಯ ಅರಣ್ಯದೊಳಗಿರುವ ಗ್ರಾಮ, ತಾಂಡಾಗಳ ಪರಿಸ್ಥಿತಿ, ಯುವಕರ ನಿರುದ್ಯೋಗ, ಅನಕ್ಷರತೆ ನಡುವೆಯೇ ತಂದೆ ತಾಯಿ ಇಲ್ಲದ ಮೂವರು ಅನಾಥ ಮಕ್ಕಳ ಪರಿಸ್ಥಿತಿಯೂ ಕಷ್ಟಕರವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇವಾ ನಾಯಕ ತಾಂಡಾದಲ್ಲಿ ತಂದೆ-ತಾಯಿ ಕಳೆದುಕೊಂಡ ಮೂವರು ಚಿಕ್ಕ ಮಕ್ಕಳು, ಅಜ್ಜ ಅಜ್ಜಿಯ ಪೋಷಣೆಯಲ್ಲಿ ಈಗ ಭವಿಷ್ಯದ ಭರವಸೆಗಾಗಿ ಕಾದು ಕುಳಿತಿದ್ದಾರೆ. ತಾಂಡಾದಲ್ಲಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿಗಳಾದ ಚಂದ್ರ ಜಾಧವ್ ಹಾಗೂ ದೇವಿಬಾಯಿ ಎಂಬವರು ತಮ್ಮ ಮಕ್ಕಳ ಬದಲಿಗೆ ಮೊಮ್ಮಕ್ಕಳನ್ನು ಸಾಕುವಂತಹ ದಯನೀಯ ಸ್ಥಿತಿ ಬಂದೊದಗಿದೆ. ಜೀವನ ಸಾಗಿಸಲು ಆರ್ಥಿಕವಾಗಿ ಬಲ ತುಂಬುತ್ತಿದ್ದ ಪುತ್ರ ಹಾಗೂ ಸೊಸೆಯನ್ನು ಕಳೆದುಕೊಂಡ ಚಂದ್ರ ಜಾಧವ್ ದಂಪತಿ, ಈಗ ಮೊಮ್ಮಕ್ಕಳನ್ನು ಸಾಕುವುದು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಮಕ್ಕಳ ಭವಿಷ್ಯ ರೂಪಿಸಲು ಅವರು ‘ಅಭಯ ಹಸ್ತ’ಕ್ಕಾಗಿ ಭರವಸೆಯಲ್ಲಿದ್ದಾರೆ. ಮೊಮ್ಮಕ್ಕಳನ್ನು ಸಾಕುತ್ತಿರುವ ವೃದ್ಧ ದಂಪತಿ: ಚಂದ್ರ ಜಾಧವ್ ಹಾಗೂ ದೇವಿಬಾಯಿ ದಂಪತಿಯ ಪುತ್ರ ಪೂರಣ್ ಜಾಧವ್ ಹಾಗೂ ಸೊಸೆ ರೇಣುಕಾ ಅವರು ಜೀವನ ನಡೆಸುವುದಕ್ಕಾಗಿ ಬೇರೆ ನಗರಗಳಿಗೆ ವಲಸೆ (ಗುಳೆ) ಹೋಗಿ ತಮ್ಮ ಬದುಕು ಸಾಗಿಸುತ್ತಿದ್ದರು. ಗುಳೆ ಹೋದ ಪ್ರದೇಶದಲ್ಲಿ ಏಕಾಏಕಿ ಸೊಸೆ ನಿಧನರಾಗಿದ್ದರಿಂದ ಮಗ ಪೂರಣ್, ತನ್ನ ಮಕ್ಕಳನ್ನು ಕರೆದುಕೊಂಡು ಪಾಲಕರ ಜೊತೆಗೆ ಸೇವಾ ನಾಯಕ ತಾಂಡಾದಲ್ಲಿ ನೆಲೆಸಿದ್ದ. ಬಳಿಕ ಪತ್ನಿ ತೀರಿಹೋದ ಕೆಲ ತಿಂಗಳಲ್ಲೇ ಪೂರಣ್ ಕೂಡ ಮೃತಪಟ್ಟರು. ಹಾಗಾಗಿ ಮೃತಪಟ್ಟ ಮಗ ಸೊಸೆಯ ಮಕ್ಕಳನ್ನು ಸಾಕುವ ಹೊಣೆ ಅಜ್ಜ, ಅಜ್ಜಿಯದಾಗಿದೆ. ಅಜ್ಜಿ ಮಾತ್ರ ಕೂಲಿ ಕೆಲಸ ಮಾಡುತ್ತ ಅಜ್ಜ ಹಾಗೂ ಮೂರು ಮೊಮ್ಮಕ್ಕಳನ್ನು ಸಾಕುತ್ತಿದ್ದಾರೆೆ. ಬೆಳ್ಳಂಬೆಳಗ್ಗೆ 4 ಗಂಟೆಗೆ ಎದ್ದು ಕೂಲಿಗಾಗಿ ಅರಸುತ್ತಾ ಹೋಗುವ ಅಜ್ಜಿ ದೇವಿಬಾಯಿ ಮರಳಿ ಬರುವುದು ಸಂಜೆಯ ಹೊತ್ತಿನಲ್ಲಿ, ಅಲ್ಲಿಯವರೆಗೆ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅಜ್ಜನ ಕೆಲಸವಾಗಿದೆ. 8 ವರ್ಷದೊಳಗಿರುವ ಮೂವರು ಮಕ್ಕಳಿಗಿಲ್ಲ ಆಧಾರ್ ಕಾರ್ಡ್: ಮೃತ ಪೂರಣ್ ಹಾಗೂ ರೇಣುಕಾ ದಂಪತಿಗೆ ಒಂದು ಗಂಡು, ಎರಡು ಹೆಣ್ಣುಮಕ್ಕಳಿವೆ. 8 ವರ್ಷದ ದೀಪಿಕಾ, 5 ವರ್ಷದ ದಿವ್ಯಾ ಹಾಗೂ ಮೂರುವರೆ ವರ್ಷದ ಸಾಯಿರಾಂ ಎಂಬ ಬಾಲಕನಿದ್ದಾನೆ. ಈ ಮೂರೂ ಮಕ್ಕಳಿಗೆ ತಂದೆ ತಾಯಿಯಷ್ಟೇ ಅಲ್ಲದೆ ಗುರುತಿಗಾಗಿ ಇರುವ ‘ಆಧಾರ್ ಕಾರ್ಡ್’ ಕೂಡ ಇಲ್ಲ. ದುಡಿಯುವ ವಯಸ್ಸು ಮೀರಿದರೂ ಅಜ್ಜಿ ನಿತ್ಯವೂ ಮಕ್ಕಳಿಗಾದರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆಯಿದೆ. ಇಂತಹ ಸನ್ನಿವೇಶದಲ್ಲೂ ಅನಾಥ ಮಕ್ಕಳನ್ನು ಸಾಕುವುದು, ಶಿಕ್ಷಣ ಕೊಡಿಸುವುದು ತುಂಬಾ ಕಷ್ಟವಾಗಿದೆ. ಅವರಿಗೆ ಸರಕಾರ, ಸಂಘ ಸಂಸ್ಥೆಗಳು ಸಹಾಯಕ್ಕೆ ಬರಬೇಕು, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತಿತ್ತರ ದಾಖಲೆಗಳನ್ನು ಸೃಷ್ಟಿಸಿ, ಸರಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಅರಣ್ಯ ಪ್ರದೇಶದಲ್ಲಿರುವ ಈ ತಾಂಡಕ್ಕೆ ಹೋಗಲು ಚಿಂಚೋಳಿಯಿಂದ ಕೇವಲ 12 ಕಿಮೀ ದೂರವಿದ್ದರೂ ಅಧಿಕಾರಿಗಳು, ಶಾಸಕ, ಸಂಸದರು, ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಬರುವುದಿಲ್ಲ. ಪಕ್ಕದಲ್ಲಿ ತೆಲಂಗಾಣ ರಾಜ್ಯವಿದೆ, ಗಡಿ ಪ್ರದೇಶದಲ್ಲಿರುವ ಜನರ ಅಭ್ಯುದಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಆಸಕ್ತಿ ತೋರಬೇಕು. ಜನಜೀವನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನರೇಶ್ ಜಾಧವ್ ಒತ್ತಾಯಿಸಿದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುವ ಕುಟುಂಬಕ್ಕೆ ಮಕ್ಕಳನ್ನು ಸಾಕುವುದು ಕಷ್ಟವಾಗಿದೆ, ಸರಕಾರ, ಸಂಘ ಅಥವಾ ಮಕ್ಕಳಿಗೆ ಸಂಬಂಧಪಟ್ಟಂತೆ ಇರುವ ಆಯೋಗ, ಸಂಸ್ಥೆಗಳು ಇತ್ತ ಕಡೆ ಗಮನ ಹರಿಸಬೇಕು, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ, ವಸತಿ, ಇತರ ಸೌಲಭ್ಯಗಳನ್ನು ಒದಗಿಸಬೇಕು. -ಪ್ರಕಾಶ್ ರಾಠೋಡ್, ಸ್ಥಳೀಯ ಕೂಲಿ ಕಾರ್ಮಿಕ
ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ, ಜರ್ಮನಿ ರಷ್ಯಾ 2029ರ ವೇಳೆಗೆ ನ್ಯಾಟೋ ರಾಷ್ಟ್ರಗಳ ಮೇಲೆ ಯುದ್ಧ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಬಾಂಬ್ ಸಿಡಿಸಿದೆ. ಪುಟಿನ್ ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೋ ಮೇಲೆ ಕಣ್ಣಿಟ್ಟಿದ್ದು, ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಉಕ್ರೇನ್ ಹಾಗೂ ನ್ಯಾಟೋ ರಾಷ್ಟ್ರಗಳು ಶಾಂತಿ ಬಯಸಿದರೂ, ಅದು ರಷ್ಯಾದ ಮೇಲೆ ಅವಲಂಬಿತವಾಗಿದೆ ಎಂದು ಜರ್ಮನಿ ಹೇಳಿದೆ. ಇತ್ತ ರಷ್ಯಾ ಮಾತ್ರ ಉಕ್ರೇನ್ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು,ಮಂಗಳವಾರ ಮಧ್ಯರಾತ್ರಿ ನಡೆಸಿದ ದಾಳಿಯಿಂದ 7 ಜನರು ಸಾವನ್ನಪ್ಪಿದ್ದಾರೆ.
India Vs South Africa- ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಅನುಭವಿ ಆಟಗಾರ ಕೆಎಲ್ ರಾಹುಲ್ ಅವರು ಕೆಟ್ಟದಾಗಿ ಬೌಲ್ಡ್ ಆಗಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಕಾಮೆಂಟರಿ ಬಾಕ್ಸ್ ನಲ್ಲಿದ್ದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ರಾಹುಲ್ ಅವರ ಔಟಾದ ರೀತಿಯನ್ನು ಅನುಕರಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
West Bengal SIR: ಏಕೆ ನಡುಗುತ್ತಿದೆ ಮಮತಾ ಬ್ಯಾನರ್ಜಿ ಸ್ವರ? ವೋಟ್ ಬ್ಯಾಂಕ್ ಭಯವೋ, ನೈಜ ಕಾಳಜಿಯೋ?
