SENSEX
NIFTY
GOLD
USD/INR

Weather

15    C
... ...View News by News Source

ಅರಾವಳಿಯಲ್ಲಿ ಹೊಸ ಗಣಿಗಾರಿಕೆಗೆ ನಿಷೇಧ; ಜನಾಂದೋಲನದ ಕರೆಗೆ ಓಗೊಟ್ಟ ಕೇಂದ್ರ ಸರ್ಕಾರದ ಐತಿಹಾಸಿಕ ಆದೇಶ

ಅರಾವಳಿ ಉಳಿಸಿ ಜನಾಂದೋಲನಕ್ಕೆ ಭಾರೀ ಯಶಸ್ಸು ದೊರೆತಿದೆ. ದೆಹಲಿಯಿಂದ ಗುಜರಾತ್‌ವರೆಗೆ ಹಬ್ಬಿರುವ ಈ ಬೆಟ್ಟಗಳ ಶ್ರೇಣಿಯಲ್ಲಿ, ಹೊಸದಾಗಿ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೇ ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಹೊಸ ಆದೇಶ, ಅರಾವಾಳಿಗಾಗಿ ಧ್ವನಿ ಎತ್ತಿದ್ದ ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 25 Dec 2025 6:42 am

ಚಿತ್ರದುರ್ಗ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಚಿತ್ರದುರ್ಗದ ಹೆದ್ದಾರಿಯಲ್ಲಿ ಘನಘೋರ ದುರಂತ ನಡೆದಿದ್ದು, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಅದರಲ್ಲಿದ್ದ 17 ಮಂದಿ ಸಜೀವ ದಹನ ಆಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದೆ.

ವಿಜಯ ಕರ್ನಾಟಕ 25 Dec 2025 6:38 am

New Railway Line: ಗಿಣಿಗೇರಾ-ರಾಯಚೂರು ರೈಲು ಮಾರ್ಗ ಯೋಜನೆ ಅಪ್ಡೇಟ್‌, ತೆಲಂಗಾಣಕ್ಕೆ ಸಂಪರ್ಕ ಸುಲಭ

ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಕೆಲವೆಡೆ ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆರಂಭವಾಗಿದ್ದ ಪ್ರಮುಖ ರೈಲ್ವೆ ಯೋಜನೆಯಾಗಿರುವ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಗಿಣಿಗೇರಾ-ರಾಯಚೂರು ರೈಲು ಮಾರ್ಗದ ನಿರ್ಮಾಣವು ಪ್ರಗತಿಯಲ್ಲಿದೆ. ಈ ಯೋಜನೆ ಮುನಿರಾಬಾದ್-ಮಹಬೂಬ್‌ನಗರ ರೈಲ್ವೆ ಮಾರ್ಗದ ಭಾಗವಾಗಿದೆ. ಒಟ್ಟು 165 ಕಿಲೋ ಮೀಟರ್ ಉದ್ದದ ಈ ಮಾರ್ಗವು ಯಾವೆಲ್ಲ

ಒನ್ ಇ೦ಡಿಯ 25 Dec 2025 6:19 am

ಚಾಮರಾಜ ನಗರದಲ್ಲಿ ಮತ್ತೊಂದು ಕೆಎಚ್‌ಬಿ ಲೇಔಟ್‌ : ಬೇಡಿಕೆ ಸಮೀಕ್ಷೆಗಾಗಿ ಅರ್ಜಿ

ಚಾಮರಾಜನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ನಾಲ್ಕನೇ ಲೇಔಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಬೇಡಿಕೆ ತಿಳಿಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಡಿ.31 ಕೊನೆಯ ದಿನವಾಗಿದೆ. ಮೈಸೂರಿನ ವಿದ್ವತ್ ಇನ್ಫಾ ಸಂಸ್ಥೆಯೊಂದಿಗೆ ಜಂಟಿ ಸಹಯೋಗದಲ್ಲಿ 24 ಎಕರೆ 13 ಗುಂಟೆ ಜಮೀನಿನಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ.

ವಿಜಯ ಕರ್ನಾಟಕ 25 Dec 2025 5:52 am

ರಾಜಧಾನಿಯಲ್ಲಿ 30,735 ವಿದ್ಯುತ್‌ ಕಳ್ಳತನ ಕೇಸ್‌ ! ವಾಣಿಜ್ಯ ಉದ್ದೇಶಕ್ಕೆ ಗೃಃಜ್ಯೋತಿ ಯೋಜನೆ ದುರ್ಬಳಕೆ

ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನ ನಿರಂತರವಾಗಿ ಮುಂದುವರೆದಿದ್ದು, ಕಳೆದ ಮೂರು ವರ್ಷಗಳಲ್ಲಿ 30,735 ಪ್ರಕರಣಗಳು ದಾಖಲಾಗಿವೆ. ಒಟ್ಟು 107.99 ಕೋಟಿ ರೂ. ದಂಡ ವಸೂಲಾಗಿದ್ದರೂ, ಮೀಟರ್ ಬೈಪಾಸ್, ಟ್ಯಾಂಪರಿಂಗ್ ಮತ್ತು ಅಕ್ರಮ ಸಂಪರ್ಕಗಳ ಮೂಲಕ ವಿದ್ಯುತ್ ದುರ್ಬಳಕೆ ನಡೆಯುತ್ತಿದೆ. ಗೃಹಜ್ಯೋತಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳೂ ವರದಿಯಾಗಿವೆ.

ವಿಜಯ ಕರ್ನಾಟಕ 25 Dec 2025 5:37 am

ಚಿಕ್ಕಮಗಳೂರು| ಕಾರು ಪಲ್ಟಿಯಾಗಿ ವಿದ್ಯಾರ್ಥಿ ಮೃತ್ಯು, ಆರು ಮಂದಿ ಗಂಭೀರ

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿ ಬಳಿ ನಡೆದಿರುವುದಾಗಿ ವರದಿಯಾಗಿದೆ. ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ವಿದ್ಯಾರ್ಥಿ ಮೋಹಿನ್ (19) ಮೃತಪಟ್ಟವರು. ಕೊಟ್ಟಿಗೆಹಾರದಿಂದ ಚಿಕ್ಕಮಗಳೂರಿಗೆ ಆಗಮಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರಿನ ಯುವಕರ ತಂಡ ಕೊಟ್ಟಿಗೆಹಾರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿದ್ದರು. ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆರು ಜನರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Dec 2025 12:31 am

ʼಸ್ಯಾನ್ಸನ್ ಗ್ರೂಪ್ ಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗʼ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ್ ಪತ್ರ

ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್ ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ ಈ ಸಂಬಂಧ ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಸಕ್ತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಎಂ.ಬಿ.ಪಾಟೀಲ್, ಈ ಬಗ್ಗೆ ಅ.31ರಂದು ತಾವು ನಮಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನ.24ರಂದು ಪ್ರತ್ಯುತ್ತರ ಬರೆದಿದ್ದೆವು. ಏತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯಸಾಧ್ಯತೆ ಜೊತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲ ಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಉದ್ದೇಶಿತ ಹೂಡಿಕೆ ಯೋಜನೆ ರಾಜ್ಯದ ಕೈತಪ್ಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಾರ್ತಾ ಭಾರತಿ 25 Dec 2025 12:20 am

ಬ್ರಾಹ್ಮಣ-ಶ್ರಮಣ ಸಂಘರ್ಷದ ಮುಂದುವರಿದ ಭಾಗ ಬಾಡೂಟದ ಹೋರಾಟ: ಚಿಂತಕ ಶಿವಸುಂದರ್

‘ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯ ಮುನ್ನುಡಿ’ ಕಾರ್ಯಕ್ರಮ

ವಾರ್ತಾ ಭಾರತಿ 25 Dec 2025 12:12 am

ಹೊಸಂಗಡಿ : ಯುವಕನ ಮೃತದೇಹ ನದಿಯಲ್ಲಿ ಪತ್ತೆ

ಮೂಡುಬಿದಿರೆ : ಹೊಸಂಗಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಸಂಜೆ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ್ ಪೂಜಾರಿ ( 42) ಎಂಬಾತ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದು,ಅಲ್ಲಿಂದ ಹೊಸಂಗಡಿಯಲ್ಲಿರುವ ಹೆಂಡತಿ ಮನೆಗೆ ಬಂದಿದ್ದರೆನ್ನಲಾಗಿದೆ. ರವಿವಾರ ಅದ್ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್ ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದು, ಅವರು ‘ಸರಿಮಾಡುವ, ಆತುರದ ನಿರ್ಧಾರ ಬೇಡ’ ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೆ ಆತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 25 Dec 2025 12:11 am

ರಚನಾತ್ಮಕ ಅಂತರವನ್ನು ಸರಿಪಡಿಸುವ ʻವಿಬಿ-ಜಿ ರಾಮ್‌ ಜಿʼ ಕಾಯ್ದೆ-2025

ʻವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ಗ್ರಾಮೀಣ) ಕಾಯ್ದೆ-2025ʼಕ್ಕೆ ಭಾರತದ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಸಬಲೀಕರಣ, ಏಕೀಕರಣದ ಮತ್ತು ಪರಿಪೂರ್ಣತೆ ಆಧರಿತ ಯೋಜನೆ ಅನುಷ್ಠಾನದ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಮತ್ತಷ್ಟು ಶಕ್ತಿ ತುಂಬಲಾಗಿದೆ. ಸದೃಢ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಅನುವು ಮಾಡಲಾಗಿದೆ. ಕೆಲವರಿಂದ ತಪ್ಪು ಗ್ರಹಿಕೆ ʻವಿಬಿ-ಜಿ ರಾಮ್‌ ಜಿʼ ಕಾಯ್ದೆಯು ಜಾರಿಯಾದ ಬಳಿಕವೂ ಕೆಲವರು ಕೂಲಂಕಷ ಪರಿಶೀಲನೆ ರಹಿತವಾದ ಊಹಾ ಪೋಹಗಳನ್ನು ಮುಂದಿಟ್ಟಿದ್ದಾರೆ. ಈ ಕಾಯ್ದೆಯ ಮೂಲಕ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸಲಾಗಿದೆ; ವಿಕೇಂದ್ರೀಕರಣ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕುಗಳನ್ನು ಸಮಾಲೋಚನೆಯಿಲ್ಲದೆ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಈ ಸುಧಾರಣೆಯು ಪುನರ್‌ ರಚನೆ ಸೋಗಿನಲ್ಲಿ ವಿತ್ತೀಯ ನಿಧಿ ಕಡಿತವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರತಿಯೊಂದು ಪ್ರತಿಪಾದನೆಯೂ ಕಾಯ್ದೆಯ ಸತ್ವ ಮತ್ತು ಉದ್ದೇಶವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಹೊರಹೊಮ್ಮಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯು ಪರಸ್ಪರ ವಿರೋದ್ಧ ಆಯ್ಕೆಗಳು ಎಂಬ ಊಹೆ ಹಾಗೂ ಪರಿಕಲ್ಪನೆಯಲ್ಲಿನ ದೋಷವು ಈ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಆದರೆ, ಹೊಸ ಕಾಯಿದೆಯನ್ನು ಇದಕ್ಕೆ ವಿರುದ್ಧವಾದ ತಿಳಿವಳಿಕೆಯ ಮೇಲೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ಶಾಸನಬದ್ಧ ಜೀವನೋಪಾಯದ ಖಾತರಿಯನ್ನು ಹೊಂದಿರುವ ಜನಕಲ್ಯಾಣ ಮತ್ತು ಅಭಿವೃದ್ಧಿ, ದೀರ್ಘಬಾಳಿಕೆಯ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆ ಹೆಚ್ಚಳದ ಮೇಲೆ ಹೊಸ ಕಾಯಿದೆ ನಿಂತಿದೆ. ಇದು ಪರಸ್ಪರ ಬಲವರ್ಧನೆಗೆ ಬೆಂಬಲಿಸುತ್ತದೆ. ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲೀನ ಗ್ರಾಮೀಣ ಉತ್ಪಾದಕತೆಯನ್ನು ನಿರಂತರವಾಗಿ ಪರಿಗಣಿಸಲಾಗುತ್ತದೆ. ಇದು ಮಹತ್ವಾಕಾಂಕ್ಷೆಯ ವಾಕ್ಚಾತುರ್ಯವಲ್ಲ, ಬದಲಿಗೆ ಶಾಸನಬದ್ಧ ವಿನ್ಯಾಸವನ್ನು ಆಧರಿಸಿದ ಕಾರ್ಯವಿಧಾನವಾಗಿದೆ. ಉದ್ಯೋಗದ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸಲಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಈ ಕಾಯ್ದೆಯು ಉದ್ಯೋಗ ಖಾತರಿಯ ಶಾಸನಬದ್ಧ ಮತ್ತು ನ್ಯಾಯಸಮ್ಮತ ಗುಣಲಕ್ಷಣವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದರ ಜಾರಿಯನ್ನು ಬಲಪಡಿಸುತ್ತದೆ. ಉದ್ಯೋಗ ಅರ್ಹತೆಯನ್ನು ಮೊಟಕುಗೊಳಿಸುವ ಬದಲು, ಅರ್ಹತೆಯನ್ನು 100 ರಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಅನರ್ಹತೆ ಮೂಲಕ ನಿರುದ್ಯೋಗ ಭತ್ಯೆಯನ್ನು ನಿರಾಕರಿಸಲು ಅವಕಾಶವಿತ್ತು. ಈಗ ಅಂತಹ ಅರ್ಹತೆ ನಿರಾಕರಣೆ ಷರತ್ತುಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಕ್ಷಿಪ್ರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ. ಈ ಸುಧಾರಣೆಯು ಶಾಸನಬದ್ಧ ಭರವಸೆ ಮತ್ತು ವಾಸ್ತವತೆಯ ನಡುವಿನ ದೀರ್ಘಕಾಲದ ಅಂತರವನ್ನು ಪರಿಹರಿಸುತ್ತದೆ. ಹೊಸ ಯೋಜನೆಯಲ್ಲಿ ಬೇಡಿಕೆ ಆಧಾರಿತ ಉದ್ಯೋಗವನ್ನು ಕೈಬಿಡಲಾಗಿದೆ ಎಂದು ವಾದಿಸಲಾಗಿದೆ. ಇದು ಆಧಾರರಹಿತ. ಕಾರ್ಮಿಕರ ಕಡೆಯಿಂದ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದು ಮುಂದುವರಿಯುತ್ತದೆ. ಆದರೆ ಹೊಸ ಯೋಜನೆಯಲ್ಲಿ ಈ ನಿಟ್ಟಿನಲ್ಲಿ ಒಂದು ಬದಲಾವಣೆ ಎಂದರೆ ಕೇವಲ ಸಂಕಷ್ಟ ಎದುರಾದ ನಂತರವಷ್ಟೇ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಮುಂಚಿತವಾಗಿ ಉದ್ಯೋಗ ಸೃಜನೆಯನ್ನು ಕಾರ್ಯಗತಗೊಳಿಸುವ ಮೂಲಕ, ಸಕ್ರಿಯ ಭಾಗವಹಿಸುವಿಕೆ ಹೊಂದಿರುವ ಗ್ರಾಮ ಮಟ್ಟದ ಯೋಜನೆಯ ಮೂಲಕ ಹೊಸ ಯೋಜನೆಯು ಕಾರ್ಮಿಕರು ಉದ್ಯೋಗವನ್ನು ಹುಡುಕಿದಾಗ ಅವರಿಗೆ ಅದು ಖಚಿತವಾಗಿ ಲಭ್ಯವಾಗುತ್ತದೆ. ಇಲ್ಲಿ ಆಡಳಿತಾತ್ಮಕ ಸಿದ್ಧತೆಯಿಲ್ಲದ ಕಾರಣ ಉದ್ಯೋಗ ನಿರಾಕರಿಸುವ ಸಂದರ್ಭ ಬರುವುದಿಲ್ಲ. ಈ ಯೋಜನೆಯು, ಈ ಅರ್ಥದಲ್ಲಿ, ಬೇಡಿಕೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಅದು ಅದನ್ನು ಕಾರ್ಯಗತಗೊಳಿಸುತ್ತದೆ. ಅಧಿಕಾರ ಕೇಂದ್ರೀಕರಣದ ಆರೋಪ ಮಾಡುವವರು, ಬಹುಶಃ ಈ ಕಾನೂನಿನ ರಚನಾ ಸ್ವರೂಪವನ್ನು ಕಡೆಗಣಿಸಿ ದಂತೆ ಕಾಣುತ್ತದೆ. ಗ್ರಾಮ ಪಂಚಾಯಿತಿಗಳು ಪ್ರಾಥಮಿಕ ಯೋಜನೆ ಮತ್ತು ಅನುಷ್ಠಾನ ಪ್ರಾಧಿಕಾರಗಳಾಗಿ ಉಳಿದಿವೆ ಮತ್ತು ಗ್ರಾಮ ಸಭೆಗಳು ಸ್ಥಳೀಯ ಯೋಜನೆಗಳ ಮೇಲೆ ಅನುಮೋದನೆಯ ಅಧಿಕಾರವನ್ನು ಉಳಿಸಿಕೊಂಡಿವೆ. ಹೊಸ ಯೋಜನೆಯಲ್ಲಿ ಬದಲಾಗಿರುವ ಒಂದು ಸಂಗತಿಯೆಂದರೆ, ವಿಕೇಂದ್ರೀಕೃತ ಯೋಜನೆಯು ಇನ್ನು ಮುಂದೆ ತಾತ್ಕಾಲಿಕ ಅಥವಾ ಸಾಂದರ್ಭಿಕವಾಗಿರುವುದಿಲ್ಲ. ಬದಲಿಗೆ, ರಚನಾತ್ಮಕ ಮತ್ತು ಭಾಗವಹಿಸುವ ಪ್ರಕ್ರಿಯೆಯಾಗಿ ಸಾಂಸ್ಥಿಕ ರೂಪ ಪಡೆಯುತ್ತದೆ. ʻವಿಕಸಿತ ಗ್ರಾಮ ಪಂಚಾಯತ್ ಯೋಜನೆʼಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ, ಇದು ಕ್ಷೇತ್ರಗಳಾದ್ಯಂತ ಸಮನ್ವಯ, ಏಕೀಕರಣ ಮತ್ತು ಗೋಚರತೆಯನ್ನು ಸಕ್ರಿಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ದಮನ ಮಾಡಲು ಅವಕಾಶವಿರುವುದಿಲ್ಲ. ಹೊಸ ಕಾಯಿದೆಯಲ್ಲಿ ಯೋಜನೆಯ ಸುಸಂಬದ್ಧತೆ ವಿಚಾರವಷ್ಟೇ ಕೇಂದ್ರೀಕೃತವಾಗಿರುತ್ತದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಸ್ಥಳೀಯವಾಗಿ ಉಳಿಯುತ್ತದೆ. ಇದು ವಿಕೇಂದ್ರೀಕರಣವನ್ನು ದುರ್ಬಲಗೊಳಿಸದೆಯೇ ವಿಘಟನೆಯನ್ನು ಸರಿಪಡಿಸುತ್ತದೆ. ಸಮಾಲೋಚನೆಯಿಲ್ಲದೆ ಸುಧಾರಣೆಯನ್ನು ಕೈಗೊಳ್ಳಲಾಗಿದೆ ಎಂಬ ವಾದಗಳು ಸಹ ಅಷ್ಟೇ ಅಸಂಗತವಾಗಿವೆ. ಈ ವಿಧೇಯಕ ಮಂಡನೆಗೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳು ನಡೆದವು. ಇದಲ್ಲಿನ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳು - ಗ್ರಾಮ ಯೋಜನಾ ರಚನೆಗಳು, ಒಮ್ಮುಖ ಕಾರ್ಯವಿಧಾನಗಳು ಮತ್ತು ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ರಾಜ್ಯಗಳ ಪ್ರತಿಕ್ರಿಯೆ ಮತ್ತು ಹಲವು ವರ್ಷಗಳ ಅನುಷ್ಠಾನದಿಂದ ಪಡೆದ ಪಾಠಗಳಿಂದ ರೂಪಿಸಲಾಗಿದೆ. ಹಂಚಿಕೆ, ಪಾಲಿನಲ್ಲಿ ಹೆಚ್ಚಳ ಕಳೆದ ದಶಕದಲ್ಲಿ ಉದ್ಯೋಗ ಖಾತರಿಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂಬ ಆರೋಪವು ವಾಸ್ತವಕ್ಕೆ ದೂರವಾದುದು. ಬಜೆಟ್ ಹಂಚಿಕೆಯು 2013-14ರಲ್ಲಿದ್ದ 33,000 ಕೋಟಿ ರೂ.ಗಳ ಮಟ್ಟದಿಂದ 2024-25ರಲ್ಲಿ 286,000 ಕೋಟಿ ರೂ.ಗೆ ಏರಿದೆ. ಸೃಷ್ಟಿಯಾದ ಮಾನವ ದಿನಗಳ ಸಂಖ್ಯೆಯೂ 2013-14ರ ಅವಧಿಯಲ್ಲಿ 1,660 ಕೋಟಿ ಇದ್ದದ್ದು ಈಗ 3,210 ಕೋಟಿಗೆ ಏರಿದೆ. ಬಿಡುಗಡೆ ಮಾಡಲಾದ ಕೇಂದ್ರದ ನಿಧಿ ಪ್ರಮಾಣವೂ 2.13 ಲಕ್ಷ ಕೋಟಿ ರೂ.ಗಳಿಂದ 8.53 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಜೊತೆಗೆ, ಪೂರ್ಣ ಗೊಂಡ ಕಾಮಗಾರಿಗಳ ಸಂಖ್ಯೆ 153 ಲಕ್ಷದಿಂದ 862 ಲಕ್ಷಕ್ಕೆ ಏರಿಕೆಯಾಗಿದೆ. ಮಹಿಳೆಯರ ಭಾಗವಹಿಸುವಿಕೆ ಶೇ.48ರಿಂದ ಶೇ.56.73ಕ್ಕೆ ಏರಿದೆ. ಶೇ.99 ಕ್ಕೂ ಹೆಚ್ಚು ಹಣ ವರ್ಗಾವಣೆ ಆದೇಶಗಳು ಈಗ ಸಕಾಲಿಕವಾಗಿ ಸೃಷ್ಟಿಯಾಗುತ್ತಿವೆ ಮತ್ತು ಸುಮಾರು ಶೇ.99 ರಷ್ಟು ಸಕ್ರಿಯ ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ. ಈ ಪ್ರವೃತ್ತಿಗಳು ನಿರಂತರ ಬದ್ಧತೆ ಮತ್ತು ಸುಧಾರಿತ ವಿತರಣೆಯನ್ನು ಸೂಚಿಸುತ್ತವೆಯೇ ಹೊರತು ನಿರ್ಲಕ್ಷ್ಯವನ್ನಲ್ಲ. ಆದಾಗ್ಯೂ ಕಾಲಾನಂತರದಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಯೋಜನೆಯ ಅನುಷ್ಠಾನದ ಅನುಭವವು ಹಿಂದಿನ ಯೋಜನೆಗಳಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಸಾಂದರ್ಭಿಕ ಉದ್ಯೋಗ, ನಿರುದ್ಯೋಗ ಭತ್ಯೆಯ ದುರ್ಬಲ ಜಾರಿಗೊಳಿಸುವಿಕೆ, ಛಿದ್ರಗೊಂಡ ಆಸ್ತಿ ಸೃಷ್ಟಿ ಮತ್ತು ನಕಲು ನೋಂದಣಿಗಳ ಸಾಧ್ಯತೆ ತಪ್ಪಿದೆ. ಬರಗಾಲದ ವರ್ಷಗಳು, ವಲಸೆಯ ಹೆಚ್ಚಳ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಂತಹ ಅವಧಿಗಳಲ್ಲಿ ಈ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರವಾಗಿವೆ. ಹೊಸ ಕಾಯ್ದೆಯಡಿ ಹಣಕಾಸಿನ ಪುನರ್‌ ರಚನೆಯನ್ನು ನಿಧಿಯ ಕಡಿತ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಕೇಂದ್ರ ಸರ್ಕಾರದ ಕೊಡುಗೆ ಹೆಚ್ಚುತ್ತಿದೆ - ಕೇಂದ್ರದ ಪಾಲು 86,000 ಕೋಟಿ ರೂ.ಗಳಿಂದ ಸುಮಾರು 295,000 ಕೋಟಿ ರೂ.ಗೆ ಏರುತ್ತದೆ, ಇದು ಗ್ರಾಮೀಣ ಉದ್ಯೋಗಕ್ಕೆ ನಿರಂತರ ಮತ್ತು ಹೆಚ್ಚಿದ ಬೆಂಬಲವನ್ನು ಒತ್ತಿಹೇಳುತ್ತದೆ. 60:40 ಧನಸಹಾಯ ಮಾದರಿಯು ದೀರ್ಘಕಾಲದಿಂದ ಅನುಸರಿಸಿಕೊಂಡು ಬಂದಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ರಚನೆಯನ್ನು ಹೊಂದಿದೆ. ಇದೇವೇಳೆ, ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ 90:10 ಅನುಪಾತದ ಧನಸಹಾಯ ರಚನೆಯನ್ನು ಯೋಜನೆ ಒಳಗೊಂಡಿದೆ. ಈ ಅನುದಾನ ಪಾಲುದಾರಿಕೆಯು ಹಣಕಾಸಿನ ಕಡಿತವನ್ನು ಸೂಚಿಸುವ ಬದಲು, ಹಂಚಿಕೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುತ್ತದೆ. ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯವಾರು ನಿಧಿ ಹಂಚಿಕೆಗಳನ್ನು ನಿರ್ಧರಿಸಲಾಗುತ್ತದೆ. ನಿಯಮ ಆಧಾರಿತ ಪ್ರಮಾಣಕ ಹಂಚಿಕೆಯ ಮೂಲಕ ಸಮಾನತೆಯನ್ನು ಖಾತ್ರಿಪಡಿಸಲಾ ಗುತ್ತದೆ. ರಾಜ್ಯಗಳನ್ನು ಕೇವಲ ಅನುಷ್ಠಾನ ಏಜೆನ್ಸಿಗಳಾಗಿ ಪರಿಗಣಿಸದೆ ಅಭಿವೃದ್ಧಿಯ ಪಾಲುದಾರರಾಗಿ ಪರಿಗಣಿಸ ಲಾಗುತ್ತದೆ, ಶಾಸನಬದ್ಧ ಚೌಕಟ್ಟಿನೊಳಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿ ಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಮ್ಯತೆಯನ್ನು ಸ್ಪಷ್ಟವಾಗಿ ಸಂರಕ್ಷಿಸಲಾಗಿದೆ. ನೈಸರ್ಗಿಕ ವಿಕೋಪಗಳು ಅಥವಾ ಇತರ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯಗಳು ವಿಶೇಷ ಸಡಿಲಿಕೆಗಳನ್ನು ಶಿಫಾರಸು ಮಾಡಬಹುದು, ಇದರಲ್ಲಿ ಅನುಮತಿಸಬಹುದಾದ ಕೆಲಸಗಳ ದಿನಗಳ ವಿಸ್ತರಣೆ ಮತ್ತು ಉದ್ಯೋಗದ ತಾತ್ಕಾಲಿಕ ಹೆಚ್ಚಳವೂ ಸೇರಿದೆ. ನಿಯಮಾಧರಿತ ಹಂಚಿಕೆ ಮತ್ತು ಸಂದರ್ಭೋಚಿತ ಬದಲಾವಣೆಗೆ ಅವಕಾಶದ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅನುಗುಣವಾದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಈ ಕಾಯ್ದೆಯು ಗರಿಷ್ಠ ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ, ಒಂದು ಹಣಕಾಸು ವರ್ಷದಲ್ಲಿ 60 ದಿನಗಳವರೆಗೆ ಕಾಮಗಾರಿಗಳನ್ನು ಕೈಗೊಳ್ಳದ ಅವಧಿಯನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ. ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜಿಲ್ಲೆಗಳು, ಬ್ಲಾಕ್‌ಗಳು ಅಥವಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಬಹುದು. ಆ ಮೂಲಕ ಸುಧಾರಿತ ಉದ್ಯೋಗ ಖಾತರಿ ಯೋಜನೆಯು ಕೃಷಿ ಕಾರ್ಯಾಚರಣೆಗಳಿಗೆ ಪೂರಕವಾಗಿರುವುದನ್ನು ಖಚಿತಪಡಿಸುತ್ತದೆ. ಯು.ಪಿ.ಎ. ದಾಖಲೆ ತನ್ನ ಮೊದಲ ಅಧಿಕಾರಾವಧಿಯಿಂದಲೇ ಕಾಂಗ್ರೆಸ್ ನೇತೃತ್ವದ ʻಯು.ಪಿ.ಎ.ʼ ಸರ್ಕಾರವು ʻಮನರೇಗಾʼ ವಿಚಾರದಲ್ಲಿ ನುಡಿದಂತೆ ನಡೆಯಲು ವಿಫಲವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದಿನಕ್ಕೆ 100 ರೂ.ಗಳ ನೈಜ ವೇತನದಂತೆ ಕನಿಷ್ಠ 100 ದಿನಗಳ ಕೆಲಸದ ಭರವಸೆ ನೀಡಲಾಗಿದ್ದರೂ, ಸರ್ಕಾರವು 2009ರ ಆರಂಭದಲ್ಲೇ ವೇತನವನ್ನು 100 ರೂ.ಗೆಮಿತಿಗೊಳಿಸಿತು. ಅಷ್ಟೇ ಅಲ್ಲದೆ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟಗಳನ್ನು ನಿರ್ಲಕ್ಷಿಸಿ ಹಲವು ವರ್ಷಗಳವರೆಗೆ ಅದೇ ಮಟ್ಟದಲ್ಲಿ ಮುಂದುವರಿಸಿತು. ಈ ಯೋಜನೆಯಡಿಯಲ್ಲಿ ರಾಜ್ಯಗಳು ಅನಿಯಂತ್ರಿತವಾಗಿ ವರ್ತಿಸುತ್ತಿವೆ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿತು ಮತ್ತು 'ವಿವೇಚನಾರಹಿತ ಹೆಚ್ಚಳ'ಕ್ಕೆ ರಾಜ್ಯ ಸರ್ಕಾರಗಳನ್ನು ದೂಷಿಸುವ ಮೂಲಕ ವೇತನ ಸ್ಥಗಿತಗೊಳಿಸುವಿಕೆಯನ್ನು ಸಮರ್ಥಿಸಿಕೊಂಡಿತು. ಇದು ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ತನ್ನದೇ ರಾಜ್ಯ ಸರ್ಕಾರಗಳನ್ನು ಸಹ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ʻಮನರೇಗಾʼದಲ್ಲಿ ನಿಧಿ ದುರ್ಬಳಕೆ, ನಕಲಿ ಜಾಬ್ ಕಾರ್ಡ್‌ಗಳ ಸೃಷ್ಟಿ ಮತ್ತು ಆರ್ಥಿಕ ಸೋರಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು. ʻಯುಪಿಎ-2ʼ ಅವಧಿಯಲ್ಲಿ ಯೋಜನೆಯ ಬಗೆಗಿನ ಬದ್ಧತೆ ಸ್ಥಿರವಾಗಿ ಕುಸಿಯಿತು. 2010-11ರಲ್ಲಿ 2,40,100 ಕೋಟಿ ರೂ.ಗಳಷ್ಟಿದ್ದ ಬಜೆಟ್ ಹಂಚಿಕೆಯನ್ನು 2012-13ರ ವೇಳೆಗೆ 33,000 ಕೋಟಿ ರೂ.ಗೆ ಇಳಿಸಲಾಯಿತು. 2013ರಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಸಹಾಯಕ ಸಚಿವರಾಗಿದ್ದ ರಾಜೀವ್ ಶುಕ್ಲಾ ಅವರು, ʻಮನರೇಗಾʼ ಅಡಿಯಲ್ಲಿ ಉದ್ಯೋಗ ಸೃಷ್ಟಿಯು 2010-11ರಲ್ಲಿ 7.55 ಕೋಟಿ ಕಾರ್ಮಿಕರಿಂದ 2013ರ ನವೆಂಬರ್ ವೇಳೆಗೆ ಕೇವಲ 6.93 ಕೋಟಿಗೆ ಕುಸಿದಿದೆ ಎಂದು ಒಪ್ಪಿಕೊಂಡಿದ್ದರು. ವಿಳಂಬವಾದ ನಿಧಿ ಬಿಡುಗಡೆಗಳು, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಆಡಳಿತಾತ್ಮಕ ನಿರಾಸಕ್ತಿಯು ಕಾರ್ಮಿಕರಲ್ಲಿ ಉದ್ಯೋಗ ಶೋಧದ ಉತ್ಸಾಹ ಕುಂದಿಸಿತು. ಇದು ಕಾಯ್ದೆಯಡಿ ಭರವಸೆ ನೀಡಲಾದ ಶಾಸನಬದ್ಧ ಉದ್ಯೋಗ ಖಾತರಿಯನ್ನು ನೇರವಾಗಿ ದುರ್ಬಲಗೊಳಿಸಿತು. ʻಕಂಟ್ರೋಲರ್ ಮತ್ತು ಆಡಿಟರ್ ಜನರಲ್ʼ(ಸಿ.ಎ.ಜಿ.) ಅವರ 2013ರ ವರದಿಯು ಯು.ಪಿ.ಎ. ವರ್ಷಗಳಲ್ಲಿ ʻಮನರೇಗಾʼ ಯೋಜನೆಯ ನೈಜ ಸ್ಥಿತಿಯನ್ನು ಬಹಿರಂಗಪಡಿಸಿದೆ. ವ್ಯಾಪಕವಾದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 4.33 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದೋಷಯುಕ್ತ ಜಾಬ್ ಕಾರ್ಡ್‌ಗಳು, ಲೆಕ್ಕವಿಲ್ಲದ ಹಣ ಹಿಂಪಡೆಯುವಿಕೆ ಮತ್ತು ಅನಿಯಮಿತ ಕೆಲಸದಿಂದ ಸಾವಿರಾರು ಕೋಟಿ ನಷ್ಟವಾ ಗಿದೆ. 23 ರಾಜ್ಯಗಳಲ್ಲಿ ವೇತನ ವಿಳಂಬವಾಗಿದೆ ಅಥವಾ ನಿರಾಕರಿಸಲಾಗಿದೆ ಮತ್ತು ಭಾರತದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕಳಪೆ ದಾಖಲೆ ನಿರ್ವಹಣೆಯಾಗಿದೆ ಎಂದು ವರದಿಯು ಹೇಳಿತ್ತು. ಗ್ರಾಮೀಣ ಬಡವರ ಸಂಖ್ಯೆ ಅತಿ ಹೆಚ್ಚಾಗಿರುವ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಹಂಚಿಕೆಯಾದ ನಿಧಿಯಲ್ಲಿ ಕೇವಲ ಶೇ.20 ರಷ್ಟು ಮಾತ್ರ ಬಳಸಿಕೊಂಡಿದ್ದವು. ಇದು ಯೋಜನೆಯು ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ನಿಖರ ವಾಗಿ ವಿಫಲವಾಗಿರುವುದನ್ನು ಸಾಬೀತುಪಡಿಸಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯ ನಡುವಿನ ಆಯ್ಕೆ ಎಂಬ ಚರ್ಚೆಯನ್ನು ಮುಂದಿಡುವುದು ಕೃತಿಮ ದ್ವಂದ್ವದ ಸೃಷ್ಟಿಯೇ ಸರಿ. ಜೀವನೋಪಾಯದ ಖಾತರಿಯು ಜನಕಲ್ಯಾಣಕ್ಕೆ ಅಡಿಪಾಯವಾದಾಗ ಮತ್ತು ದೀರ್ಘ ಬಾಳಿಕೆಯ ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆಯು ಅಭಿವೃದ್ಧಿಗೆ ಅಡಿಪಾಯವಾದಾಗ, ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡೂ ಸಹ ಪರಸ್ಪರ ಸ್ಪರ್ಧಿಗಳಾಗುವ ಬದಲು ಪರಸ್ಪರ ಅವಲಂಬಿತ ವಿಷಯಗಳಾಗುತ್ತವೆ. ನಿರೀಕ್ಷಿತ ರೀತಿಯಲ್ಲಿ ಪ್ರಯೋಜನ ತಲುಪಿಸುವಲ್ಲಿ ವಿಫಲವಾದ ಯೋಜನೆಯನ್ನು ಮುಂದುವರಿಸಬೇಕೇ ಅಥವಾ ಅಭಿವೃದ್ಧಿಯ ಮೂಲಕ ಜನಕಲ್ಯಾಣವನ್ನು ಒದಗಿಸುವ, ಸಮಗ್ರ ಉದ್ಯೋಗ ಖಾತರಿ ಒದಗಿಸುವ ಆಧುನಿಕ ಯೋಜನೆಯನ್ನಾಗಿ ಅದನ್ನು ಮಾರ್ಪಡಿಸಬೇಕೆ ಎಂಬುದು ಇಲ್ಲಿ ಮೂಲ ಪ್ರಶ್ನೆಯಾಗಿದೆ. ಹೊಸ ಕಾಯ್ದೆಯು ಕೆಲಸ ಮಾಡುವ ಕಾನೂನು ಬದ್ಧ ಹಕ್ಕನ್ನು ಸಂರಕ್ಷಿಸುತ್ತದೆ, ಅರ್ಹತೆಗಳನ್ನು ವಿಸ್ತರಿಸುತ್ತದೆ, ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುತ್ತದೆ. ಜೊತೆಗೆ ಹಲವು ವರ್ಷಗಳ ಅನುಷ್ಠಾನದ ಮೂಲಕ ಬಯಲಾದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸುತ್ತದೆ. ಇದು ಧ್ವಂಸ ಮಾಡುವ ಕೃತ್ಯವಲ್ಲ, ಬದಲಿಗೆ ಅನುಭವದ ಆಧಾರದ ಮೇಲೆ ನವೀಕರಿಸುವ ಪ್ರಕ್ರಿಯೆ. - ಶಿವರಾಜ್ ಸಿಂಗ್ ಚೌಹಾಣ್ ಲೇಖಕರು, ಭಾರತ ಸರ್ಕಾರದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು.

