Holiday: ನಾಳೆ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಚೇರಿಗಳಿಗೆ ರಜೆ ಘೋಷಣೆ: ಎಲ್ಲೆಲ್ಲಿ?
Holiday: ಈಗಾಗಲೇ ಭಾರೀ ಮಳೆ ಹಿನ್ನೆಲೆ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿತ್ತು. ಇದೀಗ ಈ ಭಾಗಗಳಲ್ಲಿ ನಾಳೆ ಅಂದರೆ ನವೆಂಬರ್ 25ರಂದು ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಕಚೇರಿಗಳು ಮುಚ್ಚಲ್ಪಡಲಿವೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ದೇಶದ ಹಲವೆಡೆ ಮುಂಗಾರು ಮಳೆ ವೇಳೆ ವಿದ್ಯಾರ್ಥಿಗಳ
New Labour Laws: ವೇತನ ನಿಯಮದಲ್ಲಿ ಮಹತ್ವದ ಬದಲಾವಣೆ; PF, ಗ್ರಾಚ್ಯುಟಿ ಏರಿಕೆ! ಕೈಗೆ ಸಿಗುವ ಸಂಬಳ ಎಷ್ಟಾಗುತ್ತೆ?
ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆ ರೂಪಿಸಿದೆ. ಕಂಪನಿಗಳು ನೌಕರರ ಮೂಲ ವೇತನವನ್ನು ಒಟ್ಟು ವೇತನದ ಕನಿಷ್ಠ ಶೇಕಡಾ 50ಕ್ಕೆ ಹೆಚ್ಚಿಸಬೇಕು. ಇದರಿಂದ ಭವಿಷ್ಯ ನಿಧಿ (ಪಿಎಫ್) ಮತ್ತು ಗ್ರಾಚ್ಯುಟಿ ಹೆಚ್ಚಾಗಲಿದ್ದು, ನಿವೃತ್ತಿ ನಂತರದ ಸೌಲಭ್ಯಗಳು ಸುಧಾರಿಸಲಿವೆ. ಆದಾಗ್ಯೂ, ನೌಕರರ ಕೈಗೆ ಬರುವ ಸಂಬಳ ಕಡಿಮೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಗುಜರಾತ್ | ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗ ಕೆಡವಿದ ಅಧಿಕಾರಿಗಳು
ಭಾವನಗರ : ಗುಜರಾತ್ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ಅಕ್ವಾಡಾ ಪ್ರದೇಶದಲ್ಲಿ ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗವನ್ನು ಕೆಡವಿರುವ ಬಗ್ಗೆ ವರದಿಯಾಗಿದೆ. ನಗರ ಯೋಜನೆಯಡಿ ನಿರ್ಮಿಸಿದ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಮದರಸಾದ ಒಂದು ಭಾಗವನ್ನು ಕೆಡವಲಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಬಿಎಂಸಿ ತೆರವು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಭಾವನಗರ ಮುನ್ಸಿಪಲ್ ಕಮಿಷನರ್ ನರೇಂದರ್ ಕುಮಾರ್ ಮೀನಾ, ಮದರಸಾದ ಕೆಲವು ಭಾಗವು ರಸ್ತೆಗೆ ಅಡ್ಡಿಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಕಟ್ಟಡದ ಭಾಗವನ್ನು ತೆರವು ಮಾಡುವ ಕುರಿತು ಅಂತಿಮ ಆದೇಶವನ್ನು ನೀಡಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರಲಿಲ್ಲ. ಇದರಿಂದ ಮದರಸಾದ ಆವರಣ ಗೋಡೆ ಮತ್ತು ಕೆಲವು ವಸತಿ ಭಾಗಗಳನ್ನು ಕೆಡವಲಾಗಿದೆ ಎಂದು ಹೇಳಿದ್ದಾರೆ.
ಯಾದಗಿರಿ | ಎಪಿಡಿ ಸಂಸ್ಥೆಯಿಂದ ಮೇಕೆಗಳ ವಿತರಣೆ
ವಿಕಲಚೇತನರು ಮೇಕೆಗಳನ್ನು ಸಾಕಿ ಜೀವನ ವೃದ್ಧಿಸಲು ಸಹಕಾರ : ಚೆನ್ನವೀರ
ʻಕರ್ನಾಟಕದ ಸಿಎಂ ಆಗಿʼ ಎಂದು ಡಿಕೆ ಶಿವಕುಮಾರ್ಗೆ ನಾಗಾ ಸಾಧುಗಳ ಆಶೀರ್ವಾದ: ಏನಿದರ ಮುನ್ಸೂಚನೆ?
ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಮಧ್ಯೆ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಉತ್ತರ ಪ್ರದೇಶದ ನಾಗಾ ಸಾಧುಗಳು ಆಗಮಿಸಿದ್ದು, ಸಿಎಂ ಆಗಿ ಎಂದು ಆಶೀರ್ವಾದಿಸಿದ್ದಾರೆ. ಜೊತೆಗೆ ಶಾಸಕ ಮಾಗಡಿ ಬಾಲಕೃಷ್ಣ ಅವರಿಗೂ ಮಂತ್ರಿಯಾಗಿ ಎಂದು ಆಶೀರ್ವಾದಿಸಿರುವುದು ಕಾಂಗ್ರೆಸ್ನಲ್ಲಿನ ರಾಜಕೀಯ ತಿಕ್ಕಾಟಕ್ಕೆ ಬೇರೋಂದು ಆಯಾಮ ಸಿಕ್ಕಿದೆ. ಈ ಹಿಂದೆ ಬಿಎಸ್ ಯಡಿಯೂರಪ್ಪನವರಿಗೂ ಆಶೀರ್ವಾದಿಸಿದ್ದರು. ಉತ್ತರ ಭಾರತದ ಸಾಧು ಸಂತರು ಭೇಟಿ ನೀಡಿದರೆ ಅಧಿಕಾರದ ಚುಕ್ಕಾಣಿ ಗ್ಯಾರಂಟಿ ಎಂಬ ನಂಬಿಕೆ ಇದೆ.
ಯಾದಗಿರಿ | ಚಿಕ್ಕನಳ್ಳಿ ಸರಕಾರಿ ಶಾಲೆಯ ಗಣಿತ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ
ಶಾಲೆಗೆ ಬೀಗ ಹಾಕಿ ಮಕ್ಕಳೊಂದಿಗೆ ಪಾಲಕರ ಧರಣಿ
ಉಡುಪಿ | ದೇಶ ಕಟ್ಟಿದವರ ಬಗ್ಗೆ ಅರಿಯುವ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ: ಸುಧಾಕರ ದೇವಾಡಿಗ
ಉಡುಪಿ, ನ.24: ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿರುತ್ತೇವೆ. ಹಾಗಾಗಿ ದೇಶದ ಸ್ವತಂತ್ರ ಚಳವಳಿಗಳಲ್ಲಿ ಭಾಗವಹಿಸಿ ದೇಶ ಕಟ್ಟಿದ ಗಾಂಧಿ, ನೆಹರೂ, ವಲ್ಲಭಬಾಯಿ ಪಟೇಲ್, ಶುಭಾಸ್ ಚಂದ್ರ ಬೋಸ್ ಇವರ ಬಗ್ಗೆ ನಾವು ತಿಳಿದು ಕೊಳ್ಳಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾರ್ಕ ದೇವಾಡಿಗ ಹೇಳಿದ್ದಾರೆ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಜರಗಿದ ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಪ್ರಥಮ ಪ್ರಧಾನಿಯಾದ ನೆಹರೂರವರು ಪ್ರಧಾನಿಯಾಗಿ ಈ ದೇಶದ ಆಡಳಿತವನ್ನು ಕೈಗೆತ್ತಿಕೊಂಡಾಗ ಈ ದೇಶ ಬಡತನದಿಂದ ಕೂಡಿತ್ತು. ದೇಶದಲ್ಲಿ ನಿರಾಶ್ರಿತರ ಸಮಸ್ಯೆ ನಿರುದ್ಯೋಗದ ಸಮಸ್ಯೆ ತಾಂಡವ ಮಾಡುತ್ತಿತ್ತು. ಪಂಚವಾರ್ಷಿಕ ಯೋಜನೆಯ ಮೂಲಕ ದೇಶದಲ್ಲಿ ಕೈಗಾರಿಕೆ ಮತ್ತು ಕೃಷಿಗೆ ಪ್ರಾಧಾನ್ಯತೆ ಕೊಟ್ಟು ನೆಹರೂರವರು ದೇಶವನ್ನು ಕಟ್ಟಿದರು. ಹುಟ್ಟಿನಿಂದಲೇ ಅಗರ್ಭ ಶ್ರೀಮಂತರಾದ ನೆಹರೂರವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕೈಗೊಂಡ ಯೋಜನೆಗಳು ಸಮ ಸಮಾಜದ ಕನಸು ಸಾಕಾರಗೊಳಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದವು ಎಂದರು. ನೆಹರೂರವರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮತ್ತು ಇವತ್ತಿನ ಯುವ ತಲೆಮಾರಿಗೆ ಸರಿಯಾಗಿ ಅರ್ಥ ಮಾಡಿಸದೆ ದೇಶ ಕಟ್ಟಿದ ಮಹನೀಯರನ್ನು ಅವಮಾನಿಸಲಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಮಾಡುತ್ತಿರುವ ಈ ತಪ್ಪನ್ನು ಯುವ ಜನರು ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಬಿಡಬೇಕು ಎಂದು ಅವರು ತಿಳಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನಿ ಸಿಂತಿಯಾ ಪಿರೇರ ಮಾತನಾಡಿದರು. ಕೋಶಾಧಿಕಾರಿ ಸತೀಶ್ ಡಿ.ಸಾಲಿಯಾನ್ ಉಪಸ್ಥಿತರಿದ್ದರು ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್ ಮತ್ತು ತಿಲಕ್ರಾಜ್ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ
ಉಡುಪಿ, ನ.24: ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಕುರ್ಮಾ ಪುನಾರಾಯ್ಕೆಯಾಗಿರುತ್ತಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು ಪಡೆದ ರೆನೋಲ್ಡ್ ಪ್ರವೀಣ್ ಕುಮಾರ್, ತನ್ನ ಪ್ರತಿಸ್ಪರ್ಧಿ ಜಯಪ್ರಕಾಶ್ ಕೆದ್ಲಾಯ ಅವರನ್ನು 40 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷರಾಗಿ ದೇವದಾಸ್, ಖಜಾಂಚಿಯಾಗಿ ಹಿಲ್ಲಾ ಕ್ಯಾಸ್ಟಲಿನೋ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಕಾರ್ಯದರ್ಶಿಯಾಗಿ ಗಿರೀಶ್ ಎಸ್.ಪಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ದೀಪಕ್ ಕುಮಾರ್ ಪೂಜಾರಿ, ಭರತೀಶ, ದೀಪಾ ಕೆ.ಶೆಟ್ಟಿ, ವಿನಯ ಸುವರ್ಣ, ಆದಿತ್ಯ, ಮಂಜುನಾಥ ನಾಗಪ್ಪ ನಾಯ್ಕ, ನಾಗರ್ಜುನ, ಶಾರದ ಎನ್., ನಾಗರಾಜ ಉಪಾಧ್ಯ ಎಂ., ಸಚಿನ್ ಕುಮಾರ್, ಗುರುಪ್ರಸಾದ್ ಜಿ.ಎಸ್., ಹರ್ಷಿತಾ, ನಾಗರಾಜ, ಸಂತೋಷ್ ಆಚಾರ್ಯ, ಗುರುರಾಜ್ ಜಿ.ಎಸ್., ಕವಿತಾ, ನಾಗರಾಜ ಬಿ., ಸಂತೋಷ್ ಹೆಬ್ಬಾರ್ ಎ., ಶ್ರೀಶ ಆಚಾರ್ಯ ಕೆ. ಮತ್ತು ಗೀತಾ ಕೌಶಿಕ್ ಆಯ್ಕೆಯಾದರು.
ʼನಯಾ ಕಾಶ್ಮೀರʼದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ಈಗ ಶಿಕ್ಷಣಕ್ಕೂ ವಿಸ್ತರಿಸುತ್ತಿದೆ ಎಂದ ಮೆಹಬೂಬ ಮುಫ್ತಿ
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್: ಮತ್ತೆ ಭಾರತೀಯ ಬ್ಯಾಟರ್ ಗಳ ವೈಪಲ್ಯ; 201 ರನ್ ಗಳಿಗೆ ಆಲೌಟ್
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 26 ರನ್
ಉಡುಪಿ | ಕೇಂದ್ರದ ಕಾರ್ಮಿಕ ಸಂಹಿತೆ ಕಾರ್ಮಿಕ ವಿರೋಧಿಯಾಗಿದೆ : ವೇಣುಗೋಪಾಲ್
ವಿಮಾ ನೌಕರರ ಸಂಘ ಉಡುಪಿ ವಿಭಾಗೀಯ ಸಮ್ಮೇಳನ ಉದ್ಘಾಟನೆ
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ವಿಧಾನಸಭಾ ಕ್ಷೇತ್ರಗಳಲ್ಲಿ ನ.27, 28ರಂದು ಹೋರಾಟ ನಡೆಸಲಾಗುವುದು. ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ. ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ಅವರು ‘ಅನ್ನದಾತರಿಗೆ ಕೈಕೊಟ್ಟ ಕಾಂಗ್ರೆಸ್ ಸರಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿದರು. ಕಾಂಗ್ರೆಸ್ಸಿನ ರೈತ ವಿರೋಧಿ ನಡೆ ಎಂಬ ಕಿರುಚಿತ್ರವನ್ನೂ ಪ್ರದರ್ಶಿಸಲಾಯಿತು. ನಾನು 25ರಂದು ಕಲಬುರಗಿ ಮತ್ತು 26ರಂದು ಹೊಸಪೇಟೆಯಲ್ಲಿ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು. ಇಡೀ ರಾಜ್ಯದಲ್ಲಿ ಬೆಳೆಹಾನಿಯಿಂದ, ಬೆಂಬಲ ಬೆಲೆ ಸಿಗದೇ ಇರುವುದರಿಂದ, ರೈತರಿಗೆ ಸಂಕಷ್ಟ ಉಂಟಾಗಿದೆ. ಆಲಮಟ್ಟಿ ನೀರನ್ನು ಸರಿಯಾಗಿ ಶೇಖರಿಸದೇ ಇರುವುದರಿಂದ ಆ ಭಾಗದ ರೈತರಿಗೆ ಎರಡನೇ ಬೆಳೆ ಪಡೆಯುವ ಯೋಗವನ್ನು ಕಸಿದಿದ್ದಾರೆ. ತುಂಗಭದ್ರಾ ಗೇಟ್ ದುರಸ್ತಿ ಕಾರ್ಯ ಆಮೆಗತಿಯಲ್ಲಿ ನಡೆದಿದೆ ಎಂದು ಆಕ್ಷೇಪಿಸಿದರು. ಕರ್ನಾಟಕದ ನೀರು ಆಂಧ್ರದ ಪಾಲಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಕಾರಣ ಎಂದು ಟೀಕಿಸಿದರು. ಅತಿವೃಷ್ಟಿ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಘೋಷಿಸಿಲ್ಲ. ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಮೀನಾಮೇಷ, ಎರಡನೇ ಬೆಳೆಗೆ ನೀರು ಕೊಡದೇ ಅನ್ಯಾಯ, ಹಾಲಿನ ಪ್ರೋತ್ಸಾಹಧನ ರೈತರ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ರಾಜ್ಯ ಬಿಜೆಪಿ ರೈತ ಮೋರ್ಚಾದ ವತಿಯಿಂದ ಇಡೀ ರಾಜ್ಯದ ಎಲ್ಲ ಜಿಲ್ಲಾ- ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ, ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು. ಕರ್ನಾಟಕದಲ್ಲಿ ಸಿಎಂ ಕುರ್ಚಿಯೇ ಇಲ್ಲ : ರಾಜ್ಯ ಸರಕಾರವು ಕಳೆದ 6 ತಿಂಗಳಿನಿಂದ ಕುರ್ಚಿ ಕಿತ್ತಾಟ ಮುಂದುವರೆಸಿದೆ. ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕೆಂದು ಹೊಡೆದಾಟ, ಬಡಿದಾಟ ನಡೆಯುತ್ತಿದೆ. ಸಿಎಂ ಕುರ್ಚಿಯ 4 ಕಾಲುಗಳನ್ನು ಒಬ್ಬೊಬ್ಬರು ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್, ಜಾರಕಿಹೊಳಿ ಈ ಕುರ್ಚಿ ಕಾಲುಗಳನ್ನು ಕಿತ್ತುಕೊಂಡಿದ್ದಾರೆ. ಕರ್ನಾಟಕದಲ್ಲಿ ಇವತ್ತು ಮುಖ್ಯಮಂತ್ರಿ ಕುರ್ಚಿಯೇ ಇಲ್ಲ ಎಂದು ಆರ್.ಅಶೋಕ್ ಅವರು ವ್ಯಂಗ್ಯವಾಡಿದರು. ಹೆಸರಿಗಷ್ಟೇ ಅಧ್ಯಕ್ಷರು : ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷಕ್ಕೆ ಹೆಸರಿಗಷ್ಟೇ ಅಧ್ಯಕ್ಷರು. ಖರ್ಗೆಯವರ ಕುರ್ಚಿಗೆ ಏನೂ ಶಕ್ತಿ ಇಲ್ಲ. ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಆಗಿರಬೇಕಿತ್ತು. ಆದರೆ, ಅವರು ಪರಾವಲಂಬಿ ಎಂದು ತಿಳಿಸಿದರು. ವಿಶೇಷ ಅನುದಾನ ನೀಡಿದ್ದ ಬಿಜೆಪಿ ರಾಜ್ಯ ಸರಕಾರ : ಹಿಂದೆ ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ, ನೆರೆ ಬಂದಾಗ ರೈತರಿಗೆ ವಿಶೇಷ ಅನುದಾನವನ್ನು ಕೊಟ್ಟಿತ್ತು. ನೆರೆ ಆಗಿ 6 ತಿಂಗಳಾದರೂ ಈ ಸರಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರೈತ ಮೋರ್ಚಾ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ್, ರಾಜ್ಯ ವಕ್ತಾರ ಮೋಹನ್ ವಿಶ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಭಾರತೀಯರಿಗೆ ಪಶ್ಚಿಮದ ದೇಶಗಳು ಬಾಗಿಲು ಮುಚ್ಚುತ್ತಿರುವುದು ಏಕೆ? | America | Canada
ವಿದೇಶಗಳಲ್ಲಿ ಹೋಗಿ ನೆಲೆಸುವ ಭಾರತೀಯರ ಕನಸಿಗೆ ದೊಡ್ಡ ಕಂಟಕ ! ► ಭಾರತೀಯರ ವಿರುದ್ಧ ದ್ವೇಷ, ಜನಾಂಗೀಯ ಅಪರಾಧಗಳು ವ್ಯಾಪಕ ಹೆಚ್ಚಳ ! ► ನಾವೇ ಬೆಳೆಸಿದ ದ್ವೇಷದ ರಾಜಕೀಯಕ್ಕೆ ನಮ್ಮವರು ವಿದೇಶಗಳಲ್ಲಿ ಬಲಿಯಾದರೆ ?
ಪತಿಯ ನೆನಪಿಗಾಗಿ 'ಸಾಲುಮರದ ತಿಮ್ಮಕ್ಕ' ಮಾಡಿದ್ದೇನು ? | Saalumarada Thimmakka - Padma Shri
'ಸಾಲುಮರದ ತಿಮ್ಮಕ್ಕ' ನಾಡಿಗೆ ಕೊಟ್ಟ ಸಂದೇಶವೇನು ? ಸೆ. 26, 2019 ರಲ್ಲಿ Wide Angle ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ 'ಸಾಲುಮರದ ತಿಮ್ಮಕ್ಕ' ಜೀವನಗಾಥೆ ಪರಿಚಯಿಸಿದ ಸಾಕ್ಷ್ಯಚಿತ್ರ ನಿಮಗಾಗಿ ಇಲ್ಲಿದೆ...
ಬೀದರ್ | ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿ ಅಧಿಕಾರೇತರ ಸದಸ್ಯರಾಗಿ ನೇಮಕ
ಬೀದರ್ : ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ 6 ಮಂದಿಯನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ. ಬಸವಕಲ್ಯಾಣ ತಾಲೂಕಿನ ಬಾಗ ಹಿಪ್ಪರಗಾದ ನಿವಾಸಿ ಅನ್ನಪೂರ್ಣಬಾಯಿ, ಪರತಾಪುರ್ ನಿವಾಸಿ ವಿಶ್ವನಾಥ್ (ಪಿಂಟು) ಕಾಂಬಳೆ, ಕೊಹಿನೂರ್ ನ ಆನಂದ್ ಪಾಟೀಲ್, ಸೈಯದ್ ನವಾಜ ಕಾಜ್ಮಿ, ಮಂಠಾಳ ನಿವಾಸಿ ಶಿವಕುಮಾರ್ ಹಾಗೂ ಸಂದೀಪ್ ಬುಯೇ ಅವರು ನಾಮ ನಿರ್ದೇಶನಗೊಂಡಿದ್ದಾರೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಆರ್.ಮಧುಸೂದನ್ ಅವರು ಆದೇಶ ಹೊರಡಿಸಿದ್ದಾರೆ.
