Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಆಗಿರುವುದರಿಂದ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಪ್ರತಿನಿತ್ಯ ಜಾಗತಿಕ ಮಾರುಕಟ್ಟೆ ಹಾಗೂ ಡಾಲರ್ ಮೌಲ್ಯದ ಏರಿಳಿತಗಳಿಂದ ಹಳದಿ ಲೋಹದ ಬೆಲೆಯಲ್ಲಿ ನಿರಂತರವಾಗಿ ಬದಲಾವಣೆಯಾಗುತ್ತಲೇ ಇರುತ್ತದೆ. ಹೂಡಿಕೆ ಮಾಡುವ ಮುನ್ನ ಅಥವಾ ಆಭರಣ ಖರೀದಿಸುವ ಮುನ್ನ ಇಂದಿನ ನೈಜ ಬೆಲೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಇಲ್ಲಿದೆ ಇಂದಿನ
ಪ್ರಿಯಾಂಕ್ ಖರ್ಗೆ ತವರು ಕಲಬುರಗಿ ಜಿಲ್ಲೆಯಲ್ಲಿ ದಾಖಲೆಯ ತೆರಿಗೆ ಸಂಗ್ರಹ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅಭೂತಪೂರ್ವ ಯಶಸ್ಸು ದಾಖಲಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 89.80ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ.
ಇಂಡೋನೇಷ್ಯಾದಲ್ಲಿ 7.4 ಭಾರಿ ತೀವ್ರತೆಯ ಭೂಕಂಪ: ಕಟ್ಟಡಗಳು ನೆಲಸಮ
ನವದೆಹಲಿ: ಇಂಡೋನೇಷ್ಯಾದಲ್ಲಿ ಗುರುವಾರ ಸ್ಥಳೀಯ ಸಮಯ 06:48 ಕ್ಕೆ (ಬುಧವಾರ 22:48 BST) 7.4 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆಗೆ ಕಟ್ಟಡಗಳು ಧ್ವಂಸವಾಗಿವೆ.ಆರಂಭದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದ್ವೀಪಸಮೂಹದ ಮಧ್ಯಭಾಗದ ಮೊಲುಕ್ಕಾ ಸಮುದ್ರದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ವರದಿ ಮಾಡಿದೆ. ಕರಾವಳಿ ತೀರ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದ್ದರಿಂದ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿಯಲ್ಲಿ ಅಲೆಗಳು ಎದ್ದಿರುವ ಸಾಧ್ಯತೆ ಇದೆ ಎಂದು ಮೊದಲೇ ಹೇಳಿದ್ದ ಅಧಿಕಾರಿಗಳು ಸುನಾಮಿ ಎಚ್ಚರಿಕೆಗಳನ್ನು ತೆಗೆದುಹಾಕಿದ್ದಾರೆ. ದ್ವೀಪಸಮೂಹದಾದ್ಯಂತದ ಹತ್ತಿರದ ನಗರಗಳ ಸ್ಥಳೀಯರು ಭೂಕಂಪದ ನಂತರ ಭಯ ಮತ್ತು ವಿನಾಶ ಉಂಟಾಗಿದೆ ಎಂದು ತಿಳಿಸಿದ್ದಾರೆ. ಇದರ ತೀವ್ರತೆಯ ಬಗ್ಗೆ ಅವರು ಮಾತನಾಡಿದ್ದಾರೆ.ಭೂಕಂಪನದ ಕೇಂದ್ರಬಿಂದು 205,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಟೆರ್ನೇಟ್ ನಗರದಿಂದ ಸುಮಾರು 120 ಕಿ.ಮೀ ದೂರದಲ್ಲಿ ಸಂಭವಿಸಿದೆ.
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು?
ಇಂಡೋನೇಷ್ಯಾದಲ್ಲಿ ಮತ್ತೊಮ್ಮೆ ವರುಣನ ಹಾಗೂ ಪ್ರಕೃತಿಯ ಮುನಿಸು ಜೋರಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರ ಇಂಡೋನೇಷ್ಯಾದಲ್ಲಿ ಗುರುವಾರ (ಏಪ್ರಿಲ್ 02) ಮುಂಜಾನೆ ಭಾರಿ ಪ್ರಬಲ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದ ಟೆರ್ನೇಟ್ ಬಳಿಯ ಉತ್ತರ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಅಪ್ಪಳಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಬಿಡುಗಡೆ
ಅಸೈಗೋಳಿ : ಸ್ವಹಾಬ ಜುಮಾ ಮಸ್ಜಿದ್ ನೂತನ ಪದಾಧಿಕಾರಿಗಳ ಆಯ್ಕೆ
ದೇರಳಕಟ್ಟೆ: ಸ್ವಹಾಬ ಜುಮಾ ಮಸ್ಜಿದ್ ಹಾಗೂ ಅಲ್ ಮದ್ರಸತುಲ್ ಜಮಾಲಿಯ್ಯ ಅಸೈ ಇದರ 2026–2027 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಹನೀಫ್ ಸಅದಿ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಸಅದಿ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಸಲೀಮ್ ಗುಡ್ಡೆ, ಕರೀಮ್ ಬಿ.ಕೆ., ರಹೀಮ್ ಹಾಗೂ ಅಬೂಸ್ವಾಲಿಹ್ ಆಯ್ಕೆಯಾಗಿದ್ದು, ಕೋಶಾಧಿಕಾರಿಯಾಗಿ ಬಶೀರ್ ಮಿಸ್ಬಾಹಿ ನೇಮಕಗೊಂಡರು. ಇದಲ್ಲದೆ, 13 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
“ಇರಾನ್ ವಿರುದ್ಧ ಅಗಾಧ ಯಶಸ್ಸು ಗಳಿಸಿದ್ದೇವೆ”
ಮಧ್ಯಪ್ರಾಚ್ಯ ಯುದ್ದದ ಪರಿಣಾಮ: ಬೆಂಗಳೂರು ಗ್ರಾಮಾಂತರದಲ್ಲಿ ಮೊಟ್ಟೆ ರಫ್ತು ಕುಸಿತ
ಬೆಂಗಳೂರು ಗ್ರಾಮಾಂತರದಲ್ಲಿ ದಿನಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಇದರಲ್ಲಿ ಶೇ. 30 ರಷ್ಟು ಭಾಗ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಈ ರಫ್ತು ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಜತೆಗೆ ಗ್ಯಾಸ್ ಪೂರೈಕೆಯ ವ್ಯತ್ಯಾಸದಿಂದ ಸಾಕಷ್ಟು ಹೋಟೆಲ್ಗಳು ಬಂದ್ ಆಗಿದ್ದು ಮೊಟ್ಟೆ ಬಳಕೆಯೂ ಕಡಿಮೆಯಾಗಿದೆ.
ಮಾರಿಪಳ್ಳ: ರಸ್ತೆ ವಿಭಜಕದ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಕನಿಷ್ಠ 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಬುಧವಾರ ರಾತ್ರಿ ಸುಮಾರು 12:45 ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಉಡುಪಿ ಮೂಲದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬವನ್ನೇ ಎಳೆದುಕೊಂಡು ಹೋಗಿ ಬಳಿಕ ಪಲ್ಟಿಯಾಗಿದೆ. ಕಾರಿನಲ್ಲಿ ಸುಮಾರು 4 ಮಂದಿ ವಿದ್ಯಾರ್ಥಿನಿಯರು ಹಾಗೂ 3 ಮಂದಿ ವಿದ್ಯಾರ್ಥಿಗಳು ಇದ್ದರು. ಪಲ್ಟಿಯಾದ ಕಾರನ್ನು ಎತ್ತಿ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಾರಿಪಳ್ಳ ಎಂಬಲ್ಲಿ ರಸ್ತೆಯ ವಿಭಜಕಕ್ಕೆ ಏರಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ಕಾರು ಜಖಂಗೊಂಡಿದೆ. ಗಾಯಾಳು ವಿದ್ಯಾರ್ಥಿಗಳನ್ನು ಸ್ಥಳೀಯರ ಸಹಾಯದಿಂದ ತುಂಬೆ ಫಾದರ್ ಮುಲ್ಲರ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಕೊಂಡಿದ್ದಾರೆ.
ಜನಸಂಖ್ಯೆ ಆಧಾರದ ಮೇಲೆ, ಕ್ಷೇತ್ರ ಪುನರ್ವಿಂಗಡನೆ, ನಡೆದು ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ.
ಕೆಎಸ್ಸಾರ್ಟಿಸಿಗೆ ʼಕೇರಳ ಲೀಡರ್ ಶಿಪ್ ಪ್ರಶಸ್ತಿʼ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ)ಗೆ ಪ್ರತಿಷ್ಠಿತ ವಲ್ರ್ಡ್ ಎಚ್ಆರ್ಡಿ ಕಾಂಗ್ರೆಸ್ ಅವಾರ್ಡ್ನ, ಉತ್ತಮ ತರಬೇತಿ ಮತ್ತು ಸಂಘಟನಾ ಅಭಿವೃದ್ಧಿ ವರ್ಗದಲ್ಲಿ ಕೇರಳ ಲೀಡರ್ ಶಿಪ್ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಮ್ಮಿಕೊಂಡಿರುವ ಉತ್ತಮ ತರಬೇತಿ ಕಾರ್ಯಕ್ರಮಗಳಿಗೆ ಉತ್ತಮ ತರಬೇತಿ ಮತ್ತು ಸಂಘಟನಾ ಅಭಿವೃದ್ಧಿ ವರ್ಗದಲ್ಲಿ ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿನ 5 ತರಬೇತಿ ಕೇಂದ್ರಗಳಲ್ಲಿ ವಿವಿಧ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು (ಇಂಧನ ಕ್ಷಮತೆ, ಪುನಃಶ್ಚೇತನ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್. ಪಿ.ಎಂ.ಅಜಯ್ ಯೋಜನೆ ಅಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಭಾರಿ ವಾಹನದ ತರಬೇತಿಯೊಂದಿಗೆ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಉಚಿತ ಚಾಲನಾ ಪರವಾನಗಿ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ಉಚಿತ ಚಾಲನಾ ಪರವಾನಗಿ ವಿತರಣೆ, ಖಾಸಗಿ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ, ಹೊಸದಾಗಿ ಆಯ್ಕೆಗೊಂಡ ಚಾಲಕ-ಕಂ-ನಿರ್ವಾಹಕರಿಗೆ, ಕರಾಸಾ ಪೇದೆಗಳಿಗೆ, ಕಿರಿಯ ಸಹಾಯಕರುಗಳಿಗೆ ವೃತ್ತಿ ಪರಿಚಯ ಹಾಗೂ ಕರ್ತವ್ಯ ಮತ್ತು ಜವಾಬ್ದಾರಿ ತರಬೇತಿ. ಮೇಲ್ವಿಚಾರಕ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಚಾಲಕ ಬೋಧಕರನ್ನು ಘಟಕಗಳಿಗೆ ನಿಯೋಜಿಸಿ ಚಾಲನಾ ಸಿಬ್ಬಂದಿಗಳಿಗೆ ತರಬೇತಿ ಸೇರಿದಂತೆ ವಿವಿಧ ಕಾರ್ಯಗಳನ್ನು ಪರಿಗಣಿಸಿ ಪ್ರತಿಷ್ಠಿತ ವಲ್ರ್ಡ್ ಎಚ್ಆರ್ಡಿ ಕಾಂಗ್ರೆಸ್ ಅವಾರ್ಡ್ನ ಉತ್ತಮ ತರಬೇತಿ ಮತ್ತು ಸಂಘಟನಾ ಅಭಿವೃದ್ಧಿ ವರ್ಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೊಚ್ಚಿನ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜ್ ಆಫ್ ಶಿಪ್ ಟೆಕ್ನಾಲಜಿಯ ನಿರ್ದೇಶಕ ಎಸ್.ಟಿ.ಶ್ರೀಧರನ್ ಅವರು ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಕೆಎಸ್ಸಾರ್ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್., ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲೆ ಎ.ಎಸ್. ಗೀತಾಂಜಲಿ ಮತ್ತಿತರರು ಉಪಸ್ಥಿತರಿದ್ದರು.
ಮೋದಿ ಸರಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಮೋದಿ ಸರಕಾರವು ಕರ್ನಾಟಕಕ್ಕೆ ಮಾಡುತ್ತಿರುವುದು ಅನ್ಯಾಯ ಮಾತ್ರವಲ್ಲ, ನಿಷ್ಕರುಣೆಯ ಕ್ರೌರ್ಯ. ಕರ್ನಾಟಕಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಗೆ ತೋರಿದಷ್ಟು ಕಾಳಜಿಯನ್ನೂ ತೋರುತ್ತಿಲ್ಲ, ಆ ದೇಶಗಳಿಗೆ ಅನುದಾನ ಕೊಡುವಷ್ಟು ಉದಾರತೆಯನ್ನು ಕರ್ನಾಟಕಕ್ಕೆ ತೋರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿರುವ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೋದಿ ಸರಕಾರವು ಕನ್ನಡಿಗರನ್ನು ಶತ್ರುಗಳಂತೆ ಕಾಣುತ್ತಿದೆ, ಪ್ರತಿ ಹಂತದಲ್ಲೂ, ಪ್ರತಿ ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯದ ಸರಣಿ ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 15ನೆ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಿದೆ. ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರದ ಅನ್ಯಾಯದ ದೊಡ್ಡ ಸಾಕ್ಷಿಗುಡ್ಡೆಯನ್ನೂ ಉಳಿಸಿದೆ. ಈ ವಂಚನೆ ಕೇವಲ 15ನೆ ಹಣಕಾಸು ಆಯೋಗದ ಅನುದಾನಕ್ಕೆ ಮಾತ್ರ ಸೀಮಿತವಲ್ಲ, ಬಜೆಟ್ ನಿಂದ ಹಿಡಿದು ನೆರೆ, ಬರ ಪರಿಹಾರಗಳು, ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ ಎಲ್ಲದರಲ್ಲೂ ಕನ್ನಡಿಗರು ಮಲತಾಯಿ ಮಕ್ಕಳೇ ಎಂದು ಪ್ರಿಯಾಂಕ್ ಖರ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಮನರೇಗಾ ಯೋಜನೆಯೂ ಮಾ.31ಕ್ಕೆ ಕೊನೆಯಾಗಿದೆ. ಈ ಯೋಜನೆಯಲ್ಲಿ ಕರ್ನಾಟಕಕ್ಕೆ 1,943 ಕೋಟಿ ರೂ. ಅನುದಾನ ಬಾಕಿ ಇದೆ. ಈ ಅನುದಾನದ ಬಗ್ಗೆ ಇದುವರೆಗೂ ಕೇಂದ್ರ ಸರಕಾರ ಯಾವುದೇ ಸ್ಪಷ್ಟತೆ ನೀಡಿಲ್ಲ, ಎ.1ರಿಂದ ಜನರಿಗೆ ಉದ್ಯೋಗ ಒದಗಿಸಬೇಕಿದ್ದ ವಿಬಿ ಗ್ರಾಮ್ ಜಿ ಯೋಜನೆಯ ಸುಳಿವೂ ಇಲ್ಲ. ಈ ಯೋಜನೆಯ ಜಾರಿಗೆ ನಿಯಮಗಳ ರೂಪುರೇಷೆಯೂ ಸಿದ್ಧವಾಗಿಲ್ಲ. ಇದು ಗ್ರಾಮೀಣ ಜನರ ಕಾನೂನಾತ್ಮಕ ಉದ್ಯೋಗದ ಹಕ್ಕನ್ನು ಕಸಿದಂತಾಗಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದಿ ಪರೀಕ್ಷೆ ಮಾದರಿಯ ಬದಲಾವಣೆಯ ಕುರಿತು ಮೈಕಿನ ಮುಂದೆ ಅಬ್ಬರಿಸುವ ರಾಜ್ಯದ ಬಿಜೆಪಿ ನಾಯಕರು 15ನೆ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಿದ್ದ 15, 583 ಕೋಟಿ ರೂ.ಗಳನ್ನು ವಂಚಿಸಿರುವುದರ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕನ್ನಡಿಗರ ಮತ್ತು ಕನ್ನಡನಾಡಿನ ಪರ ನಿಲ್ಲುವ ಕಾಳಜಿ ಅವರಿಗಿಲ್ಲ, ಮೋಶಾ ಜೋಡಿಯ ಸರ್ವಾಧಿಕಾರವನ್ನು ಪ್ರಶ್ನಿಸುವ ಧೈರ್ಯವಂತೂ ಇಲ್ಲವೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾಜೀವಿ ನರೇಂದ್ರ ಮೋದಿ ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರದ ಬಗ್ಗೆ ಬಗೆಬಗೆಯಲ್ಲಿ ಮಾತನಾಡಿದ್ದರು, ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೊಡಬೇಕಿದ್ದ 6 ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಕೊಟ್ಟಿದ್ದು ಶೂನ್ಯ. ರಾಜ್ಯದ ಬಿಜೆಪಿ ನಾಯಕರು ಮೋದಿಯ ಈ ಆತ್ಮವಂಚನೆ ಮತ್ತು ಮೋಸದ ಆಟವನ್ನು ಪ್ರಶ್ನಿಸಿದ ದಿನವೆ ಅವರು ನಿಜವಾದ ಜನಪರ ರಾಜಕಾರಣಿಗಳಾಗುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
‘ಕ್ಯಾನ್ಸರ್ ಪೀಡಿತರಿಗೆ ಮನೆಯಲ್ಲಿಯೇ ಆರೈಕೆ’ | ಅನಿಮೇಷನ್ ವಿಡಿಯೋ ಲೋಕಾರ್ಪಣೆ ಮಾಡಿದ ದಿನೇಶ್ ಗುಂಡೂರಾವ್
ಬೆಂಗಳೂರು : ಕರುಣಾಶ್ರಯ ಸಂಸ್ಥೆಯು ಕ್ಯಾನ್ಸರ್ ಪೀಡಿತರಿಗೆ ಮನೆಯಲ್ಲಿಯೇ ಉಪಶಮನ ಆರೈಕೆ ನೀಡುವ ಕುರಿತಾಗಿ ಕನ್ನಡದಲ್ಲಿ ಅನಿಮೇಷನ್ ವಿಡಿಯೋಗಳ ಸರಣಿಗಳನ್ನು ನಿರ್ಮಿಸಿದ್ದು, ರಾಜ್ಯದಲ್ಲಿ ಗೃಹ ಆಧಾರಿತ ಉಪಶಮನ ಆರೈಕೆಗೆ ಒತ್ತು ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬುಧವಾರ ಇಲ್ಲಿನ ಆರೋಗ್ಯ ಸೌಧದಲ್ಲಿ ಕರುಣಾಶ್ರಯ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 17 ವಿವಿಧ ಬಗೆಯ ವಿಡಿಯೊ ಸರಣಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 52 ಸಾವಿರ ಮಂದಿ ಕ್ಯಾನ್ಸರ್ ಪೀಡಿತರಿಗೆ ಆರೋಗ್ಯ ಇಲಾಖೆಯಿಂದ ಮನೆ ಆಧಾರಿತ ಚಿಕಿತ್ಸೆ ನೀಡುತ್ತಿದ್ದೇವೆ. ಕ್ಯಾನ್ಸರ್ ಅಂತಿಮ ಹಂತದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು, ಒಂದೇ ಕಡೆ ಮಲಗಿರುವುದರಿಂದ ಹುಣ್ಣು, ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ಗುಣಪಡಿಸಲು ಸಾಧ್ಯವಾಗದಿದ್ದರೂ, ಆರೈಕೆ ಅಗತ್ಯವಿರುತ್ತದೆ. ಆದ್ದರಿಂದ ಮನೆಗಳಲ್ಲಿ ಅವರ ಆರೈಕೆ ಬಗ್ಗೆ ಅರಿವು ಮೂಡಿಸಬೇಕಿದೆ. ಅದಕ್ಕೆ ಈ ವಿಡಿಯೋ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಕ್ಯಾನ್ಸರ್ ರೋಗಿಗಳು ದೀರ್ಘಕಾಲೀನ ಚಿಕಿತ್ಸೆ ಪಡೆದ ನಂತರ ಮನೆಗೆ ಹೋದ ವೇಳೆ ಕುಟುಂಬಸ್ಥರಿಗೆ ಅವರ ಆರೈಕೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿ ಪರಿಣಮಿಸಲಿದೆ. ಆದ್ದರಿಂದ ಮನೆಯಲ್ಲಿ ಸುಲಭವಾಗಿ ಆರೈಕೆ ಮಾಡುವ ಬಗ್ಗೆ 17 ವಿಡಿಯೊಗಳನ್ನು ಸಿದ್ಧಪಡಿಸಲಾಗಿದೆ. ಇದು ಕರುಣಾಶ್ರಮ ಬಿಎಚ್ಟಿ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ, ಕರುಣಾಶ್ರಯ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ನಾಗೇಶ್ ಸಿಮ್ಹಾ, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಮೆನನ್ ಸೇರಿದಂತೆ ಇತರರಿದ್ದರು.
ಕೇರಳ, ತಮಿಳುನಾಡು, ಪುದುಚೇರಿ ಚುನಾವಣೆ; ಮತದಾರರಿಗೆ ವೇತನ ಸಹಿತ ರಜೆ ಘೋಷಣೆ
ಬೆಂಗಳೂರು : ನೆರೆಯ ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ಕಂಡ ರಾಜ್ಯಗಳ ನೋಂದಾಯಿತ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಿ ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದೆ. ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎ.9ರಂದು ಮತ್ತು ಎ.23ರಂದು ಚುನಾವಣೆಗಳು ನಡೆಯಲಿವೆ. ಕರ್ನಾಟಕದ ಸರಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು(ಅನುದಾನಿತ ಸಂಸ್ಥೆಗಳು ಸೇರಿದಂತೆ) ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮ ಹಾಗೂ ಖಾಸಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಆ ರಾಜ್ಯಗಳ ನೊಂದಾಯಿತ ಮತದಾರರಿಗೆ ಮಾತ್ರ ಈ ರಜೆ ಅನ್ವಯವಾಗುತ್ತದೆ. ಖಾಯಂ-ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಅರ್ಹ ನೌಕರರಿಗೆ ‘Negotiable Instrument Act 1881' ಮತ್ತು ‘Representation of People Act, 1951'ರ ಅಡಿಯಲ್ಲಿ ವೇತನ ಸಹಿತ ರಜೆ ಸೌಲಭ್ಯ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್. ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಡಾ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮಜಯಂತಿ, ಗುರುವಂದನಾ ಕಾರ್ಯಕ್ರಮ
ತುಮಕೂರು : ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಭೌತಿಕವಾಗಿ ನಮ್ಮ ನಡುವೆ ಇಲ್ಲವಾದರೂ ಅವರ ಮಾಡಿದ ಸಮಾಜ ಸೇವೆ, ಇನ್ನೂ ನೂರು ವರ್ಷಗಳೂ ಕಳೆದರೂ ಸಮಾಜವನ್ನು ಪೊರೆಯುತ್ತಲೇ ಇರುತ್ತದೆ ಎಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ನಿಜ ಸಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಅತೀವ ಸಂತಸವನ್ನು ಉಂಟು ಮಾಡಿದೆ ಎಂದರು. ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳಂತಹ ಸಂತರೇ ನಮ್ಮ ಸಮಾಜ ಮತ್ತು ರಾಷ್ಟ್ರದ ಆತ್ಮಕ್ಕೆ ರೂಪ ನೀಡಿದ್ದಾರೆ ಎಂದು ನನಗೆ ಅನಿಸುತ್ತದೆ. ನೂರು ವರ್ಷ ಬದುಕಿದೆವು ಎಂಬುದು ಮುಖ್ಯವಲ್ಲ. ನೂರು ವರ್ಷ ಹೇಗೆ ಪರೋಪಕಾರಿಯಾಗಿ ಬದುಕಿದೆವು ಎಂಬುದಕ್ಕೆ ಡಾ.ಶ್ರೀಶಿವಕುಮಾರಸ್ವಾಮೀಜಿಯವರ ಜೀವನವೇ ಉದಾಹರಣೆಯಾಗಿದೆ ಎಂದು ರಾಷ್ಟ್ರಪತಿಯವರು ಅಭಿಮಾನದಿಂದ ನುಡಿದರು. ಡಾ.ಶ್ರೀಶಿವಕುಮಾರಸ್ವಾಮೀಜಿಯವರ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀಮಠದ ಪರಂಪರೆಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಈ ಮಠವು ಅನೇಕ ಗ್ರಾಮೀಣ ಮಕ್ಕಳಿಗೆ ಉಚಿತ ಅನ್ನ, ವಸತಿ ಮತ್ತು ಶಿಕ್ಷಣವನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್ಮೆಂಟ್ನ ಉನ್ನತ ಶಿಕ್ಷಣದವರೆಗೆ ವ್ಯವಸ್ಥೆ ಮಾಡಿರುವುದು ವಿಶೇಷ ಸಂತೋಷದ ಸಂಗತಿ. ಇದಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಶ್ರೀ ಸಿದ್ಧಗಂಗಾ ಆಸ್ಪತ್ರೆಯು ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಠದಿಂದ ಅನ್ನಗಂಗಾ, ಕರುಣೆಗಂಗಾ ಮತ್ತು ಶಿಕ್ಷಣಗಂಗಾ ಎಂಬ ಮೂರು ಮಹಾನ್ ಧಾರೆಗಳ ಮಹಾಸಂಗಮವಾಗಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ವಿ.ಸೋಮಣ್ಣ, ಕರ್ನಾಟಕ ಸರಕಾರದ ಸಚಿವರಾದ ಎಂ.ಬಿ.ಪಾಟೀಲ್, ಲಕ್ಷ್ಮೀಹೆಬ್ಬಾಳ್ಕರ್, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕವು ಪುಣ್ಯಭೂಮಿಯಾಗಿದ್ದು, ಇಲ್ಲಿನ ವೀರಶೈವ ಲಿಂಗಾಯತ ಮಠಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ. ಹಿರಿಯ ಶ್ರೀಗಳು 111ವರ್ಷಗಳ ಕಾಲ ಕಠಿಣ ಹಾದಿಯಲ್ಲಿ ಸಾಗಿ, ಗ್ರಾಮಾಂತರ ಭಾಗದ ಮಕ್ಕಳು ಶಿಕ್ಷಣವಂತರಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಅವರ ಶ್ರಮದಿಂದಾಗಿ ಸಿದ್ದಗಂಗಾ ಮಠ ವಿಶ್ವಮಾನ್ಯತೆ ಪಡೆದಿದೆ,ಬುಡಕಟ್ಟು ಸಮುದಾಯದಿಂದ ಬಂದು ದೇಶದ ಉನ್ನತ ಸ್ಥಾನಕ್ಕೇರಿರುವ ರಾಷ್ಟ್ರಪತಿಯವರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. -ಶ್ರೀಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ, ತುಮಕೂರು ತುಮಕೂರಿನ ಸಿದ್ದಗಂಗಾಮಠದ ಜವಾಬ್ದಾರಿ ಹೊತ್ತ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹವನ್ನು ಸಾಕಾರಗೊಳಿಸಿದರು. ಸಿದ್ದಗಂಗಾ ಮಠವು ಶಿಸ್ತು, ಸರಳತೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಸಿದ್ದಲಿಂಗ ಸ್ವಾಮೀಜಿಯವರು ಕೂಡ ಹಿರಿಯ ಶ್ರೀಗಳ ದಾರಿಯಲ್ಲೇ ಮಠವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. -ಡಾ.ಜಿ.ಪರಮೇಶ್ವರ್, ಗೃಹ ಸಚಿವ
IPL 2026 | ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂ. ದಂಡ
ನ್ಯೂ ಚಂಡೀಗಢ, ಎ. 1: ಗುಜರಾತ್ ಟೈಟಾನ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವುದಕ್ಕಾಗಿ ಅದರ ನಾಯಕ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಮೂರು ವಿಕೆಟ್ ಗಳಿಂದ ಸೋಲಿಸಿದೆ. “ನಿಧಾನಗತಿಯ ಓವರ್ಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ 2.22 ವಿಧಿಯನ್ವಯ, ಇದು ಅವರ ತಂಡದ ಈ ಋತುವಿನ ಮೊದಲ ಅಪರಾಧವಾಗಿರುವುದರಿಂದ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.
40 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆ ಇರಾಕ್ ಅರ್ಹತೆ
ಇಟಲಿ ಸತತ ಮೂರನೇ ಬಾರಿ ಹೊರಗೆ
ವಿಜಯನಗರ | ತುಂಗಭದ್ರಾ ಜಲಾಶಯದಲ್ಲಿ ಅತಿಕ್ರಮಣಕ್ಕೆ ಕಠಿಣ ಎಚ್ಚರಿಕೆ : ಡ್ಯಾಂ ಕಾರ್ಯದರ್ಶಿ ಓ.ಆರ್.ವಿ.ರೆಡ್ಡಿ
ವಿಜಯನಗರ (ಹೊಸಪೇಟೆ) : ತುಂಗಭದ್ರಾ ಜಲಾಶಯದ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆ ಪ್ರದೇಶವು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳ ಜಂಟಿ ಆಸ್ತಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಯಾವುದೇ ಅನಧಿಕೃತ ಅತಿಕ್ರಮಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ವಿ.ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಅಧಿಕೃತ ರಹಸ್ಯಗಳ ಕಾಯ್ದೆ 1923ರ ಅನ್ವಯ ಜಲಾಶಯದ ಪ್ರದೇಶ, ಪವರ್ ಹೌಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ‘ನಿಷೇಧಿತ ಪ್ರದೇಶ’ವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು. ಹೊಸಕೋಟೆ ವ್ಯಾಪ್ತಿಯ 207.41 ಎಕರೆ ಹಾಗೂ ಅಮರಾವತಿ ವ್ಯಾಪ್ತಿಯ 488.74 ಎಕರೆ ಸೇರಿದಂತೆ ಒಟ್ಟು 696.15 ಎಕರೆ ಪ್ರದೇಶ ಮಂಡಳಿಯ ಸ್ವಾಧೀನದಲ್ಲಿದೆ. ಗಾರ್ಡನ್, ಹಿನ್ನೀರು, ನಿಶಾನಿ ಕ್ಯಾಂಪ್, ಅಮರಾವತಿ ಕಾಲೋನಿ ಹಾಗೂ ಹೆಚ್.ಇ.ಎಸ್ ಕಾಲೋನಿ ಪ್ರದೇಶಗಳು ಇದರಲ್ಲಿ ಸೇರಿವೆ. ಪ್ರಸ್ತುತ ಮಂಡಳಿಯ ಜಾಗಕ್ಕೆ ಸಂಬಂಧಿಸಿದಂತೆ ಒಟ್ಟು 23 ಪ್ರಕರಣಗಳು ವಿವಿಧ ಹಂತಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ ಎಂದು ಹೇಳಿದರು. ಇತ್ತೀಚೆಗೆ ಹೊಸಪೇಟೆಯ ಜೆಎಂಎಫ್ಸಿ ನ್ಯಾಯಾಲಯವು ಮಂಡಳಿಯ ಪರವಾಗಿ ಆದೇಶ ನೀಡಿ, ಜಲಾಶಯ ಪ್ರದೇಶದಲ್ಲಿನ ಅತಿಕ್ರಮಣ ತೆರವುಗೊಳಿಸಲು ಅನುಮತಿ ನೀಡಿದೆ. ಆದ್ದರಿಂದ ಮಂಡಳಿಯ ಅನುಮತಿ ಇಲ್ಲದೆ ಯಾವುದೇ ನಿರ್ಮಾಣ ಅಥವಾ ಚಟುವಟಿಕೆ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಅಕ್ರಮ ಅತಿಕ್ರಮಣದಾರರೊಂದಿಗೆ ವ್ಯವಹಾರ ನಡೆಸಬಾರದು ಎಂದು ಮನವಿ ಮಾಡಿದರು. ಕ್ರಸ್ಟ್ ಗೇಟ್ ಕಾಮಗಾರಿ ಅಂತಿಮ ಹಂತಕ್ಕೆ : ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಈಗಾಗಲೇ 22 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜೊತೆಗೆ ಚೈನ್ ಅಳವಡಿಕೆ ಕಾರ್ಯ ಮೇ ಅಂತ್ಯದೊಳಗೆ ಮುಗಿದು, ಜೂನ್ ತಿಂಗಳ ಮುಂಗಾರು ಮಳೆಯ ವೇಳೆಗೆ ಜಲಾಶಯ ಸಂಪೂರ್ಣ ಸಿದ್ಧವಾಗಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
IPL 2026 | ಸಮೀರ್ ರಿಝ್ವಿ ಅರ್ಧಶತಕ, ಡೆಲ್ಲಿಗೆ ಗೆಲುವು
ಲುಂಗಿ ಗಿಡಿ, ನಟರಾಜನ್ ಗೆ ತಲಾ ಮೂರು ವಿಕೆಟ್ ಲಕ್ನೊ, ಎ.1: ವೇಗದ ಬೌಲರ್ ಗಳಾದ ಲುಂಗಿ ಗಿಡಿ (3-27) ಹಾಗೂ ಟಿ. ನಟರಾಜನ್ (3-29) ಅವರ ಮಾರಕ ಬೌಲಿಂಗ್ ಮತ್ತು ಸಮೀರ್ ರಿಝ್ವಿ ಅವರ ಅರ್ಧಶತಕ (ಔಟಾಗದೆ 70 ರನ್, 47 ಎಸೆತ, 5 ಬೌಂಡರಿ, 4 ಸಿಕ್ಸರ್) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಟೂರ್ನಿಯ ಐದನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಮಣಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಆತಿಥೇಯ ಲಕ್ನೊವನ್ನು ಬ್ಯಾಟಿಂಗ್ ಗೆ ಇಳಿಸಿದರು. ಲಕ್ನೊ ತಂಡವು 18.4 ಓವರ್ ಗಳಲ್ಲಿ ಕೇವಲ 141 ರನ್ ಗೆ ಆಲೌಟಾಯಿತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಡೆಲ್ಲಿ ತಂಡವು 17.1 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 145 ರನ್ ಗಳಿಸಿತು. ಡೆಲ್ಲಿ ತಂಡವು 4.3 ಓವರ್ ಗಳಲ್ಲಿ 26 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ರಿಝ್ವಿ ಹಾಗೂ ಟ್ರಿಸ್ಟನ್ ಸ್ಟಬ್ಸ್ (ಔಟಾಗದೆ 39, 32 ಎಸೆತ, 3 ಬೌಂಡರಿ, 1 ಸಿಕ್ಸರ್) ಐದನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 76 ಎಸೆತಗಳಲ್ಲಿ 119 ರನ್ ಸೇರಿಸಿ, ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಮೂರನೇ ಓವರ್ ನಲ್ಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ಲಕ್ನೊ ತಂಡವು 18.4 ಓವರ್ ಗಳಲ್ಲಿ 141 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ನಾಯಕ ರಿಷಭ್ ಪಂತ್ (7 ರನ್) ರನೌಟಾದರು. ಮಾರ್ಕ್ರಮ್ ಕೇವಲ 11 ರನ್ ಗಳಿಸಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಆಯುಷ್ ಬದೋನಿ ಶೂನ್ಯಕ್ಕೆ ನಟರಾಜನ್ ಗೆ ಔಟಾದರು. ನಿಕೊಲಸ್ ಪೂರನ್ 8 ರನ್ ಗಳಿಸಿ ಲುಂಗಿ ಗಿಡಿಗೆ ಕ್ಲೀನ್ಬೌಲ್ಡ್ ಆದರು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 35 ರನ್ ಗಳಿಸಿ ಕುಲದೀಪ್ ಯಾದವ್ ಅವರ ಸ್ಪಿನ್ ಗೆ ಬಲಿಯಾದರು. ಅಬ್ದುಲ್ ಸಮದ್ (36 ರನ್, 25 ಎಸೆತ, 3 ಬೌಂಡರಿ, 1 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಶಹಬಾಝ್ ಅಹ್ಮದ್ ಔಟಾಗದೆ 15 ರನ್ ಗಳಿಸಿದರು. ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಲುಂಗಿ ಗಿಡಿ ಹಾಗೂ ನಟರಾಜನ್ ತಲಾ ಮೂರು ವಿಕೆಟ್ ಗಳನ್ನು ಪಡೆದರು. ಕುಲದೀಪ್ ಯಾದವ್ (2-31) ಹಾಗೂ ಅಕ್ಷರ್ ಪಟೇಲ್ ಉಳಿದ ವಿಕೆಟ್ ಗಳನ್ನು ಉರುಳಿಸಿ ಲಕ್ನೊಗೆ ಕಡಿವಾಣ ಹಾಕಿದರು. ಸಂಕ್ಷಿಪ್ತ ಸ್ಕೋರ್ ಲಕ್ನೊ ಸೂಪರ್ ಜಯಂಟ್ಸ್: 18.4 ಓವರ್ ಗಳಲ್ಲಿ 141 ರನ್ ಗೆ ಆಲೌಟ್ (ಅಬ್ದುಲ್ ಸಮದ್ 36, ಮಿಚೆಲ್ ಮಾರ್ಷ್ 35, ಲುಂಗಿ ಗಿಡಿ 3-27, ನಟರಾಜನ್ 3-29, ಕುಲದೀಪ್ 2-31) ಡೆಲ್ಲಿ ಕ್ಯಾಪಿಟಲ್ಸ್: 17.1 ಓವರ್ ಗಳಲ್ಲಿ 145/4 (ಸಮೀರ್ ರಿಝ್ವಿ ಔಟಾಗದೆ 70, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 39, ಪ್ರಿನ್ಸ್ ಯಾದವ್ 2-20)
ಅಮರಾವತಿ ಆಂಧ್ರಪ್ರದೇಶದ ರಾಜಧಾನಿ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ಹೊಸದಿಲ್ಲಿ, ಎ.1: ಲೋಕಸಭೆಯು ಬುಧವಾರ ಆಂಧ್ರಪ್ರದೇಶ ಪುನರ್ರಚನೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸುವ ಮೂಲಕ ಅಮರಾವತಿಯನ್ನು ಆಂಧ್ರಪ್ರದೇಶದ ಏಕೈಕ ಹಾಗೂ ಶಾಶ್ವತ ರಾಜಧಾನಿಯಾಗಿ ಮಾನ್ಯತೆ ನೀಡಿದೆ. ಆಂಧ್ರಪ್ರದೇಶದ ಆಡಳಿತ ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಟಿಡಿಪಿ ಮತ್ತು ಬಿಜೆಪಿ ಮಸೂದೆಯನ್ನು ಬೆಂಬಲಿಸಿವೆ. ಕಾಂಗ್ರೆಸ್ ಕೂಡ ಮಸೂದೆಗೆ ಬೆಂಬಲ ನೀಡಿದರೂ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿದೆ. ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸಿದೆ. ರೈತರ ಹಿತಾಸಕ್ತಿಗಳನ್ನು ರಕ್ಷಿಸದಿದ್ದರೆ ಹಾಗೂ ಅವರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ಸ್ಪಷ್ಟ ಕಾಲಮಿತಿಯನ್ನು ನಿಗದಿಪಡಿಸದಿದ್ದರೆ, ಪ್ರಸ್ತಾವಿತ ಕಾನೂನು ಅರ್ಥಹೀನವಾಗುತ್ತದೆ ಎಂದು ಅದು ಪ್ರತಿಪಾದಿಸಿದೆ.
