SENSEX
NIFTY
GOLD
USD/INR

Weather

14    C
... ...View News by News Source

ದೇಶದ ಹಿಂದೂ-ಮುಸ್ಲಿಮರ ಮಧ್ಯೆ ಶಾಶ್ವತ ದ್ವೇಷ ಕಟ್ಟಲು ಸಂಘಪರಿವಾರದಿಂದ ಯತ್ನ: ಚಿಂತಕ ಶಿವಸುಂದರ್

ಸೋಲಿಡಾರಿಟಿ ಯೂತ್ ಮೂಮೆಂಟ್‌ನಿಂದ 'ವಕ್ಫ್: ಅಪಪ್ರಚಾರ ಮತ್ತು ವಾಸ್ತವ' ಪುಸ್ತಕ ಬಿಡುಗಡೆ

ವಾರ್ತಾ ಭಾರತಿ 12 Dec 2025 1:35 am

ಬ್ರಹ್ಮಾವರ | ಕಾರು ಢಿಕ್ಕಿ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತ್ಯು

ಬ್ರಹ್ಮಾವರ, ಡಿ.11: ವೇಗವಾಗಿ ಧಾವಿಸಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ವಾರಂಬಳ್ಳಿ ಗ್ರಾಮದ ಉದಯ ಕುಮಾರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರು ಎಸ್‌ಎಂಎಸ್ ಕಾಲೇಜು ಎದುರು ತನ್ನ ಬೈಕನ್ನು ನಿಲ್ಲಿಸಿ ಎದುರುಗಡೆ ಇರುವ ಮಧುವನ ಟವರ್ಸ್‌ಗೆ ಹೋಗಲು ಡಿವೈಡರ್ ಬಳಿ ನಿಂತಿದ್ದಾಗ ಕುಂದಾಪುರ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದ್ದು, ಉದಯಕುಮಾರ್ ಡಿವೈಡರ್ ಮೇಲೆ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುವನ್ನು ಮಹೇಶ್ ಆಸ್ಪತ್ರೆ ಬಳಿಕ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 12 Dec 2025 1:22 am

ಕಾರ್ಕಳ | ಕಾರು ಢಿಕ್ಕಿ : ಪಾದಚಾರಿ ಮೃತ್ಯು

ಕಾರ್ಕಳ, ಡಿ.11: ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಘಟನೆ ಕಾರ್ಕಳದ ಕುಕ್ಕುಂದೂರಿನಲ್ಲಿ ಬುಧವಾರ ಸಂಜೆ ನಡೆದಿದೆ. ಮೃತರನ್ನು ದಿನಕರ ಪೂಜಾರಿ (50) ಎಂದು ಗುರುತಿಸಲಾಗಿದೆ. ಅವರು ಬುಧವಾರ ಸಂಜೆ ಜಾರ್ಕಳ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ವಾಗಿ ಗಾಯಗೊಂಡ ದಿನಕರ ಪೂಜಾರಿ ಚಿಕಿತ್ಸೆಗೆ ಕಾರ್ಕಳ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 12 Dec 2025 1:21 am

ಕೋಟ | ವೃದ್ಧೆ ಆತ್ಮಹತ್ಯೆ

ಕೋಟ, ಡಿ.11: ಹೇರೂರು ಗ್ರಾಮದ ಮುತ್ತು (59) ಎಂಬವರು ಬುಧವಾರ ಬೆಳಗಿನ ವೇಳೆ ಮೊಳಹಳ್ಳಿ ಗ್ರಾಮದ ಹಾಡಿಯೊಂದರ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 12 Dec 2025 1:19 am

ಮಾಂಟ್ರಾಡಿ | ರಿಕ್ಷಾ ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿಯಿಂದ ನಗದು ಲೂಟಿ

ಮೂಡುಬಿದಿರೆ, ಡಿ.11: ಮಾಂಟ್ರಾಡಿಯಲ್ಲಿ ಗುರುವಾರ ನಸುಕಿನ ಜಾವ ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿ ಬಳಿಯಿದ್ದ 19 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈದು ಗ್ರಾಮದ ಮುಹಮ್ಮದ್ ಹಣ ಕಳಕೊಂಡವರು. ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಮುಹಮ್ಮದ್ ಮಂಗಳೂರಿನಿಂದ ಹಣ್ಣು ಖರೀದಿಸಲು ಗುರುವಾರ ನಸುಕಿನ ಜಾವ ಈದುನಿಂದ ರಿಕ್ಷಾದಲ್ಲಿ ಹೊರಟಿದ್ದರು. ಮಾಂಟ್ರಾಡಿ ತಲುಪಿದಾಗ ಕಾರಿನಲ್ಲಿ ಬಂದ ಅಪರಿಚಿತರ ತಂಡ ಇವರ ರಿಕ್ಷಾವನ್ನು ಅಡ್ಡಗಟ್ಟಿ, ಬೆದರಿಸಿ, 19 ಸಾವಿರ ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 12 Dec 2025 1:18 am

ಉಪ್ಪಿನಂಗಡಿ | ಬೆಳೆ ವಿಮೆಯಲ್ಲಿ ಕೃಷಿಕರಿಗೆ ಅನ್ಯಾಯ ಆರೋಪ: ಸಿಎ ಬ್ಯಾಂಕ್‌ನಿಂದ ಮನವಿ

ಉಪ್ಪಿನಂಗಡಿ, ಡಿ.11: ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ಮೊತ್ತದಲ್ಲಿ ಕೃಷಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರಿ ಯಂತ್ರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್‌ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಅಡಿಕೆ ಕೃಷಿಕರ ವಿಚಾರದಲ್ಲಿ ಎಕರೆಯೊಂದಕ್ಕೆ 2,590 ರೂ. ವಿಮಾ ಕಂತು ಪಾವತಿಸಿದರೆ ಕೇಂದ್ರ ಸರಕಾರ 5,180 ರೂ. ಹಾಗೂ ರಾಜ್ಯ ಸರಕಾರ 10,360 ರೂ. ವಿಮಾ ಕಂತು ಪಾವತಿಸುತ್ತದೆ. ಒಟ್ಟು 18,130 ರೂ. ವಿಮಾ ಕಂತನ್ನು ಪಡೆದು ಎಕರೆಗೆ ಕೇವಲ 10,441 ರೂ. ಹಣವನ್ನು ವಿಮಾ ಪರಿಹಾರ ಧನವಾಗಿ ಬಿಡುಗಡೆ ಮಾಡಿರುವುದು ಅತಿ ವೃಷ್ಠಿಯಿಂದ ಹಾನಿಗೀಡಾದ ಕೃಷಿಕರಿಗೆ ಮಾಡಿರುವ ಅನ್ಯಾಯವಾಗಿದೆ. ಈ ಬಗ್ಗೆ ರಾಜ್ಯ ಸರಕಾರ ತ್ವರಿತಗತಿಯಲ್ಲಿ ಮಧ್ಯ ಪ್ರವೇಶಿಸಿ ಕೃಷಿಕರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕ ರಾಜೇಶ್, ವಸಂತ ಗೌಡ ಪಿಜಕ್ಕಳ, ಉಷಾ ಮುಳಿಯ, ಸಂಧ್ಯಾ, ಸುಂದರ ಎನ್., ಬಜತ್ತೂರು ಗ್ರಾಪಂ ಅಧ್ಯಕ್ಷ ಗಂಗಾಧರ ಪಿ.ಎನ್., ಸದಸ್ಯರಾದ ಸಂತೋಷ್ ಪರ್ದಾಂಜೆ, ಹಿರೆಬಂಡಾಡಿ ಗ್ರಾಪಂ ಸದಸ್ಯ ಸೌಕತ್ ಅಲಿ, ಉಪ್ಪಿನಂಗಡಿ ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ಸದಾನಂದ ನೆಕ್ಕಿಲಾಡಿ, ಜನಾರ್ದನ ಹಿರೆಬಂಡಾಡಿ ಭಾಗವಹಿಸಿದ್ದರು.

ವಾರ್ತಾ ಭಾರತಿ 12 Dec 2025 1:12 am

ಕಾಸರಗೋಡು | ಕಚ್ಚಾ ಬಾಂಬ್ ಸ್ಫೋಟ: ಸಾಕುನಾಯಿ ಬಲಿ

ಕಾಸರಗೋಡು, ಡಿ.11: ಕಚ್ಚಾ ಬಾಂಬ್ ಸ್ಫೋಟಗೊಂಡು ಸಾಕು ನಾಯಿ ಬಲಿಯಾದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂರು ಕಚ್ಚಾ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಫೋಟದ ಶಬ್ದ ಕೇಳಿ ಗಮನಿಸಿದಾಗ ನಾಯಿ ಬಲಿಯಾಗಿರುವುದು ಕಂಡುಬಂದಿದೆ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂದಿಯನ್ನು ಕೊಳ್ಳಲು ಸದ್ರಿ ಕಚ್ಚಾ ಬಾಂಬ್ ಇಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 12 Dec 2025 1:00 am

ಉಪ್ಪಿನಂಗಡಿ | ಕಾರು ಢಿಕ್ಕಿ: ಬೈಕ್ ಸವಾರ ಗಂಭೀರ

ಉಪ್ಪಿನಂಗಡಿ, ಡಿ.11: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಡಿ.11ರಂದು ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ. ಮಠ ನಿವಾಸಿ ಬದ್ರುದ್ದೀನ್ ಗಾಯಗೊಂಡವರು. ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರೆನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್‌ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಬದ್ರುದ್ದೀನ್‌ರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

ವಾರ್ತಾ ಭಾರತಿ 12 Dec 2025 12:42 am

ಮೂಡುಬಿದಿರೆ | ತಂಡದಿಂದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ

ಮೂಡುಬಿದಿರೆ, ಡಿ.11: ಯುವಕರ ತಂಡವೊಂದು ಪೆಟ್ರೋಲ್ ಬಂಕ್‌ನ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಸುರೇಶ್, ಮೌನೇಶ್ ಮತ್ತು ಪ್ರವೀಣ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಬ್ಬಂದಿ ಸುರೇಶ್ ಮತ್ತಿತರರಿಗೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿ ಮತ್ತು ನಾಲ್ವರು ಯುವಕರು ಪರಿಚಿತರಾಗಿದ್ದು, ಹಳೆ ದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 12 Dec 2025 12:33 am

ಉಪ್ಪಿನಂಗಡಿ | ಅಡಿಕೆ ಅಂಗಡಿಯಿಂದ ನಗದು ಕಳವು ಪ್ರಕರಣ : ಆರೋಪಿಗಳು ಪೊಲೀಸ್ ವಶಕ್ಕೆ

ಉಪ್ಪಿನಂಗಡಿ, ಡಿ.11: ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ಡ್ರಾಯರ್‌ನಲ್ಲಿದ್ದ 5 ಲಕ್ಷ ರೂ.ಹಾಗೂ ದಾಖಲೆ ಪತ್ರ, ಚೆಕ್‌ಗಳಿದ್ದ ಬ್ಯಾಗ್ ಅನ್ನು ದೋಚಿದ ಪ್ರಕರಣದ ಆರೋಪಿಗಳನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸರು ಬಂಧಿಸಿದ್ದು, ಈ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26), ಜಂಶೀದ್ (25) ಬಂಧಿತ ಆರೋಪಿಗಳು. ಎನ್.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಯೊಂದರಿಂದ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಬಂಧಿತರಾಗಿದ್ದರು. ಅಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಉಪ್ಪಿನಂಗಡಿಯಲ್ಲಿ ನಡೆಸಿರುವ ಕಳ್ಳತನದ ಬಗ್ಗೆಯೂ ಬಾಯಿಬಿಟ್ಟಿದ್ದು, ಅದರಂತೆ ಈ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ನಡೆಸಿದರು. ಅ.27ರಂದು ಇಲ್ಲಿನ ಗಾಂಧಿ ಪಾರ್ಕ್ ಬಳಿಯ ಶ್ರೀರಾಮ ಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ ಗುಂಡಿಜೆ ಎಂಬವರಿಗೆ ಸೇರಿದ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರದಲ್ಲಿ ಕಳವು ನಡೆದಿತ್ತು. ಅಂದು ಮಧ್ಯಾಹ್ನ ಅಂಗಡಿಯ ಮಾಲಕ ಶೆಟರ್ ತೆರೆದಿಟ್ಟು ಕ್ಯಾಷ್ ಡ್ರಾವರ್‌ಗೆ ಬೀಗ ಹಾಕಿ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಕ್ಯಾಷ್ ಡ್ರಾವರ್ ಮುರಿದು ಹಾಕಲಾಗಿದ್ದು, ಇದರೊಳಗೆ ಇದ್ದ 5 ಲಕ್ಷ ರೂ. ಕಳವುಗೈಯಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳ ಮಹಜರು: ಎನ್.ಆರ್.ಪುರ ಪೊಲೀಸರಿಂದ ಇಲ್ಲಿನ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜು ನೇತೃತ್ವದ ಪೊಲೀಸ್ ತಂಡ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ಉಪ್ಪಿನಂಗಡಿ ಠಾಣೆಗೆ ಕರೆತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 12 Dec 2025 12:23 am

ಗುತ್ತಿಗಾರು | ಅಸ್ವಸ್ಥಗೊಂಡು ಎರಡು ತಿಂಗಳ ಮಗು ಮೃತ್ಯು

ಸುಳ್ಯ, ಡಿ.11: ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಲು ಪ್ರಾರಂಭಿಸಿದ ಎರಡು ತಿಂಗಳ ಮಗು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಕಮಿಲದಲ್ಲಿ ನಡೆದಿದೆ. ಗುತ್ತಿಗಾರು ಗ್ರಾಮದ ಕಮಿಲದ ಮಾಧವ-ವೀಣಾ ದಂಪತಿಯ ಗಂಡು ಮಗು ನಿಶ್ಚಿತ್ ಡಿ.8 ರಂದು ಮುಂಜಾನೆ ವಾಂತಿ ಮಾಡಲು ಆರಂಭಿಸಿದ್ದು, ಮನೆಯವರು ಮಗುವನ್ನು ಕುಂಬ್ರದ ಕ್ಲಿನಿಕ್‌ವೊಂದರಿಂದ ಔಷಧಿ ತಂದಿದ್ದರು. ರಾತ್ರಿ ಮಗುವಿಗೆ ಮತ್ತೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ಪುತ್ತೂರಿನ ವೈದ್ಯರ ಸೂಚನೆಯಂತೆ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 12 Dec 2025 12:19 am

ಮಂಗಳೂರು | ಡಿ.18: ಎಂಎಸ್ಎಂಇ ಕಾರ್ಯಾಗಾರ

ಮಂಗಳೂರು,ಡಿ.11ಎಂಎಸ್ಎಂಇ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸುವ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಡಿ.18ರಂದು ಬೆಳಗ್ಗೆ 10ಕ್ಕೆ ಝೆಡ್ಇಡಿ ಮತ್ತು ಎಲ್ಇಎಎನ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಯೆಯ್ಯಾಡಿ ಕೈಗಾರಿಕಾ ವಲಯದಲ್ಲಿರುವ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ನೋಂದಾಯಿತ ಎಂಎಸ್ಎಂಇ-ಗಳು ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ (ದೂ.ಸಂ: 0824-2214021)ವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Dec 2025 12:15 am

ಪಣಂಬೂರು ಪೊಲೀಸ್ ಠಾಣೆ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ : ನಗರ ಪೊಲೀಸ್ ಆಯುಕ್ತರಿಂದ ಆದೇಶ

ಮಂಗಳೂರು,ಡಿ.11: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ರಾ.ಹೆ. 66ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಘನ ಸರಕು ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿದೆ. ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಾದ ಕಾರಣ ಇಲ್ಲಿ ಪಾರ್ಕಿಂಗ್ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬೃಹತ್ ಕೈಗಾರಿಕಾ ಕಂಪೆನಿಗಳಿಗೆ ಸರಕು ವಸ್ತುಗಳನ್ನು ಸಾಗಾಟ ಮಾಡಲು ಬೃಹತ್ ಗಾತ್ರದ ಹೆಚ್ಚಿನ ಸಂಖ್ಯೆಯಲ್ಲಿ ಘನ ವಾಹನಗಳ ಓಡಾಟವಿರುತ್ತದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಪಾದಚಾರಿಗಳು ನಡೆದಾಡಲು ಹಾಗೂ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಾ.ಹೆ. 66ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ನೋ ಪಾರ್ಕಿಂಗ್‌ ವಲಯ ಎಂದು ಘೋಷಿಸಲಾಗಿದೆ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Dec 2025 12:13 am

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆ; ಆರು ಎಫ್‍ಐಆರ್ ದಾಖಲು

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ಜೈಲಾಧಿಕಾರಿಗಳು ತಪಾಸಣೆ ನಡೆಸಿದ್ದು, ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಒಟ್ಟು 6 ಎಫ್‍ಐಆರ್ ದಾಖಲಾಗಿವೆ ಎಂದು ವರದಿಯಾಗಿದೆ. ತಪಾಸಣೆ ವೇಳೆ ಒಂದೇ ದಿನದಲ್ಲಿ 14 ಮೊಬೈಲ್ ಫೋನ್‍ಗಳು, 9 ಸಿಮ್ ಕಾರ್ಡ್‍ಗಳು, 5 ಮೊಬೈಲ್ ಫೋನ್ ಚಾರ್ಜರ್, 2 ಇಯರ್ ಫೋನ್, ವಿವಿಧ ಬಗೆಯ ಚಾಕುಗಳು ಪತ್ತೆಯಾಗಿವೆ. ನ.26ರಿಂದ ಇದುವರೆಗೂ ಒಟ್ಟಾರೆ 67 ಮೊಬೈಲ್ ಫೋನ್‍ಗಳು, 14 ಚಾರ್ಜರ್ಸ್, 48 ಸಿಮ್ ಕಾರ್ಡ್‍ಗಳು, 10 ಇಯರ್ ಫೋನ್‍ಗಳು, 60,880 ರೂ. ನಗದು, 10 ಹರಿತವಾದ ಆಯುಧಗಳು ಪತ್ತೆಯಾಗಿವೆ.

ವಾರ್ತಾ ಭಾರತಿ 12 Dec 2025 12:09 am

ಮಂಗಳೂರು | ಕಾಣೆಯಾದವರ ಪತ್ತೆಗೆ ಮನವಿ

ಮಂಗಳೂರು,ಡಿ.11: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡದಪ್ಪ ರೇಹಾಳ (64) ಎಂಬವರು ನ.25ರಂದು ತಿರುಗಾಡಲೆಂದು ಮನೆಯಿಂದ ಹೋದವರು ಈವರೆಗೂ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಇವರು ಕಾಣೆಯಾದ ದಿನ ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 12 Dec 2025 12:01 am

ಬೆತ್ತಲೆ ಫೋಟೋ ವೈರಲ್ ಮಾಡುವ ಬೆದರಿಕೆ: ಬೆಂಗಳೂರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ವೈರಲ್ ಮಾಡುವ ಬೆದರಿಕೆಗೆ ಹೆದರಿದ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಜಗನ್ ಮೋಹನ್(25) ಮೃತ ವಿದ್ಯಾರ್ಥಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದು, ಅದೇ ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಪತ್ತೆಯಾದ ಡೆತ್‍ನೋಟ್‍ನಲ್ಲಿ ಮೃತ ವಿದ್ಯಾರ್ಥಿ ಮೂರು ನಂಬರ್ ದಾಖಲಿಸಿದ್ದಾನೆ. ಪರಿಶೀಲನೆ ನಡೆಸಿದಾಗ ಸುಳ್ಳು ವಿಡಿಯೋ ಕರೆಯಲ್ಲಿ ಹಣ ಕಳೆದುಕೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 25,000 ರೂ. ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಬೆತ್ತಲೆ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಸೋಲದೇವನಹಳ್ಳಿ ಠಾಣೆಯಲ್ಲಿ ಬಿಎನ್‍ಎಸ್ 106 ಅಡಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 12 Dec 2025 12:00 am

ಮಂಗಳೂರು | ಡಿ.14: ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿ

ಮಂಗಳೂರು,ಡಿ.11: ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ ಮಂಗಳೂರು ಸಹಯೋಗದಲ್ಲಿ ಡಾ. ಉಷಾ ಪ್ರಕಾಶ್ ಹಾಗೂ ಡಾ. ರಾಘವೇಂದ್ರ ಜಿಗಳೂರ ಸಂಪಾದಕತ್ವದ ಕೃತಿ ಕರಾವಳಿ ಕವನಗಳು’ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಡಿ.14ರಂದು ಬಿಡುಗಡೆಗೊಳ್ಳಲಿದೆ. ಮೈಸೂರು ವಿವಿಯ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಚಲಪತಿ ಆರ್. ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾಸರಗೋಡಿನ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ.ನಿಕೇತನ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ವಿಮರ್ಶಕ ಅರವಿಂದ ಚೊಕ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಉಪನ್ಯಾಸಕ ರಘು ಇಡ್ತಿದು ಆಶಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 11 Dec 2025 11:58 pm

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ಕೊನೆಯ ಮೊಳೆ ಗ್ಯಾರಂಟಿ?

