ವಿಟ್ಲ | ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಉಮೀದ್ ವಕ್ಫ್ ಮಾಹಿತಿ ಕಾರ್ಯಾಗಾರ
ವಿಟ್ಲ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಉಮೀದ್ ವಕ್ಫ್ ಮಾಹಿತಿ ಕಾರ್ಯಾಗಾರ ವಿಟ್ಲದ ಬ್ರೈಟ್ ಆಡಿಟೋರಿಯಂ ನಲ್ಲಿ ಮಂಗಳವಾರ ನಡೆಯಿತು. ಮಲಾರ್ ಅರಸ್ತಾನ ಜುಮಾ ಮಸೀದಿ ಖತೀಬ್ ಶಫೀಕ್ ಕೌಸರಿ ಅವರು ದುವಾಃ ಮೂಲಕ ಚಾಲನೆ ನೀಡಿದರು. ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಯುಕ್ತ ಜಮಾಅತ್ ಮತ್ತು ವಕ್ಫ್ ಗೆ ಅವಿನಾಭಾವ ಸಂಬಂಧವಿದ್ದು, ಅವರ ಸೂಚನೆಯಂತೆ ಸರಕಾರದ ವಿವಿಧ ಯೋಜನೆಗಳನ್ನು ಮುಸ್ಲಿಂ ಸಮುದಾಯಕ್ಕೆ ತಲುಪಿಸುವ ಕಾರ್ಯ ನಮ್ಮ ಸಂಸ್ಥೆ ಮಾಡಿಕೊಂಡು ಬರುತ್ತಿದೆ. ಅದರಂತೆ ಉಮೀದ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಕಾರ್ಯದರ್ಶಿ ಅಬೂಬಕ್ಕರ್ ನೋಟರಿ, ಸದಸ್ಯರಾದ ಕೆ.ಎಸ್ ಮುಹಮ್ಮದ್, ಬಿ.ಎ ಮುಹಮ್ಮದ್ ಬಂಟ್ವಾಳ, ಆಶಿಕ್ ಕುಕ್ಕಾಜೆ, ಲತೀಫ್ ನೇರಳಕಟ್ಟೆ, ಬ್ರೈಟ್ ಆಡಿಟೋರಿಯಂ ನ ಆರ್.ಕೆ ಅಬ್ದುಲ್ಲ ಹಾಜಿ, ವಕ್ಫ್ ಇಲಾಖೆಯ ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು. ಶಫೀಕ್ ಕೌಶರಿ, ಬಿಸಿ ಒನ್ ನ ಶಾಫಿ ಸಜಿಪ, ಮುಸ್ತಾಫ, ವಿಟ್ಲ ಮೀಡಿಯಾ ಸೆಂಟರ್ ನ ಮುಹಮ್ಮದ್ ಅಲಿ ವಿಟ್ಲ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಸದಸ್ಯ ರಶೀದ್ ವಿಟ್ಲ ಅವರು ಸ್ವಾಗತಿಸಿ, ನಿರೂಪಿಸಿದರು.
ಪ್ರಿಯಾಂಕ್ ಖರ್ಗೆ ಇರಲಾರದೆ ಇರುವೆ ಬಿಟ್ಟುಕೊಂಡು ಈಗ ಕಚ್ಚಿಸಿಕೊಂಡು ಓಡಾಡುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್ಸಿನವರು ಒಂದು ಕಡೆ ನಾಯಕತ್ವ ಬದಲಾವಣೆ ಆಗಬೇಕು ಎನ್ನುತ್ತಾರೆ. ಮತ್ತೊಂದು ಕಡೆ ಸಚಿವಸಂಪುಟ ಪುನಾರಚನೆ ಮಾತು ಕೇಳಿಸುತ್ತಿದೆ. ಗುಜರಾತ್ನಲ್ಲಿ ಬೆಳಿಗ್ಗೆ ರಾಜೀನಾಮೆ ಕೊಟ್ಟು ಎರಡನೇ ದಿನ ಬೆಳಿಗ್ಗೆ ಬೇರೆ ಸಚಿವಸಂಪುಟವೇ ರಚನೆ ಆಯಿತು. ಇಲ್ಲಿ ಒಂದು ವರ್ಷದಿಂದ ಸಚಿವಸಂಪುಟ ಪುನಾರಚನೆ ದೊಡ್ಡ ಕಾರ್ಯಕ್ರಮದಂತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ವಿರುದ್ಧನೂ ವಾಗ್ದಾಳಿ ನಡೆಸಿದರು. ಮತ್ತಷ್ಟು ವಿವರ ಇಲ್ಲಿದೆ.
ಮಕ್ಕಳಿಗಾಗಿ ಆಸ್ತಿ ಮಾಡದೆ, ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಬಿ.ಎಂ.ಅಬ್ಬಾಸ್ ಅಲಿ
ಜಮೀಯ್ಯತುಲ್ ಫಲಾಹ್ ನಿಂದ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ವಿತರಣಾ ಕಾರ್ಯಕ್ರಮ
ಇಲ್ಲಿದೆ ಮಾಹಿತಿ...
ಮಂಗಳೂರು | ಮರಾಠ ಅಭಿವೃದ್ಧಿ ನಿಗಮ: ಹೊಲಿಗೆ ಯಂತ್ರ ವಿತರಣಾ ಯೋಜನೆಗೆ ಅರ್ಜಿ ಆಹ್ವಾನ
ಮಂಗಳೂರು,ನ.18: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನ ಹೊಲಿಗೆ ಯಂತ್ರ ವಿತರಣಾ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್)ವರೆಗೆ ಬರುವ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-3ಬಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು). ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು ಹಾಗೂ ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವಷರ್ಗಳು ಹಾಗೂ ಗರಿಷ್ಠ 55 ವರ್ಷಗಳನ್ನು ಮೀರಿರಬಾರದು. ಒಂದು ಕುಟುಂಬದಲ್ಲಿ ಓರ್ವ ಸದಸ್ಯರನ್ನು ಮಾತ್ರ ಈ ಸೌಲಭ್ಯಕ್ಕೆ ಪರಿಗಣಿಸಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.98,000 ಹಾಗೂ ನಗರ ಪ್ರದೇಶದಲ್ಲಿ ರೂ. 1,20.000 ಗಳನ್ನು ಮೀರಿರಬಾರದು. ಅಂಗವಿಕಲ ಮಹಿಳೆಯರಿಗೆ ಶೇ.5 ರಷ್ಟು ಮೀಸಲಿರಿಸಲಾಗುತ್ತದೆ. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ33ರಷ್ಟು ವಿಕಲಚೇತನರಿಗೆ ಶೇ.5ರಷ್ಟು ಹಾಗೂ ತೃತೀಯ ಲಿಂಗಳಿಗೆ ಶೇ.1ರಷ್ಟು ಅಂಗವಿಕಲ ಮಹಿಳೆಯರಿಗೆ ಶೇ.2ರಷ್ಟನ್ನು ಮೀಸಲಿರಿಸಲಾಗುತ್ತದೆ. ವಿಧವೆಯರಿಗೆ, ಪರಿತ್ಯಕ್ತ ಮಹಿಳೆಯರಿಗೆ ಎಚ್ಐವಿ ಪೀಡಿತರಿಗೆ 35 ವರ್ಷ ವಯೋಮಿತಿ ಮೀರಿದ ಅವಿವಾಹಿತ ಮಹಿಳೆಯರಿಗೆ ಶೇ.2ರಷ್ಟನ್ನು ಮೀಸಲಿರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಡಿ.6 ಕೊನೆಯ ದಿನ. ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಮಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸಬೇಕು. ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರು ಸಹ ಆನ್ಲೈನ್ ನಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯಲ್ಲಿ ಒಂದು ಸಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್ಸೈಟ್ https://kmcdc.karnataka.gov.in ಅಥವಾ ನಿಗಮದ ಸಹಾಯವಾಣಿ: 8867537799/ ದೂ.ಸಂ:080-29903994 ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಲವಂತವಾಗಿ ಮುತ್ತಿಕ್ಕಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ಆರೋಪಿ ನಾಲಿಗೆ ಕಚ್ಚಿ ತುಂಡರಿಸಿದ ಯುಪಿ ಯುವತಿ
ಉತ್ತರ ಪ್ರದೇಶದ ಕಾನ್ಪುರದಲ್ಲಿ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ ಮುತ್ತಿಕ್ಕಲು ಯತ್ನಿಸಿದ ವ್ಯಕ್ತಿಯ ನಾಲಿಗೆಯನ್ನು ಯುವತಿಯೊಬ್ಬಳು ಕಚ್ಚಿ ತುಂಡರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಯುವತಿಯ ವಿವಾಹ ಬೇರೊಬ್ಬರೊಂದಿಗೆ ನಿಶ್ಚಯವಾಗಿದ್ದರಿಂದ ಅಸಮಾಧಾನಗೊಂಡಿದ್ದ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಯ ನಂತರ, ಸಂತ್ರಸ್ತ ಯುವತಿಯ ದೂರಿನ ಮೇರೆಗೆ ಆರೋಪಿಯ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು | ನ. 20ರಂದು ಪಡುಪೆರಾರ ಗ್ರಾಮಸಭೆ
ಮಂಗಳೂರು,ನ.18: ಮಂಗಳೂರು ತಾಲೂಕು ಪಡುಪೆರಾರ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ 3 ನೇ ಹಂತದ ಗ್ರಾಮ ಸಭೆಯು ನವೆಂಬರ್ 20 ರಂದು ಬೆಳಗ್ಗೆ 11 ಗಂಟೆಗೆ ಪಡುಪೆರಾರ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು | ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು,ನ.18: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ 2025-26ನೇ ಸಾಲಿನ ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಉದ್ಯೋಗಿನಿ ಹಾಗೂ ಎಸ್ಸಿಪಿ/ಟಿಎಸ್ಪಿ ಯೋಜನೆಗಳಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ್ ಒನ್, ಮಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 15. ಹೆಚ್ಚಿನ ಮಾಹಿತಿಗೆ ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಹಾಗೂ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಂಗಳೂರು ನಗರ (ದೂ.ಸಂ 0824-2959809, ಪುತ್ತೂರು-08251-230388, ಮಂಗಳೂರು ಗ್ರಾಮಾಂತರ-0824-2263199, ಬಂಟ್ವಾಳ 08255-232465, ವಿಟ್ಲ 08255-238080, ಬೆಳ್ತಂಗಡಿ-08256-295134, ಸುಳ್ಯ-08257-230239 ಸಂಪರ್ಕಿಸಬಹುದು ಎಂದು ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Nandini Ghee: ತಿರುಪತಿ ಲಡ್ಡುಗಾಗಿ ಕರ್ನಾಟಕದ ನಂದಿನಿ ತುಪ್ಪಕ್ಕೆ ಹೆಚ್ಚುವರಿ ಬೇಡಿಕೆ ಇಟ್ಟ ಟಿಟಿಡಿ
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ವಿತರಿಸುವ ಲಡ್ಡು ಪ್ರಸಾದವು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಸಲು ಕಲಬೆರಕೆ ಪದಾರ್ಥಗಳನ್ನ ಬಳಸಿರುವ ಆರೋಪ ಕೇಳಿಬಂದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣ ಸಂಬಂಧ ತಿರುಪತಿ ಲಡ್ಡುಗಾಗಿ ನಕಲಿ ತುಪ್ಪ ಪೂರೈಸಿದ್ದವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ನ ತುಪ್ಪಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಡಿಜಿಟಲ್ ಅರೆಸ್ಟ್ ಆತಂಕದ ಈ ದಿನಮಾನಗಳಲ್ಲಿ ಸಂಜೀವಿನಿಯಾಗಿ ’ಇ-ಜಾಗೃತಿ’ ವೇದಿಕೆ!
Lifeline for Digital Arrest : ಸರಳ OTP-ಆಧಾರಿತ ನೋಂದಣಿಯೊಂದಿಗೆ NRIಗಳೂ ದೂರು ಸಲ್ಲಿಕೆ, ಡಿಜಿಟಲ್-ಆಫ್ಲೈನ್ ಶುಲ್ಕ ಪಾವತಿ, ವರ್ಚುವಲ್ ವಿಚಾರಣೆಗಳಲ್ಲಿ ಭಾಗವಹಿಸುವಿಕೆ, ಆನ್ಲೈನ್ನಲ್ಲೇ ದಾಖಲೆಗಳ ವಿನಿಮಯ ಮತ್ತು ನೈಜ ಸಮಯದಲ್ಲಿ ಪ್ರಕರಣಗಳ ಟ್ರ್ಯಾಕ್ಗೆ ಅವಕಾಶವಾಗಿದೆ. ಡಿಜಿಟಲ್ ವಂಚನೆಯ ಕೇಸ್ ಹೆಚ್ಚುತ್ತಿರುವ ಈ ಸಮಯದಲ್ಲಿ ಇದು ಸಂಜೀವಿನಿಯಾಗಿ ಹೊರಹೊಮ್ಮುತ್ತಿದೆ.
ಐಇಇಇ ಕಾನ್ಫರೆನ್ಸ್ ನಲ್ಲಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಗೆದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರು
ಕಾರ್ಕಳ : ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು, ಭಾರತೀಯ ತಾಂತ್ರಿಕ ಸಂಸ್ಥೆ (IIT) ಧಾರವಾಡವು ಆಯೋಜಿಸಿದ್ದ ಪ್ರತಿಷ್ಠಿತ ಐಇಇಇ ಇಂಜಿನಿಯರಿಂಗ್ ಇನ್ಫೊರ್ಮ್ಯಾಟಿಕ್ಸ್ ಸಮ್ಮೇಳನ (ICEI 2025) ದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದಿದ್ದಾರೆ. “VR-Based Crop Health Visualization and Analysis Using Multispectral Images for Precision Agriculture” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಟ್ಟೆಯ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ವಿಭಾಗದ ಯಶಸ್ ಆರ್. ಅವರು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಭೋಜರಾಜ ಬಿ.ಇ. ಮತ್ತು ಎನ್.ಐ.ಟಿ.ಕೆ ಸುರತ್ಕಲ್ ನ ಜಲ ಸಂಪನ್ಮೂಲ ಹಾಗೂ ಓಶನ್ ಇಂಜಿನಿಯರಿಂಗ್ ವಿಭಾಗದ ಡಾ.ಪೃಥ್ವಿರಾಜ್ ಯು. ಅವರ ಸಹಯೋಗದೊಂದಿಗೆ ಮಾಡಲಾದ ಸಂಶೋಧನಾ ಕಾರ್ಯಕ್ಕೆ ಈ ಪ್ರಶಸ್ತಿಯು ಲಭಿಸಿದೆ. ಈ ಸಂಶೋಧನೆಯು ಬಹು-ವರ್ಣಚಿತ್ರಗಳ (Multispectral Imagery) ಬಳಕೆಯಿಂದ ಬೆಳೆಗಳ ಆರೋಗ್ಯವನ್ನು ಪ್ರಸ್ತುತ ಸಮಯದಲ್ಲಿ ವರ್ಚುವಲ್ ರಿಯಾಲಿಟಿ (VR) ಮೂಲಕ ವೀಕ್ಷಣೆ ಮತ್ತು ವಿಶ್ಲೇಷಣೆ ಮಾಡಲು ಹೊಸ ಚೌಕಟ್ಟನ್ನು ಪರಿಚಯಿಸುತ್ತದೆ. ಇದು ನಿಖರತೆ ಹಾಗೂ ಸುಸ್ಥಿರ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಈ ಇಂಟರ್ನ್ಶಿಪ್ ಕಾರ್ಯವನ್ನು NITK ಸುರತ್ಕಲ್ನ ಸಿಸ್ಟಮ್ ಡಿಸೈನ್ ಕೇಂದ್ರ (CSD) ದಲ್ಲಿ ಡಾ. ಪೃಥ್ವಿರಾಜ್ ಯು. ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಗಿದ್ದು, ನಿಟ್ಟೆ ಅಪ್ಲೈಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೇಂದ್ರ (NCAIA) ದ ಸಹಕಾರವನ್ನು ಪಡೆಯಲಾಗಿದೆ. ಈ ಯೋಜನೆಗೆ ನಿಟ್ಟೆಯ ಡಾ. ಭೋಜರಾಜ ಬಿ. ಇ. ಅವರ ಮಾರ್ಗದರ್ಶನ ಪ್ರಮುಖಪಾತ್ರ ವಹಿಸಿದೆ. ಈ ಪ್ರಶಸ್ತಿ, ನಿಟ್ಟೆ ತಾಂತ್ರಿಕ ಕಾಲೇಜಿನ ಅಂತರವಿದ್ಯಾ ಸಂಶೋಧನೆ ಹಾಗೂ ನವೋದ್ಯಮಕ್ಕೆ ನೀಡಲಾಗಿರುವ ಬೆಂಬಲ ಮತ್ತು ಪ್ರೋತ್ಸಾಹವನ್ನು ವಿವರಿಸುತ್ತದೆ.
ಮಂಗಳೂರು | ಲಿಂಗ ಸಮಾನತೆ ಮತ್ತು ನ್ಯಾಯ ಕುರಿತು ತರಬೇತಿ
ಮಂಗಳೂರು, ನ.18: ಬೆಂಗಳೂರಿನ ಕೆಆರ್ಒಎಸ್ಎಸ್ ಮತ್ತು ಮಂಗಳೂರಿನ ಸಿಒಡಿಪಿ ವತಿಯಿಂದ ಮಹಿಳಾ ಸದೃಢೀಕರಣ ಯೋಜನೆಯ ಘಟಕದಡಿ ಲಿಂಗ ಸಮಾನತೆ ಮತ್ತು ನ್ಯಾಯ ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವು ಸೋಮವಾರ ನಡೆಯಿತು. ಮಹಿಳಾ ಸದೃಢೀಕರಣ ಯೋಜನೆಯ ಸಂಯೋಜಕ ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಮರ್ಲಿನ್ ಮಾರ್ಟಿಸ್, ಮಾನಿನಿ ಮತ್ತಿತರರಿದ್ದರು. ಮಹಿಳಾ ಸದೃಢೀಕರಣ ಯೋಜನೆಯ ಸಂಯೋಜಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ರೆ.ವಿನ್ಸೆಂಟ್ ಡಿಸೊಜ ಸ್ವಾಗತಿಸಿದರು. ಡಾ.ರೋಹನ್ ಎಸ್. ಮೊನಿಸ್ ವಂದಿಸಿದರು. ಸೀಮಾ ವಂದಿಸಿದರು.
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ; \ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ಸಿನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ\
ಬೆಂಗಳೂರು, ನವೆಂಬರ್ 18: ಕಾಂಗ್ರೆಸ್ ಹೈಕಮಾಂಡ್ ಎಂಬುದು ಸತ್ತು ಹೋಗಿದೆ. ಹೈಕಮಾಂಡ್ ಎಂದರೆ ಎಐಸಿಸಿ ಅಧ್ಯಕ್ಷರು ಇರಬೇಕು. ಕರ್ನಾಟಕದ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷರೆಂದು ತಿಳಿದುಕೊಂಡೇ ಇಲ್ಲ. ಅವರು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರೆಂದು ಇವತ್ತಿಗೂ ತಿಳಿದುಕೊಂಡಂತಿದೆ. ಮಲ್ಲಿಕಾರ್ಜುನ್ ಖರ್ಗೆಯವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಗಾದೆಯ ಥರ ಕಾಂಗ್ರೆಸ್ಸಿನಲ್ಲಿ ಇದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ
Explained: ಶೇಖ್ ಹಸೀನಾ ತ್ವರಿತ ಹಸ್ತಾಂತರದ ಬಾಂಗ್ಲಾದೇಶ ಮನವಿಯನ್ನು ಭಾರತ ತಿರಸ್ಕರಿಸಬಹುದೇ? ಕಾನೂನು ಹೇಳುವುದೇನು?
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮರಣದಂಡನೆ ವಿಧಿಸಿದ ನಂತರ, ಢಾಕಾದಲ್ಲಿನ ಮಧ್ಯಂತರ ಸರ್ಕಾರವು ಪದಚ್ಯುತ ನಾಯಕಿಯನ್ನು ತಕ್ಷಣವೇ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದೆ. ಕಳೆದ ವರ್ಷ ಬಾಂಗ್ಲಾದೇಶದಿಂದ ಪಲಾಯನ ಮಾಡಿ ನವದೆಹಲಿಯಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ, ಭಾರತ ಸರ್ಕಾರ ತಮ್ಮನ್ನು ಹಸ್ತಾಂತರ ಮಾಡದು ಎಂಬ ಭರವಸೆಯಲ್ಲಿದ್ದಾರೆ. ಆದರೆ ಬಾಂಗ್ಲಾದೇಶದ ಹಸ್ತಾಂತರದ ಮನವಿಯನ್ನು ತಿರಸ್ಕರಿಸುವ ಅಧಿಕಾರ ಭಾರತಕ್ಕೆ ಇದೆಯೇ? ಈ ಕುರಿತಾದ ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.