ಅತ್ಯಾಚಾರ ಆರೋಪ | ಇನ್ಸ್ಪೆಕ್ಟರ್ ಸಂದೇಶ್ ಬಂಧನಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು : ಅತ್ಯಾಚಾರ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್ ಬಂಧನಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್ಐಆರ್ ರದ್ದು ಕೋರಿ ಪಿ.ಜಿ. ಸಂದೇಶ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ಕಾಲ ವಾದ- ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದೂಡಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿಯ ಮುಂದಿನ ವಿಚಾರಣೆಯ ವರೆಗೆ ಇನ್ಸ್ಪೆಕ್ಟರ್ ಸಂದೇಶ್ರನ್ನು ಬಂಧಿಸದಂತೆ ಮಧ್ಯಂತರ ತಡೆ ನೀಡಬೇಕು ಎಂದು ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಪ್ರಕರಣವೇನು?: ಸಂತ್ರಸ್ತ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 376(2)(ಎ)(1), 376(2)(ಎನ್), 384, 506 ಅಡಿ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್ ಪ್ರಾಥಮಿಕ ತನಿಖೆ ಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಕ್ಯೂಬಾದಲ್ಲಿ ಬಿಕ್ಕಟ್ಟು: ಇಂಧನ ಕೊರತೆ ಅಲ್ಲಿ ಯಾವ ರೀತಿ ಪರಿಣಾಮ ಬೀರಿದೆ? ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ?
ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ, ಇಂಧನ ಕೊರತೆ ಮತ್ತು ಬೆಳೆಯುತ್ತಿರುವ ರಾಜಕೀಯ ಅನಿಶ್ಚಿತತೆಯೊಂದಿಗೆ ಕ್ಯೂಬಾ ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹವಾನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ಮೇಲೆ ಯುನೈಟೆಡ್ ಸ್ಟೇಟ್ಸ್ ಒತ್ತಡವನ್ನು ಹೆಚ್ಚಿಸುತ್ತಿರುವುದರಿಂದ ಈ ಬಿಕ್ಕಟ್ಟು ಬಂದಿದೆ. ಶುಕ್ರವಾರವಷ್ಟೇ, ವೆನೆಝುವೆಲಾ ಮತ್ತು ಇರಾನ್ ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಗುರಿ ಕ್ಯೂಬಾ ಎಂಬ ಸುಳಿವು ನೀಡಿದ್ದರು. ನಾನು ಈ ಮಹಾನ್ ಸೈನ್ಯವನ್ನು ನಿರ್ಮಿಸಿದೆ. ನಾನು ಹೇಳಿದೆ, 'ನೀವು ಅದನ್ನು ಎಂದಿಗೂ ಬಳಸಬೇಕಾಗಿಲ್ಲ'. ಆದರೆ ಕೆಲವೊಮ್ಮೆ ನೀವು ಅದನ್ನು ಬಳಸಬೇಕಾಗುತ್ತದೆ. ಕ್ಯೂಬಾ ಮುಂದಿನದು ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಬೆದರಿಕೆಗಳು ಕ್ಯೂಬಾ ನಾಯಕತ್ವದ ಭವಿಷ್ಯದ ಬಗ್ಗೆ ಮತ್ತು ರಾಜಕೀಯ ಬದಲಾವಣೆಯು ಶೀಘ್ರದಲ್ಲೇ ಸಂಭವಿಸಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ► ಕ್ಯೂಬಾದಲ್ಲಿ ಏನಾಗುತ್ತಿದೆ? ವಾಸ್ತವಿಕವಾಗಿ ಅಮೆರಿಕದ ತೈಲ ದಿಗ್ಬಂಧನದ ಮಧ್ಯೆ ಕ್ಯೂಬಾ ಬಿಕ್ಕಟ್ಟು ಎದುರಿಸುತ್ತಿದೆ. ವಿದ್ಯುತ್ ಉತ್ಪಾದಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ನಡೆಸಲು ದ್ವೀಪವು ಆಮದು ಮಾಡಿಕೊಂಡ ತೈಲವನ್ನು ಅವಲಂಬಿಸಿದೆ. ಆದರೆ ಜನವರಿಯಿಂದ ಇಂಧನ ಸಾಗಣೆಗಳು ಹೆಚ್ಚಾಗಿ ನಿಂತುಹೋಗಿವೆ. ವೆನೆಝುವೆಲಾದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ನಂತರ, ಅಧ್ಯಕ್ಷ ಟ್ರಂಪ್ ಜನವರಿ 11 ರಂದು ವೆನೆಝುವೆಲಾದ ತೈಲ ಮತ್ತು ಹಣಕಾಸಿನ ಮೇಲೆ ಸಂಪೂರ್ಣ ನಿರ್ಬಂಧವನ್ನು ಘೋಷಿಸಿದರು. ಈ ಮೂಲಕ ಅದರ ಆಪ್ತ ಮಿತ್ರ ಕ್ಯೂಬಾಗೆ ಜೀವಸೆಲೆಯನ್ನು ಕಡಿತಗೊಳಿಸಿದರು. ನಂತರ ಜನವರಿ 29 ರಂದು, ಕ್ಯೂಬಾಗೆ ಇಂಧನವನ್ನು ಪೂರೈಸುವ ಯಾವುದೇ ದೇಶದ ವಿರುದ್ಧ ಸುಂಕ ವಿಧಿಸುವ ಬೆದರಿಕೆ ಹಾಕುವ ಕಾರ್ಯಕಾರಿ ಆದೇಶವನ್ನು ಅವರು ಹೊರಡಿಸಿದರು. ಅಂದಿನಿಂದ, ಕೇವಲ ಒಂದು ಟ್ಯಾಂಕರ್ ಮಾತ್ರ ದ್ವೀಪವನ್ನು ತಲುಪಿದೆ. ಮಂಗಳವಾರ, 730,000 ಬ್ಯಾರೆಲ್ ತೈಲವನ್ನು ಹೊತ್ತ ರಷ್ಯಾದ ಹಡಗು ಹವಾನಾ ಬಂದರಿಗೆ ಬಂದಿದೆ. ಆದರೆ ಕ್ಯೂಬಾದ ತೈಲ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಒಂದು ಹಡಗು ಸಾಕಾಗಬಹುದೇ ಎಂಬುದು ಸ್ಪಷ್ಟವಾಗಿಲ್ಲ. ದ್ವೀಪದ ಇಂಧನ ಪೂರೈಕೆಯಲ್ಲಿನ ಕೊರತೆಯು ದೇಶಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಮಾರ್ಚ್ ನಲ್ಲಿ ಮಾತ್ರ, ಕ್ಯೂಬಾ ದ್ವೀಪದಾದ್ಯಂತ ಎರಡು ಬಾರಿ ವಿದ್ಯುತ್ ಕಡಿತಗೊಳಿಸುವಿಕೆ ಮತ್ತು ಪ್ರಾದೇಶಿಕ ವಿದ್ಯುತ್ ಕಡಿತವನ್ನು ಎದುರಿಸಿತು. ಅಮೆರಿಕದ ನೀತಿ ಮತ್ತು ಕ್ಯೂಬಾದ ಹಳೆಯ ವಿದ್ಯುತ್ ಗ್ರಿಡ್ನ ಸಮಸ್ಯೆಯೇ ಇದಕ್ಕೆ ಕಾರಣ ಅಂತಾರೆ ವಿಶ್ಲೇಷಕರು. ಇದರಿಂದಾಗಿ ಸುಮಾರು 10 ಮಿಲಿಯನ್ ಕ್ಯೂಬನ್ ಜನರು ಸಂಪೂರ್ಣ ಕತ್ತಲೆಯಲ್ಲಿರುವಂತಾಗಿದೆ. ಇಂಧನ ಕೊರತೆಯು ದ್ವೀಪದಾದ್ಯಂತ ನೀರಿನ ವ್ಯವಸ್ಥೆಗಳು ಮತ್ತು ಆಹಾರ ವಿತರಣೆಯ ಮೇಲೂ ಪರಿಣಾಮ ಬೀರಿದೆ. ಕಸದ ಟ್ರಕ್ ಗಳಿಗೆ ಇಂಧನದ ಕೊರತೆಯಿಂದಾಗಿ ಹವಾನಾದಲ್ಲಿ ಕಸದ ರಾಶಿ ಬೀಳುತ್ತಿದೆ. ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಗಳನ್ನು ಸೀಮಿತಗೊಳಿಸುತ್ತಿವೆ. ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಮಾಡಲಾಗಿದೆ. ಅನೇಕ ಜನರು ಅಡುಗೆ ಮಾಡಲು ಮತ್ತು ನೀರನ್ನು ಬಿಸಿಮಾಡಲು ಕಟ್ಟಿಗೆ ಬಳಸಲಾರಂಭಿಸಿದ್ದಾರೆ. ಪತ್ರಕರ್ತ ಎಡ್ ಆಗಸ್ಟೀನ್ Aljazeeraದ ದಿ ಟೇಕ್ ಗೆ ನೀಡಿದ ಸಂದರ್ಶನದಲ್ಲಿ, ಈ ಬಿಕ್ಕಟ್ಟು ಜೀವನದ ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಹವಾನಾದಲ್ಲಿ, ನಿವಾಸಿಗಳು ದಿನಕ್ಕೆ 15 ಗಂಟೆಗಳವರೆಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಾರೆ, ಆದರೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತವು ಹೆಚ್ಚು ಕಾಲ ಉಳಿಯಬಹುದು. ಕೆಲವೊಮ್ಮೆ ವಿದ್ಯುತ್ ಇಲ್ಲದೆ ಒಂದಿಡೀ ದಿನಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಕ್ಯೂಬನ್ನರು ಅಸಹನೀಯ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಈ ನೀತಿಯನ್ನು ಏನು ಮಾಡಲು ವಿನ್ಯಾಸಗೊಳಿಸಲಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ► ಇಂಧನ ಕೊರತೆಯಿಂದ ಆಗುವ ನಷ್ಟ ಎಷ್ಟು? ಇಂಧನ ಸರಬರಾಜು ಕ್ಷೀಣಿಸುತ್ತಿದ್ದಂತೆ, ಕ್ಯೂಬಾದಲ್ಲಿ ಮನುಷ್ಯರು ಕಂಗಾಲಾಗಬಹುದು ಎಂಬುದರ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಆಗಸ್ಟಿನ್ನಂತಹ ವರದಿಗಾರರು ವಾಷಿಂಗ್ಟನ್ ನ ಆಕ್ರಮಣಕಾರಿ ನಿರ್ಬಂಧಗಳ ಆಡಳಿತದಿಂದ ಸಾವು ಸಂಭವಿಸಬಹುದು, ದೈನಂದಿನ ಜೀವನದ ಮೂಲಭೂತ ಸೌಕರ್ಯಕ್ಕೆ ಹೊಡೆತ ಬೀಳುತ್ತಿದೆ ಎಂದಿದ್ದಾರೆ. ನಿರ್ಬಂಧಗಳು ಕೊಲ್ಲುತ್ತವೆ ಎಂದು ತೋರಿಸುವ ಬಹಳಷ್ಟು ಅಧ್ಯಯನಗಳು ಇವೆ. ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ನಲ್ಲಿ 2025 ರ ಅಧ್ಯಯನವನ್ನು ಸೂಚಿಸಿದ ಅವರು, ಅದು ಪ್ರತಿ ವರ್ಷ 564,000 ಹೆಚ್ಚುವರಿ ಸಾವುಗಳು ಆರ್ಥಿಕ ನಿರ್ಬಂಧಗಳಿಗೆ ಸಂಬಂಧಿಸಿವೆ ಎಂದು ಅಂದಾಜಿಸಿದೆ. ಮಕ್ಕಳು ವಿಶೇಷವಾಗಿ ದುರ್ಬಲರಾಗಿದ್ದಾರೆ ಎಂದು ಆಗಸ್ಟಿನ್ ಹೇಳಿದ್ದಾರೆ. ನಾನು ಕ್ಯೂಬಾದ ವಿವಿಧ ಆಸ್ಪತ್ರೆಗಳಿಗೆ ಹೋಗುತ್ತಿದ್ದೇನೆ. ಈ ವರ್ಷ ಶಿಶು ಮರಣ ಪ್ರಮಾಣ ಹೆಚ್ಚುತ್ತಿದೆ ಎಂದು ಕ್ಯೂಬಾದ ವೈದ್ಯರು ನನಗೆ ಹೇಳುತ್ತಿದ್ದಾರೆ. ಬಸ್ ಗಳಿಲ್ಲದ ಕಾರಣ ಸಿಬ್ಬಂದಿ ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ಇದು ಹೆಚ್ಚುತ್ತಿದೆ. ಸ್ವಚ್ಛತಾ ಕಾರ್ಮಿಕರು ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ಇದು ಹೆಚ್ಚುತ್ತಿದೆ, ಆದ್ದರಿಂದ ಹೆಚ್ಚಿನ ಮಕ್ಕಳು ಮತ್ತು ತಾಯಂದಿರು ಸೆಪ್ಸಿಸ್ನಿಂದ ಬಳಲುತ್ತಿದ್ದಾರೆ. ಪ್ರಸವಪೂರ್ವ ವಿಟಮಿನ್ಗಳು ಮತ್ತು ಫೋಲಿಕ್ ಆಮ್ಲ ತಾಯಂದಿರಿಗೆ ಸಿಗುತ್ತಿಲ್ಲ. ಮಕ್ಕಳಿಗೆ ಹಾಲು ಸಿಗುತ್ತಿಲ್ಲ ಎಂದಿದ್ದಾರೆ ಆಗಸ್ಟಿನ್. ಅಂತರರಾಷ್ಟ್ರೀಯ ಟೀಕೆಗಳನ್ನು ಎದುರಿಸುತ್ತಿರುವ ಟ್ರಂಪ್ ಇತ್ತೀಚಿನ ವಾರಗಳಲ್ಲಿ ತೈಲ ನಿರ್ಬಂಧವನ್ನು ಸಡಿಲಿಸಬಹುದು ಎಂದು ಸೂಚಿಸಿದ್ದಾರೆ. ಇದರಿಂದಾಗಿ ರಷ್ಯಾದ ಹಡಗು ಹವಾನಾ ತಲುಪಲು ಅವಕಾಶ ಮಾಡಿಕೊಟ್ಟಿದೆ. ಮೆಕ್ಸಿಕೊ ಕೂಡ ಕ್ಯೂಬಾಗೆ ತೈಲ ಸಾಗಣೆಯನ್ನು ಪುನರಾರಂಭಿಸಬಹುದು ಎಂದು ಸೂಚಿಸಿದೆ. ► ಕ್ಯೂಬಾ ಮತ್ತು ಅಮೆರಿಕ ಎಷ್ಟು ಸಮಯದಿಂದ ಭಿನ್ನಾಭಿಪ್ರಾಯ ಹೊಂದಿವೆ? ಕ್ಯೂಬಾದೊಂದಿಗಿನ ಪ್ರಸ್ತುತ ಉದ್ವಿಗ್ನತೆಗಳು ಶೀತಲ ಸಮರಕ್ಕಿಂತ ಹಿಂದಿನವು. ಆಗ ಅಮೆರಿಕವು ಅಮೆರಿಕದಾದ್ಯಂತ ಎಡಪಂಥೀಯ ಸರ್ಕಾರಗಳ ವಿರುದ್ಧ ಪ್ರತಿಕೂಲ ನಿಲುವನ್ನು ತೆಗೆದುಕೊಂಡಿತು. 1950 ರ ದಶಕದಲ್ಲಿ ನಡೆದ ಕ್ಯೂಬನ್ ಕ್ರಾಂತಿಯು ಅಮೆರಿಕ ಬೆಂಬಲಿತ, ಮಿಲಿಟರಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾರಣವಾಯಿತು. 1960 ರ ದಶಕದ ಆರಂಭದ ವೇಳೆಗೆ, ಹವಾನಾದ ಹೊಸ ಕಮ್ಯುನಿಸ್ಟ್ ನಾಯಕತ್ವವನ್ನು ದುರ್ಬಲಗೊಳಿಸಲು ವಿನ್ಯಾಸಗೊಳಿಸಲಾದ ಸಮಗ್ರ ವ್ಯಾಪಾರ ನಿರ್ಬಂಧವನ್ನು ಅಮೆರಿಕ ಕ್ಯೂಬಾಗೆ ವಿಧಿಸಿತ್ತು. ಆಧುನಿಕ ಇತಿಹಾಸದಲ್ಲಿ, ಕನಿಷ್ಠ ಫ್ರೆಂಚ್ ಕ್ರಾಂತಿಯ ನಂತರ, ಕ್ಯೂಬಾವನ್ನು ನಿಷೇಧಿಸುವವರೆಗೆ ಯಾವುದೇ ದೇಶವನ್ನು ನಿಷೇಧಿಸಲಾಗಿಲ್ಲ. ಆದರೆ 2017 ರಿಂದ 2021 ರವರೆಗೆ ತಮ್ಮ ಮೊದಲ ಅವಧಿಯಲ್ಲಿ ಕ್ಯೂಬಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಬಿಗಿಗೊಳಿಸಿದ ಅಧ್ಯಕ್ಷ ಟ್ರಂಪ್ ನಿಂದ ಒತ್ತಡ ತೀವ್ರಗೊಂಡಿದೆ. 2025 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಟ್ರಂಪ್ ಕ್ಯೂಬಾವನ್ನು ಅಮೆರಿಕದ ಭದ್ರತೆಗೆ 'ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆ' ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ದ್ವೀಪವನ್ನು 'ಸ್ವಾಧೀನಪಡಿಸಿಕೊಳ್ಳುವ' ಬೆದರಿಕೆ ಹಾಕಿದ್ದಾರೆ. ಇಂಧನ ದಿಗ್ಬಂಧನವು ಆ ಅಭಿಯಾನದ ಭಾಗವಾಗಿದೆ ಎಂದು ಆಗಸ್ಟೀನ್ ವಿವರಿಸಿದ್ದಾರೆ. ಅಮೆರಿಕ ಉದ್ದೇಶಪೂರ್ವಕವಾಗಿ ಕ್ಯೂಬಾವನ್ನು ಕೈಗಾರಿಕೀಕರಣಗೊಳಿಸುತ್ತಿದೆ ಎಂದ ಅವರು, ಇಂಧನವನ್ನು ಗುರಿಯಾಗಿಸಿಕೊಳ್ಳುವ ಮೂಲಕ ಅಲ್ಲಿನ ಜನ ಜೀವನವು ಅವಲಂಬಿಸಿರುವ ಎಲ್ಲಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ► ಕ್ಯೂಬಾದಲ್ಲಿ ಅಧಿಕಾರ ಯಾರ ಕೈಯಲ್ಲಿದೆ? ಮಿಗುಯೆಲ್ ಡಯಾಜ್-ಕ್ಯಾನೆಲ್ ಕ್ಯೂಬಾದ ಅಧ್ಯಕ್ಷರಾಗಿದ್ದರೂ, ಕ್ಯೂಬಾದಲ್ಲಿ ಅಧಿಕಾರವು ಅಧ್ಯಕ್ಷ ಸ್ಥಾನದೊಂದಿಗೆ ಮಾತ್ರ ಇರುವುದಿಲ್ಲ. ಕ್ಯೂಬಾ ಒಂದೇ ಪಕ್ಷವಾಳುವ ರಾಜ್ಯವಾಗಿದ್ದು, ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆ ಕ್ಯೂಬಾದ ಕಮ್ಯುನಿಸ್ಟ್ ಪಕ್ಷವಾಗಿದೆ. ಇದನ್ನು ಅದರ ಸಂವಿಧಾನದಲ್ಲಿ ರಾಜ್ಯ ಮತ್ತು ಸಮಾಜದ ಪ್ರಮುಖ ಶಕ್ತಿ ಎಂದು ವ್ಯಾಖ್ಯಾನಿಸಲಾಗಿದೆ. ಪ್ರಾಯೋಗಿಕವಾಗಿ, ಇದರರ್ಥ ಪಕ್ಷವು ಸರ್ಕಾರವಲ್ಲ, ದೇಶದ ರಾಜಕೀಯ ದಿಕ್ಕನ್ನು ಹೊಂದಿಸುತ್ತದೆ. ಡಯಾಜ್-ಕ್ಯಾನೆಲ್ ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರೂ, ಅವರು ದೇಶದ ಭವಿಷ್ಯವನ್ನು ನಿರ್ಧರಿಸುವವರಲ್ಲದಿರಬಹುದು ಎಂಬ ಸೂಚನೆಗಳಿವೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಮೆರಿಕ ಮತ್ತು ಕ್ಯೂಬಾ ಪ್ರಸ್ತುತ ಮಾತುಕತೆಗಳಲ್ಲಿವೆ. ಟ್ರಂಪ್ ಆಡಳಿತವು ಡಯಾಜ್-ಕ್ಯಾನೆಲ್ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಇತರ ಪ್ರಬಲ ಕ್ಯೂಬನ್ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ರಾಜಕೀಯವಾಗಿ, ಏನಾಗುತ್ತಿದೆ ಎಂದರೆ ನಾವು ನಿಜವಾದ ಶಕ್ತಿಯನ್ನು, ಕ್ಯೂಬನ್ ಆಡಳಿತದೊಳಗಿನ ನಿಜವಾದ ಅಧಿಕಾರವನ್ನು ನೋಡುತ್ತಿದ್ದೇವೆ; ಅದು ಡಯಾಜ್-ಕ್ಯಾನೆಲ್ ಅಲ್ಲ ಎಂದು ಡಲ್ಲಾಸ್ನ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಒರ್ಲ್ಯಾಂಡೊ ಪೆರೆಜ್ ಹೇಳಿದ್ದಾರೆ ಎಂದು Aljazeera ಉಲ್ಲೇಖಿಸಿದೆ. ಕ್ಯೂಬಾದ ಕ್ರಾಂತಿಕಾರಿ ನಾಯಕ ದಿವಂಗತ ಫಿಡೆಲ್ ಕ್ಯಾಸ್ಟ್ರೊ ಅವರ ಕುಟುಂಬವು ಸರ್ಕಾರದ ಮೇಲೆ ಗಮನಾರ್ಹವಾದ ಪ್ರಭಾವವನ್ನು ಹೊಂದಿದೆ. ಇದರಲ್ಲಿ ಅವರ ಸಹೋದರ, ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಕೂಡ ಸೇರಿದ್ದಾರೆ. ಕ್ಯೂಬಾದಲ್ಲಿ ನಿಜವಾದ ಶಕ್ತಿ ನಿಜವಾಗಿಯೂ ಕ್ಯಾಸ್ಟ್ರೋ ಕುಟುಂಬದ ಮೇಲೆ ನಿಂತಿದೆ. ಅದು ರೌಲ್ ಕ್ಯಾಸ್ಟ್ರೋ ಮತ್ತು ಅವರ ಕುಟುಂಬ. ಅದೇ ರೀತಿ, ಕ್ಯೂಬಾದ ಆರ್ಥಿಕತೆಯ ಸುಮಾರು 60 ಪ್ರತಿಶತವನ್ನು ನಿಯಂತ್ರಿಸುವ ಮಿಲಿಟರಿ ನಿಯಂತ್ರಿತ ಸಂಘಟನೆಯಾದ GAESA ಕೂಡ ನಿಜವಾದ ಶಕ್ತಿಗಳಲ್ಲಿ ಒಂದಾಗಿದೆ ಎಂದು ಪೆರೆಜ್ ಹೇಳಿದ್ದಾರೆ. ಕ್ಯೂಬಾದಲ್ಲಿ ಸರ್ಕಾರವು ನಾಯಕನನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಅಧ್ಯಕ್ಷರನ್ನು ತೆಗೆದುಹಾಕುವುದು ವ್ಯವಸ್ಥೆಯನ್ನು ಉರುಳಿಸುವುದೆಂದು ಅರ್ಥವಲ್ಲ ಎಂದು ತಜ್ಞರು ಹೇಳಿದ್ದಾರೆ. ► ಅಧ್ಯಕ್ಷರನ್ನು ಪದಚ್ಯುತಗೊಳಿಸಿದರೆ ಏನಾಗುತ್ತದೆ? ಕ್ಯೂಬಾದ 2019 ರ ಸಂವಿಧಾನದ ಅಡಿಯಲ್ಲಿ, ಅಧ್ಯಕ್ಷರು ರಾಜೀನಾಮೆ ನೀಡಿದರೆ, ಪದಚ್ಯುತಗೊಂಡರೆ, ಮರಣಹೊಂದಿದರೆ ಅಥವಾ ಅಧಿಕಾರದಲ್ಲಿ ಮುಂದುವರಿಯಲು ಅಸಮರ್ಥರಾಗಿದ್ದರೆ ಅವರನ್ನು ಬದಲಾಯಿಸಬಹುದು. ಆ ಸಂದರ್ಭದಲ್ಲಿ, ಉಪಾಧ್ಯಕ್ಷರು — ಪ್ರಸ್ತುತ ಸಾಲ್ವಡಾರ್ ವಾಲ್ಡೆಸ್ ಮೆಸಾ — ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ನಂತರ ರಾಷ್ಟ್ರೀಯ ಅಸೆಂಬ್ಲಿಯು ಉಳಿದ ಅವಧಿಗೆ ಸೇವೆ ಸಲ್ಲಿಸಲು ಹೊಸ ಅಧ್ಯಕ್ಷರನ್ನು ನೇಮಿಸುತ್ತದೆ. ► ಮಿಗುಯೆಲ್ ಡಯಾಜ್-ಕ್ಯಾನೆಲ್ ಎಷ್ಟು ಜನಪ್ರಿಯರಾಗಿದ್ದಾರೆ? ಡಯಾಜ್-ಕ್ಯಾನೆಲ್ 2018 ರಲ್ಲಿ ಅಧ್ಯಕ್ಷರಾದರು. 1959 ರಿಂದ ಕ್ಯಾಸ್ಟ್ರೋ ಅಲ್ಲದ ಮೊದಲ ಕ್ಯೂಬನ್ ನಾಯಕರಾಗಿದ್ದಾರೆ ಕ್ಯಾನೆಲ್. ಆದರೆ ಅವರ ಅಧಿಕಾರವಧಿಯು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿದ ಬಿಕ್ಕಟ್ಟುಗಳ ಸರಣಿಯಿಂದ ಗುರುತಿಸಲ್ಪಟ್ಟಿದೆ. 2019 ರಲ್ಲಿ ಟ್ರಂಪ್ ಆಡಳಿತವು ನಿರ್ಬಂಧಗಳನ್ನು ಬಿಗಿಗೊಳಿಸಿದ ನಂತರ ಮತ್ತು 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಅದರ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾದ ಕ್ಯೂಬಾದ ಪ್ರವಾಸೋದ್ಯಮಕ್ಕೆ ಕೊಟ್ಟ ಹೊಡೆತದಿಂದ ಅಮೆರಿಕದೊಂದಿಗಿನ ಸಂಬಂಧಗಳು ಹದಗೆಟ್ಟವು. ಆದಾಗ್ಯೂ, ಡಯಾಜ್-ಕ್ಯಾನೆಲ್ ನ ಸಾರ್ವಜನಿಕ ಇಮೇಜ್ ಗೆ ಹೆಚ್ಚು ಹಾನಿ ಮಾಡಿದ್ದು ಜುಲೈ 2021 ರಲ್ಲಿ ನಡೆದ ಆರ್ಥಿಕ ಸಂಕಷ್ಟದ ಬಗ್ಗೆ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳು. 1959 ರಿಂದೀಚೆಗೆ ನಡೆದ ಅತಿದೊಡ್ಡ ಪ್ರತಿಭಟನೆಗಳಲ್ಲಿ ಈ ಪ್ರತಿಭಟನೆಗಳು ಸೇರಿವೆ. ಡಯಾಜ್-ಕ್ಯಾನೆಲ್ ಸರ್ಕಾರವು ಕಠಿಣ ಕ್ರಮದೊಂದಿಗೆ ಇದನ್ನು ಹಿಮ್ಮೆಟ್ಟಿಸಿ, ನೂರಾರು ಪ್ರತಿಭಟನಾಕಾರರನ್ನು ಬಂಧಿಸಿತು. ಅಂದಿನಿಂದ, ಕ್ಯೂಬಾದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಹಣದುಬ್ಬರ, ಪೂರೈಕೆ ಕೊರತೆ ಮತ್ತು ವಿದ್ಯುತ್ ಕಡಿತಗಳು ದೈನಂದಿನ ಜೀವನದ ಭಾಗವಾಗಿದೆ. ಅನೇಕ ಕ್ಯೂಬನ್ನರು ಡಯಾಜ್-ಕ್ಯಾನೆಲ್ ಅವರ ಅವಧಿಯು ದಶಕಗಳಲ್ಲಿ ದೇಶದ ಅತ್ಯಂತ ಕಠಿಣ ಆರ್ಥಿಕ ಅವಧಿಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ಪ್ರಸ್ತುತ ಸರ್ಕಾರವು ಹೆಚ್ಚು ಜನಪ್ರಿಯವಾಗಿಲ್ಲ. ಕಳೆದ ಐದು ಅಥವಾ ಆರು ವರ್ಷಗಳಲ್ಲಿ ನಾವು ಗಮನಾರ್ಹ ವಲಸೆ ಪರಿಸ್ಥಿತಿಯನ್ನು ನೋಡಿದ್ದೇವೆ. ಕ್ಯೂಬಾ ತನ್ನ ಜನಸಂಖ್ಯೆಯ ಸರಿಸುಮಾರು 10ನೇ ಒಂದು ಭಾಗವನ್ನು ಕಳೆದುಕೊಂಡಿದೆ, ಇದು 1960 ರ ದಶಕದಿಂದ ಕಾಣದ ವಲಸೆ ಎಂದು ಪೆರೆಜ್ ಹೇಳಿದ್ದಾರೆ. ಪ್ರತಿಭಟನೆಗಳು ಇನ್ನೂ ನಿಂತಿಲ್ಲ ಎಂದಿದ್ದಾರೆ. ಮಾರ್ಚ್ 14 ರಂದು, ಮೊರೊನ್ ನಗರದಲ್ಲಿ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಸರ್ಕಾರ ದೃಢಪಡಿಸಿದೆ. ನಿವಾಸಿಗಳು ಕ್ಯಾಸೆರೋಲಾಜೊ ಎಂಬ ಪ್ರತಿಭಟನಾ ಸಂಪ್ರದಾಯದ ಭಾಗವಾಗಿ ರಾತ್ರಿಯಲ್ಲಿ ಮಡಿಕೆಗಳು ಮತ್ತು ಹರಿವಾಣಗಳನ್ನು ಬಡಿಯುವುದನ್ನು ಮುಂದುವರೆಸಿದ್ದಾರೆ. ► ಡಯಾಜ್-ಕ್ಯಾನೆಲ್ ಅವರನ್ನು ಬದಲಾಯಿಸಬಹುದೇ? ಕ್ಯೂಬಾದ ಅಧ್ಯಕ್ಷರನ್ನು ಬದಲಾಯಿಸುವುದು ಸಾಧ್ಯ ಎಂದು ವಿಶ್ಲೇಷಕರು ಹೇಳುತ್ತಾರೆ. ನೀವು ಸುಲಭವಾಗಿ ಡಯಾಜ್-ಕ್ಯಾನೆಲ್ ಅವರನ್ನು ಬದಲಾಯಿಸಬಹುದು. ಅದು ಏನನ್ನೂ ಬದಲಾಯಿಸುವುದಿಲ್ಲ ಎಂದು ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಕ್ಯೂಬನ್ ಸಂಶೋಧನಾ ಸಂಸ್ಥೆಯ ಮಧ್ಯಂತರ ನಿರ್ದೇಶಕ ಸೆಬಾಸ್ಟಿಯನ್ ಅರ್ಕೋಸ್ ಹೇಳಿದ್ದಾರೆ. ಆ ಸ್ಥಾನವು ಟೊಳ್ಳಾಗಿದೆ. ಕ್ಯೂಬಾ ನಿಜವಾಗಿಯೂ ಮಿಲಿಟರಿ ನಡೆಸುವ ವ್ಯವಸ್ಥೆಯಾಗಿದೆ. ಡಯಾಜ್-ಕ್ಯಾನೆಲ್ ಅವರನ್ನು ಬದಲಾಯಿಸಿದರೆ, ಮುಂದಿನ ಅಧ್ಯಕ್ಷರು ಈಗಾಗಲೇ ದೇಶವನ್ನು ಆಳುತ್ತಿರುವ ರಾಜಕೀಯ ಮತ್ತು ಮಿಲಿಟರಿ ಸ್ಥಾಪನೆಯ ಒಳಗಿನಿಂದ ಬರುವ ಸಾಧ್ಯತೆಯಿದೆ. ► ಅವರ ಸ್ಥಾನವನ್ನು ಯಾರು ತುಂಬಬಹುದು? ಅಧ್ಯಕ್ಷ ಡಯಾಜ್-ಕ್ಯಾನೆಲ್ ಅವರ ಸಂಭಾವ್ಯ ಉತ್ತರಾಧಿಕಾರಿಗಳಾಗಿ ಕ್ಯಾಸ್ಟ್ರೋ ಕುಟುಂಬದ ಇಬ್ಬರು ಸೋದರಸಂಬಂಧಿಗಳತ್ತ ಗಮನ ಹರಿಸಲಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ ಕುಟುಂಬದ ಹೊರಗಿನಿಂದಲೂ ಮೂರನೇ ಆಯ್ಕೆಯ ಸಾಧ್ಯತೆಯೂ ಇದೆ. ಉತ್ತರಾಧಿಕಾರಿಗಳಾಗಲು ಸಾಧ್ಯತೆ ಇರುವವರು. ► ಆಸ್ಕರ್ ಪೆರೆಜ್-ಒಲಿವಾ ಫ್ರಾಗ ರೌಲ್ ಕ್ಯಾಸ್ಟ್ರೋ ಅವರ ಸೋದರಳಿಯ ಆಸ್ಕರ್ ಪೆರೆಜ್-ಒಲಿವಾ ಫ್ರಾಗ ಅವರು ಮೇಲ್ದರ್ಜೆಗೇರಿದ್ದಾರೆ. ಕೆಲವು ವರ್ಷಗಳ ಹಿಂದೆ ತೆರೆಮರೆಯಲ್ಲಿದ್ದ ಅವರು, ಅಕ್ಟೋಬರ್ನಲ್ಲಿ ಉಪ ಪ್ರಧಾನ ಮಂತ್ರಿಯಾಗಿ ಬಡ್ತಿ ಪಡೆಯುವ ಮೊದಲು, ಮೇ 2024 ರಲ್ಲಿ ವಿದೇಶಿ ವ್ಯಾಪಾರ ಮತ್ತು ಹೂಡಿಕೆ ಸಚಿವಾಲಯವನ್ನು ವಹಿಸಿಕೊಂಡರು. ಮುಖ್ಯ ವಿಷಯವೆಂದರೆ ಅವರು ಮಿಲಿಟರಿ ಸಂಘಟನೆಯಾದ GAESA ಒಳಗೆ ವರ್ಷಗಳ ಕಾಲ ಕಳೆದಿದ್ದಾರೆ. ಅವರು ಕ್ಯಾಸ್ಟ್ರೋ ಕುಟುಂಬದವರು, ಆದರೆ ಆ ಹೆಸರನ್ನು ಹೊಂದಿಲ್ಲ. ಇದು ಆಡಳಿತವು ಕುಟುಂಬ ರಾಜವಂಶದಂತೆ ಕಾಣಿಸಿಕೊಳ್ಳದೆ ಜಗತ್ತಿಗೆ ತಾಂತ್ರಿಕ ಇಮೇಜ್ ಅನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಪೆರೆಜ್ ಹೇಳಿದ್ದಾರೆ. ಪೆರೆಜ್-ಒಲಿವಾ ಫ್ರಾಗ ಕ್ಯೂಬಾದ ಆರ್ಥಿಕ ತೆರೆಯುವಿಕೆಯ ಸಾರ್ವಜನಿಕ ಮುಖವಾಗಲು ಸಹ ಉತ್ತಮ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಅವರು ದೇಶದ ಹೊರಗೆ ವಾಸಿಸುವ ಕ್ಯೂಬನ್ನರು ದ್ವೀಪದಲ್ಲಿನ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುವ ಒಂದು ಉನ್ನತ-ಹಕ್ಕುಗಳ ಉಪಕ್ರಮವನ್ನು ಮುನ್ನಡೆಸಿದರು, ಇದು ಹಿಂದೆ ಬಹಳ ನಿರ್ಬಂಧಿತವಾಗಿತ್ತು. ಆದರೆ ಪೆರೆಜ್-ಒಲಿವಾ ಫ್ರಾಗ ಅವರ ನೇತೃತ್ವದ ಸರ್ಕಾರವು ಕ್ಯೂಬನ್ ಮಿಲಿಟರಿ ಹೆಚ್ಚಿನ ಪ್ರಭಾವವನ್ನು ಹೊಂದಿರುವ ಯಥಾಸ್ಥಿತಿಯಿಂದ ನಿರ್ಗಮಿಸುತ್ತದೆಯೇ ಎಂದು ಪೆರೆಜ್ನಂತಹ ವಿಶ್ಲೇಷಕರು ಪ್ರಶ್ನಿಸುತ್ತಾರೆ. ► ರೌಲ್ ಗಿಲ್ಲೆರ್ಮೊ ರೊಡ್ರಿಗಸ್ ಕ್ಯಾಸ್ಟ್ರೋ ಅಧ್ಯಕ್ಷ ಸ್ಥಾನಕ್ಕೆ ಏರುವ ಮತ್ತೊಬ್ಬ ಸ್ಪರ್ಧಿ ರೌಲ್ ಗಿಲ್ಲೆರ್ಮೊ ರೊಡ್ರಿಗಸ್ ಕ್ಯಾಸ್ಟ್ರೋ, ಅವರನ್ನು ರೌಲಿಟೊ ಅಥವಾ ಲಿಟಲ್ ರೌಲ್ ಎಂದು ಕರೆಯಲಾಗುತ್ತದೆ. ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಅವರ ಮೊಮ್ಮಗ ರೌಲಿಟೊ, ಕ್ಯೂಬಾ ಸರ್ಕಾರದಲ್ಲಿ ಎಂದಿಗೂ ಮಂತ್ರಿ ಹುದ್ದೆಯನ್ನು ಅಲಂಕರಿಸಿಲ್ಲ. ಆದರೆ ಅವರು ತಮ್ಮ ಅಜ್ಜನ ಅಂಗರಕ್ಷಕರಾಗಿ ಮತ್ತು ನಂತರ ಕ್ಯೂಬಾದ ಯುಎಸ್ ಸೀಕ್ರೆಟ್ ಸರ್ವಿಸ್ ಗೆ ಸಮಾನವಾದ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಕಡಿಮೆ ರಾಜಕೀಯ ಪ್ರೊಫೈಲ್ ಇದ್ದರೂ, ಕ್ಯೂಬಾದ ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಯನ್ನು ತೆರೆಯುವ ಬಗ್ಗೆ ಚರ್ಚೆಗಳಲ್ಲಿ ಅವರು ಪ್ರಮುಖ ಸಂವಾದಕರಾಗಿ ಹೊರಹೊಮ್ಮಿದ್ದಾರೆ ಎಂದು ವರದಿಯಾಗಿದೆ. ಆಕ್ಸಿಯೋಸ್ ಪ್ರಕಟಣೆಯು ಫೆಬ್ರವರಿಯಲ್ಲಿ ರೌಲಿಟೊ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಪ್ರಮುಖ ಸಂಪರ್ಕ ಹೊಂದಿದ್ದರು ಎಂದು ಮೊದಲು ವರದಿ ಮಾಡಿತ್ತು. ಅವರು ಕ್ಯೂಬಾ ಸರ್ಕಾರವನ್ನು ಪರಿವರ್ತಿಸುವುದನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ. ಆದಾಗ್ಯೂ, ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಆರ್ಕೋಸ್ ಸೇರಿದಂತೆ ಕೆಲವು ವಿಶ್ಲೇಷಕರು ರೌಲಿಟೊ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ ಎಂದು ನಂಬುತ್ತಾರೆ. ರೌಲಿಟೊ ಮಾತುಕತೆಗಳ ಒಂದು ಮಾರ್ಗವಾಗಿದ್ದಾರೆ. ಏಕೆಂದರೆ ಅವರಿಗೆ ರೌಲ್ ಕ್ಯಾಸ್ಟ್ರೋ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಅವರು ಅಮೆರಿಕದ ಜತೆ ಮಾತುಕತೆ ನಡೆಸುತ್ತಿರುವ ಕ್ಯಾಸ್ಟ್ರೋ ಕುಟುಂಬವನ್ನು ಪ್ರತಿನಿಧಿಸುವ ವ್ಯಕ್ತಿ. ಆದರೆ ಅವರು ಪರಿವರ್ತನೆಯನ್ನು ಮುನ್ನಡೆಸಲು ಸರಿಯಾದ ವ್ಯಕ್ತಿಯಲ್ಲ. ಅವರಿಗೆ ಅರ್ಹತೆಗಳಿಲ್ಲ. ಅವರಿಗೆ ಸರ್ಕಾರದಲ್ಲಿ ಅಥವಾ ಮಿಲಿಟರಿಯಲ್ಲಿ ಯಾವುದೇ ಅಧಿಕೃತ ಹುದ್ದೆಯಿಲ್ಲ. ಈ ರೀತಿಯ ಕೆಲಸವನ್ನು ಮಾಡಲು ಅಗತ್ಯವಾದ ಔಪಚಾರಿಕ ಶಿಕ್ಷಣ ಅವರಲ್ಲಿ ಇಲ್ಲ ಎಂದು ಆರ್ಕೋಸ್ ಹೇಳಿದ್ದಾರೆ. ► ರಾಬರ್ಟೊ ಮೊರೇಲ್ಸ್ ಒಜೆಡಾ ಪಕ್ಷದ ಮಾರ್ಗಗಳನ್ನು ಅನುಸರಿಸಿದರೆ ಮತ್ತೊಂದು ಆಯ್ಕೆ ರಾಬರ್ಟೊ ಮೊರೇಲ್ಸ್ ಒಜೆಡಾ ಆಗಿರುತ್ತದೆ. ಸಿಯಾನ್ಫ್ಯೂಗೋಸ್ ನಗರದ ಮಾಜಿ ವೈದ್ಯಕೀಯ ವೃತ್ತಿಪರರಾದ ಮೊರೇಲ್ಸ್ ಒಜೆಡಾ ತಮ್ಮ ವೃತ್ತಿಜೀವನದ ಕೊನೆಯ ಭಾಗವನ್ನು ಕ್ಯೂಬಾ ಸರ್ಕಾರದಲ್ಲಿ ಕಳೆದಿದ್ದಾರೆ. ಅವರು 2010 ರಿಂದ ಎಂಟು ವರ್ಷಗಳ ಕಾಲ ಸಾರ್ವಜನಿಕ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2019 ರಿಂದ 2021 ರವರೆಗೆ ಉಪ ಪ್ರಧಾನ ಮಂತ್ರಿಯಾಗಿದ್ದರು. ಆ ನೇಮಕಾತಿಗಳು ಅವರನ್ನು ರೌಲ್ ಕ್ಯಾಸ್ಟ್ರೋ ಮತ್ತು ಡಯಾಜ್-ಕ್ಯಾನೆಲ್ ಎಂಬ ಇಬ್ಬರು ಅಧ್ಯಕ್ಷರ ಅಡಿಯಲ್ಲಿ ಉನ್ನತ ಮಟ್ಟದ ಸ್ಥಾನಗಳಲ್ಲಿ ಇರಿಸಿದವು. ರಾಬರ್ಟೊ ಮೊರೇಲ್ಸ್ ಒಜೆಡಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿದ್ದು, ಹೆಚ್ಚಿನ ವಿಶ್ಲೇಷಕರು ಅವರನ್ನು ಸಾಂಪ್ರದಾಯಿಕ ಉತ್ತರಾಧಿಕಾರಿ ಎಂದು ಗುರುತಿಸಿದ್ದಾರೆ. ಕ್ಯೂಬಾ ಪ್ರಸ್ತುತ ಅಸಾಧಾರಣ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ಅಮೆರಿಕದಂಥ ಹೊರಗಿನ ಶಕ್ತಿಯಿಂದ ಪ್ರೇರೇಪಿಸಲ್ಪಟ್ಟಿದೆ. ಜೊತೆಗೆ, ದೇಶವನ್ನು ನಡೆಸುವ ಮಿಲಿಟರಿ-ಆರ್ಥಿಕ ವ್ಯವಸ್ಥೆಯೊಂದಿಗೆ ಮೊರೇಲ್ಸ್ ಒಜೆಡಾ ಅವರಿಗೆ ಯಾವುದೇ ನೇರ ಸಂಪರ್ಕವಿಲ್ಲ ಎಂದು ಪೆರೆಜ್ ಹೇಳಿದ್ದಾರೆ. ► ಕ್ಯೂಬಾದಲ್ಲಿ ಮುಂದೇನು? ಆರ್ಥಿಕ ಕುಸಿತ, ವಾಷಿಂಗ್ಟನ್ ಜೊತೆಗಿನ ಮಾತುಕತೆಗಳು ಮತ್ತು ಆಂತರಿಕ ಅಧಿಕಾರ ಹೋರಾಟಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಕ್ಯೂಬಾ ದಶಕಗಳಲ್ಲಿಯೇ ಅತ್ಯಂತ ಅನಿಶ್ಚಿತ ಅವಧಿಯನ್ನು ಪ್ರವೇಶಿಸುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಕ್ಯೂಬಾವನ್ನು ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳತ್ತ ತಳ್ಳಲು ಅಮೆರಿಕ ಪ್ರಯತ್ನಿಸುತ್ತಿದೆ, ಆದರೆ ಕ್ಯೂಬಾದ ಕಮ್ಯುನಿಸ್ಟ್ ನಾಯಕತ್ವವು ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸಂಪೂರ್ಣ ಆರ್ಥಿಕ ಕುಸಿತವನ್ನು ತಡೆಯಲು ಪ್ರಯತ್ನಿಸುತ್ತಿದೆ. ಸುದ್ದಿ ವರದಿಗಳ ಪ್ರಕಾರ, ಸುಧಾರಣೆಗಳನ್ನು ಮಾಡಿ ಡಯಾಜ್-ಕ್ಯಾನೆಲ್ ಅವರನ್ನು ಪದಚ್ಯುತಗೊಳಿಸಿದರೆ ಕ್ಯೂಬಾ ಸರ್ಕಾರವನ್ನು ಬಿಟ್ಟು ಬಿಡಲು ಟ್ರಂಪ್ ಆಡಳಿತವು ಸಿದ್ಧರಿರಬಹುದು ಎಂದು ಸೂಚಿಸಿದೆ. ಇದು ವೆನೆಝುವೆಲಾದಲ್ಲಿ ತನ್ನ ಕಾರ್ಯತಂತ್ರವನ್ನು ಪ್ರತಿಧ್ವನಿಸುತ್ತದೆ. ಅಲ್ಲಿ ಅಮೆರಿಕವು ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ತೆಗೆದುಹಾಕಿತು. ಆದರೆ ಅವರ ಸರ್ಕಾರವನ್ನು ಹಾಗೆಯೇ ಬಿಟ್ಟಿತು. ವೆನೆಝುವೆಲಾ ಶೈಲಿಯ ಪರಿವರ್ತನೆಗಳ ಬಗ್ಗೆ ಸಂಶಯ ವ್ಯಕ್ತಪಡಿಸುವವರಲ್ಲಿ ಪೆರೆಜ್ ಕೂಡ ಒಬ್ಬರು. ಉನ್ನತ ಅಧಿಕಾರಿಗಳನ್ನು ಬದಲಾಯಿಸುವುದು ಸರ್ಕಾರವನ್ನು ಸುಧಾರಿಸುವುದಕ್ಕೆ ಸಮನಲ್ಲ ಎಂದು ಅವರು ವಾದಿಸುತ್ತಾರೆ. ಕ್ಯಾಸ್ಟ್ರೋಗಳು ಡಯಾಜ್-ಕ್ಯಾನೆಲ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಾರೆಯೇ? ಅಥವಾ ಬೇರೆ ಸ್ಥಾನಕ್ಕೆ ಸ್ಥಳಾಂತರಿಸುತ್ತಾರೆಯೇ? ಸಾಧ್ಯತೆ ಇಲ್ಲದೇ ಇಲ್ಲ. ಆದರೆ ಅದು ಆಡಳಿತ ಬದಲಾವಣೆಯಲ್ಲ; ಅದು ಕೇವಲ ಉನ್ನತ ಸ್ಥಾನವನ್ನು ನಿರ್ವಹಿಸುವುದಷ್ಟೇ ಎಂದು ಪೆರೆಜ್ ಹೇಳಿದ್ದಾರೆ. ಏತನ್ಮಧ್ಯೆ, ಹವಾನಾದಲ್ಲಿನ ಸರ್ಕಾರವು ತನ್ನ ರಾಜಕೀಯ ವ್ಯವಸ್ಥೆಯಲ್ಲಿನ ಬದಲಾವಣೆಗಳಿಗೆ ಮಾತುಕತೆಗೆ ಸಿದ್ಧವಿಲ್ಲ ಎಂಬುದನ್ನು ಸೂಚಿಸಿದೆ. ಈ ತಿಂಗಳ ಆರಂಭದಲ್ಲಿ, ಉಪ ವಿದೇಶಾಂಗ ಸಚಿವ ಕಾರ್ಲೋಸ್ ಫೆರ್ನಾಂಡಿಸ್ ಡಿ ಕೊಸಿಯೊ ಡಯಾಜ್-ಕ್ಯಾನೆಲ್ ಅವರನ್ನು ತೆಗೆದುಹಾಕುವ ಯಾವುದೇ ಪ್ರಸ್ತಾಪವನ್ನು ಖಂಡಿತವಾಗಿ ತಿರಸ್ಕರಿಸುವುದಾಗಿ ಹೇಳಿದರು. ಸರ್ಕಾರದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ, ಅಮೆರಿಕ ಮಿಲಿಟರಿ ಬಲಪ್ರಯೋಗ ಮಾಡುತ್ತದೆಯೇ? ಅನಿವಾರ್ಯವಲ್ಲ. ಆದರೆ ಸಾಧ್ಯತೆ ಇದೆ. ಕ್ಯಾಸ್ಟ್ರೋ ಕುಟುಂಬವು ಟ್ರಂಪ್ ಆಡಳಿತಕ್ಕೆ ಸಣ್ಣ ರಿಯಾಯಿತಿಗಳನ್ನು ಮಾತ್ರ ನೀಡುವ ಸಾಧ್ಯತೆಯಿದೆ. ಡಯಾಜ್-ಕ್ಯಾನೆಲ್ ಅವರನ್ನು ತೆಗೆದುಹಾಕುವುದು ಅದರ ಚೌಕಾಸಿ ಮಾರ್ಗಗಳಲ್ಲಿ ಒಂದಾಗಿರಬಹುದು ಎಂದು ಅರ್ಕೋಸ್ ಹೇಳಿದ್ದಾರೆ. ಆದರೆ ಟ್ರಂಪ್ ಆಡಳಿತವು ಹೆಚ್ಚಿನದನ್ನು ಬಯಸಿದರೆ, ಅದು ಹೆಚ್ಚು ಆಕ್ರಮಣಕಾರಿ ವಿಧಾನವನ್ನು ಆಶ್ರಯಿಸಬೇಕಾಗಬಹುದು. ಆದಾಗ್ಯೂ, ಇದೀಗ ಪ್ರಮುಖ ರಾಜಕೀಯ ಬದಲಾವಣೆ ಸನ್ನಿಹಿತವಾಗಿ ಕಾಣುತ್ತಿಲ್ಲ. ಅಮೆರಿಕ ಪ್ರಸ್ತುತ ಇರಾನ್ ಜೊತೆಗಿನ ಸಂಘರ್ಷದಲ್ಲಿ ತೊಡಗಿಕೊಂಡಿದೆ. ಆ ಯುದ್ಧ ಪೂರ್ಣಗೊಳ್ಳುವವರೆಗೆ ಕ್ಯೂಬಾ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದು ಟ್ರಂಪ್ ಸೂಚಿಸಿದ್ದಾರೆ. ಕ್ಯೂಬಾದಲ್ಲಿ ಶಾಶ್ವತ ಬದಲಾವಣೆಯನ್ನು ಉಂಟುಮಾಡಲು ಬಲಪ್ರಯೋಗಕ್ಕಿಂತ ಹೆಚ್ಚಾಗಿ ತೊಡಗಿಸಿಕೊಳ್ಳುವುದು ಅತ್ಯುತ್ತಮ ಆಯ್ಕೆಯಾಗಿರಬಹುದು ಎಂದು ಪೆರೆಜ್ ವಾದಿಸುತ್ತಾರೆ. ಕ್ಯೂಬಾ ವಿರುದ್ಧದ ದೀರ್ಘಕಾಲೀನ ಯುಎಸ್ ನಿರ್ಬಂಧವನ್ನು ಸಡಿಲಿಸುವುದು ಸುಧಾರಣೆಯನ್ನು ಉತ್ತೇಜಿಸಲು ಒಂದು ಪ್ರಬಲ ಸಾಧನವಾಗಬಹುದು. “ನಿಮ್ಮ ಆಡಳಿತವನ್ನು ಬದಲಾಯಿಸಿ, ನಂತರ ನಾವು ನಿರ್ಬಂಧವನ್ನು ತೆಗೆದುಹಾಕುತ್ತೇವೆ” ಎಂದು ಯುನೈಟೆಡ್ ಸ್ಟೇಟ್ಸ್ ಒತ್ತಾಯಿಸುವ ನಿಲುವಿನಲ್ಲಿದೆ. ಆದರೆ ಕ್ಯೂಬನ್ನರು “ನಿರ್ಬಂಧವನ್ನು ತೆಗೆದುಹಾಕಿ, ನಾವು ಬದಲಾವಣೆಗಳನ್ನು ಮಾಡುತ್ತೇವೆ” ಎನ್ನುತ್ತಾರೆ. ಕ್ಯೂಬಾದ ಜನರು ವಿಭಿನ್ನ ವಿಧಾನವನ್ನು ಸೂಚಿಸುತ್ತಾರೆ. ತಕ್ಷಣದ ಆಡಳಿತ ಬದಲಾವಣೆಯನ್ನು ಒತ್ತಾಯಿಸುವ ಬದಲು, ವ್ಯಾಪಾರ ನಿರ್ಬಂಧವನ್ನು ಕೊನೆಗೊಳಿಸಲು ಯುಎಸ್ ಹಲವಾರು ಷರತ್ತುಗಳು ಮತ್ತು ಮಾನದಂಡಗಳನ್ನು ಜಾರಿಗೆ ತರಬಹುದು ಎಂದು ವಿಶ್ಲೇಷಕ ಪೆರೆಜ್ ಹೇಳಿದ್ದಾರೆ.
ವಿಜಯನಗರ | ಜನಗಣತಿ ಕಾರ್ಯ ನಿಖರವಾಗಿ ನೆರವೇರಿಸಿ : ಡಿಸಿ ಕವಿತಾ ಮನ್ನಿಕೇರಿ ಸೂಚನೆ
ವಿಜಯನಗರ (ಹೊಸಪೇಟೆ) : ಮುಂಬರುವ ಜನಗಣತಿ ಕಾರ್ಯವನ್ನು ನಿಖರ ಹಾಗೂ ಸ್ಪಷ್ಟ ಮಾಹಿತಿಯೊಂದಿಗೆ ವ್ಯವಸ್ಥಿತವಾಗಿ ದತ್ತಾಂಶ ಸಂಗ್ರಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ನಗರದ ಪಿ.ಡಿ.ಐ.ಟಿ ಕಾಲೇಜಿನಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿ ಗಣತಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವುದರಿಂದ, ಗಣತಿದಾರರು ಮೊಬೈಲ್ ಆಪ್ ಅನ್ನು ಸಮರ್ಪಕವಾಗಿ ಬಳಸಬೇಕು. ತಾಂತ್ರಿಕ ತೊಂದರೆಗಳು ಎದುರಾದಲ್ಲಿ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು. ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಪ್ರಾರಂಭದ 15 ದಿನಗಳ ಕಾಲ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮನೆಮನೆಗೆ ಭೇಟಿ ನೀಡಿ ಸಂಗ್ರಹಿಸುವ ಮಾಹಿತಿ ಶೇ.100ರಷ್ಟು ನಿಖರವಾಗಿರಬೇಕು. ಯಾವುದೇ ಮಾಹಿತಿಯನ್ನು ಅಂದಾಜಿನ ಮೇಲೆ ದಾಖಲಿಸಬಾರದು ಎಂದು ಎಚ್ಚರಿಸಿದರು. ಈ ಗಣತಿ ಕಾರ್ಯಕ್ಕಾಗಿ 27 ಚಾರ್ಜ್ ಅಧಿಕಾರಿಗಳು, 44 ಫೀಲ್ಡ್ ತರಬೇತುದಾರರು, 16 ತಾಂತ್ರಿಕ ಸಹಾಯಕರು, 499 ಮೇಲ್ವಿಚಾರಕರು ಹಾಗೂ 2847 ಗಣತಿದಾರರನ್ನು ನೇಮಕ ಮಾಡಲಾಗಿದೆ. ಒಟ್ಟು 2467 ಹೌಸ್ ಲಿಸ್ಟಿಂಗ್ ಬ್ಲಾಕ್ಗಳನ್ನು ಗುರುತಿಸಲಾಗಿದ್ದು, ಪ್ರತಿಯೊಬ್ಬ ಗಣತಿದಾರರಿಗೆ 250 ಮನೆಗಳ ಜವಾಬ್ದಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಜನಗಣತಿ ದೇಶದ ಭವಿಷ್ಯದ ಜನಕಲ್ಯಾಣ ಯೋಜನೆಗಳಿಗೆ ಬುನಾದಿಯಾಗಿರುವುದರಿಂದ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಕಾರ್ಯನಿರ್ವಹಿಸಬೇಕು. ಪ್ರತಿದಿನದ ಪ್ರಗತಿಯನ್ನು ಪೋರ್ಟಲ್ನಲ್ಲಿ ದಾಖಲಿಸಬೇಕು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜನಗಣತಿ ಜಾಥಾಕ್ಕೆ ಚಾಲನೆ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ 16ನೇ ಜನಗಣತಿ ಜಾಥಾಕ್ಕೆ ಡಿಸಿ ಕವಿತಾ ಮನ್ನಿಕೇರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದರು.
ಹಾರ್ಮುಝ್ ಟೋಲ್ ಯೋಜನೆಗೆ ಇರಾನ್ ಸಂಸದೀಯ ಆಯೋಗ ಅನುಮೋದನೆ
ಟೆಹ್ರಾನ್, ಎ.1: ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಸುಂಕವನ್ನು ವಿಧಿಸುವ ಯೋಜನೆಯನ್ನು ಸಂಸದೀಯ ಆಯೋಗ ಅನುಮೋದಿಸಿದೆ ಎಂದು ಇರಾನ್ ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ. ಯೋಜನೆಯು ಹಣಕಾಸು ವ್ಯವಸ್ಥೆಗಳು ಮತ್ತು ಸುಂಕ ವ್ಯವಸ್ಥೆಗಳು ಹಾಗೂ ಇರಾನ್ ನ ಸಾರ್ವಭೌಮ ಪಾತ್ರವನ್ನು ಕಾರ್ಯಗತಗೊಳಿಸುವ ಜೊತೆಗೆ ಜಲಸಂಧಿಯ ಇನ್ನೊಂದು ಬದಿಯಲ್ಲಿ ಒಮಾನ್ ನೊಂದಿಗೆ ಸಹಕಾರವನ್ನು ಒಳಗೊಂಡಿದೆ ಎಂದು ವರದಿ ಹೇಳಿದೆ. ಇದರ ಜೊತೆಗೆ ` ಅಮೆರಿಕ ಮತ್ತು ಇಸ್ರೇಲ್ ಆಡಳಿತಕ್ಕೆ ಸಂಬಂಧಿಸಿದ ಹಡಗುಗಳು, ಇರಾನ್ ಮೇಲೆ ನಿಷೇಧ ವಿಧಿಸುವ ಇತರ ದೇಶಗಳ ಹಡಗುಗಳು ಜಲಸಂಧಿಯ ಮೂಲಕ ಸಾಗುವುದನ್ನು ನಿಷೇಧಿಸಲಾಗಿದೆ. ಜಾಗತಿಕ ಕಚ್ಚಾತೈಲ ಮತ್ತು LPGಯ 20%ದಷ್ಟು ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತದೆ.
ದೇವನಹಳ್ಳಿ : ತಾಲೂಕಿನ ವಿಜಯಪುರ ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ, ಅಭಯ ಆಂಜನೇಯಸ್ವಾಮಿ ದೇವಾಲಯದ ಮಾಲಕತ್ವದ ವಿಚಾರದ ಕುರಿತು, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿ, ಪೊಲೀಸರು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದಾರೆ. ʼಅಭಯ ಆಂಜನೇಯಸ್ವಾಮಿ ದೇವಾಲಯವನ್ನು, ನಾವು ನಿರ್ಮಾಣ ಮಾಡಿದ್ದೇವೆ. ದಾನಿಗಳು, ಭಕ್ತರ ಸಹಕಾರದಿಂದ ಕೋಟ್ಯಂತರ ರೂ. ಖರ್ಚು ಮಾಡಿದ್ದೇವೆ. ಎರಡು ವರ್ಷಗಳ ಹಿಂದೆ, ಇಲ್ಲಿ ಪೂಜೆ ಮಾಡಲೆಂದು, ಹಾರೋಹಳ್ಳಿಯ ಅರ್ಚಕರೊಬ್ಬರನ್ನು ಇಲ್ಲಿ ನೇಮಕ ಮಾಡಿ, ಎರಡು ವರ್ಷಗಳ ಕಾಲ ಪೂಜೆ ಮಾಡಿ, ದೇವಾಲಯವನ್ನು ಅಭಿವೃದ್ಧಿ ಪಡಿಸಲು ಬಂದಾಗ, ಬಿಟ್ಟುಕೊಡಿ ಎಂದು ಹೇಳಿದ್ದೇವು. ಆದರೆ, ಅರ್ಚಕರು, ಪೂಜಾ ಕೈಂಕರ್ಯಗಳನ್ನು ಮಾಡುವುದು ಬಿಟ್ಟು, ದೇವಾಲಯಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ ಹೇಳಿಕೊಂಡು, ಹೋಮಗಳು ಮಾಡುವುದಕ್ಕೆ ಪ್ರಾರಂಭ ಮಾಡಿ, ಒಂದೊಂದು ಹೋಮಕ್ಕೆ 25 ಸಾವಿರ ನಿಗದಿಗೊಳಿಸಿದ್ದಾರೆ. ಆದ್ದರಿಂದ ನಾವು ಅವರನ್ನು ದೇವಾಲಯದಿಂದ ಹೊರಗೆ ಕಳುಹಿಸಿದ್ದೇವೆʼ ಎಂದು ದೇವಾಲಯ ನಿರ್ಮಾಣ ಮಾಡಿರುವುದಾಗಿ ಪ್ರತಿಪಾದಿಸುವ ಪ್ರಕಾಶ್ ಹೇಳಿದರು. ಅಪಪ್ರಚಾರ ಮಾಡಿದ್ದಾರೆ: ಇಲ್ಲಿ ಪ್ರತಿಷ್ಠಾಪನೆ ಮಾಡಿರುವ ಆಂಜನೇಯಸ್ವಾಮಿ ಮೂರ್ತಿಯನ್ನು ದೇವನಹಳ್ಳಿಗೆ ಸ್ಥಳಾಂತರ ಮಾಡಿ, ಈ ಜಾಗವನ್ನು ಮಾರಾಟ ಮಾಡಲು ಪ್ರಯತ್ನ ನಡೆಸಿದ್ದಾರೆಂದು ಅರ್ಚಕರು ನಮ್ಮ ಮೇಲೆ ಅಪಪ್ರಚಾರ ಮಾಡಿ, ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಾನು, ಯಾವುದೇ ಕಾರಣಕ್ಕೂ ಇಲ್ಲಿಂದ ಮೂರ್ತಿಯನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಪ್ರಕಾಶ್ ಹೇಳಿದರು. ಈ ಕುರಿತು ಮಾತನಾಡಿದ ಅರ್ಚಕ ಲೋಕನಾಥಾಚಾರ್ಯ ಅವರು, ನಾಲ್ಕೈದು ವರ್ಷಗಳಿಂದ ದೇವಾಲಯವನ್ನು ನಾವು ನಡೆಸುತ್ತಿದ್ದೇವೆ. ದೇವಾಲಯದ ಕಮಿಟಿ ಮಾಡಿಕೊಂಡಿದ್ದೇವೆ. ಇಲ್ಲಿ, ಯಾವುದೇ ಪೂಜಾ ಕೈಂಕರ್ಯಗಳು ನಡೆಯಬೇಕಾದರೂ ಭಕ್ತರಿಂದಲೇ ನಡೆಯುತ್ತಿದೆ. ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು.ದೇವಾಲಯ ಕಟ್ಟಿರುವ ಜಾಗ ಪ್ರಕಾಶ್ ಅವರಿಗೆ ಸೇರಿದ್ದಲ್ಲ, ಸರಕಾರಿ ಜಾಗ, ಇಲ್ಲಿನ ಆಂಜನೇಯಸ್ವಾಮಿ ಮೂರ್ತಿಯನ್ನು ಸ್ಥಳಾಂತರ ಮಾಡುವ ಬಗ್ಗೆ, ನಮಗೆ ಅವರೇ ತಿಳಿಸಿದ್ದಾರೆ. ನನಗಿಷ್ಟು ಹಣ ಕೊಟ್ಟರೆ ಎಲ್ಲವೂ ಬಿಟ್ಟುಕೊಡುವುದಾಗಿಯೂ ಹೇಳಿದ್ದರು. ಆದ್ದರಿಂದ ನಾವು ನ್ಯಾಯಾಲಯಕ್ಕೆ ಹೋಗಿ, ತಡೆಯಾಜ್ಞೆ ತಂದಿದ್ದೇವೆ. ನಮಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
Turkey | ಬೆನ್ನಟ್ಟಿದ ಕಾವಲು ಪಡೆ; ವಲಸಿಗರಿದ್ದ ದೋಣಿ ಮುಳುಗಿ 18 ಮಂದಿ ಮೃತ್ಯು
ಅಂಕಾರ, ಎ.1: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ರಬ್ಬರ್ ದೋಣಿ ಬುಧವಾರ ತುರ್ಕಿಯೆ ಬಳಿ ಏಜಿಯನ್ ಸಮುದ್ರದಲ್ಲಿ ಮುಳುಗಿ ಕನಿಷ್ಠ 18 ವಲಸಿಗರು ಸಾವನ್ನಪ್ಪಿದ್ದಾರೆ. ಇತರ 21 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರಾವಳಿ ಕಾವಲು ಪಡೆಗಳು ಬೆನ್ನಟ್ಟಿದಾಗ ಈ ಅಪಘಾತ ಸಂಭವಿಸಿದೆ. ಸುಮಾರು 40 ವಲಸಿಗರಿದ್ದ ದೋಣಿಯನ್ನು ನಿಲ್ಲಿಸಲು ಕರಾವಳಿ ಕಾವಲು ಪಡೆ ಪದೇ ಪದೇ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅತೀ ವೇಗದಿಂದ ಪಲಾಯನ ಮಾಡಲು ಯತ್ನಿಸಿದಾಗ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ನೀರಿನಲ್ಲಿ ಮುಳುಗಿದೆ. ತುರ್ಕಿಯೆ ಜನಪ್ರಿಯ ವಿಹಾರ ತಾಣವಾದ ಬೋಡ್ರಮ್ನ ಕರಾವಳಿ ಬಳಿ ದುರಂತ ಸಂಭವಿಸಿದೆ. ತಕ್ಷಣ ಹೆಲಿಕಾಪ್ಟರ್ ಬಳಸಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 21 ಮಂದಿಯನ್ನು ರಕ್ಷಿಸಲಾಗಿದ್ದು 18 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ.