ವಾರ್ತಾ ಭಾರತಿ 25 Dec 2025 12:03 am

ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆ | ಸುಪ್ರೀಂಕೋರ್ಟ್ ರಿಟ್ ಅರ್ಜಿಯಲ್ಲಿ ನನ್ನ ಹೆಸರಿದೆ: ಎಚ್.ಡಿ. ದೇವೇಗೌಡ

ಬೆಂಗಳೂರು: ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಕೆಲವು ರೈತರು ಹಾಗೂ ನನ್ನನ್ನು ಉಲ್ಲೇಖ (ಪಾರ್ಟಿ) ಮಾಡಿದೆ. ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದು ತಿಳಿಸಿದರು. ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್‍ಶಿಪ್ ಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪೆನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪೆನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ದೇವೇಗೌಡರು ದೂರಿದರು.

ವಾರ್ತಾ ಭಾರತಿ 24 Dec 2025 11:51 pm

ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಪೀಕರ್ ಯು.ಟಿ.ಖಾದರ್‌ಗೆ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಸನ್ಮಾನ

ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯಿಂದ ಗೌರವಿಸಲ್ಪಟ್ಟ ಸ್ಪೀಕರ್ ಡಾ. ಯು .ಟಿ . ಖಾದರ್ ಫರೀದ್ ಅವರನ್ನು ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ ಡಬ್ಲ್ಯೂ ಫ್ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ತುಂಬು ಹೃದಯದ ಹಾರೈಕೆ ಸಲ್ಲಿಸಿದರು. ಎಸ್ ಎಂ ರಶೀದ್ ಹಾಜಿ, ಯು ಚ್ ಉಮರ್, ನಾಸಿರ್ ಲಕ್ಕಿ ಸ್ಟಾರ್, ಹನೀಫ್ ಉಳ್ಳಾಲ್‌ ಮತ್ತು ಇಕ್ವಾನ್ ಅಹ್ಮದ್ ಉಪಸ್ಥಿತರಿದ್ದರು. ಡಾ । ಯು .ಟಿ .ಖಾದರ್ ರವರು ಸನ್ಮಾನಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

ವಾರ್ತಾ ಭಾರತಿ 24 Dec 2025 11:39 pm

ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ: ಸಚಿವ ಝಮೀರ್ ಅಹ್ಮದ್ ಖಾನ್

ಮೈಸೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಝಮೀರ್ ಅಹ್ಮದ್ ಖಾನ್, 2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯನವರನ್ನು ಕೆಳೆಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು. ಹೈಕಮಾಂಡ್ ಬಿಟ್ಟು ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಹೈಕಮಾಂಡ್ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ . ಅಧಿಕಾರ ಹಂಚಿಕೆ ಒಪ್ಪಂದ ನನಗೆ ಗೊತ್ತಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾರ್ತಾ ಭಾರತಿ 24 Dec 2025 11:38 pm

ಮೆಟ್ರೋ ಪಿಂಕ್‌, ಬ್ಲೂ ಲೈನ್‌ ಆರಂಭದ ದಿನಾಂಕ ತಿಳಿಸಿದ ಡಿಕೆ ಶಿವಕುಮಾರ್‌; ಯಾವ ಮಾರ್ಗ ಯಾವಾಗ ಪ್ರಾರಂಭ?

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿದ್ದು, ಪಿಂಕ್ ಲೈನ್ ಮತ್ತು ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾರ್ಯಾಚರಣೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. 2027ರ ಅಂತ್ಯದ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲ 175.55 ಕಿ.ಮೀ.ಗೆ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಜಯ ಕರ್ನಾಟಕ 24 Dec 2025 11:36 pm

ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ: ಹೈಕೋರ್ಟ್‌

ಬೆಂಗಳೂರು/ಧಾರವಾಡ: ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ. ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ (27) ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದೇಕೆ? ಹಿಂದುಳಿದ ವರ್ಗಗಳ ವಿಭಾಗದ ಅಡಿ ರಾಜು ತಳವಾರ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಆ ವೇಳೆ ಅವರ ಜಾತಿಯು ಒಬಿಸಿ-I ಅಡಿ ಬರುತ್ತಿತ್ತು. 2020ರ ಮಾರ್ಚ್‌ 20ರಂದು ರಾಜು ತಳವಾರ ಅವರನ್ನು ಕಾರವಾರಕ್ಕೆ ನಿಯೋಜಿಸಿದ್ದಾಗ ಪರಿಶಿಷ್ಟ ಪಂಗಡಗಳ ಆದೇಶಕ್ಕೆ ತಿದ್ದುಪಡಿ ಮಾಡಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಆದ್ದರಿಂದ, 2022ರ ಅಕ್ಟೋಬರ್‌ 29ರಂದು ರಾಜ್ಯ ಸರ್ಕಾರವು ತಳವಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ತೆಗೆದು ಹಾಕಿತ್ತು. ಈ ಮಧ್ಯೆ, ರಾಜು ತಳವಾರ ಅವರು ಪರಿಶಿಷ್ಟ ಪಂಗಡ ಮೀಸಲಾತಿ ಅಡಿ ಬಡ್ತಿ ಕೋರಿದ್ದು, ಅವರಿಗೆ ಬಡ್ತಿ ಸಿಕ್ಕಿತ್ತು. 2025ರ ಜನವರಿ 29ರಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ರಾಜು ತಳವಾರಗೆ ಹಿಂದುಳಿದ ವರ್ಗಗಳ ಅಡಿ ನೇಮಕವಾಗಿರುವುದಕ್ಕೆ ನೋಟಿಸ್‌ ಜಾರಿ ಮಾಡಿದ್ದರು. ಇದರಿಂದ, ಜಾತಿ ತಿಳಿಯುವ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ತಳವಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ: ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ವ್ಯಾಪ್ತಿಯು ಉದ್ಯೋಗದಾತರಿಗೆ ಇಲ್ಲ. ಹಲವು ತೀರ್ಪುಗಳಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಈ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ನೆಲೆಯಲ್ಲಿ ಉದ್ಯೋಗದಾತರಿಗೆ ಆ ವ್ಯಾಪ್ತಿ ಇಲ್ಲ ಎಂಬ ಏಕೈಕ ಕಾರಣದ ಮೇಲೆ ಅರ್ಜಿ ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯ ಮೀಸಲಾತಿ ಇತ್ಯಾದಿ) ಕಾಯಿದೆ 1990ರ ಅಡಿ ಮಾತ್ರ ವ್ಯಕ್ತಿಯ ಜಾತಿ ಮಾಹಿತಿ ಕೇಳಬಹುದು. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ಅಧಿಕಾರ ಹೊಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 24 Dec 2025 11:10 pm

ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; ಢಾಕಾದಲ್ಲಿ ಬಾಂಬ್ ಸ್ಫೋಟ, ಯುವಕನ ಸಾವು

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕ್ರಿಸ್‌ಮಸ್ ಮುನ್ನಾದಿನದಂದುಸಂಭವಿಸಿದ ಬಾಂಬ್ ಸ್ಫೋಟದಲ್ಲಿ 21 ವರ್ಷದ ಯುವಕನೊಬ್ಬ ಮೃತಪಟ್ನೆಟಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ನಿಷೇಧಿತ ಅವಾಮಿ ಲೀಗ್ ಸಂಘಟನೆಯು ಈ 'ಕಾಕ್ಟೈಲ್ ಭಯೋತ್ಪಾದನೆ'ಯ ಹಿಂದೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಮುಂದುವರೆದಿದೆ.

ವಿಜಯ ಕರ್ನಾಟಕ 24 Dec 2025 11:09 pm

ಬಳ್ಳಾರಿ | ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ: ಓರ್ವ ಬಾಲಕಿಯ ಮೃತದೇಹ ಪತ್ತೆ

ಬಳ್ಳಾರಿ: ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ಘಟನೆ ಬಳ್ಳಾರಿ ಗಡಿಭಾಗದ ಆಂಧ್ರಪ್ರದೇಶದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನೇಮಕಲ್ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆಗೆ ರವಿವಾರ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ನಂತರ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಕಲ್ಲಪ್ಪ ಬಳಿಕ ಒಬ್ಬನೇ ಊರಿಗೆ ಮರಳಿದ್ದು ಮಕ್ಕಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಅನುಮಾನಗೊಂಡ ಮನೆಯವರು ವಿಚಾರಿಸಿ ಠಾಣೆಗೆ ದೂರು ನೀಡಿದ್ದಾರೆ. ಮಂಗಳವಾರ ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ (ಎಲ್ ಎಲ್ ಸಿ) ಯಲ್ಲಿ ಕಿರಿಯ ಪುತ್ರಿ ಚಂದ್ರಮ್ಮ (9) ಮೃತದೇಹ ಪತ್ತೆಯಾಗಿದ್ದು,ಹಿರಿಯ ಪುತ್ರಿ ಅನಸೂಯ (11) ಪತ್ತೆಗಾಗಿ ಸೀಮಾಂದ್ರದ ಪೊಲೀಸಲು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 24 Dec 2025 11:00 pm

ಕಲ್ಲಡ್ಕ: ಹೃದಯಾಘಾತದಿಂದ ಹೋಟೆಲ್ ಅಬ್ಬು ನಿಧನ

ಬಂಟ್ವಾಳ : ಕಲ್ಲಡ್ಕ ಸಮೀಪದ ಬಹದ್ದೂರ್ ರೋಡ್ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬು (70) ಹೃದಯಾಘಾತದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವಾರು ವರ್ಷಗಳಿಂದ ಕಲ್ಲಡ್ಕ ಮಸೀದಿ ಕಟ್ಟಡದಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದ ಅವರು ಅಬ್ಬುವಾಕ ಎಂದು ಜನಾನುರಾಗಿಯಾಗಿದ್ದರು. ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ 9.30 ರ ವೇಳೆಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಮೃತರು ಅಂತಿಮ ಕಾರ್ಯ ಕಲ್ಲಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Dec 2025 10:54 pm

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ‌ ಬಿ.ಎಚ್. ಖಾದರ್ ರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ

ಬಂಟ್ವಾಳ : ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದು ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಬಿ.ಎಚ್ ಖಾದರ್ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ‌ ಅಭಿನಂದನಾ ಭಾಷಣ ಮಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ ಹಮ್ಮಬ್ಬ ಖಾದರ್ ಅವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ವ್ಯವಹಾರವನ್ನು ಮುನ್ನಡೆಸುತ್ತಾ ಬದುಕು ಕಟ್ಟಿಕೊಂಡವರು, 1974 ರಲ್ಲಿ ನೇತ್ರಾವತಿಯಲ್ಲಿ ಬಂದ ದೊಡ್ಡ ಪ್ರವಾಹದ ನಂತರ ತನ್ನ ವ್ಯವಹಾರವನ್ನು ಕಳೆದುಕೊಂಡು ಸಾಮಾಜಿಕ, ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.‌ ಹಿರಿಯ ರಾಜಕಾರಣಿ ಶಿವರಾಮ ಶೆಟ್ಟರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಮಂಡಳಿ, ಸಮಿತಿ , ನಿಗಮಗಳ ಜವಾಬ್ದಾರಿಯುತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಶೈಕ್ಷಣಿಕ , ಸಾಮಾಜಿಕ ಸುಧಾರಣೆಗಳಿಗೆ ಪ್ರೇರಣಾದಾಯಕರಾಗಿ ಸೇವೆಗೈದ ನಿರಾಡಂಬರದ ಬಿ.ಎಚ್.ಖಾದರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.  ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.

ವಾರ್ತಾ ಭಾರತಿ 24 Dec 2025 10:50 pm

IndiGo ಬಿಕ್ಕಟ್ಟಿನ ಬಳಿಕ ಎರಡು ಹೊಸ ಏರ್ಲೈನ್ಗಳಿಗೆ ಸರಕಾರದ ಅನುಮತಿ

ದೇಶೀಯ ವಾಯು ಮಾರ್ಗದಲ್ಲಿ ಪೈಪೋಟಿ ನೀಡಲಿರುವ Al Hind Air, Fly Express

ವಾರ್ತಾ ಭಾರತಿ 24 Dec 2025 10:40 pm

ʻಬ್ಯಾಲೆಟ್ ಇರಲಿ - ಇವಿಎಂ ಇರಲಿ ಫಲಿತಾಂಶ ಮಾತ್ರ ಒಂದೇ, ಗೆಲುವು ನಮ್ಮದೇʼ: ಪ್ರಲ್ಹಾದ ಜೋಶಿ

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಸಿಕ್ಕ ಜನಾದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಈ ಗೆಲುವು ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ವಿಜಯ ಕರ್ನಾಟಕ 24 Dec 2025 10:39 pm

Uttar Pradesh | ಶಾಲೆಗಳಿಗೆ ಕ್ರಿಸ್ಮಸ್ ರಜೆಯಿಲ್ಲ,ವಿದ್ಯಾರ್ಥಿಗಳು ವಾಜಪೇಯಿ ಜನ್ಮ ಶತಾಬ್ದಿ ಆಚರಿಸಲಿದ್ದಾರೆ: ವರದಿ

ಹೊಸದಿಲ್ಲಿ,ಡಿ.24: ಗುರುವಾರ ಕ್ರಿಸ್ಮಸ್ ಪ್ರಯುಕ್ತ ರಾಜ್ಯದಲ್ಲಿಯ ಶಾಲೆಗಳಿಗೆ ರಜೆಯಿಲ್ಲ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಆಚರಣೆಗಾಗಿ ತೆರೆದಿರುತ್ತವೆ ಎಂದು ಉತ್ತರ ಪ್ರದೇಶದ ಬಿಜೆಪಿ ಸರಕಾರವು ಪ್ರಕಟಿಸಿದೆ ಎಂದು ಸುದ್ದಿಸಂಸ್ಥೆಯು ಬುಧವಾರ ವರದಿ ಮಾಡಿದೆ. ಗುರುವಾರ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯು, ವಾಜಪೇಯಿಯವರನ್ನು ಗೌರವಿಸಲು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಮರಣಾರ್ಥ ಚಟುವಟಿಕೆಗಳನ್ನು ಆಯೋಜಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದೇಶವು ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅನ್ವಯಿಸುತ್ತದೆ. ಡಿ.25ನ್ನು ಕ್ರಿಸ್ಮಸ್ ಬದಲಿಗೆ ‘ಬಾಲ ಗೌರವ ಮತ್ತು ಉತ್ತಮ ಆಡಳಿತ ದಿನ’ಎಂದು ಆಚರಿಸುವಂತೆ ಸಹಾರನ್ ಪುರ ಜಿಲ್ಲೆಯ ಬಜರಂಗ ದಳ ಘಟಕದ ಆಗ್ರಹಗಳ ನಡುವೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿಯಲ್ಲಿ ತಿಳಿಸಿದೆ. 2014ರಲ್ಲಿ ಹೊಸದಾಗಿ ಚುನಾಯಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆರಂಭಿಸಿದ ಉತ್ತಮ ಆಡಳಿತ ದಿನವನ್ನು ವಾಜಪೇಯಿಯವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಡಿ.25ರಂದು ಆಚರಿಸಲಾಗುತ್ತದೆ. ಶಾಲೆಗಳಿಗೆ ಕ್ರಿಸ್ಮಸ್ ರಜೆಯನ್ನು ನೀಡದಿರುವ ಸರಕಾರದ ನಿರ್ಧಾರವು ಟೀಕೆಗೆ ಗುರಿಯಾಗಿದೆ. ರಜೆಯನ್ನು ರದ್ದುಗೊಳಿಸಿರುವುದು ಕ್ರೈಸ್ತ ಸಮುದಾಯದ ಕಡೆಗಣನೆಯಾಗಿದೆ ಮತ್ತು ಸಾರ್ವಜನಿಕ ಶಿಕ್ಷಣದ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಎಂದು ಕ್ರೈಸ್ತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ರಜೆಯ ಬದಲಿಗೆ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನವು ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿಯ ಅತ್ಯಂತ ಪವಿತ್ರ ದಿನವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಅಖಿಲ ಭಾರತ ಕ್ರಿಶ್ಚಿಯನ್ ಮಂಡಳಿಯ ಮಹಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಏಕೀಕರಣ ಮಂಡಳಿಯ ಸದಸ್ಯ ಜಾನ್ ದಯಾಳ್ ಹೇಳಿದರು.

