ದೆಹಲಿ ಸ್ಫೋಟ ಆತ್ಮಹತ್ಯಾ ದಾಳಿಯಲ್ಲ? ಬಾಂಬ್ ಸಾಗಿಸಿದ ಉಗ್ರ ಮಾಡಿದ ಸಣ್ಣ ಯಡವಟ್ಟಿನಿಂದ ಇಷ್ಟು ದೊಡ್ಡ ಅನಾಹುತ ?!
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ.1ರ ಬಳಿ ಸಂಭವಿಸಿದ ಪ್ರಬಲವಾದ ಕಾರ್ ಬಾಂಬ್ ಸ್ಫೋಟವು ಆತ್ಮಹತ್ಯಾ ದಾಳಿಯಲ್ಲ ಎಂಬ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದಾರೆ. ಆದರೆ, ಈ ಅನಿಸಿಕೆಯೇ ಅಂತಿಮವಲ್ಲ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಆ ಮೂಲಗಳು ತಿಳಿಸಿವೆ. ಎಲ್ಲಿಗೋ ಸಾಗಿಸುತ್ತಿದ್ದ ಸ್ಫೋಟಕಗಳು ಆಕಸ್ಮಿಕವಾಗಿ ಸಿಡಿದಿವೆ ಎಂಬುದು ತಜ್ಞರ ಸದ್ಯದ ಅಭಿಪ್ರಾಯ. ಆ ಆಕಸ್ಮಿಕ ಸ್ಫೋಟಕ್ಕೆ ಆ ಬಾಂಬ್ ಜೋಡಿಸಿದಾತ ಮಾಡಿದ ಯಡವಟ್ಟೇ ಕಾರಣ ಎಂದಿರುವ ತಜ್ಞರು. ಏನದು ಆ ಯಡವಟ್ಟು?
ಬೆಂಗಳೂರಿನಲ್ಲಿ ‘ಸುರಂಗ ರಸ್ತೆ’ ಅಗತ್ಯತೆ ಕುರಿತು ರಾಜ್ಯ ಸರಕಾರಕ್ಕೆ ವರದಿ: ಎಂ.ಲಕ್ಷ್ಮಣ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉದ್ದೇಶಿಸಿರುವ ಸುರಂಗ ರಸ್ತೆಯ ಅಗತ್ಯತೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ರಾಜ್ಯ ಸರಕಾರಕ್ಕೆ ಸಿವಿಲ್ ಇಂಜಿನಿಯರ್ ತಜ್ಞರ ತಂಡವು ವರದಿ ಸಲ್ಲಿಸಿದೆ ಎಂದು ಭಾರತೀಯ ಇಂಜಿನಿಯರ್ ಗಳ ಸಂಸ್ಥೆ(ಐಇಐ) ರಾಜ್ಯ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹೇಳಿದ್ದಾರೆ. ಮಂಗಳವಾರ ನಗರದ ಭಾರತೀಯ ಇಂಜಿನಿಯರ್ ಗಳ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳ ಕುರಿತ ಚರ್ಚೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಶ್ವದಲ್ಲಿಯೇ ಸದ್ದು ಮಾಡಿದೆ. ಇಂತಹ ಸಂದರ್ಭದಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಈ ಸುರಂಗ ರಸ್ತೆಗಳಿಂದ ವಾಹನ ಸವಾರರಿಗೆ ಅನುಕೂಲವೇ ಹೆಚ್ಚಿದೆ. ಬೆಂಗಳೂರನ್ನು ಬಿಟ್ಟು ಹೊರಗಡೆ ಪ್ರಯಾಣ ಬೆಳೆಸುವವರ ಸಮಯವನ್ನು ಸುರಂಗ ರಸ್ತೆ ನಿರ್ಮಾಣದಿಂದ ಉಳಿಸಬಹುದಾಗಿದೆ. ಈಗಾಗಲೇ ದೇಶದಲ್ಲಿ ಹಲವು ಕಡೆ ಸುರಂಗ ರಸ್ತೆ ನಿರ್ಮಾಣಮಾಡಲಾಗಿದ್ದು, ಯಶಸ್ವಿಯೂ ಆಗಿದೆ. ಇಂತಹ ನೈಜ ಅಂಶಗಳು ನಮ್ಮ ಮುಂದೆ ಇದ್ದರೂ, ರಾಜಕೀಯ ಕಾರಣಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಒಳ್ಳೆಯದಲ್ಲ ಎಂದು ಹೇಳಿದರು. ರಾಜ್ಯ ಸರಕಾರ ಉದ್ದೇಶಿಸಿರುವ ಸುರಂಗ ರಸ್ತೆ ಬಗ್ಗೆ ಸಿವಿಲ್ ಇಂಜಿನಿಯರ್ ತಜ್ಞರು ಅಧ್ಯಯನ ನಡೆಸಿದ್ದಾರೆ. ಜನ ಸಮುದಾಯಕ್ಕೆ ತೊಂದರೆ ಆಗದಂತೆ ಭವಿಷ್ಯದಲ್ಲಿ ತುಂಬಾ ಅನುಕೂಲ ಆಗುವ ಅಂಶಗಳೇ ಇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗೆ ತಗಲುವ ವೆಚ್ಚ, ಸಮಯ, ಮಾರ್ಗಗಳು ಹೀಗೆ ಹಲವು ಅಂಶಗಳ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ಸುರಂಗ ರಸ್ತೆ ಯೋಜನೆ ಕೈಬಿಡಬೇಡಿ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು. ಸುರಂಗ ರಸ್ತೆಯಿಂದ ಲಾಲ್ಬಾಗ್ ಸೇರಿದಂತೆ ಹಲವರ ಆಸ್ತಿಪಾಸ್ತಿ ಹಾನಿ ಆಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ವಾಸ್ತವದಲ್ಲಿ ಆಸ್ತಿ ಹಾನಿ ಆಗಲ್ಲವೆಂದು ನಾನು ನಂಬಿದ್ದೇನೆ. ಸುರಂಗ ಮಾರ್ಗವೂ ಭೂಮಿ ಒಳಗೆ ಇರಲಿದೆ ಹೊರತು, ಮೇಲೆ ಯಾವುದೇ ಚಟುವಟಿಕೆ ಕಂಡುಬರುವುದಿಲ್ಲ.ಈಗಾಗಲೇ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಸುರಂಗ ಕಾಮಗಾರಿ ನಡೆಸಲಾಗಿತ್ತು.ಹೀಗಾಗಿ, ಯಾರು ಆತಂಕ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಲಕ್ಷ್ಮಣ್ ತಿಳಿಸಿದರು. ಈ ವೇಳೆ ಸಂಸ್ಥೆಯ ಡಾ.ರಂಗರೆಡ್ಡಿ, ಡಾ.ಎನ್.ಚಿಕ್ಕಣ್ಣ ಸೇರಿದಂತೆ ಪ್ರಮುಖರಿದ್ದರು. ಜಾಗೃತಿ ಮೂಡಿಸಲಿ: ‘ಸುರಂಗ ರಸ್ತೆಯಲ್ಲಿ ಬರೀ ಕಾರುಗಳು, ಶ್ರೀಮಂತರು ಹೋಗುತ್ತಾರೆ ಎನ್ನುವ ಸುಳ್ಳು ಅಂಶಗಳನ್ನು ಉದ್ದೇಶಪೂರಕವಾಗಿ ಹರಿಬಿಡಲಾಗಿದೆ. ಇಂತಹ ಸುಳ್ಳು, ತಪ್ಪು ಮಾಹಿತಿಯನ್ನು ರಾಜ್ಯ ಸರಕಾರ ನಿಯಂತ್ರಿಸುವ ಜತೆಗೆ, ಸುರಂಗ ಮಾರ್ಗದ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು’ -ಎಂ.ಲಕ್ಷ್ಮಣ್, ರಾಜ್ಯ ಕಾರ್ಯದರ್ಶಿ, ಭಾರತೀಯ ಇಂಜಿನಿಯರ್ಗಳ ಸಂಸ್ಥೆ(ಐಇಐ)
ಬೆಳಗಾವಿ ಅಧಿವೇಶನದಲ್ಲಿ ಭತ್ಯೆ, ಊಟ, ಕಾಫಿಯೂ ಬೇಡ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್
ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ, ಊಟ, ಕಾಫಿ ಸ್ವೀಕರಿಸುವುದಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಹೇಳಿದ್ದಾರೆ. ಮಂಗಳವಾರ ಈ ಕುರಿತು ಪತ್ರ ಬರೆದಿರುವ ಅವರು, ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಕಳೆದ ಬಾರಿ ನಡೆದ ಚಳಿಗಾಲದ ಅಧಿವೇಶನದ ವೇಳೆ ನಾನು ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಂತೆಯೇ ಈ ಬಾರಿಯೂ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಸರಕಾರ ನನಗೆ ನೀಡುವ ಯಾವುದೇ ತರಹದ ಭತ್ಯೆ (ಟಿಎ, ಡಿಎ) ಪಡೆಯುವುದಿಲ್ಲ. ವಸತಿ ವ್ಯವಸ್ಥೆ ಪಡೆಯುದಿಲ್ಲ ಮತ್ತು ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪ್ರಮುಖ ಧ್ವನಿಯಾಗಲು ಬೆಳಗಾವಿಯಲ್ಲಿ 25 ರಿಂದ 30 ಕೋಟಿ ರೂ.ವೆಚ್ಚ ಮಾಡಿ ಪ್ರತಿ ವರ್ಷವು ನಡೆಸುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ವೈಯಕ್ತಿಕ ಅಭಿಪ್ರಾಯ ನನ್ನದು. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರಕಾರ ತೆಗೆದುಕೊಂಡ ನಿರ್ಧಾರಗಳು ಏನು ಎಂಬ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಚರ್ಚೆ. ಮಾತುಗಳಿಂದ ಜನರ ಕಲ್ಯಾಣ ಅಸಾಧ್ಯ ಮತ್ತು ಕಟುಸತ್ಯವು ಹೌದು. ಇದು ಒಂದು ರೀತಿ ಕಾಲಹರಣ ಮಾಡಿದಂತೆಯೇ ಆಗುತ್ತಿದೆ ಮತ್ತು ಎರಡು ವಾರ ಪ್ರವಾಸ ಬಂದತೆಯೇ ಆಗುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇತ್ತೀಚಿಗೆ ಸತತ ಮಳೆ ಮತ್ತು ಪ್ರವಾಹ ಬಂದು ಲಕ್ಷಾಂತರ ರೈತರ ಕೋಟ್ಯಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದರೂ ಇಂದಿಗೂ ಸರಕಾರ ಒಂದು ನೈಯಾ ಪೈಸೆ ಬಿಡುಗಡೆ ಮಾಡಿಲ್ಲ.ಸಮಸ್ತ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು, ಬಡುವರು, ಕಾರ್ಮಿಕರು ಮತ್ತು ಜನ ಸಾಮಾನ್ಯರು ಹತ್ತು, ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ಪ್ರತಿನಿಧಿಯಾಗಿ ಶಾಸಕರೆಂಬ ಪಟ್ಟ ಹೊತ್ತು ವಿಧಾನಸಭೆ ಹೋಗಿರುವ ಎಂಎಲ್ಎ ಸಾಹೇಬರು ಕ್ಷೇತ್ರದ, ತಾಲೂಕಿನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಹೊಸ, ಹೊಸ ಕೆಲಸಗಳು ಮಾಡುವ ಮೂಲಕ ಕನಸು ನನಸು ಮಾಡುತ್ತಾರೆಂಬ ಭರವಸೆ ಹೊಂದಿದ್ದಾರೆ. ಆದರೆ, ನಾವಿಲ್ಲಿ ಸಮಯ ಸಿಕ್ಕರೆ ಬರಿ ಮಾತಾಡಿ ಕಾಡಿ, ಬೇಡಿ ಹೋಗುವುದೇ ಆಗುತ್ತಿದೆ. ಹೀಗಾಗಿ ಇಂತಹ ವೇಳೆ ಸರಕಾರ ನೀಡುವ ಈ ಅಧಿವೇಶನದ ವೇಳೆಯ ಯಾವುದೇ ತರಹದ ಸೌಲಭ್ಯ ಪಡೆಯದಿರಲು ಹಿಂದೆ ಹೇಳಿದಂತೆಯೇ ನಿರ್ಧಾರ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಂಪಾದಕೀಯ | ರಸ್ತೆ ಅಪಘಾತದ ಸಾವುಗಳಿಗೆ ಕೊನೆ ಯಾವಾಗ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Ukraine War: ಚಳಿಗಾಲ ಸಮಯದಲ್ಲಿ ದಿಢೀರ್ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ರಷ್ಯಾ ಮಾಸ್ಟರ್ ಪ್ಲಾನ್?
ಎಲ್ಲಿ ನೋಡಿದರೂ ರಕ್ತ, ಇತಿಹಾಸ ಸಾರುತ್ತಿದ್ದ ಸ್ಥಳಗಳ ನಾಶ... ಅಂದಹಾಗೆ ಇದು ರಷ್ಯಾ ಸೇನೆ ಕೊಟ್ಟ ಏಟಿಗೆ ಸಿಲುಕಿ ನರಳಿ ಹೋಗಿರುವ ಉಕ್ರೇನ್ ಪರಿಸ್ಥಿತಿ. ರಷ್ಯಾ ಮತ್ತು ಉಕ್ರೇನ್ ನಡುವೆ ರಣಭೀಕರ ಕಾಳಗ ನಡೆಯುತ್ತಿದ್ದು, ಇಬ್ಬರೂ ಬಡಿದಾಡಿ ಸಾಮಾನ್ಯರ ಜೀವ ತೆಗೆಯುತ್ತಿದ್ದಾರೆಂಬ ಆರೋಪ ಕೂಡ ಜೋರಾಗಿದೆ. ಇಷ್ಟೆಲ್ಲಾ ಒತ್ತಡದ ನಡುವೆ ಈಗ ಮತ್ತೊಂದು ಸಂಚಲನ ಸೃಷ್ಟಿ ಮಾಡುವ
ಸಿಎಂ ಪರಿಹಾರ ನಿಧಿಯಲ್ಲಿ ಹಣ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿಯ ಬಂಧನ
ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆಯಲು ನಕಲಿ ವೈದ್ಯಕೀಯ ದಾಖಲೆಗಳನ್ನು ನೀಡಿದ ಆರೋಪದಡಿ 59 ವರ್ಷದ ವ್ಯಕ್ತಿಯೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೆಲಮಂಗಲದ ಜಿ.ಧನಂಜಯ ಎಂದು ಗುರುತಿಸಲಾಗಿದೆ. ಆರೋಪಿಯು ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿ ಅವರಿಂದ ನಕಲಿ ಆಸ್ಪತ್ರೆ ಬಿಲ್ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಪಡೆದು ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಧನಂಜಯ ಶಿಕ್ಷಕರಾಗಿದ್ದು, ಯಶವಂತಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸಿ, ಅವರ ಮಾಹಿತಿಯನ್ನು ಬಳಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ಮೊತ್ತವನ್ನು ಪಡೆಯಲು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣ’ಕ್ಕೆ ಕಳಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಗೊತ್ತಾಗಿದೆ. ಪ್ರಕರಣದಲ್ಲಿ ಧನಂಜಯ ಒಬ್ಬನೇ ಈ ಕೆಲಸ ಮಾಡಿಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬವರ ಹೆಸರು ಕೂಡ ಪೊಲೀಸರ ತನಿಖೆಯಲ್ಲಿ ಕೇಳಿಬಂದಿದೆ. ಇದರಲ್ಲಿ ಕ್ಯಾತಣ್ಣ ಮತ್ತು ಇನ್ನೊಬ್ಬ ಶಂಕಿತ ವ್ಯಕ್ತಿ ನಿಧನರಾದ ನಂತರ ಧನಂಜಯ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿ, ಎರಡನೇ ಬಾರಿಗೆ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇನ್ನು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣ’ಕ್ಕೆ ಮೇ ತಿಂಗಳಲ್ಲಿ ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಆದರೆ, ಈ ಅಕ್ರಮದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲಿರಲಿಲ್ಲ. ನವೆಂಬರ್ 5ರಂದು ಆರೋಪಿ ಧನಂಜಯ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ನಕಲಿ ಅರ್ಜಿಗಳಲ್ಲಿ ಒಂದಕ್ಕೆ ಪರಿಹಾರ ಬಿಡುಗಡೆ ಮಾಡಲು ಯಾಕೆ ವಿಳಂಬವಾಗಿದೆ ಎಂದು ವಿಚಾರಿಸಲು ಬಂದಾಗ ಈ ಪ್ರಕರಣದ ಹಿಂದೆ ಧನಂಜಯ ಇರುವ ಬಗ್ಗೆ ತಿಳಿದು ಬಂದಿದೆ. ಅಧಿಕಾರಿಗಳು ಅವರನ್ನು ಈ ಬಗ್ಗೆ ಕೇಳಿದಾಗ ಸತ್ಯಾಂಶ ಹೊರಬಿದ್ದಿದೆ.
ಸೇಡಂ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ, ನ.11: ಸೇಡಂ ಪಟ್ಟಣಕ್ಕೆ ಖಾಚೂರು ಬಾಂದಾರು ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲಿಡಲಾಗಿದೆ. ಇದರಿಂದ ಬರುವ ದಿನಗಳಲ್ಲಿ ಪಟ್ಟಣದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಮಂಗಳವಾರ ಸೇಡಂ ಪಟ್ಟಣದ ಸರ್ವೇ ನಂ. 705ರ ಆಶ್ರಯ ಕಾಲನಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಸೇಡಂ ಪುರಸಭೆ ವತಿಯಿಂದ ಕೇಂದ್ರ ಅಮೃತ್ 2.0 ಯೋಜನೆಯಡಿ ಸೇಡಂ ಪಟ್ಟಣಕ್ಕೆ ಖಾಚೂರ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ (ಅಂದಾಜು ಮೊತ್ತ ರೂ. 47.85 ಕೋಟಿ ರೂ.) ಶಂಕುಸ್ಥಾಪನೆ ನೆರವೇಸಿಸಿ ಮಾತನಾಡಿದರು. ಸೇಡಂ ಪಟ್ಟಣಕ್ಕೆ ಈಗ ಸಟಪಟನಹಳ್ಳಿ ಬಾಂದಾರಿನ ನೀರು ಪೂರೈಕೆ ಇದ್ದರೂ ಅಲ್ಲಲ್ಲಿ ಸಮಸ್ಯೆಯಾಗುತ್ತಿರೋದು 2004 ರಲ್ಲೇ ಮೊದಲಿಗೆ ಶಾಸಕನಾದಾಗ ಗಮನಕ್ಕೆ ಬಂತು. ಇದೀಗ ಅವೆಲ್ಲಾ ಸಮಸ್ಯೆಗೆ ಕಾಯಂ ಪರಿಹಾರವಾಗಿ ಈ ಯೋಜನೆ ರೂಪಿಸಲಾಗಿದೆ. ಇದರಿಂದ ಸೇಡಂನಲ್ಲಿ ಇನ್ನು ಒಂದೂವರೆ ವರ್ಷದ ನಂತರ ಪ್ರತಿಯೊಬ್ಬರಿಗೂ 135 ಲೀಟರ್ ಶುದ್ಧ ನೀರು ಲಭ್ಯವಾಗಲಿದೆ ಎಂದರು. ಆಶ್ರಯ ಕಾಲನಿ, ಚಿಂಚೋಳಿ ರಸ್ತೆ, ಕಲಬುರಗಿ ರಸ್ತೆ ಸೇರಿದಂತೆ ಸೇಡಂನಲ್ಲಿ 5 ಕಡೆ ಹೊಸ ಮೇಲ್ಸ್ತರದ ಟ್ಯಾಂಕ್ಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ನೀರು ಸಂಗ್ರಹಿಸಿ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಸದರಿ ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರು, ಅಧಿಕಾರಿಗಳಿಗೆ ಅವರು ಖಡಕ್ ಸೂಚನೆ ನೀಡಿದರು. ಜಯದೇವ, ಕಿದ್ವಾಯಿ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇರ್ ಆಸ್ಪತ್ರೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಬಡವರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡದೆ ಸರಕಾರಿ ಸಂಸ್ಥೆಗಳಿಗೆ ಬಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಸೇಡಂ ಪಟ್ಟಣದಲ್ಲಿ ಒಳ ಚರಂಡಿ ಜಾಲ ಬಲವರ್ಧನೆಗೂ ಕ್ರಮಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಇನ್ನು 800 ಮೀಟರ್ ಕಾಮಗಾರಿ ಬಾಕಿ ಇದೆ. ಇದು ಜೋಡಣೆಯಾದಲ್ಲಿ ಒಳ ಚರಂಡಿ ಸಮಸ್ಯೆಯೂ ಬಗೆಹರಿಯಲಿದೆ. 56 ಕೋಟಿ ರೂ. ಯೋಜನೆ ಇದಾಗಿದ್ದು, ಈಗಾಗಲೇ ಎಸ್ಟಿಪಿ ಕೂಡ ಆಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಹೇಳಿದರು. ಇಇ ನರಸಿಂಹ ರೆಡ್ಡಿ, ಸಂಜೀವ ಕುಮಾರ್ , ಎಸಿ ಪ್ರಭು ರೆಡ್ಡಿ, ತಹಶೀಲ್ದಾರ್ ಶ್ರೇಯಾಂಕ್ ಧನಶ್ರಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದನೂರ್, ಉಪಾಧ್ಯಕ್ಷೆ ಸೈಜಾದಬಿ ಸೇರಿದಂತೆ ಅನೇಕರಿದ್ದರು.
ಯಾವುದೇ ಧಾರ್ಮಿಕ ಮಂದಿರದಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ : ಸುರೇಶ ಇಟ್ನಾಳ
ಕೊಪ್ಪಳ, ನ.11: ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತ ಸೇರಿದಂತೆ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಿರುತ್ತದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ್ ಹೇಳಿದ್ದಾರೆ. ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ‘‘ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಕರ್ನಾಟಕ ತಿದ್ದುಪಡಿ-2016 ಹಾಗೂ ಹದಿಹರೆಯದ ಮಕ್ಕಳ ಸಬಲೀಕರಣ ಕುರಿತು ವಿವಿಧ ಭಾಗೀದಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಬಾಲ್ಯವಿವಾಹವನ್ನು ಮಾಡಿಸಿದ ಪಾಸ್ಟರ್(ಪಾದ್ರಿ)ರವರಿಗೆ ಶಿಕ್ಷೆಯಾಗಿದೆ. ಕಲ್ಯಾಣ ಮಂಟಪಗಳ ಮಾಲಕರು, ಸಾಮೂಹಿಕ ವಿವಾಹ ಆಯೋಜಕರ ವಿರುದ್ಧವೂ ಸಹ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ತಾವುಗಳು ಬಾಲ್ಯವಿವಾಹದಲ್ಲಿ ಭಾಗವಹಿಸಬೇಡಿ ಮತ್ತು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹಗಳಿಗೆ ಅವಕಾಶ ನೀಡಬೇಡಿ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ. ರಾಘವೇಂದ್ರ ಭಟ್ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016ರ ಕುರಿತು ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಹರೀಶ ಜೋಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಕುರಿತು ತರಬೇತಿಯನ್ನು ನೀಡಿದರು. ಮಕ್ಕಳ ಬಾಲ್ಯವು ಅತ್ಯಮೂಲ್ಯವಾದದ್ದು, 18 ವರ್ಷದೊಳಗಿನ ಮಕ್ಕಳಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯು ತೀವ್ರವಾಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಅವರ ಹಕ್ಕುಗಳನ್ನು ಅನುಭವಿಸುವಂತಹ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಜಾರಿಯಲ್ಲಿರುವ ಕಾನೂನಿನ್ವಯ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಸಹ ಅತ್ಯಾಚಾರವಾಗಿರುತ್ತದೆ. ಆದ್ದರಿಂದ ಬಾಲ್ಯ ವಿವಾಹಗಳಲ್ಲಿ ಭಾಗವಹಿಸಬೇಡಿ, ಬಾಲ್ಯವಿವಾಹಗಳಿಗೆ ಅವಕಾಶವನ್ನು ನೀಡಬೇಡಿ ಮತ್ತು ಕಾಯ್ದೆಯ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಕೊಪ್ಪಳ ಡಿವೈ.ಎಸ್ಪಿ ಮುತ್ತಣ್ಣ ಸವರಗೋಳ, ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಬೆಳಗಾವಿ ಸ್ಪಂದನ ಸೊಸೈಟಿ ಕಾರ್ಯದರ್ಶಿ ಸುಶೀಲಾ ವಿ. ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮೂಹಿಕ ವಿವಾಹ ಆಯೋಜಕರು, ಪೂಜಾರಿಗಳು, ಮೌಲ್ವಿಗಳು, ಪಾದ್ರಿಗಳು, ಡೇಕೊರೇರ್ಸ್, ಛಾಯಾಚಿತ್ರಗಾರರು, ಮುದ್ರಣಕಾರರು, ಕಲ್ಯಾಣ ಮಂಟಪಗಳ ಮಾಲಕರ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇಸ್ಲಾಮಾಬಾದ್ ಸ್ಫೋಟಕ್ಕೆ ಭಾರತವೇ ಕಾರಣ ಎಂದ ಪಾಕ್ ಪ್ರಧಾನಿಗೆ ತಿರುಗೇಟು ನೀಡಿದ ಭಾರತೀಯ ವಿದೇಶಾಂಗ ಇಲಾಖೆ
ನ. 11ರಂದು ಇಸ್ಲಾಮಾಬಾದ್ ನಲ್ಲಿ ಪ್ರಬಲವಾದ ಬಾಂಬ್ ಸ್ಫೋಟಗೊಂಡು 12 ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಆ ಸ್ಫೋಟಕ್ಕೆ ಭಾರತವೇ ಕಾರಣ ಎಂದು ಅಲ್ಲಿನ ಪ್ರಧಾನ ಷರೀಫ್ ಅವರು ಹೇಳಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, “ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ವಿದ್ಯಮಾನಗಳಿಂದ ಪಾಕಿಸ್ತಾನದ ಜನತೆಯ ಗಮನವನ್ನು ಬೇರೆಡೆ ತಿರುಗಿಸಲು ಅಲ್ಲಿನ ಪ್ರಧಾನಿ ಹೀಗೆ ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದೆ.
