ಭಟ್ಕಳ, ಹೊನ್ನಾವರ ತಾಲೂಕುಗಳ ಬಗರ್ ಹುಕುಂ ಸಮಿತಿ ಸಭೆ
ಭಟ್ಕಳ: ತಾಲೂಕಿನ ಭಟ್ಕಳ ತಹಶೀಲ್ದಾರ ಕಚೇರಿಯಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳ ಬಗರ್ ಹುಕುಂ ಸಮಿತಿ ಸಭೆ ನಡೆಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ ಎಸ್. ವೈದ್ಯ ಸಭೆಗೆ ಅಧ್ಯಕ್ಷತೆ ವಹಿಸಿದರು. ಬಗರ್ ಹುಕುಂ ಸಂಬಂಧಿಸಿದ ಬಾಕಿ ಅರ್ಜಿಗಳ ಪರಿಶೀಲನೆ ಹಾಗೂ ತ್ವರಿತ ವಿಲೇವಾರಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಸಭೆ ಬಳಿಕ ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳ ಒಟ್ಟು 10 ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಮಂಜೂರಾತಿ ಆದೇಶಪತ್ರಗಳನ್ನು ಸಚಿವರು ಹಸ್ತಾಂತರಿಸಿದರು. ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ,ಹೊನ್ನಾವರ ತಹಶೀಲ್ದಾರ ಪ್ರವೀಣ್ ಕರಂಡೆ,ಸಮಿತಿಯ ಸದಸ್ಯರು ಮೇಘನ ತಿಮ್ಮಪ್ಪ ನಾಯ್ಕ, ರಾಜು ನಾಗಯ್ಯ ಗೊಂಡ, ಉದಯ ಬಾಬು ನಾಯ್ಕ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಭಟ್ಕಳದಲ್ಲಿ ಆಹಾರ ಸುರಕ್ಷತಾ ತರಬೇತಿ ಶಿಬಿರ; ಎಲ್ಲಾ ಆಹಾರ ವ್ಯವಹಾರ ನಿರ್ವಾಹಕರಿಗೆ ಪರವಾನಗಿ ಕಡ್ಡಾಯ
ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹಾಗೂ ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್ ಒಕ್ಕೂಟದಲ್ಲಿ ಗುರುವಾರ ಭಟ್ಕಳ ಸಿದ್ದೀಕ್ ಸ್ಟ್ರೀಟ್ನ ತಂಝೀಂ ಹಾಲ್ನಲ್ಲಿ ಏಕದಿನ ಆಹಾರ ಸುರಕ್ಷತಾ ತರಬೇತಿ ಶಿಬಿರ ನಡೆಯಿತು. ಹೋಟೆಲ್ , ಕ್ಯಾಂಟೀನ್, ಬೇಕರಿಗಳು ಸೇರಿದಂತೆ ವಿವಿಧ ಆಹಾರ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಆಹಾರ ಸುರಕ್ಷತಾ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಆಯೋಜಕರ ಮಾಹಿತಿಯಂತೆ, ತರಬೇತಿಯನ್ನು ಬೆಳಗಿನ ಹಾಗೂ ಮಧ್ಯಾಹ್ನದಂತೆ ಎರಡು ಅವಧಿಗಳಲ್ಲಿ ನಡೆಸಲಾಗಿದ್ದು, ಪ್ರತಿ ಅವಧಿಗೂ ಸುಮಾರು 100 ಮಂದಿ ಭಾಗವಹಿಸಿದರು. ಒಟ್ಟು 200 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಆಹಾರ ಸುರಕ್ಷತಾ ಮಾನದಂಡಗಳು, ಸ್ವಚ್ಛತಾ ನಿಯಮಗಳು, ಆಹಾರ ಹ್ಯಾಂಡ್ಲಿಂಗ್ ವಿಧಾನಗಳು, ಸಂಗ್ರಹಣಾ ಕ್ರಮಗಳು ಹಾಗೂ FSSAI (Food Safety and Standards Authority of India) ಮಾರ್ಗಸೂಚಿಗಳಂತೆ ಅಗತ್ಯ ಪರವಾನಗಿ ಮತ್ತು ನೋಂದಣಿಯ ಕುರಿತಾಗಿ ಮಾಹಿತಿ ನೀಡಲಾಯಿತು. ತರಬೇತಿಯನ್ನು ಪೂರ್ಣಗೊಳಿಸಿದ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬೆಳಿಗ್ಗೆ 10:30ಕ್ಕೆ ಆರಂಭವಾದ ಕಾರ್ಯಕ್ರಮವನ್ನು, ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ರಹೀಲಾ ಸನಾ ಪಟೇಲ್ ಸಸಿ ನೆಟ್ಟು ಉದ್ಘಾಟನೆ ನೆರವೇರಿಸಿದರು. ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನದ್ವಿ, ತಾಲೂಕು ಟ್ರೈನಿಂಗ್ ಸಂಯೋಜಕ ಶಮ್ಸ್ ನವೀದ್ ಸುಂದೇರಿ, ಜಿಲ್ಲಾ ಸಂಯೋಜಕ ಮನೋಜ್ ನಾಯ್ಕ ಹಾಗೂ ಗ್ಲೋಬಲ್ ಇನ್ಸ್ಟಿಟ್ಯೂಟ್ ಮತ್ತು ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್ನ ಸಿಬ್ಬಂದಿಗಳು ಹಾಜರಿದ್ದರು. ಭಾರತ ಸರ್ಕಾರಕ್ಕೆ ಸೇರಿದ ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್ನ ಸಂಪನ್ಮೂಲ ವ್ಯಕ್ತಿ ದೀಪಾ ಶಂಕರಿ, ಆಹಾರ ಸುರಕ್ಷತಾ ನಿಯಮಗಳು ಮತ್ತು FSSAI ನಿಯಮಾವಳಿಗಳ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿದರು. ಗ್ಲೋಬಲ್ ಇನ್ಸ್ಟಿಟ್ಯೂಟ್ನ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ತಮ್ಮ ಭಾಷಣದಲ್ಲಿ ಅವರು “ಸಣ್ಣದಾಗಲಿ ದೊಡ್ಡದಾಗಲಿ ಎಲ್ಲಾ ಆಹಾರ ವ್ಯವಹಾರ ನಿರ್ವಹಕರು (FBOs) ಕಡ್ಡಾಯವಾಗಿ ಪರವಾನಗಿ ಅಥವಾ ನೋಂದಣಿಯನ್ನು ಪಡೆಯಬೇಕು” ಎಂದು ಒತ್ತು ನೀಡಿದರು.
ಮೂಡುಬಿದಿರೆ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಟೆರ್ ಲೈಟ್ ಕಂಪೆನಿಯ ವಿರುದ್ಧ ಪ್ರತಿಭಟನೆ
ಮೂಡುಬಿದಿರೆ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿದ್ಯುತ್ ಪ್ರಸರಣಾ ಲೈನ್ ( 400 ಕೆ.ವಿ, UTKL) ಕಾಮಗಾರಿಯ ಗುತ್ತಿಗೆ ಪಡೆದಿರುವ ಸ್ಟೆರ್ ಲೈಟ್ ಕಂಪೆನಿಯು ತಾಲೂಕಿನ ಕೆಲವೆಡೆ ರೈತರಿಗೆ ಅನ್ಯಾಯವೆಸಗುತ್ತಿದ್ದು, ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಕೇಂದ್ರ ಸರಕಾರದ ಪವರ್ ಇದೆಯೆಂದು ತೋರಿಸಲು ಮುಂದಾದರೆ ನಾವು ನಮ್ಮ ಪವರ್ ತೋರಿಸಿ ಸ್ಟೆರ್ ಲೈಟ್ ಕಂಪೆನಿಯನ್ನು ಆಂಧ್ರಪ್ರದೇಶಕ್ಕೆ ವಾಪಾಸು ಕಳುಹಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಎಚ್ಚರಿಸಿದ್ದಾರೆ. ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಟೆರ್ ಲೈಟ್ ಕಂಪೆನಿಯ ವಿರುದ್ಧ ಶುಕ್ರವಾರ ಆಡಳಿತ ಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿಯ ಮುಖಂಡರೊಬ್ಬರು ಹಸಿರು ಶಾಲು ಹಾಕಿಕೊಂಡು ರೈತ ಮುಖಂಡ ಎಂದು ಪೋಸು ನೀಡಿ ಅಮಾಯಕ ರೈತರೊಂದಿಗೆ ನಾಟಕ ಮಾಡುತ್ತಿದ್ದಾರೆ. ಹಸಿರು ಶಾಲು ಹಾಕಿದ ಮಾತ್ರಕ್ಕೆ ರೈತ ಮುಖಂಡನಾಗುವುದಿಲ್ಲ. ರೈತರು ಇಂಥವರ ನಾಟಕವನ್ನು ಅರ್ಥ ಮಾಡಿಕೊಳ್ಳಬೇಕು. ಇವರಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ' ಎಂದರು. ಅಕ್ರಮ ಸಕ್ರಮ ಸಮಿತಿ, ಕೆಡಿಪಿ, ಆಶ್ರಯ ಮುಂತಾದ ಸಮಿತಿಗಳು ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದೆ. ಅದರ ಅಧ್ಯಕ್ಷರಾಗಿರುವ ಶಾಸಕರು ಒಮ್ಮೆಯೂ ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಇದರಿಂದಲೇ ಅವರಿಗೆ ಬಡವರ ಮೇಲೆ, ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ. ಶಾಸಕರಿಗೆ ಹತ್ತು ದಿವಸಗಳ ಗಡುವು ನೀಡುತ್ತೇವೆ. ಅದರೊಳಗೆ ಮೀಟಿಂಗ್ ಮಾಡದಿದ್ದರೆ ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದೂ ಎಚ್ಚರಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪ್ರಮುಖರಾದ ಮಿತ್ತಬೈಲು ವಾಸುದೇವ ನಾಯಕ್, ರಮೇಶ್ ಶೆಟ್ಟಿ ಪಡುಮಾರ್ನಾಡು,ಚಂದ್ರಹಾಸ ಸನಿಲ್, ಟಿ.ಎನ್.ಕೆಂಬಾರೆ, ಶೌಕತ್ ಬೆಳುವಾಯಿ, ಅಬ್ದುಲ್ ಲತೀಫ್,ಜೊಸ್ಸಿ ಮಿನೇಜಸ್,ಶಶಿಧರ ಎಂ, ಹರೀಶ್ ಆಚಾರ್ಯ,ರುಕ್ಕಯ್ಯ ಪೂಜಾರಿ,ಇಕ್ಬಾಲ್ ಕರೀಮ್, ಅಲ್ತಾಫ್, ರತ್ನಾಕರ ಮೊಯ್ಲಿ,ಝಕರಿಯಾ ಯೂಸುಫ್, ರೀಟಾ ಕುಟಿನ್ಹೊ,ರೂಪಾ ಸಂತೋಷ್ ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ,ಪದ್ಮಪ್ರಸಾದ್ ಜೈನ್, ವಸೀರ್ ಪುತ್ತಿಗೆ, ಸಲಾಮ್ ಹೊಸಂಗಡಿ,ಜಾವೆದ್ ಹೊಸಂಗಡಿ,ಮರ್ವಿನ್ ಲೋಬೋ,ಮುರಳೀಧರ ಕೋಟ್ಯಾನ್, ಅಬೂಬಕ್ಕರ್ ಶಿರ್ತಾಡಿ, ಆಳ್ವಿನ್ ಮಿನೇಜಸ್, ಆಳ್ವಿನ್ ಡಿಸೋಜ, ಸತೀಶ್ ಕೊಡಂಗಲ್,ಸಂದೀಪ್ ಅಲಂಗಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Hubballi | ಇಂಡಿಗೋ ವಿಮಾನ ರದ್ದು: ವಧು-ವರ ಇಲ್ಲದೆ ನಡೆದ ಆರತಕ್ಷತೆ ಕಾರ್ಯಕ್ರಮ
ಆನ್ಲೈನ್ನಲ್ಲೇ ಭಾಗವಹಿಸಿದ ವಧು-ವರ
ತಮ್ಮ ಬಳಿ ಇರುವ 3 ದುಬಾರಿ ವಾಚ್ಗಳ ಬೆಲೆ, ದಾಖಲೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್; ಯಾವೆಲ್ಲಾ ಬ್ರ್ಯಾಂಡ್?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ದುಬಾರಿ ವಾಚ್ಗಳ ವಿವರಗಳನ್ನು ಅಫಿಡವಿಟ್ನಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಅವರು ವಾಚ್ ಕದ್ದಿರುವ ಬಗ್ಗೆ ಮಾಡಿದ್ದ ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ. ರೋಲೆಕ್ಸ್ ಮತ್ತು ಕಾರ್ಟಿಯರ್ ಬ್ರಾಂಡ್ನ ಮೂರು ದುಬಾರಿ ವಾಚ್ಗಳ ಬೆಲೆಗಳನ್ನೂ ಅವರು ಬಹಿರಂಗಪಡಿಸಿದ್ದಾರೆ.
ಆರ್. ಅಶೋಕರ ಪಕ್ಷದ ಉಸ್ತುವಾರಿಗಳು ಕಮಿಶನ್ ಏಜೆಂಟರುಗಳಾ ? : ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನೆ
ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್ ಎಂದು ಕರ್ನಾಟದ ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಮಾಡಿರುವ ಟೀಕೆಯನ್ನು ಖಂಡಿಸಿರುವ ಮಾಜಿ ಸಚಿವ ಬಿ. ರಮಾನಾಥ ರೈಅವರು 'ಅಶೋಕರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಏನು? ಕಮಿಶನ್ ಏಜೆಂಟರುಗಳಾ ? ಎಂದು ಪ್ರಶ್ನಿಸಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆಶೋಕ್ ಅವರ ಹೇಳಿಕೆ ತಿಳಿಗೇಡಿತನದ್ದು, ಅವರು ಆಗಾಗ ಪ್ರಬುದ್ದತೆ ಇಲ್ಲದ ಬಾಲಿಶ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೆಸಿ ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಅವರ ಬಗ್ಗೆ ಅಶೋಕ್ ಇಂತಹ ಟೀಕೆ ಮಾಡಿರುವುದು ಸರಿಯಲ್ಲ. ಅಶೋಕ ಅವರು ತಮ್ಮ ಸ್ಥಾನವನ್ನು, ಜವಾಬ್ದಾರಿಯನ್ನು ಮರೆತು, ತಮಗೆ ತೋಚಿದಂತೆ ಇನ್ನೊಂದು ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಗ್ಗೆ ಕೆಟ್ಟದ್ದಾಗಿ ಟೀಕೆ ಮಾಡುವುದು ಎಷ್ಟು ಸರಿ? ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್ ಎಂದಾಗಿದ್ದರೆ, ಅಶೋಕ್ ಅವರ ಬಿಜೆಪಿಯಲ್ಲಿರುವ ಪ್ರಧಾನ ಕಾರ್ಯದರ್ಶಿಗಳು ಬ್ರೋಕರ್ ಗಳಾ? ಅಥವಾ ಅವರನ್ನು ಏನೆಂದು ಕರೆಯಬೇಕು ? ಎಂದು ರೈ ವಾಗ್ದಾಳಿ ನಡೆಸಿದರು. ಅಶೋಕ್ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಮಾಡಿದ್ದೇನು? ಮಂಗಳೂರಿನ ಕೆಎಸ್ ಆರ್ ಟಿಸಿ ಜಮೀನನ್ನು ಖಾಸಗಿ ಯವರಿಗೆ ಮಾರಾಟ ಮಾರಾಟ ಮಾಡಲಾಗಿತ್ತು. ಇಂತಹ ಹಲವು ಪ್ರಕರಣಗಳು ರಾಜ್ಯದ ಹಲವಡೆ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು ಅಶೋಕ್ ಅವರಿಗೆ ನೈತಿಕತೆ ಇಲ್ಲ. ಅವರ ಪಕ್ಷದಲ್ಲಿ ಏನಾಗುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಮೊದಲು ಅಶೋಕ್ ತಮ್ಮ ಪಕ್ಷದ ಬಗ್ಗೆ ತಿಳಿದುಕೊಳ್ಳಲಿ. ಅಶೋಕರಿಗೆ ನೈತಿಕತೆ ಇಲ್ಲ, ಅವರು ಅವರ ಪಕ್ಷದಲ್ಲಿ ಏನಾಗುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ, ಆನಂತರ ಬೇರೆ ಪಕ್ಷಗಳ ನಾಯಕರ ಬಗ್ಗೆ ಮಾತನಾಡಲಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸುವ ವೇಳೆ ಏರ್ ಪೊರ್ಟ್ ನಲ್ಲಿ ಆಗಿರುವ ಘಟನೆಯ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ರೈ ಸ್ಪಷ್ಟ ನೆ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಅಶ್ರಫ್ ಮತ್ತು ಶಶಿಧರ್ ಹೆಗ್ಡೆ, ಪಕ್ಷದ ಧುರೀಣರಾದ ವಿಶ್ವಾಸಕುಮಾರ್ ದಾಸ್, ಸುಭೋದಯ ಆಳ್ವ, ಶಬೀರ್, ಬೇಬಿ ಕುಂದರ್, ಪದ್ಮನಾಭ, ನಝೀರ್ ಬಜಾಲ್, ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.
ಕೈಗಾರಿಕಾ ಸಚಿವರಿಂದ ಮುಖ್ಯಮಂತ್ರಿಗಳಿಗೆ ರೂ.2 ಕೋಟಿ ಲಾಭಾಂಶ ಹಸ್ತಾಂತರ
ಮುಖ್ಯಮಂತ್ರಿಗಳಿಂದ ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ
ಬೆಂಗಳೂರಲ್ಲಿ ಮುಂಜಾನೆಯಿಂದಲೂ ಥಂಡಿ ಗಾಳಿ ಬೀಸುತ್ತಿದ್ದು, ಸಂಜೆ ವೇಳೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ 1 ವಾರ ರಾಜ್ಯದಾದ್ಯಂತ ಒಣಹವೆ ಇರಲಿದ್ದು, ಕನಿಷ್ಠ ತಾಪಮಾನ ಬಾರಿ ಇಳಿಕೆಯಾಗಲಿದೆ.
Maize Price: ಮೆಕ್ಕೆಜೋಳ ಖರೀದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ!
ಬೆಂಗಳೂರು, ಡಿಸೆಂಬರ್ 05: ಮೆಕ್ಕೆಜೋಳದ ಬಗ್ಗೆ ರೈತರಿಗೆ ತೊಂದರೆಯಾಗುತ್ತಿದ್ದು, ಮೆಕ್ಕೆ ಜೋಳವನ್ನು ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. 17,500 ಲಕ್ಷ ಎಕರೆ ಭೂಮಿಯಲ್ಲಿ 55 ಲಕ್ಷ ಟನ್ ಮೆಕ್ಕೆ ಜೋಳ ಬೆಳೆದಿದೆ. ಎಥನಾಲ್ ಕಾರ್ಖಾನೆಗಳು 7.50 ಲಕ್ಷ ಟನ್ ನ್ನು ಖರೀದಿಸಬೇಕಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣ ಆರೋಪ, ಸಾಬೂನು ಹಾಗೂ ಮಾರ್ಜಕ ನಿಗಮದಲ್ಲಿ 1000 ಕೋಟಿ ಅವ್ಯವಹಾರ!
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ಗಂಧದೆಣ್ಣೆ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಸುಮಾರು 1000 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಜೆಡಿಎಸ್ ಶಾಸಕ ಎಚ್.ಟಿ. ಮಂಜು ಆರೋಪಿಸಿದ್ದಾರೆ. ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ನೀಡಲಾಗಿದೆ. ಅಧಿಕಾರಿಗಳು, ಶಾಸಕರು, ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಸಿಎಂಗೆ ಪತ್ರ ಬರೆದರೂ ಯಾವುದೇ ಉತ್ತರ ಈವರೆಗೂ ಸಿಕ್ಕಿಲ್ಲ ಎಂದು ಆರೋಪಿಸಿರುವ ಅವರು ಸದನದಲ್ಲಿ ಹೋರಾಟ ನಡೆಸಿ ಎಸ್ಐಟಿ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಗುಜರಾತ್ನಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಪತ್ತೆ
ಗುಜರಾತ್ ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು ಇನ್ನೂ ಇರುವುದು ಪತ್ತೆಯಾಗಿದೆ. 6.14 ಲಕ್ಷಕ್ಕೂ ಹೆಚ್ಚು ಮತದಾರರು ವಿಳಾಸಗಳಲ್ಲಿ ಕಂಡುಬಂದಿಲ್ಲ, 30 ಲಕ್ಷಕ್ಕೂ ಹೆಚ್ಚು ಖಾಯಂ ವಲಸೆ ಹೋಗಿದ್ದಾರೆ. 3.25 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಪುನರಾವರ್ತಿತವಾಗಿವೆ. ಚುನಾವಣಾ ಆಯೋಗ ಈ ಲೋಪಗಳನ್ನು ಸರಿಪಡಿಸಿ ಪಟ್ಟಿಯನ್ನು ನಿಖರಗೊಳಿಸಲು ಮುಂದಾಗಿದೆ.
ಶಾಂತಿಯ ಪರ ಇರುವುದು ತಟಸ್ಥತೆ ಅಲ್ಲ; ರಷ್ಯಾ-ಉಕ್ರೇನ್ ಯುದ್ಧದ ಕುರಿತ ಭಾರತದ ನಿಲುವು ಸ್ಪಷ್ಟಪಡಿಸಿದ ನರೇಂದ್ರ ಮೋದಿ
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಹೈದರಾಬಾದ್ ಹೌಸ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾರತ-ರಷ್ಯಾ ವ್ಯಾಪಾರ ಮತ್ತು ರಕ್ಷಣಾ ಒಪ್ಪಂದಗಳ ಕುರಿತು, ಇಬ್ಬರೂ ನಾಯಕರು ಸುದೀರ್ಘವಾಗಿ ಮಾತನಾಡಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿ, ಭಾರತವು ಈ ವಿಷಯದಲ್ಲಿ ತಟಸ್ಥವಾಗಿಲ್ಲ, ಅದು ಯಾವಾಗಲೂ ಶಾಂತಿಯ ಪರವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಲ್ಲಿದೆ ಮಾಹಿತಿ.
Bjp Sorry: ಕಾಂಗ್ರೆಸ್ ಪಕ್ಷಕ್ಕೆ ಕ್ಷಮಿಸಿ ಅದು 60% ಅಲ್ಲ; 63% ಎಂದ ಬಿಜೆಪಿ!
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಟ್ವೀಟ್ ವಾರ್ ನಡೆಸಿಕೊಂಡೇ ಬಂದಿವೆ. ಅದರಲ್ಲೂ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಕರ್ನಾಟಕ ಬಿಜೆಪಿ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷಗಳ ನಡುವೆ ಟ್ವೀಟ್ ವಾರ್ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಯಾರ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿವೆ. ಇನ್ನು
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ
ಬೆಂಗಳೂರು, ಡಿಸೆಂಬರ್ 5: ರಾಜ್ಯದಲ್ಲಿ ಸರ್ಕಾರವು ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಗಾಗ ಮಹತ್ವದ ಮಾಹಿತಿಯನ್ನ ನೀಡುತ್ತಲಿರುತ್ತದೆ. ಇದೀಗ ಸಚಿವ ಸಂಪುಟ ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲಾಗಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆದಿದ್ದು, ಈ ವೇಳೆ
ರದ್ದಾದ ಇಂಡಿಗೋ ವಿಮಾನ: ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ನಡೆಯಿತು ಆರತಕ್ಷತೆ! ವಧು-ವರರ ಜಾಗದಲ್ಲಿ ಕೂತಿದ್ಯಾರು?
ಇಂಡಿಗೋ ವಿಮಾನ ರದ್ದತಿಯಿಂದಾಗಿ ಹುಬ್ಬಳ್ಳಿಯಲ್ಲಿ ವಧು-ವರರ ಆರತಕ್ಷತೆ ವಿಚಿತ್ರ ಪರಿಸ್ಥಿತಿಗೆ ಸಾಕ್ಷಿಯಾಯಿತು. ಮದುವೆಯಾದ ಜೋಡಿ ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಲು ವಿಮಾನ ಕಾಯುತ್ತಿದ್ದರು. ವಿಮಾನ ರದ್ದಾದ ಕಾರಣ, ವಧು-ವರರ ಬದಲಿಗೆ ಅವರ ಪೋಷಕರೇ ಕುರ್ಚಿಯಲ್ಲಿ ಕುಳಿತು ಬಂಧುಗಳಿಂದ ಶುಭ ಹಾರೈಕೆ ಸ್ವೀಕರಿಸಿದರು. ವಧು-ವರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಭಾಗಿಯಾದರು.
Putin India Visit: ಡಾಲರ್ ಅಲ್ಲ ರೂಪಾಯಿ ಮೂಲಕವೇ ವ್ಯಾಪಾರ &ವ್ಯವಹಾರ, ಅಮೆರಿಕಗೆ ಪುಟಿನ್ ಕೌಂಟರ್!
ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತಿದ್ದು, ಐತಿಹಾಸಿಕ ಕನಿಷ್ಠ ಅಂದರೆ 90 ರೂಪಾಯಿಗೆ ಕುಸಿತ ಕಂಡಿದೆ ರೂಪಾಯಿ. ಹೀಗೆ ಭಾರತದ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿತ ಕಾಣುತ್ತಿರುವುದು ಆರ್ಥಿಕತೆಗೆ ಕೂಡ ದೊಡ್ಡ ಹೊಡೆತ ಕೊಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಡಾಲರ್ ಅಲ್ಲ ರೂಪಾಯಿ ಮೂಲಕವೇ ವ್ಯಾಪಾರ &ವ್ಯವಹಾರ
Viral Video: ಸುರಂಗ ಮಾರ್ಗದಲ್ಲಿ ಸಿಲುಕಿದ ಮೆಟ್ರೋ ರೈಲು: ನಡೆದುಕೊಂಡೇ ಹೊರ ಬಂದ ಜನ, ಇಲ್ಲಿದೆ ವೈರಲ್ ವಿಡಿಯೋ!
Viral Video: ತಂತ್ರಜ್ಞಾನ ಕೈಕೊಟ್ಟರೆ ಏನೆಲ್ಲಾ ಆಗಲಿದೆ ಎನ್ನುವುದಕ್ಕೆ ಈಚೆಗೆ ದೇಶದ ಪ್ರಮುಖ ಮೆಟ್ರೋ ನಿಲ್ದಾಣದಲ್ಲಿ ಆಗಿರುವ ಘಟನೆಯೇ ಉದಾಹರಣೆಯಾಗಿದೆ. ಇಂದು ಇಡೀ ವಿಶ್ವವೇ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಈಗ ಎಐ ಜಮಾನ ಬೇರೆ. ಕ್ಷಣಾರ್ಧದಲ್ಲಿ ಎಐ ಯಾವುದೇ ಪ್ರಮುಖ ಕೆಲಸವನ್ನಾದರೂ ಮಾಡಿ ಮುಗಿಸುತ್ತದೆ. ಇನ್ನು ಈ ರೀತಿ ಇರುವಾಗ ಯಾವುದಾದರೂ ತಂತ್ರಜ್ಞಾನ ಕೈಕೊಟ್ಟರೂ ಜನ
SIR ದತ್ತಾಂಶಗಳನ್ನು ಸಾರ್ವಜನಿಕಗೊಳಿಸಿ, ಬಿಎಲ್ಒಗಳ ಮೇಲಿನ ಒತ್ತಡವನ್ನು ನಿಲ್ಲಿಸಿ: ಅಖಿಲೇಶ್ ಯಾದವ್ ಆಗ್ರಹ
ಲಕ್ನೊ: ಸದ್ಯ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ (SIR) ದತ್ತಾಂಶಗಳನ್ನು ಸರಕಾರ ಸಾರ್ವಜನಿಕಗೊಳಿಸಬೇಕು ಹಾಗೂ ಮತಗಟ್ಟೆ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳ ಮೇಲೆ ಅಧಿಕ ಹೊರೆಯಾಗುವುದನ್ನು ತಪ್ಪಿಸಲು ಹೆಚ್ಚುವರಿ ಅಧಿಕೃತ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತಗಳನ್ನೂ ಅವರು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಸಂಪೂರ್ಣಗೊಂಡಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಜರಣೆ ಅಭಿಯಾನದ ಶೇಕಡಾವಾರು ಪ್ರಮಾಣವನ್ನು ತಕ್ಷಣವೇ ಪ್ರಕಟಿಸಬೇಕು ಎಂದೂ ಸರಕಾರವನ್ನು ಆಗ್ರಹಿಸಿದ್ದಾರೆ. ಮತಪಟ್ಟಿಗಳ ಪರಿಷ್ಕರಣೆಯ ಪಾರದರ್ಶಕತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಅಧಿಕಾರದಲ್ಲಿರುವವರಾಗಲಿ ಅಥವಾ ಅವರ ಸಹಚರರಾಗಲಿ ಭಾಗಿಯಾಗದಂತೆ ಸರಕಾರ ಖಾತರಿ ಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. SIR पर सीधी माँग: - उप्र में कितने प्रतिशत SIR हुआ है, इसका आँकड़ा आज प्रकाशित किया जाए। - BLO पर जानलेवा दबाव हटाकर अतिरिक्त अधिकृत लोगों को समयावधि के अनुरूप इस काम पर लगाया जाए। - सुनिश्चित किया जाए कि सत्ताधारियों के दल और उनके संगी-साथी पिछले दरवाज़े से इस काम में अब… — Akhilesh Yadav (@yadavakhilesh) December 5, 2025
ಹೊಸದಿಲ್ಲಿ: ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾ ಸಮೀಪ ಇರುವ ಕಲ್ಲಿನ ದೀಪಸ್ತಂಭವಾದ 'ದೀಪಥೂನ್' ನಲ್ಲಿ 'ಕಾರ್ತಿಗೈ ದೀಪ' ಬೆಳಗಲು ಅರುಲ್ಮಿಘು ಸುಬ್ರಮಣಿಯ ಸ್ವಾಮಿ ದೇವಸ್ಥಾನದ ಭಕ್ತರಿಗೆ ಅನುಮತಿ ನೀಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ರಾಜ್ಯ ಸರಕಾರದ ಪರ ವಕೀಲರೊಬ್ಬರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸ್ವೀಕರಿಸಿದೆ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದೆ. ಈ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ, ಪ್ರತಿವಾದಿಗಳ ಪರ ವಕೀಲರು ಸರಕಾರವು ಸುಪ್ರೀಂ ಕೋರ್ಟ್ನ ಗಮನಕ್ಕೆ ತರಲಾಗಿದೆ ಎಂದು ಹೈಕೋರ್ಟ್ಗೆ ತಿಳಿಸಲು ಅನಗತ್ಯ ನಾಟಕ ಸೃಷ್ಟಿಸುತ್ತಿದೆ ಎಂದು ಹೇಳಿದರು.
