ಗೃಹಲಕ್ಷ್ಮೀ ಸಹಕಾರ ಸಂಘದಿಂದ ಸದ್ಯಕ್ಕೆ ಸಾಲ ಸಿಗೋದಿಲ್ಲ!
ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಸ್ಥಾಪಿಸಲಾದ ಸಹಕಾರ ಸಂಘದಲ್ಲಿ ಚುನಾವಣೆ ನಡೆಯದೆ ಪದಾಧಿಕಾರಿಗಳ ಆಯ್ಕೆ ವಿಳಂಬವಾಗಿದೆ. ಇದರಿಂದಾಗಿ ಸದಸ್ಯತ್ವ ಪಡೆದರೂ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸಂಘದ ಕಾರ್ಯನಿರ್ವಹಣೆಗೆ ಮಾರ್ಗಸೂಚಿ ರೂಪಿಸದ ಕಾರಣ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ | ಖಾಸಗಿ ಬಸ್ ಉರುಳಿ ಬಿದ್ದು 30 ಮಂದಿಗೆ ಗಾಯ
ಮಂಡ್ಯ : ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಅಗರಲಿಂಗನದೊಡ್ಡಿ ಬಳಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರದ ನಿವಾಸಿಗಳು ಸದರಿ ಬಸ್ನಲ್ಲಿ ಮಳವಳ್ಳಿ ತಾಲೂಕಿನ ಶಿಂಷಾ ಬಳಿ ಇರುವ ದೇವಸ್ಥಾನಕ್ಕೆ ತೆರಳಿ, ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಮದ್ದೂರು ಸಂಚಾರಿ ಪೊಲೀಸರು ಮತ್ತು ಸ್ಥಳೀಯರು ಬಸ್ನಲ್ಲಿ ಗಾಯಗೊಂಡವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಗಾಯಗೊಂಡವರನ್ನು ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಡಿಸಿ ಭೇಟಿ: ವಿಷಯ ತಿಳಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮಿಮ್ಸ್ ಜಿಲ್ಲಾಸ್ಪತ್ರೆಗೆ ತೆರಳಿ ಪ್ರಯಾಣಿಕರ ಆರೋಗ್ಯ ವಿಚಾರಿಸಿ, ಸೂಕ್ತ ಹಾಗೂ ಉತ್ತಮ ಮಟ್ಟದ ಔಷಧೋಪಚಾರಗಳನ್ನು ತುರ್ತಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Bengaluru | ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದ ದೈಹಿಕ ಶಿಕ್ಷಕನ ಬಂಧನ
ಬೆಂಗಳೂರು : ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿರುವ ಪ್ರಕರಣದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನು(ಪಿಟಿ) ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಬಂಧಿತ ಶಿಕ್ಷಕರಾಗಿದ್ದಾರೆ. ನಗರದ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಏಳನೆ ತರಗತಿಯ ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದರು. ವಿದ್ಯಾರ್ಥಿ ಮಧ್ಯಾಹ್ನದ ವೇಳೆ ಶಾಲಾ ಕೊಠಡಿಯಲ್ಲಿ ತನ್ನ ಸ್ನೇಹಿತನ ಕುರ್ಚಿಯನ್ನು ಎಳೆದಿದ್ದರಿಂದ ಕೆಳಗೆ ಬಿದ್ದಿದ್ದ. ಈ ಕುರಿತು ಸಹಪಾಠಿಯು ನೇರವಾಗಿ ಶಿಕ್ಷಕ ರಾಜೇಶ್ಗೆ ದೂರು ನೀಡಿದ್ದ. ಈ ಹಿನ್ನೆಲೆ ಸ್ಟಾಫ್ ರೂಂಗೆ ಕರೆಸಿ ವಿದ್ಯಾರ್ಥಿಯ ಕಪಾಳಕ್ಕೆ ನಾಲ್ಕೆದು ಬಾರಿ ಹೊಡೆದಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೆ ಸಂಜೆವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ದರು. ಸಂಜೆಯಾದರೂ ಮನೆಗೆ ಮಗ ಬರದಿರುವುದನ್ನು ಕಂಡು ಪೋಷಕರು ಶಾಲೆಗೆ ಬಂದಿದ್ದು, ತನ್ನ ಮಗನ ಕೆನ್ನೆ ಊದಿಕೊಂಡಿರುವುದನ್ನು ಕಂಡು ಕೂಡಲೇ ಪೋಷಕರು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಯ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಸದ್ಯ ರಾಜೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಾರಿ ಆಯುಷ್ ಆಸ್ಪತ್ರೆಗಳಿಗೆ ದಾನಿಗಳು ಸೂಚಿಸಿರುವ ಹೆಸರು ನಾಮಕರಣ : ಆದೇಶ
ಬೆಂಗಳೂರು : ಆಯುಷ್ ಇಲಾಖೆಯ ವ್ಯಾಪ್ತಿಗೆ ಬರುವ ಆಯುಷ್ ಆಸ್ಪತ್ರೆಗಳಿಗೆ, ಚಿಕಿತ್ಸಾಲಯಗಳಿಗೆ ದಾನಿಗಳ ಅಥವಾ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರ, ತಾಲ್ಲೂಕು ಆಯುಷ್ ಆಸ್ಪತ್ರೆ 2 ಎಕರೆ ಹಾಗೂ ಜಿಲ್ಲ ಆಯುಷ್ ಆಸ್ಪತ್ರೆ 4 ಎಕರೆ ಜಮೀನನ್ನು ದಾನ ನೀಡಿದ್ದಲ್ಲಿ, ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ಆಸ್ಪತ್ರೆಗಳಿಗೆ, ಕೇಂದ್ರಗಳಿಗೆ ನಾಮಕರಣ ಮಾಡಲಾಗುವುದು ಎಂದು ತಿಳಿಸಿದೆ. ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆ, ಕೇಂದ್ರಗಳಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲು ಕಟ್ಟಡದ ಅಂದಾಜು ಮೌಲ್ಯದ ಅರ್ಧ ಭಾಗ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕನೆ ಒಂದು ಭಾಗದಷ್ಟು ಕಟ್ಟಡದ ಅಂದಾಜು ಮೌಲ್ಯದ ಮೊತ್ತವನ್ನು ದಾನವಾಗಿ ನೀಡಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಆಸ್ಪತ್ರೆಯ ಒಂದು ವಾರ್ಡ್/ರೂಮ್ ನಿರ್ಮಿಸಲು ಪೂರ್ಣ ಮೊತ್ತವನ್ನು ದಾನವಾಗಿ ನೀಡಿದ್ದಲ್ಲಿ, ವಾರ್ಡ್/ರೂಮ್ಗೆ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲಾಗುವುದು. ಉಪಕರಣಗಳನ್ನು ನೀಡಿದ್ದಲ್ಲಿ, ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು ಎಂದು ತಿಳಿಸಿದೆ. ದಾನಿಗಳು 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದಲ್ಲಿ ಆಸ್ಪತ್ರೆಯ ನಾಮಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು. ಸ್ವೀಕರಿಸಿದ ದಾನ, ಆಸ್ಪತ್ರೆಗಳಿಗೆ ದಾನಿಗಳು ಸೂಚಿಸುವ ಹೆಸರನ್ನು ನಾಮಕರಣ ಮಾಡಲು ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ಸ್ವೀಕರಿಸಿದ ದಾನವನ್ನು ಯಾವುದೇ ಕಾರಣಕ್ಕಾಗಿ ಹಿಂದಿರುಗಿಸುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕೇರಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ : ಅಕ್ಕೈ ಪದ್ಮಶಾಲಿ ಖಂಡನೆ
ಬೆಂಗಳೂರು : ಶಬರಿಮಲೆ ದೇವಸ್ಥಾನಕ್ಕೆ ಬೆಂಗಳೂರಿನಿಂದ ತೆರಳಿದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಕೇರಳ ಪೊಲೀಸರು ದೌರ್ಜನ್ಯ ಎಸೆಗಿರುವುದು ಖಂಡನೀಯ, ಈ ಸಂಬಂಧಿಸಿದಂತೆ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಒತ್ತಾಯಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಎಂಬ ಕಾರಣಕ್ಕಾಗಿ ಶಬರಿಮಲೆ ದೇವಸ್ಥಾನದ ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಆರೋಪಿಸಿದರು. ಅದರಲ್ಲೂ, ಪಾಂಬಾ ಪೊಲೀಸ್ ಠಾಣೆಯ ಅಧಿಕಾರಿಗಳು ಅವರನ್ನು ಬಟ್ಟೆ ಬಿಚ್ಚುವಂತೆ ಬಲವಂತ ಮಾಡಿದ್ದು ನಿನ್ನೆ ರಾತ್ರಿ ನಗ್ನಗೊಳಿಸಿ ಹೀನಾಯ ಕೃತ್ಯ ಎಸಗಿದ್ದಾರೆ. ಆಹಾರ ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಅವರು ದೂರಿದರು. ಈ ಸಂಬಂಧಿಸಿದಂತೆ ಗೃಹ ಸಚಿವರು, ರಾಜ್ಯ ಸರಕಾರ ರಕ್ಷಣೆಗೆ ಧಾವಿಸಿ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ಕೈ ಪದ್ಮಶಾಲಿ ಒತ್ತಾಯ ಮಾಡಿದ್ದಾರೆ.
ಗ್ರೀಕ್ ದ್ವೀಪದ ಬಳಿ ವಲಸಿಗರ ದೋಣಿ ಮುಳುಗಿ 18 ಸಾವು
ಅಥೆನ್ಸ್: ಗಾಳಿ ತುಂಬ ಬಹುದಾದ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತಿದ್ದ ಕನಿಷ್ಠ 18 ಮಂದಿ ವಲಸಿಗರು ದಕ್ಷಿಣ ಗ್ರೀಕ್ನ ಕ್ರೀಟ್ ದ್ವೀಪದ ಬಳಿ ದೋಣಿ ಮುಳುಗಿದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೀರಿನಲ್ಲಿ ಅರ್ಧ ಮುಳುಗಿದ್ದ ದೋಣಿಯನ್ನು ಟರ್ಕಿಯ ಸರಕು ನೌಕೆ ಪತ್ತೆಹಚ್ಚಿ ಗ್ರೀಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯುರೋಪಿಯನ್ ಗಡಿ ಏಜೆನ್ಸಿಯ ಹಡಗು ಮತ್ತು ವಿಮಾನ, ಗ್ರೀಕ್ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಮತ್ತು ಮೂರು ಹಡಗುಗಳು ಪಾಲ್ಗೊಂಡಿದ್ದು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ದಂಡೆ: ಇಸ್ರೇಲ್ ದಾಳಿಯಲ್ಲಿ ಇಬ್ಬರ ಸಾವು
ರಮಲ್ಲಾ: ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಯೋಧರತ್ತ ಕಾರನ್ನು ಅಪಾಯಕಾರಿಯಾಗಿ ನುಗ್ಗಿಸಿದ ಫೆಲೆಸ್ತೀನಿಯನ್ ಯುವಕನನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ. ಈ ಘಟನೆಯಲ್ಲಿ ರಸ್ತೆಯ ಪಕ್ಕ ನಿಲ್ಲಿಸಿದ್ದ ಮತ್ತೊಬ್ಬ ಫೆಲೆಸ್ತೀನಿಯನ್ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ಇಸ್ರೇಲ್ ನ ಭದ್ರತಾ ಅಧಿಕಾರಿಗಳು ರವಿವಾರ ಹೇಳಿದ್ದಾರೆ. ಪಶ್ಚಿಮದಂಡೆಯ ಹೆಬ್ರಾನ್ ನಗರದಲ್ಲಿನ ಚೆಕ್ಪಾಯಿಂಟ್ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೆ ತಿಳಿಸಿದೆ. ರಸ್ತೆ ಸ್ವಚ್ಛ ಮಾಡುತ್ತಿದ್ದ ನಗರಪಾಲಿಕೆಯ ಪೌರ ಕಾರ್ಮಿಕ 55 ವರ್ಷದ ನಯಿಮ್ ಅಬು ದಾವೂದ್ ಹಾಗೂ ಮತ್ತೊಬ್ಬ ಯುವಕ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ನ ಸರಕಾರಿ ಸ್ವಾಮ್ಯದ ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.
Davanagere | ಸಾಕುನಾಯಿಗಳು ಕಚ್ಚಿ ಮಹಿಳೆ ಮೃತ್ಯು ಪ್ರಕರಣ: ಓರ್ವನ ಬಂಧನ
ದಾವಣಗೆರೆ : ಮಹಿಳೆಯನ್ನು ಭೀಕರವಾಗಿ ಕಚ್ಚಿ ಆಕೆಯ ಸಾವಿಗೆ ಕಾರಣವಾಗಿದ್ದ ಜೋಡಿ ರಾಟ್ ವೀಲರ್ ನಾಯಿಗಳ ಮಾಲಕನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ದಾವಣಗೆರೆ ದೇವರಾಜ ಅರಸು ಬಡಾವಣೆಯ ಶೈಲೇಶಕುಮಾರ (27) ಬಂಧಿತ ಆರೋಪಿ. ಆರೋಪಿ ಶೈಲೇಶ್ ಕುಮಾರ್ ಪಪ್ಪಿ ಮತ್ತು ಹೀರೋ ಹೆಸರಿನ ಜೋಡಿ ರಾಟ್ ವೀಲರ್ ನಾಯಿಗಳನ್ನು ಬಾಡಿಗೆ ಆಟೊ ರಿಕ್ಷಾವೊಂದರಲ್ಲಿ ತಂದು ಬಿಟ್ಚು ಹೋಗಿದ್ದು, ರಾಷ್ಟ್ರೀಯ ಹೆದ್ದಾರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ಸೇರಿದಂತೆ ಎಲ್ಲ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಸಮೀಪ ಗುರುವಾರ ತಡರಾತ್ರಿ ತನ್ನ ತವರು ಮನೆಗೆ ಹೊರಟಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಎಂಬವರ ಮೇಲೆ ನಿರ್ಜನ ಪ್ರದೇಶದಲ್ಲಿ ಜೋಡಿ ರಾಟ್ ವೀಲರ್ ನಾಯಿಗಳು ಏಕಾಏಕಿ ದಾಳಿ ಮಾಡಿ, ಆಕೆಯ ಸಾವಿಗೆ ಕಾರಣವಾಗಿದ್ದವು. ಪೊಲೀಸರು, ಗ್ರಾಮಸ್ಥರು ನಾಯಿಗಳನ್ನು ಕೋಲು, ಪೈಪ್, ಪೋಲ್ಸ್ಗಳಿಂದ ಹೊಡೆದು, ಹಗ್ಗ ಬಿಗಿದು ಬಂಧಿಸಿದ್ದರು. ಇದೀಗ ಆಂತರಿಕ ರಕ್ತಸ್ರಾವದಿಂದಾಗಿ ಎರಡೂ ನಾಯಿಗಳೂ ಸಾವನ್ನಪ್ಪಿವೆ. ಶೈಲೇಶ್ ಕುಮಾರ್ ಮೂರು ರಾಟ್ ವೀಲರ್ ನಾಯಿಗಳನ್ನು ಸಾಕಿದ್ದ. ಈ ಪೈಕಿ ಪಪ್ಪಿ ಮತ್ತು ಹೀರೋ ನಾಯಿಗಳು ಇತ್ತೀಚೆಗೆ ನಮ್ಮ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದವು, ನನಗೂ ಮತ್ತು ನನ್ನ ಮಾವ ಶಿಕುಮಾರ ಅವರ ಹೊಟ್ಟೆಗೆ ಪರಚಿದ್ದರಿಂದ ಬೇಸರಗೊಂಡು ಡಿ.4ರಂದು ರಾತ್ರಿ 10:30ರ ಸುಮಾರಿಗೆ ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಬಂದಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಎರಡನೇ ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ, ಸರಣಿ ಮುನ್ನಡೆ
ಮಿಚೆಲ್ ಸ್ಟಾರ್ಕ್ ‘ಪಂದ್ಯಶ್ರೇಷ್ಠ’
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ಹಂತ: ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಲಭ್ಯ
ಮುಂಬೈ: 2025-26ರ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತಕ್ಕೆ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡಕ್ಕೆ ಲಭ್ಯವಿರಲಿದ್ದಾರೆ. ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕ ಗಳಿಸಿರುವ ಭಾರತದ ಯುವ ಸ್ಟಾರ್ ಬ್ಯಾಟರ್ ಜೈಸ್ವಾಲ್ ಪುಣೆಯಲ್ಲಿ ಡಿಸೆಂಬರ್ 11ರಂದು ನಡೆಯಲಿರುವ ದೇಶೀಯ ಟಿ-20 ಪಂದ್ಯಕ್ಕೆ ಲಭ್ಯವಿರುವುದಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಗೆ (ಎಂಸಿಎ)ಮಾಹಿತಿ ನೀಡಿದ್ದಾರೆ. ‘‘ನಾನು ಇಂದು ಬೆಳಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಲಭ್ಯವಿರುವುದಾಗಿ ಅವರು ಹೇಳಿದ್ದಾರೆ. ಇದು ತಂಡಕ್ಕೆ ನಿಜವಾಗಿಯೂ ಶಕ್ತಿ ನೀಡಲಿದೆ’’ಎಂದು ಮುಂಬೈ ತಂಡದ ಮುಖ್ಯ ಆಯ್ಕೆಗಾರ ಸಂಜಯ್ ಪಾಟೀಲ್ ಹೇಳಿದ್ದಾರೆ. ರೋಹಿತ್ ಶರ್ಮಾ ಅವರು ಮುಂಬೈ ಪರ ಟಿ-20 ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಇನ್ನೂ ಸ್ಪಷ್ಟತೆ ಇಲ್ಲವಾಗಿದೆ. ಲಕ್ನೊದಲ್ಲಿ ಆಡಿದ ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ಮುಂಬೈ ತಂಡವು ಸೂಪರ್ ಲೀಗ್ ಪಂದ್ಯದಲ್ಲಿ ಆಡಲು ಪುಣೆಗೆ ಪ್ರಯಾಣಿಸಲಿದೆ. ತನ್ನ ಭಾಗವಹಿಸುವಿಕೆ ಕುರಿತಂತೆ ರೋಹಿತ್ ಅವರು ಎಂಸಿಎಗೆ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 28 ಪಂದ್ಯಗಳಲ್ಲಿ ಆಡಿರುವ ಜೈಸ್ವಾಲ್ 26 ಇನಿಂಗ್ಸ್ಗಳಲ್ಲಿ 648 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ನಮೀಬಿಯಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಗ್ಯಾರಿ ಕರ್ಸ್ಟನ್ ನೇಮಕ
ಹೊಸದಿಲ್ಲಿ: ಭಾರತದ ವಿಶ್ವಕಪ್ ವಿಜೇತ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ನಮೀಬಿಯಾ ಪುರುಷರ ಕ್ರಿಕೆಟ್ ತಂಡದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. 2026ರ ಫೆಬ್ರವರಿ-ಮಾರ್ಚ್ ನಲ್ಲಿ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಮುಖ್ಯ ಕೋಚ್ ಕ್ರೆಗ್ ವಿಲಿಯಮ್ಸ್ ಅವರಿಗೆ ಕರ್ಸ್ಟನ್ ಸೂಕ್ತ ಸಲಹೆ ಸೂಚನೆ ನೀಡಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರನಾಗಿರುವ ಕರ್ಸ್ಟನ್ 2004ರಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯ ನಂತರ ಕೋಚಿಂಗ್ ವೃತ್ತಿ ಆರಂಭಿಸಿದ ಅವರು 2007ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಟೀಮ್ ಇಂಡಿಯಾವು 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದಾರೆ. ‘‘ಕ್ರಿಕೆಟ್ ನಮೀಬಿಯಾದೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಉನ್ನತ ಮಟ್ಟದ ಕ್ರಿಕೆಟ್ ವಾತಾವರಣ ನಿರ್ಮಿಸಲು ಬದ್ಧತೆ ಹಾಗೂ ದೃಢತೆಯನ್ನು ಕಾಯ್ದುಕೊಳ್ಳುವೆ’’ ಎಂದು ಕರ್ಸ್ಟನ್ ಹೇಳಿದ್ದಾರೆ. ಭಾರತ ತಂಡದ ಕೋಚ್ ಆದ ನಂತರ ಕರ್ಸ್ಟನ್ ಅವರು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ವಿಶ್ವ ಮಟ್ಟದ ಟಿ-20 ಫ್ರಾಂಚೈಸಿ ಲೀಗ್ ಗಳ ಹಲವು ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. 2024ರಲ್ಲಿ ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2021, 2022 ಹಾಗೂ 2024ರ ಹಿಂದಿನ ಮೂರು ಟಿ-20 ವಿಶ್ವಕಪ್ ಟೂರ್ನಿಗಳಿಗೆ ಅರ್ಹತೆ ಪಡೆಯುವ ಮೂಲಕ ನಮೀಬಿಯಾ ತಂಡವು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಉಪಸ್ಥಿತಿಯನ್ನು ತೋರ್ಪಡಿಸಿದೆ. ನಮೀಬಿಯಾ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾ ಹಾಗೂ ಝಿಂಬಾಬ್ವೆ ದೇಶದೊಂದಿಗೆ ಜಂಟಿಯಾಗಿ ಆಯೋಜಿಸಲಿದೆ.
ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್ ಸೆಲೆಕ್ಷನ್ ಕಮಿಷನ್
ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಹತ್ತನೇ ತರಗತಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಈ ಬಾರಿ ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ, ಸಿಆರ್ಪಿಎಫ್, ಎನ್ಸಿಬಿ, ಎಸ್ಎಸ್ಎಫ್, ಅಸ್ಸಾಂ ರೈಫಲ್ಸ್ನಲ್ಲಿ ಎಸ್ಎಸ್ಸಿ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ 01 ಡಿಸೆಂಬರ್ 2025 ರಂದು ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 25,487 ಹುದ್ದೆಗಳನ್ನು ನೇಮಕಾತಿಗಾಗಿ ಆಹ್ವಾನಿಸಲಾಗಿದೆ. ಎಸ್ಎಸ್ಸಿ ಜಿಡಿ ಕಾನ್ಸ್ಟೇಬಲ್ ನೇಮಕಾತಿ 2025ಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 01, 2025 ರಿಂದ ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು ಡಿಸೆಂಬರ್ 31, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಸ್ಎಸ್ಸಿ ಜಿಡಿ ಕಾನ್ಸ್ಟೇಬಲ್ ನೇಮಕಾತಿ 2025ರ ಸಂಪೂರ್ಣ ವಿವರಗಳನ್ನು ಈ ಕೆಳಗೆ ಪರಿಶೀಲಿಸಬಹುದು. ಪ್ರಮುಖ ವಿವರಗಳು • ಅಧಿಸೂಚನೆ ಹೊರಡಿಸಿದ ದಿನಾಂಕ: 01 ಡಿಸೆಂಬರ್ 2025 • ಅರ್ಜಿ ಸಲ್ಲಿಕೆ ಆರಂಭ: 01 ಡಿಸೆಂಬರ್ 2025 • ಕೊನೆಯ ದಿನಾಂಕ: 31 ಡಿಸೆಂಬರ್ 2025 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 01 ಜನವರಿ 2026 • ತಿದ್ದುಪಡಿಗೆ ಕೊನೆಯ ದಿನಾಂಕ: 08 ಜನವರಿ 2026 ಯಿಂದ 10 ಜನವರಿ 2026 • ಪೂರ್ವಪರೀಕ್ಷೆ ದಿನಾಂಕ: ಫೆಬ್ರವರಿ – ಏಪ್ರಿಲ್ 2026 • ದಾಖಲಾತಿ ಕಾರ್ಡ್: ಪರೀಕ್ಷೆಗೆ ಮೊದಲು ಅರ್ಜಿ ಶುಲ್ಕ ಜನರಲ್, ಇಡಬ್ಲ್ಯುಎಸ್, ಒಬಿಸಿಗಳಿಗೆ ಅರ್ಜಿ ಶುಲ್ಕ ರೂ 100/- ಮತ್ತು ಎಸ್ಸಿ ಎಸ್ಟಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ತಿದ್ದುಪಡಿ ಶುಲ್ಕ ಮೊದಲ ಬಾರಿಗೆ ರೂ 200/- ಆಗಿದ್ದರೆ, ಎರಡನೇ ಬಾರಿಗೆ ರೂ 500/- ಆಗಿರುತ್ತದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್/ ಯುಪಿಐ ಮತ್ತು ಇತರ ಶುಲ್ಕ ಪಾವತಿ ವಿಧಾನಗಳಿಂದ ಪಾವತಿಸಬಹುದಾಗಿದೆ. ವಯೋಮಿತಿ 01 ಜನವರಿ 2026ರೊಳಗೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 23 ವರ್ಷಗಳು. ಎಷ್ಟು ಹುದ್ದೆಗಳು? ಎಸ್ಎಸ್ಜಿ ಜಿಡಿ ನೇಮಕಾತಿ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಒಟ್ಟು 25,487 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಜನರಲ್ ವಿಭಾಗದ ಪುರುಷರಿಗೆ 10,198 ಹುದ್ದೆಗಳು, ಮಹಿಳೆಯರಿಗೆ 904 ಹುದ್ದೆಗಳು ಖಾಲಿ ಇವೆ. ಇಡಬ್ಲ್ಯುಎಸ್ ಪುರುಷರಿಗೆ 2,416 ಮತ್ತು ಮಹಿಳೆಯರಿಗೆ 189 ಹುದ್ದೆಗಳು ಮಿಸಲಾಗಿವೆ. ಒಬಿಸಿಗೆ ಪುರುಷರಿಗೆ 5329 ಮತ್ತು ಮಹಿಳೆಯರಿಗೆ 436 ಹುದ್ದೆಗಳು, ಪರಿಶಿಷ್ಟ ಜಾತಿಗಳ ಪುರುಷರಿಗೆ 3,423 ಮತ್ತು ಮಹಿಳೆಯರಿಗೆ 269, ಪರಿಶಿಷ್ಟ ಪಂಗಡದ ಪುರುಷರಿಗೆ 2,091 ಮತ್ತು ಮಹಿಳೆಯರಿಗೆ 222 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಹೆಚ್ಚಿನ ಮಾಹಿತಿಗೆ: ಹೆಚ್ಚಿನ ಮಾಹಿತಿಗಳಿಗೆ https://www.sarkariexam.com/ssc-gd-constable-recruitment-2026/ ಲಿಂಕ್ಗೆ ಭೇಟಿ ಕೊಡಬಹುದು. ಅಥವಾ https://www.sarkariexam.com/ ವೆಬ್ತಾಣಕ್ಕೆ ಭೇಟಿಕೊಡಬಹುದು.
