SENSEX
NIFTY
GOLD
USD/INR

Weather

24    C
... ...View News by News Source

ಮಲ್ಪೆ | ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ದುರಂತ: ಇಬ್ಬರು ಮೃತ್ಯು, ಓರ್ವಳ ಸ್ಥಿತಿ ಗಂಭೀರ

ಮಲ್ಪೆ, ಜ.26: ಕೋಡಿಬೆಂಗ್ರೆ ಬೀಚ್ ಸಮೀಪ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಶಂಕರಪ್ಪ(22) ಹಾಗೂ ಸಿಂಧು(23) ಎಂದು ಗುರುತಿಸಲಾಗಿದೆ. ದೀಶಾ(26) ಎಂಬವರು ಸ್ಥಿತಿ ಗಂಭೀರವಾಗಿದ್ದು, ಧರ್ಮರಾಜ(26) ಎಂಬವರ ಸ್ಥಿತಿ ಸ್ಥಿರವಾಗಿದೆ. ಇವರು ಮೈಸೂರು ಜಿಲ್ಲೆಯ ಸರಸ್ವತೀಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರು ಎನ್ನಲಾಗಿದೆ. ಒಟ್ಟು 14 ಮಂದಿಯ ತಂಡ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಇವರು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿ ಸಮುದ್ರದಲ್ಲಿ ವಿಹಾರಕ್ಕೆ ಹೊರಟಿದ್ದರು. ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಸಮೀಪ ನದಿ-ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಅಕಸ್ಮಿಕವಾಗಿ ಪಲ್ಟಿಯಾಯಿತು. ಇದರಿಂದ ದೋಣಿಯಲ್ಲಿದ್ದ 14 ಮಂದಿ ಸಮುದ್ರದ ನೀರಿಗೆ ಬಿದ್ದರು. ಇವರಲ್ಲಿ ಕೆಲವರು ಮಾತ್ರ ಲೈಫ್‌ಜಾಕೆಟ್ ಧರಿಸಿದ್ದರೆನ್ನಲಾಗಿದೆ. ಕೂಡಲೇ ಇತರ ದೋಣಿಯವರು ನೀರಿಗೆ ಬಿದ್ದವರನ್ನು ರಕ್ಷಿಸಿ ತೀರಕ್ಕೆ ಕರೆದುಕೊಂಡು ಬಂದಿದ್ದು, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಇವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Jan 2026 2:54 pm

ಅಕ್ರಮ ಬಾಂಗ್ಲಾದೇಶಿಗರಿಂದ ಉಗ್ರ ಸಂಘಟನೆಗಳಿಗೆ ಪರೋಕ್ಷ ನೆರವು: ಗಡಿಪಾರು ಮಾಡುವಂತೆ ಶಾಸಕ ಯತ್ನಾಳ್‌ ಪತ್ರ

ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಕರ್ನಾಟಕ ಇಂದು ಅಕ್ರಮ ಬಾಂಗ್ಲಾದೇಶಿ ವಾಸಿಗಳ ತವರೂರಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಾಂಗ್ಲಾದೇಶ ಮೂಲದವರು ಅಕ್ರಮವಾಗಿ ನೆಲೆಸಿದ್ದು, ಆಧಾರ್ ಕಾರ್ಡ್ ಸೇರಿದಂತೆ ಹಲವು ಸರ್ಕಾರಿ ಗುರುತಿನ ಚೀಟಿಗಳನ್ನು ಪಡೆದು, ಸ್ಥಳೀಯ ಭಾರತೀಯ ನಾಗರಿಕರಿಗೆ ಸೇರಬೇಕಾದ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಬಳಸುತ್ತಿರುವುದು ಅತ್ಯಂತ ದುರದೃಷ್ಟಕರ

ಒನ್ ಇ೦ಡಿಯ 26 Jan 2026 2:32 pm

ಕುಂದಾಪುರ : ಕೋಡಿ ಬ್ಯಾರೀಸ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ

ಸ್ವಚ್ಛ ಕಡಲ ತೀರ ಹಸಿರು ಕೋಡಿ ಅಭಿಯಾನ

ವಾರ್ತಾ ಭಾರತಿ 26 Jan 2026 2:31 pm

$5,000 ಗಡಿ ದಾಟಿ ಇತಿಹಾಸ ಬರೆದ ಚಿನ್ನ, ರೂಪಾಯಿ ಲೆಕ್ಕದಲ್ಲಿ ಎಷ್ಟು? ಮುಂದಿನ ಟಾರ್ಗೆಟ್‌ ಏನು? | Explainer

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಐತಿಹಾಸಿಕ ದಾಖಲೆ ಬರೆದಿದ್ದು, 2026ರ ಜನವರಿ 26ರಂದು ಪ್ರತಿ ಔನ್ಸ್‌ಗೆ 5,000 ಡಾಲರ್ ಗಡಿಯನ್ನು ದಾಟಿ 5,091 ಡಾಲರ್‌ಗೆ ತಲುಪಿದೆ. ಭಾರತದಲ್ಲಿ ಎಂಸಿಎಕ್ಸ್‌ನಲ್ಲಿ 10 ಗ್ರಾಂ ಚಿನ್ನದ ದರ 1.55 ಲಕ್ಷ ರೂ. ಆಸುಪಾಸಿನಲ್ಲಿದೆ. ಅಮೆರಿಕ ಮತ್ತು ನ್ಯಾಟೋ ನಡುವಿನ ಗ್ರೀನ್‌ಲ್ಯಾಂಡ್ ಬಿಕ್ಕಟ್ಟು, ಉಕ್ರೇನ್-ಗಾಜಾ ಯುದ್ಧ, ವೆನೆಜುವೆಲಾ ರಾಜಕೀಯ ಅಸ್ಥಿರತೆ ಮತ್ತು ಅಮೆರಿಕದ ಸುಂಕದ ಬೆದರಿಕೆಗಳು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಸೆಳೆಯುತ್ತಿವೆ.

ವಿಜಯ ಕರ್ನಾಟಕ 26 Jan 2026 2:28 pm

ಉಡುಪಿ: ಮಲಬಾರ್ ಗೋಲ್ಡ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ

ಉಡುಪಿ, ಜ.26: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ 77ನೇ ಗಣರಾಜ್ಯೋತ್ಸವನ್ನು ಉಡುಪಿ ಮಳಿಗೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ ಧ್ವಜಾರೋಹಣ ನೆರೆವೇರಿಸಿ ದೇಶಾಭೀಮಾನದ ಕುರಿತು ಹಿತ ವಚನ ನೀಡಿದರು. ಈ ಸಂದರ್ಭದಲ್ಲಿ ಮುಸ್ತಫಾ ಎ.ಕೆ., ಹರೀಶ್ ಎಂ.ಜಿ., ತಂಝೀಮ್ ಶಿರ್ವ, ರಾಘವೇಂದ್ರ ಭಟ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಾರ್ತಾ ಭಾರತಿ 26 Jan 2026 2:26 pm

ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಉಡುಪಿ, ಜ.26: ತೋನ್ಸೆ-ಹೂಡೆ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಉದ್ಯಮಿ ಅಮಾನುಲ್ಲಾಹ್ ಬೇಂಗ್ರೆ ಧ್ವಜಾ ರೋಹಣ ನೆರವೇರಿಸಿದರು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಸಬೀನ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ದಿವ್ಯ ಪೈ, ಅಕಾಡೆಮಿಕ್ ಮುಖ್ಯಸ್ಥ ಅಬ್ದುಲ್ ಹಸೀಬ್, ಅರಬಿಕ್ ಕಾಲೇಜು ಪ್ರಾಂಶುಪಾಲೆ ಕುಲ್ಸುಮ್ ಅಬುಬಕರ್, ಮುಖ್ಯೋಪಾಧ್ಯಯಿನಿಯರಾದ ಸುನಂದ, ಯಾಸ್ಮೀನ್ ಹಾಗೂ ಶಾದತ್ ಉಪಸ್ಥಿತರಿದ್ದರು. ಆಸಿರ ಮೈಮುನ ಸ್ವಾಗತಿಸಿದರು. ಮಿ್ರ ಮುಜಮ್ಮಿಲ್ ಹಾಗು ಆಯೇಶ ಸನ ಕಾರ್ಯಕ್ರಮ ನಿರೂಪಿಸಿದರು. ಫಾತಿಮ ಆನಿಯ ವಂದಿಸಿದರು.

ವಾರ್ತಾ ಭಾರತಿ 26 Jan 2026 2:23 pm

ಸಂವಿಧಾನ ಬದಲಾಯಿಸಿದರೆ ಭಾರತ ಛಿದ್ರ: ಜಯನ್ ಮಲ್ಪೆ

ಉಡುಪಿ, ಜ.26: ಎಲ್ಲಾ ಜಾತಿ, ಧರ್ಮದವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಘನತೆಯನ್ನು ತಂದುಕೊಟ್ಟ ಸಂವಿಧಾನವನ್ನು ಬದಲಾಯಿಸಿ ಮನುಸ್ಮತಿ ಜಾರಿ ತರಲು ಹೊರಟರೆ ಭಾರತ ಛಿದ್ರವಾದಿತು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ. ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಮಣಿಪಾಲದ ರಜತಾದ್ರಿಯ ಅಂಬೇಡ್ಕರ್ ಪ್ರತಿಮೆಯ ಎದುರು ಸೋಮವಾರ ಆಯೋಜಿಸಲಾದ ಸಂವಿಧಾನ ರಕ್ಷಿಸಿ ಭಾರತ ಉಳಿಸಿ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು. ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರೂ ಸುರಕ್ಷಿತ. ಇಲ್ಲವೇ ನಾಶವಾಗುತ್ತೇವೆ. ಹಾಗಾಗಿ ಸಂವಿಧಾನವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು. ಅಂಬೇಡ್ಕರ್ ಯುವಸೇನೆಯ ಪಡುಬಿದ್ರಿ ಶಾಖೆಯ ಗೌರವಾಧ್ಯಕ್ಷ ಕೃಷ್ಣ ಬಂಗೇರ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ನಮ್ಮ ಸಂವಿಧಾನ ಬರೆಯಲು ಹಗಲು ರಾತ್ರಿಯೆನ್ನದೆ ನಿದ್ದೆಗೆಟ್ಟು ಅಸ್ತಮ ರೋಗ ಬಂದರೂ ತನ್ನ ಸಮಾಜದ ಬಹುಜನರಿಗಾಗಿ ಬದುಕನ್ನು ತ್ಯಾಗಮಾಡಿದ್ದಾರೆ. ಅವರ ಋಣದಲ್ಲಿರುವ ನಾವು ಈ ಸಂವಿಧಾನವನ್ನು ಉಳಿಸಿಕೊಳ್ಳಲ್ಲೇ ಬೇಕು ಎಂದು ಹೇಳಿದರು. ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ನಮ್ಮ ಸಂವಿಧಾನವನ್ನು ಕಳೆದುಕೊಳ್ಳುವ ಆತಂಕ ಈಗ ಎದುರಾಗಿದೆ. ಸಂವಿಧಾನವೆನ್ನುವುದು ಒಂದು ಪುಸ್ತಕವಲ್ಲ. ನಮ್ಮ ಬದುಕಿನ ವಿಧಾನ. ಅದು ನಮ್ಮ ಕೈತಪ್ಪಿ ಹೋಗುತ್ತಿದೆ, ನಾವೀಗ ಅನೇಕ ದುಷ್ಟ ಸಮೀಕರಣಗಳ ನಡುವೆ ನಿಂತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು ಮಾತನಾಡಿದರು. ದಲಿತ ನಾಯಕರಾದ ವಸಂತ ಪಾದೆಬೆಟ್ಟು, ಸುಜೀತ್ ಪಡುಬಿದ್ರಿ, ಕೃಷ್ಣ ಶ್ರೀಯಾನ್ ಮಲ್ಪೆ, ಅರುಣ್ ಸಾಲ್ಯಾನ್, ಸತೀಶ್ ಮಂಚಿ, ಸುಧಾಕರ ಪಡುಬಿದ್ರೆ, ಭಗವಾನ್ ಮಲ್ಪೆ, ರತನ್ ನೆರ್ಗಿ, ಶಶಿಕಾಂತ್ ಲಕ್ಷ್ಮಿನಗರ, ಪ್ರಸಾದ್ ಮಲ್ಪೆ, ಶಂಕರ್ ಪಡುಬಿದ್ರಿ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಸುಕೇಶ್ ನಿಟ್ಟೂರು, ಅಶೋಕ್ ಪುತ್ತೂರು, ರವಿರಾಜ್ ಲಕ್ಷ್ಮೀನಗರ, ಕುಮಾರಿ ಧನುಜ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಕಪ್ಪೆಟ್ಟು ಸ್ವಾಗತಿಸಿದರು. ದೀಪಕ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 26 Jan 2026 2:21 pm

ಹಾಸನದಿಂದ ಮೊಳಗಿದ ರಣಕಹಳೆ: ದಳಪತಿಗಳ ಪ್ಲ್ಯಾನ್ ಏನು? ಕಾಂಗ್ರೆಸ್‌, ಬಿಜೆಪಿ ಎರಡೂ ಹೈರಾಣ

ರಾಜ್ಯದಲ್ಲಿ ನಾಯಕತ್ವ ಕೊರತೆಯಿಂದ ಸೈಲೆಂಟಾಗಿದ್ದ ಜೆಡಿಎಸ್ ಇದೀಗ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಹಾಸನದಲ್ಲಿ ಜೆಡಿಎಸ್ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಅಬ್ಬರದ ಮಾತುಗಳು ಗಮನ ಸೆಳೆಯುವಂತಿದೆ. ಇನ್ನು ಎಚ್‌ಡಿ ಕುಮಾರಸ್ವಾಮಿ ಕೂಡಾ ಸರ್ಕಾರದ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ದಳಪತಿಗಳ ಸಂದೇಶ ಏನು ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Jan 2026 2:12 pm

ಉತ್ತರಾಖಂಡ : ಬದರಿನಾಥ-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧ

ಗಂಗೋತ್ರಿ ಧಾಮಕ್ಕೆ ಹಿಂದೂಯೇತರರ ಪ್ರವೇಶವನ್ನು ಶ್ರೀ ಗಂಗೋತ್ರಿ ದೇವಸ್ಥಾನ ಸಮಿತಿ ನಿಷೇಧಿಸಿದೆ. ಈ ನಿರ್ಬಂಧವು ಬದ್ರಿನಾಥ್, ಕೇದಾರನಾಥ ಮತ್ತು ಮುಖ್ಬಾಗೂ ಅನ್ವಯಿಸುತ್ತದೆ. ಬಿಜೆಪಿ ನಾಯಕ ಹೇಮಂತ್ ದ್ವಿವೇದಿ ಅವರು ಬಿಕೆಟಿಸಿ ವ್ಯಾಪ್ತಿಯ ಎಲ್ಲಾ ದೇವಾಲಯಗಳಿಗೂ ಈ ಪ್ರಸ್ತಾವ ಮಂಡಿಸುವುದಾಗಿ ತಿಳಿಸಿದ್ದಾರೆ. ಉತ್ತರಾಖಂಡದ ಧಾರ್ಮಿಕ ಸಂಪ್ರದಾಯಗಳ ಸಂರಕ್ಷಣೆ ಮುಖ್ಯ ಎಂದು ಅವರು ಹೇಳಿದ್ದಾರೆ.

ವಿಜಯ ಕರ್ನಾಟಕ 26 Jan 2026 2:01 pm

ಚುನಾವಣೆಯಲ್ಲಿ ಮಾತ್ರ ರಾಜಕೀಯ, ಅಭಿವೃದ್ಧಿಗಿಲ್ಲ: ಸಚಿವೆ ಹೆಬ್ಬಾಳ್ಕರ್

ಬೈಂದೂರು, ಜ.26: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಮಯದಲ್ಲಿ ಅಭಿವೃದ್ಧಿ ಕಡೆಗಷ್ಟೆ ಗಮನ ಹರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೈಂದೂರು ಉತ್ಸವದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡುತಿದ್ದರು. ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ, ಅಭಿವೃದ್ಧಿಗಷ್ಟೇ ಆದ್ಯತೆ ನೀಡುತ್ತೇನೆ ಎಂದು ಅವರು ತಿಳಿಸಿದರು. ಮಹಾತ್ಮ ಗಾಂಧಿ ಹೇಳಿದಂತೆ, ಭಾರತದ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾಗಬೇಕು, ಮಹಿಳೆಯರು ಸಬಲೀಕರಣ ಆಗಬೇಕು ಎಂದ ಅವರು, ನಾವು ಜನಪ್ರತಿನಿಧಿಗಳಾಗಿ ಸಾಮಾಜಿಕ ದೃಷ್ಟಿಯಿಂದ ನೋಡಬೇಕು, ಸಾಮಾಜಿಕ ಕಾಳಜಿ, ಬದ್ಧತೆ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿ, ಉಳಿದ ಸಮಯದಲ್ಲಿ ಅಭಿವೃದ್ಧಿಗೆ ಗಮನಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಎಎಸ್ಪಿ ಸುಧಾಕರ್ ನಾಯ್ಕ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.   ‘ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ, ಮಹಿಳೆಯರ ಸಬಲೀಕರಣ ಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ ಯೋಜನೆಗಳಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನ ಆಗಿದೆ. ನಮ್ಮ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮುಂದುವರಿದ ಭಾಗವಾಗಿ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್, ಗೃಹಲಕ್ಷ್ಮಿ ಡಿಜಿಟಲ್ ಆ್ಯಪ್ ಶೀಘ್ರವೆ ಜಾರಿಗೆ ಬರಲಿವೆ’ -ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು   ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶವನ್ನು ಪಂಚಾಯತ್ ಆಗಿ ರಚನೆ ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ರೈತರಿಗೆ ಅನ್ಯಾಯ ಆಗದಂತೆ ಕ್ರಮಕೈಗೊಳ್ಳಲಾಗುವುದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಾರ್ತಾ ಭಾರತಿ 26 Jan 2026 1:59 pm

ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ

ಉಳ್ಳಾಲ: ಗಣರಾಜ್ಯೋತ್ಸವದ ಮಹತ್ವ, ತತ್ವ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅವರು ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ ನಡೆದ ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಿಸಿಲಿನಲ್ಲೂ ನಿಂತು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಿಸುವುದು ಅವರ ವ್ಯಕ್ತಿತ್ವ ಮತ್ತು ಶಿಸ್ತಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. 35 ವರ್ಷಗಳ ಹಿಂದೆ ನಾನು ನೆಹರು ಮೈದಾನದಲ್ಲಿ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದೆ. ಇಂದು ನೀವೆಲ್ಲ ನನಗೆ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯ. ಇದೇ ರೀತಿ ಇಂದಿನ ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸಲು ಧೈರ್ಯ ನೀಡಿರುವುದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ. ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಗೆ  186 ಕೋಟಿ ರೂ. ಹಾಗೂ ಕುಡಿಯುವ ನೀರಿನ ಯೋಜನೆಗೆ  256 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಬೇಕು ಎಂದರು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ, ಜೊತೆಗೆ ಅಬ್ಬಕ್ಕ ಸರ್ಕಲ್‌ನಲ್ಲಿರುವ ರಾಣಿ ಅಬ್ಬಕ್ಕ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹಳೆಕೋಟೆ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ನಿರೀಕ್ಷಕ ಪ್ರಮೋದ್, ಉಪ ತಹಶೀಲ್ದಾರ್ ವಿಜಯ ವಿಕ್ರಮ್, ಪೌರಾಯುಕ್ತ ಸಂತೋಷ್, ಗ್ರಾಮಕರಣಿಕ ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಮುಸ್ತಫಾ ಅಬ್ದುಲ್ಲಾ, ಗ್ರಾಮಕರಣಿಕ ಲಿಂಗಪ್ಪ, ನಗರಸಭೆ ಕಂದಾಯ ಅಧಿಕಾರಿ ನವೀನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮನ್ಸೂರ್ ಮಂಚಿಲ, ಮುಸ್ತಫಾ ಮಲಾರ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ವಕ್ಫ್ ಸದಸ್ಯ ರಝಿಯಾ ಇಬ್ರಾಹೀಮ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಉಳ್ಳಾಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್, ಸೋಮೇಶ್ವರ ಪುರಸಭೆ ಸದಸ್ಯ ಪುರುಷೋತ್ತಮ ಶೆಟ್ಟಿ, ಸಲಾಮ್ ಉಚ್ಚಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತ್ಯಾಗಂ ಹರೇಕಳ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ಹಾಗೂ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.        

ವಾರ್ತಾ ಭಾರತಿ 26 Jan 2026 1:52 pm

ಕಾಸರಗೋಡು: 77 ನೇ ಗಣರಾಜ್ಯೋತ್ಸವ; ಅರಣ್ಯ ಸಚಿವ ಶಶೀಂದ್ರನ್ ಧ್ವಜಾರೋಹಣ

ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆದ ಧ್ವಜಾರೋಹಣವನ್ನು ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ನೆರವೇರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಪಿ. ಅಖಿಲ್ ಅವರು ಪರೇಡ್‌ನಲ್ಲಿ ಗೌರವ ವಂದನೆ ಸ್ವೀಕರಿಸಿದರು. ಪರೇಡ್‌ನ ಪ್ರಥಮ ಕಮಾಂಡೆಂಟ್ ಆಗಿ ಶಿವಂ ಐಪಿಎಸ್ ಹಾಗೂ ದ್ವಿತೀಯ ಇನ್‌ಕಮಾಂಡ್ ಆಗಿ ಕಾಸರಗೋಡು ವಿಶೇಷ ಶಾಖೆಯ ಸಬ್‌ಇನ್‌ಸ್ಪೆಕ್ಟರ್ ಎಂ. ಸದಾಶಿವನ್ ಪಥಸಂಚಲನಕ್ಕೆ ನೇತೃತ್ವ ವಹಿಸಿದರು. ಕಾಸರಗೋಡು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿ ಸಬ್‌ಇನ್‌ಸ್ಪೆಕ್ಟರ್ ಗೋಪಿನಾಥನ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ವಿದ್ಯಾನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಎಸ್. ಅನೂಪ್ ನೇತೃತ್ವದ ಸ್ಥಳೀಯ ಪೊಲೀಸರು, ಸಬ್‌ಇನ್‌ಸ್ಪೆಕ್ಟರ್ ಎಂ.ವಿ. ಶರಣ್ಯ ನೇತೃತ್ವದ ಕಾಸರಗೋಡು ಮಹಿಳಾ ಕೋಶದ ಮಹಿಳಾ ಪೊಲೀಸ್ ಪಡೆ, ಅಬಕಾರಿ ನಿರೀಕ್ಷಕ ಜಿ. ಆದರ್ಶ್ ನೇತೃತ್ವದ ಅಬಕಾರಿ ವಿಭಾಗ, ಕೆ.ವಿ. ಬಿಜು ನೇತೃತ್ವದ ಕಾಸರಗೋಡು ಸಮುದಾಯ ಪೊಲೀಸ್ ವಿದ್ಯಾರ್ಥಿ ಪೊಲೀಸ್ ಪಡೆ, ಕಾಸರಗೋಡು ಸರ್ಕಾರಿ ಕಾಲೇಜಿನ ಹಿರಿಯ ವಿಭಾಗದ ಎನ್‌ಸಿಸಿ ಪಡೆಗಳು ಪರೇಡ್‌ನಲ್ಲಿ ಭಾಗವಹಿಸಿದವು. ಹಿರಿಯ ಅಂಡರ್ ಆಫೀಸರ್ ಕೆ. ದರ್ಶನ ನೇತೃತ್ವದಲ್ಲಿ ಕಾಞಂಗಾಡ್‌ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ, ಸಾರ್ಜೆಂಟ್ ಎಚ್.ಆರ್. ಧನ್ವಿ ನೇತೃತ್ವದ ಕಾಞಂಗಾಡ್‌ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಜೂನಿಯರ್ ಎನ್‌ಸಿಸಿ, ಸಿ.ಕೆ. ಮೊಹಮ್ಮದ್ ಶಿಸನ್ ನೇತೃತ್ವದ ಉಳಿಯತುಡ್ಕದ ಜೈ ಮಾತಾ ಸೀನಿಯರ್ ಸೆಕೆಂಡರಿ ಶಾಲೆಯ ಬ್ಯಾಂಡ್ ಪಾರ್ಟಿ, ಆರನ್ ಶಿವ ನೇತೃತ್ವದ ಕರಡುಕ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯ ಜೂನಿಯರ್ ಎನ್‌ಸಿಸಿ ಪಡೆ, ಜಿ.ಎಚ್.ಎಸ್.ಎಸ್‌ನ ವಾಯುಪಡೆ ಜೂನಿಯರ್ ಎನ್‌ಸಿಸಿ ಪಡೆಗಳು ಭಾಗವಹಿಸಿದ್ದವು. ಸಾರ್ಜೆಂಟ್ ಎಂ. ನಿರಂಜನ್ ನೇತೃತ್ವದ ಚೆಮ್ಮನಾಡ್ ಶಾಲೆ, ನೀಲೇಶ್ವರಂ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಜೂನಿಯರ್ ಡಿವಿಷನ್ ಎನ್‌ಸಿಸಿ, ಉದಿನೂರ್ ಹೈಯರ್ ಸೆಕೆಂಡರಿ ಶಾಲೆಯ ನೇವಲ್ ವಿಂಗ್ ಸ್ಟೂಡೆಂಟ್ ಪೊಲೀಸ್ ಕೆಡೆಟ್, ದಿಯಾ ಪಾರ್ವತಿ ನೇತೃತ್ವದ ಎನ್‌ಎಚ್‌ಎಸ್‌ಎಸ್ ಪೆರ್ಡಾಲ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಕೆ.ಆರ್. ಅನಸ್ವರ ನೇತೃತ್ವದ ಜಿ.ಎಂ.ಆರ್. ಎಚ್‌ಎಸ್‌ಎಸ್ ಗರ್ಲ್ಸ್ ಪರವನಡುಕ್ಕಂ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಶಿವನ್ಯಾ ನೇತೃತ್ವದ ಕುಂದಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಪಿ.ಪಿ. ಆದಿಲ್ ರಾಜ್ ನೇತೃತ್ವದ ಕಾಞಂಗಾಡ್ ಕ್ರೈಸ್ಟ್ ಸಿ.ಎಂ.ಐ. ಪಬ್ಲಿಕ್ ಸ್ಕೂಲ್ ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಪಥಸಂಚಲನ ನಡೆಸಿದವು. ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್, ಸಿ.ಎಚ್. ಕುಂಞಬು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಉಪಾಧ್ಯಕ್ಷ ಕೆ.ಕೆ. ಸೋಯಾ, ಕಾಸರಗೋಡು ಪುರಸಭೆ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಾ ಕುಂಜಿ ಚೆರ್ಕಳ, ಉಪಾಧ್ಯಕ್ಷೆ ಉಷಾ ಅರ್ಜುನ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತನ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.      