Gen Z ಡಿಕ್ಷನರಿ: 80 - 90 ದಶಕದವರಿಗೆ ಈ ಪದಗಳ ಅರ್ಥ ಗೊತ್ತಿದ್ದರೆ ಮಜಾ!
ಈಗ ಎಲ್ಲಾ ಕಡೆಗಳಲ್ಲೂ Gen Z / ಜೆನ್ ಜಿ ಜನರೇಷನ್ದೇ ಸುದ್ದಿ. ಜೆನ್ ಜಿ ಜನರೇಷನ್ ಈ ವರ್ಷ ಎರಡು ಪ್ರಮುಖ ಕಾರಣಗಳಿಗೆ ಸುದ್ದಿಯಲ್ಲಿದೆ. ಮೊದಲನೆಯದಾಗಿ ಅವರ ಸ್ಲ್ಯಾಗ್ (ಪದಕೋಶದಿಂದ) ಮತ್ತೊಂದು ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಮಾಡಿರುವ ಪ್ರತಿಭಟನೆಗಳಿಂದ. 1997ರಿಂದ 2012ರವರೆಗೆ ಜನಿಸಿದವರನ್ನು Gen Z ತಲೆಮಾರಿನವರು ಎಂದು ಕರೆಯಲಾಗುತ್ತದೆ. ಇವರ ನಡವಳಿಕೆ,
ಗಾಂಧಿ-ಗುರು ಸಮಾವೇಶಕ್ಕೆ ಡಿಕೆಶಿಗೆ ಇಲ್ಲ ಆಹ್ವಾನ; ಅಹಿಂದ ನಾಯಕರ ಒಗ್ಗಟ್ಟಿನ ಸಂದೇಶಕ್ಕೆ ಡಿಸಿಎಂ ಬಣ ಅಸಮಾಧಾನ
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಫ್ಲೆಕ್ಸ್ ಗಳಲ್ಲಿ ಕಾಣದಿರುವುದು ಚರ್ಚೆಗೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಅಹಿಂದ ನಾಯಕರು ಒಟ್ಟಾಗಿ ಕಾಣಿಸಿಕೊಂಡರು. ಡಿಕೆ ಶಿವಕುಮಾರ್ ಅಭಿಮಾನಿಗಳು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ಬೆಂಬಲಿಗರು ಘೋಷಣೆ ಕೂಗಿದರು. ಈ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ಗೊಂದಲ ಮುಂದುವರಿದಿರುವುದನ್ನು ಸೂಚಿಸುತ್ತವೆ. ಡಿಕೆಶಿ ಬಣದಲ್ಲಿ ಅಸಮಾಧಾನ ಹೆಚ್ಚಾಗಿದೆ.
ಷೇರು ಹೂಡಿಕೆಯ ಖ್ಯಾತ ಸಲಹೆಗಾರ ಅವಧೂತ್ ಸತೇ ಬ್ಯಾನ್ ಮಾಡಿದ ಸೆಬಿ! ಯಾಕೆ? 601 ಕೋಟಿ ರೂ. ಹಿಂದಿರುಗಿಸಲು ಸೂಚನೆಯೇಕೆ?
ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆ ಸೆಬಿ, ಜನಪ್ರಿಯ ಹಣಕಾಸು ಸಲಹೆಗಾರ ಅವಧೂತ್ ಸತೇ ಮತ್ತು ಅವರ ಸಂಸ್ಥೆ ASTAPL ಮೇಲೆ ಕಠಿಣ ಕ್ರಮ ಜರುಗಿಸಿದೆ. ಇವರನ್ನು ಷೇರು ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. ಅಲ್ಲದೆ, 3.37 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಂದ ಅಕ್ರಮವಾಗಿ ಸಂಗ್ರಹಿಸಿದ 601.37 ಕೋಟಿ ರೂಪಾಯಿಗಳನ್ನು ಬಡ್ಡಿ ಸಮೇತ ಹಿಂದಿರುಗಿಸಲು ಆದೇಶ ಹೊರಡಿಸಿದೆ. ಸೆಬಿಯಲ್ಲಿ ನೋಂದಣಿ ಮಾಡಿಕೊಳ್ಳದೆ ಸಲಹೆ ನೀಡಿದ ಆರೋಪ ಕೇಳಿಬಂದಿದೆ.
ಭೂಮಂಡಲ ನುಂಗುವ ಇಸ್ಲಾಮಿಕ್ ಮೂಲಭೂತವಾದದ ಉದ್ದೇಶ ಈಡೇರದು; ಮಾರ್ಕೊ ರುಬಿಯೋ
ಇಡೀ ಪ್ರಪಂಚವನ್ನು ಆವರಿಸಿಕೊಳ್ಳುವ ಇಸ್ಲಾಮಿಕ್ ಮೂಲಭೂತವಾದವನ್ನು ಸೋಲಿಸುವುದು ಅವಶ್ಯ ಎಂದು ಹೇಳಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಈ ನಿಟ್ಟಿನಲ್ಲಿ ನಡೆಯುತ್ತಿರುವ ಜಾಗತಿಕ ಹೋರಾಟಕ್ಕೆ ನೇತೃತ್ವ ನೀಡುವುದನ್ನು ಅಮೆರಿಕ ಮುಂದುವರೆಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇಸ್ಲಾಮಿಕ್ ಮೂಲಭೂತವಾದ ಅಮೆರಿಕದ ಭದ್ರತೆಗೆ ಅತ್ಯಂತ ಅಪಾಯಕಾರಿ ಎಂದಿರುವ ಮಾರ್ಕೊ ರುಬಿಯೊ, ಭಯೋತ್ಪಾದನೆಯನ್ನು ಮತ್ತು ಧಾರ್ಮಿಕ ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳಿಗೆ ಅಮೆರಿಕ ವೀಸಾ ನಿರಾಕರಿಸಲಿದೆ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ರೆಪೋ ದರ ಇಳಿಕೆ ಮಾಡಿದ ಆರ್ಬಿಐ : ಗೃಹ, ವಾಹನ ಸಾಲಗಾರರಿಗೆ ಶುಭಸುದ್ದಿ!
ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಆರು ತ್ರೈಮಾಸಿಕಗಳ ಗರಿಷ್ಠ ಮಟ್ಟವಾದ ಶೇ.8.2ಕ್ಕೆ ಏರಿಕೆಯಾಗಿದೆ. ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನವಾಗಿ ಆರ್ಬಿಐ ಶುಕ್ರವಾರ ರೆಪೋ ದರದಲ್ಲಿ 25 ಮೂಲಾಂಶವನ್ನು ಕಡಿತಗೊಳಿಸಿದೆ. ಇದರಿಂದ ರೆಪೋ ದರ ಶೇ. 5.50ರಿಂದ ಶೇ 5.25ಕ್ಕೆ ಇಳಿಕೆಯಾಗಿದೆ. ಈ ಬೆಳವಣಿಗೆಯಿಂದ ಗೃಹ ಸಾಲ, ವಾಹನ ಸಾಲ ಹಾಗೂ ವಾಣಿಜ್ಯ ಸಾಲಗಳು ಇನ್ನಷ್ಟು ಅಗ್ಗವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಿಸಿದ್ದಾರೆ. ಹಣಕಾಸು ನೀತಿ ಸಮಿತಿ (MPC) ಒಮ್ಮತದಿಂದ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿದೆ. ಇದರಿಂದ ರೆಪೋ ದರ ಶೇ.5.25ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ. ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಕಳೆದ ಮೂರು ತಿಂಗಳುಗಳಿಂದ ಶೇ 2ಕ್ಕಿಂತ ಕಡಿಮೆ ಆಗಿರುವುದರಿಂದ ದರ ಕಡಿತ ಸಾಧ್ಯವಾಗಿದೆ ಎಂದು ವರದಿಯಾಗಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾದ ವ್ಲಾಡಿಮಿರ್ ಪುಟಿನ್ ಅವರು ಯಾವುದೇ ನೆಲಕ್ಕೆ ಕಾಲಿಟ್ಟಾಗ, ರೆಡ್ ಕಾರ್ಪೆಟ್ ಮೇಲೆ ನಡೆದಾಗ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಂಡಾಗಲೆಲ್ಲ ಗ್ಲೋಬಲ್ ಕ್ಯಾಮೆರಾಗಳು ಕಣ್ಣಗಲ ಮಾಡುತ್ತವೆ. ಪುಟಿನ್ ಎಂದಿಗೂ ನಾರ್ಮಲ್ ಪ್ರೆಸಿಡೆಂಟ್ ಆಗಲಿಲ್ಲ. ರಹಸ್ಯದಲ್ಲಿ ರಹಸ್ಯವಾಗಿರುವ, ಮುಕ್ಕಾಲು ವಿಶ್ವವನ್ನು ಪರೋಕ್ಷವಾಗಿ ಎದುರು ಹಾಕಿಕೊಂಡಿರುವ ಇಂಥ ರಷ್ಯಾ ಅಧ್ಯಕ್ಷ ಈಗ ಎರಡು ದಿನದ ಮಟ್ಟಿಗೆ ಭಾರತಕ್ಕೆ ಅತಿಥಿ.
ಮೂಡುಬಿದಿರೆ | ಮನೆ ಮೇಲೆ ಉರುಳಿಬಿದ್ದ ಬೃಹತ್ ಕ್ರೇನ್; ಮನೆಗೆ ಹಾನಿ
ಮೂಡುಬಿದಿರೆ: ಬೃಹತ್ ಕ್ರೇನ್ ವೊಂದು ಕಾರೊಂದಕ್ಕೆ ಢಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮವಾಗಿ ಮನೆ ಜಖಂಗೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ ನಡೆದಿದೆ. ಮುಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಡುವಿನ ತಿರುವಿನಲ್ಲಿ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಫೆಲಿಕ್ಸ್ ರೊಡ್ರಿಗಸ್ ಎಂಬವರ ಮನೆ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿ ಸಂಭವಿಸಿದೆ. ಘಟನೆ ವೇಳೆ ಮನೆಮಂದಿ ಮನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ಸಂದರ್ಭ ಕ್ರೇನ್ ನ ತುಂಡೊಂದು ಅದೇವೇಳೆ ಆ ರಸ್ತೆಯಾಗಿ ಸಂಚರಿಸುತ್ತಿದ್ದ ಕಾರೊಂದು ಮೇಲೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
100 ವರ್ಷಗಳ ಇತಿಹಾಸವಿರುವ ಹೈದರಾಬಾದ್ ಹೌಸ್ ನಲ್ಲಿ, ಮೋದಿ - ಪುತಿನ್ ಶೃಂಗಸಭೆ: ಏನಿದರ ವಿಶೇಷತೆ?
The Hyderabad House : ಎರಡು ದಿನಗಳ ಪ್ರವಾಸಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಭಾರತಕ್ಕೆ ಆಗಮಿಸಿದ್ದರೆ. ಶಿಷ್ಟಾಚಾರವನ್ನು ಬದಿಗೊತ್ತಿ, ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಪುತಿನ್ ಅವರನ್ನು ಸ್ವಾಗತಿಸಿದ್ದಾರೆ. ಇಂದು, ನೂರು ವರ್ಷಗಳ ಇತಿಹಾಸವಿರುವ ಹೈದರಾಬಾದ್ ಹೌಸ್ ನಲ್ಲಿ ಶೃಂಗ ಸಭೆ ನಡೆಯಲಿದೆ.
Putin Live: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ , ಪ್ರಮುಖ ಬೆಳವಣಿಗೆಗಳು
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ. 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿರುವ ಪುಟಿನ್ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಪುಟಿನ್ ಭೇಟಿಯ ಕ್ಷಣ ಕ್ಷಣದ ಮಾಹಿತಿ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ...
ರಾಯಚೂರು| ಗಾಯತ್ರಿ ಭವನದ ಭೂಮಿ ಪೂಜೆ ನೆರೆವೇರಿಸಿದ ಎಂಎಲ್ಸಿ ಎ. ವಸಂತ ಕುಮಾರ್
ರಾಯಚೂರು: ನಗರದ ಸಿದ್ದನಾಥ ಕಾಲೋನಿ ಮಂತ್ರಾಲಯ ರಸ್ತೆಯಲ್ಲಿರುವ ಸಮುದಾಯ ಭವನ ನಿರ್ಮಾಣದ ಮುಂದುವರೆದ ಕಾಮಗಾರಿಗೆ 25 ಲಕ್ಷ ರೂ. ಅನುದಾನವನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರು ಮಾಡಿದ್ದು, ಇಂದು ಕಾಮಗಾರಿ ಪ್ರಾರಂಭಿಸಲು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ರಮೇಶ ಕುಲಕರ್ಣಿ ನರಸಿಂಗರಾವ್ ದೇಶಪಾಂಡೆ, ಮೋಹನ ದೇವರು, ಡಿ.ಕೆ ಮುರಳೀಧರ, ಆನಂದ ಫಡ್ವವೀಸ್, ಶ್ರೀನಿವಾಸ ನಂದಾಪುರ, ಸುದೀಂದ್ರ ಜಾಹಗಿರದಾರ, ಸುಧೀರ ಎ., ವೇಣುಗೋಪಾಲ ಇನಾಂದಾರ, ವೆಂಕಟೇಶ ದೇಸಾಯಿ, ಜಯಕುಮಾರ ಗಬ್ಬೂರ, ಪ್ರವೀಣ ಜಾಗಿರದಾರ, ರಾಮರಾವ ಗಣೇಕಲ್, ಅನಿಲಕುಮಾರ ಗಾರಲದಿನ್ನಿ, ವಿನೋದ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಕರೀಂ ಮಾಜಿ ಆರ್ ಡಿ ಎ ಅಧ್ಯಕ್ಷರು, ರಾಮಕೃಷ್ಣ ನಾಯಕ, ಶ್ರೀನಿವಾಸ್ ಶಿಂದೆ, ಮುರಳಿ ಯಾದವ, ಭಷಿರ ಉದ್ಫಿನ ಎ ಪಿ ಎಂ ಸಿ ಉಪಾಧ್ಯಕ್ಷರು, ಅಂಜನ ಕುಮಾರ್, ಮೊಹಮ್ಮದ್ ಉಸ್ಮಾನ್, ಸಯ್ಯದ್ ದಸ್ತಾಗಿರಿ ಹಾಗೂ ಇತರರು ಉಪಸ್ಥಿತರಿದ್ದರು.
ಬಾಗಲಕೋಟೆ | ನೀಲ ಮಾಣಿಕಮಠದ ಅನ್ನದಾನೇಶ್ವರ ಸ್ವಾಮೀಜಿ ನಿಧನ
ಬಾಗಲಕೋಟೆ : ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಸ್ವಾಮೀಜಿ (75) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿ ಕೆಎಲ್ಇ ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತ್ರಿವಿಧ ದಾಸೋಹಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ-2024ರ ಪ್ರಶಸ್ತಿ ಪುರಸ್ಕ್ರತರಾಗಿರುವ ದಾನೇಶ್ವರ ಸ್ವಾಮೀಜಿಯ ಅಂತ್ಯಕ್ರಿಯೆಗೆ ಸಕಲ ರೀತಿಯ ಸಿದ್ಧತೆಯನ್ನು ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದಲ್ಲಿ ಮಾಡಲಾಗುತ್ತಿದೆ. ಶುಕ್ರವಾರ ರಾತ್ರಿ 10ರಿಂದ ಶನಿವಾರ ಸಂಜೆ 4ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಹಾದೇವ ಹೊಸೂರ ಸೇರಿದಂತೆ ಜಗದೀಶ್ ಮಾಂಬಳ್ಳಿ, ಕುಮಾರ ಗರಗ ಅವರು ಸ್ತ್ರೀಯರ ನಯನಾಜೂಕು, ವಯ್ಯಾರ, ಬಡಿವಾರ ಹಾಗೂ ನೃತ್ಯಗಳನ್ನು ರಂಗದ ಮೇಲೆ ತೋರಿಸುವುದಕ್ಕೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಗಿಟ್ಟಿಸುತ್ತಾರೆ. ಅದರಲ್ಲೂ ಮಹಿಳಾ ಪ್ರೇಕ್ಷಕರು ಬೆರಗಾಗುತ್ತಾರೆ. ಇದೇ ಈ ಕಂಪನಿಯ ವಿಶೇಷ ಮತ್ತು ವಿಶಿಷ್ಟ. ‘‘ನಾಕವೇ ಕಡಿದು ಬಿದ್ದಿಹುದು ನೋಡಬನ್ನಿರೊ ನಿಮ್ಮ ಹೃದಯ ಹೊನ್ನ ಬಟ್ಟಲು ಕೊಂಡು’’ ಎಂದು ಕುವೆಂಪು ಅವರ ಸಾಲುಗಳನ್ನು ಉದಾಹರಿಸಿದವರು ಚಿಂದೋಡಿ ಬಂಗಾರೇಶ. ಅವರು ಕೆಬಿಆರ್ ಡ್ರಾಮಾ ಕಂಪನಿಯ ಪ್ರಧಾನ ಸಂಚಾಲಕರು. ಹಾಗೆ ಅವರು ಹೇಳಿದ್ದು ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಮೊಕ್ಕಾಂ ಮಾಡಿರುವ ಗದಗದ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಶ್ರೀ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ‘ಅಕ್ಕ ಅಂಗಾರ ತಂಗಿ ಬಂಗಾರ’ ನಾಟಕವನ್ನು ನೋಡಿದ ನಂತರ. ಹೀಗೆಂದಾಗ ಪೂರ್ತಿ ನಾಟಕ ಮುಗಿದಿರಲಿಲ್ಲ. ಕೊನೆಯ ದೃಶ್ಯ ಬಾಕಿಯಿರುವಾಗ ಆಯೋಜಿಸಿದ ಪುಟ್ಟ ಸಮಾರಂಭದಲ್ಲಿ ಅವರು ಮಾತನಾಡಿದ್ದು ಗಮನಾರ್ಹ. ಕಂಪನಿ ನಾಟಕಗಳಲ್ಲಿ ಇನ್ನೊಂದು ದೃಶ್ಯ ಬಾಕಿಯಿರುವಾಗ ವ್ಯವಸ್ಥಾಪಕರೊ ಇಲ್ಲವೆ ಹಿರಿಯ ಕಲಾವಿದರೊಬ್ಬರು ಬಂದು ಪ್ರೇಕ್ಷಕರು ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆ ಹೇಳುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಏಣಗಿ ಬಾಳಪ್ಪನವರು ‘‘ಹೋಗಿ ಬರ್ತೇನ್ರಯ್ಯ ನಮ್ಮೂರಿಗೆ ಎಲ್ಲರಿಗೂ ಶರಣಾರ್ಥಿ’’ ಎಂದು ಜೋಳದರಾಶಿ ದೊಡ್ಡನಗೌಡರು ತಮ್ಮ ಕುರಿತು ತಾವೇ ಬರೆದುಕೊಂಡ ಚರಮಗೀತೆಯನ್ನು ಹಾಡುತ್ತಿದ್ದರು. ಹೀಗೆಯೇ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಪ್ರವಚನ ಹೇಳುತ್ತಿದ್ದರು. ಈ ಪರಂಪರೆಯನ್ನು ಕಂಪನಿ ನಾಟಕಗಳು ಮುಂದುವರಿಸಿಕೊಂಡು ಬಂದಿವೆ. ಹೀಗೆಯೇ ಗದಗಿನ ಅಜ್ಜಾವರ ಕಂಪನಿಯೆಂದೇ ಪ್ರಸಿದ್ಧವಾದ ಶ್ರೀ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘವೂ ಮುಂದುವರಿಸಿಕೊಂಡು ಬಂದಿದೆ. ಕಳೆದ ರವಿವಾರ ಹಿರೇಸಿಂದೋಗಿಯಲ್ಲಿ ಅಜ್ಜಾವರ ಕಂಪನಿಯ ‘ಅಕ್ಕ ಅಂಗಾರ ತಂಗಿ ಬಂಗಾರ’ ಎನ್ನುವ ನಾಟಕ ಮುಗಿಯುವ ಮುನ್ನ ಅಂದರೆ ಕೊನೆಯ ದೃಶ್ಯ ಬಾಕಿಯಿರುವಾಗ ಚಿಂದೋಡಿ ಬಂಗಾರೇಶ್ ಅವರು ಮಾತನಾಡಿದ್ದು ಮುಖ್ಯವಾಗಿತ್ತು. ‘‘ರಂಗಭೂಮಿಯಲ್ಲಿ ಕಲಾವಿದರಿಂದ ಕಲೆಯೆಂಬ ಅಮೃತ ಸಿಂಚನವಾಗುತ್ತಿದೆ. ಪ್ರೇಕ್ಷಕರು ಹೊನ್ನಬಟ್ಟಲು ತಂದು ತುಂಬಿಕೊಳ್ಳಿ; ಜೀವನ ಉದ್ಧಾರಕ್ಕೆ’’ ಎಂದು ಅವರು ಸಲಹೆ ನೀಡಿದ್ದಕ್ಕೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು. ಅವರು ಮಾತು ಮುಂದುವರಿಸಿ ‘‘ನಮ್ಮ ಹೃದಯದಲ್ಲಿ ಎರಡು ಕೋಣೆಗಳಿರುತ್ತವೆ. ಒಂದು ರಮಿಸು; ಇನ್ನೊಂದು ವಿರಮಿಸು. ರಮಿಸು ಎಂದರೆ ಕಲೆಯನ್ನು ಆರಾಧಿಸು, ಪ್ರೀತಿಸು. ಹೀಗೆ ಆರಾಧಿಸುತ್ತ ವಿರಮಿಸುವುದು ಅಂದರೆ ದೈವತ್ವಕ್ಕೆ ಹೋಗುವುದು ಎಂದರ್ಥ. ಇದರೊಂದಿಗೆ ಬಣ್ಣದ ಬದುಕಿನಿಂದ ಕಲಾವಿದರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾರೆ. ಅದರಲ್ಲೂ ನಾಟಕದ ಸಾಹಿತ್ಯದ ಮೂಲಕ ಜ್ಯೋತಿ ಪ್ರಜ್ವಲಿಸುತ್ತದೆ. ಇಂಥ ಬೆಳಕನ್ನು ಕಲಾವಿದರು ತಮ್ಮ ಅಭಿನಯದ ಮೂಲಕ, ನಾಟಕದ ಮೂಲಕ ನೀಡುತ್ತಾರೆ. ಹೀಗೆಂದಾಗ ಕಲಾವಿದರು ಮತ್ತು ಪ್ರೇಕ್ಷಕರು ಹಾಲು-ಸಕ್ಕರೆಯಂತೆ. ಅವೆರಡೂ ಹದವಾಗಿ ಬೆರೆಯಬೇಕು. ಹಾಗೆ ಬೆರೆತಾಗಲೇ ಚೆಂದ. ಆದರೆ ಕಲಾವಿದರಿಗೆ ಅಹಂಕಾರ ಬರಬಾರದು. ನಾನು ಎಂಬುದು ಅಳಿಯಬೇಕು’’ ಎನ್ನುವ ತಿಳಿವಳಿಕೆಯನ್ನೂ ನೀಡಿದರು. ಅವರ ಸಂಬಂಧಿ ಚಿಂದೋಡಿ ಮಧುಕೇಶ್ವರ ಅವರು ‘‘ಬೆಳ್ಳಿಯ ದಾರದಲ್ಲಿ ಬಂಗಾರದ ಮಣಿಗಳನ್ನು ಪೋಣಿಸಿ, ವಜ್ರದ ಕವಚವಿಟ್ಟ ಹಾಗೆ ಈ ನಾಟಕ’’ ಎಂದು ಹೊಗಳಿದರು. ಮಹಾದೇವ ಹೊಸೂರ ರಚನೆ ಹಾಗೂ ನಿರ್ದೇಶನದ ‘ಅಕ್ಕ ಅಂಗಾರ ತಂಗಿ ಬಂಗಾರ’ ನಾಟಕದ ತಿರುಳು ಸರಳ. ಪಂಚತಂತ್ರದ ಕಥೆಯಲ್ಲಿ ಬರುವ ಎರಡು ಗಿಣಿಗಳ ಕಥೆ ನಿಮಗೆ ಗೊತ್ತಿರಬಹುದು. ಹಾಗೆಯೇ ಈ ನಾಟಕದಲ್ಲಿ ಅಕ್ಕ ಯಾರ ಮನೆ ಸೇರುತ್ತಾಳೆ? ತಂಗಿ ಯಾರನ್ನು ಮದುವೆಯಾಗುತ್ತಾಳೆ ಎನ್ನುವ ಈ ನಾಟಕ ಹೃದಯಸ್ಪರ್ಶಿಯಾಗಿದೆ. ಅನೇಕ ಮನಮಿಡಿಯುವ, ಜೊತೆಗೆ ಗಮನ ಸೆಳೆಯುವ ದೃಶ್ಯಗಳಿವೆ. ಎಲ್ಲಕ್ಕೂ ಮುಖ್ಯವಾಗಿ ನಾಯಕಿ ಪಾತ್ರದಲ್ಲಿ ಮಹಾದೇವ ಹೊಸೂರ, ಹಾಸ್ಯಪಾತ್ರಗಳಲ್ಲಿ ಜಗದೀಶ ಮಾಂಬಳ್ಳಿ ಹಾಗೂ ಕುಮಾರ ಗರಗ ಸೋದರಿಯರಾಗಿ ಮಿಂಚುತ್ತಾರೆ. ಈ ಸೋದರಿಯರ ಗಂಡನಾಗಿ ಸಾಥಿಯಾಗಿದ್ದಾರೆ ಸುಮಂತ್ ಶಿಗ್ಗಾವಿ. ಸೋದರಿಯರ ತಂದೆಯ ಪಾತ್ರ ಕುಮಾರಸ್ವಾಮಿ ಹೊಸೂರಮಠ ಅವರದು. ರತನ್ಲಾಲ್ ಪಾತ್ರಧಾರಿಯಾಗಿ ಮಹೇಶ ಗದಗಿನಮಠ ಮನದಲ್ಲಿ ಉಳಿಯುತ್ತಾರೆ. ಶೇಡಜಿಯಾಗಿ ಮಹಾಂತಯ್ಯ ಶಶಿಮಠ ಚಪ್ಪಾಳೆ ಗಿಟ್ಟಿಸುತ್ತಾರೆ. ಶೀಲಾ ಪಾತ್ರಧಾರಿಯಾಗಿ ಮಹಾಂತೇಶ ಚಿಕ್ಕೋಡಿ ಉಳಿದಂತೆ ರಾಚಯಸ್ವಾಮಿ ಬಡ್ನಿ, ನೂರುದ್ದಿನ್ ವಣಗೇರಿ, ಶಿವಕುಮಾರ ಐಹೊಳೆ, ಲಿಂಗನಗೌಡ ಕದಂಬನಹಳ್ಳಿ, ಪ್ರಭುಸ್ವಾಮಿ ಬರದೂರ, ಮಾರುತಿ ಬೆಂಗೇರಿ ಹಾಗೂ ಶ್ರೀಧರ ಹೆಗಡೆ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸಂಗೀತದಲ್ಲಿ ರಿದಂ ಪ್ಯಾಡ್ ಫ್ರಾನ್ಸಿಸ್ ಕೌಜಗೇರಿ ಹಾಗೂ ಕ್ಯಾಶಿಯೊ ಪ್ರಮೋದ್ ಸಾಗರ ಅವರದು. ಧ್ವನಿ ಹಾಗೂ ಬೆಳಕು ನಿರ್ವಹಣೆ ಪವನರಡ್ಡಿ ಸಿಂಗಟಾಲೂರ ಮತ್ತು ಯಲ್ಲಪ್ಪ ಅಳವಂಡಿ. ಮೂರು ತಾಸಿನ ಈ ನಾಟಕವನ್ನು ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತ್ಸಾಹಿಸುತ್ತಾರೆ. ಹಿರೇಸಿಂದೋಗಿಯಲ್ಲದೆ ಸುತ್ತಲಿನ ಗ್ರಾಮಸ್ಥರು ತಪ್ಪದೇ ಈ ನಾಟಕ ನೋಡಿದವರಿದ್ದಾರೆ ಮತ್ತು ನೋಡುತ್ತಾರೆ. ಎಂಟು-ಹತ್ತು ಸಾವಿರ ಜನಸಂಖ್ಯೆಯಿರುವ, ಹೋಬಳಿಯಾಗಿರುವ ಹಿರೇಸಿಂದೋಗಿಯಲ್ಲಿಯೇ ಮೊಕ್ಕಾಂ ಮಾಡಲು ಮುಖ್ಯ ಕಾರಣ; ಪುಟ್ಟರಾಜ ಗವಾಯಿಗಳ ಕಾಲದಲ್ಲಿ ಎರಡು ಬಾರಿ, ನಲವತ್ತು ವರ್ಷಗಳ ನಂತರ ಮೂರನೆಯ ಬಾರಿಗೆ ಈ ಊರಲ್ಲಿ ಕ್ಯಾಂಪು ಹಾಕಲಾಗಿದೆ. ಇದಕ್ಕೆ ಈ ಕಂಪನಿ ಮೇಲಿನ ಜನರ ಪ್ರೀತಿ ಕಾರಣ. ‘‘ನಮ್ಮ ಗ್ರಾಮದ ಹಿರಿಯರು ಅಜ್ಜಾವರ ಕಂಪನಿಗೆ ಆಹ್ವಾನ ನೀಡಿದರು. ಇದರೊಂದಿಗೆ ಕಲಾವಿದರ ಸಂಬಳ ಕಡಿಮೆ ಜೊತೆಗೆ ಸಣ್ಣ ಊರಲ್ಲಿ ಖರ್ಚು ಕಡಿಮೆ. ಹೀಗಾಗಿ ನಗರಗಳಲ್ಲಿ ಮೊಕ್ಕಾಂ ಮಾಡಿ ನಾಟಕದ ಉತ್ಪನ್ನಕ್ಕಿಂತ ಖರ್ಚುವೆಚ್ಚಗಳೇ ಹೆಚ್ಚಾಗುವಾಗ ಹಿರೇಸಿಂದೋಗಿಯಲ್ಲಿ ಕಳೆದ ಎಂಟು ತಿಂಗಳಿಂದ ಅಜ್ಜಾವರ ಕಂಪನಿ ಇದೆ. ಇದು ಇದೆ ಎಂಬುದೇ ನಮಗೆಲ್ಲ ಹೆಮ್ಮೆ’’ ಎನ್ನುವ ಖುಷಿ ಯುವ ಉದ್ಯಮಿ ಅಶೋಕ ಗದ್ದಿ ಅವರದು. ಪ್ರತೀ ರವಿವಾರ ಸಂಜೆ ಆರೂವರೆಗೆ ಹಾಗೂ ರಾತ್ರಿ ಹತ್ತೂವರೆಗೆ ಎರಡು ನಾಟಕದ ಪ್ರದರ್ಶನಗಳಿರುತ್ತವೆ. ಉಳಿದ ದಿನಗಳಲ್ಲಿ ರಾತ್ರಿ ಹತ್ತೂವರೆಗೆ ಮಾತ್ರ ಪ್ರದರ್ಶನವಿರುತ್ತದೆ. ಮುಖ್ಯವಾಗಿ ಮಹಾದೇವ ಹೊಸೂರ ಸೇರಿದಂತೆ ಜಗದೀಶ್ ಮಾಂಬಳ್ಳಿ, ಕುಮಾರ ಗರಗ ಅವರು ಸ್ತ್ರೀಯರ ನಯನಾಜೂಕು, ವಯ್ಯಾರ, ಬಡಿವಾರ ಹಾಗೂ ನೃತ್ಯಗಳನ್ನು ರಂಗದ ಮೇಲೆ ತೋರಿಸುವುದಕ್ಕೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಗಿಟ್ಟಿಸುತ್ತಾರೆ. ಅದರಲ್ಲೂ ಮಹಿಳಾ ಪ್ರೇಕ್ಷಕರು ಬೆರಗಾಗುತ್ತಾರೆ. ಇದೇ ಈ ಕಂಪನಿಯ ವಿಶೇಷ ಮತ್ತು ವಿಶಿಷ್ಟ. ಸದ್ಯಕ್ಕೆ ಮಹಾದೇವ ಹೊಸೂರ ಅವರ ರಚನೆ ಹಾಗೂ ನಿರ್ದೇಶನದ ಮೂರನೇ ನಾಟಕ ‘ಸುಪಾರಿ ಸರೋಜ ಅರ್ಥಾತ್ ಮಗು ನಿನ್ನದು ಮಡದಿ ನನ್ನವಳು’ ತಾಲೀಮು ನಡೆದಿದ್ದು, ಡಿಸೆಂಬರ್ 14ರಿಂದ ರಂಗಕ್ಕೇರಲಿದೆ. ನಂತರ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜನವರಿ 3ರಿಂದ ಒಂದು ತಿಂಗಳವರೆಗೆ ಇದೇ ನಾಟಕ ಪ್ರದರ್ಶನಗೊಳ್ಳಲಿದೆ. ಅಲ್ಲಿಂದ ಹಿರೇಸಿಂದೋಗಿಗೆ ಮರಳಿ ‘ಮತ್ತೊಮ್ಮೆ ಬಾ ಮುತ್ತೈದೆಯಾಗಿ’ ನಾಟಕವನ್ನು (ಇದು ಮಹಾದೇವ ಹೊಸೂರ ರಚನೆಯ ಮೊದಲ ನಾಟಕ) ಪ್ರದರ್ಶಿಸಲಿದ್ದಾರೆ. ಆದರೆ ಈ ಬಗೆಯ ಸಾಮಾಜಿಕ ನಾಟಕಗಳಿಗಿಂತ ಈ ಕಂಪನಿಯ ಹೆಸರಾಂತ ‘ಹೇಮರಡ್ಡಿ ಮಲ್ಲಮ್ಮ’ ನಾಟಕ ಸೇರಿದಂತೆ ಪೌರಾಣಿಕ ನಾಟಕಗಳನ್ನು ಈ ಕಂಪನಿಯು ಪ್ರದರ್ಶಿಸಲಿ. ಈಮೂಲಕ ಪೌರಾಣಿಕ ನಾಟಕ ಮತ್ತೆ ರಂಗದ ಮೇಲೆ ಬರಲೆಂದು ಒತ್ತಾಯಿಸುವೆ.