ಬೆಂಗಳೂರು: ಪ್ರಧಾನಿ ಮೋದಿಯವರ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದ ಕಾರಣಕ್ಕೆ ಗುಜರಾತ್ನ ಪೊಲೀಸ್ ತಂಡವೊಂದು ಬೆಂಗಳೂರಿನಲ್ಲಿ ಬಿಜೆಪಿ ಯುವ ಮುಖಂಡನನ್ನೇ ಬಂಧಿಸಿರುವುದಾಗಿ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಯುವ ಮುಖಂಡ ಗುರುದತ್ ಶೆಟ್ಟಿ ಕಾರ್ಕಳ ಬಂಧಿತ ಎಂದು ಗುರುತಿಸಲಾಗಿದೆ. ಮಂಗಳವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ, ಗುಜರಾತ್ ರಾಜ್ಯದ ಪೊಲೀಸ್ ತಂಡ ಇಂದು ಬೆಂಗಳೂರಿಗೆ ಬಂದು, ಮೋದಿ ಅವರ ನೀತಿಗಳನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಯುವ ಘಟಕದ ಸದಸ್ಯ ಗುರುದತ್ ಕಾರ್ಕಳ ಶೆಟ್ಟಿ ಅವರನ್ನು ಬಂಧಿಸಿದೆ. ಪೊಲೀಸ್ ದೌರ್ಜನ್ಯದ ಬಗ್ಗೆ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ವಕೀಲರ ಸಮ್ಮುಖದಲ್ಲಿ ತಮ್ಮ ಹೇಳಿಕೆಯನ್ನು ನೀಡಲು ಅವಕಾಶ ನೀಡಬೇಕು. ಈ ವಿಷಯದಲ್ಲಿ ನನ್ನ ವಕೀಲ ಸ್ನೇಹಿತರು ಮುಂದಾಗಿ, ಅವರ ಮೂಲಭೂತ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಂತೆ ನಾನು ವಿನಂತಿಸಿದ್ದೇನೆ. ವಿಚಾರಣೆಯು ನಮ್ಮ ಸ್ಥಳೀಯ ವಕೀಲರ ಸಾನ್ನಿಧ್ಯದಲ್ಲಿಯೇ ನಡೆಯಬೇಕು. ಎಂದು ಹೇಳಿದ್ದಾರೆ.
ಕಾಸರಗೋಡು | ಬಾವಿಯಲ್ಲಿ ಸಿಲುಕಿದ ವೃದ್ಧ, ಕಾರ್ಮಿಕನ ರಕ್ಷಣೆ
ಕಾಸರಗೋಡು : ಬಾವಿಗೆ ಬಿದ್ದ ವೃದ್ಧನನ್ನು ರಕ್ಷಿಸಲು ಇಳಿದ ಕಾರ್ಮಿಕನೂ ಮೇಲಕ್ಕೆ ಬರಲಾಗದೆ ಸಿಲುಕಿಕೊಂಡ ಘಟನೆ ನಗರದ ತಳಂಗರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸಂಜೆ ಸುಮಾರು ಏಳು ಗಂಟೆ ವೇಳೆಗೆ ತಳಂಗರೆ ಪಳ್ಳಿಕ್ಕಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 15 ಅಡಿ ಆಳದ ಬಾವಿಗೆ 74 ವರ್ಷದ ನೆಲ್ಲಿಕುಂಜೆ ನಿವಾಸಿ ಟಿ.ಎಂ. ಮುನೀರ್ ಆಕಸ್ಮಿಕವಾಗಿ ಬಿದ್ದಿದ್ದಾರೆ. ಘಟನೆಯನ್ನು ಕಂಡ ನಾಗರಿಕರು ಸಹಾಯಕ್ಕೆ ಧಾವಿಸಿದ್ದು, ಉತ್ತರ ಪ್ರದೇಶ ಮೂಲದ 30 ವರ್ಷದ ಲುಕ್ಮಾನ್ನವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಇದರಿಂದ ಇಬ್ಬರೂ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಗ್ಗದ ಸಹಾಯದಿಂದ ಇಬ್ಬರನ್ನೂ ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ | ವೈದ್ಯೆಗೆ ಜೈಶೆ ಮೊಹಮ್ಮದ್ ಸಂಘಟನೆ ಜೊತೆ ನಂಟು; ತನಿಖಾ ಏಜೆನ್ಸಿಗಳ ಆರೋಪ
ಹೊಸದಿಲ್ಲಿ: ಜಮ್ಮುಕಾಶ್ಮೀರ, ಹರ್ಯಾಣ ಹಾಗೂ ಉತ್ತರಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತೆಂದು ಶಂಕಿಸಲಾದ ಉಗ್ರಗಾಮಿ ಜಾಲವೊಂದನ್ನು ತನಿಖಾ ಏಜೆನ್ಸಿಗಳು ಸೋಮವಾರ ಭೇದಿಸಿದ ಬಳಿಕ ಬಂಧಿತರಾದ ಆರೋಪಿಗಳಲ್ಲಿ ಒಬ್ಬಳಾದ ವೈದ್ಯೆ ಡಾ. ಶಾಹೀನ್ ಸಯೀದ್, ಭಾರತದಲ್ಲಿ ಪಾಕ್ ಮೂಲದ ಉಗ್ರಗಾಮಿ ಗುಂಪು ಜೈಶೆ ಮೊಹಮ್ಮದ್ ನ ಮಹಿಳಾ ನೇಮಕಾತಿ ಘಟಕವನ್ನು ಸ್ಥಾಪಿಸುವ ಹೊಣೆಯನ್ನು ವಹಿಸಿದ್ದಳೆಂದು ತನಿಖಾ ಏಜೆನ್ಸಿಗಳು ಆಪಾದಿಸಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜಮಾತುಲ್ ಮೊಮಿನಾತ್ ಎಂಬ ಹೆಸರಿನ ಈ ಸಂಘಟನೆಯು ಸುಶಿಕ್ಷಿತ ಮಹಿಳೆಯರು ಹಾಗೂ ವೃತ್ತಿಪರ ಮಹಿಳೆಯರನ್ನು ಈ ಗುಂಪಿನ ಜಾಲಕ್ಕೆ ಸೆಳೆಯುವ ಉದ್ದೇಶವನ್ನು ಹೊಂದಿತ್ತು ಎನ್ನಲಾಗಿದೆ. ಸೋಮವಾರ ಸಂಜೆ ದಿಲ್ಲಿಯ ಕೆಂಪುಕೋಟೆ ಪ್ರದೇಶದಲ್ಲಿ ನಡೆದ ಭೀಕರ ಕಾರ್ ಸ್ಫೋಟ ನಡೆಯುವುದಕ್ಕೆ ಕೆಲವೇ ತಾಸುಗಳ ಮೊದಲು ಈ ಜಾಲವನ್ನು ತನಿಖಾ ಸಂಸ್ಥೆಗಳು ಭೇದಿಸಿದ್ದವು. ದಿಲ್ಲಿ ಕಾರ್ ಸ್ಫೋಟಕ್ಕೂ, ಈ ಜಾಲಕ್ಕೂ ಒಂದಕ್ಕೊಂದು ಸಂಬಂಧವಿರುವುದಾಗಿ ತನಿಖಾ ಏಜೆನ್ಸಿಗಳು ಶಂಕಿಸಿವೆ. ವೃತ್ತಿಪರ, ಸುಶಿಕ್ಷಿತ ಭಯೋತ್ಪಾದಕ ಜಾಲವನ್ನು ಜೆಇಎಂ ಹಾಗೂ ಅನ್ಸಾರ್ ಘಝವತುಲ್ ಹಿಂದ್ ಗುಂಪುಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಕ್ಕಮಗಳೂರು: ತಾಯಿಯ ಹತ್ಯೆಗೈದ ಪುತ್ರಿಯ ಬಂಧನ
ಚಿಕ್ಕಮಗಳೂರು: ಮಹಿಳೆಯೊಬ್ಬರನ್ನು ಆಕೆಯ ಪುತ್ರಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಕುಸುಮಾ(62) ಹತ್ಯೆಯಾದ ಮಹಿಳೆ. ಸುಧಾ(35) ಹತ್ಯೆ ಮಾಡಿದ ಆರೋಪಿ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಮೂಲತಃ ಬೇರೆ ಊರಿನಿಂದ ಕೂಲಿ ಕೆಲಸಕ್ಕೆಂದು ಬಂದು ಬಂಡಿಮಠದಲ್ಲಿ ಈ ಕುಟುಂಬ ನೆಲೆಸಿತ್ತು. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿಯನ್ನು ತಲೆದಿಂಬು ಬಳಸಿ ಸುಧಾ ಹತ್ಯೆ ಮಾಡಿದ್ದಾಳೆ. ನಂತರ ಮೃತದೇಹದ ಬಗ್ಗೆ ಯಾವುದೇ ಅನುಮಾನ ಬಾರದಂತೆ ಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದಾಳೆ. ಆದರೆ ಪೊಲೀಸರು ನಡೆಸಿದ ತನಿಖೆಯಲ್ಲಿ ಇದು ಸಹಜ ಸಾವಲ್ಲ, ಕೊಲೆ ಎಂಬುದು ಸಾಬೀತಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುಧಾಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು, ನ.11: ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಎಕ್ಕೂರು ಮೈದಾನ ಬಳಿ ಮತ್ತು ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಕ್ಕೂರಿನಲ್ಲಿ ಹರಿಪ್ರಸಾದ್ ನನ್ನು ಹಾಗೂ ಪಡೀಲ್ ನಲ್ಲಿ ಮುಹಮ್ಮದ್ ಶಾರೂಕ್ ನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಬಸ್; ಅಪಾಯದಿಂದ ಪಾರಾದ ಪ್ರಯಾಣಿಕರು
ರಾಯಚೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸೊಂದು ಜಮೀನಿಗೆ ನುಗ್ಗಿದ ಘಟನೆ ಮಂಗಳವಾರ ಮಲಿಯಾಬಾದ್ ಸಮೀಪ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ರಾಯಚೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬಸ್ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕುಂಜತ್ತಬೈಲ್ ರಂಗಾಂತರಂಗ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಮಂಗಳೂರು, ನ.11: ಕುಂಜತ್ತಬೈಲ್ ನ ರಂಗ ಸ್ವರೂಪ (ರಿ)ಕ್ಕೆ 2025ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಪ್ರಯುಕ್ತ ರಂಗಾಂತರಂಗ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕುಂಜತ್ತಬೈಲ್ ನ ಆಸರೆ ಮನೆಯಲ್ಲಿ ನಡೆಯಿತು. ಖ್ಯಾತ ತಂಬೂರಿ ಗಾಯಕ ನಾದ ಮಣಿ ನಾಲ್ಕೂರು ಅವರಿಂದ ದೀಪ ಹಚ್ಚಿ ಕತ್ತಲೆಯ ಹಾಡು, ವಿನೂತನ ತತ್ವ ಭಾವ ಗಾನಯಾನ ನಡೆಯಿತು. ಈ ಸಂದರ್ಭ ರಂಗಸ್ವರೂಪದ ಮಾರ್ಗದರ್ಶಕ, ಸ್ವರೂಪ ಅಧ್ಯಯನ ಸಮೂಹ ಮಂಗಳೂರು ಇದರ ನಿರ್ದೇಶಕ ಗೋಪಾಡ್ಕರ್ ಅವರನ್ನು ಸನ್ಮಾನಿಸಲಾಯಿತು. ರಂಗ ಸ್ವರೂಪ ತಂಡದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಡಾ.ವಸಂತ್ ಕುಮಾರ್ ಪೆರ್ಲ, ಕಲಾವಿದ ದಿನೇಶ್ ಹೊಳ್ಳ, ಅಂತರರಾಷ್ಟ್ರೀಯ ತರಬೇತುದಾರ ಮುಹಮ್ಮದ್ ರಫೀಕ್ ಮಾತನಾಡಿದರು. ಸಾಹಿತಿ ಬದ್ರುದ್ದೀನ್ ಕೂಳೂರು, ಸುಮನಾ ರೆಬೆಲ್ಲೊ, ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಸಂಚಾಲಕಿ ಸಂಶಾದ್ ಕುಂಜತ್ತಬೈಲ್, ಅರವಿಂದ ಕುಡ್ಲ, ಆದಂ ಖಾನ್, ರಂಗ ಸ್ವರೂಪ ತಂಡದ ಪ್ರಮುಖರಾದ ಹುಸೈನ್ ರಿಯಾಝ್, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹನೀಷಾ, ರೈಹಾನ್, ವೈಷ್ಣವಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು. ಕಲಾವಿದ ಝುಬೇರ್ ಖಾನ್ ಕುಡ್ಲ ವಂದಿಸಿದರು, ಶಿಕ್ಷಕ ಪ್ರೇಮನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಸುಳ್ಯ, ನ.11: ಸುಳ್ಯದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ ಮೌಲಾನ ಅಬುಲ್ ಕಲಾಂ ಆಝಾದ್ ಜನ್ಮ ದಿನ ಮತ್ತು ರಾಷ್ಟ್ರೀಯ ಶಿಕ್ಷಣ ದಿನವನ್ನು ಮಂಗಳವಾರ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕ್ವಿಝ್ ಏರ್ಪಡಿಸಲಾಗಿತ್ತು ಅಧ್ಯಕ್ಷತೆ ವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ.ಮುಸ್ತಫ ಮಾತನಾಡಿ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಝಾದ್ ರವರ ಶಿಕ್ಷಣದ ದೂರದೃಷ್ಟಿಯು ಇಂದು ನಮ್ಮ ದೇಶದ ಶಿಕ್ಷಣದ ಗುಣಮಟ್ಟವು ವಿಶ್ವ ಮಾನ್ಯತೆ ಪಡೆಯಲು ಸಹಕಾರಿಯಾಗಿದೆ ಎಂದರು. ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಮಾತನಾಡಿ, ಮೌಲಾನಾ ಅಬುಲ್ ಕಲಾಂ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರ ನಮಗೆ ಮಾರ್ಗದರ್ಶಿ ಎಂದರು. ವೇದಿಕೆಯಲ್ಲಿ ಶಿಕ್ಷಕಿಯರಾದ ಜಯಂತಿ ಮತ್ತು ದೇವಕಿ ಉಪಸ್ಥಿತರಿದ್ದರು. ಶಿಕ್ಷಕ ರಂಜಿತ್ ಸ್ವಾಗತಿಸಿ, ವಂದಿಸಿದರು.
ತುರ್ಕಿಯಾದ ಮಿಲಿಟರಿ ಸರಕು ವಿಮಾನ ಪತನ
ಅಂಕಾರ, ನ.11: ಅಝರ್ಬೈಜಾನ್ನಿಂದ ತುರ್ಕಿಯಾದತ್ತ ಸಾಗುತ್ತಿದ್ದ ತುರ್ಕಿಯಾದ ಮಿಲಿಟರಿ ಸರಕು ವಿಮಾನ ಅಝರ್ಬೈಜಾನ್- ಜಾರ್ಜಿಯಾ ಗಡಿಭಾಗದಲ್ಲಿ ಮಂಗಳವಾರ ಪತನಗೊಂಡಿರುವುದಾಗಿ ತುರ್ಕಿಯಾದ ರಕ್ಷಣಾ ಇಲಾಖೆ ಹೇಳಿದೆ. ವಿಮಾನದಲ್ಲಿ 20 ಮಿಲಿಟರಿ ಸಿಬ್ಬಂದಿಗಳಿದ್ದು ಹೆಚ್ಚಿನ ಮಾಹಿತಿ ದೊರಕಿಲ್ಲ. ಅಜರ್ಬೈಜಾನ್ ಮತ್ತು ಜಾರ್ಜಿಯಾ ಅಧಿಕಾರಿಗಳ ನೆರವಿನೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತುರ್ಕಿಯಾದ ರಕ್ಷಣಾ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
Pawan Kalyan: ತಿರುಪತಿ ಲಡ್ಡು ಹಗರಣ ಬೆನ್ನಲ್ಲೇ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ
ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ತಯಾರಿಸಲು ನಕಲಿ ಹಾಗೂ ಕಲಬೆರಕೆ ತುಪ್ಪ ಸರಬರಾಜು ಮಾಡಿರುವ ವಿಚಾರ ಭಕ್ತಾದಿಗಳನ್ನು ಆತಂಕಕ್ಕೀಡುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳಿಗೂ ಹೆಚ್ಚಿನ ಕಾಲ ಟಿಟಿಡಿಗೆ ಲಡ್ಡು ತಯಾರಿಸಲು ನಕಲಿ ತುಪ್ಪ ಪೂರೈಕೆಯಾಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇತ್ತೀಚೆಗೆ ಕೆಲವರನ್ನು ಬಂಧನ ಕೂಡ ಮಾಡಲಾಗಿದೆ. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ
ಧರ್ಮಸ್ಥಳ ಪ್ರಕರಣದಲ್ಲಿ ಸಮಗ್ರ ತನಿಖೆಗೆ ಆಗ್ರಹ; ‘ಕೊಂದವರು ಯಾರು’ ತಂಡದಿಂದ ಸೌಜನ್ಯಾ ಮನೆಗೆ ಭೇಟಿ
ಬೆಳ್ತಂಗಡಿ, ನ.11: ಧರ್ಮಸ್ಥಳ ಪ್ರಕರಣದಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ‘ಕೊಂದವರು ಯಾರು’ ಎಂಬ ಪ್ರಶ್ನೆಯೊಂದಿಗೆ ನಡೆಯುತ್ತಿರುವ ಆಂದೋಲನದ ಮುಖಂಡರುಗಳು ಮಂಗಳವಾರ ಧರ್ಮಸ್ಥಳ ಪಾಂಗಳದ ಸೌಜನ್ಯಾ ಅವರ ಮನೆಗೆ ಭೇಟಿ ನೀಡಿ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರರಾದ ಚಂಪಾ, ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ದಾರಿತಪ್ಪಬಾರದು. ಮಹಿಳೆಯರಿಗೆ ಆಗಿರುವ ಅನ್ಯಾಯಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದ್ದೇವೆ ಎಂದರು. ವೇದವಲ್ಲಿ, ಪದ್ಮಲತಾ, ಸೌಜನ್ಯಾ, ಅನೆ ಮಾವುತ ನಾರಾಯಣ, ಅವರ ಸಹೋದರಿ ಯಮುನಾ ಅವರ ಸಾವಿಗೆ ಕಾರಣರಾದವರು ಯಾರು ಎಂಬುದನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕಾಗಿದೆ. ಅದೇ ರೀತಿ ಇಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ, ನಾಪತ್ತೆ ಪ್ರಕರಣಗಳ ಬಗ್ಗೆ ಸಮಗ್ರವಾದ ತನಿಖೆಯಾಗಬೇಕಾಗಿದೆ. ಈ ಕಾರ್ಯವನ್ನು ಎಸ್ಐಟಿ ಅಧಿಕಾರಿಗಳು ನಡೆಸಿದರೆ ಸತ್ಯ ಹೊರಬರಲು ಸಾಧ್ಯವಿದೆ ಎಂದು ಅವರು ಹೇಳಿದರು. ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, ಮಹಿಳಾ ಆಯೋಗದ ಅಧ್ಯಕ್ಷರು ತನಿಖೆ ನಡೆಸುವಂತೆ ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಕೆಲವು ಮಾಧ್ಯಮಗಳು ಆರೋಪ ಮಾಡುತ್ತಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರು ನೀಡಿರುವ ಹೇಳಿಕೆ ಅತ್ಯಂತ ಸೂಕ್ತವಾಗಿದೆ. ಇದೀಗ ಹೆಣ್ಣು ಮಕ್ಕಳಿಗೆ ನ್ಯಾಯ ಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ‘ಕೊಂದವರು ಯಾರು’ ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಾರ್ಯ ಮಾಡಬೇಕು ಎಂಬುದು ಮಾತ್ರ ನಮ್ಮ ಬೇಡಿಕೆಯಾಗಿದೆ. ಇದರಲ್ಲಿ ಬೇರೆ ಯಾವ ಹಿತಾಸಕ್ತಿಯೂ ಇಲ್ಲ ಎಂದರು. ತಂಡದಲ್ಲಿ ಶಶಿಕಲಾ ಶೆಟ್ಟಿ, ಗೀತಾ ಸುರತ್ಕಲ್, ಮಮತಾ, ಸುರೇಖಾ, ಶೈಲಜಾ, ಮಲ್ಲಿಗೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರದ ಸ್ಥಗಿತ ಕೊನೆಗೊಳಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ
ವಾಷಿಂಗ್ಟನ್, ನ.11: ಅಮೆರಿಕಾದ ಇತಿಹಾಸದಲ್ಲೇ ಅತೀ ದೀರ್ಘಾವಧಿಯ ಸರಕಾರದ ಸ್ಥಗಿತವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಅಮೆರಿಕಾದ ಸೆನೆಟ್ ಸೋಮವಾರ ಅಂಗೀಕಾರ ನೀಡಿದೆ. ಸೆನೆಟ್ನಲ್ಲಿ 60-40 ಮತಗಳಿಂದ ಮಸೂದೆ ಅಂಗೀಕರಿಸಲ್ಪಟ್ಟಿದ್ದು ಮುಂದಿನ ಹಂತದಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಕಳುಹಿಸಲಾಗುವುದು. ಇಲ್ಲಿ ಬುಧವಾರವೇ ಅಂಗೀಕಾರ ಪಡೆದು ಅಧ್ಯಕ್ಷರ ಸಹಿಗಾಗಿ ರವಾನಿಸುವ ವಿಶ್ವಾಸವಿದೆ ಎಂದು ರಿಪಬ್ಲಿಕನ್ ಮೂಲಗಳು ಹೇಳಿವೆ.
ಭಾರತದ ಮೇಲಿನ ಸುಂಕ ಕಡಿತದ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ನ.11: ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಹತ್ತಿರವಾಗುವುದರ ಕುರಿತು ಮಂಗಳವಾರ ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೊಂದು ದಿನ ಅಮೆರಿಕಾವು ಭಾರತದ ಮೇಲಿನ ಸುಂಕವನ್ನು ಕಡಿತಗೊಳಿಸಬಹುದು ಎಂದು ಹೇಳಿದ್ದಾರೆ. ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ `ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಈಗಿನ ಪ್ರಮಾಣಕ್ಕಿಂತ ತುಂಬಾ ಭಿನ್ನವಾಗಿರುತ್ತದೆ. ಈಗ ಅವರು ನನ್ನನ್ನು ಇಷ್ಟಪಡುವುದಿಲ್ಲ ಆದರೆ ಅವರು ನಮ್ಮನ್ನು ಮತ್ತೊಮ್ಮೆ ಇಷ್ಟಪಡಲಿದ್ದಾರೆ. ನಾವು ನ್ಯಾಯಯುತ ಒಪ್ಪಂದಕ್ಕೆ ಬರಲಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಿರುವ ಒಪ್ಪಂದಕ್ಕೆ ನಾವು ಬಹಳ ಹತ್ತಿರವಾಗಿರುವುದಾಗಿ ಭಾವಿಸುತ್ತೇನೆ' ಎಂದು ಹೇಳಿದ್ದಾರೆ. ಭಾರತದ ಮೇಲಿನ ಸುಂಕವನ್ನು ಕಡಿತಗೊಳಿಸುವ ಬಗ್ಗೆ ಪರಿಶೀಲಿಸುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ `ಈಗ ಭಾರತದ ಮೇಲಿನ ಸುಂಕ ಅತೀ ಹೆಚ್ಚಿರುವುದಕ್ಕೆ ಕಾರಣ ರಶ್ಯದ ತೈಲ ಮತ್ತು ಅವರು ರಶ್ಯದ ತೈಲ ಖರೀದಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿದ್ದಾರೆ. ಆದ್ದರಿಂದ ಮುಂದೊಂದು ದಿನ ನಾವೂ ಅವರ ವಿರುದ್ಧದ ಸುಂಕವನ್ನು ಕಡಿಮೆಗೊಳಿಸಲಿದ್ದೇವೆ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.