ವಾರ್ತಾ ಭಾರತಿ 24 Dec 2025 10:30 pm

ಭಾರತ ದಾಳಿ ಮಾಡಿದರೆ ಬಾಂಗ್ಲಾಕ್ಕೆ ಪಾಕಿಸ್ತಾನದ ಕ್ಷಿಪಣಿ ನೆರವಾಗುತ್ತದೆ: ಪಾಕ್ ಪ್ರಧಾನಿ ಷರೀಫ್ ಆಪ್ತನ ಎಚ್ಚರಿಕೆ

ಲಾಹೋರ್, ಡಿ.24: ಒಂದು ವೇಳೆ ಭಾರತವು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಿದರೆ ಪಾಕಿಸ್ತಾನದ ಮಿಲಿಟರಿ ಮತ್ತು ಕ್ಷಿಪಣಿಗಳು ರಂಗಪ್ರವೇಶ ಮಾಡುತ್ತದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಪಕ್ಷ `ಪಾಕಿಸ್ತಾನ್ ಮುಸ್ಲಿಂ ಲೀಗ್'ನ ಯುವ ಘಟಕದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಎಚ್ಚರಿಕೆ ನೀಡಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಅಧಿಕೃತ ಮಿಲಿಟರಿ ಒಕ್ಕೂಟಕ್ಕೆ ಸಲಹೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. `ಒಂದು ವೇಳೆ ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಕೆಟ್ಟ ಉದ್ದೇಶದಿಂದ ಬಾಂಗ್ಲಾದೇಶದತ್ತ ನೋಡಿದರೆ, ಪಾಕಿಸ್ತಾನದ ಜನತೆ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಹೆಚ್ಚು ದೂರದಲ್ಲಿಲ್ಲ ಎಂಬುದನ್ನು ನೆನಪಿಸಬೇಕಾಗುತ್ತದೆ. ಭಾರತವು ತನ್ನ `ಅಖಂಡ ಭಾರತ ಸಿದ್ಧಾಂತ'ವನ್ನು ಬಾಂಗ್ಲಾದೇಶದ ಮೇಲೆ ಹೇರುವ ಪ್ರಯತ್ನವನ್ನು ಪಾಕಿಸ್ತಾನ ಒಪ್ಪುವುದಿಲ್ಲ' ಎಂದವರು ಹೇಳಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಉಸ್ಮಾನಿ ಸಂಘಟಿತ ಒತ್ತಡದ ಕುರಿತು ಮಾತನಾಡಿದ್ದು `ಪಾಕಿಸ್ತಾನವು ಪಶ್ಚಿಮದಿಂದ , ಬಾಂಗ್ಲಾದೇಶವು ಪೂರ್ವದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಚೀನಾವು ಅರುಣಾಚಲ ಪ್ರದೇಶ ಮತ್ತು ಲಡಾಕ್ ಮೇಲೆ ಗಮನ ಕೇಂದ್ರೀಕರಿಸಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 24 Dec 2025 10:20 pm

EU ಮಾಜಿ ಕಮಿಷನರ್ ಸಹಿತ ಐವರಿಗೆ ಅಮೆರಿಕ ವೀಸಾ ನಿರಾಕರಣೆ

ವಾಷಿಂಗ್ಟನ್, ಡಿ.24: ಯುರೋಪಿಯನ್ ಯೂನಿಯನ್(EU) ಮಾಜಿ ಕಮಿಷನರ್ ಥಿಯೆರಿ ಬ್ರೆಟನ್ ಹಾಗೂ ಇತರ ನಾಲ್ಕು ಮಂದಿಗೆ ವೀಸಾ ನಿರಾಕರಿಸುವುದಾಗಿ ಅಮೆರಿಕಾದ ವಿದೇಶಾಂಗ ಇಲಾಖೆ ಮಂಗಳವಾರ ಹೇಳಿದೆ. ಈ ಐವರು ತಾವು ವಿರೋಧಿಸುವ ದೃಷ್ಟಿಕೋನಗಳನ್ನು ಸೆನ್ಸಾರ್ ಮಾಡುವಂತೆ ಅಮೆರಿಕನ್ ಸಾಮಾಜಿಕ ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ಈ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಯುರೋಪಿಯನ್ ಯೂನಿಯನ್ ಪ್ರತಿಕ್ರಿಯಿಸಿದೆ. ಅಮೆರಿಕಾ ಅಧಿಕಾರಿಗಳಿಂದ ಸ್ಪಷ್ಟೀಕರಣ ಕೇಳಿದ್ದು ಅಗತ್ಯಬಿದ್ದರೆ ನ್ಯಾಯಸಮ್ಮತವಲ್ಲದ ಕ್ರಮಗಳ ವಿರುದ್ಧ ನಮ್ಮ ನಿಯಂತ್ರಕ ಸ್ವಾಯತ್ತತೆಯನ್ನು ರಕ್ಷಿಸಲು ನಾವು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ' ಎಂದು ಯುರೋಪಿಯನ್ ಕಮಿಷನ್ ಹೇಳಿದೆ.    

ವಾರ್ತಾ ಭಾರತಿ 24 Dec 2025 10:20 pm

ಖೇಲ್ ರತ್ನ ಪ್ರಶಸ್ತಿಯ ಶಾರ್ಟ್ ಲಿಸ್ಟ್ ನಲ್ಲಿ ಒಬ್ಬನೇ ಒಬ್ಬ ಕ್ರಿಕೆಟರ್ ಇಲ್ಲ! ಹಾಕಿಪಟು ಹಾರ್ದಿಕ್ ಸಿಂಗ್ ಏಕೈಕ ಶಿಫಾರಸು

National Sports Awards- ಭಾರತೀಯ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಶಿಫಾರಸುಗೊಂಡಿದ್ದಾರೆ. ವಿಶೇಷವೆಂದರೆ ಅವರೊಬ್ಬರೇ ಈ ಮಹೋನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಆಗಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಬಾರಿ ಒಬ್ಬನೇ ಒಬ್ಬ ಕ್ರಿಕೆಟರ್ ಈ ಪಟ್ಟಿಯಲ್ಲಿಲ್ಲ. 24 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಯೋಗಾಸನ ಕ್ರೀಡಾಪಟು ಆರತಿ ಪಾಲ್ ಅವರ ಹೆಸರು ಇದೆ.

ವಿಜಯ ಕರ್ನಾಟಕ 24 Dec 2025 10:18 pm

ಬಂಟ್ವಾಳ: ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ, ಪ್ರ.ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗದರ್ಶನದಲ್ಲಿ ಮಂಗಳವಾರ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಚುನಾವಣಾಧಿಕಾರಿ ಸುರೇಶ ಡಿ ಪಳ್ಳಿ ಯವರು ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯನ್ನು ಘೋಷಿಸಿದರು. ಸಂಘದ ಅಧ್ಯಕ್ಷ ಸಹಿತ ಐದು ಪದಾಧಿಕಾರಿಗಳ ಸ್ಥಾನ, ಐದು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 10 ರಿಂದ 11:30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 10 ಸ್ಥಾನಗಳಿಗೆ 10 ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ನಾಮಪತ್ರ ಪರಿಶೀಲನೆಗ ಹಾಗೂ ನಾಮ ಪತ್ರ ಹಿಂತೆಗೆತದ ನಿಗದಿತ ಅವಧಿಯ ಬಳಿಕ, ನಾಮಪತ್ರ ಸಲ್ಲಿಸಿದ್ದ ಎಲ್ಲಾ ಹತ್ತು ಮಂದಿಯನ್ನು ಚುನಾವಣಾ ಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಿಸಿದರು. ಕೋಶಾಧಿಕಾರಿಯಾಗಿ ಚಂದ್ರ ಶೇಖರ ಕಲ್ಮಲೆ, ಉಪಾಧ್ಯಕ್ಷರಾಗಿ ರಮೇಶ್ ಕೆ. ಪುಣಚ(ವಿಷ್ಣುಗುಪ್ತ ಪುಣಚ) ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ತಲಪಾಡಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ವೆಂಕಟೆಶ್ ಬಂಟ್ವಾಳ, ರತ್ನದೇವ್ ಪುಂಜಾಲಕಟ್ಟೆ, ಉದಯಶಂಕರ ನೀರ್ಪಾಜೆ, ವಾಮನ ಪೊಳಲಿ ಹಾಗೂ ಮೌನೇಶ ವಿಶ್ವಕರ್ಮ ಆಯ್ಕೆಯಾದರು. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅಭಿನಂದಿಸಿದರು. ಈ ಸಂದರ್ಭ ಚುನಾವಣಾಧಿಕಾರಿ ಸುರೇಶ್ ಡಿ ಪಳ್ಳಿ, ಸಹಾಯಕ ಚುನಾವಣಾಧಿಕಾರಿ ಜಯಶ್ರೀ ನವೀನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಸಾಲ್ಯಾನ್ , ಪತ್ರಕರ್ತರಾದ ಗಣೇಶ್ ಪ್ರಸಾದ್ ಪಾಂಡೇಲು, ಕಿಶೋರ್ ಪೆರಾಜೆ, ಕಿರಣ್ ಸರಪಾಡಿ, ಹರೀಶ್ ಮಾಂಬಾಡಿ ಯಾದವ ಅಗ್ರಬೈಲು ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Dec 2025 10:18 pm

ಝಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ: 14 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆ!

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಮೇಲೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಝ್ ಖಾನ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರದಂದು ಲೋಕಾಯುಕ್ತ ದಾಳಿ ನಡೆದಿದ್ದು, 14 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ. ವಸತಿ ಮತ್ತು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಆಗಿರುವ ಸರ್ಫರಾಜ್ ಖಾನ್ ಅವರು ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಸರ್ಫರಾಝ್ ಖಾನ್‍ಗೆ ಸಂಬಂಧಿಸಿದ ಬೆಂಗಳೂರಿನ 7 ಮನೆಗಳು, ಕೊಡಗಿನಲ್ಲಿರುವ 2 ಕಾಫಿ ಎಸ್ಟೇಟ್, ಎಚ್.ಡಿ.ಕೋಟೆಯ ಒಂದು ರೆಸಾರ್ಟ್, ಇತರೆ ಸ್ಥಳಗಳು ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಸುಮಾರು 50ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಯು 4 ವಾಸದ ಮನೆಗಳು, 37 ಎಕರೆ ಕೃಷಿ ಜಮೀನು ಹೊಂದಿದ್ದು, ಅವರ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 8,44,33,500 ರೂ. ಆಗಿದೆ. ಇನ್ನು ಪರಿಶೀಲನೆ ವೇಳೆ 66,500 ರೂ. ನಗದು, 2,99,70,500 ರೂ. ಬೆಲೆ ಬಾಳುವ ಚಿನ್ನಾಭರಣಗಳು, 1,64,20,000 ರೂ. ಬೆಲೆ ಬಾಳುವ ವಾಹನಗಳು, 1,29,29,153 ರೂ. ಬೆಲೆ ಬಾಳುವ ಬ್ಯಾಂಕ್ ಠೇವಣಿ ಸೇರಿ ಒಟ್ಟು 5,93,86,153 ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಯು ಸ್ಥಿರ ಮತ್ತು ಚರಾಸ್ತಿ ಸೇರಿ ಒಟ್ಟು 14,38,19,653 ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಲೋಕಾಯುಕ್ತ ಅಧಿಕಾರಿಗಳು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 24 Dec 2025 10:17 pm

Save Aravali Hills: ಅರಾವಳಿ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರಾಜಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಅರಾವಳಿ ಪರ್ವತ ಶ್ರೇಣಿಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದನ್ನ ವಿರೋಧಿಸಿ ಹೋರಾಟ ತೀವ್ರಗೊಳಿಸಿದ್ದಾರೆ. ಅರಾವಳಿ ಉಳಿಸಿ ಅಭಿಯಾನ ತೀವ್ರಗೊಂಡಿದ್ದು, ಅರವಳ್ಳಿ ಬೆಟ್ಟಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದರಲ್ಲಿ ಬದಲಾವಣೆಗಳ ಕುರಿತು ಕೇಂದ್ರವು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಪ್ರಸ್ತಾಪಿತ

ಒನ್ ಇ೦ಡಿಯ 24 Dec 2025 10:04 pm

ಆರ್‌ಟಿಐ ಅರ್ಜಿ ವಿಲೇವಾರಿಗೂ ಲಂಚಕ್ಕೆ ಬೇಡಿಕೆ, ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌

ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್‌ ಢಾಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಲು ನಿರಾಕರಿಸಿದೆ. ಇವರು ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಧ್ವನಿ ರೆಕಾರ್ಡಿಂಗ್‌ ಮತ್ತು ಭ್ರಷ್ಟಾಚಾರಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ. ಹೀಗಾಗಿ ತನಿಖೆ ನಡೆಸುವಂತೆ ನ್ಯಾಯಪೀಠ ಆದೇಶಿಸಿದೆ. ಆರೋಪಿ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 1 ಲಕ್ಷ ರೂ. ವರ್ಗಾವಣೆ ಆಗಿತ್ತು.

ವಿಜಯ ಕರ್ನಾಟಕ 24 Dec 2025 10:01 pm

ಇಂಗ್ಲೆಂಡ್ ಆಡುವ 11 ರ ಬಳಗದಿಂದ ಆರ್ಚರ್, ಪೋಪ್ ಹೊರಗೆ

ಮೆಲ್ಬರ್ನ್, ಡಿ. 24: ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ತಂಡವನ್ನು ಪ್ರಕಟಿಸಿದೆ. ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಕೂಡ ಆಗಿರುವ ಈ ಪಂದ್ಯವು ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಪ್ರವಾಸಿ ತಂಡವು ತನ್ನ ಆಡುವ ಹನ್ನೊಂದರ ಬಳಗಕ್ಕೆ ಎರಡು ಬದಲಾವಣೆಗಳನ್ನು ಮಾಡಿದೆ. ಗಾಯಾಳು ಜೋಫ್ರಾ ಆರ್ಚರ್ ಸ್ಥಾನಕ್ಕೆ ಗಸ್ ಆ್ಯಟ್ಕಿನ್ಸನ್ರನ್ನು ತರಲಾಗಿದೆ ಮತ್ತು ಓಲೀ ಪೋಪ್ ಸ್ಥಾನಕ್ಕೆ ಜಾಕೋಬ್ ಬೆತೆಲ್ ಬಂದಿದ್ದಾರೆ. ‘‘ಎಡ ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ಜೋಫ್ರಾ ಆರ್ಚರ್ ರನ್ನು ಸರಣಿಯ ಉಳಿದ ಭಾಗದಿಂದ ಹೊರಗಿಡಲಾಗಿದೆ’’ ಎಂದು ಇಂಗ್ಲೆಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸರಣಿಯ ಮೊದಲ ಮೂರು ಟೆಸ್ಟ್ಗಳಲ್ಲಿ ಆರ್ಚರ್ ಇಂಗ್ಲೆಂಡ್ ನ ಶ್ರೇಷ್ಠ ಬೌಲರ್ ಆಗಿದ್ದರು. ಅವರು 80 ಓವರ್ ಗಳನ್ನು ಹಾಕಿ ಒಂಭತ್ತು ವಿಕೆಟ್ ಗಳನ್ನು ಪಡೆದಿದ್ದಾರೆ. ಆರ್ಚರ್ ಅನುಪಸ್ಥಿತಿಯು ಇಂಗ್ಲೆಂಡ್ ಗೆ ದೊಡ್ಡ ಹಿನ್ನಡೆಯಾಗಿದೆ. ಅದು ಈಗಾಗಲೇ ಸರಣಿಯಲ್ಲಿ 0-3ರ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ 11: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆತೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಗಸ್ ಆ್ಯಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.

ವಾರ್ತಾ ಭಾರತಿ 24 Dec 2025 9:59 pm

ಗೂಡ್ಸ್ ರೈಲು ಢಿಕ್ಕಿ: ವ್ಯಕ್ತಿ ಮೃತ್ಯು

ಬೈಂದೂರು: ಕೆರ್ಗಾಲ್ ಗ್ರಾಮದ ಚರುಮಕ್ಕಿ ರೈಲ್ವೆಗೇಟ್ ಸಮೀಪ ನಡೆದುಕೊಂಡು ಹೋಗುತಿದ್ದ ವ್ಯಕ್ತಿಯೊಬ್ಬರು ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ಅಪರಾಹ್ನದ ವೇಳೆ ನಡೆದಿದೆ. ಮೃತರನ್ನು ಕೆರ್ಗಾಲ್‌ನ ಉದಯ ದೇವಾಡಿಗ (44) ಎಂದು ಗುರುತಿಸಲಾಗಿದೆ. ಕಂಬದಕೋಣೆಯ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉದಯ ದೇವಾಡಿಗರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ರೈಲ್ವೇ ಹಳಿ ಬದಿ ನಡೆದುಕೊಂಡು ಹೋಗುತಿದ್ದ ಇವರಿಗೆ ರೈಲು ಬರುತ್ತಿರುವುದು ತಿಳಿಯಲಿಲ್ಲ ಎಂದು ಹೇಳಲಾಗಿದೆ. ರೈಲು ಬಡಿದು ಗಾಯ ಗೊಂಡಿದ್ದ ಉದಯರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Dec 2025 9:51 pm

ಸಚಿವ ಜಮೀರ್‌ ಆಪ್ತ ಕಾರ್ಯದರ್ಶಿಗೆ ಲೋಕಾ ಶಾಕ್‌; ಸರ್ಫರಾಜ್‌ ಖಾನ್‌ ಮನೆ, ರೆಸಾರ್ಟ್‌ ಮೇಲೆ ದಾಳಿ, ಏನೆಲ್ಲ ಪತ್ತೆಯಾಯ್ತು?

ವಸತಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ದಾರ್‌ ಸರ್ಫರಾಜ್‌ ಖಾನ್‌ ಅವರ 13 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವರ ಅಧಿಕೃತ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿರುವ ಈ ಆಸ್ತಿಗಳ ಬಗ್ಗೆ ಲೋಕಾಯುಕ್ತರ ತನಿಖೆ ಮುಂದುವರಿದಿದೆ.

ವಿಜಯ ಕರ್ನಾಟಕ 24 Dec 2025 9:51 pm

ವಿಜಯ ಹಝಾರೆ ಟ್ರೋಫಿ | ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ದಾಖಲೆಯ ಜಯ

ಜಾರ್ಖಂಡ್ ನ ಇಶಾನ್ ಕಿಶನ್ ಶತಕ ವ್ಯರ್ಥ

ವಾರ್ತಾ ಭಾರತಿ 24 Dec 2025 9:48 pm

ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು ಆರಂಭಿಸಲು ಕೇಂದ್ರ ರೇಲ್ವೆ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ಮಂಗಳೂರು, ಡಿ.24: ಮಂಗಳೂರು ಪಟ್ಟಣ ವಿದ್ಯಾಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ಸಿಟಿಯಾಗಿದ್ದು ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸಿಸುವಂತೆ ಕೇಂದ್ರ ರೇಲ್ವೆ ಸಚಿವರಿಗೆ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂ ರಾವ್ ಅವರು ಬೆಂಗಳೂರಿನ ನಂತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ಸಹ ಮುಂಚೂಣಿಯಲ್ಲಿದ್ದು ಅತ್ಯುತ್ತಮ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಹಲವಾರು ಉದ್ಯಮಗಳು ಇಲ್ಲಿವೆೆ. ವಂದೇ ಭಾರತ್ ಪ್ರಾರಂಭಿಸಿದರೆ ಜನರಿಗೆ ಹೆಚ್ಚು ಪ್ರಯೋಜನವಗಲಿದೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಹಲವಾರು ಉದ್ಯಮಿಗಳು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಇದು ಸಹಾಯಕವಾಗಲಿದೆ. ದಿನಕ್ಕೆ 3 ವಂದೇ ಭಾರತ್ ರೈಲು ಪ್ರಾರಂಭಿಸಬೇಕೆಂದು ಕರ್ನಾಟಕ ಸರ್ಕಾರದ ಪರವಾಗಿ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಚಿವ ಗುಂಡೂ ರಾವ್ ಹೇಳಿದ್ದಾರೆ.

ವಾರ್ತಾ ಭಾರತಿ 24 Dec 2025 9:46 pm

ಬ್ರಹ್ಮಾವರ| ಅಕ್ಷತಾ ಪೂಜಾರಿ ಪ್ರಕರಣ: ದೂರು- ಪ್ರತಿದೂರುಗಳೆರಡೂ ಸಿಐಡಿ ತನಿಖೆಗೆ - ಎಸ್ಪಿ ಹರಿರಾಮ್ ಶಂಕರ್

ಉಡುಪಿ, ಡಿ.24: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಜಾರಿಯಾದ ನ್ಯಾಯಾಲಯದ ವಾರಂಟ್‌ನ ಜಾರಿ ವಿಷಯದಲ್ಲಿ ಇತ್ತೀಚೆಗೆ ಉಂಟಾದ ವಿವಾದದಲ್ಲಿ ಉಪ್ಪೂರಿನ ಅಕ್ಷತಾ ಪೂಜಾರಿ ಎಂಬ ವಿದ್ಯಾರ್ಥಿನಿ ಬ್ರಹ್ಮಾವರ ಪೊಲೀಸರು ದಾಖಲಿಸಿದ ಪ್ರಕರಣ ಹಾಗೂ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಆಕೆಯ ವಿರುದ್ಧ ದಾಖಲಿಸಿದ ಪ್ರಕರಣಗಳೆರಡನ್ನೂ ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುವಂತೆ ಡಿಜಿ ಕಚೇರಿಗೆ ಕಳುಹಿಸಿದ ಪ್ರಸ್ತಾಪವನ್ನು ಅಂಗೀಕರಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಹಾಗೂ ಪ್ರತಿದೂರುಗಳೆರಡರ ತನಿಖೆಯನ್ನು ಸಿಐಡಿ ನಡೆಸಲಿದೆ ಎಂದು ಅವರು ತಿಳಿಸಿದರು. ಇದಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ಅವರು ಪ್ರಕರಣಗಳ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಮೂವರು ಪೊಲೀಸರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಿದ್ದರು. ಪ್ರಕರಣದಲ್ಲಿ ನ್ಯಾಯ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿ ಕೊಳ್ಳಲು ಇವನ್ನು ಮಾಡಲಾಗಿದೆ. ಡಿ.18ರಂದು ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಕಾರರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಕಾರರು ಠಾಣೆಯ ಮುಂದೆ ಅನುಮತಿ ಇಲ್ಲದೇ ಧ್ವನಿವರ್ದಕ ಬಳಸಿದ್ದ ಕ್ಕಾಗಿ 200ರೂ. ದಂಡ ವಿಧಿಸ ಬಹುದಾದ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಗೆ ಮುನ್ನ ಪೊಲೀಸರು ಆಯೋಜಕರಿಗೆ ನೋಟೀಸು ನೀಡಿದ್ದರೂ ಅನುಮತಿ ಇಲ್ಲದೇ ಅದನ್ನು ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದರು. ಗೃಹಸಚಿವರಿಗೆ ದೂರು ವಿನಾಕಾರಣ ಪೊಲೀಸರಿಂದ ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಅವರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ನಾವು ಕಾನೂನು ಬದ್ಧವಾಗಿ ಪ್ರತಿಭಟನೆ ಮಾಡುತಿದ್ದೇವೆ. ಆದರೆ ಪೊಲೀಸರು ನಮ್ಮ ಹೋರಾಟವನ್ನು ಹತ್ತಿಕ್ಕಲು ವಿವಿಧ ಪ್ರಯತ್ನಗಳನ್ನು ನಡೆಸುತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಆರೋಪಿಸಿದ್ದಾರೆ. ಅಕ್ಷತಾ ಪೂಜಾರಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರವೀಣ್ ಎಂ. ಪೂಜಾರಿ ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಶಾಂತಿ ಯುತ ಪ್ರತಿಭಟನೆ ನಡೆಸಿದರೂ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ನಾವೀಗ ಹೋರಾಟ ವನ್ನು ರಾಜ್ಯಮಟ್ಟಕ್ಕೆ ಒಯ್ಯುವ ಕುರಿತಂತೆ ಆಲೋಚಿಸುತಿದ್ದೇವೆ. ಈ ಸಂಬಂಧ ರಾಜ್ಯ ಗೃಹ ಸಚಿವರನ್ನು ಭೇಟಿಯಾಗುವ ಯೋಚನೆಯೂ ಇದೆ ಎಂದರು. ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಗೆ ಮಣಿದು ಮೂವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾ ದರೂ ಇನ್ನೂ ತನಿಖೆ ಪ್ರಾರಂಭ ಗೊಂಡಿಲ್ಲ. ತನಿಖಾಧಿಕಾರಿಯ ನೇಮಕವಾಗಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆ ಕುರಿತಂತೆ ನಮಗೆ ಸಂಶಯವಿದೆ. ಅಲ್ಲದೇ ಅಕ್ಷತಾ ಪೂಜಾರಿ ನೀಡಿದ ದೂರಿನ ತಪ್ಪಿತಸ್ಥ ಪೊಲೀಸರ ವಿರುದ್ಧ ಯಾವುದೇ ರೀತಿಯ ಕ್ರಮ ಇನ್ನೂ ಆಗಿಲ್ಲ. ಹೀಗಾಗಿ ತಕ್ಷಣವೇ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಸುಧಾಕರ್ ಡಿ.ಅಮೀನ್ ಪಾಂಗಾಳ, ರಾಜು ಪೂಜಾರಿ ಉಪ್ಪೂರು, ಮಹೇಶ್ ಆಂಚನ್ ಕಟಪಾಡಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Dec 2025 9:41 pm

ಸ್ಕಿ ಅಪಘಾತ: 70 ಮೀಟರ್ ಮೇಲಿನಿಂದ ಬಿದ್ದು ಜರ್ಮನ್ ಫುಟ್ಬಾಲ್ ಆಟಗಾರ ಮೃತ್ಯು

ಬರ್ಲಿನ್, ಡಿ. 24: ಜರ್ಮನ್ ಫುಟ್ಬಾಲ್ ಆಟಗಾರ ಸೆಬಾಸ್ಟಿಯನ್ ಹರ್ಟನರ್ ರವಿವಾರ ಸಂಭವಿಸಿದ ಸ್ಕಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಮೋಂಟನೆಗ್ರೊದಲ್ಲಿರುವ ಸಾವನ್ ಕಕ್ ಎಂಬಲ್ಲಿ ಸ್ಕೀಯಿಂಗ್ನಲ್ಲಿ ಪಾಲ್ಗೊಂಡಿದ್ದಾಗ, ಹರ್ಟನರ್ ಸುಮಾರು 70 ಮೀಟರ್ ಎತ್ತರದಿಂದ ಬಿದ್ದು ಸಾವನ್ನಪ್ಪಿದರು ಎಂದು ಜರ್ಮನ್ ಪತ್ರಿಕೆ ‘ಬಿಲ್ಡ್’ ವರದಿ ಮಾಡಿದೆ. ವಿಎಫ್ಬಿ ಸ್ಟಟ್ ಗರ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅವರು ತನ್ನ 16 ವರ್ಷಗಳ ಕ್ರೀಡಾ ಜೀವನದಲ್ಲಿ ಜರ್ಮನ್ ಫುಟ್ಬಾಲ್ನ ದ್ವಿತೀಯ ಮತ್ತು ತೃತೀಯ ಡಿವಿಶನ್ ಗಳಲ್ಲಿ ಹಲವು ಕ್ಲಬ್ಗಳ ಪರವಾಗಿ ಆಡಿದ್ದರು. ಇತ್ತೀಚೆಗೆ ಅವರು ಉಬರ್ಲಿಗ ಪಂದ್ಯಾವಳಿಯಲ್ಲಿ ಇಟಿಎಸ್ವಿ ಹ್ಯಾಂಬರ್ಗ್ ತಂಡದ ನಾಯಕತ್ವ ವಹಿಸಿದ್ದರು. ಅವರು ಜರ್ಮನಿಯ ಅಂಡರ್-18 ತಂಡದ ಪರವಾಗಿ 14 ಪಂದ್ಯಗಳಲ್ಲಿ ಮತ್ತು ಅಂಡರ್-19 ತಂಡದಲ್ಲಿ ಐದು ಬಾರಿ ಆಡಿದ್ದಾರೆ.