ರಾಯಚೂರು| ಡಿವೈಎಫ್ಐ ಹಟ್ಟಿ 3ನೇ ವಾರ್ಡ್ ಘಟಕ ರಚನೆ
ಹಟ್ಟಿ: ಹಟ್ಟಿ ಚಿನ್ನದ ಗಣಿಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಲು ಒತ್ತಾಯಿಸಿ ನಡೆಸುವ ಜನವರಿ ತಿಂಗಳಲ್ಲಿ ಹಟ್ಟಿಯಲ್ಲಿ ನಡೆಯುವ ಯುವಜನ ಸಮಾವೇಶದ ಭಾಗವಾಗಿ ಡಿವೈಎಫ್ಐ ಹಟ್ಟಿಯ 3ನೇ ವಾರ್ಡ್ ಘಟಕ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಇಮ್ರಾನ್, ಪ್ರಧಾನ ಕಾರ್ಯದರ್ಶಿ ಖಾಸೀನಾಥ್, ಉಪಾಧ್ಯಕ್ಷರಾಗಿ ಮಹ್ಮದ್ ರಫಿ, ಚಂದ್ರು, ಸಹ ಕಾರ್ಯದರ್ಶಿಗಳಾಗಿ ಖಾಜಾ, ಮಾಜೀದ್, ಖಜಾಂವಿಯಾಗಿ ಸನಾನ್, ಸದಸ್ಯರಾಗಿ ರವಿ, ರಾಜಾ, ಇರ್ಫಾನ್ , ಗೌಸ್, ಹರ್ಷದ್, ಸಮೀರ್, ಅಬ್ಬಾಸ್, ಜಾವೀದ್, ಮಹ್ಮದ್, ರಿಜ್ವಾನ್, ಇಮ್ತಿಯಾಜ್, ಗಫುರ್, ಜಬ್ಬರ್, ಸಫಾನ್, ಸೋಯಬ್, ರುಫಾನ್, ಇಬ್ರಾಹಿ, ಬಸು ಆಯ್ಕೆಯಾಗಿದ್ದಾರೆ. ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಡಿವೈಎಫ್ಐ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯ ಅಲ್ಲಾಭಕ್ಷ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಡಿವೈಎಫ್ಐ 9ನೇ ವಾರ್ಡ್ ಘಟಕದ ಅಧ್ಯಕ್ಷ ರಿಯಾಜ್ ಖುರೇಷಿ, 7 ನೇ ಘಟನಕದ ಅಧ್ಯಕ್ಷ ಪಯಾಜ್ ಉಪಸ್ಥಿತರಿದ್ದರು.
ಬೆಳಗಾವಿ| ಪಂಚಮಸಾಲಿಗರ ಮೇಲಿನ ಹಲ್ಲೆ ಖಂಡಿಸಿ ಮೌನ ಪಥಸಂಚಲನ : ಜಯಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಪಂಚಮಸಾಲಿ 2 ಮೀಸಲಾತಿಗಾಗಿ ಕಳೆದ ವರ್ಷ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿದ್ದೆವು. ಈ ವೇಳೆ ಸಮಾಜದ ಬಾಂಧವರ ಮೇಲೆ ಪೊಲೀಸ್ರಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ್ರು. 2024 ಡಿಸೆಂಬರ್ 10 ರಂದು ಪಂಚಮಸಾಲಿಗರ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು. ಪಂಚಮಸಾಲಿಗರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ನಾವು ಮೌನ ಪಥಸಂಚಲನ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಬಾಂಧವರ ಮೇಲಿನ ಹಲ್ಲೆ ನಮ್ಮ ಮನಸ್ಸಿಗೆ ನೋವಾಗಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟವನ್ನು ಉದಾಸೀನ ಮಾಡಿದೆ. ಇದು ನಮ್ಮ ಸಮಾಜದ ಬಾಂಧವರ ಮನಸ್ಸಿಗೆ ಪೆಟ್ಟಾಗಿದೆ. ಆದ್ದರಿಂದ ನಾಡಿನ ಎಲ್ಲ ಪಂಚಮಸಾಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮೇಲೆ ಮೀಸಲಾತಿಗಾಗಿ ಒತ್ತಡ ಹಾಕುವ ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದವರು ಇನ್ನು ಮುಂದೆ ಸಿಎಂ ಬಳಿ ತೆರಳಿ ಮೀಸಲಾತಿ ಕೇಳಲ್ಲ. ಅವರೇ ನಮ್ಮ ಹೋರಾಟ ಪರಿಗಣನೆ ಮಾಡಿ ಮೀಸಲಾತಿ ನೀಡಿದ್ರೆ ಸ್ವಾಗತ ಮಾಡುತ್ತೇವೆ ಎಂದರು. ಮೀಸಲಾತಿಗಾಗಿ ಸಮಾಜದ ಮುಖಂಡರಲ್ಲಿ ಒಡಕು ಉಂಟಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಸಮಾಜದ ಬಾಂಧವರೊಂದಿಗೆ ಸೇರಿ ಹೋರಾಟ ಮುಂದುವರೆಸುತ್ತೇವೆ. ಅಧಿಕಾರ ಇದ್ದಾಗ ಕೆಲವರು ಹೋರಾಟದಲ್ಲಿ ಭಾಗಿಯಾಗಲು ಹಿಂದೇಟು ಹಾಕ್ತಾರೆ. ಅಧಿಕಾರವಿಲ್ಲದಿದ್ದಾಗ ಎಲ್ಲರೂ ನಾವು ಸಮಾಜದ ಪರವಾಗಿದ್ದೇವೆ ಎನ್ನುತ್ತಾರೆ. ನಮ್ಮ ಸಮಾಜದ ಸಚಿವರು, ಶಾಸಕರು ಹೋರಾಟದಲ್ಲಿ ಭಾಗಿಯಾಗದಿದ್ದರೂ ಪರವಾಗಿಲ್ಲ. ಆದರೆ ಸದನದಲ್ಲಿ ಮೀಸಲಾತಿ ಕುರಿತು ಧ್ವನಿ ಎತ್ತಿದ್ರೆ ಸಾಕು ಎಂದ ಶ್ರೀಗಳು.
ಇಂಡಿಗೋ ವಿಮಾನಯಾನ ವಿಳಂಬ, ರದ್ದತಿಗಳಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಏಕಸ್ವಾಮ್ಯ ನೀತಿಯನ್ನು ಟೀಕಿಸಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿಗಳಿಗೆ ಸರ್ಕಾರದ ನೀತಿಯೇ ಕಾರಣ ಎಂದಿದ್ದಾರೆ. ಸಾಮಾನ್ಯ ನಾಗರಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ವಿಮಾನಯಾನ ಸಂಸ್ಥೆ ಹೊಸ ನಿಯಮಗಳನ್ನು ಸರಿಯಾಗಿ ಅಳವಡಿಸಿಕೊಳ್ಳಲು ವಿಫಲವಾಗಿದೆ. ಇದರಿಂದ ಪ್ರಯಾಣಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ನಾಗರಿಕ ವಿಮಾನಯಾನ ಸಚಿವರು ಪರಿಸ್ಥಿತಿ ಪರಿಶೀಲಿಸಿದ್ದಾರೆ.
Gold Rate Rise: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಹಾವು ಏಣಿ ಆಟ ಮುಂದುವರಿಕೆ, ಸದ್ಯದ ಟ್ರೆಂಟ್ ಹೇಗಿದೆ ಗೊತ್ತಾ?
ಚಿನ್ನದ ಬೆಲೆ ನಿನ್ನೆ ಭಾರಿ ಇಳಿಕೆಯಾದರೂ ಇಂದು ಮತ್ತೆ ಏರಿಕೆಯಾಗಿದ್ದು, ಚಿನ್ನದ ಬೇಡಿಕೆ ಹೆಚ್ಚಾಗಿರುವುದು, ಹೂಡಿಕೆ ಹೆಚ್ಚಾಘುತ್ತಿರುವುದೇ ಕಾರಣವಾಗಿದೆ. ದಿನನಿತ್ಯದ ಚಿನ್ನ ಬೆಳ್ಳಿ ದರ ತಿಳಿದುಕೊಳ್ಳಲು ವಿಜಯ ಕರ್ನಾಟಕ ಫಾಲೋ ಮಾಡಿ
ರಶ್ಯ ಅಧ್ಯಕ್ಷ ಪುಟಿನ್ಗೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ
ಇಂದು ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ
‘ಕಾಂಗ್ರೆಸ್ ಭ್ರಷ್ಟಾಚಾರದ ಹೊಸ ರೆಕಾರ್ಡ್’: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಆರೋಪ
ಬೆಂಗಳೂರು: ಮತಿಗೇಡಿಗಳಾದರೂ ಪರವಾಗಿಲ್ಲ ಸಿದ್ದರಾಮಯ್ಯನವರೇ, ಜೀವನದಲ್ಲಿ, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವವರು ಅಧಿಕಾರಕ್ಕಾಗಿ, ಕುರ್ಚಿಗಾಗಿ ಲಜ್ಜೆಗೇಡಿಗಳಾಗಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಅಣಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಸ್ವತಃ ಅಂದಿನ ಸಚಿವರೇ ಒಪ್ಪಿಕೊಂಡರೂ, ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಸದನದಲ್ಲಿ ತಾವೇ ಘಂಟಾಘೋಷವಾಗಿ ಒಪ್ಪಿಕೊಂಡ ಮೇಲೂ ನಿರ್ಲಜ್ಜವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? ಸ್ವತಃ ತಮ್ಮ ಆರ್ಥಿಕ ಸಲಹೆಗಾರರು, ಹಿರಿಯ ಕಾಂಗ್ರೆಸ್ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ಸರ್ಟಿಫಿಕೇಟ್ ಕೊಟ್ಟ ಮೇಲೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತುಕೊಳ್ಳುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? ಅದು ಹೋಗಲಿ ಬಿಡಿ. ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಮನಿ ಫಾರ್ ಮನೆ ಭ್ರಷ್ಟಾಚಾರವನ್ನು ಬಯಲಿಗೆಳೆದು ತಮ್ಮಲ್ಲಿರುವ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗ ಪಡಿಸಿದರೆ ಸರ್ಕಾರವೇ ಅಲ್ಲಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಸ್ವಪಕ್ಷದ ಹಿರಿಯ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡಿದರೂ, ವಸತಿ ಸಚಿವರ ಮೇಲೆ ಕ್ರಮವೂ ಕೈಗೊಳ್ಳದೆ, ತನಿಖೆಯೂ ನಡೆಸದೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? ತಾವೇ ನೇಮಕ ಮಾಡಿದ್ದ ತನಿಖಾ ಆಯೋಗ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ತಾವು ಮಾಡಿದ್ದ 40% ಕಮಿಷನ್ ಆರೋಪ ಹಸಿ ಸುಳ್ಳು ಎಂದು ವರದಿ ನೀಡಿದ ಮೇಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? 40% ಕಮಿಷನ್ ಎಂದು ಹಸಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿ, ಮತದಾರರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? ಎಂದು ಪ್ರಶ್ನಿಸಿದ್ದಾರೆ. ಕಳೆದ 2.5 ವರ್ಷಗಳಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಮಿಷನ್ ದಾಹಕ್ಕೆ ಬಲಿಯಾದ ಅಧಿಕಾರಿಗಳು, ಗುತ್ತಿಗೆದಾರರ ಪ್ರಕರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಜಾಗವೇ ಸಾಕಾಗುವುದಿಲ್ಲ. ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ. ವರ್ಗಾವಣೆ ದಂಧೆಯ ಒತ್ತಡ, ಕಿರುಕುಳ ತಾಳಲಾರದೆ ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ಸಾವು. ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದ ನಿವಾಸಿ ಸಿವಿಲ್ ಎಂಜಿನಿಯರ್ ಸಚಿನ್ ಮಾನಪ್ಪ ಪಾಂಚಾಳ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ. ಕಳೆದ 30 ತಿಂಗಳುಗಳಲ್ಲಿ ನಿಮ್ಮ ಸರ್ಕಾರ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನೂ ಮುರಿದಿದೆ. ನಿಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಅಂತ್ಯವೇ ಇಲ್ಲ, ದಿನದ 24 ಗಂಟೆಗಳು ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ @siddaramaiah ನವರೇ, ಮತಿಗೇಡಿಗಳಾದರೂ ಪರವಾಗಿಲ್ಲ, ಜೀವನದಲ್ಲಿ, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವವರು ಲಜ್ಜೆಗೇಡಿಗಳಾಗಬಾರದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಸ್ವತಃ ಅಂದಿನ ಸಚಿವರೇ ಒಪ್ಪಿಕೊಂಡರೂ, ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನ ಸದನದಲ್ಲಿ ತಾವೇ ಗಂಟಾಘೋಷವಾಗಿ… https://t.co/38DWFNZxqx pic.twitter.com/En1FCHO7pc — R. Ashoka (@RAshokaBJP) December 5, 2025
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್ಡಿ ಪದವಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಕುಲಪತಿಗಳು ಈಗ ವಿದ್ಯಾರ್ಥಿನಿ ಅರ್ಹರಿದ್ದು, ಪದವಿ ನೀಡಲು ಒಪ್ಪಿಕೊಂಡಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಪ್ರೊಫೆಸರ್ಗೆ ಕಡ್ಡಾಯ ನಿವೃತ್ತಿ ನೀಡಲು ಸಿಂಡಿಕೇಟ್ ನಿರ್ಧರಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಈಗ ತ್ವರಿತವಾಗಿ ಪದವಿ ನೀಡಲು ಮುಂದಾಗಿದೆ.
ಕರ್ನಾಟಕದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಈಗ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್ಗಳ ರೂಪದಲ್ಲಿ ಲಭ್ಯ! ದೇಶದಾದ್ಯಂತ ಏಕರೂಪದ ಈ ಬಾಳಿಕೆ ಬರುವ ಪಾಲಿ ಕಾರ್ಬೋನೇಟ್ ಕಾರ್ಡ್ಗಳು, ಮೈಕ್ರೋ ಚಿಪ್ ಮತ್ತು ಕ್ಯೂಆರ್ ಕೋಡ್ಗಳೊಂದಿಗೆ ಬರುತ್ತವೆ. ಇದರಿಂದ ಪೊಲೀಸರಿಗೆ ಮಾಹಿತಿ ಪಡೆಯುವುದು ಇನ್ನಷ್ಟು ಸುಲಭವಾಗುತ್ತದೆ. ಈ ಹೊಸ ಕಾರ್ಡ್ಗಳಿಗಾಗಿ ಕೇವಲ 200 ರೂ. ಪಾವತಿಸಿ. ನಿಮ್ಮ ಹಳೆಯ ಕಾರ್ಡ್ಗಳು ಕೂಡ ಮಾನ್ಯವಾಗಿರುತ್ತವೆ.
ಡಾಲರ್ ಎದುರು ರೂಪಾಯಿ ಇತಿಹಾಸದಲ್ಲಿಯೇ ಅತ್ಯಂತ ಆಘಾತಕಾರಿ ಕುಸಿತ ಕಂಡಿರುವುದೇಕೆ?