ನಾವು ಹೃದಯಪೂರ್ವಕ ಭಾರತೀಯರು; ಮಗನಿಗೆ ಉಗ್ರರ ಸಂಪರ್ಕ ಇಲ್ಲ: ಮುಝಮ್ಮಿಲ್ ಶಕೀಲ್ ತಾಯಿ
ಹೊಸದಿಲ್ಲಿ, ನ. 11: ಹರ್ಯಾಣದ ಫರೀದಾಬಾದ್ ನಲ್ಲಿ ಭಯೋತ್ಪಾದನಾ ಘಟಕವೊಂದನ್ನು ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಶ್ಮೀರಿ ವೈದ್ಯ ಡಾ. ಮುಝಮ್ಮಿಲ್ ಶಕೀಲ್ ನ ತಾಯಿ, ಮಗನ ಇಂಥ ಚಟುವಟಿಕೆಗಳ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. 360 ಕೆಜಿ ಸ್ಫೋಟಕ ಮತ್ತು ಮದ್ದುಗುಂಡನ್ನು ಫರೀದಾಬಾದ್ ನ ದೌಜ್ ಗ್ರಾಮದಲ್ಲಿರುವ ಆತನ ಬಾಡಿಗೆ ಮನೆಯಯಲ್ಲಿ ಪತ್ತೆಹಚ್ಚಿದ ಬಳಿಕ, ಪೊಲೀಸರು ಡಾ. ಮುಝಮ್ಮಿಲ್ ನನ್ನು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ. ದಿಲ್ಲಿಯ ಕೆಂಪು ಕೋಟೆಯ ಸಮೀಪ ನಡೆದ ಬಾಂಬ್ ಸ್ಫೋಟ ಮತ್ತು ಫರೀದಾಬಾದ್ ಭಯೋತ್ಪಾದನಾ ಘಟಕದ ನಡುವೆ ಇದೆ ಎನ್ನಲಾದ ನಂಟಿನ ಬಹಿರಂಗಗೊಂಡ ಬಳಿಕ, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವನ ತಾಯಿ ನಸೀಮಾ, ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ತನ್ನ ಮಗ ಮನೆ ಬಿಟ್ಟು ತುಂಬಾ ಸಮಯವಾಯಿತು ಎಂದು ಅವರು ಹೇಳಿದ್ದಾರೆ. ‘‘ಅವನು ಸುಮಾರು ನಾಲ್ಕು ವರ್ಷಗಳ ಹಿಂದೆ ಮನೆ ಬಿಟ್ಟಿದ್ದಾನೆ. ಅವನು ದಿಲ್ಲಿಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲಿ ನಮಗೆ ಅವನ ಬಗ್ಗೆ ಮಾಹಿತಿ ಇರಲಿಲ್ಲ. ಅವನ ಬಂಧನವಾದಾಗ, ನಮಗೆ ಬೇರೆಯವರಿಂದ ಆ ವಿಷಯ ತಿಳಿಯಿತು. ನಾವು ಅವನನ್ನು ಭೇಟಿಯಾಗಲು ಪ್ರಯತ್ನಿಸಿದೆವು. ಆದರೆ, ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ನನ್ನ ಇನ್ನೊಬ್ಬ ಮಗನನ್ನೂ ಪೊಲೀಸರು ಬಂಧಿಸಿದ್ದಾರೆ’’ ಎಂದು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ದಿಲ್ಲಿ ಸ್ಫೋಟ ಪ್ರಕರಣದಲ್ಲಿ ನನ್ನ ಮಗ ಆರೋಪಿ ಎಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಇಬ್ಬರೂ ಪುತ್ರರನ್ನು ಬಿಡುಗಡೆಗೊಳಿಸಬೇಕು ಎಂದಷ್ಟೇ ನಾನು ಬಯಸುತ್ತೇನೆ. ನಾವು ಹೃದಯಪೂರ್ವಕ ಭಾರತೀಯರು’’ ಎಂದರು.
ಉಡುಪಿ ರೈಲ್ವೆ ನಿಲ್ದಾಣದಲ್ಲಿ ಡಿಜಿ ಲಾಕರ್ ಸೌಲಭ್ಯ
ಉಡುಪಿ, ನ.11: ಕೊಂಕಣ ರೈಲ್ವೆಯು ಉಡುಪಿ, ಥೀವಿಂ ಹಾಗೂ ರತ್ನಗಿರಿ ರೈಲ್ವೆ ನಿಲ್ದಾಣಗಳಲ್ಲಿ ಡಿಜಿ ಲಾಕರ್ ಸೌಲಭ್ಯವನ್ನು ಕಲ್ಪಿಸಿದ್ದು, ಅದೀಗ ಪ್ರಯಾಣಿಕರಿಗೆ ಲಭ್ಯವಿದೆ. ಪ್ರಯಾಣಿಕರ ಲಗ್ಗೇಜ್ಗಳ ಸುರಕ್ಷತೆ, ಭದ್ರತೆ ಹಾಗೂ ಅವರ ಆತಂಕವನ್ನು ಇದು ನಿವಾರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಡಿಜಿ ಲಾಕರ್ ಸೌಲಭ್ಯದ ಮೂಲಕ ಆಧುನಿಕ, ಸುರಕ್ಷಿತ ಹಾಗೂ ತಾವೇ ಕಾರ್ಯಾಚರಿಸುವ ಅವಕಾಶವೂ ಪ್ರಯಾಣಿಕರಿಗೆ ಸಿಗುವ ಮೂಲಕ ಅವರ ಲಗ್ಗೇಜ್ಗಳನ್ನು ಸುರಕ್ಷಿತವಾಗಿರಿಸುವ ಸಮಸ್ಯೆ ಬಗೆಹರಿಯಲಿದೆ ಎಂದು ಅದು ಹೇಳಿದೆ. ಪ್ರಯಾಣಿಕರು ಯುಪಿಐ ಬಳಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನಿಂದ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಮೂಲಕ ಸುರಕ್ಷಿತವಾದ ಈ ಸೇವೆಯನ್ನು ಪಡೆದುಕೊಳ್ಳಬಹುದು. ಈ ಸೇವೆ ದಿನದ 24 ಗಂಟೆಯೂ ರೈಲ್ವೆ ನಿಲ್ದಾಣದಲ್ಲಿ ಲಭ್ಯವಿರುತ್ತದೆ. ನಿಗದಿತ ಶುಲ್ಕ ಪಾವತಿಸಿ ತಾವೇ ಕಾರ್ಯಾಚರಿಸುವ ಡಿಜಿ ಲಾಕರ್ ಸೌಲಭ್ಯವನ್ನು ದಿನದ ಯಾವುದೇ ಸಮಯದಲ್ಲಿ, ಬೇಕಾದ ಅವಧಿಗೆ ಪಡೆದುಕೊಳ್ಳಬಹುದು. ಯುಪಿಐ ಬಳಸಿ ಡಿಜಿಟಲ್ ಪೇಮೆಂಟ್ ಮೂಲಕ ಸೇವೆ ಪಡೆದು ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತವಾಗಿರಿಸಿ ತಮ್ಮ ಕೆಲಸ ಮುಗಿಸಿಕೊಂಡು ಬಂದು ಅವುಗಳನ್ನು ಕೊಂಡೊಯ್ಯಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಮುಕ್ತಾಯ: ಫಲಿತಾಂಶ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ರವಾನೆ
ಮರು ಎಣಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಎಂದ ಶಾಸಕ ಕೆ.ವೈ.ನಂಜೇಗೌಡ
ತೋಕೂರು- ಜೋಕಟ್ಟೆ ನಡುವೆ ರೈಲ್ವೆ ಹಳಿ ದ್ವಿಪಥ ಕಾಮಗಾರಿ: ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಉಡುಪಿ, ನ.11: ದಕ್ಷಿಣ ರೈಲ್ವೆಯು ತೋಕೂರು ಹಾಗೂ ಜೋಕಟ್ಟೆ ನಡುವೆ ರೈಲು ಹಳಿ ದ್ವಿಪಥ ಕಾಮಗಾರಿಯನ್ನು ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನ.12ರಿಂದ 23ರವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ನ.14ರಂದು ರೈಲು ನಂ.16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲಿನ ಸಂಚಾರದಲ್ಲಿ 80 ನಿಮಿಷ ವಿಳಂಬವಾಗಲಿದೆ. ಅದೇ ರೀತಿ ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 20 ನಿಮಿಷ ಹಾಗೂ ತಿರುವನಂತಪುರ ಉತ್ತರ- ಬಾವ್ನಗರ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 15 ನಿಮಿಷ ವಿಳಂಬವಾಗಲಿದೆ. ನ.17ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 20 ನಿಮಿಷ ವಿಳಂಬವಾಗಲಿದೆ. ನ.18ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ನ ಸಂಚಾರ 150 ನಿಮಿಷ ವಿಳಂಬವಾಗಲಿದೆ. ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವಿನ ಪ್ಯಾಸಂಜರ್ ರೈಲಿನ ಪ್ರಯಾಣ 20 ನಿಮಿಷ ವಿಳಂಬವಾಗಲಿದೆ. ನ.18ರಂದು ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ (17ರಂದು ಹೊರಡುವ) ಪ್ರಯಾಮ 20 ನಿಮಿಷ ವಿಳಂಬವಾಗಲಿದೆ. ನ.19ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ರೈಲಿನ 18ರ ಪ್ರಯಾಣ 30 ನಿಮಿಷ ವಿಳಂಬವಾಗಲಿದೆ. ನ.23ರಂದು ಮುಂಬಯಿ ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ನ.22ರ ಸಂಚಾರವನ್ನು ಸುರತ್ಕಲ್ ನಲ್ಲೆ ಕೊನೆಗೊಳಿಸಲಾಗುವುದು. ಸುರತ್ಕಲ್- ಮಂಗಳೂರು ಜಂಕ್ಷನ್ ನಡುವಿನ ಪ್ರಯಾಣ ರದ್ದಾಗಲಿದೆ. 23ರಂದು ಈ ರೈಲಿನ ಮರು ಪ್ರಯಾಣವನ್ನು ಸುರತ್ಕಲ್ ನಿಂದ ಪ್ರಾರಂಭಿಸಲಾಗುವುದು. ನ.23ರಂದು ಮುರ್ಡೇಶ್ವರ- ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಪ್ರಯಾಣ 120 ನಿಮಿಷ ವಿಳಂಬವಾಗಲಿದೆ. ಇದರೊಂದಿಗೆ ಉತ್ತರ ಹಾಗೂ ದಕ್ಷಿಣ ರಾಜ್ಯಗಳಿಗೆ ಸಂಚರಿಸುವ ಹಲವು ರೈಲುಗಳ ಪ್ರಯಾಣವೂ ವಿಳಂಬಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಸುರತ್ಕಲ್ ನ ಧನಲಕ್ಷ್ಮೀ ಪೂಜಾರಿ ಆಯ್ಕೆ
ಮೂಡುಬಿದಿರೆ, ನ.11: ಸುರತ್ಕಲ್ ಇಡ್ಯಾ ನಿವಾಸಿ ಹಾಗೂ ಆಳ್ವಾಸ್ ಸ್ಪೋಟ್ಸ್9 ಕ್ಲಬ್ನ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುರತ್ಕಲ್ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿಯ ಪುತ್ರಿಯಾಗಿರುವ ಧನಲಕ್ಷ್ಮೀ ನವೆಂಬರ್ 15ರಿಂದ 25ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ 12 ದೇಶಗಳು ಭಾಗವಹಿಸಲಿರುವ ಎರಡನೇ ಆವೃತ್ತಿಯ ಮಹಿಳಾ ಕಬಡ್ಡಿ ವರ್ಲ್ಡ್ ಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಧನಲಕ್ಷ್ಮೀ ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಕಬಡ್ಡಿ ಆಟಗಾರ್ತಿಯಾಗಿದ್ದಾರೆ. ತನ್ನ ಆಲ್ರೌಂಡರ್ ಆಟದಿಂದ ತಂಡದಲ್ಲಿ ಬಹು ಬೇಡಿಕೆಯ ಕ್ರೀಡಾಪಟುವಾಗಿದ್ದಾರೆ. ಧನಲಕ್ಷ್ಮೀ ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಕೋರ್ಸ್ಗಳನ್ನು ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ಪಡೆದಿದ್ದಾರೆ. ಧನಲಕ್ಷ್ಮೀ ಜೂನಿಯರ್ ನ್ಯಾಶನಲ್, ಸೀನಿಯರ್ ನ್ಯಾಶನಲ್ ಹಾಗೂ ಫೆಡರೇಷನ್ ಕಪ್ನಲ್ಲಿ ಒಟ್ಟು 12 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಈಗಾಗಲೇ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ 4 ಬಾರಿ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಗುಜರಾತಿನ ಗಾಂಧಿನಗರದಲ್ಲಿರುವ ಸಾಯ್ ಸೆಂಟರ್ನಲ್ಲಿ ಅಂತಿಮ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ದಿಲ್ಲಿ ಸ್ಪೋಟ ಪ್ರಕರಣ | ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ : ಎಸ್ಪಿ
ಮಂಗಳೂರು, ನ.11: ಹೊಸದಿಲ್ಲಿಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ. ಜಿಲ್ಲಾದ್ಯಂತ ರಾತ್ರಿ ವೇಳೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾದ ಗಸ್ತು ನಿರ್ವಹಿಸುವಂತೆ ಸೂಚಿಸಲಾಗಿದೆ. ಸೂಕ್ಷ್ಮಪ್ರದೇಶಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು picketing point ಕರ್ತವ್ಯದಲ್ಲಿ ನಿಯೋಜಿಸಿ ನಿಗಾವಹಿಸಲಾಗುತ್ತಿದೆ. ಜಿಲ್ಲೆಯ ಮುಖ್ಯ ಸ್ಥಳಗಳಲ್ಲಿ ನಾಕಾಬಂದಿಗಳನ್ನು ಅಳವಡಿಸಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಪ್ರಮುಖ ಸರಕಾರಿ ಕಟ್ಟಡಗಳು ಸೇರಿದಂತೆ ಜನದಟ್ಟಣೆಯ ಇರುವ ಜಾಗಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಿ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಅಥವಾ ಸಂಶಯಾಸ್ಪದ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಸ್ಪಿ ಮನವಿ ಮಾಡಿದ್ದಾರೆ.
ಮಂಗಳೂರು, ನ.11: ದನ ಮಾರಾಟ ಮಾಡಿದ ಆರೋಪದಲ್ಲಿ ಕೊಕ್ಕಡದ ಪಟ್ರಮೆ ಎಂಬಲ್ಲಿ ಮುಸ್ಲಿಮ್ ಮಹಿಳೆಯೊಬ್ಬರ ಮನೆಯನ್ನು ಜಪ್ತಿ ಮಾಡಿ, ಮೂವರು ಮಕ್ಕಳನ್ನು ಹೊರಗೆ ಹಾಕಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಭವನದಲ್ಲಿ ನಡೆದ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅವರು, ಜಾನುವಾರು ಮಾರಾಟ ಮಾಡಿದ ಆರೋಪದಲ್ಲಿ ಮನೆ ಜಪ್ತಿ ಮಾಡುವ ಕರಾಳ ಕಾನೂನನ್ನು ಪೊಲೀಸರು ದ.ಕ. ಜಿಲ್ಲೆಯಲ್ಲಿ ಜಾರಿಗೊಳಿಸಿರುವುದು ರಾಜ್ಯದಲ್ಲೇ ಪ್ರಥಮ ಘಟನೆ. ಇದರೊಂದಿಗೆ ಪೊಲೀಸರು ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರು ಜಿಲ್ಲೆಯಲ್ಲಿ ಆಘೋಷಿತ ಕಾನೂನನ್ನು ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದರು. ರೊಹರಾ ಮುಸ್ಲಿಂ ಮಹಿಳೆಗೆ ದನ ಮಾರಾಟ ಮಾಡಿದ ನವೀನ್ ಎಂಬವರ ವಿರುದ್ಧ ಯಾಕೆ ಎಫ್ಐಆರ್ ಮಾಡಿಲ್ಲ ? ಎಂದು ಪ್ರಶ್ನಿಸಿದ ಅವರು, ಪೊಲೀಸರ ಇಂತಹ ವರ್ತನೆಯು ಖಂಡನೀಯ. ಪೊಲೀಸರ ಇಂತಹ ನೀತಿಯಿಂದಾಗಿ ಜನರು ಭಯ ಭೀತರಾಗಿದ್ದಾರೆ. ಹೈನುಗಾರಿಕೆಯ ಮೂಲಕ ಜೀವನ ನಡೆಸುವ ಜನರು ದನವನ್ನು ಮಾರಾಟ ಮಾಡಬಾರದು , ಸಾಗಾಟ ಮಾಡಬಾರದು ಎಂಬ ರೀತಿಯ ಆಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದಾರೆ ಎಂದರು. ಮಸೀದಿಗಳು ಜಾನುವಾರು ವ್ಯಾಪಾರ ಕೇಂದ್ರವೇ ? : ದ.ಕ. ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ನಿಷೇಧ ಕಾಯ್ದೆಯ ಬಗ್ಗೆ ಪೊಲೀಸರು ಮಸೀದಿಗೆ ಅಕ್ರಮವಾಗಿ ಪ್ರವೇಶ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಇಂತಹ ಕ್ರಮ ಖಂಡನೀಯ. ಈ ಕಾಯ್ದೆಯ ಬಗ್ಗೆ ಮುಸ್ಲಿಮರಿಗೆ ಮಾತ್ರ ಯಾಕೆ ಮಾಹಿತಿ ನೀಡಬೇಕು ? ಮಸೀದಿಗಳು ಜಾನುವಾರು ವ್ಯಾಪಾರದ ಕೇಂದ್ರವೇ ? ಎಂದು ಪ್ರಶ್ನಿಸಿದ ಅವರು ಒಂದು ಸಮುದಾಯವನ್ನು ಪೊಲೀಸರು ಕ್ರಿಮಿನಲ್ಗಳಾಗಿ ಚಿತ್ರಿಕರಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ಜಾನುವಾರು ಸಾಗಾಟದ ವಾಹನದ ಚಾಲಕನನ್ನು ರಸ್ತೆ ಮಧ್ಯೆ ನಿಲ್ಲಿಸಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂಬ ಆರೋಪ ಇದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ದ.ಕ. ಜಿಲ್ಲೆಯಲ್ಲಿ ಜಾನುವಾರು ಸಾಗಾಟದಲ್ಲಿ ಎಷ್ಟೋ ಮಂದಿ ಸಂಘ ಪರಿವಾರದ ಕಾರ್ಯಕರ್ತರು ಶಾಮೀಲಾಗಿದ್ದಾರೆ. ಆದರೆ ಅವರ ಮನೆಗಳನ್ನು ಯಾಕೆ ಪೊಲೀಸರು ಜಪ್ತಿ ಮಾಡಿಲ್ಲ ? ಎಂದು ಶಾಹುಲ್ ಹಮೀದ್ ಪ್ರಶ್ನಿಸಿದರು. ವಕೀಲ ನೂರುದ್ದೀನ್ ಸಾಲ್ಮರ ಅವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2021ರ ವಿಚಾರದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದ ಜಿಲ್ಲೆಯ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ಶಾಹುಲ್ ಹಮೀದ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪಶ್ಚಿಮ ವಲಯ ಐಜಿಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಮುಖ್ಯ ಮಂತ್ರಿ ಮತ್ತು ಉಪಮುಖ್ಯ ಅವರನ್ನು ಭೇಟಿಯಾಗಿ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಮಾಜಿ ಮೇಯರ್ ಅಶ್ರಫ್, ಮಾಜಿ ಕಾರ್ಪೊರೇಟರ್ಗಳಾದ ಲತೀಫ್ ಕಂದಕ್ ಮತ್ತು ಅಶ್ರಫ್ ಬಜಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಜ್,ಕಾಂಗ್ರೆಸ್ ಮುಖಂಡರಾದ ಎಚ್.ಮಹಮ್ಮದ್ ಆಲಿ ಪುತ್ತೂರು , ಚಾರ್ಮಾಡಿ ಹಸನಬ್ಬ , ಅಬ್ದುಲ್ ಜಲೀಲ್ ಕೃಷ್ಣಾಪುರ, ಸುಹೈಲ್ ಕಂದಕ್, ಶಬೀರ್ ಸಿದ್ದಕಟ್ಟೆ, , ವಹಾಬ್ ಕುದ್ರೋಳಿ, ಅಬ್ದುಲ್ ರಹಿಮಾನ್ ಪಡ್ಪು, ಮಕ್ಬೂಲ್ ಅಹ್ಮದ್, ಅಶ್ರಫ್ ಕಡಬ, ಕರೀಮ್ ಬೆಳ್ತಂಗಡಿ, ಆಲ್ವೀನ್ ಪ್ರಕಾಶ್ , ಸಿರಾಜ್ ಬಜ್ಪೆ, ಅಶ್ರಫ್ ಕಾನ , ಅಯ್ಯೂಬ್ ಡಿಕೆ ಬೆಳ್ತಂಗಡಿ , ಥಾಮಸ್ ಎಡೆಯಾಲ್ ,ರಫೀಕ್ ಕಣ್ಣೂರು, ಮುಹಮ್ಮದ್ ಬಪ್ಪಳಿಗೆ ಮತ್ತಿತರರು ಭಾಗವಹಿಸಿದ್ದರು.
ಭೂತಾನ್ ನಲ್ಲಿ ಭಾರತ ಅನುದಾನಿತ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ
ಥಿಂಪು, ನ.11: ಭೂತಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ನ ರಾಜ ಜಿಗ್ಮೆ ಖೆಸರ್ ನಂಗ್ಯೆಲ್ ವಾಂಗ್ ಚುಕ್ ಮಂಗಳವಾರ ಜಂಟಿಯಾಗಿ ಭಾರತ ಅನುದಾನಿತ ಪುನಾತ್ಸಂಗ್ ಚು -2 ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದ್ದಾರೆ. ಭಾರತ ಮತ್ತು ಭೂತಾನ್ ನ ಪ್ರಗತಿ ಮತ್ತು ಸಮೃದ್ಧಿ ನಿಕಟ ಸಂಬಂಧ ಹೊಂದಿದೆ. ಈ ಪ್ರಗತಿಯನ್ನು ಮುನ್ನಡೆಸುವ ಮತ್ತೊಂದು ಪ್ರಮುಖ ಹೆಜ್ಜೆಯನ್ನು ಇಡಲಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭ ಹೇಳಿದ್ದಾರೆ. ಪುನಾಂತ್ಸಂಗ್ ಚು ನದಿಯ ಉದ್ದಕ್ಕೂ ನೆಲೆಗೊಂಡಿರುವ ಈ ಯೋಜನೆಯು 1,020 ಮೆಗಾವ್ಯಾಟ್ ಉತ್ಪಾದನೆಯ ಸಾಮರ್ಥ್ಯ ವನ್ನು ಹೊಂದಿದೆ ಮತ್ತು ಪ್ರಸ್ತುತ ಭೂತಾನ್ ನ ಅತೀ ದೊಡ್ಡ ಪೂರ್ಣ ಪ್ರಮಾಣದ ಜಲವಿದ್ಯುತ್ ಸ್ಥಾವರವಾಗಿದೆ. ಈ ದೇಶದಲ್ಲಿ ವಿದ್ಯುತ್ ಪ್ರಮುಖ ರಫ್ತು ಸರಕು ಮತ್ತು ಆದಾಯದ ಮೂಲವಾಗಿದೆ ಹಾಗೂ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ನ 99% ನವೀಕರಿಸಬಹುದಾದ ಮೂಲಗಳಿಂದ ಬರುತ್ತದೆ ಮತ್ತು ಬಹುತೇಕ ಭಾರತಕ್ಕೆ ರಫ್ತಾಗುತ್ತದೆ. ಭೂತಾನ್ ನ ನಾಲ್ಕನೇ ದೊರೆ ಜಿಗ್ಮೆ ಸಿಂಗೈ ವಾಂಗ್ ಚುಕ್ ಅವರ 70ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ಭೂತಾನ್ ತಲುಪಿದ್ದಾರೆ.
