SENSEX
NIFTY
GOLD
USD/INR

Weather

22    C
... ...View News by News Source

ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಚಾಂಪಿಯನ್ ಶಿಪ್, ಪಥ ಸಂಚಲನದಲ್ಲಿ ಪ್ರಥಮ ಸ್ಥಾನ

ಕಾರ್ಕಳ : ಮಂಗಳೂರು ವಿಶ್ವ ವಿದ್ಯಾಲಯ, ಯುವಜನ ಕ್ರೀಡಾ ಇಲಾಖೆ, ಜಿ.ಪ.ಉಡುಪಿ, ಡಾ ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇವರ ಸಹಯೋಗದಲ್ಲಿ ಉಡುಪಿ ಅಜ್ಜರಕಾಡು ಸ್ಟೇಡಿಯಂ ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ಚಾಂಪಿಯನ್ ಶಿಪ್ 2025 ಹಾಗೂ ಪಥ ಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಶಾಸಕ ಯಶ್ ಪಾಲ್ ಸುವರ್ಣ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಸ್ರುರು ರಾಜೀವ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪಥ ಸಂಚಲನದ ಬಹುಮಾನ ವಿತರಿಸಿದರು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಬಂಟ್ಸ್ ಸಂಘ ಮುಂಬೈ ಜತೆ ಕಾರ್ಯದರ್ಶಿ, ಗಿರೀಶ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಅಲೀಮಾ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗಿರೀಶ್ ಶೆಟ್ಟಿ ತೆಲ್ಲಾರ್ ಇವರು ವಿಜೇತ ವಿಶೇಷ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿಜೇತ ವಿಶೇಷ ಶಾಲೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಪಥ ಸಂಚಲನದಲ್ಲಿ ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದು, ಚಿನ್ನದ ಪದಕ-30, ಬೆಳ್ಳಿ ಪದಕ -18 ಕಂಚಿನ ಪದಕ - 15 ಒಟ್ಟು 63 ಪದಕಗಳನ್ನು ಗಳಿಸಿದ್ದಾರೆ. ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಶಾಲೆಗೆ ಕೀರ್ತಿ ತಂದ ವಿಜೇತ ಶಾಲೆಯ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.    

ವಾರ್ತಾ ಭಾರತಿ 25 Nov 2025 8:49 pm

ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಭಾವಿ ಗಂಡನಿಂದಲೇ ಮಹಾ ಮೋಸದ ಬಗ್ಗೆ... Smriti Mandhana

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಂದ್ರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಒಂದು ಗತ್ತು ಇದೆ... ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಎದುರು ಕ್ರಿಕೆಟ್ ಲೋಕವೇ ತಲೆಬಾಗಿ ಪ್ರೀತಿ ಕೊಡುತ್ತದೆ... 18 ವರ್ಷಗಳ ನಂತರ ನೀಯತ್ತಾಗಿ ಆಡಿ ಕಪ್ ಗೆದ್ದಿದೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಂತಾ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾರೆ. ಅದರಲ್ಲೂ ಬೆಂಗಳೂರು ತಂಡ

ಒನ್ ಇ೦ಡಿಯ 25 Nov 2025 8:47 pm

ಪ್ರಧಾನಿ ಉಡುಪಿ ಭೇಟಿ ಹಿನ್ನೆಲೆ, ದುರಸ್ಥಿ ಕಾರ್ಯ ತಾತ್ಕಾಲಿಕ ಸ್ಥಗಿತ

ಉಡುಪಿ, ನ.25: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ನ.28ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ ನಿಯಮಾನುಸಾರ ಶಿಷ್ಟಾಚಾರವನ್ನು ಪಾಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಸೆಕ್ಷನ್ 163ರಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಈ ಕೆಳಗಿನ ಆದೇಶ ಹೊರಡಿಸಿದ್ದಾರೆ. ಉಡುಪಿ ನಗರ ವ್ಯಾಪ್ತಿಯೊಳಗೆ ಎನ್.ಹೆಚ್-66 ಮತ್ತು ಸಂಪರ್ಕ ರಸ್ತೆಗಳ ಮೇಲೆ ನಡೆಯುತ್ತಿರುವ ಎಲ್ಲಾ ಭೂಮಿ ಅಗೆಯುವ, ಕೊರೆಯುವ, ತೋಡುವ ಹಾಗೂ ಗುಂಡಿ ತೋಡುವ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ನಿರ್ಬಂಧ ಆದೇಶವು ನ. 28ರ ಸಂಜೆ 5ರವರೆಗೆ ಜಾರಿಯಲ್ಲಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಆದೇಶವನ್ನು ಎನ್.ಹೆಚ್ ವಿಭಾಗೀಯ ಅಧಿಕಾರಿಗಳು, ಪಿ.ಡಬ್ಲ್ಯೂ.ಡಿ, ಪಿ.ಆರ್.ಇ.ಡಿ, ನಗರಸಭೆ, ಬಿಎಸ್ಎನ್ಎಲ್ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 25 Nov 2025 8:44 pm

ಮಂಗಳೂರು | ನ.29ರಂದು ವಿಶ್ವ ಮಧುಮೇಹ ರೋಗ ದಿನಾಚರಣೆ

ಮಂಗಳೂರು, ನ.25: ನಗರದ ನಾಟೆಕಲ್ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ‘ವಿಶ್ವ ಮಧುಮೇಹ ರೋಗ ದಿನಾಚರಣೆ’ ನ.29ರಂದು ಬೆ. 10:00 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಸಂಸ್ಥೆಯ ನಿರಂತರ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಲಿರುವರು. ಖ್ಯಾತ ಮತ್ತು ನುರಿತ ಮಧುಮೇಹ ರೋಗ ಶಾಸ್ತ್ರ ತಜ್ಞರು ಹಾಗೂ ಚಿಕಿತ್ಸಕರಾದ ಖ್ಯಾತ ವೈದ್ಯಕೀಯ ಶಾಸ್ತ್ರತಜ್ಞರು ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆ ಬಗ್ಗೆ ಜಾಗೃತಿ ಮತ್ತು ಮಾಹಿತಿ ಅಭಿಯಾನ ಹಾಗೂ ಕಾರಣಗಳು ರೋಗದ ವಿವಿಧ ಲಕ್ಷಣಗಳು, ದೇಹದ ವಿವಿಧ ಅಂಗಾಂಗಗಳಿಗೆ ಬೀರುವ ಪರಿಣಾಮಗಳು ಹಾಗೂ ವಿವಿಧ ಚಿಕಿತ್ಸಾ ಉಪಾಯ ಪರಿಹಾರ ಕ್ರಮಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಲಿರುವರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್, ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ. ಶಹನವಾಜ್ ಮಣಿಪಾಡಿ, ವೈದ್ಯಕೀಯ ಅಧೀಕ್ಷಕ ಡಾ.ಅಂಜನ್ ಕುಮಾರ್, ಮುಖ್ಯ ಸಲಹೆಗಾರ ಡಾ. ಮುಹಮ್ಮದ್ ಇಸ್ಮಾಯಿಲ್ ಮತ್ತು ಸಲಹಾ ಸಮಿತಿಯ ಸದಸ್ಯ ಡಾ. ಎಂ.ವಿ. ಪ್ರಭು, ಮುಖ್ಯ ಆಡಳಿತ ಅಧಿಕಾರಿಯಾದ ಡಾ. ರೋಹನ್ ಮೋನಿಸ್ ಭಾಗವಹಿಸಲಿರುವರು. ವಿವಿಧ ವೈದ್ಯಕೀಯ ಸಂಸ್ಥೆಗಳನ್ನು ಪ್ರತಿನಿಧಿಸುವ 250 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 25 Nov 2025 8:39 pm

12,000 ವರ್ಷಗಳ ಬಳಿಕ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಿಸಿದ್ದು ಏಕೆ? ತಜ್ಞರು ಏನು ಹೇಳುತ್ತಾರೆ?

ಹೊಸದಿಲ್ಲಿ: ಸುದೀರ್ಘ ಸಮಯದಿಂದ ಸುಪ್ತವಾಗಿದ್ದ ಉತ್ತರ ಇಥಿಯೋಪಿಯಾದಲ್ಲಿಯ ಹೈಲಿ ಗುಬ್ಬಿ ಜ್ವಾಲಾಮುಖಿ ರವಿವಾರ ಸ್ಫೋಟಗೊಂಡಿದ್ದು, ಕೆಂಪು ಸಮುದ್ರದಾದ್ಯಂತ ಯೆಮೆನ್, ಒಮಾನ್ ಮತ್ತು ಭಾರತದ ಕೆಲವು ಭಾಗಗಳತ್ತವೂ ಎತ್ತರದ ಬೂದಿಯ ಅಲೆಗಳನ್ನು ರವಾನಿಸಿದೆ. ಅಡಿಸ್ ಅಬಾಬಾದಿಂದ ಈಶಾನ್ಯಕ್ಕೆ ಸುಮಾರು 800 ಕಿ.ಮೀ.ದೂರದಲ್ಲಿರುವ ಅಫ್ರಾರ್ ಪ್ರದೇಶದಲ್ಲಿಯ ಹೈಲಿ ಗುಬ್ಬಿ ಜ್ವಾಲಾಮುಖಿ ಸುಮಾರು 12,000 ವರ್ಷಗಳಿಂದಲೂ ಶಾಂತವಾಗಿತ್ತು. ರವಿವಾರ ಹಲವಾರು ಗಂಟೆಗಳ ಕಾಲ ಜಾಗ್ರತಗೊಂಡಿದ್ದು ನೆರೆಯ ಅಫ್ದೇರಾ ಗ್ರಾಮವು ಬೂದಿಯಿಂದ ಆವೃತಗೊಂಡಿತ್ತು. ಈ ಘಟನೆಯನ್ನು ಅತ್ಯಂತ ಅಸಾಮಾನ್ಯ ಎಂದು ಬಣ್ಣಿಸಿರುವ ತಜ್ಞರು,ಪ್ರದೇಶದ ಜ್ವಾಲಾಮುಖಿ ಚಟುವಟಿಕೆಯ ಬಗ್ಗೆ ಸರಿಯಾದ ಅಧ್ಯಯನ ನಡೆದಿರಲಿಲ್ಲ ಎಂದಿದ್ದಾರೆ. ಜ್ವಾಲಾಮುಖಿಯು 1,000 ಅಥವಾ 10,000 ವರ್ಷಗಳ ಕಾಲ ಶಾಂತವಾಗಿದ್ದರೂ ಶಿಲಾಪಾಕ ರೂಪುಗೊಳ್ಳಲು ಪೂರಕ ಸ್ಥಿತಿಗಳು ಇರುವವರೆಗೂ ಅದು ಯಾವಾಗ ಬೇಕಾದರೂ ಸ್ಫೋಟಿಸಬಹುದು ಎಂದು ನಾರ್ಥ್ ಕ್ಯಾರೋಲಿನಾ ಸ್ಟೇಟ್ ವಿವಿಯ ಜ್ವಾಲಾಮುಖಿ ತಜ್ಞೆ ಆರಿಯಾನಾ ಸೋಲ್ಡಾಟಿ ಅವರನ್ನು ಉಲ್ಲೇಖಿಸಿ ಸೈಂಟಿಫಿಕ್ ಅಮೆರಿಕನ್ ಮ್ಯಾಗಝಿನ್ ವರದಿ ಮಾಡಿದೆ. ಗುರಾಣಿಯನ್ನು ಹೋಲುವ ಹೈಲಿ ಗುಬ್ಬಿ ಜ್ವಾಲಾಮುಖಿ ಪೂರ್ವ ಆಫ್ರಿಕಾದ ರಿಫ್ಟ್ ರೆನ್ ಅಥವಾ ಬಿರುಕು ವಲಯದಲ್ಲಿದ್ದು,ಈ ಪ್ರದೇಶದಲ್ಲಿ ಆಫ್ರಿಕನ್ ಮತ್ತು ಅರೆಬಿಯನ್ ಟೆಕ್ಟಾನಿಕ್ ಪ್ಲೇಟ್ ಅಥವಾ ಭೂಪಟಲ ಫಲಕಗಳು ವರ್ಷಕ್ಕೆ 0.4ರಿಂದ 0.6 ಇಂಚು ದರದಲ್ಲಿ ಕ್ರಮೇಣ ಬೇರ್ಪಡುತ್ತಿವೆ. ‘12,000 ವರ್ಷಗಳ ಹಿಂದೆ ನಿಜವಾಗಿಯೂ ಕೊನೆಯ ಬಾರಿಗೆ ಸ್ಫೋಟಿಸಿದ್ದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ ’ಎಂದು ಹೇಳಿದ ಇಂಗ್ಲಂಡ್‌ನ ಬ್ರಿಸ್ಟಲ್ ವಿವಿಯ ಭೂವಿಜ್ಞಾನಿ ಜೂಲಿಯಟ್ ಬಿಗ್ಸ್ ಅವರು,ಈ ಅವಧಿಯಲ್ಲಿ ಯಾವುದೇ ದೃಢೀಕೃತ ಸ್ಫೋಟಗಳು ಸಂಭವಿಸಿಲ್ಲವಾದರೂ ಜ್ವಾಲಾಮುಖಿಯು ಇತ್ತೀಚಿಗೆ ಲಾವಾವನ್ನು ಹೊರಕ್ಕೆ ಸೂಸಿರಬಹುದು ಎನ್ನುವುದನ್ನು ಉಪಗ್ರಹ ಚಿತ್ರಗಳು ಸೂಚಿಸಿವೆ. ಈ ಪ್ರದೇಶದಲ್ಲಿ ಬೃಹತ್ ಕೊಡೆಯ ಮೋಡದಂತಹ ಎತ್ತರದ ಸ್ಫೋಟದ ಸ್ತಂಭವನ್ನು ನೋಡುವುದು ನಿಜಕ್ಕೂ ಅಪರೂಪ ಎಂದರು. ಜ್ವಾಲಾಮುಖಿ ಸ್ಫೋಟದಿಂದ ಯಾವುದೆ ಸಾವುನೋವುಗಳು ಸಂಭವಿಸಿಲ್ಲ,ಆದರೆ ಅದು ಜಾನುವಾರು ಸಾಕಣೆ ಸಮುದಾಯಗಳ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದರು. ಹೈಲಿ ಗುಬ್ಬಿ ಸ್ಫೋಟಗೊಳ್ಳಬಹುದು ಎಂಬ ಮುನ್ಸೂಚನೆಗಳನ್ನು ವಿಜ್ಞಾನಿಗಳು ಮೊದಲೇ ಗಮನಿಸಿದ್ದರು. ಜುಲೈನಲ್ಲಿ ಸಮೀಪದ ಎರ್ಟಾ ಏಲ್ ಜ್ವಾಲಾಮುಖಿ ಸ್ಫೋಟಗೊಂಡಿತ್ತು ಮತ್ತು ಹೈಲಿ ಗುಬ್ಬಿ ಕೆಳಗಿನ ನೆಲದ ಚಲನೆಯನ್ನು ಪ್ರಚೋದಿಸಿತ್ತು ಮತ್ತು ಮೇಲ್ಮೈಯಿಂದ ಸುಮಾರು 30 ಕಿ.ಮೀ.ಆಳದಲ್ಲಿ ಶಿಲಾಪಾಕದ ಒಳನುಗ್ಗುವಿಕೆಯನ್ನು ಬಹಿರಂಗಗೊಳಿಸಿತ್ತು. ರವಿವಾರದ ಸ್ಫೋಟಕ್ಕೂ ಮುನ್ನ ಹೈಲಿ ಗುಬ್ಬಿಯ ಶಿಖರದಲ್ಲಿ ಬಿಳಿಯ ಹಗುರ ಮೋಡಗಳನ್ನು ಮತ್ತು ನೆಲವು ಸ್ವಲ್ಪ ಮೇಲಕ್ಕೆದ್ದಿರುವುದನ್ನು ಬಿಗ್ಸ್ ಮತ್ತು ಅವರ ಸಹವರ್ತಿಗಳು ದಾಖಲಿಸಿದ್ದರು. ಜ್ವಾಲಾಮುಖಿ ಸ್ಫೋಟದ ಸಮಯದಲ್ಲಿ ಇಥಿಯೋಪಿಯಾದಲ್ಲಿದ್ದ ಸೌಥ್‌ಹ್ಯಾಂಪ್ಟನ್ ವಿವಿಯ ಭೂ ವಿಜ್ಞಾನಿ ಡೆರೆಕ್ ಕೀರ್ ಅವರು ಸೋಮವಾರ ಬೂದಿಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಶಿಲಾಪಾಕದ ವಿಧವನ್ನು ಮತ್ತು ಜ್ವಾಲಾಮುಖಿ ನಿಜಕ್ಕೂ 12,000 ವರ್ಷಗಳಿಂದ ಸುಪ್ತವಾಗಿತ್ತೇ ಎನ್ನುವುದನ್ನು ನಿರ್ಧರಿಸಲು ಈ ಮಾದರಿಗಳು ನೆರವಾಗಲಿವೆ ಎಂದು ಬಿಗ್ಸ್ ಹೇಳಿದರು. ಫ್ರಾನ್ಸ್‌ನ ಟೌಲೋಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರದ ಪ್ರಕಾರ ಬೂದಿಯ ಮೋಡಗಳು ಆಗಸದಲ್ಲಿ 14 ಕಿ.ಮೀ.ಗಳಷ್ಟು ಎತ್ತರಕ್ಕೆ ಚಿಮ್ಮಿದ್ದು,ಯೆಮೆನ್,ಒಮಾನ್, ಭಾರತ ಮತ್ತು ಉತ್ತರ ಪಾಕಿಸ್ತಾನದಲ್ಲಿ ಪರಿಣಾಮಗಳು ಗೋಚರವಾಗಿವೆ. ಸುಮಾರು 500 ಮೀ.ಗಳಷ್ಟು ಎತ್ತರವಿರುವ ಹೈಲಿ ಗುಬ್ಬಿ ಟೆಕ್ಟಾನಿಕ್ ಪ್ಲೇಟ್‌ಗಳು ಸಂಧಿಸುವ ಭೌಗೋಳಿಕವಾಗಿ ಸಕ್ರಿಯವಾಗಿರುವ ರಿಫ್ಟ್ ವ್ಯಾಲಿಯೊಳಗಿದೆ. ಕೃಪೆ: NDTV

ವಾರ್ತಾ ಭಾರತಿ 25 Nov 2025 8:39 pm

ಮಂಗಳೂರು | ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಮಂಗಳೂರು, ನ.24: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇಂದು ತನ್ನ ಪ್ರಮುಖ ಬ್ರೈಡ್ಸ್ ಆಫ್ ಇಂಡಿಯಾ (ಭಾರತದ ವಧುಗಳ) ಅಭಿಯಾನದ 15ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ. ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನವಾಗಿದೆ. ಈ ವರ್ಷದ ಆವೃತ್ತಿಯು 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದ್ದು, ಇವರಲ್ಲಿ ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್ಟಿಆರ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಅನಿಲ್ ಕಪೂರ್, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ್ ಮತ್ತಿತರ ಖ್ಯಾತನಾಮರು ಸೇರಿದ್ದಾರೆ. ಇವರೆಲ್ಲರ ಭಾಗವಹಿಸುವಿಕೆಯು ಈ ಅಭಿಯಾನದ ಅಗಾಧತೆ, ವೈವಿಧ್ಯತೆ ಮತ್ತು ಗಾಢ ಭಾವನಾತ್ಮಕತೆಯನ್ನು ಅರ್ಥಪೂರ್ಣವಾಗಿ ಪ್ರತಿಬಿಂಬಿಸಲಿದೆ ಎಂದು ಅಧ್ಯಕ್ಷ ಎಂ.ಪಿ.ಅಹಮ್ಮದ್ ಪ್ರಕಟನೆಯಲ್ಲಿ ಹೇಳಿದ್ದಾರೆ. ಈ ಆವೃತ್ತಿಯು ಮುಖ್ಯವಾಗಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯ ವರ್ಣರಂಜಿತ ಲೋಕದ ಮೇಲೆ ಬೆಳಕು ಚೆಲ್ಲಲಿದ್ದು, ವಿಶಿಷ್ಟ ವಧುವಿನ ಆಭರಣಗಳನ್ನು ಒಂದೆಡೆ ಪ್ರದರ್ಶಿಸಲಿದೆ. ಇವುಗಳಲ್ಲಿ ಭಾರತದ ಪರಂಪರೆ ಮತ್ತು ದೇವಾಲಯ ಕಲೆಯಿಂದ ಪ್ರೇರಿತವಾದ ಡಿವೈನ್ ಕಲೆಕ್ಷನ್, ಮಾಣಿಕ್ಯಗಳು, ಪಚ್ಚೆಗಳು ಮತ್ತು ನೀಲಮಣಿಗಳನ್ನು ಒಳಗೊಂಡಿರುವ ರತ್ನ-ಸಮೃದ್ಧ ಪ್ರೀಶಿಯಾ ಕಲೆಕ್ಷನ್ ಮತ್ತು ಭಾರತದ ಸಾಂಸ್ಕೃತಿಕ ಲೋಕದ ಸಮಕಾಲೀನ ಆದರೆ ಸಂಪ್ರದಾಯ ಅಳವಡಿಸಿಕೊಂಡಿರುವ ವಜ್ರ ಸಂಗ್ರಹವೂ ಇದರಲ್ಲಿದೆ ಎಂದು ವಿವರಿಸಿದ್ದಾರೆ.

ವಾರ್ತಾ ಭಾರತಿ 25 Nov 2025 8:33 pm

ಬಜ್ಪೆ | ತಂಡದಿಂದ ವ್ಯಕ್ತಿಗೆ ಚೂರಿ ಇರಿತ ಪ್ರಕರಣ; ನಾಲ್ವರ ಬಂಧನ

ಬಜ್ಪೆ: ಇಲ್ಲಿನ ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ‌ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಬಂಧಿತರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್ ನನ್ನು ಸಾರ್ವಜನಿಕರು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿದ್ದರು. ಉಳಿದಂತೆ ವೇಣೂರು ನಿವಾಸಿ ಇರ್ಷಾದ್ ನನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು. ಜೊತೆಗೆ ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‌ ಘಟನೆ ನಡೆದ 4 ಗಂಟೆಯ ಒಳಗಾಗಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಅಕ್ರಮ್ ಮತ್ತು‌ ನಿಸಾನ್ ವಿರುದ್ಧ ಗಾಂಜಾ ಸಂಬಂಧಿಸಿದ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣದ ಜೊತೆಗೆ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಆರೋಪಿ ಸಿನಾನ್ ವಿರುದ್ಧ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕಳವು, ಗಾಂಜಾ ಸಾಗಾಟ, ಮಾರಾಟ ಹಾಗೂ ಕೊಲೆಯತ್ನ ಸೇರಿದಂತೆ 7 ಪ್ರಕರಣಗಳು ದಾಖಲಾಗಿವೆ. ಇರ್ಷಾದ್, ಅಕ್ರಮ್ ಮತ್ತು‌ ನಿಸಾನ್ ವಿರುದ್ಧವೂ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳವು , ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿವೆ‌ ಎಂದು ತಿಳಿದು ಬಂದಿದೆ. ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರು ಪೂಪಾಡಿ ಕಲ್ಲುವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಒಂದೇ ದ್ವಿಚಕ್ರವಾಹನದಲ್ಲಿ ನಾಲ್ಕು ಮಂದಿ ಚೂರಿ ಹಿಡಿದು ಸಂಚರಿಸುತ್ತಿರುವುದನ್ನು ಗಮನಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಲು‌ ಮುಂದಾಗಿದ್ದಾರೆ. ಇದನ್ನು ಕಂಡ ಆರೋಪಿಗಳು ಕೊಲೆಗೈಯ್ಯುವ ಉದ್ದೇಶದಿಂದ ಚೂರಿಯಿಂದ ದಾಳಿ ಮಾಡಿದ್ದಾರೆ ಎಂದು ಅಖಿಲೇಶ್ ಅವರು ಬಜ್ಪೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ವಾರ್ತಾ ಭಾರತಿ 25 Nov 2025 8:30 pm

2028ರಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರುವುದೆ ನಮಗೆ ಮುಖ್ಯ : ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಸದ್ಯದ ರಾಜಕೀಯ ಬೆಳವಣಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅದೇನಿದ್ದರೂ ಹೈಕಮಾಂಡ್ ಗೆ ಬಿಟ್ಟ ವಿಚಾರ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದೆ ನಮಗೆಲ್ಲರಿಗೂ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನ.28ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ನಾನು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದೇನೆ. ಬೆಳಗ್ಗೆ ಮುಖ್ಯಮಂತ್ರಿಗೆ ಆಮಂತ್ರಣ ನೀಡಿ ಬಂದೆ, ಈಗ ಉಪ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದೇನೆ. ಹಾಗಾಗಿ ಬೇರೆ ವಿಷಯಗಳ ಬಗ್ಗೆ ನಾನೇನು ಮಾತನಾಡಲಾರೆ ಎಂದು ಅವರು ಹೇಳಿದರು. ಇದೇ ಶುಕ್ರವಾರ ಅರಮನೆ ಮೈದಾನದಲ್ಲಿ ನಡೆಯುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಉದ್ಘಾಟನೆ, ಅಕ್ಕಪಡೆಗೆ ಚಾಲನೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ, ಯುಕೆಜಿ ತರಗತಿಗಳ ಆರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದ್ದು, ಅವರ ಆಗಮನದ ಕುರಿತು ಇನ್ನಷ್ಟೇ  ಖಚಿತವಾಗಬೇಕಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ವಾರ್ತಾ ಭಾರತಿ 25 Nov 2025 8:18 pm

Belagavi | 4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ನವಜಾತ ಶಿಶುವಿನ ಕತ್ತು ಹಿಸುಕಿ ಕೊಂದ ತಾಯಿ!