ವಾರ್ತಾ ಭಾರತಿ 26 Jan 2026 1:47 pm

77th Republic Day: ಸರ್ಕಾರದ ಸಾಧನಗಳೇ ಹೈಲೈಟ್ಸ್; ರಾಜ್ಯ ಸರ್ಕಾರದ ಭಾಷಣ ಯಥಾವತ್ ಓದಿದ ರಾಜ್ಯಪಾಲರು

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಜಿ ರಾಮ್ ಜಿಗೆ ವಿರೋಧ ಸೇರಿದಂತೆ 11 ಪ್ಯಾರಾಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಂಶಗಳು ಇದ್ದವು. ಈ ಕಾರಣಕ್ಕಾಗಿ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಪೂರ್ತಿ ಓದದೆ ತೆರಳಿದ್ದರು. ಇದು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹಾಗಾಗಿ ರಾಜ್ಯಪಾಲರ ಗಣರಾಜ್ಯೋತ್ಸವದ ಭಾಷಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. 77

ಒನ್ ಇ೦ಡಿಯ 26 Jan 2026 1:34 pm

ನೇರಳಕಟ್ಟೆ: ಯಂಗ್ ಚಾಲೆಂಜರ್ಸ್ ಅಧ್ಯಕ್ಷರಾಗಿ ಉಪೇಂದ್ರ ಆಚಾರ್ಯ ಆಯ್ಕೆ

ವಿಟ್ಲ: ನೇರಳಕಟ್ಟೆ–ಗಣೇಶನಗರದ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಇದರ 2026–27ನೇ ಸಾಲಿನ ಅಧ್ಯಕ್ಷರಾಗಿ ಉಪೇಂದ್ರ ಆಚಾರ್ಯ ಆಯ್ಕೆಯಾಗಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ವಿಶು ಕುಮಾರ್, ಉಪಾಧ್ಯಕ್ಷರಾಗಿ ಲೋಕೇಶ್, ಕೋಶಾಧಿಕಾರಿಯಾಗಿ ಹರೀಶ್, ಗೌರವ ಕಾರ್ಯದರ್ಶಿಯಾಗಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಶರತ್, ಸಂಘಟನಾ ಕಾರ್ಯದರ್ಶಿಯಾಗಿ ಗೌರೀಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಂಪತ್ ಹಾಗೂ ಅಕ್ಷತ್, ಕ್ರೀಡಾ ಕಾರ್ಯದರ್ಶಿಗಳಾಗಿ ಶಶಿಕಿರಣ್ ಮತ್ತು ಚರಣ್ ಅವರು ಆಯ್ಕೆಯಾದರು.

ವಾರ್ತಾ ಭಾರತಿ 26 Jan 2026 1:33 pm

ಅನೈತಿಕ ಚಟುವಟಿಕೆ ಕಡಿವಾಣಕ್ಕೆ 101 ಸಿಸಿಟಿವಿ ಅಳವಡಿಕೆ: ಕೆಕೆಆರ್‌ ಡಿಬಿಯ 1.50 ಕೋಟಿ ಅನುದಾನ ಬಳಕೆ, ಎಲ್ಲೆಲ್ಲಿ ಇರಲಿದೆ ಕ್ಯಾಮೆರಾ ಕಣ್ಗಾವಲು?

ಕಳವು ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿಂಧನೂರು ನಗರದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ 101 ಸಿಸಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಆರಂಭವಾಗಿದೆ. ಕಳವು, ಅಹಿತಕರ ಘಟನೆಗಳ ಮೇಲೆ ನಿಗಾ ಇಡಲು ನಗರದ 40 ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದೆ. ಈ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದ್ದು, ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಗುರಿಯೊಂದಿಗೆ ಕಂಟ್ರೋಲ್‌ ರೂಂ ಮೂಲಕ ನಗರದ ಭದ್ರತೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ.

ವಿಜಯ ಕರ್ನಾಟಕ 26 Jan 2026 1:32 pm

ಸಿಐಟಿಯು ನೇತೃತ್ವದಲ್ಲಿ ನಾಲ್ಕು ದಿನಗಳ ಬೆಳ್ತಂಗಡಿ–ಮಂಗಳೂರು ಕಾಲ್ನಡಿಗೆ ಜಾಥಾ

ಕಾರ್ಮಿಕ–ರೈತ ವಿರೋಧಿ ಕಾನೂನುಗಳಿಂದ ಉದ್ಯೋಗ ಖಾತ್ರಿ ಯೋಜನೆ ಹತ್ಯೆ: ಕೆ. ಯಾದವ ಶೆಟ್ಟಿ

ವಾರ್ತಾ ಭಾರತಿ 26 Jan 2026 1:28 pm

ಕ್ರಸ್ಟ್ ಗೇಟ್ ವಿಚಾರದಲ್ಲಿ ರಾಜಕೀಯ ಸಲ್ಲ: ಮಳೆ ಆರಂಭ ಆದಕೂಡಲೇ ತುಂಗಭದ್ರಾ ಜಲಾಶಯಕ್ಕೆ ನೀರು: ಸಚಿವ ಶಿವರಾಜ ತಂಗಡಗಿ ಭರವಸೆ

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ವಿಚಾರದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಮೂರು ರಾಜ್ಯಗಳ ಪಾಲುದಾರಿಕೆಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಜನವರಿ ಅಂತ್ಯದೊಳಗೆ ಆರು ಗೇಟ್‌ಗಳ ಅಳವಡಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವಿಜಯ ಕರ್ನಾಟಕ 26 Jan 2026 1:27 pm

ಬೆಂಗಳೂರು | ಜಯನಗರದ ಭಾರತ್ ವಿದ್ಯಾ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು: ಜಯನಗರದ ಭಾರತ್ ವಿದ್ಯಾ ಸಂಸ್ಥೆಯ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಲ್. ಶ್ರೀಹರ್ಷ ಧ್ವಜಾರೋಹಣ ನೆರವೇರಿಸಿದರು. ಕಾನೂನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಿರ್ಮಲ್ ಕುಮಾರ್ ಕೆ.ಆರ್., ಉಪಾಧ್ಯಕ್ಷ ಬಿ.ಸಿ.ಶಿವಲಿಂಗೇಗೌಡ, ಪ್ರೊ.ಎನ್.ಎಸ್.ವಿಜಯ, ಖಜಾಂಚಿ ಬಿ.ಎಲ್. ನಂದಿನಿ, ಪ್ರಾಂಶುಪಾಲೆ ನಜ್ಬುನ್ನೀಸಾ ಮತ್ತಿತರರು ಉಪಸ್ಥಿತರಿದ್ದರು.                

ವಾರ್ತಾ ಭಾರತಿ 26 Jan 2026 1:17 pm

Gold Rate Rise: ಜನವರಿ ತಿಂಗಳಾಂತ್ಯದಲ್ಲೂ ಭರ್ಜರಿ ಹೆಚ್ಚಳ ಕಂಡ ಚಿನ್ನದ ದರ : ಬೆಳ್ಳಿ 3.40 ಲಕ್ಷಕ್ಕೇರಿಕೆ!

ಸದ್ಯಕ್ಕೆ ಚಿನ್ನ ಬೆಳ್ಳಿಯ ರಾಕೆಟ್ ವೇಗದ ಏರಿಕೆ ತಡೆಯೇ ಇಲ್ಲದಂತೆ ಪ್ರತಿದಿನ ಏರಿಕೆ ಆಗುತ್ತಾ ಹೋಗುತ್ತಿದೆ. ಅಂತರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಚಿನ್ನ ಬೆಳ್ಳಿ ಬೆಲೆ ಏರತೊಡಗಿದೆ.

ವಿಜಯ ಕರ್ನಾಟಕ 26 Jan 2026 1:08 pm

ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ: ರಾಜಸ್ಥಾನಿ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?

ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕಾಲದಿಂದಲೂ ಒಂದಲ್ಲ ಒಂದು ವಿಶೇಷ ಪೇಟ ಧರಿಸಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭ ವಿಶೇಷ ಪೇಟೆ ಧರಿಸೋದು ಸಾಮಾನ್ಯ. ಅದರಂತೆ, ಪ್ರಧಾನಿ ಅವರು ಈ ಬಾರಿ ಕೆಂಪು ಹಳದಿ ಹಸಿರು ಮಿಶ್ರಿತ ಪೇಟ ಧರಿಸಿ ಸಾರ್ವಜನಿಕರ ಗಮನ ಸೆಳೆದರು. ಆ ರಾಜಸ್ಥಾನಿ ಶೈಲದ ಪೇಟದ ದರ ಎಷ್ಟು ಎನ್ನುವುಉ ಲೇಖನದಲ್ಲಿದೆ

ವಿಜಯ ಕರ್ನಾಟಕ 26 Jan 2026 1:08 pm

ಬಿಜೆಪಿ ಕಚೇರಿ ಮುತ್ತಿಗೆ ಕೈಬಿಟ್ಟ ಕಾಂಗ್ರೆಸ್, ಜಿ ರಾಮ್ ಜಿ ವಿರುದ್ಧ ಲೋಕಭವನ ಚಲೋ

ಮನರೇಗಾ ಹಾಗೂ ವಿ ಬಿ ಜಿ ರಾಮ್ ಜಿ ನಡುವಿನ ಫೈಟ್ ತೀವ್ರಗೊಂಡಿದೆ. ಜಂಟಿ ಅಧಿವೇಶದಲ್ಲಿ ಜಿ ರಾಮ್ ಜಿ ಕುರಿತಾಗಿ ಸರ್ಕಾರ ರಚನೆ ಮಾಡಿದ್ದ ಭಾಷಣವನ್ನು ರಾಜ್ಯಪಾಲರು ಓದಿಲ್ಲ. ಹೀಗಿರುವಾಗ ಇದು ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಕಾಂಗ್ರೆಸ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ. ಈ ಕುರಿತಾಗಿ ಯಾರು ಏನು ಹೇಳಿದ್ದಾರೆ ಎಂಬ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 26 Jan 2026 1:07 pm

KIWG 2026: ಗಣರಾಜ್ಯೋತ್ಸವದ ದಿನವೇ ಐಸ್‌ ಹಾಕಿಯಲ್ಲಿ ಲಡಾಖ್‌ ಸ್ಕೌಟ್ಸ್‌ ಸಾಧನೆ

ಭಾರತ ತನ್ನ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದ ಗಡಿಗಳ ರಕ್ಷಣೆಯಲ್ಲೇ ಸೀಮಿತವಾಗದೆ ಕ್ರೀಡಾ ಕ್ಷೇತ್ರದಲ್ಲೂ ವಿಶಿಷ್ಟ ಕೊಡುಗೆ ನೀಡುತ್ತಿರುವ ಲಡಾಖ್‌ ಸ್ಕೌಟ್ಸ್‌ ಪಡೆಯು ದೇಶದ ಗಮನ ಸೆಳೆಯುತ್ತಿದೆ. ಭಾರತೀಯ ಸೇನೆಯ ವಿಶೇಷ ಪರ್ವತ ಪಡೆಯಾದ ಲಡಾಖ್‌ ಸ್ಕೌಟ್ಸ್‌ ಇಂದು ಭಾರತದಲ್ಲಿ ಹಾಕಿ ಕ್ರಾಂತಿಗೆ ಮುನ್ನುಡಿಯಾಗಿ ನಿಂತಿದ್ದು, ಕಾಲ್ ಆಫ್ ಡ್ಯೂಟಿಗಿಂತಲೂ ಮೀರಿದ ಸೇವಾಭಾವನೆಗೆ ಸಾಕ್ಷಿಯಾಗಿದ್ದಾರೆ.

ಒನ್ ಇ೦ಡಿಯ 26 Jan 2026 1:07 pm

ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆ: ಬದಲಾಗುತ್ತಾ ಆದಾಯ ತೆರಿಗೆ ಸ್ಲ್ಯಾಬ್? ಹೆಚ್ಚುತ್ತಾ ಗೃಹ ಸಾಲದ ಡಿಡಕ್ಷನ್‌ ಲಿಮಿಟ್‌?

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸಂಬಳದ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ಇಳಿಕೆಯ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆ, ಗೃಹ ಸಾಲದ ಬಡ್ಡಿ ಕಡಿತದ ಮಿತಿಯನ್ನು 2 ಲಕ್ಷ ರೂ. ನಿಂದ 5 ಲಕ್ಷ ರೂ.ಗೆ ಏರಿಸುವುದು ಮತ್ತು ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಅಲ್ಲದೆ, ನಿವೃತ್ತಿ ನಿಧಿಯ ಮೇಲಿನ ಡಬಲ್ ಟ್ಯಾಕ್ಸೇಷನ್ ರದ್ದು ಮತ್ತು ಮೊಬೈಲ್ ಉದ್ಯೋಗಿಗಳ ತೆರಿಗೆ ಗೊಂದಲ ನಿವಾರಣೆಯಾಗಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ.

ವಿಜಯ ಕರ್ನಾಟಕ 26 Jan 2026 12:54 pm

ಕೇರಳ| ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದ ಸಚಿವ ರಾಮಚಂದ್ರನ್

ಕಣ್ಣೂರು: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಸಚಿವರು ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಉದ್ಘಾಟನಾ ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಅವರನ್ನು ತಕ್ಷಣ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದುಬಿದ್ದರೂ, ಆಂಬ್ಯುಲೆನ್ಸ್‌ಗೆ ಕರೆದೊಯ್ಯುವಾಗ ಪ್ರಜ್ಞೆ ಮರಳಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 26 Jan 2026 12:53 pm

ಮಲ್ಪೆ | ಕೋಡಿಬೆಂಗ್ರೆ ಸಮುದ್ರದಲ್ಲಿ ಪ್ರವಾಸಿಗರಿದ್ದ ದೋಣಿ ಪಲ್ಟಿ: ಹಲವು ಮಂದಿ ಅಸ್ವಸ್ಥ

ಮಲ್ಪೆ : ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಇಬ್ಬರು ಗಂಭೀರ ಸೇರಿದಂತೆ ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ. ರೆಸಾರ್ಟ್‌ನಲ್ಲಿ ಉಳಿದಿದ್ದ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇದರಲ್ಲಿ ಸುಮಾರು 10 ಮಂದಿ ಪ್ರವಾಸಿಗರಿದ್ದರು. ಇವರು ಯಾರು ಕೂಡ ಲೈಫ್ ಜಾಕೆಟ್ ಧರಿಸಿಲ್ಲ ಎಂದು ತಿಳಿದುಬಂದಿದೆ. ನೀರಿನ ಮಧ್ಯೆ ದೋಣಿ ಅಕಸ್ಮಿಕವಾಗಿ ಪಲ್ಟಿಯಾಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದರೆಂದು ತಿಳಿದುಬಂದಿದೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿ ಖಾಸಗಿ ಚಿಕಿತ್ಸೆ ಪಡೆಯುಯತ್ತಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಧಾವಿಸಿದ್ದ ಪರಿಶೀಲನೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 26 Jan 2026 12:49 pm

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಭಾನುವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್, ಭಾರತದಲ್ಲಿ ಸಂವಿಧಾನ ಜಾರಿಯಾದ ದಿನವೇ ಗಣರಾಜ್ಯೋತ್ಸವವಾಗಿದ್ದು, ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು ಹೇಳಿದರು. ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶ್‌ಬಾಬು ಮಾತನಾಡಿ, ಗಣರಾಜ್ಯೋತ್ಸವವು ಭಾರತೀಯರ ಹೆಮ್ಮೆಯ ರಾಷ್ಟ್ರೀಯ ಹಬ್ಬವಾಗಿದೆ. ಪ್ರತಿಯೊಬ್ಬ ನಾಗರಿಕರೂ ಈ ಹಬ್ಬದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶಪ್ರೇಮ ಹಾಗೂ ರಾಷ್ಟ್ರೀಯತೆಯನ್ನು ವ್ಯಕ್ತಪಡಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಗಿರಿಧರ ಸೊಂತ, ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಖಜಾಂಚಿ ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರುಗಳಾದ ಬಿ. ಮಹಾರುದ್ರಗೌಡ, ಡಾ. ರಮೇಶ್ ಗೋಪಾಲ, ಉಪಸಮಿತಿಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Jan 2026 12:35 pm

ಕಾಂಗ್ರೆಸ್ ನಾಯಕರೊಬ್ಬರಿಗೆ ಬೇರೆ ಪಕ್ಷದಿಂದ ಸಿಎಂ ಯೋಗ - ಭವಿಷ್ಯ : ಯಾರು ಆ ನಾಯಕ?

Prakash Ammannaya Prediction : ರಾಜಕೀಯ ಎಂದೂ ನಿಂತ ನೀರಲ್ಲ ಎನ್ನುವ ಮಾತು ರಾಜಕಾರಣದಲ್ಲಿ ಬಹಳಷ್ಟು ಬಾರಿ ನಿಜವಾಗಿದ್ದಿದೆ. ಅಧಿಕಾರಕ್ಕಾಗಿ ರಾಜಕೀಯ ನಾಯಕರು ಪಾರ್ಟಿಯಿಂದ ಪಾರ್ಟಿಗೆ ಹೈಜಂಪ್ ಮಾಡಿದ್ದಿದೆ. ಕಾಂಗ್ರೆಸ್ಸಿನಲ್ಲಿದ್ದರೂ, ಪಕ್ಷದ ನಾಯಕರ ವಿರುದ್ದ ಸದಾ ತಿರುಗಿ ಬೀಳುವ ಕಾಂಗ್ರೆಸ್ ನಾಯಕರೊಬ್ಬರ ಜಾತಕ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ನುಡಿದಿದ್ದಾರೆ.

ವಿಜಯ ಕರ್ನಾಟಕ 26 Jan 2026 12:28 pm

ನರೇಗಾ ರದ್ದುಪಡಿಸಿ ಕಾರ್ಮಿಕರ ಉದ್ಯೋಗ ಹಕ್ಕು ಕಸಿದುಕೊಂಡ ಕೇಂದ್ರ ಸರಕಾರ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯ ಡಿ.ಎ.ಆರ್.ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ

ವಾರ್ತಾ ಭಾರತಿ 26 Jan 2026 12:28 pm

UDUPI | ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧರಿಗೆ ಅವಮಾನ: ವಿಡಿಯೋ ವೈರಲ್

ಕೋಟ, ಜ.26: ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಗಣರಾಜ್ಯೊತ್ಸವದ ಮುನ್ನ ದಿನ ರವಿವಾರ ರಾತ್ರಿ ನಿವೃತ್ತ ಯೋಧರೊಬ್ಬರಿಗೆ ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯೋಧ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಸರಗೋಡು ಜಿಲ್ಲೆಯ ಶ್ಯಾಮರಾಜ್, ಇವಿ 21ನೇ ಪ್ಯಾರಾ ಸ್ಪೇಶಲ್ ಫೋರ್ಸ್ ನ ಪ್ಯಾರಾಟ್ರೂಪರ್ ಆಗಿದ್ದು, ಇವರು ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದರು. ಅವರಲ್ಲಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದ್ದರೂ, ಟೋಲ್ ವಿನಾಯಿತಿ ನೀಡುವುದಕ್ಕೆ ಟೋಲ್ ಪ್ಲಾಝಾ ಸಿಬ್ಬಂದಿ ನಿರಾಕರಿಸಿದರೆ ನ್ನಲಾಗಿದೆ. ಶ್ಯಾಮರಾಜ್ ಅವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪೋಸ್ಟಿಂಗ್ ಗಾಗಿ ಸಾಸ್ತಾನ ಮೂಲಕ ತೆರಳುತ್ತಿದ್ದರು. ಈ ಬಗ್ಗೆ ಸ್ವತಃ ಶ್ಯಾಮರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ದೇಶದ ಎಲ್ಲಾ ಟೋಲ್ ಗಳಲ್ಲಿ ವಿನಾಯಿತಿ ನೀಡಿದರೂ ಸಾಸ್ತಾನ ಟೋಲ್ ನಲ್ಲಿ ವಿನಾಯಿತಿ ನೀಡಿಲ್ಲ. ಇದಕ್ಕೆ ಸಂಬಂಧಿತ ಆರ್ಎಂಎ ನೀಡಿದ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಸಿಬ್ಬಂದಿ ವಿನಾಯಿತಿ ನೀಡಿಲ್ಲ ಎಂದು ದೂರಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಗಣರಾಜ್ಯೋತ್ಸವ ದಿನದಂದು ನಿವೃತ್ತ ಸೈನಿಕನೋರ್ವನಿಗೆ ಮಾಡಿದ ಅವಮಾನದ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಬಳಿಕ ಟೋಲ್ ಸಿಬ್ಬಂದಿ ತನ್ನ ತಪ್ಪನ್ನು ಅರಿತು ಶ್ಯಾಮರಾಜ್ ಅವರಲ್ಲಿ ಕ್ಷಮೇಯಾಚಿಸಿದ್ದಾರೆ ಎಂದು ತಿಳಿದುಬಂದಿದೆ. ಶ್ಯಾಮರಾಜ್ ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ವಾಪಸ್ ಬರುತ್ತಿದ್ದ ವೇಳೆ ಇವರ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಫೋಟಗೊಂಡಿದ್ದರಿಂದ ವಾಹನ ಜಖಂಗೊಂಡಿತ್ತು. ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿ, ಇಬ್ಬರು ಸೈನಿಕರು ಬದುಕುಳಿದಿದ್ದರು. ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. 15 ದಿನಗಳ ಕಾಲ ಕೋಮಾದಲ್ಲಿ ನಂತರ ಯಥಾಸ್ಥಿತಿಗೆ ಬಂದರೂ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದರಿಂದ ಶ್ಯಾಮರಾಜ್ ಸಂಪೂರ್ಣ ವಿಕಲಾಂಗರಾಗಿದ್ದಾರೆ.

ವಾರ್ತಾ ಭಾರತಿ 26 Jan 2026 12:26 pm

ಕೇಂದ್ರ -ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಹೊಸ ವಿವಾದ: 2027ರ ಜನಗಣತಿ ಅಧಿಸೂಚನೆ ಪ್ರಕಟಣೆ ವಿಳಂಬ

2027ರ ಜನಗಣತಿ ಅಧಿಸೂಚನೆಯನ್ನು ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕೃತ ಗೆಜೆಟ್‌ನಲ್ಲಿ ಮರುಪ್ರಕಟಿಸದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಸ ವಿವಾದ ಉಂಟಾಗಿದೆ. ಇದು ಏಪ್ರಿಲ್ 1 ರಿಂದ ಆರಂಭವಾಗಬೇಕಿರುವ ವಸತಿ ಮತ್ತು ಮನೆಗಳ ಗಣತಿಗೂ ಅಡ್ಡಿಯಾಗುವ ಸಾಧ್ಯತೆ ಇದೆ. ಈ ವಿಳಂಬವು ಇತ್ತೀಚಿನ ಹಲವು ಭಿನ್ನಾಭಿಪ್ರಾಯಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ.