ರಣಜಿ | ದಿಲ್ಲಿ ವಿರುದ್ಧ ಜಮ್ಮು- ಕಾಶ್ಮೀರಕ್ಕೆ ಐತಿಹಾಸಿಕ ಮೊದಲ ಗೆಲುವು
ಹೊಸದಿಲ್ಲಿ, ನ.11: ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡವು ಮಂಗಳವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅತಿಥೇಯ ದಿಲ್ಲಿ ತಂಡದ ವಿರುದ್ಧ 7 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ರಣಜಿ ಟೂರ್ನಿಯಲ್ಲಿ ಇದೇ ಮೊದಲ ಬಾರಿ ದಿಲ್ಲಿ ಎದುರು ಜಮ್ಮು-ಕಾಶ್ಮೀರ ಜಯಭೇರಿ ಬಾರಿಸಿದೆ. ಈ ಋತುವಿನ ರಣಜಿಯಲ್ಲಿ ಎರಡನೇ ಗೆಲುವು ದಾಖಲಿಸಿರುವ ಜಮ್ಮು-ಕಾಶ್ಮೀರ ತಂಡವು ಎಲೈಟ್ ‘ಡಿ’ ಗುಂಪಿನ ಅಂಕಪಟ್ಟಿಯಲ್ಲಿ ಮುಂಬೈ ತಂಡದ ನಂತರ 2ನೇ ಸ್ಥಾನಕ್ಕೇರಿದೆ. ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಜಮ್ಮು-ಕಾಶ್ಮೀರ ತಂಡವು ವೇಗದ ಬೌಲರ್ ಆಕಿಬ್ ನಬಿ(5-35), ವಂಶಜ್ ಶರ್ಮಾ(2-57)ಹಾಗೂ ಅಬಿದ್ ಮುಷ್ತಾಕ್(2-30)ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ದಿಲ್ಲಿ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 211 ರನ್ ಗೆ ನಿಯಂತ್ರಿಸಿತು. ಇದಕ್ಕೆ ಉತ್ತರವಾಗಿ ಜಮ್ಮು-ಕಾಶ್ಮೀರ ತಂಡವು ಆರಂಭಿಕ ಹಿನ್ನಡೆ ಅನುಭವಿಸಿದ್ದರೂ ನಾಯಕ ಪರಾಸ್ ಡೋಗ್ರಾ(106 ರನ್,183 ಎಸೆತ) ಹಾಗೂ ಅಬ್ದುಲ್ ಸಮದ್(85 ರನ್,115 ಎಸೆತ)ಸಾಹಸದಿಂದ, ಕನ್ಹೈಯಾ ವಧ್ವಾನ್(47 ರನ್, 81 ಎಸೆತ)ಅಮೂಲ್ಯ ಕೊಡುಗೆಯ ನೆರವಿನಿಂದ ಒಟ್ಟು 310 ರನ್ ಕಲೆ ಹಾಕಿ 99 ರನ್ ಮುನ್ನಡೆ ಪಡೆಯುವಲ್ಲಿ ಶಕ್ತವಾಯಿತು. ದಿಲ್ಲಿ ತಂಡ 2ನೇ ಇನಿಂಗ್ಸ್ ನಲ್ಲಿ ನಾಯಕ ಆಯುಷ್ ಬದೋನಿ(72 ರನ್, 73 ಎಸೆತ)ಹಾಗೂ ಆಯುಷ್ ದೊಸೆಜಾ(62 ರನ್, 88 ಎಸೆತ)ಅರ್ಧಶತಕಗಳ ಬಲದಿಂದ ಒಂದು ಹಂತದಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 267 ರನ್ ಗಳಿಸಿತ್ತು. ಆದರೆ ಕೇವಲ 10 ರನ್ ಗೆ ಕೊನೆಯ 5 ವಿಕೆಟ್ ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡು 277 ರನ್ ಗಳಿಸಿ ಆಲೌಟಾಯಿತು. ಎಡಗೈ ಸ್ಪಿನ್ನರ್ ವಂಶಜ್ ಶರ್ಮಾ(6-68) ದಿಲ್ಲಿ ತಂಡದ ಕುಸಿತಕ್ಕೆ ಕಾರಣರಾದರು. ವಂಶಜ್ ತಾನಾಡಿದ ನಾಲ್ಕನೇ ಪಂದ್ಯದಲ್ಲಿ 3ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು. ಜಮ್ಮು-ಕಾಶ್ಮೀರ ತಂಡವು ಗೆಲುವಿಗೆ 179 ರನ್ ಗುರಿ ಪಡೆಯುವಲ್ಲಿ ನೆರವಾದರು. ನಾಲ್ಕನೇ ದಿನವಾದ ಮಂಗಳವಾರ ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 133 ರನ್, 147 ಎಸೆತ, 20 ಬೌಂಡರಿ, 3 ಸಿಕ್ಸರ್)ಆಡಿದ ಆರಂಭಿಕ ಆಟಗಾರ ಕಾಮ್ರಾನ್ ಇಕ್ಬಾಲ್ ಜಮ್ಮು-ಕಾಶ್ಮೀರ ತಂಡವು 43.3 ಓವರ್ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 179 ರನ್ ಗಳಿಸಲು ನೆರವಾದರು. ದಿಲ್ಲಿ ವಿರುದ್ಧದ 43 ರಣಜಿ ಪಂದ್ಯಗಳಲ್ಲಿ ಮೊತ್ತ ಮೊದಲ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಲು ಮಹತ್ವದ ಕೊಡುಗೆ ನೀಡಿದರು. ಈ ಗೆಲುವು ದಿಲ್ಲಿಯ ದಶಕಗಳ ಪ್ರಾಬಲ್ಯವನ್ನು ಮುರಿದಿದ್ದಲ್ಲದೆ, ಜಮ್ಮು-ಕಾಶ್ಮೀರ ತಂಡವು ದೇಶೀಯ ಕ್ರಿಕೆಟ್ ನಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವ ಸಂಕೇತವಾಗಿದೆ. ►ಸಂಕ್ಷಿಪ್ತ ಸ್ಕೋರ್ ದಿಲ್ಲಿ: 211 ಹಾಗೂ 277 ರನ್(ಬದೋನಿ 72, ದೋಸೆಜಾ62, ವಂಶಜ್ 6-68) ಜಮ್ಮು-ಕಾಶ್ಮೀರ: 310 ಹಾಗೂ 179/3(ಕಾಮ್ರಾನ್ ಇಕ್ಬಾಲ್ ಔಟಾಗದೆ 133, ಹ್ರಿತಿಕ್ ಶೊಕೀನ್ 2-52)
ದಿಲ್ಲಿಯಲ್ಲಿ ಕಾರು ಸ್ಫೋಟ | ಕೋಲ್ಕತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಕ್ಕೆ ಬಿಗಿ ಬಂದೋಬಸ್ತ್
ಕೋಲ್ಕತಾ, ನ.11: ದಿಲ್ಲಿಯ ಕೆಂಪುಕೋಟೆ ಸಮೀಪ ಸೋಮವಾರ ಕಾರು ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಈಡನ್ ಗಾರ್ಡನ್ಸ್ ಹಾಗೂ ಕೋಲ್ಕತಾದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗರಿಷ್ಠ ಕಟ್ಟೆಚ್ಚರವಹಿಸಲಾಗಿದೆ ಎಂದು ದೃಢಪಡಿಸಿರುವ ಕೋಲ್ಕತಾ ಪೊಲೀಸ್ ಆಯುಕ್ತ ಮನೋಜ್ ವರ್ಮಾ, ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯದ ಆತಿಥ್ಯವಹಿಸಿರುವ ಈಡನ್ ಗಾರ್ಡನ್ಸ್ ಸ್ಟೇಡಿಯಂ ಸಹಿತ ನಗರದ ಪ್ರಮುಖ ಸ್ಥಳಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ‘‘ನಾವು ಅತ್ಯಂತ ಹೆಚ್ಚು ಅಲರ್ಟ್ ಆಗಿದ್ದೇವೆ. ದಿಲ್ಲಿಯಲ್ಲಿ ನಡೆದಿರುವ ಸ್ಫೋಟವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಹಾಗೂ ಹೆಚ್ಚುವರಿ ಭದ್ರತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ವಿಶೇಷ ಭದ್ರತಾ ಪಡೆ(ಎಸ್ಟಿಎಫ್)ಯನ್ನು ನಿಯೋಜಸಲಾಗಿದೆ’’ ಎಂದು ಕೋಲ್ಕತಾ ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಶಿಷ್ಟಾಚಾರಗಳು ಹಾಗೂ ಜನದಟ್ಟಣೆಯನ್ನು ನಿರ್ವಹಿಸುವ ಯೋಜನೆಯನ್ನು ಅಂತಿಮಗೊಳಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಮಂಗಳವಾರ ಸಭೆ ನಡೆಸಲಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ವಾಸ್ತವ್ಯವಿರುವ ಹೊಟೇಲ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದ ಸಿರಿಯಾ ಅಧ್ಯಕ್ಷ ಅಲ್-ಶರಾ
ವಾಷಿಂಗ್ಟನ್, ನ.11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿದ್ದು ಸಿರಿಯಾ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು, ಅವುಗಳನ್ನು ಅಭಿವೃದ್ಧಿಗೊಳಿಸಿ ಬಲಪಡಿಸುವ ಮಾರ್ಗಗಳು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ. ಸಿರಿಯಾ ಮೇಲಿನ ನಿರ್ಬಂಧವನ್ನು 6 ತಿಂಗಳು ಅಮಾನತುಗೊಳಿಸುವುದಾಗಿ ಅಮೆರಿಕದ ಖಜಾನೆ ಇಲಾಖೆ ಘೋಷಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. 1946ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಸಿರಿಯಾದ ನಾಯಕರೊಬ್ಬರು ಅಮೆರಿಕಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದ್ದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ನಾಟಕೀಯ ಬದಲಾವಣೆಯನ್ನು ಸೂಚಿಸುತ್ತದೆ. `ಸಿರಿಯಾವನ್ನು ಯಶಸ್ವಿಗೊಳಿಸಲು ನಾವು ಎಲ್ಲವನ್ನೂ ಮಾಡುತ್ತೇವೆ' ಎಂದು ಸಭೆಯ ಬಳಿಕ ಟ್ರಂಪ್ ಹೇಳಿದ್ದಾರೆ. ಐಸಿಸ್ ವಿರುದ್ಧ ಜಾಗತಿಕ ಒಕ್ಕೂಟದ 90ನೇ ಸದಸ್ಯನಾಗಿ ಸಿರಿಯಾ ಸೇರ್ಪಡೆಗೊಳ್ಳಲಿದೆ. ವಾಷಿಂಗ್ಟನ್ ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಪುನರಾರಂಭಿಸಲು ಅಮೆರಿಕ ಅನುಮತಿ ನೀಡಲಿದೆ ಎಂದು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಿಜೆಪಿ ಪಾಲಿಗೆ ಬಿಹಾರ ಗ್ಯಾರಂಟಿ? ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಎಡವಿದ್ದು ಎಲ್ಲಿ? Bihar Election 2025
ಬಿಹಾರ ಚುನಾವಣೆ ಮುಕ್ತಾಯವಾಗಿದೆ, 2025 ಬಿಹಾರ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆಯಲು ಕಾರಣ ಒಂದಿತ್ತು. ಸತತವಾಗಿ ಅಧಿಕಾರ ಪಡೆಯುತ್ತಿರುವ, ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಈ ಬಾರಿ ವಿಪಕ್ಷಗಳು ಶಾಕ್ ಕೊಡುತ್ತವಾ? ಎಂಬ ಚರ್ಚೆಯೂ ನಡೆದಿತ್ತು. ಆದರೆ ಚುನಾವಣೆ ಮುಗಿದ ನಂತರ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಇದೀಗ ಬೇರೆಯದ್ದೇ ಉತ್ತರ ಹೇಳುತ್ತಿವೆ. ಹಾಗಾದರೆ,
ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ: 12 ಮೃತ್ಯು; 20 ಮಂದಿಗೆ ಗಾಯ
ಇಸ್ಲಾಮಾಬಾದ್, ನ.11: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ. ಇಸ್ಲಾಮಾಬಾದ್ ನ ಜಿ-11 ಸೆಕ್ಟರ್ ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಪ್ರವೇಶದ್ವಾರದ ಬಳಿ ಆತ್ಮಾಹುತಿ ದಾಳಿ ನಡೆದಿದ್ದು ಆತ್ಮಹತ್ಯಾ ಬಾಂಬರ್ ನ ರುಂಡವು ರಸ್ತೆಯಲ್ಲಿ ಬಿದ್ದಿತ್ತು. ಸ್ಫೋಟದ ತೀವ್ರತೆಗೆ ನ್ಯಾಯಾಲಯದ ಹೊರಗಡೆ ನಿಲ್ಲಿಸಿದ್ದ ಹಲವು ವಾಹನಗಳೂ ಹಾನಿಗೊಂಡಿದ್ದು ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ. ಆದರೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸ್ಫೋಟ ನಡೆಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಬಿಹಾರ ಚುನಾವಣೆ 2025 - ವೋಟ್ ವಿಚಾರಕ್ಕಾಗಿ ಬಡಿದಾಡಿಕೊಂಡ ಗಂಡ- ಹೆಂಡತಿ!
ಬಿಹಾರ ವಿದಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನ. 11ರಂದು 2ನೇ ಹಾಗೂ ಅಂತಿಮ ಸುತ್ತಿನ ಮತದಾನ ನಡೆಯಿತು. ಅಲ್ಲಿನ ಊರೊಂದರಲ್ಲಿ ಮತದಾನಕ್ಕೆ ತೆರಳುವ ಮುನ್ನ ಗಂಡ ಹೆಂಡತಿ ವೋಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿಕೊಂಡಿದ್ದಾರೆ. ಅವರಿಬ್ಬರೂ ಹೊಡೆದಾಡಿಕೊಳ್ಳುವ ವಿಡಿಯೋ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಏನು ಕಾರಣ? ಇಲ್ಲಿದೆ ವಿವರಣೆ.
ಬ್ರಾಹ್ಮಣ್ಯ ಅಧಿಕಾರಶಾಹಿ ಆರೆಸ್ಸೆಸ್ ದೇಶದಿಂದ ತೊಲಗಲಿ: ಪ್ರೊ.ಫಣಿರಾಜ್
ದಸಂಸ ನೇತೃತ್ವದಲ್ಲಿ ಸಂವಿಧಾನ ವಿರೋಧಿ ಆರೆಸ್ಸೆಸ್ ವಿರುದ್ಧ ಪ್ರತಿಭಟನೆ
ಬೆಂಗಳೂರು ಮೈಸೂರು ಹೆದ್ದಾರಿ - ಮಾಗಡಿ ರಸ್ತೆ ನಡುವೆ ನೇರ ಸಂಪರ್ಕಿಸುವ ಎಂಎಆರ್ ಯಾವಾಗ ಆರಂಭ? ಬಿಡಿಎ ಮಾಹಿತಿ
ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾಗಡಿ ರಸ್ತೆಗೆ ಸಂಪರ್ಕಿಸುವ ಮೇಜರ್ ಆರ್ಟೀರಿಯಲ್ ರಸ್ತೆಯನ್ನು 2026ರ ಜನವರಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಶೇ. 76ರಷ್ಟು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ನ್ಯಾಯಾಲಯದ ದಾವೆಗಳ ನಂತರ ಪೂರ್ಣಗೊಳ್ಳಲಿವೆ.
ಉಳ್ಳಾಲ ರೇಂಜ್ ಸೈಯದ್ ಮದನಿ ಎಸ್ಜೆಎಂ ರೇಂಜ್ ಕಾನ್ಫರೆನ್ಸ್
ಉಳ್ಳಾಲ,ನ.11: ಸೈಯದ್ ಮದನಿ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಆಶ್ರಯದಲ್ಲಿ ಕಲ್ಲಾಪು ಸೇವಂತಿಗುಡ್ಡೆಯ ವಿಖಾಯತುಲ್ ಇಸ್ಲಾಂ ಮದ್ರಸ ಸಭಾಭವನದಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು. ಮುಕ್ಕಚೇರಿ ಮದ್ರಸದ ಮುಅಲ್ಲಿಂ ಶರೀಫ್ ಬಾಖವಿ ದುಆಗೈದರು. ತೋಟ ಮದ್ರಸ ಮುಅಲ್ಲಿಂ ಮುಸ್ತಫ ಸಅದಿ ಕಿರಾಅತ್ ಪಠಿಸಿದರು. ಸೇವಂತಿಗುಡ್ಡೆ ಮಸೀದಿಯ ಇಮಾಂ ಅಬ್ದುಲ್ ಹಕೀಂ ಮದನಿ ಸಭೆಯನ್ನು ಉದ್ಘಾಟಿಸಿದರು. ಯೂನುಸ್ ಇಮ್ದಾದಿ ಅಲ್ಫುರ್ಖಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮದನಿ ಅರೆಬಿಕ್ ಎಜುಕೇಶನಲ್ ಟ್ರಸ್ಟ್ ಮುಫತ್ತಿಸ್ ಹುಸೈನ್ ಸಅದಿ ಹೊಸ್ಮಾರ್, ಸುಂದರಭಾಗ್ ಮದ್ರಸದ ಸದರ್ ಮುಅಲ್ಲಿಂ ಕೆ. ಎಂ. ಮುಹಿಯುದ್ದೀನ್ ಮದನಿ, ಸೇವಂತಿಗುಡ್ಡೆ ಜಮಾಅತ್ ಅಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಮದ್ರಸದ ಸಂಚಾಲಕ ಜಾಬಿರ್ ಕಲ್ಲಾಪು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಕಾರ್ಯದರ್ಶಿ ತೌಸೀಫ್ ಸೇವಂತಿಗುಡ್ಡೆ, ಸದಸ್ಯರಾದ ಮುಹಮ್ಮದ್, ಫಾರೂಕ್ ಮತ್ತು ಅಬೂಬಕರ್ ಜೆಪ್ಪು, ಅರ್ಶದ್, ಆಸಿಫ್ ಕೆರೆಬೈಲು, ನಿಸಾರ್, ಖಲೀಲ್ ಮೇಲಗುಡ್ಡೆ ಭಾಗವಹಿಸಿದರು. ಮಾರ್ಗತಲೆ ಮದ್ರಸದ ಸದರ್ ಮುಅಲ್ಲಿಂ ಜಮಾಲ್ ಮದನಿ ತರಗತಿ ನಡೆಸಿದರು. ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಸದರ್ ಮುಅಲ್ಲಿಂ ವಿ.ಕೆ. ಅಬ್ದುರ್ರಹ್ಮಾನ್ ಸಖಾಫಿ ಕಿತಾಬ್ ಪರಿಚಯ ಮಾಡಿದರು. ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಅಲ್ಲಿಂ ನಿಝಾಂ ಅಮಾನಿ ಅರಬಿ ಭಾಷಾ ದಿನ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ವಿಝ್ ಮಾಸ್ಟರ್ ವಿ.ಎ.ಮುಹಮ್ಮದ್ ಸಖಾಫಿ ಕ್ವಿಝ್ ಸ್ಪರ್ಧೆ ನಡೆಸಿದರು. ಜಾಬಿರ್ ಫಾಳಿಲಿ ಸ್ಪರ್ಧೆಯಲ್ಲಿ ವಿಜೇತರಾದರು. ಇರ್ಫಾನ್ ಸಅದಿ ಮತ್ತು ತಂಡ ಪ್ರವಾದಿ (ಸ) ರವರ ಮದ್ಹ್ ಆಲಾಪಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅಬ್ದುರ್ರಝ್ಝಾಕ್ ಮದನಿ ವಂದಿಸಿದರು.
ಗೃಹ ಸಚಿವ ಅಮಿತ್ ಶಾ ಅಸಮರ್ಥತೆಯಿಂದ ದೆಹಲಿಯಲ್ಲಿ ಸ್ಫೋಟ: ಹರಿಪ್ರಸಾದ್
ದೆಹಲಿಯಲ್ಲಿ ನಡೆದ ಕಾರ್ ಸ್ಫೋಟದ ಕ್ರೂರ ಘಟನೆ ರಾಷ್ಟ್ರದ ಭದ್ರತೆಗೆ ಎದುರಾದ ಗಂಭೀರ ಸವಾಲು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ. ಅಮಾಯಕ ನಾಗರಿಕರ ಪ್ರಾಣ ಕಸಿದುಕೊಂಡ ಈ ಭಯಾನಕ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಷ್ಟ್ರದ ರಾಜಧಾನಿಯಲ್ಲೇ ಇಂತಹ ಕೃತ್ಯ ನಡೆದಿರುವುದು ಸರ್ಕಾರದ ಭದ್ರತಾ ವ್ಯವಸ್ಥೆಯ ವಿಫಲತೆಯ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದ್ದಾರೆ. ದೆಹಲಿಯಂತಹ ಉನ್ನತ
ಬಿಹಾರ ವಿಧಾನ ಸಭಾ ಚುನಾವಣೆ | ಎರಡನೇ ಹಂತದಲ್ಲಿ ಶೇ. 67.14 ಮತದಾನ
ಪಾಟ್ನಾ, ನ. 11: ಬಿಹಾರದಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಎರಡನೇ ಹಂತದಲ್ಲಿ ಸಂಜೆ 5 ಗಂಟೆ ವರೆಗೆ ಶೇ. 67.14 ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆದಿದೆ. ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಎರಡನೇ ಹಾಗೂ ಅಂತಿಮ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅಂತಿಮ ಹಂತದ ಮತದಾನ ಮಗಧ, ಮಿಥಿಲಾಚಲ್, ಸೀಮಾಚಲ್, ಶಹಾಬಾದ್ ಹಾಗೂ ತಿರ್ಹತ್ ವಲಯಗಳಲ್ಲಿರುವ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಮೊದಲ ಹಂತದಲ್ಲಿ 121 ವಿಧಾನ ಸಭಾ ಕ್ಷೇತ್ರಗಳಿಗೆ ನವೆಂಬರ್ 6ರಂದು ಮತದಾನ ನಡೆದಿತ್ತು. ಇದರೊಂದಿಗೆ 243 ವಿಧಾನ ಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ನ. 14ರಂದು ಮತ ಎಣಿಕೆ ನಡೆಯಲಿದೆ.
ಡ್ರಗ್ಸ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರ ಬಂಧನ
ದೇರಳಕಟ್ಟೆ : ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರನ್ನು ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಗ್ರೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಬಂಧಿಸಿದ್ದಾರೆ. ಮುಹಮ್ಮದ್ ನಿಗಾರೀಸ್(22),ಅಬ್ದುಲ್ ಶಕೀಬ್ ಯಾನೆ ಶಾಕಿ (22),ಶಬೀರ್ ಅಹಮ್ಮದ್(24) ಬಂಧಿತರು. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ದುಲೆ ನಿವಾಸಿ ಮುಹಮ್ಮದ್ ನಿಗಾರೀಸ್(22) ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಹಣಕ್ಕಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದನು. ನ.9 ರಂದು ಪೊಲೀಸರು ದಾಳಿ ನಡೆಸಿ ಬಗಂಬಿಲ ಗ್ರೌಂಡಿನಿಂದ ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 59,300 ರೂ. ಬೆಲೆಬಾಳುವ ನಿಷೇಧಿತ 1 ಕೆ.ಜಿ 511 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಕಲಂ 8(ಸಿ), 20(ಬ) ಎನ್ ಡಿಪಿಎಸ್ ಆಕ್ಟ್ 1985 ರೀತಿಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ (22) ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್(24) ಎಂಬವರನ್ನು ಬಂಧಿಸಲಾಗಿದೆ. ಚಾಲಕ ಮತ್ತು ಪೈಟಿಂಗ್ ವೃತ್ತಿಯನ್ನು ನಡೆಸುತ್ತಿದ್ದ ಇಬ್ಬರು ಸ್ನೇಹಿತರಾಗಿದ್ದು, ಶಕೀಬ್ ಬಿ.ಸಿ.ರೋಡ್ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಹಣಕ್ಕಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದರ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಗಂಡಿ ಪ್ರದೇಶದಿಂದ ಬಂಧಿಸಿದ್ದಾರೆ. ಇವರಿಂದ 420 ಗ್ರಾಂ ತೂಕದ ಗಾಂಜಾ ಮೌಲ್ಯ 6,000 ರೂ. ನಗದು ಹಾಗೂ ಮಾರಾಟಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನಿರ್ದೇಶನಂತೆ ಎಸ್.ಐ ಸಿದ್ದಪ್ಪ ನರನೂರ್ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಉಗ್ರರಿಗೆ ಗಲ್ಲು ಶಿಕ್ಷೆ ಗ್ಯಾರಂಟಿ, ಇಸ್ರೇಲ್ ಮಹತ್ವದ ಹೆಜ್ಜೆ!