ಬೆಳಗಾವಿ : ನಾಲ್ಕನೇ ಬಾರಿ ಹೆಣ್ಣುಮಗು ಹುಟ್ಟಿದ್ದಕ್ಕೆ ನವಜಾತ ಶಿಶುವನ್ನೇ ತಾಯಿ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಮದುರ್ಗ ತಾಲ್ಲೂಕಿನ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ಮುದಕವಿ ಗ್ರಾಮದ ಅಶ್ವಿನಿ ಹಣಮಂತ ಹಳಕಟ್ಟಿ ರವಿವಾರ (ನ.23) ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಬಾಣಂತಿ ಮತ್ತು ಶಿಶು ಇಬ್ಬರೂ ಎರಡು ದಿನ ಆರೋಗ್ಯವಾಗಿದ್ದರು. ಮಂಗಳವಾರ ಬೆಳಿಗ್ಗೆ ಶಿಶು ಅಳು ನಿಲ್ಲಿಸಿದ್ದರಿಂದ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಕತ್ತು ಹಿಸುಕಿರುವುದು ಪತ್ತೆಯಾಗಿದೆ. ಅಶ್ವಿನಿ–ಹಣಮಂತ ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಈ ಬಾರಿ ಗಂಡು ಮಗುವಿನ ನಿರೀಕ್ಷೆ ಇಟ್ಟಿದ್ದರು. ಆದರೆ ಮತ್ತೆ ಹೆಣ್ಣು ಮಗು ಹುಟ್ಟಿರುವುದರಿಂದ ಅಶ್ವಿನಿ ಮನನೊಂದುಗೊಂಡಿದ್ದು, ಶಿಶುವನ್ನು ಸಾಕಲು ಸಾಧ್ಯವಿಲ್ಲವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಹಣಮಂತ ಅವರ ತಮ್ಮನಿಗೂ ಮೂವರು ಮಕ್ಕಳು ಇದ್ದು, ಅವರ ಪತ್ನಿ ಕಳೆದ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಮಕ್ಕಳನ್ನೂ ಅಶ್ವಿನಿಯೇ ನೋಡಿಕೊಳ್ಳುತ್ತಿದ್ದರು. ಇದರಿಂದ ಆರೂ ಮಕ್ಕಳ ಜವಾಬ್ದಾರಿ ಈಗಲೇ ಅಶ್ವಿನಿಯ ಮೇಲೆ ಇದ್ದ ಹಿನ್ನೆಲೆಯಲ್ಲಿ, ಏಳನೇ ಮಗು ಕೂಡ ಹೆಣ್ಣಾಗಿದ್ದರಿಂದ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರು ತಿಳಿಸಿದ್ದಾರೆ. ಆರೋಪಿ ಅಶ್ವಿನಿ ಬಾಣಂತಿಯಾಗಿರುವುದರಿಂದ ಬಂಧಿಸದೇ, ತಾಲ್ಲೂಕು ಆಸ್ಪತ್ರೆಯಲ್ಲಿ ಪೊಲೀಸ್ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆಯ ನಂತರ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ವೇಳೆ ಹೆರಿಗೆ ವಾರ್ಡಿನಲ್ಲಿ ಅಶ್ವಿನಿ ಒಬ್ಬರೇ ಇದ್ದರು. ಲಾರಿ ಚಾಲಕರಾದ ಹಣಮಂತ ಘಟನೆ ನಂತರ ಆಸ್ಪತ್ರೆಗೆ ಧಾವಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 25 Nov 2025 8:10 pm

ಕ್ಯಾಂಪ್ಕೊ ಕುಂದಾಪುರ ಶಾಖೆಯ ನವೀಕೃತ ಕಚೇರಿ, ಗೋದಾಮು ಕಟ್ಟಡದ ಉದ್ಘಾಟನೆ

ಕುಂದಾಪುರ, ನ.25: ಕ್ಯಾಂಪ್ಕೊ ರೈತರ ಪರವಾದ ಸಂಸ್ಥೆ. ಕೇವಲ ಲಾಭ ಮಾಡುವ ಉದ್ದೇಶವಲ್ಲದೆ ಸಾರ್ವಜನಿಕ ಸೇವೆ, ರೈತರಿಗೆ ಉಪಯೋಗ ಎಲ್ಲವೂ ಅಡಗಿದೆ. ರೈತರ ಸಹಭಾಗಿತ್ವ ಇಲ್ಲದೇ ಯಾವುದೇ ಸಹಕಾರಿ ಸಂಸ್ಥೆ ಬೆಳವಣಿಗೆ ಕಾಣುವುದಿಲ್ಲ. ಕ್ಯಾಂಪ್ಕೊ ಜತೆ ವ್ಯವಹಾರ ಮಾಡಿ ಕ್ಯಾಂಪ್ಕೊದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ. ಕುಂದಾಪುರ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಕ್ಯಾಂಪ್ಕೊದ ಕುಂದಾಪುರ ಶಾಖೆಯ ನವೀಕೃತ ಕಚೇರಿ, ಗೋದಾಮು ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕ್ಯಾಂಪ್ಕೋ ವ್ಯವಸ್ಥಾಪನ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಮಾತನಾಡಿ, ಕಳೆದ ವರ್ಷ 3,632 ಕೋ.ರೂ. ವ್ಯವಹಾರ ಮಾಡಿ 49 ಕೋ.ರೂ. ಲಾಭ ಮಾಡಿದೆ. ಕೆಜಿಯೊಂದಕ್ಕೆ ಅಡಿಕೆಗೆ 2 ರೂ., ಕೊಕೊಗೆ 6ರೂ. ಹಸಿಬೀಜಕ್ಕೆ 4ರೂ. ಪ್ರೋತ್ಸಾಹಧನ ನೀಡಿದ್ದು, ಕ್ಯಾಂಪ್ಕೋ ಇತಿಹಾಸದಲ್ಲೇ ಮೊದಲು ಎಂದರು. ಈ ವರ್ಷ ಈಗಾಗಲೇ 30,400 ಟನ್ ಅಡಿಕೆ ಖರೀದಿಸಲಾಗಿದೆ. ಕಳೆದ ವರ್ಷಕ್ಕಿಂತ 1 ಸಾವಿರ ಟನ್ ಹೆಚ್ಚು. 880 ಮೆ.ಟನ್ ರಬ್ಬರ್‌ ಖರೀದಿಸಲಾಗಿದೆ. 857 ಮೆ.ಟನ್ ಕಾಳುಮೆಣಸು ಖರೀದಿಸಲಾಗಿದೆ. 6,435 ಟನ್ ಚಾಕಲೇಟ್ ಉತ್ಪನ್ನಗಳನ್ನು ತಯಾರಿಸಲಾಗಿದೆ. ಕಳೆದ ವರ್ಷ 5,684 ಮೆ.ಟನ್ ಉತ್ಪಾದನೆಯಾಗಿತ್ತು. ಕನಿಷ್ಟ 100 ಕೆಜಿಯಾದರೂ ಅಡಿಕೆ ನೀಡುವ ರೈತರಿಗೆ ವೈದ್ಯಕೀಯ ನೆರವು ಕೂಡಾ ದೊರೆಯುತ್ತದೆ ಎಂದು ಅವರು ತಿಳಿಸಿದರು. ಉಪಾಧ್ಯಕ್ಷ ಶಂ.ನಾ.ಖಂಡಿಗೆ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಶಂಭುಲಿಂಗ ಜಿ.ಹೆಗಡೆ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ ಚೌಟ, ರಾಘವೇಂದ್ರ ಭಟ್, ಡಾ.ಜಯಪ್ರಕಾಶ ನಾರಾಯಣ ಟಿ.ಕೆ., ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ಜನರಲ್ ಮೆನೆಜರ್ ರೇಶ್ಮಾ ಮಲ್ಯ, ಡಿಜಿಎಂ ಗೋವಿಂದ ಭಟ್, ಸರಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ಉಪಸ್ಥಿತರಿದ್ದರು. ಮುಖ್ಯ ವ್ಯವಸ್ಥಾಪಕ ಚಂದ್ರ ವಿ.ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 25 Nov 2025 8:08 pm

ನಟ ಧರ್ಮೇಂದ್ರಗೆ ಅಮಿತಾಭ್ ಬಚ್ಚನ್ ರಿಂದ ಭಾವುಕ ವಿದಾಯ

ಮುಂಬೈ: ಅಪರೂಪದ ವ್ಯಕ್ತಿಯಾಗಿದ್ದ ಧರ್ಮೇಂದ್ರ ರಂಗಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ನಟ ಧರ್ಮೇಂದ್ರರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಶೋಲೆ, ಚುಪ್ಕೆ ಚುಪ್ಕೆ, ರಾಮ್ ಬಲರಾಮ್, ಗುಡ್ಡಿ, ಚರಣ್ ದಾಸ್ ಹಾಗೂ ದೋಸ್ತ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಧರ್ಮೇಂದ್ರ ಹಾಗೂ ಅಮಿತಾಭ್ ಬಚ್ಚನ್ ಒಟ್ಟಾಗಿ ನಟಿಸಿದ್ದರು. ಶೋಲೆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಕ್ರಮವಾಗಿ ಜೈ ಹಾಗೂ ವೀರು ಪಾತ್ರಗಳಲ್ಲಿ ಅಭಿನಯಿಸಿದ್ದರು. ಅವರಿಬ್ಬರ ನಡುವಿನ ಕ್ಯಾಮೆರಾ ಮುಂದೆ ಹಾಗೂ ಹಿಂದಿನ ಬಲಿಷ್ಠ ಸ್ನೇಹ ಅಪರೂಪದ ನಿದರ್ಶನವಾಗಿ ಇಂದಿಗೂ ಉಳಿದಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತಾಭ್ ಬಚ್ಚನ್, “ಮತ್ತೊಬ್ಬ ಮಹಾನ್‌ ನಟ ತಮ್ಮ ರಂಗಸ್ಥಳದಿಂದ ನಿರ್ಗಮಿಸಿದ್ದಾರೆ” ಎಂದು ಕಂಬನಿ ಮಿಡಿದಿದ್ದಾರೆ. “ಧರ್ಮೇಂದ್ರ ತಮ್ಮ ದೈಹಿಕ ಉಪಸ್ಥಿತಿಯಿಂದ ಮಾತ್ರ ಅದ್ಭುತ ವ್ಯಕ್ತಿಯಾಗಿರಲಿಲ್ಲ; ಬದಲಿಗೆ ತಮ್ಮ ಹೃದಯ ವೈಶಾಲ್ಯತೆಯಿಂದಲೂ ಅವರು ಅದ್ಭುತ ವ್ಯಕ್ತಿಯಾಗಿದ್ದರು. ಪಂಜಾಬ್ ನ ಹಳ್ಳಿಯೊಂದರಿಂದ ಅವರು ತಮ್ಮೊಂದಿಗೆ ಸರಳತೆಯನ್ನು ಹೊತ್ತು ತಂದಿದ್ದರು ಹಾಗೂ ತಮ್ಮ ಸ್ವಭಾವದಲ್ಲಿ ಅವರು ನೈಜವಾಗಿ ಉಳಿದಿದ್ದರು. ತಮ್ಮ ವೈಭವಯುತ ವೃತ್ತಿ ಜೀವನದುದ್ದಕ್ಕೂ ಅವರು ನಿಷ್ಕಳಂಕರಾಗಿದ್ದರು. ಸಿನಿಮಾ ರಂಗದಲ್ಲಿ ಪ್ರತಿ ದಶಕದಲ್ಲೂ ಬದಲಾವಣೆಯಾಗುತ್ತಿದ್ದರೂ, ಅವರು ಮಾತ್ರ ಎಂದಿನಂತೆಯೇ ಉಳಿದಿದ್ದರು” ಎಂದು ಅವರು ಶ್ಲಾಘಿಸಿದ್ದಾರೆ.

ವಾರ್ತಾ ಭಾರತಿ 25 Nov 2025 8:07 pm

ಕಲಬುರಗಿಯಲ್ಲಿ ಕಾರು ಅಪಘಾತ | ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತ್ಯು

ಕಲಬುರಗಿ : ಕಾರು ಅಪಘಾತದಲ್ಲಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ.   ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಕಲಬುರಗಿಗೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಶ್ವಾನ ಅಡ್ಡ ಬಂದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.  ಅಪಘಾತದಲ್ಲಿ ಮಹಾಂತೇಶ್ ಬೀಳಗಿ, ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ವಾರ್ತಾ ಭಾರತಿ 25 Nov 2025 8:05 pm

ಟಿ20 ವಿಶ್ವಕಪ್ 2026ರ ಅಧಿಕೃತ ವೇಳಾಪಟ್ಟಿ ಪ್ರಕಟ: ಫೆ.15ರಂದು ಭಾರತ-ಪಾಕ್‌ ಮುಖಾಮುಖಿ; ಪಂದ್ಯಗಳು ಎಲ್ಲೆಲ್ಲಿ?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2026ರ ಟಿ20 ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7, 2026 ರಂದು ಆರಂಭಗೊಳ್ಳಲಿದೆ. ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಬಹುನಿರೀಕ್ಷಿತ ಪಂದ್ಯವು ಫೆಬ್ರವರಿ 15 ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯ ಸೆಮಿ-ಫೈನಲ್ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆದರೆ, ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ.

ವಿಜಯ ಕರ್ನಾಟಕ 25 Nov 2025 7:58 pm

ಹೊಸ 7 ಜಿಟಿಟಿಸಿ ಕೇಂದ್ರಗಳ ಕಾಮಗಾರಿ ಶೀಘ್ರದಲ್ಲಿಯೇ ಆರಂಭ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಈಗಾಗಲೇ ಹೊಸ 7 ಜಿಟಿಟಿಸಿ(ಸರಕಾರಿ ಉಪಕರಣಾಗಾರ ಮತ್ತು ತರಬೇತಿ) ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಧುಗಿರಿ ಮತ್ತು ಇಂಡಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆ.ಕೆ.ಆರ್.ಡಿ.ಬಿ ಮ್ಯಾಕ್ರೋ ಅನುದಾನದಡಿ ನೂತನ ಜಿಟಿಟಿಸಿ ಗಳನ್ನು ಸ್ಥಾಪಿಸುವ ಸಂಬಂಧ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಜಿಟಿಟಿಸಿ ಮೂಲಕ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಟ್ಟು 32 ಜಿಟಿಟಿಸಿ ಕೇಂದ್ರಗಳಿವೆ. ಈ ಸಾಲಿನ ಬಜೆಟ್‍ನಲ್ಲಿ ಹೊಸ 7 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಕೇಂದ್ರಗಳ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದರು. ಇಂಡಿ, ಮಧುಗಿರಿ, ಕಂಪ್ಲಿ, ರಾಯಚೂರು ಗ್ರಾಮೀಣ, ಸಿಂಧನೂರಿನಲ್ಲಿ ಜಿಟಿಟಿಸಿ ಪ್ರಾರಂಭಿಸಲು ಸ್ಥಳ ಗುರುತಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಸಂಡೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದೂ ಉಲ್ಲೇಖಿಸಿದರು. ಜಿಟಿಟಿಸಿ ಪ್ರವೇಶಾತಿಯನ್ನು 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಂದ ತರಬೇತಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ವಿದೇಶಿ ಕಂಪೆನಿಗಳಲ್ಲಿಯೂ ಸೇರಿದಂತೆ ಶೇಕಡ 100 ರಷ್ಟು ನೇಮಕಾತಿ ಆಗುತ್ತಿದೆ. ಬೇಡಿಕೆಯಿರುವ ಕೋರ್ಸ್‍ಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಜತೆಗೆ, ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಟಿಟಿಸಿ ಜೊತೆ ಒಪ್ಪಂದ: ಮತ್ತೊಂದು ಸಭೆಯಲ್ಲಿ, ಐಫೋನ್ ತಯಾರಕ ಫಾಕ್ಸ್‌ ಕಾನ್‍ಗೆ ಕ್ಯಾಮೆರಾ ಪರಿಕರಗಳನ್ನು ಒದಗಿಸುವ ಕೊರಿಯನ್ ಸಂಸ್ಥೆಯಾದ ಹೈವಿಷನ್ ಇಂಡಿಯಾ ಪ್ರೈ ಲಿಮಿಟೆಡ್‍ನ ಮುಖ್ಯಸ್ಥರು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಸಮ್ಮುಖದಲ್ಲಿ ಜಿಟಿಟಿಸಿ ಒಪ್ಪಂದಕ್ಕೆ ಸಹಿ ಹಾಕಿತು. ತಾಂತ್ರಿಕ ತರಬೇತಿ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಯಾಂತ್ರೀಕೃತತೆ, ನಿಖರ ಯಂತ್ರೋಪಕರಣ ಮತ್ತು ಸಲಕರಣೆಗಳ ಜೋಡಣೆಯಂತಹ ಕ್ಷೇತ್ರಗಳಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಸಹಕಾರಕ್ಕಾಗಿ ಈ ಒಪ್ಪಂದವು ಅವಕಾಶವನ್ನು ಒದಗಿಸುತ್ತದೆ. ಒಪ್ಪಂದಕ್ಕೆ ಹೈವಿಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲೀ ಯುನ್ಹೋ ಮತ್ತು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸಹಿ ಹಾಕಿದರು. ಎರಡೂ ಸಂಸ್ಥೆಗಳು ಅರ್ಹ ಜಿಟಿಟಿಸಿ ಪ್ರಶಿಕ್ಷಣಾರ್ಥಿಗಳಿಗೆ ಕೈಗಾರಿಕಾ ಮಾನ್ಯತೆ, ಇಂಟರ್ನ್‍ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸಮ್ಮತಿಸಿವೆ. ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕೈಗಾರಿಕಾ ಸೌಲಭ್ಯಗಳು ಮತ್ತು ಪ್ರಾತ್ಯಕ್ಷಿಕೆ ಸಲಕರಣೆಗಳನ್ನು ಪೂರೈಸಲಿವೆ.

ವಾರ್ತಾ ಭಾರತಿ 25 Nov 2025 7:51 pm

ಉಡುಪಿ | ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಅಧ್ಯಕ್ಷರಾಗಿ ಅಜ್ಮಲ್ ಆಯ್ಕೆ

ಉಡುಪಿ, ನ.25: ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕಿನ ವಾರ್ಷಿಕ ಮಹಾಸಭೆಯು ಶಿರೂರು ಯುನಿಯನ್ ಸುಪರ್ ಮಾರ್ಕೆಟ್ ನ ಮೇಲ್ ಮಹಡಿಯ ಇಸ್ಲಾಹಿ ತಂಜೀಮ್ ಕಚೇರಿಯಲ್ಲಿ ಇತ್ತೀಚಿಗೆ ನಡೆಯಿತು. ಸಭಾಧ್ಯಕ್ಷತೆಯನ್ನು ಮಾಮ್ದು ಇಬ್ರಾಹೀಂ ಶಿರೂರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ನಕ್ವಾ ಯಾಹ್ಯಾ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿಉಡುಪಿ, ಮಾಜಿ ಜಿಲ್ಲಾ ಅಧ್ಯಕ್ಷ ಮುಷ್ತಾಕ್ ಬೆಳ್ವೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಖಲೀಲ್ ಕಾಪ್ಸಿ ವರದಿ ಮಂಡಿಸಿದರು. ಖಜಾಂಚಿ ಪರಿ ಹುಸೈನ್ ರವರು ಲೆಕ್ಕ ಪತ್ರ ಮಂಡಿಸಿದರು. ತಾಲೂಕು ಉಸ್ತುವಾರಿ ಮಮ್ದು ಇಬ್ರಾಹಿಂ ಸಾಹ್ಗ್ಡೇ ಮತ್ತು ಚುನಾವಣಾ ಅಧಿಕಾರಿಗಳಾದ ನಿಹಾರ್ ಅಹ್ಮದ್ ಕುಂದಾಪುರ, ಅಬ್ದುಲ್ ಖಾದರ್ ಮೂಡುಗೋಪಾಡಿ, ಹಾರೂನ್ ರಶೀದ್ ಸಾಸ್ತಾನ್ ರವರು ಬೈಂದೂರು ತಾಲೂಕಿನ ಹೊಸ ಸಮಿತಿ ರಚನೆಯ ಪ್ರಕ್ರಿಯೆ ನಡೆಸಿಕೊಟ್ಟರು. 2026-27 ಸಾಲಿನ ನೂತನ ಅಧ್ಯಕ್ಷರಾಗಿ ಸೈಯದ್ ಅಜ್ಮಲ್ ಸಿ.ಎ.ಶಿರೂರು, ಉಪಾಧ್ಯಕ್ಷರಾಗಿ ತಮ್ಟಿಕರ್ ಮುಹಮ್ಮದ್ ಇಲ್ಯಾಸ್ ಬೈಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಕಾಪ್ಸಿ ಶಿರೂರು, ಜಂಟಿ ಕಾರ್ಯದರ್ಶಿಯಾಗಿ ತಾರಿಸಲ್ಲಾ ಮುಹಮ್ಮದ್ ಗೌಸ್ ಶಿರೂರು, ಕೋಶಾಧಿಕಾರಿಯಾಗಿ ಅಮೀರ್ ಹುಸೈನ್ ನಾಗೂರು, ಸಂಘಟನಾ ಕಾರ್ಯದರ್ಶಿಯಾಗಿ ಡಾ.ಮೊಹಮ್ಮದ್ ತಾಹಾ ಶಿರೂರು, ತಾಲೂಕು ಸಮಿತಿ ಸದಸ್ಯರಾಗಿ, ಪರಿ ಹುಸೈನ್ ಶಿರೂರು, ಮಾಮ್ದು ಇಬ್ರಾಹೀಂ ಶಿರೂರು, ಕಾವಾ ಸಯೀದ್ ಶಿರೂರು, ಮುಝಫ್ಫರ್ ಕಿರಿಮಂಜೇಶ್ವರ, ಎನ್.ಎಸ್.ರಿಜ್ವಾನ್ ಬೊಳ್ಕಿಂಬೊಳೆ, ಉಸ್ಮಾನ್ ನಾಗೂರು, ಅಬ್ದುಲ್ ಸಮಿ ಹಳಗೇರಿ, ಜೈನುಲ್ ಅಬೀದಿನ್ ಹಳಗೇರಿ, ಫೈಝಾನ್ ಕಿರಿಮಂಜೇಶ್ವರ, ಕಾಝಿ ಇರ್ಶಾದ್ ಕಿರಿಮಂಜೇಶ್ವರ, ಸಯ್ಯದ್ ಅಸ್ಲಮ್ ಶಿರೂರು, ನಿಹಾಲ್ ಶಿರೂರು, ಶೇಕ್ ನಸ್ರುಲ್ಲಾ ಕಿರಿಮಂಜೇಶ್ವರ, ಮುದಸ್ಸಿರ್, ಸಮಿಉಲ್ಲಾ ಶೇಖ್ ಕಿರಿಮಂಜೇಶ್ವರ ಮತ್ತು ಅಮೀನ್ ಗೊಳಿಹೊಳೆ ಆಯ್ಕೆಯಾದರು. ಅಲ್ ಹಾಶ್ಮಿ ಮಸೀದಿಯ ಮುಅಝ್ಝಿನ್ ಅಬ್ದುಲ್ ಕಯ್ಯುಮ್ ಕಿರಾತ್ ಪಠಿಸಿದರು. ಉಪಾಧ್ಯಕ್ಷರಾದ ತಮ್ಟಿಕರ್ ಮೊಹಮ್ಮದ್ ಇಲ್ಯಾಸ್ ಬೈಂದೂರು ವಂದಿಸಿದರು.

ವಾರ್ತಾ ಭಾರತಿ 25 Nov 2025 7:50 pm

ಕೆಪಿಎಸ್‍ಸಿ : ಪರಿಷ್ಕೃತ ಕೀ ಉತ್ತರ ಪ್ರಕಟ

ಬೆಂಗಳೂರು : ಲೋಕಸೇವಾ ಆಯೋಗವು ಅಧಿಸೂಚಿಸಲಾದ ವಿವಿಧ ಹುದ್ದೆಗಳಾದ ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು, ವಿವಿಧ ಗ್ರೂಪ್-ಸಿ, ವಿವಿಧ ಗ್ರೂಪ್-ಸಿ ಹುದ್ದೆಗಳ ಪರಿಷ್ಕೃತ ಕೀ ಉತ್ತರಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಕೀ-ಉತ್ತರಗಳು ಪ್ರಕಟಿಸಿದ ನಂತರ, ಕೀ ಉತ್ತರ, ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ, ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Nov 2025 7:47 pm

ನ್ಯಾಯವಾದಿ ನೌಶಾದ್ ಕಾಶಿಂಜಿ ಕೊಲೆ ಸಹಿತ ಹಲವು ಪ್ರಕರಣದಲ್ಲಿ ಭಾಗಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು, ನ.25: ನ್ಯಾಯವಾದಿ ನೌಶಾದ್ ಕಾಶಿಂಜಿ ಕೊಲೆ ಸಹಿತ ಹಲವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಆರೋಪಿ ಬೆಳ್ತಂಗಡಿ ತಾಲೂಕಿನ ಹೊಸಮನೆಯ ನಿವಾಸಿ ಟಿ.ದಿನೇಶ್ ಶೆಟ್ಟಿ ಯಾನೆ ದಿನ್ನು ಎಂಬಾತನನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ. ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್‌ ನಿಂದ ಸುಪಾರಿ ಪಡೆದು ನ್ಯಾಯವಾದಿ ನೌಶಾದ್ ಖಾಶಿಂಜಿ ಅವರನ್ನು 2009ರಲ್ಲಿ ಕೊಲೆಗೈದ ಆರೋಪದಲ್ಲಿ ದಿನೇಶ್ ಶೆಟ್ಟಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆ ಪ್ರಕರಣದಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಈತ ರಾಜ್ಯ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ 2019ರಲ್ಲಿ ಬಿಡುಗಡೆಗೊಂಡಿದ್ದ. ನಂತರದ ದಿನಗಳಲ್ಲಿ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಹರಣ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಂಚನೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕಳೆದ ಒಂದೂವರೆ ವರ್ಷದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದಿನೇಶ್‌ನನ್ನು ಮಂಗಳವಾರ ಬಂಧಿಸಲಾಗಿದೆ.

ವಾರ್ತಾ ಭಾರತಿ 25 Nov 2025 7:47 pm

ರಸ್ತೆ ಅಪಘಾತದಲ್ಲಿ IAS ಅಧಿಕಾರಿ ಮಹಾಂತೇಶ ಬೀಳಗಿ ಸಾವು! ಕಲಬುರಗಿಯ ಜೇವರ್ಗಿ ಬಳಿ ಘಟನೆ

ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅವರ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ವಿಜಯ ಕರ್ನಾಟಕ 25 Nov 2025 7:47 pm

ಕುಂದಾಪುರ | ಸಾಧಕ ಪತ್ರಕರ್ತರಿಗೆ ಸನ್ಮಾನ, ಪದಾಧಿಕಾರಿಗಳಿಗೆ ಗೌರವ ಕಾರ್ಯಕ್ರಮ

ಕುಂದಾಪುರ, ನ.25: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರಿಗೆ ಸನ್ಮಾನ ಹಾಗೂ ಸಂಘದ ನೂತನ ಪದಾಧಿಕಾರಿಗಳಿಗೆ ಗೌರವ ಕಾರ್ಯಕ್ರಮವು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಮುಖ್ಯ ಅತಿಥಿಯಾಗಿ ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿರ್ಶೋ ಕುಮಾರ್ ಮಾತನಾಡಿ, ಬದುಕಿನಲ್ಲಿ ಏನು ಬರುತ್ತದೋ ಅದನ್ನು ಸ್ವೀಕಾರ ಮಾಡಿ ಬದುಕಬೇಕು, ಅದೇ ನಮ್ಮ ಜೀವನವಾಗಿರಬೇಕು. ಯಾರು ಯಕ್ಷಗಾನವನ್ನು ಪ್ರೀತಿಸುತ್ತಾರೋ ಅವರು ಪ್ರತಿಯೊಬ್ಬರನ್ನೂ ಪ್ರೀತಿಸಬಲ್ಲರು ಮತ್ತು ಜಗತ್ತನ್ನು ಪ್ರೀತಿಸುತ್ತಾರೆ. ಯಕ್ಷಗಾನವನ್ನು ಪ್ರೀತಿಸುವುದರಿಂದ ನಿರಂತರವಾಗಿ ಬರೆಯಲು ಸಾಧ್ಯವಾಗುತ್ತದೆ. ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು, ಸಮಾಜದಲ್ಲಿ ಬದಲಾವಣೆಯನ್ನು ಪತ್ರಕರ್ತರಿಂದ ಮಾಡಲು ಸಾಧ್ಯವಾಗುತ್ತದೆ. ಪತ್ರಕರ್ತರು ಉತ್ಸಾಹದ ಚಿಲುಮೆಯಾಗಿ ಕೆಲಸ ಮಾಡುವಂತೆ ಆಗಬೇಕು. ಪತ್ರಕರ್ತರಲ್ಲಿ ಉತ್ಸಾಹ ಕಡಿಮೆಯಾದರೆ, ಉದಾಸೀನದ ಮನೋಭಾವ ಬೆಳೆದರೆ ನಾವು ಅರ್ಧ ಸತ್ತ ಹಾಗೆ. ಆದ್ದರಿಂದ ಯಾವುದೇ ಸುದ್ಧಿಯನ್ನು ಈಗಲೇ ಮಾಡುವ, ಇವತ್ತೇ ಮಾಡುವ ನಮ್ಮಲ್ಲಿ ಉತ್ಸಾಹ ಇದ್ದರೆ ಮಾತ್ರ ನಾವು ಬೇಡಿಕೆಯ ಪತ್ರಕರ್ತರಾಗಿ ಇರಲು ಸಾಧ್ಯವಾಗುತ್ತದೆ ಎಂದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಾನ್ ಡಿಸೋಜ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಸ್.ಸುಬ್ರಹ್ಮಣ್ಯ ಕುರ್ಯ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕಾರ್ಯದರ್ಶಿ ಟಿ.ಲೋಕೇಶ ಆಚಾರ್ಯ ತೆಕ್ಕಟ್ಟೆ, ಬಿ.ರಾಘವೇಂದ್ರ ಪೈ ಗಂಗೊಳ್ಳಿ, ಚಂದ್ರಮ ತಲ್ಲೂರು ಮತ್ತು ಯೋಗೀಶ್ ಕುಂಭಾಶಿ ಅವರನ್ನು ಗೌರವಿಸಲಾಯಿತು. ಭಂಡಾರ್ಕರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್.ಶೆಣೈ ಮಾತನಾಡಿದರು. ತಾಲೂಕು ಸಂಘದ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್.ಬೀಜಾಡಿ ವಂದಿಸಿದರು.

