ಕಲಬುರಗಿ | ಭೂಸ್ವಾಧೀನ ಪ್ರಕರಣ: ಪರಿಹಾರ ನೀಡದಕ್ಕೆ ಜಿಲ್ಲಾಧಿಕಾರಿ ಕಾರು ಜಪ್ತಿ
ಕಲಬುರಗಿ: ಕಲಬುರಗಿ ನಗರ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡಿಕೊಂಡ ಬಳಿಕ ಹಲವು ವರ್ಷ ಕಳೆದರೂ ಪರಿಹಾರ ನೀಡದೆ ವಿಳಂಬ ಮಾಡಿರುವುದಕ್ಕಾಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಪ್ರಧಾನ ಸಿವಿಲ್ ನ್ಯಾಯಾಲಯದ ದಿವಾಣಿ ಹಿರಿಯ ಶ್ರೇಣಿ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳ ಕಾರು ಆಗಿರುವ ಇನ್ನೋವಾ ಕ್ರಿಷ್ಟಾ ಕಾರಿನ ಸಂಖ್ಯೆ ಕೆ.ಎ 32 ಜಿ 9990 ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ. ಕೇಸ್ ನಂಬರ್: 59/19 ಅನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಅವರು ವಕೀಲರ ಮನವೊಲಿಸಲು ಮುಂದಾಗಿದ್ದರು. ಪ್ರಕಾಶ್ ಮಕಲಪ್ಪ ಎಂಬವರು ತಮ್ಮ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
Sri mallikarjun Mutya: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಸ್ಥಾಪಿಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ. ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ಪಕ್ಕದ ತೆಲಂಗಾಣದ ಕೆಲ ಜಿಲ್ಲೆಗಳಲ್ಲೂ ಅವರು ಸ್ವಯಂಘೋಷಿತ ದೇವಮಾನವನಾಗಿ ಹೆಸರು ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರ ಅನೇಕ ವಿಡಿಯೋಗಳು ವೈರಲ್ ಆಗಿ ವ್ಯಾಪಕ
ಮಾವುತನನ್ನು ಏಕಾಏಕಿ ಎತ್ತಿ ದೂರಕ್ಕೆಸೆದ ಉತ್ಸವದ ಆನೆ; ತ್ರಿಶ್ಶೂರ್ ನಲ್ಲಿ ನಡೆದ ದುರ್ಘಟನೆಯ ವಿಡಿಯೋ ವೈರಲ್
ಉತ್ಸವಕ್ಕೆ ಸಜ್ಜಾಗಿದ್ದ ಆನೆ ಮಾವುತನನ್ನು ಏಕಾಏಕಿ ಎತ್ತಿ ದೂರಕ್ಕೆಸೆದ ಘಟನೆ ಕೇರಳದ ತ್ರಿಶ್ಶೂರ್ ನಿಂದ ವರದಿಯಾಗಿದೆ. ಇಲ್ಲಿನ ಅನ್ನಮನದ ಮಹಾದೇವ ದೇವಾಲಯದಲ್ಲಿ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ತಿರುವನೆಲ್ಲೂರು ಮೂಲದ ಮಾವುತ ವಿವೇಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ಸವದಂಗವಾಗಿ ನಡೆಯುವ ವಲಿಯವಿಳಕ್ಕು ಮೆರವಣಿಗೆಯಲ್ಲಿ ದೇವಾಲಯದ ಆನೆ ಅಕ್ಕಿಕಾವು ಕಾರ್ತಿಕೇಯನ್ ಅನ್ನು ಕರೆದೊಯ್ಯುವ ಸಲುವಾಗಿ ಅವರು ಅಲಂಕಾರ ಮಾಡುತ್ತಿದ್ದರು. ಈ ವೇಳೆ ಹಿರಿಯ ಮಾವುತ ಉಳಿದ ಸಹಾಯಕರ ನೆರವಿನಿಂದ ಆನೆಯ ಮೇಲೇರಿ ಕುಳಿತರು. ಪಕ್ಕದಲ್ಲೇ ನಿಂತಿದ್ದ ವಿವೇಕ್(26 ವರ್ಷ) ಅವರನ್ನು ಆನೆ ಏಕಾಏಕಿ ಸೊಂಡಿಲಿನಲ್ಲಿ ಎತ್ತಿ ದೂರಕ್ಕೆ ಎಸೆದಿದೆ. ಆನೆ ಎಸೆದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಅಂಗಮಾಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಿದ್ದರಿಂದ ಬಳಿಕ ಉತ್ಸವ ನಿರಾತಂಕವಾಗಿ ಸಾಗಿದೆ. ಆದರೆ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ. ಇಂತಹ ಉತ್ಸವಗಳ ಸಂದರ್ಭದಲ್ಲಿ ಪ್ರಾಣಿಗಳನ್ನು ಬಳಕೆ ಮಾಡುವ ವೇಳೆ ಸೂಕ್ತ ಮುಂಜಾಗ್ರತೆ ವಹಿಸದ್ದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂಬ ಟೀಕೆ ಕೇಳಿ ಬಂದಿದೆ.
ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್ ನಗರದ ಥಾನಾ ಶಹರ್ ವ್ಯಾಪ್ತಿಯ ಕೈಲಾ ಭಟ್ಟ ಚೌಕಿ ಪ್ರದೇಶದಲ್ಲಿ ಮುಸ್ಲಿಮರು ನಡೆಸುವ ಮಾಂಸದ ಖಾದ್ಯ ಮಾರಾಟ ಮಳಿಗೆಯ ವೃದ್ಧ ವ್ಯಾಪಾರಿಯೊಬ್ಬರಿಗೆ, ಮಂಗಳವಾರ ಅಂಗಡಿ ತೆರೆದರೆ ಬೆಂಕಿ ಹಚ್ಚುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. In Ghaziabad, at Kaila Bhatta in Uttar Pradesh, a Hindutva goon named Satyam Pandit threatens an elderly Muslim man, ordering him to shut down his non vegetarian eatery every Tuesday, or he would set the shop on fire. How is it that any random vigilante can openly intimidate… pic.twitter.com/gZDu2RdOXf — Mohammed Zubair (@zoo_bear) February 26, 2026 ಹಾಪುರ್ ಮೋಡ್ ಫ್ಲೈಓವರ್ ಸಮೀಪದ ಮಾಂಸಾಹಾರಿ ಖಾದ್ಯ ಮಾರಾಟ ಮಳಿಗೆಗೆ ನುಗ್ಗಿದ ವ್ಯಕ್ತಿಯೊಬ್ಬ, “ಮಂಗಳವಾರ ನೀವು ಅಂಗಡಿ ತೆರೆದರೆ ಅದಕ್ಕೆ ಬೆಂಕಿ ಹಚ್ಚುತ್ತೇನೆ” ಎಂದು ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ವೀಡಿಯೋದಲ್ಲಿ ಕೇಳಿಬರುತ್ತದೆ. ದೇವಸ್ಥಾನದ ಸಮೀಪ ಮಂಗಳವಾರ ಮಾಂಸ ಮಾರಾಟ ಮಾಡಬಾರದು ಎಂದು ಆತ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ವೈರಲ್ ವೀಡಿಯೋದಲ್ಲಿ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ಹಿಂದುತ್ವ ಸಂಘಟನೆಯಾದ ರಾಷ್ಟ್ರೀಯ ಹಿಂದೂ ವೀರ ಸೇನಾ ನಾಯಕ ಸತ್ಯಂ ಪಂಡಿತ್ ಎಂದು ಗುರುತಿಸಲಾಗಿದೆ. ಆತ ಅಂಗಡಿ ಮಾಲೀಕರೊಂದಿಗೆ ವಾಗ್ವಾದ ನಡೆಸಿ, “ಇದನ್ನು ತಕ್ಷಣ ಮುಚ್ಚಿ. ಮುಂದೆ ದೇವಸ್ಥಾನ ಕಾಣಿಸುತ್ತಿಲ್ಲವೇ? ಮಂಗಳವಾರ ಅಂಗಡಿ ತೆರೆದಿರಬಾರದು. ಮುಂದಿನ ಮಂಗಳವಾರ ತೆರೆದರೆ ನಾನು ಬೆಂಕಿ ಹಚ್ಚುತ್ತೇನೆ” ಎಂದು ಎಚ್ಚರಿಕೆ ನೀಡಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಘಟನೆಯ ಬಳಿಕ ಆರೋಪಿಯು“ಗಾಝಿಯಾಬಾದ್ ನಲ್ಲಿ ಯಾವುದೇ ಮುಸ್ಲಿಮರಿಗೆ ಮಂಗಳವಾರ ಮಾಂಸ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ನಾವು ಕೈಲಾ ಭಟ್ಟಕ್ಕೆ ಹೋಗಿ ಎಲ್ಲಾ ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಿದ್ದೇವೆ” ಎಂಬ ಶೀರ್ಷಿಕೆಯಿಂದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಗಾಝಿಯಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಬೆದರಿಕೆಗಳು ಹೆಚ್ಚುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಘಟನೆಯ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್, “ಗಾಝಿಯಾಬಾದ್ ನ ಕೈಲಾ ಭಟ್ಟ ಪ್ರದೇಶದಲ್ಲಿ ಸತ್ಯಂ ಪಂಡಿತ್ ಎಂಬ ವ್ಯಕ್ತಿ ವೃದ್ಧ ಮುಸ್ಲಿಂ ಮಾರಾಟಗಾರನಿಗೆ ಮಂಗಳವಾರ ಅಂಗಡಿ ಮುಚ್ಚುವಂತೆ ಬೆದರಿಕೆ ಹಾಕಿದ್ದಾನೆ. ಇಂತಹ ವೀಡಿಯೋಗಳನ್ನು ಬಹಿರಂಗವಾಗಿ ಹಂಚಿಕೊಂಡರೂ ಕ್ರಮವಾಗದಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ. ಅವರು ಗಾಝಿಯಾಬಾದ್ ಪೊಲೀಸ್, ಉತ್ತರ ಪ್ರದೇಶ ಪೊಲೀಸ್ ಹಾಗೂ ಜಿಲ್ಲಾಡಳಿತದ ಮೌನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼರಜನೀತಿ ತಡ್ಕಾ’ ಎಂಬ ಖಾತೆಯ ಬಳಕೆದಾರರು, “ಕಾನೂನು ಮೌನ ವಹಿಸಿದಾಗ ಗುಂಪು ಆಳ್ವಿಕೆ ಬೆಳೆಯುತ್ತದೆ. ಬೆದರಿಕೆ ಪ್ರಭಾವವಾಗುತ್ತದೆ, ಬಡತನ ಸುಲಭ ಗುರಿಯಾಗುತ್ತದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಕಳೆದ ನಾಲ್ಕು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ಸಾಮಾನ್ಯವಾಗುತ್ತಿದೆ. ಕೆಲವೊಮ್ಮೆ ಪೊಲೀಸರು ಸಹ ಒಂದೇ ರೀತಿಯಾಗಿ ವರ್ತಿಸುತ್ತಾರೆ. ದೂರು ಯಾರಿಗೆ ನೀಡಬೇಕು?” ಎಂದು ಅಮೀರ್ ಇಕ್ಬಾಲ್ ಎಂಬವರು ಪ್ರಶ್ನಿಸಿದ್ದಾರೆ. “ಯಾರೂ ಕಾನೂನಿಗಿಂತ ಮೇಲಲ್ಲ. ಕಾನೂನು ಜಾರಿ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, “ಈ ಹೇಡಿಗಳಿಗೆ ಮಂಗಳವಾರ 5 ಸ್ಟಾರ್ ಹೋಟೆಲ್ಗಳಲ್ಲಿ ಮಾಂಸಾಹಾರ ಮಾರಾಟ ತಡೆಯುವ ಧೈರ್ಯವಿಲ್ಲ” ಎಂದು ಸಂಜಯ್ ಕಲ್ರಾ ಎಂಬವರು ಟೀಕಿಸಿದ್ದಾರೆ. ವಿಜಯ್ ಎಂಬವರು ಪೋಸ್ಟ್ ಮಾಡಿ, “ಭಾರತದಲ್ಲಿ ಬಹುಪಾಲು ಜನ ಮಾಂಸಾಹಾರಿಗಳು. ಕೆಲವರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನಾರ್ಥಕವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಹಜವಾಗಿ ಕೊಲೆಸ್ಟರಾಲ್ ಕಡಿಮೆ ಮಾಡಲು ನೆರವಾಗುವ 6 ಆಹಾರಗಳ ಬಗ್ಗೆ ಗೊತ್ತೇ?
ಬುದ್ಧಿವಂತ ಆಹಾರ ಆಯ್ಕೆಗಳನ್ನು ಮಾಡುವುದು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೃದಯ ರೋಗ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ತೊಂದರೆಗಳಿಗೆ ಅಧಿಕ ಕೊಲೆಸ್ಟರಾಲ್ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಎಲ್ಡಿಎಲ್ (ಕೆಟ್ಟ ಕೊಲೆಸ್ಟರಾಲ್) ಕೊಲೆಸ್ಟರಾಲ್ ಪ್ರಮಾಣ ಏರುವುದರಿಂದ ಅಪಧಮನಿಗಳಲ್ಲಿ ಲೋಳೆಯ ನಿಕ್ಷೇಪ ಶೇಖರಣೆಗೆ ಕೊಡುಗೆ ನೀಡುತ್ತವೆ. ರಕ್ತನಾಳಗಳನ್ನು ಕಿರಿದಾಗಿಸುತ್ತವೆ ಮತ್ತು ರಕ್ತದ ಹರಿವನ್ನು ದುರ್ಬಲಗೊಳಿಸುತ್ತವೆ. ಆದರೆ, ಬುದ್ಧಿವಂತ ಆಹಾರ ಆಯ್ಕೆಗಳನ್ನು ಮಾಡುವುದು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂಡೊಕ್ರೈನಲಾಜಿಸ್ಟ್ (ಅಂತಃಸ್ರಾವಶಾಸ್ತ್ರಜ್ಞ) ಡಾ. ಅಲೆಸ್ಸಿಯಾ ರೋಗ್ನೆಲ್ಟ್ ಅಂತಹ ಆರು ಆಹಾರದ ಆಯ್ಕೆಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ: ಕಾಫಿ ಮತ್ತು ಗ್ರೀನ್ ಟೀ ಸಾಂದರ್ಭಿಕ ಚಿತ್ರ | Photo Credit : freepik ದಿನನಿತ್ಯದ ಪಾನೀಯಗಳೆಂದು ಸಾಮಾನ್ಯವಾಗಿ ಪರಿಗಣಿಸಲಾಗಿರುವ ಕಾಫಿ ಮತ್ತು ಗ್ರೀನ್ ಟೀ ಎರಡೂ ಕೊಲೆಸ್ಟರಾಲ್ ಮಟ್ಟವನ್ನು ಪ್ರಭಾವಿಸುತ್ತವೆ. ಆಂಟಿಆಕ್ಸಿಡಂಟ್ ಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಎಲ್ಡಿಎಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಾಳೀಯ ಕಾರ್ಯವನ್ನು ಬೆಂಬಲಿಸುತ್ತದೆ. ಆದರೆ ಕಾಫಿ ಹೆಚ್ಚು ಸಂಕೀರ್ಣವಾಗಿದೆ: ಮಧ್ಯಮ ಸೇವನೆಯಿಂದ (ದಿನಕ್ಕೆ 2-3 ಕಪ್) ಉತ್ತಮ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ನ ಸಮತೋಲನಕ್ಕೆ ಕಾರಣವಾಗಲಿದೆ. ಆದರೆ ಅತಿಯಾಗಿ ಸೇವಿಸಿದಲ್ಲಿ ವಿರುದ್ಧ ಪರಿಣಾಮ ಬೀರಬಹುದು. ಮಿತವಾಗಿರುವುದು ಮುಖ್ಯವಾಗುತ್ತದೆ. ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಸಾಂದರ್ಭಿಕ ಚಿತ್ರ | Photo Credit : freepik ಮೆಡಿಟರೇನಿಯನ್ ಆಹಾರದ ಮೂಲಾಧಾರವಾದ ಆಲಿವ್ ಎಣ್ಣೆಯು ಪ್ಲೇಕ್ ರಚನೆಯಲ್ಲಿ ನಿರ್ಣಾಯಕ ಹಂತವಾಗಿರುವ ಎಲ್ಡಿಎಲ್ ಅನ್ನು ಕಡಿಮೆ ಮಾಡುವ ಮತ್ತು ಅದರ ಆಕ್ಸಿಡೀಕರಣವನ್ನು ತಡೆಯುವ ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ. ಸಲಾಡ್ಗಳ ಮೇಲೆ ಸಿಂಪಡಿಸಿದರೂ ಅಥವಾ ನೇರವಾಗಿ ಸೇವಿಸಿದರೂ ಆಲಿವ್ ಎಣ್ಣೆ ಲಿಪಿಡ್ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅಪಧಮನಿಯ ಗೋಡೆಗಳನ್ನು ರಕ್ಷಿಸುತ್ತದೆ. ಬೆರ್ರಿ ಹಣ್ಣುಗಳು ಸಾಂದರ್ಭಿಕ ಚಿತ್ರ | Photo Credit : freepik ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸುವ ಸಂಯುಕ್ತಗಳಾದ ಅಂಥೋಸಯಾನಿನ್ಗಳು ಬೆರ್ರಿಗಳಲ್ಲಿ ಸಮೃದ್ಧವಾಗಿವೆ. ಅವು ಎಲ್ಡಿಎಲ್ ಆಕ್ಸಿಡೇಶನ್ ಆಗುವುದನ್ನು ತಡೆಯುವುದಲ್ಲದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತವೆ. ಅಧ್ಯಯನಗಳು ತೋರಿಸಿರುವ ಪ್ರಕಾರ ನಿಯಮಿತವಾಗಿ ಬೆರ್ರಿಗಳ ಸೇವನೆಯಿಂದ ಎಲ್ಡಿಎಲ್ ಕೊಲೆಸ್ಟರಾಲ್, ರಕ್ತದಲ್ಲಿನ ಒತ್ತಡ ಮತ್ತು ಉರಿಯೂತದ ಚಿಹ್ನೆಗಳು ಕಡಿಮೆಯಾಗುತ್ತವೆ. ಕಡಲೆ-ಬೀಜಗಳು ಸಾಂದರ್ಭಿಕ ಚಿತ್ರ | Photo Credit : freepik ಬಾದಾಮಿ, ವಾಲ್ನಟ್ ಗಳು ಮತ್ತು ಗೋಡಂಬಿಗಳು ಸಸ್ಯ ಸ್ಟೆರಾಲ್ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅತ್ಯುತ್ತಮ ಫೈಬರ್ ಮೂಲಗಳಾಗಿವೆ. ಈ ಸಂಯುಕ್ತಗಳು ಕರುಳಿನಲ್ಲಿ ಕೊಲೆಸ್ಟರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಕಡಲೆ-ಬೀಜಗಳ ಸೇವನೆಯು ಹೃದಯ ರಕ್ತನಾಳದ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಎಲೆಗಳು ಪಾಲಾಕ್, ಕಾಲೆ, ಲ್ಯೂಟಸ್ ಮತ್ತು ಕ್ಯಾಬೇಜ್ಗಳಲ್ಲಿ ನೈಟ್ರೇಟ್ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಇವು ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತವೆ. ಇವುಗಳಲ್ಲಿ ವಿಟಮಿನ್, ಖನಿಜಗಳು ಮತ್ತು ಫೈಟೋರಾಸಾಯನಿಕಗಳ ಸಮೃದ್ಧವಾಗಿವೆ. ಹೀಗಾಗಿ ಹೃದಯದ ಕಾಯಿಲೆಯ ವಿರುದ್ಧ ಸಹಜವಾದ ರಕ್ಷಣೆ ಒದಗಿಸುತ್ತವೆ. ದ್ವಿದಳ ಧಾನ್ಯಗಳು ಸಾಂದರ್ಭಿಕ ಚಿತ್ರ | Photo Credit : freepik ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ಕಡಲೆಗಳಲ್ಲಿ ಕರಗುವ ಫೈಬರ್ ಹೆಚ್ಚಿರುತ್ತವೆ. ಹೀಗಾಗಿ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಅವು ಜಠರದ ಮೈಕ್ರೋಬಯೋಮ್ (ಸೂಕ್ಷ್ಮಜೀವಿ) ಬೆಳೆಯಲು ನೆರವಾಗುತ್ತವೆ. ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿದಲ್ಲಿ ಒಟ್ಟು ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಅಂತಿಮವಾಗಿ ಹೇಳುವುದಾದರೆ ಕೊಲೆಸ್ಟರಾಲ್ ಕಡಿಮೆಗೊಳಿಸಲು ಅತಿಯಾದ ಪ್ರಯತ್ನದ ಅಗತ್ಯವಿಲ್ಲ. ಸರಳ, ನಿರಂತರ ಶಿಸ್ತಿನ ಆಹಾರ ಬದಲಾವಣೆ ಸಾಕಾಗುತ್ತದೆ. ಈ ಮೇಲೆ ಹೇಳಿದ ಆರು ಆಹಾರಗಳನ್ನು ನಿತ್ಯದ ಆಹಾರದಲ್ಲಿ ಬೆರೆಸಿದಲ್ಲಿ ಎಲ್ಡಿಎಲ್ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು ಮತ್ತು ಹೃದಯನಾಳದ ಆರೋಗ್ಯವನ್ನು ಸುಧಾರಿಸಿ ಹೃದಯ ರೋಗದಿಂದ ರಕ್ಷಣೆಪಡೆಯಬಹುದು. ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ವಿವರಗಳಿಂದ ರಚಿಸಲಾಗಿದೆ. ಅಧಿಕೃತವಾಗಿ ನಿಮ್ಮ ದೇಹ-ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ. ಕೃಪೆ: hindustantimes.com
ಚೆನಾಬ್ ಸೇತುವೆ ನಕಲಿ ಎಂದ ಪಾಕ್ ʼಲಾ ಲಾ ಲ್ಯಾಂಡ್ʼ ನಲ್ಲಿ ಬದುಕುತ್ತಿದೆ ಎಂದು UNHRCಯಲ್ಲಿ ಭಾರತ ಟೀಕೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯನ್ನು ನಕಲಿ ಎಂದಿದ್ದ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿದ್ದು, ಹೀಗೆ ಪಾಕ್ ಊಹಿಸಿದರೆ, ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ನೀಡಲಾಗಿರುವ ಬಜೆಟ್ ಇತ್ತೀಚೆಗೆ IMFನಿಂದ ಪಡೆದ ಬೇಲ್ಔಟ್ ಪ್ಯಾಕೇಜ್ಗಿಂತ 2ಪಟ್ಟು ಹೆಚ್ಚಾಗಿದೆ ಎಂದು ಟೀಕೆ ಮಾಡಿದ್ದಾರೆ. ಇದೇ ವೇಳೆ ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಪುನರುಚ್ಚರಿಸಿದ್ದು, POKಯನ್ನು ಪಾಕ್ ಖಾಲಿ ಮಾಡಬೇಕು ಎಂದು ಒತ್ತಾಯಿಸಿದೆ.
ಏಮ್ಸ್ ಆಸ್ಪತ್ರೆಗಳಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳು ಬಿ.ಎಸ್ಸಿ. ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ & ಮಿಡ್ವೈಫರಿಯಲ್ಲಿ ಡಿಪ್ಲೊಮಾ ಹೊಂದಿರಬೇಕು ಮತ್ತು 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಮತ್ತು ರಾಜ್ಯ/ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಹೊಂದಿರಬೇಕು. ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (AIIMS) ಆಸ್ಪತ್ರೆ, ನರ್ಸಿಂಗ್ ಆಫೀಸರ್ NORCET 10 ನೇ ಹಂತದ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 2551 ಹುದ್ದೆಗಳಿಗೆ ನೇಮಕಾತಿ ಆಗುತ್ತಿದೆ. AIIMS ಅರ್ಜಿ ನಮೂನೆಯು 2026 ಫೆಬ್ರವರಿ 24 ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷ ಗಳು ಮತ್ತು ಗರಿಷ್ಠ ವಯಸ್ಸು 2026 ಮಾರ್ಚ್ 16 ರಂತೆ 30 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ನಲ್ಲಿ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು: https://www.aiimsexams.ac.in/landingpage/courses/advertisement/66ab7926ebb3815a4b707804 ಪ್ರಮುಖ ದಿನಾಂಕಗಳು * ಆನ್ಲೈನ್ ಅರ್ಜಿ ಆರಂಭ: 24 ಫೆಬ್ರವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮಾರ್ಚ್ 2026 * ಪರೀಕ್ಷೆ ದಿನಾಂಕ: 2026 ಏಪ್ರಿಲ್ 11 * ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು * ಫಲಿತಾಂಶ ಘೋಷಣೆ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು * ವಿವರಗಳನ್ನು ಈ ಮುಂದಿನ ಅಧಿಕೃತ ವೆಬ್ತಾಣದ ಲಿಂಕ್ನಲ್ಲಿ ಪರಿಶೀಲಿಸಬಹುದು: https://www.aiimsexams.ac.in/landingpage/courses/68dbbb27b7b096817673976e ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿಗೆ: 3000 ರೂ. ಎಸ್/ಎಸ್ಟಿ/ಇಡಬ್ಲ್ಯುಎಸ್ಗೆ: 2400 ರೂ. ಅಂಗವಿಕಲರಿಗೆ: ಶುಲ್ಕವಿಲ್ಲ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ನಗದು ಕಾರ್ಡ್ / ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದು. ವಯೋಮಿತಿ ಏಮ್ಸ್ ನೇಮಕಾತಿ 2026ರ ನಿಯಮದ ಪ್ರಕಾರ ವಯಸ್ಸಿನ ಮಿತಿ 2026 ಮಾರ್ಚ್ 16ರಂತೆ ಈ ಕೆಳಗಿನಂತಿರಬೇಕು. ಕನಿಷ್ಠ ವಯಸ್ಸು : 18 ವರ್ಷಗಳು ಗರಿಷ್ಠ ವಯಸ್ಸು :30 ವರ್ಷಗಳು ಏಮ್ಸ್ ನೇಮಕಾತಿಗೆ ಅನುಗುಣವಾಗಿ ವಯಸ್ಸಿನ ಸಡಿಲಿಕೆ ಇರುತ್ತದೆ. ಒಟ್ಟು ಹುದ್ದೆಗಳು 2551 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಹುದ್ದೆಯ ಹೆಸರು ಮತ್ತು ಅರ್ಹತೆ ಏಮ್ಸ್ ಸಂಸ್ಥೆಗಳಾದ್ಯಂತ ನರ್ಸಿಂಗ್ ಅಧಿಕಾರಿಗಳ ಹುದ್ದೆಗಳಿಗೆ (ಗ್ರೂಪ್ ಬಿ, ಲೆವೆಲ್ 07) ನೇಮಕಾತಿ. ಶೇ 80ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮತ್ತು ಶೇ 20ರಷ್ಟು ಪುರುಷರಿಗೆ ಮೀಸಲಾಗಿದೆ. ನರ್ಸಿಂಗ್ ಅಧಿಕಾರಿ ಏಮ್ಸ್: ಅಭ್ಯರ್ಥಿಗಳು ಬಿ.ಎಸ್ಸಿ. ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ & ಮಿಡ್ವೈಫರಿಯಲ್ಲಿ ಡಿಪ್ಲೊಮಾ ಹೊಂದಿರಬೇಕು ಮತ್ತು 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಮತ್ತು ರಾಜ್ಯ/ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಹೊಂದಿರಬೇಕು. ಪೂರ್ಣ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. ಆಯ್ಕೆ ಪ್ರಕ್ರಿಯೆ: ಎರಡು ಹಂತದ ಸಿಬಿಟಿ ಪರೀಕ್ಷೆ: ಪ್ರಾಥಮಿಕ ಪರೀಕ್ಷೆ 2026 ಏಪ್ರಿಲ್ 11 ಮತ್ತು ಮೈನ್ಸ್ 2026 ಎಪ್ರಿಲ್ 30
ಒತ್ತಡ ನಿವಾರಣೆಗೆ ತಿನ್ನುವ ಅಭ್ಯಾಸವೆ? ವೈದ್ಯರ ಸಲಹೆಗಳು ಇಲ್ಲಿವೆ…
ಪರೀಕ್ಷೆಯ ಸಮಯದಲ್ಲಿ ಅಥವಾ ಪ್ರಮುಖ ಕ್ಲೈಂಟ್ ಮೀಟಿಂಗ್ ಹಿಂದಿನ ರಾತ್ರಿ ನಿಮಗೆ ಹಸಿವಾಗದೆ ಇದ್ದರೂ ಹಠಾತ್ತನೆ ಸಿಕ್ಕಿದ್ದೆಲ್ಲವನ್ನು ತಿನ್ನಲು ಆರಂಭಿಸುವಿರಾ? ಒತ್ತಡವು ಅನೇಕ ವಿಧಗಳಲ್ಲಿ ಪ್ರಕಟವಾಗಬಹುದು ಮತ್ತು ಭಾವನಾತ್ಮಕ ಆಹಾರ ಸೇವನೆಯೂ ಅದರಲ್ಲಿ ಒಂದಾಗಿರುತ್ತದೆ. ಒತ್ತಡದಲ್ಲಿ ಆಹಾರ ಸೇವನೆ ಅನಾರೋಗ್ಯಕರ ಅಭ್ಯಾಸವಾಗಿದೆ. ಪದೇಪದೆ ಇಂತಹ ಅಭ್ಯಾಸ ಪುನರಾವರ್ತನೆಯಾಗದಂತೆ ಪರಿಹರಿಸುವುದು ನಿಮ್ಮ ಕೈಯಲ್ಲೇ ಇರುತ್ತದೆ. ಆಹಾರ ಸೇವನೆಯ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯುವುದು ಸರಿಯಲ್ಲ. ಹೀಗೆ ಒತ್ತಡ ನಿವಾರಣೆಗೆ ಆಹಾರ ಸೇವನೆಯನ್ನು ತಪ್ಪಿಸುವ ಬಗ್ಗೆ ಗುರುಗಾಂವ್ ನ ಮಾರ್ಗ ಮೈಂಡ್ ಕೇರ್ನ ಮನಶ್ಶಾಸ್ತ್ರಜ್ಞರಾದ ಡಾ. ವಿನೀತ್ ಪಾಟೀಲ್ ಹೇಳುವುದೇನು? ಯಾವಾಗಲಾದರೂ ಒಮ್ಮೆ ಒತ್ತಡ ನಿವಾರಣೆಗೆ ಆಹಾರ ಸೇವಿಸುವುದು ಹೆಚ್ಚು ಸಮಸ್ಯೆ ತರದು. ಆದರೆ ನಿಯಮಿತವಾಗಿ ಒತ್ತಡ ನಿವಾರಣೆಗೆ ಆಹಾರವನ್ನು ಅವಲಂಬಿಸುವುದು ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮ ಎರಡರ ಮೇಲೂ ಪರಿಣಾಮ ಬೀರಲಿದೆ ಎಂದು ವಿನೀತ್ ಪಾಟೀಲ್ ಎಚ್ಚರಿಸಿದ್ದಾರೆ. ಒತ್ತಡ ನಿವಾರಣೆಗೆ ಆಹಾರ ಸೇವನೆ ಎರಡು ಹೊಡೆತಗಳೊಂದಿಗೆ ಬರುತ್ತದೆ. ಗಮನಾರ್ಹವಾಗಿ ದೇಹದ ತೂಕ ಏರಿಕೆಯ ಅಪಾಯ ಹೊಂದಿರುತ್ತೀರಿ. ದೀರ್ಘಕಾಲೀನ ಕಳಪೆ ಆಹಾರ ಸೇವನೆಯಿಂದ ಮತ್ತಷ್ಟು ಸಮಸ್ಯೆ ಉಂಟಾಗುತ್ತದೆ. ಇಂತಹ ಅಭ್ಯಾಸವನ್ನು ಸಂಪೂರ್ಣವಾಗಿ ಮುರಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತವೆ. ಒತ್ತಡವನ್ನು ಸಂಘರ್ಷದ ಮೂಲಕ ತಡೆಹಿಡಿಯುವ ಬದಲಾಗಿ ಈ ಕೆಳಗಿನ ದಾರಿ ಹಿಡಿಯಬಹುದು. ► ತಿನ್ನುವ ಮೊದಲು ಭಾವನಾತ್ಮಕ ಹಸಿವೆಯನ್ನು ಗಮನಿಸುವುದು ನೈಜ, ದೈಹಿಕ ಹಸಿವೆ ಮತ್ತು ಭಾವನಾತ್ಮಕ ಒತ್ತಡ ನಿವಾರಣೆಗಾಗಿ ತಿನ್ನುವುದುರ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಈ ಬಗ್ಗೆ ಬಹಳ ಸಮೀಪದಿಂದ ಗಮನಹರಿಸುವ ಅಗತ್ಯವಿದೆ. ಹೀಗಾಗಿ ಮುಂದಿನ ಬಾರಿ ನೀವು ಆಹಾರ ಸೇವನೆಗೆ ಮುಂದಾದಾಗ ಹಸಿವೆ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮನಶ್ಶಾಸ್ತ್ರಜ್ಞರು ವ್ಯತ್ಯಾಸವನ್ನು ವಿವರಿಸಿದ್ದಾರೆ. “ಭಾವನಾತ್ಮಕ ಹಸಿವು ಸಾಮಾನ್ಯವಾಗಿ ಇದಕ್ಕಿದ್ದಂತೆ ಮತ್ತು ತೀವ್ರವಾಗಿ ಬರುತ್ತದೆ ಜೊತೆಗೆ ನಿರ್ದಿಷ್ಟ ಆರಾಮದಾಯಕ ಆಹಾರಗಳ ಹಂಬಲವೂ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನೈಜ ದೈಹಿಕ ಹಸಿವು ಕ್ರಮೇಣ ಹೆಚ್ಚಾಗುತ್ತದೆ ಮತ್ತು ಸಮತೋಲಿತ ಊಟದಿಂದ ತೃಪ್ತಿಪಡಿಸಬಹುದು.” ಒತ್ತಡದ ಹೊರತಾಗಿಯೂ ಬೋರ್ ಆಗುವುದು ಮತ್ತು ಏಕಾಂತವೂ ಭಾವನಾತ್ಮಕ ಹಸಿವೆಗೆ ಪ್ರಮುಖವಾಗಿ ಪ್ರಚೋದನೆ ಬೀರುತ್ತದೆ. ಭಾವನೆಯನ್ನು ನಿಯಂತ್ರಿಸಲು ಮತ್ತು ಆಹಾರ ಸೇವನೆಯನ್ನು ತಪ್ಪಿಸಲು ಸಣ್ಣ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಸಣ್ಣ ನಡಿಗೆ, ಐದು ನಿಮಿಷಗಳ ನಿಶ್ಚಲತೆಯಂತಹ ಚಿಂತನಶೀಲ ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಹೇಳಿದರು. ► ಆರೋಗ್ಯಕರ ಪರ್ಯಾಯದೊಂದಿಗೆ ಬದಲಿಸುವುದು ಭಾವನಾತ್ಮಕ ಹಸಿವನ್ನು ಎದುರಿಸಲು ತಿನ್ನುವುದಕ್ಕೆ ತಡೆಯೊಡ್ಡುವುದು ಪರಿಹಾರವಾಗದು. ಬದಲಾಗಿ ಭಾವನಾತ್ಮಕ ಸಾಧನೆಯನ್ನು ವಿಸ್ತರಿಸುವುದು. ಅಂದರೆ ಒತ್ತಡ ನಿವಾರಣೆಗೆ ಆಹಾರ ಒಂದು ಆಯ್ಕೆಯಾಗಲಿ. ಅದರ ಬದಲಾಗಿ ಇತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಅಂದರೆ ಹಗುರವಾದ ದೈಹಿಕ ಚಟುವಟಿಕೆ, ಬರೆಯುವುದು, ಸಂಗೀತ ಕೇಳುವುದು, ವ್ಯಾಯಾಮ ಮಾಡುವುದು ಮತ್ತು ಸ್ನೇಹಿತರನ್ನು ಭೇಟಿಯಾಗುವುದು ಮಾಡಬಹುದು. ಆಹಾರ ಒತ್ತಡ ನಿವಾರಣೆ ಎಂದು ಅನಿಸಿದರೂ ದೀರ್ಘಕಾಲದಲ್ಲಿ ದೊಡ್ಡ ವಿಷವೃತ್ತಕ್ಕೆ ಕಾರಣವಾಗಿ ಹೆಚ್ಚು ತಿನ್ನುವ ಉತ್ಸಾಹ ಬೆಳೆಯಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ► ಉತ್ತಮ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಸೇವನೆಯಲ್ಲಿ ತಟ್ಟೆಯಲ್ಲಿರುವ ವಸ್ತುಗಳು ಪೌಷ್ಠಿಕಾಂಶದಿಂದ ಸಮತೋಲಿತವಾಗಿರುವುದು ಅಗತ್ಯ. ಸಮತೋಲಿತ ಆಹಾರದ ವಿಚಾರದಲ್ಲೂ, ಸಾಕಷ್ಟು ಆಹಾರ ಸೇವನೆ ಮಾಡದೆ ಇದ್ದರೆ, ಒತ್ತಡದ ಸಮಯದಲ್ಲಿ ಭಾವನಾತ್ಮಕವಾಗಿ ತಿನ್ನುವ ಪ್ರವೃತ್ತಿ ಹೊಂದಿರುತ್ತಾರೆ. ಕೆಲದ ಸಂದರ್ಭಗಳಲ್ಲಿ ಇದು ನಿಜ. ಊಟ ಬಿಡುವುದು ಅಥವಾ ಸಂಪೂರ್ಣ ಆಹಾರ ಸಮೂಹವನ್ನು ಕಡಿತಗೊಳಿಸುವ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುವುದು ಅಪಾಯವನ್ನು ಹೆಚ್ಚಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಕೃಪೆ: hindustantimes.com
ಅಗ್ನಿ ಅವಘಡಗಳನ್ನು ತಡೆಗಟ್ಟಲು ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಿ : ಅಧಿಕಾರಿಗಳಿಗೆ ಆಯುಕ್ತ ಮಹೇಶ್ವರ್ರಾವ್ ಸೂಚನೆ
ಬೆಂಗಳೂರು ನಗರದ ಕುಂಬಾರಪೇಟೆಯ ಮೂರಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 21 ಮಳಿಗೆಗಳು ಸಂಪೂರ್ಣ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸತತ ಹತ್ತು ಗಂಟೆಗಳ ಕಾಲ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಕಟ್ಟಡದಲ್ಲಿರುವ ಇತರೆ ಮಳಿಗೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆದಿದ್ದರಿಂದ ಹೆಚ್ಚಿನ ನಷ್ಟ ಸಂಭವಿಸಿಲ್ಲ.