ಇಸ್ರೇಲ್ ಇದೀಗ ಗಾಜಾ ಪಟ್ಟಿಯಲ್ಲಿ ಡೆಡ್ಲಿ ಅಟ್ಯಾಕ್ ಮುಂದುವರಿಸಿ, ಹಮಾಸ್ ವಿರುದ್ಧ ಭಾರಿ ಘೋರ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ಇಸ್ರೇಲ್ ನಡೆಸುತ್ತಿರುವ ದಾಳಿ ಇಡೀ ಜಗತ್ತಿನಾದ್ಯಂತ ದೊಡ್ಡ ಸೌಂಡ್ ಮಾಡುತ್ತಿದೆ. ಹೀಗಿದ್ದಾಗ ಉಗ್ರರಿಗೆ ಮರಣದಂಡನೆ ವಿಧಿಸುವ ಮಸೂದೆ ಮೊದಲ ವಾಚನವನ್ನು ಇಸ್ರೇಲ್ ಸಂಸತ್ತು ಅಂಗೀಕರಿಸಿದೆ. ಈ ಮೂಲಕ ಗಾಜಾ ಮೇಲೆ ದಾಳಿ ನಡೆಸುತ್ತಿರುವ ಸಮಯದಲ್ಲೇ ಇಸ್ರೇಲ್ ಪಾರ್ಲಿಮೆಂಟ್
ದ.ಕ. ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅನಿ ಮಿನೇಜಸ್ ಆಯ್ಕೆ
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾಮಾಂತರ) ಇದರ ಪ್ರಧಾನ ಕಾರ್ಯದರ್ಶಿಯನ್ನಾಗಿ 34 ನೆಕ್ಕಿಲಾಡಿಯ ಅನಿ ಮಿನೇಜಸ್ ಅವರನ್ನು ನೇಮಕಗೊಳಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಆದೇಶಿಸಿದ್ದಾರೆ. ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಅನಿ ಮಿನೇಜಸ್ ಅವರು ಒಂದು ಅವಧಿಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಈ ಸಂದರ್ಭ ತನಗೆ ಬರುವ ತಿಂಗಳ ಗೌರವ ಧನವನ್ನು ಬಡ ಕುಟುಂಬಗಳಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು. ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. 34 ನೆಕ್ಕಿಲಾಡಿ ಗ್ರಾಮದ ಬೀತಲಪ್ಪುವಿನಲ್ಲಿ ಸುಶೀಲಾ ಅವರ ಮನೆ ಕುಸಿದು ಬಿದ್ದ ಸಂದರ್ಭ ಸಮಾನ ಮನಸ್ಕ ದಾನಿಗಳ ನೆರವು ಪಡೆದು ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ರೂ. ವೆಚ್ಚದಲ್ಲಿ ಅವರ ಮನೆಯನ್ನು ಪುನರ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಬೀತಲಪ್ಪುವಿನ ಉಷಾ ಅವರ ಮನೆಯ ಮೇಲ್ಚಾವಣಿಯನ್ನು ಸುಮಾರು 80 ಸಾವಿರ ರೂ. ವೆಚ್ಚದಲ್ಲಿ ದಾನಿಗಳ ನೆರವಿನಲ್ಲಿ ನಿರ್ಮಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಇವರು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು, ಪಕ್ಷ ಸಂಘಟಿಸುವಲ್ಲಿ ಮತ್ತು ಗ್ರಾಮದ ಅಭಿವೃದ್ಧಿಗೆ ಸರಕಾರದಿಂದ ಅನುದಾನ ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರಲ್ಲದೆ, ನೆಕ್ಕಿಲಾಡಿ ಗ್ರಾಮದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಂಬಾ ಅವರ ನೇತೃತ್ವದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ದುಡಿಯಲು ಸೌಮ್ಯ ರೆಡ್ಡಿಯವರ ಆದೇಶದಂತೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾ) ಇದರ ಅಧ್ಯಕ್ಷೆ ಉಷಾ ಅಂಚನ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅನಿ ಮಿನೇಜಸ್ ಅವರನ್ನು ನೇಮಕಗೊಳಿಸಿದ್ದಾರೆ.
ಸ್ಫೋಟಗೊಂಡ ಕಾರಿನಲ್ಲಿದ್ದ ಮೃತದೇಹಗಳ ಮಾದರಿಗಳ ಪರಿಶೀಲನೆ: ಗೃಹ ಸಚಿವ ಅಮಿತ್ ಶಾ ಸೂಚನೆ
ಹೊಸದಿಲ್ಲಿ: ದಿಲ್ಲಿಯ ಕೆಂಪುಕೋಟೆಯ ಬಳಿ ಸ್ಫೋಟಗೊಂಡ ಕಾರಿನಲ್ಲಿದ್ದ ಮೃತದೇಹಗಳ ಅವಶೇಷಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಹೋಲಿಕೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಐಎಲ್)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತನಿಖೆಯ ವಿವರಗಳನ್ನು ಸಾಧ್ಯವಿದ್ದಷ್ಟು ಶೀಘ್ರವೇ ನೀಡುವಂತೆ ಅವರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಸ್ಪೋಟ ಪ್ರಕರಣ | ನ.13ರವರೆಗೆ ಪ್ರವಾಸಿಗರಿಗೆ ಕೆಂಪುಕೋಟೆ ಬಂದ್
ಹೊಸದಿಲ್ಲಿ,ನ.11: ಭೀಕರ್ ಕಾರ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ಕೆಂಪುಕೋಟೆ ಪ್ರದೇಶವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನವೆಂಬರ್ 11ರಿಂದ 13ರವರೆಗೆ ಪ್ರವಾಸಿಗರಿಗೆ ಮುಚ್ಚಿದೆ. ಐತಿಹಾಸಿಕ ಕೆಂಪುಕೋಟೆ ಸ್ಮಾರಕವನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸುವಂತೆ ದಿಲ್ಲಿಯ ಕೋಟ್ವಾಲಿ ಠಾಣಾ ಪೊಲೀಸರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಕಾರ್ ಸ್ಫೋಟದ ಘಟನೆ ನಡೆದ ಕೆಂಪುಕೋಟೆ ಪ್ರದೇಶದಲ್ಲಿ ಸ್ಥಳದ ಮಹಜರು ಪ್ರಗತಿಯಲ್ಲಿದೆ. ಆದುದರಿಂದ ಕೆಂಪುಕೋಟೆಯನ್ನು ನ.11ರಿಂದ 13ರವರೆಗೆ ಮೂರು ದಿನಗಳ ಕಾಲ ಮುಚ್ಚುಗಡೆಗೊಳಿಸಬೇಕೆಂದು ಪತ್ರದಲ್ಲಿ ಕೋರಲಾಗಿತ್ತು.
ಕೆಂಪು ಕೋಟೆ ಬಳಿ ಸ್ಫೋಟಿಸಿದ ಕಾರಿನ ಚಾಲಕನಿಗೆ ಸ್ಫೋಟಕ ದಾಸ್ತಾನು ಪ್ರಕರಣದ ಆರೋಪಿಗಳ ಜೊತೆ ನಂಟು?
ಹೊಸದಿಲ್ಲಿ,ನ.11: ಕೆಂಪುಕೋಟೆ ಸಮೀಪ ಸೋಮವಾರ ಸ್ಪೋಟಗೊಂಡ ಕಾರಿನ ಚಾಲಕನೆಂದು ಶಂಕಿಸಲಾದ ಡಾ. ಉಮರ್ ಉನ್ ನಬಿ, ಫರೀದಾಬಾದ್ ಹಾಗೂ ಫತೇಹಪುರ ಟಾಗಾ ಗ್ರಾಮಗಳಲ್ಲಿ ಪತ್ತೆಯಾದ 2900 ಕೆ.ಜಿ.ದಹನಕಾರಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಪ್ರಕರಣದ ಜೊತೆ ನಂಟು ಹೊಂದಿದ್ದಾನೆಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಡಾ. ಉಮರ್ ಉನ್ ನಬಿಯು ಫರೀದಾಬಾದ್ ನಲ್ಲಿರುವ ತನ್ನ ಬಾಡಿಗೆ ಮನೆಯಿಂದ ಸ್ಫೋಟಕ ಸಾಮಾಗ್ರಿಗಳನ್ನು ದಿಲ್ಲಿಗೆ ಸಾಗಾಟ ಮಾಡಿದ್ದನೆಂದು ಅವರು ಹೇಳಿದ್ದಾರೆ. ಮೂಲತಃ ಪುಲ್ವಾಮ ನಿವಾಸಿಯಾದ ಡಾ. ಉಮರ್ ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಬಂಧಿತರಾದ ಇಬ್ಬರು ವೈದ್ಯರ ಜೊತೆ ಸಂಪರ್ಕದಲ್ಲಿದ್ದನೆನ್ನಲಾಗಿದೆ. ಸೋಮವಾರ ಸಂಜೆ ಆತ ಚಲಾಯಿಸುತ್ತಿದ್ದ ಬಿಳಿ ಬಣ್ಣದ ಹುಂಡೈ ಐ20 ಕಾರು, ಸಿಗ್ನಲ್ ಸಮೀಪ ನಿಧಾನವಾಗಿ ಚಲಿಸುತ್ತಿದ್ದಾಗ ಸ್ಫೋಟಿಸಿತು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸ್ಫೋಟದ ತೀವ್ರತೆಯಿಂದಾಗಿ ಆಸುಪಾಸಿನ ವಾಹನಗಳು ಬೆಂಕಿಯ ಜ್ವಾಲೆಗೆ ಆಹುತಿಯಾಗಿದ್ದು, 13 ಮಂದಿ ಸಾವನ್ನಪ್ಪಿದರು ಹಾಗೂ ಹಲವರು ಗಾಯಗೊಂಡರು. ಕಳೆದ ಮೂರು ವರ್ಷಗಳಿಂದ ಫರೀದಾಬಾದ್ ನ ಅಲ್ಫಲಹ್ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಳೆದ ವಾರ ಆನಂತನಾಗ್ ನ ಸರಕಾರಿ ಮೆಡಿಕಲ್ ಕಾಲೇಜ್ ನ ನಿವಾಸಿಯಾದ ಅದೀಲ್ ಅಹ್ಮದ್ ರಾಥೇರ್ ಜೊತೆಗೂಡಿ ಈ ಸಂಚನ್ನು ರೂಪಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಉಮರ್ ನ ಸಹೋದರರಾದ ಉಮರ್ ರಶೀದ್ ಹಾಗೂ ಆಮೀರ್ ರಶೀದ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಶೀದ್ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದರೆ, ರಶೀದ್ ಪ್ಲಂಬರ್ ಎಂದು ತಿಳಿದುಬಂದಿದೆ. ದಿಲ್ಲಿ ಕಾರ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಫರೀದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳನ್ನು ಮಂಗಳವಾರ ಜಮ್ಮುಕಾಶ್ಮೀರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉಮರ್ ಹಾಗೂ ಆತನ ಸಹಚರನಾದ ಪುಲ್ವಾಮಾದ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಡಾ. ಮುಝಮ್ಮಿಲ್ ಶಕೀಲ್ ರ ಚಲನವಲಗಳನ್ನು ಜಾಡನ್ನು ತಿಳಿಯಲು ಫರೀದಾಬಾದ್ ಪೊಲೀಸರು ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹರ್ಯಾಣದ ಫರೀದಾಬಾದ್ ನಲ್ಲಿರುವ ಎರಡು ವಸತಿ ಕಟ್ಟಡಗಳಿಂದ 3 ಸಾವಿರ ಕೆ.ಜಿ. ಸ್ಫೋಟಕವಸ್ತುಗಳನ್ನು ಜಮ್ಮುಕಾಶ್ಮೀರ ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡ ಕೆಲವೇ ತಾಸುಗಳ ಬಳಿಕ ದಿಲ್ಲಿಯಲ್ಲಿ ಕಾರ್ ಸ್ಫೋಟ ನಡೆದಿದೆ. ಫರೀದಾಬಾದ್ ನಲ್ಲಿ ಸೋಮವಾರ ವೈದ್ಯರಾದ ಡಾ. ಮುಝಮ್ಮಿಲ್ ಶಕೀಲ್ ಹಾಗೂ ಡಾ.ಅದಿಲ್ ರಾಥೆರ್ ರನ್ನು ಸೋಮವಾರ ಬಂಧಿಸಿದ ಜಮ್ಮಕಾಶ್ಮೀರ ಪೊಲೀಸರು ಅವರಿಂದ ಅಮೋನಿಯಂ ನೈಟ್ರೇಟ್ ರಾಸಾಯನಿಕ ಸೇರಿದಂತೆ ಸ್ಫೋಟಕವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ರಸ್ತೆ ಅಪಘಾತ: ವ್ಯಕ್ತಿ ಅನುಮಾನಾಸ್ಪದ ಸಾವು
ಗಂಗೊಳ್ಳಿ, ನ.11: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನ.10ರಂದು ಸಂಜೆ ಗುಜ್ಜಾಡಿ ಗ್ರಾಮದ ಮಾವಿನಕಟ್ಟೆ ಬಳಿ ನಡೆದಿದೆ. ಮೃತರನ್ನು ಗಂಗೊಳ್ಳಿಯ ಜಿ.ಮುಹಮ್ಮದ್ ಇರ್ಪಾನ್(66) ಎಂದು ಗುರುತಿಸಲಾಗಿದೆ. ಇವರು ತ್ರಾಸಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ಬರುತ್ತಿರುವಾಗ ರಸ್ತೆ ಅಪಘಾತವಾಗಿ ಅಥವಾ ಯಾವುದೋ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಅಪಘಾತ ನಂತರ ಮೃತದೇಹವನ್ನು ಮತ್ತು ಬೈಕ್ ಅನ್ನು ರಸ್ತೆಯ ಬದಿಯಿಂದ ಸುಮಾರು 8 ಅಡಿ ದೂರಕ್ಕೆ ಹಾಕಿರುವ ಸಾಧ್ಯತೆ ಇರುವುದು ಕಂಡುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ದಿಲ್ಲಿ ಕಾರ್ ಸ್ಫೋಟ ತನಿಖೆ ಚುರುಕು | ಪುಲ್ವಾಮದ ವೈದ್ಯನಿಂದ ಆತ್ಮಹತ್ಯಾ ದಾಳಿ ಶಂಕೆ
ಹೊಸದಿಲ್ಲಿ,ನ.11: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ ಕಾರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಐತಿಹಾಸಿಕ ಕೆಂಪುಕೋಟೆ ಪ್ರದೇಶದ ಮೆಟ್ರೋ ನಿಲ್ದಾಣದ ಸಮೀಪ ನಡೆದ ಈ ಭೀಕರ ಸ್ಪೋಟವು ಭಯೋತ್ಪಾದಕ ಕೃತ್ಯವೆಂದು ತನಿಖಾ ಏಜೆನ್ಸಿಗಳು ತಿಳಿಸಿದ್ದು, ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಿದೆ. ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪುಲ್ವಾಮಾದ ವೈದ್ಯ ಡಾ. ಉಮರ್ ನಬಿ ಎಂದು ತನಿಖಾ ಏಜೆನ್ಸಿಗಳು ಗುರುತಿಸಿವೆ. ಈತ ಕಾರನ್ನು ಸ್ಫೋಟಿಸಿ ಆತ್ಮಹತ್ಯಾದಾಳಿ ನಡೆಸಿದ್ದಾನೆಂದು ಅವು ಶಂಕಿಸಿವೆ. ಘಟನೆಗೆ ಸಂಬಂಧಿಸಿ ಪೊಲೀಸರು ಕನಿಷ್ಠ ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯ ಸಂಚುಕೋರರನ್ನು ಸದೆಬಡಿಯದೆ ಬಿಡುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ದಿಲ್ಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮ್ಮುಕಾಶ್ಮೀರ ಪೊಲೀಸರು ಮಂಗಳವಾರ ಕಣಿವೆ ಪ್ರದೇಶದ ವಿವಿಧೆಡೆ ದಾಳಿಗಳನ್ನು ನಡೆಸಿದ್ದು, ಆರು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಫೋಟಗೊಂಡ ಕಾರಿನ ಚಾಲಕನೆನ್ನಲಾದ ಪುಲ್ವಾಮಾದ ವೈದ್ಯ ಡಾ. ಉಮರ್ ನಬಿಯ ಪುಲ್ವಾಮಾದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಜಮ್ಮುಕಾಶ್ಮೀರ ಪೊಲೀಸರು , ಡಾ. ಉಮರ್ ನಬಿಯ ತಾಯಿ ಹಾಗೂ ಆತನ ಇಬ್ಬರು ಸಹೋದರರು ಬಂಧಿತರಲ್ಲಿ ಒಳಗೊಂಡಿದ್ದಾರೆ. ಮೊಬೈಲ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳು ಸೇರಿದಂತೆ ಮನೆಯಲ್ಲಿದ್ದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿಲ್ಲಿಯ ಕಾರ್ ಸ್ಫೋಟದಲ್ಲಿ ಛಿದ್ರಗೊಂಡ ದೇಹವೊಂದು ಉಮರ್ ನಬಿಯದ್ದೆಂದು ಶಂಕಿಸಲಾಗಿದ್ದು, ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವುದಕ್ಕಾಗಿ ಆತನ ತಾಯಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಹೊಸದಿಲ್ಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ 6.52ರ ವೇಳೆಗೆ ಹುಂಡೈ ಐ20 ಕಾರ್ ಸ್ಫೋಟಗೊಂಡಿದ್ದು, 13 ಮಂದಿ ಮೃತಪಟ್ಟರು ಹಾಗೂ ಹಲವಾರು ಮಂದಿ ಗಾಯಗೊಂಡಿದ್ದರು. ಜನದಟ್ಟಣೆಯ ಪ್ರದೇಶಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಯಿಂದಾಗಿ ಹಲವಾರು ವಾಹನಗಳು ಹೊತ್ತಿ ಉರಿದಿದ್ದು, ಮೃತದೇಹಗಳು ಛಿದ್ರಗೊಂಡು ಪ್ರದೇಶದೆಲ್ಲೆಡೆ ಚದುರಿ ಬಿದ್ದಿದ್ದವು.
ಶಿರ್ವ, ನ.11: ಶಿರ್ವ ಸಮೀಪದ ಇರ್ಮಿಂಜ ಚರ್ಚ್ ಸಮೀಪ ನ.9ರಂದು ರಾತ್ರಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಬಂಸಿದ್ದಾರೆ. ಹಾವೇರಿ ಮೂಲದ ನಿಂಗಪ್ಪ ಗಡ್ಡದವರ(37), ನಿಂಗಪ್ಪ ಅಂಬಿಗೇರ (23), ರಾಘವೇಂದ್ರ ಸಣ್ಣತಂಗೇರ(28) ಬಂಧಿತ ಆರೋಪಿಗಳು. ಇವರಿಂದ 1,900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿ ಕಾರು ಸ್ಪೋಟ: ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ
ಉಡುಪಿ, ನ.11: ದೆಹಲಿಯಲ್ಲಿ ನಡೆದ ಕಾರು ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಕರಾವಳಿ ಕಾವಲು ಪೊಲೀಸರು ಸಮುದ್ರ ತೀರದಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾತ್ರಿ ಗಸ್ತಿನಲ್ಲಿದ್ದ ಅಕಾರಿಗಳಿಗೆ ಎಲ್ಲ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಸಮುದ್ರ ತೀರದಲ್ಲಿ ಯಾವುದೇ ಸಂದೇಹಾಸ್ಪದ ಚಟುವಟಿಕೆಗಳ ಕುರಿತು ಕರಾವಳಿ ಕಾವಲು ಪೊಲೀಸರ ಮೂಲಕ ಸಮನ್ವಯತೆ ಸಾಸಲಾಗುತ್ತಿದೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಲ್ಪೆ ಸೇರಿದಂತೆ ಜಿಲ್ಲೆಯ ಕರಾವಳಿ ತೀರದಲ್ಲಿ ಕರಾವಳಿ ಕಾವಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಅನುಮಾನಾಸ್ಪದ ಬೋಟುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಳ ಸಮುದ್ರದಲ್ಲಿ ಅಪರಿಚಿತ ಬೋಟುಗಳ ಬಗ್ಗೆ ನಿಗಾ ವಹಿಸಲಾಗಿದೆ. ನಿರಂತರ ಸಮುದ್ರದಲ್ಲಿ ಗಸ್ತು ತಿರುಗುವ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೀಫ್ ಅಂತರ್ ಜಿಲ್ಲಾ ವಿದ್ಯಾರ್ಥಿನಿಯರ ಥ್ರೋಬಾಲ್ ಪಂದ್ಯಾಟ
ಮಂಗಳೂರು, ನ.11: ಮುಸ್ಲಿಂ ವಿದ್ಯಾ ಸಂಸ್ಥೆಗಳ ಒಕ್ಕೂಟ, ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯ ಮತ್ತು ಹಿರಾ ಮಹಿಳಾ ಕಾಲೇಜಿನ ಪ್ರಾಯಫಕತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಮೀಫ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ ಅಂತರ್ ಜಿಲ್ಲಾ ಥ್ರೋಬಾಲ್ ಸ್ಪರ್ಧಾಕೂಟವು ಮಂಗಳವಾರ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನಲ್ಲಿ ಜರುಗಿತು. ಎಸಿಪಿ ಗೀತಾ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಅಂತರರಾಷ್ಟ್ರೀಯ ಕ್ರೀಡಾಪಟು ಸರಸ್ವತಿ ಕಾಮತ್ ಬಾಳಿಲ ಭಾಗವಹಿಸಿದ್ದರು. ಶಾಂತಿ ಎಜುಕೇಶನ್ ಟ್ರಸ್ಟ್ನ ಚೇರ್ಮ್ಯಾನ್ ಎ.ಎಚ್. ಮಹಮೂದ್ ಅಧ್ಯಕ್ಷತೆ ವಹಿಸಿದ್ದರು. ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಿಗೆ ಪ್ರತ್ಯೇಕವಾಗಿ ಏರ್ಪಡಿಸಲಾದ ಈ ಸ್ಪರ್ಧೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ 37 ವಿದ್ಯಾಸಂಸ್ಥೆಗಳ ಸುಮಾರು 500 ಸ್ಪರ್ಧಾರ್ಥಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. 2025ನೇ ಸಾಲಿನ ಥ್ರೋಬಾಲ್ ಪಂದ್ಯಾಟದ ಹೈಸ್ಕೂಲ್ ವಿಭಾಗದಲ್ಲಿ ಮೌಂಟೈನ್ ವೀವ್ ಸಾಲ್ಮರ ಪುತ್ತೂರು ಶಾಲೆಯು ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಜಾಮಿಯಾ ಶಾಲೆ ಜೊಕ್ಕಬೆಟ್ಟು ದ್ವಿತೀಯ ಸ್ಥಾನ ಹಾಗೂ ಪಿಯುಸಿ ವಿಭಾಗದಲ್ಲಿ ಜಾಮಿಯಾ ಕಾಲೇಜ್ ಚೊಕ್ಕಬೆಟ್ಟು ಚಾಂಪಿಯನ್ ಪಟ್ಟ ಅಲಂಕರಿಸಿತು. ಅನುಗ್ರಹ ಕಾಲೇಜ್ ಕಲ್ಲಡ್ಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಈ ಪಂದ್ಯಾವಳಿಯ ಸಂಚಾಲಕರಾಗಿ ಹಿರಾ ವಿದ್ಯಾ ಸಂಸ್ಥೆಯ ಅಬ್ದುಲ್ ರಹಿಮಾನ್, ಅನುಗ್ರಹ ಕಾಲೇಜಿನ ಹೈದರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರಾಜ್ಕಿಶೋರ್ ಸಮನ್ವಯವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ಮಹಿಳಾ ತಂಡವು ತೀರ್ಪುಗಾರರಾಗಿ ಸಹಕರಿಸಿತು. ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ , ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ., ಉಪಾಧ್ಯಕ್ಷ ಪರ್ವೇಝ್ ಅಲಿ, ಕಾರ್ಯದರ್ಶಿಗಳಾದ ಶಾರಿಕ್, ಅನ್ವರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅಶ್ರಫ್ ಬಾವ ಹಾಗೂ ಹಿರಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ, ಶಾಂತಿ ಎಜುಕೇಷನಲ್ ಟ್ರಸ್ಟಿನ ಟ್ರಸ್ಟಿಗಳಾದ ಹನೀಫ್ ಮಾಸ್ಟರ್ ಮತ್ತು ಅಬ್ದುಲ್ ಖಾದರ್, ಹಿರಾ ಮಹಿಳಾ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಆಯಿಷಾ ಅಸ್ಮಿನ್, ಹಿರಾ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ಫಾತಿಮಾ ಮಹ್ರೂನ್, ಹಿರಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಯಿಷಾ ಅಫ್ರೀನಾ, ಹಿರಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೀನಾ ವೇಗಸ್ ಮತ್ತು ಹಿರಾ ಇನ್ಸ್ಟಿಟ್ಯೂಶನ್ನ ಕಾರ್ಯನಿರ್ವಾಹಕ ಅಧಿಕಾರಿ ಝಾಕಿರ್ ಹುಸೈನ್ ಉಪಸ್ಥಿತರಿದ್ದರು.
Ukraine War: ಉಕ್ರೇನ್ ವಿರುದ್ಧ ರಷ್ಯಾ ಡೆಡ್ಲಿ ಡ್ರೋನ್ ಅಟ್ಯಾಕ್, ನಿಲ್ಲುತ್ತಿಲ್ಲ ಸಾವು &ನೋವು...
