ಗಿಲ್ಲಿ ನಟನಿಗೆ ಬಿಗ್ ಬಾಸ್ ಕಿರೀಟ; ರಕ್ಷಿತಾ ರನ್ನರ್ ಅಪ್
ಬೆಂಗಳೂರು : ಕನ್ನಡದ ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ನಿರೀಕ್ಷೆಯಂತೆ ವಿನ್ನರ್ ಆಗಿದ್ದಾರೆ. ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್ಗಳನ್ನು ಅವರು ಪಡೆದಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ. ಪ್ರತಿ ಸೀಸನ್ನಂತೆಯೇ ಈ ಬಾರಿಯೂ ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ 50 ಲಕ್ಷ ರೂ. ಹಾಗೂ ಮಾರುತಿ ಸುಜುಕಿ ಎಸ್ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
Janardhana Reddy: ನನ್ನ ಮೇಲೆ ಕೊಲೆ ಯತ್ನ; ಬಳ್ಳಾರಿ ಪ್ರಕರಣ ಸಿಬಿಐಗೆ ಕೊಡಲು ಹಿಂದೇಟೇಕೆ?: ಜನಾರ್ದನ ರೆಡ್ಡಿ
ಬೆಂಗಳೂರು: ಸಿದ್ದರಾಮಯ್ಯನವರು ಪ್ರಾಮಾಣಿಕರೆಂದು ಬಿಂಬಿಸಲು, ಈ ರಾಜ್ಯದ ಸಿಎಂ ಆಗಿ ಕಾನೂನು ರಕ್ಷಿಸಲು ನಾನು ನಿಜವಾಗಿಯೂ ಕಂಕಣಬದ್ಧವಾಗಿ ಇದ್ದೇನೆ ಎಂದು ತೋರಿಸಲು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟವರು. ಅಂಥ ಮಹಾನುಭಾವ, ಬಳ್ಳಾರಿಯ ಪ್ರಕರಣವನ್ನು ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಸವಾಲು ಹಾಕಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ
ಹೊಸದಿಲ್ಲಿ: 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡನ್ನೂ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿಗೆ ಮುಕ್ತವಾಗಿರುವುದಾಗಿ ಸಿಪಿಐ(ಎಂ) ತಿಳಿಸಿದೆ. ರವಿವಾರ ತಿರುವನಂತಪುರದಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಟಿಎಂಸಿ ಹಾಗೂ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಿದ್ಧವಿರುವ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸುವುದು ಪಕ್ಷದ ತಂತ್ರವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಕಾಂಗ್ರೆಸ್ ಅನ್ನು ಹೆಸರಿಸದೇ ನೀಡಿದ ಹೇಳಿಕೆಯಲ್ಲಿ ಬಿಜೆಪಿಯೇತರ ಹಾಗೂ ಟಿಎಂಸಿಯೇತರ ಮತಗಳನ್ನು ಏಕೀಕರಿಸುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ನೇತೃತ್ವದ ಒಂದು ಗುಂಪು ಎಡರಂಗದೊಂದಿಗೆ ಮೈತ್ರಿಗೆ ಹಿಂಜರಿದಿದ್ದರೂ, ಇಂತಹ ಒಪ್ಪಂದದಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಹೇಳಿದ್ದರೂ ಸಹ ಸಿಪಿಐ(ಎಂ) ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ಹಾಗೂ ಎಡರಂಗವು 2016 ಮತ್ತು 2021ರ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಐ(ಎಂ) 26 ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಕಾಂಗ್ರೆಸ್ ಹಾಗೂ ಎಡರಂಗ ಎರಡೂ ಶೂನ್ಯ ಸ್ಥಾನಗಳಿಗೆ ಸೀಮಿತವಾಗಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದರೆ, ಎಡಪಕ್ಷಗಳು ಯಾವುದೇ ಸ್ಥಾನ ಗಳಿಸಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದವು. ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪರಸ್ಪರ ಎದುರಾಳಿಗಳಾಗಿರುವ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಪಿಐ(ಎಂ) ಟೀಕೆ ನಡೆಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೇರಳಕ್ಕೆ ನ್ಯಾಯಸಮ್ಮತವಾಗಿ ದೊರಕಬೇಕಾದ ಬಾಕಿಗಳನ್ನು ನಿರಾಕರಿಸುತ್ತಿದ್ದು, ಹಣಕಾಸಿನ ನಿರ್ಬಂಧಗಳನ್ನು ವಿಧಿಸುತ್ತಿರುವುದನ್ನು ಬಹಿರಂಗಪಡಿಸಲಾಗುವುದು ಎಂದು ಪಕ್ಷ ಹೇಳಿದೆ. ಸಂಸತ್ತಿನ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾಗಿದೆ ಎಂದು ಆರೋಪಿಸಿದೆ. ಕೇರಳದಲ್ಲಿ ಕೋಮುವಾದಿ ಆರೆಸ್ಸೆಸ್–ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ಗೆ ಸೈದ್ಧಾಂತಿಕ ಕೊರತೆಗಳಿವೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದ್ದು, ಈ ವಿಚಾರವನ್ನು ಜನರ ಮುಂದೆ ಇಡುವುದಾಗಿ ತಿಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳನ್ನು ಸೋಲಿಸಲು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೊಂದಿಗೆ ಸ್ಪರ್ಧಿಸುವುದಾಗಿ ಸಿಪಿಐ(ಎಂ) ತಿಳಿಸಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಒಕ್ಕೂಟದಲ್ಲಿ ಭಾಗವಹಿಸುವ ಕುರಿತು ಕಾಂಗ್ರೆಸ್ನ ಒಂದು ಭಾಗದಲ್ಲಿ ಗೊಂದಲವಿರುವುದನ್ನೂ ಅದು ಉಲ್ಲೇಖಿಸಿದೆ. ಅದೇ ರೀತಿ, ಅಸ್ಸಾಂನಲ್ಲಿ ಕೋಮುವಾದಿ ಮತ್ತು ವಿಭಜಕ ಬಿಜೆಪಿ ಸರಕಾರವನ್ನು ಸೋಲಿಸಲು ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸುವುದಾಗಿ ಸಿಪಿಐ(ಎಂ) ಹೇಳಿದೆ. ಈಶಾನ್ಯ ರಾಜ್ಯದಲ್ಲಿ ಎಡಪಕ್ಷಗಳು ಈಗಾಗಲೇ ಕಾಂಗ್ರೆಸ್ ಜೊತೆ ಸಹಕರಿಸುತ್ತಿವೆ. ಪುದುಚೇರಿಯಲ್ಲೂ ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಹೊಸೂರು ಏರ್ಪೋರ್ಟ್ ಯೋಜನೆಗೆ ಭಾರೀ ಹಿನ್ನಡೆ, ತಮಿಳುನಾಡು ಪ್ರಸ್ತಾವ ತಿರಸ್ಕರಿಸಿದ ರಕ್ಷಣಾ ಇಲಾಖೆ; ಕಾರಣ ಏನು?
ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಈ ಪ್ರದೇಶದ ವಾಯುಪ್ರದೇಶವು ಎಚ್ಎಎಲ್ ಬಳಕೆಗೆ ಅಗತ್ಯವಿದೆ ಎಂದು ಕಾರಣ ನೀಡಿ, ರಕ್ಷಣಾ ಸಚಿವಾಲಯವು ಯೋಜನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ತಮಿಳುನಾಡು ಸರ್ಕಾರವು ಈ ಹಿಂದೆಯೇ ವಿವರವಾದ ವರದಿ ಸಲ್ಲಿಸಿದ್ದರೂ, ಯಾವುದೇ ಚರ್ಚೆಯಿಲ್ಲದೆ ಮನವಿಯನ್ನು ತಿರಸ್ಕರಿಸಿರುವುದು ಅಧಿಕಾರ ವರ್ಗದಲ್ಲಿ ಅಸಮಾಧಾನ ಮೂಡಿಸಿದೆ.
ಇಂಗ್ಲೆಂಡ್ನಲ್ಲಿ 12ರ ಹರೆಯದ ಜಾಕ್ ಹೌಲ್ಸ್ ಎಂಬ ಬಾಲಕ, ಕಾರು ಚಲಾಯಿಸುತ್ತಿದ್ದ ತಾಯಿ ಪ್ರಜ್ಞೆ ಕಳೆದುಕೊಂಡಾಗ, ಸಮಯೋಚಿತವಾಗಿ ಕಾರಿನ ನಿಯಂತ್ರಣ ಪಡೆದು ತಾಯಿಯನ್ನು ರಕ್ಷಿಸಿದ್ದಾನೆ. ನಿಯಂತ್ರಣ ಕೆಳದುಕೊಂಡು ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಧಾನಗೊಳಿಸಿ ತಡೆಗೋಡೆಗೆ ತಗುಲಿಸಿ ನಿಲ್ಲಿಸಿದ ಈ ಬಾಲಕನ ಧೈರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿಯ ಜೀವ ಉಳಿಸಿದ ಈ ಪುಟ್ಟ ಹೀರೋನ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗಿಗ್ ಕಾರ್ಮಿಕರು, ಮನೆಗೆಲಸದವರಿಗೆ ಮೈಕ್ರೋಕ್ರೆಡಿಟ್ ಯೋಜನೆ: 10,000 ರೂ.ಗಳ ಮೇಲಾಧಾರ ರಹಿತ ಸಾಲ ಮತ್ತು ಉಚಿತ ವಿಮೆ!
ಕೇಂದ್ರ ಸರ್ಕಾರವು ಗಿಗ್ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಮೈಕ್ರೋಕ್ರೆಡಿಟ್ ಯೋಜನೆಯನ್ನು ರೂಪಿಸಿದೆ. ಏಪ್ರಿಲ್ 2026 ರಿಂದ ಜಾರಿಯಾಗುವ ಈ ಯೋಜನೆಯಡಿ, ಯಾವುದೇ ಭದ್ರತೆ ಇಲ್ಲದೆ 10,000 ರೂ. ವರೆಗೆ ಸಾಲ ದೊರೆಯಲಿದೆ. ಸಕಾಲಕ್ಕೆ ಮರುಪಾವತಿಸಿದರೆ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹತೆ ಪಡೆಯಬಹುದು. ಡಿಜಿಟಲ್ ಪಾವತಿಗಳಿಗೆ ಕ್ಯಾಶ್ಬ್ಯಾಕ್ ಸೌಲಭ್ಯವೂ ಲಭ್ಯವಿದೆ. ಈ ಯೋಜನೆಯು ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲಿದೆ.
TVK Vijay: ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಗೆ ನಟ ವಿಜಯ್ ಹಾಜರು
ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ತಮಿಳು ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಅವರು ಇಂದು ಸೋಮವಾರ (ಜನವರಿ 19) ನವದೆಹಲಿಯಲ್ಲಿ ಎರಡನೇ ಸುತ್ತಿನ ಸಿಬಿಐ ವಿಚಾರಣೆಗೆ ಹಾಜರಾದರು. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ಸಂಸ್ಥೆಯು (CBI) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಇಂದು ಬೆಳಗ್ಗೆ
ಬಂಗಾರ ಬಲು ದುಬಾರಿ| ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ಏರಿಕೆ: ಇಂದಿನ ದರವೆಷ್ಟು?
ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಭೌಗೋಳಿಕ-ರಾಜಕೀಯ ಸಂಘರ್ಷದ ನಡುವೆ ಹೂಡಿಕೆದಾರರು ಸುರಕ್ಷಿತ ಚಿನ್ನದ ಬೆಲೆ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಸೋಮವಾರ ಮಾರುಕಟ್ಟೆ ತೆರೆಯುತ್ತಲೇ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ ಬರೋಬ್ಬರಿ 1910 ರೂ. ಏರಿಕೆ ಕಂಡು, ದರ ಗರಿಷ್ಠ ಮಟ್ಟಕ್ಕೇರಿದೆ. ಇದೀಗ ಚಿನ್ನದ ದರ ಸಾರ್ವಕಾಲಿಕ ಏರಿಕೆಯಾಗಿ 1,45,690 ರೂ.ಗೆ ತಲುಪಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ ಜನವರಿ 19ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,569 (+191) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,355 (+175) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,927 (+143) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 14,569 ರೂ. ಆಗಿದ್ದು, ರವಿವಾರ 14,378 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ದಿಢೀರ್ ಪ್ರತೀ ಗ್ರಾಂ ಚಿನ್ನದ ಬೆಲೆ 191 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,355 ರೂ. ಆಗಿದ್ದು, ನಿನ್ನೆ 13,180 ರೂ. ಇತ್ತು. ನಿನ್ನೆಗಿಂತ ಇಂದು 175 ರೂ. ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 10,927 ರೂ. ಆಗಿದ್ದು, ನಿನ್ನೆ 10,784 ರೂ. ಇತ್ತು. ನಿನ್ನೆಗಿಂತ ಇಂದು 143 ರೂ. ಹೆಚ್ಚಳವಾಗಿದೆ. ಭಾರತದಲ್ಲಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ: ಚೆನ್ನೈ: 24 ಕ್ಯಾರೆಟ್ 14,673 ರೂ., 22 ಕ್ಯಾರೆಟ್ 13,450 ರೂ., 18 ಕ್ಯಾರೆಟ್ 11,230 ರೂ. ಮುಂಬೈ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ದಿಲ್ಲಿ: 24 ಕ್ಯಾರೆಟ್ ರೂ14,584 ರೂ., 22 ಕ್ಯಾರೆಟ್ 13,370 ರೂ., 18 ಕ್ಯಾರೆಟ್ 10,942 ರೂ. ಕೋಲ್ಕತ್ತಾ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಬೆಂಗಳೂರು: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಹೈದರಾಬಾದ್: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಕೇರಳ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಪುಣೆ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್13,355 ರೂ., 18 ಕ್ಯಾರೆಟ್ 10,927 ರೂ. ವಡೋದರಾ: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್ 13,360 ರೂ., 18 ಕ್ಯಾರೆಟ್ 10,932 ರೂ. ಅಹಮದಾಬಾದ್: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್13,360 ರೂ., 18 ಕ್ಯಾರೆಟ್ 10,932 ರೂ.
ಬೇಸಿಗೆಗೂ ಮುನ್ನವೇ ಕರ್ನಾಟಕ ಸೇರಿ ಹಿಮಾಲಯದ ತಪ್ಪಲಿನಲ್ಲಿ ಕಾಡ್ಗಿಚ್ಚು; ತಜ್ಞರು ಹೇಳೋದೇನು?
ಕರ್ನಾಟಕ ಮತ್ತು ಹಿಮಾಲಯದ ತಪ್ಪಲಿನಲ್ಲಿ ಒಣಹವೆಯಿಂದಾಗಿ ಇತ್ತೀಚೆಗೆ ಕಾಡ್ಗಿಚ್ಚಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಾನವನ ಹಸ್ತಕ್ಷೇಪ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಅವಘಡ ಸಂಭವಿಸುತ್ತಿದೆ. ಈಹಿಂದೆ ಗ್ರಾಮಸ್ಥರು ಒಣ ಹುಲ್ಲು ಮೇಯಿಸುವ ಕೆಲಸ ಮಾಡುತ್ತಿದ್ದರು. ಆದರೆ, ಈ ಗ ಬದಲಾದ ಜೀವನ ಶೈಲಿಯಿಂದ ಪರಿಸ್ಥಿತಿ ಬಿಗಡಾಯಿಸಿದೆ. ಅಷ್ಟೇ ಅಲ್ಲದೆ, ಒಣ ಹುಲ್ಲಿಗೆ ಜನರು ಬೆಂಕಿ ಹಾಕುವ ಕಾರಣದಿಂದಲೂ ಈ ಪರಿಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.
ಮಂಗಳೂರಿಗೆ ಕಾಲಿಡಲಿದೆ ಜಾಗತಿಕ ದಿಗ್ಗಜ 'ಡೆಲಾಯ್ಟ್', ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ
ಮಂಗಳೂರಿನಲ್ಲಿ ನಡೆದ 'ಟೈಕಾನ್ ಮಂಗಳೂರು 2026' ಸಮಾವೇಶದಲ್ಲಿ ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಇದರ ಭಾಗವಾಗಿ ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು. ವಿಶೇಷವಾಗಿ ಮಂಗಳೂರಿನಲ್ಲಿ ಲಭ್ಯವಿರುವ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಡೆಲಾಯ್ಟ್ ಮಂಗಳೂರಿಗೂ ವಿಸ್ತರಣೆಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಸಾಮರ್ಥ್ಯಕ್ಕೆ ಎಲ್ಲೆಯಿಲ್ಲ: ಶಕ್ತಿ ಸಂವಾದದಲ್ಲಿ ರೂಪಾ ಮೌದ್ಗಿಲ್, ಬಾಲ್ಯದ ಕನಸು, ಸವಾಲುಗಳ ಹಾದಿ ಹೇಗಿತ್ತು
ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಆದರೆ ಇದಕ್ಕೆ ಕಾರಣ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ ಎಂಬುದು ಅವರನ್ನು ಅಧಿಕಾರದಿಂದ ದೂರವಿಡಲು ಹೇಳುವ ಕುಂಟು ನೆಪವಷ್ಟೇ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅಭಿಪ್ರಾಯ ಪಟ್ಟಿದ್ದಾರೆ. ವಿಜಯ ಕರ್ನಾಟಕ ವೆಬ್ ಹಮ್ಮಿಕೊಂಡಿದ್ದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಹಿಳಾ ಸಬಲೀಕರಣದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಲ್ಲದೆ, ಐಪಿಎಸ್ ಅಧಿಕಾರಿಯಾಗಬೇಕೆಂಬ ಅವರ ಬಾಲ್ಯದ ಕನಸು, ಅಧಿಕಾರಿಯಾಗಿ ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ದಟ್ಟ ಮಂಜು, ಭಾರೀ ಶೀತಗಾಳಿ ಮುಂದುವರೆಯುವ ಮುನ್ಸೂಚನೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಟ್ಟ ಮಂಜಿನ ಜೊತೆ ಭಾರೀ ಶೀತಗಾಳಿ ಮುಂದುವರೆದಿದೆ. ಪರಿಣಾಮ ಜನರು ತತ್ತರಿಸಿ ಹೋಗಿದ್ದಾರೆ. ಹಾಗೆಯೇ ಮುಂದಿನ ಹಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 19) ಬೆಳಗ್ಗೆ
ಆನ್ಲೈನ್ ಹೂಡಿಕೆಯ ವಂಚನೆಯಿಂದ 1.98 ಕೋಟಿ ಕಳೆದುಕೊಂಡ ನಿವೃತ್ತ ಸೇನಾ ಕರ್ನಲ್
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಭಾರೀ ಏರಿಕೆಯಾಗಿವೆ. ವಿಶೇಷವಾಗಿ ಹೂಡಿಕೆ ಹಗರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿರುವ ಒಬ್ಬ ನಿವೃತ್ತ ಸೇನಾ ಕರ್ನಲ್ ಇತ್ತೀಚಿನ ಆನ್ಲೈನ್ ಹೂಡಿಕೆ ಯೋಜನೆಯ ಹೆಸರಿನಲ್ಲಿ ವಂಚಕರಿಂದ ₹1.98 ಕೋಟಿ ಹಣ ಕಳೆದುಕೊಂಡಿದ್ದಾರೆ. 71 ವರ್ಷದ ನಿವೃತ್ತ ಭಾರತೀಯ ಸೇನಾ ಕರ್ನಲ್ ಮತ್ತು ಅವರ ಪತ್ನಿಯರು ಆನ್ಲೈನ್ ಹೂಡಿಕೆಯ ಹೆಸರಿನಲ್ಲಿ ಸೈಬರ್
2026ನಲ್ಲಿ ಲಾಂಗ್ ವೀಕೆಂಡ್’ಗಳ ಸುರಿಮಳೆ : ಇಲ್ಲಿದೆ ಸಂಪೂರ್ಣ ಪಟ್ಟಿ - ಟ್ರಿಪ್ ಪ್ಲ್ಯಾನ್ ಮಾಡ್ಕೋತೀರಾ?
Indian Long weekend list : ಹಾಲೀ ವರ್ಷದಲ್ಲಿ ಹಲವು ಹಬ್ಬ ಹರಿದಿನ ಮತ್ತು ರಾಷ್ಟ್ರೀಯ ದಿನಗಳು ವಾರಾಂತ್ಯಕ್ಕೆ ಬಂದಿದೆ. ಹಾಗಾಗಿ, ಪ್ರಮುಖವಾಗಿ ಉದ್ಯೋಗಿಗಳಿಗೆ ವಾರಾಂತ್ಯದ ಲಾಭವನ್ನು ಭರ್ಜರಿಯಾಗಿ ಪಡೆಯುವ ಅವಕಾಶ ಈ ವರ್ಷದಲ್ಲಿದೆ. ಹಾಲೀ ವರ್ಷದಲ್ಲಿ, ವಾರಂತ್ಯಕ್ಕೆ ಹೊಂದಿಕೊಂಡು ಬರುವ ರಜೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಭಾರತ್ ಕೋಕಿಂಕ್ ಕೋಲ್ ಷೇರು 96% ಪ್ರೀಮಿಯಂ ದರದಲ್ಲಿ ಲಿಸ್ಟ್, ಐಪಿಒ ಹೂಡಿಕೆದಾರರಿಗೆ ಜಾಕ್ಪಾಟ್
ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಸೋಮವಾರ ಷೇರು ಮಾರುಕಟ್ಟೆಗೆ ಕಾಲಿಟ್ಟಿದ್ದು, ಹೂಡಿಕೆದಾರರಿಗೆ ಜಾಕ್ಪಾಟ್ ಹೊಡೆದಿದೆ. ಕಂಪನಿಯ ಷೇರುಗಳು ಎನ್ಎಸ್ಇ ಮತ್ತು ಬಿಎಸ್ಇ ಎರಡರಲ್ಲೂ ಶೇ. 95ಕ್ಕೂ ಹೆಚ್ಚು ಪ್ರೀಮಿಯಂ ದರದಲ್ಲಿ ಲಿಸ್ಟ್ ಆಗಿವೆ. ಇದರಿಂದ ಐಪಿಒ ಹಂಚಿಕೆ ಪಡೆದ ಹೂಡಿಕೆದಾರರಿಗೆ ಮೊದಲ ದಿನವೇ ಭಾರಿ ಲಾಭ ಸಿಕ್ಕಂತಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಇದೀಗ 21,000 ಕೋಟಿ ರೂಪಾಯಿ ದಾಟಿದೆ.
ಬಿ.ಎನ್. ರಾವ್-ಅಂಬೇಡ್ಕರ್: ಸಂವಿಧಾನ ರಚಿಸಿದ್ದು ಯಾರು?
