UAEನಲ್ಲಿ ಪರಿಸ್ಥಿತಿ ಸುರಕ್ಷಿತ: ಆಂತರಿಕ ಸಚಿವಾಲಯದಿಂದ ಜನರಿಗೆ ಮೊಬೈಲ್ ನಲ್ಲಿ ಸಲಹೆ
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಆಂತರಿಕ ಸಚಿವಾಲಯವು ದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿ ಸುರಕ್ಷಿತವಾಗಿದ್ದು, ನಿಯಂತ್ರಣದಲ್ಲಿದೆ ಎಂದು ಪ್ರಕಟಿಸಿದೆ. ಈ ಸಂಬಂಧ ಸಾರ್ವಜನಿಕರಿಗೆ ಸಲಹೆ ನೀಡಿರುವ ಸಚಿವಾಲಯ, ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಪರಿಸ್ಥಿತಿ ಪ್ರಸ್ತುತ ಸುರಕ್ಷಿತವಾಗಿದೆ ಎಂಬುದಾಗಿ ನಾವು ಭರವಸೆ ನೀಡುತ್ತೇವೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾಗರಿಕರು ಹಾಗೂ ನಿವಾಸಿಗಳು ಜಾಗರೂಕರಾಗಿರಬೇಕು ಎಂದು ಮನವಿ ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಾ, ಸಂಬಂಧಿತ ಅಧಿಕಾರಿಗಳ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ವದಂತಿಗಳಿಗೆ ಒಳಗಾಗದೇ, ಅಧಿಕೃತ ಮಾಹಿತಿಗಳನ್ನೇ ನಂಬುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಇದೊಂದಿಗೇ, ಜನರು ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಹಂತ ಹಂತವಾಗಿ ಪುನರಾರಂಭಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಸಾರ್ವಜನಿಕ ಸುರಕ್ಷತೆ ಕಾಪಾಡಲು ಅಗತ್ಯ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಹೇಳಲಾಗಿದೆ.
ಇರಾನ್ ನ IRGCCಯ ಪ್ರಧಾನ ಕಚೇರಿ ಧ್ವಂಸ: ಅಮೆರಿಕದಿಂದ ಘೋಷಣೆ
ವಾಷಿಂಗ್ಟನ್: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGCCಯ ಪ್ರಧಾನ ಕಚೇರಿಯನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಸೇನೆ ಘೋಷಿಸಿದೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆಯಲ್ಲಿ , “ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಮಿಲಿಟರಿಯನ್ನು ಅಮೆರಿಕ ಹೊಂದಿದೆ. ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿಲ್ಲ,” ಎಂದು ಹೇಳಿದೆ. ಕಳೆದ 47 ವರ್ಷಗಳಲ್ಲಿ IRGCCಯು ಸಾವಿರಕ್ಕೂ ಹೆಚ್ಚು ಅಮೆರಿಕನ್ನರನ್ನು ಹತ್ಯೆ ಮಾಡಿದೆ ಎಂದು ಸೆಂಟ್ಕಾಮ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಮುಷ್ಕರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. The Iranian Islamic Revolutionary Guard Corps (IRGC) killed more than 1,000 Americans over the past 47 years. Yesterday, a large-scale U.S. strike cut off the head of the snake. America has the most powerful military on earth, and the IRGC no longer has a headquarters. pic.twitter.com/WdpN7JBECr — U.S. Central Command (@CENTCOM) March 1, 2026
ಇರಾನ್ ರಾಜಧಾನಿ ಟೆಹ್ರಾನ್ನ ಗಾಂಧಿ ಆಸ್ಪತ್ರೆ ಮೇಲೆ ಅಮೆರಿಕ–ಇಸ್ರೇಲ್ ನಿಂದ ವಾಯುದಾಳಿ
ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಉತ್ತರ ಭಾಗದಲ್ಲಿರುವ ಗಾಂಧಿ ಆಸ್ಪತ್ರೆಯ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ವಾಯುದಾಳಿಗಳು ನಡೆಸಿವೆ ಎಂದು ಇರಾನಿನ ಸುದ್ದಿ ಸಂಸ್ಥೆ ISNA ವರದಿ ಮಾಡಿದೆ ಎಂದು aljazeera ಉಲ್ಲೇಖಿಸಿದೆ. ರಾಜಧಾನಿಯ ಪ್ರಮುಖ ಆರೋಗ್ಯ ಕೇಂದ್ರ ಇದು ಎಂದು ತಿಳಿದು ಬಂದಿದೆ. “ಟೆಹ್ರಾನ್ನ ಗಾಂಧಿ ಆಸ್ಪತ್ರೆಯ ಮೇಲೆ ಜಿಯೋನಿಸ್ಟ್–ಅಮೆರಿಕನ್ ವಾಯು ದಾಳಿ ಮಾಡಿವೆ” ಎಂದು ISNA ತಿಳಿಸಿದೆ. ದಾಳಿಯ ಸಮಯ, ಹಾನಿಯ ಸ್ವರೂಪ ಹಾಗೂ ಸಂಭವನೀಯ ಸಾವುನೋವುಗಳ ಕುರಿತು ಸಂಸ್ಥೆ ಸ್ಪಷ್ಟ ಮಾಹಿತಿ ನೀಡಿಲ್ಲ. ಫಾರ್ಸ್ ಮತ್ತು ಮಿಝಾನ್ ಸುದ್ದಿ ಸಂಸ್ಥೆಗಳು ಆಸ್ಪತ್ರೆಯ ಒಳಭಾಗದ ವೀಡಿಯೊ ದೃಶ್ಯಗಳನ್ನು ಪ್ರಕಟಿಸಿವೆ. ಅದರಲ್ಲಿ ಖಾಲಿ ವೀಲ್ಚೇರ್ಗಳ ನಡುವೆ ನೆಲದ ಮೇಲೆ ಅವಶೇಷಗಳು ಚದುರಿರುವುದು ಕಾಣುತ್ತದೆ. ದಾಳಿಯಿಂದ ಉಂಟಾದ ನಷ್ಟದ ಪ್ರಮಾಣದ ಬಗ್ಗೆ ಇನ್ನೂ ಅಧಿಕೃತ ವಿವರಗಳು ಹೊರಬಂದಿಲ್ಲ.
ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ : ಕೆ.ಎಸ್.ಈಶ್ವರಪ್ಪ
ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಎಂದೆಂದೂ ಬಂದಿಲ್ಲ. ಈ ಹಿಂದೆ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದೆ ಎಂದು ನಾನು ಮೊದಲೇ ಹೇಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆಡೆ ಹೋಗಲ್ಲ. ಆದರೆ, ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು. ಮುಂದಿನ ದಿನಗಳಲ್ಲಿ ಶುದ್ದೀಕರಣ ಆಗುವ ವಿಶ್ವಾಸವಿದ್ದು, ಆ ಬಳಿಕ ಪಕ್ಷಕ್ಕೆ ಹೋಗುತ್ತೇನೆ ಎಂದರು. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ, ಶಾಸಕರಿಗೆ ಅನುದಾನ ಬರುತ್ತಿಲ್ಲ. ಅನುದಾನವನ್ನು ಕಾಂಗ್ರೆಸ್ ಶಾಸಕರು ಬಾಯಿ ಬಿಟ್ಟು ಕೇಳುವ ಸ್ಥಿತಿಯಲ್ಲಿ ಇಲ್ಲ. ಏನಾದರೂ ಕೇಳಿದರೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೈ ತಪ್ಪುತ್ತದೆ ಎನ್ನುವ ಭಯ. ಈ ಸರಕಾರದಲ್ಲಿ ಎಲ್ಲರಿಗೂ ಅಧಿಕಾರ ದಾಹ ಆರಂಭವಾಗಿದ್ದು, ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಈಶ್ವರಪ್ಪ ಟೀಕಿಸಿದರು.