ವಿಜಯ ಕರ್ನಾಟಕ 26 Jan 2026 12:21 pm

ಚಾಮರಾಜನಗರ | 50 ಸಾವಿರ ರೂ.ಗೆ ಹೆಣ್ಣು ಮಗು ಮಾರಾಟ ಪ್ರಕರಣ : ತಂದೆ, ತಾಯಿ ಸೇರಿ ಐವರ ಬಂಧನ

ಚಾಮರಾಜನಗರ: ಕಳೆದ ವರ್ಷ ನವಜಾತ ಹೆಣ್ಣುಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೋಷಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಾಮರಾಜನಗರ ಪಟ್ಟಣದ ರಾಮಸಮುದ್ರ ನಿವಾಸಿಗಳಾದ ಸಿಂಧು ಮತ್ತು ಮಂಜುನಾಯಕ ದಂಪತಿಗೆ 2025ರ ಜು.26ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿತ್ತು. ಆದರೆ ನವಜಾತ ಶಿಶು ಪೋಷಕರ ವಶದಲ್ಲಿಲ್ಲ ಎಂಬುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ 2025ರ ಸೆ.15ರಂದು ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಜ.23ರಂದು ಸಿಂಧು ಮತ್ತು ಮಂಜುನಾಯಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತ ಎಂಬುವರ ಮಧ್ಯವರ್ತಿತ್ವದಲ್ಲಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೊಣನೂರು ಗ್ರಾಮದ ಜವರಯ್ಯ ಮತ್ತು ನೇತ್ರಾ ದಂಪತಿಗೆ ನವಜಾತ ಶಿಶುವನ್ನು 50,000 ರೂ. ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಸುಮಾರು ಆರು ತಿಂಗಳಿಂದ ಜವರಯ್ಯ ಮತ್ತು ನೇತ್ರಾ ದಂಪತಿಯ ಆಶ್ರಯದಲ್ಲಿದ್ದ ಶಿಶುವನ್ನು ಪೊಲೀಸರು ರಕ್ಷಿಸಿ, ಶಿಶು ಅಭಿವೃದ್ಧಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದು, ಮಗು ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಆರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ವಿಧಾನಗಳ ಮೂಲಕ ಪತ್ತೆಹಚ್ಚಲಾಗಿದ್ದು, ಮಗುವಿನ ತಂದೆ ಮಂಜುನಾಯಕ, ತಾಯಿ ಸಿಂಧು, ಮಧ್ಯವರ್ತಿಯಾದ ಶಾಂತ ಹಾಗೂ ಅಕ್ರಮವಾಗಿ ಮಗುವನ್ನು ಪಡೆದ ಜವರಯ್ಯ ಮತ್ತು ನೇತ್ರಾ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಮಗುವಿನ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್ ಎನ್. ಅವರ ಮಾರ್ಗದರ್ಶನದಲ್ಲಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಜಗದೀಶ, ಸಬ್‌ ಇನ್ಸ್‌ಪೆಕ್ಟರ್ ಆರ್.ಮಂಜುನಾಥ್ ಹಾಗೂ ಸಿಬ್ಬಂದಿವರ್ಗದವರು ತನಿಖೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ವಾರ್ತಾ ಭಾರತಿ 26 Jan 2026 12:12 pm

ಮನರೇಗಾ ಉಳಿಸಲು ಜ.27ರಂದು ರಾಜಭವನ ಚಲೋ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.26: ಮನರೇಗಾ ಉಳಿಸುವ ಸಲುವಾಗಿ ಮಂಗಳವಾರ(ಜ.27) ರಾಜಭವನ ಚಲೋ ನಡೆಸಲಾಗುವುದು. ಪ್ರತಿ ತಾಲೂಕಿನಲ್ಲೂ ಕನಿಷ್ಠ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತ್ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಡಾ.ಮನಮೋಹನ್ ಸಿಂಗ್ ಅವರ ಸರಕಾರ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ನಮಗೆಲ್ಲಾ ಆಶ್ಚರ್ಯ ಉಂಟು ಮಾಡಿದೆ. ಮಹಾತ್ಮಾ ಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದ ಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾಗಿದೆ ಎಂದರು. ಪ್ರತೀ ವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಮನರೇಗಾದಡಿ ನಡೆಯುತ್ತಿದ್ದವು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ವಿಧಾನಸಭೆಯಲ್ಲೂ ಇದರ ಬಗ್ಗೆ ಪ್ರತಿಭಟನೆ ಹಾಗೂ ನಿರ್ಣಯ ತೆಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದರು. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು. ವಿಬಿ-ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಳಿದಾಗ, ಮನರೇಗಾವನ್ನು ನಾಶ ಮಾಡುವ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗುವುದು. ರೈತರ ಕರಾಳ ಕಾಯ್ದೆಗಳನ್ನು ಹೇಗೆ ಹಿಂಪಡೆಯಲಾಯಿತೋ ಅದೇ ರೀತಿ ಇದನ್ನೂ ಹಿಂಪಡೆಯಬೇಕು. ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು. ಜೆಡಿಎಸ್ ಮನರೇಗಾ ಬದಲಾವಣೆ ಬಗ್ಗೆ ವಿರೋಧ ವ್ಯಕ್ತಪಡಿಸದೇ ಇರುವ ಬಗ್ಗೆ ಕೇಳಿದಾಗ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಹ ಬಾಯಿ ಬಿಡುತ್ತಿಲ್ಲ. ಹೊಸ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನಪ್ರತಿನಿಧಿಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಇದರ ಅನುಷ್ಠಾನ ಅಸಾಧ್ಯ ಎಂದರು. ಈ ಯೋಜನೆಗೆ ಅನುದಾನ ಒಗಗಿಸಿ ಕೊಡುವವರು ಯಾರು? ಕೇಂದ್ರವೇ ಅನುದಾನ ಒದಗಿಸಿಕೊಡಲಿ. ಕೆಲವು ನಾಯಕರು ಚರ್ಚೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ನಾವು ಸದನದಲ್ಲಿ ಅವರ ಚರ್ಚೆಗೆ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು. 2028 ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಇಂತಹ ಒಳ್ಳೆ ದಿನ ಏಕೆ ಅಶುಭ ಮಾತನ್ನಾಡುವುದು, ಆ ವಿಚಾರ ಬೇಡ ಬಿಡಿ ಎಂದರು. ನಮ್ಮ ಸೇವೆ ಜನರಿಗಾಗಿಯೇ ಹೊರತು ಕುಟುಂಬಕ್ಕಾಗಿ ಅಲ್ಲ ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ, ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನತೆಯ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದರು. ಹಾಸನ ಜಿಡಿಎಸ್ ಸಮಾವೇಶದ ಉದ್ದಕ್ಕೂ ತಮ್ಮನ್ನು ನೆನಪಿಸಿಕೊಂಡಿದ್ದರ ಬಗ್ಗೆ ಕೇಳಿದಾಗ, ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ ಬರುವುದಿಲ್ಲ, ಜೀವ ಬರುವುದಿಲ್ಲ, ಧೈರ್ಯ ಬರುವುದಿಲ್ಲ. ಅದಕ್ಕೆ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದರು. ಮನೆಗೆ ನುಗ್ಗಿ ಬಂಧಿಸಲಾಯಿತು ಎನ್ನುವ ದೇವೆಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ಈ ದೇಶದಲ್ಲಿ ಏನೇನು ಕಾನೂನು ಇದೆಯೋ ಅದೆಲ್ಲವೂ ಎಲ್ಲರಿಗೂ ಒಂದೇ. ಯಾರಿಗೆ ಏನೇನು ಕಾನೂನು ಮಾಡಬೇಕು ಅನ್ನೋದಕ್ಕೆ ನೀವೇ ಉತ್ತರ ನೀಡಬೇಕು ಎಂದು ಹೇಳಿದರು. ತಮ್ಮ ಭಾಷಣದ ವೇಳೆ ಸದನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಜ್ಯಪಾಲರು ಭಾಷಣ ಓದಿ, ರಾಷ್ಟ್ರಗೀತೆ ಆಗುವ ತನಕ ಇರಬಹುದಿತ್ತು. ರಾಜ್ಯಪಾಲರಿಗೆ ನರೇಗಾ ಬಗೆಗಿನ ಭಾಷಣ ಓದುವುದಕ್ಕೆ ಇಷ್ಟವಿಲ್ಲದಿದ್ದರೆ ಹಾಗೆ ಇರಬಹುದಿತ್ತು. ಜತೆಗೆ ಸಾಕಷ್ಟು ಬೇರೆ ಅವಕಾಶಗಳೂ ಇದ್ದವು. ರಾಜ್ಯಪಾಲರು ಸರಕಾರ ನೀಡಿದ ಭಾಷಣ ಓದುವುದು ಸಂವಿಧಾನ ರಕ್ಷಣೆಯ ಕರ್ತವ್ಯ. ನಮ್ಮಲ್ಲಿ ಅಲ್ಲದೇ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಆಗಿದೆ ಎಂದರು.

ವಾರ್ತಾ ಭಾರತಿ 26 Jan 2026 12:10 pm

UAE ಅಧ್ಯಕ್ಷ ಭಾರತ ಭೇಟಿ ಬೆನ್ನಲ್ಲೇ ಪಾಕ್‌ ಗೆ ಕಹಿ, ಭಾರತಕ್ಕೆ ಸಿಹಿ ಸುದ್ದಿ ಕೊಟ್ಟ ಯುಎಇ: ಪಾಕ್ ನೊಂದಿಗಿನ ವಿಮಾನ ನಿಲ್ದಾಣ ಒಪ್ಪಂದ ರದ್ದು! ಭಾರತಕ್ಕೇನು ಸಿಕ್ತು?

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅನಿರೀಕ್ಷೀತ ಭಾರತ ಭೇಟಿ ದಕ್ಷಿಣ ಏಷ್ಯಾದ ರಾಜತಾಂತ್ರಿಕ ಸಂಬಂಧಗಳಲ್ಲಿ ಆಯಾಮಗಳನ್ನು ಕ್ಷಿಪ್ರ ಬದಲಾವಣೆಯಾಗೆ ನಾಂದಿ ಹಾಡುತ್ತಿದ್ದು, ಯುಎಇಯ ಇಸ್ಲಾಮಿಕ್‌ ಮಿತ್ರರಾಷ್ಟ್ರವಾಗಿದ್ದ ಪಾಕಿಸ್ತಾನದ ಪಾಲಿಗೆ ಮುಳ್ಳಾಗುತ್ತಿದ್ದರೆ, ಇತ್ತ ಭಾರತದ ಪಾಲಿಗೆ ಹೂವಿನ ಹಾದಿಯಾಗುತ್ತಿದೆ. ಇದಕ್ಕೆ ಕಾರಣ ಯುಎಇ ಪಾಕಿಸ್ತಾನದೊಂದಿಗೆ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿದ್ದ ಒಪ್ಪಂದವನ್ನು ಕೈಬಿಟ್ಟಿದೆ, ಆದರೆ ಭಾರತದೊಂದಿಗೆ ಸಂಬಂಧ ವೃದ್ದಿಗಾಗಿ ಯುಎಇಯಲ್ಲಿರುಬ ಸುಮಾರು 900 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡದೆ. ಇದು ಪಾಕಿಸ್ತಾನಕ್ಕೆ ಹಿನ್ನಡೆಯಾಗುವಂತೆ ಮಾಡುತ್ತಿದೆ.

ವಿಜಯ ಕರ್ನಾಟಕ 26 Jan 2026 12:04 pm

ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ; ಗಮನ ಸೆಳೆದ ಆಪರೇಷನ್ ಸಿಂಧೂರ ಸ್ಥಬ್ಧ ಚಿತ್ರ

ಅಪಾಚೆ–ಧ್ರುವ ಹೆಲಿಕಾಪ್ಟರ್‌ಗಳ ಹಾರಾಟ; ಭೀಷ್ಮ–ಅರ್ಜುನ್ ಟ್ಯಾಂಕ್‌ಗಳ ಪ್ರದರ್ಶನ

ವಾರ್ತಾ ಭಾರತಿ 26 Jan 2026 11:58 am

ಲಿಂಗಸುಗೂರು | ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಗಳಿಂದ ಧ್ವಜಾರೋಹಣ ಮಾಡದೇ ನಿಯಮ ಉಲ್ಲಂಘನೆ : ಆರೋಪ

ಲಿಂಗಸುಗೂರು : ಲಿಂಗಸುಗೂರು ತಾಲೂಕಿನ ದೇವರ ಭೂಪೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ಮಾಡದಿರುವುದು ಬೆಳಕಿಗೆ ಬಂದಿದ್ದು, ಸಹಕಾರ ಸಂಘದ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಕಡ್ಡಾಯವಾಗಿ ಆಚರಿಸಬೇಕು ಎಂಬ ಸರ್ಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ, ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅವುಗಳನ್ನು ಲೆಕ್ಕಿಸದೇ ನಡೆದುಕೊಂಡಿದ್ದು, ಇದು ರಾಷ್ಟ್ರಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಹಣ ಮತ್ತು ಸದಸ್ಯರ ವಿಶ್ವಾಸದ ಮೇಲೆ ಕಾರ್ಯನಿರ್ವಹಿಸುವ ಸಹಕಾರಿ ಸಂಘವು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಅದರ ಮೂಲಭೂತ ಕರ್ತವ್ಯವಾಗಿದೆ. ಆದರೆ ಗಣರಾಜ್ಯೋತ್ಸವದ ದಿನ ಯಾವುದೇ ಸಿದ್ಧತೆ ಕೈಗೊಳ್ಳದೇ, ಧ್ವಜಾರೋಹಣ ಕಾರ್ಯಕ್ರಮ ನಡೆಸದೆ ಹಬ್ಬವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಈ ಕುರಿತು ಸಹಕಾರಿ ಸಂಘದ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 26 Jan 2026 11:56 am

ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ಮೋದಿಯ ಆಡಳಿತ ಸೂತ್ರಗಳೇ ಕಾರಣ: ಡಿ.ವಿ.ಸದಾನಂದ ಗೌಡ

ಬೆಂಗಳೂರು: ನಮ್ಮ ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಆಡಳಿತ ಸೂತ್ರಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು. ಗಣರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದ ಅವರು ಮಾತನಾಡಿ, ಭಾರತವು ಪ್ರತೀ ಕ್ಷೇತ್ರದಲ್ಲೂ ಸ್ವಾಭಿಮಾನಿ ರಾಷ್ಟ್ರವಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅದು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿದೆ. ಮಾವಿನ ಹಣ್ಣು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಹಾಗೂ ಆಹಾರೋತ್ಪನ್ನಗಳನ್ನು ನಾವು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಚಂದ್ರಯಾನದಲ್ಲೂ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು. ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದವರು ಸಂವಿಧಾನಕ್ಕೆ ಅಪಚಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನಬದ್ಧವಾದ ವೇದಿಕೆಯನ್ನು ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಲು ಬೇಕಾದ ಪ್ರಯತ್ನಗಳನ್ನು ಮಾಡಿದ್ದಾರೆ. ಇದನ್ನು ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ಹೇಳಿದರು ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಇಡೀ ರಾಜ್ಯದ ಜನತೆ ಖಂಡಿಸಬೇಕಾದ ದಿನವಿದು ಎಂದು ಹೇಳಿದರು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ನಮ್ಮದೇ ಆದ ಆರ್ಥಿಕ ನೀತಿ, ರಾಜಕೀಯ ನೀತಿ, ನಮ್ಮದೇ ಆದ ಸಾಮಾಜಿಕ- ಶೈಕ್ಷಣಿಕ, ಧಾರ್ಮಿಕ, ಕೈಗಾರಿಕಾ ನೀತಿಯನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಲು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿ ಎಂದರು. ಕರ್ನಾಟಕದ ಆಡಳಿತ ವ್ಯವಸ್ಥೆಯ, ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಈ ಹಿನ್ನೆಲೆಯಲ್ಲಿ ನಾವು ನೀವು ಗಂಭೀರವಾಗಿ ಯೋಚಿಸಬೇಕಿದೆ. ಇಲ್ಲಿಯೂ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅಬ್ದುಲ್ ಅಜೀಂ, ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನ್ ಗೌಡ, ರಾಜ್ಯ ವಕ್ತಾರ ಪ್ರಕಾಶ್ ಶೇಷ ರಾಘವಾಚಾರ್, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Jan 2026 11:48 am

2028ಕ್ಕೆ ನಾನೇ ಸಿಎಂ ಎಂದ ಎಚ್‌ಡಿಕೆಗೆ ಡಿಕೆಶಿ ಕೊಟ್ಟ ವ್ಯಂಗ್ಯ ತಿರುಗೇಟು ಏನು?

ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನತೆಯ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಹಾಸನ ಜಿಡಿಎಸ್ ಸಮಾವೇಶದ ಉದ್ದಕ್ಕೂ ತಮ್ಮನ್ನು ನೆನಪಿಸಿಕೊಂಡಿದ್ದರ ಬಗ್ಗೆ ಕೇಳಿದಾಗ, ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ ಬರುವುದಿಲ್ಲ, ಜೀವ ಬರುವುದಿಲ್ಲ, ಧೈರ್ಯ ಬರುವುದಿಲ್ಲ. ಅದಕ್ಕೆ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ವಿಜಯ ಕರ್ನಾಟಕ 26 Jan 2026 11:46 am

Gold Rate Jan 26: ಜನವರಿ 26ರಂದು ಚಿನ್ನ - ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ

Gold Rate Jan 26: ಚಿನ್ನ ಪ್ರಿಯರಿಗೆ ಸೋಮವಾರ ಮತ್ತೆ ಶಾಕ್ ಎದುರಾಗಿದೆ. ಸೋಮವಾರ ಜನವರಿ 26ರಂದು ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದ್ದು ಚಿನ್ನ ಪ್ರಿಯರು ಕಂಗಾಲಾಗಿದ್ದಾರೆ. ಜನವರಿ 26ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ. ಚಿನ್ನದ ಬೆಲೆಯು

ಒನ್ ಇ೦ಡಿಯ 26 Jan 2026 11:45 am

ಸಂವಿಧಾನ ಎಂಬ ಬಹುತ್ವ ಭಾರತದ ರಕ್ಷಾ ಕವಚ

ಉಮರ್ ಖಾಲಿದ್ ಅವರಂಥ ಹೋರಾಟಗಾರರು ಹಾಗೂ ಚಿಂತಕರನ್ನು ಬಂದಿಖಾನೆಯಲ್ಲಿ ಇಟ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಸುಕುತ್ತಿರುವ ಭಾರತದ ಆಳುವ ವರ್ಗ ಸರ್ವಾಧಿಕಾರಿ ವ್ಯವಸ್ಥೆಯತ್ತ ದಾಪುಗಾಲಿಡುತ್ತ ಸಾಗಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ತನ್ನ ಏಜೆಂಟರಾದ ರಾಜ್ಯಪಾಲರ ಮೂಲಕ ನಿತ್ಯ ಕಿರುಕುಳ ಕೊಡುವ ಇಂಥ ಕಡು ಕಷ್ಟದ ಕಾಲ ಘಟ್ಟದಲ್ಲಿ ಪ್ರಜಾರಾಜ್ಯೋತ್ಸವ ಮತ್ತೆ ಬಂದಿದೆ. ಉಳಿದ ದೇಶಗಳಂತೆ ವ್ಯವಸ್ಥೆಯ ಹೊಡೆತಕ್ಕೆ ಅಲುಗಾಡುವ ಜನತಂತ್ರ ನಮ್ಮದಲ್ಲ. ಮತ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಕಟ್ಟುವ ಸಿದ್ಧಾಂತವನ್ನು ಹೊಂದಿದವರು ಅಧಿಕಾರದಲ್ಲಿ ಇದ್ದರೂ ಪ್ರಜಾಪ್ರಭುತ್ವ ಭದ್ರವಾಗಿದೆ.ಇದನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಬಾಬಾಸಾಹೇಬರ ಸಂವಿಧಾನದ ರಕ್ಷಾ ಕವಚವಿದೆ.ಅಂತಲೇ ವಿದೇಶಾಂಗ ನೀತಿ ಸೇರಿದಂತೆ ಕೆಲವು ಮೂಲಭೂತ ವಿಚಾರಗಳಲ್ಲಿ ಬದಲಾವಣೆ ಮಾಡಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತೀ ವರ್ಷ ಆಚರಿಸುವ ಈ ಜನವರಿ 26 ಸಾಮಾನ್ಯ ದಿನವಲ್ಲ. ಆಗಸ್ಟ್ 15 ರಂತೆ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ.1947ರ ಆಗಸ್ಟ್ 15 ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ದಿನ.ಅದೇ ರೀತಿ 1950ನೇ ಇಸವಿ ಜನವರಿ 26ರಂದು ನಾವು ಒಪ್ಪಿಕೊಂಡಿರುವ ಸಂವಿಧಾನ ಜಾರಿಗೆ ಬಂದ ದಿನ.ಆ ಸಂವಿಧಾನವೇ ಪ್ರಜಾಪ್ರಭುತ್ವ ಭಾರತದ ನೈಜ ಪವಿತ್ರ ಗ್ರಂಥವಾಗಿದೆ. ಆದರೂ ಈ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇದೇ ಸಂವಿಧಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರ ಕೈಗೆ ತೆಗೆದುಕೊಂಡು ಹನ್ನೊಂದು ವರ್ಷಗಳಾದವು. ಅವರಿಂದಲೇ ಸಂವಿಧಾನಕ್ಕೆ ಗಂಡಾಂತರ ಎದುರಾಗುತ್ತಲೇ ಇದೆ.ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಿದ ಸರಕಾರಗಳು ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳು ಹೊಸ ಪೀಳಿಗೆಯಲ್ಲಿ ಸಂವಿಧಾನದ ಅರಿವು ಮೂಡಿಸಿದ್ದರೆ ದೇಶ ಇಂಥ ಸಂಕಟದ ಸಂದರ್ಭ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಸಂವಿಧಾನ ಬರುವ ಮುಂಚೆ ಈ ಭಾರತ ಹೇಗಿತ್ತು ಎಂದು ವಿವರಿಸಿ ಹೇಳಬೇಕಾಗಿಲ್ಲ.ಹಿಂದೆ ಇಲ್ಲಿ ಶ್ರೇಣೀಕೃತ ಜಾತಿ ಪದ್ಧತಿ ಇತ್ತು.ಅಸ್ಪಶ್ಯತೆಯ ನಗ್ನ ತಾಂಡವ ನೃತ್ಯವಿತ್ತು.ತುಳಿಯುವ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವ ನ್ಯಾಯ ವ್ಯವಸ್ಥೆ ಇತ್ತು.ಹೆಣ್ಣು ಮಕ್ಕಳಿಗೆ ಸಮಾನತೆ ಇರಲಿಲ್ಲ. ಹೀಗೆ ಮನುಷ್ಯರ ನಡುವೆ ತಾರತಮ್ಯಗಳಿಂದ ಕೂಡಿದ ಸಮಾಜ ಇಲ್ಲಿತ್ತು.ಇದನ್ನು ಪ್ರತಿರೋಧಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಈಗ ಇದೆಲ್ಲ ಸಂಪೂರ್ಣ ಮಾಯವಾಗಿದೆಯೆಂದಲ್ಲ. ಆದರೆ ಧ್ವನಿ ಕಳೆದುಕೊಂಡ ಸಮುದಾಯಗಳಿಗೆ ಸಂವಿಧಾನ ರಕ್ಷಾ ಕವಚವಾಗಿದೆ ಎಂಬುದು ನಿಜ. ಸಂವಿಧಾನ ಬಂದ ನಂತರ ಅಸ್ಪಶ್ಯತೆಯ ಆಚರಣೆ ಅಪರಾಧವಾಗಿದೆ.ವರದಕ್ಷಿಣೆ ನಿರ್ಬಂಧಿಸಲ್ಪಟ್ಟಿದೆ.ಶತಮಾನಗಳಿಂದ ದುಡಿದು ದೇಶ ಕಟ್ಟಿದವರ ರಕ್ಷಣೆಗೆ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ.ಅನ್ಯಾಯವನ್ನು ಪ್ರತಿಭಟಿಸುವ ಅವಕಾಶ ದೊರಕಿದೆ. ಆದರೆ ಈಗ ನಮ್ಮೆದುರು ಹೊಸ ಸವಾಲು ಎದುರಾಗಿದೆ. ನಮ್ಮ ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನ ಒಂದು ದೇಶವಾಗಿರಲಿಲ್ಲ.ಇಲ್ಲಿ ಊರಿಗೊಬ್ಬ ರಾಜ,ಪ್ರದೇಶಕ್ಕೊಬ್ಬ ಸಾಮ್ರಾಟ,ಚಕ್ರವರ್ತಿ ಗಳು ತುಂಬಿದ್ದರು.ಸ್ವಾತಂತ್ರ್ಯ ಬಂದಾಗ ಇವರನ್ನು ದೂರವಿಟ್ಟು ಸಮಸ್ತ ಭಾರತೀಯರ ಕೈಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ರಾಷ್ಟ್ರೀಯ ಆಂದೋಲನದ ಮುಖ್ಯ ಉದ್ದೇಶವಾಗಿತ್ತು. ಸಮಸ್ತ ಭಾರತೀಯರೆಂದರೆ ಯಾವುದೇ ಒಂದು ಧರ್ಮ, ಇಲ್ಲವೇ ಜಾತಿಗೆ ಸೇರಿದವರಲ್ಲ.ಶತಮಾನಗಳಿಂದ ಈ ನೆಲದಲ್ಲಿ ಒಟ್ಟಿಗೆ ಬಾಳಿದ, ಒಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಎಲ್ಲ ಸಮುದಾಯಗಳ ಜನರೂ ಭಾರತೀಯರು ಇದರಲ್ಲಿ ಹಿಂದೂ, ಮುಸ್ಲಿಂ, ಜೈನ,ಸಿಖ್ ಕ್ರೈಸ್ತ, ಎಲ್ಲರೂ ಇದ್ದಾರೆ.ಅಂತಲೇ ಇದು ಹಿಂದೂ ರಾಷ್ಟ್ರವಲ್ಲ, ಮುಸ್ಲಿಮ್ ರಾಷ್ಟ್ರವಲ್ಲ, ಕ್ರೈಸ್ತ ರಾಷ್ಟ್ರವಲ್ಲ ,ಇದು ಇವರೆಲ್ಲರನ್ನು ಒಳಗೊಂಡ ಧರ್ಮ ನಿರಪೇಕ್ಷ ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಂಡೆವು.ಇದಕ್ಕೆ ಪೂರಕವಾದ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದರು.ಅದೇ ಸಂವಿಧಾನ ಭಾರತಕ್ಕೆ ಬೆಳಕು ನೀಡುತ್ತಿದೆ. ಭಾರತದ ಸಂವಿಧಾನವನ್ನು ರೂಪಿಸಲು 1946ರ ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ರಚನಾ ಸಭೆಗೆ 299 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಭಿನ್ನಾಭಿಪ್ರಾಯ ಕಾರಣ ಕೆಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು.1946 ಡಿಸೆಂಬರ್ 6 ರಂದು ಮೊದಲ ಸಭೆ ನಡೆದು ಸಂವಿಧಾನ ರಚನೆಯ ಪ್ರಕ್ರಿಯೆ ಆರಂಭವಾಯಿತು. ಒಂದು ವರ್ಷ ಎರಡು ತಿಂಗಳ ಕಾಲಾವಧಿಯಲ್ಲಿ ಹಲವಾರು ಬಾರಿ ಸಭೆ ಸೇರಿ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದೆ ಚರ್ಚೆಗೆ ಇಡಲಾಯಿತು.ಜನತೆ ಇದಕ್ಕೆ 7,635 ತಿದ್ದುಪಡಿಗಳನ್ನು ಸೂಚಿಸಿದರು.ಈ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿ ಸೂಕ್ತವಾದವುಗಳನ್ನು ಒಪ್ಪಿ 1949 ನವೆಂಬರ್ 26 ರಂದು ಅಂತಿಮ ಕರಡನ್ನು ಭಾರತ ಸರಕಾರಕ್ಕೆ ಸಲ್ಲಿಸಲಾಯಿತು. ಮುಂದೆ 1950 ಜನವರಿ 26 ರಂದು ಈ ಸಂವಿಧಾನ ಜಾರಿಗೆ ಬಂತು. ಸಂವಿಧಾನ ರಚನೆಯಲ್ಲಿ ಕೆಲವೇ ಕೆಲವು ಸದಸ್ಯರ ಕೊಡುಗೆ ಅಮೂಲ್ಯವಾಗಿದೆ.ಅದರಲ್ಲೂ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಬಾಬಾಸಾಹೇಬ ಅಂಬೇಡ್ಕರ್ ಅವರು ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡಿ ನಮಗೊಂದು ಸಂವಿಧಾನವನ್ನು ನೀಡಿದರು.ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬರ ಕೊಡುಗೆಯನ್ನು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದರು.ಇದು ವಾಸ್ತವ ಸಂಗತಿಯಾದರೂ ಮನುವಾದಿ ಶಕ್ತಿಗಳು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ನಗಣ್ಯಗೊಳಿಸಲು ಯತ್ನಿಸುತ್ತಲೇ ಇವೆ. ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೆಸರಾಗಿದೆ.ಅತ್ಯಂತ ವೈವಿಧ್ಯಪೂರ್ಣವಾದ ಬಹುಧರ್ಮೀಯ,ಬಹುಜನಾಂಗೀಯ,ಬಹುಭಾಷಿಕ,ಬಹು ಸಾಂಸ್ಕೃತಿಕ ಹಾಗೂ ಬಹು ರಾಷ್ಟ್ರೀಯತೆಗಳನ್ನು ಒಳಗೊಂಡ ಭೂ ಪ್ರದೇಶಕ್ಕೆ ಅತ್ಯಂತ ಸೂಕ್ತ ವಾದ ,ಎಲ್ಲ ಜನ ಸಮುದಾಯಗಳ ಜನರ ಭಾವನೆಗಳನ್ನು ಪ್ರತಿನಿಧಿಸುವ ಸಂವಿಧಾನವಿದು.ಶತಮಾನಗಳಿಂದ ಗೂಟಕ್ಕೆ ಕಟ್ಟಿದ ದನಗಳಂತೆ ನರಳಿ ನರಳಿ ಬದುಕಿದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಬೆಳಕನ್ನು ನೀಡಿರುವ ಸಂವಿಧಾನವಿದು. ಇಂಥ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಅಧಿಕಾರದಲ್ಲಿರುವುದರಿಂದ ಈಗ ಅದಕ್ಕೆ ಅಪಾಯ ಎದುರಾಗಿದೆ.ಇದನ್ನು ಬುಡಮೇಲು ಮಾಡಿ ಮನುವಾದಿ, ಮನುವಾದಿ ರಾಷ್ಟ್ರ ನಿರ್ಮಿಸುವ ಮಸಲತ್ತು ನಡೆಯುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ಯತ್ನ ನಡೆದಿದೆ.ಸಂವಿಧಾನದ 19(1) (ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ.ಸಂವಿಧಾನ ದತ್ತವಾದ ಈ ವಾಕ್ ಸ್ವಾತಂತ್ರ್ಯ ಇರುವಾಗಲೂ ಈಗಿನ ಕೇಂದ್ರ ಸರಕಾರವನ್ನು, ಪ್ರಧಾನಿಯನ್ನು ಟೀಕಿಸಿದರೆ ಅಪರಾಧ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ . ಲೇಖಕರು,ಕಲಾವಿದರು, ಚಿಂತಕರ ಬಾಯಿ ಮುಚ್ಚಿಸುವ ಸರ್ವಾಧಿಕಾರಿ ನೀತಿ ಸಂವಿಧಾನದ ಮೇಲೆ ಸವಾರಿ ಮಾಡುತ್ತಿದೆ. ಸ್ವತಂತ್ರ ಭಾರತ ನಡೆಯಬೇಕಾಗಿರುವುದು ಸಂವಿಧಾನದ ಆಧಾರದಲ್ಲಿ.ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗಗಳು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಬೇಕು.ಆದರೆ ಅದಕ್ಕೆ ಈಗ ಚ್ಯುತಿ ಬರುತ್ತಿದೆ.ಕ್ರಿಮಿನಲ್ ಮಾಫಿಯಾಗಳು ಕಾನೂನಿನ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿವೆ.ಸಂವಿಧಾನ ರಕ್ಷಣೆ ನೀಡಿದ್ದರೂ ಅಸ್ಪಶ್ಯರ ಮೇಲೆ ಪ್ರತೀ ದಿನ ಸರಾಸರಿ 28 ಕ್ಕೂ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ.ಪ್ರತಿದಿನ ಐವರು ಅಸ್ಪ್ರಶ್ಯ ರ ಮನೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ.ಪ್ರತಿವಾರ ಹನ್ನೊಂದು ಅಸ್ಪಶ್ಯರ ಹತ್ಯೆಯಾಗುತ್ತಿದೆ.ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಲೇ ಇವೆ.ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ ವರದಿಯ ಪ್ರಕಾರ ಪ್ರತೀ 77 ನಿಮಿಷಗಳಗೆ ಒಬ್ಬ ಮಹಿಳೆ ಹಿಂಸೆಯಿಂದ ಅಸು ನೀಗುತ್ತಿದ್ದಾಳೆ.ಪ್ರತೀ 6 ತಾಸಿಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತ ಸುಟ್ಟು ಹಾಕಲಾಗುತ್ತಿದೆ.ದೇಶದಲ್ಲಿ ಸುಮಾರು 45 ಸಾವಿರ ಮಕ್ಕಳು ಪ್ರತಿವರ್ಷ ಕಾಣೆಯಾಗುತ್ತಿದ್ದಾರೆ. ನಕಲಿ ಎನ್‌ಕೌಂಟರ್‌ಗಳು,ಪೊಲೀಸ್ ಠಾಣೆಗಳಲ್ಲಿ ಸಂಶಯಾಸ್ಪದ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಇವುಗಳನ್ನೆಲ್ಲ ಪ್ರಶ್ನಿಸಿ ಧ್ವನಿಯೆತ್ತಿದರೆ ಅಂಥವರನ್ನು ಅರ್ಬನ್ ನಕ್ಸಲ್ ಎಂದು ಕರೆದು ಜೈಲಿಗೆ ದಬ್ಬಲಾಗುತ್ತಿದೆ ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿದ್ದರೂ ಅದರ ಮೇಲೆಯೇ ದಾಳಿ ನಡೆದಿದೆ.ಯಾರು ಏನನ್ನು ತಿನ್ನಬೇಕು,ಏನನ್ನು ತಿನ್ನಬಾರದು,ಯಾವ ಬಟ್ಟೆ ಧರಿಸಬೇಕು,ಯಾರನ್ನು ಪ್ರೀತಿಸಬೇಕು,ಯಾರನ್ನು ಮದುವೆಯಾಗಬೇಕು,ಯಾರೊಂದಿಗೆ ಯಾರು ಮಾತಾಡಬೇಕು, ಎಷ್ಟು ಮದುವೆಯಾಗಬೇಕು,ಎಷ್ಟು ಮಕ್ಕಳನ್ನು ಹಡೆಯಬೇಕು ಎಂಬ ಅತ್ಯಂತ ವೈಯಕ್ತಿಕ ವಿಷಯಗಳನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಈ ದೇಶದಲ್ಲಿ ಹುಟ್ಟಿಕೊಂಡಿದ್ದಾರೆ.ಗೋ ರಕ್ಷಣೆ,ಮತಾಂತರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಪ್ರತೀ ದಿನ ಹಲ್ಲೆ ಮಾಡುತ್ತ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಭಾರತವನ್ನು ಕಲ್ಯಾಣ ರಾಜ್ಯ ಮಾಡುವುದು ನಮ್ಮ ಸಂವಿಧಾನದ ಗುರಿಯಾಗಿದೆ.ಕಲ್ಯಾಣ ರಾಜ್ಯವೆಂದರೆ ಜನ ಸಾಮಾನ್ಯರಿಗೆ ಆಹಾರ,ಕುಡಿಯುವ ನೀರು,ಆರೋಗ್ಯ, ಶಿಕ್ಷಣ ,ಉದ್ಯೋಗ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವದು.ಅದು ಸರಕಾರದ ಜವಾಬ್ದಾರಿ. ಆದರೆ ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲವನ್ನೂ ಅಂಬಾನಿ,ಅದಾನಿಯಂಥ ಖಾಸಗಿ ರಂಗದ ತಿಮಿಂಗಿಲಗಳ ಮಡಿಲಿಗೆ ಹಾಕಲು ಹೊರಟ ಸರಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ.ಸಾಮಾಜಿಕ ನ್ಯಾಯದ ಉದ್ದೇಶದಿಂದ ತರಲಾಗಿರುವ ದಲಿತ ದಮನಿತ ಸಮುದಾಯಗಳ ಮೀಸಲು ವ್ಯವಸ್ಥೆಯನ್ನು ನಾಶ ಮಾಡುವ ಮಸಲತ್ತು ನಡೆದಿದೆ. ಸಂವಿಧಾನವನ್ನು ಸಂಪೂರ್ಣ ಬದಲಾಯಿಸಲಾಗದಿದ್ದರೂ ಇದನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಲೇ ಇವೆ.ಒಂದೇ ದೇಶ ಒಂದೇ ಭಾಷೆ,ಒಂದೇ ಧರ್ಮ ಒಂದೇ ಸಂಸ್ಕೃತಿ ಹೆಸರಿನಲ್ಲಿ ವೈವಿಧ್ಯಮಯವಾದ ಭಾರತದ ಪ್ರಾದೇಶಿಕ ಅಸ್ಮಿತೆಗಳನ್ನು ನಾಶ ನಾಡುವ ಹುನ್ನಾರ ನಡೆದಿದೆ.ದಕ್ಷಿಣ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮೇಲೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇರುವ ದೌರ್ಜನ್ಯ ನಡೆದಿದೆ. ಕೇಂದ್ರದ ಚುಕ್ಕಾಣಿ ಹಿಡಿದ ನಾಗಪುರ ನಿರ್ದೇಶಿತ ಪಕ್ಷ ಸಂಸತ್ತಿನಲ್ಲಿ ಚರ್ಚೆ ಮಾಡದೇ ಕಾರ್ಮಿಕ ಮತ್ತು ರೈತ ವಿರೋಧಿಯಾದ ಕರಾಳ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಿದೆ.ಇನ್ನು ಮುಂದೆ ಕಾರ್ಮಿಕರು ಹನ್ನೆರಡು ತಾಸು ಕೆಲಸ ಮಾಡಬೇಕಾಗುತ್ತದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾಯಿತೆಂದು ಅವರಿಗೆ ಸಮಾಧಾನವಿಲ್ಲ.ಅವರ ಅಜೆಂಡಾ ಅಷ್ಟಕ್ಕೇ ಮುಗಿಯುವುದಿಲ್ಲ. ಹೊಸ ವಿವಾದಗಳನ್ನು ಕೆರಳಿಸಲಾಗುತ್ತಿದೆ. ಕೋಮು ವೈಷಮ್ಯವನ್ನು ಜೀವಂತವಾಗಿಡುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಇಂಥ ಸನ್ನಿವೇಶದಲ್ಲಿ ಈಗ ದೇಶದ ಮುಂದೆ ಉಳಿದ ಏಕೈಕ ದಾರಿ ಬಾಬಾಸಾಹೇಬರ ಸಂವಿಧಾನದ ಸಂರಕ್ಷಣೆ.ಅದನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂಬುದನ್ನು ಮರೆಯಬಾರದು.

