SENSEX
NIFTY
GOLD
USD/INR

Weather

25    C
... ...View News by News Source

ಕಲಬುರಗಿ | ಸರಣಿ ಅಪಘಾತ : ಸ್ಥಳದಲ್ಲೇ ಮೂವರು ಮೃತ್ಯು

ಕಲಬುರಗಿ: ಜೀಪ್ ಹಾಗೂ ಬಸ್ ಗಳ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿಯಿಂದ ಅಫಜಲ್ಪುರ ಮಧ್ಯೆ ಇರುವ ಹಡಗಿಲ್ ಹಾರುತಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ. ಮೃತರನ್ನು ಅಫಜಲಪುರ ತಾಲೂಕಿನ ಮೂಲದವರೆಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಚಾರಿ ಪೊಲೀಸ್ ಠಾಣೆ 1 ವ್ಯಾಪ್ತಿಯಲ್ಲಿ ನಡೆದಿದೆ.

ವಾರ್ತಾ ಭಾರತಿ 11 Dec 2025 6:02 pm

Property: ಬೆಂಗಳೂರು ನಂತರ ಕರ್ನಾಟಕದ ಈ ಆರು ನಗರಗಳಲ್ಲಿ ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ!

ಬೆಂಗಳೂರಿನ ನಂತರ ಕರ್ನಾಟಕದ ಮತ್ತೊಂದು ಪ್ರಮುಖ ನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಹೆಚ್ಚಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ ಮತ್ತೊಂದು ಪ್ರಮುಖ ನಗರದಲ್ಲಿ ಐಟಿ ಪಾರ್ಕ್ ವಾಣಿಜ್ಯ ಕಚೇರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಡಿಸೆಂಬರ್‌ 15 ರಂದು ಟೆಂಡರ್ ಬಿಡ್ ತರೆಯಲಾಗುತ್ತದೆ. ನಂತರ ಅಗತ್ಯಬಿದ್ದರೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್

ಒನ್ ಇ೦ಡಿಯ 11 Dec 2025 5:51 pm

ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿನಲ್ಲಿರುವ ಷರತ್ತುಗಳೇನು?

ಮಂಗಳೂರು : ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳ ವಿರುದ್ದ ಅವಹೇಳನಕಾರಿ ಧ್ವೇಷ ಭಾಷಣ ಮಾಡಿದ್ದ ಆರೋಪ ಎದುರಿಸುತ್ತಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಡಿಸೆಂಬರ್ 10 ರಂದು ನಿರಿಕ್ಷಣಾ ಜಾಮೀನು ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದೆ. ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ ಪ್ರತೀ ಗುರುವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿದೆ. ಇಲ್ಲದೇ ಇದ್ದರೆ ಜಾಮೀನು ರದ್ದಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯ ವಿಧಿಸಿದ ಷರತ್ತುಗಳ ಸಾರಾಂಶ ಇಲ್ಲಿದೆ: ಆರೋಪಿ ಪ್ರಭಾಕರ ಭಟ್ BNSS ಕಲಂ 482 ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯ ಕ್ರೈಂ ನಂ.118/2025 ಪ್ರಕರಣದಲ್ಲಿ ಆರೋಪಿ ಹಾಜರಾಗಿ ಬಂಧನ ಪ್ರಕ್ರಿಯೆ ನಡೆಸಿ ಬಿಡುಗಡೆಗೊಳಿಸುವಾಗ 50,000 ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಒಬ್ಬ ಜಾಮೀನುದಾರರನ್ನು ಪಡೆದುಕೊಂಡು ಬಿಡುಗಡೆ ಮಾಡಬೇಕು. ಆರೋಪಿಯು 20 ದಿನಗಳಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮುಂದೆ ಶರಣಾಗಬೇಕು. ಆರು ತಿಂಗಳ ಅವಧಿಗೆ, ಪ್ರತೀ ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು. ದೂರುದಾರರನ್ನು ಅಥವಾ ಇತರ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಬೆದರಿಸಬಾರದು ಹಾಗೂ ನೇರ ಅಥವಾ ಪರೋಕ್ಷವಾಗಿ ಸಾಕ್ಷ್ಯ ತೊಂದರೆಗೊಳಿಸಬಾರದು. ನ್ಯಾಯಾಲಯದಲ್ಲಿ ಎಲ್ಲಾ ದಿನಾಂಕಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಮುಂದೆ ಇದೇ ರೀತಿಯ ಅಪರಾಧಗಳಲ್ಲಿ ತೊಡಗಿಸಿಕೊಳ್ಳಬಾರದು. ಈ ಆದೇಶ ಹೊರಟ ದಿನದಿಂದ 20 ದಿನಗಳೊಳಗೆ ಸ್ವಯಂ ಬಾಂಡ್ ಮತ್ತು ಜಾಮೀನಿದಾರರನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಖಾ ಅಧಿಕಾರಿ ಹಾಗೂ ನ್ಯಾಯಾಲಯಕ್ಕೆ ವಿಳಾಸದ ಗುರುತು ಪತ್ರವನ್ನು ಸಲ್ಲಿಸಬೇಕು. ಈ ಮೇಲಿನ ಯಾವುದೇ ಷರತ್ತು ಉಲ್ಲಂಘನೆಯಾದಲ್ಲಿ ಜಾಮೀನು ರದ್ದಾಗುತ್ತದೆ. ಇನ್ನು ಮುಂದೆ ಆರು ತಿಂಗಳು ಪ್ರತೀ ಗುರುವಾಗ ಠಾಣೆಗೆ ಹಾಜರಾಗದಿದ್ದಲ್ಲಿ ಜಾಮೀನು ರದ್ದಾಗಲಿದೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈವರೆಗೆ 12 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದೆ. ಪ್ರಕರಣವೇನು? ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ  ಕಲ್ಲಡ್ಕ ಪ್ರಭಾಕರ ಭಟ್‌ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸರು ಬಿಎನ್‌ಎಸ್‌-2023ರ ಸೆಕ್ಷನ್ 79, 196, 299, 302 ಹಾಗೂ 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರವಾಗಿ ಆರೋಪಿ ಪ್ರಭಾಕರ ಭಟ್ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಮತ್ತು ವಾದ ಮಾಡಲು ಅವಕಾಶ ಕೊಡಬೇಕು’ ಎಂದು ಹಿರಿಯ ವಕೀಲ ಸತೀಶನ್ ಅವರು ಬಿಎನ್‌ಎಸ್‌ಎಸ್‌ ಸೆಕ್ಷನ್ 338 - 339 ಅರ್ಜಿ ಹಾಕಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಸತೀಶನ್ ಅವರಿಗೆ ವಾದ ಮಾಡಲು ಮತ್ತು ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಈ ಮಧ್ಯೆ ಸರ್ಕಾರಿ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದರು. ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಹತ್ತಾರು ಪುಟಗಳ ಸುಧೀರ್ಘ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಭಾಕರ ಭಟ್ ಮೇಲಿದ್ದ 13 ಪ್ರಕರಣಗಳ ಇತಿಹಾಸ, ಸುಪ್ರಿಂ ಕೋರ್ಟ್ ತೀರ್ಪುಗಳನ್ನು ಹಿರಿಯ ವಕೀಲ ಸತೀಶನ್ ನ್ಯಾಯಾಲಯಕ್ಕೆ ಒದಗಿಸಿದ್ದರು. ಇದರ ಆಧಾರದಲ್ಲಿ ಹಲವು ಷರತ್ತುಗಳನ್ನು ವಿಧಿಸಿ ಪ್ರಭಾಕರ ಭಟ್ ಗೆ ನ್ಯಾಯಾಲಯ ಜಾಮೀನು ನೀಡಿದೆ.

ವಾರ್ತಾ ಭಾರತಿ 11 Dec 2025 5:49 pm

ಪರಿಭಾವಿತ(ಡೀಮ್ಡ್) ಅರಣ್ಯ ವೀಸ್ತಿರ್ಣ ಪುನರ್ ಪರಿಶೀಲನೆಗೆ ಸಮಿತಿ: ಸಚಿವ ಈಶ್ವರ್ ಖಂಡ್ರೆ

ಬೆಳಗಾವಿ (ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಮೂರು ವರ್ಷದ ವರದಿ ಅನ್ವಯ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇದ್ದು, ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರವ ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಎನ್.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 2022ರಲ್ಲಿ ವರದಿ ಅನ್ವಯ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರವ ಪರಿಭಾವಿತ ಅರಣ್ಯ ಪ್ರದೇಶವನ್ನು ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ.ಇದರೊಂದಿಗೆ ಅರಣ್ಯ ಇಲಾಖೆ ಜಾಗ ಗುರುತಿಸಲು ಅನುಕೂಲವಾಗುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಲು ಆದೇಶ ಮಾಡಲಾಗಿದೆ ಎಂದರು. ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಪುನರ್ ಪರಿಶೀಲಿಸಲು ನೇಮಿಸಿರುವ ಸಮಿತಿ 6 ತಿಂಗಳಿನಲ್ಲಿ ತನ್ನ ವರದಿ ನೀಡಲಿದೆ. ಇದಕ್ಕೂ ಮುನ್ನ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪರಿಭಾವಿತ ಅರಣ್ಯ ವಿಸ್ತೀರ್ಣ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ವರದಿ ಮಂಡಿಸಿ, ಎಲ್ಲ ಶಾಸಕರಿಗೂ ಮಾಹಿತಿ ನೀಡುವಂತೆ ಇಲಾಖೆಯಿಂದ ಆದೇಶ ನೀಡಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಒಕ್ಕಲೆಬ್ಬಿಸಿ ತೊಂದರೆ ನೀಡಿಲ್ಲ: ಕೋಲಾರ ಜಿಲ್ಲೆಯಲ್ಲಿ 36992 ಹೆಕ್ಟೇರ್ ಮೀಸಲು, 545.65 ಹೆಕ್ಟೇರ್ ಗ್ರಾಮ, 2885.59 ಹೆಕ್ಟೇರ್ ರಕ್ಷಿತ, ಸೆಕ್ಷೆನ್ 04 ಅಡಿ 1047.55 ಹೆಕ್ಟೇರ್, 5529.89 ಹೆಕ್ಟೇರ್ ವರ್ಗೀಕರಿಸಿದ ಹಾಗೂ 4986.70 ಹೆಕ್ಟೇರ್ ಪರಿಭಾವಿತ ಅರಣ್ಯವಿದೆ. ಒಟ್ಟಾರೆ ಜಿಲ್ಲೆಯಲ್ಲಿ 51987 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಕಂದಾಯ, ಮೋಜಿಣಿ ಮತ್ತು ಅರಣ್ಯ ಇಲಾಖೆಗಳು ಜಂಟಿ ಮೋಜಿಣಿ ಕಾರ್ಯಕೈಗೊಂಡು ಅಕ್ರಮ ಅರಣ್ಯ ಒತ್ತುವರಿ ಪ್ರದೇಶವನ್ನು ಗುರುತಿಸಿದ್ದಾರೆ. ಕರ್ನಾಟಕ ಅರಣ್ಯ ಕಾಯಿದೆ 1964ರ ಕಲಂ 64(ಎ) ಅನ್ವಯ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಒಮ್ಮೆ ಪಹಣಿಯಲ್ಲಿ ಅರಣ್ಯ ಎಂದು ನಮೂದಾರೆ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅನುಮತಿ ಪಡೆಯದೆ ಸಂಬಂಧಿಸಿದ ಜಮೀನನ್ನು ಯಾರಿಗೂ ಮಂಜೂರು ಮಾಡಲು ಬರುವುದಿಲ್ಲ. ಸರ್ವೋಚ್ಛ ನ್ಯಾಯಾಲಯವು ಸಹ ಒಮ್ಮೆ ಅರಣ್ಯ ಎಂದರೆ ಸದಾ ಅರಣ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಖಾಸಗಿ ಹಾಗೂ ಪಟ್ಟಾ ಜಮೀನು ಹೊಂದಿರವ ಯಾರನ್ನು ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಿ ತೊಂದರೆ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬಂಗಾರಪೇಟೆ ತಾಲೂಕಿನ ಇಂದಿರಾಗಾಂಧಿ ಪಾರ್ಕ್ ಅಭಿವೃದ್ಧಿ ಪಡಿಸಲು 2016-17 ರಿಂದ 2025-26 ರವರೆಗೆ 2.37 ಕೋಟಿ ರೂ., ಅನುದಾನ ನೀಡಲಾಗಿದೆ. ಅಗತ್ಯವಿದ್ದಲ್ಲಿ ಶಾಸಕರ ಬೇಡಿಕೆ ಮೇರೆಗೆ ಅನುದಾನ ಒದಗಿಸಲಾಗುವುದು. ಮಾಲೂರು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಗಟ್ಟಲು 74.43 ಕಿ.ಮೀ. ಸೋಲಾರ್ ತಂತಿಬೇಲಿ ಅಳವಡಿಸಲಾಗಿದೆ. ತಂತಿಬೇಲಿ ನಿರ್ವಹಣೆ ಅಗತ್ಯ ಇರುವ ಅನುದಾನವನ್ನು ಸಹ ನೀಡುವುದಾಗಿ ಅವರು ತಿಳಿಸಿದರು. ಶಾಸಕರ ಗಮನಕ್ಕೆ ತರಬೇಕು: ರಾಜ್ಯದ ಎಲ್ಲೆಡೆ ಪರಿಭಾವಿತ ಅರಣ್ಯ ವಿಸ್ತೀರ್ಣದ ಗೊಂದಲ ನಿವಾರಣೆ ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಸಮಿತಿ ರಚಿಸುವ ವರದಿಯನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಜಂಟಿ ಸರ್ವೇಕಾರ್ಯ ಮುಗಿಯುವವರೆಗೆ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಸದಸ್ಯರಾದ ಸಿ.ಸಿ.ಪಾಟೀಲ್, ಸುನೀಲ್‍ಕುಮಾರ್, ಅರಗಜ್ಞಾನೇಂದ್ರ, ಭಾಗೀರತಿ ಮರುಳ್ಯ ಸೇರಿದಂತೆ ಹಲವರು ಸಚಿವರಲ್ಲಿ ಮನವಿ ಮಾಡಿದರು.

ವಾರ್ತಾ ಭಾರತಿ 11 Dec 2025 5:40 pm

ಸಹೋದರಿಯ ಮದುವೆಗೆ ಹಾಜರಾಗಲು ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

ಹೊಸದಿಲ್ಲಿ: 2020 ರ ಈಶಾನ್ಯ ದಿಲ್ಲಿ ಗಲಭೆಯ ಪಿತೂರಿ ಆರೋಪದಲ್ಲಿ ಬಂಧನದಲ್ಲಿರುವ ಜೆಎನ್‌ಯುನ ಹಳೇ ವಿದ್ಯಾರ್ಥಿ ಹಾಗೂ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ತಮ್ಮ ಸಹೋದರಿಯ ಮದುವೆಗೆ ಹಾಜರಾಗಲು ಕರ್ಕಾರ್ಡೂಮಾ ನ್ಯಾಯಾಲಯವು ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿ. 16 ರಿಂದ 29 ರವರೆಗೆ ಜಾಮೀನು ಅನ್ವಯವಾಗಲಿದ್ದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪೇಯಿ ಅವರು 20,000 ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಎರಡು ಶ್ಯೂರಿಟಿಗಳೊಡನೆ ಜಾಮೀನು ನೀಡುವಂತೆ ನಿರ್ದೇಶಿಸಿದ್ದಾರೆ. ಜಾಮೀನು ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿ ಅಥವಾ ವ್ಯಕ್ತಿಯನ್ನು ಸಂಪರ್ಕಿಸಬಾರದೆಂದು ಖಾಲಿದ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತನಿಖಾ ಅಧಿಕಾರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸುವುದು ಹಾಗೂ ಅದು ಸಕ್ರಿಯವಾಗಿರಬೇಕೆಂಬ ಶರತ್ತನ್ನೂ ವಿಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿರುವ ನ್ಯಾಯಾಲಯ, ಖಾಲಿದ್ ಅವರು ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಭೇಟಿಯಾಗಲು ಅವಕಾಶ ನೀಡಿದೆ. ಅವರು ತಮ್ಮ ಮನೆಯಲ್ಲಿ ಅಥವಾ ವಿವಾಹ ಸಮಾರಂಭ ನಡೆಯುವ ಸ್ಥಳದಲ್ಲಿಯೇ ಇರಬೇಕು ಎಂದು ಆದೇಶಿಸಲಾಗಿದೆ. ಜಾಮೀನು ಅವಧಿ ಪೂರ್ಣಗೊಳ್ಳುವ ಡಿಸೆಂಬರ್ 29ರ ಸಂಜೆ, ಖಾಲಿದ್ ಅವರು ಸಂಬಂಧಿಸಿದ ಜೈಲಿನ ಸೂಪರಿಂಟೆಂಡೆಂಟ್ ಮುಂದೆ ಶರಣಾಗಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ 2022 ಮತ್ತು 2023 ರಲ್ಲೂ ಕುಟುಂಬದ ಮದುವೆಗಳಿಗೆ ಹಾಜರಾಗುವ ಸಲುವಾಗಿ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು. ನಿಯಮಿತ ಜಾಮೀನು ನೀಡುವ ಕುರಿತು ವಿಚಾರಣಾ ನ್ಯಾಯಾಲಯ ಹಾಗೂ ದಿಲ್ಲಿ ಹೈಕೋರ್ಟ್ ಮೊದಲು ನಿರಾಕರಿಸಿತ್ತು. ಯುಎಪಿಎ ಸೇರಿದಂತೆ ಹಲವು ಗಂಭೀರ ಕಲಂಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್ 59/2020ರಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ನತಾಶಾ ನರ್ವಾಲ್ ಸೇರಿದಂತೆ 18 ಮಂದಿ ಆರೋಪಿಗಳು ಎಂದು ಹೆಸರಿಸಲಾಗಿದೆ. ಇಡೀ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಸೇರಿದಂತೆ ಹಲವರ ಜಾಮೀನು ಅರ್ಜಿಗಳ ಮೇಲಿನ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಕಾಯ್ದಿರಿಸಲಾಗಿದೆ.

ವಾರ್ತಾ ಭಾರತಿ 11 Dec 2025 5:33 pm

Ration Card: ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ಅಗತ್ಯ ದಾಖಲೆಗಳು: ಇಲ್ಲಿದೆ ಮತ್ತೊಂದು ಅಪ್ಡೇಟ್‌

Ration Card: ರಾಜ್ಯದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿರುವ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಇದೀಗ ಹೊಸದಾಗಿ ಸದಸ್ಯರ ಸೇರ್ಪಡೆ ಕ್ರಮಗಳನ್ನು ಮತ್ತಷ್ಟು ಬಿಗಿಪಡಿಸಲಾಗಿದೆ. ಹಾಗಾದ್ರೆ, ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಪಡಿತರ ಚೀಟಿ ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಹಲವು ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು

ಒನ್ ಇ೦ಡಿಯ 11 Dec 2025 5:24 pm

ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಭಿಕ್ಷೆ ಬೇಡಿದರೆ ಹತ್ತಿಪ್ಪತ್ತು ಪೈಸೆ ಸಿಗುತ್ತೆ! ಸರ್ಕಾರದ ವಿರುದ್ಧವೇ ರಾಜು ಕಾಗೆ ವಾಗ್ಬಾಣ

ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ. ಭಿಕುಕರಂತೆ ಬೇಡಿಕೊಂಡರು ಸಿಗೋದು ಪೈಸೆ ಹಣವಷ್ಟೇ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿಗೆ ಅನುದಾನ ನೀಡುವಂತೆ ಅವರು ಮನವಿ ಮಾಡಿದರು. ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬದ್ಧನಾಗಿರುವೆ. ಸರ್ಕಾರ ವಿರುದ್ಧ ಮಾತನಾಡಿದ್ರೆ ಅದೇ ದೊಡ್ಡ ವಿಚಾರ ಮಾಡ್ತಾರೆ ಆದರೆ ಸಮಸ್ಯೆ ಯಾರಿಗೆ ಹೇಳ್ಕೋಬೇಕು ಎಂದು ಕಿಡಿಕಾರಿದರು.

ವಿಜಯ ಕರ್ನಾಟಕ 11 Dec 2025 5:12 pm

ತಾಯಿಯನ್ನು ಕೊಲ್ಲುವಂತೆ ಸಲಹೆ ನೀಡಿದ A.I. - ಅದಾದ ಮೇಲೆ ನಡೆದಿದ್ದೇ ಘೋರ!