ಮಂಗಳೂರು | ಕಾಣೆಯಾಗಿದ್ದ ವ್ಯಕ್ತಿ ಆಶ್ರಮದಲ್ಲಿ ಪತ್ತೆ
ಮಂಗಳೂರು, ನ.18: ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಆರಂಭಿಸಿರುವ ಕಾಣೆಯಾದ ವ್ಯಕ್ತಿಗಳ ಪತ್ತೆ ಕಾರ್ಯ ಅಭಿಯಾನಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ಸುಮಾರು 8 ವರ್ಷದ ಹಿಂದೆ ಅಂದರೆ 2018ರ ಆಗಸ್ಟ್ 25ರಿಂದ ಪೀಟರ್ ಮೆಂಡೋನ್ಸಾ ಎಂಬವರು ಕಾಣೆಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರಿಗಾಗಿ ದ.ಕ.ಜಿಲ್ಲೆಯಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವಿವಿಧೆಡೆ ಅದರಲ್ಲೂ ಎಲ್ಲಾ ಆಶ್ರಮ, ನಿರಾಶ್ರಿತರ ಕೆಂದ್ರಗಳಿಗೆ ತೆರಳಿ ಕಾರ್ಯಾಚರಣೆ ತೀವ್ರಗೊಳಿಸಲಾಯಿತು. ಅಂತಿಮವಾಗಿ ನ.8ರಂದು ನಗರದ ವೆಲೆನ್ಸಿಯಾ ಚರ್ಚ್ ಬಳಿಯ ಆಶ್ರಮದಲ್ಲಿ ಪೀಟರ್ ಮೆಂಡೋನ್ಸಾರನ್ನು ಕಂಕನಾಡಿ ನಗರ ಠಾಣೆಯ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್, ಎಸ್ಸೈಗಳಾದ ಅನಿತಾ, ಶಿವಕುಮಾರ್, ಪೊಲೀಸ್ ಕಾನ್ಸ್ಟೇಬಲ್ ಶಿವಾನಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Mandya | ಸತತ ನಾಲ್ಕು ದಿನಗಳ ಕಾರ್ಯಾಚರಣೆ ಯಶಸ್ವಿ; ನಾಲೆಗೆ ಬಿದ್ದಿದ್ದ ಆನೆಯ ರಕ್ಷಣೆ
ಮಳವಳ್ಳಿ(ಮಂಡ್ಯ ಜಿಲ್ಲೆ) : ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 70 ಅಡಿ ಆಳದ ಕಾವೇರಿ ನದಿಯ ನಾಲೆಯಲ್ಲಿ ಸಿಲುಕಿದ್ದ ಕಾಡಾನೆಯನ್ನು ಸತತ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಕಳೆದ ಶನಿವಾರ ಈ ಆನೆ ನೀರು ಕುಡಿಯಲು ಕಾವೇರಿ ನದಿಗೆ ಇಳಿದಾಗ ನೀರಿನ ರಭಸಕ್ಕೆ ಕೆನಾಲ್ ಒಳಗೆ ಸಿಲುಕಿಕೊಂಡಿತ್ತು ಆನೆ ಬಂದ ದಾರಿಯಲ್ಲೆ ವಾಪಸ್ ಆಗಬಹುದು ಅಂತ ಒಂದು ದಿನ ಕಾದ, ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಆನೆ ವಾಪಸ್ ತೆರಳದಿದ್ದಾಗ, ರವಿವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರವಿವಾರವಾರವೂ ಆನೆ ವಾಪಸ್ ಬರದ ಕಾರಣ ಅಧಿಕಾರಿ ಸಿಬ್ಬಂದಿ ಸೋಮವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಮಟ್ಟದ ಕ್ರೇನ್ ಬಳಸಿ ಆನೆ ಮೇಲೆತ್ತಲು ಪ್ರಯತ್ನಿಸಿದ್ದರು. ಆದರೆ, ವಿಫಲವಾಗಿತ್ತು. ಕತ್ತಲಾದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದರು. ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿ, ಕಂಟೇನರ್ ಸಹಾಯದ ಮೂಲಕ ಅನೆ ಮೇಲೆತ್ತಲು ಪ್ಲಾನ್ ರೂಪಿಸಿದರು. ಅದರಂತೆ ಪಶು ವೈದ್ಯ ರಮೇಶ್ ಹಾಗೂ ವೈದ್ಯ ಆದರ್ಶ್ ಜಂಟಿ ಕಾರ್ಯಾಚರಣೆಯಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಎರಡನೇ ಚುಚ್ಚು ಮದ್ದಿಗೆ ಕೆಳಕ್ಕುರುಳಿದ ಆನೆಯನ್ನು ಕಂಟೇನರ್ ನಲ್ಲಿ ಇರಿಸಿ ಮೇಲೆತ್ತಲಾಯ್ತು. ನಾಲ್ಕು ದಿನಗಳ ಕಾಲ ನೀರಿನಲ್ಲಿದ್ದ ಆನೆಗೆ ಸೊಂಡಿಲು ಹಾಗೂ ಕಾಲುಗಳಲ್ಲಿ ಸೋಂಕು ತಗುಲಿದ್ದ ಕಾರಣ ಅರಿಶಿನ ಹಾಗೂ ನೀಲಗಿರಿ ತೈಲದ ಲೇಪನ ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಆನೆಗೆ ಸಹಜ ಸ್ಥಿತಿಗೆ ಬರುವಂತೆ ಚುಚ್ಚುಮದ್ದು ನೀಡಿ ನಂತರ, ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಆನೆ ನಿರಂತರ ನೀರಲ್ಲಿದ್ದ ಹಿನ್ನೆಲೆ ಸೊಂಡಿಲು, ಕಾಲುಗಳು ಬಿಳಿ ಬಣ್ಣಕ್ಕೆ ತಿರುಗಿತ್ತು. ಬಿಸಿಲಿನಲ್ಲಿ ಆನೆ ಓಡಾಡುತ್ತಿದ್ದಂತೆ ಮತ್ತೆ ಯಥಾಸ್ಥಿತಿಗೆ ಬರಲಿದೆ. ಅದನ್ನು ಹೊರತುಪಡಿಸಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕೆಲದಿನಗಳ ಕಾಲ ಆನೆಯನ್ನು ಡ್ರೋನ್ ಮೂಲಕ ಮಾನಿಟರ್ ಮಾಡಲಾಗುತ್ತದೆ - ಡಾ.ಪ್ರಭು, ಡಿಸಿಎಫ್.
ಸೌದಿ ಅಪಘಾತ ಪ್ರಕರಣ : ಬೀದರ್ ಮೂಲದ ಮೃತ ಮಹಿಳೆಯ ನಿವಾಸಕ್ಕೆ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಭೇಟಿ, ಸಾಂತ್ವನ
ಬೀದರ್ : ಸೌದಿಯಲ್ಲಿ ಉಮ್ರಾ ಯಾತ್ರಿಕರಿದ್ದ ಬಸ್ ಅಪಘಾತದಲ್ಲಿ ಮೃತಪಟ್ಟ ಬೀದರ್ ನ ಮೈಲೂರು ಸಿಎಂಸಿ ಕಾಲೋನಿ ನಿವಾಸಿ ರೆಹಮತ್ ಬಿ ಅವರ ನಿವಾಸಕ್ಕೆ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇಂದು ಬೆಳಿಗ್ಗೆ ಮುಹಮ್ಮದ್ ಗೌಸ್ ಮೃತ ಮಹಿಳೆಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಹಮ್ಮದ್ ಗೌಸ್, ಈ ಘಟನೆ ತುಂಬಾ ದುಃಖಕರವಾಗಿದೆ. ಸಚಿವ ರಹೀಮ್ ಖಾನ್ ಅವರು ಈ ಬಗ್ಗೆ ಸದಾ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೃತ ಮಹಿಳೆಯ ಮೊಮ್ಮಗ ಎಂ ಡಿ ಸೋಹೆಲ್ ಮಾತನಾಡಿ, ನಮ್ಮ ಅಜ್ಜಿಯ ಮೃತದೇಹ ಅಲ್ಲಿಂದ ಇಲ್ಲಿಗೆ ಕಳುಹಿಸಲು ಅಲ್ಲಿನ ಸರಕಾರ ಒಪ್ಪುತ್ತಿಲ್ಲ, ಹಾಗಾಗಿ ನಮ್ಮ ಸಹೋದರ ಮತ್ತು ಚಿಕ್ಕಪ್ಪ ಹೈದ್ರಾಬಾದ್ ಗೆ ಹೋಗಿದ್ದಾರೆ. ಅಲ್ಲಿಂದ ಸೌದಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಅದು ಖಚಿತವಾಗಿಲ್ಲ. ಅದರ ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು. ಇನ್ನೊರ್ವ ಮೊಮ್ಮಗ ಮಹಮ್ಮದ್ ಗೌಸ್ ಮಾತನಾಡಿ, ನಮ್ಮ ಅಜ್ಜಿ ಇಲ್ಲಿಂದ ಹೈದ್ರಾಬಾದ್ಗೆ ಹೋಗಿ ಅಲ್ಲಿಂದ ನ.9ಕ್ಕೆ ಉಮ್ರಾಕ್ಕಾಗಿ ಹೋಗಿದ್ದರು. ಈ ದುರಂತ ರವಿವಾರ ರಾತ್ರಿ ನಡೆದಿದೆ ಎಂದು ನಮಗೆ ಸೋಮವಾರ ಬೆಳಿಗ್ಗೆ ಗೊತ್ತಾಯ್ತು. ಸಚಿವ ರಹೀಮ್ ಖಾನ್ ಅವರು ನಗರಸಭೆ ಅಧ್ಯಕ್ಷರನ್ನು ನಮ್ಮ ಮನೆಗೆ ಕಳುಹಿಸಿದ್ದಾರೆ. ಅವರು ಬಂದು ನಮಗೆ ಧೈರ್ಯ ತುಂಬಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ : 200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್, ಕಂಪನಿಗಳಿಗೆ ಸಿಗಲಿದೆ ಸಕಲ ಸೌಕರ್ಯ
ಕೈಗಾರಿಕೆಗಳು ಬೆಳೆಯಬೇಕು ಮತ್ತು ಹೂಡಿಕೆದಾರರು ನಮ್ಮಲ್ಲಿಗೆ ಬರಬೇಕೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಚೆನ್ನಾಗಿರಬೇಕು. ನಮ್ಮಲ್ಲಿ 800ಕ್ಕೂ ಹೆಚ್ಚು ಆರ್
ವಿಜಯಪುರ ಏರ್ಪೋರ್ಟ್ಗಿದ್ದ ಅಡ್ಡಿ ನಿವಾರಣೆ; ವಿಮಾನ ಸೇವೆ ಆರಂಭಕ್ಕೆ ಸಂಭಾವ್ಯ ದಿನಾಂಕ ಹೇಳಿದ ಸಚಿವ ಎಂ.ಬಿ ಪಾಟೀಲ್
ವಿಜಯಪುರ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಅಡ್ಡಿ ನಿವಾರಣೆಯಾಗಿದೆ. ಸುಪ್ರೀಂಕೋರ್ಟ್ ಆದೇಶದಿಂದಾಗಿ ಯೋಜನೆಗೆ ಪುನರ್ಜನ್ಮ ದೊರೆತಿದೆ. ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಇಸಿದ್ದಾರೆ. ಇದರಿಂದ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ. ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷರು ಸಚಿವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ರಾಯಚೂರು | ಡಿಸೆಂಬರ್ 20, 21ರಂದು ದಲಿತ ಸಾಹಿತ್ಯ ಸಮ್ಮೇಳನ
ರಾಯಚೂರು : ಬಂಡಾಯ ಸಾಹಿತ್ಯದ ನೆಲೆಯಾದ ರಾಯಚೂರು ನಗರದಲ್ಲಿ ಮುಂದಿನ ಡಿಸೆಂಬರ್ 20 ಹಾಗೂ 21 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಭಾರತದ ಸಂವಿಧಾನ ಎಂಬ ಅಡಿ ಬರಹದೊಂದಿಗೆ ವಿಚಾರಗಳ ಅವಲೋಕನ ನಡೆಯಲಿವೆ. ಹಾಗಾಗಿ ಈ ಸಮ್ಮೇಳನ ಯಶಸ್ವಿಗೆ ಈ ಜಿಲ್ಲೆಯ ಪ್ರತಿಯೊಬ್ಬ ಪ್ರಗತಿ ಪರ ಚಿಂತಕರು, ಸಾಹಿತಿಗಳು, ದಲಿತ ಮತ್ತು ಕನ್ನಡ ಪರ ಸಂಘಟನೆಗಳ ಪ್ರಮುಖರು ಕೈಜೋಡಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಹೇಳಿದರು. ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ 11ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಡಾ.ಅರ್ಜುನ ಗೊಳಸಂಗಿ ಮಾತನಾಡಿದರು. ದಲಿತ ಸಾಹಿತ್ಯ ಸಮ್ಮೇಳನದ ಸಂಯೋಜಕರಾದ ತಾಯರಾಜ್ ಮಾತನಾಡಿ, ಎಲ್ಲರ ಸಹಕಾರ ಮತ್ತು ಸಹಾಯ ಇದ್ದರೆ ಮಾತ್ರ ಸಮ್ಮೇಳನ ಅಭೂತ ಪೂರ್ವ ಯಶಸ್ವಿಯಾಗುತ್ತದೆ. ಈ ಸಮ್ಮೇಳನದ ಅಂಗವಾಗಿ ರಚಿಸಿದ ಸಮಿತಿಯಲ್ಲಿನ ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡರು. ಸಭೆಯಲ್ಲಿ ಡಾ.ಹುಸೇನಪ್ಪ ಅಮರಾಪುರ, ದೇವದುರ್ಗದ ಡಾ.ಮಲ್ಲಯ್ಯ ಅತ್ತನೂರು, ಬಸವರಾಜ ಬ್ಯಾಗವಾಟ, ಮಾನವಿಯ ಈರಣ್ಣ ಆರ್.ಕೆ.ರಾಘವೇಂದ್ರ ಚೌಡಿಕೆ, ಡಾ.ಹುಲುಗಪ್ಪ, ಡಾ.ಬಸವರಾಜ ಸಂಕೇಶ್ವರ, ಸಬ್ಜಲಿ, ವಾಜಿದ ಸಾಜಿದ , ವೆಂಕಟೇಶ್ ಬೇವಿನ ಬೆಂಚಿ, ಕೋರೆನಲ್, ಚಂದ್ರಬಂಡ ವೆಂಕಟೇಶ್, ಜಿಂದಪ್ಪ, ಮೂರ್ತಿ, ಬೂದೇಪ್ಪ ಸತ್ಪಾಡೆ, ಡಾ.ಬಸವರಾಜ, ರಂಗಮುನಿ ದಾಸ್ ,ಧರ್ಮಾವತಿ ಎಸ್.ನಾಯಕ, ಭೀಮಣ್ಣ ಉಡುಮಗಲ್, ಸಿರವಾರ ಶಾಂತಪ್ಪ ಪಿತಗಲ್, ಅನಿಲ್ ಕುಮಾರ್, ಚಂದ್ರಪ್ಪ ಚುಟುಕಲ, ಆರಿಫ್ ಮತ್ತು ದಲಿತ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಂಗಳೂರು | ಶಿವಳ್ಳಿ ಸ್ಪಂದನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು, ನ.18: ಶಿವಳ್ಳಿ ಸ್ಪಂದನ ವತಿಯಿಂದ ನಗರದ ಕದ್ರಿಯ ಮಾತಾಕೃಪದಲ್ಲಿ 16 ವಿದ್ಯಾರ್ಥಿಗಳಿಗೆ ತಲಾ 8,000 ರೂ. ವಿದ್ಯಾರ್ಥಿ ವೇತನ ನೀಡಲಾಯಿತು. ಸಂಘಟನೆಯ ಮಂಗಳೂರು ತಾಲೂಕು ಅಧ್ಯಕ್ಷ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ತಂತ್ರಿ, ಡಾ.ಜೆ.ಎನ್.ಭಟ್, ರಾಧಾ ಭಟ್, ನವೀನ್ ಚಂದ್ರ ಕೊಂಚಾಡಿ ಉಪಸ್ಥಿತರಿದ್ದರು. ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ರಮಾಮಣಿ ಪ್ರಾರ್ಥಿಸಿದರು. ರಾಮಚಂದ್ರ ಭಟ್ ಎಲ್ಲೂರು ಸ್ವಾಗತಿಸಿದರು. ಕದ್ರಿ ವಲಯ ಕೋಶಾಧಿಕಾರಿ ರವಿಕಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೃಷ್ಣ ಭಟ್ ಕದ್ರಿ ವಂದಿಸಿದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು | ವಿದ್ಯಾ ಜೀವನ ಅಮೃತ ಟ್ರಸ್ ಕಚೇರಿ ಉದ್ಘಾಟನೆ
ಮಂಗಳೂರು, ನ.18: ನಗರದ ಪಾಲ್ದನೆಯಲ್ಲಿರುವ ರೋಹನ್ ಬಡಾವಣೆಯಲ್ಲಿ ವಿದ್ಯಾ ಜೀವನ ಅಮೃತ ಟ್ರಸ್ಟ್(ರಿ)ನ ಕಚೇರಿಯನ್ನು ಪ್ರವರ್ತಕ ಡೆನ್ನಿಸ್ ಮಸ್ಕರೇನಸ್ ಉದ್ಘಾಟಿಸಿದರು. ಸಂತ ತೆರೆಸಾ ಚರ್ಚಿನ ಪ್ರಧಾನ ಧರ್ಮಗುರು ವಂ.ಪಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಆಶೀವರ್ಷಚನ ನೀಡಿದರು. ಕಾರ್ಯಕ್ರಮದಲ್ಲಿ ರೋಹನ್ ಕೋಆರ್ಪರೇಶನ್ ನ ನಿರ್ದೇಶಕ ಡಿಯೋನ್ ಮೊಂತೇರೊ, ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ, ಸಿಯೋನ ಆಶ್ರಮದ ಯು.ಸಿ. ಪೌಲೋಸ್, ಯಾನ್ ಪೌಂಡೇಶನ್ನ ಹೇಮಾಚಾರ್ಯ, ರೋಶನ್ ಬೆಳ್ಮನ್, ವಂ. ಪಾ. ಸತೀಶ, ವಂ. ಪಾ. ಸ್ಟ್ಯಾನಿ ಡಿಸೋಜ, ಭಗಿನಿ ಶೈಲಾ, ಭಗಿನಿ ಸುನಿತಾ ಚಿತ್ರದುರ್ಗ, ಪ್ರವೀಣ್ ತಾವ್ರೊ, ವಿಲ್ಫ್ರೆಡ್ ಸಲ್ಡಾನಾ ಉಪಸ್ಥಿತರಿದ್ದರು.
ಹೆರಿಗೆಗೆ ಬಂದಿದ್ದ ಗರ್ಭಿಣಿಗೆ ಶೀಘ್ರವೇ ಚಿಕಿತ್ಸೆ ನೀಡದೆ ತೀವ್ರ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ಅಂತಿಮವಾಗಿ, ಶೌಚಾಲಯಕ್ಕೆ ಹೋಗುವ ದಾರಿಯಲ್ಲೇ ಮಹಿಳೆಗೆ ಹೆರಿಗೆಯಾಗಿದ್ದು, ಆ ವೇಳೆ ಕೆಳಗೆ ಬಿದ್ದ ಶಿಶು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ದುರಂತಕ್ಕೆ ಆಸ್ಪತ್ರೆಯ ಸಿಬ್ಬಂದಿಯೇ ನೇರ ಕಾರಣ ಎಂದು ಮಗುವಿನ ಪೋಷಕರು ಆರೋಪಿಸಿರುವುದು ಕಂಡುಬಂದಿದೆ.
ಮಂಗಳೂರು | ವಿಜೇತಾ ದಂಡೆಕೇರಿಗೆ ಪಿಎಚ್ಡಿ
ಮಂಗಳೂರು,ನ.18: ಸುರತ್ಕಲ್ ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ವಿಜೇತಾ ದಂಡೆಕೇರಿ ಎ ಫ್ರೇಮ್ವರ್ಕ್ ಫಾರ್ ಅ್ಯಂಟಿಸಿಪೇಟರಿ ಡೆಸಿಷನ್ ಮೇಕಿಂಗ್ ಬೇಸ್ಡ್ ಎಫಿಷಿಯಂಟ್ ನ್ಯಾವಿಗೇಶನ್ ಸಿಸ್ಟಮ್ ಫಾರ್ ದ ವಿಶನ್ ಇಂಪೇಯರ್ಡ್ ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಯಚೂರು | ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ
ರಾಯಚೂರು : ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಂಗಳವಾರ ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ ನಡೆಯಿತು. ನಗರದ ಕರ್ನಾಟಕ ಸಂಘದಿಂದ ಶೆಟ್ಟಿಭಾವಿ ವೃತ್ತದ ಮಾರ್ಗವಾಗಿ ಬಂಗಾರ ಬಜಾರ್, ತೀನ್ ಖಂದಿಲ್, ತಹಶೀಲ್ದಾರ್ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಕೇಂದ್ರ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು. ಜಾಥಾದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು, ಹಿಂದೂ, ಮುಸ್ಲಿಂ, ಕ್ತೈಸ್ತ, ಬೌದ್ಧ ಧರ್ಮದ ಧರ್ಮಾಧಿಕಾರಿಗಳು, ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡು ಜೈ ಭೀಮ್ ಘೊಷಣೆ ಕೂಗಿ ಗಮನಸೆಳೆದರು. ಸಂವಿಧಾನ ಜಾರಿಗೊಂಡು ದಶಕಗಳು ಕಳೆದಿರುವುದರಿಂದ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾನಿಲಯ, ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿರುವ ʼಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣʼ ವಿಚಾರ ಸಂಕಿರಣ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೆಡಿಎಸ್ಎಸ್) ವತಿಯಿಂದ ಕುವೆಂಪು ವಿವಿ ಎದುರು ತಮಟೆ ಚಳುವಳಿ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರು, ‘ಈ ವಿಚಾರ ಸಂಕಿರಣವು ಬಲಪಂಥೀಯ ಸೈದ್ಧಾಂತಿಕ ಕಾರ್ಯಸೂಚಿಯನ್ನು ಉತ್ತೇಜಿಸುತ್ತದೆ, ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಚೈತನ್ಯಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು. ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವನ್ನು ಬಹಿಷ್ಕರಿಸಲಿ: ‘ಉಪ ಕುಲಪತಿಗಳು ಮೂಲಭೂತವಾದಿತನವನ್ನು ಮೈಗೂಡಿಸಿಕೊಂಡಿದ್ದಾರೆ. ನಾಳೆ ವಿವಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟು ವರ್ಷ ನಾಡು ಕಟ್ಟುವ ಕೆಲಸ ಮಾಡಿರುವ ಬರಗೂರು ರಾಮಚಂದ್ರಪ್ಪ ಅವರು, ಇಂತಹ ಕೋಮುವಾದಿ, ಜಾತಿವಾದಿ ಹಾಗೂ ಮೂಲಭೂತವಾದಿಯಾಗಿರುವ ಕುವೆಂಪು ವಿವಿ ಉಪಕುಲಪತಿ ಶರತ್ ಅನಂತ್ಮೂರ್ತಿ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳಬಾರದು. ಅವರು ಕಾರ್ಯಕ್ರಮಕ್ಕೆ ಬರಬಾರದು ಎಂದು ನಾನು ಮನವಿ ಮಾಡುತ್ತಿದ್ದೇನೆ’ ಎಂದರು. ‘ರಾಜ್ಯ ಸರಕಾರ ಕುವೆಂಪು ವಿವಿ ಉಪಕುಲಪತಿ ಶರತ್ ಅನಂತಮೂರ್ತಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಏಕೆಂದರೆ, ನನ್ನದು ‘ಮಾನವ ಜಾತಿ’ ಎಂದು ಕುವೆಂಪು ಹೇಳಿದ್ದರು. ಯಾವುದೇ ಧರ್ಮಗ್ರಂಥ ಪೂಜ್ಯನೀಯ ಆಗಬಾರದು ಎಂದು ಹೇಳಿದ್ದರು. ಅವರ ಹೆಸರಿನ ವಿಶ್ವವಿದ್ಯಾಲಯದೊಳಗೆ ಸನಾತನಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ನಡೆಯಬಾರದಿತ್ತು. ಇಷ್ಟೆಲ್ಲಾ ಇರುವಾಗ ಆರೆಸ್ಸೆಸ್ ವಿಚಾರವನ್ನು ಮುನ್ನೆಲೆಗೆ ತರುವುದು ಸರಿಯಲ್ಲ. ವಿಶ್ವವಿದ್ಯಾಲಯದ ಯಾವುದೇ ವಿದ್ವಾಂಸರಿಲ್ಲದೇ, ಕದ್ದುಮುಚ್ಚಿ ಕಾರ್ಯಕ್ರಮ ಮಾಡುತ್ತಿರುವುದು ಯಾಕೆ? ವಿವಿ ಆವರಣಕ್ಕೆ ಪೊಲೀಸ್ ಸರ್ಪಗಾವಲು ಹಾಕಿ ಕಾರ್ಯಕ್ರಮ ಮಾಡುವ ಮೂಲಕ ಉಪ ಕುಲಪತಿಗಳು ಕುವೆಂಪು ಆಶಯಗಳಿಗೆ ವಿರುದ್ಧವಾಗಿ ನಿಂತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.