ವಾರ್ತಾ ಭಾರತಿ 25 Nov 2025 7:43 pm

ನೈಜ, ವಸ್ತುನಿಷ್ಠವಾಗಿ ಸುದ್ದಿ ನೀಡುವ ವಾರ್ತಾಭಾರತಿ ಮಾಧ್ಯಮವನ್ನು ಬೆಂಬಲಿಸಬೇಕು : ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಸಿಂಧನೂರಿನಲ್ಲಿ ಓದುಗ, ಹಿತೈಷಿಗಳ ಸಭೆ

ವಾರ್ತಾ ಭಾರತಿ 25 Nov 2025 7:32 pm

ಉಡುಪಿ | ಹೆಜ್ಜೆ-ಗೆಜ್ಜೆಯಿಂದ ರಾಷ್ಟ್ರಮಟ್ಟದ ನೃತ್ಯ, ಸಂಗೀತ ಸ್ಪರ್ಧೆ

ಉಡುಪಿ, ನ.25: ಮಣಿಪಾಲ- ಉಡುಪಿಯ ಹೆಜ್ಜೆ ಗೆಜ್ಜೆ ಫೌಂಡೇಶನ್ ಆಶ್ರಯದಲ್ಲಿ ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಮತ್ತು ಸಂಗೀತ ಸ್ಪರ್ಧೆ ನ.30 ಹಾಗೂ ಡಿಸೆಂಬರ್ 7ರಂದು ನಡೆಯಲಿದೆ. ದಾಸಪದ ವೈಭವಂ ಹೆಸರಿನಲ್ಲಿ ನಡೆಯುವ ಭಕ್ತಿ ನೃತ್ಯ ಸೌರಭ ಭರತನಾಟ್ಯ ಸ್ಪರ್ಧೆ ನ.30ರ ರವಿವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಹೆಜ್ಜೆ ಗೆಜ್ಜೆಯ ಸಹ ನಿರ್ದೇಶಕಿ ದೀಕ್ಷಾ ರಾಮಕೃಷ್ಣ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಫಲಕದೊಂದಿಗೆ 10,000 ರೂ.ನಗದು, ಎರಡನೇ ಬಹುಮಾನ ಪಡೆದವರಿಗೆ 7,000 ರೂ. ಹಾಗೂ ಮೂರನೇ ಬಹುಮಾನ ಪಡೆದವರಿಗೆ 5000 ರೂ. ನೀಡಲಾಗುವುದು. ಅಲ್ಲದೇ ಪ್ರಥಮ ಬಹುಮಾನ ವಿಜೇತರಿಗೆ ನೃತ್ಯದಾಸರತ್ನ ಬಿರುದು ನೀಡಲಾಗುವುದು ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ನೃತ್ಯ ಸ್ಪರ್ಧಾರ್ಥಿಗೆ 10 ನಿಮಿಷಗಳ ಕಾಲಾವಕಾಶವಿರುತ್ತದೆ. ನೃತ್ಯಭಾಗ ಅಲರಿಪು, ಜತಿಸ್ವರ ಇತ್ಯಾದಿ ಮತ್ತು ಇನ್ನೊಂದು ದಾಸರ ಅಂಕಿತ ಇರುವ ದೇವರನಾಮ (ಅಭಿನಯ)ಕ್ಕೆ ನರ್ತಿಸಬೇಕಾಗುತ್ತದೆ ಎಂದು ದೀಕ್ಷಾ ರಾಮಕೃಷ್ಣ ತಿಳಿಸಿದರು. ಡಿ.7ರ ರವಿವಾರ ಭಕ್ತಿ ಗಾನ ಲಹರಿ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆಯನ್ನು ಹೆಜ್ಜೆ ಗೆಜ್ಜೆ ಉಡುಪಿಯಲ್ಲಿ ನಡೆಸಲಾಗುವುದು. ಪ್ರತಿಯೊಬ್ಬರಿಗೆ 10 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಈ ಸ್ಪರ್ಧೆಯ ವಿಜೇತರಿಗೆ ಫಲಕದೊಂದಿಗೆ 10,000 ರೂ. ನಗದು ಬಹುಮಾನ, ಎರಡನೇ ಸ್ಥಾನಿಗೆ 7,000 ರೂ. ಹಾಗೂ ಮೂರನೇ ಸ್ಥಾನಿಗೆ 5000 ರೂ. ನಗದು ನೀಡಲಾಗುವುದು. ಅಗ್ರಸ್ಥಾನಿಗೆ ದಾಸಗಾನರತ್ನ ಪ್ರಶಸ್ತಿ ನೀಡಲಾಗುವುದು. ಈ ಎರಡು ಸ್ಪರ್ಧೆಗಳಲ್ಲಿ 13ರಿಂದ 25 ವರ್ಷ ವಯೋಮಿತಿಯವರು ಮಾತ್ರ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹೆಜ್ಜೆ ಗೆಜ್ಜೆ ಉಡುಪಿ ದೂರವಾಣಿ ಸಂಖ್ಯೆ:9110814436ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹೆಜ್ಜೆಗೆಜ್ಜೆಯ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಹಾಗೂ ರಂಜನಿ ಸಾಮಗ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 7:30 pm

ಪತ್ನಿಗೆ 'ಪಾದರಸ' ಇಂಜೆಕ್ಷನ್ ಕೊಟ್ಟು 9 ತಿಂಗಳವರೆಗೆ ನರಳುವಂತೆ ಮಾಡಿದ ಪತಿ - ತಮಿಳಿನ 'ಐ' ಸಿನಿಮಾ ನೆನಪಿಸಿದ ಪ್ರಕರಣ

ಬೆಂಗಳೂರಿನ ಅತ್ತಿಬೆಲೆಯಲ್ಲಿ ಗಂಡನಿಂದ ವಿಷಪ್ರಾಶನಕ್ಕೊಳಗಾದ ವಿದ್ಯಾ ಎಂಬ ಮಹಿಳೆ ಒಂಬತ್ತು ತಿಂಗಳ ನಂತರ ಸಾವನ್ನಪ್ಪಿದ್ದಾಳೆ. ಪತಿ ಬಸವರಾಜ ಮತ್ತು ಮಾವ ಮಾರಿಸ್ವಾಮಿಚಾರಿ ತಮ್ಮನ್ನು ಕೊಲ್ಲುವ ಉದ್ದೇಶದಿಂದ ಪಾದರಸವನ್ನು ಇಂಜೆಕ್ಷನ್ ಮೂಲಕ ನೀಡಿದ್ದಾರೆ ಎಂದು ವಿದ್ಯಾ ಪೊಲೀಸರಿಗೆ ತಿಳಿಸಿದ್ದಳು. ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಪಾದರಸ ವಿಷಪ್ರಾಶನ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾ ಮೃತಪಟ್ಟಿದ್ದಾಳೆ.

ವಿಜಯ ಕರ್ನಾಟಕ 25 Nov 2025 7:25 pm

ಉಡುಪಿ | ನ.28ರಂದು ವಾಹನ ಸಂಚಾರದಲ್ಲಿ ಬದಲಾವಣೆ

ಉಡುಪಿ, ನ.25: ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬೆಳಗ್ಗೆ 9:00ರಿಂದ ಅಪರಾಹ್ನ 3:00 ಗಂಟೆಯವರೆಗೆ ಸಂಚಾರ ನಿಷೇಧ ಹಾಗೂ ಬದಲಿ ಮಾರ್ಗದ ಕುರಿತು ಜಿಲ್ಲಾಡಳಿತ ಅಧಿಸೂಚನೆಯನ್ನು ಹೊರಡಿಸಿದೆ. ಬದಲಾವಣೆಯ ವಿವರ ಹೀಗಿದೆ : ► ಆದಿಉಡುಪಿ ಹೆಲಿಪ್ಯಾಡ್ನಿಂದ ಕರಾವಳಿ ಜಂಕ್ಷನ್-ಬನ್ನಂಜೆ- ಶಿರಿಬೀಡು- ಕಲ್ಸಂಕ- ಶ್ರೀಕೃಷ್ಣ ಮಠದವರೆಗೆ ಯಾವುದೇ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ. ► ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲಾ ವಾಹನಗಳು ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು. ► ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಪ್ಲೈ ಓವರ್- ಅಂಬಲಪಾಡಿ- ಬ್ರಹ್ಮಗಿರಿ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು. ► ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಕಿನ್ನಿಮುಲ್ಕಿ ಸ್ವಾಗತಗೋಪುರ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು. ► ಅಂಬಾಗಿಲಿನಿಂದ ಗುಂಡಿಬೈಲ್ ಮಾರ್ಗವಾಗಿ ಉಡುಪಿಗೆ ಬರುವ ಎಲ್ಲಾ ವಾಹನಗಳು ಗುಂಡಿಬೈಲ್ ರಸಿಕಾ ಬಾರ್ ಮೂಲಕ ದೊಡ್ಡಣಗುಡ್ಡೆ -ಎಂಜಿಎಂ- ಎಸ್ಕೆಎಂ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು. ► ಮಲ್ಪೆಯಿಂದ ಬರುವ ಎಲ್ಲಾ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಬೇಕು. ಈ ಬದಲಿ ಮಾರ್ಗವು ನ.28ರ ಶುಕ್ರವಾರ ಬೆಳಗ್ಗೆ 9:00ರಿಂದ ಅಪರಾಹ್ನ 3:00ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಹಾಗೂ ಎಲ್ಲಾ ರೀತಿಯ ತುರ್ತುಸೇವೆಗಳ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Nov 2025 7:22 pm

ಮಂಗಳೂರು | ʼಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆʼ ಕುರಿತು ತರಬೇತಿ

ಮಂಗಳೂರು,ನ.25: ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ಕುರಿತು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ನಗರದ ಕದ್ರಿ ಬಾಲಭವನದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ಕಾರ್ಯಕ್ರಮದ ಭಾಗಿದಾರರೆಲ್ಲರೂ ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಾತ್ರ ವಹಿಸುವವರು. ಆದುದರಿಂದ ಸರಕಾರದ ಕಾನೂನುಗಳ ಹಾಗೂ ಯೋಜನೆಗಳ ಅರಿವು ಇರುವುದು ಹಾಗೂ ಸೇವೆಗಳನ್ನು ಒದಗಿಸುವುದು ಬಹುಮುಖ್ಯವಾಗಿದೆ. ಯಾವುದೇ ಮಹಿಳೆ ದೌರ್ಜನ್ಯಕ್ಕೆ ಒಳಗಾದಲ್ಲಿ ನೇರವಾಗಿ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಬಂದು ದೂರು ನೀಡಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಂಘ-ಸಂಸ್ಥೆಗಳು ನೆರವಾಗಲಿದೆ ಎಂದರು. ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ಶುಕರಾಜ್ ಕೊಟ್ಟಾರಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅರಿಣಾ ಯಡಿಯಾಳ್ ಭಾಗವಹಿಸಿದ್ದರು.

ವಾರ್ತಾ ಭಾರತಿ 25 Nov 2025 7:18 pm

BDA ಕಾಮಗಾರಿ: ಬೆಂಗಳೂರು - ಮೈಸೂರು ಮಾರ್ಗದ 10 ರೈಲುಗಳ ಸಂಚಾರ ವ್ಯತ್ಯಯ; 5 ರೈಲು ರದ್ದು!

ಬಿಡಿಎ ಕಾಮಗಾರಿ ಕಾರಣ ಬೆಂಗಳೂರು ಮೈಸೂರು ನಡುವಿನ ರೈಲು ಸಂಚಾರದಲ್ಲಿ ಬದಲಾವಣೆಗಳು ಆಗಲಿವೆ. ಐದು ರೈಲುಗಳು ಸಂಪೂರ್ಣವಾಗಿ ರದ್ದಾಗಲಿವೆ. ಐದು ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸೂಕ್ತ ಯೋಜನೆಯೊಂದಿಗೆ ಪ್ರಯಾಣ ಬೆಳೆಸಲು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬದಲಾವಣೆಗಳು ನಿರ್ದಿಷ್ಟ ದಿನಾಂಕಗಳಲ್ಲಿ ಜಾರಿಯಲ್ಲಿರಲಿವೆ.

ವಿಜಯ ಕರ್ನಾಟಕ 25 Nov 2025 7:16 pm

ಮಂಗಳೂರು | ಸಮೀಕ್ಷೆ ವೇಳೆ ಅನಾರೋಗ್ಯಕ್ಕೆ ತುತ್ತಾದ ಗಣತಿದಾರರಿಗೆ ಸನ್ಮಾನ

ಮಂಗಳೂರು,ನ.25: ಕೆಲವು ದಿನಗಳ ಹಿಂದೆ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ಕಾರ್ಯದ ವೇಳೆ ಅನಾರೋಗ್ಯಕ್ಕೀಡಾದ ಗಣತಿದಾರರಿಗೆ ಸನ್ಮಾನಿಸುವ ಕಾರ್ಯಕ್ರಮ ಸೋಮವಾರ ನಡೆಯಿತು. ಕೆಲವು ಶಿಕ್ಷಕರಿಗೆ ಗಣತಿ ಕಾರ್ಯದ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡುವಾಗ, ಹೆಜ್ಜೇನು, ಹುಳ, ನಾಯಿಗಳು ಕಚ್ಚಿ ಹಾಗೂ ರಸ್ತೆಯ ಅಪಘಾತಗಳಿಂದ ಅನಾರೋಗ್ಯಕ್ಕೆ ತುತ್ತಾದ ಶಿಕ್ಷಕರನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮುಲ್ಕಿ, ಉಳ್ಳಾಲ, ಬಂಟ್ವಾಳಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಗಣತಿದಾರರ ಆರೋಗ್ಯ ವಿಚಾರಿಸಿ, ಅಂತಹ ಕಷ್ಟದ ಸಮಯದಲ್ಲೂ ಸಹ ಧೃತಿಗೆಡದೆ ಯಶಸ್ವಿಯಾಗಿ ಗಣತಿ ಕಾರ್ಯವನ್ನು ಪೂರ್ಣಗೊಳಿಸಿದ ಗಣತಿದಾರ ಶಿಕ್ಷಕರನ್ನು ಅಭಿನಂದಿಸಿದರು. ಮುಲ್ಕಿ ತಾಲೂಕಿನ ಗ್ರಾಪಂ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ, ಮುಲ್ಕಿ ಕೆರೆಕಾಡು ಸರಕಾರಿ ಶಾಲೆಯ ನವೀನ್ ಡಿಸೋಜ, ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಎನ್ನಿ ನಿರ್ಮಲ್ ಡಿಸೋಜ, ಮರಕಡ ಶಾಲೆಯ ಸರಿತ ಡಿಸೋಜ, ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ರಾಣಿಪುರ ಸರಕಾರಿ ಶಾಲೆಯ ಗ್ಲೋರಿಯಾ ಅನುಶಿಯ ಲೋಬೋ, ಅಂಬ್ಲಮೊಗರು ಸರಕಾರಿ ಶಾಲೆಯ ರೋಝಾ, ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಸರಕಾರಿ ಪ್ರೌಢಶಾಲೆಯ ವೆಂಕಟರಮಣ ಆಚಾರ್, ಕಾವಳಮೂಡೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸುರೇಖಾ ಗಣತಿಯ ವೇಳೆ ಅನಾರೋಗ್ಯಕ್ಕೀಡಾಗಿದ್ದರು. ಈ ಸಂದರ್ಭ ಆಯಾ ತಾಲೂಕಿನ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರುಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 7:16 pm

ಪಿಲಿಕುಳ | ಪ್ರತೀ ಸೋಮವಾರ ಪ್ರವಾಸಿಗರ ವೀಕ್ಷಣೆಗೆ ಅವಕಾಶ

ಮಂಗಳೂರು,ನ.25: ಶಾಲಾ ಮಕ್ಕಳ ಪ್ರವಾಸ ಕಾರ್ಯಕ್ರಮದ ಪ್ರಯುಕ್ತ 2025ರ ಡಿಸೆಂಬರ್ ನಿಂದ ಎಲ್ಲಾ ಸೋಮವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Nov 2025 7:14 pm

ಮಂಗಳೂರು | ಉಡುಪಿಗೆ ಪ್ರಧಾನಿ ಆಗಮನ ಹಿನ್ನೆಲೆ: ಅಗತ್ಯ ಸಿದ್ಧತೆಗಳ ಪರಿಶೀಲನೆ

ಮಂಗಳೂರು,ನ.25: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಹಿರಿಯ ಅಧಿಕಾರಿಗಳ ಸಭೆ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು. ಹಿರಿಯ ಎಸ್ಪಿಜಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಹಿತ ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಐಎಸ್ಎಫ್, ಪೊಲೀಸ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ನ.28ರಂದು ಬೆಳಗ್ಗೆ 8:15ಕ್ಕೆ ಹೊಸದಿಲ್ಲಿಯಿಂದ ಹೊರಡುವ ಪ್ರಧಾನಮಂತ್ರಿ ಪೂ.11:05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ವಾಯುಪಡೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಉಡುಪಿಯ ಕಾರ್ಯಕ್ರಮದ ಬಳಿಕ ಅಪರಾಹ್ನ 2:10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಗೋವಾಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ಅತ್ಯುನ್ನತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವಾಹನ ಸೇರಿದಂತೆ ಸೌಲಭ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಎಸ್ಪಿಜಿ ಅಧಿಕಾರಿಗಳು ಸೂಚಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಗೆ ಹೋಗುವ ರಾ.ಹೆ.ಯನ್ನು ಸುಸ್ಥಿತಿಯಲ್ಲಿ ಇಡಬೇಕು. ಅಗತ್ಯ ಬಿದ್ದರೆ ಬಳಸಲು ಸರ್ಕ್ಯೂಟ್ ಹೌಸ್ ಹಾಗೂ ಉನ್ನತ ಆಸ್ಪತ್ರೆಯನ್ನು ಸನ್ನದ್ದವಾಗಿಡಲು ಸೂಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಮಂಗಳೂರು ಕಂದಾಯ ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 7:09 pm

ಗೂಗಲ್‌ನ ಎಐ ಇಮೇಜ್ ಟೂಲ್ ಬಳಸಿ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಸೃಷ್ಟಿಸಿದ ಬೆಂಗಳೂರು ಟೆಕ್ಕಿ; ಎಚ್ಚರ ವಹಿಸುವಂತೆ ಪೋಸ್ಟ್‌

ಬೆಂಗಳೂರು ಮೂಲದ ಟೆಕ್ ವೃತ್ತಿಪರ ಹಾರ್ವೀನ್ ಸಿಂಗ್ ಚಡ್ಡಾ ಅವರು ಗೂಗಲ್‌ನ ಸುಧಾರಿತ AI ಇಮೇಜ್ ಟೂಲ್ 'ನ್ಯಾನೋ ಬನಾನಾ' ವನ್ನು ಬಳಸಿಕೊಂಡು ಅತ್ಯಂತ ನಿಖರವಾದ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ AI ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ನಕಲಿ ಕಾರ್ಡ್‌ಗಳು ಎಷ್ಟು ನಿಜವೆನಿಸುತ್ತವೆ ಎಂದರೆ, ಹಳೆಯ ಗುರುತು ಚಿತ್ರ ಪರಿಶೀಲನಾ ವ್ಯವಸ್ಥೆಗಳು ಇವುಗಳನ್ನು ಪತ್ತೆಹಚ್ಚಲು ವಿಫಲಗೊಳ್ಳುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ.

ವಿಜಯ ಕರ್ನಾಟಕ 25 Nov 2025 7:07 pm

ಮಂಗಳೂರು | ಕದ್ರಿ ಮಲ್ಲಿಕಟ್ಟೆಯಲ್ಲಿ ನ.26ರಂದು ಎಆರ್‌ಎಂ ಕಿಯಾ ಶೋರೂಂ ಶುಭಾರಂಭ

ಮಂಗಳೂರು, ನ.25: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಕಿಯಾ ಸಂಸ್ಥೆಯ ಅತ್ಯಾಧುನಿಕ ಎಆರ್‌ಎಂ ಕಿಯಾ ಶೋರೂಂ ನ.26ರಂದು ಮಧ್ಯಾಹ್ನ 12ಗಂಟೆಗೆ ಶುಭಾರಂಭಗೊಳ್ಳಲಿದೆ. ಎಆರ್‌ಎಂ ಮೋಟಾರ್ಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಿಯಾ ಇಂಡಿಯಾದ ದಕ್ಷಿಣ ಪ್ರಾದೇಶಿಕ ಹಿರಿಯ ಪ್ರತಿನಿಧಿ ಜೊಂಗೊ ರಿಯೊ, ಆರ್‌ಜಿಎಂ (ಮಾರುಕಟ್ಟೆ) ರಾಹುಲ್ ಕಿರಣ್ ನಿಕಮ್, ಪ್ರಾದೇಶಿಕ ವ್ಯವಸ್ಥಾಪಕ -(ಮಾರುಕಟ್ಟೆ) ರಿಶಿ ರಾಜ್, ಸ್ಥಳೀಯ ವ್ಯವಸ್ಥಾಪಕ (ಮಾರುಕಟ್ಟೆ) ಕಿರಣ್ ಬಂಗಾರಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 25 Nov 2025 7:06 pm

ಮಂಗಳೂರು | ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ

ಮಂಗಳೂರು, ನ.25: ನಗರದ ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಇಂಫೀನಿಟೊ 2.0 ಸೋಮವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು. ಏಷ್ಯನ್ ಮಾಸ್ಟರ್ ಅಥ್ಲೀಟ್ ಖ್ಯಾತಿಯ ರೀಟ ಡಿಸೋಜ ಉದ್ಘಾಟಿಸಿ ಮಾತನಾಡಿದರು. ಉಪ ಪ್ರಾಂಶುಪಾಲರಾದ ಆನೆಟ್ ರೀಮಾ, ಸನಾ ಝಕೀರ್, ಕ್ರೀಡಾಕೂಟ ಸಂಯೋಜಕಿ ಫರ್ಹತ್, ಹಿಬಾ ಅಂಜುಮ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಆಶಾ ಸೋನ್ಸ್ ಸ್ವಾಗತಿಸಿದರು. ಶಿಕ್ಷಕಿ ನಸೀಹಾ ಶಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಓಟ, ಜಿಗಿತ, ಎಸೆತ ಸ್ಪರ್ಧೆಗಳು ಹಾಗೂ ವಿವಿಧ ಗುಂಪು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸಿದರು. ಟೀಮ್ ಉತ್ಮನ್ ತಂಡ ಬಾಲಕರ ಮತ್ತು ಬಾಲಕಿಯರ ತಂಡ ಪ್ರಶಸ್ತಿಯನ್ನು ಗಳಿಸಿತು.

ವಾರ್ತಾ ಭಾರತಿ 25 Nov 2025 7:01 pm

ಮಂಗಳೂರು | ನ.26: ಸಂವಿಧಾನ ಪೀಠಿಕೆಯ ತುಳು ಓದು ಕಾರ್ಯಕ್ರಮ

ಮಂಗಳೂರು, ನ.25: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಭಾರತ ಸಂವಿಧಾನದ ಪೀಠಿಕೆಯನ್ನು ತುಳು ಭಾಷೆಗೆ ಭಾಷಾಂತರಿಸಿ ಪಠ್ಯದ ಫಲಕ ಬಿಡುಗಡೆ ಮಾಡಿದೆ. ನ.26ರ ಸಂವಿಧಾನ ದಿನ ಕಾರ್ಯಕ್ರಮದ ಬಳಿಕ ನಗರದ ವಿವಿಧ ಕೇಂದ್ರಗಳಲ್ಲಿ ಸಂವಿಧಾನ ಪೀಠಿಕೆಯನ್ನು ತುಳುವಿನಲ್ಲಿ ಓದುವ ಅಭಿಯಾನ ನಡೆಯಲಿದೆ. ಸಂವಿಧಾನದ ಉದಾತ್ತ ಮೌಲ್ಯವನ್ನು ಪ್ರಾದೇಶಿಕ ಭಾಷೆಯ ಮೂಲಕ ತಳಮಟ್ಟದಲ್ಲಿ ಪಸರಿಸುವ ಆಶಯ ಹಾಗೂ ಪ್ರಾದೇಶಿಕ ಭಾಷೆಗಳ ಮೂಲಕ ಸಂವಿಧಾನದ ಸಮಗ್ರತೆಯನ್ನು ಅರ್ಥೈಸಿಕೊಳ್ಳುವ ಮತ್ತು ಅನುಷ್ಠಾನ ಮಾಡುವ ಸಂಕಲ್ಪದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Nov 2025 6:56 pm

ಬಳ್ಳಾರಿ | ರೈತನ ಜಮೀನಿನಲ್ಲಿ 10ನೇ ಶತಮಾನದ ಹಳೆಯ ಮೂರ್ತಿಗಳು ಪತ್ತೆ

ಸಿರಗುಪ್ಪ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಲ್ಕುಂದಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 10ನೇ ಶತಮಾನದ್ದು ಎನ್ನಲಾದ ಅಪರೂಪದ ಸೂರ್ಯನ ಶಿಲ್ಪ ಸೇರಿದಂತೆ ಕೆಲವು ಪುರಾತನ ಮೂರ್ತಿಗಳು ಪತ್ತೆಯಾಗಿವೆ. ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಮೂರ್ತಿಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದೆ. ಸಂಶೋಧನಾ ತಂಡ ಪತ್ತೆ ಹಚ್ಚಿದ ಶಿವನ ಶಿಲ್ಪ ಮತ್ತು ಸೂರ್ಯನ ಶಿಲ್ಪವು 52 ಸೆಂ.ಮೀ. ಅಗಲ, 83 ಸೆಂ.ಮೀ. ಎತ್ತರ ಮತ್ತು 12 ಸೆಂ.ಮೀ. ಪಾದದ ಅಳತೆಯನ್ನು ಹೊಂದಿದೆ. ಸೂರ್ಯದೇವನು ತನ್ನ ಎರಡು ಕೈಗಳಲ್ಲಿ ಕಮಲವನ್ನು ಹಿಡಿದಿದ್ದು, ಶಿಲ್ಪದ ಹಿಂದೆ ವೃತ್ತಾಕಾರದ ಪ್ರಭಾವಳಿ ಇದೆ. ಶಿಲ್ಪದ ಕಾಲುಗಳು ತುಂಡಾಗಿವೆ. ಸಂಶೋಧನ ತಂಡವು ಮೌನೇಶ್‌ ಎಂಬವರ ಹೊಲದಲ್ಲಿ ಈ ಮೂರ್ತಿಗಳನ್ನು ಪತ್ತೆ ಮಾಡಿದೆ.

ವಾರ್ತಾ ಭಾರತಿ 25 Nov 2025 6:52 pm

ಬಂದರೋ ಬಂದರೋ ಕೊಹ್ಲಿ ಬಂದರು!: ಏಕದಿನ ಸರಣಿಗಾಗಿ ಲಂಡನ್ ನಿಂದ ಮುಂಬೈ ತಲುಪಿದ ವಿರಾಟ್; ವೈರಲ್ ಆಗಿದೆ ವಿಡಿಯೋ

Virat Kohli At Mumbai Airport- ಲಂಡನ್ ನಲ್ಲಿ ನೆಲೆಸಿರುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡುವ ಸಲುವಾಗಿ ಭಾರತಕ್ಕೆ ಮರಳಿದ್ದಾರೆ. ನವೆಂಬರ್ 30 ರಿಂದ ಆರಂಭವಾಗುವ ಸರಣಿಗಾಗಿ 5 ದಿನ ಮುಂಚಿತವಾಗಿ ಮುಂಬೈಗೆ ಆಗಮಿಸಿರುವ ಅವರು ತಂಡದ ಜೊತೆ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಗಾಯಗೊಂಡಿರುವ ಶುಭಮನ್ ಗಿಲ್ ಬದಲಿಗೆ ಕೆ.ಎಲ್. ರಾಹುಲ್ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದು ಅನುಭವಿ ರವೀಂದ್ರ ಜಡೇಜಾ ಅವರು ತಂಡಕ್ಕೆ ಮರಳಿದ್ದಾರೆ.