ರಷ್ಯಾ ಹಾಕುತ್ತಿರುವ ಒಂದೊಂದು ಬಾಂಬ್ ಮತ್ತು ಹಾರಿಸುತ್ತಿರುವ ಒಂದೊಂದು ಮಿಸೈಲ್ ಕೂಡ ಉಕ್ರೇನ್ ಜನರ ಜೀವ ಹಿಂಡುತ್ತಿದೆ. ಯಾರದ್ದೋ ತಪ್ಪಿಗೆ ಘನಘೋರ ಚಳಿಯಲ್ಲಿ ನರಳುತ್ತಾ &ಒದ್ದಾಡುತ್ತಾ ಬದುಕುತ್ತಿದ್ದಾರೆ ಉಕ್ರೇನ್ ನಿವಾಸಿಗಳು. ಹೇಗಾದರೂ ಮಾಡಿ ಜೀವ ಉಳಿಸಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದರೆ ದೇಶ ಬಿಟ್ಟು ಹೊರಗೆ ಹೋಗುವುದಕ್ಕೂ ಆಗದ ಸ್ಥಿತಿಯಲ್ಲಿ ಉಕ್ರೇನ್ ಪ್ರಜೆಗಳು ಇದ್ದಾರೆ. ಈಗಾಗಲೇ ಲಕ್ಷಾಂತರ

ಒನ್ ಇ೦ಡಿಯ 11 Dec 2025 11:56 pm

ಮಂಗಳೂರು | ಡಿ.18 : ಮನಪಾದಲ್ಲಿ ಡಿಸಿ ಫೋನ್ ಇನ್ ಕಾರ್ಯಕ್ರಮ

ಮಂಗಳೂರು, ಡಿ.11: ಮಂಗಳೂರು ಮಹಾನಗರಪಾಲಿಕೆಯಲ್ಲಿ ಆಡಳಿತಾಧಿಕಾರಿಯ ಕೊಠಡಿಯಲ್ಲಿ ಡಿ.18ರಂದು ಪೂ.11ರಿಂದ 12ಗಂಟೆಯವರೆಗೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯು ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಾರ್ವಜನಿಕರು ದೂ.ಸಂ: 0824-2220301/2220318ಕ್ಕೆ ಕರೆ ಮಾಡಿ ಅಹವಾಲುಗಳನ್ನು ತಿಳಿಸಬಹುದು ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 11:54 pm

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಗ್ರೀನ್‌ ಸಿಗ್ನಲ್‌, ಒಳಮೀಸಲಿಗೆ ವಿಧೇಯಕ ಸೇರಿ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ

ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಒಳಮೀಸಲಾತಿ ಜಾರಿಗಾಗಿ 'ಕರ್ನಾಟಕ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ -2025'ಕ್ಕೆ ಅನುಮೋದನೆ ದೊರೆತಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ಒ.ಸಿ ಮತ್ತು ಸಿ.ಸಿ ವಿನಾಯಿತಿ ನೀಡಲು ಕಾಯಿದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.

ವಿಜಯ ಕರ್ನಾಟಕ 11 Dec 2025 11:42 pm

ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ‘ಸಮಿತಿ ರಚನೆ’: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ (ಸುವರ್ಣ ವಿಧಾನಸೌಧ): ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯಾದ್ಯಂತ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕೆಂಬುದರ ಕುರಿತು ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಅನ್ವಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ.ಹಿಮಾಂಶು ಭೂಷಣ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ಬಂದ ಕೂಡಲೇ ಅಗತ್ಯ ಇರುವ ಕಡೆಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಚಂದ್ರು ಲಮಾಣಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಸಮಿತಿಯ ವರದಿಯನ್ನು ಆಧರಿಸಿ ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಿಭಾಗದಲ್ಲಿ ಆಸ್ಪತ್ರೆಗಳನ್ನು ಮಂಜೂರು ಮಾಡಲು ಅಥವಾ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಸಮಿತಿಯ ವರದಿ ಆಧಾರದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು. 2022ರ ಮಾರ್ಗಸೂಚಿಯನ್ವಯ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಜನಸಂಖ್ಯೆ ಆಧಾರದ ಮೇಲೆ ಸ್ಥಾಪಿಸಲಾಗುತ್ತಿದ್ದು, ಸಮತಟ್ಟು ಪ್ರದೇಶದಲ್ಲಿ 1.20ಲಕ್ಷ ಜನಸಂಖ್ಯೆಗೆ ಹಾಗೂ ಗುಡ್ಡಗಾಡು ಗಿರಿಜನ ಪ್ರದೇಶದಲ್ಲಿ 80 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪಿಸಲಾಗುತ್ತಿದೆ. ನಗರೀಕರಣದ ಕಾರಣದಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯೆ ಕುಸಿತ ಕಂಡುಬರುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ಪರಿಗಣಿಸುವ ವಿಷಯದಲ್ಲಿ ಚರ್ಚಿಸಿ, ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರ್ತಾ ಭಾರತಿ 11 Dec 2025 11:31 pm

ಕೊಪ್ಪಳ | ತೋಳ ಸಂರಕ್ಷಿತ ಪ್ರದೇಶದಲ್ಲಿ ಮರಳು ಮಾಫಿಯಾ

ಕೊಪ್ಪಳ, ಡಿ.11: ಈಚೆಗೆ ಕರ್ನಾಟಕ ಸರಕಾರ ತೋಳಧಾಮ ಎಂದು ಸಂರಕ್ಷಿತ ಪ್ರದೇಶವಾದ ಬಂಕಾಪುರ, ಕರಡಿಗುಡ್ಡ, ಚಿಕ್ಕಮ್ಮದಿನಾಳ, ರಾಮದುರ್ಗ ಗ್ರಾಮದಲ್ಲಿ ರಾತ್ರಿವೇಳೆ ಆಕ್ರಮ ಮರುಳು ದಂದೆ ಎಗ್ಗಿಲದೇ ನಡೆಯುತ್ತಿದ್ದೂ, ರಾತ್ರಿವೇಳೆ ಪ್ರಾಣಿಪಕ್ಷಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ರಾಮದುರ್ಗ, ರಾಂಪುರ ಮತ್ತು ರಾಮದುರ್ಗ ಕೆರೆಯಲ್ಲಿರುವ ಮಣ್ಣನ್ನು ತಗೆದುಕೊಂಡು ಬಂದು ಅದನ್ನು ಪಿಲ್ಟರ್ ಮಾಡಿದ ನಂತರ ಮರಳನ್ನಾಗಿ ಪರಿವರ್ತಿಸಿ ದಂಧೆಕೋರರು ಮಾರಾಟ ಮಾಡುತ್ತಿದ್ದಾರೆ. ಆದರೆ ಯಾರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನರು ದೂರುತಿದ್ದಾರೆ. ಸಾರ್ವಜನಿಕರಿಗೆ ಕಷ್ಟ : ಮರಳಿನ ಬೆಲೆ ಏರಿಕೆ ಮಾತ್ರವಲ್ಲದೆ, ಸಾರ್ವಜನಿಕರಿಗೆ ಮರಳುಗಾರಿಕೆಯಿಂದ ಅನೇಕ ತೊಂದರೆಗಳೂ ಇವೆ. ಮಣ್ಣಿನ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಧೂಳಿನಿಂದ ಮಿಂದೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅನುಮತಿ ರಹಿತ ಮರಳು ಸಾಗಾಟವೇ ಅಧಿಕವಾಗಿರುವುದರಿಂದ ಪೊಲೀಸರ ಭಯದಲ್ಲಿ ಚಾಲಕರು ಅಧಿಕ ವೇಗದಲ್ಲಿ ಲಾರಿ ಚಲಾಯಿಸಿ, ಅಪಘಾತವಾಗುವ ಸಂಭವವೂ ಇದೆ.ಏನು ಮಾಡಬಹುದು: ಮರಳು ದಂಧೆ ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊರ ಜಿಲ್ಲೆ, ರಾಜ್ಯಕ್ಕೆ ಮರಳು ಸಾಗಾಟವಾಗದಂತೆ ತಡೆಯುವುದು, ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವ ಲಾರಿ ಮುಟ್ಟುಗೋಲು ಹಾಕಿ, ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು, ಅಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕುತಿದ್ದಾರೆ. ಕನಕಗಿರಿಯಲ್ಲಿ ಚಿನ್ನದ ಬೆಲೆ : ಕನಕಗಿರಿಯಲ್ಲಿ ಮರಳು ಚಿನ್ನದ ಬೆಲೆಗೆ ಮಾರಾಟವಾಗುತ್ತಿದೆ. ನವಲಿಯಿಂದ ಕನಕಗಿರಿ, ಕೊಪ್ಪಳ, ರಾಯಚೂರು, ತಾವರಗೇರ, ಸಿಂಧನೂರು, ಕುಷ್ಟಗಿ, ತಲುಪುವಲ್ಲಿ ತನಕ ಲಂಚಬಾಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾಗಿದೆ. ಹೀಗಾಗಿ ಒಂದು ಟಿಪ್ಪರ್ ಮರಳು 25,000 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಿಂದಿನ ವರ್ಷ ಒಂದು ಲೋಡ್ ಮರಳಿನ ಬೆಲೆ 56,000 ರೂ.ಆಗಿತ್ತು. ಅರಣ್ಯ ಭೂಮಿಯಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಅದು ಕಂದಾಯ ಕೆರೆಯಲ್ಲಿ ನಡೆಯುತ್ತಿತ್ತು. ಈ ಕುರಿತು ಕನಕಗಿರಿ ತಹಶೀಲ್ದಾರ್ ದೂರು ನೀಡಿದ್ದಾರೆ, ನಾವು ಇಂತಹ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. -ಸುಲೇಮಾನ್ ಅರಣ್ಯ ಇಲಾಖೆ ಅಧಿಕಾರಿಗಳು, ಗಂಗವಾತಿ ಎಲ್ಲೆಲ್ಲಿ ಮರಳು ಸಾಗಾಟ ನವಲಿ, ಉದ್ದಿಹಾಳ, ಸಂಕನಾಳ, ಮಲ್ಲಾಪುರ, ಯತ್ನಾಟ್ಟಿ, ಬುನ್ನಟ್ಟಿ, ರಾಂಪುರ ಗ್ರಾಮಗಳಲ್ಲಿ ಅತೀ ಹೆಚ್ಚು ಮರಳು ಮಾಫಿ ನಡೆಯುತ್ತಿದ್ದೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ. ಅಕ್ರಮ ಮರಳುಗಾರಿಕೆಗೆ ನಡೆಯುವ ದಾಳಿಗಳೂ ’ಮಾಮೂಲು’ ಆಗಿಬಿಟ್ಟಿವೆ. ದಾಳಿ ನಡೆದ ಒಂದೆರಡು ದಿನಗಳಲ್ಲೇ ಮತ್ತೆ ಮರಳುಗಾರಿಕೆ ಅವ್ಯಾಹತ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವವರು, ಮರಳು ಉದ್ಯಮಿಗಳಿಗೆ ಮಾಹಿತಿ ನೀಡಿಯೇ ದಾಳಿ ನಡೆಸುತ್ತಾರೆ, ದಾಳಿಯಿಂದ ಕಾನೂನಾತ್ಮಕವಾಗಿ ತೆಗೆದುಕೊಂಡ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. -ಹನುಮಂತಪ್ಪ ಚಿಕ್ಕಮಾದಿನಾಳ ಗ್ರಾಮಸ್ಥ

ವಾರ್ತಾ ಭಾರತಿ 11 Dec 2025 11:12 pm

ರಾಯಚೂರು | ಬೆಂಕಿ ಆಕಸ್ಮಿಕ: 70 ಸಾವಿರ ರೂ. ಮೌಲ್ಯದ ಬಣವೆ ನಷ್ಟ

ರಾಯಚೂರು, ಡಿ.11: ಆಕಸ್ಮಿಕವಾಗಿ ಬೆಂಕಿ ತಗಲಿ 70 ಸಾವಿರ ರೂ. ಮೌಲ್ಯದ ಸಜ್ಜೆಯ ಸೊಪ್ಪಿ, ಶೇಂಗಾ ಹೊಟ್ಟು( ಸಿಪ್ಪೆ) ತೊಗರಿ ಹೊಟ್ಟಿನ ಬಣವೆ ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ವೀರಾಪೂರು ಗ್ರಾಮದಲ್ಲಿ ನಡೆದಿದೆ. ಕುರಿಗಾಯಿ ದುರಗಮ್ಮ ಎಂಬವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ಕುರಿ ಮರಿಗಳಿಗೆ ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದುರುಗಮ್ಮ 70 ಸಾವಿರ ರೂಪಾಯಿ ಮೌಲ್ಯದ ಸಜ್ಜೆ ಸೊಪ್ಪಿ, ಶೇಂಗಾ, ತೊಗರಿ ಹೊಟ್ಟು ಸಂಗ್ರಹಿಸಿಟ್ಟಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸಂತ್ರಸ್ತ ಕುಟುಂಬ ಕುರಿಮರಿಗಳನ್ನು ಕಾಯ್ದು ಬದುಕುವ ಕುಟುಂಬ ಆಗಿದ್ದು, ನಷ್ಟ ಪರಿಹಾರವಾಗಿ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 11 Dec 2025 11:04 pm

ಆನ್‌ಲೈನ್‌ ಗೇಮ್‌ ಗೀಳು; ಬೆತ್ತಲೆ ಫೋಟೊ ಶೇರ್‌ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ಆನ್‌ಲೈನ್ ಗೇಮ್‌ ಗೀಳಿಗೆ ಒಳಗಾದ ಎಂಬಿಎ ವಿದ್ಯಾರ್ಥಿಯೊಬ್ಬ ಆ್ಯಪ್‌ ಮೂಲಕ ಸಾಲ ಪಡೆದು, ಬೆತ್ತಲೆ ಫೋಟೋ ಹಂಚುವ ಬೆದರಿಕೆ ಮತ್ತು ಹಣಕ್ಕಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ಪುಟದ ಡೆತ್‌ ನೋಟ್‌ನಲ್ಲಿ ಮೂರು ಮೊಬೈಲ್ ನಂಬರ್‌ಗಳನ್ನು ಉಲ್ಲೇಖಿಸಿದ್ದು, ಅವುಗಳೇ ಸಾವಿಗೆ ಕಾರಣ ಎನ್ನಲಾಗಿದೆ

ವಿಜಯ ಕರ್ನಾಟಕ 11 Dec 2025 11:01 pm

10 ಸಾವಿರ ಕೋಟಿ ರೂ. ಅನುದಾನ ನೀಡದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮುಂದುವರಿಸುವೆ: ಕಾಂಗ್ರೆಸ್ ಶಾಸಕ ರಾಜು ಕಾಗೆ

ಬೆಳಗಾವಿ (ಸುವರ್ಣ ವಿಧಾನಸೌಧ): ನಮಗೆ ತಲಾ 10 ಸಾವಿರ ಕೋಟಿ ರೂ. ಅನುದಾನ ಕೊಡಿ. ಇಲ್ಲವೇ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮುಂದುವರಿಸುವೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಪುನರುಚ್ಚರಿಸಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ತಾರತಮ್ಯದ ಬಗ್ಗೆ ಬೇಸರಗೊಂಡು ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಪತ್ರ ಬರೆದಿದ್ದೆ. ಅದೇ ರೀತಿ ಯಾರು ಏನೇ ಹೇಳಲಿ, ವಿರೋಧ ಮಾಡಲಿ ನನ್ನ ಹೋರಾಟ ಮುಂದುವರೆಯಲಿದೆ ಎಂದರು. ಪ್ರತ್ಯೇಕ ರಾಜ್ಯಕ್ಕಾಗಿ ನನ್ನ ಅನಸಿಕೆಗೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು, ಕೆಲವು ಸಂಘಟನೆಗಳು ಬೆಂಬಲ ನೀಡಿವೆ. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಕಡೂರಿಗೆ 10 ಕೋಟಿ ರೂ. ನೀಡಿದರೆ, ನಮ್ಮ ತಾಲೂಕಿಗೆ 8 ಕೋಟಿ ರೂ. ನೀಡುತ್ತಾರೆ. ಈ ತಾರತಮ್ಯ ಪ್ರಶ್ನಿಸಿದರೆ ಸ್ವಪಕ್ಷೀಯ ಶಾಸಕನಿಂದಲೇ ಸರಕಾರದ ವಿರೋಧಿ ಎನ್ನುತ್ತಾರೆ. ಹೀಗೆ ಆದರೆ ಯಾರಿಗೆ ನಮ್ಮ ಗೋಳು ಹೇಳಬೇಕು ಎಂದು ಪ್ರಶ್ನಿಸಿದರು. ಪ್ರಜಾ ಸೌಧದ ಬಗ್ಗೆ ಮಾತನಾಡಲು ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನನ್ನನ್ನು ಗಮನಿಸಲೇ ಇಲ್ಲ. ಈ ಸಂಬಂಧಿಸಿದಂತೆ ಅದರ ಹಕ್ಕುಚ್ಯುತಿ ಮಂಡಿಸಿದರೂ‌ ಇದುವರೆಗೂ ಕ್ರಮ ಕೈಗೊಂಡಿಲ್ಲ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕರು, ಶಾಸಕರಿಗೆ ಮರ್ಯಾದೆ ಕೊಟ್ಟಿಲ್ಲ. ಇದು ಗಂಭೀರ ವಿಷಯವಾಗಿದೆ‌ ಎಂದರು. ನಮ್ಮ ಕ್ಷೇತ್ರ ಮತ್ತು ಸುತ್ತಲಿನ ತಾಲೂಕುಗಳಲ್ಲಿ ಕೃಷಿ ಭೂಮಿ ಹಾಳಾಗಿದ್ದು, ಉಪ್ಪಿನ ಅಂಶ ಹೆಚ್ಚಾಗಿದೆ. ಈ ಭೂಮಿಯನ್ನು ಸವಳು-ಜವಳು ಮಾಡಲು ಪ್ರತಿ ಕ್ಷೇತ್ರಕ್ಕೆ 1 ಕೋಟಿ ನೀಡಬೇಕು. ನಮ್ಮ ಭಾಗದಲ್ಲಿ ಎಲ್ಲಾ ಕಾಮಗಾರಿಗಳು ವಿಳಂಬವಾಗುತ್ತಿವೆ. ನಾವು ಭೀಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು‌ ಬೇಸರ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 11 Dec 2025 11:00 pm

ಕೊಪ್ಪಳ | ಸಿರಿ ಧಾನ್ಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ.ಸುರೇಶ ಇಟ್ನಾಳ

ಕೊಪ್ಪಳ, ಡಿ.11: ಕೊಪ್ಪಳ ಜಿಲ್ಲೆ ಕೃಷಿ ಪ್ರಾಧಾನ್ಯತೆ ಹೊಂದಿರುವ ಜಿಲ್ಲೆಯಾಗಿದ್ದು, ರೈತರು ಸಿರಿ ಧಾನ್ಯ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದ್ದಾರೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಕೊಪಳ ಇವರ ಸಹಯೋಗದಲ್ಲಿ ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳ 2026ರ ಅಂಗವಾಗಿ ಆಯೋಜಿಸಿದ್ದ ಸಿರಿಧಾನ್ಯ ಮೇಳ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಕರ್ನಾಟಕ ರಾಜ್ಯದ ಒಟ್ಟು ಗ್ರೀನ್ ಪ್ರಾಡಕ್ಟ್‌ನಲ್ಲಿ ಸುಮಾರು ಶೇ.10 ರಷ್ಟು ಕೊಪ್ಪಳ ಜಿಲ್ಲೆಯ ಪಾಲನ್ನು ನಾವು ಕಾಣುತ್ತವೆ. ನಮ್ಮ ಜಿಲ್ಲೆಯನ್ನು ಭತ್ತದ ಕಣಜ ಎಂದು ಸಹ ಕರೆಯಲಾಗುತ್ತದೆ. ಕೇವಲ ಭತ್ತಕ್ಕೆ ಮಾತ್ರ ಆದ್ಯತೆ ನೀಡದೆ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಸಿರಿಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಪೈಬರ್ ಅಂಶ ದೊರೆಯುತ್ತೆ ಮತ್ತು ಇದರಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ತಿಳಿಸಿದರು. ಜಿ.ಡಿ ಕೃಷ್ಣಮೂರ್ತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಮುಖ್ಯಸ್ಥೆ ಯೋಗಿನಿ, ಇಟಗಿಯ ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿದರು. ಈ ಸಂದರ್ದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ, ಕೃಷಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ವೀರಣ್ಣ ಕಮತರ್ ಸಹಿತ ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರು, ಪೊಲೀಸ್ ಸಿಬ್ಬಂದಿ ಹಾಗೂ ಕೃಷಿ ಇಲಾಖೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 11:00 pm

IND Vs SA- ಟಾಸ್ ಗೆದ್ದ ಭಾರತವನ್ನು ದಿಕ್ಕು ತಪ್ಪಿಸಿದ ಹರಿಣಗಳು; ಚಂಡೀಗಢದಲ್ಲಿ ನಡೆಯದ ಕಟಕ್ ಆಟ

India Vs South Africa 2nd t20i Match- ಕಟಕ್‌ನಲ್ಲಿ ಪ್ರಥಮ ಟಿ20 ಪಂದ್ಯದಲ್ಲಿ ಆದ ಮುಖಭಂಗಕ್ಕೆ ನ್ಯೂ ಚಂಡೀಗಢದಲ್ಲಿ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ ಭಾರತದ ವಿರುದ್ಧ 51 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 213 ರನ್ ಗಳಿಸಿದರೆ ಇದನ್ನು ಬೆಂಬತ್ತುವಲ್ಲಿ ಯಶಸ್ವಿಯಾಗದ ಭಾರತ 162 ರನ್‌ಗಳಿಗೆ ಆಲೌಟ್ ಆಯಿತು.