ದುಬೈನಲ್ಲಿ ಸಿಲುಕಿದ ಡಾ.ಪುಷ್ಪಾ ಅಮರನಾಥ್
ಮೈಸೂರು : ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಪತ್ರಿಕೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಅವರು ಇರಾನ್-ಇಸ್ರೇಲ್ ನಡುವೆ ನಡೆದ ಯುದ್ಧದ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬರಲಾಗದೆ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಈ ಸಂಬಂಧ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡಿದೆ. ನಾವು ಬರಬೇಕಿದ್ದ ವಿಮಾನ ರದ್ದಾಗಿದೆ. ಹಾಗಾಗಿ ನಾವುಗಳು ದುಬೈನಲ್ಲೇ ಉಳಿದುಕೊಳ್ಳಬೇಕಿದೆ. ಇಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ಹೋಟೆಲ್ನಲ್ಲಿ ತಂಗಲು ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನಾಳೆ ಅಥವಾ ನಾಡಿದ್ದು ವಿಮಾನಗಳ ಹಾರಾಟ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ನಾವು ಸುರಕ್ಷಿತವಾಗಿ ಭಾರತಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
Shivamogga : ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ
ಶಿವಮೊಗ್ಗ : ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪನವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸೊರಬ ತಾಲೂಕಿನ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯತ್ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ಮಾಡಿಸುವ ಮೂಲಕ ಹೊಸ ಮಾದರಿಯನ್ನು ತೋರಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕ್ಷಿಯಾದರು. ಸಚಿವ ಮಧು ಬಂಗಾರಪ್ಪನವರಿಗೆ ಜನ್ಮದಿನದ ಶುಭಾಶಯ ಕೋರಿದ ಸಿಎಂ, ಬಳಿಕ ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದ ಪೌರಕಾರ್ಮಿಕರೊಂದಿಗೆ ಮಾತನಾಡಿದರು. ʼಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸಿ ಮತ್ತು ಅವರಿಗೆ ವಿಮಾನಯಾನದಂತಹ ಅಪರೂಪದ ಅವಕಾಶ ಕಲ್ಪಿಸುವುದು ಶ್ಲಾಘನೀಯ ಕೆಲಸʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಸೇವೆಯನ್ನು ಗುರುತಿಸಿ ಇಂತಹದೊಂದು ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಋಣಿ ಎಂದು ಕಾರ್ಮಿಕರು ಭಾವುಕರಾಗಿ ಮಾತನಾಡಿದರು.
ಇಸ್ರೇಲ್- ಇರಾನ್ ಸಂಘರ್ಷದ ಬಳಿಕ ಮತ್ತೊಮ್ಮೆ ಬಯಲಾಯ್ತು ಚೀನಾದ ಯುದ್ಧೋಪಕರಣಗಳ ಕಳಪೆ ಗುಣಮಟ್ಟ!
ಭಾರತ ನಡೆಸಿದ ಆಪರೇಶನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನ ನೆಚ್ಚಿಕೊಂಡಿದ್ದ ಚೀನಾ ನಿರ್ಮಿತ ರಕ್ಷಣಾ ಉಪಕರಣದ ಹಣೆಬರಹ ಜಗಜ್ಜಾಹೀರಾಗಿತ್ತು. ಇದೀಗ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಇರಾನ್ ಬಳಸಿದ ಚೀನಾದ 'ಎಚ್ಕ್ಯೂ-9ಬಿ' ವಾಯು ರಕ್ಷಣಾ ವ್ಯವಸ್ಥೆಯು ವಿಫಲವಾಗಿದ್ದು, ಚೀನಾ ನಿರ್ಮಿತ ರಕ್ಷಣಾ ಉಪಕರಣಗಳ ಗುಣಮಟ್ಟದ ಮೇಲೆ ಅನುಮಾನ ಮೂಡಿಸಿದೆ. ಏತನ್ಮಧ್ಯೆ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿರುವ ಜಂಟಿ ದಾಳಿಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳು ಖಂಡನೆ ವ್ಯಕ್ತಪಡಿಸಿವೆ.
ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ : ಶಾಲಿನಿ ರಜನೀಶ್
ಬೆಂಗಳೂರು, ಮಾ.1: ಇಸ್ರೇಲ್-ಇರಾನ್ ಯುದ್ಧದ ಭೀತಿಯಿಂದಾಗಿ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ವಿದೇಶದಲ್ಲಿರುವ ಕನ್ನಡಿಗರ ಸುರಕ್ಷತೆಗಾಗಿ ಸರಕಾರವು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಹೆಸರನ್ನು ನೋಂದಾಯಿಸಲು ಮತ್ತು ಮುಂದಿನ ನೆರವು, ರಕ್ಷಣಾ ಕಾರ್ಯಕ್ಕಾಗಿ ನಾವು ಎಲ್ಲ ಅಗತ್ಯ ವಿವರಗಳನ್ನು (ದೂರವಾಣಿ ಸಂಖ್ಯೆಗಳು ಮತ್ತು ಮಾಹಿತಿ) ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಗಳಿಗೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸತ್ಯಪಂಥದಿಂದ ಸಮಸಮಾಜ ಸಾಧ್ಯ : ನಟ ಚೇತನ್ ಅಹಿಂಸಾ