ಚಳಿ.. ಚಳಿ.. ಚಳಿಗಾಲದಲ್ಲಿ ನರಳುತ್ತಿರುವ ಉಕ್ರೇನ್ ಜನರ ಗೋಳು ಕೇಳುವುದು ಯಾರು?
ಉಕ್ರೇನ್ ಹಾಗೂ ರಷ್ಯಾ ಯುದ್ಧ ಘೋರವಾಗಿರುವ ಸಮಯದಲ್ಲೇ, ರಷ್ಯಾ ಸೇನೆಯಿಂದ ಭೀಕರ ದಾಳಿ ಮುಂದುವರಿದಿದೆ. ಉಕ್ರೇನ್ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಮಿಲಿಟರಿ ದಾಳಿ ಮಾಡಿ ಎಲ್ಲವನ್ನೂ ನಾಶ ಮಾಡುತ್ತಿದೆ, ಇದರ ಜೊತೆಗೆ ವಿದ್ಯುತ್ ಸೇರಿದಂತೆ ಇಂಧನ ಪೂರೈಕೆ ಕೂಡ ಹಾಳು ಮಾಡಿದೆ ಎಂಬ ಆರೋಪವನ್ನ ಉಕ್ರೇನ್ ಮಾಡುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಉಕ್ರೇನ್ ಜನರು ನೂರಾರು
ಕಿನ್ನಿಗೋಳಿ, ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಸುರತ್ಕಲ್ : ಕಿನ್ನಿಗೋಳಿ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಗೆ ಡಿ.21ರಂದು ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಕಟಿಸಿದೆ. ಕಿನ್ನಿಗೋಳಿ ಪಟ್ಟಣ ಪಂಚಾತ್ ವ್ಯಾಪ್ತಿಯ 13 ಮತ್ತು ಬಜ್ಪೆ ಪಟ್ಟಣ ಪಂಚಾಯತ್ ನ 15 ಸ್ಥಾನಗಳಿಗೆ ಡಿ. 21ರಂದು ಚುನಾವಣೆ ನಡೆಯಲಿದೆ. ಈ ಎರಡೂ ಪಂಚಾಯತ್ ಗಳು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದು ಪ್ರಥಮ ಚುನಾವಣೆಯಾಗಿದೆ. ಎರಡೂ ಪಂಚಾಯತ್ ಗಳು ಕಳೆದ ಐದೂವರೆ ವರ್ಷಗಳಿಂದ ಅಧಿಕಾರಿಗಳ ಆಡಳಿತದಲ್ಲಿದ್ದವು. ಇವುಗಳು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಪ್ರಥಮ ಚುನಾವಣೆಯಾಗಿದ್ದು, ಕಣ ರಂಗೇರಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್ : ವಾರ್ಡ್ 1- ಕೊಂಡೆಮೂಲ - ಪ್ರವೀಣ ಕುಮಾರಿ, ವಾರ್ಡ್ 4 - ನಡುಗೋಡು - ಸಂಜೀವ ಮಡಿವಾಳ ಕಟೀಲು, ವಾರ್ಡ್ 7 ಮೆನ್ನಬೆಟ್ಟು ಕೋಕಿಲಾ, ವಾರ್ಡ್ 8 ಮೆನ್ನಬೆಟ್ಟು ಪ್ರಕಾಶ್ ಆಚಾರ್ಯ, ವಾರ್ಡ್ 9 ಮೆನ್ನಬೆಟ್ಟು ಪ್ರತಿಮಾ, ವಾರ್ಡ್ 10 ಮೆನ್ನಬೆಟ್ಟು - ಚಂದ್ರ ರಾಣ್ಯ ವಾರ್ಡ್ 11 ತಾಳಿಪಾಡಿ - ಪವನ್ ಕುಮಾರ್ ವಾರ್ಡ್ 13 ತಾಳಿಪಾಡಿ - ಸುನಿತಾ ರೋಡ್ರಿಗಸ್ ವಾರ್ಡ್ 14 ತಾಳಿಪಾಡಿ - ಸಂತಾನ್ ಡಿಸೋಜ ವಾರ್ಡ್ 15 ತಾಳಿಪಾಡಿ- ಸುಂದರ ವಾರ್ಡ್ 16 ತಾಳಿಪಾಡಿ - ಟಿಎಚ್ ಮಯ್ಯದ್ದಿ, ವಾರ್ಡ್ 17 ತಾಳಿಪಾಡಿ - ಸುನೀತಾ ವಾರ್ಡ್ 18 ಎಳತ್ತೂರು - ಕುಶಲತಾ ಬಜ್ಪೆ ಪಟ್ಟಣ ಪಂಚಾಯತ್ : ವಾರ್ಡ್ 1 - ಸ್ವಾಮಿಲಪದವು - ಗೀತಾ ವಾರ್ಡ್ 2 - ಕಲ್ಲಝರಿ - ಉದಯಕುಮಾರ್ ವಾರ್ಡ್ 3 - ಅಡ್ಕಬಾರೆ - ಜಾಕೂಬ್ ಪಿರೇರಾ ವಾರ್ಡ್ 5 - ಅಡು - ರುಬಿಯಾ ನಿಶಾ ವಾರ್ಡ್ 6 - ಕಿನ್ನಿಪದವು - ಸುರೇಂದ್ರ ಪೆರ್ಗಡೆ ವಾರ್ಡ್ 8 - ಧೂಮಾವತಿ ಧಾಮ - ಯು. ಶ್ರೀನಿವಾಸ ಹೆಗ್ಡೆ ವಾರ್ಡ್ 11- ಸಿದ್ದಾರ್ಥ ನಗರ - ಚೆನ್ನಪ್ಪ ಸಾಲ್ಯಾನ್ ವಾರ್ಡ್ 12- ಪಾಂಚಕೋಡಿ - ಕಿರಣ್ ವಾರ್ಡ್ 13 - ಕರಂಬಾರು - ವಿನೋದ ಪೂಜಾರ್ತಿ ವಾರ್ಡ್ 14 - ಮರವೂರು - ಹಾಜರಾ ಫರ್ಝಾನ ವಾರ್ಡ್ 15 - ಶ್ರೀದೇವಿ ಕಾಲೇಜು - ಕಿರಣ್ ಕುಮಾರ್ ಶೆಟ್ಟಿ ವಾರ್ಡ್ 16 - ಪೊರ್ಕೋಡಿ - ರೋಹಿತ್ ಎನ್ . ಕುಮಾರ್ ವಾರ್ಡ್ 17 - ಅಂಬೇಡ್ಕರ್ ನಗರ - ರಝೀಯಾ ವಾರ್ಡ್ 18 - ಕೆಂಜಾರು ಕಾನ- ಪವಿತ್ರಾ ವಾರ್ಡ್ 19 - ಪೇಜಾವರ - ಕ್ಲೆವಿ ರಂಜಿತ್ ಫೆರಾವೊ
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಿದ್ಧತೆ : ಕಾಸರಗೋಡಿನಲ್ಲಿ 8 ಶಿಕ್ಷಣ ಸಂಸ್ಥೆಗಳಿಗೆ ಇಂದು (ಡಿ.8) ರಜೆ
ಕಾಸರಗೋಡು, ಡಿ.7: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಂಬಂಧಿಸಿ ಮತದಾನ ಸಾಮಗ್ರಿ ವಿತರಣೆ ಕೇಂದ್ರ ಮತ್ತು ಮತ ಎಣಿಕೆ ಕೇಂದ್ರಗಳಾಗಿ ಗುರುತಿಸಿರುವ ಶಿಕ್ಷಣ ಸಂಸ್ಥೆಗಳನ್ನು ಸಜ್ಜು ಗೊಳಿಸಬೇಕಾಗಿದೆ. ಅದಕ್ಕಾಗಿ ಅಂತಹ ಶಾಲೆ-ಕಾಲೇಜುಗಳಿಗೆ ಡಿ.8ರಂದು ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಆದೇಶಿಸಿದ್ದಾರೆ. ಕುಂಬಳೆ ಸರಕಾರಿ ಹಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಬೋವಿಕ್ಕಾನ ಹಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆ, ನೀಲೇಶ್ವರ ರಾಜಾಸ್ ಹಯರ್ ಸೆಕೆಂಡರಿ ಶಾಲೆ, ಪಡನ್ನಕ್ಕಾಡ್ ನೆಹರೂ ಕಾಲೇಜು, ಪರಪ್ಪ ಜಿಎಚ್ಎಸ್ ಶಾಲೆ ಮತ್ತು ಹೊಸದುರ್ಗ ಹಯರ್ ಸೆಕೆಂಡರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಡಿ.11ರಂದು ಜಿಲ್ಲೆಯ 18 ಜಿಪಂ ಸ್ಥಾನ, ಮೂರು ನಗರಸಭೆ, 6 ಬ್ಲಾಕ್ ಪಂಚಾಯತ್, 38 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.
ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಂತಾ... Virat Kohli
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಭಾರಿ ದೊಡ್ಡ ಕದನ ಈಗ ಶುರುವಾಗಿ ಹೋಗಿದೆ. ಕಿಂಗ್ ವಿರಾಟ್ ಕೊಹ್ಲಿ ಅವರನ್ನ ಕ್ರಿಕೆಟ್ ಲೋಕದಿಂದ ಹೊರ ಹಾಕಲು ಗೌತಮ್ ಗಂಭೀರ್ ಕುತಂತ್ರ ಮಾಡುತ್ತಿದ್ದಾರೆ ಅನ್ನೋ ಆರೋಪಗಳ ನಡುವೆ ಸಂಚಲನವೇ ಸೃಷ್ಟಿ ಆಗಿದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದಲ್ಲಿ ಕೂಡ ಈ ಜಗಳ ದೊಡ್ಡ ಅಲ್ಲೋಲ
ಲಿಯೊನೆಲ್ ಮೆಸ್ಸಿ ಮುಂದಾಳತ್ವದ ಇಂಟರ್ ಮಿಯಾಮಿಗೆ ಎಂಎಲ್ಎಸ್ ಕಪ್
ಫ್ಲೋರಿಡಾ: ಲಿಯೊನೆಲ್ ಮೆಸ್ಸಿ ಅವರಿಂದ ಪ್ರೇರಣೆ ಪಡೆದ ಇಂಟರ್ ಮಿಯಾಮಿ ಫುಟ್ಬಾಲ್ ತಂಡವು ವ್ಯಾಂಕೋವರ್ ವೈಟ್ಕ್ಯಾಪ್ಸ್ ತಂಡದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯಶಾಲಿಯಾಗಿ ಮೊದಲ ಬಾರಿ ಎಂಎಲ್ಎಸ್ ಕಪ್ ಪ್ರಶಸ್ತಿಗೆ ಮುತ್ತಿಟ್ಟಿದೆ. ಅರ್ಜೆಂಟೀನದ ಸೂಪರ್ಸ್ಟಾರ್ ಮೆಸ್ಸಿ ಎರಡು ಗೋಲು ಗಳಿಸಲು ಅಸಿಸ್ಟ್ ಮಾಡಿದರು. ಎಡಿಯೆರ್ ಒಕಾಂಪೊ ಅವರ ಸ್ವಯಂ ಗೋಲಿನಿಂದಾಗಿ ಮಿಯಾಮಿ ತಂಡವು 8ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಅಲಿ ಮುಹಮ್ಮದ್ 60ನೇ ನಿಮಿಷದಲ್ಲಿ ಗೋಲು ಗಳಿಸಿ ವ್ಯಾಂಕೋವರ್ ತಂಡ ಸಮಬಲ ಸಾಧಿಸುವಲ್ಲಿ ನೆರವಾದರು. ಆ ನಂತರ ಮೆಸ್ಸಿ ಅವರು ಅರ್ಜೆಂಟೀನ ಅಂತರ್ರಾಷ್ಟ್ರೀಯ ತಂಡದ ಸಹ ಆಟಗಾರ ರೊಡ್ರಿಗೊ ಡಿ ಪೌಲ್ಗೆ 71ನೇ ನಿಮಿಷದಲ್ಲಿ ಗೋಲು ಗಳಿಸಲು ಅಸಿಸ್ಟ್ ಮಾಡಿ ಮಿಮಾಮಿ ತಂಡ 2-1 ಮುನ್ನಡೆ ಪಡೆಯಲು ನೆರವಾದರು. ಇಂಜುರಿ ಟೈಮ್ನಲ್ಲಿ(90+6) ಟಾಡಿಯೊ ಅಲೆಂಡೆ ಗೋಲು ಗಳಿಸಲು ಮೆಸ್ಸಿ ಪಾಸ್ ನೀಡಿದರು. ಈ ಮೂಲಕ ಮಿಯಾಮಿ ತಂಡಕ್ಕೆ 3-1 ಅಂತರದ ಗೆಲುವು ಖಚಿತಪಡಿಸಿದರು. ಮಿಯಾಮಿ ಮೊದಲ ಬಾರಿ ಪ್ರಮುಖ ಲೀಗ್ ಸಾಕರ್ ಪ್ರಶಸ್ತಿಯನ್ನು ಗೆದ್ದ ಕಾರಣ ಸಹ ಮಾಲಕ, ಇಂಗ್ಲೆಂಡ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಜಿ ಆಟಗಾರ ಡೇವಿಡ್ ಬೆಕ್ಹ್ಯಾಮ್ ಸಂಭ್ರಮಪಟ್ಟರು. ‘‘ನಾನು ಸಾಕಷ್ಟು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೆ. ಆದರೆ ನನಗೆ ಯಾವಾಗಲೂ ನಂಬಿಕೆ ಇತ್ತು. ತಂಡವನ್ನು ಇಲ್ಲಿಯ ತನಕ ತಲುಪಿಸುವ ನಂಬಿಕೆ ಇತ್ತು. ಸರಿಯಾದ ಜೊತೆಗಾರರನ್ನು ಪಡೆದರೆ ಎಲ್ಲವೂ ಸಾಧ್ಯ ಎಂದು ಗೊತ್ತಿತ್ತು’’ಎನ್ನುವುದಾಗಿ ಬೆಕ್ಹ್ಯಾಮ್ ಹೇಳಿದರು. ಜರ್ಮನಿಯ ಲೆಜೆಂಡ್ ಥಾಮಸ್ ಮುಲ್ಲರ್ ಮುಂದಾಳತ್ವದ ವ್ಯಾಂಕೋವರ್ ತಂಡವು 8ನೇ ನಿಮಿಷದ ಸ್ವಯಂ ಗೋಲಿನಿಂದ ಚೇತರಿಸಿಕೊಂಡು ಅಲಿ ಅಹ್ಮದ್ 60ನೇ ನಿಮಿಷದಲ್ಲಿ ಗಳಿಸಿದ ಗೋಲು ನೆರವಿನಿಂದ ಸಮಬಲ ಸಾಧಿಸಿತು. ಆದರೆ ಪಂದ್ಯ ಗೆಲ್ಲಲು ವಿಫಲವಾಯಿತು.
ದಾಳಿಗೆ ಗುರಿಯಾದ ಮಾದಕ ವಸ್ತುಗಳಿದ್ದ ದೋಣಿ ಅಮೆರಿಕಾದತ್ತ ಚಲಿಸುತ್ತಿರಲಿಲ್ಲ: ವರದಿಯಲ್ಲಿ ಉಲ್ಲೇಖ
ಕ್ಯಾರಕಸ್: ಸೆಪ್ಟಂಬರ್ 2ರಂದು ವೆನೆಝುವೆಲಾದ ಬಳಿ ಸಾಗುತ್ತಿದ್ದ ಮಾದಕ ವಸ್ತುಗಳಿದ್ದ ದೋಣಿಯ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಸಂಬಂಧಿಸಿದ ಹೊಸ ವರದಿಯು ಈ ದೋಣಿ ಅಮೆರಿಕಾದತ್ತ ಸಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಗೆ ತೀವ್ರ ಹಿನ್ನಡೆಯಾಗಿದೆ. ಅಮೆರಿಕಾದ ದಾಳಿಯಲ್ಲಿ ದೋಣಿಯಲ್ಲಿದ್ದ 11 ಮಂದಿ ಸಾವನ್ನಪ್ಪಿದರು. ದಾಳಿ ನಡೆದೊಡನೆ ಆ ಕುರಿತ ವಿವರಗಳನ್ನು ಟ್ರಂಪ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು ` ವೆನೆಝುವೆಲಾದ ಮಾದಕ ವಸ್ತು ಭಯೋತ್ಪಾದಕರು ಅಕ್ರಮ ಮಾದಕ ವಸ್ತುಗಳನ್ನು ಅಮೆರಿಕಾದತ್ತ ಸಾಗಿಸುತ್ತಿದ್ದಾಗ ಅಂತರಾಷ್ಟ್ರೀಯ ಸಮುದ್ರದಲ್ಲಿ ಅವರ ಮೇಲೆ ದಾಳಿ ನಡೆಸಲಾಗಿದೆ. ಈ ಅತ್ಯಂತ ಅಪಾಯಕಾರಿ ಮಾದಕ ವಸ್ತು ಸಾಗಾಟ ಪ್ರಕ್ರಿಯೆ ಅಮೆರಿಕಾದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕಾದ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದೆ. ದಾಳಿಯಲ್ಲಿ ಮೂವರು ಪುರುಷ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ' ಎಂದು ಪೋಸ್ಟ್ ಮಾಡಿದ್ದರು. ಆದರೆ ದಾಳಿ ನಡೆದ ಕೆಲ ಘಂಟೆಗಳ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅಮೆರಿಕಾದ ವಿದೇಶಾಂಗ ಸಚಿವ ಮಾರ್ಕೋ ರೂಬಿಯೊ `ದಾಳಿಗೆ ಗುರಿಯಾದ ಆಪಾದಿತ ಮಾದಕ ವಸ್ತು ಸಾಗಾಟದ ದೋಣಿಯು ಬಹುಷಃ ಟ್ರಿನಿಡಾಡ್ ಅಥವಾ ಇತರ ಕ್ಯಾರಿಬಿಯನ್ ದೇಶಗಳತ್ತ ಸಾಗುತ್ತಿತ್ತು' ಎಂದು ಹೇಳಿಕೆ ನೀಡಿದ್ದರು ಎಂದು ಸಿಎನ್ಎನ್ ವರದಿ ಮಾಡಿದೆ. ಅಮೆರಿಕಾದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಡ್ಮಿರಲ್ ಪ್ರಕಾರ ದೋಣಿಯು ಸುರಿನಾಮ್ ಮೂಲಕ ಅಮೆರಿಕಾದತ್ತ ಚಲಿಸುವ ಸಾಧ್ಯತೆಯಿತ್ತು. ಆದರೆ ಸಾಮಾನ್ಯವಾಗಿ ಈ ಸಮುದ್ರ ಮಾರ್ಗವನ್ನು ಯುರೋಪಿಯನ್ ಮಾರ್ಕೆಟ್ ನತ್ತ ಸಾಗಲು ಬಳಸಲಾಗುತ್ತದೆ ಎಂದು ವರದಿ ಹೇಳಿದೆ. ದೋಣಿಯ ಮೇಲೆ 4 ದಾಳಿ ನಡೆದಿದ್ದು ಮೊದಲ ದಾಳಿಯಲ್ಲಿ ದೋಣಿ ಎರಡು ಭಾಗವಾಗಿದ್ದು ಬದುಕುಳಿದವರು ಒಂದು ಭಾಗವನ್ನು ಹಿಡಿದು ನೇತಾಡುತ್ತಿದ್ದರು. ನಂತರ ನಡೆದ ಎರಡು ದಾಳಿಗಳು ಅವರನ್ನು ಕೊಂದು ದೋಣಿಯನ್ನು ಮುಳುಗಿಸಿದೆ. ದೋಣಿಯಲ್ಲಿದ್ದ ಎಲ್ಲರನ್ನೂ ಕೊಲ್ಲುವಂತೆ ರಕ್ಷಣಾ ಸಚಿವ ಪೀಟ್ ಹೆಗ್ಸೆಥ್ ಆದೇಶಿಸಿದ್ದರು ಎಂದು ಅಡ್ಮಿರಲ್ ಹೇಳಿದ್ದರು. ಇದೀಗ ಸೆಪ್ಟೆಂಬರ್ 2ರಂದು ನಡೆದ ದಾಳಿಯ ಸಂಪೂರ್ಣ ವೀಡಿಯೊವನ್ನು ಬಹಿರಂಗಗೊಳಿಸುವಂತೆ ಹೆಗ್ಸೆಥ್ ಮೇಲೆ ಒತ್ತಡ ಹೆಚ್ಚುತ್ತಿದೆ.