ವಿಜಯ ಕರ್ನಾಟಕ 11 Dec 2025 10:57 pm

ಕಳ್ಳತನ ಆರೋಪಿ ಬಂಧನ ; ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶ : ಡಾ.ಶರಣಪ್ಪ ಎಸ್.ಡಿ.

ಕಲಬುರಗಿ, ಡಿ.11: ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದ ಪುಣೆಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹದಿನೈದು ದಿನಗಳಲ್ಲೇ ಬಂಧಿಸಿ, ಸುಮಾರು 20ರಿಂದ 40 ಲಕ್ಷ ರೂ.ಗಳ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹೇಳಿದ್ದಾರೆ. ಧಾರವಾಡದ ಎಮ್ಮೆಕೆರೆ ನಿವಾಸಿ, ಮಹಾರಾಷ್ಟ್ರದ ಪುಣೆಯ ಕಲವಾಡ ಬಸ್ತಿ ಲೋಗಂನ ಅಡಿಗೆ ಭಟ್ಟ ನವೀನ್ (49) ಬಂಧಿತ ಆರೋಪಿಯಾಗಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಾಚರಣೆ ಕೈಗೊಂಡ ಸ್ಟೇಷನ್ ಬಝಾರ್ ಠಾಣೆಯ ಪಿಐ ಗುರುಲಿಂಗಪ್ಪ ಪಾಟೀಲ್, ಸಿಬ್ಬಂದಿ ಸಿರಾಜ್ ಪಟೇಲ್, ಪ್ರಭಾಕರ್, ಮೋಸಿನ್, ಯಲ್ಲಪ್ಪ, ಶಿವಲಿಂಗ, ಮಲ್ಲಣ್ಣ, ಸಂಗಣ್ಣ, ಸುಮೀತ್ ಹಾಗೂ ಚನ್ನವೀರೇಶ್ ಅವರಿಗೆ ನಗರ ಪೋಲಿಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತ ಪ್ರವೀಣ್ ನಾಯಕ್, ಸಹಾಯಕ ಪೋಲಿಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 10:53 pm

ವಾಯು ಗುಣಮಟ್ಟ ಸುಧಾರಿಸುವ ವರೆಗೆ ದಿಲ್ಲಿಯಿದ ಸಂಸತ್ಅಧಿವೇಶವನ್ನು ಸ್ಥಳಾಂತರಿಸಿ: ಸರಕಾರವನ್ನು ಆಗ್ರಹಿಸಿದ ಬಿಜೆಡಿ ಸಂಸದ

ಹೊಸದಿಲ್ಲಿ, ಡಿ. 11: ವಾಯು ಗುಣಮಟ್ಟ ಸುಧಾರಿಸುವ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ದಿಲ್ಲಿಯ ಹೊರಗೆ ಸ್ಥಳಾಂತರಿಸುವಂತೆ ಬಿಜೆಡಿಯ ರಾಜ್ಯ ಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಗುರುವಾರ ಸರಕಾರವನ್ನು ಆಗ್ರಹಿಸಿದ್ದಾರೆ. ದಿಲ್ಲಿಯ ವಾರ್ಷಿಕ ಮಾಲಿನ್ಯದ ಬಿಕ್ಕಟ್ಟನ್ನು ‘‘ಮಾನವ ನಿರ್ಮಿತ ವಿಪತ್ತು’’ ಎಂದು ಅವರು ಕರೆದರು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಒಡಿಶಾದ ಮಂಗರಾಜ್, ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಮಾತನಾಡಿದರು. ನೈಸರ್ಗಿಕ ವಿಕೋಪಗಳಿಗೆ ತನ್ನ ರಾಜ್ಯದ ಪರಿಣಾಮಕಾರಿ ಪ್ರತಿಕ್ರಿಯೆ ಬಗ್ಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿ ಮಾಲಿನ್ಯವನ್ನು ನಿಭಾಯಿಸಲು ಅದೇ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು. ನಾನು ಒಡಿಶಾದಿಂದ ಬಂದಿದ್ದೇನೆ. ಅದು ಚಂಡ ಮಾರುತ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳನ್ನು ಬಹಳ ಶಿಸ್ತಿನಿಂದ ನಿರ್ವಹಿಸುವ ರಾಜ್ಯ. ನಿಜವಾದ ಬಿಕ್ಕಟ್ಟು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಆದರೆ, ದಿಲ್ಲಿಯ ಬಗ್ಗೆ ನನಗೆ ಆತಂಕವಿದೆ ಎಂದು ಅವರು ಹೇಳಿದರು. ‘‘ಅವರು ತೊಂದರೆಗೆ ಒಳಗಾಗುತ್ತಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂಬಂತೆ ನಟಿಸಲು ಸಾಧ್ಯವಿಲ್ಲ. ಗರಿಷ್ಠ ಮಾಲಿನ್ಯ ತಿಂಗಳಲ್ಲಿ ಸಂಸತ್ತಿನ ನಿರ್ಣಾಯಕ ಅಧಿವೇಶನವನ್ನು ನಡೆಸುವ ಮೂಲಕ ಅನಗತ್ಯವಾಗಿ ಜೀವಗಳನ್ನು ಅಪಾಯಕ್ಕೆ ಒಡ್ಡುತ್ತೇವೆ’’ ಎಂದು ಮಂಗರಾಜ್ ಹೇಳಿದರು.

ವಾರ್ತಾ ಭಾರತಿ 11 Dec 2025 10:46 pm

ವಿರಕ್ತ ಮಠದ ಪೀಠಾಧಿಪತಿ ಚನ್ನಬಸವ ಶ್ರೀ ನಿಧನ

ಸಿಎಂ, ಡಿಸಿಎಂ ಸಂತಾಪ

ವಾರ್ತಾ ಭಾರತಿ 11 Dec 2025 10:44 pm

ಮಂಗಳೂರು | ಬ್ಯಾಟರಿ ಕಳವು : ಪ್ರಕರಣ ದಾಖಲು

ಮಂಗಳೂರು, ಡಿ.11: ಕಾರ್ಮಿಕ ಇಲಾಖೆಯ ಎರಡು ಸಂಚಾರಿ ಆರೋಗ್ಯ ಘಟಕ ಬಸ್‌ನಿಂದ ಸುಮಾರು 40 ಸಾವಿರ ರೂ. ಮೌಲ್ಯದ ಐದು ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಬಸ್ಸಿನ ಚಾಲಕರು ಬಸ್ಸನ್ನು ಡಿ.6ರಂದು ಸಂಜೆ 5 ಗಂಟೆಗೆ ಪದವು ಗ್ರಾಮದ ಭದ್ರಕಾಳಿ ದೇವಸ್ಥಾನ ರಸ್ತೆಯ ಕಾರ್ಮಿಕ ಕಚೇರಿ ಬಳಿ ನಿಲ್ಲಿಸಿದ್ದರು. ಡಿ.8ರಂದು ಬೆಳಗ್ಗೆ ಬಂದಾಗ ಒಂದು ಬಸ್ಸಿನಲ್ಲಿ ಅಳವಡಿಸಿದ್ದ ಬ್ಯಾಟರಿ ಮತ್ತು ಯುಪಿಎಸ್ ಬ್ಯಾಟರಿ ಹಾಗೂ ಇನ್ನೊಂದು ಬಸ್ಸಿನಿಂದ ಎರಡು ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 10:38 pm

ಯಾವಾಗ ಚುನಾವಣೆ ನಡೆಸಲು ಬಯಸಿದ್ದೀರಿ: ಝೆಲೆನ್‍ಸ್ಕಿಗೆ ಟ್ರಂಪ್ ಪ್ರಶ್ನೆ

ವಾಷಿಂಗ್ಟನ್, ಡಿ.11: ಈಗ ನಡೆಯುತ್ತಿರುವ ಯುದ್ಧದ ವಾಸ್ತವಿಕತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅರಿತುಕೊಳ್ಳಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದು ಮುಂದಿನ ಚುನಾವಣೆಯನ್ನು ಯಾವಾಗ ನಡೆಸಲು ಬಯಸಿದ್ದೀರಿ ಎಂದು ಝೆಲೆನ್‍ಸ್ಕಿಯನ್ನು ಪ್ರಶ್ನಿಸಿದ್ದಾರೆ. ರಶ್ಯದೊಂದಿಗಿನ ಯುದ್ಧದಲ್ಲಿ ತನ್ನ ಸ್ಥಿತಿಯ ಬಗ್ಗೆ ಉಕ್ರೇನ್ ಮರುಪರಿಶೀಲನೆ ನಡೆಸಬೇಕು ಮತ್ತು ಅಧ್ಯಕ್ಷ ಝೆಲೆನ್‍ಸ್ಕಿ ವಾಸ್ತವಿಕತೆಯನ್ನು ಅರಿತುಕೊಳ್ಳಬೇಕು. ಅವರು ಚುನಾವಣೆಯನ್ನು ಯಾವಾಗ ನಡೆಸುತ್ತಾರೆ ಎಂದು ತಿಳಿಯಬೇಕಿದೆ. ಯುರೋಪಿಯನ್ ನಾಯಕರು ಈ ವಾರಾಂತ್ಯ ಅಮೆರಿಕಾ ಮತ್ತು ಉಕ್ರೇನ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಬಯಸಿದ್ದಾರೆ. ಉಕ್ರೇನ್ ನಾಯಕರ ಜೊತೆಗಿನ ಮಾತುಕತೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ನಾವು ಆಸಕ್ತರಾಗಿದ್ದೇವೆ' ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 11 Dec 2025 10:36 pm

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಚಿವ ಸಂಪುಟ ಒಪ್ಪಿಗೆ?

ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡಲು ಕೆಲ ಷರತ್ತುಗಳ ಅನ್ವಯ ಅನುಮತಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಜನಾಭಿಪ್ರಾಯ ಸಂಗ್ರಹದ ಜೊತೆಯಲ್ಲಿ ನಿಯಮಗಳನ್ನು ರೂಪಿಸಲು ಗೃಹ ಸಚಿವರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಕಾಲ್ತುಳಿತ ಪ್ರಕರಣದ ಹಿನ್ನಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ವರದಿಯನ್ನೂ ಪರಿಗಣಿಸಿ ಷರತ್ತುಗಳ ಅನ್ವಯ ಕ್ರಿಕೆಟ್ ಪಂದ್ಯ ಏರ್ಪಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 11 Dec 2025 10:31 pm

ವಾಯುಮಾಲಿನ್ಯ | ವಿಶ್ವಸಂಸ್ಥೆಯ ಮಾನದಂಡಕ್ಕೆ ಬದ್ಧವಾಗಬೇಕಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

ಹೊಸದಿಲ್ಲಿ,ಡಿ.11: ವಾಯುಮಾಲಿನ್ಯದ ಕುರಿತಾಗಿ ಭಾರತಕ್ಕೆ ತನ್ನದೇ ಆದ ಮಾನದಂಡವಿದೆ. ವಿಶ್ವಸಂಸ್ಥೆ ಸೇರಿದಂತೆ ವಾಯುಮಾಲಿನ್ಯಕ್ಕೆ ಸಂಬಂಧಿಸಿ ಜಾರಿಗೊಳಿಸಲಾಗುವ ಜಾಗತಿಕ ಮಾನದಂಡಗಳು ಕೇವಲ ಮಾರ್ಗದರ್ಶಕ ದಾಖಲೆಗಳಾಗುತ್ತವೆಯೇ ಹೊರತು ಅವು ಬದ್ಧ ಮಾನದಂಡಗಳಲ್ಲವೆಂದು ಕೇಂದ್ರ ಸರಕಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿಗಳು ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ವಿವಿಧ ದೇಶಗಳಿಗೆ ಶಿಫಾರಸು ಮೌಲ್ಯಗಳಾಗಿ ಕಾರ್ಯ ನಿರ್ವಹಿಸುತ್ತವೆಯೇ ಹೊರತು ಬದ್ಧ ಮಾನದಂಡವಾಗಿ ಅಲ್ಲವೆಂದು ಕೇಂದ್ರದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ. ಆದಾಗ್ಯೂ ಕೆಲವು ದೇಶಗಳು ಭೌಗೋಳಿಕತೆ, ಪಾರಿಸಾರಿಕ ಅಂಶಗಳು, ಹಿನ್ನೆಲೆಯ ಮಟ್ಟಗಳು, ಸಾಮಾಜಿಕ -ಆರ್ಥಿಕ ಸ್ಥಾನಮಾನ ಹಾಗೂ ರಾಷ್ಟ್ರೀಯ ಸನ್ನಿವೇಶಗಳನ್ನು ಆಧರಿಸಿ ದೇಶಗಳು ತಮ್ಮದೇ ಆದ ವಾಯು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸುತ್ತವೆ’’ ಎಂದು ಸಿಂಗ್ ಅವರು ರಾಜ್ಯಸಭೆಯಲ್ಲಿ ಸಿಪಿಎಂ ಸಂಸದ ವಿ. ಶಿವದಾಸನ್ ಅವರಿಗೆ ತಿಳಿಸಿದರು. ಮಾಲಿನ್ಯ ಮಟ್ಟದ ಕುರಿತಾದ ನಗರಗಳ ಜಾಗತಿಕ ರ್ಯಾಂಕಿಂಗ್ ಅನ್ನು ಅಧಿಕೃತ ಪ್ರಾಧಿಕಾರದ ಮೂಕ ನಡೆಸಲಾಗುತ್ತಿಲ್ಲವೆಂದು ಸಚಿವರು ಹೇಳಿದರು. 2024ರಲ್ಲಿ ಜಗತ್ತಿನ 20 ಅತ್ಯಂತ ಮಾಲಿನ್ಯಭರಿತ ನಗರಗಳಲ್ಲಿ ಭಾರತ ಕೂಡಾ ಒಂದಾಗಿದೆ ಎಂದು ಸ್ವಿಸ್ ಮೂಲದ ವಾಯುಗುಣಮಟ್ಟ ತಂತ್ರಜ್ಞಾನ ಸಂಸ್ಥೆ ಐಕ್ಯೂಎಐಆರ್ ಪ್ರಕಟಿಸಿರುವ ಜಾಗತಿಕ ವಾಯುಗುಣಮಟ್ಟದ ವರದಿ ತಿಳಿಸಿದೆ.

ವಾರ್ತಾ ಭಾರತಿ 11 Dec 2025 10:30 pm

ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಸೆರೆ

ಮಂಗಳೂರು, ಡಿ.11: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಉರ್ವ, ಮಂಗಳೂರು ಗ್ರಾಮಾಂತರ ಮತ್ತು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಕಸಬಾ ಬೆಂಗ್ರೆಯ ಮುಹಮ್ಮದ್ ಸುಹೈಲ್ ಮತ್ತು ಮುಹಮ್ಮದ್ ಸಫ್ವಾನ್ ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಪದವು ಗ್ರಾಮದ ಶಕ್ತಿನಗರದ ನಾಲ್ಯಪದವು ಮೈದಾನದ ಬಳಿ ಅತ್ತಾವರ ಬಾಬುಗುಡ್ಡೆ ನಿವಾಸಿ ಚರಣ್ ಯಾನೆ ಚಲ್ಲು ಎಂಬಾತನನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2024ರಲ್ಲಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಆಯಿಂಜೆರಿ ಗ್ರಾಮದ ನಿವಾಸಿ, ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿರುವ ಮುಹಮ್ಮದ್ ಶಮ್ಮಾಸ್ ಎಂಬಾತನನ್ನು ಠಾಣೆಗೆ ಕರೆಸಿದಾಗ ಆತ ಮಾದಕ ವಸ್ತು ಸೇವಿಸಿದ್ದ ಕಾರಣ ಪೊಲೀಸರು ಮತ್ತೊಂದು ಎನ್ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 11 Dec 2025 10:30 pm

ಮಂಗಳೂರು | ವಿಚಾರಾಧೀನ ಕೈದಿ ಮೃತ್ಯು: ಪ್ರಕರಣ ದಾಖಲು

ಮಂಗಳೂರು, ಡಿ.11: ಚಿಕಿತ್ಸೆಗೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾದೀನ ಕೈದಿಯೊಬ್ಬ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಉಡುಪಿ ಪೆರ್ಡೂರು ಹೊಲಗದ್ದೆ ನಿವಾಸಿ ರಾಜೇಶ್ (38) ಮೃತಪಟ್ಟ ಕೈದಿ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಯಾಗಿದ್ದ ಈತನಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 10:28 pm

ʻಹಸು ಮೇಯಿಸುತ್ತಿದ್ದ ನನಗೆ ಶಿಕ್ಷಣ ಕೊಡಿಸಿ ಎಂಜಿನಿಯರ್‌ ಮಾಡಿದ್ರುʼ; ಜೀವನ ರೂಪಿಸಿದ ಶಿಕ್ಷಕನಿಗೆ ವಿದ್ಯಾರ್ಥಿಯಿಂದ ಬೈಕ್‌ ಗಿಫ್ಟ್‌

ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿ ತಿ ನರಸೀಪುರ ಸಾಕ್ಷಿಯಾಗಿದೆ. ತನ್ನ ನೆಚ್ಚಿನ ಶಿಕ್ಷಕ ಶ್ರೀನಿವಾಸಗೌಡ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮಾಶಂಕರ್ ಅವರು 1.50 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಿಕ್ಷಕರ ಮಾರ್ಗದರ್ಶನದಿಂದ ಜೀವನ ರೂಪಿಸಿಕೊಂಡ ವಿದ್ಯಾರ್ಥಿ, ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 10:28 pm

ಡ್ರಗ್ಸ್‌ ಮಾರಾಟವು ಮಾರಾಟಗಾರರಿಗೆ ಉದ್ಯಮವಾಗಿ ಬದಲಾಗಿದೆ: ಜಿ ಪರಮೇಶ್ವರ್

ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ ಸಾರಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಡ್ರಗ್ಸ್ ತಡೆಗೆ ಮತ್ತು ಅಂತಹ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಡ್ರಗ್ಸ್ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ದಂಧೆಕೋರರ ವಿರುದ್ಧ ಸಮರ ನಡೆಯಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಒನ್ ಇ೦ಡಿಯ 11 Dec 2025 10:26 pm

‘ಬಾಬರಿ ಮಸೀದಿ ಬಗ್ಗೆ ನೆಹರೂ ಹೇಳಿಕೆ ನೀಡಿಲ್ಲ’: ಮಣಿಬೆನ್ ಡೈರಿ ಪ್ರತಿಯನ್ನು ರಾಜ್‌ನಾಥ್‌ ಗೆ ಹಸ್ತಾಂತರಿಸಿದ ಜೈರಾಮ್ ರಮೇಶ್