ಬೆಂಗಳೂರು, ಮಾ.1: ಸಮಾನತೆ, ನ್ಯಾಯ, ವೈಜ್ಞಾನಿಕತೆ, ಸಂವಿಧಾನ ಪೀಠಿಕೆಯನ್ನು ಸೂತ್ರವಾಗಿಸಿಕೊಂಡು, ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಶೀರಾಮ್ರ ಹಾದಿಯನ್ನು ಬಲವಾಗಿ ನಂಬಿರುವ ‘ಸತ್ಯ ಪಂಥ’ದಿಂದ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಚಿತ್ರನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾನತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯವಸ್ಥೆ ಬಹಳಷ್ಟು ಅಸಮಾನತೆಯಿಂದ ಕೂಡಿದೆ. ಶ್ರೀಮಂತರ ಪರವಾಗಿ ಮಾತ್ರ ಸಮಾಜ ನಡೆಯುತ್ತಿದೆ. ಭಾರತದಲ್ಲಿ ಇದುವರೆಗೂ ಬಲ ಪಂಥೀಯರಿಂದಾಗಲಿ, ಎಡ ಪಂಥೀಯ ಮತ್ತು ಮಧ್ಯ ಪಂಥೀಯರಿಂದಾಗಲಿ ಸಮ ಸಮಾಜ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದರು. ಪ್ರಸ್ತುತ ವ್ಯವಸ್ಥೆಯು ವರ್ಗ, ಜಾತಿ, ಲಿಂಗ, ಕುಟುಂಬ, ಭಾಷೆಯ ಅಸಮಾನತೆಗಳಿಂದ ಮತ್ತು ಅನ್ಯಾಯದಿಂದ ಕೂಡಿದೆ. ರಾಜಕಾರಣಿಗಳು ಅಧಿಕಾರ, ಹಣ ಮತ್ತು ಸ್ವಪ್ರತಿಷ್ಠೆಗಾಗಿ, ತಮ್ಮ ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು, ರಾಜ್ಯದ, ರಾಷ್ಟ್ರದ ಹಿತಾಸಕ್ತಿಗೆ ದುಡಿಯುತ್ತಿಲ್ಲ. ಆದುದರಿಂದ ಸತ್ಯ ಪಂಥದ ಮೂಲಕ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಚೇತನ್ ತಿಳಿಸಿದರು. ಪುರುಷ ಪ್ರಧಾನದ ವ್ಯವಸ್ಥೆಗೆ ಪ್ರತಿರೋಧವಾಗಿ ಲಿಂಗ ಸಮಾನತೆಯ ಕಾರ್ಯಕ್ರಮಗಳು, ಮಹಿಳೆಯರು ಮತ್ತು ಎಲ್ಜಿಬಿಟಿಕ್ಯೂ ಗಾಗಿ ನ್ಯಾಯ ಯೋಜನೆಗಳನ್ನು ರೂಪಿಸುತ್ತೇವೆ. ಬ್ರಾಹ್ಮಣ್ಯದ ವ್ಯವಸ್ಥೆಗೆ ಪ್ರತಿರೋಧವಾಗಿ ಎಸ್ಸಿ, ಎಸ್ಟಿ, ಎಂಬಿಸಿ, ಅಲೆಮಾರಿಗಳು, ಧಾರ್ಮಿಕ ಅಲ್ಪಸಂಖ್ಯಾರಿಗಾಗಿ ನ್ಯಾಯ ಯೋಜನೆಗಳನ್ನು ರೂಪಿಸಲಾಗುವುದು. ಬಂಡವಾಳಶಾಹಿ ವ್ಯವಸ್ಥೆಗೆ ಪ್ರತಿರೋಧವಾಗಿರುವ ಸಮಾಜವಾದದ ಪರವಾಗಿ ಬಡವರು, ಮಧ್ಯಮವರ್ಗ, ಕಾರ್ಮಿಕರು, ರೈತರು, ಭೂಮಿ, ಉದ್ಯೋಗದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಧರ್ಮನಿರಪೇಕ್ಷತೆಯನ್ನು ವ್ಯಾಖ್ಯಾನಿಸಿ ಮತ್ತು ಅದರಂತೆ ಕೆಲಸ ಮಾಡುವುದು. ದತ್ತಾಂಸ್ಕೃಕ, ಪ್ರಾದೇಶಿಕತೆಯ ನ್ಯಾಯಕ್ಕಾಗಿ, ಪರಿಸರ ಸಂರಕ್ಷಣೆ, ನೀರುಗಾಗಿ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರನ್ನು ಬಲಪಡಿಸುವುದು, ಲಂಚ ಮುಕ್ತ ಕರ್ನಾಟಕ, ಪಾರದರ್ಶಕತೆಯ ನೀತಿಗಳು, ತಪ್ಪುಗಳ ವಿರುದ್ಧ ಕ್ರಮ ಹಾಗೂ ಆರ್ಟಿಐ ಜಾಗೃತಿ ಸಭೆಗಳನ್ನು ಏರ್ಪಡಿಸಲಾವುದು ಎಂದು ಚೇತನ್ ಮಾಹಿತಿ ನೀಡಿದರು. ಅಭಿವ್ಯಕ್ತಿ, ಪ್ರತಿಭಟನೆ ಮತ್ತು ಮಾಧ್ಯಮದ ಸ್ವಾತಂತ್ರ್ಯಕ್ಕಾಗಿ ಆರ್ಟಿಕಲ್ 19ರ ಪ್ರಕಾರ ಪ್ರಜಾಪ್ರಭುತ್ವವನ್ನು ನಿರ್ಮಿಸುವುದು. ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ಶಾಲೆಗಳ ಬಲವಾದ ಸುಧಾರಣೆಗಾಗಿ ಕೆಲಸ ಮಾಡಲಾಗುತ್ತದೆ. ಪೊಲೀಸ್, ಜೈಲು, ನ್ಯಾಯಾಂಗ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುತ್ತೇವೆ. ಈಗಿನ ಯಾವ ರಾಜಕೀಯ ಪಕ್ಷಗಳು ಕೂಡ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸತ್ಯಪಂಥದ ಮೇಲೆ ನಂಬಿಕೆ ಇರುವ, ಸೇವಾ ಮನೋಭಾವ ಹೊಂದಿರುವ, ಕ್ಷೇತ್ರದಲ್ಲಿ ನೆಲೆಸಿರುವ, ಪ್ರಾಮಾಣಿಕ ಹಿನ್ನಲೆಯಿರುವ ಮತ್ತು ಆರ್ಥಿಕ ಭದ್ರತೆ ಇರುವ ವ್ಯಕ್ತಿಗಳ ಮೂಲಕ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುತ್ತದೆ. ಸಮಾನತೆ ಮತ್ತು ನ್ಯಾಯದೊಂದಿಗೆ 2028ರ ವಿಧಾನಸಭಾ ಚುನಾವಣೆಗೆ ಸಿದ್ದರಾಗುತ್ತೇವೆ. 2026ರ ನವೆಂಬರ್ನಲ್ಲಿ ಹೊಸ ಪಕ್ಷ ಉದ್ಘಾಟನೆ ಮಾಡಿ, 2027ರ ಫೆಬ್ರವರಿ ಅಷ್ಟರೊಳಗೆ ಪಕ್ಷದ ಹೆಸರು, ಪಕ್ಷದ ಬಾವುಟ, ವೆಬ್ಸೈಟ್ ಇತ್ಯಾದಿಗಳನ್ನು ಮಾಡುತ್ತೇವೆ ಎಂದು ಚೇತನ್ ಅಹಿಂಸ ಮಾಹಿತಿ ನೀಡಿದರು. ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹೋರಾಟಗಾರರು, ಚಿಂತಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಯುಎಇ ಮೇಲಿನ ದಾಳಿಗೆ ಪ್ರಧಾನಿ ಮೋದಿ ಖಂಡನೆ
ಭಾರತೀಯರ ಸುರಕ್ಷತೆಗೆ ಕಾಳಜಿ ವಹಿಸಿದ ಅಧ್ಯಕ್ಷ ಅಲ್ ನಹ್ಯಾನ್ ಅವರಿಗೆ ಟೆಲಿಫೋನ್ ಮೂಲ ಕೃತಜ್ಞತೆ ಸಲ್ಲಿಸಿದ ಮೋದಿ
ಕಾರ್ಕಳ-ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆ ವಿದ್ಯುತ್ ಸಂಪರ್ಕ ಸ್ಥಗಿತ : ಸುನಿಲ್ ಕುಮಾರ್ ಆಕ್ರೋಶ
ಬೆಂಗಳೂರು : ‘ರಾಜ್ಯ ಕಾಂಗ್ರೆಸ್ ಸರಕಾರ ತುಳಿಯುತ್ತಿರುವ ದುಶಾಃಸನ ಆಡಳಿತಕ್ಕೆ ಕಾರ್ಕಳ- ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವುದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಯೋಜನೆಯ ಸ್ಥಾಪನೆಯ ಉದ್ದೇಶವೇ ನೀರಾವರಿ ಹಾಗೂ ರೈತ ಕಲ್ಯಾಣ. ರಾಜ್ಯದಲ್ಲಿ ಈಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆ ಹಿಂದಿನ ವರ್ಷಗಳಿಗಿಂತ ತೀವ್ರ ಪ್ರಮಾಣದಲ್ಲಿ ಬಾಧಿಸುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಈ ಏತನೀರಾವರಿ ಯೋಜನೆಗೆ ಸಂಬಂಧಪಟ್ಟ 2ಕೋಟಿ ರೂ.ಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತ ಮಾಡಿರುವುದು ಅಸಮಂಜಸ ಹಾಗೂ ರೈತ ವಿರೋಧಿ ಕ್ರಮ ಎಂದು ಕಿಡಿಗಾರಿದ್ದಾರೆ. ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂಧನ ಇಲಾಖೆಯ ನಿರ್ವಹಣೆ ಹಾಳು ಬಿದ್ದು ಹೋಗಿದೆ. ಹೀಗಾಗಿ ಮೆಸ್ಕಾಂ ಏತ ನೀರಾವರಿ ಯೋಜನೆಯ ಪ್ಯೂಜ್ ಕಿತ್ತು ಸಂಪರ್ಕ ಕಡಿತಗೊಳಿಸಿ 3 ದಿನ ಕಳೆದರೂ ಸರಕಾರ ಮೌನಕ್ಕೆ ಶರಣಾಗಿದೆ. ಅನ್ನದಾತರ ಬದುಕಿನೊಟ್ಟಿಗೆ ಆಟವಾಡಬೇಡಿ. ಆಳುವ ಸರಕಾರ ದಿವಾಳಿಯಾದಾಗ ಮಾತ್ರ ಇಂಥದೊಂದು ಜನವಿರೋಧಿ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ: ಇರಾನ್ ನ ಸರ್ವೋಚ್ಚ ನಾಯಕ ಖಾಮಿನೈ ಹತ್ಯೆ ಖಂಡಿಸಿದ ಕಾಂಗ್ರೆಸ್