ವಾರ್ತಾ ಭಾರತಿ 24 Dec 2025 9:40 pm

ಕರ್ನಾಟಕ ಕ್ರೀಡಾಕೂಟ 2025-26 ಲಾಂಛನ ಬಿಡುಗಡೆ

ಬೆಂಗಳೂರು, ಡಿ. 24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 16 ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಬುಧವಾರ ಹೇಳಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದ ಒಲಿಂಪಿಕ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಕ್ರೀಡಾಕೂಟ 2025-26’ರ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಸಿಂತೆಟಿಕ್ ಟ್ರ್ಯಾಕ್ ಮತ್ತು ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಇದೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸುವ ಸಾಮರ್ಥ್ಯವಿದೆ ಎಂದು ಹೇಳಿದರು. ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ 27 ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ನಾಲ್ಕು ಕ್ರೀಡೆಗಳನ್ನು ಮಾತ್ರ ಬೆಂಗಳೂರಿನಲ್ಲಿ ನಡೆಸಲಾಗುವುದು. ಒಲಿಂಪಿಕ್ ಮಟ್ಟದ ಕ್ರೀಡಾಕೂಟ ಇದಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉತ್ತಮ ಅವಕಾಶ ಸಿಗಲಿದೆ. ಕಳೆದ ವರ್ಷ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು. ‘‘ತುಮಕೂರು ಜಿಲ್ಲೆಯಲ್ಲಿ ಕೃಷ್ಣಮೃಗ ಜಿಂಕೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುವ ಕರ್ನಾಟಕ ಕ್ರೀಡಾಕೂಟಕ್ಕೆ ಕೃಷ್ಣಮೃಗ ಜಿಂಕೆಯನ್ನು ಲಾಂಛನಕ್ಕೆ ಬಳಸಲಾಗಿದೆ. ಇದು ಕ್ರೀಡಾಕೂಟದ ಮೊದಲ ಹೆಜ್ಜೆಯಾಗಿದ್ದು, ಯಶಸ್ವಿಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ’’ ಎಂದರು. ಈ ಹಿಂದೆ ದಸರಾ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡೆಗಳನ್ನು ನಡೆಸಲಾಗುತಿತ್ತು. ಇದನ್ನು ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಬೇರೆ ಅವಕಾಶಗಳು ಸಿಗುತ್ತಿರಲಿಲ್ಲ. ಗೋವಿಂದರಾಜ್ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಬಳಿಕ, ಕಳೆದ 25 ವರ್ಷಗಳಿಂದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ‘‘ಕಬಡ್ಡಿ, ಖೋಖೋ, ಹಾಕಿ ಸೇರಿದಂತೆ ವಿವಿಧ ಕ್ರೀಡಾ ಸಂಸ್ಥೆಗಳಿಗೆ ತಲಾ 50 ಲಕ್ಷ ರೂ. ಮೊತ್ತದ ಅನುದಾನ ನೀಡಲಾಗಿದೆ. ದೇಶದಲ್ಲಿ ಯಾವ ರಾಜ್ಯಗಳೂ ಈ ರೀತಿಯ ಕೆಲಸವನ್ನು ಮಾಡಿಲ್ಲ. ಕ್ರೀಡಾಪಟುಗಳಲ್ಲಿ ಕ್ರೀಡಾಸ್ಪೂರ್ತಿ ಬರಬೇಕಾದರೆ, ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು ಮತ್ತು ಅದರಲ್ಲಿ ಕ್ರೀಡಾಪಟುಗಳು ಭಾಗವಹಿಸುತ್ತಿರಬೇಕು. ಇದರಿಂದ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ಕ್ರೀಡಾಕೂಟಗಳಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಲು ಸಾಧ್ಯವಾಗುತ್ತದೆ’’ ಎಂದರು. ಗೋವಿಂದರಾಜ ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ತುಮಕೂರು ದಸರಾ ಯಶಸ್ವಿಯಾಗಿ ನಡೆಸಿದ್ದು, ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು. ಟೆನಿಸ್, ಬಾಸ್ಕೆಟ್ಬಾಲ್, ಕಬಡ್ಡಿ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ನಡೆಸಲು ಸುಸಜ್ಜಿತ ವ್ಯವಸ್ಥೆ ಇದೆ ಎಂದು ತಿಳಿಸಿದರು. ಕರ್ನಾಟಕ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್., ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Dec 2025 9:40 pm

Assam | ಸಹಜ ಸ್ಥಿತಿಗೆ ಮರಳಿದ ಪಶ್ಚಿಮ ಕರ್ಬಿ ಅಂಗ್ಲಾಂಗ್

ಗುವಾಹಟಿ, ಡಿ. 24: ಅಸ್ಸಾಂನ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಖೆರೋನಿ ಪ್ರದೇಶ ಬುಧವಾರ ಸಹಜ ಸ್ಥಿತಿಗೆ ಮರಳಿದೆ. ಗ್ರಾಮದ ಜಾನುವಾರು ಮೇಯಿಸುವ ಮೀಸಲು ಪ್ರದೇಶ (ವಿಜಿಆರ್) ಹಾಗೂ ವೃತ್ತಿಪರ ಮೇಯಿಸುವ ಮೀಸಲು ಪ್ರದೇಶ (ಪಿಜಿಆರ್) ದಿಂದ ಅತಿಕ್ರಮಣಕಾರರನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮಂಗಳವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 38 ಪೊಲೀಸ್ ಸಿಬ್ಬಂದಿ ಸೇರಿದಂತೆ 45 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾದ ಬುಡಕಟ್ಟು ಕರ್ಬಿ ಸಮುದಾಯದ ಪ್ರತಿಭಟನಕಾರರೋರ್ವರು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರತಿಭಟನಕಾರರು ಬೆಂಕಿ ಹಚ್ಚಿದ ಮನೆಯೊಳಗೆ ಸಿಲುಕಿದ ಬೆಂಗಾಳಿ ಸಮುದಾಯಕ್ಕೆ ಸೇರಿದ ಅಂಗವಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಹಿಂಸಾಚಾರದಲ್ಲಿ ಪಾಲ್ಗೊಂಡವರನ್ನು ಬಂಧಿಸುವಂತೆ ಆಗ್ರಹಿಸಿ ಪಶ್ಚಿಮ ಕರ್ಬಿ ಅಂಗ್ಲಾಂಗ್-ಹೋಜೈ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ಬುಡಕಟ್ಟು ಸಮುದಾಯಕ್ಕೆ ಸೇರದ ಜನರ ಗುಂಪೊಂದು ಪ್ರತಿಭಟನೆ ನಡೆಸಿದೆ. ಹಿಂಸಾಚಾರದಲ್ಲಿ ಮೃತಪಟ್ಟ ಬುಡಕಟ್ಟು ಸಮುದಾಯಕ್ಕೆ ಸೇರದ ವ್ಯಕ್ತಿಗಳ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 24 Dec 2025 9:35 pm

ರಾಜ್ಯ ಸರಕಾರ ಪ್ರತೀ ವಿಷಯಕ್ಕೂ ಕೇಂದ್ರ ಸರಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ: ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯ ಸರಕಾರ ಪ್ರತೀ ವಿಷಯಕ್ಕೂ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ. ಈ ನಡೆಯಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರಕಾರದಲ್ಲಿ ಡಾ.ಮನಮೋಹನ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಮನಮೋಹನ್ ಸಿಂಗ್, ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್, ನಬಾರ್ಡ್ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ ಎಂದು ಆರೋಪಿಸಿದರು. ಈಗ ನೋಡಿದರೆ ರಾಜ್ಯ ಸರಕಾರ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ಹೀಗೆ ಟೀಕೆ ಮಾಡುತ್ತಾ ಹೋದರೆ ಆಗುವ ಪ್ರಯೋಜನ ಏನು? ಮುಖ್ಯಮಂತ್ರಿ ಆದವರು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು ಎಂದರು. ಸಮಾವೇಶ: ಜ.30ರಂದು ಸಂಸತ್‍ನ ಜಂಟಿ ಅಧಿವೇಶನ ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಜ.23ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ಪಕ್ಷದ ವತಿಯಿಂದ ತಲಾ ಒಂದು ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ರಾಜ್ಯ ಸರಕಾರದ ವೈಫಲ್ಯಗಳು, ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿ ಗೌಡ, ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಮುಖಂಡ ರೋಷನ್ ಅಬ್ಬಾಸ್ ಸೇರಿದಂತೆ ಪ್ರಮುಖರಿದ್ದರು. ಗಾಂಧೀಜಿ ಮೇಲೆ ಕಾಂಗ್ರೆಸ್ ಅಕ್ಕರೆ ಬಗ್ಗೆ ಗೊತ್ತಿದೆ! ನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಎಚ್.ಟಿ.ದೇವೇಗೌಡ ಟೀಕಿಸಿದ್ದಾರೆ.

ವಾರ್ತಾ ಭಾರತಿ 24 Dec 2025 9:34 pm

ಹೊಸ ಗಣಿಗಾರಿಕೆಗೆ ನಿಷೇಧ, ಸಂರಕ್ಷಿತ ವಲಯದ ವಿಸ್ತರಣೆ: ಅರಾವಳಿ ರಕ್ಷಣೆಗಾಗಿ ಕೇಂದ್ರದ ಯೋಜನೆ

ಹೊಸದಿಲ್ಲಿ,ಡಿ.24: ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನದ ಕುರಿತು ಇತ್ತೀಚಿಗೆ ಪ್ರಕಟಿಸಲಾದ ಹೊಸ ನಿಯಮಗಳ ಕುರಿತು ವಿವಾದದ ನಡುವೆಯೇ ಅರಾವಳಿ ಪರ್ವತ ಶ್ರೇಣಿಯ ಸಂರಕ್ಷಣೆಗಾಗಿ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಅರಾವಳಿಯಾದ್ಯಂತ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವವರೆಗೆ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ಸ್ಥಗಿತಗೊಳಿಸಿದ ಕೆಲವು ದಿನಗಳ ಬಳಿಕ ಸರಕಾರದ ಈ ಆದೇಶವು ಹೊರಬಿದ್ದಿದೆ. ನಿಷೇಧವು ಗುಜರಾತಿನಿಂದ ದಿಲ್ಲಿವರೆಗಿನ ಇಡೀ ಅರಾವಳಿ ಪ್ರದೇಶದಾದ್ಯಂತ ಏಕರೂಪವಾಗಿ ಅನ್ವಯಿಸಲಿದ್ದು, ಅರಾವಳಿ ಶ್ರೇಣಿಯನ್ನು ನಿರಂತರ ಭೂವೈಜ್ಞಾನಿಕ ಪರ್ವತ ಶ್ರೇಣಿಯನ್ನಾಗಿ ಸಂರಕ್ಷಿಸುವ ಹಾಗೂ ಎಲ್ಲ ಕಾನೂನುಬಾಹಿರ ಮತ್ತು ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳಿಗೆ ಕಡಿವಾಣವನ್ನು ಹಾಕುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರವು ಈಗಾಗಲೇ ನಿಷೇಧಿಸಿರುವ ವಲಯಗಳಾಚೆ ಗಣಿಗಾರಿಕೆಯನ್ನು ನಿಷೇಧಿಸಬೇಕಾದ ಅರಾವಳಿಯಾದ್ಯಂತದ ಹೆಚ್ಚುವರಿ ಪ್ರದೇಶಗಳನ್ನು ಗುರುತಿಸುವಂತೆ ಸಚಿವಾಲಯವು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೂ (ICFRE) ಸೂಚಿಸಿದೆ. ಇಡೀ ಅರಾವಳಿ ಪ್ರದೇಶಕ್ಕಾಗಿ ಸಮಗ್ರ, ವಿಜ್ಞಾನ ಆಧಾರಿತ ಸುಸ್ಥಿರ ಗಣಿಗಾರಿಕೆ ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸುವಾಗ ಗಣಿಗಾರಿಕೆ ನಿಷೇಧಕ್ಕಾಗಿ ಹೆಚ್ಚುವರಿ ಪ್ರದೇಶಗಳನ್ನು ಗುರುತಿಸುವಂತೆ ICFREಗೆ ಸೂಚಿಸಲಾಗಿದೆ. ಸಂಬಂಧಿಸಿದವರೊಂದಿಗೆ ವ್ಯಾಪಕ ಸಮಾಲೋಚನೆಗಾಗಿ ಸಾರ್ವಜನಿಕ ವಲಯದಲ್ಲಿ ಮಂಡಿಸಲಾಗುವ ಯೋಜನೆಯು ಸಂಚಿತ ಪರಿಸರ ಪರಿಣಾಮ, ಪರಿಸರ ಧಾರಣ ಸಾಮರ್ಥ್ಯಗಳ ಮೌಲ್ಯಮಾಪನದ ಜೊತೆಗೆ ಪರಿಸರ ಸೂಕ್ಷ್ಮ ಮತ್ತು ಸಂರಕ್ಷಣೆಗಾಗಿ ನಿರ್ಣಾಯಕ ಪ್ರದೇಶಗಳನ್ನು ಗುರುತಿಸಲಿದೆ. ಜೊತೆಗೆ ಪರಿಸರ ಮರುಸ್ಥಾಪನೆ ಮತ್ತು ಪುನರ್ವಸತಿಗಾಗಿ ಕ್ರಮಗಳನ್ನೂ ನಿಗದಿಗೊಳಿಸಲಿದೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಗಣಿಗಳಿಗೆ ಸಂಬಂಧಿಸಿದಂತೆ ಕೇಂದ್ರವು, ರಾಜ್ಯ ಸರಕಾರಗಳು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಎಲ್ಲ ಪರಿಸರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 24 Dec 2025 9:30 pm

ಉನ್ನಾವೊ ಅತ್ಯಾಚಾರ ಪ್ರಕರಣ | “ಘರ್ ತೋ ಉನ್ ಕಾ ಉನ್ನಾವೊ ಹೈ”: ಸಂತ್ರಸ್ತೆಯನ್ನು ಅಣಕಿಸಿದ Uttar Pradesh ಸಚಿವ

ಲಕ್ನೋ,ಡಿ.24: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಬುಧವಾರ ಅಣಕಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಓಂ ಪ್ರಕಾಶ್ ರಾಜಭರ್, ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ಅವರನ್ನು ಅಪಹಾಸ್ಯ ಮಾಡಿದರು. ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ನ ಜೈಲು ಶಿಕ್ಷೆಯನ್ನು ಆತನ ಮೇಲ್ಮನವಿ ಇತ್ಯರ್ಥಗೊಳ್ಳುವವರೆಗೆ ಅಮಾನತಿನಲ್ಲಿರಿಸಿದ ಬಳಿಕ ಸಂತ್ರಸ್ತೆ ಮಹಿಳೆ ಮತ್ತು ಕುಟುಂಬ ಸದಸ್ಯರು ದಿಲ್ಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷ ಸುಹೇಲದೇವ್ ಭಾರತೀಯ ಸಮಾಜ ಪಾರ್ಟಿಯ (ಎಸ್ಬಿಎಸ್ಪಿ) ಮುಖ್ಯಸ್ಥರಾಗಿರುವ ರಾಜಭರ್ ಮಂಗಳವಾರ ಬೆಳಿಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದರು. ಪೋಲಿಸ್ ಸಿಬ್ಬಂದಿಗಳು ಸಂತ್ರಸ್ತೆಯನ್ನು ಎಳೆದೊಯ್ಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಆಕೆಯ ಬಗ್ಗೆ ದಿಲ್ಲಿ ಪೋಲಿಸರ ಅಸಡ್ಡೆಯ ಕುರಿತು ಸುದ್ದಿಗಾರರು ರಾಜಭರ್ ಅವರನ್ನು ಪ್ರಶ್ನಿಸಿದ್ದರು. ಸಂತ್ರಸ್ತೆಯನ್ನು ಇಂಡಿಯಾ ಗೇಟ್ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಓರ್ವ ಸುದ್ದಿಗಾರ ಹೇಳಿದಾಗ ಗಹಗಹಿಸಿ ನಕ್ಕ ರಾಜಭರ್, ‘ಇಂಡಿಯಾ ಗೇಟ್? ಉನ್ ಕಾ ಘರ್ ತೋ ಉನ್ನಾವೊ ಹೈ(ಉನ್ನಾವೊ ಅವರ ಮನೆಯಾಗಿದೆ)ʼ ಎಂದು ಹೇಳಿದರು. ‘ಸೆಂಗಾರ್ ಸಂತ್ರಸ್ತೆಯ ಕುಟುಂಬದಿಂದ ದೂರವಿರಬೇಕು, ಐದು ಕಿ.ಮೀ.ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯವು ನಿರ್ದೇಶನಗಳನ್ನು ಹೊರಡಿಸಿದೆ. ಭದ್ರತೆಯನ್ನು ಖಚಿತಪಡಿಸಿ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿರುವಾಗ ದಿಲ್ಲಿಯಲ್ಲೇಕೆ ಧರಣಿ? ಇಲ್ಲಿ ಭದ್ರತೆಯ ಕೊರತೆಯ ಪ್ರಶ್ನೆ ಎಲ್ಲಿದೆ?’ ಎಂದರು. ಪ್ರತಿಕ್ರಿಯೆಯನ್ನು ಕೋರಿ ಸುದ್ದಿಸಂಸ್ಥೆಯ ಕರೆಗಳಿಗೆ ರಾಜಭರ್ ಉತ್ತರಿಸಲಿಲ್ಲವಾದರೂ ಅವರ ಪುತ್ರ ಹಾಗೂ ಎಸ್ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ರಾಜಭರ್,‘ಹಾಗಾದರೆ ಓಂ ಪ್ರಕಾಶ್ ರಾಜಭರ್ ಅವರು ಈ ಬಗ್ಗೆ ಅಳಬೇಕು, ಅಂದರೆ ಸರಿಯಾಗುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಕುಟುಂಬಕ್ಕೆ ಭದ್ರತೆಯ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ. ಹೇಳುವುದೇನೂ ಬಾಕಿಯಿಲ್ಲ’ ಎಂದರು.

ವಾರ್ತಾ ಭಾರತಿ 24 Dec 2025 9:30 pm

ವೀರಪ್ಪನ್‍ಗಿಂತ ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಅಧಿಕ: ಆರ್. ಅಶೋಕ್

ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಹಾವಳಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಆನೆಗಳು ಸಾವನ್ನಪ್ಪುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಪ್ಪನ್ ತನ್ನ 25 ವರ್ಷಗಳ ಕಾಡುಗಳ್ಳತನದ ಅವಧಿಯಲ್ಲಿ ಸುಮಾರು 500 ಆನೆಗಳನ್ನು ಕೊಂದಿರಬಹುದು. ಆದರೆ, ಈ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷದಲ್ಲಿ ಬರೋಬ್ಬರಿ 206 ಆನೆಗಳು ಸಾವನ್ನಪ್ಪಿವೆ. ಸಿದ್ದರಾಮಯ್ಯನವಗಿಂತ ವೀರಪ್ಪನ್ ಉತ್ತಮ ಎನಿಸುತ್ತದೆ ಎಂದರು. 61 ಚಿರತೆ, 19 ನವಿಲು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಜಿಂಕೆಗಳು ಸತ್ತಿವೆ. ಜಿಂಕೆ ಮಾಂಸ ಮಾರಾಟವಾಗುತ್ತಿದೆ. ವಿದೇಶದಿಂದ ಹಾವುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ಬದಲು ಸಫಾರಿ ರದ್ದು ಮಾಡಲಾಗಿದೆ. ಯಾವುದೇ ರಾಜ್ಯಗಳಲ್ಲಿ ಸಫಾರಿ ರದ್ದು ಮಾಡಿಲ್ಲ. ಸಫಾರಿಯಿಂದ ವನ್ಯಜೀವಿ ಸಂಘರ್ಷ ಆಗುತ್ತಿಲ್ಲ. ಸಫಾರಿ ಮಾಡುವ ಜಂಗಲ್ ರೆಸಾರ್ಟ್‍ಗಳಲ್ಲಿ 6,000 ಸಿಬ್ಬಂದಿ ಇದ್ದಾರೆ. ಇದರಿಂದಾಗಿ ಪ್ರವಾಸೋದ್ಯಮ ಕುಸಿತವಾಗಿದೆ. ರೈತರು, ಸ್ಥಳೀಯರಿಗೆ ಇದರಿಂದ ನಷ್ಟವಾಗಿದೆ ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಭಾಗಕ್ಕೆ ಹೊಸದಾಗಿ ಏನೂ ನೀಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾನು ಎರಡು ಗಂಟೆ ಮಾತಾಡಿದ್ದೇನೆ. ಆದರೆ, ಈ ರಾಜ್ಯ ಸರಕಾರ ಯಾವುದೇ ಹೊಸ ಘೋಷಣೆ ಮಾಡದೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಗೃಹಲಕ್ಷ್ಮೀ ಯೋಜನೆಗೆ ಹಣ ನೀಡಲು ಏಕೆ ವಿಳಂಬವಾಗಿದೆ ಎಂದು ಸರ್ಕಾರ ಸರಿಯಾಗಿ ತಿಳಿಸಿಲ್ಲ. 1.26 ಕೋಟಿ ಮಹಿಳೆಯರಿಗೆ ಅನ್ಯಾಯವಾಗಿದ್ದು, ಇದು ದೊಡ್ಡ ಹಗರಣವಾಗಿದೆ. ಫೆಬ್ರವರಿ ಹಾಗೂ ಮಾರ್ಚ್‍ನ ಹಣ ಏನಾಗಿದೆ ಎಂಬುದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇನ್ನೂ ಹೇಳಿಲ್ಲ. ಮಹಿಳೆಯರಿಗೆ ಹಣ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.

ವಾರ್ತಾ ಭಾರತಿ 24 Dec 2025 9:28 pm

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದಿಢೀರ್‌ ದಾಳಿ; ಮೊಬೈಲ್‌, ಇಯರ್‌ ಬಡ್ಸ್‌, ಸಿಮ್‌ಕಾರ್ಡ್‌ ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ ನಡೆಸಿದ ಅಧಿಕಾರಿಗಳು, ಕೈದಿಗಳ ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು, ಸಿಮ್‌ಕಾರ್ಡ್‌ಗಳು, ಚಾರ್ಜರ್‌ಗಳು ಮತ್ತು ಇಯರ್‌ ಬಡ್ಸ್‌ಗಳಂತಹ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಗೆ ಸಹಕರಿಸಿದ ಸಿಬ್ಬಂದಿಗೆ 5 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.

ವಿಜಯ ಕರ್ನಾಟಕ 24 Dec 2025 9:26 pm

ಬಾಂಗ್ಲಾದೇಶ ಬೆನ್ನಲ್ಲೇ ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ: ಇಬ್ಬರ ಸಾವು, ಸೇನೆ ಮಧ್ಯಪ್ರವೇಶ

ಗುವಾಹಟಿ: ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಸ್ಸಾಂನ ಹಿಂಸಾಚಾರ ಪೀಡಿತ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಇಲ್ಲಿನ ಮಣಿಪುರ ರಾಜ್ಯದಲ್ಲಿ ಈಗಾಗಲೇ ಆಂತರಿಕ ಕಲಹ ಶುರುವಾಗಿ ವರ್ಷಗಳೇ ಆಗಿವೆ. ಇದೀಗ ಈಶಾನ್ಯ ಭಾರತದ ಮತ್ತೊಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದಿದ್ದೆ. ಅಸ್ಸಾಂನ

ಒನ್ ಇ೦ಡಿಯ 24 Dec 2025 9:24 pm

ಮನುಷ್ಯ ಜೀವಕ್ಕೆ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಿ: ಬಿಷಪ್ ಸಲ್ಡಾನ

ಮಂಗಳೂರು,ಡಿ.24: ಸಮಾಜದಲ್ಲಿ ಪ್ರೀತಿಯ ಮತ್ತು ಜೀವದ ಸಂಸ್ಕೃತಿ ಇದೆ. ಮನುಷ್ಯ ಜೀವಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ಕ್ರೆಸ್ತರು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ಕ್ರೆಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು. ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬುಧವಾರ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಅವರು ಸಂದೇಶ ನೀಡಿದರು. ಏಸುಸ್ವಾಮಿಯ ವಿಶ್ವಾಸಿಗಳು ಪ್ರತ್ಯೇಕವಾಗಿ ಜಗತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ದ್ಯೋತಕವಾಗಿದೆ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಎಲ್ಲರನ್ನೂ ಪ್ರೀತಿಸಿರಿ ಎಂಬ ಏಸುವಿನ ಮಾತನ್ನು ಜೀವನದಲ್ಲಿ ಅಳವಡಿಸಿ ಕೊಂಡು ಬದುಕುತ್ತಿದ್ದಾರೆ. ಭಾರತದಲ್ಲಿ ಕ್ರೆಸ್ತರ ಕೊಡುಗೆ ಅಪಾರ. ಪ್ರತ್ಯೇಕವಾಗಿ ಪ್ರೀತಿ ಹಾಗೂ ಸೇವೆಯ ಪ್ರತೀಕವಾದ ಈ ಕ್ರೆಸ್ತರು ಏಸುಕ್ರಿಸ್ತರ ಜೀವನದ ಒಂದು ಪ್ರತಿಫಲನವಾಗಿದೆ. ಕ್ರಿಸ್ಮಸ್ ಹಬ್ಬವು ನಮಗೆ ವಿಶೇಷ ವಾಗಿ ಕ್ರೆಸ್ತನಂತೆ ಆಗಲು ಪ್ರೇರೇಪಿಸುತ್ತದೆ. ನಾವು ಶಾಂತಿಯ ದೂತರಾಗಿ ಮನುಷ್ಯರ ನಡುವೆ ಸೇತುವೆಯಾಗಿ, ಎಲ್ಲರನ್ನೂ ಪ್ರೀತಿಸುವವರಾಗಿ ಬೆಳೆಯಲು ಏಸು ಸ್ವಾಮಿಯ ಕೃಪೆ-ವರಗಳು ನಮಗೆ ಸಹಾಯ ಮಾಡುತ್ತಿವೆ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಹೇಳಿದರು. ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ವಲೇರಿಯನ್ ಫೆರ್ನಾಂಡೀಸ್, ಫಾ.ಜೈಸನ್ ಲೋಬೋ ಭಾಗವಹಿಸಿದ್ದರು. *ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಫಾ.ಬೊನವೆಂಚರ್ ನಜರತ್, ಉರ್ವ ಲೇಡಿಹಿಲ್ ಚರ್ಚ್‌ನಲ್ಲಿ ಫಾ. ಬೆಂಜಮಿನ್ ಪಿಂಟೋ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್‌ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್‌ನಲ್ಲಿ ಫಾ. ವಿಜಯ ವಿಕ್ಟರ್ ಲೋಬೊ ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು. *ಮಂಗಳೂರು ಕ್ರೆಸ್ತ ಧರ್ಮಪ್ರಾಂತಕ್ಕೆ ಒಳಪಟ್ಟ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಕ್ರಿಸ್ಮಸ್ ಬಲಿಪೂಜೆ ಹಾಗೂ ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಿತು. ಪರಸ್ಪರ ಶುಭಾಶಯ ಕೋರುವ ಸಿಹಿತಿನಿಸುಗಳು (ಕುಸ್ವಾರ್) ಕೇಕ್‌ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಂಡು ಬಂತು.  