ಪರಿಸರ ಪ್ರೇಮಿ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ | Saalumarada Thimmakka - Padma Shri
8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ ವೃಕ್ಷಮಾತೆ ► ನೂರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ತಿಮ್ಮಕ್ಕ
ಕರ್ನಾಟಕದ ಮುಂದಿನ ಸಿಎಂ : Decoding ಹುಲಿಗೆಮ್ಮ ಭೈಲಮ್ಮ ಬಾಳಮಣ್ಣವರ ಜೋಗತಿ ಭವಿಷ್ಯ
Bhailamma Balamannavara Prediction : ಗದಗಿನ ಭೈಲಮ್ಮ ಬಾಳಮಣ್ಣವರ ಭವಿಷ್ಯ ಮತ್ತು ಅವರ ಟೈಮಿಂಗ್ಸ್ ಭಾರೀ ಸದ್ದನ್ನು ಮಾಡುತ್ತಿದೆ. ಸದ್ಯ, ಮುಖ್ಯಮಂತ್ರಿ ಬದಲಾವಣೆ ವಿಚಾರ, ಭಾರೀ ಚರ್ಚೆಯಲ್ಲಿರುವ ಸಂದರ್ಭದಲ್ಲಿ ಭೈಲಮ್ಮ ನುಡಿದ ಭವಿಷ್ಯದ ಅರ್ಥವೇನು ಎನ್ನುವುದು ಚರ್ಚೆಯ ವಿಷಯವಾಗಿದೆ.
ಬಿಹಾರ ಚುನಾವಣೆ: ಪ್ರಶಾಂತ್ ಕಿಶೋರ್ ಗೆ ಪಾಠ ಏನು ? | Honakere Nanjundegowda - Bihar Election Result
ಪ್ರಶಾಂತ್ ಕಿಶೋರ್ ಪ್ಲಾನ್ ಎಡವಿದ್ದು ಎಲ್ಲಿ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ಕಾಂಗ್ರೆಸ್ ಜೊತೆ ಸೇರಿ ಕೈ ಸುಟ್ಟುಕೊಂಡರೇ ತೇಜಸ್ವಿ ಯಾದವ್?| Honakere Nanjundegowda - Bihar Election Result
ವೋಟ್ ಚೋರಿ ಕ್ಯಾಂಪೇನ್ ಬಿಹಾರದಲ್ಲಿ ವಿಫಲವಾಗಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯೋಚಿಸಲು ಸಾಧ್ಯವೇ ? | Honakere Nanjundegowda - Bihar Election Result
ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ! ► ಬಿಹಾರ ರಿಸಲ್ಟ್ ಕರ್ನಾಟಕದ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ಹೊನಕೆರೆ ನಂಜುಂಡೇಗೌಡ -ಹಿರಿಯ ಪತ್ರಕರ್ತರು
ನಿತೀಶ್ ಯಾವಾಗ ಬೇಕಾದ್ರೂ ಪಲ್ಟಿ ಹೊಡೆಯಬಹದು: ದಿನೇಶ್ ಅಮಿನ್ ಮಟ್ಟು| Dinesh Amin Mattu | Bihar Election Result
ನಿತೀಶ್ ಮತ್ತು ಲಾಲೂ ನಡುವಿನ ಸಂಬಂಧ ಹೇಗಿದೆ ? ► ಬದ್ಧ ವೈರಿಗಳು ಪರಮ ಸ್ನೇಹಿತರು ಆಗಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ನಿತೀಶ್ ಕುಮಾರ್ ಸೋತಿದ್ರೆ, ಅವರ ರಾಜಕೀಯ ಮುಗಿಯುತ್ತಿತ್ತು: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar
ಮೋದಿ ಜೊತೆಗಿನ ಪೈಪೋಟಿಯಲ್ಲೂ ನಿತೀಶ್ ಗೆದ್ದಿದ್ದಾರೆ ► ಬಿಹಾರದಲ್ಲಿ ನಿತೀಶ್ ಸಿಎಂ ಆಗೋದು ಖಚಿತ... ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಧರ್ಮೇಂದ್ರ ವೃತ್ತಿಜೀವನಕ್ಕೆ ನೆರವಾದ ಮೂರು ಕನ್ನಡ ಸಿನಿಮಾ!
ಹಿಂದಿ ನಟ ಧರ್ಮೇಂದ್ರ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಮೂರು ಕನ್ನಡದ ಸೂಪರ್ ಹಿಟ್ ಚಿತ್ರಗಳ ಹಿಂದಿ ರಿಮೇಕ್ ಗಳಿವೆ. 'ಗಂಧದಗುಡಿ'ಯ 'ಕರ್ತವ್ಯ', 'ತಾಯಿಗೆ ತಕ್ಕ ಮಗ'ನ 'ಮೈ ಇಂತಕಾಂ ಲೂಂಗಾ', ಮತ್ತು 'ಹುಲಿ ಹೆಬ್ಬುಲಿ'ಯ 'ಗಂಗಾ ತೇರೇ ದೇಶ್ ಮೇ' ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ನಾಯಕತ್ವ ಬದಲಾವಣೆಗೆ ಡಿಕೆಶಿ ಗೌಪ್ಯ ಮತದಾನ ತಂತ್ರ? ಕಾಂಗ್ರೆಸ್, ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಗೌಪ್ಯ ಮತದಾನಕ್ಕೆ ಡಿಕೆಶಿ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಪಕ್ಷಗಳ ಆರೋಪಗಳು ಈ ಚರ್ಚೆಗೆ ಮತ್ತಷ್ಟು ಬಣ್ಣ ತಂದಿವೆ. ಅಲ್ಲದೆ, ಪರಪ್ಪನ ಸಗ್ರಹಾರ ಜೈಲಿನ್ನಲ್ಲಿರುವ ಶಾಸಕರನ್ನು ಡಿಕೆಶಿ ಭೇಟಿ ಮಾಡಿರುವುದು ಈ ಆರೋಪಗಳಿಗೆ ಪುಷ್ಟಿ ನೀಡುತ್ತಿದೆ. ಇನ್ನು, ಈ ಮಧ್ಯೆ ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ಸರ್ಕಾರಿ ಶಾಲಾ ಮಕ್ಕಳಿಂದ ವರುಣಾದಲ್ಲಿ \ಟಾಯ್ಲೆಟ್ ಕ್ಲೀನ್': CM ಸಾಹೆಬ್ರೆ ಏನಂತೀರಾ?
ಬೆಂಗಳೂರು, ನವೆಂಬರ್ 24: ಮ್ಯಾನ್ ಹೋಲ್ನಲ್ಲಿ ಇಳಿದು ಮಲ ಎತ್ತುವುದು ನಿಷಿದ್ಧವಾಗಿದೆ. ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವ ಅನೇಕ ಪ್ರಕರಣಗಳು ಈ ಹಿಂದೆ ಆಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯ ಸಂಪ್ ಮತ್ತು ಟಾಯ್ಲೆಟ್ ಸ್ವಚ್ಛಗೊಳಿಸಿದ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ವಿಪಕ್ಷಗಳು ಸೇರಿದಂತೆ ಸಾರ್ವಜನಿಕವಾಗಿ
ಶೂ ದಾಳಿ ನಡೆಸಿದ್ದ ವಕೀಲರನ್ನು ತಾನೇಕೆ ಕ್ಷಮಿಸಿದ್ದೆ ಎನ್ನುವುದನ್ನು ಬಹಿರಂಗಗೊಳಿಸಿದ ನ್ಯಾ. ಗವಾಯಿ
ʼಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲʼ ಎಂದು ಗವಾಯಿ ಅವರತ್ತ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್
ಬಿಹಾರದಲ್ಲಿ ಕಾಂಗ್ರೆಸ್ ನಾಯಕ ಯಾರು ಅಂತಾನೇ ಗೊತ್ತಿಲ್ಲ: ದಿನೇಶ್ ಅಮಿನ್ ಮಟ್ಟು | Dinesh Amin Mattu | Bihar
ತೇಜಸ್ವಿ ಯಾದವ್ ಉದ್ಯೋಗ ಭರವಸೆಯನ್ನು ಜನ ನಂಬಿಲ್ಲ ಯಾಕೆ ? ► ಬಿಹಾರದಲ್ಲಿ ಬಿಜೆಪಿ ಚಮತ್ಕಾರ ಮಾಡಿದ್ದು ಹೇಗೆ ? ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಕರ್ನಾಟಕದಂತಹ ಗ್ಯಾರಂಟಿ ಬಿಹಾರದಲ್ಲೂ ಘೋಷಣೆ ಮಾಡಬಹುದಿತ್ತು: Dinesh Amin Mattu | Bihar election results
ಪ್ರಶಾಂತ್ ಕಿಶೋರ್ ಅಟ್ಯಾಕ್ ಮಾಡಿದ್ದು ಸಾಮ್ರಾಟ್ ಚೌಧರಿ ವಿರುದ್ಧ ► ನಿತೀಶ್ ಕುಮಾರ್ ವೈಯಕ್ತಿಕವಾಗಿ ಭ್ರಷ್ಟಾಚಾರಿ, ಕೋಮುವಾದಿ ಅಲ್ಲ ► ಪ್ರಚಾರಕ್ಕೆ ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಬಳಸಿಕೊಂಡೇ ಇಲ್ಲ ► ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಭ್ರಷ್ಟಾಚಾರ ಮತ್ತು ಕೋಮುವಾದ ಕೆಲಸ ಮಾಡಿದೆ ► ಅವರು ಒಂದೇ ಬಾರಿಗೆ ಹತ್ತು ಸಾವಿರ ರೂ. ಕೊಟ್ಟು ಚುನಾವಣೆಯನ್ನೇ ಗೆದ್ದರು ► ವಾರ್ತಾಭಾರತಿ - ಪಾಲಿಟಿಕ್ಸ್ ಡಾಟ್ ಕಾಮ್ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಪೇಷಾವರದ ಫೆಡರಲ್ ಕಾನ್ಸ್ಟೇಬ್ಯುಲರಿ ಯೋಧರ ಕಚೇರಿ ಮೇಲೆ ಭಯೋತ್ಪಾದಕ ದಾಳಿ; ಮೂವರು ಭದ್ರತಾ ಸಿಬ್ಬಂದಿ ಹುತಾತ್ಮ
ಪೇಷಾವರದಲ್ಲಿ ಫೆಡರಲ್ ಕಾನ್ಸ್ಟೇಬ್ಯುಲರಿ ಪ್ರಧಾನ ಕಚೇರಿ ಮೇಲೆ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಆರು ನಾಗರಿಕರು ಗಾಯಗೊಂಡಿದ್ದಾರೆ. ಪಾಕಿಸ್ತಾನ ತಾಲಿಬಾನ್ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ದಾಳಿಯನ್ನು ಖಂಡಿಸಿದ್ದಾರೆ.
Bescom Outages: ಬೆಂಗಳೂರಿನ ಜೆಪಿ ನಗರ, ರಾಜಾಜಿನಗರ ಸೇರಿ 60 ಬಡಾವಣೆಗಳಲ್ಲಿ 2 ದಿನ ವಿದ್ಯುತ್ ಕಡಿತ! ಎಲ್ಲೆಲ್ಲಿ?
ಬೆಂಗಳೂರಿನಲ್ಲಿ ನವೆಂಬರ್ 25, 26 ರಂದು ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿದೆ. ಆರ್.ಬಿ.ಐ ಲೇಔಟ್, ಕೊತ್ತನೂರು, ಜೆ.ಪಿ.ನಗರ 5ನೇ ಹಂತ, ರಾಜಾಜಿನಗರ ಸೇರಿದಂತೆ 60 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್ ಇರುವುದಿಲ್ಲ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರವೂ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಬಿರುಗಾಳಿಗೂ ಬೆದರದು ಎಚ್ಎಎಲ್ ಭವಿಷ್ಯ; ರಾಷ್ಟ್ರ ರಕ್ಷಣೆಯ ಕರ್ತವ್ಯ ನಿರಂತರ
ದುಬೈ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಷೇರುಗಳು ಕುಸಿತ ಕಂಡವು. ಎಚ್ಎಎಲ್ಗೆ ಬಲಿಷ್ಠ ಇತಿಹಾಸವಿರುವುದು ಹೌದು, ಹೀಗಾಗಿ 83 ತೇಜಸ್ ಯುದ್ಧ ವಿಮಾನಗಳಿಗೆ ಬೇಡಿಕೆ ಇದೆ. 97 ತೇಜಸ್ ಎಂಕೆ1ಎ 2027ರ ಆರ್ಥಿಕ ವರ್ಷದ ವೇಳೆಗೆ ಕಂಪನಿಯು 2.7 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಡರ್ ಬುಕ್ ಹೊಂದುವ ನಿರೀಕ್ಷೆಯಿದೆ ಎಂದು ಎಚ್ಎಎಲ್ ಮುಖ್ಯಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಮೂಡುಬಿದಿರೆ: ಈಜು ಸ್ಪರ್ಧೆಯಲ್ಲಿ ಪ್ರೇರಣಾ ಶಾಲೆಯ ಪ್ರೀತಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಸಮಗ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 4 x 100 ಮೀಟರ್ ರಿಲೇ: ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೆ ಅವರು 400 ಮೀಟರ್ ಫ್ರೀ ಸ್ಟೈಲ್- ದ್ವಿತೀಯ ಸ್ಥಾನ, 400 ಮೀಟರ್ ಫ್ರೀ ಸ್ಟೈಲ್- ಪ್ರಥಮ ಸ್ಥಾನ, 100 ಮೀಟರ್ ಫ್ರೀ ಸ್ಟೈಲ್: ದ್ವಿತೀಯ ಸ್ಥಾನ ಹಾಗೂ 50 ಮೀಟರ್ ಫ್ರೀ ಸ್ಟೈಲ್ -ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಸಾಧನೆ ಮಾಡಿದ್ದರು. ವಿದ್ಯಾಭಾರತಿ ಈಜು ಸ್ಪರ್ಧೆಯ ರಾಜ್ಯಮಟ್ಟದಲ್ಲಿ 100 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕ್ರೀಡೆಯಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಈಕೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಟ್ಪುಟ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರೀತಿ ಮೂಡುಬಿದಿರೆ ಈಜು ಕೊಳ ಸಂಕೀರ್ಣದ ಉದ್ಯೋಗಿ ಬಸವರಾಜಾ- ಎಲ್ಲಿಜಮ್ಮ ದಂಪತಿಯ ಪುತ್ರಿ.
ನೋಯ್ಡಾ | ಎಸ್ಐಆರ್ ಹೊರೆ : ಮತಗಟ್ಟೆ ಅಧಿಕಾರಿ ಜವಾಬ್ಧಾರಿ ತೊರೆದ ಶಿಕ್ಷಕಿ
ಹೊಸದಿಲ್ಲಿ: ತಮ್ಮ ಬೋಧನೆಯ ಕರ್ತವ್ಯ ಹಾಗೂ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆಗಳೆರಡರ ಕರ್ತವ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯಾವಿಲ್ಲ ಎಂದು ಉಲ್ಲೇಖಿಸಿ, ನೊಯ್ಡಾದ ಸಹಾಯಕ ಶಿಕ್ಷಕಿಯೊಬ್ಬರು ತಮ್ಮ ಮತಗಟ್ಟೆ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ನೊಯ್ಡಾದ ಸೆಕ್ಟರ್ 94ರಲ್ಲಿರುವ ಗೇಜಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿಂಕಿ ಸಿಂಗ್ ಎಂಬವರು ತಮ್ಮ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಆ ಪತ್ರದಲ್ಲಿ, “ಬೋಧನೆ ಮತ್ತು ವಿಶೇಷ ಮತಪಟ್ಟಿ ಪರಿಷ್ಕರಣೆ ಎರಡರ ಕೆಲಸದ ಹೊರೆ ವಿಪರೀತವಾಗಿದ್ದು, ನಾನು ಥೈರಾಯ್ಡ್ ಸಮಸ್ಯೆ ಹಾಗೂ ಕೌಟುಂಬಿಕ ಒತ್ತಡದಿಂದಲೂ ಬಳಲುತ್ತಿದ್ದೇನೆ. ಇದರಿಂದಾಗಿ ಬೋಧನಾ ಕರ್ತವ್ಯ ಹಾಗೂ ಮತಗಟ್ಟೆ ಅಧಿಕಾರಿ ಕರ್ತವ್ಯಗಳೆರಡನ್ನೂ ಒಟ್ಟಾಗಿ ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ” ಎಂದು ಜಿಲ್ಲಾ ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಈ ರಾಜೀನಾಮೆ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ ಬೆನ್ನಿಗೇ ಈ ಘಟನೆ ನಡೆದಿದೆ. ನೊಯ್ಡಾದ ಸೆಕ್ಟರ್ 33ರಲ್ಲಿರುವ ರಾಕ್ ವುಡ್ ಶಾಲೆಯಲ್ಲಿನ ಮತ ಕೇಂದ್ರದಲ್ಲಿರುವ 1,179 ಮತಗಳ ಉಸ್ತುವಾರಿಯನ್ನು ಮತಗಟ್ಟೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಪಿಂಕಿ ಸಿಂಗ್ ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ. “ಈ 1,179 ಮತದಾರರ ಪೈಕಿ, ನನಗೆ 215 ಮತದಾರರ ಕುರಿತು ಮಾತ್ರ ಆನ್ ಲೈನ್ ನಲ್ಲಿ ಮಾಹಿತಿ ಸಲ್ಲಿಸಲು ಸಾಧ್ಯವಾಗಿದೆ. ನಾನು ಈ ಕೆಲಸವನ್ನು ಇನ್ನು ಮಾಡಲು ಸಾಧ್ಯವಿಲ್ಲದಿರುವುದರಿಂದ, ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೆ, ಚುನಾವಣಾ ಸಂಬಂಧಿತ ಸಾಮಗ್ರಿಗಳನ್ನು ಹೇಗೆ ಸೂಕ್ತವಾಗಿ ಹಸ್ತಾಂತರಿಸಬೇಕು ಎಂಬ ಕುರಿತು ಮಾರ್ಗದರ್ಶನ ನೀಡುವಂತೆಯೂ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ವಿಶೇಷ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಭಾಗಿಯಾಗಿರುವ ಕೆಲವು ಮತಗಟ್ಟೆ ಅಧಿಕಾರಿಗಳು ಕೆಲಸ ಒತ್ತಡ ತಾಳಲಾರದೆ ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಆತ್ಮಹತ್ಯೆ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು. ಇದೀಗ, ಉತ್ತರ ಪ್ರದೇಶದಲ್ಲೂ ಕೆಲಸದ ಒತ್ತಡ ತಾಳಲಾರದೆ ಶಿಕ್ಷಕಿಯೊಬ್ಬರು ಮತಗಟ್ಟೆ ಅಧಿಕಾರಿಯ ಹುದ್ದೆಗೆ ರಾಜೀನಾಮೆ ನೀಡಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಹದಗೆಟ್ಟ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ಪರದಾಟ
ಗದಗ, ನ.23: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲಾ ಕೇಂದ್ರ ಗದಗ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಗದಗದಿಂದ ಲಕ್ಷ್ಮೇಶ್ವರ ಸಂಪರ್ಕಕ್ಕೆ ಒಟ್ಟು 40 ಕಿ.ಮೀ. ಇದೆ. ಅದರಲ್ಲಿ ಗದಗದಿಂದ ಮುಳಗುಂದವರೆಗೆ (ಸುಮಾರು 14 ಕಿ.ಮೀ.) ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನುಳಿದ ರಸ್ತೆ ಗುಂಡಿಗಳಿಂದ ಕೂಡಿದ್ದು, ಪ್ರತಿದಿನ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಸ್ಥಿತಿಯಿದೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಳೆದ ಏಳೆಂಟು ವರ್ಷಗಳಿಂದ ಹೇಳುತ್ತಾ ಬಂದಿದ್ದು ಆದರೆ ರಾಜ್ಯ ಹೆದ್ದಾರಿ ಸಂಪೂರ್ಣ ಗುಂಡಿಮಯವಾಗಿ ಕೆಸರು ಗದ್ದೆಯಾಗಿ ಜಮೀನಿಗೆ ಸಂಪರ್ಕಿಸುವ ರಸ್ತೆಯಾಗಿ ಮಾರ್ಪಡುತ್ತಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬರೀ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಮಾಡುತ್ತಾರೆ ಆದರೆ ವರ್ಷದಿಂದ ವರ್ಷಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ರಸ್ತೆ ಹದಗೆಟ್ಟ ಕಾರಣ ಗದಗ ಲಕ್ಷ್ಮೇಶ್ವರ ಸಂಪರ್ಕಿಸುವ ಹೆಚ್ಚಿನ ಬಸ್ಗಳ ಸಂಚಾರ ನಿಂತುಹೋಗಿದೆ. ಈ ರಸ್ತೆಯಲ್ಲಿ ಪ್ರತಿದಿನ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಲಾಗಿದೆ. ಮೇಲ್ದರ್ಜೆಗೇರಿಸಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದ್ದು, ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. - ಬಸವರಾಜ ಬೊಮ್ಮಾಯಿ, ಸಂಸದ
BJP, JDU ನೇತೃತ್ವದ NDA ಮೈತ್ರಿಕೂಟಕ್ಕೆ ಪ್ರಚಂಡ ಗೆಲುವು | BIHARA ELECTION RESULTS | Nitish Kumar
ಸ್ಪರ್ಧೆ ನೇರವಾಗಿ ಚುನಾವಣಾ ಆಯೋಗ ಮತ್ತು ಬಿಹಾರದ ಜನರ ನಡುವೆ ನಡೆದಿದೆ : ಪವನ್ ಖೇರಾ ► ಎಸ್ಐಆರ್ ಪ್ರಜಾಪ್ರಭುತ್ವವನ್ನು ಕೊಲ್ಲಲು ಬಹಳ ದೊಡ್ಡ ಅಸ್ತ್ರವಾಗಿದೆ : ಮಾಣಿಕ್ಯಮ್ ಟಾಗೋರ್
ಬಿಹಾರ ಜನಾದೇಶ 2025 | BIHARA ELECTION RESULTS | Nitish Kumar
ಬಿಹಾರದಲ್ಲಿ ಹರ್ ಬಾರ್ ನಿತೀಶ್ ಕುಮಾರ್ ► ವಿಪಕ್ಷ ಮಹಾಘಟಬಂಧನ್ ಧೂಳೀಪಟ
ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಪತನ: ಅಸಾಧಾರಣ ಸಂದರ್ಭಗಳಿಂದ ಉಂಟಾದ ಘಟನೆ; ಎಚ್ಎಎಲ್ ಸ್ಪಷ್ಟನೆ
ದುಬೈ ಏರ್ ಶೋನಲ್ಲಿ ಭಾರತದ ದೇಶೀಯವಾಗಿ ನಿರ್ಮಿಸಿದ ಲಘು ಯುದ್ಧ ವಿಮಾನವಾದ ತೇಜಸ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ನಮನ್ ಸ್ಯಾಲ್ ಮೃತಪಟ್ಟಿದ್ದಾರೆ. ಈ ದುರಂತದ ಕುರಿತು ಹೇಳಿಕೆ ನೀಡಿದ ಎಚ್ಎಎಲ್ ಇದನ್ನು ಅಸಾಧಾರಣ ಸಂದರ್ಭಗಳಿಂದಾದ ಪ್ರತ್ಯೇಕ ಘಟನೆ ಎಂದು ಸ್ಪಷ್ಟಪಡಿಸಿದೆ ಮತ್ತು ಇದು ಕಂಪನಿಯ ವ್ಯವಹಾರ ಅಥವಾ ವಿತರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದೆ. ಎಚ್ಎಎಲ್ ಮತ್ತು ಭಾರತೀಯ ವಾಯುಪಡೆ ಮೃತ ಪೈಲಟ್ಗೆ ಸಂತಾಪ ಸೂಚಿಸಿದ್ದು, ಅಪಘಾತದ ಕಾರಣವನ್ನು ತಿಳಿಯಲು ಕೋರ್ಟ್ ಆಫ್ ಇನ್ಕ್ವೈರಿಗೆ ಆದೇಶಿಸಲಾಗಿದೆ.