ವಿಜಯ ಕರ್ನಾಟಕ 25 Nov 2025 6:52 pm

ಗಾಜಾ ಪ್ರಜೆಗಳಿಗೆ ಗಾಯದ ಮೇಲೆ ಬರೆ, ಭೀಕರ ಪ್ರವಾಹಕ್ಕೆ ನಲುಗಿದ ನಿರಾಶ್ರಿತರು...

ಗಾಜಾ ಜಗತ್ತಿನ ಗಮನ ಸೆಳೆಯುತ್ತಿದ್ದು, ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿರುವ ಆರೋಪ ನಡುವೆ ಈಗಾಗಲೇ 60,000ಕ್ಕೂ ಜನರು ಜೀವ ಬಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೂಡ ಮಾಡಲಾಗುತ್ತಿದೆ. ಇದು ಸಾಲದು ಎನ್ನುವಂತೆ ಈಗ, ಪ್ರಕೃತಿ ವಿಕೋಪ ಕೂಡ ಗಾಜಾ ಪಟ್ಟಿಯಲ್ಲಿ ಜನರಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಅಂದಹಾಗೆ ಈಗ ದಕ್ಷಿಣ ಗಾಜಾದಲ್ಲಿ ಪ್ರತಿಕೂಲ ಹವಾಮಾನ

ಒನ್ ಇ೦ಡಿಯ 25 Nov 2025 6:49 pm

ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರಕಾರ ರಚಿಸಿದ್ದಿದೆಯೇ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು : ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರಕಾರ ರಚಿಸಿದ್ದಿದೆಯೇ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು ಬದಲಿಸಿ, ಎರಡನೆ ಅಧಿಕಾರಾವಧಿಯಲ್ಲಿ 2 ಮುಖ್ಯಮಂತ್ರಿಗಳನ್ನು ಬದಲಿಸಿದ ಹಾಗೂ ಆಪರೇಷನ್ ಕಮಲವೆಂಬ ಕರ್ನಾಟಕ ರಾಜಕಾರಣದ ಕರಾಳ ಅದ್ಯಾಯವನ್ನು ಆರಂಭಿಸಿದ ಬಿಜೆಪಿ ಪಕ್ಷದವರಿಗೆ ಕಾಂಗ್ರೆಸ್ ಹೆಸರೆತ್ತುವುದಕ್ಕೆ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಕಿಡಿಗಾರಿದ್ದಾರೆ. ‘ಹೈಕಮಾಂಡ್ ಕಪ್ಪ’ದ ಬಗ್ಗೆ ಬಹಳ ಆಸಕ್ತಿಯಿಂದ ಮಾತನಾಡುವ ಬಿಜೆಪಿ, ಯಡಿಯೂರಪ್ಪನವರು ಹೈಕಮಾಂಡಿಗೆ ಎಷ್ಟು ಕಪ್ಪ ಕೊಟ್ಟು ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು? ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಎಷ್ಟೆಷ್ಟು ಬಿಡ್ ಕೂಗಿ ಮುಖ್ಯಮಂತ್ರಿಗಳಾದರು ಎಂಬ ಪ್ರಶ್ನೆಗಳಿಗೆ ಉತ್ತರಿಸುವುದೇ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳು ನಮ್ಮದಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು ‘ಪೇಮೆಂಟ್ ಸೀಟ್’ ಎಂದು ಯತ್ನಾಳ್ ಅವರೆ ಹೇಳಿದ್ದರು. ಮಂತ್ರಿಗಿರಿಗೆ 70 ರಿಂದ 80 ಕೋಟಿ ರೂ.ವಸೂಲಿಯಾಗಿತ್ತು ಎಂಬ ಸತ್ಯವನ್ನೂ ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಬಿಜೆಪಿಯವರ ಈ ಎಲ್ಲ ವಿಚಾರಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೆ ಉಳಿದಿವೆ, ಜನತೆಗೆ ಉತ್ತರಿಸುವ ನೈತಿಕತೆ ತೋರಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ..

ವಾರ್ತಾ ಭಾರತಿ 25 Nov 2025 6:48 pm

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕದ ಕ್ರಿಕೆಟ್ ಪಟುಗಳಿಗೆ 10 ಲಕ್ಷ ರೂ., ಸರಕಾರಿ ಉದ್ಯೋಗ ಘೋಷಿಸಿದ ಸಿಎಂ

ವಾರ್ತಾ ಭಾರತಿ 25 Nov 2025 6:43 pm

ಹೊಸಕೋಟೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಡಿ.ನಾಗಪ್ಪ ಅವಿರೋಧ ಆಯ್ಕೆ

ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹೊಸಕೋಟೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೆ ಕೆರೆಗುಡಿಹಳ್ಳಿ ಗ್ರಾಮದ ಸದಸ್ಯ ಡಿ.ನಾಗಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಬಿ.ರೇಣುಕಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಪಕ್ಷೇತರ ಸದಸ್ಯರಾಗಿದ್ದ ಡಿ.ನಾಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ತಹಶೀಲ್ದಾರ್‌ ಗಿರೀಶ್ ಬಾಬು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಡಿ.ನಾಗಪ್ಪ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷ ಡಿ.ನಾಗರಾಜ್ ಮಾತನಾಡಿ, ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳನ್ನು ನಾನು ಅಭಿವೃದ್ಧಿಪಡಿಸುತ್ತೇನೆ. ಎಲ್ಲಾ ಗ್ರಾಮಗಳ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾದ ಹೇಮಂತ್ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪರಿಹರಿಸಿ ಪಂಚಾಯತ್‌ನ್ನು ತಾಲ್ಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯತ್‌ ಆಗಿ ಮಾಡುತ್ತೇನೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕವಿತಮ್ಮ ವಿರೇಶ್, ಸದಸ್ಯರಾದ ಕಬ್ಬಳ್ಳಿ ಶ್ರೀನಿವಾಸ್, ಟಿ.ಪಾಂಡುರಂಗಪ್ಪ, ಬೂದಿಹಾಳ್ ಸಿದ್ದೇಶ್, ಬಸಮ್ಮ ಲೋಕಪ್ಪ, ಗೌರಮ್ಮ ಜಗದೀಶ್, ಹೊಸಕೋಟೆ ಬಿ.ಮಂಜಮ್ಮ ಆನಂದಪ್ಪ, ಜಯಮ್ಮ ಕೃಷ್ಣಪ್ಪ, ವಡ್ಡನಹಳ್ಳಿ ಕೆಂಚಪ್ಪ, ಮುಖಂಡರಾದ ವಿರೇಶ್, ಕೋಣನಕಟ್ಟೆ ಅಣ್ಣಪ್ಪ, ಮಂಜಣ್ಣ,  ಸುರೇಶ್, ಶಿವು, ಗುಡಿಹಳ್ಳಿ ಕೆ.ನಾಗರಾಜ್, ಕೆ.ಕೆಂಗಣ್ಣ, ಪರಮೇಶಪ್ಪ, ಶೇಖರಪ್ಪ, ಪಿಡಿಓ ಹೇಮಂತ್ ಕುಮಾರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 25 Nov 2025 6:35 pm

\50 ಕೋಟಿ ರೂ ಕೊಟ್ಟು ಶಾಸಕ ಖರೀದಿಗೆ ಕಾಂಗ್ರೆಸ್ ಸಿದ್ಧ\

ರಾಯಚೂರು, ನವೆಂಬರ್‌ 25: ಆಂಧ್ರ- ತೆಲಂಗಾಣ ಭಾಗಕ್ಕೆ ಶೇ.33ರಷ್ಟು ನೀರು ಹೋಗುತ್ತೆ. ಆದರೂ ಅಲ್ಲಿನ ರೈತರಿಗೆ ನೀರು ಕೊಡಬಹುದು. ಆದ್ರೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ತುಂಗಾಭದ್ರಾ ಕ್ರಸ್ಟ್‌ ಗೇಟ್ ರಿಪೇರಿಗೆ 11ಕೋಟಿ ರೂ.ಕೊಡಲು ಈ ಸರ್ಕಾರಕ್ಕೆ ಶಕ್ತಿ ಇಲ್ಲ. 50 ಕೋಟಿ ರೂ. ಶಾಸಕರಿಗೆ ಕೊಟ್ಟು ಖರೀದಿಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್

ಒನ್ ಇ೦ಡಿಯ 25 Nov 2025 6:33 pm

ರೈತರ ಪರ ಅಖಾಡಕ್ಕೆ ಬಿಜೆಪಿ: ಎರಡು ದಿನ ರಾಜ್ಯಾದ್ಯಂತ ಪ್ರತಿಭಟನೆ, ಅನ್ನದಾತನ ಕಷ್ಟಕ್ಕೆ ಸ್ಪಂದಿಸಲು ವಿಜಯೇಂದ್ರ ಆಗ್ರಹ

ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾದಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಇದೇ ಸಂದರ್ಭದಲ್ಲ ಅನ್ನದಾತನ ಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ರೈತರ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದೆ. ಹಾಗಾದರೆ ಬಿಜೆಪಿ ಹೋರಾಟದ ಸ್ವರೂಪ ಹೇಗಿರಲಿದೆ? ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 25 Nov 2025 6:27 pm

ಮೈಸೂರಿನಲ್ಲಿ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಸ್ಥಾಪನೆ : ಗೃಹ ಸಚಿವ ಜಿ.ಪರಮೇಶ್ವರ್‌

ಮೈಸೂರು : ಮೈಸೂರಿನಲ್ಲಿ ಸುಸಜ್ಜಿತವಾದ ಕರ್ನಾಟಕ ಪೊಲೀಸ್ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮಾಡಲಾಗುವುದು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಮೈಸೂರು ಜಿಲ್ಲಾ ಪ್ರವಾಸದ ವೇಳೆ ಕೆಎಸ್‌ಆರ್‌ಪಿ ಆಶ್ವಾರೋಹಿ ದಳ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಆರಕ್ಷಕ ಅಶ್ವದಳದ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ನಜರ್‌ಬಾದ್ ಪೊಲೀಸ್ ಠಾಣೆಗೆ ದೀಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದುಬಂದ ರೀತಿ ಹಾಗೂ ಇಲಾಖೆಗೆ ಸಂಬಂಧಿಸಿದ ನೆನಪಿನಲ್ಲಿ ಉಳಿಯುವಂತಹ ವಸ್ತುಗಳನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಸಿದ್ಧವಾದ ಸುಸಜ್ಜಿತ ಪೊಲೀಸ್ ಮ್ಯೂಸಿಯಂ ಮಾಡಲಾಗುವುದು ಎಂದು ವಿವರಿಸಿದರು. ನಜರ್‌ಬಾದ್ ಪೊಲೀಸ್ ಠಾಣೆ ಮೈಸೂರಿನಲ್ಲಿ ಅತ್ಯಂತ ಹಳೆಯ ಪೊಲೀಸ್ ಠಾಣೆ. ಬಹಳ ದಿನದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ದಿಢೀರ್ ಭೇಟಿ ನೀಡಿದ್ದೇನೆ. ರೆಕಾರ್ಡ್‌, ಸಶಸ್ತ್ರಗಳನ್ನು ಇಟ್ಟುಕೊಳ್ಳುವುದು ಸೇರಿದಂತೆ ಪರಿಶೀಲನೆ ನಡೆಸಿದ್ದೇನೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೇನೆ. ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ನಾಲ್ಕೈದು ಜನರಿಗೆ ಖುದ್ದು ಕರೆ ಮಾಡಿ ವಿಚಾರಿಸಿದೆ ಎಂದರು. ಆನ್‌ಲೈನ್‌ ವಂಚನೆಯಾಗಿರುವ ಬಗ್ಗೆ ತಿಳಿಸಿದರು. ವಂಚನೆಯಾದ ಬಳಿಕ 1930 ನಂಬರ್‌ಗೆ ಕರೆ ಮಾಡಿದ್ದಾರೆ. ವಂಚಕರ ಬ್ಯಾಂಕ್ ಖಾತೆ ನಿಷ್ಕ್ರೀಯಗೊಳಿಸಲಾಗಿರುತ್ತದೆ. ಆ‌ ಪ್ರಕರಣದ ತನಿಖೆಯನ್ನು ಫಾಲೋಅಪ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಜರ್‌ಬಾದ್ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದರು. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದೇನೆ. ಹೆಚ್ಚಿನಂಶ ಸೈಬರ್ ವಂಚನೆಗೊಳಗಾಗುತ್ತಿದ್ದಾರೆ. ಮೈಸೂರಿನಲ್ಲಿ‌ ಡಿಜಿಟಲ್ ಅರೆಸ್ಟ್, ಹೂಡಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಸುಮಾರು 30 ಕೋಟಿ ರೂ.ಯಷ್ಟು ಸೈಬರ್ ವಂಚನೆಯಾಗಿದೆ. ಕಳೆದ ವರ್ಷ 40 ಕೋಟಿ ರೂ.ಯಷ್ಟು ವಂಚನೆಯಾಗಿತ್ತು. ಈ ವರ್ಷ ಕಡಿಮೆಯಾಗಿದೆ. 30 ಕೋಟಿ ರೂಪಾಯಿ ವಂಚನೆಯಲ್ಲಿ 5 ಕೋಟಿ ರೂ. ಪತ್ತೆಹಚ್ಚಲಾಗಿದೆ. ಇದನ್ನು ಯಾವ ರೀತಿ ನಿಯಂತ್ರಣಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಚರ್ಚಿಸಲಾಗಿದೆ ಎಂದರು. ಸೈಬರ್ ಲ್ಯಾಬ್ : ಬೆಂಗಳೂರಿನಲ್ಲಿ ಕುಳಿತು ಅಮೆರಿಕಾದವರಿಗೆ ಡಿಜಿಟಲ್ ಅರೆಸ್ಟ್ ವಂಚನೆ ಮಾಡುತ್ತಿದ್ದವರ ಬಗ್ಗೆ ಪತ್ತೆಹಚ್ಚಿ ಬಂಧಿಸಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೈಬರ್ ಲ್ಯಾಬ್ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಸೈಬರ್ ಲ್ಯಾಬ್ ಮಾಡಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿರಿಯ ಪೊಲೀಸ್ ಅಧಿಕಾರಿವರೆಗೂ ಸೈಬರ್ ಅಪರಾಧದ ಕುರಿತು ತಾಂತ್ರಿಕ ಜ್ಞಾನ ಹಾಗೂ ತರಬೇತಿ ಇರಬೇಕು. ಈ ಎರಡು ವರ್ಷದೊಳಗೆ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೂ ಹಂತಹಂತವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಪೊಲೀಸ್ ಆಯೋಗದಿಂದ ಒಬ್ಬ ಪೊಲೀಸ್ ಎಷ್ಟು ತಾಸು ಕೆಲಸ ಮಾಡಬೇಕು ಎಂಬ ಬಗ್ಗೆ ಸೂಚನೆ ಇದೆ. ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಪಿಎಸ್‌ಐ ಅಕ್ರಮದಿಂದ ನೇಮಕಾತಿ ಸ್ಥಗಿತವಾಗಿತ್ತು. ಇದೆಲ್ಲ ಸಮಸ್ಯೆಯನ್ನು ನಿವಾರಿಸಿ, ನೇಮಕಾತಿ ಮಾಡಿ 900ಕ್ಕೂ ಹೆಚ್ಚು ಪಿಎಸ್‌ಐಗಳನ್ನು ತರಬೇತಿಗೆ ಕಳುಹಿಸಲಾಗಿದೆ. ಎರಡು ತಿಂಗಳಲ್ಲಿ ತರಬೇತಿ ಪಡೆದು, ಕರ್ತವ್ಯಕ್ಕೆ ಬರುತ್ತಾರೆ. ಅಲ್ಲಿವರೆಗೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಹೇಳಿದರು. ಸೈಬರ್ ಅಪರಾಧದ ಕುರಿತು ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಲಾಗುತ್ತಿದೆ. ವಿದ್ಯಾವಂತರು ಹೆಚ್ಚಿನ ರೀತಿಯಲ್ಲಿ ವಂಚನೆಗೆ ಒಳಗಾಗುತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಟೆಕ್ಕಿಯೊಬ್ಬರು ನಿರಂತರವಾಗಿ 32 ಕೋಟಿ ರೂ. ವಂಚನೆಗೊಳಗಾಗಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಈ ರೀತಿಯ ವಂಚನೆಗೆ ಸಿಲುಕುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿಪಿ ಡಾ.‌ ಎಂ.ಬಿ.ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್ ಅವರು ಇದ್ದರು.

ವಾರ್ತಾ ಭಾರತಿ 25 Nov 2025 6:25 pm

ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತುಂಗಭದ್ರಾ ಆಣೆಕಟ್ಟಿಗೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಯುವಕ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ರೈತರಿಗೆ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 8 ರಿಂದ 10 ದಿನಗಳ ಕಾಲ ಗಡುವು ನೀಡಿದ್ದಾರೆ. ಗಡುವಿನೊಳಗಾಗಿ ಸ್ಪಂದಿಸದೇ ಇದ್ದರೆ ತೀವ್ರ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 25 Nov 2025 6:25 pm

ಯಾದಗಿರಿ | ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಿ : ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್‌

ಯಾದಗಿರಿ : ಡಿಸೆಂಬರ್ ಮೊದಲ ವಾರದಲ್ಲಿ ಯಾದಗಿರಿ ನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಮೇಶ್‌ ಕೋಲಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಹಾಗೂ  ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ರಮೇಶ್‌ ಕೋಲಾರ್ ಮಾತನಾಡಿದರು. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ  ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಜೊತೆಗೆ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚಿಸಿದರು. ಯುವಜನೋತ್ಸವ ನಡೆಯುವ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 10 ಸಾವಿರ ಜನ ಸೇರುವ ಸಾಧ್ಯತೆ ಇದೆ. ಆದ್ದರಿಂದ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸುವ ಜೊತೆಗೆ ವೇದಿಕೆ ಸಿದ್ಧತೆ, ಶಾಮಿಯಾನ, ಕುಡಿಯುವ ನೀರು , ಆಸನಗಳ ವ್ಯವಸ್ಥೆ ಸೇರಿದಂತೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಸೂಚಿಸಿದರು. ಈ ಯುವಜನೋತ್ಸವ ಅಂಗವಾಗಿ ಸುಮಾರು 900ಕ್ಕೂ ಹೆಚ್ಚು ಸ್ಪರ್ಧಾಳುಗಳು, 40ಕ್ಕೂ ಹೆಚ್ಚು ನಿರ್ಣಾಯಕರು, ಕ್ರೀಡಾ ಇಲಾಖೆ ಅಧಿಕಾರಿಗಳು, ವಿವಿಧ ತಂಡಗಳ ವ್ಯವಸ್ಥಾಪಕರು ಆಗಮಿಸಲಿದ್ದು ನಗರದ ಇನ್ನಿತರ 6 ವೇದಿಕೆಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬರುವ ಎಲ್ಲ ಸ್ಪರ್ಧಾಳುಗಳಿಗೆ, ಅತಿಥಿ, ಗಣ್ಯರಿಗೆ ವಾಸ್ತವ್ಯಕ್ಕೆ ವಿವಿಧ ವಸತಿ ನಿಲಯ, ವಸತಿ ಶಾಲೆ, ಹೋಟಲ್‌ಗಳನ್ನು  ಗುರುತಿಸಿ ಇಟ್ಟುಕೊಳ್ಳಬೇಕು. ವಸತಿ , ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಈಗಾಗಲೇ ರಚಿಸಲಾಗಿರುವ ಆಯಾ ಸಮಿತಿಗಳ ಮುಖ್ಯಸ್ಥರು, ಆಯಾ ವಸತಿನಿಲಯಗಳು ಮತ್ತು ವೇದಿಕೆವಾರು ನಿಯೋಜಿಸಿರುವ ವಿವಿಧ ನೋಡಲ್ ಅಧಿಕಾರಿಗಳು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಈಗಾಗಲೇ ರಚಿಸಲಾದ ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಹಣಕಾಸು, ಶಿಷ್ಟಾಚಾರ ಸಮಿತಿ, ವೇದಿಕೆ ನಿರ್ಮಾಣ, ಅಲಂಕಾರ ಸಮಿತಿ, ತೀರ್ಪುಗಾರರು, ರಕ್ಷಣಾ ಸಮಿತಿ, ಆರೋಗ್ಯ ಸಮಿತಿ, ಪ್ರಚಾರ ಸಮಿತಿ, ವಿಜ್ಞಾನ ಮತ್ತು ವಸ್ತುಪ್ರದರ್ಶನ ಸಮಿತಿ, ಸ್ವಯಂಸೇವಕರು, ಸ್ವಾಗತ ಸಮಿತಿ ಮುಖ್ಯಸ್ಥರು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಜಾನಪದ ಗೀತೆ ಸ್ಪರ್ದೆ ನಡೆಯುವ ಸರ್ಕಾರಿ ಪದವಿ ಕಾಲೇಜು ಸಭಾಂಗಣ,ಕವಿತೆ ಬರೆಯುವ ಸ್ಪರ್ಧೆ ನಡೆಯುವ ಸರಕಾರಿ ಪದವಿ ಕಾಲೇಜು ಚಿತ್ತಾಪುರ ರಸ್ತೆ, ಘೋಷಣೆ ಸ್ಪರ್ಧೆ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಭವನ, ವಿಜ್ಞಾನ ಮೇಳ ನಡೆಯುವ ಕ.ವಿದ್ಯುತ್ ಪ್ರಸರಣ ನಿಗಮದ ಸಭಾ ಭವನ, ಹೊಸಳ್ಳಿ ರಸ್ತೆ, ಕಥೆ ಬರೆಯುವ ಸ್ಪರ್ಧೆ ನಡೆಯುವ ಕನ್ನಡ ಭವನ , ಚಿತ್ತಾಪುರ ರಸ್ತೆ, ಚಿತ್ರ ಕಲೆ ನಡೆಯುವ ವಿದ್ಯಾ ಮಂಗಲ ಕಾರ್ಯಾಲಯಗಳನ್ನು ಎಲ್ಲ ರೀತಿಯಲ್ಲೂ ಸಿದ್ದವಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು. ಈ ವೇಳೆ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 6:19 pm

ಕೆಎಲ್ ರಾಹುಲ್ ನೇತೃತ್ವದ ತಂಡದಲ್ಲಿ ಯಾರಿಗೆಲ್ಲಾ ಉಂಟು ಅವಕಾಶ? ಹೀಗಿದೆ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

India Vs South Africa ODI Series- ಭಾರತ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು ನವೆಂಬರ್ 30 ರಿಂದ ಪ್ರಾರಂಭ ಆಗಲಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅನೇಕ ಪ್ರಮುಖ ಆಟಗಾರರು ವಿವಿಧ ಕಾರಣಗಳಿಗಾಗಿ ತಂಡದಿಂದ ಹೊರಗುಳಿದಿರುವುದರಿಂದ ಪ್ಲೇಯಿಂಗ್ ಇಲೆವೆನ್ ನಲ್ಲಿ ವ್ಯಾಪಕ ಬದಲಾವಣೆಗಳಾಗುವ ಎಲ್ಲಾ ಸಾಧ್ಯತೆಗಳಿವೆ. ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾರ್ಯಾರು ಇರ್ತಾರೆ?

ವಿಜಯ ಕರ್ನಾಟಕ 25 Nov 2025 6:06 pm

ಕಾಡಸಿದ್ದೇಶ್ವರ ಸ್ವಾಮೀಜಿ ಧಾರವಾಡ ಪ್ರವೇಶ ನಿರ್ಬಂಧಿಸಿದ್ದ ಜಿಲ್ಲಾಡಳಿತದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026ರ ಜನವರಿ 3ರವರೆಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಧಾರವಾಡ ಜಿಲ್ಲಾಧಿಕಾರಿ ನವೆಂಬರ್ 4ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶದಲ್ಲೇನಿದೆ? ಅರ್ಜಿದಾರರ ಧಾರವಾಡ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದೆ. ಅನುಮಾನದ ಆಧಾರದಲ್ಲಿ ಅರ್ಜಿದಾರರನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಗಳನ್ನು ಸರಕಾರ ನೀಡಿಲ್ಲ. ಅರ್ಜಿದಾರ ಸ್ವಾಮೀಜಿಯು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ, ಸ್ವಾತಂತ್ರ್ಯದ ಎಲ್ಲೆ ಮೀರುವುದಿಲ್ಲ ಎಂಬ ಅವರ ಪರ ವಕೀಲ ಮುಚ್ಚಳಿಕೆಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದ್ದು, ಅರ್ಜಿ ಪುರಸ್ಕರಿಸಲಾಗಿದೆ. ನವೆಂಬರ್ 4ರಂದು ಧಾರವಾಡ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಲಾಗಿದ್ದು, ಆ ಆದೇಶದ ಪ್ರಕಾರ ಕೈಗೊಂಡಿದ್ದ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನೂ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅರ್ಜಿದಾರರ ಆಕ್ಷೇಪವೇನಾಗಿತ್ತು? ವಿಚಾರಣೆ ವೇಳೆ ವಾದ ಮಂಡಿಸಿದ್ದ ಸ್ವಾಮೀಜಿ ಪರ ವಕೀಲ ವೆಂಕಟೇಶ್‌ ದಳವಾಯಿ, ಕಾಡಸಿದ್ದೇಶ್ವರ ಸ್ವಾಮೀಜಿಗೆ ಯಾವುದೇ ಷೋಕಾಸ್‌ ನೋಟಿಸ್‌ ನೀಡದೇ ಬಿಎನ್‌ಎಸ್‌ಎಸ್‌ ಸೆಕ್ಷನ್‌ 163(4) ಅಡಿ ನಿರ್ಬಂಧ ಆದೇಶ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಅಧಿಕಾರ ಮೀರಿದ ದುರುದ್ದೇಶಪೂರಿತ ಕ್ರಮವಾಗಿದೆ. ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನವೆಂಬರ್‌ 7ರಂದೇ ಮುಗಿದಿದೆ. ಆದರೆ, ಅರ್ಜಿದಾರರನ್ನು ಯಾವ ಕಾರಣಕ್ಕಾಗಿ 2026ರ ಜನವರಿ 3ರವರೆಗೆ ನಿರ್ಬಂಧಿಸುತ್ತಿದ್ದಾರೆ ತಿಳಿದಿಲ್ಲ. ನಿರ್ಬಂಧಕ್ಕೆ ಸೂಕ್ತ ಕಾರಣವನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದ್ದರು. ರಾಜ್ಯ ಸರ್ಕಾರದ ಪರ ವಕೀಲರು, ಪೊಲೀಸ್‌ ವರಿಷ್ಠಾಧಿಕಾರಿಯ ವರದಿ ಪಡೆದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂಕೋರ್ಟ್‌ ಸಹ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಜನರ ಭಾವನೆಗಳ ಜತೆ ಆಟವಾಡಲು ಸ್ವಾಮೀಜಿ ಯತ್ನಿಸುತ್ತಿದ್ದಾರೆ ಎಂದು ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದರು.

