ಟ್ರಂಪ್ ಹಾಗೂ ಸೌದಿ ಯುವರಾಜರ ಗೆಳೆತನದ ಹಿಂದೆ ಯಾವ ಲೆಕ್ಕಾಚಾರವಿದೆ?
ಈ ಬಾಂಧವ್ಯವು ಇಸ್ರೇಲ್ - ಫೆಲೆಸ್ತೀನ್ ಸಂಘರ್ಷದ ಕುರಿತು ಸೌದಿ ಅರೇಬಿಯ ಇರಿಸಿರುವ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಟ್ರಂಪ್ ಆಡಳಿತದಲ್ಲಿ, ಮಾನವ ಹಕ್ಕುಗಳು ಮತ್ತು ಸಂಕೀರ್ಣ ಪ್ರಾದೇಶಿಕ ಶಾಂತಿಗಿಂತ ಹಣ ಮತ್ತು ಮಿಲಿಟರಿ ಒಪ್ಪಂದಗಳು ಮೇಲುಗೈ ಸಾಧಿಸಿವೆ ಎಂಬುದು ಸ್ಪಷ್ಟ. ಎಂಬಿಎಸ್ ಎಂದೇ ಕರೆಯಲ್ಪಡುವ ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ನವೆಂಬರ್ 18, 2025ರಂದು ಅಮೆರಿಕಕ್ಕೆ ಭೇಟಿ ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಎಂಬಿಎಸ್ಗೆ ಅಮೆರಿಕದಲ್ಲಿ ಕೆಂಪು ಹಾಸಿನ ಸ್ವಾಗತ ಮತ್ತು ಸೈನಿಕ ಬ್ಯಾಂಡ್ನೊಂದಿಗೆ ನೀಡಲಾದ ಅದ್ದೂರಿ ಆತಿಥ್ಯ, ಜಾಗತಿಕವಾಗಿ ಗಮನ ಸೆಳೆದಿದೆ. ಈ ಭೇಟಿಯು ಕೇವಲ ವೈಯಕ್ತಿಕ ಸ್ನೇಹದ ವಿಸ್ತರಣೆಯೇ? ಇಲ್ಲವೇ ಇಸ್ರೇಲ್ನ ಭದ್ರತಾ ಹಿತಾಸಕ್ತಿಗಳನ್ನು ಬದಿಗೊತ್ತಿ ಎಮ್ಬಿಎಸ್ ಅವರಿಗೆ ಎಫ್-35 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ನಿರ್ಧಾರದ ಹಿಂದೆ ಅಮೆರಿಕದ ಹೊಸ ಮಧ್ಯಪ್ರಾಚ್ಯ ರಾಜತಾಂತ್ರಿಕತೆಯು ಅಡಗಿದೆಯೇ? ಜಮಾಲ್ ಖಶೋಗಿ ಹತ್ಯೆಯಂತಹ ಮಾನವ ಹಕ್ಕುಗಳ ವಿಷಯಗಳನ್ನು ಟ್ರಂಪ್ ಏಕೆ ಸುಲಭವಾಗಿ ತಳ್ಳಿಹಾಕಿದರು? ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಪ್ರಾದೇಶಿಕ ಭದ್ರತೆಯನ್ನು ಖಾತರಿಪಡಿಸುವಲ್ಲಿ ಈ ವ್ಯಾಪಾರ ಕೇಂದ್ರಿತ ಬಾಂಧವ್ಯವು ನಿಜಕ್ಕೂ ಯಶಸ್ವಿಯಾಗಬಲ್ಲದೇ? ಇಂತಹ ವಿಮರ್ಶಾತ್ಮಕ ಪ್ರಶ್ನೆಗಳು ಈ ಭೇಟಿಯ ಫಲಿತಾಂಶಗಳನ್ನು ಮತ್ತು ಭವಿಷ್ಯದ ಪರಿಣಾಮಗಳನ್ನು ವಿಶ್ಲೇಷಿಸಲು ಅಗತ್ಯವಾಗಿದೆ. ಈ ಶೃಂಗಸಭೆಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಮಿಲಿಟರಿ ಬಾಂಧವ್ಯವು ಗಟ್ಟಿಗೊಂಡಿತು. ಎಂಬಿಎಸ್ ಅವರು ಅಮೆರಿಕದಲ್ಲಿನ ತಮ್ಮ ಆರಂಭಿಕ 600 ಬಿಲಿಯನ್ ಡಾಲರ್ ಹೂಡಿಕೆಯ ಭರವಸೆಯನ್ನು 1 ಟ್ರಿಲಿಯನ್ ಡಾಲರ್ಗೆ ಏರಿಸುವುದಾಗಿ ಘೋಷಿಸಿದರು. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಬಂಡವಾಳವನ್ನು ತರುವಂತೆ ಟ್ರಂಪ್ ಮೇಲೆ ಇದ್ದ ಒತ್ತಡಕ್ಕೆ ಇದು ದೊಡ್ಡ ರಾಜಕೀಯ ವಿಜಯವೆಂದು ಬಿಂಬಿತವಾಯಿತು. ಇದರ ಜೊತೆಗೆ, ಭೇಟಿಯ ಅತ್ಯಂತ ಮಹತ್ವದ ಮತ್ತು ವಿವಾದಾತ್ಮಕ ನಿರ್ಧಾರವೆಂದರೆ ಎಫ್-35 ಫೈಟರ್ ಜೆಟ್ಗಳ ಮಾರಾಟವನ್ನು ಅಂತಿಮಗೊಳಿಸುವುದು. ಇದುವರೆಗೆ ಅಮೆರಿಕವು ತನ್ನ ಮಿಲಿಟರಿ ತಂತ್ರಜ್ಞಾನದಲ್ಲಿ ಇಸ್ರೇಲ್ಗೆ ಇರುವ ಮಿಲಿಟರಿ ಆದ್ಯತೆಯನ್ನು ಉಳಿಸಿಕೊಳ್ಳಲು ಅತ್ಯಾಧುನಿಕ ವಿಮಾನಗಳನ್ನು ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಿತ್ತು. ಟ್ರಂಪ್ ಈ ನೀತಿಯನ್ನು ಬದಿಗೊತ್ತಿದ್ದು, ಇಸ್ರೇಲ್ನ ಆತಂಕಗಳ ಹೊರತಾಗಿಯೂ ಸೌದಿ ಅರೇಬಿಯಕ್ಕೆ ಎಫ್-35 ಜೆಟ್ಗಳನ್ನು ನೀಡುವುದಾಗಿ ಘೋಷಿಸಿದರು. ಇದರ ಜೊತೆಗೆ, ಟ್ರಂಪ್ ಅವರು ಸೌದಿ ಅರೇಬಿಯವನ್ನು ಪ್ರಮುಖ ನೇಟೊ ಅಲ್ಲದ ಮಿತ್ರರಾಷ್ಟ್ರ ಅಂದರೆ MNNA ಎಂದು ಘೋಷಿಸಿದರು. ಈ ಸ್ಥಾನಮಾನವು ಸೌದಿಗೆ ಅಮೆರಿಕದ ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಸುಲಭವಾಗಿ ಮತ್ತು ವೇಗವಾಗಿ ಪಡೆಯಲು ಅವಕಾಶ ನೀಡುತ್ತದೆ. ದೀರ್ಘಕಾಲದ ಸೌದಿಯ ಬೇಡಿಕೆಯಂತೆ, ಅಮೆರಿಕವು ಸೌದಿ ಅರೇಬಿಯದಲ್ಲಿ ನಾಗರಿಕ ಪರಮಾಣು ವಿದ್ಯುತ್ ಸ್ಥಾವರ ಅಭಿವೃದ್ಧಿಗೆ ಸಹಾಯ ಮಾಡಲು ಒಪ್ಪಿಕೊಂಡಿತು. ಈ ಎಲ್ಲಾ ಒಪ್ಪಂದಗಳು ಟ್ರಂಪ್ ಅವರ ಆಡಳಿತದ ಅಡಿಯಲ್ಲಿ ಸೌದಿ ಅರೇಬಿಯವು ಅಮೆರಿಕದ ಪ್ರಮುಖ ಕಾರ್ಯತಂತ್ರ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಸೂಚಿಸುತ್ತವೆ. ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮೂರು ಐತಿಹಾಸಿಕ ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವು 1931ರಲ್ಲಿ ಔಪಚಾರಿಕ ಸ್ನೇಹದಿಂದ ಆರಂಭವಾಯಿತು ಮತ್ತು 1933ರಲ್ಲಿ ತೈಲ ರಿಯಾಯಿತಿ ಒಪ್ಪಂದದೊಂದಿಗೆ ಗಟ್ಟಿಯಾಯಿತು. ಎರಡನೇ ಮಹತ್ವದ ಹಂತ 1945ರಲ್ಲಿ ಪ್ರಾರಂಭವಾಯಿತು. ಅಲ್ಲಿ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಮತ್ತು ಕಿಂಗ್ ಅಬ್ದುಲ್ ಅಝೀಝ್ ನಡುವಿನ ಐತಿಹಾಸಿಕ ಸಭೆಯಲ್ಲಿ ‘ಆಯಿಲ್ ಫಾರ್ ಸೆಕ್ಯುರಿಟಿ’ ಸೂತ್ರಕ್ಕೆ ಅಡಿಪಾಯ ಹಾಕಲಾಯಿತು: ಅಮೆರಿಕಕ್ಕೆ ಸ್ಥಿರ ತೈಲ ಪೂರೈಕೆ, ಬದಲಿಗೆ ಸೌದಿ ಅರೇಬಿಯಕ್ಕೆ ಮಿಲಿಟರಿ ಭದ್ರತಾ ಖಾತರಿ. ಇಂದಿನ ರಾಜಕೀಯಕ್ಕೆ ಪ್ರಸ್ತುತವಾದ ಮೂರನೇ ಹಂತವು 2015ರಲ್ಲಿ ಎಂಬಿಎಸ್ ಅವರ ಆಗಮನದೊಂದಿಗೆ ಪ್ರಾರಂಭವಾಯಿತು. ಯುವ ರಾಜಕುಮಾರ ವಿಷನ್ 2030ರ ಅಡಿಯಲ್ಲಿ ಸೌದಿ ಅರೇಬಿಯವನ್ನು ಆಧುನೀಕರಿಸಲು, ಪ್ರಾದೇಶಿಕ ಭಯೋತ್ಪಾದನೆ ಮತ್ತು ಇರಾನ್ನ ಬೆದರಿಕೆಯನ್ನು ಎದುರಿಸಲು ಅಮೆರಿಕದ ಬೆಂಬಲ ಮತ್ತು ತಂತ್ರಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಟ್ರಂಪ್ ಮತ್ತು ಎಂಬಿಎಸ್ ನಡುವಿನ ವೈಯಕ್ತಿಕ ಸ್ನೇಹ ಈ ರಾಜತಾಂತ್ರಿಕತೆಯನ್ನು ಮತ್ತಷ್ಟು ಬಲಪಡಿಸಿದೆ. ಈ ಭೇಟಿಯ ವಿಶ್ಲೇಷಣೆಯು ಹಲವು ಮಹತ್ವದ ಅಂಶಗಳನ್ನು ತೆರೆದಿಟ್ಟಿದೆ. ಅಬ್ರಹಾಂ ಒಪ್ಪಂದಗಳಿಗೆ ಸೌದಿಯನ್ನು ಸೇರಿಸಲು ಅಮೆರಿಕ ಪ್ರಯತ್ನಿಸುತ್ತಿದ್ದರೂ, ಎಂಬಿಎಸ್ ಅವರು ‘ಎರಡು ದೇಶಗಳ ಪರಿಹಾರ’ ಅಂದರೆ 1967ರ ಗಡಿಗಳು ಮತ್ತು ಪೂರ್ವ ಜೆರುಸಲೇಮ್ ಫೆಲೆಸ್ತೀನ್ನ ರಾಜಧಾನಿ ಎಂಬ ಷರತ್ತನ್ನು ವಿಧಿಸಿದ್ದಾರೆ. ಇಸ್ರೇಲ್ನ ವಸಾಹತು ನೀತಿಗಳ ಬಗ್ಗೆ ಟ್ರಂಪ್ ಮೌನವಾಗಿರುವುದರಿಂದ, ಸೌದಿಯ ಈ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸುವುದು ಅಸಾಧ್ಯವಾಗಿದೆ. ಇನ್ನೊಂದು ಪ್ರಮುಖ ವಿವಾದವೆಂದರೆ ಜಮಾಲ್ ಖಶೋಗಿ ಹತ್ಯೆ. ಅಕ್ಟೋಬರ್ 2, 2018ರಂದು ತನ್ನ ಮದುವೆಗಾಗಿ ಕೆಲವು ದಾಖಲೆಗಳನ್ನು ಪಡೆಯಲು ತುರ್ಕಿಯದ ಸೌದಿ ರಾಯಭಾರ ಕಚೇರಿ ಒಳಗೆ ಹೋಗಿದ್ದ ಸೌದಿ ಮೂಲದ ಅಮೆರಿಕನ್ ಪತ್ರಕರ್ತ ಜಮಾಲ್ ಖಶೋಗಿ ಅಲ್ಲಿಂದ ವಾಪಸ್ ಬರಲೇ ಇಲ್ಲ. ಅವರನ್ನು ಅಲ್ಲೇ ಸೌದಿಯಿಂದ ಬಂದಿದ್ದ ವಿಶೇಷ ಹಂತಕರ ತಂಡವೊಂದು ಬರ್ಬರವಾಗಿ ಕೊಂದು ಮೃತ ದೇಹವನ್ನು ತುಂಡು ತುಂಡು ಮಾಡಿ ರಾಸಾಯನಿಕ ಬಳಸಿ ವಿಲೇವಾರಿ ಮಾಡಿದೆ ಎಂಬ ಗಂಭೀರ ಆರೋಪವಿದೆ. ಸೌದಿ ರಾಜಕುಮಾರ ಎಂಬಿಎಸ್ ಅವರೇ ಈ ಹತ್ಯೆಗೆ ಆದೇಶ ನೀಡಿದ್ದರು ಎಂದು ಅಮೆರಿಕದ ಸಿಐಎ ಕೂಡ ಹೇಳಿತ್ತು. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದಾಗ ಟ್ರಂಪ್ ಆ ಹತ್ಯೆಯ ವಿಷಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು ಮತ್ತು ಎಂಬಿಎಸ್ ಅವರನ್ನು ರಕ್ಷಿಸಲು ಮುಂದಾದರು. ಈ ನಡೆಯು ಟ್ರಂಪ್ ಆಡಳಿತವು ಮಾನವ ಹಕ್ಕುಗಳಿಗಿಂತಲೂ ಸೌದಿ ಅರೇಬಿಯದೊಂದಿಗಿನ ವ್ಯಾಪಾರ ಮತ್ತು ಭದ್ರತಾ ವ್ಯವಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ದೃಢಪಡಿಸಿತು. ಎಫ್-35 ಜೆಟ್ಗಳ ಮಾರಾಟವು ಇಸ್ರೇಲ್ಗೆ ಅಮೆರಿಕ ಈವರೆಗೆ ಕೊಡುತ್ತಾ ಬಂದಿರುವ ಪ್ರಾದೇಶಿಕ ಮಿಲಿಟರಿ ಆದ್ಯತೆಯನ್ನು ನಿಲ್ಲಿಸುವ ಬಗ್ಗೆ ಕಳವಳವನ್ನುಂಟು ಮಾಡಿದೆ. ಆದರೆ, ಸೌದಿ ಅರೇಬಿಯದ ಅತಿ ಹೆಚ್ಚು ಮಿಲಿಟರಿ ವೆಚ್ಚದ ಹೊರತಾಗಿಯೂ, ಅದರ ಮಿಲಿಟರಿ ಸಾಮರ್ಥ್ಯವು ಇಸ್ರೇಲ್ನ ಮಟ್ಟವನ್ನು ತಲುಪಿಲ್ಲ. ಆದ್ದರಿಂದ, ಈ ಜೆಟ್ಗಳ ಮಾರಾಟವು ಹೆಚ್ಚಾಗಿ ಎಂಬಿಎಸ್ ಅವರು ತಮ್ಮ ಅಗಾಧ ಸಂಪತ್ತಿನ ಮೂಲಕ ಟ್ರಂಪ್ನಿಂದ ಪಡೆಯುತ್ತಿರುವ ರಾಜ ಕೀಯ ಪ್ರತಿಫಲವಾಗಿದೆ ಎಂಬ ವಿಶ್ಲೇಷಣೆ ಇದೆ. ಅಂತಿಮವಾಗಿ, ಟ್ರಂಪ್ ಅವರು ಅಮೆರಿಕಕ್ಕೆ ತಂದ ಹೂಡಿಕೆಯ ಮೊತ್ತದ ಬಗ್ಗೆ ನೀಡಿರುವ ಹೇಳಿಕೆಗಳು ಅಮೆರಿಕದ ಮಾಧ್ಯಮಗಳ ಫ್ಯಾಕ್ಟ್ ಚೆಕ್ಗಳಲ್ಲಿ ಅತಿಶಯೋಕ್ತಿ ಎಂದು ಸಾಬೀತಾಗಿದೆ. ವೈಟ್ ಹೌಸ್ನ ಅಧಿಕೃತ ಮಾಹಿತಿ ಪ್ರಕಾರ ಅದು ಸುಮಾರು 8.8 ಟ್ರಿಲಿಯನ್ ಡಾಲರ್ ಮಾತ್ರ ಆಗಿದೆ. ಇದು ಟ್ರಂಪ್ ಅವರ ಹೇಳಿಕೆಯ ಅರ್ಧಕ್ಕಿಂತ ಕಡಿಮೆ. ಟ್ರಂಪ್-ಎಂಬಿಎಸ್ ಭೇಟಿಯು ಅಮೆರಿಕದ ಮಧ್ಯಪ್ರಾಚ್ಯ ನೀತಿಯಲ್ಲಿನ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ಇಸ್ರೇಲ್ನ ಭದ್ರತೆಗೆ ಆದ್ಯತೆ ನೀಡುತ್ತಿದ್ದ ಅಮೆರಿಕ, ಈಗ ಸೌದಿ ಅರೇಬಿಯದೊಂದಿಗೆ ವ್ಯವಹಾರ ಆಧಾರಿತ ಸಂಬಂಧವನ್ನು ನಿರ್ಮಿಸುತ್ತಿದೆ. ಈ ಬಾಂಧವ್ಯವು ಹಳೆಯ ಭದ್ರತೆಗಾಗಿ ತೈಲ ಸೂತ್ರದಿಂದ ಭದ್ರತೆ ಮತ್ತು ತಂತ್ರಜ್ಞಾನಕ್ಕಾಗಿ ಬೃಹತ್ ಹೂಡಿಕೆ ಎಂಬ ಹೊಸ ಸೂತ್ರಕ್ಕೆ ವಿಕಸನಗೊಳ್ಳುತ್ತಿದೆ. ಎಂಬಿಎಸ್ ಅವರ ಆಶಯದಂತೆ ಅಮೆರಿಕದ ಮಿಲಿಟರಿ ಮತ್ತು ತಂತ್ರಜ್ಞಾನದ ಬೆಂಬಲವನ್ನು ಪಡೆಯುವ ಮೂಲಕ ಸೌದಿ ಅರೇಬಿಯವು ಪ್ರಾದೇಶಿಕ ನಾಯಕನಾಗಿ ತನ್ನ ಪಾತ್ರವನ್ನು ಬಲಪಡಿಸಲು ಹೊರಟಿದೆ. ಟ್ರಂಪ್ ಅವರ ಮುಖ್ಯ ಗುರಿ ಮಧ್ಯಪ್ರಾಚ್ಯದಲ್ಲಿ ತೈಲ ಸರಬರಾಜುಗಳನ್ನು ರಕ್ಷಿಸಲು ಅಮೆರಿಕದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಆ ಜವಾಬ್ದಾರಿಯನ್ನು ಸೌದಿಯಂತಹ ಮಿತ್ರರಾಷ್ಟ್ರಗಳ ಮೇಲೆ ವರ್ಗಾಯಿಸುವುದು. ಸೌದಿ ಅರೇಬಿಯವನ್ನು ಎಂ.ಎನ್.ಎನ್.ಎ. ಸ್ಥಾನಮಾನಕ್ಕೆ ಏರಿಸುವುದು ಮತ್ತು ಎಫ್-35 ಜೆಟ್ಗಳನ್ನು ನೀಡುವುದು ಈ ವಲಯದಲ್ಲಿನ ಅಧಿಕಾರದ ಸಮತೋಲನವನ್ನು ಬದಲಾಯಿಸದಿದ್ದರೂ, ಸೌದಿ ಅರೇಬಿಯಕ್ಕೆ ಭಾರೀ ರಾಜಕೀಯ ಮತ್ತು ತಾಂತ್ರಿಕ ಬಲವನ್ನು ನೀಡುತ್ತದೆ. ಅಂತಿಮವಾಗಿ, ಈ ಬಾಂಧವ್ಯವು ಇಸ್ರೇಲ್ - ಫೆಲೆಸ್ತೀನ್ ಸಂಘರ್ಷದ ಕುರಿತು ಸೌದಿ ಅರೇಬಿಯ ಇರಿಸಿರುವ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಟ್ರಂಪ್ ಆಡಳಿತದಲ್ಲಿ, ಮಾನವ ಹಕ್ಕುಗಳು ಮತ್ತು ಸಂಕೀರ್ಣ ಪ್ರಾದೇಶಿಕ ಶಾಂತಿಗಿಂತ ಹಣ ಮತ್ತು ಮಿಲಿಟರಿ ಒಪ್ಪಂದಗಳು ಮೇಲುಗೈ ಸಾಧಿಸಿವೆ ಎಂಬುದು ಸ್ಪಷ್ಟ.
ಸಂಪಾದಕೀಯ | ಹಸೀನಾ: ಭಾರತದ ಮುಜುಗರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 21ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಈಗಾಗಲೇ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 21) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (KRS) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು
ಹಿಂದಿಯಲ್ಲಿ ಮಾತನಾಡಿದ್ದಕ್ಕೆ ರೈಲಿನಲ್ಲಿ ಹಲ್ಲೆ, ಅವಮಾನ: ಆತ್ಮಹತ್ಯೆಗೆ ಶರಣಾದ ಮುಂಬೈನ 19 ವರ್ಷದ ವಿದ್ಯಾರ್ಥಿ
ಹಿಂದಿಯಲ್ಲಿ ಮಾತನಾಡಿದ ಕಾರಣಕ್ಕೆ ಲೋಕಲ್ ರೈಲಿನಲ್ಲಿ ಹಲ್ಲೆಗೆ ಒಳಗಾದ 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಅರ್ನಾವ್ ಖೈರೆ ಮಾನಸಿಕವಾಗಿ ತೀವ್ರ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ತಂದೆ ಜಿತೇಂದ್ರ ಖೈರೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಎಂ ಪಟ್ಟಕ್ಕಾಗಿ ಕನಕಪುರ ಬಂಡೆ ಪಟ್ಟು; 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಡಿ ಕೆ ಶಿವಕುಮಾರ್ ರಿಯಾಕ್ಷನ್
ಬೆಂಗಳೂರು,ನವೆಂಬರ್ 21: ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಣ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ತೀವ್ರಗೊಂಡಿದೆ. ಅಲ್ಲದೇ ಚಾಮರಾಜನಗರದಲ್ಲಿ ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ವೈಟ್ ಹೌಸ್ನಲ್ಲಿ ಫುಟ್ಬಾಲ್ ಆಡುತ್ತಿರುವ ಕೃತಕ ಬುದ್ಧಿಮತ್ತೆ (AI) ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ರೊನಾಲ್ಡೊ ಅವರನ್ನು ಮಹಾನ್ ವ್ಯಕ್ತಿ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಈ ಹಿಂದೆ ರೊನಾಲ್ಡೊ ಕೂಡ ಟ್ರಂಪ್ಗೆ ಧನ್ಯವಾದ ತಿಳಿಸಿದ್ದರು. ಟ್ರಂಪ್ ಈ ಹಿಂದೆ ಕೂಡ ಹಲವಾರು AI ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಸುದ್ದಿ ಮಾಡಿದ್ದಾರೆ.