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಾಟ್ ಜಿಪಿಟಿ ತಾಯಿಯನ್ನು ಕೊಲ್ಲುವಂತೆ ಸೂಚಿಸಿದ್ದರಿಂದ ಮಗನೊಬ್ಬ ತಾಯಿಯನ್ನು ಹತ್ಯೆಗೈದಿದ್ದಾನೆ. ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ತಂತ್ರಜ್ಞಾನದ ಅತಿಯಾದ ಅವಲಂಬನೆಯ ದುಷ್ಪರಿಣಾಮವನ್ನು ತೋರಿಸುತ್ತದೆ. ಮೃತ ಸುಝೇನ್ ಅವರ ಕಂಪನಿ ಚಾಟ್ ಜಿಪಿಟಿ ವಿರುದ್ಧ ಪ್ರಕರಣ ದಾಖಲಿಸಿದೆ. ಇದು ಕೃತಕ ಬುದ್ಧಿಮತ್ತೆಯ ವಿರುದ್ಧ ದಾಖಲಾದ ಮೊದಲ ಪ್ರಕರಣವಾಗಿದೆ.

ವಿಜಯ ಕರ್ನಾಟಕ 11 Dec 2025 5:09 pm

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಾವಾಗ? ಮಹತ್ವದ ಅಪ್ಡೇಟ್‌ ನೀಡಿದ ಮುಖ್ಯ ಆರ್ಥಿಕ ಸಲಹೆಗಾರ ನಾಗೇಶ್ವರನ್

ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ಬಹುತೇಕ ವ್ಯಾಪಾರ ಬಿಕ್ಕಟ್ಟುಗಳು ಬಗೆಹರಿದಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಭೌಗೋಳಿಕ ರಾಜಕೀಯ ಕಾರಣಗಳಿಂದ ಒಪ್ಪಂದದಲ್ಲಿ ತುಸು ವಿಳಂಬವಾಗಿದ್ದರೂ, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಇದು ಕಾರ್ಯರೂಪಕ್ಕೆ ಬರಲಿದೆ. ಇದೇ ವೇಳೆ, ಅಮೆರಿಕದ ನಿಯೋಗ ದಿಲ್ಲಿಯಲ್ಲಿದ್ದು, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶದ ಕುರಿತು ತೀವ್ರ ಮಾತುಕತೆ ನಡೆಸುತ್ತಿದೆ.

ವಿಜಯ ಕರ್ನಾಟಕ 11 Dec 2025 5:00 pm

ಸಿಎಂ ಹೆಲಿಕಾಪ್ಟರ್ ಪ್ರಯಾಣ ಇಷ್ಟೊಂದು ದುಬಾರಿನಾ?; 2025ರ ನವೆಂಬರ್‌ವರೆಗೆ ಖರ್ಚಾಗಿದ್ದು47.38 ಕೋಟಿ ರೂ.

ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ 2023ರಿಂದ 2025ರ ನವೆಂಬರ್ ವರೆಗೆ ದೆಹಲಿ, ಕರ್ನಾಟಕದ ಹಲವು ಜಿಲ್ಲೆಗೆ ತೆರಳಲು ಸರ್ಕಾರದ ಬೊಕ್ಕಸದಿಂದ ಅವರ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಯಾನಕ್ಕಾಗಿ ಬರೋಬ್ಬರಿ 47 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ವಿಧಾನ ಪರಿಷತ್‌ನಲ್ಲಿ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಸರ್ಕಾರ ಈ ಉತ್ತರ ನೀಡಲಾಗಿದೆ.

ವಿಜಯ ಕರ್ನಾಟಕ 11 Dec 2025 4:51 pm

ಶುಭಮನ್ ಗಿಲ್ ಟಿ20 ಕಂಬ್ಯಾಕ್ ಡ್ರಾಮಾದಲ್ಲಿ ಸಂಜು ಸ್ಯಾಮ್ಸನ್ ಅವಕಾಶಕ್ಕೆ ಕೊಳ್ಳಿ! ಇದು ಎಷ್ಟರಮಟ್ಟಿಗೆ ಸರಿ?

India T20 Team Selection Criteria- ಶುಭಮನ್ ಗಿಲ್ ಅವರನ್ನು ಟೀಂ ಇಂಡಿಯಾದ ಮೂರೂ ಮಾದರಿಗಳಿಗೂ ನಾಯಕನನ್ನಾಗಿ ಮಾಡಬೇಕೆಂಬ ಆತುರದಲ್ಲಿರುವ ಬಿಸಿಸಿಐ ಈ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್ ಅವರ ಅವಕಾಶಕ್ಕೇ ಕೊಡಲಿಯೇಟು ಹಾಕಿದೆ. ಗಿಲ್ ಅವರಿಗೆ ಆರಂಭಿಕನ ಸ್ಥಾನ ಕಲ್ಪಿಸುವ ಸಲುವಾಗಿ ಕಳೆದ ವರ್ಷದ ಯಶಸ್ವಿ ಆರಂಭಿಕ ಸಂಜು ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಅಲ್ಲಿ ಅವರು ಯಶಸ್ವಿಯಾಗಲಿಲ್ಲ ಎಂಬ ಕಾರಣಕ್ಕೆ ಇದೀಗ ತಂಡದಿಂದಲೇ ಕಿತ್ತೊಗೆದು ಜಿತೇಶ್ ಶರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್ ಇಲೆವೆನ್ ನಲ್ಲಿ ಆಡಿಸುತ್ತಿದೆ.

ವಿಜಯ ಕರ್ನಾಟಕ 11 Dec 2025 4:43 pm

ಪಡುಬಿದ್ರಿ | ಅದಾನಿ ಪವರ್: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ 37 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪಡುಬಿದ್ರಿ: ಇಲ್ಲಿಗೆ ಸಮೀಪದ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್‍ನ ಸಿಎಸ್‍ಆರ್ ನಿಧಿಯಲ್ಲಿ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 37 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಅದಾನಿ ಸಂಸ್ಥೆಯು ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಬಡಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿರ್ಮಿಸಿದ 17 ಲಕ್ಷ ರೂ.ಗಳ ನೂತನ ಮಾರುಕಟ್ಟೆ ಸಂಕೀರ್ಣ ಹಾಗೂ 20 ಲಕ್ಷ ರೂ.ನಲ್ಲಿ ಮಾರುಕಟ್ಟೆ ವಿಸ್ತರಣೆ, ಸಾರ್ವಜನಿಕ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಕಾಮಗಾರಿಗೆ ಚಾಲನೆ ನೀಡಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಗ್ರಾಮೀಣ ಸಮುದಾಯಗಳನ್ನು ಸಬಲೀಕರಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಅವಶ್ಯಕ. ಹೊಸ ಮಾರುಕಟ್ಟೆ ರೈತರಿಗೆ ಹೆಚ್ಚು ಆದಾಯ ಮತ್ತು ಪಾರದರ್ಶಕ ಮಾರಾಟ ವ್ಯವಸ್ಥೆಯನ್ನು ಒದಗಿಸುವ ಮೂಲಕ ಮಹತ್ವದ ಪ್ರಯೋಜನ ನೀಡಲಿದೆ ಎಂದರು. ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ 1.51 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಗ್ರಾಮಸ್ಥರ ಉಪಯೋಗಕ್ಕೆ ಸಮರ್ಪಿಸಲಾಗಿದೆ ಎಂದರು. ಬಡಾಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿದರು. ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ, ಅಬ್ದುಲ್ ಮಜೀದ್, ಶಕುಂತಲಾ, ನಿರ್ಮಲಾ, ರಜಾಕ್, ಮೋಹಿನಿ ಸುವರ್ಣ, ಕಲಾವತಿ, ತಾಲೂಕು ಪಂಚಾಯತ್ ಮಾಜಿ ಸದ್ಯಸ್ಯ ಯು.ಸಿ. ಶೇಕಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ, ಪಂಚಾಯತ್ ಸಿಬ್ಬಂಧಿ ಶಶಿಕಾಂತ್ ಕುಮಾರ್, ಸ್ಥಳೀಯರು ಹಾಗೂ ಅದಾನಿ ಪವರ್ ಲಿಮಿಟೆಡ್‍ನ ರವಿ ಆರ್. ಜೇರೆ ಮತ್ತು ಅದಾನಿ ಫೌಂಡೇಷನ್‍ನ ಅನುದೀಪ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 4:38 pm

ವಿಟ್ಲ | ಡಿ.14ರಂದು ದುಲ್ ಫುಖಾರ್ ಸೇವಾ ಟ್ರಸ್ಟ್ ಕನ್ಮಾನ ಬೆಳ್ಳಿಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ವಿಟ್ಲ : ಬಡ ಮತ್ತು ಅನಾಥರ ಸೇವೆಯ ಗುರಿಯೊಂದಿಗೆ ಜನ್ಮ ತೆತ್ತು ಹುಟ್ಟು ದ್ಯೇಯದಲ್ಲಿ ಮುನ್ನಡೆಯುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ ಡಿ.24 ಮತ್ತು 25 ರಂದು ಕನ್ಯಾನ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದ್ದು, ಇದರ ಪ್ರಯುಕ್ತ ಡಿ.14ರಂದು ರಕ್ತದಾನ ಶಿಬಿರ ನಡೆಯಲಿದೆ. ಆ ಪ್ರಯುಕ್ತ ಹಮ್ಮಿಕೊಂಡ ಹಲವು ಯೋಜನೆಗಳಲ್ಲೊಂದಾದ ರಕ್ತದಾನ ಶಿಬಿರವು ಮಂಗಳೂರು ಎ.ಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಡಿ.14ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಕನ್ಯಾನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ

ವಾರ್ತಾ ಭಾರತಿ 11 Dec 2025 4:33 pm

ಮೆಕ್ಸಿಕೊದಿಂದಲೂ ಭಾರತದ ಮೇಲೆ ಶೇ 50ರಷ್ಟು ಸುಂಕ ಭಾರತದ ಮೇಲೆ ಮೆಕ್ಸಿಕೊದ ಸುಂಕದ ಪರಿಣಾಮವೇನು?

2026 ಜನವರಿ 1ರಿಂದ ಅನ್ವಯವಾಗುವಂತೆ ಭಾರತದಿಂದ ಆಮದುಗಳ ಮೇಲೆ ಮೆಕ್ಸಿಕೊ ಶೇ 50ರಷ್ಟು ಸುಂಕ ವಿಧಿಸಿದೆ. ಇದು ಭಾರತದ ಮುಂದಿನ ವರ್ಷದ ರಫ್ತುಗಳ ಮೇಲೆ ಪರಿಣಾಮ ಬೀರಲಿದೆ. ಭಾರತೀಯ ಆಮದುಗಳ ಮೇಲೆ ಅಮರಿಕ ಶೇ 50ರಷ್ಟು ಸುಂಕ ವಿಧಿಸಿದ ನಂತರ ಇದೀಗ ಮೆಕ್ಸಿಕೋದ ಸಂಸತ್ತು ಕೂಡ ಭಾರತದಿಂದ ಬರುವ ವಿಸ್ತೃತ ಶ್ರೇಣಿಯ ಆಮದುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸುವುದಕ್ಕೆ ಒಪ್ಪಿಗೆ ನೀಡಿದೆ. ಭಾರತ ಸೇರಿದಂತೆ ಚೀನಾ ಮತ್ತು ಇತರ ಏಷ್ಯಾದ ರಾಷ್ಟ್ರಗಳ ಮೇಲೆ ಮೆಕ್ಸಿಕೊ ಶೇ 50 ರಷ್ಟು ಸುಂಕ ವಿಧಿಸಿದೆ. ಆಟೊಮೊಬೈಲ್, ಆಟೋ ಭಾಗಗಳು, ಜವಳಿ ಉದ್ಯಮ, ಪ್ಲಾಸ್ಟಿಕ್ಗಳು ಮತ್ತು ಉಕ್ಕು ಮೊದಲಾದ ಸರಕುಗಳ ಮೇಲೆ 2026 ಜನವರಿ 1ರಿಂದ ಕಾರ್ಯರೂಪಕ್ಕೆ ಬರುವಂತೆ ಈ ಸುಂಕ ವಿಧಿಸಲಾಗಿದೆ. ಮೆಕ್ಸಿಕೊ ಜೊತೆಗೆ ವ್ಯಾಪಾರ ಒಪ್ಪಂದವಿಲ್ಲದ ರಾಷ್ಟ್ರಗಳಾದ ಭಾರತ, ದಕ್ಷಿಣ ಕೊರಿಯ, ಥಾಯ್ಲಂಡ್ ಹಾಗೂ ಇಂಡೋನೇಷ್ಯದಂತಹ ದೇಶಗಳ ಮೇಲೆ ಸುಂಕದ ಪರಿಣಾಮವಾಗಲಿದೆ. ಮೆಕ್ಸಿಕೊ ಸುಂಕ ವಿಧಿಸಲು ಕಾರಣವೇನು? ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಸ್ವದೇಶಿ ಉತ್ಪನ್ನಕ್ಕೆ ಹೆಚ್ಚು ಒತ್ತು ನೀಡಲು ಬಯಸಿದ್ದಾರೆ. ಆದರೆ ವಿಶ್ಲೇಷಕರ ಪ್ರಕಾರ ಅಮೆರಿಕ-ಮೆಕ್ಸಿಕೊ-ಕೆನಡಾ ವ್ಯಾಪಾರ ಒಪ್ಪಂದದ ನವೀಕರಣಕ್ಕೆ ಮೊದಲು ಟ್ರಂಪ್ರನ್ನು ಓಲೈಸಲು ಕ್ಲೌಡಿಯಾ ಶೀನ್‌ಬಾಮ್ ಈ ನಿರ್ಧಾರ ಕೈಗೊಂಡಿದ್ದಾರೆ. ಮೆಕ್ಸಿಕೊಗೆ ಅಮೆರಿಕ ಅತಿದೊಡ್ಡ ವ್ಯಾಪಾರಿ ಪಾಲುದಾರನಾಗಿದೆ. ಇದೇ ವರ್ಷದ ಆರಂಭದಲ್ಲಿ ಮೆಕ್ಸಿಕೊ ಚೀನಾದ ಸರಕುಗಳ ಮೇಲೆ ಅತಿಯಾದ ಸುಂಕ ವಿಧಿಸಿತ್ತು. ಕಳೆದ ಕೆಲವು ವಾರಗಳಿಂದ ಟ್ರಂಪ್ ಸರ್ಕಾರ ಮೆಕ್ಸಿಕನ್ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಶೇ 50ರಷ್ಟು ಸುಂಕ ಹೇರುವುದಾಗಿ ಬೆದರಿಕೆ ಒಡ್ಡಿದೆ. ಅಲ್ಲದೆ, ಮೆಕ್ಸಿಕೊದಿಂದ ಅಮೆರಿಕಕ್ಕೆ ಬರುತ್ತಿರುವ ಓಪಿಯಾಯ್ಡ್ ಫೆಂಟನಿಲ್ ಡ್ರಗ್ನ ಹರಿವನ್ನು ತಡೆಯಲು ವಿಫಲವಾದರೆ ಶೇ 25ರಷ್ಟು ಹೆಚ್ಚುವರಿ ಸುಂಕವನ್ನು ಹೇರುವುದಾಗಿ ಟ್ರಂಪ್ ಬೆದರಿಸಿದ್ದರು. ಇದೇ ವಾರದ ಆರಂಭದಲ್ಲಿ ಟ್ರಂಪ್ ಅವರು ಅಮೆರಿಕದ ರೈತರಿಗೆ ನೀರಿನ ಹರಿವನ್ನು ಒದಗಿಸುವ 1944ರ ಒಪ್ಪಂದ ಉಲ್ಲಂಘನೆಗೆ ಮೆಕ್ಸಿಕೊದ ಮೇಲೆ ಹೆಚ್ಚುವರಿ ಶೇ 5ರಷ್ಟು ಸುಂಕವನ್ನು ಹೇರುವುದಾಗಿ ಎಚ್ಚರಿಸಿದ್ದರು. ಭಾರತದ ಮೇಲೆ ಮೆಕ್ಸಿಕೊದ ಸುಂಕದ ಪರಿಣಾಮ ಮೆಕ್ಸಿಕೊ ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವುದರಿಂದ ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. 2024ರಲ್ಲಿ ದ್ವಿಪಕ್ಷೀಯ ವ್ಯಾಪಾರ 11.7 ಶತಕೋಟಿ ಡಾಲರ್ನಷ್ಟು ಗರಿಷ್ಠ ಮಟ್ಟಕ್ಕೆ ಏರಿತ್ತು. ಮೆಕ್ಸಿಕನ್ ರಫ್ತುಗಳಿಗೆ ಭಾರತ ಒಂಭತ್ತನೇ ಅತ್ಯಧಿಕ ಪಾಲುದಾರನಾಗಿದೆ. ವರದಿಗಳ ಪ್ರಕಾರ, ಭಾರತ ಮೆಕ್ಸಿಕೊಗೆ 2024ರಲ್ಲಿ 8.9 ಶತಕೋಟಿ ಡಾಲರ್ಗಳ ರಫ್ತು ವ್ಯವಹಾರ ನಡೆಸಿತ್ತು ಮತ್ತು 2.8 ಶತಕೋಟಿ ಡಾಲರ್ಗಳ ಆಮದುಗಳ ವ್ಯವಹಾರ ನಡೆಸಿತ್ತು. ಹೀಗಾಗಿ ಒಟ್ಟು ವಹಿವಾಟು ಭಾರತದ ಪರವಾಗಿ ವಾಲಿತ್ತು. 2024ರಲ್ಲಿ ಭಾರತದಿಂದ ಮೆಕ್ಸಿಕೊ ಕಾರುಗಳು, ಆಟೋ ಭಾಗಗಳು ಮತ್ತು ಇತರ ಪ್ರಯಾಣಿಕ ವಾಹನಗಳನ್ನು ಆಮದು ಮಾಡಿಕೊಂಡಿತ್ತು. ಇದೀಗ ಶೇ 50ರಷ್ಟು ಸುಂಕದಿಂದ ಭಾರತದ ಮುಂದಿನ ವರ್ಷದ ರಫ್ತಿನ ಮೇಲೆ ಪರಿಣಾಮ ಬೀರಲಿದೆ.

ವಾರ್ತಾ ಭಾರತಿ 11 Dec 2025 4:32 pm

ಕೊಣಾಜೆ | ಭಾಷೆ ಬೆಳೆದರೆ ಸಂಸ್ಕೃತಿ ಉಳಿಯುತ್ತದೆ : ಡಾ.ಸುಧೀರ್ ರಾಜ್. ಕೆ.

ಭಾರತೀಯ ಭಾಷಾ ದಿನಾಚರಣೆ ಕಾರ್ಯಕ್ರಮ

ವಾರ್ತಾ ಭಾರತಿ 11 Dec 2025 4:31 pm

ಗ್ರೇಟರ್ ಬೆಂಗಳೂರು (2ನೇ ತಿದ್ದುಪಡಿ) ವಿಧೇಯಕ ಮಂಡನೆ

ವಿಧೇಯಕದಲ್ಲಿ ಏನಿದೆ? :

ವಾರ್ತಾ ಭಾರತಿ 11 Dec 2025 4:25 pm

8th Pay Commission : ಕೇಂದ್ರ ಸರ್ಕಾರಿ ನೌಕರಿಗೆ ಶುಭಸುದ್ದಿ ಯಾವತ್ತಿಂದ - ಸರ್ಕಾರದ ಪ್ರತಿಕ್ರಿಯೆ

MoS for Finance responds - 8th Pay Commission : ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿರುವ ಎಂಟನೇ ವೇತನ ಆಯೋಗ ಜಾರಿಯಾಗುವುದು ಯಾವಾಗ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಹಣಕಾಸು ಸಚಿವಾಲಯದಿಂದ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ವಿಜಯ ಕರ್ನಾಟಕ 11 Dec 2025 4:21 pm

ನವಿಲಗುಡ್ಡ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು: ಸಚಿವ ಮಧು ಬಂಗಾರಪ್ಪ

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.11: ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿನ ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ವ್ಯಾಪ್ತಿಯಲ್ಲಿ ಸರಕಾರಿ ಪ್ರೌಢಶಾಲೆ ಅವಶ್ಯಕತೆ ಇರುವುದು ಸರಕಾರದ ಗಮನಕ್ಕೆ ಬಂದಿದ್ದು, ಅಮರಾಪುರ ಕ್ರಾಸ್ ಅಥವಾ ನವಿಲಗುಡ್ಡ ಗ್ರಾಮಕ್ಕೆ ಪ್ರೌಢಶಾಲೆಯೊಂದನ್ನು ಮಂಜೂರು ಮಾಡುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯೆ ಕರೆಮ್ಮ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವದುರ್ಗದ ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ಶಾಲೆಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸರಕಾರಿ ಅಥವಾ ಅನುದಾನಿತ ಪ್ರೌಢಶಾಲೆಗಳು ಇರುವುದಿಲ್ಲ. ಆದುದರಿಂದ ಈ ಎರಡು ಶಾಲೆಗಳ ಪೈಕಿ ಒಂದನ್ನು ಪ್ರೌಢಶಾಲೆಯಾಗಿ ಉನ್ನತಿಕರಿಸಲು ಸರಕಾರ ಮಂಜೂರಾತಿ ನೀಡಲಿದೆ. ಇದರಿಂದ ನವಿಲಗುಡ್ಡ, ಬಾಗೂರು, ನೀಲವಂಜಿ, ಕರಡಿಗುಡ್ಡ, ಮಂಡಲಗುಡ್ಡ ಮತ್ತು ಹೇರುಂಡಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿದೆ. ಮಲ್ಲೇಗೌಡರ ದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ ಶಾಲಾ ಕಟ್ಟಡಗಳು ಹಾಗೂ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇಲ್ಲಿ ಶಿಕ್ಷಕರನ್ನು ನಿಯೋಜಿಸಿ ತಾತ್ಕಾಲಿಕವಾಗಿ ಶಾಲೆ ತೆರೆಯಲಾಗಿದೆ. ಮಲ್ಲೇಗೌಡರ ದೊಡ್ಡಿಯಲ್ಲಿ ನಿಯಮಾನುಸಾರ ಪ್ರಾಥಮಿಕ ಶಾಲೆ ಮಂಜೂರು ಮಾಡಲು ಪರಿಶೀಲನೆ ನಡೆಸುವುದಾಗಿ ಅವರು ಹೇಳಿದರು.