ಮಂಗಳೂರು | ಹಾಸ್ಯಗಾರ ವಳಕುಂಜರಿಗೆ ಕದ್ರಿ ವಿಷ್ಣು ಪ್ರಶಸ್ತಿ
ಮಂಗಳೂರು, ನ.18: ಸುಮಾರು 28 ವರ್ಷಗಳ ಶ್ರೀ ಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆಯನ್ನೂ ಪಡೆಯದೆ ದಾಖಲೆ ಮಾಡಿರುವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು. ಕಳೆದ 9 ವರ್ಷಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ಕದ್ರಿ ವಿಷ್ಣು ಪ್ರಶಸ್ತಿಯನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮಿ ನಾರಾಯಣ ಆಸ್ರಣ್ಣ ಪ್ರದಾನಿಸಿದರು. ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಜಯಶಂಕರ್ ಮಾರ್ಲ, ಲೀಲಾಕ್ಷ ಬಿ.ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ.ಎಸ್.ಭಂಡಾರಿ, ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣಟಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯಂತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿಗುತ್ತು ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕದ್ರಿ ಯಕ್ಷ ಬಳಗದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ತಾರಾನಾಥ ಶೆಟ್ಟಿ ಬೋಳಾರ, ಶಿವಪ್ರಸಾದ್ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಸುಧಾಕರ್ ಶೆಟ್ಟಿ ದೋಣಿಂಜೆ ಗುತ್ತು, ಕೃಷ್ಣ ಶೆಟ್ಟಿ ತಾರೆಮಾರ್, ಹರೀಶ್ ಕುಮಾರ್, ನಿವೇದಿತಾ ಎನ್. ಶೆಟ್ಟಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು.
ಸ್ವಂತ ಉದ್ದಿಮೆ ಸ್ಥಾಪಿಸಬೇಕು ಎಂಬುದು ಹಲವರ ಕನಸು. ಆದರೆ, ಹಣಕಾಸಿನ ಕೊರೆಯ ಕಾರಣ ಅನೇಕರು ಉದ್ಯಮ ಸ್ಥಾಪನೆಗೆ ಹಿಂದೇಟು ಹಾಕುತ್ತಾರೆ. ಈ ಕಾರಣಕ್ಕಾಗಿ ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು/ಅಥವಾ ಮಹಿಳಾ ಉದ್ಯಮಿಗಳಿಗೆ ಹೊಸ ಉದ್ಯಮ ಸ್ಥಾಪಿಸಲು ಬ್ಯಾಂಕ್ ಸಾಲಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗೆ ಯಾರೆಲ್ಲಾ ಅರ್ಹರು? ಯೋಜನೆಯಡಿ ದೊರೆಯುವ ಸಹಾಯಧನ ಎಷ್ಟು? ಅರ್ಜಿ ಸಲ್ಲಿಕೆ ಹೇಗೆ? ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಂಗಳೂರು | ನ.19-25: ಇಂಟಾಕ್ನಿಂದ ಕಲಾ ಪ್ರದರ್ಶನ
ಮಂಗಳೂರು, ನ.18: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್ ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ನ.19ರಿಂದ 25ರವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಆಚರಿಸಲಿದೆ. ವಿಶ್ವ ಪರಂಪರೆಯ ಸಪ್ತಾಹವು ನ.19ರ ಬುಧವಾರ ಸಂಜೆ 5:30ಕ್ಕೆ ಲೇಖಕ ಡಾ. ಗಣೇಶ್ ಅಮೀನ್ ಸಂಕಮಾರ್ ಅವರ ಱತುಳು ಭಾಷೆ ಬೊಕ್ಕ ಬದುಕು ವಿಷಯದ ಕುರಿತು ಉಪನ್ಯಾಸದೊಂದಿಗೆ ಆರಂಭವಾಗಲಿದೆ. ನ.20ರಂದು ಸಂಜೆ 5:30ಕ್ಕೆ ನಾಣ್ಯ ಸಂಗ್ರಾಹಕ ಎಂ. ಪ್ರಶಾಂತ್ ಶೆಟ್ ಇತಿಹಾಸದ ಗುರುತು: ಪಶ್ಚಿಮ ಗಂಗ ರಾಜವಂಶದ ನಾಣ್ಯಗಳು ವಿಷಯದ ಬಗ್ಗೆ ಮಾತನಾಡಲಿದ್ದಾರೆ. ನ.21ರ ಸಂಜೆ 5:30ಕ್ಕೆ ಯಕ್ಷಗಾನ ಕಲಾವಿದೆ ಶ್ರುತಿ ಬಂಗೇರ ಯಕ್ಷಗಾನದಲ್ಲಿ ಸ್ತ್ರೀವೇಷ: ಭಾರತೀಯ ನೃತ್ಯನಾಟಕಗಳಲ್ಲಿ ಸ್ತ್ರೀ ವೇಷಧಾರೆಯ ಸಂಪ್ರದಾಯೞ ಕುರಿತು ಮಾತನಾಡಲಿದ್ದಾರೆ. ನ.22ರ ಸಂಜೆ 5:30ಕ್ಕೆ ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಮ್ಮುಖ ನಮ್ಮ ಊರು ನಮ್ಮ ನೆಲ ಕಲಾ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಹರೀಶ್ ಕೊಡಿಯಾಲ್ಬೈಲ್, ಜನಾರ್ದನ ಹಾವಂಜೆ, ಜೀವನ್ ಸಾಲಿಯಾನ್, ರೇಷ್ಮಾ ಎಸ್. ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾಭಟ್, ಉಮೇಶ್ ಎಂ., ವಿಶ್ವಾಸ್ ಎಂ., ವಿಲ್ಸನ್ ಸೋಜ ಸಹಿತ ಕಲಾವಿದರ ಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಬಿಹಾರ ಚುನಾವಣಾ ಫಲಿತಾಂಶದ ಕುರಿತು ಆರಂಭವಾದ ವಾಗ್ವಾದ ಯುವಕನ ಕೊಲೆಯಲ್ಲಿ ಅಂತ್ಯ
ಭೋಪಾಲ್ : ಬಿಹಾರ ಚುನಾವಣಾ ಫಲಿತಾಂಶದ ಕುರಿತ ಚರ್ಚೆಯ ವೇಳೆ ವಾಗ್ವಾದ ನಡೆದು ಯುವಕನೋರ್ವನನ್ನು ಆತನ ಮಾವಂದಿರೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಟ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿಹಾರದ ಶಿವಹಾರ್ ಜಿಲ್ಲೆಯ ಕಾರ್ಮಿಕ ಶಂಕರ್ ಮಾಂಝಿ (22) ತನ್ನ ಮಾವ ರಾಜೇಶ್ ಮಾಂಝಿ (25) ಮತ್ತು ತೂಫಾನಿ ಮಾಂಝಿ (27) ಅವರೊಂದಿಗೆ ವಾಸಿಸುತ್ತಿದ್ದ. ಶಂಕರ್ ಆರ್ಜೆಡಿ ಬೆಂಬಲಿಗನಾಗಿದ್ದ. ಇಬ್ಬರು ಆರೋಪಿಗಳು ಜೆಡಿ(ಯು) ಬೆಂಬಲಿಗರು ಎಂದು ಕ್ಯಾಂಟ್ ಪೊಲೀಸ್ ಠಾಣಾ ಉಸ್ತುವಾರಿ ಅನೂಪ್ ಭಾರ್ಗವ್ ತಿಳಿಸಿದ್ದಾರೆ. ರಾಜೇಶ್ ಮತ್ತು ತೂಫಾನಿ ಸೇರಿ ಶಂಕರ್ ಅವರನ್ನು ಹತ್ತಿರದ ಕೆಸರು ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ರಾಜೇಶ್ ಮತ್ತು ತೂಫಾನಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಸಮಯದಲ್ಲಿ ಇಬ್ಬರು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಭಾರ್ಗವ್ ಹೇಳಿದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಉಡುಪಿ | ಟೆಕ್ಝೋನ್ ನ್ಯಾಷನಲ್ಸ್ 2025: ಬಂಟಕಲ್ ವಿದ್ಯಾರ್ಥಿಗಳ ತಂಡ ಪ್ರಥಮ
ಉಡುಪಿ, ನ.17: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಕೌಶಿಕ್ ಎ., ಕಾರ್ತಿಕ್ ಸೂರ್ಯ ನಾರಾಯಣ ಅಮೀನ್, ಕೆ.ಎಸ್.ರವೀಶ್ ಪದ್ಮಶಾಲಿ ತಂಡವು ಶಿವಮೊಗ್ಗದ ಜೆಎನ್ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇತ್ತೀಚೆಗೆ ನಡೆದ ಟೆಕ್ಝೋನ್ಸ್ ನ್ಯಾಷನಲ್ಸ್ 2025ರ ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ. ಈ ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಎಸ್ಎಮ್ ಐಟಿಎಮ್ ನ ವಿದ್ಯಾರ್ಥಿಗಳ ತಂಡವು ರೋಬೋಟ್ ಅನ್ನು ಲೈನ್ ಫಾಲೋಯಿಂಗ್ ಟ್ರ್ಯಾಕ್ ನಲ್ಲಿ ಚಲಾಯಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ಬಹುಮಾನವನ್ನು ಪಡೆದಿದ್ದಾರೆ.
Bengaluru Second Airport: 2ನೇ ಏರ್ಪೋರ್ಟ್ಗೆ ಸ್ಥಳ ಫೈನಲ್: ಬಿಗ್ ಅಪ್ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 18: ರಾಜಧಾನಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವೇಗ ನೀಡಿದೆ. ಏರ್ಪೋರ್ಟ್ ನಿರ್ಮಾಣವಾಗುವ ಜಾಗದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಮೂರು ಸ್ಥಳಗಳನ್ನು ಪರಿಶೀಲಿಸಲಾಗುತ್ತಿದ್ದು, ಗ್ರೇಟರ್ ಬೆಂಗಳೂರು ಹೆಗ್ಗಳಿಕೆಗೂ ಪಾತ್ರವಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೇ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಿರ್ಮಾಣವಾಗುವುದು ಬಹುತೇಕ
ಉಡುಪಿ | ಐವರು ಬಾಲ ಪ್ರತಿಭೆಗಳಿಗೆ ʼಪ್ರಮಾ ಪ್ರಶಸ್ತಿʼ ಪ್ರದಾನ
ಉಡುಪಿ, ನ.18: ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಐವರು ಬಾಲ ಪ್ರತಿಭೆಗಳಿಗೆ ʼಪ್ರಮಾ ಪ್ರಶಸ್ತಿʼಯನ್ನು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯಲ್ಲಿ ಪ್ರದಾನ ಮಾಡಲಾಯಿತು. ಶ್ರೀಶ ಭಟ್ ಕನ್ನರ್ಪಡಿ(ವೇದ), ಆದ್ಯ ಯು.(ತಬಲ), ಆಪ್ತ ಚಂದ್ರಮತಿ ಮುಳಿಯ(ವಿಜ್ಞಾನ), ಸ್ವಸ್ತಿ ಎಂ.ಭಟ್(ಸಂಗೀತ), ಸುಶಾಂತ್ ಎಸ್.ಭಟ್ (ಯಕ್ಷಗಾನ) ಅವರಿಗೆ ಪ್ರಮಾ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್ ಮಾತನಾಡಿ, ಮಕ್ಕಳ ಸಾಧನೆಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಹೆತ್ತವರ ಪ್ರೋತ್ಸಾಹ, ಶ್ರಮ ಮತ್ತು ಯೋಗ್ಯ ಗುರುಗಳ ಮಾರ್ಗದರ್ಶನವು ಅಂತರ್ಗತವಾದ ಪ್ರತಿಭೆ ಅರಳಲು ಅವಶ್ಯಕ. ಸಾಧನೆಯ ಹಾದಿಯಲ್ಲಿ ಸೋಲು ಬಂದಾಗ ಅದನ್ನು ಎದುರಿಸುವ ಬಗ್ಗೆ, ಸೋಲನ್ನು ಸಕರಾತ್ಮಕವಾಗಿ ಒಪ್ಪಿಕೊಳ್ಳುವ ಬಗ್ಗೆ ಹೆತ್ತವರ ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನ ಅತೀ ಅಗತ್ಯ ಎಂದರು. ಟ್ರಸ್ಟ್ ಪರವಾಗಿ ಡಾ.ಅನುಸೂಯ ದೇವಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷೆ ದೇವಕಿ ಕೆ.ಭಟ್, ವಿದುಷಿ ಪವನ ಬಿ.ಆಚಾರ್ಯ ಉಪಸ್ಥಿತರಿದ್ದರು. ಡಾ.ಬಾಲಚಂದ್ರ ಆಚಾರ್ಯ ವಂದಿಸಿದರು. ಸಂಹಿತ ಜಿಪಿ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ ತಾಲೂಕು ವ್ಯಾಪ್ತಿಯ ಜನಸಂಪರ್ಕ ಸಭೆ, ಅಹವಾಲು ಸ್ವೀಕಾರ
ಉಡುಪಿ, ನ.18: ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕು ವ್ಯಾಪ್ತಿಗೆ ಬರುವ 10 ಗ್ರಾಪಂಗಳಿಗೆ ಸಂಬಂಧಿಸಿದ ಜನ ಸಂಪರ್ಕ ಸಭೆ ಹಾಗೂ ಸ್ವೀಕಾರ ಕಾರ್ಯಕ್ರಮ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗುರ್ಮೆ, ಸಮೃದ್ಧ ಕಾಪು; ಸಾಮರಸ್ಯ ಕಾಪು ಎಂಬ ಕಲ್ಪನೆಯಲ್ಲಿ ಆಡಳಿತಕ್ಕೆ ಬಂದಿದ್ದೇನೆ. ಜನರ ಮನೆಬಾಗಿಲಿಗೆ ಆಡಳಿತ ಎಂಬುವುದು ಧ್ಯೇಯವಾಗಿದೆ. ಜನರ ಸಮಸ್ಯೆ ಪರಿಹಾರವೇ ನಮ್ಮ ಧ್ಯೇಯವಾಗಿದೆ. ಅಧಿಕಾರದಲ್ಲಿದ್ದಾಗ ಜನರ ಋಣ ತೀರಿಸುವ ಕೆಲಸವಾಗಬೇಕು. ನಮ್ಮ ಆತ್ಮ ಒಪ್ಪುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 65 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳನ್ನು ಸಕ್ಷಮ ಅಧಿಕಾರಿಗಳ ಎದುರಿನಲ್ಲಿ ಇತ್ಯರ್ಥ ಪಡಿಸಲಾಯಿತು. ಉಳಿದ ಅರ್ಜಿಗಳಲ್ಲಿ ತಾಂತ್ರಿಕ ಹಾಗೂ ದಾಖಲೆಗಳ ಸಮಸ್ಯೆಗಳಿರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಶೀಘ್ರ ವಿಲೇವಾರಿಗೊಳಿಸುವಂತೆ ಶಾಸಕರು ಸೂಚಿಸಿದರು. 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ಸಂದೀಪ್ ಮಡಿವಾಳ, ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ಪ್ರಸಾದ್ ಮಲ್ಯ, ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಉಡುಪಿ ತಹಶೀಲ್ದಾರ್ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಚೇರಿ ಸಿಬಂದಿ ಸುಧಾಕರ ಸ್ವಾಗತಿಸಿ, ವಂದಿಸಿದರು.
ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಹೆಚ್ಚಳ: ಸರ್ಕಾರ ಹೇಳಿದ್ದೇನು ?
Cyber Fraud Cases: ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು. ಇದೀಗ ರಾಜ್ಯ ಸರ್ಕಾರವು ಮಹತ್ವದ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ದೇಶದಾದ್ಯಂತ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೈಬರ್ ವಂಚನೆ
Government Jobs: ಸರ್ಕಾರಿ ಉದ್ಯೋಗ ಈ ಕಾರಣಕ್ಕೆ ಅರ್ಹರಿಗೆ ಸಿಗಲ್ಲ: ಸಿ.ಟಿ.ರವಿ ಹೀಗಂದಿದ್ದೇಕೆ?
ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಯುವಜನರ ದೊಡ್ಡ ಕನಸು. ಆದರೆ ಅದು ಅಷ್ಟು ಸುಲಭದ ಮಾತಲ್ಲ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇರುವುದು ಗೊತ್ತೇ ಇದೆ. ಸರ್ಕಾರದ 43 ಇಲಾಖೆಗಳಲ್ಲಿ ಖಾಲಿ ಇರುವ 2.86 ಲಕ್ಷ ಹುದ್ದೆಗಳಿಗೆ ನೇಮಕಾತಿ ಆಗುತ್ತಿಲ್ಲ ಎಂದು ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆಯೂ ನಡೆಸಿದ್ದಾರೆ. ಆದರೆ ಆ ಒಂದು
160ಕ್ಕೂ ಹೆಚ್ಚು ಮಂದಿಗೆ ಲಸಿಕೆ
ಸಿಪಿಐ (ಎಂ) ನಿಂದ ನ. 29 ರಿಂದ 'ಬಾಂಗ್ಲಾ ಬಚಾವ್ ಯಾತ್ರೆ' ಪ್ರಾರಂಭ; ಯಾಕಾಗಿ? ಏನಿದರ ಉದ್ದೇಶ?
ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿ ಸರ್ಕಾರದ ಅನ್ಯಾಯ ತಡೆಗೆ ಸಿಪಿಐ(ಎಂ) ಪಕ್ಷವು ನವೆಂಬರ್ 29 ರಿಂದ 'ಬಾಂಗ್ಲಾ ಬಚಾವ್ ಯಾತ್ರೆ'ಯನ್ನು ಪ್ರಾರಂಭಿಸಲಿದೆ. ಈ 1,000 ಕಿಲೋಮೀಟರ್ ಯಾತ್ರೆಯು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಅನ್ಯಾಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರ ಮುಂದಿಡುವ ಗುರಿ ಹೊಂದಿದೆ. ಇದು 2026ರ ಚುನಾವಣೆಗೆ ಮುನ್ನ ಮತದಾರರೊಂದಿಗೆ ಮರುಸಂಪರ್ಕ ಸಾಧಿಸಲು ಪಕ್ಷಕ್ಕೆ ಸಹಾಯ ಮಾಡಲಿದೆ.
Udupi | ಪ್ರಚೋದನಕಾರಿ ಭಾಷಣ ಆರೋಪ: ಹಿಂಜಾವೇ ಮುಖಂಡ ರತ್ನಾಕರ್ ಅಮೀನ್ ಬಂಧನ
ಉಡುಪಿ : ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡನೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಅಜೆಕಾರು ಮರ್ಣೆ ನಡಿಬೆಟ್ಟು ನಿವಾಸಿ ರತ್ನಾಕರ್ ಅಮೀನ್(49) ಬಂಧಿತ ಆರೋಪಿ. ನ.15ರಂದು ಉಡುಪಿ ನಗರದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ ಉಡುಪಿ ವತಿಯಿಂದ ದೆಹಲಿ ಬಾಂಬ್ ಸ್ಪೋಟ ಕೃತ್ಯವನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ರತ್ನಾಕರ ಅಮೀನ್, ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಈ ಬಗ್ಗೆ ರತ್ನಾಕರ ಅಮೀನ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದ ವಿಶೇಷ ತಂಡವು ಖಚಿತ ಮಾಹಿತಿಯ ಆಧಾರದ ಮೇರೆಗೆ ನ.18ರಂದು ಬೆಳಗ್ಗೆ ಆರೋಪಿ ರತ್ನಾಕರ್ ಅಮೀನ್ನನ್ನು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ವಶಕ್ಕೆ ಪಡೆದು ಬಂಧಿಸಿ, ನ್ಯಾಯಲಯಕ್ಕೆ ಹಾಜರು ಪಡಿಸಿದೆ.
Fridayಗೆ Farday, Motherಗೆ Mader ಬರೆದ ಛತ್ತೀಸ್ಗಡದ ಇಂಗ್ಲಿಷ್ ಟೀಚರ್; ಶಿಕ್ಷಕನ ಪಾಠ ಕಂಡು ಪೋಷಕರು ಶಾಕ್
ಮಕ್ಕಳ ಭವಿಷ್ಯ ಪ್ರಜ್ವಲಿಸುವಂತಹ ಶಿಕ್ಷಕ ತಪ್ಪು ತಪ್ಪಾಗಿ ಪಾಠ ಮಾಡಿ, ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಘಟನೆ ಛತ್ತೀಸಗಢದ ಸರ್ಕಾರಿ ಶಾಲೆಯಲ್ಲಿ ಕಂಡುಬಂದಿದೆ. ಇಂಗ್ಲಿಷ್ ಶಿಕ್ಷಕನೊಬ್ಬ ವಾರದ ದಿನಗಳ ಹೆಸರು, ಅಪ್ಪ ಅಮ್ಮ, ದೇಹದ ಅಂಗಾಗಗಳ ಹೆಸರನ್ನು ಇಂಗ್ಲಿಷ್ನಲ್ಲಿ ತಪ್ಪು ಸ್ಪೆಲಿಂಗ್ ಹೇಳಿಕೊಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೋಷಕರು ಮಾತನಾಡಿದ್ದು, ನಾವು ಪಂಚಾಯಿತಿಯವರಿಗೆ ದೂರು ಕೊಟ್ಟಿದ್ದೇವೆ ಆದರೆ ಕ್ಯಾರೆ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಹಾಕ್ತೇನೆ ಎಂದು ಸಂದೇಶ ಕಳುಹಿಸಿದ ಬೆಂಗಳೂರು ವ್ಯಕ್ತಿ! ಹೆಂಡತಿ ಕೆಲಸವೇ ಕಾರಣ
ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಹಾಕುವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಪದ್ಮಿನಿ ಅವರನ್ನು ಕಚೇರಿ ಸಮಯ ಮೀರಿ ಕೆಲಸ ಮಾಡಿಸಿದರೆ ಮೆಟ್ರೋ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ 50 ವರ್ಷದ ಬಿಎಸ್ ರಾಜೀವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶಂಕಿತನನ್ನು ನಿಮ್ಹಾನ್ಸ್ಗೆ ರವಾನಿಸಲಾಗಿದೆ.
ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನೂ ಅನುಮಾನದಿಂದ ನೋಡಬೇಡಿ: ಸಿಎಂ ಉಮರ್ ಅಬ್ದುಲ್ಲಾ
ಶ್ರೀನಗರ: ದಿಲ್ಲಿ ಸ್ಫೋಟಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇದರ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ಅನುಮಾನದಲ್ಲಿ ನೋಡುವುದನ್ನು ತಪ್ಪಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ. ನೌಗಮ್ ಪೊಲೀಸ್ ಠಾಣೆಯ ಸುತ್ತಮುತ್ತ ನಡೆದ ಆಕಸ್ಮಿಕ ಸ್ಫೋಟದಲ್ಲಿ ಗಾಯಗೊಂಡವರನ್ನು ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾತನಾಡಿದ ಸಿಎಂ ಉಮರ್ ಅಬ್ದುಲ್ಲಾ ಅವರು, “ಜಮ್ಮು-ಕಾಶ್ಮೀರದ ಪ್ರತಿಯೊಬ್ಬ ನಾಗರಿಕನನ್ನೂ, ವಿಶೇಷವಾಗಿ ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನೂ ಅನುಮಾನದಿಂದ ನೋಡಬೇಡಿ ಎಂದು ನಾನು ಕೇಂದ್ರ ಗೃಹ ಸಚಿವರು ಮತ್ತು ಉತ್ತರ ವಲಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ” ಎಂದು ಹೇಳಿದ್ದಾರೆ. ಈ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು. ಉಮರ್ ಅಬ್ದುಲ್ಲಾ ಕಳೆದ ವಾರ ದಿಲ್ಲಿ ಸ್ಫೋಟದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದು, “ರಾಜ್ಯದ ಸಮಗ್ರ ಜನಸಂಖ್ಯೆಯನ್ನು ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದವರಂತೆ ಚಿತ್ರಿಸುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದರು. ಭಯೋತ್ಪಾದನಾ ಜಾಲದಲ್ಲಿ ಭಾಗಿಯಾಗಿರುವವರಿಗೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಉಮರ್ ಅವರು, “ಹಿಂಸಾಚಾರದ ವಿರುದ್ಧ ಸದಾ ಧ್ವನಿ ಎತ್ತಿರುವ ನಿರಪರಾಧ ಜನರನ್ನು ಆರೋಪಿಗಳಂತೆ ನೋಡಬಾರದು” ಎಂದರು. ನ. 10 ರಂದು ದಿಲ್ಲಿಯ ಕೆಂಪು ಕೋಟೆ ಬಳಿ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಡಾ. ಉಮರ್ ನಬಿ ಚಾಲನೆ ಮಾಡುತ್ತಿದ್ದ ಸ್ಫೋಟಕಗಳಿಂದ ತುಂಬಿದ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು. ನೌಗಮ್ ಸ್ಫೋಟ ಹೇಗೆ ಸಂಭವಿಸಿತು, ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಹೇಗೆ ತರಲಾಯಿತು, ಯಾವ ಪರಿಸ್ಥಿತಿಯಲ್ಲಿ ಸಂಗ್ರಹಿಸಲಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ” ಎಂದು ಸಿಎಂ ಉಮರ್ ಹೇಳಿದ್ದಾರೆ. ಸ್ಫೋಟದ ನಂತರ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ವೈದ್ಯಕೀಯ ಸಿಬ್ಬಂದಿಯನ್ನು ಅವರು ಪ್ರಶಂಸಿಸಿದರು. “ಅವರು ಯಾವುದೇ ಸೂಚನೆಗಾಗಿ ಕಾಯಲಿಲ್ಲ. ಸ್ಫೋಟವನ್ನು ಕಂಡ ತಕ್ಷಣ ಆಂಬ್ಯುಲೆನ್ಸ್ ತಂದರು”, ಎಂದು ಉಮರ್ ಅಬ್ದುಲ್ಲಾ ಶ್ಲಾಘಿಸಿದರು. ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ದರ್ಜಿ ಮಮ್ಮದ್ ಶಫಿ ಪ್ಯಾರೆಯವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಅನುಮೋದಿಸಲಾಗುವುದು ಎಂದು ಹೇಳಿದರು. ನೌಗಮ್ನಲ್ಲಿ ನಡೆದ ಈ ಆಕಸ್ಮಿಕ ಸ್ಫೋಟದಲ್ಲಿ ಐದು ಪೊಲೀಸ್ ಸಿಬ್ಬಂದಿ ಮತ್ತು ನಾಲ್ವರು ನಾಗರಿಕರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಬಾಕಿಯಿರುವ ಗೃಹಲಕ್ಷ್ಮೀ ಹಣ ಬಿಡುಗಡೆ ಯಾವಾಗ? ಮಹಿಳೆಯರ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ, ಗೃಹಲಕ್ಷ್ಮೀ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯಿಂದ ಇಲಾಖೆಯ ಪ್ರಾಮುಖ್ಯತೆ ಹೆಚ್ಚಿದೆ. ಅಕ್ಕ ಪಡೆ ಮಹಿಳೆಯರ ರಕ್ಷಣೆಗೆ ಕಾರ್ಯೋನ್ಮುಖವಾಗಿದೆ. ಗೃಹಲಕ್ಷ್ಮೀ ಬ್ಯಾಂಕ್ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಲಾಗುವುದು ಎಂದರು.
ತುಮಕೂರಿಗೆ ಮೆಟ್ರೋ ಯೋಜನೆ; ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗುತ್ತದೆ : ಜಿ.ಪರಮೇಶ್ವರ್
ಬೆಂಗಳೂರು : ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್ಪೇಟೆ, ಕ್ಯಾತ್ಸಂದ್ರ ಭಾಗ ವೇಗವಾಗಿ ಬೆಳೆಯುತ್ತಿವೆ. ಕೈಗಾರಿಕೆ ಉದ್ದೇಶದಿಂದ ಜನರ ಜೀವನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒತ್ತಡ ಜಾಸ್ತಿ ಇದೆ. ನೀರಿಗೆ ಕಷ್ಟ, ಓಡಾಡೋಕೆ ಟ್ರಾಫಿಕ್ ಸಮಸ್ಯೆ ಇದೆಲ್ಲ ನೋಡಿಕೊಂಡು ಆ ಕಡೆ ಜೀವನ ನಡೆಸುತ್ತಿದ್ದಾರೆ ಎಂದರು. ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್ಶಿಪ್ಗೆ ಜಾಗ ಕೊಟ್ಟಿದ್ದೇವೆ. ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ (ಕನೆಕ್ಟಿವಿಟಿ) ವ್ಯವಸ್ಥೆ ಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ರಸ್ತೆ, ಮೆಟ್ರೋ, ರೈಲು ಸಂಪರ್ಕ ಇದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಉದ್ದೇಶ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು. ಎರಡು ವರ್ಷದ ಹಿಂದೆಯೇ ತುಮಕೂರಿಗೆ ಮೆಟ್ರೋ ಯೋಜನೆ ತೆಗೆದುಕೊಂಡು ಹೋಗಬೇಕು ಎಂದು ಪ್ರಸ್ತಾಪ ಮಾಡಿದ್ದೆ.ಮುಖ್ಯಮಂತ್ರಿಗಳು ಫಿಸಿಬಲಿಟಿ ಸ್ಟಡಿ ಮಾಡುವುದಾಗಿ 2024ರ ಬಜೆಟ್ನಲ್ಲಿ ಘೋಷಿಸಿದ್ದರು. ಫಿಸಿಬಲಿಟಿ ವರದಿಯಲ್ಲಿ ತುಮಕೂರು ಮೆಟ್ರೋ ಯೋಜನೆ ಬಗ್ಗೆ ಪಾಸಿಟಿವ್ ಆಗಿ ಕೊಟ್ಟಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂದರು. ಎರಡು-ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಹೂಡಿಕೆ ಮಾಡಲು ಸಿದ್ಧರಿದ್ದೇವೆ ಎಂಬುದಾಗಿ ಕತಾರ್ ಮೂಲದ ಕಂಪನಿಯವರು ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಪತ್ರ ನೀಡಿದ್ದಾರೆ. ಇಷ್ಟೆಲ್ಲ ಆಗಿರುವಾಗ, ಸಂಸದ ತೇಜಸ್ವಿ ಸೂರ್ಯ ಏನು ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ನಾನು ಅವರೊಂದಿಗೆ ಮಾತಾಡುತ್ತೇನೆ. ಇದು ಸಂಘರ್ಷದ ಪ್ರಶ್ನೆಯಲ್ಲ. 'ನಮಗೆ ಬೇಕು, ನಿಮಗೆ ಬೇಡ. ನಮಗೆ ಬೇಡ, ನಿಮಗೆ ಬೇಕು' ಎಂಬ ಪ್ರಶ್ನೆಯೂ ಅಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಯೋಚನೆ ಮಾಡಬೇಕು ಎಂದು ಹೇಳಿದರು. ನಾವು ಅಧಿಕಾರದಲ್ಲಿದ್ದಾಗ ಒಂದು ಹೇಳಬಹುದು. ಮತ್ತೊಬ್ಬರು ಅಧಿಕಾರದಲ್ಲಿದ್ದಾಗ ಮತ್ತೊಂದು ಹೇಳಬಹುದು. ಆ ರೀತಿ ಆದರೆ ರಾಜ್ಯ ಬೆಳೆಯುವುದಿಲ್ಲ. ಕರ್ನಾಟಕ ಪ್ರಗತಿಯ ರಾಜ್ಯ. ಎಲ್ಲರೂ ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ನಾನು ಅನೇಕ ದೇಶಗಳಿಗೆ ಹೋಗಿದ್ದೇನೆ. ಟೋಕಿಯೋದಲ್ಲಿ ನರೀಟ ಏರ್ಪೋರ್ಟ್ 70 ಕಿ.ಮೀ. ದೂರದಲ್ಲಿದೆ. ಮಲೇಷ್ಯಾದಲ್ಲಿ ಕೌಲಲಾಂಪುರಗೆ 20 ನಿಮಿಷದಲ್ಲಿ ಹೋಗುತ್ತಾರೆ. ಆ ರೀತಿ ಪಾಸಿಟಿವ್ ಆಗಿ ಯೋಚಿಸಬೇಕು. ನೆಗಿಟಿವ್ ಆಗಿ ಯೋಚಿಸಬೇಕಿಲ್ಲ ಎಂದರು. ನಾನು ಏಕಾಏಕಿಯಾಗಿ ಬಿಜೆಪಿಯವರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಅವರ ನಡೆದುಕೊಳ್ಳುವ ರೀತಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಅಭಿವೃದ್ಧಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಓದಲು ಕರ್ನಾಟಕಕ್ಕೆ ಬರುತ್ತಾರೆ? ಬೇರೆಬೇರೆ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳಿವೆ. ಅಲ್ಲಿಗೆ ಯಾಕೆ ಓದಲು ಹೋಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಶಿಕ್ಷಣ ಸಿಗುತ್ತಿದೆ ಎಂದು ಬರುತ್ತಿದ್ದಾರೆ. ಕರ್ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾವು ನೋಡಬೇಕೇ ಹೊರತು, ಬೇರೆ ವಿಚಾರಗಳಿಂದಲ್ಲ ಎಂದು ಹೇಳಿದರು. ಸಿಎಂ ಜೊತೆ ಮಾತನಾಡಿದ ಮೇಲೆ ವಿಷಯ ಗೊತ್ತಾಗುತ್ತದೆ : ಸಂಪುಟ ಪುನರ್ ರಚನೆ ಕುರಿತು ಮಾಧ್ಯಮದವರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡಿಲ್ಲ. ದೆಹಲಿ ಭೇಟಿ ವೇಳೆ ಏನು ಮಾಡಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಮೇಲೆ ವಿಷಯ ಗೊತ್ತಾಗುತ್ತದೆ. ಮಾತಾಡದೆನೇ ಹೇಳಿದರೆ ಸರಿ ಇರುವುದಿಲ್ಲ ಎಂದರು. ಕಳೆದ ಬಾರಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. ಈ ಬಾರಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿಕೊಂಡು ಬಂದಿದ್ದಾರೆ. ಅವರ ಮಧ್ಯೆ ಏನು ಚರ್ಚೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಲ್ಲವೇ? ಈ ರೀತಿಯಾಗಿ ಚರ್ಚೆಯಾಗಿದೆ ಎಂದು ಯಾರಾದರೂ ನೇರವಾಗಿ ನಮ್ಮ ಜೊತೆ ಮಾತನಾಡಬೇಕಲ್ಲ. ತಿಳಿದುಕೊಳ್ಳದೆ ಹೇಳಿದರೆ ಊಹಾಪೋಹಾ ಅಗುತ್ತದೆ ಎಂದು ಪ್ರತಿಕ್ರಿಯಿಸಿದರು.
School Holiday: ನವೆಂಬರ್ 21 ಶುಕ್ರವಾರ ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ... ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ... ಹೀಗೆ ಬಹುಶಃ 2025 ಮುಗಿಯುವ ತನಕ ಕೂಡ ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ ಅನ್ನೋ ಶಬ್ಧ ಕೇಳದೇ ಇರಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಏಕೆಂದರೆ 2025 ವರ್ಷ ಪೂರ್ತಿ ಬರೀ ರಜೆ ರಜೆ ರಜೆಗಳೇ ಸಿಕ್ಕುಬಿಟ್ಟಿವೆ. ಅದರಲ್ಲೂ ಈ ಬಾರಿ
UDUPI | ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಪ್ರಕರಣ: ವ್ಯವಸ್ಥಾಪಕನ ಬಂಧನ
ಕೋಟ : ಸಾಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಂತರ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ನಿವಾಸಿ ಸುರೇಶ ಭಟ್(38) ಬಂಧಿತ ಆರೋಪಿ. ಸುರೇಶ್ ಭಟ್ ಹಾಗೂ ಶಾಖೆಯ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಎಂಬವರು ಸಂಘಕ್ಕೆ 1.70ಕೋಟಿ ರೂ. ಹಣ ವಂಚಿಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ ಕುಮಾರ್ ಹಾಗೂ ಮಾಂತೇಶ್ ಜಾಭಗೌಡ ಮತ್ತು ಸಿಬ್ಬಂದಿ ಕೃಷ್ಣ ಶೇರೆಗಾರ, ಶ್ರೀಧರ್, ವಿಜಯೇಂದ್ರ ತಂಡ ಆರೋಪಿಯನ್ನು ಬಂಧಿಸಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ರಾಜ್ಯದಲ್ಲಿ ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ: ಹೂಡಿಕೆದಾರರಿಗೆ ಸಿದ್ದರಾಮಯ್ಯ ಕರೆ
ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ.ರಾಜ್ಯದ ನಿರುದ್ಯೋಗ ಪ್ರಮಾಣ 4.3% ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಉದ್ಯಮಶೀಲತಾ ಶಕ್ತಿಗೆ ಬೆಂಗಳೂರು ಅನ್ವರ್ಥವಾಗಿದೆ. ಕರ್ನಾಟಕವು 16,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದೆ ಮತ್ತು ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟನ್ನು ರಾಜ್ಯವು ಕೊಡುಗೆ ನೀಡಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದರು. ಮತ್ತಷ್ಟು ವಿವರ ಇಲ್ಲಿದೆ.
Maize Price Today: ಕರ್ನಾಟಕದಲ್ಲಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು
Maize Price Today: ಕರ್ನಾಟಕ ರಾಜ್ಯದಲ್ಲಿ ಈ ವರ್ಷ (2025) 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್ ಬೆಲೆ ಸಹ ಕುಸಿಯುತ್ತಿದೆ. ಕೂಡಲೇ ರಾಜ್ಯ ಸರ್ಕಾರಮೆಕ್ಕೆಜೋಳ ಖರೀದಿ ಆರಂಭಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬಿಹಾರ ಚುನಾವಣೆ | ಸೋಲಿನ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತೇನೆ : ಪ್ರಶಾಂತ್ ಕಿಶೋರ್
“ಮಹಿಳೆಯರಿಗೆ 10,000ರೂ. ನೀಡದಿದ್ದರೆ ಜೆಡಿಯು 25 ಸ್ಥಾನಗಳಿಗೆ ತೃಪ್ತಿ ಪಡಬೇಕಿತ್ತು”
ಭಯೋತ್ಪಾದನೆ ಇಲ್ಲವಾಗಿಸುತ್ತೇವೆ ಎಂದವರಿಗೆ ಇನ್ನೂ ಅದನ್ನು ನಿಲ್ಲಿಸಲಾಗುತ್ತಿಲ್ಲ ಯಾಕೆ?
ದಿಲ್ಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ನಡೆದ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಯೋತ್ಪಾದನೆ ವಿರುದ್ಧ ಮೋದಿ ಸರಕಾರ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ದಿನಬೆಳಗಾದರೆ ಅಮಿತ್ ಶಾ ಹೇಳುತ್ತಲೇ ಇದ್ದಾರೆ. ದೇಶದಲ್ಲಿ ಭಯೋತ್ಪಾದನೆ ಇನ್ನೊಂದೇ ವರ್ಷದಲ್ಲಿ ಕೊನೆಗೊಳ್ಳಲಿದೆ ಎಂದು ಕೂಡ ಅವರು ಹೇಳುತ್ತಿದ್ದಾರೆ. ಪ್ರತೀ ಭಯೋತ್ಪಾದಕ ದಾಳಿಯ ನಂತರವೂ ಮೋದಿ ಮತ್ತು ಶಾ ಅಬ್ಬರಿಸುವುದು ನಡೆಯುತ್ತದೆ. ಆದರೆ ಭಯೋತ್ಪಾದನೆ ನಿಲ್ಲುತ್ತಿಲ್ಲ ಎನ್ನುವ ಕಟು ವಾಸ್ತವವನ್ನು ಈ ದೇಶ ನೋಡುತ್ತಲೇ ಇರಬೇಕಾಗಿದೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ಮೋದಿ ಕೊಟ್ಟ ಬಹಳ ದೊಡ್ಡ ಭರವಸೆಗಳಲ್ಲಿ ರಾಷ್ಟ್ರೀಯ ಸುರಕ್ಷತೆಯೂ ಒಂದು. ಆದರೆ ಈ 11 ವರ್ಷಗಳಲ್ಲಿ ಏನೇನೆಲ್ಲ ಆಯಿತು ಎಂದು ನೋಡಿದರೆ, ಸರಕಾರದ ಭರವಸೆಯೂ ಸುಳ್ಳಾಗಿದೆ, ಅಬ್ಬರವೂ ಸುಳ್ಳಾಗಿದೆ ಎಂಬುದು ಗೊತ್ತಾಗುತ್ತದೆ. ಭಾಗ - 1 ದೇಶದಲ್ಲಿ ಮತ್ತೊಮ್ಮೆ ಆತಂಕದ ಕರಿನೆರಳು ಕವಿದಿದೆ. ದಿಲ್ಲಿ ಸ್ಫೋಟ ರಾಜಧಾನಿಯನ್ನು ಬೆಚ್ಚಿಬೀಳಿಸಿರುವುದರ ಜೊತೆಗೇ ದೇಶಾದ್ಯಂತ ಭೀತಿಗೆ ಕಾರಣವಾಗಿದೆ. 2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ದೇಶದಲ್ಲಿ ಹಲವು ಸ್ಫೋಟ ಪ್ರಕರಣಗಳು ನಡೆದಿವೆ. ಆದರೆ ದಿಲ್ಲಿಯಲ್ಲಿ ಅದೇ ಮೋದಿ ಸರಕಾರದ ನದರಿನಡಿಯೇ ನಡೆದಿರುವ ಸ್ಫೋಟ ಇದಾಗಿದೆ. ಮೋದಿ ಆಡಳಿತದಲ್ಲಿ ಮಾತ್ರ ದೇಶ ಸುರಕ್ಷಿತವಾಗಿರುವುದು ಸಾಧ್ಯ ಎಂಬ ಬಿಜೆಪಿಯ ಬೊಗಳೆಯನ್ನು ಈ ಘಟನೆ ಸುಳ್ಳು ಮಾಡಿದೆ. ಈಗಾಗಲೇ ಬಂದಿರುವ ಹಲವು ವರದಿಗಳು ಭದ್ರತಾ ವ್ಯವಸ್ಥೆಗಳಲ್ಲಿನ ದೊಡ್ಡ ಲೋಪಗಳ ಕಡೆ ಬೆರಳು ಮಾಡಿವೆ. ದಿಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ. ಘಟನೆಯನ್ನು ಭಯೋತ್ಪಾದಕ ಕೃತ್ಯವೆಂದು ಸರಕಾರ ಘೋಷಿಸಿದ್ದು, ಈಗ ಲೋಪಗಳ ಬಗ್ಗೆ ವಿಮರ್ಶಿಸಿಕೊಳ್ಳುವ ಬದಲು ಮತ್ತೊಮ್ಮೆ, ಅಲ್ಪಸಂಖ್ಯಾತರನ್ನು ಭಯೋತ್ಪಾದಕರೆಂದು ನೋಡುವ ಬಗ್ಗೆಯೇ ನಿರೂಪಣೆಗಳು ಒತ್ತು ನೀಡಲಿವೆ ಎನ್ನುವುದು ಸ್ಪಷ್ಟ. ಸ್ಫೋಟ ನಡೆಸಲು ಬಳಸಿದ ಕಾರನ್ನು ನಡೆಸುತ್ತಿದ್ದ ವ್ಯಕ್ತಿಯೂ ಸತ್ತಿದ್ದು, ದೇಶದ ಇತರೆಡೆಗಳಲ್ಲಿ ಭಯೋತ್ಪಾದನಾ ದಾಳಿಗಳ ಒಳಸಂಚು ಮಾಡಿದ್ದ ಇತರ ಗುಂಪಿನೊಂದಿಗೆ ಆತ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ. ವೈಟ್ ಕಾಲರ್ ಭಯೋತ್ಪಾದನೆ ಎಂಬ ಚರ್ಚೆಯನ್ನು ಎತ್ತಲಾಗಿದೆ. ಶಂಕಿತ ಆರೋಪಿ ಡಾ.ಉಮರ್ ನಬಿಯ ಪುಲ್ವಾಮಾದ ಕ್ವಿಲ್ ಗ್ರಾಮದಲ್ಲಿನ ಮನೆಯನ್ನೂ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಪುಲ್ವಾಮಾ ದಾಳಿಯೊಂದಿಗೂ ನಬಿ ಹೆಸರು ಜೋಡಿಸಲಾಗಿದೆ. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಸರಕಾರ ಮತ್ತು ಮಡಿಲ ಮೀಡಿಯಾಗಳ ಕಣ್ಣು ಮೊದಲು ಹರಿಯುವುದೇ ಮುಸ್ಲಿಮರ ಕಡೆಗೆ ಎನ್ನುವುದು ಈಗ ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಭಯೋತ್ಪಾದನೆಯ ಹೆಸರಿನಲ್ಲಿ ಕೋಮು ಧ್ರುವೀಕರಣದ ರಾಜಕೀಯ ಬಲಗೊಳ್ಳುತ್ತಿದೆ. ದಿಲ್ಲಿ ಸ್ಫೋಟ ಪ್ರಕರಣದ ತನಿಖೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಆದರೆ, ಆರೋಪ ಹೊತ್ತವರ ಕುಟುಂಬಗಳು ನಿತ್ಯವೂ ಎದುರಿಸಬೇಕಾದ ಸಂಕಟ, ಈ ಸಮಾಜದ ದೃಷ್ಟಿಯನ್ನು ಎದುರಿಸಬೇಕಾಗುವಲ್ಲಿನ ತಳಮಳ ಸಣ್ಣದಲ್ಲ. ದೇಶದ ರಾಜಧಾನಿಯಲ್ಲಿ ಈ ಸಲ ಮತ್ತೊಮ್ಮೆ ದೇಶವನ್ನೇ ನಡುಗಿಸುವ ಸದ್ದು ಕೇಳಿಸಿದೆ ಎನ್ನುವ ಕಾರಣಕ್ಕಾಗಿ, ದಿಲ್ಲಿ ಸ್ಫೋಟಗಳ ಇತಿಹಾಸವನ್ನೊಮ್ಮೆ ಗಮನಿಸಬೇಕು. ದಿಲ್ಲಿಯಲ್ಲಿನ ಈಗಿನ ಸ್ಫೋಟ ಕಳೆದ 14 ವರ್ಷಗಳಲ್ಲಿ ಮೊದಲನೆಯದು. 1985 ರಿಂದ 2025 ರವರೆಗಿನ 40 ವರ್ಷಗಳಲ್ಲಿ ದಿಲ್ಲಿಯಲ್ಲಿ 23 ಬಾಂಬ್ ಸ್ಫೋಟಗಳು ನಡೆದಿವೆ. ನವೆಂಬರ್ 10ರ ಸಂಜೆ ಕೆಂಪು ಕೋಟೆಯ ಮುಂದೆ ನಡೆದ ಕಾರು ಸ್ಫೋಟ ದಿಲ್ಲಿಯಲ್ಲಿ ನಡೆದ 24ನೇ ಬಾಂಬ್ ಸ್ಫೋಟವಾಗಿದೆ. 1985ರ ಮೇ 10: ಇದ್ದಕ್ಕಿದ್ದಂತೆ ದಿಲ್ಲಿಯ ಹಲವಾರು ಸ್ಥಳಗಳಲ್ಲಿ ಬಾಂಬ್ಗಳು ಸ್ಫೋಟಗೊಂಡಿದ್ದವು. ಆ ಸರಣಿ ಸ್ಫೋಟಗಳಲ್ಲಿ 49 ಜನರು ಸಾವನ್ನಪ್ಪಿ, 127ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎನ್ನಲಾಗಿದೆ. ಟ್ರಾನ್ಸಿಸ್ಟರ್ಗಳನ್ನು ಬಳಸಿ ಆ ಸ್ಫೋಟ ನಡೆಸಲಾಗಿತ್ತು ಮತ್ತು ಅದು ಖಾಲಿಸ್ತಾನಿ ಉಗ್ರರ ಪಿತೂರಿ ಎಂದು ಬಯಲಾಗಿತ್ತು. 1996 ಮೇ 21: ಲಜ್ಪತ್ ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ ಸಂಭವಿಸಿ, 13 ಜನರು ಸಾವನ್ನಪ್ಪಿದರು ಮತ್ತು 28ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದಾಳಿಯ ಹೊಣೆಯನ್ನು ಜಮ್ಮು-ಕಾಶ್ಮೀರ ಇಸ್ಲಾಮಿಕ್ ಫ್ರಂಟ್ ಹೊತ್ತುಕೊಂಡಿತ್ತು. 1997 ಜನವರಿ 9: ಲಜ್ಪತ್ ನಗರ ಸ್ಫೋಟದ ಸುಮಾರು ಆರು ತಿಂಗಳ ನಂತರ, ದಿಲ್ಲಿ ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಸ್ಫೋಟ ನಡೆಯಿತು. 50 ಜನ ಗಾಯಗೊಂಡಿದ್ದರು. 1997 ಅಕ್ಟೋಬರ್ 1: ಸದರ್ ಬಝಾರ್ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಎರಡು ಸ್ಫೋಟಗಳು ನಡೆದು, 30 ಜನ ಗಾಯಗೊಂಡರು. 1997 ಅಕ್ಟೋಬರ್ 10: ಕಿಂಗ್ಸ್ವೇ ಕ್ಯಾಂಪ್ನ ಶಾಂತಿವನದಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದವು. ಒಬ್ಬ ವ್ಯಕ್ತಿ ಸಾವನ್ನಪ್ಪಿ, 16 ಜನರು ಗಾಯಗೊಂಡಿದ್ದರು. 1997 ಅಕ್ಟೋಬರ್ 18: ರಾಣಿ ಬಾಗ್ ಬಝಾರ್ನಲ್ಲಿ ಸ್ಫೋಟ ನಡೆಯಿತು. ಆ ಅವಳಿ ಬಾಂಬ್ ಸ್ಫೋಟಗಳಲ್ಲಿ ಒಬ್ಬ ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದರು. 1997 ಅಕ್ಟೋಬರ್ 26: ಕರೋಲ್ ಬಾಗ್ನಲ್ಲಿ ಸಂಭವಿಸಿತು. ಅವಳಿ ಬಾಂಬ್ಗಳು ಸ್ಫೋಟಗೊಂಡು, ಒಬ್ಬ ಸಾವನ್ನಪ್ಪಿ, 34 ಜನರು ಗಾಯಗೊಂಡಿದ್ದರು. 1997 ನವೆಂಬರ್ 30: ಕೆಂಪು ಕೋಟೆಯ ಪಕ್ಕದ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟಗಳಲ್ಲಿ ಮೂವರು ಸಾವನ್ನಪ್ಪಿ, 70ಕ್ಕೂ ಹೆಚ್ಚು ಜನರು ಗಾಯಗೊಂಡರು. 1999 ಎಪ್ರಿಲ್ 16: ಹುಲಂಬಿ ಕಲಾನ್ ರೈಲು ನಿಲ್ದಾಣದಲ್ಲಿ ಸ್ಫೋಟ ನಡೆದು, ಇಬ್ಬರು ಸಾವನ್ನಪ್ಪಿದ್ದರು. 1999 ಜೂನ್ 3: ಹಳೆಯ ದಿಲ್ಲಿ ಪ್ರದೇಶವಾದ ಚಾಂದನಿ ಚೌಕ್ನಲ್ಲಿ ಬಾಂಬ್ ಸ್ಫೋಟಗೊಂಡು 27 ಜನರು ಗಾಯಗೊಂಡರು. 2000 ಜನವರಿ 6: ಹಳೆಯ ದಿಲ್ಲಿ ರೈಲು ನಿಲ್ದಾಣದಲ್ಲಿ ರೈಲಿನೊಳಗೆ ಸ್ಫೋಟ ನಡೆದು, 20 ಜನರು ಗಾಯಗೊಂಡರು. 2000 ಫೆಬ್ರವರಿ 27: ಪಹರ್ಗಂಜ್ ಮಾರುಕಟ್ಟೆ ಪ್ರದೇಶದಲ್ಲಿ ಸ್ಫೋಟ ನಡೆದು, 8 ಜನರು ಗಾಯಗೊಂಡರು. 2000 ಮಾರ್ಚ್ 16: ಸದರ್ ಬಝಾರ್ ಅನ್ನು ಎರಡನೇ ಬಾರಿಗೆ ಗುರಿಯಾಗಿಸಿ ನಡೆದ ಸ್ಫೋಟದಲ್ಲಿ 7 ಜನರು ಗಾಯಗೊಂಡರು. 2000 ಜೂನ್ 18: ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ಶಕ್ತಿಶಾಲಿ ಬಾಂಬ್ಗಳು ಸ್ಫೋಟಗೊಂಡು, 8 ವರ್ಷದ ಬಾಲಕಿಯೂ ಸೇರಿ ಇಬ್ಬರು ಸಾವನ್ನಪ್ಪಿದರು ಮತ್ತು 12 ಜನರು ಗಾಯಗೊಂಡರು. 2001 ಮೇ 9: ಡಾಲ್ಹೌಸಿ ರಸ್ತೆಯಲ್ಲಿರುವ ಸೇನಾ ಪ್ರಧಾನ ಕಚೇರಿ ಮುಂದೆ ಸ್ಫೋಟ ನಡೆದು, ಒಬ್ಬ ವ್ಯಕ್ತಿ ಗಾಯಗೊಂಡರು. 2001 ಮೇ 20: ಸಿಜಿಒ ಕಾಂಪ್ಲೆಕ್ಸ್ನಲ್ಲಿ ನಡೆದ ಸ್ಫೋಟದಲ್ಲಿ ಯಾರಿಗೂ ಹಾನಿಯಾಗಲಿಲ್ಲ. 2001 ಆಗಸ್ಟ್ 11: ದಕ್ಷಿಣ ವಿಸ್ತರಣಾ ಮಾರುಕಟ್ಟೆಯಲ್ಲಿನ ಸ್ಫೋಟದಲ್ಲಿ ಇಬ್ಬರು ಗಾಯಗೊಂಡರು. 2001 ಡಿಸೆಂಬರ್ 13: ಬಾಂಬ್ಗಳು ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತ ಭಯೋತ್ಪಾದಕರು ಸಂಸತ್ ಭವನದ ಮೇಲೆ ನೇರವಾಗಿ ದಾಳಿ ಮಾಡಿದರು. 2005 ಮೇ 22: ಲಿಬರ್ಟಿ ಮತ್ತು ಸತ್ಯಂ ಸಿನೆಮಾ ಮಂದಿರಗಳಲ್ಲಿ ಸರಣಿ ಸ್ಫೋಟಗಳು ನಡೆದು, ಒಬ್ಬ ವ್ಯಕ್ತಿ ಸಾವನ್ನಪ್ಪಿ, 60 ಜನರು ಗಾಯಗೊಂಡರು. 2005 ಅಕ್ಟೋಬರ್ 29: ಸರೋಜಿನಿ ನಗರ, ಪಹರ್ಗಂಜ್ ಮತ್ತು ಗೋವಿಂದಪುರಿಯಲ್ಲಿ ಬಸ್ನೊಳಗೆ ಸ್ಫೋಟಗಳನ್ನು ನಡೆಸಲಾಯಿತು. ಈ ಭೀಕರ ದಾಳಿಯಲ್ಲಿ 62 ಜನರು ಪ್ರಾಣ ಕಳೆದುಕೊಂಡರು. ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬಾ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. 2006 ಎಪ್ರಿಲ್ 14: ಜಾಮಾ ಮಸೀದಿಯನ್ನು ಗುರಿಯಾಗಿಸಿ ನಡೆದ ಎರಡು ಸ್ಫೋಟಗಳಲ್ಲಿ 14 ಜನ ಗಾಯಗೊಂಡರು. 2008 ಸೆಪ್ಟಂಬರ್ 13: ದಿಲ್ಲಿಯ ಐದು ಸ್ಥಳಗಳಲ್ಲಿ 45 ನಿಮಿಷಗಳಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಕರೋಲ್ ಬಾಗ್, ಗಫರ್ ಮಾರುಕಟ್ಟೆ, ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಶ್ ಒನ್ ಅನ್ನು ಗುರಿಯಾಗಿಸಿಕೊಂಡ ಸ್ಫೋಟಗಳಲ್ಲಿ 30 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2011 ಸೆಪ್ಟಂಬರ್ 7: ದಿಲ್ಲಿ ಹೈಕೋರ್ಟ್ ಮುಂದೆ ಬ್ರೀಫ್ಕೇಸ್ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು, 15 ಜನರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಈಗ 2025ರ ನವೆಂಬರ್ 10ರಂದು ಕೆಂಪು ಕೋಟೆಯ ಮುಂದೆ ಕಾರ್ಬಾಂಬ್ ಸ್ಫೋಟಗೊಂಡು 13 ಜನರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೋದಿ ಸರಕಾರ ಸುಳ್ಳು ಆಶ್ವಾಸನೆಗಳ ಮೇಲೆಯೇ ನಿಂತಿದೆ. ಅದು ಹೇಳಿದ ಅಚ್ಛೇ ದಿನಗಳು ಕಡೆಗೂ ಬರಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬರುವಾಗ ರಾಷ್ಟ್ರೀಯ ಭದ್ರತೆ ವಿಷಯವನ್ನು ದೊಡ್ಡದಾಗಿ ಎತ್ತಲಾಗಿತ್ತು. ಅದಾದ 11 ವರ್ಷಗಳ ಬಳಿಕವೂ ಆಗುತ್ತಿರುವುದೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಉಗ್ರರ ದಾಳಿಗಳನ್ನು ತಡೆಯಲು ಮೋದಿ ಸರಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ? ದೇಶದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳ ಕುರಿತು ಕೇಂದ್ರ ಗೃಹ ಇಲಾಖೆ ನೀಡಿರುವ ಅಂಕಿಅಂಶಗಳು ನಿಜಕ್ಕೂ ಆತಂಕಕಾರಿಯಾಗಿವೆ. ಜಮ್ಮು-ಕಾಶ್ಮೀರವೊಂದರಲ್ಲೇ 2014ರಿಂದ 2025 ರವರೆಗೆ 3,000ಕ್ಕೂ ಹೆಚ್ಚು ಭಯೋತ್ಪಾದಕ ಘಟನೆಗಳು ನಡೆದಿವೆ. ಇಡೀ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ ಸಂಖ್ಯೆ 5,000 ದಾಟಿದೆ ಮತ್ತು ಈ ಅವಧಿಯಲ್ಲಿ ಸಾವಿರಾರು ಯೋಧರು, ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಸಂತಸದ ಸುದ್ದಿ ನೀಡಿದೆ. ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ನೂತನ ಫೀಡರ್ ಬಸ್ ಮಾರ್ಗಗಳನ್ನು ನವೆಂಬರ್ 18 ರಿಂದ ಆರಂಭಿಸಲಾಗುತ್ತಿದೆ. ಎಂಎಫ್-23ಸಿ ಮತ್ತು ಎಂಎಫ್-23ಡಿ ಎಂಬ ಎರಡು ಹೊಸ ಮಾರ್ಗಗಳು ಪ್ರಯಾಣಿಕರ ಅನುಕೂಲಕ್ಕಾಗಿ ಪರಿಚಯವಾಗುತ್ತಿವೆ. ಈ ಸೇವೆಗಳು ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲಿವೆ.
ತುಮಕೂರಿಗೆ ಮೆಟ್ರೋ ರೈಲು ಅಗತ್ಯ ಏಕೆ? ತೇಜಸ್ವಿ ಸೂರ್ಯಗೆ ವಿವರಣೆ ನೀಡಿದ ಜಿ ಪರಮೇಶ್ವರ್
ಎರಡು-ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಹೂಡಿಕೆ ಮಾಡಲು ಸಿದ್ಧರಿದ್ದೇವೆ ಎಂಬುದಾಗಿ ಕತಾರ್ ಮೂಲದ ಕಂಪನಿಯವರು ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಪತ್ರ ನೀಡಿದ್ದಾರೆ. ಇಷ್ಟೆಲ್ಲ ಆಗಿರುವಾಗ, ಸಂಸದ ತೇಜಸ್ವಿ ಸೂರ್ಯ ಏನು ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ನಾನು ಅವರೊಂದಿಗೆ ಮಾತಾಡುತ್ತೇನೆ. ಇದು ಸಂಘರ್ಷದ ಪ್ರಶ್ನೆಯಲ್ಲ. 'ನಮಗೆ ಬೇಕು, ನಿಮಗೆ ಬೇಡ. ನಮಗೆ ಬೇಡ, ನಿಮಗೆ ಬೇಕು' ಎಂಬ ಪ್ರಶ್ನೆಯೂ ಅಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಯೋಚನೆ ಮಾಡಬೇಕು ಎಂದು ಜಿ ಪರಮೇಶ್ವರ್ ಹೇಳಿದರು.
ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ : ಸಿದ್ದರಾಮಯ್ಯ
► ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ : ಹೂಡಿಕೆದಾರರಿಗೆ ಸಿಎಂ ಕರೆ► ʼಬೆಂಗಳೂರು ಟೆಕ್ ಸಮ್ಮಿಟ್ 2025ʼ
ಕಲಬುರಗಿ: ಸಂಗಮೇಶ್ವರ ಆಸ್ಪತ್ರೆಯಲ್ಲಿ ವಿಶ್ವ ಪ್ರೀಮೆಚುರಿಟಿ ದಿನಾಚರಣೆ
ಕಲಬುರಗಿ: ಅವಧಿಪೂರ್ವ ಜನನ ಸಂಬಂಧಿತ ಸಾವುಗಳು, ಸವಾಲುಗಳು ಮತ್ತು ಅವುಗಳನ್ನು ತಡೆಗಟ್ಟಲು ಕೈಗೆಟುಕುವ ಮಾರ್ಗಗಳು ಸೇರಿದಂತೆ ಅವಧಿಪೂರ್ವ ಜನನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನ.17 ರಂದು ವಿಶ್ವ ಅವಧಿಪೂರ್ವ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ ಕಿರಣ್ ಹೊಸ ಗೌಡ ಹೇಳಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ 2025 ನೇ ಸಾಲಿನ ಪ್ರೀಮಾಚುರಿಟಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಈ ದಿನದಂದು, ವಿಶ್ವ ಆರೋಗ್ಯ ಸಂಸ್ಥೆ ,ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ , ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಮತ್ತು ಮಾರ್ಚ್ ಆಫ್ ಡೈಮ್ಸ್ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಆಸ್ಪತ್ರೆಗಳು, ಲಾಭರಹಿತ ಸಂಸ್ಥೆಗಳು ಮತ್ತು ಆರೋಗ್ಯ ವೃತ್ತಿಪರರು ಒಟ್ಟಾಗಿ ಚಟುವಟಿಕೆಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ವಿಶ್ವಾದ್ಯಂತ ಅಕಾಲಿಕ ಜನನದ ತೊಂದರೆಗಳು ಮತ್ತು ಹೊರೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದರು. ನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಮಹಾನಂದಾ ಮೇಳಕುಂದಿ ಮಾತನಾಡಿ, ಅವಧಿಪೂರ್ವ ಜನನವು ಹಲವಾರು ಕಾರಣಗಳಿಂದ ಸಂಭವಿಸಬಹುದು. ಹೆಚ್ಚಿನ ಅವಧಿಪೂರ್ವ ಜನನಗಳು ಸ್ವಾಭಾವಿಕವಾಗಿ ಸಂಭವಿಸುತ್ತವೆ. ಆದಾಗ್ಯೂ, ಕೆಲವು ಸೋಂಕುಗಳು ಅಥವಾ ಗರ್ಭಧಾರಣೆಯ ಇತರ ಸಮಸ್ಯೆಗಳಂತಹ ವೈದ್ಯಕೀಯ ಕಾರಣಗಳಿಂದ ಉಂಟಾಗುತ್ತವೆ, ಅದು ಹೆರಿಗೆಗೆ ಆರಂಭಿಕ ಪ್ರಚೋದನೆ ಅಥವಾ ಸಿಸೇರಿಯನ್ ಹೆರಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಕ್ಕಳ ವೈದ್ಯರಾದ ಡಾ.ಬಸವರಾಜ ಪಾಟೀಲ್, ಡಾ. ಐಶ್ವರ್ಯ ಮತ್ತು ಡಾ. ಶಿವಕುಮಾರ್ ಸಂಗೋಳಗಿ ಅವರು ಆಸ್ಪತ್ರೆಯ NICU ನಲ್ಲಿ ದಾಖಲಾಗಿರುವ 2 ಅಕಾಲಿಕ ಶಿಶುಗಳ ಪ್ರಕರಣಗಳನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ತೊಡಕುಗಳು ಮತ್ತು ಅಕಾಲಿಕ ಶಿಶುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಹಾರ ತಜ್ಞೆ ಡಾ.ಪಾರ್ವತಿ ಭೀಮಳ್ಳಿ ಉಪಸ್ಥಿತರಿದ್ದರು.
ಕನಕಗಿರಿ ತಾಲೂಕಿನ ಗ್ರಾಮೀಣ ಜನರಿಗೆ ತಪ್ಪದ ಸಂಚಾರ ಸಮಸ್ಯೆ
►ಮೂಲ ಸೌಕರ್ಯವಿಲ್ಲದ ಬಸ್ ನಿಲ್ದಾಣ ►ಸಮರ್ಪಕ ಬಸ್ ವ್ಯವಸ್ಥೆಗೆ ವಿದ್ಯಾರ್ಥಿಗಳ ಆಗ್ರಹ
ಸಂಪಾದಕೀಯ | ತಿಮ್ಮಕ್ಕನ ನೆರಳಲ್ಲಿ ಭವಿಷ್ಯದ ಮಕ್ಕಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೊದಲ ದಿನವೇ ಕಡಲೆಕಾಯಿ ಪರಿಷೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಬೆಂಗಳೂರು: ಬಸವನಗುಡಿಯಲ್ಲಿ ಆಯೋಜನೆಗೊಂಡ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ನೀಡಲಾಗಿದ್ದು, ಅಪಾರ ಸಂಖ್ಯೆಯ ಸಾರ್ವಜನಿಕರು ಕಡಲೆಕಾಯಿ ಪರಿಷೆಗೆ ಬಂದಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ.21ರವರೆಗೆ ನಡೆಯಲಿರುವ ಕಡಲೆಕಾಯಿ ಪರಿಷೆಯು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕಾಲದಿಂದ ಪ್ರಾರಂಭವಾಗಿದ್ದು, ಸುಮಾರು 500ವರ್ಷಗಳು ಸಂದಿವೆ. ಪ್ರತಿ ವರ್ಷ ಕೇವಲ ಮೂರು ದಿನಗಳ ಕಾಲ ನಡೆಯುತ್ತಿದ್ದ ಕಡಲೆಕಾಯಿ ಪ್ರದರ್ಶನ ಈ ಬಾರಿ 5 ದಿನಗಳ ಕಾಲ ನಡೆಯುತ್ತಿರುವುದು ವಿಶೇಷವಾಗಿದೆ. ಎರಡೂ ರಸ್ತೆಗಳ ಬದಿಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರು ರಾಶಿ ರಾಶಿ ಕಡಲೆಕಾಯಿಯನ್ನು ತಂದು ಮಾರಾಟ ಮಾಡುತಿದ್ದಾರೆ. ಈ ಬಾರಿಯ ಪರಿಷೆ 5ದಿನಗಳ ಕಾಲ ನಡೆಯುತ್ತಿರುವುದರಿಂದ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದು ಕಡಲೆಕಾಯಿ ವ್ಯಾಪಾರಿಯೊಬ್ಬರ ಅಭಿಪ್ರಾಯವಾಗಿದೆ. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ನಡೆಸಲು ಸರಕಾರ ನಿರ್ಧರಿಸಿರುವುದರಿಂದ ಬಹುತೇಕ ವ್ಯಾಪಾರಿಗಳು ಪೇಪರ್ ಕವರ್ಗಳನ್ನು ಬಳಸುತ್ತಿದ್ದಾರೆ. ಒಂದು ಲೀಟರ್ ಹಸಿ ಕಡಲೆಕಾಯಿಯನ್ನು ಸುಮಾರು 50ರಿಂದ 70 ರೂ. ವರೆಗೆ, ಬೇಯಿಸಿದ ಅಥವಾ ಹುರಿದ ಕಡಲೆಕಾಯಿಯನ್ನು 80ರೂ.ಗೆ ಮಾರಾಟ ನಡೆಸಲಾಗುತ್ತಿದೆ. ಬಸವನಗುಡಿ ಕಡಲೆಕಾಯಿ ಪರಿಷೆಯ ಈ ವರ್ಷದ ವಿಶೇಷತೆಯೆಂದರೆ ಈ ಬಾರಿ ಯಾವುದೇ ಶುಲ್ಕವಿಲ್ಲದೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಬುಲ್ ಟೆಂಪಲ್ ರೋಡ್ನಲ್ಲಿ ಈಗಾಗಲೇ ಸಾವಿರಾರು ಅಂಗಡಿಗಳು ತೆರೆಯಲಾಗಿದೆ. ಪರಿಷೆಗೆ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇರುವುದರಿಂದ ಭದ್ರತೆ ದೃಷ್ಠಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೇಲಂ, ಕುಣಿಗಲ್, ಬೆಳಗಾವಿ, ಧರ್ಮಪುರಿ, ತಮಿಳುನಾಡಿನ ಕಡಲೆಕಾಯಿಗಳನ್ನು ಪರಿಷೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ವಿವಿಧೆಡೆ ಸುರಿದ ವಿಪರೀತ ಮಳೆಯಿಂದ ಕಡಲೆಕಾಯಿಗಳು ನಾಶವಾದ ಕಾರಣದಿಂದ ರೈತರಿಗೆ ಇಳುವರಿ ಕೂಡ ಕಡೆಮೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡೆಲೆಕಾಯಿ ಬೆಲೆ ಹೆಚ್ಚಳವಾಗಿದೆ.