ಹಣದಾಸೆ ತೋರಿಸಿ 40 ಮಹಿಳೆಯರ 'ಅಂಡಾಣು' ಮಾರಾಟ; ನಾಲ್ವರು ಮಹಿಳೆಯರು ಪೊಲೀಸ್ ಬಲೆಗೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ (Badlapur) ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬೃಹತ್ 'ಅಂಡಾಣು ಮಾರಾಟ' (Human Egg Sale) ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಹಣದ ಆಸೆ ತೋರಿಸಿ ಮಹಿಳೆಯರ ಅಂಡಾಣುಗಳನ್ನು ಅಕ್ರಮವಾಗಿ ಹೊರತೆಗೆದು ಮಾರಾಟ ಮಾಡುತ್ತಿದ್ದ ಈ ದಂಧೆಗೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರನ್ನೇ ಬಂಡವಾಳವಾಗಿಸಿಕೊಂಡು ಕೋಟ್ಯಂತರ
Shoaib Akhtar Statement On India Vs Pakistan Clash-ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಪಾಕಿಸ್ತಾನ ವೇಗದ ಬೌಲರ್ ಶೊಯೇಬ್ ಅಖ್ತರ್ ಎತ್ತಿದ ಕೈ. ಇದೀಗ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿಯನ್ನು ಉಲ್ಲೇಖಿಸುತ್ತಿದ್ದಾಗ ತಾನು ಮತ್ತು ಸಕ್ಸೈನ್ ಮುಷ್ತಾಕ್ ರಸಹ್ಯವಾಗಿ ಮಾತ್ರೆ ಮತ್ತು ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುತ್ತಿದ್ದೆವು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾತ್ರವಲ್ಲದೆ ಪಾಕ್ ಕ್ರಿಕೆಟ್ ವಲಯದಲ್ಲಿ ತೀವ್ರ ಮುಜುಗರವನ್ನು ಉಂಟು ಮಾಡಿದೆ.
Viral ಕೋತಿ ಪಂಚ್ ಗೊಂಬೆಗೆ ಭಾರಿ ಡಿಮ್ಯಾಂಡ್: ಜಗತ್ತಿನಾದ್ಯಂತ ಟಾಯ್ ಸೋಲ್ಡ್ ಔಟ್, 10 ಪಟ್ಟು ಹೆಚ್ಚಾಯ್ತು ಬೆಲೆ
ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ (Ichikawa City Zoo) 'ಪಂಚ್' ಎಂಬ 7 ತಿಂಗಳ ಮರಿ ಕೋತಿಯ ಕಥೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಾಯಿಯ ಪ್ರೀತಿಯಿಂದ ವಂಚಿತವಾಗಿದ್ದ ಈ ಪುಟ್ಟ ಮರಿ ಕೋತಿಗೆ ಐಕಿಯಾ (IKEA) ಕಂಪನಿಯ ಒರಾಂಗುಟಾನ್ ಸಾಫ್ಟ್ ಟಾಯ್ (ಗೊಂಬೆ) ಆಸರೆಯಾಗಿದ್ದು, ಈ ಫೋಟೋಗಳು ಜಗತ್ತಿನಾದ್ಯಂತ ವೈರಲ್ ಆಗಿವೆ. ಇದರ
“ಪ್ರಧಾನಿ ಒಬ್ಬ ಅಪರಾಧಿಯನ್ನು ಅಪ್ಪಿಕೊಂಡರು”: ಇಸ್ರೇಲ್ ಪ್ರವಾಸದಲ್ಲಿರುವ ಮೋದಿ ವಿರುದ್ಧ ಮೆಹಬೂಬಾ ಮುಫ್ತಿ ವಾಗ್ದಾಳಿ
ಹೊಸದಿಲ್ಲಿ: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪ್ರಧಾನಿ ಹೋಗಿ ಒಬ್ಬ ಅಪರಾಧಿಯನ್ನು ಅಪ್ಪಿಕೊಂಡರು ಎಂದು ಹೇಳಿದ್ದಾರೆ. VIDEO | Khanbal, J&K: On PM Narendra Modi's visit to Israel, PDP Chief Mehbooba Mufti says, PM went and hugged a criminal. He (Netanyahu) has been shunned by the world, banned from entering many countries. (Full video available on PTI Videos - https://t.co/n147TvrpG7 ) pic.twitter.com/JuvwoEShxZ — Press Trust of India (@PTI_News) February 26, 2026 ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮೆಹಬೂಬಾ ಮುಫ್ತಿ, ಪ್ರಧಾನಿ ಮೋದಿ ಇಸ್ರೇಲ್ಗೆ ಹೋಗಿ ಒಬ್ಬ ಅಪರಾಧಿಯನ್ನು ಅಪ್ಪಿಕೊಂಡರು. ನೆತನ್ಯಾಹು ಅವರನ್ನು ಜಗತ್ತು ದೂರವಿಟ್ಟಿದೆ. ಅನೇಕ ದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗೆ ಬುಧವಾರ ಇಸ್ರೇಲ್ ಗೆ ತೆರಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕೃಷಿ, ನೀರು ನಿರ್ವಹಣೆ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಹಾಗೂ ಜನರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಈ ಭೇಟಿಯು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
“ಕೇಂದ್ರ ಸರಕಾರ ಶಾಂತಿಯುತ ಭಿನ್ನಾಭಿಪ್ರಾಯವನ್ನು ದಮನಿಸುತ್ತಿದೆ”
ಫೆಬ್ರವರಿ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 26) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ: ಎನ್ಐಎ ತನಿಖೆಗೆ ಶ್ರೀರಾಮುಲು ಆಗ್ರಹ, ಅಮಿತ್ ಶಾಗೆ ಪತ್ರ
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯನ್ನು ಶ್ರೀರಾಮುಲು ಖಂಡಿಸಿದ್ದು, ಇದರ ಹಿಂದೆ ದೊಡ್ಡ ಸಂಚಿದೆ. ಷಡ್ಯಂತ್ರವಿದೆ. ಎನ್ಐಎ ತನಿಖೆ ನಡೆಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
The Kerala Story 2: 'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ.
ನಮ್ಮ ಮೆಟ್ರೋ ನಿರಂತರ ದರ ಏರಿಕೆ ಪ್ರಸ್ತಾವನೆ ಪರಿಣಾಮ: ಬೆಂಗಳೂರಿಗರ ಸ್ವಂತ ವಾಹನ ಬಳಕೆ ಹೆಚ್ಚಳ
ನಮ್ಮ ಮೆಟ್ರೋ ಬೆಲೆ ಇನ್ಷ್ಟು ಹೆಚ್ಚಳ ಆದ್ರೆ ಜನ ಸ್ವಂತ ವಾಹನವನ್ನೇ ಮತ್ತೆ ಹೆಚ್ಚು ಬಳಸುವ ದಿನಗಳು ದೂರ ಉಳಿದಿಲ್ಲ. ಸದ್ಯಕ್ಕೆ ಮೆಟ್ರೋದಲ್ಲಿ ಕಾಣಿಸುವ ದಟ್ಟಣೆಯೂ ಮಾಯವಾಗುವ ಸಾಧ್ಯತೆ ಇದೆ. ಜನರ ಪ್ರಕಾರ ಮೆಟ್ರೋ ಲಾಭ ನೋಡುವುದಕ್ಕಿಂತ ಜನರ ಅಗತ್ಯಕ್ಕಾಗಿ ಸಾರಿಗೆ ಸೇವೆ ಕೊಡುವುದೇ ಮುಖ್ಯ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಜಿಬಿಎಗೆ ನೋಟಿಸ್! ಈಶ್ವರ ಖಂಡ್ರೆ ಸೂಚನೆ
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಶಾಸಕರ ಜೊತೆಗೆ ಸಭೆ ನಡೆಸಲು ಖಂಡ್ರೆ ಮುಂದಾಗಿದ್ದಾರೆ. ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರವನ್ನು ಅವರು ಕೋರಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಸ್ಥಿತಿಗತಿ ಹೇಗಿದೆ? ಈ ಕುರಿತಾದ ವಿವರಗಳು ಇಲ್ಲಿವೆ.
‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
ಸೆನ್ಸಾರ್ ಮಂಡಳಿ ನಿಯಮ ಪಾಲಿಸಿಲ್ಲವೆಂದು ಹೈಕೋರ್ಟ್ ತರಾಟೆ
Modi Followers : ವಿಪಕ್ಷದ 10 ನಾಯಕರು ಒಂದೆಡೆ, ಪ್ರಧಾನಿ ಇನ್ನೊಂದೆಡೆ - 'Miles ahead' ಎಂದ ಪಿಯೂಶ್ ಗೋಯಲ್
Narendra Modi Vs Opposition Leaders : ಇನ್ಸ್ಟಾಗ್ರಾಮ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿವರನ್ನು ಹಿಂಬಾಲಿಸುವವರ ಸಂಖ್ಯೆ ನೂರು ಮಿಲಿಯನ್ ಅನ್ನು ದಾಟಿದ್ದಾರೆ. ವಿಶ್ವದ ಯಾವುದೇ ರಾಜಕೀಯ ನಾಯಕರಿಗೆ ಮೋದಿಯವರಷ್ಟು ಫಾಲೋವರ್ಸ್ ಇಲ್ಲ. ಈ ಜನಪ್ರಿಯತೆಯನ್ನು ಇಟ್ಟುಕೊಂಡು, ಬಿಜೆಪಿ ನಾಯಕರು ವಿಪಕ್ಷಗಳ ನಾಯಕರ ಜೊತೆ ತುಲನೆಯನ್ನು ಮಾಡುತ್ತಿದ್ದಾರೆ.
‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ: ಏನಿದು NCERT ಪಠ್ಯಪುಸ್ತಕ ವಿವಾದ?
ಎನ್ಸಿಇಆರ್ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ವ್ಯಕ್ತಿಯು ನ್ಯಾಯಾಂಗದ ಅವಹೇಳನ ಮಾಡುವುದಕ್ಕೆ ಹಾಗೂ ಅದರ ಸಮಗ್ರತೆಗೆ ಧಕ್ಕೆತರುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಕ್ಷಮೆಯಾಚಿಸಿದ್ದು, ವಿವಾದಾತ್ಮಕ ಪುಸ್ತಕವನ್ನು ಹಿಂತೆಗೆದುಕೊಂಡಿದೆ. ಅಧ್ಯಾಯವು ಅನುಚಿತ ವಿಷಯವನ್ನು ಹೊಂದಿದೆ. ಅದರ ಸೇರ್ಪಡೆಯು ತೀರ್ಪಿನ ಗಮನಾರ್ಹ ದೋಷ ಎಂದು ಮಂಡಳಿ ಒಪ್ಪಿಕೊಂಡಿದೆ. ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್, ಸಂಪುಟ II ಎಂಬ ಪುಸ್ತಕವನ್ನು ಫೆಬ್ರವರಿ 24 ರಂದು ಬಿಡುಗಡೆ ಮಾಡಲಾಗಿದೆ ಎಂದು NCERT ಹೇಳಿದೆ. ಆದಾಗ್ಯೂ, ಪಠ್ಯಪುಸ್ತಕ ಪ್ರಕಟವಾದ ನಂತರವೇ, ಕೆಲವು ಅನುಚಿತ ಪಠ್ಯ ವಿಷಯ ಮತ್ತು ತೀರ್ಪಿನ ದೋಷವು 'ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ' ಎಂಬ ಶೀರ್ಷಿಕೆಯ ಅಧ್ಯಾಯ ಸಂಖ್ಯೆ 4 ರಲ್ಲಿ ಅಜಾಗರೂಕತೆಯಿಂದ ನುಸುಳಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ಮಂಡಳಿ ಹೇಳಿದೆ. ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಹ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದು ಮುಂದಿನ ಸೂಚನೆ ಬರುವವರೆಗೆ ಪಠ್ಯಪುಸ್ತಕದ ವಿತರಣೆಯನ್ನು ಕಟ್ಟುನಿಟ್ಟಾಗಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ ಎಂದು ಎನ್ಸಿಇಆರ್ಟಿ ಹೇಳಿದೆ. ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ NCERT ಕ್ಷಮೆಯಾಚಿಸಿದೆ. ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಇದನ್ನು ಲೆಕ್ಕಾಚಾರದ ನಡೆ ಎಂದಿದ್ದು, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ನ್ಯಾಯಾಂಗವನ್ನು ದೂಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಆದಾಗ್ಯೂ, ಮಂಡಳಿಯು ನ್ಯಾಯಾಂಗದ ಬಗ್ಗೆ ಹೆಚ್ಚು ಗೌರವ ಹೊಂದಿದೆ . ಅದನ್ನು ಭಾರತೀಯ ಸಂವಿಧಾನದ ರಕ್ಷಕ ಮತ್ತು ಮೂಲಭೂತ ಹಕ್ಕುಗಳ ರಕ್ಷಕ ಎಂದು ನೋಡುತ್ತದೆ. ಮೇಲೆ ಹೇಳಿದ ದೋಷವು ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲ. ಅಧ್ಯಾಯದಲ್ಲಿ ಅನುಚಿತ ವಿಷಯವನ್ನು ಸೇರಿಸಿದ್ದಕ್ಕಾಗಿ NCERT ವಿಷಾದಿಸುತ್ತದೆ ಎಂದು ಹೇಳಿದೆ. ತನ್ನ ನಿರಂತರ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ, ರಚನಾತ್ಮಕ ಪ್ರತಿಕ್ರಿಯೆಗೆ ಮುಕ್ತವಾಗಿದೆ. ಆದ್ದರಿಂದ, ಅಗತ್ಯವಿರುವಂತೆ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಧ್ಯಾಯವನ್ನು ಪುನಃ ಬರೆಯಲಾಗುವುದು ಮತ್ತು 2026–27 ಶೈಕ್ಷಣಿಕ ಅಧಿವೇಶನದ ಆರಂಭದಲ್ಲಿ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ. ಏನಿದು ವಿವಾದ? ಎನ್ಸಿಇಆರ್ಟಿ 8 ನೇ ತರಗತಿಯ ಪಠ್ಯ ಪುಸ್ತಕದಲ್ಲಿ “ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ಅಧ್ಯಾಯದದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಭಾಗವಿದೆ. ‘ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಕಾರ್ಯವಿಧಾನಗಳು, ಕಳಪೆ ಮೂಲಸೌಕರ್ಯದಂತಹ ಬಹು ಕಾರಣಗಳಿಂದಾಗಿ ಬೃಹತ್ ಪ್ರಕರಣಗಳು ಬಾಕಿ ಉಳಿದಿವೆ. ಇದು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು ಎಂದು ಅಧ್ಯಾಯವು ಪಟ್ಟಿ ಮಾಡಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಶೀರ್ಷಿಕೆಯ ವಿಭಾಗವು, ನ್ಯಾಯಾಧೀಶರು ನ್ಯಾಯಾಲಯದಲ್ಲಿ ಅವರ ನಡವಳಿಕೆಯನ್ನು ಮಾತ್ರವಲ್ಲದೆ ಅದರ ಹೊರಗೆ ಅವರ ನಡವಳಿಕೆಯನ್ನು ಸಹ ನಿಯಂತ್ರಿಸುವ ನೀತಿ ಸಂಹಿತೆಗೆ ಬದ್ಧರಾಗಿದ್ದಾರೆ ಎಂದು ಹೇಳಿದೆ. ಜನರು ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಅನುಭವಿಸುತ್ತಾರೆ. ಬಡವರು ಮತ್ತು ಅನುಕೂಲ ಇಲ್ಲದವರಿಗೆ ಇದು ನ್ಯಾಯದ ಪ್ರವೇಶದ ಸಮಸ್ಯೆಯನ್ನು ಇನ್ನಷ್ಟು ಕಷ್ಟವಾಗಿಸಬಹುದು ಎಂದು ಅಧ್ಯಾಯವು ಹೇಳುತ್ತದೆ. ತಂತ್ರಜ್ಞಾನದ ಬಳಕೆಯ ಮೂಲಕವೂ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಬೆಳೆಸಲು ಮತ್ತು ಭ್ರಷ್ಟಾಚಾರದ ನಿದರ್ಶನಗಳು ಎಲ್ಲೆಲ್ಲಿ ಉದ್ಭವಿಸಬಹುದು ಎಂಬುದರ ವಿರುದ್ಧ ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪಠ್ಯದಲ್ಲಿದೆ. ಪಠ್ಯಪುಸ್ತಕದ ಹಿಂದಿನ ಆವೃತ್ತಿಗಳು ಪ್ರಾಥಮಿಕವಾಗಿ ನ್ಯಾಯಾಲಯಗಳ ರಚನೆ ಮತ್ತು ಕಾರ್ಯಗಳ ಮೇಲೆ ಕೇಂದ್ರೀಕರಿಸಿತ್ತು. ►ಕಾನೂನು ವಲಯಗಳಲ್ಲಿ ಕಳವಳಗಳು ಕಾರ್ಯಾಂಗ ಮತ್ತು ಅಧಿಕಾರಶಾಹಿಯಂತಹ ಇತರ ವಲಯಗಳಲ್ಲಿನ ಭ್ರಷ್ಟಾಚಾರವನ್ನು ಬಿಟ್ಟು, ನ್ಯಾಯಾಂಗ ಭ್ರಷ್ಟಾಚಾರದ ಕುರಿತಾದ ವಿಭಾಗವನ್ನು ಸೇರಿಸಿರುವುದು ಕಾನೂನು ಮತ್ತು ರಾಜಕೀಯ ವಲಯಗಳಿಂದ ಟೀಕೆಗೆ ಗುರಿಯಾಗಿದೆ. “NCERTಯ 8 ನೇ ತರಗತಿಯ ಪುಸ್ತಕವು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತಾದ ವಿಭಾಗವನ್ನು ಒಳಗೊಂಡಿದೆ. ರಾಜಕಾರಣಿಗಳು, ಸಚಿವರು, ಸಾರ್ವಜನಿಕ ಸೇವಕರು ಮತ್ತು ತನಿಖಾ ಸಂಸ್ಥೆಗಳಲ್ಲಿನ ಬೃಹತ್ ಭ್ರಷ್ಟಾಚಾರದ ಬಗ್ಗೆ ಯಾಕಿಲ್ಲ? ಅದನ್ನೆಲ್ಲಾ ಏಕೆ ಮುಚ್ಚಿಡಲಾಗುತ್ತಿದೆ? ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ನ್ಯಾಯಾಂಗ ಕುರಿತು ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿನ ‘ಆಕ್ಷೇಪಾರ್ಹ’ ಮಾಹಿತಿ ಬಗ್ಗೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದು, ಈ ವಿಷಯದ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಕೋರಿದ್ದರು. ಇದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನ್ಯಾಯಾಂಗದ ಮುಖ್ಯಸ್ಥನಾಗಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ.ಈ ವಿಷಯವನ್ನು ಅಧಿಕೃತವಾಗಿ ಗಮನಕ್ಕೆ ತೆಗೆದುಕೊಂಡಿದ್ದೇನೆ. ಇದು ಬಹಳ ಲೆಕ್ಕಾಚಾರ ಹಾಗೂ ದೀರ್ಘ ಆಲೋಚನೆಯಿಂದ ಕೈಗೊಂಡ ಕ್ರಮದಂತೆ ತೋರುತ್ತಿದೆ. ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದಿದ್ದಾರೆ. 2016 ಮತ್ತು 2025 ರ ನಡುವೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರ ವಿರುದ್ಧ ಸಿಜೆಐ ಕಚೇರಿಗೆ ಸುಮಾರು 7,500 ದೂರುಗಳು ಬಂದಿವೆ ಎಂದು ಕೇಂದ್ರ ಸರ್ಕಾರ ಬಹಿರಂಗಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಂತೆ 8ನೇ ತರಗತಿ ಮಕ್ಕಳಿಗೆ ಕಲಿಸಲಾಗುತ್ತಿದೆ ಎಂಬ ವಿಚಾರ ತಿಳಿದು ನಮ್ಮ ಮನಸ್ಸಿಗೆ ನೋವಾಗಿದೆ. ನಾವು ಕೂಡ ನ್ಯಾಯಾಂಗದ ಭಾಗೀದಾರರು.ಇದು NCERT ಪುಸ್ತಕದ ಭಾಗವಾಗಿದೆ. ಈ ಸಂಸ್ಥೆಯಲ್ಲಿ ನಮಗೆ ದೊಡ್ಡ ಪಾಲು ಇದೆ, ಮತ್ತು ಅಧ್ಯಾಯವು ಸಂಪೂರ್ಣವಾಗಿ ಮಾನಹಾನಿಕಾರವಾಗಿವೆ . ನಮ್ಮ ಬಳಿ ಪುಸ್ತಕದ ಪ್ರತಿಗಳಿವೆ ಎಂದು ಸಿಬಲ್ ಹೇಳಿದರು. ಈ ವಿಚಾರದ ಸಂಪೂರ್ಣ ಅರಿವು ನಮಗಿದೆ. ಒಂದು ದಿನ ಕಾಯಿರಿ. ಇದು ಖಂಡಿತವಾಗಿಯೂ ಇಡೀ ಸಂಸ್ಥೆಗೆ ಸಂಬಂಧಿಸಿದ ವಿಷಯ. ಬಾರ್ ಆ್ಯಂಡ್ ಬೆಂಚ್ ಕಳವಳಗೊಂಡಿದೆ. ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬ ಪಾಲುದಾರರು ನಿಜವಾಗಿಯೂ ಚಿಂತಿತರಾಗಿದ್ದಾರೆ. ನನಗೆ ಬಹಳಷ್ಟು ಕರೆಗಳು, ಸಂದೇಶಗಳು ಬರುತ್ತಿವೆ. ಹೈಕೋರ್ಟ್ ನ್ಯಾಯಾಧೀಶರು ತೊಂದರೆಗೀಡಾಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ ►ಸರ್ಕಾರ ಮತ್ತು NCERTಗೆ ಸುಪ್ರೀಂ ತರಾಟೆ ಗುರುವಾರ, ಸುಪ್ರೀಂ ಕೋರ್ಟ್ ಸರ್ಕಾರ ಮತ್ತು NCERT ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಎಲ್ಲಾ ಭೌತಿಕ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಪುಸ್ತಕದ ಪ್ರಕಟಣೆ ಮತ್ತು ಡಿಜಿಟಲ್ ಪ್ರಸರಣದ ಮೇಲೆ ಸಂಪೂರ್ಣ ನಿಷೇಧ ಹೇರಲು ನ್ಯಾಯಾಲಯ ಆದೇಶಿಸಿತು. ಪುಸ್ತಕದ ಎಲ್ಲಾ ಪ್ರತಿಗಳು, ಹಾರ್ಡ್ ಕಾಪಿ ಅಥವಾ ಸಾಫ್ಟ್ ಕಾಪಿ, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಅಥವಾ ಶಾಲೆಗಳಲ್ಲಿ ಇರಿಸಿದ್ದರೂ, ಸಾರ್ವಜನಿಕ ಪ್ರವೇಶದಿಂದ ತೆಗೆದುಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಎಂದು ಸಿಜೆಐ ಹೇಳಿದ್ದಾರೆ. ಎರಡು ವಾರಗಳಲ್ಲಿ ಅನುಸರಣಾ ವರದಿಯನ್ನು ಕೋರಲಾಗಿದೆ. ವಿವಾದಾತ್ಮಕ ಅಧ್ಯಾಯವನ್ನು ಬರೆದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯಲ್ಲಿ ಯಾರಿದ್ದಾರೆಂದು ನಿಖರವಾಗಿ ತಿಳಿಸಬೇಕೆಂದು ಒತ್ತಾಯಿಸುವ ಮೂಲಕ ಸುಪ್ರೀಂ ಕೋರ್ಟ್ ಇನ್ನಷ್ಟು ಕಠಿಣ ನಿಲುವು ತೆಗೆದುಕೊಂಡಿತು. ವಿಷಯದ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನ್ಯಾಯಾಲಯವು ಔಪಚಾರಿಕ ತನಿಖೆಯನ್ನು ಪರಿಗಣಿಸುತ್ತಿದೆ. ಆ ಅಧ್ಯಾಯ ಬರೆದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.ನ್ಯಾಯಾಲಯವು ಉತ್ತರಗಳನ್ನು ಕಂಡುಕೊಳ್ಳುವವರೆಗೆ ವಿಷಯವನ್ನು ಕೈಬಿಡುವುದಿಲ್ಲ ಎಂದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಮತ್ತು NCERT ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ನ್ಯಾಯಾಲಯ ನಿಂದನೆ ಕಾಯ್ದೆಯಡಿ ನೋಟಿಸ್ ನೀಡಿದೆ. ಆದಾಗ್ಯೂ, ನ್ಯಾಯಾಂಗ ವ್ಯವಸ್ಥೆಯ ಮೇಲಿನ ಕಾನೂನುಬದ್ಧ ಟೀಕೆಯನ್ನು ನಿಗ್ರಹಿಸುವ ಉದ್ದೇಶವನ್ನು ತನ್ನ ಆದೇಶಗಳು ಹೊಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. NCERT ಯ ಸ್ಪಷ್ಟೀಕರಣದ ಮೇರೆಗೆ, ಪುಸ್ತಕದಲ್ಲಿನ ಪದಗಳ ಆಯ್ಕೆಯು ನಿಜವಾದ ದೋಷ ದಂತೆ ಕಾಣುತ್ತಿಲ್ಲ. ಸಾಂಸ್ಥಿಕ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಅವಮಾನಿಸಲು ಉದ್ದೇಶಪೂರ್ವಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಮಗೆ ತೋರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆರಂಭದಲ್ಲಿ, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದರು. ಅಧ್ಯಾಯವನ್ನು ಸಿದ್ಧಪಡಿಸಿದ ಇಬ್ಬರು ಅಧಿಕಾರಿಗಳು ಯುಜಿಸಿ ಅಥವಾ ಯಾವುದೇ ಸಚಿವಾಲಯದೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಏತನ್ಮಧ್ಯೆ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ಕ್ರಮವು ಉದ್ದೇಶಪೂರ್ವಕವಾಗಿರಬಹುದು ಎಂದು ಸೂಚಿಸಿದರು. ಸಿಂಘ್ವಿ ಅವರು ಅಧ್ಯಾಯದ ಆಯ್ಕೆಯನ್ನು ಪ್ರಶ್ನಿಸಿದ್ದು, ಭ್ರಷ್ಟಾಚಾರ ಇತರ ಹಲವು ವಲಯಗಳಲ್ಲಿಯೂ ಅಸ್ತಿತ್ವದಲ್ಲಿದೆ ಎಂದರು. ರಾಜಕಾರಣಿಗಳು ಮತ್ತು ಉನ್ನತ ನಾಯಕರ ನಡವಳಿಕೆಯ ಬಗ್ಗೆ ಮೌನವಾಗಿರುವಾಗ ಪುಸ್ತಕವು ನ್ಯಾಯಾಂಗವನ್ನು ಏಕೆ ಪ್ರತ್ಯೇಕವಾಗಿ ಉಲ್ಲೇಖಿಸಿದೆ ಎಂದು ಕೇಳುತ್ತಾ ಸಿಬಲ್ ಈ ಅಭಿಪ್ರಾಯವನ್ನು ಬೆಂಬಲಿಸಿದರು. ನಾಲ್ಕು ವಾರಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಫೆ 27 ರಂದು ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನೆ
ಉಳ್ಳಾಲ: ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಫೆಬ್ರವರಿ 27 ಶುಕ್ರವಾರ ಮತ್ತು ಫೆ 28 ಶನಿವಾರದಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ತಿಳಿಸಿದ್ದಾರೆ. ಗುರುವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಸಂಘದ ಬೆಳವಣಿಗೆಯ ಬಗ್ಗೆ ವಿವರಿಸಿದರು. ಸಣ್ಣ ಕಟ್ಟಡ ನಿರ್ಮಿಸುವ ಕನಸಿನಿಂದ ಆರಂಭವಾದ ಪ್ರಯತ್ನ ದೇವರ ಆಶೀರ್ವಾದದಿಂದ ಇಂದು ಅದರ ಹತ್ತು ಪಟ್ಟು ದೊಡ್ಡ ಕಟ್ಟಡವಾಗಿ ರೂಪುಗೊಂಡಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಂದರ ಕಟ್ಟಡದ ಉದ್ಘಾಟನೆ ಶುಕ್ರವಾರ ಸಂಜೆ ನಡೆಯಲಿದ್ದು ಈ ಸಮಾರಂಭಕ್ಕೆ ಎಲ್ಲಾ ಧರ್ಮದ ಜನರು ಭಾಗವಹಿಸಲಿದ್ದಾರೆ ಎಂದರು. ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಮಾತನಾಡಿ ಫೆ. 27 ಶುಕ್ರವಾರ ಸಂಜೆ 6 ಗಂಟೆಗೆ ನೂತನ ಕಟ್ಟಡದಲ್ಲಿ ದೀಪ ಪ್ರಜ್ವಲನೆಯನ್ನು ಉದಯ ಗುರು ಸ್ವಾಮಿ ಮಂಜೇಶ್ವರ ನಡೆಸಲಿದ್ದಾರೆ, ಭಗವಧ್ವಜ ಅನಾವರಣವನ್ನು ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸೇಸಪ್ಪ ಟೈಲರ್ ಸುದರ್ಶನನಗರ ಪಜೀರು ನಡೆಸಲಿದ್ದಾರೆ. ಸಂಜೆ 6.30 ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಸಾಮೂಹಿಕ ಪ್ರಾರ್ಥನೆ, ಪ್ರಸಾದ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಸಂಜೆ ಕೀರ್ತಿಶೇಷ ಪದ್ಮಾವತಿ ಕೋಚಣ್ಣ ಆಳ್ವ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ ಎಂದರು. ಫೆ .28 ಶನಿವಾರ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ದೀಪ ಪ್ರಜ್ವಲನೆ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಪ್ರಾರಂಭ, ಬೆಳಿಗ್ಗೆ ಗಂಟೆ 11.33 ಗಂಟೆಗೆ ನೂತನ ಕಟ್ಟಡ ಪ್ರವೇಶ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ,ಮಧ್ಯಾಹ್ನ 3 ಗಂಟೆಗೆ ಸತ್ಯನಾರಾಯಣ ಪೂಜೆ ಪ್ರಾರಂಭ, 4.30 ಗಂಟೆಗೆ ಪ್ರಸಾದ ವಿತರಣೆ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಸುದ್ದಿ ಗೋಷ್ಠಿ ಯಲ್ಲಿ ಪ್ರಧಾನ ಕಾರ್ಯದರ್ಶಿ ನಿತಿನ್ ಪೂಂಜ ಪಾಣೇಲ ಬರಿಕೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಂಕಷ್ಟದಲ್ಲಿ ಕುಕನೂರು-ಯಲಬುರ್ಗಾದ 66 ಅತಿಥಿ ಶಿಕ್ಷಕರು
ಭಾರತದ ಪಾಲಿಗೆ ಗೋಲ್ಡನ್ ಡೋರ್ ಎಂದೇ ಭಾವಿಸಲಾಗಿದ್ದ ಇರಾನ್ ಹಾಗೂ ಭಾರತ ಜಂಟಿಯಾಗಿ ಅಭಿವೃದ್ದಿ ಪಡಿಸುತ್ತಿರುವ ಚಾಬಹಾರ್ ಬಂದರು ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಭಾರತ ಸರ್ಕಾರ ಯಾವುದೇ ಅನುದಾನವನ್ನು ಮೀಸಲಿಡದೆ ಇರುವುದಕ್ಕೆ ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿ ಭಾರತ ಹಾಗೂ ಇರಾನ್ ಎರಡಕ್ಕೂ ಯೋಜನೆಯಿಂದ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ. ಹಾಗಾದ್ರೆ, ಈ ಚಾಬಹಾರ್ ಬಂದರು ಭಾರತಕ್ಕೆ ಎಷ್ಟು ಮುಖ್ಯ? ಈ ಬಾರಿಯ ಬಜೆಟ್ ನಲ್ಲಿ ಹಣವನ್ನು ಮೀಸಲಿಡದೆ ಇರಲು ಇರುವ ಸಂಭವನೀಯ ಕಾರಣಗಳೇನಿರಬಹುದು? ಎಂಬುದರ ಕುರಿತ ವರದಿ ಇಲ್ಲಿದೆ..
ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುವ ಮೂತ್ರಾಲಯಗಳು
ಸೇಡಂ: ಈ ಹಿಂದೆ ಪಟ್ಟಣ ಪುರಸಭೆ ಇದ್ದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಮೂತ್ರಾಲಯಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ದುರ್ವಾಸನೆ ಬೀರುತ್ತಿದ್ದು, ನಗರಸಭೆಯಾಗಿ ಪರಿವರ್ತನೆಗೊಂಡರೂ ಸರಿಯಾದ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಚ್ಚ ಭಾರತ್ ಮಿಶನ್ ಯೋಜನೆಯಡಿ 2024-25ನೇ ಸಾಲಿನಲ್ಲಿ ಅಂದಿನ ಪುರಸಭೆ ವತಿಯಿಂದ ಲೋಹಾರ ಗಲ್ಲಿ, ಕೊಡ್ಲಾ ಕ್ರಾಸ್, ಬಸವೇಶ್ವರ ವೃತ್ತ, ಚಿಂಚೋಳಿ ಕ್ರಾಸ್, ಉಡಗಿ ರಸ್ತೆ, ಹಳೆಯ ತಹಶೀಲ್ದಾರ್ ಕಚೇರಿ ರಸ್ತೆ, ಐಟಿಐ ಕಾಲೇಜು ರಸ್ತೆ ಹಾಗೂ ತಾಲೂಕು ಕ್ರೀಡಾಂಗಣ ರಸ್ತೆ ಸೇರಿ ಒಟ್ಟು ಎಂಟು ಕಡೆಗಳಲ್ಲಿ ಸಾರ್ವಜನಿಕ ಮೂತ್ರಾಲಯಗಳನ್ನು ನಿರ್ಮಿಸಲಾಗಿತ್ತು. ಪ್ರತಿಯೊಂದಕ್ಕೂ 2 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 16 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ ಸದ್ಯ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಕೆಯಾದ ಬಳಿಕವೂ ಈ ಮೂತ್ರಾಲಯಗಳ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಹಾಗಾಗಿ ಈ ಮೂತ್ರಾಲಯಗಳಲ್ಲಿ ಕಸ, ದುರ್ವಾಸನೆ, ಕೆಲವೊಂದು ಕಡೆ ಕಟ್ಟಡವೇ ಬಿದ್ದು ಹೋಗಿರುವುದು ಕಾಣುತ್ತದೆ. ಇಲ್ಲಿ ಸ್ವಚ್ಛತೆ, ನೀರಿನ ಪೂರೈಕೆ ಹಾಗೂ ಪೈಪ್ಲೈನ್ ದುರಸ್ತಿ ಕಾರ್ಯಗಳು ನಿರ್ಲಕ್ಷ್ಯಗೊಂಡ ಪರಿಣಾಮ ಮೂತ್ರಾಲಯಗಳು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಬಳಕೆ ಮಾಡಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ನಿರ್ಮಿಸಿರುವ ಮೂತ್ರಾಲಯಗಳು ಸಮರ್ಪಕವಾಗಿ ಬಳಕೆಯಾಗದಿದ್ದರೂ ಪ್ರಮುಖ ರಸ್ತೆ ಬದಿಗಳಲ್ಲಿ ಮತ್ತೊಂದೈದು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಪ್ರತಿಯೊಂದಕ್ಕೂ ಸುಮಾರು 7 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಕೇವಲ ನಿರ್ಮಾಣ ಮಾಡುವುದೇ ಕೆಲಸವಾಗಿಬಿಟ್ಟಿದೆ, ಆದರೆ ಸಮರ್ಪಕ ಬಳಕೆ ಮತ್ತು ನಿರ್ವಹಣೆಯಲ್ಲಿ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಮೊದಲು ನಿರ್ಮಿಸಿರುವ ಮೂತ್ರಾಲಯ, ಶೌಚಾಲಯಗಳಿಗೆ ನೀರು, ಸ್ವಚ್ಛತೆ ಸೇರಿದಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಬೇಕು, ಅಲ್ಲದೆ ಸುಂದರ, ಸ್ವಚ್ಛತೆ ಜೊತೆಗೆ ಉತ್ತಮವಾಗಿ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸರಕಾರದ ಹಣದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ನಂತರ ಅವುಗಳ ನಿರ್ವಹಣೆ ಕಡೆ ಗಮನ ಹರಿಸದೆ ಪಾಳುಬೀಳುವಂತೆ ಮಾಡುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. -ಭೀಮಾಶಂಕರ ಕೊರವಿ ಕರ್ನಾಟಕ ನವನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಸ್ವಚ್ಚ ಭಾರತ್ ಮಿಶನ್ ಯೋಜನೆಯಡಿ ನಿರ್ಮಿಸಲಾದ ಸಾರ್ವಜನಿಕ ಮೂತ್ರಾಲಯಗಳನ್ನು ತಿಂಗಳಿಗೆ ಒಮ್ಮೆ ನೀರಿನ ಟ್ಯಾಂಕ್ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಸೌಲಭ್ಯ ಕೊರತೆ ಇದ್ದಲ್ಲಿ ನೀಗಿಸಲಾಗುವುದು. --ಪ್ರಿಯಾಂಕ ವಿಭೂತಿ ನಗರಸಭೆಯ ಪರಿಸರ ಅಭಿಯಂತರರು
ತಿಪಟೂರಿನಲ್ಲಿ ರೈಲ್ವೆ, ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ ಕೇಂದ್ರ ಸಚಿವ ವಿ.ಸೋಮಣ್ಣ
ತುಮಕೂರು. ಫೆ.26: ತಿಪಟೂರಿಗೆ ಭೇಟಿ ನೀಡಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಹಾಯಕ ಸಚಿವ ವಿ.ಸೋಮಣ್ಣ ಶಾರದ ನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ರೈಲ್ವೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವರು, ತಿಪಟೂರು ಶಾರದ ನಗರ ರೈಲ್ವೆ ಮೆಲ್ಸೇತುವೆ ಕಾಮಗಾರಿ ಹಾಗೂ ಹೊನ್ನವಳ್ಳಿ ರಸ್ತೆ ರೈಲ್ವೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ಮೇ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ನಾನು ಭೇಟಿಗೆ ಬರುತ್ತೇನೆ. ಈಗ ಕಾಮಗಾರಿ ಪಿಲ್ಲರ್ ತೆಗೆಯುತ್ತಿದ್ದೀರಿ ನಿಮಗೆ ಜವಾಬ್ದಾರಿ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈಲ್ವೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಂಚ ಗ್ಯಾರಂಟಿಯಿಂದ ಆರ್ಥಿಕ ಹೊರೆ, ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ಗೆ ಮುಜುಗರ
ಪಂಚ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗುತ್ತದೆ ಎಂಬ ಚರ್ಚೆ ಮತ್ತೆ ಶುರುವಾಗಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರೂ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆ ಆಗುತ್ತಿರುವುದನ್ನು ಅವರು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಗ್ಯಾರಂಟಿ ಯೋಜನೆಯ ಬಗ್ಗೆ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಮತ್ತಷ್ಟು ವಿವರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಈ ಬೃಹತ್ ಸಾಧನೆ ಸಾಧಿಸಿದ ಮೊದಲ ರಾಜಕಾರಣಿಯಾಗಿದ್ದಾರೆ. ಪ್ರಮುಖ ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿ ಈಗ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಿಂತ ಎರಡು ಪಟ್ಟು ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 43.2 ಮಿಲಿಯನ್ ಫಾಲೋವರ್ ಹೊಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷರು ಪ್ರಾಥಮಿಕವಾಗಿ ಹೇಳಿಕೆಗಳು, ಪ್ರತಿಕ್ರಿಯೆಗಳು ಮತ್ತು ಹೆಚ್ಚಿನವುಗಳಿಗಾಗಿ ತಮ್ಮದೇ ಆದ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಷಿಯಲ್ ಬಳಸುತ್ತಾರೆ. 2014ರಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದಂದಿನಿಂದ ಮೋದಿ ಅವರ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಅನುಯಾಯಿಗಳು ಬರಲು ಆರಂಭಿಸಿದ್ದರು. ಕಳೆದ 12 ವರ್ಷಗಳಲ್ಲಿ ಜಾಗತಿಕ ನಾಯಕರಲ್ಲಿ ಅತ್ಯಂತ ಆಕರ್ಷಕ ಡಿಜಿಟಲ್ ಸ್ಥಾನದಲ್ಲಿ ಒಂದಾಗಿ ಪ್ರಧಾನಿ ಅವರ ಖಾತೆ ಬೆಳೆದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಭಾರತೀಯ ನಾಯಕರಲ್ಲಿ ಮೋದಿ ಅವರ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅತಿ ಹೆಚ್ಚು 16 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ 12.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ಟಾಟಿಸ್ಟಿಯಾ ಪ್ರಕಾರ ಪ್ರಧಾನಿ ಮೋದಿ 2025ರ ಡಿಸೆಂಬರ್ ಹೊತ್ತಿಗೆ ಶೇ 70ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಇತರ ಜಾಗತಿಕ ನಾಯಕರಿಗೆ ಹೋಲಿಸಿದರೆ ಅವರು ಅಗ್ರಸ್ಥಾನದಲ್ಲಿದ್ದಾರೆ. ಜಪಾನ್ನ ಪ್ರಧಾನಿ ಸನೇ ತಕೈಚಿ ಅವರು ಶೇ 63ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದರೆ, ಅರ್ಜೆಂಟಿನಾದ ಜೇವಿಯರ್ ಮಿಲೀ ಶೇ 60ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಕೇವಲ ಶೇ 43ರಷ್ಟು ರೇಟಿಂಗ್ನೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. 2026ರ ಫೆಬ್ರವರಿ 2ರಿಂದ ಫೆಬ್ರವರಿ 8ರ ನಡುವೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಶೇ 67ರಷ್ಟು ಅನುಮೋದನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ ಎಂದು ಅಮೆರಿಕ ಮೂಲದ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶ ತಿಳಿಸಿದೆ.
ಅಪರಿಚಿತ ವಾಹನ ಢಿಕ್ಕಿ: ವ್ಯಕ್ತಿ ಮೃತ್ಯು
ಬಸವಕಲ್ಯಾಣ: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-65 ರ ತಾಡೋಳಾ ಗ್ರಾಮದ ಬಳಿ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಸಂಭವಿಸಿದೆ. ಬಸವಕಲ್ಯಾಣ ತಾಲ್ಲೂಕಿನ ತಳಭೋಗ ಗ್ರಾಮದ ನಿವಾಸಿ ನರಸಿಂಗ್ ಮೆತ್ರೆ (28) ಮೃತ ವ್ಯಕ್ತಿ. ಈತ ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದನೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಸವಕಲ್ಯಾಣ ಸಿಪಿಐ ಅಲಿಸಾಬ್ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ಜೊತೆ ಅನುಚಿತ ವರ್ತನೆ: ನಮ್ಮದು ತಂದೆ ಮಗಳ ಸಂಬಂಧ - ಮಲ್ಲಿಕಾರ್ಜುನ ಮುತ್ಯಾ ಪ್ರತಿಕ್ರಿಯೆ
ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆಯ ಬಗ್ಗೆ ಮುತ್ಯಾ ಪ್ರತಿಕ್ರಿಯೆ ನೀಡಿದ್ದು, ನಮ್ಮದು ತಂದೆ ಮಗಳ ಸಂಬಂಧ ಎಂದಿದ್ದಾರೆ. ಜತೆಗೆ ಪೊಲೀಸ್ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ AI ನೀಡಿದ ಹೊಡೆತಕ್ಕೆ ದೃತಿಗೆಡದ ಜಪಾನ್ ಕನಸುಗಾರ; ಸವಾಲು ಸ್ವೀಕರಿಸಿ ಗೆದ್ದ ಫುಟೋಶಿ ಇಟೊ ಎಂಬ ಛಲಗಾರ
ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಎಂಬಂತೆ ಸಾಧಿಸುವ ಛಲವಿದ್ದವನಿಗೆ ತಾಳ್ಮೆಯೊಂದಿದ್ದರೆ, ಆತ ಎಲ್ಲಾ ಅಡೆತಡೆಗಳನ್ನೂ ಮೀರಿ ಜಯಿಸಬಲ್ಲ. ಇದಕ್ಕೆ ಜಪಾನ್ ಮೂಲದ ಉದ್ಯಮಿ ಫುಟೋಶಿ ಇಟೊ ಸಾಕ್ಷಿ. ಕೃತಕ ಬುದ್ಧಿಮತ್ತೆ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ತಮ್ಮ ಉದ್ಯಮ ನಷ್ಟಗೊಂಡರೂ, ಮಧುರೈನಲ್ಲಿ ಸ್ಥಳೀಯ ಉದ್ಯಮಿ ಶರವಣ ಭವ ಅವರೊಂದಿಗೆ ಸೇರಿ ರಿಗ್ ವ್ಹೀಲ್ಸ್ ಎಂಬ ಆಟಿಕೆ ಕಂಪನಿ ತೆರೆದು ಯಶಸ್ಸು ಗಳಿಸಿದ್ದಾರೆ. ಫುಟೋಶಿ ಇಟೊ ಅವರ ಕಠಿಣ ಪರಿಶ್ರಮ ಮತ್ತು ಮೇಕ್ ಇನ್ ಇಂಡಿಯಾ ಬಗ್ಗೆ ಅವರಿಗಿರುವ ಅಚಲ ವಿಶ್ವಾಸದ ಬಗ್ಗೆ ಇಲ್ಲಿದೆ ಮಾಹಿತಿ.
ಕರ್ನಾಟಕ ಕರಾವಳಿಯಲ್ಲಿ 500 ಮೆಗಾವ್ಯಾಟ್ ಸಾಮರ್ಥ್ಯದ 'ಎಐ ಡೇಟಾ ಹಬ್' ಸ್ಥಾಪನೆಗೆ ಪ್ಲಾನ್
ಬೆಂಗಳೂರು: ಕರ್ನಾಟಕ ಕರಾವಳಿ ಭಾಗದಲ್ಲಿ ಕೈಗಾರಿಕೆ ಹೂಡಿಕೆಗೆ ಮುಂದೆ ಬರುತ್ತಿಲ್ಲ. ಇದಕ್ಕೆ ಅಲ್ಲಿನ ಕೋಮುವಾದ ಕಾರಣ ಎಂದು ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು, ಸಾಕಷ್ಟು ಚರ್ಚೆ ಹಾಗೂ ಟೀಕೆಗೂ ಕಾರಣವಾಗಿತ್ತು. ಇದರ ಬೆನ್ನಲ್ಲೆ ಕರಾವಳಿ ಜಿಲ್ಲೆಯಲ್ಲಿ ಹೂಡಿಕೆ, ಡೇಟಾ ಕೇಂದ್ರ ಸ್ಥಾಪನೆ ಬಗ್ಗೆ ಕೈಗಾರಿಕೆ ಸಚಿವ ಎಂಬಿ ಪಾಟೀಲರು ಶುಭ ಸುದ್ದಿ
ಸಂಪಾದಕೀಯ | ಖಾಸಗಿ ವಲಯದಲ್ಲಿ ಮೀಸಲಾತಿ: ಹೋರಾಟಕ್ಕೆ ಇನ್ನೇಕೆ ತಡ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚಾಮರಾಜನಗರ: ಸುಟ್ಟ ಸ್ಥಿತಿಯಲ್ಲಿ ಎರಡು ಬೈಕ್ಗಳು ಪತ್ತೆ
ಚಾಮರಾಜನಗರ: ತಾಲ್ಲೂಕಿನ ಕೋಟಂಬಳ್ಳಿ ಹಾಗೂ ಗೂಳಿಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಉಪ್ಪುಲಿಂಗ ಕಟ್ಟೆಯಲ್ಲಿ ಸುಟ್ಟ ಸ್ಥಿತಿಯಲ್ಲಿರುವ ಎರಡು ಬೈಕ್ ಮತ್ತು ಒಂದು ಗೋಲಕ ಪತ್ತೆಯಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಸುರಿದ ಮಳೆಗೆ ಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿತ್ತು. ಆದರೆ ಈಗ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ, ಕಟ್ಟೆ ಬಳಿಯ ರೈತರು ತಮ್ಮ ಜಮೀನಿಗೆ ನೀರನ್ನು ಮೋಟಾರ್ ಮೂಲಕ ಹರಿಸುತ್ತಿದ್ದಾರೆ. ಈ ವೇಳೆ ಕಟ್ಟೆಯಲ್ಲಿ ಅರ್ಧಭಾಗ ನೀರು ಕಡಿಮೆಯಾಗಿರುವ ಸಂದರ್ಭದಲ್ಲಿ ಬೈಕ್ ಮತ್ತು ಗೋಲಕ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ. ರೈತರು ಕಾಗಲವಾಡಿ ಉಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಟ್ಟೆಯೊಳಗೆ ಇದ್ದ 2 ಬೈಕ್ ಮತ್ತು 1 ಗೋಲಕವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಕರಾವಳಿ , ಮಲೆನಾಡು, ಉತ್ತರ ಒಳನಾಡಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಚಿಂತೆಗೀಡಾಗಿದ್ದು, ದ್ರಾಕ್ಷಿ, ಜೋಳ, ಕಡಲೆ, ಸಜ್ಜೆ, ಒಣಗಲು ಹಾಕಿದ ಕಾಫಿ, ಅರಶಿನ, ಈರುಳ್ಳಿ ಬೆಳೆಗಾರರನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಆದರೆ ಸಮಾಧಾನಕರ ಬೆಳವಣಿಗೆ ಎಂದರೆ, ಮಳೆ ಇಂದೇ ಕೊನೆಯಾಗಲಿದ್ದು, ನಾಳೆಯಿಂದ ರಾಜ್ಯದಾದ್ಯಂತ ಒಣಹವೆ ಇರಲಿದೆ.
ಅಂಬಲಗಾ ಗ್ರಾ.ಪಂ.ಗೆ ಖಾಯಂ ಪಿ.ಡಿ.ಓ ನೇಮಕಕ್ಕೆ ಆಗ್ರಹ
ಕಲಬುರಗಿ: ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮ ಪಂಚಾಯತಿಗೆ ಕಳೆದ ಆರು ತಿಂಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಹುದ್ದೆ ಖಾಲಿಯಿದ್ದು, ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಕೂಡಲೇ ಅಧಿಕಾರಿಯನ್ನು ನೀಡಬೇಕೆಂದು ಅಂಬೇಡ್ಕರ್ ಯುವ ಸೇನೆ ವತಿಯಿಂದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕಳೆದ ಆರು ತಿಂಗಳಿಂದ ಅಧಿಕಾರಿಗಳಿಲ್ಲದ ಕಾರಣ ಅಂಬಲಗಾ ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ. ನರೇಗಾ ಯೋಜನೆಯಡಿ ಕೆಲಸಗಳು ನಡೆಯುತ್ತಿಲ್ಲ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ ಮತ್ತು ಮಾಡಿದ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಣ ಪಾವತಿಯಾಗುತ್ತಿಲ್ಲ ಎಂದು ದೂರಿದರು. ಗ್ರಾಮದಲ್ಲಿ ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ ಮತ್ತು ಬೀದಿ ದೀಪಗಳ ನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಣ್ಣಪುಟ್ಟ ಕೆಲಸಗಳಿಗೂ ಅಧಿಕಾರಿಗಳ ಸಹಿ ಇಲ್ಲದೆ ಸಾರ್ವಜನಿಕರು ಕಚೇರಿಗೆ ಅಲೆಯುವಂತಾಗಿದೆ ಎಂದು ಆರೋಪಿಸಿದರು. ಕೂಡಲೇ ಪಿಡಿಓ ಅಧಿಕಾರಿ ನೇಮಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಅಂಬೇಡ್ಕರ್ ಯುವ ಸೇನೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಶ್ರೀಕಾಂತ ತಳಕೇರಿ, ಉಪಾಧ್ಯಕ್ಷರಾದ ವಿಜಯಕುಮಾರ ತಳಕೇರಿ, ಪ್ರಧಾನ ಕಾರ್ಯದರ್ಶಿ ಶರಣು ಎಸ್. ತಳಕೇರಿ, ಕಾರ್ತಿಕ್ ತಳಕೇರಿ, ವಿದ್ಯಾನಂದ ತಳಕೇರಿ, ಪ್ರಜ್ವಲ್ ತಳಕೇರಿ, ಪ್ರವೀಣ ತಳಕೇರಿ, ವಿಶಾಲ್ ತಳಕೇರಿ ಮತ್ತಿತ್ತರು ಇದ್ದರು.
ಜಾರ್ಖಂಡ್ನಲ್ಲಿ ಪತನವಾದ ಏರ್ ಆಂಬುಲೆನ್ಸ್ನಲ್ಲಿ ಬ್ಲ್ಯಾಕ್ ಬಾಕ್ಸ್ ಇರಲಿಲ್ಲ: ವರದಿ
ರಾಂಚಿ: ಜಾರ್ಖಂಡ್ನಲ್ಲಿ ಸೋಮವಾರ ಪತನವಾದ ಏರ್ ಆಂಬುಲೆನ್ಸ್ನಲ್ಲಿ ಬ್ಲ್ಯಾಕ್ ಬಾಕ್ಸ್ ಇರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿರುವ ಬಗ್ಗೆ ವರದಿಯಾಗಿದೆ. ರೆಡ್ಬರ್ಡ್ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ 'ಬೀಚ್ಕ್ರಾಫ್ಟ್ ಸಿ90ಎ' ವಿಮಾನ, ರಾಂಚಿ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆಗಿನ ಸಂಪರ್ಕ ಕಳೆದುಕೊಂಡಿತ್ತು. ಇದಾದ ಕೆಲವೇ ಕ್ಷಣದಲ್ಲಿ ಚತ್ರಾ ಜಿಲ್ಲೆಯ ಸಿಮಾರಿಯಾ ಬಳಿ ಪತನಗೊಂಡಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ಗಳು, ರೋಗಿ ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದರು. ವಿಮಾನವು ಬ್ಲ್ಯಾಕ್ ಬಾಕ್ಸ್ ಅಥವಾ ಕಾಕ್ಪಿಟ್ ಧ್ವನಿ, ಹಾರಾಟದ ದತ್ತಾಂಶ ರೆಕಾರ್ಡರ್ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದರೆ, 'ಬೀಚ್ಕ್ರಾಫ್ಟ್ ಸಿ90ಎ' ವಿಮಾನವು 40 ವರ್ಷ ಹಳೆಯದಾಗಿರುವುದರಿಂದ ಆಗ ಜಾರಿಯಲ್ಲಿದ್ದ ನಿಯಮಗಳ ಅನುಸಾರ 1987ರಲ್ಲಿ ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರವನ್ನು ನೀಡಲಾಗಿತ್ತು. ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರಕ್ಕೆ 2027ರ ಜನವರಿ 20ರವರೆಗೂ ಮಾನ್ಯತೆ ಇದೆ. ಆದರೆ, 2016ರ ಜನವರಿ 1ಕ್ಕೂ ಮೊದಲು ಅಥವಾ ನಂತರ ಈ ಪ್ರಮಾಣಪತ್ರ ಪಡೆದ ವಿಮಾನಗಳು ಕಪ್ಪು ಪೆಟ್ಟಿಗೆ ಹೊಂದುವುದು ಕಡ್ಡಾಯ ಎಂಬ ಆದೇಶ ಹೊರಡಿಸಲಾಗಿತ್ತು.
ಕಲಬುರಗಿ | ಫೆ.28ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ
30,514 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧ
ದೇವಸೂಗೂರು ಬಳಿ ಕೃಷ್ಣಾ ನದಿಯ ಬೌಸ್ಟ್ರಿಂಗ್ ಸೇತುವೆ ಕಾಮಗಾರಿ ವಿಳಂಬ
ಗುತ್ತಿಗೆ ಸಂಸ್ಥೆಯಿಂದ ಮತ್ತೊಂದು ವರ್ಷದ ಕಾಲಾವಕಾಶ ಬೇಡಿಕೆ
ಭಾರತದ ವಿರುದ್ಧ ಗೆದ್ಧ ಬಳಿಕ ಡೆವಿಡ್ ಮಿಲ್ಲರ್ ಜೊತೆ ಯುವತಿ ರೀಲ್ಸ್: ಅತ್ಯಾಚಾರದ ಬೆದರಿಕೆ, ಇಲ್ಲಿದೆ ವಿಡಿಯೋ
T20 World Cup 2026: ಇನ್ಫ್ಲುಯೆನ್ಸರ್ ಪ್ರಿನ್ಸಿ ಪಾರಿಖ್ ಅವರು ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರೊಂದಿಗೆ ಮಾಡಿದ್ದ ಇನ್ಸ್ಟಾಗ್ರಾಂ ರೀಲ್ ಅನ್ನು ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ತಾಲತಾಣದಲ್ಲಿ ತಮಗೆ ಅತ್ಯಾಚಾರದ ಬೆದರಿಕೆಗಳು ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ಬಳಿಕ ಈ ವಿಡಿಯೋ
ಹೊಸದಾಗಿ ಪ್ರಾರಂಭಿಸಿದ ರಾಜಕೀಯ ಪಕ್ಷದ ಹೆಸರು ವಾರದೊಳಗೆ ಘೋಷಣೆ: ವಿ ಕೆ ಶಶಿಕಲಾ
ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಹೊಸದಾಗಿ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ರಾಜಕೀಯ ಪಕ್ಷದ ಹೆಸರನ್ನು ಒಂದು ವಾರದೊಳಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಮೈತ್ರಿಕೂಟದ ಕುರಿತು ನಾವು ಮಾತುಕತೆ ನಡೆಸುತ್ತಿದ್ದೇವೆ, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.