ಬಿಹಾರದ ತೀರ್ಪು ಮತ್ತು ಕಾಂಗ್ರೆಸ್ ಭವಿಷ್ಯ
2026ರಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯು ಕಾಂಗ್ರೆಸ್ ಮತ್ತು ರಾಹುಲ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ವ್ಯಂಗ್ಯವೆಂದರೆ, ಬಿಜೆಪಿ ಎಲ್ಲ ಪಕ್ಷದ ವಲಸಿಗರಿಂದ ತುಂಬಿಕೊಂಡು, ಹಳೆಯ ಕಾಂಗ್ರೆಸ್ನ ಪಡಿಯಚ್ಚಾಗಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ತಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿವೆ. ಬಿಜೆಪಿಯನ್ನು ಎದುರಿಸಬಲ್ಲ ರಾಷ್ಟ್ರೀಯ ಹೆಜ್ಜೆಗುರುತು ಮತ್ತು ಐತಿಹಾಸಿಕ ಸ್ವೀಕಾರಾರ್ಹತೆ ಇರುವುದು ಕಾಂಗ್ರೆಸ್ಗೆ ಮಾತ್ರ. ಕಾಂಗ್ರೆಸ್ ತನ್ನ ದೊಡ್ಡಣ್ಣನ ಮನಸ್ಥಿತಿ ಕೈಬಿಟ್ಟು, ಪ್ರಾದೇಶಿಕ ಪಕ್ಷಗಳೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ವಿಶಾಲವಾದ ವೇದಿಕೆಯೊಂದನ್ನು ರೂಪಿಸಬೇಕಿದೆ. ಬಿಹಾರದ ಜನ ಪ್ರತಿಪಕ್ಷಗಳನ್ನು ತಿರಸ್ಕರಿಸಿ, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು ಪ್ರಚಾರದ ವೇಳೆ ತೇಲಿಸಿದ ನುಸುಳುಕೋರ ನರೇಟಿವ್ ನ್ನು ವಿಜಯದ ಬಳಿಕ ಮತ್ತೆ ಪ್ರಸ್ತಾಪಿಸಲಿಲ್ಲ. ಮಹಾಘಟಬಂಧನ್ ಯಾದವ-ಮುಸ್ಲಿಮ್ ಸಮುದಾಯವನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ವಿಫಲವಾಗಿದೆ. ‘ಮತಗಳವು’ ಹಾಗೂ ನ್ಯಾಯಯಾತ್ರೆಯ ಹೊರತಾಗಿಯೂ ಕಾಂಗ್ರೆಸ್ ಸೋತಿದೆ. ಪಕ್ಷ ಮತ್ತೊಮ್ಮೆ ಹೋಳಾಗುವುದೇ ಎಂಬ ಪ್ರಶ್ನೆಯನ್ನೂ ಎತ್ತಿದೆ. ಬಿಹಾರ ಚುನಾವಣೆಯು ದಮನ, ಶರಣಾಗತಿ ಮತ್ತು ವಿಷಮಯ ವಾತಾವರಣದಲ್ಲಿ ನಡೆಯಿತು. ಸೆಪ್ಟಂಬರ್ 26ರಂದು 75 ಲಕ್ಷ, ಅಕ್ಟೋಬರ್ 3ರಂದು 25 ಲಕ್ಷ ಹಾಗೂ ಅಕ್ಟೋಬರ್ 6ರಂದು 21 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆಯ ಘೋಷಣೆ ಮಾಡಲಾಯಿತು; ಅಕ್ಟೋಬರ್ 17 ಹಾಗೂ ಆನಂತರ ಖಾತೆಗೆ ಹಣ ಹಾಕಲಾಯಿತು. ಆದರೆ, ಚುನಾವಣೆ ಆಯೋಗ ಉಸಿರೆತ್ತಲಿಲ್ಲ. ಮಾದರಿ ನೀತಿಸಂಹಿತೆ ಕಸದ ಬುಟ್ಟಿ ಸೇರಿತು. ಜೀವಮಾನದಲ್ಲಿ 500 ರೂ. ನೋಟು ಮುಟ್ಟದ ಬಿಹಾರದ ಅಸಂಖ್ಯಾತ ಮಹಿಳೆಯರ ಖಾತೆಗೆ ಒಮ್ಮೆಲೇ 10,000 ರೂ. ಜಮೆ ಹಾಗೂ ಆನಂತರ 2 ಲಕ್ಷ ರೂ.ಗಳ ಆಶ್ವಾಸನೆ ಸಿಕ್ಕರೆ ಏನಾಗಬಹುದೋ ಅದೇ ಆಯಿತು. ಬಿಜೆಪಿ ಬಿಹಾರಕ್ಕೆ ಮತದಾರರಿಂದ ತುಂಬಿದ ರೈಲುಗಳನ್ನು ಕಳುಹಿಸಿದೆ ಎಂಬ ದೂರುಗಳಿವೆ. ಮತದಾನದ ವೀಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕೆಂಬ ಪ್ರತಿಪಕ್ಷಗಳ ಕೋರಿಕೆಯನ್ನು ತಳ್ಳಿ ಹಾಕಿದ ಚುನಾವಣೆ ಆಯೋಗ, ಇದರಿಂದ ಮಹಿಳೆಯರ ಸಭ್ಯತೆಯ ಉಲ್ಲಂಘನೆ ಆಗಲಿದೆ ಎಂದು ನೆಪ ಹೇಳಿತು. ದ್ವೇಷ ಭಾಷಣ ಸೇರಿದಂತೆ ಹಲವು ಉಲ್ಲಂಘನೆಗಳ ಹೊರತಾಗಿಯೂ, ಆಯೋಗ ಈವರೆಗೆ ಪ್ರಧಾನಿ ಮತ್ತು ಗೃಹ ಸಚಿವರ ಮೇಲೆ ದೂರು ದಾಖಲಿಸಿಲ್ಲ. ಮತದಾರರ ಪಟ್ಟಿಯಲ್ಲಿನ ವ್ಯತ್ಯಯಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಸುಮಾರು 65 ಲಕ್ಷ ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ಮಾಡಬೇಕಿದ್ದ ಚುನಾವಣೆ ಆಯೋಗ, ಈ ಹಿಂದೆಯೇ ಏಕೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿತು. ಬೇರೆ ರಾಜ್ಯಗಳಲ್ಲಿ ಮತ ಚಲಾಯಿಸಿದವರು ಬಿಹಾರದಲ್ಲೂ ಮತ ನೀಡಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹರ್ಯಾಣದಲ್ಲಿ ಲಕ್ಷಾಂತರ ನಕಲಿ ಮತದಾರರು ಮತ ಚಲಾಯಿಸಿರುವುದನ್ನು ಕಾಂಗ್ರೆಸ್ ಬಹಿರಂಗಗೊಳಿಸಿದೆ. ಚುನಾವಣೆಯನ್ನು ಈ ರೀತಿ ನಡೆಸುವುದಾದರೆ, ಆಯೋಗವನ್ನು ಮುಚ್ಚಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗೆ ಜವಾಬ್ದಾರಿ ವಹಿಸಬಹುದಲ್ಲವೇ? ಆಯೋಗದ ಮೇಲೆ ದೂರು ನೀಡುವ ಅವಕಾಶವನ್ನೇ ಕಾನೂನಿನ ಮೂಲಕ ತೆಗೆದುಹಾಕಲಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡ ‘ನುಸುಳುಕೋರ’ ಪದವನ್ನು ಉಲ್ಲೇಖಿಸಿದ್ದರಲ್ಲದೆ,‘‘ಬಿಹಾರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಏಕೆಂದರೆ, ಭೂಮಿ ಇಲ್ಲ’’ ಎಂದಿದ್ದರು. ಆದರೆ, ವಿಜಯದ ಬಳಿಕ ಪ್ರಧಾನಿ ತಮ್ಮ ನರೇಟಿವ್ ಬದಲಿಸಿದರು. ‘ನುಸುಳುಕೋರ’ ಪದವನ್ನು ಕೈಬಿಟ್ಟು ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಹೇಳಿದರು. ‘ನುಸುಳುಕೋರ’ ಪದದ ಬಳಕೆಯು ದಿಕ್ಕುಗೆಡಿಸುವ ತಂತ್ರ ಎಂದು ದೃಢಪಡಿಸಿದರು. ‘ರೆವ್ಡಿ ಸಂಸ್ಕೃತಿ’ ದೇಶದ ಆರ್ಥಿಕತೆಯನ್ನು ಹಾಳುಮಾಡುತ್ತದೆ ಎಂದು ‘ಉಚಿತ’ಗಳನ್ನು ಹೀಗಳೆಯುತ್ತಿದ್ದ ಪ್ರಧಾನಿ, ಅದೇ ಮಾರ್ಗ ಹಿಡಿದರು. ನಿತೀಶ್ ಅವರ 20 ವರ್ಷಗಳ ಆಡಳಿತದ ಬಳಿಕವೂ 10,000 ರೂ. ಆಮಿಷಕ್ಕೆ ಬಲಿಯಾಗುವಷ್ಟು ಬಡತನ ರಾಜ್ಯದಲ್ಲಿ ಇದೆ ಎಂಬುದು ಸಾಬೀತಾಯಿತು. ರಾಹುಲ್ ಅವರ ನಕಾರಾತ್ಮಕ ರಾಜಕೀಯದ ಬಗ್ಗೆ ಕಾಂಗ್ರೆಸ್ನಲ್ಲಿರುವ ಅಸಮಾಧಾನವನ್ನು ಉಲ್ಲೇಖಿಸಿದ ಪ್ರಧಾನಿ, ಪ್ರತಿಪಕ್ಷದಲ್ಲಿ ಮತ್ತೊಂದು ವಿಭಜನೆಯನ್ನು ಊಹಿಸಿದ್ದಾರೆ. ಆದರೆ, ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ಬಿಜೆಪಿಯೊಳಗಿನ ಅಸಮಾಧಾನದ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಅದಾನಿ ಗ್ರೂಪ್ಗೆ ಭಾಗಲ್ಪುರದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಭೂಮಿ ನೀಡಿರುವುದನ್ನು ಲೂಟಿ ಎಂದು ಸಾರ್ವ ಜನಿಕವಾಗಿ ಖಂಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರಧಾನಿ ಪ್ರತಿಕ್ರಿಯೆ ಏನು? ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ರಾಹುಲ್ ದಾಳಿ ನಡೆಸುತ್ತಿದ್ದಾರೆ ಎಂದು ಮೋದಿ ಟೀಕಿಸುತ್ತಾರೆ. ಆದರೆ, ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯನ್ನು ಬಲಪಡಿಸಿದ್ದಾರೆಯೇ? ಇಲ್ಲ. ಕಾಂಗ್ರೆಸ್ ಮತ್ತು ರಾಹುಲ್ ಸಮಸ್ಯೆ ಬಿಹಾರದಲ್ಲಿ ವಿಜಯದ ಸೂಚನೆ ಸಿಕ್ಕ ತಕ್ಷಣ ಬಿಜೆಪಿಯ ಐಟಿ ಸೆಲ್, ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡಲಾರಂಭಿಸಿತು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ 90 ಚುನಾವಣೆಗಳಲ್ಲಿ ಸೋಲು ಅನುಭವಿಸಿದೆ ಎಂದು ಅನುರಾಗ್ ಠಾಕೂರ್, ನರೋತ್ತಮ್ ಮಿಶ್ರಾ ಮತ್ತಿತರರು ಹೀಯಾಳಿಸಿದರು; ‘ಪಪ್ಪು’ ಟ್ಯಾಗ್ ಅನ್ನು ಮರುಜೋಡಿಸುವ ಪ್ರಯತ್ನ ನಡೆಯಿತು. ನಿಜ; 2009ರ ಬಳಿಕ ಕಾಂಗ್ರೆಸ್ 83 ಚುನಾವಣೆಗಳಲ್ಲಿ 71ರಲ್ಲಿ ಸೋಲುಂಡಿದೆ. ಆದರೆ, ರಾಹುಲ್ಗೆ ಸಮಸ್ಯೆಯಾಗಿರುವುದು ಕಾಂಗ್ರೆಸ್ನಲ್ಲಿ ಇರುವ ಸಂವಿಧಾನ ವಿರೋಧಿಗಳು ಹಾಗೂ ಪಕ್ಷದ ಬಗ್ಗೆ ಅರಿವು ಇಲ್ಲದವರಿಂದ. ‘ಹರ್ಯಾಣದಲ್ಲಿ ಪಕ್ಷ ದುರಾಡಳಿತದಿಂದ ಸೋತಿದೆಯೇ ಹೊರತು ರಾಹುಲ್ ಆರೋಪ ಮಾಡಿದಂತೆ ವೋಟ್ ಚೋರಿಯಿಂದಲ್ಲ’ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲೇ ಕೇಳಿಬಂದಿದೆ. ಕೆಲವರು ರಾಹುಲ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದರೆ, ಇನ್ನಿತರರು ಅವರ ಸುತ್ತಲಿನ ಗುಂಪನ್ನು ದೂಷಿಸುತ್ತಿದ್ದಾರೆ. ಆದರೆ, ಕಟ್ಟಡವೇ ನೆಲಸಮ ಆಗುತ್ತಿರುವಾಗ ಕಿಟಕಿಗಳ ಬಗ್ಗೆ ಕೊರಗುವುದು ವ್ಯರ್ಥ ಎನ್ನುವುದು ಇಂಥವರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಒಳಸಂಚು ಮತ್ತು ಪಿತೂರಿಗಳ ಸಾಗರ. ಪಕ್ಷದ ನಾಯಕರು ನೆಟ್ವರ್ಕಿಂಗ್ ಮತ್ತು ಹೊಗಳುಭಟ ಪ್ರವೃತ್ತಿಯಿಂದ ಹುದ್ದೆ ಗಳಿಸಿಕೊಂಡು, ಅದನ್ನು ಉಳಿಸಿಕೊಳ್ಳಲು ಸಾಧ್ಯವಿರುವುದನ್ನೆಲ್ಲ ಮಾಡುತ್ತಾರೆ; ಸಂಘಟನೆಗೆ ಶ್ರಮ ವಹಿಸುವುದಿಲ್ಲ. ಚುನಾವಣೆಯಲ್ಲಿ ಸೋತರೆ, ಪರಿಷತ್ತು-ರಾಜ್ಯಸಭೆಯಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಪಕ್ಷ ನಿರಾಕರಿಸಿದರೆ, ದ್ವೇಷ ಸಾಧಿಸುತ್ತಾರೆ ಮತ್ತು ಮುಖಂಡರನ್ನು ಅವಕಾಶ ಸಿಕ್ಕಾಗಲೆಲ್ಲ ಟೀಕಿಸುತ್ತಾರೆ. ಕೊನೆಗೊಮ್ಮೆ ಪಕ್ಷವನ್ನು ತೊರೆಯುತ್ತಾರೆ. ಬಿಜೆಪಿಗೆ ಪಕ್ಷಾಂತರಗೊಂಡವರನ್ನು ಸಮರ್ಥಿಸುತ್ತ, ಕಡೆಗಣನೆ ಮತ್ತು ನಿರ್ಲಕ್ಷ್ಯವನ್ನು ಸಹಿಸುವುದಕ್ಕೂ ಮಿತಿಯಿದೆ ಎಂದು ವಾದಿಸುತ್ತಾರೆ. ಇಂಥವರಲ್ಲಿ ಹೆಚ್ಚಿನವರು ಅಂತರಂಗದಲ್ಲಿ ಸಂಘಿಗಳೇ ಆಗಿರುತ್ತಾರೆ. ಶಶಿ ತರೂರ್ ಅಂಥವರು ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದಲ್ಲಿ ಇದ್ದಾರೆ. ಮೋದಿ-ಶಾ ಜೋಡಿಯ ವಿನಾಶಕಾರಿ ರಾಜಕೀಯ ದಾಳಿ ಹೊರತಾಗಿಯೂ ಕಾಂಗ್ರೆಸ್ನ ಯುವ ಮತ್ತು ಹಿರಿಯ ನಾಯಕರು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಒಗ್ಗಟ್ಟು ಸಾಧಿಸಲು ಸಾಧ್ಯವಾಗಿಲ್ಲ ಎಂಬುದು ಕಠೋರ ಸತ್ಯ. ರಾಹುಲ್ ತಮ್ಮ ಕಠಿಣ ಪರಿಶ್ರಮ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಸ್ಪಷ್ಟ ಸೈದ್ಧಾಂತಿಕ ನಿಲುವಿನಿಂದ ಕಾರ್ಯಕರ್ತರು ಮತ್ತು ಜನರ ಅಭಿಮಾನ ಗಳಿಸಿದ್ದಾರೆ. ಆದರೆ, ತಮ್ಮ ನಿಲುವನ್ನು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳಲ್ಲೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸೆಣಸಾಟ ರಸ್ತೆಗೆ ಬಂದಿದೆ. ‘ಉಚಿತ’ಗಳ ವಿರುದ್ಧ ಸಚಿವರೇ ಮಾತನ್ನಾಡುತ್ತಾರೆ; ಆದರೆ, ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿ-ಸರಕಾರದ ಮೇಲೆ ಬಿಜೆಪಿ-ಆರೆಸ್ಸೆಸ್ ವಾಗ್ದಾಳಿ ನಡೆಸಿದರೆ, ಸಚಿವರು ಉಸಿರೆತ್ತುವುದಿಲ್ಲ. ಒಂದು ವೇಳೆ ಸೈದ್ಧಾಂತಿಕ ನಿಕಷದಲ್ಲಿ ಪರಿಶೋಧಿಸಿದರೆ, ರಾಜ್ಯ ಕಾಂಗ್ರೆಸ್ ಬಹುತೇಕ ಖಾಲಿಯಾಗಿ ಬಿಡುತ್ತದೆ! ಕಬ್ಬನ್ ಪಾರ್ಕ್ ಮೂಲಕ ಸುರಂಗ ರಸ್ತೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, 46 ಕಸ ಗುಡಿಸುವ ಯಂತ್ರಗಳಿಗೆ 7 ವರ್ಷ ಅವಧಿಗೆ 613 ಕೋಟಿ ರೂ. ಬಾಡಿಗೆ ಒಪ್ಪಂದ(ಈ ಯಂತ್ರವೊಂದರ ಬೆಲೆ 2.5 ಕೋಟಿ ರೂ.)ದಂಥ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ. ಬಿಜೆಪಿಯ ಕೆಟ್ಟ ಆಡಳಿತ ನೋಡಿ, ಜನ ನಮಗೆ ಮತ ನೀಡಿದ್ದಾರೆ ಎಂಬುದನ್ನು ಕಾಂಗ್ರೆಸ್ ಮಂದಿ ಮರೆತಂತೆ ಕಾಣುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ್ ರೆಡ್ಡಿ ಎಬಿವಿಪಿ ಹಿನ್ನೆಲೆಯವರು. ಅವರ ನಡೆಗಳು ರಾಹುಲ್ ಪ್ರತಿಪಾದಿಸುವ ಸಿದ್ಧಾಂತಕ್ಕೆ ತದ್ವಿರುದ್ಧವಾಗಿವೆ. ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸರಕಾರವಿದ್ದರೂ, 2024ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಿಜಕ್ಕೂ ಸಂಕಷ್ಟದಲ್ಲಿದೆ. ಮಂಡಲ-ಕಮಂಡಲ ಸಮೀಕರಣದ ಪುನರುಜ್ಜೀವ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯನ್ನು ‘ಉಚಿತ’ದಿಂದ ತಗ್ಗಿಸಲಾಯಿತು. ವಿಜಯಕ್ಕೆ ಮತ ಕಳವು ಮಾತ್ರವಲ್ಲದೆ ಹಲವು ಕಾರಣಗಳಿವೆ. ಮೊದಲಿಗೆ, ಜಗನ್ನಾಥ್ ಮಿಶ್ರಾ ಅವರ ನಂತರ ಲಾಲು ಪ್ರಸಾದ್ ಯಾದವ್ ಅಧಿಕಾರಕ್ಕೆ ಬಂದಾಗ, ಮೇಲ್ಜಾತಿ ವ್ಯವಸ್ಥೆಯನ್ನು ಹಿಂದುಳಿದ ಜಾತಿಗಳು ಸ್ಥಳಾಂತರಿಸಿದವು; ಲಾಲು ಅವರು ಯಾದವ ಕೇಂದ್ರಿತ ರಾಜಕೀಯಕ್ಕೆ ಪರ್ಯಾಯವನ್ನು ರೂಪಿಸಲಿಲ್ಲ. ನಿತೀಶ್ ಕುಮಾರ್ ಆಡಳಿತದಲ್ಲಿ ಅತಿ ಹಿಂದುಳಿದ ಜಾತಿಗಳು ಮುನ್ನೆಲೆಗೆ ಬಂದಿವೆ. ಇದರಿಂದ, ಮಂಡಲ್ ರಾಜಕೀಯ ಮಾತ್ರವಲ್ಲದೆ ಲಾಲು ಅವರ ಕುಟುಂಬದ ಹಿಡಿತ ಕೂಡ ದುರ್ಬಲಗೊಂಡಿದೆ. ಸಾಕಷ್ಟು ಯುವ ಯಾದವ ಮುಖಂಡರು ಎನ್ಡಿಎ ಸೇರಿದ್ದಾರೆ. ಎರಡನೆಯದಾಗಿ, ಮಂಡಲ-ಕಮಂಡಲ ಸಮೀಕರಣ ರೂಪುಗೊಂಡಿದೆ. ಬಿಜೆಪಿ-ಜೆಡಿಯು ಸಂಬಂಧ ಇದನ್ನು ಪ್ರತಿಬಿಂಬಿಸುತ್ತದೆ. ಮೂರನೆಯದಾಗಿ, ಬಿಜೆಪಿ-ಜೆಡಿಯು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಬದಿಗಿಟ್ಟಿವೆ. ಉದಾಹರಣೆಗೆ, ನಿತೀಶ್ ಅವರನ್ನು ಮೈತ್ರಿಕೂಟದ ನಾಯಕ ಎಂದು ಒಪ್ಪಿಕೊಳ್ಳಲಾಯಿತು; ಎರಡೂ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡು, ಒಂದು ಪಕ್ಷ ಬಹುಮತ ಗಳಿಸುವ ಸಾಧ್ಯತೆಯನ್ನು ನಿವಾರಿಸಿದವು. ಮೂರನೆಯದಾಗಿ, ಮುಸ್ಲಿಮ್ ಮತಗಳು ಮತ್ತು ಪ್ರಬಲ ಜಾತಿಯಾದ ಯಾದವರ ಬೆಂಬಲವಿಲ್ಲದಿದ್ದರೂ, ಬಿಜೆಪಿ ಮೇಲ್ಜಾತಿ ಮತಗಳನ್ನು, ಜೆಡಿ(ಯು) ಕುರ್ಮಿ, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್ಎಲ್ಎಸ್ಪಿ) ಕೊಯರಿ, ಜಿತನ್ ರಾಂ ಮಾಂಝಿ ಅವರ ಹಿಂದುಸ್ಥಾನ್ ಅವಾಂ ಮೋರ್ಚಾ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕಜನ ಶಕ್ತಿ ಪಕ್ಷ(ಆರ್ವಿ)ದ ಮೂಲಕ ದಲಿತರ ಮತಗಳನ್ನು ಸೆಳೆಯಲಾಯಿತು. ಆಂಧ್ರದಲ್ಲಿ ರೆಡ್ಡಿ ಸಮುದಾಯವನ್ನು ಕಮ್ಮ-ಕಾಪು ಹೊಂದಾಣಿಕೆ ಮೂಲಕ ಅಥವಾ ತೆಲಂಗಾಣದಲ್ಲಿ ವೇಲಮರನ್ನು ಪ್ರತ್ಯೇಕಿಸಿದಂತೆ, ಯಾದವರನ್ನು ಉಳಿದ ಜಾತಿ ಗುಂಪುಗಳಿಂದ ಪ್ರತ್ಯೇಕಿಸಲಾಯಿತು. ಪ್ರಬಲ ಜಾತಿಗಳನ್ನು ಮುಖಾಮುಖಿಯಾಗಿಸುವ ಬದಲು ಜಾತಿಗಳ ಸುಸಂಬದ್ಧ ಕ್ರೋಡೀಕರಣದಿಂದ ಅವನ್ನು ಪ್ರತ್ಯೇಕಿಸಲಾಯಿತು. ಈ ಸೂತ್ರದಿಂದ ಜಾತಿ ಆಧರಿತ ಪ್ರಾದೇಶಿಕ ಪಕ್ಷಗಳನ್ನು ನಿಭಾಯಿಸಬಹುದಾಗಿದೆ. ನಾಲ್ಕನೆಯದಾಗಿ, ಬಿಹಾರದಲ್ಲಿ ಬಿಜೆಪಿ ಎರಡನೇ ಸ್ಥಾನವನ್ನು ಒಪ್ಪಿಕೊಂಡಿದೆ. ಪ್ರಧಾನಿ ಸ್ಥಾನಕ್ಕೆ ನಿತೀಶ್ ಪ್ರಯತ್ನಿಸದೆ ಇರುವವರೆಗೆ ಬಿಜೆಪಿ ಸುಮ್ಮನಿರುತ್ತದೆ. ವಯಸ್ಸು ನಿತೀಶ್ ಅವರ ಪರ ಇಲ್ಲ. ಐದನೆಯದಾಗಿ, ಜಗನ್ನಾಥ ಮಿಶ್ರಾ ಸಾವಿನ ಬಳಿಕ ಕಾಂಗ್ರೆಸ್ ಬಿಹಾರದಲ್ಲಿ ನೆಲೆ ಕಳೆದುಕೊಂಡಿತು. ಹಿಂದೊಮ್ಮೆ ಮೇಲ್ಜಾತಿ ನಾಯಕತ್ವದಡಿ ಜಾತಿ ಒಗ್ಗಟ್ಟನ್ನು ಸಾಧಿಸಿದ್ದ ಪಕ್ಷ ಈಗ ಸಾಮಾಜಿಕ ಬೆಂಬಲವಿಲ್ಲದೆ ಬಳಲಿದೆ. ಆರ್ಜೆಡಿ ಮೇಲಿನ ಜಂಗಲ್ ರಾಜ್ ಆರೋಪ, ಯಾದವ ಸಮುದಾಯದ ಹಿಡಿತ, ಮೃದು ಹಿಂದುತ್ವದ ಅರೆ ಮನಸ್ಸಿನ ನಡೆಗಳು, ರಾಹುಲ್ ಗಾಂಧಿ ಅವರ ಸೈದ್ಧಾಂತಿಕ ನಿಲುವಿಗೆ ಅಸಹಕಾರ, ಚುನಾವಣೆ ಆಯೋಗ ಸೇರಿದಂತೆ ನಾನಾ ಸರಕಾರಿ ಏಜೆನ್ಸಿಗಳಿಂದ ಕಿರುಕುಳ ಮತ್ತು ನಿರಂತರ ಸೋಲಿನಿಂದ ಕಾಂಗ್ರೆಸ್ ಸಂಪೂರ್ಣವಾಗಿ ದಣಿದಿದೆ. ಆರನೆಯದಾಗಿ, ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ದಲಿತರ ಬೆಂಬಲ. ದಲಿತರು ತಮ್ಮ ನಿಷ್ಠೆಯನ್ನು ರಾಮ್ವಿಲಾಸ್ ಪಾಸ್ವಾನ್ ಅವರಿಂದ ಮಗ ಚಿರಾಗ್ಗೆ ವರ್ಗಾಯಿಸಿದ್ದಾರೆ. ಪಕ್ಷವನ್ನು ಒಡೆದಿದ್ದ ಪಶುಪತಿ ಕುಮಾರ್ ಪಾರಸ್ ಅವರಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿ, ಚಿರಾಗ್ ಅವರನ್ನು ಕಸದ ಬುಟ್ಟಿಗೆ ಎಸೆದಿತ್ತು. ಆದರೆ, 2025ರಲ್ಲಿ ಚಿರಾಗ್ ಅವರಿಗೆ ಮಣೆ ಹಾಕಿತು; ಪಾರಸ್ ಅವರನ್ನು ವಿಸರ್ಜಿಸಿತು. ಬಿಜೆಪಿಯ ಬಳಸಿ ಎಸೆಯುವ ರಾಜಕೀಯಕ್ಕೆ ಇದೊಂದು ಉದಾಹರಣೆ. ಮಹಿಳೆಯರಿಗೆ ಆದ್ಯತೆ ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಮಹಿಳೆಯರು ಮತ್ತು ಮೋದಿ-ನಿತೀಶ್ ಅವರ ಮಹಿಳಾಕೇಂದ್ರಿತ ಕಾರ್ಯಕ್ರಮಗಳು ಭರ್ಜರಿ ಇಳುವರಿ ನೀಡಿದವು. ಮಹಿಳೆಯರ ಮತದಾನ ಪ್ರಮಾಣ ಶೇ.71.6(ಪುರುಷರಿಗಿಂತ ಶೇ.10 ಹೆಚ್ಚು) ಮತ್ತು ಕಳೆದ ಬಾರಿ(26)ಗಿಂತ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದಾರೆ(28). ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ ಶಾಸಕಿಯರ ಪಾಲು ಶೇ.10.7. ಕರ್ನಾಟಕದಲ್ಲಿ ಶೇ.3; ದೇಶದಲ್ಲೇ ಕಡಿಮೆ. ಮದ್ಯ ನಿಷೇಧ, ಬಾಲಕಿಯರಿಗೆ ಸಮವಸ್ತ್ರ-ಸೈಕಲ್ ವಿತರಣೆ, ಜೀವಿಕಾ ದೀದಿ ಮತ್ತು ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಕಾರ್ಯಕ್ರಮ ಹಾಗೂ 10,000 ರೂ. ವಿಜಯಕ್ಕೆ ಕಾರಣವಾಗಿದೆ. 2016ರಲ್ಲಿ ಆರಂಭಗೊಂಡ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನ(ಡಿಎವೈ-ಎನ್ಆರ್ಎಲ್ಎಂ) ಗ್ರಾಮೀಣ ಮಹಿಳೆಯರಿಗೆ ಸ್ವಉದ್ಯೋಗ ಮತ್ತು ಸುಸ್ಥಿರ ಜೀವನೋಪಾಯ ಕಲ್ಪಿಸುವ ಉದ್ದೇಶವಿರುವ ಪ್ರಮುಖ ಸರಕಾರಿ ಉಪಕ್ರಮ. ನಿತೀಶ್ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ಡ್ರೋನ್ ದೀದಿ, ಕೃಷಿ ಸಖಿ, ಪಶು ಸಖಿ, ಉದ್ಯೋಗ ಸಖಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಅಸ್ಮಿತೆ ಮತ್ತು ಆರ್ಥಿಕ ಸ್ವಾವಲಂಬನೆ ಲಭ್ಯವಾಗಿದೆ. ಈ ‘ಉಚಿತ’ಗಳಿಗೆ ದೀರ್ಘ ಪರಂಪರೆ ಇದೆ. ಇದನ್ನು ಮೊದಲು ಜಾರಿಗೊಳಿಸಿದ್ದು ಕಾಂಗ್ರೆಸ್. ಮೋದಿ ಅದನ್ನು ಚಾಣಾಕ್ಷತನದಿಂದ ಬಳಸಿಕೊಂಡಿದ್ದು, ಅದರೊಟ್ಟಿಗೆ ಕೋಮು ಧ್ರುವೀಕರಣವನ್ನೂ ಮಾಡಿದ್ದಾರೆ. ತಮಾಷೆ ಎಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನೀಡುತ್ತಿರುವ ಭಾಗ್ಯಗಳನ್ನು ‘ಬಿಟ್ಟಿ ಭಾಗ್ಯ’ ಎಂದು ಬಿಜೆಪಿ ಹೀಗಳೆಯುತ್ತದೆ. ನೀತಿಸಂಹಿತೆ ಜಾರಿಯಾದ ಬಳಿಕವೂ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದ್ದರೂ, ಚುನಾವಣಾ ಆಯೋಗ ಕಮಕ್ ಕಿಮಕ್ ಎನ್ನಲಿಲ್ಲ. ಪ್ರತಿಪಕ್ಷಗಳು ಈ ಸಂಬಂಧ ದೂರು ನೀಡಬೇಕಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ, ಚುನಾವಣಾ ಆಯೋಗ, ಕಾರ್ಯಾಂಗ ಹಾಗೂ ಮಾಧ್ಯಮಗಳನ್ನು ಕೈ ವಶಪಡಿಸಿಕೊಂಡಿರುವ ಬಿಜೆಪಿ ಇದಕ್ಕೆ ಮಣಿಯುತ್ತಿತ್ತೇ? ಜಾತಿ ಸಮೀಕರಣ, ಜಾತಿ-ಧಾರ್ಮಿಕ ಧ್ರುವೀಕರಣ, ಹಣ-ಅಧಿಕಾರದ ಬಲ ಎಲ್ಲವೂ ಬಿಜೆಪಿ ಪರ ಕೆಲಸ ಮಾಡಿದೆ. ಇದು ದುರುಳತನ ಎನ್ನುವುದು ಜನರಿಗೆ ಗೊತ್ತಿಲ್ಲದೆ ಇಲ್ಲ; ಆದರೆ, ಸೈದ್ಧಾಂತಿಕ ಅಮಲು ಬಾಯಿ ಮುಚ್ಚಿಸಿದೆ. ಕೆಲಸ ಮಾಡಿದರೂ, ಮಾಡದೆ ಇದ್ದರೂ ಗೆಲ್ಲುವುದು ಹೇಗೆ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ಮಹಾರಾಷ್ಟ್ರದಲ್ಲಿ 1989ರಿಂದ ಜತೆಗಾರನಾಗಿ, ಆನಂತರ ಮೈತ್ರಿಯನ್ನು ತೊರೆದ ಶಿವಸೇನೆ ಮೇಲೆ ಬಿಜೆಪಿ ಹೇಗೆ ಸೇಡು ತೀರಿಸಿಕೊಂಡಿತು ಎನ್ನುವುದನ್ನು ಸ್ಮರಿಸಿಕೊಳ್ಳಿ. ಶಿವಸೇನೆಯನ್ನು ಒಡೆಯಿತಲ್ಲದೆ, ಆನಂತರ ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನೂ ವಿಭಜಿಸಿತು. 2024ರ ಲೋಕಸಭೆ ಚುನಾವಣೆಯಲ್ಲಿ ಕೇವಲ 9 ಸ್ಥಾನ ಗಳಿಸಿದರೂ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಾಡಿದ ಭಾಷಣದಲ್ಲಿನ ಕಾಂಗ್ರೆಸ್ ವಿಭಾಗವಾಗುವ ಮಾತನ್ನು ಪರಿಗಣಿಸಬೇಕು. ಕಾಂಗ್ರೆಸ್ನಲ್ಲಿ ರಾಹುಲ್ ಅವರ ಕಾರ್ಯನೀತಿ-ನಿಲುವು ಒಪ್ಪದೆ ಇರುವವರು ಸಾಕಷ್ಟು ಮಂದಿ ಇದ್ದಾರೆ. ಕೋಮುವಾದದ ವಿರುದ್ಧ ಮತ್ತು ಸಂವಿಧಾನ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ನಿಲುವು ತೆಗೆದುಕೊಂಡರೆ, ಕಾಂಗ್ರೆಸ್ ಇಬ್ಭಾಗವಾದರೂ ಆಶ್ಚರ್ಯವಿಲ್ಲ. 2026ರಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯು ಕಾಂಗ್ರೆಸ್ ಮತ್ತು ರಾಹುಲ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ವ್ಯಂಗ್ಯವೆಂದರೆ, ಬಿಜೆಪಿ ಎಲ್ಲ ಪಕ್ಷದ ವಲಸಿಗರಿಂದ ತುಂಬಿಕೊಂಡು, ಹಳೆಯ ಕಾಂಗ್ರೆಸ್ನ ಪಡಿಯಚ್ಚಾಗಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ತಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿವೆ. ಬಿಜೆಪಿಯನ್ನು ಎದುರಿಸಬಲ್ಲ ರಾಷ್ಟ್ರೀಯ ಹೆಜ್ಜೆಗುರುತು ಮತ್ತು ಐತಿಹಾಸಿಕ ಸ್ವೀಕಾರಾರ್ಹತೆ ಇರುವುದು ಕಾಂಗ್ರೆಸ್ಗೆ ಮಾತ್ರ. ಕಾಂಗ್ರೆಸ್ ತನ್ನ ದೊಡ್ಡಣ್ಣನ ಮನಸ್ಥಿತಿ ಕೈಬಿಟ್ಟು, ಪ್ರಾದೇಶಿಕ ಪಕ್ಷಗಳೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ವಿಶಾಲವಾದ ವೇದಿಕೆಯೊಂದನ್ನು ರೂಪಿಸಬೇಕಿದೆ. ಇದು ಆಗುವುದು ಯಾವ ಕಾಲಕ್ಕೆ?