ಮೆಕ್ಕೆಜೋಳದ ಗರಿಷ್ಠ ಮಿತಿ 50 ಕ್ವಿಂಟಾಲ್ಗೆ ಹೆಚ್ಚಳ : ರಾಜ್ಯ ಸರಕಾರ ಆದೇಶ
ಬೆಂಗಳೂರು : ರವಿವಾರ ರಾಜ್ಯ ಸರಕಾರವು ಪ್ರತಿ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಾಲ್ನಿಂದ 50 ಕ್ವಿಂಟಾಲ್ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಪ್ರತಿ ಎಕರೆಗೆ 12 ಕ್ವಿಂಟಾಲ್ನಂತೆ ಗರಿಷ್ಠ 20 ಕ್ವಿಂಟಾಲ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್ಗೆ 24 ಸಾವಿರ ರೂಪಾಯಿಯಂತೆ ಖರೀದಿಸಲು ಆದೇಶ ಹೊರಡಿಸಲಾಗಿತ್ತು. ಖರೀದಿ ಪ್ರಮಾಣವನ್ನು ಹೆಚ್ಚಿಸುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಿತಿಯನ್ನು 50 ಕ್ವಿಂಟಾಲ್ಗೆ ಏರಿಕೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿತವಾಗಿರುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಟ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಸಮೀಪದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕಲಬುರಗಿ| ಅಲ್ ಬದರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
ಕಲಬುರಗಿ: ನಗರದ ಎಂ.ಜಿ.ರೋಡ್ನ ಬಡೇಪುರದ ಮನ್ಸಬದಾರ ಲೇಔಟ್ನಲ್ಲಿ ನಿರ್ಮಿಸಿರುವ ಅಲ್-ಬದರ್ ಮಲ್ಟಿಸ್ಪೇಷಾಲಿಟಿ ಮತ್ತು ಡೆಂಟಲ್ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಿದರು. ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಹಝರತ್ ಖ್ವಾಜಾ ಬಂದಾನವಾಜ್ ದರ್ಗಾದ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಅಲ್ ಬದರ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಎ. ಮುಜೀಬ್, ಸಚಿವ ಶರಣಬಸಪ್ಪ ದರ್ಶನಾಪೂರ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಶಶೀಲ ನಮೋಶಿ, ಫರಾಜ್ ಉಲ್ ಇಸ್ಲಾಂ, ಚಂದು ಪಾಟೀಲ್, ಟ್ರಸ್ಟಿಗಳಾದ ಎಂ.ಎ.ನಜೀಬ್, ಸೈಯದ್ ಸನಾವುಲ್ಲಾ, ಡಾ.ಸೈಯದ್ ಜಕಾವುಲ್ಲಾ, ಡಾ.ಅರ್ಷದ್ ಹುಸೇನ್, ಎಂ.ಅವನ್ ಮುಜೀಬ್, ಖಲೀಲ್ ಮಸೂದ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುರತ್ಕಲ್ | ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿಯ ಸೆರೆ
ಸುರತ್ಕಲ್, ಡಿ.7: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಕ್ಸೊ ಕಾಯ್ದೆಯಡಿ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ. ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ನಡೆಸಿಕೊಂಡಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟು ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕನ ತಾಯಿ ಸುರತ್ಕಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕಲಂ 4, 6 ಪೊಕ್ಸೊ ಹಾಗೂ 351(2), 117(2) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
Mysuru | ಫೈನಾನ್ಶಿಯರ್ ಅಪಹರಿಸಿ 1 ಕೋಟಿ ರೂ. ಬೇಡಿಕೆ : ನಾಲ್ವರ ಬಂಧನ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರಿಂದ ಕಾರ್ಯಾಚರಣೆ
ಕಲಬುರಗಿ: ಬೆಳೆಹಾನಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯದ ರೈತರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಹೆಚ್ಚುಕಮ್ಮಿ ಆಗಿದೆ ಎಂಬ ದೂರುಗಳಿವೆ. ಇವನ್ನೆಲ್ಲ ಗಮನಿಸಲಾಗಿದ್ದು ಬೆಳಗಾವಿ ಸದನದಲ್ಲಿ ಪ್ರಸ್ತಾಪಿಸಿ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಲು ಯತ್ನಿಸಲಾಗುತ್ತದೆ ಎಂದು ಕೆಕೆಆರ್ಡಿಬಿ ಅದ್ಯಕ್ಷರು, ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಡಾ. ಅಜಯ್ ಧರ್ಮಸಿಂಗ್, ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಒಟ್ಟು 1,033.60 ಕೋಟಿ ಇನ್ ಪುಟ್ ಸಬ್ಸಿಡಿ ಮೊತ್ತ ರೈತರ ಖಾತೆಗೆ ವರ್ಗಾವಣೆ ಆರಂಭಿಸಿದೆ, ಈಗಾಗಲೇ 2 ಕಂತುಗಳಲ್ಲಿ ಹಣ ರೈತರ ಖಾತೆಗೆ ತಲುಪಿದೆ. ಕೆಲವು ಖಾತೆಗಳು ಲಿಂಕ್ ಆಗದ್ದಕ್ಕೆ ಹಣ ವರ್ಗಾವಣೆಯಾಗಿಲ್ಲ. ಆ ಸಮಸ್ಯೆ ಕೂಡಾ ಪರಿಹರಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಈ ಮದ್ಯೆ ಸಮೀಕ್ಷೆಯಲ್ಲಿನ ಕೆಲವು ದೋಷಗಳು, ಹಣ ವಿತರಣೆಯಲ್ಲಿನ ಸಮಸ್ಯೆ ಚರ್ಚೆಯಲ್ಲಿವೆ. ಪತ್ರಿಕೆ ವರದಿಗಳನ್ನೂ ಗಮನಿಸಲಾಗಿದೆ. ಇವನ್ನೆಲ್ಲ ಬೆಳಗಾವಿ ಸದನದಲ್ಲಿ ಸರ್ಕಾರದ ಗಮನಕ್ಕೆ, ಸಿಎಂ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೈ ತಲುಪುವಂತೆ ಮಾಡಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಭರವಸೆ ನೀಡಿದ್ದಾರೆ. ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಇನ್ ಪುಟ್ ಸಬ್ಸಿಡಿ ರೂ 1,033.60 ಕೋಟಿ ರೈತರ ಖಾತೆಗೆ ವರ್ಗಾವಣೆಗೆ ಕ್ರಮವಹಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಪರಿಹಾರದ ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಮೂಲಕ ಪರಿಹಾರ ಹಂಚಿಕೆಗೆ ಚಾಲನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅತಿವೃಷ್ಟಿಯಿಂದ ರೈತರ ಬದುಕು ದುಸ್ಥರವಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ಗಳಿಗೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಗಮನಕ್ಕೆ ತರಲಾಗಿತ್ತು, ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಗಳು ಕಲಬುರಗಿಯಲ್ಲಿ ಪರಿಹಾರ ಘೋಷಣೆ ಮಾಡಿದ್ದರು. ಎನ್ಡಿಆರ್ಎಫ್ ನಿಯಮಗಳಲ್ಲಿರುವ ಮೊತ್ತದೊಂದಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ಘೋಷಿಸಲಾಗಿತ್ತು. ವೈಮಾನಿಕ ಸಮೀಕ್ಷೆಯ ವೇಳೆ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದ ಸಿಎಂ ರೈತರ ಕಷ್ಟ ನಷ್ಟಗಳನ್ನು ಅವಲೋಕಿಸಿದ್ದರು. ಅಂತೆಯೇ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚಿನ ಪರಿಹಾರ ದೊರಕಿದೆ. ರೈತರು ಕಾಂಗ್ರೆಸ್ ಸರ್ಕಾರದ ರೈತ ಪರ ಧೋರಣೆಯನ್ನು ಮನಗಾಣಬೇಕು. ಪರಿಹಾರ ವಿತರಣೆಯಲ್ಲಿನ ದೋಷಗಳನ್ನು, ತಾಂಕ್ಷಿಕ ನ್ಯೂನತೆಗಳನ್ನು ಶೀಘ್ರ ಸರಿಪಡಿಸಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ. ಕೆಕೆಆರ್ಡಿಬಿಯಲ್ಲಿ ಅನುದಾನ ವೆಚ್ಚವಾಗುತ್ತಿಲ್ಲವೆಂಬ ಕಾಲವಿತ್ತು. ಈಗ ಅದು ಬದಲಾಗಿದೆ. ನಾವು ಹೆಚ್ಚಿನ ಅನುದಾನ ಹಲವು ಯೋಜನೆಗಳಲ್ಲಿ ವೆಚ್ಚ ಮಾಡುತ್ತಿದ್ದೇವೆ. ಇದರಿಂದ ಈ ಭಾಗದಲ್ಲಿ ಪ್ರಗತಿ ಕಣ್ಣಿಗೆ ಕಾಣೋ ರೀತಿಯಲ್ಲಿ ಆಗುತ್ತಿದೆ. ಈ ಆರ್ಥಿಕ ವರ್ಷದ ಡಿಸೆಂಬರ್ವರೆಗೂ 1626 ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಚ್ ಒಳಗಾಗಿ 4 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಕಳೆದ ವರ್ಷ 1, 200 ಕೋಟಿ ರೂ ವೆಚ್ಚವಾಗಿತ್ತು. ಈ ಬಾರಿ ಆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಚರ್ಚೆಗೆ ನಾನೂ ಸಿದ್ಧ; ದಿನಾಂಕ, ಸಮಯ ನಿಗದಿಗೊಳಿಸಿ: ಕೆ.ಸಿ. ವೇಣುಗೋಪಾಲ್ಗೆ ಪಿಣರಾಯಿ ವಿಜಯನ್ ಸವಾಲು
ತಿರುವನಂತಪುರಂ: ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆ ಕುರಿತು ಸಾರ್ವಜನಿಕ ಚರ್ಚೆ ನಡೆಸಲು ನಾನು ಸಿದ್ಧ. ಅದಕ್ಕಾಗಿ ದಿನಾಂಕ ಮತ್ತು ಸಮಯ ನಿಗದಿಗೊಳಿಸಲು ನೀವು ಸಿದ್ಧರಿದ್ದೀರಾ? ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ಪಂಥಾಹ್ವಾನ ನೀಡಿದ್ದಾರೆ. ಯುಡಿಎಫ್ ಸಂಸದರು ಕೇರಳದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ವಿಫಲರಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ರಾಜ್ಯದ ಹಿತಾಸಕ್ತಿಗಳ ವಿರುದ್ಧವಾಗಿ ಅವರು ನಿಲುವು ತೆಗೆದುಕೊಂಡಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಟೀಕಿಸಿದ್ದರು. ಈ ಟೀಕೆಗೆ ಪ್ರತಿಕ್ರಿಯಿಸಿದ್ದ ಕೆ.ಸಿ.ವೇಣುಗೋಪಾಲ್, ಯುಡಿಎಫ್ ಸಂಸದರ ಕಾರ್ಯವೈಖರಿ ಕುರಿತು ಮುಕ್ತ ಚರ್ಚೆಗೆ ಪಿಣರಾಯಿ ವಿಜಯನ್ ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದ್ದರು. ಈ ಕುರಿತು ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಪಿಣರಾಯಿ ವಿಜಯನ್, ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಬಗ್ಗೆ ವೇಣುಗೋಪಾಲ್ ಅವರಿಗೆ ತಿಳಿದಿಲ್ಲವೆ? ಹಾಗಾದರೆ, ಖಂಡಿತ ನಾನು ಅವರೊಂದಿಗೆ ಮುಕ್ತ ಚರ್ಚೆಗೆ ಸಿದ್ಧನಿದ್ದದೇನೆ. ಅವರೇ ಸಮಯ ಮತ್ತು ಸ್ಥಳವನ್ನು ನಿಗದಿಗೊಳಿಸಲಿ ಎಂದು ಸವಾಲು ಹಾಕಿದ್ದಾರೆ. ಕೇರಳದ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಕಾಂಗ್ರೆಸ್ ನಾಯಕರೇ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಕೇರಳವನ್ನು ಬಡತನ ಮುಕ್ತ ರಾಜ್ಯವೆಂದು ಘೋಷಿಸಿದ ಬಳಿಕ, ವಿರೋಧ ಪಕ್ಷದ ಸಂಸದರು ಸಂಸತ್ತಿನಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತುವ ಮೂಲಕ ಅಂತ್ಯೋದಯ ಅನ್ನ ಯೋಜನೆಗೆ ಸಂಬಂಧಿಸಿದ ಎಲ್ಲ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.
30 ಕೋಟಿ ರೂ. ವಂಚನೆ ಪ್ರಕರಣ: ಖ್ಯಾತ ನಿರ್ದೇಶಕ ವಿಕ್ರಂ ಭಟ್ ಬಂಧನ
ಮುಂಬೈ: 30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಉದಯ್ಪುರ್ನ ಇಂದಿರಾ ಸಮೂಹ ಸಂಸ್ಥೆಗಳ ಮಾಲಕ ಡಾ. ಅಜಯ್ ಮುರ್ದಿಯಾ ದೂರುದಾರರಾಗಿದ್ದಾರೆ. ನಿರ್ಮಾಪಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದ ನಂತರ, ಪೊಲೀಸರು ದಂಪತಿಯನ್ನು ಉದಯ್ಪುರ್ಗೆ ಕರೆ ತರಲಿದ್ದಾರೆ. ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳಿಗೆ ಎರಡನೆಯ ಬಾರಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಡಿಸೆಂಬರ್ 8ರೊಳಗೆ ಪೊಲೀಸರೆದುರು ಹಾಜರಾಗುವಂತೆ ಅವರಿಗೆಲ್ಲ ನೋಟಿಸ್ನಲ್ಲಿ ಸೂಚಿಸಲಾಗಿತ್ತು. ಜೀವನಚಿತ್ರ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವೊಂದರಲ್ಲಿ ನಡೆದಿದೆಯೆನ್ನಲಾದ 30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಕ್ರಂ ಭಟ್, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಎಫ್ಐಆರ್ನಲ್ಲಿ ದಾಖಲಾಗಿರುವ ಅಂಶಗಳು ಸಂಪೂರ್ಣವಾಗಿ ತಪ್ಪಾಗಿದ್ದು, ಪೊಲೀಸರನ್ನು ದಾರಿ ತಪ್ಪಿಸಲಾಗಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದರು. ಹಣಕಾಸು ಅವ್ಯವಹಾರಗಳನ್ನು ನಡೆಸಿದ್ದಾರೆ ಹಾಗೂ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಿಕ್ರಂ ಭಟ್ ಹಾಗೂ ಅವರ ಸಹಚರರ ವಿರುದ್ಧ ಇಂದಿರಾ ಐವಿಎಫ್ ಸಂಸ್ಥಾಪಕ ಡಾ. ಅಜಯ್ ಮುರ್ದಿಯಾ ಉದಯ್ಪುರ್ ಜಿಲ್ಲೆಯ ಭೂಪಾಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನನ್ನ ದಿವಂಗತ ಪತ್ನಿಯ ಜೀವನಾಧಾರಿತ ಚಲನಚಿತ್ರ ನಿರ್ಮಿಸಿದರೆ, ಆ ಚಿತ್ರವು ಅಂದಾಜು 200 ಕೋಟಿ ರೂ. ಲಾಭ ತಂದುಕೊಡುತ್ತದೆ ಎಂದು ನನ್ನನ್ನು ನಂಬಿಸಿ, ಹಣ ಹೂಡಿಸಲಾಗಿತ್ತು ಎಂದು ಎಫ್ಐಆರ್ನಲ್ಲಿ ಡಾ. ಅಜಯ್ ಮುರ್ದಿಯಾ ಆರೋಪಿಸಿದ್ದಾರೆ. ದೂರಿನಲ್ಲಿ ಮೆಹಬೂಬ್ ಮತ್ತು ದಿನೇಶ್ ಕಟಾರಿಯಾ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.
ಅಮೆರಿಕಾದ ಹೊಸ ರಕ್ಷಣಾ ನೀತಿ ಪ್ರಕಟ: ಭಾರತದ ಪ್ರಾಮುಖ್ಯತೆ ಕುಸಿತ
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2025ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ(ಎನ್ಎಸ್ಎಸ್)ವನ್ನು ಬಿಡುಗಡೆಗೊಳಿಸಿದ್ದು ಆಡಳಿತದ ವಿದೇಶಾಂಗ ನೀತಿಯ ನಿಷ್ಠುರ ನೀಲನಕ್ಷೆಯನ್ನು ಒದಗಿಸಿದೆ. ಭಾರತದೊಂದಿಗಿನ ಪಾಲುದಾರಿಕೆಯ ಬಗ್ಗೆ ಅಮೆರಿಕಾದ ಅಭಿವ್ಯಕ್ತಿಯಲ್ಲಿ ಸ್ಪಷ್ಟ ಬದಲಾವಣೆಯನ್ನು ಈ ಕಾರ್ಯತಂತ್ರ ತೋರಿಸಿದೆ. 2017ರ ಎನ್ಎಸ್ಎಸ್ ನಲ್ಲಿ `ಇಂಡೊ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ ನೀಡಲಾಗಿತ್ತು. `ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗಿ ಮತ್ತು ಬಲವಾದ ಕಾರ್ಯತಂತ್ರ ಮತ್ತು ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುವುದನ್ನು' ಸ್ಪಷ್ಟವಾಗಿ ಸ್ವಾಗತಿಸಲಾಗಿತ್ತು. ಇತ್ತೀಚಿನ ದಾಖಲೆಯಲ್ಲಿ ಈ ಭಾಷೆಯನ್ನು ಗಮನಾರ್ಹವಾಗಿ ಹದಗೊಳಿಸಿದೆ. `ಕ್ವಾಡ್ ಸೇರಿದಂತೆ ಇಂಡೊ-ಪೆಸಿಫಿಕ್ ಭದ್ರತೆಗೆ ಕೊಡುಗೆ ನೀಡಲು ಭಾರತವನ್ನು ಉತ್ತೇಜಿಸಲು ಅಮೆರಿಕಾವು ಭಾರತದೊಂದಿಗೆ ವಾಣಿಜ್ಯ ಹಾಗೂ ಇತರ ಸಂಬಂಧಗಳನ್ನು ಸುಧಾರಿಸುವುದನ್ನು ಮುಂದುವರಿಸಬೇಕು' ಎಂದಷ್ಟೇ ಉಲ್ಲೇಖಿಸಲಾಗಿದೆ. ಇಂಡೊ-ಪೆಸಿಫಿಕ್ ಸಹಕಾರದ ಮೂಲಾಧಾರವಾದ ಕ್ವಾಡ್ನ ಉಲ್ಲೇಖವು ಗಮನಾರ್ಹವಾಗಿ ಸಂಕ್ಷಿಪ್ತವಾಗಿದ್ದು ಹಿಂದಿನ ವ್ಯಾಪಕ ಘೋಷಣೆಗಳಿಗೆ ಹೋಲಿಸಿದರೆ ಕಡಿಮೆ ಕಾರ್ಯತಂತ್ರದ ಮಹತ್ವವನ್ನು ಸೂಚಿಸುತ್ತದೆ' ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುಸೂತ್ರವಾಗಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
ಬೆಂಗಳೂರು : ರವಿವಾರ ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025(ಟಿಇಟಿ) ಸುಸೂತ್ರವಾಗಿ ನಡೆದಿದ್ದು, ಪತ್ರಿಕೆ-1ರಲ್ಲಿ ಶೇ. 93.35, ಪತ್ರಿಕೆ-2ರಲ್ಲಿ ಶೇ. 94.79 ಮಂದಿ ಹಾಜರಾಗಿದ್ದಾರೆ. ಪತ್ರಿಕೆ-1ಕ್ಕೆ 85,042 ಮಂದಿ ನೋಂದಣಿ ಮಾಡಿಕೊಂಡಿದ್ದು, 79,394 ಮಂದಿ ಪರೀಕ್ಷೆ ಬರೆದಿದ್ದಾರೆ. ಪತ್ರಿಕೆ-2ಕ್ಕೆ 2,50,189 ಮಂದಿ ನೋಂದಣಿ ಮಾಡಿಕೊಂಡಿದ್ದು, 2,37,164 ಮಂದಿ ಪರೀಕ್ಷೆ ಬರೆದಿದ್ದಾರೆ.
ಇಸ್ರೇಲ್ ಸೇನೆಯ ಆಕ್ರಮಣ ಕೊನೆಗೊಂಡರೆ ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ಶಸ್ತ್ರಾಸ್ತ್ರ ಹಸ್ತಾಂತರ: ಹಮಾಸ್
ಗಾಝಾ ನಗರ: ಇಸ್ರೇಲ್ ಸೇನೆಯ ಆಕ್ರಮಣ ಕೊನೆಗೊಂಡರೆ ಗಾಝಾ ಪಟ್ಟಿಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ತಾನು ಸಿದ್ಧ ಎಂದು ಹಮಾಸ್ ಹೇಳಿದೆ. ನಮ್ಮ ಶಸ್ತ್ರಾಸ್ತ್ರಗಳು ಆಕ್ರಮಣ ಮತ್ತು ಆಕ್ರಮಣಕಾರರ ಉಪಸ್ಥಿತಿಯೊಂದಿಗೆ ಸಂಬಂಧಿಸಿದೆ. ಆಕ್ರಮಣ ಕೊನೆಗೊಂಡರೆ ಈ ಆಯುಧಗಳನ್ನು ಸ್ವತಂತ್ರ ಮತ್ತು ಸಾರ್ವಭೌಮ ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಹಮಾಸ್ ನ ಗಾಝಾ ಮುಖ್ಯಸ್ಥ ಖಲೀಲ್ ಅಲ್-ಹಯ್ಯಾ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಗಡಿಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಗಾಝಾದಲ್ಲಿ ಕದನ ವಿರಾಮದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವಸಂಸ್ಥೆ ಪಡೆಗಳನ್ನು ಪ್ರತ್ಯೇಕ ಪಡೆಯಾಗಿ ನಿಯೋಜಿಸುವುದನ್ನು ನಾವು ಸ್ವೀಕರಿಸುತ್ತೇವೆ' ಎಂದು ಅಲ್-ಹಯ್ಯಾ ಹೇಳಿದ್ದಾರೆ. ಅಂತಾರಾಷ್ಟ್ರೀಯ ಪಡೆಗಳ ಕಾರ್ಯ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ಎಂಬ ಅಂಶವನ್ನು ಹಮಾಸ್ ತಿರಸ್ಕರಿಸಿದೆ.