ವಾರ್ತಾ ಭಾರತಿ 11 Dec 2025 4:13 pm

ವಿಧಾನಸಭೆಯಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ’ ವಿಧೇಯಕ ಮಂಡನೆ

‘ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿಪಡಿಸಿದರೂ ಗರಿಷ್ಠ 3 ವರ್ಷ ಜೈಲು ಶಿಕ್ಷೆ, 1ಲಕ್ಷ ರೂ. ದಂಡ’

ವಾರ್ತಾ ಭಾರತಿ 11 Dec 2025 4:09 pm

ಪ್ರಜ್ವಲ್ ರೇವಣ್ಣ ಪ್ರಕರಣ: ವಿಚಾರಣೆ ವರ್ಗಾವಣೆ ಮನವಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

ಹೊಸದಿಲ್ಲಿ, ಡಿ.11: ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂಬ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಹಿಂದಿನ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಇದೇ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದರಿಂದ ತಟಸ್ಥತೆಗೆ ಅಡ್ಡಿಯಾಗಬಹುದು ಎಂಬ ವಾದವನ್ನು ರೇವಣ್ಣ ಪರ ವಕೀಲರು ಮಂಡಿಸಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ, ವಿಚಾರಣಾ ದಾಖಲೆಗಳ ಆಧಾರದಲ್ಲಿ ನ್ಯಾಯಾಧೀಶರು ಮಾಡಿದ ಅವಲೋಕನಗಳನ್ನು ಪಕ್ಷಪಾತದ ಸೂಚನೆ ಎಂದು ಕರೆಯಲು ಆಧಾರವಿಲ್ಲ ಎಂದು ಸ್ಪಷ್ಟಪಡಿಸಿತು. “ಹಿಂದಿನ ಪ್ರಕರಣದಲ್ಲಿನ ಪ್ರಕರಣಗಳನ್ನು ಪರಿಗಣಿಸಲಾಗುವುದಿಲ್ಲ. ಈಗಿನ ವಿಚಾರಣೆ ಸಂಪೂರ್ಣವಾಗಿ ದಾಖಲೆಯಲ್ಲಿರುವ ಸಾಕ್ಷ್ಯಾಧಾರಗಳ ಮೇಲೇ ನಿರ್ಧಾರವಾಗಲಿದೆ,” ಎಂದು ಸಿಜೆಐ ಕಾಂತ್ ಆದೇಶದಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದರಿಂದ, ರೇವಣ್ಣ ಸುಪ್ರೀಂ ಕೋರ್ಟ್ ಮೊರೆಹೋದಿದ್ದರು. ಐಪಿಸಿ ಸೆಕ್ಷನ್ 376(2)(n), 354A, 354B, 354C, 506, 201 ಹಾಗು ಐಟಿ ಕಾಯ್ದೆಯ ಸೆಕ್ಷನ್ 66ಇ ಅಡಿಯಲ್ಲಿ ರೇವಣ್ಣ ವಿರುದ್ಧ ಆರೋಪಗಳು ಬಾಕಿ ಇದ್ದು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತೋರಿಸುವ 2,900 ಕ್ಕೂ ಹೆಚ್ಚು ವೀಡಿಯೊಗಳು ಹೊರಬಂದ ನಂತರ ದಾಖಲಾಗಿದ್ದ ನಾಲ್ಕು ಪ್ರಕರಣಗಳಲ್ಲಿ ಇವು ಎರಡನೆಯದು. ಈ ವರ್ಷದ ಆಗಸ್ಟ್‌ನಲ್ಲಿ, ಕುಟುಂಬದ ಮನೆ ಕೆಲಸದಾಕೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಆ ತೀರ್ಪಿನ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ವಿಚಾರಣಾ ನ್ಯಾಯಾಧೀಶರ ಕೆಲವು ಅವಲೋಕನಗಳ ವಿರುದ್ಧ ರೇವಣ್ಣ ಪರ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಜೆಐ ಸೂರ್ಯಕಾಂತ್, “ನ್ಯಾಯಾಲಯದಲ್ಲಿ ಹಲವಾರು ಕಾಲ್ಪನಿಕ ಸನ್ನಿವೇಶಗಳನ್ನು ಉದಾಹರಣೆಗೆ ಹೇಳಲಾಗುತ್ತದೆ. ಅದನ್ನು ನ್ಯಾಯಾಧೀಶರ ವಿರುದ್ಧದ ಆರೋಪಗಳಾಗಿ ಪರಿವರ್ತಿಸುವುದು ಸರಿಯಲ್ಲ. ತಪ್ಪುಗಳಾಗಿದೆಯಾದರೆ ನಾವು ಸ್ವತಃ ತಿದ್ದಿಕೊಳ್ಳುತ್ತೇವೆ,” ಎಂದು ಹೇಳಿದರು. ವಕೀಲರ ಬದಲಾವಣೆಯನ್ನು ಉಲ್ಲೇಖಿಸಿ ವಿಚಾರಣಾ ನ್ಯಾಯಾಲಯ ಮಾಡಿದ ಟಿಪ್ಪಣಿಗಳನ್ನು ರದ್ದುಪಡಿಸುವ ಮನವಿಯನ್ನೂ ಪೀಠ ನಿರಾಕರಿಸಿತು. “ವಕೀಲರನ್ನು ಗದರಿಸುವ ಉದ್ದೇಶ ನ್ಯಾಯಾಲಯಕ್ಕೆ ಇಲ್ಲ. ಆದರೆ ವೃತ್ತಿಪರ ನೈತಿಕತೆಯ ಪಾಲನೆಯೂ ಅವಶ್ಯ. ಅಗತ್ಯವಿದ್ದರೆ ಹೈಕೋರ್ಟ್ ಮುಂದೆ ಕ್ಷಮೆಯಾಚಿಸಬಹುದು,” ಎಂದು ನ್ಯಾಯಾಲಯ ಸೂಚನೆ ನೀಡಿತು.

ವಾರ್ತಾ ಭಾರತಿ 11 Dec 2025 4:08 pm

ಡೆವಿಲ್‌ ಸಿನಿಮಾಗೆ ರೇಟಿಂಗ್‌ ನೀಡುವ ಆಯ್ಕೆಯೇ ಇಲ್ಲ! ಬುಕ್‌ಮೈ ಶೋನಲ್ಲಿ ವಿಮರ್ಶೆಗೆ ಬ್ರೇಕ್‌; ಕಾರಣವೇನು?

ಡೆವಿಲ್‌ ಸಿನಿಮಾ ವೀಕ್ಷಕರಿಗೆ ಬುಕ್‌ಮೈ ಶೋನಲ್ಲಿ ಅಚ್ಚರಿ ಕಾದಿದೆ. ಆಪ್‌ನಲ್ಲಿ ಸಿನಿಮಾದ ರೇಟಿಂಗ್‌ ನೀಡುವ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಹಣ ಕೊಟ್ಟು ನೆಗೆಟಿವ್ ವಿಮರ್ಶೆ ಬರೆಸುವ ಪ್ರವೃತ್ತಿ ಸಿನಿಮಾ ಸಂಸ್ಕೃತಿಗೆ ಹಾನಿ ಮಾಡುತ್ತಿದೆ ಎಂದು ನಿರ್ದೇಶಕ ದಿನಕರ್ ತೂಗುದೀಪ ಹೇಳಿದ್ದಾರೆ. ಈ ನಿರ್ಧಾರದಿಂದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

ವಿಜಯ ಕರ್ನಾಟಕ 11 Dec 2025 4:07 pm

BPL Card: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಸಚಿವ ಕೆ.ಎಚ್‌.ಮುನಿಯಪ್ಪ ಶುಭಸುದ್ದಿ

BPL Card: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ಮುಂದುವರೆದಿದೆ. ಈ ನಡುವೆಯೇ ಇದೀಗ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಹೊಸ ಬಿಪಿಎಲ್ ಕಾರ್ಡ್‌ ವಿತರಣೆ ಯಾವಾಗಿನಿಂದ ಆರಂಭ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಾಮಾನ್ಯವಾಗಿ ಬಿಪಿಎಲ್‌ ಕಾರ್ಡ್‌ ಅನ್ನು

ಒನ್ ಇ೦ಡಿಯ 11 Dec 2025 4:06 pm

ಸಾಮಾಜಿಕ ಬಹಿಷ್ಕಾರದ ವಿರುದ್ಧ ಕಠಿಣ ಕಾನೂನು, 3 ವರ್ಷ ಜೈಲು, 1 ಲಕ್ಷ ದಂಡ! ವಿಧಾನಸಭೆಯಲ್ಲಿ ಮಸೂದೆ ಮಂಡನೆ

ಸಾಮಾಜಿಕ ಬಹಿಷ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆ-2025 ಅನ್ನು ಸಚಿವ ಮಹದೇವಪ್ಪ ಅವರು ಮಂಡಿಸಿದರು. ಈ ಕಾನೂನಿನಡಿ ಏನೆಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ಬಹಿಷ್ಕಾರ ಹಾಕಿದವರ ವಿರುದ್ಧ ಕ್ರಮವೇನು ಯಾರಿಗೆಲ್ಲ ಶಿಕ್ಷಯಾಗುತ್ತದೆ. ಎಂತಹ ವಿಚಾರದಲ್ಲಿ ಬಹಿಷ್ಕಾರ ಹಾಕಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.

ವಿಜಯ ಕರ್ನಾಟಕ 11 Dec 2025 4:00 pm

ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದ ಇಂಡಿಗೋ

ಇಂಡಿಗೋ ವಿಮಾನಯಾನ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದಾಗಿ ಡಿಸೆಂಬರ್ 3 ರಿಂದ 5 ರವರೆಗೆ ವಿಮಾನಗಳು ರದ್ದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಘೋಷಿಸಿದೆ. ಸಾವಿರಾರು ಮಂದಿ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ, ಇಂಡಿಗೋ ₹10,000 ಮೌಲ್ಯದ ಟ್ರಾವೆಲ್ ವೋಚರ್‌ಗಳನ್ನು ನೀಡುತ್ತಿದೆ. ಈ ವೋಚರ್‌ಗಳನ್ನು ಮುಂದಿನ 12 ತಿಂಗಳೊಳಗೆ ಬಳಸಬಹುದು. ಹಣ ಹಿಂದಿರುಗಿಸುವ ಪ್ರಕ್ರಿಯೆಯೂ ಆರಂಭವಾಗಿದೆ.

ವಿಜಯ ಕರ್ನಾಟಕ 11 Dec 2025 4:00 pm

ಕೊಣಾಜೆ | ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಮುಖ್ಯ : ಅರುಣ್ ಕುಮಾರ್ ಗಟ್ಟಿ

ಕೊಣಾಜೆ: ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ,ತಾಳ್ಮೆ, ಆತ್ಮವಿಶ್ವಾಸ ಗುಣಗಳೇ ಮುಖ್ಯ. ಆದರೆ, ಬಡತನ ಎನ್ನುವುದು ಕ್ರೀಡಾ ಸಾಧನೆಗೆ ಅಡ್ಡಿ ಬರುವುದಿಲ್ಲ, ವಿಶ್ವ ಕಪ್ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿರುವ ಧನಲಕ್ಷ್ಮೀ ಪೂಜಾರಿ ಅವರು ಕಡು ಬಡತನದಲ್ಲಿ ಹುಟ್ಟಿ ಇಂದು ವಿಶ್ವದಲ್ಲೇ ತನ್ನ ಹೆಸರನ್ನು ದಾಖಲಿಸಿಕೊಂಡದ್ದು ನಮಗೆಲ್ಲ ಉದಾಹರಣೆ. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅದನ್ನು ಸಮಾನವಾಗಿ ಸ್ವೀಕರಿಸಿದಾಗ ಕ್ರೀಡಾ ಜೀವನದಲ್ಲಿ ಅದ್ಭುತವಾದ ಯಶಸ್ಸುಗಳಿಸಲು ಸಾಧ್ಯ ಎಂದು ರಾಜ್ಯ ಮಟ್ಟದ ಮಾಜಿ ಕ್ರೀಡಾಪಟು ಆಗಿರುವ ಅರುಣ್ ಕುಮಾರ್ ಗಟ್ಟಿ ಅಗರಿಮಾರ್ ಅಭಿಪ್ರಾಯ ಪಟ್ಟರು. ಅವರು ಹರೇಕಳ ಶ್ರೀ ರಾಮಕೃಷ್ಣಅನುದಾನಿತ ಪ್ರೌಢಶಾಲೆಯ ಶಾಲಾ ಅಂತರ್ಗತ ಪಂದ್ಯಾಟ - ಕ್ರೀಡಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಮೋಹಿನಿ ಅವರು ವಹಿಸಿ ಮಕ್ಕಳು ಪ್ರತಿನಿತ್ಯ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಉತ್ತಮ ಅರೋಗ್ಯ ಸಾಧ್ಯ , ಇಂದು ಮೊಬೈಲ್ ಗೆ ದಾಸರಾಗುವ ಮಕ್ಕಳು ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮಾನಸಿಕ, ಬೌದ್ಧಿಕ ಅರೋಗ್ಯ ವೃದ್ಧಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಸಾಧಕ ಅರುಣ್ ಕುಮಾರ್ ಗಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ, ಶಾಲಾ ನಾಯಕಿ ಫಾತಿಮ ರಫೀದ, ಚೈತನ್ಯ ಕ್ರೀಡಾ ಸಂಘದ ನಾಯಕ ಅನ್ವಿತ್ ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕರಾದ ಕೃಷ್ಣ ಶಾಸ್ತ್ರೀ, ಸ್ಮಿತಾ ಸಹಕರಿಸಿದರು. ಹಿರಿಯ ಶಿಕ್ಷಕರಾದ ರವಿಶಂಕರ್ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕ ಶಿವಕುಮಾರ್ ಧನ್ಯವಾದವಿತ್ತರು. ಕಾರ್ಯಕ್ರಮ ಸಯ್ಯೋಜಕರು, ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ನಿರೂಪಿಸಿದರು.

ವಾರ್ತಾ ಭಾರತಿ 11 Dec 2025 3:59 pm

ಸತತ 3 ದಿನಗಳ ಕುಸಿತದ ನಂತರ ಪುಟಿದೆದ್ದ ಷೇರುಪೇಟೆ, ದಿಢೀರ್‌ ಏರಿಕೆ ಇಲ್ಲಿವೆ 6 ಕಾರಣಗಳು

ಸತತ ಮೂರು ದಿನಗಳ ಕುಸಿತದ ನಂತರ ಗುರುವಾರ ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂತು. ಸೆನ್ಸೆಕ್ಸ್ 426 ಅಂಕಗಳಷ್ಟು ಏರಿಕೆಯಾಗಿ 84,818 ಅಂಕಗಳನ್ನು ತಲುಪಿದರೆ, ನಿಫ್ಟಿ 140 ಅಂಕಗಳ ಗಳಿಕೆಯೊಂದಿಗೆ 25,898 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿತು. ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ಮೌಲ್ಯವರ್ಧಿತ ಖರೀದಿ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸಕಾರಾತ್ಮಕ ಸೂಚನೆಗಳು, ಫೆಡರಲ್ ರಿಸರ್ವ್ ದರ ಕಡಿತ ಈ ಚೇತರಿಕೆಗೆ ಪ್ರಮುಖ ಕಾರಣಗಳಾಗಿವೆ.

ವಿಜಯ ಕರ್ನಾಟಕ 11 Dec 2025 3:58 pm

ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ್‌ ಖರ್ಗೆ: ಪತ್ರದಲ್ಲೇನಿದೆ?

ಬೆಂಗಳೂರು, ಡಿಸೆಂಬರ್‌ 11: ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಮಗ್ರ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ಅನುಮೋದನೆ ಹಾಗೂ ಜಲ್ ಜೀವನ್ ಮೀಷನ್ ಯೋಜನೆಯಡಿಯಲ್ಲಿ 50% ಕೇಂದ್ರ ಸರ್ಕಾರದ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಈ ಕುರಿತು

ಒನ್ ಇ೦ಡಿಯ 11 Dec 2025 3:54 pm

ರಣವೀರ್ ಸಿಂಗ್‌ ‘ಧುರಂಧರ್’ಗೆ ಹೃತಿಕ್ ರೋಷನ್ ಶ್ಲಾಘನೆ; ರಾಜಕೀಯ ದೃಷ್ಟಿಕೋನ ಕುರಿತು ಪ್ರಶ್ನಿಸಿದ ನಟ

ಮುಂಬೈ: ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಚಿತ್ರದ ರಾಜಕೀಯ ದೃಷ್ಟಿಕೋನದ ಬಗ್ಗೆ ನನಗೆ ಒಪ್ಪಿಗೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಿದ್ದು, 2000ರ ದಶಕದ ಉತ್ತರಾರ್ಧದ ಭಯೋತ್ಪಾದನಾ ಹಿನ್ನೆಲೆಯ ಕಥಾಹಂದರವನ್ನು ಕಲ್ಪನಾತ್ಮಕ ರೂಪದಲ್ಲಿ ತೆರೆಮೇಲೆ ತಂದಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ ಹಂಝಾ ಎಂಬ ಭಾರತೀಯ ಗುಪ್ತಚರನಾಗಿ ನಟಿಸಿದ್ದು, ಪಾಕಿಸ್ತಾನ ಮೂಲದ ರೆಹಮಾನ್ ಡಕಾಯತ್ ಗ್ಯಾಂಗ್‌ಗೆ ನುಸುಳುವ ಕಾರ್ಯಾಚರಣೆಯ ಸುತ್ತ ಕಥೆ ಸಾಗುತ್ತದೆ. ಬೇಹುಗಾರಿಕೆ, ಅಪರಾಧ ಜಾಲ ಮತ್ತು ಗುಪ್ತಚರ ಕಾರ್ಯಗಳ ಸಂಕೀರ್ಣತೆಯನ್ನು ಚಿತ್ರವು ಆಳವಾಗಿ ಬಿಚ್ಚಿಡುತ್ತದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಹೃತಿಕ್, “ಸದಾ ಯೋಚನೆಗಳಲ್ಲಿ ಸಿಲುಕುವ ಪಾತ್ರಗಳನ್ನು ನಾನು ಪ್ರೀತಿಸುತ್ತೇನೆ. ಕಥೆಯನ್ನು ಹಿಡಿದು ಗಿರಕಿ ಹೊಡೆಸುವವ ನಿರ್ದೇಶಕರ ಕೈಚಳಕ ‘ಧುರಂಧರ್’ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಿನಿಮಾ ಹೇಳುವ ವಿಧಾನ ಅದ್ಭುತ” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಮುಂದುವರಿದು, “ಅದರಲ್ಲಿರುವ ರಾಜಕೀಯ ಒಳನೋಟಗಳನ್ನು ನಾನು ಒಪ್ಪದೆ ಇರಬಹುದು ಮತ್ತು ನಾವು ಜಾಗತಿಕ ಪ್ರಜೆಗಳಾಗಿ ಸಿನಿಮಾ ನಿರ್ದೇಶಕರಾಗಿ ಹೊರಬೇಕಾದ ಜವಾಬ್ದಾರಿಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಆದರೆ ಸಿನಿಮಾದ ವಿದ್ಯಾರ್ಥಿಯಾಗಿ ಇದನ್ನು ನಾನು ಎಷ್ಟು ಇಷ್ಟಪಟ್ಟೆ ಮತ್ತು ಏನು ಕಲಿತಿದ್ದೇನೆ ಎನ್ನುವುದನ್ನು ಅಲಕ್ಷಿಸಲು ಸಾಧ್ಯವಿಲ್ಲ. ಅತ್ಯದ್ಭುತ” ಎಂದು ಬರೆದಿದ್ದಾರೆ. ಇದಕ್ಕೂ ಮೊದಲು ಅಕ್ಷಯ್ ಕುಮಾರ್ ಕೂಡ ಚಿತ್ರದ ಕಥಾಹಂದರವನ್ನು ಹೊಗಳುತ್ತಾ, “ಎಂತಹ ಆಕರ್ಷಕ ಕಥೆ! ಅದನ್ನು ಆದಿತ್ಯ ಧರ್ ಅದ್ಭುತವಾಗಿ ಹೇಳಿಕೊಂಡಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದರು. ನಟಿ, ರಾಜಕಾರಣಿಯಾಗಿರುವ ಸ್ಮೃತಿ ಇರಾನಿ ಅವರು ಸಿನಿಮಾ ನಿಜ ಜೀವನದ ಅನುಭವಗಳನ್ನು ಪ್ರತಿಬಿಂಬಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಣವೀರ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಸೇರಿದಂತೆ ಹಲವು ನಟರು ಪಾತ್ರವಹಿಸಿರುವ ಈ ಚಿತ್ರದ ಮುಂದುವರಿದ ಭಾಗ ಮುಂದಿನ ವರ್ಷದ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.  