ಹೇಮಾ ಮಾಲಿನಿನ ಮದುವೆಯಾಗುವುದಕ್ಕಾಗಿ ಇಸ್ಲಾಂಗೆ ಕನ್ವರ್ಟ್ ಆಗಿದ್ರಾ ಧರ್ಮೇಂದ್ರ? ಸತ್ಯ ಇಲ್ಲಿದೆ!
ಸೆಲೆಬ್ರಿಟಿಗಳು ಅಂದ್ಮೇಲೆ ವಿವಾದಗಳು, ಗಾಸಿಪ್ಗಳು ಸಾಮಾನ್ಯ. ಧರ್ಮೇಂದ್ರ ಅವರೂ ಇದಕ್ಕೆ ಹೊರತಾಗಿರಲಿಲ್ಲ. ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಅವರನ್ನ ಕಾಡಿದ್ದು ಅನ್ಯಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾದ ಗಾಸಿಪ್. ಇದು ನಿಜವೇ? ಈ ಗಾಸಿಪ್ ಬಗ್ಗೆ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಅಂದು ಏನಂದಿದ್ದರು? ವಿವರ ಇಲ್ಲಿದೆ…
ಅರುಣಾಚಲ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುವ ಚೀನಾ, ಅಲ್ಲಿ ಜನಿಸಿದ ಭಾರತೀಯ ಮಹಿಳೆಯೊಬ್ಬರ ಪಾಸ್ಪೋರ್ಟ್ ಅನ್ನು ಶಾಂಘೈ ವಿಮಾನ ನಿಲ್ದಾಣದಲ್ಲಿ ಅಮಾನ್ಯಗೊಳಿಸಿ, 18 ಗಂಟೆಗಳ ಕಾಲ ಬಂಧಿಸಿ ಕಿರುಕುಳ ನೀಡಿದೆ. ಚೀನಾ ಅಧಿಕಾರಿಗಳು ಆಕೆಗೆ ಭಾರತೀಯ ಪಾಸ್ಪೋರ್ಟ್ ತಿರಸ್ಕರಿಸಿ, ಚೀನೀ ಪಾಸ್ಪೋರ್ಟ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಭಾರತದ ಸಾರ್ವಭೌಮತ್ವಕ್ಕೆ ಅವಮಾನವೆಂದು ಕರೆದ ಮಹಿಳೆ, ಭಾರತ ಸರ್ಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಹಿಂದೆಯೂ ಚೀನಾ ಭಾರತದ ಭೂಭಾಗವನ್ನು ತನ್ನ ಭೂಪ್ರದೇಶ ಎಂದು ಘೋಷಿಸಿ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಇಗ ಮತ್ತೆ ಅರುಣಾಚಲ ಮೂಲದ ಭಾರತೀಯ ಮಹಿಳೆಗೆ ಅರುಣಾಚಲ ಚೀನಾದ ಭೂಭಾಗ ಎಂದು ಕಿರುಕುಳ ನೀಡಿರುವುದು ಭಾರತದ ಸಾರ್ವಭೌಮತ್ವ ಹಾಗೂ ಚೀನಾದಲ್ಲಿ ಭಾರತೀಯರ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕುವಂತಿದೆ.
ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ಜಾಥಾ- ನ್ಯಾಯ ಸಮಾವೇಶ
ಮಂಗಳೂರು, ನ.24: ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಡಿ. 16ರಂದು ಅತ್ಯಾಚಾರ ವಿರೋಧಿ ದಿನ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ‘ಕೊಂದವರು ಯಾರು’ ಎಂಬ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದವರು ಯಾರು ಎಂಬ ಸತ್ಯವನ್ನು ಹೊರತರುವ ದಿಕ್ಕಿನಲ್ಲಿ ಎಸ್ಐಟಿ ತನಿಖೆ ನಡೆಯಬೇಎಂದು ಒತ್ತಾಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಾಗೂ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೊಂದವರು ಯಾರು ಎಂಬ ಆಂದೋಲನ ಆಗಸ್ಟ್ನಲ್ಲಿ ಆರಂಭಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದ ಪ್ರಕರಣಳ ಸಂತ್ರಸ್ತರ ಕುಟುಂಬಗಳೊಂದಿಗೆ ನಿಲ್ಲುವುದು ನಮ್ಮ ಉದ್ದೇಶ ಎಂದರು. ಕಳೆದ 13 ವರ್ಷಗಳಿಂದ ಮಹಿಳಾ ಸಂಘಟನೆಗಳು ಅತ್ಯಾಚಾರ ವಿರೋಧಿ ದಿನವನ್ನಾಗಿ ಆಚರಿಸುತ್ತಿವೆ. ಕಳೆದ ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘಟನೆಗಾಗಿ ವಿವಿಧ ಮಹಿಳಾ ಸಂಘಟನೆಗಳು ಕೆಲಸ ನಿರ್ವಹಿಸುತ್ತಿದ್ದು, ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿ ದೂರು ನೀಡಿದ ಹಾಗೂ ನೊಂದವರ ಕುಟುಂಬಗಳನು ನಾವು ಸಂಪರ್ಕಿಸಿ ಸಾಂತ್ವಾನ ಹೇಳಿದ್ದೇವೆ. ಎಸ್ಐಟಿಯಿಂದ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ಅಭಿಯಾನದ ಸದಸ್ಯೆ ಮಲ್ಲಿಗೆ ತಿಳಿಸಿದರು. ಎಸ್ಐಟಿ ರಚನೆಯ ಆದೇಶವು ಸ್ಪಷ್ಟವಾಗಿ ಹೇಳುವಂತೆ ವಿಚಾರಣೆ ಕೇವಲ ಸಾಮೂಹಿಕ ಹೆಣ ಹೂಳುವಿಕೆಯ ಕುರಿತಾಗಿ ಮಾತ್ರವಲ್ಲ. ಇನ್ನಿತರ ಎಲ್ಲ ವಿಚಾರಗಳ ಸಮಗ್ರ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹ. ಎಸ್ಐಟಿ ವಿಚಾರಮೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕುವ ಸುತ್ತ ಕೇಂದ್ರೀಕೃತವಾಗಿರಬೇಕೇ ಹೊರತು ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂಬುದನ್ನು ಗಟ್ಟಿದನಿಯಲ್ಲಿ ನಾವು ಪ್ರತಿಪಾದಿಸುತ್ತಿದ್ದೇವೆ ಎಂದು ಅವರು ಹೇಳಿದರು. ಅಭಿಯಾನದ ಸದಸ್ಯೆ ಜ್ಯೋತಿ ಮಾತನಾಡಿ, ಧರ್ಮಸ್ಥಳ ಪ್ರಕರಣಗಳಿಗೆ ಸಂಬಂಧಿಸಿ ದೂರುದಾರರು ಹಾಗೂ ಸಾಕ್ಷಿಗಳನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದ್ದು, ಎಸ್ಐಟಿಯಿಂದ ಪ್ರಾಮಾಣಿಕ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಮಹಿಳಾ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದು, ಪ್ರಾಮಾಣಿಕ ತನಿಖೆಯ ಭರವಸೆ ನೀಡಿದ್ದಾರೆ ಎಂದರು. ಗೋಷ್ಟಿಯಲ್ಲಿ ರೈತ ಸಂಘದ ಮುಖಂಡೆ ಅನಸೂಯಮ್ಮ ಅರಲಾಲುಸಂದ್ರ, ಕಲಾವಿದೆ ಮತ್ತು ಲೇಖಕಿ ಗೀತಾ ಸುರತ್ಕಲ್, ಸೌಜನ್ಯ ಪರ ಹೋರಾಟಗಾರರಾದ ಶಶಿಕಲಾ, ಮಹಿಳಾ ಪರ ಹೋರಾಟಗಾರರಾದ ಸುನೀತಾ ಲಂಬಾಣಿ, ಭಾಗ್ಯಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.
Siddaramaiah: ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ, ನವೆಂಬರ್ 24: ಖಜಾನೆ ಖಾಲಿ ಎನ್ನುವ ಬಿಜೆಪಿ ಸುಳ್ಳಿನ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸಿದ್ದೇವೆ. ಒಂದೇ ದಿನ 2000 ಕೋಟಿ ರೂಪಾಯಿಗಳ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ
ನಿಥಾರಿ ಹತ್ಯಾಕಾಂಡ : ಸುರೀಂದರ್ ಕೋಲಿಯ ಗಲ್ಲು ರದ್ದು, ಬಿಡುಗಡೆ ! Nithari murder case - Surendra Koli
ನಿಥಾರಿ ಹತ್ಯಾಕಾಂಡ ಪ್ರಕರಣವನ್ನು ಜೀವಂತ ಸಮಾಧಿ ಮಾಡಲಾಯಿತೇ ? ► ನಿಥಾರಿ ಸರಣಿ ಹತ್ಯೆ ಪ್ರಕರಣ: ಸಿಬಿಐ, ಪೊಲೀಸರ ವೈಫಲ್ಯ ಏನು ? ► ನಿಜವಾದ ಅಪರಾಧಿಗಳು ಯಾರು? ಅವರಿಗೆ ಶಿಕ್ಷೆಯಾಗುವುದು ಹೇಗೆ ? ►► ವಾರ್ತಾಭಾರತಿ NEWS ANALYSIS
ಒಮ್ಮೆ ಸಂಸದರಾಗಿ, 3 ಬಾರಿ ಪತ್ನಿ ಸಂಸದೆ ಆಗಲು ಸಹಾಯ ಮಾಡಿದ್ದ ಧರ್ಮೇಂದ್ರ: ಯಾವ ಪಾರ್ಟಿ?
Dharmendra No More : ಭಾರತೀಯ ಚಿತ್ರೋದ್ಯಮದ ಹೆಸರಾಂತ ನಟ ಧರ್ಮೇಂದ್ರ ಇಂದು (ನ. 11) ಇಹಲೋಕವನ್ನು ತ್ಯಜಿಸಿದ್ದಾರೆ. ಸಿನಿಮಾದ ಜೊತೆಗೆ, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಧರ್ಮೇಂದ್ರ ಒಮ್ಮೆ ಲೋಕಸಭಾ ಸದಸ್ಯರೂ ಆಗಿದ್ದವರು. ಇದಾದ ಮೇಲೆ, ಮೂರು ಬಾರಿ ತಮ್ಮ ಪತ್ನಿ ಎಂಪಿ ಸೀಟ್ ಗೆಲ್ಲಲು ಸಹಾಯವನ್ನು ಮಾಡಿದ್ದರು.
ನ.29 ರಂದು ರಾಜ್ಯ ಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನ
ತೋಟಗಾರಿಕಾ ಬೆಳೆಯಾಗಿ ರಬ್ಬರ್ ಪರಿಗಣಿಸಲು ಒತ್ತಾಯ
ಬಿಹಾರದ ಮತಗಟ್ಟೆ ಸಮೀಕ್ಷೆಗಳು ನಿಜವಾಗಿಯೂ ಹೇಳುತ್ತಿರೋದೇನು? | Bihar Election 2025
ನಿತೀಶ್ v/s ತೇಜಸ್ವಿ : ಗೆಲ್ಲೋದು ಜನಮತವೋ ? ಹಣಬಲವೋ ? ► ಬಿಹಾರದಲ್ಲಿ ಮತದಾನ ದಾಖಲೆ : ಜನರು ಬದಲಾವಣೆ ಬಯಸಿದ್ದು ನಿಜವೇ? ► ಚುನಾವಣೆ ಗೆಲ್ಲಲು ಸರಕಾರದ ಹಣ ಬಳಸಲಾಗಿದೆಯೆ?
ರಾಜಮನೆತನಕ್ಕೂ ಇಸ್ಲಾಂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ: ಅಬ್ದುಸ್ಸಲಾಮ್ ಪುತ್ತಿಗೆ| Abdussalam Puthige | Mangaluru
ಜಾತಿಪದ್ಧತಿ, ಅಸ್ಪೃಶ್ಯತೆಯ ವಿರುದ್ಧ ಮುಸ್ಲಿಂ ರಾಜರು ಸಮರ ಸಾರಬೇಕಿತ್ತು! ► 'ಭಾರತದ ಇತಿಹಾಸ ಮತ್ತು ಮುಸ್ಲಿಮರು' ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ► ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ಆಯೋಜನೆ ► ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತು
ದೆಹಲಿ ಸ್ಫೋಟ: ಉಬರ್ ಚಾಲಕ, ಬಸ್ ಕಂಡಕ್ಟರ್ ಸೇರಿ 12 ಮಂದಿ ಬಲಿ | Delhi Red Fort blast
ಕ್ಯಾಬ್ ಚಾಲಕ ಪಂಕಜ್ ಗಾಗಿ ರಾತ್ರಿಯಿಡೀ ಹುಡುಕಾಡಿದ್ದ ಕುಟುಂಬ ! ► ಕುಟುಂಬದ ಏಕೈಕ ಆಸರೆಯನ್ನು ಕಳೆದುಕೊಂಡವರ ಪರಿಸ್ಥಿತಿ ಏನು ?
ತಮಿಳುನಾಡು| ಎರಡು ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ: ಕನಿಷ್ಠ ಆರು ಮಂದಿ ಮೃತ್ಯು
30ಕ್ಕೂ ಹೆಚ್ಚು ಮಂದಿಗೆ ಗಾಯ
ದೆಹಲಿ ಸ್ಫೋಟ ಹೇಗೆ ಸಂಭವಿಸಿತು? ಇದು ಭಯೋತ್ಪಾದಕ ದಾಳಿಯೇ ? | Delhi Red Fort blast
ಪುಲ್ವಾಮಾ, ಪಹಲ್ಗಾಮ್, ಈಗ ದೆಹಲಿ.. ನೈತಿಕ ಹೊಣೆ ಯಾರದ್ದು ? ► ಗುಪ್ತಚರ ವೈಫಲ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆಯೆ ?
ಬಿಹಾರ ಶಾಂತವಾಗಿದ್ದರೆ ಮತಗಟ್ಟೆಗಳು ದಾಖಲೆಯ ಮತದಾನ ಕಂಡಿದ್ದು ಹೇಗೆ ? | Bihar Election 2025
ಬಿಹಾರದ ಮತದಾರರು ಮಡಿಲ ಮಾಧ್ಯಮಗಳ ಸುಳ್ಳು ನಿರೂಪಣೆಯನ್ನು ತಿರಸ್ಕರಿಸಿದ್ದಾರೆಯೆ? ► ಬಿಹಾರದ ಗುಪ್ತ ಅಲೆ : ಮೌನ ಮತದಾರರ ತೀರ್ಪು ಎಲ್ಲ ಅಂದಾಜುಗಳನ್ನು ಮೀರಿಸಬಹುದೇ?
ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಸಲು ಹೊರಟಿದ್ದು ಏಕೆ ? | Pakistan - Asim Munir
ಜನರಲ್ ಮುನೀರ್ ಮಿಲಿಟರಿ ಆಳ್ವಿಕೆ ಯುಗವನ್ನು ಮರಳಿ ತರುತ್ತಿದ್ದಾರೆಯೆ? ► ಮುನೀರ್ ಬಲಶಾಲಿಯಾಗುತ್ತಿದ್ದಂತೆ, ಪಾಕಿಸ್ತಾನ ದುರ್ಬಲವಾಗುತ್ತಿದೆ ಯಾಕೆ ? ► ಪಾಕಿಸ್ತಾನ ಸೇನಾ ಕಾಯ್ದೆಗೆ ತಿದ್ದುಪಡಿ: ಪರಿಣಾಮಗಳು ಏನೇನು ?
ಗುವಾಹಟಿಯಲ್ಲಿ ಟೀಂ ಇಂಡಿಯಾ ಕುಸಿತದ ಬೆನ್ನಲ್ಲೇ ಕರುಣ್ ನಾಯರ್ ಟ್ವೀಟ್; ಕನ್ನಡಿಗನ ನೋವಿಗೆ ಆರ್ ಅಶ್ವಿನ್ ಸಾಥ್!
ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 122 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ಮಾಡಿರುವ ಎಕ್ಸ್ ಪೋಸ್ಟ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ತಾನಿರುತ್ತಿದ್ದರೆ ಈ ರೀತಿಯ ಕುಸಿತ ಕಾಣಲು ಬಿಡುತ್ತಿರಲಿಲ್ಲ ಎಂಬರ್ಥದ ಸಾಲುಗಳು ಇದರಲ್ಲಿದ್ದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಅವರು ಸಹ ಇದಕ್ಕೆ ಪ್ರತಿಕ್ರಿಯಿಸಿರುವುದರಿಂದ ಮತ್ತಷ್ಟು ಗಮನ ಸೆಳೆದಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆಯುತ್ತಿರುವ ದಲ್ಲಿ ಭಾರತ ಟೆಸ್ಟ್ ತಂಡದ ಬ್ಯಾಟಿಂಗ್ ದೌರ್ಬಲ್ಯ ಮತ್ತೊಮ್ಮೆ ಬಟಾಬಯಲಾಗಿದೆ. ಹರಿಣಗಳು ಪ್ರಥಮ ಇನ್ನಿಂಗ್ಸ್ ನಲ್ಲಿ ಗಳಿಸಿದ 489 ರನ್ ಗಳ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 44ನೇ ಓವರ್ ನಲ್ಲೇ 122 ರನ್ ಗಳಾಗಬೇಕಾದರೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಕರುಣ್ ಎಕ್ಸ್ ಪೋಸ್ಟ್ ನಲ್ಲೇನಿದೆ? ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕರುಣ್ ನಾಯರ್ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಒಂದು ರಹಸ್ಯಮಯ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಭಾರತ ತಂಡದ ಬಗ್ಗೆಯಾಗಲಿ, ಟೆಸ್ಟ್ ಬಗ್ಗೆಯಾಗಲಿ ಏನನ್ನೂ ಬರೆದಿಲ್ಲ. ಆದರೆ ಅವರು ಬರೆದಿರುವ ವಾಕ್ಯಗಳು ಗುವಾಹಟಿ ಟೆಸ್ಟ್ ನ ಪರಿಸ್ಥಿತಿಗೆ ಹೋಲಿಕೆಯಾಗುತ್ತಿದ್ದು ಆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ``ಕೆಲವು ಪರಿಸ್ಥಿತಿಗಳು ನಿಮಗೆ ಹೃದಯದಿಂದ ತಿಳಿದಿರುವ ಭಾವನೆಯನ್ನು ಹೊಂದಿರುತ್ತವೆ - ಮತ್ತು ಹೊರಗೆ ಇಲ್ಲದಿರುವ ಮೌನವು ತನ್ನದೇ ಆದ ನೋವನ್ನು ಸೇರಿಸುತ್ತದೆ.'' ಎಂದು ಅವರು ತಮ್ಮ ಎಕ್ಸ್ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಮಾಜಿ ಭಾರತೀಯ ಸ್ಪಿನ್ನರ್ ಅವರು ಸಹ ಪ್ರತಿಕ್ರಿಯಿಸಿದ್ದಾರೆ. ಅವರು ಅದೇ [ಹೇ ಮ್ಯಾನ್] ಎಂದು ನಗುವಿನ ಎಮೋಜಿಯೊಂದಿಗೆ ಉತ್ತರಿಸಿದ್ದಾರೆ. ಅಶ್ವಿನ್ ಅವರ ಈ ಪ್ರತಿಕ್ರಿಯೆಯು ಕರುಣ್ ನಾಯರ್ ಅವರ ಪೋಸ್ಟ್ನ ಬಗ್ಗೆ ಮತ್ತಷ್ಟು ಕುತೂಹಲವನ್ನು ಸಹ ಹೆಚ್ಚಿಸಿದೆ. ಒಂದು ವೇಳೆ ಭಾರತದ ಪರಿಸ್ಥಿತಿಯಲ್ಲಿ ಅಶ್ವಿನ್ ಸಹ ಇರುತ್ತಿದ್ದರೆ ದಕ್ಷಿಣ ಆಫ್ರಿಕಾ ಇಷ್ಟೊಂದು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ರವಿಚಂದ್ರನ್ ಅಶ್ವಿನ್ ಇರುತ್ತಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಕಸಿತವನ್ನು ತಡೆಯುತ್ತಿದ್ದರು ಎಂಬ ಮಾತೂ ಕೇಳಿ ಬಂದಿದೆ. ರಣಿಜಿಯಲ್ಲಿ ಕೇರಳ ವಿರುದ್ಧ ದ್ವಿಶತಕ ಕರುಣ್ ನಾಯರ್ ಅವರು ಇದೀಗ ಮುಂದುವರಿಸಿದ್ದು ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಅತ್ಯುತ್ತಮ ಆಟ ಆಡಿುತ್ತಿದ್ದಾರೆ. 100.33 ರ ಸರಾಸರಿಯಲ್ಲಿ 602 ರನ್ಗಳನ್ನು ಗಳಿಸಿದ್ದಾರೆ. ಕೇರಳ ವಿರುದ್ಧ ಅಮೋಘ 233 ರನ್ಗಳ ಮಹಾ ಇನ್ನಿಂಗ್ಸ್ ಕೂಡ ಆಡಿದ್ದರು. ಹೀಗಾಗಿ, ಅವರು ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದರು. 2016 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕರುಣ್ ನಾಯರ್ ಅವರು ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿ ಮಿಂಚಿದ್ದರು. ಆದರೆ ಮುಂದಿನ ಪಂದ್ಯದಲ್ಲೇ ಅವರನ್ನು ಬೆಂಚು ಕಾಯಿಸಲಾಗಿತ್ತು. ಒಂದು ವರ್ಷದ ಬಳಿಕ ಅವರಿಗೆ ಅವಕಾಶ ನೀಡಿದರೂ ಅವರು ಸಫಲರಾಗಲಿಲ್ಲ. 2022ರಲ್ಲಿ ಕರ್ನಾಟಕ ತಂಡದಿಂದಲೂ ಹೊರಬಿದ್ದರು. ಬಳಿಕ ವಿದರ್ಭ ತಂಡವನ್ನು ಸೇರಿಕೊಂಡ ಅವರು ದೇಶೀಯ ಕ್ರಿಕೆಟ್ ನಲ್ಲಿ ಅದ್ಙುತ ಪ್ರದರ್ಶನ ನೀಡಿ ಈ ವರ್ಷ ಇಂಗ್ಲೆಂಡ್ ವಿರುದ್ಧ ಆ್ಯಂಡರ್ಸನ್- ತೆಂಡೂಲ್ಕರ್ ಟ್ರೋಫಿ ಸರಣಿಗೆ ಆಯ್ಕೆ ಆದರು. ಆದರೆ ದೊಡ್ಡ ಮಟ್ಟಿನ ಯಶಸ್ಸು ಗಳಿಸದ್ದರಿಂದ ಗೆ ಅವರನ್ನು ತಂಡದಿಂದ ಕೈಬಿಡಲಾಯಿತು. ಇದೀಗ ಅವರು ಈ ಪೋಸ್ಟ್ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರ ಅಭಿಮಾನಿಗಳು ಭಾವಿಸಿದ್ದಾರೆ.
ಚುನಾವಣಾ ಆಯೋಗದ ಮೌನದ ಹಿಂದಿನ ಗುಟ್ಟೇನು? | Election Commission | Tejaswi Yadav | Kapil Sibal | BJP
ಮತದಾನದ ಲಿಂಗಾಧಾರಿತ ಡೇಟಾ ಏಕೆ ಮರೆಮಾಚಿದೆ ಆಯೋಗ? ► ಬಿಜೆಪಿ ಆಡಳಿತದ ರಾಜ್ಯಗಳ ಪೊಲೀಸರನ್ನು ಮಾತ್ರ ಆಯೋಗ ನಂಬುತ್ತದೆಯೆ? ► ತೇಜಸ್ವಿ ಯಾದವ್ ಮತ್ತು ಕಪಿಲ್ ಸಿಬಲ್ ಎತ್ತಿದ ಗಂಭೀರ ಆರೋಪಗಳೇನು?
RSSಗೆ ಡೊನೇಶನ್ ಕೊಟ್ರೆ BJPಯಲ್ಲಿ ನಿಮ್ಮ ಕೆಲಸ ಆಗುತ್ತೆ ಅನ್ನೋ ಅಭಿಪ್ರಾಯ ಇದೆ : Dinesh Amin Mattu
ಆರೆಸ್ಸೆಸ್ ನೋಂದಣಿಯಾಗಿಲ್ಲ ಅಂತ ಭಾಗವತ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ ► ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಹಣದ ವ್ಯವಹಾರ ಆರೆಸ್ಸೆಸ್ ನಡೆಸುತ್ತೆ ► ದೇಶದ ಸಂವಿಧಾನ, ಕಾನೂನುಗಳ ಮೇಲೆ ನಂಬಿಕೆಯಿಲ್ಲ ಎಂದು ಭಾಗವತ್ ಹೇಳಿದ್ದಾರೆ ► ಉಡಾಫೆ ಉತ್ತರದಿಂದ ಆರೆಸ್ಸೆಸ್ ಗೆ ಅಂಟಿರುವ ಕಳಂಕ ಹೋಗಲ್ಲ ►► ವಾರ್ತಾಭಾರತಿ - ವಿಶೇಷ ಸಂದರ್ಶನ ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಬಿಹಾರದಲ್ಲಿ ಏನಾಗಲಿದೆ ? ನಿತೀಶ್ ಕುಮಾರ್ ಭವಿಷ್ಯ ಏನು ? | Politics ಡಾಟ್ ಕಾಮ್ - Narendra Modi - Nitish Kumar
ನಿತೀಶ್ ಕುಮಾರ್ ಹಿಂದೆಯೇ ಬಿಜೆಪಿಯವರು ಹೋಗ್ಬೇಕು, ಯಾಕಂದ್ರೆ.. ► ಉವೈಸಿ ಪಕ್ಷದಿಂದ ಮಹಾಘಟಬಂಧನ್ ಗೆ ಆತಂಕ ಇದೆಯೇ ? ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು ಧರಣೀಶ್ ಬೂಕನಕೆರೆ ಹಿರಿಯ ಪತ್ರಕರ್ತರು ► ವಾರ್ತಾಭಾರತಿ - Politics ಡಾಟ್ ಕಾಮ್
ಸಂಪಾದಕೀಯ | ಬಾಲಾಪರಾಧಿಗಳ ಬದುಕಿನಲ್ಲಿ ಸುಧಾರಣೆಯಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಿಂಚುತ್ತಿರುವ ಸೈಕತ್ ಚಕ್ರವರ್ತಿ ! - Zohran Mamdani - Saikat Chakrabarti - USA
ಡೆಮಾಕ್ರಟಿಕ್ ಪ್ರಭಾವಿಗೆ ಸವಾಲೊಡ್ಡಿರುವ ಮತ್ತೊಬ್ಬ ಭಾರತೀಯ ಅಮೆರಿಕನ್ ! ► ಕಾರ್ಪೊರೇಟ್ ಹಣ ಬೇಡ, ಮತದಾರರೊಂದಿಗೆ ಮಾತಾಡುತ್ತೇನೆ ಎಂದ ಚಕ್ರವರ್ತಿ !
ಮಂಗಳೂರು: ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಅಸ್ತಿತ್ವಕ್ಕೆ
ಮಂಗಳೂರು: ರಾಜ್ಯ ವ್ಯಾಪ್ತಿಯ ಬ್ಯಾರಿ ಆಂದೋಲನಾ ನೇತಾರರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬ್ಯಾರಿ ರಿಸರ್ಚ್ ಆಂಡ್ ಸರ್ವಿಸ್ ಸೆಂಟರ್ ಅನ್ನು ಅಸ್ತಿತ್ವಕ್ಕೆ ತಂದು ಸಾರ್ವಜನಿಕ ಟ್ರಸ್ಟ್ ಆಗಿ ನೋಂದಾಯಿಸಲಾಗಿದ್ದು, ಇದರ ಸಭೆಯು ಮಂಗಳೂರಿನ ಹಂಪನಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಟ್ರಸ್ಟ್ನ ಮುಖ್ಯ ಸಲಹೆಗಾರರಾಗಿ ಎಮ್.ಪಿ. ಬ್ಯಾರಿ ಜೋಕಟ್ಟೆ ಹಾಗೂ ಮುಹಮ್ಮದ್ ಕುಳಾಯಿಯವರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪ್ರಜಾವಾಣಿಯ ಮಾಜಿ ಸಂಪಾದಕ ಬಿ. ಎಮ್. ಹನೀಫ್ ಆಯ್ಕೆಯಾದರು. ಅಧ್ಯಕ್ಷರಾಗಿ ಬಿ.ಎ. ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಬಿ. ಎ. ಮುಹಮ್ಮದಲಿ ಕಮ್ಮರಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಎ. ಶಂಶುದ್ದೀನ್ ಮಡಿಕೇರಿ, ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಬೈಕಂಪಾಡಿ, ಕೋಶಾಧಿಕಾರಿಯಾಗಿ ಎಮ್. ಮಯ್ಯದ್ದಿ ಬ್ಯಾರಿ ಅಡ್ಡೂರು, ಆಂತರಿಕ ಲೆಕ್ಕ ಪರಿಶೋಧಕರಾಗಿ ಎಮ್. ಎ. ಬಾವಾ ಪದರಂಗಿಯವರನ್ನು ಆಯ್ಕೆ ಮಾಡಲಾಯಿತು. ಬೋರ್ಡ್ ಆಫ್ ಟ್ರಸ್ಟಿಗಳಾಗಿ ರಿಯಾಝ್ ಹುಸೈನ್ ಬಂಟ್ವಾಳ, ಎಮ್. ಬಿ. ಅಬ್ದುಲ್ ನಝೀರ್ ಮಠ ಉಪ್ಪಿನಂಗಡಿ, ಎಸ್. ಅಬ್ದುಲ್ ಮಜೀದ್ ಕಣ್ಣೂರು, ಅಬ್ದುಲ್ ಸಲಾಮ್ ಅಬೂಬಕ್ಕರ್ ತೋಡಾರು, ಯಾಕೂಬ್ ಅಹ್ಮದ್ ಸಲಾಮ್ ಗುರುಪುರ, ಎಸ್. ಅಬ್ದುಲ್ ಮಜೀದ್ ಸೂರಿಂಜೆ, ಎನ್. ಇ. ಮುಹಮ್ಮದ್ ಮಲ್ಲೂರು, ಮೊಹಮ್ಮದ್ ಜಾಬಿರ್ ಜೋಕಟ್ಟೆ, ಎಮ್. ಅಬ್ದುಲ್ ಬಶೀರ್ ಮೊಂಟೆಪದವು ಹಾಗೂ ಎಸ್. ಎ. ಮೊಹಮ್ಮದ್ ಕುಂಞ ಉಪ್ಪಿನಂಗಡಿ ಇವರು ಆಯ್ಕೆಯಾದರು. 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಭಾಜನರಾದ ಟ್ರಸ್ಟ್ನ ಗೌರವಾಧ್ಯಕ್ಷ ಬಿ. ಎಮ್. ಹನೀಫ್ ರವರನ್ನು ಈ ಸಂದರ್ಭದಲ್ಲಿ ಟ್ರಸ್ಟ್ನ ವತಿಯಿಂದ ಗೌರವಿಸಲಾಯಿತು. ಸದ್ರಿ ಟ್ರಸ್ಟ್ನ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣವನ್ನು 2026 ರ ಜನವರಿ 10ಕ್ಕೆ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದು ಟ್ರಸ್ಟ್ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
CM Change : ಖರ್ಗೆ - KJ ಜಾರ್ಜ್ ಭೇಟಿಯ ನಂತರ ಎಲ್ಲವೂ ಸುಸೂತ್ರ - ರಾಹುಲ್ ಸಮ್ಮುಖದಲ್ಲಿ ನಾಳೆ (ನ.25) ಫೈನಲ್?
CM Change in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ, ಅಂತಿಮ ಹಂತಕ್ಕೆ ಬಂದಿದೆ ಎನ್ನುವ ಬಲವಾದ ಸುದ್ದಿ ಕಾಂಗ್ರೆಸ್ಸಿನಲ್ಲಿ ಕೇಳಿ ಬರುತ್ತಿದೆ. ಎಲ್ಲರ ಕಣ್ಣು ಈಗ ವಿಪಕ್ಷದ ನಾಯಕ ರಾಹುಲ್ ಗಾಂಧಿ ಕಡೆ ಬಿದ್ದಿದೆ. ವಿದೇಶ ಪ್ರವಾಸದಿಂದ ರಾಹುಲ್ ಗಾಂಧಿ ಇಂದು (ನ. 24) ತಡರಾತ್ರಿ ದೆಹಲಿಗೆ ವಾಪಸ್ ಆಗಲಿದ್ದಾರೆ.
KSRTC ಬಸ್ನಲ್ಲಿ ಫ್ರೀ ಟಿಕೆಟ್ ಪಡೆದು ಮಾರ್ಗಮಧ್ಯೆ ಇಳಿದ ಮಹಿಳೆ; ಪ್ರಶ್ನಿಸಿದ ಕಂಡಕ್ಟರ್ನ ಕಾಲರ್ ಹಿಡಿದು ಹಲ್ಲೆ!
ಮೈಸೂರಿನಿಂದ ತುಮಕೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದ ಮಹಿಳೆ ಶ್ರೀರಂಗಪಟ್ಟಣದಲ್ಲಿ ಇಳಿದಿದ್ದಾರೆ. ಕಂಡಕ್ಟರ್ ಪ್ರಶ್ನಿಸಿದ್ದಕ್ಕೆ ಮಹಿಳೆ ಶರ್ಟ್ ಕಾಲರ್ ಹಿಡಿದು ಜಗಳವಾಡಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಡಕ್ಟರ್ಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರಿಗೆ ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಜುಲೈನಲ್ಲಿ ನಮ್ಮ ಸೌರಮಂಡಲ ಪ್ರವೇಶಿಸಿರುವ ಮೂರನೇ ಅಂತರತಾರಾ ಬಾಹ್ಯಾಕಾಶ ಶಿಲೆ 3I/ATLAS, ಈಗ ತನ್ನ ನಿರ್ಗಮನ ಪಥದಲ್ಲಿದೆ. ಆದರೆ ಬಾಹ್ಯಾಕಾಶದಲ್ಲಿ ಈ ಧೂಮಕೇತುವಿನ ವಿಚಿತ್ರ ವರ್ತನೆ ಜಾಗತಿಕ ಖಗೋಳ ವಿಜ್ಞಾನಿಗಳ ನಿದ್ದೆಗೆಡೆಸಿದ್ದು, ಪ್ರಸ್ತುತ ಅದರ ಚಲನೆಯ ಬಗ್ಗೆ ಮತ್ತೆ ಊಹಾಪೋಹಗಳು ತಲೆಯೆತ್ತಿವೆ. 3I/ATLASನ ಹೊಸ ಛಾಯಾಚಿತ್ರಗಳು ಅದರ ಸುತ್ತಲೂ ವೃತ್ತಾಕಾರದ ರಚನೆಯನ್ನು ಗುರುತಿಸಿದ್ದು, ನೈಸರ್ಗಿಕ ಧೂಮಕೇತುಗಳನ್ನು ಇದು ಕಂಡುಬರದಿರುವುದು, ಇದೊಂದು ಏಲಿಯನ್ ಶಿಪ್ ಎಂಬ ವಾದಕ್ಕೆ ಮತ್ತಷ್ಟು ಬಲ ತುಂಬಿದೆ.
ಪ್ರಧಾನಿ ಮೋದಿ ಆರ್ಥಿಕತೆಯನ್ನು ಮಕಾಡೆ ಮಲಗಿಸಿದ್ದಾರೆ : ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸ್ವಯಂ ಘೋಷಿತ ವಿಶ್ವಗುರುವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ ನರೇಂದ್ರ ಮೋದಿಯ ಅಚ್ಛೇ ದಿನದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನು ಶತಕದ ಗಡಿ ದಾಟಿಸಬೇಕೆಂದು ದಿನದ 18 ಗಂಟೆಗಳ ಕಾಲ ದುಡಿಯುತ್ತಿರುವುದರ ಸಾಧನೆಯೋ? ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಕುಹಕವಾಡಿದ್ದಾರೆ. ಸಾಮಾಜಿಕ ಜಾತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು,ಮೋದಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಡಾಲರ್ ಮುಂದೆ ರುಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದರೆ, ದೇಶದ ಆಡಳಿತ, ಆರ್ಥಿಕ ನೀತಿಗಳು ಹಳಿ ತಪ್ಪಿರುವುದರಿಂದ ಬೆಲೆ ಏರಿಕೆಯೂ ಮಿತಿ ಮೀರುತ್ತಿದೆ. ಪೆಟ್ರೋಲ್, ಡಿಸೆಲ್, ದಿನಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದ್ದರೆ, ಜನ ಸಾಮಾನ್ಯರ ಬದುಕು ಮತ್ತಷ್ಟು ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿಎ ಆಡಳಿತದಲ್ಲಿ ರೂಪಾಯಿ ಮೌಲ್ಯ 63.76 ಇದ್ದ ಕಾಲದಲ್ಲಿ 2013, ಆಗಸ್ಟ್ 24 ರಂದು ಗುಜರಾತಿನ ರಾಜ್ ಕೋಟ್ ನಲ್ಲಿ ನಿಂತು ನರೇಂದ್ರ ಮೋದಿ ಭಾಷಣ ಮಾಡಿರುವುದನ್ನು ಮರೆತಂತಿದೆ. ರೂಪಾಯಿ ಮೌಲ್ಯ ಡೆತ್ ಬೆಡ್ ನಲ್ಲಿದೆ, ಯುಪಿಎ ಸರ್ಕಾರ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದೆ, ಆರ್ಥಿಕತೆಯನ್ನು ಎದ್ದು ನಿಲ್ಲಿಸಬೇಕಿದೆ ಎಂದು ಭಾಷಣ ಮಾಡಿದ ಪ್ರಧಾನಿ ಮೋದಿ, ಆರ್ಥಿಕತೆಯನ್ನು ಎದ್ದು ನಿಲ್ಲಿಸುವುದು ಬಿಡಿ, ಮಕಾಡೆ ಮಲಗಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ರೂಪಾಯಿ ಮೌಲ್ಯವು 89ರ ಗಡಿ ದಾಟಿರುವುದಕ್ಕೆ ಪ್ರಧಾನಿ ಮೋದಿ ಸರ್ಕಾರದ ಆರ್ಥಿಕ ದಿವಾಳಿತನದ ನೀತಿಗಳೇ ಕಾರಣ. ರೂಪಾಯಿ ಮೌಲ್ಯದ ಕುಸಿತವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಸ್ಮಿತೆಗೆ ಬಿದ್ದ ಭಾರಿ ಹೊಡೆತ. ಕೇಂದ್ರ ಸರ್ಕಾರದ ಇಂತಹ ಕೆಟ್ಟ ನೀತಿಗಳಿಂದ ಭಾರತದ ಭವಿಷ್ಯತ್ತಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RSS ಹಣಕಾಸು ಮೂಲ, ನೋಂದಣಿ ಬಗ್ಗೆ ಭಾಗ್ವತ್ ಮಾತು : ಪ್ರಶ್ನೆಗಳೇನು ? | Mohan Bhagwat
ಹಿಂದೂ ರಾಷ್ಟ್ರದ ಬಗ್ಗೆ ಮಾತಾಡುವ ಆರೆಸ್ಸೆಸ್ ಸಂವಿಧಾನಕ್ಕೆ ಬೆದರಿಕೆಯಲ್ಲವೇ ? ► ಆರೆಸ್ಸೆಸ್ ಹೇಗೆ ರಾಜಕೀಯೇತರ ಸಂಸ್ಥೆ ಆಗಲು ಸಾಧ್ಯ ?
ಸಾಕಿದ ದನವನ್ನು ಮಾರಾಟ ಮಾಡಿದ್ದಕ್ಕೆ ಮನೆಯನ್ನು ಮುಟ್ಟುಗೋಲು ಹಾಕಿದ್ದು ಸರಿಯೇ ? | Belthangady | Mangaluru
ದನಗಳನ್ನು ಸಾಕುವುದು ಅಪರಾಧವೇ? ಈ ಭಯ, ಆತಂಕಕ್ಕೆ ಕಾರಣಗಳೇನು ? ► ಜಾನುವಾರು ಕಾಯ್ದೆಯನ್ನು ಮುಂದಿಟ್ಟು ರೈತರಿಗೆ ಕಿರುಕುಳ ನೀಡೋದು ಎಷ್ಟು ಸರಿ ?