ಹೊಸದಿಲ್ಲಿ,ಡಿ.11:ಸರಕಾರಿ ನಿಧಿಗಳನ್ನು ಬಳಸಿಕೊಂಡು ಜವಾಹರಲಾಲ್ ನೆಹರೂ ಅವರು ಬಾಬರಿ ಮಸೀದಿಯನ್ನು ಪುನರ್ನಿರ್ಮಿಸಲು ಬಯಸಿದ್ದರೆಂದು, ವಲ್ಲಭಬಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಮೂಲ ಡೈರಿಯಲ್ಲಿ ಬರೆಯಲಾಗಿತ್ತೆಂಬ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಳ್ಳಿಹಾಕಿದ್ದಾರೆ. ಇದನ್ನು ದೃಢಪಡಿಸುವುದಕ್ಕಾಗಿ ಅವರು ಗುಜರಾತ್ ಭಾಷೆಯಲ್ಲಿರುವ ಆ ಡೈರಿಯ ಪ್ರತಿಯೊಂದನ್ನು ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ. ಜೈರಾಮ್ ರಮೇಶ್ ಅವರು ಸಂಸತ್‌ಭವನದ ಮಕರದ್ವಾರದ ಹೊರಗೆ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿಯಾಗಿ, ಅವರಿಗೆ ಮಣಿಬೆನ್ ಅವರ ಗುಜರಾತಿ ಭಾಷೆಯ ಡೈರಿಯ ಪ್ರತಿಯನ್ನು ಹಿಂದಿ ಭಾಷಾ ಅನುವಾದದೊಂದಿಗೆ ನೀಡಿದ್ದಾರೆ. ಬಾಬರಿ ಮಸೀದಿಯ ಪುನರ್ನಿರ್ಮಾಣಕ್ಕಾಗಿ ಸರಕಾರಿ ಹಣವನ್ನು ಬಳಸುವ ಕುರಿತು ನೆಹರೂ ಪ್ರಸ್ತಾವಿಸಿದ್ದರು. ಆದರೆ ಅದನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ತಡೆದಿದ್ದರು ಎಂದು ರಾಜ್‌ನಾಥ್ ಸಿಂಗ್ ಅವರು ಕಳೆದ ವಾರ ಗುಜರಾತ್‌ನ ವಡೋದರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿತ್ತು. ರಕ್ಷಣಾ ಸಚಿವರು ಸುಳ್ಳುಗಳನ್ನು ಹರಡುತ್ತಿದ್ದು, ಅವರು ಕ್ಷಮೆಯಾಚಿಸಬೇಕೆಂದು ಅದು ಆಗ್ರಹಿಸಿತ್ತು. ಮಣಿಬೆನ್ ಪಟೇಲ್ ಅವರ ಡೈರಿಯ ಬರಹಗಳನ್ನು 2025ರಲ್ಲಿ ಸಿ.ಎ.ಆರ್.ಎಸ್. ಪಟೇಲ್ ಅವರು ಸಮರ್ಪಿತ್ ಪದಚ್ಛಯೋ ಸರ್ದಾರ್ನೋ ಹೆಸರಿನಲ್ಲಿ ಪ್ರಕಟಿಸಿದ್ದರು. ‘‘ರಾಜ್‌ನಾಥ್ ಸಿಂಗ್ ಹಾಗೂ ಅವರ ಸಹ ಇತಿಹಾಸ ತಿರುಚುಗಾರರು ಪ್ರತಿಪಾದಿಸುತ್ತಿರುವುದಕ್ಕೂ , ಡೈರಿಯಲ್ಲಿನ ಉಲ್ಲೇಖಗಳಿಗೂ ಅಗಾಧವಾದ ವ್ಯತ್ಯಾಸವಿದೆ ’’ ಎಂದು ಜೈರಾಮ್ ರಮೇಶ್ ಅವರು ಡೈರಿಯ ಪುಟಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಶೇರ್ ಮಾಡಿಕೊಂಡು ತಿಳಿಸಿದ್ದಾರೆ. ನೆಹರೂ ಅವರನ್ನು ಗುರಿಯಿರಿಸಿ ಹಾಗೂ ಐತಿಹಾಸಿಕ ದಾಖಲೆಗಳನ್ನು ತಿರುಚಲು ಬಿಜೆಪಿಯು ‘ವಾಟ್ಸಾಪ್ ವಿವಿ’ಯನ್ನು ಅವಲಂಭಿಸಿದೆಯೆಂದು ಕಾಂಗ್ರೆಸ್ ಆಪಾದಿಸಿದೆ. ಆದಾಗ್ಯೂ ಸಿಂಗ್ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಭಾಂಶು ತ್ರಿವೇದಿ ಅವರು ಇನ್ನೊಂದು ಪ್ರಕಾಶನದ ಪ್ರಕಟಣೆಯಾದ ‘ ಇನ್‌ಸೈಡ್ ಸ್ಟೋರಿ ಆಫ್ ಸರ್ದಾರ್ ಪಟೇಲ್, ದಿ ಡೈರಿ ಆಫ್ ಮಣಿಬೆನ್ ಪಟೇಲ್ ಕೃತಿಯನ್ನು ಉಲ್ಲೇಖಿಸಿದ್ದಾರೆೆ. ಅದರಲ್ಲಿ ನೆಹರೂ ಅವರು ಬಾಬರಿ ಮಸೀದಿ ವಿಷಯವನ್ನು ಪ್ರಸ್ತಾವಿಸಿದಾಗ,ಪಟೇಲ್ ಅವರು ಸರಕಾರಿ ಖರ್ಚಿನಲ್ಲಿ ಮಸೀದಿ ಮರುನಿರ್ಮಾಣವನ್ನು ವಿರೋಧಿಸಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದವರು ಹೇಳಿದ್ದಾರೆ.

ವಾರ್ತಾ ಭಾರತಿ 11 Dec 2025 10:25 pm

ಅಮಾನ್ಯಗೊಂಡ ನೋಟು ಮಾರಾಟ ಜಾಲ ಭೇದಿಸಿದ ದಿಲ್ಲಿ ಪೊಲೀಸರು

ಹೊಸದಿಲ್ಲಿ,ಡಿ.11: ನಗರದ ವಝೀರ್‌ಪುರ ಪ್ರದೇಶದಲ್ಲಿ ಅಮಾನ್ಯಗೊಂಡ ಕರೆನ್ಸಿನೋಟುಗಳ ಮಾರಾಟ ನಡೆಸುತ್ತಿದ್ದ ಅಕ್ರಮ ಜಾಲವೊಂದನ್ನು ದಿಲ್ಲಿ ಪೊಲೀಸರು ಗುರುವಾರ ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಒಟ್ಟು 3.5 ಕೋಟಿ ರೂ.ಮುಖಬೆಲೆ ಮೌಲ್ಯದ 500 ರೂ. ಹಾಗೂ 1 ಸಾವಿರ ರೂ. ಗಳ ನೋಟುಗಳನ್ನು ತುಂಬಿಸಿಟ್ಟಿದ್ದ ಹಲವಾರು ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 2016ರ ನವೆಂಬರ್‌ನಲ್ಲಿ ಅಮಾನ್ಯೀಕರಣದ ಬಳಿಕ ಈ ನೋಟುಗಳು ಅಸಿಂಧುಗೊಂಡಿದ್ದರೂ, ಅವು ಈಗಲೂ ರಹಸ್ಯವಾಗಿ ಚಲಾವಣೆಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಅಮಾನ್ಯಗೊಂಡ ಕರೆನ್ಸಿಗಳನ್ನು ಹೊಂದುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದರೂ, ಆರೋಪಿಗಳು ದಿಢೀರ್ ಹಣ ಸಂಪಾದಿಸಲು ಈ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಅಮಾನ್ಯಗೊಂಡ ನೋಟುಗಳನ್ನು ಆರೋಪಿಗಳು ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ಈ ನೋಟುಗಳನ್ನು ಆರ್‌ಬಿಐ ಅಥವಾ ಕೆಲವು ನಿರ್ದಿಷ್ಟ ವಾಹಿನಿಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದೆಂದು ಸುಳ್ಳು ಆಶ್ವಾಸನೆಯನ್ನು ನೀಡಿ ಆರೋಪಿಗಳು ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ದಿಲ್ಲಿ ನಿವಾಸಿಗಳಾದ ಹರ್ಷ್, ಟೀಕ್‌ಚಂದ್, ಲಕ್ಷ್ಯ ಎಂದುಗುರುತಿಸಲಾಗಿದೆ.ನಾಲ್ಕನೇ ಆರೋಪಿ ವಿಪಿನ್ ಕುಮಾರ್ ಹಿಮಾಚಲ ಪ್ರದೇಶದ ಜೋಗಿಂದರ್ ನಗರದ ನಿವಾಸಿಯಾಗಿದ್ದು, ಆತ ಶಾಲಿಮಾರ್‌ಭಾಗ್ ನಗರದ ಮೆಟ್ರೋ ನಿಲ್ದಾಣದ ಸಮೀಪದ ಮನೆಯೊಂದರಲ್ಲಿ ನೆಲೆಸಿದ್ದನು. ಈ ಜಾಲವು ವಿವಿಧ ಸ್ಥಳಗಳಲ್ಲಿ ಹರಡಿರುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ನಿರ್ದಿಷ್ಟಪಡಿಸಲಾದ ಬ್ಯಾಂಕ್ ನೋಟುಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಹಾಗೂ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿದೆ.

ವಾರ್ತಾ ಭಾರತಿ 11 Dec 2025 10:21 pm

ಜಾಲಿವುಡ್‌ ಸ್ಟುಡಿಯೋ ಬೀಗ ತೆರವು, ಆದೇಶ ಹಿಂಪಡೆದ ಮಾಲಿನ್ಯ ನಿಯಂತ್ರಣ ಮಂಡಳಿ

ಮಾಲಿನ್ಯ ನಿಯಮ ಉಲ್ಲಂಘನೆ ಸಂಬಂಧ ಬೀಗ ಬಿದ್ದಿದ್ದ ಬಿಡದಿಯ ಜಾಲಿವುಡ್‌ ಸ್ಟುಡಿಯೋ ಮರು ಆರಂಭಗೊಂಡಿದೆ. ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ತೊಂದರೆಯಾಗಿದ್ದ ಈ ವಿಚಾರದಲ್ಲಿ, ಮಾಲೀಕರು ನಿಯಮ ಪಾಲನೆಗೆ ಅಗತ್ಯ ವ್ಯವಸ್ಥೆ ಮಾಡಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹಿಂಪಡೆದಿದೆ. ಕಲ್ಮಶ ನೀರು ಸಂಸ್ಕರಣೆ, ತ್ಯಾಜ್ಯ ವಿಂಗಡಣೆ ಸೇರಿದಂತೆ ಸುಧಾರಣೆಗಳನ್ನು ಪರಿಶೀಲಿಸಿ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ವಿಜಯ ಕರ್ನಾಟಕ 11 Dec 2025 10:18 pm

ವಾಯು ಗುಣಮಟ್ಟ ಸುಧಾರಿಸುವ ವರೆಗೆ ದಿಲ್ಲಿಯಿದ ಅಧಿವೇಶವನ್ನು ಸ್ಥಳಾಂತರಿಸಿ: ಸರಕಾರವನ್ನು ಆಗ್ರಹಿಸಿದ ಬಿಜೆಡಿ ಸಂಸದ

ಹೊಸದಿಲ್ಲಿ, ಡಿ. 11: ವಾಯು ಗುಣಮಟ್ಟ ಸುಧಾರಿಸುವ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ದಿಲ್ಲಿಯ ಹೊರಗೆ ಸ್ಥಳಾಂತರಿಸುವಂತೆ ಬಿಜೆಡಿಯ ರಾಜ್ಯ ಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಗುರುವಾರ ಸರಕಾರವನ್ನು ಆಗ್ರಹಿಸಿದ್ದಾರೆ. ದಿಲ್ಲಿಯ ವಾರ್ಷಿಕ ಮಾಲಿನ್ಯದ ಬಿಕ್ಕಟ್ಟನ್ನು ‘‘ಮಾನವ ನಿರ್ಮಿತ ವಿಪತ್ತು’’ ಎಂದು ಅವರು ಕರೆದರು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಒಡಿಶಾದ ಮಂಗರಾಜ್, ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಮಾತನಾಡಿದರು. ನೈಸರ್ಗಿಕ ವಿಕೋಪಗಳಿಗೆ ತನ್ನ ರಾಜ್ಯದ ಪರಿಣಾಮಕಾರಿ ಪ್ರತಿಕ್ರಿಯೆ ಬಗ್ಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿ ಮಾಲಿನ್ಯವನ್ನು ನಿಭಾಯಿಸಲು ಅದೇ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು. ನಾನು ಒಡಿಶಾದಿಂದ ಬಂದಿದ್ದೇನೆ. ಅದು ಚಂಡ ಮಾರುತ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳನ್ನು ಬಹಳ ಶಿಸ್ತಿನಿಂದ ನಿರ್ವಹಿಸುವ ರಾಜ್ಯ. ನಿಜವಾದ ಬಿಕ್ಕಟ್ಟು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಆದರೆ, ದಿಲ್ಲಿಯ ಬಗ್ಗೆ ನನಗೆ ಆತಂಕವಿದೆ ಎಂದು ಅವರು ಹೇಳಿದರು. ‘‘ಅವರು ತೊಂದರೆಗೆ ಒಳಗಾಗುತ್ತಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂಬಂತೆ ನಟಿಸಲು ಸಾಧ್ಯವಿಲ್ಲ. ಗರಿಷ್ಠ ಮಾಲಿನ್ಯ ತಿಂಗಳಲ್ಲಿ ಸಂಸತ್ತಿನ ನಿರ್ಣಾಯಕ ಅಧಿವೇಶನವನ್ನು ನಡೆಸುವ ಮೂಲಕ ಅನಗತ್ಯವಾಗಿ ಜೀವಗಳನ್ನು ಅಪಾಯಕ್ಕೆ ಒಡ್ಡುತ್ತೇವೆ’’ ಎಂದು ಮಂಗರಾಜ್ ಹೇಳಿದರು.

ವಾರ್ತಾ ಭಾರತಿ 11 Dec 2025 10:16 pm

ರಾಜಸ್ಥಾನ: SIR ನಿಯೋಜಿಸಿದ್ದ BLO ಕುಸಿದು ಬಿದ್ದು ಮೃತ್ಯು

ಜೈಪುರ, ಡಿ. 11: ರಾಜಸ್ಥಾನದ ಕೋಟಪುತಲಿ-ಬಹ್ರೋರ್‌ ನಲ್ಲಿ ಮತದರಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ನಿಯೋಜಿಸಲಾಗಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಯೊಬ್ಬರು ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಯನ್ನು ವಿಜಯ್ ಗುರ್ಜರ್ (42) ಎಂದು ಗುರುತಿಸಲಾಗಿದೆ. ವಿಜಯ್ ಅವರು ಕೋಟಪುತಲಿಯ ಸರ್ದಾರ್ ಸೀನಿಯರ್ ಸೆಕೆಂಡರ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಬಿಎಲ್‌ಒ ಆಗಿ ನಿಯೋಜಿಸಲಾಗಿತ್ತು. ಅವರು ಬುಧವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ಕುಟುಂಬ ಕೂಡಲೇ ಸರಕಾರಿ ಬಿಡಿಎಂ ಜಿಲ್ಲಾಸ್ಪತ್ರೆಗೆ ಕರೆದೊಯ್ದಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ವಿಜಯ್ ಕುಸಿದು ಬಿದ್ದು ಸಾವನ್ನಪ್ಪಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ನಿರ್ಧರಿಸಲು ಸಾಧ್ಯ’’ ಎಂದು ಕೋಟಪುತಲಿಯ ಡಿಎಸ್‌ಪಿ ರಾಜೇಂದ್ರ ಕುಮಾರ್ ಹೇಳಿದ್ದಾರೆ. ‘‘ವಿಜಯ್ ಸಾರ್ ಅವರ ಎಸ್‌ಐಆರ್ ಕೆಲಸಗಳು ಡಿಸೆಂಬರ್ 4ರಂದು ಪೂರ್ಣಗೊಂಡಿದೆ. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅವರಿಗೆ ಯಾವುದೇ ನೋಟಿಸು ನೀಡಿರಲಿಲ್ಲ’’ ಎಂದು ಉಪ ವಿಭಾಗೀಯ ದಂಡಾಧಿಕಾರಿ (ಎಸ್‌ಡಿಎಂ) ರಾಮಾವತಾರ್ ಮೀನಾ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 10:12 pm

ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ಓಡಿ ಹೋದ ಕೇರ್‌ ಟೇಕರ್; AMT ಹಣ ಡ್ರಾ ಮಾಡಿ ಸಿಕ್ಕಿಬಿದ್ದ ಬಿಹಾರಿ ಚಾಂದಿನಿ!

ಬಾಣಸವಾಡಿ ಪೊಲೀಸರು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಭರಣ ಮತ್ತು ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಚಾಂದಿನಿ ಕುಮಾರಿ ಎಂಬುವರು ಗೌಸಿಯಾ ಬೇಗಂ ಅವರ ಮನೆಯಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ವಿದೇಶಕ್ಕೆ ತೆರಳಿದ್ದ ಮನೆಯ ಮಾಲೀಕರ ಅನುಪಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾರೆ. 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ವಿಜಯ ಕರ್ನಾಟಕ 11 Dec 2025 9:54 pm

2026ರ ಟಿ-20 ವಿಶ್ವಕಪ್ ಟೂರ್ನಿ: ಟಿಕೆಟ್‌ ಗಳ ಮಾರಾಟ ಆರಂಭಿಸಿದ ICC; ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಹೊಸದಿಲ್ಲಿ, ಡಿ.11: ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್‌ ಗಳ ಮಾರಾಟ ಆರಂಭವಾಗಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ. ಪಂದ್ಯಾವಳಿಗೆ ಹೆಚ್ಚಿನ ಜನರು ಆಗಮಿಸುವಂತಾಗಲು ಆರಂಭಿಕ ಹಂತದ ಟಿಕೆಟ್ ದರವನ್ನು ಕಡಿಮೆಗೊಳಿಸಲಾಗಿದೆ. ಟಿಕೆಟ್ ಮಾರಾಟವು ಗುರುವಾರ ಸಂಜೆ 6:45ರಿಂದ ಆರಂಭವಾಗಿದೆ. ಟಿಕೆಟ್ ದರಗಳು ಭಾರತದಲ್ಲಿ 100 ರೂ. ಹಾಗೂ ಶ್ರೀಲಂಕಾದಲ್ಲಿ 1,000 ಎಲ್‌ಕೆಆರ್‌ನಿಂದ ಆರಂಭವಾಗಲಿದೆ ಎಂದು ಐಸಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. 10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ಎಂಟು ತಾಣಗಳಲ್ಲಿ ನಡೆಯಲಿದೆ. ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್‌ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ಕೋಲ್ಕತಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಂಬೈನಲ್ಲಿ ಮುಖಾಮುಖಿಯಾಗಲಿದೆ. ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ. ‘‘ಟಿಕೆಟ್ ಮಾರಾಟದ ಮೊದಲ ಹಂತವು ಒಂದು ಪ್ರಮುಖ ಮೈಲಿಗಲ್ಲು. ಮೊದಲ ಹಂತದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿದ್ದೇವೆ. 100 ರೂ. ಹಾಗೂ 1,000 ಎಲ್‌ಕೆಆರ್‌ನಿಂದ ಟಿಕೆಟ್ ದರ ಆರಂಭವಾಗಲಿದೆ. 2 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳು ಲಭ್ಯವಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗಿನ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಗಾಗಿ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ’’ ಎಂದು ಐಸಿಸಿ ಸಿಇಒ ಸಂಜೋಗ್ ಗುಪ್ತಾ ತಿಳಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, 55 ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದ ಪಂದ್ಯಗಳ ಮೂಲಕ ಟೂರ್ನಿಯು ಆರಂಭವಾಗಲಿದೆ. ಅಹ್ಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂ, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ, ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಮುಂಬೈನ ವಾಂಖೆಡೆ ಸ್ಟೇಡಿಯಂ, ಕೋಲ್ಕತಾದ ಈಡನ್ ಗಾರ್ಡನ್ಸ್, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಗ್ರೌಂಡ್ ಹಾಗೂ ಕ್ಯಾಂಡಿಯ ಪಲ್ಲೆಕೆಲೆ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.

ವಾರ್ತಾ ಭಾರತಿ 11 Dec 2025 9:51 pm

ಬೆಂಗಳೂರಿನಿಂದ ಮತ್ತೆ 60 ವಿಮಾನಗಳ ಹಾರಾಟ ರದ್ದುಪಡಿಸಿದ ಇಂಡಿಗೊ

ಹೊಸದಿಲ್ಲಿ,ಡಿ.11: ಇಂಡಿಗೊ ವಿಮಾನ ಪ್ರಯಾಣಿಕರ ಗೋಳಾಟ ಮುಂದುವರಿದಿದ್ದು, ಗುರುವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ 60 ವಿಮಾನಗಳ ಹಾರಾಟವನ್ನು ಇಂಡಿಗೊ ವಾಯುಯಾನ ಸಂಸ್ಥೆ ರದ್ದುಗೊಳಿಸಿದೆ. ನೂತನ ಪೈಲಟ್ ಹಾಗೂ ಇತರ ಸಿಬ್ಬಂದಿಯ ಕರ್ತವ್ಯದ ನಿಯಮಾವಳಿಗಳ ಅನುಷ್ಠಾನಕ್ಕೆ ತರುವಲ್ಲಿ ವೈಫಲ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಇಂಡಿಗೋ ಸಂಸ್ಥೆಯ ವಿಮಾನಗಳ ಸೇವೆಯಲ್ಲಿ ಅಡಚರಣೆ ಉಂಟಾಗಿದೆ. ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಗುರುವಾರ 1950 ವಿಮಾನಗಳ ಹಾರಾಟವನ್ನು ಪರಿಶೀಲನೆಗೊಳಿಪಡಿಸಿದರೂ, ಈ ವಿಮಾನಗಳ ಹಾರಾಟ ರದ್ದುಗೊಂಡಿದೆ. ಇಂಡಿಗೊ ವಾಯುಯಾನ ಸಂಸ್ಥೆಯು 60 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಬೆಂಗಳೂರಿನ ಆಗಮಿಸುವ 32 ವಿಮಾನಗಳು ಹಾಗೂ ನಿರ್ಗಮಿಸುವ 28 ವಿಮಾನಯಾನಗಳನ್ನು ರದ್ದುಪಡಿಸಲಾಗಿದೆ. ಈ ಮಧ್ಯೆ, ಇತ್ತೀಚೆಗೆ ವಿಮಾನಗಳ ನಿರ್ವಹಣೆಯಲ್ಲಿ ಉಂಟಾಗಿರುವ ಇಂಡಿಗೊ ಸಂಸ್ಥೆಯ ಸಿಇಓ ಪೀಟರ್ ಎಲ್ಬರ್ಸ್ ಅವರಿಗೆ ದತ್ತಾಂಶ ಸೇರಿದಂತೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಹಾಗೂ ಗುರುವಾರ ಸಂಜೆ 3 ಗಂಟೆಯ ಒಳಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಗುರುವಾರದಂದು ತನ್ನ 1950 ವಿಮಾನಗಳು ಕಾರ್ಯನಿರ್ವಹಿಸುವುದನ್ನು ನಿರೀಕ್ಷಿಸುವುದಾಗಿ ಇಂಡಿಗೋ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿತ್ತು. ಪ್ರಸಕ್ತ ಇಂಡಿಗೋ ಏರ್‌ಲೈನ್ಸ್ ದಿನಂಪ್ರತಿ, ಹಾಲಿ ಚಳಿಗಾಲದಲ್ಲಿ 2200 ವಿಮಾನಯಾನಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಆ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಸ್ಥಿರಗೊಳಿಸಲು ಹಾಗೂ ವಿಮಾನಯಾನಗಳ ರದ್ದತಿಯನ್ನು ಕನಿಷ್ಠಗೊಳಿಸುವುದಕ್ಕಾಗಿ ವಿಮಾನಹಾರಾಟವನ್ನು ಸರಕಾರವು ಶೇ.10ರಷ್ಟು ಕಡಿಮೆಗೊಳಿಸಿದೆ. ಬುಧವಾರದಂದು ಇಂಡಿಗೋ ದಿಲ್ಲಿ, ಬೆಂಗಳೂರು ಹಾಗೂ ಮುಂಬೈ ವಿಮಾನನಿಲ್ದಾಣಗಳಿಂದ 220 ವಿಮಾನಯಾನಗಳ ಹಾರಾಟವನ್ನು ರದ್ದುಪಡಿಸಿತ್ತು ದಿಲ್ಲಿಯಲ್ಲಿ ಅತ್ಯಧಿಕ 137 ವಿಮಾನಗಳ ಹಾರಾಟವು ರದ್ದುಗೊಂಡಿದ್ದವು.