ವಾರ್ತಾ ಭಾರತಿ 24 Dec 2025 9:22 pm

ಜಮ್ಮು-ಕಾಶ್ಮೀರ: ಸೇನಾ ಶಿಬಿರದಲ್ಲಿ ಗುಂಡಿನ ದಾಳಿ; JCO ಮೃತ್ಯು

ಜಮ್ಮು, ಡಿ. 24: ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದ ಒಳಗೆ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಒಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಬುಧವಾರ ತಿಳಿಸಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ, ಅವರು ಯಾವುದೇ ಭಯೋತ್ಪಾದನಾ ದಾಳಿಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ‘‘ಸಾಂಬಾದ ಸೇನಾ ಘಟಕದ JCO ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಗುಂಡಿನ ದಾಳಿಗೆ ಗುರಿಯಾದರು. ಗಂಭೀರ ಗಾಯಗೊಂಡ ಅವರು ಅನಂತರ ಮೃತಪಟ್ಟರು. ಈ ಹಂತದಲ್ಲಿ ಈ ದಾಳಿಯನ್ನು ಭಯೋತ್ಪಾದನೆಯ ಆಯಾಮದಲ್ಲಿ ನೋಡಲು ಸಾಧ್ಯವಿಲ್ಲ’’ ಎಂದು ವಕ್ತಾರ ಹೇಳಿದ್ದಾರೆ. ‘‘ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ದೃಢವಾದ ಬಳಿಕ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು’’ ಎಂದು ಅವರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಯೋಧನನ್ನು ಸುಬೇದಾರ್ ಸುರ್ಜೀತ್ ಸಿಂಗ್ ಎಂದು ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗುರುತಿಸಿದೆ. ಅಲ್ಲದೆ, ಅವರಿಗೆ ಗೌರವ ನಮನ ಸಲ್ಲಿಸಿದೆ. ‘‘ಜಮ್ಮುವಿನಲ್ಲಿ ಕರ್ತವ್ಯದ ಸಂದರ್ಭ ಪ್ರಾಣ ತ್ಯಾಗ ಮಾಡಿದ ಧೀರ ಸುಬೇದಾರ್ ಸುರ್ಜೀತ್ ಸಿಂಗ್ ಅವರಿಗೆ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗೌರವ ನಮನ ಸಲ್ಲಿಸುತ್ತದೆ. ಈ ದುಃಖದ ಸಂದರ್ಭ ಭಾರತೀಯ ಸೇನೆ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಹಾಗೂ ಬೆಂಬಲ ನೀಡುತ್ತದೆೆ’’ ಎಂದು ರಕ್ಷಣಾ ಇಲಾಖೆ ವಕ್ತಾರ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 24 Dec 2025 9:20 pm

ಚಿಕಾಗೋದಲ್ಲಿ ನ್ಯಾಷನಲ್ ಗಾರ್ಡ್ ನಿಯೋಜನೆ: ಟ್ರಂಪ್ ಕೋರಿಕೆ ತಿರಸ್ಕರಿಸಿದ ಅಮೆರಿಕದ ಉನ್ನತ ನ್ಯಾಯಾಲಯ

ವಾಷಿಂಗ್ಟನ್, ಡಿ.24: ಇಲಿನಾಯ್ಸ್ ರಾಜ್ಯದ ಚಿಕಾಗೋ ನಗರದಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ ಸೇವೆ(ಐಸಿಇ)ಯ ಏಜೆಂಟರ ಭದ್ರತೆಗೆ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದ್ದು, ವಲಸೆ ವಿಚಾರದಲ್ಲಿ ಶ್ವೇತಭವನಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಪ್ರಾಥಮಿಕ ಹಂತದಲ್ಲಿ, ಇಲಿನಾಯ್ಸ್ನಲ್ಲಿ ಕಾನೂನುಗಳನ್ನು ಕಾರ್ಯಗತಗೊಳಿಸಲು ಮಿಲಿಟರಿಯನ್ನು ಅನುಮತಿಸುವ ಅಧಿಕಾರದ ಮೂಲವನ್ನು ಗುರುತಿಸಲು ಸರಕಾರ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು ಚಿಕಾಗೋ ನಗರದಲ್ಲಿ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸುವುದನ್ನು ನಿಷೇಧಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ನಿಯಮಿತ ಪಡೆಗಳೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಕಾನೂನುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಾಗ ಅಧ್ಯಕ್ಷರು ನ್ಯಾಷನಲ್ ಗಾರ್ಡ್ ಅನ್ನು ನಿಯೋಜಿಸಬಹುದು ಎಂಬ ಅಮೆರಿಕದ ಫೆಡರಲ್ ಕಾನೂನನ್ನು ಸುಪ್ರೀಂಕೋರ್ಟ್ ನ 9 ಸದಸ್ಯರ ನ್ಯಾಯಪೀಠ 6-3 ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅವರ ವಲಸೆ ಕಾನೂನುಗಳನ್ನು ಜಾರಿಗೊಳಿಸಲು, ಫೆಡರಲ್ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಅಮೆರಿಕದ ಸಾರ್ವಜನಿಕರನ್ನು ರಕ್ಷಿಸಲು ಟ್ರಂಪ್ ನಡೆಸುತ್ತಿರುವ ಪ್ರಯತ್ನಗಳನ್ನು ಈ ತೀರ್ಪು ತಡೆಯುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಹೇಳಿದ್ದಾರೆ.

ವಾರ್ತಾ ಭಾರತಿ 24 Dec 2025 9:20 pm

ಮುರ್ಶಿದಾಬಾದ್ ಹತ್ಯೆ ಪ್ರಕರಣ | 13 ದೋಷಿಗಳಿಗೆ ಜೀವಾವಧಿ ಶಿಕ್ಷೆ

ಕೋಲ್ಕತಾ, ಡಿ. 24: ಪಶ್ಚಿಮಬಂಗಾಳದ ಮುರ್ಸಿದಾಬಾದ್ ಜಿಲ್ಲೆಯಲ್ಲಿ ಎಪ್ರಿಲ್ ನಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಎಪ್ರಿಲ್ ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ತಂದೆ ಹಾಗೂ ಮಗನನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ 13 ಮಂದಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ 13 ದೋಷಿಗಳಲ್ಲಿ ಪ್ರತಿಯೊಬ್ಬರಿಗೂ ದರೋಡೆಗೆ 10 ವರ್ಷ, ಮನೆ ಅತಿಕ್ರಮಣಕ್ಕೆ 10 ವರ್ಷ ಹಾಗೂ ಗಲಭೆ ನಡೆಸಿರುವುದಕ್ಕೆ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಪರಿಹಾರವಾಗಿ 15 ಲಕ್ಷ ರೂ. ಪಾವತಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ‘‘ಭಾರತದಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದಲ್ಲಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾದ ಎರಡನೇ ಪ್ರಕರಣ ಇದಾಗಿದೆ. ನಾವು ಮರಣ ದಂಡನೆಗೆ ಕೋರಿದ್ದೆವು’’ ಎಂದು ವಿಶೇಷ ಸರಕಾರಿ ಅಭಿಯೋಜನೆ ಬಿವಾಸ್ ಚಟರ್ಜಿ ತಿಳಿಸಿದ್ದಾರೆ. ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಎಪ್ರಿಲ್ 11 ಹಾಗೂ 12ರಂದು ಮುರ್ಶಿದಾಬಾದ್ ಜಿಲ್ಲೆಯ ಸಂಸೇರ್ಗಂಜ್ ಹಾಗೂ ಸುತಿ ಪ್ರದೇಶದಲ್ಲಿ ಕೋಮು ಘಷಣೆ ಭುಗಿಲೆದ್ದಿತ್ತು. ಮನೆಗಳನ್ನು ಲೂಟಿಗೈಯಲಾಗಿತ್ತು. ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಲಾಗಿತ್ತು. ಜಾಫ್ರಾಬಾದ್ ನಲ್ಲಿ ಗುಂಪೊಂದು 72 ವರ್ಷದ ಹರಗೋಬಿಂದ್ ದಾಸ್ ಹಾಗೂ ಅವರ ಪುತ್ರ ಚಂದನ್ ದಾಸ್ ಅವರನ್ನು ಥಳಿಸಿ ಹತ್ಯೆಗೈದಿತ್ತು. ಈ ಹಿಂಸಾಚಾರದಲ್ಲಿ ಇವರಿಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದರು.

ವಾರ್ತಾ ಭಾರತಿ 24 Dec 2025 9:20 pm

ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್ ಮಾಲಕರ ಸಭೆ

ಉಡುಪಿ, ಡಿ.24: ಉಡುಪಿಯಲ್ಲಿ 2026ರ ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಗಳು ತೆಗೆದುಕೊಳ್ಳಬೇಕಾದ ಮುಂಜಾಗೃತೆ, ಎಚ್ಚರಿಕೆ ಕುರಿತಂತೆ ಇವುಗಳ ಮಾಲಕರ ಸಭೆಯನ್ನು ಪೊಲೀಸ್ ಇಲಾಖೆ ಇಂದು ಅಜ್ಜರಕಾಡಿನ ಪುರಭವನದಲ್ಲಿ ನಡೆಸಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇವರ ಮಾರ್ಗದರ್ಶನ ದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಹರ್ಷ ಪ್ರಿಯಂವದ ಅವರು 2026 ಹೊಸ ವರ್ಷ ಅಚರಣೆಯ ಸಮಯ ವಹಿಸಬೇಕಾದ ಮುಂಜಾಗ್ರತ ಕ್ರಮ ಹಾಗೂ ಪಾಲಿಸಬೇಕಾದ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಸೆನ್ ಪೊಲೀಸ್ ಠಾಣೆಯ ಪಿಎಸ್‌ಐ ಹರೀಶ್ ಅವರು ಸಹ ವಿವಿಧ ವಿಷಯಗಳಲ್ಲಿ ಮಾಹಿತಿಗಳನ್ನು ನೀಡಿದರು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆಗಳಿವು. *ಉಡುಪಿ ಜಿಲ್ಲೆಯ ಎಲ್ಲಾ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಮಾಲಕರು ಹೊಸ ವರ್ಷಾಚರಣೆಯ ವೇಳೆ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10:00 ಗಂಟೆಯೊಳಗೆ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಹಾಗೂ ನಿಗದಿತ ಸಮಯದೊಳಗೆ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಯಿತು. *ಫೈರ್ ಕ್ಯಾಂಪ್‌ಗಳಿಂದ/ಅಬ್ಬರದ ಸಂಗೀತಗಳಿಂದ ನೆರೆಹೊರೆಯವರ ಶಾಂತಿ ಭಂಗವುಂಟು ಮಾಡುವಂತಿಲ್ಲ. ಹೋಮ್‌ಸ್ಟೇಗಳು ವಿದೇಶಿ ಪ್ರವಾಸಿಗರು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು. *ಹೋಂಸ್ಟೇ/ರೆಸಾರ್ಟ್‌ಗಳು ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯತಕ್ಕದ್ದು. *ಪೊಲೀಸರಿಂದ/ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ/ಹೊರವಲಯ ಅಥವಾ ಅರಣ್ಯ ಪ್ರದೇಶ ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್ ಸ್ಟೇ ಮಾಲಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ. *ಹೋಮ್ ಸ್ಟೇಗಳಲ್ಲಿ ಅತಿಥಿಗಳ ವಾಹನಗಳನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಂಸ್ಟೇ ನಿರ್ವಹಿಸಿರುವ ಜಾಗದೊಳಗೆ ಪಾರ್ಕಿಂಗ್ ಮಾಡಿಸತಕ್ಕದ್ದು. ಹೋಮ್‌ಸ್ಟೇಯಲ್ಲಿ ಕಾನೂನು ಬಾಹಿರ ಅನೈತಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. *ಹೋಂ-ಸ್ಟೇಯಲ್ಲಿನ ಎಲ್ಲಾ ಹೊರ ಆವರಣದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ಸದರಿ ಕ್ಯಾಮೆರಾದ ದೃಶಗಳನ್ನು ಕನಿಷ್ಠ ಮೂರು ತಿಂಗಳಾದರೂ ಬ್ಯಾಕ್ ಅಪ್ ಇರುವಂತೆ ಅಳವಡಿಸಬೇಕು. *ವಿದೇಶಿಯರು ಹೋಂ-ಸ್ಟೇಗೆ ಬಂದಾಗ ಅವರ ಸಿ ಫಾರಂ ವಿವರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿರುವ ವಿದೇಶಿ ವಿಭಾಗಕ್ಕೆ ಸಲ್ಲಿಸಿ ಕಡ್ಡಾಯವಾಗಿ ನಮೂದು ಮಾಡಿ ಸರಹದ್ದಿನ ಠಾಣೆಗೆ ಮಾಹಿತಿ ನೀಡಬೇಕು. *ಹೋಂ-ಸ್ಟೇಗೆ ಬರುವ ಅತಿಥಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಹನ ನೊಂದಾಣಿ ಸಂಖ್ಯೆ, ಆಧಾರ್ ಕಾರ್ಡ್ ಗುರುತು ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ನೊಂದಾವಣಿಯನ್ನು ತೆರೆಯಬೇಕು. * ಹೊಸ ವರ್ಷ ಆಚರಣೆ ಬಗ್ಗೆ ಧ್ವನಿವರ್ಧಕ ಬಳಸುವ ಬಗ್ಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಹೋಂ ಸ್ಟೇ/ರೆಸಾರ್ಟ್‌ಗಳಲ್ಲಿ ಯಾವುದೇ ಜಾತಿ ಧರ್ಮಗಳ ಅವಹೇಳನ ಮಾಡುವಂತ ಕಾರ್ಯಕ್ರಮ ನಡೆಸಬಾರದು. *ಹೋಂ ಸ್ಟೇಯಲ್ಲಿ ಬರುವ ಅತಿಥಿಗಳು ಮದ್ಯಪಾನ ಮಾಡಿ ಇತರರಿಗೆ ತೊಂದರೆ ನೀಡಿ ಅನವಶ್ಯಕ ಘಟನೆಗಳು ನಡೆಯದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಹೋಂಸ್ಟೇ/ರೆಸಾರ್ಟ್‌ಗಳಲ್ಲಿ ನಿಗದಿ ಪಡಿಸಿದ ಸಮಯದೊಳಗೆ ಕಾರ್ಯಕ್ರಮವನ್ನು ಮುಗಿಸಿ ಶಾಂತಿ ಭಂಗವುಂಟಾಗದಂತೆ ಇಲಾಖೆಯೊಂದಿಗೆ ಸಹಕರಿಸಬೇಕು. *ವಿದೇಶಿಗರು ಕೆಲಸ ಅಥವಾ ಇನ್ನಿತರ ಯಾವುದೇ ಕಾರಣಗಳಿಂದ ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಹೋಂಸ್ಟೇ/ರೆಸಾರ್ಟ್‌ಗಳಲ್ಲಿ ಮದ್ಯಪಾನ ವಿತರಿಸಲು ಅಬಕಾರಿ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. *ಹೋಂಸ್ಟೇ/ರೆಸಾರ್ಟ್‌ಗಳಲ್ಲಿ ಯಾವುದೇ ರೀತಿ ಗಾಂಜ/ಅಫೀಮು ಇನ್ನಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡಬಾರದು. *ಹೋಂಸ್ಟೇ/ರೆಸಾರ್ಟ್‌ಗಳಲ್ಲಿ ಇನ್ನಿತರ ಕಡೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟವರೇ ಜವಾಬ್ದಾರರಾಗಿರುತ್ತಾರೆ. ಆದುದರಿಂದ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.  

ವಾರ್ತಾ ಭಾರತಿ 24 Dec 2025 9:17 pm

ಬಿಕ್ಲು ಶಿವು ಕೊಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗಾಗಿ ಮತ್ತೆ ಹೈಕೋರ್ಟ್ ಕದ ತಟ್ಟಿದ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ 5ನೇ ಆರೋಪಿ ಬಿ.ಎ. ಬಸವರಾಜ ಅಲಿಯಾಸ್ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರವಷ್ಟೇ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ, ಬೈರತಿ ಬಸವರಾಜ್ ಅವರು ನಿರೀಕ್ಷಣಾ ಜಾಮೀನು ಕೋರಿ ಬುಧವಾರ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಭಾರತಿನಗರ ಠಾಣೆ ಪೊಲೀಸರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿಯು ನ್ಯಾಯಮೂರ್ತಿ ಜಿ. ಬಸವರಾಜ ಅವರ ರಜಾಕಾಲದ ನ್ಯಾಯಪೀಠದ ಮುಂದೆ ಶುಕ್ರವಾರ (ಡಿ.26) ವಿಚಾರಣೆಗೆ ನಿಗದಿಯಾಗಿದೆ. ಪ್ರಕರಣವೇನು? ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ಬಿಕ್ಲು ಶಿವನ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಗೊಂಡಿತ್ತು. ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಬಂಧನ ಭೀತಿಯಿಂದ ಹೈಕೋರ್ಟ್‌ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದ ಸೂಚನೆ ಮೇರೆಗೆ ಬೈರತಿ, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದರು. ಬೈರತಿ ಬಸವರಾಜ್ ಅವರನ್ನು ಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಆನಂತರ, ಬೈರತಿ ಬಸವರಾಜ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಸಿಐಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ, ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಬೈರತಿ ಬಸವರಾಜ್, ನಿರೀಕ್ಷಣಾ ಜಾಮೀನು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಪ್ರಕರಣದಲ್ಲಿ ಬೈರತಿ ಬಸವರಾಜ್ ಸೇರಿ ಐವರು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೊಕಾ) ಅನ್ವಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಿಗಳ ವಿರುದ್ಧ ಕೊಕಾ ಅನ್ವಯಿಸಿದ್ದ ಆದೇಶವನ್ನು ಡಿಸೆಂಬರ್ 19ರಂದು ರದ್ದುಪಡಿಸಿತ್ತಲ್ಲದೆ, ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇನ್ನು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೈರತಿ ಬಸವರಾಜ್ ಹಿಂಪಡೆದ ಕಾರಣ ಆ ಅರ್ಜಿಯೂ ವಜಾಗೊಂಡಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಹ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರಿಂದ, ಬಂಧನ ಭೀತಿಯಿಂದ ಮತ್ತೊಮ್ಮೆ ಬೈರತಿ ಬಸವರಾಜ್ ಹೈಕೋರ್ಟ್ ಕದ ತಟ್ಟಿದ್ದಾರೆ.

ವಾರ್ತಾ ಭಾರತಿ 24 Dec 2025 9:15 pm

ಗುಲ್ವಾಡಿ ಗ್ರಾಪಂನ ಸಿಪಿಎಂ ಸದಸ್ಯೆ ವನಜ ನಿಧನ

ಉಡುಪಿ, ಡಿ.24: ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮ ಪಂಚಾಯತ್‌ನ ಸಿಪಿಎಂ ಬೆಂಬಲಿತ ಸದಸ್ಯೆ ವನಜ ಅನಾರೋಗ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು. ವನಜ ಅವರಿಗೆ ಸಿಪಿಎಂ ಜಿಲ್ಲಾ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಮೃತರ ಅಂತಿಮಕ್ರಿಯೆ ಗುರುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 24 Dec 2025 9:15 pm

ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವಲ್ಲಿ ತೃಪ್ತಿಯಿದೆ: CM ಬದಲಾವಣೆ ವದಂತಿ ನಡುವೆ ಡಿಕೆಶಿ

ಹೊಸದಿಲ್ಲಿ,ಡಿ.24: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳನ್ನು ಬುಧವಾರ ತಳ್ಳಿಹಾಕಿದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಹುದ್ದೆಯ ಕುರಿತು ಯಾವುದೇ ವಿವಾದವಿಲ್ಲ ಮತ್ತು ಡಿಸಿಎಂ ಆಗಿ ಮುಂದುವರಿಯುವಲ್ಲಿ ತನಗೆ ತೃಪ್ತಿಯಿದೆ ಎಂದು ಒತ್ತಿ ಹೇಳಿದರು. ಇಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಆಂತರಿಕ ಭಿನ್ನಾಭಿಪ್ರಾಯಗಳು ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆ ಭೇಟಿಗಳ ವದಂತಿಗಳು ಕೇವಲ ಮಾಧ್ಯಮಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ಹೇಳಿದರು. ‘ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಯಾರನ್ನೂ ನಾನು ಭೇಟಿಯಾಗುತ್ತಿಲ್ಲ. ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಖುಷಿಯಿದೆ. ಪಕ್ಷದ ಕಾರ್ಯಕರ್ತನಾಗಿರಲು ನಾನು ಇಷ್ಟ ಪಡುತ್ತೇನೆ’ ಎಂದರು. ಮಾಧ್ಯಮಗಳ ಪುನರಾವರ್ತಿತ ವಿಚಾರಣೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್,ಯಾವುದೇ ಹೆಸರುಗಳನ್ನು ಊಹಾಪೋಹ ಮಾಡಬಾರದು,ನಾಯಕತ್ವಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ್ದಾಗಿದೆ. ಪಕ್ಷವು ಯಾವುದೇ ದಿನ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಾಯಕತ್ವ ಏನೇ ನಿರ್ಧರಿಸಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿಯವರ ಪಾತ್ರ ಅಥವಾ ಅವರು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಡಿಕೆಶಿ,‘ಈ ವಿಷಯಗಳ ಬಗ್ಗೆ ನನಗೆ ತಿಳಿದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ನನ್ನ ನಾಯಕರು ’ ಎಂದು ಉತ್ತರಿಸಿದರು. ರಾಜ್ಯದಲ್ಲಿ ಸಂಪುಟ ಪುನರ್ರಚನೆ ಕುರಿತು ಪ್ರಶ್ನೆಗೆ ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಎಂದು ವರದಿಗಾರರಿಗೆ ಕಿವಿಮಾತು ಹೇಳಿದ ಶಿವಕುಮಾರ್,ತನ್ನ ದಿಲ್ಲಿ ಭೇಟಿಯು ಸಂಪೂರ್ಣವಾಗಿ ಆಡಳಿತಾತ್ಮಕವಾಗಿದೆ,ರಾಜಕೀಯಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದರು.

ವಾರ್ತಾ ಭಾರತಿ 24 Dec 2025 9:10 pm

ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ ಡಾ.ಪೀಟರ್ ಮಚಾದೊ

ಬೆಂಗಳೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರು ಕ್ರಿಶ್ಚಿಯನ್ ಸಮುದಾಯದ ಪರವಾಗಿ ಸಮಸ್ತ ನಾಗರಿಕರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದ್ದಾರೆ. ಕ್ರಿಸ್‍ಮಸ್ ಧಾರ್ಮಿಕ ಎಲ್ಲೆಗಳನ್ನು ಮೀರಿದ ಸಾರ್ವತ್ರಿಕ ಆಚರಣೆಯಾಗಿದ್ದು, ಇದು ಭರವಸೆ, ಪ್ರೀತಿ ಮತ್ತು ಹೊಸ ಆರಂಭದ ಒಂದು ಸಂದೇಶವನ್ನು ಘೋಷಿಸುತ್ತದೆ. ಯೇಸು ಕ್ರಿಸ್ತನ ಜನನವು ಸಹಾನುಭೂತಿ, ಕ್ಷಮೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಮರುಶೋಧಿಸಲು ನಮಗೆ ಕರೆ ನೀಡುತ್ತದೆ. ಭಯ ಮತ್ತು ಅನುಮಾನದಿಂದ ದೂರ ಸರಿಯಲು ಮತ್ತು ತಿಳುವಳಿಕೆ ಹಾಗೂ ಒಗ್ಗಟ್ಟಿನ ಸೇತುವೆಗಳನ್ನು ನಿರ್ಮಿಸಲು ಕ್ರಿಸ್ಮಸ್ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ದೇವರು ಪ್ರತಿಯೊಬ್ಬರಿಗೂ ಸಮಾನವಾದ ಘನತೆಯನ್ನು ನೀಡುತ್ತಾನೆ. ಈ ದೈವಿಕ ಸತ್ಯವು, ತಾರತಮ್ಯ, ಹಿಂಸೆ ಅಥವಾ ಬಹಿಷ್ಕಾರಕ್ಕೆ ಅವಕಾಶವನ್ನು ನೀಡುವುದಿಲ್ಲ. ಮನುಷ್ಯರಾಗಿ, ನಾವು ಶಾಂತಿ, ನ್ಯಾಯ ಮತ್ತು ಸಾಮಾನ್ಯ ಒಳಿತಿಗಾಗಿ ಒಟ್ಟಿಗೆ ಕೆಲಸ ಮಾಡುವ ಸಹೋದರ ಸಹೋದರಿಯರಂತೆ ಬದುಕಬೇಕು ಎಂದು ಅವರು ಕರೆ ನೀಡಿದ್ದಾರೆ. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಶಾಂತಿ, ಏಕತೆ ಮತ್ತು ಸೌಹಾರ್ದತೆಗೆ ತಮ್ಮನ್ನು ತಾವು ಮರುಕಳಿಸುವಂತೆ ಸದ್ಭಾವನೆಯ ಎಲ್ಲ ಜನರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಮನೆಗಳು, ನೆರೆಹೊರೆಗಳು ಮತ್ತು ಸಮುದಾಯಗಳು ಸಂವಾದ, ಬಡವರ ಕಾಳಜಿ ಮತ್ತು ದುರ್ಬಲರ ಬಗ್ಗೆ ಕಾಳಜಿಯ ಸ್ಥಳಗಳಾಗಲಿ. ದ್ವೇಷವನ್ನು ಮಾನವೀಯತೆಯೊಂದಿಗೆ, ವಿಭಜನೆಯನ್ನು ಸಂಭಾಷಣೆಯೊಂದಿಗೆ ಮತ್ತು ಭಯವನ್ನು ಭರವಸೆಯೊಂದಿಗೆ ಬದಲಿಸಲು ಕ್ರಿಸ್ಮಸ್ ನೆರವಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 24 Dec 2025 9:01 pm

ಇಳಿ ವಯಸ್ಸಿನಲ್ಲೂ ಗೌಡರ ಹೆಸರನ್ನು ಸುಪ್ರೀಂ ಕೋರ್ಟ್‌ಗೆ ಎಳೆದ ರಿಟ್ ಅರ್ಜಿ : ಸಿದ್ದರಾಮಯ್ಯ ಮೇಲ್ಯಾಕೆ ಸಿಟ್ಟು?