ಡಾಲರ್ ಎದುರು ರೂಪಾಯಿ ಮೌಲ್ಯ 90.2ಕ್ಕೆ ಕುಸಿತ ಕಂಡಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ. ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆಯುವುದು, ಮಾರಾಟ ಮಾಡುವುದು ಮತ್ತು ಭಾರತೀಯ ಹೂಡಿಕೆದಾರರು ಖರೀದಿಸುವುದು ಇದಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಡಾಲರ್ ಒಳಹರಿವಿನ ಕೊರತೆ ಇಲ್ಲಿನ ಕಂಪೆನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬಹುತೇಕ ಎಲ್ಲಾ ವಲಯಗಳಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು ತೀವ್ರ ಸಂಕಷ್ಟದಲ್ಲಿವೆ ಎಂದು ವರದಿಗಳು ಹೇಳುತ್ತಿವೆ. 1,000 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳ ಷೇರು ಬೆಲೆಗಳು ಅವುಗಳ ಗರಿಷ್ಠ ಮಟ್ಟದಿಂದ ಶೇ. 20ರಷ್ಟು ಕುಸಿದಿವೆ ಮತ್ತು 440 ಕಂಪೆನಿಗಳ ಷೇರು ಬೆಲೆಗಳು ಶೇ. 50ರಷ್ಟು ಕುಸಿದಿವೆ. ಅನೇಕ ಕಂಪೆನಿಗಳ ಷೇರು ಬೆಲೆಗಳು ಶೇ. 90ರಷ್ಟು ಕುಸಿದಿವೆ. ಮಾರುಕಟ್ಟೆಯ ಲಾಭಗಳು ಈಗ ಅಷ್ಟು ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾದರೆ, ನಮ್ಮ ಆರ್ಥಿಕತೆ ಸುಳ್ಳಿನ ಸುಳಿಯಲ್ಲಿ ಸಿಲುಕಿದೆಯೇ? ಯಾರೂ ಸತ್ಯವನ್ನು ಹೇಳದಿದ್ದರೆ, ಅದನ್ನು ಹೇಗೆ ಸರಿಪಡಿಸಬಹುದು? ರೂಪಾಯಿ ಮೌಲ್ಯ ಈ ಮಟ್ಟಕ್ಕೆ ಕುಸಿದಿರುವಾಗ, ಇದು ಹೇಗೆ ಪರಿಣಾಮ ಬೀರುತ್ತದೆ? ಏಶ್ಯದ ಎಲ್ಲಾ ಕರೆನ್ಸಿಗಳಲ್ಲಿ ರೂಪಾಯಿ ಕೆಟ್ಟ ಸ್ಥಿತಿಯಲ್ಲಿದೆ. ಆದರೆ ಯಾರೂ ಇದರ ಬಗ್ಗೆ ಚರ್ಚಿಸುವುದಿಲ್ಲ. 2014ರ ಮೊದಲು, ರೂಪಾಯಿಯ ದೌರ್ಬಲ್ಯವನ್ನು ರಾಷ್ಟ್ರಕ್ಕೆ ನಷ್ಟ ಎಂದು ಕರೆಯುತ್ತಿದ್ದವರು ಈಗ ಅದನ್ನು ಲಾಭ ಎಂದು ಕರೆಯುತ್ತಿದ್ದಾರೆ. ರೂಪಾಯಿ ದುರ್ಬಲಗೊಳ್ಳುವುದರಿಂದ ವಿದೇಶಿ ವಿನಿಮಯ ಗಳಿಕೆ ಮತ್ತು ಉದ್ಯೋಗಗಳು ಹೆಚ್ಚಾಗುತ್ತವೆ ಎಂದು, ಈ ಹಿಂದೆ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ರಾಜೀವ್ ಕುಮಾರ್ ಹೇಳುತ್ತಿದ್ದಾರೆ. ಆದರೆ ಕಳೆದ ಹಲವಾರು ದಿನಗಳಿಂದ, ವಿದೇಶಿ ಹೂಡಿಕೆದಾರರು ಭಾರತದಿಂದ ಡಾಲರ್ಗಳನ್ನು ಹಿಂದೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಸಾವಿರಾರು ಕೋಟಿ ರೂ.ಮೌಲ್ಯದ ಡಾಲರ್ಗಳನ್ನು ಹಿಂದೆಗೆದುಕೊಳ್ಳಲಾಗಿದೆ. ಇದನ್ನು ಬಹಿರಂಗಪಡಿಸಿಲ್ಲ. ವಿದೇಶಿ ಹೂಡಿಕೆದಾರರು ಬಂದಾಗ, ಅದರ ಬಗ್ಗೆ ಬಹಳ ಸಂಭ್ರಮಪಡಲಾಯಿತು. ಈಗ ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ತಮ್ಮ ಹೂಡಿಕೆಗಳಿಂದ ಹಣ ಹಿಂದೆಗೆದುಕೊಳ್ಳುತ್ತಿದ್ದಾರೆ. ರೂಪಾಯಿ ಕುಸಿತಕ್ಕೆ ಹಲವು ಕಾರಣಗಳಿವೆ. ವಿಫಲ ಆರ್ಥಿಕ ನೀತಿಗಳು ಮತ್ತು ವಿಫಲ ವಿದೇಶಾಂಗ ನೀತಿಯಲ್ಲದೆ ಅಮೆರಿಕದ ಸುಂಕಗಳು ನಮ್ಮ ಆರ್ಥಿಕತೆಗೆ ವಿನಾಶಕಾರಿ ಹೊಡೆತ ನೀಡಿವೆ. ವ್ಯಾಪಾರ ಒಪ್ಪಂದದ ಕೊರತೆಯಿಂದಾಗಿ ರೂಪಾಯಿ ಮತ್ತಷ್ಟು ದುರ್ಬಲಗೊಂಡಿದೆ. ಮತ್ತೊಂದು ಪ್ರಮುಖ ಕಾರಣವೆಂದರೆ, ನಿರಂತರವಾಗಿ ಹೆಚ್ಚುತ್ತಿರುವ ಆಮದು ಪ್ರಮಾಣ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ವ್ಯಾಪಾರ ಕೊರತೆ. ಪ್ರಧಾನಿ, ಅವರ ಸರಕಾರ, ಕಪಟ ಅರ್ಥಶಾಸ್ತ್ರಜ್ಞರು ಮತ್ತು ಮಡಿಲ ಮಾಧ್ಯಮಗಳು ರೂಪಾಯಿ ದುರ್ಬಲಗೊಳ್ಳುವುದು ನಿಜಕ್ಕೂ ಒಳ್ಳೆಯದೆಂದು ಹೇಳುತ್ತಿರುವುದು ವಿಚಿತ್ರವಾಗಿದೆ. ಇದು ಸಂಪೂರ್ಣವಾಗಿ ಸುಳ್ಳು. ರೂಪಾಯಿ ಈಗ ಏಶ್ಯದಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿರುವ ಕರೆನ್ಸಿಯಾಗಿದೆ. 2025ರ ಎಪ್ರಿಲ್ನಿಂದ ಅಕ್ಟೋಬರ್ ವರೆಗಿನ ಆಮದು ಪ್ರಮಾಣ ಸುಮಾರು 58 ಲಕ್ಷ ಕೋಟಿ ರೂ. ಇದು ಕಳೆದ ವರ್ಷಕ್ಕಿಂತ ಶೇ. 10 ಹೆಚ್ಚಾಗಿದೆ. ರೂಪಾಯಿಯನ್ನು ಬಲವಾಗಿಡಲು ಆರ್ಬಿಐ ಸುಮಾರು 4 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೆ ಅದು ಯಾವುದೇ ಪರಿಣಾಮ ಬೀರುತ್ತಿಲ್ಲ. ರೂಪಾಯಿ ದುರ್ಬಲಗೊಳ್ಳುತ್ತಿದೆ ಮತ್ತು ಅದು ಏನೂ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದರೆ ತಪ್ಪು. ರೂಪಾಯಿ ದುರ್ಬಲಗೊಳ್ಳುವುದು ಎಂದರೆ ದೇಶದ ಆಮದು ಬಿಲ್ ಹೆಚ್ಚಾಗುತ್ತದೆ. ನಾವು ವಿದೇಶದಿಂದ ಏನೇ ಖರೀದಿಸಿದರೂ ಅದು ಹೆಚ್ಚು ದುಬಾರಿಯಾಗುತ್ತದೆ ಮತ್ತು ನಾವು ಅವುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಭಾರತಕ್ಕೆ ಖರೀದಿಸಿ ತರುವ ಹೆಚ್ಚಿನ ಬೆಲೆಯ ಸರಕುಗಳ ಬೆಲೆಯೂ ಇಲ್ಲಿ ಹೆಚ್ಚಾಗುತ್ತದೆ ಎಂಬುದು ಸ್ಪಷ್ಟ. ಉದಾಹರಣೆಗೆ, ಕಚ್ಚಾ ತೈಲ. ಇದು ಹೆಚ್ಚು ದುಬಾರಿಯಾದರೆ, ಡೀಸೆಲ್ ಮತ್ತು ಪೆಟ್ರೋಲ್ ಇಲ್ಲಿ ಹೆಚ್ಚು ದುಬಾರಿಯಾಗುತ್ತವೆ. ಸಾರಿಗೆ ವೆಚ್ಚದ ಅಗತ್ಯವಿರುವ ತರಕಾರಿಗಳು, ಹಣ್ಣುಗಳು ಮತ್ತು ಇತರ ವಸ್ತುಗಳು ಹೆಚ್ಚು ದುಬಾರಿಯಾಗುತ್ತವೆ. ಹಣದುಬ್ಬರ ಹೆಚ್ಚಾದಾಗ, ಆರ್ಬಿಐ ಬಡ್ಡಿದರಗಳನ್ನು ಹೆಚ್ಚಿಸುತ್ತದೆ.ಇದರಿಂದ ನಮ್ಮ ಸಾಲದ ಇಎಂಐ ಹೆಚ್ಚಾಗುತ್ತದೆ. ಅಲ್ಲದೆ, ವಿದೇಶ ಪ್ರಯಾಣ, ಆಹಾರ, ಶಿಕ್ಷಣ ಎಲ್ಲವೂ ದುಬಾರಿಯಾಗುತ್ತದೆ. ಹಾಗಿರುವಾಗ, ರೂಪಾಯಿ ಕುಸಿಯುತ್ತಲೇ ಇದ್ದರೂ ನಾವು ಸಂತೋಷವಾಗಿರುತ್ತೇವೆ ಎಂಬ ಭ್ರಮೆಯಲ್ಲಿ ತಳ್ಳಲಾಗುತ್ತಿದೆಯೆ? ರೂಪಾಯಿ ಕುಸಿತ ಮೋದಿಯವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ಅದು ಖಂಡಿತವಾಗಿಯೂ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಯುಪಿಎ ಅವಧಿಯಲ್ಲಿ ರೂಪಾಯಿ ಐವತ್ತೈದು, ಅರುವತ್ತು ರೂಪಾಯಿ ಆದಾಗ ಸರಕಾರವನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದವರು ಈಗ ನಾಪತ್ತೆಯಾಗಿದ್ದಾರೆ. ಕನಿಷ್ಠ ರೂಪಾಯಿ ಇಷ್ಟೊಂದು ಕುಸಿಯುತ್ತಿರುವುದು ಯಾಕೆ ಎಂಬ ಪ್ರಶ್ನೆಯನ್ನೂ ಅವರು ಕೇಳುತ್ತಿಲ್ಲ ಯುವಕರಿಗೆ ಉದ್ಯೋಗಗಳು ಸಿಗುವುದು ಹಾಗಿರಲಿ, ಇಲ್ಲಿ ಇಂಟರ್ನ್ಶಿಪ್ಗಳ ಬಗ್ಗೆಯೇ ಬಿಕ್ಕಟ್ಟು ಇದೆ. ಪಿಎಂ ಇಂಟರ್ನ್ಶಿಪ್ ಯೋಜನೆ ವಿಫಲವಾಗಿದೆ ಎಂಬುದು ಹಳೇ ವಿಷಯ. ಈ ಯೋಜನೆಯನ್ನು ಫೆಬ್ರವರಿ 2024-25ರ ಬಜೆಟ್ ಸಮಯದಲ್ಲಿ ಘೋಷಿಸಲಾಯಿತು. ಅದ್ಭುತ ಯೋಜನೆ. ಮೋದಿ ಮಾತ್ರ ಇಂತಹ ಯೋಜನೆಯನ್ನು ತರಬಲ್ಲರು ಎಂದೆಲ್ಲ ಹೇಳಲಾಗಿತ್ತು. ಟಾಪ್ 500 ಕಂಪೆನಿಗಳಿಗೆ ಈ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎನ್ನಲಾಗಿತ್ತು. 5 ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ಶಿಪ್ ಒದಗಿಸುವುದು ಯೋಜನೆಯ ಗುರಿಯಾಗಿತ್ತು. ಇದರರ್ಥ ಒಂದು ವರ್ಷದಲ್ಲಿ 20 ಲಕ್ಷ ಯುವಕರಿಗೆ ತರಬೇತಿ ನೀಡುವುದು. ಆದರೆ ಮೊದಲ ವರ್ಷದಲ್ಲಿ ಎಷ್ಟು ವಿದ್ಯಾರ್ಥಿಗಳು ಇಂಟರ್ನ್ಶಿಪ್ ಪಡೆದರು? ಟಿಎಂಸಿ ಸಂಸದೆ ಸಯಾನಿ ಘೋಷ್ ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವನ್ನು ಕೇಳಿದಾಗ, ಒಂದು ವರ್ಷದಲ್ಲಿ 1.25 ಲಕ್ಷ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯಿದ್ದು, ಅಕ್ಟೋಬರ್ 3, 2024ರಂದು ಪೈಲಟ್ ಯೋಜನೆ ಪ್ರಾರಂಭಿಸಲಾಗಿದೆ ಎಂಬ ಉತ್ತರ ಬಂದಿತ್ತು. ಸರಕಾರ ಇದಕ್ಕಾಗಿ ರೂ. 73 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಈ 73 ಕೋಟಿಯಲ್ಲಿ 16 ಕೋಟಿಗೂ ಹೆಚ್ಚು ಜಾಹೀರಾತಿಗಾಗಿ ಖರ್ಚಾಗಿದೆ. ಆದರೆ ಪಿಎಂ ಇಂಟರ್ನ್ಶಿಪ್ ಯೋಜನೆ ವಿಫಲವಾಗಿದೆ ಅಥವಾ ನಿಷ್ಪ್ರಯೋಜಕವಾಗಿದೆ ಮತ್ತು ಅದು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಹೇಳಲಾಗುತ್ತಿಲ್ಲ. 4,566 ವಿದ್ಯಾರ್ಥಿಗಳು ತಮ್ಮ ಇಂಟರ್ನ್ಶಿಪ್ಗಳನ್ನು ಮಧ್ಯದಲ್ಲಿಯೇ ಬಿಟ್ಟಿದ್ದಾರೆ. 1 ಕೋಟಿಗೂ ಹೆಚ್ಚು ಜನರಿಗೆ ಇಂಟರ್ನ್ಶಿಪ್ ನೀಡುವ ಭರವಸೆ ನೀಡಿದ ಈ ಯೋಜನೆ 100 ಉದ್ಯೋಗಗಳನ್ನು ಸಹ ಒದಗಿಸಿಲ್ಲ. ಹಾಗಾದರೆ ಉದ್ಯೋಗಗಳು ಏಕೆ ಸೃಷ್ಟಿಯಾಗುತ್ತಿಲ್ಲ? 2021ರಿಂದ 2025ರ ನಡುವಿನ ಐದು ವರ್ಷಗಳಲ್ಲಿ, 100 ಬಿಲಿಯನ್ ಡಾಲರ್ ಐಪಿಒಗಳನ್ನು ಸಂಗ್ರಹಿಸಲಾಗಿದೆ ಎಂದು ಪರಿಣಿತರು ಹೇಳುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟೆಲ್ಲ ಹಣವಿದೆ? ಆರ್ಥಿಕತೆ ಎಷ್ಟು ಪ್ರಬಲವಾಗಿದೆ? ಎಂದೆಲ್ಲ ದೊಡ್ಡದಾಗಿ ಹೇಳಿಕೊಳ್ಳುವುದು ನಡೆಯುತ್ತದೆ.ಆದರೆ ಈ ಗದ್ದಲದಲ್ಲಿ, ಐಪಿಒ ಒಳಗೆ ಮಾರಾಟಕ್ಕೆ ಇರುವ ಕೊಡುಗೆ ಏನೆಂದು ಹೇಳಲಾಗುತ್ತಿಲ್ಲ. ತಮ್ಮ ಷೇರುಗಳನ್ನು ಮಾರಾಟ ಮಾಡುವ ಮೂಲಕ ಅದರ ಪ್ರಮೋಟರ್ಗಳು ಎಷ್ಟು ಗಳಿಸಿದರು ಮತ್ತು ಆ ಹಣ ಎಲ್ಲಿಗೆ ಹೋಯಿತು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪ್ರಮೋಟರ್ಗಳು ಸ್ವತಃ ಹೂಡಿಕೆ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.ಅವರು ತಮ್ಮ ಕಂಪೆನಿ ಮತ್ತು ಷೇರುಗಳ ಮೌಲ್ಯಮಾಪನದ ಲಾಭ ಪಡೆದುಕೊಂಡು ಷೇರುಗಳನ್ನು ಮಾರಾಟ ಮಾಡಿ ಹೊರಟು ಹೋಗುತ್ತಿದ್ದಾರೆ. ಹಾಗಾದರೆ ಅವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ನಂಬಿಕೆ ಇಲ್ಲವೇ? ಪರಿಣಿತರು ಹೇಳುವ ಪ್ರಕಾರ, ಐಪಿಒಗಳ ಮೂಲಕ ಸಂಗ್ರಹಿಸಿದ ಹಣದ ಶೇ. 60 ಖಂಡಿತವಾಗಿಯೂ ಕಂಪೆನಿಗಳಿಗೆ ಹೋಯಿತು. ಆದರೆ ಆ ಹಣದಲ್ಲಿ ಕೇವಲ ಶೇ. 15 ಮಾತ್ರ ಹೊಸ ಸ್ಥಾವರಗಳು ಅಥವಾ ಯಂತ್ರೋಪಕರಣಗಳನ್ನು ಸ್ಥಾಪಿಸಲು ಬಳಸಲಾಯಿತು. ಈ ಹಣದಿಂದ ಸ್ಥಾವರಗಳು ಮತ್ತು ಕಾರ್ಖಾನೆಗಳು ಸ್ಥಾಪಿಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದಿಲ್ಲವೆಂದಾದರೆ, ಉದ್ಯೋಗಗಳು ಹೇಗೆ ಸೃಷ್ಟಿಯಾಗುತ್ತವೆ? ಆದರೆ ಎರಡು ದಶಕಗಳ ಹಿಂದೆ, ಐಪಿಒಗಳ ಮೂಲಕ ಸಂಗ್ರಹಿಸಿದ ಹಣದ ಹೆಚ್ಚಿನ ಭಾಗವನ್ನು ಸ್ಥಾವರಗಳು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಲು ಖರ್ಚು ಮಾಡಲಾಗಿತ್ತು. ಈಗ, ಅದು ಆಗುತ್ತಿಲ್ಲ, ಆದ್ದರಿಂದ ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ. ಮೋದಿ ಸರಕಾರವೇ ಲೋಕಸಭೆಯಲ್ಲಿ ಕೊಟ್ಟ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಕಂಪೆನಿಗಳು ಮುಚ್ಚಲ್ಪಟ್ಟಿವೆ. ಮುಚ್ಚುವ ಕಂಪೆನಿಗಳಲ್ಲಿ ಕೆಲಸ ಮಾಡಿದ ಜನರು ಎಲ್ಲಿಗೆ ಹೋಗುತ್ತಾರೆ? 2 ಲಕ್ಷಕ್ಕೂ ಹೆಚ್ಚು ಕಂಪೆನಿಗಳನ್ನು ಮುಚ್ಚಿವೆಯೆಂದರೆ, ಕೋಟ್ಯಂತರ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿರಬೇಕು. ಹೀಗೆಲ್ಲ ಇರುವಾಗ ಸರಕಾರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸವನ್ನು ತಪ್ಪದೆ ಮಾಡುತ್ತದೆ. ಹಾಗೆ ಗಮನ ಬೇರೆಡೆಗೆ ಸೆಳೆಯುವುದರ ಭಾಗವಾಗಿ, ರಾಜ್ಯಪಾಲರುಗಳ ನಿವಾಸಗಳನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಯಿತು. ಅದರಿಂದ ಏನು ಬದಲಾಯಿತು, ಜನರಿಗೆ ಏನು ಉಪಯೋಗವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಈಗ, ಪಿಎಂಒ ಸಂಕೀರ್ಣಕ್ಕೆ ‘ಸೇವಾ ತೀರ್ಥ’ ಎಂದು ಹೆಸರಿಡಲಾಗುವುದು ಎಂಬ ಹೊಸ ಸುದ್ದಿ ಬಂದಿದೆ. ಇದನ್ನೇ ಸರಕಾರ ಮಾಡಿಕೊಂಡು ಕೂತರೆ, ಈ ಸರಕಾರ ಬರಲು ಮತ ಹಾಕಿದ, ಘೋಷಣೆ ಕೂಗಿದ, ಕಾರ್ಯಕರ್ತರಾಗಿ ದುಡಿದ ಕೋಟ್ಯಂತರ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಕಥೆಯೇನು? ಅವರು ಫಾರಂಗಳನ್ನು ಭರ್ತಿ ಮಾಡುವುದು, ಕನಸು ಕಾಣುವುದು, ಪರೀಕ್ಷೆಗಳಿಗಾಗಿ ಕಾಯುವುದು, ಪರೀಕ್ಷೆ ಬರೆಯುವುದು, ಉದ್ಯೋಗಕ್ಕಾಗಿ ಕಾಯುವುದು, ವಿವಿಧ ಕಂಪೆನಿಗಳಿಗೆ ರೆಸ್ಯೂಮ್ಗಳನ್ನು ಸಲ್ಲಿಸುವುದು ಇಷ್ಟರಲ್ಲೇ ಬದುಕು ಕಳೆಯಬೇಕೆ? ಜನರು ತಮ್ಮ ಮೆದುಳನ್ನೇ ಬಳಸದಿರುವಾಗ, ಡಾಲರ್ ಎದುರು ರೂಪಾಯಿ 90ಕ್ಕೂ ಮೀರಿ ಕುಸಿದರೂ ಬಹಳ ಚೆಂದ ಕಾಣುತ್ತಿದೆ. ಅದನ್ನೂ ರೂಪಾಯಿ ಶತಕದ ಕಡೆಗೆ ದಾಪುಗಾಲು ಎಂದು ಸಂಭ್ರಮಿಸುವುದನ್ನೂ ಕಾಣುವ ಸಾಧ್ಯತೆ ಇರಬಹುದಲ್ಲವೇ?
ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು, 1 ಲಕ್ಷ ದಂಡ: ಸಚಿವ ಸಂಪುಟ ಸಭೆಯಲ್ಲಿ ಮಹತ್ವ ತಿರ್ಮಾನ
ಬೆಂಗಳೂರು, ಡಿಸೆಂಬರ್ 05: ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣಕ್ಕೆ ಮೂಗುದಾರ ಹಾಕುಲು ರಾಜ್ಯ ಸರ್ಕಾರ ಸಜ್ಜಾಗಿದೆ. ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ- 2025 ಅನುಮೋದನೆ ಸಿಕ್ಕಿದೆ. ಕರಾವಳಿ ಸೇರಿದಂತೆ ರಾಜ್ಯದ
ಎಸ್ಐಆರ್ ಸಂಪೂರ್ಣ ಪ್ರಕ್ರಿಯೆಯು ಅಮಿತ್ ಶಾ ಅವರ ತಂತ್ರ: ಮಮತಾ ಬ್ಯಾನರ್ಜಿ ವಾಗ್ದಾಳಿ
ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವೆಲ್ಲಾ ಅಮಿತ್ ಶಾ ಅವರ ತಂತ್ರ ಎಂದು ಆರೋಪಿಸಿದ್ದಾರೆ. ತಮ್ಮ ಸರ್ಕಾರ ಈ ಕ್ರಮವನ್ನು ತಡೆದಿದ್ದರೆ, ಕೇಂದ್ರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತಿತ್ತು ಎಂದು ಹೇಳಿದ್ದಾರೆ. ಮತದಾರರಲ್ಲಿ ಭಯ ಮೂಡಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಜನರು ಈ ಎಣಿಕೆ ಪ್ರಕ್ರಿಯೆಗೆ ಹೆದರಬೇಡಿ, ಕೇವಲ ತಮ್ಮ ದಾಖಲೆಗಳನ್ನು ಸಲ್ಲಿಸಿ ಎಂದು ಅವರು ಜನರಿಗೆ ಮನವಿ ಮಾಡಿದರು.
ಚಿಂಚೋಳಿ | ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ
ಕಲಬುರಗಿ: ಚಿಂಚೋಳಿ ತಾಲೂಕಿನ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ತಾಲೂಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದ ಸಿದ್ದಸಿರಿ ಎಥೆನಾಲ್ ಪವರ್ ಘಟಕದ ಎದುರು ಧರಣಿ ನಡೆಸಲಾಯಿತು. ನವೆಂಬರ್ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಬ್ಬಿಗೆ ಪ್ರತಿ ಟನ್ ಗೆ 2,950 ರೂ. ಹಾಗೂ 50 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸಕ್ಕರೆ ಕಾರ್ಖಾನೆ ಮಾಲಕರು ಒಪ್ಪಿಗೆ ಸೂಚಿಸಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ಸಿದ್ದಸಿರಿ ಕಾರ್ಖಾನೆಯು ಈ ಒಪ್ಪಂದವನ್ನು ಮುರಿದು ರೈತರ ಖಾತೆಗಳಿಗೆ ಕೇವಲ 2,550 ರೂ. ಜಮಾ ಮಾಡುವ ಮೂಲಕ ವಂಚನೆ ಮಾಡುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದಸಿರಿ ಕಂಪೆನಿಯ ಸಂಸ್ಥಾಪಕ ಬಸನಗೌಡ ಪಾಟೀಲ ಯತ್ನಾಳ್ ಕಂಪೆನಿ ಸ್ಥಾಪಿಸುವಾಗ ಕಲಬುರಗಿ ಜಿಲ್ಲೆಯ ರೈತರಿಗೆ ಇತರ ಕಂಪೆನಿಗಳಿಗಿಂತ 100 ರೂ. ಅಧಿಕ ಬೆಲೆ ನೀಡುವುದಾಗಿ ಮಾತು ಕೊಟ್ಟಿದ್ದರು. ಆದರೆ ಈಗ ಆ ಮಾತು ತಪ್ಪಿ ನಡೆಯುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆರೋಪಿಸಿದರು. ಚಿಂಚೋಳಿ ಮತ್ತು ಕಾಳಗಿ ಅವಳಿ ತಾಲೂಕಿನ ರೈತರು ಬೆಳೆದ ಕಬ್ಬಿಗೆ ಮೊದಲ ಆದ್ಯತೆ ನೀಡಿ ಕಬ್ಬು ನುರಿಸಬೇಕು ಮತ್ತು ಕಾರ್ಖಾನೆಯಲ್ಲಿ ಸ್ಥಳೀಯ ಅರ್ಹ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಕಬ್ಬು ಸಾಗಣೆ ಮಾಡುತ್ತಿರುವ ವಾಹನ ಚಾಲಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ನಂತರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ಪವರ್ ಎಥೆನಾಲ್ ಘಟಕದ ಜಿ.ಎಂ. ದಯಾನಂದ ಬಣಗಾರ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದರು. ತಹಶೀಲ್ದಾರ್ ಅವರು ಕಾರ್ಖಾನೆ ಮಾಲಕರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ರೈತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಅಬ್ದುಲ್ ಬಾಸಿತ್, ಪ್ರಮುಖರಾದ ಆರ್. ಗಣಪತ ರಾವ್, ಲಕ್ಷ್ಮಣ ಅವಂಟಿ, ನಾಗೇಶ ಗುಣಾಜಿ, ಸುಭಾಷ್ ಎಂಪಳ್ಳಿ, ಶಬ್ಬೀರ್ ಅಹ್ಮದ್ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ದ್ವೇಷ ಭಾಷಣಕ್ಕೆ ಕಡಿವಾಣ, ಹೊಸ ಕಾನೂನಿಂದ ಏನು ಪ್ರಯೋಜನ, ಮತೀಯ ಸಂಘರ್ಷಕ್ಕೆ ಬೀಳುತ್ತಾ ಬ್ರೇಕ್?
ರಾಜ್ಯದಲ್ಲಿ ಮತೀಯ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದ್ವೇಷ ಭಾಷಣ ತಡೆಯಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಚಿವ ಸಂಪುಟವು ಹೊಸ ಮಸೂದೆಗೆ ಒಪ್ಪಿಗೆ ನೀಡಿದ್ದು, ದ್ವೇಷ ಭಾಷಣ ಮಾಡುವವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಈ ನಡುವೆ ಬಿಜೆಪಿಯನ್ನು ಟಾರ್ಗೆಟ್ ಮಾಡಲೆಂದೇ ಈ ಮಸೂದೆಯನ್ನು ಜಾರಿಗೊಳಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಕಾನೂನಾಗಿ ಜಾರಿಗೆ ಬರಲಿದೆ. ಈ ಕ್ರಮದಿಂದ ಕೋಮು ಸಾಮರಸ್ಯ ಹೆಚ್ಚುವ ನಿರೀಕ್ಷೆ ಇದ್ದು, ಇದು ಹೇಗೆ ಜಾರಿಯಾಗಲಿದೆ ಎಂದು ನೋಡಬೇಕಿದೆ.
Good News: ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗೆ ಇಳಿಕೆ ಮಾಡಿದ ರಿಸರ್ವ್ ಬ್ಯಾಂಕ್; ಸಾಲಗಾರರು ನಿರಾಳ
ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇಳಿಕೆ ಮಾಡಿದ್ದು, ಶೇ. 5.5ರಿಂದ ಶೇ. 5.25ಕ್ಕೆ ಇಳಿಕೆಗೊಂಡಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ಕೊನೆಯ ದಿನ, ರೆಪೋ ದರವನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಸರ್ವಸಮ್ಮತಿ ವ್ಯಕ್ತವಾಗಿದೆ. ರೆಪೋ ದರವನ್ನು ಇಳಿಕೆ ಮಾಡುವ ಬಗ್ಗೆ ಆರ್ಬಿಐ ನಿನ್ನೆಯೇ ಮುನ್ಸೂಚನೆ ನೀಡಿತ್ತಾದರೂ, ಇಂದು (ಡಿ. 5-ಶುಕ್ರವಾರ) ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗೆ ಇಳಿಕೆ ಮಾಡಲಾಗಿದೆ.
ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?