ವಾರ್ತಾ ಭಾರತಿ 11 Dec 2025 9:47 pm

Pakistan | ISI ಮಾಜಿ ಮುಖ್ಯಸ್ಥ ಹಮೀದ್‍ ಗೆ 14 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್, ಡಿ.11: ಪಾಕಿಸ್ತಾನದ ಇಂಟರ್- ಸರ್ವಿಸಸ್ ಇಂಟೆಲಿಜೆನ್ಸ್(ಐಎಸ್‍ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್‍ ಗೆ ಗುರುವಾರ ಮಿಲಿಟರಿ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳಲ್ಲಿ ಹಮೀದ್‍ ಗೆ ಶಿಕ್ಷೆ ವಿಧಿಸಿರುವುದಾಗಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್‍ ನ ಹೇಳಿಕೆ ತಿಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟ ವಲಯದಲ್ಲಿ ಗುರುತಿಸಿಕೊಂಡಿದ್ದ ಹಮೀದ್‍ರನ್ನು ಕಳೆದ ವರ್ಷ `ಟಾಪ್ ಸಿಟಿ ಯೋಜನೆ'ಯ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. 2019ರಲ್ಲಿ ಆಸಿಮ್ ಮುನೀರ್‍ ರನ್ನು (ಪ್ರಸ್ತುತ ಪಾಕ್ ಸೇನಾ ಮುಖ್ಯಸ್ಥ) ಪದಚ್ಯುತಗೊಳಿಸಿ ಹಮೀದ್‍ರನ್ನು ನೇಮಕಗೊಳಿಸಿದ್ದು ಅವರು 2021ರವರೆಗೆ ಕಾರ್ಯ ನಿರ್ವಹಿಸಿದ್ದರು. 

ವಾರ್ತಾ ಭಾರತಿ 11 Dec 2025 9:43 pm

ಕೇವಲ ₹20 ಕೊಟ್ಟರೆ ನಿಮ್ಮ ಕುಟುಂಬಕ್ಕೆ ₹2 ಲಕ್ಷ ಭದ್ರತೆ – PMSBY ಯೋಜನೆಯ ಸಂಪೂರ್ಣ ವಿವರ.

ಸ್ನೇಹಿತರೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು(PMSBY – Pradhan Mantri Suraksha Bima Yojana) ಜಾರಿ ಮಾಡಿ ಹಲವು ದಿನಗಳಾಗಿದೆ. ಅಪಘಾತ ವಿಮೆಗಾಗಿ ಕೇಂದ್ರ ಸರಕಾರ ಎರಡು ಲಕ್ಷದ ವರೆಗೆ ವಿಮೆ ಪ್ರಯೋಜನ ನೀಡುತ್ತಿದೆ. ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ಈ ಸೌಲಭ್ಯವನ್ನು ಪಡೆಯಬಹುದು. ಇದು ಯಾವುದೇ ಆದಾಯಕ್ಕೆ ಸೀಮಿತವಾದ ಯೋಜನೆ ಅಲ್ಲ. ಹಾಗಿದ್ರೆ ಯಾರು ಇದರ ಸದುಪಯೋಗ ಮಾಡಿಕೊಳ್ಳಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನೆಗಳೇನು? ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ... Read more The post ಕೇವಲ ₹20 ಕೊಟ್ಟರೆ ನಿಮ್ಮ ಕುಟುಂಬಕ್ಕೆ ₹2 ಲಕ್ಷ ಭದ್ರತೆ – PMSBY ಯೋಜನೆಯ ಸಂಪೂರ್ಣ ವಿವರ. appeared first on Karnataka Times .

ಕರ್ನಾಟಕ ಟೈಮ್ಸ್ 11 Dec 2025 9:40 pm

US Gold Card ಅನಾವರಣಗೊಳಿಸಿದ ಟ್ರಂಪ್

ವಾಷಿಂಗ್ಟನ್, ಡಿ.11: ಶ್ರೀಮಂತ ವಲಸಿಗರಿಗೆ ಅಮೆರಿಕಾದ ಪೌರತ್ವ ಒದಗಿಸುವ `ಯುಎಸ್ ಗೋಲ್ಡ್ ಕಾರ್ಡ್' ಅನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಾವರಣಗೊಳಿಸಿದ್ದು ಗೋಲ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಶ್ವೇತಭವನದಲ್ಲಿ ಬುಧವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. 1 ಮಿಲಿಯ ಅಮೆರಿಕನ್ ಡಾಲರ್ ಪಾವತಿಸಿದವರು ಗೋಲ್ಡ್ ಕಾರ್ಡ್ ಪಡೆದು ಅಮೆರಿಕಾದ ಪೌರತ್ವ ಗಳಿಸುವ ಯೋಜನೆಯಿದಾಗಿದೆ. `ಅಮೆರಿಕಾದಲ್ಲಿ ಪದವಿ ಪಡೆದ ಬಳಿಕ ಭಾರತ, ಚೀನಾ ಇತ್ಯಾದಿ ವಿದೇಶಗಳ ವಿದ್ಯಾರ್ಥಿಗಳು ಮನೆಗೆ ಮರಳಬೇಕಾಗುತ್ತದೆ. ಇದು ಬೇಸರದ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಈ ಸಂದರ್ಭ ಟ್ರಂಪ್ ಹೇಳಿದ್ದಾರೆ. ಅಮೆರಿಕಾಕ್ಕೆ ಗಣನೀಯ ಪ್ರಯೋಜನವನ್ನು ಒದಗಿಸುವ ವಲಸಿಗರಿಗೆ ರೂಪಿಸಲಾಗಿರುವ ಈ ವೀಸಾವು ಪೌರತ್ವಕ್ಕೆ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ. ಗೋಲ್ಡ್ ಕಾರ್ಡ್ ವೆಬ್‍ ಸೈಟ್ ಚಾಲನೆಯಲ್ಲಿದೆ ಮತ್ತು ಕಂಪೆನಿಗಳು ಅಮೆರಿಕಾದ ಉನ್ನತ ಕಂಪನಿಗಳಿಂದ ನೇಮಿಸಿಕೊಳ್ಳುವ ವಿದ್ಯಾರ್ಥಿಗಳನ್ನು ಗೋಲ್ಡ್ ಕಾರ್ಡ್ ಅನ್ನು ಖರೀದಿಸುವ ಮೂಲಕ ಅಮೆರಿಕಾದಲ್ಲೇ ಇರಿಸಿಕೊಳ್ಳಬಹುದು. ಇದು ಗ್ರೀನ್ ಕಾರ್ಡ್ ನ ಮತ್ತೊಂದು ರೂಪವಾಗಿದೆ. ಆದರೆ ಅದಕ್ಕಿಂತ ಉತ್ತಮ, ಹೆಚ್ಚು ಶಕ್ತಿಶಾಲಿ ಮತ್ತು ಮತ್ತು ಪೌರತ್ವಕ್ಕೆ ಬಲಿಷ್ಠ ಮಾರ್ಗ ಕಲ್ಪಿಸುವ ವ್ಯವಸ್ಥೆ. ನಮ್ಮ ದೇಶಕ್ಕೆ ಉತ್ತಮ ವ್ಯಕ್ತಿಗಳು ಬರುವುದು ಒಂದು ಕೊಡುಗೆಯಾಗಿದೆ, ಯಾಕೆಂದರೆ ಇವರು ಪ್ರಚಂಡ ವ್ಯಕ್ತಿಗಳಾಗಿರುತ್ತಾರೆ. ಕಂಪೆನಿಗಳು ಈಗ ಗೋಲ್ಡ್ ಕಾರ್ಡ್ ನ ಪ್ರಯೋಜನ ಪಡೆಯಬಹುದು. ಇದು ಅಮೆರಿಕಾದಲ್ಲಿ ಶಾಶ್ವತ ನಿವಾಸ ಕಲ್ಪಿಸುವ ಗ್ರೀನ್ ಕಾರ್ಡ್ ಗಿಂತಲೂ ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ವಾರ್ತಾ ಭಾರತಿ 11 Dec 2025 9:39 pm

ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣ; ಹೊಸದಾಗಿ ಶಾಸಕ ಸತೀಶ್ ಸೈಲ್ ಆರೋಗ್ಯ ತಪಾಸಣೆಗೆ ಹೈಕೋರ್ಟ್ ಆದೇಶ

ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದ ಆರೋಪಿ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ತಪಾಸಣೆಗೆ ಹೈಕೋರ್ಟ್‌ ಆದೇಶಿಸಿದೆ. ಜಾರಿ ನಿರ್ದೇಶನಾಲಯವು ಹೊಸದಾಗಿ ವೈದ್ಯಕೀಯ ತಪಾಸಣೆ ನಡೆಸಲು ಅಭಿಪ್ರಾಯ ವ್ಯಕ್ತಪಡಿಸಿದೆ. ಯಾವ ವೈದ್ಯರು ತಪಾಸಣೆ ನಡೆಸಬೇಕು ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ವಿಚಾರಣೆ ಡಿ.18ಕ್ಕೆ ಮುಂದೂಡಲಾಗಿದೆ.

ವಿಜಯ ಕರ್ನಾಟಕ 11 Dec 2025 9:39 pm

Wd, Wd, Wd, Wd, Wd, Wd, Wd: ಒಂದೇ ಓವರ್‌ನಲ್ಲಿ 7 ವೈಡ್‌ ಎಸೆದ ಅರ್ಶದೀಪ್‌ ಸಿಂಗ್! ಲಯ ತಪ್ಪಿದ ಭಾರತದ ಬೌಲಿಂಗ್

India Vs South Africa- ಚುಟುಕು ಕ್ರಿಕೆಟ್ ನ ಸ್ಪೆಷಲಿಸ್ಟ್ ಬೌಲರ್ ಎಂದೇ ಹೆಸರಾಗಿರುವ ಅರ್ಶದೀಪ್ ಸಿಂಗ್ ಅವರು ಒಂದೇ ಓವರ್ ನಲ್ಲಿ 7 ವೈಡ ಎಸೆವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇನಿಂಗ್ಸ್‌ನ 11ನೇ ಓವರ್‌ ನಲ್ಲಿ ಒಟ್ಟು 18 ರನ್ ಬಿಟ್ಟುಕೊಟ್ಟ ಅವರು ಅದರಲ್ಲಿ 7 ರನ್ ಗಳನ್ನು ವೈಡ್ ನಲ್ಲೇ ಬಿಟ್ಟುಕೊಟ್ಟರು. ಒಟ್ಟಾರೆ ಭಾರತದ ಬೌಲರ್ ಗಳು 16 ವೈಡ್ ಗಳನ್ನು ಎಸೆದಿದ್ದಾರೆ.

ವಿಜಯ ಕರ್ನಾಟಕ 11 Dec 2025 9:37 pm

ಮಂಗಳೂರು | ಗ್ರೀನ್ ವೀವ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು : ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ಅಡ್ಕರೆಪಡ್ಪುವಿನಲ್ಲಿ ವಾರ್ಷಿಕ ಕ್ರೀಡಾಕೂಟ 2025 ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಸಹಾಯಕ ಆಯುಕ್ತರಾದ ನಜ್ಮಾ ಫಾರೂಕಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿದಲ್ಲಿ ನಮ್ಮ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾನೂನನ್ನು ಅರಿತುಕೊಳ್ಳುವುದರ ಜೊತೆಗೆ ತಂದೆ, ತಾಯಿ ಮತ್ತು ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಧ್ವಜಾರೋಹಣವನ್ನು ಕೊಣಾಜೆ ಪಂಚಾಯತ್ ಅಧ್ಯಕ್ಷೆಯಾದ ಗೀತಾ ಕುಂದರ್ ರವರು ನಿರ್ವಹಿಸಿದರು. ವಿದ್ಯಾರ್ಥಿಗಳ ಪಥಸಂಚಲನ ಗೌರವ ವಂದನೆಯನ್ನು ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕೋಡಿಜಾಲ್ ಸ್ವೀಕರಿಸಿದರು. ಕೋಶಾಧಿಕಾರಿ ವಿ.ಇಬ್ರಾಹೀಂ ನಡುಪದವು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ವೇದಿಕೆಯಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂಚಲಾಕ್ಷಿ, ಸದಸ್ಯರಾದ ಹೈದರ್, ಝೊಹರಾ, ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಜಾಫರ್, ಎಸ್.ಬಿ.ಸಿ ಅಧ್ಯಕ್ಷರಾದ ಅಸೈನಾರ್ ಎ.ಬಿ, ಉಪಾಧ್ಯಕ್ಷರಾದ ಮಾಲತಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ನಮಿತಾ ಬಿ.ಎನ್, ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಸಿಂಧಿಯಾ ಲೂಸಿ ಮಸ್ಕರೇನಸ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕರಾದ ಪರ್ವೇಜ್ ಅಲಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ. ವಂದಿಸಿದರು. ಗಣಿತ ಶಿಕ್ಷಕಿ ರಶ್ಮಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.

ವಾರ್ತಾ ಭಾರತಿ 11 Dec 2025 9:34 pm

ಮೌಖಿಕ ಸೂಚನೆ ನೀಡಿ ಠಾಣೆಗೆ ರೌಡಿಶೀಟರ್‌ ಕರೆಸಿಕೊಳ್ಳಲು ಬ್ರೇಕ್‌! ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ಮಹತ್ವದ ಸೂಚನೆ

ಮೌಖಿಕ ಆದೇಶದ ಮೂಲಕ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸುವವರೆಗೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಸೂಚನೆ ನೀಡಬಹುದು ಎಂದು ನ್ಯಾಯಾಲಯ ಆದೇಶಿಸಿದೆ. ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೆ, ಕೇವಲ ರೌಡಿಶೀಟ್ ಕಾರಣಕ್ಕೆ ಆಗಾಗ್ಗೆ ಕರೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಜಯ ಕರ್ನಾಟಕ 11 Dec 2025 9:33 pm

ಪ್ರವಾಹದಲ್ಲಿ ಮುಳುಗಿದ ಗಾಝಾದ ಡೇರೆ: ಶಿಶು ಮೃತ್ಯು

ಸಾವಿರಾರು ಮಂದಿ ಸ್ಥಳಾಂತರ: ವರದಿ

ವಾರ್ತಾ ಭಾರತಿ 11 Dec 2025 9:30 pm

‘ಒಂದು ದೇಶ, ಒಂದು ಚುನಾವಣೆ’ ಮಸೂದೆ | ಪರಿಶೀಲನಾ ಸಮಿತಿಯ ಅಧಿಕಾರಾವಧಿ ವಿಸ್ತರಣೆ

ಹೊಸದಿಲ್ಲಿ, ಡಿ. 11: ಲೋಕಸಭೆ ಹಾಗೂ ವಿಧಾನಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದನ್ನು ಪರಿಚಯಿಸಲು ಕೋರುವ ಮಸೂದೆಯನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ. 2026ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದ ವರೆಗೆ ಸಾಂವಿಧಾನಿಕ (129ನೇ ತಿದ್ದುಪಡಿ) ಮಸೂದೆ, 2024 ಹಾಗೂ ಕೇಂದ್ರಾಡಾಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಮಿತಿ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರುವ ನಿರ್ಣಯವನ್ನು ಸಮಿತಿಯ ಅಧ್ಯಕ್ಷರಾದ ಪಿ.ಪಿ. ಚೌಧರಿ ಮಂಡಿಸಿದರು. ಈ ನಿರ್ಣಯವನ್ನು ಲೋಕಸಭೆ ಧ್ವನಿ ಮತದ ಮೂಲಕ ಅಂಗೀಕರಿಸಿತು. ಕಳೆದ ಡಿಸೆಂಬರ್‌ನಲ್ಲಿ ರೂಪುಗೊಂಡ ಬಳಿಕ ಈ ಸಮಿತಿ ಸಂವಿಧಾನ ಪರಿಣತರು, ಅರ್ಥಶಾಸ್ತ್ರಜ್ಞರು, ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಹಾಗೂ ಇತರರನ್ನು ಭೇಟಿಯಾಗಿದೆ.

ವಾರ್ತಾ ಭಾರತಿ 11 Dec 2025 9:24 pm

1996ರ ಮಾದಕ ವಸ್ತು ಇರಿಸಿದ ಪ್ರಕರಣ | ಸಂಜೀವ್ ಭಟ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಡಿ. 11: 1996ರ ಮಾದಕ ವಸ್ತು ಇರಿಸಿದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ವಿಧಿಸಲಾದ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಇದರಿಂದ ಸಂಜೀವ್ ಭಟ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯಿ ನೇತೃತ್ವದ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ, ‘‘ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ ಅವರ ಅರ್ಜಿಯನ್ನು ಪರಿಗಣಿಸಲು ನಾವು ಸಿದ್ಧರಿಲ್ಲ’’ ಎಂದು ಹೇಳಿತು. ಗುಜರಾತ್ ನ್ಯಾಯಾಲಯ ಕಳೆದ ವರ್ಷ ಎನ್‌ಡಿಪಿಎಸ್ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ನಿಯಮಗಳ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಂಜೀವ್ ಭಟ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು. 1990ರಲ್ಲಿ ನಡೆದ ಪ್ರಭುದಾಸ್ ವೈಷ್ಣನಿ ಎಂಬವರ ಕಸ್ಟಡಿ ಸಾವಿಗೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ವಾರ್ತಾ ಭಾರತಿ 11 Dec 2025 9:24 pm

ಅಮೆರಿಕದ ಕೇಂದ್ರೀಯ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ, ಭಾರತದ ಮೇಲೆ ಏನು ಪರಿಣಾಮ?

ಅಮೆರಿಕದ ಫೆಡರಲ್‌ ರಿಸರ್ವ್‌ ಸತತ ಮೂರನೇ ಬಾರಿ ಬಡ್ಡಿದರವನ್ನು ಶೇಕಡಾ 0.25ರಷ್ಟು ಇಳಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಆರ್ಥಿಕತೆಗೆ ಬೆಂಬಲ ನೀಡುವುದು ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ. ಮುಂದಿನ ವರ್ಷವೂ ಬಡ್ಡಿದರ ಕಡಿತವಾಗುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 11 Dec 2025 9:23 pm

2 ವರ್ಷಗಳಲ್ಲಿ ವಿಮಾನಗಳ GPS ಮೇಲೆ ಸೈಬರ್ ದಾಳಿಯ 1900ಕ್ಕೂ ಅಧಿಕ ಘಟನೆಗಳು ವರದಿ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಡಿ. 11: 2023 ನವೆಂಬರ್‌ನಿಂದ ಎರಡು ವರ್ಷಗಳ ಕಾಲ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಜಿಪಿಎಸ್ ಮೇಲೆ ಸೈಬರ್ ದಾಳಿ ನಡೆದ 1,951ಕ್ಕೂ ಅಧಿಕ ಘಟನೆಗಳು ವರದಿಯಾಗಿವೆ ಎಂದು ಸರಕಾರ ಗುರುವಾರ ತಿಳಿಸಿದೆ. ನಾಗರಿಕ ವಿಮಾನ ಯಾನ ಖಾತೆಯ ಸಹಾಯಕ ಸಚಿವ ಮುರಳೀಧರ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ‘‘ಡಿಜಿಸಿಎ ಸುತ್ತೋಲೆ ಪ್ರಕಟಿಸಿದ ಬಳಿಕ ವರದಿಯಾದ (2023 ನವೆಂಬರ್‌ನಿಂದ 2025 ನವೆಂಬರ್)ಜಿಪಿಎಸ್ ಹಸ್ತಕ್ಷೇಪದ ಒಟ್ಟು ಪ್ರಕರಣಗಳು 1,951’’ ಎಂದು ಹೇಳಿದ್ದಾರೆ. ವಾಯು ಪ್ರದೇಶದಲ್ಲಿ ಜಿಎನ್‌ಎಸ್‌ಎಸ್‌ನ ಮೇಲೆ ಸೈಬರ್ ದಾಳಿಗೆ ಸಂಬಂಧಿಸಿ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) 2023 ನವೆಂಬರ್‌ನಲ್ಲಿ ಸಲಹಾ ಸುತ್ತೋಲೆ ಪ್ರಕಟಿಸಿದ ಬಳಿಕ ಜಿಪಿಎಸ್ ಮೇಲೆ ಸೈಬರ್ ದಾಳಿಯ ಬಗ್ಗೆ ವರದಿಯಾಗಲು ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಜಿಪಿಎಸ್‌ನ ಮೇಲೆ ದಾಳಿ ನಡೆಸಿದ ಘಟನೆಗಳು ದಿಲ್ಲಿ, ಮುಂಬೈ, ಕೋಲ್ಕತಾ, ಅಮೃತಸರ, ಹೈದರಾಬಾದ್, ಬೆಂಗಳೂರು ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ವರದಿಯಾಗಿವೆ.