ವಾರ್ತಾ ಭಾರತಿ 26 Jan 2026 11:42 am

ಕೆಎಂಸಿಗೆ ಮತ್ತೆ 50 ವೈದ್ಯ ಸೀಟುಗಳಿಗೆ ಬೇಡಿಕೆ ; ಪರವಾನಗಿ ಸಿಗುವ ನಿರೀಕ್ಷೆ

ಹುಬ್ಬಳ್ಳಿ ಕೆಎಂಸಿಆರ್‌ಐ ವೈದ್ಯಕೀಯ ಪದವಿ (ಯುಜಿ) ಪ್ರವೇಶಾತಿಗಾಗಿ 50 ಹೆಚ್ಚುವರಿ ಸೀಟುಗಳನ್ನು ಕೋರಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪ್ರಸ್ತಾವನೆ ಸಲ್ಲಿಸಿದೆ. 2026-27ರ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಾತಿ ನೀಡಲು ಸಿದ್ಧತೆ ನಡೆದಿದ್ದು, ಸ್ನಾತಕೋತ್ತರ ಕೋರ್ಸ್‌ಗಳಿಗೂ 18 ಸೀಟುಗಳ ಬೇಡಿಕೆ ಮಂಡಿಸಲಾಗಿದೆ.

ವಿಜಯ ಕರ್ನಾಟಕ 26 Jan 2026 11:42 am

Rajasthan| 10,000 ಕೆಜಿ ಸ್ಫೋಟಕ ವಶ: ಓರ್ವ ಆರೋಪಿಯ ಬಂಧನ

ಜೈಪುರ: ಗಣರಾಜ್ಯೋತ್ಸವಕ್ಕೆ ಮುನ್ನಾದಿನ ರಾಜಸ್ಥಾನದ ನಾಗೌರ್ ಜಿಲ್ಲಾ ಪೊಲೀಸರು ಜಮೀನೊಂದರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ, ಪೊಲೀಸರು ಶನಿವಾರ ತಡರಾತ್ರಿ ಹರ್ಸೌರ್ ಗ್ರಾಮದಲ್ಲಿ ದಾಳಿ ನಡೆಸಿದಾಗ ಹೊಲವೊಂದರಲ್ಲಿ 187 ಚೀಲಗಳಲ್ಲಿ ಪ್ಯಾಕ್ ಮಾಡಿಟ್ಟಿದ್ದ 9,550 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ತಿಳಿಸಿದ್ದಾರೆ. ಹರ್ಸೌರ್ ಗ್ರಾಮದ ನಿವಾಸಿ ಸುಲೇಮಾನ್ ಖಾನ್ ಎಂಬಾತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಪಿ  ತಿಳಿಸಿದ್ದಾರೆ. ಅಮೋನಿಯಂ ನೈಟ್ರೇಟ್ ಜೊತೆಗೆ, ಪೊಲೀಸರು ಡಿಟೋನೇಟರ್‌ಗಳು, ಐದು ಬಂಡಲ್ ಕೆಂಪು ಫ್ಯೂಸ್ ವೈರ್ ಸೇರಿದಂತೆ ದೊಡ್ಡ ಪ್ರಮಾಣದ ಸ್ಫೋಟಕ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಸ್ಫೋಟಕ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೃದುಲ್ ಕಚವಾ ಹೇಳಿದ್ದಾರೆ. 

ವಾರ್ತಾ ಭಾರತಿ 26 Jan 2026 11:41 am

ಸಂವಿಧಾನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ : ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ

ವಾರ್ತಾ ಭಾರತಿ 26 Jan 2026 11:41 am

ಮೈಸೂರು ಒಡೆಯರು; ಗಣರಾಜ್ಯ ದಿನದ ರಾಜಮನೆತದ ಬೇರುಗಳು: ಗಿರೀಶ್ ಲಿಂಗಣ್ಣ ಬರಹ

ಪ್ರತಿವರ್ಷವೂ ಜನವರಿ 26ರಂದು ನಾವು ಪರೇಡುಗಳು, ತ್ರಿವರ್ಣ ಧ್ವಜಗಳು, ಮತ್ತು ಅಪಾರ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ದಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತು ಆಧುನಿಕ ಭಾರತವನ್ನು ನಿರ್ಮಿಸಿದವರನ್ನು ಸ್ಮರಿಸುತ್ತೇವೆ. ಆದರೆ, ಸಾಮಾನ್ಯವಾಗಿ ಜನರು ಮರೆಯುವಂತಹ ಒಂದು ಅದ್ಭುತವಾದ ಕಥೆಯೂ ಇದೆ. ಅದುವೇ ಭಾರತ ಸ್ವತಂತ್ರವಾಗುವ ಮುನ್ನವೇ ಪ್ರಜಾಪ್ರಭುತ್ವವನ್ನು ಮೈಸೂರು ಮಹಾರಾಜರು ಚಾಲ್ತಿಗೆ ತಂದ ಕಥೆ. (ಬರಹ: ಲೇಖಕರು

ಒನ್ ಇ೦ಡಿಯ 26 Jan 2026 11:36 am

ಉಳ್ಳಾಲ | ರಹ್ಮಾನಿಯಾ ಜುಮಾ ಮಸೀದಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಉಳ್ಳಾಲ: ರಹ್ಮಾನಿಯಾ ಜುಮಾ ಮಸೀದಿ ಹಾಗೂ ಬುಸ್ತಾನುಲ್ ಉಲೂಮ್ ಮದರಸ ಪೇಟೆ ಉಳ್ಳಾಲ ವತಿಯಿಂದ ಮಸೀದಿ ವಠಾರದಲ್ಲಿ ಭಾರತದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಿಯುದ್ದೀನ್ ಹಸನ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಸ್ಲಾಂ ಧರ್ಮವನ್ನು ನಿಜವಾಗಿ ಪ್ರೀತಿಸುವ ವ್ಯಕ್ತಿ ತನ್ನ ರಾಷ್ಟ್ರವನ್ನೂ ಪ್ರೀತಿಸಬೇಕು. ದೇಶಪ್ರೇಮವು ಇಸ್ಲಾಮಿನ ಅವಿಭಾಜ್ಯ ಭಾಗವಾಗಿದೆ ಎಂದು ಹೇಳಿದರು. ರಹ್ಮಾನಿಯಾ ಜುಮಾ ಮಸೀದಿ ಕಾರ್ಯದರ್ಶಿ ಮುಸ್ತಫಾ ಅಹ್ಮದ್ ಅವರು ಗಣರಾಜ್ಯೋತ್ಸವದ ಮಹತ್ವದ ಕುರಿತು ಸಂದೇಶ ನೀಡಿದರು. ಬುಸ್ತಾನುಲ್ ಉಲೂಮ್ ಮದರಸ ಸದರ್ ಬಿ.ಕೆ. ಅಬ್ದುಲ್ ಖಾದರ್ ಮದನಿ ಅವರು ದುವಾ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೇಟೆ ಜುಮಾ ಮಸೀದಿ ಉಪಾಧ್ಯಕ್ಷ ನಝೀರ್ ಕರಾವಳಿ, ಸದಸ್ಯರಾದ ಶರೀಫ್, ಶರಾಫತ್, ಅಜೀಮ್ ಬಸ್ತಿಪಡ್ಡು, ಫಾರೂಕ್ ಸಾದುಕಾನ, ಪೊತ್ತುಬಾವಾ ಪೇಟೆ, ಆಫ್ರಿದ್ ಕೊಟ್ಟಾರ, ನಾಸೀರ್ ಮುಸ್ಲಿಯಾರ್, ಇಲ್ಯಾಸ್ ಕೊಟ್ಟಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೇಟೆ ಜುಮಾ ಮಸೀದಿ ಜೊತೆಗೆ ಕಾರ್ಯದರ್ಶಿ ತೌಸಿಫ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.      

ವಾರ್ತಾ ಭಾರತಿ 26 Jan 2026 11:35 am

ಸಂವಿಧಾನವನ್ನು ಅಪ್ರಸ್ತುತ ಮಾಡುವ ಸಂಚಿನ ಬಗ್ಗೆ ಎಚ್ಚರ ವಹಿಸೋಣ: ಸಿದ್ದರಾಮಯ್ಯ

ಮುಖ್ಯಮಂತ್ರಿಯಿಂದ ಗಣರಾಜ್ಯೋತ್ಸವ ಸಂದೇಶ

ವಾರ್ತಾ ಭಾರತಿ 26 Jan 2026 11:30 am

Siddaramaiah: 77ನೇ ಗಣರಾಜ್ಯೋತ್ಸವ; ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಸಂದೇಶವೇನು?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಆಚರಣೆ ಸಂಭ್ರಮದಿಂದಲೇ ನೆರವೇರಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರಿಯಾಗಿ 9 ಗಂಟೆಗೆ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣದ ನಂತರ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪೊಲೀಸರಿಂದ ವಂದನಾ

ಒನ್ ಇ೦ಡಿಯ 26 Jan 2026 11:28 am

Tamil Nadu Elections; ಆರ್ಯ-ದ್ರಾವಿಡರ ವಿರುದ್ಧದ ಹೊಸ ಯುದ್ಧ; ಪ್ರಧಾನಿ ಮೋದಿ ವಿರುದ್ಧ ಸ್ಟಾಲಿನ್‌ ಕಿಡಿ

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ಯ-ದ್ರಾವಿಡ ಯುದ್ಧ ಹೊಸ ಸ್ವರೂಪದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ತಮಿಳು ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಹಾಳುಮಾಡಲು ಪ್ರಯತ್ನಿಸುವವರು ಸೋಲು ಕಾಣುವುದು ನಿಜ ಸ್ಟಾಲಿನ್ ತಿಳಿಸಿದ್ದಾರೆ.

ವಿಜಯ ಕರ್ನಾಟಕ 26 Jan 2026 11:21 am

ಮಿನ್ನಿಯಾಪೋಲಿಸ್ ಗುಂಡಿನ ದಾಳಿ |ಟ್ರಂಪ್ ವಲಸೆ ಜಾರಿ ಉಲ್ಬಣ; ಟ್ರಂಪ್‌ಗೆ ರಾಜಕೀಯ ಅಗ್ನಿಪರೀಕ್ಷೆ

ವಾಷಿಂಗ್ಟನ್/ಮಿನ್ನಿಯಾಪೋಲಿಸ್, ಜ.26: ಅಮೆರಿಕದ ಮಿನ್ನಿಯಾಪೋಲಿಸ್‌ನಲ್ಲಿ ನಡೆದ ಗುಂಡಿನ ದಾಳಿಯು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ವಲಸೆ ಜಾರಿ ನೀತಿಯನ್ನು ಚುನಾವಣಾ ವರ್ಷದ ಪ್ರಮುಖ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿಸಿದೆ. ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಹಾಗೂ ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (CBP) ನಡೆಸುತ್ತಿರುವ ಕಾರ್ಯಾಚರಣೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಸಾರ್ವಜನಿಕ ಸುರಕ್ಷತೆಯ ಹೆಸರಿನಲ್ಲಿ ICE ಮತ್ತು CBP ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಲ್ಲಿ ರಿಪಬ್ಲಿಕನ್ನರು ಡೆಮೋಕ್ರಾಟ್‌ಗಳೊಂದಿಗೆ ಕೈಜೋಡಿಸಬೇಕು ಎಂದು ಸೆನೆಟ್ ನಾಯಕ ಚಕ್ ಷುಮರ್ ಆಗ್ರಹಿಸಿದ್ದಾರೆ. ಡೆಮೋಕ್ರಾಟ್‌ಗಳೂ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. “ಇದು ಅಮೆರಿಕನ್ನರನ್ನು ಸುರಕ್ಷಿತವಾಗಿರಿಸುವ ವಿಚಾರವಲ್ಲ. ಅಮೆರಿಕ ನಾಗರಿಕರು ಮತ್ತು ಕಾನೂನು ಪಾಲಿಸುವ ವಲಸಿಗರ ಮೇಲೆ ಕ್ರೂರವಾಗಿ ವರ್ತಿಸುವ ಕ್ರಮ ಇದಾಗಿದೆ,” ಎಂದು ನೆವಾಡಾ ಸೆನೆಟರ್ ಕ್ಯಾಥರಿನ್ ಕೊರ್ಟೆಜ್ ಮಾಸ್ಟೊ ICE ಕಾರ್ಯಾಚರಣೆಯನ್ನು ಟೀಕಿಸಿದ್ದಾರೆ. ಟ್ರಂಪ್ ಆಡಳಿತವು ಮಿನ್ನಿಯಾಪೋಲಿಸ್‌ನಲ್ಲಿ ಇದುವರೆಗೆ ನಡೆದ ಅತ್ಯಂತ ಮಹತ್ವಾಕಾಂಕ್ಷೆಯ ವಲಸೆ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇದರ ವಿರುದ್ಧ ವಾರಗಳ ಕಾಲ ಪ್ರತಿಭಟನೆಗಳು ನಡೆದಿವೆ. ಫೆಡರಲ್ ಏಜೆಂಟ್‌ಗಳು ಮತ್ತು ಸ್ಥಳೀಯ ನಿವಾಸಿಗಳ ನಡುವಿನ ಘರ್ಷಣೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಜನವರಿ 7ರಂದು ರೆನೀ ಗುಡ್ ಹಾಗೂ ಇತ್ತೀಚಿನ ವಾರಾಂತ್ಯದಲ್ಲಿ ಪ್ರೆಟ್ಟಿ ಎಂಬ ಇಬ್ಬರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಹಿಂದೆ ಸರಿಯುವ ಯಾವುದೇ ಲಕ್ಷಣ ತೋರಿಸಿಲ್ಲ. ರವಿವಾರ ಟ್ರೂತ್ ಸೋಷಿಯಲ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಈ ಕಾರ್ಯಾಚರಣೆ 2024ರ ಅಧ್ಯಕ್ಷೀಯ ಚುನಾವಣೆ ಮತ್ತು ಕಾಂಗ್ರೆಸ್ ಮೇಲಿನ ರಿಪಬ್ಲಿಕನ್ ನಿಯಂತ್ರಣಕ್ಕೆ ಪ್ರಮುಖ ಅಸ್ತ್ರವಾಗಲಿದೆ ಎಂದು ಅವರು ಹೇಳಿದ್ದಾರೆ. “ಡೆಮೋಕ್ರಾಟ್‌ಗಳು ಸೃಷ್ಟಿಸಿದ ಅವ್ಯವಸ್ಥೆಯ ಪರಿಣಾಮವಾಗಿ ಇಬ್ಬರು ಅಮೆರಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ಟ್ರಂಪ್ ಆರೋಪಿಸಿದ್ದಾರೆ. ಕಾನೂನು ಜಾರಿಗೆ ಸಾಮಾನ್ಯವಾಗಿ ಬೆಂಬಲ ನೀಡುವ ರಿಪಬ್ಲಿಕನ್ ಪಕ್ಷಕ್ಕೆ, ಕಾನೂನುಬದ್ಧವಾಗಿ ಶಸ್ತ್ರಸಜ್ಜಿತನಾಗಿದ್ದ ಅಮೆರಿಕ ನಾಗರಿಕನ ಮೇಲೆ ರವಿವಾರ ಗುಂಡು ಹಾರಿಸಿರುವ ಘಟನೆ ರಾಜಕೀಯ ಸಂಕಷ್ಟವನ್ನುಂಟುಮಾಡಿದೆ. ಪ್ರೆಟ್ಟಿ, ಪ್ರತಿಭಟನೆಗೆ ಶಸ್ತ್ರಾಸ್ತ್ರ ತಂದಿದ್ದಕ್ಕಾಗಿ ಆಡಳಿತವು ಅವರನ್ನು ದೋಷಾರೋಪಣೆ ಮಾಡಲು ಯತ್ನಿಸುತ್ತಿರುವುದರ ಬಗ್ಗೆ ಬಂದೂಕು ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. “ಮಿನ್ನೇಸೋಟದ ಪ್ರತಿಯೊಬ್ಬ ಶಾಂತಿಯುತ ನಿವಾಸಿಗೂ, ಪ್ರತಿಭಟನೆಗಳಲ್ಲಿಯೂ ಸೇರಿದಂತೆ, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಮತ್ತು ಹೊರುವ ಹಕ್ಕಿದೆ,” ಎಂದು ಮಿನ್ನೇಸೋಟ ಗನ್ ಓನರ್ಸ್‌ ಕಾಕಸ್ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ರಾಯಿಟರ್ಸ್ ವರದಿಯ ಪ್ರಕಾರ, ಡೆಮೋಕ್ರಾಟ್ ಮತದಾರರು ಟ್ರಂಪ್ ಅವರ ವಲಸೆ ಜಾರಿ ತಂತ್ರಗಳನ್ನು ಬೆಂಬಲಿಸುವುದಿಲ್ಲ. ಟ್ರಂಪ್ ಬೆಂಬಲಿಗ ರಿಪಬ್ಲಿಕನ್ ಮತದಾರರಲ್ಲಿ 39 ಶೇಕಡಾ ಮಂದಿ ಈ ತಂತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾನಿಯನ್ನು ತಗ್ಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಸ್ವತಂತ್ರ ಮತದಾರರಲ್ಲಿ 73 ಶೇಕಡಾ ಮಂದಿ ಹಾನಿ ಕಡಿಮೆ ಮಾಡುವುದೇ ಮುಖ್ಯ ಎಂದು ಅಭಿಪ್ರಾಯಪಟ್ಟರೆ, 19 ಶೇಕಡಾ ಮಂದಿ ಬಂಧನ ಜಾರಿಗೆ ಗಂಭೀರ ಗಾಯ ಅಥವಾ ಸಾವಿನ ಅಪಾಯವನ್ನೂ ಎದುರಿಸಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ. “ಇಲ್ಲಿ ನಡೆಯುತ್ತಿರುವುದು ದೇಶದ ಎಲ್ಲ ಭಾಗಗಳಲ್ಲಿಯೂ ಸಂಭವಿಸಬಹುದು ಎಂಬುದನ್ನು ಜನರು ಅರಿಯಬೇಕು,” ಎಂದು 50 ವರ್ಷದ ಮಿನ್ನಿಯಾಪೋಲಿಸ್ ನಿವಾಸಿ ಹಾಗೂ ಪ್ರತಿಭಟನಾಕಾರ ಎರಿಕ್ ಗ್ರೇ ಹೇಳಿದ್ದಾರೆ. “ಮಿನ್ನೇಸೋಟ ಆರಂಭಿಕ ಹಂತ ಅಥವಾ ಲಿಟ್ಮಸ್ ಪರೀಕ್ಷೆಯಾಗಿ ಬದಲಾಗುತ್ತಿದೆ,” ಎಂದಿದ್ದಾರೆ. ರಿಪಬ್ಲಿಕನ್ ವಲಯದಲ್ಲಿಯೇ ಅಸಮಾಧಾನ ಭಾರೀ ಶಸ್ತ್ರಸಜ್ಜಿತ ಫೆಡರಲ್ ವಲಸೆ ಏಜೆಂಟ್‌ ಗಳು ಮತ್ತು ನಾಗರಿಕರ ನಡುವಿನ ಘರ್ಷಣೆಗಳ ವೈರಲ್ ದೃಶ್ಯಗಳು, ನವೆಂಬರ್ ಮಧ್ಯಾವಧಿ ಚುನಾವಣೆಗೂ ಮುನ್ನ ಬೆಲೆ ಏರಿಕೆಯ ವಿರುದ್ಧ ಮತದಾರರ ಅಸಮಾಧಾನ ಎದುರಿಸುತ್ತಿರುವ ರಿಪಬ್ಲಿಕನ್ ಶಾಸಕರಲ್ಲೂ ಆತಂಕ ಮೂಡಿಸಿವೆ. ಕಳೆದ ವರ್ಷ ICEಗೆ ಹೆಚ್ಚುವರಿ ಅನುದಾನಕ್ಕೆ ಒಪ್ಪಿಗೆ ನೀಡಿದ್ದರೂ, ಮಿನ್ನೇಸೋಟದಲ್ಲಿ ನಡೆದ ಎರಡು ಗುಂಡಿನ ದಾಳಿಗಳ ಬಳಿಕ ಕೆಲ ರಿಪಬ್ಲಿಕನ್ನರು ಟ್ರಂಪ್ ಆಡಳಿತದಿಂದ ಸ್ಪಷ್ಟ ಉತ್ತರಗಳನ್ನು ಕೇಳುತ್ತಿದ್ದಾರೆ. ಲೂಸಿಯಾನಾ ಸೆನೆಟರ್ ಬಿಲ್ ಕ್ಯಾಸಿಡಿ, ಮಿನ್ನಿಯಾಪೋಲಿಸ್ ಗುಂಡಿನ ದಾಳಿಯನ್ನು “ಅತೀವ ಗೊಂದಲಕಾರಿಯಾಗಿದೆ. ICE ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಿಶ್ವಾಸಾರ್ಹತೆ ಅಪಾಯದಲ್ಲಿದೆ” ಎಂದಿದ್ದಾರೆ. ಅಲಾಸ್ಕಾ ಸೆನೆಟರ್ ಲಿಸಾ ಮುರ್ಕೋವ್ಸ್ಕಿ, ಈ ಸಾವು ವಲಸೆ ಜಾರಿ ತರಬೇತಿಯ ಸಮರ್ಪಕತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎಂದಿದ್ದಾರೆ. ಉತ್ತರ ಕೆರೊಲಿನಾ ಸೆನೆಟರ್ ಥಾಮ್ ಟಿಲ್ಲಿಸ್, ತನಿಖೆಯನ್ನು ಸ್ಥಗಿತಗೊಳಿಸಲು ಯತ್ನಿಸುವ ಯಾವುದೇ ಆಡಳಿತಾಧಿಕಾರಿ “ರಾಷ್ಟ್ರಕ್ಕೂ ಮತ್ತು ಟ್ರಂಪ್ ಅವರ ಪರಂಪರೆಯಿಗೂ ಅಪಚಾರ ಮಾಡುತ್ತಾರೆ” ಎಂದು ಹೇಳಿದ್ದಾರೆ. ಸದನದಲ್ಲಿ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಸಮಿತಿಯು ICE ಅಧಿಕಾರಿಗಳಿಂದ ಕಾರ್ಯಾಚರಣೆಯ ಕುರಿತು ಸಾಕ್ಷ್ಯವನ್ನು ಕೋರಿದೆ.ವಲಸೆ ಜಾರಿಯನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದರ ಕುರಿತು ಅಮೆರಿಕ ಜನತೆ ಮತ್ತು ಕಾಂಗ್ರೆಸ್‌ಗೆ ಸ್ಪಷ್ಟತೆ ನೀಡುವುದು ಅಗತ್ಯ, ಎಂದು ವಾಷಿಂಗ್ಟನ್ ರಾಜ್ಯದ ರಿಪಬ್ಲಿಕನ್ ಪ್ರತಿನಿಧಿ ಮೈಕೆಲ್ ಬಾಮ್‌ಗಾರ್ಟ್ನರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Jan 2026 11:19 am