ಸರಕಾರದಿಂದ ಪೂರ್ವಾನ್ವಯ ಪರಿಸರ ಅನುಮತಿಗಳ ನೀಡಿಕೆ ನಿರ್ಬಂಧಿಸಿದ್ದ ತನ್ನ ತೀರ್ಪನ್ನು ಹಿಂಪಡೆದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದ ಗಣಿಗಾರಿಕೆ ಯೋಜನೆಗಳಿಗೆ ಕೇಂದ್ರ ಸರಕಾರವು ಪೂರ್ವಾನ್ವಯವಾಗಿ ಪರಿಸರ ಅನುಮತಿಗಳನ್ನು ನೀಡುವುದನ್ನು ನಿರ್ಬಂಧಿಸಿದ್ದ ತನ್ನ ಮೇ 16ರ ತೀರ್ಪನ್ನು ಮಂಗಳವಾರ 2:1 ಬಹುಮತದಿಂದ ಹಿಂದೆಗೆದುಕೊಂಡಿದೆ. ವನಶಕ್ತಿ ತೀರ್ಪಿನ ಪುನರ್ಪರಿಶೀಲನೆ ಮತ್ತು ಮಾರ್ಪಾಡು ಕೋರಿ ಸಲ್ಲಿಸಲಾಗಿದ್ದ ಸುಮಾರು 40 ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಉಜ್ಜಲ ಭುಯಾನ್ ಮತ್ತು ಕೆ.ವಿನೋದ ಚಂದ್ರನ್ ಅವರನ್ನು ಒಳಗೊಂಡಿದ್ದ ಪೀಠವು ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿತು. ಈ ವರ್ಷದ ಮೇ 16ರಂದು ವನಶಕ್ತಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ನ್ಯಾ.ಎ.ಎಸ್.ಓಕಾ ಮತ್ತು ನ್ಯಾ.ಉಜ್ಜಲ್ ಭುಯಾನ್ ಅವರ ಪೀಠವು ಹೊರಡಿಸಿದ್ದ ತೀರ್ಪು ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಸಂಬಂಧಿತ ಪ್ರಾಧಿಕಾರಗಳು ನಿಯಮಗಳನ್ನು ಉಲ್ಲಂಘಿಸಿದವರಿಗೆ ಪೂರ್ವಾನ್ವಯವಾಗಿ ಪರಿಸರ ಅನುಮತಿಗಳನ್ನು ನೀಡುವುದನ್ನು ನಿಷೇಧಿಸಿತ್ತು. ಮಂಗಳವಾರ ಆ ತೀರ್ಪನ್ನು ಮೆಲುಕು ಹಾಕಿದ ಸಿಜೆಐ ಗವಾಯಿ ಮತ್ತು ನ್ಯಾ.ವಿನೋದ್ ಚಂದ್ರನ್ ಅವರು,ಈ ವಿಷಯವನ್ನು ಹೊಸದಾಗಿ ಪರಿಗಣಿಸಲು ಅದನ್ನು ಸೂಕ್ತ ಪೀಠಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ‘ಪರಿಸರ ಅನುಮತಿಯನ್ನು ಪರಿಶೀಲಿಸದಿದ್ದರೆ 20,000 ಕೋಟಿ ರೂ.ಗಳ ಸಾರ್ವಜನಿಕ ಯೋಜನೆಗಳನ್ನು ಕೆಡವಬೇಕಾಗುತ್ತದೆ. ನಾನು ಮೇ 16ರ ತೀರ್ಪನ್ನು ಹಿಂದೆಗೆದುಕೊಳ್ಳಲು ಒಲವು ಹೊಂದಿದ್ದೇನೆ. ನನ್ನ ಸಹೋದ್ಯೋಗಿ ನ್ಯಾ.ಭುಯಾನ್ ಅವರು ನನ್ನ ನಿರ್ಧಾರವನ್ನು ಟೀಕಿಸಿದ್ದಾರೆ’ ಎಂದು ಸಿಜೆಐ ಹೇಳಿದರು. ಬಲವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾ.ಭುಯಾನ್, ಪೂರ್ವಾನ್ವಯ ಪರಿಸರ ಅನುಮತಿಗಳಿಗೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಪ್ರತಿಪಾದಿಸಿದರು. ಪರಿಸರ ಕಾನೂನಿನಲ್ಲಿ ಪೂರ್ವಾನ್ವಯ ಪರಿಸರ ಅನುಮತಿಯ ಪರಿಕಲ್ಪನೆ ಇಲ್ಲ ಎಂದು ಹೇಳಿದ ಅವರು,ಈ ಪರಿಕಲ್ಪನೆಯು ಪರಿಸರ ನ್ಯಾಯತತ್ವಕ್ಕೆ ಒಂದು ಶಾಪವಾಗಿದೆ ಎಂದು ಬಣ್ಣಿಸಿದರು. 2013ರ ಅಧಿಸೂಚನೆ ಮತ್ತು ನಂತರದ ಕಚೇರಿ ಜ್ಞಾಪಕ ಪತ್ರವು ಅನುಮತಿ ನೀಡಬಹುದಾದ ಚಟುವಟಿಕೆಗಳಿಗೆ,ಅದೂ ಗಣನೀಯ ದಂಡಗಳನ್ನು ವಿಧಿಸುವ ಮೂಲಕ ಪರಿಸರ ಅನುಮತಿಗಳನ್ನು ನೀಡಲು ಚೌಕಟ್ಟೊಂದನ್ನು ಕಲ್ಪಿಸಿದೆ ಎಂದು ಸಿಜೆಐ ಬೆಟ್ಟು ಮಾಡಿದರು. ವನಶಕ್ತಿ ತೀರ್ಪು ಅದಾಗಲೇ ಪೂರ್ವಾನ್ವಯ ಪರಿಸರ ಅನುಮತಿಗಳನ್ನು ಪಡೆದಿದ್ದ ಯೋಜನೆಗಳಿಗೆ ರಕ್ಷಣೆ ನೀಡಿತ್ತು ಮತ್ತು ಭವಿಷ್ಯದಲ್ಲಿ ಇಂತಹ ಅನುಮತಿಗಳನ್ನು ನೀಡುವುದನ್ನು ಮಾತ್ರ ನಿಷೇಧಿಸಿತ್ತು ಎಂದು ಹೇಳಿದ ಸಿಜೆಐ ಗವಾಯಿ,ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ತೀರ್ಪನ್ನು ಹಿಂದೆಗೆದುಕೊಳ್ಳಲು ತಾನು ನಿರ್ಧರಿಸಿದ್ದೇನೆ ಎಂದರು.
ಕೆಪಿಟಿಸಿಎಲ್ನಿಂದ ಪರಿಸರ ಸ್ನೇಹಿ ‘ಥೀಮ್ ಪಾರ್ಕ್’ ನಿರ್ಮಾಣ
►ಸರ್ವಜ್ಞನಗರದ ಎಚ್ಬಿಆರ್ ಲೇಔಟ್ನಲ್ಲಿ ತಲೆ ಎತ್ತಲಿರುವ ಥೀಮ್ ಪಾರ್ಕ್►ಮಕ್ಕಳ ಆಟೋಟಗಳಿಗೆ ಅಂಗಳ, ಹಿರಿಯರಿಗೆ ನಡಿಗೆ ಪಥ
ಯಾದಗಿರಿ: ಬೈಕ್, ಆಟೋ ಢಿಕ್ಕಿ; ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
ಸುರಪುರ: ನಗರದ ರಂಗಂಪೇಟೆಯ ಸರ್ವಜ್ಞ ವೃತ್ತದ ಬಳಿಯ ಬಸ್ ನಿಲ್ದಾಣ ಬಳಿ ಸುರಪುರ-ಶಹಾಪುರ ಮುಖ್ಯ ರಸ್ತೆಯಲ್ಲಿ ಟಂಟಂ ಆಟೋ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದ ಶಿವರಾಜ ಪೂಜಾರಿ (16) ಮೃತ ಯುವಕ. ಶಹಾಪುರದಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿರುವ ಈತ ನಗರದ ಹಸನಾಪುರದಲ್ಲಿನ ಸಂಬಂಧಿಕರ ಮನೆಯಿಂದ ಮರಳುವ ವೇಳೆ ಘಟನೆ ನಡೆದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ಥಳದಲ್ಲಿಯೇ ಶಿವರಾಜ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನದ ಹಿಂದೆ ಕುಳಿತಿರುವ ಸಿದ್ದಪ್ಪ ಎನ್ನುವ ಬಾಲಕನಿಗೂ ಗಂಭೀರ ಗಾಯವಾಗಿದ್ದು, ನಗರದದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಟೋದಲ್ಲಿದ್ದ ಮಹಿಳೆಯೊಬ್ಬಳು ಕೆಳಗೆ ಬಿದ್ದು ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ಅವರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿ ವಾಹನ ಸವಾರರು ಪರದಾಡುವಂತಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಕೃಷ್ಣಾ ಸುಬೇದಾರ್, ಎಎಸ್ಆಯ್ ಮನೋಹರ ರಾಠೋಡ್ ಹಾಗೂ ಪೋಲಿಸ್ ಸಿಬ್ಬಂದಿ ವಾಹನಗಳಿಗೆ ಹೋಗಲು ಅನುಕೂಲ ಮಾಡಿಕೊಟ್ಟರು.
ಕಾಂಗ್ರೆಸ್ ಪಾದಯಾತ್ರೆಯಿಂದಲೇ ಮೇಕೆದಾಟು ಯೋಜನೆಗೆ ಹಿನ್ನಡೆ: ಬಸವರಾಜ್ ಬೊಮ್ಮಾಯಿ
ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಪಡೆಯುವಾಗ ರಾಜಕೀಯ ಮಾಡದೆ, ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಲ್ಲದೆ, ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದಕ್ಕೆ ಯೋಜನೆ ಆರಂಭಿಸಲು ತಡವಾಗಿದ್ದು ಎಂದು ಹೇಳಿದರು. ಮೆಕ್ಕೆಜೋಳ ಬೆಳೆದ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಕೂಡಲೇ ಖರೀದಿ ಆರಂಭಿಸಬೇಕು. ರಾಜ್ಯ ಸರ್ಕಾರ ಜನರ ಸಮಸ್ಯೆಗಳ ಕಡೆ ಗಮನಹರಿಸಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರದ ಆರು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಕೋಲಾರ, ನ.18 : ಟ್ರಾಕ್ಟರ್ ಖರೀದಿಗೆ ತೆರಿಗೆ ವಿನಾಯಿತಿ ಪಡೆಯಲು ಬೋನೋಫೈಡ್ ಪ್ರಮಾಣ ಪತ್ರ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಟ್ರಾಕ್ಟರ್ ನೊಂದಣಿಯಲ್ಲಿ ಬೋನಾಪೈಡ್ ಸರ್ಟಿಫಿಕೇಟ್ ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ 5 ಕಡೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸೇರಿ 6 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ನರಸಾಪುರ ನಿವೃತ್ತ ಉಪ ತಹಶೀಲ್ದಾರ್ ಎಸ್ . ನಾರಾಯಣಸ್ವಾಮಿ, ನಾಡ ಕಚೇರಿ ಕಂಪ್ಯೂಟರ್ ಆಪರೇಟರ್ ಅಂಬುಜಾ, ಆರ್ ಟಿ ಓ ಮಧ್ಯವರ್ತಿ ಮಂಜುನಾಥ್ , ಅಶ್ವಥ್ ನಾರಾಯಣ, ಟ್ರಾಕ್ಟರ್ ಶೋರೂಂ ಸೇಲ್ಸ್ ಮ್ಯಾನ್ ಗೋಕುಲ್, ಆದಿತ್ಯ ಟ್ರಾಕ್ಟರ್ ಶೋ ರೂಂ ಎಂ.ಡಿ. ಆಂಜನೇಯ ರೆಡ್ಡಿ ಇವರ ಮನೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೋಲಾರ -ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ 6 ಜನ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳು ಶೋಧ ಕಾರ್ಯದಲ್ಲಿ ನಡೆಸಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಮೀನು ಪತ್ರಗಳ ಮೂಲಕವೂ ಮಧ್ಯವರ್ತಿಗಳು ಬೋನಾಪೈಡ್ ಸರ್ಟಿಫಿಕೇಟ್ ಪಡೆದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ. ಟ್ರಾಕ್ಟರ್ ಖರೀದಿಗೆ ಟ್ಯಾಕ್ಸ್ ಫ್ರೀ ಹಾಗೂ ರಿಯಾಯಿತಿ ಸಿಗುತ್ತೆ ಅನ್ನೋ ಕಾರಣಕ್ಕೆ ಕಂದಾಯ ಇಲಾಖೆ ಕೊಡುವ ಬೋನಫೈಡ್ ಪ್ರಮಾಣ ಪತ್ರವನ್ನು ಬಳಸಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿ ಅಕ್ರಮ ಎಸಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ವ್ಯವಸ್ಥೆಯನ್ನು ಬದಲಾಯಿಸಲೂ ಆಗಲಿಲ್ಲ, ಸರ್ಕಾರ ಬದಲಿಸಲೂ ಆಗಲಿಲ್ಲ: ಬಿಹಾರದಲ್ಲಿ ಸೋಲಿನ ಹೊಣೆ ಹೊತ್ತ ಪ್ರಶಾಂತ್ ಕಿಶೋರ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಹೀನಾಯ ಸೋಲು ಕಂಡಿದೆ. ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ವ್ಯವಸ್ಥೆ ಬದಲಾಯಿಸುವ ಪ್ರಯತ್ನ ವಿಫಲವಾಗಿದೆ. ಜನರ ನಂಬಿಕೆ ಗಳಿಸುವಲ್ಲಿ ಕೊರತೆಗಳಿದ್ದವು. ಚುನಾವಣಾ ಫಲಿತಾಂಶಕ್ಕೆ ನಾನೇ ಹೊಣೆಗಾರ ಎಂದು ಕಿಶೋರ್ ಹೇಳಿದ್ದಾರೆ. ಹಿಂದೂ-ಮುಸ್ಲಿಂ ರಾಜಕೀಯ ಆಡಿಲ್ಲ, ಮತಗಳನ್ನು ಖರೀದಿಸಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಬಿಹಾರವನ್ನು ಉತ್ತಮಗೊಳಿಸುವ ಸಂಕಲ್ಪ ಈಡೇರಿಸುವವರೆಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಿಶೋರ್ ತಿಳಿಸಿದ್ದಾರೆ.
ಹೂಡಿಕೆದಾರರ ಹುಬ್ಬೇರಿಸಿದ ಫಿಸಿಕ್ಸ್ವಾಲಾ, ಬಂಪರ್ 33% ಪ್ರೀಮಿಯಂ ದರದಲ್ಲಿ ಲಿಸ್ಟಿಂಗ್, 49% ಏರಿಕೆ!
ಎಡ್ಟೆಕ್ ದೈತ್ಯ ಫಿಸಿಕ್ಸ್ವಾಲಾ ಷೇರುಪೇಟೆಗೆ ಭರ್ಜರಿಯಾಗಿ ಎಂಟ್ರಿ ನೀಡಿದೆ. ಐಪಿಒ ಬೆಲೆಗಿಂತ ಶೇಕಡಾ 33ರಷ್ಟು ಪ್ರೀಮಿಯಂ ದರದಲ್ಲಿ ಲಿಸ್ಟ್ ಆದ ಷೇರು, ದಿನದ ವಹಿವಾಟಿನಲ್ಲಿ ಶೇಕಡಾ 49ರಷ್ಟು ಜಿಗಿದು, ಬಳಿಕ ಲಾಭಾಂಶ ಗಳಿಕೆಯಿಂದಾಗಿ ಸ್ವಲ್ಪ ಇಳಿಕೆ ಕಂಡಿತು. ಕಂಪನಿಯ ಬಲಿಷ್ಠ ಬ್ರ್ಯಾಂಡ್ ಮತ್ತು ಹೈಬ್ರಿಡ್ ಮಾದರಿಯ ಬಗ್ಗೆ ವಿಶ್ಲೇಷಕರು ಸಕಾರಾತ್ಮಕವಾಗಿದ್ದರೂ, ಅದರ ಲಾಭದಾಯಕವಲ್ಲದ ಸ್ಥಿತಿ ಮತ್ತು ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸಂಪುಟ ಪುನಾರಚನೆ ಸರ್ಕಸ್: ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆಯುತ್ತಿರುವ ಆಕಾಂಕ್ಷಿಗಳು!
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ ತೀವ್ರಗೊಂಡಿದೆ. ಈ ನಡುವೆ ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಆಕಾಂಕ್ಷಿಗಳು ತುದಿಕಾಲಿನಲ್ಲಿ ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆಗೆ ಒಂದಿಷ್ಟು ಆಕಾಂಕ್ಷಿಗಳು ಕೂಡಾ ತೆರಳಿದ್ದಾರೆ. ಸಿದ್ದರಾಮಯ್ಯ ಸುತ್ತಲೂ ಆಕಾಂಕ್ಷಿಗಳ ಗಿರಕಿ ಹೊಡೆಯುತ್ತಿದ್ದಾರೆ. ಮಂತ್ರಿ ಮಂಡಲ ಪುನಾರಚನೆ ಬಗ್ಗೆ ಇನ್ನೂ ಸ್ಪಷ್ಟವಾದ ತೀರ್ಮಾನ ಆಗಿಲ್ಲ. ಹಾಗಿದ್ದರೂ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಹಾಗಾದರೆ ಯಾರಿಗೆ ಸಂಪುಟಕ್ಕೆ ಸ್ಥಾನ ಸಿಗುವ ಸಾಧ್ಯತೆ ಇದೆ?
ಅರಸೀಕೆರೆ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಹರಪನಹಳ್ಳಿ: ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025-26 ಕಾರ್ಯಕ್ರಮವು ಮಂಗಳವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಛದ್ಮವೇಷ, ಕ್ಲೇ ಮಾಡೆಲಿಂಗ್, ಆಶುಭಾಷಣ, ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ, ಬಣ್ಣಹಚ್ಚುವಿಕೆ, ಅಭಿನಯಗೀತೆ, ಭಕ್ತಿಗೀತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ದೈಹಿಕ ಪರಿವಿಕ್ಷಕರಾದ ಷಣ್ಮುಖಪ್ಪ ಅವರು, ‘ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೊಂದು ವೇದಿಕೆ ಒದಗಿಸುವಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮಕ್ಕಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ’ ಎಂದರು. ಅರಸೀಕೆರೆ ಕ್ಲಸ್ಟರ್ ಮಟ್ಟದ ಅಧಿಕಾರಿ ಸಿದ್ದೇಶರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿಯಂತಹ ವೇದಿಕೆಗಳ ಅವಶ್ಯಕತೆ ಬಹಳಷ್ಟಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಇದೆಲ್ಲಕ್ಕಿಂತ ಭಾಗವಹಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿಒಂದಿಲ್ಲೊಂದು ಸ್ಪರ್ಧೆಯಲ್ಲಿಭಾಗವಹಿಸಿ ವಿಜೇತರಾಗಬೇಕು’’ ಎಂದು ಹೇಳಿದರು. ಬಿ.ಆರ್.ಪಿ ನಾಗರಾಜ್ ಮಾತನಾಡಿ, ‘ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ತಂದೆ–ತಾಯಿ ಮತ್ತು ಶಿಕ್ಷಕರ ಶ್ರಮವೂ ಇದೆ. ಇಬ್ಬರೂ ಕೈ ಜೋಡಿಸಿದಾಗ ಮಾತ್ರ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಅತಿ ಮುಖ್ಯವಾಗಿದೆ. ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೆಕು’ ಎಂದು ಸಲಹೆ ನೀಡಿದರು. ಹಿರಿಯ ಶಿಕ್ಷಕ ಬಸವರಾಜ ಮಾತನಾಡಿ, ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದವರು ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಗೆದ್ದವರು ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ. ಆದ್ದರಿಂದ ಯಾವುದೇ ಸ್ಪರ್ಧೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ನಿಷ್ಪಕ್ಷಪಾತವಾಗಿ ಗುರುತಿಸಿ, ಪ್ರಶಸ್ತಿಯನ್ನು ತೀರ್ಮಾನಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಮ್ಮ, ಎಸ್ ಡಿ ಎಂ ಸಿ ಸದಸ್ಯರಾದ ಅಜ್ಜಪ್ಪ, ಗುರುಮೂರ್ತಿ, ಶಾಲೆಯ ಸಹ ಶಿಕ್ಷಕರಾದ ಯು.ಸತೀಶ್, ಉಮಾ, ಸರಸ್ವತಿ, ಪವಿತ್ರ ಚಾಂದಿನಿಭಾನು, ಸತೀಶ್, ಕೆರೆಗುಡಿಹಳ್ಳಿ ಶಾಲೆಯ ಶಿಕ್ಷಕ ಅಜ್ಜಪ್ಪ, ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
Ration Card: ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್
Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಸರ್ಕಾರಿ ಯೋಜನೆ ಪಡೆಯಲು ಸೇರಿದಂತೆ ಹಲವು ಅರ್ಜಿ ಸಲ್ಲಿಕೆ ವೇಳೆ ಇದು ಅತ್ಯಗತ್ಯವಾಗಿದೆ. ಇನ್ನೂ ಈ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇನ್ಮುಂದೆ ನೀವು ಆನ್ಲೈನ್ ಸೆಂಟರ್ಗಳ ಬಳಿ ದಿನಗಟ್ಟಲೇ ಕಾಯುವ ಅವಶ್ಯಕತೆ ಇರುವುದಿಲ್ಲ. ಇದ್ದಲ್ಲಿಯೇ ಈ ಪ್ರಕ್ರಿಯೆಯನ್ನು ಮುಗಿಸಬಹುದು.
ಭಾರತ ಮೂಲದ ಜಯಶ್ರೀ ಉಳ್ಳಾಲ್ ಶ್ರೀಮಂತ ಮಹಿಳಾ ಉದ್ಯಮಿ: ಹುರುನ್ ಇಂಡಿಯಾ ಪಟ್ಟಿಯಲ್ಲಿ ಇರುವವರು ಯಾರ್ಯಾರು ಗೊತ್ತೇ?