Nice Project : ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆ ವೇಳೆ, ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದ ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್‌ ಯೋಜನೆಗೆ ಸಂಬಂಧಿಸಿದಂತೆ, ರಿಟ್ ಅರ್ಜಿ ಸರ್ವೋಚ್ಚ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ. ಅದರಲ್ಲಿ, ದೇವೇಗೌಡರ ಹೆಸರು ಕೂಡಾ ಇದೆ.

ವಿಜಯ ಕರ್ನಾಟಕ 24 Dec 2025 8:58 pm

ಋುತುಚಕ್ರ ರಜೆ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಆದೇಶ; ಪ್ರತಿ ತಿಂಗಳು ಒಂದು ರಜೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋುತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಕೆಎಸ್‌ಆರ್‌ಟಿಸಿ ಕೂಡ ಮಹಿಳಾ ಸಿಬ್ಬಂದಿಗೆ ಇದೇ ರೀತಿಯ ರಜೆ ಮಂಜೂರು ಮಾಡಿತ್ತು.

ವಿಜಯ ಕರ್ನಾಟಕ 24 Dec 2025 8:52 pm

ಅಸ್ಸಾಂ | ಹಿಂಸಾಚಾರ ಪೀಡಿತ ಕರ್ಬಿ ಆನ್ಲಾಂಗ್ ನಲ್ಲಿ ಸೇನೆಯ ನಿಯೋಜನೆ

ಗುವಾಹಟಿ: ಅಸ್ಸಾಂನ ಹಿಂಸಾಚಾರ ಪೀಡಿತ ಪಶ್ಚಿಮ ಕರ್ಬಿ ಆನ್ಲಾಂಗ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಬುಧವಾರ ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕ ಹರ್ಮೀತ್ ಸಿಂಗ್ ತಿಳಿಸಿದ್ದಾರೆ. ತೀವ್ರ ಹಿಂಸಾಚಾರ ಪೀಡಿತ ಖೆರೋನಿ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಮೀತ್ ಸಿಂಗ್, ಹಿಂಸಾಚಾರದಲ್ಲಿ ತೊಡಗಬೇಡಿ ಎಂದು ಜನರಿಗೆ ಮನವಿ ಮಾಡಿದ್ದು, ಮಾತುಕತೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು ಎಂದು ದಾರಿ ತಪ್ಪಿರುವ ಯುವಕರಿಗೆ ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸೇನೆಯ ತುಕಡಿಗಳು ಇಲ್ಲಿಗೆ ಆಗಮಿಸಿದ್ದು, ಈ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ನಡೆದಿರುವ ಹಿಂಸಾಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಮೊದಲು ಪರಿಸ್ಥಿತಿ ಸ್ಥಿರವಾಗಲಿ. ನಂತರ ನಾವು ದುಷ್ಕರ್ಮಿಗಳನ್ನು ಬಂಧಿಸಲಿದ್ದೇವೆ ಎಂದೂ ಅವರು ಭರವಸೆ ನೀಡಿದ್ದಾರೆ. ಆದಿವಾಸಿಯೇತರ ಪರಕೀಯರನ್ನು ತೆರವುಗೊಳಿಸಬೇಕು ಎಂದು ಪಶ್ಚಿಮ ಕರ್ಬಿ ಆನ್ಲಾಂಗ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಈವರೆಗೆ ಇಬ್ಬರು ಮೃತಪಟ್ಟು, 38 ಮಂದಿ ಪೊಲೀಸ್ ಸಿಬ್ಬಂದಿಗಳೂ ಸೇರಿದಂತೆ 45 ಮಂದಿ ಗಾಯಗೊಂಡಿದ್ದಾರೆ.

ವಾರ್ತಾ ಭಾರತಿ 24 Dec 2025 8:42 pm

ಕ್ರಿಸ್ಮಸ್ ಪ್ರಯುಕ್ತ ಆರ್ಚ್ ಬಿಷಪ್ ನಿವಾಸಕ್ಕೆ ಸಿಎಂ, ಡಿಸಿಎಂ ಭೇಟಿ

ಬೆಂಗಳೂರು: ಬೆಂಗಳೂರಿನ ಬೆನ್ಸನ್ ಟೌನ್‌ ಮಿಲ್ಲರ್ಸ್ ರಸ್ತೆಯಲ್ಲಿರುವ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಸೌಹಾರ್ದ ಭೇಟಿ ನೀಡಿ ಕ್ರೈಸ್ತರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು.

ವಾರ್ತಾ ಭಾರತಿ 24 Dec 2025 8:41 pm

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಯಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ

ಹೊಸದಿಲ್ಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ದೋಷಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತು ಮಾಡಿರುವ ದೆಹಲಿ ಹೈಕೋರ್ಟ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಹಾಜರಿದ್ದರು. ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸದಲ್ಲಿ ಈ ಭೇಟಿ ನಡೆಯಿತು. ವಿದೇಶ ಪ್ರವಾಸದಿಂದ ವಾಪಸ್ಸಾದ ಮರುದಿನವೇ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಿದರು. ಸೆಂಗಾರ್ ನ ಜೀವಾವಧಿ ಶಿಕ್ಷೆ ಅಮಾನತು ವಿರೋಧಿಸಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ವೇಳೆ CRPF ಸಿಬ್ಬಂದಿ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಮಾಧ್ಯಮಗಳೊಂದಿಗೆ ಮಾತನಾಡದಂತೆ ತಡೆದಿದ್ದಾರೆ. ವೃದ್ಧ ಮಹಿಳೆಯನ್ನು ಚಲಿಸುತ್ತಿದ್ದ ಬಸ್ನಿಂದ ಹಾರುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಸೆಂಗಾರ್ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಜೈಲಿನಿಂದ ಹೊರಗಿರಲು ಅವಕಾಶ ನೀಡಿದೆ. ಈ ತೀರ್ಪು ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸಂತ್ರಸ್ತೆ ದೌರ್ಜನ್ಯಕ್ಕೆ ಒಳಗಾಗಬೇಕೇ ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರಿಗಳಿಗೆ ಜಾಮೀನು ನೀಡಲಾಗುತ್ತಿದ್ದು, ಸಂತ್ರಸ್ತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿಕ, 2017ರಲ್ಲಿ ಸೆಂಗಾರ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ತಾಯಿ ಮತ್ತು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯನಾ ಅವರೊಂದಿಗೆ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬುಧವಾರ ಬೆಳಿಗ್ಗೆ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಮಂಡಿ ಹೌಸ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ತಡೆದ, CRPF ಸಿಬ್ಬಂದಿ ಅವರನ್ನು ಬಸ್ ನಲ್ಲಿ ಕರೆದೊಯ್ದರು. ಮಂಡಿ ಹೌಸ್ ನಲ್ಲಿಯೂ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದರು. ಬಳಿಕ, ಪ್ರತಿಭಟನೆ ನಡೆಸಲು ಸಂತ್ರಸ್ತರಿಗೆ ಅನುಮತಿ ನೀಡಿಲ್ಲ ಎಂದು CRPF ಸ್ವಷ್ಟಪಡಿಸಿತು.

ವಾರ್ತಾ ಭಾರತಿ 24 Dec 2025 8:39 pm

ದೇವದತ್ ಪಡಿಕ್ಕಲ್ ಬೊಂಬಾಟ್ ಶತಕ! ಜಾರ್ಖಂಡ್ ಗಳಿಸಿದ್ದ ಬೃಹತ್ ಮೊತ್ತವನ್ನೂ ಲೆಕ್ಕಕ್ಕೇ ಇಲ್ಲದಂತೆ ಮಾಡಿದ ಕರ್ನಾಟಕ!

Vijay Hazare Trophy 2025-26- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡಿದೆ. ಜಾರ್ಖಂಡ್ ನೀಡಿದ್ದ 413 ರನ್‌ಗಳ ಗುರಿಯನ್ನು ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಇನ್ನೂ 15 ಎಸೆತಗಳು ಬಾಕಿ ಉಳಿದಿರುವಂತೆ ಬೆನ್ನಟ್ಟಿ ಜಯ ಗಳಿಸಿದೆ. ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ರನ್ ಚೇಸ್ ಆಗಿದೆ. ದೇವದತ್ ಪಡಿಕ್ಕಲ್ ಅವರು ಕೇವಲ 118 ಎಸೆತಗಳಲ್ಲಿ 147 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಜಯ ಕರ್ನಾಟಕ 24 Dec 2025 8:37 pm

ಕಾಣೆಯಾದ ಯುವಕನ ಪತ್ತೆಗೆ ಮನವಿ

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಧನರಾಜ್ (25) ಎಂಬವರು ಡಿ.19ರಿದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದ ಧನರಾಜ್ ತಿಂಗಳಿಗೊಮ್ಮೆ ಮನೆಗೆ ಹೋಗುತ್ತಿದ್ದರು. ಡಿ.19ರಂದು ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಹೋದವರು ಡಿ.21ರಂದು ನಾನು ಇನ್ನು ಮನೆಗೆ ಬರುವುದಿಲ್ಲ ಎಂದು ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಧನರಾಜ್‌ರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 5 ಅಡಿ ಎತ್ತರದ, ಸಪೂರ ಶರೀರದ ಧನರಾಜ್ ಮನೆಯಿಂದ ಹೊರ ಹೋಗುವಾಗ ಕಪ್ಪುಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಧನರಾಜ್‌ರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 24 Dec 2025 8:30 pm

ಅಮೆರಿಕದ ಸೆಮಿಕಂಡಕ್ಟರ್ ಕಂಪನಿಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: HD ಕುಮಾರಸ್ವಾಮಿಗೆ MB ಪಾಟೀಲ್ ಪತ್ರ

ಅಮೆರಿಕದ ಸ್ಯಾನ್ಸನ್ ಗ್ರೂಪ್‌ಗೆ ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ, ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಲು ವಿಫಲ ಯತ್ನ ನಡೆದಿದೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ಬದ್ಧವಾಗಿರುವ ಸರಕಾರ, ಈ ಹೂಡಿಕೆ ರಾಜ್ಯಕ್ಕೆ ಬರಬೇಕೆಂದು ಬಯಸಿದೆ.

ವಿಜಯ ಕರ್ನಾಟಕ 24 Dec 2025 8:25 pm

ಎಸ್‌ವೈಎಸ್ ಉಪ್ಪಿನಂಗಡಿ ರೋನ್ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ

ಉಪ್ಪಿನಂಗಡಿ, ಡಿ.24: ರಾಜ್ಯದ ಅತೀ ದೊಡ್ಡ ಸುನ್ನೀ ಯುವಜನ ಸಂಘಟನೆಯಾಗಿರುವ ಎಸ್‌ವೈಎಸ್ ಉಪ್ಪಿನಂಗಡಿ ಝೋನ್ ಸಮಿತಿ ವತಿಯಿಂದ ಖುತುಬಾಅ ಹಾಗೂ ಜಮಾಅತ್ ಪ್ರತಿನಿಧಿ ಸಂಗಮವು, ಎಸ್ ವೈ ಎಸ್ ಝೋನ್ ಸಮಿತಿ ಅಧ್ಯಕ್ಷ ಅಬ್ದುರ‌್ರಝಾಖ್ ಲತೀಫಿ ಕುಂತೂರು ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿ ಎಸ್‌ಜೆಎಂ ಜಿಲ್ಲಾ ಮುಅಲ್ಲಿಂ ಸೆಂಟರ್ ಸಭಾಂಗಣದಲ್ಲಿ ಜರಗಿತು. ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿಂದು ಮದುವೆಯ ಹೆಸರಲ್ಲಿ ಅನಗತ್ಯವಾಗಿ ನಡೆಯುತ್ತಿರುವ ದುಂದು ವೆಚ್ಚ ಹಾಗೂ ಅನಾಚಾರದಿಂದ ದೂರವಿರುವಂತೆ ನಮ್ಮ ಯುವಕ ಯುವತಿಯರಿಗೆ ಜಮಾಅತ್ ನಾಯಕರು ಸ್ಪಷ್ಟ ಸಂದೇಶ ನೀಡಿ, ಸರಳ ಮಾದರಿ ಮದುವೆಗೆ ಪ್ರೇರಣೆ ನೀಡಬೇಕೆಂದು ಕರೆ ನೀಡಿದರು. ಕೆ.ಎಂ.ಜೆ ಜಿಲ್ಲಾಧ್ಯಕ್ಷ ಜಿ ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ನಾಯಕ ಆದಂ ಅಹ್ಸನಿ ಉಸ್ತಾದರು ದುಆ ನೆರವೇರಿಸಿದರು. ವೇದಿಕೆಯಲ್ಲಿ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು, ಅಥಾವುಲ್ಲ ಹಿಮಮಿ ಸಖಾಫಿ, ಹಮೀದ್ ಸಅದಿ ಕಳಂಜಿಬೈಲು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಉಸ್ಮಾನ್ ಸೋಕಿಲ, ಅಬ್ದುಲ್ ಮಜೀದ್ ಸಖಾಫಿ, ಡಿ.ಎಚ್.ಇಬ್ರಾಹೀಂ ಸಅದಿ, ಮುಹಮ್ಮದ್ ಅಲಿ ತುರ್ಕಳಿಕೆ, ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುಲ್ ಶುಕೂರ್ ಮೇದರಬೆಟ್ಟು, ಮುಹಮ್ಮದ್ ಫಾಳಿಲಿ, ಜಿ ಎಂ ಕುಂಞಿ ಜೋಗಿಬೆಟ್ಟು, ರಫೀಕ್ ಬಾಜಾರ, ನಿಸಾರ್ ಸೋಕಿಲ, ಕಲಂದರ್ ಪದ್ಮುಂಜ ಸೇರಿದಂತೆ ಝೋನ್ ವ್ಯಾಪ್ತಿಯ 40 ಕ್ಕೂ ಅಧಿಕ ಜಮಾಅತಿನ ಖತೀಬ್ ಉಪಸ್ಥಿತರಿದ್ದರು. ಎಸ್ ವೈ ಎಸ್ ಉಪ್ಪಿನಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲು ಸ್ವಾಗತಿಸಿ ದರು. ಎಸ್‌ವೈ ಎಸ್ ಝೋನ್ ಕೋಶಾಧಿಕಾರಿ ಡಾ.ಫಾರೂಕ್ ನೆಕ್ಕಿಲಾಡಿ ವಂದಿಸಿದರು.    

ವಾರ್ತಾ ಭಾರತಿ 24 Dec 2025 8:22 pm

ಹಳ್ಳಿಹೊಳೆ ಗ್ರಾಪಂಗೆ ಶಾಸಕ ಮಂಜುನಾಥ ಭಂಡಾರಿ ಭೇಟಿ

ಕುಂದಾಪುರ, ಡಿ.24: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಡಿ.24ರಂದು ಹಳ್ಳಿಹೊಳೆ ಗ್ರಾಪಂಗೆ ಭೇಟಿ ನೀಡಿ, ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಗ್ರಾಪಂ ಕಟ್ಟಡವನ್ನು ಪರಿಶೀಲಿಸಿ ಗ್ರಾಮಸ್ಥರ ಹಲವು ಮನವಿಗಳನ್ನು ಸ್ವೀಕರಿಸಿದರು. ಹಳ್ಳಿಹೊಳೆಯಿಂದ ಬೈಂದೂರು ತಾಲೂಕು ಕೇಂದ್ರಕ್ಕೆ ಹೋಗುವ ಸರಕಾರಿ ಬಸ್‌ಗೆ ಬೇಡಿಕೆ, ಹಳ್ಳಿಹೊಳೆ ಕಮಲಶಿಲೆ ರಸ್ತೆಯ ಪಾರೆಯಲ್ಲಿ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ವಿಭಾಗದಿಂದ ಆಕ್ಷೇಪದ ಬಗ್ಗೆ, ಶಾಡಬೇರುನಿಂದ ಮೂಡಹಿತ್ಲು ರಸ್ತೆ ಅಭಿವೃದ್ಧಿಗೆ ಮನವಿ, ಸುಮಾರು 25 ವರ್ಷದಿಂದ ಓಡಾಡುತ್ತಿದ್ದ ಉಡುಪಿ-ಹೈದರಾಬಾದ್ ಸರಕಾರಿ ಬಸ್ ಸಂಚಾರ ಸ್ಥಗಿತ ಗೊಂಡ ಬಗ್ಗೆ, ಮಡಾಮಕ್ಕಿ ಗ್ರಾಮದ ಬೆಪ್ದೆ ರಸ್ತೆ ಅಭಿವೃದ್ಧಿ ಬಗ್ಗೆ ಸ್ಥಳೀಯರು ಮಂಜುನಾಥ ಭಂಡಾರಿ ಅವರ ಬಳಿ ಮನವಿ ಮಾಡಿದ್ದು ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಮಂಜುನಾಥ್ ಭಂಡಾರಿ ತಿಳಿಸಿದರು. ಈ ಸಂದರ್ಭದಲ್ಲಿ ಹಳ್ಳಿಹೊಳೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಪ್ರದೀಪ ಕೊಠಾರಿ, ನೇತ್ರಾವತಿ, ಯು. ಪ್ರಭಾಕರ ನಾಯ್ಕ, ಸುಜಾತ ಬೋವಿ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು, ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಂಕರನಾರಾಯನ ಯಡಿಯಾಳ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು, ತಾ.ಪಂ. ಮಾಜಿ ಸದಸ್ಯ ರಾಜು ಪೂಜಾರಿ ಹನ್ಕಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ವಾರ್ತಾ ಭಾರತಿ 24 Dec 2025 8:13 pm

ಕೊರಗ ಯುವಜನರ ಧರಣಿಗೆ ಸಿಪಿಎಂ ಬೆಂಬಲ

ಮಣಿಪಾಲ, ಡಿ.24: ಕೊರಗ ಯುವಜನರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಇಂದು ಭಾಗವಹಿಸಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹಾಗೂ ವೆಂಕಟೇಶ್ ಕೋಣಿ ಕೊರಗರ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಕಳೆದ ಹತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರಕಾರ ದಿಂದ ಯಾವುದೇ ಸ್ಪಂದನೆ ಇಲ್ಲದಿರು ವುದು ಖಂಡನೀಯ ಎಂದು ಅವರು ಹೇಳಿದರು. ಕಳೆದ ಹಲವು ವರ್ಷಗಳಿಂದ ಕೊರಗರ ಕುಂದುಕೊರತೆ ಸಭೆಗಳನ್ನು ನಡೆಸದಿರುವುದರ ಕುರಿತು ಕೊರಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತದ ಈ ಧೋರಣೆ ಖಂಡನೀಯ ಎಂದು ಅವರು ತಿಳಿಸಿದರು. ಸಮಾಜದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಸಮುದಾಯವನ್ನು ಸರಕಾರವೂ ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯ ಸರಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ ಸರಕಾರದ ಜೊತೆಗೆ ಮಾತುಕತೆಗೆ ಏರ್ಪಾಟು ಮಾಡಬೇಕು ಎಂದು ಸುರೇಶ್ ಕಲ್ಲಾಗರ ಮತ್ತು ವೆಂಕಟೇಶ ಕೋಣಿ ಆಗ್ರಹಿಸಿದರು.

ವಾರ್ತಾ ಭಾರತಿ 24 Dec 2025 8:12 pm

ಡಿ.26-28: ಕೋಡಿ ಬ್ಯಾರೀಸ್ ಶೈಕ್ಷಣಿಕ ಸಂಸ್ಥೆಯಲ್ಲಿ ಪದವಿ ಪ್ರದಾನ

ಸಂಸ್ಥಾಪಕರ ದಿನಾಚರಣೆ, ‘ಬ್ಯಾರೀಸ್ ಉತ್ಸವ-2025’

ವಾರ್ತಾ ಭಾರತಿ 24 Dec 2025 8:10 pm

ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಪಾವತಿ; ಡಿಸಿಸಿ ಬ್ಯಾಂಕ್‌ನಿಂದ IMPS, ಯುಪಿಐ ಸೇವೆ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಐಎಂಪಿಎಸ್‌ ಮತ್ತು ಯುಪಿಐ ಆನ್‌ಲೈನ್‌ ಪಾವತಿ ಸೇವೆಗಳನ್ನ ಜಾರಿ ತರಲು ನಿರ್ಧರಿಸಿದೆ. ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಬ್ಯಾಂಕ್‌ ತನ್ನ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. 2025-26ನೇ ಸಾಲಿನಲ್ಲಿ 1.20 ಲಕ್ಷ ರೈತರಿಗೆ 1300 ಕೋಟಿ ರೂ. ಬೆಳೆ ಸಾಲ ನೀಡುವ ಯೋಜನೆ ಇದೆ. ಸ್ವ ಸಹಾಯ ಸಂಘಗಳಿಗೂ ಆರ್ಥಿಕ ನೆರವು ನೀಡಲಾಗುತ್ತಿದೆ.

ವಿಜಯ ಕರ್ನಾಟಕ 24 Dec 2025 8:05 pm

2025ನೆ ಸಾಲಿನ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ: ವಾರ್ತಾಭಾರತಿ ಹಿರಿಯ ವರದಿಗಾರ ಅಮ್ಜದ್ ಖಾನ್ ಸೇರಿ 55 ಪತ್ರಕರ್ತರಿಗೆ ಪ್ರಶಸ್ತಿ

ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಹಿರಿಯ ಪತ್ರಕರ್ತರು, ಸಾಧಕರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರದಾನ ಮಾಡುವ 2025ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ., ಸೇರಿದಂತೆ 55 ಪತ್ರಕರ್ತರು ಭಾಜನರಾಗಿದ್ದಾರೆ. ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್., ನಂಜುಂಡೇಗೌಡ ಎಚ್.ಜೆ., ನಂಜುಂಡಪ್ಪ ವಿ., ಶಿವರುದ್ರಪ್ಪ ಡಿ.ಎಸ್, ಕೀರ್ತಿ ಪ್ರಸಾದ್ ಎಂ., ರಮೇಶ್ ಕುಮಾರ್ ನಾಯ್ಕ್, ಶ್ರೀನಿವಾಸಮೂರ್ತಿ, ಝಿಕ್ರಿಯಾ ಕೆ.ಎಂ., ಅಂತೋನಿ ಎ.ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಅನುಷಾ ರವಿ, ಬನ್ಸಿ ಕಾಳಪ್ಪ, ಸೇರಿದಂತೆ 55 ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಡಿ.31 ರಂದು ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 24 Dec 2025 8:05 pm

ಅತ್ಯಾಚಾರ ಅಪರಾಧಿ ಸೆಂಗರ್ ಜೈಲು ಶಿಕ್ಷೆ ಅಮಾನತು: ಸುಪ್ರೀಂಕೋರ್ಟ್ ಮೊರೆ ಹೋಗಲಿರುವ ಉನ್ನಾಂವ್ ಸಂತ್ರಸ್ತೆ

ನಮ್ಮ ಕುಟುಂಬದ ಪಾಲಿಗೆ ಕರಾಳ ತೀರ್ಪು ಎಂದ ಸಂತ್ರಸ್ತೆ

ವಾರ್ತಾ ಭಾರತಿ 24 Dec 2025 7:59 pm

170 ಪರಮಾಣು ಸಿಡಿತಲೆಗಳ ಹುಸಿ ಬೆದರಿಕೆ: ಢಾಕಾಗೋಸ್ಕರ ಭಾರತದ ವಿರುದ್ಧ ಪಾಕಿಸ್ತಾನ ಏಕೆ ಯುದ್ಧಕ್ಕಿಳಿಯುವುದಿಲ್ಲ?

ಡಿಸೆಂಬರ್ 2025ರಲ್ಲಿ ದಕ್ಷಿಣ ಏಷ್ಯಾ ತೀವ್ರ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಭಾರತ, ಪಾಕಿಸ್ತಾನ ಮತ್ತು ಚೀನಾಗಳನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿತು. ಶರೀಫ್ ಒಸ್ಮಾನ್ ಹಾದಿ ಹತ್ಯೆಯಿಂದ ಆರಂಭವಾದ ಗಲಭೆಗಳು ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿಗೆ ಕಾರಣವಾಯಿತು. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಉಪಸ್ಥಿತಿ ಮತ್ತು ಚೀನಾದ ಹೂಡಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದವು. ಇದು ಪರಮಾಣು ಯುದ್ಧದ ಅಂಚಿಗೆ ತಂದರೂ, ತಪ್ಪು ಲೆಕ್ಕಾಚಾರಗಳಿಂದ ಅಪಾಯ ಹೆಚ್ಚಾಯಿತು.