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮೊದಲ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ; ಇಂದಿನಿಂದ 3 ದಿನ ಪ್ರವಾಸ
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಶೃಂಗಸಭೆಯಲ್ಲಿ, ಅವರು 'ವಸುಧೈವ ಕುಟುಂಬಕಂ' ಎಂಬ ಭಾರತದ ದೃಷ್ಟಿಕೋನವನ್ನು ಮಂಡಿಸಲಿದ್ದಾರೆ. ಆರ್ಥಿಕ ಬೆಳವಣಿಗೆ, ಹವಾಮಾನ ಬದಲಾವಣೆ, ಮತ್ತು ಕೃತಕ ಬುದ್ಧಿಮತ್ತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಅಚ್ಚರಿಯ ಬೆಳವಣಿಗೆ - ಡಿಕೆಶಿ ಬಣದಲ್ಲಿ ಕಾಣಿಸಿಕೊಂಡ ಇಬ್ಬರು ಸಚಿವರ ದೆಹಲಿ ಪಯಣ : ಲಾಬಿಗೋ, ಇಲಾಖೆ ಕೆಲಸಕ್ಕೋ?
Karnataka Power Sharing Issue : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಬರೋಬ್ಬರಿ ಎರಡೂವರೆ ವರ್ಷ ಮುಗಿದಿದೆ. ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯ ಸುದ್ದಿಯ ನಡುವೆ, ಒಂದಷ್ಟು ಶಾಸಕರು ದೆಹಲಿಗೆ ಪ್ರಯಾಣಿಸಿದ್ದಾರೆ. ಅದರಲ್ಲಿ ಇಬ್ಬರು ಸಚಿವರು ಇದ್ದದ್ದು ಕುತೂಹಲಕ್ಕೆ ಕಾರಣವಾಗಿದೆ.
ಬಿಹಾರ ಪತನದ ಬಳಿಕ ಇಂಡಿಯಾ ಕೂಟದಲ್ಲಿ ಬಿರುಕು; ನಿರ್ಗಮನಕ್ಕೆ ಮಿತ್ರಪಕ್ಷಗಳ ಚಿಂತನೆ
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಒಡಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಕಾರ್ಯತಂತ್ರ, ನಾಯಕತ್ವ ಮತ್ತು ವಿಶ್ವಾಸಾರ್ಹತೆಯನ್ನು ಹಲವು ಪ್ರಾದೇಶಿಕ ಪಕ್ಷಗಳು ಬಹಿರಂಗವಾಗಿ ಪ್ರಶ್ನಿಸಿವೆ. ಆಂತರಿಕ ಮಟ್ಟದಲ್ಲೇ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಬಹಿರಂಗ ಟೀಕೆಗಳಾಗಿ ಮಾರ್ಪಟ್ಟಿದ್ದು, ಮೈತ್ರಿಕೂಟದಿಂದ ಕಳಚಿಕೊಳ್ಳುವ ಬಗ್ಗೆಯೂ ಚಿಂತನೆಗಳು ಪಕ್ಷ ಮಟ್ಟದಲ್ಲಿ ನಡೆಯುತ್ತಿವೆ. ಚುನಾವಣೆಗೆ ಮುನ್ನವೇ ಜಾರ್ಖಂಡ್ ಮುಕ್ತಿ ಮೋರ್ಚಾ, ಸೀಟು ಹೊಂದಾಣಿಕೆ ಚೌಕಟ್ಟಿನಿಂದ ಹೊರನಡೆದಿತ್ತು. ಸೀಟು ಹಂಚಿಕೆ ಮಾತುಕತೆ ವೇಳೆ ದೊಡ್ಡ ಪಕ್ಷಗಳು ಮೂಲೆಗುಂಪು ಮಾಡಿವೆ ಹಾಗೂ ಹಿಂದಿನ ಮಾತುಕತೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಜೆಎಂಎಂ ಆಪಾದಿಸಿತ್ತು. ಏತನ್ಮಧ್ಯೆ ಬಿಹಾರ ತೀರ್ಪಿನ ಇಡೀ ಪ್ರಕ್ರಿಯೆ ಹಾಗೂ ಕಾರ್ಯತಂತ್ರವನ್ನು ಶಿವಸೇನೆ (ಯುಬಿಟಿ) ಟೀಕಿಸಿದೆ. ಇದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಎಂದು ವಿಶ್ಲೇಷಿಸಿದ್ದು, ಹಿರಿಯ ಮುಖಂಡರು ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸುವ ಜತೆಗೆ ಇಂಡಿಯಾ ಮೈತ್ರಿಕೂಟದ ಆಂತರಿಕ ಸಮನ್ವಯವನ್ನೂ ಪ್ರಶ್ನಿಸಿದ್ದಾರೆ. ಸಮಾಜವಾದಿ ಪಕ್ಷ ರಾಚನಿಕ ಪುನರ್ರಚನೆಗೆ ಆಗ್ರಹಿಸಿದ್ದು, ಬಿಹಾರದಲ್ಲಿ ವಿಧಿವಿಧಾನಗಳ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಾರೆ. ಇಂಥ ಆಡಳಿತಾತ್ಮಕ ಹಸ್ತಕ್ಷೇಪಗಳು ಭವಿಷ್ಯದಲ್ಲಿ ಸ್ಪರ್ಧೆಯನ್ನೇ ಹಳಿತಪ್ಪಿಸಲು ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಆಮ್ ಆದ್ಮಿ ಪಾರ್ಟಿ ಮೊದಲೇ ನಿರ್ಧಾರ ಕೈಗೊಂಡಿತ್ತು. ರಾಷ್ಟ್ರಮಟ್ಟದ ವೇದಿಕೆಯೇ ದುರ್ಬಲವಾಗಿರುವಾಗ ರಾಜ್ಯಮಟ್ಟದ ವಿಸ್ತರಣೆಯನ್ನು ಬಲಿಕೊಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.
ದೆಹಲಿ ಮೆಟ್ರೋ ಸ್ಟೇಷನ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ನಾಲ್ವರು ಶಿಕ್ಷಕರ ಅಮಾನತು
ಹೊಸದಿಲ್ಲಿ: ಶಿಕ್ಷಕರ ಕಿರುಕುಳದಿಂದ ಬೇಸತ್ತು ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಯನ್ನು ಒಂದು ವರ್ಷದಿಂದೀಚೆಗೆ ಶಿಕ್ಷಕರು ನಿಂದಿಸುತ್ತಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆಪಾದಿಸಿದ್ದು, ಖಿನ್ನತೆಗೆ ಒಳಗಾದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಲಹಾತಜ್ಞರು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದ್ದ ಎಂದು ಕುಟುಂಬದವರು ಹೇಳಿದ್ದಾರೆ. ನಿಮ್ಮ ವಿರುದ್ಧ ತಿಸ್ ಹಜಾರಿ ಕೋರ್ಟ್ ನಲ್ಲಿ ನ.19ರಂದು ಎಫ್ಐಆರ್ ದಾಖಲಾಗಿರುವುದು ಶಾಲೆಯ ಗಮನಕ್ಕೆ ಬಂದಿದ್ದು, ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಗಳ ಗಂಭೀರತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇರುತ್ತೀರಿ ಎಂದು ನಾಲ್ವರು ಶಿಕ್ಷಕರಿಗೆ ನೀಡಿದ ಪತ್ರದಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆತನ ಪೋಷಕರುಮತ್ತು ಸ್ನೇಹಿತರು ಅಶೋಕ ಪ್ಯಾಲೇಸ್ ನಲ್ಲಿರುವ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ, ಆರೋಪಿ ಶಿಕ್ಷಕರ ವಿರುದ್ಧ ಮತ್ತು ಶಾಲಾ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದರು.
ಧರ್ಮ, ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ಗೆ ಅವಕಾಶ ನೀಡಲಾಗದು: ಹೈಕೋರ್ಟ್ ಖಡಕ್ ಎಚ್ಚರಿಕೆ
ಸರಕಾರಿ ಜಾಗವನ್ನು ಧರ್ಮದ ಹೆಸರಿನಲ್ಲಿ ಒತ್ತುವರಿ ಮಾಡುವುದಕ್ಕೆ ಹಾಗೂ ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಕೋಲಾರ ಜಿಲ್ಲೆಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲಾ ಕಾಂಪೌಂಡ್ ಹಾಗೂ ರಸ್ತೆಯ ಜಾಗದಲ್ಲಿ ನಿರ್ಮಿಸಿರುವ ಮಳಿಗೆಗಳ ತೆರವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬ್ರೆಜಿಲ್ ನ COP30 ಹವಾಮಾನ ಶೃಂಗಸಭೆಯಲ್ಲಿ ಅಗ್ನಿ ಅವಘಡ; ಉಸಿರುಗಟ್ಟಿ 13 ಜನ ಅಸ್ವಸ್ಥ, ವೇಳಾಪಟ್ಟಿ ವ್ಯತ್ಯಯ
ಬ್ರೆಜಿಲ್ನ COP30 ಹವಾಮಾನ ಶೃಂಗಸಭೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 13 ಮಂದಿ ಅಸ್ವಸ್ಥರಾಗಿದ್ದಾರೆ. ಕಾನ್ಫರೆನ್ಸ್ ಸೆಂಟರ್ನ ಪ್ಯಾವಿಲಿಯನ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಹತೋಟಿಗೆ ಬಂದಿದೆ. ವಿದ್ಯುತ್ ಉಪಕರಣದಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಶೃಂಗಸಭೆಯ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿದ್ದು, ಇಂದು ಮುಕ್ತಾಯವಾಗಬೇಕಿದ್ದ ಶೃಂಗಸಭೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆ ಎದುರಾಗುವ ಜೊತೆಗೆ ಪ್ರಕೃತಿ ಉಳಿಸುವ ಕುರಿತು ನಡೆಯುವ ಶೃಂಗಸಭೆಯಲ್ಲಿ ಅಲ್ಲಿ ಸೇರುವವರ ಸುರಕ್ಷತಾ ಕ್ರಮಗಳ ಬಗ್ಗೆಯೂ ಚರ್ಚೆ ಶೂರುವಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಅಂದಾಜು ಮೊತ್ತ ಮೀರಿ ವೆಚ್ಚ
ಲೆಕ್ಕ ಪರಿಶೋಧಕರಿಂದ ಬಯಲು
ಗೋಡೆಗಳಲ್ಲಿ ಬಿರುಕು, ಶಿಥಿಲಾವಸ್ಥೆ ತಲುಪಿದ ಕಟ್ಟಡ; ಉಳಿವಿಗಾಗಿ ಹೋರಾಡುತ್ತಿದೆ 'ವಂದೇ ಮಾತರಂ' ಹುಟ್ಟಿದ ಸ್ಥಳ
ವಂದೇ ಮಾತರಂ ಗೀತೆಯ 150 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕವಿ ಬಂಕಿಂ ಚಂದ್ರ ಚಟರ್ಜಿಯವರ ಐತಿಹಾಸಿಕ ಬಂಕಿಂ ಭವನ ಗವೇಷಣಾ ಕೇಂದ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತೇವಾಂಶ, ಬೆಳಕಿನ ಕೊರತೆ, ಸಿಬ್ಬಂದಿ ಮತ್ತು ಹಣದ ಅಭಾವದಿಂದಾಗಿ ಈ ಸ್ಥಳವು ಶಿಥಿಲಾವಸ್ಥೆಯಲ್ಲಿದೆ. ವಂಶಸ್ಥರು ಸರ್ಕಾರದ ಹಸ್ತಕ್ಷೇಪ ಕೋರಿದ್ದಾರೆ.
ಪಡಿತರ ಸೋರಿಕೆ ತಡೆಗೆ ಬರಲಿದೆ ಇ-ಪೋಸ್: ಆಹಾರ ಇಲಾಖೆ ನಿರ್ಧಾರ; ಹೇಗೆ ಕಾರ್ಯನಿರ್ವಹಿಸಲಿದೆ ಈ ಆಪ್?
ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಯಲು ಆಹಾರ ಇಲಾಖೆ 'ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ಸ್' ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಬಯೋಮೆಟ್ರಿಕ್ಗೆ ತೂಕದ ಯಂತ್ರ ಸಂಯೋಜನೆ, ಆಧಾರ್ ಪರಿಶೀಲನೆ, ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಪಾರದರ್ಶಕತೆ ಹೆಚ್ಚಿಸಲಿದೆ. ಕೇಂದ್ರ ಸರಕಾರದ ಸೂಚನೆ ಮೇರೆಗೆ ತೂಕದ ಯಂತ್ರವನ್ನು ಬಯೋಮೆಟ್ರಿಕ್ಗೆ ಸಂಯೋಜಿಸಲು ತೀರ್ಮಾನಿಸಲಾಗಿದೆ.
ಭಟ್ಕಳ: ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಮೃತ್ಯು
ಭಟ್ಕಳ: ಜಾಲಿ ಬೀಚ್ ಸಮೀಪದ ರೆಸಾರ್ಟ್ ಒಂದರಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ಮೊಹಮ್ಮದ್ ಮುಸ್ತಕೀಂ ಶೇಖ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಮದ್ರಸಾ ಶಿಕ್ಷಕರಾದ ಮೌಲವಿ ಶಾಹಿದುಲ್ಲಾ ಅವರ ಪುತ್ರ ಎಂದು ತಿಳಿದು ಬಂದಿದೆ. ಕುಟುಂಬದ ಮಾಹಿತಿ ಪ್ರಕಾರ, ತಾಯಿ ಮತ್ತು ತಮ್ಮನೊಂದಿಗೆ ರೆಸಾರ್ಟ್ನಲ್ಲಿ ಇದ್ದ ಬಾಲಕ, ಕೆಲ ಹೊತ್ತು ತಾಯಿಯು ಸ್ಥಳದಲ್ಲಿಲ್ಲದ ಸಂದರ್ಭದಲ್ಲೇ ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣವೇ ತಾಯಿಯು ನೀರಿನಿಂದ ಬಾಲಕನನ್ನು ಹೊರತೆಗೆದರು. ರೆಸಾರ್ಟ್ ಹೊರಭಾಗದಲ್ಲಿದ್ದ ಕೆಲ ಯುವಕರು ಸಹ ಸಹಾಯಕ್ಕೆ ಧಾವಿಸಿ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದರು. ನಂತರ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ಧೃಡಪಡಿಸಿದರು. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾತ್ರಿ 8 ಗಂಟೆ ವೇಳೆಗೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಬಾಲಕ ಸ್ಥಳೀಯ ಮದ್ರಸಾದಲ್ಲಿ ಎಲ್ಕೆಜಿ ತರಗತಿಯಲ್ಲಿ ಓದುತ್ತಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯ ನಂತರ ಮದ್ರಸಾ ಶಿಕ್ಷಕರು ಮತ್ತು ಹಲವರು ಆಸ್ಪತ್ರೆಗೆ ಬಂದು ಕುಟುಂಬಕ್ಕೆ ಸಾಂತ್ವನ ನೀಡಿದರು. ಮಧ್ಯರಾತ್ರಿಯೇ ನವಾಯತ್ ಕಾಲೋನಿಯ ತಂಝೀಂ ಮಿಲ್ಲಿಯಾ ಮಸೀದಿಯಲ್ಲಿ ಧಪನ ಕಾರ್ಯ ನೆರವೇರಿಸಲಾಗಿದ್ದು, ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ನ. 20: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಗುರುವಾರ ರಾತ್ರಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆಶಿ ಅವರು ಉತ್ತರಿಸಿದರು. ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿ ಹೇಳಿರುವ ಬಗ್ಗೆ ಕೇಳಿದಾಗ ಬಹಳ ಸಂತೋಷ, ಅವರಿಗೆ ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿಯನ್ನು ಪಕ್ಷ ಕೊಟ್ಟಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದರು. ವಿಧಾನ ಪರಿಷತ್ ಸದಸ್ಯರ ಭೇಟಿಯ ಬಗ್ಗೆ ಕೇಳಿದಾಗ, ವಿಧಾನಪರಿಷತ್ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆ ಮಾಡಬೇಕು ಎಂದು ಪಕ್ಷದ ಸದಸ್ಯರುಗಳು ಮನವಿ ಮಾಡಿದ್ದಾರೆ. ಈ ಹಿಂದೆಯೇ ಇದನ್ನು ಮಾಡಬೇಕಿತ್ತು. ಮೇಲ್ಮನೆಯಲ್ಲಿ ವಿಪಕ್ಷಗಳ ಹಾಗೂ ನಮ್ಮ ಸಂಖ್ಯೆ ಸಮನಾಗಿದೆ. ಗಾಯತ್ರಿ ಅವರ ಪ್ರಕರಣವನ್ನು ನ್ಯಾಯಲಯದಲ್ಲಿ ಗೆದ್ದಿದ್ದೇವೆ. ಅಲ್ಲಿಂದ ಆದೇಶ ಪಡೆಯಬೇಕಿದೆ. ಆಗ ನಮ್ಮ ಸದಸ್ಯರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಸದಸ್ಯರು ತಿಳಿಸಿದ್ದಾರೆ ಎಂದರು. ಸಚಿವರು, ಶಾಸಕರು, ಎಂಎಲ್ ಸಿಗಳ ದೆಹಲಿ ಭೇಟಿ ವಿಚಾರವಾಗಿ ಕೇಳಿದಾಗ, ನನಗೆ ಇದರ ಬಗ್ಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಕೇಳಿಯೂ ಇಲ್ಲ. ಈ ವಿಚಾರ ನನಗೆ ಗೊತ್ತೂ ಇಲ್ಲ ಎಂದರು.
Karnataka Weather: ಶೀತಗಾಳಿ ನಡುವೆಯೂ ಬೆಂಗಳೂರು ಸೇರಿ ರಾಜ್ಯದ ಹಲವೆಡೆ 3 ದಿನ ಭಾರೀ ಮಳೆ ಮುನ್ಸೂಚನೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಚಳಿ ಆವರಿಸಿದೆ. ಈ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನಗಳ ಕಾಲ ಈ ಭಾಗಗಳಲ್ಲಿ ಶಿತಗಾಳಿ ಮಧ್ಯೆಯೇ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮರುಜೀವ, ವಾಷಿಂಗ್ ಯುನಿಟ್ ಬಂದ್ ಆದೇಶ ತೆರವಿಗೆ ಸಿಎಂ ಸೂಚನೆ
ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ರಾಜ್ಯ ಸರಕಾರ ಮರುಜೀವ ನೀಡಿದೆ. ಪರಿಸರ ಹಾನಿ ನೆಪದಲ್ಲಿ 36 ವಾಷಿಂಗ್ ಯುನಿಟ್ಗಳ ಬಂದ್ಗೆ ನೀಡಿದ್ದ ನೋಟಿಸ್ನಿಂದ ಉದ್ಯಮವು ಸ್ಥಗಿತದ ಭೀತಿ ಎದುರಿಸಿತ್ತು. ಇದೀಗ ಕಾಮನ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (ಸಿಇಟಿಪಿ) ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿರುವುದು ಉದ್ಯಮದ ಭವಿಷ್ಯವನ್ನು ಗಟ್ಟಿಗೊಳಿಸಿದೆ.
ಇನ್ಮುಂದೆ ಆನ್ಲೈನ್ನಲ್ಲೇ ಸಿಗಲಿವೆ ಆಸ್ತಿ ದಾಖಲೆಗಳು, ಮೈಸೂರಿನಲ್ಲಿ 42% ಡಿಜಿಟಲೀಕರಣ ಪೂರ್ಣ
ಮೈಸೂರು ಜಿಲ್ಲೆಯಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಭರದಿಂದ ಸಾಗಿದ್ದು, ಶೇಕಡಾ 42ರಷ್ಟು ಕೆಲಸ ಪೂರ್ಣಗೊಂಡಿದೆ. ಏಳು ಸಾವಿರಕ್ಕೂ ಹೆಚ್ಚು ಪುಟಗಳು ಆನ್ಲೈನ್ನಲ್ಲಿ ಅಪ್ಲೋಡ್ ಆಗಿದ್ದು, ಇದರಿಂದ ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು. ಹಳೆಯ ದಾಖಲೆಗಳು ಕಳೆದುಹೋಗುವುದು ಅಥವಾ ಮಾರ್ಪಾಡು ಮಾಡುವುದನ್ನು ತಡೆಯಲು ಈ ಯೋಜನೆ ಸಹಕಾರಿಯಾಗಿದ್ದು, ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಲಿದೆ.
ನಿತೀಶ್ ಸಂಪುಟದಲ್ಲಿ ಬಿಜೆಪಿಗೆ ಸಿಂಹಪಾಲು; ಜೆಡಿಯುಗೆ ದಕ್ಕಿದ್ದು 8 ಸಚಿವ ಸ್ಥಾನ
ಪಾಟ್ನಾ: ಬಿಹಾರದಲ್ಲಿ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 26 ಮಂದಿ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಪೈಕಿ 14 ಮಂದಿ ಬಿಜೆಪಿಯವರು. ನಿತೀಶ್ ನೇತೃತ್ವದ ಸಂಯುಕ್ತ ಜನತಾದಳ ಕೇವಲ ಏಳು ಸಚಿವ ಸ್ಥಾನಗಳನ್ನು ಪಡೆದಿದೆ. ಇತರ ಮೂರು ಘಟಕ ಪಕ್ಷಗಳ ನಾಲ್ವರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಂಪುಟದಲ್ಲಿ ಮೂವರು ಮಹಿಳೆಯರು ಸೇರ್ಪಡೆಯಾಗಿದ್ದರೆ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ 10 ಮಂದಿಗೂ ಸಚಿವರಾಗುವ ಭಾಗ್ಯ ದೊರಕಿದೆ. ಮೊದಲ ಬಾರಿಗೆ ಆಯ್ಕೆಯಾದ ಬಿಜೆಪಿಯ ಏಳು ಮಂದಿ ಶಾಸಕರು ಸಚಿವ ಪದವಿ ಪಡೆದಿದ್ದರೆ, ಜೆಡಿಯು ಹಳಬರಿಗೆ ಮಣೆ ಹಾಕಿದೆ. ಜೆಡಿಯುನಿಂದ ಸಚಿವರಾದ ಎಲ್ಲರೂ ನಿತೀಶ್ ಅವರ ನಿಕಟವರ್ತಿಗಳು. ಜೆಡಿಯು ಕೋಟಾದಡಿ ನಿತೀಶ್ ಸೇರಿದಂತೆ ಕೇವಲ ಎಂಟು ಮಂದಿ ಸಚಿವರಿದ್ದು, ಪಕ್ಷದ ಭದ್ರನೆಲೆ ಎನಿಸಿದ ಕುಶ್ವಾಹ ಸಮುದಾಯದಿಂದ ಯಾರೂ ಸಚಿವರಾಗದಿರುವುದು ಹಲವರ ಹುಬ್ಬೇರಿಸಿದೆ. 36 ಸದಸ್ಯಬಲದ ಸಂಪುಟದಲ್ಲಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮತ್ತಷ್ಟು ಮಾತುಕತೆ ನಡೆಯಲಿದೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ. ಮೇಲ್ವರ್ಗದ ಎಂಟು ಮಂದಿ, ಇತರ ಹಿಂದುಳಿದ ವರ್ಗಗಳ ಆರು ಮಂದಿ, ಐವರು ದಲಿತರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಸಂಯುಕ್ತ ಜನತಾದಳ ಶಾಸಕ ಝಾಮಾ ಖಾನ್, ಅಲ್ಪಸಂಖ್ಯಾತ ವರ್ಗದ ಏಕೈಕ ಪ್ರತಿನಿಧಿಯಾಗಿದ್ದಾರೆ. 33 ಶಾಸಕರನ್ನು ಹೊಂದಿರುವ ರಜಪೂತ ಸಮುದಾಯ ಗರಿಷ್ಠ ಪ್ರಾತಿನಿಧ್ಯ ಪಡೆದಿದ್ದು, ಬ್ರಾಹ್ಮಣ, ಯಾದವ ಕುರ್ಮಿ, ಕುಶ್ವಾಹ ಮತ್ತು ನಿಷದ ಸಮುದಾಯದ ತಲಾ ಇಬ್ಬರು ಸಂಪುಟದಲ್ಲಿದ್ದಾರೆ. ಬಿಜೆಪಿ ಶಾಸಕ ಹಾಗೂ ಓಬಿಸಿ ಮುಖಂಡ ಸಮರ್ಥ್ ಚೌಧರಿ ಹಾಗೂ ಮೇಲ್ವರ್ಗದ ಭೂಮಿಹಾರ್ ಸಮುದಾಯಕ್ಕೆ ಸೇರಿದ ವಿಜಯಕುಮಾರ್ ಸಿನ್ಹಾ ಉಪ ಮುಖ್ಯಮಂತ್ರಿಗಳಾಗಿ ಸ್ಥಾನ ಉಳಿಸಿಕೊಂಡಿದ್ದಾರೆ. ಆರ್ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ತಮ್ಮ ಮಗ ದೀಪಕ್ ಪ್ರಕಾಶ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದು, ಸಾರ್ವಜನಿಕವಾಗಿ ಅಪರಿಚಿತರಾಗಿರುವ ಅವರು ಇನ್ನೂ ಯಾವುದೇ ಸದನದ ಸದಸ್ಯರಾಗಿಲ್ಲ. ಕುಶ್ವಾಹ ಪತ್ನಿ ಸ್ನೇಹಲತಾ ಕುಶ್ವಾಹ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಎಚ್ಎಎಂ(ಎಸ್) ಪ್ರತಿನಿಧಿಯಾಗಿ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.
ಕಬ್ಬಿನ ನಂತರ ಮೆಕ್ಕೆಜೋಳ ಬೆಳೆಗಾರರ ಅಕ್ರೋಶ, ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಸರಕಾರ; ಏನಿದು ಎಂಎಸ್ಪಿ ಗೊಂದಲ?
ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ರಾಜ್ಯ ಸರಕಾರ ಗೊಂದಲದಲ್ಲಿದೆ. ಕೇಂದ್ರ ಸರಕಾರ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡದೆ, ರಾಜ್ಯ ಸರಕಾರವೇ ಖರೀದಿಸಿ ಪಡಿತರದಲ್ಲಿ ವಿತರಿಸಲು ಸೂಚಿಸಿದೆ. ಆದರೆ ಮೆಕ್ಕೆಜೋಳ ತಿನ್ನಲ್ಲ, ಪಡಿತರದಲ್ಲಿ ವಿತರಿಸುವುದು ಹೇಗೆ ಎಂಬುದೇ ರಾಜ್ಯದ ಪ್ರಶ್ನೆಯಾಗಿದೆ. ಒಂದೆಡೆ ರೈತರ ಒತ್ತಡ ಹೆಚ್ಚಾಗಿದ್ದು, ಸರಕಾರ ಆರ್ಥಿಕ ಹೊರೆ ಲೆಕ್ಕಹಾಕುತ್ತಿದೆ.
Gold Price on November 21: ಬಂಗಾರ ದರ ಭರ್ಜರಿ ಇಳಿಕೆ: ಇಲ್ಲಿದೆ ನವೆಂಬರ್ 21ರ ಚಿನ್ನದ ದರಪಟ್ಟಿ
Gold Price on November 21: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 21) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್
ದುಬಾರಿ ಶುಲ್ಕದಿಂದ ಎ-ಖಾತಾಗೆ ಹಿಂದೇಟು, ಕೇವಲ 2,000 ಅರ್ಜಿ ಸಲ್ಲಿಕೆ, ಈವರೆಗೆ ಒಂದಕ್ಕೂ ಸಿಕ್ಕಿಲ್ಲ ಎ-ಖಾತಾ!
ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ 100 ದಿನಗಳ ಅಭಿಯಾನಕ್ಕೆ ಮಾಲೀಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. 7.50 ಲಕ್ಷ ಬಿ-ಖಾತಾ ಆಸ್ತಿಗಳಿದ್ದರೂ ಕೇವಲ 2 ಸಾವಿರ ಅರ್ಜಿಗಳು ಬಂದಿವೆ. ಶುಲ್ಕದ ಹೊರತಾಗಿ, ಅಧಿಕಾರಿಗಳ ವಿಳಂಬವೂ ಇದಕ್ಕೆ ಕಾರಣವಾಗಿದೆ. ಸರಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳಿಗೆ ಎ-ಖಾತಾ ನೀಡುತ್ತಿಲ್ಲ. 55 ಚಮೀ ವರೆಗಿನ ನಿವೇಶನಕ್ಕೆ ಯಾವುದೇ ಶುಲ್ಕವಿಲ್ಲ.
₹7.11 ಕೋಟಿ ದರೋಡೆಯಲ್ಲಿ ಪೊಲೀಸರ ಕೈವಾಡ? ಪ್ರತಿರೋಧ ವ್ಯಕ್ತಪಡಿಸದ CMS ಸಿಬ್ಬಂದಿ ಬಗ್ಗೆಯೂ ಅನುಮಾನ
ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಕಿ ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸಿಎಂಎಸ್ ಏಜೆನ್ಸಿ ಮಾಜಿ ಉದ್ಯೋಗಿಯೊಂದಿಗೆ ಸಂಪರ್ಕ ಹೊಂದಿದ್ದ ಕಾನ್ಸ್ಟೆಬಲ್ ಅಣ್ಣಪ್ಪ ನಾಯಕ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ದರೋಡೆಗೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಹೊರಗುತ್ತಿಗೆ ಉದ್ಯೋಗ ಬಂದ್, ಸರಕಾರಕ್ಕೆ ಹೆಚ್ಚುವರಿ ಹೊರೆ, ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ರಾಜ್ಯ ಸಚಿವ ಸಂಪುಟ ಉಪಸಮಿತಿಯು 2028ರ ಮಾರ್ಚ್ ವೇಳೆಗೆ ಹೊರಗುತ್ತಿಗೆ ನೌಕರರ ನೇಮಕವನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ. ಸುಮಾರು 3.80 ಲಕ್ಷ ಹೊರಗುತ್ತಿಗೆ ನೌಕರರ ವ್ಯವಸ್ಥೆಗೆ ಕೊನೆ ಹಾಡಲು ಶಿಫಾರಸು ಮಾಡಲಾಗಿದ್ದು, ಇದರಿಂದ ಸರಕಾರಕ್ಕೆ ವಾರ್ಷಿಕ 10,000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಅಂದಾಜಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಶಿವಮೊಗ್ಗ | ವೇತನಾನುದಾನ ನೀಡಲು ಒತ್ತಾಯ; 2ನೇ ದಿನಕ್ಕೆ ಕಾಲಿಟ್ಟ ಶಿಕ್ಷಕರ ಉಪವಾಸ ಸತ್ಯಾಗ್ರಹ
ಶಿವಮೊಗ್ಗ : ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಎಲ್ಲ ಭಾಗ್ಯಗಳ ಜೊತೆಗೆ ವೇತನಾನುದಾನ ಭಾಗ್ಯ ನೀಡುವಂತೆ ಕೋರಿ ಬುಧವಾರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಹೋರಾಟ ತೀವ್ರವಾಗಿದ್ದು ಮೂವರು ಶಿಕ್ಷಕರು, ಓರ್ವ ಶಿಕ್ಷಕಿ ಅಸ್ವಸ್ಥರಾಗಿ ಕುಸಿದುಬಿದ್ದ ಘಟನೆ ನಡೆದಿದ್ದು ಸ್ಥಳಕ್ಕೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಮಾತನಾಡಿ, 1995ರಿಂದ 2005ರ ವರೆಗೆ ಅನುದಾನರಹಿತ ಕನ್ನಡ ಮಾಧ್ಯಮದ ಶಾಲಾ-ಕಾಲೇಜುಗಳಿಗೆ ಎಲ್ಲ ಭಾಗ್ಯಗಳ ಜೊತೆ ವೇತನಾನುದಾನ ನೀಡುವಂತೆ ಕೋರಿ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಲವು ಬಾರಿ ಮನವಿ ನೀಡಿದ್ದೇವೆ. ಸಚಿವ ಮಧು ಬಂಗಾರಪ್ಪನವರು ಕೂಡ ರಾಜ್ಯೋತ್ಸವಕ್ಕೆ ಕನ್ನಡ ಶಾಲೆಯ ಉಳಿವಿಗಾಗಿ ನಮಗೆಲ್ಲರಿಗೂ ಶುಭ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ವಿಫಲವಾಗಿದೆ. ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಉಳಿದಿದೆ. ನಾವೆಲ್ಲರೂ ಸಿದ್ಧವಾಗಿಯೇ ಬಂದಿದ್ದೇವೆ. 10 ದಿನಗಳ ಹಿಂದೆಯೇ ಸುದ್ದಿಗೋಷ್ಠಿ ಮೂಲಕ ಶಿಕ್ಷಣ ಸಚಿವರ ತವರೂರಿನಲ್ಲಿ ಮಾಡು ಇಲ್ಲವೇ ಮಡಿ ರಾಜ್ಯಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದೆವು. ಸೌಜನ್ಯಕ್ಕಾಗಿ ಆದರೂ ಶಿಕ್ಷಣ ಸಚಿವರು ಸ್ಥಳಕ್ಕೆ ಬಂದಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ನಿನ್ನೆಯಿಂದ ರಾತ್ರಿಯಿಡೀ ಸೊಳ್ಳೆಯಿಂದ ಕಚ್ಚಿಸಿಕೊಂಡು ಚಳಿಯಲ್ಲಿ ನಡುಗುತ್ತಾ ಹೋರಾಟ ಮಾಡಿದರೂ ಕನಿಷ್ಠ ಪಕ್ಷ ಇಲ್ಲಿ ಒಂದು ದೀಪದ ವ್ಯವಸ್ಥೆ ಮಾಡಿಲ್ಲ. ಮಹಿಳಾ ಹೋರಾಟಗಾರರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಶಿಕ್ಷಕರಿಗೆ ಈ ರೀತಿಯ ವ್ಯವಸ್ಥೆಯಾದರೆ ನಮ್ಮ ಸಮಸ್ಯೆ ಬಗೆಹರಿಯುವುದು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ತಮ್ಮೆಲ್ಲಾ ಸಮಸ್ಯೆಯ ಅರಿವಿದೆ. ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಸಚಿವರು ಸ್ಪಂದಿಸಿದ್ದಾರೆ. ದಯವಿಟ್ಟು ಉಪವಾಸ ಸತ್ಯಾಗ್ರಹ ವಾಪಸ್ ಪಡೆಯಿರಿ ಎಂದು ವಿನಂತಿಸಿದರು. ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಕುಸಿದು ಬಿದ್ದರು. ಅವರನ್ನು ಶಾಸಕರೇ ಆಂಬುಲೆನ್ಸ್ನಲ್ಲಿ ಚಿಕಿತ್ಸೆಗೆ ಕಳುಹಿಸಿಕೊಟ್ಟ ಘಟನೆಯೂ ನಡೆಯಿತು. ಜಿಲ್ಲಾಧಿಕಾರಿ ಗಮನಕ್ಕೆ ತಂದ ಶಾಸಕರು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಂತರ ಬಂದ ಇನ್ನೋರ್ವ ಶಾಸಕ ಡಾ. ಧನಂಜಯ ಸರ್ಜಿ ಕೂಡ ಸಾಂತ್ವನ ಹೇಳಿ, ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಸಚಿವರ ಜೊತೆಗೆ ಮಾತನಾಡಿ, ಸಮಸ್ಯೆಯ ಬಗ್ಗೆ ವಿವರಿಸಿದರು. ಈ ಸಂದರ್ಭ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಬಂದ ಶಿಕ್ಷಕ ಪ್ರಮುಖರು ಉಪಸ್ಥಿತರಿದ್ದರು. ನವಕರ್ನಾಟಕ ನಿರ್ಮಾಣ ವೇದಿಕೆಯ ಗೋ.ರಮೇಶ್ ಗೌಡ ಮತ್ತಿತರರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪಟ್ಟು ಸಡಿಲಿಸದ ಪ್ರತಿಭಟನಾಕಾರರು : ಈ ಅಧಿವೇಶನದಲ್ಲಿ ಮುಖ್ಯಮಂತ್ರಿಯೊಂದಿಗೆ ನಿಯೋಗ ತೆರಳಿ ಖಂಡಿತವಾಗಿಯೂ ಸಮಸ್ಯೆ ಬಗೆಹರಿಸೋಣ. ನನ್ನ ಗಮನಕ್ಕೆ ಈ ವಿಷಯ ಇದ್ದು ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ. ಉಪವಾಸ ಸತ್ಯಾಗ್ರಹ ಹಿಂಪಡೆಯಿರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. ಆದರೂ ಕನ್ನಡ ಶಿಕ್ಷಕರ ಒಕ್ಕೂಟ ಸಚಿವರೇ ಇಲ್ಲಿಗೆ ಬರಬೇಕು. ನಮಗೆ ಲಿಖಿತ ಭರವಸೆ ನೀಡಬೇಕು ನಾವು ಸತ್ತರೂ ಪರವಾಗಿಲ್ಲ. ನಮಗೆ ಆಶ್ವಾಸನೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಕನಿಷ್ಠ ನೇರವಾಗಿ ಹೋರಾಟಗಾರರೊಂದಿಗೆ ಖುದ್ದು ಸಚಿವರೇ ಮಾತನಾಡುವ ತನಕ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಬಿಸಿಲಿನಲ್ಲೇ ಹೋರಾಟ ಮುಂದುವರಿಸಿದ್ದಾರೆ. ಹೋರಾಟಗಾರರಿಂದ ಮನವಿ ಪಡೆದು, ನಾನು ಈಗಾಗಲೇ ಸಚಿವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನನ್ನ ತಾಯಿ ಕೂಡ ಓರ್ವ ಶಿಕ್ಷಕಿ. ನನಗೆ ಸಮಸ್ಯೆಯ ಆಳದ ಅರಿವಿದೆ. ಶೌಚಾಲಯ ಮತ್ತು ವಿದ್ಯುತ್ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇಲ್ಲಿ ರಾತ್ರಿ ಹೋರಾಟಗಳಿಗೆ ಅವಕಾಶವಿಲ್ಲ. ಆದರೂ ಮಹಿಳೆಯರು ಇರುವುದರಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು. ನಮ್ಮಿಂದ ಎಲ್ಲ ಸಹಕಾರ ನೀಡುತ್ತೇವೆ. ದಯವಿಟ್ಟು ಹೋರಾಟ ವಾಪಸ್ ಪಡೆಯಿರಿ. ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ
ಮಾರ್ನಮಿಬೈಲ್ | ಯುವಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ
ಶಿವಮೊಗ್ಗ : ನಗರದ ಆರ್ಎಂಎಲ್ ನಗರದ ಮಾರ್ನಮಿಬೈಲ್ನಲ್ಲಿ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೊಡ್ಡಪೇಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುದ್ದನಗರದ ನಿವಾಸಿ ಅರ್ಮಾನ್ (21), ಸಿಗೇಹಟ್ಟಿ ಬಡಾವಣೆ ನಿವಾಸಿ ನಿರಂಜನ್ (20) ಮತ್ತು 17 ವರ್ಷದ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ. ಹರೀಶ್ (35) ಮೇಲೆ ನಡೆದಿದ್ದ ಹಲ್ಲೆ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು.ಒಂದು ಸಮುದಾಯದವರು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಶಾಸಕ ಚನ್ನಬಸಪ್ಪಅವರು ದೊಡ್ಡಪೇಟೆ ಠಾಣೆಗೆ ಭೇಟಿ ನೀಡಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ರಾಷ್ಟ್ರಭಕ್ತರ ಬಳಗ ಸಂಘಟನೆ ಕೂಡ ಎಸ್ಪಿಯನ್ನು ಭೇಟಿ ಮಾಡಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿತ್ತು. ಹರೀಶ್ ಮೇಲೆ ನಡೆದಿದ್ದ ಹಲ್ಲೆಯ ಸಿಸಿ ಕ್ಯಾಮರಾ ದೃಶ್ಯಾವಳಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ನಡುವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗುರಾಯಿಸಿ ನೋಡಿದ್ದೇ ಹಲ್ಲೆಗೆ ಕಾರಣ ಎಂದು ಬಂಧಿತ ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಧರ್ಮ-ದೇವರ ಹೆಸರಲ್ಲಿ ಸರಕಾರಿ ಜಾಗ ಒತ್ತುವರಿಗೆ ಅನುಮತಿಸಲಾಗದು : ಹೈಕೋರ್ಟ್
ಬೆಂಗಳೂರು : ಧರ್ಮದ ಹೆಸರಿನಲ್ಲಿ ಸರಕಾರಿ ಜಾಗ ಅತಿಕ್ರಮಿಸಲು ಹಾಗೂ ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ತೀಕ್ಷ್ಣವಾಗಿ ನುಡಿದಿದೆ. ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆಯ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಹೇಳಿದೆ. ಜತೆಗೆ, ಸರಕಾರಿ ಜಾಗವನ್ನು ಖಾಸಗಿಯವರು ಬಳಕೆ ಮಾಡುತ್ತಿದ್ದರೂ ಇಲ್ಲಿಯವರೆಗೆ ಸುಮ್ಮನೆ ಇದ್ದದ್ದು ಏಕೆ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿರುವ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ಕೋಲಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ನವೆಂಬರ್ 21ಕ್ಕೆ (ಶುಕ್ರವಾರ) ಮುಂದೂಡಿತು. ಅರ್ಜಿದಾರರ ವಾದವೇನು? ಗುರುವಾರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ಎರಡೂ ಅರ್ಜಿದಾರ ಸಂಸ್ಥೆಗಳು ನಿರ್ವಹಣೆ ಮಾಡಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಈ ಜಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆ ನಡೆಸಿಕೊಂಡು ಬರಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸಮುದಾಯದ ದೇಣಿಗೆಗಳಿಂದ ಮಳಿಗೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆ. ಇವುಗಳಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ಜಾಗ ಅರ್ಜಿದಾರರ ಸಂಸ್ಥೆಗಳಿಗೆ ಮಂಜೂರು ಮಾಡಬೇಕು ಎಂದು 2015ರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಆಗಿದೆ. ಆ ಪ್ರಸ್ತಾವನೆ ಸದ್ಯ ಜಿಲ್ಲಾಧಿಕಾರಿ ಬಳಿ ಬಾಕಿ ಇದೆ. ಈ ನಡುವೆ, ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದು, ನವೆಂಬರ್ 21ರಂದು ತೆರವು ಕಾರ್ಯಾಚರಣೆ ನಿಗದಿಯಾಗಿದೆ ಎಂದರು. ಅರ್ಜಿದಾರರು ಮಳಿಗೆಗಳನ್ನು ನಿರ್ಮಿಸಿರುವ ಜಾಗ ಸರಕಾರಿ ಜಮೀನು ಎಂದು ತಿಳಿದ ನ್ಯಾಯಪೀಠ, ಸರಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ? ಯಾವ ಆಧಾರ ಮತ್ತು ಯಾವ ಉದ್ದೇಶಕ್ಕೆ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡಲಾಗುತ್ತಿದೆ? ಇದು ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಅಲ್ಲದೆ ಮತ್ತೇನಿಲ್ಲ ಎಂದು ಹೇಳಿತು. ಧರ್ಮದ ಹೆಸರಿನಲ್ಲಿ ಈ ರೀತಿ ಸರಕಾರಿ ಜಾಗ ಅತಿಕ್ರಮಿಸುವುದಕ್ಕೆ ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ಗೆ ಅವಕಾಶ ನೀಡಲಾಗದು. ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. 'ರಾಮ್-ರಹೀಮ್' ಸೇರಿ ಬಂದಿರುವುದೇ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ನ್ಯಾಯಪೀಠ ನುಡಿಯಿತು. ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿ ಮುಂದಿದ್ದರೆ ಅವರ ಬಳಿ ಹೋಗಿ, ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ವಿವಾದಿತ ಜಾಗ ಸರಕಾರಕ್ಕೆ ಸೇರಿದ್ದು. ಸರಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.
ಗುತ್ತಿಗೆ ಪದ್ಧತಿ ಬಡತನವನ್ನು ಶಾಶ್ವತಗೊಳಿಸುತ್ತದೆ : ಡಾ.ನಿರಂಜನಾರಾಧ್ಯ
ಬೆಂಗಳೂರು : ಪೋಷಕರು ಗುತ್ತಿಗೆ ಪದ್ಧತಿಯಂತಹ ಅಸುರಕ್ಷಿತ ಉದ್ಯೋಗಗಳಲ್ಲಿ ಸಿಲುಕಿಕೊಂಡಾಗ ತಮ್ಮ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗುತ್ತಿಗೆ ಪದ್ಧತಿ ಬಡತನವನ್ನು ಶಾಶ್ವತಗೊಳಿಸುತ್ತದೆ ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅಭಿಪ್ರಯಪಟ್ಟಿದ್ದಾರೆ. ಗುರುವಾರ ನಗರದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಸಿಸಿಟಿಯು) ಆಯೋಜಿಸಿದ್ದ ‘ಗುತ್ತಿಗೆ ಕಾರ್ಮಿಕ ವ್ಯವಸ್ಥೆ ಮತ್ತು ಮರೀಚಿಕೆಯಾದ ಘನತೆಯ ವೇತನ: ಎಲ್ಲಿದೆ ಸಾಂವಿಧಾನಿಕ ಭರವಸೆ?’ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪದ್ಧತಿಯು ಕೇವಲ ಕಾರ್ಮಿಕರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ಇಡೀ ಕುಟುಂಬ, ಮಕ್ಕಳು ಮತ್ತು ಸಮಾಜವನ್ನೇ ಬಾಧಿಸುವ ಸಮಸ್ಯೆ ಎಂದು ಗುರುತಿಸಬೇಕು ಎಂದರು. ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಗುತ್ತಿಗೆ ಕಾರ್ಮಿಕ ಪದ್ದತಿಯು ದಲಿತ, ಆದಿವಾಸಿ ಮತ್ತು ಮಹಿಳೆಯರನ್ನು ಕಡಿಮೆ ವೇತನದ ಕೆಲಸಕ್ಕೆ ತಳ್ಳುವ ಮೂಲಕ ಜಾತಿ, ವರ್ಗ ಮತ್ತು ಲಿಂಗ ಶ್ರೇಣಿಗಳನ್ನು ಬಲಪಡಿಸುತ್ತದೆ. ಹೀಗಾಗಿ ಈ ಪದ್ದತಿಯನ್ನು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ನಿರಾಕರಣೆ ಎಂದು ಪರಿಗಣಿಸಬೇಕು ಎಂದು ಹೇಳಿದರು. ಆರೋಗ್ಯ ತಜ್ಞೆ ಡಾ. ಸಿಲ್ವಿಯಾ ಕಾರ್ಪಗಮ್ ಮಾತನಾಡಿ, ಅಸಮರ್ಪಕ ಆದಾಯವು ಜೀವನೋಪಾಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಇಡೀ ಸಮುದಾಯವನ್ನು ಕಳಪೆ ಆರೋಗ್ಯ ವ್ಯವಸ್ಥೆ ಮತ್ತು ಅಪೌಷ್ಟಿಕತೆಯ ಸುಳಿಗೆ ಸಿಲುಕಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಕಾರ್ಮಿಕ ಹಕ್ಕುಗಳ ತಜ್ಞ ಮೋಹನ್ ಮಣಿ, ಪ್ರೊ. ರಾಜೇಶ್, ಪ್ರೊ. ಬಾಬು ಮ್ಯಾಥ್ಯೂ, ಪ್ರೊ. ರಾಜೇಂದ್ರನ್, ಪ್ರೊ. ಕರುಣಾ ಮತ್ತಿತರರು ಉಪಸ್ಥಿತರಿದ್ದರು.
ಡಿ.28ರಂದು ‘ಜನರಾಜ್ಯೋತ್ಸವ’ ಕಾರ್ಯಕ್ರಮ ನಡೆಸಲು ಕನ್ನಡಪರ ಹೋರಾಟಗಾರರ ನಿರ್ಣಯ
ಬೆಂಗಳೂರು : ಕನ್ನಡದ ನೆಲ, ಜಲ, ರಾಜ್ಯಭಾಷೆ ಕನ್ನಡದ ಗೌರವಕ್ಕಾಗಿ ನಡೆದ ದೀರ್ಘ ಚಳವಳಿಗಳ ಸಂಕೇತವಾಗಿ ಎಲ್ಲ ಕನ್ನಡಪರ ಸಂಘಟನೆಗಳು, ಸಾಂಸ್ಕೃತಿಕ ವೇದಿಕೆಗಳು, ಹೋರಾಟಗಾರರು ಸೇರಿಕೊಂಡು ಡಿ.28ರಂದು ‘ಜನರಾಜ್ಯೋತ್ಸವ’ ಆಚರಿಸಲು ಕನ್ನಡಪರ ಹೋರಾಟಗಾರರು ನಿರ್ಣಯ ಕೈಗೊಂಡಿದ್ದಾರೆ. ನಗರದ ಖಾಸಗಿ ಹೊಟೇಲ್ನಲ್ಲಿ ಜನರಾಜ್ಯೋತ್ಸವ ಕಾರ್ಯಕ್ರಮದ ಕುರಿತ ಕನ್ನಡ ಚಳವಳಿಗಾರರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣವಾಗಿ 51ನೇ ವರ್ಷದ ಹೊಸ್ತಿಲಲ್ಲಿರುವ ಕನ್ನಡಿಗರ ಘನತೆಯ ಬದುಕಿನ ಹಿಂದೆ ಕನ್ನಡ ಸಂಘಟನೆಗಳ ತ್ಯಾಗ, ಹೋರಾಟದ ಪಥವಿದೆ. ಈ 50 ವರ್ಷಗಳಲ್ಲಿ ಕನ್ನಡ ಸಂಘಟನೆಗಳ ಸಾಧಿಸಿದ್ದೇನು ? ವಿಫಲತೆಗಳೇನು ಎಂಬ ಅವಲೋಕನ ನಡೆಯಬೇಕಿದೆ. ಕನ್ನಡ ಸಂಘಟನೆಗಳನ್ನು ಎಲ್ಲಾ ಸರಕಾರಗಳು ಹೇಗೆ ನಡೆಸಿಕೊಂಡಿವೆ? ಕನ್ನಡಿಗರ ಉದ್ಯೋಗ, ಮೀಸಲಾತಿ, ದ್ವಿಭಾಷಾ ನೀತಿ, ಹಿಂದಿ ಹೇರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಡಿ.28ರ ‘ಜನರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಕನ್ನಡದ ಎಲ್ಲಾ ಕಟ್ಟಾಳುಗಳು ಭಾಗವಹಿಸಲಿದ್ದಾರೆ. ಈ ಮೂಲಕ ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಗುವುದು. ಮೈಸೂರು ರಾಜ್ಯವನ್ನು ‘ಕರ್ನಾಟಕ' ಎಂದು ನಾಮಕರಣ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಕೋಟ್ಯಾಂತರ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜನರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಆ ಬಳಿಕ ಸಂಜೆ ಕನ್ನಡದ ಖ್ಯಾತ ಜನಪದ ಗಾಯಕರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ, ಸಿನೆಮಾ ರಂಗದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಪ್ರತಿ ವರ್ಷ ಒಂದು ದಿನಾಂಕ ನಿರ್ಧರಿಸಿ, ಶಾಶ್ವತ ‘ಜನರಾಜ್ಯೋತ್ಸವ’ವಾಗಿ ಆಚರಿಸಬೇಕು. ರಾಜ್ಯದ ಭಾಷಾ ಹಕ್ಕು, ಹೋರಾಟಗಳ ಸ್ಮರಣೆ, ಕನ್ನಡನೀತಿಯ ವಿಮರ್ಶೆ, ವಿಶ್ಲೇಷಣೆ ನಿರ್ಣಯಗಳ ದಿನವಾಗಿ ಘೋಷಿಸಲಾಗುತ್ತದೆ. ಯಾವುದೇ ಸಂಘಟನೆಗಳು, ನಾನು ಎಂಬ ಮೇಲರಿಮೆ ಇಲ್ಲದೆ, ಮತ್ತೊಂದು ಸಂಘಟನೆಯನ್ನು ಕೀಳಾಗಿ ನೋಡದೇ ಎಲ್ಲರೂ ಕನ್ನಡದ ಕಟ್ಟಾಳುಗಳು ಎಂಬ ಒಂದೇ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಮತ್ತು ಕನ್ನಡದ ವಿಷಯಗಳಲ್ಲಿ ಒಂದಾಗುವ ಕುರಿತು ಸಭೆಯಲ್ಲಿ ಪ್ರತಿಜ್ಞೆ ಮಾಡಿದರು. ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ಪತ್ರಕರ್ತ ನವೀನ್ ಸೂರಿಂಜೆ, ಜಯ ಕರ್ನಾಟಕದ ಜಗದೀಶ್, ಆರ್.ಎನ್.ಪ್ರಸಾದ್, ರೂಪೇಶ್ ರಾಜಣ್ಣ, ಗುರುದೇವ ನಾರಾಯಣ ಕುಮಾರ್, ಲಕ್ಷ್ಮೀ ಶ್ರೀನಿವಾಸ, ಪಡುಕೋಟೆ, ಮಂಜುನಾಥ ಗೌಡ, ದಿವ್ಯ ಆಲೂರು, ರವಿ ಶೆಟ್ಟಿ, ದಾ.ಪಿ.ಆಂಜಿನಪ್ಪ, ಲೋಕೇಶ ಗೌಡ, ನಿತೀಶ ಗೌಡ, ಟಿ.ತಿಮ್ಮೇಶ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನ 5 ಪಾಲಿಕೆಗಳ 369 ವಾರ್ಡ್ಗಳ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಐದು ನಗರ ಪಾಲಿಕೆಗಳ ವಾರ್ಡ್ಗಳ ಅಂತಿಮ ಪಟ್ಟಿ ಪ್ರಕಟವಾಗಿದೆ. ಒಟ್ಟು 369 ವಾರ್ಡ್ಗಳನ್ನು ಗುರುತಿಸಲಾಗಿದೆ. ಬೆಂಗಳೂರು ಪಶ್ಚಿಮ ಪಾಲಿಕೆಗೆ ಒಂದು ಹೆಚ್ಚುವರಿ ವಾರ್ಡ್ ಸೇರ್ಪಡೆಯಾಗಿದೆ. 10 ವರ್ಷಗಳ ಬಳಿಕ ನಡೆಯಲಿರುವ ಈ ಚುನಾವಣೆಗೆ ಫೆಬ್ರವರಿ ಅಂತ್ಯದೊಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ. ಇದು ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಹೊಸ ಅಧ್ಯಾಯವನ್ನು ತೆರೆಯಲಿದೆ.