ಕೆಲವೇ ತಿಂಗಳ ಅವಧಿಯಲ್ಲಿ ತನ್ನ ಕಾರ್ಯ ಮುಗಿಸಿಕೊಟ್ಟು, ಮ್ಯಾನ್ಮಾರ್ ಸಂವಿಧಾನ ರಚನಾ ಕಾರ್ಯದತ್ತ ಹೊರಟುಹೋದ ರಾವ್ ಅವರನ್ನು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಕಾನೂನು ಅಧ್ಯಯನ ನಡೆಸಿ ಬರೋಬ್ಬರಿ 7,600 ತಿದ್ದುಪಡಿಗಳ ಮೂಲಕ ವಿಸ್ತೃತ ರೂಪ ನೀಡಿದ ಅಂಬೇಡ್ಕರ್ ಅವರಿಗೆ ಸರಿಸಮನೆಂದು ವಾದಿಸಲು ಹೋಗುವುದು ಅಂಬೇಡ್ಕರರಿಗೆ ಮಾಡಿದ ಅವಮಾನವಾಗುವುದಿಲ್ಲ; ಬದಲಿಗೆ, ಇತಿಹಾಸದ ಕುರಿತು ನಮ್ಮ ಅಜ್ಞಾನದ ಪ್ರದರ್ಶನವಾದೀತಷ್ಟೆ. ಭಾಗ - 2 ಸಂವಿಧಾನ ರಚನಾ ಸಭೆಯ ತಮ್ಮ ಅಂತಿಮ ಭಾಷಣದಲ್ಲಿ ಬಿ.ಎನ್. ರಾವ್ ಅವರ ಕೊಡುಗೆಯನ್ನು ಸ್ವತಃ ಅಂಬೇಡ್ಕರ್ ಕೊಂಡಾಡಿದ್ದನ್ನು ಉಲ್ಲೇಖಿಸಿ, ರಾವ್ ಅವರನ್ನು ನಿಜವಾದ ಸಂವಿಧಾನ ಶಿಲ್ಪಿ ಎಂದು ಬಿಂಬಿಸಲು ಹಲವರು ಪ್ರಯತ್ನಿಸುತ್ತಾರೆ. ವಾಸ್ತವವೇನೆಂದರೆ, ಅಂಬೇಡ್ಕರ್ ತಮ್ಮ ಆ ಭಾಷಣದಲ್ಲಿ ರಚನೆಗೆ ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದ್ದರು. ರಚನಾ ಸಮಿತಿಯ ಅಧ್ಯಕ್ಷರಾಗಿ ಅದು ಅವರ ಕರ್ತವ್ಯವೂ ಆಗಿತ್ತು. ಇನ್ನು ಅಧಿಕಾರಿಗಳ ವಿಚಾರಕ್ಕೆ ಬಂದಾಗ, ಬಿ.ಎನ್. ರಾವ್ ಮಾತ್ರವಲ್ಲದೆ, ಪ್ರಧಾನ ಕರಡು ಬರಹಗಾರ ಎಸ್.ಎನ್. ಮುಖರ್ಜಿಯವರನ್ನೂ ಅಂಬೇಡ್ಕರ್ ತುಂಬಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದಾರೆ. ಹಾಗೆ ನೋಡಿದರೆ ಬಿ.ಎನ್. ರಾವ್ ಅವರಿಗಿಂತ ಮುಖರ್ಜಿಯವರ ಪಾತ್ರ ಅಪಾರವಾದುದು. ಅಗತ್ಯಕ್ಕೆ ತಕ್ಕಂತೆ ವಿದೇಶಿ ಕಾನೂನು ಅವಕಾಶಗಳನ್ನು ಕ್ರೋಡೀಕರಿಸಿ ಕೊಡುವಷ್ಟಕ್ಕೆ ರಾವ್ ಅವರ ಕೆಲಸ ಮುಗಿದಿತ್ತು. ಆದರೆ ಅಂಬೇಡ್ಕರರು ಅವುಗಳನ್ನು ಅಧ್ಯಯನ ಮಾಡಿ, ಭಾರತದ ಸಂಕೀರ್ಣ ಸಮಾಜಕ್ಕೆ ತಕ್ಕಂತೆ ತಿದ್ದುಪಡಿ-ವಿಸ್ತರಣೆಗಳಿಗೆ ಒಳಪಡಿಸಿ ಸಭೆಯಲ್ಲಿ ಮಂಡಿಸಿದಾಗ, ವಿಸ್ತೃತ ಚರ್ಚೆ ನಡೆದವು. ಕೆಲವರು ಆಕ್ಷೇಪ ವ್ಯಕ್ತಪಡಿಸಿದರು, ಕೆಲವರು ಸುಧಾರಣೆಗಳನ್ನು ಸೂಚಿಸಿದರು. ಅನುದಿನದ ಸಭೆಯ ಚರ್ಚೆಯಲ್ಲಿ ಹಾಜರಿದ್ದು, ಅಷ್ಟೂ ಚರ್ಚೆಗಳನ್ನು ದಾಖಲಿಸಿಕೊಂಡು, ಸಭೆಯ ಅಂತಿಮ ತೀರ್ಮಾನದಂತೆ ಅನುಚ್ಛೇದಗಳನ್ನು ಕಾನೂನಿನ ಪರಿಭಾಷಾ ಮಿತಿಯಲ್ಲಿ ತಿದ್ದುಪಡಿ ಮಾಡಿದ್ದು ಮುಖರ್ಜಿಯವರು. ಮುಖರ್ಜಿಯವರು ಇಲ್ಲದೆ ಹೋಗಿದ್ದರೆ ಈ ಸಂವಿಧಾನವನ್ನು ಅಂತಿಮಗೊಳಿಸಲು ನಮ್ಮ ರಚನಾ ಸಭೆಗೆ ಇನ್ನೂ ಹಲವು ವರ್ಷಗಳು ಬೇಕಾಗುತ್ತಿತ್ತೇನೋ ಎಂದು ಸ್ವತಃ ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಮುಖರ್ಜಿಯವರ ಉಲ್ಲೇಖವನ್ನು ಸ್ಮರಿಸದ ಮನುವಾದಿಗಳು ಬ್ರಾಹ್ಮಣರೆಂಬ ಕಾರಣಕ್ಕೆ ರಾವ್ ಅವರ ಉಲ್ಲೇಖವನ್ನು ಪುನರುಚ್ಚರಿಸುತ್ತಿದ್ದಾರೆ. ಬಿ.ಎನ್. ರಾವ್ ಅವರು ಕ್ರೋಡೀಕರಿಸಿ ಕೊಟ್ಟ ಕಾನೂನುಗಳ ಕರಡು ಪ್ರತಿಗೂ, ಅಂತಿಮವಾಗಿ ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿಯಡಿ ಅಂಗೀಕಾರಗೊಂಡ ಕರಡು ಪ್ರತಿಗೂ ನಡುವೆ ಇರುವ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಾಗ ಸಂವಿಧಾನ ರಚನೆಯಲ್ಲಿ ರಾವ್ ಅವರ ಮಿತಿಯೂ ಅರ್ಥವಾಗುತ್ತದೆ; ಅಂಬೇಡ್ಕರ್ ಅವರ ಶ್ರಮವೂ ಕಾಣುತ್ತದೆ. 1947ರ ಅಕ್ಟೋಬರ್ನಲ್ಲಿ ಬಿ.ಎನ್. ರಾವ್ ತಮ್ಮ ಸಂಗ್ರಹ ವರದಿಯನ್ನು ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿಗೆ ಸಲ್ಲಿಸುತ್ತಾರೆ. ಆಗ ಅವರ ವರದಿಯಲ್ಲಿ 13 ಶೆಡ್ಯೂಲ್ಗಳು ಮತ್ತು 243 ಆರ್ಟಿಕಲ್ಗಳು ಇರುತ್ತವೆ. ಇವೆಲ್ಲವೂ ನೆಹರೂ ನೇತೃತ್ವದಲ್ಲಿ ರಚನಾ ಸಭೆ ಅನುಮೋದಿಸಿದ್ದ ಭಾರತ ಸಂವಿಧಾನದ objective resolutionಗೆ ಅನುಗುಣವಾಗಿ ವಿದೇಶಿ ಕಾನೂನುಗಳಿಂದ ಸಂಗ್ರಹಿಸಿದ ಕರಡು ಕಾಯ್ದೆಗಳಷ್ಟೆ. ಈ ಕಾನೂನು ಅವಕಾಶಗಳು ಭಾರತದ ಸಮಾಜಕ್ಕೆ ಎಷ್ಟು ಸರಿಹೊಂದುತ್ತವೆ, ಯಾವುದನ್ನು ಹೇಗೆಲ್ಲ ಮರುರೂಪಿಸಬೇಕು ಎಂದು ಸತತ 141 ದಿನಗಳ ಕಾಲ ಹಗಲುರಾತ್ರಿ ಅಧ್ಯಯನಶೀಲರಾಗುವ ಅಂಬೇಡ್ಕರ್ ಬಿ.ಎನ್. ರಾವ್ ನೀಡಿದ್ದ 243 ಆರ್ಟಿಕಲ್ಗಳನ್ನು 395 ಆರ್ಟಿಕಲ್ಗಳಿಗೆ ವಿಸ್ತರಿಸುತ್ತಾರೆ ಮತ್ತು 13 ಶೆಡ್ಯೂಲ್ಗಳನ್ನು 8 ಶೆಡ್ಯೂಲ್ಗೆ ಕಡಿತಗೊಳಿಸುತ್ತಾರೆ. ಅಂದರೆ ಬಿ.ಎನ್. ರಾವ್ ನೀಡಿದ್ದ ಅಸ್ಥಿಪಂಜರಕ್ಕೆ ಅಂಬೇಡ್ಕರ್ ರಕ್ತಮಾಂಸ ಜೀವ ತುಂಬುವ ಕೆಲಸ ಮಾಡುತ್ತಾರೆ. ಬಿ.ಎನ್. ರಾವ್ ರೂಪಿಸುವಾಗ ಕೇವಲ ಒಂದು ಕಾನೂನು-ಆಡಳಿತಾತ್ಮಕ ಕಟ್ಟಳೆಗಳ ಸಂಗ್ರಹವಾಗಿದ್ದ frameworಗೆ ಅಂಬೇಡ್ಕರ್ ಹೇಗೆಲ್ಲ ಜೀವ ತುಂಬಿದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನಾವು ಸಂವಿಧಾನದ ಪೀಠಿಕೆಗೆ ರಾವ್ ಹೇಗೆ ಸಲಹೆ ಕೊಟ್ಟಿದ್ದರು, ಅಂಬೇಡ್ಕರ್ ಹೇಗೆ ಅದನ್ನು ವ್ಯಾಖ್ಯಾನಿಸಿದರು ಎಂಬುದನ್ನು ಗಮನಿಸಬೇಕು. ‘‘We, the people of India, seeking to promote the common good, do hereby, through our chosen representatives, enact, adopt and give to ourselves this constitution’’ ಎಂದು ದಾಖಲಿಸಲು ರಾವ್ ಸಲಹೆ ನೀಡಿದ್ದರು. ಆದರೆ ಇಲ್ಲಿ ‘common good’ ಎನ್ನುವುದು ಮೇಲ್ನೋಟಕ್ಕೆ ಪ್ರಗತಿಪರವಾಗಿ ಗೋಚರಿಸಿದರೂ, ಜಾತಿವ್ಯವಸ್ಥೆಯಿಂದ ಬಾಧಿತವಾದ ಭಾರತದ ಸಮಾಜದಲ್ಲಿ ಒಂದೊಂದು ಸಮುದಾಯದ ದೃಷ್ಟಿಯಲ್ಲಿ ಒಂದೊಂದು ರೀತಿಯಾಗಿ common good ವ್ಯಾಖ್ಯಾನಗೊಳ್ಳಬಹುದಿತ್ತು. ಇದನ್ನು ಮನಗಂಡ ಅಂಬೇಡ್ಕರ್ Justice, Liberty, Equality, or Fraternity ಎಂಬ ಕ್ರಾಂತಿಕಾರಿ ಆಧಾರಸ್ತಂಭಗಳನ್ನು ಪೀಠಿಕೆಯೊಳಗೆ ಸೇರಿಸಿ, ಕಾನೂನು ಗ್ರಂಥವಾಗಬಹುದಿದ್ದ ಸಂವಿಧಾನವನ್ನು ಸಾಮಾಜಿಕ ಪ್ರಣಾಳಿಕೆಯಾಗಿ ರೂಪಾಂತರಿಸಿದರು. ಜಾತಿಯಿಂದ ವಿಭಜಿತವಾದ ಸಮಾಜದಲ್ಲಿ ಭ್ರಾತೃತ್ವವನ್ನು ನೀವು ಬಾಳ್ವಿಕೆಯ ಆತ್ಮವಾಗಿಸದೆ ಹೋದರೆ, ‘ಸಾಮಾನ್ಯ ಒಳಿತು’ ಎಂಬ ಆಶಯ ಅರ್ಥಕಳೆದುಕೊಳ್ಳಲಿದೆ ಎಂಬುದು ಅಂಬೇಡ್ಕರರ ವಾದವಾಗಿತ್ತು. ರಾವ್ ವರದಿಯಲ್ಲಿ ಕೇವಲ ಘೋಷಣಾತ್ಮಕವಾಗಿ ಉಲ್ಲೇಖವಾಗಿದ್ದ ಮೂಲಭೂತ ಹಕ್ಕುಗಳನ್ನು ಪರಿಷ್ಕರಿಸಿ ಆರ್ಟಿಕಲ್ 17ರ ಮೂಲಕ ಅಸ್ಪಶ್ಯತೆಯನ್ನು ತೊಡೆದುಹಾಕಿದ್ದು, ಆರ್ಟಿಕಲ್ 32ರ ಸೇರ್ಪಡೆ ಮೂಲಕ ಸಂವಿಧಾನಾತ್ಮಕ ರಕ್ಷಣೆಗಳನ್ನು ಒದಗಿಸಿದ್ದು ಅಂಬೇಡ್ಕರ್. ರಾವ್ ವರದಿಯಲ್ಲಿ ತಾಂತ್ರಿಕವಾಗಿ ಕಾನೂನಿನ ದೃಷ್ಟಿಯಲ್ಲಿ ಮಾತ್ರ ಘೋಷಿಸಲಾಗಿದ್ದ ‘ಸಮಾನತೆ’ಯನ್ನು ಮರುವ್ಯಾಖ್ಯಾನಿಸಿ ವಿಸ್ತರಿಸಿದ ಅಂಬೇಡ್ಕರರು ಎಸ್ಸಿ/ಎಸ್ಟಿ ಮೀಸಲಾತಿಯ ಮೂಲಕ ಅವಕಾಶಗಳಲ್ಲೂ ಸಮಾನತೆಯನ್ನು ಲಭ್ಯವಾಗಿಸಿದರು. ರಾವ್ ತಮ್ಮ ವರದಿಯಲ್ಲಿ ನಿರ್ದೇಶಾತ್ಮಕ ತತ್ವಗಳನ್ನು ಆಡಳಿತಾತ್ಮಕ ನಿಬಂಧನೆಗಳ ರೂಪದಲ್ಲಿ ಹಕ್ಕುಗಳ ಜೊತೆಗೇ ಬೆಸೆದು ಕೊಟ್ಟಿದ್ದರು. ಅವುಗಳನ್ನು ಪರಿಚ್ಛೇದ 4ರಲ್ಲಿ ಪ್ರತ್ಯೇಕವಾಗಿ ವಿಂಗಡಿಸಿದ ಅಂಬೇಡ್ಕರರು ಸರಕಾರದ ನೈತಿಕ ಪ್ರಜ್ಞೆಯಾಗಿ ವ್ಯಾಖ್ಯಾನಿಸಿದರು. ಇವು ಕೇವಲ ಕೆಲವು ಉದಾಹರಣೆಗಳಷ್ಟೆ. ಪ್ರತೀ ಅನುಚ್ಛೇದದ ಪ್ರತೀ ಉಪಬಂಧಗಳನ್ನು ಹೀಗೆ ಆಳವಾಗಿ ತರ್ಕಿಸಿ, ಸುದೀರ್ಘವಾಗಿ ಚರ್ಚೆಗೆ ಒಳಪಡಿಸಿ, ಅವುಗಳ ಮೂಲಕ ದೇಶದ ಚಲನೆಯ ದಿಕ್ಕನ್ನು ನಿರ್ಧರಿಸಿದ್ದು ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿ. ಕೆಲವೇ ತಿಂಗಳ ಅವಧಿಯಲ್ಲಿ ತನ್ನ ಕಾರ್ಯ ಮುಗಿಸಿಕೊಟ್ಟು, ಮ್ಯಾನ್ಮಾರ್ ಸಂವಿಧಾನ ರಚನಾ ಕಾರ್ಯದತ್ತ ಹೊರಟುಹೋದ ರಾವ್ ಅವರನ್ನು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಕಾನೂನು ಅಧ್ಯಯನ ನಡೆಸಿ ಬರೋಬ್ಬರಿ 7,600 ತಿದ್ದುಪಡಿಗಳ ಮೂಲಕ ವಿಸ್ತೃತ ರೂಪ ನೀಡಿದ ಅಂಬೇಡ್ಕರ್ ಅವರಿಗೆ ಸರಿಸಮನೆಂದು ವಾದಿಸಲು ಹೋಗುವುದು ಅಂಬೇಡ್ಕರರಿಗೆ ಮಾಡಿದ ಅವಮಾನವಾಗುವುದಿಲ್ಲ; ಬದಲಿಗೆ, ಇತಿಹಾಸದ ಕುರಿತು ನಮ್ಮ ಅಜ್ಞಾನದ ಪ್ರದರ್ಶನವಾದೀತಷ್ಟೆ. ಇನ್ನು ಅಂಬೇಡ್ಕರರು ಸಂವಿಧಾನ ರಚನೆಗೆ ತಮ್ಮನ್ನು ತಾವು ಎಷ್ಟು ಸಮರ್ಪಿಸಿಕೊಂಡಿದ್ದರು ಎಂಬುದನ್ನು ಹೊಸದಾಗಿ ನಿರೂಪಿಸುವ ಅಗತ್ಯವಿಲ್ಲ. ನವೆಂಬರ್ 5, 1948ರ ರಚನಾ ಸಭೆಯಲ್ಲಿ ಸದಸ್ಯ ಟಿ.ಟಿ. ಕೃಷ್ಣಾಮಾಚಾರಿಯವರು ಮಾಡಿರುವ ಈ ಭಾಷಣದ ತುಣುಕು ಸಾಕು.. ‘‘ಕರಡು ರಚನಾ ಸಮಿತಿಗೆ ಸಭೆಯಿಂದ ನೇಮಿಸಲ್ಪಟ್ಟ ಏಳು ಸದಸ್ಯರಲ್ಲಿ ಒಬ್ಬರು ಸಭೆಗೆ ರಾಜೀನಾಮೆ ನೀಡಿದ್ದರು ಮತ್ತು ಅವರ ಬದಲಿಗೆ ಬೇರೆಯವರನ್ನು ನೇಮಿಸಲಾಯಿತು ಎಂಬ ವಿಷಯ ಸಭೆಗೆ ಬಹುಶಃ ತಿಳಿದಿರಬಹುದು. ಇನ್ನೊಬ್ಬರು ನಿಧನರಾದರು ಮತ್ತು ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಲಿಲ್ಲ. ಮತ್ತೊಬ್ಬರು ದೂರದ ಅಮೆರಿಕದಲ್ಲಿ ಉಳಿದರು ಮತ್ತು ಅವರ ಸ್ಥಾನವೂ ಭರ್ತಿಯಾಗಲಿಲ್ಲ. ಇನ್ನುಳಿದ ಒಬ್ಬಿಬ್ಬರು ದಿಲ್ಲಿಯಿಂದ ಬಹಳ ದೂರದಲ್ಲಿದ್ದರು ಮತ್ತು ಬಹುಶಃ ಅನಾರೋಗ್ಯದ ಕಾರಣದಿಂದಾಗಿ ಸಮಿತಿಯ ಕರ್ತವ್ಯಗಳಿಗೆ ಹಾಜರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಅಂತಿಮವಾಗಿ ಈ ಸಂವಿಧಾನವನ್ನು ರಚಿಸುವ ಸಂಪೂರ್ಣ ಹೊಣೆಗಾರಿಕೆಯು ಡಾ. ಅಂಬೇಡ್ಕರ್ ಅವರ ಮೇಲೆ ಬಿತ್ತು. ಅವರೇ ಈ ಮಹತ್ವದ ದಾಖಲೆಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರು ಈ ಕಾರ್ಯವನ್ನು ಅತ್ಯಂತ ಶ್ಲಾಘನೀಯವಾಗಿ ಪೂರೈಸಿರುವುದಕ್ಕಾಗಿ ನಾವೆಲ್ಲರೂ ಅವರಿಗೆ ಚಿರಋಣಿಯಾಗಿದ್ದೇವೆ ಎಂಬಲ್ಲಿ ನನಗೆ ಯಾವುದೇ ಅನುಮಾನವಿಲ್ಲ.’’ ಅಂಬೇಡ್ಕರ್ ಅವರನ್ನು ನಾವು ಯಾಕೆ ಸಂವಿಧಾನ ಶಿಲ್ಪಿ ಎಂದು ಪರಿಗಣಿಸುತ್ತೇವೆ ಎಂದು ಅರ್ಥ ಮಾಡಿಸಲು ಇಷ್ಟು ವಿವರಣೆ ಸಾಕು. ಇದರ ನಂತರವೂ ಬಿ.ಎನ್. ರಾವ್ ಅವರನ್ನು ಶಿಲ್ಪಿಯಾಗಿ ಮೊಂಡುವಾದ ಮುಂದುವರಿಸುವವರಿಗೆ ಒಂದು ಪ್ರಶ್ನೆಯಿದೆ. ಇತ್ತೀಚೆಗೆ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿತು. ಈ ಕಾಯ್ದೆ ಜಾರಿಗೆ ತಂದಿದ್ದು ಯಾರು? ಎಂದು ಪ್ರಶ್ನೆ ಕೇಳಿದರೆ, ಬಹಳಷ್ಟು ಬಲಪಂಥೀಯರು ಹೆಮ್ಮೆಯಿಂದ ಮೋದೀಜಿಯ ಹೆಸರು ಹೇಳುತ್ತಾರೆ. ಇನ್ನೂ ನಿರ್ದಿಷ್ಟವಾಗಿ ಹೇಳಬಯಸುವವರು, ಮಸೂದೆಯನ್ನು ಮಂಡಿಸಿದ ಗೃಹಮಂತ್ರಿ ಅಮಿತ್ ಶಾ ಅವರ ಹೆಸರು ಹೇಳುತ್ತಾರೆ. ಸ್ವಲ್ಪ ವಿಶಾಲವಾಗಿ ನೋಡುವವರಾದರೆ ಬಿಜೆಪಿ ಸರಕಾರದ ಹೆಸರು ಉಲ್ಲೇಖಿಸುತ್ತಾರೆ. ಅದು ನಿಜವೂ ಹೌದು. ಆದರೆ ಮೋದಿಯವರಾಗಲಿ, ಶಾ ಅವರಾಗಲಿ ಮಸೂದೆಯ ಕರಡು ಪ್ರತಿಯನ್ನು ಕೂತು ಬರೆದಿರುವುದಿಲ್ಲ. ಅವರ ನಿರ್ದೇಶನಗಳ ಮೇಲೆ ಯಾರೋ ಐಎಎಸ್ ಅಧಿಕಾರಿ, ಕಾನೂನು ತಜ್ಞರು ಅದನ್ನು ರಚಿಸಿರುತ್ತಾರೆ. ಆದರೂ ಅದು ಆ ಐಎಎಸ್ ಅಧಿಕಾರಿಯ ಮಸೂದೆ ಎಂದು ಹೇಳಲಾಗದು. ಯಾಕೆಂದರೆ, ಆ ಅಧಿಕಾರಿ ಕೇವಲ ತನಗೆ ವಹಿಸಿದ ಹೊಣೆಯ ತಾಂತ್ರಿಕ ಕೆಲಸ ಮಾಡಿ ಮುಗಿಸಿರುತ್ತಾನೆ. ಆ ಮಸೂದೆ ಆಶಯ, ಉದ್ದೇಶ, ದುರುದ್ದೇಶ, ಪರಿಣಾಮ, ದುಷ್ಪರಿಣಾಮ ಆತನಿಗೆ ಸಂಬಂಧಿಸಿದ್ದಲ್ಲ. ಅದರ ಹೊಣೆಯೂ ಆತನದಲ್ಲ. ಸಂವಿಧಾನ ರಚನೆಯಲ್ಲಿ ಬಿ.ಎನ್. ರಾವ್ ಪಾತ್ರ ಕೂಡಾ ಇಷ್ಟಕ್ಕೆ ಸೀಮಿತವಾದುದು!
ಒಸಿ ಇಲ್ಲದ ಮನೆಗಳಿಗೆ ಬೆಸ್ಕಾಂ ಸಂಪರ್ಕ ಕಡಿತ; ವಿದ್ಯುತ್ ಕಳ್ಳತನ ಹೆಚ್ಚಳ
ಬೆಂಗಳೂರಿನಲ್ಲಿ ಅಕ್ರಮ ವಿದ್ಯುತ್ ಬಳಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ನಂತರ ಈ ಪರಿಸ್ಥಿತಿ ಉಂಟಾಗಿದೆ. ಡಿಸೆಂಬರ್ನಲ್ಲಿ 419 ಪ್ರಕರಣಗಳು ದಾಖಲಾಗಿವೆ. ತಾತ್ಕಾಲಿಕ ವಿದ್ಯುತ್ ಸಂಪರ್ಕಗಳ ದುರುಪಯೋಗವೂ ಹೆಚ್ಚಾಗಿದೆ. ನೆರೆಹೊರೆಯವರಿಂದ ಬರುವ ದೂರುಗಳ ಆಧಾರದ ಮೇಲೆ ತಪಾಸಣೆ ನಡೆಸಲಾಗುತ್ತಿದೆ. ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಂಪರ್ಕಗಳು ಹೆಚ್ಚಾಗಿವೆ.
Jharkhand| ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ: ಕನಿಷ್ಠ 9 ಮಂದಿ ಮೃತ್ಯು, 80 ಜನರಿಗೆ ಗಾಯ
ಗುಮ್ಲಾ: ಜಾರ್ಖಂಡ್ನ ಲತೇಹಾರ್ ಜಿಲ್ಲೆಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಐವರು ಮಹಿಳೆಯರು ಸೇರಿದಂತೆ ಕನಿಷ್ಠ 9 ಜನರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹುವಾದರ್ ಪೊಲೀಸ್ ಠಾಣಾ ವ್ಯಾಪ್ತಿಯ ಓರ್ಸಾ ಬಾಂಗ್ಲಾದಾರ ಕಣಿವೆಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ವಿಕಾಸ್ ಪಾಠಕ್ ಸೇರಿದಂತೆ 90 ಮಂದಿ ಬಸ್ನಲ್ಲಿದ್ದರು ಎಂದು ಹೇಳಲಾಗಿದೆ. ಛತ್ತೀಸ್ಗಢದ ಬಲರಾಮ್ಪುರ ಜಿಲ್ಲೆಯಿಂದ ಲತೇಹಾರ್ನ ಮಹುವಾದರ್ಗೆ ವಿವಾಹ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಗೌರವ್ ತಿಳಿಸಿದ್ದಾರೆ. ಲತೇಹಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಗುಮ್ಲಾ ಸದರ್ ಆಸ್ಪತ್ರೆಯಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಲತೇಹಾರ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಚಿಲಿಯ ದಕ್ಷಿಣ ಪ್ರಾಂತ್ಯಗಳಲ್ಲಿ ತೀವ್ರ ಶುಷ್ಕತೆ ಮತ್ತು ಬಿಸಿಲಿನಿಂದಾಗಿ ಭಾನುವಾರ ಕಾಡ್ಗಿಚ್ಚು ಸಂಭವಿಸಿ 18 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 8,500 ಹೆಕ್ಟೇರ್ ಪ್ರದೇಶ ಬೆಂಕಿಗಾಹುತಿಯಾಗಿದೆ. ಬಲವಾದ ಗಾಳಿ ಮತ್ತು ಅಧಿಕ ತಾಪಮಾನ ಬೆಂಕಿಯ ತೀವ್ರತೆಗೆ ಕಾರಣವಾಗಿದ್ದು, ಬೆಂಕಿನಂದಿಸಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.ಈ ಹಿನ್ನಲೆಯಲ್ಲಿ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಕ್ರಿಕೆಟ್ DNA ಬದಲಾಯಿಸಿದ ಚೇಸ್ ಮಾಸ್ಟರ್ : ಕೊಹ್ಲಿ ನಿವೃತ್ತಿ ನಂತರದ ಇಂಡಿಯನ್ ಕ್ರಿಕೆಟ್ - 10 ಎಫೆಕ್ಟ್’ಗಳು
Virat Kohli and Retirement : ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟಿನ ಅನಭಿಷಕ್ತ ದೊರೆ. ಈಗಾಗಲೇ, ಟಿ20 ಮತ್ತು ಟೆಸ್ಟ್ ಕ್ರಿಕೆಟ್’ ನಿಂದ ನಿವೃತ್ತಿ ಹೊಂದಿದ್ದಾರೆ. ಏಕದಿನ ಪಂದ್ಯದಲ್ಲಿ ಆಡುತ್ತಿರುವ ಕೊಹ್ಲಿ, ಐಪಿಎಲ್’ನಲ್ಲೂ ತನ್ನ ಖದರ್ ಅನ್ನು ಮುಂದುವರಿಸಿದ್ದಾರೆ. ಈ ಲೇಖನದಲ್ಲಿ, ಕೊಹ್ಲಿ ರಿಟೈರ್ಮೆಂಟ್ ನಂತರ, ಭಾರತದ ಕ್ರಿಕೆಟ್ ಮೇಲೆ ಬೀಳಬಹುದಾದ ಎಫೆಕ್ಟ್ ಬಗ್ಗೆ ವಿವರಿಸಲಾಗಿದೆ.
ಇಂದು ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ; ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವು
ಬೆಂಗಳೂರಿನ ವಿವೇಕನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಶಾಲೆಗೆ ಮಗನೊಂದಿಗೆ ತೆರಳುತ್ತಿದ್ದ ತಾಯಿ ಸಂಗೀತಾ ಮತ್ತು ಎಂಟು ವರ್ಷದ ಮಗ ಪಾರ್ಥ ರಸ್ತೆ ದಾಟುತ್ತಿದ್ದರು. ಈ ವೇಳೆ ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನ್ಯಾಯದ ಹೋರಾಟದ ನಡುವೆಯೇ ಇಹಲೋಕ ತ್ಯಜಿಸಿದ ಮಣಿಪುರ ಅತ್ಯಾಚಾರ ಸಂತ್ರಸ್ತೆ
ಇಂಫಾಲ: ಮಣಿಪುರದ ಜನಾಂಗೀಯ ಸಂಘರ್ಷದ ವೇಳೆ 2023ರ ಮೇ ತಿಂಗಳಲ್ಲಿ ಉದ್ರಿಕ್ತ ಗುಂಪಿನಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಝೋ ಸಮುದಾಯಕ್ಕೆ ಸೇರಿದ ಯುವತಿ ನ್ಯಾಯ ದೊರಕುವ ಮೊದಲೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಪಹರಣಕಾರರು ಆಕೆಯನ್ನು ಅಪಹರಿಸಿ ಸಶಸ್ತ್ರ ಗುಂಪಿಗೆ ಹಸ್ತಾಂತರಿಸಿದ ಸಂದರ್ಭದಲ್ಲಿ ಆಕೆಗೆ 18 ವರ್ಷ ವಯಸ್ಸಾಗಿತ್ತು. ಮಹಿಳೆಯ ದೈಹಿಕ ಹಾಗೂ ಮಾನಸಿಕ ಆಘಾತಗಳು ವಾಸಿಯಾಗದೇ ಜನವರಿ 10ರಂದು ಆಕೆ ಕೊನೆಯುಸಿರೆಳೆದಳು ಎಂದು ದೇಶಿ ಬುಡಕಟ್ಟು ಮುಖಂಡರ ಒಕ್ಕೂಟ ಪ್ರಕಟಿಸಿದೆ. ಅತ್ಯಾಚಾರ ಘಟನೆ ಬಗ್ಗೆ ಇಂಫಾಲ ಪೂರ್ವ ಜಿಲ್ಲೆಯ ಪೊರೊಮ್ಪೇಟೆ ಠಾಣೆಯಲ್ಲಿ ಎರಡೂವರೆ ವರ್ಷ ಹಿಂದೆಯೇ ಎಫ್ಐಆರ್ ದಾಖಲಾದರೂ, ಯುವತಿ ಮೇಲೆ ಅತ್ಯಾಚಾರ ಎಸಗಿದ ಯಾವ ಆರೋಪಿಗಳನ್ನೂ ಇದುವರೆಗೆ ಪತ್ತೆ ಮಾಡುವ ಕಾರ್ಯವೂ ನಡೆದಿಲ್ಲ. ಬುಡಕಟ್ಟು ಏಕತಾ ಸಮಿತಿ ಸೇರಿದಂತೆ ಕುಕಿ ಝೋ ಸಮುದಾಯದ ಹಲವು ಸಂಘಟನೆಗಳು ಶನಿವಾರ ಈ ಯುವತಿಗೆ ಆಗಿರುವ ಆಘಾತಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಮೊಂಬತ್ತಿ ಮೆರವಣಿಗೆ ನಡೆಸಿದವು. ಕಳೆದ30 ತಿಂಗಳಿನಿಂದ ಯುವತಿ ದೈಹಿಕ ಹಾಗೂ ಮಾನಸಿಕ ಆಘಾತದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 2023ರ ಜುಲೈ 21ರಂದು ಘಟನೆಯ ಬಗ್ಗೆ ಈಕೆ ಕಂಗ್ಪೋಕಿ ಠಾಣೆಗೆ ದೂರು ನೀಡಿದ್ದರು. ಆಕೆಯನ್ನು ಮೇ 15ರಂದು ಇಂಫಾಲದ ನ್ಯೂಚೆಕಾನ್ ಎಟಿಎಂ ಬೂತ್ ಬಳಿಯಿಂದ ಅಪಹರಿಸಲಾಗಿತ್ತು.
ಮಹಾರಾಷ್ಟ್ರದ ಬಟಾಣಿ ಎಂಟ್ರಿಯಿಂದ ಚಳಿಗಾಲದಲ್ಲೂ ಅವರೆಗೆ ಕುಸಿದ ದರ
ಮಹಾರಾಷ್ಟ್ರದಿಂದ ಹಸಿ ಬಟಾಣಿ ಚಿತ್ರದುರ್ಗಕ್ಕೆ ಪ್ರವೇಶಿಸಿರುವುದರಿಂದ, ಸ್ಥಳೀಯ ಅವರೆಕಾಯಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಅವರೆಕಾಯಿ ದರ ಕೆಜಿಗೆ 15 ರೂ.ಗೆ ಕುಸಿದಿದೆ. ಈ ಹಿಂದೆ 80-100 ರೂ. ಇದ್ದ ದರ ಈಗ ಗಣನೀಯವಾಗಿ ಕಡಿಮೆಯಾಗಿದೆ, ರೈತರು ನಷ್ಟ ಅನುಭವಿಸುವಂತಾಗಿದೆ.
ಆಟಿಕೆ ಗನ್ ತಂದ ಪಜೀತಿ; ಸಿನಿಮಾ ಸ್ಟೈಲ್ನಲ್ಲಿ ಪೋಜ್ ಕೊಡಲು ಹೋಗಿ ರಾಮನಗರ ಪೊಲೀಸರ ಕೈಗೆ ತಗ್ಲಾಕೊಂಡ ಇಂಜಿನಿಯರ್ಸ್
ಕೆಲಸ ಸಿಗಲೆಂದು ಚಿಕ್ಕಮಗಳೂರಿನ ದೇಗುಲಕ್ಕೆ ಭೇಟಿ ಕೊಟ್ಟು ಅಲ್ಲಿಂದ ವಾಪಸ್ ಬರುವ ವೇಳೆ ಆಟಿಕೆ ಗನ್ವೊಂದನ್ನು ಮೂವರು ಯುವಕರು ಖರೀದಿಸಿದ್ದರು. ರೀಲ್ಸ್ವೊಂದನ್ನು ನೋಡಿದ್ದ ಅವರು ಅದರಂತೆ ಗನ್ ತೋರಿಸುತ್ತ ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಪ್ರಯಾಣಿಸಿದ್ದರು. ಇದು ಅವರ ಹಿಂಬದಿ ಬರುತ್ತಿದ್ದ ಕಾರಿನ ಡ್ಯಾಶ್ಬೋರ್ಡ್ನಲ್ಲಿ ಸರಿಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡರು. ಮೂವರಿಗೂ ಸಾರ್ವಜನಿಕ ಸ್ಥಳದಲ್ಲಿ ನಡೆದುಕೊಳ್ಳಬೇಕಾದ ರೀತಿ ಬಗ್ಗೆ ಪೊಲೀಸರು ಪಾಠ ಕಲಿಸಿದ್ದಾರೆ.
DK Shivakumar: ನಾಯಕತ್ವ ಬದಲಾವಣೆ; ಕಾಲವೇ ಉತ್ತರ ನೀಡುತ್ತದೆ: ಡಿ ಕೆ ಶಿವಕುಮಾರ್ ಮಾತಿನ ಮರ್ಮವೇನು?
ದೆಹಲಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ತೀರ್ಮಾನದ ಚೆಂಡು ಸದ್ಯ ದೆಹಲಿಗೆ ಅಂಗಳದಲ್ಲಿದೆ. ಆದರೆ ಈವರೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿಲ್ಲ. ಬದಲಿಗೆ ನಮಗೆ ಬಿಡಿ ಎನ್ನುತ್ತಾ ಸಣ್ಣ ಗೆರೆಯನ್ನಷ್ಟೇ ಎಳೆದಿದ್ದಾರೆ. ಈ ಮಧ್ಯೆ ಸಿಎಂ ಪಟ್ಟಕ್ಕಾಗಿ ಕಾದುಕುಳಿತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗುತ್ತಿರುವ ಬಗ್ಗೆ’ ಕಳವಳ ವ್ಯಕ್ತಪಡಿಸಿದ್ದಾರೆ. ‘‘ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೇ 2025ರ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಬೇಲಿಯೇ ಎದ್ದು ಹೊಲ ಮೇಯ ತೊಡಗಿದರೆ, ನಾಡನ್ನು ರಕ್ಷಿಸುವವರು ಯಾರು?’’ ಎಂದು ಕೇಳಿದ್ದಾರೆ. ಅವರು ಸಮಾರಂಭದಲ್ಲಿ ಎತ್ತಿದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಇಂದು ಕಾನೂನು ಸುವ್ಯವಸ್ಥೆ ಕೆಡುವುದಕ್ಕೆ ಪರೋಕ್ಷವಾಗಿ ಪೊಲೀಸ್ ಇಲಾಖೆಯೇ ಕಾರಣವಾಗುತ್ತಿರುವುದರ ಬಗ್ಗೆ ಗಂಭೀರ ಚರ್ಚೆ ನಡೆಯದೇ, ಅಪರಾಧಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಯುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ 88 ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ನೇರವಾಗಿ ಶಾಮೀಲಾಗಿದ್ದಾರೆ. ಮುಖ್ಯವಾಗಿ ಇವು ಕಳವು, ಕೊಲೆ, ದೌರ್ಜನ್ಯ ಹಿಂಸಾಚಾರದಂತಹ ಅಪರಾಧ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳು ಬೆಳಕಿಗೆ ಬರುವುದು ತೀರಾ ಅಪರೂಪ. ಯಾಕೆಂದರೆ, ಇಂತಹ ಕೃತ್ಯಗಳಲ್ಲಿ ಪೊಲೀಸರು ಶಾಮೀಲಾಗಿದ್ದರೆ ಅದನ್ನು ತನಿಖೆ ನಡೆಸಿ ಬೆಳಕಿಗೆ ತರಬೇಕಾದವರು ಕೂಡ ಪೊಲೀಸರೇ ಆಗಿರುತ್ತಾರೆ. ತಮ್ಮ ಇಲಾಖೆಯ ಸಿಬ್ಬಂದಿ ಎಸಗಿರುವ ಕೃತ್ಯಗಳನ್ನು ‘ತಮ್ಮವರು’ ಎನ್ನುವ ಬಾಂಧವ್ಯವನ್ನು ಮುಂದಿಟ್ಟುಕೊಂಡು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುವುದೇ ಹೆಚ್ಚು. ಉಳಿದಂತೆ ಪೊಲೀಸ್ ಇಲಾಖೆಯನ್ನು ವ್ಯಾಪಿಸಿರುವ ಲಂಚ, ಭ್ರಷ್ಟಾಚಾರ ಪ್ರತಿ ವರ್ಷ ನೂರಾರು ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕಿಸುತ್ತವೆೆ. ಲಂಚ ಪಡೆಯುವ ಸಂದರ್ಭದಲ್ಲಿ ಎಲ್ಲೋ ಒಂದಿಬ್ಬರು ಅಧಿಕಾರಿಗಳು ಅಥವಾ ತಳಸ್ತರದ ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ ಅಷ್ಟೇ. ಈ ನಾಡಿನಲ್ಲಿ ಅಪರಾಧ ಪ್ರಕರಣಗಳನ್ನು ಜೀವಂತವಾಗಿಟ್ಟಿರುವುದು ಪೊಲೀಸ್ ಇಲಾಖೆಯೊಳಗೆ ಹರಡಿಕೊಂಡಿರುವ ಭ್ರಷ್ಟಾಚಾರ. ಇದನ್ನು ಅಧಿಕೃತವಾಗಿ ‘ಅಪರಾಧ’ವಾಗಿ ಗುರುತಿಸಿ ಪ್ರಕರಣ ದಾಖಲಿಸುವ ವ್ಯವಸ್ಥೆಯೊಂದಿದ್ದರೆ ಜೈಲು ತುಂಬಾ ಪೊಲೀಸ್ ಸಿಬ್ಬಂದಿಯೇ ಇರುತ್ತಿದ್ದರು. ಪೊಲೀಸ್ ಇಲಾಖೆಯ ಪರೋಕ್ಷ ಸಹಕಾರವಿಲ್ಲದೇ ಇದ್ದರೆ ಡ್ರಗ್ಸ್, ಗಾಂಜಾ ಜಾಲಗಳು ವಿಸ್ತರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ವತಃ ಪೊಲೀಸ್ ಇಲಾಖೆಯೇ ಒಪ್ಪಿಕೊಳ್ಳುತ್ತದೆ. ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಗಾಂಜಾ, ಡ್ರಗ್ಸ್ಗಳನ್ನು ಕೆಲವು ಪೊಲೀಸ್ ಸಿಬ್ಬಂದಿಯ ಮೂಲಕವೇ ಮತ್ತೆ ಸಮಾಜಕ್ಕೆ ಪೂರೈಸಲಾಗುತ್ತದೆ ಎನ್ನುವ ಆರೋಪಗಳಿವೆ. ಪೊಲೀಸ್ ಇಲಾಖೆಯ ಗೋದಾಮುಗಳಲ್ಲಿರುವ ಭಾರೀ ಪ್ರಮಾಣದ ಮಾದಕವಸ್ತುಗಳು ನಾಪತ್ತೆಯಾಗುವುದು ಮತ್ತು ಅವುಗಳನ್ನು ‘ಇಲಿಗಳು ತಿಂದಿವೆ’ ಎಂದು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಹೇಳಿಕೆಗಳನ್ನು ನೀಡುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಹೀಗೆ ಕಾಣೆಯಾಗಿರುವ ಮಾದಕ ದ್ರವ್ಯಗಳ ಬಗ್ಗೆ ಗಂಭೀರ ತನಿಖೆ ನಡೆಸಿದರೆ, ಜವಾಬ್ದಾರಿ ಸ್ಥಾನದಲ್ಲಿರುವವರೇ ಹೇಗೆ ಮಾದಕ ವಸ್ತುಗಳ ಜಾಲಗಳ ಜೊತೆಗೆ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎನ್ನುವ ಕಟು ಸತ್ಯ ಬೆಳಕಿಗೆ ಬರಬಹುದಾಗಿದೆ. ಯಾವುದೇ ಅಪರಾಧದಲ್ಲಿ ಪೊಲೀಸರು ನೇರವಾಗಿ ಭಾಗಿಯಾಗುವುದಕ್ಕಿಂತಲೂ ಅಪಾಯಕಾರಿಯಾಗಿದೆ ಇದು. ಹಲವು ಅಮಾಯಕರು ಖಾಕಿಗಳ ಒತ್ತಡಗಳಿಗೆ ಬಲಿಯಾಗಿ ಇಂತಹ ವ್ಯಾಪಾರಗಳಿಗೆ ಜೊತೆಯಾಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಆರೋಪಗಳು ಇಂದು ನಿನ್ನೆಯದೇನೂ ಅಲ್ಲ. ಅಮಾಯಕನೊಬ್ಬ ಮಾಡದ ತಪ್ಪಿಗೆ ಜೈಲು ಪಾಲಾದರೆ ಆದ ಮರಳಿ ಬರುವಾಗ ‘ಅಪರಾಧಗಳ ಸಕಲ ಕಲೆ’ಗಳನ್ನು ಕಲಿತು ಬಂದಿರುತ್ತಾನೆ. ಜೈಲುಗಳು ಅಪರಾಧಿಗಳನ್ನು ತಿದ್ದಿ ಸಜ್ಜನನಾಗಿಸುವುದಕ್ಕಿಂತ, ಅಮಾಯಕರನ್ನು ಅಪರಾಧಿಗಳನ್ನಾಗಿಸುವುದರಲ್ಲೇ ಕುಖ್ಯಾತವಾಗಿವೆ. ಜೈಲುಗಳು ಕುಖ್ಯಾತ ಅಪರಾಧಿಗಳ ಜೊತೆಗೆ ಸಂಪರ್ಕವನ್ನು ಬೆಸೆಯುವ ಕೇಂದ್ರವಾಗಿದೆ. ಪೊಲೀಸ್ ಸಿಬ್ಬಂದಿ ಕೆಲವು ಅಪಾಯಕಾರಿ, ಸಂವಿಧಾನವಿರೋಧಿ ಸಿದ್ಧಾಂತಗಳ ಜೊತೆಗೆ ಕೈ ಜೋಡಿಸಿಕೊಂಡಿರುವುದು ಕಾನೂನು ಸುವ್ಯವಸ್ಥೆ ಹದಗೆಡಲು ಇನ್ನೊಂದು ಪ್ರಮುಖ ಕಾರಣವಾಗಿದೆ. ದೇಶಾದ್ಯಂತ ಹೆಚ್ಚಿರುವ ಗುಂಪು ಥಳಿತ, ಗುಂಪು ಹತ್ಯೆ, ಅನೈತಿಕ ಪೊಲೀಸ್ಗಿರಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದಾಂಧಲೆಗಳಿಗೆ ಪೊಲೀಸ್ ಇಲಾಖೆಯ ಮೌನವೇ ಕಾರಣ ಎನ್ನುವ ಆರೋಪಗಳಿವೆ. ಪೊಲೀಸ್ ಇಲಾಖೆಯೊಳಗಿರುವ ಕೆಲವು ಸಿಬ್ಬಂದಿಯ ಕಾರಣಗಳಿಂದಾಗಿ, ಸಂಘಪರಿವಾರ ಪರ್ಯಾಯ ಪೊಲೀಸ್ ಇಲಾಖೆಯಾಗಿ ಕೆಲಸ ಮಾಡುತ್ತಿದೆ. ದನಗಳನ್ನು ಸಾಕುವ ರೈತರು ಇಂದು ಗೋರಕ್ಷಕರ ವೇಷದಲ್ಲಿರುವ ರೌಡಿಗಳಿಗೆ, ಗೂಂಡಾಗಳಿಗೆ ಹೆದರಬೇಕಾಗಿದೆ. ಸಾಕುವುದಕ್ಕಾಗಿಯೂ ದನಗಳನ್ನು ಸಾಗಾಟ ಮಾಡಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಪೊಲೀಸ್ ಇಲಾಖೆಯು ಈ ನಕಲಿ ಗೋರಕ್ಷಕರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳೋಣ. ಇಲ್ಲಿನ ಸುನೀಲ್ ಎಂಬವರು ಸ್ಥಳೀಯ ರೈತನಿಂದ ಒಂದು ಹಾಲು ಕರೆಯುವ ಹಸು, ಇನ್ನೊಂದು ಗಬ್ಬದ ಹಸು ಮತ್ತು ಐದು ದಿನಗಳ ಕರುವೊಂದನ್ನು ಖರೀದಿಸಿ ಸಾಗಾಟ ನಡೆಸಿದ್ದರು. ಸ್ಥಳೀಯ ಸಂಘಪರಿವಾರದ ವ್ಯಕ್ತಿಗಳು ಈತನನ್ನು ತಡೆದು ಕಿರುಕುಳ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಸುನೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುತ್ತೂರಿನ ರೈತ ಸಂಘದ ಕಾರ್ಯಕರ್ತರು ಇದರ ವಿರುದ್ಧ ಈಗಾಗಲೇ ಪ್ರತಿಭಟನೆಯನ್ನು ಮಾಡಿದ್ದಾರೆ. ದನ ಸಾಗಾಟಕ್ಕೆ ಸಂಬಂಧಿಸಿದಂತೆ ನಕಲಿ ಗೋರಕ್ಷಕರು ವಾಹನಗಳನ್ನು ತಡೆದು ಹಲ್ಲೆ ನಡೆಸುವುದು, ದರೋಡೆ ನಡೆಸುವುದು ನಿರಂತರ ನಡೆಯುತ್ತದೆಯಾದರೂ ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂತ್ರಸ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಈ ನಕಲಿ ಗೋರಕ್ಷಕರ ಜೊತೆಗೆ ಶಾಮೀಲಾಗಿರುವುದು. ಈ ಕಾರಣದಿಂದಲೇ ದೇಶದಲ್ಲಿ ಗುಂಪುಹತ್ಯೆ, ಗುಂಪುಥಳಿತ ಪ್ರಕರಣ ಹೆಚ್ಚುತ್ತಿರುವುದು. ಮುಂದಿನ ದಿನಗಳಲ್ಲಿ ಇದು ಭಾರತದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ಅಂತರ್ರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ತನ್ನ ವರದಿಯಲ್ಲಿ ಈಗಾಗಲೇ ನೀಡಿದೆ. ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿರಬೇಕಾದರೆ, ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಸುಧಾರಣೆಯಾಗಬೇಕಾಗಿದೆ. ಪ್ರತೀ ಇಲಾಖೆಗಳಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುವುದು, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸುವುದು ಮಾತ್ರವಲ್ಲ, ಅವರಿಗೆ ವರ್ಷಕ್ಕೊಮ್ಮೆಯಾದರೂ ಸಂವಿಧಾನದ ಕುರಿತಂತೆ ವಿಶೇಷ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆ ಸುಧಾರಣೆಯಾದರೆ ಸಮಾಜದ ಅರ್ಧ ಭಾಗ ಸುಧಾರಣೆಯಾದಂತೆ. ಈ ನಿಟ್ಟಿನಲ್ಲಿ ತಳಸ್ತರದ ಪೊಲೀಸ್ ಸಿಬ್ಬಂದಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ.
ಬಿಎಂಸಿ ಮೇಯರ್ ಹುದ್ದೆಗೆ ಹಗ್ಗಜಗ್ಗಾಟ; ಮಾತುಕತೆಗೆ ತಾತ್ಕಾಲಿಕ ವಿರಾಮ
ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯ ಮೇಯರ್ ಗಾದಿಗಾಗಿ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ವಿಶ್ವ ಆರ್ಥಿಕ ವೇದಿಕೆಯ (WEF) ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಾವೋಸ್ಗೆ ತೆರಳಿರುವುದು ಹಾಗೂ ಮೇಯರ್ ಹುದ್ದೆಗೆ ಮೀಸಲಾತಿ ಡ್ರಾ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಹುದ್ದೆ ಕುರಿತು ನಡೆಯುತ್ತಿದ್ದ ಚರ್ಚೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮೇಯರ್ ಆಯ್ಕೆ ಕಸರತ್ತು ಈ ತಿಂಗಳ ಅಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಜನವರಿ 22ರಂದು ಮೀಸಲಾತಿ ಡ್ರಾ ನಡೆಯಲಿದೆ ಎಂದು ತಿಳಿದುಬಂದಿದೆ. ವರ್ಗ ನಿಗದಿಯಾದ ಬಳಿಕ ಅದೇ ದಿನ ಅಧಿಸೂಚನೆ ಹೊರಡಿಸಲಾಗುತ್ತದೆ. ಮೇಯರ್ ಚುನಾವಣೆಗೆ ಕನಿಷ್ಠ ಏಳು ದಿನಗಳ ನೋಟಿಸ್ ಅಗತ್ಯವಿದೆ. ಜನವರಿ 22ರಂದು ಅಧಿಸೂಚನೆ ಪ್ರಕಟವಾದಲ್ಲಿ, ಮೇಯರ್ ಚುನಾವಣೆ ಜನವರಿ 29 ಅಥವಾ 30ರಂದು ನಡೆಯುವ ಸಾಧ್ಯತೆ ಇದೆ. ಜನವರಿ 23ರಂದು ಅಧಿಸೂಚನೆ ಹೊರಡಿಸಿದರೆ, ಜನವರಿ 30 ಅಥವಾ 31ರಂದು ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಫಡ್ನವೀಸ್ ಈ ತಿಂಗಳ 24ರಂದು ದಾವೋಸ್ ನಿಂದ ಮರಳಲಿದ್ದು, ಶಿಂಧೆ ಹಾಗೂ ಇತರ ಮುಖಂಡರು ಮೇಯರ್ ಹುದ್ದೆ ನಿರ್ಧರಿಸಲಿದ್ದಾರೆ ಎಂದು ಈ ಮೊದಲು ಫಡ್ನವೀಸ್ ಹೇಳಿಕೆ ನೀಡಿದ್ದರು. ಆದರೆ ಶಿವಸೇನೆಯ ಮೇಯರ್ ಆಗಬೇಕು ಎನ್ನುವುದು ದೇವರ ಇಚ್ಛೆ ಎಂದು ಶಿವಸೇನೆ (ಯುಬಿಟಿ) ವಕ್ತಾರ ಸಂಜಯ್ ರಾವುತ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಫಡ್ನವೀಸ್, ರಾವುತ್ ಅವರನ್ನು 'ದೇವಭಾವು' ಎಂದು ಕರೆಯಲ್ಪಡುವುದರಿಂದ ಅವರು ದೇವರ ಬಗ್ಗೆ ಉಲ್ಲೇಖಿಸುತ್ತಿದ್ದಾರೆಯೇ ಅಥವಾ ತಮ್ಮ ಬಗ್ಗೆಯೇ ಉಲ್ಲೇಖಿಸಿದ್ದಾರೆಯೇ ಎನ್ನುವುದು ತಿಳಿಯದು ಎಂದು ವ್ಯಂಗ್ಯವಾಡಿದ್ದರು.
ಗುತ್ತಿಗೆ ಷರತ್ತು ಉಲ್ಲಂಘಿಸಿ ಕೋಟ್ಯಂತರ ರೂ.ಬಾಚುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆ
ಸರಕಾರಕ್ಕೆ ಬಿಡಿಗಾಸು ಲಾಭವಿಲ್ಲ
ಕೊಪ್ಪಳದ ಗವಸಿದ್ಧೇಶ್ವರ ಜಾತ್ರೆಗೆ ಭಾನುವಾರ ತೆರೆ ಬಿದ್ದಿದೆ. 18 ದಿನಗಳ ಜಾತ್ರೆಯಲ್ಲಿ ಸುಮಾರು 30 ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಗವಸಿದ್ಧೇಶ್ವರನ ದರ್ಶನ ಪಡೆದರು.
ಪದವಿ ಕಾಲೇಜುಗಳಲ್ಲಿ 1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಖಾಲಿ |
ಕಲಬುರಗಿ: ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ1026 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅತಿಥಿ ಉಪನ್ಯಾಸಕರ ಮೇಲೆಯೇ ಕಾಲೇಜುಗಳು ನಡೆಯುತ್ತಿವೆ. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ನಿರುದ್ಯೋಗಿಗಳು ಒತ್ತಾಯಿಸಿದ್ದಾರೆ.
ಸ್ಪೇನ್ ನಲ್ಲಿ ರೈಲುಗಳು ಮುಖಾಮುಖಿ ಢಿಕ್ಕಿ; 21 ಮಂದಿ ಮೃತ್ಯು
ಸ್ಪೇನ್: ಸ್ಪೇನ್ ನ ದಕ್ಷಿಣ ವಲಯದ ಅಂದಲೂಸಿಯಾ ಬಳಿ ಸೋಮವಾರ ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿ, ಅತ್ಯಂತ ನೋವಿನ ರಾತ್ರಿ ಎಂದು ಬಣ್ಣಿಸಿದ್ದಾರೆ. ಮಗಲಾದಿಂದ ಮ್ಯಾಡ್ರಿಡ್ಗೆ ತೆರಳುತ್ತಿದ್ದ ಹೈಸ್ಪೀಡ್ ರೈಲು ಅಡಮುಝ್ ಬಳಿ ಹಳಿತಪ್ಪಿತ್ತು. ಇದರಿಂದ ರೈಲು ಮತ್ತೊಂದು ಹಳಿಗೆ ಕ್ರಾಸಿಂಗ್ ಆಗಿದ್ದರಿಂದ ಆ ಹಳಿಯಲ್ಲಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆಯಿತು. ಇದು ಕೂಡಾ ಹಳಿ ತಪ್ಪಿತು ಎಂದು ಸ್ಪೇನ್ನ ಅದಿಫ್ ರೈಲು ಜಾಲ ಎಕ್ಸ್ ಹ್ಯಾಂಡಲ್ನಲ್ಲಿ ವಿವರಿಸಿದೆ. ದುರಂತದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವಕ್ತಾರರು ಎಎಫ್ಪಿಗೆ ತಿಳಿಸಿದ್ದಾರೆ. ಅಂಡಲೂಸಿಯಾದ ತುರ್ತು ವಿಭಾಗದ ಹಿರಿಯ ಅಧಿಕಾರಿ ಅಂಟೋನಿಯಾ ಸ್ಯಾನ್ಸ್ ಅವರ ಪ್ರಕಾರ, 73 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದ್ದು, ಅತ್ಯಂತ ಸಂಕೀರ್ಣ ರಾತ್ರಿ ನಮ್ಮ ಮುಂದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತ ಜಿ.ಟಿ. ನಿಜಗುಣ ಆರಾಧ್ಯ ಒಂದೂವರೆ ಎಕರೆ ಅಡಕೆ ತೋಟದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬಾಳೆ, ಏಲಕ್ಕಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದು, ಅವರು ಅನುಸರಿಸುವ ಸಾವಯವ ಪದ್ಧತಿ ಎಲ್ಲರಿಗೂ ಮಾದರಿಯಾಗಿದೆ.
ಪಾವಗಡಕ್ಕೆ ಸ್ಥಗಿತಗೊಂಡ ರೈಲ್ವೆ ಮಾರ್ಗ: ತುಮಕೂರು -ರಾಯದುರ್ಗ ರೈಲ್ವೆ ಯೋಜನೆ ಪೂರ್ಣ ಯಾವಾಗ?
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ಪಾವಗಡದವರೆಗೆ ಪೂರ್ಣಗೊಂಡಿದ್ದು, ಅಲ್ಲಿಂದ ಮುಂದಕ್ಕೆ ಕರ್ನಾಟಕದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಗಡಿ ಪ್ರದೇಶದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ವಿಳಂಬದಿಂದಾಗಿ ಯೋಜನೆ ವೆಚ್ಚ 900 ಕೋಟಿ ರೂ ನಿಂದ 4 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳಗೊಂಡಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೂ ಬದಲಿಗೆ ಚಪ್ಪಲಿ; ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಕಾರಣವೇನು?
2026-27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕೆಲವು ಜಿಲ್ಲೆಗಳ ಹವಾಮಾನಕ್ಕೆ ಅನುಗುಣವಾಗಿ ಶೂಗಳ ಬದಲಿಗೆ ಚಪ್ಪಲಿಗಳನ್ನು ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಹೀಗಾಗಿ ಶಿಕ್ಷಕರು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಇನ್ನು ವಿದ್ಯಾರ್ಥಿಗಳ ದಾಖಲಾತಿ ಆಧರಿಸಿ ಈ ವಿತರಣೆ ನಡೆಯಲಿದೆ.
Gold Price On January 19: ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಜನವರಿ 19ರ ದರಪಟ್ಟಿ
Gold Price on January 19: ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಲಿದೆ. ಹಾಗಾದ್ರೆ, ಇಂದು (ಜನವರಿ 19) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ಜನವರಿ 18) ಬೆಂಗಳೂರು ಸೇರಿದಂತೆ
ಪ್ರೇಮಿಗಳ ಹಬ್ಬ ವ್ಯಾಲೆಟೆನ್ಸ್ ಡೇಗೆ ದಿನಗಣನೆ ಶುರುವಾಗಿದೆ. ಆದರೆ ಈ ಮಧ್ಯೆ ವಿದೇಶಕ್ಕೆ ಗುಲಾಬಿಗಳ ರಫ್ತು ಪ್ರಮಾಣದಲ್ಲಿ ಬೇಡಿಕೆ ಕುಂಠಿತವಾಗಿದೆ. ಆದರೆ, ವಿದೇಶಿ ಮಾರುಕಟ್ಟೆಗಿಂತ ಸ್ಥಳೀಯ ಮಾರುಕಟ್ಟೆಯತ್ತ ಪುಷ್ಪೋದ್ಯಮಿಗಳು ಗಮನ ಹರಿಸುತ್ತಿದ್ದಾರೆ. ವಿಮಾನ ದರದ ಮೇಲಿನ ಸಹಾಯಧನ ಸ್ಥಗಿತ ಮತ್ತು ಜಿಎಸ್ಟಿ ಕಾರಣದಿಂದಾಗಿ ವಿದೇಶಿ ರಫ್ತು ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಆದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಗುಲಾಬಿ ಹಾಗೂ ಇತರ ಅಲಂಕಾರಿಕ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಥೈಲ್ಯಾಂಡ್ ರೈಲು ದುರಂತದ ಬೆನ್ನಲ್ಲೇ ಮತ್ತೊಂದು ರೈಲು ಅಪಘಾತದ ಸುದ್ದಿ ಆಘಾತ ಹುಟ್ಟಿಸಿದೆ. ಸುಮಾರು 400 ಮಂದಿ ಪ್ರಯಾಣಿಕರಿದ್ದ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿವೆ.
ಬೆಂಗಳೂರಿನಲ್ಲಿ ಮೂಲೆಗುಂಪಾದ 'ನಮ್ಮ ಕ್ಲಿನಿಕ್' ರೋಗಿಗಳಿಗೆ ಬರ; ಮಾತ್ರೆ, ಲಸಿಕೆ ನೀಡಲಷ್ಟೇ ಸೀಮಿತ
ಬೆಂಗಳೂರಿನಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಉದ್ಘಾಟನೆಯಾಗಿದ್ದ 'ನಮ್ಮ ಕ್ಲಿನಿಕ್'ಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಪ್ರಯೋಗಾಲಯ ಪರಿಕರಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಔಷಧ ಪೂರೈಕೆಯಲ್ಲಿ ವಿಳಂಬ, ಮತ್ತು ಸಿಬ್ಬಂದಿ ವೇತನದಲ್ಲಿ ತೊಂದರೆಗಳು ಕಾಡುತ್ತಿವೆ. ನತಿಂಗಳ ಸಂಬಳ ನಂಬಿಕೊಂಡು ಬದುಕುವ ಸಿಬ್ಬಂದಿಗೆ ಇದೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ ನಿರೀಕ್ಷಿತ ಆರೋಗ್ಯ ಸೇವೆ ದೊರಕುತ್ತಿಲ್ಲ ಎನ್ನುವುದು ವಿಜಯ ಕರ್ನಾಟಕ ರಿಯಾಲಿಟಿ ಚೆಕ್ವೇಳೆ ತಿಳಿದು ಬಂದಿದೆ.
ಕಾಫಿಗೆ ದರ ಕುಸಿತ ಬರೆ : ಕಳೆದ ವರ್ಷ ದಾಖಲೆ ಮಟ್ಟಕ್ಕೇರಿದ್ದ ದರ, ಈ ಬಾರಿಯ ಕುಸಿತಕ್ಕೆ ಇಲ್ಲಿದೆ ಪ್ರಮುಖ 4 ಕಾರಣಗಳು..
ಮಡಿಕೇರಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಜೋರಾಗಿದೆ, ಆದರೆ ಬೆಳೆ ನಷ್ಟ, ಕಾರ್ಮಿಕರ ಕೊರತೆ ನಡುವೆ ಇದೀಗ ಕಾಫಿ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಮಾರುಕಟ್ಟೆಗೆ ಕಾಫಿ ಕೊಂಡೊಯ್ಯುತ್ತಿರುವ ರೈತರಿಗೆ ಈ ವರ್ಷದ ಬೆಲೆ ಕುಸಿತ ದಿಗಿಲು ಹುಟ್ಟಿಸುತ್ತಿದೆ.
ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ವಿರೋಧಿಸಿ ಜ.20ಕ್ಕೆ ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’
ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಮೇಲೆ ಮಾಡುತ್ತಿರುವ ದಾಳಿಯನ್ನು ವಿರೋಧಿಸಿ ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಜ.20ಕ್ಕೆ ನಗರದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ. ರವಿವಾರ ಈ ಕುರಿತು ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕಂಠಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ದಯಾನಂದ, ನಾಗೇಶ್ ಅರಳಕುಪ್ಪೆ, ಕೆ.ಆರ್.ಸುಭಾಷ್, ಮಾವಳ್ಳಿ ಅರವಿಂದ್, ಕೆ.ಎಸ್. ನಾಗರಾಜ್, ಅಖಿಲಾ ವಿದ್ಯಾಸಂದ್ರ, ವೇಣು, ರಘುಕುಮಾರ್ ಹಾಗೂ ಅಲಿಬಾಬಾ ಜಂಟಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ. ಇತ್ತಿಚಿನ ದಿನಗಳಲ್ಲಿ ನಮ್ಮನ್ನಾಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಗಡಣೆ ಮಾಡುವ ವಿಚಾರ ಹರಿಬಿಟ್ಟಿದೆ. ಅದೇನಾದರೂ ಕಾರ್ಯಗತವಾದರೆ ಒಕ್ಕೂಟ ವ್ಯವಸ್ಥೆಯಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಭಾರಿ ಪ್ರಮಾಣದ ಹೊಡೆತ ಬೀಳಲಿದೆ. ದೇಶ ಅರಾಜಕತೆಕಡೆಗೆ ತಳ್ಳಲ್ಪಡುತ್ತದೆ. ಅಷ್ಟೇ ಅಲ್ಲದೇ ಕೇಂದ್ರ ಸರಕಾರ ದಕ್ಷಿಣ ರಾಜ್ಯಗಳಿಗೆ ಕೊಡಬೇಕಾದ ತೆರಿಗೆಯ ಪಾಲನ್ನು ಕೊಡದೆ, ತಾರತಮ್ಯ ಧೋರಣೆ ಮಾಡುತ್ತಿದೆ. ಇಂತಹ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಮಂಥನದ ತುರ್ತು ಕೆಲಸವಾಗಬೇಕಾಗಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಆಶಯ ನುಡಿಗಳಾಡಲಿದ್ದಾರೆ. ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್.ಶಂಕರ್, ಸಾಹಿತಿಗಳಾದ ಡಾ.ಎಲ್.ಹನುಮಂತಯ್ಯ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ, ಥಂಪನ್ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಮಿಳುನಾಡಿನ ಶಾಸಕ ರಾಜೇಶ್ ಕುಮಾರ್, ಕೇರಳದ ಮಾಜಿ ಸಚಿವ ಪ್ರೊ.ಐಸ್ಯಾಕ್ ಥಾಮಸ್, ತೆಲಂಗಾಣದ ಶಾಸಕ ಡಾ.ವಂಶಿಕೃಷ್ಣ, ನೆರರಾಜ್ಯಗಳ ಮಾಜಿ ಶಾಸಕರಾದ ವಿಜಯರಾಘವನ್, ಯಾದವರೆಡ್ಡಿ, ಹಿರಿಯ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯೂ, ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಹೋರಾಟಗಾರರಾದ ಪ್ರೊ.ಪ್ರಕಾಶ್ ಕಮ್ಮರಡಿ, ಕೆ.ವಿ.ಭಟ್, ನೂರ್ ಶ್ರೀಧರ್, ಮಂಗ್ಳೂರ ವಿಜಯ ಸೇರಿದಂತೆ ಹಲವು ಸಾಹಿತಿಗಳು, ಚಿಂತಕರು ವಿವಿಧ ಗೋಷ್ಠಿಗಳಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮದುವೆ ನೆಪದಲ್ಲಿ ಬೆಂಗಳೂರು ಯುವತಿಗೆ ದೋಖಾ - 1.5 ಕೋಟಿ ರೂ. ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್
ವಿಜಯ್ರಾಜ್ ಗೌಡ ಎಂಬುವರ ವಿರುದ್ಧ ವೈಟ್ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್ವೇರ್ ಎಂಜಿನಿಯರ್ ನವ್ಯಶ್ರೀ ಅವರಿಂದ 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಉದ್ಯಮಿಯಾಗಿ ಸುಳ್ಳು ಹೇಳಿ ಆಸ್ತಿ ವಿವರ ನೀಡಿ ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದಾಗ ಮದುವೆಯಾಗಿ ಮಗು ಇರುವುದು ತಿಳಿದುಬಂದಿದೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ವಾರ್ತಾ ಇಲಾಖೆಯ ನಿಯಮ ಬದಲಾವಣೆಗೆ ದಿನೇಶ್ ಗೂಳಿಗೌಡ ಮನವಿ
ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸಿಎಂ ಸೂಚನೆ
ʼಮನರೇಗಾʼ ಮರು ಸ್ಥಾಪನೆಯಾಗುವವರೆಗೆ ಹೋರಾಟಕ್ಕೆ ಸಜ್ಜಾಗಿ : ಸಿದ್ದರಾಮಯ್ಯ ಕರೆ
ಮೈಸೂರು: ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮನರೇಗಾ ಮರು ಸ್ಥಾಪನೆಯಾಗುವವರೆಗೆ ಮಾಡುವ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ. ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ರವಿವಾರ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು. ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರಕಾರ ಅದನ್ನು ತೀರ್ಮಾನಿಸಲಿದೆ. ವಿಬಿ- ಜಿ ಗ್ರಾಮ್ ಜಿ ರದ್ದಾಗಬೇಕು. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಕುಪ್ಯಾ ಗ್ರಾಮದಲ್ಲಿ ಸುಮಾರು 323 ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ವರುಣಾ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2024ರಲ್ಲಿ 501 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ನಂತರ 2025ರಂದು 1108 ಕೋಟಿ ರೂ.ಗಳ ಕಾರ್ಯಕ್ರಮ. ಮತ್ತು ಇಂದು 323 ಕೋಟಿ ಸೇರಿದಂತೆ ಒಟ್ಟು 1932 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ವರುಣಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ ಎಂದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ.ಮಹದೇವಪ್ಪ, ಸಚಿವ ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರು ಹಾಗೂ ರಾಜ್ಯ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಡಿ.ರವಿಶಂಕರ್ ಸೇರಿ ಮೊದಲಾದವರು ಉಪಸ್ಥಿತರಿದ್ದರು.