ವಿಜಯ ಕರ್ನಾಟಕ 24 Dec 2025 7:55 pm

ಗುರುಪುರ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ

ಗುರುಪುರ: ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಚುನಾವಣೆ ಸಂಬಂಧ ಗುರುಪುರ ಬ್ಲಾಕ್‌ ಕಾಂಗ್ರೆಸ್ ನ ಸಭೆಯು ಕೆಪಿಸಿಸಿ ಪ್ರಧಾ‌ನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಇನಾಯತ್ ಅಲಿ ಮಾತನಾಡಿ, ಬೂತ್ ಮಟ್ಟದಲ್ಲೂ ಸಭೆಗಳು ನಡೆಯಬೇಕು. ತಿಂಗಳಿಗೊಂದು ಸಭೆ‌ ‌ನಡೆಸಲಾ ಗುತ್ತಿದೆ. ವರಾಹ ಪೌಂಡೇಶನ್ ರೀತಿ ಎಲ್ಲಾ ವಲಯ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸ ಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬ್ಲಾಕ್ ನಿರ್ವಹಿಸಲಿದೆ. ಕಾಂಗ್ರೆಸ್ ಕಾರ್ಯಕರ್ತರು ಗೆದ್ದ ಬಿಜೆಪಿ ಸದಸ್ಯರ ಫೊಟೊಗಳನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ‌. ಕಾಂಗ್ರೆಸ್ ಎಂದರೆ ಸಾಯುವ ವರೆಗೂ ಸಾಯುವವರೆಗೂ ಕಾಂಗ್ರೆಸ್ ಆಗಿರಬೇಕು. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವವರೆಗೆ ಕಾರ್ಯಕರ್ತರು, ನಾಯಕರು ವಿರಮಿಸಬಾರದು ಎಂದು ಇನಾಯತ್ ಅಲಿ ನುಡಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ರಾಜ್ಯದಲ್ಲಿ ನೀಡಿರುವ ಗ್ಯಾರಂಟಿಗಳು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತಗಳಾಗಿ‌ ಬದಲಾಗಿಲ್ಲ. ಮುಂದಿನ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆಯ ಕನ್ನಡಿ ಎಂದರು. ಗುರುಪುರ ಕಾಂಗ್ರೆಸ್ ನ ಭದ್ರಕೋಟೆ, ಇಲ್ಲಿ ಕಾಂಗ್ರೆಸ್ ನ ಹಲವು ಬಲಿಷ್ಠ ನಾಯಕರು ಇದ್ದಾರೆ‌. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗುರುಪುರದಲ್ಲಿ ಅತೀ ಹೆಚ್ಚಿನ ಮತಗಳು ಪಕ್ಷಕ್ಕೆ ದೊರೆಯಲಿದೆ ಎಂದರು. ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಬಿ.ಎಲ್‌. ಪದ್ಮನಾಭ ಪೂಜಾರಿ, ಕೆಪಿಸಿಸಿ ಸದಸ್ಯ ಆರ್.ಕೆ. ಪ್ರಥ್ವಿರಾಜ್‌, ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಬ್ಲಾಕ್ ಮಹಿಳಾ ಘಟಕಾಧ್ಯಕ್ಷೆ ಜಯಲಕ್ಷ್ಮೀ , ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ಪೂಜಾರಿ, ಗುರುಪುರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಷಾ ಗುರುಪುರ, ಯೂತ್ ಬ್ಲಾಕ್‌ ಅಧ್ಯಕ್ಷ ಮುಫೀದ್ ಮೊದಲಾದವರು ಇದ್ದರು.

ವಾರ್ತಾ ಭಾರತಿ 24 Dec 2025 7:39 pm

ಉನ್ನಾವೋ ಸಂತ್ರಸ್ತೆಯ ಮೇಲೆ ಪೊಲೀಸರ ದೌರ್ಜನ್ಯ; ಅಪರಾಧಿಗೆ ಜಾಮೀನು, ನಮಗೆ ಸಾವು ಎಂದು ಅಳಲು

ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿರುವ ರಿಯಾಯಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಇದಕ್ಕೂ ಮುನ್ನ ಕೇಂದ್ರ ಪ್ಯಾರಾ ಮಿಲಿಟರಿ ಸಿಬ್ಬಂದಿ ಸಂತ್ರಸ್ತೆಯ ತಾಯಿಯನ್ನು ಅಮಾನವೀಯವಾಗಿ ನಡೆಸಿ ಕೊಂಡ ಘಟನೆ ನಡೆದಿದೆ.

ವಿಜಯ ಕರ್ನಾಟಕ 24 Dec 2025 7:26 pm

ಕಾಪು ಮಾರಿಗುಡಿಗೆ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ

ಕಾಪು: ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಬುಧವಾರ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀಮಾರಿಯಮ್ಮ ದೇವಿಯ ದರುಶನ ಪಡೆದರು. ಈ ಸಂದರ್ಭದಲ್ಲಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ದೇವರ ಅನುಗ್ರಹ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ನನಗೆ ಇದು ಜೀವನದಲ್ಲಿ ಅತ್ಯಂತ ಶ್ರೇಷ್ಠವಾದ ದಿನ, ಇಂತಹ ಚರಿತ್ರೆಯುಳ್ಳ ದೇವಸ್ಥಾನಕ್ಕೆ ಬಂದಿರುವುದರಿಂದ ಮಾನಸಿಕ ನೆಮ್ಮದಿಯ ಅನುಭವ ವಾಗಿದೆ. ಎಲ್ಲಿಯೂ ನಡೆಯದ ರೀತಿಯಲ್ಲಿ ಈ ದೇಗುಲದ ಜೀರ್ಣೋದ್ಧಾರ ನಡೆದಿದೆ, ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು. ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಹುಬ್ಬಳ್ಳಿ ಧಾರವಾಡ ಸಮಿತಿಯ ಸಂಚಾಲಕ ಸುಗ್ಗಿ ಸುಧಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಮನೋಹರ ರಾವ್, ಜಯಲಕ್ಷ್ಮಿ ಎಸ್.ಶೆಟ್ಟಿ, ಚರಿತ ದೇವಾಡಿಗ, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್ ಮತ್ತು ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Dec 2025 7:24 pm

ಜಾಗೃತ ಗ್ರಾಹಕರಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯ: ಸುಮೀಲ ಟಿ. ಮಾಸರೆಡ್ಡಿ

ಉಡುಪಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ವಾರ್ತಾ ಭಾರತಿ 24 Dec 2025 7:21 pm

ಆಸೀಸ್ ನೆಲದಲ್ಲಿ ಆ್ಯಶಸ್ ಸರಣಿ ಸೋತ ಇಂಗ್ಲೆಂಡ್ ತಂಡದ ಕೋಚ್ ಬದಲಿಸಲು ಆಗ್ರಹ; ರವಿ ಶಾಸ್ತ್ರಿ ಹೊಡಿಯುತ್ತಾ ಚಾನ್ಸ್?

Monty Panesar On Ravi Shastri- ಆ್ಯಶಸ್ ಸರಣಿಯನ್ನು ಸೋಲುವುದರೊಂದಿಗೆ ಮಧ್ಯಪಾನದ ಪಾರ್ಟಿ ಮಾಡಿರುವ ಆರೋಪ ಎದುರಿಸುತ್ತಿರುವ ಇಂಗ್ಲೆಂಡ್ ತಂಡ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ಪ್ರಧಾನ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಬದಲಾಯಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆ ಸ್ಥಾನಕ್ಕೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅವರನ್ನು ನೇಮಿಸುವ ಬಗ್ಗೆ ಮಾಜಿ ಸ್ಪಿನ್ನರ್ ಮಾಂಟಿ ಪನಸರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟ ಅನುಭವ ಶಾಸ್ತ್ರಿ ಅವರಿಗಿದೆ.

ವಿಜಯ ಕರ್ನಾಟಕ 24 Dec 2025 7:04 pm

ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಪ್ರಚಾರಕ್ಕೆ ಯು.ಟಿ. ಖಾದರ್ ಚಾಲನೆ

ಮಂಗಳೂರು, ಡಿ.24: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2026ರ ಜನವರಿ 4ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಭಿತ್ರಿಪತ್ರ ಬಿಡುಗಡೆಯ ಮೂಲಕ ಸ್ಪೀಕರ್ ಯು.ಟಿ. ಖಾದರ್ ಬುಧವಾರ ಪ್ರಚಾರಕ್ಕೆ ಚಾಲನೆ ನೀಡಿದರು. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಸದಸ್ಯರಾದ ಮುಹಮ್ಮದ್ ಅಲಿ ಉಚ್ಚಿಲ್, ಯು.ಎಚ್. ಖಾಲಿದ್ ಉಜಿರೆ, ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ. ಸಾಹುಲ್ ಹಮೀದ್, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಎಸ್.ಎಂ.ಅಝೀಝ್ ಕೈಕಂಬ, ಅಬ್ದುಲ್ ಜಲೀಲ್ ಅರಳ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸದಸ್ಯ ಇಖ್ವಾನ್ ಅಹ್ಮದ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Dec 2025 6:59 pm

ಮಂಗಳೂರು: ಮುಹಿಮ್ಮಾತ್ ಪ್ರಚಾರ ಉದ್ಘಾಟನೆ, ಹಿಮಮಿ ಸಂಗಮ

ಮಂಗಳೂರು, ಡಿ.24: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡು ಇದರ ಸಂಸ್ಥಾಪಕ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಳ್‌ರ 20ನೇ ಉರೂಸ್ ಹಾಗೂ 2026ರ ಜನವರಿ 28-31ರವರೆಗೆ ನಡೆಯಲಿ ರುವ ಮುಹಿಮ್ಮಾತ್ ಸನದು ದಾನ ಸಮ್ಮೇಳನದ ಪ್ರಚಾರ ಉದ್ಘಾಟನಾ ಸಮಾವೇಶ ಮತ್ತು ಹಿಮಮೀಸ್ ಸಂಗಮವು ಮಂಗಳವಾರ ನಗರದ ಪಂಪ್‌ವೆಲ್ ಸಮೀಪದ ಯುನಿಕ್ಸ್ ಬಿಲ್ಡಿಂಗ್‌ನಲ್ಲಿ ಜರುಗಿತು. ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಳ್ ನಾಯಕತ್ವ ವಹಿಸಿದರು. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಶರಫುದ್ದೀನ್ ತಂಳ್ ಪರೀದ್‌ನಗರ ದುಆದೊಂದಿಗೆ ಪ್ರಾರಂಭಗೊಂಡಿತು. ಕೇರಳ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಿಎಸ್ ಅಬ್ದುಲ್ಲ ಕುಂಞ ಫೈಝಿ ಉದ್ಘಾಟಿಸಿದರು. ಕಾರ್ಯದರ್ಶಿ ಮುನೀರ್ ತಂಳ್ ಅವರಯ ತ್ವಾಹಿರುಲ್ ಅಹ್ದಲ್ ತಂಳ್‌ರ ಜೀವನದ ಬಗ್ಗೆ ವಿವರಿಸಿದರು. ಕೆಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿದರು. ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಪ್ರಾಸ್ತಾವಿಕವಾಗಿ ಮಾತಾಡಿದರು. ಹಿಮಮಿಗಳಿಗೆ ಮುಹೀಸುನ್ನ ಸಾರಥಿ ಕೆಎಂ ಮುಸ್ತಫಾ ನಯೀಮಿ ವಿಷಯ ಮಂಡಿಸಿದರು. ವೇದಿಕೆಯಲ್ಲಿ ಮುಹಿಮ್ಮಾತ್ ಗುರುಗಳಾದ ಅಬ್ದುರ‌್ರಹ್ಮಾನ್ ಅಹ್ಸನಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಪೀಣ್ಯ, ಮುಹಿಮ್ಮಾತ್‌ನಿಂದ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರು, ಅಬ್ದುಲ್ ಅಝೀಝ್ ಹಿಮಮಿ ಗೋಸಾಡ, ಅಬ್ದುಲ್ ಖಾದರ್ ಜಲಾಲಿ, ಸಯ್ಯಿದ್ ಅಝ್‌ಹರ್ ತಂಳ್, ಹಾಜಿ ಅಮೀರ್ ಆಲಿ ಚೂರಿ, ಕೋಶಾಧಿಕಾರಿ, ಮುಹಮ್ಮದ್ ಅಶ್ರಫ್ ಸಖಾಫಿ ಉಳುವಾರ್, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಕೆಎಂ ಸಿದ್ದೀಕ್ ಮೋಂಟುಗೋಳಿ, ಕರ್ನಾಟಕ ಯೋಜನಾ ಸಮಿತಿಯ ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸಾಕ್ ಹಾಜಿ ಬೊಳ್ಳಾಯಿ, ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಸಲೀಂ ಕನ್ಯಾಡಿ, ಸಲಾಂ ಮದನಿ ಗಡುಕಲ್ಲು ಉಪಸ್ಥಿತರಿದ್ದರು. ಕೆ.ಕೆ. ಅಶ್ರಫ್ ಸಖಾಫಿ ವಂದಿಸಿದರು.

ವಾರ್ತಾ ಭಾರತಿ 24 Dec 2025 6:57 pm

ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ತುಮಕೂರು ಜಿಲ್ಲೆಯ ಸಿರಾ ತಾಲೂಕಿನಲ್ಲಿ ನಡೆದಿದೆ. ಘಟನೆಗೆ ಕಾರಣವೇನು ಎಂಬ ಬಗ್ಗೆ ಇದುವರೆಗೂ ಮಾಹಿತಿ ದೊರೆತಿಲ್ಲ. ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಮುದ್ದರಂಗನಹಳ್ಳಿ ಹಾಗೂ ಮೇಲುಕುಂಟೆ ರಸ್ತೆ ಮಧ್ಯದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಂಜುನಾಥ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರು ಸುಟ್ಟು ಹೋಗಿರುವುದನ್ನು ನೋಡಲು ಬಂದ ಸ್ಥಳೀಯರಿಗೆ ಕಾರಿನೊಳಗೆ ಮೃತದೇಹ ಇರುವುದನ್ನು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 24 Dec 2025 6:56 pm

ಕೆಡಿಎಂ- ಎಫ್‌ಕೆಸಿಸಿಐ ನಡುವೆ ʼಎಂಒಯುʼ

ಮಂಗಳೂರು, ಡಿ.24: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಸಂಸ್ಥೆಗಳು ಜಿಲ್ಲಾ ಮಟ್ಟದ ಮತ್ತು ಕ್ಲಸ್ಟರ್ ಮಟ್ಟದ ಅಭಿವೃದ್ಧಿಯ ಮೇಲೆ ಒತ್ತು ನೀಡಿ ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದ ತಿಳುಳಿಕೆ ಪತ್ರಕ್ಕೆ (ಎಂಒಯು) ಬುಧವಾರ ಸಹಿಹಾಕಿವೆ. ಈ ಸಹಯೋಗದ ಮೂಲಕ ಎಫ್‌ಕೆಸಿಸಿಐಯ 30ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳ ಜಾಲ ಮತ್ತು ಕೆಡಿಇಎಂಯ ಕ್ಲಸ್ಟರ್ ಆಧರಿತ ವ್ಯವಸ್ಥೆಯನ್ನು ಬಳಸಿಕೊಂಡು ಮಹಾನಗರಗಳಲ್ಲದ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳ ಡಿಜಿಟಲೀಕರಣ, ಸ್ಟಾರ್ಟಪ್ ಬೆಳವಣಿಗೆ, ಹೂಡಿಕೆ ಸಿದ್ಧತೆ ಮತ್ತು ಉದ್ಯಮ ಶೀಲತೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಾಗುವುದು. ಸಣ್ಣ ಉದ್ಯಮಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮುಂದುವರಿಯಲಾಗುತ್ತದೆ. ಈ ಸಂದರ್ಭ ಮಾತನಾಡಿರುವ ಕೆಡಿಇಎಂನ ಸಿಇಓ ಸಂಜೀವ್ ಕುಮಾರ್ ಗುಪ್ತಾ, ಕರ್ನಾಟಕದ ಡಿಜಿಟಲ್ ಬೆಳವಣಿಗೆಯು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತವಾಗ ಬಾರದು. ರಾಜ್ಯ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಎಫ್‌ಕೆಸಿಸಿಐ ಜೊತೆಗಿನ ಈ ಪಾಲುದಾರಿಕೆಯು ನೀತಿ, ವ್ಯವಸ್ಥೆ ಅಭಿವೃದ್ಧಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಜೋಡಿಸಿ ಈ ಉದ್ದೇಶ ಸಾಧನೆಗೆ ನಮಗೆ ಸಹಾಯ ಮಾಡಲಿದೆ. ಜಿಲ್ಲೆಗಳಲ್ಲಿ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹೂಡಿಕೆಗಳನ್ನು ಸಾಧ್ಯವಾಗಿಸುವುದು, ಉದ್ಯಮಶೀಲತೆಯನ್ನು ವೇಗಗೊಳಿಸುವುದು ಮತ್ತು ತಂತ್ರಜ್ಞಾನ ಆಧರಿತ ಬೆಳವಣಿಗೆ ಉಂಟಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಎಫ್‌ಕೆಸಿಸಿಐಯ ಅಧ್ಯಕ್ಷರಾದ ಉಮಾ ರೆಡ್ಡಿ ಅವರು, ಈ ಒಡಂಬಡಿಕೆಯು ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉದ್ಯಮಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ. ನಮ್ಮ ಜಿಲ್ಲಾ ಚೇಂಬರ್‌ಗಳು ಮತ್ತು ಸದಸ್ಯ ಜಾಲದ ಮೂಲಕ ಕೆಡಿಇಎಂನೊಂದಿಗೆ ಕೆಲಸ ಮಾಡಿ ಉದ್ಯಮಗಳು, ಸ್ಟಾರ್ಟಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ಹೂಡಿಕೆ, ಕೌಶಲ್ಯ ಮತ್ತು ಹೊಸ ಆವಿಷ್ಕಾರ ಅವಕಾಶಗಳನ್ನು ಹೊಂದುವ ಸಂಪರ್ಕ ಒದಗಿಸುತ್ತೇವೆ ಎಂದರು. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಮಾತನಾಡಿ, ರಾಜ್ಯಾದ್ಯಂತ ಸಮತೋಲಿತ ಡಿಜಿಟಲ್ ಬೆಳವಣಿಗೆಯನ್ನು ಆಗುಗೊಳಿಸುವ ಕರ್ನಾಟಕ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿ ಈ ಸಹಭಾಗಿತ್ವ ಮೂಡಿಬಂದಿದೆ ಎಂದರು.

ವಾರ್ತಾ ಭಾರತಿ 24 Dec 2025 6:54 pm

ಡಾ.ಕಾರಂತರು ವಿಜ್ಞಾನ, ಕಲೆ, ಸಾಹಿತ್ಯದ ಸಂಗಮ: ಡಾ. ಐತಾಳ್

ಉಡುಪಿ, ಡಿ.24: ಡಾ.ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಮಕ್ಕಳೊಂದಿಗೆ ಬೆರೆತು ಅವರನ್ನು ತಿದ್ದಿ-ತೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದ ನಿದರ್ಶನವಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಕಾರಂತರು ವಿಜ್ಞಾನ, ಕಲೆ, ಸಾಹಿತ್ಯಗಳ ಸಂಗಮವಾಗಿದ್ದರು ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿ ಕಾರಿ ಡಾ.ರಾಧಾಕೃಷ್ಣ ಎಸ್ ಐತಾಳ್ ಹೇಳಿದ್ದಾರೆ. ಇನ್ನಂಜೆಯ ಎಸ್.ವಿ.ಎಚ್ ಕನ್ನಡ ಮಾಧ್ಯಮ ಪ್ರೌಢ ಶಾಲಾ ಸಭಾಂಗಣ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಶಾಲೆ ಸಹಯೋಗದಲ್ಲಿ ‘ಮಕ್ಕಳಿಗಾಗಿ ಕಾರಂತರು-3’ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಡಾ.ಕಾರಂತರ ಪರಿಚಯ ರಂಗವಲ್ಲಿಯ ಮೂಲಕ ಕಾರ್ಯಕ್ರಮದಲ್ಲಿ ಖ್ಯಾತ ರಂಗವಲ್ಲಿ ಕಲಾವಿದೆ ಡಾ.ಭಾರತಿ ಮರವಂತೆ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಬಾಲ ಪ್ರಪಂಚ, ಪ್ರಾಣಿ ಪ್ರಪಂಚ, ಪಕ್ಷಿಗಳ ಅದ್ಭುತ ಲೋಕ ಪುಸ್ತಕದಲ್ಲಿರುವ ಚಿತ್ರಗಳನ್ನು ರಂಗವಲ್ಲಿಯಲ್ಲಿ ಬಿಡಿಸುವ ವಿಶಿಷ್ಟ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಯಕ್ಷಗಾನ ಕಲೆಯನ್ನು ಪುನರುಜ್ಜೀವನ ಗೊಳಿಸಿದ ಕೀರ್ತಿ ಡಾ.ಶಿವರಾಮ ಕಾರಂತರಿಗೆ ಸಲ್ಲುತ್ತದೆ. ಅವರ ಬರಹ-ಬದುಕು ಇಂದಿನ ಯುವ ಪೀಳಿಗೆಗೆ ಮಾದರಿ. ಕಾರಂತರ ಪುಸ್ತಕಗಳ ಓದುವಿಕೆ ಬದುಕಿಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದ ಡಾ.ಐತಾಳ್, ರಂಗವಲ್ಲಿಯ ಮೂಲಕ ಡಾ.ಶಿವರಾಮ ಕಾರಂತರನ್ನು ಮಕ್ಕಳಿಗೆ ಪರಿಚಯಿಸುವ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮ ಉತ್ತಮ ಅವಕಾಶ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಮಾನಸಿಕ ಆರೋಗ್ಯಕ್ಕೆ ಕಲೆ ಮತ್ತು ಸಾಹಿತ್ಯ ಅದ್ಭುತ ಕೊಡುಗೆಯನ್ನು ನೀಡುತ್ತದೆ. ಓದಿನ ಹವ್ಯಾಸ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಪುಸ್ತಕಗಳ ಓದುವಿಕೆಯ ಕುರಿತು ಆಸಕ್ತಿ ಬೆಳೆಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು. ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯೆ ಡಾ.ಭಾರತಿ ಮರವಂತೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇನ್ನಂಜೆ ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ನಿವೃತ್ತ ಶಿಕ್ಷಕ ಸತ್ಯ ಸಾಯಿ ಪ್ರಸಾದ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್ ಉಪಾಧ್ಯಾಯ ಸ್ವಾಗತಿಸಿ, ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ವಂದಿಸಿದರು.

ವಾರ್ತಾ ಭಾರತಿ 24 Dec 2025 6:46 pm

ಶೃಂಗೇರಿ ಶಾರದಾ ಪೀಠದ ಅಧೀನಕ್ಕೆ ಮೈಸೂರಿನ ಜಿಎಸ್‌ಎಸ್‌ಎಸ್‌: ವಿಧುಶೇಖರ ಭಾರತಿ ಸ್ವಾಮೀಜಿ ಘೋಷಣೆ

ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥೆಗಳು ಈಗ ಶ್ರೀ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ಸಂಸ್ಥೆಗಳು ಹೇಳಿವೆ. ಈ ಐತಿಹಾಸಿಕ ನಿರ್ಧಾರವು 18 ತಿಂಗಳ ಸಮಾಲೋಚನೆಯ ನಂತರ ಕೈಗೊಳ್ಳಲಾಗಿದ್ದು, ಶ್ರೀ ಶೃಂಗೇರಿ ಶಾರದಾ ಪೀಠವು ಸಂಸ್ಥೆಗಳ ಅಭಿವೃದ್ಧಿ ಮತ್ತು ಆಡಳಿತದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದೆ. ಇದು ಸಂಸ್ಥೆಗಳ ಭವಿಷ್ಯಕ್ಕೆ ಹೊಸ ದಾರಿಯನ್ನು ತೆರೆಯಲಿದೆ.

ವಿಜಯ ಕರ್ನಾಟಕ 24 Dec 2025 6:37 pm

ನಿಟ್ಟೆ ಕ್ಯಾಂಪಸ್‌ನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ನಿಟ್ಟೆ: ಕಾರ್ಕಳದ ನಿಟ್ಟೆ ಕ್ಯಾಂಪಸ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಕಳ ಕ್ರೈಸ್ಟ್‌ಕಿಂಗ್ ಚರ್ಚ್‌ನ ಸಹಾಯಕ ಧರ್ಮಗುರು ವಂ.ಅವಿನಾಶ್ ಲೆಸ್ಲೆ ಪಾಯ್ಸ್ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಾ, ಪ್ರೀತಿಯನ್ನು ನೀಡುವ ಮತ್ತು ಹರಡುವ ಮನೋಭಾವ ಸ್ಪೂರ್ತಿದಾಯಕ, ಅನುಕರಣೀಯ ಎಂದರು. ಅತಿಥಿಗಳಾಗಿ ಉಪಸ್ಥಿತರಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್ ಮಾತನಾಡಿ, ಇಂತಹ ಆಚರಣೆಗಳು ಕ್ಯಾಂಪಸ್‌ನಲ್ಲಿ ಒಂದು ರೀತಿಯ ಲವಲವಿಕೆಯನ್ನು ಅರಳಿಸುತ್ತದೆ ಎಂದರು. ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ತಮ್ಮ ಭಾಷಣದಲ್ಲಿ ಏಕತೆ, ಸಹಾನುಭೂತಿ ಮತ್ತು ಕ್ರಿಸ್‌ಮಸ್‌ನ ನಿಜವಾದ ಸಾರವನ್ನು ವಿವರಿಸಿದರು. ವೇದಿಕೆಯಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಪ್ರಾಂಶುಪಾಲರು, ವಿದ್ಯಾರ್ಥಿ ವಸತಿಗೃಹದ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮ ಹಾಡುಗಾರಿಕೆ, ನಾಟಕ ಮತ್ತು ಸಾಂಸ್ಕೃತಿಕ ನೃತ್ಯಗಳು ಸೇರಿದಂತೆ ವಿವಿಧ ಪ್ರದರ್ಶನಗಳನ್ನು ಒಳಗೊಂಡಿತ್ತು.