ಸಿಎಂ ಪಟ್ಟಕ್ಕೆ ಜಟಾಪಟಿ: \ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು\
ಮೈಸೂರು, ನವೆಂಬರ್24: ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ಇದು ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲಿನಂತೆ ರೆಬೆಲಿಯನ್ ಸಿದ್ದರಾಮಯ್ಯ ಆದರೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು
Blind Women's World Cup- ಭಾರತದ ನಾರಿಯರಿಗೆ ಮತ್ತೊಂದು ವಿಶ್ವಕಪ್ ಗರಿ; ಪ್ರಧಾನಿ ಮೋದಿ ಪ್ರಶಂಸೆಯ ಸುರಿಮಳೆ
Blind Women's T20 World Cup 2025- ಬಾರತದ ಮಹಿಳೆಯರು ಏಕದಿನ ವಿಶ್ವಕಪ್ ಗೆದ್ದ ತಿಂಗಳೊಳಗಾಗಿ ಮತ್ತೊಂದು ಖುಷಿ ಪಡುವ ಸುದ್ದಿ. ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಅಂಧ ಮಹಿಳೆಯರ ಟಿ20 ವಿಶ್ವಕಪ್ ಅನ್ನು ಭಾರತ ತಂಡ ಗೆದ್ದುಕೊಂಡಿದೆ. ಕೊಲಂಬೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಕರ್ನಾಟಕದ ದೀಪಿಕಾ ಕೆಸಿ ನೇತೃತ್ವದ ಭಾರತ ತಂಡ 7 ವಿಕೆಟ್ ಗಳಿಂದ ಸೋಲಿಸಿದೆ. ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಈ ಸಾಧನೆಯನ್ನು ಕೊಂಡಾಡಿದ್ದಾರೆ.
RCB: ಆರ್ಸಿಬಿ ಇದೇ ಕಾರಣಕ್ಕೆ ಐಪಿಎಲ್ 2026 ಟ್ರೋಫಿ ಗೆಲ್ಲುವುದು ಖಚಿತ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದೆ. ಮಿನಿ ಹರಾಜಿಗೂ ಮುನ್ನೆವೇ ಇತ್ತೀಚೆಗಷ್ಟೇ ಎಲ್ಲಾ ತಂಡಗಳು ರಿಟೈನ್ ಪಟ್ಟಿಯನ್ನು ಪ್ರಕಟ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವುದು ಬೆಂಗಳೂರು ಫಿಕ್ಸ್
6 ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಸಮರ: ಅಮೆರಿಕದ ದೈತ್ಯರ ವಿರುದ್ಧ ತಿರುಗಿಬಿದ್ದ ಜಿಯೋ, ಏರ್ಟೆಲ್! ಏನಿದು ಸಂಘರ್ಷ?
ಭಾರತದಲ್ಲಿ 6 ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಹಂಚಿಕೆ ವಿಚಾರವಾಗಿ ದೇಶಿಯ ಟೆಲಿಕಾಂ ದಿಗ್ಗಜರು ಮತ್ತು ಅಮೆರಿಕದ ಟೆಕ್ ಕಂಪನಿಗಳ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದೆ. ಆಪಲ್, ಅಮೆಜಾನ್ ಮತ್ತು ಮೆಟಾದಂತಹ ಕಂಪನಿಗಳು ಈ ಸ್ಪೆಕ್ಟ್ರಮ್ ಅನ್ನು ವೈ-ಫೈ ಬಳಕೆಗೆ ನೀಡಬೇಕೆಂದು ಟ್ರಾಯ್ಗೆ ಮನವಿ ಮಾಡಿವೆ. ಆದರೆ, ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ಇದನ್ನು ವಿರೋಧಿಸಿದ್ದು, ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವಂತೆ ಒತ್ತಾಯಿಸಿವೆ.
Breaking: ಭಾರತೀಯ ಚಿತ್ರರಂಗದ ದಂತಕಥೆ ಧರ್ಮೇಂದ್ರ ನಿಧನ
ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ (89) ನವೆಂಬರ್ 24 ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದ್ದ ಅವರು, 12 ದಿನಗಳ ಹಿಂದಷ್ಟೇ ಡಿಸ್ಚಾರ್ಜ್ ಆಗಿ ನಿವಾಸಕ್ಕೆ ಮರಳಿದ್ದರು.
ತಮಿಳು ಸರಿಗಮಪ ಸೀಸನ್-5ರ ಫಿನಾಲೆ ತಲುಪಿದ ಕನ್ನಡತಿ ಶಿವಾನಿ; ಪ್ರೇಕ್ಷಕರ ಮನಗೆದ್ದರೂ ಕೈ ತಪ್ಪಿತು ವಿನ್ನರ್ ಟ್ರೋಫಿ!
ತಮಿಳು 'ಸರಿಗಮಪ ಸೀಸನ್-5' ಗ್ರ್ಯಾಂಡ್ ಫಿನಾಲೆ ನ.23ರಂದು ಜೀ ತಮಿಳಿನಲ್ಲಿ ಪ್ರಸಾರವಾಯಿತು. ಈ ಸ್ಪರ್ಧೆಯಲ್ಲಿ ಕನ್ನಡತಿ ಶಿವಾನಿ ಫೈನಲ್ ತಲುಪಿದ್ದರೂ, ಸುಶಾಂತಿಕಾ ವಿಜೇತರಾದರು. ವಿಜೇತ ಸುಶಾಂತಿಕಾ 15 ಲಕ್ಷ ರೂ. ನಗದು ಬಹುಮಾನ ಹಾಗೂ ಮನೆಯನ್ನು ಪಡೆದರು.ತಮ್ಮ ಅದ್ಬುತ ಪ್ರದರ್ಶನ ಹಾಗೂ ಸುಮಧುರವಾದ ಸಂಗೀತದಿಂದ ತಮಿಳಿಗರ ಮನಗೆದ್ದ ಶಿವಾನಿ ಪರಭಾಷೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
Bengaluru | ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು
ಆತ್ಮಹತ್ಯೆ ಶಂಕೆ
ಐದು ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸಿದ್ದರಾಮಯ್ಯ ತಡ ಮಾಡಿದ್ಯಾಕೆ?
ಚಿಕ್ಕಬಳ್ಳಾಪುರ, ನವೆಂಬರ್ 24: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಜೋರಾಗಿತ್ತು. ಈ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇನ್ನೂ ಸಂಪುಟ ಪುನಾರಚನೆ ಹಾಗೂ
ಡಿಕೆಶಿ ಪರಪ್ಪನ ಅಗ್ರಹಾರಕ್ಕೆ ಶಾಸಕರ ಸಹಿ ಹಾಕಿಸಲು ಹೋಗಿದ್ದಾರೆ: ಆರ್ ಅಶೋಕ್ ಗಂಭೀರ ಆರೋಪ
ವಿಪಕ್ಷ ನಾಯಕ ಆರ್. ಅಶೋಕ್ ಅವರು ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿರುವ ಶಾಸಕರ ಸಹಿ ಪಡೆಯಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಸರ್ಕಾರ ಮಜವಾದಿ ಸರ್ಕಾರ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಜನರು ಕಾಯುತ್ತಿದ್ದಾರೆ ಎಂದರು.
ಭಾರತ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು 2025ರ ನವೆಂಬರ್ 21 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸುವ ಐತಿಹಾಸಿಕ ನಿರ್ಧಾರವೊಂದನ್ನು ಘೋಷಿಸಿದೆ. ಇದು ಹಾಲಿ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಏಕರೂಪಗೊಳಿಸಿದೆ. ಈ ಮಹತ್ವದ ಕ್ರಮವು, ಕಾರ್ಮಿಕ ನಿಯಮಗಳನ್ನು ಆಧುನೀಕರಿಸಿ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸಿ ಮತ್ತು ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ನಿರ್ಮಿಸಲಿದೆ. ಜೊತೆಗೆ ಆತ್ಮನಿರ್ಭರ ಭಾರತಕ್ಕಾಗಿ ದುಡಿಯುವ ಪಡೆ ಮತ್ತು ಕೈಗಾರಿಕೆಗಳಿಗೆ ಭದ್ರ ಬುನಾದಿಯನ್ನು ಹಾಕಲಿದೆ. ಈ ಹಿನ್ನೆಲೆಯಲ್ಲಿ ಏನಿದು ನೂತನ ಕಾರ್ಮಿಕ ಸಂಹಿತೆ? ಇದರಿಂದ ಕಾರ್ಮಿಕರಿಗೆ ಏನೆಲ್ಲಾ ಪ್ರಯೋಜನಗಳಿವೆ? ಸರ್ಕಾರ ಕಾರ್ಮಿಕ ಕಾನೂನಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಿದೆ ಎಂಬುದನ್ನು ತಿಳಿಯೋಣ.
Jeevan Pramaan: ಪಿಂಚಣಿದಾರರಿಗೆ ಸಿಹಿದುದ್ದಿ: ಜೀವನ್ ಪ್ರಮಾಣ ಸೌಲಭ್ಯ ಸರಳೀಕರಣ, ಡೌನ್ಲೋಡ್ ವಿಧಾನ
Jeevan Pramaan Fecility: ಭಾರತ ಸರ್ಕಾರವು ತನ್ನ ವಿವಿಧ ಇಲಾಖೆಗಳ ಸಹಕಾರದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರಿಗೆ ಅನುಕೂಲವಾಗಲೆಂದು ಜೀವನ್ ಪ್ರಮಾಣ' (Jeevan Pramaan) ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದನ್ನು ಮತ್ತಷ್ಟು ಸುಲಭಗೊಳಿಸಿದೆ. ನೈಋತ್ಯ ರೈಲ್ವೆಯು ಮುಖ ಗುರುತಿಸುವಿಕೆ (Face Authentication) ಆಧಾರಿತ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪಿಂಚಣಿದಾರರು ಯಾವ ತೊಂದರೆ ಇಲ್ಲದೇ ಇದರ ಸೇವೆ
ಹತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ಪ್ರದರ್ಶನ!
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ಆಂಧ್ರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತ್ಯೆಯಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ಅನ್ನು ಪ್ರತಿಭಟನಾಕಾರರು ಪ್ರದರ್ಶಿಸಿರುವ ಬಗ್ಗೆ ವರದಿಯಾಗಿದೆ. ದಿಲ್ಲಿ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿಯ ಸಿ-ಹೆಕ್ಸಾಗನ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವೀಡಿಯೊ ವೈರಲ್ ಆಗಿದೆ. ಅದರಲ್ಲಿ ಒಬ್ಬ ಪ್ರತಿಭಟನಾಕಾರ ನವೆಂಬರ್ 18 ರಂದು ಆಂಧ್ರಪ್ರದೇಶ ಪೊಲೀಸರಿಂದ ಹತ್ಯೆಯಾದ ಮಾವೋವಾದಿ ಉನ್ನತ ಕಮಾಂಡರ್ ಮದ್ವಿ ಹಿದ್ಮಾ ಪೋಟೊ ಹೊಂದಿರುವ ಪೋಸ್ಟರ್ ಅನ್ನು ಹಿಡಿದಿರುವುದು ಕಂಡು ಬಂದಿದೆ. ಪ್ರತಿಭಟನಾಕಾರರು, ನೀವು ಎಷ್ಟು ಹಿದ್ಮಾರನ್ನು ಹತ್ಯೆ ಮಾಡುತ್ತೀರಿ? ಪ್ರತಿ ಮನೆಯಿಂದ ಹಿದ್ಮಾ ಹೊರ ಬರುತ್ತಾನೆ. ಹಿದ್ಮ ಚಿರಾಯುವಾಗಲಿ ಎಂದು ಹತ್ಯೆಯಾದ ಮಾವೋವಾದಿ ಕಮಾಂಡರ್ ಪರ ಘೋಷಣೆಯನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದರಿಂದ ಉದ್ವಿಗ್ನತೆ ಸಂಭವಿಸಿದೆ. ಈ ಕುರಿತು ಎಫ್ಐಆರ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಉನ್ನತ ಮಾವೋವಾದಿ ಕಮಾಂಡರ್ ಮದ್ವಿ ಹಿದ್ಮಾ ಪೋಸ್ಟರ್ ಪ್ರದರ್ಶನದ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Asia Cup Rising Stars 2025- ಅಂತೂ ಟ್ರೋಫಿ ಎತ್ತಿ ಹಿಡಿವ ಜಗಮೊಂಡ ಮೊಹ್ಸಿನ್ ನಖ್ವಿ ಆಸೆ ಈಗ ಈಡೇರಿತು!
Pakisran A Vs Bangladesh A- ಸಯ್ಯದ್ ಮೊಹ್ಸಿನ್ ನಖ್ವಿ- ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ( ACC) ಮುಖ್ಯಸ್ಥರಾಗಿರುವ ಪಾಕಿಸ್ತಾನದ ಆಂತರಿಕ ಸಚಿವರನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಹೇಗೆ ಮರೆಯಲು ಸಾಧ್ಯ ಹೇಳಿ? ಈ ಜಗಮೊಂಡ ಮಾಡಿದ ಕೆಲಸದಿಂದಾಗಿ ಟೀಂ ಇಂಡಿಯಾ ಗೆದ್ದಿರುವ ಏಷ್ಯಾ ಕಪ್ 2025 ಈವರೆಗೂ ಸೂರ್ಯಕುಮಾರ್ ಯಾದವ್ ಕೈಗೆ ಬಂದಿಲ್ಲ. ಕೊನೆಗೂ ಪಾಕಿಸ್ತಾನ ಗೆದ್ದ ಏಷ್ಯಾ ಕಪ್ ಅನ್ನು ಎತ್ತಿಹಿಡಿಯಬೇಕು ಎಂಬ ಪಿಸಿಬಿ ಅಧ್ಯಕ್ಷರ ಆಸೆ ಈಗ ಈಡೇರಿದೆ.
ಅಧಿಕಾರ ಹಂಚಿಕೆ ವಿಚಾರ | ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು, ಡಿಕೆಶಿ ಬದ್ಧರಾಗಬೇಕು : ಸಿಎಂ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ (ಶಿಡ್ಲಘಟ್ಟ) : ಬಿಜೆಪಿಯವರು ನಮ್ಮ ಸರಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸೋಮವಾರ ಶಿಡ್ಲಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ . ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಬಿಟ್ಟರೆ ಬೇರೇನೂ ಹೇಳಲು ಬರುವುದಿಲ್ಲ. ಸುಳ್ಳೇ ಅವರ ಮನೆ ದೇವರು ಎಂದು ವಾಗ್ದಾಳಿ ನಡೆಸಿದರು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು, ಡಿ.ಕೆ.ಶಿವಕುಮಾರ್ ಬದ್ಧರಾಗಬೇಕು : ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನಮ್ಮಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ನಾನು ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಬೇಕು ಎಂದು ಹೇಳಿದರು. ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆಯುವೆವು : ಹೈಕಮಾಂಡ್ ಐದು ತಿಂಗಳ ಹಿಂದೆ ಭೇಟಿಯಾದಾಗ, ಸಚಿವ ಸಂಪುಟ ಪುನರ್ ರಚನೆ ಮಾಡಲು ಸೂಚನೆ ನೀಡಿದ್ದರು. ನಾನು ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇವೆ ಎಂದರು. ನುಡಿದಂತೆ ನಡೆಸಿದ್ದೇವೆ : ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ನಾವು ನುಡಿದಂತೆ ನಡೆದ ಸರಕಾರ ಎಂದು ಹೇಳಿದ್ದೆವು. ಅದರಂತೆ ನಡೆದಿದ್ದೇವೆ ಎಂದರು.
ಅರುವತ್ತೊಂದು ಲಕ್ಷ ದಾಟಿದ ಆತ್ಮಕತೆ!
ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ. ಕಳೆದ ತೊಂಭತ್ತು ವರ್ಷಗಳಿಂದಲೂ ಈ ಆತ್ಮಕತೆ ಪ್ರಕಟವಾಗುತ್ತಲೇ ಇದೆ. ನವಜೀವನ್ ಟ್ರಸ್ಟ್ ಈಚೆಗೆ ಕೊಟ್ಟ ಅಧಿಕೃತ ಅಂಕಿ ಅಂಶ ಇದು: 2025ರ ಅಕ್ಟೋಬರ್ ತಿಂಗಳ ಹೊತ್ತಿಗೆ ಈ ಆತ್ಮಕತೆಯ 61 ಲಕ್ಷ ಪ್ರತಿಗಳು ಭಾರತದ 17 ಭಾಷೆಗಳಲ್ಲಿ ಪ್ರಕಟವಾಗಿ ಮಾರಾಟವಾಗಿದ್ದವು. ಇಂಗ್ಲಿಷ್ 21.9 ಲಕ್ಷ. ಮಲಯಾಳಂ 9.1 ಲಕ್ಷ. ತಮಿಳು 7.8 ಲಕ್ಷ. ಹಿಂದಿ 7.06 ಲಕ್ಷ. ಗುಜರಾತಿ 7.05 ಲಕ್ಷ. ದಕ್ಷಿಣ ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಈ ಆತ್ಮಕತೆಯ ಪ್ರಸಾರದ ನಾಗಾಲೋಟದಲ್ಲಿ ಮಲಯಾಳಂ ಮುಂಚೂಣಿಯಲ್ಲಿದೆ. 1999-2000ದ ವರ್ಷದಲ್ಲಿ ಹಾಗೂ 2000-01ರಲ್ಲಿ ತಲಾ 1 ಲಕ್ಷ ಮಲಯಾಳಂ ಪ್ರತಿಗಳು ಮಾರಾಟವಾದವು. ಇವತ್ತಿಗೂ ಜಗತ್ತಿನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಈ ಪುಸ್ತಕಕ್ಕೆ ಖಾಯಂ ಸ್ಥಾನವಿದೆ. ಈ ಪುಸ್ತಕದ ವಿದೇಶಿ ಮಾರಾಟದ ಪ್ರಸಾರದ ಲೆಕ್ಕ ಸಿಕ್ಕಿಲ್ಲ. ಬೇರೆ ಬೇರೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಆವೃತ್ತಿಗಳ ಮಾರಾಟ ಹಾಗೂ ಈ ಆತ್ಮಕತೆಯ ಸಂಕ್ಷಿಪ್ತ ಆವೃತ್ತಿಯ ಮಾರಾಟದ ಅಂಕಿ ಅಂಶಗಳು ಕೂಡ ಇದರಲ್ಲಿ ಸೇರಿಲ್ಲ. ಈ ಗುಜರಾತಿ ಪುಸ್ತಕದ ಹೆಸರು: ‘ಸತ್ಯಾ ನ ಪ್ರಯೋಗೊ ಅಥವಾ ಆತ್ಮಕಥಾ’. ಲೇಖಕರು: ಮೋಹನದಾಸ್ ಕರಮಚಂದ ಗಾಂಧಿ. ಗಾಂಧೀಜಿಯ ಆತ್ಮಕತೆ 1925ನೆಯ ಇಸವಿಯ ನವೆಂಬರ್ 25ರಿಂದ ‘ನವಜೀವನ್’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ‘ಮೈ ಎಕ್ಸ್ ಪರಿಮೆಂಟ್ ವಿತ್ ಟ್ರುತ್ ಆರ್ ಸ್ಟೋರಿ ಆಫ್ ಮೈ ಲೈಫ್’ ಎಂಬ ಶೀರ್ಷಿಕೆಯಲ್ಲಿ ಮಹದೇವ ದೇಸಾಯಿ ಪ್ರತೀ ಕಂತನ್ನೂ ಇಂಗ್ಲಿಷ್ಗೆ ಅನುವಾದಿಸತೊಡಗಿದರು. ಅದು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. 1925ರಿಂದ 1929ರವರೆಗೆ ಈ ಆತ್ಮಕತೆ ಪ್ರಕಟವಾಯಿತು. ‘ಸತ್ಯದೊಂದಿಗೆ ನನ್ನ ಪ್ರಯೋಗ ಅಥವಾ ನನ್ನ ಜೀವನ ಕತೆ’ಯ ಮೊದಲ ಭಾಗ 1927ರಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಯಿತು. ನಂತರ ಎರಡನೆಯ ಭಾಗ ಬಂತು. ‘ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂದು ಕನ್ನಡದಲ್ಲೂ ಪ್ರಕಟವಾಗಿರುವ ಗಾಂಧೀ ಆತ್ಮಕತೆಯ ಪ್ರಸಾರವನ್ನು ಇನ್ನೆರಡು ಪುಸ್ತಕಗಳ ವ್ಯಾಪಕ ಪ್ರಸಾರಗಳ ಜೊತೆಗೆ ಕೆಲವರು ಹೋಲಿಸಿ ನೋಡಿದ್ದಾರೆ. ದುರುಳ ಸರ್ವಾಧಿಕಾರಿ ಹಿಟ್ಲರ್ನ ‘ಮೈನ್ ಕೆಂಫ್’ (ನನ್ನ ಹೋರಾಟ) 1930-45ರ ನಡುವೆ ಅವನ ನಾಝಿವಾದದ ಫ್ಯಾಶಿಸ್ಟ್ ಅಬ್ಬರದ ಕಾಲದಲ್ಲಿ ಮಿಲಿಯಗಟ್ಟಲೆ ಖರ್ಚಾಗಿತ್ತು. ಅದು ನಾಝಿ ಜನಾಂಗದ ಪರವಾದ ಹುಸಿ ಉನ್ಮಾದ ಹಾಗೂ ಪೂರ್ವಾಗ್ರಹದ ಫಲವಾಗಿತ್ತು. ಚೀನಾದ ಅಧ್ಯಕ್ಷರಾಗಿದ್ದ ಮಾವೋ ಭಾಷಣ, ಬರಹಗಳ ‘ರೆಡ್ ಬುಕ್’ನ ಕೋಟಿಗಟ್ಟಲೆ ಪುಸ್ತಕಗಳು ಮುದ್ರಣವಾಗಿವೆ. ಮಾವೋ ಪುಸ್ತಕದ ಕ್ರಾಂತಿಕಾರಿ ಮಹತ್ವ ಈ ಪ್ರಸಾರಕ್ಕೆ ಒಂದು ಕಾರಣವಾಗಿತ್ತು. ಚೀನಾ ಕ್ರಾಂತಿಯ ಸಂದರ್ಭದಲ್ಲಿ ಈ ಪುಸ್ತಕವನ್ನು ಕಡ್ಡಾಯವಾಗಿ ಹಂಚಲಾಗಿದ್ದು ಈ ಬೃಹತ್ ಪ್ರಸಾರಕ್ಕೆ ಮತ್ತೊಂದು ಕಾರಣ. ಆದರೆ ಕಳೆದ ತೊಂಭತ್ತೈದು ವರ್ಷಗಳಲ್ಲಿ ಭಾರತದಲ್ಲಿ ಹಾಗೂ ಭಾರತದಾಚೆಗೆ ಎಲ್ಲ ವರ್ಗದ ಜನರೂ ಕೊಂಡು ಓದಿದ ‘ಸತ್ಯದೊಂದಿಗೆ ನನ್ನ ಪ್ರಯೋಗ’ ಪುಸ್ತಕದ ಅಗ್ಗಳಿಕೆ ಈ ಎರಡೂ ಪುಸ್ತಕಗಳಿಗಿಲ್ಲ. ಒಂದು ಪುಸ್ತಕ ಓದಿದ ನಂತರ ಉಂಟಾಗುವ ಸಾತ್ವಿಕ ಪ್ರಭಾವ ಎಷ್ಟು ಅದ್ಭುತವಾಗಿರುತ್ತದೆ; ನಮ್ಮೊಳಗೆ ಎಂಥ ಒಳಿತಿನ ಭಾವ ಹಬ್ಬುತ್ತದೆ; ಹಾಗೂ ಒಳಿತು ಒಳಿತನ್ನು ಉದ್ದೀಪಿಸಬಲ್ಲದು ಎಂಬುದಕ್ಕೆ ಗಾಂಧೀ ಆತ್ಮಚರಿತ್ರೆ ಸಾಕ್ಷಿಯಂತಿದೆ. ‘ಸತ್ಯದೊಂದಿಗೆ ನನ್ನ ಪ್ರಯೋಗ’ ಎನ್ನುವುದು ಎಲ್ಲ ಬರವಣಿಗೆಯ ಹಾಗೂ ಎಲ್ಲ ಬಗೆಯ ಅಭಿವ್ಯಕ್ತಿಯ ಸವಾಲನ್ನು ಹೇಳುತ್ತದೆ ಎಂದು ಸದಾ ನನಗನ್ನಿಸಿದೆ. ಆಧುನಿಕ ಗುಜರಾತಿ ಗದ್ಯವನ್ನು ರೂಪಿಸಿದ ಮಹತ್ವದ ಲೇಖಕರಾಗಿ ಕೂಡ ಗಾಂಧೀಜಿ ಗುಜರಾತಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಲೇಖಕನೊಬ್ಬ ಅತ್ಯಂತ ಸರಳವಾಗಿ, ಸತ್ಯಕ್ಕೆ ಅತ್ಯಂತ ಹತ್ತಿರವಾಗಿ ತನ್ನ ಬದುಕಿನ ಕತೆ ಹೇಳುವ ಈ ರೀತಿ ಎಲ್ಲ ಕಾಲದಲ್ಲೂ ಬರವಣಿಗೆ ಕಲಿಯಲು ಬಯಸುವವರಿಗೆ ಮಾರ್ಗದರ್ಶಿಯಂತಿದೆ. ತಮ್ಮ ಕಾವ್ಯ ಬದುಕಿನ ಆರಂಭ ಘಟ್ಟದಲ್ಲಿ ಸ್ಫೋಟಕ ಹಾಡು, ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ ತಮ್ಮ ನಡುವಯಸ್ಸಿನಲ್ಲಿ ಬೆಂಗಳೂರಿನ ಬಾದಾಮಿ ಹೌಸ್ ಲೈಬ್ರರಿಯಲ್ಲಿ ಕೂತು, ‘ಹರಿಜನ್’ ಪತ್ರಿಕೆಗೆ ಗಾಂಧೀಜಿ ಬರೆದ ಬರಹಗಳನ್ನು ಓದಿದರು. ನಂತರ ಇಡೀ ಸಂಗ್ರಹವನ್ನು ಕೊಂಡು ತಮ್ಮ ಖಾಸಗಿ ಗ್ರಂಥಭಂಡಾರದಲ್ಲಿ ಇಟ್ಟುಕೊಂಡರು. ಸಿದ್ಧಲಿಂಗಯ್ಯ ತಮ್ಮ ಆತ್ಮಚರಿತ್ರೆ ‘ಊರು ಕೇರಿ’ಯ ಮೊದಲ ಭಾಗ ಬರೆದಾಗ, ಕೊನೇ ಪಕ್ಷ ಅದರ ಸರಳ, ನಿರುದ್ವಿಗ್ನ ನಿರೂಪಣೆಯ ಶೈಲಿಯನ್ನು ಗಾಂಧೀಜಿಯ ಆತ್ಮಕತೆಯ ನಿರೂಪಣಾ ಶೈಲಿಯಿಂದಲೂ ಕಲಿತಿರಬಹುದು ಎಂದು ಊಹಿಸುತ್ತೇನೆ. ಗಾಂಧೀ ಲೋಕಕ್ಕೆ ಅತ್ಯಂತ ಒಳಗಿನವರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ಗಾಂಧೀ ಆತ್ಮಕತೆಯನ್ನು ಕನ್ನಡ ಓದುಗಬಳಗಕ್ಕೆ ಆತ್ಮೀಯವಾಗುವಂತೆ ಅನುವಾದಿಸಿದ್ದಾರೆ. ಇದು ಅನುವಾದದ ಒಂದು ಮುಖ್ಯ ಮಾದರಿಯಾಗಿ ಕೂಡ ನಮ್ಮೆದುರಿಗಿದೆ. ಗಾಂಧೀಜಿಯವರ ಆತ್ಮಕತೆಯ ಬರವಣಿಗೆ 1920ನೆಯ ಇಸವಿಯವರೆಗಿನ ಅವರ ಅನುಭವಗಳವರೆಗೆ ಬಂದು ನಿಂತಿತು. ಅದಕ್ಕೆ ಕಾರಣವನ್ನು ಲೇಖಕರೇ ಕೊಡುತ್ತಾರೆ: ‘ಇನ್ನು ಈ ಅಧ್ಯಾಯಗಳನ್ನು ಮುಗಿಸುವ ಕಾಲ ಬಂದಿದೆ. ಇಲ್ಲಿಂದ ಮುಂದೆ ನನ್ನ ಜೀವನ ಎಷ್ಟು ಬಹಿರಂಗವಾಗಿದೆಯೆಂದರೆ, ಸಾರ್ವಜನಿಕರಿಗೆ ತಿಳಿಯದಿರುವ ಸಂಗತಿ ಏನೇನೂ ಇಲ್ಲ...’ ಇದೇ ಅಧ್ಯಾಯದಲ್ಲಿ ಅವರು ಬರೆಯುವ ಮಾತುಗಳು: ‘ಈವರೆಗಿನ ನನ್ನ ಪ್ರಯೋಗಗಳಿಂದ ದೊರೆತ ನಿರ್ಣಯಗಳನ್ನು ನಾವು ಅಂತಿಮ ತೀರ್ಮಾನಗಳೆಂದು ಪರಿಗಣಿಸಲು ಆಗುವುದಿಲ್ಲ. ಆದುದರಿಂದ ಈ ಕಥೆಯನ್ನು ಇಲ್ಲಿಗೆ ಮುಗಿಸುವುದು ನನ್ನ ಸರಳ ಕರ್ತವ್ಯ. ವಾಸ್ತವವಾಗಿ ನನ್ನ ಲೇಖನಿ ಮುಂದುವರಿಯಲು ಸ್ವಾಭಾವಿಕವಾಗಿಯೇ ಹಿಂಜರಿಯುತ್ತದೆ. ವಾಚಕರಿಂದ ಬೀಳ್ಕೊಳ್ಳುವುದು ನನ್ನ ಮನಸ್ಸಿಗೆ ನೋವಾಗದೇ ಇಲ್ಲ. ನನ್ನ ಪ್ರಯೋಗಗಳಿಗೆ ನಾನು ಹೆಚ್ಚು ಬೆಲೆಯನ್ನು ಕಟ್ಟುತ್ತೇನೆ. ಅವುಗಳನ್ನು ಸತ್ಯಬದ್ಧವಾಗಿ ವರ್ಣಿಸುವಲ್ಲಿ ಯಶಸ್ವಿಯಾಗಿದ್ದೇನೋ ಇಲ್ಲವೋ ನನಗೆ ತಿಳಿಯದು. ಪ್ರಾಮಾಣಿಕವಾದ ನಿರೂಪಣೆಯನ್ನು ಮಾಡಲು ನಾನು ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆಂದು ಮಾತ್ರ ಹೇಳಬಲ್ಲೆ. ಸತ್ಯವು ನನಗೆ ಹೇಗೆ ತೋರಿತೋ ಹಾಗೆ ವಿವರಿಸುವುದು ಹಾಗೂ ನಾನು ಆ ಸತ್ಯವನ್ನು ಕಂಡುಕೊಂಡ ಮಾರ್ಗವನ್ನು ವಿವರಿಸುವುದು ನನ್ನ ನಿರಂತರ ಪ್ರಯತ್ನವಾಗಿದೆ. ಇವನ್ನೆಲ್ಲ ಓದುಗರಿಗೆ ವಿವರಿಸಿ ಹೇಳುವಾಗ ನನಗೆ ವರ್ಣಾನಾತೀತವಾದ ಮಾನಸಿಕ ಶಾಂತಿ ಸಿಕ್ಕಿದೆ; ಯಾಕೆಂದರೆ ಇದು ಓದುಗರಲ್ಲಿ ಸತ್ಯ, ಅಹಿಂಸೆಗಳಲ್ಲಿ ನಂಬಿಕೆ ಹುಟ್ಟಿಸಬಹುದೆಂಬುದು ನನ್ನ ನೆಚ್ಚಿನ ಆಸೆಯಾಗಿದೆ.’ ‘ಸತ್ಯನಿಷ್ಠ ನಿರೂಪಣೆ ಮಾಡುವ ಹಾದಿಯಲ್ಲಿ ಎದುರಾಗುವ ಯಾವ ಕಷ್ಟ ಕೋಟಲೆಗಳನ್ನೂ ನಾನು ಎದುರಿಸದೆ ಬಿಟ್ಟಿಲ್ಲ’ ಎಂಬ ಗಾಂಧೀಜಿಯ ಮಾತು ನಿಜವಾದ ಬರವಣಿಗೆಯ ಸವಾಲನ್ನು ಎಲ್ಲ ಲೇಖಕ ಲೇಖಕಿಯರಿಗೂ ನೆನಪಿಸುತ್ತದೆ. ‘ಆತ್ಮಕಥಾ’ ಕುರಿತು ಮುಂದೊಮ್ಮೆ ಗಾಂಧೀಜಿ ಬರೆದ ಮಾತು: ‘ನಾನೆಂದೂ ಆತ್ಮಚರಿತ್ರೆ ಬರೆಯಲಿಲ್ಲ. ಸತ್ಯದೊಂದಿಗೆ ನನ್ನ ಪ್ರಯೋಗ ಕುರಿತ ಲೇಖನಗಳ ಸರಣಿ ಬರೆದೆ; ಅವು ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು. ಇದಾಗಿ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಾದವು. ಅದಾದ ನಂತರ ನಾನು ಏನು ಮಾಡಿದೆ, ಏನು ಯೋಚಿಸಿದೆ... ಇವೆಲ್ಲವನ್ನೂ ಕಾಲಾನುಕ್ರಮದಲ್ಲಿ ಬರೆದಿಲ್ಲ. ಹಾಗೆ ಬರೆಯುವ ಆಸೆಯೇನೋ ಇದೆ. ಆದರೆ ನನಗೆ ಬಿಡುವೆಲ್ಲಿದೆ?’ ಆತ್ಮಕತೆಯ ಮುಂದಿನ ಭಾಗವನ್ನು ಬರೆಯಬೇಕೆಂದು ಜನ ಕೇಳುತ್ತಲೇ ಇದ್ದರು. ಆಗ ಗಾಂಧೀಜಿ ಬರೆದರು: ‘ಆತ್ಮಕತೆಯನ್ನು ಎಲ್ಲಿಗೆ ನಿಲ್ಲಿಸಿದ್ದೇನೋ ಅಲ್ಲಿಂದ ಮತ್ತೆ ಮುಂದುವರಿಸಬೇಕೆಂದು, ಅಹಿಂಸಾ ತತ್ವವನ್ನು ವಿವರಿಸುವ ಒಂದು ಗ್ರಂಥದ ರಚನೆಗೂ ನಾನು ಶೀಘ್ರದಲ್ಲೇ ಕೈಹಾಕಬೇಕೆಂದು ನನ್ನ ಸ್ನೇಹಿತರೊಬ್ಬರು ಬೇಡಿ.ಕೆ.ಯಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಆತ್ಮಕತೆಯನ್ನು ಬರೆಯಬೇಕೆಂದು ತೀರ್ಮಾನಿಸಿ ನಾನು ಬರೆದದ್ದಲ್ಲ. ಬದುಕಿನ ಯಥಾರ್ಥ ಅನುಭವಗಳನ್ನು ಒಂದು ಅಂದಾಜಿನಲ್ಲಿ ನಾನು ದಾಖಲಿಸುತ್ತಾ ಹೋದೆನಷ್ಟೆ. ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹ ಸರಣಿ, ನಂತರ ಪುಸ್ತಕವಾಗಿ ಪ್ರಕಟವಾಯಿತು. ಆಗಿನಿಂದ ಇಲ್ಲಿಗೆ ಇಪ್ಪತ್ತು ವರ್ಷ ಸಂದಿವೆ. ನಾನು ಚಿಂತಿಸಿದ, ಕ್ರಿಯೆಯಲ್ಲಿ ತೊಡಗಿದ ವಿವರಗಳು ಈ ಅವಧಿಯಲ್ಲಿ ಅಷ್ಟು ವ್ಯವಸ್ಥಿತವಾಗಿ ಬರಹ ರೂಪಕ್ಕಿಳಿದಿಲ್ಲ. ಅವನ್ನು ಕ್ರಮಬದ್ಧವಾಗಿ ದಾಖಲಿಸುವುದು ನನಗೂ ಸಹ ಇಷ್ಟವೇ. ಆದರೆ ಅಷ್ಟು ಪುರುಸೊತ್ತಾದರೂ ಎಲ್ಲಿದೆ? ಆತ್ಮಕತೆಯನ್ನು ಮತ್ತೆ ಮುಂದುವರಿಸಲು ಸಮಯಾವಕಾಶವಂತೂ ಸದ್ಯಕ್ಕೆ ನನ್ನ ಬಳಿ ಇಲ್ಲ. ದೈವಸಂಕಲ್ಪ ಹೇಗಿದೆಯೋ ನೋಡಬೇಕು. ಆದರೆ ಅಹಿಂಸಾ ತತ್ವದ ಕುರಿತು ಗ್ರಂಥವನ್ನು ಬರೆಯುವಷ್ಟು ಖಂಡಿತ ನಾನು ಶಕ್ತನಲ್ಲ. ಪಾಂಡಿತ್ಯಪೂರ್ಣ ಬರವಣಿಗೆ ನನ್ನ ಕೈಲಾಗದು.’ 1920ರ ನಂತರದ ಗಾಂಧೀ ಕತೆಯನ್ನು ರಾಜಮೋಹನ ಗಾಂಧಿಯವರ ‘ಮೋಹನದಾಸ್: ಎ ಟ್ರು ಸ್ಟೋರಿ’ ಅಥವಾ ಡಿ.ಎಸ್. ನಾಗಭೂಷಣರ ‘ಗಾಂಧೀ ಕಥನ’ ಮುಂತಾದ ಪುಸ್ತಕಗಳಲ್ಲಿ ಹಲವೆಡೆ ಓದಿಕೊಳ್ಳಬಹುದು. ಆದರೆ ‘ಗಾಂಧೀಜಿ ತಮ್ಮ ಆತ್ಮಕತೆಯ ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೂ ಬರೆದ ಸರಳ, ನೇರ ರೀತಿಯಲ್ಲಿ ನಂತರದ ಕತೆಯನ್ನೂ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬ ನಿರೀಕ್ಷೆ ಮಾತ್ರ ಹಾಗೇ ಉಳಿದುಬಿಟ್ಟಿದೆ. 500 ಪುಟಗಳ ಈ ಪುಸ್ತಕ ಈಗ ಎಲ್ಲೆಡೆ ದೊರೆಯುತ್ತದೆ. ‘ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಶೇಷಾದ್ರಿಪುರಂ, ಬೆಂಗಳೂರು 56001’ ಇಲ್ಲಿ ನೂರು ರೂಪಾಯಿ ಮುಖ ಬೆಲೆಯ ಇಂಗ್ಲಿಷ್ ಹಾಗೂ ಕನ್ನಡಾನುವಾದದ ಪ್ರತಿಗಳು ಐವತ್ತು ರೂಪಾಯಿಗೆ ದೊರೆಯುತ್ತವೆ. ಸಂಕ್ಷಿಪ್ತ ವಿದ್ಯಾರ್ಥಿ ಆವೃತ್ತಿ ಮೂವತ್ತು ರೂಪಾಯಿಗೆ ದೊರೆಯುತ್ತದೆ. ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ.
1500 ಕೋಟಿ ವೆಚ್ಚದಲ್ಲಿ ಮೆಜೆಸ್ಟಿಕ್ ಗೆ ಮೇಜರ್ ಮೇಕ್ಓವರ್ ; 32 ಎಕರೆ ವ್ಯಾಪ್ತಿಯಲ್ಲಿ ಪುನರಾಭಿವೃದ್ಧಿಗೆ ಯೋಜನೆ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣವು 1,500 ಕೋಟಿ ರೂ. ವೆಚ್ಚದಲ್ಲಿ ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ಪುನರಾಭಿವೃದ್ಧಿ ಕಾಣಲಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಕೆಡವಿ, ಅತ್ಯಾಧುನಿಕ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯು ರೈಲು, ಮೆಟ್ರೋ ಮತ್ತು ಉಪನಗರ ರೈಲು ಸಂಪರ್ಕಗಳನ್ನು ಸುಗಮಗೊಳಿಸಲಿದೆ. ಖಾಸಗಿ ಪಾಲುದಾರರು ಹೂಡಿಕೆ ಮಾಡಲಿದ್ದು, ರಾಜ್ಯ ಸಾರಿಗೆ ಸಂಸ್ಥೆಯೊಂದಿಗೆ ಆದಾಯ ಹಂಚಿಕೊಳ್ಳಲಿದ್ದಾರೆ. ಇದು ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲಿದೆ.