ಕನಿಷ್ಠ ಮಕ್ಕಳು ದಾಖಲಾಗದಿದ್ದಲ್ಲಿ, ಮುಂದಿನ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿ ಆರಂಭ
ಬೆಂಗಳೂರು : ಈ ವರ್ಷ ಸರಕಾರಿ ಶಾಲೆಗಳಲ್ಲಿ ನಿಗದಿತ ಕನಿಷ್ಠ ಸಂಖ್ಯೆಗಿಂತ ಕಡಿಮೆ ಮಕ್ಕಳಿದ್ದರೆ, ಮುಂದಿನ ಶೈಕ್ಷಣಿಕ ವರ್ಷದಿಂದ(2026-27) ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1,105 ಶಾಲೆಗಳು, 126 ಪಿಎಂಶ್ರೀ ಶಾಲೆಗಳು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಯೋಜನೆಯಡಿ 1,105 ಶಾಲೆಗಳು ಮತ್ತು 1,699 ಮ್ಯಾಗ್ನೆಟ್ ಶಾಲೆಗಳು ಹೀಗೆ ಒಟ್ಟು 4,056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲು ರಾಜ್ಯ ಸರಕಾರ ಅನುಮತಿ ನೀಡಿತ್ತು. ಅದರಂತೆ ಪೂರ್ವ ಪ್ರಾಥಮಿಕ ತರಗತಿ ಆರಂಭಕ್ಕೆ ಆಯ್ಕೆಗೊಂಡ 4 ರಿಂದ 5ನೆ ವರ್ಷ ವಯಸ್ಸಿನ ಕನಿಷ್ಠ 20 ವಿದ್ಯಾರ್ಥಿಗಳು ಎಲ್ಕೆಜಿಗೆ ದಾಖಲಾದರೆ ಮಾತ್ರ, ಈ ಶೈಕ್ಷಣಿಕ ವರ್ಷದಿಂದ ಎಲ್ಕೆಜಿಯನ್ನು ಆರಂಭಿಸಬೇಕು. ಒಂದು ವೇಳೆ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗದಿದ್ದಲ್ಲಿ, ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಗೆ ಕನಿಷ್ಠ 20 ಮತ್ತು ಗರಿಷ್ಠ 40 ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು. ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕ ಮತ್ತು ಒಬ್ಬ ಆಯಾರನ್ನು ನಿಯಮಾನುಸಾರ ತಾತ್ಕಾಲಿಕವಾಗಿ ನೇಮಕಗೊಳಿಸಬೇಕು. ಶಿಕ್ಷಕರಿಗೆ ಮಾಸಿಕ 12 ಸಾವಿರ ರೂ. ಮತ್ತು ಓರ್ವ ಆಯಾಗೆ ಮಾಸಿಕ 6,250 ರೂ. ಸಂಭಾವನೆ ನಿಗದಿ ಮಾಡಬೇಕು. ಪೂರ್ವ ಪ್ರಾಥಮಿಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಗ್ಯ, ಪೂರಕ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಬಿಡಿಸಿಸಿ ಬ್ಯಾಂಕ್ ಚುನಾವಣೆ : 18 ಕ್ಷೇತ್ರಗಳ ಪೈಕಿ 15 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು
ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಬಿಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ 15 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ನಗರದ ಬಿಡಿಸಿಸಿ ಬ್ಯಾಂಕ್ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಬಿಡಿಸಿಸಿ ಬ್ಯಾಂಕ್ ಚುನಾವಣೆ ನಡೆದಿದ್ದು, 18 ಕ್ಷೇತ್ರಗಳ ಪೈಕಿ 15ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನೇರವಾಗಿ ಗೆದ್ದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ 2 ಕ್ಷೇತ್ರಗಳು, ಚನ್ನಪಟ್ಟಣದ 1, ಕನಕಪುರದ 2, ಮಾಗಡಿಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು. ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆಯ 2, ದೇವನಹಳ್ಳಿಯಲ್ಲಿ 1, ದೊಡ್ಡಬಳ್ಳಾಪುರದಲ್ಲಿ 1, ಆನೇಕಲ್ನಲ್ಲಿ 1, ಬೆಂಗಳೂರು ಉತ್ತರ ಕ್ಷೇತ್ರದಿಂದ 1 ಕ್ಷೇತ್ರದಲ್ಲಿ ಹಾಗೂ ಎಚ್.ಎಂ ರೇವಣ್ಣ ಅವರ ಸಹಕಾರದಿಂದ 1 ಸೇರಿ, ಇತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಮಾಹಿತಿ ನೀಡಿದರು. ನೆಲಮಂಗಲ ಹಾಗೂ ಸೋಲೂರು ಕ್ಷೇತ್ರಗಳ 2 ಸ್ಥಾನಗಳನ್ನು ಬಿಜೆಪಿ ಸಹಕಾರದೊಂದಿಗೆ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಕೆ.ಎಚ್ ಮುನಿಯಪ್ಪ, ಕೃಷ್ಣ ಭೈರೇಗೌಡ ಹಾಗೂ ಶಾಸಕರಾದ ಶಿವಣ್ಣ, ಶರತ್ ಬಚ್ಚೇಗೌಡ, ಇಕ್ಬಾಲ್ ಹುಸೇನ್, ಬಾಲಕೃಷ್ಣ, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್, ಮುಖಂಡರಾದ ಆರ್.ಕೆ. ರಮೇಶ್, ವೆಂಕಟರಮಣಪ್ಪ ಮತ್ತಿತರ ಮುಖಂಡರ ಸಹಕಾರದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗಿದೆ ಎಂದರು. ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬಹಳ ಇತಿಹಾಸ ಇರುವ ಬ್ಯಾಂಕ್. ರಾಜಧಾನಿಯಲ್ಲಿರುವ ರಾಜ್ಯದ ಗಮನ ಸೆಳೆಯುವ ಬ್ಯಾಂಕ್ ಇದಾಗಿದ್ದು, ಅನೇಕ ಏಳು ಬೀಳು ಕಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕ್ ಉತ್ತಮ ಆಡಳಿತ ನಡೆಸಿಕೊಂಡು ಬಂದಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಒಟ್ಟು 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಬ್ಯಾಂಕ್ ಇದಾಗಿದೆ ಎಂದರು. ಬಿಡಿಸಿಸಿ ಬ್ಯಾಂಕ್ ಅನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಈ ಬ್ಯಾಂಕ್ ವ್ಯಾಪ್ತಿಗೆ ಬರುವ ರೈತರು ಹಾಗೂ ನಾಗರಿಕರಿಗೆ ಉತ್ತಮ ಸೇವೆ, ಸೌಲಭ್ಯವನ್ನು ನಮ್ಮ ಆಡಳಿತ ಮಂಡಳಿ ನೀಡಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬೆಂಬಲಿತ ಪ್ರಸಾದ್, ಶಾಂತಕುಮಾರ್ ಅವರನ್ನು 191 ಮತಗಳ ಅಂತರದಿಂದ ಸೋಲಿಸಿದರು. ಒಟ್ಟು 20 ಸುತ್ತುಗಳ ಮತ ಎಣಿಕೆಯಲ್ಲಿ ಪ್ರಸಾದ್ 749 ಮತಗಳನ್ನು ಪಡೆದರು.
ಸೋನಿಯಾ ಗಾಂಧಿಗೂ ಇದೇ ಭಾಷೆ ಬಳಸುತ್ತೀರಾ? ಸಿದ್ದರಾಮಯ್ಯಗೆ ವಿಜಯೇಂದ್ರ ಹೀಗಂದಿದ್ದೇಕೆ?
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಏಕವಚನ ಬಳಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವರನ್ನು ನೀವು ಹೀಗೆ ಸಂಬೋಧಿಸುತ್ತೀರಾ? ಮುಖ್ಯಮಂತ್ರಿಯ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂತಹ ಭಾಷೆ ಸೂಕ್ತವಲ್ಲ. ಶ್ರೀಮತಿ
ಕಲಬುರಗಿ| ಎಸ್.ಬಿ ಕಾಲೇಜಿನಲ್ಲಿ ವಿಶ್ವ ಮಣ್ಣಿನ ದಿನಾಚರಣೆ
ಕಲಬುರಗಿ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ರವಿವಾರ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಣ್ಣು ಎಂದರೆ ಕೇವಲ ಧೂಳು ಅಥವಾ ಭೂಪರದೆ ಅಲ್ಲ, ಅದರಲ್ಲಿ ಕಾಣುವ ಹಾಗೂ ಕಾಣದ ಅನೇಕ ಜೀವಿಗಳು ಹಾಗೂ ಜೀವಾಣುಗಳು ವಾಸಿಸುತ್ತಿದ್ದು, ಮಣ್ಣಿನೊಂದಿಗೆ ಮಾನವನ ನೇರ ಸಂಬಂಧವಿದೆ ಎಂದು ಹೇಳಿದರು. ಭೂಮಿಯ ಜೀವವಲಯದಲ್ಲಿ ಮಣ್ಣು ಅತ್ಯಂತ ಮೌಲ್ಯಯುತ ಮತ್ತು ಮೂಲಭೂತ ಸಂಪನ್ಮೂಲವಾಗಿದ್ದು, ಕೃಷಿಯ ಆಧಾರವೇ ಮಣ್ಣು. ಆದರೆ ಯಾಂತ್ರಿಕ ಅಭಿವೃದ್ಧಿ, ರಾಸಾಯನಿಕಗಳ ಅತಿಯಾದ ಬಳಕೆ, ಅರಣ್ಯ ನಾಶ, ಮಣ್ಣು ಕೊರೆತ ಹಾಗೂ ಮಾಲಿನ್ಯದ ಪರಿಣಾಮವಾಗಿ ಮಣ್ಣಿನ ಆರೋಗ್ಯ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿ ವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುವುದರ ಉದ್ದೇಶ ಮಣ್ಣಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಪೋಷಕಾಂಶಯುಕ್ತ ಆಹಾರ ಪಡೆಯಲು ಮಣ್ಣಿನಲ್ಲೇ ಸತ್ವ ಇರಬೇಕು ಎಂದು ಡಾ. ಜ್ಯೋತಿ ವಿವರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಸ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ಶೈಲಾ ಹಿರೇಮಠ, ಈ ವರ್ಷದ ವಿಶ್ವ ಮಣ್ಣಿನ ದಿನದ ಧ್ಯೇಯವಾಕ್ಯ “ಆರೋಗ್ಯಕರ ಮಣ್ಣು, ಆರೋಗ್ಯಕರ ನಗರಗಳು” (Healthy Soils for Healthy Cities) ಆಗಿದ್ದು, ಮಣ್ಣಿನ ಸುಸ್ಥಿರ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ಸಂಯೋಜಕರಾದ ಡಾ. ಅಂಬಿಕಾ, ಓಂಕಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೀರಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ : ಡಾ.ಜಿ.ಪರಮೇಶ್ವರ್
‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’
ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಲಿಂಗಾರೆಡ್ಡಿ ಶೇರಿ, ಶೋಭಾದೇವಿ ಚೆಕ್ಕಿ ಆಯ್ಕೆ
ಕಲಬುರಗಿ: ಇಲ್ಲಿನ ಸಂಸ್ಕೃತಿ ಪ್ರಕಾಶನ ಕೊಡಮಾಡುವ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಗೆ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಶೋಭಾದೇವಿ ಚೆಕ್ಕಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ. ಡಿಸೆಂಬರ್ 15ರಂದು ಸೇಡಂನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸ್ಕೃತಿ ಪ್ರಕಾಶನದ ಬೆಳ್ಳಿ ಹಬ್ಬದ ನೆನಪಿಗೆ ಸ್ಥಾಪಿಸಿದ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಶಾಸ್ತ್ರ ಚೂಡಾಮಣಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ, ದಾಸಸಾಹಿತ್ಯದ ವಿದ್ವಾನ್ ಡಾ.ಸ್ವಾಮಿರಾವ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಗಿದೆ. ಪ್ರಕಾಶನದ ಕಾರ್ಯದರ್ಶಿಯಾಗಿದ್ದ ಸೀತಾಗೀತ ಜೋಶಿ ಸ್ಮರಣೆಗೆ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರಶಸ್ತಿ ನೀಡಲಾಗುತ್ತಿದೆ. ಡಿ.15 ರಂದು ಸಂಜೆ 5.45 ಕ್ಕೆ ಸೇಡಂ ರಥಬೀದಿಯಲ್ಲಿರುವ ಶ್ರೀ ಕೊತ್ತಲ ಬಸವ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರಿಯ ವೈದ್ಯರು, ಸಾಹಿತಿಗಳಾದ ಡಾ.ಎಂ.ಜಿ.ದೇಶಪಾoಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧ ಪಾಟೀಲರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಜೋಶಿ ವಹಿಸಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ರಶ್ಯ: 8 ಮಂದಿಗೆ ಗಾಯ
ಕೀವ್: ಉಕ್ರೇನ್ ನಾದ್ಯಂತ ಶನಿವಾರ ತಡರಾತ್ರಿಯಿಂದ ರಶ್ಯ ಭಾರೀ ಪ್ರಮಾಣದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು ನಿರ್ಣಾಯಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ. ಉಕ್ರೇನ್ ನ ಸಶಸ್ತ್ರ ಪಡೆಗಳ ದಿನಾಚರಣೆ ಮತ್ತು ಯುದ್ಧ ಕೊನೆಗೊಳಿಸುವ ಬಗ್ಗೆ ವಿದೇಶದಲ್ಲಿ ಮಾತುಕತೆ ಮುಂದುವರಿಯುತ್ತಿರುವ ಸಂದರ್ಭದಲ್ಲೇ ರಶ್ಯದ ದಾಳಿ ನಡೆದಿದೆ. ರಶ್ಯವು 51 ಕ್ಷಿಪಣಿ ಮತ್ತು 653 ಡ್ರೋನ್ ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 30 ಕ್ಷಿಪಣಿಗಳು ಹಾಗೂ 585 ಡ್ರೋನ್ ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ . ದೇಶದಾದ್ಯಂತ 29 ಸ್ಥಳಗಳಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಪತನಗೊಂಡ ಕ್ಷಿಪಣಿಗಳ ಅವಶೇಷ ಬಡಿದು ಹಲವು ವಸತಿ ಪ್ರದೇಶಗಳಿಗೆ ಹಾನಿಯಾಗಿದೆ. ಕೀವ್ ಬಳಿಯ ಫಾಸ್ತಿವ್ ನಗರದಲ್ಲಿ ಡ್ರೋನ್ ದಾಳಿಯಿಂದ ರೈಲ್ವೇ ನಿಲ್ದಾಣಕ್ಕೆ ಹಾಮಿಯಾಗಿದ್ದು ಈ ಪ್ರದೇಶದ ರೈಲು ಸಂಚಾರಕ್ಕೆ ತೊಡಕಾಗಿದೆ ಎಂದು ಉಕ್ರೇನಿನ ಆಂತರಿಕ ಸಚಿವ ಇಹೊರ್ ಕ್ಲಿಮೆಂಕೋ ಹೇಳಿದ್ದಾರೆ. ಡ್ರೋನ್ ದಾಳಿಯ ಬಳಿಕ ಝಪೋರಿಝಿಯಾ ಪರಮಾಣು ಸ್ಥಾವರದ ಹೊರಗೆ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ನಂತರ ರಿಯಾಕ್ಟರ್ ಗಳನ್ನು ಸ್ಥಗಿತಗೊಳಿಸಿದ್ದು ಪರಮಾಣು ಅಪಾಯವನ್ನು ದೂರಗೊಳಿಸಲು ನಿರಂತರ ವಿದ್ಯುತ್ ಸಂಪರ್ಕದ ಅಗತ್ಯವಿದೆ ಎಂದು ರಾಷ್ಟ್ರೀಯ ಇಂಧನ ನಿರ್ವಾಹಕ ಏಜೆನ್ಸಿಯ ಮೂಲಗಳು ಹೇಳಿವೆ.
ಅಧ್ಯಕ್ಷರ ಪದಚ್ಯುತಿ, ಸರಕಾರ ವಿಸರ್ಜನೆ: ಟಿವಿ ವಾಹಿನಿಯ ಮೂಲಕ ಯೋಧರ ಗುಂಪು ಘೋಷಣೆ
ಬಸರಿಹಾಳ| ಕೆರೆ ತುಂಬಿ ರಸ್ತೆಗೆ ಆವರಿಸಿದ ನೀರು: ಜನರ ಪರದಾಟ
ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದ ಕೆರೆ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರಕ್ಕೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಕೆರೆಯ ನೀರು ಗೌರಿಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹರಿಯುತ್ತಿದ್ದು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಇತರೆ ವಾಹನಗಳ ಚಾಲಕರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಹಾಕಿದ ಡಾಂಬರೀಕರಣ ಕಿತ್ತಿಕೊಂಡು ಹೋಗಿದ್ದು ಬೃಹತ್ ಪ್ರಮಾಣದ ಗುಂಡಿಗಳು ಬಿದ್ದಿದೆ. ರಸ್ತೆ ದಾಟಲು ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಕನಕಪ್ಪ ಕುಟುಗಮರಿ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯಾಗಿರುವ ಬಾಲಪ್ಪ, ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಹಾಗೂ ರಸ್ತೆ ಹದಗೆಟ್ಟಿರುವುದರಿಂದ ಯಲಬುರ್ಗಾದಿಂದ ಕನಕಗಿರಿಗೆ ಬಸ್ ಗಳ ಓಡಾಟ ಸ್ಥಗಿತಗೊಂಡಿದೆ. ಬಸರಿಹಾಳದಿಂದ ಗೌರಿಪುರದ ರಸ್ತೆ ಮೂಲಕ ಹೋಗುವ ಬದಲಾಗಿ ಬೈಲಕ್ಕುಂಪುರ ಗ್ರಾಮದ ಮೂಲಕ ಕನಕಗಿರಿ, ಯಲಬುರ್ಗಾಕ್ಕೆ ಹೋಗಲಾಗುತ್ತಿದೆ. ಇದರಿಂದ ಬಸರಿಹಾಳ ಗ್ರಾಮದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಕೆರೆಯ ನೀರು ಸುತ್ತಮುತ್ತಲ್ಲಿನ ಹೊಲಗಳಿಗೂ ಹರಿದು ಬೆಳೆಗಳಿಗೂ ಹಾನಿಯಾಗಿದೆ. ರೈತರು ಬೆಳೆ ಕಟಾವ್ ಮಾಡುವ ಸಮಯದಲ್ಲಿ ನೀರು ಹೊಲದಲ್ಲಿ ನಿಂತಿರುವುದರಿಂದ ಸಮಸ್ಯೆಯಾಗಿದೆ ಎಂದು ರೈತ ಕನಕಪ್ಪ ಕುಟಗಮರಿ ತಿಳಿಸಿದರು.
ದಿಲ್ಲಿ ಭಾರತದ 4ನೇ ಅತ್ಯಂತ ಕಲುಷಿತ ನಗರ, ಅಗ್ರ ಸ್ಥಾನದಲ್ಲಿ ಘಾಝಿಯಾಬಾದ್: CREA ವರದಿ
ಹೊಸದಿಲ್ಲಿ: ದೇಶದ ಅತ್ಯಂತ ಕಲುಷಿತ ನಗರಗಳ ನವೆಂಬರ್ ಪಟ್ಟಿಯಲ್ಲಿ ದಿಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (CREA)ನ ವರದಿಯೊಂದು ತಿಳಿಸಿದೆ. ಪಟ್ಟಿಯಲ್ಲಿ ಘಾಝಿಯಾಬಾದ್ ಅಗ್ರ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ನೋಯ್ಡಾ, ಬಹಾದುರ್ ಗಢ, ದಿಲ್ಲಿ, ಹಾಪುರ, ಗ್ರೇಟರ್ ನೋಯಿಡ, ಬಾಘ್ಪತ್, ಸೋನಿಪತ್, ಮೀರತ್ ಮತ್ತು ರೋಹ್ಟಕ್ ನಗರಗಳಿವೆ. ಕೂಳೆ ಸುಡುವಿಕೆಯಲ್ಲಿ ಗಣನೀಯ ಇಳಿಕೆಯ ಹೊರತಾಗಿಯೂ, ರಾಷ್ಟ್ರ ರಾಜಧಾನಿ ವಲಯದ 29 ನಗರಗಳ ಪೈಕಿ 20 ನಗರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಮಾಲಿನ್ಯ ಮಟ್ಟಗಳನ್ನು ದಾಖಲಿಸಿವೆ. ರಾಷ್ಟ್ರ ರಾಜಧಾನಿ ವಲಯದ ವಾಯು ಮಾಲಿನ್ಯಕ್ಕೆ ಮೂಲ ಕಾರಣ ಪಂಜಾಬ್ ಮತ್ತು ಹರ್ಯಾಣ ಎಂಬುದಾಗಿ ಹಿಂದೆ ಆರೋಪಿಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ರಾಜ್ಯಗಳಲ್ಲಿನ ಕೂಳೆ ಸುಡುವ ಪ್ರಕರಣಗಳ ಸಂಖ್ಯೆಯಲ್ಲಿ 80ರಿಂದ 90 ಶೇಕಡ ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ವಾಯು ಗುಣಮಟ್ಟ ನಿಗಾ ಕೇಂದ್ರಗಳ ಪಿಎಮ್2.5ಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಆಧರಿಸಿ CREA ತನ್ನ ನವೆಂಬರ್ 2025ರ ವರದಿಯನ್ನು ಸಿದ್ಧಪಡಿಸಿದೆ. ದೇಶಾದ್ಯಂತ ವಾಯು ಗುಣಮಟ್ಟದಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ವರದಿ ಎತ್ತಿ ತೋರಿಸಿದೆ. ಅತ್ಯಂತ ಕಲುಷಿತ ನಗರಗಳ ಅಗ್ರ 10ರ ಪಟ್ಟಿಯಲ್ಲಿ ಉತ್ತರಪ್ರದೇಶ ಆರು ನಗರಗಳಿವೆ ಎಂದು ವರದಿ ಹೇಳುತ್ತದೆ. ಇದೇ ಪಟ್ಟಿಯಲ್ಲಿ ಹರ್ಯಾಣದ ಮೂರು ನಗರಗಳು ಮತ್ತು ದಿಲ್ಲಿ ಬರುತ್ತವೆ. ಅಗ್ರ 10ರ ಪಟ್ಟಿಯಲ್ಲಿರುವ ಎಲ್ಲಾ ನಗರಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪಿಎಮ್2.5 ಮಟ್ಟಗಳು ದಾಖಲಾಗಿವೆ.