ರಷ್ಯಾ &ಉಕ್ರೇನ್ ನಡುವೆ ಯುದ್ಧದ ಬೆಂಕಿ ಆರುತ್ತಿಲ್ಲ, ಬದಲಾಗಿ ಇನ್ನಷ್ಟು ಜಾಗಕ್ಕೆ ಹಬ್ಬುತ್ತಾ ಭಯ ಸೃಷ್ಟಿ ಮಾಡಿದೆ. ರಷ್ಯಾ &ಉಕ್ರೇನ್ ಯುದ್ಧಕ್ಕೆ ಇನ್ನೇನು 4 ತಿಂಗಳಲ್ಲಿ 4 ವರ್ಷ ತುಂಬಿ ಹೋಗಲಿದೆ. ಹೀಗಿದ್ದರೂ ಯುದ್ಧ ನಿಲ್ಲದೆ ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡುತ್ತಾ ಇದ್ದಾರೆ. ಮತ್ತೊಂದು ಕಡೆ ದಿಢೀರ್ ರಷ್ಯಾ
ಅಧಿಕ ಲಾಭದ ಆಮಿಷವೊಡ್ಡಿ ವಂಚನೆ : ಪ್ರಕರಣ ದಾಖಲು
ಮಂಗಳೂರು, ನ.11: ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ 2 ಕೋ.ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ 2022ರ ಮೇ 1ರಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ತಾನು ಡೆಲ್ಟಿನ್ ರೋಯಲ್ ಕಂಪನಿಯ ಅಂಕಿತ್ ಎಂದು ಪರಿಚಯಿಸಿದ್ದ. ಆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಹಾಗೂ ಲಾಭಾಂಶವನ್ನು ನೀಡುವುದಾಗಿ ತಿಳಿಸಿದ್ದ. ಅಲ್ಲದೆ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್, ಅಖಿಲ್ ಎಂಬುವರ ಪರಿಚಯವನ್ನೂ ಮಾಡಿದ್ದ. ಇದನ್ನೆಲ್ಲಾ ನಂಬಿದ ತಾನು 2022ರ ಮೇ 1ರಂದು 3,500 ರೂ. ಹಣವನ್ನು ಅಂಕಿತ್ ನೀಡಿದ ಅಪರಿಚಿತ ವ್ಯಕ್ತಿಯ ಸ್ಕ್ಯಾನರ್ ಮೂಲಕ ಫೆಡರಲ್ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾಯಿಸಿದೆ. ಆ ದಿನ ತನಗೆ 1,000 ರೂ. ಲಾಭಾಂಶದ ಹಣವನ್ನು ತನ್ನ ಫೆಡೆರಲ್ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಬಳಿಕ ತಾನು ಹಂತ ಹಂತ ವಾಗಿ ಫೆಡೆರಲ್ ಬ್ಯಾಂಕ್, ಕೆನರಾ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್ ಹಾಗೂ ತನ್ನ ಸಂಬಂಧಿಕರ ಖಾತೆಯಿಂದ 2022ರ ಮೇ ತಿಂಗಳಿಂದ 2025ರ ಆ.29ರವರೆಗೆ 2 ಕೋ.ರೂ.ಗಿಂತಲೂ ಹೆಚ್ಚಿನ ಹಣ ವರ್ಗಾವಣೆ ಮಾಡಿರುವೆ. ಕಳೆದ ಮೂರು ತಿಂಗಳಿನಿಂದ ಆರೋಪಿಗಳು ವಾಟ್ಸ್ಆ್ಯಪ್ ಮೆಸೇಜ್ ಮತ್ತು ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ಅನುಮಾನಗೊಂಡು ಅಂಕಿತ್ ಬಳಿ ಕರೆ ಮಾಡಿ ಹಣ ವಾಪಸ್ ನೀಡುವಂತೆ ಕೇಳಿದಾಗ ಕುಶಾಗರ್ ಜೈನ್, ಅಖಿಲ್ ಮತ್ತು ಸುಮಿತ್ ಜೈಸ್ವಾಲ್ ಮೋಸ ಮಾಡಿರುವ ಬಗ್ಗೆ ಹೇಳಿದ್ದಾನೆ ಎಂದು ಹಣ ಕಳಕೊಂಡ ವ್ಯಕ್ತಿ ತಿಳಿಸಿದ್ದಾರೆ. ಬಳಿಕ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿದ ಆರೋಪಿಗಳು ಹೂಡಿಕೆ ಮಾಡಿದ ಯಾವುದೇ ಹಣ ಹಿಂದಿರುಗಿಸುವುದಿಲ್ಲ. ಈ ಬಗ್ಗೆ ದೂರು ನೀಡಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಾರ್ಜಿಯಾದಲ್ಲಿ ಟರ್ಕಿಯ ಸೇನಾ ವಿಮಾನ ಪತನ: 20 ಮಂದಿ ಪ್ರಯಾಣಿಕರ ಸಾವು
ಅಜೆರ್ಬೈಜಾನ್ನಿಂದ ಟರ್ಕಿಗೆ ಹಿಂದಿರುಗುತ್ತಿದ್ದ ಟರ್ಕಿಶ್ ಸೇನೆಯ C-130 ವಿಮಾನ ಜಾರ್ಜಿಯಾದಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ 20 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ವಿಮಾನವು ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಲ್ಲಿ ಪತನಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಘಟನೆಯ ಬಗ್ಗೆ ಟರ್ಕಿ ಮತ್ತು ಅಜೆರ್ಬೈಜಾನ್ ಅಧ್ಯಕ್ಷರು ದುಃಖ ವ್ಯಕ್ತಪಡಿಸಿದ್ದಾರೆ. ಜಾರ್ಜಿಯಾ ಅಧಿಕಾರಿಗಳೊಂದಿಗೆ ಟರ್ಕಿ ಸಂಪರ್ಕದಲ್ಲಿದೆ.
ಕಾಂಬೋಡಿಯಾ – ಥೈಲ್ಯಾಂಡ್ ಶಾಂತಿ ಒಪ್ಪಂದ ಅಮಾನತು
ಬ್ಯಾಂಕಾಕ್, ನ.11: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕಳೆದ ತಿಂಗಳು ಸಹಿ ಹಾಕಲಾಗಿದ್ದ ಕಾಂಬೋಡಿಯಾ-ಥೈಲ್ಯಾಂಡ್ ಶಾಂತಿ ಒಪ್ಪಂದವನ್ನು ಥೈಲ್ಯಾಂಡ್ ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ. ಕಾಂಬೋಡಿಯಾದೊಂದಿಗಿನ ಗಡಿ ಭಾಗದಲ್ಲಿ ನೆಲದಡಿ ಹೂತಿದ್ದ ಸ್ಫೋಟಕ ಸಿಡಿದು ಥೈಲ್ಯಾಂಡ್ ನ ಯೋಧರು ಗಾಯಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಥೈಲ್ಯಾಂಡ್ ನ ರಕ್ಷಣಾ ಸಚಿವ ನಟ್ಟಫೊವಾನ್ ನರ್ಕ್ಫನಿಟ್ ಹೇಳಿದ್ದಾರೆ. ಘಟನೆಯ ಬಳಿಕ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಒಪ್ಪಂದವನ್ನು ಅಮಾನತಿನಲ್ಲಿರಿಸುವ ಮತ್ತು ಒಪ್ಪಂದದ ಪ್ರಕಾರ ಕಾಂಬೋಡಿಯಾದ ಬಂಧಿತರನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಸರ್ಕಾರದ ವಕ್ತಾರ ಸಿರಿಪೊಂಗ್ ಅಂಕಾಸಕುಲ್ಕಿಯಾಟ್ ಹೇಳಿದ್ದಾರೆ. ಈ ಮಧ್ಯೆ, ಥೈಲ್ಯಾಂಡ್ ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಗಡಿಯನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಲು ಪ್ರಧಾನಿ ಅನುಟಿನ್ ಚರ್ನ್ವಿರಾಕುಲ್ ರಕ್ಷಣಾ ಇಲಾಖೆಗೆ ಸೂಚಿಸಿದ್ದಾರೆ. ಒಂದು ವೇಳೆ ಥೈಲ್ಯಾಂಡ್ ಸಲ್ಲಿಸಿದ ಔಪಚಾರಿಕ ಪ್ರತಿಭಟನೆಗೆ ಕಾಂಬೋಡಿಯಾ ಪ್ರತಿಕ್ರಿಯಿಸದಿದ್ದರೆ ಶಾಂತಿ ಒಪ್ಪಂದದ ಸಂಪೂರ್ಣ ರದ್ದತಿಯನ್ನು ಸರಕಾರ ಪರಿಗಣಿಸಬಹುದು ಎಂದು ಸರಕಾರ ಹೇಳಿದೆ.
ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ
ಉಡುಪಿ, ನ.11: 2024-25ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಯಾವುದೇ ಡಿಪ್ಲೋಮಾ ಪದವಿ ಪಡೆದು ನಿರುದ್ಯೋಗಿಯಾಗಿರುವ ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು 3,000ರೂ. (ಪದವೀಧರ ನಿರುದ್ಯೋಗಿಗಳಿಗೆ) ಹಾಗೂ 1,500ರೂ.(ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ) ನೇರ ನಗದು ಪಡೆಯುತ್ತಿದ್ದಾರೆ. ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕದ ಬದಲಾಗಿ ಇನ್ನು ಮುಂದೆ ಪ್ರತಿ ತಿಂಗಳು ನವಂಬರ್ 1ರಿಂದ 25ರೊಳಗೆ ಕಡ್ಡಾಯವಾಗಿ ಆನ್ ಲೈನ್ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ನೀಡುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಬಿ. ಬ್ಲಾಕ್ ರೂ ನಂಬರ್ 201 ಮೊದಲನೆ ಮಹಡಿ ರಜತಾದ್ರಿ ಮಣಿಪಾಲ ಅಥವಾ ದೂ.ಸಂ: 0820-2574869 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ, ನ.11: ರಾಜ್ಯ ಗ್ರಾಹಕರ ಆಯೋಗದ ಆದೇಶದಂತೆ 2016 ರಿಂದ 2020ನೇ ಸಾಲಿನವರೆಗಿನ ಕಡತಗಳಲ್ಲಿ ಅಂತಿಮ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ದಾಖಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಗಮನಕ್ಕೆ ತರಬಹುದಾಗಿದೆ. ಮೂಲ ಕಡತ ಮತ್ತು ಅಮಲ್ಜಾರಿ ಅರ್ಜಿಗಳಲ್ಲಿನ ಮೂಲ ದಾಖಲೆಗಳು ಅವಶ್ಯವಿದ್ದಲ್ಲಿ ನವೆಂಬರ್ 11ರಿಂದ ಡಿಸೆಂಬರ್ 9ರ ಒಳಗೆ ತೆಗೆದುಕೊಳ್ಳಬಹುದಾಗಿದೆ. ಅನಂತರ ಮೂಲ ದಾಖಲೆಗಳಿಗೆ ಆಯೋಗವು ಜವಾಬ್ದಾರಿ ಹೊಂದಿರುವುದಿಲ್ಲ. ಡಿಸೆಂಬರ್ 10ರ ನಂತರ 5 ವರ್ಷ ಅವಧಿ ಮೀರಿದ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿದ್ದಲ್ಲಿ ಪ್ರತಿಭೆ ಅನಾವರಣ : ದಿನಕರ ಹೇರೂರು
ಮಕ್ಕಳ ವಿವಿಧ ಸ್ಪರ್ಧೆಗಳ ಉದ್ಘಾಟನೆ
ಗಾಝಾ ವಿಭಜನೆಗೊಳ್ಳುವ ಅಪಾಯ ಹೆಚ್ಚಿದೆ: ಯುರೋಪ್ ರಾಜತಾಂತ್ರಿಕರ ಎಚ್ಚರಿಕೆ
ನ್ಯೂಯಾರ್ಕ್, ನ.11: ಕದನ ವಿರಾಮವನ್ನು ಮೀರಿ ಗಾಝಾ ಯುದ್ಧವನ್ನು ಕೊನೆಗೊಳಿಸುವ ಟ್ರಂಪ್ ಯೋಜನೆಯನ್ನು ಮುನ್ನಡೆಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಗಾಝಾವು ವಿಭಜನೆಗೊಳ್ಳುವ ಅಪಾಯ ಹೆಚ್ಚಿದೆ ಎಂದು ಯುರೋಪ್ ನ 6 ಪ್ರಮುಖ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ನಿಂದ ನಿಯಂತ್ರಿಸಲ್ಪಡುವ ಪ್ರದೇಶ ಮತ್ತು ಹಮಾಸ್ ನಿಂದ ಆಳಲ್ಪಡುವ ಮತ್ತೊಂದು ಪ್ರದೇಶದ ನಡುವೆ ಗಾಝಾದ ವಾಸ್ತವಿಕ ವಿಭಜನೆಯ ಅಪಾಯ ಹೆಚ್ಚಿದೆ. ಅದು ದೀರ್ಘಾವಧಿಯ ಪ್ರತ್ಯೇಕತೆಗೆ ಕಾರಣವಾಗಬಹುದು ಎಂದು ಯೋಜನೆಯ ಮುಂದಿನ ಹಂತವನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳ ಬಗ್ಗೆ ಮಾಹಿತಿಯಿರುವ ಯುರೋಪ್ ನ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. ಅಕ್ಟೋಬರ್ 10ರಿಂದ ಜಾರಿಗೆ ಬಂದಿರುವ ಯೋಜನೆಯ ಪ್ರಥಮ ಹಂತದ ಪ್ರಕಾರ, ಇಸ್ರೇಲಿ ಮಿಲಿಟರಿ ಪ್ರಸ್ತುತ ಹೆಚ್ಚಿನ ಕೃಷಿ ಭೂಮಿ, ದಕ್ಷಿಣದಲ್ಲಿ ರಫಾ, ಗಾಝಾ ನಗರದ ಭಾಗ ಮತ್ತು ಇತರ ನಗರ ಪ್ರದೇಶ ಸೇರಿದಂತೆ ಮೆಡಿಟರೇನಿಯನ್ ಪ್ರದೇಶದ 53 ಪ್ರತಿಶತವನ್ನು ನಿಯಂತ್ರಿಸುತ್ತದೆ. ಗಾಝಾದ 2 ದಶಲಕ್ಷ ಜನಸಂಖ್ಯೆಯ ಬಹುತೇಕ ಜನರು ಗಾಝಾದ ಉಳಿದ ಪ್ರದೇಶದಲ್ಲಿ ಡೇರೆಗಳಲ್ಲಿ ಅಥವಾ ಛಿದ್ರಗೊಂಡ ಕಟ್ಟಡಗಳ ಅವಶೇಷಗಳ ನಡುವೆ ತುಂಬಿದ್ದು ಈ ಪ್ರದೇಶ ಹಮಾಸ್ ನ ನಿಯಂತ್ರಣದಲ್ಲಿದೆ. ಯೋಜನೆಯ ಮುಂದಿನ ಹಂತದ ಪ್ರಕಾರ, ಇಸ್ರೇಲ್ `ಹಳದಿ ಗೆರೆ' ಎಂದು ಕರೆಯಲ್ಪಡುವ ಪ್ರದೇಶದವರೆಗೆ ಹಿಂದೆ ಸರಿಯುತ್ತದೆ. ಗಾಝಾವನ್ನು ಆಳಲು ಪರಿವರ್ತನಾ ಪ್ರಾಧಿಕಾರದ ಸ್ಥಾಪನೆ, ಇಸ್ರೇಲ್ ಮಿಲಿಟರಿಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲು ಬಹು ರಾಷ್ಟ್ರೀಯ ಭದ್ರತಾ ಪಡೆಯ ನಿಯೋಜನೆ, ಹಮಾಸ್ ನ ನಿಶ್ಯಸ್ತ್ರೀಕರಣ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಯೋಜನೆಯು ಅನುಷ್ಠಾನಕ್ಕೆ ಯಾವುದೇ ಸಮಯಾವಧಿ ಅಥವಾ ಕಾರ್ಯವಿಧಾನವನ್ನು ಒದಗಿಸಿಲ್ಲ. ಈ ಮಧ್ಯೆ ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಲು ನಿರಾಕರಿಸಿದರೆ, ಪಾಶ್ಚಿಮಾತ್ಯರ ಬೆಂಬಲವಿರುವ ಫೆಲೆಸ್ತೀನಿಯನ್ ಪ್ರಾಧಿಕಾರದ ಯಾವುದೇ ಒಳಗೊಳ್ಳುವಿಕೆಯನ್ನು ಇಸ್ರೇಲ್ ತಿರಸ್ಕರಿಸುತ್ತಿದೆ. ಅಲ್ಲದೆ ಬಹುರಾಷ್ಟೀಯ ಪಡೆಯ ಕುರಿತ ಅನಿಶ್ಚಿತತೆ ಮುಂದುವರಿದಿದೆ. ಹಮಾಸ್ ಅಥವಾ ಇಸ್ರೇಲ್ ನ ನಿಲುವಿನಲ್ಲಿ ಪ್ರಮುಖ ಬದಲಾವಣೆಯಾಗದಿದ್ದರೆ, ಅಥವಾ ಫೆಲೆಸ್ತೀನಿಯನ್ ಪ್ರಾಧಿಕಾರದ ಪಾತ್ರವನ್ನು ಒಪ್ಪಿಕೊಳ್ಳುವಂತೆ ಇಸ್ರೇಲ್ ನ ಮೇಲೆ ಅಮೆರಿಕಾ ಒತ್ತಡ ಹಾಕದಿದ್ದರೆ ಟ್ರಂಪ್ ಅವರ ಯೋಜನೆಯು ಕದನ ವಿರಾಮಕ್ಕಿಂತ ಮುಂದೆ ಸಾಗುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಯುರೋಪಿಯನ್ ಅಧಿಕಾರಿಗಳು ಹೇಳಿದ್ದಾರೆ. ಶಾಂತಿ ಮತ್ತು ಯುದ್ದದ ನಡುವಿನ ನಿರ್ಜನ ಪ್ರದೇಶದಲ್ಲಿ ಗಾಝಾ ಸಿಲುಕಿಕೊಳ್ಳಬಾರದು ಎಂದು ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಪ್ರತಿಪಾದಿಸಿದ್ದಾರೆ.
Islamabad: ಪಾಕಿಸ್ತಾನ ಪ್ರಧಾನಿ ಹುಚ್ಚಾಟ, ಇಸ್ಲಾಮಾಬಾದ್ ಘಟನೆಗೆ ಭಾರತವೇ ಕಾರಣವಂತೆ!
ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧದ ವಾತಾವರಣ ಇದೀಗ ನಿರ್ಮಾಣ ಆಗುತ್ತಿದೆ. ಒಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ ನಂತರ ಪಾಕಿಸ್ತಾನ ಹೊಸ ನಾಟಕ ಶುರು ಮಾಡಿದಂತೆ ಕಾಣುತ್ತಿದೆ. ಪ್ರತಿಬಾರಿ ಕೂಡ ಉಗ್ರರನ್ನು ತಲೆಯ ಮೇಲೆಯೇ ಹೊತ್ತುಕೊಂಡು ಮೆರೆಸುವ ಡಬಲ್ ಗೇಮ್ ಪಾಕಿಸ್ತಾನ ಇದೀಗ ತನ್ನದೇ ನೆಲದಲ್ಲಿ ಭೀಕರವಾದ ದಾಳಿ ಎದುರಿಸಿದೆ.
ಮೋದಿ ವಿರುದ್ಧ ಟಿಎಮ್ಸಿ ವಾಗ್ದಾಳಿ: ಅಮಿತ್ ಶಾ ರಾಜೀನಾಮೆಗೆ ಆಗ್ರಹ
ಕೋಲ್ಕತಾ, ನ. 11: ದಿಲ್ಲಿಯ ಕೆಂಪು ಕೋಟೆ ಸಮೀಪ ಸೋಮವಾರ ಸಂಭವಿಸಿದ ಭೀಕರ ಕಾರು ಸ್ಫೋಟಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಮ್ಸಿ) ಪಕ್ಷ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದೆ. ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ, ಟಿಎಮ್ಸಿ, ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಬಾಂಬ್ ದಾಳಿ ಮತ್ತು ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿರುವ ಪ್ರವಾಸಿಗರ ಮಾರಣಹೋಮವನ್ನು ಉಲ್ಲೇಖಿಸಿದೆ. ‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೆ ಭಯಾನಕ ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ದಾಳಿಗಳು ನಡೆದಿವೆ ಮತ್ತು ಈಗ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲೇ ಭೀಕರ ಸ್ಫೋಟ ನಡೆದಿದೆ. ಆದರೆ, ದೇಶದಲ್ಲಿ ರಕ್ತಪಾತ ನಡೆಯುವಾಗ ಪ್ರತಿ ಬಾರಿಯೂ ಗೃಹ ಸಚಿವ ಅಮಿತ್ ಶಾ ಎಳ್ಳಷ್ಟೂ ಉತ್ತರದಾಯಿತ್ವವಿಲ್ಲದೆ ಕೂದಲೂ ಕೊಂಕದೆ ಪಾರಾಗುತ್ತಾರೆ’’ ಎಂದು ಟಿಎಮ್ಸಿ ಹೇಳಿದೆ. ‘‘ಎಳ್ಳಷ್ಟಾದರೂ ಆತ್ಮಸಾಕ್ಷಿ ಇರುವ ಯಾವುದೇ ಗೃಹ ಸಚಿವ ಈ ವೇಳೆಗಾಗಲೇ ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಈ ಸರಕಾರಕ್ಕೆ ಪಶ್ಚಾತ್ತಾಪ ಮತ್ತು ಜವಾಬ್ದಾರಿ ಎನ್ನುವುದು ಅನ್ಯಲೋಕದ ಕಲ್ಪನೆಗಳಂತೆ ಕಾಣುತ್ತದೆ’’ ಎಂದು ಅದು ಹೇಳಿದೆ. ಮಂಗಳವಾರ ಭೂತಾನ್ ಪ್ರವಾಸಕ್ಕೆ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್, ‘‘ಸ್ವದೇಶದಲ್ಲಿ ಜನರು ಸಾಯುತ್ತಿರುವಾಗ ಅವರು ವಿದೇಶದಲ್ಲಿ ಕ್ಯಾಮರಗಳಿಗೆ ಪೋಸ್ ನೀಡುವಲ್ಲಿ ವ್ಯಸ್ತರಾಗಿದ್ದಾರೆ’’ ಎಂದು ಬಣ್ಣಿಸಿದೆ. ಪ್ರತಿಯೊಂದು ಸ್ಫೋಟ, ಭದ್ರತಾ ವೈಫಲ್ಯ ಮತ್ತು ಅಮಾಯಕ ಜೀವಗಳ ನಷ್ಟವು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿ ರಾಷ್ಟ್ರಿಯ ಭದ್ರತೆಯು ‘‘ಪಾತಾಳಕ್ಕೆ ಕುಸಿದಿರುವುದನ್ನು’’ ತೋರಿಸಿದೆ ಎಂದು ಅದು ಹೇಳಿದೆ. ►ರಾಷ್ಟ್ರದ ಹೃದಯದಲ್ಲಿ ಭದ್ರತಾ ವೈಫಲ್ಯ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಭದ್ರತಾ ಲೋಪದತ್ತ ಬೆಟ್ಟು ಮಾಡಿದ್ದಾರೆ. ‘‘ಇಂಥ ಭೀಕರ ಸ್ಫೋಟವು ರಾಷ್ಟ್ರ ರಾಜಧಾನಿಯ ಹೃದಯದಲ್ಲೇ ನಡೆದಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಕೇಂದ್ರ ಸರಕಾರದ ನೇರ ಅಧೀನದಲ್ಲಿರುವ ದಿಲ್ಲಿ ಪೊಲೀಸರು ಇದರ ಪ್ರಾಥಮಿಕ ಜವಾಬ್ದಾರಿಯನ್ನು ಹೊರಬೇಕು. ಇಲ್ಲದಿದ್ದರೆ, ಇಂಥ ಘೋರ ಭದ್ರತಾ ವೈಫಲ್ಯಗಳು ನಡೆಯಲು ಯಾಕೆ ಅವಕಾಶ ನೀಡಲಾಗುತ್ತದೆ’’ ಎಂದು ಅವರು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ. ಹರ್ಯಾಣದ ಫರೀದಾಬಾದ್ನಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿದ ಅವರು, ಇಂಥ ಘಟನೆಗಳು ಆಂತರಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದರು.
ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಆರೋಪದ ಮೇಲೆ 9 ಮಂದಿ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 13 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. 2019-2021ರವರೆಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 6 ವಾರ್ಡ್ಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಸುಮಾರು 250 ಕೋಟಿ ರೂ.ನಷ್ಟು ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಸಂಸದ ಡಿ.ಕೆ.ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು 2019-2021ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲಿಕೆಯ ಟೆಕ್ನಿಕಲ್ ವಿಜಿಲೆನ್ಸ್ ಸೆಲ್ ಅಂಡರ್ ಕಮಿಷನರ್ ವಿಭಾಗದ ಮುಖ್ಯ ಇಂಜಿನಿಯರ್ ದೊಡ್ಡಯ್ಯ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಸತೀಶ್, ಶಿಲ್ಪಾ, ಭಾರತಿ, ಬಸವರಾಜ್, ಸಿದ್ದರಾಮಯ್ಯ, ಉಮೇಶ್ ಸೇರಿದಂತೆ ಒಟ್ಟು 9 ಅಧಿಕಾರಿಗಳ ಕಚೇರಿ, ನಿವಾಸಗಳಲ್ಲಿ ಶೋಧ ನಡೆಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ. ಆರೋಪಿತ ಅಧಿಕಾರಿಗಳಿಗೆ ಸಂಬಂಧಿಸಿದ ನಿವಾಸಗಳು, ಗ್ರಾಮೀಣಾಭಿವೃದ್ಧಿ ನಿಗಮ ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ದಾಳಿಯಲ್ಲಿ ಕೆಲವು ಟೆಂಡರ್ ದಾಖಲೆಗಳು ಲಭ್ಯವಾಗಿದ್ದು, ಈ ಬಗ್ಗೆ ಪರಿಶೀಲನೆ ಮುಂದುವರೆದಿದೆ ಎಂದು ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.