ವಾರ್ತಾ ಭಾರತಿ 25 Nov 2025 5:59 pm

'ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಗುಜರಾತ್ ನಲ್ಲಿ ಖಂಡಿತವಾಗಿ ಸೋಲುತ್ತೆ' - ಮಮತಾ ಬ್ಯಾನರ್ಜಿ ಭವಿಷ್ಯ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಗುಜರಾತ್‌ ರಾಜ್ಯವನ್ನು ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯು ಬಿಜೆಪಿಯ ಚುನಾವಣಾ ತಂತ್ರದ ಭಾಗವಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಈ ವಿಚಾರವಾಗಿ ಅವರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ವಿಜಯ ಕರ್ನಾಟಕ 25 Nov 2025 5:50 pm

ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಶಾಸಕರ ಮತ್ತೊಂದು ತಂಡ ದಿಲ್ಲಿಗೆ ಭೇಟಿ ನೀಡಿರುವ ಬಗ್ಗೆ, ಹೈಕಮಾಂಡ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರಿಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಇದೆ. ಪಕ್ಷರ ವರಿಷ್ಠರು ಏನು ಹೇಳುತ್ತಾರೆ ಎಂದು ನೋಡೋಣ. ಅಂತಿಮವಾಗಿ ಈ ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ಹೈಕಮಾಂಡ್ ತೀರ್ಮಾನಿಸಬೇಕು ಎಂದರು. ಮೂರು ದೇಶಗಳಿಗೆ ನಂದಿನಿ ತುಪ್ಪ ರಫ್ತು: ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .

ವಾರ್ತಾ ಭಾರತಿ 25 Nov 2025 5:50 pm

Bescom Power Cut: ಬೆಂಗಳೂರಿನ ಜೆಸಿ ರಸ್ತೆ, ಶಾಂತಿನಗರ ಸೇರಿ ಹಲವೆಡೆ ಗುರುವಾರ (ನ.27) ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ?

ಬೆಂಗಳೂರಿನಲ್ಲಿ ನವೆಂಬರ್ 27 ರಂದು ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದ್ದು, 66/11ಕೆವಿ ಬಿ.ಎಂ.ಟಿ.ಸಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ ಸೇರಿದಂತೆ ಹಲವು ಬಡಾವಣೆಗಳು ಇದರಿಂದ ಬಾಧಿತವಾಗಲಿವೆ.

ವಿಜಯ ಕರ್ನಾಟಕ 25 Nov 2025 5:35 pm

Ukraine & Russia: ಉಕ್ರೇನ್ ವಿರುದ್ಧ ವಿಜಯ ಘೋಷಣೆ ಮೊಳಗಿಸಲು ರಷ್ಯಾ ಸಜ್ಜು?

ಜಗತ್ತಿನ ಘೋರ ಯುದ್ಧವೊಂದು ಇನ್ನೇನು ನಿಂತು ಹೋಗುವ ಹಂತ ಪ್ರವೇಶ ಮಾಡುತ್ತಾ ಇದೆ... ರಷ್ಯಾ &ಉಕ್ರೇನ್ ಯುದ್ಧ ಒಂದು ಹಂತಕ್ಕೆ ಬಂದು ನಿಂತಿದ್ದು, ಈ ಯುದ್ಧ ನಿಲ್ಲಿಸಲು ನಡೆದ ಪ್ರಯತ್ನಗಳು ಕೊನೆಗೂ ಫಲ ನೀಡಿದಂತೆ ಕಾಣುತ್ತಿದೆ. ಒಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್ &ಇನ್ನೊಂದು ಕಡೆ ಜಗತ್ತಿನ ಬಲಿಷ್ಠ ದೇಶಗಳು ಒಗ್ಗೂಡಿ ಈ ಯುದ್ಧಕ್ಕೆ

ಒನ್ ಇ೦ಡಿಯ 25 Nov 2025 5:18 pm

14 ವರ್ಷದೊಳಗಿನ ಬಾಲಕ- ಬಾಲಕಿಯರ ಅತ್ಲೆಟಿಕ್ಸ್ ಕ್ರೀಡಾಕೂಟ: ಶೋನಿತ್ ಸ್ಯಾಮ್ ಸನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು, ನ.25: ಹಾಸನದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ 14ರ ವಯೋಮಿತಿಯ ಬಾಲಕ-ಬಾಲಕಿಯರ ಅತ್ಲೆಟಿಕ್ಸ್ 2025-26ರ ಕ್ರೀಡಾಕೂಟದಲ್ಲಿ ಜೆಪ್ಪುವಿನ ಸಂತ ಜೆರೋಸಾ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶೋನಿತ್ ಸ್ಯಾಮ್ ಸನ್ ಮಾಬೆನ್ ಓಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶೋನಿತ್ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದರೆ, 200 ಮೀ. ಓಟದಲ್ಲಿ ಬೆಳ್ಳಿಯ ಪದಕ ಗಳಿಸಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಅತ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳ ಅತ್ಲೆಟಿಕ್ಸ್ ಕ್ಲಬ್ ನ ತರಬೇತುದಾರ ದಿನೇಶ್ ಕುಂದರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಶೋನಿತ್ ಸ್ಯಾಮ್ ಸನ್ ಅವರು ಜೆಪ್ಪು ಬಪ್ಪಾಲ್ ನ ಶೈಲೇಶ್ ಮಾಬೆನ್ ಮತ್ತು ಸರಿತಾ ಮಾಬೆನ್ ದಂಪತಿಯ ಪುತ್ರ.

ವಾರ್ತಾ ಭಾರತಿ 25 Nov 2025 5:18 pm

ಮಂಗಳೂರು ವಿವಿಯಲ್ಲಿ ʼವೇವ್ಸ್ 2025 –ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವʼ ಉದ್ಘಾಟನೆ

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಅಗತ್ಯ : ಡಾ.ಶಾನಿ ಕೆ.ಆರ್.

ವಾರ್ತಾ ಭಾರತಿ 25 Nov 2025 5:10 pm

ಬಿಜೆಪಿ ವರಿಷ್ಠರು ಡಿಕೆಶಿ‌ CM ಮಾಡಿದ್ರೆ ಬಾಹ್ಯ ಬೆಂಬಲ ಕೊಡ್ತೇವೆ ಎಂದ ಸದಾನಂದ ಗೌಡ: ಡಿ ಕೆ ಶಿವಕುಮಾರ್‌ ರಿಯಾಕ್ಷನ್

ಬೆಂಗಳೂರು, ನವೆಂಬರ್‌ 25: ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್ನಿಂದ ಹೊರಬಂದು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟರೆ ಒಪ್ಪುತ್ತೇವೆ. ಆದರೆ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಅದು ಕೇಂದ್ರದ ನಿರ್ಧಾರಕ್ಕೆ ಬಿಟ್ಟ ವಿಚಾರ. ಅಲ್ಲದೇ ಕೇಂದ್ರದ ವರಿಷ್ಠರು ಅವರನ್ನೇ ಮುಖ್ಯಮಂತ್ರಿ ಮಾಡಲು ನಾವೇ ಡಿ.ಕೆ. ಶಿವಕುಮಾರ್ಗೆ ಬಾಹ್ಯ ಬೆಂಬಲ ಕೊಡುತ್ತೇವೆ ಎಂದರೆ ನಾವು ಒಪ್ಪುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ

ಒನ್ ಇ೦ಡಿಯ 25 Nov 2025 5:09 pm

SWR: ಜನವರಿ 08ರವರೆಗೆ ವಿವಿಧ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

ಬೆಂಗಳೂರು, ನವೆಂಬರ್ 25: ವೀರಾಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣದ 03ನೇ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ರದ್ದುಗೊಳಿಸಲಾಗಿದೆ. ಜೊತೆಗೆ ರೈಲುಗಳ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಪ್ಡೇಟ್ ನೀಡಿದೆ. ಪ್ರಯಾಣಿಕರು ಗಮನಿಸಿ ತಮ್ಮ ಸಾರಿಗೆ ಸಂಚಾರಕ್ಕೆ ಪ್ಲಾನ್ ಮಾಡಿಕೊಳ್ಳುವಂತೆ ಕೋರಲಾಗಿದೆ. ಈ ಕಾಮಗಾರಿಗಳು ನವೆಂಬರ್ 25ರಿಂದ ಜನವರಿ 8,

ಒನ್ ಇ೦ಡಿಯ 25 Nov 2025 5:02 pm

ಒಂದು ವಿಮಾನದ ಕಥೆ: ದಶಕಗಳಿಂದ ಮರೆತು ಹೋಗಿದ್ದ ಏರ್‌ ಇಂಡಿಯಾ ವಿಮಾನಕ್ಕೆ 13 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸಿಕ್ತು ಮರುಜೀವ!

ದಶಕಗಳಷ್ಟು ಹಳೆಯದಾದ ಬೋಯಿಂಗ್ 737-200 ವಿಮಾನವು ಸುಮಾರು 13 ವರ್ಷಗಳ ಕಾಲ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಷ್ಕ್ರಿಯವಾಗಿತ್ತು. ಆಶ್ಚರ್ಯಕರವಾಗಿ, ವಿಮಾನದ ಮಾಲೀಕರಾದ ಏರ್ ಇಂಡಿಯಾ ಸಂಸ್ಥೆಯು ವಿಮಾನದ ಇರುವಿಕೆಯನ್ನೇ ಮರೆತು ಹೋಗಿತ್ತು. ಈಗ ಏರ್ ಇಂಡಿಯಾವು ಈ ವಿಮಾನವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತಕ್ಕೆ ಮಾರಾಟ ಮಾಡಿದೆ. ಈ ವಿಮಾನವು 2012 ರಲ್ಲಿ ನಿವೃತ್ತಿಗೊಂಡಿತ್ತು. ಅದರ 13 ವರ್ಷಗಳ ನಿಲುಗಡೆಗಾಗಿ ಏರ್ ಇಂಡಿಯಾ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಸುಮಾರು 1 ಕೋಟಿ ರೂ. ಪಾರ್ಕಿಂಗ್ ಶುಲ್ಕವನ್ನು ಪಾವತಿಸಬೇಕಾಯಿತು.

ವಿಜಯ ಕರ್ನಾಟಕ 25 Nov 2025 4:54 pm

ಉತ್ತರ ಪ್ರದೇಶ | ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದ ಕಾರಣ ತಾಯಿಯ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪುತ್ರ

ಮೃತದೇಹವನ್ನು 4 ದಿನ ಫ್ರೀಝರ್‌ನಲ್ಲಿಡುವಂತೆ ವೃದ್ಧಾಶ್ರಮದ ಸಿಬ್ಬಂದಿಗೆ ಸೂಚಿಸಿದ ಪುತ್ರ

ವಾರ್ತಾ ಭಾರತಿ 25 Nov 2025 4:47 pm

ಕೊಪ್ಪಳ | ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ

ಕೊಪ್ಪಳ : ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯುವಂತೆ ಆಗ್ರಹಿಸಿ ಮತ್ತು ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಆಡಳಿತ ಭವನದ ಮುಂದೆ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ರವಿ ಕುಮಾರ್ ವಸ್ತ್ರದ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ  ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಯನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ರಾಜ್ಯ ಸರಕಾರ ಆಗ್ರಹಿಸಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ಕಟ್ಟಡ ಕಾರ್ಮಿಕರಿಗೆ ನಿವೃತ್ತಿ ವೇತನ ಬಂದಿಲ್ಲ. ಕಟ್ಟಡ ಕಾರ್ಮಿಕರ ಮಂಡಳಿಯಿಂದ ಗುರುತಿಸಿರುವ ಕೊಪ್ಪಳದ ಕೆ.ಎಸ್. ಆಸ್ಪತ್ರೆಯಲ್ಲಿ ಅಪಘಾತವಾದ ಕಟ್ಟಡ ಕಾರ್ಮಿಕರಿಗೆ ಚಿಕಿತ್ಸೆಗೆ ಹೋದಾಗ ಮೊದಲು ಠೇವಣಿ ಇಡಲು ಹೇಳುತ್ತಾರೆ. ಮೊದಲು ಒಳ ರೋಗಿಯಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡಿ ಮಂಡಳಿಯಿಂದ ಹಣ ಪಡೆಯುವಂತೆ ಸುತ್ತೋಲೆ ಹೊರಡಿಸಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ನಕಲಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳನ್ನು ತಕ್ಷಣ ರದ್ದುಪಡಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.  ಈ ವೇಳೆ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಬಸವರಾಜ್ ಶೀಲವಂತರ್, ಸಂಚಾಲಕ ಎಸ್.ಎ.ಗಫಾರ್, ಪಾನಿಷಾ ಮಕಾಂದಾರ್, ಸಂಶುದ್ದೀನ್ ಮಕಾಂದಾರ್, ಗಾಳೆಪ್ಪ ಪೂಜಾರ ಲೆಬಗೇರಿ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ್, ರಿಯಾಝ್‌ ಮಕಾಂದಾರ್, ಆದಿತ್ಯ ಟಿ, ಪಾತ್ರೋಟಿ, ಪ್ರಕಾಶ್ ದೇವರ ಮನಿ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 4:44 pm

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ, ನ.25: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಅಜ್ಜರಕಾಡಿನ ಜಿಲ್ಲಾ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ 45ನೇ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಮಾತನಾಡಿ, ಕ್ರೀಡಾಪಟುಗಳು ನಮ್ಮ ದೇಶದ ಬಹು ದೊಡ್ಡ ಆಸ್ತಿ. ಇವರ ಯೋಗದಾನವನ್ನು ನಾವು ಹಲವು ಕ್ಷೇತ್ರಗಳಲ್ಲಿ ಕಾಣ ಬಹುದಾಗಿದೆ. ಇಂದು ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ಲಭ್ಯವಿದೆ. ಇದರ ಪ್ರಯೋಜನ ನಾಡಿನ ಸಮಸ್ತ ಕ್ರೀಡಾಳುಗಳಿಗೆ, ಕ್ರೀಡಾ ಆಸಕ್ತರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸಿಗುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ಕೆ.ಆರ್.ಕವಿತಾ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಬಹಳ ಮುಖ್ಯ. ಕ್ರೀಡಾಳುಗಳು ಸೋಲು ಮತ್ತು ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದರೆ ಮಾತ್ರ ನಮ್ಮ ಜೊತೆಗೆ ಕ್ರೀಡೆಯೂ ಜಯಗಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕಲಪತಿಗಳಾಗಿ, ರಿಜಿಸ್ಟ್ರಾರಾಗಿ ಮತ್ತು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿ ಇತೀಚೆಗೆ ನಿಧನರಾದ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಅವರ ಸ್ಮರಣಾರ್ಥ ಬೆಳ್ಳಿಯ ಚಾಂಪಿಯನ್ಸ್ ಟ್ರೋಫಿಯನ್ನು ಈ ವೇಳೆ ಅನಾವರಣ ಮಾಡಲಾಯಿತು. ಉಡುಪಿ ಜಿಲ್ಲೆಯ ಅಮೆಚೂರ್ ಅಥ್ಲೆಟಿಕ್ ಅಸೋಶಿಯೇಶನ್ ನ ಅಧ್ಯಕ್ಷ ಹರಿಪ್ರಸಾದ್ ರೈ ಪಥಸಂಚಲನ ಮತ್ತು ದ್ವಜವಂದನೆಯನ್ನು ಸ್ವೀಕರಿಸಿದರು. ವಿದ್ಯಾರ್ಥಿನಿ ಪ್ರಗತಿ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು. ಪಥ ಸಂಚಲನದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಪ್ರಥಮ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ದ್ವಿತೀಯ ಮತ್ತು ಪೂರ್ಣಪ್ರಜ್ಞ ಕಾಲೇಜು ಉಡುಪಿ ತೃತೀಯ ಬಹುಮಾನವನ್ನು ಪಡೆಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ.ಜಿ. ವಹಿಸಿದ್ದರು. ದಿವಂಗತ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಅವರ ಧರ್ಮ ಪತ್ನಿ ಅರುಣ ಕಿಶೋರ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಮತ್ತು ಉಡುಪಿ ಯುವ ಸವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ನಿಕೇತನ ವಂದಿಸಿದರು.

ವಾರ್ತಾ ಭಾರತಿ 25 Nov 2025 4:44 pm

“Kiss ಮಾಡ್ಬೇಡಿ, Hug ಮಾಡ್ಬೇಡಿ, ಇದು OYO ರೂಮ್ ಅಲ್ಲ” - ಪ್ರಯಾಣಿಕರಿಗೆ ಬೆಂಗಳೂರು ಆಟೋ ಚಾಲಕನ ಸೂಚನೆ

ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಪ್ರಯಾಣಿಕರಿಗಾಗಿ ವಿಚಿತ್ರ ಸೂಚನಾ ಫಲಕ ಹಾಕಿದ್ದಾನೆ. 'No Kissing, No Hugging' ಮುಂತಾದ ಸೂಚನೆಗಳೊಂದಿಗೆ, ಅಸಭ್ಯ ವರ್ತನೆಗಳನ್ನು ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಚಾಲಕ ತಿಳಿಸಿದ್ದಾನೆ. ಇತ್ತೀಚೆಗೆ ಇಂತಹ ಅಸಭ್ಯ ವರ್ತನೆಗಳು ಹೆಚ್ಚಾಗುತ್ತಿರುವುದರಿಂದ ಚಾಲಕರು ಈ ರೀತಿ ಕ್ರಮ ಕೈಗೊಳ್ಳುತ್ತಿದ್ದಾರೆ.

ವಿಜಯ ಕರ್ನಾಟಕ 25 Nov 2025 4:42 pm

2028 ರವರೆಗೆ ಸಿದ್ದರಾಮಯ್ಯನೇ ಸಿಎಂ: ಜಮೀರ್ ಅಹ್ಮದ್ ಖಾನ್ ಭರ್ಜರಿ ಬ್ಯಾಟಿಂಗ್

ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ನಡೆಯಲಿದೆ. ಸಚಿವ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತನ್ವೀರ್ ಸೇಠ್, ಯು.ಟಿ ಖಾದರ್, ಎನ್ ಎ ಹ್ಯಾರೀಸ್ ಎಲ್ಲರೂ ಇದ್ದಾರೆ. ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇದೆ. ನನಗೆ ಹೈಕಮಾಂಡ್ ಯಾವುದೇ ಹುದ್ದೆ ಕೊಡಲಿ. ನಾನು ಪಕ್ಷದ ಜವಾಬ್ದಾರಿ ಕೊಟ್ರೂ ಮಾಡ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಕಾಂಗ್ರೆಸ್ ಸರ್ಕಾರ 2028 ರವರಗೆ ಭದ್ರವಾಗಿ ಇರಲಿದೆ. ಬಿಜೆಪಿ ನಾಯಕರು ಸರ್ಕಾರ ಪತನ ಆಗಲಿದೆ ಎಂದು ಹೇಳುತ್ತಿರುವುದರಲ್ಲಿ ಸತ್ಯಾಂಶ ಇಲ್ಲ. ಬಿಜೆಪಿಯವರು ಹಗಲು ಗನಸು ಕಾಣ್ತಿದ್ದಾರಷ್ಟೇ ಎಂದು ತಿರುಗೇಟು ನೀಡಿದರು.

ವಿಜಯ ಕರ್ನಾಟಕ 25 Nov 2025 4:36 pm

ಸಿದ್ದರಾಮಯ್ಯ ಸರಕಾರಕ್ಕೆ ಎರಡೂವರೆ ವರ್ಷಗಳು ಸಾಧನೆಗಳೇನು? ವೈಫಲ್ಯಗಳೇನು?