ವಾರ್ತಾ ಭಾರತಿ 11 Dec 2025 3:51 pm

ಮದುವೆ ಮಾತುಕತೆಗೆಂದು ಕರೆಸಿ ಯುವಕನ ಹತ್ಯೆ; ಬ್ಯಾಟ್‌ನಿಂದಲೇ ಹೊಡೆದು ಕೊಂದ ಯುವತಿ ಕುಟುಂಬ

ತೆಲಂಗಾಣದಲ್ಲಿ ಬಿಟೆಕ್‌ ಓದುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ಆತನ ಪ್ರೇಯಸಿಯ ಕುಟುಂಬವು ಕ್ರಿಕೆಟ್‌ ಬ್ಯಾಟ್‌ನಿಂದ ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿ ಶ್ರವಣ್ ಸಾಯಿ ಎಂಬ ಯುವಕ ಶ್ರೀಜಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧವಿತ್ತು ಹಲವು ಬಾರಿ ಬೇಡ ಎಂದು ಕಿವಿಮಾತು ಹೇಳಿದರು. ಸಂಬಂಧ ಮುಂದುವರೆಸಿದ ಹಿನ್ನೆಲೆ, ಸಿಟ್ಟಾಗಿ ಮದುವೆ ಮಾತುಕತೆ ನೆಪದಲ್ಲಿ ಮನೆಗೆ ಕರೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ವಿಜಯ ಕರ್ನಾಟಕ 11 Dec 2025 3:32 pm

ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿರುದ್ಧವೇ ಹೋರಾಡಿ ಗೆದ್ದ ಜಕ್ಕವ್ವ ಯಾರು? ಈ ಪ್ರಕರಣದ ಹಿಂದಿದೆ 135 ವರ್ಷಗಳ ಇತಿಹಾಸ!

ಹುಬ್ಬಳ್ಳಿಯ ಸ್ಥಿರಾಸ್ತಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಕುಟುಂಬದ ವಿರುದ್ಧ ಧೈರ್ಯದಿಂದ ಹೋರಾಡಿದ ಸಾವಕ್ಕ ಸುಳ್ಳದ ಮತ್ತು ಜಕ್ಕವ್ವ ಸಹೋದರಿಯರು 15 ಗುಂಟೆ ಜಾಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಜಾಗವನ್ನು ಈ ಸಹೋದರಿಯರ ತಂದೆ 1894ರಲ್ಲೇ ಗುತ್ತಿಗೆ ನೀಡಿದ್ದರು. ಆ ಗುತ್ತಿಗೆಯ ಜಾಗದಲ್ಲಿ ಎಚ್ ಕೆ ಪಾಟೀಲರ ತಂದೆ ಉಪ ಗುತ್ತಿಗೆದಾರರಾಗಿ ಆಗಮಿಸಿದ್ದರು. ಸುಮಾರು 69 ವರ್ಷಗಳಿಂದ ಅವರ ವಶದಲ್ಲಿದ್ದ ಜಾಗ ಈಗ ನ್ಯಾಯಾಲಯದ ತೀರ್ಪಿನಿಂದ ಜಕ್ಕವ್ವ - ಸಾವಕ್ಕನವರ ಪಾಲಾಗಿದೆ.

ವಿಜಯ ಕರ್ನಾಟಕ 11 Dec 2025 3:20 pm

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ!

ಬೆಳಗಾವಿ, ಡಿಸೆಂಬರ್‌ 11: ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ

ಒನ್ ಇ೦ಡಿಯ 11 Dec 2025 3:18 pm

ಬೆಂಗಳೂರು ಸಾಹಿತ್ಯೋತ್ಸವ: ಕೇಳಿಸುತ್ತಿರುವ ಧ್ವನಿಗಳು, ಮರೆಮಾಡಲ್ಪಟ್ಟ ಸ್ವರಗಳು

ಇತ್ತೀಚೆಗೆ ನಡೆದ ಎರಡು ದಿನಗಳ ಬೆಂಗಳೂರು ಸಾಹಿತ್ಯೋತ್ಸವವು (Bangalore Literature Festival) ಸಾಹಿತ್ಯ, ಸಂಸ್ಕೃತಿ ಮತ್ತು ಬೌದ್ಧಿಕ ಚಿಂತನೆಗಳ ವೈವಿಧ್ಯತೆಯಿಂದ ತುಂಬಿತ್ತು. ನಗರ ಜೀವನ, ಲಿಂಗ, ಆಹಾರ ಪರಂಪರೆ, ಶಾಸ್ತ್ರೀಯ ಸಂಪ್ರದಾಯಗಳು, ಮನೋವೈಜ್ಞಾನಿಕ ಚಿಂತನೆಗಳ ಕುರಿತ ಸಂವಾದಗಳ ಜೊತೆಗೆ ಚಿತ್ರಕಲೆ, ಶಾಸ್ತ್ರೀಯ ಪಠ್ಯಗಳು, ಬಹುಭಾಷಾ ಕಥನ ಪರಂಪರೆ, ಸಮಕಾಲೀನ ಅಧಿಕಾರ, ರಾಜಕೀಯ, ಮಾನಸಿಕ ಆರೋಗ್ಯ, ಸಮುದಾಯ ಕಥನಗಳು, ಕೃತಕ ಬುದ್ಧಿಮತ್ತೆ ಮುಂತಾದ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ಅನ್ವೇಷಿಸಲಾಯಿತು. ಹಾಗೇನೆ, ಇತಿಹಾಸ, ಸಾಮ್ರಾಜ್ಯಗಳ ಉದಯ-ಪತನ, ಹವಾಮಾನ ಬದಲಾವಣೆ, ಕುಟುಂಬದ ಕಥಾನಕಗಳು, ಚಲನಚಿತ್ರ ನಿರ್ಮಾಣ, ಕ್ರೈಂ ಫಿಕ್ಷನ್, ಷೇರು ಮಾರುಕಟ್ಟೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆದವು. ಆದರೆ ಇದೇ ಸಮಯದಲ್ಲಿ, ಈ ಉತ್ಸವ ನನ್ನೊಳಗೊಂದು ಮೌನವಾದ ಪ್ರಶ್ನೆಯನ್ನು ಹುಟ್ಟುಹಾಕಿತು: ಈ ವೇದಿಕೆಯಲ್ಲಿ ಯಾರು ಇದ್ದರು? ಮತ್ತು ಯಾರು ಇರಲಿಲ್ಲ? ಎಷ್ಟೇ ಉತ್ತಮ ಚರ್ಚೆಗಳಿದ್ದರೂ, ಒಂದು ಮಾತ್ರ ನಿಜ: ಈ ಉತ್ಸವದಲ್ಲಿ ಎಲ್ಲರ ಧ್ವನಿಗಳೂ ಇರಲಿಲ್ಲ. ಬಹುತೇಕರು ನಗರ ಕೇಂದ್ರಿತ Gen Z ಬಗ್ಗೆ, ಅವರ ಬಿಚ್ಚು ನುಡಿಗಳ ಬಗ್ಗೆ, ಮಧ್ಯಮ ವರ್ಗದ ಜೀವನಾನುಭಗಳ ಬಗ್ಗೆ ಮಾತನಾಡಿದರು. ಆದರೆ ಅವರು ಯಾರನ್ನು ಉದ್ದೇಶಿಸುತ್ತಿದ್ದರು? ಅದು ಅಂಚಿನಲ್ಲಿರುವ ದಮನಿತ, ಶೋಷಿತ ಸಮುದಾಯಗಳ ಬಗ್ಗೆ ಅಲ್ಲ, ಅದು ಸರಕಾರಿ ಶಾಲೆಯ ಮಕ್ಕಳ ಬಗ್ಗೆ ಅಲ್ಲ. ಅದು ಗ್ರಾಮೀಣ ಜನರ ಬದುಕಿನ ಜಂಜಾಟಗಳ ಬಗ್ಗೆಯೂ ಅಲ್ಲ ಅವರ ಮಾತುಗಳಲ್ಲಿ ಮಧ್ಯಮ ವರ್ಗದ ಸಣ್ಣ ಗುಂಪಿನ ಮಕ್ಕಳು ಮಾತ್ರ Gen Z ಆಗಿಬಿಟ್ಟರು! ಇದು ಬೆಂಗಳೂರು ಸಾಹಿತ್ಯ ಉತ್ಸವದ ದೊಡ್ಡ ಸಮಸ್ಯೆಯ ಸೂಚಕ. ಇಂಗ್ಲಿಷ್ ಸಾಹಿತ್ಯದ ವೇದಿಕೆಗಳಲ್ಲಿ ಈ ಹೊರಗೂಡುವಿಕೆ ಇನ್ನಷ್ಟು ತೀವ್ರವಾಗಿದೆ. ಕನ್ನಡ ಸಾಹಿತ್ಯದಲ್ಲಿ ದಮನಿತರ ಧ್ವನಿಗೆ, ಅಂಚಿನವರ ಅನುಭವಗಳಿಗೆ ಒಂದು ದೀರ್ಘ ಪರಂಪರೆ ಇದೆ. ಆದರೆ ಇಂಗ್ಲಿಷ್ ಸಾಹಿತ್ಯ? ಇನ್ನೂ ಅದು ಮಧ್ಯಮ ವರ್ಗ ಮತ್ತು ಎಲೀಟ್ ವರ್ಗದವರಿಗೆ ಸೇರಿದ ಸುರಕ್ಷಿತ ವಲಯ! ಎರಡು ದಿನಗಳ ಕಾರ್ಯಕ್ರಮಗಳ ಪಟ್ಟಿ ನೋಡಿದರೆ ಒಂದು ಅಚ್ಚರಿಯ ಸಂಗತಿ ಗೋಚರಿಸುತ್ತದೆ: ಅಲ್ಲಿ ಶೋಷಿತರ, ದಮನಿತರ ಕುರಿತಾಗಿ ಚರ್ಚೆ ಇಲ್ಲ. ದಲಿತ ಸಾಹಿತ್ಯದ ಕುರಿತು ಗೋಷ್ಠಿ, ಸಂವಾದಗಳಿಲ್ಲ. ಇದು ಯಾಕೆ? ದಮನಿತರು, ಶೋಷಿತರು ಇಂಗ್ಲಿಷ್‌ನಲ್ಲಿ ಬರೆಯುತ್ತಿಲ್ಲವೇ? ದಲಿತ ಸಾಹಿತ್ಯದ ಇಂಗ್ಲಿಷ್ ಅನುವಾದಗಳು ಲಭ್ಯವಿಲ್ಲವೇ? ಶೋಷಿತ ಸಮುದಾಯಗಳ ಬರಹಗಳಿಗೆ ಮೌಲ್ಯವಿಲ್ಲವೇ? ಇದು ಯಾವ ಕಾರಣವೂ ಅಲ್ಲ. ನಿಜ ಏನೆಂದರೆ - ಅವರಿಗೆ ಅವಕಾಶ ದೊರಕುವುದಿಲ್ಲ. ಅವರು ಧ್ವನಿಯಿಲ್ಲದವರು ಅಲ್ಲ; ಅವರಿಗೆ ಮಾತನಾಡಲು ಒದಗಿಸುವ ವೇದಿಕೆಗಳೇ ಇಲ್ಲ. ಇದಕ್ಕೂ ಮಿಗಿಲಾಗಿ, ಅವರು ಇಂಗ್ಲಿಷ್ ಬರವಣಿಗೆಯಲ್ಲಿ ಸ್ಪರ್ಧೆ ಮಾಡಲು ಅಸಮರ್ಥ ಎಂಬ ಭಾವನೆ ಉಂಟುಮಾಡಲಾಗಿದೆ. ಅದಕ್ಕೆ ಮೂಲ ಕಾರಣವೇ ಶಿಕ್ಷಣ. ವಿಶೇಷವಾಗಿ, ಇಂಗ್ಲಿಷನ್ನು ಶಿಕ್ಷಣ ಹಂತದಲ್ಲಿ ಕಡೆಗಣಿಸಿರುವುದು! ಈ ಉತ್ಸವ ನನಗೆ ಕಲಿಸಿದ ಪಾಠವೇನೆಂದರೆ ಇಂಗ್ಲಿಷ್ ಅನ್ನು ಶಾಲಾ ಹಂತದಲ್ಲಿ, ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ, ಕೇವಲ ಭಾಷೆಯಾಗಿ ಕಲಿಸಿದರೆ ಸಾಕಾಗುವುದಿಲ್ಲ-ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಂದಿನ ತುರ್ತು! ಅಂಚಿನ ಸಮುದಾಯಗಳಿಗೆ ಇಂಗ್ಲಿಷ್ ಕಲಿಸುವುದು ಸಾಮಾಜಿಕ-ನೈತಿಕ ಕರ್ತವ್ಯ. ಆದರೆ ಕೇವಲ ಭಾಷೆ ಕಲಿಸಿದರೆ ಸಾಲದು. ಅವರು ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ಕಲೆ, ರಾಜಕೀಯ, ತಂತ್ರಜ್ಞಾನ ಈ ಎಲ್ಲಾ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ಪ್ರಾಥಮಿಕ ತರಗತಿಗಳಲ್ಲಿ ದ್ವಿಭಾಷಾ ಮಾಧ್ಯಮದ ಮೂಲಕ ಅವರ ಭಾಷಾ ಪ್ರಭುತ್ವ, ವಿಷಯ ಜ್ಞಾನ ಗ್ರಹಿಸುವಿಕೆಯನ್ನು ವೃದ್ಧಿಗೊಳಿಸಬೇಕು. ಅವರ ಜೀವನಾನುಭವಗಳು, ರಾಜಕೀಯ ವೀಕ್ಷಣೆಗಳು, ಸಾಮಾಜಿಕ ಚಿಂತನೆಗಳು-all must find a place in English. ಆಗ ಮಾತ್ರ ಅವರು ರಾಷ್ಟ್ರೀಯ ವೇದಿಕೆಗಳಲ್ಲಿ, ಇಂತಹ ಸಾಹಿತ್ಯ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಲು ಸಾಧ್ಯ ವಾಗುತ್ತದೆ. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯು ಶೋಷಿತರ ನೋವು, ಅವಮಾನ, ಬದುಕಿನ ಹೋರಾಟವನ್ನು ಪ್ರತಿನಿಧಿಸಲಾಗುವುದಿಲ್ಲ. ದಲಿತನು ತನ್ನ ಜೀವನಾನುಭವವನ್ನು ತಾನೇ ಹೇಳಬೇಕು. ಅದಕ್ಕಾಗಿ ಅವನಿಗೆ ಭಾಷೆಯೂ ಬೇಕು, ವೇದಿಕೆಯೂ ಬೇಕು. ಆಗ ಮಾತ್ರ ಸಾಹಿತ್ಯ-ನಿಜಕ್ಕೂ-ಎಲ್ಲರ ಸಾಹಿತ್ಯವಾಗುತ್ತದೆ.

ವಾರ್ತಾ ಭಾರತಿ 11 Dec 2025 3:13 pm

ರೈಲಿನಲ್ಲಿ ಪ್ರಯಾಣಿಸುವ ಹಿರಿಯರಿಗೆ, ಗರ್ಭಿಣಿಯರಿಗೆ &ದಿವ್ಯಾಂಗರಿಗೆ ಭಾರಿ ಗುಡ್ ನ್ಯೂಸ್.

ರೈಲ್ವೆ ಪ್ರಯಾಣದಲ್ಲಿ ತುಂಬಾ ಜನರು ಕೆಳ ಸೀಟು ಬಯಸುತ್ತಾರೆ, ವಿಶೇಷವಾಗಿ ಹಿರಿಯ ನಾಗರಿಕರು ಮೊಳಕಾಲು ನೋವು ಅಥವಾ ಇತರೆ ಸಮಸ್ಯೆಗಳಿಂದ ಕೆಳ ಸೀಟು ಬಯಸುತ್ತಾರೆ. ಕೆಳ ಸೀಟು ಆರಾಮದಾಯಕ ಹಾಗು ಸುಲಭ ಪ್ರಯಾಣದ ಒಂದು ಅಂಶಬಾಗಿದ್ದು ಹಿರಿಯ ನಾಗರಿಕರಿಗೆ ಸುಲಭ ಪ್ರಯಾಣದ ಒಂದು ಸುಯೋಗ ಎನ್ನಬಹುದು. ಇಂತಹ ಹಿರಿಯ ನಾಗರಿಕರು ಕೆಳ ಸೀಟು ಸಿಗದೇ ಕೆಲವು ಬರಿ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರೈಲ್ವೆ Lower Berth Quota (LBQ) ಅನ್ನು ಅನೇಕ ವರ್ಷಗಳಿಂದ ... Read more The post ರೈಲಿನಲ್ಲಿ ಪ್ರಯಾಣಿಸುವ ಹಿರಿಯರಿಗೆ, ಗರ್ಭಿಣಿಯರಿಗೆ & ದಿವ್ಯಾಂಗರಿಗೆ ಭಾರಿ ಗುಡ್ ನ್ಯೂಸ್. appeared first on Karnataka Times .

ಕರ್ನಾಟಕ ಟೈಮ್ಸ್ 11 Dec 2025 3:12 pm

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳದ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ: ಯಾಕೆ 2 ಕೋಟಿ ರೂ.ವರೆಗೂ ಕತ್ತರಿ?

BCCI Annual Contract Renewal- ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗಳಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಇಬ್ಬರ ವಾರ್ಷಿಕ ಗುತ್ತಿಗೆಯನ್ನು ನವೀಕರಿಸುವ ಸಾಧ್ಯತೆ ಇದೆ. ಮೂರೂ ಮಾದರಿಗಳಲ್ಲಿ ಆಡುತ್ತಿದ್ದ ಇಬ್ಬರೂ ಎ+ ಕೆಟಗರಿಯಲ್ಲಿದ್ದರು. ಇದೀಗ ಎ ಕೆಟಗರಿಗೆ ತಂದರೂ ಅವರ ವಾರ್ಷಿಕ ಸಂಬಳದಲ್ಲಿ 2 ಕೋಟಿ ರೂಪಾಯಿ ಕಡಿತವಾಗುವ ಸಾಧ್ಯತೆ ಇದೆ. ಹೀಗಿದೆ ನೋಡಿ ಲೆಕ್ಕಾಚಾರ.

ವಿಜಯ ಕರ್ನಾಟಕ 11 Dec 2025 3:07 pm

ವಿಶ್ವದ ಅತಿ ಉದ್ದದ ರಸ್ತೆ... 14 ದೇಶಗಳ ಹಾದು ಹೋಗುವ ಪ್ಯಾನ್ ಅಮೆರಿಕ ಹೆದ್ದಾರಿ! 30,000 ಕಿ.ಮೀ. ಪ್ರಯಾಣ! ನೋ ಯು ಟರ್ನ್!

ಉತ್ತರ ಅಮೆರಿಕದ ಅಲಾಸ್ಕಾದಿಂದ ದಕ್ಷಿಣ ಅಮೆರಿಕದ ಅರ್ಜೆಂಟೀನಾವರೆಗೆ ಸುಮಾರು 30,600 ಕಿ.ಮೀ. ಉದ್ದದ ಪ್ಯಾನ್ ಅಮೆರಿಕನ್ ಹೆದ್ದಾರಿಯು 14 ದೇಶಗಳ ಮೂಲಕ ಹಾದುಹೋಗುತ್ತದೆ. 1925ರಲ್ಲಿ ನಿರ್ಮಾಣ ಆರಂಭಗೊಂಡು 1963ರಲ್ಲಿ ಪೂರ್ಣಗೊಂಡ ಈ ಹೆದ್ದಾರಿಯು ವಿಶ್ವದ ಅತಿ ದೊಡ್ಡ ಹೆದ್ದಾರಿಯಾಗಿದ್ದು, ನಾನ್-ಸ್ಟಾಪ್ ವಾಹನ ಚಲಾವಣೆಗೆ ಹೆಸರುವಾಸಿಯಾಗಿದೆ. ವೈವಿಧ್ಯಮಯ ಭೂಪ್ರದೇಶಗಳ ಮೂಲಕ ಸಾಗುವ ಈ ಹೆದ್ದಾರಿಯು 60 ದಿನಗಳಲ್ಲಿ ಸಂಪೂರ್ಣವಾಗಿ ಕ್ರಮಿಸಬಹುದು.