ಚ್ಯವನ್ ಪ್ರಾಶ್ ಜಾಹೀರಾತು ಹಿಂದಕ್ಕೆ ಪಡೆಯುವಂತೆ ಪತಂಜಲಿಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ, ನ. 11: ಜಾಹೀರಾತು ನೀಡುವ ಮೂಲಭೂತ ಹಕ್ಕು ಸುಳ್ಳು ಪ್ರಚಾರ, ಅಪಪ್ರಚಾರ ಅಥವಾ ಎದುರಾಳಿಯ ಹೀಯಾಳಿಕೆಗೆ ಅನ್ವಯಿಸುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಎದುರಾಳಿ ಉತ್ಪನ್ನಗಳನ್ನು ‘‘ವಂಚನೆ’’ ಎಂದು ಬಣ್ಣಿಸುವ ತನ್ನ ಚ್ಯವನ್ ಪ್ರಾಶ್ ಜಾಹೀರಾತನ್ನು 72 ಗಂಟೆಗಳಲ್ಲಿ ತೆಗೆದುಹಾಕುವಂತೆ ಪತಂಜಲಿಗೆ ನಿರ್ದೇಶನ ನೀಡಿದೆ. ಜಾಹೀರಾತೊಂದು ಸುಳ್ಳು ಹೇಳಿದರೆ, ತಪ್ಪುದಾರಿಗೆಳೆದರೆ, ಅನುಚಿತವಾದರೆ ಅಥವಾ ವಂಚನೆಯಿಂದ ಕೂಡಿದರೆ ಅದು ತನ್ನ ಸಾಂವಿಧಾನಿಕ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ತೇಜಸ್ ಕಾರಿಯ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು. ಚ್ಯವನ್ ಪ್ರಾಶ್ ಗೆ ಸ್ಪರ್ಧೆ ನೀಡುವ ಎಲ್ಲಾ ಉತ್ಪನ್ನಗಳನ್ನು ‘‘ಮೋಸ’’ ಎಂಬುದಾಗಿ ಬಣ್ಣಿಸುವುದು ವಾಣಿಜ್ಯಿಕ ಅವಮಾನವಾಗುತ್ತದೆ ಎಂದು ತನ್ನ 37 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ‘‘ಚ್ಯವನ್ ಪ್ರಾಶಕ್ಕೆ ಸ್ಪರ್ಧೆ ನೀಡುವ ಎಲ್ಲಾ ಉತ್ಪನ್ನಗಳು ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂಬ ಸಂದೇಶವನ್ನು ನೀಡಲು ಪ್ರತಿವಾದಿಗಳು (ಪತಂಜಲಿ) ಪ್ರಯತ್ನಿಸಿದ್ದಾರೆ ಎನ್ನುವುದು ವಿವಾದಿತ ಜಾಹೀರಾತನ್ನು ನೋಡಿದಾಗ ಗೊತ್ತಾಗುತ್ತದೆ’’ ಎಂದು ಮಂಗಳವಾರ ನೀಡಿದ ತನ್ನ ಆದೇಶದಲ್ಲಿ ದಿಲ್ಲಿ ಹೈಕೋರ್ಟ್ ತಿಳಿಸಿದೆ. ‘‘ಜಾಹೀರಾತೊಂದು ತನ್ನ ಅನುಮೋದಿತ ಮಿತಿಗಳನ್ನು ಮೀರಿ ಸುಳ್ಳು ಹೇಳಿದಾಗ, ಜನರನ್ನು ತಪ್ಪು ದಾರಿಗೆಳೆದಾಗ, ಅನುಚಿತವಾಗಿ ವರ್ತಿಸಿದಾಗ ಅಥವಾ ಮೋಸ ಮಾಡಿದಾಗ, ಅದು ಸಂವಿಧಾನದ 19(1)(ಚಿ) ವಿಧಿ ಖಾತರಿಪಡಿಸುವ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ’’ ಎಂದು ನ್ಯಾಯಾಲಯ ಹೇಳಿದೆ. ಪತಂಜಲಿಯ ಚ್ಯವನ್ ಪ್ರಾಶ್ ಉತ್ಪನ್ನದ ಜಾಹೀರಾತನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ನಿರ್ದೇಶನ ನೀಡುವಂತೆ ಕೋರಿ ಡಾಬರ್ ಕಂಪೆನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ದಿಲ್ಲಿ ಹೈಕೋರ್ಟ್ ಈತ ತೀರ್ಪು ನೀಡಿದೆ.
ವಿಜಯಪುರ: ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು
ವಿಜಯಪುರ: ನಗರದ ಐತಿಹಾಸಿಕ ಆಸಾರ್ ಮಹಾಲ್ ಬಳಿ ಇರುವ ನೀರಿನ ಹೊಂಡದಲ್ಲಿ ಆಟ ಆಡುತ್ತಾ ಹೋಗಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತ ಬಾಲಕನನ್ನು ಲೊಹಾರಗಲ್ಲಿ ನಿವಾಸಿ ಪ್ರೀತಂ ಪವಾರ (10) ಎಂದು ಗುರುತಿಸಲಾಗಿದೆ. ಇಂದು ಸಂಜೆ ಹೊತ್ತಿಗೆ ನಗರದ ಆಸರ ಮಹಾಲ್ ಮುಂದೆ ಇರುವ ಹೊಂಡದ ಬಳಿ ಮಗು ಆಟವಾಡುತ್ತಿರುವ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾನೆ. ಅಲ್ಲಿ ಇದ್ದ ಸ್ಥಳೀಯ ಯುವಕರು ಸೇರಿ ಬಾಲಕನ್ನು ನೀರಿನಿಂದ ಹೊರಗೆ ತೆಗೆಯುವ ಪ್ರಯತ್ನ ಮಾಡಿ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆಸಾರ್ ಮಹಲ್ ಹೊಂಡಕ್ಕೆ ಸುತ್ತಲೂ ತಂತಿ ಬೇಲಿ ಹಾಕುವ ಪ್ರಯತ್ನವನ್ನೂ ಮಾಡಿಲ್ಲ, ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಚ್ಯ ತೋರಲಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು. ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
\ಜನರಿಗೆ ಮೂತ್ರ ಕುಡಿಸಿ\ ಎಂದ್ರಾ ಸಂತೋಷ್ ಲಾಡ್? ವಿಜಯೇಂದ್ರ ಗರಂ ಆಗಿದ್ದೇಕೆ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಮಾತಿಗೆ ಸಿಟ್ಟಾಗಿದ್ದಾರೆ. ಜನರಿಗೆ ಕಾಫಿ, ಟೀ ಯಾಕೆ ಕುಡಿಸ್ತೀರ, ಮೂತ್ರ ಕುಡಿಸಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ ಎಂದು ವಿಜಯೇಂದ್ರ ಖಂಡಿಸಿದ್ದಾರೆ. ಪದ ಸಂಸ್ಕೃತಿಯು ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ. ಪದಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ
ವಿಜಯಪುರ| ಒಂದೇ ಕುಟುಂಬದ ಮೂವರು ನೀರುಪಾಲು; ಓರ್ವನ ಮೃತದೇಹ ಪತ್ತೆ
ವಿಜಯಪುರ: ಅಕ್ಕ, ತಮ್ಮ ಸಹಿತ ಒಂದೇ ಕುಟುಂಬದ ಮೂವರು ನೀರುಪಾಲಾದ ಘಟನೆ ಮುದ್ದೇಬಿಹಾಳದ ಶಿರೋಳ ರಸ್ತೆಯಲ್ಲಿನ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಪದ ಬಸಮ್ಮ ಚಿನ್ನಪ್ಪ ಕೊಣ್ಣೂರ (20), ಆಕೆಯ ಸಹೋದರ ಸಂತೋಷ ಚಿನ್ನಪ್ಪ ಕೊಣ್ಣೂರ (18), ಅಳಿಯ ರವಿ ಹಣಮಂತ ಕೊಣ್ಣೂರ (17) ನೀರುಪಾಲಾದವರು . ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. ಬಸಮ್ಮ ಬಟ್ಟೆ ತೊಳೆಯಲೆಂದು ಕಾಲುವೆಗೆ ಬಂದಿದ್ದು, ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಸಹೋದರ ಸಂತೋಷ ಅಕ್ಕನನ್ನು ಕಾಪಾಡಲು ನೀರಿಗೆ ಜಿಗಿದಿದ್ದಾರೆ. ಇವರಿಬ್ಬರೂ ನೀರಿನ ರಭಸಕ್ಕೆ ಹರಿದು ಹೋಗುತ್ತಿರುವುದನ್ನು ಕಂಡ ಅಳಿಯ ರವಿ ಕೂಡ ನೀರಿಗೆ ಜಿಗಿದಿದ್ದಾನೆ. ಆದರೆ ನೀರಿನ ರಭಸಕ್ಕೆ, ಕಾಲುವೆಯಲ್ಲಿ ಆಳವಾದ ಮಟ್ಟದಲ್ಲಿ ನೀರಿದ್ದುದರಿಂದ ಮೂವರೂ ನೀರುಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳಕ್ಕೆ ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಟ್ನಾ, ನವೆಂಬರ್ 11: ದೇಶದ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿಸಲಾಗುವ ಬಿಹಾರದ ಮಹಾ ಚುನಾವಣೆಯ ಮತದಾರ ಪ್ರಭು ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು, ಇದು ರಾಜಕೀಯ ಪಡಸಾಲೆಯಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಮತ್ತೆ ಆಡಳಿತಾರೂಢ ಎನ್ಡಿಎಗೆ ವರದಾನವಾಗಲಿಯೇ ಅಥವಾ ಅಥವಾ ಯುವ ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ಗೆ ಅಧಿಕಾರದ ಬಾಗಿಲು
ದಿಲ್ಲಿಯ ಕೆಂಪು ಕೋಟೆ ಬಳಿ ಸ್ಫೋಟ ಘಟನೆ ಖಂಡಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ನಿಷ್ಪಕ್ಷ ತನಿಖೆಗೆ ಆಗ್ರಹ
ಟಾಟಾ ಟ್ರಸ್ಟ್ ನೂತನ ಟ್ರಸ್ಟಿಗಳಾಗಿ ನೋಯೆಲ್ ಪುತ್ರ ನೆವಿಲ್ಲೆ ಟಾಟಾ, ಭಾಸ್ಕರ್ ಭಟ್ ನೇಮಕ
ಟಾಟಾ ಸಮೂಹದ ಪ್ರಮುಖ ಅಂಗವಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ಗೆ ನೋಯೆಲ್ ಟಾಟಾ ಅವರ ಪುತ್ರ ನೆವಿಲ್ಲೆ ಟಾಟಾ ಮತ್ತು ಟೈಟಾನ್ನ ಮಾಜಿ ಮುಖ್ಯಸ್ಥ ಭಾಸ್ಕರ್ ಭಟ್ ಅವರನ್ನು ಹೊಸ ಟ್ರಸ್ಟಿಗಳಾಗಿ ನೇಮಕ ಮಾಡಲಾಗಿದೆ. ಈ ನೇಮಕವು ಟಾಟಾ ಸಮೂಹದ ಆಡಳಿತದಲ್ಲಿ ಯುವ ನಾಯಕತ್ವದ ಪ್ರವೇಶವನ್ನು ಸೂಚಿಸುತ್ತದೆ ಮತ್ತು ನೋಯೆಲ್ ಟಾಟಾ ಅವರ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದರೊಂದಿಗೆ, ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಟ್ರಸ್ಟಿಗಳ ಅಧಿಕಾರಾವಧಿಯಲ್ಲೂ ಬದಲಾವಣೆ ಮಾಡಲಾಗಿದೆ.
ದಿಲ್ಲಿ | ಸ್ಫೋಟ ಪ್ರಕರಣ ಮುಸುಕುಧಾರಿ ಕಾರು ಚಲಾಯಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹೊಸದಿಲ್ಲಿ, ನ. 11: ದಿಲ್ಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರು ಸ್ಫೋಟಗೊಳ್ಳುವ ಮುನ್ನ ಅದನ್ನು ಮುಸುಕುದಾರಿ ವ್ಯಕ್ತಿಯೋರ್ವ ಚಲಾಯಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಈ ದೃಶ್ಯಾವಳಿಯನ್ನು ಲಾಲ್ ಖಿಲಾ ಮೆಟ್ರೋ ಸ್ಟೇಷನ್ ಹಾಗೂ ಸಮೀಪದ ಪಾರ್ಕಿಂಗ್ ಪ್ರದೇಶದ ಸಮೀಪ ಅಳವಡಿಸಲಾಗಿದ್ದ ಹಲವು ಕೆಮೆರಾಗಳಿಂದ ಸಂಗ್ರಹಿಸಲಾಗದೆ. ಈ ದೃಶ್ಯಾವಳಿಯಲ್ಲಿ ಸ್ಫೋಟಕ್ಕೆ ಮುನ್ನ ಬಿಳಿ ಕಾರು ಆ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಸ್ಫೋಟಗೊಳ್ಳುವ ಮುನ್ನ ಎಚ್ಆರ್ 26 ಸಿಇ 7674 ನೋಂದಣಿ ಸಂಖ್ಯೆ ಹೊಂದಿರುವ ಕಾರು ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ 2 ಗಂಟೆಗೂ ಅಧಿಕ ಕಾಲ ನಿಂತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಫರೀದಾಬಾದ್ ನಲ್ಲಿ ಸ್ಫೋಟಕಗಳ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಉಮರ್ ಎಂದು ಗುರುತಿಸಲಾದ ವ್ಯಕ್ತಿ ಈ ಕಾರು ಚಲಾಯಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸಿಸಿಟಿವಿ ದೃಶ್ಯವೊಂದರಲ್ಲಿ ಚಾಲಕ ಕೈಯನ್ನು ಕಿಟಕಿಯ ಮೇಲೆ ಇಟ್ಟುಕೊಂಡ ಪಾರ್ಕಿಂಗ್ ಪ್ರದೇಶ ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಇನ್ನೊಂದು ದೃಶ್ಯದಲ್ಲಿ ಆತ ನೀಲಿ ಹಾಗೂ ಕಪ್ಪು ಟಿ ಶರ್ಟ್ ಹಾಕಿರುವುದು ಕಂಡು ಬಂದಿದೆ.
6 ಸಾವಿರ ಗ್ರಾ.ಪಂ.ಗಳಲ್ಲಿ ಕೆಪಿಎಸ್ ಶಾಲೆ ಆರಂಭಿಸುವ ಗುರಿ: ಸಚಿವ ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದರಂತೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳನ್ನು ಆರಂಭಿಸುವ ಗುರಿಯನ್ನು ನಮ್ಮ ಸರಕಾರ ಹೊಂದಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಮಂಗಳವಾರ ನಗರದ ದೇವರಾಜ ಅರಸು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲಯ ವತಿಯಿಂದ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಶಿಕ್ಷಣ ದಿನ-2025’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 308 ಇದ್ದ ಕೆಪಿಎಸ್ ಶಾಲೆಗಳ ಸಂಖ್ಯೆ ಈಗ 900 ಆಗಿದೆ. ಬಜೆಟ್ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಘೋಷಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹೊಸದಾಗಿ 100 ಕೆಪಿಎಸ್ ಶಾಲೆಗಳನ್ನು ಮಾಡುತ್ತಿರುವುದಕ್ಕೆ ನಾನು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ಕೆಪಿಎಸ್ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಕಂಪ್ಯೂಟರ್ ಕಲಿಕೆ. 6ನೆ ತರಗತಿಯಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ದಿನಾಚರಣೆಗೆ ಗೌರವ ಬರಬೇಕಾದರೆ ಆಝಾದ್ ಅವರಿಗೆ ಗೌರವ ಕೊಡಬೇಕು. ಮಕ್ಕಳಿಗೆ ದಾರಿ ತಪ್ಪಿಸಲು ಅವಕಾಶ ನೀಡದೆ, ಒಳ್ಳೆಯ ಶಿಕ್ಷಣ ಕೊಡಬೇಕು ಅನ್ನೋದು ನಮ್ಮ ಉದ್ದೇಶ ಎಂದು ಮಧು ಬಂಗಾರಪ್ಪ ಹೇಳಿದರು. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದೆವು. ನಾನು ಶಿಕ್ಷಣ ಸಚಿವನಾದ ನಂತರ ಸಹಿ ಹಾಕಿದ ಮೊದಲ ಕಡತ ಪಠ್ಯಕ್ರಮ ಪರಿಷ್ಕರಣೆಗೆ ಸಂಬಂಧಿಸಿದ್ದು. ಪಠ್ಯ ಪುಸ್ತಕಗಳಲ್ಲಿ ಶಿಕ್ಷಣ ಇರಬೇಕೆ ಹೊರತು, ಯಾವುದೋ ಒಂದು ಪಕ್ಷದ ಪರವಾದ ಸಿದ್ಧಾಂತ ಇರಬಾರದು. ರಾಜ್ಯ ಸರಕಾರಿ, ಅನುದಾನಿತ, ಖಾಸಗಿ ಸೇರಿ ಒಟ್ಟು 57 ಸಾವಿರಕ್ಕಿಂತ ಹೆಚ್ಚು ಶಾಲೆಗಳು ಇವೆ. ಇದರಲ್ಲಿ ಸುಮಾರು 1.16 ಕೋಟಿ ಮಕ್ಕಳು ಓದುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಒನಕೆ ಓಬವ್ವ ಯುವ ಜನಾಂಗಕ್ಕೆ ಪ್ರೇರಣೆಯಾಗಲಿ: ಸಂಸದ ಕೋಟ
ಉಡುಪಿ, ನ.11: ಮುದ್ದ ಹನುಮ ಎಂಬ ಒಬ್ಬ ಸಾಮಾನ್ಯ ಕಾವಲುಗಾರನ ಹೆಂಡತಿ ಓಬವ್ವ ತನ್ನ ರಾಜ್ಯಕ್ಕೆ ಶತ್ರುಗಳಿಂದ ಗಂಡಾಂತರ ಉಂಟಾಗುವ ಸಂದರ್ಭ ಬಂದಾಗ ತನ್ನ ಪ್ರಾಣವನ್ನೂ ಲೆಕ್ಕಿಸದೆ ಮಾತೃಭೂಮಿ ಗಾಗಿ ಒನಕೆ ಹಿಡಿದು ಶತ್ರುಗಳನ್ನು ಸದೆಬಡಿದು ರಾಜ್ಯದ ರಕ್ಷಣೆ ಮಾಡುತ್ತಾಳೆ. ಅಂಥ ಒನಕೆ ಓಬವ್ವ ನಮ್ಮ ಇಂದಿನ ಯುವಜನತೆಗೆ, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಒನಕೆ ಓಬವ್ವಳ ಅಪ್ರತಿಮ ಸಾಹಸಕ್ಕಾಗಿ ಇತಿಹಾಸಕಾರರು ಆಕೆಯನ್ನು ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನಂತಹ ವೀರ-ಧೀರ ಮಹಿಳೆಯರ ಸಾಲಿನಲ್ಲಿ ನಿಲ್ಲಿಸುತ್ತಾರೆ. ತನಗಿಂತ ತನ್ನ ದೇಶ ಮೊದಲೆಂದು ಬದುಕಿದ ಇಂತಹ ವೀರವನಿತೆ ಓಬವ್ವನ ತ್ಯಾಗ, ದೇಶ ಪ್ರೇಮ, ಸ್ವಾಮಿನಿಷ್ಠೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಿದೆ ಎಂದವರು ನುಡಿದರು. ಒನಕೆ ಓಬವ್ವ ಆತ್ಮರಕ್ಷಣೆಯ ಪ್ರತೀಕ. ಹೆಣ್ಣುಮಕ್ಕಳು ತಮ್ಮ ಆತ್ಮ ರಕ್ಷಣೆಯ ಜೊತೆಗೆ ತನ್ನ ಪ್ರಾಂತ್ಯ, ರಾಜ್ಯ ಮತ್ತು ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ ಎನ್ನುವುದಕ್ಕೆ ಒನಕೆ ಓಬವ್ವ ಸಾಕ್ಷಿ. ಚಿತ್ರದುರ್ಗದ ಕಲ್ಲಿನ ಕೋಟೆ ಕಂಡಾಗಲೆಲ್ಲಾ ಓಬವ್ವನ ತ್ಯಾಗ, ಬಲಿದಾನ, ಸಮರ್ಪಣೆ ನೆನಪಾಗುತ್ತದೆ ಎಂದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕುತಂತ್ರದಿಂದ ಚಿತ್ರದುರ್ಗದ ಕೋಟೆಗೆ ಒಳನುಸುಳಿದ ಹೈದರಾಲಿಯ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವರ ಧೈರ್ಯ, ದೇಶಪ್ರೇಮ, ಸದಾ ಸ್ಮರಣೀಯ. ಜೊತೆಗೆ ಸ್ತ್ರೀಶಕ್ತಿಯ ಸಂಕೇತವಾಗಿ ಇಂದಿಗೂ ಮಹಿಳೆಯರಿಗೆ ಓಬವ್ವಳ ಹೋರಾಟದ ಮನೋಭಾವ ಸ್ಫೂರ್ತಿದಾಯಕ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಮಾಜಕ್ಕೆ ಮಹನೀಯರು, ಮಹಿಳೆಯರು ನೀಡಿದ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳ ಸಾರ್ಥಕ ಸೇವೆ ಗುರುತಿಸಿ ಜಯಂತಿ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದೆ. ಇಂದಿನ ಯುವ ಪೀಳಿಗೆಯು ಇವರ ಮಹತ್ವವನ್ನು ಅರಿತು ಅವರ ತತ್ವ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು. ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಸುಬ್ರಮಣ್ಯ ಶೆಟ್ಟಿ, ಮಣಿಪಾಲ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಉಪಪ್ರಾಂಶುಪಾಲ ನಾಗೇಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಹಿರಿಯ ಶಿಕ್ಷಕ ಸಚ್ಚಿದಾನಂದ ವಂದಿಸಿದರು.
ಹಂಚಿಹೋಗಿದ್ದ ರಾಜ್ಯಗಳನ್ನು ಒಗ್ಗೂಡಿಸಿದವರು ಪಟೇಲರು : ಸಂಸದ ಕೋಟ
ಉಡುಪಿ, ನ.11: ಸ್ವಾತಂತ್ರ್ಯಾದ ನಂತರ ರಾಜಪ್ರಭುತ್ವಗಳಲ್ಲಿ ಹರಿದು ಹಂಚಿಹೋಗಿದ್ದ ರಾಜ್ಯಗಳನ್ನು ತಮ್ಮ ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವದಿಂದ ಒಗ್ಗೂಡಿಸಿದವರು ಭಾರತ ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ ಮತ್ತು ಮೈ ಭಾರತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಮತ್ತು ಎನ್ನೆಸ್ಸೆಸ್, ಎನ್ಸಿಸಿ, ರೇಂಜರ್ಸ್, ರೋವರ್ಸ್ಗಳ ಸಂಯುಕ್ತ ಆಶ್ರಯದಲ್ಲಿ ಸರ್ದಾರ್ ವಲ್ಲಭಬಾಯಿ ಪಠೇಲರ 150ನೇ ಜನ್ಮ ದಿನೋತ್ಸವದ ಪ್ರಯುಕ್ತ ಉಡುಪಿ ಬೋರ್ಡ್ ಹೈಸ್ಕೂಲ್ ನಿಂದ ಆರಂಭಗೊಂಡ ಉಡುಪಿ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಹಾಗೂ ಏಕತಾ ನಡಿಗೆಗೆ ಚಾಲನೆ ನೀಡಿ, ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾತಿ, ವರ್ಗ, ಭಾಷೆಯ ಬೇಧ ಮರೆತು ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ದಿಗೆ ಮಾರ್ಗದರ್ಶನ ತೋರಿದ ಸರ್ದಾರ್ ವಲ್ಲಭ ಭಾಯಿ ಪಟೇಲರ ನೆನಪಿಗಾಗಿ ಪ್ರತಿವರ್ಷವೂ ಏಕತೆಗಾಗಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದವರು ಹೇಳಿದರು. ದೇಶದ ಪ್ರಪ್ರಥಮ ಉಪ ಪ್ರಧಾನಿಯಾಗಿ ಹಾಗೂ ಗೃಹ ಮಂತ್ರಿಯಾಗಿ ಸರ್ದಾರ್ ವಲ್ಲಭಬಾಯಿ ಪಟೇಲರು ದೇಶವನ್ನು ಒಗ್ಗೂಡಿಸಲು ದಿಟ್ಟ ನಿರ್ಧಾರ ತೆಗೆದುಕೊಂಡ ಫಲವಾಗಿ ಇಂದು ಭಾರತ ಅಖಂಡವಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಅಭೀದ್ ಗದ್ಯಾಳ್ ರಾಷ್ಟ್ರೀಯ ಐಕ್ಯತೆ ಹಾಗೂ ಸಮಗ್ರತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ರೆಡ್ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್, ಬಿಜೆಪಿ ಮಂಗಳೂರು ಪ್ರಭಾರಿ ಉದಯ್ಕುಮಾರ್ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಯೋಜಿಸಲಾದ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಹಾಗೂ ಏಕತಾ ನಡಿಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಅಜ್ಜರಕಾಡಿನ ಹುತಾತ್ಮ ಸ್ಮರಣೆ ಭವನದಲ್ಲಿ ಸಮಾಪನ ಗೊಂಡಿತು.