ಕಳೆದ 5 ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಖಾಸಗಿ ಕಂಪೆನಿಗಳು ಬಾಗಿಲು ಮುಚ್ಚಿವೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಹುಸಿಯಾಗಿದೆ. ಕಟ್ಟು ಜಾಣ್ಮೆಯ ಜಗತ್ತಿನಲ್ಲಿ ಉದ್ಯೋಗ ನಷ್ಟದ ಭೀತಿ ಕಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ನೂತನ ಸಂಹಿತೆಗಳು ರಂಗ ಪ್ರವೇಶಿಸಿವೆ; ಇವು ಕಾನೂನು ಆಗುತ್ತವೆ ಕೂಡ. ಏಕೆಂದರೆ, ಪ್ರತಿಪಕ್ಷದ ಸದಸ್ಯರನ್ನು ಸಾರಾಸಗಟಾಗಿ ಅಮಾನತುಗೊಳಿಸಿ ಮಸೂದೆಗಳನ್ನು ಅಂಗೀಕರಿಸಿದ ಖ್ಯಾತಿ ಈ ಸರಕಾರದ್ದು. ಸಂಧಾನದಲ್ಲಿ ನಂಬಿಕೆ ಇಲ್ಲದೆ, ಎಲ್ಲವನ್ನೂ ಮೇಲಿನಿಂದ ಹೇರುತ್ತದೆ ಮತ್ತು ಮೂಗು ಹಿಡಿದು ಒಪ್ಪಿಸಲಾಗುತ್ತದೆ. ಹಾಗಾಗಿ ಇದರಿಂದ ಹಾನಿಗೊಳಗಾಗುವ ದುಡಿಯುವ ವರ್ಗ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ. ಒಕ್ಕೂಟ ಸರಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯ್ದೆ 1936, ಕನಿಷ್ಠ ವೇತನ ಕಾಯ್ದೆ 1948, ಬೋನಸ್ ಪಾವತಿ ಕಾಯ್ದೆ 1965 ಹಾಗೂ ಸಮಾನ ಸಂಭಾವನೆ ಕಾಯ್ದೆ 1976ರ ಕ್ರೋಡೀಕರಣ. ಇವುಗಳೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್ಎಚ್ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು ಈ ಸಂಬಂಧ ಕರಡು ನಿಯಮವನ್ನು ಪ್ರಕಟಿಸಿವೆ ಮತ್ತು ಲಕ್ಷ ದ್ವೀಪ ಹಾಗೂ ಪಶ್ಚಿಮ ಬಂಗಾಳ ಯಾವುದೇ ಸಂಹಿತೆಯನ್ನು ಪ್ರಕಟಿಸಿಲ್ಲ. ತಾನು ಸಂಹಿತೆಯನ್ನು ಜಾರಿಗೊಳಿಸುವುದಿಲ್ಲ ಎಂದು ಕೇರಳ ಹೇಳಿದೆ. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಕೇಂದ್ರದ ಏಕಪಕ್ಷೀಯ ನಿಲುವನ್ನು ಖಂಡಿಸಿವೆ. ಕರಡಿಗೆ ಪ್ರತಿಕ್ರಿಯಿಸಲು 45 ದಿನ ಕಾಲಾವಕಾಶ ನೀಡಲಾಗಿದೆ. ಆನಂತರ ತಿದ್ದುಪಡಿಗಳೊಂದಿಗೆ ಮರುಪ್ರಕಟಣೆ ಹೊರಡಿಸಲಾಗುತ್ತದೆ. ಉದ್ಯಮ ಸಂಹಿತೆಯನ್ನು ಸ್ವಾಗತಿಸಿದ್ದರೆ, ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ನೇಮಕ ಪತ್ರ ಕಡ್ಡಾಯಗೊಳಿಸಿರುವುದು, ಗಿಗ್ ಮತ್ತು ಪ್ಲಾಟ್ಫಾರ್ಮ್ ನೌಕರರು ಸೇರಿದಂತೆ ಎಲ್ಲರಿಗೂ ಪಿಎಫ್, ಇಎಸ್ಐಸಿ, ವಿಮೆ ಮತ್ತಿತರ ಭದ್ರತೆಗಳ ವಿಸ್ತರಣೆ, ಎಲ್ಲ ಕಾರ್ಮಿಕರಿಗೂ ಕನಿಷ್ಠ ಮತ್ತು ಸಕಾಲಿಕ ವೇತನ, 40 ವರ್ಷ ದಾಟಿದ ಎಲ್ಲರಿಗೂ ವಾರ್ಷಿಕ ಆರೋಗ್ಯ ತಪಾಸಣೆ, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಮತ್ತು ಎಲ್ಲ ವಲಯಗಳಲ್ಲಿ ಕೆಲಸ ಮಾಡಲು ಅವಕಾಶ, ಲಿಂಗ ತಟಸ್ಥ ವೇತನ ಮತ್ತು ಉದ್ಯೋಗಾವಕಾಶ, ತೃತೀಯ ಲಿಂಗಿಗಳ ತಾರತಮ್ಯಕ್ಕೆ ನಿರ್ಬಂಧ ಹಾಗೂ ಉದ್ಯಮಗಳಿಗೆ ದೇಶಾದ್ಯಂತ ‘ಒಂದು ನೋಂದಣಿ, ಒಂದು ಪರವಾನಿಗೆ’ ನೀಡುವಿಕೆಯನ್ನು ಸಂಹಿತೆ ಒಳಗೊಂಡಿದೆ. ಸಂಹಿತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ, ಕಾನ್ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಸ್ವಾಗತಿಸಿದ್ದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ದ ಪ್ರತಿನಿಧಿಗಳು ಪ್ರತಿಕ್ರಿಯಿಸಿಲ್ಲ. ಆದರೆ, ಭಾರತೀಯ ಉದ್ಯಮಿಗಳ ಸಂಘಟನೆ(ಅಸೋಸಿಯೇಷನ್ ಆಫ್ ಇಂಡಿಯನ್ ಎಂಟ್ರೆಪ್ರೆನರ್, ಎಐಇ)ಯು ಎಂಎಸ್ಎಂಇಗಳ ಕಾರ್ಯನಿರ್ವಹಣೆ ವೆಚ್ಚ ಹೆಚ್ಚಲಿದೆ; ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ವಹಿವಾಟಿಗೆ ಅಡೆತಡೆ ಆಗಲಿದೆ ಎಂದು ಹೇಳಿದೆ. ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಹೊರತುಪಡಿಸಿ, ಉಳಿದ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಇವು ಸಂಹಿತೆಯನ್ನು ವಿರೋಧಿಸಿ 2019, 2020, 2022, 2023 ಮತ್ತು ಜುಲೈ 9, 2025ರಲ್ಲಿ ಪ್ರತಿಭಟನೆ ನಡೆಸಿದ್ದವು. ಕಾರ್ಮಿಕ ವಿಷಯ ಅನುಷಂಗಿಕ ಪಟ್ಟಿಯಲ್ಲಿದ್ದು, ರಾಜ್ಯ ಮತ್ತು ಕೇಂದ್ರ ಎರಡೂ ಕಾಯ್ದೆ ರೂಪಿಸಬಹುದು. ಸಂಹಿತೆಯು ರಾಜ್ಯ ಸರಕಾರಗಳ ವೇತನ ನಿಗದಿಗೊಳಿಸುವಿಕೆಯ ಸ್ವಾತಂತ್ರ್ಯವನ್ನು ಕಸಿದು ಕೊಂಡಿದೆ. ರಾಷ್ಟ್ರದೆಲ್ಲೆಡೆ ಒಂದೇ ವೇತನ ಎನ್ನುವುದು ಈ ಹಿಂದೆ ಚಾಲ್ತಿಗೊಳಿಸಿದ್ದ ಪರಿಕಲ್ಪನೆಯಾದರೂ, ಜಾರಿಗೆ ಬಂದಿರಲಿಲ್ಲ. ಶೇ.93ರಷ್ಟು ನೌಕರರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಅವರಿಗೆ ಸಂಹಿತೆಯು ರಕ್ಷಣೆಯ ಖಾತ್ರಿ ನೀಡುವುದಿಲ್ಲ. ಕಾರ್ಖಾನೆಗೆ ಅನುಮತಿ ಪಡೆಯಲು ಇರಬೇಕಾದ ಕಾರ್ಮಿಕರ ಸಂಖ್ಯೆಯ ಹೆಚ್ಚಳದಿಂದ, ಗುತ್ತಿಗೆ ಕಾರ್ಮಿಕರು ಹೆಚ್ಚಲಿದ್ದಾರೆ ಎಂದು ದೂರಿವೆ. ಕನಿಷ್ಠ ವೇತನ-ಭರವಸೆಯೇನು ಮತ್ತು ಕಳೆದುಕೊಳ್ಳುವುದೇನು? ವೇತನ ಸಂಹಿತೆ 2019 ಕನಿಷ್ಠ ವೇತನವನ್ನು ನಿಗದಿತ ಉದ್ಯೋಗಕ್ಕೆ ಸೀಮಿತಗೊಳಿಸದೆ ಎಲ್ಲ ಕಾರ್ಮಿಕರಿಗೂ ವಿಸ್ತರಿಸುತ್ತದೆ; ರಾಜ್ಯಗಳು ಒಕ್ಕೂಟ ಸರಕಾರ ನಿಗದಿಗೊಳಿಸಿದ ರಾಷ್ಟ್ರೀಯ ವೇತನಕ್ಕಿಂತ ಕಡಿಮೆ ವೇತನ ನೀಡುವಂತಿಲ್ಲ. ಕೌಶಲ ಮಟ್ಟ, ಕೆಲಸದ ಪ್ರಕಾರ, ಕೆಲಸದಿಂದ ಆಗಬಹುದಾದ ಸಮಸ್ಯೆಗಳು ಮತ್ತು ಮಹಾನಗರ, ಮಹಾನಗರವಲ್ಲದ ಪ್ರದೇಶ ಅಥವಾ ಗ್ರಾಮೀಣ ಪ್ರದೇಶಗಳ ಆಧಾರದ ಮೇಲೆ ಕನಿಷ್ಠ ವೇತನ ನಿರ್ಧರಿಸಬೇಕು. ವೇತನವನ್ನು ಐದು ವರ್ಷದೊಳಗೆ ಪರಿಷ್ಕರಿಸಬೇಕು ಎಂದು ಸಂಹಿತೆ ಹೇಳುತ್ತದೆ. ಸಂಹಿತೆಯು ಕಾರ್ಮಿಕರಿಗೆ ಭದ್ರತೆ ನೀಡಲಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ಕನಿಷ್ಠ ವೇತನದ ನಿಬಂಧನೆಗಳು ಕಾನೂನು ‘ಉದ್ಯಮ’ ಎಂದು ಗುರುತಿಸುವ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಅನ್ವ ಯಿಸುತ್ತವೆ. ಉದ್ಯಮ ಎಂದರೆ ವ್ಯಾಪಾರ ಅಥವಾ ಉತ್ಪಾದನೆ ನಡೆಯುವ ಸ್ಥಳ ಎಂದು ಸಂಹಿತೆ ವ್ಯಾಖ್ಯಾನಿಸುವುದರಿಂದ, ಗೃಹಾಧರಿತ ವೃತ್ತಿಗಳು ಮತ್ತು ಕೃಷಿಗೆ ಇದು ಅನ್ವಯಿಸುವುದಿಲ್ಲ. ಗೃಹಾಧರಿತ ವೃತ್ತಿಗಳಲ್ಲಿ ಉದ್ಯೋಗದಾತ-ಉದ್ಯೋಗಿ ಸಂಬಂಧ ಇರುವುದಿಲ್ಲ. ಕುಟುಂಬಗಳು ನಡೆಸುವ ಉದ್ಯಮ ಅಥವಾ ಕೃಷಿಯಲ್ಲೂ ಇದೇ ಸಮಸ್ಯೆ ಇರಲಿದೆ. ಇವರೆಲ್ಲರೂ ಕನಿಷ್ಠ ವೇತನ ವ್ಯಾಪ್ತಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಸಂಹಿತೆಗಳು ವಲಸೆ ಕಾರ್ಮಿಕರು, ಸ್ವಉದ್ಯೋಗಿಗಳು ಸೇರಿದಂತೆ ಅನೌಪಚಾರಿಕ ವಲಯದ ಬಹುತೇಕ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲು ವಿಫಲವಾಗಿವೆ ಎಂದು ಟೀಕೆ ವ್ಯಕ್ತವಾಗಿದೆ. ಹಿಂದಿನ ಕಾನೂನು ಪ್ರತೀ ಉದ್ಯೋಗಕ್ಕೂ ಪ್ರತ್ಯೇಕ ಕನಿಷ್ಠ ವೇತನ ನಿಗದಿಪಡಿಸುತ್ತಿತ್ತು; ಕೆಲಸಕ್ಕೆ ಅಗತ್ಯವಾದ ನಿರ್ದಿಷ್ಟ ಕೌಶಲ, ಶ್ರಮ ಮತ್ತು ಅಪಾಯಗಳನ್ನು ಆಧರಿಸಿ ವೇತನ ನಿಗದಿಯಾಗುತ್ತಿತ್ತು. ಇದರಿಂದ ಅಸಂಘಟಿತ ಕಾರ್ಮಿಕ ಮಾರುಕಟ್ಟೆಯಲ್ಲಿ ಉತ್ತಮ ವೇತನ ಲಭ್ಯವಾಗುವುದಲ್ಲದೆ, ಕಾರ್ಮಿಕರಿಗೆ ಸ್ವಲ್ಪಮಟ್ಟಿಗೆ ರಕ್ಷಣೆ ಸಿಗುತ್ತಿತ್ತು. ಹೊಸ ಸಂಹಿತೆಯಲ್ಲಿ ಒಕ್ಕೂಟ ಸರಕಾರವೇ ವೇತನ ನಿಗದಿಪಡಿಸುವುದರಿಂದ, ಕಾರ್ಮಿಕರಿಗೆ ಲಭ್ಯವಿದ್ದ ಚೌಕಾಶಿ ಅವಕಾಶ ಇಲ್ಲವಾಗುತ್ತದೆ ಮತ್ತು ಕಾರ್ಮಿಕರ ಸಂಘ/ಒಕ್ಕೂಟಗಳು ವೇತನಕ್ಕೆ ಸಂಬಂಧಿಸಿದಂತೆ ಒತ್ತಡ ಹೇರಲು ಆಗುವುದಿಲ್ಲ. ವೇತನವನ್ನು ನಿರ್ಧರಿಸುವುದು ಮಾರುಕಟ್ಟೆ. ಹೊಸ ಸಂಹಿತೆಯು ಮೂರು ಭೌಗೋಳಿಕ ಪ್ರದೇಶ (ಮಹಾನಗರ, ಮಹಾನಗರವಲ್ಲದ ನಗರಗಳು ಮತ್ತು ಗ್ರಾಮೀಣ ಪ್ರದೇಶ), ನಾಲ್ಕು ಕೌಶಲ ಮಟ್ಟ(ಕೌಶಲರಹಿತ, ಕೌಶಲವುಳ್ಳವರು, ಅರೆಕೌಶಲ ಮತ್ತು ಉನ್ನತ ಕೌಶಲವಿರುವವರು) ಮತ್ತು ಕೆಲಸದ ಪರಿಸ್ಥಿತಿ(ಉಷ್ಣತೆ, ಆರ್ದ್ರತೆ ಅಥವಾ ಹಾನಿಕರ ಪರಿಸರ) ಆಧರಿಸಿ, ಕನಿಷ್ಠ ವೇತನವನ್ನು ನಿರ್ಧರಿಸುತ್ತದೆ. ಆದರೆ, ‘ಹಾನಿಕರ ಪರಿಸರ’ವನ್ನು ಯಾರು ನಿರ್ಧರಿಸುತ್ತಾರೆ? ಕಾರ್ಖಾನೆ ಹಂತದಲ್ಲಿ ವಿವಿಧ ಕನಿಷ್ಠ ವೇತನವನ್ನು ಯಾರು ನಿರ್ಧರಿಸುತ್ತಾರೆ? ಹಿಂದಿನ ವ್ಯವಸ್ಥೆಯಲ್ಲಿ ಕಾರ್ಮಿಕ ತನಿಖಾಧಿಕಾರಿಗೆ ಕೆಲಸದ ಸ್ಥಳಗಳಿಗೆ ಭೇಟಿ ನೀಡಲು, ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಇದ್ದಿತ್ತು. ಹೊಸ ಕಾನೂನಿನಲ್ಲಿ ಇದನ್ನು ವೆಬ್ ಆಧರಿತ ತಪಾಸಣೆ ಮತ್ತು ಸ್ವಯಂಪ್ರಮಾಣೀಕರಣದಿಂದ ಬದಲಿಸಲಾಗಿದೆ; ಉದ್ಯಮಿ ಸ್ವಯಂ ಪರಿಶೀಲನೆ ನಡೆಸಿ, ವರದಿ ನೀಡುತ್ತಾರೆ. ಇನ್ಸ್ಪೆಕ್ಟರ್ ಶಿರೋನಾಮೆಯನ್ನು ‘ಇನ್ಸ್ಪೆಕ್ಟರ್ ಕಮ್ ಫೆಸಿಲಿಟೇಟರ್’ ಎಂದು ಬದಲಿಸಲಾಗಿದೆ. ಉಲ್ಲಂಘನೆಗೆ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಸಂಹಿತೆಯು ‘ವ್ಯವಹಾರ ಸುರಳೀತ’(ಬಿಸಿನೆಸ್ ಆಸ್ ಯೂಶುಯಲ್)ಗೊಳಿಸುವ ಬದಲು ಹಲವು ಹಂತಗಳಲ್ಲಿ ಸರಕಾರದ ಮಧ್ಯಪ್ರವೇಶಕ್ಕೆ ದಾರಿ ಮಾಡಿಕೊಡಲಿದ್ದು, ಹೊಸ ಇನ್ಸ್ಪೆಕ್ಟರ್ ರಾಜ್ಗೆ ದಾರಿಮಾಡಿಕೊಡಲಿದೆ. ಕನಿಷ್ಠ ವೇತನಗಳ ವರ್ಗೀಕರಣವು ಕನಿಷ್ಠ ವೇತನದ ಮೂಲಭೂತ ಉದ್ದೇಶವನ್ನೇ ಹಾಳುಗೆಡವುತ್ತದೆ. ಹೆಚ್ಚು ಕಾರ್ಮಿಕರು ಅಗತ್ಯವಿರುವ ಔಪಚಾರಿಕ ಕ್ಷೇತ್ರದ ಉದ್ಯಮಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣವನ್ನು ಹೊಸ ಸಂಹಿತೆಗಳು ಸೃಷ್ಟಿಸುತ್ತವೆಯೇ ಎನ್ನುವುದು ಮುಖ್ಯ ಪ್ರಶ್ನೆ. ಪ್ರಾವಿಡೆಂಟ್ ಫಂಡ್ ನಿಯಮದಿಂದ ನಿರ್ವಹಣೆ ವೆಚ್ಚ ಹೆಚ್ಚುತ್ತದೆ ಎನ್ನುವುದು ಉದ್ಯಮದ ದೂರು. ಇದು ಹೊಸ ಉದ್ಯೋಗ ಸೃಷ್ಟಿ ಮೇಲೆ ವಿಪರಿಣಾಮ ಬೀರುತ್ತದೆ. ಸಂಹಿತೆಯು ಕನಿಷ್ಠ ವೇತನದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ; ಆದರೆ, ಕಾರ್ಮಿಕರು ಕಾನೂನು ನಿಗದಿಪಡಿಸಿದ ವೇತನ ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ; ಸಂಹಿತೆಯಲ್ಲಿನ ಬದಲಾವಣೆಗಳು ಕಾರ್ಮಿಕರ ರಕ್ಷಣೆ-ಭದ್ರತೆ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ವ್ಯಾಪ್ತಿ ವಿಸ್ತರಣೆಯಿಂದಷ್ಟೇ ರಕ್ಷಣೆ ಖಾತರಿ ಆಗುವುದಿಲ್ಲ. ಜಾರಿ ವ್ಯವಸ್ಥೆಯನ್ನು ಬಲಪಡಿಸಿಲ್ಲ; ಕನಿಷ್ಠ ವೇತನವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಹಾಗೂ ಪರಿಷ್ಕರಿಸಲಾಗುತ್ತದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಅನೌಪಚಾರಿಕ ಕ್ಷೇತ್ರದಲ್ಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಮತ್ತು ಕಾರ್ಮಿಕ ಸಂಘಟನೆಗಳ ಅನುಪಸ್ಥಿತಿಯಲ್ಲಿ ಕಾನೂನಿನ ಪರಿಣಾಮಕಾರಿ ಅನುಷ್ಠಾನ ಅತ್ಯಗತ್ಯ. ಉದಾರೀಕರಣದಿಂದ ಕಾರ್ಮಿಕ ಸಂಘಟನೆಗಳು ಸಾಕಷ್ಟು ದುರ್ಬಲಗೊಂಡಿವೆ. ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಕಾರ್ಮಿಕರ ಸಂಘಟನೆಗಳ ಕಾರ್ಯನಿರ್ವಹಣೆ ಮೇಲೆ ಅನಗತ್ಯ ನಿರ್ಬಂಧ ಹೇರುತ್ತದೆ. ಸದಸ್ಯತ್ವದ ಮೇಲೆ ಮಿತಿ, ಸಂಘದ ಸದಸ್ಯರಲ್ಲದವರು ಅಧಿಕಾರ (ಅಧ್ಯಕ್ಷ, ಕಾರ್ಯದರ್ಶಿ ಇತ್ಯಾದಿ) ವಹಿಸಿಕೊಳ್ಳಲು ನಿರ್ಬಂಧ ಮತ್ತು ಉದ್ಯಮ-ಸರಕಾರದೊಡನೆ ಸಂಧಾನ ನಡೆಸಲು ಏಕೈಕ ಯೂನಿಯನ್/ಮಂಡಳಿಗೆ ಅವಕಾಶ ಎಂಬ ನಿಬಂಧನೆ ಅಳವಡಿಸಲಾಗಿದೆ. ಹರತಾಳದ ಹಕ್ಕುಗಳನ್ನು ಹಾಗೂ ನೋಟಿಸ್ ಅವಧಿಯಲ್ಲಿ ವೇತನ ಮತ್ತು ವಸತಿ ಬಾಡಿಗೆ ವೆಚ್ಚ(ಎಚ್ಆರ್ಎ) ಕಡಿತಗೊಳಿಸಲಾಗಿದೆ. 19 ರಾಜ್ಯಗಳು 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಸಂಸ್ಥೆಗಳಿಗೆ ನೌಕರರನ್ನು ವಜಾಗೊಳಿಸುವ ಅಧಿಕಾರವನ್ನು ಈಗಾಗಲೇ ನೀಡಿವೆ. ಈ ಮೊದಲು ಇದು 100 ಆಗಿತ್ತು. ನೌಕರರ ಸಂಖ್ಯೆ ಹೆಚ್ಚಳದಿಂದ ವಿಪರಿಣಾಮ ಉಂಟಾಗಲಿದೆ; ಮೊದಲಿಗೆ, ಸಂಸ್ಥೆಗಳು ನೌಕರರನ್ನು ನೇಮಕ ಮಾಡಿಕೊಳ್ಳದೆ ಸಣ್ಣದಾಗಿಯೇ ಉಳಿಯಲು ಪ್ರಯತ್ನಿಸುತ್ತವೆ. ಉದ್ಯಮಗಳ ವಾರ್ಷಿಕ ಸಮೀಕ್ಷೆಯ ದತ್ತಾಂಶಗಳ ಪ್ರಕಾರ, ಶೇ.81ರಷ್ಟು ಕಂಪೆನಿಗಳು 100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಎರಡನೆಯದಾಗಿ, ನೇಮಕಕ್ಕೆ ಮಿತಿ ಹೇರುವಿಕೆಯಿಂದ ಹೆಚ್ಚು ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂಸ್ಥೆಗಳಿಗೆ ಅನ್ಯಾಯ ಆಗಲಿದೆ. ಇನ್ನೊಂದು ಪ್ರಶ್ನೆಯೆಂದರೆ, ಕಾರ್ಮಿಕರ ವಜಾಗೊಳಿಸುವಿಕೆ ಇಲ್ಲವೇ ಭದ್ರತೆ ನೀಡುವಿಕೆಗೂ ಕಂಪೆನಿಯ ಗಾತ್ರಕ್ಕೂ ಏನು ಸಂಬಂಧ? ಖಾಯಂ ಕಾರ್ಮಿಕರ ನೇಮಕದಿಂದ ಸಮಸ್ಯೆಯಾದರೆ, ಸಂಸ್ಥೆಗಳು ಗುತ್ತಿಗೆ ನೌಕರರನ್ನು ನೇಮಿಸಿ ಕೊಳ್ಳುತ್ತವೆ ಇಲ್ಲವೇ ಹಲವು ಘಟಕಗಳನ್ನು ಆರಂಭಿಸುತ್ತವೆ. ಪ್ರತೀ ಘಟಕದಲ್ಲೂ ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತವೆ. ದೇಶದಲ್ಲಿ ಸೃಷ್ಟಿಯಾಗಿರುವುದು ಅನೌಪಚಾರಿಕ, ಕಡಿಮೆ ವೇತನದ ಕೆಲಸಗಳು. ಔಪಚಾರಿಕ-ಅನೌಪಚಾರಿಕವಲ್ಲದೆ, ಸ್ವಉದ್ಯೋಗ, ತಾತ್ಕಾಲಿಕ ಉದ್ಯೋಗ, ನಿರ್ದಿಷ್ಟ ಅವಧಿಯ ಗುತ್ತಿಗೆ ಕೆಲಸ, ಗಿಗ್ ಸೇರಿದಂತೆ ಪ್ಲಾಟ್ಫಾರ್ಮ್ ಉದ್ಯೋಗಗಳು ಮತ್ತು ಸಾಂಪ್ರದಾಯಿಕ ವೃತ್ತಿಗಳೂ ಇವೆ. ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್)ಯ ಫ್ಯೂಚರ್ ಆಫ್ ಜಾಬ್ ರಿಪೋರ್ಟ್ ಪ್ರಕಾರ, 2030ರೊಳಗೆ ಜಗತ್ತಿನ ಕಾರ್ಮಿಕ ಬಲದ ದೊಡ್ಡ ಪಾಲನ್ನು ಮರುಕೌಶಲಗೊಳಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಏನಿದೆ? ಒಕ್ಕೂಟ ಸರಕಾರದ ವಿವಿಧ ಇಲಾಖೆಗಳಲ್ಲಿ 9.64 ಲಕ್ಷ ಹುದ್ದೆಗಳು ಭರ್ತಿಯಾಗದೆ ಉಳಿದಿವೆ(2023ರ ಮಾಹಿತಿ). ಕರ್ನಾಟಕದಲ್ಲಿ 2 ಲಕ್ಷ ಹುದ್ದೆಗಳು ಖಾಲಿ ಇವೆ. ಇವನ್ನು ಭರ್ತಿಗೊಳಿಸದೆ ಬಿಟ್ಟಿರುವ ಉದ್ದೇಶವಾದರೂ ಏನು? ಉದ್ಯಮಪರ ನಿರ್ಧಾರ ಎನ್ಡಿಎ 3.0 ಜೂನ್ 2024ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಉದ್ಯಮಪರ ನಿರ್ಧಾರಗಳು ಹೆಚ್ಚಿವೆ. ಸರಕಾರ ರಚನೆಯಾದ 2 ತಿಂಗಳ ನಂತರ ವಿವಿಧ ಕೇಂದ್ರ ಸಚಿವಾಲಯಗಳಲ್ಲಿನ 45 ಹಿರಿಯ ಹುದ್ದೆಗಳನ್ನು ಹಿಂಭಾಗದ ಪ್ರವೇಶದ ಮೂಲಕ ತುಂಬಲು ಮುಂದಾಗಿ, 17 ಆಗಸ್ಟ್ 2024ರಂದು ಅರ್ಜಿ ಕರೆಯಿತು. ಆದರೆ, ಎರಡು ದಿನಗಳ ನಂತರ ಹಿಂಪಡೆಯಿತು. ಆನಂತರ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್ಪಿಎಸ್)ಗೆ ಪರ್ಯಾಯವಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿತು. ಇದು ಪಿಂಚಣಿಯನ್ನು ಖಾತ್ರಿಪಡಿಸದ ಕಾರಣ ವಿರೋಧಿಸಲ್ಪಟ್ಟಿತು. ಸೆಪ್ಟಂಬರ್ 2025ರ ಅಂತ್ಯದ ವೇಳೆಗೆ 2.3 ದಶಲಕ್ಷ ಉದ್ಯೋಗಿಗಳಲ್ಲಿ 1 ಲಕ್ಷ ಮಂದಿ ಹಾಗೂ ಮಹಾರಾಷ್ಟ್ರ ಮಾತ್ರ ಯುಪಿಎಸ್ ಆಯ್ಕೆ ಮಾಡಿಕೊಂಡಿದೆ. ಆಗಸ್ಟ್ 2023ರಲ್ಲಿ ಲ್ಯಾಪ್ಟಾಪ್, ವೈಯಕ್ತಿಕ ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಸರ್ವರ್ಗಳ ಆಮದಿನ ಮೇಲೆ ಪರವಾನಿಗೆ ನಿರ್ಬಂಧ ಘೋಷಿಸಿತು. ಉದ್ಯಮದ ಒತ್ತಡದಿಂದ ಹಲವು ಬಾರಿ ಅವಧಿ ವಿಸ್ತರಿಸಿ, ಜಾರಿಗೊಳಿಸುವಿಕೆಯನ್ನು ಡಿಸೆಂಬರ್ 2025ರ ವರೆಗೆ ಮುಂದೂಡಿತು. ಆಮದು ಉತ್ಪನ್ನಗಳಲ್ಲಿ ಗುಣಮಟ್ಟ ಖಚಿತಪಡಿಸಿಕೊಳ್ಳಲು 2016-2025ರ ಅವಧಿಯಲ್ಲಿ 720 ಗುಣಮಟ್ಟ ನಿಯಂತ್ರಣ ಆದೇಶ (ಕ್ಯುಸಿಒ) ನೀಡಲಾಗಿದೆ. ಆದರೆ, ಕ್ಯುಸಿಒಗಳಿಂದ ದೇಶಿ ಕಚ್ಚಾ ವಸ್ತು ಮತ್ತು ಮಧ್ಯಂತರ ಉತ್ಪನ್ನಗಳ ಸ್ಪರ್ಧಾತ್ಮಕತೆ ಕುಸಿಯಿತು. ಆನಂತರ, ಉದ್ಯಮದ ಒತ್ತಡದಿಂದ 69 ಕ್ಯುಸಿಒಗಳನ್ನು ಅಮಾನತುಗೊಳಿಸಿದ್ದಲ್ಲದೆ, 208 ಕ್ಯುಸಿಒಗಳನ್ನು ಹಿಂಪಡೆಯಲು ಶಿಫಾರಸು ಮಾಡಲಾಗಿದೆ. 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಮತ್ತು ಸರಕು-ಸೇವಾ ತೆರಿಗೆ (ಜಿಎಸ್ಟಿ) ಕಡಿತದಿಂದ ಜನ ಮತ್ತು ವ್ಯಾಪಾರ-ಉದ್ಯಮದ ಮೇಲಿನ ಹೊರೆ ಕಡಿಮೆ ಆಗಿದೆ. ಸರಕಾರ ಈ ಉಪಕ್ರಮಗಳ ಮೂಲಕ ಉದ್ಯಮಿಗಳಿಗೆ ಸಕಾರಾತ್ಮಕ ಸಂದೇಶ ರವಾನಿಸಿದೆ. ಇದರ ಮುಂದಿನ ಹೆಜ್ಜೆಯಾಗಿ ನವೆಂಬರ್ 21ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿದೆ. ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವುದಿಲ್ಲ. ಈ ಸಂಬಂಧ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕೇರಳ ಹೇಳಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನವೆಂಬರ್ 2025ರಲ್ಲಿ ಆಯೋಜಿಸಿದ್ದ ಎಲ್ಲ ರಾಜ್ಯಗಳ ಸಭೆಯಲ್ಲಿ ಇದನ್ನು ಪುನರುಚ್ಚರಿಸಿದೆ. ಸಂಹಿತೆಗಳು ಉದ್ಯಮಿಗಳಿಗೆ ಉದ್ಯೋಗಿಗಳ ನೇಮಕ- ವಜಾ ಸುಲಭಗೊಳಿಸುತ್ತವೆ; ಉತ್ತಮ ಕೆಲಸದ ಪರಿಸ್ಥಿತಿ ಮತ್ತು ವೇತನ ಕುರಿತು ಉದ್ಯಮಿಗಳೊಂದಿಗೆ ಸಂಧಾನ ನಡೆಸುವುದು ಹಾಗೂ ಮುಷ್ಕರ ಹಮ್ಮಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಸಂಹಿತೆಗಳ ವಿರುದ್ಧ 10 ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಪವರ್ ಇಂಜಿನಿಯರ್ಸ್ ಫೆಡರೇಶನ್ನ ಸದಸ್ಯರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು. ಕಳೆದ ಒಂದು ದಶಕದಿಂದ ಒಮ್ಮೆಯೂ ಸೇರದ ಇಂಡಿಯನ್ ಲೇಬರ್ ಕಾನ್ಫೆರೆನ್ಸ್(ತ್ರಿಪಕ್ಷೀಯ ವೇದಿಕೆ)ನ ಸಭೆಯನ್ನು ಆದಷ್ಟು ಬೇಗ ಕರೆಯಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ಉದ್ಯೋಗಿಗಳು ಕಾರ್ಖಾನೆ ಹಂತದಲ್ಲಿ ಸಂಧಾನ-ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಕೋರಿವೆ. ಉದ್ಯಮಸ್ನೇಹಿ ನೀತಿ ಅಗತ್ಯವಿದೆ ಉದ್ಯಮಗಳು ಜಾಗತಿಕ ಸವಾಲು ಎದುರಿಸುತ್ತಿರುವ ಹೊತ್ತಿನಲ್ಲಿ ಸರಕಾರ-ಉದ್ಯಮ-ಉದ್ಯೋಗಿಗಳ ನಡುವೆ ಸಮನ್ವಯ ಅಗತ್ಯವಿದೆ. ಆದರೆ, ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ ಮತ್ತು ಸರಕಾರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿದೆ. ಅವು ಗುತ್ತಿಗೆ ನೌಕರರಿಗೆ ಮಣೆ ಹಾಕುತ್ತಿವೆ. ಕಳೆದ 5 ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಖಾಸಗಿ ಕಂಪೆನಿಗಳು ಬಾಗಿಲು ಮುಚ್ಚಿವೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಹುಸಿಯಾಗಿದೆ. ಕಟ್ಟು ಜಾಣ್ಮೆಯ ಜಗತ್ತಿನಲ್ಲಿ ಉದ್ಯೋಗ ನಷ್ಟದ ಭೀತಿ ಕಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ನೂತನ ಸಂಹಿತೆಗಳು ರಂಗ ಪ್ರವೇಶಿಸಿವೆ; ಇವು ಕಾನೂನು ಆಗುತ್ತವೆ ಕೂಡ. ಏಕೆಂದರೆ, ಪ್ರತಿಪಕ್ಷದ ಸದಸ್ಯರನ್ನು ಸಾರಾಸಗಟಾಗಿ ಅಮಾನತುಗೊಳಿಸಿ ಮಸೂದೆಗಳನ್ನು ಅಂಗೀಕರಿಸಿದ ಖ್ಯಾತಿ ಈ ಸರಕಾರದ್ದು. ಸಂಧಾನದಲ್ಲಿ ನಂಬಿಕೆ ಇಲ್ಲದೆ, ಎಲ್ಲವನ್ನೂ ಮೇಲಿನಿಂದ ಹೇರುತ್ತದೆ ಮತ್ತು ಮೂಗು ಹಿಡಿದು ಒಪ್ಪಿಸಲಾಗುತ್ತದೆ. ಹಾಗಾಗಿ ಇದರಿಂದ ಹಾನಿಗೊಳಗಾಗುವ ದುಡಿಯುವ ವರ್ಗ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.