T20 World Cup : ಮ್ಯಾಚ್ ಆಡೋಲ್ವಾ, ನೋ ಪ್ರಾಬ್ಲಂ, ಪ್ಲ್ಯಾನ್ ಬಿ ರೆಡಿ - ಐಸಿಸಿ ನಿರ್ಧಾರಕ್ಕೆ ಬೆಚ್ಬಿಬಿದ್ದ ಪಾಕಿಸ್ತಾನ

T20 World Cup Venue Row : ಭಾರತದಲ್ಲಿ ಆಡುವುದಿಲ್ಲ ಎನ್ನುವ ಕಾರಣಕ್ಕೆ ಬಾಂಗ್ಲಾದೇಶ ತಗಾದೆ ತೆಗೆದಿತ್ತು. ಹಠವನ್ನು ಬಿಡದ ಬಾಂಗ್ಲಾದೇಶಕ್ಕೆ ಪಾಠ ಕಲಿಸಿದ ಐಸಿಸಿ, ಆ ತಂಡವನ್ನು ಟೂರ್ನಿಯಿಂದ ಹೊರಗಟ್ಟಿತು. ಈಗ, ಪಾಕಿಸ್ತಾನದ ಸರದಿ. ಸರ್ಕಾರ ಬೇಡ ಎಂದರೆ, ನಾವು ಆಡುವುದಿಲ್ಲ ಎಂದು ಪಿಸಿಬಿ ಹೇಳಿದೆ. ಐಸಿಸಿ, ಇದಕ್ಕೂ ಪರ್ಯಾಯ ತಂಡವನ್ನು ಆಗಲೇ ಸಂಪರ್ಕಿಸಿದೆ.

ವಿಜಯ ಕರ್ನಾಟಕ 26 Jan 2026 11:18 am

ರಾಯಚೂರು | 77ನೇ ಗಣರಾಜ್ಯೋತ್ಸವ: ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಧ್ವಜಾರೋಹಣ

ರಾಯಚೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಧ್ವಜಾರೋಹಣ ನಡೆಸಿದರು. ಈ ಸಂದರ್ಭದಲ್ಲಿ ಎಂಎಲ್ ಸಿ ವಸಂತಕುಮಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ದದ್ದಲ್, ನಗರ ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಪವನ್ ಕುಮಾರ್ ಪಾಟೀಲ ಕಿಶೋರ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಮತ್ತು ಡಾ. ರಝಾಕ್ ಉಸ್ತಾದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.  ವಿವಿಧ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನವನ್ನು ವೀಕ್ಷಿಸಿದ ಬಳಿಕ ಸಚಿವರು ಗಣರಾಜ್ಯೋತ್ಸವ ಸಂದೇಶ ನೀಡಿದರು.   ಸತ್ಯ ಮತ್ತು ಅಹಿಂಸೆಯಿಂದ ಪಡೆದ ಸ್ವಾತಂತ್ರ್ಯವು ವಿಶ್ವಕ್ಕೆ ಮಾದರಿಯಾಗಿದೆ. ಸರ್ವರಿಗೂ ಸಮಾನತೆ ದೊರಕಬೇಕು ಎಂಬುದೇ ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಗುರಿಯಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಜ್ಞಾನದ ಸಾಗರ, ಮೇಧಾವಿ, ದೇಶಕ್ಕೆ ಅಗತ್ಯವಾದ ಅದ್ಭುತ ಸಂವಿಧಾನ ಮತ್ತು ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ವಿವಿಧ ಭಾಷೆ, ಸಂಸ್ಕೃತಿ, ಅಭಿಪ್ರಾಯಗಳ ನಡುವಿನ ಏಕತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನ್ವಯವಾಗುವಂತೆ ಸಂವಿಧಾನವನ್ನು ರೂಪಿಸಲಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪ್ರತಿ ಶಬ್ದದ ಕುರಿತು ಚರ್ಚೆ ಮಾಡಿ, ತೀವ್ರ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದರು. ಪ್ರತಿಯೊಬ್ಬರೂ ಸಂವಿಧಾನದ ಅಂಗೀಕಾರಕ್ಕಾಗಿ ತೀವ್ರವಾಗಿ ಚರ್ಚೆ ಮಾಡಿದ್ದಾರೆ. ಆದ್ದರಿಂದ ನಾವೆಲ್ಲರೂ ಈ ಸಂವಿಧಾನವನ್ನು ಅಂಗೀಕರಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು. ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ್ದೇವೆ. ಸರ್ಕಾರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಸಮಾನತೆ, ಒಕ್ಕೂಟ ವ್ಯವಸ್ಥೆ ಉಳಿಸಿಕೊಂಡು ಹೋಗಬೇಕು. ಕೇಂದ್ರ ಮತ್ತು ರಾಜ್ಯಗಳ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಮತ್ತು ನಿಷ್ಪಕ್ಷಪಾತ, ನಿಸ್ವಾರ್ಥ ಭಾವದಿಂದ ಕೆಲಸ ಮಾಡಬೇಕು ಎಂದರು. 2013 ರಲ್ಲಿ ಯುಪಿಎ ಸರ್ಕಾರವು ಸಂವಿಧಾನದಲ್ಲಿ ತಿದ್ದುಪಡಿ 371ಜೆ ಕಲಂ ಜಾರಿಗೆ ತಂದಿತು. ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಈ ಕ್ರಮ ಬಹಳ ಪರಿಣಾಮಕಾರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಶ್ರಮದ ಮೂಲಕ ಕಳೆದ 10 ವರ್ಷಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು, ಸಾವಿರಾರು ಇಂಜಿನಿಯರ್‌ಗಳು ಹಿರಿತನ ತಲುಪಿದ್ದಾರೆ. ಪ್ರತಿ ವರ್ಷ ₹5,000 ಕೋಟಿ ಹೂಡಿಕೆಯಾಗುತ್ತಿದೆ. ಗ್ಯಾರಂಟಿ ಯೋಜನೆಯ ಮೂಲಕ ಈ ಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯವನ್ನು ಸಮೃದ್ಧ, ಪ್ರಗತಿಪರವನ್ನಾಗಿಸಲು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬೇಡಿಕೆಗೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗಿದೆ. ಏಮ್ಸ್ ಸ್ಥಾಪನೆಗಾಗಿ ಪ್ರಯತ್ನಗಳು ನಡೆಯುತ್ತಿವೆ. ಪಾರದರ್ಶಕ ಆಡಳಿತಕ್ಕಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮನರೇಗಾ ಕಾಯ್ದೆಯನ್ನು ಬದಲಾಯಿಸಿದ ಕೇಂದ್ರ ಸರ್ಕಾರ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ನೀಡಿದೆ. ಮನರೇಗಾ ಗ್ರಾಮೀಣ ಜನರಿಗೆ ಮತ್ತು ಭೂರಹಿತರಿಗೆ ಉದ್ಯೋಗ ಖಾತರಿ ನೀಡುತ್ತಿತ್ತು. ಜನರು ಕೆಲಸಕ್ಕಾಗಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೆ ಕೆಲಸ ದೊರಕುತ್ತಿತ್ತು; ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ದೊರಕುತ್ತಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯಗಳ ಅಭಿಪ್ರಾಯವನ್ನು ಕೇಳದೆ ಗಣತಂತ್ರಕ್ಕೆ ವಿರುದ್ಧವಾದ ನೀತಿಗಳನ್ನು ಅನುಸರಿಸಿದೆ. ಬಡವರ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಮನರೇಗಾ ಪುನಃ ಜಾರಿಗೆ ಬರಬೇಕು ಎಂದು ಹೇಳಿದರು. ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ; ದೇಶ ಕಟ್ಟಲು ಕೇಂದ್ರ-ರಾಜ್ಯ ಸರ್ಕಾರಗಳು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಬೇಕು. ಪ್ರಜೆಗಳಾದ ನಾವೆಲ್ಲಾ ದೇಶಭಕ್ತಿ ಅಳವಡಿಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಗೌರವಿಸಬೇಕು ಎಂದರು.          

ವಾರ್ತಾ ಭಾರತಿ 26 Jan 2026 11:17 am

ರಾಜ್ಯಪಾಲರ ಜತೆಗಿನ ಸಂಘರ್ಷ ಬೇಕಿತ್ತಾ?

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಒಂದು ಪ್ಯಾರಾ ಓದಿ ವಿಧಾನಸಭೆಯಿಂದ ನಿರ್ಗಮಿಸುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕರೊಬ್ಬರು ‘ಇಲ್ಲಿಯವರೆಗೆ ಇವರು ಮಾಡಿದ ಒಳ್ಳೆಯ ಕೆಲಸ ಇದೊಂದೇ’ ಎಂದು ಉದ್ಗರಿಸಿದರು. ರಾಜ್ಯಪಾಲರು ಸರಕಾರದ ಜೊತೆ ಎಲ್ಲಾ ವಿಷಯದಲ್ಲೂ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು. ಇದು ಬಹುತೇಕ ನಿಜ. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಅವಸರ ಮಾಡಿದರು ಎನ್ನುವ ಆರೋಪ ಇದೆ. ಆದರೆ ಅವರು ಇನ್ನೂ ಬೇಗ ಕ್ರಮ ಕೈಗೊಳ್ಳಬಹುದಿತ್ತು ಎನ್ನುವುದೂ ವಾಸ್ತವವೇ. ಹಾಗೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯದಲ್ಲಿ ಅನಗತ್ಯ ತಡಮಾಡಿದರು ಎನ್ನುವ ಆರೋಪವೂ ಇದೆ. ಮಸೂದೆಗಳ ವಿಷಯಕ್ಕೆ ಬರುವುದಾದರೆ ದ್ವೇಷ ಭಾಷಣ ತಡೆ ಮಸೂದೆ ಮತ್ತು ಒಳಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಮೀನಾ ಮಿಷ ಎಣಿಸುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಪಕ್ಕದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ಕೇರಳದ ಮಾಜಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಈಗಿನ ರಾಜ್ಯಪಾಲ ರಾಜೇಂದ್ರ ಆರ್ಲೆಕರ್, ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್ ಬೋಸ್ ಕಾರ್ಯವೈಖರಿಗೆ ಹೋಲಿಸಿಕೊಂಡರೆ, ಅಷ್ಟೇ ಏಕೆ, ಹಿಂದೆ ಕರ್ನಾಟಕದಲ್ಲೇ ಇದ್ದ ಹಂಸರಾಜ್ ಭಾರದ್ವಾಜ್‌ಗೆ ಹೋಲಿಸಿಕೊಂಡರೂ ಥಾವರ್ ಚಂದ್ ಗೆಹ್ಲೋಟ್ ಹೊಂದಾಣಿಕೆ ಮನೋಭಾವದವರು ಎನ್ನುವುದು ದಿಟವೇ. ಹಿಂದೆ ಕುಲಪತಿಯೊಬ್ಬರ ನೇಮಕ ವಿಷಯ ಸ್ವಲ್ಪ ವಿಷಮ ಪರಿಸ್ಥಿತಿ ತಲುಪುತ್ತಿದ್ದಂತೆ ‘ಇದೊಂದು ವಿಚಾರದಲ್ಲಿ ನನ್ನ ಬಿಟ್ಟುಬಿಡಿ’ ಎಂದು ಎದ್ದುನಿಂತು ಕೈಮುಗಿದು ಕೇಳಿಕೊಂಡಿದ್ದರಂತೆ. ಅವರ ಮೇಲೆ ಅಷ್ಟೊಂದು ಒತ್ತಡವಿತ್ತು; ಇಲ್ಲದಿದ್ದರೆ ಅದಕ್ಕೂ ಸಮ್ಮತಿ ಸೂಚಿಸುತ್ತಿದ್ದರು ಎಂದು ಸರಕಾರದ ಉನ್ನತ ಮೂಲಗಳೇ ಹೇಳುತ್ತವೆ. ಹೀಗೆ ಸರಕಾರ ಮತ್ತು ರಾಜಭವನದ ನಡುವೆ ಸೌಹಾರ್ದ ವಾತಾವರಣವಿದ್ದಾಗ ಸರಕಾರ ರಾಜ್ಯಪಾಲರ ಬಾಯಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆ ಕುರಿತು 11 ಪ್ಯಾರಾಗಳನ್ನು ಓದಿಸಲೇಬೇಕೆಂದು ನಿರ್ಣಯಿಸಿದ್ದು ಏಕೆ? ಸಾಂಕೇತಿಕವಾಗಿ ಒಂದೇ ಪ್ಯಾರಾ ಸೇರಿಸಿದ್ದರೆ ರಾಜ್ಯಪಾಲರು ಓದಲೇಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದರು. 11 ಪ್ಯಾರಾಗಳನ್ನು ಸೇರಿಸುವ ಮೂಲಕ ಭಾಷಣ ಓದದೇ ಪಲಾಯನ ಮಾಡಲು ಮತ್ತು ತಮ್ಮನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ ಕೇಂದ್ರ ಸರಕಾರಕ್ಕೆ ಕೃತಜ್ಞರಾಗಿರಲು ರಾಜ್ಯಪಾಲರಿಗೆ ಸರಕಾರವೇ ಅವಕಾಶ ಮಾಡಿಕೊಟ್ಟಿತು. ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳುವುದು ಸರಕಾರದ ಉದ್ದೇಶವೇ ಆಗಿದ್ದರೆ ರಾಜ್ಯಪಾಲರು ಸಾಂಕೇತಿಕವಾಗಿ ಒಂದು ಪ್ಯಾರಾ ಓದಿದ ಬಳಿಕವೂ ಆ ಕೆಲಸವನ್ನು ಮಾಡಬಹುದಾಗಿತ್ತು. ಅಥವಾ ಆ ಒಂದು ಪ್ಯಾರಾವನ್ನು ಓದದ್ದಿರೆ ಇನ್ನಷ್ಟು ಉಗ್ರವಾಗಿ ವಿರೋಧಿಸಬಹುದಾಗಿತ್ತು. ಮುಖ್ಯಮಂತ್ರಿ, ಮಂತ್ರಿಗಳಿಂದ ಹಿಡಿದು ಕಾಂಗ್ರೆಸ್ ಪಕ್ಷದಲ್ಲಿ ನೀತಿ, ನಿರೂಪಣೆಗಳ ಬಗ್ಗೆ, ಕಾಯ್ದೆ, ಕಟ್ಟಳೆ ಬಗ್ಗೆ ಮಾತನಾಡಲು ದಂಡಿ ದಂಡಿ ನಾಯಕರಿದ್ದಾರೆ. ಅಂಥ ಬರ ಮತ್ತು ಅಜ್ಞಾನ ಇರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮಾತ್ರ. ಆದರೂ ಸರಕಾರ, ಅಂದರೆ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಪ್ರಚೋದಿಸಲು ಮುಂದಾಗಿದ್ದೇಕೆ? ಅವರಿಗೆ ತಾವು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದೇವೆ ಎನ್ನುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿ, ಹೈಕಮಾಂಡ್ ನಾಯಕರಿಗೂ ಗೊತ್ತಾಗಲಿ ಎನ್ನುವ ಅಜೆಂಡಾ ಇದ್ದಿರಬಹುದು. ಒಂದೊಮ್ಮೆ ಅಂಥ ಉದ್ದೇಶವಿದ್ದರೂ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಾಗಿತ್ತು. ಪ್ರಾದೇಶಿಕ ಅಸ್ಮಿತೆಯ ವಿಚಾರ ರಾಜ್ಯಪಾಲ ಎನ್ನುವುದು ಆಲಂಕಾರಿಕ ಹುದ್ದೆ, ಅದನ್ನು ರದ್ದು ಪಡಿಸುವುದೇ ಸೂಕ್ತ ಎಂದು ಯಾವ ಆಯೋಗ-ಸಮಿತಿಗಳೂ ಶಿಫಾರಸು ಮಾಡಿಲ್ಲ. ಆದರೂ ರಾಜ್ಯಪಾಲರ ಅಗತ್ಯ ಏನು ಎನ್ನುವ ಚರ್ಚೆ ಇದ್ದೇ ಇದೆ. ಮೊನ್ನೆ ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇರವಾಗಿಯೇ ರಾಜ್ಯಪಾಲರ ಅಗತ್ಯ ಇಲ್ಲ, ಲೋಕಭವನಗಳ ಜರೂರತ್ತು ಇಲ್ಲ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೂ ದನಿಗೂಡಿಸಿದ್ದರೆ ರಾಜ್ಯಪಾಲರ ಹುದ್ದೆ ಬೇಡ ಎನ್ನುವ ವಾದಕ್ಕೆ ಇನ್ನಷ್ಟು ಬಲ ಬರುತ್ತಿತ್ತು. ಈ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರು ಪ್ರಾದೇಶಿಕ ಅಸ್ಮಿತೆಯನ್ನೂ ಬಡಿದೆಚ್ಚರಿಸಬಹುದಾಗಿತ್ತು. ರಾಜ್ಯದ ಪ್ರಾದೇಶಿಕ ಪಕ್ಷ ಎಂದೇ ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜೊತೆ ಕೈಜೋಡಿಸಿ ರಾಜ್ಯದ ಹಿತ ಕಡೆಗಣಿಸಿರುವ ಈ ಹೊತ್ತಿನಲ್ಲಿ ಅದರ ಅಗತ್ಯ ಕೂಡ ಇತ್ತು. ವಿಬಿ-ಜಿ ರಾಮ್ ಜಿ ಕಾಯ್ದೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಲಿದೆ. ಅನುದಾನ ಹಂಚಿಕೆಯ ಹೊಸ ಮಾದರಿಯಿಂದ ರಾಜ್ಯ ಸರಕಾರಗಳಿಗೆ ಆರ್ಥಿಕವಾಗಿ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿಯ ನಾಯಕ, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಯಾವ ಸಮಸ್ಯೆಗಳೂ ಕಾಣುತ್ತಿಲ್ಲ. ಅದರ ಬಗ್ಗೆ ಅಪ್ಪ-ಮಕ್ಕಳು ಮಾತನಾಡುತ್ತಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಾದೇಶಿಕ ಕಾಳಜಿಯನ್ನು ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲೂ ಕಾಂಗ್ರೆಸ್ ನಾಯಕರು ಅದರ ಬಗ್ಗೆ ಮಾತನಾಡಲು ಇದು ಸಕಾಲವಾಗಿತ್ತು. ರಾಜ್ಯಪಾಲ ಹುದ್ದೆ ಯಾವಾಗೆಲ್ಲಾ ವಿವಾದದ ಸ್ವರೂಪ ಪಡೆದುಕೊಳ್ಳುತ್ತದೆಯೋ ಆಗೆಲ್ಲಾ ರಾಜ್ಯಗಳ ಪ್ರಾದೇಶಿಕ ಅಸ್ಮಿತೆ ಹಾಗೂ ಜನರಿಂದ ಆಯ್ಕೆಯಾದ ಸರಕಾರಗಳ ಮಹತ್ವದ ಬಗ್ಗೆ ಚರ್ಚೆಯಾಗುತ್ತದೆ. ಅಷ್ಟೇ ಏಕೆ? ಸಂವಿಧಾನ ರಚನಾ ಸಮಿತಿಯಲ್ಲಿ ರಾಜ್ಯಪಾಲರ ಹುದ್ದೆಯ ಸೃಷ್ಟಿ ಕುರಿತು ನಿರ್ಧರಿಸುವಾಗಲೂ ಪ್ರಾದೇಶಿಕ ಹಿತದ ಬಗ್ಗೆ ಸಮಾಲೋಚನೆ ಮಾಡಲಾಗಿತ್ತು. 1983ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧ ಸುಧಾರಣೆಗಾಗಿ ಶಿಫಾರಸು ಮಾಡುವಂತೆ ರಚಿಸಲಾಗಿದ್ದ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ನೇತೃತ್ವದ ಆಯೋಗ ಹಾಗೂ 2000ರಲ್ಲಿ ರಚಿಸಲಾಗಿದ್ದ ನ್ಯಾಯಮೂರ್ತಿ ಎಂಎನ್ ವೆಂಕಟಾಚಲಯ್ಯ ನೇತೃತ್ವದ ಸಂವಿಧಾನದ ಕಾರ್ಯನಿರ್ವಹಣೆಯ ಪುನರ್ ಪರಿಶೀಲನಾ ಆಯೋಗಗಳು ಕೂಡ ರಾಜ್ಯಪಾಲರು ಪ್ರಾದೇಶಿಕ ಹಿತ ಮರೆತು ಕೆಲಸ ಮಾಡಬಾರದು ಎನ್ನುವ ಕಾಳಜಿ ಮೇಲೆ ಬೆಳಕು ಚೆಲ್ಲಿದ್ದವು. ಈಗಲೂ ರಾಜ್ಯಪಾಲರು ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ಇರುವುದು ಒಂದು ಪ್ರಾದೇಶಿಕ ಸರಕಾರಕ್ಕೆ ಮಾಡಿದ ಅಪಮಾನ. ಆದರೂ ರಾಜ್ಯ ಕಾಂಗ್ರೆಸ್ ನಾಯಕರು ‘ರಾಜ್ಯಪಾಲರು ವಿಬಿ-ಜಿ ರಾಮ್ ಜಿ ಕಾಯ್ದೆ ಬಗ್ಗೆ ಭಾಷಣ ಮಾಡಲಿಲ್ಲ’ ಎಂದು ಹೇಳುತ್ತಿದ್ದಾರೆಯೇ ವಿನಃ ‘ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು’, ‘ರಾಜ್ಯದ ಜನ ಆರಿಸಿದ ಸರಕಾರಕ್ಕೆ’ ಅಪಮಾನ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಎಲ್ಲಿ, ಯಾವ ವಿಷಯವನ್ನು? ಹೇಗೆ ಒತ್ತಿ ಹೇಳಬೇಕು ಎಂದು, ನಿರೂಪಣೆಯನ್ನು ಸೃಷ್ಟಿಸುವುದು ಕಾಂಗ್ರೆಸ್ ನಾಯಕರಿಗೆ ಗೊತ್ತಾಗುತ್ತಿಲ್ಲ. ಇದನ್ನು lack of political diplomacy ಎನ್ನಬಹುದು. ತಯಾರಿಯ ಕೊರತೆ! ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ವಿಷಯಗಳಲ್ಲೂ ಹೀಗೆ ಮಾಡುತ್ತದೆ. ಸೂಕ್ತ ತಯಾರಿಯೊಂದಿಗೆ ಯುದ್ಧಕ್ಕಿಳಿಯುವುದು ಕಾಂಗ್ರೆಸ್ ಸೇನಾ ಪಡೆಗೆ ತಿಳಿದೇ ಇಲ್ಲ. ರಾಜ್ಯಪಾಲರು ಒಂದು ದಿನ ಮುಂಚಿತವಾಗಿಯೇ ತಕರಾರು ತೆಗೆಯುವ ಸುಳಿವು ನೀಡಿದ್ದರು. ಅದರಿಂದಾಗಿಯೇ ‘ಅವರು ಅಧಿವೇಶನಕ್ಕೆ ಬಾರದಿದ್ದರೆ ತಕ್ಷಣವೇ ಸುಪ್ರೀಂ ಕೋರ್ಟಿಗೆ ಹೋಗಬೇಕು’ ಎಂದು ಅಡ್ವೊಕೇಟ್ ಜನರಲ್ ಅವರನ್ನು ದಾಖಲೆಗಳ ಸಮೇತ ದಿಲ್ಲಿಗೆ ಕಳುಹಿಸಲಾಗಿತ್ತು. ಅವರೊಂದಿಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸಂಪರ್ಕದಲ್ಲಿದ್ದರು. ಅಂಥ ಸನ್ನಿವೇಶ ಬರಲಿಲ್ಲ. ಆದರೆ ಇದೇ ರೀತಿ ‘ರಾಜ್ಯಪಾಲರು ಬಂದು ಚುಟುಕು ಭಾಷಣ ಮಾಡಿ ಹೋದರೆ ಏನು ಮಾಡಬೇಕು?’ ಎಂಬ ಅಂದಾಜು ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ political diplomacy ಮಾತ್ರವಲ್ಲ, floor management (ಸದನ ನಿರ್ವಹಣೆ) ಕೂಡ ಸರಿಯಾಗಿ ಗೊತ್ತಿಲ್ಲ. ಒಬ್ಬ ತರುಣ ಶಾಸಕ ಸ್ವಯಂ ಪ್ರೇರಿತರಾಗಿ ಪ್ರತಿಭಟನೆ ಮಾಡಲು ಮುಂದೆ ಬಂದಿದ್ದಾರೆ. ಆದರೆ ಅವರ ಪಕ್ಷದ ಇತರ ಹಿರಿಯರು ಸುಮ್ಮನಿದ್ದದ್ದನ್ನು ಕಂಡು ರಾಜ್ಯಪಾಲರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಾಗದೆ ಕಡೆಗೆ ರಾಜ್ಯಪಾಲರು ಹತ್ತಿರ ಬಂದಾಗ ಕೈಮುಗಿದು ಬೀಳ್ಕೊಟ್ಟಿದ್ದಾರೆ. ಅಂದು ‘ಪರಿಸ್ಥಿತಿ ಬಂದರೆ ಪ್ರತಿಭಟನೆ ಮಾಡಿ’ ಎಂದು ಯುವ ಶಾಸಕರನ್ನು ಸರಕಾರದ ಮುಖ್ಯ ಸಚೇತಕರು ಸಜ್ಜುಗೊಳಿಸಿರಬೇಕಿತ್ತು. ಆದರೆ ಆ ಮುಖ್ಯಸಚೇತಕರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ‘ಮುಖ್ಯಸಚೇತಕರು ಸದಾ ಆಸ್ಥಾನದ ಮುಖ್ಯ ವಿದೂಷಕರ ರೀತಿ ಇರುತ್ತಾರೆ’ ಎಂದು ಕಾಂಗ್ರೆಸ್ ನಾಯಕರೇ ಕುಹಕವಾಡುತ್ತಾರೆ. ಮೊದಲೇ ಮಾಡಬಹುದಾಗಿತ್ತು ನಿಜಕ್ಕೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಬಗ್ಗೆ, ಮನರೇಗಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದ ಕೋಟ್ಯಂತರ ಬಡವರ ಬಗ್ಗೆ ಎಳ್ಳಷ್ಟು ಕಾಳಜಿ ಇದ್ದರೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ಈಗ ರಾಜ್ಯಾದ್ಯಂತ ಹೋರಾಟ, ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕಾರ ಎಂಬ ನಾಟಕವಾಡುತ್ತಿರಲಿಲ್ಲ. ಬದಲಿಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ವಿಬಿ-ಜಿ ರಾಮ್ ಜಿ ಮಸೂದೆ ಮಂಡಿಸಿದಾಗಲೇ ಮುಗಿಬೀಳುತ್ತಿತ್ತು. ಅಂಥ ಅವಕಾಶ ಕೂಡ ಇತ್ತು. ಏಕೆಂದರೆ ಸಂಸತ್ತಿನಲ್ಲಿ ಮಸೂದೆ ಮಂಡನೆಯಾದಾಗ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿತ್ತು. ಆಗಲೇ ‘ವಿಬಿ-ಜಿ ರಾಮ್ ಜಿ ಜನವಿರೋಧಿ’ ಎನ್ನುವ ನಿರ್ಣಯ ಮಾಡಿರುತ್ತಿತ್ತು. ಆಫ್ ದಿ ರೆಕಾರ್ಡ್ ಈಗ ಜನವರಿ 27ಕ್ಕೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರಂತೆ. ಬಿಜೆಪಿ ನಾಯಕರು ಮನರೇಗಾವನ್ನು ಕೊಂದಿದ್ದಾರೆ, ಜನವರಿ 27ಕ್ಕೆ ಕಾಂಗ್ರೆಸಿಗರು ಸಮಾಧಿ ಕಟ್ಟುತ್ತಾರೆ. ಜನವರಿ 28ಕ್ಕೆ ಮನರೇಗಾವನ್ನು ಮರೆಯುತ್ತಾರೆ. ಕಾಂಗ್ರೆಸ್ ನಾಯಕರ ಮೇಲೆ ಆಣೆ; ಇದಲ್ಲದೆ ಬೇರೇನೂ ಆಗಲ್ಲ. ಪುರಾವೆ ಬೇಕಾ? ಕಾಂಗ್ರೆಸ್ ನಾಯಕರು 2025ರ ಜನವರಿ 21ರಂದು ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಎಂಬ ಸಮಾವೇಶ ಮಾಡಿದ್ದರು. ವರ್ಷಪೂರ್ತಿ ರಾಜ್ಯಾದ್ಯಂತ ಇಂಥ ಸಮಾವೇಶಗಳನ್ನು ನಡೆಸುತ್ತೇವೆ ಎಂದು ಹೇಳಿದ್ದರು. 2026ರ ಜನವರಿ 22ರಂದೇ ಅದನ್ನು ಮರೆತಿದ್ದರು.