Ballari | ಸಂಭ್ರಮದಿಂದ ಭಗವಾನ್ ಮಹಾವೀರರ ಜಯಂತಿ ಆಚರಣೆ
ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶತಮಾನೋತ್ಸವ ಶಾಲೆಯಲ್ಲಿ ಜೈನ ಸಮಾಜದ ತೀರ್ಥಂಕರರಾದ ಭಗವಾನ್ ಮಹಾವೀರ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕ ರವಿಕುಮಾರ ಮಾತನಾಡಿ, ಸತ್ಯ, ಅಹಿಂಸೆ, ಉಪವಾಸ, ಅಪರಿಗ್ರಹ ಮೊದಲಾದ ಮೌಲ್ಯಗಳನ್ನು ಬೋಧಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಮಹಾನ್ ಚೇತನ ಭಗವಾನ್ ಮಹಾವೀರರಾಗಿದ್ದಾರೆ ಎಂದು ಹೇಳಿದರು. ಇಂತಹ ಮಹಾನೀಯರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎಸ್.ಸದ್ಯೋಜಾತಪ್ಪ, ಶಿಕ್ಷಕರಾದ ಶಿವನೇಗೌಡರ ರಾಮಪ್ಪ, ಮಂಜುನಾಥ್, ಧನಂಜಯ ರೆಡ್ಡಿ, ದೇವರಾಜ, ಮಾರೇಸ್ ಸೇರಿದಂತೆ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೈಚೀಲ ಖರೀದಿ-ಸರಬರಾಜಿನಲ್ಲಿ ಅಕ್ರಮ ಆರೋಪ; ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್: ಹೈಕೋರ್ಟ್
ಬೆಂಗಳೂರು : ಪರಿಸರ ಸ್ನೇಹಿ, ಬಟ್ಟೆಯ ಕೈಚೀಲಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ.ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ. ಈ ಸಂಬಂಧ ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂಬ ಅರ್ಜಿದಾರರ ಪೂರ್ವಾನುಮತಿ ಕೋರಿಕೆಯನ್ನು ನಿರಾಕರಿಸಿದ್ದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಆದೇಶವನ್ನು ರದ್ದುಗೊಳಿಸಿದೆ. ‘ಈ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ 4 ವಾರಗಳಲ್ಲಿ ನ್ಯಾಯದ ಹಿತದೃಷ್ಟಿಯಿಂದ ತನಿಖೆಗೆ ಪರಮಾದೇಶ ನೀಡಬೇಕು’ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರ ಪರ ಬಿಪಿನ್ ಹೆಗಡೆ ವಾದ ಮಂಡಿಸಿದ್ದರು.
ಕಂಪ್ಲಿಯಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ಸಂಭ್ರಮ
ಬಳ್ಳಾರಿ / ಕಂಪ್ಲಿ : ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ದಿವಂಗತ ಸಜ್ಜನ್ ವೀರಭದ್ರಪ್ಪ ಕುಟುಂಬದ ನೇತೃತ್ವದಲ್ಲಿ ಪರಮಪೂಜ್ಯ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಮಹಾಸ್ವಾಮಿ ಅವರ 119ನೇ ಜಯಂತ್ಯೋತ್ಸವವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಮಾತನಾಡಿ, ಶ್ರೀಗಳು ವೈಯಕ್ತಿಕವಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡು ದುಡಿದ ಮಹಾನ್ ವ್ಯಕ್ತಿ ಎಂದು ಕೊಂಡಾಡಿದರು. ಶೈಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕು ತಂದ ಶಿವಕುಮಾರ ಸ್ವಾಮೀಜಿಯವರ ಕಾಯಕ, ಶ್ರದ್ಧೆ ಹಾಗೂ ಸೇವಾಭಾವ ನಮ್ಮ ಬದುಕಿನ ದಾರಿಯಾಗಬೇಕು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು. ಮೊದಲಿಗೆ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಸಿಹಿ ಹಾಗೂ ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರಪ್ಪ, ಕಂಪ್ಲಿ ಜೆಸಿಐ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ, ಮುಖಂಡರಾದ ಸಜ್ಜನ್ ಶರಣಪ್ಪ, ಸಜ್ಜನ್ ವಿಶ್ವನಾಥ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿಕೊಟ್ರಪ್ಪ, ಜಿ.ಚಂದ್ರೇಶಖರಹಗೌಡ, ಬಿ.ವಿ.ಗೌಡ, ಎಸ್.ಎಂ.ಗುರುಪ್ರಸನ್ನ, ಅರವಿ ಅಮರೇಶಗೌಡ, ಗಡಾದ್ ಪ್ರಸಾದ್, ಇಂದ್ರಜಿತ್ ಸಿಂಗ್, ಸಂತೋಷ್, ರಾಕೇಶ ಬಾಗ್ರಾಚಾ ಸೇರಿದಂತೆ ಇತರರು ಇದ್ದರು.
Belagavi | ಗಾಳಿ-ಮಳೆಗೆ ಕುಸಿದ ತೆಂಗಿನಮರ : ತಾಯಿ-ಪುತ್ರನಿಗೆ ಗಾಯ
ಬೆಳಗಾವಿ : ತಾಲೂಕಿನ ಅನಿಗೋಳ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮ ತೆಂಗಿನಮರ ಮನೆಯ ಮೇಲ್ಛಾವಣಿಗೆ ಕುಸಿದು ತಾಯಿ- ಪುತ್ರ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ನೀಲವ್ವ ರುದ್ರಪ್ಪ ಯಲ್ಲಯ್ಯನವರ (70) ಮತ್ತು ಉಳವಪ್ಪ ರುದ್ರಪ್ಪ ಯಲ್ಲಯ್ಯನವರ (37) ಎಂದು ಗುರುತಿಸಲಾಗಿದೆ. ಘಟನೆಯ ತಕ್ಷಣ ಗ್ರಾಮಸ್ಥರು ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ತಾಯಿ-ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Lebanon | ಇಸ್ರೇಲ್ ದಾಳಿಯಲ್ಲಿ 7 ಮಂದಿ ಮೃತ್ಯು; 24 ಮಂದಿಗೆ ಗಾಯ
ಬೈರುತ್, ಎ.1: ಬೈರುತ್ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಎರಡು ದಾಳಿಗಳಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಬೈರುತ್ ನ ದಕ್ಷಿಣ ಹೊರವಲಯದ ಖಲ್ದೇ ಪ್ರದೇಶದಲ್ಲಿ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಜಾಹ್ನ್ ಪ್ರದೇಶದಲ್ಲಿ ಮತ್ತೊಂದು ವಾಹನದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಹಿರಿಯ ಹಿಜ್ಬುಲ್ಲಾ ಕಮಾಂಡರ್ ಮತ್ತು ಬೈರುತ್ ನಲ್ಲಿ ಇರಾನ್ ಬೆಂಬಲಿತ ಇನ್ನೊಂದು ಗುಂಪಿನ ಹಿರಿಯ ಸದಸ್ಯನನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
NATOದಿಂದ ಹೊರಬರುವುದನ್ನು ಪರಿಗಣಿಸುತ್ತಿದ್ದೇವೆ: ಟ್ರಂಪ್
ವಾಶಿಂಗ್ಟನ್, ಎ.1: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಬೆಂಬಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ NATOದಿಂದ ಹೊರಬರುವುದನ್ನು ಬಲವಾಗಿ ಪರಿಗಣಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. NATO ಸದಸ್ಯತ್ವದ ಬಗ್ಗೆ ಮರುಪರಿಶೀಲನೆ ಮಾಡುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಹೌದು, ಆ ಬಗ್ಗೆ ಬಲವಾಗಿ ಪರಿಗಣಿಸಲಾಗುತ್ತಿದೆ. NATOದಿಂದ ನಾನು ಯಾವತ್ತೂ ಪ್ರಭಾವಿತನಾಗಿಲ್ಲ. ಅವರು ‘ಕಾಗದದ ಹುಲಿ’ ಎಂಬುದು ನನಗೆ ಯಾವಾಗಲೂ ತಿಳಿದಿತ್ತು; ರಷ್ಯ ಅಧ್ಯಕ್ಷ ಪುಟಿನ್ ಗೂ ಅದು ತಿಳಿದಿದೆ” ಎಂದು ಹೇಳಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ಒಳಗೊಳ್ಳಲು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, “ಅವರಿಗೆ ನೌಕಾಪಡೆಯೂ ಇಲ್ಲ, ತುಂಬಾ ವಯಸ್ಸಾಗಿದೆ, ಮತ್ತು ಕೆಲಸ ಮಾಡದ ವಿಮಾನ ವಾಹಕ ನೌಕೆಗಳನ್ನು ಹೊಂದಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಸುರಪುರ | ಮೌಲೀಕರಣ ಕಾಯಿದೆ ವಿರೋಧಿಸಿ ನಿವೃತ್ತ ನೌಕರರ ಪ್ರತಿಭಟನೆ
ಸುರಪುರ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೌಲೀಕರಣ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮುಖಂಡರು ಕಪ್ಪು ಪಟ್ಟಿ ಧರಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ ಮಾತನಾಡಿ, 2025ರ ಮೌಲೀಕರಣ ಕಾಯ್ದೆ ನಿವೃತ್ತ ನೌಕರರು ಹಾಗೂ ಅವರ ಕುಟುಂಬದ ಪಿಂಚಣಿದಾರರಿಗೆ ದೊಡ್ಡ ಆಘಾತ ತಂದಿದೆ ಎಂದು ಆರೋಪಿಸಿದರು. ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಿವೃತ್ತ ನೌಕರರನ್ನು ವರ್ಗೀಕರಿಸುವ ಮೂಲಕ ಪಿಂಚಣಿ ವ್ಯವಸ್ಥೆಯಲ್ಲಿ ಅನ್ಯಾಯ ಉಂಟಾಗುತ್ತಿದೆ. ಇದರಿಂದ ದೇಶದಾದ್ಯಂತ ನಿವೃತ್ತ ನೌಕರರು ಸಂಕಷ್ಟ ಅನುಭವಿಸುವಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪಿಂಚಣಿ ಮುಂದುವರಿಸಬೇಕು ಹಾಗೂ ಇಂತಹ ಕಾಯ್ದೆಗಳನ್ನು ಜಾರಿಗೊಳಿಸಬಾರದು ಎಂದು ಅವರು ಒತ್ತಾಯಿಸಿದರು. ಈ ಪ್ರತಿಭಟನೆ ರಾಜ್ಯದಷ್ಟೇ ಅಲ್ಲದೆ ದೇಶಾದ್ಯಂತ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ವಾಸುದೇವ ಗಂಗೆ ಸೇರಿದಂತೆ ಇತರರು ಮಾತನಾಡಿದರು. ಬಳಿಕ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಹುಸೇನ ಸಾಬ್ ಎ ಸರಕಾವಸ್ ಅವರ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜ ಅಮರಪ್ಪ ರಾಜ, ಹನುಮಂತ ಪೂಜಾರಿ, ಗೂಳಪ್ಪ ಕುಂಬಾರ, ದೇವಿಂದ್ರಪ್ಪ ಬಳಿಚಕ್ರ, ರಾಜ ಪೆದ್ದ ನಾಯಕ ಪ್ಯಾಪಲಿ, ನಾರಾಯಣರಾವ್ ಜೂಜಾರೆ, ದೇವಿಂದ್ರ ಹಾದಿಮನಿ, ಭೀಮರಾಯ ದರಬಾರಿ, ಸಿದ್ದಯ್ಯ ಸ್ವಾಮಿ, ಹಣಮಂತರಾಯ ಕಮತಗಿ, ಎಂ ಎಸ್ ಸಜ್ಜನ್, ಭೀಮಣ್ಣ ಗುಡ್ಡಕಾಯಿ, ಅಮ್ಮಣ್ಣ ತಳವಾರ, ಸೈಯದ್ ಬಂದೆ ಅಲಿ, ನಿಂಗಪ್ಪ ಹಾದಿಮನಿ, ಚಂದ್ರಪ್ಪ ಕಟ್ಟಿಮನಿ, ಸಾಯಿಬಣ್ಣ ರತ್ತಾಳ, ಶ್ರೀನಿವಾಸ ಪಾಣಿಭಾತೆ, ಸುವರ್ಣ ಕಟ್ಟಿಮನಿ, ಭೀಮಣ್ಣ ಉದ್ದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Kerala | ಮಾದಕದ್ರವ್ಯ ವಿರೋಧಿ ಕಾಯ್ದೆಯಡಿ ಕೇರಳದಲ್ಲಿ ಗರಿಷ್ಠ ಪ್ರಕರಣ ದಾಖಲು: ಕೇಂದ್ರ
ಹೊಸದಿಲ್ಲಿ, ಎ.1: 2023ರಲ್ಲಿ ಮಾದಕದ್ರವ್ಯ ಹಾಗೂ ಚಿತ್ತಭ್ರಾಮಕ ಪದಾರ್ಥಗಳ (NDPS) ಕಾಯ್ದೆಯಡಿ ಕೇರಳದಲ್ಲಿ 30,697 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲೇ ಗರಿಷ್ಠವಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ 2,232 ಪ್ರಕರಣಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ ದೇಶಾದ್ಯಂತ NDPS ಕಾಯ್ದೆಯಡಿ 1,20,010 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ರಾಜ್ಯಗಳ ಪೈಕಿ ಕೇರಳದಲ್ಲಿ NDPS ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 2023ರಲ್ಲಿ ಮಹಾರಾಷ್ಟ್ರದಲ್ಲಿ 15,610 ಹಾಗೂ ಪಂಜಾಬ್ ನಲ್ಲಿ 11,589 ಪ್ರಕರಣಗಳು ವರದಿಯಾಗಿವೆ. ತಮಿಳುನಾಡು (10,126) ಮತ್ತು ಉತ್ತರ ಪ್ರದೇಶ (9,387) ಹೆಚ್ಚಿನ ಸಂಖ್ಯೆಯಲ್ಲಿ NDPS ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವ ಇತರ ರಾಜ್ಯಗಳಾಗಿವೆ. ಮಾದಕದ್ರವ್ಯ ಹಾಗೂ ಚಿತ್ತಭ್ರಾಮಕ ಪದಾರ್ಥಗಳ ಬಳಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ನಿಯಂತ್ರಿಸುವ 1985ರ NDPS ಕಾಯ್ದೆಗೆ 2014ರಲ್ಲಿ ತಿದ್ದುಪಡಿ ಮಾಡಲಾಗಿದೆ.
ಸಂಪೂರ್ಣ ಬೌಲರ್ ಗಳ ಪಂದ್ಯವಾಗುವ ಎಲ್ಲಾ ಸೂಚನೆಯಿದ್ದ ವೇಳೆ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಸಮೀರ್ ರಿಝ್ವಿ ಅವರು ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರವನ್ನೇ ಬುಡುಮೇಲು ಮಾಡಿದರು. ಅವರ ಸೊಗಸಾದ ಅರ್ಧ ಶತಕದ ನೆರವಿನಿಮದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಲಖನೌನ ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ 18.4 ಓವರ್ ಗಳಲ್ಲಿ 145 ರನ್ ಗಳನ್ನು ಗಳಿಸಿತು. ಈ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ()ಸಾಧಾರಣ ಮೊತ್ತ ಬೆಂಬತ್ತಿ ಹೊರಟಿದ್ದ ಡೆಲ್ಲಿ ತಂಡ ಒಂದು ಹಂತದಲ್ಲಿ 26 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿತ್ತು. ಅನುಭವಿ ಕೆಎಲ್ ರಾಹುಲ್ ಅವರು ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿ.ನ್ ಮರಳಿದರೆ ಮತ್ತೊಬ್ಬ ಆರಂಭಕಾರ ಪಥುಮ್ ನಿಸ್ಸಾಂಕಾ ಒಂದು ರನ್ ಗಳಿಸಿದ್ದೇ ಸಾಧನೆಯಾಯಿತು. ಕ್ರೀಸ್ ನಲ್ಲಿ ನಿತೇಶ್ ರಾಣಾ ಅವರು ಅವರು 15 ರನ್ ಔಟಾದರು. ನಾಯಕ ಅಕ್ಷರ್ ಪಟೇಲ್ ಅವರು ಸಹ ಗೋಲ್ಡನ್ ಡಕ್ ಆದಾಗ ಡೆಲ್ಲಿ ಕತೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ತ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ 5ನೇ ವಿಕೆಟ್ ಗೆ ಮುರಿಯದ 119 ರನ್ ಗಳ ಜೊತೆಯಾಟ ಆಡಿದ ರಿಝ್ವಿ ಅವರು ತಂಡವನ್ನು ಗೆಲುವಿನ ದಡ ತಲುಪಿಸಿದರು. ಬಹಳ ಜಾಗರೂಕತೆಯಿಂದ ಆಡಿದ ಇವರಿಬ್ಬರು ಎದುರಾಳಿ ಬೌಲರ್ ಗಳಿಗೆ ವಿಕೆಟ್ ಕೀಳಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಲಖನೌ ಬೌಲರ್ ಗಳು ಸಾಂಘಿಕ ಪ್ರಯತ್ನ ನಡೆಸಿದರೂ ಡೆಲ್ಲಿ ಗೆಲುವನ್ನು ತಡೆಯಲು ಸಾಧ್ಯವಾಗಿಲಲ್ಲ. 47 ಎಸೆತಗಳನ್ನು ಎದುರಿಸಿದ ರಿಝ್ವಿ ಅವರು 5 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡಿದ್ದ ಅಜೇಯ 70 ರನ್ ಬಾರಿಸಿದರು. ಇನ್ನು ಸ್ಟಬ್ಸ್ ಅವರು 32 ಎಸೆತಗಳಿಂದ 3 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 39 ರನ್ ಗಳಿಸಿ ನಾಟೌಟ್ ಆಗಿ ಉಳಿದರು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ವೇಗಿಗಳಾದ ಲುಂಗಿ ಎನ್ ಗಿಡಿ ಮತ್ತು ಟಿ ನಟರಾಜನ್ ಅವರ ಮಾರಕ ದಾಳಿಗೆ ಕುಸಿಯಿತು. ಆರಂಭಿಕ ಮಿಚೆಲ್ ಮಾರ್ಷ್(28 ಎಸೆತದಲ್ಲಿ 35) ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಸಮದ್ (25 ಎಸೆತದಲ್ಲಿ 36) ಅವರನ್ನು ಹೊರತುಪಡಸಿದರೆ ಯಾರೂ ಡೆಲ್ಲಿ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಲಿಲ್ಲ. ಹೀಗಾಗಿ ತಂಡ ನಿಗದಿತ ಓವರ್ ಗೆ ಮುಂಚಿತವಾಗಿಯೇ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.
ಇರಾನ್ ಇನ್ನು ಮುಂದೆ ಇಸ್ರೇಲ್ ಗೆ ಅಸ್ತಿತ್ವದ ಬೆದರಿಕೆ ಇಲ್ಲ: ನೆತನ್ಯಾಹು
ಟೆಲ್ ಅವೀವ್, ಎ.1: ಇರಾನ್ ನೊಂದಿಗಿನ ಸಂಘರ್ಷದಲ್ಲಿ ಮಹತ್ವದ ಸಾಧನೆ ಸಾಧಿಸಲಾಗಿದೆ ಮತ್ತು ಇರಾನ್ ಇನ್ನು ಮುಂದೆ ಇಸ್ರೇಲ್ ಗೆ ಅಸ್ತಿತ್ವದ ಬೆದರಿಕೆ ಒಡ್ಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸಂಯೋಜಿತ ಇಸ್ರೇಲ್-ಅಮೆರಿಕ ಪ್ರಯತ್ನವು ಇರಾನ್ ಸರ್ಕಾರವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದ್ದು, ಯಹೂದಿ ರಾಷ್ಟ್ರದ ಮೇಲಿನ ಅಸ್ತಿತ್ವದ ಅಪಾಯವನ್ನು ಕಡಿಮೆ ಮಾಡುತ್ತಿದೆ. ‘ಇಸ್ರೇಲ್ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಇರಾನ್ ಇನ್ನು ಮುಂದೆ ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಗಾಝಾದಲ್ಲಿ ಹಮಾಸ್ ಗೆ, ಲೆಬನಾನ್ ನಲ್ಲಿ ಹಿಜ್ಬುಲ್ಲಾಗೆ, ಯೆಮನ್ ನಲ್ಲಿ ಹೌದಿಗಳಿಗೆ ಭಾರೀ ಹೊಡೆತ ನೀಡಲಾಗಿದೆ. ಕಾರ್ಯಾಚರಣೆಗಳು ಇರಾನ್ ನ ಪರಮಾಣು ಮೂಲಸೌಕರ್ಯ, ಕ್ಷಿಪಣಿ ಉತ್ಪಾದನಾ ಸಾಮರ್ಥ್ಯ, ಆಡಳಿತ ಸಂಸ್ಥೆಗಳು, ಭದ್ರತಾ ಪಡೆಗಳು, ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡಿವೆ’ ಎಂದು ಅವರು ಹೇಳಿದ್ದಾರೆ. ಜೊತೆಗೆ, ಇರಾನ್ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಹೊಸ ಪ್ರಾದೇಶಿಕ ಮೈತ್ರಿಗಳನ್ನು ರೂಪಿಸಲು ಇಸ್ರೇಲ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದೇಹತೂಕ ಕಡಿಮೆಗೊಳಿಸುವ GLP-1 ಔಷಧಿಗಳ ಅನಧಿಕೃತ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸರಕಾರ
ಹೊಸದಿಲ್ಲಿ, ಎ.1: ದೇಹತೂಕವನ್ನು ಕಡಿಮೆಗೊಳಿಸುವ GLP-1 ಆಧಾರಿತ ಔಷಧಿಗಳನ್ನು ಟೈಪ್ 2 ಡಯಾಬಿಟಿಸ್ ಹಾಗೂ ಬೊಜ್ಜು ದೇಹದ ಸಮಸ್ಯೆಗೆ ಚಿಕಿತ್ಸೆಗಾಗಿ ವೈದ್ಯರ ಶಿಫಾರಸಿನ ಮೇರೆಗೆ ಬಳಸಲಾಗುತ್ತದೆ. ಆದರೆ ಅವು ಗಂಭೀರ ಅಡ್ಡಪರಿಣಾಮಗಳನ್ನುಂಟು ಮಾಡಬಹುದಾದ ಕಾರಣ, ಅರ್ಹ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಡಿಯಲ್ಲೇ ಸೇವಿಸಬೇಕು ಎಂದು ಕೇಂದ್ರ ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ. GLP-1 ಔಷಧಿಯ ವಿವಿಧ ರೂಪಗಳು ಭಾರತೀಯ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆಗೊಂಡಿವೆ. ಆದರೆ ರಿಟೇಲ್ ಔಷಧಿ ಮಳಿಗೆಗಳು, ಆನ್ ಲೈನ್ ವೇದಿಕೆಗಳು, ಸಗಟು ಔಷಧಿ ವ್ಯಾಪಾರಿಗಳು ಹಾಗೂ ಆರೋಗ್ಯಕ್ಷೇಮ (ವೆಲ್ ನೆಸ್) ಕ್ಲಿನಿಕ್ ಗಳಲ್ಲಿ ಅವು ಸುಲಭವಾಗಿ ಲಭ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಔಷಧಿಗಳ ಅನಧಿಕೃತ ಮಾರಾಟ ಹಾಗೂ ಪ್ರಚಾರದ ವಿರುದ್ಧ ಶಾಸನಾತ್ಮಕ ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ. ಮುಂದಿನ ವಾರಗಳಲ್ಲಿ ಈ ಕುರಿತು ಕಟ್ಟುನಿಟ್ಟಿನ ತಪಾಸಣೆ ಮತ್ತು ಕಣ್ಗಾವಲು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಿಯಮಗಳನ್ನು ಉಲ್ಲಂಘಿಸುವ ಉದ್ಯಮ ಸಂಸ್ಥೆಗಳ ಲೈಸೆನ್ಸ್ ರದ್ದು, ದಂಡ ವಿಧಿಸುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. GLP-1 ಔಷಧಿಗಳು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದು, ಟೈಪ್ 2 ಡಯಾಬಿಟಿಸ್ ಹಾಗೂ ಬೊಜ್ಜು ದೇಹದ ಚಿಕಿತ್ಸೆಗೆ ಬಳಸಲಾಗುತ್ತಿವೆ. ಇವು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವುದರ ಜೊತೆಗೆ ಹೆಚ್ಚುವರಿ ಗ್ಲುಕಾಗೊನ್ ರಸವನ್ನು ಹತ್ತಿಕ್ಕಿ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಹಸಿವು ಹಾಗೂ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಈ ಔಷಧಿಗಳು ದೇಹತೂಕ ಇಳಿಕೆಗೆ ಸಹಕಾರಿಯಾಗುತ್ತವೆ.
ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ ಕರಡು ನೀತಿ ಪ್ರಕಟ
ಬೆಂಗಳೂರು : ರಾಜ್ಯ ಸರಕಾರವು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಅತಿಯಾದ ಹಾಗೂ ಅಸುರಕ್ಷಿತ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ (ತಂತ್ರಜ್ಞಾನ ಬಳಕೆ)-ಕರ್ನಾಟಕ’ ಎಂಬ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬುಧವಾರ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ನಿಮ್ಹಾನ್ಸ್ ಸಹಯೋಗದಲ್ಲಿ ಈ ಕರಡು ನೀತಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ನೀತಿಯು ವಿದ್ಯಾರ್ಥಿಗಳಿಗೆ ಸುರಕ್ಷಿತ, ಸಮತೋಲಿತ ಮತ್ತು ಮಾನಸಿಕವಾಗಿ ಆರೋಗ್ಯಕರ ಡಿಜಿಟಲ್ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು. ಹೆಚ್ಚು ಸಮಯದ ಸ್ಕ್ರೀನ್ ಬಳಕೆಯಿಂದ ಉಂಟಾಗುವ ಮಾನಸಿಕ ಅನಾರೋಗ್ಯ ಸಮಸ್ಯೆಗಳಾದ ಆತಂಕ, ನಿದ್ದೆ ಹೀನತೆ, ಕಡಿಮೆ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸಾಮಾಜಿಕ ಪ್ರತ್ಯೇಕತೆ ಇತ್ಯಾದಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚುತ್ತಿರುವ ಆನ್ಲೈನ್ ಕಿರುಕುಳ, ಮೋಸ ಮತ್ತು ಆನ್ಲೈನ್ ದುರುಪಯೋಗ ಸೇರಿದಂತೆ ಸೈಬರ್ ಅಪಾಯಗಳ ಬಗ್ಗೆಯೂ ನೀತಿಯಲ್ಲಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಈ ಕರುಡನ್ನು ಆರೋಗ್ಯ ಇಲಾಖೆಯ ಜಾಲತಾಣ https://hfwcom.karnataka.gov.in/en ದಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಆಸಕ್ತ ಪೊಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇತರರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳಲ್ಲಿ 15 ದಿನಗಳೊಳಗೆ ಇಮೇಲ್ dd6mhkar@gmail.com ಮತ್ತು ddehospital-hfws@karnataka.gov.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ ಎಂದು ಅವರು ಹೇಳಿದರು. ಶಿಕ್ಷಕರಿಗೆ ತರಬೇತಿ: ಟ್ರೈನಿಂಗ್ ಆಫ್ ಟ್ರೈನರ್ಸ್ (ಟಿಒಟಿ) ಮಾದರಿಯ ಮೂಲಕ, ತಂತ್ರಜ್ಞಾನ ವ್ಯಸನದ ಕುರಿತು ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮೂಲಕ ನಿಯಂತ್ರಿಸುವ ಕಾರ್ಯ ಆಗಬೇಕಿದೆ. ಈ ಸಂಬಂಧ ಶಾಲೆಯಲ್ಲಿ ತಂತ್ರಜ್ಞಾನ ಬಳಕೆಯ ಕುರಿತು ಮಕ್ಕಳಿಗೆ ಹೇಗೆ ತಿಳಿಸಬೇಕು. ಮನೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ ಮಾಡಬೇಕು ಎಂಬುದನ್ನು ಕಲಿಸಲು ಶಿಕ್ಷಕರಿಗೆ ತಜ್ಞರಿಂದ ತರಬೇತಿ ನೀಡಲಾಗುವುದು ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕನಕಗಿರಿ | ವಿಜೃಂಭಣೆಯ ಹನುಮ ಮಾಲಾಧಾರಿಗಳ ಇರುಮುಡಿ ಉತ್ಸವ
ಕನಕಗಿರಿ: ತೋಂಡಿತೇವರಪ್ಪ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳ ಇರುಮುಡಿ ಉತ್ಸವ ಬುಧವಾರ ಸಡಗರ, ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಇರುಮುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಕುಂಕುಮಾರ್ಚನೆ, ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ಗುರು ಸ್ವಾಮಿಗಳ ಸಾನಿಧ್ಯದಲ್ಲಿ ನೂರಾರು ಮಾಲಾಧಾರಿಗಳು ಇರುಮಡಿ ಕಟ್ಟಿಸಿ ಕೊಂಡರು. ಗಂಗಾವತಿ ರಸ್ತೆಯಿಂದ ವಾಲ್ಮೀಕಿ ವೃತ್ತ ರಸ್ತೆಯಿಂದ ಕನಕಾಚಲಪತಿ ದೇವಸ್ಥಾನ, ರಾಜಬೀದಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಮಾಲಾಧಾರಿಗಳು ಆಂಜೀನಯ್ಯ ದೇವರ ನಾಮ ಸ್ಮರಿಸಿ ಕುಣಿಯುತ್ತಾ ಭಕ್ತಿಯಿಂದ ಅಂಜನಾದ್ರಿ ಕಡೆಗೆ ಪ್ರಯಾಣ ಬೆಳಸಿದರು.