ಕರ್ನಾಟಕ ರಾಜಕೀಯದಲ್ಲಿ 2023ರ ಮೇ 20ರಂದು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರಕಾರಕ್ಕೆ ಈ 2025 ನವೆಂಬರ್ 19ರಂದು ಎರಡೂವರೆ ವರ್ಷ ತುಂಬಿದೆ. ಅಧಿಕಾರ ಹಸ್ತಾಂತರದ ಸತತ ಚರ್ಚೆಗಳ ಹೊರತಾಗಿಯೂ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿದಿದ್ದಾರೆ. ‘‘ನವೆಂಬರ್ ಕ್ರಾಂತಿ ಎಂಬುದು ಠುಸ್ ಆಗಿದೆ. ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ’’ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ‘‘ನಾನೇ ಐದೂ ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ’’ ಎಂದು, ಹಿಂದೆ ಮಾತಾಡುತ್ತಿದ್ದ ಆತ್ಮವಿಶ್ವಾಸದ ಧಾಟಿಯಲ್ಲೇ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಿ ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯೊಂದು ರಾಜಕೀಯದಲ್ಲಿ ಇದೆಯೋ ಅದೇ ಚಾಮರಾಜನಗರಕ್ಕೆ ಮತ್ತೆ ಮತ್ತೆ ಹೋಗುವ ಸಿದ್ದರಾಮಯ್ಯ, ನವೆಂಬರ್ 20ರಂದು ಕೂಡ ಅಲ್ಲಿಯೇ ಹೋಗಿ ತಾವು ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ, ಮುಂದಿನ ವರ್ಷ 17ನೇ ಬಜೆಟ್ ಮಂಡಿಸುವ ಬಗ್ಗೆ ದೃಢವಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಸರಕಾರದ ಈ ಎರಡೂವರೆ ವರ್ಷಗಳಲ್ಲಿ ಸಿಎಂ ಬದಲಾವಣೆ ಚರ್ಚೆ ಮೊದಲ ದಿನದಿಂದಲೇ ಇತ್ತೆಂಬುದು ನಿಜ. ಆದರೆ, ಅಧಿಕಾರ ಹಸ್ತಾಂತರ ಕುರಿತ ಗದ್ದಲಗಳು ಅವರನ್ನೆಂದೂ ವಿಚಲಿತಗೊಳಿಸಲಿಲ್ಲ. ಸರಕಾರ ಮಾಡಬೇಕಿರುವ ಕೆಲಸಗಳನ್ನು ಅವರು ಮರೆಯಲಿಲ್ಲ. ತಮ್ಮ ಸರಕಾರದ ಗ್ಯಾರಂಟಿಗಳನ್ನು ಪೂರೈಸುವ ಬಗ್ಗೆ ಅಸಾಧಾರಣ ಬದ್ಧತೆ ತೋರಿಸಿದರು. ಈ ಎರಡೂವರೆ ವರ್ಷಗಳು ರಾಜಕೀಯವಾಗಿ ಬರೀ ಅಧಿಕಾರ ಹಸ್ತಾಂತರದ ಗೊಂದಲಗಳಲ್ಲೇ ಮುಳುಗಿತೆಂಬಂತೆ ಕಂಡರೂ, ಸಿದ್ದರಾಮಯ್ಯ ಸರಕಾರ ಏನೆಲ್ಲವನ್ನೂ ಮಾಡಿದೆ ಎಂಬುದು ಕೂಡ ಸ್ಪಷ್ಟವಾಗಿದೆ. ಈ ಎರಡೂವರೆ ವರ್ಷಗಳಲ್ಲಿ ಅದು ಗೆದ್ದದ್ದೆಲ್ಲಿ, ಬಿದ್ದದ್ದೆಲ್ಲಿ ಎಂಬುದನ್ನೊಮ್ಮೆ ಈ ಹೊತ್ತಲ್ಲಿ ಸ್ಥೂಲವಾಗಿ ನೋಡಬಹುದು. ಮೊನ್ನೆ ನವೆಂಬರ್ 20ರಂದು ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿದ್ದರು. ‘‘ನನ್ನ ಸರಕಾರ ಈಗಲೂ ಭದ್ರ, ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ’’ ಎಂದರು. ‘‘ಜನ ಎಲ್ಲಿಯವರೆಗೆ ಬಯಸುತ್ತಾರೋ ಅಲ್ಲಿಯವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’’ ಎಂದರು. ಚಾಮರಾಜನಗರದ ಜೊತೆಗೆ ಅಂಟಿಕೊಂಡಿರುವ ಮೂಢನಂಬಿಕೆಯನ್ನು ನಿರಾಕರಿಸುತ್ತಾ ‘‘20ಕ್ಕೂ ಹೆಚ್ಚು ಸಲ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದಾಗೆಲ್ಲ ನನ್ನ ಕುರ್ಚಿ ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ಸರಕಾರವೇ ಗಟ್ಟಿಯಾಗಿದೆ’’ ಎಂದರು. ಒಂದು ರೀತಿಯಲ್ಲಿ ಸರಕಾರದ ಎರಡೂವರೆ ವರ್ಷಗಳ ಆಚರಣೆ ಕೂಡ ಇಲ್ಲಿಯೇ ನಡೆಯುತ್ತಿದೆ ಎಂದರು. ನಾಯಕತ್ವ ಬದಲಾವಣೆಯ ಗುಸುಗುಸು ಆಡಳಿತಾರೂಢ ಕಾಂಗ್ರೆಸ್ ಅನ್ನು ತಿಂಗಳುಗಳಿಂದ ಕಾಡುತ್ತಿತ್ತು. ನವೆಂಬರ್ ಕ್ರಾಂತಿ ಎಂದೆಲ್ಲ ಹೇಳಲಾಗುತ್ತಿದ್ದುದನ್ನು ಸಿದ್ದರಾಮಯ್ಯ ಸಂಪೂರ್ಣವಾಗಿ ತಳ್ಳಿಹಾಕಿದರು. ಮತ್ತದು ಮಾಧ್ಯಮಗಳ ಸೃಷ್ಟಿ ಎಂದು ಕರೆದರು. ‘‘ಈ ಪದವನ್ನು ಸೃಷ್ಟಿಸಿದವರೇ ಮಾಧ್ಯಮದವರು. ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ನಮಗೆ ಐದು ವರ್ಷಗಳ ಆಡಳಿತ ಅವಧಿ ನೀಡಲಾಗಿದೆ. ಐದು ವರ್ಷಗಳ ನಂತರ, ಚುನಾವಣೆ ನಡೆಯುತ್ತದೆ ಮತ್ತು ನಾವು ಮತ್ತೊಮ್ಮೆ ಗೆಲ್ಲುತ್ತೇವೆ’’ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲಿಗೆ, ಅಧಿಕಾರ ಹಸ್ತಾಂತರದ ಬಗ್ಗೆ ಇದ್ದ ಈವರೆಗಿನ ಗುಸುಗುಸು ಮುಗಿದಿದೆ. ಇದೆಲ್ಲದರ ನಡುವೆಯೂ ಈ ಆಟ ಮುಗಿದಿದೆ ಎಂದೇನೂ ಅಲ್ಲ. ಮಾಧ್ಯಮಗಳು ಕಂಡಕಂಡ ನಾಯಕರ ಎದುರು ಮತ್ತೆ ಮತ್ತೆ ಅದನ್ನೇ ಕೆದಕುವುದು, ಬಿಜೆಪಿಯವರು ಮತ್ತೆ ಮತ್ತೆ ಕೆಣಕುವುದು ನಡೆದೇ ಇತ್ತು, ಇನ್ನು ಮುಂದೆಯೂ ಇರುತ್ತದೆ. ಡಿ.ಕೆ. ಶಿವಕುಮಾರ್ ಪಾಳೆಯ ಹೊಸ ವರಸೆಯನ್ನೂ ಶುರು ಮಾಡಿದೆ ಎನ್ನುವುದಕ್ಕೆ, ಅವರ ಸಹೋದರ ಡಿ.ಕೆ. ಸುರೇಶ್ ಹೇಳಿಕೆ ಕೂಡ ಸಾಕ್ಷಿ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ ಎನ್ನುವ ಮೂಲಕ, ಅಧಿಕಾರ ಹಂಚಿಕೆ ಸೂತ್ರ ಇತ್ತೆನ್ನಲಾಗಿರುವ ಬಗ್ಗೆ ಅವರು ನೆನಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಇದೆಯೆಂಬುದು ಗುಟ್ಟಿನ ವಿಷಯವೇನೂ ಅಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿರುವುದು ಕೂಡ ಸುಳ್ಳಲ್ಲ. ಒಂದೆಡೆ ಡಿ.ಕೆ. ಶಿವಕುಮಾರ್ ಪಟ್ಟ ಬದಲಾವಣೆಗೆ ಪಟ್ಟು ಹಿಡಿದಿರುವಾಗಲೇ, ಇನ್ನೊಂದಡೆ ಸಂಪುಟ ಪುನರ್‌ರಚನೆ ಅಸ್ತ್ರ ಪ್ರಯೋಗಕ್ಕೆ ಸಿದ್ದರಾಮಯ್ಯ ಸಿದ್ಧವಾಗಿದ್ದಾರೆ. ಆದರೆ ಅವೆರಡರ ಹೊರತಾಗಿ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವ ಸೂತ್ರವನ್ನು ಹೈಕಮಾಂಡ್ ನೆಚ್ಚಿದೆ. ಏನೋ ಮಾಡಲು ಹೋಗಿ ಇರುವುದನ್ನೂ ಕಳೆದುಕೊಳ್ಳುವ ಹಾಗಾಗಬಾರದು ಎನ್ನುವುದು ಕಾಂಗ್ರೆಸ್ ದಿಲ್ಲಿ ನಾಯಕರ ಚಿಂತೆ. ಬಿಹಾರದಲ್ಲಿನ ಸೋಲು ಅದನ್ನು ಹಿಂಡಿಹಾಕಿದೆ. ಕರ್ನಾಟಕ ಬಿಟ್ಟರೆ ಇನ್ನೆರಡೇ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದೆ. ಈ ಸ್ಥಿತಿಯಲ್ಲಿ ಹೈಕಮಾಂಡ್ ಪಾಲಿಗೆ ಕರ್ನಾಟಕದಲ್ಲಿನ ಅಧಿಕಾರ ಒಂದು ದೊಡ್ಡ ಭರವಸೆ. ಮಲ್ಲಿಕಾರ್ಜುನ ಖರ್ಗೆಯವರು ಈಗಾಗಲೇ ತಮ್ಮನ್ನು ಭೇಟಿಯಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಇದನ್ನೇ ಹೇಳಿದ್ದೂ ಆಗಿದೆ. ಡಿಸೆಂಬರ್ ಮೊದಲ ವಾರ ಸಂಸತ್ ಅಧಿವೇಶನ ಶುರುವಾಗಲಿದ್ದು, ಡಿಸೆಂಬರ್ 8ರಿಂದ ವಿಧಾನಮಂಡಲ ಅಧಿವೇಶನವೂ ನಡೆಯುವುದಿದೆ. ಇದೊಂದು ನೆಪ ಸದ್ಯಕ್ಕೆ ಯಾವುದೇ ಬದಲಾವಣೆ ಸಾಧ್ಯತೆಗಳನ್ನು ದೂರವಾಗಿಸಿದೆ. ಸಿದ್ದರಾಮಯ್ಯನವರು ಸಂಪುಟ ಪುನರ್‌ರಚನೆ ಪ್ರಸ್ತಾವ ಮುಂದಿಟ್ಟದ್ದೇ ಅಧಿಕಾರ ಹಂಚಿಕೆ ಚರ್ಚೆಯನ್ನು ಹಿಂದೆ ಸರಿಸುವುದಕ್ಕೆ ಮತ್ತು ಸಿದ್ದರಾಮಯ್ಯನವರ ಈ ದಾಳದ ಮರ್ಮವೇನೆಂಬುದು ಡಿ.ಕೆ. ಶಿವಕುಮಾರ್ ಅವರಿಗೆ ಅರ್ಥವಾಗದೆ ಇಲ್ಲ. ಹಾಗಾಗಿಯೇ ಅವರು ದಿಲ್ಲಿಯಲ್ಲಿ ಕಸರತ್ತಿಗಿಳಿದರು. ಖರ್ಗೆಯವರ ಬಳಿ ಮಾತ್ರವಲ್ಲದೆ, ಪ್ರಿಯಾಂಕಾ ಗಾಂಧಿಯವರ ಬಳಿಯೂ ತಮ್ಮ ಹಕ್ಕು ಪ್ರತಿಪಾದಿಸಿದರು. ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಖರ್ಗೆಯವರು ಈಗಾಗಲೇ ಸ್ಪಷ್ಟಪಡಿಸಿರುವಂತೆ, ಈಗೇನಿದ್ದರೂ ಚೆಂಡು ಇರುವುದು ರಾಹುಲ್ ಅಂಗಳದಲ್ಲಿ. ಹಾಗಾಗಿ, ಅಧಿಕಾರ ಹಸ್ತಾಂತರ, ಸಂಪುಟ ಪುನಾರಚನೆ ಚರ್ಚೆಯೆಲ್ಲವೂ ಮತ್ತಷ್ಟು ಕಾಲ ಮುಂದುವರಿಯುತ್ತವೆ. ಇದರ ನಡುವೆಯೇ ತಾವೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆಯುತ್ತದೆ. ಸಿದ್ದರಾಮಯ್ಯ ಸರಕಾರದ ಈ ಎರಡೂವರೆ ವರ್ಷಗಳಲ್ಲಿ ಅಧಿಕಾರ ಹಸ್ತಾಂತರದ ಗದ್ದಲ, ಗೊಂದಲಗಳಲ್ಲೇ, ಅವರ ಗ್ಯಾರಂಟಿಯೂ ಸೇರಿದಂತೆ ಸರಕಾರದ ಸಾಧನೆಗಳಿಗೆ ಮಂಕು ಕವಿಯಿತೇ ಎಂಬ ಪ್ರಶ್ನೆಯಿದೆ. ಇನ್ನೊಂದೆಡೆ, ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣ, ಎಸ್‌ಸಿ, ಎಸ್‌ಟಿ ನಿಧಿ ವರ್ಗಾವಣೆ ಆರೋಪ ಇವೆಲ್ಲವೂ ತಂದಿಟ್ಟ ನಕಾರಾತ್ಮಕ ಪರಿಣಾಮಗಳನ್ನೂ ನಿಭಾಯಿಸಬೇಕಾಯಿತು. ಹಾಗೆಂದು ಎಲ್ಲವೂ ನಕಾರಾತ್ಮಕವಾಗಿಯೇ ಇದೆಯೆಂದಲ್ಲ. ಸರಕಾರದಿಂದ ಆಗಿರುವ ಅನೇಕ ಉತ್ತಮ ಕೆಲಸಗಳಿವೆ. ಬೆಂಗಳೂರಿಗೆ ಬಹಳ ಅಗತ್ಯವಿರುವ ದೊಡ್ಡ ಯೋಜನೆಗಳನ್ನು ಮುನ್ನಡೆಸುವಲ್ಲಿಸಿದ್ದರಾಮಯ್ಯ ಸರಕಾರ ಮಹತ್ವದ ಪಾತ್ರ ವಹಿಸಿದೆ. ಗಾಢ ನಿದ್ರೆಯಿಂದ ಅಲುಗಾಡಿಸಿದ್ದಕ್ಕಾಗಿ ಸರಕಾರಕ್ಕೆ ಸಂಪೂರ್ಣ ಶ್ರೇಯಸ್ಸು ಸಲ್ಲುತ್ತದೆ ಎಂದು ಅವರು ಹೇಳುತ್ತಾರೆ. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಪೂರ್ಣಗೊಂಡಿರುವುದು, ಹೂಡಿಕೆ ಆಕರ್ಷಣೆ ಇವೆಲ್ಲವೂ ಮಹತ್ವದ್ದವಾಗಿವೆ. ಗ್ಯಾರಂಟಿ ಯೋಜನೆಗಳಂತೂ ಸಿದ್ದರಾಮಯ್ಯ ಸರಕಾರದ ಗುರುತೇ ಆಗಿವೆ. ಗ್ಯಾರಂಟಿಗಳನ್ನು ಪೂರೈಸಿದ ಸಿದ್ದರಾಮಯ್ಯ ಮೇ 2023ರಲ್ಲಿ ಐದು ಗ್ಯಾರಂಟಿಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವದ ಯೋಜನೆಯಲ್ಲೊಂದು ಗ್ಯಾರಂಟಿ ಯೋಜನೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳೇ ಆ ಐದು ಗ್ಯಾರಂಟಿಗಳಾಗಿವೆ. ಐದೂ ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ ಸರಕಾರ, ಮೊದಲ ಆರು ತಿಂಗಳಲ್ಲೇ ಐದೂ ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಇದಕ್ಕಾಗಿ ವಾರ್ಷಿಕವಾಗಿ 54 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಸರಕಾರ ಹೇಳಿಕೊಂಡಿರುವಂತೆ, ಈವರೆಗೆ 1.05 ಲಕ್ಷ ಕೋಟಿ ರೂ. ಪ್ರಯೋಜನವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಈ ಕರ್ನಾಟಕ ಮಾದರಿ ಇಡೀ ದೇಶಾದ್ಯಂತ ಗಮನ ಸೆಳೆದಿದ್ದು, ವಿರೋಧಿಸಿದ್ದ ಬಿಜೆಪಿಯೇ ಈಗ ಇದನ್ನು ಅನುಸರಿಸುವಂತಾಗಿದೆ. ಗ್ಯಾರಂಟಿಗಳ ಸಮರ್ಥ ನಿಭಾಯಿಸುವಿಕೆ ಜೊತೆಗೇ ಅಭಿವೃದ್ಧಿ ಯೋಜನೆಗಳಿಗೆ ತಡೆಯಾಗದಂತೆ ಸಿದ್ದರಾಮಯ್ಯ ಸರಕಾರ ಮುನ್ನೆಚ್ಚರಿಕೆ ವಹಿಸಿದೆ. ಬಿಜೆಪಿಯವರು ಏನೇ ಬೊಬ್ಬೆ ಹೊಡೆದರೂ, ಈ ಯೋಜನೆಗಳಿಂದ ಸಾಕಷ್ಟು ಮಂದಿಗೆ ಅನುಕೂಲವಾಗಿದೆ, ಅವರ ಬದುಕು ಬದಲಾಗಿದೆ ಎನ್ನುವುದು ನಿಜ. ಜಾತಿ ಸಮೀಕ್ಷೆ ಎಂಬ ಮಹತ್ವದ ಹೆಜ್ಜೆ ಜಾತಿ ಸಮೀಕ್ಷೆ ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಮೂಲಕ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವುದು ಇದರ ಉದ್ದೇಶ. ಈ ಮೊದಲಿನ ಜಾತಿ ಸಮೀಕ್ಷೆಗೆ ವ್ಯಾಪಕ ವಿರೋಧ ಬಂದ ಬಳಿಕ ಮರು ಸಮೀಕ್ಷೆ ನಡೆಸಲಾಯಿತು. ಈಗ ಹೊಸ ಸಮೀಕ್ಷೆಯ ವರದಿ ಬರಬೇಕಿದ್ದು, ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಈ ಸಮೀಕ್ಷೆ ನಡೆಸುವ ಮೂಲಕ ಸಿದ್ದರಾಮಯ್ಯ ತಮ್ಮ ಸಮಾಜವಾದಿ ಬದ್ಧತೆಯನ್ನು ಮೆರೆದಿದ್ದಾರೆ. ಬೆಂಗಳೂರಿನ ಚಹರೆ ಬದಲಿಸುವ ಜಿಬಿಎ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸಲಾಗಿದ್ದು, ಬಿಬಿಎಂಪಿ ಎಂಬುದು ಕಣ್ಮರೆಯಾಗಲಿದೆ. ಬೆಂಗಳೂರಿನ ಆಡಳಿತಕ್ಕೆ ಇದರೊಂದಿಗೆ ಹೊಸ ರೂಪ ಬರುತ್ತದೆನ್ನುವುದು ಸರಕಾರದ ಪ್ರತಿಪಾದನೆ. ಇದಕ್ಕೂ ವಿರೋಧ ಬಂತಾದರೂ, ಬೆಂಗಳೂರು ನಗರದ ಆಡಳಿತ, ಯೋಜನೆ ಮತ್ತು ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲು ಇದನ್ನು ತರಲಾಗಿದೆ. ಬೆಂಗಳೂರು ಒಟ್ಟು ಐದು ವಿಭಾಗಗಳಲ್ಲಿ ವಿಭಜನೆಯಾಗಲಿದ್ದು, ನಿರ್ವಹಣೆ ಸುರಳೀತವಾಗುವ ನಿರೀಕ್ಷೆಯಿದೆ. ಟ್ರಾಫಿಕ್ ಸಮಸ್ಯೆಗೆ ಸುರಂಗ ಪರಿಹಾರ ಬೆಂಗಳೂರಿಗೆ ಸಂಬಂಧಿಸಿ ಸಿದ್ದರಾಮಯ್ಯ ಸರಕಾರದ ಮತ್ತೊಂದು ಮಹತ್ವದ ಯೋಜನೆ ಸುರಂಗ ರಸ್ತೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 16.7 ಕಿಲೋಮೀಟರ್ ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಾಣ ಸರಕಾರದ ಉದ್ದೇಶ. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಈ ಯೋಜನೆ ವಿಸ್ತರಿಸಲಿದೆ. ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಹೆಜ್ಜೆ ತೆಗೆದುಕೊಳ್ಳಲಾಗಿದೆಯಾದರೂ, ಇದರ ಬಗ್ಗೆ ವಿವಾದವೂ ಇದೆ. ಇವೆಲ್ಲದರ ಜೊತೆಗೆ, ನಕ್ಸಲರನ್ನು ಶರಣಾಗತಿಗೆ ಮನವೊಲಿಸಿ, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರಕಾರ ಗೆದ್ದಿದೆ. ದೇವನಹಳ್ಳಿಯಲ್ಲಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಸ್ವಾಧೀನ ಮಾಡುವ ವಿಚಾರಕ್ಕೆ ರೈತರಿಂದ ತೀವ್ರ ವಿರೋಧ ಬಂದ ಬಳಿಕ ಭೂಸ್ವಾಧೀನ ಅಧಿಸೂಚನೆಯನ್ನೇ ಸಿದ್ದರಾಮಯ್ಯ ರದ್ದುಮಾಡಿ ರೈತರ ಪರ ನಿಲುವು ತೆಗೆದುಕೊಂಡರು. ಇತ್ತೀಚಿನ ಕಬ್ಬು ಬೆಳಗಾರರ ಹೋರಾಟಕ್ಕೂ, ಅವರ ಬೇಡಿಕೆ ಕೇಂದ್ರ ಸರಕಾರದ ಹೊಣೆಗಾರಿಕೆಯಡಿ ಬರುತ್ತಿದ್ದರೂ, ಸಿದ್ದರಾಮಯ್ಯ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ಸಿದ್ದರಾಮಯ್ಯನವರ ರಾಜಕಾರಣ ಬರೀ ರಾಜಕೀಯ ಮಾತ್ರವಾಗಿರದೆ, ಅದು ಬಸವ, ಅಂಬೇಡ್ಕರರ ತತ್ವಗಳನ್ನೂ ಆಧರಿಸಿದೆ ಎಂಬುದಕ್ಕೆ ಅವರ ಸರಕಾರದ ನೀತಿಗಳು ಮತ್ತು ನಡೆಗಳು ಸಾಕ್ಷಿಯಾಗಿವೆ. ಅವರ ಸರಕಾರದ ಸಾಧನೆಯನ್ನು ಈ ನೆಲೆಯಿಂದಲೂ ಅರ್ಥ ಮಾಡಿಕೊಳ್ಳುವುದು ಅಗತ್ಯ. ಇನ್ನು, ಅವರ ಸರಕಾರದ ವೈಫಲ್ಯಗಳು, ಸರಕಾರದ ವಿರುದ್ಧದ ಆಪಾದನೆಗಳನ್ನು ಕೂಡ ಕಡೆಗಣಿಸಲು ಆಗುವುದಿಲ್ಲ. ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಪ್ರಕರಣ ಅವರ ಸರಕಾರಕ್ಕೆ ಕಳಂಕ ತರುವ ರೀತಿಯಲ್ಲಿ ಸಾಕಷ್ಟು ಸಮಯ ಕಾಡಿದವು. ಮುಡಾ ಪ್ರಕರಣ ರಾಜ್ಯ ಸರಕಾರದ ವಿರುದ್ಧ ಕೇಳಿಬಂದ ಬಹುದೊಡ್ಡ ಆರೋಪ. ಅದರಲ್ಲೂ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪವಿತ್ತು. ಅವರ ಪತ್ನಿ ಹೆಸರಲ್ಲಿ ನಿವೇಶನ ಹಂಚಿಕೆಯಾಗಿರುವುದನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಲಾಯಿತು. ಈ ಬೇಡಿಕೆ ಮುಂದಿಟ್ಟುಕೊಂಡೇ ಬಿಜೆಪಿ ಪಾದಯಾತ್ರೆ ರಾಜಕೀಯವನ್ನೂ ಮಾಡಿತು. ಬಳಿಕ ಸಿದ್ದರಾಮಯ್ಯ ಪತ್ನಿ ಮುಡಾ ನಿವೇಶನ ವಾಪಸ್ ನೀಡಿದ್ದರು. ವಾಲ್ಮೀಕಿ ಹಗರಣ ಕೂಡ ಇಷ್ಟೇ ದೊಡ್ಡ ಸುದ್ದಿ ಮಾಡಿತು. ವಾಲ್ಮೀಕಿ ಹಗರಣದ ಆರೋಪ ಹೊತ್ತ ಬಿ. ನಾಗೇಂದ್ರ ಅವರು ಸಂಪುಟಕ್ಕೆ ರಾಜೀನಾಮೆ ಕೊಡಬೇಕಾಯಿತು. ಇನ್ನು ಮತಗಳ್ಳತನ ಆರೋಪ ವಿಚಾರದಲ್ಲಿ ರಾಹುಲ್ ಮಾತಿಗೆ ಅಪಸ್ವರ ತೆಗೆದರೆಂಬ ಕಾರಣಕ್ಕೆ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಬೇಕಾಯಿತು. ಅವರು ಸಿದ್ದರಾಮಯ್ಯನವರ ಆಪ್ತರಾಗಿರುವುದರಿಂದ ಇದು ಸ್ವತಃ ಅವರಿಗೂ ಮುಜುಗರ ತಂದಿತ್ತು. ಕಾಂಗ್ರೆಸ್ ಸರಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ಬಂದದ್ದು ಕೂಡ ಸರಕಾರದ ವರ್ಚಸ್ಸಿಗೆ ಧಕ್ಕೆ ತಂದಿತು. ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದಾಗ ಬಿಜೆಪಿ ಸರಕಾರದ ವಿರುದ್ಧ ಕಮಿಷನ್ ಆರೋಪ ಮಾಡಿತ್ತು. ಗುತ್ತಿಗೆದಾರರ ಸಂಘದ ಪತ್ರ ಇದಕ್ಕೆ ಕಾರಣವಾಗಿತ್ತು. ಅದೇ ಆರೋಪ ಕಾಂಗ್ರೆಸ್ ಸರಕಾರವನ್ನೂ ಸುತ್ತಿಕೊಂಡಾಗ, ಅದನ್ನು ಬಿಜೆಪಿ ಅಸ್ತ್ರವಾಗಿ ಬಳಸಿತು. ಅವರದೇ ಶಾಸಕರು ಸರಕಾರದ ಬಗ್ಗೆ, ಸಚಿವರ ಬಗ್ಗೆ ಆರೋಪ ಮಾಡತೊಡಗಿದ್ದು ಮತ್ತೊಂದು ಕಳಂಕವಾಗಿ ಕಾಡಿತು. ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ಸರಕಾರ ವಿಫಲವಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು. ಶಾಸಕ ಬಿ.ಆರ್. ಪಾಟೀಲ್ ವಸತಿ ಇಲಾಖೆ ವಿರುದ್ಧ ಆರೋಪ ಮಾಡಿದ್ದರು. ಇವೆಲ್ಲವೂ ಆ ಹೊತ್ತಲ್ಲಿ ಸರಕಾರಕ್ಕೆ ಹಿನ್ನಡೆ ಉಂಟುಮಾಡುವಂತೆ ಕಂಡವು. ಆದರೆ ಇವೆಲ್ಲವನ್ನೂ ಮೀರಿ ಸರಕಾರವನ್ನು ಮತ್ತೆ ಮತ್ತೆ ಇಕ್ಕಟ್ಟಿನಲ್ಲಿ ಬೀಳಿಸುತ್ತಿದ್ದದ್ದು ಅಧಿಕಾರ ಹಸ್ತಾಂತರದ ಗದ್ದಲ. ಹೈಕಮಾಂಡ್ ನಾಯಕರು ಎಷ್ಟೇ ಎಚ್ಚರಿಕೆ ಕೊಡುತ್ತಿದ್ದರೂ ಸಿದ್ದರಾಮಯ್ಯ ಆಪ್ತರು ಮತ್ತು ಡಿ.ಕೆ. ಶಿವಕುಮಾರ್ ಕಡೆಯವರು ಮತ್ತೆ ಮತ್ತೆ ಅದರ ಪ್ರಸ್ತಾಪ ಮಾಡುತ್ತ ಗೊಂದಲ ಮೂಡಿಸುತ್ತಿದ್ದರು. ಇಲ್ಲಿ ಸಮಸ್ಯೆಯಿರುವುದೇ ಅಧಿಕಾರ ಹಂಚಿಕೆ ಸೂತ್ರವಿದೆ ಎಂಬ ಒಂದು ನಿಗೂಢದಲ್ಲಿ. ಇದು ನಿಜವಾಗಿಯೂ ಇದೆಯೇ ಎಂಬುದರ ಬಗ್ಗೆ ಕಾಂಗ್ರೆಸ್ ಕೇಂದ್ರ ನಾಯಕರಾಗಲಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಾಗಲೀ ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷವೂ ಸಿಎಂ ಆಗಿ ಮುಂದುವರಿಯುತ್ತಾರೆ ಎನ್ನುವುದರ ಬಗ್ಗೆ ಹೈಕಮಾಂಡ್ ಕೂಡ ಯಾಕೋ ಈವರೆಗೂ ಎಲ್ಲಿಯೂ ಸ್ಪಷ್ಟವಾಗಿ ಮಾತಾಡಿಲ್ಲ. ಈ ಅಸ್ಪಷ್ಟತೆಯೇ ಎಲ್ಲ ಗೊಂದಲದ ಮೂಲವಾಗಿದೆ. ಸದ್ಯ ಎಲ್ಲವೂ ತಣ್ಣಗಾದಂತಿದೆಯಾದರೂ, ಮತ್ತೆ ಭುಗಿಲೇಳುವ ಸಾಧ್ಯತೆ ಇಲ್ಲದೇ ಇಲ್ಲ. ಮುಂದೇನು ಎನ್ನುವುದರ ನಡುವೆಯೇ, ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿ, ದ್ವಿತೀಯಾರ್ಧವನ್ನು ಆರಂಭಿಸಿದ್ದಾರೆ.

ವಾರ್ತಾ ಭಾರತಿ 25 Nov 2025 4:27 pm

ಬಿಸಿನೆಸ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಆರಂಭಿಸಿದ BDA; 100 ಎಕರೆಗೆ ಪರಿಹಾರ ಘೋಷಣೆ! 6 ಆಯ್ಕೆಗಳೇನು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಸಿನೆಸ್ ಕಾರಿಡಾರ್ ಯೋಜನೆಗೆ 100 ಎಕರೆ ಭೂಮಿಗೆ ಪರಿಹಾರ ಘೋಷಿಸಿದೆ. ಇದರಿಂದಾಗಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭೂಮಿಗೆ ಪರಿಹಾರ ಘೋಷಣೆ ಮಾಡಲಾಗುವುದು. ಭೂಮಾಲೀಕರಿಗೆ ನಗದು, ನಿವೇಶನ ಸೇರಿದಂತೆ ಆರು ರೀತಿಯ ಪರಿಹಾರ ಆಯ್ಕೆಗಳನ್ನು ನೀಡಲಾಗುತ್ತಿದೆ.

ವಿಜಯ ಕರ್ನಾಟಕ 25 Nov 2025 4:18 pm

ಕೊಣಾಜೆ | ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳೂ ಅಗತ್ಯ : ಡಾ.ಪ್ರಸಾದ್ ಎಸ್.ಎನ್.

ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್ಸ್, ಮ್ಯಾನೇಜ್ ಮೆಂಟ್ ನ ಪದವಿ ದಿನಾಚರಣೆ

ವಾರ್ತಾ ಭಾರತಿ 25 Nov 2025 4:15 pm

Ghati Subramanya Temple: ₹29 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ

ಬೆಂಗಳೂರು, ನವೆಂಬರ್ 25: ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಬಹುಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಮುಜರಾಯಿ ಖಾತೆ ಸಚಿವ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಆಗಲಿದೆ. ಯಾವೆಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂಬ ಮಾಹಿತಿ ಇಲ್ಲಿದೆ. ಶ್ರೀ

ಒನ್ ಇ೦ಡಿಯ 25 Nov 2025 4:15 pm

ಮಂಗಳೂರು | ವಕೀಲ ಕೆ.ಎಂ. ಕೃಷ್ಣ ಭಟ್‌ರ ‘ಇಂದ್ರ ಧನುಸ್’ ಲಿಲಿತ ಪ್ರಬಂಧ ಸಂಕಲನ ಬಿಡುಗಡೆ

ಮಂಗಳೂರು, ನ.25: ವಕೀಲ ಕೆ.ಎಂ. ಕೃಷ್ಣ ಭಟ್ ಅವರು ರಚಿಸಿದ ‘ಇಂದ್ರ ಧನುಸ್’ ಲಿಲಿತ ಪ್ರಬಂಧ ಸಂಕಲನ ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ.ವಸಂತಕುಮಾರ ಪೆರ್ಲ ಅವರು, ಕೆ.ಎಂ.ಕೃಷ್ಣ ಭಟ್ ಅವರು ಕಳೆದ 65 ವರ್ಷದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಆರನೇ ಕೃತಿಯಾಗಿ ಲಿಲಿತ ಪ್ರಬಂಧಗಳ ಸಂಕಲನ ಹೊರಬಂದಿದೆ. ಲಲಿತ ಪ್ರಬಂಧಗಳು ಗಾತ್ರ, ಸ್ವರೂಪದಲ್ಲಿ ಚಿಕ್ಕದಾದರೂ, ದೊಡ್ಡ ಆಶಯ ಹೊಂದಿದೆ. ಚಿಕಿತ್ಸಕ ದೃಷ್ಟಿಯಿಂದ ವಿಷಯಗಳನ್ನು ನೋಡಿ ಲಾಲಿತ್ಯಪೂರ್ಣವಾದ ಭಾಷೆಯಲ್ಲಿ ಬರೆದಿದ್ದಾರೆ. ಲಲಿತ ಪ್ರಬಂಧಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಕೃಷ್ಣ ಭಟ್ ಅವರು ತನ್ನ ಅರಿವಿನ ಹಿನ್ನೆಲೆಯಲ್ಲಿ ಲಲಿತ ಪ್ರಬಂಧ ರಚಿಸಿದ್ದಾರೆ. ಕೃತಿಯಲ್ಲಿ ಮನೋಜ್ಞ ಲೇಖನಗಳಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಎಂ.ವಿ. ಶಂಕರ ಭಟ್ ಮಾತನಾಡಿ, ಕೃಷ್ಣ ಭಟ್ ಅವರು ಉತ್ತಮ ಸಾಹಿತಿಯಾಗಿದ್ದು, ತನ್ನ ಅನುಭವವನ್ನು ಲಘು ದಾಟಿಯಲ್ಲಿ ಬರೆದಿದ್ದಾರೆ ಎಂದರು. ಕೃತಿಕಾರ ಕೆ.ಎಂ.ಕೃಷ್ಣ ಭಟ್ ಮಾತನಾಡಿ, ನಾನು 10ನೇ ತರಗತಿಯಲ್ಲಿ ಓದುತ್ತಿರುವ ಸಂದರ್ಭದಲ್ಲೇ ಸಾಹಿತ್ಯ ರಚನೆ ಆರಂಭಿಸಿದ್ದೆ. ಕಸ್ತೂರಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನನ್ನ ಲೇಖನಗಳಿಗೆ ಸಿಗುತ್ತಿದ್ದ ಗೌರವಧನ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಗಿದೆ. ಅನೇಕ ಓದುಗರಿಂದ ನನಗೆ ಉತ್ತೇಜನ ದೊರೆತಿದೆ ಎಂದು ಹೇಳಿದರು. ಲೇಖಕ ಅನಂತ ಸುಬ್ರಹ್ಮಣ್ಯ ಶರ್ಮ ಸ್ವಾಗತಿಸಿ, ವಂದಿಸಿದರು. 