ಹೊಸದಿಲ್ಲಿ: ಇರಾನ್ ನ ಸರ್ವೋಚ್ಚ ನಾಯಕ ಅಯತುಲ್ಲಾ ಸಯ್ಯದ್ ಅಲಿ ಖಾಮಿನೈ ಅವರನ್ನು “ಗುರಿಯಿಟ್ಟು ಹತ್ಯೆ” ಮಾಡಿದ ಕ್ರಮವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ, ಇರಾನ್ನ ಜನತೆ ಹಾಗೂ ಜಗತ್ತಿನಾದ್ಯಂತದ ಶಿಯಾ ಸಮುದಾಯಕ್ಕೆ ಸಂತಾಪ ಸೂಚಿಸಿದೆ. ಸಂವಿಧಾನದ 51ನೇ ವಿಧಿಯನ್ನು ಉಲ್ಲೇಖಿಸಿದ ಪಕ್ಷ,ವು ಭಾರತದ ವಿದೇಶಾಂಗ ನೀತಿ ಸಂವಾದ, ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನಿನ ಗೌರವದ ಮೇಲೆ ಆಧಾರಿತವಾಗಿದೆ ಎಂದು ಹೇಳಿದೆ. “ಸಾರ್ವಭೌಮ ಸಮಾನತೆ, ಹಸ್ತಕ್ಷೇಪ ಮಾಡದಿರುವುದು ಮತ್ತು ಶಾಂತಿಯುತ ಇತ್ಯರ್ಥ ಇವು ಭಾರತೀಯ ಮೌಲ್ಯಗಳ ಅಡಿಪಾಯ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ‘ವಸುಧೈವ ಕುಟುಂಬಕ’ ತತ್ವ, ಮಹಾತ್ಮ ಗಾಂಧಿ ಅವರ ಅಹಿಂಸಾ ಸಿದ್ಧಾಂತ ಹಾಗೂ ಜವಾಹರಲಾಲ್ ನೆಹರು ಅವರ ಅಲಿಪ್ತ ನೀತಿಗೆ ವಿರುದ್ಧವಾಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇರಾನ್ ಮತ್ತು ವೆನೆಝುವೆಲಾದಲ್ಲಿ ಆಡಳಿತ ಅಸ್ಥಿರಗೊಳಿಸುವ ಉದ್ದೇಶದಿಂದ ಬಲಪ್ರಯೋಗ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ವಿಶ್ವಸಂಸ್ಥೆಯ ಚಾರ್ಟರ್ನ ಆರ್ಟಿಕಲ್ 2(4) ಮತ್ತು 2(7) ಉಲ್ಲೇಖಿಸಿ, ಯಾವುದೇ ರಾಜ್ಯದ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಮತ್ತು ದೇಶೀಯ ವಿಷಯಗಳಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿದೆ. “ಹಾಲಿ ರಾಷ್ಟ್ರದ ಮುಖ್ಯಸ್ಥರನ್ನು ಗುರಿಯಿಟ್ಟು ಹತ್ಯೆ ಮಾಡಿರುವುದು ಅಂತರರಾಷ್ಟ್ರೀಯ ನಿಯಮಗಳ ಮೇಲೆ ಹೊಡೆತ ನೀಡುತ್ತದೆ,” ಎಂದು ಅಭಿಪ್ರಾಯಪಟ್ಟಿದೆ. The Indian National Congress (INC) unequivocally condemns the targeted assassination of Iran's Supreme Leader, Ali Hosseini Khamenei, in a military strike carried out without a formal declaration of war. The INC extends its deepest condolences to the Supreme Leader's family, to… pic.twitter.com/CSQAbds3tS — Mallikarjun Kharge (@kharge) March 1, 2026
Middle East Crisis- ಪ್ರಧಾನಿ ಮೋದಿ ಮಹತ್ವದ ಸಂಪುಟ ಸಭೆ; ಗಲ್ಫ್ ನಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ ಚರ್ಚೆ
PM Modi Cabinet Meeting- ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ರಾತ್ರಿ ಪ್ರಮುಖ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜನಾಥ ಸಿಂಗ್, ಅಮಿತ್ ಶಾ, ಜೈಶಂಕರ್, ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು. ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ವಾಪಸ್ ಕರೆ ತರಲು ಕ್ರಮ, ಇಂಧನ ಪೂರೈಕೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬಂದಿವೆ ಎಂದು ತಿಳಿದು ಬಂದಿದೆ.
ಖಮೇನಿ ಬಳಿಕ ಇರಾನ್ ದೇಶಕ್ಕೆ ಹೊಸ ಸರ್ವಾಧಿಕಾರಿ, ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ದಾಳಿ | Operation Roaring Lion
ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ಪಾಲಿಗೆ ದೊಡ್ಡ ಶತ್ರುವಾಗಿದ್ದ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿ ದೊಡ್ಡಣ್ಣ ಅಮೆರಿಕ ಖುಷಿಯಾಗಿದೆ. ಅಮೆರಿಕ ತನ್ನ ಮಿತ್ರ ದೇಶ, ಇಸ್ರೇಲ್ ಮೂಲಕ ಈ ಕೆಲಸ ಸಾಧಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಜೊತೆಗೆ ಉತ್ತಮ ನಂಟು ಹೊಂದಿರುವ ದೇಶಗಳೇ ಹೆಚ್ಚು. ಆದರೆ ಇರಾನ್ ಮಾತ್ರ ಅಮೆರಿಕ ಹಾಗೂ ಇಸ್ರೇಲ್
Iran | ಶಾಲೆಯ ಮೇಲಿನ ಇಸ್ರೇಲ್ ನ ಮಾರಕ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 150ಕ್ಕೆ ಏರಿಕೆ!