ಉತ್ತರಾಖಂಡದ ಪೌಡಿಯಲ್ಲಿ ಚಿರತೆ ಹಾವಳಿ: ಆನ್ ಲೈನ್ ತರಗತಿಗೆ ಬದಲಾದ 55 ಶಾಲೆಗಳು
ಡೆಹ್ರಾಡೂನ್: ಪದೇ ಪದೇ ನೈಸರ್ಗಿಕ ಪ್ರಕೋಪಗಳು ಮತ್ತು ಕಾಡ್ಗಿಚ್ಚುಗಳ ನಡುವೆ ಉತ್ತರಾಖಂಡದಲ್ಲಿ ಈಗ ಮಾನವ-ವನ್ಯಜೀವಿ ಸಂಘರ್ಷಗಳು ಆತಂತಕಾರಿಯಾಗಿ ಹೆಚ್ಚುತ್ತಿವೆ. ಪೌಡಿ ಜಿಲ್ಲೆಯಲ್ಲಿ ಚಿರತೆಯೊಂದರ ಹಾವಳಿಯಿಂದಾಗಿ ಶಿಕ್ಷಣ ಇಲಾಖೆಯು 55 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ವಿದ್ಯಾರ್ಥಿಗಳಿಗಾಗಿ ಆನ್ಲೈನ್ ತರಗತಿಗಳಿಗೆ ಮೊರೆ ಹೋಗಿದೆ. ಚಿರತೆಯ ಭೀತಿಯೊಂದಾಗಿ ಪೌಡಿಯಲ್ಲಿ ಲಾಕ್ ಡೌನ್ ನಂತಹ ಸ್ಥಿತಿ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ ವಾರ ಹಾಡಹಗಲೇ ಚಿರತೆ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಕೊಂದುಹಾಕಿದ ಬಳಿಕ ಪರಿಸ್ಥಿತಿ ತೀರ ಉಲ್ಬಣಿಸಿದೆ. ಸ್ಥಳೀಯರು ತ್ವರಿತ ಕ್ರಮವನ್ನು ಕೈಗೊಳ್ಳುವಂತೆ ಮತ್ತು ನರಭಕ್ಷಕ ಚಿರತೆಯನ್ನು ತಕ್ಷಣ ಕೊಲ್ಲುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅರಣ್ಯ ಇಲಾಖೆ ಹೆಣಗಾಡುತ್ತಿದೆ, ಆದರೆ ಅದು ಮಾತ್ರ ಯಾರ ಕೈಗೂ ಸಿಕ್ಕಿಲ್ಲ. ಇದು ಪೌಡಿಯಾದ್ಯಂತ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ʻರಾಜಭವನ ಹೆಸರು ʻಲೋಕ ಭವನʼ ಎಂದು ಬದಲಿಸಲು ಸಂಪುಟ ಒಪ್ಪಿಗೆ ಇಲ್ಲʼ: ಸಚಿವ ಎಚ್ಕೆ ಪಾಟೀಲ್
ರಾಜ್ಯಪಾಲರ ಭವನವನ್ನು 'ಲೋಕಭವನ' ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟದ ಒಪ್ಪಿಗೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಭೇಟಿ ಮಾಡಿ ಮೂಲ ಹೆಸರನ್ನೇ ಉಳಿಸಿಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಹೇಳಿದರು. ಅಲ್ಲದೆ, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳನ್ನು ತಡೆಯಲು ಬೆಳಗಾವಿ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಮಹತ್ವದ ಬಿಲ್ಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
IndiGo: ಇಂಡಿಗೋ ವಿಮಾನ ಪ್ರಯಾಣಿಕರಿಗೆ ರಿಲೀಫ್: ₹610 ಕೋಟಿ ಟಿಕೆಟ್ ಹಣ ವಾಪಸ್
ಇಂಡಿಗೋ ವಿಮಾನಗಳ ಹಾರಾಟ ದಿಢೀರ್ ರದ್ದಾದ ಹಿನ್ನೆಲೆ ಕೆಲ ದಿನಗಳಿಂದ ಪ್ರಯಾಣಿಕರ ಆಕ್ರೋಶಕ್ಕೆ ಸಂಸ್ಥೆ ಗುರಿಯಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಎಂದಿನಂತೆ ಸಹಜ ಸ್ಥಿತಿಗೆ ಬರುತ್ತಿರುವ ಸೂಚನೆ ನೀಡಿರುವ ಇಂಡಿಗೋ, ಇತ್ತೀಚೆಗೆ ಟಿಕೆಟ್ ಬುಕಿಂಗ್ ಮಾಡಿಯೂ ವಿಮಾನ ಪ್ರಯಾಣದಿಂದ ವಂಚಿತರಾದ ಪ್ರಯಾಣಿಕರಿಗೆ ರಿಲೀಫ್ ನೀಡಿದೆ. ಇತ್ತೀಚಿನ ಅಡಚಣೆಗೆ ಕ್ಷಮೆ ಕೋರಿರುವ ಇಂಡಿಗೋ, ಬರೋಬ್ಬರಿ 610 ಕೋಟಿ ರೂಪಾಯಿಯಷ್ಟು
ಪಡುಬಿದ್ರಿ | ಪಿಡಿಓ ನಕಲಿ ಸಹಿ ಬಳಸಿ ದೃಢಪತ್ರ ಸಲ್ಲಿಕೆ: ದೂರು
ಪಡುಬಿದ್ರಿ, ಡಿ.7: ಗ್ರಾಪಂ ದಾಖಲೆ ದುರುಪಯೋಗ ಪಡಿಸಿ, ಪಿಡಿಓ ನಕಲಿ ಸಹಿ ಬಳಸಿ ಉಪ-ನೊಂದಣಾಧಿಕಾರಿಯವರ ಕಚೇರಿಗೆ ದೃಢಪತ್ರ ಸಲ್ಲಿಸಿರುವ ಬಗ್ಗೆ ತೆಂಕ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಜನಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ತೆಂಕ ಗ್ರಾಪಂ ಪಿಡಿಓ ಸಹಿ ಇರುವ ದಾಖಲೆ ದುರು ಪಯೋಗ ಆಗಿದೆ ಎಂಬ ಮಾಹಿತಿ ಮೇರೆಗೆ ಮೂಲ್ಕಿ ಉಪ-ನೊಂದಣಾಧಿ ಕಾರಿಯವರ ಕಚೇರಿಗೆ ತೆರಳಿ ಪಿಡಿಓ ರಜನಿ ಪರಿಶೀಲಿಸಿದಾಗ, ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಸರ್ವೇ ನಂಬ್ರ 56/2 ರಲ್ಲಿ ಗಿರಿಯಪ್ಪ ಕೋಟ್ಯಾನ್ ಎಂಬ ಹೆಸರಿನಲ್ಲಿ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು, ಈ ಕಟ್ಟಡದ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ ಎಂದು ಈ ಮೂಲಕ ದೃಡಪಡಿಸಲಾಗಿದೆ ಎಂಬ ನಮೂದು ತೆಂಕ ಗ್ರಾಪಂ ಲೆಟೆರ್ ಹೆಡ್ ನಲ್ಲಿ ಇರುವುದು ಕಂಡುಬಂದಿದೆ. ಈ ದೃಡಪತ್ರದಲ್ಲಿ ತೆಂಕ ಗ್ರಾಪಂ ಲೆಟರ್ ಹೆಡ್ ನಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸೀಲು ಹಾಗೂ ಪಿಡಿಓ ನಕಲಿ ಸಹಿ ಇರುವುದು ಕಂಡುಬಂದಿದೆ. ನಮೂನೆ 11 ಬಿ ಯು ಈ ವರ್ಷ ಜೂನ್ ತಿಂಗಳಿನಿಂದ ಬಂದ್ ಆಗಿ ಈ ವರ್ಷ ಡಿ.1ರಂದು ಓಪನ್ ಆಗಿದ್ದು, ಆ ಮಧ್ಯದಲ್ಲಿ ಯಾರೋ ಯಾವುದೋ ದುರುದ್ದೇಶದಿಂದ ತೆಂಕ ಗ್ರಾಪಂ ಕಚೇರಿಯ ಲೆಟರ್ ಹೆಡ್, ಸೀಲನ್ನು ದುರ್ಬಳಕೆ ಮಾಡಿ, ಪಿಡಿಓ ನಕಲಿ ಸಹಿಯನ್ನು ಮಾಡಿ ಉಪ ನೊಂದಣಿ ಕಚೇರಿ ಮೂಲ್ಕಿ ಇಲ್ಲಿಗೆ ನಮೂನೆ 11 ಬಿ ರ ಬದಲಿಗೆ ದೃಡಪತ್ರ ನೀಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕುಂದಾಪುರ | ಮನೆಯ ಕಾಪಾಟಿನಲ್ಲಿದ್ದ 18ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಕುಂದಾಪುರ, ಡಿ.7: ಶಿಕ್ಷಕಿಯೊಬ್ಬರ ಮನೆಯ ಕಾಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ. ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರಿನ ನಿವಾಸಿ, ಬಿದ್ಕಲ್ ಕಟ್ಟೆಯ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಪೂಜಾ ಕಿಣಿ ಎಂಬವರು ಮನೆಯ ಗೊದ್ರೇಜ್ ನಲ್ಲಿ ಚಿನ್ನಾಭರಣಗಳನ್ನು ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದರು. 2023ರ ಜ.9ರಂದು ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಗಮನಕ್ಕೆ ಬಂತು. ಇವುಗಳನ್ನು ಲಾಕರ್ ನಲ್ಲಿ ಇಟ್ಟಿರಬಹುದೆಂದು ಭಾವಿಸಿದ ಅವರು, 2025ರ ಜೂ.26ರಂದು ಕಾರ್ಯಕ್ರಮಕ್ಕೆ ಹೋಗಲು ಕಾಪಾಟಿನ ಬೀಗವನ್ನು ತೆರೆದು ನೋಡಿದಾಗ ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪೈಕಿ ಒಟ್ಟು ಸುಮಾರು 23 ಪವನ್ ಚಿನ್ನಾಭರಣಗಳು ಕಳವು ಆಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು | ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಬೈಂದೂರು, ಡಿ.7: ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಡಿ.6ರಂದು ರಾತ್ರಿ ವೇಳೆ ಉಪ್ಪುಂದ ಕಂಬದಕೋಣೆ ಸೊಸೈಟಿಯ ಎದುರು ನಡೆದಿದೆ. ಮೃತರನ್ನು ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ. ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್, ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸವಾರ ನಾಗರಾಜ ಖಾರ್ವಿ ಗಂಭೀರ ಗಾಯಗೊಂಡಿದ್ದು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು | ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು
ಅಜೆಕಾರು, ಡಿ.7: ವಯೋಸಹಜ ನೆನೆಪಿನ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಅಂಡಾರು ಗ್ರಾಮದ ಮುಟ್ಲುಪಾಡಿಯ ಕಾಳು ನಾಯ್ಕ್(79) ಎಂಬವರು ಡಿ.3ರಂದು ರಾತ್ರಿ ಮನೆಯ ಪಕ್ಕದ ಮನೆಯಲ್ಲಿನ ಬೀಗರ ಊಟಕ್ಕೆ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ | ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು
ಶಂಕರನಾರಾಯಣ, ಡಿ.7: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ವೆ ಗ್ರಾಮದ ಬೆಳ್ವೆ ಮಸೀದಿಯ ಬಳಿ ನಡೆದಿದೆ. ಮೃತರನ್ನು ಲಕ್ಷ್ಮಣ ನಾಯ್ಕ್(58) ಎಂದು ಗುರುತಿಸಲಾಗಿದೆ. ಡಿ.6ರಂದು ರಾತ್ರಿ ಗೋಳಿಯಂಗಡಿ ಕಡೆಯಿಂದ ಅಲ್ಬಾಡಿ ಕಡೆಗೆ ಹೋಗುತ್ತಿದ್ದ ಬೈಕ್, ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ಅಲ್ಬಾಡಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಲಕ್ಷ್ಮಣ್ ನಾಯ್ಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸೈಕಲ್ ಸವಾರ ವಂಸತ್ ನಾಯ್ಕ್ ಹಾಗೂ ಪಾದಾಚಾರಿ ಲಕ್ಷ್ಮಣ ನಾಯ್ಕ್ ರಸ್ತೆಗೆ ಬಿದ್ದು ಗಾಯಗೊಂಡರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ ನಾಯ್ಕ್ ಡಿ.7ರಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಕಪಾಳಕ್ಕೆ ಹೊಡೆದಿದ್ದಕ್ಕೆ ಕೇಸ್; ಪೊಲೀಸರಿಂದ ಟೀಚರ್ ಬಂಧನ!
ಹುಳಿಮಾವು ಲೇಕ್ ರಸ್ತೆಯ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ರಾಜೇಶ್ ಕಪಾಳಮೋಕ್ಷ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಹಪಾಠಿಯೊಂದಿಗೆ ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ಸಿಬ್ಬಂದಿ ಕೊಠಡಿಗೆ ಕರೆದೊಯ್ದು ಶಿಕ್ಷಕ ಹೊಡೆದಿದ್ದರು. ಇದರಿಂದ ಕೆನ್ನೆ ಊದಿಕೊಂಡ ವಿದ್ಯಾರ್ಥಿ, ರಾತ್ರಿ ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ತಂದೆ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ.
ʼಸಂಸತ್ ನಲ್ಲಿ ಪಕ್ಷ ಬದ್ಧತೆ ಬಿಟ್ಟು ಮತದಾನಕ್ಕೆ ಅವಕಾಶʼ: ಖಾಸಗಿ ಸದಸ್ಯರ ಮಸೂದೆ ಮಂಡಿಸಲಿರುವ ಮನೀಶ್ ತಿವಾರಿ
ಮಸೂದೆಗಳಿಗೆ ಮತ ಹಾಕುವಾಗ ಸಂಸತ್ ಸದಸ್ಯರು ಪಕ್ಷ ಬದ್ಧತೆಯಿಂದ ಮುಕ್ತರಾಗಿರಬೇಕು ಎಂದ ಕಾಂಗ್ರೆಸ್ ಸಂಸದ
ಕುತ್ಯಾರು ಗೋಶಾಲೆಯ ಮೇವು ಸಂಗ್ರಹಣಾ ಕೊಠಡಿಗೆ ಬೆಂಕಿ
ಶಿರ್ವ, ಡಿ.7: ಶಿರ್ವ ಸಮೀಪದ ಕುತ್ಯಾರು ಆನೆಗುಂದಿ ಮಠದ ಗೋಶಾಲೆಯ ಮೇವು ಸಂಗ್ರಹಣಾ ಕೊಠಡಿಯಲ್ಲಿ ರವಿವಾರ ಅಗ್ನಿ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮಠದ ಪರಿಸರದ ಗೋಶಾಲೆಯಿಂದ ಪ್ರತ್ಯೇಕವಾಗಿ ಇರುವ ಸಭಾ ಭವನದ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಕೊಠಡಿಯನ್ನು ವಿಸ್ತರಿಸಿತು. ಇದರಿಂದ ಒಣ ಬೈ ಹುಲ್ಲಿನ ಮೇವು ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣ ವೇದಪಾಠ ಶಾಲೆಯ ವಿದ್ಯಾರ್ಥಿಗಳು ಮಠದ ಸಿಬ್ಬಂದಿಗಳು ಸಮಯಪ್ರಜ್ಜೆ ಮೆರೆದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಎಸ್ಪಿಯಿಂದ ಒಂದು ಓಟು ಕೊಡಿ, ಒಂದು ನೋಟು ಕೊಡಿ ಅಭಿಯಾನ
ದೇವದುರ್ಗ: ಮಾಯಾವತಿ ಅವರ 70ನೇ ಜನ್ಮದಿನದ ಅಂಗವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ವಾರದ ಶನಿವಾರ ಸಂತೆಯಲ್ಲಿ ಪಕ್ಷದ ಮುಖಂಡರು ಒಂದು ಓಟು ಕೊಡಿ, ಒಂದು ನೋಟು ಕೊಡಿ ಅಭಿಯಾನ ನಡೆಸಿದರು. ಈ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ವೆಂಕನಗೌಡ ನಾಯಕ ಮಾತನಾಡಿ, ಪಕ್ಷ ಸಂಘಟನೆಗಾಗಿ ಇಂತಹ ಅಭಿಯಾನ ಕಾರ್ಯಕ್ರಮ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮನಾಳುವ ಸರಕಾರಗಳು ಅಧಿಕಾರಕ್ಕೆ ಬರುವ ಮುನ್ನ ಎಲ್ಲಾ ಸೌಲಭ್ಯಗಳು ನೀಡುವ ಭರವಸೆ ನೀಡುತ್ತವೆ. ಆದರೆ ಗೆದ್ದ ಮೇಲೆ ಹಾಡುವ ರಾಗಗಳೇ ಬದಲಾಗಿವೆ. ಇಂತಹ ವ್ಯವಸ್ಥೆ ಜಾರಿಯಾದ್ದರಿಂದ ಜನರು ಬದಕು ಕಟ್ಟಿಕೊಳ್ಳಲು ಮಹಾನಗರದತ್ತ ಗೊಳೆ ಹೊರಟಿದ್ದಾರೆ. ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡುತ್ತಿಲ್ಲ. ಕಳೆದ ಆರೇಳು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಗಳ ಕೆಲಸ ಸ್ಥಬ್ತವಾಗಿದೆ ಎಂದು ದೂರಿದರು. ಈ ವೇಳೆ ಎಂಆರ್ ಭೇರಿ, ಬಿಎಸ್ಪಿ ಪಕ್ಷದ ತಾಲೂಕಾಧ್ಯಕ್ಷ ಏಸು ಕಮಲ್ಮದಿನಿ, ಶಿವಪ್ಪ ಬಲ್ಲಿದವ್, ಯಲ್ಲಪ್ಪ ಕಾಕರಗಲ್, ರತ್ನಕರ್ ಶಾವಂತಗೇರಾ, ಹನುಮಂತ ಗಾಣಾಧಳ, ದುರಗಪ್ಪ ಬುಂಕಲದೊಡ್ಡಿ, ಹನುಮಂತ ದೊಂಡಬಂಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಡುಪಿಯಿಂದ ಪ್ರಾರಂಭಗೊಂಡ ಆದಿಯೋಗಿ ರಥದ ಶಿವಯಾತ್ರೆ
ಉಡುಪಿ, ಡಿ.7: ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ, ಆದಿಯೋಗಿ ರಥ ಉಡುಪಿಯಿಂದ 70 ದಿನಗಳ ಶಿವಯಾತ್ರೆಯನ್ನು ಆರಂಭಿಸಿದ್ದು, 1,000 ಕಿ.ಮೀ.ಗೂ ಅಧಿಕ ದೂರದ ತೀರ್ಥಯಾತ್ರೆಯನ್ನು ಮಹಾಶಿವರಾತ್ರಿ ಹಬ್ಬಕ್ಕೂ ಮೊದಲು ಫೆ.13ರಂದು, ವೈಭವಯುತ ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಆದಿಯೋಗಿಯ ಬಳಿ ಯಾತ್ರೆ ಪೂರ್ಣಗೊಳ್ಳಲಿದೆ. ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು 70ದಿನಗಳ ಶಿವಯಾತ್ರೆಗೆ ಚಾಲನೆ ನೀಡಿದರು. ಉಡುಪಿಯಿಂದ ಪ್ರಾರಂಭಗೊಂಡು, ಆದಿಯೋಗಿ ರಥವು ಡಿ.12ರಂದು ಮಂಗಳೂರಿಗೆ ತಲುಪಲಿದ್ದು, ಅಲ್ಲಿಂದ ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಮಾಲೂರು, ರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿ, ಈಶ ಯೋಗ ಕೇಂದ್ರವಿರುವ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ. ಈ ಪ್ರಯಾಣ ಎಲ್ಲರಿಗೂ ಮುಕ್ತವಾಗಿರಲಿದ್ದು, ಭಾಗವಹಿಸಲು ಇಚ್ಚಿಸುವವರು ಒಂದು ದಿನ, ಹಲವು ದಿನಗಳು ಅಥವಾ ಸಂಪೂರ್ಣ ಅವಧಿಗೆ ಸೇರಬಹುದು. ಯಾತ್ರೆಯ ಯಾವುದೇ ಹಂತದಲ್ಲಿ ಆಸಕ್ತರು ಸೇರಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಮಂಗಳೂರು | ಶಾರದಾ ವಿದ್ಯಾಲಯದಲ್ಲಿ ‘ಹೊನಲು ಬೆಳಕಿನ ಕ್ರೀಡೋತ್ಸವ’
ಮಂಗಳೂರು, ಡಿ. 7: ನಗರದ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ರವಿವಾರ ‘ಹೊನಲು ಬೆಳಕಿನ ಕ್ರೀಡೋತ್ಸವ’ ನಡೆಯಿತು. ಶಾರದಾ ಸಮೂಹ ಸಂಸ್ಥೆಗಳ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರದರ್ಶಿಸಿದ ಮಲ್ಲಕಂಬ ಕಸರತ್ತು, ಸಮೂಹ ನೃತ್ಯ, ಸಮೂಹ ಗಾಯನ, ಸ್ಕೌಟ್ಸ್ ಗೈಡ್ಸ್, ತಾಲೀಮು ಪ್ರದರ್ಶನ ಇತ್ಯಾದಿ ಪ್ರೇಕ್ಷಕರ ಮನಸೂರೆಗೊಳಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ದೈಹಿಕ ಕಸರತ್ತುಗಳು ವೀಕ್ಷಕರನ್ನು ರೋಮಾಂಚನಗೊಳಿಸಿತು. ಬೆಂಕಿಯೊಂದಿಗಿನ ಸರಸದ ಆಟಗಳು, ಸಾಹಸ ಪ್ರದರ್ಶನಗಳು ವಿದ್ಯಾರ್ಥಿಗಳ ಕಲಾ ನೈಪುಣ್ಯತೆಗೆ ಸಾಕ್ಷಿಯಾದವು. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲದಂತೆ ನಗರದ ಮಕ್ಕಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು ದೇಸಿ ಕ್ರೀಡೆಗೆ ಪ್ರೋತ್ಸಾಹ ಅಭಿನಂದನಾರ್ಹ : ಸಂಸದ ಒಡೆಯರ್ ಕ್ರೀಡೋತ್ಸವ ಉದ್ಘಾಟಿಸಿದ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ- ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ, ದೇಶಾಭಿಮಾನ ಮೂಡಿಸುವ ಕೆಲಸ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಅಭಿಪ್ರಾಯಪಟ್ಟರು. ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು ಇದ್ದಂತೆ. ಕರಾವಳಿಯಲ್ಲಿ ರಾಜ್ಯದ ಪರಂಪರೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡಿದರೆ ಅದು ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಈ ಕ್ರೀಡೋತ್ಸವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಶಾರದಾ ವಿದ್ಯಾಲಯ ಆರಂಭವಾಗಿ 33 ವರ್ಷಗಳು ಸಂದಿದ್ದು, ಮೆಕಾಲೆ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಭಾರತೀಯ ಜೀವನ ಮೌಲ್ಯ, ಸಂಸ್ಕಾರಗಳನ್ನು, ಭಾರತೀಯ ಚಿಂತನೆಗಳಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತಿದೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭ ಶಾರದಾ ಸಮೂಹ ಸಂಸ್ಥೆ ವತಿಯಿಂದ ಯದುವೀರ್ ಅವರಿಗೆ ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರಚಿಸಿದ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು. ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ , ಉದ್ಯಮಿ ನಾಗಾರ್ಜುನ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಭಟ್, ಸುನಂದಾ ಪುರಾಣಿಕ್, ಕರ್ನಾಟಕ ಹೈಕೋರ್ಟ್ನ ವಕೀಲ ಅರುಣ್ ಶ್ಯಾಮ್, ಪ್ರಮುಖರಾದ ಪ್ರದೀಪ ಕುಮಾರ ಕಲ್ಕೂರ, ರಘುನಾಥ ಸೋಮಯಾಜಿ, ಸುಧಾಕರ ರಾವ್ ಪೇಜಾವರ, ಪ್ರೊ. ಲೀಲಾ ಉಪಾಧ್ಯಾಯ, ಸೀತಾರಾಮ ಭಟ್, ಪ್ರಕಾಶ್ ಇಳಂತಿಲ, ಪ್ರಾಂಶುಪಾಲರಾದ ಪ್ರಕಾಶ್ ನಾಯಕ್, ದಯಾನಂದ ಕಟೀಲ್, ಸತ್ಯ ನಾರಾಯಣ ಭಟ್ , ವಿದ್ಯಾ ಭಾರತಿಯ ಹಿರಿಯರಾದ ವಸಂತ ಮಾಧವ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿಮಾನ ಸಂಚಾರ ಅಸ್ತವ್ಯಸ್ತ: 3 ದಿನಗಳಲ್ಲಿ 89 ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ ರೈಲ್ವೇಸ್
ಹೊಸದಿಲ್ಲಿ: ಇಂಡಿಗೊ ವಿಮಾನಯಾನಗಳ ಬೃಹತ್ ಪ್ರಮಾಣದ ರದ್ದತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರಿಗೆ ನೆರವಾಗುವುದಕ್ಕಾಗಿ ಶನಿವಾರದಿಂದ ಆರಂಭಿಸಿ ಮೂರು ದಿನಗಳ ಕಾಲ ದೇಶದ ಎಲ್ಲಾ ವಲಯಗಳಲ್ಲಿ 89 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೇಸ್ ಘೋಷಿಸಿದೆ. ಹೊಸದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಮತ್ತು ಹೌರಾ ಮುಂತಾದ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಅತ್ಯಂತ ಕಡಿಮೆ ಸಂಭಾವ್ಯ ಸಮಯದಲ್ಲಿ ಈ ರೈಲುಗಳನ್ನು ನಿಯೋಜಿಸಲಾಗಿದೆ. ಈ ರೈಲುಗಳು 100ಕ್ಕೂ ಅಧಿಕ ಯಾನಗಳನ್ನು ಕೈಗೊಳ್ಳುತ್ತವೆ ಎಂದು ರೈಲ್ವೇಸ್ ತಿಳಿಸಿದೆ. ‘‘ಸಂಚಾರ ಪರಿಸ್ಥಿತಿಯನ್ನು ಹೊಂದಿಕೊಂಡು ವಿಶೇಷ ರೈಲುಗಳು ಮತ್ತು ಅವುಗಳ ಯಾನಗಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ವಿಮಾನಗಳ ರದ್ದತಿಯಿಂದಾಗಿ ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ಲಕ್ಷಾಂತರ ಪ್ರಯಾಣಿಕರಿಗಾಗಿ ರೈಲುಗಳನ್ನು ಸುರಕ್ಷಿತವಾಗಿ ಓಡಿಸಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಎಲ್ಲಾ ರೈಲ್ವೇ ವಲಯಗಳಿಗೆ ಸೂಚಿಸಲಾಗಿದೆ’’ ಎಂದು ರೈಲ್ವೇ ಮಂಡಳಿಯ ವಾರ್ತಾ ಮತ್ತು ಪ್ರಚಾರ ವಿಭಾಗದ ಕಾರ್ಯಕಾರಿ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ. ಸಂಸದೀಯ ಸಮಿತಿಯಿಂದ ವಿಮಾನಯಾನ ಸಂಸ್ಥೆಗಳಿಗೆ ಸಮನ್ಸ್?: ಇಂಡಿಗೊ ವಿಮಾನಯಾನಗಳ ಬೃಹತ್ ಪ್ರಮಾಣದ ರದ್ದತಿಯಿಂದಾಗಿ ಉದ್ಭವಿಸಿದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸಂಸದೀಯ ಸಮಿತಿಯೊಂದು ಖಾಸಗಿ ವಿಮಾನಯಾನ ಸಂಸ್ಥೆಗಳು ಮತ್ತು ನಾಗರಿಕ ವಾಯಯಾನ ಮಹಾ ನಿರ್ದೇಶನಾಲಯದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಜೆಡಿಯು ನಾಯಕ ಸಂಜಯ್ ಝಾ ಅಧ್ಯಕ್ಷತೆಯ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು, ವಿಮಾನ ಸೇವೆಗಳಲ್ಲಿ ತಲೆದೋರಿರುವ ಅವ್ಯವಸ್ಥೆಗೆ ಕಾರಣ ಮತ್ತು ಸಂಭಾವ್ಯ ಪರಿಹಾರಗಳ ಬಗ್ಗೆ ವಿಮಾನಯಾನ ಸಂಸ್ಥೆಗಳು, ಡಿಜಿಸಿಎ ಮತ್ತು ನಾಗರಿಕ ವಾಯುಯಾನ ಸಚಿವಾಲಯದ ಹಿರಿಯ ಅಧಿಕಾರಿಗಳಿಂದ ವಿವರಣೆ ಕೇಳುವ ಸಾಧ್ಯತೆಯಿದೆ. ವಿಮಾನಯಾನಗಳ ವ್ಯತ್ಯಯದಿಂದಾಗಿ ಲಕ್ಷಾಂತರ ಪ್ರಯಾಣಿಕರು ಅನುಭವಿಸಿರುವ ಸಂಕಷ್ಟವನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ ಎಂದು ಅದರ ಸದಸ್ಯರೊಬ್ಬರು ತಿಳಿಸಿದರು. ಚಳಿಗಾಲದ ಅಧಿವೇಶನಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿರುವ ಸಂಸದರು ಕೂಡ ವಿಮಾನ ರದ್ದತಿಗಳು ಮತ್ತು ವಿಳಂಬದ ಪರಿಣಾಮವನ್ನು ಎದುರಿಸಿದ್ದಾರೆ ಎಂದು ಅವರು ಹೇಳಿದರು.