ಮಂಗಳೂರು ಮೂಲದ ಜಯಶ್ರೀ ಉಳ್ಳಾಲ್ ಅವರು 50,170 ಕೋಟಿ ರೂ. ಸಂಪತ್ತಿನೊಂದಿಗೆ ಭಾರತ ಮೂಲದ ನಂ.1 ಶ್ರೀಮಂತ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅರಿಸ್ಟಾ ನೆಟ್ವರ್ಕ್ಸ್ನ ಸಿಇಒ ಆಗಿರುವ ಅವರು, ದೇಶದ ಅಗ್ರ 10 ಸ್ವಯಂ-ನಿರ್ಮಿತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ತಮಿಳುನಾಡು ಕಂದಾಯ ಇಲಾಖೆ ನೌಕರರಿಂದ ವಿಶೇಷ ತೀವ್ರ ಪರಿಷ್ಕರಣೆ ಕೆಲಸ ಬಹಿಷ್ಕಾರ
ತಮಿಳುನಾಡಿನಲ್ಲಿ ಕಂದಾಯ ಇಲಾಖೆಯ ನೌಕರರು ವಿಶೇಷ ತೀವ್ರ ಪರಿಷ್ಕರಣೆ ಕೆಲಸವನ್ನು ಬಹಿಷ್ಕರಿಸಿದ್ದಾರೆ. ಮಂಗಳವಾರದಿಂದ ಈ ಬಹಿಷ್ಕಾರ ಆರಂಭವಾಗಿದೆ. ಅತಿಯಾದ ಕೆಲಸದ ಒತ್ತಡ, ಸಿಬ್ಬಂದಿ ಕೊರತೆ, ಗಡುವುಗಳ ಒತ್ತಡ ಮತ್ತು ಸರಿಯಾದ ತರಬೇತಿ ಇಲ್ಲದಿರುವುದೇ ಇದಕ್ಕೆ ಕಾರಣ. ಫೆಡರೇಶನ್ ಆಫ್ ರೆವೆನ್ಯೂ ಅಸೋಸಿಯೇಷನ್ಸ್ ಆಫ್ ತಮಿಳುನಾಡು ಈ ಪ್ರತಿಭಟನೆ ನಡೆಸುತ್ತಿದೆ.
ಸಂಪನ್ಮೂಲ ಸಂರಕ್ಷಣೆಗೆ ಪುನರ್ ಬಳಕೆ, ಮರು ಬಳಕೆಗೆ ಒತ್ತು ಅಗತ್ಯ : ಈಶ್ವರ್ ಖಂಡ್ರೆ
ಬೆಂಗಳೂರು : ನೈಸರ್ಗಿಕ ಸಂಪನ್ಮೂಲಗಳ ಸುದೀರ್ಘ ಬಳಕೆ ಮತ್ತು ಸಂರಕ್ಷಣೆಗಾಗಿ ಮರು ಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಮತ್ತು ಸಂಪನ್ಮೂಲಗಳ ಸುದೀರ್ಘ ಬಳಕೆಯ ಆರ್ಥಿಕತೆ ಮತ್ತು ಸುಸ್ಥಿರತೆಯ ಸಮ್ಮೇಳನ ಉದ್ಘಾಟಿಸಿ ಅವರು ಸಂಪನ್ಮೂಲದ ಹಿತ-ಮಿತ ಬಳಕೆಯ ಅಗತ್ಯ ಪ್ರತಿಪಾದಿಸಿದರು. ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಪ್ರಕೃತಿಯೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂಬುದು ನಮ್ಮ ಸರಕಾರದ ನಿಲುವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು. 1987 ರಲ್ಲಿ, ವಿಶ್ವಸಂಸ್ಥೆಯ ಬ್ರಂಡ್ಲ್ಯಾಂಡ್ ಆಯೋಗ ಭವಿಷ್ಯದ ಪೀಳಿಗೆಯ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದು. 'ಸುಸ್ಥಿರತೆ' ಎಂದು ವ್ಯಾಖ್ಯಾನಿಸಿದೆ. ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗುವುದರ ಜೊತೆಗೆ ಪ್ರಕೃತಿ ಪರಿಸರ ಉಳಿಸಬೇಕಿದೆ ಎಂದರು. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪರಿಸರ ಸ್ನೇಹಿ ರೂಢಿಗಳ ಉತ್ತೇಜನ, ಆಧುನಿಕ ತಂತ್ರಜ್ಞಾನದ ಬಳಕೆ, ನಾವೀನ್ಯತೆಗೆ ಒತ್ತು ನೀಡಿ ಒಟ್ಟಾರೆ ಸುಸ್ಥಿರತೆ ಮಾದರಿಯ ಪರಿಣಾಮಕಾರಿ ಅನುಷ್ಠಾನ ಮಾಡುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು. ಮರುಬಳಕೆ, ದುರಸ್ತಿ, ಪುನರ್ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಮ್ಮ ಭೂಗ್ರಹ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು. ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ, ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮತ್ತಿತರರು ಪಾಲ್ಗೊಂಡಿದ್ದರು.
ಗುಜರಾತ್ | ಆಂಬ್ಯುಲೆನ್ಸ್ನಲ್ಲಿ ಅಗ್ನಿ ಅವಘಡ : ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಮೃತ್ಯು
ಅಹ್ಮದಾಬಾದ್ : ಗುಜರಾತ್ನಲ್ಲಿ ಆಂಬ್ಯುಲೆನ್ಸ್ವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಗುಜರಾತ್ನ ಅರ್ವಳ್ಳಿ ಜಿಲ್ಲೆಯ ಮೋಡಸ ಪಟ್ಟಣದ ಬಳಿ ಮಂಗಳವಾರ ನಸುಕಿನ ಜಾವ ಆಂಬ್ಯುಲೆನ್ಸ್ಗೆ ಬೆಂಕಿ ಹೊತ್ತಿಕೊಂಡು ನವಜಾತ ಶಿಶು, ವೈದ್ಯ ಮತ್ತು ಇತರ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಸಾಗರ್ ಜಿಲ್ಲೆಯ ನಿವಾಸಿ ಜಿಗ್ನೇಶ್ ಮೋಚಿ ತನ್ನ ಪತ್ನಿಯ ಹೆರಿಗೆಯ ನಂತರ ಅಸ್ವಸ್ಥವಾಗಿದ್ದ ಒಂದು ದಿನದ ಪುಟ್ಟ ಮಗುವನ್ನು ಮೋಡಸ ಬಳಿಯ ಆಸ್ಪತ್ರೆಯಿಂದ ಅಹ್ಮದಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮುಂಜಾನೆ 1 ಗಂಟೆ ಸುಮಾರಿಗೆ ಮೋಡಸ-ಧನ್ಸುರ ರಸ್ತೆಯಲ್ಲಿ ಆಂಬ್ಯುಲೆನ್ಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಡಿಬಿ ವಾಲಾ ತಿಳಿಸಿದ್ದಾರೆ. ಮಗು, ತಂದೆ ಜಿಗ್ನೇಶ್ ಮೋಚಿ (38), ವೈದ್ಯ ಶಾಂತಿಲಾಲ್ ರೆಂಟಿಯಾ (30) ಮತ್ತು ನರ್ಸ್ ಭೂರಿಬೆನ್ ಮನಾತ್ (23) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಜಿಗ್ನೇಶ್ ಮೋಚಿಯ ಇಬ್ಬರು ಸಂಬಂಧಿಕರು, ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಮೂವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ದುರಂತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಜಡೇಜಾ ತಿಳಿಸಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ಜಗತ್ತಿನ 9 ಪ್ರಮುಖ ನಾಯಕರು ಯಾರೆಲ್ಲಾ? ಇಲ್ಲಿದೆ ಮಾಹಿತಿ...
ಹೊಸದಿಲ್ಲಿ: ಆಧುನಿಕ ಇತಿಹಾಸವನ್ನು ಗಮನಿಸಿದರೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದಂಗೆಗಳು, ಆಡಳಿತ ಬದಲಾವಣೆಗಳು ಅಥವಾ ಪ್ರಮುಖ ರಾಜಕೀಯ ಕ್ರಾಂತಿಗಳ ನಂತರ ರಾಜಕಾರಣಿಗಳನ್ನು ವಿಚಾರಣೆಗೆ ಒಳಪಡಿಸಿರುವುದು, ಶಿಕ್ಷೆ ವಿಧಿಸಿರುವುದು ಮತ್ತು ಕೆಲವೊಮ್ಮೆ ಮರಣದಂಡನೆಯನ್ನು ವಿಧಿಸಿದರುವುದು ಕಂಡು ಬರುತ್ತದೆ. ಈ ಘಟನೆಗಳು ರಾಜಕೀಯ ಪರಿಸ್ಥಿತಿ ಎಷ್ಟು ಬೇಗ ಬದಲಾಗಬಹುದು ಮತ್ತು ಅಧಿಕಾರಕ್ಕಾಗಿರುವ ಹೋರಾಟಗಳು ಇಡೀ ರಾಷ್ಟ್ರಗಳ ಭವಿಷ್ಯವನ್ನು ಹೇಗೆ ಮರುರೂಪಿಸಬಹುದು ಎಂಬುದನ್ನು ಪ್ರತಿಬಿಂಬಿಸುತ್ತವೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಈವರೆಗೆ ಯಾವೆಲ್ಲಾ ದೇಶದಲ್ಲಿ ಇಂತಹ ಬೆಳವಣಿಗೆ ನಡೆದಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದ ಪ್ರಧಾನಿಗಳು, ಅಧ್ಯಕ್ಷರು ಯಾರ್ಯಾರು? ಇಲ್ಲಿದೆ ಮಾಹಿತಿ.... 1.ಸೆಲಾಲ್ ಬಯಾರ್ – ತುರ್ಕಿಯೆ (Photo credit: alchetron.com ) ಸೆಲಾಲ್ ಬಯಾರ್ ಅವರು 1950 ರಿಂದ 1960 ರವರೆಗೆ ತುರ್ಕಿಯೆ ರಾಷ್ಟ್ರದ ಅಧ್ಯಕ್ಷರಾಗಿದ್ದರು. ಅವರು ಈ ಹಿಂದೆ 1937 ರಿಂದ 1939ರವರೆಗೆ ತುರ್ಕಿಯೆ ಪ್ರಧಾನ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ತುರ್ಕಿಯೆ ರಾಷ್ಟ್ರದಲ್ಲಿ 1960ರ ಮಿಲಿಟರಿ ದಂಗೆಯ ನಂತರ ಸೆಲಾಲ್ ಬಯಾರ್ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಅವರ ಮೇಲೆ ಸಂವಿಧಾನದ ನಿಯಮಗಳ ಉಲ್ಲಂಘನೆ ಆರೋಪ ಹೊರಿಸಲಾಗಿತ್ತು. ನಂತರ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಕಡಿತಗೊಳಿಸಲಾಯಿತು. ವಯಸ್ಸು ಮತ್ತು ಆರೋಗ್ಯದ ಕಾರಣದಿಂದ 1964ರಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. 2. ಝುಲ್ಫಿಕರ್ ಅಲಿ ಭುಟ್ಟೋ - ಪಾಕಿಸ್ತಾನ ಝುಲ್ಫಿಕರ್ ಅಲಿ ಭುಟ್ಟೋ ಅವರು ಅಧ್ಯಕ್ಷ 1971 ರಿಂದ 1973ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು ಮತ್ತು 1973 ರಿಂದ 1977ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಜನರಲ್ ಝಿಯಾ ಉಲ್ ಹಕ್ ನೇತೃತ್ವದ ಮಿಲಿಟರಿ ದಂಗೆಯ ಬಳಿಕ ಝುಲ್ಫಿಕರ್ ಅಲಿ ಭುಟ್ಟೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ರಾಜಕೀಯ ಪ್ರೇರಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿವಾದಾತ್ಮಕ ವಿಚಾರಣೆಯಲ್ಲಿ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಎಪ್ರಿಲ್ 4, 1979ರಂದು ಭುಟ್ಟೋ ಅವರನ್ನು ಗಲ್ಲಿಗೇರಿಸಲಾಯಿತು. ಈ ಬೆಳವಣಿಗೆ ಪಾಕಿಸ್ತಾನದಲ್ಲಿ ರಾಜಕೀಯ ವಿಭಜನೆಗೆ ಕಾರಣವಾಗಿತ್ತು. 3. ಅದ್ನಾನ್ ಮೆಂಡೆರೆಸ್ - ತುರ್ಕಿಯೆ ಅದ್ನಾನ್ ಮೆಂಡೆರೆಸ್ ಅವರು1950 ರಿಂದ 1960ರವರೆಗೆ ತುರ್ಕಿಯೆ ಪ್ರಧಾನಿಯಾಗಿದ್ದರು. 1960ರ ದಂಗೆಯ ಬಳಿಕ ಸಂವಿಧಾನದ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗದ ಆರೋಪದ ಮೇಲೆ ಮೆಂಡೆರೆಸ್ ಅವರನ್ನು ಪದಚ್ಯುತಿಗೊಳಿಸಲಾಯಿತು. ಅವರನ್ನು 1961ರ ಸೆಪ್ಟೆಂಬರ್ 17ರಂದು ಗಲ್ಲಿಗೇರಿಸಲಾಯಿತು. ಈ ಘಟನೆಯು ತುರ್ಕಿಯೆ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿ ಗುರಿತಿಸಲ್ಪಟ್ಟಿದೆ. 4. ಬೆನಿಟೊ ಮುಸ್ಸೋಲಿನಿ – ಇಟಲಿ ಬೆನಿಟೊ ಮುಸ್ಸೋಲಿನಿ 1922 ರಿಂದ 1943ರವರೆಗೆ ಇಟಲಿಯ ಪ್ರಧಾನ ಮಂತ್ರಿಯಾಗಿದ್ದರು. ಎರಡನೇ ಮಹಾಯುದ್ಧದ ಬಳಿಕ ಇಟಲಿಯ ಜನರು ಬೆನಿಟೊ ಮುಸ್ಸೋಲಿನಿ ವಿರುದ್ಧ ತಿರುಗಿ ಬಿದ್ದರು. ಅವರನ್ನು ಇಟಲಿಯನ್ ಪಾರ್ಟಿಸನ್ಗಳು ಸೆರೆಹಿಡಿದು 1945ರ ಎಪ್ರಿಲ್ 28ರಂದು ಹತ್ಯೆ ಮಾಡಿದ್ದರು. ಅವರ ಹತ್ಯೆ ಇಟಲಿಯಲ್ಲಿ ಫ್ಯಾಸಿಸಂನ ಪತನಕ್ಕೆ ಕಾರಣವಾಯಿತು. 5. ಇಮ್ರೆ ನಾಗಿ - ಹಂಗೇರಿ ಇಮ್ರೆ ನಾಗಿ ಅವರು 1953 ರಿಂದ 1955ರವರೆಗೆ ಮತ್ತು ಬಳಿಕ 1956ರಲ್ಲಿ ಹಂಗೇರಿಯ ಪ್ರಧಾನ ಮಂತ್ರಿಯಾಗಿದ್ದರು. 1956ರ ಸೋವಿಯತ್ ನಿಯಂತ್ರಣದ ವಿರುದ್ಧದ ದಂಗೆಯ ಸಮಯದಲ್ಲಿ ದೇಶವನ್ನು ಇಮ್ರೆ ನಾಗಿ ಮುನ್ನಡೆಸಿದ್ದರು. ಬಳಿಕ ಅವರನ್ನು ಬಂಧಿಸಿ ರಹಸ್ಯವಾಗಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು 1958ರ ಜೂನ್ 16ರಂದು ಅವರನ್ನು ಗಲ್ಲಿಗೇರಿಸಲಾಯಿತು. 6. ಸದ್ದಾಂ ಹುಸೇನ್ - ಇರಾಕ್ (Photo credit: AP) ಸದ್ದಾಂ ಹುಸೇನ್ ಅವರು 1979 ರಿಂದ 2003ರವರೆಗೆ ಇರಾಕ್ನ ಅಧ್ಯಕ್ಷರಾಗಿದ್ದರು. 2003ರಲ್ಲಿ ಅಮೆರಿಕ ಪಡೆಗಳು ಸದ್ದಾಂ ಹುಸೇನ್ ಅವರನ್ನು ಸೆರೆಹಿಡಿದಿತ್ತು. ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಇರಾಕ್ ನ್ಯಾಯಮಂಡಳಿಯು ಅವರನ್ನು ವಿಚಾರಣೆಗೆ ಒಳಪಡಿಸಿತು. ಅವರನ್ನು ತಪ್ಪಿತಸ್ಥರೆಂದು ಘೋಷಿಸಿ 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಯಿತು. 7. ಹಿಡೆಕಿ ಟೋಜೊ – ಜಪಾನ್ ಹಿಡೆಕಿ ಟೋಜೊ 1941 ರಿಂದ 1944ರವೆರೆಗೆ ಜಪಾನ್ ನ ಪ್ರಧಾನಿಯಾಗಿದ್ದರು. ಎರಡನೇ ಮಹಾಯುದ್ಧದ ಅವಧಿಯಲ್ಲಿ ಟೋಜೊ ಜಪಾನ್ ಅನ್ನು ಮುನ್ನಡೆಸಿದ್ದರು. ಜಪಾನ್ ಸೋಲಿನ ನಂತರ ಅಂತರರಾಷ್ಟ್ರೀಯ ಮಿಲಿಟರಿ ನ್ಯಾಯಮಂಡಳಿಯು ಅವರ ಮೇಲೆ ಯುದ್ಧ ಅಪರಾಧಗಳ ಆರೋಪ ಹೊರಿಸಿತು. 1948ರ ಡಿಸೆಂಬರ್ 23ರಂದು ಅವರನ್ನು ಗಲ್ಲಿಗೇರಿಸಲಾಯಿತು. 8. ಪರ್ವೇಝ್ ಮುಷರಫ್ - ಪಾಕಿಸ್ತಾನ (Photo credit: AP) ಪರ್ವೇಝ್ ಮುಷರಫ್ ಅವರು 2001ರಿಂದ 2008ರವೆರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 2019ರಲ್ಲಿ ಅವರಿಗೆ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಘೋಷಿಸಲಾಯಿತು. ಆ ಬಳಿಕ ಉನ್ನತ ನ್ಯಾಯಾಲಯ ಶಿಕ್ಷೆಯನ್ನು ಕಡಿತಗೊಳಿಸಿತು. ಮುಷರಫ್ 2023ರಲ್ಲಿ ನಿಧನರಾದರು. 9. ಶೇಖ್ ಹಸೀನಾ - ಬಾಂಗ್ಲಾದೇಶ ಶೇಖ್ ಹಸೀನಾ ಅವರು 1996 ರಿಂದ 2001ರವೆರೆಗೆ ಮತ್ತು 2009 ರಿಂದ 2024ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ದಂಗೆ ವೇಳೆ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಈ ತೀರ್ಪು ಬಾಂಗ್ಲಾದೇಶದ ಇತ್ತೀಚಿನ ಇತಿಹಾಸದಲ್ಲೇ ಪ್ರಮುಖ ಬೆಳವಣಿಗೆಯಾಗಿದೆ.
200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು ತಂತ್ರಜ್ಞಾನ ಸಮಾವೇಶ-2025
ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿಕೆಗೆ ನಾನಾ ದೇಶದ ನಾಯಕರುಗಳು ಮುಂದೆ ಬಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್ ನಡೆಯುತ್ತಿರುವ ಬಗ್ಗೆ ಕೇಳಿದಾಗ ಜಗತ್ತಿನ ನಾನಾ ದೇಶದ ನಾಯಕರುಗಳು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಅನೇಕರು ಬೆಂಗಳೂರಿನಲ್ಲಿ ಉದ್ದಿಮೆ ಆರಂಭಕ್ಕೆ ಉತ್ಸುಕರಾಗಿದ್ದಾರೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರೆಲ್ಲರ ಬೆಂಬಲಕ್ಕೆ ನಿಂತಿದ್ದೇವೆ. 60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ. ಇವರುಗಳು ಉದ್ಯೋಗ ನೀಡಬೇಕು, ಸಂಪಾದನೆ ಮಾಡಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ ಎಂದರು. ಪ್ರೋತ್ಸಾಹ ನೀಡಿದರೆ ಇಲ್ಲಿನ ಪ್ರತಿಭೆಗಳು, ಹೊಸ ಆವಿಷ್ಕಾರ, ತಂತ್ರಜ್ಞಾನ, ಸ್ಟಾರ್ಟ್ ಅಪ್ ಗಳು ಕರ್ನಾಟಕವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಿವೆ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ನಮ್ಮ ಮುಂದಿನ ಪೀಳಿಗೆಗೆ ನಾನು ಸದಾ ಹೇಳುತ್ತಿರುತ್ತೇನೆ. ಹೊಸ ಆಲೋಚನೆಗಳು ಬಂದರೆ ಸ್ಟಾರ್ಟ್ ಅಪ್ ಮೂಲಕ ಬೆಳೆಯಲು ಸರಕಾರ ಅವಕಾಶ ಕಲ್ಪಿಸಿ ನಿಮ್ಮ ಜೊತೆಗಿದೆ ಎಂದು ಹೇಳುತ್ತಿರುತ್ತೇನೆ. ನಮ್ಮನ್ನು ನಂಬಿ ಬಂದವರಿಗೆ ಉತ್ತಮ ಅವಕಾಶ ನೀಡುವುದು ನಮ್ಮ ಕೆಲಸ. ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗುವುದು ಎಂದರು. ಐಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಜವಾಬ್ದಾರಿ ಹೊತ್ತಿರುವ ಶರತ್ ಬಚ್ಚೇಗೌಡರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ನಾವೆಲ್ಲರೂ ಇದ್ದೇವೆ. ಬೆಂಗಳೂರಿನ ವಾತಾವರಣವೇ ಎಲ್ಲದಕ್ಕೂ ಅನುಕೂಲಕರವಾಗಿದೆ. 25 ಲಕ್ಷ ಐಟಿ ಪರಿಣಿತರು ಇಲ್ಲಿದ್ದಾರೆ. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳು ಬೇರೆ ಎಲ್ಲೂ ಇಲ್ಲ. ಈ ಸಮ್ಮೇಳನ ಮೂಲಕ ಮೂರು ದಿನಗಳ ಕಾಲ ಭವಿಷ್ಯದ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ದೆಹಲಿಯಲ್ಲಿ ಮತ್ತೆ ಭಾರೀ ಭದ್ರತಾ ಎಚ್ಚರಿಕೆ ನೀಡಲಾಗಿದೆ. ಹಲವು ಜಿಲ್ಲಾ ನ್ಯಾಯಾಲಯಗಳು ಮತ್ತು ಎರಡು ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿವೆ. ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿ ಆವರಣಗಳನ್ನು ಪರಿಶೀಲಿಸಿದ್ದಾರೆ. ಬೆದರಿಕೆಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಶಾಂತವಾಗಿರಲು ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಸವಾಲು ಎದುರಿಸುತ್ತಿರುವ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು, ಅಸ್ತಿತ್ವದಲ್ಲಿರುವ 'ಅನ್ನ ಭಾಗ್ಯ' ಯೋಜನೆಯಡಿ 'ಕರ್ನಾಟಕ ಅನ್ನ ಸುವಿಧಾ' ಎಂಬ ಮಹತ್ವದ ಉಪಕ್ರಮವನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ತಮ್ಮ ಮನೆಯಿಂದಲೇ ಸರ್ಕಾರದ ಉಚಿತ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ. ಮನೆಯಿಂದ ಹೊರಗೆ ಹೋಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆಯಲು ಕಷ್ಟಪಡುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಅನ್ನ ಸುವಿಧಾ ಯೋಜನೆ? ಈ ಯೋಜನೆ ಯಾರಿಗೆಲ್ಲಾ ಅನ್ವಯ? ಹಿರಿಯ ನಾಗರಿಕರು ಈ ಯೋಜನೆಯ ಪ್ರಯೋಜನ ಪಡೆಯವುದು ಹೇಗೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ.