ಟೆಹ್ರಾನ್: ದಕ್ಷಿಣ ಇರಾನ್ ನ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್ ನಿಂದ ನಡೆದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಸುಮಾರು 150ಕ್ಕೆ ಏರಿದೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಶನಿವಾರ ಬೆಳಿಗ್ಗೆ ನಡೆದ ಈ ದಾಳಿ, ಅಮೆರಿಕ –ಇಸ್ರೇಲ್ ಬಾಂಬ್ ದಾಳಿ ಕಾರ್ಯಚರಣೆಯ ಅತ್ಯಂತ ಮಾರಕ ಘಟನೆಯಾಗಿ ಪರಿಣಮಿಸಿದೆ. ಇಸ್ರೇಲ್ ಹಾಗೂ ಅಮೆರಿಕ ರವಿವಾರ ಇರಾನ್ ನ ವಿವಿಧ ಪ್ರದೇಶಗಳಲ್ಲಿ ಮತ್ತೊಂದು ಸುತ್ತಿನ ಭಾರೀ ವೈಮಾನಿಕ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಇರಾನ್ ಸರ್ಕಾರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಎರಡನೇ ದಿನ ಇದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸ್ಪಷ್ಟ ಅಂತ್ಯ ಕಾಣದ ಈ ಸಂಘರ್ಷವು ಪ್ರಾದೇಶಿಕ ಮುಖಾಮುಖಿಗೆ ತಿರುಗುವ ಆತಂಕ ವ್ಯಕ್ತವಾಗಿದೆ ಎಂದು theguardian.com ವರದಿಯಾಗಿದೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನ ಹೇಳಿಕೆಗಳ ವಿನಿಮಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಿಲಿಟರಿ ಬೆಳವಣಿಗೆಗಳು ಸಂಭವಿಸಬಹುದೆಂಬ ಸೂಚನೆಗಳು ಲಭ್ಯವಾಗಿವೆ. ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಶನಿವಾರ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವರದಿಗಳ ಬಳಿಕ, ಟೆಹ್ರಾನ್ ಪ್ರತೀಕಾರದ ಬೆದರಿಕೆಗಳನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ಇರಾನ್ ಮೇಲಿನ ದಾಳಿಯ ನಂತರ ಅಮೆರಿಕದ ವಿವಿಧ ನಗರಗಳಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ನಡೆದಿವೆ. ಶ್ವೇತಭವನದ ಹೊರಭಾಗ ಮತ್ತು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ನಲ್ಲಿ ನಡೆದ ಸಭೆಗಳಲ್ಲಿ ಪ್ರತಿಭಟನಾಕಾರರು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಪಾಲಿಗೆ ಶ್ರೀರಕ್ಷೆ ಆಗಿರುವ ಐರನ್ ಡೋಮ್, ಇರಾನ್ ದಾಳಿಯಿಂದ ಸಿಗುತ್ತಿದೆ ರಕ್ಷಣೆ | Operation Roaring Lion
ಇರಾನ್ ವಿರುದ್ಧ ಯುದ್ಧ ಆರಂಭವಾದ ನಂತರ ಇಸ್ರೇಲ್ ಹಾಗೂ ಅಮೆರಿಕ ತಮ್ಮ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿವೆ. ಪ್ರಮುಖವಾಗಿ ಇರಾನ್ ಪಕ್ಕದಲ್ಲೇ ಇರುವ ಇಸ್ರೇಲ್ಗೆ ಈಗ ರಕ್ಷಣೆಯ ಅಗತ್ಯತೆ ಇದ್ದು, ಇರಾನ್ ಹಾರಿಸುತ್ತಿರುವ ಕ್ಷಿಪಣಿಗಳಿಂದ ರಕ್ಷಣೆ ಪಡೆಯಬೇಕಿದೆ. ಹೀಗಿದ್ದಾಗ ಇಸ್ರೇಲ್ ಪಾಲಿಗೆ ಐರನ್ ಡೋಮ್ ಎಂಬುದು ಶ್ರೀರಕ್ಷೆ ಆಗಿದ್ದು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡ್ತಾ ಇದೆ.
ಸಹಕಾರಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರವಾಗುತ್ತಿದೆ: ಡಾ.ರಾಜೇಂದ್ರ ಕುಮಾರ್
ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ
ಇರಾನ್ ನ ಹೊಸ ನಾಯಕತ್ವದೊಂದಿಗೆ ಮಾತುಕತೆಗೆ ಸಿದ್ಧ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ
ವಾಷಿಂಗ್ಟನ್: ಇರಾನ್ ನ ಹೊಸ ನಾಯಕತ್ವವು ಅಮೆರಿಕದೊಂದಿಗೆ ಮಾತುಕತೆ ಆರಂಭಿಸಲು ಆಸಕ್ತಿ ತೋರಿರುವುದಾಗಿ ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಮಾತುಕತೆಗೆ ಸಮ್ಮತಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇರಾನ್ನಲ್ಲಿ ರೂಪುಗೊಂಡಿರುವ ಹೊಸ ಆಡಳಿತವು ತನ್ನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ. “ಅವರು ಮಾತನಾಡಲು ಬಯಸುತ್ತಾರೆ ಮತ್ತು ನಾನು ಮಾತನಾಡಲು ಒಪ್ಪಿಕೊಂಡಿದ್ದೇನೆ. ಆದ್ದರಿಂದ ನಾನು ಅವರೊಂದಿಗೆ ಮಾತನಾಡುತ್ತೇನೆ,” ಎಂದು ಅವರು ‘ದಿ ಅಟ್ಲಾಂಟಿಕ್’ ನಿಯತಕಾಲಿಕೆಗೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಾತುಕತೆಗಳು ಯಾವಾಗ ಹಾಗೂ ಯಾವ ಮಟ್ಟದಲ್ಲಿ ನಡೆಯಲಿವೆ ಎಂಬುದರ ಕುರಿತು ಟ್ರಂಪ್ ಯಾವುದೇ ವಿವರ ನೀಡಿಲ್ಲ. ಇರಾನ್–ಅಮೆರಿಕ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಇರಾನ್ ನಾಯಕತ್ವವು ಈ ನಿರ್ಧಾರವನ್ನು ಮುಂಚಿತವಾಗಿಯೇ ಕೈಗೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವನ್ನೂ ಟ್ರಂಪ್ ವ್ಯಕ್ತಪಡಿಸಿದ್ದಾರೆ. “ಅವರು ಅದನ್ನು ಬೇಗ ಮಾಡಬೇಕಿತ್ತು. ಬಹಳ ಪ್ರಾಯೋಗಿಕ ಮತ್ತು ಮಾಡಲು ಸುಲಭವಾಗಿದ್ದ ವಿಷಯವನ್ನು ಅವರು ಶೀಘ್ರದಲ್ಲೇ ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಅವರು ತುಂಬಾ ವಿಳಂಬ ಮಾಡಿದರು,” ಎಂದು ಅವರು ಹೇಳಿದ್ದಾರೆ.