ʻ500 ಕೋಟಿ ರೂ. ಕೊಟ್ಟವರಿಗೆ ಕಾಂಗ್ರೆಸ್ ನೀಡುತ್ತೆ 'ಸಿಎಂ' ಪಟ್ಟʼ: ಸ್ಫೋಟಕ ಹೇಳಿಕೆ ಕೊಟ್ಟ ಸಿಧು ಪತ್ನಿ ನವಜೋತ್
ಪಂಜಾಬ್ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐವರು ನಾಯಕರು ಸ್ಪರ್ಧಿಸುತ್ತಿದ್ದು, 500 ಕೋಟಿ ರೂ. ನೀಡುವವರಿಗೆ ಸ್ಥಾನ ಸಿಗುತ್ತದೆ ಎಂದು ನವಜೋತ್ ಕೌರ್ ಸಿಧು ಆರೋಪಿಸಿದ್ದಾರೆ. ತಮ್ಮ ಪತಿ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ಗೆ ನಿಷ್ಠರಾಗಿದ್ದು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಅವರು ಮತ್ತೆ ಸಕ್ರಿಯ ರಾಜಕಾರಣ ಪ್ರವೇಶಿಸುತ್ತಾರೆ ಎಂದೂ ಅವರು ತಿಳಿಸಿದ್ದಾರೆ.
ಯುದ್ಧ ವಿರೋಧಿ ಪೋಸ್ಟ್ ಗಳಿಗಾಗಿ SRM ವಿವಿಯ ದಲಿತ ಕ್ರೈಸ್ತ ಪ್ರಾಧ್ಯಾಪಕಿಯ ವಜಾ
ʼಆಪರೇಷನ್ ಸಿಂಧೂರʼ ಸಂದರ್ಭದಲ್ಲಿ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಪ್ರಾಧ್ಯಾಪಕಿ
ಮಂಗಳವಾರ ಎಸ್ಐಆರ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ; ಪ್ರತಿಪಕ್ಷಕ್ಕೆ ರಾಹುಲ್ ಗಾಂಧಿ ನೇತೃತ್ವ
ಹೊಸದಿಲ್ಲಿ: ಲೋಕಸಭೆಯಲ್ಲಿ ಮಂಗಳವಾರ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಷಯದ ಬಗ್ಗೆ ಮಹತ್ವದ ಚರ್ಚೆ ನಡೆಯಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳು ಕೋರಿದ ಈ ಚರ್ಚೆಯ ನೇತೃತ್ವವನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಹಿಸಲಿದ್ದಾರೆ. ಈ ಚರ್ಚೆಯಲ್ಲಿ ಕಾಂಗ್ರೆಸ್ ನಿಂದ ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ವರ್ಷಾ ಗಾಯಕ್ವಾಡ್, ಮುಹಮ್ಮದ್ ಜಾವೇದ್, ಉಜ್ವಲ್ ರಮಣ್ ಸಿಂಗ್, ಇಶಾ ಖಾನ್ ಚೌಧರಿ, ಮಲ್ಲು ರವಿ, ಇಮ್ರಾನ್ ಮಸೂದ್, ಗೊವಾಲ್ ಪದವಿ ಮತ್ತು ಜ್ಯೋತಿಮಣಿ ಭಾಗವಹಿಸಲಿದ್ದಾರೆ. ಈ ಇಡೀ ಚರ್ಚೆಗೆ ಒಟ್ಟು 10 ಗಂಟೆಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಚರ್ಚೆಗೆ ಬುಧವಾರ ಉತ್ತರ ನೀಡಲಿದ್ದಾರೆ. ಚರ್ಚೆಯ ವೇಳೆ, ರಾಹುಲ್ ಗಾಂಧಿ ‘‘ಮತಗಳ್ಳತನ’’ ಮತ್ತು ಭಾರತೀಯ ಚುನಾವಣಾ ಆಯೋಗದ ಉತ್ತರದಾಯಿತ್ವ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಈ ವಿಷಯವು ಅವರ ಇತ್ತೀಚಿನ ರಾಜಕೀಯ ಭಾಷಣಗಳ ಪ್ರಮುಖ ವಿಷಯಗಳ ಪೈಕಿ ಒಂದಾಗಿದೆ. ಮತದಾರರ ಪಟ್ಟಿಗಳಲ್ಲಿ ವೈರುಧ್ಯಗಳಿವೆ, ಚುನಾವಣಾ ವಿಧಿವಿಧಾನಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆ ಮತ್ತು ಚುನಾವಣಾ ಆಯೋಗವು ಆಯ್ದ ಪ್ರಕರಣಗಳಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳುತ್ತದೆ. ಇದು ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ಮಾಡಿವೆ ಎಂಬುದಾಗಿ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ನಾಯಕರು ದೊಡ್ಡ ಧ್ವನಿಯಲ್ಲಿ ಹೇಳುತ್ತಾ ಬಂದಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವೇಳೆ, ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳ ಮೇಲೆ ಹೇರಲಾಗುತ್ತಿದೆ ಎನ್ನಲಾದ ಅಗಾಧ ಒತ್ತಡದ ಬಗ್ಗೆಯೂ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ಮಾತನಾಡುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಬೆಂಗಳೂರು : ರವಿವಾರದಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸುವ ಮೂಲಕ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್, ಖಜಾಂಜಿ ಸ್ಥಾನಕ್ಕೆ ಮಧುಕರ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ. ವೆಂಕಟೇಶ್ ಪ್ರಸಾದ್ ಅವರು ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. 20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 749 ಮತಗಳಿಂದ ಗೆಲುವು ಸಾಧಿಸಿದ್ದು, ಕೆ.ಎನ್. ಶಾಂತಕುಮಾರ್ 558 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಪರಿಶೀಲನೆಯಲ್ಲಿ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಶಾಂತಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಅವರ ನಾಮಪತ್ರ ಸಿಂಧುಗೊಳಿಸಿ, ಡಿ.7ರಂದು ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.
ಕಬ್ಬನ್ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೆರೆ; 11 ದಿನಗಳ ಪ್ರದರ್ಶನಕ್ಕೆ 4.60 ಲಕ್ಷ ಮಂದಿ ಆಗಮನ
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ನ.27ರಿಂದ ಆರಂಭವಾದ ಪುಷ್ಪ ಪ್ರದರ್ಶನ ಆರಂಭವಾಗಿತ್ತು. ಇಂದಿಗೆ(ಡಿ.7) ಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಭಾನುವಾರವಾದ ಕಾರಣ ಸಾವಿರಾರು ಜನರು ಪಾರ್ಕ್ನಲ್ಲಿ ಆಯೋಜಿಸಿದ್ದ ಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಇಲ್ಲಿಯವರೆಗೂ 4.60 ಲಕ್ಷಕ್ಕೂ ಹೆಚ್ಚು ಜನರು ಪುಷ್ಪಗಳನ್ನು ಕಣ್ತುಂಬಿಕೊಂಡಿದ್ದಾರೆ ಎನ್ನಲಾಗಿದೆ. ತರಕಾರಿಯಲ್ಲಿ ನಿರ್ಮಿಸಿದ್ದ ಆನೆ ಮತ್ತು ಕರ್ನಾಟಕದ ನಕ್ಷೆಯ ಒಂದೊಂದು ಜಿಲ್ಲೆಗೆ ಒಂದೊಂದು ಸಿರಿ ಧಾನ್ಯ ಅಂಟಿಸಿದ್ದದ್ದು ಹಾಗೂ ಚಿಟ್ಟೆ ಇನ್ನಿತರ ಪ್ರದರ್ಶನಗಳು ಇದ್ದವು.ಹಲವು ಫುಡ್ಸ್ಟಾಲ್ಗಳು ಇದ್ದವು.
ಸಾಮಾಜಿಕ, ಆರ್ಥಿಕ ಅಸಮಾನತೆ ಇದ್ದಾಗ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿಲ್ಲ : ಶಿವಸುಂದರ್
ವಿಜಯನಗರ: ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರಿದಷ್ಟು ಕಾಲ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿರುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಎನ್ನುವುದು ಸರ್ವಾಧಿಕಾರತ್ವವನ್ನು ತರುತ್ತದೆ ಎಂದು ಚಿಂತಕರಾದ ಶಿವಸುಂದರ್ ಅವರು ಹೇಳಿದರು. ಹಂಪಿ ಮಹಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸುಂದರ್, ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರನ್ನು ಯಾವುದೇ ಒಂದು ನಿಲುವಿಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ನಿಧನದ ನಂತರ ಅವರನ್ನು, ಅವರ ವಿಚಾರಗಳನ್ನು ಕಡೆಗಣಿಸುವ ಮೂಲಕ ವೈಚಾರಿಕತೆ, ವೈಜ್ಞಾನಿಕತೆಗಳಿಗೆ ಬ್ರಾಹ್ಮಣಶಾಹಿಗಳು ವಿದಾಯ ಹೇಳಿದ್ದರು. 1990ರ ದಶಕದಲ್ಲಿ ಜಾಗೃತ ದಲಿತ ಪ್ರಜ್ಞೆಯ ಭಾಗವಾಗಿ ಅವರು ಮತ್ತೆ ಚರ್ಚೆಗೆ ಬಂದರು. ಅಂಬೇಡ್ಕರ್ ಅವರು ಬೌದ್ಧ ಧರ್ಮವು ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ನಿಂತಿರುವುದನ್ನು ತಿಳಿಸಿಕೊಟ್ಟರು. ಇಂದು ಧರ್ಮಗಳು ಈ ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ಪುನರ್ ರೂಪಿತವಾಗಬೇಕು ಎಂದು ಹೇಳಿದರು. ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿತ್ವ ದೇಶದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವಗಳು ಸಾಮಾಜಿಕವಾಗಿ ಸಾಯುತ್ತಿವೆ ಮತ್ತು ಚುನಾವಣಾ ಪ್ರಜಾತಂತ್ರವನ್ನು ಟೊಳ್ಳು ಮಾಡುತ್ತಿದೆ. ಇದು ಜನರ ಬದುಕು ಅತಂತ್ರವಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಯಾವ ಪಕ್ಷಗಳು ಕೂಡ ಸಮಾಜದ ಒಳತಿನ ಕಡೆಗೆ ಗಮನಹರಿಸುತ್ತಿಲ್ಲ. ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲರು ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು. ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಬಯಸಿದ್ದ ಬ್ರಾತೃತ್ವ ಭಾರತ, ಮಾನವೀಯ ಭಾರತ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಭಾರತ ಎನ್ನುವ ಮಾನ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಭಾರತ ತಲೆ ಎತ್ತುತ್ತಿದೆ. ಇದರ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಇದು ಇದೇ ರೀತಿ ಮುಂದುವರಿದರೆ ಸಂವಿಧಾನವನ್ನು ಮೀರಿದ ನಿಯಮಗಳು ಜಾರಿಗೆ ಬರಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಸಿಂಡಿಕೇಟ್ ಸದಸ್ಯರಾದ ಸೋಮಶೇಖರ್ ಬಣ್ಣದ ಮನೆ, ಬಳ್ಳಾರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪೀರ್ ಭಾಷಾ, ವಿವಿಧ ವಿಭಾಗದ ಡೀನ್ಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಹನ ಸವಾರರೇ ಗಮನಿಸಿ; ಡಿ.7ರಿಂದ 9 ತಿಂಗಳು ಬೆಂಗಳೂರಿನ ಈ ರಸ್ತೆಗಳು ಸಂಪೂರ್ಣ ಬಂದ್
ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ, ಡಿಸೆಂಬರ್ 7 ರಿಂದ ಮುಂದಿನ 9 ತಿಂಗಳ ಕಾಲ ಬೆಂಗಳೂರು-ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಿಲ್ಲ ಎಂದು ರೈಲ್ವೆ ಇಲಾಖೆ ಹೇಲಿದೆ. ದಟ್ಟಣೆ ತಪ್ಪಿಸುವುದು ಈ ಕಾಮಗಾರಿಯ ಮುಖ್ಯ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಬೆಂಗಳೂರು ಸಂಚಾರ ಪೊಲೀಸರು ಶೀಘ್ರದಲ್ಲೇ ಪರ್ಯಾಯ ಮಾರ್ಗದ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ನಿಟ್ಟೆ | ಡಿ.8ರಿಂದ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ
ನಿಟ್ಟೆ, ಡಿ.7: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಎಐಸಿಟಿಇ-ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) - ಎಪ್ಲಿಕೇಶನ್ ಆಫ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಇನ್ ಹೆಲ್ತ್ಕೇರ್ ಎಂಬ ವಿಷಯದ ಕುರಿತಂತೆ ಸೋಮವಾರದಿಂದ ಡಿ.13ರವರೆಗೆ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಿದೆ. ಆರು ದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಡಿ.8ರ ಬೆಳಗ್ಗೆ 9:30ಕ್ಕೆ ನಿಟ್ಟೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಭಾಗವಹಿಸುವರು. ನಿಟ್ಟೆ (ಡಿಮ್ಡ್) ವಿವಿಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ನಿರಂಜನ ಎನ್. ಚಿಪ್ಳೂಣಕರ್ ವಹಿಸಲಿದ್ದಾರೆ. ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಗಳ ಬಳಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಐಐಎಸ್ಸಿ ಬೆಂಗಳೂರು, ಎನ್ಐಟಿಕೆ ಸುರತ್ಕಲ್, ಎಂಐಟಿ ಮಣಿಪಾಲ, ಎಚ್ಪಿಇ ಬೆಂಗಳೂರು ಹಾಗೂ ನಿಟ್ಟೆ ಸಂಸ್ಥೆಗಳಿಂದ ಶೈಕ್ಷಣಿಕ ಹಾಗೂ ಕೈಗಾರಿಕಾ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚನೆ
ಬೆಂಗಳೂರು : ‘ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು' ಎಂಬ ಘೋಷಣೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪ್ರಭಾಕರ್ ಟಿ. ಆದೇಶ ಹೊರಡಿಸಿದ್ದು, ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು ಎಂದು 2025-26ನೆ ಸಾಲಿನ ಆಯವ್ಯಯ ಘೋಷಿಸಲಾಗಿದ್ದು, ಅದರಂತೆ ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ಥಳ, ನಿರ್ಮಾಣ ಮತ್ತು ಕಾರ್ಯಸಾಧ್ಯತೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆದುದರಿಂದ ಆಯವ್ಯಯ ಕಂಡಿಕೆಯನ್ನು ಹೆಚ್ಚಿನ ಪರಿಶೀಲನೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು ಕ್ರಮ ಕೈಗೊಳ್ಳುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಪುತ್ತೂರು ತಾಲ್ಲೂಕು ಆಸ್ಪತ್ರೆ ಒಟ್ಟು 5.16 ಎಕರೆ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜು ಸ್ಥಾಪನೆಗೆ ಜಮೀನು ಸಾಕಾಗುವುದಿಲ್ಲ. ಹೀಗಾಗಿ ಪುತ್ತೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಸೆಡಿಯಾಪು ಗ್ರಾಮದ ಬಳಿ 40 ಎಕರೆ ಜಮೀನನ್ನು ವೈದ್ಯಕೀಯ ಕಾಲೇಜು ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ನಿರ್ಮಾಣ ಮಾಡಲು 200 ಕೋಟಿ ರೂ.ವ್ಯಯಿಸಬೇಕಾಗಿದೆ ಎಂದು ಮುಖ್ಯ ಇಂಜಿನಿಯರ್ ಪ್ರಸ್ತಾವ ಸಲ್ಲಿಸಿದ್ದು, ಈ ಕಡತವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.8ರಿಂದ 11ರ ತನಕ ದಿನನಿತ್ಯ 8 ಇಂಡಿಗೊ ವಿಮಾನಗಳ ಯಾನ ರದ್ದು
ಮಂಗಳೂರು , ಡಿ.7: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಆಗಮಿಸುವ ಮತ್ತು ನಿರ್ಗಮಿಸುವ ಇಂಡಿಗೊದ 8 ವಿಮಾನಗಳ ಯಾನ ಡಿ.8 ರಿಂದ 11ರ ತನಕ ರದ್ದಾಗಿದೆ. ಮಂಗಳೂರಿಗೆ ದಿನನಿತ್ಯ ಆಗಮಿಸುವ ಇಂಡಿಗೊದ ಬೆಂಗಳೂರು -ಮಂಗಳೂರು ( 6ಇ 6858)ಬೆಳಗ್ಗೆ 7:10, ಮುಂಬೈ -ಮಂಗಳೂರು(6ಇ 6674) ಬೆಳಗ್ಗೆ 8:40, ಬೆಂಗಳೂರು -ಮಂಗಳೂರು (6ಇ109) ಸಂಜೆ 5:20 ಮತ್ತು ಬೆಂಗಳೂರು -ಮಂಗಳೂರು (6ಇ6119) ರಾತ್ರಿ 10:15ಕ್ಕೆ ಆಗಮಿಸುವ ವಿಮಾನಗಳು ರದ್ದಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 7:40ಕ್ಕೆ ಹೊರಡುವ ಮಂಗಳೂರು -ಬೆಂಗಳೂರು (6ಇ 306), ಬೆಳಗ್ಗೆ 9:10 ಮಂಗಳೂರು-ಮುಂಬೈ (6ಇ6205) , ಸಂಜೆ 5:50ರ ಮಂಗಳೂರು-ಬೆಂಗಳೂರು (6ಇ388), ರಾತ್ರಿ 10:45ಕ್ಕೆ ನಿರ್ಗಮಿಸುವ ಮಂಗಳೂರು-ಬೆಂಗಳೂರು (6ಇ6120) ವಿಮಾನಗಳ ಯಾನ ರದ್ದಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಯಶವಂತಪುರ - ವಿಜಯಪುರ ನಡುವಿನ ವಿಶೇಷ ರೈಲು ಇನ್ನು ಮುಂದೆ ಖಾಯಂ; ಟಿಕೆಟ್ ದರ ಇಳಿಕೆ; ಎಷ್ಟಿತ್ತು? ಎಷ್ಟಾಯ್ತು?
ಯಶವಂತಪುರ - ವಿಜಯಪುರ ವಿಶೇಷ ರೈಲು ಡಿಸೆಂಬರ್ 8 ರಿಂದ ಖಾಯಂ ಆಗಲಿದ್ದು, ಟಿಕೆಟ್ ದರಗಳಲ್ಲಿ ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಲೀಪರ್ ಟಿಕೆಟ್ ದರಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ರೈಲಿನ ಸಂಖ್ಯೆ ಬದಲಾಗಲಿದ್ದು, ಆದರೆ, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಚೀನಾದೊಂದಿಗೆ ಭೀಕರ ಘರ್ಷಣೆಯ ಐದು ವರ್ಷಗಳ ಬಳಿಕ ಗಲ್ವಾನ್ ನಲ್ಲಿ ಯುದ್ಧ ಸ್ಮಾರಕ ಅನಾವರಣ
ಲೇಹ್ (ಲಡಾಖ್): ಐದು ವರ್ಷಗಳ ಹಿಂದೆ ಚೀನಿ ಸೈನಿಕರೊಂದಿಗೆ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರ ಅನಾವರಣಗೊಳಿಸಿದರು. ಇದು ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡ ಯುದ್ಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಡಾಖ್ ನ ಆಯಕಟ್ಟಿನ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯಲ್ಲಿ ಕೆಎಂ-120 ಪೋಸ್ಟ್ ನ ಬಳಿ ಸ್ಮಾರಕವು ತಲೆಯೆತ್ತಿದ್ದು, ಇದು ವಿಶ್ವದ ಅತ್ಯಂತ ಕಠಿಣ ಮಿಲಿಟರಿ ನಿಯೋಜನೆ ವಲಯಗಳಲ್ಲಿ ಒಂದಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ, ಕಡಿಮೆ ಆಮ್ಲಜನಕ ಮಟ್ಟಗಳು ಮತ್ತು ಪ್ರತಿಕೂಲ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಸೇನಾ ದಿನದಂದು ಘೋಷಿಸಲಾಗಿದ್ದ ‘ಭಾರತ ರಣಭೂಮಿ ದರ್ಶನ’ ಉಪಕ್ರಮದಡಿ ಸ್ಮಾರಕವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಉಪಕ್ರಮವು ಪ್ರಮುಖ ಯುದ್ಧಭೂಮಿಗಳಿಗೆ ಭೇಟಿ ನೀಡಲು,ತಮ್ಮ ಗೌರವ ಸಲ್ಲಿಸಲು ಮತ್ತು ರಾಷ್ಟ್ರಸೇವೆಯಲ್ಲಿ ಮಾಡಿದ ತ್ಯಾಗದ ಮಹತ್ವವನ್ನು ಗ್ರಹಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುತ್ತದೆ. ತ್ಯಾಗ ಮತ್ತು ಶೌರ್ಯವನ್ನು ಸಂಕೇತಿಸುವ ಕೆಂಪು ಮತ್ತು ಬಿಳಿ ಗ್ರಾನೈಟ್ ಬಳಿಸಿ ನಿರ್ಮಿಸಲಾಗಿರುವ ಸ್ಮಾರಕವು ತ್ರಿಶೂಲ ಮತ್ತು ಡಮರು ರೂಪವನ್ನು ಹೊಂದಿದೆ. ಸ್ಮಾರಕದ ಮಧ್ಯಭಾಗದಲ್ಲಿ ಶಕ್ತಿಯನ್ನು ಪ್ರತಿನಿಧಿಸುವ ತ್ರಿಕೋನ ಸ್ಥಾಪನೆ,ಶಾಶ್ವತ ಜ್ವಾಲೆ ಮತ್ತು ರಾಷ್ಟ್ರಧ್ವಜದಿಂದ ಸುತ್ತುವರಿಯಲ್ಪಟ್ಟಿರುವ ಪರ್ವತಗಳಿವೆ. ಸ್ಮಾರಕದ ಸುತ್ತ ಗಲ್ವಾನ್ ಕಣಿವೆಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದ ಯೋಧರನ್ನು ಪ್ರತಿನಿಧಿಸುವ 20 ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಯುದ್ಧ ಸ್ಮಾರಕ ಸಂಕೀರ್ಣವು ಗಲ್ವಾನ್ ಘರ್ಷಣೆ,ಲಡಾಖ್ ನ ಮಿಲಿಟರಿ ಇತಿಹಾಸ ಮತ್ತು ತಲೆಮಾರುಗಳಾದ್ಯಂತ ಧೈರ್ಯದ ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಮತ್ತು ಡಿಜಿಟಲ್ ಗ್ಯಾಲರಿಯನ್ನು ಒಳಗೊಂಡಿದೆ. ಶೌರ್ಯ ಕಥನಗಳನ್ನು ಪ್ರದರ್ಶಿಸಲು ಸಭಾಂಗಣವೊಂದನ್ನು ಸಹ ನಿರ್ಮಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ಸೇನೆಯು ಮೂರು ಕೆಫೆಗಳು,ಸ್ಮರಣಿಕೆಗಳ ಮಳಿಗೆ,ಸೆಲ್ಫಿ ಪಾಯಿಂಟ್ ಮತ್ತು ಸೇನಾ ಮಾದರಿಯ ಮಾಹಿತಿ ಕೇಂದ್ರ ಸೇರಿದಂತೆ ಸೌಲಭ್ಯಗಳನ್ನು ಸ್ಥಾಪಿಸಿದೆ.