ಭಾರತ - ನ್ಯೂಜಿಲೆಂಡ್ ಸರಣಿ ಮುಗಿಯುತ್ತಿದ್ದಂತೆ ರವೀಂದ್ರ ಜಡೇಜಾ ನಿವೃತ್ತಿ? ಆಪ್ತ ಸ್ನೇಹಿತನೇ ಕೊಟ್ಟ ಸುಳಿವು?
ಭಾರತದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಬ್ಯಾಟಿಂಗ್ ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಮಾಜಿ ಸಹ ಆಟಗಾರರೊಬ್ಬರು ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಜಡೇಜಾ ಅವರ ಪ್ರದರ್ಶನ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ಅಧ್ಯಾತ್ಮ ಧರ್ಮಗಳನ್ನು ದಾಟಿದ ಸಂಗತಿ : ಡಾ.ನಟರಾಜ್ ಬೂದಾಳ್
ಮೈಸೂರು : ಅಧ್ಯಾತ್ಮ ಧರ್ಮಗಳನ್ನು ದಾಟಿದ ಸಂಗತಿ. ಜಗತ್ತಿನಲ್ಲಿ ಪೊಳ್ಳು ತತ್ವಜ್ಞಾನಗಳು, ಸುಳ್ಳು ಧರ್ಮಗಳು ಸಾವಿರ ವರ್ಷಗಳಿಂದ ನಮ್ಮ ಬದುಕನ್ನು ಈಡಾಡುತ್ತ ಬಂದಿರುವ ಧಾರ್ಮಿಕತೆಗೆ ಪ್ರತಿಯಾಗಿ ಅಧ್ಯಾತ್ಮ ಬಳಸಬಹುದೇ ಎಂಬುದನ್ನು ಎಚ್ಚರದಿಂದ ತೀರ್ಮಾನಿಸಬೇಕಿದೆ ಎಂದು ವಿದ್ವಾಂಸ ಡಾ.ನಟರಾಜ್ ಬೂದಾಳ್ ಹೇಳಿದ್ದಾರೆ. ಕಿರುರಂಗಮಂದಿರದಲ್ಲಿ ಬಹುರೂಪಿ ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರವಿವಾರ ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬುದ್ಧನನ್ನು ಯಾಕೆ ಸ್ವೀಕರಿಸಿದ್ದಾರೆ ಎಂದರೆ ಆತ ವಿಜ್ಞಾನಿ. ಲೋಕದ ಸಂಕಟಕ್ಕೆ ಸೂಕ್ತ ಪರಿಹಾರ ಸೂಚಿಸಿದ ವೈದ್ಯ. ಜಗತ್ತಿನ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ ಬಾಬಾ ಸಾಹೇಬರು ಯಾವ ಧರ್ಮಕ್ಕೆ ಸೇರದೇ ಇರಬಹುದಾಗಿತ್ತು. ಆದರೆ, ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು. ಜೆನ್ ಝಿ ಜನಾಂಗ ಯೂರೋಪಿನಲ್ಲಿ ಶೇ.65 ಯುವಕರು ತಾವು ಯಾವ ಧರ್ಮಕ್ಕೂ ಸೇರಿದವರಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇದನ್ನು ಬಹಳ ಎಚ್ಚರದಿಂದ ಗಮನಿಸಬೇಕು ಎಂದು ಹೇಳಿದರು. ಭಾರತದಲ್ಲಿ ಅದೆಷ್ಟು ಕಾಲನಿಗಳಿವೆ. ಬರೀ ದಲಿತ ಕಾಲನಿಗಳಲ್ಲ. ಭಾಷೆಯ, ಲಿಂಗದ ಕಾಲನಿಗಳಿವೆ. ಇಡೀ ದಕ್ಷಿಣ ಭಾರತಕ್ಕೆ ಉತ್ತರ ವೈದಿಕ ಭಾರತ ಕಾಲನಿ. ತುಳಿಯುವ ಜಾತಿ ಕೂಡ ಒಂದು ಕಾಲನಿ. ತುಳಿಸಿಕೊಳ್ಳುವ ಜಾತಿ ಕೂಡ ಒಂದು ಕಾಲನಿಯಾಗಿದೆ. ಅನೈಸರ್ಗಿಕ ಜೀವನ ಕ್ರಮ ಬಾಳುತ್ತಿದ್ದೇವೆ. ತುಳಿಯುವವನಿಗೂ ಅದೇ ಬಂಧನ. ತುಳಿಸಿಕೊಳ್ಳುವವನಿಗೂ ಅದೇ ಬಂಧನ. ತಾತ್ವಿಕತೆಯ ಜೀತ ಅತ್ಯಂತ ಹೀನಾಯವಾದದ್ದು. ದಲಿತರು ಮಾತ್ರವಲ್ಲ, ಬ್ರಾಹ್ಮಣರು ತಾತ್ವಿಕತೆಯ ಜೀತ ಮಾಡುತ್ತಿದ್ದಾರೆ ಎಂದರು. ಬೈಲುಕುಪ್ಪೆಯ ಸೆರಾಜೆ ಬಿಕ್ಕು ತರಬೇತಿ ಕೇಂದ್ರದ ಬಂತೆ ತುಪ್ಟನ್ ಕಲ್ಡಾನ್ ವಿಷಯ ಮಂಡಿಸಿದರು. ಅಂಬೇಡ್ಕರ್ ಒಂದೇ ಸಂವಿಧಾನ ಕೊಡಲಿಲ್ಲ. ಶಕ್ತಿಶಾಲಿಯಾದ ಸಾಂಸ್ಕೃತಿಕ ಸಂವಿಧಾನ ಕೊಟ್ಟರು. ಅದು ನಮ್ಮ ಬದುಕಿನ ನಡೆಗಳನ್ನು ನಿರ್ಣಯಿಸುತ್ತದೆ. ಅನೇಕ ದುಷ್ಟ ಸಮೀಕರಣಗಳು ನಡುವೆ ಇದ್ದೇವೆ. ಕೇಡಿನ ಜತೆಗೆ ಬಾಳುತ್ತಿದ್ದೇವೆ. ಪಾಂಥಿಕ ಆವರಣಕ್ಕೆ ಹೊದರೆ ಯಾವ ಧರ್ಮಕ್ಕೆ ಮೂಲ ಇರುವುದಿಲ್ಲ. ಅಧ್ಯಾತ್ಮ ಸ್ವರೂಪ ತೀರ್ಮಾನಿಸಿಕೊಂಡಿರುವ ಸಂಗತಿ ಅಲ್ಲ. ಅಧ್ಯಾತ್ಮ ವ್ಯಕ್ತಿಗತ ಬಿಡುಗಡೆಯ ಪ್ರಶ್ನೆಯಲ್ಲ. ಅಧ್ಯಾತ್ಮದ ಎದುರು ಧರ್ಮಗಳಿವೆ. ಜೀತದ ಬಿಡುಗಡೆಗೆ ಬೇಕಿರುವುದು ಅಧ್ಯಾತ್ಮ. ಪ್ರಜಾಸತ್ತೆಗಿಂತ ಮೀರಿದ ಧರ್ಮ ಬೇರೆ ಇಲ್ಲ. - ಡಾ.ನಟರಾಜ್ ಬೂದಾಳ್, ವಿದ್ವಾಂಸರು
ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು : ಶಾಸಕ ಬಸವಂತಪ್ಪ
ದಾವಣಗೆರೆ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ
ಅಧಿಕಾರ ಹಂಚಿಕೆ: ಗಾಯ ಕೆರೆದವರು ಯಾರು?
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಬಾಧಿಸುತ್ತಿರುವ ನಾಯಕತ್ವ ಬದಲಾವಣೆ ಎಂಬ ಸಮಸ್ಯೆಯನ್ನು ಹುಟ್ಟುಹಾಕಿದ್ದೇ ಆ ಪಕ್ಷದ ಹೈಕಮಾಂಡ್; ಸ್ಪಷ್ಟವಾದ ಸಂದೇಶ ನೀಡದಿರುವ ಮೂಲಕ. ಒಂದು ಹಂತದಲ್ಲಿ ಆ ವಿಷಯ ಸತ್ತೇ ಹೋಗಿದೆ, ಕೇರಳ ಚುನಾವಣೆ ಮುಗಿಯುವವರೆಗೆ ಅದರ ಬಗ್ಗೆ ಮಾತೇ ಇಲ್ಲ ಎನ್ನುವಂತಾಗಿತ್ತು. ಈಗ ಮತ್ತೆ ಹಳೆಯ ಗಾಯವನ್ನು ಕೆರೆದವರು ಯಾರು? ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿಲ್ಲ ಎನ್ನುವುದು ಈ ಅಂಕಣಕಾರನ ಖಚಿತ ಅಭಿಪ್ರಾಯ. ಅದು ಮೂವರ ನಡುವೆ ನಡೆದಿರುವ ಮಾತುಕತೆ. ಅವರ ಪೈಕಿ ಯಾರೊಬ್ಬರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ‘ಅಧಿಕಾರ ಹಂಚಿಕೆಯ ಪ್ರಾರ್ಥನೆ ಫಲಿಸಿರಬಹುದು’, ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಭೇಟಿ ಮಾಡುವ ವಿಶ್ವಾಸದಲ್ಲಿ ಇರಬಹುದು ಎಂಬ ವ್ಯಾಖ್ಯಾನಗಳು, ವಿಶ್ಲೇಷಣೆಗಳಾಗುತ್ತಿವೆ. ಸರಕಾರ ಬಂದಾಗ ಮುಖ್ಯಮಂತ್ರಿ ಮಾಡುವುದು ಬೇರೆ ವಿಚಾರ. ತದನಂತರ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಎಲ್ಲಾ ಕಾಲಕ್ಕೂ, ಎಲ್ಲಾ ಪಕ್ಷಗಳಿಗೂ, ಎಲ್ಲಾ ನಾಯಕರಿಗೂ ಸವಾಲಿನ ಪ್ರಶ್ನೆಯೇ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡುವುದು ಎಷ್ಟು ಕಷ್ಟವೋ ಅವರನ್ನು ಆ ಸ್ಥಾನದಿಂದ ಇಳಿಸುವುದು ಅದಕ್ಕಿಂತಲೂ ಕಷ್ಟ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿನ ಬಹಳ ಒಳ್ಳೆಯ ಉದಾಹರಣೆ ಎಂದರೆ 2014ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಬೇಕಾದ ಸಂದರ್ಭ ಬಂದಾಗ ತಮ್ಮ ಅತ್ಯಂತ ಆಪ್ತ, ಅತ್ಯಂತ ದುರ್ಬಲ, ಯಕಶ್ಚಿತ್ ಶಾಸಕ ಎಂದೇ ಹೇಳಲಾಗುತ್ತಿದ್ದ ಜಿತಿನ್ ರಾಮ್ ಮಾಂಝಿ ಅವರನ್ನು ತಂದು ಕೂರಿಸಿದ್ದು ಹಾಗೂ ಮಾಂಝಿಯನ್ನು ಮಾಜಿ ಮಾಡಲು ಚಾಣಾಕ್ಷ ರಾಜಕಾರಣಿ ನಿತೀಶ್ ಕುಮಾರ್ ಆವರೆಗೆ ಕಲಿತಿದ್ದ ರಾಜಕೀಯ ವಿದ್ಯೆಗಳೆಲ್ಲವನ್ನೂ ಬಳಸಿದ್ದು. ಮೊದಲಿಗೆ ನಿತೀಶ್ ತಂಡದಲ್ಲಿ ಮಾಂಝಿ ಒಬ್ಬ ಕಾರ್ಮಿಕನ ರೀತಿ ಇದ್ದವರು. ಈಗ ಅದೇ ನಿತೀಶ್ ಸರಕಾರದಲ್ಲಿ ಅವರು ಪಾಲುದಾರ (ಪುಷ್ಪ ಸಿನೆಮಾ ರೀತಿ). ದಿಲ್ಲಿಗೆ ಬೆಂಗಳೂರಿಗಿಂತ ಪಾಟ್ನಾ ಬಲು ಸಮೀಪ. ರಾಹುಲ್ ಗಾಂಧಿಗೆ ಈ ನಿದರ್ಶನ ಗೊತ್ತಿಲ್ಲದಿರುವ ಸಾಧ್ಯತೆ ಇಲ್ಲ. ಆದರೂ ನಾಯಕತ್ವ ಬದಲಾವಣೆ ಬಗ್ಗೆ ನಿರ್ಲಿಪ್ತ ನಿಲುವು ತೆಳೆದಿದ್ದಾರೆ. ಒಬ್ಬರಿಗೆ ಅಧಿಕಾರ ಕೊಡಲು ಇಷ್ಟವಿಲ್ಲದಿದ್ದರೆ, ಇನ್ನೊಬ್ಬರಿಗೆ ಇರುವ ಅಧಿಕಾರವನ್ನು ಸುಸೂತ್ರವಾಗಿ ನಡೆಸಲು ಇದ್ದ ಅಡೆತಡೆಗಳನ್ನು ನಿವಾರಿಸಬಹುದಿತ್ತು. ಅದನ್ನೂ ಮಾಡಿಲ್ಲ ಎನ್ನುವುದಾದರೆ ಇರುವ ವ್ಯವಸ್ಥೆ ಬಗೆಗೂ ಅವರಿಗೆ ಸಮಾಧಾನ ಇಲ್ಲವೇನೋ ಎಂಬುದಾಗಿ ಕೂಡ ವ್ಯಾಖ್ಯಾನಿಸಬಹುದು. ಅದೇನೇ ಇದ್ದರೂ ಅವರು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು ಎನ್ನುವುದು ವಾಸ್ತವ. ಬಹಳ ವಿಷಯಗಳಲ್ಲಿ ಸ್ಥಳ ಮಹಿಮೆ ಎನ್ನುವುದು ಮಹತ್ವದ ಪಾತ್ರವಹಿಸುತ್ತದೆ. ರಾಜಕೀಯದಲ್ಲಿ ಒಂಚೂರು ಜಾಸ್ತಿಯೇ ಮಹತ್ವ ಇರುತ್ತದೆ. ಮೈಸೂರು ವಿಮಾನ ನಿಲ್ದಾಣದ ಬದಲು ದಿಲ್ಲಿಯಲ್ಲಿ ಕೂತು ಮಾತನಾಡಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ. ನಾಯಕತ್ವ ಬದಲಾವಣೆ ವಿಚಾರವನ್ನು ಬಿಡಿ, ಕೇರಳ ಚುನಾವಣೆಯಿಂದ ಹಿಡಿದು, ಸಚಿವ ಸಂಪುಟ ಪುನರ್ ರಚನೆವರೆಗೆ ಬೇರಾವುದೇ ವಿಷಯವನ್ನಾದರೂ ದಿಲ್ಲಿಗೆ ಕರೆಸಿಕೊಂಡು ಮಾತನಾಡಬಹುದಿತ್ತು. ಕರ್ನಾಟಕದಲ್ಲೂ ಕೇರಳದ ಚರ್ಚೆ ಮುಂದೆ ನಡೆಯುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಗೆಲ್ಲುವ ಅವಕಾಶ ಇರುವುದು ಕೇರಳದಲ್ಲಿ ಮಾತ್ರ. ಅದರಿಂದಾಗಿ ಸದ್ಯ ರಾಹುಲ್ ಗಾಂಧಿ ಕೇರಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಕರ್ನಾಟಕದ ವಿದ್ಯಮಾನಗಳಿಗೆ ಈಗ ಅವರ ಬಳಿ ವಿಶೇಷ ಮಾನ್ಯತೆ ಇಲ್ಲ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಜ್ಯ ನಾಯಕರನ್ನು ಭೇಟಿ ಮಾಡುವ ಉದ್ದೇಶವೂ ಅವರಿಗಿರಲಿಲ್ಲ. ಅದೇ ಕಾರಣಕ್ಕೋ ಏನೋ ಕರ್ನಾಟಕದ ನಾಯಕರ ಜೊತೆ ಕೇರಳದ ವಿಷಯವನ್ನಷ್ಟೇ, ಅದೂ ಕೆಲವೇ ನಿಮಿಷ ಮಾತನಾಡಿ ಅಲ್ಲಿಂದ ಜಾಗ ಖಾಲಿ ಮಾಡಿದರು ಎನ್ನುತ್ತವೆ ದಿಲ್ಲಿ ಮೂಲಗಳು. ಸಿದ್ದುಗೆ ರಾಹುಲ್ ಕರೆ ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆ ಮುರಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕರೆ ಮಾಡಿದ್ದಾರೆ. ಶಾಸ್ತ್ರಕ್ಕೆ ಅಭಿನಂದನೆ ಹೇಳಿ ಮರುಕ್ಷಣವೇ ಕೇರಳ ಚುನಾವಣೆ ಕಡೆಗೆ ಹೊರಳಿದ್ದಾರೆ. ರಾಜ್ಯ ಬಜೆಟ್, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಉತ್ಸಾಹ ತೋರಿದರೂ ರಾಹುಲ್ ಗಾಂಧಿ ಮತ್ತೆ ಮತ್ತೆ ತಲುಪಿದ್ದು ಕೇರಳದ ಕಡೆಗೆ ಎನ್ನುತ್ತವೆ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಜೊತೆ ಮಾತನಾಡಿದ್ದರಿಂದ ಅವರು ಮತ್ತೊಮ್ಮೆ ರಾಜ್ಯ ನಾಯಕರನ್ನು ಮೈಸೂರಿಗೆ ಕರೆಸಿಕೊಂಡು ಮಾತನಾಡುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆಯ ಬೆನ್ನುಹತ್ತಿದರೆ ಅವರು ಕರೆಸಿಕೊಂಡಿರಲಿಲ್ಲ ಎನ್ನುವ ಮಾಹಿತಿ ಖಚಿತವಾಗುತ್ತದೆ.ಜೊತೆಜೊತೆಯಲ್ಲಿ ಕೇರಳದ ವಿಷಯವೂ ತೆರೆದುಕೊಳ್ಳುತ್ತದೆ. ಯಾರು ಏನೇ ಮಾತನಾಡಿದರೂ ತಮಗೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿಕೊಳ್ಳುವ ಮಾಧ್ಯಮಗಳ ಮತ್ತು ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಅಧಿಕಾರದ ಕನಸು ಕಟ್ಟಿಕೊಟ್ಟಿಕೊಡುವ ಸ್ವಾಮೀಜಿ/ಜ್ಯೋತಿಷಿಗಳ ಆರ್ಭಟ-ಕಪಟಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ರಾಜ್ಯ ನಾಯಕರು ಮೈಮರೆತಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಕೂಡ ‘ಕಾಂಗ್ರೆಸಿಗ’ ಎನ್ನುವುದನ್ನು ನಿರೂಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಅಸ್ಪಷ್ಟತೆಗೆ ಇನ್ನಷ್ಟು ನಿದರ್ಶನಗಳು ಬೇಕೆಂದರೆ... ಅವರೀಗ ದೇಶಾದ್ಯಂತ ಹಿಂದುಳಿದವರು, ಪರಿಶಿಷ್ಟ ಜಾತಿಯವರು, ಪಂಗಡದವರು, ಆದಿವಾಸಿಗಳು, ಸಣ್ಣಸಂಖ್ಯಾತರು ಆಯಕಟ್ಟಿನ ಜಾಗಕ್ಕೆ ಬರಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಅವರ ಪಕ್ಷ ಅಧಿಕಾರದಲ್ಲಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಮಾತ್ರ ಹಿಂದುಳಿದ ಜಾತಿಯ ಅಥವಾ ಅಹಿಂದ ನಾಯಕ. ಉಳಿದಿಬ್ಬರು ಮುಂದುವರಿದ ಜಾತಿಗೆ ಸೇರಿದವರು. ಇದು ಗೊತ್ತಿದ್ದೂ ಹಿಂದುಳಿದ ಜಾತಿಯ ನಾಯಕನೊಬ್ಬ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವುದನ್ನು ನಾಲ್ಕು ಕೋಣೆಯೊಳಗಾದರೂ ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗೆಯೇ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಕೂಡ ಚರ್ಚೆಯಾಗುತ್ತಿದೆ(ತೀವ್ರವಾಗಿ ಅಲ್ಲ). ದಲಿತರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸಬೇಕಿತ್ತಲ್ಲವೇ? 2021ರಲ್ಲಿ ಇದೇ ರಾಹುಲ್ ಗಾಂಧಿ ಪಂಜಾಬ್ನಲ್ಲಿ ದಲಿತ ನಾಯಕ ಚರಣಜಿತ್ ಸಿಂಗ್ ಚೆನ್ನಿ ಅವರನ್ನು ಭಾರೀ ವಿರೋಧದ ನಡುವೆಯೂ ಮುಖ್ಯಮಂತ್ರಿ ಮಾಡಿದ್ದರು. ಈಗಲೂ ಅಂಥ ಧೈರ್ಯ ಅಥವಾ ಬದ್ಧತೆ ಪ್ರದರ್ಶಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಆಡಳಿತದ 2013-2018ರ ಅವಧಿಗೂ ಇಂದಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈಗ ಅವರ ಆಡಳಿತ ಕಾರ್ಯವೈಖರಿಗೆ ದೊಡ್ಡ ಸಾವಾಲಾಗಿರುವುದು ಕಾಂಗ್ರೆಸ್ ಹೈಕಮಾಂಡ್ ಹೇರಿರುವ ಗ್ಯಾರಂಟಿಗಳು. ಗ್ಯಾರಂಟಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ನೀಡುತ್ತಿರುವ ದೂರದೃಷ್ಟಿಯುಳ್ಳ ಅಪರೂಪದ ಯೋಜನೆಗಳು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ರಾಜ್ಯದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗಲು, ಮಹಿಳೆಯರು ಸ್ವಾವಲಂಬಿಗಳಾಗಲು, ಗುಳೆ ಹೋಗುತ್ತಿದ್ದವರ ಪ್ರಮಾಣ ಕಮ್ಮಿಯಾಗಲು ಮತ್ತು ಜಿಎಸ್ಟಿ ಸಂಗ್ರಹ ಜಾಸ್ತಿಯಾಗಲು ಗ್ಯಾರಂಟಿ ಯೋಜನೆಗಳೇ ಕಾರಣ ಎನ್ನುವುದು ಅತಿಶಯೋಕ್ತಿಯೂ ಅಲ್ಲ. ಆದರೆ ಒಂದೇ ಸಲಕ್ಕೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಹೊರಟಿದ್ದು ದುಸ್ಸಾಹಸ. ಗ್ಯಾರಂಟಿಗಳೆಂಬ ಮಣಭಾರ ಹೊರಿಸಿ ಸರಕಾರ ಶರವೇಗದಲ್ಲಿ ಓಡಲಿ ಎಂದು ಬಯಸಿದರೆ ಅರ್ಥವುಂಟೆ? ಎರಡನೆಯದಾಗಿ ಈಗ ಅಧಿಕಾರ ಕೇಂದ್ರಗಳು ಕೂಡ ಜಾಸ್ತಿ. ಈ ಕಗ್ಗಂಟನ್ನು ಬಿಡಿಸಬೇಕಾಗಿದ್ದವರು ರಾಹುಲ್ ಗಾಂಧಿ ಅಲ್ಲವೇ? ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಕೂಡ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ. ಕೇಂದ್ರ ಸರಕಾರ ಜಾತಿ ಗಣತಿ ಮಾಡುವುದಾಗಿ ಘೋಷಿಸಿದಾಗ, ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದೇ ಕೇಂದ್ರ ಸರಕಾರ ಜಾತಿ ಗಣತಿ ಘೋಷಿಸಿದೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದರೆ ರಾಹುಲ್ ಗಾಂಧಿ ಜಾತಿ ಗಣತಿ ಬಗ್ಗೆ ಮಾತನಾಡುತ್ತಿರುವುದು ಯಾವಾಗಿನಿಂದ? 2024ರ ಲೋಕಸಭಾ ಚುನಾವಣೆ ಸಂದರ್ಭದಿಂದ. ಸಿದ್ದರಾಮಯ್ಯ ಜಾತಿಗಣತಿ ಬಗ್ಗೆ 20 ವರ್ಷದ ಹಿಂದೆ ನಡೆದ ಅಹಿಂದ ಸಮಾವೇಶದಲ್ಲೇ ಮಾತನಾಡಿದ್ದರು. 2007ರಲ್ಲಿ ಕೇಂದ್ರ ಸರಕಾರ ಜಾತಿಗಣತಿ ಪೈಲೆಟ್ ಪ್ರಾಜೆಕ್ಟ್ ಗಾಗಿ 23.5 ಕೋಟಿ ರೂ. ಕೊಟ್ಟಿತ್ತು. ಅದಕ್ಕೆ 1.5 ಕೋಟಿ ರೂ. ಸೇರಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ ತಯಾರಿಗಾಗಿ ಒಟ್ಟು 25 ಕೋಟಿ ರೂ. ಕೊಟ್ಟದ್ದು ಆಗ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ. ನಂತರ ಅವರು ಮುಖ್ಯಮಂತ್ರಿಯಾದ ಮೇಲೆ 2014ರಲ್ಲಿ ಜಾತಿಗಣತಿ ಮಾಡುವುದಾಗಿ ಘೋಷಿಸಿದರು. ಇದರಿಂದ ಕಾಂತರಾಜ್ ಆಯೋಗ ಸುದೀರ್ಘವಾಗಿ, ಸಮರ್ಪಕವಾಗಿ, ಸಮರ್ಥನೀಯವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಯಿತು. ಆದರೂ ರಾಹುಲ್ ಗಾಂಧಿ ಉಲ್ಲೇಖಿಸುತ್ತಿರುವುದು ಅವಸರದಲ್ಲಿ ನಡೆದ ತೆಲಂಗಾಣದ ಜಾತಿಗಣತಿ ಬಗ್ಗೆ. ಇದಕ್ಕೂ ಮೀರಿ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿ ಜಯಪ್ರಕಾಶ್ ಹೆಗ್ಡೆ ಆಯೋಗ ಕೊಟ್ಟಿದ್ದ ವರದಿ ಜಾರಿ ಮಾಡುವ ಕುರಿತು ವಿಷಯಾಧಾರಿತವಾಗಿಯಾದರೂ ಸಿದ್ದರಾಮಯ್ಯ ಜೊತೆ ನಿಲ್ಲದೆ ಆ ವರದಿ ಕಸದ ಬುಟ್ಟಿಗೆ ಎಸೆಯಲ್ಪಡುವಂತಾಗಲು ರಾಹುಲ್ ಗಾಂಧಿ ಕಾರಣ ಅಲ್ಲವೇ? ಸಂವಿಧಾನದ ಪ್ರತಿ ಹಿಡಿದು ದೇಶ ಸುತ್ತುವ, ಸಂವಿಧಾನ ರಕ್ಷಿಸಿ ಎಂದು ಹೇಳುವ ರಾಹುಲ್ ಗಾಂಧಿಗೆ, ಕೆ.ಎನ್. ರಾಜಣ್ಣ ಅವರನ್ನು ಒಂದು ಮಾತೂ ಕೇಳದೆ, ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿ ಸಂಪುಟದಿಂದ ವಜಾ ಮಾಡಿದ್ದು ಅಪ್ರಜಾಪ್ರಭುತ್ವ ನಡೆ ಎನಿಸುವುದಿಲ್ಲ. ಮೊನ್ನೆ ಮೊನ್ನೆ ಕೂಡ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದದ್ದು ಶಾಲೆಯೊಂದರ ಕಾರ್ಯಕ್ರಮ ಮುಗಿಸಿ. ಆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿಯಾಗಬಾರದು, ಶಿಕ್ಷಣ ಖಾಸಗೀಕರಣವಾಗಬಾರದು, ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರಕಾರಿ ಶಿಕ್ಷಣ ವ್ಯವಸ್ಥೆ ಸದೃಢವಾಗಿರಬೇಕು ಎಂದಿದ್ದಾರೆ. ಆದರೆ ಅವರದೇ ಪಕ್ಷದ ರಾಜ್ಯ ನಾಯಕರನೇಕರು ಶಿಕ್ಷಣವನ್ನು ಬಿಕರಿಗಿಟ್ಟು ತಿಜೋರಿ ತುಂಬಿಕೊಳ್ಳುತ್ತಿದ್ದಾರೆ. ಪಕ್ಷ ಮತ್ತು ಸರಕಾರದಲ್ಲಿ ಇಂಥ ನೀತಿಗಳ ಬಗ್ಗೆ ರಾಹುಲ್ ಗಾಂಧಿ ಕಿವಿ ಹಿಂಡಬಹುದಲ್ಲವೇ? ಕಾಂಗ್ರೆಸ್ ಪಕ್ಷ ಈಗ ಮನರೇಗಾ ವಿರುದ್ಧ ಜನವರಿ 26ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆಯಂತೆ. ತಾಲೂಕು ಮಟ್ಟದಲ್ಲೂ ಪಾದಯಾತ್ರೆ ನಡೆಸಲಿದೆಯಂತೆ. ಇಷ್ಟು ತಡ ಮಾಡುತ್ತಿರುವುದು ಏಕೆ? ಆ ಕ್ಷಣಕ್ಕೆ ಸ್ಪಂದಿಸದಿದ್ದರೆ ಯಾವ ಹೋರಾಟವೂ ಯಶಸ್ಸು ಸಾಧಿಸಲಾರದು. ಇದೇ ರಾಹುಲ್ ಗಾಂಧಿ ಮತ್ತವರ ತಂಡ (ಕಾಂಗ್ರೆಸ್ ಪಕ್ಷ ಅಲ್ಲ) ಇತ್ತೀಚೆಗೆ ಮತಗಳ್ಳತನದ ಹೋರಾಟ ಆರಂಭಿಸಿತ್ತು. ಅದಕ್ಕೂ ಮೊದಲು ಸಂವಿಧಾನ ರಕ್ಷಿಸುವ ಅಭಿಯಾನ ಹಮ್ಮಿಕೊಂಡಿತ್ತು. ಅದಕ್ಕೂ ಹಿಂದೆ ಚುನಾವಣಾ ಬಾಂಡ್, ರಫೇಲ್, ಇನ್ನೊಂದು, ಮತ್ತೊಂದು ವಿಚಾರಗಳನ್ನು ಕೈಗೆತ್ತಿಕೊಂಡಿತ್ತು. ಒಂದು ಬಂದ ಮೇಲೆ ಮತ್ತೊಂದನ್ನು ಮರೆಯಲಾಯಿತು. ಈಗ ಮನರೇಗಾ ಬಂತು, ಮತಗಳ್ಳತನ ಮೂಲೆಗುಂಪಾಯಿತು. ಇದರ ಜವಾಬ್ದಾರಿ ಹೊರಬೇಕಾದವರು ಯಾರು? ರಾಹುಲ್ ಗಾಂಧಿ ಅಲ್ಲವೇ?