National Highway 44: ಹೆದ್ದಾರಿಗಳು ಆ ದೇಶದ ರಸ್ತೆ ಮೂಲ ಸೌಕರ್ಯಗಳ ಸಂಕೇತವಾಗಿವೆ. ಒಂದು ದೇಶದ ಆರ್ಥಿಕ ಪ್ರಗತಿ, ಕೈಗಾರಿಕೆ ಬೆಳವಣಿಗೆ, ಸಾರಿಗೆ ಸೇವೆ ಸುಧಾರಣೆ ಮತ್ತು ಪ್ರವಾಸೋದ್ಯಮ ವೃದ್ಧಿಗೆ ಹೆದ್ದಾರಿಗಳು ಅತಿ ಮುಖ್ಯ. ಈ ವಿಷಯದಲ್ಲಿ ಭಾರತವು ಅತ್ಯುತ್ತಮ ಮತ್ತು ಬೃಹತ್ ರಾಷ್ಟ್ರೀಯ ಹೆದ್ದಾರಿ ಜಾಲವನ್ನು (India's Highway Network) ಹೊಂದಿದೆ. ಈ ಪೈಕಿ ನಾವು
ಮತ್ತೆ ಅಲ್ಪ ಕುಸಿದ ಚಿನ್ನ; ಇಂದಿನ ದರವೆಷ್ಟು?
ಸಾಮಾನ್ಯವಾಗಿ ಡಾಲರ್ ಬೆಲೆ ಕುಸಿದಾಗ ಇತರ ಕರೆನ್ಸಿಗಳನ್ನು ಬಳಸುವವರು ಅದರ ಲಾಭ ಪಡೆದು ಚಿನ್ನದ ಬೆಲೆ ಹೆಚ್ಚಿಸುತ್ತಾರೆ. ಆದರೆ ಈ ಬಾರಿ ಅಂತಹ ಪ್ರವೃತ್ತಿ ಕಂಡುಬರಲಿಲ್ಲ. ಜನವರಿಯಲ್ಲಿ ಗರಿಷ್ಠ ಮಟ್ಟ ತಲುಪಿದ ನಂತರ ಕುಸಿತದ ಹಾದಿಯಲ್ಲಿದ್ದ ಚಿನ್ನ ಫೆಬ್ರವರಿ 23 ಸೋಮವಾರದಿಂದ ಏರು ಹಾದಿಯಲ್ಲಿತ್ತು. ಇದೀಗ ಗುರುವಾರ ತುಸು ಕುಸಿತ ಕಂಡಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಆದರೆ ಒಟ್ಟಾಗಿ ಗಮನಿಸಿದಲ್ಲಿ ಫೆಬ್ರವರಿಯಲ್ಲಿ ಹೆಚ್ಚು ಏರಿಳಿತ ಕಾಣದೆ ಚಿನ್ನದ ಬೆಲೆ ಸ್ಥಿರವಾಗಿ ನಿಂತಿದೆ. ಅಮೆರಿಕದ ಸುಂಕ ನೀತಿಗಳ ಮೇಲಿನ ಅನಿಶ್ಚಿತತೆ ಮತ್ತು ಅಮೆರಿಕ- ಇರಾನ್ ನಡುವಿನ ನಿರಂತರ ಉದ್ವಿಗ್ನತೆ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದರಿಂದ ಗುರುವಾರ ಮಾರುಕಟ್ಟೆ ತೆರೆದ ಕ್ಷಣ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತುಸು ಕುಸಿತ ಕಂಡಿವೆ. ಅಲ್ಲದೆ, ಅಮೆರಿಕದ ಡಾಲರ್ ಕುಸಿತ ಕಂಡಿರುವ ಹೊರತಾಗಿಯೂ ಚಿನ್ನದ ಬೆಲೆ ಕುಸಿದಿದೆ. ಸಾಮಾನ್ಯವಾಗಿ ಡಾಲರ್ ಬೆಲೆ ಕುಸಿದಾಗ ಇತರ ಕರೆನ್ಸಿಗಳನ್ನು ಬಳಸುವವರು ಅದರ ಲಾಭ ಪಡೆದು ಚಿನ್ನದ ಬೆಲೆ ಹೆಚ್ಚಿಸುತ್ತಾರೆ. ಆದರೆ ಈ ಬಾರಿ ಅಂತಹ ಪ್ರವೃತ್ತಿ ಕಂಡುಬರಲಿಲ್ಲ. ಫೆಬ್ರವರಿ 26ರಂದು ಗುರುವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 21 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,61,680 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 20 ರೂ. ಕುಸಿತ ಕಂಡು ಹತ್ತು ಗ್ರಾಂಗೆ 1,48,200 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 16 ರೂ. ಕುಸಿದು ಹತ್ತು ಗ್ರಾಂಗೆ 1,21,260 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 25ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ತುಸು ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,168 (-21) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,820 (-20) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,126 (-16) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ಬುಧವಾರ ಮತ್ತು ಗುರುವಾರ ಬೆಳ್ಳಿ ಇದೇ ಬೆಲೆಗೆ ಸ್ಥಿರವಾಗಿ ನಿಂತಿದ್ದು, ಏರಿಳಿತ ಕಂಡುಬಂದಿಲ್ಲ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,183 (-21) ರೂ., 22 ಕ್ಯಾರೆಟ್ ಚಿನ್ನದ ದರ 14,835 (-20) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,168 (-21) ರೂ., 22 ಕ್ಯಾರೆಟ್ ಚಿನ್ನದ ದರ 14,820 (-20) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,173 (-21) ರೂ., 22 ಕ್ಯಾರೆಟ್ ಚಿನ್ನದ ದರ 14,825 (-20) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,277 (-11) ರೂ., 22 ಕ್ಯಾರೆಟ್ ಚಿನ್ನದ ದರ 14,920 (-10) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,168 (-21) ರೂ., 22 ಕ್ಯಾರೆಟ್ ಚಿನ್ನದ ದರ 14,820 (-20) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,168 (-21) ರೂ., 22 ಕ್ಯಾರೆಟ್ ಚಿನ್ನದ ದರ 14,820 (-20) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,183 (-21) ರೂ., 22 ಕ್ಯಾರೆಟ್ ಚಿನ್ನದ ದರ 14,835 (-20) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,183 (-21) ರೂ., 22 ಕ್ಯಾರೆಟ್ ಚಿನ್ನದ ದರ 14,835 (-20) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,183 (-21) ರೂ., 22 ಕ್ಯಾರೆಟ್ ಚಿನ್ನದ ದರ 14,835 (-20) ರೂ.
ಲಿಂಗಸುಗೂರು : ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಸಿದ್ಧರಾಮೇಶ, ಉಪಾಧ್ಯಕ್ಷರಾಗಿ ಶಿವಗ್ಯಾನಪ್ಪ ಆಯ್ಕೆ
ಲಿಂಗಸುಗೂರು, ಫೆ.25: ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಿತು. ಇದರಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ಬೆಂಬಲಿತ ಅಭ್ಯರ್ಥಿ ಸಿದ್ಧರಾಮೇಶ ಗೌಡ ಆದಾಪೂರ ಅಧ್ಯಕ್ಷರಾಗಿ ಹಾಗೂ ಶಿವಗ್ಯಾನಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಬೆಂಬಲಿತ ಅಭ್ಯರ್ಥಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಯ್ಯಾಪೂರ ಬಣ ಮತ್ತು ಹೂಲಗೇರಿ ಬಣಗಳ ಮಧ್ಯೆ ಪ್ರತಿಷ್ಠೆಯಾಗಿ ನಡೆದ ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಕೊನೆಗೂ ಬಯ್ಯಾಪೂರ ಬಣ ಮೇಲುಗೈ ಸಾಧಿಸಿದೆ. ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆ.11ರಂದು ನಡೆದಿತ್ತು. ನಾಮನಿರ್ದೇಶನ ಸೇರಿ ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು, ನೂತನ ಅಧ್ಯಕ್ಷ–ಉಪಾಧ್ಯಕ್ಷರು ತಲಾ 8 ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಬ್ಯಾಂಕ್ನ ವ್ಯವಸ್ಥಾಪಕ ರಾಜೇಂದ್ರಕುಮಾರ ತಿಳಿಸಿದ್ದಾರೆ. ಲಿಂಗಸುಗೂರು ಪಿಕಾರ್ಡ್ ಬ್ಯಾಂಕ್ಗೆ ಆಯ್ಕೆಯಾದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅಭಿನಂದನೆ ಸಲ್ಲಿಸಿದರು.
ಮಂಗಳೂರು | ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
ಮಂಗಳೂರು: ನಗರದ ಬಾಬುಗುಡ್ಡ ಎಂಬಲ್ಲಿ ರೈಲ್ವೆ ಹಳಿ ಮೇಲೆ ಕುಳಿತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ-ವಿದ್ಯಾರ್ಥಿನಿಯ ವೀಡಿಯೋ ಮಾಡಿ, ವಿದ್ಯಾರ್ಥಿಗೆ ಹಲ್ಲೆಗೈದ ಅನೈತಿಕ ಪೊಲೀಸ್ ಗಿರಿ ಎಸಗಿದ ತಂದೆ ಮತ್ತು ಮಗನನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಬಂಧಿತ ಆರೋಪಿಗಳು. ಸೋಮವಾರ ಸಂಜೆ ನಗರದ ಬಾಬುಗುಡ್ಡ ರೈಲ್ವೆ ಹಳಿಯಲ್ಲಿ ಕುಳಿತಿದ್ದ ಶಾಲಾ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿನಿಯನ್ನು ಆರೋಪಿಗಳಾದ ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ತಡೆದು ವೀಡಿಯೊ ಮಾಡಿದ್ದಾರೆ. ಅಲ್ಲದೇ, ಈ ವೇಳೆ ವಿದ್ಯಾರ್ಥಿಗೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಪೊಲೀಸ್ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗ್ಯಾರಂಟಿಗಳಿಂದ ಸರಕಾರಕ್ಕೆ ಹೊರೆಯಾದರೂ ಜನಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ. ಶಿವಕುಮಾರ್
‘ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ’
ಜಮಾಅತೆ ಇಸ್ಲಾಮೀ ಹಿಂದ್ ಹಿರಿಯ ಮುಖಂಡ ಸೈಯದ್ ಮಹಮೂದ್ ಖಾದ್ರಿ ಸಾಹೇಬ್ ನಿಧನ
ಮಾನ್ವಿ : ಕಾಂಗ್ರೆಸ್ ಮುಖಂಡ ಖಾಲಿದ್ ಖಾದ್ರಿ ರವರ ತಂದೆ ಜಮಾಅತೇ ಇಸ್ಲಾಮಿ ಹಿಂದ್ ಸಂಘದ ಹಿರಿಯ ಮುಖಂಡ ಸೈಯದ್ ಮಹಮೂದ್ ಖಾದ್ರಿ ಸಾಹೇಬ್ (88) ರವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಇವರು ಮಾನ್ವಿ ತಾಲೂಕಿನ ಹಿರಿಯ ಮುತ್ಸದ್ದಿ, ಮಾನ್ವಿಗೆ ಜಮಾಅತೆ ಇಸ್ಲಾಮಿ ಸಂಘಟನೆಯನ್ನು ಪರಿಚಯಿಸಿದವರಲ್ಲಿ ಒಬ್ಬರಾಗಿದ್ದರಾಗಿದ್ದರು. ಮೃತರು ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 2 ಘಂಟೆಗೆ ಮಾನ್ವಿ ಪಟ್ಟಣದ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ, ( ರ. ಅ ) ದರ್ಗಾದ ಖಬರಸ್ಥಾನದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
‘ಭಗವಂತನ ಮರಣ’ದಲ್ಲಿ ಕೋಮುವಾದದ ಸಾವು
ಮತೀಯವಾದದ ಲೋಕದಲ್ಲಿ ಕೊಲ್ಲುವವರು ಮತ್ತು ಕೊಲ್ಲಲ್ಪಡುವವರು ಹಿಂದುಳಿದ ಬಡವರೇ ಯಾಕಿರುತ್ತಾರೆ? ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಸಮುದಾಯ ಬೆಂಗಳೂರು ಪ್ರಸ್ತುತಪಡಿಸಿದ, ಡಾ ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ ‘ಭಗವಂತನ ಮರಣ’ ನಾಟಕವನ್ನು ನೋಡಬೇಕು. ಮಲಯಾಳಂ ಸಾಹಿತಿ ಆರ್. ಮೀರಾ ಬರೆದ ಕತೆಯನ್ನು ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಅವರು ಮಲಯಾಳಂನಲ್ಲಿ ಈಗಾಗಲೇ ರಂಗರೂಪಕ್ಕೆ ತಂದು ಯಶಸ್ವಿಯಾಗಿದ್ದು, ಇದೀಗ ಕನ್ನಡದಲ್ಲೂ ‘ಸಮುದಾಯ ಬೆಂಗಳೂರು’ಗಾಗಿ ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಕತೆಯನ್ನು ಕೆ. ಪ್ರಭಾಕರನ್ ಕನ್ನಡಕ್ಕೆ ಅನುವಾದಿಸಿದ್ದು, ರಂಗಕರ್ಮಿ ಪದ್ಮಾ ಶಿವಮೊಗ್ಗ ಸಹನಿರ್ದೇಶನ ಮಾಡಿದ್ದಾರೆ. ನಾಟಕದ ಶೀರ್ಷಿಕೆಯು ಭಗವಂತನ ನಿರಾಕರಣೆ ಸಂದೇಶ ಹೊಂದಿದೆ ಎಂಬಂತೆ ಕಂಡರೂ, ವಾಸ್ತವದಲ್ಲಿ ದೇವರ ಹೆಸರಿನಲ್ಲಿ ನಡೆಸುವ ಕೋಮುರಾಜಕಾರಣವನ್ನು ಬಯಲು ಮಾಡುವ ಅಂಶಗಳನ್ನಷ್ಟೇ ಒಳಗೊಂಡಿದೆ. ಈ ನಾಟಕವು ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ಗುಂಪು ಹಲ್ಲೆಗಳು ಮತ್ತು ದ್ವೇಷ ಪ್ರಚೋದನೆಗಳ ವಿಷಯಗಳನ್ನು ಕೇಂದ್ರವನ್ನಾಗಿಸಿಕೊಂಡಿದೆ. ನಾಟಕದ ಬಗ್ಗೆ ತೀರಾ ಸರಳವಾಗಿ ಹೇಳುವುದಾದರೆ; ಕೊಲ್ಲಲು ಬಂದ ಧರ್ಮ ರಕ್ಷಕ ಆರೋಪಿಗಳು ಪ್ರೊ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರ ಮನೆಯಲ್ಲೇ ಒಂದು ವಾರ ಬದುಕಿದರೆ ಹೇಗಿರಬಹುದಿತ್ತು? ಅಥವಾ ಕೊಲ್ಲಲು ಬಂದವರು ಗೌರಿ ಜೊತೆಯೋ, ಕಲಬುರ್ಗಿಯವರ ಜೊತೆಯೋ ಒಂದೆರಡು ಗಂಟೆ ಕೂತು ಮಾತಾಡಿದ್ದರೆ ಕೊಲ್ಲಲು ಮನಸ್ಸು ಮಾಡುತ್ತಿದ್ದರೇ? ಅವರ ಮಧ್ಯೆ ಏನೆಲ್ಲಾ ಸಂಭಾಷಣೆ ನಡೆಯುತ್ತಿದ್ದವು? ಎಂಬ ಅಂಶಗಳನ್ನೇ ಪರಿಣಾಮಕಾರಿಯಾಗಿ ‘ಭಗವಂತನ ಮರಣ’ ನಾಟಕದಲ್ಲಿ ಪ್ರಸ್ತುತಪಡಿಸಲಾಗಿದೆ. ಕೋಮುವಾದಿಗಳಿಂದ ಹಿಂದೂ ವಿರೋಧಿ ಎಂದು ಘೋಷಿಸಲ್ಪಟ್ಟ ಪ್ರೊಫೆಸರ್ರನ್ನು ಕೊಲೆ ಮಾಡಲು ಹಿಂದೂ ಸಂಘಟನೆಯೊಂದು ನಿರ್ಧರಿಸಿ ತನ್ನ ಕಾಲಾಳುವನ್ನು ರಿವಾಲ್ವರ್ನೊಂದಿಗೆ ಕಳುಹಿಸುತ್ತದೆ. ಆತ ಪ್ರೊಫೆಸರ್ ಮತ್ತವರ ಶಿಷ್ಯರ ಜೊತೆ ಸಂವಾದ ನಡೆಸುತ್ತಲೇ ‘ಮನುಷ್ಯ’ ಆಗುತ್ತಾನೆ. ಗನ್ ಹಿಡಿದು ಬರುವ ಯುವಕನ ಎದುರು ನಿಂತಿರುವ ಪ್ರೊಫೆಸರ್ ಗುಂಡಿನಿಂದಲ್ಲ, ಪ್ರಶ್ನೆಯಿಂದ ಪ್ರತಿಕ್ರಿಯಿಸುತ್ತಾನೆ. ಇಲ್ಲಿ ಹತ್ಯೆಯು ನಿರೀಕ್ಷೆ ಸಂವಾದವಾಗಿ ಬದಲಾಗುತ್ತದೆ. ಇದೇ ನಾಟಕದ ವೈಶಿಷ್ಟ್ಯ. ಆದರೆ, ಈ ರೀತಿ ಕೊಲೆಗೆ/ಹಲ್ಲೆಗೆ ಬಳಸಲ್ಪಟ್ಟ ಸಂಘಪರಿವಾರದ ಕಾಲಾಳುಗಳು ಸಂವಹನದ ಮೂಲಕ ಪರಿವರ್ತನೆ ಆಗಿರುವ ಉದಾಹರಣೆಗಳಿಲ್ಲ. ಕಾನೂನು ಇಂತಹ ಪರಿವರ್ತನೆಗಳನ್ನು ಸೃಷ್ಟಿಸಿದ ಉದಾಹರಣೆಗಳಿವೆ. 2009 ಜನವರಿ 24ರಂದು ಮಂಗಳೂರು ಅಮ್ನೇಶಿಯಾ ಪಬ್ನಲ್ಲಿ ಯುವತಿಯರು ಮತ್ತು ಯುವಕರ ಮೇಲೆ ದಾಳಿ ನಡೆಸಿದ ಶ್ರೀರಾಮ ಸೇನೆಯು ಆ ಬಳಿಕ ಒಂದು ಬಾರಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆಗೆ ನಾನು ಕೆಲ ನೇರ ಪ್ರಶ್ನೆಗಳನ್ನು ಕೇಳಿದ್ದೆ. ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಪಬ್ ಅಟ್ಯಾಕ್ ಆರೋಪಿಯಲ್ಲಿ ಒಬ್ಬನಾಗಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತನೊಬ್ಬ ನನ್ನನ್ನು ಅಡ್ಡಗಟ್ಟಿ ‘‘ನಿನ್ನನ್ನು ಮುಗಿಸಿದರೆ ಮಂಗಳೂರು ಸರಿಯಾಗುತ್ತೆ’’ ಅಂದ. ನಾನು ನಕ್ಕು ಸುಮ್ಮನಾದೆ. ಆ ನಂತರ ಈ ವಿಷಯ ತಿಳಿದ ಅಂದಿನ ಪೊಲೀಸರೇ ನನ್ನ ಬಳಿ ಬಂದು ದೂರು ಕೊಡುವಂತೆ ಒತ್ತಾಯಿಸಿ ಎಫ್ಐಆರ್ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟನ್ನೂ ಸಲ್ಲಿಸಿದರು. ಇದಾಗಿ ಕೆಲ ತಿಂಗಳು ಆಗಿರಬಹುದು. ಕೊಲೆ ಬೆದರಿಕೆ ಒಡ್ಡಿದ್ದ ಶ್ರೀರಾಮ ಸೇನೆಯ ಆರೋಪಿ ನಮ್ಮ ವಕೀಲರಾದ ದಿನೇಶ್ ಹೆಗ್ಡೆ ಉಳಿಪಾಡಿಯವರನ್ನು ಸಂಪರ್ಕಿಸಿ, ‘‘ಕ್ಷಮೆ ಕೇಳ್ತೀನಿ, ಕೇಸ್ ವಾಪಸ್ ಪಡೆಯೋಕೆ ಹೇಳಿ’’ ಎಂದು ಅಂಗಲಾಚಿದ. ನಂತರ ನಾವು ಆತನ ಮನೆ ಪರಿಸ್ಥಿತಿ ವಿಚಾರಿಸಿದಾಗ ಅಳುವ ಸರದಿ ನಮ್ಮದಾಗಿತ್ತು. ರೋಗಗ್ರಸ್ಥ ತಾಯಿ, ಮದುವೆಯಾಗದ ತಂಗಿಯರು, ಮನೆಯಲ್ಲಿ ಸರಿಯಾಗಿ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ. ಅದ್ಯಾರೋ ಇವರ ತಲೆಯಲ್ಲಿ ತುಂಬಿದ ಧರ್ಮದ ಅಮಲು ಹೀಗೆಲ್ಲಾ ಮಾಡಿಸುತ್ತದೆ. ಕೊನೆಗೆ ಕೋರ್ಟಿಗೆ ಅಲೆಯಲು ತಾಯಿಯ ತಾಳಿ ಅಡವಿಡಬೇಕಾದ ಪರಿಸ್ಥಿತಿ. ಆತನ ತಾಯಿಯೇ ಖುದ್ದಾಗಿ ಮಾತನಾಡಿದ ಬಳಿಕ ಕೇಸ್ ವಾಪಸ್ ಪಡೆಯದಿರಲು ಸಾಧ್ಯವೇ ಇರಲಿಲ್ಲ. ಇನ್ನು ಇಂತಹ ದಾಳಿ ಕೃತ್ಯಗಳಲ್ಲಿ ಭಾಗಿಯಾಗಲ್ಲ ಎಂದು ಆತ ಮತ್ತು ಆತನ ತಾಯಿ ಬಳಿ ಖಾತರಿ ಮಾಡಿಕೊಂಡು ಕೇಸ್ ವಾಪಸ್ ಪಡೆಯಲಾಯಿತು. ಆನಂತರ ನಡೆದ ಹೋಂ ಸ್ಟೇ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ 2009ರ ಪಬ್ ದಾಳಿಯ ಆರೋಪಿಗಳೇ ಬಹುತೇಕರು ಕಂಡು ಬರುತ್ತಾರೆ. ಆದರೆ ನಾವು ಕ್ಷಮಿಸಿದ ಆತ ಯಾವ ದಾಳಿಯಲ್ಲೂ ನಂತರ ಕಾಣಿಸಿಲ್ಲ. ಹಿಂದೂ ಸಂಘಟನೆಗಳ ನಾಯಕರುಗಳು ಇಂತಹ ಬಡವರ ಮಕ್ಕಳನ್ನೇ ಕೊಲೆ ಮಾಡಲು, ಜೈಲಿಗೆ ಹೋಗಲು ಬಳಸುತ್ತಾರೆ. ಈವರೆಗೆ ಮಂಗಳೂರಿನಲ್ಲಿ ನಡೆದ ನೂರಾರು ಕೋಮುಗಲಭೆ, ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರ ಪೈಕಿ ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರು ಮತ್ತು ಬಡವರು. ಸಮಾಜದ ಅಸಂಗತತೆಗಳನ್ನು ಪ್ರಶ್ನಿಸುವ, ಚರ್ಚೆಗೆ ದಾರಿ ಮಾಡುವ ಪ್ರಭಾವಶಾಲಿ ನಾಟಕ. ಪ್ರೇಕ್ಷಕರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುವುದೇ ಇದರ ಯಶಸ್ಸು. ಚಿಂತನೆಗೆ ಒಯ್ಯುವ, ಸಂವಾದಕ್ಕೆ ಪ್ರೇರೇಪಿಸುವ ರಂಗಪ್ರಯೋಗವಾಗಿ ಇದು ಗಮನಾರ್ಹ. ಧಾರ್ಮಿಕ ಅಸಹಿಷ್ಣುತೆ, ಉದ್ದೇಶಪೂರ್ವಕ ದ್ವೇಷದ ಸಂಘಟನೆ, ಯುವ ಮನಸ್ಸುಗಳ ಕೇಸರೀಕರಣ, ಸಾಮಾಜಿಕ ಅಸಮಾನತೆಯ ವಿಚಾರವನ್ನು ಒಂದೇ ಪಠ್ಯದಲ್ಲಿ ಸೇರಿಸಿ ರಂಗಮಂಚದ ಮೇಲೆ ತಂದಿರುವ ಪ್ರಯೋಗವೇ ‘ಭಗವಂತನ ಮರಣ’. ಇದು ಕೇವಲ ಕಥನಾತ್ಮಕ ನಾಟಕವಲ್ಲ; ಇಂದಿನ ಭಾರತದ ಸಾಮಾಜಿಕರಾಜಕೀಯ ವಾತಾವರಣದ ಒಳಸತ್ಯಗಳನ್ನು ಕಲೆಯ ಮೂಲಕ ವಿಶ್ಲೇಷಿಸುವ ಪ್ರಖರವಾದ ಪ್ರಯತ್ನ. ಸಮಾನತಾವಾದಿ/ಬಸವವಾದಿ ಪ್ರೊಫೆಸರನ್ನು ಕೊಲ್ಲಲು ಹೋಗುವ ಯುವಕ ಸಂಘಟಿತ ದ್ವೇಷದ ಭಾಷೆಯನ್ನು ಪ್ರತಿನಿಧಿಸಿದರೆ, ಪ್ರೊಫೆಸರ್ ಅವರು ಬಸವ ತತ್ವ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳ ಧ್ವನಿಯನ್ನು ಪ್ರತಿನಿಧಿಸುತ್ತಾರೆ. ನಾಟಕ ನೋಡುತ್ತಿದ್ದಂತೆ ‘ಧರ್ಮರಕ್ಷಣೆ’ ಎಂಬ ಘೋಷಣೆ ನಿಧಾನವಾಗಿ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಪ್ರೇಕ್ಷಕರು ಮೂರನೇ ವ್ಯಕ್ತಿಗಳಾಗಿರದೆ, ಆ ವಿಚಾರಸಂಘರ್ಷದ ಸಾಕ್ಷಿಗಳಾಗುತ್ತಾರೆ. ಕೆಲವೊಮ್ಮೆ ಅವರೇ ತೀರ್ಪುಗಾರರಾಗುತ್ತಾರೆ. ಈ ನಾಟಕದ ಶಕ್ತಿಯ ಮೂಲ ಬಸವಣ್ಣನ ವಚನಗಳು. ಬಸವಣ್ಣ ಅವರ ಚಿಂತನೆ ಇಲ್ಲಿ ಕೇವಲ ಉಲ್ಲೇಖವಾಗದೆ, ನಾಟಕದ ನೈತಿಕ ದಿಕ್ಕನ್ನು ರೂಪಿಸುವ ಶಕ್ತಿಯಾಗುತ್ತದೆ. ಕೋಮುವಾದ ವರ್ಸಸ್ ಬಸವವಾದ ಎಂದು ಪರಸ್ಪರ ಎರಡು ಸಿದ್ಧಾಂತಗಳನ್ನು ಎದುರುಬದುರು ನಿಲ್ಲಿಸುತ್ತದೆ. ವಚನಗಳ ಪ್ರಖರತೆ, ಶರಣರ ಸಾಮಾಜಿಕ ಸಮಾನತೆಯ ದೃಷ್ಟಿಕೋನವು ಕೋಮುವಾದಿ ಯುವಕನೊಳಗಿನ ದ್ವಂದ್ವವನ್ನು ಗಾಢಗೊಳಿಸುತ್ತವೆ. ಈ ಆಂತರಿಕ ಭಿನ್ನಾಭಿಪ್ರಾಯವೇ ನಾಟಕದ ನಿಜವಾದ ಕ್ಲೈಮ್ಯಾಕ್ಸ್. ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿದ್ದ ಹಿಂದೂ ಸಂಘಟನೆಯ ಯುವಕರನ್ನು ವಿಚಾರಣೆ ನಡೆಸಿದ್ದ ಅಡಿಷನಲ್ ಎಸ್ಪಿಯೊಬ್ಬರು ‘‘ನಿಮ್ಮನ್ನು ಯಾರೂ ಈವರೆಗೂ ಪ್ರೀತಿಸಿಲ್ಲವೇ?’’ ಎಂದು ಪ್ರಶ್ನಿಸಿದ್ದರು. ಭಗವಂತನ ಮರಣ ನಾಟಕದಲ್ಲಿ ತನ್ನನ್ನು ಕೊಲೆ ಮಾಡಲು ಬಂದ ಯುವಕನ ಬಳಿ ಇದನ್ನೆಲ್ಲಾ ಮಾಡಬಾರದು ಎನ್ನಲು ‘‘ನಿನಗೆ ಯಾರೂ ಪ್ರೀತಿಯನ್ನು ತೋರಿಸಿಲ್ಲವೇನೋ’’ ಎಂದು ಪ್ರೊಫೆಸರ್ ಕೇಳುವ ಕ್ಷಣ, ವೇದಿಕೆಯಲ್ಲಿ ಕೇವಲ ಪಾತ್ರವಲ್ಲ, ಮಾನವೀಯತೆ ಜೀವಂತವಾಗುತ್ತದೆ. ಹಿಂದೂ ನಾವೆಲ್ಲಾ ಒಂದು ಎಂದು ಘೋಷಣೆ ಕೂಗುತ್ತಿದ್ದ ಆ ಹಂತಕ ಜಾತಿಯ ಕಾರಣಕ್ಕಾಗಿ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ಹಿಂದುತ್ವದ ಹೋರಾಟಗಾರ ಮದುವೆಯಾಗಬೇಕಾದ ಹುಡುಗಿ ದಲಿತೆ ಎಂಬ ಕಾರಣಕ್ಕಾಗಿಯೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ಮೂಲಕ ‘ಹಿಂದೂ ನಾವೆಲ್ಲಾ ಒಂದು’ ಎನ್ನುವ ಘೋಷಣೆಗೂ ಹಿಂದುತ್ವದೊಳಗಿನ ವಾಸ್ತವತೆಗೂ ಇರುವ ವ್ಯತ್ಯಾಸವನ್ನು ನಾಟಕ ಬಯಲು ಮಾಡುತ್ತದೆ. ನಾಟಕದಲ್ಲಿ ಉಪದೇಶ ಜಾಸ್ತಿ ಆಯಿತು ಅನ್ನಿಸಬಹುದು. ಆದರೆ, ‘ಭಗವಂತನ ಮರಣ’ ನಾಟಕವು ಉಪದೇಶ ನೀಡುವು ದಿಲ್ಲ. ಅದು ಪ್ರಶ್ನಿಸುತ್ತದೆ. ಹಿಂಸೆಯ ಬದಲು ಸಂವಾದವನ್ನು, ಅಂಧಾನುಸರಣೆ ಬದಲು ಆತ್ಮಪರಿಶೀಲನೆಯನ್ನು, ದ್ವೇಷ ಬದಲು ಮನುಷ್ಯತ್ವವನ್ನು ಆಯ್ಕೆಮಾಡುವ ಸಾಧ್ಯತೆಯನ್ನು ಇದು ತೋರಿಸುತ್ತದೆ. ಈ ನಾಟಕದಲ್ಲಿ ‘ಭಗವಂತ’ ಸಾಯುವುದಿಲ್ಲ; ಸಾಯುವುದು ಕೋಮುವಾದ. ಬದುಕುವುದು ಪ್ರಶ್ನಿಸುವ ಮನಸ್ಸು. ಒಟ್ಟಾರೆಯಾಗಿ ‘ಭಗವಂತನ ಮರಣ’ ನಾಟಕವು ಧರ್ಮ, ರಾಜಕೀಯ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಘರ್ಷವನ್ನು ತೀವ್ರವಾಗಿ ಪ್ರಶ್ನಿಸುವ-ಚಿಂತನೆಗೆ ಹಚ್ಚುವ ರಂಗಕೃತಿ. ಮತೀಯವಾದ ಮತ್ತು ‘ಅರಿವು’ ನಡುವಿನ ಘರ್ಷಣೆಯನ್ನು ವೇದಿಕೆಯಲ್ಲಿ ಜೀವಂತಗೊಳಿಸುವ ಈ ನಾಟಕ ಪ್ರೇಕ್ಷಕರನ್ನು ವರ್ತಮಾನದ ಸತ್ಯಗಳ ಎದುರು ನಿಲ್ಲಿಸುತ್ತದೆ. ಸೌಹಾರ್ದ ಕದಡುವ ಮತ್ತು ಸೌಹಾರ್ದ ಬಯಸುವ ಮನಸ್ಸು ಗಳೆರಡೂ ಈ ರಂಗಕೃತಿಯನ್ನು ತಪ್ಪದೇ ವೀಕ್ಷಿಸಬೇಕು.