ಕನಕಗಿರಿ | ಕೊಲೆ ಪ್ರಕರಣ : 20ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕನಕಗಿರಿ : ಕೊಲೆ ಮತ್ತು ಮರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪರಶುರಾಮ ಅಲಿಯಾಸ್ ರಾಮಣ್ಣ (49)ಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ವಿವರ : 2004ರ ಜ.15ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ, ದುರುಗಪ್ಪ ನಾಯಕ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಅಲ್ಲಿದ್ದ ಆರೋಪಿಯ ಪತ್ನಿಯ ಮೇಲೂ ಹೊಟ್ಟೆ ಭಾಗಕ್ಕೆ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವೇಳೆ ಆರೋಪಿ ಪರಾರಿಯಾಗಿ, ಬೇರೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದನು. ದೀರ್ಘಕಾಲದ ಶೋಧದ ಬಳಿಕ 2025ರಲ್ಲಿ ಕನಕಗಿರಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ನಾಗಲಕ್ಷ್ಮಿ ವಾದ ಮಂಡಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಚಂಡಮಾರುತ ಅಪಾಯ ಪರಿಹಾರ ಯೋಜನೆಗೆ 4 ಸಾವಿರ ಕೋಟಿ ರೂ. ಖರ್ಚು: ಕೇಂದ್ರ ಸರಕಾರ
ಹೊಸದಿಲ್ಲಿ, ಎ.1: ದೇಶಾದ್ಯಂತದ ಕರಾವಳಿ ರಾಜ್ಯಗಳಲ್ಲಿ ಪ್ರಕೃತಿ ವಿಕೋಪದ ಪರಿಣಾಮಗಳನ್ನು ಎದುರಿಸಲು 2011ರಲ್ಲಿ ಆರಂಭಿಸಲಾದ ರಾಷ್ಟ್ರೀಯ ಚಂಡಮಾರುತ ಅಪಾಯ ಪರಿಹಾರ ಯೋಜನೆ (ಎನ್ಸಿಆರ್ಎಂಪಿ)ಯಡಿ ಈವರೆಗೆ 4,331.68 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆಯೆಂದು ಕೇಂದ್ರ ಸರ್ಕಾರವು ಬುಧವಾರ ರಾಜ್ಯಸಭೆಗೆ ತಿಳಿಸಿದೆ. 2011ರಲ್ಲಿ ಜಾರಿಗೊಂಡ ಯೋಜನೆಯ ಮೊದಲ ಹಂತದಲ್ಲಿ 2,524.84 ಕೋಟಿ ರೂ. ವ್ಯಯಿಸಲಾಗಿದೆ. 2015ರಲ್ಲಿ ಅನುಮೋದನೆ ಪಡೆದ ಎರಡನೇ ಹಂತದಲ್ಲಿ 1,806.84 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ. ಚಂಡಮಾರುತಗಳನ್ನು ಎದುರಿಸುವಲ್ಲಿ ಇರುವ ದೌರ್ಬಲ್ಯಗಳನ್ನು ಕನಿಷ್ಠಗೊಳಿಸುವಂತಹ ಮೂಲಸೌಕರ್ಯಗಳನ್ನು ನಿರ್ಮಿಸುವ ಉದ್ದೇಶವನ್ನು ಎನ್ಸಿಆರ್ಎಂಪಿ ಹೊಂದಿದೆ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕರಾವಳಿ ಪ್ರದೇಶದ ಜನಸಮುದಾಯಗಳು ಹಾಗೂ ಆಸ್ತಿಪಾಸ್ತಿಗಳು ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುವ ಯೋಜನೆಯನ್ನು ಒಳಗೊಂಡಿದೆ. ದೇಶಾದ್ಯಂತ ಎಂಟು ಕರಾವಳಿ ಜಿಲ್ಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮೊದಲ ಹಂತದ ಯೋಜನೆ ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳನ್ನು ಒಳಗೊಂಡಿದ್ದು, 2018ರ ಡಿಸೆಂಬರ್ ನಲ್ಲಿ ಪೂರ್ಣಗೊಂಡಿತ್ತು. ಎರಡನೇ ಹಂತವು ಗೋವಾ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಒಳಗೊಂಡಿದ್ದು, 2023ರ ಮಾರ್ಚ್ನಲ್ಲಿ ಪೂರ್ಣಗೊಂಡಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇರಾನ್ ಪರಿಸ್ಥಿತಿ ಬಗ್ಗೆ CIA ಜೊತೆ ಸಂಪರ್ಕದಲ್ಲಿದ್ದೇವೆ: ರಶ್ಯ
ಮಾಸ್ಕೊ, ಎ.1: ಇರಾನ್ ಯುದ್ಧವನ್ನು ಕೊನೆಗೊಳಿಸುವ ಕುರಿತು ರಶ್ಯದ ವಿದೇಶಿ ಗುಪ್ತಚರ ಸೇವೆ (SVR) ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ಜೊತೆ ಸಂಪರ್ಕದಲ್ಲಿದೆ ಎಂದು SVR ನಿರ್ದೇಶಕ ಸೆರ್ಗೆಯ್ ನರಿಷ್ಕಿನ್ ಬುಧವಾರ ತಿಳಿಸಿದ್ದಾರೆ. ‘ಇರಾನ್ ಪರಿಸ್ಥಿತಿಗಳ ಬಗ್ಗೆ CIA ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಶ್ಯ ವ್ಯಾಪಕ ರಾಜತಾಂತ್ರಿಕ ಸಂವಾದದಲ್ಲಿ ತೊಡಗಿದೆ. ಈ ತೀವ್ರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹಲವು ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ನರಿಷ್ಕಿನ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಾಂತಿಗಾಗಿ ಇರಾನ್ ಅಗತ್ಯ ಸಂಕಲ್ಪ ಹೊಂದಿದೆ | ಷರತ್ತುಗಳಿಗೆ ಒಪ್ಪಿದರೆ ಯುದ್ಧ ನಿಲ್ಲುತ್ತದೆ: ಪೆಝೆಶ್ಕಿಯಾನ್
ಟೆಹ್ರಾನ್, ಎ.1: ಪರಿಸ್ಥಿತಿಗಳಿಗೆ ಅನುಗುಣವಾಗಿ ಅಮೆರಿಕ ಮತ್ತು ಇಸ್ರೇಲ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ತನ್ನ ರಾಷ್ಟ್ರವು ಅಗತ್ಯವಾದ ಸಂಕಲ್ಪವನ್ನು ಹೊಂದಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. ಇದಕ್ಕೂ ಮುನ್ನ ವಾಶಿಂಗ್ಟನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ‘ಮುಂದಿನ ದಿನಗಳು ನಿರ್ಣಾಯಕವಾಗಿವೆ’ ಎಂದು ಹೇಳಿದ್ದಾರೆ. ಈ ಮಧ್ಯೆ, ಅಮೆರಿಕದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳುತ್ತಿದ್ದ ಇರಾನ್ ಇದೀಗ ತನ್ನ ನಿಲುವನ್ನು ತುಸು ಸಡಿಲಿಸಿರುವ ಸೂಚನೆ ನೀಡಿದೆ. ‘ಅಗತ್ಯ ಪರಿಸ್ಥಿತಿಗಳನ್ನು ಪೂರೈಸಿದರೆ (ವಿಶೇಷವಾಗಿ ಆಕ್ರಮಣಶೀಲತೆಯ ಪುನರಾವರ್ತನೆಯನ್ನು ತಡೆಗಟ್ಟಲು ಅಗತ್ಯವಿರುವ ಖಾತರಿ) ಈ ಸಂಘರ್ಷವನ್ನು ಕೊನೆಗೊಳಿಸಲು ಅಗತ್ಯವಿರುವ ಇಚ್ಛಾಶಕ್ತಿ ಮತ್ತು ಸಂಕಲ್ಪವನ್ನು ನಾವು ಹೊಂದಿದ್ದೇವೆ. ಅವರ ಆಕ್ರಮಣಕಾರಿ ದಾಳಿಗಳ ನಿಲುಗಡೆಯು ಪರಿಸ್ಥಿತಿ ಸಾಮಾನ್ಯಗೊಳ್ಳುವುದಕ್ಕೆ ಪೂರಕವಾಗಿರುತ್ತದೆ’ ಎಂದು ಪೆಝೆಶ್ಕಿಯಾನ್ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಕೋಸ್ಟ ಅವರೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Raichur | ಜನಗಣತಿ ದೇಶದ ಅಭಿವೃದ್ಧಿಗೆ ಬುನಾದಿ: ಆಯುಕ್ತ ಜುಬಿನ್ ಮಹೋಪಾತ್ರ
ರಾಯಚೂರು : ಜನಗಣತಿ ದೇಶದ ಅಭಿವೃದ್ಧಿ, ಪ್ರಗತಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಅಸ್ತಿವಾರವಾಗಿದ್ದು, ಇದರಲ್ಲಿ ಸಂಗ್ರಹವಾಗುವ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳಿಗೆ ದಿಕ್ಕು ತೋರಿಸುತ್ತವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಹೇಳಿದರು. ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಹಾನಗರ ಪಾಲಿಕೆಯಿಂದ ಭಾರತದ ಜನಗಣತಿ–2027ರ ಅಂಗವಾಗಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ್ದ ಮೊದಲ ಹಂತದ ತರಬೇತಿ ಕಾರ್ಯಗಾರವನ್ನು ಸಸಿ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿದರು. ಜನಗಣತಿ ಕೇವಲ ಸರ್ಕಾರದ ಕಾರ್ಯವಲ್ಲ, ಇದು ದೇಶದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವ ಮಹತ್ವದ ಪ್ರಕ್ರಿಯೆಯಾಗಿದೆ. ಪ್ರಾಚೀನ ಕಾಲದಿಂದಲೇ ಜನಗಣತಿಯ ಮಹತ್ವವನ್ನು ಗುರುತಿಸಲಾಗಿದ್ದು, ಇದು ಯೋಜನೆಗಳ ರೂಪುರೇಷೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕೊನೆಯದಾಗಿ 2011ರಲ್ಲಿ ನಡೆದಿದ್ದು, 2021ರಲ್ಲಿ ನಡೆಯಬೇಕಿದ್ದ ಗಣತಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಸುಮಾರು 15 ವರ್ಷಗಳ ಬಳಿಕ ಮರುಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗಣತಿದಾರರು ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಮುಂದಿನ 45 ದಿನಗಳ ಕಾಲ ಮನೆಮನೆಗೆ ಭೇಟಿ ನೀಡುವ ಗಣತಿದಾರರು ಕಟ್ಟಡಗಳು, ಕುಡಿಯುವ ನೀರು, ರಸ್ತೆ, ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ನಂತರ ಈ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದೇಶದಲ್ಲಿ ಮೊದಲ ಜನಗಣತಿ 1872ರಲ್ಲಿ ನಡೆದಿತ್ತು. ಮುಂದಿನ ಜನಗಣತಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಇದು ಇನ್ನಷ್ಟು ಪರಿಣಾಮಕಾರಿಯಾಗಿ ಮಾಹಿತಿ ಸಂಗ್ರಹಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಜನಗಣತಿ ಕಾರ್ಯವು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಯಾವುದೇ ನಿರ್ಲಕ್ಷ್ಯವಿಲ್ಲದೆ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ ಶರಣಪ್ಪ ಸತ್ಯಂಪೇಟ್, ಸದಸ್ಯ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ವಲಯ ಆಯುಕ್ತ ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಹಾಗೂ ಕಂದಾಯ ಅಧಿಕಾರಿಗಳಾದ ರವಿ ಎಸ್. ಅಂಗಡಿ, ಶಂಶಾಲಂ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು
ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ಬಂಧನ
ಕೊಚ್ಚಿ, ಎ. 1: ಚಲನಚಿತ್ರದ ಸೆಟ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದರು ಎಂದು ನಟಿಯೋರ್ವರು ಆರೋಪಿಸಿರುವ ಹಿನ್ನೆಲೆಯಲ್ಲಿ, ಪೋಲಿಸರು ಮಂಗಳವಾರ ಸಂಜೆ ಮಲಯಾಳಂ ನಿರ್ದೇಶಕ ರಂಜಿತ್ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಹಿಂದೆ ಸರಣಿ ಆರೋಪಗಳಿದ್ದರಿಂದ ಈ ಬೆಳವಣಿಗೆ ಗಮನ ಸೆಳೆದಿದೆ. ಸೋಮವಾರ ಕೊಚ್ಚಿ ನಗರ ಠಾಣೆಯಲ್ಲಿ ರಂಜಿತ್ ವಿರುದ್ಧ ದೂರು ದಾಖಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ರಂಜಿತ್ ತನ್ನನ್ನು ಪುಸಲಾಯಿಸಿ ಕ್ಯಾರವಾನ್ ಗೆ ಕರೆದೊಯ್ದು ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೋಲಿಸರು ರಂಜಿತ್ ಅವರನ್ನು ಇಡುಕ್ಕಿ ಜಿಲ್ಲೆಯಿಂದ ಬಂಧಿಸಿದ್ದು, ಪ್ರಸ್ತುತ ತೊಡುಪಳ ಜೈಲಿನಲ್ಲಿ ಇರಿಸಲಾಗಿದೆ. ಮುಂದಿನ ಕ್ರಮಗಳಿಗಾಗಿ ಅವರನ್ನು ಕೊಚ್ಚಿಗೆ ವರ್ಗಾಯಿಸುವ ನಿರೀಕ್ಷೆಯಿದೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಕಳಪೆ ವಾಯು ಗುಣಮಟ್ಟ: ಕ್ರಮಕ್ಕೆ ಪರಿಸರ ಸಂಗಮದಿಂದ ನಗರಸಭಾ ಆಯುಕ್ತರಿಗೆ ಪತ್ರ
ಉಡುಪಿ, ಎ.1: ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಉಡುಪಿ ನಗರ ವಾಯು ಗುಣಮಟ್ಟ ನಿಗದಿ ಪಡಿಸಿದ ಮಾಪನಕ್ಕಿಂತ (0-100), ಕಳಪೆ ಗುಣಮಟ್ಟ (160ರಿಂದ 180) ದಾಖಲಾಗುತ್ತಿರುವುದು ಅತ್ಯಂತ ಕಳವಳಕರ ವಿಷಯವಾಗಿದ್ದು, ಈ ಬಗ್ಗೆ ಕೂಡಲೇ ತುರ್ತುಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ‘ಪರಿಸರ ಸಂಗಮ’ ಸಂಘಟನೆ ನಾಡಿನ ಹಲವು ಗಣ್ಯರ ಸಹಿಯೊಂದಿಗೆ ಉಡುಪಿ ನಗರಸಭಾ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದೆ. ಬೆಂಗಳೂರು ಮೂಲದ ‘ಪರಿಸರ ಸಂಗಮ’ ಜೀವ ಸಂಕುಲ ಪರ ವೇದಿಕೆಯು ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ಜಲ ಸಂಪನ್ಮೂಲಗಳ ರಕ್ಷಣೆ, ಜೀವ ವೈವಿಧ್ಯತೆಗಳ ಉಳಿವಿಗೆ ಬದ್ಥತೆಯುಳ್ಳ, ಇದಕ್ಕಾಗಿ ಹೋರಾಟ ಮಾಡುತ್ತಿರುವ ರಾಜ್ಯಮಟ್ಟದ ವೇದಿಕೆಯಾಗಿದೆ. ಉಡುಪಿ ನಗರದ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವೆಂದರೆ ಇದರಲ್ಲಿ ಮಾಲಿನ್ಯಕಾರಕ ಪಿಎಂ 2.5 (ಪರ್ಟಿಕ್ಯೂಲೇಟ್ ಮ್ಯಾಟರ್), ಪಿಎಂ10, ಕಾರ್ಬನ್ ಮೋನೋಕ್ಸೈಡ್ (ಸಿಒ- 348ಪಿಪಿಬಿ), ಸಲ್ಫರ್ ಡೈಆಕ್ಸೈಡ್ (ಎಸ್ಓ2- 2ಪಿಪಿಬಿ), ನೈಟ್ರೋಜನ್ ಡೈಆಕ್ಸೈಡ್ (ಎನ್ಓ2- 8ಪಿಪಿಬಿ) ಹಾಗೂ ಓರೆನ್ (ಓ3-26ಪಿಪಿಬಿ) ಕಣಗಳು ಅಧಿಕ ಸಂಖ್ಯೆಯಲ್ಲಿರುವುದೇ ಕಾರಣ ಎಂದು ಸಂಘಟನೆಯ ಸದಸ್ಯರಾಗಿರುವ ಉಡುಪಿಯ ಪರಿಸರ ಹೋರಾಟಗಾರ ಪ್ರೇಮಾನಂತ ಕಲ್ಮಾಡಿ ತಿಳಿಸಿದ್ದಾರೆ. ಮಾಲಿನ್ಯದ ಅಂಶಗಳ ಪ್ರಕಾರ ಪಿಎಂ2.5, 2.5 ಮೈಕ್ರೋನ್ಗಿಂತ ಕಡಿಮೆ ವ್ಯಾಸದ ಕಣಗಳು ಇಲ್ಲಿನ ಗಾಳಿಯಲ್ಲಿ ಇರುವುದು ದಾಖಲಾಗಿದೆ. ಅತಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು ಹಾಗೂ ಅಶಕ್ತ ವೃದ್ಧರು ಶ್ವಾಸಕೋಶ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಕನಿಷ್ಠ ಎನ್95 ಮಾಸ್ಕ್ ಬಳಸುವ ಪರಿಸ್ಥಿತಿ ಉಡುಪಿ ನಗರವಾಸಿಗಳಿಗೆ ಬಂದಿದೆ ಎಂದು ಮಾ.25ರಂದು ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇದು ಜನರ ಮೂಲಭೂತ ಹಕ್ಕುಗಳ ಜೊತೆಗೆ ನಾಗರಿಕರು ಉತ್ತಮ ಪರಿಸರವನ್ನು ಹೊಂದುವ ಹಕ್ಕಿಗೆ ಚ್ಯುತಿ ತಂದಿದೆ. ಆದ್ದರಿಂದ ನಗರಸಭೆಯು ಈ ಕುರಿತಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ 2026-27ನೇ ಸಾಲಿನ ಬಜೆಟ್ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ಕೊಟ್ಟು ನಗರ ದಲ್ಲಿರುವ ಖಾಲಿ ಜಾಗದಲ್ಲಿ ಹಸಿರು ಬೆಳೆಸುವ, ಗಿಡಮರಗಳನ್ನು ಅದರಲ್ಲೂ ವಿಶೇಷವಾಗಿ ಬಿದಿರು ಗಿಡಗಳನ್ನು ಬೆಳೆಸುವ ಪ್ರಯತ್ನ ನಡೆಸುವಂತೆ ಸಲಹೆಯನ್ನು ನೀಡಲಾಗಿದೆ. ಈ ಮೂಲಕ ‘ಹವಾಮಾನ ಬದಲಾವಣೆ ಮತ್ತು ತುರ್ತು ಪರಿಸರ ಕ್ರಿಯೆ’ ಪಾಲನೆಯೊಂದಿಗೆ ಉಡುಪಿ ಉತ್ತಮ ನಗರಸಭೆ ಎನ್ನುವ ಹಿರಿಮೆಯನ್ನು ಉಳಿಸಿಕೊಳ್ಳುವಂತಾಗಲಿ ಎಂದು ಪತ್ರದಲ್ಲಿ ಹಾರೈಸಲಾಗಿದೆ. ಪತ್ರಕ್ಕೆ ಕಾರ್ಕಳದ ಮಮತಾ ರೈ, ಧಾರವಾಡದ ಪ್ರಕಾಶ್ ಭಟ್, ಮೈಸೂರಿನ ಸುರೇಶ್ ಕೆ.ಪಿ., ಮಂಗಳೂರಿನ ಸರೋಜಾ ಪ್ರಕಾಶ್, ಧಾರವಾಡದ ಶಾರದಾ ಗೋಪಾಲ, ಲೋಕೇಶ್ ಚಿಂತಾಮಣಿ, ಪ್ರೇಮಾನಂದ ಕಲ್ಮಾಡಿ, ಕಾಸರಗೋಡಿನ ರಾಜು ಕಿದೂರು, ಇನ್ನಾ ಚಂದ್ರಹಾಸ ಶೆಟ್ಟಿ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ನಗರಸಭೆ ತುರ್ತುಕ್ರಮ ಕೈಗೊಳ್ಳಬೇಕಿದೆ: ಕಲ್ಮಾಡಿ ಉಡುಪಿ ನಗರಸಭೆ ಕೆಲಸಮಯದ ಹಿಂದೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಕರೆದ ಬಜೆಟ್ ಪೂರ್ವ ಕರೆದ ಸಮಾಲೋಚನಾ ಸಭೆಯಲ್ಲಿ ತಾನು ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿ ಕೂಡಲೇ ತುರ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ವಾಯು ಮಾಲಿನ್ಯದ ಪರಿಣಾಮಗಳ ಕುರಿತು, ಇದರಿಂದ ಜನರ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತಂತೆ ಗಮನ ಸೆಳೆದಿದ್ದೆ ಎಂದು ಪರಿಸರ ಸಂಗಮ ಸಂಘಟನೆಯ ಸದಸ್ಯರಲ್ಲೊಬ್ಬರಾದ ಜಿಲ್ಲೆಯ ಪ್ರಮುಖ ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ತಿಳಿಸಿದರು. ನಗರಸಭೆ ಈಗ ತುರ್ತಾಗಿ ಮಾಡಬೇಕಾಗಿರುವುದು ನಗರಸಭಾ ವ್ಯಾಪ್ತಿಯಲ್ಲಿರುವ, ತನಗೆ ಸೇರಿದ ಖಾಲಿ ನಿವೇಶನಗಳು ಹಾಗೂ ಕಟ್ಟಡಗಳ ಆವರಣವನ್ನು ಹಸಿರೀಕರಣಗೊಳಿಸುವುದು ಹಾಗೂ ಶ್ವಾಸಕೇಂದ್ರ (ಲಂಗ್ ಸ್ಪೇಸ್)ಗಳನ್ನು ಅಭಿವೃದ್ಧಿಪಡಿಸುವುದು. ಸಾಧ್ಯವಾದಲೆಲ್ಲಾ ಬಿದಿರು ತಳಿಗಳನ್ನು ಬೆಳೆಸುವುದರಿಂದ ವಾತಾವರಣ ದಿಂದ ಕಾರ್ಬನ್ ಡೈಆಕ್ಸೈಡ್ (ಸಿಓ2) ಅಂಶ ಕಡಿಮೆಯಾಗಿ, ಹೆಚ್ಚೆಚ್ಚು ಆಮ್ಲಜನಕ ಪ್ರಮಾಣ ಗಾಳಿಗೆ ಸೇರಲು ಸಾಧ್ಯವಾಗುತ್ತದೆ ಎಂದು ಕಲ್ಮಾಡಿ ಸೂಚಿಸಿದರು.
Raichur | ಅಕ್ರಮ ಮದ್ಯ ಮಾರಾಟ : 6 ಮಂದಿಗೆ ಗಡಿಪಾರು ಪ್ರಸ್ತಾವನೆ
ರಾಯಚೂರು : ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಿ.ಹೆಚ್ ಪೌಡರ್ ಮಿಶ್ರಿತ ಕಲಬೆರಕೆ ಶೇಂದಿ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆ ಕ್ರಮ ಕೈಗೊಂಡಿದ್ದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ 6 ಮಂದಿಯನ್ನು ಗಡಿಪಾರು ಮಾಡಲು ಸಹಾಯಕ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಡಿಪಾರು ಪ್ರಸ್ತಾವನೆ ಪಟ್ಟಿಯಲ್ಲಿ ಮೈಲಾರನಗರದ ನರಸಮ್ಮ (ಶಾರದಮ್ಮ), ರಮೇಶ, ಮಂಗಳವಾರಪೇಟೆಯ ಹುಸೇನಿ (ರವಿ), ಹರಿಜನವಾಡ ಬಡಾವಣೆಯ ಶಿವಮ್ಮ, ಕಾಳಿದಾಸ ನಗರದ ಇಬ್ರಾಹಿಂ ಹಾಗೂ ಕಕ್ಕೇನಕೇರಾ ಬಡಾವಣೆಯ ವಾಹೀದ್ ಹೆಸರುಗಳಿವೆ. ರಾಯಚೂರು ನಗರ ಸೇರಿದಂತೆ ಲಿಂಗಸುಗುರು ಮತ್ತು ಇತರೆ ಭಾಗಗಳಲ್ಲಿ ಕಳ್ಳಭಟ್ಟಿ ಸರಾಯಿ ಹಾಗೂ ಕಲಬೆರಕೆ ಮದ್ಯ ಮಾರಾಟದ ಮೂಲಕ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿರುವ ಬಗ್ಗೆ ಬಂದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 55 ಹಾಗೂ 56(ಜಿ) ಅಡಿಯಲ್ಲಿ ಗಡಿಪಾರು ಮಾಡಲು ಉಪ ವಿಭಾಗೀಯ ದಂಡಾಧಿಕಾರಿ ಕ್ರಮ ಕೈಗೊಂಡಿದ್ದು, ಈಗಾಗಲೇ ಪ್ರಾಥಮಿಕ ವಿಚಾರಣೆ ನಡೆದಿದೆ. ಅಂತಿಮ ವಿಚಾರಣೆಯ ನಂತರ ಗಡಿಪಾರು ಆದೇಶ ಹೊರಡಿಸಲಾಗುವುದು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ಉದ್ದೇಶದಿಂದ ಆರೋಪಿಗಳ ಪಟ್ಟಿ ಸಲ್ಲಿಸಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ವಿಚಾರಣೆ ನಡೆಯುತ್ತಿದ್ದು, ಏಪ್ರಿಲ್ 2ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. – ಡಾ. ಹಂಪಣ್ಣ ಸಜ್ಜನ್, ಉಪ ವಿಭಾಗೀಯ ದಂಡಾಧಿಕಾರಿ (ಸಹಾಯಕ ಆಯುಕ್ತರು)
KKR Vs SRH- ಸೀಸನ್ ಓಪನರ್ ನಲ್ಲಿ ಸೋತವರ ಸಮರ: ಈಡನ್ ಗಾರ್ಡನ್ ಪಿಚ್ ನಲ್ಲಿ ಅಭಿಷೇಕ್ ಶರ್ಮಾ ಮಿಂಚ್ತಾರಾ?
Indian Premier League 2026- ಐಪಿಎಲ್ 2026ರ ಆರಂಭಿಕ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಕೆಕೆಆರ್ ಮತ್ತು ಎಸ್ಆರ್ಎಚ್ ತಂಡಗಳು ಇದೀಗ ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ ಗೆಲುನನ್ನು ಎದುರು ನೋಡುತ್ತಿವೆ. ಕೋಲ್ಕತಾ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಆಸರೆಯಾದರೆ, ಹೈದರಾಬಾದ್ ಬ್ಯಾಟಿಂಗ್ ಗೆ ಸ್ಫೋಟಕ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಬಲ ತುಂಬಬೇಕಿದೆ. ಅಂಕಿಅಂಶಗಳ ಪ್ರಕಾರ 30 ಪಂದ್ಯಗಳಲ್ಲಿ 20 ಬಾರಿ ಗೆದ್ದಿರುವ ಕೆಕೆಆರ್ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಇದಾಗಿರುವುದರಿಂದ ರನ್ಗಳ ಮಳೆ ನಿರೀಕ್ಷಿಸಲಾಗಿದೆ.
ಸಿಲಿಂಡರ್ ಬೆಲೆ ಏರಿಕೆ | ಮೋದಿ ಸರಕಾರದಿಂದ ಜನರ ಜೇಬಿಗೆ ಕತ್ತರಿ ಹಾಕುವ ಹೊಸ ಅಧ್ಯಾಯ ಆರಂಭ : ಸುರ್ಜೆವಾಲ
ಬೆಂಗಳೂರು : ಮೋದಿ ಸರಕಾರ ಮತ್ತು ಬಿಜೆಪಿಯಿಂದ ಎ.1ರಿಂದ ಜನರ ಜೇಬಿಗೆ ಕತ್ತರಿ ಹಾಕುವ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇಂದು ಬೆಳಗ್ಗೆ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ.ಹೆಚ್ಚಿಸಲಾಗಿದೆ. ಇದರೊಂದಿಗೆ ಪ್ರತಿ ಸಿಲಿಂಡರ್ ಬೆಲೆ 2 ಸಾವಿರ ರೂ.ಗಡಿಯನ್ನು ದಾಟಿದೆ. ಟೋಲ್ ಸುಂಕ ಏರಿಕೆಯಾಗಿದೆ. ಕರ್ನಾಟಕವೊಂದರಲ್ಲೆ 2026-27ರಲ್ಲಿ 5 ಸಾವಿರ ಕೋಟಿ ರೂ. ಮತ್ತು ಇಡೀ ದೇಶಾದ್ಯಂತ 80 ಸಾವಿರ ಕೋಟಿ ರೂ.ಟೋಲ್ ಸಂಗ್ರಹವಾಗಲಿದೆ ಎಂದು ತಿಳಿಸಿದ್ದಾರೆ. ಈ ವರ್ಷ ರೂಪಾಯಿ ಮೌಲ್ಯವು ಶೇ.10ರಷ್ಟು ಕುಸಿದಿದೆ. 85 ರಿಂದ 95 ರೂ.ಗಳಿಗೆ ಇಳಿಯುವ ಮೂಲಕ ಏಷ್ಯಾದಲ್ಲೆ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕರೆನ್ಸಿಯಾಗಿದೆ. ನಯಾರಾ ಎನರ್ಜಿ (ಹಳೆಯ ಎಸ್ಸಾರ್) ಮಾ.26 ರಂದು ಪೆಟ್ರೋಲ್ ಬೆಲೆಯನ್ನು 5.30 ರೂ. ಮತ್ತು ಡೀಸೆಲ್ ಬೆಲೆಯನ್ನು 3 ರೂ.ಹೆಚ್ಚಿಸಿದೆ ಎಂದು ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ, ಮಾ.31 ರಂದು, ಮತ್ತೊಂದು ಖಾಸಗಿ ತೈಲ ಕಂಪನಿಯಾದ ಶೆಲ್, ಪೆಟ್ರೋಲ್ ಬೆಲೆಯನ್ನು 112 ರೂ.ಗಳಿಗೆ ಮತ್ತು ಡೀಸೆಲ್ ಬೆಲೆಯನ್ನು 98 ರೂ.ಗಳಿಗೆ ಏರಿಸಿದೆ. ಸಾಮಾನ್ಯ ಜನರ ಬೆನ್ನುಮೂಳೆ ಮುರಿಯಲು ಮೋದಿ ಸರಕಾರವು ಈಗ ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲು ಎ.9 ಅಥವಾ 23 ಕ್ಕಾಗಿ ಕಾಯುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿವೆ, ರಫ್ತು ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿದಿದೆ ಮತ್ತು ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಇದರಿಂದಾಗಿ ಕಾರ್ಮಿಕರು ಮತ್ತು ಕೆಲಸಗಾರರು ಅನಿವಾರ್ಯವಾಗಿ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ. ಇವೇನಾ ಆ ‘ಅಚ್ಚೇ ದಿನ್’? ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ. ಹೇಳಿದ್ದು ಅಚ್ಚೇ ದಿನ್, ಜನರಿಗೆ ಸಿಕ್ಕಿದ್ದು ನರಕ ದರ್ಶನ. ಕೇಂದ್ರ ಸರಕಾರದ ದುರ್ಬಲ ನೀತಿಯಿಂದ ಭಾರತೀಯರು ಅಕ್ಷರಶಃ ನರಳುತ್ತಿದ್ದಾರೆ. ಮಧ್ಯ ಏಷ್ಯಾ ದಲ್ಲಿನ ಸಮರದಿಂದಾಗಿ ಭಾರತದಲ್ಲಿ ಇಂಧನ ಅಭಾವ ಹೆಚ್ಚಾಗಿದೆ. ಅಡುಗೆ ಅನಿಲ ಕೊರತೆಯಿಂದ ಹೊಟೇಲ್ ಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈ ಉದ್ಯಮ ಈಗಾಗಲೇ 250 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಿದೆ. ಇನ್ನು ಅಡುಗೆ ಅನಿಲ ಸಿಗದೆ ಅದೆಷ್ಟೋ ಕುಟುಂಬಗಳು ಪರದಾಡುತ್ತಿವೆ. ಕೆಲವು ಹೊಟೇಲ್ ಗಳು ಪರ್ಯಾಯ ಆಯ್ಕೆಯಾಗಿ ಸೌದೆ ಒಲೆ ಮೊರೆ ಹೋಗಿದ್ದರೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಸೌದೆ ಒಲೆ, ಸೀಮೆಎಣ್ಣೆ ಬಳಕೆಯಿಂದ ಮಾಲೀನ್ಯ ಹಾಗೂ ಮಹಿಳೆಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇನ್ನು ಜೈವಿಕ ಅನಿಲ ಹಾಗೂ ಹೊಗೆರಹಿತ ಸ್ಟವ್ ಗಳು ಎಲ್ಲರಿಗೂ ಲಭ್ಯವಾಗುವ ಪರಿಸ್ಥಿತಿ ಇಲ್ಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇರಳ ಚುನಾವಣೆ ಮುಗಿಯುವವರೆಗೆ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ ಮಂಡನೆ ಇಲ್ಲ?
ಹೊಸದಿಲ್ಲಿ: ಕೆಳಮನೆಯಲ್ಲಿ ವಿಪಕ್ಷಗಳು ವಿವಾದಾತ್ಮಕ ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026ಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬುಧವಾರ ಕೇಂದ್ರ ಸರಕಾರ ತಿಳಿಸಿದೆ. ಸದನ ಪ್ರಾರಂಭಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳ ಸದಸ್ಯರು ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರ ಬೆನ್ನಿಗೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಪ್ರಕಟನೆ ಹೊರಡಿಸಿದ್ದು, ವಿಪಕ್ಷಗಳು ಜನರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದು ದೂರಿದರು. ಕಳೆದ ವಾರ ಮಸೂದೆ ಮಂಡನೆಯಾಗಿದ್ದು, ಅದರ ಚರ್ಚೆಗೆ ಇಂದು ಪಟ್ಟಿಯಾಗಿತ್ತು. ಆದರೆ, ಮಸೂದೆಯನ್ನು ಇಂದು ಚರ್ಚೆಗೆತ್ತಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು. ಕೇರಳದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ವಿಪಕ್ಷಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿರಣ್ ರಿಜಿಜು ಆರೋಪಿಸಿದರು. ಈ ಮಸೂದೆಯಲ್ಲಿನ ನಿಯಮಗಳು ವಿದೇಶಿ ದೇಣಿಗೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿವೆಯೇ ಹೊರತು, ಯಾವುದೇ ಧರ್ಮ ಅಥವಾ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿರುವುದರಿಂದ, ಕೇರಳ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಸಕ್ರಿಯವಾಗಿ ಮನವೊಲಿಸುತ್ತಿರುವ ಬಿಜೆಪಿಯ ನಿರೀಕ್ಷೆಗಳ ಮೇಲೆ ಪರಿಣಾಮವುಂಟು ಮಾಡಬಹುದು ಎಂದು ಕೇರಳ ಬಿಜೆಪಿ ಘಟಕವು ಕೇಂದ್ರ ನಾಯಕತ್ವದ ಮೇಲೆ ಒತ್ತಡ ಹೇರಿರುವುದರಿಂದ, ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಸಂಸತ್ ಭವನದ ಮಕರ ದ್ವಾರದಲ್ಲಿ ಈ ಮಸೂದೆಯ ವಿರುದ್ಧ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದರು.
ಕುವೈತ್ - ಮಂಗಳೂರು ನಡುವೆ ಜಝೀರಾ ಏರ್ವೇಸ್ನ ವಿಶೇಷ ವಿಮಾನ; ಎ.8ರಿಂದ ಆರಂಭ
ಮಂಗಳೂರು, ಎ.1:ಕುವೈತ್ - ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಜಝೀರಾ ಏರ್ವೇಸ್ನ ವಿಶೇಷ ವಿಮಾನ ಹಾರಾಟ ಸೌಲಭ್ಯ ಎ.8ರಿಂದ ಆರಂಭವಾಗಲಿದೆ. ದಮಾಮ್ ಮೂಲಕ ಈ ವಿಮಾನ ಸಾಗಲಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ವಿಶೇಷ ವಿಮಾನಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಿದೆ. ಈ ವಿಮಾನಗಳು ಬುಧವಾರ ಮತ್ತು ರವಿವಾರ ಹಾರಾಟ ನಡೆಸಲಿವೆ. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಸುಮಾರು 6 ಗಂಟೆಗಳ ಪ್ರಯಾಣವಾಗಿದ್ದು, ವಿಮಾನ ಜೆ 9 3417 ಸ್ಥಳೀಯ ಸಮಯ ಬೆಳಗ್ಗೆ 8:40 ಕ್ಕೆ ಕುವೈತ್ನಿಂದ ಹೊರಟು ದಮಾಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರನ್ನು ತಲುಪುತ್ತದೆ. ವಿಮಾನ ಜೆ 9 3418 ಮಂಗಳೂರಿನಿಂದ ಭಾರತೀಯ ಕಾಲಮಾನ 4: 55 ಕ್ಕೆ ಹೊರಟು ಸ್ಥಳೀಯ ಸಮಯ ಸಂಜೆ 7:40 ಕ್ಕೆ ಕುವೈತ್ ತಲುಪಲಿದೆ. ಕೋವಿಡ್ ಸಮಯದಲ್ಲಿ ಜಝೀರಾ ಏರ್ವೇಸ್ನಿಂದ ಮಂಗಳೂರಿಗೆ ವಿಶೇಷ ವಿಮಾನಗಳ ಹಾರಾಟ ಸೌಲಭ್ಯವಿತ್ತು. ಈಗ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿ ಇದ್ದರೂ, ಕುವೈಟ್- ಮಂಗಳೂರು ನಡುವೆ ಜಝೀರಾ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ.
‘ಆಧುನಿಕ ಅನುಭವ ಮಂಟಪ’ | ರಾಜ್ಯ ಸರಕಾರದಿಂದ ಈವರೆಗೆ 280 ಕೋಟಿ ರೂ. ಬಿಡುಗಡೆ : ಈಶ್ವರ್ ಖಂಡ್ರೆ
ಬೆಂಗಳೂರು : ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಮೂಲ ನೆಲೆಯಾದ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪಕ್ಕೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಮತ್ತೆ 55 ಕೋಟಿ ರೂ. ಬಿಡುಗಡೆ ಮಾಡಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನುಭವ ಮಂಟಪ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಂಕಲ್ಪಿಸಿದ್ದು, ಬಸವ ತತ್ವ ಅನುಯಾಯಿಗಳಾದ ಮುಖ್ಯಮಂತ್ರಿ ತಮ್ಮ ಕೋರಿಕೆಯ ಮೇರೆಗೆ 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಟ್ಟು 280 ಕೋಟಿ ರೂ. ಬಿಡುಗಡೆ ಮಾಡಿದ್ದು, ಎಲ್ಲ ಬಸವಭಕ್ತರ ಮತ್ತು ಬೀದರ್ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅನುಭವ ಮಂಟಪ ಕಾಮಗಾರಿಗೆ ವೇಗ ನೀಡಲು ಹಣ ಬಿಡುಗಡೆ ಮಾಡುವಂತೆ ತಾವು ಮಾಡಿಕೊಂಡ ಮನವಿಯ ಮೇರೆಗೆ ಮಾ.20ರಂದು 50 ಕೋಟಿ ರೂ. ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ, ಈಗ ಮತ್ತೆ 55 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ. 12ನೆ ಶತಮಾನದಲ್ಲಿ ಬಸವಾದಿ ಶರಣರು ಯಾವುದೆ ಜಾತಿ ಭೇದ, ಲಿಂಗಭೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡಿ ಸಮಾಜದ ಹಿತಕ್ಕಾಗಿ ಚಿಂತನ ಮಂಥನ ನಡೆಸುತ್ತಿದ್ದ ಧರ್ಮ ಸಂಸತ್ತು ಅನುಭವ ಮಂಟಪವಿದ್ದ ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂಬ ತಮ್ಮ ನೇತೃತ್ವದ ನಿಯೋಗದ ಮನವಿಗೆ ಸಿದ್ದರಾಮಯ್ಯ ಸಮ್ಮತಿಸಿದರು ಎಂದು ಅವರು ಹೇಳಿದ್ದಾರೆ. ಅದರಂತೆ, 2013ರಿಂದ 2018ರವರೆಗೆ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುಮೋದನೆ ನೀಡಿ, ಬಜೆಟ್ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲು ಅಗತ್ಯ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಶೇ.70ರಷ್ಟು ಕಾಮಗಾರಿ ಮುಗಿದಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ 2024ರ ಮಾ.6ರಂದು 100 ಕೋಟಿ ರೂ., 2025ರ ಫೆ.25ರಂದು 10 ಕೋಟಿ ರೂ., ಮಾ.17ರಂದು 15 ಕೋಟಿ ರೂ., ಅಕ್ಟೋಬರ್ ನಲ್ಲಿ 50 ಕೋಟಿ ರೂ., ಕಳೆದ ತಿಂಗಳ 20ರಂದು ಮತ್ತೆ 50 ಕೋಟಿ ರೂ.ಬಿಡುಗಡೆ ಮಾಡಿದ್ದರು. ಈಗ ಆರ್ಥಿಕ ವರ್ಷದ ಕೊನೆಯ ದಿನ ಅದರೆ ಮಾ.31ರಂದು ಮತ್ತೆ 55 ಕೋಟಿ ರೂ.ಬಿಡುಗಡೆ ಮಾಡಿದ್ದು, ಒಟ್ಟಾರೆ 280 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ. 770 ಅಮರ ಗಣಂಗಳ ಹೆಸರಲ್ಲಿ ಕಂಬಗಳನ್ನು ನಿರ್ಮಿಸಿ ಅದರಲ್ಲಿ ಅವರ ವಚನಗಳನ್ನು ಕೆತ್ತಿಸುವುದರ ಜೊತೆಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವ ವ್ಯವಸ್ಥೆಯೂ ಇರುವ ಆಧುನಿಕ ಅನುಭವ ಮಂಟಪ ಜಗತ್ತಿನ ಆಕರ್ಷಕ ಮತ್ತು ಪ್ರಮುಖ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಈಶ್ವರ್ ಖಂಡ್ರೆ ವ್ಯಕ್ತಪಡಿಸಿದ್ದಾರೆ.