SIR Process in West Bengal : ವೋಟ್ ಚೋರಿ ದೇಶದಲ್ಲಿ ಸದ್ದನ್ನು ಮಾಡುತ್ತಿರುವ ಹೊತ್ತಿನ್ನಲ್ಲೇ, ಕೇಂದ್ರ ಚುನಾವಣಾ ಆಯೋಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ. ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ಯಾವುದೇ ವಿಚಾರವನ್ನು ಜನರ ಮುಂದಿಡುವುದರಿಂದ, ಈ ಪ್ರಕ್ರಿಯೆ ಸರಿಯಾಗಿ ಸಾರ್ವಜನಿಕರ ಮುಂದೆ ಬರುತ್ತಿಲ್ಲ. ಯಾಕಾಗಿ, ಮಮತಾ ಬ್ಯಾನರ್ಜಿ ಇದನ್ನು ವಿರೋಧಿಸುತ್ತಿದ್ದಾರೆ? ಅಮಿತ್ ಶಾ ಅವರ ಸಮರ್ಥನೆ ಏನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
Haveri | ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ
ಹಾವೇರಿ: ಮೊಬೈಲ್ ರಿಪೇರಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಇಲ್ಲಿನ ಬಸ್ ನಿಲ್ದಾಣದ ಬಳಿ ಸ್ವಾತಿ ಹೊಟೇಲ್ ಪಕ್ಕದಲ್ಲಿರುವ ರಫೀಕ್ ಬೋರ್ಗಲ್ ಮತ್ತು ಸಾಹಿಲ್ ಮಾಣಿಕ ಎಂಬವರ ಮಾಲಕತ್ವದ A2 ಝೆಡ್ ಮೊಬೈಲ್ ಸರ್ಮಿಸ್ ಸೆಂಟರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?: ಮನುವಾದಿಗಳ ವಿಕೃತ ವಾದಗಳು-ಚಾರಿತ್ರಿಕ ಸತ್ಯಗಳು
ಬಿ.ಎನ್.ರಾವ್ ಅವರು ತಮ್ಮ ಕಾನೂನಾತ್ಮಕ ಪರಿಣತಿಯನ್ನು ಬಳಸಿಕೊಂಡು ಹೊಸ ರಾಷ್ಟ್ರದ ಪ್ರಜಾತಾಂತ್ರಿಕ ಆಡಳಿತಕ್ಕೆ ಬೇಕಾದ ನಿಯಮಗಳನ್ನು ಒಳಗೊಂಡ ಕಚ್ಚಾ ಕರಡನ್ನು ಮುಂದಿಟ್ಟರು. ಅದನ್ನು ಒಂದು ಸಾಮಾಜಿಕ ಪರಿವರ್ತನಾ ಆಶಯವುಳ್ಳ ಸೆಕ್ಯುಲರ್, ಸಮಾಜವಾದಿ, ಪ್ರಜಾತಾಂತ್ರಿಕ ಮತ್ತು ಸಾರ್ವಭೌಮ ಗಣರಾಜ್ಯದ ಆಶಯದ ಸಂವಿಧಾನವನ್ನಾಗಿ ಮಾಡಿದ್ದು ಅಂಬೇಡ್ಕರ್. ಹೀಗಾಗಿಯೇ ಭಾರತದ ಸಾಂವಿಧಾನಿಕ ಇತಿಹಾಸದ ವಿದ್ವಾಂಸರು ಬಿ.ಎನ್.ರಾವ್ ಅವರು ಭಾರತಕ್ಕೆ ಸಂವಿಧಾನದ ಕರಡನ್ನು ಕೊಟ್ಟರೆ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನದ ಆತ್ಮವನ್ನು ಕೊಟ್ಟರು ಎಂದು ವಿವರಿಸುತ್ತಾರೆ. ಭಾಗ - 1 ಅಂಬೇಡ್ಕರ್ ಅವರು ಭಾರತದ ದಮನಿತರ ಸ್ವಾಭಿಮಾನದ ಸಂಕೇತವಾಗಿಯೂ, ಸಮತಾ ಭಾರತದ ಆಶಯವಾಗಿಯೂ ಎತ್ತರೆತ್ತರಕ್ಕೇರುತ್ತಿದ್ದಂತೆ ಒಳಗೊಳಗೆ ಅಸಹನೆಯಿಂದ ಕುದಿಯುತ್ತಿರುವ ಬ್ರಾಹ್ಮಣವಾದಿಗಳು ಮತ್ತು ಸಂಘಪರಿವಾರಿಗಳು ಭಾರತದ ಸಂವಿಧಾನವನ್ನು ಬರೆದದ್ದು ಅಂಬೇಡ್ಕರ್ ಅಲ್ಲವೇ ಅಲ್ಲ, ಅದರ ಕೀರ್ತಿ ಸೇರಬೇಕಿರುವುದು ಸಂವಿಧಾನ ಮತ್ತು ಕಾನೂನು ಪರಿಣಿತರಾಗಿದ್ದ ಬಿ.ಎನ್. ರಾವ್ ಎಂಬ ವಿದ್ವಾಂಸರಿಗೆ ಎಂಬ ವಾದವನ್ನು ಹೆಚ್ಚೆಚ್ಚು ಹರಿಬಿಡುತ್ತಿದ್ದಾರೆ. ಇದರಲ್ಲಿ ದಿಟವೆಷ್ಟು? ಸುಳ್ಳೆಷ್ಟು? ಸಂವಿಧಾನ ಕರಡಿನ ಚರಿತ್ರೆ: ಬಿ.ಎನ್. ರಾವ್ ಪಾತ್ರವೆಷ್ಟು? ಬಿ.ಎನ್. ರಾವ್ ಅವರು (1887-1953) ಮಂಗಳೂರು ಮೂಲದ ಕೊಂಕಣಿ ಬ್ರಾಹ್ಮಣರು ಮತ್ತು ದೇಶ ವಿದೇಶಗಳಲ್ಲಿ ಕಾನೂನು ಮತ್ತು ಸಂವಿಧಾನಗಳ ವ್ಯಾಸಂಗ ಮಾಡಿದ ಪರಿಣಿತರಾಗಿದ್ದರು. ಬ್ರಿಟಿಷರಿಗೂ ತಮ್ಮ ಕಾನೂನು ಪರಿಣಿತಿಯ ಸೇವೆಯನ್ನು ಕೊಟ್ಟು ನೈಟ್ ಹುಡ್ ಇತ್ಯಾದಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಬ್ರಿಟಿಷ್ ಆಡಳಿತದಲ್ಲಿ ಅಸ್ಸಾಂ ಹಾಗೂ ಕಾಶ್ಮೀರ ಸಂಸ್ಥಾನಗಳ ಪ್ರಧಾನಿಗಳಾಗಿಯೂ, ಕೋಲ್ಕತಾ ಹೈಕೋರ್ಟಿನ ಜಡ್ಜ್ ಆಗಿಯೂ, ಬ್ರಿಟಿಷ್ ಸರಕಾರದ ಆಡಳಿತ ಮತ್ತು ಸಂವಿಧಾನ ಸುಧಾರಣೆ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅವರು ಎಂದೂ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಾಗಲೀ ಅಥವಾ ಭಾರತದ ಸಮಾಜದ ದಮನಿತರ ವಿಮೋಚನಾ ಹೋರಾಟದಲ್ಲಾಗಲೀ ಭಾಗವಹಿಸಿರಲಿಲ್ಲ. ಆದರೆ ದೇಶ ವಿದೇಶಗಳ ಸಂವಿಧಾನಗಳ ಬಗ್ಗೆ ಮತ್ತು ಆಧುನಿಕ ಪ್ರಜಾತಾಂತ್ರಿಕ ರಾಷ್ಟ್ರಗಳ ಆಡಳಿತ ನಿಯಮಗಳ ಬಗ್ಗೆ ವಿದ್ವತ್ಪೂರ್ಣ ತಿಳುವಳಿಕೆ ಹೊಂದಿದ್ದರು. ಹೀಗಾಗಿ 1946ರಲ್ಲಿ ಕಾಂಗ್ರೆಸ್ ನೇತೃತ್ವದ ಸಂವಿಧಾನ ಸಭೆ ಅವರನ್ನು ಭಾರತದ ಸಂವಿಧಾನ ಸಭೆಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುತ್ತದೆ ಹಾಗೂ ಸಂವಿಧಾನ ರಚಿಸಲು ಬೇಕಾದ ಕಚ್ಚಾ ಕರಡನ್ನು ರೂಪಿಸಲು ಕೇಳಿಕೊಳ್ಳುತ್ತದೆ. ಆದರೆ ಅವರು ಎಂದೂ ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ. ಹೀಗಾಗಿ ಅದರ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ. ಆದರೂ ಸಲಹೆಗಾರನ ಸ್ಥಾನಮಾನದಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಅದರಂತೆ ರಾವ್ ಅವರು 1947ರ ಫೆಬ್ರವರಿಯ ವೇಳೆಗೆ ಒಂದು ಕರಡನ್ನು ರೂಪಿಸಿ ಸಂವಿಧಾನ ಸಭೆಗೆ ಒಪ್ಪಿಸಿದರು. ಅಲ್ಲಿಗೆ ಸಂವಿಧಾನ ಸಭೆಯ ರಚನೆಗೆ ಸಂಬಂಧಪಟ್ಟಂತೆ ಅವರಿಗೆ ವಹಿಸಿದ್ದ ಕೆಲಸವು ಮುಕ್ತಾಯವಾಗಿತ್ತು. ಆ ನಂತರವೂ ಸಂವಿಧಾನ ಸಭೆ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಅವರ ಪರಿಣಿತ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದರೂ 1947ರ ಫೆಬ್ರವರಿಯ ನಂತರದಲ್ಲಿ ಸಂವಿಧಾನ ರಚನೆಯ ಕಾರಣಕರ್ತರು ಅಂಬೇಡ್ಕರ್ ಮತ್ತು ಸಂವಿಧಾನ ಸಭೆಯೇ ಆಗಿತ್ತು. ಹೀಗಾಗಿ ಸಂವಿಧಾನ ರಚನೆಯಲ್ಲಿ ರಾವ್ ಅವರ ಪಾತ್ರ ಸೀಮಿತವಾಗಿತ್ತು. ಅದನ್ನು ಅಂಬೇಡ್ಕರ್ ಅವರೂ ಗುರುತಿಸಿ ಸ್ಮರಿಸಿಕೊಳ್ಳುತ್ತಾರೆ. 1949ರ ನವೆಂಬರ್ 25ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಅಂತಿಮ ಭಾಷಣದಲ್ಲಿ ‘‘ಸಂವಿಧಾನ ತಯಾರಿಯ ಸಂಪೂರ್ಣ ಶ್ರೇಯಸ್ಸು ನಮಗೆ ಮಾತ್ರ ಸೇರತಕ್ಕದ್ದಲ್ಲ. ಇದರಲ್ಲಿ ಒಂದಷ್ಟು ಭಾಗ ಸಂವಿಧಾನದ ಕಚ್ಚಾ ಕರಡನ್ನು ತಯಾರಿಸಿದ ಬಿ.ಎನ್. ರಾವ್ ಅವರಿಗೂ ಸೇರಬೇಕು. ಹಾಗೆಯೇ ಕರಡನ್ನು ಅತ್ಯಂತ ಸಮರ್ಥವಾಗಿ ಶಾಸನಾತ್ಮಕ ಭಾಷೆಯಲ್ಲಿ ಅಂತಿಮವಾಗಿ ಸಿದ್ಧಗೊಳಿಸಿದ ಎಸ್.