ವಿಜಯ ಕರ್ನಾಟಕ 11 Dec 2025 2:42 pm

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕಮಾಂಡ್ ಆ್ಯಂಡ್ ಕಂ‌ಟ್ರೋಲ್ ಸೆಂಟರ್ ಸ್ಥಾಪನೆ

ಶೀಘ್ರದಲ್ಲೇ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ

ವಾರ್ತಾ ಭಾರತಿ 11 Dec 2025 2:37 pm

ಸೌಕೂರು ಏತ ನೀರಾವರಿ ಯೋಜನೆ | 4ಮೆಸ್ಕಾಂ ಬಿಲ್ ಬಾಕಿಯಿಂದ ಪವರ್ ಕಟ್; ರೈತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ!

ನೀರು ಹರಿಸದ ಕಾರಣ ರೈತರು ಕಂಗಾಲು ►ಹಿಂಗಾರು ಕೃಷಿಗೆ ಸಜ್ಜಾದವರಿಗೆ ಆತಂಕ

ವಾರ್ತಾ ಭಾರತಿ 11 Dec 2025 2:32 pm

ಮೈಸೂರು ಅರಮನೆಯ ಮುಖ್ಯದ್ವಾರದ ಛಾವಣಿ ಕುಸಿತ: ಬೈಕ್ ಜಖಂ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!

ವಿಶ್ವವಿಖ್ಯಾತ ಮೈಸೂರು ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ದಿಢೀರ್ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಮೇಲ್ಚಾವಣಿ ಕುಸಿದು ಸ್ಥಳದಲ್ಲೇ ಇದ್ದ ಬೈಕ್‌ ಮೇಲೆ ಅವಶೇಷಗಳು ಬಿದ್ದು ಜಖಂಗೊಂಡಿದೆ.

ವಿಜಯ ಕರ್ನಾಟಕ 11 Dec 2025 2:27 pm

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಚಿಕ್ಕಮಗಳೂರು : ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ. ಮಂಜು (35) ಮೃತ ವ್ಯಕ್ತಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Dec 2025 2:24 pm

Railway New Project: ಕೆಆರ್‌ಸಿಎಲ್ ವಿಲೀನ ವಿಳಂಬ! ಕೊಂಕಣ ರೈಲ್ವೆ ದ್ವಿಪಥ ಯೋಜನೆ ಜಾರಿಗೆ ಒತ್ತಾಯ

ಬೆಂಗಳೂರು, ಡಿಸೆಂಬರ್ 11: ಐದು ಷೇರುದಾರರಿಂದ ರಚಿತವಾದ ಕೆಆರ್‌ಸಿಎಲ್ ಅನ್ನು ಭಾರತೀಯ ರೈಲ್ವೆ ಇಲಾಖೆ ಜೊತೆಗೆ ವಿಲೀನಕ್ಕೆ ಒಪ್ಪಿಗೆ ನೀಡದ ಮೇಲೂ ಸಹಿತ ಸೇರ್ಪಡೆಗೆ ವಿಳಂಬವಾಗುತ್ತಿದೆ. ಇದರಿಂದ ರೈಲ್ವೆ ಸಂಪರ್ಕ ಸುಧಾರಣೆಗೆ ತೊಂದರೆ ಆಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಕೇಂದ್ರ ಸರ್ಕಾರವೇ 739 ಕಿಲೋ ಮೀಟರ್ ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸಬೇಕೆಂಬ ಆಗ್ರಹ ಕರ್ನಾಟಕದ

ಒನ್ ಇ೦ಡಿಯ 11 Dec 2025 2:23 pm

ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ವೈ.ಎಂ. ಸತೀಶ್ ಆಗ್ರಹ

ಬೆಳಗಾವಿ/ಬಳ್ಳಾರಿ, ಡಿ. 11: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಜಯನಗರ - ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ. ಬೆಳಗಾವಿಯ `ಸುವರ್ಣ ಸೌಧ’ದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರಿಗೆ ಪ್ರಶ್ನೆ ಕೇಳಿರುವ ಶಾಸಕ ವೈ.ಎಂ. ಸತೀಶ್ ಅವರು, 1976ರಲ್ಲಿ ಪ್ರಾರಂಭವಾಗಿರುವ ತಂಬ್ರಹಳ್ಳಿ ಏತ ನೀರಾವರಿ ಯೋಜನೆ 3000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಆಗಿತ್ತು. ಆದರೆ, ಈವರೆಗೆ 1400 ಎಕರೆ ಭೂಮಿಗೆ ಈ ವರೆಗೆ ನೀರುಣಿಸುವ ಕೆಲಸ ಆಗಿಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಗ, ಸಚಿವ ಎನ್.ಎಸ್. ಬೋಸರಾಜು ಅವರು, ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರೂ. 2.5 ಕೋಟಿ ಹಾಗೂ ಏತ ನೀರಾವರಿ ಯೋಜನೆ ಅಡಿಯಲ್ಲಿ ರೂ. 1.75 ಅನುದಾನವನ್ನು ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಪ್ತಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಕ ಹಾಗೂ ಇನ್ನಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು. ಅಲ್ಲದೇ, ಈ ಯೋಜನೆಯ ವ್ಯಾಪ್ತಿಯಲ್ಲಿ ಶಿಗೇನಹಳ್ಳಿ 1, 2, ಮತ್ತು 3, ತಂಬ್ರಹಳ್ಳಿ, ತಂಬ್ರಹಳ್ಳಿ ಎಕ್ಸ್‍ಟೆನ್ಶನ್ ಪ್ರದೇಶ, ಕೃಷ್ಣಾಪುರ, ಚಿಲಗೋಡು ಇನ್ನಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂಧು ಉತ್ತರಿಸಿದರು. ಆಗ, ವೈ.ಎಂ. ಸತೀಶ್ ಅವರು, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆಗಳನ್ನು ಸದನದಲ್ಲಿ ಕೇಳಿದ್ದೆ. ಆಗ, ಸಚಿವರಾಗಿದ್ದ ಮಾಧುಸ್ವಾಮಿ ಅವರು, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ಕಾರಣ ತ್ವರಿತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡು ರೈತರಿಗೆ ನೆರವಾಗಿ. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು. ಸಚಿವ ಎನ್.ಎಸ್. ಬೋಸರಾಜ್ ಅವರು, ಹಣದ ಖರ್ಚಿನ ಲೆಕ್ಕಾಚಾರ ಹಾಕಿ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಬಜೆಟ್‍ನಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಉತ್ತರಿಸಿದರು.

ವಾರ್ತಾ ಭಾರತಿ 11 Dec 2025 2:14 pm

ಡಿ.14ರಂದು ‘ಲತಾ ಕೆ ಆವಾಜ್ ಶೋಭಾ ಕೆ ಸಾಥ್’ ಸಂಗೀತ ಕಾರ್ಯಕ್ರಮ

ಮಂಗಳೂರು, ಡಿ.11: ಸಿಂಚನಾ ಮೆಲೊಡಿಸ್ ತಂಡದ ವತಿಯಿಂದ ಡಿ.14ರಂದು ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಲತಾಕಿ ಆವಾಜ್ ಶೋಭಾ ಕೆ ಸಾಥ್’ ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯಸ್ಥೆ ಶೋಭಾ ಭಾಸ್ಕರನ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ಆಯ್ದ 24 ಸೋಲೋ ಮತ್ತು ಡುಯೆಟ್ ಹಿಂದಿ ಹಾಡುಗಳನ್ನು ತಂಡದ ಒಟ್ಟು 10 ಗಾಯಕರು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಹಾಡುಗಳ ಮಧ್ಯೆ ಒಂದೆರಡು ನೃತ್ಯ ಕಾರ್ಯಕ್ರಮಗಳು ಇರಲಿವೆ. ಸಂಗೀತತಜ್ಞ, ಗುರು ರೋಶನ್ ಫ್ರಾನ್ಸಿಸ್ ಮಾರ್ಟಿಸ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶೆಣೈ, ದ.ಕ ಜಿಲ್ಲಾ ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ ರಾಜನ್, ದ.ಕ, ಜಿಲ್ಲಾ ಸಂಗೀತಗಾರರ ಒಕ್ಕೂಟದ ಅಧ್ಯಕ್ಷ ಧನ್‌ರಾಜ್, ಉದ್ಯಮಿ ಜಯಶ್ ಅವರು ಭಾಗವಹಿಸಲಿದ್ದಾರೆ ಎಂದರು. ದೀಪಕ್ -ಕೀಬೋರ್ಡ್, ಜಯನ್ -ಕೊಳಲು, ಪ್ರತಾಪ್ ಆಚಾರ್ಯ - ರಿದಂ ಪ್ಯಾಡ್, ಪ್ರಜ್ವಲ್ -ತಬಲ, ರಾಜ್‌ಗೋಪಾಲ್ -ಗಿಟಾರ್ ನಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು. ಗಾಯಕರಾದ ಮನೋಜ್ ಕುಮಾರ್, ನೌಷಾದ್, ಆಸೀಫ್, ಸುರೇಶ್ ಬಂಗೇರ, ಸಲಾವುದ್ದೀನ್ ಸಲಾಂ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 2:11 pm

ಕಾರ್ಕಳದ ಮಹಿಳಾ ಸಾಂತ್ವನ ಕೇಂದ್ರ ಮಹಿಳಾ ಒಕ್ಕೂಟ ಅಧ್ಯಕ್ಷರಿಂದ ಸಾಮಾಜಿಕ ಕಾರ್ಯಕರ್ತರ ಧ್ವನಿ ಅಡಗಿಸುವ ಪ್ರಯತ್ನ: ರಮಿತಾ ಸೂರ್ಯವಂಶಿ

ಕಾರ್ಕಳ: ಮಹಿಳೆಯರು, ಮಕ್ಕಳಿಗೆ ನ್ಯಾಯ ಒದಗಿಸಿ ಸಮಾಜದ ಸ್ವಸ್ಥ ಕಾಪಾಡಲು ಪ್ರಮುಖ ವಾಗಿ ಕೆಲಸ ಮಾಡಬೇಕಾಗಿದ್ದ ಮಹಿಳಾ ಸಾಂತ್ವನ ಕೇಂದ್ರ ಏಕ ಪಕ್ಷಿಯವಾಗಿ ಕೆಲಸ ಮಾಡುತ್ತಿದ್ದು ಸಮಾಜದ ನೊಂದವರ ಧ್ವನಿ ಆಗಿರುವ ಸಮಾಜ ಸೇವಕರ ಧ್ವನಿ ಅಡಗಿಸುವ ಪ್ರಯತ್ನವನ್ನು ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರ ಮಾಡುತ್ತಿದೆ ಎಂದು ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿರುವ ಅವರು, ದೂರುದಾರರು ದೂರು ನೀಡಲು ಬಂದಾಗ ಯಾವುದೇ ನೋಟಿಸ್ ಕೊಡದೇ ಏಕಾಏಕಿಯಾಗಿ ತಮ್ಮ ಕಚೇರಿಗೆ ಬರಲು ಹೇಳುವುದು. ಬರದೇ ಇದ್ದಲ್ಲಿ ದೂರುದಾರರಿಗೆ ಸ್ವತಃ ಇವರೇ ದೂರನ್ನು ಬರೆದು ಕೊಟ್ಟು ಸುಳ್ಳು ಕಂಪ್ಲೇಂಟ್ ಗಳನ್ನು ಸೃಷ್ಟಿಸುವಂತಹ ಕೆಲಸವನ್ನು ಕಾರ್ಕಳ ಸಾಂತ್ವಾನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಾಡುತ್ತಿದ್ದಾರೆ. ಈ ಮಹಿಳಾ ಒಕ್ಕೂಟದ ಅಧ್ಯಕ್ಷರು ಎಲ್ಲ ವಿಚಾರದಲ್ಲೂ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ನಿಜವಾಗಿಯೂ ನೊಂದವರಿಗೆ ನ್ಯಾಯ ಇವರಿಂದ ಸಿಗುತಿಲ್ಲ. ಮಹಿಳಾ ಅಧ್ಯಕ್ಷೆಯ ಬಗ್ಗೆ ಸಾರ್ವಜನಿಕವಾಗಿಯೂ ಹಲವು ದೂರುಗಳು ಕೇಳಿ ಬರುತಿದ್ದು, ಈ ಎಲ್ಲ ವಿಚಾರಗಳು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕಾರ್ಕಳ ಸಾಂತ್ವನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷರ ಬದಲಾವಣೆ ಅಗತ್ಯ ಎಂದು ಈಗಾಗಲೇ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದೂರಿನ ಮೇಲೆಯೂ ಮುಂದೆ ಅವರನ್ನೇ ಮುಂದುವರಿಸಿದಲ್ಲಿ ಮಹಿಳೆಯರು ಒಟ್ಟು ಗೂಡಿ ಪ್ರತಿಭಟನೆ ನಡೆಸಲಿದ್ದೇವೆ ಮತ್ತು ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಯವರು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 2:08 pm

ಸದನ ಸ್ವಾರಸ್ಯ: ಕಾಣದ ಕುರ್ಚಿಗೆ ಹಂಬಲಿಸಿದೆ ಮನ, ಕೂಡಬಲ್ಲನೇ ಒಂದು ದಿನ! ಡಿಕೆಶಿ ಕಾಲೆಳೆದ ಸುನೀಲ್ ಕುಮಾರ್

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ವೇಳೆ, ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದರು. ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ನೀಡಿದ ವಿವರಣೆಗಳಿಗೆ ಸುನೀಲ್ ಕುಮಾರ್ ವ್ಯಂಗ್ಯವಾಡಿದರು. ಕಾಣದ ಕುರ್ಚಿಗೆ ಹಂಬಲಿಸುತ್ತಿರುವ ಡಿಕೆಶಿ ಬಗ್ಗೆ ಹಾಡಿನ ಸಾಲುಗಳನ್ನು ಉಲ್ಲೇಖಿಸಿ ಟೀಕಿಸಿದರು. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಹಣ ನೀಡಿದೆ.

ವಿಜಯ ಕರ್ನಾಟಕ 11 Dec 2025 2:05 pm

ಕಾರ್ಕಳ | ಪಳ್ಳಿ ಬೆಳ್ಳೆ ಬಸ್ ಸೇವೆ ಪುನರಾರಂಭ: ಶುಭದ ರಾವ್ ಅಭಿನಂದನೆ

ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಆರಂಭಗೊಂಡಿದ್ದ ಪಳ್ಳಿ ಬೆಳ್ಳೆ ಸರ್ಕಾರಿ ಬಸ್ ಸಂಚಾರವು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಇದೀಗ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರ ಸತತ ಪ್ರಯತ್ನದ ಫಲವಾಗಿ ಮತ್ತೆ ಈ ಭಾಗದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಸಂಚಾರದ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ, ದೈನಂದಿನ ಉದ್ಯೋಗಕ್ಕೆ ತೆರಳುವವರಿಗೆ ತೀವ್ರ ತೊಂದರೆಯಾಗಿದ್ದು ಸಾರ್ವಜನಿಕರು ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಮಾಡಿದ್ದರು, ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಪುನರ್ ಬಸ್ ಸಂಚಾರಕ್ಕೆ ಅಧಿಕಾರಿಗಳ ಗಮನ ಸೆಳೆದಿದ್ದರು. ಬಸ್ ಸಂಚಾರ ಆರಂಭ ಮಾಡದಿದ್ದರೆ ಅಧಿಕಾರಿಗಳ ಸಮ್ಮುಖದಲ್ಲಿ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಅಜಿತ್ ಹೆಗ್ಡೆಯವರು ಅಂದಿನ ಸಭೆಯಲ್ಲಿ ಆಡಿದ ಮಾತು ರಾಜ್ಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶಾಸಕ ಹೆಚ್.ಎಮ್. ರೇವಣ್ಣ ಅವರಿಗೆ ತಲುಪಿದ್ದು ತಕ್ಷಣ ರೇವಣ್ಣ ಹಾಗೂ ರಾಜ್ಯ ಉಪಾದ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ಜಿಲ್ಲಾಡಳಿತಕ್ಕೆ ಸೂಚನೆಯನ್ನು ನೀಡಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಮಾಡಿದ್ದಾರೆ. ಪಳ್ಳಿ ಬೆಳ್ಳೆ ಭಾಗದ ಸಾರ್ವಜನಿಕರ ಮನವಿಯ ಮೇರೆಗೆ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ವಿನಂತಿಗೆ ಪೂರಕವಾಗಿ ಸ್ಪಂದಿಸಿ ಬಸ್ ಸಂಚಾರವನ್ನು ಪುನರ್ ಆರಂಭಿಸುವಲ್ಲಿ ಸಹಕಾರ ನೀಡಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗ್ಯಾರಂಟಿ ಸಮಿತಿಯ ರಾಜ್ಯಾಧ್ಯಕ್ಷರಾದ ರೇವಣ್ಣ, ಉಪಾದ್ಯಕ್ಷ ಪುಷ್ಪಾ ಅಮರನಾಥ್ ಅವರಿಗೆ, ಬಸ್ ಸಂಚಾರಕ್ಕೆ ಭಗೀರಥ ಪ್ರಯತ್ನ ನಡೆಸಿದ ಅಜಿತ್ ಹೆಗ್ಡೆ ಮಾಳ ಅವರಿಗೆ ಸಾರ್ವಜನಿಕರ ಪರವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 11 Dec 2025 2:01 pm

ಲೋಕಸಭೆಯಲ್ಲಿ ಟಿಎಂಸಿ ಸಂಸದನ ವಿರುದ್ಧ ಇ-ಸಿಗರೇಟ್‌ ಸೇದಿದ ಆರೋಪ ಹೊರಿಸಿದ ಅನುರಾಗ್‌ ಠಾಕೂರ್‌; ಸ್ಪೀಕರ್‌ ಹೇಳಿದ್ದೇನು?

ಲೋಕಸಭೆ ಮತ್ತು ರಾಜ್ಯಸಭೆಗಳು ಇಡೀ ದೇಶಕ್ಕೆಅನ್ವಯವಾಗುವಂತಹ ಶಾಸನಗಳನ್ನು ಜಾರಿ ಮಾಡುತ್ತವೆ. ಆದರೆ ಈ ಶಾಸನಸಭೆಗಳಲ್ಲೇ ಕಾನೂನುಗಳು ಉಲ್ಲಂಘನೆಯಾದರೆ? ಇಂತದ್ದೊಂದು ಗಂಭೀರ ಆರೋಪ ಟಿಎಂಸಿ ಸಂಸದನೋರ್ವನ ವಿರುದ್ಧ ಕೇಳಿಬಂದಿದೆ. ಲೋಕಸಭೆ ಕಲಾಪ ನಡೆಯುವ ವೇಳೆಯೇ ಟಿಎಂಸಿ ಸಂಸದರೊಬ್ಬರು ನಿಷೇಧಕ್ಕೆ ಒಳಗಾಗಿರುವ ಇ-ಸಿಗರೇಟ್‌ ಸೇದುತ್ತಾರೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್‌ ಓಂ ಬಿರ್ಲಾ ಭರವಸೆ ನೀಡಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Dec 2025 1:56 pm

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ; 50.1 ಶೇಕಡಾ ಮತದಾನ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1.15 ರ ತನಕ 50.1 ಶೇಕಡಾ ಮತದಾನವಾಗಿದೆ. ಮತದಾನ ಶಾಂತಿಯುತವಾಗಿದೆ. 11,12,190 ಮಂದಿಯಲ್ಲಿ 5,56,255 ಮಂದಿ ಮತ ಚಲಾಯಿಸಿದ್ದಾರೆ. ನಗರಸಭೆಯಲ್ಲಿ ಕಾಞಂಗಾಡ್ 44.98,ಕಾಸರಗೋಡು 43.58 ಮತ್ತು ನೀಲೇಶ್ವರ 54.23 ಶೇಕಡಾ ಮತದಾನವಾಗಿದೆ. ಬ್ಲಾಕ್ ಪಂಚಾಯತ್ ನ ನೀಲೇಶ್ವರ 55.71, ಕಾಞಂಗಾಡ್ 51.42, ಪರಪ್ಪ 51.64, ಕಾಸರಗೋಡು 46.85, ಕಾರಡ್ಕ 52.55 ಮತ್ತು ಮಂಜೇಶ್ವರ 46.31 ಶೇಕಡಾ ಮಂದಿ ಹಕ್ಕು ಚಲಾಯಿಸಿದ್ದಾರೆ.