ಬ್ಯಾರಿ ಅಕಾಡಮಿ ಚಮ್ಮನ ಮತ್ತು ವಿದ್ಯಾರ್ಥಿ ಸಂಗಮ: ಸ್ವಾಗತ ಸಮಿತಿ ರಚನೆ
ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ಬ್ಯಾರಿ ಅಕಾಡಮಿ ಚಮ್ಮನ’ (ಗೌರವ ಪುರಸ್ಕಾರ) ಮತ್ತು ’ವಿದ್ಯಾರ್ಥಿ ಸಂಗಮ’ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೊಳುವಾರಿನ ಆಕರ್ಷನ್ ಬಿಲ್ಡರ್ಸ್ ಕಚೇರಿಯಲ್ಲಿ ನಡೆಯಿತು. ಅಕಾಡಮಿಯ ಸದಸ್ಯ ಬಿ.ಎಸ್. ಮುಹಮ್ಮದ್ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಸಾರಾ ಅಲಿ ಪರ್ಲಡ್ಕ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಪಿ. ಅಹ್ಮದ್ ಹಾಜಿ, ಸಂಚಾಲಕರಾಗಿ ಡಾ.ಹಾಜಿ ಎಸ್. ಅಬೂಬಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಹ ಸಂಚಾಲಕರಾಗಿ ಬಿ.ಎ. ಶಕೂರ್ ಹಾಜಿ ಕಲ್ಲೆಗ, ಉಪಾಧ್ಯಕ್ಷರುಗಳಾಗಿ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಾಜಿ ಅಬ್ದುಲ್ ರಹಿಮಾನ್ ಆಝಾದ್,ಇಬ್ರಾಹಿಂ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ವಿ.ಕೆ. ಶರೀಫ್ ಬಪ್ಪಳಿಗೆ ಮತ್ತು ಅಬ್ದುಲ್ ಹಮೀದ್ ಸೋಂಪಾಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಝೈನುದ್ದೀನ್, ಸಂಘಟನಾ ಕಾರ್ಯದರ್ಶಿಗಳಾಗಿ ನ್ಯಾಯವಾದಿ ಕೆ.ಎಂ.ಸಿದ್ದೀಕ್, ಕೆ.ಉಮರ್ ಕರಾವಳಿ, ಹಾಜಿ ಅಶ್ರಫ್ ಕಲ್ಲೆಗ ಹಾಗೂ ಸದಸ್ಯರಾಗಿ ಮುಹಮ್ಮದ್ ಶಾಫಿ ಪಾಪೆತಡ್ಕ, ಪಿ. ಮುಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.
Udupi | ಆನ್ಲೈನ್ ಹೂಡಿಕೆ ಹೆಸರಿನಲ್ಲಿ 12.38 ಲಕ್ಷ ರೂ. ವಂಚನೆ: ದೂರು
ಉಡುಪಿ: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವೀಣ್ ಎಂಬವರ ಮೊಬೈಲ್ನ ಟೆಲಿಗ್ರಾಂ ಆ್ಯಪ್ಗೆ ಬಂದ ಲಿಂಕ್ ಒತ್ತಿದ್ದು ಆ ಮೂಲಕ ಗ್ರೂಪಿಗೆ ಸೇರ್ಪಡೆಗೊಂಡಿದ್ದರು. ಟಾಸ್ಕ್ ಹೆಸರಿನಲ್ಲಿ ಇವರು ಅ.22ರಿಂದ ಅ.29ವರೆಗೆ ಆರೋಪಿಗಳು ತಿಳಿಸಿದಂತೆ ಹಂತ ಹಂತವಾಗಿ ಒಟ್ಟು 12,38,750ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಪ್ರವೀಣ್ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಶಬರಿಮಲೆ ಅವ್ಯವಸ್ಥೆ: ತೀರ್ಥಯಾತ್ರಿಕರ ದಟ್ಟಣೆ - ಕನ್ನಡಿಗರ ಪರಿಸ್ಥಿತಿ ಹೇಗಿದೆ?
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರ ಅತಿಯಾದ ಜನಸಂದಣಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ದೈನಂದಿನ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಿ, ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಆದೇಶಿಸಲಾಗಿದೆ. ಕನ್ನಡಿಗರಿಗೆ ಯಾವುದೇ ತೊಂದರೆಯಾಗಿಲ್ಲ, ಆದರೆ 'ಮೆದುಳು ತಿನ್ನುವ ಅಮೀಬಾ' ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೆಇಎ: 973 ಹುದ್ದೆ ನೇಮಕಾತಿಗೆ ಡಿ.20ರಿಂದ ಲಿಖಿತ ಪರೀಕ್ಷೆ
ಬೆಂಗಳೂರು : ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ 973 ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಡಿ.20ರಿಂದ ಪರೀಕ್ಷೆಗಳು ನಡೆಯಲಿವೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಡಿ.20, ಡಿ.21, ಜನವರಿ 24 ಮತ್ತು ಫೆಬ್ರುವರಿ 22ರಂದು ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 391 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಕೋಟಾ ಕ್ಲೇಮ್ ಮಾಡದವರಿಗೆ ಜ.10, ಜ.11, ಜ.12 ಮತ್ತು ಜ.25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 582 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ತಾಂತ್ರಿಕ ಶಿಕ್ಷಣ, ಕೃಷಿ ಮಾರಾಟ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್ಡಿಎಲ್, ಕೆಕೆಆರ್ ಟಿಸಿ, ಆರ್ ಜಿಯುಎಚ್ಎಸ್, ಕೆಎಸ್ಎಸ್ಐಡಿಸಿ, ಶಾಲಾ ಶಿಕ್ಷಣ ಇತ್ಯಾದಿ ಇಲಾಖೆ/ನಿಗಮ- ಮಂಡಳಿಗಳ ವಿವಿಧ ದರ್ಜೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಶಿರ್ವ: ಕಳೆದ 40 ವರ್ಷಗಳಿಂದ ಬಂಟಕಲ್ಲಿನಲ್ಲಿ ಮಲ್ಲಿಗೆ ಕಟ್ಟೆಯನ್ನು ನಡೆಸುತ್ತಿದ್ದ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ನಿವಾಸಿ ರಮಾನಾಥ ಶೆಟ್ಟಿ ಎಚ್.(78) ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಬಂಟಕಲ್ಲು ಅಂಚೆ ಕಛೆರಿಯ ನಿವೃತ್ತ ಅಂಚೆಪಾಲಕರು, ಹೇರೂರು ಶ್ರೀಮಹಾಲಿಂಗೇಶ್ವರ ದೇವಳದ ಮುಖ್ಯಸ್ಥ, ಬಂಟಕಲ್ಲು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕಲಬುರಗಿ: ಸಾರ್ವಜನಿಕರು ಮತ್ತು ವಿಶೇಷವಾಗಿ ಮಕ್ಕಳಿಗೆ ತೊಂದರೆ ಉಂಟು ಮಾಡುತ್ತಿರುವ ಜಿಲ್ಲೆಯಾದ್ಯಂತ ನಗರ ಹಾಗೂ ಪ್ರದೇಶದ ಶಾಲಾ ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಆವರಣ, ಕ್ರೀಡಾಂಗಣ, ವಸತಿ ನಿಲಯ, ಆಸ್ಪತ್ರೆ ಆವರಣದಲ್ಲಿನ ನಾಯಿಗಳನ್ನು ಖಾಯಂ ಆಗಿ ಸ್ಥಳಾಂತರಿಸಿ ಸಂತಾನ ಹರಣ ಚಿಕಿತ್ಸೆಯ ಲಸಿಕಾ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಯಿಗಳ ಸ್ಥಳಾಂತರ ಮತ್ತು ಮತ್ತು ಜಾನುವಾರುಗಳನ್ನು ಗೋಶಾಲೆಗೆ ಸೇರಿಸುವ ಸಂಬಂಧ Suo Moto WP (Civil) No 5 of 2025 ದಿನಾಂಕ 07-11-2025ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೌಝಿಯಾ ತರನ್ನುಮ್, ಇನ್ನು ಬೀದಿ ಬದಿ ನಾಯಿಗಳನ್ನು ಎ.ಬಿ.ಸಿ.ಲಸಿಕೆ ನೀಡಿ ಅದೇ ಸ್ಥಳದಲ್ಲಿ ಬಿಡಬೇಕು ಎಂದರು. ಇದಲ್ಲದೆ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಬಿಡಾಡಿ ದನಗಳನ್ನು ಶಾಶ್ವತವಾಗಿ ಜಾನುವಾರುಗಳ ತಂಗುದಾಣ ಅಥವಾ ಗೋಶಾಲೆಗಳಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ಎಲ್ಲಾ ನಗರ, ಗ್ರಾಮೀಣ ಪ್ರದೇಶದಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಭಾಗದ ಎಲ್ಲಾ ಸಂಸ್ಥೆಯ ಮುಖ್ಯಸ್ಥರುಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಅದೇ ರೀತಿ ಶಿಕ್ಷಣ, ಆರೋಗ್ಯ, ಸಾರಿಗೆ, ರೈಲ್ವೆ, ಮಹಾನಗರ ಪಾಲಿಕೆ, ನಗರಾಭಿವೃದ್ದಿ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೋಲಿಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಶ್ವವಿದ್ಯಾಲಯ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ ವರದಿ ಸಲ್ಲಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಸಂಜಯ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಟ್ಕಳ: ಶ್ರೀ ಮಾರುತಿ ಪತ್ತಿನ ಸಂಘಕ್ಕೆ ಉತ್ತಮ ಸಹಕಾರಿ ಪತ್ತಿನ ಸಂಘ ಪ್ರಶಸ್ತಿ
ಭಟ್ಕಳ: ಹಾವೇರಿಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಜಿಲ್ಲೆಯ ಉತ್ತಮ ಸಹಕಾರಿ ಪತ್ತಿನ ಸಂಘ – 2025 ಪ್ರಶಸ್ತಿ ಲಭಿಸಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಲ ಮತ್ತು ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಲ ಜಂಟಿಯಾಗಿ ಆಯೋಜಿಸಿತ್ತು. ಮಹಾಮಂಡಲದ ನಿರ್ದೇಶಕ ಡಾ. ಸಂಜಯ ಹೊಸಮಠ ಅವರು ಸಂಘದ ಪರವಾಗಿ ಅಧ್ಯಕ್ಷ ಅಶೋಕ ಪೈ, ಉಪಾಧ್ಯಕ್ಷ ಉಮೇಶ್ ಕಾಮತ್ ಮತ್ತು ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶಾನಭಾಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಿರ್ದೇಶಕ ರವೀಂದ್ರ ಪ್ರಭು, ಅನಂತ ಕಾಮತ್ ಹಾಗೂ ಶಾಖಾ ಪ್ರಬಂಧಕ ಪ್ರಸನ್ನ ಪ್ರಭು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು. 26 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಾರುತಿ ಪತ್ತಿನ ಸಂಘವು ನಾಲ್ಕು ಶಾಖೆಗಳ ಮೂಲಕ 116 ಕೋಟಿಗೂ ಹೆಚ್ಚು ಠೇವಣಿ, ಸದಸ್ಯರಿಗೆ 103.62 ಕೋಟಿ ಸಾಲ ನೀಡಿಕೆ, 98.49% ಸಾಲ ವಸೂಲಾತಿ, ಮತ್ತು 2.53 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ 12% ಲಾಭಾಂಶ ವಿತರಿಸಿರುವ ಸಂಘವು ಸತತ 14 ವರ್ಷಗಳಿಂದ ’ಎ’ ಗ್ರೇಡ್ (ಂ ಉಡಿಚಿಜe) ಪಡೆಯುತ್ತಿರುವುದು ಈ ಪ್ರಶಸ್ತಿಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಹೆಚ್.ಕೆ. ಪಾಟೀಲ್, ಸಭಾಪತಿ ಬಸವರಾಜ ಹೊರಟ್ಟಿ ಮತ್ತು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶ್ರೀ.ಮಾರುತಿ ಪತ್ತಿನ ಸಂಘಕ್ಕೆ ಇದು ಮೂರನೇ ಬಾರಿ ಲಭ್ಯವಾಗಿರುವ ಪ್ರಶಸ್ತಿ. ಇದಕ್ಕೂ ಮೊದಲು 2017 ಮತ್ತು 2024ರಲ್ಲಿ ಇದೇ ಪ್ರಶಸ್ತಿ ದೊರೆತಿತ್ತು. ಸಂಘವು 2023–24ರಲ್ಲಿ ತೋರಿದ ಉತ್ತಮ ಕಾರ್ಯಕ್ಷಮತೆಗೆ ಕೆಡಿಸಿಸಿ ಬ್ಯಾಂಕ್ ನೀಡುವ ಜಿಲ್ಲಾಮಟ್ಟದ ಉತ್ತಮ ಸಹಕಾರಿ ಸಂಘ – 2025 ಪ್ರಶಸ್ತಿಗೂ ಭಾಜನವಾಗಿದೆ.
ವಿದೇಶಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಯುಜಿಸಿಗೆ ಪತ್ರ : ಡಾ.ಎಂ.ಸಿ. ಸುಧಾಕರ್
ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿದೇಶಿ ವಿಶ್ವವಿದ್ಯಾಲಯಗಳು ಶಾಖೆಗಳನ್ನು ಆರಂಭಿಸುತ್ತಿದ್ದು, ಇವುಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸಬೇಕು ಎಂದು ಮಾಹಿತಿ ಒದಗಿಸಲು ವಿಶ್ವವಿದ್ಯಾಲಯಗಳ ಅನುದಾನ ಆಯೋಗಕ್ಕೆ(ಯುಜಿಸಿ) ಪತ್ರ ಬರೆಯಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದ್ದಾರೆ. ಗುರುವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇಲಾಖೆ ಜವಾಬ್ದಾರಿ ವಹಿಸಲಿದೆ. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಯಾರೊಬ್ಬರ ಕಡಿವಾಣ ಇರುವುದಿಲ್ಲ. ಅವರದ್ದೇ ನಿಯಮಗಳು, ಪಠ್ಯಕ್ರಮ, ಶುಲ್ಕ ವಿಧಿಸುತ್ತವೆ ಎಂದರು. ವಿದೇಶಿ ವಿಶ್ವವಿದ್ಯಾಲಯಗಳು ಯುಜಿಸಿ ಅನುಮತಿ ಪಡೆದು ದೇಶಾದ್ಯಂತ ತಮ್ಮ ಶಾಖೆಗಳನ್ನು ಆರಂಭಿಸುತ್ತಿದ್ದು, ರಾಜ್ಯ ಸರಕಾರದ ನಿಯಂತ್ರಣದಲ್ಲಿರದ ಕಾರಣ ಕ್ಯಾಂಪಸ್ನ್ನು ಹಠಾತ್ತನೇ ಸ್ಥಗಿತಗೊಳಿಸುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಕಿರಿಕಿರಿ ಮಾಡಿದರೆ ಭವಿಷ್ಯದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಬಗ್ಗೆ ಸ್ಪಷ್ಟತೆ ಕೋರಲಾಗುವುದು ಎಂದು ಅವರು ಮಾಹಿತಿ ನೀಡಿದರು. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಮೇಲೆಯೇ ರಾಜ್ಯ ಸರಕಾರದ ಹಕ್ಕಿಲ್ಲದಿರುವುವಾಗ, ವಿದೇಶಿ ವಿಶ್ವವಿದ್ಯಾಲಯಗಳ ಮೇಲೆ ಹೇಗೆ ಹಕ್ಕು ಹೊಂದಲು ಸಾಧ್ಯ. ನೀತಿ ಮತ್ತು ಪಠ್ಯಕ್ರಮಗಳ ಆಯ್ಕೆ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ರಾಜ್ಯ ಶಿಕ್ಷಣ ನೀತಿ ವಿದೇಶಿ ವಿವಿಗಳಿಗೆ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.
ಬೆಳ್ತಂಗಡಿ: ವಾಹನದ ಅಡಿಗೆ ಸಿಲುಕಿ ವೃದ್ದ ಮೃತ್ಯು
ಬೆಳ್ತಂಗಡಿ: ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯ ವಾಹನದ ಅಡಿಗೆ ಸಿಲುಕಿ ವೃದ್ದರೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಮೃತ ವ್ಯಕ್ತಿ ಬಂಗಾಡಿ ನಿವಾಸಿಯಾಗಿರುವುದಾಗಿ ತಿಳಿದು ಬಂದಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಕಾಮಗಾರಿಯ ಯಂತ್ರವೊಂದು ಚಲಾಯಿಸುತ್ತಾ ಬಂದ ಚಾಲಕ ವೃದ್ದನನ್ನು ಗಮನಿಸದೆ ವಾಹನ ಚಲಾಯಿಸಿದ್ದು ವೃದ್ದ ವಾಹನದ ಅಡಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು | ನ. 22ರಂದು ಬ್ಯಾರೀಸ್ನಲ್ಲಿ ʼಉತ್ಕರ್ಷ್ 2025ʼ ಪ್ರತಿಭಾ ಉತ್ಸವ
ಮಂಗಳೂರು: ಬ್ಯಾರೀಸ್ ಸಂಸ್ಥೆಗಳ ಸಮೂಹವು ನ. 22ರಂದು ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರ್ ಸಂಸ್ಥೆಗಳ ಪ್ರತಿಭಾ ಉತ್ಸವ ʼಉತ್ಕರ್ಷ್ 2025ʼ ಕಾರ್ಯಕ್ರಮ ಆಯೋಜಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಸಮೀಪದ ಬೋಳಿಯಾರ್ನ ಲ್ಯಾಂಡ್ಸ್ ಎಂಡ್ನಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಡಿಜಿಟಲ್ ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, ವಿಜೇತರಿಗೆ ಒಟ್ಟು 1 ಲಕ್ಷ ರೂ. ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಸ್ಟಿಲ್ಲ್/ವರ್ಕಿಂಗ್ ಮಾಡೆಲ್, ಎಕ್ಸ್ಪ್ಲೋರ್ AI (ಪಿಯುಸಿ ವಿದ್ಯಾರ್ಥಿಗಳಿಗೆ), ಲಿಟ್ಮೈಂಡ್ಸ್ ಅಡ್ವೆಂಚರ್ (ಟ್ರೆಷರ್ ಹಂಟ್), ಸೈನ್ಸ್ ರಂಗೋಲಿ, ಬ್ರೈನ್ ಬಝ್ (ಕ್ವಿಜ್), ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುಕೂಲವಾಗುವಂತೆ ಕಾಸರಗೋಡು, ಮಂಜೇಶ್ವರ, ತಲಪಾಡಿ, ಪಂಪ್ವೆಲ್, ತೊಕ್ಕೊಟ್ಟು, ದೇರಳಕಟ್ಟೆ, ಬಿ.ಸಿ.ರೋಡ್, ಮೆಲ್ಕಾರ್, ಮುಡಿಪು, ಉಪ್ಪಿನಂಗಡಿ, ಮಾಣಿ, ಪುತ್ತೂರು, ವಿಟ್ಲದಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ಆಯೋಜನಾ ಸಮಿತಿಯಲ್ಲಿ ಡಾ. ಎಸ್.ಐ. ಮಂಜುರ್ ಬಾಷಾ (ಪ್ರಾಂಶುಪಾಲರು, BIT), ಡಾ. ಅಝೀಝ್ ಮುಸ್ತಫಾ (ಪ್ರಾಂಶುಪಾಲರು,BIES), ಆರ್ಕಿಟೆಕ್ಟರ್ ಖಲೀಲ್ ರಝಾಕ್ ಶೇಖ್ (ಪ್ರಾಂಶುಪಾಲರು, BEADS), ಬಿ.ಕೆ. ಅಬ್ದುಲ್ ಲತೀಫ್ (ಪ್ರಾಂಶುಪಾಲರು, BIPUC), ಪ್ರೊ. ಪೃಥ್ವಿರಾಜ್ ಎಂ (ನಿರ್ದೇಶಕರು, BITP) ಹಾಗೂ ಸಿಬ್ಬಂದಿ ಸಂಯೋಜಕಿ ಪ್ರಫುಲ್ಲಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕ 99000 66888 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಉಳ್ಳಾಲ: ಬಿಜೆಪಿ ನಾಯಕಿ ಲಲಿತ ಸುಂದರ್ ನಿಧನ
ಉಳ್ಳಾಲ: ಉಳ್ಳಾಲದ ಬಿಜೆಪಿಯ ಹಿರಿಯ ನಾಯಕಿ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ತೊಕ್ಕೊಟ್ಟಿನ ಅವರ ಸ್ವಗೃಹದಲ್ಲಿ ನಿಧನರಾದರು. ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಉಳ್ಳಾಲ ನಗರಸಭೆಯ ಚುನಾಯಿತ ಸದಸ್ಯರಾಗಿ, ನಾಮ ನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾಗಿದ್ದ ಅವರು ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಸ್ವಾಮಿ ಕೊರಗಜ್ಜ ಸೇವಾ ಸಮಿತಿ,ಕೊಲ್ಯ ಶ್ರೀ ಶಾರದೋತ್ಸವ ಸಮಿತಿ,ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರ,ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಸೊಸೆ, ಮೊಮ್ಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಂದಿನಿ ನದಿ ಅತಿಕ್ರಮಣದ ವಿರುದ್ಧ ಅಧಿಕಾರಿಗಳ ನಿರ್ಲಕ್ಷ್ಯ : ಉಪ ಲೋಕಾಯುಕ್ತ ಎಚ್ಚರಿಕೆ
ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಮತ್ತು ಖಂಡಿಗೆ ಬಳಿ ನಂದಿನಿ ನದಿಯ ಅತಿಕ್ರಮಣ ಮತ್ತು ಕಲುಷಿತ ನೀರು ಸೇರ್ಪಡೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿರುವುದನ್ನು ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಆದರೆ ಎಂಟು ತಿಂಗಳು ಕಳೆದರೂ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗದಿರುವ ಬಗ್ಗೆ ಉಪಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.20ರಂದು ನಡೆಯುವ ವಿಚಾರಣೆಗೆ ಮುನ್ನ ಸೂಕ್ತ ಕ್ರಮ ವಹಿಸದಿದ್ದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮಾ.24ರಂದು ಲೋಕಾಯುಕ್ತರು ಸುಮೊಟೊ ಪ್ರಕರಣ ದಾಖಲಿಸಿದ್ದು, ಪ್ರಕರಣದಲ್ಲಿ ಮನಪಾ ಒಳ ಚರಂಡಿ ವಿಭಾಗ (ಸುರತ್ಕಲ್ ವಲಯ) ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಲಿಂಗಪ್ಪ, ಮನಪಾ ಸಹಾಯಕ ನಗರ ಯೋಜನಾಧಿಕಾರಿಗಳಾದ ಗುರು ಪ್ರಸಾದ್, ಲಾವಣ್ಯ, ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಮುಡಾ ನಗರ ಯೋಜಕ ರಘು ಜಿ.ಆರ್., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಎಂ.ತಾಜುದ್ದೀನ್ ಉಬೈದ್, ಮೆಸ್ಕಾಂ ಸುರತ್ಕಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಸುರತ್ಕಲ್ ಹೋಬಳಿಯ ಕಂದಾಯ ನಿರೀಕ್ಷಕ ಪ್ರಸಾದ್ ಎನ್.ಜಿ., ಇಡ್ಯಾ ಗ್ರಾಮ ಆಡಳಿತಾಧಿಕಾರಿ ಕೆ. ಸಂತೋಷ್ ಅವರನ್ನು ಎದುರುದಾರರನ್ನಾಗಿಸಲಾಗಿತ್ತು. ಮೊದಲನೇ ಎದುರುದಾರ ಶಿವಲಿಂಗಪ್ಪತನಗೆ ವರ್ಗಾವಣೆ ಆಗಿರುವುದಾಗಿ ತಿಳಿಸಿರುವುದರಿಂದ ಕಾರ್ಯಪಾಲಕ ಅಭಿಯಂತರ-2 ಪಿ.ಎಸ್. ಜ್ಞಾನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕಾರ್ತಿಕ್ ಶೆಟ್ಟಿ, ಕಿರಿಯ ಅಭಿಯಂತರ ಯತೀಶ್ ಎಂ.ಎಸ್. ಅವರನ್ನು ಎದುರುದಾರರು 12 - 14 ಎಂದು ಸೇರ್ಪಡೆಗೊಳಿಸಲಾಗಿದೆ. ಮಂಗಳೂರು ಸಹಾಯಕ ಆಯುಕ್ತರು ಮತ್ತು ಪೊಲೀಸ್ ಸಹಾಯಕ ಆಯುಕ್ತರನ್ನು 15 ಮತ್ತು 16ನೇ ಎದುರುದಾರರಾಗಿ ಮಾಡಲಾಗಿದೆ. ಈ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಎದುರುದಾರರು ಯಾವ ರೀತಿ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಪರಿಶೀಲಿಸಿ ಪ್ರತ್ಯೇಕ ವರದಿ ನೀಡಬೇಕು. ದ.ಕ. ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರೂ ಕೂಡ ಸಮಸ್ಯೆ ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತ್ಯೇಕ ವರದಿ ತಯಾರಿಸಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕದೊಳಗೆ ಮಂಗಳೂರು ಸಹಾಯಕ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ಪ್ರತಿವಾದಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ʼಸಂಸದರ ನಡೆ ಗ್ರಾಮದ ಕಡೆʼ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರೊಂದಿಗೆ ಸಂಸದ ಬ್ರಿಜೇಶ್ ಚೌಟ ಸಂವಾದ
ಸುಳ್ಯ: ʼಸಂಸದರ ನಡೆ ಗ್ರಾಮದ ಕಡೆʼ ಕಾರ್ಯಕ್ರಮದಡಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಗುರುವಾರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ತಾಲೂಕಿನ ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರುವಿನ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸ್ಥಳೀಯರ ಕುಂದು-ಕೊರತೆ ಆಲಿಸಿದರು. ಬಳಿಕ ಪ್ರತಿಕ್ರಿಯಿಸಿರುವ ಸಂಸದರು ಕ್ಷೇತ್ರದ ಪ್ರತಿಯೊಂದು ವಿಭಾಗದ ಜನರನ್ನು ತಲುಪುವ ಮೂಲಕ ಅವರ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂಬ ಆಶಯ ನನ್ನದು. ಜನರ ಸಮಸ್ಯೆಗಳು-ಸವಾಲುಗಳಿಗೆ ಖುದ್ದು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಮುಖಂಡರಾದ ವೆಂಕಟ್ ದಂಬೇಕೋಡಿ, ಕಿಶೋರ್ ಶಿರಾಡಿ, ವಿನಯ್ ಮುಳುಗಾಡು, ವಿನಯ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕೇಶವ ಭಟ್ ಮುಳಿಯ, ಶ್ರೀಕಾಂತ್ ಮಾವಿನಕಟ್ಟೆ, ಸೋಮಶೇಖರ್ ಕಟ್ಟೆಮನೆ, ಚಂದ್ರಹಾಸ ಶಿವಾಲ, ಎ.ಟಿ. ಕುಸುಮಾಧರ್ ಮತ್ತಿತರರು ಉಪಸ್ಥಿತರಿದ್ದರು.
ಎಪ್ಸ್ಟೀನ್ ಫೈಲ್ ಗಳ ಬಿಡುಗಡೆ ಕುರಿತ ಮಸೂದೆಗೆ ಟ್ರಂಪ್ ಸಹಿ
ವಾಷಿಂಗ್ಟನ್, ನ.20: ತನ್ನದೇ ಪಕ್ಷದ ಸದಸ್ಯರ ತೀವ್ರ ಒತ್ತಡಕ್ಕೆ ಮಣಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್ ಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಬುಧವಾರ ಸಹಿ ಹಾಕಿದ್ದಾರೆ. ` ನಮ್ಮ ಅದ್ಭುತ ಗೆಲುವಿನಿಂದ ಗಮನಗಳನ್ನು ಬೇರೆಡೆ ಸೆಳೆಯಲು ಡೆಮಾಕ್ರಟಿಕ್ ಪಕ್ಷ ಎಪ್ಸ್ಟೀನ್ ಪ್ರಕರಣವನ್ನು ಬಳಸಿಕೊಂಡಿದೆ. ಆದರೆ ಇದು ರಿಪಬ್ಲಿಕನ್ ಪಕ್ಷಕ್ಕಿಂತಲೂ ಅವರ ಮೇಲೆಯೇ ಹೆಚ್ಚು ಪರಿಣಾಮ ಬೀರಲಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶಾದ್ಯಂತ 2008ರ ಸರಣಿ ಸ್ಫೋಟದ ಸಂಚುಕೋರ ಸಹ ಅಲ್-ಫಲಾಹ್ ವಿವಿ ವಿದ್ಯಾರ್ಥಿ
ಹರಿಯಾಣದ ಫರೀದಾಬಾದ್ನಲ್ಲಿರುವ ವಿವಾದಿತ ಅಲ್-ಫಲಾಹ್ ವಿಶ್ವವಿದ್ಯಾಲಯವು ಮತ್ತೊಮ್ಮೆ ಭಯೋತ್ಪಾದನೆ ನಂಟಿನ ವಿಚಾರಕ್ಕೆ ಸುದ್ದಿಯಲ್ಲಿದೆ. 2007-08ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಅಲ್-ಫಲಾಹ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮಾಸ್ಟರ್ ಮೈಂಡ್ ಮಿರ್ಜಾ ಶಾದಾಬ್ ಬೇಗ್ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ, ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದು, ಕರ್ನಾಟಕದ ಕುಖ್ಯಾತ ಭಟ್ಕಳ ಸಹೋದರರಿಗೂ ಸ್ಫೋಟಕಗಳನ್ನು ಪೂರೈಸಿದ್ದ ಎನ್ನಲಾಗಿದೆ.
ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಚಂಡಮಾರುತ ಭೀತಿ
ಕೋಲ್ಕತಾ,ನ.20: ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಚಂಡಮಾರುತ ರೂಪುಗೊಳ್ಳುತ್ತಿದ್ದು, ಅಂಡಮಾನ್ ನಿಕೋಬಾರ್ ದ್ವೀಪಪ್ರದೇಶದಲ್ಲಿ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ನೆಚ್ಚರಿಕೆ ನೀಡಿದೆ. ನವೆಂಬರ್ 21ರಿಂದ ಚಂಡಮಾರುತದ ರೂಪುಗೊಳ್ಳುವಿಕೆ ತೀವ್ರರೂಪ ಪಡೆಯಲಿದೆ. ಇದರಿಂದಾಗಿ ನಿಕೋಬಾರ್ ದ್ವೀಪದ ಕೆಲವೆಡೆ ಅತ್ಯಧಿಕ (070ಸೆಂ.ಮೀ.ನಿಂದ 20 ಸೆಂ.ಈ.ವರೆಗೆ)ಮಳೆ ಸುರಿಯಲಿದೆ. ಅಂಡಮಾನ್ ನಲ್ಲೂ 70ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 24 ಹಾಗೂ 25ರಂದು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಒಂದೆರಡು ಸ್ಥಳಗಳಲ್ಲಿ ಗುಡುಗು ಸಿಡಿಲಿನ ಜೊತೆಗೆ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಸಿಂಧನೂರು: ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. 2020ರ ಜನವರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಸ್ಕಿ ತಾಲೂಕಿನ ರತ್ನಾಪುರ ಗ್ರಾಮದ ಸಣ್ಣ ಪಾಮಪ್ಪ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಸಿಪಿಐ ಬಾಲಚಂದ್ರ ಲಕ್ಕಂ, ಡಿವೈಎಸ್ಪಿ ವಿಶ್ವನಾಥ ರಾವ್ ಅವರು ಸಣ್ಣ ಪಾಮಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾ.ಬಿ.ಬಿ.ಜಕಾತಿಯವರಿದ್ದ ಪೀಠ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ದಿಲ್ಲಿ | ಶಿಕ್ಷಕರ ಕಿರುಕುಳದಿಂದ ನೊಂದು ಮೆಟ್ರೋ ನಿಲ್ದಾಣದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಹೊಸದಿಲ್ಲಿ,ನ.20: ಶಿಕ್ಷಕರ ಕಿರುಕುಳದಿಂದ ನೊಂದು ಇಲ್ಲಿನ ಮೆಟ್ರೋ ನಿಲ್ದಾಣವೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ಲ್ಯಾಟ್ಫಾರಂನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ಆಕ್ರೋಶಗೊಂಡ ನೂರಾರು ಜನರು, ಬಾಲಕ ಕಲಿಯುತ್ತಿದ್ದ ಶಾಲೆಯ ಹೊರಗೆ ಗುರುವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗೆ ಕಿರುಕುಳ ನೀಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು. 16 ವರ್ಷದ ಬಾಲಕ, ನವೆಂಬರ್ 18ರಂದು ರಾಜೇಂದ್ರ ಪ್ಯಾಲೇಸ್ ಮೆಟ್ರೋ ನಿಲ್ದಾಣದಲ್ಲಿ ಪ್ಲ್ಯಾಟ್ಫಾರ್ಮ್ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸ್ಕೂಲ್ ಬ್ಯಾಗ್ ನಲ್ಲಿ ಡೆತ್ನೋಟ್ ಪತ್ತೆಯಾಗಿದ್ದು,ತಾನು ಶಾಲೆಯಲ್ಲಿ ಶಿಕ್ಷಕರ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿರುವುದಾಗಿ ಬರೆದಿದ್ದನು. ‘‘ ಹೀಗೆ ಮಾಡಿದ್ದಕ್ಕೆ ವಿಷಾದವಿದೆ. ಆದರೆ ಶಾಲಾ ಸಿಬ್ಬಂದಿ ಆಡಿದಂತಹ ಮಾತುಗಳಿಗೆ ನಾನು ಹೀಗೆ ಮಾಡಬೇಕಾಗಿ ಬಂತು’’ ಎಂದು ಆತ ಡೆತ್ನೋಟ್ನಲ್ಲಿ ಬರೆದಿದ್ದಾನೆ. ಒಂದು ವೇಳೆ ತನ್ನ ದೇಹದಭಾಗಗಳು ಸುಸ್ಥಿತಿಯಲ್ಲಿದ್ದರೆ, ಅವುಗಳನ್ನು ನಿಜಕ್ಕೂ ಅಗತ್ಯವಿರುವವರಿಗೆ ದಾನ ಮಾಡುವಂತೆಯೂ ಆತ ತಿಳಿಸಿದ್ದಾನೆ.‘‘ನನ್ನ ಹೆತ್ತವರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ಅವರಿಗಾಗಿ ನನಗೆ ಏನನ್ನೂ ಕೊಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ’’ ಎಂದು ಆತ ತನ್ನ ಪಾಲಕರು ಹಾಗೂ ಸೋದರನಲ್ಲಿ ಕ್ಷಮೆಕೋರಿದ್ದಾನೆ. ತನ್ನ ಈ ಪರಿಸ್ಥಿತಿಗೆ ಕಾರಣರಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಬೇರೆ ಯಾವುದೇ ವಿದ್ಯಾರ್ಥಿಗೆ ನನ್ನ ಪರಿಸ್ಥಿತಿ ಬಾರಕೂಡದು ಎಂದು ಆತ ಡೆತ್ನೋಟ್ನಲ್ಲಿ ಹೇಳಿದ್ದಾನೆ. ಬಾಲಕನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಸಿದ್ದು, ಶಿಕ್ಷಕರ ನಿರಂತರ ಕಿರುಕುಳದಿಂದಾಗಿ ತನ್ನ ಪುತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಆರೋಪಿಸಿದ್ದಾರೆ. ಕೆಲವು ನಿರ್ದಿಷ್ಟ ಶಿಕ್ಷಕರು ಸಣ್ಣಪುಟ್ಟ ವಿಚಾರಗಳಿಗಾಗಿ ನಿಂದಿಸುತ್ತಿದ್ದರು, ಅಪಮಾನಿಸುತ್ತಿದ್ದರು ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು ಎಂದು ತನ್ನ ಪುತ್ರನು ತನ್ನಲ್ಲಿ ಪದೇ ಪದೇ ದೂರಿದ್ದನು ಎಂದು ಮೃತನ ತಂದೆ ಆರೋಪಿಸಿದ್ದಾರೆ. ಶಾಲಾಡಳಿತಕ್ಕೆ ಈ ಬಗ್ಗೆ ಹಲವಾರು ಸಲ ಮೌಖಿಕವಾಗಿ ದೂರುಗಳನ್ನು ನೀಡಿದ್ದರೂ, ಶಿಕ್ಷಕರು ಅದೇ ವರ್ತನೆಯನ್ನು ಮುಂದುವರಿಸಿದ್ದರೆಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಡೆತ್ನೋಟ್ನಲ್ಲಿ ಬಾಲಕನ ಹೇಳಿಕೆ ಹಾಗೂ ಎಫ್ಐಆರ್ ನಲ್ಲಿ ದಾಖಲಿಸಲಾದ ಆರೋಪಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿರುವುದಾಗಿ ಅವರು ಹೇಳಿದ್ದಾರೆ.
ಬೈಕ್ ಸವಾರಿ ವೇಳೆ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ; ವೇಗ ಮಿತಿ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು, ವೇಗ ಗಂಟೆಗೆ 40 ಕಿ.ಮೀ ಮೀರಬಾರದು ಎಂದು ಆದೇಶಿಸಿದೆ.
ಡಿಜಿಟಲ್ ಅರೆಸ್ಟ್ ಹಗರಣ | ಗುಜರಾತ್ ನ ರೈತ ಆತ್ಮಹತ್ಯೆ
ಅಹ್ಮದಾಬಾದ್, ನ. 20: ದಿಲ್ಲಿ ಭಯೋತ್ಪಾದನ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳೆಂದು ಸೋಗು ಹಾಕಿದ ಸೈಬರ್ ವಂಚಕರ ಡಿಜಿಟಲ್ ಅರೆಸ್ಟ್ ಹಗರಣಕ್ಕೆ ಸಿಲುಕಿದ ಬಳಿಕ ಗುಜರಾತ್ ನ ವಡೋದರಾ ಜಿಲ್ಲೆಯ 65 ವರ್ಷದ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೈಬರ್ ವಂಚಕರು 40 ಕೋಟಿ ರೂ. ನಕಲಿ ವಂಚನೆ ಪ್ರಕರಣದಲ್ಲಿ ಅವರಿಗೆ ದಿನವಿಡಿ ಬೆದರಿಕೆ ಒಡ್ಡಿದ್ದರು. ಘಟನೆಯಿಂದ ಕಂಗಾಲಾಗಿರುವ ಅವರ ಕುಟುಂಬ ದಾಭೋಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕಠಿಣ ಕ್ರಮ ತೆಗೆದುದುಕೊಳ್ಳುವಂತೆ ಒತ್ತಾಯಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ರೈತನನ್ನು ಕಾಕಾ ರಾಮ್ನಾ ಫಾಲಿಯಾ ನಿವಾಸಿ 65 ವರ್ಷದ ಅತುಲ್ಭಾಯಿ ಹೀರಾಬಾಯಿ ಪಟೇಲ್ ಎಂದು ಗುರುತಿಸಲಾಗಿದೆ. ಸೈಬರ್ ವಂಚಕರು ದಿಲ್ಲಿಯ ಎಟಿಎಸ್ ಅಧಿಕಾರಿಗಳೆಂದು ಸೋಗು ಹಾಕಿ ಪಟೇಲ್ ಗೆ ಬೆದರಿಕೆ ಒಡ್ಡಿದ್ದಾರೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, 40 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ. ವಂಚಕರು ಪ್ರತಿ ಕೆಲವು ನಿಮಿಷಗಳಲ್ಲಿ ಒಮ್ಮೆ ವ್ಯಾಟ್ಸ್ ಆ್ಯಪ್ನಲ್ಲಿ ಸಂದೇಶ ಕಳುಹಿಸಿದರೆ, ಇನ್ನೊಮ್ಮೆ ವೀಡಿಯೊ ಕರೆ ಮಾಡುತ್ತಿದ್ದರು. ಅನಂತರ ಪಟೇಲ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದರು. ಮನೆಯಿಂದ ಹೊರಗೆ ಹೋಗದಂತೆ ಹಾಗೂ ಎಲ್ಲಾ ಸಮಯದಲ್ಲಿ ಲಭ್ಯವಿರುವಂತೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಅರಸ್ಟ್ಗೆ ಒಳಗಾದ ಬಳಿಕ ರೈತನೋರ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಭಯಾನಕ ಹಾಗೂ ಬಹುಶಃ ಮೊದಲ ಪ್ರಕರಣ ಇದಾಗಿದೆ. ಇದರಿಂದಾಗಿ ವಡೊದರಾ ಜಿಲ್ಲೆಯ ಕಾಯಾವರೋಹಣ ಪ್ರದೇಶದಲ್ಲಿ ಆತಂಕ ಮೂಡಿದೆ
ಫಿಫಾ ರ್ಯಾಂಕಿಂಗ್: 142ನೇ ಸ್ಥಾನಕ್ಕೆ ಕುಸಿದ ಭಾರತ
ಹೊಸದಿಲ್ಲಿ, ನ.20: ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಹಿನ್ನಡೆ ಅನುಭವಿಸಿರುವ ಭಾರತೀಯ ಫುಟ್ಬಾಲ್ ತಂಡವು 142ನೇ ಸ್ಥಾನಕ್ಕೆ ಕುಸಿದಿದೆ. 2016ರ ಅಕ್ಟೋಬರ್ ಬಳಿಕ ಭಾರತದ ಕೆಟ್ಟ ಸಾಧನೆ ಇದಾಗಿದೆ. ಅಂದು 148ನೇ ಸ್ಥಾನ ಪಡೆದಿತ್ತು. ಅಲ್ಲದೆ 2023ರ ಡಿಸೆಂಬರ್ ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ತಂಡವು ಆ ನಂತರ 40 ಸ್ಥಾನಗಳ ಕುಸಿತ ಕಂಡಿದೆ. 1996ರಲ್ಲಿ 94ನೇ ಸ್ಥಾನ ಪಡೆದಿರುವುದು ಭಾರತದ ಈ ತನಕದ ಶ್ರೇಷ್ಠ ಸಾಧನೆಯಾಗಿದೆ. ಏಶ್ಯ ರಾಷ್ಟ್ರಗಳ ಪೈಕಿ ಭಾರತ 27ನೇ ಸ್ಥಾನದಲ್ಲಿದೆ. ಏಶ್ಯ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 0-1 ಗೋಲು ಅಂತರದ ಸೋಲು ಭಾರತದ ಹೀನಾಯ ಸಾಧನೆಗೆ ಕಾರಣವಾಗಿದೆ.
ನ.21ರಿಂದ ಆ್ಯಶಸ್ ಸರಣಿ ಆರಂಭ | ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಮುಖಾಮುಖಿ
ಪರ್ತ್, ನ.20: ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 2025-26ರ ಸಾಲಿನ ಪ್ರತಿಷ್ಠಿತ ಆ್ಯಶಸ್ ಸರಣಿಯು ಒಪ್ಟಸ್ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಉಭಯ ತಂಡಗಳು ಐದು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡುವ ಉತ್ಸಾಹದಲ್ಲಿವೆ. ಆಸ್ಟ್ರೇಲಿಯ ತಂಡವು ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್ವುಡ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಈ ಇಬ್ಬರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾರ್ಕ್ ವುಡ್ ಜೊತೆಗೆ ಜೋಪ್ರಾ ಆರ್ಚರ್ ಮರಳಿಕೆಯಿಂದಾಗಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಆತಿಥೇಯ ಆಸ್ಟ್ರೇಲಿಯ ತಂಡವು ಆರಂಭಿಕ ಬ್ಯಾಟರ್ ಜಾಕ್ ವೆದರಾಲ್ಡ್ ಹಾಗೂ ವೇಗದ ಬೌಲರ್ ಬ್ರೆಂಡನ್ ಡೊಗೆಟ್ ಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಿದೆ. ಡೊಗೆಟ್ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಚೊಚ್ಚಲ ಪಂದ್ಯವನ್ನಾಡಲಿರುವ ಆಸ್ಟ್ರೇಲಿಯದ ಮೊದಲ ವೇಗದ ಬೌಲರ್ ಆಗಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಅವಕಾಶವನ್ನು ಬಳಸಿಕೊಂಡು ಸರಣಿಯಲ್ಲಿ ಆರಂಭದಲ್ಲೇ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ. ► ಅಂಕಿ ಅಂಶ ► ಆಸ್ಟ್ರೇಲಿಯ ತಂಡವು ತಾಯ್ನಾಡಿನಲ್ಲಿ ಆಡಿರುವ ಹಿಂದಿನ 15 ಆ್ಯಶಸ್ ಪಂದ್ಯಗಳ ಪೈಕಿ 13ರಲ್ಲಿ ಗೆಲುವು, 2ರಲ್ಲಿ ಡ್ರಾ ಸಾಧಿಸಿದೆ. 2011ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಸೋತಿತ್ತು. ► ಪರ್ತ್ 2017-18ರಲ್ಲಿ ಕೊನೆಯ ಬಾರಿ ಆ್ಯಶಸ್ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಆಗ ಆಸ್ಟ್ರೇಲಿಯವು ಇನಿಂಗ್ಸ್ ಹಾಗೂ 41 ರನ್ಗಳಿಂದ ಜಯ ಸಾಧಿಸಿತ್ತು. ► ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಆಗಿ ವಸೀಂ ಅಕ್ರಂ ದಾಖಲೆ ಮುರಿಯಲು ಮಿಚೆಲ್ ಸ್ಟಾರ್ಕ್ಗೆ ಸರಣಿಯಲ್ಲಿ 13 ವಿಕೆಟ್ಗಳನ್ನು ಪಡೆಯಬೇಕಾಗಿದೆ. ►► ಪಂದ್ಯ ಆರಂಭದ ಸಮಯ: ಬೆಳಗ್ಗೆ 7:50 (ಭಾರತೀಯ ಕಾಲಮಾನ)
Chikkamagaluru | ಚಿರತೆ ದಾಳಿಗೆ 5 ವರ್ಷದ ಮಗು ಬಲಿ
ಮನೆಯವರ ಮುಂದೆಯೇ ಮಗುವನ್ನು ಹೊತ್ತೊಯ್ದಿದ್ದ ಚಿರತೆ
ವಿಶ್ವ ಬಾಕ್ಸಿಂಗ್ ಫೈನಲ್ಸ್ | ಮೀನಾಕ್ಷಿ, ಪ್ರೀತಿ, ಅರುಂಧತಿ, ನೂಪುರ್ ಗೆ ಚಿನ್ನ
ಹೊಸದಿಲ್ಲಿ, ನ.20: ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಮಹಿಳಾ ಬಾಕ್ಸರ್ಗಳು 2025ರ ಆವೃತ್ತಿಯ ವಿಶ್ವ ಬಾಕ್ಸಿಂಗ್ ಫೈನಲ್ಸ್ ಟೂರ್ನಿಯಲ್ಲಿ ಮನಸೂರೆಗೊಂಡಿದ್ದಾರೆ. ಪುರುಷ ಬಾಕ್ಸರ್ಗಳು ನಾಲ್ಕು ಬೆಳ್ಳಿ ಪದಕಗಳನ್ನು ಜಯಿಸಿದ್ದು ಈ ಮೂಲಕ ಆತಿಥೇಯರು ಪ್ರಾಬಲ್ಯ ಸಾಧಿಸಿದ್ದಾರೆ. ಶಾಹೀದ್ ವಿಜಯ ಸಿಂಗ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಮೀನಾಕ್ಷಿ(48ಕೆಜಿ), ಪ್ರೀತಿ(54 ಕೆಜಿ), ಅರುಂಧತಿ ಚೌಧರಿ(70ಕೆಜಿ) ಹಾಗೂ ನೂಪುರ್(80+ಕೆಜಿ)ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗಿಂತ ಮೊದಲು ಭಾರತವು ತನ್ನ ಪ್ರಾಬಲ್ಯ ಮೆರೆದಿದೆ. ಪುರುಷರ ಫೈನಲ್ಸ್ ನಲ್ಲಿ ಜದುಮಣಿ ಸಿಂಗ್, ಪವನ್ ಬರ್ಟ್ವಾಲ್, ಅವಿನಾಶ್ ಹಾಗೂ ಅಂಕುಶ್ ಪಂಘಾಲ್ ತಲಾ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಏಶ್ಯನ್ ಚಾಂಪಿಯನ್ ಫೋಝಿಲೋವಾರನ್ನು 5-0 ಅಂತರದಿಂದ ಸದೆಬಡಿದಿರುವ ಮೀನಾಕ್ಷಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು. ಪ್ರೀತಿ ಇಟಲಿಯ ಸಿರಿನ್ ಚರಾಬಿ ಅವರನ್ನು 5-0 ಅಂತರದಿಂದ ಸೋಲಿಸಿ ಮತ್ತೊಂದು ಚಿನ್ನ ಜಮೆ ಮಾಡಿದರು. 18 ತಿಂಗಳ ನಂತರ ಸ್ಪರ್ಧಾತ್ಮಕ ಬಾಕ್ಸಿಂಗ್ಗೆ ಮರಳಿದ ಮಾಜಿ ಯೂತ್ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಉಜ್ಬೇಕಿಸ್ತಾನದ ಅಝಿಝಾ ರೊಕಿರೋವಾರನ್ನು 5-0 ಅಂತರದಿಂದ ಮಣಿಸಿದರು. ನೂಪುರ್ ಉಜ್ಬೇಕಿಸ್ತಾನದ ಸೊಟಿಂಬೋವಾ ಓಲ್ಟಿನಾಯ್ ಅವರನ್ನು 3-2 ಅಂತರದಿಂದ ಮಣಿಸುವ ಮೂಲಕ ಗುರುವಾರ ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದುಕೊಟ್ಟರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾರತವು ನಾಲ್ಕು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟುಕೊಂಡಿತು. 50 ಕೆಜಿ ವಿಭಾಗದಲ್ಲಿ ಜದುಮಣಿ ಸಿಂಗ್(50ಕೆಜಿ) ಉಜ್ಬೇಕಿಸ್ತಾನದ ಅಸಿಲ್ಬೆಕ್ ಜಲಿಲೋವ್ ಎದುರು 1-4 ಅಂತರದಿಂದ ಸೋತಿದ್ದಾರೆ. 55 ಕೆಜಿ ವಿಭಾಗದಲ್ಲಿ ಪವನ್ ಬರ್ಟ್ವಾಲ್, ಸಮಂದರ್ ಒಲಿಮೊವ್ ವಿರುದ್ಧ ಸೋತಿದ್ದಾರೆ. ಅವಿನಾಶ್ ಜಮ್ವಾಲ್(65 ಕೆಜಿ)ಜಪಾನಿನ ಅನುಭವಿ ಬಾಕ್ಸರ್ ಶಿಯೊನ್ ನಿಶಿಯಾಮಾ ಎದುರು 1-4 ಅಂತರದಿಂದ ಶರಣಾದರು. ಅಂಕುಶ್ ಪಾಂಘಾಲ್(80ಕೆಜಿ)ಇಂಗ್ಲೆಂಡ್ನ ಹಾಲಿ ಚಾಂಪಿಯನ್ ಶಿಟ್ಟು ಓಲಾಡಿಮೇಜಿ ವಿರುದ್ಧ ಸೋತಿದ್ದಾರೆ.
ಕಲಬುರಗಿ | ನ.21ರಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ
ಕಲಬುರಗಿ: 'ಮಾದರಿ ನೆರೆಹೊರೆ, ಮಾದರಿ ಸಮಾಜ' ಎಂಬ ಶೀರ್ಷಿಕೆಯಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಇದೇ ನ.21ರಿಂದ 30ರವರೆಗೆ ನಗರದ ಸಂತ್ರಾಸ್ ವಾಡಿಯಲ್ಲಿರುವ ಹಿದಾಯತ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡರಾದ ಮುಹಮ್ಮದ್ ಮಿನ್ಹಾಝುದ್ದೀನ್ ಹುಜೂರ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಹಮ್ಮದ್ ಮಿನ್ಹಾಝುದ್ದೀನ್, 10 ದಿನಗಳ ಕಾಲ ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ, ಮೆರವಣಿಗೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನೆರೆಹೊರೆಯರ ಹಕ್ಕುಗಳು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದೀರ್, ಗುಲಾಮ್ ಮುಸಫ್ತಾ, ಸಯ್ಯದ್ ಇಲ್ಯಾಸ್ ಮುಹಿಯುದ್ದೀನ್, ಅಲ್ಲಾವುದ್ಧೀನ್ ಮುಹಮ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಂದೆಯ ಎದುರೇ ಮಗಳನ್ನ ಹೊತ್ತೊಯ್ದ ಚಿರತೆ - ಚಿಕ್ಕಮಗಳೂರಿನಲ್ಲಿ ನಡದ ಘಟನೆ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಚಿರತೆ ಕಾಟ ಜಾಸ್ತಿಯಾಗಿದೆ. ತರೀಕೆರೆಯ ಶಿವಪುರ ಬಳಿಯಲ್ಲಿರುವ ಅಡಕೆ ತೋಟದಲ್ಲಿರುವ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳನ್ನು ಚಿರತೆಯೊಂದು ಹೊತ್ತೊಯ್ದಿದೆ. ನ. 20ರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ತೋಟದಲ್ಲಿ ಧಾರವಾಡ ಮೂಲದ ಬಸವರಾಜ ಮತ್ತು ರೇಣುಕಾ ದಂಪತಿಗಳು ಕೆಲಸ ಮಾಡುತ್ತಿದ್ದರು. ತೋಟದಲ್ಲಿ ತಂದೆ ಬಸವರಾಜ ಕೆಲಸ ಮಾಡುವಾಗ ಆತನ ಮಗಳನ್ನು ಹೊತ್ತೊಯ್ದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್: ಶುಭಮನ್ ಗಿಲ್ ಔಟ್
ನಾಯಕನ ಬದಲಿಗೆ ಆಡಲು ಸುದರ್ಶನ್, ನಿತೀಶ್ ರೆಡ್ಡಿ ಮಧ್ಯೆ ಪೈಪೋಟಿ
ಯಾದಗಿರಿ | ಕಾರು ಢಿಕ್ಕಿಯಾಗಿ 12 ಕುರಿಗಳು ಸಾವು
ಯಾದಗಿರಿ: ಕಡೇಚೂರು ಗ್ರಾಮದ ಹೊರವಲಯದಲ್ಲಿ ಹಾದು ಹೋಗುವ ಯಾದಗಿರಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಕುರಿ ಹಿಂಡಿಗೆ ಕಾರು ಢಿಕ್ಕಿಯಾಗಿ ಸುಮಾರು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದೆ. 14 ಕುರಿಗಳು ಗಂಭೀರವಾಗಿ ಗಾಯಗೊಂಡಿದೆ. ಗುರುವಾರ ಬೆಳಗ್ಗೆ ಕುರಿಗಳು ರಸ್ತೆ ದಾಟುವಾಗ ರಾಯಚೂರು ಮಾರ್ಗವಾಗಿ ವೇಗವಾಗಿ ಬಂದ ಕಾರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿಗಳ ಹಿಂಡಿಗೆ ಢಿಕ್ಕಿ ಹೊಡೆದಿದೆ. ಮಲ್ಲಪ್ಪ ಚನ್ನಮಲ್ಲಪ್ಪ ತೋಳನೋರ್ ಹಾಗೂ ಮಲ್ಲಪ್ಪ ಮಲ್ಹಾ ಅವರಿಗೆ ಸೇರಿದ 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರ ಮೌಲ್ಯ 1ಲಕ್ಷ 40 ಸಾವಿರ ರೂ. ಎಂದು ಹೇಳಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ: ದಂಡ ಪಾವತಿಗೆ ಶೇ 50 ಡಿಸ್ಕೌಂಟ್! ಯಾರಿಗೆ ಅನ್ವಯ? ಏನೆಲ್ಲಾ ನಿಯಮ?
ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಈ ರಿಯಾಯಿತಿ ಲಭ್ಯವಿದ್ದು, ಸಾರಿಗೆ ಇಲಾಖೆಯ ಹಳೆಯ ಪ್ರಕರಣಗಳಿಗೂ ಇದೇ ಮೊದಲ ಬಾರಿಗೆ ವಿನಾಯಿತಿ ನೀಡಲಾಗಿದೆ. ವಾಹನ ಮಾಲೀಕರು ಸಂಬಂಧಪಟ್ಟ ಕಚೇರಿಗಳಿಗೆ ತೆರಳಿ ಬಾಕಿ ದಂಡ ಪಾವತಿಸಬಹುದು.
JDSಗೆ ಹೊಸ ಸಾರಥಿ ಆಯ್ಕೆ ಚರ್ಚೆ; ನಿಖಿಲ್ ಕುಮಾರಸ್ವಾಮಿ ಪರ ಪಕ್ಷದಲ್ಲಿ ಹೆಚ್ಚಿದ ಒಲವು
ಜೆಡಿಎಸ್ನ ರಾಜ್ಯ- ರಾಷ್ಟ್ರೀಯ ಪರಿಷತ್ ಸಭೆ ಹಾಗೂ ರಾಷ್ಟ್ರೀಯ ಸಮಾವೇಶ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಕ್ಷದ ಬೆಳ್ಳಿಹಬ್ಬ ಆಚರಣೆಯೂ ಶನಿವಾರ ನಡೆಯಲಿದ್ದು, ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಚುನಾಯಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಡಲು ಹಲವು ರೀತಿಯ ಯೋಜನೆಗಳನ್ನು ಹೂಡಲಾಗುತ್ತಿದೆ ಎನ್ನಲಾಗಿದೆ.