ಸುಗಮ ಬಂದರು ಕಾರ್ಯಾಚರಣೆಗೆ ಅಧಿಕಾರಿಗಳು ಉದ್ಯಮದ ನಡುವೆ ಸಮನ್ವಯತೆ ಅಗತ್ಯ: ಡಿಸಿ ದರ್ಶನ್
ಮಂಗಳೂರು, ಎ.1: ಬಂದರು ಕಾರ್ಯಾಚರಣೆಯಲ್ಲಿ ಎದುರಾಗುವ ಅಪಾಯಗಳನ್ನು ಎದುರಿಸಲು ಸರಕಾರಿ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ಬಂದರು ಅಧಿಕಾರಿಗಳ ನಡುವೆ ಬಲವಾದ ಸಮನ್ವಯತೆ ಅಗತ್ಯ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ. ನವಮಂಗಳೂರು ಬಂದರಿನಲ್ಲಿ ಎನ್ಎಂಪಿಎ ಆಶ್ರಯದಲ್ಲಿ ಬುಧವಾರ ನಡೆದ ‘ಕಡಲ ಸವಾಲುಗಳು ಮತ್ತು ಪಾಲುದಾರರ ಪಾತ್ರ’ ಹಾಗೂ ‘ಇಂಡಿಯನ್ ಪೋರ್ಟ್ ಆಕ್ಟ್ 2025’ ಎಂಬ ವಿಷಯಗಳ ಕುರಿತು ನಡೆದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಎನ್ಎಂಪಿಎ ಡೆಪ್ಯುಟಿ ಕನ್ಸರ್ವೇಟರ್ ಕ್ಯಾಪ್ಟನ್ ಮನೋಜ್ ಜೋಶಿ ಅವರು ಗಣ್ಯರನ್ನು ಮತ್ತು ಭಾಗವಹಿಸಿದ ವರನ್ನು ಸ್ವಾಗತಿಸಿದರು. ಕಡಲ ಸವಾಲುಗಳನ್ನು ಎದುರಿಸಲು ಮತ್ತು ಸುರಕ್ಷಿತ ಹಾಗೂ ದಕ್ಷ ಬಂದರು ಕಾರ್ಯಾ ಚರಣೆಯನ್ನು ಖಚಿತಪಡಿಸಿಕೊಳ್ಳಲು ಪಾಲುದಾರರ ನಡುವೆ ಸಹಯೋಗದ ಪ್ರಯತ್ನಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಅಧ್ಯಕ್ಷತೆ ವಹಿಸಿದ್ದ ಎನ್ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಮಾತನಾಡಿ, ಇಂಡಿಯನ್ ಪೋರ್ಟ್ ಆಕ್ಟ್ 2025 ಬಂದರುಗಳ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ನಿಯಂತ್ರಕ ಚೌಕಟ್ಟನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು. ಗೌರವ ಅತಿಥಿ ಎಂಆರ್ಪಿಎಲ್ ನಿರ್ದೇಶಕರಾದ (ರಿಫೈನರಿ) ನಂದಕುಮಾರ್ ವಿ. ಪಿಳ್ಳೈ ಅವರು ಕೈಗಾರಿಕಾ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರವನ್ನು ಶ್ಲಾಘಿಸಿದರು. ತಾಂತ್ರಿಕ ಗೋಷ್ಠಿ: ಭಾರತ ಸರಕಾರದ ಮಾಜಿ ನೌಕಾಯಾನ ಸಲಹೆಗಾರರಾದ ಕ್ಯಾಪ್ಟನ್ ಎಲ್. ಕೆ. ಪಾಂಡಾ ಮತ್ತು ಮುಂಬೈ ಬಂದರು ಪ್ರಾಧಿಕಾರದ ಮಾಜಿ ಡೆಪ್ಯುಟಿ ಕನ್ಸರ್ವೇಟರ್ ಕ್ಯಾಪ್ಟನ್ ಆನಂದ್ ಡಬ್ಲ್ಯೂ.ಕರ್ಕರೆ ಅವರು ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಎನ್ಎಂಪಿಎ ಉಪಸಂರಕ್ಷಕ ಕ್ಯಾಪ್ಟನ್ ಮನೋಜ್ ಜೋಶಿ , ಸರ್ವೆಯರ್ ಇನ್ಚಾರ್ಜ್ ಉಬೈದುಲ್ಲಾ ರಹಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 50 ಮಿಲಿಯನ್ ಟನ್ ಸರಕು ನಿರ್ವಹಣೆ: ಎನ್ಎಂಪಿಎ ಐತಿಹಾಸಿಕ ದಾಖಲೆ ನವಮಂಗಳೂರು ಬಂದರು ಪ್ರಾಧಿಕಾರವು (ಎನ್ಪಿಎ) ತನ್ನ ಸ್ಥಾಪನೆಯ 50ನೇ ಹಣಕಾಸು ವರ್ಷದಲ್ಲಿ (ಸುವರ್ಣ ಮಹೋತ್ಸವ ವರ್ಷ) ಐತಿಹಾಸಿಕ ಸಾಧನೆ ಮಾಡಿದೆ. 2025-26ನೇ ಸಾಲಿನಲ್ಲಿ ಬಂದರು ಒಟ್ಟು 50.04 ಮಿಲಿಯನ್ ಟನ್ (ಎಂಟಿ) ಸರಕು ನಿರ್ವಹಣೆ ಮಾಡುವ ಮೂಲಕ ತನ್ನದೇ ಆದ ಹಳೆಯ ದಾಖಲೆಗಳನ್ನು ಮುರಿದಿದೆ. ಬಂದರಿನ ಇತಿಹಾಸದಲ್ಲೇ ಇದು ಅತ್ಯಧಿಕ ವಾರ್ಷಿಕ ಸರಕು ನಿರ್ವಹಣೆಯಾಗಿದೆ. ಈ ಮೈಲಿಗಲ್ಲು ಭಾರತದ ಪಶ್ಚಿಮ ಕರಾವಳಿಯ ಪ್ರಮುಖ ಪ್ರವೇಶ ದ್ವಾರವಾಗಿ ಎನ್ಎಂಪಿಎ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಈ ಸಾಧನೆಗೆ ಸಹಕರಿಸಿದ ಪ್ರಮುಖ ಕಂಪನಿಗಳು, ಕಸ್ಟಮ್ಸ್ ಇಲಾಖೆ ಮತ್ತು ಎಲ್ಲಾ ಪಾಲುದಾರರಿಗೆ ಬಂದರು ಪ್ರಾಧಿಕಾರವು ಧನ್ಯವಾದ ಅರ್ಪಿಸಿದೆ. ಎನ್ಎಂಪಿಎ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ , ಮತ್ತು ಉಪಾಧ್ಯಕ್ಷೆ ಎಸ್. ಶಾಂತಿ ಅವರ ನಾಯಕತ್ವದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಪ್ರಕಟನೆ ತಿಳಿಸಿದೆ. ಈ ಐತಿಹಾಸಿಕ ಕ್ಷಣವನ್ನು ಬುಧವಾರ ಸಂಜೆ ಬಂದರು ಉದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.
ಆಳಂದ | ಶಾಲಾ ಅಭಿವೃದ್ಧಿಗೆ ಎಸ್ಡಿಎಂಸಿ ಸಕ್ರಿಯತೆ ಅಗತ್ಯ: ಅಣ್ಣಪ್ಪ ಹಾದಿಮನಿ
ಆಳಂದ : ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿಯೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ತಿಳಿಸಿದರು. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 2025–26ನೇ ಸಾಲಿನ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳ ಪ್ರಗತಿಗೆ ಮುಖ್ಯಗುರುಗಳು ಮತ್ತು ಎಸ್ಡಿಎಂಸಿ ಸದಸ್ಯರ ಸಹಕಾರ ಅತ್ಯವಶ್ಯಕ ಎಂದು ಹೇಳಿದರು. ಶಾಲಾ ಸೌಲಭ್ಯಗಳು, ಮಕ್ಕಳ ಪ್ರಗತಿ ದಾಖಲಾತಿ, ಮಧ್ಯಾಹ್ನದ ಬಿಸಿ ಊಟ, ಶಾಲಾ ಪರಿಸರ, ಮೂಲಭೂತ ಸೌಕರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಸ್ಡಿಎಂಸಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಶಾಲೆಗಳು ಅಭಿವೃದ್ಧಿಯತ್ತ ಸಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬೇನಾಜಿ ಸೂರ್ಯವಂಶಿ ಮಾತನಾಡಿ, ಅಕ್ಷರ ದಾಸೋಹ ಯೋಜನೆಯಡಿ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದ್ದು, ಪ್ರತಿಯೊಬ್ಬ ಮಗುವಿಗೂ ಇದರ ಪ್ರಯೋಜನ ತಲುಪುವಂತೆ ಎಸ್ಡಿಎಂಸಿ ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಆರ್ಪಿ ವೀರೇಶ್ ಬೋಳಶೆಟ್ಟಿ ಅವರು ಮುಖ್ಯಗುರುಗಳು ಮತ್ತು ಎಸ್ಡಿಎಂಸಿ ಸದಸ್ಯರಿಗೆ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಶೈಕ್ಷಣಿಕ ಪ್ರವಾಸ, ಹಬ್ಬಗಳ ಆಚರಣೆ, ಶಾಲಾ ಅಭಿವೃದ್ಧಿ ಯೋಜನೆ ಹಾಗೂ ಭೌತಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಬಾಲಕರ ಪ್ರೌಢಶಾಲೆಯ ತಾನಾಜಿ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರವೀಂದ್ರ ಕಂಟೇಕೋರೆ ಮಾರ್ಗದರ್ಶನ ನೀಡಿದರು. ಹೊದಲೂರ, ಖಜೂರಿ, ಮಟಕಿ ಮತ್ತು ಆಳಂದ ದಕ್ಷಿಣ ಕ್ಲಸ್ಟರ್ನ ಸರ್ಕಾರಿ ಶಾಲೆಗಳ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಮಟಗಿ ಕ್ಲಸ್ಟರ್ನ ಸಿಆರ್ಪಿ ಸಿದ್ದಾರ್ಥ್ ವಂದಿಸಿದರು.
ಕೆಎಂಸಿಯಲ್ಲಿ ಉಡುಪಿ ಜಿಲ್ಲೆಯ ಮೊದಲ ಮೃತ ದಾನಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ
ಮಣಿಪಾಲ, ಎ.1: ಮಾಹೆಯ ಸಹ ಘಟಕವಾದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪರಿಣಿತ ವೈದ್ಯರು ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಮೃತ ದಾನಿಯೊಬ್ಬರ ಯಕೃತ್ನ(ಲೀವರ್) ಕಸಿ ಶಸ್ತ್ರಚಿಕಿತ್ಸೆಯನ್ನು ರೋಗಿ ಯೊಬ್ಬರ ಮೇಲೆ ಯಶಸ್ವಿಯಾಗಿ ನಡೆಸಿದ್ದಾರೆ. ಯಕೃತ್ ಕಸಿ ಮಾಡಿಸಿಕೊಂಡ 56ರ ಹರೆಯದ ರೋಗಿ ಈಗ ಆರೋಗ್ಯವಂತರಾಗಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಡಾ.ರಾಮದಾಸ ಎಂ.ಪೈ ಬ್ಲಾಕ್ನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹೆಯ ಬೋಧನಾ ಆಸ್ಪತ್ರೆಯ ಸಿಒಒ ಡಾ.ಸುಧಾಕರ ಕಾಂತಿಪುಡಿ ತಿಳಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕೃಿಯಗೊಂಡ 42ಹರೆಯದವರ ಲೀವರ್ನ್ನು ದಾನ ಮಾಡಲು ದು:ಖಿತ ಕುಟುಂಬ ನಿರ್ಧರಿಸಿದ್ದು, ಇದರಿಂದಾಗಿ ಯಕೃತ್ನ ತೀವ್ರ ತೊಂದರೆಯಿಂದ ಬಳಲುತಿದ್ದ ಕೋಟೇಶ್ವರ ಮೂಲದ ರೋಗಿ ಅದನ್ನು ಪಡೆದು ಆರೋಗ್ಯವನ್ನು ಮರಳಿ ಪಡೆಯಲು ಸಾಧ್ಯವಾಯಿತು ಎಂದವರು ಹೇಳಿದರು. ದೀರ್ಘಕಾಲದ ಯಕೃತ್ (ಲೀವರ್) ಕಾಯಿಲೆ ಮತ್ತು ಪೋರ್ಟಲ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯನ್ನು ಮೃತ ದಾನಿಯ ಕಸಿ ಕಾರ್ಯಕ್ರಮದಡಿಯಲ್ಲಿ ವಿವರವಾದ ಬಹು ಆಯಾಮ ಮೌಲ್ಯಮಾಪನಕ್ಕೆ ಒಳಪಡಿಸಿ, ಎಚ್ಚರಿಕೆಯ ಯೋಜನೆ ಮತ್ತು ಅಂಗಾಂಗ ಹಂಚಿಕೆ ಮಾರ್ಗಸೂಚಿಗಳಂತೆ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಡಾ.ಸುಧಾಕರ್ ವಿವರಿಸಿದರು. ಶಸ್ತ್ರಚಿಕಿತ್ಸೆಯ ನಂತರ, ಅವರನ್ನು ವೈದ್ಯರ ತೀವ್ರ ನಿಗಾದಲ್ಲಿರಿಸಿ ರಚನಾತ್ಮಕ ಮೇಲ್ವಿಚಾರಣೆ ಮತ್ತು ಪ್ರೋಟೋ ಕಾಲ್-ಚಾಲಿತ ಆರೈಕೆಯೊಂದಿಗೆ ಕಸಿ ಆರೈಕೆಗಾಗಿಯೇ ಮೀಸಲಾದ ಐಸಿಯುನಲ್ಲಿ ಇರಿಸಲಾಯಿತು. ಅವರ ಚೇತರಿಕೆ ಸ್ಥಿರವಾಗಿ ಮುಂದುವರೆದ ಕಾರಣ ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಗೊಳಿಸಲಾಗಿದೆ ಎಂದರು. ಕಸ್ತೂರ್ಬಾ ಆಸ್ಪತೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಮತವರ ತಂಡ ಆರಂಭಿಕ ಮೌಲ್ಯಮಾಪನದ ವೇಳೆ ಯಕೃತ್ ಕಸಿಯಿಂದ ಮಾತ್ರ ಅವರು ಬದುಕುಳಿದು ಚೇತರಿಕೆಗೆ ಉತ್ತಮ ಅವಕಾಶವಿದೆ ಎಂಬ ನಿರ್ಧಾರಕ್ಕೆ ಬಂದಿತ್ತು. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಜಯಂತ್ ರೆಡ್ಡಿ ನೇತೃತ್ವದ ತಂಡ ಮಣಿಪಾಲದ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ.ಬೆಂಗಳೂರಿನ ಡಾ.ದೀಪ್ತಿ ರಾಮಚಂದ್ರ, ಮಣಿಪಾಲ ಗ್ಯಾಸ್ಟ್ರೋ ಎಂಟರಾಲಜಿ ಸರ್ಜರಿ ವಿಭಾಗದ ಡಾ.ಭರತ್ಕುಮಾರ್ ಭಟ್ ಮತ್ತವರ ಬಹುಶಿಸ್ತೀಯ ತಂಡವನ್ನು ಇದರಲ್ಲಿ ಪಾಲ್ಗೊಂಡಿತ್ತು ಎಂದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಯುತ್ತಿ ರುವ ಲಿವರ್ ಕಸಿ ಶಸ್ತ್ರಚಿಕಿತ್ಸೆ ಉಡುಪಿ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ಹೊಸ ಆಶಾಕಿರಣವಾಗಿದೆ ಎಂದು ಕೆಎಂಸಿಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ತಿಳಿಸಿದರು. ಮಾನವ ದೇಹದ ಬಹುಮುಖ್ಯ ಅಂಗವಾಗಿರುವ ನೂರಾರು ಕಾರ್ಯಗಳನ್ನು ನೆರವೇರಿಸುವ ಯಕೃತ್ನ್ನು ಭಾಗಶ: ದಾನ ಮಾಡಿದರೂ, ಕೆಲವೇ ಸಮಯದಲ್ಲಿ ಮತ್ತೆ ಅದು ಚಿಗುರಿಕೊಳ್ಳುತ್ತದೆ. ಮಾನವ ದೇಹದಲ್ಲಿ ಮತ್ತೆ ಬೆಳೆಯುವ ಏಕೈಕ ಅಂಗ ಇದಾಗಿದೆ. ಹೀಗಾಗಿ ಸಂಬಂಧಿಗಳಲ್ಲಿ ಯಾರಾದರೂ ಯಕೃತ್ ತೊಂದರೆಗೊಳಗಾಗಿದ್ದರೆ ಅವರ ಕುಟುಂಬದವರೇ ಯಾರಾದರೂ ತನ್ನ ಯಕೃತ್ನ ಕೆಲ ಭಾಗವನ್ನು ದಾನ ಮಾಡಬಹುದು ಎಂದು ಡಾ.ಜಯಂತ್ ರೆಡ್ಡಿ ತಿಳಿಸಿದರು. ದೇಶದಲ್ಲೀಗ 25,000 ಮಂದಿ ಯಕೃತ್ ದಾನಿಗಳಿಗಾಗಿ ಕಾಯತಿದ್ದಾರೆ. ಒಂದು ವರ್ಷದಲ್ಲಿ ಸುಮಾರು 1000 ಮಂದಿ ಮಾತ್ರ ದಾನಿಗಳ ಯಕೃತ್ ಕಸಿಯ ಮೂಲಕ ಮರುಜೀವ ಪಡೆದಿದ್ದಾರೆ ಎಂದರು. ಅತಿಯಾದ ಮದ್ಯಪಾನ, ದೇಹದಲ್ಲಿ ಅತಿಯಾದ ಕೊಬ್ಬಿನಂಶ ಶೇಖರಣೆ ಹಾಗೂ ವಿವಿಧ ಸೋಂಕುಗಳಿಂದ ಯಕೃತ್ ರೋಗಪೀಡಿತವಾಗುತ್ತದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಡಾ. ದೀಪ್ತಿ ರಾಮಚಂದ್ರ, ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಡಾ. ಶಿರನ್ ಶೆಟ್ಟಿ, ಡಾ. ಜಯಂತ್ ರೆಡ್ಡಿ, ಡಾ. ಭರತ್ ಭಟ್ ಉಪಸ್ಥಿತರಿದ್ದರು.
IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ! FIR ದಾಖಲಿಸಿ ತನಿಖೆಗೆ ಅನುಮತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಗಿದೆ. ಈ ಹಿಂದೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಅಕ್ರಮವೊಂದರ ಕೇಸ್ನಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಲು ಹೈಕೋರ್ಟ್ನಿಂದ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಬ್ಯಾಗ್ ಖರೀದಿಯಲ್ಲಿನ ಅಕ್ರಮ ಆರೋಪ ಬಂದಿದ್ದು, ಇದರಿಂದ ಬೊಕ್ಕಸಕ್ಕೆ 7.65 ಕೋಟಿ ನಷ್ಟವಾಗಿದೆ ಎನ್ನಲಾಗಿದೆ.
ಚಿತ್ತಾಪುರ | ಸಚಿವರ ಆಪ್ತ ಸಹಾಯಕರು ಕಾಮಗಾರಿ ನಿಲ್ಲಿಸಿಲ್ಲ : ಗುತ್ತೇದಾರ
ಚಿತ್ತಾಪುರ: ಸ್ಥಳೀಯ ಕಾಂಗ್ರೆಸ್ ಮುಖಂಡರ ಮಾತು ಕೇಳಿ ಸಚಿವರ ಆಪ್ತ ಸಹಾಯಕರು ಕಾಮಗಾರಿ ನಿಲ್ಲಿಸಿಲ್ಲ, ಇದು ಸತ್ಯಕ್ಕೆ ದೂರ ಎಂದು ದಿಗ್ಗಾಂವ ಗ್ರಾಮದ ಕಾಂಗ್ರೆಸ್ ಮುಖಂಡರಾದ ಶ್ರೀಮಂತ ಗುತ್ತೇದಾರ, ಮಲ್ಲಿನಾಥ ಪಾಟೀಲ್ ಹಾಗೂ ಸುಭಾಶ್ಚಂದ್ರ ಪವಾರ್ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಗ್ಗಾಂವ ಗ್ರಾಮದಲ್ಲಿ ಅಲ್ಟ್ರಾಟೇಕ್ ಸಿಮೆಂಟ್ ಕಂಪೆನಿಯ ವತಿಯಿಂದ ಸಿಎಸ್ಆರ್ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿಲ್ಲ, ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಮಸ್ಥರ ಆಗ್ರಹವೆಂದರೆ ಕಾಮಗಾರಿಗಳನ್ನು ಗುಣಮಟ್ಟದಿಂದ ನಡೆಸಬೇಕು ಎಂಬುದೇ ಹೊರತು, ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿ ಗ್ರಾಮಾಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ. ಆದರೆ, ಅವುಗಳನ್ನು ನಿಯಮಾನುಸಾರ ಹಾಗೂ ದೀರ್ಘಕಾಲಿಕವಾಗಿ ಉಪಯೋಗವಾಗುವಂತೆ ಗುಣಮಟ್ಟದಿಂದ ಮಾಡಬೇಕು. ಕಳಪೆ ಕಾಮಗಾರಿ ಮಾಡಿದರೆ ಭವಿಷ್ಯದಲ್ಲಿ ಅವು ಬಳಕೆಗೆ ಬಾರದಂತಾಗಬಹುದು ಎಂದು ಪ್ರಶ್ನಿಸಿದರು. ಕಂಪೆನಿಯ ಅಧಿಕಾರಿ ಸೋಮಶೇಖರ್ ಅವರಿಗೆ ಈ ಕುರಿತು ಗಮನಕ್ಕೆ ತಂದರೂ ಸಮರ್ಪಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ದೂರಿದರು. “ಗ್ರಾಮಸ್ಥರ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಬೇಕು” ಎಂದು ಒತ್ತಾಯಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಗುಣಮಟ್ಟದ ಕಾಮಗಾರಿಗಳನ್ನೇ ಬೆಂಬಲಿಸುತ್ತಾರೆ ಎಂದು ಹೇಳಿದರು. ಗ್ರಾಮಸ್ಥರೂ ಸಹ ಗುಣಮಟ್ಟದ ಅಭಿವೃದ್ಧಿಯನ್ನೇ ಬಯಸುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಶೌಚಾಲಯ, ಸಣ್ಣ ಹಳ್ಳದ ಬಳಿ ಬ್ರಿಡ್ಜ್ ಹತ್ತಿರ ಮಹಿಳಾ ಶೌಚಾಲಯ, ಬಾವಿ ಹೂಳೆತ್ತುವ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಅವುಗಳ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಗನ್ನಾಥ ಸೀದಾ, ಜಗನ್ನಾಥ ಇಟಗಾ, ಮಲ್ಲಿನಾಥ ಕುಕನೂರ ಸೇರಿದಂತೆ ಇತರರು ಇದ್ದರು.
ಕಾವೂರು| ಫಲ್ಗುಣಿ ನದಿಯಲ್ಲಿ ಮುಳುಗಿ ಓರ್ವ ಯುವಕ ಮೃತ್ಯು, ಇನ್ನೋರ್ವ ನಾಪತ್ತೆ
ಕಾವೂರು: ದೋಣಿಯಲ್ಲಿ ಮೀನು ಹಿಡಿಯಲು ಫಲ್ಗುಣಿ ನದಿಗೆ ತೆರಳಿದ್ದ ಮೂವರು ಯುವಕರ ಪೈಕಿ ಓರ್ವ ಯುವಕ ನೀರುಪಾಲಾಗಿದ್ದು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಕಾವೂರು ಕುಂಜತ್ತಬೈಲ್ ನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತ ಯುವಕನನ್ನು ಕುಂಜತ್ತಬೈಲ್ ನಿವಾಸಿ ಗಣೇಶ್ (28) ಎಂದು ಗುರುತಿಸಲಾಗಿದ್ದು, ರಾಯಲ್ (27) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೀನು ಹಿಡಿಯಲೆಂದು ಮೂವರು ಗೆಳೆಯರು ಸಣ್ಣ ದೋಣಿಯೊಂದರಲ್ಲಿ ಫಲ್ಗುಣಿ ನದಿಗೆ ತೆರಳಿದ್ದರು. ಮೀನು ಹಿಡಿಯುತ್ತಿದಾಗ ಆಯಾತಪ್ಪಿ ದೋಣಿ ಮಗುಚಿ ನದಿಗೆ ಬಿದ್ದಿದೆ ಎನ್ನಲಾಗಿದ್ದು, ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ಈಜಲು ಬಾರದ ಗಣೇಶ್ ಹಾಗೂ ರಾಯಲ್ ನೀರಿನಲ್ಲಿ ಮುಳುಗಿದ್ದು, ನಿತೇಶ್ (29) ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ನದಿಯಲ್ಲಿ ಮುಳುಗಿದ್ದ ಯುವಕರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿ ಮಧ್ಯಾಹ್ನ ವೇಳೆಗೆ ಗಣೇಶ್ ಮೃತದೇಹ ಪತ್ತೆಹಚ್ಚಿದ್ದಾರೆ. ರಾಯಲ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ತಾಪುರ | ಎ.4 ರಂದು ಕಂಬಳೇಶ್ವರ ಶ್ರೀಗಳ ಜನ್ಮ ದಿನೋತ್ಸವ ಪ್ರಯುಕ್ತ ಉಚಿತ ನೇತ್ರ ತಪಾಸಣೆ
ಚಿತ್ತಾಪುರ : ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರ 59 ನೇ ಜನ್ಮದಿನದ ಪ್ರಯುಕ್ತ ವೇದಾ ಕಣ್ಣಿನ ಆಸ್ಪತ್ರೆ ಯಾದಗಿರಿ ಮತ್ತು ದೃಷ್ಟಿ ಕಣ್ಣಿನ ಆಸ್ಪತ್ರೆ ಕಲಬುರಗಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಎ.4 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಮಲ್ಲು ಇಂದೂರ, ನಾಗರೆಡ್ಡಿ ಗೋಪಸೇನ್ ಅವರು ಹೇಳಿದರು. ಪಟ್ಟಣದ ಕಂಬಳೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಕಂಬಳೇಶ್ವರ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ನುರಿತ ವೈದ್ಯರಿಂದ ಕಣ್ಣಿನ ತಪಾಸಣೆ ನಡೆಯಲಿದೆ ಹಾಗೂ ಬಿಪಿ, ಶುಗರ್ ತಪಾಸಣೆ ನಡೆಯಲಿದೆ, ಹೀಗಾಗಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಾಗರಾಜ ರೇಶ್ಮಿ, ಪ್ರಸಾದ್ ಅವಂಟಿ, ಜಗದೇವ ದಿಗ್ಗಾಂವಕರ್, ದೇವಿಂದ್ರ ಅರಣಕಲ್ ಇದ್ದರು.
ಮಾವನಿಂದ ಜೀವನಾಂಶ ಪಡೆಯಲು ವಿಧವೆ ಅರ್ಹಳು: Allahabad High Court
ಅಲಹಾಬಾದ್, ಎ. 1: ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ, ಪತಿಯ ನಿಧನದ ಬಳಿಕವೂ ತನ್ನ ಪತ್ನಿಯನ್ನು ಪೋಷಿಸುವ ಆತನ ಕಾನೂನುಬದ್ಧ ಬಾಧ್ಯತೆ ಅಂತ್ಯಗೊಳ್ಳುವುದಿಲ್ಲ ಎಂದು ಹೇಳಿದೆ. ವಿಧವೆಯೋರ್ವಳು ತನ್ನ ಪತಿಯ ಆಸ್ತಿಯಿಂದ ಜೀವನಾಂಶವನ್ನು ಪಡೆಯಬಹುದು ಮತ್ತು ಒಂದು ವೇಳೆ ಅದು ಸಾಲದಿದ್ದರೆ ತನ್ನ ಮಾವನಿಂದ ಕೇಳಬಹುದು ಎಂದು ಎತ್ತಿ ಹಿಡಿದಿದೆ. ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆಯನ್ನು ನೀಡಿದ್ದಕ್ಕಾಗಿ ತನ್ನ ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆತ್ತಿಕೊಂಡ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅರ್ಜಿದಾರ ಅಕುಲ್ ರಸ್ತೋಗಿ ಪರ ವಕೀಲರು, ರಾಮ್ಪುರ ಕುಟುಂಬ ನ್ಯಾಯಾಲಯದ ಫೆ. 6ರ ಆದೇಶದಿಂದ ತನ್ನ ಕಕ್ಷಿದಾರರು ನೊಂದುಕೊಂಡಿದ್ದಾರೆ ಎಂದು ವಾದಿಸಿದರು. ಅವರ ಪತ್ನಿ ಜೀವನಾಂಶ ಪಡೆಯಲು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕೆ ಹಲವಾರು ಕಾರಣಗಳಿವೆ. ತಾನು ಉದ್ಯೋಗಸ್ಥ ಮಹಿಳೆ ಎನ್ನುವುದನ್ನು ಬಚ್ಚಿಟ್ಟು, ಆಕೆ ತಾನು ಗೃಹಿಣಿ ಎಂದು ಹೇಳಿಕೊಂಡಿದ್ದಾರೆ. ಬ್ಯಾಂಕುಗಳಲ್ಲಿ 20 ಲಕ್ಷ ರೂ.ಗೂ ಹೆಚ್ಚಿನ ಸ್ಥಿರ ಠೇವಣಿಯನ್ನು ಹೊಂದಿರುವುದಾಗಿ ಆಕೆ ಹೇಳಿಕೊಂಡಿದ್ದರು. ಪ್ರಶ್ನಿಸಿದಾಗ, ಈ ಠೇವಣಿಯನ್ನು ತನ್ನ ತಂದೆ ತನ್ನ ಹೆಸರಿನಲ್ಲಿ ಇಟ್ಟಿದ್ದರು. ಆದಾಗ್ಯೂ ಖಾತೆಯಲ್ಲಿ ಕೇವಲ ನಾಲ್ಕು ಲಕ್ಷ ರೂ.ಗಳಿವೆ, ಉಳಿದ ಹಣವನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ಆಕೆ ತಿಳಿಸಿದ್ದಾರೆ ಎಂದು ವಾದಿಸಿದರು. ವಕೀಲರು ಅರ್ಜಿಯನ್ನು ಬೆಂಬಲಿಸಲು ಯಾವುದೇ ಪುರಾವೆಯನ್ನು ಒದಗಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಹೇಳಿದ ಪೀಠವು ಮೇಲ್ಮನವಿಯನ್ನು ತಿರಸ್ಕರಿಸಿತು. ಮಾಹಿತಿಯನ್ನು ಮುಚ್ಚಿಡುವುದು ಸುಳ್ಳು ಹೇಳಿಕೆಯೆಂದು ಪರಿಗಣಿಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು. ಮಗಳ ಮದುವೆಯ ಬಳಿಕ ಆಕೆಯ ನಿರ್ವಹಣೆಯ ಯಾವುದೇ ಜವಾಬ್ದಾರಿ ಹೊಂದಿರದ ತಂದೆ ಆಕೆಯ ಹೆಸರಿನಲ್ಲಿ ಸ್ಥಿರ ಠೇವಣಿಗಳನ್ನು ಇಟ್ಟಿದ್ದರು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಈಗ ಖಾತೆಯಲ್ಲಿ ಕೇವಲ ನಾಲ್ಕು ಲಕ್ಷ ರೂ.ಗಳು ಉಳಿದಿದ್ದು, ಮಹಿಳೆಯು ಜೀವನ ನಿರ್ವಹಿಸಲು ಹಣಕಾಸು ಬೆಂಬಲದ ಅಗತ್ಯವಿದೆ ಎಂದು ತಿಳಿಸಿತು. ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಅಲಹಾಬಾದ್ ಉಚ್ಚ ನ್ಯಾಯಾಲಯವು, ಪತ್ನಿಗೆ ಜೀವನಾಂಶವನ್ನು ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿತು. ತನ್ನ ಪತ್ನಿಗೆ ಜೀವನಾಂಶವನ್ನು ಪಾವತಿಸುವುದು ಪತಿಯ ಕರ್ತವ್ಯವಾಗಿದೆ. ದಂಪತಿಗಳು ಪ್ರತ್ಯೇಕಗೊಂಡಾಗ ಮತ್ತು ಪತ್ನಿಯು ಕ್ರಿಮಿನಲ್ ಕಾನೂನುಗಳ ಆಧಾರದಲ್ಲಿ ಅಥವಾ ಹಿಂದು ಕಾನೂನಿನಲ್ಲಿನ ಜೀವನಾಂಶ ನಿಬಂಧನೆಗಳಿಗೆ ಅನುಗುಣವಾಗಿ ಜೀವನಾಂಶವನ್ನು ಕೋರಿದಾಗ ಈ ಬಾಧ್ಯತೆಯು ಹುಟ್ಟಿಕೊಳ್ಳುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ಚಿತ್ತಾಪುರ | ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಲಿ : ದೇವಪ್ಪ ನಂದೂರಕರ್ ಕರೆ
ಚಿತ್ತಾಪುರ : ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಇಂದು ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಅವುಗಳ ಬಲವರ್ಧನೆಗೆ ಮುಂದಾಗಬೇಕು ಎಂದು ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್ ಕರೆ ನೀಡಿದರು. ತಾಲೂಕಿನ ಹೊಸ್ಸೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ವರ್ಷ ಕನಿಷ್ಠ 50ಕ್ಕೂ ಹೆಚ್ಚು ಹೊಸ ವಿದ್ಯಾರ್ಥಿಗಳನ್ನು ದಾಖಲಿಸುವ ಗುರಿ ಹೊಂದೋಣ ಎಂದು ಪೋಷಕರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ 8ನೇ ತರಗತಿ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು 7ನೇ ತರಗತಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಮೂಲಕ ಶೈಕ್ಷಣಿಕ ಪರಂಪರೆಯನ್ನು ಮುಂದುವರಿಸಿದರು. ಇದೇ ವೇಳೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಎಲ್ಎಫ್ ಶಿಕ್ಷಕರಾದ ಫತೃಬಿ ಮಂಜೂರಬಾಬಾ ಹಾಗೂ ಬುಗ್ಗಪ್ಪ ಭೀಮಣ್ಣ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಲ್ಲಿ ಪೊಲೀಸ್, ಶಿಕ್ಷಣ, ನ್ಯಾಯಾಂಗ, ಆರೋಗ್ಯ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ 50ಕ್ಕೂ ಹೆಚ್ಚು ಸಾಧಕರನ್ನು ಮುಖ್ಯಗುರು ಜಗನ್ನಾಥ ಬಡಿಗೇರ ಅವರು ಸನ್ಮಾನಿಸಿದರು. ಅಮೀನಸಾಬ್ ಹವಾಲ್ದಾರ್, ಅಬ್ದುಲ್ ರಹಮಾನ್ ರುಸ್ತುಂ, ಮೈಬೂಬ ಹವಾಲ್ದಾರ್, ಮಲ್ಲಿಕಾರ್ಜುನ ಕಣಸೂರ ಸೇರಿದಂತೆ ಹಲವರು ಗೌರವ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಕಿರುನಾಟಕ ಮತ್ತು ಅಭಿನಯ ಗೀತೆಗಳು ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಎಸ್ಡಿಎಂಸಿ ಅಧ್ಯಕ್ಷ ಸಂಜೀವ ರೆಡ್ಡಿ ಜಾಕನಳ್ಳಿ, ಈಶಣ್ಣ ಸಜ್ಜನ, ಭೀಮಣ್ಣ ಶೀಭಾ, ಗೌಸೋದೀನ್ ರುಸ್ತುಂ, ವಿಜಯಕುಮಾರ್ ಭಂಕಲಗಿ, ಸಿಆರ್ಪಿ ಶಿವಾನಂದ್ ಹಾಗೂ ಶಿಕ್ಷಕರು ಇದ್ದರು. ಶಿಲ್ಪಾ, ಮಲ್ಲು ಶೀಭಾ ನಿರೂಪಿಸಿದರು, ಭೀಮರಾಯ ವಂದಿಸಿದರು.