ಎಮ್ಮೆಕೆರೆ ಅಂತರ್ರಾಷ್ಟ್ರೀಯ ಈಜುಕೊಳದ ಮುಗಿಯದ ವಿವಾದ
ಮಂಗಳೂರು, ನ.23: ನಗರದ ಎಮ್ಮೆಕೆರೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ವಿವಾದದಿಂದ ಇನ್ನೂ ಮುಕ್ತವಾಗಿಲ್ಲ. ಒಂದಲ್ಲೊಂದು ವಿವಾದ ಈಜುಕೊಳದ ಸುತ್ತ ಗಿರಕಿ ಹೊಡೆಯುತ್ತಾ ಇದೆ. ಚಾಂಪಿಯನ್ ಈಜುಗಾರರಿಗೆ ಸ್ವಂತ ಕೋಚ್ ಮೂಲಕ ತರಬೇತಿಗೆ ಅವಕಾಶ ಇಲ್ಲದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ರ ಗಮನ ಸೆಳೆದಾಗ ಸಚಿವರು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ವಿವಾದ ಬಗೆಹರಿಸಲು ಸಭೆ ಕರೆಯುತ್ತಾರೆಂದು ದ.ಕ. ಜಿಲ್ಲಾ ಈಜುಗಾರರ ಸಂಘದ ಪದಾಧಿಕಾರಿಗಳು ಕಾಯುತ್ತಿದ್ದಾರೆ. ಈಜುಕೊಳ ಉದ್ಘಾಟನೆಗೊಂಡಾಗ ಈಜುಗಾರರಿಗೆ ತಮ್ಮ ಸ್ವಂತ ತರಬೇತಿದಾರರನ್ನು ಕರೆ ತರಲು ಅವಕಾಶ ಇತ್ತು. ಬಳಿಕ ಇದರ ನಿರ್ವಹಣೆಯನ್ನು ಬೆಂಗಳೂರಿನ ವಿಒನ್ ಅಕ್ವಾ ಕ್ಲಬ್ ವಹಿಸಿಕೊಂಡ ಬಳಿಕ ಈ ಸಮಸ್ಯೆ ಆರಂಭಗೊಂಡಿತು ಎನ್ನಲಾಗಿದೆ. ಸ್ಮಾರ್ಟ್ ಸಿಟಿ ನೆರವಿನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಗೊಂಡಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನು ಈಜುಪಟುಗಳಿಗೆ ತಮ್ಮ ಸ್ವಂತ ಕೋಚ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯಲು ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಬಸವನಗುಡಿಯ ಅಕ್ವಾಟಿಕ್ ಸೆಂಟರ್ನೊಂದಿಗೆ ಪಾಲುದಾರಿಕೆ ಹೊಂದಿರುವ ವಿಒನ್ ಅಕ್ವಾ ಸೆಂಟರ್ನ ತರಬೇತುದಾರರಿಗೆ ಮಾತ್ರ ಎಮ್ಮೆಕೆರೆ ಸಂಕೀರ್ಣದೊಳಗೆ ತರಬೇತಿ ನೀಡಲು ಅನುಮತಿ ಇದೆ. ಅವರು ಐವರು ಕೋಚ್ಗಳನ್ನು ನೇಮಕ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈಜುಪಟುಗಳು ತರಬೇತಿ ಪಡೆಯಬೇಕಾಗಿದೆ. ಇತರ ಸ್ಥಳೀಯ ಕ್ಲಬ್ಗಳ ತರಬೇತುದಾರರು ಮತ್ತು ಈಜುಗಾರರು ಸ್ಪರ್ಧಾತ್ಮಕ ತರಬೇತಿಗಾಗಿ ಸೌಲಭ್ಯವನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳುತ್ತಾರೆ. ಎಮ್ಮೆಕೆರೆಯಲ್ಲಿ ಈಜುಪಟುಗಳಿಗೆ ತಮ್ಮ ವೈಯಕ್ತಿಕ ಕೋಚ್ಗಳಿಗೆ ಪ್ರವೇಶ ಇಲ್ಲದ ಕಾರಣ ದಿಂದಾಗಿ ಅವರು ಅಭ್ಯಾಸಕ್ಕೆ ಮಂಗಳಾ ಪೂಲ್ ಅಥವಾ ಲಭ್ಯವಿರುವ ಇತರ ಈಜುಕೊಳಗಳನ್ನು ಅವಲಂಭಿಸುವಂತಾಗಿದೆ. ಹಿಂದೆ ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿಯಾಗಿದ್ದಾಗ ಈಜುಕೊಳದ ಗುತ್ತಿಗೆಯನ್ನು ವಿಒನ್ ಅಕ್ವಾ ಸೆಂಟರ್ಗೆ ನೀಡಲಾಗಿತ್ತು. ಸ್ಥಳೀಯ ಈಜುಪಟುಗಳಿಗೆ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಗಮನಸೆಳೆಯಲಾಗಿತ್ತು. ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಬಳಿಕ ಅವರು ವರ್ಗಾವಣೆಗೊಂಡರು ಎಂದು ಈಜುಗಾರರು ಹೇಳುತ್ತಾರೆ. ಎಮ್ಮೆಕೆರೆಯಲ್ಲಿರುವುದುದ ಅಂತರ್ರಾಷ್ಟ್ರೀಯ ಮಟ್ಟದ ಈಜುಕೊಳವಾಗಿದೆ. ಇಲ್ಲಿ ಕೇವಲ ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಈಜಗಾರರ ಅಭ್ಯಾಸಕ್ಕೆ ಮಾತ್ರ ಅವಕಾಶ ಇದೆ. ಕಲಿಯಲು ಅವಕಾಶ ಇದೆ. ಆದರೆ ಈಗ ನಿರ್ವಹಣೆ ಹೊಣೆ ಹೊತ್ತವರು ಅಲ್ಲಿರುವ ಮೂರು ಈಜು ಕೊಳಗಳ ಪೈಕಿ ಒಂದು ಈಜುಕೊಳದ ಆಳವನ್ನು ಕಡಿಮೆ ಮಾಡಿ ಮೂಲ ಸ್ವರೂಪವನ್ನು ಬದಲಾಯಿಸಿ ಈಜು ಕಲಿಯುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ನಿರ್ವಹಣೆಗೆ ಸ್ಥಳೀಯ ಸಮಿತಿ ರಚನೆಯಾಗಲಿ: ಈಜು ಕೊಳದ ನಿರ್ವಹಣೆ ಗುತ್ತಿಗೆಯನ್ನು ಹೊರಗಿನವರಿಗೆ ಕೊಟ್ಟದ್ದು ಸರಿಯಲ್ಲ. ನಿರ್ವಹಣೆಗೆ ಸ್ಥಳೀಯ ಸಮಿತಿ ರಚನೆಯಾಗಲಿ. ಮಂಗಳೂರಿನಲ್ಲಿ ತರಬೇತಿ ಪಡೆದ ಈಜುಪಟುಗಳ ಯಶಸ್ಸಿನ ಶ್ರೇಯಸ್ಸು ಮಂಗಳೂರಿಗೆ ಸಲ್ಲಬೇಕು. ಎಮ್ಮೆಕೆರೆಯ ಈಜು ಕೊಳದ ಈಗಿನ ಸಮಸ್ಯೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕರೆಯುವ ಸಭೆಗಾಗಿ ನಾವು ಕಾಯುತ್ತಿದ್ದೇವೆ ಎಂದು ದ.ಕ. ಜಿಲ್ಲಾ ಸ್ವಿಮ್ಮಿಂಗ್ ಅಸೋಸಿಯೇಶನ್ನ ಅಧ್ಯಕ್ಷ ಯತೀಶ್ ಬೈಕಂಪಾಡಿ ಹೇಳಿದ್ದಾರೆ. ಈಜುಪಟುಗಳು ಅಭ್ಯಾಸಕ್ಕೆ ಸ್ವಂತ ಕೋಚ್ಗಳನ್ನು ಕರೆ ತರುವಂತಿಲ್ಲ: ಜಿಲ್ಲಾಧಿಕಾರಿ ಸ್ವಂತ ಕೋಚ್ಗಳನ್ನು ಈಜುಕೊಳದಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಬೇಕು ಎನ್ನುವುದು ಕೆಲವು ಈಜುಪಟುಗಳ ಬೇಡಿಕೆಯಾಗಿದೆ. ಆದರೆ ಆ ಬೇಡಿಕೆಯನ್ನು ಈಡೇರಿಸುವುದು ಕಷ್ಟಸಾಧ್ಯ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ. ಎಲ್ಲರೂ ಕೋಚ್ಗಳನ್ನು ಕರೆದುಕೊಂಡು ಬಂದರೆ ಕೋಚ್ಗಳ ನಡುವೆ ಸಮನ್ವಯ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಬರುವುದಕ್ಕಿಂತ ಮೊದಲು ಈಜುಗಾರರಿಗೆ ಸ್ವಂತ ಕೋಚ್ಗಳನ್ನು ಕೆರೆದುಕೊಂಡು ಬರಲು ಅವಕಾಶ ನೀಡಿರುವ ಕಾರಣದಿಂದಾಗಿ ಅಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ತಮಗೆ ಮಾಹಿತಿ ಲಭಿಸಿತ್ತು. ಈ ಸಮಸ್ಯೆಯನ್ನು ತಪ್ಪಿಸಲು ಈಗ ಈಜು ಕೊಳದ ನಿರ್ವ ಹಣೆಯ ಗುತ್ತಿಗೆ ವಹಿಸಿಕೊಂಡ ವರು ಐವರು ಕೋಚ್ಗಳನ್ನು ನಿಯೋಜನೆ ಮಾಡಿ ದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಬೇಕಾಗಿದೆ ಎಂದು ಡಿಸಿ ದರ್ಶನ್ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಈಜುಕೊಳದಲ್ಲಿ ಸ್ವಂತ ಕೋಚ್ಗಳನ್ನು ಕರೆದುಕೊಂಡು ಹೋಗಿ ತರಬೇತಿ ಪಡೆಯಲು ಅವಕಾಶ ಇದೆ. ಅಲ್ಲಿ ತರಬೇತಿ ಪಡೆದು ಸ್ವಂತ ಕೋಚ್ ಇಲ್ಲದೆ ಎಮ್ಮೆಕೆರೆ ಈಜುಕೊಳದಲ್ಲಿ ಅಭ್ಯಾಸ ನಡೆಸಲಿ. ಈಜುಪಟುಗಳ ಸ್ವಂತ ಕೋಚ್ ಬೇಡಿಕೆಯನ್ನು ಹೊರತುಪಡಿಸಿ ಬಹು ತೇಕ ಬೇಡಿಕೆ ಗಳನ್ನು ಈಡೇರಿಸಲಾಗಿದೆ. ಈಜುಪಟು ಗಳ ಬೇಡಿಕೆಗಳಿಗೆ ಸಂಬಂಧಿಸಿ ಚರ್ಚಿಸಲು ಸಭೆ ಕರೆ ಯಲು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗುವುದು ಎಂದರು.
ಅಮೆರಿಕ ವೀಸಾ ನಿರಾಕರಣೆ: ಆಂಧ್ರ ವೈದ್ಯೆ ಆತ್ಮಹತ್ಯೆ
ಹೈದರಾಬಾದ್: ಅಮೆರಿಕ ವೀಸಾ ನಿರಾಕರಣೆಯಿಂದ ಮನನೊಂದ 35 ವರ್ಷದ ವೈದ್ಯರೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಪದ್ಮರಾವ್ ನಗರದಲ್ಲಿ ನಡೆದಿದೆ. ಮೃತ ವೈದ್ಯೆಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿ ಕೆ.ರೋಹಿಣಿ ಎಂದು ಗುರುತಿಸಲಾಗಿದ್ದು, ಅವರು 9 ವರ್ಷಗಳ ಹಿಂದೆ ರಶ್ಯದಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದರು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಚಿಲ್ಕಲ್ಗುಡ ಸಬ್ ಇನ್ಸ್ ಪೆಕ್ಟರ್ ಜೆ.ರಾಕೇಶ್, “ಅಮೆರಿಕದಲ್ಲಿ ವೈದ್ಯಕೀಯ ವೃತ್ತಿ ನಡೆಸಬೇಕು ಎಂಬುದು ರೋಹಿಣಿಯ ಸುದೀರ್ಘ ಕಾಲದ ಬಯಕೆಯಾಗಿತ್ತು. ಅವರು ಅದಕ್ಕಾಗಿ ಸುಮಾರು ಎಂಟು ವರ್ಷಗಳಿಂದ ಅರ್ಹತಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಅದರಲ್ಲಿ ಉತ್ತಮ ಅಂಕಗಳನ್ನೂ ಗಳಿಸಿದ್ದ ಅವರು, ಬಳಿಕ ವಿದೇಶಕ್ಕೆ ತೆರಳುವ ಅವಕಾಶವನ್ನೂ ಪಡೆದಿದ್ದರು. ಆದರೆ, ಎರಡು ತಿಂಗಳ ಹಿಂದೆ ಅವರ ವೀಸಾ ಮನವಿ ತಿರಸ್ಕೃತಗೊಂಡಿತ್ತು. ಇದರಿಂದ ಅವರು ತೀರಾ ಬೇಸರಗೊಂಡಿದ್ದರು. ಇದೇ ವೇಳೆ ಅವರೆದುರು ವಿವಾಹ ಪ್ರಸ್ತಾವವೊಂದೂ ಮಂಡನೆಯಾಗಿತ್ತು. ಇದರಿಂದ ಅವರು ಮತ್ತಷ್ಟು ಖಿನ್ನರಾಗಿದ್ದರು” ಎಂದು ತಿಳಿಸಿದ್ದಾರೆ. ಪದ್ಮರಾವ್ ನಗರದಲ್ಲಿ ಕಳೆದ ಏಳೆಂಟು ವರ್ಷಗಳಿಂದ ರೋಹಿಣಿ ಏಕಾಂಗಿಯಾಗಿಯೇ ವಾಸಿಸುತ್ತಿದ್ದರು. ಅವರ ಪೋಷಕರು ಆಗಾಗ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಶುಕ್ರವಾರ ಅವರು ವಾಸಿಸುತ್ತಿದ್ದ ಮನೆಯ ಮನೆಯ ಬಾಗಿಲನ್ನು ಬಡಿದಾಗ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕುರಿತು ಗುಂಟೂರಿನಲ್ಲಿರುವ ಅವರ ಸಂಬಂಧಿಕರಿಗೆ ವಾಚ್ಮ್ಯಾನ್ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕುಟುಂಬದ ಸದಸ್ಯರು ಆಕೆಯ ನಿವಾಸಕ್ಕೆ ಧಾವಿಸಿ ಬಂದಿದ್ದಾರೆ. ಮನೆಯ ಬಾಗಿಲು ಒಡೆದು ಒಳಗೆ ಹೋದಾಗ, ಆಕೆ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತ ರೋಹಿಣಿ ತಾವು ನಿತ್ಯ ಸೇವಿಸುತ್ತಿದ್ದ ನಿದ್ರೆ ಮಾತ್ರೆಯನ್ನು ಅತಿಯಾಗಿ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಶನಿವಾರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಪ್ರವಾಸಿಗರ ಆಕರ್ಷಣೀಯ ತಾಣ ಹೊನ್ನಾವರ
ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ಹಿನ್ನೀರು ಪ್ರದೇಶವು ಕರ್ನಾಟಕದ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಶರಾವತಿ ನದಿಯು ಅರಬ್ಬಿ ಸಮುದ್ರವನ್ನು ಸೇರುವ ಸ್ಥಳದಲ್ಲಿ ರೂಪುಗೊಂಡಿರುವ ಮತ್ತು ಇದರ ರಮಣೀಯ ಸೌಂದರ್ಯದಿಂದಾಗಿ ಇದನ್ನು ‘ಮಿನಿ ಕೇರಳ’ ಎಂದೇ ಕರೆಯಲಾಗುತ್ತಿದೆ. ಹೊನ್ನಾವರವು ತೂಗು ಸೇತುವೆಗಳು, ಕರಾವಳಿ ಪಾಕಪದ್ಧತಿ, ಶರಾವತಿ ಕಾಂಡ್ಲಾ ಮ್ಯಾಂಗ್ರೋವ್ ಕಾಡುಗಳು ಇರುವುದರಿಂದ ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವಾಗಿ ಗುರುತಿಸಲ್ಪಟ್ಟಿದೆ. ಶರಾವತಿ ಹಿನ್ನೀರಿನ ಪ್ರದೇಶವು ಕನ್ನಡಿಯಂತಹ ನೀರಿನ ಪ್ರತಿಬಿಂಬಗಳು ಮತ್ತು ಮುಸ್ಸಂಜೆ ಹಾಗೂ ಸೂರ್ಯೋದಯದ ಅದ್ಭುತ ನೋಟಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ, ಹಿನ್ನೀರಿನಲ್ಲಿ ದೋಣಿ ವಿಹಾರ ಅತ್ಯಂತ ಜನಪ್ರಿಯ ಚಟುವಟಿಕೆಯಾಗಿದೆ. ಖಾಸಗಿ ಅಥವಾ ಹಂಚಿಕೆಯ ದೋಣಿಗಳಲ್ಲಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳು ಮತ್ತು ಸಣ್ಣ ಮೀನುಗಾರಿಕೆ ಹಳ್ಳಿಗಳ ನಡುವೆ ವಿಹಾರ ಮಾಡುವ ಮೂಲಕ ಪ್ರಾಕೃತಿಕ ಸೊಬಗನ್ನು ಸವಿಯಬಹುದಾಗಿದೆ. ಅಲ್ಲದೆ, ದೋಣಿ ವಿಹಾರದ ಮೂಲಕ 16ನೇ ಶತಮಾನದ ಐತಿಹಾಸಿಕ ಬಸವರಾಜ ದುರ್ಗ ಕೋಟೆಯಿರುವ ದ್ವೀಪಕ್ಕೂ ಭೇಟಿ ನೀಡಬಹುದಾಗಿದೆ. ಶರಾವತಿ ಮ್ಯಾಂಗ್ರೋವ್ ಬೋರ್ಡ್ವಾಕ್: ಕಾಂಡ್ಲಾ ವನ, ‘ಮ್ಯಾಂಗ್ರೋವ್ ಬೋರ್ಡ್ ವಾಕ್’ ಎಂದೂ ಕರೆಯಲ್ಪಡುವ ಇದು ಹೊನ್ನಾವರದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಮತ್ತು ಸಮಯ ಕಳೆಯಲು ಪ್ರಕೃತಿ ಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ. ಈ ವಿಶಿಷ್ಟವಾದ ಮರದ ನಡಿಗೆದಾರಿಯು ಹೊನ್ನಾವರ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಪ್ರದೇಶದಲ್ಲಿನ ಪ್ರಾಣಿ ಮತ್ತು ಸಸ್ಯವರ್ಗವನ್ನು ಉಲ್ಲೇಖಿಸುವ ಫಲಕಗಳು ಮ್ಯಾಂಗ್ರೋವ್ಗಳ ಬಗ್ಗೆ ಸಂದರ್ಶಕರಿಗೆ ತಿಳಿಸುತ್ತವೆ. ಹೊನ್ನಾವರವು ಮಂಗಳೂರಿನಿಂದ 180 ಕಿ.ಮೀ. ದೂರದಲ್ಲಿದ್ದರೆ, ಗೋವಾದಿಂದ 166 ಕಿ.ಮೀ. ದೂರದಲ್ಲಿದೆ. ಅಲ್ಲದೆ ಇಲ್ಲಿಗೆ ಬೆಂಗಳೂರು, ಮಂಗಳೂರು ಮತ್ತು ಮುಂಬೈ, ಗೋವಾದಿಂದ ನೇರ ರೈಲು ಸಂಪರ್ಕವನ್ನೂ ಹೊಂದಿದೆ. ಭೇಟಿ ನೀಡಲು ಉತ್ತಮ ಸಮಯ: ಕರಾವಳಿ ಪಟ್ಟಣ ಹೊನ್ನಾವರಕ್ಕೆ ಭೇಟಿ ನೀಡಲು ಅಕ್ಟೋಬರ್ನಿಂದ ಫೆಬ್ರವರಿ ಉತ್ತಮ ಸಮಯವಾಗಿದೆ. ಈ ಅವಧಿಯಲ್ಲಿ ವಾತಾವರಣವು ಪ್ರವಾಸಿಗರ ಭೇಟಿಗೆ ಹೆಚ್ಚು ಅನುಕೂಲವಾಗಿರುತ್ತದೆ.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 24ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಇದೀಗ ಸದ್ಯ ಮಳೆ ಆರ್ಭಟ ಕಡಿಮೆಯಾಗಿದೆ. ಈಗಾಗಲೇ ಮುಂಗಾರು ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 24) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್ಎಸ್) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು
Mangaluru|ಸಂತ ಅಲೋಶಿಯಸ್ ಉರ್ವಾದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕ ಬೆಂಜಮಿನ್ ಪಿಂಟೋ, ಶಾಲಾ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ,ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್, ಸುಧಾಕರ್ ಮತ್ತು ಹರಿಣಾಕ್ಷಿ ಇವರು ಶಾಲಾ ವತಿಯಿಂದ ಅಭಿನಂದಿಸಿ ಶುಭ ಹಾರೈಸಿದರು.
ಸಿಎಂ ಬದಲಾವಣೆ : ಆರು ಜನರ ತೀರ್ಮಾನವೇ ಫೈನಲ್, 3-2 ಅಂತರದ ಅಭಿಪ್ರಾಯ ವ್ಯತ್ಯಾಸ - ಸಮಸ್ಯೆ ಇನ್ನಷ್ಟು ಜಟಿಲ?
Power sharing in Karnataka : ಸಿದ್ದರಾಮಯ್ಯನವರ ಎರಡನೇ ಅವಧಿಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿಕೊಳ್ಳುತ್ತಿದ್ದಂತೆಯೇ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ. ಎರಡು ಬಣಗಳ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗುತ್ತಿದ್ದಾರೆ. ಈ ನಡುವೆ, ಆರು ಜನರು, ಸಿಎಂ ಬದಲಾವಣೆ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಜರಿ ಅಂಗಡಿಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿಯವರೆಗೆ ಸಾಧಕರೊಬ್ಬರ ಯಶೋಗಾಥೆ
ಕುಂದಾಪ್ರ ಕನ್ನಡಕ್ಕೆ ಮೊದಲ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿ, ಬ್ಯಾರಿ ಭಾಷೆಯಲ್ಲಿ ಮೊದಲ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಯಾಕೂಬ್ ಖಾದರ್ ಗುಲ್ವಾಡಿ
ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿರೋಧಿಸಿ ಪ್ರತಿಭಟನೆ: ಪೊಲೀಸರ ಮೇಲೆ 'ಪೆಪ್ಪರ್ ಸ್ಪ್ರೇ' ಆರೋಪ, 15 ಮಂದಿ ಬಂಧನ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ವಿರೋಧಿಸಿ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು 15 ಜನರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರು ಸಿಬ್ಬಂದಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಇದರಿಂದ ಘರ್ಷಣೆ ನಡೆಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲವು ಪ್ರತಿಭಟನಾಕಾರರು ಇಂಡಿಯಾ ಗೇಟ್ ಬಳಿ ಸಿ ಹೆಕ್ಸಾಗನ್ ಪ್ರದೇಶಕ್ಕೆ ನುಗ್ಗಿ ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದರು. ನಾವು ಆಂಬ್ಯುಲೆನ್ಸ್ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆ ಅವರಿಗೆ ತುರ್ತಾಗಿ ಹೋಗಬೇಕಿದೆ ಎಂದು ತಿಳಿಸಿದರೂ , ಅವರು ಆಕ್ರೋಶಗೊಂಡರು. ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು ಎಂದು ಅರಿತ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರಿಗೆ ಹಿಂದೆ ಸರಿಯುವಂತೆ ಸಲಹೆ ನೀಡಿದರು. ಆದರೆ, ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಪೆಪ್ಪರ್ ಸ್ಪ್ರೇ ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಮೂರರಿಂದ ನಾಲ್ಕು ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ತುಂಬಾ ಅಸಾಮಾನ್ಯವಾಗಿತ್ತು. ಮೊದಲ ಬಾರಿಗೆ ಪ್ರತಿಭಟನಾಕಾರರು ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದರು ಎಂದು ದಿಲ್ಲಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹ್ಲಾ ಹೇಳಿದ್ದಾರೆ.
ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ್ಲ. ಅದು ನಮಗೆ ಇಷ್ಟವಾಗದಿದ್ದರೆ ಸಂಬಂಧಪಟ್ಟ ವಿಷಯಗಳಿಗೆ ಸೀಮಿತವಾಗಿ ಉತ್ತರ ನೀಡಬಹುದು. ಆದರೆ ಬರೆದವರ ವ್ಯಕ್ತಿಗತ ನಿಂದನೆ, ಅವಹೇಳನ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ಅಂದರೆ ಏನು ಎಂಬ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳು ಬಂದಿವೆ. ಬರುತ್ತಿವೆ. ಉಳಿದುದೇನೇ ಇರಲಿ, ಈ ಜನತಂತ್ರ ವ್ಯವಸ್ಥೆಯ ಮೂಲ ಸ್ವರೂಪವೆಂದರೆ ಇಲ್ಲಿ ಮುಕ್ತ ಮಾತುಕತೆಗೆ ಮೊದಲ ಆದ್ಯತೆ. ಹಲವಾರು ಭಾಷೆ, ಮತ ಧರ್ಮಗಳು, ಸಂಸ್ಕೃತಿಗಳು ನೆಲೆಗೊಂಡಿರುವ ನಮ್ಮ ದೇಶದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ರಾಜಕೀಯ, ತಾತ್ವಿಕ ಮತಭೇದವನ್ನು ಪರಸ್ಪರ ಮಾತುಕತೆ, ಸಂವಾದ ಮೂಲಕ ಬಗೆಹರಿಸುವುದು ಈ ವ್ಯವಸ್ಥೆಯ ಜೀವ ಸತ್ವ. ಇದು ಉಳ್ಳವರ ಪ್ರಜಾಪ್ರಭುತ್ವವಾದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಚರ್ಚೆ, ಸಂವಾದಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ಪ್ರತೀತಿ ಇದಕ್ಕಿದೆ. ಆದರೆ, ಈ ಸಂವಾದ ಸಂಸ್ಕೃತಿಯೇ ಈಗ ಅಪಾಯದಲ್ಲಿದೆ. ಭಿನ್ನ ಅಭಿಪ್ರಾಯಗಳನ್ನು ಹೊಂದಿದವರು ಪರಸ್ಪರ ಮಾತನಾಡುವುದೇ ಅಪರೂಪವಾದ ದಿನಗಳಿವು. ಚರ್ಚೆ, ಸಂವಾದಗಳನ್ನು ಇಷ್ಟಪಡದಿರುವವರು ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಈ ಅಸಹನೆ ಯಾವ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದತ್ತ ಕಣ್ಣು ಹಾಯಿಸಿದರೆ ಗೊತ್ತಾಗುತ್ತದೆ. ಯಾವುದೇ ವೈಯಕ್ತಿಕ ಪರಿಚಯ, ಜಗಳ ದ್ವೇಷ ಇಲ್ಲದಿದ್ದರೂ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಯಾವುದೇ ಸ್ಟೇಟಸ್ ಹಾಕಿದರೆ ಸಾಕು ಅದನ್ನು ವಿರೋಧಿಸುವವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಅದರ ಬದಲಿಗೆ ಸ್ಟೇಟಸ್ ಹಾಕಿದವರ ಮೇಲೆ ವೈಯಕ್ತಿಕ ದಾಳಿಗೆ ಇಳಿಯುತ್ತಾರೆ. ಅತ್ಯಂತ ಅವಾಚ್ಯ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡುತ್ತಾರೆ. ಇದಕ್ಕೆ ಕಾರಣವೆಂದರೆ ಯಾವುದೇ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಅವರಿಗಿರುವುದಿಲ್ಲ ಅಥವಾ ಅವರು ಪ್ರತಿಪಾದಿಸುವ ಸಿದ್ಧಾಂತಕ್ಕೂ ಆ ಸಾಮರ್ಥ್ಯ ಇರುವುದಿಲ್ಲ. ಆಗ ಅವರು ಅನುಸರಿಸುವ ಮಾರ್ಗ ಅಶ್ಲೀಲ ಶಬ್ದಗಳ ಧಾರಾಳ ಬಳಕೆ. ಇಂಥ ಹೊಲಸು ಶಬ್ದಗಳನ್ನು ಬಳಸಿ ಅವರ ರಾಜಕೀಯ ಇಲ್ಲವೇ ಸಾಮಾಜಿಕ ಅಥವಾ ಸೈದ್ಧಾಂತಿಕ ವಿರೋಧಿಗಳ ಬಾಯಿ ಮುಚ್ವಿಸಲು ಯತ್ನಿಸುತ್ತಾರೆ. ಇಂಥವರ ಜೊತೆಗೆ ಯಾಕೆ ಕಿತ್ತಾಡುವುದೆಂದು ನಾವು ಮೌನವನ್ನು ತಾಳುತ್ತೇವೆ. ಈ ರೀತಿ ಅಕ್ಷರ ಗೂಂಡಾಗಿರಿಯ ಮೂಲಕ ಸೈದ್ಧಾಂತಿಕ ವಿರೋಧಿಗಳ ಧ್ವನಿ ಯಾರಿಗೂ ಕೇಳದಂತೆ ಮಾಡುವುದು ಇವರ ಮಸಲತ್ತು. ನಮ್ಮ ನೆಲದಲ್ಲಿ ಅಸಹನೆ, ದ್ವೇಷ, ಹೊಸದಲ್ಲ. ಯಾರು ಏನೇ ಹೇಳಲಿ ಇಲ್ಲಿ ಸಂವಾದಗಳು ನಡೆದದ್ದು ಬಹಳ ಅಪರೂಪ. ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳನ್ನು ಮತ್ತು ಅಸಮಾನತೆ ವಿರೋಧಿಸುವವರನ್ನು ಈ ವ್ಯವಸ್ಥೆ ಸಹಿಸುವುದಿಲ್ಲ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಸಮಾಜ ಸುಧಾರಣೆಗೆ ಮುಂದಾದ ಬಸವಣ್ಣನವರನ್ನು ಈ ವ್ಯವಸ್ಥೆ ಬಲಿ ತೆಗೆದುಕೊಂಡಿತು. ಅದಕ್ಕಿಂತ ಮೊದಲು ಚಾರ್ವಾಕರನ್ನು ಮತ್ತು ಬೌದ್ಧ ಹಾಗೂ ಜೈನ ಧರ್ಮಗಳನ್ನು ನಾಶ ಮಾಡಿದರು. ಅವು ಈಗ ಹೇಗೋ ಬದುಕಿ ಉಸಿರಾಡುತ್ತಿವೆ. ಮಹಾರಾಷ್ಟ್ರದ ಸಂತ ತುಕಾರಾಮ ಮತ್ತು ಸಂತರು (ಶಿವಾಜಿ ಸಾವು ಕೂಡ ನಿಗೂಢ) ಇವರ ಅಸಹನೆಗೆ ಬಲಿಯಾದರು. ಸ್ವಾತಂತ್ರ್ಯ ನಂತರ ಮಹಾತ್ಮಾ ಗಾಂಧಿಯವರು ಇಂಥವರಿಂದಲೇ ಕೊಲ್ಲಲ್ಪಟ್ಟರು. ಕೋಮುವಾದಿಗಳು ಪ್ರಾಬಲ್ಯ ಗಳಿಸಿದ ನಂತರ ಅಸಹನೆಯ, ದೈಹಿಕ ದಾಳಿಯ ಘಟನೆಗಳು ಹೆಚ್ಚಾಗುತ್ತಲೇ ಇವೆ. ತಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳದವರನ್ನು ಮುಗಿಸುತ್ತಲೇ ಬಂದಿದ್ದಾರೆ. ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ಮೇಲೆ ಅವರ ಕಚೇರಿಯಲ್ಲೇ ಹಲ್ಲೆ ಮಾಡಿದರು. ಅಂತರ್ರಾಷ್ಟ್ರೀಯ ಖ್ಯಾತಿಯ ಕಲಾವಿದ ಎಂ.ಎಫ್.ಹುಸೇನ್ ಅವರು ರಚಿಸಿದ ಕಲಾಕೃತಿಗಳನ್ನು ನೆಪವಾಗಿಟ್ಟುಕೊಂಡು ಕಂಡ, ಕಂಡಲ್ಲೆಲ್ಲ ಅವರ ಮೇಲೆ ಹಲ್ಲೆ ಮಾಡಿದರು. ಕೊನೆಗೆ ಹತಾಶರಾದ ಹುಸೇನ್ ದುಬೈಗೆ ಹೋಗಿ ನೆಲೆಸಿದರು. ಹರ್ಯಾಣದ ಜೀತದಾಳುಗಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಜಾರ್ಖಂಡ್ ಮತ್ತು ದಿಲ್ಲಿಯಲ್ಲಿ ಹಲ್ಲೆ ಮಾಡಿ ನೆಲದ ಮೇಲೆ ಎಳೆದಾಡಿ ಹೊಡೆದರು. ಅಹ್ಮದಾಬಾದ್ನಲ್ಲಿ ಸರ್ದಾರ್ ಸರೋವರ ಅಣೆಕಟ್ಟೆಯ ಸಂತ್ರಸ್ತರ ಪರವಾಗಿ ಹೋರಾಟವನ್ನು ರೂಪಿಸಲು ಬಂದಿದ್ದ ಮೇಧಾ ಪಾಟ್ಕರ್ ಅವರ ಮೇಲೆ ಗೂಂಡಾಗಿರಿ ನಡೆಸಿದರು. ನಮ್ಮ ನಾಡಿನ ಹಿರಿಯ ಲೇಖಕ ಡಾ.ಯು.ಆರ್.ಅನಂತಮೂರ್ತಿ ಅವರಿಗೆ ವಿಪರೀತ ಮಾನಸಿಕ ಹಿಂಸೆ ನೀಡಿದರು. ಅವರು ಕೊನೆಯುಸಿರೆಳೆದಾಗ ಪಟಾಕಿ ಹಾರಿಸಿ ಸಂಭ್ರಮಿಸಿದರು. ಗಿರೀಶ್ ಕಾರ್ನಾಡ್ ಅವರಿಗೂ ಸಾಕಷ್ಟು ಕಿರುಕುಳ ನೀಡಿದರು. ಇಂಥ ನೂರಾರು ಉದಾಹರಣೆಗಳನ್ನು ನೀಡಬಹುದು. ಈ ಕಹಿ ಅನುಭವ ನನ್ನದೂ ಕೂಡ. ಸುಮಾರು ನಲವತ್ತೆಂಟು ವರ್ಷಗಳಿಂದ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬರೆಯಲು ಆರಂಭಿಸಿದ ನಾನು ಎಡಪಂಥೀಯ ವಿಚಾರಗಳ ಪ್ರಭಾವದ ಕಾರಣದಿಂದ ಕೋಮುವಾದ ಮತ್ತು ಜಾತಿವಾದಗಳನ್ನು ವಿರೋಧಿಸುತ್ತಲೇ ಬಂದೆ. ಆಗೆಲ್ಲ ಈ ಮೊಬೈಲು, ಫೇಸ್ ಬುಕ್ ಇದಾವುದೂ ಇರಲಿಲ್ಲ. ಆದರೆ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಪತ್ರಿಕೆಗಳು ಅಲ್ಲಲ್ಲಿ ಪ್ರಕಟವಾಗುತ್ತಿದ್ದವು. ನಾನು ನಮ್ಮ ಬಿಜಾಪುರ ಜಿಲ್ಲೆಯ ಅಂಥ ಸಣ್ಣ ಪತ್ರಿಕೆಗಳಿಗೆ ಆಗಾಗ ಬರೆಯುತ್ತಿದ್ದೆ. ಆಗ ಕೋಮುವಾದಿ ಸಂಘಟನೆಗಳ ಪ್ರಭಾವ ಅಷ್ಟೊಂದು ಇರಲಿಲ್ಲ. ಆದರೂ ಅಲ್ಲಲ್ಲಿ ಕೆಲವು ಭಕ್ತರಿದ್ದರು. ಅವರು ಸ್ಥಳೀಯ ಪತ್ರಿಕೆಗಳಲ್ಲೇ ನನಗೆ ಉತ್ತರ ನೀಡಲು ಪ್ರಯತ್ನಿಸುತ್ತಿದ್ದರು. ಮುಂದೆ ನಾನು ಖಾದ್ರಿ ಶಾಮಣ್ಣನವರು ಸಂಪಾದಕರಾಗಿದ್ದಾಗ ಆಗ ರಾಜ್ಯ ಮಟ್ಟದ ಬಹು ಪ್ರಸಾರ ಸಂಖ್ಯೆಯ ದಿನ ಪತ್ರಿಕೆಯಾಗಿದ್ದ ‘ಸಂಯುಕ್ತ ಕರ್ನಾಟಕ’ವನ್ನು ಸೇರಿ ಅಲ್ಲೂ ಆಗಾಗ ಬರೆಯಲು ಆರಂಭಿಸಿದೆ. ಆಗಲೂ ಸಹಿಸಲಾಗದ ಕೋಮುವಾದಿಗಳು ವೈಯಕ್ತಿಕವಾಗಿ ದಾಳಿ ಮಾಡುತ್ತಲೇ ಬಂದರು. ನಾನು ‘ಸಂಯುಕ್ತ ಕರ್ನಾಟಕ’ದಲ್ಲಿ ಬರೆಯುತ್ತಿದ್ದ ‘ವಿಶ್ವ ಪ್ರದಕ್ಷಿಣೆ’ ಎಂಬ ಅಂಕಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಂಪಾದಕರಿಗೂ ಪತ್ರ ಬರೆಯುತ್ತಿದ್ದರು. ಉತ್ತರಿಸಲಾಗದ ಸವಾಲುಗಳು ಎದುರಾದಾಗ ಪ್ರಶ್ನಿಸಿದವರ ಮೇಲೆ ಅಕ್ಷರ ಗೂಂಡಾಗಿರಿಗೆ ಇಳಿಯುತ್ತಾರೆ. ಅದಕ್ಕೂ ಮಣಿಯದಿದ್ದರೆ ದೈಹಿಕ ದಾಳಿಗೆ ಮುಂದಾಗುತ್ತಾರೆ. ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರರಾದ ಡಾ.ನರೇಂದ್ರ ದಾಭೋಲ್ಕರ್, ಶಿವಾಜಿಯ ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಕೊಲ್ಲಾಪುರದ ಹೆಸರಾಂತ ಲೇಖಕ ಗೋವಿಂದ ಪನ್ಸಾರೆ, ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂದು ಪುರಾವೆಗಳ ಸಹಿತ ಪ್ರತಿಪಾದಿಸಿದ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ, ಕೋಮುವಾದ, ಮನುವಾದದ ವಿರುದ್ಧ ನೇರ ವೈಚಾರಿಕ ಸಮರವನ್ನು ಸಾರಿದ ಗೌರಿ ಲಂಕೇಶ್ ಇವರೆಲ್ಲರೂ ಬಲಿಯಾಗಿದ್ದು ಇದೇ ಗೋಡ್ಸೆ ಮನಸ್ಥಿತಿಯ ಅಸಹನೀಯ ಅತಿರೇಕಕ್ಕೆ ಎಂಬುದು ಗುಟ್ಟಿನ ಸಂಗತಿಯಲ್ಲ. ಸಾಮಾಜಿಕ ಜೀವನದಲ್ಲಿ ಇಂಥ ಅಸಹನೆ ಅತಿರೇಕಕ್ಕೆ ಹೋದಾಗ ಕೆಲವು ಸಲ ಸಾಧು, ಸಂತರು ಅದನ್ನು ತಡೆಯಲು ಮಧ್ಯಪ್ರವೇಶ ಮಾಡುತ್ತಾರೆ. ಆದರೆ ಈಗಿನ ದುರಂತವೆಂದರೆ ಈ ಸ್ವಾಮಿಗಳು, ಮಠಾಧೀಶರು ಈಗ ಕೋಮುವಾದಿಗಳ ಅಸಹನೆಯ ಅಸ್ತ್ರವಾಗಿ ದುರ್ಬಳಕೆಯಾಗುತ್ತಿದ್ದಾರೆ. ಅಯೋಧ್ಯೆಯ ಬಾಬರಿ ಮಸೀದಿ ತಮ್ಮ ಕಣ್ಣೆದುರಿಗೇ ನಾಶವಾಗುತ್ತಿರುವಾಗಲು ಉಡುಪಿಯ ಮಠಾಧೀಶರಾಗಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಮೌನ ವೀಕ್ಷಕರಾಗಿದ್ದರು. ಈಗ ಕೋಮುವಾದಿಗಳ ಹೊಸ ಅಸ್ತ್ರವೆಂದರೆ ಕನೇರಿ ಸ್ವಾಮಿಗಳು ಅಂದರೆ ತಪ್ಪಿಲ್ಲ. ಬಸವಣ್ಣನವರ ಸಂದೇಶವನ್ನು ನಾಡಿನ ಎಲ್ಲ ಜನರಿಗೆ ತಲುಪಿಸಲು ಯಾತ್ರೆ ಹೊರಟ ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ, ಅಸಭ್ಯ ಅವಹೇಳನಕಾರಿ ಮಾತುಗಳನ್ನು ಆಡಿದ ಕನೇರಿ ಸ್ವಾಮಿಗಳ ವಿರುದ್ಧ ಉತ್ತರ ಕರ್ನಾಟಕದ ಲಿಂಗಾಯತರು ಮಾತ್ರವಲ್ಲ ಜನ ಸಾಮಾನ್ಯರು ಸಿಡಿದೆದ್ದಿದ್ದಾರೆ. ಆದರೆ, ಇನ್ನೊಂದೆಡೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತ ಸ್ವಾಮಿಗಳನ್ನು ಬೈದ ಕನೇರಿ ಸ್ವಾಮಿಯ ಪರವಾಗಿ ಕೆಲವರು ಪ್ರತಿಭಟಿಸುತ್ತಿದ್ದಾರೆ. ಇದೊಂದು ವಿಚಿತ್ರ ಕಾಲ. ಬೈಯಿಸಿ ಕೊಂಡವರ ಬದಲಿಗೆ ಬೈದ ಸ್ವಾಮಿಯ ಪರವಾಗಿ ಚಳವಳಿಗಳು ನಡೆದಿವೆ. ಇದು ನಾಡಿನ ದುರಂತ. ಒಂದು ಕಾಲವಿತ್ತು, ಕಾವಿ ಧರಿಸಿದ ಸ್ವಾಮಿಗಳು, ಮಠಾಧೀಶರು, ಸಾಧು ಸಂತರ ಬಗ್ಗೆ ಗೌರವ ಭಾವನೆ ಮೂಡುತ್ತಿತ್ತು. ಅವರ ಬಾಯಿಯಿಂದ ಕೆಟ್ಟ ಮಾತುಗಳು ಬರುತ್ತಿರಲಿಲ್ಲ. ಬಿಜಾಪುರದ ಸಿದ್ಧೇಶ್ವರ ಸ್ವಾಮಿಗಳು ಕೋಮುವಾದಿಗಳ ಪರ ಸೌಮ್ಯ ಧೋರಣೆಯನ್ನು ಹೊಂದಿದವರು ಎಂಬ ಆರೋಪವಿದ್ದರೂ ಅವರೆಂದೂ ಯಾರಿಗೂ ಒರಟು ಮತ್ತು ಅಸಭ್ಯ ಭಾಷೆಯಲ್ಲಿ ಮಾತಾಡುತ್ತಿರಲಿಲ್ಲ. ಆದರೆ ಕೋಮುವಾದಿ ಸ್ವಾಮಿಯೊಬ್ಬ ಇವರ ಆಶ್ರಮದಲ್ಲೇ ತಯಾರಾಗಿ ಬಂದರು. ನೇರವಾಗಿ ಕೋಮುವಾದಿಗಳೊಂದಿಗೆ ಈ ಸ್ವಾಮಿ ಬಸವ ಪರ ಲಿಂಗಾಯತ ಮಠಾಧೀಶರನ್ನು ‘ಸೂ ಮಕ್ಕಳು’ ಎಂದು ಬಹಿರಂಗವಾಗಿ ಬೈದರು, ನಂತರವೂ ತಾನು ಆಡಿದ ಮಾತು ಬಿಜಾಪುರದ ಆಡು ಭಾಷೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಧಾರ್ಮಿಕ ಕ್ಷೇತ್ರದ ಇಂದಿನ ಸ್ಥಿತಿ. ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ್ಲ. ಅದು ನಮಗೆ ಇಷ್ಟವಾಗದಿದ್ದರೆ ಸಂಬಂಧಪಟ್ಟ ವಿಷಯಗಳಿಗೆ ಸೀಮಿತವಾಗಿ ಉತ್ತರ ನೀಡಬಹುದು. ಆದರೆ ಬರೆದವರ ವ್ಯಕ್ತಿಗತ ನಿಂದನೆ, ಅವಹೇಳನ ಮಾಡುವುದು ಸರಿಯಲ್ಲ. ಹೀಗೆ ವೈಯಕ್ತಿಕ ನಿಂದನೆ, ತೇಜೋವಧೆಗೆ ಇಳಿಯುವವರನ್ನು ಈಗ ವಾಟ್ ಆ್ಯಪ್ ಯುನಿವರ್ಸಿಟಿಯಿಂದ ಬಂದವರು ಎಂದು ಗುರುತಿಸಲಾಗುತ್ತದೆ. ಇಂಥ ಸೈದ್ಧಾಂತಿಕ ಹಿನ್ನೆಲೆಯ ಕರಾಳ ಶಕ್ತಿಗಳಿಂದ, ವ್ಯಕ್ತಿಗಳಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ. ಈ ಅಪಾಯದಿಂದ ಪ್ರಜಾಪ್ರಭುತ್ವವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.

24 C