T20 World Cup 2026: ಭಾನುವಾರ ನಡೆದ ಟಿ20 ವಿಶ್ವಕಪ್ನ ಸೂಪರ್ 8 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡರೆ, ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್
ಅಲಿ ಖಮೇನಿ ಸಾವಿಗೆ ಸೇಡು, ಇರಾನ್ನ ನೂತನ ಸರ್ವಾಧಿಕಾರಿಗೆ ಜನರ ಆಗ್ರಹ | Operation Roaring Lion
ಇಸ್ರೇಲ್ ಸೇನೆ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿದು ಹೋಗಿದೆ. ಗುಟ್ಟಾದ ಸ್ಥಳದಲ್ಲಿ ಇದ್ದರೂ ಅಲಿ ಖಮೇನಿ ಮಾತ್ರ ಜೀವ ಉಳಿಸಿಕೊಳ್ಳಲು ಆಗಿಲ್ಲ, ಹಲವು ತಿಂಗಳಿಂದ ಪಕ್ಕಾ ಪ್ಲಾನ್ ಮಾಡಿದ್ದ ಇಸ್ರೇಲ್ ಸೇನೆ ದಿಢೀರ್ ನುಗ್ಗಿ ದಾಳಿ ನಡೆಸಿದೆ. ಪರಿಣಾಮ ಸುಮಾರು 3 ದಶಕ ಎಂದರೆ 30 ವರ್ಷಗಳಿಂದ
ಇರಾನ್ ಕಾರ್ಯಾಚರಣೆಯಲ್ಲಿ ಮೂವರು ಅಮೆರಿಕ ಸೈನಿಕರು ಮೃತ್ಯು; ಐವರಿಗೆ ಗಂಭೀರ ಗಾಯ
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಮೂವರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ರವಿವಾರ ಪ್ರಕಟನೆಯಲ್ಲಿ ತಿಳಿಸಿದೆ. ಶನಿವಾರ ಆರಂಭವಾದ ಮಿಲಿಟರಿ ಕಾರ್ಯಾಚರಣೆ ನಂತರ ದೃಢಪಟ್ಟ ಮೊದಲ ಮೃತ್ಯು ಪ್ರಕರಣ ಇದಾಗಿದೆ. ಎಂದು guardian.com ವರದಿ ಮಾಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಐದು ಹೆಚ್ಚುವರಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೈನಿಕ ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟ ಮೂವರು ಸೈನಿಕರ ಗುರುತುಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ನಾವೆಲ್ಲ ಸುರಕ್ಷಿತರಾಗಿದ್ದೇವೆ; ಗಾಳಿ ಸುದ್ದಿಗೆ ಕಿವಿಗೊಡಬೇಡಿ: ಯುಎಇಯಲ್ಲಿರುವ ಕನ್ನಡಿಗರ ಮನವಿ
ದುಬೈ, ಮಾ.1: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದಾಳಿಗೆ ಸಂಬಂಧಿಸಿದ ಸುದ್ದಿ, ವೀಡಿಯೊಗಳಿಂದಾಗಿ ಜನ ಇನ್ನಷ್ಟು ಭಯಭೀತರಾಗಿದ್ದಾರೆ. ಯುಎಇಯಲ್ಲಿ ದಾಳಿಯ ಭೀತಿ ಇದ್ದರೂ ಜನಜೀವನ ಎಂದಿನಂತಿದೆ. ಜನ ಸುರಕ್ಷಿತರಾಗಿದ್ದು, ಅಂಗಡಿ, ಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಇಲ್ಲಿನ ಪ್ರಸಕ್ತ ಪರಿಸ್ಥಿತಿ ಬಗ್ಗೆ ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ ಕನ್ನಡಪರ ಸಂಘಟನೆಗಳ ಹಾಗು ವಿವಿಧ ಕರ್ನಾಟಕ ಮೂಲದ ಸಂಘಟನೆಗಳ ಮುಖಂಡರು ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ. ನಾವು ಸುರಕ್ಷಿತರಾಗಿದ್ದೇವೆ ಯುಎಇಯಲ್ಲಿ ಪ್ರಸಕ್ತ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಇಲ್ಲಿನ ಸರಕಾರ ಜನರೊಂದಿಗಿದೆ. ಕರ್ನಾಟಕದಿಂದ ದುಬೈಗೆ ಬಂದಿರುವ ಕೆಲವು ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದು, ಅವರನ್ನು ನಾವು ಭೇಟಿ ಮಾಡಿ ಎಲ್ಲ ರೀತಿಯ ಸಹಾಯ, ಸಹಕಾರದ ಭರವಸೆ ನೀಡಿದ್ದೇವೆ. ಇಲ್ಲಿ ಎಲ್ಲ ಭಾರತೀಯರು ಸುರಕ್ಷಿತರಾಗಿದ್ದಾರೆ. ಸರಕಾರ ನೀಡುತ್ತಿರುವ ಸೂಚನೆಗಳನ್ನು ಪಾಲಿಸಿ, ಯಾವುದೇ ಗಾಳಿಸುದ್ದಿಗಳನ್ನು ಹರಡಬೇಡಿ. -ಹಿದಾಯತ್ ಅಡ್ಡೂರು, ಅಧ್ಯಕ್ಷರು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸರಕಾರ ಎಲ್ಲ ರೀತಿಯ ಭದ್ರತೆ ನೀಡಿದೆ, ಆತಂಕ ಬೇಡ ಯುಎಇಯಲ್ಲಿನ ಸರಕಾರ ಎಲ್ಲ ರೀತಿಯ ಭದ್ರತೆ ನೀಡಿರುವುದರಿಂದ ಜನರು ಭಯ, ಆತಂಕ ಪಡುವ ಅಗತ್ಯವಿಲ್ಲ. ಕಳೆದ ಎರಡು ದಿನಗಳಿಂದ ಇಲ್ಲಿನ ಸಚಿವಾಲಯ ಜನರ ಸುರಕ್ಷತೆಯ ದೃಷ್ಟಿನಿಂದ ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಲೇ ಇದೆ. ಸಾಮಾಜಿಕ ಜಾಲತಾಣಗಳ ಸುದ್ದಿಗಳನ್ನು ನಂಬಬೇಡಿ. ಸರಕಾರ ನೀಡುವ ಸುದ್ದಿ, ಸೂಚನೆಯನ್ನಷ್ಟೇ ಪಾಲಿಸಿ. ಕನ್ನಡಿಗರೊಂದಿಗೆ ಯುಎಇ ಸರಕಾರ, ಕರ್ನಾಟಕ ಸರಕಾರ ಹಾಗೂ ಕೆಎನ್ಆರ್ಐ ಫೋರಂ ಸದಾ ಇರುತ್ತದೆ. ನಾವು ಹೋಟೆಲ್ ಉದ್ಯಮಿಯಾಗಿದ್ದು, ನಮ್ಮ ಹೋಟೆಲ್ ನಲ್ಲಿ ಇರುವವರಿಗೆ ಅವರ ಕಾಲಮಿತಿ ಮುಗಿದರೂ ಪ್ರಸಕ್ತ ಸನ್ನಿವೇಶದಿಂದಾಗಿ ಹೆಚ್ಚು ಕಾಲ ಹೋಟೆಲ್ನಲ್ಲೇ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಯುಎಇಯ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಇಲ್ಲಿನ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸುವಂತೆಯೋ ಸರಕಾರ ಆದೇಶ ಹೊರಡಿಸಿದೆ. -ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಕೆಎನ್ಆರ್ಐ ಫೋರಂ ಆತಂಕಿತರಾಗಬೇಡಿ ಯುಎಇಯಲ್ಲಿ ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಯಾರೂ ಆತಂಕಿತರಾಗಬೇಡಿ. ಎಲ್ಲ ಕಡೆ ಅಂಗಡಿ, ಶಾಪಿಂಗ್ ಮಾಲ್ಗಳು ತೆರೆದಿವೆ. ಜನರು ಎಂದಿನಂತೆ ತಿರುಗಾಡುತ್ತಿದ್ದಾರೆ. ಸರಕಾರ ಎಲ್ಲ ರೀತಿಯ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ. ದುಬೈಗೆ ಆಗಮಿಸಿರುವ ಸುಮಾರು 85 ಕನ್ನಡಿಗರು ದಾಳಿಯ ಹಿನ್ನೆಲೆಯಲ್ಲಿ ಸಿಕ್ಕಾಕಿಕೊಂಡಿದ್ದು, ಅವರನ್ನೆಲ್ಲ ಸುರಕ್ಷಿತವಾಗಿ ಹೋಟೆಲೊಂದರಲ್ಲಿ ಇರಿಸಲಾಗಿದೆ. ಅವರಿಗೆ ಆಹಾರ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಆದರೂ ನಮ್ಮನ್ನು ಸಂಪರ್ಕಿಸಬಹುದು. -ಶಶಿಧರ್ ನಾಗರಾಜಪ್ಪ, ಅಧ್ಯಕ್ಷರು, ಕರ್ನಾಟಕ ಸಂಘ, ದುಬೈ ಪ್ರವಾಸ ಬಂದಿರುವ ಕನ್ನಡಿಗರಿಗೆ ಅಗತ್ಯ ನೆರವು ಸದ್ಯ ಕರ್ನಾಟಕದಿಂದ ದುಬೈಗೆ ಪ್ರವಾಸ ಬಂದಿರುವ ಹಲವಾರು ಕನ್ನಡಿಗರು ವಾಪಸ್ ಹೋಗಲು ಆಗದೆ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೆರೆಡು ದಿನದಲ್ಲಿ ಸುರಕ್ಷಿತರಾಗಿ ಅವರು ತಾಯ್ನಾಡು ಸೇರಲಿದ್ದಾರೆ. ಇಲ್ಲಿನ ಸರಕಾರ ಎಲ್ಲ ರೀತಿಯಲ್ಲೂ ಜನರ ಸುರಕ್ಷತೆಯನ್ನು ಕಾಪಾಡುತ್ತಿದೆ. ಎಲ್ಲ ರೀತಿಯ ಮುನ್ಸೂಚನೆ ನೀಡುವ ಜೊತೆಗೆ ಸಹಾಯವಾಣಿ ತೆರೆಯಲಾಗಿದೆ. ಈ ದೇಶದಲ್ಲಿ ಜನ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದ್ದಾರೆ. - ಅರುಣ್ ಕುಮಾರ್, ಅಧ್ಯಕ್ಷರು, ಕನ್ನಡ ಕೂಟ ದುಬೈ ಸುಳ್ಳುಸುದ್ದಿಗಳನ್ನು ನಂಬಬೇಡಿ ಯುಎಇಯಲ್ಲಿ ಯುದ್ಧದ ವಾತಾವರಣ ಇದ್ದರೂ ಇಲ್ಲಿ ಜನ ಭಯ, ಆತಂಕಿತರಾಗಬೇಕಿಲ್ಲ. ಇಲ್ಲಿನ ಸರಕಾರ ಜನರ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿಯ ಬಗ್ಗೆ ಬರುತ್ತಿರುವ ಸುದ್ದಿಗಳು, ವೀಡಿಯೊಗಳನ್ನು ಯಾರೂ ನಂಬ ಬೇಡಿ. ಅವರು ತಮ್ಮ ಟಿಆರ್ಪಿ ಹೆಚ್ಚಿಸಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅಂತಹ ಘಟನೆಗಳು ಎಲ್ಲಿಯೂ ನಡೆದಿಲ್ಲ. ಇಲ್ಲಿ ಎಲ್ಲವೂ ಸಹಜವಾಗಿದೆ. ಜನರು ಸುರಕ್ಷಿತರಾಗಿದ್ದಾರೆ. -ಎಂ.ಇ.ಮೂಳೂರು, ಉಪಾಧ್ಯಕ್ಷರು, ಬ್ಯಾರೀಸ್ ಕಲ್ಚರಲ್ ಫೋರಂ, ದುಬೈ ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಯುಎಇಯಲ್ಲಿರುವ ಎಲ್ಲ ಕನ್ನಡಿಗರು ಸುರಕ್ಷಿತರಾಗಿದ್ದಾರೆ. ಇಲ್ಲಿರುವ ಎಲ್ಲ ಅನಿವಾಸಿಗಳ ಸುರಕ್ಷತೆಗೆ ಯುಎಇ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಇಲ್ಲಿನ ಸರಕಾರ ಸೂಚನೆ ನೀಡಿದೆ. ಸರಕಾರಿ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಜೊತೆಗೆ ಯಾವುದೇ ರೀತಿಯ ಭಯ ಪಡುವ ಅಗತ್ಯತೆ ಇಲ್ಲ. - ನಾಸಿರ್ ಕರಾಜೆ, ಕನ್ನಡಿಗ, ದುಬೈ
ಅಮೆರಿಕ ಯುದ್ಧನೌಕೆ ಮೇಲೆ ದಾಳಿ ಮಾಡಿದ ಇರಾನ್, ಮಧ್ಯಪ್ರಾಚ್ಯ ಸಮುದ್ರ ಭಾಗದಲ್ಲೂ ಹಿಂಸಾಚಾರ | Israel Military
ಇಸ್ರೇಲ್ ಹಾಗೂ ಅಮೆರಿಕ ದಾಳಿಯ ಹಿನ್ನೆಲೆ ನಲುಗಿ ಹೋಗಿರುವ ಇರಾನ್ ಮರುದಾಳಿ ನಡೆಸುತ್ತಾ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಸಾಲು ಸಾಲು ಹಿಂಸಾಚಾರ ಹಾಗೂ ತಿಕ್ಕಾಟ ಜೋರಾಗುತ್ತಿದೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯದ ಪ್ರತಿಯೊಂದು ದೇಶ ಕೂಡ ಈ ಹಿಂಸೆಯ ಬೆಂಕಿಯಲ್ಲಿ ಬಳಲಿ ಹೋಗುವ ಲಕ್ಷಣ ಗೋಚರಿಸುತ್ತಿದೆ. ಅದರಲ್ಲೂ ಅಮೆರಿಕ ಸೇನಾ ನೆಲೆ ಹೊಂದಿರುವ ದೇಶಗಳ
ಯಾದಗಿರಿ | ಆರೋಗ್ಯವೇ ಮಹಾಸಂಪತ್ತು: ಪೃಥ್ವಿಕ್ ಶಂಕರ್
ಯಾದಗಿರಿ: ಆರೋಗ್ಯ ಸಂಪತ್ತಿನ ಮುಂದೆ ಮತ್ತಾವ ಸಂಪತ್ತೂ ಸಮಾನವಲ್ಲ. ಅದನ್ನು ನಿರ್ಲಕ್ಷ್ಯಿಸಿ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು. ನಗರದ ಲುಂಬಿನಿ ವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ನಶೆಮುಕ್ತ, ಅಪರಾಧಮುಕ್ತ ಸಮಾಜ, ಸೈಬರ್ ಕ್ರೈಂ ಜಾಗೃತಿ, “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಹಾಗೂ ಉತ್ತಮ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ರನ್ನಿಂಗ್ ಸ್ಪರ್ಧೆ ವಿಜೇತರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅವರು ಸಾರ್ವಜನಿಕರ ಸೇವೆಗಾಗಿ ಇದ್ದಾರೆ. ಯಾವುದೇ ಅನಾಹುತ ಸಂಭವಿಸಿದರೆ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಜನರ ಸಹಕಾರ ಅಗತ್ಯವಿದೆ ಎಂದರು. ಯುವಕರು ಮೊಬೈಲ್ ಗೀಳಿನಿಂದ ದೂರವಿದ್ದು ಕಠಿಣ ಅಭ್ಯಾಸ ಮಾಡಿ, ಉತ್ತಮ ಆರೋಗ್ಯಕ್ಕಾಗಿ ಓಟ, ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರಂಭದಲ್ಲಿ 5 ಮತ್ತು 10 ಕಿಮೀ ಓಟ ಸ್ಪರ್ಧೆಗೆ ಜಿಲ್ಲಾ ನ್ಯಾಯಾಧೀಶ ಮರಿಯಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಹೆಚ್ಚುವರಿ ಎಸ್ಪಿ ಧರಣೇಶ್, ಡಿವೈಎಸ್ಪಿಗಳಾದ ಭರತಕುಮಾರ ತಳವಾರ, ಸುರೇಶ ನಾಯಕ, ಸಿಪಿಐ ಸುನೀಲ್ ಮೂಲಿಮನಿ, ಅಕ್ಕಮಹಾದೇವಿ ಬಿರಾದಾರ, ಪಿಎಸ್ಐ ಮಂಜನಗೌಡ, ಎಸ್ಬಿಐ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ನಾಗರಿಕರು, ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 650 ಮಂದಿ ಓಟದಲ್ಲಿ ಭಾಗವಹಿಸಿದ್ದರು. ಎರಡು ವಿಭಾಗಗಳ ತಲಾ ಐದು ವಿಜೇತರಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ರಾಯಚೂರು | ತುಂಗಭದ್ರಾ ನೀರಾವರಿ ಕಾರ್ಮಿಕರನ್ನು ಖಾಯಂಗೊಳಿಸಲು ಸಂಸದ ರಾಜಾರಾಮ ಸಿಂಗ್ ಆಗ್ರಹ