ವಾರ್ತಾ ಭಾರತಿ 26 Jan 2026 11:09 am

ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾರಿಗೆ ಅಶೋಕ ಚಕ್ರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಲ್ಲಿ,ಜ. 26: ಭೂಮಿಯ ವಾತಾವರಣದ ಮಿತಿಯನ್ನು ಮೀರಿದ ಅಸಾಧಾರಣ ಧೈರ್ಯಕ್ಕೆ ಮನ್ನಣೆಯಾಗಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಿದರು. ಭಾರತದ ವಿಸ್ತರಿಸುತ್ತಿರುವ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಮಹತ್ವಾಕಾಂಕ್ಷೆಗಳಿಗೆ ಸಂಬಂಧಿಸಿದಂತೆ, ಬಾಹ್ಯಾಕಾಶ ನಿಲ್ದಾಣದಲ್ಲಿನ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗಿದೆ. ತೀವ್ರ ಹಾಗೂ ಅಪಾಯದ ಪರಿಸ್ಥಿತಿಗಳಲ್ಲಿಯೂ ಕಾರ್ಯಾಚರಣೆಯನ್ನು ನಿರ್ವಹಿಸಿದ ಶುಕ್ಲಾ ಅವರ ಅಸಾಧಾರಣ ಧೈರ್ಯ, ವೃತ್ತಿಪರ ನೈಪುಣ್ಯ ಮತ್ತು ಕಾರ್ಯನಿಷ್ಠೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಶಂಸಿಸಲಾಗಿದೆ.

ವಾರ್ತಾ ಭಾರತಿ 26 Jan 2026 11:08 am

16 ಸಾವಿರ ರೂ.ಗಡಿದಾಟಿದ ಚಿನ್ನದ ಬೆಲೆ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಚಿನ್ನದ ದರಗಳು ಕ್ರಮೇಣ ಹೆಚ್ಚಾಗುತ್ತಲೇ ಇವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕಕಾಲದಲ್ಲಿ ಭಾರೀ ಹೂಡಿಕೆ ಮಾಡುವುದು ಅಥವಾ ಸಂಪೂರ್ಣವಾಗಿ ದೂರ ಉಳಿಯುವುದೂ ಸರಿಯಲ್ಲ. ಜನವರಿ 25ರಂದು ವಾರದ ರಜಾ ಇದ್ದ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರಲಿಲ್ಲ. ಶನಿವಾರ ಬೆಳಗಿನ ವಹಿವಾಟಿನಲ್ಲಿ ಶುದ್ಧ ಮತ್ತು ಆಭರಣ ಚಿನ್ನದ ಬೆಲೆ ಗ್ರಾಂಗೆ 1 ರೂ.ರಷ್ಟು ಕುಸಿದಿತ್ತು. ಭಾನುವಾರವೂ ಕೊಂಚ ಕುಸಿತ ಕಂಡಿತ್ತು. ಸೋಮವಾರ ರಜಾ ದಿನವಾಗಿದ್ದರೂ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಕಂಡಿದೆ. 2025ರಲ್ಲಿ ಈವರೆಗೆ ಚಿನ್ನದ ದರದಲ್ಲಿ ಶೇ. 64ರಷ್ಟು ಏರಿಕೆ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿ, ಕೇಂದ್ರ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಿರುವುದು, ಹಣದುಬ್ಬರದ ಮಟ್ಟ—ಇವೆಲ್ಲವೂ ಚಿನ್ನದ ದರವನ್ನು ನಿರ್ಧರಿಸುತ್ತವೆ. ಹೀಗಾಗಿ ಬೆಲೆಯಲ್ಲಿ ಏರಿಳಿತವಾಗುತ್ತಲೇ ಹೋಗುತ್ತದೆ. ಜನವರಿ 1ರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಮಧ್ಯೆ ಒಂದೆರಡು ಬಾರಿ ಮಾತ್ರ ಕುಸಿತ ಕಂಡಿದೆ. ಹೀಗೆ ಏರಿಕೆ ಎಷ್ಟು ದಿನ ಸಾಗಲಿದೆ ಎನ್ನುವುದು ಖಚಿತವಿಲ್ಲ. ಆದರೆ ಹಣಕಾಸು ತಜ್ಞರ ಪ್ರಕಾರ, “ಚಿನ್ನದ ದರಗಳು ಕ್ರಮೇಣ ಹೆಚ್ಚಾಗುತ್ತಲೇ ಇವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕಕಾಲದಲ್ಲಿ ಭಾರೀ ಹೂಡಿಕೆ ಮಾಡುವುದು ಅಥವಾ ಸಂಪೂರ್ಣವಾಗಿ ದೂರ ಉಳಿಯುವುದು ಸರಿಯಲ್ಲ. ದೀರ್ಘಕಾಲೀನ ಗುರಿಯೊಂದಿಗೆ ಚಿನ್ನವನ್ನು ನೋಡಬೇಕು.” ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ, ಜನವರಿ 26ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,271 ರೂ. (+245)ಕ್ಕೆ ಏರಿಕೆಯಾಗಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,915 ರೂ. (+225) ಹಾಗೂ ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,203 ರೂ. (+184)ಕ್ಕೆ ತಲುಪಿದೆ.

ವಾರ್ತಾ ಭಾರತಿ 26 Jan 2026 11:00 am

ವಾಹನ ಸವಾರರ ಗಮನಕ್ಕೆ: ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಲ್ಲ ಖಾಸಗಿ ವಾಹನಕ್ಕೂ ಅನ್ವಯ; NHAI ಸ್ಪಷ್ಟನೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಫಾಸ್ಟ್ ಟ್ಯಾಗ್ (FASTag) ಕುರಿತಾದ ಸುದ್ದಿಯೊಂದು ಕಾರು ಮಾಲೀಕರಲ್ಲಿ, ಅದರಲ್ಲೂ ವಿಶೇಷವಾಗಿ ದೊಡ್ಡ ಕಾರುಗಳನ್ನು (SUV/MUV) ಹೊಂದಿರುವವರಲ್ಲಿ ಆತಂಕ ಸೃಷ್ಟಿಸಿತ್ತು. 6 ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿರುವ ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಅಥವಾ ರಿಯಾಯಿತಿ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ ಎಂಬ ಸುದ್ದಿ ಎಲ್ಲೆಡೆ

ಒನ್ ಇ೦ಡಿಯ 26 Jan 2026 10:55 am

ಭಾರತ-ಚೀನಾ 'ಉತ್ತಮ ನೆರೆಹೊರೆಯವರು, ಪಾಲುದಾರರು': ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಕ್ಸಿ ಜಿನ್‌ಪಿಂಗ್

ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭ ಕೋರಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಭಾರತ ಮತ್ತು ಚೀನಾ ದೇಶಗಳು 'ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರು' ಎಂದು ಬಣ್ಣಿಸಿದ್ದಾರೆ. ಕಳೆದ ವರ್ಷದಿಂದ ಉಭಯ ದೇಶಗಳ ಸಂಬಂಧ ಸುಧಾರಿಸುತ್ತಿದ್ದು, ಇದು ಜಾಗತಿಕ ಶಾಂತಿಗೆ ಅತ್ಯಗತ್ಯ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 'ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಹೆಜ್ಜೆ ಹಾಕಬೇಕು' ಎಂಬ ಆಶಯ ವ್ಯಕ್ತಪಡಿಸಿರುವ ಅವರು, ಪರಸ್ಪರ ಸಹಕಾರ ವೃದ್ಧಿಗೆ ಕರೆ ನೀಡಿದ್ದಾರೆ.

ವಿಜಯ ಕರ್ನಾಟಕ 26 Jan 2026 10:45 am

ವಿಜಯಪುರ| 77 ನೇ ಗಣರಾಜ್ಯೋತ್ಸವ: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ

ವಿಜಯಪುರ: ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭ ಸೋಮವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭವ್ಯವಾಗಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ನಿಶಿತಾ ಗುಪ್ತಾ ಐಪಿಎಸ್ ಪ್ರೊಬೇಷನರಿ ಅಧಿಕಾರಿ ನೇತೃತ್ವದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಎನ್‌.ಸಿ.ಸಿ, ಎನ್‌.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಚಿವ ಡಾ. ಎಂ.ಬಿ.ಪಾಟೀಲ ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪಥಸಂಚಲನವನ್ನು ವೀಕ್ಷಿಸಿದರು. ನಂತರ ಸಾರ್ವಜನಿಕರಿಗೆ ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವ ಎಂ.ಬಿ.ಪಾಟೀಲ ಅವರು, ಪ್ರಜಾಪ್ರಭುತ್ವ ಒಂದು ಜೀವನ ವಿಧಾನವಾಗಿದೆ. ಇದು ಆರ್ಥಿಕ, ಸಾಮಾಜಿಕ, ಸಮಾನತೆಯ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಲು ಹೋರಾಡುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಪ್ರತಿಯೊಬ್ಬರಲ್ಲಿ ಪರಸ್ಪರ ತಿಳುವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ ಮತ್ತು ರಚನಾತ್ಮಕ ವಿಮರ್ಶೆ ಅತ್ಯಂತ ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನೈತಿಕತೆ, ಮಾನವೀಯತೆ ಮತ್ತು ಸಮಾಜವನ್ನು ಕಟ್ಟುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳೊಂದಿಗೆ ಆಕರ್ಷಕ ನೃತ್ಯ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ನಗರದ ಶಾಸಕರು ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮಹಾನಗರ ಪಾಲಿಕೆಯ ಮೇಯರ್ ಎಂ.ಎಸ್.ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಪ್, ಜಿಲ್ಲಾಧಿಕಾರಿ ಡಾ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮತ್ತು ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Jan 2026 10:42 am

ಫಿಲಿಪೈನ್ಸ್‌‌ ನಲ್ಲಿ ಭೀಕರ ಫೆರ್ರಿ ದುರಂತ: 342 ಪ್ರಯಾಣಿಕರಿದ್ದ ಫೆರ್ರಿ ಮುಳುಗಿ 15 ಮಂದಿ ಸಾವು, 28 ಜನ ನಾಪತ್ತೆ

ದಕ್ಷಿಣ ಫಿಲಿಪೈನ್ಸ್‌ನಲ್ಲಿ 342 ಪ್ರಯಾಣಿಕರಿದ್ದ ಫೆರ್ರಿ ಮುಳುಗಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಜಾಂಬೊಂಗಾದಿಂದ ಜಲೋ ದ್ವೀಪಕ್ಕೆ ಹೊರಟಿದ್ದ M/V ಟ್ರಿಶಾ ಕೆರ್ಸ್ಟಿನ್ 3 ಫೆರ್ರಿ ಹೊರಟ 4 ಗಂಟೆಗಳ ಬಳಿಕ ದುರಂತಕ್ಕೀಡಾಗಿದೆ.ಈ ದುರಂರದಲ್ಲಿ 28 ಮಂದಿ ಕಾಣೆಯಾಗಿದ್ದು, 316 ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ವೈದ್ಯಕೀಯ ರಕ್ಷಣ ಕಾರ್ಯಚರಣೆ ವಿಳಂಬವಾಗುತ್ತಿದ್ದು, ಎಲ್ಲಾ ರಕ್ಷಣ ದಳಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ದುರಂತಕ್ಕೆ ಕಾರಣ ತನಿಖೆ ಹಂತದಲ್ಲಿದ್ದು, ಅಧಿಕ ಭಾರ ಕಾರಣವಲ್ಲ ಎಂದು ಖಚಿತಪಡಿಸಿದ್ದಾರೆ.

ವಿಜಯ ಕರ್ನಾಟಕ 26 Jan 2026 10:38 am

ಜನವರಿ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 26) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 26 Jan 2026 10:38 am

ಒಕ್ಕೂಟ ವ್ಯವಸ್ಥೆ ಉಲ್ಲೇಖಿಸಿ ಕೇಂದ್ರಕ್ಕೆ ಪರೋಕ್ಷ ಟಾಂಗ್, ಸರ್ಕಾರದ ಸಾಧನಗಳೇ ಹೈಲೈಟ್ಸ್: ರಾಜ್ಯಪಾಲರ ಭಾಷಣದಲ್ಲಿ ಏನಿದೆ?

ದೇಶದ ಪ್ರಗತಿಗೆ ವಿದ್ಯುಚ್ಛಕ್ತಿ ಲಭ್ಯತೆ ಅತ್ಯಾವಶ್ಯಕವಾದುದು. ಸರ್ಕಾರವು `ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು 200 ಯೂನಿಟ್‌ಗಳ ಉಚಿತ ವಿದ್ಯುತ್ ನೀಡುತ್ತಿದೆ. ಜೊತೆಗೆ ರಾಜ್ಯದಲ್ಲಿ ಹಲವಾರು ವಿದ್ಯುತ್ ಉತ್ಪಾದನಾ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದೆ. ಈ ಆರ್ಥಿಕ ವರ್ಷದ 10 ತಿಂಗಳುಗಳಲ್ಲಿ 28,000 ಮಿಲಿಯನ್ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ರ್ಕಾರವು ರಾಜ್ಯದ ಎಲ್ಲಾ ದೇವಸ್ಥಾನಗಳ ಆಸ್ತಿಗಳನ್ನು ಅಳತೆ ಮಾಡಿ ಒತ್ತುವರಿಗಳನ್ನು ತೆರವು ಮಾಡಿ ದೇವಸ್ಥಾನಗಳಿಗೆ ಮರಳಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ 15 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಭೂ ವರಾಹ' ಯೋಜನೆಯನ್ನು ರೂಪಿಸಲಾಗಿದೆ. ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 200 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನಿರ್ಮಿಸಲಾಗಿದೆ.

ವಿಜಯ ಕರ್ನಾಟಕ 26 Jan 2026 10:33 am

ಚಾಮರಾಜನಗರ | 77ನೇ ಗಣರಾಜ್ಯೋತ್ಸವ: ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಧ್ವಜಾರೋಹಣ

ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು

ವಾರ್ತಾ ಭಾರತಿ 26 Jan 2026 10:31 am

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಪ್ರಧಾನಿ ಮೋದಿ ನಮನ

ಹೊಸದಿಲ್ಲಿ: 77ನೇ ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಸೈನಿಕರಿಗೆ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದರು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಅವರು ಕರ್ತವ್ಯ ಪಥದಲ್ಲಿ ನಡೆಯುವ ಗಣ ರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ್ದಾರೆ.

ವಾರ್ತಾ ಭಾರತಿ 26 Jan 2026 10:26 am

ಜಾಗತಿಕ ಕ್ರಿಕೆಟ್’ನಲ್ಲಿ BCCI ಪಾರುಪತ್ಯ : ಏಕಸ್ವಾಮ್ಯತೆಯ ಹಿಂದಿದೆ 3 ಪ್ಲಸ್, 3 ಮೈನಸ್ ಪಾಯಿಂಟ್’ಗಳು

BCCI and World Cricket : ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್’ನಲ್ಲಿ ಬಾಂಗ್ಲಾದೇಶ, ಭಾರತದಲ್ಲಿ ಆಡುವುದಿಲ್ಲ ಎನ್ನುವ ವಿಚಾರ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿ ಹೋಗಿದೆ. ಪರೋಕ್ಷವಾಗಿ ಬಿಸಿಸಿಐ ಒತ್ತಡಕ್ಕೆ ಮಣಿದಿರುವ ಐಸಿಸಿ, ಪಂದ್ಯವನ್ನು ಭಾರತದಿಂದ ಶಿಫ್ಟ್ ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದ ಹಾಗೇ ಹೇಳಿದೆ. ಜಾಗತಿಕ ಕ್ರಿಕೆಟ್’ನಲ್ಲಿ ಬಿಸಿಸಿಐ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಲೇ ಇದೆ. ಇದರ ಹಿಂದಿನ ಸಾಧಕಬಾಧಕವೇನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ವಿಜಯ ಕರ್ನಾಟಕ 26 Jan 2026 10:13 am

ಬೆಳ್ತಂಗಡಿ: ನಡ ಕನ್ಯಾಡಿ ಪರಿಸರದಲ್ಲಿ ಚಿರತೆ ಸೆರೆ; ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಬೆಳ್ತಂಗಡಿ: ತಾಲೂಕಿನ ನಡ ಕನ್ಯಾಡಿ ಪರಿಸರ ಪ್ರದೇಶದಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಚಿರತೆಯನ್ನು ಸೆರೆಹಿಡಿಯುವಲ್ಲಿ ಇಲಾಖೆ ಕೈಗೊಂಡ ಪತ್ತೆ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿ, ಚಿರತೆ ಸಂಚರಿಸುತ್ತಿದ್ದ ಸ್ಥಳಗಳನ್ನು ಗುರುತಿಸಿ, ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಬೋನುಗಳನ್ನು ಸ್ಥಾಪಿಸಿತ್ತು. ಇದರ ಫಲವಾಗಿ ಇದೀಗ ಒಂದು ಚಿರತೆ ಬೋನಿಗೆ ಸಿಲುಕಿದೆ. ಈ ಪ್ರದೇಶದಲ್ಲಿ ಚಿರತೆಯ ಓಡಾಟ ತೀವ್ರವಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ, ಹಲವು ಸಾಕು ಪ್ರಾಣಿಗಳ ಮೇಲೂ ದಾಳಿ ನಡೆಸಿದ್ದ ಘಟನೆಗಳು ವರದಿಯಾಗಿದ್ದವು. ಇದರಿಂದ ಸ್ಥಳೀಯರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಬೋನು ಸ್ಥಾಪಿಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Jan 2026 10:10 am

ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ : 77 ನೇ ಗಣರಾಜ್ಯೋತ್ಸವದಂದು ಡಿಸಿಎಂ ಡಿಕೆಶಿ ಭಾಷಣ

ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಮಹತ್ವ ಸಾರಿದರು. ದೇಶದ ಸ್ವಾಭಿಮಾನದ ಪ್ರತೀಕವಾದ ಸಂವಿಧಾನವು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣದ ಆಶಯ ಹೊಂದಿದೆ ಎಂದರು. ದೇಶದ ಅಭಿವೃದ್ಧಿ ಹಾಗೂ ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಲು ಸಂವಿಧಾನವೇ ಕಾರಣ ಎಂದು ತಿಳಿಸಿದರು. ಸಂವಿಧಾನ ಉಳಿದರೆ ಭಾರತ ಉಳಿಯುತ್ತದೆ ಎಂದು ಕರೆ ನೀಡಿದರು.