ವಾರ್ತಾ ಭಾರತಿ 11 Dec 2025 1:53 pm

RCB Phil Salt: ಐಪಿಎಲ್‌ 2026 ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಸ್ಟಾರ್ ಫಿಲ್‌ ಸಾಲ್ಟ್‌ ಹೇಳಿಕೆಯೊಂದು ಭಾರೀ ವೈರಲ್‌

RCB Phil Salt: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿಯು ಬಲಿಷ್ಠ ಪಂಜಾಬ್‌ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿ ಎತ್ತಿಡಿದಿತು. ಇದೀಗ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದೆ. ಈಗ ಆರ್‌ಸಿಬಿ ಸ್ಟಾರ್ ಫಿಲ್‌ ಸಾಲ್ಟ್‌ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರೀ ವೈರಲ್‌ ಆಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ

ಒನ್ ಇ೦ಡಿಯ 11 Dec 2025 1:45 pm

ಮಂಗಳೂರು | ಡಿ.14ರಂದು ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ

ಮಂಗಳೂರು, ಡಿ.11: ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿಯ ದ.ಕ. ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಸಂಕಿರಣವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ವಿಚಾರಗೋಷ್ಠಿ ಉದ್ಘಾಟನೆಗೆ ಮೊದಲು ಬೆಳಗ್ಗೆ 9.30ಕ್ಕೆ ಶ್ರೀ ಅನಂತ ಸ್ವಾಮಿ ಬಸದಿಯಿಂದ ವಿಚಾರಗೋಷ್ಠಿ ನಡೆಯುವ ಮಳಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ತನಕ ಸಾಂಸ್ಕೃತಿಕ ನಡಿಗೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸುವರು ಎಂದರು. ಅಬ್ಬಕ್ಕನ ಕುರಿತಾಗಿ ನಡೆಯುವ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ವಿಷಯದ ಬಗ್ಗೆ ಹಾಗೂ ಇತಿಹಾಸ ತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್ ‘ಮಣೇಲಿನಲ್ಲಿ ಪ್ರವಾಸಿ ಪಿಯಾತ್ರೋ ದಲ್ಲಾವೆಲ್ಲೆ ಕಂಡ ಅಬ್ಬಕ್ಕ’ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ವಿಚಾರಗೋಷ್ಠಿಯಲ್ಲಿ ಮಂಡಿಸಲ್ಪಡುವ ಚಾರಿತ್ರಿಕ ವಿಷಯಗಳ ಆಶಯದಂತೆ ಮುಂದಿನ ದಿನಗಳಲ್ಲಿ ಅಬ್ಬಕ್ಕರಾಣಿಯ ಚಿತ್ರವನ್ನು ಸ್ಥಳೀಯ ಶಾಲೆಯ ಹಾಗೂ ಕಟ್ಟೆಮಾರು ಮನೆಯ ಆವರಣಗೋಡೆಯಲ್ಲಿ ಜಿಲ್ಲೆಯ ಹಿರಿಯ ಕಲಾವಿದರು ಚಿತ್ರಿಸುವ ಯೋಜನೆಯನ್ನು ಹೊಂದಲಾಗಿದೆ. ವಿವಿಧ ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ, ನಿವೃತ್ತ ಪ್ರಾಂಶುಪಾಲ, ಮಣೇಲ್ ಗ್ರಾಮಸ್ಥ ಪ್ರೊ. ಅಕ್ಷಯ ಕುಮಾರ್ ಮಳಲಿ, ಮಣೇಲ್ ಗ್ರಾಮಸ್ಥ ಪುರಂದರ ಕುಲಾಲ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Dec 2025 1:43 pm

ಕಡೂರು | ಗ್ರಾಪಂ ಸದಸ್ಯನ ಹತ್ಯೆ ಪ್ರಕರಣ : ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ 6 ಆರೋಪಿಗಳ ಬಂಧನ

ಚಿಕ್ಕಮಗಳೂರು : ಸಖರಾಯಪಟ್ಟಣದಲ್ಲಿ ಡಿ.5ರ ರಾತ್ರಿ ನಡೆದ ಕಾಂಗ್ರೆಸ್ ಗ್ರಾ.ಪಂ. ಸದಸ್ಯ ಗಣೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಧುರೈ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಎ2 ಆರೋಪಿ ನಿತಿನ್, ಎ4 ಆರೋಪಿ ದರ್ಶನ್, ಎ5 ಆರೋಪಿ ಅಜಯ್, ದರ್ಶನ್ ನಾಯ್ಕ್, ಯೋಗೇಶ್ ಮತ್ತು ಫೈಸಲ್ ನನ್ನು ವಿಶೇಷ ತಂಡ ಡಿ.11  ಬಂಧಿಸಿದೆ. ಪ್ರಕರಣದ ತನಿಖೆಗೆ ಸಖರಾಯಪಟ್ಟಣ ಪೊಲೀಸರು ನಾಲ್ಕು ಸದಸ್ಯರ ವಿಶೇಷ ತಂಡವನ್ನು ರಚಿಸಿದ್ದರು. ಈವರೆಗೆ ಗಣೇಶ್ ಕೊಲೆ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಾದ 6 ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 1:42 pm

5 ವರ್ಷ ತಂದೆಯೇ ಸಿಎಂ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆ!

Karnataka Power Tussle : ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕುರ್ಚಿ ಸಂಘರ್ಷಕ್ಕೆ ತೆರೆಬೀಳುವ ರೀತಿಯಲ್ಲಿ ಕಾಣುತ್ತಿಲ್ಲ. ಮತ್ತೆಮಗುದೊಮ್ಮೆ ನಮ್ಮ ತಂದೆಯೇ ಪೂರ್ಣವಧಿಗೆ ಸಿಎಂ ಎಂದ ಡಾ.ಯತೀಂದ್ರ ಹೇಳಿದ್ದಾರೆ. ಬೆಳಗಾವಿಯ ಅಧಿವೇಶನದ ವೇಳೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಿಜಯ ಕರ್ನಾಟಕ 11 Dec 2025 1:31 pm

CM vs DCM: 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದ ಯತೀಂದ್ರ: ಮಾರ್ಮಿಕವಾಗಿ ಉತ್ತರ ಕೊಟ್ಟ ಡಿ.ಕೆ. ಶಿವಕುಮಾರ್​​

ಬೆಳಗಾವಿ, ಡಿಸೆಂಬರ್‌ 11: ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ವಿಧಾನ ಪರಿಷತ್​​ ಸದಸ್ಯ ಯತೀಂದ್ರ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾಯಕತ್ವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಒನ್ ಇ೦ಡಿಯ 11 Dec 2025 1:30 pm

IMD Weather Forecast: ಈ ಭಾಗಗಳಲ್ಲಿ ಮಳೆ-ಹಿಮಪಾತ, ಉಳಿದೆಲ್ಲೆಡೆ ಶೀತದ ಅಲೆ ಮುನ್ಸೂಚನೆ

India Cold Waver Alert: ದೇಶಾದ್ಯಂತ ಶೀತಭರಿತ ಗಾಳಿ ಅಬ್ಬರ ಜೋರಾಗಿದೆ. ಕರಾವಳಿ ಪ್ರದೇಶ, ಭೂಮೇಲ್ಮೈ ಸೇರಿದಂತೆ ಎಲ್ಲ ಭಾಗಗಳಲ್ಲಿ ಚಳಿ ಆವರಿಸಿದೆ. ಬೆಳಗ್ಗೆ ದಟ್ಟ ಮಂಜು ಬೀಳುತ್ತಿದೆ. ಇದೀಗ ಹವಾಮಾನ ಇಲಾಖೆ ವಿವಿಧೆಡೆ ಲಘು ಮಳೆ ಜೊತೆಗೆ ಹಿಮಪಾತದ ಮುನ್ನೆಚ್ಚರಿಕೆ ನೀಡಿದೆ. ಇದರೊಂದಿಗೆ ಹಗಲು ಹೊತ್ತು ತಾಪಮಾನ ಏರಿಕೆ ಅಗಿದ್ದು, ಒಂದೆರಡು ಭಾಗಗಳಲ್ಲಿ ಮಳೆ ಬರುವ

ಒನ್ ಇ೦ಡಿಯ 11 Dec 2025 1:10 pm

ಹೈದರಾಬಾದ್‌ನಲ್ಲಿ ‘ನಾಯಿ ಕಳೆದಿದೆ’!

ಕನ್ನಡ ನಾಟ್ಯ ರಂಗ, ಹೈದರಾಬಾದ್ ಆಶ್ರಯದಲ್ಲಿ ನಾಯಿ ಕಳೆದಿದೆ ನಾಟಕ (ರಚನೆ, ನಿರ್ದೇಶನ: ರಾಜೇಂದ್ರ ಕಾರಂತ) ತಾ 30-11-2025 ರಂದು ಇಲ್ಲಿನ ಸುಂದರಯ್ಯ ಕಲಾ ನಿಲಯದಲ್ಲಿ ಪ್ರದರ್ಶಿಸಲ್ಪಟ್ಟಿತು. ಬೈಂದೂರಿನ ಲಾವಣ್ಯ ತಂಡದವರ ಈ ಅದ್ಭುತ ಪ್ರಯೋಗ ಹಲವುಕಾಲ ಇಲ್ಲಿಯ ಕನ್ನಡಿಗರ ಮನಗಳಲ್ಲಿ ಸ್ಥಾಯಿಯಾಗಿ ಉಳಿಯುವಂತಹದ್ದು. ಮಕ್ಕಳು ವಿದೇಶವಾಸದ ಬಿಸಿಲುಗುದುರೆಯನ್ನೇರಿ ಹೋದಾಗ ಇಳಿ ವಯಸ್ಸಿನ ತಂದೆತಾಯಿಗಳು ಅನುಭವಿಸುವ ಒಂಟಿತನ, ಪಡುವ ಕಳವಳ, ನಿರಾಸೆ-ಇಂದಿನ ಜ್ವಲಂತ ಸಮಸ್ಯೆಯ ಸುತ್ತ ಹೆಣೆದ ಕತೆ. ಸಾಕು ನಾಯಿಯನ್ನು ಅವರ ಸುಪರ್ದಿಗೆ ಬಿಟ್ಟು ಹೋಗುವ ಮಕ್ಕಳಿಗೆ ಹೆತ್ತವರ ಮೇಲಿನ ಕಾಳಜಿಗಿಂತ ನಾಯಿಯ ಆರೈಕೆಯೇ ಮುಖ್ಯವಾಗುತ್ತದೆ. ಪ್ರತೀ ಫೋನ್‌ನಲ್ಲೂ ಅವರಿಗೆ ತಮ್ಮ ತಂದೆ ಕೆಮ್ಮುವುದು ಕೇಳದು. ಬದಲಿಗೆ ನಾಯಿಯ ಬಗ್ಗೆ ಕಳಕಳಿಯ ಪ್ರಶ್ನೆಗಳು. ಜೊತೆಗೆ ನಾಯಿಸಾಕಣೆಯಿಂದಾಗಿ ಬರುವ ಮುನಿಸಿಪಾಲಿಟಿಯವರ ಉಪಟಳ ಬೇರೆ. ಯಾವಾಗಲೂ ಈ ದಂಪತಿಯ ಕಷ್ಟ ಸುಖಕ್ಕೆ ಒದಗುವ ಹೊರಗಿನವನಾದ ಅಶೋಕ (ಮೂರ್ತಿ, ಬೈಂದೂರು) ನಾಯಿಯನ್ನು ದೂರ ಕೊಂಡೊಯ್ಯುತ್ತಾನೆ. ನಾಯಿ ಕಾಣೆಯಾದ ಸುದ್ದಿ ಸಿಕ್ಕಿದೊಡನೇ ಅಮೆರಿಕದಿಂದ ಧಾವಿಸಿ ಬಂದ ಮಗ ಸೊಸೆ ಅಶೋಕನನ್ನು ವಿಚಾರಣೆಗೆ ಒಳಪಡಿಸಿ ನಾಯಿಯನ್ನು ಮಾರಿದುದಲ್ಲದೆ ತಮ್ಮ ತಂದೆತಾಯಿಯನ್ನು ನಂಬಿಸಿ ಆಸ್ತಿ-ಮನೆಯನ್ನು ಲಪಟಾಯಿಸುವ ಹುನ್ನಾರವೂ ಅವನಿಗೆ ಇದೆಯೆಂದು ಆಪಾದಿಸುತ್ತಾರೆ. ಅನಿರೀಕ್ಷಿತ ತಿರುವಿನೊಂದಿಗೆ ಕೊನೆಗೊಳ್ಳುವ ಈ ನಾಟಕದ ಆರಂಭದಲ್ಲೇ ಜಿ.ಎಸ್.ಎಸ್.ರ ಭಾವಗೀತೆ- ‘‘ಎಲ್ಲೋ ಹುಡುಕಿದೆ ಇಲ್ಲದ ದೇವರ...’’ - ನಾಟಕದ ಆಶಯದ ಸುಳಿವನ್ನು ನೀಡುತ್ತದೆ. ‘‘ಅಮ್ಮಾ ನಿನ್ನ ಎದೆಯಾಳದಲ್ಲಿ’’ ಮತ್ತಿತರ ಜನಜನಿತ ಗೀತೆಗಳು ಸನ್ನಿವೇಶಗಳಿಗೆ ಭಾವ ಪುಷ್ಟಿಯನ್ನು ಒದಗಿಸುತ್ತವೆ. ರಂಗದ ಮೇಲೆ ಒಮ್ಮೆಯೂ ಕಾಣಿಸದ ನಾಯಿಯ ಪಾತ್ರ - ಕಳೆದುಹೋದವೆಂದುಕೊಂಡ ಮಾನವ ಸಂಬಂಧಗಳಿಗೆ, ನಾವು ನಿರೀಕ್ಷಿಸಿದ ಕಡೆಯಲ್ಲಲ್ಲದೆ ಮತ್ತೆಲ್ಲೋ ಸಿಗುವ ಪ್ರೀತಿ ವಿಶ್ವಾಸಗಳಿಗೆ ಸಂಕೇತವಾಗಿ ನೋಡುಗರ ಹೃದಯವನ್ನು ತಟ್ಟುತ್ತದೆ. ಉದಯ ಆಚಾರ್ಯರ ಬೆಳಕು ಸಂಯೋಜನೆಯಲ್ಲಿ (ಉದಾ-ದುಃಸ್ವಪ್ನದ ದೃಶ್ಯ)ಈ ವಾಸ್ತವ ಕತೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿತು. ಒಂದೂವರೆ ಗಂಟೆ ಯಾವೊಬ್ಬ ಪ್ರೇಕ್ಷಕರೂ ಮೊಬೈಲ್ ಕಡೆ ನೋಡದೇ ಇದ್ದುದು, ತುಂಬಿದ ಸಭೆಯಲ್ಲಿ ಒಬ್ಬರೂ ಏಳದೆ ಕುಳಿತೆಡೆಯಲ್ಲೇ ಮಂತ್ರಮುಗ್ಧರಾಗಿದ್ದುದು ಈ ಮನೆಮನೆಯ ಕತೆ ಸಾಧಿಸಿದ ವಿಕ್ರಮವೆಂದೇ ಹೇಳಬೇಕು. ಪ್ರತೀ ಪಾತ್ರದಲ್ಲೂ ಜೀವ ತುಂಬಿದ ಪಾತ್ರವರ್ಗದಲ್ಲಿ ತಂದೆ ತಾಯಿಯ ಪಾತ್ರದಲ್ಲಿ ಸುಬ್ರಹ್ಮಣ್ಯ ಜಿ.ಉಪ್ಪುಂದ ಮತ್ತು ನಿಧಿ ನಾಯಕ್, ಕಂಬದ ಕೋಣೆ ಉಲ್ಲೇಖನೀಯರು- ಕೊನೆಯ ದೃಶ್ಯದಲ್ಲಿ ಅವರ ಅಭಿನಯದಿಂದಾಗಿ ಹನಿಗಣ್ಣಾಗದ ಸಭಿಕರೇ ಇರಲಿಲ್ಲವೆನ್ನಬೇಕು. ಸಾಕು ಮಗನಾಗಿ ಅಶೋಕ್ ನಾಯಿಯಂತೆ ಶಬ್ದ ಹೊರಡಿಸಿದ್ದು, ಬಿಗ್‌ಬಾಸ್ ವಿಜೇತೆ ಮುನಿವೆಂಕಟಮ್ಮನ(ಜ್ಯೋತ್ಸ್ನಾ) ತೆಲುಗು ಮಿಶ್ರಿತ ಕನ್ನಡ ಲಘು ಹಾಸ್ಯಗಳು- ಸಭಿಕರ ಮನರಂಜಿಸಿದವು. ಕೇಮಿಯೋಗಳಲ್ಲಿ ಪಿಎ ಪಾತ್ರದ ಪಾಂಡು, ಸಾಬಿಯಾಗಿ ಗಣೇಶ್ ಪರಮಾನಂದ, ಪತ್ರಕರ್ತನಾಗಿ ರಾಜೇಶ್ ನಾಯಕ್ ಮನ ಸೆಳೆದರು. ಹಾಗೆಯೇ ಬಾಯಿ ಬಿಟ್ಟು ಹೇಳಲಾಗದ ಸಂದೇಶಗಳನ್ನೂ ಮುಟ್ಟಿಸುವುದರಲ್ಲಿ ಯಶಸ್ವಿಯಾದರು. ಪಾತ್ರವರ್ಗದ ಎಲ್ಲರೂ ತಮ್ಮ ಸಹಜ ನಟನೆಯಿಂದ ತಮ್ಮದೇ ಕತೆಯನ್ನು ರಂಗದ ಮೇಲೆ ನೋಡುವ ತಾದಾತ್ಮ್ಯಭಾವವನ್ನು ಪ್ರೇಕ್ಷಕರಲ್ಲಿ ಮೂಡಿಸಿದರು. ಹಿತಮಿತವಾದ ವೇಷಭೂಷಣ ಮತ್ತು ಪ್ರಸಾದನ-ತ್ರಿವಿಕ್ರಮ್ ರಾವ್ ಉಪ್ಪುಂದ ಅವರಿಂದ. ಮಾನವ ಸ್ವಭಾವವನ್ನು ಸಣ್ಣ ಸಣ್ಣ ಸಹಜ ವಿವರಗಳಲ್ಲಿ ಚಿತ್ರಿಸಿದ ನಾಟಕಕಾರ, ನಿರ್ದೇಶಕ, ರಾಜೇಂದ್ರ ಕಾರಂತರು ಅಭಿನಂದನೀಯರು. ಎಲ್ಲೂ ಅತಿ ನಾಟಕೀಯತೆ ಇರದೆ ಸರಳ ಸುಂದರವಾಗಿ ಮೂಡಿ ಬಂದ ಅಪರೂಪದ ಪ್ರದರ್ಶನ.

ವಾರ್ತಾ ಭಾರತಿ 11 Dec 2025 1:09 pm

ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ, ಖಾಲಿ! 2.84 ಲಕ್ಷ ಹುದ್ದೆ ನೇಮಕ ಯಾವಾಗ?

ರಾಜ್ಯದ 43 ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು 79,694 ಹುದ್ದೆಗಳು ಖಾಲಿ ಇದ್ದು, ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ.

ವಿಜಯ ಕರ್ನಾಟಕ 11 Dec 2025 1:09 pm

ಆರೆಸ್ಸೆಸ್ ಕೋಮುವಾದ ಬಿತ್ತುವ ಸಂಘಟನೆಯಲ್ಲ: ಪ್ರಹ್ಲಾದ್ ಜೋಶಿ

ಹೊಸದಿಲ್ಲಿ, ಡಿ. 11: ಕಾಂಗ್ರೆಸ್ಸಿಗರು ಇನ್ನಾದರೂ ಪಾಠ ಕಲಿಯಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಯಾವತ್ತೂ ರಾಷ್ಟ್ರೀಯ ಹಿತಕ್ಕಾಗಿ ಇರುವಂತಹ ಒಂದು ಜಾಗೃತ ಸಂಘಟನೆಯೇ ಹೊರತು ಕೋಮುವಾದ ಬಿತ್ತುವುದು ಅದರ ಕೆಲಸವಲ್ಲ. ದೇಶವನ್ನು ಜಾಗೃತಗೊಳಿಸುವುದೇ ಅದರ ಧ್ಯೇಯ ಮತ್ತು ಶಕ್ತಿ ಎಂಬುದನ್ನು ಅರಿತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆರೆಸ್ಸೆಸ್ ಶಬ್ದ ಕೇಳಿದರೆ ಸಾಕು ಉರಿದುಬಿಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ಅವರ ಸರಕಾರದಿಂದಲೇ ತಕ್ಕ ಉತ್ತರ ಸಿಕ್ಕಿದೆ. ಕರ್ನಾಟಕ ರಾಜ್ಯದಲ್ಲಿ 518 ಆರೆಸ್ಸೆಸ್ ಪಥಸಂಚಲನ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಗೊಂಡಿವೆ. ಕಾಂಗ್ರೆಸ್ಸಿಗರು ಮಾಡಿದ ಅಪಪ್ರಚಾರಕ್ಕೆ ಇದು ತಕ್ಕ ಉತ್ತರವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪಥಸಂಚಲನಕ್ಕೆ ಅವಕಾಶ ಕೊಟ್ಟರೆ ಗದ್ದಲ, ಗಲಾಟೆ, ಕೋಮು ಗಲಭೆಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಲೇ ಇತ್ತು. ಆದರೆ, ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪಥಸಂಚಲನ ನಡೆಸಿದ್ದರೂ ಅಂತಹ ಯಾವುದೇ ಅಹಿತಕರ ವಾತಾವರಣ ಉಂಟಾಗಿಲ್ಲ. ಸಂಘದ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ನಾಯಕರಿಗೆ ಮೈ ಉರಿಯುತ್ತದೆ. ಇಂತಹವರಿಗೆ ಇದೀಗ ಕಾಂಗ್ರೆಸ್ ಸರಕಾರವೇ ತಕ್ಕ ಉತ್ತರ ನೀಡಿದೆ ಎಂದರು. ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ ಗಲಾಟೆ, ದೊಂಬಿ ಹಾಗೂ ಕೋಮು ಗಲಭೆಗಳಿಗೆ ದಾರಿಯಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದ ನಡುವೆಯೂ ಧೃತಿಗೆಡದೆ ರಾಜ್ಯದಲ್ಲಿ ಬರೋಬ್ಬರಿ 518 ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮಗಳನ್ನು ನಡೆಸಿದೆ. ಸಂಘವು ಶಿಸ್ತಿಗೆ ಪ್ರತೀಕವಾಗಿದೆ ಮತ್ತು ‘ದೇಶ ಮೊದಲು, ದೇಶ ಸೇವೆಯೇ ಪರಮೋಚ್ಚ' ಎಂಬ ಆರೆಸ್ಸೆಸ್ ಸಿದ್ಧಾಂತವನ್ನು ಮತ್ತಷ್ಟು ಬಲವಾಗಿ ಪ್ರತಿಪಾದಿಸಿದೆ ಎಂದು ಜೋಶಿ ಪ್ರತಿಕ್ರಿಯೆ ನೀಡಿದರು.