ವಾರ್ತಾ ಭಾರತಿ 24 Dec 2025 6:35 pm

ಕ್ರಿಸ್‌ಮಸ್: ಉಡುಪಿ ಧರ್ಮಾಧ್ಯಕ್ಷರ ಸಂದೇಶ

ಕ್ರಿಸ್ತಜಯಂತಿ, ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ. ಕ್ರಿಸ್ತ ಜಯಂತಿ ದೇವನ ಅನುಪಮ ಪ್ರೀತಿಯ ರೀತಿ. ಮಮತೆ, ಮಮಕಾರದ ಆಗರವಾಗಿರುವ ಆ ದೇವರ ಪ್ರೀತಿಯನ್ನು ಅನುಭವಿಸಿ ನಾವದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ. ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ. ಇನಿತು ಜಡ ನಾನು ಬಂದ ಚೇತನ ನೀನು ನಿನ್ನ ಶಕ್ತಿಯ ಬಲದಿ, ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ... ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ, ಚಿರಕಾಲ ಪ್ರಜ್ವಲಿಸಿ ಬೆಳಗುವಂತೆ ಜಿ.ಎಸ್. ಶಿವರುದ್ರಪ್ಪನವರ ಅದ್ಬುತ ಸಾಲುಗಳಿವು. ಬದುಕಿಗೆ ಬೆಳಕಿನ ಮಹತ್ವವನ್ನು ಸಾರುವ ನುಡಿಗಳಿವು. ಬಂದರೇಸು ಧರೆಗೆ ಕತ್ತಲು ತುಂಬಿದ ಜಗಕೆ, ಶಾಂತಿ ಪ್ರೀತಿ ನೀಡಲು ಸೂರ್ಯ ಮುಳುಗಿ ಕತ್ತಲು ಜಗತ್ತನ್ನು ಆವರಿಸಿದಾಗ, ಕ್ರಿಸ್ಮಸ್ ನಡುರಾತ್ರಿಯಲ್ಲಿ ಬೆಳಕಿನ ಆಗಮನವಾಯಿತು. ಬೆಳಕಿನಲ್ಲಿ ನಡೆಯಲು, ಬೆಳಕಿನ ರಾಜ್ಯದ ಸದಸ್ಯರಾಗಲು ಕ್ರಿಸ್ತ ಜಯಂತಿ ಪ್ರೇರಣೆಯಾಯಿತು. ಕತ್ತಲ ಬದುಕಿಗೆ ಬೆಳಕಿನ ಆಹ್ವಾನವಾಯಿತು. ನೀರಸ ಬದುಕಿಗೆ ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು. ಪ್ರಭುಯೇಸು ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿ ಯಾಗಿ ಆಲಂಗಿಸಿ ಪ್ರೀತಿಯ ಸಿಂಚನವೆರೆದ ಹಬ್ಬ. ಕ್ರಿಸ್ಮಸ್, ನಮ್ಮ ಬದುಕಿನ ಬೆಳಕಿನ ಹಬ್ಬ. ಕ್ರಿಸ್ತ ಜಯಂತಿಯಲ್ಲಿನ ಜಗಜ್ಯೋತಿ ಯೇಸು ನಮ್ಮ ಹೃದಯಲ್ಲಿ ಜನಿಸಲಿ. ಅವರ ಪ್ರಭೆಯಿಂದ ಪುಳಕಿತರಾಗಿ, ಸ್ವಾರ್ಥ ದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆ ಯಿಂದ ನಾವು ಬದುಕುವಂತಾಗಲಿ. ಸಹೋದರತ್ವ, ಸಾಮರಸ್ಯದ ಬದುಕು ನಮ್ಮದಾಗಲಿ. ನಿಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. -ಜೆರಾಲ್ಡ್ ಲೋಬೊ, ಧರ್ಮಾಧ್ಯಕ್ಷರು ಉಡುಪಿ.

ವಾರ್ತಾ ಭಾರತಿ 24 Dec 2025 6:34 pm

Bescom Power Cut: ಬೆಂಗಳೂರಿನ ರಾಜಾಜಿನಗರ ಸೇರಿ 40 ಕ್ಕೂ ಅಧಿಕ ಬಡಾವಣೆಗಳಲ್ಲಿ 7 ದಿನ ವಿದ್ಯುತ್ ವ್ಯತ್ಯಯ! ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದೆ. ಡಿಸೆಂಬರ್ 26 ರಿಂದ 7 ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಟ್ಟಿಗೇನಹಳ್ಳಿ, ಚಂದ್ರಾಲೇಔಟ್, ಬಾಗಲೂರು ಕ್ರಾಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನತೆ ಸಹಕರಿಸುವಂತೆ ಕೋರಲಾಗಿದೆ.

ವಿಜಯ ಕರ್ನಾಟಕ 24 Dec 2025 6:29 pm

ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿಲ್ಲ, ಉತ್ತರ ಕರ್ನಾಟಕಕ್ಕೆ ಹೊಸ ಯೋಜನೆ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಕೇಂದ್ರ ಸರ್ಕಾರಿ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸುತ್ತಿಲ್ಲ. ಕೇಂದ್ರಕ್ಕೆ ಬಿಲ್‌ ನೀಡದೆ ಅನುದಾನ ತಡೆಹಿಡಿಯಲಾಗಿದೆ. ರೈಲ್ವೆ, ಕೆರೆ ಮೊದಲಾದವುಗಳಿಗೆ ಭೂಮಿ ನೀಡಿಲ್ಲ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಸರ್ಕಾರ ಪ್ರಸ್ತಾವಗಳನ್ನು ತಿರಸ್ಕಾರ ಮಾಡಿದ್ದಾರೆಯೇ ಹೊರತು ಅನುದಾನ ನೀಡುತ್ತೇನೆಂದು ಭರವಸೆ ನೀಡಿಲ್ಲ. ಈ ಸರ್ಕಾರದಿಂದ ಎಂದಿಗೂ ನಿಯೋಗ ಹೋಗಿ ಕೇಂದ್ರದ ಜೊತೆ ಚರ್ಚೆ ಮಾಡಿಯೇ ಇಲ್ಲ. ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 24 Dec 2025 6:25 pm

ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ: ಡಿಕೆಶಿ

​​​ಪಕ್ಷದಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿರಬೇಕು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ ಇಡೀ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂಬುದು ಪ್ರಿಯಾಂಕಾ ಗಾಂಧಿ ಅವರ ಗುರಿಯಾಗಿದೆ. ಅದಕ್ಕೆ ಅವರು ಶ್ರಮಿಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಈ ಕುರಿತಾಗಿ ಅವರು ಏನೆಲ್ಲಾ ವಿಚಾರ ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 24 Dec 2025 6:25 pm

ಅಸಾಧಾರಣ ಸಂದರ್ಭಗಳಲ್ಲಿ ವಿದ್ಯುತ್‌ ಉತ್ಪಾದಕರಿಗೆ ರಾಜ್ಯ ಸರ್ಕಾರಗಳೂ ಆದೇಶ ನೀಡಬಹುದು: ಹೈಕೋರ್ಟ್‌

ಬೆಂಗಳೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಉಂಟಾಗಿದ್ದ ವಿದ್ಯುತ್‌ ಕೊರತೆ ಸರಿದೂಗಿಸಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳು ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ಸರ್ಕಾರದ ಗ್ರಿಡ್‌ಗೆ ಪೂರೈಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್, ಅಸಾಧಾರಣ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರಕ್ಕೆ ಇರುವಂತೆ ರಾಜ್ಯ ಸರ್ಕಾರಕ್ಕೂ ಅಂಥ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಸರ್ಕಾರದ ಗ್ರಿಡ್‌ಗೆ ಪೂರೈಸುವಂತೆ ಹೊರಡಿಸಲಾಗಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿದ್ಯುತ್‌ ಕೊರತೆಯಂಥ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯದ ವ್ಯಾಪ್ತಿಯಲ್ಲಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ರಾಜ್ಯದ ಗ್ರಿಡ್‌ಗೆ ವಿದ್ಯುತ್‌ ಪೂರೈಸುವಂತೆ ಆದೇಶಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇರುವಂತೆ ವಿದ್ಯುತ್‌ ಕಾಯ್ದೆ ಸೆಕ್ಷನ್‌ 11ರ ಅಡಿ ರಾಜ್ಯ ಸರ್ಕಾರಕ್ಕೂ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಕಂಪನಿಗಳು ವಿದ್ಯುತ್‌ ಪೂರೈಸಿದರೂ ಕೆಲವು ಸಂದರ್ಭದಲ್ಲಿ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗದ ಅಡಿ ಸೂಕ್ತ ನಿರ್ದೇಶನ ಮತ್ತು ಪರಿಹಾರ ಖಾತ್ರಿಪಡಿಸಲು ರಾಜ್ಯ ಸರ್ಕಾರವೇ ಸೂಕ್ತ ಸರ್ಕಾರವಾಗಿದೆ ಎಂಬುದು ಕಾಯ್ದೆಯ ಸೆಕ್ಷನ್‌ 11ರ ಸುಸಂಬದ್ಧ ವ್ಯಾಖ್ಯಾನವಾಗಿದೆ. ಸೆಕ್ಷನ್ 11ರ ಪ್ರಕಾರ ಅಸಾಧಾರಣ ಸಂದರ್ಭ, ಸನ್ನಿವೇಶಗಳು ಪ್ರಾದೇಶಿಕ ಸ್ವರೂಪದ್ದಾಗಿದ್ದು, ನಿರ್ದಿಷ್ಟ ಬಿಕ್ಕಟ್ಟುಗಳ ಸಮಯದಲ್ಲಿ ರಾಜ್ಯದೊಳಗೆ ಭೌತಿಕವಾಗಿ ನೆಲೆಗೊಂಡಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ನೀಡುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಪ್ರಕರಣದ ಹಿನ್ನೆಲೆ: ಮುಂಗಾರು ವೈಫಲ್ಯದಿಂದ ಜಲಾಶಯಗಳು ಭರ್ತಿಯಾಗದೇ ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗಿ ರಾಜ್ಯ ಸರ್ಕಾರಕ್ಕೆ 3,000-3,500 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಕೊರತೆಯಾಗಿತ್ತು. ಇದರಿಂದ ರಾಜ್ಯ ಸರ್ಕಾರ ಪ್ರತಿ ಯೂನಿಟ್‌ಗೆ 4.86 ರೂ. ನಂತೆ ತಾತ್ಕಾಲಿಕ ಟಾರಿಫ್‌ ಭಾಗವಾಗಿ ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ಸರ್ಕಾರದ ಗ್ರಿಡ್‌ಗೆ ಪೂರೈಸುವಂತೆ ಎಲ್ಲ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ 2023ರ ಅಕ್ಟೋಬರ್‌ 16ರಂದು ಕಾಯ್ದೆಯ ಸೆಕ್ಷನ್‌ 11ರ ಅಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಎನ್‌ಎಸ್‌ ಶುಗರ್ಸ್‌ ಲಿಮಿಟೆಡ್‌, ಚಾಮುಂಡೇಶ್ವರಿ ಶುಗರ್ಸ್‌ ಲಿಮಿಟೆಡ್‌ ಮತ್ತು ಅಲ್ಟಿಲಿಯಮ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು 2024ರ ಮಾರ್ಚ್‌ 11ರಂದು ಪುರಸ್ಕರಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕಾಯ್ದೆಯ ಸೆಕ್ಷನ್‌ 11ರ ಅಡಿ ಅಸಾಧಾರಣ ಸಂದರ್ಭಗಳಲ್ಲಿ ಅಂತರ ರಾಜ್ಯ ವಿದ್ಯುತ್‌ ಪ್ರಸರಣದಲ್ಲಿ ತೊಡಗಿರುವ ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಸೂಕ್ತ ಸರ್ಕಾರವಾಗಿದೆ ಎಂದು ಆದೇಶಿಸಿತ್ತು. ಜತೆಗೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಿಡ್‌ಗಳು ಷರತ್ತಿಗೆ ಒಳಪಟ್ಟು ರಫ್ತು ಮಾಡುವ ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ರಾಜ್ಯದ ಗ್ರಿಡ್‌ಗಳಿಗೆ ಪೂರೈಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿತ್ತು. ಇದನ್ನು ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠದಲ್ಲಿ ಪ್ರಶ್ನಿಸಿತ್ತು.

ವಾರ್ತಾ ಭಾರತಿ 24 Dec 2025 6:23 pm

ಭಾರತೀಯ ಕಾಗೆಗಳು ವಿಶ್ವದ ಅತಿ ಚತುರ ಪಕ್ಷಿಗಳು ಎನ್ನುವುದು ನಿಮಗೆ ಗೊತ್ತೆ?

ದಟ್ಟಾರಣ್ಯದಿಂದ ತೊಡಗಿ ಭಾರತದ ಜನದಟ್ಟಣೆಯ ನಗರ ಪ್ರದೇಶಗಳವರೆಗೆ ಕಾಗೆಗಳು ಎಲ್ಲೆಡೆ ನಿರ್ಭಿಡೆಯಿಂದ ನೆಲಸಿವೆ. ಮಾನವರ ವಸತಿ ನೆಲೆಗಳಲ್ಲಿ ಜೊತೆಗೂಡಿ ಬದುಕುವ ರೀತಿಯಿಂದಲೇ ಅವುಗಳ ಅರಿವಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬಹುದು. ಕಾ ಕಾ ಎಂದು ಕರ್ಕಶ ಸದ್ದು ಮಾಡಿ ನಗರವಿಡೀ ಹಾರಾಡುವ ಪಕ್ಷಿ ಕಾಗೆ ಅತಿ ಬುದ್ಧಿವಂತ ಪಕ್ಷಿಗಳಲ್ಲಿ ಒಂದು ಎನ್ನುವುದು ನಿಮಗೆ ಗೊತ್ತೆ? ಭಾರತೀಯ ಕಾಗೆಗಳು ಭೂಗ್ರಹದಲ್ಲಿರುವ ಅತಿ ಬುದ್ಧಿವಂತ ಪಕ್ಷಿ ಪ್ರಬೇಧಗಳೆಂದು ಮನ್ನಣೆಪಡೆದಿದೆ. ಸಮಸ್ಯೆ ಪರಿಹರಿಸುವ ಚತುರ ಬುದ್ಧಿ, ಪ್ರಬಲ ನೆನಪಿನ ಶಕ್ತಿ ಮತ್ತು ಹೊಂದಿಕೊಳ್ಳುವ ಗುಣಕ್ಕೆ ಕಾಗೆಗಳು ಹೆಸರುವಾಸಿ. ಮಧ್ಯಪ್ರದೇಶದ ಜಬಲ್ಪುರದ ಎನ್ಡಿವಿಎಸ್ಯುನ ಪಶುಸಂಗೋಪನಾ ವೈದ್ಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿರುವ ಡಾ. ದೇವೇಂದ್ರ ಕುಮಾರ್ ಗುಪ್ತಾ ಪ್ರಕಾರ, ಕಾಗೆಗಳು ಕೆಲವೊಂದು ಸಸ್ತನಿಗಳಿಗೆ ಸ್ಪರ್ಧಿಯಾಗುವಂತಹ ಅರಿವಿನ ಸಾಮರ್ಥ್ಯವನ್ನು ಹೊಂದಿವೆ. ನೈಸರ್ಗಿಕ ಜಗತ್ತಿನಲ್ಲಿ ಚತುರ ಬುದ್ಧಿಗೆ ಅತ್ಯಂತ ಆಕರ್ಷಕ ಉದಾಹರಣೆ ಕಾಗೆ. ಕಾಗೆಗಳು ಅತಿ ಚತುರ ಬುದ್ಧಿ ಹೊಂದಿರಲು ಕಾರಣವೇನು?: ಅತ್ಯಾಧುನಿಕ ರೀತಿಯಲ್ಲಿ ಸಮಸ್ಯೆ ಪರಿಹರಿಸುವ ಚತುರ ಬುದ್ಧಿ, ಪ್ರಬಲ ನೆನಪಿನ ಶಕ್ತಿ ಮತ್ತು ಹೊಂದಿಕೊಳ್ಳುವ ಗುಣಕ್ಕೆ ಕಾಗೆಗಳು ಹೆಸರುವಾಸಿ. ಅಂಟಾರ್ಟಿಕ ಹೊರತುಪಡಿಸಿ ಪ್ರತಿ ಖಂಡದಲ್ಲೂ ಸಿಗುವ ಪಕ್ಷಿ ಕಾಗೆ. ಹೀಗಾಗಿ ವಿವಿಧ ಪರಿಸರಗಳಿಗೆ ಒಗ್ಗಿ ಬದುಕುವ ಛಾತಿ ಅವುಗಳಲ್ಲಿವೆ. ದಟ್ಟಾರಣ್ಯದಿಂದ ತೊಡಗಿ ಭಾರತೀಯ ನಗರ ಪ್ರದೇಶಗಳವೆಗೆ ಎಲ್ಲೆಡೆ ನಿರ್ಭಿಡೆಯಿಂದ ನೆಲಸಿವೆ. “ಮಾನವರ ವಸತಿ ನೆಲೆಗಳಲ್ಲಿ ಜೊತೆಗೂಡಿ ಬದುಕುವ ರೀತಿಯಿಂದಲೇ ಅವುಗಳ ಅರಿವಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬಹುದು” ಎನ್ನುತ್ತಾರೆ ಡಾ ಗುಪ್ತಾ. ಸಾಧನಗಳನ್ನು ಬಳಸಿಕೊಳ್ಳುವುದು ಮತ್ತು ತಯಾರಿಸುವುದೇ ಕಾಗೆಗಳ ಬುದ್ಧಿವಂತಿಕೆಯ ಅತ್ಯಂತ ಗಮನಾರ್ಹ ವಿಷಯ. ಕಾಗೆಗಳು ತಲುಪಲು ಕಷ್ಟವಾಗಿರುವ ಸ್ಥಳದಿಂದ ಆಹಾರವನ್ನು ಪಡೆಯಲು ರೆಂಬೆ, ತಂತಿಗಳು ಅಥವಾ ಎಲೆಗಳನ್ನು ಮಾರ್ಪಡಿಸಬಲ್ಲವು. “ಸಾಧನಗಳ ಬಳಕೆ ಅರಿವಿನ ಅತ್ಯಾಧುನಿಕ ಲಕ್ಷಣ ಮತ್ತು ಕಾಗೆಗಳು ಅತ್ಯದ್ಭುತವಾದ ನಿಖರತೆಯಿಂದ ಈ ಸಾಮರ್ಥ್ಯವನ್ನು ಪ್ರದರ್ಶಿಸಬಲ್ಲವು” ಎಂದು ವಿವರಿಸುತ್ತಾರೆ ಡಾ. ಗುಪ್ತಾ. ಸಂಕೀರ್ಣ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲವು?: ಸಹಜ ಪ್ರವೃತ್ತಿ ಅಥವಾ ಸರಳವಾದ ಪ್ರಯತ್ನ ಮತ್ತು ದೋಷವನ್ನು ಮೀರಿ ಸಮಸ್ಯೆ ಪರಿಹಾರದ ಸಾಮರ್ಥ್ಯವನ್ನು ಕಾಗೆಗಳು ಪ್ರದರ್ಶಿಸಿವೆ. ಕಾರಣ ಮತ್ತು ಪರಿಣಾಮದ ಸಂಬಂಧವನ್ನು ಕಾಗೆಗಳು ಅರ್ಥಮಾಡಿಕೊಳ್ಳಬಲ್ಲವು. ಹೀಗಾಗಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಕಾಗೆಗಳ ವರ್ತನೆಯಲ್ಲಿ ಅತಿ ಮುಖ್ಯವಾದ ಅಧ್ಯಯನವೊಂದರಲ್ಲಿ, ಕಾಗೆಗಳು ವಾಹನ ದಟ್ಟನೆಯ ರಸ್ತೆಯ ಮೇಲೆ ಒಡೆಯಲಾಗದ ಕಾಯಿಗಳನ್ನು ಹಾಕಿ ವಾಹನಗಳು ಅದರ ಮೇಲೆ ಹಾದು ಹೋದಾಗ ಅವು ಒಡೆದು ಹೋಗುವುದಕ್ಕೆ ಕಾದು ನಿಂತು ತಿಂದಿರುವ ಉದಾಹರಣೆಯಿದೆ. ಇಂತಹ ವರ್ತನೆಗಳು ಯೋಜನೆ ರೂಪಿಸುವುದು ಮತ್ತು ಸ್ಮರಣೆಯ ಕೌಶಲ್ಯವನ್ನು ಸೂಚಿಸುತ್ತದೆ. ಅವು ಸಸ್ತನಿ ವರ್ಗದ ಪ್ರಾಣಿಗಳಿಗೆ ಮಾತ್ರ ಇರುವ ಅರಿವಿನ ಚಹರೆಗಳಾಗಿವೆ. ಕಾಗೆಗಳು ಬಹು ಹಂತದ ಒಗಟುಗಳನ್ನು ಪರಿಹರಿಸಬಲ್ಲವು. ಪರಿಹಾರವನ್ನು ನೆನಪಿನಲ್ಲಿಟ್ಟು ಹೊಸ ಪರಿಸ್ಥಿತಿಗಳಿಗೆ ಅವನ್ನು ಒಡ್ಡುವುದು ಕೂಡ ಅರಿವಿನ ಸಾಮರ್ಥ್ಯವಾಗಿದೆ. ಭಾರತೀಯ ಕಾಗೆಗಳು ಹೆಚ್ಚು ಚತುರ? ಭಾರತೀಯ ಕಾಗೆಗಳು, ಮುಖ್ಯವಾಗಿ, ಮನೆ ಸುತ್ತಮುತ್ತ ಇರುವ ಕಾಗೆಗಳು ಸಂಕೀರ್ಣವಾದ ನಗರ ಪರಿಸರಕ್ಕೆ ಒಡ್ಡಿಕೊಂಡಿರುತ್ತವೆ. ಮಾನವರ ಜೀವನವನ್ನು ಗಮನಿಸಿ ಕಲಿಯುವುದು, ಆಹಾರದ ಅವಕಾಶವನ್ನು ಗುರುತಿಸುವುದು ಮತ್ತು ಅನುಭವದಿಂದ ವರ್ತನೆಯನ್ನು ಸುಧಾರಿಸಿಕೊಳ್ಳುವುದು ಮೊದಲಾದ ಚತುರಬುದ್ಧಿಯ ಹೊಂದಾಣಿಕೆಗಳಲ್ಲಿ ಅವುಗಳ ಯಶಸ್ಸು ಅಡಗಿದೆ. ಕಾಗೆಗಳು ಸಾಮಾನ್ಯ ಪಕ್ಷಿಗಳಲ್ಲ. ಜೈವಿಕ ಪರಿಸರದಲ್ಲಿ ಅವು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ ಅರಿವಿನ ಸಾಮರ್ಥ್ಯಕ್ಕೆ ಅತಿ ಮುಖ್ಯ ಒಳನೋಟಗಳನ್ನು ಕೊಡುತ್ತವೆ. ಕಾಗೆಗಳ ಬುದ್ಧಿವಂತಿಕೆಯನ್ನು ಅರ್ಥಮಾಡಿಕೊಳ್ಳುವುದೇ ಪಕ್ಷಿಗಳ ಕುರಿತಂತೆ ನಮ್ಮ ಜ್ಞಾನಕ್ಕೆ ಅತಿದೊಡ್ಡ ಸವಾಲು. ಜೀವವಿಕಾಸವು ಬುದ್ಧಿಮತ್ತೆಯನ್ನು ವೈವಿಧ್ಯಮಯ ರೂಪಗಳಲ್ಲಿ ಹೇಗೆ ನಿರೂಪಿಸುತ್ತದೆ ಎನ್ನುವುದನ್ನು ಮುಖ್ಯವಾಗಿ ತೋರಿಸುತ್ತದೆ ಎನ್ನುತ್ತಾರೆ ಡಾ. ಗುಪ್ತಾ. ಕೃಪೆ: indianexpress.com

ವಾರ್ತಾ ಭಾರತಿ 24 Dec 2025 6:19 pm

ಚಿನ್ನ-ಬೆಳ್ಳಿಯ ಓಟವನ್ನೇ ಮೀರಿಸಿದೆ ಈ ಅಮೂಲ್ಯ ಲೋಹ, ಒಂದೇ ವರ್ಷದಲ್ಲಿ 140% ಏರಿಕೆ, ಹೂಡಿಕೆದಾರರು ಫುಲ್ ಖುಷ್!

2025ನೇ ಇಸವಿಯು ಹೂಡಿಕೆದಾರರ ಪಾಲಿಗೆ ಅಚ್ಚರಿಯ ವರ್ಷವಾಗಿದೆ. ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಎಲ್ಲರ ಕಣ್ಣಿರುತ್ತದೆ. ಆದರೆ, ಈ ಬಾರಿ ಪ್ಲಾಟಿನಂ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ವರ್ಷದ ಆರಂಭದಲ್ಲಿ ಪ್ರತಿ ಔನ್ಸ್‌ಗೆ 1,000 ಡಾಲರ್‌ಗಿಂತ ಕಡಿಮೆ ಇದ್ದ ಪ್ಲಾಟಿನಂ ಬೆಲೆ, ಈಗ 2,300ರ ಗಡಿ ದಾಟಿದೆ. ಇದು ಸುಮಾರು ಶೇ. 140ರಷ್ಟು ಏರಿಕೆಯಾಗಿದ್ದು, ಚಿನ್ನದ ಗಳಿಕೆಗಿಂತಲೂ (ಸುಮಾರು ಶೇ. 70) ಅಧಿಕವಾಗಿದೆ.

ವಿಜಯ ಕರ್ನಾಟಕ 24 Dec 2025 6:11 pm

ಮುಂಬೈನಲ್ಲಿ ವೃದ್ಧನಿಗೆ ‘ಡಿಜಿಟಲ್ ಅರೆಸ್ಟ್’; 9 ಕೋಟಿ ರೂ. ಕಳೆದುಕೊಂಡ 85 ವರ್ಷದ ವೃದ್ಧ!

ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ನೀಡುತ್ತಿದ್ದರೂ ಸಹ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. 85 ವರ್ಷದ ಹಿರಿಯ ನಾಗರಿಕರೊಬ್ಬರು ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ ಒಂಬತ್ತು ಕೋಟಿ ಕಳೆದುಕೊಂಡ ಘಟನೆ ಮುಂಬೈನ ಠಾಕೂರ್‌ದ್ವಾರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕರಿಗೆ ಧನಸಹಾಯ ಮಾಡಿ ಎಂಬ ಸುಳ್ಳು ಆರೋಪಗಳನ್ನು ವೃದ್ಧನ ಮೇಲೆ ಹೊರೆಸಿ, ಯಾರಿಗೂ ವಿಷಯ ತಿಳಿಸದಂತೆ ವಂಚಿಸಿರುವುದುಬೆಳಕಿಗೆ ಬಂದಿದೆ. ಬ್ಯಾಂಗ್‌ ಉದ್ಯೋಗಿಯೊಬ್ಬರ ಜಾಗರೂಕತೆಯಿಂದ ಮೂರು ಕೋಟಿ ಲೂಟಿ ಮಾಡುವುದು ತಪ್ಪಿದೆ. ಸದ್ಯ ಅವರು ಸೈಬರ್‌ಕ್ರೈಂಗೆ ದೂರನ್ನು ನೀಡಿದ್ದಾರೆ.

ವಿಜಯ ಕರ್ನಾಟಕ 24 Dec 2025 6:08 pm

ತುಮಕೂರು, ಚಿಕ್ಕಬಳ್ಳಾಪುರ, ಬಿಡದಿ, ಹೊಸಕೋಟೆವರೆಗೂ ಮೆಟ್ರೋ :‌ ಬಿಗ್‌ ಅಪ್‌ಡೇಟ್‌ ಕೊಟ್ಟ ಡಿ ಕೆ ಶಿವಕುಮಾರ್‌

ನವದೆಹಲಿ: ಮೂರನೇ ಹಂತದ 3ಎ ಯೋಜನೆಯಡಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿಲೋಮೀಟರ್ ಉದ್ದದ 28 ನಿಲ್ದಾಣಗಳ ಮಾರ್ಗಕ್ಕೆ 28,405 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೆಂಗಳೂರು, ಬಿಡದಿ, ಮೈಸೂರು, ಕನಕಪುರ, ನೆಲಮಂಗಲ, ತುಮಕೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಕೋಲಾರದಂತಹ ಪಟ್ಟಣಗಳಿಗೆ ಆರ್ಆರ್‌ಟಿಎಸ್ ಡಿಪಿಆರ್ ಸಿದ್ಧಪಡಿಸಲು ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ ಕೆ

ಒನ್ ಇ೦ಡಿಯ 24 Dec 2025 5:58 pm