ಯುವಜನರ ಉದ್ಯೋಗ ಸಮರ: ವಿಪಕ್ಷಕ್ಕೆ ಸಿಕ್ಕಿತು ಅಸ್ತ್ರ, ಇಕ್ಕಟ್ಟಿನಲ್ಲಿ ಸರ್ಕಾರ; ಸಂಪುಟ ಸಭೆಯತ್ತ ಎಲ್ಲರ ಚಿತ್ತ
ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಯುವ ಜನರು ಧಾರವಾಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಯುವ ಜನರ ಉದ್ಯೋಗ ಹೋರಾಟ ಸರ್ಕಾರದ ನಿದ್ದೆಗೆಡಿಸಿದೆ. ವಿಪಕ್ಷಕ್ಕೂ ಇದು ಬಹುದೊಡ್ಡ ಅಸ್ತ್ರವಾಗಿದೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಈ ನಡುವೆ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಸರ್ಕಾರ ಏನಾದ್ರೂ ತೀರ್ಮಾನ ಕೈಗೊಳ್ಳಲಿದ್ಯಾ? ಎಂಬುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಮತ್ತಷ್ಟು ಮಾಹಿತಿ ಇಲ್ಲಿದೆ.
ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿಗಿರಿ ಮರೀಚಿಕೆ ? ಸಿಎಂ, ಡಿಸಿಎಂ ನಡುವೆ ’ಭಿನ್ನರಾಗ’
First Time MLAs of Karnataka : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಲವು ವಿಧವಾದ ಧ್ವನಿಗಳು ಕೇಳಿ ಬರುತ್ತಿದೆ ಅದರಲ್ಲಿ ಕ್ಯಾಬಿನೆಟ್ ವಿಸ್ತರಣೆ ಕೂಡಾ ಒಂದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಗೊಂದಲ ಏರ್ಪಟ್ಟಂತೆ ಹೇಳಿಕೆಗಳು ಬರುತ್ತಿದೆ.
ಕಲಬುರಗಿ | ರೇಣುಕಾಚಾರ್ಯ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ
ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಮಾರ್ಚ್ 1 ರಂದು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ ರ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಯಿತು. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು. ಅಂದು ಬೆಳಿಗ್ಗೆ 9 ಗಂಟೆಗೆ ಕಡ್ಡಾಯವಾಗಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು. ಸಭೆಯಲ್ಲಿ ನುರಿತ ಉಪನ್ಯಾಸಕರನ್ನು ಸಹ ಆಹ್ವಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರ ಜೊತೆಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೊದಿ ನೇತೃತ್ವವಹಿಸುವರು. ಜಯಂತಿ ಸಮಿತಿ ಅಧ್ಯಕ್ಷರಾಗಿ ಬಸವರಾಜ ಮಠಪತಿ ಕಮಲಾಪೂರ ಹಾಗೂ ನಾಗಲಿಂಗಯ್ಯ ಮಠಪತಿ ಕಾರ್ಯಕ್ರಮದ ನಿರೂಪಕರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಅವರು ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ಪತ್ರಿಕಾ ಆಮಂತ್ರಣ ಮುದ್ರಿಸಲಾಗುವುದು. ನಾಡಗೀತೆ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವಕುಮಾರ ಹಿರೇಮಠ, ರುದ್ರಮುನಿ ಮಠಪತಿ, ಸಾಗರ ಹಿರೇಮಠ, ಸುನೀತಾ, ಕವಿತಾ, ಅನ್ನಪೂರ್ಣ, ಆನಂದ, ವಿರೇಶ ಹಾಗೂ ರವಿಕುಮಾರ ಇತರರು ಉಪಸ್ಥಿತರಿದ್ದರು.
ವಿವಾದಿತ NCERT ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್; ನಿರ್ದೇಶಕರಿಗೆ ನೋಟಿಸ್
ಹೊಸದಿಲ್ಲಿ: NCERT ಇತ್ತೀಚೆಗೆ ಬಿಡುಗಡೆ ಮಾಡಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ಅಧ್ಯಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ವಿವಾದಿತ ಪಠ್ಯಪುಸ್ತಕವನ್ನು ನಿಷೇಧಿಸಿದೆ. ಈ ಕುರಿತು ವಿವರಣೆಯನ್ನು ಕೋರಿ NCERT ನಿರ್ದೇಶಕರಿಗೆ ನೋಟಿಸ್ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠವು, ಇದು ಆಳವಾಗಿ ಬೇರೂರಿರುವ ಪಿತೂರಿಯ ಭಾಗವಾಗಿದೆ ಮತ್ತು ಇದಕ್ಕೆ ಹೊಣೆಗಾರರಾಗಿರುವವರನ್ನು ಕಾನೂನಿನ ಮುಂದೆ ತರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಶಾಲಾ ಶಿಕ್ಷಣ ಇಲಾಖೆ ಮತ್ತು NCERT ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ʼನ್ಯಾಯಾಲಯ ನಿಂದನೆʼಗೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ನಿಂದನೆ ಆರೋಪದಡಿ ಸೂಕ್ತ ಕ್ರಮ ಕೈಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚಿಸಿದೆ. ಇದಲ್ಲದೆ ಪುಸ್ತಕದ ಎಲ್ಲಾ ಪ್ರತಿಗಳನ್ನು ಡಿಜಿಟಲ್ ಅಥವಾ ಸಾರ್ವಜನಿಕ ವೇದಿಕೆಯಿಂದ ತೆಗೆದು ಹಾಕುವಂತೆ NCERT, ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳಿಗೆ ನ್ಯಾಯಾಲಯ ಆದೇಶಿಸಿದೆ. ಪುಸ್ತಕದ ಉತ್ಪಾದನೆ ಮತ್ತು ವಿತರಣೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಿದ ಸುಪ್ರೀಂ ಕೋರ್ಟ್ ಮತ್ತು ಆಕ್ಷೇಪಾರ್ಹ ಅಧ್ಯಾಯವನ್ನು ಬರೆದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ಬಗ್ಗೆಯೂ ವಿವರಗಳನ್ನು ಕೇಳಿದೆ.
ನವದೆಹಲಿ: 8ನೇ ತರಗತಿಯ ಎನ್ಸಿಇಆರ್ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಕುರಿತು ಉಲ್ಲೇಖಿಸಿರುವ ವಿವಾದ ಇದೀಗ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಬೇಷರತ್ ಕ್ಷಮೆಯಾಚಿಸಿದೆ. ಶಿಕ್ಷಣ ಸಚಿವಾಲಯದ ಪರವಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ (Solicitor General) ತುಷಾರ್ ಮೆಹ್ತಾ ಅವರು ನ್ಯಾಯಾಲಯದ
NCERT ಪಠ್ಯ ವಿವಾದ | ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ ಕೇಂದ್ರ ಸರಕಾರ
ʼಇದರ ಹಿಂದೆ ಯಾರು ಇದ್ದಾರೆ ಎಂದು ತಿಳಿದುಕೊಳ್ಳಲು ನಾವು ಬಯಸುತ್ತೇವೆʼ ಎಂದ ಸಿಜೆಐ
ರಾಜ್ಯದ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸಿದ ಸರ್ ಸಿದ್ದಪ್ಪ ಕಂಬಳಿ
ಸರ್ ಸಿದ್ದಪ್ಪ ಕಂಬಳಿಯವರ ಪ್ರತಿಮೆ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 27ರಂದು ಅನಾವರಣಗೊಳ್ಳಲಿದೆ ಆಧುನಿಕ ಭಾರತದ ಸಾಮಾಜಿಕ-ರಾಜಕೀಯ ಇತಿಹಾಸವು ಕೇವಲ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳ ದಾಖಲೆಯಷ್ಟೇ ಅಲ್ಲ. ಅದು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅನೇಕ ಮೌನ ಮಹನೀಯರ ಬದುಕಿನ ಪಥವನ್ನೂ ಒಳಗೊಂಡಿರುವ ವಿಸ್ತೃತ ಚಿಂತನಾ ಭೂಮಿಯಾಗಿದೆ. ಈ ಇತಿಹಾಸದ ಸಂಕ್ರಮಣಕಾಲದಲ್ಲಿ ರಾಜಕೀಯ ಅಧಿಕಾರದ ವಲಯದಲ್ಲೇ ನೆಲೆಸಿದ್ದುಕೊಂಡು ಸಮಾಜದ ಅಂಚಿನ ಸಮುದಾಯಗಳ ಬದುಕಿಗೆ ದಿಕ್ಕು ನೀಡಿದ ವ್ಯಕ್ತಿತ್ವಗಳು ವಿರಳವಾದರೂ ಅತ್ಯಂತ ಮಹತ್ವದವರಾಗಿದ್ದಾರೆ. ಅಂತಹ ವಿರಳ ಮಹನೀಯರಲ್ಲಿ ಸರ್ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವವು ವಿಶೇಷ ಅಧ್ಯಯನಕ್ಕೆ ಅರ್ಹವಾಗುತ್ತದೆ. ಅವರ ಬದುಕು ಬಡತನದ ನೆಲೆಯಿಂದ ಆರಂಭಗೊಂಡು ಆಡಳಿತ, ಶಿಕ್ಷಣ, ಸಮಾಜಪರಿವರ್ತನೆ ಮತ್ತು ಜಾತ್ಯತೀತ ಮಾನವತಾವಾದದ ಉನ್ನತ ಶಿಖರಗಳಿಗೆ ಏರಿದ ಚೇತನಶೀಲ ಪಯಣವಾಗಿದ್ದು, ಅದು ವ್ಯಕ್ತಿಚರಿತ್ರೆಯ ಮಿತಿಯನ್ನು ಮೀರಿ ಒಂದು ಯುಗದ ಚಿಂತನಾ ಪ್ರತಿನಿಧಿಯಂತೆಯೇ ಕಾಣಿಸುತ್ತದೆ. ಛತ್ರಪತಿ ಶಾಹೂ ಮಹಾರಾಜ, ಸರ್ ಸಿದ್ದಪ್ಪ ಕಂಬಳಿ ಹಾಗೂ ಡಾ. ಅಂಬೇಡ್ಕರ್ ಈ ಮೂವರು ಮಹನೀಯರು ಸಮಾನ ಚಿಂತನಾ ನೆಲೆಯ ಸಮಾನಮನಸ್ಕ ತವನಿಧಿಗಳಾಗಿದ್ದು, ಒಂದೇ ಸಾಮಾಜಿಕ ಯಾತನೆಗಳನ್ನು ಆತ್ಮಸಾಕ್ಷಿಯಾಗಿ ಕಂಡವರು. ಒಂದೇ ಭೌಗೋಳಿಕ ವಲಯದಲ್ಲಿ ಬದುಕಿದ ಚಿಂತಕರೆಂಬುದು ಗಮನಾರ್ಹ ಸಂಗತಿಯಾಗಿದೆ. ಮುಂಬೈ ಪ್ರಾಂತಕ್ಕೆ ಒಳಪಟ್ಟ ಕೊಲ್ಲಾಪುರದ ಅರಸರಾಗಿ ಸಮಾಜಸೇವೆಯನ್ನು ರಾಜಧರ್ಮವನ್ನಾಗಿ ರೂಪಿಸಿಕೊಂಡವರು ಶಾಹೂ ಮಹಾರಾಜರಾದರೆ, ವಕೀಲ ವೃತ್ತಿಯಿಂದ ರಾಜಕೀಯ ಪ್ರವೇಶ ಪಡೆದು ಮುಂಬೈ ಸರಕಾರದಲ್ಲಿ ಉಪಸಭಾಪತಿಯಾಗಿ ಹಾಗೂ ಶಿಕ್ಷಣ ಮಂತ್ರಿಯಾಗಿ ಸಮಾಜಮುಖಿ ಆಡಳಿತಕ್ಕೆ ದಿಕ್ಕು ನೀಡಿದವರು ಸರ್ ಸಿದ್ದಪ್ಪ ಕಂಬಳಿ ಸಾಹೇಬರು. ಇನ್ನು ಬಾಬಾಸಾಹೇಬರು ಮುಂಬೈ ವಿಧಾನ ಪರಿಷತ್ತಿನ ಸದಸ್ಯರಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಕಾನೂನು ಮಂತ್ರಿಯಾಗಿ ಹಾಗೂ ಸಂವಿಧಾನ ಶಿಲ್ಪಿಯಾಗಿ ಜಗತ್ತಿಗೇ ಮಾದರಿಯಾಗುವಂತಹ ಮಹತ್ತರ ಐತಿಹಾಸಿಕ ಕಾರ್ಯವನ್ನು ನೆರವೇರಿಸಿದ್ದಾರೆ. ಬಾಬಾಸಾಹೇಬರ ಜೀವನ, ಚಿಂತನೆ, ಶಿಕ್ಷಣ ಹಾಗೂ ರಾಜಕೀಯ ಹೋರಾಟಗಳ ಚರ್ಚೆಯಲ್ಲಿ ಛತ್ರಪತಿ ಶಾಹೂ ಮಹಾರಾಜ, ಸಯ್ಯಾಜಿರಾವ್ ಗಾಯಕವಾಡ, ಕೃಷ್ಣಾಜಿ ಅರ್ಜುನ ಕೇಳೂಸ್ಕರ್, ಎಸ್.ಕೆ. ಭೋಲೆ, ಅಂಬೇಡ್ಕರ್ ಅವರ ಬಾಲ್ಯದ ಗೆಳೆಯ ನವಲಭತೇನಾ ಮುಂತಾದವರ ನೆರವು-ಸಹಕಾರವನ್ನು ನಾವು ದಾಖಲು ಮಾಡುತ್ತೇವೆ. ಆದರೆ ಸರ್ ಸಿದ್ದಪ್ಪ ಕಂಬಳಿ ಮತ್ತು ಅಂಬೇಡ್ಕರ್ ಅವರ ಆಪ್ತ ಚಿಂತನಾ ಒಡನಾಟದ ವಿಚಾರಗಳು ಇತಿಹಾಸದ ಪ್ರಧಾನ ಪ್ರವಾಹದಲ್ಲಿ ಸಮರ್ಪಕವಾಗಿ ಮೆಲುಕು ಹಾಕಲ್ಪಟ್ಟಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ನ್ಯಾಯವಾದಿಯಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು 1907ರಲ್ಲಿ ಹುಬ್ಬಳ್ಳಿಯ ನಗರಸಭೆಗೆ ಸ್ಪರ್ಧಿಸಿ ಜಯಶಾಲಿ ಯಾದರು. 1921ರ ವೇಳೆಗೆ ಕಂಬಳಿಯವರು ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ರೂಪುಗೊಂಡಿದ್ದರು. ಅವರಿಲ್ಲದೆ ಯಾವುದೇ ಸಾರ್ವಜನಿಕ ಕೆಲಸವೂ ನಡೆಯದ ಸ್ಥಿತಿಗೆ ಅವರು ಏರಿದ್ದರು. ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಸರದಾರ ಮಹಬೂಬ್ ಅಲಿಖಾನ್ರ ಸಹಕಾರದೊಂದಿಗೆ ತಮ್ಮದೇ ರಾಜಕೀಯ ಸಂಘಟನೆಯನ್ನು ರೂಪಿಸಿಕೊಂಡರು. ನಂತರ ವಿಧಾನಸಭೆಯ ಸದಸ್ಯರಾಗಿದ್ದ ಅವಧಿಯಲ್ಲಿ 1924ರಲ್ಲಿ ಉಪಸಭಾಪತಿಯಾಗಿ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಬಿ.ಆರ್. ಅಂಬೇಡ್ಕರ್, ಕೆ.ಎಸ್. ನಾರಿಮನ್, ಸರ್ ಗುಲಾಮ್ ಹುಸೇನ್ ಹಿದಾಯತುಲ್ಲಾ, ಡಿ.ಬಿ. ಕೂಪರ್, ಬಿ.ವಿ. ಜಾಧವ, ಸರ್ ಶಹಾನವಾಝ್ ಅಲಿಖಾನ್ ಭುಟ್ಟೋ, ಚಮನ್ದಾಸ್ ಮೆಹತಾ ಮುಂತಾದವರು ಕಂಬಳಿಯವರೊಂದಿಗೆ ವಿಧಾನಮಂಡಲದ ಸದಸ್ಯರಾಗಿದ್ದರು. ಶಾಸಕರ ಸ್ಥಾನವಷ್ಟೇ ಅಲ್ಲದೆ ಅನೇಕ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಗಳು ಸ್ವಯಂ ಅವರತ್ತ ಹರಿದು ಬಂದವು. ಕನ್ನಡ ಭಾಷೆಯ ವಿಚಾರದಲ್ಲಿ ಅವರು ಅಪಾರ ಕಾಳಜಿ ತೋರಿದರು. ಕರ್ನಾಟಕ ಏಕೀಕರಣದ ಚಳವಳಿಯಲ್ಲಿ ಕೂಡ ಪ್ರಮುಖ ನಾಯಕನಾಗಿ ಶ್ರಮಿಸಿದರು. 1930ನೇ ವರ್ಷ ಕಂಬಳಿಯವರ ಜೀವನದಲ್ಲಿ ಮಹತ್ವದ ತಿರುವಾಗಿ ಮೂಡಿಬಂತು. ಲಂಡನ್ನಲ್ಲಿ ಸಾರ್ವಭೌಮರ ಸಮ್ಮುಖದಲ್ಲಿ ನಡೆಯುವ ದುಂಡುಮೇಜಿನ ಪರಿಷತ್ತಿಗೆ ಹಾಜರಾಗಬೇಕೆಂದು ಅವರಿಗೆ ಅಧಿಕೃತ ಆಹ್ವಾನ ಬಂದಿತ್ತು. ಈ ಆಹ್ವಾನವು, ಸರ್ ಸಿದ್ದಪ್ಪ ಕಂಬಳಿಯವರು ತಮ್ಮ ಕಾಲಘಟ್ಟದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಎಂಬುದಕ್ಕೆ ಪ್ರಬಲ ಸಾಕ್ಷಿಯಾಗುತ್ತದೆ. ಸರ್ ಸಿದ್ದಪ್ಪ ಕಂಬಳಿಯವರು ಮುಂಬೈ ವಿಧಾನ ಪರಿಷತ್ತಿನಲ್ಲಿ ಇಪ್ಪತ್ತೇಳು ಜನ ಬ್ರಾಹ್ಮಣೇತರ ಸದಸ್ಯರ ಗುಂಪಿನ ನಾಯಕತ್ವ ವಹಿಸಿಕೊಂಡಿದ್ದರು. ಕರ್ನಾಟಕದಿಂದ ಬೆಳಗಾವಿಯ ಷಣ್ಮುಖಪ್ಪ ಅಂಗಡಿ, ವಿಜಯಪುರದ ರಕ್ಕಸಗಿ ದೇಸಾಯಿ ಹಾಗೂ ಸಿದ್ದಪ್ಪ ಕಂಬಳಿಯವರು ಆ ಸಭೆಯಲ್ಲಿ ಪ್ರಬಲ ಧ್ವನಿಗಳಾಗಿ ಗುರುತಿಸಿಕೊಂಡಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಹಾನುಭೂತಿ ಹಾಗೂ ಬೆಂಬಲವೂ ಕಂಬಳಿಯವರಿಗೆ ನಿರಂತರವಾಗಿ ಲಭಿಸುತ್ತಿತ್ತು. ದುಂಡುಮೇಜಿನ ಪರಿಷತ್ತಿಗೆ ಕಂಬಳಿಯವರು ಅನಿವಾರ್ಯ ಕಾರಣಗಳಿಂದ ಹಾಜರಾಗಲಿಲ್ಲ. ಆದರೆ ಆ ಅನುಪಸ್ಥಿತಿಯೇ ಅವರ ರಾಜಕೀಯ ಬದುಕಿಗೆ ವರದಾನವಾಯಿತು. 1930ರ ನವೆಂಬರ್ ತಿಂಗಳಲ್ಲಿ ಸಿದ್ದಪ್ಪ ಕಂಬಳಿಯವರು ಮಂತ್ರಿಯಾಗಿ ಮುಂಬೈಯಲ್ಲಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿಯೇ ಆಡಳಿತದ ಅತ್ಯಂತ ಸಂಕೀರ್ಣ ಹಾಗೂ ಸಂಘರ್ಷಪೂರ್ಣ ಹೊಣೆಗಾರಿಕೆಯನ್ನು ಎದುರಿಸಬೇಕಾಯಿತು. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿನ ಮಿತವ್ಯಯ ನೀತಿಯ ಭಾಗವಾಗಿ ಸಚಿವ ಸಂಪುಟದ ವೆಚ್ಚ ಹಾಗೂ ಸಂಸ್ಥೆಗಳ ಮೇಲಿನ ಖರ್ಚು ಕಡಿತಗೊಳಿಸುವ ತೀರ್ಮಾನ ಜಾರಿಗೆ ತರಲಾಯಿತು. ಥಾಮಸ್ ಮಿತವ್ಯಯ ಸಮಿತಿಯ ಶಿಫಾರಸಿನಂತೆ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಬೇಕೆಂಬ ಸೂಚನೆ ಕಂಬಳಿಯವರಿಗೆ ನುಂಗಲಾರದ ತುತ್ತಾಯಿತು. ಅವರು ತಮ್ಮ ರಾಜಕೀಯ ಪ್ರಭಾವ ಹಾಗೂ ಕಾರ್ಯಕ್ಷಮತೆಯನ್ನು ಬಳಸದೇ ಇದ್ದಿದ್ದರೆ, ಕರ್ನಾಟಕ ಕಾಲೇಜು ಮಾತ್ರವಲ್ಲದೆ, ಪುಣೆಯ ಕೃಷಿ ಕಾಲೇಜು ಕೂಡ ಇತಿಹಾಸದ ಅಂಧಕಾರದಲ್ಲಿ ಮಾಯವಾಗುತ್ತಿದ್ದವು. ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಾಗ ಕಂಬಳಿಯವರು ಅಚಲ ನಿಲುವು ತಾಳಿ, ‘‘ಕರ್ನಾಟಕ ಕಾಲೇಜನ್ನು ಮುಚ್ಚುವ ನಿರ್ಣಯವನ್ನು ಸರಕಾರ ಸ್ವೀಕರಿಸುವುದಾದರೆ; ನನ್ನ ರಾಜೀನಾಮೆಯನ್ನೂ ಜೊತೆಯಾಗಿ ಸ್ವೀಕರಿಸಬೇಕಾಗುತ್ತದೆ. ಕರ್ನಾಟಕ ಕಾಲೇಜನ್ನು ಮುಚ್ಚಲು ನಾನು ಮಂತ್ರಿಯಾಗಿ ಬಂದಿಲ್ಲ. ನಾಳೆ ಜನರು-ಕಂಬಳಿ ಸಿದ್ದಪ್ಪ ತನ್ನ ಮಂತ್ರಿಪದವಿ ಉಳಿಸಿಕೊಂಡು ಕರ್ನಾಟಕ ಕಾಲೇಜಿನ ಸಮಾಧಿ ಮಾಡಿದ ಎಂದು ನನ್ನ ಮೇಲೆ ಕಲ್ಲು ಎಸೆಯುತ್ತಾರೆ. ಈ ಕಾಲೇಜು ಸರಕಾರದ ಖಜಾನೆಯಿಂದ ಸ್ಥಾಪನೆಯಾಗಿಲ್ಲ. ಅಲ್ಲಿನ ಹಳ್ಳಿಗಳ ಜನರು ತಮ್ಮ ಬೆವರು ಸುರಿಸಿ ದುಡಿದ ಹಣವನ್ನು ದೇಣಿಗೆಯಾಗಿ ನೀಡಿದ ಫಲವೇ ಇದು. ಧಾರವಾಡದವನಾದ ನಾನು ನನ್ನ ಕೈಯಿಂದಲೇ ಈ ಕಾಲೇಜು ಮುಚ್ಚಬೇಕೆ? ಕೃಷಿಕ ಕುಟುಂಬದಿಂದ ಬಂದ ನಾನು ಕೃಷಿ ಕಾಲೇಜು ಮುಚ್ಚುವುದು ಧರ್ಮವಲ್ಲ. ನನ್ನ ರಾಜೀನಾಮೆಯನ್ನು ತೆಗೆದುಕೊಂಡು ನೀವೇನು ಬೇಕಾದರೂ ಮಾಡಿ’’ ಎಂದು ಅವರು ನಿಸ್ಸಂಕೋಚವಾಗಿ ಘೋಷಿಸಿದರು. ಈ ದೃಢ ನಿಲುವಿನ ಫಲವಾಗಿ ಕರ್ನಾಟಕ ಕಾಲೇಜು ಉಳಿಯಿತು. ಮಾತ್ರವಲ್ಲ, ಕಾಲಕ್ರಮೇಣ ಅದು ಬೆಳೆಯಿತು. ದ್ವಿತೀಯ ದರ್ಜೆಯ ನೆಲೆಯಿಂದ ಪ್ರಥಮ ದರ್ಜೆಯ ಕಾಲೇಜಾಗಿ ರೂಪಾಂತರಗೊಂಡಿತು. ಕರ್ನಾಟಕ ಕಾಲೇಜನ್ನು ಉಳಿಸಲು ಕಂಬಳಿಯವರು ಪುಣೆಯ ಡೆಕ್ಕನ್ ಕಾಲೇಜನ್ನು ಮುಚ್ಚುವ ತೀರ್ಮಾನ ಕೈಗೊಂಡರು. ಈ ನಿರ್ಧಾರಕ್ಕೆ ವಿರೋಧವಾಗಿ ಪುಣೆಯ ಚಿತ್ಪಾವನ ಬ್ರಾಹ್ಮಣ ಸಮುದಾಯದ ಅರುವತ್ತಕ್ಕೂ ಹೆಚ್ಚು ಪ್ರಮುಖರು ಸೇರಿಕೊಂಡು ರಾಜ್ಯಪಾಲರ ಬಳಿಗೆ ಭಾರೀ ನಿಯೋಗವನ್ನು ಕರೆದೊಯ್ದರು. ಸಭೆ ಗಂಭೀರವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಸರ್ ಸಿದ್ದಪ್ಪ ಕಂಬಳಿಯವರು ಪ್ರತ್ಯಕ್ಷವಾಗಿ ಹಾಜರಾದರು. ‘‘ನೋಡಿ ಇಲ್ಲಿ ನಿಮ್ಮ ಶಿಕ್ಷಣ ಮಂತ್ರಿಗಳೇ ಬಂದಿದ್ದಾರೆ. ಅವರೊಂದಿಗೆ ಮಾತನಾಡಿ’’ ಎಂದು ಹೇಳಿ ರಾಜ್ಯಪಾಲರು ಸಭೆಯಿಂದ ನಿರ್ಗಮಿಸಿದರು. ನಿಯೋಗವು ಡೆಕ್ಕನ್ ಕಾಲೇಜು ಮುಚ್ಚಬಾರದೆಂದು ತೀವ್ರ ವಾದ ಮಂಡಿಸಿತು. ಆದರೆ ಕಂಬಳಿಯವರ ತಾತ್ವಿಕ ದೃಢತೆಯ ಮುಂದೆ ಅವರ ವಾದ ನೆಲೆಯೂರಲಿಲ್ಲ. ಇನ್ನೇನೂ ಮಾರ್ಗವಿಲ್ಲವೆಂದು ತಿಳಿದು ಅವರು ಕೊಲ್ಲಾಪುರದ ಛತ್ರಪತಿ ಶಾಹೂ ಮಹಾರಾಜರನ್ನು ಆಶ್ರಯಿಸಿದರು. ಸಮಾನಮನಸ್ಕರಾದ ಶಾಹೂ ಮಹಾರಾಜರ ಮೂಲಕ ಕಂಬಳಿಯವರ ಮೇಲೆ ಪ್ರಭಾವ ಬೀರುವ ತಂತ್ರವನ್ನು ಅವರು ಬಳಸಿದರು. ಒಂದು ದಿನ ಶಾಹೂ ಮಹಾರಾಜರು ಸ್ವತಃ ಕಂಬಳಿಯವರನ್ನು ಭೇಟಿ ಮಾಡಲು ಅವರ ಮನೆಗೆ ಬಂದರು. ಮಹಾರಾಜರು ಬರುತ್ತಿರುವ ಸುದ್ದಿ ತಿಳಿದ ಕಂಬಳಿಯವರು ಬಾಗಿಲವರೆಗೆ ಹೋಗಿ, ‘‘ನೀವು ತೊಂದರೆ ತೆಗೆದುಕೊಂಡಿರಿ. ಹೇಳಿ ಕಳಿಸಿದ್ದರೆ ನಾನೇ ನಿಮ್ಮ ಬಳಿ ಬರುತ್ತಿದ್ದೆ’’ ಎಂದು ವಿನಯದಿಂದ ಅವರನ್ನು ಒಳಗೆ ಕರೆದುಕೊಂಡರು. ಶಾಹೂ ಮಹಾರಾಜರು ಡೆಕ್ಕನ್ ಕಾಲೇಜು ಮುಚ್ಚುವ ವಿಚಾರವನ್ನು ಪ್ರಸ್ತಾಪಿಸಿದಾಗ, ಕಂಬಳಿಯವರು ಸ್ಪಷ್ಟವಾಗಿ ಉತ್ತರಿಸಿದರು: ‘‘ಮಹಾರಾಜ, ತಾವು ಸಮಾಜಕ್ಕಾಗಿ ಮಾಡಬೇಕೆಂದು ಯೋಚಿಸುವ ಕಾರ್ಯವನ್ನು ನಾನು ಈಗಾಗಲೇ ಕೈಗೊಂಡಿದ್ದೇನೆ. ಹಳ್ಳಿಗಳಲ್ಲಿರುವ ಹಿಂದುಳಿದ ಜನರ ವಿದ್ಯಾಭಿವೃದ್ಧಿಯೇ ನಮ್ಮಿಬ್ಬರ ಧ್ಯೇಯ. ನಗರಗಳಲ್ಲಿ ನೆಲೆಸಿರುವ ಮುಂದುವರಿದ ವರ್ಗಗಳು ತಮ್ಮನ್ನು ತಾವು ನೋಡಿಕೊಳ್ಳಲು ಸಮರ್ಥರಾಗಿದ್ದಾರೆ. ಆದರೆ ಬಹುಸಂಖ್ಯಾತ ಹಿಂದುಳಿದ ಜನರು ಇನ್ನೂ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರ ಬಗ್ಗೆ ನಿಮ್ಮಂಥವರೂ, ನಮ್ಮಂಥವರೂ ಚಿಂತಿಸಬೇಕಾಗಿದೆ. ಪುಣೆಯ ಡೆಕ್ಕನ್ ಕಾಲೇಜನ್ನು ಉಳಿಸಬೇಕೆಂದು ನೀವು ಹೇಳುತ್ತಿರುವುದು ನನಗೆ ಆಶ್ಚರ್ಯವಾಗಿದೆ’’ ಎಂದರು. ಇದನ್ನು ಕೇಳಿದ ಶಾಹೂ ಮಹಾರಾಜರು, ‘‘ಇಲ್ಲ, ಈ ವಿಷಯದಲ್ಲಿ ನಾನು ನಿಮಗೆ ಏನನ್ನೂ ಹೇಳುವುದಿಲ್ಲ. ನೀವು ಮಾಡಿರುವುದು ಸಂಪೂರ್ಣವಾಗಿ ಸರಿಯಾದುದೇ’’ ಎಂದು ಹೇಳಿ ಹೊರಡಲು ಅಣಿಯಾಗುತ್ತಿದ್ದಂತೆ, ಶಾಹೂ ಮಹಾರಾಜರನ್ನು ಗೌರವದಿಂದ ಬೀಳ್ಕೊಟ್ಟರು. ಕಂಬಳಿಯವರು ಪುಣೆಯ ಡೆಕ್ಕನ್ ಕಾಲೇಜಿನ ಪ್ರಯೋಗಾಲಯದ ಉಪಕರಣಗಳು ಹಾಗೂ ಗ್ರಂಥಾಲಯದ ಗ್ರಂಥಗಳನ್ನು ರಾತ್ರೋರಾತ್ರಿ ಟ್ರಕ್ಗಳಲ್ಲಿ ತುಂಬಿಸಿ, ಪುಣೆಯ ಜನರು ಎಚ್ಚರಗೊಳ್ಳುವ ಮೊದಲೇ ಧಾರವಾಡಕ್ಕೆ ಕಳುಹಿಸಿದರು. ಯುದ್ಧೋಪಾದಿಯಾಗಿ ನಡೆದ ಈ ಕಾರ್ಯ ಅನೇಕರಿಗೆ ಪವಾಡದಂತೆ ಕಂಡಿತು. ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಮೊದಲಿಗೆ ನಿರಾಕರಿಸಲ್ಪಟ್ಟ ಸಂಲಗ್ನತೆಯನ್ನು ಕಂಬಳಿಯವರು ಚಾತುರ್ಯದಿಂದ ದೊರಕಿಸಿಕೊಟ್ಟರು. ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದರು. ಇದು ಸಾಧ್ಯವಾಗಿದ್ದು ಛತ್ರಪತಿ ಶಾಹೂ ಮಹಾರಾಜರ ತಿಳುವಳಿಕೆ, ಸಹಕಾರದಿಂದ.