ಹೆಬ್ರಿ | ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ
ಹೆಬ್ರಿ, ಡಿ.7: ಬೆಳ್ವೆ, ಇದರ ವತಿಯಿಂದ ಬೆಳ್ವೆ ಆರ್ಡಿ ಗೋಳಿಯಂಗಡಿ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಬೆಳ್ವೆ ಶ್ರೀಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬೆಳ್ವೆ ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ್ ಶೆಟ್ಟಿ, ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರ್ಷ ಪೂಜಾರಿ, ನಮ್ಮ ನಾಡ ಒಕ್ಕೂಟ ಹೆಬ್ರಿ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಉಪಾಧ್ಯಕ್ಷ ಶರೀಫ್ ಸಾಹೇಬ್ ಬೆಳ್ವೆ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜೀವ ಆರ್ಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಏಳು ಮಂದಿ ರೋಗಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಒಬ್ಬರಿಗೆ ಕೃತಕ ಕಾಲು ಜೋಡಣೆಗೆ ಸಹಾಯ ಧನ ನೀಡಲಾಯಿತು. ಇದೆ ಸಂದರ್ಭದಲ್ಲಿ ಕುಂದಾಪುರ ಮಾವಿನಕಟ್ಟೆಯ ಬಡ ಯುವತಿಯ ವಿವಾಹಕ್ಕೆ ಸಹಾಯಧನ ನೀಡಲಾಯಿತು. ಮುಸ್ತಾಕ್ ಅಹಮದ್ ಬೆಳ್ವೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಬ್ದುಲ್ ಶುಕೂರ್ ಬೆಳ್ವೆ ಸಹಕರಿಸಿದರು. ಹುಝೈಫ್ ಕುರಾನ್ ಪಠಿಸಿದರು. ಮುಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿದರು. ಜಾಸಿಂ ಬೆಳ್ವೆ ವಂದಿಸಿದರು.
ಉಡುಪಿ | ವಿಕಸಿತ ಭಾರತ ನಿರ್ಮಾಣದಿಂದ ಅಂಬೇಡ್ಕರ್ಗೆ ನೈಜ ಗೌರವ: ಕಾರ್ಣಿಕ್
ಉಡುಪಿ, ಡಿ.7: ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ನೈಜ ಗೌರವ ಸಲ್ಲಿಸುವ ಅಗತ್ಯವಿದೆ ಎಂದು ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾ, ಜಿಲ್ಲಾ ಎಸ್.ಟಿ. ಮೋರ್ಚಾ ಮತ್ತು ಜಿಲ್ಲಾ ಒಬಿಸಿ ಮೋರ್ಚಾ ನೇತತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 42 ಸಾವಿರ ಕೋಟಿ ರೂ. ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಬಗ್ಗೆ ಮೋರ್ಚಾಗಳು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಜನರಿಗೆ ನೈಜ ವಿಚಾರಗಳನ್ನು ತಿಳಿಸಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾಧ್ಯಕ್ಷ ಕುಮಾರ್ದಾಸ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಉಪಸ್ಥಿತರಿದ್ದರು.
ಉತ್ತರ ಪ್ರದೇಶ: ಮದುವೆ ಸಂಭ್ರಮಾಚರಣೆಯ ಗುಂಡು ಹಾರಾಟಕ್ಕೆ ಇಬ್ಬರು ಬಾಲಕರು ಬಲಿ
ಎಟಾ: ಉತ್ತರ ಪ್ರದೇಶದ ಎಟಾ ಜಿಲ್ಲೆಯ ಉಮೈ ಅಸದ್ನಗರ ಗ್ರಾಮದಲ್ಲಿ ಶನಿವಾರ ರಾತ್ರಿ ವಿವಾಹ ಪೂರ್ವ ಸಂಭ್ರಮಾಚರಣೆಯ ಸಂದರ್ಭ ಬಂದೂಕಿನಿಂದ ಹಾರಿದ ಗುಂಡುಗಳು ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರನ್ನು ಬಲಿ ತೆಗೆದುಕೊಂಡಿವೆ. ಪೋಲಿಸರ ಪ್ರಕಾರ ಸಂಗೀತ ಮತ್ತು ನೃತ್ಯದೊಂದಿಗೆ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಗುಂಡಿನ ಶಬ್ದಗಳು ಕೇಳಿ ಬಂದಿದ್ದವು. ಅಸದುದ್ದೀನ್ ಎನ್ನುವವರ ಪುತ್ರ ಸುಹೈಲ್(12) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಮುನ್ನಾ ಖಾನ್ ಎಂಬವರ ಪುತ್ರ ಶಾಖಾದ್ (17) ತೀವ್ರವಾಗಿ ಗಾಯಗೊಂಡಿದ್ದ. ಇಬ್ಬರನ್ನೂ ತಕ್ಷಣ ಅಲಿಗಂಜ್ ನಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಸುಹೈಲ್ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ವೈದ್ಯರ ಸಲಹೆಯ ಮೇರೆಗೆ ಶಾಖಾದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೆಚ್ಚುವರಿ ಎಸ್ಪಿ ಶ್ವೇತಾಂಭ ಪಾಂಡೆ ಅವರು,ಘಟನೆಯು ಸಂಭ್ರಮಾಚರಣೆಯ ಗುಂಡು ಹಾರಾಟಕ್ಕೆ ಸಂಬಂಧಿಸಿರಬಹುದು ಎನ್ನುವುದನ್ನು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ,ಆದರೆ ತನಿಖೆಯ ಬಳಿಕವೇ ನಿಖರವಾದ ಕಾರಣ ಮತ್ತು ಗುಂಡು ಹಾರಿಸಿದವರು ಯಾರು ಎನ್ನುವುದು ದೃಢಪಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.
ಧರ್ಮ -ಸಂವಿಧಾನ ಒಂದಕ್ಕೊಂದು ಪೂರಕ : ನಟ ಪವನ್ ಕಲ್ಯಾಣ್
ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವ ಸಮಾರೋಪ
ಇವತ್ತಿನ ಪತ್ರಕರ್ತರು ವರದಿಯ ಹೆಸರಿನಲ್ಲಿ ಕಥೆ ಬರೆಯುತ್ತಿರುವುದು ನಿಜಕ್ಕೂ ಆತಂಕಕಾರಿ : ಬಿ.ಎಂ.ಬಶೀರ್
ಬೆಂಗಳೂರು ಸಾಹಿತ್ಯ ಉತ್ಸವ-2025 ‘ಅಗ್ನಿಪಥ’ ಕಾದಂಬರಿಯ ವಿಚಾರ ಗೋಷ್ಠಿ
ʼಆರೆಸ್ಸೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ : ಎಚ್ಡಿಕೆ ವಿರುದ್ಧ ಎಚ್.ಸಿ.ಮಹದೇವಪ್ಪ ಟೀಕೆ
ಬೆಂಗಳೂರು : ʼಎಚ್.ಡಿ.ಕುಮಾರಸ್ವಾಮಿ ಅವರೇ, ಹಿಂದೆ ತಾವೇ ಭಗವದ್ಗೀತೆಯ ಅಪ್ರಸ್ತುತತೆಯ ಬಗ್ಗೆ ಮತ್ತು ಸರಕಾರವು ಹೊಂದಿರಬೇಕಾದ್ದ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದೀರಿ. ಈಗ ಕೋಮುವಾದಿ ಆರೆಸ್ಸೆಸ್ ಅನ್ನು ಬೆಂಬಲಿಸಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ‘ಪಠ್ಯದಲ್ಲಿ ಭಗವದ್ಗೀತೆ ಬೋಧನೆ’ ಸಂಬಂಧ ಕೇಂದ್ರ ಶಿಕ್ಷಣ ಸಚಿವರಿಗೆ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿರುವ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ʼಮಕ್ಕಳ ತಲೆಗೆ ಕೇವಲ ಧಾರ್ಮಿಕತೆ ತುಂಬುವುದನ್ನು ಬಿಟ್ಟು ಒಂದಷ್ಟು ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸಮಾನತೆಯ ಜ್ಞಾನವನ್ನು ತುಂಬುವ ಕೆಲಸ ಮಾಡಿ. ಕಾರಣ ಈ ದೇಶಕ್ಕೆ ಬೇಕಿರುವುದು, ಸಂವಿಧಾನಾತ್ಮಕ ತಿಳುವಳಿಕೆಯೇ ವಿನಃ, ಧಾರ್ಮಿಕತೆಯ ಹಾದಿಯಲ್ಲ. ಈ ವಿಷಯ ನಿಮಗೂ ಮತ್ತು ಮತ್ತು ಜೆಡಿಎಸ್ ಪಕ್ಷಕ್ಕೂ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದುʼ ಎಂದು ಅವರು ತಿಳಿಸಿದ್ದಾರೆ.
ʻಕನ್ನಡ ಕಲಿಯದೆ ಬೆಂಗಳೂರಿಗೆ ಬರ್ಲೇಬೇಡಿ, ಇವ್ರೆಲ್ಲ ಎಂತವ್ರು ಗೊತ್ತಾ?ʼ; ದೆಹಲಿ ಯುವತಿಯ ವಿಡಿಯೋ ವೈರಲ್
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಆಗಾಗ್ಗೆ ಕನ್ನಡಿಗರು ಮತ್ತು ಹಿಂದಿ ಭಾಷಿಕರ ನಡುವೆ ವಿವಾದಗಳು ನಡೆಯುತ್ತಲೇ ಇರುತ್ತದೆ. ಬ್ಯಾಂಕ್ ಆಟೋ ಚಾಲಕರು ಹೀಗೆ ನಾನಾ ಕಡೆ. ಆಯಾ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಎಂಬುದು ಎಲ್ಲರ ಅಭಿಪ್ರಾಯ ಆದರೆ, ಕೆಲವು ಮಾತ್ರ ಜಡ ಹಿಡಿದಂತೆ ವರ್ತಿಸುತ್ತಾರೆ. ಇದೇ ಮನಸ್ಥಿತಿಯಲ್ಲಿದ್ದ ದೆಹಲಿ ಯುವತಿಯೊಬ್ಬರು ಈಗ ತಮ್ಮ ನಿಲುವು ಬದಲಿಸಿ ನಾನು ಕನ್ನಡ ಕಲಿಯಲೇ ಬೇಕು ಎಂದು ಕುಳಿತಿದ್ದಾರೆ. ಅವ್ರ ಈ ಹಠಕ್ಕೆ ಕಾರಣ ಏನು. ಬೆಂಗಳೂರಿನಲ್ಲಿ ಅಂತದ್ದೇನಾಯ್ತು ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ.
ನೈಟ್ ಕ್ಲಬ್ನಲ್ಲಿ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಅವಘಡ: ಗೋವಾ ಸಿಎಂ ಪ್ರಮೋದ್ ಸಾವಂತ್
ಸೀಮಿತ ನಿರ್ಗಮನ ದ್ವಾರಗಳಿಂದಾಗಿ ಸಾವು-ನೋವುಗಳ ಸಂಖ್ಯೆಯಲ್ಲಿ ಏರಿಕೆ
ಒಂದು ವರ್ಷದಲ್ಲಿ ₹300 ಕೋಟಿ ಮೌಲ್ಯದ ಡ್ರಗ್ಸ್ ವಶ: ಜಿ.ಪರಮೇಶ್ವರ್
ಕಳೆದ ಒಂದು ವರ್ಷದ ಅವಧಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ನಿರಂತರವಾಗಿ ಕಠಿಣ
Mangaluru | ಉರ್ವ ಪೊಂಪೈ ಮಾತೆಯ ವಾರ್ಷಿಕ ಮಹೋತ್ಸವ
ಮಂಗಳೂರು, ಡಿ.7: ನಗರದ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ರವಿವಾರ ನಡೆಯಿತು. ವಾರ್ಷಿಕ ಮಹೋತ್ಸವದ ಕೃತಜ್ಞತಾ ಪೂಜೆಯ ನೇತೃತ್ವ ವಹಿಸಿ ಆಶೀವರ್ಚನ ನೀಡಿದ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲಾ ಸಲ್ಡಾನಾ ಮಾತನಾಡಿ, ದೇವರ ಮೇಲಿನ ವಿಶ್ವಾಸವು ಯಾರನ್ನು ನಿರಾಶೆ ಮಾಡುವುದಿಲ್ಲ ಎನ್ನುವುದಕ್ಕೆ ಮೇರಿ ಮಾತೆ ಸಾಕ್ಷಿಯಾಗಿದ್ದಾರೆ. ಮೇರಿ ಮಾತೆಯ ಬದುಕು ಯೇಸುವಿನ ಹಾದಿಯಲ್ಲಿ ಸಾಗಿಕೊಂಡು ಬಂತು. ಅವರು ದೇವರ ಕೃಪೆಗೆ ಪಾತ್ರವಾದರು ಎಂದರು. ಈ ಸಂದರ್ಭ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ.ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ.ಲ್ಯಾನ್ಸನ್ ಪಿಂಟೋ, ಫಾ.ಮೈಕಲ್ ಲೋಬೋ ಸಹಿತ ಮಂಗಳೂರು ಧರ್ಮಪ್ರಾಂತದ 40ಕ್ಕೂ ಅಧಿಕ ಧರ್ಮಗುರುಗಳು ಪೂಜೆಯಲ್ಲಿ ಭಾಗವಹಿಸಿದರು. ಕೃತಜ್ಞತಾ ಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆ ನಡೆಯಿತು.
ಮೂಡುಬಿದಿರೆಯಲ್ಲಿ 'ಸಮಸ್ತ ಆದರ್ಶ ಮಹಾ ಸಮ್ಮೇಳನ ಪ್ರಯುಕ್ತ ಆಕರ್ಷಕ ಕಾಲ್ನಡಿಗೆ ಜಾಥಾ
ಮೂಡುಬಿದಿರೆ : ಸಮಸ್ತದ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಮಹಾ ಸಮ್ಮೇಳನದ ಅಂಗವಾಗಿ ರವಿವಾರ ಮಧ್ಯಾಹ್ನ ಮೂಡುಬಿದಿರೆ ಟೌನ್ ಮಸೀದಿಯಿಂದ ಲಾಡಿವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಏರ್ ಇಂಡಿಯಾ ಅವರು ರಫೀಕ್ ಧಾರಾಮಿ ಅವರಿಗೆ ಸಮಸ್ತದ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ಧಾರಿಮಿ, ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷರಾದ ಅಝೀಝ್ ಮಾಲಿಕ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ, ಎಂ.ಜಿ.ಮಹಮ್ಮದ್, ಅಬ್ದುಲ್ ಸಲಾಂ ಬೂಟ್ ಬಜಾರ್, ಅಬ್ದುಲ್ ರಝಾಕ್, ಮತ್ತಿತರರು ಈ ಸಂದರ್ಭದಲ್ಲಿದ್ದರು. ಜಾಥಾದಲ್ಲಿ ಮಕ್ಕಳಿಂದ ದಫ್, ಸ್ಕೌಟ್ಸ್ ಹಾಗೂ ಫ್ಲವರ್ ಶೋ ನಡೆಯಿತು.
ಮೂಡುಬಿದಿರೆ| ʼನಮ್ಮ ಮತ ನಮ್ಮ ಹಕ್ಕುʼ ಮತದಾನ ಗುರುತಿನ ಚೀಟಿ ಅಭಿಯಾನ
ಮೂಡುಬಿದಿರೆ: ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಮಂಗಳೂರು) ಮತ್ತು ಛಾಯಾ ಗ್ರಾಮ ವನ್ ಸೇವಾ ಕೇಂದ್ರ ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ 'ನಮ್ಮ ಮತ ನಮ್ಮ ಹಕ್ಕು' ಮತದಾನ ಗುರುತಿನ ಚೀಟಿ ಅಭಿಯಾನವು ಮೂಡುಬಿದಿರೆ ಗ್ಯಾರಂಟಿ ಅಧ್ಯಕ್ಷರ ಕಚೇರಿಯಲ್ಲಿ ಭಾನುವಾರ ನಡೆಯಿತು. ಪುರಸಭಾ ಹಿರಿಯ ಸದಸ್ಯರಾದ ಕೊರಗಪ್ಪ ಅವರು ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಭರತ್ ಮುಂಡೊಡಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಅಭಿನಂದನ್ ಬಳ್ಳಾಳ್, ಪುರಸಭಾ ಸದಸ್ಯರಾದ ಅಬ್ದುಲ್ ಕರೀಂ, ಜೆಸ್ಸಿ ಮೆನೇಜಸ್, ಸಂತೋಷ್ ಶೆಟ್ಟಿ, ಸುರೇಶ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾತ್ಯಾಯಿನಿ, ಗ್ಯಾರಂಟಿ ಅನುಷ್ಠಾನದ ತಾಲುಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಶಕುಂತಲಾ, ರಜನಿ, ಹರೀಶ್ ಆಚಾರ್ಯ, ಶೌಕತ್ ಆಲಿ, ರೆಕ್ಸಾನ್, ಪುರುಷೋತ್ತಮ್ ನಾಯಕ್, ಪ್ರಭಾಕರ್ ದರಗುಡ್ಡೆ, ಅಸ್ಲಾಂ ಪಡುಮಾರ್ನಾಡು, ಉಪಸ್ಥಿತರಿದ್ದರು. ಅಭಿಯಾನದಲ್ಲಿ ಸುಮಾರು 250 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಾರ್ವಜನಿಕರು ಹೊಸ ಮತದಾರರ ಗುರುತಿನ ಚೀಟಿ ನೋಂದಣಿ, ತಿದ್ದುಪಡಿ, ಸೇರ್ಪಡೆ ಮುಂತಾದ ಪ್ರಯೋಜನಗಳನ್ನು ಪಡೆದುಕೊಂಡರು. ರಮೇಶ್ ಶೆಟ್ಟಿ ಮಾರ್ನಾಡು ಸ್ವಾಗತಿಸಿದರು. ಛಾಯಾ ಸೇವಾ ಕೇಂದ್ರದ ಪ್ರಿಯಾ ಶೆಟ್ಟಿ, ರಕ್ಷಿತಾ, ಬುಶ್ರ, ಅನುಷಾ ಅಭಿಯಾನದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದರು.
ಡಿ.8, 9ರಂದು ದ.ಕ.ಜಿಲ್ಲೆಯಲ್ಲಿ ಸಮಸ್ತ ಸಂದೇಶ ಜಾಥಾ
ಮಂಗಳೂರು, ಡಿ.6: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಶತಮಾನೋತ್ಸವ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರಾರ್ಥ ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರ ನೇತೃತ್ವದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಮಸ್ತ ಸಂದೇಶ ಜಾಥಾ ಡಿ.8,9ರಂದು ನಡೆಯಲಿದೆ. ಡಿ.8ರಂದು ಮುಲ್ಕಿಯಿಂದ ಸಮಸ್ತ ಕೇಂದ್ರ ಮುಶಾವರ ಸದಸ್ಯ ತೋಡಾರ್ ಉಸ್ಮಾನುಲ್ ಫೈಝಿ ನೇತೃತ್ವದಲ್ಲಿ ಆರಂಭಗೊಳ್ಳುವ ಯಾತ್ರೆಯು ಕಕ್ಕಿಂಜೆಯಲ್ಲಿ ಸಮಾರೋಪಗೊಳ್ಳಲಿದೆ. ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ನೇತೃತ್ವದಲ್ಲಿ ಕಲ್ಲುಗುಂಡಿಯಿಂದ ಪ್ರಾರಂಭಗೊಂಡು ಪುತ್ತೂರಿನಲ್ಲಿ ಸಮಾರೋಪಗೊಳ್ಳಲಿದೆ. ದ್ವಿತೀಯ ದಿನ ಉಸ್ಮಾನುಲ್ ಫೈಝಿ ನೇತೃತ್ವದ ಯಾತ್ರೆಯು ಮಂಗಳೂರಿನ ಬಂದರ್ ಮಖಾಮಿನಿಂದ ಹಾಗೂ ಬಂಬ್ರಾಣ ಉಸ್ತಾದರ ನೇತೃತ್ವದ ಯಾತ್ರೆಯು ಉಪ್ಪಿನಂಗಡಿಯಿಂದ ಪ್ರಾರಂಭಗೊಂಡು ಎರಡೂ ಜಾಥಾಗಳು ಮಿತ್ತಬೈಲ್ ನಲ್ಲಿ ಸಮಾರೋಪಗೊಳ್ಳಲಿದೆ. ಜಿಲ್ಲಾ ವ್ಯಾಪ್ತಿಯ ರೇಂಜ್ ಕೇಂದ್ರಗಳಲ್ಲಿ ಜಾಥಾ ಸ್ವಾಗತ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಜಾಥಾ ಸಂಯೋಜಕರು ತಿಳಿಸಿದ್ದಾರೆ
ಮಂಡ್ಯ ಹೆದ್ದಾರಿಯಲ್ಲಿ 2 ಭೀಕರ ಅಪಘಾತ: ಕಾರು ಡಿಕ್ಕಿ ದಂಪತಿ ಸಾವು; ಬಸ್ ಪಲ್ಟಿ 30 ಮಂದಿಗೆ ಗಾಯ!
ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ನಾಗಮಂಗಲದಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಚಿಕ್ಕಮಗಳೂರಿನ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ದೂರು ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Nagamangala | ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಮೃತ್ಯು
ನಾಗಮಂಗಲ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಸೇತುವೆಗೆ ಗುದ್ದಿ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನಾಗತಿಹಳ್ಳಿ ಬಳಿ ನಡೆದಿರುವುದು ವರದಿಯಾಗಿದೆ. ಚಿಕ್ಕಮಂಗಳೂರು ಪಟ್ಟಣ ವಾಸಿ ಚಂದ್ರೇಗೌಡ (63) ಪತ್ನಿ ಸರೋಜಮ್ಮ(57) ಚಂದ್ರೇಗೌಡರ ಚಿಕ್ಕಮ್ಮನಾದ ಜಯಮ್ಮ (70 ) ಮೃತರು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಬಿಂಡಿಗನವಿಲೆ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುಂದಾಪುರ | ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿ
ಕುಂದಾಪುರ, ಡಿ.7: ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಆಂಗ್ಲ ಭಾಷೆಯ ಸಹಾಯವಿಲ್ಲದೆ ಕನ್ನಡದಲ್ಲೇ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯುವುದು ಸಾಧ್ಯವಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದೆ ಎಂದು ಕರಾವಳಿ ವಿಕಿಪಿಡಿಯನ್ ಸ್ಥಾಪಕ ಕಾರ್ಯದರ್ಶಿ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕರು, ವಿಜ್ಞಾನಿ ಡಾ.ಯು.ಬಿ.ಪವನಜ ಹೇಳಿದ್ದಾರೆ. ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವ ಕನ್ನಡ ಫೌಂಡೇಶನ್ ನ ನಿರ್ದೇಶಕ, ವಿಜ್ಞಾನಿ ಆನಂದ ಸಾವಂತ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶಾಲೆಯ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶಾಲೆಯ ಕಂಪ್ಯೂಟರ್ ಲ್ಯಾಬ್ ನಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಪಡೆದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಡಯೆಟ್ ಉಡುಪಿಯ ಪ್ರಾಂಶುಪಾಲ ಅಶೋಕ ಕಾಮತ್, ಉಪನ್ಯಾಸಕ ರಾದ ನಾಗರಾಜ್, ಸುರೇಶ ಭಟ್, ಶಾಲಾ ಶಿಕ್ಷಕರಾದ ಸಂಜೀವ ಎಂ., ವಿಜಯಾ ಆರ್., ವಿಜಯ ಶೆಟ್ಟಿ, ಸ್ವಾತಿ ಬಿ. ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್. ವಂದಿಸಿದರು. ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ : ಮಹೇಶ್ ತೇಗಂಪುರೆ
ಬೀದರ್ : ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಆಗ ಮಾತ್ರ ಸಮಾನತೆ ಬರಲು ಸಾಧ್ಯವಿದೆ ಎಂದು ಮಹೇಶ್ ತೇಗಂಪುರೆ ತಿಳಿಸಿದರು. ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ತೇಗಂಪುರೆ, 1956ರ ಡಿ. 6 ರಂದು ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರಬಹುದು. ಆದರೆ ಅವರ ವಿಚಾರಗಳು, ತತ್ವ ಸಿದ್ಧಾಂತ ಇನ್ನು ಕೂಡ ಜಿವಂತವಾಗಿವೆ. ನಾವೆಲ್ಲರೂ ಅವರ ತತ್ವ ಸಿದ್ಧಾಂತದಡಿಯಲ್ಲಿ ಸಾಗಿದರೆ ಅವರು ಕಂಡಂತಹ ಸಮಾನತೆಯ ಕನಸು ನನಸು ಮಾಡಬಹುದು ಎಂದರು. ಇಂದಿನ ಯುವ ಪೀಳಿಗೆ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಒಳಗಾಗಿ ಪುಸ್ತಕದಿಂದ ದೂರ ಉಳಿಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಅಂಬೇಡ್ಕರ್ ಅವರ ತತ್ವದಡಿ ಸಾಗಲು ಸಾಧ್ಯವಿಲ್ಲ. ಹಾಗಾಯೇ ಅಂಬೇಡ್ಕರ್ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಯುವ ಜನತೆ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಮಖಂಡರಾದ ರವಿಕುಮಾರ್ ಶೇರಿಕಾರ್, ಜಗನ್ನಾಥ್ ಶೇರಿಕಾರ್, ಜೈರಾಜ್ ಕಾಂಬಳೆ, ರಘುನಾಥ್ ಸಿರ್ಸಿಕರ್,ಕಾಶಿನಾಥ್ ಕಾಂಬಳೆ, ಯುವ ಮುಖಂಡರಾದ ಲೊಕೇಶ್ ಸುಣಗಾರ್, ವಿಲಾಸ್ ತೇಗಂಪೂರೆ, ಆನಂದ್ ಸುಣಗಾರ್, ಶಿವುಕುಮಾರ್ ಕಾಂಬಳೆ, ಮಲ್ಲಿಕಾರ್ಜುನ್ ಮಚುಕುರೆ, ಯುವರಾಜ್ ಕಾಂಬಳೆ, ಅಂತೀಶ್ ಮೇಡಪಳ್ಯ, ಕಲ್ಲಪ್ಪ ಮೇತ್ರೆ, ಸಂತೋಷ್ ಕಾಂಬಳೆ, ತುಳಜಪ್ಪಾ ತೇಗಂಪೂರೆ ಹಾಗೂ ರಾಹುಲ್ ಮೇತ್ರೆ ಉಪಸ್ಥಿತರಿದ್ದರು.
ಕುಂದಾಪುರ | ಧನಾತ್ಮಕ ಚಿಂತನೆಯಿಂದ ಉತ್ತಮ ಆರೋಗ್ಯ: ಮೋಹನ್ ದಾಸ್ ಪೈ
ಕುಂದಾಪುರ, ಡಿ.7: ಯಾವುದೇ ಸಂದರ್ಭದಲ್ಲಿ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಅದರಿಂದ ನಮ್ಮ ಬೆಳವಣಿಗೆಯೂ ಸಾಧ್ಯ. ಉತ್ತಮ ಆರೋಗ್ಯಕ್ಕೂ ಇದು ಪೂರಕ. ಜೀವನದಲ್ಲಿ 60 ಅಂಚಿಗೆ ತಲುಪುವಾಗ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿದ್ದು, ಅದನ್ನೆಲ್ಲ ತೊಡೆದು ಹಾಕಲು ಧನಾತ್ಮಕ ಚಿಂತನೆಯೇ ಉತ್ತಮ ಮಾರ್ಗ ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಮುಖ್ಯಸ್ಥ ಮೋಹನ್ ದಾಸ್ ಪೈ ಹೇಳಿದ್ದಾರೆ. ಕುಂದಾಪುರ ಶೆರೋನ್ ಹೋಟೆಲಿನ ಸಭಾಂಗಣದಲ್ಲಿ ಶನಿವಾರ ನಡೆದ ಭಂಡಾರ್ಕಾರ್ಸ್ ಕಾಲೇಜಿನ 1984-85ರ ಬಿ.ಕಾಂ. ವಿದ್ಯಾರ್ಥಿಗಳು 40 ವರ್ಷಗಳ ಬಳಿಕ ಒಟ್ಟು ಸೇರಿದ ಸ್ನೇಹ ಪುನರ್ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ನಿವೃತ್ತ ಉಪನ್ಯಾಸಕ ಶಾಂತರಾಮ ಶುಭಹಾರೈಸಿದರು. ಕಾರ್ಯಕ್ರಮ ಸಂಘಟಕರಾದ ಮಂಜುನಾಥ ಸೇಲಂ, ಓಸ್ಲಿನ್ ರೆಬೆಲ್ಲೋ, ಗಂಗಾಧರ ಆಚಾರ್ಯ, ನಾಗರಾಜ ಶೇರಿಗಾರ್, ಜಗನ್ನಾಥ ಪುತ್ರನ್, ಪ್ರಕಾಶ ಬಾಳಿಗ, ಭಾಸ್ಕರ್ ಶೆಟ್ಟಿ, ಎಸ್.ವಿ.ಅರುಣ್, ಲೋಲಿಟಾ ಕಾಡ್ರಸ್, ರಘುರಾಮ ಶೆಟ್ಟಿ, ಪೂರ್ಣಿಮಾ, ಸೂರ್ಯ ಪ್ರಕಾಶ್, ಅಶೋಕ್ ಬಿ., ರಮೇಶ್ ಮಂಜು, ವಸಂತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಈಗ ವಿವಿಧೆಡೆಗಳಲ್ಲಿ ಬದುಕು ಕಟ್ಟಿಕೊಂಡಿರುವ 1984 -85ರ ಸಾಲಿನ ಬಿ.ಕಾಂ. ಪದವಿ ತರಗತಿಯ ಎ ಮತ್ತು ಬಿ ವಿಭಾಗದ ನೂರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಈ ಸ್ನೇಹ ಪುನರ್ ಸಮ್ಮಿಲನದಲ್ಲಿ ಪಾಲ್ಗೊಂಡು, ಬಳಿಕ ಕಾಲೇಜಿನ ಆಗಿನ ತರಗತಿ ಕೋಣೆಗೂ ತೆರಳಿ, ಅಲ್ಲಿ ಮಕ್ಕಳಾಗುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕುವ ಮೂಲಕ ಸಂಭ್ರಮಿಸಿದರು. ಸ್ನೆಹಿತರು ಹಾಗೂ ಅವರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. 1984-85ರ ಬ್ಯಾಚಿನ ಬಿಕಾಂ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕ ಕೃಷ್ಣಾನಂದ ಚಾತ್ರ ಸ್ವಾಗತಿಸಿದರು. ರಾಜೀವ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್ ಪಾಯಸ್ ವಂದಿಸಿದರು. ಪ್ರಭಾಕರ ಕುಂಭಾಶಿ ಕಾರ್ಯಕ್ರಮ ನಿರೂಪಿಸಿದರು.
ಝಾನ್ಸಿ (ಉತ್ತರ ಪ್ರದೇಶ): ಮುಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ನಿರ್ಮಾಣವಾಗುವ ಮಸೀದಿಗಳು ತೀವ್ರ ವಿರೋಧ ಎದುರಿಸಲಿವೆ ಎಂದು ರವಿವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ವಿನ್ಯಾಸ ಹೋಲುವ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಿಗೇ ಕೇಶವ್ ಪ್ರಸಾದ್ ಮೌರ್ಯರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಶಂಕುಸ್ಥಾಪನೆಯ ಬೆನ್ನಿಗೇ ಚುನಾವಣಾ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಕಾವೇರಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, ಮಸೀದಿ ನಿರ್ಮಾಣದ ಬಗ್ಗೆ ನಮಗ್ಯಾವ ತಕರಾರೂ ಇಲ್ಲ. ಆದರೆ, ಬಾಬರ್ ಹೆಸರಲ್ಲಿ ಯಾರಾದರೂ ಮಸೀದಿ ನಿರ್ಮಾಣ ಮಾಡಿದರೆ ನಾವು ಅದನ್ನು ವಿರೋಧ ಮಾತ್ರ ಮಾಡುವುದಿಲ್ಲ, ಬದಲಿಗೆ ಅದು ತಕ್ಷಣವೇ ನೆಲಸಮಗೊಳ್ಳುವುದನ್ನು ಖಾತರಿ ಪಡಿಸಲಿದ್ದೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
ಉಡುಪಿ | ಹಿರಿಯರಡೆಗೆ ನಮ್ಮ ನಡಿಗೆ ಕಾರ್ಯಕ್ರಮದಡಿಯಲ್ಲಿ ಪ್ರೊ.ಅ.ಸುಂದರಗೆ ಸನ್ಮಾನ
ಉಡುಪಿ, ಡಿ.7: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯರಡೆಗೆ ನಮ್ಮ ನಡಿಗೆ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಪುರಾತತ್ವ ರತ್ನ ಪ್ರೊ.ಅ.ಸುಂದರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಮೊಗೇರಿ, ನೀಲಾವರ ಶ್ರೀಮಹಿಷ ಮರ್ದಿನಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅನುಷಾ, ಕಸಾಪ ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿ ಮಣಿಪಾಲ, ಕೊ.ಚಂದ್ರಶೇಖರ ನಾವಡ, ಸುಂದರ ಅವರ ಪುತ್ರ ಅನಂತ ಅಡಿಗ, ಆದಿತ್ಯ, ನಿವೃತ್ತ ಶಿಕ್ಷಕಿ ಸೀತಾಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಶಾಂತಿ, ಸಮೃದ್ಧಿ ಕುರ್ಆನಿನ ಬೆಳಕಿನಲ್ಲಿ ಕುರಿತು ಪ್ರವಚನ
ಬೀದರ್: ಕುರ್ಆನ್ ಸೃಷ್ಟಿಕರ್ತ ಹಾಗೂ ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು. ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಏರ್ಪಡಿಸಿದ್ದ 'ಶಾಂತಿ ಮತ್ತು ಸಮೃದ್ಧಿ ಕುರ್ಆನಿನ ಬೆಳಕಿನಲ್ಲಿ' ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ಕುರ್ಆನ್ ಅಧ್ಯಾಯ 17ರ ಸೂಕ್ತ 23 ರಿಂದ 30ರವರೆಗೆ ಪಠಿಸಿ, ಅವುಗಳ ವಿವರಣೆ ನೀಡಿದರು. ಸೃಷ್ಟಿಕರ್ತ-ಮಾನವ ಮತ್ತು ಮಾನವ-ಮಾನವರ ಮಧ್ಯದ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ. 'ಅಸ್ಸಲಾಮ್ ಅಲೈಕುಮ್ ರಹಮತುಲ್ಲಾಹೀ ಬರಕಾತುಹು' ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು ಎಂದು ತಿಳಿಸಿದರು. ನಮ್ಮೆಲ್ಲರ ಪ್ರಭು ಏಕದೇವನು, ಇಡೀ ಪ್ರಪಂಚದ ನಿಯಂತ್ರಕನೂ ಆಗಿದ್ದಾನೆ. ಅವನ ಹೊರತು ಬೇರೆ ಯಾರೂ ಆರಾಧ್ಯರಿಲ್ಲ. ಅವನಿಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಬಾಧಿಸುವುದಿಲ್ಲ. ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಎಂದು ಅವನ ಗುಣ ವಿಶೇಷತೆಗಳನ್ನು ಅವರು ವಿವರಿಸಿದರು. ದಿವ್ಯ ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಸದ್ಗುರು ಮಾತೆ ಸತ್ಯದೇವಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ. ದೇವನ ಆರಾಧನೆ, ಕರುಣೆ, ದಯೆ, ನ್ಯಾಯ, ಸಮಾನತೆಯಿಂದ ಶಾಂತಿ ಲಭಿಸುತ್ತದೆ. ಮುಹಮ್ಮದ್(ಸ) ಹಾಗೂ ಬಸವಣ್ಣ ಶಾಂತಿ, ಸೌಹಾರ್ದತೆಯ ಪ್ರತೀಕ ಎಂದು ಬಣ್ಣಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್ಜಿ ಅವರು ಮಾತನಾಡಿ, ದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ. ಆರಾಮ ವಲಯ ಹಾಗೂ ವಿಜ್ಞಾನ ಪ್ರಗತಿಯಿಂದ ಶಾಂತಿ ಸಿಗುವುದಿಲ್ಲ. ಮನುಷ್ಯ ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಸ್ವರೂಪನಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ. ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ, ಅನ್ಯಾಯವೇ ಅಶಾಂತಿಗೆ ಕಾರಣವಾಗಿದೆ. ಮನಸ್ಸಿನ ಶಾಂತಿ ಪ್ರಭುವಿನ ಸ್ಮರಣೆಯಲ್ಲಿದೆ. ನಾವು ಯಾವಾಗಲೂ ಸೃಷ್ಟಿಕರ್ತನನ್ನು ಸ್ಮರಿಸುತ್ತ, ಅವನನ್ನೇ ಪ್ರಶಂಸಿಸಬೇಕು. ನಮ್ಮ ತಂದೆ ತಾಯಿ ಒಂದೇ. ನಾವೆಲ್ಲ ಸಹೋದರರು ಎಂಬ ಭಾವನೆಯಿಂದ ಸಮಾನತೆ, ಶಾಂತಿ ಸ್ಥಾಪನೆಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್ ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಶೇಖ್ ಸುಮಯ್ಯಾ ಕುಲ್ಸುಮ್, ಡಾ. ವಿಜಯಶ್ರೀ ಎಸ್.ಶೆಟ್ಟಿ, ಡಾ. ಸುಮಯ್ಯ ಫಾತಿಮಾ, ಸಾಹಿತಿ ಡಾ. ಸುನಿತಾ ಕೂಡ್ಲಿಕರ್, ಡಾ.ಅಮಲ್ ಷರೀಫ್, ಡಾ. ದೀಪಾ ನಂದಿ, ಬಿಲ್ಕೀಸ್ ಫಾತಿಮಾ, ಬುಶ್ರಾ ಜಮಾಲ್, ಬುತುಲ್ ಸಯೀದ್ ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ ಐಮನ್, ರುಖಿಯ್ಯಾ ಫಾತಿಮಾ, ಡಾ. ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಅವರು ಉಪಸ್ಥಿತರಿದ್ದರು.
ಕುಂದಾಪುರ | ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಪರಿನಿಬ್ಬಾಣ ಕಾರ್ಯಕ್ರಮ
ಕುಂದಾಪುರ, ಡಿ.7: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ವತಿಯಿಂದ ಭಾರತ ಭಾಗ್ಯವಿಧಾತ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಪರಿನಿಬ್ಬಾಣ ಕಾರ್ಯಕ್ರಮ ಕುಂದಾಪುರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ಬಾಬಾ ಸಾಹೇಬರು ತನ್ನ ಬಾಲ್ಯದ ದಿನಗಳಿಂದ ಸಮಾಜದಲ್ಲಿ ನೋವು ಅವಮಾನವನ್ನು ಸಹಿಸುತ್ತಲೇ ಬಂದಿದ್ದು, ಎಂದಿಗೂ ಅವಮಾನ ನಿಂದನೆಗಳ ಬಗ್ಗೆ ಅಂಜಿದವರಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಛಲದಿಂದ ಬೆಳೆದು ಅತೀ ಹೆಚ್ಚಿನ ವಿದ್ಯಾಬ್ಯಾಸ ಪಡೆದು ಈ ದೇಶದ ಸಂವಿಧಾನ ಶಿಲ್ಪಿಯಾದದ್ದು ಇತಿಹಾಸ ಎಂದರು. ತಾಲೂಕು ಸಂಚಾಲಕ ಕೆ.ಸಿ.ರಾಜುಬೆಟ್ಟಿನಮನೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಮನ ಮನಸ್ಸುಗಳಲ್ಲಿ ಅಂಬೇಡ್ಕರರ ವಿಚಾರದಾರೆಗಳನ್ನು ಬಿತ್ತರಿಸಿ ಮುಂದಿನ ವಿದ್ಯಾರ್ಥಿ ಜೀವನ ಉತ್ತಮಗೊಳಿಸುವ ಉದ್ದೇಶ ವಾಗಿದೆ. ಅಂಬೇಡ್ಕರ್ ಅವರ ಜೀವನದ ಮೌಲ್ಯವನ್ನು ಅರಿತು ಉತ್ತಮ ವಿದ್ಯಾರ್ಥಿಗಳಾಗಿ ಭಾರತದ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಹೆತ್ತವರಿಗೆ ಗುರು ಹಿರಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಸದಾ ಸಮಾಜದ ಹಿತಕ್ಕಾಗಿ ಶ್ರಮಿಸಿದರೆ ನಿಮ್ಮಲ್ಲೂ ಕೂಡ ಅಂಬೇಡ್ಕರರಂತಾಗುವ ಅವಕಾಶಗಳು ದೊರಯಲಿದೆ ಎಂದರು. ಜಿಲ್ಲಾ ಸಂಘಟನ ಸಂಚಾಲಕ ಸುರೇಶ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ತಾಲೂಕು ಸಂಘಟನ ಸಂಚಾಲಕ ವಿಜಯ್ ಗಿಳಿಯಾರು, ವಿದ್ಯಾರ್ಥಿ ನಿಲಯದ ಕಾರ್ಯಪಾಲಕ ಗುರುರಾಜ್ ರಾವ್, ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಡಿಸಿಎಂ ಸೂಚನೆ
ಬೆಂಗಳೂರು : ದೇಶದ ಉದ್ಯಾನ ನಗರಿ ಹಾಗೂ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾಡಿದ ಮನವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣವೇ ಸ್ಪಂದಿಸಿದ್ದು, ಈ ವಿಷಯದ ಕುರಿತು ತುರ್ತು ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ದಿಲ್ಲಿಯಲ್ಲಿರುವಂತೆ ಬೆಂಗಳೂರು ಸಹ ಭವಿಷ್ಯದಲ್ಲಿ ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದಿನೇಶ್ ಗೂಳಿಗೌಡ ಅವರು ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಬೆಂಗಳೂರಿನ ವಾಯು ಮಾಲಿನ್ಯದ ಅಪಾಯವನ್ನು ತಡೆಗಟ್ಟಲು ತುರ್ತು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ರಚಿಸುವಂತೆ ಆದೇಶಿಸಿದ್ದಾರೆ. ಮನವಿ ಪತ್ರದಲ್ಲಿನ ಮುಖ್ಯಾಂಶಗಳು: ಬೆಂಗಳೂರಿನಲ್ಲಿ 1,23,24,919 ನೋಂದಾಯಿತ ಮೋಟರ್ ವಾಹನಗಳಿವೆ. ಜನಸಂಖ್ಯೆ (ಸುಮಾರು 1.47 ಕೋಟಿ) ಮತ್ತು ವಾಹನಗಳ ಅನುಪಾತವು ಸರಿಸುಮಾರು ಪ್ರತಿ ನಾಗರಿಕರಿಗೆ ಒಂದು ವಾಹನ ಎಂಬಂತಾಗಿದೆ. ನಿರಂತರ ನೋಂದಣಿ ಹೆಚ್ಚಳ: ಪ್ರತಿದಿನ ಸರಾಸರಿ 2,563 ಹೊಸ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಇವುಗಳಲ್ಲಿ 84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಾಗಿವೆ ಎಂದು ಅವರು ಗಮನ ಸೆಳೆದಿದ್ದಾರೆ. ವಾಯು ಗುಣಮಟ್ಟದ ಸೂಚ್ಯಂಕ : ಬೆಂಗಳೂರಿನ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 50ನ್ನು ಮೀರಿ 70 ‘ಮಧ್ಯಮ’ ವರ್ಗದಲ್ಲಿದೆ. ಆದರೆ ಮುಂದಿನ 5-10 ವರ್ಷಗಳಲ್ಲಿ ನಗರವು 'ತೀವ್ರ' ಮಾಲಿನ್ಯದ ಮಟ್ಟ ತಲುಪಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ : ಮಾಲಿನ್ಯದಿಂದಾಗಿ ಮಕ್ಕಳು, ಹಿರಿಯರು ಉಸಿರಾಟದ ತೊಂದರೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತುರ್ತು ಸಮಿತಿ ರಚನೆಗೆ ಬೇಡಿಕೆ: ಪರಿಸರ ವಿಜ್ಞಾನಿಗಳು, ಸಂಚಾರ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕು ಎಂದು ಅವರು ಕೋರಿದ್ದಾರೆ. ತಜ್ಞರ ಸಮಿತಿಯ ಕರ್ತವ್ಯಗಳು ಮತ್ತು ಧ್ಯೇಯೋದ್ದೇಶಗಳು: ಮುಂದಿನ ದಶಕದಲ್ಲಿ ಬೆಂಗಳೂರಿನ ಮಾಲಿನ್ಯದ ಪಥವನ್ನು ನಿರ್ಣಯಿಸುವುದು. ತುರ್ತು ಮತ್ತು ದೀರ್ಘಕಾಲೀನ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಶಿಫಾರಸು ಮಾಡುವುದು. ವಾಹನ ಹೊರಸೂಸುವಿಕೆಯ ನಿಯಮಗಳು ಮತ್ತು ಅವುಗಳ ಜಾರಿಯನ್ನು ಬಲಪಡಿಸುವುದು. ಹೊಸ ವಾಹನ ನೋಂದಣಿ ಮತ್ತು ಸಂಚಾರ ದಟ್ಟಣೆಯನ್ನು ನಿರ್ವಹಿಸುವ ತಂತ್ರಗಳನ್ನು ರೂಪಿಸುವುದು. ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕೆಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.
ಉಡುಪಿ | ಎರಡು ದಿನಗಳ ಕರಾವಳಿ ಭಜನಾ ಸಮಾವೇಶ ಸಮಾರೋಪ
ಉಡುಪಿ, ಡಿ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವುಗಳ ಸಹಯೋಗದೊಂದಿಗೆ ಎರಡು ದಿನಗಳ ಕರಾವಳಿ ಭಜನಾ ಸಮಾವೇಶದ ಸಮಾರೋಪ ಸಮಾರಂಭ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಟಿ.ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ರವಿವಾರ ನಡೆಯಿತು. ಸಮಾರೋಪ ನುಡಿಗಳನ್ನಾಡಿದ ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್.ಸಾಮಗ, ಭಜನೆ ಎಂಬುದು ಬಹಳ ಮುಖ್ಯ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮಗಳು ಇದನ್ನು ಪಾಲಿಸಬೇಕು. ಭಜನೆಯಿಂದ ಮನಸ್ಸು ನೆಮ್ಮದಿ, ಶಾಂತಿ ಹಾಗೂ ಏಕಾಗ್ರತೆ ಸಿಗಲು ಸಾಧ್ಯವಾಗುತ್ತದೆ. ಆದುದರಿಂದ ಪ್ರತಿದಿನ ಮನೆಗಳಲ್ಲಿ ಭಜನೆ ಹಾಡುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಮಾತನಾಡಿದರು. ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

16 C