100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಮುಶ್ಫಿಕುರ್ರಹೀಂ
ಭಾರತೀಯ ಬ್ಯಾಟರ್ ಗೂ ಸಾಧ್ಯವಾಗದ ಅಪರೂಪದ ಸಾಧನೆಗೈದ ಬಾಂಗ್ಲಾದೇಶದ ಆಟಗಾರ
CET Good News: ಈ ಮಕ್ಕಳಿಗೂ ಸಿಇಟಿಯಲ್ಲಿ ಅವಕಾಶ: ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್
CET Good News: ಕರ್ನಾಟಕ ಸರ್ಕಾರವು ಸಿಇಟಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್ನ್ಯೂಸ್ ನೀಡಿದೆ. ಕರ್ನಾಟಕದಲ್ಲಿ ಸಿಇಟಿಗೆ ಸಂಬಂಧಿಸಿದಂತೆ ಹೊಸದೊಂದು ಬಿಗ್ ಅಪ್ಡೇಟ್ಸ್ ನೀಡಲಾಗಿದೆ. ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ಕಲ್ಪಿಸಿದ್ದು, ಈವರೆಗೆ 180 ಜನ ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ. ಇದರೊಂದಿಗೆ ಮತ್ತೊಂದು
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ತೆರೆ: ಡೀಪ್ಟೆಕ್ ನವೋದ್ಯಮಗಳಿಗೆ 400 ಕೋಟಿ ನೆರವು ಘೋಷಣೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸತತ ಮೂರು ದಿನಗಳ ಕಾಲ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ತೆರೆ ಕಂಡಿದ್ದು, ರಾಜ್ಯ ಸರಕಾರ ಮತ್ತು ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರಿಂದ (ವಿಸಿ) ಡೀಪ್ಟೆಕ್ ನವೋದ್ಯಮಗಳಿಗೆ ನೆರವಾಗಲು 400 ಕೋಟಿ ಘೋಷಣೆ ಮಾಡಲಾಗಿದೆ. ಇಲ್ಲಿನ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೊನೆಯ ದಿನವಾದ ಗುರುವಾರ ಹಮ್ಮಿಕೊಂಡಿದ್ದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಸಮಾರೋಪ ಸಮಾರಂಭದಲ್ಲಿ ಡೀಪ್ಟೆಕ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಇದೇ ಮೊದಲ ಬಾರಿಗೆ 400 ಕೋಟಿ ಮೊತ್ತದ ನೆರವು ನೀಡಲಾಗಿದೆ. ಈ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಗಗನಯಾನಿ ಶುಭಾಂಶು ಶುಕ್ಲಾ, ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ಸೇರಿದಂತೆ ಹಲವು ಗಣ್ಯರ ಆಗಮನ ಗಮನ ಸೆಳೆಯಿತು. ಜತೆಗೆ, 57ಕ್ಕೂ ಹೆಚ್ಚು ದೇಶಗಳ 20,680 ಪ್ರತಿನಿಧಿಗಳು ತಂತ್ರಜ್ಞಾನ ಶೃಂಗಸಭೆಯ ವಿವಿಧ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. 46,389ಕ್ಕೂ ಹೆಚ್ಚು ಉದ್ದಿಮೆ ಸಂದರ್ಶಕರು ವಹಿವಾಟು ವೃದ್ಧಿ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಟೇಕ್ ಮೇಳಕ್ಕೆ ಭೇಟಿ ನೀಡಿದವರ ಒಟ್ಟಾರೆ ಸಂಖ್ಯೆಯು 92,500 ಸಾವಿರ ಮೀರಿತ್ತು. ಶೃಂಗಸಭೆಯಲ್ಲಿ ಕೃತಕ ಜಾಣ್ಮೆ, ಡೀಪ್ಟೆಕ್, ಜೈವಿಕ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತ 100 ವಿಚಾರಗೋಷ್ಠಿಗಳಲ್ಲಿ ಉದ್ಯಮದ 630ಕ್ಕೂ ಹೆಚ್ಚು ಭಾಷಣಕಾರರು ತಮ್ಮ ಚಿಂತನೆಗಳನ್ನು ಹಂಚಿಕೊಂಡರು. 1,015 ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿದರು. ಭಾಗವಹಿಸಿದ 12,000ಕ್ಕೂ ಹೆಚ್ಚು ಜನರಲ್ಲಿ ಸುಸ್ಥಿರತೆಯ ಜಾಗೃತಿ ಮೌಲ್ಯಮಾಪನ, ಸುಸ್ಥಿರ ಮಳಿಗೆ ಪ್ರಶಸ್ತಿಗಳಿಗಾಗಿ 850 ಮಳಿಗೆಗಳ ಮೌಲ್ಯಮಾಪನ. ನವೋದ್ಯಮಗಳು 36 ಹೂಡಿಕೆದಾರರಿಗೆ 146 ಹೂಡಿಕೆ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದವು. ಜತೆಗೆ, ಶೃಂಗಸಭೆಯ ಸಮಯದಲ್ಲಿ ಒಟ್ಟು 107 ಮಾರ್ಗದರ್ಶಕರ ಸಭೆಗಳು ನಡೆದಿದ್ದು, ಒಟ್ಟಾರೆ, ಮೂರು ದಿನಗಳವರೆಗೆ ನಡೆದ ಬೆಂಗಳೂರು ಟೆಕ್ ಶೃಂಗಸಭೆಯು ಗುರುವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಭವಿಷ್ಯದ ಹತ್ತು ವರ್ಷಗಳು ವೈಜ್ಞಾನಿಕ ನಾವೀನ್ಯತೆ ಆಧರಿಸಿದ ತಂತ್ರಜ್ಞಾನಗಳಾದ ಕೃತಕ ಜಾಣ್ಮೆ, ರೋಬೊಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನಗಳ ದಶಕವಾಗಿರಲಿದ್ದು, ಬೆಂಗಳೂರಿನ ಟೆಕ್ ಸಮ್ಮೇಳನವು ಅದಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ಮಾರುಕಟ್ಟೆಗಳನ್ನು ಸೃಷ್ಟಿಸುವಲ್ಲಿ ಡೀಪ್ಟೆಕ್ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು, ಮಾರುಕಟ್ಟೆ ಅವಕಾಶಗಳ ಮಹತ್ವ ಮನದಟ್ಟು ಮಾಡಿಕೊಡುವಲ್ಲಿ ತಂತ್ರಜ್ಞಾನ ಶೃಂಗಸಭೆಯು ಗಮನಾರ್ಹ ಯಶಸ್ಸು ಸಾಧಿಸಿದೆ. ಡೀಪ್ಟೆಕ್ ಪ್ರಯೋಜನವು ಬರೀ ಕರ್ನಾಟಕಕ್ಕೆ, ಭಾರತಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದೊರೆಯಲಿದೆ ಎಂದು ಅವರು ತಿಳಿಸಿದರು. ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲಿಸ್ಟ್ ಹೂಡಿಕೆದಾರರು ಸರಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ನವೋದ್ಯಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕವು ಜಾಗತಿಕ ನವೋದ್ಯಮಗಳಲ್ಲಿ ಮುಂಚೂಣಿ ಐದನೆ ಸ್ಥಾನ ಗಳಿಸುವ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲು ಭವಿಷ್ಯ ರೂಪಿಸುವವರ ಕೊಡುಗೆ ತುಂಬ ಮಹತ್ವದ್ದಾಗಿದೆ ಎಂದು ಅವರು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ, ನಿರ್ದೇಶಕ ರಾಹಲ್ ಸಂಕನೂರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿನ ಭಾರತದ ಭವಿಷ್ಯ ಪ್ರಖರವಾಗಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಗಗನಯಾನ ಕೈಗೊಳ್ಳಿದ್ದಾರೆ. ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಉಜ್ವಲ ಭವಿಷ್ಯ ಇದೆ. ದೇಶದ 300 ನವೋದ್ಯಮಗಳು ಈಗಾಗಲೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇಂತಹ ನವೋದ್ಯಮಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಲಿದೆ. - ಶುಭಾಂಶು ಶುಕ್ಲಾ, ಗಗನಯಾನಿ ನವೋದ್ಯಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯ. ಉದ್ಯೋಗಿಗಳು, ಗ್ರಾಹಕರು, ಸರಕಾರದ ಜೊತೆ ವಿಶ್ವಾಸಾರ್ಹತೆಯಿಂದ ವರ್ತಿಸುವುದನ್ನು ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉದ್ಯಮ ವಹಿವಾಟಿನಲ್ಲಿ ವಿಶ್ವಾಸಾರ್ಹತೆ ರೂಢಿಸಿಕೊಂಡರೆ ಹಣ, ಸಂಪತ್ತು ಯಶಸ್ಸು ತನ್ನಷ್ಟಕ್ಕೆ ತಾವೇ ಹಿಂಬಾಲಿಸಿಕೊಂಡು ಬರುತ್ತವೆ. -ಅಂಕೂರ್ ವಾರಿಕು, ಲೇಖಕ ಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವ ಕಪ್ ಗೆದ್ದ ನಂತರ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ನತ್ತ ಆಕರ್ಷಿತರಾಗುತ್ತಿದ್ದಾರೆ. ಕ್ರೀಡಾಂಗಣಕ್ಕೆ ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. -ರಿಚಾ ಘೋಷ್, ಕ್ರಿಕೆಟ್ ಆಟಗಾರ್ತಿ ಕ್ರೀಡಾಂಗಣದಲ್ಲಿ ಒತ್ತಡವನ್ನು ಸಮಚಿತ್ತದಿಂದ ಎದುರಿಸಿದರೆ ಸೋಲನ್ನೂ ಗೆಲುವಾಗಿ ಬದಲಾಯಿಸಬಹುದು. ಕ್ರೀಡೆಯಲ್ಲಿನ ಸೋಲು ಹಲವಾರು ಪಾಠ ಕಲಿಸುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಸೋಲಿನಿಂದ ಧೃತಿಗೆಡಬಾರದು. -ಸಾನಿಯಾ ಮಿರ್ಝಾ, ಟೆನಿಸ್ ತಾರೆ
ರಬಿಹ್ ಅಲಮೆದ್ದೀನ್, ಪೆಟ್ರೀಷಿಯಾ ಸ್ಮಿತ್ ಗೆ 2025ರ ನ್ಯಾಷನಲ್ ಬುಕ್ ಪ್ರಶಸ್ತಿ
ನ್ಯೂಯಾರ್ಕ್, ನ.20: ಅಮೆರಿಕಾದ ನ್ಯಾಷನಲ್ ಬುಕ್ ಫೌಂಡೇಷನ್ ಕೊಡಮಾಡುವ 2025ರ ನ್ಯಾಷನಲ್ ಬುಕ್ ಪ್ರಶಸ್ತಿಗೆ ಲೆಬನಾನಿನ ಕಾದಂಬರಿಕಾರ ರಬಿಹ್ ಅಲಮೆದ್ದೀನ್ ಮತ್ತು ಚಿಕಾಗೋದ ಸಾಹಿತಿ ಪೆಟ್ರೀಷಿಯಾ ಸ್ಮಿತ್ ಆಯ್ಕೆಯಾಗಿದ್ದಾರೆ. ಕಾದಂಬರಿ ವಿಭಾಗದಲ್ಲಿ ಅಲಮೆದ್ದೀನ್ ಅವರ `ದಿ ಟ್ರೂ ಸ್ಟೋರಿ ಆಫ್ ರಾಜಾ ದಿ ಗಲ್ಲಿಬಲ್(ಆ್ಯಂಡ್ ಹಿಸ್ ಮದರ್), ಕವಿತೆಗಳ ವಿಭಾಗದಲ್ಲಿ ಪೆಟ್ರೀಷಿಯಾ ಸ್ಮಿತ್ ಅವರ `ದಿ ಇಂಟೆನ್ಷನ್ ಆಫ್ ಥಂಡರ್', ಸಾಕ್ಷ್ಯಚಿತ್ರ ವಿಭಾಗದಲ್ಲಿ ಈಜಿಪ್ಟ್ ಮೂಲದ ಒಮರ್ ಎಲ್ ಅಕ್ಕಾಡ್, ಯುವ ಸಾಹಿತಿಗಳ ವಿಭಾಗದಲ್ಲಿ ಇರಾನ್ ಮೂಲದ ಡೇನಿಯಲ್ ನಯೇರಿ , ಅನುವಾದ ಸಾಹಿತ್ಯ ವಿಭಾಗದಲ್ಲಿ ಅಮೆರಿಕಾದ ರೋಬಿನ್ ಮೆಯರ್ಸ್ ಅನುವಾದಿಸಿದ ಅರ್ಜೆಂಟೀನಾ ಸಾಹಿತಿ ಗ್ಯಾಬ್ರಿಯೆಲಾ ಕ್ಯಾಬೆಝಾನ್ ಕೆಮರಾ ಅವರ ಕೃತಿ ಪ್ರಶಸ್ತಿ ಪಡೆದಿದೆ.
ಉಡುಪಿ: ನ.22ರಂದು 10 ಮಂದಿ ಸಾಧಕರಿಗೆ ಪ್ರೇರಣಾಶ್ರೀ ಪ್ರಶಸ್ತಿ ಪ್ರದಾನ
ಉಡುಪಿ: ಕಳೆದ ಅ.24ರಂದು ಕನ್ನಡ ಸಂಘ ಬಹರೇನ್ನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ 10ನೇ ವಿಶ್ವದಾಖಲೆಯನ್ನು ಬರೆದ ಉಡುಪಿಯ ತನುಶ್ರೀ ಪಿತ್ರೋಡಿ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನ.22ರಂದು ಸೈಂಟ್ ಸಿಸಿಲಿಸ್ ಹೈಸ್ಕೂಲ್ ಸಭಾಂಗಣದಲ್ಲಿ ಅಪರಾಹ್ನ 3:00ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ. ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ತನುಶ್ರೀ ಕೋಟ್ಯಾನ್ ಅವರು 2017ರಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವಾಗ ತನ್ನ ಮೊದಲ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಮೊದಲ ವಿಶ್ವದಾಖಲೆ ಬರೆದಿದ್ದರು. ಆ ಬಳಿಕ ಅವರು ಸತತವಾಗಿ 10 ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಬಹರೇನ್ನಲ್ಲಿ ನಡೆದ ಪ್ರದರ್ಶನದಲ್ಲಿ ಅವರು 50 ನಿಮಿಷಗಳ ಅವಧಿಯಲ್ಲಿ 333 ಆಸನಗಳನ್ನು ಪ್ರದರ್ಶಿಸುವ ಮೂಲಕ ತಾನೇ ಬರೆದ 43 ನಿಮಿಷಗಳಲ್ಲಿ 245 ಆಸನಗಳ ದಾಖಲೆಯನ್ನು ಉತ್ತಮ ಪಡಿಸಿದ್ದರು. ಇದೀಗ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನ.22ರಂದು ವಿತರಿಸಲಾಗುತ್ತದೆ ಎಂದು ತನುಶ್ರೀ ಅವರ ತಂದೆ ಉದಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 10 ಮಂದಿ ಸಾದಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ಶಾಸಕ ಯಶಪಾಲ್ ಸುವರ್ಣ ಅವರನ್ನು ಸಾಧಕರನ್ನು ಗೌರವಿಸಲಿದ್ದಾರೆ ಎಂದೂ ಅವರು ಹೇಳಿದರು. ಪ್ರೇರಣಾಶ್ರೀ ಸಾಧಕರಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸಂಗೀತ ಗುರು ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ, ಮತ್ಸೋದ್ಯಮಿ ಸಾಧು ಸಾಲ್ಯಾನ್ ಮಲ್ಪೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಯೋಗ ಶಿಕ್ಷಕಿ ಅಖಿಲಾ ಶೆಟ್ಟಿ, ಪ್ರಕಾಶ್ ಅಂದ್ರಾದೆ, ರಕ್ತದಾನಿ ರಾಕೇಶ್ ಸುವರ್ಣ ಬೊಳ್ಜೆ ಮುಂತಾದವರು ಸೇರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತನುಶ್ರೀ ಪಿತ್ರೋಡಿ, ರಾಘವೇಂದ್ರ ದೇವಾಡಿಗ, ವಿಜಯ ಕೋಟ್ಯಾನ್ ಪಿತ್ರೋಡಿ ಉಪಸ್ಥಿತರಿದ್ದರು.
ಸಭೆಗೆ ಮಮ್ದಾನಿ ಕೋರಿಕೆಯನ್ನು ನಾವು ಒಪ್ಪಿದ್ದೇವೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ನ.20: ನ್ಯೂಯಾರ್ಕ್ನ ಚುನಾಯಿತ ಮೇಯರ್ ಝೊಹ್ರಾನ್ ಮಮ್ದಾನಿ ತನ್ನನ್ನು ಶುಕ್ರವಾರ(ನ.21) ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. `ನ್ಯೂಯಾರ್ಕ್ ನಗರದ ಕಮ್ಯುನಿಸ್ಟ್ ಮೇಯರ್ ಝೊಹ್ರಾನ್ ಮಮ್ದಾನಿ ನನ್ನನ್ನು ಭೇಟಿಯಾಗಲು ಬಯಸಿರುವುದಾಗಿ ಕೇಳಿಕೊಂಡರು. ಅದಕ್ಕೆ ನಾವು ಸಮ್ಮತಿಸಿದ್ದು ಈ ಭೇಟಿ ನ. 21ರಂದು ಶ್ವೇತಭವನದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಮಮ್ದಾನಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದರೆ, ರಿಪಬ್ಲಿಕನ್ ಅಭ್ಯರ್ಥಿಯಾಗಿ ಕರ್ಟಿಸ್ ಸ್ಲಿವಾ, ಸ್ವತಂತ್ರ ಅಭ್ಯರ್ಥಿಯಾಗಿ ಆಂಡ್ರ್ಯೂ ಕ್ಯುಮೊ ಕಣದಲ್ಲಿದ್ದರು. `ಮಮ್ದಾನಿಯ ಗೆಲುವು ನ್ಯೂಯಾರ್ಕ್ ನಗರಕ್ಕೆ ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವಿಪತ್ತು ಆಗಲಿದೆ' ಎಂದು ಪ್ರಚಾರದ ಸಂದರ್ಭ ಟ್ರಂಪ್ ಎಚ್ಚರಿಕೆ ನೀಡಿದ್ದರು.
ರಾಯಚೂರು | ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಕಲಾ ಜಾಥಾಕ್ಕೆ ಚಾಲನೆ
ರಾಯಚೂರು : ರಾಜ್ಯಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದ ಮೂಲಕ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಹಮ್ಮಿಕೊಂಡಿರುವ ಕಲಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಮಟ್ಟದ ಸಮಿತಿಯ ಉಪಾಧ್ಯಕ್ಷರಾದ ನಾಗೇಂದ್ರ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ ಹಾಗೂ ತಾಲೂಕುಮಟ್ಟದ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಕಲಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಹನುಮಂತಪ್ಪ ಜಾಲಿಬೆಂಚಿ, ಜನತೆಗೆ ಮಾತು ನೀಡಿದಂತೆ ರಾಜ್ಯ ಸರಕಾರ ವಾರ್ಷಿಕವಾಗಿ 52.000 ಕೋಟಿ ರೂ ಬಳಕೆ ಮಾಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬದ್ಧತೆಯನ್ನು ಉಳಿಸಿಕೊಂಡಿದೆ. ಈ ಯೋಜನೆಗಳಿಂದ ರಾಜ್ಯದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಈ ಬಗ್ಗೆ ಪ್ರಚಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದರು. ನಾಗೇಂದ್ರ ಮಟಮಾರಿ ಮಾತನಾಡಿ, ರಾಜ್ಯದ 7 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ಬದುಕು ನೀಡಿದೆ. ರಾಜ್ಯದ ಶೇ.96ರಷ್ಟು ಜನ ಒಂದಲ್ಲಾ ಒಂದು ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಮಾಹಿತಿಯು ಜಿಲ್ಲೆಯ ಪ್ರತಿ ಮನೆಮನೆ ಬಾಗಿಲಿಗೆ ತಲುಪಬೇಕು ಎಂದು ತಿಳಿಸಿದರು. ಪವನ್ ಕಿಶೋರ್ ಪಾಟೀಲ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ರಾಯಚೂರು ಜಿಲ್ಲೆಯಲ್ಲಿ ಸಹ ಅಚ್ಚುಕಟ್ಟಾಗಿ ಅನುಷ್ಠಾನವಾಗುತ್ತಿವೆ. ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಗೆ 5ನೇ ಸ್ಥಾನ ಲಭಿಸಿದೆ. ಯುವನಿಧಿ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿಯೇ ನಾವು 3ನೇ ಸ್ಥಾನದಲ್ಲಿದ್ದೇವೆ. ಕಲಾ ಜಾಥಾ ತಂಡದಲ್ಲಿರುವ ಎಲ್ಲರೂ ಪ್ರಚಾರ ರಾಯಭಾರಿಗಳು ನಾವು ಎಂದು ಭಾವಿಸಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಶಿಸ್ತುಬದ್ಧವಾಗಿ ನಡೆಸಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ ಮಾತನಾಡಿ, ಅರ್ಹ ಪ್ರತಿಯೊಬ್ಬರು ಸಹ ಈ ಪಂಚ ಗ್ಯಾರಂಟಿ ಯೋಜನೆಗಳ ಪಾಲುದಾರರಾಗುವ ನಿಟ್ಟಿನಲ್ಲಿ ಪ್ರಚಾರ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದು ಹೇಳಿದರು.
ಸೈಬರ್ ವಂಚನೆಗೆ ಸಿಲುಕಿ ಮಾಡಿದ್ದ ಸಾಲ ತೀರಿಸಲು ಕಳ್ಳನಾದ ಟೆಕ್ಕಿ ; ಸಂಬಂಧಿಕರ ಚಿನ್ನಕ್ಕೆ ಕನ್ನ ಹಾಕಿ ಜೈಲು ಪಾಲು
ಸೈಬರ್ ವಂಚನೆಗೆ 50 ಲಕ್ಷ ರೂ. ಕಳೆದುಕೊಂಡ ಸಾಫ್ಟ್ವೇರ್ ಎಂಜಿನಿಯರ್, ಆ ಸಾಲ ತೀರಿಸಲು ಬೇರೆ ದಾರಿಯಿಲ್ಲದೇ ಪರಿಚಯಸ್ಥರ ಮನೆಯಿಂದ ಚಿನ್ನಾಭರಣ ದೋಚಲು ಹೋಗಿ ಜೈಲು ಪಾಲಾದ ಘಟನೆ ಬೆಳಕಿಗೆ ಬಂದಿದೆ. ಆಂಧ್ರದ ತಿರುಪತಿ ಮೂಲದ ಕೊತ್ತಾಪು ಷಣ್ಮುಗಂ ರೆಡ್ಡಿ ಎಂಬಾತನನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿ, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಸ್ಪೀಕರ್ ಯು.ಟಿ.ಖಾದರ್
ರಾಷ್ಟ್ರಪತಿಯಿಂದ ʼಸಿಲ್ವರ್ ಎಲಿಫೆಂಟ್ʼ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಕರ್ನಾಟಕ ಸ್ಪೀಕರ್
ರಾಯಚೂರು | ಜಿಲ್ಲಾ ಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆ
ರಾಯಚೂರು : ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಮೇರಾ ಯುವ ಭಾರತ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್, ಕೃಷ್ಣ ತುಂಗೆ, ಎನ್ಸಿಸಿ ಮತ್ತು ಭಾರತ ಸೇವಾದಳದ ಸಂಯುಕ್ತಾಶ್ರಯದಲ್ಲಿ ನವೆಂಬರ್ 20ರಂದು ರಾಯಚೂರು ನಗರದಲ್ಲಿ ಜಿಲ್ಲಾಮಟ್ಟದ ಏಕತಾ ಯಾತ್ರೆ ನಡೆಯಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ನಡೆದ ಜಿಲ್ಲಾಮಟ್ಟದ ಏಕತಾ ಕಾಲ್ನಡಿಗೆ ಯಾತ್ರೆಯು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಶ್ರೀಬಸವೇಶ್ವರ ವೃತ್ತ, ಗಾಂಧಿ ಚೌಕ್, ಚಂದ್ರಮೌಳೇಶ್ವರ ಸರ್ಕಲ್ ಮೂಲಕ ಸಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯಾ ಮಾತನಾಡಿ, ಭಾರತ ದೇಶದ ಏಕೀಕರಣದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಪ್ರೇಮ, ಸಂಘಟನಾತ್ಮಕ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಮಹಾಗನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿರುವ ಪವನ್ ಕಿಶೋರ್ ಪಾಟೀಲ್, ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗೇರಿ, ಮುಖಂಡರಾದ ವೀರನಗೌಡ ಪಾಟೀಲ್, ಯು ನರಸರೆಡ್ಡಿ, ಶಂಕರರೆಡ್ಡಿ, ಸಂತೋಷ ರಾಜಗುರು, ಗೌತಮ ರೆಡ್ಡಿ, ವಿಜಯಕುಮಾರ್ ಸಜ್ಜನ, ವಿದ್ಯಾಸಾಗರ ಚಿಮಣಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಕಳ | ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರಿಗೆ ಗಾಯ
ಕಾರ್ಕಳ: ಬಸ್ಸೊಂದು ಚಾಲಕನ ಹತೋಟಿ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಹಲವು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನ.19ರಂದು ರಾತ್ರಿ ಮಿಯ್ಯಾರ ಗ್ರಾಮದ ಮಿಯ್ಯಾರ್ ಗ್ಲೋರಿಯಸ್ ಆಯಿಲ್ ಮಿಲ್ಲ್ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಾದ ಭಾಗ್ಯ, ಭೂಮಿಕ, ರಾಜೇಶ್ ಜೈನ್, ಶ್ರೀಕಾಂತ್ ಹಾಗೂ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿಲ್ಲಿ ಗಡಿಯಲ್ಲಿ ರೈತರ ಹೋರಾಟಕ್ಕೆ ಐದು ವರ್ಷ : ನ.26ರಂದು ದೇಶಾದ್ಯಂತ ಪ್ರತಿಭಟನೆ ; ರಾಜನ್ ಕ್ಷೀರಸಾಗರ್
ಕಲಬುರಗಿ : ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದಿಲ್ಲಿ ಗಡಿಯಲ್ಲಿ ನಡೆದ ರೈತರ ಹೋರಾಟಕ್ಕೆ ಐದು ವರ್ಷಗಳು ತುಂಬುತ್ತಿವೆ. ಅದರ ಅಂಗವಾಗಿ ನ.26ರಂದು ದೇಶದ ಎಲ್ಲಾ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಅಧ್ಯಕ್ಷ ರಾಜನ್ ಕ್ಷೀರಸಾಗರ್ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜನ್ ಕ್ಷೀರಸಾಗರ್, ರೈತರ ಹೋರಾಟಕ್ಕೆ ಐದು ವರ್ಷ ಕಳೆದರೂ ಬೆಂಬಲ ಬೆಳೆಯನ್ನು ಕಾನೂನು ಬದ್ಧಗೊಳಿಸಲು ಕೇಂದ್ರ ಸರಕಾರ ವಿಫಲವಾಗಿದೆ. ಎಂಎಸ್ಪಿ ಕಾಯ್ದೆ ಇನ್ನೂ ಕೂಡ ಜಾರಿಗೊಳಿಸಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟಾದರೂ ಕೇಂದ್ರ ಸರಕಾರ ಅದನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಣೆ ಮಾಡಿಲ್ಲ. ಸಮರ್ಪಕವಾಗಿ ಪರಿಹಾರವನ್ನೂ ಬಿಡುಗಡೆ ಮಾಡಿಲ್ಲ. ಎನ್ಡಿಆರ್ಎಫ್ ನಿಯಮಗಳನ್ನು ಪರಿಷ್ಕರಿಸಿ ಪರಿಹಾರದಲ್ಲೂ ರೈತರಿಗೆ ವಂಚಿಸಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಐಕೆಎಸ್ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ, ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಚೌಧರಿ, ಮುಖಂಡರಾದ ಸಾಜೀದ್ ಅಹ್ಮದ್ ದಿಗ್ಗಾಂವಕರ್, ಸಿದ್ದಣ್ಣ ಕನ್ನೂರ್, ಶರಣಬಸಪ್ಪ ಗಣಜಲಖೇಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ: ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಸಾಧನೆ
ಕುಂದಾಪುರ: ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾನ್ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆ ಸಿಬಿಎಸ್ಇ ಇದರ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಮುಹಮ್ಮದ್ ಶಂಮ್ರಾಜ್ ಸೈಫುಲ್ಲ 1 ಚಿನ್ನ ಮತ್ತು 1 ಬೆಳ್ಳಿ, ಮುಹಮ್ಮದ್ ಅಯಾನ್ 1 ಚಿನ್ನ ಮತ್ತು 1 ಕಂಚು, ಮೊಹಮ್ಮದ್ ಸಿನಾನ್ 2 ಬೆಳ್ಳಿ, ಮೊಹಮ್ಮದ್ ಫಹಾದ್ 1 ಬೆಳ್ಳಿ, ಮೊಹಮದ್ ಅಬ್ದುಲ್ ನಸೀರ್ ಒಂದು ಬೆಳ್ಳಿ, ಮಹಮ್ಮದ್ ಐಮಾನ್ 2 ಕಂಚು, ಅಬ್ದುಲ್ ಮುಕ್ಷಿತ್ 2 ಕಂಚು, ಮೊಹಮ್ಮದ್ ಝಯಿಧ್ 2 ಕಂಚು, ಖಲೀಫ ಮಹಮ್ಮದ್ ಮುಸ್ಸಬ್ 1 ಕಂಚು, ಅಮೀರ್ ಹಂಝ 1 ಕಂಚಿನ ಪದಕ ಗೆದ್ದುಕೊಂಡಿ ದ್ದಾರೆ. ಈ ಸಾಧನೆ ಮಾಡಿದ ಎಲ್ಲಾ ಆಟಗಾರರನ್ನು ಹಾಗೂ ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
ಬಾಲನ್ಯಾಯ ಮಂಡಳಿ | ನ್ಯಾಯದಾನಕ್ಕಾಗಿ ಕಾಯುತ್ತಿರುವ 50 ಸಾವಿರಕ್ಕೂ ಅಧಿಕ ಮಕ್ಕಳು!