ವಾರ್ತಾ ಭಾರತಿ 11 Dec 2025 9:23 pm

Maharashtra | 3 ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ: ಎನ್‌ಸಿಪಿ-ಎಸ್‌ಸಿಪಿ ಸಂಸದೆ ಫೌಝಿಯಾ ಖಾನ್

ಹೊಸದಿಲ್ಲಿ, ಡಿ. 11: ಮಹಾರಾಷ್ಟ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಪಿ-ಎಸ್‌ಸಿಪಿ ಸಂಸದೆ ಫೌಝಿಯಾ ಖಾನ್ ರಾಜ್ಯಸಭೆಯಲ್ಲಿ ಗುರುವಾರ ಹೇಳಿದ್ದಾರೆ. ಸರಕಾರ ರೈತರ ಬಗ್ಗೆ ಕಾಳಜಿ ವಹಿಸಲು ಆರಂಭಿಸುವುದು ಯಾವಾಗ? ಎಂದು ಅವರ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಖಾನ್, ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು. ಕೇವಲ ಮೂರು ತಿಂಗಳಲ್ಲಿ 766 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರಕಾರ ವಿಧಾನ ಸಭೆಗೆ ತಿಳಿಸಿದೆ ಎಂದು ಅವರು ಹೇಳಿದರು. ಇದರಲ್ಲಿ 676 ಕುಟುಂಬಗಳು ಸರಕಾರದ ಪರಿಹಾರ ಸ್ವೀಕರಿಸಿವೆ. 200 ಕುಟುಂಬಗಳು ಪರಿಹಾರ ನಿರಾಕರಿಸಿವೆ ಎಂದು ಅವರು ಹೇಳಿದರು. ಸರಕಾರ 31,628 ಕೋ. ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ವರ್ಷ ಭಾರೀ ಮಳೆ ಹಾಗೂ ವ್ಯಾಪಕ ನೆರೆಯ ಹಿನ್ನೆಲೆಯಲ್ಲಿ ನೆರವು ನೀಡುವ ಉದ್ದೇಶವನ್ನು ಈ ಪ್ಯಾಕೇಜ್ ಹೊಂದಿತ್ತು. ಆದರೆ, ವಾಸ್ತವ ಭಿನ್ನವಾಗಿತ್ತು ಎಂದು ಅವರು ಹೇಳಿದ್ದಾರೆ. ಹೆಚ್ಚುವರಿ ನೆರವು ಕೋರಿದ ಮಹಾರಾಷ್ಟ್ರದ ಪ್ರಸ್ತಾವವನ್ನು ಸಚಿವಾಲಯ ಸ್ವೀಕರಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಗೆ ತಿಳಿಸಿದ್ದಾರೆ ಎಂದು ಅವರು ಗಮನ ಸೆಳೆದರು. ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ ರೈತರಿಗೆ 4,176 ಕೋ.ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 3,180 ಕೋ.ರೂ. 1,13,455 ರೈತರ ಬ್ಯಾಂಕ್ ಖಾತೆಗಳಿಗೆ 82 ಕೋ. ರೂ. ಜಮೆ ಮಾಡಲಾಗಿದೆ ಎಂದು ಖಾನ್ ಅವರು ಚೌಹಾಣ್ ಅವರ ಪ್ರತಿಕ್ರಿಯೆ ಉಲ್ಲೇಖಿಸಿ ಹೇಳಿದರು.  

ವಾರ್ತಾ ಭಾರತಿ 11 Dec 2025 9:22 pm

ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಮೋದಿ ಮಾತುಕತೆ; ಜಾಗತಿಕ ಶಾಂತಿ, ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ರಷ್ಯಾದಿಂದ ತೈಲ ಖರೀದಿ ಬೆನ್ನಲ್ಲೇ ಭಾರತದ ಮೇಲೆ ಅಮೆರಿಕದ ಟ್ರಂಪ್‌ ಸರ್ಕಾರ ಶೇ.50ಸುಂಕ ವಿಧಿಸಿತ್ತು. ಆ ಬಿಕ್ಕಟ್ಟಿನ ಮಧ್ಯೆ ಕೆಲ ದಿನಗಳ ಹಿಂದೆ ಪುಟಿನ್ ಭಾರತಕ್ಕೆ ಬಂದಿದ್ದರೂ ಈ ಗೊಂದಲಗಳ ಮಧ್ಯೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರ ಜೊತೆ ಆತ್ಮೀಯ ಮಾತುಕತೆ ನಡೆಸಿದ್ದಾಗಿ ಎಕ್ಸ್‌ನಲ್ಲಿ ಟ್ವೀಟ್‌ ಹಂಚಿಕೊಂಡಿದ್ದಾರೆ. ಜಾಗತಿಕ ಶಾಂತಿ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ

ವಿಜಯ ಕರ್ನಾಟಕ 11 Dec 2025 9:22 pm

2026ರ ಟಿ-20 ವಿಶ್ವಕಪ್ ಟೂರ್ನಿಯ ಟಿಕೆಟ್‌ ಗಳ ಮಾರಾಟ ಆರಂಭ

ಹೊಸದಿಲ್ಲಿ, ಡಿ.11: ಮುಂಬರುವ 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ. ಕ್ರಿಕೆಟ್ ಅಭಿಮಾನಿಗಳು ಗುರುವಾರ ಸಂಜೆ 6:45ರಿಂದ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಲು ಆರಂಭಿಸಬಹುದು ಎಂದು ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ. 10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ. ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್‌ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಖಾಮುಖಿಯಾಗಲಿದೆ. ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ.

ವಾರ್ತಾ ಭಾರತಿ 11 Dec 2025 9:21 pm

SIR | ಮತದಾರರ ಪಟ್ಟಿಯಿಂದ ಒಂದು ಅರ್ಹ ಹೆಸರು ತೆಗೆದರೂ ಧರಣಿ: ಮಮತಾ ಬ್ಯಾನರ್ಜಿ ಎಚ್ಚರಿಕೆ

ಕೋಲ್ಕತಾ, ಡಿ. 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ, ಒಬ್ಬ ಅರ್ಹ ಮತದಾರನ ಹೆಸರನ್ನು ಅಳಿಸಿ ಹಾಕಿದರೂ ನಾನು ಧರಣಿ ನಡೆಸುತ್ತೇನೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ನಾನು ಈವರೆಗೆ ನನ್ನ ಮತದಾರ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಅವರು ಹೇಳಿದರು. ‘‘ನಾನು ನನ್ನ ಪೌರತ್ವವನ್ನು ಗಲಭೆಕೋರರ ಪಕ್ಷಕ್ಕೆ ಸಾಬೀತುಪಡಿಸಬೇಕಾದ ಅಗತ್ಯವಿದೆಯೇ?’’ ಎಂದು ಅವರು ಪ್ರಶ್ನಿಸಿದರು. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಭಾರತೀಯ ಚುನಾವಣಾ ಆಯೋಗವು ಈ ಕಸರತ್ತು ನಡೆಸುತ್ತಿದೆ ಎಂದು ಆರೋಪಿಸಿದೆ. ಕೃಷ್ಣಾನಗರ್‌ ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ವಿಶೇಷ ತೀವ್ರ ಪರಿಷ್ಕರಣೆಯ ವಿಚಾರಣೆಯ ವೇಳೆ, ಜಿಲ್ಲಾಧಿಕಾರಿಗಳ ಕಾರ್ಯದ ಮೇಲ್ವಿಚಾರಣೆಗಾಗಿ ದಿಲ್ಲಿಯಿಂದ ಬಿಜೆಪಿ ಪರವಾಗಿ ಇರುವ ಅಧಿಕಾರಿಗಳನ್ನು ಚುನಾವಣಾ ಆಯೋಗವು ಕಳುಹಿಸುತ್ತಿದೆ ಎಂದು ಹೇಳಿದರು. ಪಶ್ಚಿಮಬಂಗಾಳದಲ್ಲಿ 2026ರ ಮೊದಲಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ‘‘ಬಂಗಾಳಿಗಳನ್ನು ಬಾಂಗ್ಲಾದೇಶಿಗಳು ಎಂಬುದಾಗಿ ಕರೆದು ಅವರನ್ನು ಬಂಧನ ಶಿಬಿರಗಳಿಗೆ ಕಳುಹಿಸಲು ಕೇಂದ್ರ ಗೃಹ ಸಚಿವರು ಏನು ಬೇಕಾದರೂ ಮಾಡಬಹುದು’’ ಎಂದು ಅವರು ಹೇಳಿದರು. ಚುನಾವಣಾ ಆಯೋಗವು ಈ ಕಸರತ್ತನ್ನು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಅಸ್ತ್ರವಾಗಿ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ‘‘ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ಅಳಿಸಿಹೋದರೂ ನಾನು ಧರಣಿ ಮಾಡುತ್ತೇನೆ. ಪಶ್ಚಿಮಬಂಗಾಳದಲ್ಲಿ ಬಂಧನ ಕೇಂದ್ರಗಳಿರುವುದಿಲ್ಲ. ಅವರು ಮತಗಳಿಗಾಗಿ ಎಷ್ಟು ಹಪಹಪಿಸುತ್ತಿದ್ದಾರೆ ಎಂದರೆ, ಚುನಾವಣೆಗೆ ಎರಡು ತಿಂಗಳುಗಳು ಇರುವಾಗ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಮಾಡುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಹೇಳಿದರು.

ವಾರ್ತಾ ಭಾರತಿ 11 Dec 2025 9:20 pm

ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ: ಸಿಎಂ ಸಿದ್ದರಾಮಯ್ಯ

ಬೆಳಗಾವಿ(ಸುವರ್ಣವಿಧಾನಸೌಧ): ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು, ಪೊಲೀಸ್ ಇಲಾಖೆಯಲ್ಲಿ ಶೇ.3ರಷ್ಟು ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗುರುವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರ ಒಲಂಪಿಕ್ಸ್, ಪ್ಯಾರಾ-ಒಲಂಪಿಕ್ಸ್, ಕಾಮನ್‍ವೆಲ್ತ್, ಏಶಿಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ 13 ಕ್ರೀಡಾಪಟುಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ 70 ಕಾನ್‍ಸ್ಟೇಬಲ್‍ಗಳಿಗೆ ನೇರ ನೇಮಕಾತಿ ಹಾಗೂ 14 ಪಿಎಸ್ಸೈಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು. ಅಲ್ಲದೇ, ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು, ಪೊಲೀಸ್ ಇಲಾಖೆಯಲ್ಲಿ ಶೇ.3ರಷ್ಟು ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕಬ್ಬಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ವಾರ್ತಾ ಭಾರತಿ 11 Dec 2025 9:12 pm

Ind Vs SA T20 | ಭಾರತಕ್ಕೆ 214 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಮುಲ್ಲನಪುರ: ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಪಿಸಿಬಿ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾವು ಭಾರತಕ್ಕೆ 214 ರನ್ ಗಳ ಗುರಿ ನೀಡಿದೆ.

ವಾರ್ತಾ ಭಾರತಿ 11 Dec 2025 9:09 pm

ಐಷಾರಾಮಿ ಕಟ್ಟಡದ ಫೋಟೋ ಹಾಕಿ, ಗೆಸ್ ಮಾಡಿ ನೋಡೋಣ ಎಂದ ಪ್ರಿಯಾಂಕ್ ಖರ್ಗೆ : ಯಾವುದಿದು ಬಿಲ್ಡಿಂಗ್?

RSS Delhi Office : ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಟ್ಟಡದ ಫೋಟೋ ಜೊತೆ ರಾಜ್ಯ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ಈ ಫೋಟೋ ನೋಡಿ ಮಿಸ್ಟೇಕ್ ಮಾಡಿಕೊಳ್ಳಬೇಡಿ ಎಂದು ಎಕ್ಸ್ ಮೂಲಕ ವ್ಯಂಗ್ಯವಾಡಿದ್ದಾರೆ.

ವಿಜಯ ಕರ್ನಾಟಕ 11 Dec 2025 9:08 pm

ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ಭಾರಿ ಹಿನ್ನಡೆ

ರಾಜ್ಯದ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬಡವರಿಗೆ ಕಡಿಮೆ ಬೆಲೆಗೆ ಔಷಧಿ ನೀಡುವಲ್ಲಿ ಸರಕಾರದ ವಿಭಾಗ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದು ಸರಕಾರಕ್ಕೆ ಹಿನ್ನಡೆಯಾಗಿದ್ದು, ಜನೌಷಧಿ ಕೇಂದ್ರಗಳು ಸಾರ್ವಜನಿಕರ ಆರೋಗ್ಯ ಹಕ್ಕಿಗೆ ಪೂರಕವಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಜಯ ಕರ್ನಾಟಕ 11 Dec 2025 9:01 pm

2 ಲಕ್ಷ ಸರಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರಕಾರ ಬದ್ಧ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಳಗಾವಿ(ಸುವರ್ಣವಿಧಾನಸೌಧ): ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2 ಲಕ್ಷ ಸರಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರಕಾರ ಬದ್ಧವಾಗಿದೆ. ನಾವು ಇದಕ್ಕಾಗಿ ನಮ್ಮದೇ ಆದ ಸಮಯ ನಿಗದಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿಗೆ ಪ್ರತಿಕ್ರಿಯೆ ನೀಡಿದರು. ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಅವರು ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಯವರು ಉತ್ತರಿಸಿದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ಸ್ಪಷ್ಟನೆ ನೀಡಿದರು. ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಒಳಮೀಸಲಾತಿ ವಿಚಾರ ಬಾಕಿ ಇರುವ ಕಾರಣಕ್ಕೆ ಒಂದಷ್ಟು ಭರ್ತಿ ಕೆಲಸ ಬಾಕಿಯಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ವಾರ್ತಾ ಭಾರತಿ 11 Dec 2025 8:57 pm

ಕುಂದಾಪುರ ಯುಜಿಡಿ ಸಮಸ್ಯೆ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ; ಸಾರ್ವಜನಿಕರೊಂದಿಗೆ ಚರ್ಚೆ

ಕುಂದಾಪುರ, ಡಿ.11: ಸುಮಾರು 11 ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ಯುಜಿಡಿ ಕಾಮಗಾರಿಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿವೆ ಎಂಬ ದೂರಿಗೆ ಸ್ಪಂದಿಸಿರುವ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ಥಳ ಪರಿಶೀಲನೆಗಾಗಿ ಗುರುವಾರ ಕುಂದಾಪುರದ ಪುರಸಭಾ ವ್ಯಾಪ್ತಿಯ ಹುಂಚಾರಬೆಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಂಚಾರುಬೆಟ್ಟು ಎಂಬಲ್ಲಿ ನಿರ್ಮಿಸಲುದ್ದೇಶಿಸಿರುವ ಯುಜಿಡಿ ಕಾಮಗಾರಿಯ ಎಸ್‌ಟಿಪಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದ ಬಳಿಕ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಕರೆದ ಸಭೆಯಲ್ಲಿ ಯುಜಿಡಿ ಕಾಮಗಾರಿ, ಎಸ್‌ಟಿಪಿ ರಚನೆ ಸಮಸ್ಯೆಗಳ ಕುರಿತಂತೆ ಸಾಕಷ್ಟು ಪ್ರಸ್ತಾಪಗಳು ಕೇಳಿಬಂದವು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಹುಂಚಾರಬೆಟ್ಟು ಎಂಬಲ್ಲಿನ ಜನನಿಬೀಡ ಪ್ರದೇಶದಲ್ಲಿ ಯುಜಿಡಿ ಕಾಮಗಾರಿ ಎಸ್ಟಿಪಿ ಘಟಕ ತೆರೆಯುವುದು ಸೂಕ್ತವಲ್ಲ. ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡುವುದಕ್ಕೆ ವಿರೋಧವಿಲ್ಲ. ಆದರೆ ಜನವಸತಿ ಪ್ರದೇಶಕ್ಕಿಂತ 500 ಮೀ. ದೂರದಲ್ಲಿ ನಿರ್ಮಿಸಿದಲ್ಲಿ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಯುಜಿಡಿ ಕಾಮಗಾರಿ ಅನುಷ್ಠಾನದ ಸಮಯದಿಂದಲೂ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ತರಾತುರಿ ನಿರ್ಧಾರಗಳು ಜನರನ್ನು ಹೈರಾಣಾಗಿಸಿದೆ ಎಂದವರು ಸ್ಥಳೀಯರ ಅಭಿಪ್ರಾಯಗಳನ್ನು ಜಿಲ್ಲಾಡಳಿತದ ಮುಂದಿರಿಸಿದರು. ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ್ ಖಾರ್ವಿ ಮಾತನಾಡಿ, 23 ವಾರ್ಡ್‌ಗಳ ತ್ಯಾಜ್ಯದ ನೀರನ್ನು ಪಂಚಗಂಗಾವಳಿ ಹೊಳೆಗೆ ಬಿಡಲಾಗುತ್ತಿದ್ದು, ಆ ವಾರ್ಡ್‌ನಿಂದ ಗೆದ್ದು ಸ್ಥಳೀಯ ಜನರ ಕಷ್ಟಕ್ಕೆ ಸ್ಪಂದಿಸಲಾಗದೆ, ಉತ್ತರವನ್ನೂ ನೀಡಲಾಗುತ್ತಿಲ್ಲ. ಸಮಸ್ಯೆಗಳನ್ನು ತಕ್ಷಣ ಸರಕಾರ, ಜಿಲ್ಲಾಡಳಿತ ಬಗೆಹರಿಸಬೇಕೆಂದು ಒತ್ತಾಯಿಸಿದರು. ಮಾಜಿ ಪುರಸಭಾ ಸದಸ್ಯ ಶ್ರೀಧರ್ ಮಾತನಾಡಿ, ಯುಜಿಡಿ ಕಾಮಗಾರಿ ಸಲುವಾಗಿ ಅಗೆದ ರಸ್ತೆಗಳು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು. ಮಾಜಿ ಸದಸ್ಯೆ ದೇವಕಿ ಸಣ್ಣಯ್ಯ, ನಾಗರಿಕರಾದ ಸುನೀಲ್ ಪೂಜಾರಿ ಕೋಡಿ ಯುಜಿಡಿ ಕಾಮಗಾರಿಯಿಂದ ಆಗುತ್ತಿರುವ ವಿವಿಧ ಸಮಸ್ಯೆಗಳ ಕುರಿತಂತೆ ಮಾತನಾಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಕುಂದಾಪುರದ 23 ವಾರ್ಡ್‌ಗಳ ಪೈಕಿ 5-6 ವಾರ್ಡ್‌ಗಳನ್ನು ಯುಜಿಡಿ ಯೋಜನೆ ಇನ್ನೂ ತಲುಪಿಲ್ಲ. ಹಾಗಿದ್ದರೆ ಎಲ್ಲ ವಾರ್ಡ್, ಎಲ್ಲ ಮನೆಗಳನ್ನು ಇದು ತಲುಪುವ ಬಗೆ ಹೇಗೆ ಎಂದು ಪ್ರಶ್ನಿಸಿದರಲ್ಲದೇ, ಲಭ್ಯ ಅನುದಾನದಲ್ಲಿ ಕಾಮಗಾರಿ ಮಾಡಬೇಕಿದೆ. ಹುಂಚಾರಬೆಟ್ಟಿನಲ್ಲಿ ಎಸ್ಟಿಪಿ ನಿರ್ಮಾಣಕ್ಕೆ ವಿರೋಧ ಇದೆ. ಪುರಸಭೆ ವ್ಯಾಪ್ತಿಯ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕರು, ಯುಜಿಡಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು. ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ. ಮಾತನಾಡಿ, ಪುರಸಭೆ ವ್ಯಾಪ್ತಿಗೊಳಪಡುವ ಮೂರು ವಿದ್ಯಾರ್ಥಿನಿಲಯಗಳ ತ್ಯಾಜ್ಯಗಳನ್ನು ಅಂಬೇಡ್ಕರ್ ನಗರದ ಕಾಲನಿ ಬಳಿ ಬಿಡುತ್ತಿದ್ದು, ಇಡೀ ನಗರ ಸ್ವಚ್ಚಗೊಳಿಸುವ ಪೌರಕಾರ್ಮಿಕರ ಕುಟುಂಬಕ್ಕೆ ಹೀಗಾದರೆ ಹೇಗೆ ಎಂದು ಅಲ್ಲಿನ ಸಮಸ್ಯೆಯ ಗಂಭೀರತೆಯನ್ನು ಸಭೆಯ ಮುಂದಿಟ್ಟರು. ದಸಂಸ ಮುಖಂಡ ವಿಜಯ್ ಕೆ.ಎಸ್. ಮಾತನಾಡಿ, ಕುಂದಾಪುರ ಅಂಬೇಡ್ಕರ್ ಭವನ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ದುರಸ್ಥಿಮಾಡಿ ಎಂದು ಆಗ್ರಹಿಸಿದರು. ಕೊಲ್ಲೂರಿನಿಂದ ಬಂದ ವಿಶೇಷಚೇತನ ಮಹಿಳೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 8:53 pm

IND vs SA T20 | ಒಂದೇ ಓವರ್‌ ನಲ್ಲಿ 7 ವೈಡ್; ಅರ್ಷದೀಪ್‌ ಅನಗತ್ಯ ದಾಖಲೆ!

ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತೀಯ ವೇಗಿ ಅರ್ಷದೀಪ್ ಸಿಂಗ್‌ ಅವರು ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇನಿಂಗ್ಸ್‌ ನ 11ನೇ ಓವರ್‌ ನಲ್ಲಿ ಬೌಲಿಂಗ್‌ ಗೆ ಬಂದ ಅರ್ಷದೀಪ್, ಒಂದೇ ಓವರ್‌ ನಲ್ಲಿ 7 ವೈಡ್‌ಗಳನ್ನು ಎಸೆದು ಗಮನಸೆಳೆದರು. ಇದರಿಂದ ಟಿ20 ಕ್ರಿಕೆಟ್‌ ನಲ್ಲಿ ಒಂದೇ ಓವರ್‌ ನಲ್ಲಿ ಅತಿಹೆಚ್ಚು ವೈಡ್ ಹಾಕಿದ ಬೌಲರ್‌ ಎಂಬ ಅಪ್ರತಿಷ್ಠಿತ ದಾಖಲೆಯು ಅವರಿಗೆ ಸೇರಿತು. ಜೊತೆಗೆ, ಒಂದೇ ಓವರ್‌ನಲ್ಲಿ 13 ಎಸೆತಗಳ ಬೌಲಿಂಗ್ ಮಾಡಿದ ದಾಖಲೆಯನ್ನು ಅವರು ಅಫ್ಗಾನಿಸ್ತಾನದ ನವೀನ್ ಉಲ್ ಹಕ್ ಅವರೊಂದಿಗೆ ಹಂಚಿಕೊಂಡಿದ್ದಾರೆ. 2024ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನವೀನ್ ಇದೇ ಮಾದರಿಯಲ್ಲಿ 13 ಎಸೆತಗಳನ್ನು ಹಾಕಿದ್ದರು. ಪಾಕಿಸ್ತಾನ ವಿರುದ್ಧ 2021ರಲ್ಲಿ 12 ಎಸೆತ ಹಾಕಿದ ದಕ್ಷಿಣ ಆಫ್ರಿಕಾದ ಸಿಸಂಡಾ ಮಗಲ ಈ ಪಟ್ಟಿಯಲ್ಲಿ ಮುಂದಿದ್ದಾರೆ.

ವಾರ್ತಾ ಭಾರತಿ 11 Dec 2025 8:51 pm

ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರಗಳ ಸ್ಥಗಿತ ಆದೇಶ ರದ್ದು; ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ನಿರ್ದೇಶಿಸಿ ಕಳೆದ ಮೇ 14ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಧಾರವಾಡ ಪೀಠ ರದ್ದುಪಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಎಲ್‌. ರಾಕೇಶ್‌ ಮಹಾಲಿಂಗಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಪೀಠ, ಬಡವರಿಗೆ ನೀಡಲಾಗುವ ಔಷಧಿಗಳನ್ನು ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ನೀಡುತ್ತಿರಲಿ, ಅದರಲ್ಲಿ ಸರ್ಕಾರದ ಒಂದು ವಿಭಾಗವು ಹಸ್ತಕ್ಷೇಪ ಮಾಡಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ಮೌಖಿಕವಾಗಿ ನುಡಿಯಿತು. ಅರ್ಜಿದಾರರ ವಾದ: ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಜನೌಷಧಿ ಕೇಂದ್ರಗಳ ಮಾಲೀಕರ ಜತೆ ಸಮಾಲೋಚಿಸದೆ ಅಥವಾ ಪೂರ್ವ ಎಚ್ಚರಿಕೆ ನೀಡದೆ ತರಾತುರಿಯಲ್ಲಿ ಸರ್ಕಾರ ಈ ಆದೇಶ ಜಾರಿಗೊಳಿಸಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಒಂದು ಸಣ್ಣ ಕೇಂದ್ರವು ಉಚಿತ ಔಷಧ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸರ್ಕಾರ ಹೇಳುವುದನ್ನು ಒಪ್ಪಲಾಗದು. ಸರ್ಕಾರ ಮೊದಲಿಂದಲೂ ಉಚಿತವಾಗಿ ಔಷಧ ನೀಡುತ್ತಿದೆ. ಜನೌಷಧಿ ಕೇಂದ್ರಗಳಿಂದ ಸರ್ಕಾರದ ಉದ್ದೇಶಕ್ಕೆ ಅಡ್ಡಿಯಾಗುತ್ತಿಲ್ಲ, ಸರ್ಕಾರ ಮತ್ತು ಅರ್ಜಿದಾರರಿಬ್ಬರೂ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿವೆ ಎಂದು ವಿವರಿಸಿದ್ದರು. ಮೂಲಸೌಕರ್ಯ ಅಭಿವೃದ್ಧಿ, ಔಷಧ ದಾಸ್ತಾನು, ಉಪಕರಣಗಳು ಮತ್ತು ಪೀಠೋಪಕರಣಗಳು, ಸಿಬ್ಬಂದಿ ವೇತನಗಳು, ಜನೌಷಧಿ ಕೇಂದ್ರ ನಡೆಸುವ ಉದ್ದೇಶಕ್ಕಾಗಿ ಅಗತ್ಯ ಪರವಾನಗಿ ಹಾಗೂ ಅನುಮತಿ ಪಡೆಯಲು ಅರ್ಜಿದಾರರು ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಸರ್ಕಾರದ ವಿವಾದಿತ ಆದೇಶವು ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯ ಅರ್ಜಿದಾರರ ಜೀವನೋಪಾಯದ ಹಕ್ಕು ಮತ್ತು ಸಂವಿಧಾನದ ಪರಿಚ್ಛೇದ 21ರ ಅಡಿಯ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿದ್ದರು. ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ರಾಜ್ಯ ಸರ್ಕಾರವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧವನ್ನು ಪೂರೈಸಲು ನಿರ್ಧರಿಸಿದೆ. ಆದ್ದರಿಂದ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಕಾರ್ಯಾಚರಣೆ ಅನಿವಾರ್ಯವಲ್ಲ. ಔಷಧಿ ಕೇಂದ್ರಗಳು ಹೊರಗೆ ಕಾರ್ಯನಿರ್ವಹಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಸರ್ಕಾರಿ ಆಸ್ಪತ್ರೆ ಆವರಣದೊಳಗಿನ ಸರ್ಕಾರಿ ಭೂಮಿಯಲ್ಲಿ ಮಾತ್ರ ಕೇಂದ್ರಗಳ ಕಾರ್ಯಾಚರಣೆ ನಿಲ್ಲಿಸಲು ಆದೇಶಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಆಕ್ಷೇಪವೇನು? ಜನೌಷಧಿ ಕೇಂದ್ರಗಳು ಶೇ 50-90 ರಿಯಾಯಿತಿ ದರದಲ್ಲಿ ಜೆನೆರಿಕ್‌ ಔಷಧಿಗಳನ್ನು ಒದಗಿಸುತ್ತವೆ. ಇದರಿಂದಾಗಿ ಬಡತನ ರೇಖೆಗಿಂತ ಕೆಳಗಿರುವವರು, ಸ್ಥಿರ ಆದಾಯ ಹೊಂದಿರುವ ಹಿರಿಯ ನಾಗರಿಕರು, ದಿನಗೂಲಿ ಕಾರ್ಮಿಕರು ಮತ್ತು ಔಷಧಿಗಳ ಅಗತ್ಯವಿರುವ ದೀರ್ಘಕಾಲದ ರೋಗಿಗಳಿಗೆ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಆದ್ದರಿಂದ, ಇದು ಯಾವುದೇ ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಜನೌಷಧಿ ಕೇಂದ್ರಗಳನ್ನು ಮುಚ್ಚುವುದು ನಾಗರಿಕರ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ವಾರ್ತಾ ಭಾರತಿ 11 Dec 2025 8:50 pm

ಉಡುಪಿ | ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸಂಶೋಧನೆಗೆ ಅವಕಾಶವಿದೆ : ಡಾ.ಗುರುಬಸವರಾಜ

ಉದ್ಯಾವರ ಎಸ್ಡಿಎಂ ಕಾಲೇಜಿನಲ್ಲಿ ಶಿಷ್ಯೋಪನಯನ ಸಂಸ್ಕಾರ

ವಾರ್ತಾ ಭಾರತಿ 11 Dec 2025 8:37 pm

ಭಾರತದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಪವನ್‌ ಕಲ್ಯಾಣ್

ತಮಿಳುನಾಡಿನ ದೇವಸ್ಥಾನವೊಂದರ ದೀಪ ಬೆಳಗುವ ವಿಚಾರದಲ್ಲಿ ಹಿಂದೂಗಳ ಪರ ತೀರ್ಪು ನೀಡಿದ ನ್ಯಾಯಮೂರ್ತಿಯ ಪದಚ್ಯುತಿಗೆ ಸಂಸದರು ಯತ್ನಿಸುತ್ತಿರುವುದನ್ನು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. ಜಾತಿ, ಪ್ರಾದೇಶಿಕ ಭೇದಗಳಿಂದಾಗಿ ಹಿಂದೂಗಳು ಬಹುಸಂಖ್ಯಾತರು ಎಂಬುದು ಒಂದು ಮಿಥ್ಯೆಯಾಗಿದೆ ಎಂದಿರುವ ಅವರು, ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆಗೆ ಕರೆ ನೀಡಿದ್ದಾರೆ.

ವಿಜಯ ಕರ್ನಾಟಕ 11 Dec 2025 8:35 pm

ಬ್ರಹ್ಮಾವರ | ದೇಶದ ಆರ್ಥಿಕಾಭಿವೃದ್ಧಿಗೆ ಗ್ರಾಮೀಣ ಭಾರತದ ಅಭಿವೃದ್ಧಿ ಮುಖ್ಯ : ಟಿ.ಎಸ್.ಎನ್.ಪೂರ್ಣಾನಂದ

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಬ್ಯಾಂಕ್ ಮಿತ್ರ ತರಬೇತಿಗೆ ಚಾಲನೆ

ವಾರ್ತಾ ಭಾರತಿ 11 Dec 2025 8:31 pm

ಮಲ್ಪೆ | ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿ ಉದ್ಘಾಟನೆ

ಮಲ್ಪೆ, ಡಿ.11: ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ವತಿಯಿಂದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಸಹಯೋಗದಲ್ಲಿ ನಡೆಯುವ ಮೂರು ತಿಂಗಳ ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿ ಶಿಬಿರ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ ನ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿಯು ಕನ್ನಡ ಕಲಿಕಾ ಆಸ್ತಕರಿಗೆ ಉತ್ತಮ ಅವಕಾಶವಾಗಿದ್ದು, ಪ್ರತಿಯೊಬ್ಬರು ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು. ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ., ಮುಖ್ಯ ಹಣಕಾಸು ಅಧಿಕಾರಿ ಶಂಕರ್ ನಟರಾಜ್, ಉಪಪ್ರಧಾನ ವ್ಯವಸ್ಥಾಪಕ ಎಂ.ಅಂಬಲವನನ್, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ, ಶಿಕ್ಷಕಿ ದೀಪಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಾರ್ತಾ ಭಾರತಿ 11 Dec 2025 8:27 pm

ಟಿ20 ವಿಶ್ವಕಪ್ ಪಂದ್ಯ ಕ್ರೀಡಾಂಗಣದಲ್ಲೇ ನೋಡುವ ಮನಸ್ಸುಂಟಾ? ನಂಬಲಸಾಧ್ಯವಾದ ಟಿಕೆಟ್ ಬೆಲೆ ನಿಗದಿಪಡಿಸಿದೆ ಐಸಿಸಿ

ನೀವಿದನ್ನು ನಂಬಲೇಬೇಕು. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಬೆಲೆ ಕೇವಲ 100 ರೂಪಾಯಿ! ಜನಸಾಮಾನ್ಯರೂ ಕ್ರಿಕೆಟ್ ಅನ್ನು ಮೈದಾನಗಳಿಗೆ ಬಂದು ಆಸ್ವಾದಿಸಲು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ಐಸಿಸಿ ಇಂತಹದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ನಡೆದ ಮಹಿಳಾ ಏಕದಿನ ವಿಶ್ವಕಪ್ ಟಿಕೆಟ್ ದರವನ್ನು 100 ರೂಪಾಯಿ ಇಟ್ಟದ್ದು ನೆನಪಿರಬಹುದು. ಇದರಿಂದಾಗಿ ಕ್ರೀಡಾಂಗಣಗಳತ್ತ ಜನ ತೆರಳಿದ್ದರು. ಇದೀಗ ಕ್ರಿಕೆಟ್ ಪ್ರಿಯರಿಂದ ಅಂಥಹದ್ದೇ ಪ್ರತಿಕ್ರಿ ಯೆಯನ್ನು ಐಸಿಸಿ ಎದುರು ನೋಡುತ್ತಿದೆ.

ವಿಜಯ ಕರ್ನಾಟಕ 11 Dec 2025 8:23 pm

ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಹಾಡನ್ನು ದೇಶ ವಿಭಜಿಸಲು ಬಳಸಲಾಗುತ್ತಿದೆ: ನಟ ಕಿಶೋರ್ ಕುಮಾರ್

ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಮತ್ತು ಭಾರತದಾದ್ಯಂತ ಜನರನ್ನು ಒಗ್ಗೂಡಿಸಿದ(ವಂದೇ ಮಾತರಂ) ಹಾಡನ್ನು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು, ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಟ ಕಿಶೋರ್ ಕುಮಾರ್ ಖಂಡಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ‘ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಚಿತ್ರ’ವನ್ನು ‘ಜೈ ಶ್ರೀರಾಮ್ ನಿಂದ ವಂದೇ ಮಾತರಂವರೆಗೆ’ ಎಂದು ಶೀರ್ಷಿಕೆ ನೀಡಿ, ಅವರು ಪೋಸ್ಟ್ ಮಾಡಿದ್ದಾರೆ. ಇತರರನ್ನು ಪ್ರೀತಿಯಿಂದ ಸ್ವಾಗತಿಸಲು ಬಳಸುತ್ತಿದ್ದ ಅಭಿವ್ಯಕ್ತಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡು ಅದನ್ನು ಯುದ್ಧಘೋಷವಾಗಿ, ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ, ಅಧಿಕಾರ ಹಿಡಿಯುವ ಸುಲಭ ಸಾಧನವಾಗಿ ಪರಿವರ್ತಿಸಲಾಗಿದೆಯೋ, ಹಾಗೆಯೇ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ನಿಜವಾದ ದೇಶಭಕ್ತರು ನಿರ್ಮಿಸಿದ ಎಲ್ಲವನ್ನೂ ಮಾರುತ್ತಿರುವ ಅಧಿಕಾರದಲ್ಲಿರುವ ನಿಷ್ಪ್ರಯೋಜಕ ಜನರು, ಈಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಹಾಡನ್ನು ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕತೆ ಮತ್ತು ಕುಸಿಯುತ್ತಿರುವ ಪ್ರಜಾಪ್ರಭುತ್ವದ ಸಂಸ್ಥೆಗಳು, ನಕಲಿ ಜಿಡಿಪಿ ಮತ್ತು ರೈತರಿಗೆ ನೀಡಿದ ನಕಲಿ ಭರವಸೆಗಳು, ಆರೋಗ್ಯ ಮತ್ತು ನಿರುದ್ಯೋಗ, ಅಮೆರಿಕ ಮತ್ತು ಚೀನಾ, ಮಣಿಪುರ ಮತ್ತು ಲಡಾಖ್, ವಿಜ್ಞಾನಿಗಳು ಮತ್ತು ವಿದ್ವಾಂಸರ ಅಕ್ರಮ ಬಂಧನಗಳು ಮುಂತಾದ ಎಲ್ಲ ಅಗತ್ಯ ಮತ್ತು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹೊತ್ತಿಗೆ ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು ನಾವು ಅರ್ಥಮಾಡಿಕೊಂಡಿರಬೇಕಿತ್ತು. ಅವರು ಮಾಡಬಹುದಾದದ್ದು ಇಷ್ಟೇ ‘ವಿಭಜಿಸು ಇಲ್ಲ, ದಿಕ್ಕು ತಪ್ಪಿಸು’ ಎಂದು ನಟ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಾರ್ತಾ ಭಾರತಿ 11 Dec 2025 8:10 pm

ನಿನ್ನೆ ಅಮಿತ್‌ ಶಾ, ಇಂದು ನಡ್ಡಾ; ರಾಜ್ಯಸಭೆಯಲ್ಲಿ ಅಬ್ಬರಿಸಿದ ಬಿಜೆಪಿ ಅಧ್ಯಕ್ಷ! ಸಂಸತ್ ಕಲಾಪದ ಪ್ರಮುಖಾಂಶಗಳು

ಸಂಸತ್ತಿನ ಚಳಿಗಾಲದ ಅಧಿವೇಶನದ 9ನೇ ದಿನವಾದ ಗುರುವಾರ, ಲೋಕಸಭೆಯು ಪ್ರಮುಖ ಆರ್ಥಿಕ ವಿಷಯಗಳತ್ತ ಗಮನಹರಿಸಿದರೆ, ರಾಜ್ಯಸಭೆಯು ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ 2025-26ರ ಸಾಲಿನ ಪೂರಕ ಅನುದಾನಗಳ ಕುರಿತು ಚರ್ಚೆ ನಡೆದರೆ, ರಾಜ್ಯಸಭೆಯಲ್ಲಿ 'ವಂದೇ ಮಾತರಂ' ಗೀತೆಯ ಮೇಲಿನ ಚರ್ಚೆಯನ್ನು ಜೆ.ಪಿ. ನಡ್ಡಾ ಅವರು ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯೊಂದಿಗೆ ಮುಕ್ತಾಯಗೊಳಿಸಿದರು. ಇದೇ ವೇಳೆ 'ಒಂದು ರಾಷ್ಟ್ರ, ಒಂದು ಚುನಾವಣೆ' ವರದಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.

ವಿಜಯ ಕರ್ನಾಟಕ 11 Dec 2025 8:01 pm

50% Tariffs: ಅಮೇರಿಕಾದ ನಂತರ ಮತ್ತೊಂದು ದೇಶದಿಂದ ಭಾರತದ ಮೇಲೆ ಶೇ 50% ಸುಂಕ!