ಬೇಲೂರು : ಪತ್ನಿಯನ್ನೇ ಕೊಲೆ ಮಾಡಿದ ಪತಿ
ಬೇಲೂರು, ಫೆ.26: ಪತ್ನಿ ಮೇಲೆ ಅನುಮಾನ ಹಾಗೂ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೇಲೂರು ತಾಲೂಕಿನ ರಾಜನಸಿರಿಯೂರು ಗ್ರಾಮದಲ್ಲಿ ನಡೆದಿದೆ. ಚನ್ನಮ್ಮ (34) ಮೃತ ಮಹಿಳೆ. ಮಧು (40) ಬಂಧಿತ ಆರೋಪಿ. ಸುಮಾರು ಹದಿನೈದು ವರ್ಷಗಳ ಹಿಂದೆ ರಾಜನಸಿರಿಯೂರು ಗ್ರಾಮದ ಮಧು ಜೊತೆ ಚನ್ನಮ್ಮ ವಿವಾಹವಾಗಿದ್ದರು. ದಾಂಪತ್ಯ ಜೀವನದ ಆರಂಭಿಕ ವರ್ಷಗಳಲ್ಲಿ ಎಲ್ಲವೂ ಸಹಜವಾಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಮಧು ಪತ್ನಿ ಮೇಲೆ ಅನುಮಾನ ಪಟ್ಟು ನಿರಂತರ ಜಗಳವಾಡುತ್ತಿದ್ದನೆಂದು ತಿಳಿದುಬಂದಿದೆ. ಕುಟುಂಬಸ್ಥರು ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಿ ದಂಪತಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ಆದರೆ ಮಧು ವರದಕ್ಷಿಣೆ ಹಣ ತರುವಂತೆ ಚನ್ನಮ್ಮನಿಗೆ ಕಿರುಕುಳ ನೀಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚನ್ನಮ್ಮಳ ಪೋಷಕರು ಆತನಿಗೆ ಆಟೋ ವಾಹನ ಕೊಡಿಸಿದ್ದರೂ ಕಿರುಕುಳ ನಿಲ್ಲಲಿಲ್ಲ ಎನ್ನಲಾಗಿದೆ. ಫೆ. 18ರಂದು ಚನ್ನಮ್ಮಳ ಮೇಲೆ ಮಧು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಚನ್ನಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಉತ್ತರ ಪ್ರದೇಶ ನ್ಯಾಯಾಲಯದಿಂದಲೇ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕಡತ ನಾಪತ್ತೆ: ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಲಕ್ನೋ: ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳ ನಾಪತ್ತೆ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ರಾಯ್ ಬರೇಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ. ಕಡತಗಳನ್ನು ಉದ್ದೇಶಪೂರ್ವಕವಾಗಿ ಸಿಗದಂತೆ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆಯೂ ಸೂಚಿಸಿದೆ. ಆಸಿಡ್ ದಾಳಿ ಮತ್ತು ಸಾಮೂಹಿಕ ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠವು ನಡೆಸಿದೆ. ಈ ಅರ್ಜಿಗಳಲ್ಲಿ, ಪೊಲೀಸರು ಮುಕ್ತಾಯ ವರದಿಗಳನ್ನು ಸಲ್ಲಿಸಿದರೂ, ಸಂಬಂಧಿತ ದಾಖಲೆಗಳನ್ನು ಸಂತ್ರಸ್ತರಿಗೆ ನೀಡಿಲ್ಲ ಎಂದು ಆರೋಪಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ 2025ರ ನವೆಂಬರ್ನಲ್ಲಿ ರಾಯ್ ಬರೇಲಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ, ಪ್ರಕರಣದ ದಾಖಲೆಗಳ ಕುರಿತು ವಿಚಾರಣಾ ನ್ಯಾಯಾಲಯದಿಂದ ಸೂಕ್ತ ವರದಿ ಪಡೆಯುವಂತೆ ಆದೇಶಿಸಿತ್ತು. ಇದಲ್ಲದೆ ಜನವರಿಯಲ್ಲಿ, ದಾಖಲೆಗಳನ್ನು ಪುನರ್ನಿರ್ಮಿಸುವಂತೆ ಕೂಡ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅರ್ಜಿ ವಿಚಾರಣೆ ವೇಳೆ ಉತ್ತರ ಪ್ರದೇಶ ಸರಕಾರದ ಪರವಾಗಿ ಹಾಜರಾದ ವಕೀಲ ಶೌರ್ಯ ಸಹಾಯ್ ಅವರು, ನಾಪತ್ತೆಯಾಗಿದೆ ಎನ್ನಲಾದ ಕಡತಗಳನ್ನು ಪತ್ತೆಹಚ್ಚಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಪಂಕರ್ ದತ್ತ, ನ್ಯಾಯಾಲಯದ ಮಧ್ಯಪ್ರವೇಶದ ನಂತರ ಹಠಾತ್ ದಾಖಲೆಗಳು ಹೇಗೆ ಲಭ್ಯವಾದವು? ಇಷ್ಟೊಂದು ವರ್ಷಗಳ ಕಾಲ ಸಂತ್ರಸ್ತರು ಅವುಗಳನ್ನು ಪಡೆಯಲು ಮನವಿ ಮಾಡುತ್ತಿದ್ದರೂ ಅವು ಸಿಗದೆ, ಈಗ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ಅವು ಹೇಗೆ ದೊರಕಿದೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಕನ್ನಡಿಗನಿಗೆ ತಲೆಯಲ್ಲಿ ಡಿಚ್ಚಿ ಹೊಡೆದ ಜಮ್ಮು-ಕಾಶ್ಮೀರ ಕ್ರಿಕೆಟರ್: ಮಯಾಂಕ್ ಮಾಡಿದ್ದೇನು ಗೊತ್ತಾ?
Ranji Trophy: ಸಾಮಾನ್ಯವಾಗಿ ಯಾವುದೇ ಕ್ರೀಡೆಗಳಲ್ಲಿ ಫೈನಲ್ ಪಂದ್ಯಗಳ ಸಮಯದಲ್ಲಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿರುವುದನ್ನು ನಾವು ನೋಡಿಯೇ ಇರುತ್ತೇವೆ. ಇಲ್ಲಿ ಮುಖ್ಯವಾಗಿ ಆಟಗಾರರಿಗೆ ಬೇಕಾದದ್ದು ತಾಳ್ಮೆ. ಇದನ್ನು ಕಳೆದುಕೊಂಡು ಅನುಚಿತವಾಗಿ ವರ್ತಿಸಿದರೆ, ಏನೇ ಸಾಧನೆ ಮಾಡಿದರೂ ಎಲ್ಲಾ ಮಣ್ಣುಪಾಲಾಗಿಬಿಡುತ್ತದೆ. ಇದಕ್ಕೆ ಇದೀಗ ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ನಾಯಕನ
ಬೆಳಗಾವಿ | ಸಾರ್ವಜನಿಕ ಸ್ಥಳದಲ್ಲಿ ಖಡ್ಗದಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಇಬ್ಬರ ಬಂಧನ
ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಖಡ್ಗ ಬಳಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಇಬ್ಬರನ್ನು ಕಿತ್ತೂರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದ ಮೂಲ ನಿವಾಸಿಯಾಗಿದ್ದು, ಪ್ರಸಕ್ತ ಎಂ.ಕೆ. ಹುಬ್ಬಳ್ಳಿಯಲ್ಲಿ ವಾಸವಾಗಿರುವ ಝೈದ್ ನೂರ್ ಅಹ್ಮದ್ ಸನದಿ ಮತ್ತು ರೆಹಾನ್ ಮುಸ್ತಾಕ್ ಅಹ್ಮದ್ ಬಡೇಘರ್ ಬಂಧಿತ ಆರೋಪಿಗಳು. ಫೆಬ್ರವರಿ 24ರ ರಾತ್ರಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರ ಬದಿಯಲ್ಲಿರುವ ಎಚ್.ಪಿ. ಪೆಟ್ರೋಲ್ ಪಂಪ್ ಬಳಿ ಝೈದ್ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ತಬ್ರೇಝ್ ಹನೀಫ್ ಖಾದ್ರಿ ಎಂಬಾತ ಝೈದ್ ನನ್ನು ಬೈಕಿನಲ್ಲಿ ಸ್ಥಳಕ್ಕೆ ಕರೆತಂದಿದ್ದಾನೆ. ಈ ವೇಳೆ ಮೋಟರ್ ಸೈಕಲ್ ಮೇಲೆ ಸುಮಾರು ಐದು ಕೇಕ್ ಗಳನ್ನು ಇರಿಸಿ, ಖಡ್ಗ ಬಳಸಿ ಅವುಗಳನ್ನು ಝೈದ್ ಕತ್ತರಿಸಿದ್ದಾನೆ. ಇದರ ವಿಡಿಯೋವನ್ನು ರೆಹಾನ್ ಮುಸ್ತಾಕ್ ಅಹ್ಮದ್ ಬಡೇಘರ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ. ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ ಮತ್ತು ಬಳಕೆ ಮಾಡಿರುವುದು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/2026ರಂತೆ ಭಾರತೀಯ ಆಯುಧ ಕಾಯ್ದೆ 1959ರ ಕಲಂ 25 ಮತ್ತು 27ರ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಫೆ.25ರಂದು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದು ಮತ್ತು ಬಳಸುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಾಂಜಾ ಘಾಟು, ಮೂಲ ಪತ್ತೆಯೇ ವಿಫಲ
ಚಿಕ್ಕಮಗಳೂರು ನಗರ, ಪಟ್ಟಣದ ನಿರ್ಜನ ಪ್ರದೇಶ, ಉದ್ಯಾನ ಮತ್ತಿತರೆ ಖಾಲಿ ಜಾಗದಲ್ಲಿ ಇಂತಹ ಗಾಂಜಾ ಅಮಲುದಾರಿಗಳು ಕಂಡುಬರುತ್ತಿದ್ದು ಅವರ ಉಪಟಳದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಮಧ್ಯೆ ಶಾಲಾ, ಕಾಲೇಜು ಆವರಣದಲ್ಲೂ ಗಾಂಜಾ ಘಾಟು ರಾಚುತ್ತಿರುವುದು ಪೋಷಕರಲ್ಲಿ ಕಳವಳ ಉಂಟುಮಾಡಿದೆ.
ಇಸ್ರೇಲ್ ಪ್ರಧಾನಿಯನ್ನೇ ನಿಯಂತ್ರಿಸುವ 'ಶ್ಯಾಡೋ ಪವರ್': ವಿವಾದಗಳ ಸುಳಿಯಲ್ಲಿರುವ ಸಾರಾ ನೆತನ್ಯಾಹು ಅಸಲಿ ಕಥೆ
ವಿಶ್ವ ರಾಜಕಾರಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅತ್ಯಂತ ಶಕ್ತಿಶಾಲಿ ನಾಯಕ. ಆದರೆ, ಅವರ ಪ್ರತಿಯೊಂದು ಅಧಿಕೃತ ನಿರ್ಧಾರದ ಹಿಂದೆ ಅವರ ಪತ್ನಿ ಸಾರಾ ನೆತನ್ಯಾಹು ಅವರ ಪ್ರಭಾವ ದೊಡ್ಡದಿದೆ. ಇವರನ್ನು ನೆತನ್ಯಾಹು ಅವರ ಹಿಂದಿರುವ 'ಅದೃಶ್ಯ ಶಕ್ತಿ' ಅಥವಾ ತೆರೆಯ ಹಿಂದಿನ ನಾಯಕಿ ಎನ್ನಲಾಗುತ್ತದೆ. ಗಗನಸಖಿಯಾಗಿ ವೃತ್ತಿಜೀವನ ಆರಂಭಿಸಿದ ಸಾರಾ ನೆತನ್ಯಾಹು, ಇಂದು ಇಸ್ರೇಲ್ ದೇಶದ
Explained: ಇಸ್ರೇಲ್ ʻಹೆಕ್ಸಗಾನ್ʼ ಮೈತ್ರಿಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ; ಅತ್ತೂ ಕರೆದು ಸುಸ್ತಾದ ಪಾಕಿಸ್ತಾನ!
ಜಾಗತಿಕ ಮಟ್ಟದಲ್ಲಿ ಸಾಲ ಎತ್ತುವುದನ್ನು ರೂಢಿ ಮಾಡಿಕೊಂಡಿಉವ ಪಾಕಿಸ್ತಾನ, ಆಗ್ಗಾಗೆ ಭಾರತ ಕೊಡುವ ರಾಜತಾಂತ್ರಿಕ ಹೊಡೆತವನ್ನೂ ತಡೆದುಕೊಳ್ಳುವುದನ್ನು ರೂಢಿಸಿಕೊಂಡಿದೆ. ಈ ಹೊಡೆತಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವ ಪಾಕಿಸ್ತಾನ, ಮತ್ತೆ ಹಲ್ಲು ಕಿರಿಯುತ್ತಾ ಜಗತ್ತಿನ ಮುಂದೆ ಸಾಲಕ್ಕಾಗಿ ಮೊರೆ ಇಡುತ್ತದೆ. ಪಾಕಿಸ್ತಾನಕ್ಕೆ ಇಂತದ್ದೇ ರಾಜತಾಂತ್ರಿಕ ಹೊಡೆತವನ್ನು ಈ ಬಾರಿ ಇಸ್ರೇಲ್ ಕೂಡ ನೀಡಿದ್ದು, ತನ್ನ ಹೆಕ್ಸಗಾನ್ ಮೈತ್ರಿಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ ನೀಡಿ ಪಾಕಿಸ್ತಾನದ ನಿದ್ದೆಗೆಡೆಸಿದೆ. ಈ ಕುರಿತು ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
ಭಾರತದ ಪ್ರಜಾಪ್ರಭುತ್ವವು ಈಗ ಸಜಾಪ್ರಭುತ್ವವಾಗುವತ್ತ ದಾಪುಗಾಲನ್ನಿಟ್ಟಿದೆ. ಯಾವುದೇ ಪ್ರತಿಭಟನೆಯಿರಲಿ ಅದು ಬಟ್ಟೆ ತೊಟ್ಟಿರಲಿ, ಇಲ್ಲದಿರಲಿ, ಅದನ್ನೊಂದು ದೇಶವಿರೋಧಿ ಚಳವಳಿಯೆಂದು ಗುರುತಿಸಿ ದಂಡಿಸುವುದು ಈ ಆಡಳಿತದಲ್ಲಿ ಸುಲಲಿತವಾದ, ಸುಸೂತ್ರವಾದ ವಿಧಾನ. ಸಾಕಷ್ಟು ಜನರು ಇದಕ್ಕೆ ಭಯಪಟ್ಟಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇವೆಲ್ಲ ನಾವು ಬದುಕಿದ್ದರೆ ತಾನೇ ಎಂಬ ತರ್ಕ ಈಗ ಚಾಲ್ತಿಯಲ್ಲಿದೆ. ಅಧಿಕಾರದ ಅಭಾವದಿಂದ ಪಶ್ಚಿಮ ಬಂಗಾಳದ ಸೇವೆ ಮಾಡಲು ತನಗಾಗಲಿಲ್ಲವೆಂದು ಪ್ರಧಾನಿಯವರು ಅಲ್ಲಿನ ಪ್ರಜೆಗಳಿಗೆ ಬರೆದ ಬಹಿರಂಗ ಪತ್ರದ ಮೂಲಕ ಶೋಕಿಸಿದ್ದಾರೆ. ಅದನ್ನು ಹೊರತುಪಡಿಸಿದ ಈ ದೇಶಕ್ಕೆ ಕಳೆದ ಒಂದು ದಶಕಕ್ಕೂ ಮಿಕ್ಕಿ ತಾನು ಪ್ರಧಾನಿಯಾಗಿದ್ದೇನೆಂದು ಸೂಚಿಸಿದ್ದಾರೆ. ಈಗ ಅದರ ಅಧಿಕಾರದ ತುರ್ತು ಅವರಿಗಿದೆ. ಏಕೆಂದರೆ ಅಲ್ಲಿ ಸದ್ಯ ಚುನಾವಣೆಯಿದೆ. ಇದಕ್ಕೆ ಕೆಲವೇ ದಿನಗಳ ಮೊದಲು ಒಕ್ಕೂಟ ಸರಕಾರವು ರಾಷ್ಟ್ರಗೀತೆಗೆ ಮೊದಲು ಬಂಕಿಮರ ವಂದೇಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂದು ಫರ್ಮಾನ್ ಹೊರಡಿಸಿದೆ. ಇದಿನ್ನೂ ಯಾವುದೇ ಪ್ರತಿಭಟನೆಯನ್ನು ಕಂಡಿಲ್ಲ. ಏಕೆಂದರೆ ರಾಷ್ಟ್ರಗೀತೆ ಇನ್ನೂ ರದ್ದಾಗಿಲ್ಲ. ಇದು ಪಶ್ಚಿಮ ಬಂಗಾಳದ ಚುನಾವಣೆಯನ್ನು ಎಷ್ಟು ಪ್ರಭಾವಿಸುತ್ತದೆಂದು ಕಾದು ನೋಡಬೇಕು. ದಿಲ್ಲಿಗೆ ಮೊದಲು ಕೋಲ್ಕತಾ ಆಗಿನ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲಿ ಭಾರತದ ರಾಜಧಾನಿಯಾಗಿತ್ತು. ಆನಂತರ ದಿಲ್ಲಿಗೆ ವರ್ಗಾಯಿಸಲಾಯಿತು. ಪ್ರಾಯಃ ಇದು ನೆನಪಾಗಿರುತ್ತಿದ್ದರೆ ಸದ್ಯ ಪಶ್ಚಿಮ ಬಂಗಾಳದ ಚುನಾವಣೆ ಮುಗಿಯುವ ವರೆಗೆ ಒಕ್ಕೂಟ ಸರಕಾರವು ಭಾರತದ ರಾಜಧಾನಿಯನ್ನು ದಿಲ್ಲಿಯಿಂದ ಕೋಲ್ಕತಾಕ್ಕೆ ವರ್ಗಾಯಿಸುತ್ತಿತ್ತೇನೋ? ಇನ್ನೊಂದು ಕಡೆ ವಸಾಹತುಶಾಹಿ ಮನಸ್ಥಿತಿಯನ್ನು ಕಳೆದುಕೊಳ್ಳುವ ಸಲುವಾಗಿ ರಾಷ್ಟ್ರಪತಿಭವನದೊಳಗೆ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟೆನ್ಸ್ ಅವರ ಪ್ರತಿಮೆಯಿದ್ದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಮನಸ್ಥಿತಿಗೂ ಕಾರಣವಿದೆ. ಮುಂದಿನ ಕೆಲವೇ ಕಾಲದಲ್ಲಿ ತಮಿಳುನಾಡಿನ ಚುನಾವಣೆ ನಡೆಯಲಿದೆ. ತಮಿಳರೊಬ್ಬರನ್ನು ಉಪರಾಷ್ಟ್ರಪತಿಯಾಗಿ ಚುನಾಯಿಸಿದ್ದರಲ್ಲಿ ಆರಂಭವಾದ ಈ ರಾಜಕೀಯ ಇನ್ನೂ ಹಲವು ದಾಳಗಳನ್ನು ಉರುಳಿಸಲಿದೆ; ಮತ್ತು ಈ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲಿದೆ. ವಸಾಹತುಶಾಹಿ ಮನಸ್ಥಿತಿಯ ಪ್ರತಿನಿಧಿಯೆಂದು ಈಗ ಆಪಾದಿಸಲ್ಪಟ್ಟ ಈ ಎಡ್ವಿನ್ ಲುಟೆನ್ಸ್ ಗಾಂಧೀಜಿಯ ಸಮಕಾಲೀನ. ರಾಜಕೀಯ ರಹಿತವಾದ, ಬ್ರಿಟಿಷ್ ಶಿಲ್ಪಶಾಸ್ತ್ರಜ್ಞ. ಹೊಸದಿಲ್ಲಿಯನ್ನು ವಿನ್ಯಾಸಗೊಳಿಸಿದವನು. ಇಂಡಿಯಾ ಗೇಟ್ ಮತ್ತು ಈಗಿನ ರಾಷ್ಟಪತಿ ಭವನದ ನಿರ್ಮಾತೃ. ದಿಲ್ಲಿಯಲ್ಲಿ ಈತನ ಹೆಸರಿನ ‘ಎಡ್ವಿನ್ ಲುಟೆನ್ಸ್ ದಿಲ್ಲಿ’ ಎಂಬ ಒಂದು ಭಾಗವೇ ಇದೆ. ಈತನ ಬಗ್ಗೆ ಮೋದಿ ಸರಕಾರಕ್ಕೆ ಯಾವ ವೈರವೋ ಕಾಣೆ. ಪ್ರಾಯಃ ಆತನ ಮೂರ್ತಿಯನ್ನು ತೆಗೆದದ್ದು ಆತನ ವಿರುದ್ಧದ ಕ್ರಮವಲ್ಲ; ಬದಲಾಗಿ ತಮಿಳುನಾಡಿನ ಚುನಾವಣಾ ರಾಜಕೀಯದ ಒಂದು ತಂತ್ರ. ಹಾಗೆಂದು ಆತ ನಿರ್ಮಿಸಿದ ಭವನದಲ್ಲಿ ಉಳಿಯಲು ರಾಷ್ಟ್ರಪತಿಯವರಿಗೆ ಯಾವ ಲಜ್ಜೆಯೂ ಇಲ್ಲ. ಇಷ್ಟಕ್ಕೂ ಇದು ಅವರ ನಿರ್ಧಾರವಾಗಿರಲಿಕ್ಕಿಲ್ಲ. ಈ ದೇಶದ ಸಮಸ್ತ ಅಜ್ಞಾನಿಗಳಿಗೆ ಹೀಗೂ ಒಂದು ದೇಶಿ ಕೊಡುಗೆಯನ್ನು ನೀಡಬಹುದೆಂದು ಪ್ರಧಾನಿಯವರಿಗೆ ಹೇಳಿಕೊಟ್ಟ ಮಹಾನುಭಾವ ಯಾರಿರಬಹುದು? ಅಸ್ಸಾಮಿನಲ್ಲಿ ಅಲ್ಲಿನ ಕಾಂಗ್ರೆಸ್ ಅಧ್ಯಕ್ಷರು ತತ್ವಸಿದ್ಧಾಂತಗಳ ಬೆಳಕಿನಲ್ಲಿ ಪಕ್ಷ ತ್ಯಜಿಸಿ ಇದೀಗ ಭಾಜಪ ಸೇರಿದ್ದಾರೆ. ವಯಸ್ಸಾದಂತೆ ಮನುಷ್ಯನ ಬುದ್ಧಿಮತ್ತೆ ಈಗಿನ ‘ಎಐ’ಗಿಂತಲೂ ಚುರುಕಾಗಿ ವಿಕಾಸವಾಗುತ್ತಿದೆ. ಅಲ್ಲೂ ಸದ್ಯ ಚುನಾವಣೆಯಿದೆ. ಈಚೆಗೆ ಗೋವಾದಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ತನಗೆ ಗೋವಾವೆಂಬುದು ಮನೆಯಂತೆ ಎಂಬರ್ಥದಲ್ಲಿ ಆತ್ಮೀಯವಾಗಿ ಮಾತನಾಡಿದರು. ಅಲ್ಲೂ ಚುನಾವಣೆಯಿದೆ. ಕೇರಳ ಸರಕಾರವು ಜೂನ್ 24, 2024ರಂದು ‘ಕೇರಳ’ ಎಂಬ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ತೀರ್ಮಾನಿಸಿ ಒಕ್ಕೂಟ ಸರಕಾರಕ್ಕೆ ಅದನ್ನು ಅನುಮೋದಿಸಲು ಕಳುಹಿಸಿತು. ಹೀಗೆ ಅನುಮೋದನೆಯಾಗದೆ ಹೆಸರನ್ನು ಬದಲಾಯಿಸುವಂತಿಲ್ಲ. ಆದರೆ ಒಕ್ಕೂಟ ಸರಕಾರವು ಅದನ್ನು ತಲೆದಿಂಬಿನಡಿಗಿಟ್ಟು ನಿದ್ರಿಸಿತು. ಈಗ ಕೇರಳ ರಾಜ್ಯದ ಚುನಾವಣೆ ಹತ್ತಿರವಾಯಿತು. ಚುನಾವಣೆಗೆ ‘ಕೇರಳ ಸ್ಟೋರಿಸ್-2’ ಸಾಕಾಗುವುದಿಲ್ಲವಾದ್ದರಿಂದ ರಾಜ್ಯದ ಹೆಸರು ಬದಲಾವಣೆಯ ಬೇಡಿಕೆಯನ್ನು ಅನುಮೋದಿಸಿತು. ಇದನ್ನು ಪ್ರಧಾನಿ ಕೇರಳದ ಚುನಾವಣಾ ಪ್ರಚಾರದಲ್ಲಿ ಹೇಳಿ ಚಪ್ಪಾಳೆಗಿಟ್ಟಿಸುವವರಿದ್ದಾರೆ. ಪ್ರಧಾನಿ ಇನ್ನೆಲ್ಲೆಲ್ಲ ವಿಕಾಸಗೊಂಡಿದ್ದಾರೋ ನೆನಪಾಗುವುದಿಲ್ಲ. ಆದರೆ ಹೀಗೆ ರಾಜ್ಯಗಳ ಕುರುಕ್ಷೇತ್ರಕ್ಕೆ ಮೊದಲು ಇನ್ನೆಷ್ಟು ವಿಕಾಸಗಳು ನಡೆಯಲಿವೆಯೋ ಗೊತ್ತಿಲ್ಲ. ನೂರಾನಲ್ವತ್ತು ಕೋಟಿ ಶ್ರೇಷ್ಠರಿರುವ ಈ ದೇಶದಲ್ಲಿ ಇವೆಲ್ಲ ಸಹಜ. ಇನ್ನೊಂದು ವಿಚಾರವನ್ನು ಗಮನಿಸಿದ್ದೀರಾ? ಯಾರದ್ದೇ ಮದುವೆಯಿರಲಿ; ಮದುಮಗನನ್ನು ಪಕ್ಕಕ್ಕೆ ಸರಿಸಿ ತಾನೇ ಅಲ್ಲಿ ಫೋಟೊ ತೆಗೆಸಿಕೊಳ್ಳುವ ವೈಖರಿ ನಮ್ಮ ಪ್ರಧಾನಿಯದ್ದು. ದೇಶೀಯ ಸಮಾರಂಭಗಳು ಮಾತ್ರವಲ್ಲ, ಜಿ-7 ಇರಲಿ, ಜಿ-20 ಇರಲಿ, ನಾಳೆ ಜಿ-ಸಾವಿರವೇ ಬರಲಿ ಪತ್ರಿಕೆ ಮತ್ತಿತರ ಮಾಧ್ಯಮಗಳಲ್ಲಿ ಪ್ರದರ್ಶಿತಗೊಳ್ಳುವ ಚಿತ್ರಗಳಲ್ಲಿ ನಮ್ಮ ಪ್ರಧಾನಿ ಕೇಂದ್ರದಲ್ಲಿರುತ್ತಾರೆ. ಈ ಕೇಂದ್ರವೃತ್ತಾಂತವು ಅಭಿಮಾನಿಗಳ ಮನಸೆಳೆಯುವಂಥಾದ್ದು. ಇದು ಫೋಟೊಷಾಪಿಂಗ್ ಅಲ್ಲವೆಂದು ನನ್ನ ನಂಬಿಕೆ. ‘ಎಐ’ಯ ಕಾಲದಲ್ಲಿ ಯಾವುದೂ ಸಾಧ್ಯ. ಸಚ್ಚಾ-ಝೂಟಾ, ಅಸಲಿ-ನಕಲಿಗಳ ದ್ವಂದ್ವದ ತಲೆಬಿಸಿಯಿಲ್ಲ. ಈಚೆಗಿನ ಅಮೆರಿಕ-ರಶ್ಯ ಗೊಂದಲದ ನಡುವೆ ಭಾರತ ಎಲ್ಲಿರುತ್ತದೆಯೆಂದೇ ಗೊತ್ತಾಗುವುದಿಲ್ಲ. ನಾವು ಸುಂಕ ಪಾವತಿಸಿ, ನಮ್ಮಲ್ಲಿಗೆ ಬರುವ ಅಮೆರಿಕದ ಸರಕುಗಳಿಗೆ ಸುಂಕದಿಂದ ಪೂರ್ಣ ವಿನಾಯಿತಿ ನೀಡಿದರೂ ನಾವು ಈ ವ್ಯಾಪಾರವನ್ನು ಭಾರತ ಶಕ್ತಿಯುತವಾಗಿ ಪಡೆದಿದೆಯೆಂದು ನಮ್ಮ ಪ್ರಧಾನಿ ಹೇಳುತ್ತಿದ್ದಾರೆ. ರಾಜಪ್ರಭುತ್ವವನ್ನು ಕಳಚಿಕೊಂಡು ಅಥವಾ ಪಕ್ಕಕ್ಕೆ ಸರಿಸಿ ಪ್ರಜಾಪ್ರಭುತ್ವಕ್ಕೆ ಬಂದೆವೆಂದು ತಿಳಿದವರು ಮೂರ್ಖರು ಎಂದು ನಮ್ಮ ಆಗುಹೋಗುಗಳು ತಿಳಿಸಿವೆ. ಸ್ವಾತಂತ್ರ್ಯ ಬಂದಾಗ ಭಾರತದ ಪ್ರಜೆಗಳಲ್ಲಿ ಬಹುಪಾಲು ಜನರು ಕುಣಿದದ್ದೇ ಕುಣಿದದ್ದು. ಕೆಲವೇ ಮಂದಿ, ಗಾಂಧಿಯೂ ಸೇರಿ ತಾವೇ ತಂದುಕೊಂಡ ಈ ಅನಿವಾರ್ಯ ಸಂಭ್ರಮವನ್ನು ತಾಳಿಕೊಂಡು ಇದು ರಾಜಕೀಯ ಸ್ವಾತಂತ್ರ್ಯ ಮಾತ್ರವೆಂದು ಮತ್ತು ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಸ್ಥಾನಮಾನ ಸಿಗದ ಹೊರತು ಈ ಸ್ವಾತಂತ್ರ್ಯವು ಕೆಲವೇ ಜನರನ್ನು ಸುಖದ ಸುಪ್ಪತ್ತಿಗೆಯಲ್ಲೂ ಇನ್ನು ಕೆಲವರನ್ನು ಹೊಟ್ಟೆ ತುಂಬಿಸುವಲ್ಲೂ, ಬಹಳಷ್ಟು ಮಂದಿಯನ್ನು ಅಧಿಕಾರದ ಇಂದ್ರಪದವಿಯಲ್ಲೂ ಸಾರ್ಥಕಗೊಳಿಸುವ ಮಿತಿಯನ್ನಷ್ಟೇ ಸಾಧಿಸುತ್ತದೆಯೆಂದು ಅರ್ಥಮಾಡಿಕೊಂಡರು. ಆದರೂ ಇಂದಲ್ಲ ನಾಳೆ ಈ ದೇಶ ಸುಭಿಕ್ಷವಾಗುತ್ತದೆಯೆಂದು ಮತ್ತು ಗ್ರಾಮರಾಜ್ಯವೊಂದು ಸ್ಥಾಪನೆಯಾಗುತ್ತದೆಯೆಂದು ಆಶಿಸಿದರು ಅಥವಾ ಭ್ರಮಿಸಿದರು. ಸ್ವಾತಂತ್ರ್ಯ ಸಿಕ್ಕಿ ಎಂಟು ದಶಕಗಳು ಸಮೀಪಿಸುತ್ತಿವೆ. ಒಕ್ಕೂಟ ಸರಕಾರವು ಈಗಲೇ ಶತಮಾನವನ್ನು ಕಾಣುವತ್ತ ಪ್ರಜೆಗಳಿಗೆ ಜಾಹೀರಾತುಗಳ ಮೂಲಕ ಹಾದಿ ತೋರಿಸುತ್ತಿದೆ. ನಾವೇನು ಸಾಧಿಸಿದ್ದೇವೆಂದು ಇತರರು ಹೇಳುವುದನ್ನು ಕಾಯುವುದಕ್ಕೆ ವ್ಯವಧಾನವಿಲ್ಲದೆ ನಮ್ಮ ನೀಳ ಬಾಹುಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಚಾಚಿ ಝಳಪಿಸಿ ನಮ್ಮ ಬೆನ್ನುಗಳೇ ಬಾತುಕೊಳ್ಳಲು ಶುರುಮಾಡಿವೆ. ನಾವೇ ಮೊದಲು, ನಾವೇ ಅಗ್ರಗಣ್ಯರು, ನಾವೇ ವಿಶ್ವಗುರುವೆಂದು ಹೇಳುವ ಮೂಲಕ ನಮ್ಮ ದೇಶದ ಅಸಂಖ್ಯಾತ ಮುಗ್ಧರನ್ನು ಕನಸಿನ ಲೋಕಕ್ಕೊಯ್ದು ಅಲ್ಲೇ ಸ್ವಲ್ಪ ಕಾಲವಿರಲು ಹೇಳಿದ್ದೇವೆ; ಇದಕ್ಕಾಗಿ ದೇಶದ ನಿಧಿಯ ಬಹುಪಾಲನ್ನು ಜಾಹೀರಾತಿಗೆ ಬಳಸಿದ್ದೇವೆ. ಜೊತೆಗೇ ವಿಶ್ವದೆಲ್ಲೆಡೆ ನಮ್ಮ ನಿಲುವೇನೆಂದು ಹೇಳಲು ನಾಚಿ ಖೋಖೋ ಆಟದಲ್ಲಿ ಮುಟ್ಟಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಓಡುವವರಂತೆ ಓಡುತ್ತ ನಮ್ಮ ಗಡಿಯಿಂದಾಚೆಗಿರುವ ಇತರರಿಗೆ ಮುಸುಕಿನೊಳಗೇ ನಗುವ ಸಂದರ್ಭವನ್ನು ಮಾಡಿಕೊಟ್ಟಿದ್ದೇವೆ. ಗಡಿಯಿಂದೊಳಗೆ ನಮ್ಮೊಂದಿಗೆ, ಗಡಿಯಿಂದಾಚೆಗೆ ನಮ್ಮ ಕಡೆಗೆ ಈ ನಗು ವ್ಯಾಪಿಸಿದೆ. ಭಾರತದ ಪ್ರಜಾಪ್ರಭುತ್ವವು ಈಗ ಸಜಾಪ್ರಭುತ್ವವಾಗುವತ್ತ ದಾಪುಗಾಲನ್ನಿಟ್ಟಿದೆ. ಯಾವುದೇ ಪ್ರತಿಭಟನೆಯಿರಲಿ ಅದು ಬಟ್ಟೆ ತೊಟ್ಟಿರಲಿ, ಇಲ್ಲದಿರಲಿ, ಅದನ್ನೊಂದು ದೇಶವಿರೋಧಿ ಚಳವಳಿಯೆಂದು ಗುರುತಿಸಿ ದಂಡಿಸುವುದು ಈ ಆಡಳಿತದಲ್ಲಿ ಸುಲಲಿತವಾದ, ಸುಸೂತ್ರವಾದ ವಿಧಾನ. ಸಾಕಷ್ಟು ಜನರು ಇದಕ್ಕೆ ಭಯಪಟ್ಟಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇವೆಲ್ಲ ನಾವು ಬದುಕಿದ್ದರೆ ತಾನೇ ಎಂಬ ತರ್ಕ ಈಗ ಚಾಲ್ತಿಯಲ್ಲಿದೆ. ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರು ಹಲ್ಲೆ ಮಾಡುತ್ತಿದ್ದಾರೆ ಎಂಬ ಕೂಗಿನ ನಡುವೆಯೇ ಬಹಳಷ್ಟು ಅಲ್ಪಸಂಖ್ಯಾತರೂ ಜಾಣತನದಿಂದ ರಾಜಕೀಯ ಬಹುಮತೀಯರಾಗಲು ಬಯಸುತ್ತಿದ್ದಾರೆ. ವ್ಯಾವಹಾರಿಕವಾಗಿ ಅದು ಸನ್ಮತಿಯೆಂದು ಅವರು ತಿಳಿದಿದ್ದಾರೆ. ಪ್ರತಿಭಟಿಸಿ ಹುತಾತ್ಮರಾಗಲು ಇದೇನೂ ಸ್ವಾತಂತ್ರ್ಯ ಹೋರಾಟವಲ್ಲವಲ್ಲ! ಇದರೆಲ್ಲದರ ಹಿಂದೆ ಒಂದು ಸಂಘಟಿತ ಜಾಣತನವಿದೆ. ಹಣಕಾಸಿನಿಂದ ದೇಶದ ರಕ್ಷಣೆಯ ವರೆಗೆ ಹೇಗೆ ಎಸೆದರೂ ನಮಗೆ ಬೇಕಾದಂತೆ ಬೀಳುವ ನಾಣ್ಯ ಈ ಸಂಘಟನೆಯಲ್ಲಿದೆ. ಸದ್ಯ ಗೆದ್ದೆತ್ತಿನ ಬಾಲದತ್ತ ಬಹಳಷ್ಟು ಸಾಹಿತಿ-ಕಲಾವಿದರು, ಚಿಂತಕರು, ವಿದ್ವಾಂಸರು ಕ್ಯೂನಲ್ಲಿದ್ದಾರೆ. ಹೀಗೆ ಕ್ಯೂ ಸೇರದವರೂ ನೀರೋನಂತೆ ತಮ್ಮ ಪಾಲಿಗೆ ತಾವು ಪಿಟೀಲು ಬಾರಿಸುತ್ತ ನಡೆಯುತ್ತಿದ್ದಾರೆ. ಆಳುವ ರಾಜಕಾರಣಿಗಳು ಏನು ಹೇಳಿಯೂ ದಕ್ಕಿಸಿಕೊಂಡಾರು. ಏಕೆಂದರೆ ಅವರಿಗೆ ಆಡಳಿತದ, ಮಾಧ್ಯಮಗಳ, ಮುಖ್ಯವಾಗಿ ಪೊಲೀಸರ, ಬೆಂಬಲವಿದೆ. ಪ್ರತಿಪಕ್ಷಗಳಿಗೆ ಈ ಸವಲತ್ತಿಲ್ಲ. ಶಿಕ್ಷೆ, ರಕ್ಷೆ ಎರಡೂ ಆಡಳಿತದ ಕೈಯಲ್ಲಿದೆ. ಆಡಳಿತದ ವಿರುದ್ಧ ಕಾಂಗ್ರೆಸ್ ಎಂದಿನ ದಡ್ಡತನದಿಂದ ಪ್ರತಿಭಟಿಸುತ್ತಿದೆ. ಅಲ್ಲಿ ಯಾರು ಹೇಳುತ್ತಾರೋ ಯಾರು ಕೇಳುತ್ತಾರೋ ಒಂದೂ ಗೊತ್ತಿಲ್ಲ. ಮೊನ್ನೆ ‘ಎಐ’ ಸಮ್ಮೇಳನದ ಎದುರು ಒಂದು ತಂಡ ಬಟ್ಟೆ ಕಳಚಿ ಪ್ರತಿಭಟಿಸಿತು. ಅವರೆಲ್ಲ ಈಗ ಕಂಬಿ ಎಣಿಸುತ್ತಿದ್ದಾರೆ. ‘ಎಐ’ ಅಂದರೆ ‘ಕೃತಕ ಬುದ್ಧಿಮತ್ತೆ’ಯ ಎದುರು ಸಹಜ ದಡ್ಡತನವು ಕೆಲಸಮಾಡದೆಂದು ಅವರಿಗೆ ಗೊತ್ತಿಲ್ಲ. ನಾಲಗೆಯಂತೂ ಹಿಡಿತದಲ್ಲೇ ಇಲ್ಲ! ಕಾಂಗ್ರೆಸ್ ದೇಶಕ್ಕಾಗಿ ಪ್ರತಿಭಟಿಸುತ್ತದೆಯೆಂದು ತಿಳಿಯುವುದು ತಪ್ಪಾದೀತು. ಅವರೂ ಅಧಿಕಾರಕ್ಕಾಗಿಯೇ ಹಾತೊರೆಯುತ್ತಿದ್ದಾರೆ. ಸಂವಿಧಾನ ರಕ್ಷಣೆಯೂ ಒಂದು ನೆಪವೇ ಹೊರತು ತಾತ್ವಿಕ ಬದ್ಧತೆಯಲ್ಲ. ಇರುವ ಒಂದಷ್ಟು ಶಕ್ತಿಯನ್ನೂ ಬುದ್ಧಿವಂತಿಕೆಯಿಂದ ಬಳಸಲು ಕಾಂಗ್ರೆಸ್ ಸಿದ್ಧವಿಲ್ಲ. ಏಕೆಂದರೆ ಅದಕ್ಕೆ ಸೈದ್ಧಾಂತಿಕ, ರಾಜಕೀಯ ಬದ್ಧತೆಯಿಲ್ಲ. ಇದರಿಂದಾಗಿ ಅದು ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಮುಳುಗುವ ಹಡಗಿನಂತಿದೆ. ಇತರ ರಾಜ್ಯಗಳಲ್ಲಿ ಹೇಳುವಂತಹ ಸಂದರ್ಭಗಳಿಲ್ಲ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಯಾವ ಸದಾಶಯಗಳನ್ನೂ ಹೊತ್ತು ಸಾಗುವ ಮನಸ್ಸು ಕಾಂಗ್ರೆಸ್ ಸರಕಾರಕ್ಕೆ ಇದ್ದಂತಿಲ್ಲ. ಚುನಾವಣೋತ್ತರ ಮೊದಲ ದಿನಗಳು ಗ್ಯಾರಂಟಿಯ ಪ್ರವಾಹದ ಮೂಲಕ ಸಾಗಿದರೂ ಈಗ ಅದರ ಏರುತಗ್ಗುಗಳು ಸ್ಪಷ್ಟವಾಗುತ್ತಿವೆ. ಭ್ರಷ್ಟತನ ಎಂದಿಗಿಂತ ಭಯಾನಕವಾಗಿದೆ. ಸರಕಾರದ ಸಾಮಾನ್ಯ ಅಧಿಕಾರಿಗಳೂ ಬಹಿರಂಗವಾಗಿ ಕೈನೀಡುವ ಭಿಕ್ಷುಕರಂತಿದ್ದಾರೆ. ಯಾವ ಸಂಕಲ್ಪಗಳನ್ನೂ ಐದು ವರ್ಷಗಳ ಕಾಲ ಈಡೇರಿಸುವ ಪ್ರಯತ್ನದಲ್ಲಿ ಅದು ಸೋತಿದೆ. ಕರ್ನಾಟಕದ ಪ್ರತಿಪಕ್ಷಗಳು ಸರಿಯಿಲ್ಲವೆಂಬ ಒಂದೇ ಕಾರಣದಿಂದ ಇಲ್ಲಿನ ಸರಕಾರ ಉಳಿದಿದೆ. ಚುನಾವಣೆಯಾದ ತಕ್ಷಣ ನಾಯಕರು ಯಾರೆಂದು ನಿರ್ಣಯಿಸಬೇಕಾದದ್ದು ಪಕ್ಷದ ಹೊಣೆ. ಕ್ಷೀಣವಾದ ‘ಹೈಕಮಾಂಡ್’ ಹೆಸರಿಗೆ ಮಾತ್ರವಿದ್ದರೂ ಅದನ್ನು ನೆಪವಾಗಿಸಿ ಇಲ್ಲಿ ನಡೆಯುವ ಅಧಿಕಾರದ ಗೊಂದಲ ಪಕ್ಷದ ಕೊನೆಗೆ ಕಾರಣವಾಗದಿರುವುದು ಅದೇ ಅದೃಷ್ಟ. ಡಿವಿಜಿಯವರು ಈಗ ಇದ್ದಿದ್ದರೆ ಮನ್ನಣೆಯ ದಾಹಕ್ಕಿಂತಲೂ ಅಧಿಕಾರದಾಹವೇ ಹೆಚ್ಚೆಂದು ಹೇಳುತ್ತಿದ್ದರು! ಇಂತಹ ಪ್ರಭುತ್ವಗಳಡಿ ಪ್ರಜೆಗಳು ನರಳುವುದು, ನರಳಬೇಕಾದ್ದು ಸಹಜ. ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು. ಏಕೆಂದರೆ ನಮ್ಮಲ್ಲಿ ಬಹಳಷ್ಟು ವಿದ್ಯಾವಂತರೂ ಬುದ್ಧಿವಂತರೂ ಸರಕಾರದ ಕೃಪಾಶ್ರಯಕ್ಕೆ ಮನಸೋತಿದ್ದಾರೆ. ರಾಜಕೀಯಕ್ಕೆ ಹೋಗದೆ ರಾಜಕೀಯದ ಕೃಪೆಯಲ್ಲಿ ಒಂದಷ್ಟು ದಿನಕಳೆಯುವವರಂತೆ ನಮ್ಮ ನಿವೃತ್ತ ವಿದ್ವಾಂಸರಿದ್ದಾರೆ. ಪಿಂಚಣಿಯೊಂದಿಗೆ ಆಡಳಿತದ ಇಕ್ಕಡೆಯಲ್ಲಿ ಶೋಭಿಸುವುದೇ ಅವರ ಬದುಕಾಗಿದೆ. ಆಡಳಿತವನ್ನು ಎಚ್ಚರಿಸುವುದರ ಬದಲು ರಾಜನ ಛತ್ರಚಾಮರಗಳ ಗಾಳಿ ತಮಗೂ ಬೀಸಿದವರಂತೆ ತಲೆಯಾಡಿಸುತ್ತ ನಿದ್ರೆಹೋಗುವ ಪಾಳೇಗಾರರೇ ತುಂಬಿದ್ದಾರೆ. ದೇವರ ಭರ್ಜರಿ ಮೆರವಣಿಗೆಯಲ್ಲಿ ಬಡಕುರಿಯೊಂದನ್ನು ಬಲಿಕೊಡಲು ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅದು ಭಗವಂತನಲ್ಲಿ ‘ನನಗೇಕೆ ಈ ಸ್ಥಿತಿ?’ ಎಂದು ಕೇಳಿದಾಗ ಆ ಬಡ ಭಗವಂತ ನಗುತ್ತ ‘ನಿನ್ನನ್ನು ನೋಡುವಾಗ ನನಗೂ ನಿನ್ನನ್ನು ಬಲಿಕೊಡಬೇಕೆಂದು ಅನ್ನಿಸುತ್ತದೆ’ ಎಂದನಂತೆ. ಹಾಗೆ ಹೇಳಿದವನು ಮುಂದುವರಿಸಿ, ‘ಈ ಮೆರವಣಿಗೆ ಮುಗಿದ ಮೇಲೆ ನನ್ನನ್ನೂ ಕತ್ತಲ ಕೋಣೆಯಲ್ಲಿ ಬಂಧಿಸಿಡುತ್ತಾರೆ ಅವರಿಗೆ ಬೇಕಾದಾಗ ಹೊರತರುತ್ತಾರೆ’ ಎಂದು ಹತಾಶನಾಗಿ ಮಾತು ಮುಗಿಸಿದನಂತೆ. ಪ್ರಜೆಗಳ ಪಾಡೂ ಇಷ್ಟೇ. ಚುನಾವಣೆಯ ಕಾಲಕ್ಕೆ ಜನರೇ ದೇವರು; ಆನಂತರ ಕಾಲಕಸ! ಇಂತಹ ಸ್ಥಿತಿಯಲ್ಲಿ ಯಾರಾದರೂ ತಲೆಯೆತ್ತಿದರೆ ಪ್ರಭುತ್ವವೆಂಬ ಹಾವಿನ ಹೆಡೆ. ಶೇಷಶಯನನೆಂಬ ಬಿರುದಿನ ದೇವರೂ ಅದರ ಅಡಿಯಲ್ಲೇ ಇರುವಾಗ ಸಾಮಾನ್ಯರಿಗೆ ಕಷ್ಟದಿಂದ ಪಾರಾಗುವ ಹಾದಿಯೆಲ್ಲಿ?
ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದಕ್ಕೆ ಕ್ಷಣಗಣನೆ, ಚರ್ಚೆ ಕೈಕೊಟ್ಟರೆ ಯುದ್ಧ ಭೀತಿ | USA And Iran
ಅಮೆರಿಕ ಕಣ್ಣು ಇದೀಗ ಸಂಪೂರ್ಣ ಇರಾನ್ ಮೇಲೆ ನೆಟ್ಟಿದ್ದು, ತಮ್ಮ ಜೊತೆಗೆ ಪರಮಾಣು ಶಾಂತಿ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳದೇ ಇದ್ದರೆ ಯುದ್ಧ ಗ್ಯಾರಂಟಿ ಅಂತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಇರಾನ್ ನಾಯಕರಿಗೆ ಈ ವಿಚಾರದಲ್ಲಿ ಸಾಲು ಸಾಲು ಎಚ್ಚರಿಕೆ ನೀಡಿದ್ದು, ಯಾವ ಕ್ಷಣದಲ್ಲಿ ಯುದ್ಧ ಶುರುವಾಗುತ್ತೋ? ಎಂಬ ಚರ್ಚೆ ನಡೆದಿದೆ. ಇದೇ ಸಮಯಕ್ಕೆ ಸ್ವಿಝರ್ಲ್ಯಾಂಡ್ನ
ನಗರದಲ್ಲೇ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ತಾಳಿಕೋಟಿ ಬಂದ್
ತಾಳಿಕೋಟಿ: ನಗರ ಹೊರ ಪ್ರದೇಶದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿರುವುದನ್ನು ವಿರೋಧಿಸಿ ತಾಲೂಕು ಹೋರಾಟ ಸಮಿತಿ ನೀಡಿದ್ದ ಕರೆಯಂತೆ ಬುಧವಾರ ತಾಳಿಕೋಟಿ ಬಂದ್ ಆಗಿತ್ತು. ಬಂದ್ ಗೆ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬೀದಿಬದಿ ವ್ಯಾಪಾರಸ್ಥರು ಹಾಗೂ ಎಲ್ಲಾ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದ್ದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು. ಈ ವೇಳೆ ಪ್ರತಿಭಟನೆ ನಡೆಯಿತು. ತಾಲೂಕು ಆಡಳಿತವು ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿದ್ದು, ಈ ಸ್ಥಳ ತಾಳಿಕೋಟಿ ಪಟ್ಟಣದಿಂದ ಸುಮಾರು 4ರಿಂದ 5 ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತಾಲೂಕಿನ ಸಾರ್ವಜನಿಕರು, ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಅಂಗವಿಕಲರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ದೂರಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಜಾಸೌಧ ನಗರದಲ್ಲಿ ಆಗಬೇಕು ಎಂದು ಹೇಳಿದರು. ಕಾಶೀನಾಥ್ ಮುರಾಳ ಮಾತನಾಡಿ, ಈಗ ಗುರುತಿಸಿರುವ ಸ್ಥಳವು ಸಾರ್ವಜನಿಕರಿಗೆ ಅನುಕೂಲಕರವಲ್ಲ. ಆದ್ದರಿಂದ ಪ್ರಜಾಸೌಧ ಕಟ್ಟಡವನ್ನು ತಾಳಿಕೋಟಿ ಪಟ್ಟಣದ ವ್ಯಾಪ್ತಿಯಲ್ಲೇ ನಿರ್ಮಾಣವಾಗಲಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ಹೋರಾಟ ಸಮಿತಿಯ ಅಧ್ಯಕ್ಷ ದಶರಥ ಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಎಂ. ಕೆ. ಜೋರಗಸ್ತಿ, ಮಾಸುಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ಪ್ರಕಾಶ್ ಹಜೇರಿ, ರವೀಂದ್ರ ಕಟ್ಟಿಮನಿ, ದತ್ತು ಹೆಬಸೂರ, ರಾಜು ಹಂಚಾಟೆ, ಗಂಗಾಧರ್ ಕಸ್ತೂರಿ, ಮಂಜು ಶೆಟ್ಟಿ, ಸುರೇಶ ಹಜೇರಿ, ಸದ್ದಾಂ ಬೀಳಗಿ, ಲತೀಫ್ ಬೀಳಗಿ, ಅಮಿತ್ ಮನಗೂಳಿ, ನಾಗೇಶ ಕಟ್ಟಿಮನಿ, ತಿಪ್ಪಣ್ಣ ಸಜ್ಜನ, ಮಾನಸಿಂಗ ಕೋಕಟನೂರ, ಸಿರಸಕುಮಾರ ಹಜೇರಿ, ನಿತಿನ ವಿಜಾಪುರ್ ಮುಖಂಡರು ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಅವರು ಜ.28ರಂದು ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಆದರೆ, ಈ ಕುರಿತು ಶಾಸಕ ರೋಹಿತ್ ಪವಾರ್ ಇದು ಅಪಘಾತದಿಂದ ಆದ ಸಾವಲ್ಲ ಬದಲಾಗಿ ಪಿತೂರಿಯಿಂದ ಆಗಿರುವ ಸಾವು ಎಂದು ಶಂಕೆ ವ್ಯಕ್ತ ಪಡಿಸಿದ್ದು, ತನಿಖೆಯಲ್ಲಿ ಖಾಸಗಿ ಜೆಟ್ ಕಂಪನಿಯ ವಿರುದ್ದ DCGA ನೀಡದ ವರದಿಯಲ್ಲಿ ಲೋಪಗಳಿವೆ ಎಂದು ಉಲ್ಲೇಖಿಸಿ ನಾಗರಿಕ ವಿಮಾನಯಾನ ಸಂಸ್ಥೆ ಹಾಗೂ ಅಜಿತ್ ಪವಾರ್ ಸಾವಿಗೆ ಕಾರಣವಾದ ವಿಮಾನದ VSR ಸಂಸ್ಥೆಯ ವಿರುದ್ದ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಳ್ಳದಿದ್ದರೆ, ಕಾನೂನು ಹಸ್ತಕ್ಷೇಪಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜೊತೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಚಾಬಹಾರ್ ಬಂದರು ಯೋಜನೆಗೆ ನಿಧಿ ಮೀಸಲಿಡದಿರುವ ಭಾರತ ಸರಕಾರದ ನಿರ್ಧಾರ ನಿರಾಶೆ ಉಂಟು ಮಾಡಿದೆ: ಇರಾನ್
ಟೆಹ್ರಾನ್: ಇರಾನ್ನ ಚಾಬಹಾರ್ ಬಂದರು ಯೋಜನೆಗೆ ಈ ವರ್ಷ ಯಾವುದೇ ನಿಧಿಯನ್ನು ಮೀಸಲಿಡದಿರುವ ಭಾರತ ಸರಕಾರದ ನಿರ್ಧಾರವು ನಿರಾಶೆ ಉಂಟು ಮಾಡಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ಚಾಬಹಾರ್ ಬಂದರನ್ನು ಸುವರ್ಣ ದ್ವಾರವೆಂದು ಬಣ್ಣಿಸಿದ ಅಬ್ಬಾಸ್ ಅರಾಗ್ಚಿ, ಈ ಯೋಜನೆ ಭಾರತಕ್ಕೆ ಮಧ್ಯ ಏಷ್ಯಾ ಹಾಗೂ ಯುರೋಪ್ ದೇಶಗಳೊಂದಿಗೆ ಸಂಪರ್ಕವನ್ನು ವಿಸ್ತರಿಸುವ ಮಹತ್ವದ ಅವಕಾಶವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. India Todayಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಾಬಹಾರ್ ಬಂದರು ಯೋಜನೆಗೆ ಬಜೆಟ್ನಲ್ಲಿ ಅನುದಾನ ಕಡಿತಗೊಳಿಸಿರುವುದು ನಿರಾಶೆ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ಬಾಸ್ ಅರಾಗ್ಚಿ, ಹೌದು, ಇದು ಇರಾನ್ ಮತ್ತು ಭಾರತ ಎರಡೂ ದೇಶಕ್ಕೂ ನಿರಾಶೆಯ ವಿಷಯವೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಅದು ಅತ್ಯುತ್ತಮ ಸಾರಿಗೆ ಮಾರ್ಗ ಎಂದು ನಾನು ಭಾವಿಸುತ್ತೇನೆ. ಒಂದು ದಿನ ನಾವು ಈ ಬಂದರಿನ ಸಂಪೂರ್ಣ ಅಭಿವೃದ್ಧಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿ ಎಂಬುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ, ಚಾಬಹಾರ್ ಹಿಂದೂ ಮಹಾಸಾಗರ ಪ್ರದೇಶವನ್ನು ಮಧ್ಯ ಏಷ್ಯಾ, ಯುರೋಪ್ ದೇಶಗಳೊಂದಿಗೆ ಸಂಪರ್ಕಿಸುವ ‘ಸುವರ್ಣ ದ್ವಾರ’ವಾಗಿದೆ. ಈ ಬಂದರು ಸಂಪೂರ್ಣವಾಗಿ ಅಭಿವೃದ್ಧಿಗೊಂಡರೆ ಇರಾನ್ ಮೂಲಕ ಭಾರತವನ್ನು ಮಧ್ಯ ಏಷ್ಯಾ, ಯುರೋಪ್ ಗೆ ಸಂಪರ್ಕಿಸುವಲ್ಲಿ ಇದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಉದ್ವಿಗ್ನತೆಯ ಮಧ್ಯೆ ಈ ವರ್ಷದ ಕೇಂದ್ರ ಬಜೆಟ್ನಲ್ಲಿ ಈ ಯೋಜನೆಗೆ ಯಾವುದೇ ಹಣವನ್ನು ಹಂಚಿಕೆ ಮಾಡಿರಲಿಲ್ಲ.
Shivamogga | ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡಿಸಿ ಬೀದಿಗಿಳಿದ ಸೂಳೆಬೈಲು ಗ್ರಾಮಸ್ಥರು
ಗ್ರಾಮದಲ್ಲಿ ಮಾದಕವಸ್ತು ಹಾವಳಿ ನಿಯಂತ್ರಿಸಲು ಒಕ್ಕೊರಲ ಆಗ್ರಹ
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಖಾಕಿ!
ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಗೆ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಅಡ್ಡಿ ಉಂಟು ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬಂಧನ ಆಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರ ಕಾರ್ಯಾಚರಣೆಗೆ ಹಿಮಾಚಲ ಪ್ರದೇಶ ಶಿಮ್ಲಾ ಪೊಲೀಸರು ಅಡ್ಡಿ ಉಂಟು ಮಾಡಿದ್ದಾರೆ. ಇದು ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಹಾಗಾದರೆ ಏನಿದು ಘಟನೆ ಇಲ್ಲಿದೆ ಮಾಹಿತಿ.
ಟಿ-20 ವಿಶ್ವಕಪ್ 2026 ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ vs ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಫಾರ್ಮ್ಗೆ ಮರಳಿದರೆ, ಜಿಂಬಾಬ್ವೆ ಧೂಳಿಪಟವಾಗಲಿದೆ ಎಂದು ಮಾತನಾಡಿಕೊಳ್ಳುತ್ತಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು, ತಿಲಕ್ ವರ್ಮಾ ಕೂಡ ಅಬ್ಬರಿಸಲಿ ಎಂದು ಹಾರೈಸುತ್ತಿದ್ದಾರೆ. ಈ ಇಬ್ಬರೂ ಆಟಗಾರರ ಫಾರ್ಮ್ ಬಗ್ಗೆ ಭಾರತದ ಬ್ಯಾಟಿಂಗ್ ಕೋಚ್ ಹೇಳುವುದೇನು?
Gold Rate Fall: ಏರಿಕೆಯ ನಡುವೆ ದಿಢೀರ್ ಇಳಿದ ಚಿನ್ನದ ದರ: ಅಲ್ಪ ಇಳಿಕೆಗೆ ಇಲ್ಲಿವೆ ಕಾರಣಗಳು
ಹೂಡಿಕೆದಾರರು ಲಾಭ ಕಾಯ್ದಿರಿಸಿಕೊಳ್ಳಲು (profit booking) ಮುಂದಾಗಿದ್ದೇ ಇಂದಿನ ಬೆಲೆ ಇಳಿಕೆಗೆ ಕಾರಣವಾಗಿದೆ. ಅಮೆರಿಕ- ಇರಾನ್ ನಡುವೆ ಮಾತುಕತೆ ಮುಂದುವರಿದಿರುವ ಹಿನ್ನೆಲೆ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.
ಮಂಗಳೂರು | ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಬಾಲಕ ಮತ್ತು ಬಾಲಕಿಯೊಬ್ಬಳ ಮೇಲೆ ಅನೈತಿಕ ಪೊಲೀಸ್ ಗಿರಿ ಎಸಗಿದ ಆರೋಪದಲ್ಲಿ ತಂದೆ ಮತ್ತು ಮಗನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ನಗರದ ಬಾಬುಗುಡ್ಡ ರೈಲ್ವೆ ಟ್ರ್ಯಾಕ್ ಬಳಿಯಿದ್ದ ಬಾಲಕ ಮತ್ತು ಬಾಲಕಿಯನ್ನು ತಡೆದು ನಿಲ್ಲಿಸಿದ ಆರೋಪಿಗಳಾದ ತಂದೆ ಮತ್ತು ಮಗ ಅವರಿಬ್ಬರ ವೀಡಿಯೊ ಮಾಡಿದ್ದಾರೆ. ಅಲ್ಲದೇ, ಬಾಲಕನಿಗೆ ಹಲ್ಲೆ ನಡೆಸಿ, ಜಾತಿ ನಿಂದನೆಗೈದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬಾಲಕನ ತಂದೆ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಬೈಕ್ ಅಪಘಾತಕ್ಕೆ ಮಂಡ್ಯ ಯುವಕನ ಬ್ರೇನ್ ಡೆಡ್: 6 ಜನರ ಬಾಳಿಗೆ ಜೀವ ತುಂಬಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!