Vijay Hazare Trophy- ಕಳೆದ ವರ್ಷ ಕರ್ನಾಟಕದ ವಿರುದ್ಧ ಎಡವಿದ್ದ ವಿದರ್ಭಕ್ಕೆ ಈಗ ಚೊಚ್ಚಲ ಪ್ರಶಸ್ತಿ ಸಂಭ್ರಮ!
Vidarbha New VHT Champion- ಕಾಲ ಇದ್ದ ಹಾಗೆ ಇರುವುದಿಲ್ಲ ಎಂದು ಹೇಳುವುದು ಇದಕ್ಕೇ ನೋಡಿ. ಕಳೆದ ವರ್ಷ ವಿಜಯ ಹಜಾರೆ ಟ್ರೋಫಿ ಫೈನಲ್ ನಲ್ಲಿ ವಿದರ್ಭ ತಂಡ ನಿರಾಸೆ ಅನುಭವಿಸಿತ್ತು. ಕರ್ನಾಟಕದ ವಿರುದ್ಧ ಸೋಲನುಭವಿಸಿದ್ದ ತಂಡ ಈ ಬಾರಿ ಸೆಮಿಫೈನಲ್ ನಲ್ಲಿ ಅದೇ ತಂಡವನ್ನು ಸೋಲಿಸಿ ಫೈನಲ್ ಗೇರಿ ನಿಂತಿತ್ತು. ಕಳೆದ ಬಾರಿ ಮಾಡಿದ ತಪ್ಪನ್ನು ಈ ಬಾರಿ ಸೌರಾಷ್ಟ್ರದ ವಿರುದ್ಧ ಮಾಡದ ವಿದರ್ಭ ಇದೀಗ ಚಾಂಪಿಯನ್ ಆಗಿ ಮೂಡಿ ಬಂದಿದೆ. ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಆಥರ್ವ ತಾಯಿಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ರಚಿಸಲಾಗುತ್ತಿರುವ 'ಬೋರ್ಡ್ ಆಫ್ ಪೀಸ್' ಸಮಿತಿಗೆ ಭಾರತವನ್ನು ಆಹ್ವಾನಿಸಿದ್ದಾರೆ. ಈ ಸಮಿತಿ ಗಾಜಾದ ಆಡಳಿತ, ಪುನರ್ನಿರ್ಮಾಣ ಮತ್ತು ಹೂಡಿಕೆಗಳ ಮೇಲೆ ಗಮನಹರಿಸಲಿದೆ. ಭಾರತದೊಂದಿಗೆ ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಯುರೋಪಿಯನ್ ಕಮಿಷನ್ ಮತ್ತು ಇತರ ದೇಶಗಳ ನಾಯಕರನ್ನೂ ಆಹ್ವಾನಿಸಲಾಗಿದೆ. ಮಾಜಿ ಪ್ರಧಾನಿ ಟೋನಿ ಬ್ಲೇರ್ ಸ್ಥಾಪಕ ಕಾರ್ಯನಿರ್ವಾಹಕ ಸದಸ್ಯರಾಗಿದ್ದಾರೆ.
ಫೆ.11, 12ರಂದು ಕಂಪ್ಲಿ ಉತ್ಸವ : ಶಾಸಕ ಜೆ.ಎನ್.ಗಣೇಶ್
ಕಂಪ್ಲಿ: ತಾಲೂಕಿನ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ 'ಕಂಪ್ಲಿ ಉತ್ಸವ'ವನ್ನು ಫೆ.11 ಮತ್ತು 12ರಂದು ಹಾಗೂ 'ಕುರುಗೋಡು ಉತ್ಸವ'ವನ್ನು ಫೆ.15 ಮತ್ತು 16ರಂದು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಘೋಷಿಸಿದರು. ಪಟ್ಟಣದ ಕೊಟ್ಟಾಲ್ ಪ್ರದೇಶದಲ್ಲಿ 2024-25ನೇ ಸಾಲಿನ ಕೆಕೆಆರ್ಡಿಬಿ (KKRDB) ಯೋಜನೆಯಡಿ ಸುಮಾರು 50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಉತ್ಸವಗಳ ಯಶಸ್ವಿ ಆಯೋಜನೆಗಾಗಿ ಸರ್ಕಾರಕ್ಕೆ 5 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಕೇವಲ ಒಂದೆರಡು ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ಸವ ಮಾಡುವುದು ಕಷ್ಟಕರವಾಗಿರುವುದರಿಂದ, ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಕ್ಷೇತ್ರಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡ ಎಂ. ಸುಧೀರ್ ಮಾತನಾಡಿ, ಸ್ಥಳೀಯ ಸ್ಮಶಾನದ ಸುತ್ತಲೂ ತಂತಿ ಬೇಲಿ ಅಳವಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಬೇಕು. ಹಾಗೆಯೇ ನಾರಿಹಳ್ಳದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಹರಿವಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಡಿಒ ಅಪರಂಜಿ, ಪ್ರಮುಖ ಮುಖಂಡರಾದ ಎಂ.ಸುಧೀರ್, ಕೆ.ರವಿಚಂದ್ರ, ಸುಧಾಕರ, ಈರಣ್ಣ, ದುಬ್ಬಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಾಲಕಿಯರಿಗೆ ಕ್ರೀಡೆಯಲ್ಲಿ ಪ್ರತಿಭಾ ಪ್ರರ್ಶನಕ್ಕೆ ಹೆತ್ತವರ ಪ್ರೋತ್ಸಾಹ ಅಗತ್ಯ: ಪಿ.ಟಿ.ಉಷಾ
ಮಂಗಳೂರಿನಲ್ಲಿ ಅಥ್ಲಿಟ್ಗಳ ಪ್ರತಿಭಾ ಆನ್ವೇಷಣಾ ಶಿಬಿರ
ವಿಜಯನಗರ | ರಸ್ತೆ ನಿಯಮ ಪಾಲನೆ ದಂಡಕ್ಕಾಗಿ ಅಲ್ಲ, ಜೀವದ ರಕ್ಷಣೆಗಾಗಿ ಇರಲಿ : ನ್ಯಾ.ಡಿ.ಪಿ.ಕುಮಾರಸ್ವಾಮಿ
ವಿಜಯನಗರ (ಹೊಸಪೇಟೆ): ಜೀವವು ಅತ್ಯಂತ ಅಮೂಲ್ಯವಾದುದು. ರಸ್ತೆ ಸಂಚಾರಿ ನಿಯಮಗಳನ್ನು ಕೇವಲ ದಂಡಕ್ಕೆ ಹೆದರಿ ಪಾಲಿಸದೆ, ಸ್ವಯಂಪ್ರೇರಿತರಾಗಿ ಜೀವದ ರಕ್ಷಣೆಗಾಗಿ ಪಾಲಿಸುವ ಮೂಲಕ ಸುರಕ್ಷಿತವಾಗಿರಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಗರದ ವಡಕಾರಾಯ ದೇವಸ್ಥಾನದ ಬಳಿ ಭಾನುವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ '37ನೇ ರಸ್ತೆ ಸುರಕ್ಷತಾ ಸಪ್ತಾಹ'ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಅಪಘಾತಗಳು ಸಂಭವಿಸಿದಾಗ ಕೇವಲ ಒಬ್ಬ ವ್ಯಕ್ತಿಯಲ್ಲ, ಇಡೀ ಕುಟುಂಬವೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಸವಾರನು ತಮಗಾಗಿ ಅಲ್ಲದಿದ್ದರೂ, ತಮ್ಮನ್ನು ನಂಬಿರುವ ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸುವ ಜವಾಬ್ದಾರಿ ತೋರಬೇಕು ಎಂದು ಅವರು ಕಿವಿಮಾತು ಹೇಳಿದರು. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯಲ್ಲಿ ಸಂಚಾರಿ ನಿಯಮಗಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯಲಾಯಿತು. ಕಾರ್ಯಕ್ರಮದಲ್ಲಿ ಎಎಸ್ಪಿ ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯಾದಗಿರಿ | ಮಹಿಳಾ ನೌಕರರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ರೋಶಿನಿ ಗೌಡ
ಯಾದಗಿರಿ: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಮಹಿಳಾ ನೌಕರರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಶೇ.52 ರಷ್ಟು ಮಹಿಳಾ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ನೌಕರರು ಎದುರಿಸುತ್ತಿರುವ ಸಮಸ್ಯೆಗಳು, ಸವಲತ್ತುಗಳನ್ನು ಪಡೆಯಲು ಸಂಘಟನೆ ಅವಶ್ಯಕವಾಗಿದೆ. ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘಟನೆ ಬಲಗೊಳಿಸಬೇಕೆಂದು ಮನವಿ ಮಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನೌಕರರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಮಸ್ಯೆ ಗಳ ಪರಿಹಾರಕ್ಕೆ ಸಂಘಟಿತ ಹೋರಾಟಕ್ಕೆ ಅಣಿಗೊಳಿಸಲಾಗುತ್ತಿದೆ ಎಂದರು. ಮೇರಿ ದೇವಾಸಿಯಾ ಜನ್ಮದಿನ ಸೆ.13 ರಂದು ಮಹಿಳಾ ಸರ್ಕಾರಿ ನೌಕರರ ದಿನಾಚರಣೆ ಸರ್ಕಾರ ಈಗಾಗಲೇ ಸಿಎಂ ಮತ್ತು ಡಿಸಿಎಂ ಘೋಷಣೆ ಮಾಡಿದ್ದು, ಅಭಿನಂದನಾರ್ಹ ಎಂದರು. ಸಮಸ್ಯೆಗಳ ನಿವಾರಣೆಗೆ ಎಲ್ಲಾ ಮಹಿಳಾ ನೌಕರರು ಸಂಘದೊಂದಿಗೆ ಹೆಜ್ಜೆಹಾಕುವ ಮೂಲಕ ಸಂಘಟಿತ ಪ್ರ ಪ್ರಯತ್ನಕ್ಕೆ ಬೆಂಬ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆಶಾರಾಣಿ ಹಾಗೂ ಸ್ಥಳಿಯ ಸಂಘದ ಅನುಸೂಯಾ, ರೂಪಾ ಜಿ., ರೂಪಾ ಹಿರೇಮಠ, ಸಾವಿತ್ರಿ, ಲೀಲಾ ಸೇರಿದಂತೆಯೇ ಇತರರಿದ್ದರು.
ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಒಗ್ಗಟ್ಟಿನಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ : ನಸೀರ್ ಅಹ್ಮದ್
ಬೆಂಗಳೂರು : ಖಾಸಗಿ ಅನುದಾನರಹಿತ ಶಾಲೆಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ, ಇದು ಅವುಗಳ ಪರಿಶ್ರಮ, ಶಿಸ್ತು ಮತ್ತು ಶೈಕ್ಷಣಿಕ ಬದ್ಧತೆಗೆ ಸಾಕ್ಷಿ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದ್ದಾರೆ. ರವಿವಾರ ನಗರದ ಎಚ್.ಬಿ.ಆರ್.ಬಡಾವಣೆಯಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಫೆಡರೇಶನ್ ಆಫ್ ಮೈನಾರಿಟೀಸ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್, ಕರ್ನಾಟಕ ಚಾಪ್ಟರ್ (ಫೆಮಿ)ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಾಲಾ ನಾಯಕತ್ವ ಪ್ರಶಸ್ತಿ ಸಮಾವೇಶ-2026 ಅನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆಗಳು ಪ್ರಮುಖ ಸ್ಥಾನ ಪಡೆದಿವೆ. ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳು ಒಗ್ಗಟ್ಟಿನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಫೆಮಿಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಸೀರ್ ಅಹ್ಮದ್ ಹೇಳಿದರು. ಫೆಮಿ ಕರ್ನಾಟಕ ಚಾಪ್ಟರ್ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸಿಫುದ್ದೀನ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ನಡೆಸಿರುವ ಈ ಶಾಲಾ ನಾಯಕತ್ವ ಪ್ರಶಸ್ತಿ ಸಮಾವೇಶದ ಮುಖ್ಯ ಉದ್ದೇಶವು ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಸೇವೆಗಳನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸುವುದಾಗಿದೆ. ಈ ಮೂಲಕ ಅವರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಫೆಮಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸೈಯದ್ ತನ್ವೀರ್ ಅಹ್ಮದ್, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಡಾ.ಮುಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ, ಮನ್ಸೂರಾ ಎಜುಕೇಷನಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಖ್ವಾ ಎಜುಕೇಷನಲ್ ಟ್ರಸ್ಟ್ನ ಟ್ರಸ್ಟಿ ಡಾ.ಮುಹಮ್ಮದ್ ತಾಹಾ ಮತೀನ್ ಮಾತನಾಡಿದರು. ಈ ಸಮಾವೇಶದಲ್ಲಿ ಬೆಂಗಳೂರಿನ 150ಕ್ಕೂ ಹೆಚ್ಚು ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಡಾ.ಬೆನಝೀರ್, ಫೆಮಿ ಬೆಂಗಳೂರು ಘಟಕದ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ಹಾರೂನ್ ಬಾಷಾ, ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ, ರಿಯಾಝ್ ಅಹ್ಮದ್ ರೋಣ, ಸೈಯದ್ ಬಶಾರತ್ ಅಹ್ಮದ್, ಅಸ್ಲಂ ಹೈಕಾಡಿ ಉಡುಪಿ, ಅತೀಕ್ ಪಾಷಾ, ರೇಷ್ಮಾ ಇಕ್ಬಾಲ್, ಸೈಯದ್ ಇಜಾಝ್, ಸೈಯದ್ ಮುನೀರ್, ಝುಲ್ಫಿಕರ್ ಅಹ್ಮದ್, ಡಾ.ಝುಹೈಬ್ ಜಾವೇದ್ ಖಾನ್, ಮುಹಮ್ಮದ್ ಅಲ್ತಾಫ್ ಅಹ್ಮದ್, ಇಫ್ತಿಖಾರ್ ಶರೀಫ್ ಹಾಗೂ ಇತರರು ಉಪಸ್ಥಿತರಿದ್ದರು. ಡಾ.ಫರೀದಾ ರಹ್ಮತುಲ್ಲಾಹ್ ಧನ್ಯವಾದಗಳನ್ನು ಸಲ್ಲಿಸಿದರು. ಬೇಡಿಕೆಗಳು ಶಾಲೆಗಳ ನವೀಕರಣ ಮಾನ್ಯತೆ ಪ್ರಕ್ರಿಯೆಯಲ್ಲಿ ಸಡಿಲಿಕೆ ನೀಡಬೇಕು, ಅಲ್ಪಸಂಖ್ಯಾತರ ಸ್ಥಾನಮಾನ ಪ್ರಮಾಣಪತ್ರದ ಜಾರಿಯನ್ನು ಸುಲಭಗೊಳಿಸಬೇಕು, ಪ್ರೀ-ಮೆಟ್ರಿಕ್ ವಿದ್ಯಾರ್ಥಿವೇತನದ ಬಜೆಟ್ ಅನ್ನು 2026-27ರಲ್ಲಿ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿಸಬೇಕು, ಮುಸ್ಲಿಮ್ ಶಾಲೆಗಳಿಗೆ ಸರಕಾರಿ ಭೂಮಿಯ ಹಂಚಿಕೆ ಹಾಗೂ ಮೂಲಸೌಕರ್ಯಕ್ಕಾಗಿ ಅನುದಾನಗಳನ್ನು ಒದಗಿಸಬೇಕು. ಪೋಸ್ಟ್-ಮೆಟ್ರಿಕ್ ಹಾಗೂ ಉನ್ನತ ಶಿಕ್ಷಣ (ಓವರ್ಸೀಸ್ ಯೋಜನೆ) ಬಜೆಟ್ ಅನ್ನು ದ್ವಿಗುಣಗೊಳಿಸಬೇಕು, ದೀನೀ ಮದರಸಾಗಳ ಆಧುನೀಕರಣಕ್ಕಾಗಿ ಅರ್ಜಿಗಳನ್ನು ಮಧ್ಯವರ್ತಿ ಸಂಸ್ಥೆಗಳನ್ನು ತಪ್ಪಿಸಿ ನೇರವಾಗಿ (ಆನ್ಲೈನ್) ಮದ್ರಸಾಗಳಿಂದಲೇ ಸ್ವೀಕರಿಸಬೇಕು ಎಂಬ ಬೇಡಿಕೆಗಳನ್ನು ಸಮಾವೇಶದಲ್ಲಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ಶಿಕ್ಷಣ ಸಚಿವರು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರೊಂದಿಗೆ ಚರ್ಚಿಸಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಉಮರ್ ಖಾಲಿದ್ ಪ್ರಕರಣದಲ್ಲಿ ತ್ವರಿತ ವಿಚಾರಣೆಯಾಗಬೇಕು, ಅದು ಅವರ ಹಕ್ಕು: ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್
ಜೈಪುರ: ಸುಮಾರು ಐದು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಪ್ರಕರಣವನ್ನು ಉಲ್ಲೇಖಿಸಿ, ಜಾಮೀನು ಮತ್ತು ತ್ವರಿತ ವಿಚಾರಣೆಯ ಹಕ್ಕಿನ ಕುರಿತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೈಪುರ ಸಾಹಿತ್ಯ ಉತ್ಸವದಲ್ಲಿ ಹಿರಿಯ ಪತ್ರಕರ್ತ ವೀರ್ ಸಾಂಗ್ವಿ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ದೀರ್ಘಕಾಲದ ಜೈಲುವಾಸದ ಕುರಿತು ಕಳವಳ ವ್ಯಕ್ತಪಡಿಸಿದರು. “ನಾನು ಉಲ್ಲೇಖಿಸಿರುವ ಪ್ರತಿಯೊಂದು ತತ್ವವೂ, ಜಾಮೀನು ದುರುಪಯೋಗವಾಗದಂತೆ ತಡೆಯಲು ನ್ಯಾಯಾಲಯಗಳು ಅಗತ್ಯವಿದ್ದರೆ ಷರತ್ತುಗಳನ್ನು ವಿಧಿಸಬಹುದು ಎಂಬ ಅಂಶವನ್ನು ಸೂಚಿಸುತ್ತದೆ,” ಎಂದು ಹೇಳಿದರು. ಜೊತೆಗೆ, ಆರೋಪಿಯ ತ್ವರಿತ ವಿಚಾರಣೆಯ ಹಕ್ಕನ್ನೂ ನ್ಯಾಯಾಲಯಗಳು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು. ಉಮರ್ ಖಾಲಿದ್ ಅವರ ಮುಂದುವರಿದ ಬಂಧನದ ವಿಚಾರವನ್ನು ಸಾಂಗ್ವಿ ಪ್ರಸ್ತಾಪಿಸಿದಾಗ, ಚಂದ್ರಚೂಡ್ ಜಾಗರೂಕರಾಗಿ ಪ್ರತಿಕ್ರಿಯಿಸಿದರು. “ನಾನು ನನ್ನ ನ್ಯಾಯಾಲಯವನ್ನು ಟೀಕಿಸುತ್ತಿಲ್ಲ,” ಎಂದು ಅವರು ಹೇಳಿದರು. ಇತ್ತೀಚಿನವರೆಗೂ ಸುಪ್ರೀಂಕೋರ್ಟ್ ಮುನ್ನಡೆಸುತ್ತಿದ್ದ ಕಾರಣದಿಂದ ನಿರ್ದಿಷ್ಟ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಲು ತಾನು ಹಿಂಜರಿದಿದ್ದುದನ್ನು ಅವರು ಸೂಚಿಸಿದರು. ಜಾಮೀನು ಕುರಿತ ನಿರ್ಧಾರಗಳನ್ನು ನ್ಯಾಯಾಧೀಶರು ಸಾರ್ವಜನಿಕ ಒತ್ತಡ ಅಥವಾ ಹಿನ್ನೋಟದ ಆಧಾರದ ಮೇಲೆ ಅಲ್ಲ; ಬದಲಾಗಿ ತಮ್ಮ ಮುಂದೆ ಇಡಲ್ಪಟ್ಟಿರುವ ಪುರಾವೆಗಳು ಮತ್ತು ದಾಖಲೆಗಳ ಆಧಾರದ ಮೇಲೆ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದರು. ಆದರೆ, ಈ ವಿಚಾರದಲ್ಲಿ ವಿಶಾಲವಾದ ಸಾಂವಿಧಾನಿಕ ತತ್ವವು ಸ್ಪಷ್ಟವಾಗಿದೆ ಎಂದು ಚಂದ್ರಚೂಡ್ ಅಭಿಪ್ರಾಯಪಟ್ಟರು. ವಿಚಾರಣೆಗಳು ಸಮಂಜಸವಾದ ಅವಧಿಯೊಳಗೆ ಮುಕ್ತಾಯಗೊಳ್ಳದಿದ್ದರೆ, ಸೆರೆವಾಸವೇ ಶಿಕ್ಷೆಯಾಗಿ ಪರಿವರ್ತನೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. “ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಇರುವ ಜೀವಿಸುವ ಹಕ್ಕು ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ,” ಎಂದು ಹೇಳಿದರು. ಜಾಮೀನನ್ನು ನಿರ್ಬಂಧಿಸುವ ಕಾನೂನುಗಳೂ ಸಹ ಈ ಸಾಂವಿಧಾನಿಕ ಖಾತರಿಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. “ಪ್ರಸ್ತುತ ಪರಿಸ್ಥಿತಿಗಳಲ್ಲಿ ತ್ವರಿತ ವಿಚಾರಣೆ ಸಾಧ್ಯವಾಗದಿದ್ದರೆ, ಜಾಮೀನು ನಿಯಮವಾಗಿರಬೇಕು; ಅಪವಾದವಾಗಬಾರದು,” ಎಂದು ಅಭಿಪ್ರಾಯಪಟ್ಟರು. ಜಾಮೀನು ನಿರ್ಧಾರಗಳು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸ್ವಯಂಚಾಲಿತವಾಗಿ ಮುಂದೂಡಲ್ಪಡಬೇಕು ಎಂಬ ಕಲ್ಪನೆಯನ್ನು ಚಂದ್ರಚೂಡ್ ತಿರಸ್ಕರಿಸಿದರು. ರಾಷ್ಟ್ರೀಯ ಭದ್ರತೆ ನಿಜವಾಗಿಯೂ ಪ್ರಕರಣದಲ್ಲಿ ಇದೆಯೇ ಮತ್ತು ದೀರ್ಘಕಾಲದ ಬಂಧನವು ಪ್ರಮಾಣಾನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸುವ ಹೊಣೆಗಾರಿಕೆ ನ್ಯಾಯಾಲಯಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಇಲ್ಲದಿದ್ದರೆ, ವ್ಯಕ್ತಿಗಳು ಶಿಕ್ಷೆಯಿಲ್ಲದೆ ವರ್ಷಗಳ ಕಾಲ ಜೈಲಿನಲ್ಲಿ ಉಳಿಯುವ ಪರಿಸ್ಥಿತಿ ಉಂಟಾಗುತ್ತದೆ; ಇದು ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್ ಸುಮಾರು 21,000 ಜಾಮೀನು ಅರ್ಜಿಗಳನ್ನು ವಿಲೇವಾರಿ ಮಾಡಿದೆ ಎಂದು ಚಂದ್ರಚೂಡ್ ಉಲ್ಲೇಖಿಸಿದರು. ಸಾರ್ವಜನಿಕ ಆಕ್ರೋಶವನ್ನು ತೃಪ್ತಿಪಡಿಸುವುದಲ್ಲ; ಬದಲಾಗಿ ಸಾಂವಿಧಾನಿಕ ಸಮತೋಲನವನ್ನು ಕಾಪಾಡುವುದೇ ನ್ಯಾಯಾಲಯದ ಮೂಲ ಹೊಣೆಗಾರಿಕೆ ಎಂದು ಹೇಳಿದರು. ಆರೋಪಿಯು ಅಪರಾಧವನ್ನು ಪುನರಾವರ್ತಿಸುವ ಸಾಧ್ಯತೆ ಇದ್ದರೆ, ದೇಶದಿಂದ ಪಲಾಯನ ಮಾಡುವ ಅಪಾಯವಿದ್ದರೆ ಅಥವಾ ಸಾಕ್ಷ್ಯಗಳನ್ನು ತಿರುಚುವ ಸಂಭವವಿದ್ದರೆ—ಈ ಮೂರು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು ಎಂದು ಚಂದ್ರಚೂಡ್ ಪುನರುಚ್ಚರಿಸಿದರು. “ಈ ವಿನಾಯಿತಿಗಳು ಅನ್ವಯವಾಗದಿದ್ದರೆ, ಆರೋಪಿಯು ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ. ಜಾಮೀನನ್ನು ಶಿಕ್ಷೆಯಾಗಿ ಪರಿವರ್ತಿಸುವ ಪ್ರವೃತ್ತಿಯಿಂದ ನ್ಯಾಯ ವ್ಯವಸ್ಥೆ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಸಾರ್ವಜನಿಕ ನಂಬಿಕೆಯನ್ನೂ ಕಳೆದುಕೊಳ್ಳುವ ಅಪಾಯವಿದೆ ಎಂದು ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ : ಮಧುಬಂಗಾರಪ್ಪ
ಬೆಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕವು(ಕ್ಯಾಮ್ಸ್) ಆಯೋಜಿಸಿದ್ದ 'ವಿಷನ್ - ಮಿಷನ್' ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣವನ್ನು ಸರಳೀಕರಿಸುವಂತೆ ಶಿಕ್ಷಣ ಒಕ್ಕೂಟಗಳಿಂದ ಮನವಿಗಳು ಬಂದಿದ್ದು, ಅವುಗಳನ್ನು ಪರಿಶೀಲಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 'ಮೂರು ಪರೀಕ್ಷಾ ಪದ್ಧತಿ', ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ 'ವೆಬ್ಕಾಸ್ಟಿಂಗ್' ಅಳವಡಿಕೆ ಹಾಗೂ ಎಸೆಸಸೆಲ್ಸಿ ಹಾಗೂ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿರುವುದು ಸೇರಿದಂತೆ ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿವೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷರಾದ ಎನ್.ಪಿ.ಸಿಂಗ್ ಮತ್ತು ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
Kalaburagi | ಗುಲ್ಬರ್ಗಾ ವಿವಿ ಕುಲಸಚಿವರಿಂದ ಜೀವ ಬೆದರಿಕೆ ಆರೋಪ: ಕುಲಪತಿಗಳಿಗೆ ಅತಿಥಿ ಉಪನ್ಯಾಸಕನ ದೂರು
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ.ರಾಜಕುಮಾರ ದಣ್ಣೂರ ಗಂಭೀರವಾಗಿ ಆರೋಪಿಸಿದ್ದು, ಕುಲಪತಿಗಳಿಗೆ ದೂರು ನೀಡಿದ್ದಾರೆ. ಕಳೆದ 7 ವರ್ಷಗಳಿಂದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ, 2026ರ ಶೈಕ್ಷಣಿಕ ಸಾಲಿನಲ್ಲಿ ನನ್ನ ಕಾರ್ಯಭಾರವನ್ನು ಏಕಾಏಕಿ 12 ಗಂಟೆಗೆ ಇಳಿಸಿ ಅನ್ಯಾಯ ಮಾಡಲಾಗಿದೆ. ಈ ಕುರಿತು ವಿಚಾರಿಸಲು ಹೋದಾಗ ಕುಲಸಚಿವರು ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಅವರ ನಡೆ ನನಗೆ ಭೀತಿ ಉಂಟುಮಾಡಿದ್ದು, ರಕ್ಷಣೆ ನೀಡಬೇಕು, ಎಂದು ರಾಜಕುಮಾರ ದಣ್ಣೂರ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆರೋಪಗಳನ್ನು ನಿರಾಕರಿಸಿರುವ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಅಂಕಗಳ ಹಂಚಿಕೆಯಲ್ಲಿ ನಮ್ಮ ಪಾತ್ರವಿರುವುದಿಲ್ಲ. ಡೀನ್ ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಂದರ್ಶನ ಸಮಿತಿಯು ನೀಡಿದ ಅಂಕಗಳ ಆಧಾರದ ಮೇಲೆ ನಾವು ಸಹಿ ಹಾಕುತ್ತೇವೆ ಅಷ್ಟೇ. ಇದನ್ನು ದಣ್ಣೂರ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಾಗ, ಅವರು ನನ್ನ ಚೇಂಬರ್ನಲ್ಲೇ ಉದ್ಧಟತನ ತೋರಿ, ಏಕವಚನದಲ್ಲಿ ನಿಂದಿಸಿದ್ದಾರೆ, ಎಂದು ಸ್ಪಷ್ಟನೆ ನೀಡಿದ್ದಾರೆ. ಅವರೇ ಬೆದರಿಕೆ ಹಾಕಿದ್ದರಿಂದ ಪೊಲೀಸರಿಗೆ ಕರೆ ಮಾಡುವೆ ಎಂದು ಹೇಳಿದಾಗ ಅವರು ಕಚೇರಿಯಿಂದ ನಿರ್ಗಮಿಸಿದ್ದಾರೆ ಎಂದು ಕುಲಸಚಿವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
Mudigere | ಚಾರ್ಮಾಡಿ ಘಾಟಿಯ ಬಿದ್ರುತಳ ಭಾಗದಲ್ಲಿ ಅರಣ್ಯ ಅಗ್ನಿ ಅವಘಡ
ಮೂಡಿಗೆರೆ : ಚಾರ್ಮಾಡಿ ಘಾಟಿಯ ಮೂಡಿಗೆರೆ ಅರಣ್ಯ ವಿಭಾಗದ ಬಿದ್ರುತಳ ಭಾಗದಲ್ಲಿ ರವಿವಾರ ರಾತ್ರಿ ಅರಣ್ಯ ಅಗ್ನಿ ಅವಘಡ ಸಂಭವಿಸಿದೆ. ರಸ್ತೆಯಿಂದ ಸುಮಾರು ಒಂದುರಿಂದ ಎರಡು ಕಿಲೋಮೀಟರ್ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯದಲ್ಲಿ ಹೊತ್ತಿಕೊಂಡ ಅಗ್ನಿಯ ಜ್ವಾಲೆಗಳು ದೂರದಿಂದಲೇ ಕಾಣಿಸಿಕೊಂಡಿದ್ದು, ಇದರಿಂದಾಗಿ ಪ್ರದೇಶದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ಉಂಟಾಗಲು ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗ್ನಿ ನಂದಿಸುವ ಸಲುವಾಗಿ ಅಗ್ನಿಶಾಮಕ ದಳವನ್ನು ಕರೆಸಿ ತುರ್ತು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಓಸ್ಲೊ, ಜ.18: ತನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ಗೆ ಹಸ್ತಾಂತರಿಸಿರುವುದಾಗಿ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾದೊ ನೀಡಿರುವುದನ್ನು ತಿರಸ್ಕರಿಸುವುದಾಗಿ ನೊಬೆಲ್ ಪ್ರತಿಷ್ಠಾನ ರವಿವಾರ ಹೇಳಿದೆ. ಪ್ರಶಸ್ತಿಗಳ ಘನತೆಯನ್ನು ಮತ್ತು ಆಲ್ಫ್ರೆಡ್ ನೊಬೆಲ್ ಅವರ ಆಶಯಗಳ ನಿಬಂಧನೆಗಳನ್ನು ಎತ್ತಿಹಿಡಿಯುವುದು ತನ್ನ ಮುಖ್ಯ ಆದ್ಯತೆಗಳಲ್ಲಿ ಒಂದಾಗಿದೆ ಎಂದು ನೊಬೆಲ್ ಪ್ರತಿಷ್ಠಾನ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಬಹುಮಾನಗಳನ್ನು ಮನುಕುಲಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಿದವರಿಗೆ ಮಾತ್ರ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವೀಕರಿಸುವ ಹಕ್ಕು ಯಾರಿಗೆ ಇದೆ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದ್ದರಿಂದ ಬಹುಮಾನಗಳನ್ನು ಸಾಂಕೇತಿಕವಾಗಿ ವರ್ಗಾಯಿಸಲು ಸಾಧ್ಯವಿಲ್ಲ' ಎಂದು ನೊಬೆಲ್ ಪ್ರತಿಷ್ಠಾನ ಹೇಳಿದೆ.
ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು. ಇತ್ತೀಚಿನ ವರ್ಷಗಳಲ್ಲಿ ಬಿಜಾಪುರ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕ ಇಂಥದೊಂದು ಹೋರಾಟವನ್ನು ಕಂಡಿರಲಿಲ್ಲ. ಕಳೆದ ಎರಡೂ ವರೆ ದಶಕಗಳಿಂದ ನಿತ್ಯ ಪ್ರಚೋದನಕಾರಿ ಭಾಷಣಗಳು, ಜನಾಂಗ ದ್ವೇಷದ ಮಾತುಗಳನ್ನು ಕೇಳಿ ತತ್ತರಿಸಿ ಹೋಗಿದ್ದ ಈ ಭಾಗದಲ್ಲಿ ಜನರಿಗೆ, ನಾಡಿನ ಬದುಕಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟಗಳು ಅಪರೂಪವಾಗಿದ್ದವು. ಹಿಂದೂ ಮುಸಲ್ಮಾನರು ಜತೆಗೂಡಿ ಮೊಹರಂ, ದೀಪಾವಳಿ ಆಚರಿಸುತ್ತ ಬಂದ ಪ್ರದೇಶವಿದು. ಸೌಹಾರ್ದ ಇಲ್ಲಿನ ಸಹಜ ಸಂಸ್ಕೃತಿ.ವಿವಿಧ ಸಮುದಾಯಗಳ ನಡುವೆ ಕೊಳ್ಳಿ ಇಡುವ ಅಸಹಜ ಕುಸಂಸ್ಕೃತಿಯೊಂದು ಇತ್ತೀಚೆಗೆ ವ್ಯಾಪಕವಾಗಿ ನೆಲೆಯೂರಲು ಹವಣಿಸುತ್ತಿತ್ತು. ಇಂಥ ನಿರಾಶಾದಾಯಕ ವಾತಾವರಣದಲ್ಲಿ ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಹೊಸ ಭರವಸೆಯನ್ನು ಮೂಡಿಸಿತು. ಇನ್ನು ಮುಂದೆ ಒಂಟಿ ಹೋರಾಟಗಳಿಗೆ ಭವಿಷ್ಯವಿಲ್ಲ, ಜಂಟಿ ಹೋರಾಟಗಳಿಗೆ ಸೋಲಿಲ್ಲ ಎಂಬ ಸಂದೇಶಗಳನ್ನು ನಾಡಿಗೆ ನೀಡಿ ಹೊಸ ದಾರಿಯನ್ನು ತೋರಿಸಿತು ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ. ನನ್ನ ಬಿಜಾಪುರ ಜಿಲ್ಲೆಯಲ್ಲಿ ಇಂಥದೊಂದು ಹೋರಾಟ ಇತ್ತೀಚಿನ ದಿನಗಳಲ್ಲಿ ನಡೆದಿರಲಿಲ್ಲ. ಆಲಮಟ್ಟಿ ಅಣೆಕಟ್ಟೆಗಾಗಿ ಅರುವತ್ತರ ದಶಕದಲ್ಲಿ ನಡೆದ ಸುದೀರ್ಘ ಹೋರಾಟದ ನೆನಪು ನನಗಿನ್ನೂ ಇದೆ. ಆಗ ಬಿಜಾಪುರದ ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್ನ ರಾಜಾರಾಮ ದುಬೆ, ಗುಡದಿನ್ನಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್.ಕೆ. ಉಪಾಧ್ಯಾಯ, ಡಾ.ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷದ ಶಾಸಕ ಸಿದ್ಧಾರ್ಥ ಅರಕೇರಿ, ಸುಗಂಧಿ ಅವರ ಜಂಟಿ ನಾಯಕತ್ವದಲ್ಲಿ ದೀರ್ಘವಾಗಿ ನಡೆದ ಹೋರಾಟಕ್ಕೆ ಸರಕಾರ ಕೊನೆಗೂ ಮಣಿಯಿತು.ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಿಜಾಪುರಕ್ಕೆ ಬಂದು ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಅದರ ನಂತರ ನಡೆದ ಬಹುದೊಡ್ಡ, 106 ದಿನಗಳಷ್ಟು ದೀರ್ಘ ಕಾಲದ ಹೋರಾಟವೆಂದರೆ ಬಿಜಾಪುರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಆಗ ಬೇಕೆಂದು ನಡೆದ ಹೋರಾಟವೆಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನವನ್ನು ಸಂಘಟಿಸಿದವರು ಯಾವುದೇ ಒಂದು ಪಕ್ಷದವರಲ್ಲ, ಸಂಘಟನೆಯವರಲ್ಲ, ಇದು ಎಲ್ಲ ಜನಪರ ಸಂಘಟನೆಗಳು ಸಮಾನ ಮನಸ್ಕ ಗೆಳೆಯರು ಕೂಡಿ ನಡೆಸಿದ ಹೋರಾಟ. ಇದರಲ್ಲಿ ಕಾಂಗ್ರೆಸ್, ರೈತ ಸಂಘ, ಜೆಡಿಎಸ್, ಸಿಪಿಐ, ಸಿಪಿಎಂ, ಎಸ್.ಯು.ಸಿ.ಐ ಎಲ್ಲ ದಲಿತ ಸಂಘಟನೆಗಳು ಪಾಲ್ಗೊಂಡಿದ್ದವು. ಹೋರಾಟ ತೀವ್ರ ಸ್ವರೂಪ ತಾಳಿದಾಗ ಈ ಚಳವಳಿಯ ನಾಯಕರಾದ ಹೆಸರಾಂತ ಅಂಬೇಡ್ಕರ್ವಾದಿ ಲೇಖಕ, ಪತ್ರಕರ್ತ ಅನಿಲ ಹೊಸಮನಿ , ಎಸ್.ಯು.ಸಿ.ಐ.ನ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಭಗವಾನ ರೆಡ್ಡಿ, ಆಮ್ ಆದ್ಮಿ ಪಕ್ಷದ ಭೋಗೇಶ ಸೊಲ್ಲಾಪುರ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಹುಣಶ್ಯಾಳದ ಸಂಗನ ಬಸವ ಸ್ವಾಮೀಜಿ ಇವರನ್ನು ಬಂಧಿಸಲಾಯಿತು. ಇದರ ಬಿಸಿ ಬೆಂಗಳೂರಿನವರೆಗೂ ತಲುಪಿತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜಾಪುರಕ್ಕೆ ಬಂದು ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಭರವಸೆಯನ್ನು ನೀಡಿದರು. ಆದರೂ ಬಂಧಿತರ ಬಿಡುಗಡೆಯಾಗಿರಲಿಲ್ಲ. ಎರಡು ವಾರ ಕಾಲ ಜೈಲು ವಾಸ ಅನುಭವಿಸಿದ ನಂತರ ನ್ಯಾಯಾಲಯ ಇವರನ್ನು ಸಂಕ್ರಮಣದ ದಿನ ಜನವರಿ 14ರಂದು ಜಾಮೀನು ಮೇಲೆ ಬಿಡುಗಡೆ ಮಾಡಿತು. ಖಾಸಗಿ ಸಹಭಾಗಿತ್ವದ (ಪಿಪಿಪಿ) ಹೆಸರಿನಲ್ಲಿ 150 ಎಕರೆ ಅಮೂಲ್ಯ ಭೂಮಿಯನ್ನು ನುಂಗುವ ಮಸಲತ್ತು ನಡೆದಿತ್ತು. (ನುಂಗಪ್ಪಗಳು ಯಾರೆಂಬುದು ಈಗ ಬೇಡ) ಆದರೆ ಈ ಮಸಲತ್ತನ್ನು ಅವಿರತ ಹೋರಾಟದ ಮೂಲಕ ಜನ ವಿಫಲಗೊಳಿಸಿದರು. ನಾವು (ಡಾ.ಸಿದ್ಧನ ಗೌಡ ಪಾಟೀಲ, ಡಾ. ಮಲ್ಲಿಕಾ ಘಂಟಿ, ಡಾ.ರಾಜೇಂದ್ರ ಪೊದ್ದಾರ, ಶಂಕರ ಹಲಗತ್ತಿ, ಮೊದಲಾದವರು) ಅಲ್ಲಿ ಹೋಗಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದೆವು. ಈಗ ಹೋರಾಟದ ಗೆಳೆಯರು ಜಾಮೀನು ಮೇಲೆ ಬಿಡುಗಡೆ ಯಾದರೂ ಅವರ ಮೇಲೆ ಹಲವಾರು ಖಟ್ಲೆಗಳನ್ನು ಹಾಕಲಾಗಿದೆ. ಸರಕಾರ ಅವರ ಮೇಲಿನ ಖಟ್ಲೆಗಳನ್ನು ವಾಪಸ್ ಪಡೆಯಬೇಕು. ಇದರಿಂದ ಸ್ಪಷ್ಟವಾದ ಅಂಶವೆಂದರೆ ಎಲ್ಲ ಸಮಾನ ಮನಸ್ಕರು ಜೊತೆ ಗೂಡಿ ಹೋರಾಟಕ್ಕೆ ಇಳಿದರೆ ಗೆಲುವು ಅಸಾಧ್ಯವಲ್ಲ. ಇನ್ನೊಂದು ಅಂಶವೆಂದರೆ ಇನ್ನು ಮುಂದೆ ಹೋರಾಟವೇ ಉಳಿದ ದಾರಿ ಎಂಬುದು ಬಿಜಾಪುರದ ಹೋರಾಟದಿಂದ ಸ್ಪಷ್ಟವಾಗಿದೆ. ರಾಜ್ಯದ ಹಲವಾರು ಕಡೆ ಆಗಾಗ ಚಳವಳಿ, ಹೋರಾಟಗಳು ನಡೆಯುತ್ತಿರುತ್ತವೆ. ಬಹುತೇಕ ಹೋರಾಟಗಳು ಸಣ್ಣಪುಟ್ಟ ಬೇಡಿಕೆಗಳಿಗಾಗಿ ನಡೆಯುತ್ತವೆ. ಅವೂ ಕೂಡ ಯಶಸ್ವಿಯಾದ ಉದಾಹರಣೆಗಳು ವಿರಳ. ಆದರೆ ನವ ಉದಾರೀಕರಣದ ಈ ಕಾಲಘಟ್ಟದಲ್ಲಿ ಖಾಸಗಿ ಸಹಭಾಗಿತ್ವದ ಸರಕಾರಿ ಕಾಲೇಜು ಸ್ಥಾಪನೆಯ ಸರಕಾರದ ಮಸಲತ್ತನ್ನು ವಿರೋಧಿಸಿ ನಡೆದ ಹೋರಾಟವಿದು. ಈ ಹೋರಾಟವನ್ನು ವಿಫಲಗೊಳಿಸಲು ಹಲವಾರು ತಂತ್ರ, ಕುತಂತ್ರಗಳು ನಡೆದವು. ತೊಂಭತ್ತು ದಿನಗಳ ಧರಣಿ ಸತ್ಯಾಗ್ರಹ, ಹದಿನೈದು ದಿನಗಳ ಹಗಲೂ ರಾತ್ರಿ ಕೊರೆಯುವ ಚಳಿಯಲ್ಲಿ ನಡೆದ ಸತ್ಯಾಗ್ರಹ, ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರ ಮನೆಯ ಮುಂದೆ ನಡೆದ ಪ್ರತಿಭಟನೆ, ಆ ಸಂದರ್ಭದಲ್ಲಿ ಆರು ಜನರ ಬಂಧನ.ಇಷ್ಟು ದೀರ್ಘಕಾಲ ಬದ್ಧತೆ, ಸಂಯಮ ಹಾಗೂ ಸ್ಫೂರ್ತಿಯನ್ನು ಇಟ್ಟುಕೊಂಡು ಈ ಹೋರಾಟ ನಡೆಯಿತು. ಇದರ ಯಶಸ್ಸಿನ ಗುಟ್ಟೇನಂದರೆ ಹೋರಾಟದ ಮಧ್ಯದಲ್ಲಿ ಒಡಕು ಬರದಂತೆ ಕಾಯ್ದು ಕೊಂಡಿದ್ದು. ಒಡಕು ಹುಟ್ಟಿಸಲು ನಡೆದ ಹುನ್ನಾರಗಳು ವಿಫಲಗೊಂಡವು. ಈ ಮೆಡಿಕಲ್ ಕಾಲೇಜು ಹೋರಾಟದಲ್ಲಿ ಪಾಲ್ಗೊಂಡ ಸಂಘಟನೆಗಳಿಗೆ ತಮ್ಮದೇ ಆದ ಪ್ರತ್ಯೇಕ ಅಜೆಂಡಾ ಇರಲಿಲ್ಲ. ಎಲ್ಲರ ಏಕೈಕ ಗುರಿ ಪಿಪಿಪಿ ಅಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿತ್ತು.ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಹಲವಾರು ಕಡೆ ಸಂಯುಕ್ತ ಹೋರಾಟಗಳು ನಡೆದರೂ ಯಶಸ್ವಿಯಾದ ಉದಾಹರಣೆಗಳು ತುಂಬಾ ಕಡಿಮೆ.ರಾಜಕೀಯ ರಂಗವನ್ನು ತೆಗೆದುಕೊಂಡರೂ ಕೂಡ ಬಿಜೆಪಿಯನ್ನು ಕೋಮುವಾದಿ, ಫ್ಯಾಶಿಸ್ಟ್ ಪಕ್ಷ ಎಂದು ಒಪ್ಪಿಕೊಳ್ಳುವವರು ಅದರ ವಿರುದ್ಧ ಒಂದಾಗಿ ಪ್ರತೀ ಕ್ಷೇತ್ರದಲ್ಲಿ ಏಕೈಕ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದ್ದರೆ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಪ್ರತಿಪಕ್ಷಗಳ ಈ ಒಡಕು ಬಿಜೆಪಿ ಗೆಲುವಿಗೆ ಕಾರಣವಾಗಿದೆ.ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್ಡಿ ಎ) ಅಧಿಕಾರಕ್ಕೆ ಬರುತ್ತಿದೆ. ಅದು ತನ್ನ ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತರುತ್ತಲೇ ಇದೆ.ಅದನ್ನು ಫ್ಯಾಶಿಸ್ಟ್ ಎಂದು ಟೀಕಿಸುವವರು ಕೂಡ ಅದನ್ನು ತಡೆಯಲು ಸಾಧ್ಯವಾಗಿಲ್ಲ. ಪ್ರತಿಪಕ್ಷ ಗಳ ಈ ಅನೈಕ್ಯತೆಯ ಕೋಮುವಾದಿ ಶಕ್ತಿಗಳ ಗೆಲುವಿನ ಗುಟ್ಟಾಗಿ ರೈತ, ಕಾರ್ಮಿಕ ಸಂಘಟನೆಗಳು ಜಂಟಿ ಹೋರಾಟಗಳನ್ನು ಮಾಡುತ್ತಲೇ ಬಂದಿವೆ. ಆದರೂ ನವ ಉದಾರೀಕರಣದ ಪ್ರಭುತ್ವದ ಧೋರ ಣೆಯನ್ನು ಪರಾಭವಗೊಳಿಸಲು ಸಾಧ್ಯವಾಗಿಲ್ಲ. ನಾನು ಅನೇಕ ಜಂಟಿ ಹೋರಾಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಷ್ಟೇ ಅಲ್ಲ ಕೆಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಇದರಲ್ಲಿ ಪಾಲ್ಗೊಳ್ಳುವ ಬಹುತೇಕ ಸಂಘಟನೆಗಳು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತವೆ. ತಮ್ಮದೇ ಆದ ಸ್ವಂತದ ಹೋರಾಟವಿದ್ದರೆ ಮಾತ್ರ ತಮ್ಮ ಸಂಘಟನೆಯ ಎಲ್ಲರೂ ಭಾಗವಹಿಸುವಂತೆ ಎಚ್ಚರ ವಹಿಸುತ್ತವೆ. ಜಂಟಿ ಹೋರಾಟವಾದರೆ ಕೆಲವೇ ಕೆಲವು ನಾಯಕರು ಮಾತ್ರ ಬರುತ್ತಾರೆ. ಹೀಗಾಗಿ ಐಕ್ಯ ಹೋರಾಟಗಳು ಯಶಸ್ವಿಯಾಗುತ್ತಿಲ್ಲ. ಕನಿಷ್ಠ ಜನಸಾಮಾನ್ಯರ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾದರೂ ಸಂಯುಕ್ತ ಹೋರಾಟ ನಡೆಸುವುದು ಇಂದಿನ ಅನಿವಾರ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬಿಜಾಪುರದಲ್ಲಿ ನಡೆದ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ರಾಜ್ಯದ ಎಲ್ಲರಿಗೂ ಮಾದರಿಯಾಗಿದೆ. ಈ ಹೋರಾಟದಲ್ಲಿ ರೈತ, ದಲಿತ,ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಪಕ್ಷಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡವು. ಇವರೆಲ್ಲರ ಏಕೈಕ ಗುರಿ ಖಾಸಗಿ ಸಹಭಾಗಿತ್ವ ಇಲ್ಲದ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿತ್ತು ಈ ಹೋರಾಟದ ಪರಿಣಾಮವಾಗಿ ಬಿಜಾಪುರ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಬೇಕಾಗಿ ಬಂತು. ಇದು ಇಲ್ಲಿಗೆ ಮುಗಿಯುವುದಿಲ್ಲ. ಆದರೆ ಬರೀ ಭರವಸೆಯನ್ನು ಮಾತ್ರ ನಂಬದೇ ಗುರಿ ಸಾಧಿಸುವ ವರೆಗೆ ಹೋರಾಟವನ್ನು ನಿಧಾನವಾಗಿ ನಡೆಸಿಕೊಂಡು ಹೋಗಬೇಕಾಗಿದೆ. ಮಾರ್ಚ್ನಲ್ಲಿ ಮಂಡಿಸಲ್ಪಡುವ ಮುಂಗಡ ಪತ್ರದಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ಒದಗಿಸಲು ಒತ್ತಡ ತರಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಜೊತೆಗೂಡಿ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಬಿಜಾಪುರದ ಸರಕಾರಿ ಮೆಡಿಕಲ್ ಕಾಲೇಜು ವಿಷಯದಲ್ಲಿ ಜನರು ಬೀದಿಗೆ ಬರುವ ಮೊದಲು ಜನ ಪ್ರತಿನಿಧಿಗಳು ಜಿಲ್ಲೆಯ ಹಾಗೂ ತಮ್ಮನ್ನು ಚುನಾಯಿಸಿದ ಜನರ ಹಿತರಕ್ಷಣೆಗಾಗಿ ಖಾಸಗಿ ಸಹಭಾಗಿತ್ವವನ್ನು ವಿರೋಧಿಸಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜಿನ ಪರವಾಗಿ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು.ಆದರೆ ಪಾಟೀಲರು, ಗೌಡರು, ನಾಡಗೌಡರು, ದೇಸಾಯರು ಮೊದಲಾದ ಫ್ಯೂಡಲ್ ಧಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿರುವ ಜಿಲ್ಲೆ ಬಿಜಾಪುರ. ಇವರಲ್ಲಿ ಬಹುತೇಕ ಶಾಸಕರಿಗೆ ಸ್ವಹಿತಾಸಕ್ತಿ ಮುಖ್ಯವಾಗಿರುತ್ತದೆ. ಎಲ್ಲರೂ ಹಾಗಿಲ್ಲವಾದರೂ ವಿಷ ಕಕ್ಕುವ ಮಾತುಗಳಿಗೆ ಹೆಸರಾದ ಬಿಜಾಪುರ ನಗರ ಶಾಸಕ ಯತಾಳ್ ಗೌಡರು ಇಡೀ ಪ್ರಕರಣದಲ್ಲಿ ಖಳನಾಯಕ ನಂತೆ ಕಾಣಿಸಿಕೊಂಡರು. ಖಾಸಗಿ ಸಹಭಾಗಿತ್ವದ ಸರಕಾರಿ ಮೆಡಿಕಲ್ ಕಾಲೇಜಿನ ಪಾಲುಗಾರಿಕೆ ವಹಿಸಲು 500 ಕೋಟಿ ರೂಪಾಯಿ ಕೊಡುವುದಾಗಿ ಸದನದಲ್ಲೇ ಅವರು ಹೇಳಿದ್ದರು. ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಆರಂಭವಾದಾಗ ಸ್ಥಳೀಯ ಶಾಸಕನಾಗಿ ಕನಿಷ್ಠ ಸಹಾನುಭೂತಿಯನ್ನು ಅವರು ತೋರಿಸಲಿಲ್ಲ. ಬದಲಿಗೆ ಹೋರಾಟಗಾರರನ್ನು ಪೇಮೆಂಟ್ ಗಿರಾಕಿಗಳೆಂದು ಅವಮಾನಿಸಿದರು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಧರಣಿ ನಡೆದ ಸ್ಥಳಕ್ಕೆ ಬಂದು ಸಹಾನುಭೂತಿ ತೋರಿಸಿದರು. ಆದರೆ ಈ ಗೆಲುವಿನ ಮೊದಲ ಶ್ರೇಯಸ್ಸು ಹೋರಾಟಗಾರರಿಗೆ ಸಲ್ಲಬೇಕು. ಹೋರಾಟ ನಡೆಯದಿದ್ದರೆ ಇಷ್ಟೊತ್ತಿಗೆ ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ತಲೆ ಎತ್ತಲು ಪೂರ್ವ ತಯಾರಿಗಳು ನಡೆಯುತ್ತಿದ್ದವು.ಹೋರಾಟಗಾರರ ಜೊತೆಗೆ ಇದರ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಬಿಜಾಪುರದ ಮಾಧ್ಯಮದ ಗೆಳೆಯರು.ಅವರು ಬಿಟ್ಟೂ ಬಿಡದೇ ಬೆನ್ನು ಹತ್ತಿದರು. ಇದೇ ಕಾರಣಕ್ಕಾಗಿ ಯುವ ಪತ್ರಕರ್ತ ಮಿತ್ರ ಬಸವರಾಜ ಸಂಪಳ್ಳಿ ಅವರಿಗೆ ಎಂ.ಬಿ.ಪಾಟೀಲರು ಆ್ಯಕ್ಟಿವಿಸ್ಟ್ ತರ ಮಾತಾಡಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು. ಆದರೆ ಸಚಿವರಿಗೆ ಗೊತ್ತಿಲ್ಲ ‘ಜರ್ನಲಿಸ್ಟ್ ಒಳಗೆ ಒಬ್ಬ ಆ್ಯಕ್ಟಿವಿಸ್ಟ್ಟ್’ ಇರದಿದ್ದರೆ ಆತ ಪತ್ರಕರ್ತನೇ ಅಲ್ಲ. ಇಂದಿನ ನಿರಾಶಾದಾಯಕ ಕಾರ್ಪೊರೇಟ್, ಕಮ್ಯೂನಲ್ ದಿನಗಳಲ್ಲಿ ಸಂಯುಕ್ತ ಹೋರಾಟವೊಂದೇ ಉಳಿದ ದಾರಿಯಾಗಿದೆ.
ಶಹಾಬಾದ್ | ಜ.20ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ: ಕೃಷ್ಣಪ್ಪ ಕರಣಿಕ
ಶಹಾಬಾದ್: ತಾಲೂಕ ಕಚೇರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.20ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು, ಅಂಗನವಾಡಿ ಮೇಲ್ವಿಚಾರಕಿಯ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಧರಣಿ ಸತ್ಯಾಗ್ರಹದಲ್ಲಿ ಶಹಾಬಾದ್ನ ಪ್ರಗತಿ ಪರ ಚಿಂತಕರು, ನಾಗರಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ | ಸಾಮಾಜಿಕ ಜಾಲತಾಣಗಳಿಂದ ಎಚ್ಚರವಿರಿ: ಖ್ವಾಜಾ ಹುಸೇನ್
ಕಲಬುರಗಿ : ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕು ಎಂದು ಎಂ.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಖ್ವಾಜಾ ಹುಸೇನ್ ಹೇಳಿದರು. ಇಲ್ಲಿನ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಂ.ಬಿ. ನಗರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಫೋನಿನಲ್ಲಿ ಯಾರಿಗೂ ಕೆವೈಸಿ, ಓಟಿಪಿ ನೀಡಬಾರದು, ಪಾರ್ಸಲ್ ಹಾಗೂ ಕೊರಿಯರ್ ಸಂಬಂಧಿಸಿದ ಸಂಶಯಾಸ್ಪದ ಕರೆಗಳಿಗೆ ಸ್ಪಂದಿಸಬಾರದು ಎಂದು ಸಲಹೆ ನೀಡಿದರು. ಬಹುತೇಕ ಸೈಬರ್ ವಂಚಕರು ಬಹುಭಾಷಿಕರಾಗಿದ್ದು, ಕನ್ನಡ ಭಾಷೆ ತಿಳಿಯದವರಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಕನ್ನಡದಲ್ಲೇ ಮಾತನಾಡುವುದರಿಂದ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದರು. ಪಿಎಸ್ಐ ಅನಿತಾ ಗುತ್ತೇದಾರ, ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು. ಸಭೆಯಲ್ಲಿ ಕಾಲೋನಿಯ ಹಿರಿಯರಾದ ಬಿ.ಎನ್.ಪುಣ್ಯಶೆಟ್ಟಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಎಸ್.ಜಿ. ಬಿರಾದಾರ ಸೇರಿದಂತೆ ಹಲವರು ಸಲಹೆಗಳನ್ನು ನೀಡಿದರು. ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಎಎಸ್ಐ ಅಯ್ಯುಬ್, ಸಿವಿಲ್ ಪೊಲೀಸ್ ಸಿಬ್ಬಂದಿ ಹಾಗೂ ಕಾಲೋನಿಯ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ | ವಿ.ಜಿ ವುಮನ್ಸ್ ಕಾಲೇಜಿಗೆ ರನ್ನರ್ ಆಫ್ ಪ್ರಶಸ್ತಿ
ಕಲಬುರಗಿ : ರನ್ನನ ನಾಡು ಮುಧೋಳದಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಯೋಜಿಸಿರುವ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 20ನೆಯ ಶಕ್ತಿ ಸಂಭ್ರಮದಲ್ಲಿ ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಥಿಯೇಟರ್ ಸ್ಪರ್ಧೆಯಲ್ಲಿ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿದೆ. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಒನ್ ಆಕ್ಟ್ ಪ್ಲೇ, ಸ್ಕಿಟ್, ಮೈಂ, ಜಾನಪದ ನೃತ್ಯ, ಕ್ರಿಯೇಟಿವ್ ಕೊರಿಯೋಗ್ರಫಿ, ಕ್ಲಾಸಿಕಲ್ ಡ್ಯಾನ್ಸ್, ಡಿಬೇಟ್ ಹೀಗೆ ಹಲವರು ವಿಭಾಗಗಳಲ್ಲಿ ಸ್ಪರ್ಧಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ತಂಡದೊಂದಿಗೆ ಡಾ.ಪರ್ವೀನ್ ರಾಜೇಸಾಬ, ಡಾ.ಮಹೇಶ ಗಂವ್ಹಾರ, ಡಾ.ಪ್ರೇಮಚಂದ ಚವ್ಹಾಣ, ಸಂಗಮೇಶ ತುಪ್ಪದ, ವೈಷ್ಣವಿ ತಿವಾರಿ, ಭಾಗ್ಯಶ್ರೀ, ಸುಷ್ಮಾ ಕುಲಕರ್ಣಿ ಅವರ ನೇತೃತ್ವದಲ್ಲಿ ಶಕ್ತಿ ಸಂಭ್ರಮ ಯುವಜನೋತ್ಸವನದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ.ನಮೋಶಿ, ಉಪಾಧ್ಯಕ್ಷರಾದ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಶ್ ಪಾಟೀಲ್, ಮಹಾವಿದ್ಯಾಲಯದ ಸಂಚಾಲಕರಾದ ನಾಗಣ್ಣ ಘಂಟಿ, ಅರುಣಕುಮಾರ್ ಪಾಟೀಲ್, ಅನಿಲ್ ಕುಮಾರ್ ಮರಗೋಳ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ಸುಗಮವಾಗಿ ನಡೆಯತೊಡಗಿದಾಗ ಹಳೆಯ ಪೀಳಿಗೆ ಪಕ್ಕಕ್ಕೆ ಸರಿಯಬೇಕು: ಸಚಿವ ನಿತಿನ್ ಗಡ್ಕರಿ
ನಾಗ್ಪುರ (ಮಹಾರಾಷ್ಟ್ರ),ಜ.18: ಎಲ್ಲವೂ ಸುಗಮವಾಗಿ ನಡೆಯಲು ಆರಂಭಿಸಿದಾಗ ಹೊಸ ಪೀಳಿಗೆಯು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಮತ್ತು ಹಳೆಯ ಪೀಳಿಗೆಯು ಪಕ್ಕಕ್ಕೆ ಸರಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ರವಿವಾರ ಹೇಳಿದರು. ತನ್ನದೇ ಪರಿಕಲ್ಪನೆಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಘದ (ಎಐಡಿ) ಅಧ್ಯಕ್ಷ ಆಶಿಷ್ ಕಾಳೆ ಆಯೋಜನೆಯ ಅಡ್ವಾಂಟೇಜ್ ವಿದರ್ಭ-ಖಾಸದಾರ್ ಔದ್ಯೋಗಿಕ ಮಹೋತ್ಸವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗಡ್ಕರಿ, ‘ಕಾಳೆಯವರು ಅಡ್ವಾಂಟೇಜ್ ವಿದರ್ಭ ಉಪಕ್ರಮದಲ್ಲಿ ಯುವಪೀಳಿಗೆಯನ್ನು ತೊಡಗಿಸಿಕೊಂಡಿದ್ದಾರೆ. ಕ್ರಮೇಣ ಪೀಳಿಗೆಯೂ ಬದಲಾಗಬೇಕು ಎನ್ನುವುದು ನನ್ನ ನಂಬಿಕೆಯಾಗಿದೆ. ಕಾಳೆಯವರ ತಂದೆ ನನ್ನ ಸ್ನೇಹಿತರು. ನಾವು ಈಗ ನಿಧಾನವಾಗಿ ನಿವೃತ್ತರಾಗಬೇಕು ಮತ್ತು ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಎಲ್ಲವೂ ಸುಸೂತ್ರವಾಗಿ ನಡೆಯತೊಡಗಿದಾಗ ನಾವು ಹಿಂದೆ ಸರಿಯಬೇಕು ಮತ್ತು ಬೇರೆ ಏನಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು ’ಎಂದು ಹೇಳಿದರು. ಇದು ಅಡ್ವಾಂಟೇಜ್ ವಿದರ್ಭ ಪ್ರದರ್ಶನದ ಮೂರನೇ ವರ್ಷವಾಗಿದ್ದು,ಫೆ.6ರಿಂದ 8ರವರೆಗೆ ನಾಗ್ಪುರದಲ್ಲಿ ನಡೆಯಲಿದೆ ಎಂದು ಎಐಡಿಯ ಮುಖ್ಯ ಮಾರ್ಗದರ್ಶಕರೂ ಆಗಿರುವ ಗಡ್ಕರಿ ತಿಳಿಸಿದರು. ವಿದರ್ಭ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅತ್ಯುತ್ತಮ ಉದ್ಯಮಿಗಳಿದ್ದಾರೆ ಎಂದು ಹೇಳಿದ ಅವರು,ವಿದರ್ಭವನ್ನು ಭಾರತೀಯ ಕೈಗಾರಿಕಾ ರಂಗದಲ್ಲಿ ಪ್ರಬಲ ಮತ್ತು ಉದಯೋನ್ಮುಖ ಬೆಳವಣಿಗೆ ಕೇಂದ್ರವನ್ನಾಗಿ ಮಾಡುವುದು ಮಹೋತ್ಸವದ ಉದ್ದೇಶವಾಗಿದೆ ಎಂದರು. ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಹಾಗೂ ಸೇವಾ ಕ್ಷೇತ್ರದ ಮಹತ್ವವನ್ನೂ ಗಡ್ಕರಿ ಒತ್ತಿ ಹೇಳಿದರು.