ʼಮೋದಿ ಭಾರತದಲ್ಲಿರುವುದು ಭಾರತೀಯರ ಅದೃಷ್ಟʼ : ಆಪ್ತಮಿತ್ರನ ಹಾಡಿ ಹೊಗಳಿದ ಪುಟಿನ್
23ನೇ ಭಾರತ-ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂದರ್ಶನವೊಂದರಲ್ಲಿ ತಮ್ಮ ಆಪ್ತಮಿತ್ರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ಸ್ನೇಹವನ್ನು . ಭಾರತದಲ್ಲಿ ಮೋದಿ ಬಣ್ಣಿಸಿದ್ದಾರೆ. ಭಾರತದಲ್ಲಿ ಮೋದಿ ಇರುವುದು ಭಾರತೀಯರ ಅದೃಷ್ಟ, ಮೋದಿ ದ್ವೀಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಬದ್ದವಾಗಿದ್ದಾರೆ ಎಂದು ಹಾಡಿಹೊಗಳಿದ್ದಾರೆ. ಇನ್ನು, ಎರಡು ದಿನಗಳ ಪ್ರವಾಸದ ವೇಳೆ ಉಭಯ ನಾಯಕರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
’ಸಾರ್ವಜನಿಕ ಜೀವನದಲ್ಲಿರುವವರು ಲಜ್ಜೆಗೇಡಿಗಳಾಗಬಾರದು’: ಮುಖ್ಯಮಂತ್ರಿಗಳ 5 ಉದಾಹರಣೆ ಕೊಟ್ಟ R ಅಶೋಕ!
R Ashoka To Karnataka CM Siddaramaiah : ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್.ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಜ್ಜಗೇಡಿತನದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ, ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಅದಕ್ಕೆ ಐದು ಕಾರಣವನ್ನು ನೀದಿದ್ದಾರೆ.
ಬೆಳ್ತಂಗಡಿ: ಸದ್ಭಾವನಾ ಮಂಚ್ ಅಸ್ತಿತ್ವಕ್ಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸದ್ಭಾವನಾ ಮಂಚ್ ಗೆ ಚಾಲನೆ ನೀಡಲಾಯಿತು. ಅಳದಂಗಡಿಯ ಸೈಂಟ್ ಪೀಟರ್ ಕ್ಲಾವರ್ ಕೆಥೊಲಿಕ್ ಚರ್ಚ್ ಹಾಲ್ ನಲ್ಲಿ ನಡೆದ ವಿವಿಧ ಧರ್ಮಗಳ ಸಮಾನ ಮನಸ್ಕ ಹಿರಿಯರ ಸಭೆಯಲ್ಲಿ ಸದ್ಭಾವನಾ ಮಂಚ್ ಅಸ್ತಿತ್ವಕ್ಕೆ ನಿರ್ಧರಿಸಲಾಯಿತು. ಎಲ್ಲ ಧರ್ಮಗಳ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಒಟ್ಟು ಸೇರಿ ಹಬ್ಬದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವುದು, ರಾಷ್ಟ್ರೀಯ ದಿನಾಚರಣೆಗಳನ್ನು ಒಂದಾಗಿ ಆಚರಿಸುವುದು ಮುಂತಾದ ನಿರ್ಮಾಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇಂತಹ ವೇದಿಕೆಗಳನ್ನು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ಥಾಪಿಸಲು ಪ್ರಯತ್ನಿಸುವುದು ಎಂದು ತೀರ್ಮಾನಿಸಲಾಯಿತು. ನೂತನ ಪದಾಧಿಕಾರಿಗಳ ವಿವರ ಗೌರವಾಧ್ಯಕ್ಷ : ಫಾ.ಇಲಿಯಾಸ್ ಡಿಸೋಜ 2) ಅಧ್ಯಕ್ಷ : ಸುಭಾಸ್ ರೈ 3) ಪ್ರಧಾನ ಕಾರ್ಯದರ್ಶಿ: ಆದಂ ಶಾಫಿ 3) ಖಜಾಂಚಿ : ವಿಕ್ಟರ್ ಕ್ರಾಸ್ತಾ 4) ಉಪಾಧ್ಯಕ್ಷರು : ಮಬ್ಯಾಝ್, ಸುರೇಶ್ ಜೈನ್, ಲಿಯೋ ಪೆರೇರಾ ಮತ್ತು ನಾಸಿರ್ ಖಾನ್
ಬಾಬರಿ ಮಸೀದಿ ನಿರ್ಮಾಣ ವಿರೋಧಿಸಿದ ಮಮತಾ ಬ್ಯಾನರ್ಜಿ ಆರ್ಎಸ್ಎಸ್ ಏಜೆಂಟ್; ಟಿಎಂಸಿ ಉಚ್ಚಾಟಿತ ಶಾಸಕನ ಆರೋಪ!
ಜಗನ್ನಾಥ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರಿ ಖಜಾನೆಯಿಂದ ಹಣ ನೀಡಿದ ಮಮತಾ ಬ್ಯಾನರ್ಜಿ, ಬಾಬರಿ ಮಸೀದಿ ನಿರ್ಮಾಣ ವಿರೋಧಿಸುವ ಮೂಲಕ ತಾವು ಆರ್ಎಸ್ಎಸ್ ಏಜೆಂಟ್ ಎಂಬುದನ್ನು ಸಾಬೀತು ಮಾಡಿದ್ದಾರೆ ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ, ಟಿಎಂಸಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಶಾಸಕ ಹುಮಾಯೂನ್ ಕಬೀರ್ ಅವರು ಮಾಡಿರುವ ಗಂಭೀರ ಆರೋಪ. ಇಷ್ಟೇ ಅಲ್ಲ, ಮಮತಾ ಬ್ಯಾನರ್ಜಿ 2026ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದೂ ಹುಮಾಯೂನ್ ಕಬೀರ್ ಭವಿಷ್ಯ ನುಡಿದಿದ್ದಾರೆ. ಇಲ್ಲಿದೆ ಮಾಹಿತಿ.
ಸ್ಮಾರ್ಟ್ ಸಿಟಿ ಟ್ರೋಫಿ ಪುಟ್ಬಾಲ್ ಟೂರ್ನಿ: ಮಣಿಪಾಲ್ ಸ್ಕೂಲ್ ತಂಡಕ್ಕೆ ಅವಳಿ ಪ್ರಶಸ್ತಿ
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನವೀಕರಣಗೊಂಡ ನಗರದ ಫುಟ್ಬಾಲ್ ಮೈದಾನದಲ್ಲಿ ನಡೆದ ಮೊದಲ ಸ್ಮಾರ್ಟ್ ಸಿಟಿ ಕಪ್ ಫುಟ್ಬಾಲ್ ಪಂದ್ಯಾಟದ ಅಂಡರ್ 17 ಬಾಲಕರ ಹಾಗೂ ಬಾಲಕಿಯರ ಎರಡು ವಿಭಾಗಗಳಲ್ಲೂ ಮಣಿಪಾಲ್ ಸ್ಕೂಲ್ ತಂಡ ಜಯ ಗಳಿಸಿ ಚಾಂಪಿಯನ್ ಟ್ರೋಫಿ ಪಡೆಯಿತು. ಬಾಲಕರ ವಿಭಾಗದಲ್ಲಿ ಬದ್ರಿಯಾ ಮಂಗಳೂರು ತಂಡ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕಾರ್ಕಳದ ನಿಟ್ಟೆ ಎನ್.ಎಸ್.ಎ.ಎಂ. ಸ್ಕೂಲ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಅಂಡರ್ 14 ಬಾಲಕರ ವಿಭಾಗದಲ್ಲಿ ಯೆನೆಪೊಯ ಸ್ಕೂಲ್ ಮಂಗಳೂರು ಪ್ರಥಮ, ನಿಟ್ಟೆ ಎನ್.ಎಸ್.ಎ.ಎಂ. ತಂಡ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಜಾಯ್ ಲ್ಯಾಂಡ್ ಕೊಲ್ಯ ಪ್ರಥಮ, ಹಾಗೂ ಮಣಿಪಾಲ್ ಸ್ಕೂಲ್ ದ್ವಿತೀಯ ಸ್ಥಾನ ಪಡೆಯಿತು. ಬಹುಮಾನ ವಿತರಿಸಿದ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡುವುದರಿಂದ ಆರೋಗ್ಯವಂತ ಜೀವನ ಸಾಧಿಸಲು ಸಾಧ್ಯ. ಸರಕಾರ ಕ್ರೀಡಾ ಕ್ಷೇತ್ರದ ಸಾಧಕರಿಗೆ ನಿರಂತರ ಬೆಂಬಲ ನೀಡುತ್ತಿದೆ ಎಂದರು. ನವೀಕರಣಗೊಂಡಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಈ ಮೈದಾನ ಮಂಗಳೂರಿನ ಕ್ರೀಡಾಪಟುಗಳಿಗೆ ದೊಡ್ಡ ಕೊಡುಗೆಯಾಗಿದ್ದು, ಇದರ ಸದುಪಯೋಗ ಪಡೆಯುವಂತೆ ಸಚಿವರು ಕರೆ ನೀಡಿದರು. ಇನಾಯತ್ ಅಲಿ, ಸುಲ್ತಾನ್ ಗೋಲ್ಡ್ ನ ಚೆಯರ್ ಮ್ಯಾನ್ ರವೂಫ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಮುಖರಾದ ವಿಜಯ್ ಸುವರ್ಣ, ಅಬ್ದುಲ್ಲತೀಫ್, ಆರಿಫ್ ಉಚ್ಚಿಲ್, ಅಶ್ಫಾಕ್, ಅನಿಲ್ ಪಿ.ವಿ., ಫಿರೋಝ್ ಮುಂತಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಸ್ವಾಗತಿಸಿದರು. ಸಿಯಾಝ್ ಕಾರ್ಯಕ್ರಮ ನಿರೂಪಿಸಿದರು.
ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ: ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಡಿಸೆಂಬರ್ 05: ನನ್ನ ಬಳಿ ಇರುವ ದುಬಾರಿ ವಾಚ್ ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಇದು ಕದ್ದಿರುವ ವಾಚಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದು,
BJP Dissidence in Karnataka : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ, ಒಂದಲ್ಲಾ ಒಂದು ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಬಿಜೆಪಿ ನಾಯಕರು, ಈಗ, ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವ ವಿಜಯೇಂದ್ರಗೆ ಇದು ಹಿನ್ನಡೆಯಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಪುಟಿನ್ ಭಾರತ ಪ್ರವಾಸ: ನೀವು ತೈಲ ಖರೀದಿಸುವುದಾದರೆ ಭಾರತ ಏಕೆ ಖರೀದಿಸಬಾರದು? ಟ್ರಂಪ್ ಗೆ ಪುಟಿನ್ ನೇರ ಪ್ರಶ್ನೆ
ಭಾರತ-ರಷ್ಯಾ ದ್ವೀಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಮೂಲಕ 2.0 ಶುರು ಮಾಡಿ, ಸಂಬಂಧವನ್ನು ದುಪಟ್ಟು ಧೃಡಪಡಿಸಲು ರಷ್ಯಾ ಅಧ್ಯಕ್ಷ ಪುಟಿನ್ ಈಗಾಗಲೇ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸಂದರ್ಶನ ನೀಡಿರುವ ಪುಟಿನ್ ತೈಲ ಖರೀದಿಸಿ ವಿಚಾರದಲ್ಲಿ ಅಮೆರಿಕಾದ ದ್ವಂದ್ವ ನಿಲುವನ್ನುಖಂಡಿಸಿ, ನೀವು ಖರೀದಿ ಮಾಡಬಹುದಾದರೇ ಇವರೇಕೆ ಮಾಡಬಾರದು ಎಂದು ಟ್ರಂಪ್ ಗೆ ನೇರಾನೇರಾ ಪ್ರಶ್ನೆ ಮಾಡಿದ್ದಾರೆ. ಇನ್ನು, ಜಾಗತಿಕ ಒತ್ತಡದ ನಡುವೆಯೂ ಅಲುಗಾಡದೆ ನಿಂತಿರುವ ಈ ಸಂಬಂಧವನ್ನು ಮತ್ತಷ್ಟು ಬೆಳೆಸಲು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ.
ಕಾರ್ತಿಕ ಹಬ್ಬದ ದೀಪ ವಿವಾದ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಧುರೈ ಜಿಲ್ಲಾಡಳಿತ
ಮಧುರೈ ಜಿಲ್ಲಾಡಳಿತವು ಕಾರ್ತಿಕೈ ಹಬ್ಬದ ದೀಪ ಹಚ್ಚುವ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ. ಹಿಂದೂ ಭಕ್ತರಿಗೆ ದೀಪ ಹಚ್ಚಲು ಅವಕಾಶ ನೀಡಬೇಕೆಂದು ಹೈಕೋರ್ಟ್ ಆದೇಶಿಸಿತ್ತು. ಜಿಲ್ಲಾಡಳಿತ ಈ ಆದೇಶ ಪಾಲಿಸದ ಕಾರಣ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದೆ. ಹೈಕೋರ್ಟ್ನ ವಿಭಾಗೀಯ ಪೀಠವೂ ಸಿಂಗಲ್ ಬೆಂಚ್ ಆದೇಶವನ್ನು ಎತ್ತಿ ಹಿಡಿದಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ರಾಜ್ಯ ಬಿಜೆಪಿ ನಾಯಕರ ‘ಉಪಾಹಾರ ಸಭೆ’ ಎಂದು?
ರಾಜ್ಯ ಕಾಂಗ್ರೆಸ್ನೊಳಗಿನ ಭಿನ್ನಮತದ ಕಾರಣದಿಂದ ಸರಕಾರ ಬೀಳಬಹುದೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ. ಇದೀಗ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯವರು ಜೊತೆಯಾಗಿ ಉಪಾಹಾರ ಮಾಡಿದ ತಟ್ಟೆಯಲ್ಲಿ ಉಳಿದ ಆಹಾರಗಳ ರುಚಿ ನೋಡಿ ಅದರಲ್ಲಿ ತಪ್ಪು ಹುಡುಕಲು ಹೊರಟಿದ್ದಾರೆ. ಉಪಾಹಾರದ ಸಂದರ್ಭದಲ್ಲಿ ಮಾಂಸಾಹಾರ ಯಾಕೆ ತಿಂದಿರಿ? ಹನುಮಜಯಂತಿಯ ದಿನ ಕೋಳಿ ತಿಂದದ್ದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಸ್ವತಃ ಬಿಜೆಪಿ ನಾಯಕರೇ ಹಾಸ್ಯಾಸ್ಪದರಾಗುತ್ತಿದ್ದಾರೆ. ಸರಕಾರವನ್ನು ಟೀಕಿಸುವುದಕ್ಕೆ ಬಿಜೆಪಿ ನಾಯಕರ ಬಳಿ ವಿಷಯಗಳೇ ಇಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ತಳಸ್ತರದ ಕಾರ್ಯಕರ್ತರು ರಾಜ್ಯ ಬಿಜೆಪಿ ನಾಯಕರಿಗೆ ‘‘ನಿಮ್ಮ ನಡುವಿನ ಉಪಾಹಾರ ಕಾರ್ಯಕ್ರಮ ಯಾವಾಗ?’’ ಎಂದು ಕೇಳುತ್ತಿದ್ದಾರೆ. ‘‘ಉಪಾಹಾರದಲ್ಲಿ ಏನನ್ನಾದರೂ ತಿನ್ನಿ. ಆದರೆ ದಯವಿಟ್ಟು ಜೊತೆ ಕೂತು ಮಾತುಕತೆ ನಡೆಸಿ ರಾಜ್ಯ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಕ್ಕೆ ಈಗಲಾದರೂ ಪರಿಹಾರವನ್ನು ಹುಡುಕಿ’’ ಎಂದು ಅವರು ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್ನೊಳಗಿನ ಭಿನ್ನಾಭಿಪ್ರಾಯಗಳಿಗೆ ತೆರೆಬಿದ್ದ ಬೆನ್ನಿಗೇ, ಇತ್ತ ರಾಜ್ಯ ಬಿಜೆಪಿಯ ಒಂದು ಗುಂಪು ದಿಲ್ಲಿಗೆ ಪ್ರಯಾಣ ಬೆಳೆಸಿದೆ. ರಾಜ್ಯಾಧ್ಯಕ್ಷರ ಬದಲಾವಣೆಯಾಗಬೇಕು ಎನ್ನುವ ಕೂಗು ಬಿಜೆಪಿಯೊಳಗೆ ಮತ್ತೆ ಎದ್ದಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಾರ ಬಂಗಾರಪ್ಪ, ಬಿ.ವಿ. ನಾಯಕ್, ಬಿ. ಪಿ. ಹರೀಶ್ ಸೇರಿದಂತೆ ಹಲವರು ದಿಲ್ಲಿಗೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವ ಪ್ರಯತ್ನ ಸಂಪೂರ್ಣ ವಿಫಲವಾಗಿ ಯತ್ನಾಳ್ ಸೇರಿದಂತೆ ಹಲವರ ವಿರುದ್ಧ ಬಿಜೆಪಿ ವರಿಷ್ಠರು ಶಿಸ್ತು ಕ್ರಮ ತೆಗೆದುಕೊಂಡ ಬಳಿಕ ಭಿನ್ನಮತೀಯರು ತಣ್ಣಗಾಗಿದ್ದರು. ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಇಂಗಿತವನ್ನು ವರಿಷ್ಠರು ವ್ಯಕ್ತಪಡಿಸಿದ್ದರಾದರೂ, ವಿಜಯೇಂದ್ರ ಪರವಾಗಿ ಚುನಾವಣೆಗೆ ನಿಲ್ಲುವ ಧೈರ್ಯವನ್ನು ಯಾವ ಭಿನ್ನಮತೀಯರೂ ಪ್ರದರ್ಶಿಸಲಿಲ್ಲ. ಸ್ವತಃ ಯತ್ನಾಳ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಬಿಟ್ಟರು. ವಿಜಯೇಂದ್ರ ಅವರನ್ನು ಬದಲಿಸಲು ಕೇಶವ ಕೃಪಾದಲ್ಲಿ ಸಂಚುಗಳು ರೂಪುಗೊಳ್ಳುತ್ತಿದ್ದವಾದರೂ, ಬಹಿರಂಗವಾಗಿ ಅವರ ವಿರುದ್ಧ ಮಾತನಾಡುವ ಧೈರ್ಯವನ್ನು ಈವರೆಗೆ ಪ್ರದರ್ಶಿಸಿಲ್ಲ. ಬಿಜೆಪಿಯೊಳಗಿರುವ ಕೆಲವು ಶೂದ್ರ, ಲಿಂಗಾಯತ, ಒಕ್ಕಲಿಗ ನಾಯಕರನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆರೆಸ್ಸೆಸ್ ನಾಯಕರು ಬಳಸುತ್ತಾ ಬಂದಿದ್ದಾರೆ. ಸಿ. ಟಿ. ರವಿ, ಅಶೋಕ್, ಶೆಟ್ಟರ್ ಸೇರಿದಂತೆ ಹಿರಿಯ ನಾಯಕರಿಗೆ ವಿಜಯೇಂದ್ರ ನಾಯಕತ್ವ ಅಪಥ್ಯವಾಗಿದೆಯಾದರೂ ಅದನ್ನು ಬಹಿರಂಗವಾಗಿ ಪ್ರಕಟಿಸಲು ಸಾಧ್ಯವಾಗದೆ ಈಗಾಗಲೇ ಮುನ್ನೆಲೆಯಲ್ಲಿರುವ ಭಿನ್ನಮತೀಯರನ್ನು ಒಳಗೊಳಗೆ ಬೆಂಬಲಿಸುತ್ತಾ ಬರುತ್ತಿದ್ದಾರೆ. ಇವೆಲ್ಲವೂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರಿಗೆ ತಿಳಿಯದ ವಿಷಯವೇನೂ ಅಲ್ಲ. ಲಿಂಗಾಯತ ಜಾತಿ ಬಲವನ್ನು ಮುಂದಿಟ್ಟುಕೊಂಡು ವಿಜಯೇಂದ್ರ ಅವರು ಎಲ್ಲ ಸಂಚುಗಳನ್ನು ವಿಫಲಗೊಳಿಸುತ್ತಾ ಬಂದಿದ್ದಾರೆ. ವಿಜಯೇಂದ್ರ ಅವರನ್ನು ಬದಲಾಯಿಸುವ ಒಲವು ವರಿಷ್ಠರಿಗೆ ಇದೆಯಾದರೂ, ರಾಜ್ಯ ಬಿಜೆಪಿಯೊಳಗೆ ಅದು ಉಂಟು ಮಾಡಬಹುದಾದ ಅನಾಹುತಗಳಿಗೆ ಹೆದರಿ ಅವರು ಮೌನವಾಗಿದ್ದಾರೆ. ವಿಜಯೇಂದ್ರ ಅವರಿಗೆ ಜಾತಿ ಬಲ, ಹಣ ಬಲ ಎರಡೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರ ಆಶೀರ್ವಾದ ಅವರಿಗಿದೆ. ಆದರೆ ಬಿಜೆಪಿಯೊಳಗಿರುವ ಹಿರಿಯರಿಗೆ ಹೋಲಿಸಿದರೆ ರಾಜಕೀಯ ಅನುಭವ ತೀರಾ ಕಡಿಮೆ. ವಿಜಯೇಂದ್ರ ಅವರ ಸೂಚನೆಗಳನ್ನು, ಆದೇಶಗಳನ್ನು ಪಾಲಿಸಲು ಬಿಜೆಪಿಯ ಬಹುತೇಕ ಹಿರಿಯರು ಮಾನಸಿಕವಾಗಿ ಸಿದ್ಧರಿಲ್ಲ. ಆದುದರಿಂದಲೇ ಪಕ್ಷ ಸಂಘಟನೆಯ ಕುರಿತಂತೆ ವಿಜಯೇಂದ್ರ ಸಲಹೆ ಸೂಚನೆಗಳನ್ನು ನೀಡುವುದನ್ನು ಇತ್ತೀಚೆಗೆ ಸಂಪೂರ್ಣ ಕೈ ಬಿಟ್ಟಿದ್ದಾರೆ. ಯತ್ನಾಳ್ ಅವರಂತೂ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಬಿಜೆಪಿಯೊಳಗಿರುವ ಹಿರಿಯರೇ ವಿಜಯೇಂದ್ರ ಅವರಿಗೆ ಅತಿ ದೊಡ್ಡ ತಲೆನೋವಾಗಿದ್ದಾರೆ. ಈ ಹಿರಿಯರನ್ನು ಕೈ ಬಿಟ್ಟು ಪಕ್ಷವನ್ನು ಮುಂದಕ್ಕೆ ಒಯ್ಯುವಂತೆಯೂ ಇಲ್ಲ. ಪರಿಣಾಮವಾಗಿ ಒಂದು ವಿರೋಧ ಪಕ್ಷವಾಗಿ ಬಿಜೆಪಿಯು ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಲಾಭವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನದಾಗಿಸುತ್ತಾ ಬರುತ್ತಿದೆ. ಬಿಜೆಪಿಯ ಈ ಅಸಹಾಯಕ ಸ್ಥಿತಿಯ ಕಾರಣದಿಂದಲೇ ಕಾಂಗ್ರೆಸ್ನೊಳಗಿರುವ ಭಿನ್ನಮತ ರಾಜ್ಯದ ಜನತೆಗೆ ವಿಶೇಷವೆಂದು ಅನ್ನಿಸುತ್ತಿಲ್ಲ. ಅದೆಷ್ಟೇ ಭಿನ್ನಮತವಿದ್ದರೂ ಕಾಂಗ್ರೆಸ್ ನಾಯಕರು ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಯನ್ನು ಈವರೆಗೆ ನೀಡಿಲ್ಲ. ಅಸಮಾಧಾನಗಳನ್ನು ವರಿಷ್ಠರ ಮುಂದೆ ತೋಡಿಕೊಂಡಿದ್ದಾರಾದರೂ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮಗಳ ಮುಂದೆ ಸದಾ ಒಗ್ಗಟ್ಟಿನ ಮಾತುಗಳನ್ನು ಆಡುತ್ತಾ ಬಂದಿದ್ದಾರೆ. ಸದ್ಯ ಅಧಿಕಾರದಲ್ಲಿರುವುದು ಕಾಂಗ್ರೆಸ್. ಆದರೂ ಭೀಕರ ಕಚ್ಚಾಟ ನಡೆಯುತ್ತಿರುವುದು ಬಿಜೆಪಿಯೊಳಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಚಾಲ್ತಿಯಲ್ಲಿರುವ ಈ ಕಚ್ಚಾಟಕ್ಕೆ ಔಷಧಿ ಹುಡುಕುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಪದೇ ಪದೇ ಅವಾಚ್ಯ ಹೇಳಿಕೆಗಳನ್ನು ನೀಡುತ್ತಿರುವಾಗಲೂ ಬಿಜೆಪಿ ವರಿಷ್ಠರು ಮೌನ ಪಾಲಿಸಿದ್ದರು. ಇನ್ನು ಸಹಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವರಿಷ್ಠರಿಗೆ ಪ್ರತಿಯಾಗಿ ರವಾನಿಸಿದಾಗ ಅನಿವಾರ್ಯವಾಗಿ ಯತ್ನಾಳ್ ಮತ್ತು ಅವರ ಸಂಗಡಿಗರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡವರಂತೆ ನಟಿಸಿದ್ದಾರೆ. ಒಂದು ವೇಳೆ ಅಂದೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇಂದು ಮತ್ತೆ ಭಿನ್ನಮತೀಯರು ವಿಜಯೇಂದ್ರ ವಿರುದ್ಧ ದಿಲ್ಲಿಗೆ ದೂರು ಹಿಡಿದುಕೊಂಡು ಹೋಗುತ್ತಿರಲಿಲ್ಲ. ಅತ್ಯುತ್ತಮ ಆಡಳಿತ ನಡೆಸಲು ಸರಕಾರದೊಳಗೆ ಹೇಗೆ ಭಿನ್ನಮತಗಳು ಇರಬಾರದೋ ಹಾಗೆಯೇ ಅತ್ಯುತ್ತಮ ವಿರೋಧ ಪಕ್ಷವಾಗಿ ಸರಕಾರಕ್ಕೆ ಮಾರ್ಗದರ್ಶನ ಮಾಡಲು ಬಿಜೆಪಿಯೊಳಗೂ ಭಿನ್ನಮತ ತಣ್ಣಗಾಗಬೇಕಾಗಿದೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ಇನ್ನಾದರೂ ಸಿದ್ಧವಾಗಬೇಕು. ಭಿನ್ನಮತದ ಶಮನದ ವಿಷಯದಲ್ಲಿ ಕಾಂಗ್ರೆಸ್ನ ನಾಯಕರನ್ನು ಮಾದರಿಯಾಗಿರಿಸಿಕೊಂಡು, ವಿಜಯೇಂದ್ರ, ಯತ್ನಾಳ್, ಜಾರಕಿ ಹೊಳಿ, ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರಿಗೆ ಒಂದೇ ಟೇಬಲ್ನಲ್ಲಿ ಅಪ್ಪಟ ಸಸ್ಯಾಹಾರಿ ಉಪಾಹಾರ ವ್ಯವಸ್ಥೆಯನ್ನು ಬಿಜೆಪಿ ವರಿಷ್ಠರು ಮಾಡಿಕೊಡಬೇಕಾಗಿದೆ.
ಮತ್ತಷ್ಟು ಬಲಶಾಲಿಯಾದ ಅಸಿಮ್ ಮುನೀರ್; ಪಾಕಿಸ್ತಾನದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥನಾಗಿ ನೇಮಕ!
ಪಾಕಿಸ್ತಾನದ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ ಅಸಿಮ್ ಮುನೀರ್ಗೆ ಹೆಚ್ಚಿನ ಮಿಲಿಟರಿ ಅಧಿಕಾರ ಕೊಡುವುದು. ಮಂಗನ ಕೈಗೆ ಮಾಣಿಕ್ಯ ಕೊಡುವುದು ಎರಡೂ ಒಂದೇ. ಆದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಮಾತ್ರ, ಅಸಿಮ್ ಮುನೀರ್ನನ್ನು ದಿನದಿಂದ ದಿನಕ್ಕೆ ಬಲಶಾಲಿಯನ್ನಾಗಿ ಮಾಡುತ್ತಿದೆ. ಪಾಕಿಸ್ತಾನದ ಮಿಲಿಟರಿಯನ್ನೇ ಮುನೀರ್ ಕೈಗಿಟ್ಟಿರುವ ಷರೀಫ್ ಸರ್ಕಾರ ಇದೀಗ ಟೆರರಿಸ್ಟ್ ಜನರಲ್ಗೆ ಪಾಕಿಸ್ತಾನದ ಮೊಟ್ಟ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಕರುಣಿಸಿದೆ. ಮುನೀರ್ ಪಾಕ್ನ ಮೊದಲ ಸಿಡಿಎಫ್ ಆಗಿ ನೇಮಕಗೊಂಡಿದ್ದಾರೆ.
20 ವರ್ಷಗಳಲ್ಲೇ ಹೊಸ ದಾಖಲೆ: 550 ಇಂಡಿಗೊ ವಿಮಾನ ಹಾರಾಟ ರದ್ದು!
ಹೊಸದಿಲ್ಲಿ: ಕಳೆದ ಇಪ್ಪತ್ತು ವರ್ಷಗಳ ಕಾರ್ಯಾಚರಣೆ ದಾಖಲೆಯಲ್ಲೇ ಮೊದಲ ಬಾರಿಗೆ ಗುರುವಾರ ಇಂಡಿಗೊ 550 ವಿಮಾನಗಳ ಕಾರ್ಯಾಚರಣೆಯನ್ನು ರದ್ದುಪಡಿಸಿದೆ. ಸಿಬ್ಬಂದಿ ಮತ್ತು ತಾಂತ್ರಿಕ ಸಮಸ್ಯೆಗಳಿಂದ ವಿಮಾನಯಾನ ಅಸ್ತವ್ಯಸ್ತಗೊಂಡಿದೆ. ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಪೂರ್ವಯೋಜಿತ ಸೇವಾ ರದ್ದತಿಯ ಮೂಲಕ ಕಾರ್ಯಾಚರಣೆ ಸಹಜ ಸ್ಥಿತಿಗೆ ತರಲು ಹೆಣಗಾಡುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ವಿಮಾನಗಳು ರದ್ದಾಗುವ ಸಾಧ್ಯತೆ ಇದೆ. ಪ್ರತಿದಿನ 2300 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆ, ಸೇವೆಯ ಸಮಯ ಪಾಲನೆ ಹೆಗ್ಗುರುತು ಹೊಂದಿರುವ ಸಂಸ್ಥೆಯ ಸಕಾಲಿಕ ಸೇವೆ ಬುಧವಾರ ಶೇಕಡ 19.7ಕ್ಕೆ ಇಳಿದಿದೆ. ಮಂಗಳವಾರ ಇದು ಶೇಕಡ 35ರಷ್ಟಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಇಂಡಿಗೊ ಹಿರಿಯ ಅಧಿಕಾರಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸಮಯಪಾಲನೆಯನ್ನು ಮತ್ತೆ ಜಾರಿಗೊಳಿಸುವುದು ಸುಲಭ ಸಾಧ್ಯವಲ್ಲ ಎಂದು ಇಂಡಿಗೊ ಸಿಇಓ ಪೀಟರ್ ಎಲ್ಬರ್ಸ್ ಹೇಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ 118, ಬೆಂಗಳೂರಿನಲ್ಲಿ 100, ಹೈದರಾಬಾದ್ ನಲ್ಲಿ 75, ಕೊಲ್ಕತ್ತಾದಲ್ಲಿ 35, ಚೆನ್ನೈನಲ್ಲಿ 26, ಗೊವಾದಲ್ಲಿ 11 ವಿಮಾನಗಳ ಸೇವೆ ರದ್ದುಪಡಿಸಲಾಗಿದೆ. ಇತರ ವಿಮಾನ ನಿಲ್ದಾಣಗಳಲ್ಲೂ ಸೇವೆ ರದ್ದಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಹೊಸ ನಿಯಮಾವಳಿಯಡಿ ಸಿಬ್ಬಂದಿ ಅಗತ್ಯತೆಯನ್ನು ತಪ್ಪು ಅಂದಾಜು ಮಾಡಿರುವುದನ್ನು ಇಂಡಿಗೊ ಒಪ್ಪಿಕೊಂಡಿದ್ದು, ಚಳಿಗಾಲದ ವಾತಾವರಣ ಮತ್ತು ದಟ್ಟಣೆಯ ಕಾರಣದಿಂದ ಸಮರ್ಪಕ ಸಿಬ್ಬಂದಿ ಲಭ್ಯತೆ ಸಾಧ್ಯವಾಗುತ್ತಿಲ್ಲ.
ನಮ್ಮ ಮೆಟ್ರೋ ಪ್ರಯಣಿಕರ ಗಮನಕ್ಕೆ: ಕೆಂಗೇರಿಯಲ್ಲಿ ಆತ್ಮಹತ್ಯೆಗೆ ಯತ್ನ- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ
ಬೆಳ್ಳಂಬೆಳಗ್ಗೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟಿದೆ. ಕೆಂಗೇರಿ ನಿಲ್ದಾಣದಲ್ಲಿ ಪ್ರಯಾಣಿಕರೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೆಟ್ರೋ ಸಂಚಾರ ತಡೆಯಾಗಿದೆ.
ಉಮ್ರಾ ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದರೂ ಚಾಲಕ ಸಹಾಯಕ್ಕೆ ಬರಲೇ ಇಲ್ಲ!
ತಾಯ್ನಾಡಿಗೆ ಮರಳಿದ ಮದೀನಾದಲ್ಲಿ ಭೀಕರ ಬಸ್ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ
ರಷ್ಯಾದಿಂದ ಅಮೆರಿಕ ತೈಲ ಖರೀದಿ ಮಾಡಬಹುದಾದರೆ ಭಾರತಕ್ಕೆ ಆ ಹಕ್ಕು ಏಕಿಲ್ಲ? : ಪುಟಿನ್
ಮಾಸ್ಕೊ: ರಷ್ಯಾದಿಂದ ತೈಲ ಖರೀದಿ ಮಾಡುವ ಹಕ್ಕನ್ನು ಅಮೆರಿಕ ಹೊಂದಿದೆ ಎಂದಾದರೆ, ಅದೇ ಸೌಲಭ್ಯ ಭಾರತಕ್ಕೆ ಏಕಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಪ್ರಶ್ನಿಸಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವ ಸಂಬಂಧ ಟ್ರಂಪ್ ಇತ್ತೀಚೆಗೆ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಗಮನ ಸೆಳೆದಾಗ ಪುಟಿನ್ ಮೇಲಿನಂತೆ ಪ್ರಶ್ನಿಸಿದರು. ರಷ್ಯಾದಿಂದ ಭಾರತ ಇಂಧನ ಸಂಪನ್ಮೂಲಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ, ಈ ಮೊದಲೇ ಬಹಿರಂಗವಾಗಿ ಒಮ್ಮೆ ಉಲ್ಲೇಖಿಸಿದ್ದೇನೆ. ಅಮೆರಿಕ ಸ್ವತಃ ಈಗಲೂ ತನ್ನ ಅಣು ವಿದ್ಯುತ್ ಸ್ಥಾವರಗಳಿಗೆ ನಮ್ಮಿಂದ ಅಣ್ವಸ್ತ್ರ ಇಂಧನವನ್ನು ಖರೀದಿಸುತ್ತಿದೆ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ಎರಡು ದಿನಗಳ ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಪುಟಿನ್, ಅಮೆರಿಕ ತನ್ನ ರಿಯಾಕ್ಟರ್ಗಳಿಗೆ ಯುರೇನಿಯಂ ಖರೀದಿಸಬಹುದಾದರೆ, ಭಾರತಕ್ಕೂ ಇಂಥದ್ದೇ ಸೌಲಭ್ಯ ಇರಬೇಕು ಎಂದು ಪ್ರತಿಪಾದಿಸಿದರು. ಅದು ಕೂಡಾ ಇಂಧನ; ಅಮೆರಿಕದ ರಿಯಾಕ್ಟರ್ಗ ಳಲ್ಲಿ ಕಾರ್ಯಾಚರಣೆಗೆ ಬೇಕಾಗಿರುವ ಯುರೇನಿಯಂ. ಅಮೆರಿಕಕ್ಕೆ ಇಂಧನ ಖರೀದಿಸುವ ಹಕ್ಕು ಇದ್ದರೆ, ಭಾರತಕ್ಕೆ ಅಂಥದ್ದೇ ಸೌಲಭ್ಯ ಏಕೆ ಇರಬಾರದು ಎಂದು ಪುಟಿನ್ ಪ್ರಶ್ನಿಸಿದರು. ರಷ್ಯಾದಿಂದ ತೈಲ ಖರೀದಿ ಮಾಡುವ ಭಾರತದ ಮೇಲೆ ಟ್ರಂಪ್ ಶೇಕಡ 25ರಷ್ಟು ಹೆಚ್ಚವರಿ ಸುಂಕ ವಿಧಿಸಿದ್ದು, ಆಗಸ್ಟ್ ನಲ್ಲಿ ಒಟ್ಟು ಸುಂಕವನ್ನು ಶೇಕಡ 50ಕ್ಕೆ ಏರಿಸಿದ್ದಾರೆ. ಇದು ಯಾವುದೇ ದೇಶಗಳಿಗೆ ವಿಧಿಸಿದ್ದಕ್ಕಿಂತ ಅಧಿಕ ಸುಂಕವಾಗಿದೆ.
ಬಿಎಲ್ಒಗಳಿಗೆ ಬೆಂಬಲ ನೀಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಬಿಎಲ್ಒಗಳು ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಆದರೆ, ಕೆಲಸದ ಒತ್ತಡ ಹೆಚ್ಚಾದಾಗ ರಾಜ್ಯ ಸರ್ಕಾರಗಳು ಅವರಿಗೆ ಬದಲಿಯಾಗಿ ಸಿಬ್ಬಂದಿ ಒದಗಿಸಬೇಕು. ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಆತ್ಮಹತ್ಯೆ ಮಾಡಿಕೊಂಡ ಬಿಎಲ್ಒಗಳಿಗೆ ಪರಿಹಾರ ನೀಡಬೇಕೆಂದು ತಮಿಳಗ ವೆಟ್ರಿ ಕಳಗಂ ಪಕ್ಷದ ಅರ್ಜಿ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ರಾಜ್ಯ ಸರ್ಕಾರಗಳು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಬಿಎಲ್ಒಗಳಿಗೆ ನೆರವಾಗಬೇಕು.
ಪುಟಿನ್-ಮೋದಿ ದೋಸ್ತಿ ಮೇಲೆ ಕಣ್ಣಿಟ್ಟ ಡೊನಾಲ್ಡ್ ಟ್ರಂಪ್; ಹೊಸ ಕುಸ್ತಿ ಯೋಜನೆಗಳು ಪೋಸ್ಟ್ಪೋನ್?
ಭಾರತವನ್ನ ದೂರ ತಳ್ಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಣಿಸುವ ಪ್ರಯತ್ನದಲ್ಲಿ ಸೋಲುಂಡಿದ್ದಾರೆ. ಟ್ರಂಪ್ ಅವರ ಹಠಮಾರಿ ಧೋರಣೆಗಳು ಅಮೆರಿಕ ಮತ್ತು ಭಾರತದ ಸಂಬಂಧವನ್ನು ಶಿಥಿಲಗೊಳಿಸಿದ್ದು, ಭಾರತ-ರಷ್ಯಾ ಸಂಬಂಧವನ್ನು ಗಟ್ಟಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಪ್ರವಾಸದ ಬಗ್ಗೆ ಡೊನಾಲ್ಡ್ ಟ್ರಂಪ್ ತಲೆಕೆಡಿಸಿಕೊಂಡಿದ್ದು, ಈ ಪ್ರವಾಸದ ಸಾಧಕ-ಬಾಧಕಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ.
ದೇಶದಲ್ಲಿ ದಿನಕ್ಕೆ 485 ಮಂದಿ ಅಪಘಾತದಿಂದ ಮೃತ್ಯು!
ಹೊಸದಿಲ್ಲಿ: ದೇಶದಲ್ಲಿ ಸರಾಸರಿ ಪ್ರತಿದಿನ 485 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. 2024ರಲ್ಲಿ ಒಟ್ಟು 1.77 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ರಸ್ತೆ ಸಾರಿಗೆ ಸಚಿವಾಲಯ ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದೆ. ದೇಶದ ಒಟ್ಟು ರಸ್ತೆ ಜಾಲದಲ್ಲಿ ಶೇಕಡ 2ರಷ್ಟು ಪಾಲು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 54,443 ಸಾವುಗಳು ಸಂಭವಿಸಿದ್ದು, ಇದು ಒಟ್ಟು ಜೀವಹಾನಿಯ ಶೇಖಡ 31ರಷ್ಟಾಗಿದೆ. ಆದರೆ ಇದು ಕಳೆದ ನಾಲ್ಕು ವರ್ಷಗಳಲ್ಲಿ ಕನಿಷ್ಠ ಎಂದು ಸಚಿವಾಲಯ ವಿವರಿಸಿದೆ. 2023ಕ್ಕೆ ಹೋಲಿಸಿದರೆ ಒಟ್ಟು ಸಾವಿನ ಸಂಖ್ಯೆ ಶೇಕಡ 2.3ರಷ್ಟ ಹೆಚ್ಚಳವಾಗಿದೆ. ಹಿಂದಿನ ವರ್ಷ 1.73 ಲಕ್ಷ ಮಂದಿ ಅಪಘಾತಗಳಲ್ಲಿ ಮೃತಪಟ್ಟಿದ್ದರು. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ರಸ್ತೆ ಅಪಘಾತಗಳಿಂದ ಆಗಿರುವ ಸಾವ 2024ರಲ್ಲಿ 1,77,177 ಆಗಿದೆ. ಇದರಲ್ಲಿ ಬಂಗಾಳದಿಂದ ಪಡೆದ ಅಪಘಾತಕ್ಕೆ ಸಂಬಂಧಿಸಿದ ವಿವರವಾದ ಎಲೆಕ್ಟ್ರಾನಿಕ್ ವರದಿಯ ಅಂಕಿ ಅಂಶಗಳೂ ಸೇರಿವೆ ಎಂದು ಡಿಎಂಕೆಯ ಎ.ರಾಜಾ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಸಂಖ್ಯೆ ಮತ್ತು ಮರಣ ಸಂಖ್ಯೆ ಕಡಿಮೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 2022ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1.52 ಲಕ್ಷ ಅಪಘಾತಗಳು ಸಂಭವಿಸಿದ್ದರೆ ಕಳೆದ ವರ್ಷ ಇದು 1.29 ಲಕ್ಷಕ್ಕೆ ಇಳಿದಿದೆ. ಅಂತೆಯೇ 2021ರಲ್ಲಿ 56007 ಇದ್ದ ಸಾವಿನ ಸಂಖ್ಯೆ 54 ಸಾವಿರಕ್ಕೆ ಇಳಿದಿದೆ.
ಸಿವಿಲ್ ಕೋರ್ಟ್ನಿಂದ ರೇರಾ ಆದೇಶ ಜಾರಿ ಅಸಾಧ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಕೆ-ರೇರಾ ಮತ್ತು ಅದರ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರೇರಾ ಆದೇಶಗಳು ಸಿಪಿಸಿ ಅಡಿಯಲ್ಲಿ 'ಡಿಕ್ರಿ' ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತೀರ್ಪು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಸಾವಿರಾರು ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
Gold Price December 5: ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ, ಇಲ್ಲಿದೆ ನೋಡಿ ಡಿಸೆಂಬರ್ 5 ಶುಕ್ರವಾರದ ಬೆಲೆ...
ಚಿನ್ನದ ಬೆಲೆ ಭರ್ಜರಿ ಕುಸಿತ ಕಾಣಲು ಆರಂಭಿಸಿದೆ, ಚಿನ್ನದ ಬೆಲೆ ಏರಿಕೆ ಹಿನ್ನೆಲೆ ಭಾರಿ ಚಿಂತೆ ಶುರುವಾಗಿದ್ದ ಸಮಯದಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಇಳಿಕೆ ಇದೀಗ ಶುರುವಾಗಿದೆ. ಈ ಮೂಲಕ ಮದುವೆ ಸೇರಿದಂತೆ ಶುಭಕಾರ್ಯ ನೆರವೇರಿಸಲು ಕಾಯುತ್ತಿದ್ದ ಜನರಿಗೆ ಚಿನ್ನದ ಬೆಲೆ ಇಳಿಕೆ ಭಾರಿ ಸಂಭ್ರಮ ತಂದಿದೆ. ನೋಡ ನೋಡುತ್ತಲೇ 1,40,000 ರೂಪಾಯಿ ಹತ್ತಿರಕ್ಕೆ ಬಂದು
ಐತಿಹಾಸಿಕ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ತಮ್ಮ ಭೇಟಿಯ ಮೊದಲ ದಿನವನ್ನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಳೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುಟಿನ್ ಅವರನ್ನು ಖುದ್ದು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷರಿಗಾಗಿ ಖಾಸಗಿ ಭೋಜನಕೂಟ ಏರ್ಪಡಿಸಿದ್ದರು. ಅದೇ ರೀತಿ ಮೋದಿ ಅವರು ಪುಟಿನ್ ಅವರಿಗೆ ಭಗವದ್ಗೀತೆಯ ಪ್ರತಿಯೊಂದನ್ನು ಉಡುಗೊರೆಯಾಗಿ ನೀಡಿದೆ. ಭಾರತ-ರಷ್ಯಾ ದ್ವಿಪಕ್ಷೀಯ ಮಾತುಕತೆಯಲ್ಲಿ ಏನೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ? ಇಲ್ಲಿದೆ ಮಾಹಿತಿ.
Putin India Visit: ರಷ್ಯಾ ಅಧ್ಯಕ್ಷರಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಪಿಎಂ ಮೋದಿ
ರಾಷ್ಟ್ರ ರಾಜಧಾನಿ ನವದೆಹಲಿ ಇದೀಗ ಸಂಭ್ರಮದಲ್ಲಿ ಮಿಂದು ಎದ್ದಿದೆ, ಭಾರತದ ಆಪ್ತ ರಾಷ್ಟ್ರ ರಷ್ಯಾ ಅಧ್ಯಕ್ಷರ ಆಗಮನ ಹಿನ್ನೆಲೆ ಪ್ರಪಂಚದ ಕೇಂದ್ರ ಬಿಂದುವಾಗಿದೆ ದೆಹಲಿ. ಹೀಗಿದ್ದಾಗ ಹಲವು ಪ್ರಮುಖ ಒಪ್ಪಂದಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಇಂದು ಪಿಎಂ ಮೋದಿ ಅವರ ಜೊತೆ ಚರ್ಚಸಿ, ಸಹಿ ಹಾಕಲು ಸಜ್ಜಾಗಿದ್ದಾರೆ. ಇಷ್ಟೆಲ್ಲಾ ಪ್ರಮುಖ ವಿಚಾರಗಳ ಜೊತೆಗೆ ಮತ್ತಷ್ಟು ವಿಶೇಷ
ಎಚ್ಚರ; ವ್ಯಾಪಕವಾಗಿ ಹರಡುತ್ತಿದೆ ಇಲಿಜ್ವರ, ಕೇರಳ- ಕಾಸರಗೋಡಲ್ಲಿ 5308 ಮಂದಿಗೆ ರೋಗ ಬಾಧೆ
ಕೇರಳ ರಾಜ್ಯದಲ್ಲಿ ಇಲಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 11 ತಿಂಗಳಲ್ಲಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಜ್ವರ, ತಲೆನೋವು, ನಿತ್ರಾಣ ಇದರ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಮಂಗಳೂರು | ಗಾಂಜಾ ಸೇವನೆ: ಯುವಕ ಸೆರೆ
ಮಂಗಳೂರು, ಡಿ.4: ನಗರದ ಕೋರ್ಟ್ ರಸ್ತೆಯಲ್ಲಿ ತೂರಾಡುತ್ತಾ ಸಾಗುತ್ತಿದ್ದ ಬೆಂಗಳೂರು ಅಂದ್ರಹಳ್ಳಿಯ 10ನೇ ಕ್ರಾಸ್ ನಿವಾಸಿ ದರ್ಶನ್ (25) ಎಂಬಾತನನ್ನು ಗಾಂಜಾ ಸೇವನೆ ಮಾಡಿದ ಆರೋಪದಡಿ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಎಸ್ಸೈ ಫೈಜುನ್ನಿಸಾ ಕೋರ್ಟ್ ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿರುವಾಗ ತೂರಾಡುತ್ತಾ ಸಾಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಆತನ ವಿರುದ್ಧ ಬಂದರು ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು | ಮೀನು ಕಾರ್ಮಿಕ ನಾಪತ್ತೆ
ಮಂಗಳೂರು, ಡಿ.5: ನಗರದ ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ತೀರದಲ್ಲಿ ಲಂಗರು ಹಾಕಿದ್ದ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಸುರೇಶ್ ಮಾಝಿ (27) ಗುರುವಾರ ನಾಪತ್ತೆಯಾಗಿದ್ದಾರೆ. ಡಿ.1ರಂದು ನಿಲ್ಲಿಸಲಾಗಿದ್ದ ಬೋಟ್ ನಲ್ಲಿ 29 ಮಂದಿ ಕಾರ್ಮಿಕರಿದ್ದರು ಎನ್ನಲಾಗಿದೆ. ಬೋಟ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಶಾಂತ್ ಡಿ.2ರಂದು ರಾತ್ರಿ 9ರ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಕಾರ್ಮಿಕರು ಮಾತ್ರ ಬೋಟ್ ನಲ್ಲಿ ಉಳಿದುಕೊಂಡಿದ್ದರು. ಡಿ.3ರಂದು ತಡರಾತ್ರಿ 1:30ಕ್ಕೆ ಕಾರ್ಮಿಕರು ಕರೆ ಮಾಡಿ ಸುರೇಶ್ ಮಾಝಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಪ್ರಶಾಂತ್ ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರದ, ಗೋಧಿ ಮೈ ಬಣ್ಣದ, ಸಾಧಾರಣ ಮೈಕಟ್ಟು ಹೊಂದಿರುವ ಸುರೇಶ್ ಮಾಝಿ ಹಿಂದಿ, ಒಡಿಸಿ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಕಪ್ಪುಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ವಿಶ್ವ ಅಂಗವಿಕಲರ ದಿನಾಚರಣೆ : ಬೆಳುವಾಯಿ ಸ್ಫೂರ್ತಿ ವಿಶೇಷ ಮಕ್ಕಳಿಂದ ಜಾಗೃತಿ ಜಾಥಾ
ಮೂಡುಬಿದಿರೆ, ಡಿ.4: ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ ಬೆಳುವಾಯಿ ಹಾಗೂ ರಿಕ್ಷಾ ಚಾಲಕ, ಮಾಲಕರ ಸಂಘ ಬೆಳುವಾಯಿ ಇವುಗಳ ಸಹಕಾರದೊಂದಿಗೆ ಬೆಳುವಾಯಿ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ವಿಶೇಷ ಚೇತನ ಮಕ್ಕಳಿಂದ ವಿಶೇಷ ಚೇತನರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜನಜಾಗೃತಿ ಜಾಥಾ ಗುರುವಾರ ನಡೆಯಿತು. ಬೆಳುವಾಯಿ ಷಣ್ಮುಖಾನಂದ ಹಾಲ್ ಬಳಿಯಿಂದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯವರೆಗೆ ನಡೆದ ಜಾಥಾಕ್ಕೆ ಬೆಳುವಾಯಿ ಷಣ್ಮುಖಾನಂದ ಹಾಲ್ನ ಮಾಲಕ ಅಣ್ಣಿ ಪೂಜಾರಿ ಆಣೆಬೆಟ್ಟು ಚಾಲನೆ ನೀಡಿದರು. ಬೆಳುವಾಯಿ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಸುಭಾಸ್ ಪೈ, ವ್ಯವಸಾಯ ಸಹಕಾರಿ ಬ್ಯಾಂಕ್ ಬೆಳುವಾಯಿ ಇದರ ನಿರ್ದೇಶಕ ರಾಮ್ ಪ್ರಸಾದ್, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಇದರ ಅರ್ಜುನ್ ಭಂಡಾರ್ಕರ್ ಅವರು ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡಿ ಪ್ರೋತ್ಸಾಹಿಸಿದರು. ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಸುಚಿತ್ರಾ ನಿರೂಪಿಸಿದರು.