ಎನ್. ಮುಖರ್ಜಿಯವರಿಗೂ ಹಾಗೂ ಇಡೀ ಕರಡು ಸಮಿತಿಗೂ ಮತ್ತು ಉತ್ತಮ ರೀತಿಯಲ್ಲಿ ಸಂವಿಧಾನ ಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳು ಆಗುವಂತೆ ಶಿಸ್ತನ್ನು ಕಾಪಾಡಿದ ಕಾಂಗ್ರೆಸ್ ಪಕ್ಷಕ್ಕೂ ನಮ್ಮ ಕೃತಜ್ಞತೆಗಳು ಸೇರಬೇಕು’’ ಎಂದೂ ಹೇಳುತ್ತಾರೆ. (Dr. Babasaheb Ambedkar: Writings And Speeches Vol. 13, p.1208) ರಾವ್ ಅವರ ಪ್ರಜಾ‘ತಂತ್ರ’ದ ಕರಡಿಂದ ಪ್ರಜಾತಂತ್ರದ ಸಂವಿಧಾನದ ಕಡೆಗಿನ ಹೆಜ್ಜೆಗಳು 1947ರ ಫೆಬ್ರವರಿಯಿಂದ ಸಂವಿಧಾನ ಸಭೆಯ ವಿವಿಧ ಸಮಿತಿಗಳು ಆ ಕರಡಿನ ಬಗ್ಗೆ ತಮ್ಮ ತಿದ್ದುಪಡಿಗಳನ್ನು ನೀಡಿದವು. ಈ ಮಧ್ಯೆ 1947ರಲ್ಲಿ ಭಾರತದ ವಿಭಜನೆಯಾಗಿ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗಿದ್ದ ಕ್ಷೇತ್ರವು ಪೂರ್ವ ಪಾಕಿಸ್ತಾನಕ್ಕೆ ವರ್ಗಾವಣೆಗೊಂಡು ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಸದಸ್ಯತ್ವ ರದ್ದಾಯಿತು. ಆದರೆ ಆ ವೇಳೆಗಾಗಲೇ ಅಂಬೇಡ್ಕರ್ 1919ರ ಸೌತ್ ಬರೋ ಸಮಿತಿ, 1928ರ ಸೈಮನ್ ಕಮಿಷನ್, 1930-32ರ ದುಂಡು ಮೇಜಿನ ಪರಿಷತ್ಗಳಲ್ಲಿ ಮಾತ್ರವಲ್ಲದೆ ಹಲವಾರು ಇತರ ಸಾಂವಿಧಾನಿಕ ಸಭೆಯ ಸದಸ್ಯರಾಗಿ ಸಂವಿಧಾನ ಮತ್ತು ಕಾನೂನು ರಚನೆಯಲ್ಲಿ ತಮಗಿರುವ ಜ್ಞಾನದ ಹರಹನ್ನು ಭಾರತೀಯರು ಮತ್ತು ಬ್ರಿಟಿಷರು ಕೂಡ ನಿಬ್ಬೆರಗಾಗುವ ರೀತಿಯಲ್ಲಿ ಮುಂದಿಟ್ಟಿದ್ದರು. ಅಷ್ಟು ಮಾತ್ರವಲ್ಲದೆ ಭಾರತೀಯ ಸಮಾಜದ ರೋಗವನ್ನು ಅರ್ಥ ಮಾಡಿಕೊಳ್ಳುವಲ್ಲಿ ತಮಗಿರುವ ಅತ್ಯಪರೂಪದ ಚಿಕಿತ್ಸಕ ಒಳನೋಟಗಳನ್ನು ನೀಡಿದ್ದರು. ಹೀಗಾಗಿ ಕೊನೆಯ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್, ಆಗಿನ ಬ್ರಿಟನ್ ಪ್ರಧಾನಿ ಆಟ್ಲಿ ಆದಿಯಾಗಿ ಹಲವು ಬ್ರಿಟಿಷ್ ಆಡಳಿತಗಾರರು ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮುಂದುವರಿಯುವುದು ಅಗತ್ಯವೆಂದು ಭಾವಿಸಿದ್ದರು. ಹಾಗೆಯೇ ಹಲವಾರು ಅಂತರಿಕ ಸಂಘರ್ಷಗಳಿಂದ ಬಳಲಿರುವ ಭಾರತ ಹೊಸ ರಾಷ್ಟ್ರವಾಗಿ ಹೊಸ ಹುಟ್ಟನ್ನು ಪಡೆಯಬೇಕೆಂದರೆ ಸಂವಿಧಾನ ರಚನಾ ಪ್ರಕ್ರಿಯೆಯು ರಾಜಕೀಯ ವಿರೋಧಿಗಳನ್ನೂ ಒಳಗೊಳ್ಳಬೇಕೆಂಬ ರಾಜಕೀಯ ದೃಷ್ಟಿಕೋನದಿಂದಲೂ, ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದರೆ ಈ ದೇಶದ ದಮನಿತ ಬಹುಜನ ಹೊಸ ಭಾರತವನ್ನು ಮತ್ತು ಅದರ ಸಂವಿಧಾನವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ರಾಜಕೀಯ ವ್ಯೆಹತಂತ್ರದ ಕಾರಣಕ್ಕಾಗಿಯೂ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಮುಂಬೈ ಪ್ರಾಂತದಿಂದ ಸಂವಿಧಾನ ಸಭೆಗೆ ಆಯ್ಕೆ ಮಾಡಿಕೊಳ್ಳುತ್ತದೆ ಹಾಗೂ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುತ್ತದೆ ಎಂದು ಪ್ರಖ್ಯಾತ ವಿದ್ವಾಂಸ ಆನಂದ್ ತೇಲ್ತುಂಬ್ಡೆಯವರು ತಮ್ಮ ‘Iconoclat- A Reflective Biography of Dr. Babasaheb Ambedkar’ ಎಂಬ ಕೃತಿಯಲ್ಲಿ ವಿಷದವಾಗಿ ವಿವರಿಸುತ್ತಾರೆ. ಹೀಗೆ 1947ರ ಆಗಸ್ಟ್ನಲ್ಲಿ ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್ ಅವರ ಮುಂದೆ: ‘ರಾವ್ ಅವರ ಕರಡನ್ನು ಇತರ ಸಮಿತಿಗಳ ಸಲಹೆ ಮತ್ತು ತಿದ್ದುಪಡಿಗಳನ್ನು ಆಧರಿಸಿ ಪುನರ್ ರಚಿಸಿ ಹೊಸ ಕರಡನ್ನು ಮುಂದಿಡುವ’ ಕಾರ್ಯಭಾರವಿತ್ತು. 1947ರ ಅಕ್ಟೊಬರ್ಗೆ ರಾವ್ ಅವರ ಕರಡನ್ನು ಕೂಲಂಕಷವಾಗಿ ತಿದ್ದುಪಡಿ ಮಾಡಿದ ಅಂಬೇಡ್ಕರ್ ಅವರ ಮೊದಲ ಕರಡು ಸಿದ್ಧವಾಗುತ್ತದೆ. 1947ರ ನವೆಂಬರ್ನಿಂದ 1948ರ ಫೆಬ್ರವರಿಯವರೆಗೆ ಆ ಕರಡಿನ ಬಗ್ಗೆ ಸಂವಿಧಾನ ಸಭೆಯ ಉಪಸಮಿತಿಗಳು ಚರ್ಚಿಸಿ 1948ರ ಫೆಬ್ರವರಿಗೆ ಮತ್ತೊಂದು ಕರಡು ತಯಾರಾಗುತ್ತದೆ. 1948 ಫೆಬ್ರವರಿಯಿಂದ ಎಂಟು ತಿಂಗಳ ಕಾಲದ ಕರಡಿನ ಬಗ್ಗೆ ಜನತೆಯ ತಿದ್ದುಪಡಿಗಳನ್ನು ಆಹ್ವಾನಿಸಲಾಗುತ್ತದೆ. ಅವೆಲ್ಲವನ್ನು ಆಧರಿಸಿ 1948ರ ನವಂಬರ್ನಲ್ಲಿ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ (ಹೆಸರಿಗೆ ಏಳು ಸದಸ್ಯರಿದ್ದರೂ ಅಂಬೇಡ್ಕರ್ ಒಬ್ಬರೇ ಅದರ ಎಲ್ಲಾ ಹೊಣೆಯನ್ನು ನಿಭಾಯಿಸಿದ್ದು) ಅಂತಿಮ ಕರಡನ್ನು ಸಿದ್ಧಪಡಿಸುತ್ತದೆ. 1948ರ ನವೆಂಬರ್ನಿಂದ 1949ರ ನವೆಂಬರ್ 25ರವರೆಗೆ ಈ ಅಂತಿಮ ಕರಡನ್ನು ಸಂವಿಧಾನ ಸಭೆ ಒಂದೊಂದಾಗಿ ಚರ್ಚಿಸುತ್ತದೆ ಹಾಗೂ ಅಂತಿಮ ಸಂವಿಧಾನ ರೂಪುಗೊಳ್ಳುತ್ತದೆ. ಆದ್ದರಿಂದ ರಾವ್ ಅವರ ಮುಂದಿಟ್ಟ ಕರಡು ಅತ್ಯಗತ್ಯವಾಗಿದ್ದ ಒಂದು ತಾಂತ್ರಿಕ ಕಚ್ಚಾ ಕರಡು ಆಗಿತ್ತು. ಆ ಪಾತ್ರವನ್ನು ರಾವ್ ಅವರು ನಿರ್ವಹಿಸಿದ್ದರು. ಆದರೆ ಅದಕ್ಕೆ ಪ್ರಜಾತಾಂತ್ರಿಕ ಆತ್ಮವನ್ನು, ಭಾರತೀಯ ಪ್ರಜಾತಂತ್ರದ ರಕ್ತ ಮಾಂಸವನ್ನು ತುಂಬಿದ್ದು ಅಂಬೇಡ್ಕರ್ ಅವರಾಗಿದ್ದರು. ಇದು ಬಿ.ಎನ್. ರಾವ್ ಅವರ ತಾಂತ್ರಿಕ ಕರಡಿಗೂ ಹಾಗೂ ಅಂಬೇಡ್ಕರ್ ಅವರ ದೂರ ಹಾಗೂ ಸಮ ದೃಷ್ಟಿಯ ನೇತೃತ್ವದಲ್ಲಿ ತಯಾರಾದ ಅಂತಿಮ ಸಂವಿಧಾನಕ್ಕೂ ಇರುವ ಮೂಲಭೂತ ವ್ಯತ್ಯಾಸಗಳನ್ನು ಗಮನಿಸಿದರೆ ಅದು ಇನ್ನೂ ನಿಚ್ಚಳವಾಗಿ ಸ್ಪಷ್ಟವಾಗುತ್ತದೆ. ಬಿ.ಎನ್. ರಾವ್ ಕರಡು ಮತ್ತು ಅಂತಿಮ ಸಂವಿಧಾನ: ಕೆಲವು ಪ್ರಮುಖ ವ್ಯತ್ಯಾಸಗಳು: 1. ಮೂಲಭೂತ ಹಕ್ಕುಗಳು ಬಿ.ಎನ್. ರಾವ್ ಅವರ ಕರಡಿನಲ್ಲಿ ಮೂಲಭೂತ ಹಕ್ಕುಗಳು ನಿರ್ದಿಷ್ಟವಾಗಿಯೂ ಇರಲಿಲ್ಲ ಮತ್ತು ಅದನ್ನು ಜಾರಿಗೊಳಿಸುವ ಬದ್ಧತೆಯನ್ನು ಕಡ್ಡಾಯ ಮಾಡುವ ಕ್ರಮಗಳಿರಲಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ 1946 ಡಿಸೆಂಬರ್ನಲ್ಲಿ ಮಾಡಿದ ಮೊದಲ ಭಾಷಣವೇ ಮೂಲಭೂತ ಹಕ್ಕುಗಳ ರಕ್ಷಣೆಗೆ ಬೇಕಾದ ಕ್ರಮಗಳ ಅಗತ್ಯದ ಕುರಿತಾಗಿತ್ತು. ಅವರ ಸತತ ಪರಿಶ್ರಮ, ಬದ್ಧತೆ ಮತ್ತು ಪ್ರತಿಪಾದನೆಗಳಿಂದಾಗಿ ಮೂಲಭೂತ ಹಕ್ಕುಗಳಿಗೆ ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ರಕ್ಷಣೆ ಒದಗಿಸುವ ಆರ್ಟಿಕಲ್ 32 ಮತ್ತು 226ಗಳನ್ನು ಅಳವಡಿಸಿಕೊಳ್ಳಲಾಯಿತು. 2. ಸಾಮಾಜಿಕ ನ್ಯಾಯ ಬಿ.ಎನ್.ರಾವ್ ಅವರ ಕರಡಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಒತ್ತು ಇರಲಿಲ್ಲ. ಆದರೆ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಹೆಚ್ಚಿನ ಮಹತ್ವ ಮತ್ತು ಒತ್ತನ್ನು ನೀಡಿತು ಹಾಗೂ ಅಸ್ಪಶ್ಯತೆ ನಿವಾರಣೆ (ಆರ್ಟಿಕಲ್ 17 ಮತ್ತು 15 ಹಾಗೂ 16ರ ವಿಸ್ತರಣೆ ) ಹಾಗೂ ಇತರ ಸಾಮಾಜಿಕ ಘನತೆಯ ಅಂಶಗಳನ್ನು ಅಳವಡಿಸಿಕೊಂಡಿತು. 3. ಪ್ರಭುತ್ವ ನಿರ್ದೇಶನಾ ತತ್ವಗಳು ಬಿ.ಎನ್.ರಾವ್ ಅವರ ಕರಡಿನಲ್ಲಿ ಇದಕ್ಕೆ ಮಹತ್ವವನ್ನೇ ಕೊಟ್ಟಿರಲಿಲ್ಲ. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆಯು ಸಮಾಜದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ನಿವಾರಿಸಲು ಸಂವಿಧಾನವು ಪ್ರಭುತ್ವಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕಾದ ಅಗತ್ಯವನ್ನು ಮನಗಂಡಿತು ಮತ್ತು ಅದನ್ನು ಪ್ರತ್ಯೇಕ ಪರಿಚ್ಛೇದ 4 ಆಗಿ ಸೇರಿಸಿತು. ಆದರೆ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿ ಅಡಕವಾಗಿರುವ ಅಂಶಗಳು ಮೂಲಭೂತ ಹಕ್ಕಾಗಬೇಕೆಂಬುದು ಅಂಬೇಡ್ಕರ್ ಅವರ ನಿಜವಾದ ಆಶಯವಾಗಿತ್ತು. ಅದನ್ನು ಕೇವಲ ಮಾರ್ಗದರ್ಶಿ ಸೂತ್ರ ಮಾಡಿದರೆ ಸರಕಾರ ಅವುಗಳನ್ನು ಜಾರಿಗೆ ತರುವ ಒತ್ತಾಸೆ ಇರುವುದಿಲ್ಲ ಅಥವಾ ಸರಕಾರ ಬದಲಾದಂತೆ ಇದಕ್ಕೆ ಸಂಬಂಧಪಟ್ಟ ಕಾನೂನುಗಳೂ ಬದಲಾಗಿಬಿಡಬಹುದೆಂಬ ಆತಂಕ ಮತ್ತು ಅಭಿಪ್ರಾಯ ಅಂಬೇಡ್ಕರ್ ಅವರದಾಗಿತ್ತು. ಆದರೆ ಸಂವಿಧಾನ ಸಭೆಯಲ್ಲಿ ಇದ್ದದ್ದು ಕೇವಲ ಅಂಬೇಡ್ಕರ್ ಮಾತ್ರ ಅಲ್ಲವಲ್ಲ. ಹೀಗಾಗಿ ಈ ಮನುಷ್ಯ ಘನತೆಯ ಹಕ್ಕುಗಳು ಮೂಲಭೂತ ಹಕ್ಕುಗಳಾಗಲಿಲ್ಲ. 4. ಪ್ರಜಾತಾಂತ್ರಿಕ ನೈತಿಕತೆ ಬಿ.