ಟ್ರಂಪ್ ನಮಗೆ ದ್ರೋಹ ಬಗೆದಿದ್ದಾರೆ: ಇರಾನ್ನಲ್ಲಿ ಪ್ರತಿಭಟನಾಕಾರರ ಆಕ್ರೋಶ
ಟೆಹ್ರಾನ್, ಜ.18: ಇತ್ತೀಚಿನ ಪ್ರತಿಭಟನೆಯ ಅಲೆಯ ಸಮಯದಲ್ಲಿ ಬೀದಿಗಿಳಿದ ಅನೇಕ ಇರಾನಿಯನ್ನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವನಾಡಿಯಾಗಿ ಕಾಣಿಸಿಕೊಂಡಿದ್ದರು. ಆ ನಂಬಿಕೆ, ವಿಶ್ವಾಸಕ್ಕೆ ಅವರು ದ್ರೋಹ ಬಗೆದಿದ್ದಾರೆ. ಅವರು ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಇರಾನಿನ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಆರಂಭದ ದಿನಗಳಲ್ಲಿ ಅಮೆರಿಕಾ ಅಧ್ಯಕ್ಷರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸಿ ಇರಾನ್ ಆಡಳಿತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು ಮತ್ತು `ಸಹಾಯ ಬರುತ್ತಿದೆ' ಎಂದು ಘೋಷಿಸಿದ್ದರು. ಶಾಂತಿಯುತ ಪ್ರತಿಭಟನಾಕಾರರಿಗೆ ಹಾನಿ ಎಸಗಿದರೆ ಅಮೆರಿಕಾ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್ ಕ್ರಮೇಣ ಮೃದು ನಿಲುವು ತಳೆದಿರುವುದನ್ನು ಪ್ರತಿಭಟನಾಕಾರರು ಟೀಕಿಸಿದ್ದಾರೆ. `ಇರಾನಿನಲ್ಲಿ ಪ್ರತಿಭಟನೆಯ ಸಂದರ್ಭ ನಡೆದ ಸಾವುಗಳಿಗೆ ಟ್ರಂಪ್ ಹೊಣೆ. ಯಾಕೆಂದರೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದವರನ್ನು ಅವರು ಪ್ರೋತ್ಸಾಹಿಸಿದ್ದರು ಮತ್ತು ಅಮೆರಿಕಾದ ನೆರವಿನ ಭರವಸೆ ನೀಡಿದ್ದರು. ಆದರೆ ಬಳಿಕ ಈ ರೀತಿ ದ್ರೋಹ ಎಸಗಿರುವುದನ್ನು ಕಂಡರೆ ಅಮೆರಿಕಾವು ಇರಾನ್ ಆಡಳಿತದ ಜೊತೆಗೆ `ಡೀಲ್' ಮಾಡಿಕೊಂಡಿರುವ ಅನುಮಾನ ಮೂಡುತ್ತಿದೆ ಎಂದು ಪ್ರತಿಭಟನಾಕಾರರನ್ನು ಉಲ್ಲೇಖಿಸಿ `ಟೈಮ್' ಪತ್ರಿಕೆ ವರದಿ ಮಾಡಿದೆ.
ಫೆ.10 ರಿಂದ ಫೆ.25ರೊಳಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚನೆ
ಬೆಂಗಳೂರು : 2025-26ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಫೆ.10ರಿಂದ ಫೆ.25ರೊಳಗೆ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಹಣ ಸಂಗ್ರಹಿಸದೆ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸಬೇಕು ಎಂದು ಪದವಿ ಪೂರ್ವ ಕಾಲೇಜುಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸೂಚನೆ ನೀಡಿದೆ. ಈ ಪರೀಕ್ಷೆ ಸಂಬಂಧ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅಳವಡಿಸಿರುವ ದ್ವಿತೀಯ ಪಿಯುಸಿ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅನುಸರಿಸಿ, ಅದೇ ಮಾದರಿಯಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕಾರ್ಯ ನಡೆಸಬೇಕು ಎಂದಿದ್ದಾರೆ. ಫೆ.25ರೊಳಗೆ ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಇಂದೀಕರಿಸಬೇಕು. ಫಲಿತಾಂಶ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಮಾ.13ರೊಳಗೆ ಫಲಿತಾಂಶ ಪಟ್ಟಿಗೆ ಜಿಲ್ಲಾ ಉಪನಿರ್ದೇಶಕರಿಂದ ಅನುಮೋದನೆ ಪಡೆಯಬೇಕು. ಮಾ.30 ಫಲಿತಾಂಶವನ್ನು ಘೋಷಣೆ ಮಾಡಬೇಕು ಅವರು ಸೂಚನೆ ನೀಡಿದ್ದಾರೆ. ನಾಳೆಯಿಂದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆ : ಜ.19 ರಿಂದ ಫೆ.2ರವರೆಗೆ ದ್ವಿತೀಯ ಪಿಯುನ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಬೋರ್ಡ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಕಲಬುರಗಿ | ಜ.19ರಂದು ಬಿಜೆಪಿ ಪ್ರತಿಭಟನೆ : ಮಲ್ಲಿಕಾರ್ಜುನ
ಕಲಬುರಗಿ : ರಾಜ್ಯ ಸರಕಾರದ ವೈಫಲ್ಯ ಹಾಗೂ ಎಸ್ಸಿಪಿ., ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಜ.19ರಂದು ಬಿಜೆಪಿ ಎಸ್.ಸಿ. ಮೋರ್ಚಾದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೀನಕೇರಿ ತಿಳಿಸಿದ್ದಾರೆ. ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ಸಿಎಂ ಅವರು ಅಹಿಂದ ಪರ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಒಂದು ಒಳ್ಳೆಯ ಯೋಜನೆ ನೀಡಿಲ್ಲ. ಇರುವ ಯೋಜನೆಗಳನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ದಲಿತಪರ ಇಲ್ಲ. ದಲಿತಪರ ಎಂದು ವೋಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಮುಖಂಡ ರಾಜು ವಾಡೇಕರ್, ರಮೇಶ್ ವಾಡೇಕರ್ ಸೇರಿ ಅನೇಕರು ಮಾತನಾಡಿದರು. ಈ ಸುದ್ದಿಗೋಷ್ಠಿಯಲ್ಲಿ ರಾಜು ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಸಚಿನ ಕಟ್ಟಿಮನಿ, ಪ್ರದೀಪ ಬಾಚನಾಳ, ಶ್ರೀಮಂತ ಭಂಡಾರಿ, ಭಂಡೇಶ್ ಆರ್., ರಾಜೇಶ್ ಶಿವನೂರ್, ಪ್ರಧ್ವಿರಾಜ್ ರಾಂಪೂರ್, ದತ್ತು ಹಯ್ಯಾಳಕರ್, ಮರಲಿಂಗ ಇತರರು ಉಪಸ್ಥಿತರಿದ್ದರು.
ಪಿಜಿ ವೈದ್ಯಕೀಯ 3ನೇ ಸುತ್ತಿನಲ್ಲಿ ಸೀಟು ನೋಂದಣಿಗೆ ಅವಕಾಶ
ಬೆಂಗಳೂರು : ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ ಪಿಜಿನೀಟ್-2025 ರಲ್ಲಿ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಿರುವುದರಿಂದ 3ನೇ ಸುತ್ತಿನ (ಮಾಪ್-ಅಪ್) ಸೀಟು ಹಂಚಿಕೆಗಾಗಿ ಅರ್ಹ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ರವಿವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಆನ್ ಲೈನ್ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗಾಗಿ ಪ್ರಾಧಿಕಾರದ ಪೋರ್ಟಲ್ ಅನ್ನು ಜ.26ರ ಬೆಳಿಗ್ಗೆ 11ರವರೆಗೆ ತೆರೆದಿರಲಾಗುತ್ತದೆ. 3ನೇ ಸುತ್ತಿನಲ್ಲಿ (ಮಾಪ್- ಅಪ್) ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಬಹುದು ಎಂದಿದ್ದಾರೆ. ಮುಂದಿನ ಯಾವುದೇ ಸುತ್ತಿನ ಸೀಟು ಹಂಚಿಕೆಗೆ ಆನ್ ಲೈನ್ ನೋಂದಣಿ ಮಾಡಿಕೊಳ್ಳಲು / ಅರ್ಜಿ ಸಲ್ಲಿಸಲು ಅವಕಾಶಗಳನ್ನು ನೀಡುವುದಿಲ್ಲ. 3ನೇ ಸುತ್ತಿಗೆ ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ರದ್ದುಗೊಳ್ಳಬಹುದಾದ ಅಥವಾ ಹೊಸದಾಗಿ ಸೇರ್ಪಡೆಯಾಗುವ ಸೀಟುಗಳು ಇದ್ದಲ್ಲಿ ಅವನ್ನೂ ಹಂಚಿಕೆಗೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿಗಾಗಿ ಆಗಿಂದಾಗ್ಗೆ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಬೇಕು ಎಂದು ಅವರು ಸೂಚಿಸಿದ್ದಾರೆ. ಈವರೆಗೆ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಎಲ್ಲರೂ ಒಂದಾಗಿ ಕೋಮುವಾದಿಗಳನ್ನು ದಮನಿಸಬೇಕಿದೆ : ಶಾಸಕ ಬಿ.ಆರ್.ಪಾಟೀಲ್
ಬೆಂಗಳೂರು : ಇವತ್ತು ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೋಮುವಾದಿ ಶಕ್ತಿ ಎಡೆ ಎತ್ತಿದೆ. ದೇಶದಲ್ಲಿ ಮತ್ತೆ ಚಾತುರ್ವರ್ಣ ವ್ಯವಸ್ಥೆ ಮರಳಿ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಬಿಜೆಪಿ ಸಜ್ಜಾಗಿ ನಿಂತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಕೋಮುವಾದಿ ಶಕ್ತಿಯನ್ನು ದಮನಮಾಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ. ರವಿವಾರ ನಗರದ ಗಾಂಧಿ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ‘ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ’ ಹೋರಾಟಗಾರನ ಅಳಿಯದ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ದಸಂಸ ತನ್ನದೇ ಆದ ಛಾಪು ಮೂಡಿಸಿದೆ. ಬಸವಣ್ಣನವರನ್ನು ಮೇಲ್ಜಾತಿಯವರು ಮಾತ್ರ ಪೂಜಿಸುತ್ತ, ಅವರ ವಿಚಾರದಲ್ಲಿ ಹೋಗುತ್ತಿದ್ದರು. ಆದರೆ ಬಸವಣ್ಣ ಅವರನ್ನು ಕೇರಿಗೆ ಕರೆದುಕೊಂಡು ಹೋಗಿದ್ದು ದಸಂಸ. ಬಸವಣ್ಣ ಎಂದರೆ ಕೇವಲ ನಂದಿ, ದನ ಎಂದು ಪೂಜಿಸಲಾಗುತ್ತಿದ್ದು, ಬಸವಣ್ಣ ಒಬ್ಬ ಮಾನವತಾವಾದಿ ಎಂದು ದಸಂಸ ತೋರಿಸಿಕೊಟ್ಟಿದೆ ಎಂದು ನುಡಿದರು. ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ಕಾಂಗ್ರೆಸ್ಗೆ ಸಕ್ರೀಯವಾಗಿ ಬೆಂಬಲ ನೀಡಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಲಿಲ್ಲ ಎನ್ನುವ ನೋವು ಅವರಲ್ಲಿತ್ತು. ರಾಜಕೀಯದಲ್ಲಿ ಅವಕಾಶ ಸಿಗಬೇಕಿದ್ದವರಿಗೆ ಸಿಗುವುದಿಲ್ಲ. ಲಕ್ಷ್ಮೀನಾರಾಯಣ ನಾಗವಾರ ಅವರು ಸಮಾನತೆಯ ಕನಸು ಕಾಣುತ್ತಿದ್ದರು. ಅವರ ಕನಸನ್ನು ಕಟ್ಟುವ ಕೆಲಸ ನಮ್ಮ ಮುಂದಿದೆ ಎಂದು ಅವರು ತಿಳಿಸಿದರು. ಕೆನರಾ ಬ್ಯಾಂಕ್ ಎಸ್ಸಿ-ಎಸ್ಟಿ ನೌಕರರ ಸಂಘದ ಪುರುಷೋತ್ತಮ ದಾಸ್ ಮಾತನಾಡಿ, ಹುಟ್ಟುತ್ತಾ ನಾವೆಲ್ಲರೂ ಮನುಷ್ಯರು, ಯಾರೋ ಇಟ್ಟ ಲೇಬಲ್ಗಳಿಂದ ಬೇರೆ-ಬೇರೆ ಮಾಡಬಾರದು. ಕುವೆಂಪು ಹೇಳಿದಂತೆ ವಿಶ್ವಮಾನವರಾಗಬೇಕಾಗಿರುವುದು ನಮ್ಮ ಕರ್ತವ್ಯ. ಡಾ.ಅಂಬೇಡ್ಕರ್ ಅವರು ಹೇಳಿದಂತೆ ಜಾತಿವಿನಾಶ ಮಾಡಬೇಕು, ಅದಕ್ಕೆ ನಾವು ಪ್ರಯತ್ನಿಸೋಣ ಎಂದು ಹೇಳಿದರು. ಬೇರೆ ಬೇರೆ ಸಮುದಾಯದವರಿಗೆ ಹಾಸ್ಟೆಲ್, ಕಲ್ಯಾಣ ಮಂಟಪಗಳಿವೆ. ಆದರೆ ದಲಿತರ ಕಲ್ಯಾಣ ಮಂಟಪ ಎಲ್ಲಿದೆ? ನಮಗೆ ಇರುವ ಹಾಸ್ಟೆಲ್ಗಳಿಗೆ ಕಿಟಕಿ, ಬಾಗಿಲು ಮುರಿದಿರುತ್ತವೆ. ಅದಕ್ಕಾಗಿ ವಿದ್ಯಾವಂತರಾದವರು ಕೆಲಸ ಮಾಡಬೇಕು. 30 ಎಕರೆ ಜಾಗ ತೆಗೆದುಕೊಂಡು ಕ್ರೀಡಾಂಗಣ ಮಾಡಿ ನಮ್ಮ ಮಕ್ಕಳನ್ನು ಅಂತರ್ರಾಷ್ಟ್ರೀಯ, ಒಲಂಪಿಕ್ಸ್ ನಲ್ಲಿ ಆಟವಾಡಲು ಅನುಕೂಲ ಮಾಡಬೇಕು ಎಂಬ ಕನಸಿದೆ ಎಂದರು. ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ರಂಗಕರ್ಮಿ ಜನಾರ್ಧನ್(ಜನ್ನಿ), ಸಮಾಜವಾದಿ ಚಿಂತಕ ಅಲಿಬಾಬಾ ಮತ್ತಿತರರು ಉಪಸ್ಥಿತರಿದ್ದರು.
ಗಾಝಾ ಸಲಹಾ ಸಮಿತಿಗೆ ಇಸ್ರೇಲ್ ಪ್ರಧಾನಿ ಆಕ್ಷೇಪ
ಜೆರುಸಲೇಂ, ಜ.18: ಶ್ವೇತಭವನವು ರಚಿಸಿದ ಗಾಝಾ ಸಲಹಾ ಸಮಿತಿಯ ಸಂಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ಷೇಪಿಸಿದ್ದು ಈ ಬಗ್ಗೆ ಚರ್ಚಿಸಲು ಆಡಳಿತಾರೂಢ ಮೈತ್ರಿಪಕ್ಷದ ಸಭೆ ಕರೆದಿರುವುದಾಗಿ ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ `ಶಾಂತಿ ಮಂಡಳಿಯ' ಅಡಿಯಲ್ಲಿ ಕಾರ್ಯನಿರ್ವಹಿಸುವ ಗಾಝಾ ಕಾರ್ಯಕಾರಿ ಮಂಡಳಿಯ ರಚನೆಯನ್ನು ಈ ವಾರ ಶ್ವೇತಭವನ ಘೋಷಿಸಿದೆ. ಸಲಹೆಗಾರನ ಪಾತ್ರ ನಿರ್ವಹಿಸುವ ಕಾರ್ಯಕಾರಿ ಮಂಡಳಿಯಲ್ಲಿ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ಮತ್ತು ಖತರ್ ರಾಜತಾಂತ್ರಿಕ ಅಲಿ ಅಲ್-ಥವಾದಿ ಸೇರಿದಂತೆ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಅಧಿಕಾರಿಗಳನ್ನು ಹೆಸರಿಸಲಾಗಿದೆ. ಕಾರ್ಯಕಾರಿ ಮಂಡಳಿ ರಚನೆಗೆ ಇಸ್ರೇಲ್ ಪ್ರಧಾನಿಯ ಕಚೇರಿ ಆಕ್ಷೇಪ ವ್ಯಕ್ತಪಡಿಸಿದ್ದು `ಇದು ಇಸ್ರೇಲ್ನ ನೀತಿಗೆ ವಿರುದ್ಧವಾಗಿ ಸಾಗುತ್ತದೆ. ಈ ವಿಷಯದ ಬಗ್ಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ವಿದೇಶಾಂಗ ಸಚಿವರಿಗೆ ಸೂಚಿಸಲಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಒಂದು ಶತಕೋಟಿ ಡಾಲರ್ ನೀಡಿದರೆ ಗಾಝಾ ಶಾಂತಿ ಮಂಡಳಿಯ ಕಾಯಂ ಸದಸ್ಯತ್ವ: ವರದಿ
ನ್ಯೂಯಾರ್ಕ್, ಜ.18: ಗಾಝಾದ ಹೊಸ `ಶಾಂತಿ ಮಂಡಳಿಯ ಕಾಯಂ ಸದಸ್ಯತ್ವ ಬೇಕಿದ್ದರೆ ಕನಿಷ್ಠ 1 ಶತಕೋಟಿ ಡಾಲರ್ ಪಾವತಿಸಬೇಕು ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಆಡಳಿತವು ದೇಶಗಳಿಗೆ ಸೂಚಿಸಿರುವುದಾಗಿ `ಬ್ಲೂಮ್ಬರ್ಗ್' ವರದಿ ಮಾಡಿದೆ. ಪ್ರಸ್ತಾವಿತ ಶಾಂತಿ ಮಂಡಳಿಯ ಕರಡು ಸನ್ನದು(ಚಾರ್ಟ್ರ್) ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಸದಸ್ಯತ್ವಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಯಾವುದೇ ನಿರ್ಧಾರವು ಬಹುಮತದ ಆಧಾರದಲ್ಲಿ ನಡೆಯುತ್ತದೆ ಮತ್ತು ಇದನ್ನು ಅಧ್ಯಕ್ಷರು ಅನುಮೋದಿಸಬೇಕು. ಪ್ರತೀ ಸದಸ್ಯ ರಾಷ್ಟ್ರಕ್ಕೆ ಒಂದು ಓಟು ಇರುತ್ತದೆ. ಸನ್ನದು ಅನುಷ್ಠಾನಕ್ಕೆ ಬಂದ ದಿನದಿಂದ 3 ವರ್ಷಗಳವರೆಗೆ ಪ್ರತೀ ಸದಸ್ಯ ದೇಶಗಳ ಸದಸ್ಯಾವಧಿ ಇರುತ್ತದೆ. ಸನ್ನದು ಜಾರಿಗೆ ಬಂದ 1 ವರ್ಷದೊಳಗೆ 1 ಶತಕೋಟಿ ಡಾಲರ್ ಹಣವನ್ನು ನಗದು ನಿಧಿಯ ರೂಪದಲ್ಲಿ ಶಾಂತಿ ಮಂಡಳಿಗೆ ಪಾವತಿಸುವ ಸದಸ್ಯ ರಾಷ್ಟ್ರಗಳಿಗೆ 3 ವರ್ಷದ ಮಿತಿ ಅನ್ವಯಿಸುವುದಿಲ್ಲ. ಶಾಂತಿ ಮಂಡಳಿಯ ಮೂರು ಸದಸ್ಯ ರಾಷ್ಟ್ರಗಳು ಸನ್ನದಿಗೆ ಒಪ್ಪಿಗೆ ಸೂಚಿಸಿದರೆ ಅದು ಅಧಿಕೃತವಾಗಲಿದೆ. ಸದಸ್ಯನನ್ನು ವಜಾಗೊಳಿಸುವ ಅಧಿಕಾರವನ್ನೂ ಟ್ರಂಪ್ ಹೊಂದಿರುತ್ತಾರೆ. ಆದರೆ ಮೂರನೇ ಎರಡು ಬಹುಮತವಿದ್ದರೆ ಸದಸ್ಯರು ಇದಕ್ಕೆ ತಡೆಯೊಡ್ಡಬಹುದು. ಈ ಮಧ್ಯೆ, ಕರಡು ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟೀಕಿಸಿದ್ದಾರೆ . ಶಾಂತಿ ಮಂಡಳಿ ವರ್ಷಕ್ಕೆ ಕನಿಷ್ಠ ಒಮ್ಮೆ ಸಭೆ ನಡೆಸಬೇಕು ಮತ್ತು ಸಭೆಯ ಅಜೆಂಡಾವನ್ನು ಟ್ರಂಪ್ ಅನುಮೋದಿಸಬೇಕು ಹಾಗೂ ಶಾಂತಿ ಮಂಡಳಿಯ ಹಣವನ್ನು ಟ್ರಂಪ್ ನಿಯಂತ್ರಿಸುತ್ತಾರೆ ಎಂಬ ಪ್ರಸ್ತಾಪಕ್ಕೆ ಹಲವು ದೇಶಗಳು ಆಕ್ಷೇಪಿಸಿವೆ ಎಂದು ವರದಿಯಾಗಿದೆ.
`ಪ್ರತಿದಿನ ಅಪ್ಪನ ಮುಂದೆ ಕೂತು ಅಳುತ್ತಿದ್ದೆ, ಅನುಭವಿಸಿದ ನೋವು ಒಂದೆರಡಲ್ಲ': ಮನದಾಳ ತೆರೆದಿಟ್ಟ ಹರ್ಷಿತ್ ರಾಣಾ!
Harhit Rana Allround Performance- ಹರ್ಷಿತ್ ರಾಣಾ ಅವರು ಭಾರತ ತಂಡಕ್ಕೆ ಆಯ್ಕೆ ಆಗಿದ್ದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇವನ್ಯಾವ ಸೀಮೆ ಆಲ್ರೌಂಡರ್ ಎಂಬ ಮಾತುಗಳೂ ಕೇಳಿ ಬಂದಿದ್ದವು. ಎಲ್ಲಾ ಕುಹಕ, ವ್ಯಂಗ್ಯಗಳಿಗೂ ಹರ್ಷಿತ್ ರಾಣಾ ಅವರ ಆಟವೇ ಉತ್ತರ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಆಲ್ರೌಂಡ್ ಪ್ರದರ್ಶನದಿಂದ ಮಿಂಚಿದ್ದಾರೆ. ಆದರೆ ಅವರು ಇದೇನೂ ತನಗೆ ಹೊಸದಲ್ಲ. ಕಳೆದ 10 ವರ್ಷಗಳಿಂದ ವೈಫಲ್ಯಗಳನ್ನು ನಿರಂತರವಾಗಿ ಅನುಭವಿಸುತ್ತಾ ಬಂದಿದ್ದೇನೆ. ಆಗೆಲ್ಲಾ ತನ್ನ ಬೆಂಬಲಕ್ಕೆ ನಿಂತವರು ತನ್ನ ತಂದೆ ಎಂದು ಅವರು ಹೇಳಿದ್ದಾರೆ.
Bengaluru | ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಸ್ಫೋಟಿಸುವುದಾಗಿ ರವಿವಾರ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ವರದಿಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಅಪರಿಚಿತರಿಂದ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಮೂರು ಆರ್ಡಿಎಕ್ಸ್, ಐಇಡಿ ಬಳಸಿ ಟರ್ಮಿನಲ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ತಕ್ಷಣ ಎಚ್ಚೆತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳಗಳು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನಾಳೆ ಸಚಿವ ವಿಜಯ್ ಶಾ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಭೋಪಾಲ್,ಜ.18: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಜಾಯ್ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಸಚಿವ ವಿಜಯ್ ಶಾ ಅವರ ಅರ್ಜಿಯ ವಿಚಾರಣೆಯನ್ನು ನಡೆಸುವ ನಿರೀಕ್ಷೆಯಿದೆ. ಕರ್ನಲ್ ಕುರೇಷಿ ವಿರುದ್ಧ ಆಡಿದ ಮಾತುಗಳಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ವಿಜಯ್ ಶಾ ಅವರನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತ್ತು. ಶಾ ಅವರು ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಸಚಿವರ ನಡವಳಿಕೆಯ ಹಿಂದಿರುವ ಉದ್ದೇಶವು ಶಂಕಾಸ್ಪದವಾಗಿದೆಯೆಂದು ಹೇಳಿತ್ತು. ವಿಜಯ್ ಶಾ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಪರಮೇಶ್ವರ್, ಈ ವಿಷಯವಾಗಿ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಿ ಹೇಳಿಕೆ ನೀಡಿದ್ದು, ಅದನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗಿದ್ದು ಮತ್ತು ನ್ಯಾಯಾಲಯದ ದಾಖಲೆಗೂ ನೀಡಲಾಗಿದೆ ಎಂದು ಹೇಳಿದರು. ಅದನ್ನು ಒಪ್ಪದ ನ್ಯಾಯಪೀಠವು ,‘‘ ಆನ್ಲೈನ್ ಮೂಲಕ ಕ್ಷಮಾಯಾಚನೆ ಅಂದರೆ ಏನು? ವಿಜಯ್ ಶಾ ಅವರ ಉದ್ದೇಶಗಳು ಹಾಗೂ ಪ್ರಾಮಾಣಿಕತೆಯ ಬಗ್ಗೆ ಸಂದೇಹವನ್ನು ಮೂಡಿಸುತ್ತದೆ. ನ್ಯಾಯಾಲಯದ ದಾಖಲೆಗೆ ಕ್ಷಮಾಯಾಚನೆ ಪತ್ರವನ್ನು ಒಪ್ಪಿಸಿ ಅದನ್ನು ಪರಿಶೀಲಿಸಬೇಕಿದೆ ಎದು ನ್ಯಾಯಾಲಯವು ವಿಜಯ್ ಶಾ ಅವರಿಗೆ ತಿಳಿಸಿದೆ. ಕ.ಸೋಫಿಯಾ ಖುರೇಷಿ ಹಾಗೂ ಮಹಿಳಾ ವಾಯುಪಡೆ ಅಧಿಕಾರಿ ವಿಂಗ್ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕಾರ್ಯಾಚರಣೆಯ ವಿವರಗಳನ್ನು ನೀಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಗೆ ಭಯೋತ್ಪಾದಕರ ‘ಸಹೋದರಿ’ಯನ್ನೇ ಕಳುಹಿಸಿದ್ದಾರೆಂದು ಹೇಳಿದ್ದಕ್ಕಾಗಿ ವಿಜಯ್ ಶಾ ತೀವ್ರ ವಿವಾದಕ್ಕೆ ಒಳಗಾಗಿದ್ದರು.