ಎ.2ರಂದು ʼNNOʼ ಮೂಡುಬಿದಿರೆ ಕಮ್ಯೂನಿಟಿ ಸೆಂಟರ್ ಉದ್ಘಾಟನೆ
ಮೂಡುಬಿದಿರೆ: ಸಾರ್ವಜನಿಕರಿಗೆ ಉಚಿತ ಸೇವೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿರುವ ʼNNOʼ (ನಮ್ಮ ನಾಡ ಒಕ್ಕೂಟ) ಮೂಡುಬಿದಿರೆ ಕಮ್ಯೂನಿಟಿ ಸೆಂಟರ್ ಎ.2ರಂದು ಮೂಡುಬಿದಿರೆಯಲ್ಲಿ ಉದ್ಘಾಟನೆಯಾಗಲಿದೆ. ʼNNOʼ ಟ್ರಸ್ಟ್ ಪ್ರಸ್ತುತ ಬೆಂಗಳೂರು, ಮಂಗಳೂರು, ಪಡುಬಿದ್ರೆ, ಉಡುಪಿ, ಕಾರ್ಕಳ ಹಾಗೂ ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ವಿಸ್ತರಣೆಯ ಭಾಗವಾಗಿ ಎ.2ರಂದು ಮೂಡುಬಿದಿರೆಯಲ್ಲಿ ಉದ್ಘಾಟನೆಯಾಗಲಿದೆ. ʼNNOʼ ಟ್ರಸ್ಟ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ, ಮಾರ್ಗದರ್ಶನ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ಹಾಗೂ ದಾಖಲೆ ಮತ್ತು ಅರ್ಜಿ ಪ್ರಕ್ರಿಯೆಯ ಸೇವೆ ನೀಡಲಾಗುತ್ತದೆ. ಈ ಯೋಜನೆಯು ಅಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಮತ್ತು ಜಿಲ್ಲಾ ಅಧ್ಯಕ್ಷರಾದ ಡಾ. ಆರಿಫ್ ಮಸೂದ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಮೂಡುಬಿದಿರೆ ಕೇಂದ್ರವನ್ನು ತಾಲೂಕು ಅಧ್ಯಕ್ಷರಾದ ನೂರುದ್ದೀನ್, ಕಾರ್ಯದರ್ಶಿ ಅಬ್ದುಲ್ ರಝಾಕ್, ಖಜಾಂಚಿ ಎಲ್.ಆರ್. ರಿಝ್ವಾನ್ ಹಾಗೂ ಟ್ರಸ್ಟಿ ಅಬ್ದುಲ್ ಹಮೀದ್ ಅವರು ನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
West Bengal S I R | 47 ಲಕ್ಷ ಆಕ್ಷೇಪಗಳ ಇತ್ಯರ್ಥ: ಸುಪ್ರೀಂ ಕೋರ್ಟ್
ಕೋಲ್ಕತಾ, ಎ. 1: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR)ಯ ಪ್ರಗತಿಯ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೃಪ್ತಿ ವ್ಯಕ್ತಪಡಿಸಿದೆ. ಮಾ.31ರ ವೇಳೆಗೆ ಒಟ್ಟು 60 ಲಕ್ಷ ಪೈಕಿ 47.4 ಲಕ್ಷ ಆಕ್ಷೇಪಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ಎ.7ರ ಗಡುವು ವಿಧಿಸಿದೆ. ಆಕ್ಷೇಪಗಳ ಇತ್ಯರ್ಥ ಪ್ರಕ್ರಿಯೆ ಬಗ್ಗೆ ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ನೀಡಿರುವ ಎರಡು ವರದಿಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಾಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು. ‘‘ನಮಗೆ ತುಂಬಾ ಸಂತೋಷವಾಗಿದೆ ಹಾಗೂ ವಿಷಯಗಳು ಮತ್ತು ಅಂಕಿ-ಅಂಶಗಳ ಬಗ್ಗೆ ನಾವು ಭರವಸೆ ಹೊಂದಿದ್ದೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಪ್ರತಿ ದಿನ ಸುಮಾರು 1.75 ಲಕ್ಷದಿಂದ 2 ಲಕ್ಷದವರೆಗೆ ಆಕ್ಷೇಪಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮತದಾರರ ಪಟ್ಟಿಗಳಿಗೆ ಹೆಸರು ಸೇರ್ಪಡೆ ಅಥವಾ ಅವುಗಳಿಂದ ಹೆಸರುಗಳನ್ನು ಕೈಬಿಡುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಗಳ ವಿಚಾರಣೆಗೆ ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಾಧೀಶರು ಮತ್ತು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ 19 ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ ಎಂಬ ವಿಷಯವನ್ನು ಚುನಾವಣಾ ಆಯೋಗವು ನ್ಯಾಯಾಲಯದ ಗಮನಕ್ಕೆ ತಂದಿತು.
ಕದನ ವಿರಾಮಕ್ಕೆ ಮನವಿ ಮಾಡಿಲ್ಲ: ಟ್ರಂಪ್ ಹೇಳಿಕೆ ಬೆನ್ನಲ್ಲೆ ಇರಾನ್ ಸ್ಷಷ್ಟನೆ
ಟೆಹ್ರಾನ್: ಇರಾನ್ ಕದನ ವಿರಾಮಕ್ಕೆ ಮನವಿ ಸಲ್ಲಿಸಿದ್ದು, ಹಾರ್ಮುಝ್ ಜಲಸಂಧಿ ತೆರೆದಾಗ ಇದನ್ನು ಪರಿಗಣಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಈ ಹೇಳಿಕೆಯನ್ನು ಇರಾನ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಂತಹ ಯಾವುದೇ ಮನವಿಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಕದನ ವಿರಾಮಕ್ಕೆ ಮನವಿ ಮಾಡಿದೆ ಎಂಬ ಹೇಳಿಕೆ ನೀಡಿದ ಬೆನ್ನಿಗೇ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಹಾರ್ಮುಝ್ ಜಲಸಂಧಿ ಮುಕ್ತ, ಸ್ವತಂತ್ರ ಹಾಗೂ ಪಾರದರ್ಶಕವಾದಾಗ ಈ ಕುರಿತು ಪರಿಗಣಿಸಲಾಗುವುದು. ಅಲ್ಲಿಯವರೆಗೆ ನಾವು ಇರಾನ್ ಅನ್ನು ಅಳಿವಿನಂಚಿಗೆ ದೂಡುತ್ತೇವೆ ಎಂದು ಬರೆದಿದ್ದಾರೆ.
ಕುಂದಾಪುರ | ಸಣ್ಣ ಕಟ್ಟಿಗೆ ತುಂಡಿನಿಂದ ಹೆಚ್ಚಿನ ಅಡುಗೆ ತಯಾರಿಸಲು ಬಂದಿದೆ 'ಕಟ್ಟಿಗೆ ಸ್ಟವ್'!
ಕುಂದಾಪುರ: ವಾಣಿಜ್ಯ ಸಿಲಿಂಡರ್ ಪೂರೈಕೆ ಅಭಾವದಿಂದ ಎಲ್ಲೆಡೆ ಹೋಟೆಲ್, ಹಾಲ್, ಕ್ಯಾಂಟಿನ್ಗಳಿಗೆ ಅಡುಗೆ ತಯಾರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಕೆಲವೊಂದು ಹೋಟೆಲ್ ಮಾಲಕರು ಕೆಲ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕುಂದಾಪುರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವಿರುವ ಪಾರಿಜಾತ ಹೋಟೆಲ್ ನಲ್ಲಿ ಕೊಯಮತ್ತೂರಿ ನಿಂದ ಕಟ್ಟಿಗೆ ಸ್ಟವ್ (ವುಡ್ ಸ್ಟವ್) ವೊಂದನ್ನು ತರಿಸಿದ್ದಾರೆ. ಈ ಕಟ್ಟಿಗೆ ಸ್ಟವ್ ಗೆ ಹೆಚ್ಚಿನ ಕಟ್ಟಿಗೆ ಏನು ಬೇಕಾಗಿಲ್ಲ. ಕೇವಲ ಸಣ್ಣ ಒಂದು ತುಂಡು ಕಟ್ಟಿಗೆಯಿದ್ದರೆ ಸಾಕು ಒಂದು ಸಾಂಬಾರ್ ಸಿದ್ಧಪಡಿಸಬಹುದು. ಅಂದರೆ ಕಡಿಮೆ ಕಟ್ಟಿಗೆಯಲ್ಲಿ ಹೆಚ್ಚಿನ ಆಹಾರ ತಯಾರಿಸಲು ಈ ಕಟ್ಟಿಗೆ ಸ್ಟವ್ ಸಹಕಾರಿಯಾಗಿದೆ. ಇದನ್ನು ಕೊಯಮತ್ತೂರಿನಿಂದ ಸುಮಾರು 35 ಸಾವಿರ ರೂ. ಕೊಟ್ಟು ತರಿಸಲಾಗಿದ್ದು, ನಮಗೆ ಇಲ್ಲಿ ತಿಂಡಿ ಮಾಡಲು, ಮಿಕ್ಸರ್ ನಂತಹ ತಿಂಡಿಗಳನ್ನು ತಯಾರಿಸಲು ಹೆಚ್ಚಿನ ಗ್ಯಾಸ್ ಬೇಕಾಗುತ್ತದೆ. ಸಾಂಬಾರ್ ತಯಾರಿಗೂ ಗ್ಯಾಸ್ ನ ಅಗತ್ಯವಿದೆ. ಅದಕ್ಕಾಗಿ ಈ ಕಟ್ಟಿಗೆ ಸ್ಟವ್ ಅನ್ನು ತರಿಸಿದ್ದೇವೆ. ತಕ್ಕಮಟ್ಟಿಗೆ ಇದರಿಂದ ಪ್ರಯೋಜನವಾಗು ತ್ತಿದೆ. ಇದಕ್ಕೆ ವಿದ್ಯುತ್ ಸಂಪರ್ಕವೂ ಇರುವುದರಿಂದ ಬೆಂಕಿ ಜಾಸ್ತಿ ಉರಿಯಲು ಅನುಕೂಲವಾಗುತ್ತದೆ. ಕಡಿಮೆ ಮಾಡಲು ಸಹ ಅವಕಾಶವಿದೆ ಎನ್ನುತ್ತಾರೆ ಪಾರಿಜಾತ ಹೋಟೆಲ್ ಮಾಲಕರಾದ ಗಣೇಶ್ ಭಟ್.
ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಸುವುದನ್ನು ಯಾವ ಕಾನೂನೂ ನಿಷೇಧಿಸುವುದಿಲ್ಲ: ಛತ್ತೀಸ್ ಗಢ ಹೈಕೋರ್ಟ್
ರಾಯ್ಪರ: ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಸುವುದನ್ನು ಯಾವ ಕಾನೂನೂ ನಿಷೇಧಿಸುವುದಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಮನೆಗಳಲ್ಲಿ ಕ್ರಿಶ್ಚಿಯನ್ ಪ್ರಾರ್ಥನೆ ಆಯೋಜಿಸುವುದರಿಂದ ದೂರ ಉಳಿಯಬೇಕು ಎಂದು ಜಾಂಗೀರ್ ಚಂಪಾ ನಿವಾಸಿಗಳಿಗೆ ಪೊಲೀಸರು ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನರೇಶ್ ಕುಮಾರ್ ಚಂದ್ರವಂಶಿ, “ಯಾವುದೇ ವ್ಯಕ್ತಿ ತಾನು ವಾಸಿಸುವ ಮನೆಯಲ್ಲಿ ಪ್ರಾರ್ಥನೆ / ಪ್ರಾರ್ಥನಾ ಸಭೆಗಳನ್ನು ನಡೆಸುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇಲ್ಲ. ಮುಂದುವರಿದು, ಕಾನೂನನ್ನು ಉಲ್ಲಂಘಿಸದೆ ಆಯೋಜಿಸಲಾಗುವ ಪ್ರಾರ್ಥನೆ ಅಥವಾ ಪ್ರಾರ್ಥನಾ ಸಭೆಗಳನ್ನು ನಡೆಸಲು ಯಾವುದೇ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕಾದ ಅಗತ್ಯವೂ ಇಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಅಲ್ಲೇನಾದರೂ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದರೆ, ಪ್ರಾಧಿಕಾರಗಳು ಸೂಕ್ತ ಕಾನೂನುಗಳಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದೂ ನ್ಯಾಯಾಲಯ ಹೇಳಿದೆ. ಹೀಗಾಗಿ, ಅರ್ಜಿದಾರರ ನಾಗರಿಕ ಹಕ್ಕುಗಳ ಮಧ್ಯೆ ಪ್ರವೇಶಿಸಬಾರದು ಹಾಗೂ ಅವರಿಗೆ ವಿಚಾರಣೆಯ ಸೋಗಿನಲ್ಲಿ ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಭಟ್ಕಳ ಪುರಸಭೆ ನಗರಸಭೆಯಾಗಿ ಉನ್ನತೀಕರಣ: ಮೊದಲ ಕಮಿಷನರ್ ಆಗಿ ಬಾಬಾಸಾಹೇಬ್ ಮಾನೆ ಅಧಿಕಾರ ಸ್ವೀಕಾರ
ಭಟ್ಕಳ: ಪಟ್ಟಣ ಪುರಸಭೆ (ಟಿಎಂಸಿ)ಯನ್ನು ನಗರಸಭೆ (ಸಿಎಂಸಿ)ಯಾಗಿ ಉನ್ನತೀಕರಿಸಿದ ನಂತರ ಭಟ್ಕಳಕ್ಕೆ ಮೊದಲ ಬಾರಿಗೆ ನಗರಸಭಾ ಕಮಿಷನರ್ ಹುದ್ದೆ ಸೃಷ್ಟಿಯಾಗಿದ್ದು, ಬಾಬಾಸಾಹೇಬ್ ಮಾನೆ ಅವರು ಕಮಿಷನರ್ ಆಗಿ ಇದುವರೆಗೂ ಮುಖ್ಯಾಧಿಕಾರಿಯಾಗಿದ್ದ ವೆಂಕಟೇಶ್ ನಾವುಡಾ ಅವರಿಂದ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರ ಭಟ್ಕಳ ಪಟ್ಟಣವನ್ನು ಸಣ್ಣ ನಗರವಾಗಿ ಘೋಷಿಸಿ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಂಡು ಒಟ್ಟು 22.67 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಟ್ಕಳ ನಗರಸಭೆ ರಚನೆಗೆ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ಬೆಳಗಾವಿ ಜಿಲ್ಲೆಯ ಕುಡ್ಚಿ ಟಿಎಂಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬಾಬಾಸಾಹೇಬ್ ಮಾನೆ ಅವರನ್ನು ನೂತನ ಭಟ್ಕಳ ಸಿಎಂಸಿ ಕಮಿಷನರ್ ಆಗಿ ನಿಯೋಜಿಸಲಾಗಿದೆ. ಅಧಿಕಾರ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಪೂರೈಕೆ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದರು. ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಒಣ, ತೇವ ಮತ್ತು ಅಪಾಯಕಾರಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಒಪ್ಪಿಸುವಂತೆ ಮನವಿ ಮಾಡಿದರು. ನಗರದ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಜವಾಬ್ದಾರಿಯಿಂದ ಸಮರ್ಪಕವಾಗಿ ಪರಿಹರಿಸುವುದಾಗಿ ತಿಳಿಸಿದರು.
ದಿಲ್ಲಿ ಪೊಲೀಸ್ ಇಲಾಖೆಯಲ್ಲಿ 14,000 ಪೊಲೀಸರ ಕೊರತೆ: ರಾಜ್ಯಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ದಿಲ್ಲಿ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಒಟ್ಟು ಹುದ್ದೆಗಳ ಪೈಕಿ ಶೇ.14.5ರಷ್ಟು ಹುದ್ದೆಗಳ ಕೊರತೆ ಇದ್ದು, ಸಹಾಯಕ ಪೊಲೀಸ್ ಆಯುಕ್ತ ಹುದ್ದೆಯ ಹಂತದಲ್ಲಿ 346 ಹುದ್ದೆಗಳಲ್ಲಿ 152 ಹುದ್ದೆಗಳು ಖಾಲಿ ಉಳಿದಿವೆ. ಇದು ಒಟ್ಟು ಹುದ್ದೆಯ ಶೇ.44ರಷ್ಟಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಕುರಿತು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರಾಯ್, ದಿಲ್ಲಿ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಒಟ್ಟು 97,331 ಸಿಬ್ಬಂದಿಗಳ ಪೈಕಿ, ಮಾರ್ಚ್ 12, 2026ಕ್ಕೆ ಅಂತ್ಯಗೊಂಡಂತೆ 14,140 ಹುದ್ದೆಗಳು ಖಾಲಿ ಉಳಿದಿವೆ ಎಂದು ತಿಳಿಸಿದರು. 96,817 ಒಟ್ಟು ಮಂಜೂರಾದ ಹುದ್ದೆಗಳಲ್ಲಿ 13,958 ಹುದ್ದೆಗಳು ಕಾನ್ಸ್ಟೆಬಲ್ನಿಂದ ಇನ್ಸ್ಪೆಕ್ಟರ್ ಮಟ್ಟದ್ದಾಗಿದೆ. ಆರ್ಥಾತ್, ಈ ಹಂತದಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ.14.4ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಮತ್ತೊಂದೆಡೆ, ಮಂಜೂರಾಗಿರುವ 364 ಸಹಾಯಕ ಪೊಲೀಸ್ ಆಯುಕ್ತ ಹಂತದ ಹುದ್ದೆಗಳ ಪೈಕಿ 152 ಹುದ್ದೆಗಳು ಖಾಲಿ ಉಳಿದಿವೆ. ಅರ್ಥಾತ್, ಶೇ. 43.9ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹಂತದಲ್ಲಿ ಮಂಜೂರಾಗಿರುವ 168 ಹುದ್ದೆಗಳ ಪೈಕಿ 30 ಹುದ್ದೆಗಳು ಖಾಲಿ ಉಳಿದಿವೆ. ದಿಲ್ಲಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಗಳು, ಮಹಿಳಾ ಸಹಾಯ ಡೆಸ್ಕ್ ಹಾಗೂ ಆಧುನಿಕ ಸಂಪನ್ಮೂಲಗಳು ಲಭ್ಯವಿದೆ ಎಂದು ಸಚಿವ ನಿತ್ಯಾನಂದ್ ರಾಯ್ ತಿಳಿಸಿದ್ದಾರೆ.
ಭಟ್ಕಳ: ಕೃಷಿ ಭೂಮಿಯಲ್ಲಿ ಮಣ್ಣು ತುಂಬಿಕೆಗೆ ಗ್ರಾಮಸ್ಥರ ಆಕ್ರೋಶ; ಮುಂಡಳ್ಳಿ ಪಂಚಾಯತ್ಗೆ ಮುತ್ತಿಗೆ
ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಮಣ್ಣು ತುಂಬಲಾಗುತ್ತಿದೆ ಎಂದು ಆರೋಪಿಸಿ ಮುಂಡಳ್ಳಿ ಹೊಸ ಮನೆ ಭಾಗದ ಸಾರ್ವಜನಿಕರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಹದ ಭೀತಿ ಮತ್ತು ಕೃಷಿ ಹಾನಿ: ಕಣಕನಬೈಲ್ ವಾರ್ಡ್ ಸೇರಿದಂತೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳ ಮಳೆ ನೀರು ಬಾಸಿಗುಂಡಿ ಹೊಳೆಗೆ ಸಹಜವಾಗಿ ಹರಿಯುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಕೆಲವು ವ್ಯಕ್ತಿಗಳು ಈ ನೈಸರ್ಗಿಕ ಹಾದಿಗೆ ಮಣ್ಣು ತುಂಬಿ ಮುಚ್ಚಿರುವುದರಿಂದ ಸಮಸ್ಯೆ ಗಂಭೀರಗೊಂಡಿದೆ. ಸಮೀಪದಲ್ಲೇ ಶರಾಬಿ ಹೊಳೆ ಇರುವುದರಿಂದ ಮಳೆಗಾಲದಲ್ಲಿ ಕೃಷಿ ಭೂಮಿಗೆ ಹಾನಿಯಾಗುವುದಲ್ಲದೆ, ಮನೆಗಳಿಗೆ ನೀರು ನುಗ್ಗಿ ಆಸ್ತಿಪಾಸ್ತಿ ಹಾನಿ ಹಾಗೂ ಜೀವಾಪಾಯದ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಭಾಗವು ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಯಾವುದೇ ಭೂ ಪರಿವರ್ತನೆಗೆ ಅನುಮತಿ ನೀಡಬಾ ರದು ಎಂದು ಈ ಹಿಂದೆ ಸಾರ್ವಜನಿಕರ ಸಮ್ಮುಖದಲ್ಲಿ ಠರಾವು ಕೈಗೊಳ್ಳಲಾಗಿತ್ತು. ಆದರೂ ಕೆಲವು ಅಧಿಕಾರಿಗಳು ಲಂಚ ಪಡೆದು ಕೃಷಿ ಭೂಮಿಯಲ್ಲಿ ಮಣ್ಣು ತುಂಬಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ವಾಗಿ ಆರೋಪಿಸಿದ್ದಾರೆ. ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮುತ್ತಿಗೆ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ (ಪಿಡಿಓ) ತಹಶೀಲ್ದಾರರನ್ನು ಸ್ಥಳಕ್ಕೆ ಕರೆಯಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಈ ವೇಳೆ ತಹಶೀಲ್ದಾರರ ಫೋನ್ ಸಂಖ್ಯೆ ಇಲ್ಲದೆ ಪಿಡಿಓ ತಡಬಡಾಯಿಸಿದ್ದು ಕೆಲಕಾಲ ಗೊಂದಲ ಮೂಡಿಸಿತು. ಬಳಿಕ ಸಾರ್ವಜನಿಕರೇ ಸಂಖ್ಯೆ ಒದಗಿಸಿದ ನಂತರ ಸಂಪರ್ಕ ಸಾಧ್ಯವಾಯಿತು. ಇದಲ್ಲದೆ, ಅಕ್ರಮ ಮಣ್ಣು ತುಂಬಿಕೆಯನ್ನು ಪ್ರಶ್ನಿಸಲು ಹೋದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹೋರಾಟದ ಎಚ್ಚರಿಕೆ: ಹಿಂದಿನ ಅಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿ ಇದು ಮುಳುಗಡೆ ಪ್ರದೇಶವಾಗಿದ್ದು ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಸೂಚಿಸಿದ್ದರು ಎಂದು ಮಾಜಿ ಪಂಚಾಯತ್ ಸದಸ್ಯ ರಾಜು ನಾಯ್ಕ ಸ್ಮರಿಸಿ ದರು. ಕೂಡಲೇ ಕೃಷಿ ಭೂಮಿಯಲ್ಲಿ ಹಾಕಿರುವ ಮಣ್ಣನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ರೈತರು ಹಾಗೂ ಗ್ರಾಮಸ್ಥರು ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗು ತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ
ಸಚಿವ ಚಿರಾಗ್ ಪಾಸ್ವಾನ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ದ.ಕ.ಸಂಸದ
ಕೋಡಿ ಬ್ಯಾರೀಸ್ ಸೀ ಸೈಡ್ ಸ್ಕೂಲ್ನಲ್ಲಿ ಪದವಿ ಪ್ರದಾನ; ಅಜ್ಜ-ಅಜ್ಜಿಯರ ದಿನಾಚರಣೆ
ಕುಂದಾಪುರ, ಎ.1: ತಾಲೂಕಿನ ಕೋಡಿಯಲ್ಲಿರುವ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ನಲ್ಲಿ ಹಿಸ್ ಗ್ರೇಸ್ ಮೊಂಟೆಸರಿ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಹಾಗೂ ಅಜ್ಜ-ಅಜ್ಜಿಯರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಮಣಿಪಾಲದ ಶಾರದಾ ಮೊಂಟೆಸರಿ ತರಬೇತಿ ಕೇಂದ್ರದ ಪ್ರಾಂಶುಪಾಲೆ ಸುನೀತಾ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಕ್ಕಳ ಸಮಗ್ರ ಬೆಳವಣಿಗೆಗೆ ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಡಾ.ಆಸೀಫ್ ಬ್ಯಾರಿ ಮಾತನಾಡಿ, ಹಿರಿಯರ ಸ್ಥಾನವನ್ನು ತುಂಬುವುದರ ಮೂಲಕ ಕುಟುಂಬದ ಸರ್ವರಿಗೂ ಸರಿಯಾದ ಮಾರ್ಗದರ್ಶನ ನೀಡುವ ಅಜ್ಜ ಅಜ್ಜಿಯರು ಪ್ರತಿಯೊಂದು ಮನೆಯ ನಿಜವಾದ ಆಸ್ತಿಯಾಗಿದ್ದು ಅವರನ್ನು ಎಲ್ಲರೂ ಪ್ರೀತಿಸಿ, ಗೌರವಿಸಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಅಜ್ಜ ಅಜ್ಜಿಯ ಕಾಳಜಿ ಹಾಗೂ ಮೊಮ್ಮಕ್ಕಳ ಪ್ರೀತಿ, ಬಾಂಧವ್ಯದ ಬಗ್ಗೆ ಅರಿವು ಮೂಡಿಸಿದರು. ಸಂಸ್ಥೆಯ ನಿರ್ದೇಶಕಿ ಹಾಗೂ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಹಾಗೂ ಉಪ ಪ್ರಾಂಶುಪಾಲೆ ಜನಿಫರ್ ಲೂಯಿಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಚರಿಸಲಾದ ಅಜ್ಜ-ಅಜ್ಜಿಯರ ದಿನವು ವಿಶೇಷ ಆಕರ್ಷಣೆಯಾಗಿದ್ದು, ಮಕ್ಕಳು ಮತ್ತು ಹಿರಿಯರು ಒಟ್ಟಾಗಿ ಭಾಗವಹಿಸಿ ಸಂತಸವನ್ನು ಹಂಚಿಕೊಂಡರು. ಹಿರಿಯರಿಗಾಗಿ ಆಯೋಜಿಸಲಾದ ವಿವಿಧ ಆಟೋಟ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ನೀಡಿದವು. ಮೊಂಟೆಸರಿ ವಿದ್ಯಾರ್ಥಿಯಾದ ಮೊಹಮ್ಮದ್ ಮಾಹಿರ್ ಸ್ವಾಗತಿಸಿ, ಮಲಿಹಾ ಸಾಫಿಯಾ ವಂದಿಸಿ, ಒಂದನೇ ತರಗತಿಯ ಕತೀಜ ತಬಸುಮ್ ಕಾರ್ಯಕ್ರಮ ನಿರೂಪಿಸಿದರು.
ಉದ್ಯಾವರ ಎಂಇಟಿ ಶಾಲೆಯ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭ
ಉಡುಪಿ, ಎ.1: ಉದ್ಯಾವರ ಎಂ.ಇ.ಟಿ. ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭವು ಮಾ.27ರಂದು ಎಂ.ಇ.ಟಿ. ಆಡಿಯಟೋರಿಯಂನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಅಬ್ಸರ್ ಉಲ್ ಹುದಾ, ವನ್ಯಜೀವಿ ಸಂರಕ್ಷಕ ಅಕ್ಷಯ್ ಎನ್.ಶೇಟ್ ಮಾತನಾಡಿದರು. ಅಧ್ಯಕ್ಷತೆಯನ್ನು ಆರ್ಮೊರ್ ಕಾರ್ಟೂನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಮೀರ್ ಮೊಹಮ್ಮದ್ ವಹಿಸಿದ್ದರು. ಶಾಲಾ ಮುಖ್ಯಸ್ಥೆ ಡಾ.ಜುನೈದಾ ಸುಲ್ತಾನ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಕಿಂಡರ್ಗಾರ್ಟನ್ ಸಂಯೋಜಕಿ ರುಬಿನಾ ಸಮೀರ್ ಶಾಲೆಯಲ್ಲಿ ಅನುಸರಿಸಲಾಗುತ್ತಿರುವ ಪ್ಲೇ-ವೇ ಮತ್ತು ಮಾಂಟೆಸೊರಿ ವಿಧಾನಗಳ ಕುರಿತು ಮಾಹಿತಿ ನೀಡಿದರು. ಸವಿತಾ ಆಚಾರ್ಯ ಅಕಾಡೆಮಿಕ್ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು. ರತಿ ಸ್ವಾಗತಿಸಿದರು. ಸಂಜಾತಾ ವಂದಿಸಿದರು. ಅತಿಥಿಗಳಾಗಿ ಮೊಹಮ್ಮದ್ ಇಕ್ಬಾಲ್ ಹಾಗೂ ಸುಹೈಲಾ ಫಿರೋಜ್ ಉಪಸ್ಥಿತರಿದ್ದರು. ಮಕ್ಕಳ ಬಾಲ್ಯ ಶಿಕ್ಷಣ ಯಾನದ ಮಹತ್ವದ ಹಂತವನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವ್ಯವಹಾರದ ವಿಚಾರವಾಗಿ ವ್ಯಕ್ತಿಯ ಅಪಹರಣ: ಪ್ರಕರಣ ದಾಖಲು
ಮಣಿಪಾಲ, ಎ.1: ವ್ಯವಹಾರದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಕೊಡ್ಲಾಡಿ ಗ್ರಾಮದ ದಾರಸಮಕ್ಕಿ ನಿವಾಸಿ ರಾಮ ಮಡಿವಾಳ ಎಂಬವರು ತನ್ನ ತಮ್ಮ ಲಕ್ಷ್ಮಣ ಎಂಬವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದರು. ಇವರೊಂದಿಗೆ ಅಣ್ಣ ರಾಜೇಶ್ ಕೂಡ ಬಂದಿದ್ದರು. ಇವರೆಲ್ಲ ಆಸ್ಪತೆಯ ಹೊರಬದಿಯ ಕ್ಯಾಂಟಿನಿನಲ್ಲಿ ಟೀ ಕುಡಿಯುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಏಳೆಂಟು ಮಂದಿ ಬಂದು, ಏಕಾಏಕಿ ಲಕ್ಷ್ಮಣ ಅವರನ್ನು ಹಿಡಿದು ಕಾರಿನಲ್ಲಿ ಕುರಿಸಿ ಕೊಂಡು ಮಣಿಪಾಲದಿಂದ ಹಿರಿಯಡ್ಕ ಕಡೆ ರಸ್ತೆಯಲ್ಲಿ ಹೋಗಿದ್ದಾರೆ ಎಂದು ದೂರಲಾಗಿದೆ. ಕಾರಿನಲ್ಲಿ ಬಂದ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್, ವಿಜಯ್ ಎಂಬವರು ಈ ಹಿಂದೆ ರಾಜೇಶ್ನೊಂದಿಗೆ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದರು. ಇವರು ತೆಲಂಗಾಣ ದಲ್ಲಿರುವ ವ್ಯವಹಾರದ ವಿಚಾರದಲ್ಲಿ ರಾಜೇಶ್ ಅವರನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನಯಂಪಳ್ಳಿ ಭಾಗದ 50 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ
ಉಡುಪಿ, ಎ.1: ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನ ನಯಂಪಳ್ಳಿ ಪ್ರದೇಶದಲ್ಲಿ 4 ದಶಕಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ನಗರಸಭೆಯ ವತಿಯಿಂದ ಕುಡಿ ಯುವ ನೀರು ಸಂಪರ್ಕ ಕಲ್ಪಿಸುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿದೆ. ನೀರಿನ ಸಂಪರ್ಕವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಈ ಭಾಗದ ಸುಮಾರು 50 ಮನೆಗಳಿಗೆ ಹಲವು ದಶಕಗಳಿಂದ ಕುಡಿಯುವ ನೀರು ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಈ ಸಂಬಂಧ ಖಾಸಗಿ ವ್ಯಕ್ತಿಗಳು ತಮ್ಮ ಖಾಸಗಿ ಜಮೀನಿನಲ್ಲಿ ಪೈಪ್ಲೈನ್ ಅಳವಡಿಸಲು ಅವಕಾಶ ನೀಡಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ವಿಶೇಷ ಸಹಕಾರ ನೀಡಿದರು ಮೂಲಕ ಈ ಭಾಗದ ಜನತೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ದಿನೇಶ್ ಪೈ, ಚಿನ್ಮಯ ಮೂರ್ತಿ, ಮಂಜಪ್ಪ ಹಾಗೂ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಡಾ.ಅಂಬೇಡ್ಕರ್, ಜಗಜ್ಜೀವನರಾಮ್ ಜಯಂತಿಗೆ ಪೂರ್ವಭಾವಿ ಸಭೆ
ಉಡುಪಿ, ಎ.1: ಜಿಲ್ಲಾ ಮಟ್ಟದಲ್ಲಿ ಎ.5ರಂದು ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಹಾಗೂ ಎ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿ ಹಾಗು ಸುಸಂಘಟಿತವಾಗಿ ಆಯೋಜಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾಟಿ.ಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಡಾ. ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ದೇಶದ ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆಯನ್ನು ಎ.5ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ಎ.14ರಂದು ಬೆಳಗ್ಗೆ 10ಕ್ಕೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ಅಥವಾ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುತ್ತದೆ ಎಂದರು. ಬಾಬು ಜಗಜೀವನರಾಂ ಮತ್ತು ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಲು ತಜ್ಞ ಉಪನ್ಯಾಸ ಕರನ್ನು ನಿಯೋಜಿಸಬೇಕು. ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅರ್ಹ ಚರ್ಮ ಕುಶಲ ಕರ್ಮಿಗಳನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆಯ ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಬುದ್ಧ ವಂದನೆ ನಡೆಯಬೇಕಾಗಿದೆ. ಇದರಲ್ಲಿ ನಗರಸಭೆಯ ಇಬ್ಬರು ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಜೊತೆಗೆ ಕಳೆದ ಬಾರಿಯ ಎಸೆಸೆಲ್ಸಿ ಹಾಗೂ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ನಿಲಯಾರ್ಥಿಗಳನ್ನು ಹಾಗೂ ಕೊರಗ ಸಮುದಾ ಯದ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದರು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಕಡ್ಡಾಯ ವಾಗಿ ಆಚರಿಸಬೇಕು ಎಂದ ಅವರು, ಆದಿ ಉಡುಪಿಯಲ್ಲಿ ನಿರ್ಮಾಣ ಮಾಡಲಾಗುವ ನೂತನ ಅಂಬೇಡ್ಕರ್ ಭವನದ ಶಂಕುಸ್ಥಾಪನೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಿದರು. ಸಭೆಯಲ್ಲಿ ಎಎಸ್ಪಿ ಸುಧಾಕರ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ., ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
APK file ಡೌನ್ಲೋಡ್ | 93,000 ರೂ. ಕಳೆದುಕೊಂಡ ಮುಂಬೈ ನ್ಯಾಯಾಧೀಶ!