ವಾರ್ತಾ ಭಾರತಿ 25 Nov 2025 4:10 pm

ಪಕ್ಷಕ್ಕೆ ಮುಜುಗರ ತರಲು, ದುರ್ಬಲ ಮಾಡಲು ನನಗೆ ಇಷ್ಟವಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ʼʼನನಗಾಗಿ ಶ್ರಮಿಸುವ ಕಾರ್ಯಕರ್ತರ ಪರ ನಿಲ್ಲೋದು ನನ್ನ ಕರ್ತವ್ಯʼʼ

ವಾರ್ತಾ ಭಾರತಿ 25 Nov 2025 4:06 pm

IND Vs SA- ಗುವಾಹಟಿ ಟೆಸ್ಟ್ ನಲ್ಲಿ ಭಾರತ 549 ರನ್ ಬೆನ್ನಟ್ಟಿ ಗೆಲ್ಲುತ್ತಾ? ಟೆಸ್ಟ್ ಇತಿಹಾಸ ಏನು ಹೇಳುತ್ತೆ?

India Vs South Africa 2nd Test- ಟಿ20ಯಲ್ಲಿ 20 ಓವರ್ ಗಳಲ್ಲಿ 250 ರನ್ ಬೇಕಾದರೆ ಹೊಡೆದುಬಿಡಬಹುದು. ಆದರೆ ಟೆಸ್ಟ್ ನಲ್ಲಿ 300 ರನ್ ಹೊಡೆಯುವುದು ಸುಲಭವಲ್ಲ. ಅಂಥದ್ದರಲ್ಲಿ ಗುವಾಹಟಿ ಟೆಸ್ಟ್ ನಲ್ಲಿ ಭಾರತ ಗೆಲ್ಲಬೇಕಾದರೆ ಇದೀಗ 549 ರನ್ ಗಳಿಸಬೇಕು! ಪ್ರಥಮ ಟೆಸ್ಟ್ ಪಂದ್ಯ ನಡೆಯುತ್ತಿರುವ ಗುವಾಹಟಿ ಪಿಚ್ ನ ಮರ್ಮವನ್ನು ಅರಿತವರಿಲ್ಲ. ಕೊನೇ ದಿನ ಏನು ಬೇಕಾದರೂ ನಡೆಯಬಹುದು. ಭಾರತ ಏನಾದರೂ ಈ ಮೊತ್ತವನ್ನು ಬೆಂಬತ್ತಿ ಗೆಲುವು ಸಾಧಿಸಿದರೆ ಅದು ವಿಶ್ವದಾಖಲೆ ಎನ್ನಿಸಿಕೊಳ್ಳಲಿದೆ.

ವಿಜಯ ಕರ್ನಾಟಕ 25 Nov 2025 4:06 pm

ಗುರುದ್ವಾರ ಪ್ರವೇಶಕ್ಕೆ ನಕಾರ - ಸೇನೆಯಿಂದ ಅಧಿಕಾರಿ ವಜಾ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್

ಭಾರತೀಯ ಸೇನೆಯ ಕ್ರಿಶ್ಚಿಯನ್ ಅಧಿಕಾರಿಯೊಬ್ಬರನ್ನು ಗುರುದ್ವಾರ ಪ್ರವೇಶಿಸಿ ಪೂಜೆ ಮಾಡಲು ನಿರಾಕರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ವಜಾ ಆದೇಶವನ್ನು ಎತ್ತಿಹಿಡಿದಿದೆ. ತಮ್ಮ ಧರ್ಮದ ಕಾರಣ ನೀಡಿ ಆದೇಶ ಪಾಲಿಸದ ಅಧಿಕಾರಿಯನ್ನು ನ್ಯಾಯಾಲಯ 'ಸೇನೆಗೆ ಯೋಗ್ಯರಲ್ಲ' ಎಂದು ಹೇಳಿದೆ. ಇದು ಸೇನೆಯ ಶಿಸ್ತಿಗೆ ಧಕ್ಕೆ ತಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ನಿರ್ಧಾರವು ಸೈನಿಕರ ನಂಬಿಕೆಗಳಿಗೆ ಗೌರವ ನೀಡುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

ವಿಜಯ ಕರ್ನಾಟಕ 25 Nov 2025 4:01 pm

ಅಸ್ಸಾಂ ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಬಹುಪತ್ನಿತ್ವ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಡಿಸಿದರು. ವಿರೋಧ ಪಕ್ಷಗಳು ಗಾಯಕ ಜುಬಿನ್ ಗಾರ್ಗ್ ಅವರ ಸಾವಿನ ಬಗ್ಗೆ ಚರ್ಚಿಸಿ ವಾಕ್ ಔಟ್ ನಡೆಸಿದವು. ಈ ಮಸೂದೆಯು ಅಸ್ಸಾಂನಲ್ಲಿ ಬಹುಪತ್ನಿತ್ವವನ್ನು ಕಾನೂನುಬಾಹಿರಗೊಳಿಸುವ ಗುರಿಯನ್ನು ಹೊಂದಿದೆ.

ವಿಜಯ ಕರ್ನಾಟಕ 25 Nov 2025 3:59 pm

ಕಾಂಗ್ರೆಸ್ ನ ವೋಟ್ ಚೋರಿ ನಿರೂಪಣೆ ತಿರಸ್ಕರಿಸಿದ ಬಿಹಾರದ ಮತದಾರರು | ಈ ವಾರ' ವಿಶೇಷ | E Vaara

ದಿಲ್ಲಿ ಸ್ಪೋಟ : NIA ತನಿಖೆಯಿಂದ ವಿಧ್ವಂಸಕ ಕೃತ್ಯದ ಪ್ಲ್ಯಾನ್ ಬಯಲು ► ಕಬ್ಬಿಗೆ 3300 ರೂ. ದರ ನಿಗದಿ : ಪ್ರತಿಭಟನೆ ಮುಂದುವರೆಸಿದ ರೈತರು ►► ವಾರದ ವಿದ್ಯಮಾನಗಳ ನೋಟ - ಒಳನೋಟ : ಈ ವಾರ

ವಾರ್ತಾ ಭಾರತಿ 25 Nov 2025 3:57 pm

ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಜನ ಬೆಂಬಲ ಸಿಗಲಿಲ್ಲ ಯಾಕೆ ? | Prashant Kishor | Bihar Election

ಇತರರನ್ನು ‘ಗೆಲ್ಲಿಸಿದ’ ಪ್ರಶಾಂತ್ ಕಿಶೋರ್ ತಮ್ಮದೇ ಪಕ್ಷವನ್ನು ಏಕೆ ಗೆಲ್ಲಿಸಲಿಲ್ಲ? ► 100 ಕೋಟಿಯ ಸಲಹೆ ನೀಡುವ ತಂತ್ರಗಾರನ ತಂತ್ರ ವಿಫಲವಾದದ್ದು ಹೇಗೆ?

ವಾರ್ತಾ ಭಾರತಿ 25 Nov 2025 3:56 pm

ಬಿಹಾರ : BJP , JDU ರಣತಂತ್ರಕ್ಕೆ RJD, Congress ಸಾಟಿಯಾಗಲಿಲ್ಲ ಯಾಕೆ ? | BIHARA ELECTION RESULTS | NDA

ಮಹಾಘಟಬಂಧನದ ಫ್ರೆಂಡ್ಲಿ ಫೈಟ್ ಅದನ್ನು ನುಂಗಿ ಹಾಕಿತೇ ? ► ಜಾತಿ ಸಮೀಕರಣದಲ್ಲಿ ಹೇಗೆ ವಿಫಲವಾದವು RJD, Congress, VIP ?

ವಾರ್ತಾ ಭಾರತಿ 25 Nov 2025 3:55 pm

ಕಾಂಗ್ರೆಸ್ ಗೆ ಮುಸ್ಲಿಮರ ಓಟು ಕಟ್ಟಿಟ್ಟ ಬುತ್ತಿ ಅಲ್ಲ!| Bihar election results | Asaduddin Owaisi | Muslims

ಬಿಹಾರ ಚುನಾವಣಾ ಫಲಿತಾಂಶದಿಂದ ಪಾಠ ಕಲಿಯುತ್ತಾ ಕರ್ನಾಟಕ ಕಾಂಗ್ರೆಸ್ ಸರಕಾರ ? ► ‘ಬಿಜೆಪಿ ಬಿ ಟೀಮ್’ ಅಂತ ಇನ್ನೂ ಎಷ್ಟು ಕಾಲ ಹೇಳ್ತಾ ಇರ್ತೀರಿ ?

ವಾರ್ತಾ ಭಾರತಿ 25 Nov 2025 3:55 pm

ಬಿಹಾರದಲ್ಲಿ ನಿತೀಶ್ ಹೊರತಾದ ಬೇರೆ ದಾರಿ ಬಿಜೆಪಿಗೆ ಉಳಿದಿದೆಯೆ? | Bihar | Nitish Kumar | BJP | NDA | Modi

ತನಗೆ ನೆಲೆ ನೀಡಿದ್ದ ಪಕ್ಷವನ್ನೇ ಮುಗಿಸಿಬಿಡಲು ಬಿಜೆಪಿಗೆ ಸಾಧ್ಯವಿದೆಯೆ? ► ಸಂಖ್ಯೆಗಳ ಆಟದಲ್ಲಿ ಬಿಜೆಪಿಯ ನಿರ್ಧಾರವೇನಿರಬಹುದು?

ವಾರ್ತಾ ಭಾರತಿ 25 Nov 2025 3:54 pm

BTS Disbandment?: ಲೈವ್‌ ನಲ್ಲಿ ಟೀಂ ಡಿಸ್ಬ್ಯಾಂಡ್‌ ಮಾಡುವುದಾಗಿ ತಮಾಷೆ ಮಾಡಿದ RM; ವಿಡಿಯೋ ವೈರಲ್‌, ಆರ್ಮಿಗಳು ಆತಂಕ, ಆದ್ರೆ ನಿಜಕ್ಕೂ ಆಗಿದ್ದೇನು?

ಬಿಟಿಎಸ್ (BTS) ಬ್ಯಾಂಡ್‌ನ ಜಿಮಿನ್ (Jimin) ಮತ್ತು ಆರ್‌ಎಂ (RM) ಲೈವ್ ಸ್ಟ್ರೀಮ್‌ನಲ್ಲಿ ತಮಾಷೆಯಾಗಿ ತಂಡವನ್ನು ವಿಸರ್ಜಿಸುವ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ ಕ್ಷಣಿಕ ಆತಂಕ ಮೂಡಿಸಿತ್ತು. ತಾಂತ್ರಿಕ ದೋಷದಿಂದ ಹೀಗೆ ತಮಾಷೆ ಮಾಡಿರುವುದು ಸ್ಪಷ್ಟವಾದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ. ಬಿಟಿಎಸ್ 2026ರಲ್ಲಿ ಹೊಸ ಆಲ್ಬಂ ಮತ್ತು ವಿಶ್ವ ಪ್ರವಾಸದೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಿದ್ಧತೆ ನಡೆಸುತ್ತಿದೆ. ಸದಸ್ಯರು ತಮ್ಮ ಡ್ಯಾನ್ಸ್ ಸ್ಟುಡಿಯೋದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಆಗಾಗ RM ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ವಿಜಯ ಕರ್ನಾಟಕ 25 Nov 2025 3:50 pm

’ಬಿಜೆಪಿಯಿಂದ ಉತ್ತರ ಸಿಗದೇ ಪ್ರಶ್ನೆಯಾಗಿಯೇ ಉಳಿದ 5 ಪ್ರಶ್ನೆಗಳು’ : ಅವು ಯಾವುವು?

Priyank Kharge Questions to BJP : ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಯು ಲೇವಡಿ ಮಾಡುತ್ತಿದೆ. ಇದಕ್ಕೆ ಕೌಂಟರ್ ಕೊಟ್ಟಿರುವ ರಾಜ್ಯ ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಟ್ವೀಟ್ ಮೂಲಕ, ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ವಿಜಯ ಕರ್ನಾಟಕ 25 Nov 2025 3:49 pm

ದಾವಣಗೆರೆ | ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಕೆರೆಯಲ್ಲಿ ಪತ್ತೆ

ದಾವಣಗೆರೆ: ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಗರದ ಕುಂದವಾಡದಲ್ಲಿ ನಡೆದಿದೆ. ಮೃತರನ್ನು ಶಾಂತಿನಗರದ ಚೇತನ್ (22) ಮತ್ತು ಮನು (23) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಯುವಕರು ನಾಪತ್ತೆಯಾಗಿದ್ದು, ಕುಟುಂಬಸ್ಥರು ವಿವಿಧಡೆ ಹುಡುಕಾಟ ನಡೆಸಿದರು. ಆದರೆ ಮಂಗಳವಾರ ಕುಂದವಾಡ ಕೆರೆಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 25 Nov 2025 3:38 pm

Nandini Ghee Export: ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; 3 ದೇಶಗಳಿಗೆ ನಂದಿನಿ ತುಪ್ಪ ರಫ್ತು: ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, ನವೆಂಬರ್ 25: ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು . ಇಂದು ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂಲತ: ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕಾದಲ್ಲಿ

ಒನ್ ಇ೦ಡಿಯ 25 Nov 2025 3:23 pm

ಕಾಂಗ್ರೆಸ್ ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ : ಬಿ.ವೈ.ವಿಜಯೇಂದ್ರ

ದಾವಣಗೆರೆ : ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇವತ್ತು ಹೋರಾಟಕ್ಕೆ ಚಾಲನೆ ನೀಡಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಂಗಳವಾರ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ನಡಹಳ್ಳಿ, ರಾಜ್ಯದ ಹಿರಿಯ ನಾಯಕ ಸಿ.ಟಿ.ರವಿ, ಮುಖಂಡರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿ ಜಿಲ್ಲೆಯ ನಾಯಕರು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿರುವ ರೈತವಿರೋಧಿ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಟೀಕಿಸಿದರು. ಮೆಕ್ಕೆ ಜೋಳದ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ ಹೋರಾಟ ನಡೆಯುತ್ತಿದೆ. ನವಲಗುಂದದಲ್ಲಿ ರೈತ ಮುಖಂಡ ಶಂಕ್ರಣ್ಣ ಅಂಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಾಗಲಕೋಟೆ, ಶಿವಮೊಗ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರವು ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರಕಾರವು ಖರೀದಿ ಕೇಂದ್ರ ತೆರೆದಿಲ್ಲ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಅಣೆಕಟ್ಟಿಗೆ 32 ಕ್ರಸ್ಟ್ ಗೇಟ್ ಅಳವಡಿಸದೇ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸುತ್ತಲಿನ ರೈತರು ಎರಡನೇ ಬೆಳೆ ಬೆಳೆಯಲು ಆಗುತ್ತಿಲ್ಲ. ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಒತ್ತಾಯಿಸಿದರು. ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೇ ಇಡೀ ಸಚಿವಸಂಪುಟವು ದೆಹಲಿಯಲ್ಲಿ ಕುಳಿತಿದೆ. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರದ ಕುರಿತು ಚರ್ಚಿಸಲು ಸಭೆ ಕರೆದರೆ ಕೃಷಿ ಸಚಿವರು ದೆಹಲಿಯಲ್ಲಿದ್ದರು ಎಂದು ಟೀಕಿಸಿದರು. ಮುಖ್ಯಮಂತ್ರಿ ಯಾರೆಂಬುದು ನಮಗೆ ಸಂಬಂಧವಿಲ್ಲ. ರೈತರ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ನ.27, 28ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. ಡಿ.1 ಮತ್ತು 2ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ರೈತ ಮೋರ್ಚಾ ಹೋರಾಟ ಮಾಡಲಿದೆ ಎಂದು ತಿಳಿಸಿದರು.  

ವಾರ್ತಾ ಭಾರತಿ 25 Nov 2025 3:21 pm

ಮಂತ್ರಿಗಿರಿಗೆ ₹80,00,00,000 ವಸೂಲಿ: ಪ್ರಿಯಾಂಕ್‌ ಖರ್ಗೆ ಹೀಗಂದಿದ್ದೇಕೆ?

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣದ ಶಾಸಕರನ್ನು ಸಿಎಂ ಕುರ್ಚಿಗಾಗಿ ಕೋಟಿಗಟ್ಟಲೆ ಆಫರ್‌ ಕೊಟ್ಟು ಖರೀದಿ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಒಬ್ಬ ಶಾಸಕರಿಗೆ 50 ಕೋಟಿ ಫಿಕ್ಸ್‌ ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕೂಡ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

ಒನ್ ಇ೦ಡಿಯ 25 Nov 2025 3:12 pm

ಮಂಗಳೂರು | ಮಂಜನಾಡಿ–ಅನ್ಸಾರ್ ನಗರದಲ್ಲಿ ದಫ್ ಸ್ಪರ್ಧೆ, ಸಾಧಕರಿಗೆ ಸನ್ಮಾನ

ಮಂಗಳೂರು : ಮಂಜನಾಡಿ-ಅನ್ಸಾರ್ ನಗರದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ.22 ರಂದು ರಾತ್ರಿ ಇಲ್ಲಿನ ಮರ್ ಹೂಂ ಶೈಖುನಾ ಮಂಜನಾಡಿ ಸಿ ಪಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ದುವಾ ನೆರವೇರಿಸಿದರು. ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಗೌರವಾಧ್ಯಕ್ಷ, ಅನ್ಸಾರ್ ನಗರ ಬಿಲಾಲ್ ಮಸೀದಿ ಅಧ್ಯಕ್ಷ ಹಾಜಿ ಎನ್ ಎಸ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಕುದುಂಬ್ಲಾಡಿ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಅಲ್ಖಾಮಿಲಿ ಉದ್ಘಾಟಿಸಿದರು. ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮುಖ್ಯ ಭಾಷಣಗೈದರು. ಇದೇ ವೇಳೆ ಪಡೀಲ್ ಜನಪ್ರಿಯಾ ಆಸ್ಪತ್ರೆ ಸಿಇಒ ಹಾಗೂ ಡೈರೆಕ್ಟರ್ ಡಾ.ಕಿರಾಶ್ ಪರ್ತಿಪ್ಪಾಡಿ, ನರಿಂಗಾನ ಅಲ್-ಮದೀನಾ ಪಾಲಿಕ್ಲಿನಿಕ್ ಡೈರೆಕ್ಟರ್ ಡಾ.ಮುಹಮ್ಮದ್ ಫಯಾಝ್ ಹಾಗೂ ಕುಟ್ಯಾಡಿ ಜಮೀಯ್ಯತುಲ್ ಹಿಂದ್ ಅಲ್-ಇಸ್ಲಾಮಿಯ್ಯ ಸಂಸ್ಥೆಯಿಂದ ಹಾದಿ ಬಿರುದು ಪಡೆದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ ಹಳೆ ವಿದ್ಯಾರ್ಥಿ ಹಾಫಿಳ್ ನೌಫಲ್ ಹಾದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನ್ಸಾರ್ ನಗರ ಬಿಲಾಲ್ ಮಸೀದಿ ಇಮಾಂ ಅಬ್ಬಾಸ್ ಸಖಾಫಿ, ನೆಕ್ಕರೆ ಮದ್ರಸ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಸದರ್ ಮುಅಲ್ಲಿಂ ಝೈನುಲ್ ಆಬಿದೀನ್ ಮದನಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ನಾಗರಾಜ್, ಮುಡಿಪು ಸರ್ಕಲ್ ಕೆಎಂಜೆ ಅಧ್ಯಕ್ಷ ಹಾಜಿ ಎಸ್ ಕೆ ಖಾದರ್, ನರಿಂಗಾನ ಗ್ರಾ ಪಂ ಅಧ್ಯಕ್ಷ ನವಾಝ್, ಸದಸ್ಯ ಸಲೀಂ ಪೊಟ್ಟೊಳಿಕೆ, ಮರಿಕ್ಕಳ ಜುಮಾ ಮಸೀದಿ ಅಧ್ಯಕ್ಷ ಜಲೀಲ್ ಮೋಂಟುಗೋಳಿ, ಮಂಜನಾಡಿ ಗ್ರಾ ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಅಸೈ, ಕೊಣಾಜೆ ಗ್ರಾ ಪಂ ಮಾಜಿ ಅಧ್ಯಕ್ಷರಾದ ನಝರ್, ಶೌಕತ್, ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಹಾಜಿ ಎನ್ ಎಂ ಅಹ್ಮದ್ ಕುಂಞ (ನೆಕ್ಕರೆ ಬಾವು), ಗುತ್ತಿಗೆದಾರ ನಝೀರ್ ಮದ್ದಾಡಿ, ಅನ್ಸಾರ್ ನಗರ ಬದ್ರಿಯಾ ಮದ್ರಸ ಅಧ್ಯಕ್ಷ ಮನ್ಸೂರ್ ಯು ಎಸ್, ಉಪಾಧ್ಯಕ್ಷ ಮೋನು ಕೊಳ, ಬಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ, ಎಂ ಇ ಮೊಯಿದೀನ್ ಕುಂಞ, ಮಂಜನಾಡಿ ಗ್ರಾ ಪಂ ಸದಸ್ಯರಾದ ಇಲ್ಯಾಸ್ ಮೇಗಿನಮನೆ, ಇಸ್ಮಾಯಿಲ್ ಬಾವು, ನೆಕ್ಕರೆ ಅಲ್-ಅಮೀನ್ ಚಾರಿಟಿ ಅಧ್ಯಕ್ಷ ಸನಾವುಲ್ಲಾ, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಮಂಗಳಾಂತಿ ಎಂಯುಎಂ ಅಧ್ಯಕ್ಷ ಹಮೀದ್ ಕುಚ್ಚಿಗುಡ್ಡೆ, ಉದ್ಯಮಿಗಳಾದ ಅಬ್ದುಲ್ಲ, ಹಾಜಿ ಖಲಂದರ್, ಮೋರ್ಲ ರಿಫಾಯಿಯ ಮಸೀದಿ ಅಧ್ಯಕ್ಷ ಶಂಸು, ಅನ್ಸಾರ್ ನಗರ ಎಸ್ ವೈ ಎಸ್ ಯುನಿಟ್ ಅಧ್ಯಕ್ಷ ವಹಾಬ್, ಅನ್ಸಾರ್ ನಗರ ರಿಫಾಯಿಯ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷ ಸವಾದ್ ಕೊಳ, ಉಪಾಧ್ಯಕ್ಷರಾದ ಹನೀಫ್ ಹಾಜಿ ಪರಮಾಂಡ, ರಿಯಾಝ್ ಅನ್ಸಾರ್ ನಗರ, ಪ್ರಧಾನ ಕಾರ್ಯದರ್ಶಿ ರಾಶಿದ್, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಆಸಿಫ್ ಯು ಎಸ್ ಮೊದಲಾದವರು ಭಾಗವಹಿಸಿದ್ದರು. ಅನ್ಸಾರ್ ನಗರ ಬದ್ರಿಯಾ ಮದ್ರಸ ಸದರ್ ಮುಅಲ್ಲಿಂ ಉಮರುಲ್ ಫಾರೂಕ್ ಸಖಾಫಿ ಸ್ವಾಗತಿಸಿ, ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು. ಅಲ್-ಜಝೀರಾ ತಂಡಕ್ಕೆ ಪ್ರಶಸ್ತಿ : ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟದಲ್ಲಿ ಉಳ್ಳಾಲ-ಅಕ್ಕರೆಕರೆಯ ಅಲ್-ಜಝೀರಾ ದಫ್ ತಂಡ ಪ್ರಥಮ ಸ್ಥಾನ ಪಡೆದರೆ, ರೆಂಜಾಡಿ ತಾಜುಲ್ ಹುದಾ ದಫ್ ತಂಡ ದ್ವಿತೀಯ ಸ್ಥಾನ ಹಾಗೂ ಕೂಳೂರು ಮುಹಿಯುದ್ದೀನ್ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.        

ವಾರ್ತಾ ಭಾರತಿ 25 Nov 2025 3:11 pm

ನೀವು ಜಾತ್ಯತೀತ ಸೇನೆಗೆ ಅನರ್ಹರು: ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಅಧಿಕಾರಿಯ ವಜಾ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇವಸ್ಥಾನವೊಂದರ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಸೇನಾಧಿಕಾರಿಯನ್ನು ವಜಾಗೊಳಿಸಿದ್ದನ್ನು ಮಂಗಳವಾರ ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ಒಂದು ಸಂಸ್ಥೆಯಾಗಿ ಸೇನೆಯು ಜಾತ್ಯತೀತವಾಗಿದೆ ಮತ್ತು ಅದರ ಶಿಸ್ತನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿದೆ. ಅಶಿಸ್ತಿಗಾಗಿ ಅಧಿಕಾರಿ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ನೀವು ನಿಮ್ಮ ಯೋಧರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದೀರಿ,ನೀವು ಸೇನೆಯಲ್ಲಿರಲು ಸಂಪೂರ್ಣ ಅನರ್ಹರಾಗಿದ್ದೀರಿ ಎಂದು ಹೇಳಿತು. ಸಿಖ್ ಸ್ಕ್ವಾಡ್ರನ್‌ಗೆ ನಿಯೋಜಿಸಲ್ಪಟ್ಟಿದ್ದ ಕಮಲೇಶನ್ ದೇವಸ್ಥಾನವನ್ನು ಪ್ರವೇಶಿಸುವಂತೆ ಒತ್ತಾಯಿಸುವುದು ತನ್ನ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ತನ್ನ ವಿರುದ್ಧದ ಶಿಸ್ತು ಕ್ರಮವನ್ನು ಪ್ರಶ್ನಿಸಿದ್ದರು. ಆದರೆ,ಸರ್ವೋಚ್ಚ ನ್ಯಾಯಾಲಯವು ಅವರ ನಡವಳಿಕೆಯು ಕಾನೂನುಬದ್ಧ ಆದೇಶದ ಅವಿಧೇಯತೆಗೆ ಸಮನಾಗಿದೆ ಎಂದು ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಲ್ಯ ಬಾಗ್ಚಿ ಅವರ ಪೀಠವು,‌ ಕಮಲೇಶನ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಸಮರ್ಥಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ‘ಅವರು ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಸೇನಾಧಿಕಾರಿಯೊಬ್ಬರು ತೀವ್ರ ಅಶಿಸ್ತನ್ನು ಪ್ರದರ್ಶಿಸಿದ್ದಾರೆ, ಕೇವಲ ಇದೊಂದೇ ಕಾರಣಕ್ಕಾಗಿ ಅವರನ್ನು ಹೊರಹಾಕಬೇಕಿತ್ತು’ ಎಂದು ದಿಲ್ಲಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸುತ್ತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು. ಕಮಲೇಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು,‌ ‘ಹೆಚ್ಚಿನ ರೆಜಿಮೆಂಟ್‌ಗಳ ಪ್ರಧಾನ ಕಚೇರಿಗಳಲ್ಲಿ ಸರ್ವ ಧರ್ಮ ಸ್ಥಳವಿದೆ, ಆದರೆ ಪಂಜಾಬಿನ ಮಾಮುಮ್‌ನಲ್ಲಿ ದೇವಸ್ಥಾನ ಮತ್ತು ಗುರುದ್ವಾರ ಮಾತ್ರ ಇವೆ. ನನ್ನ ಕಕ್ಷಿದಾರರು ಗರ್ಭಗುಡಿಯನ್ನು ಪ್ರವೇಶಿಸುವುದು ತನ್ನ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿ ದೇವಸ್ಥಾನದೊಳಗೆ ಅಡಿಯಿರಿಸಲು ನಿರಾಕರಿಸಿದ್ದರು. ತಾನು ಹೊರಗಿನಿಂದಲೇ ಹೂವುಗಳನ್ನು ಅರ್ಪಿಸುತ್ತೇನೆ, ಆದರೆ ಒಳಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ಬೇರೆ ಯಾರಿಗೂ ಇದು ಸಮಸ್ಯೆ ಅನ್ನಿಸಿರಲಿಲ್ಲ, ಆದರೆ ಓರ್ವ ಉನ್ನತ ಅಧಿಕಾರಿ ಶಿಸ್ತು ಕ್ರಮವನ್ನು ಆರಂಭಿಸಿದ್ದರು’ ಎಂದು ವಾದಿಸಿದರು. ಶಿಸ್ತುಬದ್ಧ ಪಡೆಯಲ್ಲಿ ಇಂತಹ ಜಗಳಗಂಟ ವ್ಯಕ್ತಿ ಸ್ವೀಕಾರಾರ್ಹರೇ? ಅವರು ಭಾರತದ ಅತ್ಯಂತ ಶಿಸ್ತುಬದ್ಧ ಪಡೆಯ ಸದಸ್ಯ. ಅವರು ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದ ಪೀಠವು, ಇದು ಓರ್ವ ಸೇನಾಧಿಕಾರಿಯಿಂದ ಅತ್ಯಂತ ಘೋರ ಅಶಿಸ್ತನ್ನು ಪ್ರದರ್ಶಿಸುತ್ತದೆ ಎಂದು ಹೇಳಿತು. ತಾನು ಸರ್ವಧರ್ಮ ಸ್ಥಳವನ್ನು ಪ್ರವೇಶಿಸಲು ನಿರಾಕರಿಸಿರಲಿಲ್ಲ,ಆಚರಣೆಗಳನ್ನು ಮಾಡುವುದನ್ನು ಮಾತ್ರ ನಿರಾಕರಿಸಿದ್ದೆ ಎಂಬ ಕಮಲೇಶನ್ ವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,ಅವರ ಕೃತ್ಯವು ಅವರದೇ ಯೋಧರಿಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿತು. ‘ಅಧಿಕಾರಿ ಎಷ್ಟೊಂದು ದುರಹಂಕಾರಿಯೆಂದರೆ ಅವರು ತನ್ನ ಯೋಧರೊಂದಿಗೆ ಹೋಗುವುದಿಲ್ಲ. ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಧಾರ್ಮಿಕ ವಿಧಿಗಳನ್ನು ನೆರವೇರಿಸುವಂತೆ ನಿಮ್ಮನ್ನು ಯಾರಾದರೂ ಕೇಳಿದರೆ ಅದು ಬೇರೆ ವಿಷಯ ಮತ್ತು ನೀವು ಇಲ್ಲ ಎನ್ನಬಹುದು. ಆದರೆ ಒಳ ಪ್ರವೇಶಿಸಲು ನೀವು ಹೇಗೆ ನಿರಾಕರಿಸುತ್ತೀರಿ?’ ಎಂದು ಪ್ರಶ್ನಿಸಿದ ಪೀಠವು, ದೇವಸ್ಥಾನವನ್ನು ಪ್ರವೇಶಿಸಿದರೆ ನಂಬಿಕೆಗೆ ಚ್ಯುತಿಯುಂಟಾಗುವುದಿಲ್ಲ ಎಂದು ಅವರ ಪ್ಯಾಸ್ಟರ್ ಹೇಳಿದ್ದರೂ ಅವರು ಕಡೆಗಣಿಸಿದ್ದರು ಎಂದು ಬೆಟ್ಟು ಮಾಡಿತು.