ಮಂಡ್ಯದ ಯುವಕನೊಬ್ಬ ಬೈಕ ಅಪಘಾತಕ್ಕಿಡಾಗಿದ್ದು, ಇದರಿಂದಾಗಿ ಆತನ ತಲೆಗೆ ಪೆಟ್ಟುಬಿದ್ದಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ, ವೈದ್ಯರು ಈತನ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿಸಿದ್ದು, ಈ ನೋವಿನಲ್ಲೂ ಸಹ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡಲು ಸಮ್ಮತಿ ನೀಡಿದ್ದಾರೆ. ಈ ಮೂಲಕ ಆತನ ದೇಹದ ಅಂಗಾಂಗ ಕಸಿ ಮಾಡಿದ್ದು, ಸುಮಾರು 6 ಜನರ ಬಾಳಿಗೆ ಬೆಳಕು ನೀಡಿದೆ. ಈ ಮೂಲಕ ಕುಟುಂಬಸ್ಥರು ಯುವಕನ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸಂಸತ್ನಲ್ಲಿ ವಿಶೇಷ ಗೌರವ | PM Narendra Modi
ಭಾರತ ಮತ್ತು ಇಸ್ರೇಲ್ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದು ಇಡೀ ಜಗತ್ತಿಗೆ ಮತ್ತೊಮ್ಮೆ ಈಗ ಮನವರಿಕೆ ಆಗುತ್ತಿದ್ದು, ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಆಡಿದ ಮಾತುಗಳು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಒಂದು ಕಡೆ ಪಾಕಿಸ್ತಾನ ರೀತಿಯ ಉಗ್ರ ಪೋಷಕ ದೇಶಗಳಿಗೆ ಎಚ್ಚರಿಕೆ ಸಂದೇಶ ಹೋಗಿದ್ದರೆ, ಇನ್ನೊಂದು ಕಡೆ ಭಾರತದ ಅಭಿವೃದ್ಧಿಯ ವೇಗ
Gold Rate : ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ದರ ಹೀಗಿದೆ
ಬೆಂಗಳೂರು: ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಆಭರಣಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ದೈನಂದಿನ ಬೆಲೆಗಳು ತೀವ್ರ ಕುತೂಹಲ ಮೂಡಿಸಿವೆ. ಫೆಬ್ರವರಿ ತಿಂಗಳು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಾಣತೊಡಗಿದೆ. ಇಂದು ಅಂದರೆ ಫೆಬ್ರವರಿ 26, 2026ರ ಗುರುವಾರದಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಳದಿ ಲೋಹದ ಬೆಲೆಯಲ್ಲಿ ಅಲ್ಪ
ಶಿಮ್ಲಾ, ಫೆ.26: ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭ ನಡೆದ ಪ್ರತಿಭಟನೆಗೆ ಸಂಬಂಧಿಸಿ ರೋಹ್ರುವಿನ ಮೂವರು ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಹಿಮಾಚಲ ಪ್ರದೇಶಕ್ಕೆ ಬಂದಿದ್ದ ದಿಲ್ಲಿಯ ಪೊಲೀಸರ ತಂಡವನ್ನು ರಾಜ್ಯ ಪೊಲೀಸರು ಧರಂಪುರ ಬಳಿ ತಡೆದು ಕನಿಷ್ಠ 20 ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ವೇಳೆ ಯುವ ಕಾಂಗ್ರೆಸ್ ನಾಯಕರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ತಂಡ ರೋಹ್ರುಗೆ ಆಗಮಿಸಿತ್ತು. ಅಲ್ಲಿಂದ ಮೂವರು ನಾಯಕರನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯುವ ವೇಳೆ ಧರಂಪುರ ಸಮೀಪ ಹಿಮಾಚಲ ಪೊಲೀಸರು ವಾಹನವನ್ನು ತಡೆದಿದ್ದಾರೆ. ಬಳಿಕ ದಿಲ್ಲಿ ಪೊಲೀಸರನ್ನೂ ಹಾಗೂ ಬಂಧಿತ ನಾಯಕರನ್ನೂ ಶಿಮ್ಲಾಕ್ಕೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಲನ್ ಜಿಲ್ಲೆಯ ಎಸ್ಪಿ ತಿರುಮಲರಾಜು ಎಸ್.ಡಿ. ವರ್ಮಾ ಘಟನೆಯ ಬಗ್ಗೆ ಮಾಹಿತಿ ಪಡೆದಿರುವುದನ್ನು ದೃಢಪಡಿಸಿದ್ದಾರೆ. ಶಿಮ್ಲಾ ಪೊಲೀಸರ ಮನವಿಯ ಮೇರೆಗೆ ಧರಂಪುರ ಬಳಿ ನಾಕಾಬಂಧಿ ತಪಾಸಣೆಗಳನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಕುರಿತು ರಾಜ್ಯದ ಡಿಜಿಪಿ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಗೆ ಪ್ರತಿಕ್ರಿಯಿಸಿದ ಎಐಸಿಸಿ ವಕ್ತಾರ ಹಾಗೂ ಥಿಯೋಗ್ ಶಾಸಕ ಕುಲದೀಪ್ ರಾಥೋಡ್, ಹಿಮಾಚಲ ಸದನದ ಮೇಲೆ ದಾಳಿ ನಡೆಸಿದ ಆರೋಪದಡಿ ದಿಲ್ಲಿ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯುವ ಕಾಂಗ್ರೆಸ್ ನಾಯಕರ ವಿರುದ್ಧ ಕೈಗೊಂಡ ಕ್ರಮವು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ. “ವಾರೆಂಟ್ ಇಲ್ಲದೆ ಆವರಣದ ಮೇಲೆ ದಾಳಿ ನಡೆಸುವುದು ಗೌಪ್ಯತೆಯ ಸ್ಪಷ್ಟ ಉಲ್ಲಂಘನೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ದಿಲ್ಲಿ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೇಶವು ಒಂದು ಪಕ್ಷದ ಆಸ್ತಿಯಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, “ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ವಿರೋಧ ಪಕ್ಷದ ಕರ್ತವ್ಯ ಜನರ ಧ್ವನಿಯನ್ನು ಎತ್ತುವುದು,” ಎಂದು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ದೊಡ್ಡ ವಿಷಯವನ್ನಾಗಿ ಮಾಡಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಫೆಬ್ರವರಿ 20ರಂದು ಯುಎಸ್–ಭಾರತ ವ್ಯಾಪಾರ ಒಪ್ಪಂದ ಹಾಗೂ ರೈತರು ಮತ್ತು ಯುವಕರ ಮೇಲೆ ಅದರ ಪರಿಣಾಮದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟಿಸಿದ್ದರು ಎಂದು ರಾಥೋಡ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ಉದ್ಯೋಗ ಕಡಿತದಿಂದ ಯುವಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹಾನಿಗೊಳಿಸಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ರಾಥೋಡ್ ಖಂಡಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ರಾಷ್ಟ್ರವಿರೋಧಿಯೇ?” ಎಂದು ಪ್ರಶ್ನಿಸಿದ ಅವರು, “ಪ್ರಧಾನಿಯ ವಿರುದ್ಧ ಮಾತನಾಡಿದವರನ್ನು ರಾಷ್ಟ್ರವಿರೋಧಿ ಎಂದು ಗುರುತಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ,” ಎಂದು ಹೇಳಿದ್ದಾರೆ. “ಭಾರತದ ಘನತೆ ಪ್ರತಿಭಟನಾಕಾರರು ಹಾಗೂ ಸರ್ಕಾರ ಎರಡರ ಜವಾಬ್ದಾರಿಯಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಯ ಅತಿರೇಕ : ಶರ್ಟ್ಲೆಸ್ ಹೋರಾಟಕ್ಕೆ ಮೈತ್ರಿಕೂಟದಲ್ಲಿ ಆಕ್ಷೇಪ - ರಾಹುಲ್ ಗಾಂಧಿಗೆ ತೀವ್ರ ಮುಜುಗರ
INC Youth Workers Shirtless Protest : ಇಡೀ ವಿಶ್ವವೇ ನೋಡುತ್ತಿದ್ದ ಎಐ ಸಮ್ಮಿಟ್’ನಲ್ಲಿ ಕಾಂಗ್ರೆಸ್ಸಿನ ಯುವ ಘಟಕದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ದೇಶದ ಮರ್ಯಾದೆಯನ್ನು ಹರಾಜು ಹಾಕಲು ಕಾಂಗ್ರೆಸ್ ನಿರ್ಧರಿಸಿದಂತಿದೆ ಎಂದು ಸಾರ್ವಜನಿಕ ವಲಯದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಇಂಡಿಯಾ ಮೈತ್ರಿಕೂಟದ ಸದಸ್ಯರೂ ಈ ಪ್ರತಿಭಟನೆ ತಪ್ಪು ಎಂದಿದ್ದಾರೆ.
ಖಾಸಗಿ ವಲಯದಲ್ಲಿ ಮೀಸಲಾತಿ: ಹೋರಾಟಕ್ಕೆ ಇನ್ನೇಕೆ ತಡ?
ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯು ಧಾರವಾಡದಲ್ಲಿ ಬೃಹತ್ ಧರಣಿಯನ್ನು ಮಂಗಳವಾರ ಹಮ್ಮಿಕೊಂಡಿತ್ತು. ಪ್ರತಿಭಟನೆಯ ಬಿಸಿ ಸರಕಾರಕ್ಕೆ ಮುಟ್ಟಿದ್ದು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ಈ ಪ್ರತಿಭಟನೆಗೆ ಬಿಜೆಪಿ, ಜೆಡಿಎಸ್ ಕೂಡ ಕೈ ಜೋಡಿಸಿದ್ದು ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿವೆ. ಸದ್ಯಕ್ಕೆ ರಾಜ್ಯದಲ್ಲಿ ೨.೮೪ ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ ಎಂದು ಸಂಘಟನೆಗಳು ಆರೋಪಿಸಿವೆ. ಈಗಾಗಲೇ ೫೦,೦೦೦ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದಿಸಿದ್ದು, ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿವೆ. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆಗಳು ಕೇವಲ ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿರುವುದಲ್ಲ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಈ ಖಾಲಿ ಹುದ್ದೆಗಳನ್ನು ತುಂಬಲು ಸರಕಾರ ವಿಫಲವಾಗಿತ್ತು. ‘‘ಯುವ ಜನರು ಎರಡೂವರೆ ವರ್ಷಗಳಿಂದ ಕಣ್ಮೀರು ಹಾಕುತ್ತಿದ್ದಾರೆ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ. ಈ ಯುವಜನರು ಬಿಜೆಪಿ ಆಡಳಿತ ಕಾಲದಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ನೋಡಿ ಸಂತೋಷ, ಸಂಭ್ರಮದಲ್ಲಿದ್ದರೆ? ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಕ್ಕಿಲ್ಲ. ಯಾಕೆಂದರೆ, ಈ ಯುವಜನರು ಬಿಜೆಪಿಯ ಕಾಲದಲ್ಲೂ ಉದ್ಯೋಗಗಳಿಗಾಗಿ ಹಲವು ಬಾರಿ ಬೀದಿಗಿಳಿದಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಕಡೆಗೆ ಬೆರಳು ತೋರಿಸಿ ಹೊಣೆಗಾರಿಕೆಯಿಂದ ಸಿದ್ದರಾಮಯ್ಯ ಪಾರಾಗುವುದಕ್ಕೆ ಸಾಧ್ಯವಿಲ್ಲ. ‘‘ನಾವು ಅಧಿಕಾರಕ್ಕೆ ಬಂದಾಗ ೨.೬೪ ಲಕ್ಷಕ್ಕೂ ಹೆಚ್ಚು ಸರಕಾರಿ ಹುದ್ದೆಗಳು ಖಾಲಿ ಇದ್ದವು. ಹಿಂದಿನ ಬಿಜೆಪಿ ಸರಕಾರ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಯೋಜನೆ ರೂಪಿಸದ ಕಾರಣ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದಿವೆ’’ ಎಂದು ಅವರು ಸಮರ್ಥನೆ ನೀಡಲು ಪ್ರಯತ್ನಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರವು ಸರಕಾರಿ ಹುದ್ದೆಗಳನ್ನು ತುಂಬಲು ತೋರಿಸಿದ ನಿರ್ಲಕ್ಷ್ಯದ ಕಾರಣದಿಂದ ಆ ಪಕ್ಷವನ್ನು ಯುವ ಜನತೆ ತಿರಸ್ಕರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದು ಮೂರು ವರ್ಷ ಕಳೆದಿದೆ. ಹೀಗಿರುವಾಗ ಆ ಖಾಲಿ ಉಳಿದಿರುವ ಹುದ್ದೆಗಳಲ್ಲಿ ಕನಿಷ್ಠ ಅರ್ಧದಷ್ಟು ಹುದ್ದೆಗಳನ್ನು ತುಂಬುವುದಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಬಿಜೆಪಿಯ ಆಡಳಿತ ಯಾವ ಕಾರಣಕ್ಕೂ ಕಾಂಗ್ರೆಸ್ಗೆ ಮಾದರಿಯಾಗಬಾರದು. ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳು ಕೇವಲ ಯುವಕರ ನಿರುದ್ಯೋಗ ನಿವಾರಣೆಯ ಭಾಗವಾಗಿಯಷ್ಟೇ ಮುಖ್ಯ ಅಲ್ಲ. ಶಿಕ್ಷಣ ಇಲಾಖೆಯಲ್ಲಿ ಸುಮಾರು ೮೦,೦೦೦ ಹುದ್ದೆಗಳು ಖಾಲಿ ಬಿದ್ದಿವೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ೩೭,೫೭೨ ಹುದ್ದೆಗಳು, ಒಳಾಡಳಿತದಲ್ಲಿ ೨೮,೧೮೮, ಉನ್ನತ ಶಿಕ್ಷಣದಲ್ಲಿ ೧೩, ೫೯೯, ಹಿಂದುಳಿದ ವರ್ಗಗಗಳ ಇಲಾಖೆಯಲ್ಲಿ ೧೧,೦೨೦, ಕಂದಾಯ ಇಲಾಖೆಯಲ್ಲಿ ೧೦,೮೬೭, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೧೦,೫೦೪ ಹೀಗೆ ಒಟ್ಟು ೨,೮೪, ೮೮೧ ಹುದ್ದೆಗಳು ಖಾಲಿ ಬಿದ್ದಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರಕಾರವೂ ಈ ಆರೋಪಗಳನ್ನು ನಿರಾಕರಿಸಿಲ್ಲ. ಇಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಬಿದ್ದರೆ ಅದು ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ? ಇಂದು ವಿವಿಧ ಇಲಾಖೆಗಳು ವಿಧಿಸಿದ ಗುರಿಯನ್ನು ತಲುಪಲು ಸಾಧ್ಯವಾಗದೇ ಇರುವುದಕ್ಕೆ, ಅರ್ಹ ಸಿಬ್ಬಂದಿ ಕೊರತೆಯೂ ಮುಖ್ಯ ಕಾರಣವಾಗಿದೆ. ಇಂದು ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಿವೆ. ೨೦೧೮ರಲ್ಲಿ ೩,೪೫೦ರಷ್ಟಿದ್ದ ಏಕೋಪಾಧ್ಯಾಯ ಶಾಲೆಗಳು ಇಂದು ೬,೬೭೫ಕ್ಕೆ ತಲುಪಿವೆ. ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಇಳಿಯಲು ಇದೂ ಮುಖ್ಯ ಕಾರಣ. ಇದರಿಂದಾಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ನೆಪವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್ಗಳ ಕೊರತೆಯೂ ಎದ್ದು ಕಾಣುತ್ತಿದೆ. ಬೆಂಗಳೂರು ನಗರದ ೧೮ ಆಯಕಟ್ಟಿನ ಠಾಣೆಗಳಲ್ಲಿ ಇನ್ಸ್ಪೆಕ್ಟರ್ಗಳೇ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಪೊಲೀಸ್ ಸಿಬ್ಬಂದಿಯ ಕೊರತೆ, ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಸಹಜವೇ ಆಗಿದೆ. ಹೀಗಿರುವಾಗ, ಸರಕಾರಿ ಉದ್ಯೋಗವನ್ನು ನೀಡಿ ಯುವಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮಾತು ಪಕ್ಕಕ್ಕಿರಲಿ, ಮೊದಲು, ಸಿಬ್ಬಂದಿಯ ಕೊರತೆಯಿಂದ ನರಳುತ್ತಿರುವ ಇಲಾಖೆಗಳನ್ನು ಬಳಸಿಕೊಂಡು ಅತ್ಯುತ್ತಮ ಆಡಳಿತವನ್ನು ನೀಡುವುದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಬೇಕಾಗಿದೆ. ಇನ್ನುಳಿದಂತೆ ಇದು ನಿರುದ್ಯೋಗ ಸಮಸ್ಯೆಯ ಪರ್ವ ಕಾಲ. ಮೊದಲನೆಯದಾಗಿ, ಬರೇ ಸರಕಾರಿ ಹುದ್ದೆಗಳಿಂದಷ್ಟೇ ಯುವಕರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಖಾಸಗಿ ವಲಯದ ತೆಕ್ಕೆ ಸೇರುತ್ತಿರುವ ಈ ಸಂದರ್ಭದಲ್ಲಿ, ಈ ನಾಡಿನ ನೆಲ, ಜಲದ ಮೇಲೆ ಬೃಹತ್ ಕಾರ್ಪೊರೇಟ್ ಉದ್ದಿಮೆಗಳು ನಿಯಂತ್ರಣ ಸಾಧಿಸುತ್ತಿರುವ ಸಂದರ್ಭದಲ್ಲಿ ಯುವಕರು ಬರೇ ಸರಕಾರಿ ವಲಯದಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳುವಂತಿಲ್ಲ. ಒಂದೆಡೆ ಸರಕಾರಿ ಹುದ್ದೆಗಳನ್ನು ತುಂಬುವಾಗ ಒಳ ಮೀಸಲಾತಿಯ ಸಮಸ್ಯೆಯನ್ನು ಗುರಾಣಿಯಾಗಿ ಬಳಸಲಾಗುತ್ತದೆ. ಒಳಮೀಸಲಾತಿಯು ಪರಿಣಾಮಕಾರಿಯಾಗಿ ಜಾರಿಗೊಳ್ಳದೆ ಈ ಖಾಲಿ ಹುದ್ದೆಗಳನ್ನು ತುಂಬಿದರೆ ಕೆಲವು ದುರ್ಬಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ಖಾಸಗಿ ವಲಯದಲ್ಲಿರುವ ಸಹಸ್ರಾರು ಹುದ್ದೆಗಳನ್ನು ಯಾವುದೇ ಮೀಸಲಾತಿಯಿಲ್ಲದೆ ತುಂಬಲಾಗುತ್ತಿದೆ. ಈ ವಲಯದಲ್ಲಿ ಮೀಸಲಾತಿ ಜಾರಿಯಾಗದೇ ಇದ್ದರೆ ದುರ್ಬಲ ಸಮುದಾಯದ ಯುವಕರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗುವಂತೆ ಹೋರಾಟ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವಕರ ನಿರುದ್ಯೋಗದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದರ ಬಗ್ಗೆ ಯಾಕೆ ಮೌನವಾಗಿದ್ದಾರೆ? ಎನ್ನುವುದು ಗಂಭೀರ ಪ್ರಶ್ನೆಯೇ ಆಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಬೇಡಿಕೆಯ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಇದೀಗ ಖಾಸಗಿ ಸಂಸ್ಥೆಗಳು ಕೂಡ ‘ಎಐ’ ನೆಪವನ್ನು ಮುಂದಿಟ್ಟುಕೊಂಡು ಏಕಾಏಕಿ ನೌಕರರನ್ನು ಕಿತ್ತು ಹಾಕುತಿವೆ. ಭವಿಷ್ಯದಲ್ಲಿ ತಮ್ಮ ಉದ್ಯೋಗಗಳ ಮೇಲೆ ಎಐ ಬೀರಬಹುದಾದ ಪರಿಣಾಮಗಳ ಬಗ್ಗೆ ಯುವಕರು ಆತಂಕದಲ್ಲಿದ್ದಾರೆ. ಎಐ ಹೊಸ ಉದ್ಯೋಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನು ಹೇಗೆ ಕಿತ್ತು ಹಾಕಬಹುದು ಎನ್ನುವುದರಲ್ಲಿ ಅದರ ಯಶಸ್ಸು ಇದೆ. ಎಐ ಕೇವಲ ಬೃಹತ್ ಉದ್ದಿಮೆದಾರರ ಹಿತಾಸಕ್ತಿಗೆ ಪೂರಕವಾಗಿ ಬೆಳೆಯಲು ಸರಕಾರ ಅವಕಾಶ ನೀಡಬಾರದು. ಅದು ಎಲ್ಲರನ್ನೂ ಒಳಗೊಳ್ಳುವಂತಾಗಬೇಕು. ರಾಜ್ಯದ ಸಂಪನ್ಮೂಲಗಳನ್ನು ಎಐ ಕಂಪೆನಿಗಳಿಗೆ ಒತ್ತೆಯಿಡುವ ಸಂದರ್ಭದಲ್ಲಿ ಯುವಜನರ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ಅವರ ಭವಿಷ್ಯದ ಗೋರಿಗಳ ಮೇಲೆ ಎಐ ಕಂಪೆನಿಗಳು ವಿಜೃಂಭಿಸುವಂತಾಗಬಾರದು.
ಕರಾವಳಿ ಸೇರಿದಂತೆ ಒಳನಾಡಿನ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಕಾರ ಮಳೆ ಸುರಿದಿದೆ. ಹಲವೆಡೆ ಅಡಕೆ ಕೃಷಿಗಳಿಗೆ ಅನುಕೂಲವಾಗಿದ್ದರೆ, ಮಲೆನಾಡು ಹಾಗೂ ಒಳನಾಡಲ್ಲಿ ದ್ರಾಕ್ಷಿ, ಕಾಫಿ, ಕಡಲೆ, ಸಜ್ಜೆ, ಜೋಳ ಬೆಳೆಗಳಿಗೆ ಭಾರಿ ಹಾನಿಯಾಗಿದೆ.
ಪತ್ನಿ, ಮೂವರು ಪುತ್ರಿಯರ ಕತ್ತು ಸೀಳಿ ಹತ್ಯೆ; ಆರೋಪಿ ಪತಿ ನಾಪತ್ತೆ
ಹೊಸದಿಲ್ಲಿ: ಉತ್ತರ ದೆಹಲಿಯ ಸಮಯಪುರ ಬದ್ಲಿ ಎಂಬಲ್ಲಿ ಬುಧವಾರ 30 ವರ್ಷದ ಮಹಿಳೆ ಹಾಗೂ ಐದು, ನಾಲ್ಕು ಮತ್ತು ಮೂರು ವರ್ಷದ ಮೂವರು ಪುತ್ರಿಯರ ಶವಗಳು ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆ ಮರೆಸಿಕೊಂಡಿದ್ದಾನೆ. ಹತ್ಯೆಯ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರನ್ನು ಅನಿತಾ ಮತ್ತು ಅವರ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಈ ಕುಟುಂಬ ಪಾಟ್ನಾ ಮೂಲದ್ದಾಗಿದ್ದು, ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿಯನ್ನು ಮುಂಚುನ್ ಕೇವಾಟ್ ಎಂದು ಗುರುತಿಸಲಾಗಿದ್ದು, ಈತ ಅಝಾದ್ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿ. ಬೆಳಿಗ್ಗೆ 8ರ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ. ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.
ಮಹಿಳೆ, ಮೂವರು ಪುತ್ರಿಯರ ಕತ್ತು ಸೀಳಿ ಹತ್ಯೆ; ಆರೋಪಿ ಪತಿ ನಾಪತ್ತೆ
ಹೊಸದಿಲ್ಲಿ: ಉತ್ತರ ದೆಹಲಿಯ ಸಮಯಪುರ ಬದ್ಲಿ ಎಂಬಲ್ಲಿ ಬುಧವಾರ 30 ವರ್ಷದ ಮಹಿಳೆ ಹಾಗೂ ಐದು, ನಾಲ್ಕು ಮತ್ತು ಮೂರು ವರ್ಷದ ಮೂವರು ಪುತ್ರಿಯರರ ಶವಗಳು ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆ ಮರೆಸಿಕೊಂಡಿದ್ದಾನೆ. ಹತ್ಯೆಯ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರನ್ನು ಅನಿತಾ ಮತ್ತು ಅವರ ಮೂವರು ಮಕ್ಕಳೆಂದು ಗುರುತಿಸಲಾಗಿದೆ. ಈ ಕುಟುಂಬ ಪಾಟ್ನಾ ಮೂಲದ್ದಾಗಿದ್ದು, ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿಯನ್ನು ಮುಂಚುನ್ ಕೇವಾಟ್ ಎಂದು ಗುರುತಿಸಲಾಗಿದ್ದು, ಈತ ಅಝಾದ್ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿ. ಬೆಳಿಗ್ಗೆ 8ರ ಸುಮಾರಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ. ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ. ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.
ಕ್ಯೂಬಾ ಕರಾವಳಿ ಕಾವಲು ಪಡೆಯಿಂದ ಅಮೆರಿಕದ ಸ್ಪೀಡ್ ಬೋಟ್ನ ನಾಲ್ವರು ಪ್ರಯಾಣಿಕರ ಹತ್ಯೆ
ಹವಾನಾ, ಕ್ಯೂಬಾ: ಕ್ಯೂಬಾ ಕರಾವಳಿಯಲ್ಲಿ ದೇಶದ ಕರಾವಳಿ ಕಾವಲು ಪಡೆ ಮತ್ತು ಅಮೆರಿಕ ನೋಂದಾಯಿತ ಸ್ಪೀಡ್ಬೋಟ್ನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಬೋಟ್ನಲ್ಲಿದ್ದ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫ್ಲೋರಿಡಾ ನೋಂದಣಿ ಹೊಂದಿದ್ದ ಸ್ಪೀಡ್ಬೋಟ್, ವಿಲ್ಲಾ ಕ್ಲಾರಾ ಪ್ರಾಂತ್ಯದ ಫಾಲ್ಕನ್ಸ್ ಕೇ ಎಂಬಲ್ಲಿದ್ದ ಒಂದು ನಾಟಿಕಲ್ ಮೈಲು ದೂರದಲ್ಲಿ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದುದನ್ನು ಪತ್ತೆ ಮಾಡಿ ದಾಳಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಪೀಡ್ಬೋಟನ್ನು ಗುರುತಿಸುವ ಸಲುವಾಗಿ ಕರಾವಳಿ ಕಾವಲು ಪಡೆಯ ಹಡಗು ಸಮೀಪಕ್ಕೆ ಬಂದಾಗ ನಾವೆಯಿಂದ ಗುಂಡು ಹಾರಿಸಲಾಗಿದೆ. ಇದರಿಂದ ಕ್ಯೂಬಾ ಹಡಗಿನ ಕಮಾಂಡರ್ ಗಾಯಗೊಂಡಿದ್ದಾರೆ. ಈ ಸಂಘರ್ಷದಲ್ಲಿ ನಾವೆಯಲ್ಲಿದ್ದ ನಾಲ್ವರು ದಾಳಿಕೋರರು ಮೃತಪಟ್ಟಿದ್ದು ಇತರ ಆರು ಮಂದಿಗೆ ಗಾಯಗಳಾಗಿವೆ ಎಂದು ಸಚಿವಾಲಯ ಸ್ಪಷ್ಟನೆನೀಡಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ತನ್ನ ಜಲಪ್ರದೇಶವನ್ನು ರಕ್ಷಿಸಿಕೊಳ್ಳಲು ಕ್ಯೂಬಾ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ. ಅಮೆರಿಕ ಮತ್ತು ಕಮ್ಯೂನಿಸ್ಟ್ ಆಡಳಿತದ ದ್ವೀಪದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಫ್ಲೋರಿಡಾದಿಂದ ಕೇವಲ 100 ಮೈಲು ಅಂತರದ ಪ್ರದೇಶದಲ್ಲಿ ನಡೆದಿರುವ ಈ ಸಂಘರ್ಷ ಹೆಚ್ಚಿನ ಮಹತ್ವ ಪಡೆದಿದೆ.
Ranya Rao: ಒಂದೇ ವರ್ಷದಲ್ಲಿ 127.287 ಕೆಜಿ ಚಿನ್ನ ಸಾಗಿಸಿದ ರಮ್ಯಾ ರಾವ್ ಮತ್ತು ತಂಡ; ಹವಾಲಾ ಹಣ ಬಳಕೆ - ED
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಮತ್ತು ಆಕೆಯ ಸಹಚರರು ನಡೆಸುತ್ತಿದ್ದ ಬೃಹತ್ ಚಿನ್ನ ಕಳ್ಳಸಾಗಣೆ (Gold Smuggling) ಜಾಲದ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬಯಲು ಮಾಡಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಗ್ಯಾಂಗ್ ಬರೋಬ್ಬರಿ 102.55 ಕೋಟಿ ರೂಪಾಯಿ ಮೌಲ್ಯದ 127.287 ಕೆ.ಜಿ. ಚಿನ್ನವನ್ನು ಅಕ್ರಮವಾಗಿ
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆಯೇ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ರಾಜ್ಯದ ಕೆಲವೆಡೆ ಗುರುವಾರ (ಫೆಬ್ರವರಿ 26) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಐದು ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು
ಕೇವಲ 2 ಸಾವಿರದಿಂದ ಮಹಿಳೆಯರ ಸಬಲೀಕರಣ ಅಲ್ಲದೆ, ಮಹಿಳೆಯರು ಆರಂಭಿಸಿರುವ ಸ್ವ- ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಅನ್ನು ಮಹಿಳಾ ಅಭಿವೃದ್ಧೀ ನಿಗಮವು ಬಿಡುಗಡೆಗೊಳಿಸಿದೆ.
ಇನ್ನು 3 ತಿಂಗಳು ಕಳೆದರೆ ಕರಾವಳಿಯಲ್ಲಿ ಮಳೆಗಾಲ ಅಬ್ಬರಿಸಲಿದೆ. ಈಗಾಗಲೇ ಆರಂಭ ಆಗಿರುವ 20 ಕೋಟಿ ರೂ ವೆಚ್ಚದ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದು, ಕಾಮಗಾರಿಗೆ ಈಗ ಚುರುಕು ನೀಡಲಾಗಿದೆ.
ಬೇಸಿಗೆ ಆರಂಭ ಹಿನ್ನೆಲೆಯಲ್ಲಿ ವನ್ಯ ಜೀವಿಗಳಿಗೆ ನೀರಿನ ವ್ಯವಸ್ಥೆ; ಬೆಂಗಳೂರು ಗ್ರಾಮಾಂತರ ಅರಣ್ಯ ಇಲಾಖೆ ಕ್ರಮ
ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಗುರುತಿಸಿ ಹೂಳೆತ್ತುವ ಕಾರ್ಯ ಆರಂಭಿಸಿದೆ. ಅರಣ್ಯ ಇಲಾಖೆಯ ಈ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು: ಕುಂಬಾರಪೇಟೆಯಲ್ಲಿ ಹೊತ್ತಿ ಉರಿದ ಮೂರಂತಸ್ತಿನ ವಾಣಿಜ್ಯ ಸಂಕೀರ್ಣ; ಶಾರ್ಟ್ ಸರ್ಕೀಟ್ ಕಾರಣ?
ರಾಜಧಾನಿ ಬೆಂಗಳೂರಿನ ಕುಂಬಾರಪೇಟೆಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್ಬರಿ ಮೂರು 123 ಮಳಿಗೆಗಳನ್ನು ಹೊಂದಿರುವ ಕುಮಾರ್ ಎಂಬುವವರಿಗೆ ಸೇರಿದ್ದ ಈ ಬೃಹತ್ ವಾಣಿಜ್ಯ ಸಂಕೀರ್ಣದ 21 ಮಳಿಗೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕೀಟ್ ಕಾರಣ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಮಾಹಿತಿ.
ICC T20 Rankings- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಸ್ಫೋಟಕ ಆರಂಭಕಾರ ಅಭಿಷೇಕ್ ಶರ್ಮಾ ಅವರು ಇದೀಗ ಬಿಡುಗಡೆಯಾಗಿರುವ ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದೇವೇಳೆ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಬಳಿಕ ಮಿಂಚುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಗ್ರ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟಾಪ್ 10ರೊಳಗೆ ಭಾರತದ ನಾಲ್ವರು ಬ್ಯಾಟರ್ ಗಳು ಇದ್ದಾರೆ ಎಂಬುದು ವಿಶೇಷವಾಗಿದೆ.

30 C