ಮುಂಬೈ, ಎ. 1: ನಕಲಿ ಕಸ್ಟಮರ್ ಕೇರ್ ಆ್ಯಪ್ ಮೂಲಕ ಕಸ್ಟಮರ್ ಕೇರ್ ಪ್ರತಿನಿಧಿಗಳ ಸೋಗಿನಲ್ಲಿ ತನ್ನನ್ನು ಸಂಪರ್ಕಿಸಿದ್ದ ಸೈಬರ್ ಅಪರಾಧಿಗಳ ಬಲೆಗೆ ಬಿದ್ದ ಮುಂಬೈನ ನ್ಯಾಯಾಧೀಶರೋರ್ವರು ಸುಮಾರು 93,000 ರೂ. ಕಳೆದುಕೊಂಡಿದ್ದಾರೆ. ಮಾ. 30ರಂದು ಮುಂಬೈ ಸಿಟಿ ಕೋರ್ಟ್ ನ್ಯಾಯಾಧೀಶರ ಫೋನ್ ಪರದೆಯಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡಿತ್ತು. ಹೀಗಾಗಿ ಆನ್ ಲೈನ್ ನಲ್ಲಿ ಕಸ್ಟಮರ್ ಕೇರ್ ಸರ್ವಿಸ್ ಎಂದು ಪಟ್ಟಿ ಮಾಡಲಾಗಿದ್ದ ಸಂಖ್ಯೆಯನ್ನು ಅವರು ಸಂಪರ್ಕಿಸಿದ್ದರು. ಕಸ್ಟಮರ್ ಕೇರ್ ಸಪೋರ್ಟ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ಮಾತನಾಡಿದ ವಂಚಕ, ವಾಟ್ಸ್ಆ್ಯಪ್ ಮೂಲಕ APK file ಕಳುಹಿಸಿ ಅದನ್ನು ಡೌನ್ ಲೋಡ್ ಮಾಡುವಂತೆ ಸೂಚಿಸಿದ್ದ. ನೋಂದಣಿಗಾಗಿ ಗೂಗಲ್ ಪೇ ಮೂಲಕ 20 ರೂ.ಗಳ ಸಾಂಕೇತಿಕ ಶುಲ್ಕವನ್ನು ಪಾವತಿಸುವಂತೆಯೂ ಕೋರಲಾಗಿತ್ತು. ನ್ಯಾಯಾಧೀಶರು ಹಣ ಪಾವತಿಸಿದ್ದು, ಇದರಿಂದ ವಂಚಕನಿಗೆ ದೂರದಿಂದಲೇ ಅವರ ಮೊಬೈಲ್ ಸಾಧನ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಪ್ರವೇಶಿಸಲು ಅವಕಾಶ ದೊರೆಯಿತು. ಇದಾದ ಬಳಿಕ ಎಸ್ಬಿಐ ಖಾತೆಯಿಂದ ಎರಡು ಅನಧಿಕೃತ ವಹಿವಾಟುಗಳ ಮೂಲಕ 93,000 ರೂ. ಹಿಂಪಡೆಯಲಾಯಿತು. ಹಣ ಕಡಿತದ SMS ಸಂದೇಶಗಳನ್ನು ಗಮನಿಸಿದ ಬಳಿಕ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಅವರಿಗೆ ತಿಳಿಯಿತು. ತಾಡದೇವ್ ಪೋಲಿಸ್ ಠಾಣೆಯಲ್ಲಿ ಅಪರಿಚಿತ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅದೇ ದಿನ ಪೋಲಿಸರು ಸೈಬರ್ ವಂಚನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಿಗೆ 6.02 ಲಕ್ಷ ರೂ. ವಂಚಿಸಿದ್ದ ಜಾರ್ಖಂಡ್ ನ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆತ 10 ರಾಜ್ಯಗಳಲ್ಲಿ ಕನಿಷ್ಠ 36 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ನಾಗ್ಪುರ ಚಲನಚಿತ್ರೋತ್ಸವ ಮಾಹೆಯ ‘ಯಕ್ಷಗಾನ’ ಕುರಿತ ಸಾಕ್ಷ್ಯಚಿತ್ರಕ್ಕೆ ಅಗ್ರಪ್ರಶಸ್ತಿ
ಮಣಿಪಾಲ, ಎ.1:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯಿಂದ ನಿರ್ಮಾಣಗೊಂಡ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ ಸಾಕ್ಷ್ಯಚಿತ್ರವು ನಾಗ್ಪುರ ಚಲನಚಿತ್ರೋತ್ಸವ-2026ರಲ್ಲಿ ವೃತ್ತಿಪರ ವಿಭಾಗದ ’ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮಾಹೆಯ ಅಂತರ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ (ಸಿಐಎಸ್ಡಿ)ವು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಐತಿಹಾಸಿಕ ವಿಕಸನ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದು ಜಗತ್ತಿಗೆ ಪರಿಚಯಿಸಿದೆ. ಈ ಬಾರಿಯ ನಾಗ್ಪುರ ಚಲನಚಿತ್ರೋತ್ಸವಕ್ಕೆ ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಒಟ್ಟು 304 ಪ್ರವೇಶಗಳು ಬಂದಿದ್ದವು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ 189 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರವು ಕಲಾತ್ಮಕ ಮೌಲ್ಯ ಮತ್ತು ಆಳವಾದ ಸಂಶೋಧನೆಯಿಂದಾಗಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಗ್ಪುರದ ರಾಷ್ಟ್ರ ಸಂತ ತುಕಾಡೋಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ಮಾ.29ರಂದು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಿಐಎಸ್ಡಿ ಸಂಸ್ಥೆಯ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯ ಭಾಗವಾಗಿ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿ ಸಲಾಗಿದೆ. ಕರಾವಳಿಯ ಸಂಪ್ರದಾಯ ಗಳನ್ನು ಸಂರಕ್ಷಿಸುವ ಮತ್ತು ವಿಶ್ಲೇಷಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಪ್ರಶಸ್ತಿ, ಸಂಸ್ಥೆ ನಿರ್ಮಿಸುವ ವಿವಿಧ ವಿಷಯಗಳ ಕುರಿತ ಸಾಕ್ಷ್ಯಚಿತ್ರದ ಸಾಧನೆಗೆ ಹೊಸ ಗರಿಯಂತಾಗಿದೆ. ಇದು ಈಗಾಗಲೇ ವಾರಣಾಸಿಯ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಜ್ಯೂರಿ ಪ್ರಶಸ್ತಿಯನ್ನೂ ಪಡೆದಿದೆ. ಜತೆಗೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ‘ವರ್ಲ್ಡ್ ಕಲ್ಚರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸೆಮಿಫೈನಲ್ ಹಂತ ತಲುಪಿದೆ. ‘ಯಕ್ಷಗಾನ’ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಸಿಐಎಸ್ಡಿ ಸಂಯೋಜಕ ಡಾ. ಪ್ರವೀಣ್ ಕೆ. ಶೆಟ್ಟಿ, ಪ್ರಶಸ್ತಿಯು ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ದಾಖಲೀಕರಣದ ನಡುವೆ ಅರ್ಥಪೂರ್ಣ ಸೇತುವೆಯನ್ನು ನಿರ್ಮಿಸುವ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡಿದೆ. ಈ ಸಾಕ್ಷ್ಯಚಿತ್ರದ ಯಶಸ್ಸು, ಆಳವಾದ ಸಂಶೋಧನೆ ಮತ್ತು ನವೀನ ಕಥಾವಾಚನದ ಮೂಲಕ ಭಾರತದ ಪರಂಪರೆಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುವಲ್ಲಿ ಸಿಐಎಸ್ಡಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ.
Adam Zampa On IPL- ಇಂಡಿಯನ್ ಪ್ರೀಮಿಯರ್ ಲೀಗ್(IPL) ತೊರೆದು ಪಾಕಿಸ್ತಾನ ಸೂಪರ್ ಲೀಗ್ (PSL) ಸೇರಿರುವ ಆಸ್ಟ್ರೇಲಿಯಾದ ಆ್ಯಡಂ ಝಂಪಾ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಐಪಿಎಲ್ನಲ್ಲಿ ತಮ್ಮ ಕೌಶಲ್ಯಕ್ಕೆ ತಕ್ಕ ಸಂಭಾವನೆ ಸಿಗುತ್ತಿಲ್ಲ ಮತ್ತು ಟೂರ್ನಿ ದೀರ್ಘಾವಧಿಯದ್ದು ಎಂಬ ಕಾರಣಕ್ಕೆ ಪಿಎಸ್ಎಲ್ ಸೇರಿದೆ ಎಂದು ತಿಳಿಸಿದ್ದಾರೆ. ಸದ್ಯ ಡೇವಿಡ್ ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ಪರ ಆಡುತ್ತಿರುವ ಝಂಪಾ ಅವರು ಐಪಿಎಲ್ಗಿಂತ ಪಿಎಸ್ಎಲ್ ಗುಣಮಟ್ಟ ಉತ್ತಮವಾಗಿದೆ ಎಂದೂ ಹೇಳಿದ್ದಾರೆ.
SIR ಬಳಿಕ ಆಧಾರ್ ದತ್ತಾಂಶದಿಂದ ಮೃತ ವ್ಯಕ್ತಿಗಳ ಹೆಸರನ್ನು ತೆಗೆಯಲು ಮುಂದಾದ UIDAI: ವರದಿ
ಹೊಸದಿಲ್ಲಿ: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ, ಮೃತ ಮತದಾರರ ಹೆಸರನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಭಾರತದಲ್ಲಿ ಆಧಾರ್ ವಿತರಿಸುವ ಹೊಣೆಗಾರಿಕೆ ಹೊಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(UIDAI), ಭಾರತೀಯ ಚುನಾವಣಾ ಆಯೋಗವನ್ನು ಕೋರಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೊದಲ ಮತ್ತು ಎರಡನೆ ಹಂತದ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿರುವ ಮತದಾರರ ದತ್ತಾಂಶವನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಫೆಬ್ರವರಿ ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಪತ್ರ ಬರೆದಿತ್ತು. ಇದರ ಉದ್ದೇಶ ಆಧಾರ್ ದತ್ತಾಂಶವನ್ನು ಪರಿಷ್ಕರಿಸುವುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಮೃತರ ಆಧಾರ್ ಸಂಖ್ಯೆಗಳನ್ನು ನಿಯಮಿತವಾಗಿ ತೆಗೆದು ಹಾಕುತ್ತದೆ. ಆದರೆ, ಈ ಮನವಿಯ ಕುರಿತು ಚುನಾವಣಾ ಆಯೋಗ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ದತ್ತಾಂಶಗಳು ಕೇವಲ ಚುನಾವಣಾ ಆಯೋಗಕ್ಕೆ ಮಾತ್ರ ಸೇರಿದ್ದು, ಅದನ್ನು ಸರಕಾರಿ ಸಂಸ್ಥೆಗಳು ಸೇರಿದಂತೆ ಬಾಹ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣಾ ಆಯೋಗ ಸ್ವತಂತ್ರ ಶಾಸನಾತ್ಮಕ ಸಂಸ್ಥೆಯಾಗಿದ್ದು, ತನ್ನ ದತ್ತಾಂಶಗಳ ಸಮಗ್ರತೆಯನ್ನು ಅದು ಕಾಪಾಡಬೇಕಿದೆ ಎಂದೂ ಅವರು ಹೇಳಿದ್ದಾರೆ.
ಸಿಂದಗಿಯ ಗೊಲ್ಲಾಳೇಶ್ವರ ಜಾತ್ರಾ ಮಹೋತ್ಸವ ಶುರು: 70 ಅಡಿ ರಥೋತ್ಸವಕ್ಕೆ ದಿನಗಣನೆ, ಐತಿಹಾಸಿಕ ಹಿನ್ನೆಲೆ
ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯಲ್ಲಿ ಗೊಲ್ಲಾಳೇಶ್ವರ ಹಲವು ಪವಾಡಗಳನ್ನು ಮಾಡುವ ಮೂಲಕ ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಅಪಾರ ಭಕ್ತರ ಆರಾಧ್ಶ ದೈವವಾಗಿದ್ದಾರೆ. ನಾಳೆ ಏಪ್ರಿಲ್ 2ರ ಗುರುವಾರದಿಮದ ಅದ್ಧೂರಿ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಲಿದೆ. ಮೊದಲ ದಿನ ಏಪ್ರಿಲ್ 2 ರಂದು ಸಂಜೆ 5.40ಕ್ಕೆ ಧರ್ಮದರ್ಶಿಗಳಾದ ವರಪುತ್ರ ಹೊಳೆಪ್ಪಶರಣರು ದೇವರಮನಿ, ನಿಜಪ್ಪಶರಣರು
Tumkur | ಸೇತುವೆಗೆ ಕಾರು ಢಿಕ್ಕಿ : ಓರ್ವ ಸಜೀವ ದಹನ, ನಾಲ್ವರಿಗೆ ಗಂಭೀರ ಗಾಯ
ಹುಳಿಯಾರು : ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಳಿಯಾರು ಹೋಬಳಿಯ ಕೋರಗೆರೆ ಬಳಿ ನಡೆದಿದೆ. ಮೃತರನ್ನು ತಿಮ್ಮನಹಳ್ಳಿ ಗ್ರಾಮದ ರಾಮಯ್ಯ (55) ಎಂದು ಗುರುತಿಸಲಾಗಿದೆ. ರಾಮಯ್ಯ ಬೆಳವಾಡಿ, ಹಾಗಲವಾಡಿ, ಬಿಳೆಕಲ್ಲು ಹಟ್ಟಿ ಗ್ರಾಮದ ಇತರ ನಾಲ್ವರೊಂದಿಗೆ ಅರಸೀಕೆರೆ ತಾಲ್ಲೂಕಿನ ಅಮ್ಮನಹಟ್ಟಿ ಮಾಳಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೋರಗೆರೆ ಸಮೀಪದ ಸೇತುವೆಗೆ ಕಾರು ವೇಗವಾಗಿ ಢಿಕ್ಕಿ ಹೊಡೆದ ರಭಸಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಾರಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ಐವರೂ ಒಳಗಡೆ ಸಿಲುಕಿ ಕಿರುಚಾಡುತ್ತಿದ್ದರು. ಇದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಾರಿನ ಬಾಗಿಲುಗಳನ್ನು ಮುರಿದು ನಾಲ್ವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ರಾಮಯ್ಯ ಅವರು ಕಾರಿನೊಳಗೆ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ತಕ್ಷಣವೇ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ನೀರಿನ ಟ್ಯಾಂಕರ್ ತರಿಸಿ ಕಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅರುಣಾಚಲಂ ಮಾದರಿಯಲ್ಲೇ ಅದ್ಧೂರಿಯಾಗಿ ನಡೆದ ನಂದಿಬೆಟ್ಟ ಗಿರಿ ಪ್ರದಕ್ಷಿಣೆ; ಪ್ರತಿ ತಿಂಗಳೂ ಆಚರಣೆಗೆ ನಿರ್ಧಾರ
ತಮಿಳುನಾಡಿನ ಅರುಣಾಚಲಂನಲ್ಲಿ ನಡೆಯುವ ಗಿರಿ ಪ್ರದಕ್ಷಿಣೆ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ನಂದಿಬೆಟ್ಟ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಭೋಗನಂದೀಶ್ವರ ದೇವಸ್ಥಾನದಿಂದ ಆರಂಭವಾಗಿ ಸುತ್ತಲ ಗ್ರಾಮಗಳಲ್ಲಿ ಭಕ್ತರು ನಡೆದು ಪ್ರದಕ್ಷಿಣೆ ಹಾಕಿದರು. ಇನ್ನು ಮುಂದೆ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲು ಸಂಸದ ಡಾ ಕೆ ಸುಧಾಕರ್ ನಿರ್ಧರಿಸಿದ್ದಾರೆ.
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು
ಚೆನ್ನೈ; ಈ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆ 2026 ರಾಜ್ಯದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿ ರೂಪುಗೊಳ್ಳುತ್ತಿದೆ. ಪ್ರಬಲ ಪೈಪೋಟಿ, ಹೊಸ ಹೊಸ ರಣತಂತ್ರಗಳು, ಭರವಸೆಗಳ ಮುಖೇನ ವಿನೂತನವಾಗಿ ರೂಪಗೊಳ್ಳುತ್ತಿದೆ. ಇನ್ನೂ ಸಾಂಪ್ರದಾಯಿಕ ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆ ಹಾಗೂ ರಾಜಕೀಯಕ್ಕೆ ಖ್ಯಾತನಾಮರ ಹೊಸ ಪ್ರವೇಶದಿಂದಾಗಿ ಚುನಾವಣಾ ಸ್ಪರ್ಧೆ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಒಟ್ಟು 234
ಬೆಂಗಳೂರು ಮಂಗಳೂರು ಕಣ್ಣೂರು ವಿಶೇಷ ರೈಲು: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲ
ಗುಡ್ ಫ್ರೈಡೆ ವಾರಾಂತ್ಯದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಯಶವಂತಪುರ ಮತ್ತು ಕಣ್ಣೂರು ನಡುವೆ ಏಪ್ರಿಲ್ 2 ಮತ್ತು 3 ರಂದು ವಿಶೇಷ ರೈಲು ಸಂಚರಿಸಲಿದೆ. ಹಾಸನ, ಮಂಗಳೂರು ಮಾರ್ಗವಾಗಿ ಚಲಿಸುವ ಈ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವವರಿಗೆ ಸಹಕಾರಿಯಾಗಲಿದೆ. ಒಟ್ಟು 21 ಬೋಗಿಗಳ ಈ ರೈಲು ಕುಣಿಗಲ್, ಸಕಲೇಶಪುರ ಮತ್ತು ಪುತ್ತೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಕಲಬುರಗಿ | ಸಿಐಟಿಯು ವತಿಯಿಂದ ಕರಾಳ ದಿನಾಚರಣೆ
ಕಲಬುರಗಿ: ದೇಶದಲ್ಲಿನ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ “ಕರಾಳ ದಿನ” ಆಚರಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಮಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನ, ಸಾಮಾಜಿಕ ಭದ್ರತೆ ಹಾಗೂ ಮುಷ್ಕರ ಹಕ್ಕುಗಳನ್ನು ಸುಮಾರು 150 ವರ್ಷಗಳ ಹೋರಾಟದ ಮೂಲಕ ಗಳಿಸಿಕೊಂಡಿದ್ದು, ಇವುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ಆರೋಪಿಸಿದೆ. ಈ ಸಂಹಿತೆಗಳು ಭಾರತೀಯ ಸಂವಿಧಾನದ ಆತ್ಮಕ್ಕೆ, ಅಂತರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೆ ಹಾಗೂ ಮಾನವ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಇದೇ ಹಿನ್ನೆಲೆಯಲ್ಲಿ, ಎ.1ರಿಂದ ಜಾರಿಗೆ ತರಲಾಗುತ್ತಿರುವ ಈ ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಎಂಬಿ ಸಜ್ಜನ್, ಶಾಂತಾ ಘಂಟಿ, ಗೌರಮ್ಮ ಪಾಟೀಲ, ಶಾಂತಾ ಸರಡಗಿ, ವಿಜಯಲಕ್ಷ್ಮಿ ಹಿರೇಮಠ, ಮಂಜುಳಾ ಪೂಜಾರಿ, ರಫತ್ ಸುಲ್ತಾನಿ, ರತ್ನಾ, ಶಂಕರಯ್ಯ ಘಂಟಿ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಬುರಗಿಯಿಂದ ವಿಮಾನ ಹಾರಾಟಕ್ಕೆ ಕೆಕೆಸಿಸಿಐ ಒತ್ತಾಯ
ಕಲಬುರಗಿ : ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕಚೇರಿಗೆ ಸ್ಟಾರ್ ಏರ್ ಸಂಸ್ಥೆಯ ದಕ್ಷಿಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ಮುಹಮ್ಮದ್ ಸೋಹೈಲ್ ಅಹ್ಮದ್ ಅವರು ಬುಧವಾರ ಭೇಟಿ ನೀಡಿ, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳನ್ನು ಮರುಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ಉಡಾನ್ 2.0 ಯೋಜನೆ ಅಡಿಯಲ್ಲಿ ಕಲಬುರಗಿಯಿಂದ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಸ್ಟಾರ್ ಏರ್ ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ. ಹಿಂದಿನ ಅನುಭವದ ಆಧಾರದ ಮೇಲೆ ಶೀಘ್ರದಲ್ಲೇ ಸೇವೆಗಳನ್ನು ಮರುಪ್ರಾರಂಭಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳ ಅಗತ್ಯತೆಯನ್ನು ಕೆಕೆಸಿಸಿಐ ಒತ್ತಿ ಹೇಳಿತು. ಸಂಸ್ಥೆಯು ಸ್ಟಾರ್ ಏರ್ಗೆ ಮನವಿಪತ್ರ ಸಲ್ಲಿಸಿ, ಸೇವೆಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದೆ. ಕಲಬುರಗಿ–ಬೆಂಗಳೂರು ಮಾರ್ಗವನ್ನು ಮರುಪ್ರಾರಂಭಿಸುವುದರ ಜೊತೆಗೆ ಮುಂಬೈ, ದೆಹಲಿ, ತಿರುಪತಿ, ಗೋವಾ, ಹೈದರಾಬಾದ್, ಮಂಗಳೂರು ಮತ್ತು ಅಹಮದಾಬಾದ್ ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಿಸಲು ಮನವಿ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ರಾತ್ರಿ ವೇಳೆಯ ಸೇವೆಗಳ ಅಗತ್ಯವಿದೆ ಎಂದು ತಿಳಿಸಲಾಯಿತು. ಸೇವೆಗಳ ಪರಿಣಾಮಕಾರಿತ್ವ ಹೆಚ್ಚಿಸಲು ಬೆಂಗಳೂರು ಮತ್ತು ಹೈದರಾಬಾದ್ ಮೂಲಕ ಹಬ್ ಆಧಾರಿತ ಮಾರ್ಗಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಟಿಕೆಟ್ ದರವನ್ನು 5,000 ರೂ. ಒಳಗೆ ನಿಗದಿ ಮಾಡಲು ಸೂಚಿಸಲಾಗಿದೆ. ವಿಮಾನ ಸಂಪರ್ಕ ಪುನರುಜ್ಜೀವನಗೊಳಿಸಲು ಇಂಡಿಗೋ, ಆಕಾಶ ಏರ್ ಸೇರಿದಂತೆ ಹಲವು ವಿಮಾನ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಮಾತನಾಡಿ, ಕಲಬುರಗಿಯಿಂದ ವಿಮಾನ ಸೇವೆಗಳ ಮರುಪ್ರಾರಂಭವು ಈ ಭಾಗದ ಬಹುಕಾಲದ ಬೇಡಿಕೆಯಾಗಿದೆ. ಉಡಾನ್ ಯೋಜನೆಯಡಿ ಶೀಘ್ರದಲ್ಲೇ ಸೇವೆಗಳು ಆರಂಭವಾಗುವ ವಿಶ್ವಾಸ ವ್ಯಕ್ತಪಡಿಸಿದರು. ವಿಮಾನ ಸೇವೆಗಳ ಪುನರಾರಂಭದಿಂದ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ ಎಂದು ಕೆಕೆಸಿಸಿಐ ತಿಳಿಸಿದೆ.
‘ಬಿಕ್ಕಟ್ಟಿನ ನಡುವೆಯೂ ಬಿಜೆಪಿಯ ಲೂಟಿ ದಿವಸ’: ಖರ್ಗೆ ವಾಗ್ದಾಳಿ
ಹೊಸದಿಲ್ಲಿ, ಎ. 1: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಬುಧವಾರ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮೋದಿ ಸರಕಾರವು ದೇಶದ ರಕ್ಷಣಾ ಹಾಗೂ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ‘‘ಧ್ವಂಸಗೊಳಿಸಿದೆ’’ ಎಂದು ಆರೋಪಿಸಿದೆ. ಸಾಮಾನ್ಯ ಜನರು ಚೇತರಿಕೆಗೆ ಸರಕಾರದತ್ತ ನೋಡುತ್ತಿದ್ದರೆ, ಬಿಜೆಪಿ ನಾಯಕತ್ವವು ‘‘ಈ ಬಿಕ್ಕಟ್ಟಿನ ನಡುವೆಯೂ ಜನರನ್ನು ಲೂಟಿಗೈಯುವ ಮತ್ತು ದೇಶವನ್ನು ಕೊಳ್ಳೆಹೊಡೆಯುವತ್ತ ಗಮನ ಹರಿಸಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ‘‘ಮೋದಿ ಸರಕಾರವು ದೇಶದ ರಕ್ಷಣಾ ಮತ್ತು ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಇದರ ನೇರ ಪರಿಣಾಮವನ್ನು ದೇಶದ 140 ಕೋಟಿ ಜನರು ಅನುಭವಿಸುತ್ತಿದ್ದಾರೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಎಪ್ರಿಲ್ 1ರಿಂದ ಹಲವಾರು ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ ಎಂದು ಅವರು ಹೇಳಿದರು. ‘‘ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಗಗನಕ್ಕೇರಿದೆ. ಪೂರೈಕೆ ಪಾತಾಳಕ್ಕಿಳಿದಿದೆ. ಇದರ ಪರಿಣಾಮ ರಸ್ತೆ ಬದಿಯ ಚಹಾದಿಂದ ಹಿಡಿದು ಶಾಲೆಗಳ ಮಧ್ಯಾಹ್ನದ ಬಿಸಿಯೂಟದವರೆಗೆ ಕಾಣಿಸುತ್ತಿದೆ. ವಿಮಾನ ಇಂಧನ ದುಬಾರಿಯಾಗಿದೆ’’ ಎಂದು ಖರ್ಗೆ ತಿಳಿಸಿದ್ದಾರೆ. ಒಮ್ಮೆ ಸಾಮಾನ್ಯ ಜನರಿಗೂ ಲಭ್ಯವಿದ್ದ ವಿಮಾನಯಾನ ಈಗ ಕನಸಾಗಿದೆ. ವಿಮಾನ ಟಿಕೆಟ್ ದರ ಮಿತಿಯನ್ನು ಕೂಡ ಸರಕಾರ ತೆಗೆದುಹಾಕಿದೆ ಎಂದು ಅವರು ಆರೋಪಿಸಿದರು. ‘‘ಬಿಜೆಪಿಯ ಲೂಟಿ ದಿವಸ’’ ಎಂಬ ಶೀರ್ಷಿಕೆಯ ವೀಡಿಯೊವನ್ನೂ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ►900ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆ ಏರಿಕೆ 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದೆ. ಹೃದಯದ ಸ್ಟೆಂಟ್ ಗಳ ಬೆಲೆಯೂ ಹೆಚ್ಚಾಗಿದೆ. ರಸ್ತೆ ಟೋಲ್ ಬೂತ್ಗಳಲ್ಲಿ ಜನರು ಹೆಚ್ಚು ಹಣ ಪಾವತಿಸಬೇಕಾಗಿದೆ. ‘‘ಹೆದ್ದಾರಿ ದರೋಡೆ’’ ಈಗ ವ್ಯಾಪಕವಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಸ್ಪೀಡ್ ಪೋಸ್ಟ್ ದರವನ್ನು 34 ಶೇಕಡ ಹೆಚ್ಚಿಸಲಾಗಿದೆ. ಪ್ಲಾಸ್ಟಿಕ್, ಉಕ್ಕು ಮತ್ತು ಸಿರಾಮಿಕ್ಸ್ ವಸ್ತುಗಳ ಬೆಲೆ ವರ್ಷಕ್ಕೊಮ್ಮೆ ಏರಿಕೆಯಾಗುತ್ತಿದೆ. ರೈತರು ಬಳಸುವ ಪಿವಿಸಿ ಪೈಪ್ ಗಳೂ ದುಬಾರಿಯಾಗಿವೆ. ಡಾಂಬರಿನ ಬೆಲೆ ಸುಮಾರು 50 ಶೇಕಡ ಏರಿಕೆಯಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರವು ಭಾರೀ ಒತ್ತಡವನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸುರಪುರ | ವಿವಿಧ ಗ್ರಾಮ ಪಂಚಾಯತ್ಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ ಭೇಟಿ
ಸುರಪುರ : ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಅವರು ಸುರಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು. ಮೊದಲಿಗೆ ಕಿರದಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ, ಗುಣಮಟ್ಟ ಹಾಗೂ ಸಮಯಪಾಲನೆಗೆ ಹೆಚ್ಚಿನ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎನ್ಆರ್ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಚಟುವಟಿಕೆಗಳು, ಆರ್ಥಿಕ ಸಬಲೀಕರಣ ಮತ್ತು ಸಾಲ ವಸೂಲಾತಿ ಕುರಿತು ಮಾಹಿತಿ ಪಡೆದು ಮಹಿಳಾ ಸದಸ್ಯರನ್ನು ಉತ್ತೇಜಿಸಿದರು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ನೀರಿನ ಗುಣಮಟ್ಟ ಮತ್ತು ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ, ತಾಂತ್ರಿಕ ದೋಷಗಳು ಕಂಡುಬಂದಲ್ಲಿ ತಕ್ಷಣ ಸರಿಪಡಿಸುವಂತೆ ಸೂಚಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು, ಶಿಕ್ಷಕರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಮಾರ್ಗದರ್ಶನ ನೀಡಿದರು. ಗ್ರಾಮ ಪಂಚಾಯತ್ ಗ್ರಂಥಾಲಯವನ್ನು ವೀಕ್ಷಿಸಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಪ್ರೋತ್ಸಾಹಿಸಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಪೋಷಣಾ ಆಹಾರ, ಹಾಜರಾತಿ ಹಾಗೂ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು. ನಂತರ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಮತ್ತು ಎನ್ಆರ್ಎಲ್ಎಂ ಯೋಜನೆಗಳ ಪ್ರಗತಿಯನ್ನು ಮರುಪರಿಶೀಲನೆ ಮಾಡಿ, ಕಾಮಗಾರಿಗಳ ವೇಗ ಹೆಚ್ಚಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸೇವೆಗಳು, ಔಷಧಿ ಲಭ್ಯತೆ ಮತ್ತು ಸಿಬ್ಬಂದಿ ಹಾಜರಾತಿ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸೂಚಿಸಿದರು. ಇದೇ ವೇಳೆ ಎನ್ಆರ್ಎಲ್ಎಂ ಮಹಿಳಾ ಸದಸ್ಯರ ಮನೆಗೆ ಭೇಟಿ ನೀಡಿ, ಅವರು ತಯಾರಿಸುತ್ತಿರುವ ಆಹಾರ ಉತ್ಪನ್ನಗಳ ಪ್ರಕ್ರಿಯೆಯನ್ನು ವೀಕ್ಷಿಸಿ, ಉದ್ಯಮದ ಲಾಭ-ನಷ್ಟಗಳ ಕುರಿತು ಮಾಹಿತಿ ಪಡೆದು ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿಸಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ್, ಪಿಡಿಓ ಗಳಾದ ಪುತ್ರಪ್ಪಗೌಡ, ಚನ್ನಬಸವ, ನರೇಗಾ ತಾಂತ್ರಿಕ ಸಂಯೋಜಕ ಶಿವಯೋಗಿ ಹಿರೇಮಠ, ಐಇಸಿ ಸಂಯೋಜಕರು ಮಲ್ಲಿಕಾರ್ಜುನ, ಕಾರ್ಯದರ್ಶಿ, ತಾಂತ್ರಿಕ ಸಹಾಯಕರು, ಎನ್ ಆರ್ ಎಲ್ ಎಂ ಸಿಬ್ಬಂದಿ ಸವಿತಾ, ಅಮ್ಮಪ್ಪ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು
ಮೀನುಗಾರಿಕಾ ಬೋಟ್ಗಳಿಗೆ ನಿರಂತರ ಡೀಸೆಲ್ ಪೂರೈಸಲು ಸ್ಪೀಕರ್ ಖಾದರ್ ಸೂಚನೆ
ಮಂಗಳೂರು: ನಗರದ ಮೀನುಗಾರಿಕಾ ಬಂದರಿನಿಂದ ಹೊರಡುವ ಬೋಟ್ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ. ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲಕರು, ತೈಲ ಕಂಪನಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ಅವರು ಮಾತನಾಡಿದರು. ಮೀನುಗಾರಿಕಾ ಬೋಟುಗಳಿಗೆ ಡೀಸೆಲ್ ಕೊರತೆಯಾಗದಂತೆ ಸರಬರಾಜು ಮಾಡಬೇಕು. ಹಳೆ ಬಂದರಿನಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಡೀಸೆಲ್ ಔಟ್ಲೆಟ್ ಪುನಃ ತೆರೆಯಬೇಕು. ಅಗತ್ಯವಾದ ಕೋಡ್ ಸಂಖ್ಯೆ ಯನ್ನು ತುರ್ತಾಗಿ ನೀಡುವಂತೆ ಮೀನುಗಾರಿಕೆ ನಿರ್ದೇಶಕರಿಗೆ ಸ್ಪೀಕರ್ ಖಾದರ್ ಸೂಚಿಸಿದರು. ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಂತರ ಮೀನುಗಾರಿಕಾ ಬೋಟ್ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೀನುಗಾರಿಕಾ ಬೋಟ್ಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೀನುಗಾರಿಕಾ ಉದ್ಯಮ ತೀರ ಸಮಸ್ಯೆ ಎದುರಿಸುತ್ತಿದೆ. ಡೀಸೆಲ್ ದರ ಹೆಚ್ಚಳದಿಂದ ಆಗುವ ನಷ್ಟವನ್ನು ಸರಕಾರ ಭರಿಸಬೇಕು ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದರು. ಈಗಾಗಲೇ ಕೇಂದ್ರ ಸರಕಾರದ ಸುತ್ತೋಲೆಯ ಅನ್ವಯ ವಿತರಣೆಯ ಶೇ.20ರಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇಂದಿರಾ ಕ್ಯಾಂಟೀನ್, ರೆಸ್ಟೋರೆಂಟ್ ಮತ್ತು ಮೀನುಗಾರಿಕೆ ಮುಂತಾದವುಗಳು ಇರುವುದರಿಂದ ಆದ್ಯತೆಯಲ್ಲಿ ಪರಿಗಣಿಸಿ ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸುವುದಾಗಿ ತೈಲ ಕಂಪೆನಿಗಳ ಪ್ರತಿನಿಧಿಗಳು ಸಭೆಗೆ ತಿಳಿಸಿದರು. ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಅಡುಗೆಗಾಗಿ ಕೊಂಡೊಯ್ಯುವ ಎಲ್ಪಿಜಿ ಸಿಲಿಂಡರ್ಗಳಲ್ಲಿಯೂ ಯಾವುದೇ ಕೊರತೆಯಾಗದಂತೆ ಕನಿಷ್ಟ 130ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಬಂದರ್ ಮೀನುಗಾರಿಕಾ ದಕ್ಕೆಯಿಂದ ಹೊರಡುವ ಪ್ರತಿ ಬೋಟ್ಗೆ 1ರಂತೆ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸಿಲಿಂಡರ್ ಒದಗಿಸಲು ಸ್ಪೀಕರ್ ಖಾದರ್ ಸೂಚಿಸಿದರು. ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ ಪ್ರತಿ ಜಿಲ್ಲೆಗೆ ನೀಡುವ ಕೋಟಾದಲ್ಲಿ ಮೀನುಗಾರಿಕೆಗಾಗಿ 130ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಒದಗಿಸಲು ಮತ್ತು ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳು ತೈಲ ಕಂಪೆನಿಗಳೊಂದಿಗೆ ವ್ಯವಹರಿಸಲು ಸೂಚಿಸಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಾತನಾಡಿ ನಿಗಮದ ಮೂಲಕ ಡೀಸೆಲ್ ವಿತರಣೆ ಏಜನ್ಸಿ ಈಗಾಗಲೇ ಇದ್ದು, ಇದಕ್ಕಾಗಿ ಕೋಡ್ ನಂಬರ್ ಪಡೆದ ನಂತರ ಇಲಾಖೆಯಿಂದ ಡೀಸೆಲ್ ಕೋಟಾ ಪಡೆದು ಮೀನುಗಾರರಿಗೆ ಡೀಸೆಲ್ ನೀಡಲಾಗುವುದು ಎಂದು ತಿಳಿಸಿದರು.
Yadgir | ಕೆಯುಡಬ್ಲೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ : ನಾಲ್ವರು ಪತ್ರಕರ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿ
ಯಾದಗಿರಿ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಲಭಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದಂತೆ, ಬೀದರ್ನಲ್ಲಿ ಎ.11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ), ಅಮರೇಶ ಹಿರೇಮಠ ಅವರಿಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಅವರಿಗೆ ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) ಹಾಗೂ ಸಂಜೀವರಾವ್ ಕುಲಕರ್ಣಿ ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ನಾಲ್ವರು ಪತ್ರಕರ್ತರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಜಿಲ್ಲೆಯ ಘನತೆಯನ್ನು ಹೆಚ್ಚಿಸಿದೆ ಎಂದು ಮಲ್ಲಪ್ಪ ಸಂಕೀನ್ ಹೇಳಿದ್ದಾರೆ. ವಿಶೇಷವಾಗಿ ಶಹಾಪುರದ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಅನೇಕ ಯೋಜನೆಗೆ ಸಿದ್ಧಗಂಗಾ ಶ್ರೀಗಳೇ ಸ್ಫೂರ್ತಿ, `ಅಂತ್ಯೋದಯ' ಕಲ್ಪನೆಗೆ ಮಠವೇ ದಾರಿದೀಪ: ಪ್ರಲ್ಹಾದ ಜೋಶಿ
Pralhad Joshi On Siddaganga Sri- ತುಮಕೂರು ಸಿದ್ಧಗಂಗಾ ಮಠದಲ್ಲಿ ಏಪ್ರಿಲ್ 1ರಂದು ನಡೆದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು. ಶ್ರೀಗಳ 'ಅನ್ನ-ಅಕ್ಷರ-ಆಶ್ರಯ' ಎಂಬ ತ್ರಿವಿಧ ದಾಸೋಹ ತತ್ವವು ಕೇಂದ್ರ ಸರ್ಕಾರದ 'ಅಂತ್ಯೋದಯ' ಮತ್ತು 'ಗರೀಬ್ ಕಲ್ಯಾಣ್' ಯೋಜನೆಗಳಿಗೆ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು. ಮಠದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ ಕೇಂದ್ರ ಸಚಿವರು ಜನವರಿ 21 ಅನ್ನು 'ದಾಸೋಹ ದಿನ'ವಾಗಿ ಆಚರಿಸುವ ಸಂಪ್ರದಾಯವನ್ನು ರಾಜ್ಯ ಸರ್ಕಾರ ಮುಂದುವರಿಸಬೇಕೆಂದು ಆಗ್ರಹಿಸಿದರು.

22 C