ಶೇ.55ರಷ್ಟು ಪ್ರಕರಣಗಳು ವಿಚಾರಣೆಗೆ ಬಾಕಿ; ರಾಜ್ಯದಲ್ಲಿ ಶೇ.35ರಷ್ಟು ಬಾಲಾಪರಾಧ ಪ್ರಕರಣಗಳ ವಿಚಾರಣೆ ನೆನೆಗುದಿಯಲ್ಲಿ: ವರದಿ
ದಿಲ್ಲಿ ಸ್ಫೋಟ ಪ್ರಕರಣ | ನ್ಐಎಯಿಂದ ಮತ್ತೆ ನಾಲ್ವರು ಶಂಕಿತರ ಬಂಧನ
ಹೊಸದಿಲ್ಲಿ, ನ. 20: ದಿಲ್ಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಮತ್ತು ಉತ್ತರಪ್ರದೇಶದಿಂದ ಮತ್ತೆ ನಾಲ್ವರು ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದ ಶಂಕಿತರ ಸಂಖ್ಯೆ 6ಕ್ಕೆ ತಲುಪಿದೆ ಎಂದು ಎನ್ಐಎಯ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪುಲ್ವಾಮದ ಡಾ. ಮುಝಾಮಿಲ್ ಶಕೀಲ್ ಗನಾಯಿ, ಅನಂತ್ ನಾಗ್ ನ ಡಾ. ಅದೀಲ್ ಅಹ್ಮದ್ ರಾಥರ್, ಲಕ್ನೋದ ಡಾ. ಶಹೀನ್ ಸಯೀದ್, ಶೋಪಿಯಾನದ ಮುಫ್ತಿ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಾಲ್ವರು ಸ್ಫೋಟವನ್ನು ಯೋಜಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ನೇರ ಪಾತ್ರ ವಹಿಸಿರುವುದಾಗಿ ಶಂಕಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಬಳಿಕ ಈ ಬಂಧನಗಳು ಅತ್ಯಂತ ಮುಖ್ಯವಾದವು ಎಂದು ಅವರು ತಿಳಿಸಿದ್ದಾರೆ. ‘‘ಈ ಹಿಂದೆ ಸ್ಫೋಟದಲ್ಲಿ ಬಳಸಿದ ಕಾರಿನ ನೋಂದಾಯಿತ ಮಾಲಕ ಅಮೀರ್ ರಶೀದ್ ಅಲಿ, ಬಾಂಬರ್ ಗೆ ತಾಂತ್ರಿಕ ಬೆಂಬಲ ಹಾಗೂ ಸಾಗಾಟದ ನೆರವು ನೀಡಿದ್ದಾನೆ ಎನ್ನಲಾದ ಜಾಸಿರ್ ಬಿಲಾಲ್ ವಾನಿ ಆಲಿಯಾಸ್ ದಾನಿಶ್ ನನ್ನು ಬಂಧಿಸಿದ್ದೇವೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶ | ಅಂಬೇಡ್ಕರ್ ಕುರಿತು ಸುಳ್ಳು, ಅವಮಾನಕರ ಹೇಳಿಕೆ; ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಪ್ರಕರಣ ದಾಖಲು
ಬಲಿಯಾ, ನ. 20: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ತಪ್ಪು ಮಾಹಿತಿ ಹಾಗೂ ವದಂತಿ ಹರಡಿದ ಆರೋಪದಲ್ಲಿ ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಇಲ್ಲಿನ ಭೀಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಪತಿ ದೇವಿ ಅವರ ಪ್ರತಿನಿಧಿಯೊಬ್ಬರು ಸಲ್ಲಿಸಿದ ದೂರಿನ ಆಧಾರದಲ್ಲಿ ಶಾಂಭವಿ ಪೀಠದ ಮುಖ್ಯಸ್ಥ ಹಾಗೂ ಕಾಳಿ ಸೇನಾದ ಸ್ಥಾಪಕ ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2) ಹಾಗೂ ಐಟಿ ಕಾಯ್ದೆಯ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸೆಸರ ಗ್ರಾಮದ ನಿವಾಸಿಯಾಗಿರುವ ಸ್ವಾಮಿ ಆನಂದ ಸ್ವರೂಪ್ ಫೇಸ್ಬುಕ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅತ್ಯಂತ ಆಕ್ಷೇಪಾರ್ಹ, ದಾರಿತಪ್ಪಿಸುವ ಹಾಗೂ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ದೂರುದಾರ ಹೇಳಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲ ಎಂದು ಸ್ವಾಮಿ ಆನಂದ ಸ್ವರೂಪ್ ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ. ಇದು ಸಮಾಜದಲ್ಲಿ ಜಾತಿ ತಾರತಮ್ಯ, ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುವ ಹೇಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗಳು ಭಾರತೀಯ ಸಂವಿಧಾನದ ಘನತೆಗೆ ಅವಮಾನ ಉಂಟು ಮಾಡುತ್ತದೆ. ಸಮಾಜದಲ್ಲಿ ಪರಸ್ಪರ ಸಾಮರಸ್ಯ ಹಾಗೂ ಭಾತೃತ್ವಕ್ಕೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೆ, ಕೋಮು ಉದ್ವಿಗ್ನತೆ ಹಾಗೂ ಜಾತಿ ದ್ವೇಷವನ್ನು ಸೃಷ್ಟಿಸುತ್ತದೆ ಎಂದು ದೂರುದಾರ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗೂ ತನಿಖೆ ನಡೆಸುತ್ತಿದ್ದಾರೆ ಎಂದು ಸರ್ಕಲ್ ಅಧಿಕಾರಿ (ರಸರ) ಅಲೋಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಮಲ್ಪೆಯ ಮೀನುಗಾರಿಕಾ ಬೋಟು ಮುಳುಗಡೆ: ಐವರು ಮೀನುಗಾರರ ರಕ್ಷಣೆ
ಅಪಾರ ಸೊತ್ತುಗಳು ಸಮುದ್ರಪಾಲು
ಶೇ.80ರಷ್ಟು ಭಿನ್ನಸಾಮರ್ಥ್ಯದವರಿಗಿಲ್ಲ ಆರೋಗ್ಯ ವಿಮೆಯ ರಕ್ಷಣೆ: ಎನ್ಜಿಓ ವರದಿ
ಹೊಸದಿಲ್ಲಿ,ನ.9: ಶೇ.80ರಷ್ಟು ಭಿನ್ನಸಾಮರ್ಥ್ಯದ ಭಾರತೀಯರು ವಿಮೆಯನ್ನು ಹೊಂದಿಲ್ಲ ಹಾಗೂ ಆರೋಗ್ಯ ವಿಮೆಯು ಎಲ್ಲರಿಗೂ ಸಾಮಾನ್ಯವಾಗಿ ಲಭ್ಯವಾಗುವುದನ್ನು ಖಾತರಿಪಡಿಸುವಂತಹ ಕಾನೂನುಗಳಿರುವ ಹೊರತಾಗಿಯೂ, ವಿಮೆಗಾಗಿ ಅರ್ಜಿ ಸಲ್ಲಿಸಿರುವ ಅರ್ಧಾಂಶಕ್ಕಿಂತಲೂ ಅಧಿಕ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಅಹವಾಲುಗಳು ತಿರಸ್ಕೃತವಾಗಿವೆ ಎಂದು ಗುರುವಾರ ಬಿಡುಗಡೆಯಾದ ನೂತನ ಶ್ವೇತಪತ್ರವೊಂದು ತಿಳಿಸಿದೆ. ಹೊಸದಿಲ್ಲಿಯಲ್ಲಿ ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಉದ್ಯೋಗಕ್ಕೆ ಉತ್ತೇಜನಕ್ಕಾಗಿನ ರಾಷ್ಟ್ರೀಯ ಕೇಂದ್ರ ( ಎನ್ಪಿಇಡಿಪಿ) ಗುರುವಾರ ಆಯೋಜಿಸಿದ ದುಂಡುಮೇಜಿನ ಸಮಾವೇಶದಲ್ಲಿ ‘‘ಎಲ್ಲರನ್ನೂ ಒಳಪಡಿಸಿದ ಆರೋಗ್ಯ: ಭಿನ್ನಸಾಮರ್ಥ್ಯ, ತಾರತಮ್ಯ ಹಾಗೂ ಭಾರತದಲ್ಲಿ ಆರೋಗ್ಯ ವಿಮೆ’’ ಶೀರ್ಷಿಕೆಯ ಶ್ವೇತಪತ್ರವನ್ನು ಬಿಡುಗಡೆಗೊಳಿಸಲಾಯಿತು. ಸಂಸದರು, ಶಾಸಕರು, ವಿಮಾದಾರರು ಹಾಗೂ ಭಿನ್ನಸಾಮರ್ಥ್ಯದ ಹಕ್ಕುಗಳ ಪ್ರತಿಪಾದಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂ 5 ಸಾವಿರಕ್ಕೂ ಅಧಿಕ ಭಿನ್ನಸಾಮರ್ಥ್ಯದವರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಸಾರ್ವಜನಿಕ ಹಾಗೂ ಖಾಸಗಿ ವಿಮಾ ಯೋಜನೆಗಳು ಸುಮಾರು 16 ಕೋಟಿ ಭಿನ್ನಸಾಮರ್ಥ್ಯದ ಭಾರತೀಯರಿಗೆ ಲಭಿಸದಂತೆ ಮಾಡುವುದು ಮುಂದುವರಿದಿದೆ ಎಂದು ಶ್ವೇತಪತ್ರದಲ್ಲಿ ಗಮನಸೆಳೆಯಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.80 ಮಂದಿ ತಮಗೆ ಯಾವುದೇ ಆರೋಗ್ಯ ವಿಮೆ ಇಲ್ಲವೆಂದು ಹೇಳಿದ್ದಾರೆ. ಇವರ ಪೈಕಿ ಆರೋಗ್ಯವಿಮೆಗಾಗಿ ಅರ್ಜಿ ಸಲ್ಲಿಸಿದ ಶೇ.53 ಮಂದಿಯ ಅರ್ಜಿಗಳು ತಿರಸ್ಕೃತವಾಗಿದ್ದವು. ಅಂಗವೈಕಲ್ಯ ಅಥವಾ ಈ ಮೊದಲೇ ಇದ್ದ ದೈಹಿಕ ಪರಿಸ್ಥಿತಿಯ ಕಾರಣದಿಂದಾಗಿ ತಮ್ಮ ಅರ್ಜಿಗಳು ತಿರಸ್ಕೃತವಾಗಿತ್ತೆಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವಾರು ಮಂದಿ ದೂರಿದ್ದಾರೆ. ಆಟಿಸಂ, ಮನೋಸಾಮಾಜಿಕ ಹಾಗೂ ಬೌದ್ಧಿಕ ಭಿನ್ನಸಾಮರ್ಥ್ಯ ಹಾಗೂ ಥಲಸ್ಸೆಮಿಯಾದಂತಹ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಜಿದಾರರು ಹೊಂದಿದ್ದ ಕಾರಣದಿಂದಾಗಿ ಈ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಸಾಂವಿಧಾನಿಕ ರಕ್ಷಣೆ ಹಾಗೂ 2016ರ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, ಅಲ್ಲದೆ ಭಾರತೀಯ ವಿಮಾನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಪುನರಾವರ್ತಿತ ನಿರ್ದೇಶನಗಳನ್ನು ಹೊರಡಿಸಿರುವ ಹೊರತಾಗಿಯೂ ಪರಿಸ್ಥಿತಿ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ದುಬಾರಿ ಪ್ರೀಮಿಯಂಗಳು, ಡಿಜಿಟಲ್ ವೇದಿಕೆಗಳ ಅಲಭ್ಯತೆ ಹಾಗೂ ಆರೋಗ್ಯ ವಿಮಾ ಯೋಜನೆಗಳ ಕುರಿತ ಮಾಹಿತಿಯ ಕೊರತೆಯು ಭಿನ್ನಸಾಮರ್ಥ್ಯದ ವ್ಯಕ್ತಿಗಳು ಈ ಯೋಜನೆಯನ್ನು ಪಡೆಯುವುದಕ್ಕೆ ಪ್ರಮುಖ ಅಡೆತಡೆಗಳಾಗಿವೆ ಎಂದು ವರದಿ ತಿಳಿಸಿದೆ. ಸಾಮಾಜಿಕ ಕಲ್ಯಾಣ ಹಾಗೂ ಸಬಲೀಕರಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನಮೀತ್ ನಂದಾ ಮಾತನಾಡಿ, ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಆರೋಗ್ಯ ವಿಮೆ ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನದ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಹಾಗೂ ಸಚಿವಾಲಯಗಳ ಮಟ್ಟದಲ್ಲಿ ಸಮನ್ವಯತೆಯನ್ನು ಕಾಪಾಡಲಾಗುವುದು ಎಂದರು.
ಪಾಸ್ಪೋರ್ಟ್ ಜಪ್ತಿ: ಕ್ಯಾಮರೂನ್ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಭಾರತೀಯ ಕುಟುಂಬ
ಯೌಂಡೆ, ನ.20: ಮಧ್ಯ ಆಫ್ರಿಕಾದ ಕ್ಯಾಮರೂನ್ ನಲ್ಲಿ ಆಗ್ರಾ ಮೂಲದ ವ್ಯಕ್ತಿ, ಅವರ ಪತ್ನಿ ಮತ್ತು ಒಂದೂವರೆ ವರ್ಷದ ಮಗು ಪಾಸ್ಪೋರ್ಟ್ ಮುಟ್ಟುಗೋಲು, ಆರ್ಥಿಕ ಸಂಕಷ್ಟದಿಂದಾಗಿ ದೀರ್ಘಕಾಲದಿಂದ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ. 2012ರಿಂದ ಕ್ಯಾಮರೂನ್ ನ ಡೌಲಾದಲ್ಲಿ ಟೂರ್ ಮತ್ತು ಟ್ರಾವೆಲ್ ಕಂಪೆನಿಯ ಉದ್ಯೋಗಿಯಾಗಿರುವ ಧೀರಜ್ ಜೈನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಲು ನೆರವಾಗುವಂತೆ ಭಾರತ ಸರಕಾರವನ್ನು ಕೋರಿದ್ದಾರೆ. ತನ್ನ ಉದ್ಯೋಗದ ಒಪ್ಪಂದದ ಅವಧಿ ಮುಗಿದಿದ್ದರೂ ದೇಶವನ್ನು ತೊರೆಯಲು ಅನುಮತಿಸುತ್ತಿಲ್ಲ. ಕಂಪೆನಿಗೆ ಸಂಬಂಧಿಸಿದವರು ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಯಾಣದ ದಾಖಲೆ ಪಡೆಯಲು, ಮಗುವಿಗೆ ಅಗತ್ಯವಿರುವ ಆಹಾರ ಖರೀದಿಸಲೂ ಆರ್ಥಿಕ ಸಂಕಷ್ಟ ಎದುರಾಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. आगरा के धीरज जैन, पत्नी, बेटी अफ्रीका के डौआला कैमरून में फंस गए हैं। भारत सरकार से वापस बुलाने की गुहार लगा रहे हैं। धीरज एक टूर ट्रेवल्स कंपनी के एम्पलाई हैं। कॉन्ट्रैक्ट खत्म हो चुका है। पासपोर्ट जब्त कर लिया गया है। कह रहे हैं कि अब बेटी को दूध पिलाने तक के पैसे नहीं हैं।… pic.twitter.com/b2OFrhaEO2 — Sachin Gupta (@SachinGuptaUP) November 20, 2025 2024ರ ಸೆಪ್ಟಂಬರ್ ನಲ್ಲಿ ಕಂಪೆನಿಯ 19 ದಶಲಕ್ಷ ಸಿಎಫ್ಎ ಫ್ರಾಂಕ್ಸ್( ಸುಮಾರು 30 ಲಕ್ಷ ರೂ.) ಹಣ ದರೋಡೆಯಾಗಿದ್ದು ಇದಕ್ಕೆ ವಿನಾಕಾರಣ ತನ್ನನ್ನು ದೂಷಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಭಾರತೀಯರಾದ ಚಂದ್ರಪ್ರಕಾಶ್ ಮತ್ತು ಮನೀಷ್ ಥಾಕೂರ್ ಸ್ಥಳೀಯ ಪೊಲೀಸರೊಂದಿಗೆ ಶಾಮೀಲಾಗಿ ನಿರಂತರ ಕಿರುಕುಳ ನೀಡುತ್ತಿದ್ದು ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಲು ನೆರವಾಗಬೇಕೆಂದು ಜೈನ್ ಮತ್ತು ಅವರ ಪತ್ನಿ ಭಾರತ ಸರಕಾರವನ್ನು ಕೋರಿದ್ದಾರೆ.
7.11 ಕೋಟಿ ದರೋಡೆ ಪ್ರಕರಣ | ಆರೋಪಿಗಳ ಪತ್ತೆಗೆ 4 ಜಂಟಿ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ 16 ತಂಡಗಳ ರಚನೆ
ತಿರುಪತಿಯಲ್ಲಿ ಇನ್ನೋವಾ ಕಾರು, ಇಬ್ಬರು ಶಂಕಿತರು ವಶಕ್ಕೆ
ರಶ್ಯ-ಉಕ್ರೇನ್ ಯುದ್ಧ ಅಂತ್ಯಕ್ಕೆ ಅಮೆರಿಕದ ಶಾಂತಿ ಪ್ರಸ್ತಾಪ
► ಉಕ್ರೇನ್ ಡೊನ್ಬಾಸ್ ಪ್ರಾಂತವನ್ನು ರಶ್ಯಕ್ಕೆ ಬಿಟ್ಟುಕೊಡಬೇಕು► ಕ್ರಿಮಿಯಾ ರಶ್ಯದ ಭಾಗವೆಂದು ಅಮೆರಿಕ ಗುರುತಿಸುತ್ತದೆ
Surathkal | ಬಸ್ ಢಿಕ್ಕಿಯಾಗಿ ಪಾದಾಚಾರಿ ಮೃತ್ಯು; ಚಾಲಕನ ಬಂಧನ
ಸುರತ್ಕಲ್: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ವಿರುದ್ಧ ದಿಕ್ಕಿನಲ್ಲಿ ಬಂದ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಬೈಕಂಪಾಡಿ ಚಿತ್ರಾಪುರ ಬಳಿ ವರದಿಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ಬಸ್ ಚಾಲಕ ಕೇರಳ ಮೂಲದ ರಾಧಾಕೃಷ್ಣನ್ ಎಂಬಾತನನ್ನು ಬಂಧಿಸಿದ್ದಾರೆ. ಮೃತ ವ್ಯಕ್ತಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಚಿತ್ರಾಪುರ ಬಳಿಯ ನ್ಯೂ ಸ್ಟಾರ್ ಬೆಡ್ ಮಾರ್ಟ್ ಬಳಿ ನಿಂತುಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಕೇರಳ ನೋಂದಣಿಯ ಬಸ್ ಅನ್ನು ಚಾಲಕ ರಾಧಾಕೃಷ್ಣನ್ ಎಂಬಾತ ವಿರುದ್ಧ ದಿಕ್ಕಿನಲ್ಲಿ ತೀವ್ರ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ರಸ್ತೆಯನ್ನು ದಾಟಲು ನಿಂತಿದ್ದ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ. ಅಪಘಾತದ ರಭಸಕ್ಕೆ ವ್ಯಕ್ತಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಆತನ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 18,500 ಬೀದಿನಾಯಿ; ಶೀಘ್ರ ಆಶ್ರಯ ತಾಣ
ಉಡುಪಿ: ಜಿಲ್ಲೆಯಲ್ಲಿ ಸರಿಸುಮಾರು 18,500 ಬೀದಿನಾಯಿಗಳನ್ನು ಗುರುತಿಸಲಾಗಿದ್ದು, ನಾಯಿಗಳಿಗೆ ಆಶ್ರಯ ತಾಣಕ್ಕಾಗಿ ಉಡುಪಿ ನಗರ ಭಾಗದಲ್ಲಿ ಈಗಾಗಲೇ ಒಂದು ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಆಶ್ರಯ ತಾಣ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮುಂದಿನ ಮೂರು ದಿನಗಳಲ್ಲಿ ತಾಲೂಕು ಮತ್ತು ನಗರ ಪ್ರದೇಶಕ್ಕೆ ಒಂದರಂತೆ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲು ಬೇಕಾದ ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಬೀದಿನಾಯಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದು, ಅವುಗಳ ಪಾಲನೆ ಮಾಡಿ, ವರದಿ ನೀಡಬೇಕು ಎಂದೂ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಸ್ತ್ರಚಿಕಿತ್ಸೆಯ ಬಳಿಕ ನಾಯಿ ಗಳನ್ನು ಅದೇ ಸ್ಥಳಕ್ಕೆ ವಾಪಾಸು ಬಿಡಬೇಕು. ರೇಬೀಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಆಕ್ರಮಣಕಾರಿ ನಡತೆ ಇರುವ ನಾಯಿಗಳನ್ನು ಆಶ್ರಯ ತಾಣಗಳಿಗೆ ಬಿಡಬೇಕು ಎಂದರು. ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಿ ಅವುಗಳನ್ನು ಪ್ರದರ್ಶಿಸಬೇಕು. ಆಶ್ರಯ ತಾಣಗಳಲ್ಲಿ ಸ್ವಚ್ಚತೆ, ಆಹಾರ, ನೀರು, ನೆರಳು, ಪಶು ವೈದ್ಯಕೀಯ ಚಿಕಿತ್ಸೆ ಗಳನ್ನು ಒದಗಿಸಬೇಕು. ಪ್ರಾಣಿಗಳ ಹಾಗೂ ನಾಗರಿಕರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕುಎಂದು ಜಿಲ್ಲಾಧಿಕಾರಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಸಮನ್ವಯದೊಂದಿಗೆ ಪದೇ ಪದೇ ಬೀಡಾಡಿ ದನಗಳು ಮತ್ತು ಪ್ರಾಣಿಗಳು ಕಾಣಿಸುವ ರಾಷ್ಟ್ರೀಯ ಹೆದ್ದಾರಿ ಪರಿಮಿತಿಗಳನ್ನು ಗುರುತಿಸಬೇಕು. ಅಲ್ಲಿರುವ ಎಲ್ಲಾ ದನ ಸೇರಿದಂತೆ ಬೀಡಾಡಿ ಪ್ರಾಣಿಗಳನ್ನು ಆಶ್ರಯ ತಾಣಗಳಿಗೆ ಅಥವಾ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದ ಅವರು, ಹೆದ್ದಾರಿಗಳಲ್ಲಿ ಸ್ಪಷ್ಟವಾಗಿ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು. ಈ ಸಂಖ್ಯೆಗಳನ್ನು ಎನ್ಹೆಚ್ಎಐ ಕಂಟ್ರೋಲ್ ರೂಂ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂಗೆ ಲಿಂಕ್ ಮಾಡಬೇಕು ಎಂದರು. ಸಾಕುನಾಯಿಗಳ ಮಾಲಕರು ನೋಂದಣಿ ಮಾಡಿಕೊಂಡು ನಾಯಿಗಳಿಗೆ ಕಡ್ಡಾಯವಾಗಿ ಕಾಲರ್ ಪಟ್ಟಿ ಅಳವಡಿಸಬೇಕು. ಕಾಲರ್ ಪಟ್ಟಿ ಇಲ್ಲದೆ ರಸ್ತೆ ಬದಿ ಅಲೆದಾಡುತ್ತಿದ್ದರೆ ಅವುಗಳನ್ನು ಬೀದಿ ನಾಯಿ ಎಂದು ಪರಿಗಣಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಪ್ರಕಟಣೆಗೊಳಿಸಿ ಎಂದು ಸೂಚನೆ ನೀಡಿದರು. ಸ್ಥಳಾಂತರ ಮಾಡಲಾಗುವ ಬೀದಿ ನಾಯಿಗಳ ಆಶ್ರಯ ತಾಣಗಳ ನಿರ್ವಹಣೆಗಾಗಿ ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಯಿ ಕಡಿತದಿಂದ ಉಂಟಾಗಬಹುದಾದ ರೇಬೀಸ್ ರೋಗದ ಅಪಾಯ ಮತ್ತು ಲಸಿಕೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೇಬೀಸ್ ನಿರೋಧಕ ಲಸಿಕೆಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿಯಲ್ಲಿ 10 ಆಹಾರ ನೀಡುವ ತಾಣ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 10 ಕಡೆಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಜಾಗಗಳನ್ನು ಗುರುತಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಆದಷ್ಟು ಶೀಘ್ರವಾಗಿ ಜಾಗ ಗುರುತಿಸುವ ಕೆಲಸವಾಗಬೇಕು. ಎಲ್ಲರಿಗೂ ಗುರುತಿನ ಚೀಟಿ ನೀಡಿ ನಿಗದಿಪಡಿಸಿದ ಜಾಗದಲ್ಲೆ ಆಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಸಾರಿಗೆ, ನಗರಾಭಿವೃದ್ದಿ, ಪಂಚಾಯತ್ರಾಜ್, ಪಶುಪಾಲನಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು. ನಾಯಿಗಳ ಆರೈಕೆಗೆ ಸೂಕ್ತ ಸ್ಥಳವನ್ನು ಗುರುತಿಸಿ ಸಂವೇದನಾಶೀಲರಾಗಿ ಆದಷ್ಟು ಬೇಗ ಅವುಗಳನ್ನು ಸ್ಥಳಾಂತರಿಸಬೇಕು ಎಂದರು.
Dharmasthala Case: 3,923 ಪುಟಗಳ ಪ್ರಾಥಮಿಕ ವರದಿ ಸಲ್ಲಿಕೆ; ಬೆಳ್ತಂಗಡಿ ಕೋರ್ಟ್ ಮುಂದೆ SITಗೆ ಮನವಿ ಮಾಡಿದ್ದೇನು?
ಧರ್ಮಸ್ಥಳದಲ್ಲಿ ಶವ ಹೂತು ಹಾಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಪ್ರಾಥಮಿಕ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿದೆ. 3,923 ಪುಟಗಳ ವರದಿಯಲ್ಲಿ ಆರು ಮಂದಿಯನ್ನು ಷಡ್ಯಂತ್ರ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಚಿನ್ನಯ್ಯ ನೀಡಿದ್ದ ಸುಳ್ಳು ಹೇಳಿಕೆ ಹಾಗೂ ತಲೆಬುರುಡೆ ಪ್ರಕರಣದ ಬಗ್ಗೆ ತನಿಖೆ ನಡೆದಿದೆ. ಐವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ 0-5 ವರ್ಷದ 67,140 ಮಕ್ಕಳಿಗೆ ಲಸಿಕೆ ನೀಡುವ ಗುರಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಡಿ.21ರಂದು ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ
ರೋಹಿತ್-ಕೊಹ್ಲಿಯನ್ನು ತಂಡದಿಂದ ಹೊರದೂಡಲಾಯಿತು: ಗೌತಮ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಆಕ್ರೋಶ
“ಪರಿವರ್ತನೆ ಬೇಕಾಗಿರುವುದು ನ್ಯೂಝಿಲ್ಯಾಂಡ್, ಝಿಂಬಾಬ್ವೆ ತಂಡಕ್ಕೆ, ಭಾರತಕ್ಕಲ್ಲ”
ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಉಚಿತ 10 GB ಡೇಟಾ ಸಿಮ್
ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಉಚಿತ 10GB ಡೇಟಾ ಸಿಮ್ ನೀಡಲಾಗುತ್ತಿದೆ. ಇದು ಇ-ಕನೆಕ್ಟ್ (e

22 C