ಸುರತ್ಕಲ್ | ಮನೆಗೆ ಅಕ್ರಮವಾಗಿ ಪ್ರವೇಶಿಸಿ ಒಂಟಿ ವೃದ್ಧೆಯನ್ನು ಬೆದರಿಸಿ ನಗ-ನಗದು ಲೂಟಿ
ಸುರತ್ಕಲ್, ಡಿ.4: ಒಂಟಿ ವೃದ್ಧೆಯ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ರಪಟ್ಣ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಮಿತ್ರಪಟ್ಣ ನಿವಾಸಿ ಜಲಜಾ (86) ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಕಳ್ಳರು ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆಗಳು ಹಾಗೂ ಪರ್ಸ್ ನಲ್ಲಿಟ್ಟಿದ್ದ ಸುಮಾರು 14 ಸಾವಿರ ರೂ. ನಗದು ಕಳವುಗೈದಿದ್ದಾರೆ. ಜಲಜಾ ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ಸುಮಾರು 2:30ರ ಸುಮಾರಿಗೆ ಇಬ್ಬರು ಯುವಕರು ನೀರು ಕೊಡುವಂತೆ ಬಾಗಿಲು ತಟ್ಟಿದ್ದಾರೆ. ಆಗ ಎಚ್ಚರಗೊಂಡ ಜಲಜಾ ನೀರು ಮನೆಯ ಹೊರಗಡೆ ಇದೆ. ಕುಡಿದು ಹೋಗಿ ಎಂದು ಹೇಳಿ ಮಲಗುವ ಕೋಣೆಗೆ ಹೋಗಿ ಮಲಗಲು ಮುಂದಾದಾಗ ಹೆಂಚು ಬೀಳುವ ಶಬ್ದ ಕೇಳಿಸಿದೆ. ತಕ್ಷಣ ಮನೆಯ ಛಾವಡಿಗೆ ತೆರಳಿ ನೋಡಿದಾಗ ಯುವಕನೋರ್ವ ಮಾಡಿನ ಹೆಂಚು ತೆಗೆದು ಮನೆಯ ಒಳಗೆ ಬಂದು ಮುಂಬಾಗಿಲನ್ನು ತೆರೆದು ಮತ್ತೋರ್ವನನ್ನು ಒಳಗೆ ಕರೆದಿದ್ದ. ಚಿನ್ನಾಭರಣ ಎಲ್ಲಿದೆ ಎಂದು ವಿಚಾರಿಸಿದ ಕಳ್ಳರು ಜಲಜಾರ ಕುತ್ತಿಗೆಗೆ ಟವಲ್ ಸುತ್ತಿ ಹಿಡಿದು ಕೊಲೆ ಮಾಡುವುದಾಗಿ ಬೆದರಿಸಿ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು 14 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಜಲಜಾ ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನುಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ | ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ವರ್ತಕರಿಂದ ದೂರು
ಉಪ್ಪಿನಂಗಡಿ, ಡಿ.4: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಭಾಗವಾಗಿ ಉಪ್ಪಿನಂಗಡಿಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಯು ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಸುದೀರ್ಘ ಕಾಲ ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ. ಮಳೆಗಾಲದ ಮೊದಲು ಶ್ಲಾಘನಾತ್ಮಕ ವೇಗದೊಂದಿಗೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೆ, ಮಳೆಗಾಲ ಮುಗಿದು ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ ವೇಗ ಮಾತ್ರ ನಿರ್ಲಕ್ಷ್ಯದ ಪರಮಾವಧಿಯಂತಿದೆ. ಪರ್ಯಾಯವಾಗಿ ಕಲ್ಪಿಸಲಾದ ಮಾರ್ಗದಲ್ಲಿನ ವಾಹನ ಸಂಚಾರದಿಂದ ಪೇಟೆಯ ವ್ಯವಹಾರಿಕ ಕ್ಷೇತ್ರವನ್ನು ತಲ್ಲಣಗೊಳಿಸಿದ್ದು, ಕಾಮಗಾರಿಯನ್ನು ಆದ್ಯತೆಯ ನೆಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ತಿಗೊಳಿಸಬೇಕೆಂದು ಅಗ್ರಹಿಸಿ ಬುಧವಾರ ಪಂಚಾಯತ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಕಾಮಗಾರಿ ನಿರತ ಕೆಎನ್ಆರ್ ಸಂಸ್ಥೆಯ ಇಂಜಿನಿಯರ್ಗಳನ್ನು ಗುರುವಾರ ಸ್ಥಳಕ್ಕೆ ಕರೆಯಿಸಿದ ಪಂಚಾಯತ್ ಆಡಳಿತ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಅಗ್ರಹಿಸಿತು. ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಲ್ಲದು : ಹಿರಿಯ ಉದ್ಯಮಿ ಯು.ರಾಮ, ವರ್ತಕ ಸಮೂಹ ಅನುಭವಿಸುತ್ತಿರುವ ಸಂಕಷ್ಠಗಳನ್ನು ಉಲ್ಲೇಖೀಸಿ, ಆಡಳಿತ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ಪೇಟೆಯ ಪ್ರಮುಖ ಭಾಗದ ರಸ್ತೆಯಲ್ಲಿ ಅಗೆತ ಮಾಡಿ ವಾರಗಟ್ಟಲೆ ಕಾಮಗಾರಿ ನಡೆಸಿದರೆ, ಪೇಟೆಗೆ ಜನ ಬರುವುದಾದರೂ ಹೇಗೆ ? ವ್ಯಾಪಾರಿಗಳಿಗೆ ವ್ಯಾಪಾರವಾಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು. ಜನರ ತಾಳ್ಮೆಯನ್ನು ಕೆಣಕಿದರೆ ಹೋರಾಟ ನಡೆಸುವುದು ಅನಿರ್ವಾಯ ಎಂದು ಎಚ್ಚರಿಸಿದರು. ಇಂಜಿನಿಯರ್ ರಘುನಾಥ್ ರೆಡ್ಡಿ ವರ್ತಕ ಸಮೂಹದ ಅಗ್ರಹವನ್ನು ಆಲಿಸಿ , ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಡಾ.ರಾಜಾರಾಮ ಕೆ.ಬಿ., ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ವರ್ತಕರಾದ ಮಸೂದ್, ಕೈಲಾರ್ ರಾಜಗೋಪಾಲ ಭಟ್, ಅನೂಷ್ ಕುಲಾಲ್, ಅರವಿಂದ ಭಂಡಾರಿ, ಪ್ರಕಾಶ್ ಬಿ., ರೂಪೇಶ್ ರೈ ಅಲಿಮಾರ, ಕರಾಯ ಸತೀಶ್ ನಾಯಕ್, ವಸಂತ ಗೌಡ, ಚೇತನ್ ಶೆಣೈ ಉಪಸ್ಥಿತರಿದ್ದರು.
ಗಂಗೊಳ್ಳಿ | ಮೀನು ಮಾರಾಟದ ಮಹಿಳೆ ಕುಸಿದು ಬಿದ್ದು ಮೃತ್ಯು
ಗಂಗೊಳ್ಳಿ, ಡಿ.4: ಪ್ರತಿದಿನದಂತೆ ಮೀನು ಮಾರಾಟ ಮಾಡಲು ಗಂಗೊಳ್ಳಿಯಿಂದ ಮೀನು ತೆಗೆದುಕೊಂಡು ಬಸ್ಸಿನಲ್ಲಿ ಕುಂದಾಪುರದ ವಿನಾಯಕ ಜಂಕ್ಷನ್ ಗೆ ಬರುತ್ತಿದ್ದ ಪದ್ಮಾವತಿ (67) ಎಂಬ ಮೀನುಗಾರ ಮಹಿಳೆ ಶಾಸ್ತ್ರಿ ಪಾರ್ಕ್ ಸಮೀಪ ಬಸ್ಸಿನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ ಸ್ಥಳೀಯರು ಸೇರಿ ತಕ್ಷಣ ಪದ್ಮಾವತಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು | ಗಾಂಜಾ ಸೇವನೆ: ಆರೋಪಿಯ ಬಂಧನ
ಮಂಗಳೂರು, ಡಿ.4: ವರ್ಷದ ಹಿಂದೆ ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅದ್ಯಪಾಡಿ ನಿವಾಸಿ ಮಹೇಂದ್ರ ಪೈ (35) ಎಂಬಾತನನ್ನು ಕಾವೂರು ಪೊಲೀಸರು ಗುರುವಾರ ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಆತ ಮಾದಕ ವಸ್ತುವನ್ನು ಸೇವಿಸಿದ್ದಾನೆಯೇ ಎಂದು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮತ್ತೆ ಗಾಂಜಾ ಸೇವಿಸಿ ಬಂದಿರುವುದಾಗಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಹೇಂದ್ರ ಪೈ ವಿರುದ್ಧ ಕಾವೂರು ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಯ, ಡಿ.4: ಸುಳ್ಯದ ಗಾಂಧಿನಗರ ಬಳಿಯ ಗುರಂಪು ನಿವಾಸಿ ಮುಸ್ತಫಾ ಅವರ ವಿಶೇಷ ಚೇತನ ಪುತ್ರ ಮುಹಮ್ಮದ್ ಆದಿಲ್ (13) ಬುಧವಾರ ನಿಧನರಾದರು. ಹುಟ್ಟಿನಿಂದಲೇ ವಿಶೇಷ ಚೇತನದಿಂದ ಅನಾರೋಗ್ಯಕ್ಕೀಡಾಗಿ ಮಲಗಿದ ಸ್ಥಿತಿಯಲ್ಲೇ ಇದ್ದರು. ಮೃತರು ತಂದೆ, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಸುಳ್ಯ, ಡಿ.4: ಸುಳ್ಯ ಹಳೆಗೇಟು ನಿವಾಸಿ ಶ್ರೀ ದುರ್ಗಾ ಸೌಂಡ್ ಮತ್ತು ಲೈಟಿಂಗ್ ಸಂಸ್ಥೆಯ ಮಾಲಕ ರಕ್ಷಿತ್ ಸೆಂಡಾರ್ಕರ್ (40) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಾಯಿ, ಪತ್ನಿ, ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸುಳ್ಯ, ಡಿ.4: ನಾಟಿವೈದ್ಯರಾಗಿ ಜನಮನ್ನಣೆಗಳಿಸಿದ್ದ ಶತಾಯುಷಿ, ತೊಡಿಕಾನ ಗ್ರಾಮದ ಗುಂಡಿಗದ್ದೆ ನಿವಾಸಿ ದಿ.ಬೊಳ್ಳೂರು ನಾಗಪ್ಪಗೌಡರ ಪತ್ನಿ ಪುಟ್ಟಮ್ಮ ಬೊಳ್ಳೂರು (101) ನಿಧನರಾದರು. ತೊಡಿಕಾನ ಗ್ರಾಮದ ಸುತ್ತಮುತ್ತ ಮನೆ ಮನೆಗೆ ತೆರಳಿ ನೂರಾರು ಮಂದಿಗೆ ಹೆರಿಗೆ ಮಾಡಿಸಿ, ತಾಯಿ, ಮಗುವಿಗೆ ನಾಟಿ ಔಷಧಿ ನೀಡುತ್ತಿದ್ದರು. ಹಲವು ಬಗೆಯ ರೋಗಗಳಿಗೆ ಹಳ್ಳಿಮದ್ದು ನೀಡಿ ಗ್ರಾಮದಲ್ಲಿ ಜನಪ್ರಿಯರಾಗಿದ್ದರು. ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಸುಳ್ಯ | ತೆರಿಗೆ ಹಣ ದುರುಪಯೋಗ ಆರೋಪ : ಪಂಜ ಗ್ರಾಪಂ ಸಿಬ್ಬಂದಿ ಅಮಾನತು
ಸುಳ್ಯ, ಡಿ.4: ಪಂಜ ಗ್ರಾಮ ಪಂಚಾಯತ್ನ ತೆರಿಗೆ ವಸೂಲಾತಿಯ ಹಣವನ್ನು ಬ್ಯಾಂಕ್ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಪಂ ಸಿಬ್ಬಂದಿ ಬಾಬು ಎಂಬವರನ್ನು ಗ್ರಾಪಂ ಆಡಳಿತ ಅಮಾನತುಗೊಳಿಸಿದೆ. ಪಂಚಾಯತ್ ಸಿಬ್ಬಂದಿಯಾಗಿರುವ ಬಾಬು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಬ್ಯಾಂಕ್ಗೆ ಪಾವತಿಸದೆ ದುರುಪಯೋಗ ಮಾಡಿದ್ದಾರೆ. ಈ ವಿಚಾರ ಪಂಚಾಯತ್ ಆಡಳಿತ ಹಾಗೂ ಪಿಡಿಒ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಾಬುರನ್ನು ವಿಚಾರಿಸಿದಾಗ ಹಣ ದುರುಪಯೋಗ ಮಾಡಿದನ್ನು ಒಪ್ಪಿಕೊಂಡಿದ್ದಾರೆ. ಡಿ.2ರಂದು ಪಂಚಾಯತ್ ಆಡಳಿತ ಬಾಬುರನ್ನು ಅಮಾನತು ಮಾಡಿ ಹಾಗೂ ಹಣ ದುರುಪಯೋಗದ ಕುರಿತು ಪೊಲೀಸ್ ದೂರು ನೀಡಿದ್ದಾರೆ.
ಮಂಗಳೂರು | ಭರವಸೆಗೆ ಸೀಮಿತಗೊಂಡ ಎನ್ಐಟಿಕೆ ಕೇಂದ್ರೀಯ ವಿದ್ಯಾಲಯ!
ಮಂಗಳೂರು, ಡಿ.4: ಸುರತ್ಕಲ್ನ ಎನ್ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿ ಏಳೆಂಟು ವರ್ಷ ಕಳೆದಿದೆ. ಆದರೆ ಅದಿನ್ನೂ ಭರವಸೆಗೆ ಸೀಮಿತಗೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಮಂಗಳೂರಿನ ಎಕ್ಕೂರು ಮತ್ತು ಪಣಂಬೂರಿನಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳಿವೆ. ಮೂರನೇ ಕೇಂದ್ರೀಯ ವಿದ್ಯಾಲಯವನ್ನು ಸುರತ್ಕಲ್ನ ಎನ್ಐಟಿಕೆ ಕ್ಯಾಂಪಸ್ನೊಳಗೆ ಆರಂಭಿಸುವ ಬಗ್ಗೆ ಘೋಷಿಸಲಾಗಿತ್ತು. ಅಂದರೆ 2018ರಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯ (ಎಂಇ) ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ)ವು ಜಂಟಿಯಾಗಿ ಹಲವು ಕೇಂದ್ರೀಯ ವಿದ್ಯಾಲಯಗಳನ್ನು ಏಕಕಾಲದಲ್ಲಿ ಘೋಷಣೆ ಮಾಡಿತ್ತು. ಈ ವೇಳೆ ಮಂಗಳೂರಿಗೂ ಮೂರನೇ ಕೇಂದ್ರೀಯ ವಿದ್ಯಾಲಯ ಬರುತ್ತದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿತ್ತು. ಕೇಂದ್ರ ಶಿಕ್ಷಣ ಸಚಿವಾಲಯವು ಎನ್ಐಟಿಕೆಯ ನಿರ್ದೇಶಕರಿಗೆ ಎನ್ಐಟಿಕೆಯ ಕ್ಯಾಂಪಸ್ನಲ್ಲಿ ಐದು ಎಕರೆ ಜಾಗವನ್ನು ಕೇಂದ್ರೀಯ ವಿದ್ಯಾಲಯಕ್ಕೆ ಮೀಸಲಿಡಲು ಸೂಚನೆ ನೀಡಿತ್ತು. ಇದು ಕಾರ್ಯಗತಗೊಂಡಿದ್ದರೆ ಮೂಡುಬಿದಿರೆ, ಬೆಳ್ತಂಗಡಿ ಮತ್ತಿತರ ಪ್ರದೇಶಗಳ ಕೇಂದ್ರ ಸರಕಾರಿ ನೌಕರರ ಮಕ್ಕಳಿಗೆ ಹೆಚ್ಚಿನ ಸಹಾಯವಾಗುತ್ತಿತ್ತು ಎಂಬ ಮಾತು ಕೇಳಿ ಬಂದಿತ್ತು. ಮಂಗಳೂರಿನಲ್ಲಿ ಮೂರನೇ ಕೇಂದ್ರೀಯ ಶಾಲೆಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ಇರುವ ಎರಡು ಕೇಂದ್ರೀಯ ಶಾಲೆಗಳಲ್ಲಿ ಹೆಚ್ಚುವರಿ ಮಕ್ಕಳ ಸೇರ್ಪಡೆಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಎಕ್ಕೂರು ಹಾಗೂ ಪಣಂಬೂರಿನಲ್ಲಿ ಕೇಂದ್ರೀಯ ವಿದ್ಯಾಲಯಗಳಿವೆ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಸೀಟುಗಳ ಏರಿಕೆ ಆಗುತ್ತಿಲ್ಲ. ಮೂರನೇ ಕೆವಿ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುಳ್ಯ | ಡಿ.9ರಿಂದ ಉಬರಡ್ಕದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ
ಸುಳ್ಯ, ಡಿ.4: ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು (ಮಾಸ್ ಲಿಮಿಟೆಡ್) ವತಿಯಿಂದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಡಿ.9ರಂದು ಉಬರಡ್ಕ ಮಿತ್ತೂರಿನ ಸಿರಿ ಸಹಕಾರ ಸೌಧದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಾಸ್ ಲಿಮಿಟೆಡ್ ಮಂಗಳೂರು ಅಧ್ಯಕ್ಷ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸುವರು. ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರ ಜತ್ತಪ್ಪಗೌಡ, ಮಿತ್ತೂರು ಜೋಡು ದೈವಗಳ ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ ಮುಖ್ಯ ಅತಿಥಿಗಳಾಗಿರುವರು. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕತ ಸಹಕಾರ ರತ್ನ ಪಿ.ಸಿ.ಜಯರಾಮರನ್ನು ಸಮ್ಮಾನಿಸಲಾಗುತ್ತದೆ ಎಂದು ಮಾಸ್ ಲಿಮಿಟೆಡ್ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಮೂಡುಬಿದಿರೆ | ಡಿ.7ರಂದು ‘ಸಮಸ್ತ ಆದರ್ಶ ಸಮ್ಮೇಳನ’
ಮೂಡುಬಿದಿರೆ, ಡಿ.4: ಸಮಸ್ತದ ನೂರನೇ ವಾರ್ಷಿಕ ಅಂತರ್ರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಸೈಯದ್ ಜಿಫ್ರಿ ಮುತ್ತುಕ್ಕೋಯ ತಂಞಳ್ ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಸಮ್ಮೇಳನವು ಡಿ.7ರಂದು ಮೂಡುಬಿದಿರೆಯ ಲಾಡಿಯಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಅಂದು ಅಪರಾಹ್ನ 2ಕ್ಕೆ ಮೂಡುಬಿದಿರೆ ಡೌನ್ ಟೌನ್ ಮಸೀದಿಯಿಂದ ಲಾಡಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. 3:30ಕ್ಕೆ ಸ್ವಾಗತ ಸಮಿತಿಯ ಗೌರವ ಸಲಹೆಗಾರ ಅಬ್ದುರ್ರಹ್ಮಾನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಸರ್ ನಮಾಝ್ ಬಳಿಕ ಬೆಳ್ತಂಗಡಿ ದಾರುಸ್ಸಲಾಮ್ ಎಜುಕೇಶನ್ ಸೆಂಟರ್ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಹಾಗೂ ಶೈಖುನಾ ತೊಟ್ಟಿ ಉಸ್ತಾದ್ ಅನುಸ್ಮರಣೆ ನಡೆಯಲಿದೆ ಎಂದು ತಿಳಿಸಿದರು. ಮಗ್ರಿಬ್ ನಮಾಝ್ ಬಳಿಕ ನಡೆಯಲಿರುವ ಆದರ್ಶ ಮಹಾ ಸಮ್ಮೇಳನವನ್ನು ದ.ಕ. ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝಹರಿ ಉದ್ಘಾಟಿಸಲಿದ್ದಾರೆ. ಜಂಇಯ್ಯತುಲ್ ಮುಅಲ್ಲಿಮೀನ್ ಮೂಡುಬಿದಿರೆ ರೇಂಜ್ ಅಧ್ಯಕ್ಷ ಸೈಯದ್ ಅಕ್ರಂ ಅಲಿ ತಂಞಳ್ ರಹ್ಮಾನಿ ದುಆ ನೆರವೇರಿಸುವರು. ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ದಾರಿಮಿ ಸ್ವಾಗತಿಸಲಿದ್ದಾರೆ. ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ ಹಾಗೂ ದಾರುರ್ರಹ್ಮಾನ್ ಎಸ್ಎನ್ಇಸಿ ಕಾಲೇಜಿನ ಪ್ರಾಂಶುಪಾಲ ಸಲಾಹುದ್ದೀನ್ ಫೈಝಿ ವಲ್ಲಪ್ಪುಝ ಮುಖ್ಯ ಭಾಷಣ ಮಾಡಲಿದ್ದಾರೆ. ಉವೈಸ್ ಮದನಿ ಅಲ್ ಅಝ್ಹರಿ ತೋಕೆ, ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್ಎನ್ಇಸಿ ರಾಜ್ಯಾಧ್ಯಕ್ಷ ಸೈಯದ್ ಅಕ್ರಂ ಅಲಿ ತಂಳ್, ಸ್ವಾಗತ ಸಮಿತಿಯ ಗೌರವ ಸಲಹೆಗಾರ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷ ಅಝೀಝ್ ಮಾಲಿಕ್, ಕಾರ್ಯದರ್ಶಿ ಅಬ್ದುಲ್ ಗಫೂರ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ ಉಪಸ್ಥಿತರಿದ್ದರು.
ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಈ ವೇಳೆ 40 ಲಕ್ಷ ಮೌಲ್ಯದ 28 ಸಿಮ್ ಬಾಕ್ಸ್ ಗಳು, ವಿವಿಧ ಕಂಪೆನಿಗಳ 1,193 ಸಿಮ್ ಕಾರ್ಡ್ಗಳು ಒಂದು ಲ್ಯಾಪ್ ಟಾಪ್, ಮೂರು ರೂಟರ್ಸ್, ಒಂದು ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನಾಯ್ಡು ಲೇಔಟ್ನಲ್ಲಿರುವ ಕಟ್ಟಡವೊಂದರ ನಾಲ್ಕನೇ ಮಹಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಕೈಗೊಂಡು ಆರೋಪಿಗಳು ಮನೆ ಬಾಡಿಗೆ ಪಡೆದು ಕೃತ್ಯವೆಸಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಕೇರಳ ಮೂಲದ ಆರೋಪಿ ನೇತೃತ್ವದ ತಂಡವು ಹಿಂದಿನ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ಮಿನಿ ಟೆಲಿಫೋನ್ ಎಕ್ಸ್ ಚೇಂಜ್ ರೀತಿಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿಸಿಕೊಂಡಿತ್ತು. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೇರಳ ಮೂಲದ ಆರೋಪಿ ಜೊತೆಗೆ ಕೃತ್ಯ ನಡೆಸುತ್ತಿದ್ದ ಮನೆಯ ಮಾಲಕ ಸಹ ನಾಪತ್ತೆಯಾಗಿದ್ದಾನೆ ಎಂದು ಸಿಸಿಬಿ ತಿಳಿಸಿದೆ. ಆರೋಪಿಗಳು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ಆರ್ಥಿಕ ನಷ್ಟ ಹಾಗೂ ದೇಶದ ಭದ್ರತೆಗೆ ಅಡ್ಡಿ ಉಂಟು ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಈ ಕಾರ್ಯಾಚರಣೆಯ ತನಿಖಾ ವರದಿ ಬಂದ ಬಳಿಕ ಆರೋಪಿಗಳು ಎಷ್ಟು ಪ್ರಕರಣಗಳಲ್ಲಿ ಸಿಮ್ಕಾರ್ಡ್ ನಂಬರ್ಗಳನ್ನು ಬಳಸಿ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಲಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಉಡುಪಿ | 108 ಆಂಬುಲೆನ್ಸ್ ಸೇವೆಗೆ ಸಿಬ್ಬಂದಿ ಕೊರತೆ
►18 ಆಂಬುಲೆನ್ಸ್ಗಳಲ್ಲಿ ಏಕಕಾಲಕ್ಕೆ 6-7 ಮಾತ್ರ ಸಂಚಾರ ► ತುರ್ತು ಕರೆಗಳಿಗೆ ಸ್ಪಂದಿಸಲು ಪರದಾಟ
ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ : ಹೆಣ್ಣೂರು ಶ್ರೀನಿವಾಸ್
ದಸಂಸ ವತಿಯಿಂದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶ
ಮನೆಗೆ ಅಕ್ರಮ ಪ್ರವೇಶ ಆರೋಪ : ಕಡಬ ಠಾಣಾ ಹೆಡ್ ಕಾನ್ಸ್ಟೇಬಲ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಆರೋಪಿಯ ಅಮಾನತು
ಹಜ್ಯಾತ್ರೆ-2026 | ಸೌದಿ ಅರೇಬಿಯಾ ಸರಕಾರ ನೀಡಿರುವ ಸೂಚನೆಗಳನ್ನು ಪಾಲಿಸಿ : ಶೌಕತ್ ಅಲಿ ಸುಲ್ತಾನ್
ಬೆಂಗಳೂರು : ಸೌದಿ ಅರೇಬಿಯಾ ಸರಕಾರದ ಹಜ್ ಮತ್ತು ಉಮ್ರಾ ಸಚಿವಾಲಯದಿಂದ ಪ್ರಕಟಿಸಲಾದ ವೇಳಾಪಟ್ಟಿಯ ಪ್ರಕಾರ 2026ನೆ ಸಾಲಿನ ಹಜ್ ಯಾತ್ರೆಗೆ ಸಂಬಂಧಿಸಿದ ವಸತಿ ಹಾಗೂ ಸೇವಾ ಒಪ್ಪಂದಗಳನ್ನು ಅಂತಿಮಗೊಳಿಸುವ ದಿನಾಂಕ 2026ರ ಫೆಬ್ರವರಿ 1. ವಸತಿ, ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಸೇವೆಗಳ ವ್ಯವಸ್ಥೆಗಾಗಿ ಈ ಕಡ್ಡಾಯ ಒಪ್ಪಂದಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕ ರಾಜ್ಯ ಹಜ್ ಆಯೋಜಕರ ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮೇಲಿನ ವೇಳಾಪಟ್ಟಿಯನ್ನು ಹಾಗೂ ಹಜ್ ಗ್ರೂಪ್ ಆಯೋಜಕರು(ಎಚ್ಜಿಒ) ಮತ್ತು ಖಾಸಗಿ ಟೂರ್ ಆಪರೇಟರ್ಗಳು(ಪಿಟಿಒ) ಪೂರ್ಣಗೊಳಿಸಬೇಕಾದ ವಿವಿಧ ಪೂರ್ವ ಸಿದ್ಧತಾ ಅಗತ್ಯಗಳನ್ನು ಪರಿಗಣಿಸಿ, ಇವರ ಮೂಲಕ ಹಜ್ ನಿರ್ವಹಿಸಲು ಬಯಸುವ ಯಾತ್ರಿಕರು ತಮ್ಮ ಬುಕ್ಕಿಂಗ್ ಅನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವಂತೆ ಕೋರಿದ್ದಾರೆ. ಮೀನಾ ಮತ್ತು ಅರಫಾತ್ ಸೇವೆಗಳು, ಮಕ್ಕಾ ಮತ್ತು ಮದೀನಾದಲ್ಲಿ ವಸತಿ, ಹೊಟೇಲ್ಗಳು, ಕಟ್ಟಡಗಳು, ಸಾರಿಗೆ ಸಂಸ್ಥೆಗಳೊಂದಿಗೆ ಒಪ್ಪಂದಗಳು ಹಾಗೂ ಹಜ್ ಪರವಾನಗಿ (ಪರ್ಮಿಟ್) ಪಡೆಯಲು ಅಗತ್ಯವಿರುವ ಇತರೆ ಕಡ್ಡಾಯ ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಯದೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಯಾತ್ರಿಗಳಿಗೆ ಸಮಸ್ಯೆಗಳು ಎದುರಾಗಬಹುದು ಎಂದು ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ. ಹಜ್ ಯಾತ್ರಿಕರಿಗೆ ತುರ್ತು ಸೂಚನೆ: ಯಾತ್ರಿಕರು ತಕ್ಷಣ ತಮ್ಮ ಹಜ್ ಯೋಜನೆಗಳನ್ನು ಅಂತಿಮಗೊಳಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ(ಹಜ್ ವಿಭಾಗ)ದಿಂದ ಅನುಮೋದಿತ ಮತ್ತು ಕೋಟಾ ಹಂಚಿಕೆ ಹೊಂದಿರುವ ಹಜ್ ಗ್ರೂಪ್ ಆಯೋಜಕರನ್ನು ತಕ್ಷಣ ಸಂಪರ್ಕಿಸಿ, ತಮ್ಮ ದಾಖಲಾತಿಗಳ ದೃಢೀಕರಣ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ. 2026ರ ಹಜ್ ಯಾತ್ರೆಯ ವೇಳಾಪಟ್ಟಿಯಂತೆ ಸೌದಿ ಸಚಿವಾಲಯದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಸೇವೆಗಳನ್ನು ದೃಢೀಕರಿಸಿಕೊಳ್ಳಲು ಯಾತ್ರಿಕರು ಯಾತ್ರೆಯ ಮೊತ್ತದ ಮೊದಲನೆ ಕಂತನ್ನು ಡಿ.15, ಎರಡನೆ ಕಂತನ್ನು 2026ನೆ ಸಾಲಿನ ಜ.15ರೊಳಗೆ ಪಾವತಿಸಬೇಕು. ತಮ್ಮ ಆಯೋಜಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹಜ್ ಯಾತ್ರೆಯನ್ನು ಸುಗಮ, ಸುರಕ್ಷಿತ ಮತ್ತು ಉತ್ತಮವಾಗಿ ಸಂಘಟಿಸಲು ಸಹಕರಿಸುವಂತೆ ಶೌಕತ್ ಅಲಿ ಸುಲ್ತಾನ್ ಮನವಿ ಮಾಡಿದ್ದಾರೆ.

25 C