ದಿಲ್ಲಿ ಸ್ಫೋಟ ಪ್ರಕರಣ | ಮೃತಪಟ್ಟವರಲ್ಲಿ ಟ್ಯಾಕ್ಸಿ ಚಾಲಕ, ಅಂಗಡಿ ಮಾಲಕ
ಹೊಸದಿಲ್ಲಿ, ನ. 11: ದಿಲ್ಲಿಯ ಕೆಂಪು ಕೋಟೆಯ ಸಮೀಪ ಸೋಮವಾರ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದು, ಅವರಲ್ಲಿ ಕೆಲವರ ಗುರುತು ಪತ್ತೆಯಾಗಿದೆ. ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ 18 ವರ್ಷದ ನುಮಾನ್ ಅನ್ಸಾರಿ ತನ್ನ ಅಂಗಡಿಗೆ ಬೇಕಾದ ಸೌಂದರ್ಯ ವರ್ಧಕಗಳನ್ನು ಖರೀದಿಸಲು ದಿಲ್ಲಿಗೆ ಆಗಮಿಸಿದ್ದರು. ಅವರು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಶಾಮ್ಲಿಯ ಝಿಂಝಾನ ಪಟ್ಟಣದವರಾದ ಅನ್ಸಾರಿ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ‘‘ನುಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಗಾಯಗೊಂಡಿದ್ದಾರೆ ಹಾಗೂ ದಿಲ್ಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’’ ಎಂದು ನುಮಾನ್ ನ ಮಾವ ಫುರ್ಕಾನ್ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಡಿಟಿಸಿಯ ನಿರ್ವಾಹಕ ಅಶೋಕ್ ಕುಮಾರ್ (34) ಅಮೋರಾ ಜಿಲ್ಲೆಯವರು. ಮೃತಪಟ್ಟ ಇನ್ನೋರ್ವರನ್ನು ಪಂಕಜ್ ಸಹಾನಿ (22) ಎಂದು ಗುರುತಿಸಲಾಗಿದೆ. ಅವರು ಟ್ಯಾಕ್ಸಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 12 ಮಂದಿ ಸಾವನ್ನಪ್ಪಲು ಕಾರಣವಾದ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ತನ್ನ ಸೋದರಳಿಯ ಸಾವನ್ನಪ್ಪಿರುವ ಕುರಿತು ದಿಲ್ಲಿಯ ಕೊಟ್ವಾಲಿ ಪೊಲೀಸ್ ಠಾಣೆಯಿಂದ ಫೋನ್ ಕರೆ ಸ್ವೀಕರಿಸಲಾಗಿತ್ತು ಎಂದು ಪಂಕಜ್ ಸಹಾನಿಯ ಸಂಬಂಧಿ ರಾಮ್ದೇವ್ ಸಹಾನಿ ತಿಳಿಸಿದ್ದಾರೆ. ‘‘ಪಂಕಜ್ ಸಹಾನಿ ಮೂರು ವರ್ಷಗಳಿಂದ ಟ್ಯಾಕ್ಸಿ ಚಲಾಯಿಸುತ್ತಿದ್ದರು. ಸ್ಫೋಟದ ತೀವ್ರತೆಗೆ ಅವರ ತಲೆಯ ಹಿಂಭಾಗ ಹಾರಿ ಹೋಗಿದೆ. ಅವರ ವೇಗನರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ’’ ಎಂದು ಸಹಾನಿ ಹೇಳಿದ್ದಾರೆ. ಮಂಗಳವಾರ ಮತ್ತೆ ಮೂವರು ಸಾವನ್ನಪ್ಪುವುದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
Bihar Election 2025 P-Marq Exit Poll: ಬಿಹಾರ ವಿಧಾನಸಭಾ ಚುನಾವಣೆ 2025ರ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಾಗಾದ್ರೆ, ಪಿ-ಪಿ-ಮಾರ್ಕ್ (P-Marq) ನಡೆಸಿದ ಸಮೀಕ್ಷೆ ಪ್ರಕಾರ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೂ ಎಷ್ಟು ಸ್ಥಾನಗಳು ಬರಲಿವೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಿಹಾರ ವಿಧಾಸಭೆ ಚುನಾವಣೋತ್ತರ
ಕೇರಳ | ಋತುಚಕ್ರ ಆರೈಕೆಗಾಗಿ ಶಾಲೆಗಳಲ್ಲಿ ಬಾಲಕಿಯರ ಸ್ನೇಹಿ ಕೊಠಡಿಗಳ ನಿರ್ಮಾಣ
ತಿರುವನಂತಪುರಂ: ಕೇರಳದಲ್ಲಿನ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ರಜೆ ಘೋಷಿಸಿದ್ದ ಕೇರಳ ಸರಕಾರದ ಕ್ರಮ ತೀವ್ರ ಚರ್ಚೆ ಹುಟ್ಟುಹಾಕಿರುವ ಹೊತ್ತಿನಲ್ಲೇ, ಕಟ್ಟಕಾಡ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಮಾದರಿಯನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿನಿಯರು ಋತುಚಕ್ರದಿಂದ ಅಸೌಖ್ಯಕ್ಕೀಡಾದಾಗ, ಅಂಥವರು ವಿಶ್ರಾಂತಿ ಪಡೆಯಲು ಕಟ್ಟಕಾಡು ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ 16 ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ತಲಾ ಒಂದು ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದು ಮಹಿಳಾ ಶಿಕ್ಷಕರಿಗೂ ವರದಾನವಾಗಿ ಪರಿಣಮಿಸಿದೆ. ಕಟ್ಟಕಾಡು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ ಜಾರಿಗೆ ತರಲಾಗಿರುವ ‘ಒಪ್ಪಂ’ (ಒಟ್ಟಾಗಿ) ಭಾಗವಾಗಿ ಶಾಸಕ ಐ.ಬಿ.ಸತೀಶ್ ಈ ಯೋಜನೆಗೆ ಚಾಲನೆ ನೀಡಿದರು. ಈ ಬಾಲಕಿಯರ ಸ್ನೇಹಿ ‘ಒಪ್ಪಂ’ ಕೊಠಡಿಯನ್ನು ಎರಡು ಹಾಸಿಗೆಗಳು, ಕುರ್ಚಿಗಳು, ಬಿಸಿ ನೀರಿನ ಬ್ಯಾಗ್ ಗಳು, ನ್ಯಾಪ್ಕಿನ್ ವಿತರಿಸುವ ಯಂತ್ರಗಳು ಹಾಗೂ ದಹನ ಯಂತ್ರಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಋತುಚಕ್ರದಿಂದ ಅಸೌಖ್ಯಕ್ಕೀಡಾಗುವ ವಿದ್ಯಾರ್ಥಿನಿಯರಲ್ಲಿ ಚೇತೋಹಾರಿ ಮನಸ್ಥಿತಿಯನ್ನು ಮೂಡಿಸಲು ಮನಶಾಸ್ತ್ರಜ್ಞರ ಸಲಹೆಯ ಮೇರೆಗೆ ಕೊಠಡಿಯ ಬಣ್ಣಗಳ ವಿನ್ಯಾಸವನ್ನೂ ಮಾಡಲಾಗಿದೆ ಎಂದು ಐ.ಬಿ.ಸತೀಶ್ ತಿಳಿಸಿದ್ದಾರೆ. “ಋತುಚಕ್ರದ ಅವಧಿಯಲ್ಲಿ ಬಾಲಕಿಯರು ಕೇವಲ ಒಂದು ದಿನ ಮಾತ್ರ ಅಸೌಖ್ಯಕ್ಕೀಡಾಗುವುದಿಲ್ಲ. ಹೀಗಾಗಿ, ಒಂದು ಅಥವಾ ಎರಡು ದಿನಗಳ ರಜೆ ನೀಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯಿವಿಲ್ಲ. ಆದ್ದರಿಂದ, ಬಾಲಕಿಯರು ವಿಶ್ರಾಂತಿ ಪಡೆಯಲು ಕೊಠಡಿಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಇದೀಗ, ಋತುಚಕ್ರದ ಅಸೌಖ್ಯದಿಂದ ಉಪಶಮನ ಪಡೆಯಲು ನಮಗೂ ಈ ಕೊಠಡಿಗಳು ಉಪಯುಕ್ತವಾಗಿವೆ ಎಂದು ಹಲವಾರು ಮಹಿಳಾ ಶಿಕ್ಷಕರೂ ಹೇಳುತ್ತಿದ್ದಾರೆ” ಎಂದು ಐ.ಬಿ.ಸತೀಶ್ ಹೇಳಿದ್ದಾರೆ. ತಿರುವನಂತಪುರಂ ಉಪನಗರದಲ್ಲಿರುವ ಕಟ್ಟಕಾಡ ವಿಧಾನಸಭಾ ಕ್ಷೇತ್ರವನ್ನು ಮಹಿಳಾ ಸ್ನೇಹಿಯನ್ನಾಗಿಸಲು ಜಾರಿಗೊಳಿಸಲಾಗಿರುವ ಸರಣಿ ಯೋಜನೆಗಳ ಪೈಕಿ ‘ಒಪ್ಪಂ’ ಕೂಡಾ ಒಂದಾಗಿದ್ದು, ಈ ಯೋಜನೆಗೆ ಚಾಲನೆ ನೀಡಿರುವ ಸತೀಶ್, ಸಿಪಿಐ(ಎಂ) ಶಾಸಕರಾಗಿದ್ದಾರೆ. ಮಹಿಳೆಯರಿಗಾಗಿ ಶೌಚಾಲಯ ಸಂಕೀರ್ಣ, ಆರೋಗ್ಯ ಕ್ಲಬ್, ಸಮಾಲೋಚನಾ ಕೇಂದ್ರಗಳು ಹಾಗೂ ಮಹಿಳಾ ಚಿತ್ರಮಂದಿರಗಳು ಶಾಸಕ ಸತೀಶ್ ಚಾಲನೆ ನೀಡಿರುವ ಇನ್ನೂ ಕೆಲವು ಮಹಿಳಾ ಸ್ನೇಹಿ ಉಪಕ್ರಮಗಳಾಗಿವೆ. ಸೌಜನ್ಯ: deccanherald.com
ಅಮೆರಿಕದಲ್ಲಿ 41 ದಿನಗಳ ಶಟ್ಡೌನ್ ಕೊನೆಗೂ ಅಂತ್ಯ, ಬೆನ್ನಲ್ಲೇ ಡೆಮೋಕ್ರಾಟಿಕ್ ಪಕ್ಷದಲ್ಲಿ ಭಿನ್ನಮತ ಸ್ಫೋಟ!
ಅಮೆರಿಕದ ಇತಿಹಾಸದಲ್ಲೇ ಅತಿ ಸುದೀರ್ಘ ಎನಿಸಿದ್ದ 41 ದಿನಗಳ ಸರ್ಕಾರಿ ಶಟ್ಡೌನ್, ಸೆನೆಟ್ನಲ್ಲಿ ರಾಜಿ ಸೂತ್ರಕ್ಕೆ ಅನುಮೋದನೆ ಸಿಗುವುದರೊಂದಿಗೆ ಅಂತ್ಯಗೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದವನ್ನು ಸ್ವಾಗತಿಸಿದ್ದು, ಸರ್ಕಾರವನ್ನು ಶೀಘ್ರವೇ ಪುನರಾರಂಭಿಸುವುದಾಗಿ ಹೇಳಿದ್ದಾರೆ. ಆದರೆ, ಈ ಒಪ್ಪಂದವು ಡೆಮೋಕ್ರಾಟಿಕ್ ಪಕ್ಷದಲ್ಲಿ ತೀವ್ರ ಬಿರುಕಿಗೆ ಕಾರಣವಾಗಿದ್ದು, ಆರೋಗ್ಯ ರಕ್ಷಣೆ ಸಬ್ಸಿಡಿಗಳ ಕುರಿತ ಪ್ರಮುಖ ಬೇಡಿಕೆಯನ್ನು ಕೈಬಿಟ್ಟು ರಾಜಿ ಮಾಡಿಕೊಂಡಿದ್ದಕ್ಕೆ ಪಕ್ಷದ ಪ್ರಗತಿಪರ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಟ್ಟೆ | ಮಹಿಳಾ ಶಿಕ್ಷಕಿಯರಿಗೆ ನಾಯಕತ್ವ ತರಬೇತಿ ಶಿಬಿರ ಉದ್ಘಾಟನೆ
ನಿಟ್ಟೆ, ನ.11: ಮಹಿಳಾ ಅಧ್ಯಾಪಕಿಯರು ಹೊಸತನ, ಕಲಿಯುವ ಹುಮ್ಮಸ್ಸು ಹಾಗೂ ಮಾರ್ಗದರ್ಶನಗಳ ಮೂಲಕ ನಾಯಕತ್ವದ ಸಾಮರ್ಥ್ಯ ವನ್ನು ಪಡೆದುಕೊಳ್ಳಬೇಕು ಎಂದು ಪುಣೆಯ ಸಿಂಬಯೋಸಿಸ್ ತಾಂತ್ರಿಕ ಸಂಸ್ಥೆಯ ಸಹ ಪ್ರಾದ್ಯಾಪಕಿ ಡಾ.ರಾಹೀ ವಾಲಾಂಬೆ ಮಹಿಳಾ ಶಿಕ್ಷಕಿಯರಿಗೆ ಕಿವಿಮಾತು ಹೇಳಿದ್ದಾರೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರ (ಎಸ್ಡಿಸಿ), ಐಇಇಇ ಬೆಂಗಳೂರು ವಿಭಾಗ ಹಾಗೂ ವುಮನ್ ಇನ್ ಎಂಜಿನಿಯರಿಂಗ್(ಡಬ್ಲ್ಯುಐಇ) ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಮಹಿಳಾ ಶಿಕ್ಷಕಿಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (ಎಫ್ಡಿಪಿ)ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷ ಡಾ.ವೇಣುಗೋಪಾಲ ಪಿ.ಎಸ್. ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಣಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶ್ಮುಖ್ ಉಪಸ್ಥಿತರಿದ್ದರು. ಸುಮಾರು 60 ಮಂದಿ ಈ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಅಶ್ವಿನಿ ಬಿ ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕಿ ಡಾ.ಮಂಜುಳಾ ಗುರುರಾಜ್ ರಾವ್, ಡಾ.ರಶ್ಮಿ ನವೀನ್ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಚಿನ್ಮಯಿ ಶೆಟ್ಟಿ ವಂದಿಸಿ, ಡಾ.ದೀಪಾ ಕಾರ್ಯಕ್ರಮ ನಿರೂಪಿಸಿದರು.
ಮಾನವ ಕಳ್ಳಸಾಗಾಣಿಕೆ ಹೀನಕೃತ್ಯ, ತಡೆಗಟ್ಟಲು ಎಲ್ಲರೂ ಬದ್ಧರಾಗಬೇಕು : ಮಂಜುನಾಥ್
ಮಾನವ ಕಳ್ಳ ಸಾಗಾಣಿಕೆಯ ತಡೆ ಕುರಿತ ಮಾಹಿತಿ ಕಾರ್ಯಕ್ರಮ
ರಾಜ್ಯಾದ್ಯಂತ ದರಖಾಸ್ ಪೋಡಿ ಅಭಿಯಾನ: ಸಚಿವ ಕೃಷ್ಣ ಬೈರೇಗೌಡ
ಕುಶಾಲನಗರದಲ್ಲಿ 8.60 ಕೋಟಿ ರೂ. ವೆಚ್ಚದ ಪ್ರಜಾಸೌಧ ನಿರ್ಮಾಣಕ್ಕೆ ಸಚಿವರಿಂದ ಶಿಲಾನ್ಯಾಸ
ನ.13ರಂದು ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ ನವೀಕೃತ ಕ್ಯಾಂಪಸ್ ಉದ್ಘಾಟನೆ
ಮಂಗಳೂರು, ನ.11: ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ ಇದರ ನವೀಕೃತ ಕ್ಯಾಂಪಸ್ನ ಉದ್ಘಾಟನೆ ನ.13ರಂದು ನಡೆಯಲಿದೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಎಸ್.ಶ್ಯಾಮ್ ಸುಂದರ್ ಅವರು, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೊವಾಲ್ ಅವರು ನವೀಕೃತ ಕ್ಯಾಂಪಸ್ನ ಉದ್ಘಾಟನೆ ನೆರವೇರಿಸುವರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇಂದ್ರ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು. 2010 ರಲ್ಲಿ ಸ್ಥಾಪನೆಯಾದ ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ (ಎಂಎಂಸಿಟಿ) ಕರ್ನಾಟಕದ ಮೊದಲ ಮತ್ತು ಏಕೈಕ ಡಿಜಿಎಸ್ -ಅನುಮೋದಿತ ಮರೈನ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಜಾಗತಿಕ ಹಡಗು ಸಾಗಣೆ ಉದ್ಯಮಕ್ಕೆ ಸಮರ್ಥ ಸಾಗರ ವೃತ್ತಿಪರರನ್ನು ರೂಪಿಸಲು ಸಮರ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸನ್ ಉಪಸ್ಥಿತರಿದ್ದರು.
ಕೊಂಕಣ ರೈಲ್ವೆ | ಟಿಕೇಟ್ ರಹಿತ ಪ್ರಯಾಣಿಕರಿಂದ 6 ತಿಂಗಳಲ್ಲಿ 12.81 ಕೋಟಿ ರೂ. ದಂಡ ವಸೂಲಿ
ಉಡುಪಿ, ನ.11: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ಕಳೆದ ಎಪ್ರಿಲ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಆರು ತಿಂಗಳ ಅವಧಿಯಲ್ಲಿ ಒಟ್ಟು 12.81 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ. 2025ರ ಎಪ್ರಿಲ್ ನಿಂದ ಸೆಪ್ಟಂಬರ್ ತಿಂಗಳ ನಡುವಿನ ಆರು ತಿಂಗಳ ಅವಧಿಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಒಟ್ಟು 5,493 ವಿಶೇಷ ಟಿಕೇಟ್ ತಪಾಸಣಾ ಅಭಿಯಾನ ಕೈಗೊಂಡಿದ್ದು, ಈ ಸಂದರ್ಭದಲ್ಲಿ 1,82,781 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ ಟಿಕೇಟ್ ಮೌಲ್ಯ ಹಾಗೂ ದಂಡದ ರೂಪದಲ್ಲಿ 12.81 ಕೋಟಿ ರೂ. ಗಳನ್ನು ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. ಅಕ್ಟೋಬರ್ ತಿಂಗಳಿನಲ್ಲಿಯೂ ಇದೇ ಅಭಿಯಾನವನ್ನು ಮುಂದುವರಿಸಿ, 920 ವಿಶೇಷ ಅಭಿಯಾನ ಸಂದರ್ಭದಲ್ಲಿ 42,645 ಮಂದಿ ಟಿಕೇಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ 2.40 ಕೋಟಿ ರೂ. ಟಿಕೇಟ್ ಮೌಲ್ಯ ಹಾಗೂ ದಂಡವಾಗಿ ವಸೂಲಿ ಮಾಡಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿರುವ ರೈಲ್ವೆ ಅಧಿಕಾರಿಗಳು ಈ ಮೂಲಕ ಕೆಆರ್ಸಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ವಿನಂತಿಸಿದೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಟಿಕೆಟ್ ಚಕ್ಕಿಂಗ್ ನ ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ.ನಾರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Bihar Exit Poll : ಬಿಹಾರದಲ್ಲಿ ಅರಳಿದ NDA, ಮುದುಡಿದ ಇಂಡಿಯಾ ಮೈತ್ರಿಕೂಟ...Poll Diary Survey 2025
ಬಿಹಾರ ವಿಧಾನಸಭಾ ಚುನಾವಣೆಯ 2025 ಮತದಾನ ಪ್ರಕ್ರಿಯೆ ಇಂದು ನವೆಂಬರ್ 11ರಂದು ಪೂರ್ಣಗೊಳ್ಳುತ್ತಿದ್ದಂತೆ Poll Diary Exit Poll ಸಮೀಕ್ಷೆ ಫಲಿತಾಂಶ ಬಿಡುಗಡೆ ಗೊಂಡಿದೆ. ಪೋಲ್ ಡೈರಿ ಪ್ರಕಾರ, ರಾಜ್ಯದಲ್ಲಿ ಮತ್ತೆ ಬಿಜೆಪಿ ಹಾಗೂ ಜೆಡಿಯು ತಮ್ಮ ಸಹಕಾರ ಮುಂದುವರಿಸಿ ಮುಂದಿನ 05 ವರ್ಷ ಆಡಳಿತ ನಡೆಸಲಿವೆ. ಮ್ಯಾಜಿಕ್ ಸಂಖ್ಯೆಯಷ್ಟು ಸ್ಥಾನ ಗಳಿಸಿದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಭಾರೀ
ಚಾಮರಾಜನಗರ: ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
ಚಾಮರಾಜನಗರ: ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಿನ್ನೀರಿನಲ್ಲಿ ನಡೆದಿದೆ ಚಾಮರಾಜನಗರ ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ (24) ಮೃತ ಯುವಕ. ಗೆಳೆಯ ದಿಲೀಪ್ ಕುಮಾರ್ ಜೊತೆ ಸುವರ್ಣಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಸೋಮವಾರ ರಾತ್ರಿ ತೆಪ್ಪದಲ್ಲಿ ಶಿವಸ್ವಾಮಿ ತೆರಳಿದ್ದರು. ಈ ಸಂದರ್ಭ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ದಿಲೀಪ್ ಕುಮಾರ್ ಈಜಿಕೊಂಡು ದಡ ಸೇರಿದ್ದು, ಶಿವಸ್ವಾಮಿ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕರ್ನಾಟಕದ 5 ಜಿಲ್ಲೆಗಳಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣ; ಸಿಎಂ ಸಿದ್ದರಾಮಯ್ಯ ಘೋಷಣೆ - ಎಲ್ಲೆಲ್ಲಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಐದು ಕಡೆಗಳಲ್ಲಿ ವಿಶ್ವದರ್ಜೆ ಏರೋಸ್ಪೇಸ್ ಪಾರ್ಕ್ಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ದೇವನಹಳ್ಳಿಯಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಹೊಸ ಕಾರ್ಯಾಚರಣಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಹೂಡಿಕೆಯು 2000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ರಾಜ್ಯವು ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
TIF Research exit poll: ಟಿಐಎಫ್ ರೀಸರ್ಚ್ ಪ್ರಕಾರ ಬಿಹಾರದಲ್ಲಿ ಮತ್ತೆ ಎನ್ಡಿಎ ಸರ್ಕಾರ
ಎರಡು ಹಂತಗಳಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದೆ. ಇಂದು ಎರಡನೇ ಹಂತದ ಚುನಾವಣೆ ಪೂರ್ಣಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆ-2025 ರ ಎರಡನೇ ಹಂತದಲ್ಲಿ ಅಂದಾಜು 68.52% ಮತದಾನ ದಾಖಲಾಗಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ (ಎಕ್ಸಿಟ್ ಪೋಲ್) ಫಲಿತಾಂಶ ಪ್ರಕಟಿಸಿವೆ. ಟಿಐಎಫ್ ರೀಸರ್ಚ್ (TIF Research)
ಬಿಹಾರ ಚುನಾವಣೆ 2025 Exit poll - ನಿಖರತೆಗೆ ಹೆಸರಾಗಿರುವ ‘ಟುಡೇಸ್ ಚಾಣಕ್ಯ’ ಹೇಳಿದ್ದೇನು? ಯಾರಿಗೆಷ್ಟು ಸೀಟು?
ಬಿಹಾರದಲ್ಲಿ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಟುಡೇಸ್ ಚಾಣಕ್ಯ ಸಂಸ್ಥೆಯ ವರದಿ ಪ್ರಕಾರ, ಎನ್ ಡಿಎ ಮೈತ್ರಿಕೂಟವು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮಹಾಘಟಬಂಧನ್ ಮೈತ್ರಿಕೂಟವು ಕಡಿಮೆ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ. ಇದು ಬಿಹಾರದ ರಾಜಕೀಯ ಚಿತ್ರಣವನ್ನು ಬದಲಾಯಿಸಲಿದೆ.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಸಾಟ್ ಕಟ್ಟಡದ ಲೋಕಾರ್ಪಣೆ
ವಿದ್ಯಾರ್ಥಿಗಳು ಸಮಾಜ ಕಟ್ಟುವ ನಾಯಕರಾಗಿ ಮುನ್ನಡೆಯಿರಿ : ಭಾಗೀರಥಿ ಮುರುಳ್ಯ
ಮೊದಲ ಯತ್ನದಲ್ಲೇ ಹೀನಾಯ ಸೋಲು? ಪ್ರಶಾಂತ್ ಕಿಶೋರ್ಗೆ ಆಘಾತ ನೀಡಿದ ಬಿಹಾರ ಮತಗಟ್ಟೆ ಸಮೀಕ್ಷೆಗಳು!
ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು, ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಆಘಾತ ನೀಡಿವೆ. ಮೂರನೇ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಕನಸು ಕಂಡಿದ್ದ ಅವರ 'ಜನ್ ಸೂರಜ್' ಪಕ್ಷವು ಕೇವಲ 0 ರಿಂದ 5 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಏಳಕ್ಕೂ ಹೆಚ್ಚು ಪ್ರಮುಖ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

20 C