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಒಂದೊಂದೇ ಸುಂಕವನ್ನು ಭಾರತದ ಮೇಲೆ ವಿಧಿಸುತ್ತಿರುವಾಗಲೇ ಭಾರತಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ಅಮೇರಿಕಾ ಶೇ.50 ರಷ್ಟು ಸುಂಕ ವಿಧಿಸಿದ ನಂತರ ಇದೀಗ ಮೆಕ್ಸಿಕೊದ ಸೆನೆಟ್ ಭಾರತದ ಮೇಲೆ ದುಬಾರಿ ಶೇ 50 ರಷ್ಟು ತೆರಿಗೆ ವಿಧಿಸುವುದಕ್ಕೆ ಮುಂದಾಗಿದೆ. ಜಾಗತಿಕ ವ್ಯಾಪಾರ ಯುದ್ಧದ ನಡುವೆ

ಒನ್ ಇ೦ಡಿಯ 11 Dec 2025 7:59 pm

ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ... Smriti Mandhana

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ ಆಗಿರುವ ಸ್ಮೃತಿ ಮಂಧಾನ ಬದುಕಿನಲ್ಲಿ ಭಾರಿ ದೊಡ್ಡ ಬಿರುಗಾಳಿ ಎದ್ದಿದ್ದು, ಸ್ಮೃತಿ ಮಂಧಾನ ಮದುವೆ ಆಗಬೇಕಿದ್ದ ಹುಡುಗ ಮೋಸ ಮಾಡಿ ಬೇರೆ ಹುಡುಗಿ ಜೊತೆಗೆ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಈ ನಡುವೆ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಮಾಜಿ ಹೆಂಡತಿ ಜೊತೆಗೆ ಸ್ಮೃತಿ

ಒನ್ ಇ೦ಡಿಯ 11 Dec 2025 7:37 pm

ದ.ಕ.ಜಿಲ್ಲೆಯಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗ ಸರಕಾರಿ ಆಸ್ಪತ್ರೆ : ಸಿಎಂಗೆ ಉಸ್ತುವಾರಿ ಸಚಿವರ ಮನವಿ

ಮಂಗಳೂರು,ಡಿ.1: ದ.ಕ.ಜಿಲ್ಲೆಯಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗ ಸರಕಾರಿ ಆಸ್ಪತ್ರೆ ಸ್ಥಾಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ಅಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ತಾನು ಜಿಲ್ಲೆಗೆ ಭೇಟಿ ನೀಡುತ್ತಿರುವ ಸಂದರ್ಭಗಳಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳ ಅಗತ್ಯ ಚಿಕಿತ್ಸೆಗೆ ಪ್ರತ್ಯೇಕವಾಗಿ ಸರಕಾರಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಕೋರಿದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹೊರವಲಯದ ಮೂಡುಶೆಡ್ಡೆಯ ಕ್ಷಯರೋಗಗಳ ಆಸ್ಪತ್ರೆಯ ಆವರಣದಲ್ಲಿ ಲಭ್ಯರುವ ಜಾಗದಲ್ಲಿ ಶ್ರೀಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗಳ ಒಂದೊಂದು ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ವಾರ್ತಾ ಭಾರತಿ 11 Dec 2025 7:36 pm

ಉಡುಪಿ | ಡಿ.14ರಂದು ಶೀರೂರು ಪರ್ಯಾಯದ ಧಾನ್ಯ ಮುಹೂರ್ತ

ಉಡುಪಿ, ಡಿ.11: 2026ರ ಜ.18ರಂದು ನಡೆಯುವ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರ ಪ್ರಥಮ ಪರ್ಯಾಯದ ಪೂರ್ವ ಸಿದ್ಧತೆಗಳಲ್ಲಿ ಕೊನೆಯದಾದ ಧಾನ್ಯ ಮುಹೂರ್ತ ಡಿ.14ರ ರವಿವಾರ ಮುಂಜಾನೆ 7:45ಕ್ಕೆ ನಡೆಯಲಿದೆ ಎಂದು ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ. ರಥಬೀದಿಯಲ್ಲಿರುವ ಶೀರೂರು ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪರ್ಯಾಯ ಅವಧಿಯಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ಉಣಬಡಿಸಲು ಅಕ್ಕಿಗಾಗಿ ಭತ್ತದೊಂದಿಗೆ ಬೇಳೆಕಾಳುಗಳನ್ನು ಸಂಗ್ರಹಿಸಿಡುವುದೇ ಈ ಮುಹೂರ್ತದ ಉದ್ದೇಶ ಎಂದರು. ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಜ.18ರ ಬೆಳಗಿನ ಜಾವ ಸರ್ವಜ್ಞ ಪೀಠಾರೋಹಣ ಮಾಡಿ ಶ್ರೀಕೃಷ್ಣಪೂಜಾ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರಗಳ ತೀರ್ಥ ಯಾತ್ರೆಯಲ್ಲಿರುವ ಶ್ರೀಗಳು ಜನವರಿ ಮೊದಲ ವಾರ ಪುರಪ್ರವೇಶ ಮಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮಧುಕರ ಮುದ್ರಾಡಿ, ನಂದನ್ ಜೈನ್ ಹಾಗೂ ಮೋಹನ ಭಟ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 7:32 pm

ಸದನ ಹೈಲೈಟ್ಸ್: ಸಿದ್ದು ದಾಖಲೆ, ಕಾಣದ ಕುರ್ಚಿಗೆ ಹಂಬಲಿಸೋ ಮನ! ಯತ್ನಾಳ್, ಸುನೀಲ್ ಸ್ವಾರಸ್ಯದ ಮಾತು, ಕಾಗೆ ಖಡಕ್ ನುಡಿ

‌ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಾಲ್ಕನೇ ದಿನವಾದ ಇಂದು ಡಿ.11ರಂದು ಉತ್ತರ ಕರ್ನಾಟಕದ ಚರ್ಚೆಯ ವೇಳೆ ಬಿಜೆಪಿ ಮತ್ತು ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಸಚಿವರ ನಡುವೆ ಮಾತುಕತೆ ನಡೆಯಿತು. ಡಿಕೆ ಶಿವಕುಮಾರ್ ಅವರ ಕುರ್ಚಿ ಆಸೆ ಮತ್ತು ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿ ಕುರಿತು ಬಿಜೆಪಿ ನಾಯಕರು ವ್ಯಂಗ್ಯವಾಡಿದರು. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಕಾಂಗ್ರೆಸ್ ಶಾಸಕ ರಾಜು ಕಾಗೆ ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯ ಕರ್ನಾಟಕ 11 Dec 2025 7:30 pm

ಕುಂದಾಪುರ | ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಶಿವಕುಮಾರ್ ಅಧಿಕಾರ ಸ್ವೀಕಾರ

ಕುಂದಾಪುರ, ಡಿ.11: ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾಗಿದ್ದ ಶಿವಕುಮಾರ್ ಅವರನ್ನು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾಗಿ ಡಿ.3 ರಂದು ವರ್ಗಾವಣೆ ಮಾಡಿದ್ದು, ಗುರುವಾರ ಅವರು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಂಟ್ವಾಳಕ್ಕೂ ಮುನ್ನ ಅವರು ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.

ವಾರ್ತಾ ಭಾರತಿ 11 Dec 2025 7:29 pm

ಕುಂದಾಪುರ | ಹೈನುಗಾರಿಕೆ ಸ್ಥಳೀಯ ಆರ್ಥಿಕತೆಗೆ ವರದಾನ : ಜಯಕರ ಶೆಟ್ಟಿ ಇಂದ್ರಾಳಿ

ಕುಂದಾಪುರ, ಡಿ.11: ಬೇರೆಲ್ಲ ಕ್ಷೇತ್ರ, ಉದ್ಯಮಗಳಲ್ಲಿ ಹಳ್ಳಿಯ ಹಣ ಪಟ್ಟಣಕ್ಕೆ ಹೋಗುತ್ತವೆ. ಆದರೆ ಹೈನುಗಾರಿಕೆಯಿಂದ ಮಾತ್ರ ಪಟ್ಟಣದ ಹಣ ಹಳ್ಳಿಗೆ ಬರುತ್ತಿದೆ. ಹೈನುಗಾರಿಕೆ ನಮ್ಮ ಸ್ಥಳೀಯ ಆರ್ಥಿಕತೆಗೆ ವರದಾನವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ. ಗುರುವಾರ ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎನ್. ಮಂಜಯ್ಯ ಶೆಟ್ಟಿ ಮಾತನಾಡಿ, ನಮ್ಮಲ್ಲಿ ಹಾಲಿಗೆ 42 ರೂ. ಇದ್ದು, ಬೇರೆ ರಾಜ್ಯಗಳಲ್ಲಿ 50 ರೂ.ಗಿಂತ ಹೆಚ್ಚಿದೆ. ಹೈನುಗಾರರಿಗೆ ಸರಕಾರದ 5 ರೂ. ಸಬ್ಸಿಡಿ ನಿಯಮಿತವಾಗಿ ಸಿಗುತ್ತಿಲ್ಲ. ಒಂದೋ ಸಬ್ಸಿಡಿ ನಿರಂತರ ಕೊಡಬೇಕು. ಇಲ್ಲದಿದ್ದರೆ ಹಾಲಿನ ದರವನ್ನು ಕನಿಷ್ಠ 52 ರೂ.ಗೆ ಏರಿಸಬೇಕು ಎಂದವರು ಒತ್ತಾಯಿಸಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಮಮತಾ ಆರ್. ಶೆಟ್ಟಿ ಮಾತನಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಹಕಾರ ಚಳುವಳಿ ಕುರಿತು ಹಾಗೂ ಪಶು ವೈದ್ಯ, ಒಕ್ಕೂಟದ ನಿವೃತ್ತ ಉಪ ವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಆಧುನಿಕ ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದ ಬಗ್ಗೆ ಉಪನ್ಯಾಸ ನೀಡಿದರು. ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 11 Dec 2025 7:27 pm

Siddaramaiah: ಸಿದ್ದರಾಮಯ್ಯ ಹೆಲಿಕಾಪ್ಟರ್​ ಹಾರಾಟ ಬಲು ದುಬಾರಿ! ಸರ್ಕಾರದಿಂದ ಖರ್ಚಾಗಿದ್ದೆಷ್ಟು ಗೊತ್ತಾ?

ಬೆಳಗಾವಿ, ಡಿಸೆಂಬರ್‌ 11: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರವಾಸದ ವೆಚ್ಚ ತೀವ್ರ ಅಚ್ಚರಿ ಮೂಡಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಈವರೆಗೆ ಅಂದರೆ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್​​ ಪ್ರಯಾಣ ವೆಚ್ಚದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಾಗಿ ಯಾವ ಸ್ಥಳಕ್ಕೆ ಪ್ರವಾಸ ಕೈಗೊಂಡರು ಹೆಚ್ಚಾಗಿ ಹೆಲಿಕಾಪ್ಟರ್​​ನಲ್ಲೇ

ಒನ್ ಇ೦ಡಿಯ 11 Dec 2025 7:25 pm

ಉಡುಪಿ | ಡಿ.13ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ಉಡುಪಿ, ಡಿ.11: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಆವರಣದ ಶ್ರೀವಿಶ್ವೇಶತೀರ್ಥ ಶ್ರೀಪಾದ ವೇದಿಕೆಯಲ್ಲಿ ಡಿ.13ರ ಶನಿವಾರ ಸಂಜೆ 5:45ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ ಎಂದು ಉಡುಪಿ ಘಟಕದ ಜೊತೆ ಕಾರ್ಯದರ್ಶಿ ಹಾಗೂ ಸಂಘಟನಾ ಕಾರ್ಯದರ್ಶಿ ಮುರುಳಿ ಕಡೆಕಾರ್ ತಿಳಿಸಿದ್ದಾರೆ. ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಾರಂಭಿಕ 45 ನಿಮಿಷಗಳ ಕಾಲ ನಡೆಯುವ ಸಭಾ ಕಾರ್ಯಕ್ರಮವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು ಎಂದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜದ ಎಲ್ಲಾ ಸ್ತರಗಳ ಪ್ರಮುಖರು, ಗಣ್ಯರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯರಿಗೆ ಅರ್ಪಿಸಲಾಗಿದೆ ಎಂದು ಮುರಳಿ ಕಡೆಕಾರ್ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ, ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಫ್ಯೂಷನ್ ನಡೆಯಲಿದೆ. ಬೊಂಬೆ ವಿನೋದಾವಳಿಯೊಂದಿಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನವಿರಲಿದೆ. ಪ್ರೇಕ್ಷಕರಿಗಾಗಿ 15,000ಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರಲಿದೆ. ಎಲ್ಲಾ ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯ ಗೊಳ್ಳಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಗೌರವಾಧ್ಯಕ್ಷ ವಿ.ಜಿ.ಶೆಟ್ಟಿ, ಕಾರ್ಯದರ್ಶಿ ಭುವನಪ್ರಸಾದ್ ಹೆಗ್ಡೆ, ಕಾರ್ಯಕ್ರಮ ಸಂಘಟಕರಾದ ನಿದೀಶ್ ತೋಳಾರ್, ಅಂಬರೀಷ್, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 7:23 pm

ತಪ್ಪು ಮಾಡಿದ್ದಾರೆಂದು ಕ್ರಮ ಕೈಗೊಂಡರೆ ಅಧಿಕಾರಗಳ ಗ್ಯಾಲರಿಯೇ ಖಾಲಿಯಾಗಲಿದೆ: ಸ್ಪೀಕರ್ ಯು.ಟಿ. ಖಾದರ್ ಹೀಗೆ ಹೇಳಿದ್ದು ಏಕೆ?

ಬೆಳಗಾವಿ (ಸುವರ್ಣ ವಿಧಾನಸೌಧ): ‘ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಕ್ರಮ ಕೈಗೊಳ್ಳುತ್ತಾ ಹೋದರೆ ವಿಧಾನಸಭೆಯಲ್ಲಿನ ಅಧಿಕಾರಿಗಳ ಗ್ಯಾಲರಿಯೇ ಖಾಲಿ ಖಾಲಿಯಾಗಲಿದೆ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು, ಸದಸ್ಯರೊಬ್ಬರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಪ್ರಸಂಗ ನಡೆಯಿತು. ಗುರುವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ‘ವಿಧಾನಸಭೆ ಬದಲಿಗೆ ವಿಧಾನ ಪರಿಷತ್’ ಎಂದು ತಪ್ಪಾಗಿ ನಮೂದಿಸಿ ಉತ್ತರ ನೀಡಿದ್ದರು. ಇದರಿಂದ ಆಕ್ರೋಶಿತರಾದ ಶರಣಗೌಡ ಕಂದಕೂರ್, ನಾನು ವಿಧಾನಸಭೆ ಸದಸ್ಯ. ಆದರೆ, ಅಧಿಕಾರಿಗಳು ವಿಧಾನ ಪರಿಷತ್ ಎಂದು ತಪ್ಪಾಗಿ ಉತ್ತರ ನೀಡಿದ್ದಾರೆಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ, ನನಗೆ ನೀಡಿದ ಉತ್ತರದಲ್ಲಿ ವಿಧಾನಸಭೆ ಎಂದು ಇದೆ. ಆ ಪ್ರತಿಯನ್ನು ತಮಗೆ ಕಳುಹಿಸುತ್ತೇನೆ ಎಂದರು. ತಪ್ಪಾಗಿ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶರಣಗೌಡ ಕಂದಕೂರ್ ಆಗ್ರಹಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ತಪ್ಪಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡದರೆ ಅಧಿಕಾರಿಗಳ ಗ್ಯಾಲರಿ ಖಾಲಿಯಾಗಲಿದೆ ಎಂದು ಪ್ರತಿಕ್ರಿಯೆ ನೀಡಿದರು.

ವಾರ್ತಾ ಭಾರತಿ 11 Dec 2025 7:18 pm

30,000 ಅಡಿಗಳಷ್ಟು ಮೇಲೆ ವಿಮಾನ ಸಿಬ್ಬಂದಿ ಜೀವ ಉಳಿಸಿದ ಇಬ್ಬರು ಭಾರತೀಯ ವೈದ್ಯರು

ಇಥಿಯೋಪಿಯಾದಿಂದ ಭಾರತಕ್ಕೆ ಹೊರಟಿದ್ದ ಇಥಿಹಾದ್ ಏರ್‌ಲೈನ್ಸ್ ವಿಮಾನದಲ್ಲಿ ಸೇವಾ ಸಿಬ್ಬಂದಿಯೊಬ್ಬರು 30,000 ಅಡಿ ಎತ್ತರದಲ್ಲಿ ಅಸ್ವಸ್ಥರಾದರು. ಡಾ. ಗೋಪಿನಾಥನ್ ಮತ್ತು ಡಾ. ಸುದರ್ಶನ್ ಬಾಲಾಜಿ ಅವರು ತಕ್ಷಣವೇ ಸ್ಪಂದಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಅವರ ಪ್ರಾಣ ಕಾಪಾಡಿದರು. ಚೆನ್ನೈಗೆ ವಿಮಾನ ತಲುಪಿದ ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ವೈದ್ಯರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿಜಯ ಕರ್ನಾಟಕ 11 Dec 2025 7:12 pm

IND Vs SA- ಯಾವ ಸ್ಪೆಷಲ್ ಟ್ರಿಕ್ಸ್ ಅನ್ನೂ ಮಾಡದ ಸೂರ್ಯಕುಮಾರ್ ಯಾದವ್! ಟಾಸ್ ಗೆದ್ದಿದ್ದಕ್ಕೆ ಖುಷಿಯೋ ಖುಷಿ!

ಕಳೆದೆರಡು ವರ್ಷಗಳಿಂದ ಭಾರತಕ್ಕೆ ಅಂಟಿದ್ದ ಟಾಸ್ ಕಳಂಕ ನಿಧಾನಕ್ಕೆ ಕಳಚುವ ಲಕ್ಷಣ ತೋರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಟಾಸ್ ಗೆದ್ದ ಮೇಲೆ ಇದೀಗ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಸಹ ಟಾಸ್ ಗೆದ್ದಿದ್ದಾರೆ. ನ್ಯೂ ಚಂಡೀಗಢದಲ್ಲಿ ಗುರುವಾರ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಫೀಲ್ಡಿಂಗ್ ಆನ್ನು ಆಯ್ದುಕೊಂಡಿತು. ಕೆಎಲ್ ರಾಹುಲ್ ಅವರು ಎಡಗೈಯಲ್ಲಿ ಟಾಸ್ ಎಸೆದೆ ಯಶಸ್ಸು ಸಿಕ್ಕಿತ್ತು. ಅದೇ ತಂತ್ರವನ್ನು ತಾನೂ ಅಳವಡಿಸಿಕೊಳ್ಳುವುದಾಗಿ ಅವರು ಕಳೆದ ಪಂದ್ಯಕ್ಕೂ ಮುನ್ನ ತಿಳಿಸಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಅವರು ಟಾಸ್ ಗೆಲ್ಲುವ ಸಲುವಾಗಿ ಯಾವ ಹೊಸ ಟ್ರಿಕ್ಸ್ ಅನ್ನೂ ಅಳವಡಿಸಲಿಲ್ಲ. ನಾಣ್ಯವನ್ನು ಹಿಡಿದು ಸ್ವಲ್ಪ ಬಗ್ಗಿ ಬಲಗೈನಲ್ಲೇ ಎತ್ತರಕ್ಕೆ ಹಾರಿಸಿದರಷ್ಟೇ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡನ್ ಮಾರ್ಕಂ ಅವರು ಟೇಲ್ ಎಂದು ಹೇಳಿದರು. ಆದರೆ ಬಿದ್ದಿದ್ದು ಹೆಡ್ ಆಗಿದ್ದರಿಂದ ಭಾರತ ತಂಡದ ನಾಯಕನ ಮುಖದಲ್ಲಿ ಸಂತಸ ಅರಳಿತು. ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ಸರ್ ಪ್ರೈಸ್ ಸರ್ ಪ್ರೈಸ್ ಎಂದು 2 ಬಾರಿ ಉದ್ಗಾರ ತೆಗೆದರು. ಟಾಸ್ ಗೆದ್ದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಅವರು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುತ್ತಿರುವುದಾಗಿ ಮಾಹಿತಿ ನೀಡಿದರು. ಹೀಗಾಗಿ ಅವರನ್ನು ಈ ಪಂದ್ಯದಿಂದಲೂ ಹೊರಗಿಡಲಾಗಿದೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ),, ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್. ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಐಡೆನ್ ಮಾರ್ಕಂ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೆರಾ, ಜಾರ್ಜ್ ಲಿಂಡೆ, ಮಾರ್ಕೊ ಜಾನ್ಸೆನ್, ಲುಥೋ ಸಿಪಾಮ್ಲಾ, ಲುಂಗಿ ಎನ್ಗಿಟ್ನೆ ಬಾರ್ಟ್‌ಡಿ

ವಿಜಯ ಕರ್ನಾಟಕ 11 Dec 2025 6:57 pm

ಭಾರತದ ಮೇಲೆ 50% ಸುಂಕ ಹೇರಿದ ಅಮೆರಿಕ ನೆರೆ ರಾಷ್ಟ್ರ, ಆತಂಕದಲ್ಲಿ ₹9,000 ಕೋಟಿ ಮೌಲ್ಯದ ರಫ್ತು!

ಅಮೆರಿಕದ ನಂತರ ಇದೀಗ ಮೆಕ್ಸಿಕೋ ಸರ್ಕಾರ ಕೂಡ ಭಾರತದ ರಫ್ತು ವಹಿವಾಟಿಗೆ ಭಾರೀ ಆಘಾತ ನೀಡಿದೆ. ಮೆಕ್ಸಿಕೋ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರದ ಭಾರತ, ಚೀನಾ, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಿಂದ ಆಮದಾಗುವ ಆಯ್ದ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ. ಇದರಿಂದಾಗಿ ಭಾರತದ ವಾಹನ ರಫ್ತು ಉದ್ಯಮಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗುವ ಸಾಧ್ಯತೆಯಿದ್ದು, ಮಾರುತಿ ಸುಜುಕಿ, ವೋಕ್ಸ್‌ವ್ಯಾಗನ್ ಮತ್ತು ಹ್ಯುಂಡೈನಂತಹ ಕಂಪನಿಗಳ ರಫ್ತು ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ.

ವಿಜಯ ಕರ್ನಾಟಕ 11 Dec 2025 6:57 pm