Rice Price Hike: ಅಕ್ಕಿ ಬೆಲೆ 10 ರೂಪಾಯಿ ಹೆಚ್ಚಳ ಸಾಧ್ಯತೆ, ಇದಕ್ಕೆ ಕಾರಣ ಇಲ್ಲಿದೆ
ರಾಜ್ಯದ ಜನತೆಗೆ ಆತಂಕಕಾರಿ ಸುದ್ದಿಯೊಂದು ಇಲ್ಲಿದೆ. ಈಗಾಗಲೇ ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ದುಬಾರಿ ಜೀವನ ನಡೆಸುವುದು ಕಷ್ಟ ಎಂದು ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಅಕ್ಕಿ ಬೆಲೆ ದಿಢೀರ್ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಅಕ್ಕಿ ಪ್ರತಿ ಕೆ.ಜಿ.ಗೆ 10 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ದಿಢೀರ್ ಬೆಲೆ
ಬೆಂಗಳೂರು ಮೆಟ್ರೋ ನಿಗಮಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಮಾಜಿ ಪತ್ನಿಗೆ ಮೆಟ್ರೋ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ನನಗೆ ಗೊತ್ತಾಗಿದೆ. ಆಕೆಗೇನಾದರೂ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಯಾಣಿಕರ ತಪಾಸಣೆ ಬಿಗಿಗೊಳಿಸಲಾಗಿದೆ. ಇಂತಹ ಬೆದರಿಕೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಎಲ್ಐಸಿ ಹೂಡಿಕೆ ಮಂತ್ರ: ಚಿಲ್ಲರೆ ಹೂಡಿಕೆದಾರರಿಗೆ ಇಲ್ಲಿದೆ ಪಾಠ | ಹಣಕಾಸು ತಜ್ಞ ಕೆ.ಜಿ. ಕೃಪಾಲ್ ಲೇಖನ
ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಹೆಚ್ಚಿನವರು ಯಾವುದೇ ಸಂಶೋಧನೆ ನಡೆಸದೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಲಹೆಗಳು ಮತ್ತು ಶಿಫಾರಸುಗಳನ್ನು ಕುರುಡಾಗಿ ನಂಬಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದು ಹೂಡಿಕೆದಾರರನ್ನು ಅಪಾಯಕ್ಕೆ ದೂಡುತ್ತದೆ. ಹೂಡಿಕೆ ಎಂದರೆ ಕೇವಲ ಷೇರು ಖರೀದಿಸುವುದಲ್ಲ, ಅದಕ್ಕೂ ಮುನ್ನ ಕಂಪನಿಯ ಬಗ್ಗೆ ಸಂಪೂರ್ಣ ಅರಿವು ಹೊಂದುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಭಾರತದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆ ಎಲ್ಐಸಿ ಅನುಸರಿಸುವ ಹೂಡಿಕೆ ತಂತ್ರಗಳು ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ ಪಾಠವಾಗಬಲ್ಲದು.
ಕಾಸರಗೋಡು ಮೂಲದ ಸಿನಿಮಾ ನಿರ್ದೇಶಕನ ಪುತ್ರ ಬೆಂಗಳೂರಿನಲ್ಲಿ ಆತ್ಮಹತ್ಯೆ
ಕಾಸರಗೋಡು : ಸಿನಿಮಾ ನಿರ್ದೇಶಕ ಹಾಗೂ ಚೆನ್ನೈಯಲ್ಲಿ ಪತ್ರಕರ್ತನಾಗಿರುವ ಕಾಸರಗೋಡು ಮೂಲದ ಪ್ರಶಾಂತ್ ಕಾನತ್ತೂರ್ ಅವರ ಪುತ್ರ ಅನಿರುದ್ಧ್ ಯಾನೆ ಕಣ್ಣನ್ (22) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಕಂಪ್ಯೂಟರ್ ಗೇಮ್ ಡಿಸೖನಿಂಗ್ ನಲ್ಲಿ ವಿಶೇಷ ಪರಿಣತಿ ಹೊಂದಿದ್ದ ಕಣ್ಣನ್, ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಗೇಮ್ಸ್ ಡಿಸೖನರ್ ಆಗಿ ವೃತ್ತಿಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದ. ಕಳೆದೆರಡು ದಿನಗಳಿಂದ ಉದ್ಯೋಗಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಬಾಡಿಗೆ ಮನೆ ಗೆ ಬಂದು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Good News: 200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್: ಎಂ.ಬಿ ಪಾಟೀಲ
ಬೆಂಗಳೂರು, ನವೆಂಬರ್ 18: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹೂಡಿಕೆಗೆ, ಹೊಸ ಹೊಸ ಯೋಜನೆಗಳಿಗೆ ವಿಫುಲ ಅವಕಾಶಗಳು ಇವೆ. ರಾಜ್ಯ ಸರ್ಕಾರ ಆಧುನಿಕ ಬಗೆಯ ಕೈಗಾರಿಕೋದ್ಯಮಗಳ ಮಹತ್ವ ಅರಿತುಕೊಂಡಿದೆ. ಇದೀಗ ಬರೋಬ್ಬರಿ 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಮಂಗಳವಾರ ಇಲ್ಲಿನ ಬೆಂಗಳೂರು
ನ.22ರಿಂದ ಇರಾನ್ ಗೆ ಹೋಗುವವರಿಗೆ ಬೇಕು ಕಡ್ಡಾಯ ವೀಸಾ; ಕಳ್ಳಸಾಗಣೆ & ಭಾರತೀಯರ ಅಪಹರಣ ತಡೆಗೆ ಇರಾನ್ ಹೊಸ ನಿಯಮ!
ಭಾರತೀಯ ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವವರಿಗೆ ಇರಾನ್ ನೀಡಿದ್ದ ಒಂದು-ಮಾರ್ಗದ ವೀಸಾ ವಿನಾಯಿತಿಯನ್ನು ಅಮಾನತುಗೊಳಿಸಲಾಗಿದೆ. ಕಳ್ಳಸಾಗಣೆ ಮತ್ತು ಅಪಹರಣ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನವೆಂಬರ್ 22ರಿಂದ ಇರಾನ್ಗೆ ಪ್ರವೇಶಿಸಲು ಅಥವಾ ಅಲ್ಲಿಂದ ಪ್ರಯಾಣಿಸಲು ಭಾರತೀಯರು ಕಡ್ಡಾಯವಾಗಿ ಮುಂಚಿತವಾಗಿ ವೀಸಾ ಪಡೆಯಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬೆಂಗಳೂರಿನಲ್ಲಿ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ 19.11.2025 ರಂದು ಶಿವಾಜಿನಗರ, ರಾಜಾಜಿನಗರ, ಹೆಣ್ಣೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೆಚ್.ಬಿ.ಆರ್. ಲೇಔಟ್, ನಾಗವಾರ, ಥಣಿಸಂದ್ರ, ಹೆಣ್ಣೂರು ಮುಖ್ಯರಸ್ತೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಿಸಿದೆ.
ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ: ಹೊಸ ಪ್ರತಿಭೆ, ತಂತ್ರಜ್ಞಾನಕ್ಕೆ ಸಿಗಲಿದೆ ಅವಕಾಶ
ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು. ಬೆಂಗಳೂರು ಟೆಕ್ ಸಮ್ಮಿಟ್ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಐಟಿ ನಗರ ಸ್ಥಾಪನೆಯಿಂದಾಗಿ ಹೊಸ ಪ್ರತಿಭೆ, ತಂತ್ರಜ್ಞಾನಕ್ಕೆ ಅವಕಾಶ ಸಿಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಟೆಕ್ ಸಮ್ಮಿಟ್ ನಲ್ಲಿ 1,500 ದೊಡ್ದ ಕಂಪನಿಗಳು ಭಾಗವಹಿಸುತ್ತಿವೆ. ಈ ಕಂಪನಿಗಳು ಉದ್ಯೋಗ ನೀಡಬೇಕು, ಸಂಪಾದನೆ ಮಾಡಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ ಇದೆ ಎಂದು ಅವರು ತಿಳಿಸಿದರು.
ಆಂಧ್ರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಆರು ಮಾವೋವಾದಿಗಳ ಹತ್ಯೆ
ಮರೇಡುಮಿಲ್ಲಿ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ ಎನ್ ಕೌಂಟರ್ ನಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮರೇಡುಮಿಲ್ಲಿ ಮಂಡಲದ ಅರಣ್ಯ ವ್ಯಾಪ್ತಿಯಲ್ಲಿ ಬೆಳಿಗ್ಗೆ 6.30 ರಿಂದ 7 ಗಂಟೆಯ ಅವಧಿಯಲ್ಲಿ ಈ ಎನ್ಕೌಂಟರ್ ನಡೆದಿದೆ ಎಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ತಿಳಿಸಿದ್ದಾರೆ. “ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ,” ಎಂದು ಅವರು ಪಿಟಿಐಗೆ ಹೇಳಿದ್ದಾರೆ. ಪೊಲೀಸ್ ಇಲಾಖೆಯ ಹಲವು ವಿಶೇಷ ಘಟಕಗಳು ಜಂಟಿಯಾಗಿ ನಡೆಸಿದ ಈ ಆಪರೇಷನ್ ನಂತರ ಪ್ರದೇಶದಲ್ಲಿ ಶೋಧ ಕಾರ್ಯ ವಿಸ್ತರಿಸಲಾಗಿದೆ. ಮೃತಪಟ್ಟವರ ಗುರುತು ಮತ್ತು ಸಂಘಟನೆಯ ಸಂಪರ್ಕ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 18ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಈಗಾಗಲೇ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 18) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (KRS) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು
ವಳಪ್ಪಿಲ ಕಮ್ಯೂನಿಕೇಶನ್ಸ್ಗೆ ರಾಷ್ಟ್ರೀಯ ಪುರಸ್ಕಾರ
ಕಣ್ಣೂರು: ವಳಪ್ಪಿಲ ಕಮ್ಯೂನಿಕೇಷನ್ಸ್ಗೆ ಮಾಧ್ಯಮರಂಗದ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. ವಳಪ್ಪಿಲ ಕಮ್ಯೂನಿಕೇಷನ್ಸ್ಗೆ ಇಂಡಿಪೆಂಡೆಂಟ್ ಏಜೆನ್ಸಿ ಆಫ್ ದಿ ಇಯರ್ ಪುರಸ್ಕಾರ ಹಾಗೂ ಇಂಡಿಪೆಂಡೆಂಟ್ ಏಜೆನ್ಸಿ ಹೆಡ್ ಆಫ್ ದಿ ಇಯರ್ ಪುರಸ್ಕಾರ ಮೆನೇಜಿಂಗ್ ಡೈರೆಕ್ಟರ್ ಆದ ಜೇಮ್ಸ್ ವಳಪ್ಪಿಲ್ ಅವರಿಗೆ ಲಭಿಸಿದೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಳಪ್ಪಿಲ ಕಮ್ಯೂನಿಕೇಶನ್ಸ್ ಮೆನೇಜಿಂಗ್ ಡೈರೆಕ್ಟರ್ಗಳಾದ ಜೇಮ್ಸ್ ವಳಪ್ಪಿಲ, ಜೋನ್ಸ್ ವಳಪ್ಪಿಲ, ನಿರ್ದೇಶಕ ಲಿಯೋ ವಳಪ್ಪಿಲ ಎಂಬಿವರು ಜಂಟಿಯಾಗಿ ಪುರಸ್ಕಾರ ಸ್ವೀಕರಿಸಿದರು. ಪ್ರಶಸ್ತಿ ಸಮಿತಿ ಅಧ್ಯಕ್ಷ ಹಾಗೂ ಎಕ್ಸ್ಚೇಂಜ್ 4 ಮೀಡಿಯ ಕೋ ಫೌಂಡರ್ ಆದ ನವಲ್ ಅಹುಜ, ಬಿಡಬ್ಲ್ಯು ಬಿಸಿನೆಸ್ ವರ್ಲ್ಡ್ ಚೆಯರ್ಮೆನ್ ಹಾಗೂ ಎಡಿಟರ್ ಇನ್ ಚೀಫ್ ಆದ ಡಾ. ಅನುರಾಗ್ ಬತ್ರ, ಡ್ಯೂರೋಸೆಲ್ ಇಂಡಿಯ ಜನರಲ್ ಮೆನೇಜರ್ ಸುನಿಲ್ ಗಾಡ್ಲಿಲ್, ಆಪ್ಟ್ರೋವ್ ಅಸೋಸಿಯೇಟ್ ನಿರ್ದೇಶಕ ಆಕಾಕ್ಷ ತಿವಾರಿ ಮಾತನಾಡಿದರು. ಡೆಂಟ್ವು ಮೈಂಡ್ ಶೇರ್, ಎಫ್ಸಿಬಿ, ಮ್ಯಾಡಿಸನ್, ಡಬ್ಲ್ಯುಪಿಪಿ, ಹವಾಸ್ ಮೊದಲಾದ ರಾಷ್ಟ್ರೀಯ ಮಟ್ಟದಲ್ಲಿನ ಅನೇಕ ಖ್ಯಾತ ಏಜೆನ್ಸಿಗಳು ವಿವಿಧ ಕೆಟಗರಿಗಳಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ. ಮೀಡಿಯಾ ಸೈಟಾಜಿಕಲ್, ಪ್ಲಾನಿಂಗ್, ಬೈಯಿಂಗ್, ಕ್ಲೈಂಟ್ಗಳ ಸಂತೃಪ್ತಿ ಮೊದಲಾದ ಘಟಕಗಳಲ್ಲಿ ವಳಪ್ಪಿಲ ಕಮ್ಯೂನಿಕೇಶನ್ಸ್ ಕಳೆದ ವರ್ಷ ಕೈಗೊಂಡ ಸಾಧನೆಯ ಆಧಾರದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೇಮ್ಸ್ ವಳಪ್ಪಿಲ್, ರಾಜ್ಯದ ಜಾಹೀರಾತು ರಂಗದಲ್ಲಿ ಮಾಧ್ಯಮಗಳಿಗೆ ಹಾಗೂ ಗ್ರಾಹಕರಿಗೆ ಲಭಿಸಿದ ಅಂಗೀಕಾರವಾಗಿ ಈ ಪುರಸ್ಕಾರವನ್ನು ಕಾಣುತ್ತಿರುವುದಾಗಿ ಹೇಳಿದರು. ಕೇರಳದ ಜಾಹೀರಾತುರಂಗದಲ್ಲಿ 40 ವರ್ಷಕ್ಕೂ ಹೆಚ್ಚು ಪರಂಪರೆಯಿರುವ ವಳಪ್ಪಿಲ ಕಮ್ಯೂನಿಕೇಶನ್ಸ್ ರಾಜ್ಯದಾದ್ಯಂತ 9 ಬ್ರಾಂಚ್ಗಳನ್ನು ಹೊಂದಿದೆ. ಕ್ರಿಯೇಟಿವ್ ಅಡ್ವರ್ಟೈಸಿಂಗ್, ಬ್ರಾಂಡಿಂಗ್, ಮೀಡಿಯಾ ಬೈಯಿಂಗ್, ಡಿಜಿಟಲ್ ಮಾರ್ಕೆಟಿಂಗ್, ಔಟ್ಡೋರ್, ಪ್ರಿಂಟ್ ಆಂಡ್ ಪ್ರೊಡಕ್ಷನ್, ಇವೆಂಟ್ಸ್ ಆಂಡ್ ಪಿ.ಆರ್. ಮೊದಲಾದ ಎಲ್ಲಾ ವಲಯಗಳಲ್ಲೂ ಮುಂಚೂಣಿಯಲ್ಲಿದೆ.
ದೆಹಲಿಯ ಕೆಂಪು ಕೋಟೆ ಬಳಿಯ ಸ್ಫೋಟದ ನಂತರ, ಆತ್ಮಾಹುತಿ ಬಾಂಬರ್ ಡಾ. ಉಮರ್ ಮೊಹಮ್ಮದ್ನ ವೀಡಿಯೊ ಬೆಳಕಿಗೆ ಬಂದಿದ್ದು, ಆತ ಆತ್ಮಹತ್ಯಾ ದಾಳಿಯನ್ನು ಹುತಾತ್ಮ ಕಾರ್ಯಾಚರಣೆ ಎಂದು ಸಮರ್ಥಿಸುವ ಮೂಲಕ ತನ್ನ ಮೂಲಭೂತವಾದಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾನೆ. ಈ ವೀಡಿಯೊ ದಾಳಿಯು ಪೂರ್ವನಿಯೋಜಿತವಾಗಿತ್ತು ಎಂಬುದನ್ನು ಖಚಿತಪಡಿಸಿದೆ. ಜೈಶ್-ಎ-ಮೊಹಮ್ಮದ್ನಂತಹ ಉಗ್ರ ಸಂಘಟನೆಗಳು ವೈದ್ಯರು ಮತ್ತು ವಿದ್ಯಾರ್ಥಿಗಳಂತಹ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳುವ ಮೂಲಕ 'ವೈಟ್ ಕಾಲರ್ ಭಯೋತ್ಪಾದಕ ಜಾಲವನ್ನು ಸೃಷ್ಟಿಸಿವೆ ಎಂಬುದನ್ನು ತನಿಖೆಯು ಬಯಲು ಮಾಡಿದೆ.
ಕುಟುಂಬದೊಳಗಿನ ಗೊಂದಲವನ್ನು ನಾನೇ ಬಗೆಹರಿಸಲಿದ್ದೇನೆ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಎದುರಿಸಿದ ಸೋಲಿನ ಬೆನ್ನಲ್ಲೇ ಯಾದವ್ ಕುಟುಂಬದೊಳಗೆ ಉಂಟಾದ ಕಲಹದ ಬಗ್ಗೆ ಪಕ್ಷಾಧ್ಯಕ್ಷ ಲಾಲು ಪ್ರಸಾದ್ ಯಾದವ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕುಟುಂಬದೊಳಗಿನ ಗೊಂದಲವನ್ನು ತಾನೇ ಬಗೆಹರಿಸಲಿದ್ದೇನೆ ಎಂದು ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಲಾಲೂ ಪ್ರಸಾದ್ ಅವರ ಕುಟುಂಬದೊಳಗಿನ ಕಲಹ ರವಿವಾರ ಬಹಿರಂಗವಾಗಿತ್ತು. ಆ ನಂತರ, ಸೋಮವಾರ ಪಾಟ್ನಾದಲ್ಲಿ ನಡೆದ ನೂತನವಾಗಿ ಆಯ್ಕೆಯಾದ ಆರ್ಜೆಡಿ ಶಾಸಕರ ಸಭೆಯಲ್ಲಿ ಲಾಲು ಅವರು ಮಾತನಾಡಿದರು. “ಇದು ಕುಟುಂಬದ ಆಂತರಿಕ ವಿಷಯ. ಕುಟುಂಬದೊಳಗೇ ಪರಿಹರಿಸಲಾಗುತ್ತದೆ. ಇದನ್ನು ನಿಭಾಯಿಸಲು ನಾನು ಇದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾಗಿ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ. ಸಭೆಯಲ್ಲಿ ರಾಬ್ರಿ ದೇವಿ, ಮಿಸಾ ಭಾರತಿ, ಜಗದಾನಂದ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು. ತೇಜಸ್ವಿ ಚುನಾವಣೆಯಲ್ಲಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ಲಾಲು ಸಭೆಯಲ್ಲಿ ಹೇಳಿದರು. ಇದೇ ವೇಳೆ ತೇಜಸ್ವಿ ಯಾದವ್ ಅವರನ್ನು ಮತ್ತೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು. ಈ ಬಾರಿ 243 ಸ್ಥಾನಗಳಲ್ಲಿ ಆರ್ಜೆಡಿ ಕೇವಲ 25 ಸ್ಥಾನಗಲ್ಲಷ್ಟೇ ಗೆಲವು ಸಾಧಿಸಿದ್ದು, 2010ನ ನಂತರದ ಪಕ್ಷದ ಎರಡನೇ ಅತೀ ದುರ್ಬಲ ಫಲಿತಾಂಶ ಇದಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪಾಟ್ನಾದ ಸರ್ಕ್ಯುಲರ್ ರಸ್ತೆಯ ನಿವಾಸದಲ್ಲಿ ತೇಜಸ್ವಿ ಯಾದವ್ ಮತ್ತು ಅವರ ಅಕ್ಕ ರೋಹಿಣಿ ಆಚಾರ್ಯ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ರವಿವಾರ ಮಧ್ಯಾಹ್ನ ರೋಹಿಣಿ ಆಚಾರ್ಯ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿ, ಕುಟುಂಬವನ್ನು ತೊರೆದು ರಾಜಕೀಯದಿಂದ ದೂರ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದರು. ತೇಜಸ್ವಿ ಯಾದವ್ ಅವರ ಆಪ್ತರಾದ ಸಂಜಯ್ ಯಾದವ್ ಮತ್ತು ರಮೀಝ್ ನೆಮತ್ ಖಾನ್ ತಮ್ಮ ಮೇಲೆ ಒತ್ತಡ ಹೇರಿರುವುದಾಗಿ ಅವರು ಪೋಸ್ಟ್ನಲ್ಲಿ ಆರೋಪಿಸಿದ್ದರು. “ಸಂಜಯ್, ರಮೀಝ್ ಅಥವಾ ತೇಜಸ್ವಿಯ ಹೆಸರು ತೆಗೆದರೆ ಮನೆಯ ಹೊರಗೆ ಹಾಕುತ್ತಾರೆ. ನನಗೆ ಈಗ ಕುಟುಂಬವಿಲ್ಲ,” ಎಂದು ರೋಹಿಣಿ ಸುದ್ದಿಗಾರರೊಂದಿಗೆ ಹೇಳಿದ್ದರು. 2022ರಲ್ಲಿ ತಂದೆ ಲಾಲು ಯಾದವ್ ಅವರಿಗೆ ತಾವೇ ದಾನ ಮಾಡಿದ್ದ ಮೂತ್ರಪಿಂಡವನ್ನೇ ‘ಕೊಳಕು’ ಎಂದು ನಿಂದಿಸಲಾಯಿತು ಎಂದು ರೋಹಿಣಿ ಗಂಭೀರ ಆರೋಪ ಮಾಡಿದ್ದಾರೆ. “ನನ್ನ ದೇವರಾದ ತಂದೆಯನ್ನು ಉಳಿಸಲು ಮೂತ್ರಪಿಂಡ ಕೊಟ್ಟಿದ್ದೇನೆ. ಅದೇ ಇಂದು ನನ್ನ ತಪ್ಪಾಗಿದೆ,” ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದರು. ರೋಹಿಣಿಯೊಂದಿಗೆ ಇನ್ನೂ ಮೂವರು ಸಹೋದರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಯಾದವ್ ಕೂಡ 10 ಸರ್ಕ್ಯುಲರ್ ರಸ್ತೆ ನಿವಾಸವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಸಂಪಾದಕೀಯ | ಖಾಸಗಿ ಕಾಲೇಜುಗಳಿಗೆ ಅವೈಜ್ಞಾನಿಕ ಅನುಮತಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

23 C