ವಿಜಯ ಕರ್ನಾಟಕ 26 Jan 2026 10:07 am

Teacher Recruitment: ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಕುರಿತು ಮಹತ್ವದ ಅಪ್ಡೇಟ್‌ ಕೊಟ್ಟ ಸಚಿವ ಮಧು ಬಂಗಾರಪ್ಪ

Teacher Recruitment: ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗುವಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತದೆ. ಹಾಗೆಯೇ ಇದೀಗ ಕೆಪಿಎಸ್ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಶೀಘ್ರದಲ್ಲೇ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸರ್ಕಾರಿ ಕೆಪಿಎಸ್ (ಕೆಪಿಎಸ್‌) ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ

ಒನ್ ಇ೦ಡಿಯ 26 Jan 2026 10:05 am

ಉಡುಪಿ | 77ನೇ ಗಣರಾಜ್ಯೋತ್ಸವ: ಸೇಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಧ್ವಜಾರೋಹಣ

ಕರಾವಳಿ ಪ್ರವಾಸೋದ್ಯಮ ಭವಿಷ್ಯಕ್ಕೆ ಹೊಸ ಬಾಗಿಲು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ವಾರ್ತಾ ಭಾರತಿ 26 Jan 2026 9:58 am

77th Republic Day; ʻಸಂವಿಧಾನ ರಕ್ಷಿಸಿದರೆ ಮಾತ್ರ ನಮಗೆ ರಕ್ಷಣೆʼ: ಸಿಎಂ ಸಿದ್ದರಾಮಯ್ಯ

ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಗಣ ರಾಜ್ಯೋತ್ಸವ ಆಯೋಜಿಸಲಾಗಿತ್ತು. ದ್ವಜಾರೋಹಣ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸಂವಿಧಾನದ ಮಹತ್ವ ಸಾರಿದರು. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಸಮಾನತೆಯನ್ನು ಖಾತ್ರಿಪಡಿಸುವ ಸಂವಿಧಾನದ ಆಶಯಗಳನ್ನು ವಿವರಿಸಿದ ಅವರು, ಬಸವಣ್ಣನವರ ಅನುಭವ ಮಂಟಪವನ್ನು ಪ್ರಜಾಪ್ರಭುತ್ವದ ಆದರ್ಶ ಮಾದರಿಯಾಗಿ ಸ್ಮರಿಸಿದರು. ಅಂಬೇಡ್ಕರ್ ರಚಿಸಿದ ಸಂವಿಧಾನವು ಅಸಮಾನತೆಗಳನ್ನು ನಿವಾರಿಸಿ, ಸರ್ವರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣಕ್ಕೆ ಒತ್ತು ಕೊಟ್ಟಿದೆ ಎಂದರು

ವಿಜಯ ಕರ್ನಾಟಕ 26 Jan 2026 9:58 am

ಕನ್ನಡದಲ್ಲಿ ಮರೆತೇ ಹೋದಂತಿದ್ದ ಅದ್ಭುತ ಕಲಾಪ್ರಕಾರ ಪುನರುಜ್ಜೀವನಗೊಳಿಸಿದ ಶತಾವಧಾನಿ ರಾ ಗಣೇಶ್: ಮಂಜುನಾಥ ಕೊಳ್ಳೇಗಾಲ ಬರಹ

ಕನ್ನಡದಲ್ಲಿ ಮರೆತೇ ಹೋದಂತಿದ್ದ ಅದ್ಭುತ ಕಲಾಪ್ರಕಾರ ಪುನರುಜ್ಜೀವನಗೊಳಿಸಿದ್ದು ಶತಾವಧಾನಿ ರಾ ಗಣೇಶ್ - ಮಂಜುನಾಥ ಕೊಳ್ಳೇಗಾಲ ಅವರ ಬರಹ ಇಲ್ಲಿದೆ. ನವರಸಗಳಲ್ಲದೆ ಮತ್ತೊಂದು ರಸವಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ - ಪಾಂಡಿತ್ಯ ರಸ. ಶುದ್ಧ ಕಲೆಯೊಂದರ ಬಹುಮುಖ್ಯ ಉದ್ದೇಶವೇ ರಸಾನ್ವೇಷಣೆ ಮತ್ತು ರಸನಿಷ್ಪತ್ತಿ ಎನ್ನುವುದಾದರೆ, ಅವಧಾನವೆಂಬ ಕಲೆಯ ಮಗ್ಗುಲು ಮಗ್ಗುಲನ್ನೂ ಈ ಪಾಂಡಿತ್ಯರಸದೃಷ್ಟಿಯಿಂದ ಶೋಧಿಸಿದವರು, ಈ ಕಲಾ

ಒನ್ ಇ೦ಡಿಯ 26 Jan 2026 9:52 am

77ನೇ ಗಣರಾಜ್ಯೋತ್ಸವ: ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಧ್ವಜಾರೋಹಣ

ಬೀದರ್: 77ನೇ ಗಣರಾಜ್ಯೋತ್ಸವದ ಅಂಗವಾಗಿ ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಎನ್‌ಸಿಸಿ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಸುಮಾರು 13 ತುಕಡಿಗಳು ಶಿಸ್ತುಬದ್ಧ ಪರೇಡ್ ನಡೆಸಿ ಗೌರವ ವಂದನೆ ಸಲ್ಲಿಸಿದವು. ಈ ಸಂದರ್ಭದಲ್ಲಿ ಸಂಸದ ಸಾಗರ್ ಖಂಡ್ರೆ, ಶಾಸಕ ಶೈಲೆಂದ್ರ ಬೇಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಬುಡಾ ಅಧ್ಯಕ್ಷ ಬಸವರಾಜ್ ಜಾಬಶೇಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Jan 2026 9:51 am

ತುಮಕೂರಿನಲ್ಲಿ ಹೆಚ್ಚಿದ ಚಿರತೆ ಉಪಟಳ: ಅರಣ್ಯ ಪ್ರದೇಶ ವಿಸ್ತೀರ್ಣ ಕಡಿಮೆಯಾಗಿ ನಾಡಿಗೆ ನುಗ್ಗಿತ್ತಿರುವ ಚಿರತೆಗಳಿಂದ ಕೃಷಿಕರಲ್ಲಿ ಹೆಚ್ಚಿದ ಆತಂಕ

ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, 150ಕ್ಕೂ ಹೆಚ್ಚು ಚಿರತೆಗಳಿರಬಹುದೆಂದು ಅಂದಾಜಿಸಲಾಗಿದ್ದು, ಅರಣ್ಯ ವಿಸ್ತೀರ್ಣ ಕಡಿಮೆಯಾದ ಕಾರಣ ಚಿರತೆಗಳು ಆಹಾರಕ್ಕಾಗಿ ಗ್ರಾಮೀಣ ಪ್ರದೇಶಕ್ಕೆ ಬರುತ್ತಿವೆ. ಇದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿದೆ. ಅರಣ್ಯ ಇಲಾಖೆ ಬೋನುಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನು ಬೇಸಿಗೆ ಹತ್ತಿರ ಬರುತ್ತಿದ್ದು, ನೀರು ಹಾಯಿಸಲು ಕೃಷಿ ಭೂಮಿಗೆ ಹೋಗಲು ಸಹ ರೈತರು ಹೆದರುವ ಪರಿಸ್ಥಿತಿ ಉಂಟಾಗಿದೆ.

ವಿಜಯ ಕರ್ನಾಟಕ 26 Jan 2026 9:40 am

Republic Day 2026 | ಮಾಣಿಕ್ ಷಾ ಮೈದಾನದಲ್ಲಿ ಪರೇಡ್ ಆರಂಭ

ಬೆಂಗಳೂರು: ನಗರದ ಮಾಣಿಕ್ ಷಾ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಭವ್ಯ ಪರೇಡ್‌ಗೆ ಅಧಿಕೃತವಾಗಿ ಚಾಲನೆ ದೊರೆಯಿತು. ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಪರೇಡ್‌ನಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್‌, ಗೃಹರಕ್ಷಕ ದಳ, ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್ಎಸ್, ರೆಡ್ ಕ್ರಾಸ್ ಸೇರಿದಂತೆ 30ಕ್ಕೂ ಹೆಚ್ಚು ತಂಡಗಳು ಪರೇಡ್‌ನಲ್ಲಿ ಭಾಗವಹಿಸಿದ್ದವು. ಒಟ್ಟು 1,326 ಮಂದಿ ಈ ಪರೇಡ್‌ನಲ್ಲಿ ಭಾಗವಹಿಸಿದ್ದು, ಶಿಸ್ತಿನ ಪ್ರದರ್ಶನ  ನಡೆಯಿತು.

ವಾರ್ತಾ ಭಾರತಿ 26 Jan 2026 9:27 am

ಬೆಂಗಳೂರು ಅಭಿವೃದ್ಧಿಗೆ 2.50 ಲಕ್ಷ ಕೋಟಿ; ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್: ಅಪ್‌ಡೇಟ್‌ ಕೊಟ್ಟ ಡಿ ಕೆ ಶಿವಕುಮಾರ್‌

ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುತ್ತಿದೆ ಎಂದರು. ದಾವೋಸ್

ಒನ್ ಇ೦ಡಿಯ 26 Jan 2026 9:23 am

400 Crore Robbery: ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ 400 ಕೋಟಿ ದರೋಡೆ: ಏನಿದು ಪ್ರಕರಣ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳಗಾವಿ: ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿರುವ ಭಾರೀ ದರೋಡೆ ಪ್ರಕರಣವೊಂದು ಇದೀಗ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಬರೋಬ್ಬರಿ 400 ಕೋಟಿ ರೂಪಾಯಿ ಸಾಗಿಸುತ್ತಿದ್ದ ಕಂಟೇನರ್ ಹೈಜಾಕ್ ವಿಚಾರವು ಇದೀಗ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಮಹಾರಾಷ್ಟ್ರ ಗಡಿ ಪ್ರದೇಶ ಚೋರ್ಲಾ ಘಾಟ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ದರೋಡೆ ನಡೆದಿದೆ.

ಒನ್ ಇ೦ಡಿಯ 26 Jan 2026 9:19 am

ದಲಿತರಿಗೆ ಇದುವರೆಗೂ ಸಿಗದ ಭೂ ಒಡೆತನ, ದೂರು ಕೊಟ್ಟರೂ ಸಿಕ್ಕಿಲ್ಲ ನ್ಯಾಯ

ತೀರ್ಥಹಳ್ಳಿಯಲ್ಲಿ ದಲಿತರಿಗೆ ಮಂಜೂರಾದ 265 ಎಕರೆ ಭೂಮಿಗೆ ದಾಖಲೆ ಸಿಕ್ಕಿಲ್ಲ. ಭೂಮಿ ಪಡೆದ ಹಿರಿಯರು ಮೃತರಾಗಿದ್ದು, ವಾರಸುದಾರರಿಗೆ ಹಕ್ಕು ದೊರೆತಿಲ್ಲ. ಭೂಮಿ ಬಲಾಢ್ಯರ ಪಾಲಾಗಿದೆ. ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ಪಿಟಿಸಿಎಲ್‌ ನಿಯಮ ಮೀರಿ ಭೂಮಿ ಪರಭಾರೆ ನಡೆದಿದೆ. ಸುಮಾರು 3 ಸಾವಿರ ದಲಿತ ಕುಟುಂಬಗಳಿದ್ದು, 459 ಎಕರೆ ಹಂಚಿಕೆಯಾಗಿದೆ. ಕಾನೂನು ಬಾಹಿರವಾಗಿ ಭೂಮಿ ಕಬಳಿಕೆಯಾಗಿದೆ. ದೂರು ನೀಡಿದರೂ ಅತಿಕ್ರಮಣದಾರರಿಗೆ ರಕ್ಷಣೆ ಸಿಗುತ್ತಿದೆ.

ವಿಜಯ ಕರ್ನಾಟಕ 26 Jan 2026 9:12 am

ಸೂರಿಕುಮೇರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ: ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ ಭಾಗಶಃ ಹಾನಿ ಉಂಟಾಗಿದ್ದು, ಅತೀವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 26 Jan 2026 9:04 am

ಮಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದ ವೈರಲ್‌ ಜ್ವರ ಹೆಚ್ಚಳಕ್ಕೆ ಜನ ಕಂಗಾಲು: ಕಾಮಲೆ ರೋಗ ಪ್ರಮಾಣದಲ್ಲೂ ಏರಿಕೆಗೆ ಕಾರಣವೇನು?

ಮಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ. ನಗರದಲ್ಲಿ ಜ್ವರ ಹೆಚ್ಚಾಗುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಕಾಮಾಲೆ ರೋಗದ ಪ್ರಮಾಣ ಏರಿಕೆಯಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರಿನಿಂದ ಕಾಮಾಲೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವೈದ್ಯರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ವಿಜಯ ಕರ್ನಾಟಕ 26 Jan 2026 9:00 am

ಜೆಡಿಎಸ್ ವಿಸರ್ಜನಾ ಸಮಾವೇಶ?

ಜಾತ್ಯತೀತ ಜನತಾದಳ 25ನೇ ವರ್ಷದ ಅಂಗವಾಗಿ ಹಾಸನದಲ್ಲಿ ಶನಿವಾರ ನಡೆದ ‘ಜನತಾ ಸಮಾವೇಶ’ವು ಜೆಡಿಎಸ್‌ನ ಮರು ನಿರ್ಮಾಣಕ್ಕೆ ಪೀಠಿಕೆಯಾಗಬಹುದು ಎಂದು ಭಾವಿಸಿದ ‘ಹಾಸನದ ಜನತೆ’ಗೆ ನಿರಾಸೆಯಾಗಿದೆ. ಕಾಂಗ್ರೆಸ್-ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಕರ್ನಾಟಕದ ಹಿತಾಸಕ್ತಿಯನ್ನು ಜೆಡಿಎಸ್ ಎತ್ತಿ ಹಿಡಿಯಬಹುದು ಎನ್ನುವ ನಿರೀಕ್ಷೆ ಎಂದೋ ಹುಸಿಯಾಗಿತ್ತು. ಜೆಡಿಎಸ್ ಹಲವು ಬಾರಿ ನೆಲಕಚ್ಚಿ ಮತ್ತೆ ಮೇಲೆದ್ದು ನಿಂತ ಉದಾಹರಣೆಗಳಿವೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ದಿನದಿಂದ ಎದುರಾಗುತ್ತಿರುವ ಹಿನ್ನಡೆಯ ಕಾರಣದಿಂದ ಈ ಸಮಾವೇಶ ಜೆಡಿಎಸ್‌ನ ಆತ್ಮವಿಮರ್ಶೆಗೆ ವೇದಿಕೆಯಾಗಬಹುದು ಮತ್ತು ಇನ್ನೊಮ್ಮೆ ಮತ್ತೆ ನಿಲ್ಲುವುದಕ್ಕೆ ಈ ಸಮಾವೇಶ ಒಂದು ನಿಮಿತ್ತವಾಗಬಹುದೋ ಎಂಬ ಸಣ್ಣ ಆಸೆಯೂ ನಂದಿ ಹೋಗಿದೆ. ಎಡಬಲದಲ್ಲಿ ಕುಮಾರಸ್ವಾಮಿ-ರೇವಣ್ಣ ಅವರನ್ನು ಕುಳ್ಳಿರಿಸಿಕೊಂಡು ಮೈಕ್ ಮುಂದೆ ವೀರಾವೇಶದಿಂದ ಅಬ್ಬರಿಸುವ ದೇವೇಗೌಡರ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಅದು ಅವಸಾನದ ಅಂಚಿಗೆ ಬಂದು ನಿಂತಿರುವ ಜೆಡಿಎಸ್ ಪಕ್ಷದ ಏದುಸಿರಿನಂತಿತ್ತು. ದೇವೇಗೌಡರನ್ನು ಮುಂದಿಟ್ಟು ಕಾರ್ಯಕರ್ತರೆಡೆಗೆ ಬಾಣ ಬಿಡುವ ಕುಮಾರಸ್ವಾಮಿಯವರ ಪ್ರಯತ್ನ ಕೂಡ ವಿಫಲವಾಗಿದೆ ಮಾತ್ರವಲ್ಲ, ದೇವೇಗೌಡರ ಭಾಷಣದಿಂದಾಗಿ ಪಕ್ಷದ ಅಳಿದುಳಿತ ವರ್ಚಸ್ಸಿಗೂ ಧಕ್ಕೆಯಾಗಿದೆ. ಸಮಾವೇಶದಲ್ಲಿ ರಾಜ್ಯ ಜೆಡಿಎಸ್‌ಗೆ ಹೊಸ ನಾಯಕತ್ವದ ಘೋಷಣೆಯ ಬಗ್ಗೆ ನಿರೀಕ್ಷೆಗಳಿದ್ದವು. ಕುಮಾರಸ್ವಾಮಿಯವರು ಹೊಸದಿಲ್ಲಿಗೆ ಸೀಮಿತರಾಗಿದ್ದಾರೆ. ರೇವಣ್ಣ ಮೈತುಂಬಾ ಕಳಂಕವನ್ನು ಅಂಟಿಸಿಕೊಂಡು ಮನೆಯಲ್ಲಿ ಕುಳಿತಿದ್ದಾರೆ. ದೇವೇಗೌಡರ ಓರ್ವ ಮೊಮ್ಮಗ ಜೈಲಲ್ಲಿದ್ದಾನೆ. ಇನ್ನೋರ್ವ ಮೊಮ್ಮಗ ಅಪ್ರಬುದ್ಧತನದ ಮೂಲಕವೇ ಮೂಲೆಸೇರಿದ್ದಾನೆ. ಹೊಸ ನಾಯಕನೊಬ್ಬನ ತುರ್ತು ಅಗತ್ಯ ಜೆಡಿಎಸ್‌ಗಿತ್ತು. ಆದರೆ ಸಮಾವೇಶದಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಸೂಚನೆಯನ್ನು ಕುಮಾರಸ್ವಾಮಿಯವರು ನೀಡಿದ್ದಾರೆ. 2028ಕ್ಕೆ ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದು ಗುರಿ ಎಂದು ಅವರ ಪುತ್ರ ನಿಖಿಲ್ ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಈ ಸರಣಿ ಸೋಲಿನ ಸರದಾರನ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಜೆಡಿಎಸ್ ಕುರಿತಂತೆ ಭರವಸೆಯನ್ನು ಮೂಡಿಸುವ ಯಾವ ಮಾತುಗಳು ಸಭೆಯಲ್ಲಿ ವ್ಯಕ್ತವಾಗಲ್ಲಿಲ್ಲ. ಅದೇ ತಂದೆ ಮತ್ತು ಮಕ್ಕಳ ಮುಖ ನೋಡಿ ಕಾರ್ಯಕರ್ತರು ನಿರಾಸೆಯಿಂದ ಮರಳಿದ್ದಾರೆ. ಈಗಾಗಲೇ ಜೆಡಿಎಸ್‌ನೊಳಗೆ ಜಾತ್ಯತೀತತೆಯ ಮೌಲ್ಯಕ್ಕೆ ಬದ್ಧರಾಗಿರುವ ಕಾರ್ಯಕರ್ತರು ಬೇರೆ ದಾರಿಯೇ ಇಲ್ಲದೆ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದರೆ, ಇನ್ನೊಂದು ಗುಂಪು ಬಿಜೆಪಿಯ ಕಡೆಗೆ ಮುಖ ಮಾಡಿ ನಿಂತಿದೆ. ಒಂದು ರೀತಿಯಲ್ಲಿ ಜೆಡಿಎಸ್ ಅನಧಿಕೃತವಾಗಿ ಬಿಜೆಪಿಯೊಂದಿಗೆ ವಿಲೀನವಾಗಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಸಮಾವೇಶದಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ರೇವಣ್ಣ ಮತ್ತು ಅವರ ಪುತ್ರರನ್ನು ದೇವೇಗೌಡರು ಯಾವ ಲಜ್ಜೆಯೂ ಇಲ್ಲದೆ ಸಮರ್ಥಿಸಿಕೊಂಡರು. ಈ ಹಿಂದೆ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ದೇವೇಗೌಡರ ನಿವಾಸದಲ್ಲೇ ಬಂಧಿಸಲಾಗಿತ್ತು. ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ಹಗರಣದಲ್ಲಿ ಬಂಧನಕ್ಕೊಳಗಾಗುವ ಭಯದಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾಗ ‘ತಕ್ಷಣ ಪೊಲೀಸರಿಗೆ ಶರಣಾಗು’ ಎಂದು ದೇವೇಗೌಡರೇ ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ರೇವಣ್ಣ ಮತ್ತು ಅವರ ಪುತ್ರನ ಅಶ್ಲೀಲ ಸಿಡಿಗಳು ಬಹಿರಂಗವಾದಾಗ, ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ‘‘ನನಗೂ ರೇವಣ್ಣ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ದೇವೇಗೌಡರ ಹೆಸರನ್ನು ಇದರಲ್ಲಿ ಎಳೆಯಬೇಡಿ’’ ಎಂದು ಅಬ್ಬರಿಸಿದ್ದರು. ಇಂದು ರಾಜ್ಯದಲ್ಲಿ ಜೆಡಿಎಸ್‌ಗೆ ಮುಂದಡಿಯಿಡುವುದಕ್ಕೆ ಅತಿದೊಡ್ಡ ತಡೆಯೇ ರೇವಣ್ಣ ಮತ್ತು ಅವರ ಪುತ್ರ ಎಸಗಿದ ‘ಲೈಂಗಿಕ ಹಗರಣ’ವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅನ್ನು ಹೊಸದಾಗಿ ಕಟ್ಟುವ ಉದ್ದೇಶವಿದ್ದಿದ್ದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸ್ಪಷ್ಟವಾಗಿ ರೇವಣ್ಣ ಮತ್ತು ಪ್ರಜ್ವಲ್ ಗೌಡರಿಂದ ಅಂತರ ಕಾಪಾಡಿಕೊಳ್ಳಬೇಕಾಗಿತ್ತು. ಯಾವ ಕಾರಣಕ್ಕೂ ರೇವಣ್ಣ ಅವರಿಗೆ ವೇದಿಕೆಯಲ್ಲಿ ಅವಕಾಶವನ್ನು ನೀಡಬಾರದಿತ್ತು. ‘ತಪ್ಪು ಮಾಡಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗಲಿ’ ಎಂದು ದೇವೇಗೌಡರು ವೇದಿಕೆಯಲ್ಲೇ ಘೋಷಿಸಬೇಕಾಗಿತ್ತು. ಅಂತಹ ನಿಷ್ಠುರತೆಯನ್ನು ದೇವೇಗೌಡಪ್ರದರ್ಶಿಸಿದ್ದರೆ ಜೆಡಿಎಸ್ ಕಳೆದುಕೊಂಡ ಗೌರವವನ್ನು ಮತ್ತೆ ಪಡೆದುಕೊಳ್ಳುತ್ತಿತ್ತು. ಆದರೆ ದೇವೇಗೌಡರು ತನ್ನ ಪುತ್ರ ರೇವಣ್ಣರನ್ನು ಬಗಲಲ್ಲಿ ಕುಳ್ಳಿರಿಸಿಕೊಂಡು ಸಮರ್ಥಿಸಿಕೊಂಡರು. ಲೈಂಗಿಕ ಹಗರಣದಲ್ಲಿ ಅವರನ್ನು ಬಂಧಿಸಿದ ಪೊಲೀಸರನ್ನೇ ಟೀಕಿಸುವ ಮಟ್ಟಕ್ಕೆ ಇಳಿದರು. ರೇವಣ್ಣ ಅವರನ್ನು ಯಾವುದೋ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿರುವುದಲ್ಲ. ಅದಾಗಲೇ ಸಾರ್ವಜನಿಕವಾಗಿ ಬಹಿರಂಗವಾದ ಅಶ್ಲೀಲ ಸಿಡಿ ಪ್ರಕರಣಕ್ಕೆ ಮತ್ತು ಮಹಿಳೆಯ ಅಪಹರಣಕ್ಕೆ ಸಂಬಂಧಿಸಿ ಅವರನ್ನು ಪೊಲೀಸರು ದೇವೇಗೌಡರ ನಿವಾಸದಿಂದ ವಶಕ್ಕೆ ತೆಗೆದುಕೊಂಡಿದ್ದರು. ನಿಜಕ್ಕೂ ಪೊಲೀಸರು ದುರುದ್ದೇಶಪೂರ್ವಕವಾಗಿ ಆ ಬಂಧನವನ್ನು ಮಾಡಿದ್ದರೆ ಅದರ ವಿರುದ್ಧ ಆಗಲೇ ಮಾತನಾಡುವ ಅವಕಾಶ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗಿತ್ತು. ದೇವೇಗೌಡರು ಅಂದು ಯಾವ ಹೇಳಿಕೆಯನ್ನೂ ನೀಡದೆ, ‘ಅನಾರೋಗ್ಯದ ಹೆಸರಿನಲ್ಲಿ’ ಮೌನವಾಗಿದ್ದರು. ಇದೀಗ ‘ರೇವಣ್ಣ’ನಿಗೆ ಅನ್ಯಾಯವಾಗಿದೆ ಎಂಬ ರೀತಿಯಲ್ಲಿ ಜನತಾ ಸಮಾವೇಶದಲ್ಲಿ ಅಬ್ಬರಿಸಿದ್ದಾರೆ. ಹಾಗಾದರೆ ರೇವಣ್ಣ ಮತ್ತು ಪ್ರಜ್ವಲ್ ಅವರಿಂದ ಅನ್ಯಾಯಕ್ಕೊಳಗಾಗಿರುವ ಮಹಿಳೆಯರ ಕುರಿತಂತೆ ದೇವೇಗೌಡರು ಏನು ಹೇಳುತ್ತಾರೆ? ಜನತಾ ಸಮಾವೇಶದಲ್ಲಿ ರೇವಣ್ಣ ಮತ್ತು ಪ್ರಜ್ವಲ್ ಅವರ ಬಂಧನವನ್ನು ನಾಡಿಗಾದ, ಜೆಡಿಎಸ್‌ನ ಕಾರ್ಯಕರ್ತರಿಗಾದ ಅನ್ಯಾಯ ಎಂಬಂತೆ ದೇವೇಗೌಡರು ಮಾತನಾಡಿದರು. ನಿಜಕ್ಕೂ ರೇವಣ್ಣ ಮತ್ತು ಪ್ರಜ್ವಲ್ ಅವರ ಲೈಂಗಿಕ ಹಗರಣದಿಂದ ಜೆಡಿಎಸ್‌ಗೆ ಭಾರೀ ಅನ್ಯಾಯವಾಗಿದೆ. ನಾಡಿಗೆ ಅದರಿಂದ ಅವಮಾನವಾಗಿದೆ. ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷದ ಮರ್ಯಾದೆಯನ್ನು ಈ ನಾಯಕರು ತಮ್ಮ ತೆವಲಿಗಾಗಿ ಕಳೆದರು. ಜನತಾ ಸಮಾವೇಶದಲ್ಲಿ ತನ್ನ ಪುತ್ರರಿಂದ ಪಕ್ಷಕ್ಕಾದ ಧಕ್ಕೆಗಾಗಿ ದೇವೇಗೌಡರು ಮೊದಲು ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಮಕ್ಕಳನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾರ್ಯಕರ್ತರನ್ನು ಅವಮಾನಿಸಿದರು. ಉಳಿದಂತೆ ಕುಮಾರಸ್ವಾಮಿಯವರು ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಇಂಗಿತವನ್ನು ಸಮಾವೇಶದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಮರಳುವ ಹೊತ್ತಿಗೆ ಇಲ್ಲಿ ಜೆಡಿಎಸ್ ಉಳಿದಿರುವುದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದಂತೆ, ಕುಮಾರಸ್ವಾಮಿಯವರು ಜೆಡಿಎಸ್ ತೊರೆದು ಅಧಿಕೃತವಾಗಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಪ್ರಯತ್ನಿಸಬಹುದಾಗಿದೆ. ಆದರೆ ಅದಕ್ಕೆ ಬಿಜೆಪಿಯೊಳಗಿರುವ ನಾಯಕರು ಅವಕಾಶ ಮಾಡಿಕೊಡುವುದು ಅತ್ಯಗತ್ಯವಾಗಿದೆ.