ವಾರ್ತಾ ಭಾರತಿ 11 Dec 2025 1:05 pm

ಪಡುಬಿದ್ರಿ | ಟೆಂಪೋ ಮಗುಚಿ ಬಿದ್ದು ಮಹಿಳೆ ಮೃತ್ಯು

ಪಡುಬಿದ್ರಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದು ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7ಜನರು ಗಾಯಗೊಂಡಿದ್ದಾರೆ. ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮುಗುಚಿ ಬಿದ್ದಿದೆ. ಮುಗುಚಿಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ. ಮಹಿಳೆಯೋರ್ವರು ಯಂತ್ರ ಅಡಿಗೆ ಸಿಲುಕಿ ಅವರನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಹರಸಾಹಸಪಟ್ಟರು. ಹೆಜಮಾಡಿ ಟೋಲ್ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಆಗಮಿಸಿ ಮಹಿಳೆಯನ್ನು ರಕ್ಷಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 11 Dec 2025 12:55 pm

ಥೈಲ್ಯಾಂಡ್‌ನಲ್ಲಿ ಸೆರೆಸಿಕ್ಕ ಬೆಂಕಿಗೆ ಆಹಗುತಿಯಾಗಿದ್ದ ಗೋವಾ ನೈಟ್‌ಕ್ಲಬ್‌ ಮಾಲೀಕರು; ಲುತ್ರಾ ಬ್ರದರ್ಸ್‌ ಕೈಗೆ ಕೋಳ!

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೈಟ್‌ಕ್ಲಬ್‌ ಮಾಲೀಕರಾದ ಸೌರಭ್‌ ಮತ್ತು ಗೌರವ್‌ ಲುತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಈ ಮೂಲಕ ನೈಟ್‌ಕ್ಲಬ್‌ ಬೆಂಕಿ ಅವಘಢ ಪ್ರಕರಣದ ತನಿಖೆ ಇದೀಗ ಮಹತ್ವದ ತಿರುವು ಒಡೆದುಕೊಂಡಿದ್ದು, ಲುತ್ರಾ ಸಹೋದರರನ್ನು ಥೈಲ್ಯಾಂಡ್‌ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಲಿದ್ದಾರೆ. ಥೈಲ್ಯಾಂಡ್‌ ಪೊಲೀಸ್‌ ಅಧಿಕಾರಿಗಳು ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಲುತ್ರಾ ಸಹೋದದರ ಕೈಗೆ ಕೋಳ ಹಾಕಿರುವುದನ್ನು ಗುರುತಿಸಬಹುದು. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 11 Dec 2025 12:39 pm

ಕಾಂತಾರ, KGF ಎರಡೂ ನಮ್ಮ ಸಿನಿಮಾ : ಯಶ್ ಜೊತೆಗಿನ ಬಾಂಡಿಂಗ್ - ರಿಷಬ್ ಶೆಟ್ಟಿ ಅಚ್ಚರಿಕೆಯ ಹೇಳಿಕೆ

Yash and Rishab Shetty : ನಾಲ್ಕು ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಪಡೆದಿರುವ ಇಬ್ಬರು ಸ್ಯಾಂಡಲ್’ವುಡ್ ನಟರ ನಡುವೆ ಹೇಗೆ ಬಾಂಡಿಂಗ್ ಇದೆ. ಹೇಗೆ, ಚಿತ್ರ ಜೀವನದ ಆರಂಭದಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿದ್ದಾರೆ? ಈ ಬಗ್ಗೆ ರಿಷಬ್ ಶೆಟ್ಟಿ, ತಮಿಳು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 12:36 pm

‌ಪ್ರಧಾನಿ ಮೋದಿ ಉತ್ತರಾಧಿಕಾರಿ ಕುರಿತ ಪ್ರಶ್ನೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಕುರಿತು ದೇಶದ ರಾಜಕೀಯ ವಲಯದಲ್ಲಿ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲಿ, RSS ಮುಖ್ಯಸ್ಥ ಮೋಹನ್ ಭಾಗವತ್ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಚೆನ್ನೈನಲ್ಲಿ ಬುಧವಾರ ನಡೆದ ‘‘RSS 100 Years: Saga of RSS Envisioning the Way Forward’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೋದಿಯವರ ನಂತರ ಯಾರು ಎಂಬ ಪ್ರಶ್ನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಮೋದಿ ಮತ್ತು ಬಿಜೆಪಿ ತೀರ್ಮಾನಿಸಬೇಕು,” ಎಂದರು. ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತು ಕೇಳಿದ ಪ್ರಶ್ನೆಗೆ ಭಾಗವತ್ ಪ್ರತಿಕ್ರಿಯಿಸಿದ್ದು, ತಮ್ಮ ಪಾತ್ರವೂ ಅಲ್ಲ, ಅದು RSSನ ಅಧಿಕಾರ ಕ್ಷೇತ್ರವೂ ಅಲ್ಲ ಎಂದು ಹೇಳಿದರು. “ನಾನು ಕೇವಲ ಶುಭ ಹಾರೈಸಬಹುದು, ಅದಕ್ಕಿಂತ ಹೆಚ್ಚಿನದಿಲ್ಲ,” ಎಂದೂ ಅವರು ತಿಳಿಸಿದ್ದಾರೆ. ಭಾಗವತ್ ಅವರ ಈ ಹೇಳಿಕೆ, ಬಿಜೆಪಿಯಲ್ಲಿ 75 ವರ್ಷ ತುಂಬಿದ ನಂತರ ನಾಯಕರ ನಿವೃತ್ತಿಯ ಕುರಿತು ಇರುವ ‘ಅಲಿಖಿತ ನಿಯಮ’ದ ಚರ್ಚೆಯ ಮಧ್ಯೆ ಮಹತ್ವ ಪಡೆದುಕೊಂಡಿದೆ. ಆಗಸ್ಟ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ತಾನು ಅಥವಾ ಆರೆಸ್ಸೆಸ್ ಯಾವತ್ತೂ 75 ನೇ ವಯಸ್ಸಿನಲ್ಲಿ ನಿವೃತ್ತಿಯಾಗಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೆಪ್ಟೆಂಬರ್‌ನಲ್ಲಿ ಮೋದಿ 75 ವರ್ಷ ಪೂರೈಸಿದ ನಂತರ ರಾಜಕೀಯದಲ್ಲಿ ಮುಂದುವರಿಯುತ್ತಾರೆಯೇ ಎಂಬ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ, ಯಾವುದೇ ವಯೋಮಿತಿಯ ನಿಯಮವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.

ವಾರ್ತಾ ಭಾರತಿ 11 Dec 2025 12:34 pm

ಹೆದ್ದಾರಿ ಸಂಚಾರ ಅಪಾಯ! ರಾಜ್ಯ, ರಾಷ್ಟ್ರೀಯ ಹೈವೇನಲ್ಲಿ 3 ವರ್ಷಗಳಲ್ಲಿ 403 ದರೋಡೆ, ಸುಲಿಗೆ

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 403 ಪ್ರಕರಣಗಳು ವರದಿಯಾಗಿವೆ. ಪೊಲೀಸರು ಚೆಕ್‌ಪೋಸ್ಟ್‌ಗಳು, ರಾತ್ರಿ ಗಸ್ತು, 112 ಗಸ್ತು ವಾಹನಗಳು, ಮತ್ತು ಹಳೆಯ ಆರೋಪಿಗಳ ಮೇಲೆ ನಿಗಾ ಇರಿಸುವ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಟೋಲ್‌ಗಳಲ್ಲಿನ ಸಿಸಿಟಿವಿ ಪರಿಶೀಲನೆ ಮತ್ತು ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.

ವಿಜಯ ಕರ್ನಾಟಕ 11 Dec 2025 12:30 pm

BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟದಲ್ಲಿ BCF ಅಧ್ಯಕ್ಷ ಡಾ. BK ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ ನೀಡಿ ಸನ್ಮಾನಿಸಲಾಯಿತು. ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು ತುಂಬೆ ಸಂಸ್ಥೆಯ 28ನೇ ವಾರ್ಷಿಕದ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟ ಏರ್ಪಡಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಭಾಗಿಯಾಗಿದ್ದರು. ಯುಎಇಯ ಬ್ಯಾರಿ ಮುಖಂಡರು, ಕನ್ನಡಿಗ ಬಂದುಗಳು, ಉದ್ಯಮಿಗಳು ವಿವಿಧ ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಕೆ.ಯೂಸುಫ್, BCF ದಶಕಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ಮಾನವೀಯ ಸಹಕಾರದ ಹಿಂದೆ ಡಾ.ತುಂಬೆ ಮೊಯ್ದಿನ್ ರವರ ಅಮೂಲ್ಯ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಡಾ. ತುಂಬೆ ಮೊಯ್ದಿನ್ ರವರು ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ MBBS ಕೋರ್ಸ್ ಕಲಿಯಲು ಸಂಪೂರ್ಣ ಖರ್ಚನ್ನು ಸ್ಕಾಲರ್ಷಿಪ್ ಅನ್ನು BCF ಮೂಲಕ ನೀಡುವ ಯೋಜನೆಯನ್ನು ಅವರು ಶ್ಲಾಘಿಸಿದರು. ಈ ಸಂದರ್ಭ ಸಮಾಜ ಸೇವಾಸೇವಕ ಮುಹಮ್ಮದ್ ಮೀರಾನ್ ಅವರನ್ನೂ ಸನ್ಮಾನಿಸಲಾಯಿತು. ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಡಾ. ತುಂಬೆ ಮೊಯ್ದಿನ್ ಅವರನ್ನೂ ಸನ್ಮಾನಿಸಲಾಯಿತು. BCF ಸಲಹೆಗಾರ ಗಡಿಯಾರ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಬೂಸಾಲಿಹ್, BCF ಉಪಾಧ್ಯಕ್ಷ ಎಂಇ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫಿಕ್ ಹುಸೈನ್, ಅಮೀರುದ್ದೀನ್, ಅಸ್ಲಾಂ ಕಾರಾಜೆ,ಯಾಕುಬ್ ದೀವ, ಉಸ್ಮಾನ್ ಮೂಳೂರು, ಅಬ್ದುಲ್ ಲತೀಫ್ ಪುತ್ತೂರು, ನಿಯಾಝ್‌, ಅಶ್ರಫ್ ಸಟ್ಟಿಕಲ್, BCF Ladies Wing ಹಾಗೂ ಇತರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. KNRI ಅಧ್ಯಕ್ಷರಾದ ಪ್ರವೀಣ್ ಕುಮಾ‌ರ್ ಶೆಟ್ಟಿ, ಫರ್ ಹಾದ್, ವಿಘ್ನಶ್, ಡಾ. ಬಂಗೇರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.    

ವಾರ್ತಾ ಭಾರತಿ 11 Dec 2025 12:24 pm

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿದರೆ ದಲಿತರು ಸಿಎಂ ಆಗಬೇಕು :‌ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ

ಬೆಳಗಾವಿ: ಒಂದು ವೇಳೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿದರೆ ದಲಿತರು ಸಿಎಂ ಆಗಬೇಕು ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೊಸ ಬೇಡಿಕೆಯನ್ನಿಟ್ಟಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ನಾಲ್ಕೈದು ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಎಚ್ ಸಿ ಮಹದೇವಪ್ಪ, ಮುನಿಯಪ್ಪ, ಸತೀಶ ಜಾರಕಿಹೊಳಿ ಇದ್ದಾರೆ. ಇವರಲ್ಲಿ ಯಾರೇ ಸಿಎಂ ಆದರೂ ನಮಗೆ ಸಂತೋಷ ಎಂದರು. ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆದರೆ ನಮ್ಮ ಅಭ್ಯಂತರ ಏನೂ ಇಲ್ಲ. ವಾಲ್ಮೀಕಿ‌ ಸಮಾಜದ ಶಾಸಕರು, ಹಾಗೂ ಸಮಾಜ ಸಿದ್ದರಾಮಯ್ಯ ಬೆನ್ನಿಗೆ ಇರಲಿದೆ ಎಂದು ಹೇಳಿದರು. ಪ್ರತಿ ವರ್ಷದಂತೆ  ಮಠದ ವತಿಯಿಂದ ವಾಲ್ಮೀಕಿ ಜಯಂತಿ‌ ಮಾಡುತ್ತೇವೆ. ಹೀಗಾಗಿ ಸತೀಶ ಜಾರಕಿಹೊಳಿ ಸಭೆಗೆ ಬಂದಿದ್ದರು. ಇಂದು ಮಧ್ಯಾಹ್ನ ಸಿಎಂ ಅವರನ್ನು ಜಾತ್ರೆಗೆ ಆಮಂತ್ರಿಸಲು ಹೋಗತ್ತಿದ್ದೇವೆ. ಆಗ ನಮ್ಮ ಸಮುದಾಯಕ್ಕೆ ಎರಡು ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.   

ವಾರ್ತಾ ಭಾರತಿ 11 Dec 2025 12:21 pm

ಬೆಂಗಳೂರಿನ ಅಸ್ತವ್ಯಸ್ತ ಪರಿಸ್ಥಿತಿಗೆ ಬೇಸತ್ತು ಮತ್ತೆ ವಿದೇಶದತ್ತ ಮುಖ ಮಾಡಿದ ಎನ್.ಆರ್.ಐ!

ಅಮೆರಿಕಾದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿದ್ದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್, ಬೆಂಗಳೂರಿನ ಜೀವನ 'ಅಸಹನೀಯ' ಮತ್ತು 'ಮಾನವೀಯತೆ ಇಲ್ಲದಂತಾಗಿದೆ' ಎಂದು ಟೀಕಿಸಿ, ಪುನಃ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ. ವಾಯು, ಶಬ್ದ ಮಾಲಿನ್ಯ, ಸಂಚಾರ ದಟ್ಟಣೆ, ಅಸುರಕ್ಷಿತ ರಸ್ತೆಗಳು, ನಾಗರಿಕ ಪ್ರಜ್ಞೆಯ ಕೊರತೆ ಮುಂತಾದ ಸಮಸ್ಯೆಗಳಿಂದ ಬೇಸತ್ತು, ಜರ್ಮನಿಯ ಮ್ಯೂನಿಚ್‌ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದಾರೆ.

ವಿಜಯ ಕರ್ನಾಟಕ 11 Dec 2025 12:21 pm

ಸಂಪಾದಕೀಯ | ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ ಆತಂಕ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 11 Dec 2025 12:11 pm

Gold Silver Price: ಬೆಳ್ಳಿ ದರ ₹12,000 ರೂಪಾಯಿ ಹೆಚ್ಚಳ, ಹೊಸ ದಾಖಲೆ! ಚಿನ್ನದ ಬೆಲೆ ಮತ್ತೆ ಇಳಿಕೆ

ಬೆಂಗಳೂರು, ಡಿಸೆಂಬರ್ 11: ಚಿನ್ನ ಮತ್ತು ಬೆಳ್ಳಿ ಲೋಹಗಳ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ನಿರಂತರವಾಗಿ ಏರಿಕೆ ಆಗುತ್ತಲೇ ಬಂದಿದ್ದ ಚಿನ್ನದ ಬೆಲೆಯು ಇಂದು ಒಂದೇ ದಿನಕ್ಕೆ ಕೊಂಚ ಇಳಿಕೆ ಆಗಿದೆ. ಇಂದಿನ ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಬಂಗಾರದ ದರ ಇಳಿಕೆಯು ಏರಿಕೆಗೆ ಹೋಲಿಸಿದರೆ ತೀರಾ ಕಡಿಮೆ. ಇತ್ತ ಬೆಳ್ಳಿ ಸಹ ತೀವ್ರ

ಒನ್ ಇ೦ಡಿಯ 11 Dec 2025 12:08 pm

ಸುರತ್ಕಲ್ | ಡಿ.21ರಂದು ಉರುಮಾಲ್ ಮಾಸಪತ್ರಿಕೆಯ 21ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ

ಸುರತ್ಕಲ್ : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಉರುಮಾಲ್ ಮಾಸ ಪತ್ರಿಕೆಯ ಇಪ್ಪತ್ತನೇಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವು ಡಿ.21ರಂದು ಕಾಟಿಪಳ್ಳದ ಮಂಗಳಪೇಟೆ ಜಂಕ್ಷನ್‌ನಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧು-ವರರಿಗೆ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ನೀಡಲಾಗುವುದು. ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಧವಾ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಿದೆ. ಇದೇ ಸಂದರ್ಭ ರಾಜ್ಯ ಮಟ್ಟದ ಉರುಮಾಲ್ ಕ್ವಿಝ್ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಚಿನ್ನದ ಉಂಗುರ ಹಾಗೂ ಉರುಮಾಲ್ ಪ್ರಶಸ್ತಿ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉರುಮಾಲ್ ಕಿಟ್ ನೀಡಿ ಗೌರವಿಸಲಾಗುವುದು. ರಾಜ್ಯಾದ್ಯಂತ 80 ರೇಂಜ್‌ಗಳಿಂದ ತಲಾ ಒಬ್ಬರಂತೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉರುಮಾಲ್ ಸಂಸ್ಥಾಪಕ ಸರ್ಫಾಝ್ ನವಾಝ್ ಮಂಗಳಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Dec 2025 12:00 pm

Gruhalakshmi Scheme: ರಾಜ್ಯದಲ್ಲಿ ಗೃಹಲಕ್ಷ್ಮಿ ₹2,000 ಹಣ ಜಮಾ ಬಗ್ಗೆ ಮಹತ್ವದ ಮಾಹಿತಿ

Gruhalakshmi Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಗೃಹಲಕ್ಷಿ ಯೋಜನೆಯೂ ಒಂದಾಗಿದೆ. ಇದರಡಿಯಲ್ಲಿ ಪ್ರತಿ ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತದೆ. ಇದೀಗ ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನುವ ಆರೋಪಗಳ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಸಿಎಂ ಆರ್ಥಿಕ ಸಲಹೆಗಾರ ನೀಡಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ

ಒನ್ ಇ೦ಡಿಯ 11 Dec 2025 11:55 am

ಪ್ರಧಾನಿ ಕಚೇರಿಯಲ್ಲಿ 88 ನಿಮಿಷಗಳ ಸಭೆ; ನರೇಂದ್ರ ಮೋದಿ-ರಾಹುಲ್‌ ಗಾಂಧಿ ಮತ್ತು ಅಮಿತ್‌ ಶಾ ಮಾತಾಡಿದ್ದೇನು?

ಭಾರತದ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ನೇಮಕ ವಿಚಾರವಾಗಿ ಚರ್ಚಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನಿನ್ನೆ (ಡಿ.10-ಬುಧವಾರ) 88 ನಿಮಿಷಗಳ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಸೂಚಿಸಿದ ಮುಖ್ಯ ಮಾಹಿತಿ ಆಯುಕ್ತರು ಮತ್ತು 8 ಮಾಹಿತಿ ಆಯುಕ್ತರ ಅಭ್ಯರ್ಥಿ ಪಟ್ಟಿಗೆ ರಾಹುಲ್‌ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 11 Dec 2025 11:45 am

ಸುಳ್ಯ | ದೇವಸ್ಥಾನದ ಮುಂಭಾಗ ಆಯೋಜನೆಯಾಗಿದ್ದ ದಫ್ ಪ್ರದರ್ಶನ ರದ್ದು

ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರು

ವಾರ್ತಾ ಭಾರತಿ 11 Dec 2025 11:23 am

Goa ನೈಟ್‌ಕ್ಲಬ್ ದುರಂತ | ಶನಿವಾರ ರಾತ್ರಿ 11:45ಕ್ಕೆ ಬೆಂಕಿ ಬಿದ್ದ ಮಾಹಿತಿ; ರವಿವಾರ ಮಧ್ಯರಾತ್ರಿ 1:17ರ ಫುಕೆಟ್ ಗೆ ಟಿಕೆಟ್!

ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ಯೋಜನೆ ರೂಪಿಸಿದ್ದ ಲುತ್ರಾ ಸಹೋದರರು

ವಾರ್ತಾ ಭಾರತಿ 11 Dec 2025 11:22 am

ಆರ್ ಸಿ ಬಿ ದುರಂತದ ಎಫೆಕ್ಟ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಿಗುತ್ತಾ ಅವಕಾಶ? ಸಂಪುಟಲ್ಲಿ ಮಹತ್ವದ ಚರ್ಚೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ಧಾರ ಕುತೂಹಲ ಮೂಡಿಸಿದೆ.

ವಿಜಯ ಕರ್ನಾಟಕ 11 Dec 2025 11:21 am

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿನಿ - ಪುರಾತನ ‘ಗಾಂಧಾರಿ ಕಲೆ’ಯ ಪ್ರಯೋಜನಗಳನ್ನು ಜಗತ್ತಿಗೆ ಸಾರಿದ ಹಿಮಾಬಿಂದು!

ಬಳ್ಳಾರಿಯ ಹಿಮಾಬಿಂದು ಎಂಬ ವಿದ್ಯಾರ್ಥಿನಿ ಗಾಂಧಾರಿ ಕಲೆ ಕರಗತ ಮಾಡಿಕೊಂಡಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ, ಶಬ್ದದಿಂದ ವಸ್ತುಗಳನ್ನು ಗುರುತಿಸುವ ಈ ಕಲೆ ಆನ್‌ಲೈನ್ ಮೂಲಕ ಕಲಿತಿದ್ದಾಳೆ. 8ನೇ ತರಗತಿಯ ಎಫ್‌ಎ4 ಪರೀಕ್ಷೆಯನ್ನು ಇದೇ ರೀತಿ ಬರೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಈ ಕಲೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 11:18 am

ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ವಾರ್ತಾ ಭಾರತಿ 11 Dec 2025 11:14 am

ಊಬರ್‌ನಿಂದ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್‌ ಬುಕಿಂಗ್‌ ಹಾಗೂ ಸರಕು ಸಾಗಣೆ ಸೇವೆ ಆರಂಭ; ಸೇವೆ ಪಡೆಯುವುದು ಹೇಗೆ?

ಊಬರ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಮಹತ್ವದ ಹೊಸ ಸೇವೆಗಳನ್ನು ಆರಂಭಿಸಿದೆ. 'ಊಬರ್ ಡೈರೆಕ್ಟ್' ಎಂಬುದು ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಸೇವೆಯಾಗಿದೆ. ಇದರೊಂದಿಗೆ, ಊಬರ್ ಆ್ಯಪ್ ಮೂಲಕ ಬೆಂಗಳೂರು ಮೆಟ್ರೋ ಟಿಕೆಟ್‌ಗಳನ್ನು ಕ್ಯೂಆರ್ ಆಧಾರಿತವಾಗಿ ಖರೀದಿಸಬಹುದು. ಈ ಸೇವೆಗಳು 2026ರ ವೇಳೆಗೆ ದೇಶದ ಹೆಚ್ಚಿನ ನಗರಗಳಿಗೆ ವಿಸ್ತರಿಸಲಿವೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಊಬರ್‌ನ ಬದ್ಧತೆಯನ್ನು ತೋರಿಸುತ್ತದೆ.

ವಿಜಯ ಕರ್ನಾಟಕ 11 Dec 2025 11:07 am

ತೀರ್ಥಹಳ್ಳಿ | ಬೈಕ್ -ಬಸ್ ನಡುವೆ ಢಿಕ್ಕಿ : ಯುವಕ ಮೃತ್ಯು

ತೀರ್ಥಹಳ್ಳಿ: ಬೈಕ್ ಮತ್ತು ರಾಜಹಂಸ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟ ಘಟನೆ ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ಬುಧವಾರ ತಡರಾತ್ರಿ ನಡೆದಿದೆ. ಮೃತಪಟ್ಟ ಯುವಕನನ್ನು ರಂಜದಕಟ್ಟೆ ಸಮೀಪದ ಮೀನುಗುಂದ ಗ್ರಾಮದ ಪುನೀತ್ (26 ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಯುವಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ತೀರ್ಥಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Dec 2025 11:05 am

ರೈತರಿಗೆ ಭೂಸ್ವಾಧೀನಕ್ಕಾಗಿ 8.38 ಕೋಟಿ ಬಿಡುಗಡೆ: ಮಾಹಿತಿ ಕೊಟ್ಟ ಹೆಚ್.ಕೆ. ಪಾಟೀಲ್

ಬೆಳಗಾವಿ, ಡಿಸೆಂಬರ್‌ 11: ವಿವಿಧ ಜಿಲ್ಲೆಗಳ ರೈತರ ಕೃಷಿ ಭೂಮಿಗೆ ನೀರುಣಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ರೈತರಿಗೆ ಭೂಸ್ವಾಧೀನದ ಹಣ ಪಾವತಿಸಲು ಅಗತ್ಯವಿರುವ 8.38 ಕೋಟಿ ರೂ. ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.

ಒನ್ ಇ೦ಡಿಯ 11 Dec 2025 10:57 am

Explained: ಯುಎಸ್‌ ಗೋಲ್ಡ್‌ ಕಾರ್ಡ್‌ ಅನಾವರಣ; ಡೊನಾಲ್ಡ್‌ ಟ್ರಂಪ್‌ ಉದ್ದೇಶ ಶ್ರೀಮಂತರ ಸಮಾಜ ನಿರ್ಮಾಣ

ಅಮೆರಿಕನ್‌ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಬಯಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶ್ರೀಮಂತಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. H-1B ವೀಸಾ ಕಾರ್ಯಕ್ರಮದಡಿ ಬರುವ ಸಾಮಾಮನ್ಯ ವಿದೇಶಿ ವಲಸಿಗರೆಂದರೆ ಮೂಗು ಮುರಿಯುವ ಟ್ರಂಪ್‌, ವಿದೇಶಗಳಲ್ಲಿರುವ ಶ್ರೀಮಂತರಿಗೆ ಅಮೆರಿಕನ್‌ ವ್ಯವಸ್ಥೆಯೊಳಗೆ ಪ್ರವೇಶ ನೀಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಯುಎಸ್‌ ಗೋಲ್ಡ್‌ ಕಾರ್ಡ್‌ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿರುವ ಟ್ರಂಪ್‌, ವಿದೇಶಿ ಶ್ರೀಮಂತ ವಲಸಿಗರನ್ನು ಅಮೆರಿಕ ಬಾಚಿ ತಬ್ಬಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 11 Dec 2025 10:49 am

ಯಾದಗಿರಿ | ವಸತಿ ನಿಲಯದಲ್ಲಿ ಊಟ ಸೇವಿಸಿದ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ರಾತ್ರಿ 7.30ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥತಗೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಒಟ್ಟು 150 ವಿದ್ಯಾರ್ಥಿಗಳಲ್ಲಿ 33ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿಂದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ. ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯತ್‌ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಶೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

ವಾರ್ತಾ ಭಾರತಿ 11 Dec 2025 10:49 am

ಬೆಂಗಳೂರು | ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಮೂವರು ಮೃತ್ಯು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ನಿವಾಸಿಗಳಾದ ಮೋಹನ್ ಕುಮಾರ್ (33), ಸುಮನ್ (28), ಸಾಗರ್ (23) ಎಂದು ಗುರುತಿಸಲಾಗಿದೆ.  ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಕಡೆಗೆ ಬರುತ್ತಿದ್ದ KA 50 MA 0789 ಸಂಖ್ಯೆಯ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಿಂದ ಕಾರನ್ನು ಹೊರತೆಗೆಯುವ ಕಾರ್ಯ ಪೂರ್ಣಗೊಂಡಿದ್ದು, ಸಂಚಾರ ದಟ್ಟಣೆ ನಿಧಾನವಾಗಿ ಕಡಿಮೆಯಾಗುತ್ತಿದೆ. 

ವಾರ್ತಾ ಭಾರತಿ 11 Dec 2025 10:30 am

ಮಹಿಳೆಯ ಅಪರೂಪದ ಕಾಯಿಲೆ ಪರಿಹರಿಸಿದ ಬೆಂಗಳೂರಿನ ವೈದ್ಯರು- ಏನಿದು ರೋಗ? ನಿಮ್ಮಲ್ಲೂ ಈ ಲಕ್ಷಣವಿದೆಯೇ ಪರೀಕ್ಷಿಸಿಕೊಳ್ಳಿ!

ಬೆಂಗಳೂರಿನ ಸ್ವರ್ಶ್‌ ಆಸ್ಪತ್ರೆಯ ವೈದ್ಯರು, ಮಹಿಳೆಯೊಬ್ಬರ ಅಪರೂಪದ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಸಾಮಾನ್ಯ ನಿಮೋನಿಯಾ ಎಂದು ತಪ್ಪು ತಿಳಿಯಲಾದ ಅಪರೂಪದ ಶ್ವಾಸಕೋಶದ ಕಾಯಿಲೆ 'ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌' (ಪಿಎಪಿ) ನಿಂದ ಬಳಲುತ್ತಿದ್ದ 39 ವರ್ಷದ ಮಹಿಳೆಯನ್ನು ಯಶಸ್ವಿಯಾಗಿ ಗುಣಪಡಿಸಿದ್ದಾರೆ. ಸುಮಾರು 17 ಲೀಟರ್‌ ಉಪ್ಪಿನ ದ್ರಾವಣ ಬಳಸಿ ಶ್ವಾಸಕೋಶವನ್ನು ಸಂಪೂರ್ಣವಾಗಿ ತೊಳೆದು, ರೋಗಿಯನ್ನು ಗುಣಮುಖರಾಗಿಸಿದ್ದಾರೆ.

ವಿಜಯ ಕರ್ನಾಟಕ 11 Dec 2025 10:23 am

ಮಟ್ಟೂರು ತಾಂಡದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ | ಪ್ರತಿದೂರಿಗೆ ಸ್ಪಂದನೆ ಇಲ್ಲ: ಆರೋಪ

ರಾಯಚೂರು: ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿ ಮಟ್ಟೂರು ತಾಂಡದಲ್ಲಿ ರಾಮಪ್ಪ ಮತ್ತು ಸಕ್ಕುಬಾಯಿ ಇವರ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಪಿಎಸ್‍ಐ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಈಶ್ವರ ಜಾಧವ ಆರೋಪಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಪ್ರಕರಣದಲ್ಲಿ ಹಳೆ ದ್ವೇಷಕ್ಕೆ ಸಂಬಂದಿಸಿದಂತೆ ರೈಲ್ವೆ ಪೊಲೀಸ್ ಪೇದೆ ರಾಘವೇಂದ್ರ ಇವರು ಪೊಲೀಸ್‍ರೊಂದಿಗೆ ಹೊಂದಿರುವ ಸ್ನೇಹದಿಂದ ಸುಳ್ಳು ಆರೋಪಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ದಾಖಲಿಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯಿಂದ ಪ್ರತಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಡಿವೈಎಸ್ಪಿ ಇವರಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ. ಪೊಲೀಸ್ ಇಲಾಖೆಯಿಂದ ನ್ಯಾಯಸಮತ ನಡೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಮುದುಗಲ್ ಪಿಎಸ್‍ಐ ತನ್ನ ಸ್ನೇಹಿತ ರಾಘವೇಂದ್ರ ಇವರನ್ನು ರಕ್ಷಿಸಲು ಆರೋಪಿಗಳನ್ನು ಬಂಧಿಸದೇ ಸಹಕರಿಸುತ್ತಿದ್ದಾರೆ. ಈಗಾಗಲೇ ರಾಮಪ್ಪ ಮತ್ತು ಸಕ್ಕುಬಾಯಿ ಇವರನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಗುಂಪಿನವರನ್ನು ಬಂಧಿಸದೇ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ನ್ಯಾಯಾಂಗಮೊರೆ ಹೋಗುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಲಾಲಮ್ಮ, ಶಿಲ್ಪಾ ಇದ್ದರು.

ವಾರ್ತಾ ಭಾರತಿ 11 Dec 2025 10:20 am

Goa ನೈಟ್‌ಕ್ಲಬ್ ದುರಂತ | ಶನಿವಾರ ರಾತ್ರಿ 11:45ಕ್ಕೆ ಬೆಂಕಿ ಬಿದ್ದ ಮಾಹಿತಿ; ರವಿವಾರ ಮಧ್ಯರಾತ್ರಿ 1:17ಕ್ಕೆ ಫುಕೆಟ್ ಗೆ ಟಿಕೆಟ್!

ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ರೂಪಿಸಿದ್ದ ಲುಥ್ರಾ ಸಹೋದರರು

ವಾರ್ತಾ ಭಾರತಿ 11 Dec 2025 10:17 am

ಮೋದಿಗೆ ಉತ್ತರಾಧಿಕಾರಿ ಯಾರು ? RSS ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಸ್ಪಷ್ಟನೆ

Who After Narendra Modi : ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರವನ್ನು ನೀಡಿದ್ದಾರೆ. 75 ವರ್ಷ ತುಂಬಿದವರು, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಬಿಜೆಪಿಯ ನಿಯಮದಿಂದಾಗಿ, ಭಾಗವತ್ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ವಿಜಯ ಕರ್ನಾಟಕ 11 Dec 2025 10:04 am

ಅಮೆರಿಕನ್‌ ಸಮಾಜದಲ್ಲಿ ವಲಸಿಗ ಭಾರತೀಯರ ಸಂಘರ್ಷಗಳು; ನನಸಾಗಲಿ ಭಯ ಮುಕ್ತ ಜೀವನದ ಕನಸುಗಳು

ಅದೊಂದು ಕಾಲವಿತ್ತು. ಭಾರತೀಯ ಕೌಶಲ್ಯಪೂರ್ಣ ಕಾರ್ಮಿಕರನ್ನು ಅಮೆರಿಕ ಬಿಗಿದಪ್ಪಿಕೊಳ್ಳುತ್ತಿತ್ತು. ಭಾರತದ ವಿದ್ವತ್ತಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅಮೆರಿಕ, H-1B ವೀಸಾ ಕಾರ್ಯಕ್ರಮದಡಿಯಲ್ಲಿ ಯುಎಸ್‌ಗೆ ಬರುವ ಭಾರತೀಯರನ್ನು ತೆರೆದ ಹೃದಯದಿಂದ ಸ್ವಾಗತ ನೀಡುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಅಮೆರಿಕದ ಆಡಳಿತದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಮೆರಿಕಕ್ಕೆ ವಿದೇಶುಯರ ವಲಸೆಯನ್ನು ಅತ್ಯುಗ್ರವಾಗಿ ವಿರೋಧಿಸುತ್ತಾರೆ. ಟ್ರಂಪ್‌ ಆಡಳಿತದ ಕಠಿಣ ವಲಸೆ ನೀತಿ, ಅಮೆರಿಕನ್‌ ಸಮಾಜದಲ್ಲಿ ವಲಸಿಗರ ವಿರುದ್ಧ ದ್ವೇಷ ಭಾವನೆ ಕೆರಳಿಸುವಲ್ಲಿ ನಿಧಾನವಾಗಿ ಯಶಸ್ವಿಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದಲ್ಲಿ ವಲಸಿಗ ಭಾರತೀಯರ ಹೋರಾಟಗಳ ರೋಚಕ ಕಥೆ ಇಲ್ಲಿದೆ.

ವಿಜಯ ಕರ್ನಾಟಕ 11 Dec 2025 10:00 am

ಇಂಡಿಗೋ ಬಿಕ್ಕಟ್ಟು: ಸ್ಪಷ್ಟನೆ ನೀಡಿ, ತೊಂದರೆಗೆ ಕ್ಷಮೆಯಾಚಿಸಿದ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ

ಇಂಡಿಗೋ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಇತ್ತೀಚೆಗೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ನೀಡಿದ ವಿಮಾನ ರದ್ದತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ್ನು ಸೃಷ್ಟಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳು ಹೊಣೆಗಾರಿಕೆ ಮತ್ತು ಪ್ರಯಾಣಿಕರ ಪರಿಹಾರಕ್ಕಾಗಿ ಒತ್ತಾಯಿಸುತ್ತಿವೆ.

ವಿಜಯ ಕರ್ನಾಟಕ 11 Dec 2025 9:51 am

ಸಿರವಾರ | ಭತ್ತದ ಬೆಳೆ ಕಳ್ಳತನದ ಆರೋಪ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಸಿರವಾರ ತಾಲೂಕಿನ ಜಾಗಟಕಲ್ ಸೀಮಾಂತರದಲ್ಲಿ ರಾಜಗೋಪಾಲ ಎಂಬುವವರಿಗೆ ಸೇರಿದ ಜಮೀನಲ್ಲಿ ಬೆಳೆದಿದ್ದ ಭತ್ತವನ್ನು ಅತಿಕ್ರಮಣ ಮಾಡಿ ಭತ್ತ ಕೊಯ್ದುಕೊಂಡು ಕಳ್ಳತನ ಮಾಡಿರುವರ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಿ ವಿಜಯರಾಣಿ ಸಿರವಾರ ಆಗ್ರಹಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸರ್ವೆ 84/2, 84/3 ಹಾಗೂ 84/2 ರಲ್ಲಿರುವ ಏಳು ಎಕರೆ ಭೂಮಿಯನ್ನು ಬಸ್ಸಮ್ಮ ಇವರಿಂದ ರಾಜಗೋಪಾಲರಾವ್ ಮತ್ತು ಶೇಷಾದ್ರಿ ಇವರು ಕಾನೂನು ಬದ್ದವಾಗಿ ಖರೀದಿ ಮಾಡಿದ್ದಾರೆ. ರಾಚಪ್ಪ ಎಂಬುವವರು ಮ್ಯುಟೇಷನ್ ಮಾಡಲು ಆರಕೇರಾ ನಾಡಕಚೇರಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ನೊಂದಣಿ ಬಾಕಿಯಿದೆ. ಆದರೆ ನ.30 ರಂದು ರಾತ್ರಿ ರಾಚಪ್ಪ, ಕಾಸಲಯ್ಯ, ಶಿವಪ್ಪ, ಸಣ್ಣ ಶಿವಪ್ಪ, ಮೂಕಪ್ಪ ಮತ್ತು ಮಲ್ಲಪ್ಪ ಸೇರಿ ಭತ್ತ ಕೊಯ್ಯುವ ಯಂತ್ರದೊಂದಿಗೆ ಬಂದು ಬೆಳೆದು ನಿಂತಿದ್ದ ಭತ್ತವನ್ನುಕೊಯ್ದುಕೊಂಡು ಕಳ್ಳತನ ಮಾಡಿದ್ದಾರೆ.   ಜಮೀನು ಲೀಜುದಾರರಾದ ಶ್ರೀನಿವಾಸ, ಮೌನೇಶ ಇವರನ್ನು ಬೆದರಿಸಿದ್ದಾರೆ. ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭತ್ತ ಕಳ್ಳತನ ಮಾಡಿರುವರನ್ನು ಬಂಧಿಸಿಲ್ಲ.ಕೂಡಲೇ ಆರೋಪಿಗಳನ್ನು ಬಂಧಿಸಿ ಕಳವು ಮಾಡಿರುವ ಭತ್ತವನ್ನು ಮರಳಿಸಬೇಕೆಂದು ಒತ್ತಾಯಿಸಿದರು. ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, ರಾಜಗೋಪಾಲ ಎಂಬುವವರ ಖರೀದಿ ಭೂಮಿಯಲ್ಲಿ ಅತಿಕ್ರಮಣ ಮಾಡಿ ರಾಚಪ್ಪ ಹಾಗೂ ಇತರರು ದೌರ್ಜನ್ಯ ಎಸಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಸ್ಮಮ್ಮ, ಲಕ್ಷ್ಮೀ, ರಾಜಗೋಪಾಲ, ಸಾಜೀದ್, ಮಾರತಿ ಚಿಕ್ಕಸೂಗೂರು, ಕೃಷ್ಣ ಮಚರ್ಲಾ ಜೀವನ ಸಹಿತ ಹಲವರಿದ್ದರು.

ವಾರ್ತಾ ಭಾರತಿ 11 Dec 2025 9:46 am

ಕಾಸರಗೋಡು | 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ; ಮತದಾನ ಆರಂಭ

ಡಿ.13 ರಂದು ಮತ ಎಣಿಕೆ

ವಾರ್ತಾ ಭಾರತಿ 11 Dec 2025 9:35 am