ಎನ್.ರಾವ್ ಅವರ ಕರಡು ಸಂವಿಧಾನ ಸರಕಾರ ರಚಿಸಲು ಮತ್ತು ನಡೆಸಲು ಬೇಕಾದ ನಿಯಮಗಳನ್ನು ಒದಗಿಸುವ ತಾಂತ್ರಿಕ ಸಂವಿಧಾನವಷ್ಟೇ ಆಗಿತ್ತು. ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಭೆಯಲ್ಲಿದ್ದ ಪ್ರಗತಿಪರರು, ಎಲ್ಲಕ್ಕಿಂತ ಪ್ರಮುಖವಾಗಿ ಮತ್ತು ವಿಶೇಷವಾಗಿ ಅಂಬೇಡ್ಕರ್ ಅವರು ಸಂವಿಧಾನವನ್ನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿಪಾದಿಸುವ ಒಂದು ಜೀವಂತ ನೈತಿಕ ಸಂವಿಧಾನವನ್ನಾಗಿ ಪರಿವರ್ತಿಸಿದರು. 5. ಸಂಸದೀಯ ಪ್ರಜಾತಂತ್ರ ಬಿ.ಎನ್.ರಾವ್ ಅವರ ಕರಡು ಒಂದು ಸಂಸದೀಯ ಪ್ರಜಾತಂತ್ರದ ಅಸ್ಥಿಪಂಜರವನ್ನು ಮಾತ್ರ ಒದಗಿಸಿತ್ತು. ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಭೆ ಕೂಲಂಕಷ ಚರ್ಚೆ ವಾದ-ಪ್ರತಿವಾದ, ತಿದ್ದುಪಡಿಗಳ ಮೂಲಕ ಅದಕ್ಕೆ ರಕ್ತ ಮಾಂಸಗಳನ್ನು ತುಂಬಿ ರಾಷ್ಟ್ರಪತಿ, ಪ್ರಧಾನಿ, ಮಂತ್ರಿಮಂಡಲ, ಒಕ್ಕೂಟ ಮತ್ತು ರಾಜ್ಯಗಳ ಸಂಬಂಧ ಇತ್ಯಾದಿಗಳನ್ನು ಸ್ಪಷ್ಟಪಡಿಸಿತು. ಅಂದು ಇದ್ದ ಸಂದರ್ಭ, ಸಂವಿಧಾನ ಸಭೆಯ ಒಟ್ಟಾರೆ ರಾಜಕೀಯ ಸಾಮಾಜಿಕ ಹಿನ್ನೆಲೆಯ ಮಿತಿಯಲ್ಲಿ ಭಾರತವು ಫೆಡರಲ್ ಸ್ವರೂಪಕ್ಕಿಂತ ಯೂನಿಯನ್ ಸ್ವರೂಪದ ಗಣರಾಜ್ಯವನ್ನಾಗಿ ಅಂಗೀಕರಿಸಲಾಯಿತು. 75 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಅದರ ಸಾಧಕ ಬಾಧಕಗಳನ್ನು ಈಗ ಮತ್ತೊಮ್ಮೆ ಪರಿಶೀಲಿಸುವ, ಸುಧಾರಿಸುವ, ಇನ್ನೂ ಹೆಚ್ಚು ಪ್ರಜಾತಂತ್ರೀಕರಿಸುವ ಅಗತ್ಯವಂತೂ ಇದ್ದೇ ಇದೆ. 6. ಗಾತ್ರ ಬಿ.ಎನ್.ರಾವ್ ಅವರ ಕರಡು ಅಂತಿಮ ಸಂವಿಧಾನಕ್ಕೆ ಹೋಲಿಸಿದಲ್ಲಿ ಸಣ್ಣದು ಮತ್ತು ಕೇವಲ ಪ್ರಾಥಮಿಕವಾದ 240 ಆರ್ಟಿಕಲ್ಗಳನ್ನು ಮಾತ್ರ ಹೊಂದಿತ್ತು. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಭೆ ರೂಪಿಸಿದ ಅಂತಿಮ ಕರಡು 395 ಆರ್ಟಿಕಲ್ಗಳಷ್ಟು ಸುದೀರ್ಘ ಲಿಖಿತ ಸಂವಿಧಾನವಾಗಿದೆ. ಇವು ರಾವ್ ಅವರು ಒದಗಿಸಿದ ಸಂವಿಧಾನದ ಕಚ್ಚಾ ಕರಡಿಗೂ, ಅಂಬೇಡ್ಕರ್ ರಾಷ್ಟ್ರಕ್ಕೆ ನೀಡಿದ ಅಂತಿಮ ಸಂವಿಧಾನಕ್ಕೂ ಇರುವ ಕೆಲವು ಮೂಲಭೂತ ವ್ಯತ್ಯಾಸಗಳು. ರಾವ್ ಅವರು ತಮ್ಮ ಕಾನೂನಾತ್ಮಕ ಪರಿಣತಿಯನ್ನು ಬಳಸಿಕೊಂಡು ಹೊಸ ರಾಷ್ಟ್ರದ ಪ್ರಜಾತಾಂತ್ರಿಕ ಆಡಳಿತಕ್ಕೆ ಬೇಕಾದ ನಿಯಮಗಳನ್ನು ಒಳಗೊಂಡ ಕಚ್ಚಾ ಕರಡನ್ನು ಮುಂದಿಟ್ಟರು. ಅದನ್ನು ಒಂದು ಸಾಮಾಜಿಕ ಪರಿವರ್ತನಾ ಆಶಯವುಳ್ಳ ಸೆಕ್ಯುಲರ್, ಸಮಾಜವಾದಿ, ಪ್ರಜಾತಾಂತ್ರಿಕ ಮತ್ತು ಸಾರ್ವಭೌಮ ಗಣರಾಜ್ಯದ ಆಶಯದ ಸಂವಿಧಾನವನ್ನಾಗಿ ಮಾಡಿದ್ದು ಅಂಬೇಡ್ಕರ್. ಹೀಗಾಗಿಯೇ ಭಾರತದ ಸಾಂವಿಧಾನಿಕ ಇತಿಹಾಸದ ವಿದ್ವಾಂಸರು ಬಿ.ಎನ್.ರಾವ್ ಅವರು ಭಾರತಕ್ಕೆ ಸಂವಿಧಾನದ ಕರಡನ್ನು ಕೊಟ್ಟರೆ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನದ ಆತ್ಮವನ್ನು ಕೊಟ್ಟರು ಎಂದು ವಿವರಿಸುತ್ತಾರೆ. ಭಾರತದ ಸಂವಿಧಾನ ರಚನೆಯ ಪ್ರತಿಷ್ಠಿತ ಇತಿಹಾಸಕಾರ ಗ್ರನ್ವಿಲ್ ಆಸ್ಟಿನ್ ಅವರು ಹೇಳುವಂತೆ ‘‘ರಾವ್ ಅವರು ಪರಿಣತ ಕರಡನ್ನು ಒದಗಿಸಿದರು. ಅಂಬೇಡ್ಕರ್ ಸಂವಿಧಾನಕ್ಕೆ ತಾತ್ವಿಕ ಆಳವನ್ನು ಮತ್ತು ಪ್ರಜಾತಾಂತ್ರಿಕ ಬದ್ಧತೆಯನ್ನೂ ನೀಡಿದರು’’. ಒಂದು ಮಾತಿನಲ್ಲಿ ಹೇಳುವುದಾದರೆ ‘‘ಬಿ.ಎನ್ ರಾವ್ ಅವರು ರಾಷ್ಟ್ರಕ್ಕೆ ಒಂದು ಸಂವಿಧಾನದ ಕಚ್ಚಾ ಕರಡನ್ನು ಕೊಟ್ಟರೆ, ಅಂಬೇಡ್ಕರ್ ಅವರು ಸಂವಿಧಾನಕ್ಕೆ ಒಂದು ರಾಷ್ಟ್ರವನ್ನು ಕೊಟ್ಟರು’’. (The Indian Constitution: Cornerstone Of A Nation- Granville Austin) ಸಂವಿಧಾನ ರಚನಾ ಸಭೆಯ ಕೊನೆಯ ಸಭೆ ನಡೆದದ್ದು 1949ರ ನವೆಂಬರ್ 26ರಂದು. ಅಂದು ಹಾಜರಿದ್ದ 285 ಸದಸ್ಯರು ಕರಡಿಗೆ ಸಹಿ ಹಾಕಿ ಸಂವಿಧಾನವನ್ನು ಅಖೈರುಗೊಳಿಸಿದರೆ, 284 ಸದಸ್ಯರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದರು. ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾಗಿದ್ದ ಟಿ.ಟಿ. ಕೃಷ್ಣಮಾಚಾರಿಯವರಂತೂ ಅಂಬೇಡ್ಕರ್ ಅವರಿಲ್ಲದಿದ್ದರೆ ಸಂವಿಧಾನ ರಚನೆ ಎಷ್ಟು ಕಷ್ಟವಾಗುತ್ತಿತ್ತೆಂಬುದನ್ನು ಮನದುಂಬಿ ವಿವರಿಸಿದರು. ಅವರ ಪ್ರಕಾರ ‘‘ಕರಡು ಸಮಿತಿಯ ಸದಸ್ಯರಾಗಿದ್ದ ಏಳು ಜನ ಸದಸ್ಯರಲ್ಲಿ ಒಬ್ಬರು ಮರಣಹೊಂದಿದರು. ಇಬ್ಬರು ದಿಲ್ಲಿಯಿಂದ ದೂರ ಉಳಿದಿದ್ದು ಯಾವ ಸಭೆಗೂ ಬರಲಿಲ್ಲ. ಒಬ್ಬರು ಅಮೆರಿಕ ಸೇರಿಕೊಂಡರು. ಮತ್ತೊಬ್ಬರಿಗೆ ಅನಾರೋಗ್ಯ ಹಾಗೂ ತಾನು ಸಂಪೂರ್ಣವಾಗಿ ಸರಕಾರದ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡದ್ದರಿಂದ ಸಂವಿಧಾನವನ್ನು ರಚಿಸುವ ಸಂಪೂರ್ಣ ಹೊಣೆ ಅಂಬೇಡ್ಕರ್ ಅವರ ಮೇಲೆ ಬಿತ್ತು.’’ ಹಾಗೂ ‘‘ಅಂಬೇಡ್ಕರ್ ಅವರ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ದಿನಕ್ಕೆ 18 ಗಂಟೆಗಳಷ್ಟು ಕೆಲಸ ಮಾಡಿ ಕರಡು ರಚನೆ ಸಾಧ್ಯಗೊಳಿಸಿದ’’ ವಾಸ್ತವವನ್ನು ಇಡೀ ದೇಶಕ್ಕೆ ತಿಳಿಸಿಕೊಟ್ಟರು. ಈ ವಾಸ್ತವವನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್, ಪ್ರಧಾನಿ ನೆಹರೂ ಹಾಗೂ ಇನ್ನಿತರರೂ ಸಹ ಅಕ್ಷರಶಃ ಒಪ್ಪಿಕೊಂಡು ಇಡೀ ದೇಶ ಅಂಬೇಡ್ಕರ್ ಅವರಿಗೆ ಕೃತಜ್ಞವಾಗಿದೆಯೆಂದು ಭಾವಪರವಶರಾಗಿ ನುಡಿದಿದ್ದರು. (Dr. Babasaheb Ambedkar: Writings And Speeches Vol. 13, p.72)
Senyar Cyclone: ಸೆನ್ಯಾರ್ ಚಂಡಮಾರುತ: ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಭಾರೀ ಮಳೆ
ಮಲಕ್ಕಾ ಜಲಸಂಧಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದ ಭಾಗಗಳ ಮೇಲೆ ಕಡಿಮೆ ಒತ್ತಡ ಪ್ರದೇಶವು ನವೆಂಬರ್ 26ರ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ. ಇದು ಪೂರ್ಣ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಅದಕ್ಕೆ ಸೆನ್ಯಾರ್ (Senyar) ಚಂಡಮಾರುತ ಎಂದು ಕರೆಯಲಾಗಿದೆ. ಸೈಕ್ಲೋನ್ ಹಿನ್ನೆಲೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ
Gold Rate Rise: ಚಿನ್ನದ ಬೆಲೆಯ ಓಟ ನಾಗಾಲೋಟದತ್ತ! ಮತ್ತೆ ಬರೋಬ್ಬರಿ 870 ರೂ. ಹೆಚ್ಚಳ!