ವಾರ್ತಾ ಭಾರತಿ 26 Jan 2026 8:56 am

Bangladesh ಹಿಂಸಾಚಾರ: ಕಾರು ಮೆಕ್ಯಾನಿಕ್ ಸಜೀವ ದಹನ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಆಶ್ವಾಸನೆ ನೀಡುತ್ತಿರುವ ನಡುವೆಯೇ, ಕಾರು ಮೆಕ್ಯಾನಿಕ್ ಒಬ್ಬರನ್ನು ಬೆಂಕಿ ಹಚ್ಚಿ ಸಾಯಿಸಿರುವ ಭೀಕರ ಘಟನೆ ವರದಿಯಾಗಿದೆ. ನರ್ಸಿಂಗ್ಡಿ ಜಿಲ್ಲೆಯಲ್ಲಿ ವರ್ಕ್‌ಶಾಪ್ ನಡೆಸುತ್ತಿದ್ದ 23 ವರ್ಷದ ಕಾರು ಮೆಕ್ಯಾನಿಕ್ ಚಂಚಲ್ ಚಂದ್ರ ಭೂಮಿಕ್, ತಮ್ಮ ವರ್ಕ್‌ಶಾಪ್‌ನಲ್ಲೇ ನಿದ್ರಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲಸ ಮುಗಿಸಿದ ಬಳಿಕ ಚಂಚಲ್ ಸಾಮಾನ್ಯವಾಗಿ ವರ್ಕ್‌ಶಾಪ್‌ನ ಒಳಗೆಯೇ ನಿದ್ರಿಸುತ್ತಿದ್ದರು. ಇದು ಯೋಜಿತ ಹತ್ಯೆ ಎಂದು ಆರೋಪಿಸಿರುವ ಸ್ಥಳೀಯರು, ವರ್ಕ್‌ಶಾಪ್‌ನ ಬಾಗಿಲುಗಳಿಗೆ ಹೊರಗಿನಿಂದ ಬೀಗ ಹಾಕಲಾಗಿದ್ದ ಕಾರಣ, ನೆರವಿಗಾಗಿ ಚಂಚಲ್ ಮೊರೆ ಇಟ್ಟರೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Jan 2026 8:41 am

GBA ಚುನಾವಣೆಗೆ ತಯಾರಿ ಹೊತ್ತಲ್ಲೇ ಅಪಸ್ವರ; ಮಹಿಳೆಯರಿಗೆ ಶೇ.50 ಮೀಸಲಾತಿ ಸಿಗದ ಬಗ್ಗೆ ಆಕ್ಷೇಪ

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮಹಿಳಾ ಮೀಸಲಾತಿ ಹಂಚಿಕೆಯಲ್ಲಿ ಶೇ.50ರಷ್ಟು ಗುರಿ ತಲುಪಿಲ್ಲ. 369 ವಾರ್ಡ್‌ಗಳಲ್ಲಿ ಕೇವಲ 176 ವಾರ್ಡ್‌ಗಳಿಗೆ ಮಾತ್ರ ಮಹಿಳಾ ಮೀಸಲಾತಿ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಪ್ರಾಧಿಕಾರಕ್ಕೆ ಸುಮಾರು 700 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆ ಮೂಲಕ ಜಿಬಿಎ ಚುನಾವಣೆಗೆ ತಯಾರಿ ನಡೆಸುವ ಹೊತ್ತಲ್ಲೇ ಈ ಅಪಸ್ವರ ಎದ್ದಿದೆ.

ವಿಜಯ ಕರ್ನಾಟಕ 26 Jan 2026 8:41 am

ಅಕ್ರಮಕ್ಕೆ ಗಡಿ ಹೆದ್ದಾರಿಗಳೇ ರಹದಾರಿ; ಬೆಳಗಾವಿ ಪೊಲೀಸರಿಗೆ ಸವಾಲಾದ ಹೈಟೆಕ್ ಕಳ್ಳಾಟ

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಕ್ರಮ ಸಾಗಾಟದ ಕೇಂದ್ರಗಳಾಗಿವೆ. ಮದ್ಯ, ಹವಾಲಾ ಹಣ, ಚಿನ್ನದ ಅಕ್ರಮ ಸಾಗಾಟ ಹೆಚ್ಚಾಗಿದೆ. ತನಿಖಾ ಸಂಸ್ಥೆಗಳು ಹೈಟೆಕ್ ತಂತ್ರಜ್ಞಾನ ಬಳಸುತ್ತಿದ್ದರೂ, ಚೆಕ್‌ಪೋಸ್ಟ್‌ಗಳಲ್ಲಿ ಆಧುನಿಕ ಸ್ಕ್ಯಾನರ್‌ಗಳ ಕೊರತೆ ಇದೆ. ನೆರೆ ರಾಜ್ಯಗಳ ಪೊಲೀಸರ ಸಹಕಾರದ ಕೊರತೆ ಕರ್ನಾಟಕ ಪೊಲೀಸರಿಗೆ ಸವಾಲಾಗಿದೆ. ಇತ್ತೀಚೆಗೆ ನಡೆದ 400 ಕೋಟಿ ರೂ. ದರೋಡೆ ಪ್ರಕರಣವು ಈ ಅಕ್ರಮಗಳ ಗಂಭೀರತೆಯನ್ನು ಎತ್ತಿ ತೋರಿಸಿದೆ.

ವಿಜಯ ಕರ್ನಾಟಕ 26 Jan 2026 8:31 am

ಹಿಮಾಚಲ ಪ್ರದೇಶ: ಕುಲು–ಮನಾಲಿಯಲ್ಲಿ ಸಂಚಾರ ದುಸ್ತರ; 10 ಗಂಟೆಗಳಲ್ಲಿ ಕೇವಲ 15 ಕಿ.ಮೀ ಪ್ರಯಾಣ

ಕುಲು/ಮನಾಲಿ: ಪ್ರಸಿದ್ಧ ಪ್ರವಾಸಿತಾಣಗಳಾದ ಕುಲು ಹಾಗೂ ಮನಾಲಿ ಹಿಮಚ್ಛಾದಿತವಾಗಿದ್ದು, ಮೈ ಕೊರೆಯುವ ತೀವ್ರ ಚಳಿಯ ನಡುವೆ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇವಲ 15 ಕಿಲೋಮೀಟರ್ ದೂರ ಪ್ರಯಾಣಿಸಲು 10 ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತಿರುವುದರಿಂದ, ಪ್ರವಾಸಿಗರ ಕಾರುಗಳು ಅಕ್ಷರಶಃ ತೆವಳುವಂತಾಗಿದೆ. ಸತತ ಎರಡನೇ ದಿನವಾದ ರವಿವಾರವೂ ಸಂಚಾರ ದಟ್ಟಣೆಯಿಂದಾಗಿ ಈ ಗಿರಿಧಾಮ ಪ್ರವಾಸಿಗರ ಪಾಲಿಗೆ ದುಃಸ್ವಪ್ನವಾಗಿದೆ. ಮನಾಲಿಯಿಂದ ಹೊರಹೋಗುವ ಬಹುತೇಕ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ದುಸ್ತರವಾಗಿದೆ. ಜಾರು ರಸ್ತೆಗಳ ಕಾರಣ ವಾಹನಗಳು ಅತೀವ ನಿಧಾನವಾಗಿ ಚಲಿಸುತ್ತಿದ್ದು, ಮನಾಲಿಯಿಂದ 15 ಕಿಲೋಮೀಟರ್ ದೂರದ ಪುಟ್ಟ ಮಾರುಕಟ್ಟೆ ನಗರ ಪಾಟಲಿಕುಹಾಲ್ ತಲುಪಲು 10 ಗಂಟೆಗಳಷ್ಟು ಸಮಯ ಬೇಕಾಗಿದೆ. ಪಾಟಲಿಕುಹಾಲ್ ಪ್ರದೇಶದಲ್ಲಿ ಮಂಜು ನಿಧಾನವಾಗಿ ಕರಗತೊಡಗಿದೆ ಎಂದು ತಿಳಿದುಬಂದಿದೆ. ರವಿವಾರ ರಾತ್ರಿ ಸುಮಾರು 2.30ರ ವೇಳೆಗೆ, ಪ್ರವಾಸಿಗರು ಹಿಮಚ್ಛಾದಿತ ರಸ್ತೆಗಳ ಮೇಲೆ ಟ್ರಾಲಿ ಬ್ಯಾಗ್‌ಗಳನ್ನು ಎಳೆಯುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಜಾರುತ್ತಾ, ಬೀಳುತ್ತಾ ಮತ್ತೆ ಏಳುತ್ತಾ ಸಾಗುತ್ತಿರುವ ದೃಶ್ಯಗಳು ಇದರಲ್ಲಿ ಸೆರೆಯಾಗಿದೆ. “ಇದು ಮನಾಲಿಗೆ ತೆರಳಿದ ಪ್ರವಾಸಿಗರ ಸ್ಥಿತಿ; ಸಂಪೂರ್ಣ ಅತಂತ್ರವಾಗಿ ಅಲೆದಾಡುವಂತಾಗಿದೆ” ಎಂದು ಎಕ್ಸ್ (X) ಬಳಕೆದಾರರೊಬ್ಬರು ಬರೆದಿದ್ದಾರೆ. ನೂರಾರು ಮಂದಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪಾದರಸ ಮಟ್ಟ ಶೂನ್ಯ ಡಿಗ್ರಿಗಿಂತ ಕೆಳಗೆ ಇಳಿದಿರುವುದರಿಂದ, ಬಸ್‌, ಟ್ಯಾಕ್ಸಿ ಹಾಗೂ ಕಾರುಗಳ ಸಂಚಾರ ಮತ್ತಷ್ಟು ಕಷ್ಟಕರವಾಗಿದೆ. ಮಕ್ಕಳು ಸೇರಿದಂತೆ ಹಲವರು ಕೊರೆಯುವ ಚಳಿಯಲ್ಲಿ ವಾಹನಗಳ ಒಳಗೆಯೇ ರಾತ್ರಿಯಿಡೀ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. “ಪಾಟಲಿಕುಹಾಲ್ ತಲುಪಲು ನಮಗೆ 12 ಗಂಟೆಗಳಷ್ಟು ಸಮಯ ತಗುಲಿತು. ರಾತ್ರಿಯಿಡೀ ಮೈಕೊರೆಯುವ ಚಳಿಯಲ್ಲಿ ವಾಹನದಲ್ಲೇ ಉಳಿಯಬೇಕಾಯಿತು. ಇಂತಹ ಭಯಾನಕ ಸಂಚಾರ ದಟ್ಟಣೆಯನ್ನು ನಾನು ಎಂದೂ ಕಂಡಿಲ್ಲ,” ಎಂದು ಕುಲ್ವಿಂದರ್ ಸಿಂಗ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಪ್ಪುಗಟ್ಟಿರುವ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದರೂ, ಕುಲು–ಮನಾಲಿ ನಡುವಿನ ದ್ವಿಪಥ ರಸ್ತೆಯಲ್ಲಿ ಭಾರಿ ವಾಹನಗಳ ದಟ್ಟಣೆಯಿಂದಾಗಿ ಪ್ರವಾಸಿಗರು ಇನ್ನೂ ಸಂಕಷ್ಟದಲ್ಲೇ ಸಿಲುಕಿದ್ದಾರೆ. ಶನಿವಾರ ಹಾಗೂ ರವಿವಾರ ಹವಾಮಾನದಲ್ಲಿ ಸುಧಾರಣೆ ಕಂಡುಬಂದರೂ, ರಸ್ತೆ ಸಂಚಾರ ಮಾತ್ರ ಇನ್ನೂ ಸಂಪೂರ್ಣವಾಗಿ ಸರಾಗವಾಗಿಲ್ಲ.

ವಾರ್ತಾ ಭಾರತಿ 26 Jan 2026 8:30 am

ಕಾಫಿ ಎಸ್ಟೇಟ್ ಗೆ ಬರುವ ಹೊರ ಕಾರ್ಮಿಕರ ಮೇಲೆ ತೀವ್ರ ನಿಗಾ, ಆಧಾರ್ ಪರಿಶೀಲನೆ

ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ತಾಲೂಕಿನಲ್ಲಿಅಕ್ರಮ ವಲಸಿಗರಿಂದ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರ ಆಧಾರ್‌ ಕಾರ್ಡ್‌ ತಪಾಸಣೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ. ತೋಟದ ಮಾಲೀಕರಿಗೆ ಆಧಾರ್‌ ಸಹಿತ ಕಾರ್ಮಿಕರನ್ನು ಹಾಜರುಪಡಿಸುವಂತೆ ನೋಟಿಸ್‌ ನೀಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಕ್ರಮ ಚಟುವಟಿಕೆ, ದಾಂಧಲೆ, ಕಳ್ಳತನ, ಬೆದರಿಕೆ ಪ್ರಕರಣಗಳು ವರದಿಯಾಗಿವೆ.

ವಿಜಯ ಕರ್ನಾಟಕ 26 Jan 2026 8:18 am

ಗಣರಾಜ್ಯೋತ್ಸವ ಸಂಭ್ರಮದ ಹೊತ್ತಲ್ಲೇ ರಾಜಸ್ಥಾನದಲ್ಲಿ ಭಾರಿ ಸ್ಫೋಟಕ ಪತ್ತೆ; ಒಬ್ಬ ಅರೆಸ್ಟ್

ದೆಹಲಿಯಲ್ಲಿಗಣರಾಜ್ಯೋತ್ಸವ ಆಚರಣೆಗೂ ಮುನ್ನ ರಾಜಸ್ಥಾನದಲ್ಲಿ ಭಾರಿ ಸ್ಫೋಟಕಗಳು ಪತ್ತೆಯಾಗಿವೆ. 10,000 ಕೆಜಿ ಸ್ಫೋಟಕಗಳನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೂರು ಕ್ರಿಮಿನಲ್‌ ಕೇಸ್‌ ಹೊಂದಿದ್ದ ಸುಲೈಮಾನ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ದಾಳಿ ವೇಳೆ ಘಟನಾ ಸ್ಥಳದಲ್ಲಿದ್ದ ಎನ್ನಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಆತ ಹೇಳಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 26 Jan 2026 7:58 am

ಅತಿವೇಗದ ಫಿಫ್ಟಿ: ಭಾರತ ಟಿ20 ತಂಡದ ದಾಖಲೆಯ ಕಿರೀಟಕ್ಕೆ ಮತ್ತೊಂದು ಗರಿ!

ಗುವಾಹತಿ: ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ. ಕೇವಲ 10 ಓವರ್‌ಗಳಲ್ಲೇ 155 ರನ್ ಚೇಸ್ ಮಾಡಿದ ಭಾರತೀಯ ಬ್ಯಾಟ್ಸ್ಮನ್‌ಗಳು, ಕೇವಲ 3.1 ಓವರ್‌ಗಳಲ್ಲಿ 50 ರನ್ ಪೂರೈಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಇದು ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಭಾರತದ ಟಿ20 ತಂಡದ ಬ್ಯಾಟಿಂಗ್ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಕಳೆದ ಐದು ವರ್ಷಗಳಲ್ಲಿ ದಾಖಲಾಗಿದ್ದ ಅನೇಕ ಸ್ಫೋಟಕ ಆರಂಭದ ದಾಖಲೆಗಳನ್ನು ರವಿವಾರ ಭಾರತೀಯ ಬ್ಯಾಟ್ಸ್ಮನ್‌ಗಳು ಅಳಿಸಿಹಾಕಿದರು. ಎದುರಾಳಿ ತಂಡ ನೀಡಿದ ಗುರಿಯನ್ನು ಕೇವಲ 10 ಓವರ್‌ಗಳಲ್ಲೇ ತಲುಪಿದ ಭಾರತ, ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಐದು ಪಂದ್ಯಗಳ ಸರಣಿಯಲ್ಲಿ 3-0 ಅಜೇಯ ಮುನ್ನಡೆಯೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದರಲ್ಲೂ ಅಭಿಷೇಕ್ ಶರ್ಮಾ ಅವರ ನಿರ್ಭೀತ ಬ್ಯಾಟಿಂಗ್ ಹೊಸ ಯುಗದ ಟಿ20 ಮನಸ್ಥಿತಿಗೆ ಕನ್ನಡಿ ಹಿಡಿದಂತಿತ್ತು. ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಇದು ಭಾರತದ ಟಿ20 ಇತಿಹಾಸದಲ್ಲಿನ ಎರಡನೇ ವೇಗದ ಅರ್ಧಶತಕವಾಗಿದೆ. ಅವರು 20 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಚಚ್ಚಿ ಪಂದ್ಯವನ್ನು ಸಂಪೂರ್ಣ ಏಕಪಕ್ಷೀಯಗೊಳಿಸಿದರು. ಈ ಇಬ್ಬರು ಮುರಿಯದ ಮೂರನೇ ವಿಕೆಟ್‌ಗೆ ಕೇವಲ 40 ಎಸೆತಗಳಲ್ಲಿ 102 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿದರು. ಈ ಹಿಂದೆ ಭಾರತ ತಂಡವು 2023ರಲ್ಲಿ ಬಾಂಗ್ಲಾದೇಶ ವಿರುದ್ಧ 3.4 ಓವರ್‌ಗಳಲ್ಲಿ 50 ರನ್ ಗಳಿಸಿದ್ದು, ಅದು ತಂಡದ ವೇಗದ ಆರಂಭದ ದಾಖಲೆಯಾಗಿತ್ತು. ಅಲ್ಲದೆ ಸ್ಕಾಟ್ಲೆಂಡ್, ಆಸ್ಟ್ರೇಲಿಯಾ, ನೇಪಾಳ, ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ವಿರುದ್ಧವೂ 3.5 ಓವರ್‌ಗಳಲ್ಲಿ 50 ರನ್ ಗಳಿಸಿತ್ತು. ಆದರೆ ಗುವಾಹತಿಯ ವೇಗ ಮಾತ್ರ ಎಲ್ಲ ದಾಖಲೆಗಳನ್ನು ಅಳಿಸಿಹಾಕಿತು.  

ವಾರ್ತಾ ಭಾರತಿ 26 Jan 2026 7:56 am

ಇರಾನ್ ಸಂಘರ್ಷ: ಹಲವು ವಿಮಾನ ರದ್ದುಪಡಿಸಿದ ಇಂಡಿಗೊ, ಪಥ ಬದಲಿಸಿದ ಏರ್‌ ಇಂಡಿಯಾ

ಹೊಸದಿಲ್ಲಿ: ಇರಾನ್ ನಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೊ ಬಿಲಿಸಿ, ಅಲ್ಮತಿ, ತಾಷ್ಕೆಂಟ್ ಹಾಗೂ ಬಕು ಪ್ರದೇಶಗಳಿಗೆ ತೆರಳುವ ವಿಮಾನಗಳ ಸಂಚಾರವನ್ನು ಈ ತಿಂಗಳ 28ರವರೆಗೆ ರದ್ದುಪಡಿಸಿದೆ. ಏರ್ಇಂಡಿಯಾ ವಿಮಾನಗಳು ಪಥ ಬದಲಿಸಿದ್ದು, ಉತ್ತರ ಅಮೆರಿಕಗೆ ತೆರಳುವ ವಿಮಾನಗಳು ಇರಾನ್ನ ಸಫೆರ್ ಪೂರ್ವ ಭಾಗದ ಮೂಲಕ ಸಂಚರಿಸುತ್ತಿದೆ. ಪೂರ್ವ ಕರಾವಳಿಯಲ್ಲಿ ಹಿಮಗಾಳಿ ಪರಿಸ್ಥಿತಿ ಸುಧಾರಿಸುವ ವರೆಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಏರ್ಇಂಡಿಯಾ ಸ್ಪಷ್ಟಪಡಿಸಿದೆ. ಇರಾನ್ ನಲ್ಲಿ ಹಾಲಿ ಇರುವ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಜನವರಿ 26, 27 ಮತ್ತು 28ರಂದು ಬಿಲಿಸಿ, ಅಲ್ಮತಿ, ತಾಷ್ಕೆಂಟ್ ಹಾಗೂ ಬಕು ಪಟ್ಟಣಕ್ಕೆ ತೆರಳಬೇಕಿದ್ದ ಹಾಗೂ ಆ ಪಟ್ಟಣಗಳಿಂದ ಭಾರತಕ್ಕೆ ಬರಬೇಕಿದ್ದ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಇಂಡಿಗೊ ಪ್ರಕಟಿಸಿದೆ. ಯೂರೋಪಿಯನ್ ಯೂನಿಯನ್ ವಿಮಾನಯಾನ ಸುರಕ್ಷಾ ಏಜೆನ್ಸಿಯ ಸಲಹೆಯಂತೆ ಜನವರಿ 16ರಿಂದಲೇ ಏರ್ಇಂಡಿಯಾ ವಿಮಾನಗಳು ಇರಾನ್ ಮೂಲಕ ಹಾದುಹೋಗುವುದನ್ನು ಸ್ಥಗಿತಗೊಳಿಸಲಾಗಿತ್ತು. ಹಾಲಿ ಇರುವ ಪರಿಸ್ಥಿತಿ ಮತ್ತು ಅಮೆರಿಕದ ಮಿಲಿಟರಿ ಕ್ರಮಗಳ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಇರಾನಿಯ ವಾಯುರಕ್ಷಣಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಇರಾನಿಯ ವಾಯುಪ್ರದೇಶದಲ್ಲಿ ಹಾರುವ ವಿಮಾನಗಳನ್ನು ತಪ್ಪಾಗಿ ಗುರುತಿಸುವ ಸಧ್ಯತೆ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ವಾರ್ತಾ ಭಾರತಿ 26 Jan 2026 7:53 am

Karnataka Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ - ಚಳಿ: ಐಎಂಡಿ ರಿಪೋರ್ಟ್

Karnataka Weather: ಕರ್ನಾಟಕದ ವಿವಿಧ ಭಾಗದಲ್ಲಿ ಚಳಿ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಚಳಿ ಹೆಚ್ಚಳವಾಗಿದೆ ಹಾಗೂ ಎಲ್ಲೆಲ್ಲಿ ಮಳೆ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6-3C ಕಡಿಮೆ ಆಗಿದ್ದು. ದಕ್ಷಿಣ

ಒನ್ ಇ೦ಡಿಯ 26 Jan 2026 7:12 am

Gold Price: ಚಿನ್ನದ ಬೆಲೆ 2026ರಲ್ಲಿ ಇನ್ನಷ್ಟು ಏರಿಕೆ ಆಗುತ್ತಾ? ಹೂಡಿಕೆದಾರರ ಕುತೂಹಲ ಕೆರಳಿಸಿದ ಬಾಬಾ ವಂಗಾ ಭವಿಷ್ಯ

ನವದೆಹಲಿ: ದೇಶದಲ್ಲಿ ದಶಕಗಳಿಂದಲೂ ಚಿನ್ನವು (Gold Price) ಆರ್ಥಿಕ ಭದ್ರತೆ ಒದಗಿಸಬಲ್ಲ ಶಕ್ತಿಯಾಗಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಅನಿಶ್ಚಿತತೆ ಉಂಟಾದಾದರೆ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನ ಮೇಲೆ ಹೂಡಿಕೆಗೆ ಮುಂದಾಗುತ್ತಾರೆ. ಅದು ಎಂತಹ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ, ಮೌಲ್ಯ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆ. ಸದ್ಯ ಈಗಲೇ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ

ಒನ್ ಇ೦ಡಿಯ 26 Jan 2026 7:00 am

ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ ಲಭ್ಯ; ಮೈಸೂರಿನ 27 ಸಾವಿರ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೈಸೂರು ಜಿಲ್ಲೆಯ 9-14 ವರ್ಷದ ಸುಮಾರು 27 ಸಾವಿರ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುವುದು. 15 ವರ್ಷ ಮೇಲ್ಪಟ್ಟವರಿಗೆ 3 ಡೋಸ್‌, ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ 6-12 ತಿಂಗಳ ಅಂತರದಲ್ಲಿ 2 ಡೋಸ್‌ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದಾಗಿ 51 ಕೋಟಿಗೂ ಹೆಚ್ಚು ಲಾಭ ಎಂದು ಹೇಳಲಾಗಿದೆ.

ವಿಜಯ ಕರ್ನಾಟಕ 26 Jan 2026 6:36 am

ಲಾಲ್‌ಬಾಗ್‌ಫಲಪುಷ್ಪ ಪ್ರದರ್ಶನಕ್ಕೆ ಇಂದೇ ತೆರೆ; ಭಾನುವಾರ ಒಂದೇ ದಿನ 1.14 ಲಕ್ಷ ಮಂದಿ ಭೇಟಿ

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬೀಳಲಿದೆ. ಈ ಹಿನ್ನೆಲೆ ಭಾನುವಾರ ಲಕ್ಷಕ್ಕೂ ಹೆಚ್ಚು ಜನರು ತೇಜಸ್ವಿ ವಿಸ್ಮಯವನ್ನು ಕಣ್ತುಂಬಿಕೊಂಡರು. ಅಲ್ಲದೇ ಭಾನುವಾರ ಹುಲ್ಲುಹಾಸಿನ ಪ್ರದೇಶದಲ್ಲಿ ಅಣ್ಣನ ನೆನಪು ನಾಟಕ ಪ್ರದರ್ಶನವಿದ್ದ ಕಾರಣ ಹೆಚ್ಚು ಜನರು ಆಗಮಿಸಿದ್ದರು. ಭದ್ರತಾ ಸಿಬ್ಬಂದಿ ಜನರನ್ನು ನಿಭಾಯಿಸಲು ಹರಸಾಹಸ ಪಟ್ಟರು. ಇನ್ನು ಜನವರಿ15 ರಿಂದ 25ರವರೆ1.81ಕೋಟಿ ಹಣ ಸಂಗ್ರಹವಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.

ವಿಜಯ ಕರ್ನಾಟಕ 26 Jan 2026 6:05 am