ವಾರ್ತಾ ಭಾರತಿ 25 Nov 2025 3:04 pm

ಮಂಗಳೂರು | ʼಮಾದರಿ ಮದುವೆʼ ಪ್ರೊಮೋಶನ್ ಕೌನ್ಸಿಲ್ ಅಸ್ತಿತ್ವಕ್ಕೆ

ಮಂಗಳೂರು: ಮದುವೆಗಳನ್ನು ಅನಾಚಾರಮುಕ್ತಗೊಳಿಸುವ ಮತ್ತು ಮದುವೆಯ ಆರ್ಥಿಕ ಭಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ: ಶತದಿನ ಅಭಿಯಾನ'ದ ಯಶಸ್ಸಿಗಾಗಿ ಪ್ರೊಮೋಶನ್ ಕೌನ್ಸಿಲ್ ರೂಪಿಸಲಾಯಿತು. ಇದರ ಚೇರ್ಮಾನ್ ಆಗಿ ಡಾ.ಶೇಖ್ ಬಾವ ಹಾಜಿ, ಕನ್ವೀನರ್ ಆಗಿ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಹಾಗೂ ಕೋರ್ಡಿನೇಟರ್ ಆಗಿ ಮುಹಮ್ಮದ್ ಅಲೀ ತುರ್ಕಳಿಕೆ ಅವರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಮುಹ್ಯಿದ್ದೀನ್ ಸಖಾಫಿ ತೋಕೆ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಹನೀಫ್ ಹಾಜಿ ಉಳ್ಳಾಲ, ಕಾರ್ಯದರ್ಶಿಗಳಾಗಿ ಕೆಕೆಎಂ ಕಾಮಿಲ್ ಸಖಾಫಿ ಮತ್ತು ಮುಹಮ್ಮದ್ ಮದನಿ ಪೂಡಲ್, ಸದಸ್ಯರಾಗಿ ಜಿ.ಎಂ.ಕಾಮಿಲ್ ಸಖಾಫಿ, ಹಮೀದ್ ಹಾಜಿ ಕೊಡುಂಗಾಯಿ, ಮನ್ಸೂರ್ ಕೋಡಿ ಕುಂದಾಪುರ, ಇಕ್ಬಾಲ್ ಕೃಷ್ಣಾಪುರ, ಮುಜೀಬ್ ಕೊಡಗು, ತೌಸೀಫ್ ಅಸ್ಅದಿ ಅವರನ್ನು ಆಯ್ಕೆಮಾಡಲಾಯಿತು. ಈ ಸಂಬಂಧ ಮಂಗಳೂರಿನ ಎಸ್ ವೈ ಎಸ್ ರಾಜ್ಯ ಕಚೇರಿಯಲ್ಲಿ ನಡೆದ ಸಾರಥ್ಯ ಸಂಗಮದಲ್ಲಿ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೈಯದ್‌ ಇಲ್ಯಾಸ್ ತಂಙಳ್ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು. ಜಂಇಯತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರಾದ ಜಿ ಎಂ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಡಾ.ಝೈನಿ ಕಾಮಿಲ್, ಎಸ್.ಎಂ.ಎ. ಉಪಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಜಂಇಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಪೂಡಲ್, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆ, ಉಳ್ಳಾಲ ದರ್ಗಾಧ್ಯಕ್ಷ ಹನೀಫ್ ಹಾಜಿ, ಕೆ ಸಿ ಎಫ್ ಮಾಜಿ ಅಧ್ಯಕ್ಷ ಡಾ ಶೇಖ್ ಬಾವ, ಕೆಎಂಜೆ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಪು ಮಾತನಾಡಿದರು. ಹಫೀಳ್ ಸಅದಿ ಮಡಿಕೇರಿ, ಕೆ.ಎಚ್.ಇಸ್ಮಾಯಿಲ್ ಸಅದಿ, ಅನಸ್ ಸಿದ್ದೀಖಿ ಶಿರಿಯ, ಇಸ್ಮಾಯಿಲ್ ಸಅದಿ ಉರುಮನೆ, ಕಲ್ಕಟ್ಟ ರಝ್ವಿ ಉಡುಪಿ, ಇಬ್ರಾಹೀಂ ಖಲೀಲ್ ಮಾಲಿಕಿ, ಮಹ್ಬೂಬ್ ಸಖಾಫಿ ಕಿನ್ಯ, ಇಬ್ರಾಹೀಂ ನಈಮಿ ಉರುಮಣೆ ಉಪಸ್ಥಿತರಿದ್ದರು. ಕೆ.ಎಂ.ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಮನ್ಸೂರ್ ಅಲಿ ಶಿವಮೊಗ್ಗ ವಂದಿಸಿದರು.

ವಾರ್ತಾ ಭಾರತಿ 25 Nov 2025 2:57 pm

ಗೋವಾದಲ್ಲಿ ರಂಗೇರಲಿದೆ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಹಿರಿಯರ ಕ್ರಿಕೆಟ್ ಸಮರ ಯಾವಾಗ ಶುರು? ಯಾರೆಲ್ಲಾ ಇರ್ತಾರೆ?

Legends Pro T20 League 2026- ಇದೇ ಮೊದಲ ಬಾರಿಗೆ ಗೋವಾದಲ್ಲಿ ಭಾರೀ ಕ್ರಿಕೆಟ್ ಜಾತ್ರೆಯೊಂದು ನಡೆಯಲಿದೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಮೊದಲ ಆವೃತ್ತಿಯು 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ಫ್ರಾಂಚೈಸಿ ತಂಡಗಳು ಮತ್ತು 90 ದಿಗ್ಗಜ ಕ್ರಿಕೆಟಿಗರು ಭಾಗವಹಿಸಲಿದ್ದು ಶಿಖರ್ ಧವನ್, ಹರ್ಭಜನ್ ಸಿಂಗ್, ಶೇನ್ ವಾಟ್ಸನ್, ಮೈಕಲ್ ಕ್ಲಾರ್ಕ್, ಡೇಲ್ ಸ್ಟೇನ್ ಮೊದಲಾದ ಕ್ರಿಕೆಟ್ ಲೋಕದ ಹಳೇಹುಲಿಗಳು ಕಣಕ್ಕಿಳಿಯಲಿದ್ದಾರೆ.

ವಿಜಯ ಕರ್ನಾಟಕ 25 Nov 2025 2:52 pm

'ಭಯ್ಯ ಅನ್ನಬೇಡಿ' ಸೇರಿದಂತೆ ಪ್ರಯಾಣಿಕರಿಗೆ 6 ನಿಯಮಗಳನ್ನ ಹಾಕಿದ ಬೆಂಗಳೂರು ಕ್ಯಾಬ್‌ ಚಾಲಕ! ಫೋಟೋ ವೈರಲ್‌

ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗಾಗಿ ರೂಪಿಸಿದ ಆರು ನಿಯಮಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಿಯಮಗಳು ಪ್ರಯಾಣಿಕರ ವರ್ತನೆ, ಗೌರವ ಮತ್ತು ಚಾಲಕರೊಂದಿಗೆ ಅವರ ಒಪ್ಪಂದದ ಬಗ್ಗೆ ಹೇಳುತ್ತವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನೆಟ್ಟಿಗರೊಬ್ಬರು ಚಾಲಕರಿಗೂ ಅನ್ವಯವಾಗುವ ನಿಯಮಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 25 Nov 2025 2:52 pm

ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ: ಬೂದಿ ಮೋಡಗಳು ಭಾರತದಿಂದ ತೆರವಾಗುವುದು ಯಾವಾಗ? ಮುಂದೆ ಏನಾಗುತ್ತೆ?

ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹಾಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮವಾಗಿ ಹೊರಹೊಮ್ಮಿದ ಬೂದಿ ಮೋಡಗಳು ಬಲವಾದ ಮೇಲ್ಮಟ್ಟದ ಗಾಳಿಯ ಸಹಾಯದಿಂದ ಅರಬ್ಬಿ ಸಮುದ್ರದ ಮೂಲಕ ಭಾರತದ ವಾಯುವ್ಯ ಮತ್ತು ಪಶ್ಚಿಮ ಭಾಗಗಳನ್ನು ತಲುಪಿವೆ.. ಇದರಿಂದಾಗಿ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋಚರತೆ ಕಡಿಮೆಯಾಗಿ ವಿಮಾನಯಾನ ಕಾರ್ಯಾಚರಣೆಗಳಿಗೆ ಅಲ್ಪ ಮಟ್ಟಿಗೆ ಅಡ್ಡಿಯುಂಟಾಗಿದೆ. ಸಂಜೆ 7:30 ರೊಳಗೆ ಸಂಪೂರ್ಣವಾಗಿ ತೆರವಾಗಲಿವೆ ಮತ್ತು ಮೋಡವು ಈಗ ಚೀನಾದತ್ತ ಚಲಿಸುತ್ತಿದೆ.

ವಿಜಯ ಕರ್ನಾಟಕ 25 Nov 2025 2:41 pm

ಕೆನಾಡದಲ್ಲಿ ಮತ್ತೆ ಹೆಚ್ಚಾಯ್ತು ಖಲಿಸ್ತಾನಿಗಳ ಅಟ್ಟಹಾಸ;‌ SFJ ಖಲಿಸ್ತಾನ್ ಜನಮತಗಣನೆ ಪ್ರಕಿಯೆ, ʼಕಿಲ್‌ ಇಂಡಿಯಾ ಪಾಲಿಟಿಕ್ಸ್‌ʼ ಘೋಷಣೆ

ಭಾರತ-ಕೆನಡಾ ಸಂಬಂಧ ಸುಧಾರಿಸುತ್ತಿರುವಾಗಲೇ, ಒಟ್ಟಾವಾದಲ್ಲಿ ಖಲಿಸ್ತಾನಿ ಸಂಘಟನೆಗಳು ನಡೆಸಿದ 'ಕಿಲ್ ಇಂಡಿಯಾ ಪಾಲಿಟಿಕ್ಸ್, ಕಿಲ್ ಮೋದಿ‌ ಪಾಲಿಟಿಕ್ಸ್' ಘೋಷಣೆಗಳು ಕೂಗಿ ಜನಮತಗಣನೆ ಪ್ರಕ್ರಿಯೆ ನಡೆಸಿರುವುದು ಉದ್ವಿಗ್ನತೆ ಸೃಷ್ಟಿಸಿದೆ. G20 ಶೃಂಗಸಭೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆದಿದ್ದೇ ತಡ, ಅದೇ ದಿನದಲಲ್ಲಿ ಸಂಭವಿಸಿದ ಈ ಘಟನೆಗಳು ರಾಜತಾಂತ್ರಿಕ ಸಂಬಂಧಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ರಾಯಭಾರಿ ಇದನ್ನು ಹಾಸ್ಯಾಸ್ಪದ ಸಂಗತಿ ಹಾಗೂ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂದು ಕರೆದಿದ್ದಾರೆ.

ವಿಜಯ ಕರ್ನಾಟಕ 25 Nov 2025 2:41 pm

ದಾನಿಗಳ ಸಹಕಾರದೊಂದಿಗೆ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಸಹಾಯಧನ ವಿತರಿಸಿದ ಶುಭದ ರಾವ್

ಕಾರ್ಕಳ : ಕಾರ್ಕಳ ತಾಲೂಕು‌ ಕುಕ್ಕುಂದೂರು ವಿಜೇತ ವಿಶೇಷ ಶಾಲೆಯ ಮಕ್ಕಳಿಗೆ ಇಂದು ದಾನಿಗಳಾದ ಮಲ್ಲೇಶ್ವರಂ ನಿವಾಸಿ ಶ್ರೀ ಬಾಲಕೃಷ್ಣ ಹಾಗೂ ಶ್ರೀಮತಿ ಉಷಾ ಬಾಲಕೃಷ್ಣ ರವರು ‌ನೀಡಿದ ಸಮವಸ್ತ್ರ ಬಟ್ಟೆಗಳು ಹಾಗೂ ತಮ್ಮ ವೈಯಕ್ತಿಕ ಸಹಾಯಧನವನ್ನು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ದೇವರ ಮಕ್ಕಳ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ, ಹಿಂದಿನಿಂದಲೂ ಈ ಶಾಲೆಯ ಮಕ್ಕಳಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ ಮುಂದೆಯೂ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ಬೊಂಡುಕುಮೇರಿ ಸಚಿನ್ ನಾಯ್ಕ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಫುಟ್ ಬಾಲ್ ಆಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿದಿಸಿ ಚಿನ್ನದ ಪದಕವನ್ನು ಪಡೆದ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿಗಳಾದ ಕಿಶೋರ್ ಹಾಗೂ ಪ್ರೀತಿ ಇವರನ್ನು ಗೌರವಿಸಲಾಯಿತು. ಮುಖ್ಯ ಅಥಿತಿಗಳಾಗಿ ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ, ಪಂಚಾಯತ್ ಸದಸ್ಯರಾದ ರುಕ್ಮಿಯ್ಯ ಶೆಟ್ಟಿಗಾರ್ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ವಿಜೇತ ವಿಶೇಷ ಶಾಲಾ ಹಿತೈಷಿಗಳಾದ ಸತೀಶ್ ಭಂಡಾರಿ, ಶಾಲಾ ಸಿಬ್ಬಂದಿ ವರ್ಗ, ಮುಗ್ಧ ಮಕ್ಕಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Nov 2025 2:38 pm

ಕಮ್ಯುನಿಸ್ಟ್ ಕ್ರಾಂತಿಕಾರಿ ಫಿಡೆಲ್ ಮತ್ತು ಫುಟ್ಬಾಲ್ ದಂತಕತೆ ಮರಡೋನ ಸ್ನೇಹ ಸಂಬಂಧದ ಇನ್‌ಸೈಡ್ ಸ್ಟೋರಿ

ಫುಟ್ಬಾಲ್ ದಂತಕತೆೆ, ಫುಟ್ಬಾಲ್ ಅಭಿಮಾನಿಗಳ ದೇವರು, ಫುಟ್ಬಾಲ್ ಕ್ಷೇತ್ರದಲ್ಲಿ ಅನೇಕ ದಾಖಲೆಗಳ ಸರದಾರ ತನ್ನ ಎಡಗಾಲಿನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದ ಅರ್ಜೆಂಟೀನದ ಡೀಗೊ ಮರಡೋನ ತನ್ನ ಅದೇ ಎಡಗಾಲಿನಲ್ಲಿ ಅಮೆರಿಕಾ ಸಾಮ್ರಾಜ್ಯ ಶಾಹಿಗಳ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಕ್ಯೂಬಾದ ಮಾಜಿ ಅಧ್ಯಕ್ಷ, ಕಾಮ್ರೆಡ್ ಫಿಡೆಲ್ ಕ್ಯಾಸ್ಟ್ರೋ ಅವರ ಚಿತ್ರವನ್ನು ಟಾಟೂ ಹಾಕಿಸಿಕೊಂಡಿದ್ದರು. ಬಲಗೈಯಲ್ಲಿ ಮತ್ತೊರ್ವ ಕ್ರಾಂತಿಕಾರಿ ಚೆಗುವೇರಾರ ಟಾಟೂ ಹಾಕಿಸಿ ಕೊಂಡಿದ್ದರು. ಚೆಗುವೇರಾ ಮತ್ತು ಕ್ಯಾಸ್ಟ್ರೋ ಅವರ ಟಾಟೂವನ್ನು ಮರಡೋನ ಬೂಟಾಟಿಕೆಗೋ, ಫ್ಯಾಷನಿಗಾಗಿಯೋ ಹಾಕಿಸಿಕೊಂಡಿರಲಿಲ್ಲ. ತನ್ನ ಸಾಮ್ರಾಜ್ಯಶಾಹಿ ವಿರೋಧಿ ರಾಜಕೀಯ ಸಿದ್ದಾಂತದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಇಬ್ಬರು ಹೋರಾಟಗಾರರ ಟಾಟೂವನ್ನು ಹಾಕಿಸಿಕೊಂಡಿದ್ದರು ಎಂಬುದು ಜಗಜ್ಜಾಹೀರಾಗಿದ್ದ ಸಂಗತಿ. ಮರಡೋನ, ಫಿಡೆಲ್ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು 1987ರಲ್ಲಿ ಅರ್ಜೆಂಟೀನ ಫುಟ್ಬಾಲ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ. ಆ ನಂತರ ಅವರಿಬ್ಬರು ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರೂ ಅತ್ಯಂತ ಆಪ್ತ ಸ್ನೇಹಿತರಾಗುವುದು 2000 ಇಸವಿಯಲ್ಲಿ. ಮರಡೋನ ಅತಿಯಾದ ಕೊಕೇನ್ ಅಮಲು ಪದಾರ್ಥ ಸೇವಿಸಿ ಸಾವಿನ ಅಂಚಿಗೆ ತಳ್ಳಲ್ಪಟ್ಟಾಗ ಅರ್ಜೆಂಟೀನದ ಆಸ್ಪತ್ರೆಗಳಲ್ಲಿ ಮರಡೋನರ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂದು ಮರಡೋನರನ್ನು ಆಸ್ಪತ್ರೆಯಿಂದ ಆಚೆ ಕಳುಹಿಸಿದರು. ಚಿಕಿತ್ಸಾ ವೈಫಲ್ಯದಿಂದ ಮರಡೋನ ಅರ್ಜೆಂಟೀನದಲ್ಲಿ ಸಾಯುವುದು ಅರ್ಜೆಂಟೀನ ಆಡಳಿತಕ್ಕೂ ಇಷ್ಟ ಇರಲಿಲ್ಲ . ಅದಕ್ಕಾಗಿ ವಿದೇಶಕ್ಕೆ ತೆರಳಲು ಅರ್ಜೆಂಟೀನ ಉಚಿತ ಸಲಹೆ ಕೊಡುತ್ತಿತ್ತು ಮತ್ತು ವಿಪರೀತ ಕೊಕೇನ್ ಸೇವಿಸುತ್ತಿದ್ದ ಕಾರಣಕ್ಕೆ ಅರ್ಜೆಂಟೀನ ಆಸ್ಪತ್ರೆಗಳ ಬಾಗಿಲುಗಳು ನನಗೆ ಮುಚ್ಚಿ ದ್ದವು ಎಂದು ಮರಡೋನ ತನ್ನ ಆತ್ಮಕತೆಯಲ್ಲಿ ನಂತರ ತಿಳಿಸಿದ್ದರು. ಮರಡೋನರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ಕ್ಯೂಬಾ ಅಧ್ಯಕ್ಷ ಕ್ಯಾಸ್ಟ್ರೋ ಕ್ಯೂಬಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮರಡೋನ ಅವರನ್ನು ಕ್ಯೂಬಾಕ್ಕೆ ಆಹ್ವಾನಿಸಿದರು. ನಾಲ್ಕು ವರ್ಷ ಕ್ಯೂಬಾದಲ್ಲಿ ನೆಲೆಸಿದ್ದ ಮರಡೋನ ಚಿಕಿತ್ಸೆ ಪಡೆದು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿ ಆರೋಗ್ಯವಂತರಾದರು. ಹವಾನದ ಲಾ ಪೆಡ್ರೇರ ಆಸ್ಪತ್ರೆಯಲ್ಲಿ ಮರಡೋನ ಅವರಿಗೆ ಕ್ಯೂಬಾದ ಪ್ರಸಿದ್ದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರು. ಸಾವಿನ ಭೀತಿಯಲ್ಲಿದ್ದ ಮರಡೋನ ಸಂಪೂರ್ಣ ಚೇತರಿಸಿಕೊಂಡಿದ್ದರು. ಕ್ಯೂಬಾದ ವೈದ್ಯರು ನೀಡಿದ ಚಿಕಿತ್ಸೆ ಮರಡೋನಗೆ ಪುನರ್ಜನ್ಮ ನೀಡಿತು. ಮರಡೋನ ರೋಗ ಮತ್ತು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿದ್ದರು. ಲಾ ಪೆಡ್ರೇರ ಆಸ್ಪತ್ರೆ ವೈದ್ಯರ ಚಿಕಿತ್ಸೆ ಜೊತೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ ತೋರಿದ ಪಿತೃ ವಾತ್ಸಲ್ಯದ ಪ್ರೀತಿ ಮತ್ತು ಆರೈಕೆಯೇ ಮರಡೋನ ಚೇತರಿಕೆಗೆ ಮುಖ್ಯ ಕಾರಣವಾಗಿತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನ ಮುಂಜಾನೆಯ ವಾಯು ವಿಹಾರಕ್ಕೆ ಜೊತೆಯಾಗುತ್ತಿದ್ದರು. ವಿಹಾರದ ಸಮಯದಲ್ಲಾಗಲಿ, ಪ್ರತಿಯೊಂದು ಭೇಟಿಯಲ್ಲಾಗಲಿ ಮರಡೋನಗೆ ರಾಜಕೀಯದ ಪಾಠಗಳನ್ನು ಮಾಡುತ್ತಲೇ ಮಾದಕ ವ್ಯಸನದ ಅಪಾಯ ಹಾಗೂ ಆರೋಗ್ಯದ ಕಾಳಜಿಯ ಬಗ್ಗೆ ಬೋಧನೆಯನ್ನು ಕ್ಯಾಸ್ಟ್ರೋ ಮಾಡುತ್ತಿದ್ದರು. ಕ್ಯೂಬಾ ಅಧ್ಯಕ್ಷರ ನಿವಾಸ ಮತ್ತು ಕಛೇರಿಯ ಬಾಗಿಲುಗಳು ಮರಡೋನಗೆ ಸದಾ ತೆರೆದಿದ್ದವು. ಫಿಡೆಲ್ ಮತ್ತು ಮರಡೋನ ಅವರ ಸ್ನೇಹ ಎಷ್ಟು ಗಾಢವಾಗಿತ್ತು ಎಂದರೆ ಅಧ್ಯಕ್ಷರ ನಿವಾಸದ ಶಿಷ್ಟಚಾರಗಳು ಅನ್ವಯಿಸದ ರೀತಿಯ ಸ್ವಾತಂತ್ರ್ಯ ವನ್ನು ಫಿಡೆಲ್, ಮರಡೋನಗೆ ನೀಡಿದ್ದರು. 2002ರಲ್ಲಿ ಕ್ಯೂಬಾದ ರಾಜಧಾನಿ ಹವಾನದಲ್ಲಿ ಮರಡೋನ ತನ್ನ ಆತ್ಮಕಥೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ನನ್ನ ಚರಿತ್ರೆ ಬರೆಯಲು ಮತ್ತು ಜಗತ್ತಿನ ಜನತೆಯ ಜತೆಗಿನ ಸ್ನೇಹ ಸಂಬಂಧಗಳಿಗೆ ದಾರಿ ಮಾಡಿಕೊಟ್ಟಿರುವುದು ಫುಟ್ಬಾಲ್. ಆದರೂ ನನಗೆ ಪುನರ್ಜನ್ಮ ನೀಡಿದ ಫಿಡೆಲ್ ಮತ್ತು ಕ್ಯೂಬಾ ಜನತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸಾಮಾನ್ಯ ಜನರು ದೇವರು ದೊಡ್ಡವರೆಂದು ಹೇಳುತ್ತಾರೆ. ಆದರೆ ನನಗೆ ಫಿಡೆಲ್ ಕ್ಯಾಸ್ಟ್ರೋ ದೇವರಿಗಿಂತ ದೊಡ್ಡವರು ಎಂದು ಹೇಳುತ್ತಾ ಮರಡೋನ ಭಾವುಕರಾಗಿದ್ದರು. 2015ರ ನವೆಂಬರ್ 25 ಫಿಡೆಲ್ ಕ್ಯಾಸ್ಟ್ರೋ ನಿಧನರಾದಾಗ ಮರಡೋನ ಮಗುವಿನಂತೆ ಅತ್ತಿದ್ದರು, ಫಿಡೆಲ್‌ರ ಸ್ವಂತ ಮಗನಂತೆ ಸಂಕಟ ಅನುಭವಿಸಿದ್ದರು. ಫಿಡೆಲ್ ಮತ್ತು ಮರಡೋನರ ನಡುವಿನ ಅಗಾಧವಾದ ಪ್ರೀತಿ ವಾತ್ಸಲ್ಯಕ್ಕೆ ಕಾಕತಾಳೀಯ ಎಂಬಂತೆ ಫಿಡೆಲ್ ಕ್ಯಾಸ್ಟ್ರೋ ನಿಧನದ ನಾಲ್ಕು ವರ್ಷಗಳ ತರುವಾಯ ಡೀಗೋ ಮರಡೋನ ಅದೇ ನವೆಂಬರ್ 25 2020ರಂದು ನಿಧನರಾಗಿದ್ದರು. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಿ ಹೋರಾಟಗಾರ ಜಗತ್ತಿನ ಅಗ್ರ ಗಣ್ಯ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಮತ್ತು ಜಾಗತಿಕ ಫುಟ್ಬಾಲ್ ಕ್ರೀಡೆಯ ದಂತಕತೆ ಡೀಗೋ ಮರಡೋನರ ಗಡಿ ಮೀರಿದ ಜೀವಪರವಾದ ಸ್ನೇಹ ಜಗತ್ತಿನಲ್ಲಿ ಅತ್ಯಂತ ಅಪೂರ್ವವಾದುದು.

ವಾರ್ತಾ ಭಾರತಿ 25 Nov 2025 2:34 pm