ಡಾಲರ್ ಮೌಲ್ಯ ಕುಸಿತ, ಬೇಡಿಕೆ ಹೆಚ್ಚಳ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವದಿಂದ ಚಿನ್ನದ ಬೆಲೆ ಗಣನೀಯವಾಗಿ ಏರಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,910 ರೂ. ತಲುಪಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಕಾಣುತ್ತಿದೆ .
Nikhil Kumaraswamy: \ನೀರು ಕೊಡಿ ಇಲ್ಲವೇ ಪರಿಹಾರ ಕೊಡಿ ಅಥವಾ ರೈತರ ಸಾಲ ಮನ್ನಾ ಮಾಡಿ\
ರಾಯಚೂರು, ನವೆಂಬರ್ 26: ರಾಜ್ಯ ಸರ್ಕಾರದ ತಪ್ಪಿನಿಂದ ರೈತರ ಎರಡನೇ ಬೆಳೆಗಳಿಗೆ ನೀರು ಬಿಟ್ಟಿಲ್ಲ. ನೀರು ಬಿಟ್ಟಿಲ್ಲ ಅಂದ್ರೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ರೈತರಿಗೆ ಹತ್ತರಿಂದ ಹನ್ನೆರಡು ಕೋಟಿ ನಷ್ಟವಾಗಿದೆ. ಇದಕ್ಕೆ ಸರ್ಕಾರನೇ ಹೊಣೆ, ರೈತರ ಸಾಲಮನ್ನಾ ಮಾಡು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು. ಈ ಕುರಿತು
ಮುಖ್ಯೋಪಾಧ್ಯಾಯ ಹುದ್ದೆ ನಿರ್ವಹಿಸಲು ಶಿಕ್ಷಕರ ಹಿಂದೇಟು, ಕಾರಣ 'ಮೊಟ್ಟೆ ದರ ಭಾರ'!
ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆಯು ಮುಖ್ಯೋಪಾಧ್ಯಾಯರಿಗೆ ಆರ್ಥಿಕ ಹೊರೆಯಾಗುತ್ತಿದೆ. ಮೊಟ್ಟೆ ದರ ಏರಿಕೆಯಿಂದಾಗಿ ಪ್ರತಿ ಮೊಟ್ಟೆಗೆ 1.90 ರೂ. ಹೆಚ್ಚುವರಿ ಹಣವನ್ನು ಶಿಕ್ಷಕರೇ ಭರಿಸಬೇಕಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ಪಡೆಯಲು ಹಾಗೂ ಪ್ರಭಾರಿ ಜವಾಬ್ದಾರಿ ವಹಿಸಿಕೊಳ್ಳಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
₹200 ಕಾರಣಕ್ಕೆ ಶಾಂತ ಕುಮಾರ್ ನಾಮಪತ್ರ ಅಸಿಂಧು, ಫೋಗಟ್ ಪ್ರಕರಣವನ್ನು ಮೀರಿಸುತ್ತಿದೆ KSCA ಚುನಾವಣೆ!
ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ರೋಚಕ ಹಂತ ತಲುಪಿದೆ. ಪತ್ರಕರ್ತ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವನ್ನು ಕೇವಲ 200 ರೂಪಾಯಿ ಚಂದಾದಾರಿಕೆ ಬಾಕಿ ಕಾರಣದಿಂದ ತಿರಸ್ಕರಿಸಲಾಗಿದೆ. ಈ ಬೆಳವಣಿಗೆಯಿಂದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
BPL Card: ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಯಾರೆಲ್ಲಾ ಕಾರ್ಡ್ಗಳು ರದ್ದು?
BPL Ration Card: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾಹಿಸುವ ಕೆಲಸ ಮುಂದುವರೆದಿದೆ. ಹಾಗಾದ್ರೆ, ಯಾರೆಲ್ಲಾ ಅನರ್ಹರ ಪಟ್ಟಿಯಲ್ಲಿ ಬರುತ್ತೀರಿ ಹಾಗೂ ಇದರಲ್ಲಿ ರಾಜಧಾನಿ ಬೆಂಗಳೂರಿನ ಪಾಲೆಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಅನರ್ಹರು
2025 ರ ಋತುವಿನಲ್ಲಿ 51 ಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುವ ಮೂಲಕ ದಾಖಲೆ ಬರೆದ ಚಾರ್ಧಾಮ್ ಯಾತ್ರೆ
2025ರ ಚಾರ್ ಧಾಮ್ ಯಾತ್ರೆ 51 ಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸಿ ದಾಖಲೆ ಬರೆದಿದೆ. ಕೇದಾರನಾಥ್ ಅತಿ ಹೆಚ್ಚು ಭಕ್ತರನ್ನು ಹೊಂದಿದ್ದರೆ, ಬದ್ರಿನಾಥ್ ಧಾಮವು ಮಂಗಳವಾರ ಚಳಿಗಾಲಕ್ಕಾಗಿ ಮುಚ್ಚಲ್ಪಟ್ಟಿತು. ಪ್ರವಾಹ ಮತ್ತು ಹೆಲಿಕಾಪ್ಟರ್ ಅಪಘಾತಗಳಂತಹ ಸವಾಲುಗಳ ನಡುವೆಯೂ ಯಾತ್ರಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಕರಡಿ ಜತೆಗೆ ಜೀವ ಸವೆಸುವ ‘ಕರಡಿ ಖಲಂದರ್’
ಕರಡಿಗಳನ್ನು ಕಳಕೊಂಡ ಖಲಂದರ್ಗಳಿಗೆ ಮಾನಸಿಕ ಖಿನ್ನತೆ ಬಹಳ ದಿನ ಕಾಡಿತು. ಕಡೆಗೆ ಬದುಕು ಕಟ್ಟಿಕೊಳ್ಳಲು ಈಚಲು ಚಾಪೆ ಹೆಣೆಯುವುದು. ಫ್ಯಾಕ್ಟರಿಗಳಲ್ಲಿ ತಯಾರಾದ ಪ್ಲಾಸ್ಟಿಕ್ ಚಾಪೆಗಳನ್ನು ಮಾರುವುದು, ಭೂಮಾಲಕರ ಹೊಲ ಗದ್ದೆಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುವುದೇ ಮುಂತಾದ ಕೆಲಸ ಮಾಡತೊಡಗಿದರು. ನನಗೆ ತಿಳಿದಂತೆ ಖಲಂದರ್ಗಳಲ್ಲಿ ಒಬ್ಬರೂ ಪದವೀಧರರಿಲ್ಲ. ಈಗಲೂ ಬಹಳಷ್ಟು ಜನ ಅನಕ್ಷರಸ್ಥರು, ಒಬ್ಬರಿಗೂ ಸರಕಾರದ ನಾಲ್ಕನೇ ದರ್ಜೆ ಕೆಲಸವೂ ಸಿಕ್ಕಿಲ್ಲ. ಬಡತನದಿಂದಾಗಿ ಅನೇಕರು ಪೌಷ್ಟಿಕಾಂಶದ ಕೊರತೆಯಿಂದ ನರಳುತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ನಾನೂ ಒಬ್ಬ ಅಲೆಮಾರಿಯಂತೆ ಅಲೆದಾಡುತ್ತಾ ಕೊಪ್ಪಳ ಜಿಲ್ಲೆಗೆ ಕಾಲಿಟ್ಟಾಗ ನನ್ನ ಬರುವಿಕೆಗೆಂದೇ ಕಾಯುತ್ತಿದ್ದವನಂತೆ ರಾಜಾಸಾಬ್ ಎಂಬ ಕರಡಿ ಆಡಿಸುವಾತ ಬಂದು ತನ್ನ ಊರಿಗೆ ಬಂದು ಕರಡಿಗಳೊಂದಿಗಿನ ತಮ್ಮ ಬದುಕನ್ನು ನೋಡಬೇಕೆಂದು ಪಟ್ಟು ಹಿಡಿದ. ಕರಡಿ ಖಲಂದರ್ಗಳು ಎಸ್.ಸಿ. ಪಟ್ಟಿಗೆ ಸೇರುತ್ತಾರೋ ಅಥವಾ ಈ ಸಮುದಾಯ ಮುಸ್ಲಿಮ್ ಧರ್ಮಕ್ಕೆ ಸೇರಿರುವುದರಿಂದ ಪ್ರವರ್ಗ 2(ಬಿ)ಗೆ ಬರುತ್ತಾರೋ ಎಂಬ ಗೊಂದಲವಿತ್ತು. ಜಾತಿ ಪಟ್ಟಿ ನೋಡಿದಾಗ ಕರಡಿ ಖಲಂದರ್ಗಳು ಹಿಂದುಳಿದ ವರ್ಗಗಳ ಪ್ರವರ್ಗ ಒಂದಕ್ಕೆ ಬರುತ್ತಾರೆ ಎಂಬುದು ತಿಳಿದ ಮೇಲೆ, ಅದು ನನ್ನ ವ್ಯಾಪ್ತಿಗೇ ಬರುತ್ತದೆಂದು ಮನವರಿಕೆ ಆದಮೇಲೆ ರಾಜಾಸಾಬ್ ಅವರ ಊರಿಗೆ ಹೋಗಲು ಸಿದ್ಧನಾದೆ. ಕೊಪ್ಪಳ ಜಿಲ್ಲೆಯ ಮಂಗಳಾಪುರ ಒಂದು ಸಣ್ಣ ಹಳ್ಳಿ, ಅತ್ಯಂತ ಬಡತನದಿಂದ ಆವರಿಸಿದ್ದ ಈ ಗ್ರಾಮವನ್ನು ಸುತ್ತಾಡಿದಾಗ ನನಗೆ ಆದ ಅನುಭವ ವರ್ಣನಾತೀತ! ಇಡೀ ಬೀದಿ, ಮನೆ, ಜಗುಲಿಗಳಲ್ಲಿ ಕರಡಿಗಳು ಮನುಷ್ಯರೊಂದಿಗೆ ಅತ್ಯಂತ ಸಹಜವಾಗಿ ಒಡನಾಡುತ್ತಾ ಬದುಕು ಕಟ್ಟಿಕೊಂಡಿದ್ದವು. ನಡುಮನೆಯಲ್ಲಿ ಮಲಗಿದ್ದ ಕರಡಿಯ ಮೇಲೆ ಕಾಲು ಹಾಕಿಕೊಂಡು ನಿದ್ದೆಗೆ ಜಾರಿದ್ದ ಮಗು ಹೆತ್ತ ತಾಯಿ ಮೇಲೆ ಕಾಲು ಹಾಕಿಕೊಂಡು ಮಲಗಿದಂತೆಯೇ ನಿದ್ರಿಸುತ್ತಿತ್ತು. ಬೀದಿಯಲ್ಲಿ ಮಕ್ಕಳೊಂದಿಗೆ ಆಟ ಆಡುವ ಕರಡಿಗಳು. ಮನೆ ಮುಂದೆ ಕುಳಿತು ಮೊಸರಲ್ಲಿ ಮುದ್ದೆ ಕಲಸಿ ಕರಡಿಗೆ ತಿನ್ನಿಸುತ್ತಿದ್ದ ಖಲಂದರ್ ಕುಟುಂಬಗಳು. ಇಲ್ಲಿ ಕರಡಿಗಳು ಮನೆಯಲ್ಲಿ ಸಾಕಿದ ನಾಯಿಗಳಂತೆ ಕಾಣುತ್ತಿದ್ದವು. ಒಂದು ಕರಡಿಯನ್ನು ಕರೆತಂದು ನನಗೆ ಸಲಾಂ ಮಾಡಿಸಿದರು, ಆ ಕರಡಿಯ ಕೈಯಲ್ಲಿ ಏನೆಲ್ಲಾ ಆಟ ಆಡಿಸಿ ತೋರಿಸಿದರು. ಕರಡಿಗಳೊಂದಿಗೆ ಭಿಕ್ಷೆಗೆ ಹೋದಾಗ ಸಹಜವಾಗಿ ಆಡಿಸುವ ಆಟಗಳು ಅವು. ಕರ್ನಾಟಕದ ಬಳ್ಳಾರಿ, ಕೊಪ್ಪಳ, ಕೋಲಾರ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಖಲಂದರ್ ಸಮುದಾಯದವರು ನೆಲೆಸಿದ್ದಾರೆ. ಹೊಸಪೇಟೆ ತಾಲೂಕಿನ ಹಂಪನಕಟ್ಟೆ, ಹಡಗಲಿ ತಾಲೂಕಿನ ಕರಡಿ ಐನಹಳ್ಳಿ, ಗಂಗಾವತಿ ತಾಲೂಕಿನ ಹುಲಿಹೈದರ, ಹಿರೇಖೇಡ, ರಾಯಚೂರಿನ ಕಾಟಗಲ್, ಧಾರವಾಡದ ಕಲಘಟಗಿ, ಶಿವನಾಪುರ, ಬೆಳಗಾವಿಯ ಖಾನಾಪುರ, ಚಿಕ್ಕಹಂಗರಹಳ್ಳಿ, ರಾಮದುರ್ಗದ ಯಗುದ್ದಿ, ಕೋಲಾರ ಜಿಲ್ಲೆಯ ಅರಲುಕುಂಟೆ ಪ್ರದೇಶಗಳಲ್ಲಿ ಕರಡಿ ಖಲಂದರ್ಗಳ ಸಮುದಾಯ ಕಾಣುತ್ತದೆ. ನಾವು ಚಿಕ್ಕಂದಿನಲ್ಲಿ ಕರಡಿ ಆಡಿಸುವವರನ್ನು ನೋಡಿರುತ್ತೇವೆ. ಯಾರಾದರೂ ಸಿರಿವಂತರ ಅಂಗಳದಲ್ಲಿ, ಸಂತೆ ಮೈದಾನದಲ್ಲಿ, ಜಾತ್ರೆಗಳಲ್ಲಿ ಕರಡಿ ಆಡಿಸುತಿದ್ದರು. ಮಕ್ಕಳು ಹಾಸಿಗೆಯಲ್ಲಿ ಉಚ್ಚೆ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕರಡಿಗಳ ಕೂದಲಲ್ಲಿ ತಾಯತ ಮಾಡಿ ಮಗುವಿನ ನಡುವಿಗೋ, ಕತ್ತಿಗೋ ಕಟ್ಟುತಿದ್ದರು. ಊರುಬೀದಿ ಸುತ್ತಾಡಿ ಕರಡಿ ಆಡಿಸುತ್ತಾ ಸುಸ್ತಾಗುತಿದ್ದ ಖಲಂದರ್ಗಳು ಪಾಳು ಮಂಟಪದಲ್ಲೋ, ಹಾಳುಬಿದ್ದ ಛತ್ರಗಳಲ್ಲೋ, ಶಾಲೆಗಳ ಪಡಸಾಲೆಗಳಲ್ಲೋ ಮಲಗುತಿದ್ದರು. ಬಹುಶಃ ಈಗಿನ ತಲೆಮಾರಿಗೆ ಈ ದೃಶ್ಯಗಳು ಕಾಣಸಿಗಲಾರವು. ವರಕವಿ ದ.ರಾ. ಬೇಂದ್ರೆಯವರ ‘ಕರಡಿ ಕುಣಿತ’ ಕವನ ಬಹಳ ಜನಪ್ರಿಯವಾಗಿತ್ತು.. ‘‘ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು ಕಂಬಳಿ ಹೊದ್ದಾವಾ ಬಂದಾನ. ಗುಣುಗುಣು ಗುಟ್ಟುತ, ಕಡಗವ ಕುಟ್ಟುತ ಕರಡಿಯನಾಡಿಸುತ ನಿಂದಾನ..’’ ಎಂಬ ಕವನವನ್ನು ಐದನೇ ತರಗತಿಗೆ ಪಠ್ಯವಾಗಿ ಇಟ್ಟಿದ್ದ ನೆನಪು ಇಂದಿಗೂ ಹಸಿರಾಗಿದೆ. ಹಾವು ಮತ್ತು ಕೋತಿ ಆಡಿಸುವವರನ್ನು ಸಹಜವಾಗಿ ‘ಮದಾರಿ’ ಎಂದು ಕರೆಯುತ್ತಾರೆ. ಆದರೆ ಕರಡಿ ಆಡಿಸುವವರನ್ನು ಕರಡಿ ಖಲಂದರ್ ಎಂದೇ ಕರೆಯುತ್ತಾರೆ. ಇದು ಭಾರತದ ಪ್ರಾಚೀನ ಸಮುದಾಯಗಳಲ್ಲೊಂದು. ಇಡೀ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ಕರಡಿ ಖಲಂದರ್ಗಳು ವಾಸಿಸುತ್ತಿದ್ದಾರೆ. ನೂರಾರು ವರ್ಷಗಳ ಹಿಂದೆ ಕರಡಿಗಳನ್ನು ಕಾಡಿನಿಂದ ನಾಡಿಗೆ ಕರೆತಂದು ಅವುಗಳನ್ನು ಪಳಗಿಸಿ ಕರಡಿ ಆಟ ಆಡಿಸುತ್ತಾ ಅವುಗಳ ಸಂತಾನವನ್ನು ಬೆಳೆಸಿದ್ದಾರೆ. ಇವರ ಬಳಿ ಇವರೊಂದಿಗೇ ಬದುಕಿರುವ ಕರಡಿಗಳಿಗೆ ಕಾಡಿನ ಪರಿಚಯವೇ ಇಲ್ಲ. ಈ ವಾಸ್ತವವನ್ನು ಅರಿಯದ ಪ್ರಾಣಿ ದಯಾ ಸಂಘದವರು ಕರಡಿ ಆಡಿಸುವವರ ವಿರುದ್ಧ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡುತ್ತಾರೆ. ಅರಣ್ಯ ಇಲಾಖೆಯವರು ಹಿಂದೂ ಮುಂದೂ ಯೋಚಿಸದೆ ಈ ಕರಡಿಗಳನ್ನು ಖಲಂದರ್ಗಳಿಂದ ಕಸಿದುಕೊಂಡು ಕಾಡಿಗೆ ಬಿಡುತ್ತಾರೆ. ಕರಡಿಗಳನ್ನು ಖಲಂದರ್ಗಳಿಂದ ಕಿತ್ತು ಒಯ್ಯುವಾಗಿನ ದೃಶ್ಯಗಳನ್ನು ನೋಡಬೇಕು. ಮಕ್ಕಳನ್ನು ಕಳಕೊಂಡ ಅಪ್ಪ ಅಮ್ಮಂದಿರಂತೆ ಖಲಂದರ್ಗಳು ಗೋಳಾಡಿದರೆ, ಅಪ್ಪ ಅಮ್ಮನನ್ನು ಕಳಕೊಂಡ ಮಕ್ಕಳಂತೆ ಈ ಕರಡಿಗಳು ಗೊಳೋ ಎಂದು ಆಕ್ರಂದಿಸುತ್ತಾ ಕಣ್ಣೀರು ಸುರಿಸುತ್ತವೆ. ಅರಣ್ಯ ಇಲಾಖೆಯವರು ಕಾಡಿಗೆ ಬಿಟ್ಟ ಕರಡಿಗಳಿಗೆ ಕಾಡಿನ ಪರಿಚಯವೇ ಇರಲ್ಲ, ಇವು ತಲೆತಲಾಂತರಗಳಿಂದ ಊರುಕೇರಿಗಳಲ್ಲಿ ಜನಸಂದಣಿಯೊಂದಿಗೆ ಒಡನಾಡುತ್ತಾ ಖಲಂದರ್ಗಳ ಮನೆಗಳಲ್ಲೇ ಹುಟ್ಟಿ ಅಲ್ಲೇ ಬದುಕುತ್ತಿದ್ದವು. ಇವು ಕಾಡಲ್ಲಿ ಆಹಾರ ಪಡೆಯುವ ಮಾರ್ಗ ತೋಚದೆ ಹಸಿವಿನಿಂದ ದಾರುಣವಾಗಿ ಸತ್ತರೆ, ಕರಡಿಗಳನ್ನು ಕಳಕೊಂಡು ಬದುಕು ಕಟ್ಟಿಕೊಳ್ಳಲಾರದ ಖಲಂದರ್ಗಳ ಕುಟುಂಬಗಳೂ ಹಸಿವಿನಿಂದ ಕಂಗಾಲಾಗುತ್ತವೆ. ಇತ್ತ ಕುಲಕಸುಬನ್ನು ಕಳಕೊಂಡ ಖಲಂದರ್ ಗಳು ಏನೂ ಮಾಡಲು ದಿಕ್ಕುತೋಚದೆ ತಾವೂ ಹಸಿವಿನಿಂದ ಸಾಯುತ್ತಾರೆ. ಶೋಕಿಗಾಗಿ ಪ್ರಾಣಿದಯಾ ಸಂಘಗಳನ್ನು ಕಟ್ಟಿಕೊಂಡ ವ್ಯಾಪಾರಿಗಳಿಗಾಗಲಿ, ಅರಣ್ಯ ಇಲಾಖೆಯ ಅಧಿಕಾರಿಶಾಹಿಗಾಗಲಿ ಕರಡಿ ಮತ್ತು ಖಲಂದರ್ ಗಳ ನಡುವಿನ ಜೀವ ಸರಪಳಿಯ ಸೂಕ್ಷ್ಮಗಳು ಅರ್ಥವಾಗಲ್ಲ. ಹಿಂದೆ ಖಲಂದರ್ಗಳಿಗೆ ಕರಡಿ ಸಾಕಲು ಮತ್ತು ಕರಡಿಯಾಟ ಆಡಿಸಲು ಸರಕಾರದ ನಿರ್ಬಂಧ ಇರಲಿಲ್ಲ. ಆದರೆ 1972ರಲ್ಲಿ ವನ್ಯಪ್ರಾಣಿ ರಕ್ಷಣಾ ಕಾಯ್ದೆ ಬಂದ ನಂತರ ಖಲಂದರ್ಗಳಿಗೆ ಸಂಕಷ್ಟಗಳು ಎದುರಾಗತೊಡಗಿದವು. ಕರಡಿ ಹೊಂದಿರುವ ಕಾರಣ ಮುಗ್ಧ ಖಲಂದರ್ಗಳನ್ನು ಜೈಲಿಗೂ ಹಾಕಲಾಯಿತು, ಅವರ ಮೇಲೆ ಕೇಸುಗಳನ್ನು ಹಾಕಿ ಹಿಂಸಿಸಲಾಯಿತು. ಕರಡಿ ಮತ್ತು ಖಲಂದರ್ಗಳ ಕರುಳ ಸಂಬಂಧವನ್ನು ಬೇರ್ಪಡಿಸುವುದು ಸರಕಾರಕ್ಕೆ ದೊಡ್ಡ ಸವಾಲಾಯಿತು. ಕರಡಿಗಳನ್ನು ಪ್ರಾಣಿದಯಾ ಸಂಘ ಮತ್ತು ಅರಣ್ಯ ಇಲಾಖೆಯಿಂದ ಕಾಪಾಡಿಕೊಳ್ಳಲು ಖಲಂದರ್ಗಳು ಕರಡಿಗಳನ್ನು ತಮ್ಮ ಕುಟುಂಬಗಳೊಂದಿಗೆ ಹೊರಡಿಸಿಕೊಂಡು ರಾಜಾಸ್ಥಾನ, ಗುಜರಾತ್, ಉತ್ತರಪ್ರದೇಶ ಮುಂತಾದೆಡೆಗೆ ವಲಸೆ ಹೋಗತೊಡಗಿದರು. ಕರಡಿಗಳನ್ನು ಯಾವುದೇ ವಾಹನಗಳಲ್ಲಿ ಹತ್ತಿಸಿಕೊಳ್ಳುವುದಿಲ್ಲ ಈ ಕಾರಣಕ್ಕೆ ಕರಡಿ, ಮಕ್ಕಳು, ಮಹಿಳೆಯರು, ಮದುಕರೊಂದಿಗೆ ಸಾವಿರಾರು ಮೈಲಿ ಮಳೆ, ಬಿಸಿಲು, ಚಳಿ, ಚಂಡಮಾರುತಗಳನ್ನು ಲೆಕ್ಕಿಸದೆ ನಡೆದೇ ಹೋಗತೊಡಗಿದರು. ಇಷ್ಟಾದರೂ ತಮ್ಮ ಹೆತ್ತ ಮಕ್ಕಳಂತಿದ್ದ ಕರಡಿಗಳನ್ನು ಉಳಿಸಿಕೊಳ್ಳಲು ಈ ನತದೃಷ್ಟ ಖಲಂದರ್ಗಳಿಗೆ ಸಾಧ್ಯವಾಗಲಿಲ್ಲ. ಇವರಿಂದ ಕಸಿದು ಬನ್ನೇರುಘಟ್ಟ ಅರಣ್ಯಕ್ಕೆ ಬಿಟ್ಟ 280 ಕರಡಿಗಳಲ್ಲಿ ಒಂದೂ ಉಳಿಯಲಿಲ್ಲ. ಅವು ಕಾಯಿಲೆ ಬಿದ್ದು ನರಳುವಾಗ ಅವನ್ನು ನೋಡಲು, ಕನಿಷ್ಠ ಸಾಂಪ್ರದಾಯಿಕ ಚಿಕಿತ್ಸೆ ನೀಡಲು ಹೋಗಿದ್ದ ನಮ್ಮ ರಾಜಾಸಾಬ್ ಮತ್ತಿತರ ಖಲಂದರ್ಗಳನ್ನು ಬನ್ನೇರುಘಟ್ಟ ಅರಣ್ಯದೊಳಕ್ಕೇ ಬಿಡಲಿಲ್ಲ. ಕರಡಿಗಳನ್ನು ಕಳಕೊಂಡ ಖಲಂದರ್ಗಳಿಗೆ ಮಾನಸಿಕ ಖಿನ್ನತೆ ಬಹಳ ದಿನ ಕಾಡಿತು. ಕಡೆಗೆ ಬದುಕು ಕಟ್ಟಿಕೊಳ್ಳಲು ಈಚಲು ಚಾಪೆ ಹೆಣೆಯುವುದು. ಫ್ಯಾಕ್ಟರಿಗಳಲ್ಲಿ ತಯಾರಾದ ಪ್ಲಾಸ್ಟಿಕ್ ಚಾಪೆಗಳನ್ನು ಮಾರುವುದು, ಭೂಮಾಲಕರ ಹೊಲ ಗದ್ದೆಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುವುದೇ ಮುಂತಾದ ಕೆಲಸ ಮಾಡತೊಡಗಿದರು. ನನಗೆ ತಿಳಿದಂತೆ ಖಲಂದರ್ಗಳಲ್ಲಿ ಒಬ್ಬರೂ ಪದವೀಧರರಿಲ್ಲ. ಈಗಲೂ ಬಹಳಷ್ಟು ಜನ ಅನಕ್ಷರಸ್ಥರು, ಒಬ್ಬರಿಗೂ ಸರಕಾರದ ನಾಲ್ಕನೇ ದರ್ಜೆ ಕೆಲಸವೂ ಸಿಕ್ಕಿಲ್ಲ. ಬಡತನದಿಂದಾಗಿ ಅನೇಕರು ಪೌಷ್ಟಿಕಾಂಶದ ಕೊರತೆಯಿಂದ ನರಳುತಿದ್ದಾರೆ. ನಮ್ಮ ಆಯೋಗದಿಂದ ಮಂಗಳಾಪುರ ಮತ್ತು ಹುಲಿಹೈದರಕ್ಕೆ ಹೋಗಿದ್ದಾಗ ಅವರ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿಗಳಿಗೆ ತಲಾ ಎರಡು ಎಕರೆ ಭೂಮಿ ನೀಡುವಂತೆ ಆದೇಶ ಮಾಡಿ ನಂತರ ನನ್ನ ಕೈಲಾದ ಪ್ರಯತ್ನವನ್ನೆಲ್ಲ ಮಾಡಿದ್ದೆ. ಈ ಸತತ ಪ್ರಯತ್ನದಿಂದ 45 ಎಕರೆ ಭೂಮಿಯೇನೋ ಇಪ್ಪತ್ತೈದು ಕುಟುಂಬಕ್ಕೆ ಮಂಜೂರಾಯಿತು (ಮಂಗಲಾಪುರಕ್ಕೆ 10 ಎಕರೆ ಹುಲಿಹೈದರಕ್ಕೆ 35 ಎಕರೆ) ಆದರೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಹಣ ಇಲ್ಲವೆಂದು ಇದು ಇಂದಿಗೂ ನನೆಗುದಿಗೆ ಬಿದ್ದಿದೆ. ಅಂತೆಯೇ ನಿವೇಶನ ನೀಡಲೂ ಪ್ರಯತ್ನಿಸಿದ್ದೆವು. ಅದರಲ್ಲಿ 200 ಕುಟುಂಬಗಳಿಗೆ ಚಿಕ್ಕೇಡ ಮತ್ತು ಹುಲಿಹೈದರ ದಲ್ಲಿ ನಿವೇಶನ ನೀಡಲು ಮಂಜೂರು ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವೂ ಜನಕ್ಕೆ ಈವರೆಗೂ ತಲುಪಿಲ್ಲ. ಇಂತಹ ಸಣ್ಣ ಸಮುದಾಯಗಳ ಏಳಿಗೆಗಾಗಿಯೇ ಜನ್ಮವೆತ್ತಿ ಬರುವ ಬಾಬಾಸಾಹೇಬ ಅಂಬೇಡ್ಕರ್, ದೇವರಾಜ ಅರಸು ಅಂತಹವರಿ ಗಾಗಿ ಈ ದಿಕ್ಕೆಟ್ಟ ಜನ ಕಾಯುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ರೀಮಂತರಿಗಾಗಿ 'ಗೋಲ್ಡ್ ಕಾರ್ಡ್' ವೀಸಾವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವೀಸಾ ಅಮೆರಿಕದ ಆರ್ಥಿಕತೆಗೆ ಭಾರಿ ಕೊಡುಗೆ ನೀಡುವವರಿಗೆ ನೀಡಲಾಗುತ್ತದೆ. ಇದಕ್ಕೆ 1 ಮಿಲಿಯನ್ ಡಾಲರ್ ಉಡುಗೊರೆ ನೀಡಬೇಕಾಗುತ್ತದೆ. ಇದು ಪ್ರಸ್ತುತ ಇರುವ EB-5 ವೀಸಾ ವ್ಯವಸ್ಥೆಯನ್ನು ಬದಲಾಯಿಸುವ ನಿರೀಕ್ಷೆಯಿದೆ. ಡಿ.18ರ ವೇಳೆಗೆ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಈ ವೀಸಾ ಪಡೆದುಕೊಳ್ಳಲು ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ನೋಡೋಣ ಬನ್ನಿ...
ಡಿಕೆಶಿಗೆ ಬಾಹ್ಯ ಬೆಂಬಲ ಕೊಡಲು ಬಿಜೆಪಿ ರೆಡಿ : ಏನಿದು ಸದಾನಂದ ಗೌಡ್ರು ಉರುಳಿಸಿದ ಹೊಸ ರಿವರ್ಸ್ ಸ್ವಿಂಗ್?
CM Post tussle in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ, ಬಾಹ್ಯ ಬೆಂಬಲ ಕೇಳಿಕೊಂಡು ಡಿಕೆ ಶಿವಕುಮಾರ್ ಬಂದರೆ, ಅದನ್ನು ನಾವು ಕೊಡಲು ರೆಡಿ ಎನ್ನುವ ಅರ್ಥದಲ್ಲಿ ಮಾಜಿ ಸಿಎಂ, ಬಿಜೆಪಿ ನಾಯಕ ಸದಾನಂದ ಗೌಡ ಹೇಳಿದ್ದಾರೆ.
ಭಾರತದ ಒಂದೇ ಜಿಲ್ಲೆಗೆ 2.2 ಲಕ್ಷ ಎಚ್-1ಬಿ ವೀಸಾ! ಅಮೆರಿಕದ ಮಾಜಿ ಅಧಿಕಾರಿಯಿಂದ ಹಗರಣದ ಆರೋಪ
ಅಮೆರಿಕದ ಎಚ್-1ಬಿ ವೀಸಾ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕದ ಮಾಜಿ ಜನಪ್ರತಿನಿಧಿ ಡಾ. ಡೇವ್ ಬ್ರಾಟ್ ಅವರ ಪ್ರಕಾರ, ವಾರ್ಷಿಕ ಮಿತಿಗಿಂತಲೂ ಹೆಚ್ಚು, ಅಂದರೆ ಬರೋಬ್ಬರಿ 2.20 ಲಕ್ಷ ವೀಸಾಗಳು ಭಾರತದ ಒಂದೇ ಜಿಲ್ಲೆಗೆ ಲಭ್ಯವಾಗಿವೆ. ಇದೇ ವೇಳೆ, ಚೆನ್ನೈ ಕಾನ್ಸುಲೇಟ್ನಲ್ಲಿ ಕೆಲಸ ಮಾಡಿದ್ದ ಮಾಜಿ ಅಧಿಕಾರಿಯೊಬ್ಬರು, ಹೈದರಾಬಾದ್ ಸೇರಿದಂತೆ ದಕ್ಷಿಣ ಭಾರತದಿಂದ ಸಲ್ಲಿಕೆಯಾಗುವ ಶೇkwA 80 ರಿಂದ 90 ರಷ್ಟು ವೀಸಾ ಅರ್ಜಿಗಳು ನಕಲಿ ದಾಖಲೆಗಳನ್ನು ಒಳಗೊಂಡಿರುತ್ತವೆ ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನವೆಂಬರ್ 26ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 26) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ಇತಿಹಾಸ ನಿರ್ಮಿಸಿದ ಇವಿ ಮಾರುಕಟ್ಟೆ: ಒಂದೇ ವರ್ಷ 20 ಲಕ್ಷ ಬ್ಯಾಟರಿ ವಾಹನಗಳು ನೋಂದಣಿ !
ಚೆನ್ನೈ: ಬ್ಯಾಟರಿ ಚಾಲಿತ ವಾಹನಗಳಿಗೆ 2025 ಅತ್ಯಂತ ಉತ್ತಮ ವರ್ಷವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ವರ್ಷ 20 ಲಕ್ಷ ಬ್ಯಾಟರಿ ಚಾಲಿತ ವಾಹನಗಳು ನೋಂದಣಿಗೊಂಡಿವೆ. ಈ ವರ್ಷದಲ್ಲಿ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ ಭಾರತದಲ್ಲಿ ಇವಿ ಕ್ರಾಂತಿ ಈ ಮೈಲುಗಲ್ಲು ದಾಟಿದೆ. ಈ ಏರಿಕೆ ಗ್ರಾಹಕರಲ್ಲಿನ ಆಸಕ್ತಿ, ಉತ್ತಮ ಉತ್ಪನ್ನ ಲಭ್ಯತೆ ಮತ್ತು ಇವಿ ಅಳವಡಿಕೆಯನ್ನು ಬೆಂಬಲಿಸುವ ನೀತಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಮಂಗಳವಾರದವರೆಗೆ ಪ್ರಸಕ್ತ ವರ್ಷದಲ್ಲಿ ಹೈಬ್ರೀಡ್ ವಾಹನಗಳನ್ನು ಹೊರತುಪಡಿಸಿ, 2.02 ದಶಲಕ್ಷ ಇವಿ ನೋಂದಣಿಯಾಗಿದೆ. 2024ರಲ್ಲಿ ಒಟ್ಟು 1.95 ದಶಲಕ್ಷ ವಾಹನಗಳು ನೋಂದಣಿಯಾಗಿದ್ದವು. ಇವಿ ನೀತಿ ಬದಲಾವಣೆಯಾಗಿದ್ದರೂ, ಎಲೆಕ್ಟ್ರಿಕ್ ವಾಹನಗಳಿಗೆ ಪ್ರಬಲ ಬೇಡಿಕೆ ಮುಂದುವರಿದಿದೆ. ಬ್ಯಾಟರಿ ವೆಚ್ಚದಲ್ಲಿ ಇಳಿಕೆ, ನಿಧಾನವಾಗಿ ಏರಿಕೆಯಾಗುತ್ತಿರುವ ಚಾರ್ಜಿಂಗ್ ಜಾಲ ಮತ್ತು ಹೊಸ ಧೀರ್ಘ ದೂರದ ಮಾದರಿಗಳು ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬ್ಯಾಟರಿ ಚಾಲಿತ ವಾಹನಗಳ ಬೇಡಿಕೆ ವೇಗ ಪಡೆಯಲು ಮುಖ್ಯ ಕಾರಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು. ವಾಹನ ಅಂಕಿ ಅಂಶಗಳ ಪ್ರಕಾರ, ಒಟ್ಟು ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ದ್ವಿಚಕ್ರ ವಾಹನಗಳು ಸಿಂಹಪಾಲು ಪಡೆದಿವೆ. ಒಟ್ಟು ಎಲೆಕ್ಟ್ರಿಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳ ಪಾಲು ಶೇಕಡ 57ರಷ್ಟಿವೆ. ಕಳೆದ ವರ್ಷ ಇದ್ದ ಶೇಕಡ 27ರ ಪ್ರಗತಿಗೆ ಹೋಲಿಸಿದರೆ ಈಗ ಶೇಕಡ 15ರಷ್ಟು ಪ್ರಗತಿ ಕಂಡುಬಂದಿದ್ದು, ಇದು ಕೂಡಾ ಆರೋಗ್ಯಕರ ಬೆಳವಣಿಗೆ. ದ್ವಿಚಕ್ರ ವಾಹನಗಳಿಗೆ ಬೇಡಿಕೆ ಮುಂದುವರಿದಿರುವುದು, ತ್ರಿಚಕ್ರ ಸರಕು ವಾಹನಗಳ ವಿದ್ಯುದ್ದೀಕರಣ ಮತ್ತು ಸ್ಪರ್ಧಾತ್ಮಕ ಚತುಶ್ಚಕ್ರ ವಾಹನಗಳನ್ನು ಪರಿಚಯಿಸುತ್ತಿರುವುದು ಸುಸ್ಥಿರ ಪ್ರಗತಿಯನ್ನು ಸೂಚಿಸುತ್ತದೆ ಎಂದು ಕ್ರಿಸಿಲ್ ರೇಟಿಂಗ್ಸ್ ನಿರ್ದೇಶಕರಾದ ಪೂನಮ್ ಉಪಾಧ್ಯಾಯ ಹೇಳುತ್ತಾರೆ.