‘ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ’ ನಾಳೆ ಲೋಕಾರ್ಪಣೆ
ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಯ ಮೂರ್ತಿಶಿಲ್ಪ, ಉಬ್ಬುಶಿಲ್ಪ, ಮಾಹಿತಿ ಫಲಕ, ಕಥಾಚಿತ್ರ ಹಾಗೂ ರೊಬೋಟಿಕ್ ತಂತ್ರಜ್ಞಾನ, ಡೈಮೆನ್ನನ್ ಚಿತ್ರಮಂದಿರ-ಧ್ವನಿ ಪಭಾವಗಳೊಂದಿಗೆ ನೋಡುಗನ ಮನಸ್ಸಿನಲ್ಲಿ ರಾಯಣ್ಣನ ಕ್ರಾಂತಿಯ ಘಟನೆಗಳನ್ನು ಬಿಂಬಿಸುವ ವಸ್ತು ಸಂಗ್ರಹಾಲಯ (ವೀರಭೂಮಿ) ಹಾಗೂ ರಾಯಣ್ಣನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ(ಜ.19) ಲೋಕಾರ್ಪಣೆ ಮಾಡಲಿದ್ದಾರೆ. ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಮಾಜಿ ಸಚಿವ ಹಾಗೂ ರಾಯಣ್ಣ ಅಧ್ಯಯನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಅಧಿಕಾರಿಗಳು, ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ನಂದಗಡದಲ್ಲಿನ ವಸ್ತು ಸಂಗ್ರಹಾಲಯದ ಸಿದ್ಧತೆಗಳನ್ನು ಪರಿಶೀಲಿಸಿದರು. ಅಲ್ಲದೆ, ನಾಳೆ(ಜ.19) ನಂದಗಡ ರೂರಲ್ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ದತೆಗಳನ್ನು ವೀಕ್ಷಿಸಿದರು. ರಾಯಣ್ಣನವರ ಕುರಿತ ಪಾರಂಪರಿಕ ಮತ್ತು ಆಧುನಿಕ ಮಾಧ್ಯಮದ ದೃಶ್ಯವನ್ನು ಸಮ್ಮಿಶ್ರಗೊಳಿಸಿದ್ದು, ಭಿತ್ತಿಚಿತ್ರದಲ್ಲಿ ರಾಯಣ್ಣರ ವಂಶ, ಸಂಸ್ಥಾನದೊಂದಿಗೆ ಸಂಬಂಧ, ಭರಮಪ್ಪ ಹುಲಿಯನ್ನು ಸಂಹರಿಸಿದ್ದು, ಸಂಗೊಳ್ಳಿಯಲ್ಲಿನ ಮೆರವಣಿಗೆ, ರಾಯಣ್ಣ ಜನನ ವಿವರಗಳ ಭಿತ್ತಿಚಿತ್ರ ಪ್ರದರ್ಶನದ ಇರಲಿದೆ. ಅಲ್ಲದೆ, ರಾಯಣ್ಣನ ಬಾಲ್ಯದ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳನ್ನು ಆಲೋಗ್ರಾಮ್ ಚಿತ್ರ ಮಂದಿರದಲ್ಲಿ ಬಿಂಬಿಸಲಾಗುವುದು ಎಂದು ತಿಳಿಸಲಾಗಿದೆ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ’ವನ್ನು 2016ರಲ್ಲಿ ರಚಿಸಲಾಗಿದ್ದು, ರಾಯಣ್ಣನ ಜನ್ಮಭೂಮಿಯಾದ ಸಂಗೊಳ್ಳಿ, ಹುತಾತ್ಮನಾದ ನಂದಗಡ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ರಾಯಣ್ಣ ಮತ್ತವರ ಸಂಗಡಿಗರ ನಾಡ ನಿಷ್ಠೆ, ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸಿ, ಯುವ ಸಮುದಾಯಕ್ಕೆ ತಲುಪಿಸಲು ರಾಜ್ಯ ಸರಕಾರ ಕ್ರಮ ವಹಿಸಿದೆ. ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಲ್ಲಿ 100ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಿದೆ. ರಾಯಣ್ಣ ಬಾಲ್ಯದಿಂದ ಗಲ್ಲಿಗೇರಿಸಿದವರೆಗಿನ ಇತಿಹಾಸವನ್ನು ಸಾರುವ ಶೌರ್ಯಭೂಮಿ ನಿರ್ಮಾಣ, ಕಲ್ಯಾಣ ಮಂಟಪ ನವೀಕರಣ. ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಸ್ಥಳದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ(ವೀರಭೂಮಿ). ನಂದಗಡದಲ್ಲಿ ರಾಯಣ್ಣನ ಸಮಾಧಿ ಬಳಿಯಿರುವ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸೈನಿಕ ಶಾಲೆ: ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ಇಲಾಖೆಯ ಅಧೀನದಲ್ಲಿ ಬರುವ ಸೈನಿಕ ಸ್ಕೂಲ್ ಸೊಸೈಟಿಯಿಂದ ಅನುಮೋದನೆ ಪಡೆದು ಸೈನಿಕ ಶಾಲೆಯು ಸಿಎಂ ಅವರಿಂದ ಉದ್ಘಾಟನೆಯಾಗಿದ್ದು, 2022-23ನೆಯ ಸಾಲಿನಿಂದ 6ನೆ ತರಗತಿಯಿಂದ ಪ್ರಾರಂಭಗೊಂಡಿದೆ. ಪ್ರಸ್ತುತ 2025-26ನೆಯ ಸಾಲಿನಲ್ಲಿ ಸೈನಿಕ ಶಾಲೆಯಲ್ಲಿ 6, 7, 8 ಮತ್ತು 9ನೆ ತರಗತಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸೇರಿ ದೇಶದ ವಿವಿಧ ರಾಜ್ಯಗಳ ಒಟ್ಟು 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೌರ್ಯ ಭೂಮಿ: ಸಂಗೊಳ್ಳಿಯಲ್ಲಿ ರಾಯಣ್ಣ ಮತ್ತು ಅವನ ಚಟುವಟಿಕೆ ಕುರಿತಂತೆ 10 ಎಕರೆ ಪ್ರದೇಶದಲ್ಲಿ ಶಿಲ್ಪಗಳ ನಿರ್ಮಾಣವನ್ನು ಮಾಡಲಾಗಿದೆ. ಇದು ಅತ್ಯಂತ ಆಕರ್ಷಣೀಯವಾಗಿದ್ದು, ಸಾವಿರ ಸಂಖ್ಯೆಯಲ್ಲಿ ಪ್ರತಿದಿನವು ಪ್ರವಾಸಿಗಳು ಮಕ್ಕಳ ಸಹಿತ ಬಂದು ವೀಕ್ಷಿಸುತ್ತಿದ್ದಾರೆ. ರಾಯಣ್ಣ ಮತ್ತು ಆತನ ಸಂಗಡಿಗರನ್ನು ನೇಣು ಹಾಕಿದ ನಂದಗಡದಲ್ಲಿ ವೀರಭೂಮಿ ಹೆಸರಿನಲ್ಲಿ ವಸ್ತು ಸಂಗ್ರಹಾಲಯವು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಯುರೋಪಿಯನ್ ಯೂನಿಯನ್
ಬ್ರಸೆಲ್ಸ್, ಜ.18: ಗ್ರೀನ್ಲ್ಯಾಂಡ್ ವಿಷಯದಲ್ಲಿ ಅಮೆರಿಕಾದ ನಿಲುವನ್ನು ಬೆಂಬಲಿಸದ ಕಾರಣಕ್ಕೆ ಡೆನ್ಮಾರ್ಕ್ ಹಾಗೂ ಇತರ ಹಲವಾರು ಯುರೋಪಿಯನ್ ರಾಷ್ಟ್ರಗಳ ಮೇಲೆ ಹೊಸದಾಗಿ ಸುಂಕ ವಿಧಿಸುವ ಅಧ್ಯಕ್ಷ ಟ್ರಂಪ್ ನಿರ್ಧಾರದ ಬಳಿಕ ಅಮೆರಿಕಾದ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ. ವ್ಯಾಪಾರ ಒಪ್ಪಂದಕ್ಕೆ ವ್ಯಾಪಕ ಅನುಮೋದನೆಯಿದ್ದರೂ ಗ್ರೀನ್ಲ್ಯಾಂಡ್ ವಿಷಯದಲ್ಲಿ ಟ್ರಂಪ್ ಅವರ ಬೆದರಿಕೆ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಅಮೆರಿಕಾದ ಉತ್ಪನ್ನಗಳ ಮೇಲಿನ ಶೂನ್ಯ ಶೇಕಡಾ ಸುಂಕಗಳನ್ನು ತಡೆಹಿಡಿಯಬೇಕು ಎಂದು ಯುರೋಪಿಯನ್ ಪೀಪಲ್ಸ್ ಪಾರ್ಟಿ(ಇಪಿಪಿ) ಅಧ್ಯಕ್ಷ ಮಾನ್ಫ್ರೆಡ್ ವೆಬರ್ ಹೇಳಿದ್ದಾರೆ. ಹೊಸ ಸುಂಕಗಳು ಅಟ್ಲಾಂಟಿಕ್ ಸಾಗರದಾದ್ಯಂತದ ಸಂಬಂಧಗಳನ್ನು ಹಾನಿಯುಂಟುಮಾಡುವ ಅಪಾಯವನ್ನು ಉಂಟುಮಾಡುತ್ತದೆ. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವು ಅಂತಾರಾಷ್ಟ್ರೀಯ ಕಾನೂನಿನ ಮೂಲ ತತ್ವಗಳಾಗಿವೆ ಮತ್ತು ಯುರೋಪ್ ಮತ್ತು ಜಾಗತಿಕ ಸಮುದಾಯಕ್ಕೆ ಪ್ರಮುಖವಾಗಿವೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಪ್ರತಿಪಾದಿಸಿದ್ದಾರೆ.
ವಾಡಿ | ಸ್ಪರ್ಧೆಗಾಗಿ ಪ್ರಬಂಧ ಬೇಡ, ಜ್ಞಾನಕ್ಕಾಗಿ ಬರೆಯಿರಿ : ಕಾಶಿನಾಥ ಧನ್ನಿ
ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ
ಡಿಕೆ ಶಿವಕುಮಾರ್ - ಹೈಕಮಾಂಡ್ ಭೇಟಿ: ಒಂದೇ ವಾಕ್ಯದಲ್ಲಿ ಹೇಳುವುದಾದ್ರೆ ಕಾಲವೇ ಉತ್ತರಿಸುತ್ತದೆ ಎಂದ DCM
ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ತಮ್ಮ ಕೆಲಸ ಮಾಡುತ್ತಾರೆ ಎಂದರು. ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿ ಐದು ಕಿ.ಮೀ. ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಪಂಚಾಯತಿ ಮಟ್ಟದಲ್ಲಿ ನಿರ್ಣಯ ಕೈಗೊಂಡು ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಧ್ಯಪ್ರದೇಶ| ‘ಗೀಲನ್ ಬಾ’ ಸೋಂಕಿಗೆ ಇಬ್ಬರು ಮಕ್ಕಳು ಮೃತ್ಯು
ನೀಮುಚ್,ಜ.18: ‘ಗೀಲನ್ ಬಾ’ ಸಿಂಡ್ರೋಮ್ ದೇಶದ ವಿವಿಧೆಡೆ ಆತಂಕ ಸೃಷ್ಟಿಸಿದ್ದು, ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಮಾನಸ ಪಟ್ಟಣದಲ್ಲಿ ಇಬ್ಬರು ಮಕ್ಕಳು ಸೋಂಕಿನಿಂದ ಮೃತಪಟ್ಟಿದ್ದಾರೆ. ನೀಮುಚ್ ನಗರದಲ್ಲಿ ಸುಮಾರು 15 ಮಂದಿ ಗೀಲನ್ ಬಾ ಸೋಂಕು ಪೀಡಿತರಾಗಿದ್ದಾರೆ. ಆರೋಗ್ಯ ಇಲಾಖೆಯ ದತ್ತಾಂಶಗಳ ಪ್ರಕಾರ, ಒಟ್ಟು ಆರು ಮಂದಿ ಸೋಂಕು ಪೀಡಿತರಾಗಿರುವುದು ಅಧಿಕೃತವಾಗಿ ದೃಢಪಟ್ಟಿದೆ. ಇತರ ಶಂಕಿತ ಪ್ರಕರಣಗಳ ಮೇಲೆ ನಿಗಾವಿರಿಸಲಾಗಿದ್ದು, ನಿಕಟವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ‘ಗೀಲನ್ ಬಾ’ ವೇಗವಾಗಿ ಹರಡುತ್ತಿದ್ದು, ಸೋಂಕುಪೀಡಿತರಲ್ಲಿ ಬಹುತೇಕ ರೋಗಿಗಳು 4ರಿಂದ 17 ವರ್ಷದೊಳಗಿನವರಾಗಿದ್ದಾರೆ. ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ರಾಜೀವ ಶುಕ್ಲಾ ವಾರ್ಡ್ ನಂ.15ಕ್ಕೆ ಭೇಟಿ ನೀಡಿ ಮೃತ ಬಾಲಕನೊಬ್ಬನ ಕುಟುಂಬಸ್ಥರನ್ನು ಭೇಟಿಯಾದರು. ಸೋಂಕು ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಿದ ಶುಕ್ಲಾ ಅವರು ಮನೆಮನೆ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೇಡಂ | ವಿವಿಧ ಬೇಡಿಕೆ ಈಡೇರಿಕೆಗಾಗಿ ಜ.20ಕ್ಕೆ ಮೆದಕ್ ಗ್ರಾಪಂ ಮುತ್ತಿಗೆ : ಸಾಬಪ್ಪ
ಸೇಡಂ : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.20ರಂದು ಮೆದಕ್ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಸಾಬಪ್ಪ ಹೇಳಿದ್ದಾರೆ. ಮೆದಕ್ ಗ್ರಾಪಂ ವ್ಯಾಪ್ತಿಯ ಸಿಲಾರಕೋಟ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲದೇ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಶೌಚಾಲಯ ನಿರ್ಮಾಣಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
ಚಿತ್ತಾಪುರ | ದುಶ್ಚಟಗಳ ದಾಸರಾಗದಿರಿ: ಫಕೀರಪ್ಪ ದೊಡ್ಡಮನಿ
ಚಿತ್ತಾಪುರ : ಯುವ ಜನಾಂಗ ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು ಎಂದು ಜಿಮ್ಸ್ ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿ ಫಕೀರಪ್ಪ ದೊಡ್ಡಮನಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಹುಳಂಡಗೇರ ಗ್ರಾಮದಲ್ಲಿ ಗುರು ಅಯ್ಯಳಲಿಂಗೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ನಿಮಿತ್ತ ಹಮಿಕೊಂಡಿದ್ದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಂಬಾಕಿನಲ್ಲಿ ನಿಕೋಟಿನ್ ಅಂಶವಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶ್ವಾಸಕೋಶಕ್ಕೆ ಹಾನಿಯುಂಟಾಗುವ ಕಾರಣದಿಂದ ತಂಬಾಕು ಸೇವನೆ ಮಾಡಬಾರದು ಎಂದು ಹೇಳಿದರು. ಜೆಸ್ಕಾಂನ ಮಾಜಿ ನಿರ್ದೇಶಕ ಗೋಪಿಕೃಷ್ಣ ಮಾತನಾಡಿದರು. ಗ್ರಾಮದ ಮಕ್ಕಳಿಗೆ ನೋಟ್ ಬುಕ್, ಪೆನ್ ನೀಡಿ ಸನ್ಮಾನಿಸಿದರು. ಮಲ್ಲೇಶಿ ಬೇನಳ್ಳಿ, ಇತರರಿದ್ದರು. ನೃತ್ಯ, ಕಿರುನಾಟಕ ಇತರ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು 2028ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಸಿಎಂ ಆಗಬಹುದು ಎಂದ ಅವರು, ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತೆರೆ ಎಳೆಯಬೇಕು ಎಂದು ಅಭಿಪ್ರಾಯಪಟ್ಟರು. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದರು.
Karnataka Weather: ಈ ವರ್ಷ ಬಿಸಿಲಿನ ಝಳ ಹೆಚ್ಚಿರಲಿದೆ - ಹವಾಮಾನ ತಜ್ಞರಿಂದ ಎಚ್ಚರಿಕೆ! ಬೇಸಿಗೆ ಆರಂಭ ಯಾವಾಗ?
ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಸೆಂಬರ್ನಲ್ಲಿ ದಾಖಲೆಯ ಚಳಿ ದಾಖಲಾಗಿದ್ದರಿಂದ, ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಜನವರಿ ಅಂತ್ಯದ ವೇಳೆಗೆ ಚಳಿ ಕಡಿಮೆಯಾಗಿ, ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗಲಿದೆ. ಶುಷ್ಕ ವಾತಾವರಣದಿಂದಾಗಿ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಯಾದಗಿರಿ | ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು : ನ್ಯಾ.ಮರಿಯಪ್ಪ
ಯಾದಗಿರಿ : ಸ್ನಾತಕ ಮತ್ತು ಸ್ನಾತಕೊತ್ತರ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಂದರ್ಭಗಳಲ್ಲಿ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು. ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಮಾಜ ವಿಭಾಗದ ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದೆ. ಇದು ನಿಜವಾಗಿಯು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಎಲ್ಲ ಹಂತಗಳಲ್ಲಿಯೂ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹಿಳೆಯನ್ನು ಗೌರವದಿಂದ ಕಾಣಬೇಕು. ಆಗ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯಲು ಸಹಾಯಕವಾಗತ್ತದೆ ಎಂದು ಅವರು ಹೇಳಿದರು. ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನೂತನಾ ಬಿ.ಡಿ. ಮಾತನಾಡಿ, ಅರ್ಹತೆ ಇರುವವರಿಗೆ ಅವಕಾಶಗಳು ಸಾಕಷ್ಟು ಪ್ರಾಪ್ತವಾಗುತ್ತವೆ. ಆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಿ, ಪ್ರಾಮಾಣಿಕವಾಗಿ ಪ್ರಯತ್ನಸಿದಾಗ ಖಂಡಿತವಾಗಿ ಯಶಶ್ಸು ಪಡಿಯಲು ಸಾಧ್ಯವಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಗ್ಯಜ್ಯೋತಿ ಎ.ಎನ್., ಲಿಂಗರಾಜ ಪಡಶೆಟ್ಟಿ, ಡಾ.ಸಿ.ಆರ್.ಕಂಬಾರ, ಡಾ.ಉಮೇಶ್ ತೇಜಪ್ಪ, ಸಾಬರೆಡ್ಡಿ ಬಂಗಾರಿ, ಬಿ.ಆರ್,ಕೇತನ್ಕರ್, ಡಾ.ಜಯದೇವಿ ಗಾಯಕ್ವಾಡ್, ಪ್ರಹ್ಲಾದ್ ಜ್ಯೋಷಿ, ಬಸನ್ಗೌಡ, ನಾಗಪ್ಪ ಮಾನೇದರ್, ಡಾ.ಗೌರೀಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಜಸ್ಥಾನ| ಬಿಷ್ಣೋಯಿ ಗ್ಯಾಂಗ್ನ ಶಾರ್ಪ್ ಶೂಟರ್ ಬಂಧನ
ಜೈಪುರ,ಜ.18: ದಿಲ್ಲಿ ಕ್ರೈಂ ಬ್ರಾಂಚ್ನ ರೌಡಿ ನಿಗ್ರಹ ದಳವು (ಎಜಿಎಸ್) ಹಾಗೂ ರಾಜಸ್ಥಾನ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯೊಂದರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು ಹೊಂದಿದ್ದಾನೆನ್ನಲಾದ ಶಾರ್ಪ್ಶೂಟರ್ ಒಬ್ಬನನ್ನು ಬಂಧಿಸಿದೆ. ಉತ್ತರಪ್ರದೇಶದ ಆಗ್ರಾ ನಿವಾಸಿ ಪ್ರದೀಪ್ ಶರ್ಮಾ ಯಾನೆ ಗೋಲು (23) ಬಂಧಿತ ಆರೋಪಿ. 2026ರ ಜನವರಿ 16ರಂದು ಲಭ್ಯವಾದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದಲ್ಲಿ ಆತನನ್ನು ದಿಲ್ಲಿಯ ಉತ್ತಮ ನಗರದಿಂದ ಬಂಧಿಸಲಾಗಿದೆ. ವಿಚಾರಣೆಗೊಳಪಡಿಸಿದ ಬಳಿಕ ಆತನನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಶರ್ಮಾನ ವಿರುದ್ಧ ಗಂಗಾನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದ. ಬಿಷ್ಣೋಯಿ ಗ್ಯಾಂಗ್ 2025ರ ಮಾರ್ಚ್ನಲ್ಲಿ ಉದ್ಯಮಿಯೊಬ್ಬರಿಗೆ 4 ಕೋಟಿ ರೂ. ಹಣವನ್ನು ನೀಡುವಂತೆ ಬೆದರಿಕೆ ಹಾಕಿತ್ತು. ಆದರೆ ಉದ್ಯಮಿ ಹಣ ನೀಡದೆ ಇದ್ದಾಗ, ಆತನ ನಿವಾಸದಲ್ಲಿ ಗುಂಡಿನ ದಾಳಿ ನಡೆಸುವ ಕೆಲಸಕ್ಕೆ ಪ್ರದೀಪ್ ಶರ್ಮಾನನ್ನು ಬಿಷ್ಣೋಯಿ ಗ್ಯಾಂಗ್ ನಿಯೋಜಿಸಿತ್ತು. 2025ರ ಮೇ ತಿಂಗಳಲ್ಲಿ ಶರ್ಮಾ ಹಾಗೂ ಆತನ ಸಹಚರರು ಈ ಉದ್ಯಮಿಯ ನಿವಾಸದ ಮೇಲೆ ಗುಂಡು ಹಾರಾಟ ನಡೆಸಿದ್ದು, ಆನಂತರ ಪ್ರಕರಣ ದಾಖಲಾಗಿತ್ತು. ಜಾಮೀನು ಬಿಡುಗಡೆಗೊಂಡ ಆನಂತರವೂ ಆತ ಗ್ಯಾಂಗ್ ಜೊತೆಗಿನ ನಂಟನ್ನು ಮುಂದುವರಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡನ್ನು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.
ಕಲಬುರಗಿ | ಜ.26ರಂದು ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ : ಶಿವಲಿಂಗಪ್ಪ
ಕಲಬುರಗಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ ಹಾಗೂ ಅವರ ರಾಜ್ಯಾಭಿಷೇಕದ ವಾರ್ಷಿಕೋತ್ಸವ ಜ.26ರಂದು ನಂದಗಡ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ತಿಳಿಸಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದ ಕರ್ನಾಟಕ ಘಟಕ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಖಾನಾಪುರ ತಾಲೂಕಿನ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಹದೇವ್ ಜಾನ್ಕರ್ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ. ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಸಿದ್ದಪ್ಪ ಅಕ್ಕಿ ಸಾಗರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಎಂಬ ಬೇಡಿಕೆ ಸರಕಾರದ ಮುಂದಿಡಲಾಗುವುದು ಎಂದು ಶಿವಲಿಂಗಪ್ಪ ತಿಳಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಜ.20ರಂದು ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ : ರಾಹುಲ್ ಉಪಾರೆ
ಕಲಬುರಗಿ : ಕಾರ್ಮಿಕರ ಪಿಎಫ್ ಹಣ ಭರಿಸದಿರುವ ಎಜೆನ್ಸಿಗೆ ಸೂಚನೆ ನೀಡಿದ್ದರೂ ಕ್ರಮ ಜರುಗಿಸದಿರುವ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಜೈ ಭೀಮ ಸೇನೆಯ ಜಿಲ್ಲಾಧ್ಯಕ್ಷ ರಾಹುಲ್ ಉಪಾರೆ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿಯ ಕಲಬುರಗಿ ಕಚೇರಿಗೆ ಹಲವು ಬಾರಿ ಮನವಿ ನೀಡಲಾಗಿದ್ದರೂ ಅರ್ಜಿಯ ಕುರಿತಾಗಿ ಯಾವುದೇ ಕ್ರಮವಾಗದ ಪ್ರಯುಕ್ತ ಜ.20ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದರು. ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಹಣಮಂತ ನಾಟಿಕಾರ, ರೇವಣ್ಣ ಭಾವಿಮನಿ, ಎಮ್.ಡಿ. ಸದ್ದಾಮ್, ಸಿದ್ದಾರ್ಥ ದಿಗಸಂಗಿಕರ, ದತ್ತು ಬುಕ್ಕನ, ಅಮಿತ ಮಾಲೆ, ಅಮಿತ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹರ್ಯಾಣ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: ಕನಿಷ್ಠ ಇಬ್ಬರು ಕಾರ್ಮಿಕರು ಸಜೀವ ದಹನ
ನೂಹ್,ಜ.18: ಹರ್ಯಾಣದ ನೂಹ್ ಜಿಲ್ಲೆಯ ಕುಂಡಲಿ-ಮಾನೆಸರ್-ಪಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ವೇನಲ್ಲಿ ರವಿವಾರ ಬೆಳಗ್ಗೆ ಐದು ಭಾರೀ ಗಾತ್ರದ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ಕನಿಷ್ಠ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಈ ಅವಘಡದಿಂದಾಗಿ ಉಂಟಾದ ಭಾರೀ ಬೆಂಕಿಯು, 1 ಕೋಟಿ ರೂ. ಮೌಲ್ಯದ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಅಮೆಝಾನ್ ಕಂಪೆನಿಯ ಕಂಟೈನರ್ ವಾಹನವನ್ನು ಸುಟ್ಟುಹಾಕಿದೆ. ಬೆಳಗ್ಗೆ 8 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಭಾರೀ ಗಾತ್ರದ ವಾಹನವೊಂದು ಹಠಾತ್ತನೇ ಬ್ರೇಕ್ಗಳನ್ನು ಹಾಕಿದಾಗ, ಹಿಂದಿದ್ದ ಹಲವಾರು ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿವೆ. ಈ ಸರಣಿ ಢಿಕ್ಕಿಯಲ್ಲಿ ಕಲ್ಲುಗಳನ್ನು ಹೇರಿಕೊಂಡಿದ್ದ ಡಂಪರ್ ಹಾಗೂ ವಾಣಿಜ್ಯ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಕಂಟೈನರ್ ವಾಹನಕ್ಕೆ ಬೆಂಕಿ ತಗಲಿದ್ದು, ಅವು ಕೂಡಾ ಅಗ್ನಿಗಾಹುತಿಯಾಗಿದೆ. ಬೆಂಕಿಯ ತೀವ್ರ ಜ್ವಾಲೆ ವಾಹನವನ್ನು ಆವರಿಸಿದ್ದರಿಂದ ಕಲ್ಲುಗಳನ್ನು ಸಾಗಿಸುತ್ತಿದ್ದ ಡಂಪರ್ ವಾಹನದಲ್ಲಿದ್ದ ಚಾಲಕ ಹಾಗೂ ಹೆಲ್ಪರ್ ಹೊಗೆ ಬರಲಾಗದೆ ಒಳಗೆ ಸಿಲುಕಿಕೊಂಡಿದ್ದು, ಸಜೀವ ದಹನವಾಗಿದ್ದಾರೆ. ಇವರಿಬ್ಬರೂ ರಾಜಸ್ಥಾನದವರೆಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಇತರ ವಾಹನಗಳಲ್ಲಿ ಸಿಲುಕಿಕೊಂಡಿದ್ದವರನ್ನು ಸ್ಥಳೀಯರು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ. ಅಪಘಾತಕ್ಕೀಡಾದ ಅಮೆಝಾನ್ ಕಂಟೈನರ್ ವಾಹನವು ಉಡುಪುಗಳು, ಪಾದರಕ್ಷೆ ಹಾಗೂ ಮೊಬೈಲ್ ಫೋನ್ಗಳನ್ನು ಸಾಗಿಸುತ್ತಿತ್ತು. ಬೆಂಕಿಯ ಕೆನ್ನಾಲಿಗೆಯು ಇಡೀ ಸರಕು ಸಾಗಣೆ ವಾಹನವನ್ನು ಸಂಪೂರ್ಣವಾಗಿ ಸುಟ್ಟುಹಾಕಿದ್ದು, ಅಂದಾಜು 1.25 ಕೋಟಿ ರೂ. ನಷ್ಟ ಸಂಭವಿಸಿದೆ. ಹಾನಿಯಾಗದೆ ಇರುವ ಸರಕುಗಳನ್ನು ಸ್ಥಳಾಂತರಿಸಲಾಯಿತು. ಅಪಘಾತಕ್ಕೀಡಾದ ಕಂಟೈನರ್ನಿಂದ ಸ್ಥಳೀಯರು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಅವಘಡದಿಂದಾಗಿ ಎಕ್ಸ್ಪ್ರೆಸ್ವೇನಲ್ಲಿ ಆರು ಕಿ.ಮೀ.ವರೆಗೂ ವಾಹನಸಂಚಾರ ಅಸ್ತವ್ಯಸ್ಥಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಹನಗಳ ದಟ್ಟಣೆಯುಂಟಾಗಿತ್ತು. ಅಗ್ನಿಶಾಮಕದಳದ ವಾಹನಗಳು ಸುಮಾರು ಮೂರು ತಾಸುಗಳ ಸತತ ಕಾರ್ಯಾಚರಣೆ ನಡೆಸಿ ವಾಹನಗಳಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು. ಸುಟ್ಟುಹೋದ ವಾಹನಗಳನ್ನು ತೆರವುಗೊಳಿಸಲು ಕ್ರೇನ್ಗಳನ್ನು ಹಾಗೂ ಆರ್ಥ್ಮೂರ್ಗಳನ್ನು ಬಳಸಲಾಗಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ವಾಹನಸಂಚಾರವನ್ನು ಮರುಸ್ಥಾಪಿಸಲಾಗಿತ್ತು.
ನೊಬೆಲ್ ಪ್ರಶಸ್ತಿ ಹಿಂತೆಗೆದುಕೊಳ್ಳಲು ಅವಕಾಶವಿದೆಯಾ? ನೊಬೆಲ್ ಪ್ರತಿಷ್ಠಾನದ ನಿಯಮಾವಳಿ ಏನು ಹೇಳುತ್ತದೆ?
ಪದಕ ಮಾರಾಟವಾದರೂ ಪ್ರಶಸ್ತಿ ವಿಜೇತರ ಗುರುತು ಶಾಶ್ವತ!
ಬಜಗೋಳಿ ಸೊಸೈಟಿಯಲ್ಲಿ ಕಳವಿಗೆ ಯತ್ನ ಪ್ರಕರಣ: ಆರೋಪಿ ಸೆರೆ
ಕಾರ್ಕಳ, ಜ.18: ಬಜಗೋಳಿ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ನುಗ್ಗಿ ಕಳವಿಗೆ ಯತ್ನಿಸಿದ್ದ ಆರೋಪಿ ಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಟ್ಟೆ ದರ್ಖಾಸು ನಿವಾಸಿ ಸುರೇಶ ಕೊರಗ ಪೂಜಾರಿ(53) ಬಂಧಿತ ಆರೋಪಿ. ಈತ ಜ.16ರಂದು ಸೊಸೈಟಿ ಬೀಗ ಮುರಿದು ಒಳಗೆ ನುಗ್ಗೆ ಕಳ್ಳತನಕ್ಕೆ ಪ್ರಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿ ಗುರುತು ಪತ್ತೆಯಾಗಿತ್ತು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜ.17ರಂದು ಆರೋಪಿಯನ್ನು ಬಂಧಿಸಿದರು. ಆರೋಪಿಗೆ ನ್ಯಾಯಾ ಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ಮೇಲೆ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ, ಬೆಳ್ತಂಗಡಿ, ಉಡುಪಿ ನಗರ, ಗೋವಾ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

24 C