ಆಪರೇಷನ್ ಸಿಂಧೂರ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವಿಗೆ ದೊಡ್ಡ ಉದಾಹರಣೆ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುರುಕ್ಷೇತ್ರದಲ್ಲಿ 350ನೇ ಗುರು ತೇಜ್ ಬಹದ್ದೂರ್ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡರು. ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ಅವರು ಒತ್ತಿ ಹೇಳಿದರು. 'ಸಿಂಧೂರ್ ಕಾರ್ಯಾಚರಣೆ' ಇದಕ್ಕೆ ಉತ್ತಮ ಉದಾಹರಣೆ ಎಂದರು. ಅಯೋಧ್ಯೆಯ ರಾಮ ಮಂದಿರದ ಬಳಿಕ ಕುರುಕ್ಷೇತ್ರಕ್ಕೆ ಆಗಮಿಸಿದ್ದು, ಭಾರತದ ಪರಂಪರೆಯ ಸಂಗಮಕ್ಕೆ ಸಾಕ್ಷಿಯಾಗಿದೆ ಎಂದರು. ಯುವಕರನ್ನು ಡ್ರಗ್ಸ್ ವ್ಯಸನದಿಂದ ಪಾರು ಮಾಡಲು ಗುರುಗಳ ಬೋಧನೆಗಳು ಸ್ಫೂರ್ತಿ ನೀಡುತ್ತವೆ ಎಂದರು. ವಿಶೇಷ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿದರು. ಗೀತಾ ಸಂದೇಶದ ಮಹತ್ವವನ್ನು ವಿವರಿಸಿದರು.
Gold Price Today Nov 26: ಚಿನ್ನ ಖರೀದಿದಾರರಿಗೆ ಆಘಾತ, ಎಷ್ಟಿದೆ ಇಂದಿನ ಚಿನ್ನ-ಬೆಳ್ಳಿ ದರ?
ಚಿನ್ನ ಹಾಗೂ ಬೆಳ್ಳಿ ದರವು ಮಂಗಳವಾರ ಭಾರೀ ಏರಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರಿಗೆ ಆಘಾತ ನೀಡಿದೆ. ಸೋಮವಾರ ಇಳಿಕೆ ಕಂಡಿದ್ದ ಚಿನ್ನದ ದರವು ಒಂದೇ ದಿನದಲ್ಲಿ ದಿಢೀರ್ ಏರಿಕೆ ಕಾಣುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ವರ್ಷಾಂತ್ಯ ಮುಗಿಯುತ್ತಿರುವ ಹಿನ್ನೆಲೆ ಹಲವರು ಚಿನ್ನ ಖರೀದಿ ಮೇಲೆ ಆಸಕ್ತಿ ತೋರಿದ್ದಾರೆ. ಆದರೆ ಭಾರೀ ದರ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಚಿನ್ನ
ಪುತ್ತಿಲ ಬೇಡಿಕೆಗೆ ರೆಡ್ ಸಿಗ್ನಲ್, ಪುತ್ತೂರಿನಲ್ಲಿ ಮತ್ತೆ ಭುಗಿಲೆದ್ದ ಬಿಜೆಪಿ - ಪುತ್ತಿಲ ಪರಿವಾರ ಶೀತಲ ಸಮರ
ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಶೀತಲ ಸಮರ ತೀವ್ರಗೊಂಡಿದೆ. ಅರುಣ್ ಕುಮಾರ್ ಪುತ್ತಿಲರ ಬೇಡಿಕೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು 'ನೋ' ಎಂದಿದ್ದು, ಮಂಡಲಗಳ ವಿಲೀನ ಹಾಗೂ ಅಧ್ಯಕ್ಷರ ಬದಲಾವಣೆ ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕೆರಳಿರುವ ಪುತ್ತಿಲ ಬೆಂಬಲಿಗರು, ಮುಂದಿನ ಚುನಾವಣೆಯಲ್ಲೂ ಪಕ್ಷೇತರರಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದೇಶಕ್ಕೆ ಗಡೀಪಾರಾದ 6 ಮಂದಿಯನ್ನು ವಾಪಾಸು ಕರೆ ತನ್ನಿ: ಸುಪ್ರೀಂಕೋರ್ಟ್
ಹೊಸದಿಲ್ಲಿ: ಅಕ್ರಮ ವಲಸೆ ಆರೋಪದಲ್ಲಿ ಬಾಂಗ್ಲಾದೇಶಕ್ಕೆ ಗಡೀಪಾರಾಗಿರುವ ತುಂಬುಗರ್ಭಿಣಿ ಸುನಾಲಿ ಖಾತೂನ್, ಪತಿ ದಾನಿಷ್ ಶೇಖ್ ಮತ್ತು ಅಪ್ರಾಪ್ತ ವಯಸ್ಸಿನ ಮಗ ಸಬೀರ್ ಸೇರಿದಂತೆ ಆರು ಮಂದಿಯನ್ನು ಭಾರತಕ್ಕೆ ವಾಪಾಸು ಕರೆಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮಧ್ಯಂತರ ಕ್ರಮವಾಗಿ ಅವರನ್ನು ಭಾರತಕ್ಕೆ ವಾಪಾಸು ಕರೆಸಿಕೊಂಡು ಬಳಿಕ ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬೇಕು ಎಂದು ಸಲಹೆ ಮಾಡಿದೆ. ಆದಾಗ್ಯೂ ನುಸುಳುಕೋರರ ವಿರುದ್ಧ ಕಠಿಣ ಕ್ರಮಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಗಡೀಪಾರಾದವರ ಪರವಾಗಿ ಹಿರಿಯ ವಕೀಲರಾದ ಸಂಜಯ್ ಹೆಗಡೆ, ಕಪಿಲ್ ಸಿಬಲ್ ಮತ್ತು ಶಂಕರನಾರಾಯಣನ್ ಅವರು, ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲಾ ಬಗ್ಚಿ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿ, ಸುನಾಲಿ, ಆಕೆಯ ಪತಿ ಹಾಗೂ ಪುತ್ರನ ಪೌರತ್ವ ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿದ್ದಾರೆ ಹಾಗೂ ಅವರ ಗಡೀಪಾರಿನಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಘನೆಯಾಗಿದೆ. ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ಅವರನ್ನು ವಾಪಾಸು ಕರೆತರಬೇಕು ಎಂದು ಕೋರಿದರು. ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೊಂಡ ನ್ಯಾಯಪೀಠ, ಇದೀಗ ಭೂಮಿ ಹೊಂದಿರುವ ದಾಖಲೆ ಹಾಗೂ ಸಂಬಂಧಿಕರ ಹೇಳಿಕೆಗಳು ದಾಖಲಾಗಿವೆ. ನೀವೇಕೆ ಅವರನ್ನು ವಾಪಾಸು ಕರೆಸಿಕೊಂಡು ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬಾರದು? ನೀವು ಗಡೀಪಾರಿಗಿಂತ ಮುನ್ನ ಯಾವುದೇ ತನಿಖೆ ನಡೆಸಿಲ್ಲ. ಗಡೀಪಾರುಗೊಂಡವರಿಗೆ ಅವರ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಿ ಎಂದು ಕೇಂದ್ರಕ್ಕೆ ಸೂಚಿಸಿತು. ಮಧ್ಯಂತರ ಕ್ರಮವಾಗಿ ಅವರನ್ನು ವಾಪಾಸು ಕರೆಸಿಕೊಳ್ಳಿ ಹಾಗೂ ತನಿಖೆ ನಡೆಸಿ. ಅವರು ಪ್ರಸ್ತುತಪಡಿಸುವ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರ ಪೌರತ್ವ ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಿ ಎಂದು ಸ್ಪಷ್ಟ ಸೂಚನೆ ನೀಡಲಾಯಿತು.
ಬಾಂಗ್ಲಾದೇಶಕ್ಕೆ ಗಡೀಪಾರಾದ 6 ಮಂದಿಯನ್ನು ವಾಪಾಸ್ಸು ಕರೆ ತನ್ನಿ: ಸುಪ್ರೀಂಕೋರ್ಟ್ ಹೊಸದಿಲ್ಲಿ: ಅಕ್ರಮ ವಲಸೆ ಆರೋಪದಲ್ಲಿ ಬಾಂಗ್ಲಾದೇಶಕ್ಕೆ ಗಡೀಪಾರಾಗಿರುವ ತುಂಬುಗರ್ಭಿಣಿ ಸುನಾಲಿ ಖಾತೂನ್, ಪತಿ ದಾನಿಷ್ ಶೇಖ್ ಮತ್ತು ಅಪ್ರಾಪ್ತ ವಯಸ್ಸಿನ ಮಗ ಸಬೀರ್ ಸೇರಿದಂತೆ ಆರು ಮಂದಿಯನ್ನು ಭಾರತಕ್ಕೆ ವಾಪಾಸು ಕರೆಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮಧ್ಯಂತರ ಕ್ರಮವಾಗಿ ಅವರನ್ನು ಭಾರತಕ್ಕೆ ವಾಪಾಸು ಕರೆಸಿಕೊಂಡು ಬಳಿಕ ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬೇಕು ಎಂದು ಸಲಹೆ ಮಾಡಿದೆ. ಆದಾಗ್ಯೂ ನುಸುಳುಕೋರರ ವಿರುದ್ಧ ಕಠಿಣ ಕ್ರಮಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಗಡೀಪಾರಾದವರ ಪರವಾಗಿ ಹಿರಿಯ ವಕೀಲರಾದ ಸಂಜಯ್ ಹೆಗಡೆ, ಕಪಿಲ್ ಸಿಬಾಲ್ ಮತ್ತು ಶಂಕರನಾರಾಯಣನ್ ಅವರು, ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲಾ ಬಗ್ಚಿ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿ, ಸುನಾಲಿ, ಆಕೆಯ ಪತಿ ಹಾಗೂ ಪುತ್ರನ ಪೌರತ್ವ ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿದ್ದಾರೆ ಹಾಗೂ ಅವರ ಗಡೀಪಾರಿನಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಘನೆಯಾಗಿದೆ. ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ಅವರನ್ನು ವಾಪಾಸು ಕರೆತರಬೇಕು ಎಂದು ಕೋರಿದರು. ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೊಂಡ ನ್ಯಾಯಪೀಠ, ಇದೀಗ ಭೂಮಿ ಹೊಂದಿರುವ ದಾಖಲೆ ಹಾಗೂ ಸಂಬಂಧಿಕರ ಹೇಳಿಕೆಗಳು ದಾಖಲಾಗಿವೆ. ನೀವೇಕೆ ಅವರನ್ನು ವಾಪಾಸು ಕರೆಸಿಕೊಂಡು ಅವರ ಪೌರತ್ವದ ಬಗ್ಗೆ ತನಿಖೆ ನಡೆಸಬಾರದು? ನೀವು ಗಡೀಪಾರಿಗಿಂತ ಮುನ್ನ ಯಾವುದೇ ತನಿಖೆ ನಡೆಸಿಲ್ಲ. ಗಡೀಪಾರುಗೊಂಡವರಿಗೆ ಅವರ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಿ ಎಂದು ಕೇಂದ್ರಕ್ಕೆ ಸೂಚಿಸಿತು. ಮಧ್ಯಂತರ ಕ್ರಮವಾಗಿ ಅವರನ್ನು ವಾಪಾಸು ಕರೆಸಿಕೊಳ್ಳಿ ಹಾಗೂ ತನಿಖೆ ನಡೆಸಿ. ಅವರು ಪ್ರಸ್ತುತಪಡಿಸುವ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರ ಪೌರತ್ವ ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಿ ಎಂದು ಸ್ಪಷ್ಟ ಸೂಚನೆ ನೀಡಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ: ಟೆಂಡರ್ ಇಲ್ಲದೆಯೇ ಕೋ.ರೂ.ಗೂ ಹೆಚ್ಚು ಮೊತ್ತ ವೆಚ್ಚ
ಮತದಾರರ ಪಟ್ಟಿಯಲ್ಲಿ ಎಸ್ಐಆರ್ ರಕ್ತಪಾತ!
ಕೋಲಾರ, ಬೆಂ.ಗ್ರಾ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರುತ್ತಾ? ಕೇಂದ್ರದ ನೆಪ ಹೇಳುತ್ತಾ ಸರ್ಕಾರ!
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ 2027 ಕ್ಕೆ ನೀರು ಬರುತ್ತಾ ಎಂಬ ಅನುಮಾನ ಮೂಡಿದ್ದು, ಇದಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ನಿರಾಕರಣೆ ಕೂಡಾ ಕಾರಣ. ಪರಿಸರವಾದಿಗಳ ಹೋರಾಟ ಒಂದುಕಡೆಯಾದರೆ, ಈ ಯೋಜನೆಯಿಂದ ನೀರು ಲಭ್ಯತೆಯೇ ಅನುಮಾನ ಎಂಬ ಇನ್ನೊಂದು ವಾದವೂ ಇದೆ.

26 C