ರಾಯಚೂರು: ತುಂಗಭದ್ರಾ ನೀರಾವರಿ ಯೋಜನೆ ಕೇಂದ್ರ ವಲಯ, ಮುನಿರಾಬಾದ್ ವ್ಯಾಪ್ತಿಯ ಕಾಲುವೆ ಹಾಗೂ ಕ್ಯಾಂಪ್ಗಳಲ್ಲಿ ಕಳೆದ 25–30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿ, ಅವರಿಗೆ ವರ್ಷಪೂರ್ತಿ ಉದ್ಯೋಗದ ಭದ್ರತೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ, ಜವಳಿ ಹಾಗೂ ಕೌಶಲ್ಯಾಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯ ಹಾಗೂ ಬಿಹಾರ ಸಂಸದ ರಾಜಾರಾಮ ಸಿಂಗ್ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಬರೆದ ಪತ್ರದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಮಸ್ಯೆಗಳತ್ತ ಗಮನ ಸೆಳೆದಿರುವ ಅವರು, ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಗ್ಯಾಂಗ್ಮನ್, ಗೇಜ್ ರೀಡರ್, ವರ್ಕ್ ಇನ್ಸ್ಪೆಕ್ಟರ್, ಡ್ರೈವರ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ರೈತರ ಜಮೀನುಗಳಿಗೆ ನೀರು ಹರಿಸುವ ಮಹತ್ವದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಉದ್ಯೋಗದ ಭದ್ರತೆ ಇಲ್ಲದಿರುವುದು ವಿಷಾದನೀಯ ಎಂದು ಹೇಳಿದ್ದಾರೆ. 2021-22ರವರೆಗೆ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಲಾಗುತ್ತಿತ್ತು. ಇತ್ತೀಚೆಗೆ ನೀರು ನಿರ್ವಹಣೆ ಮುಗಿದ ಬಳಿಕ ಎರಡು ತಿಂಗಳು ಕೆಲಸ ನಿಲ್ಲಿಸಲಾಗುತ್ತಿದೆ. ನೀರು ನಿಂತ ನಂತರ ಕಾಲುವೆಗಳಲ್ಲಿ ಸೀಲ್ಟ್ ತೆರವು, ಜಂಗಲ್ ಕ್ಲಿಯರೆನ್ಸ್ ಹಾಗೂ ಸೇವಾ ರಸ್ತೆ ದುರಸ್ತಿ ಕಾರ್ಯಗಳನ್ನು ಕಾರ್ಮಿಕರ ಮೂಲಕವೇ ಮಾಡಬಹುದಾದರೂ, ಅವುಗಳನ್ನು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡುತ್ತಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತುಂಗಭದ್ರಾ ಜಲಾಶಯ ಮತ್ತು ಕಾಲುವೆಗಳು ಶಾಶ್ವತ ಯೋಜನೆಯಾಗಿದ್ದರೂ ಶೇ.90ರಷ್ಟು ಕಾರ್ಮಿಕರನ್ನು ಖಾಯಂಗೊಳಿಸಿಲ್ಲ. ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಹೋರಾಟದ ಬಳಿಕ ಸರ್ಕಾರ ವರ್ಷಪೂರ್ತಿ ಉದ್ಯೋಗ ನೀಡುವಂತೆ ಸೂಚನೆ ನೀಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಯೋಜನೆಯ ಅಧಿಕಾರಿಗಳು ಕಾರ್ಮಿಕರನ್ನು ನಿರಂತರವಾಗಿ ಕೆಲಸದಲ್ಲಿ ಮುಂದುವರಿಸಿದರೆ ಸರ್ಕಾರಕ್ಕೆ ಹೆಚ್ಚಿನ ಅನುದಾನ ಉಳಿತಾಯವಾಗುತ್ತದೆ ಎಂಬ ವರದಿಯೂ ಸಲ್ಲಿಕೆಯಾಗಿದೆ. ಆದ್ದರಿಂದ ತಕ್ಷಣ ಸ್ಪಷ್ಟ ಆದೇಶ ಹೊರಡಿಸಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡಬೇಕು ಎಂದು ಅವರು ಕೋರಿದ್ದಾರೆ. ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ, ಉದ್ಯೋಗದ ಭದ್ರತೆ ಹಾಗೂ ಖಾಯಂಗೊಳಿಸುವಿಕೆ ಸರ್ಕಾರದ ತಕ್ಷಣದ ಜವಾಬ್ದಾರಿಯಾಗಿದೆ ಎಂದು ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.
ರಾಯಚೂರು | ತಾರಾನಾಥ ಪೂಜಾರಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ: ತಲಕಾಯ್ ಮಾರೆಪ್ಪ ಅಭಿನಂದನೆ
ರಾಯಚೂರು: ವಕೀಲ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ದೀನದಲಿತರು ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ಗುರುತಿಸಿಕೊಂಡಿರುವ ತಾರಾನಾಥ ಪೂಜಾರಿ ಅವರು ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯ್ ಮಾರೆಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ತಾರಾನಾಥ ಪೂಜಾರಿ ಅವರು ಸದಾ ಜನಪರ ಧೋರಣೆಯೊಂದಿಗೆ ಕಾರ್ಯನಿರ್ವಹಿಸಿ ಎಲ್ಲರ ವಿಶ್ವಾಸ ಗಳಿಸಿರುವ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ. ಇಂತಹ ವ್ಯಕ್ತಿಗೆ ಸರ್ಕಾರ ಮಹತ್ವದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆ ನೀಡಿರುವುದು ಶ್ಲಾಘನೀಯ ಕ್ರಮವಾಗಿದೆ. ಅವರ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ದೊರಕಲಿ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸಿದ್ದಾರೆ.
Ind Vs Wi- ಟೀಂ ಇಂಡಿಯಾವನ್ನು ಸೆಮಿಫೈನಲ್ ತಲುಪಿಸಿದ ಸಂಜು ಸ್ಯಾಮ್ಸನ್! ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ
ಈವೆರೆಗೂ ತನ್ನ ಫಾರ್ಮ್ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಇದೀಗ ಈಡನ್ ಗಾರ್ಡನ್ಸ್ ನಲ್ಲಿ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ತಲುಪಿಸಿದ್ದಾರೆ. ಅವರ ಮ್ಯಾಚ್ ವಿನ್ನಿಂಗ್ ಅರ್ಧಶತಕದ ಸಹಾಯದಿಂದ ಶಾಯ್ ಹೋಪ್ ಬಳಗವನ್ನು ಸೂರ್ಯಕುಮಾರ್ ಯಾದವ್ ಪಡೆ 5 ವಿಕೆಟ್ ಗಳಿಂದ ಸೋಲಿಸಿದೆ. ಇದೀಗ ಮಾರ್ಚ್ 5ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ 5 ವಿಕೆಟ್ ಕಳೆದಕೊಂಡು 4 ಎಸೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. ಕೇವಲ 3 ರನ್ ಗಳಿಂದ ಶತಕ ವಂಚಿತರಾದ ಸಂಜು ಸ್ಯಾಮ್ಸನ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.() ಸಂಜು ತಾಳ್ಮೆ+ ಜಾಣ್ಮೆ ಆರಂಭಕಾರನಾಗಿ ಬಂದ ಸಂಜು ಸ್ಯಾಮ್ಸನ್ ಅವರು 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಗಳಿದ್ದವು. ಭಾರತ ತಂಡ 41 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಆಕ್ರಮಣಕಾರಿ ಶೈಲಿಯ ಬ್ಯಾಟರ್(11 ಎಸೆತದಲ್ಲಿ 10) ಮತ್ತು ಫಾರ್ಮ್ ನಲ್ಲಿರುವ ಇಶಾನ್ ಕಿಶನ್(6 ಎಸೆತದಲ್ಲಿ 10) ಅವರ ವಿಕೆಟ್ ಪತನವಾಯಿತು. ಈ ಸಂದರ್ಭದಲ್ಲಿ ಸಂಜು ಅವರು ತಾಳ್ಮೆಯೊಂದಿಗೆ ಜಾಣ್ಮೆಯನ್ನು ತೋರಿಸಿ ಇನ್ನಿಂಗ್ಸ್ ಕಟ್ಟಿದರು. ನಾಯಕ ಸೂರ್ಯಕುಮಾರ್ ಯಾದವ್(16 ಎಸೆತದಲ್ಲಿ 18), ತಿಲಕ್ ವರ್ಮಾ(15 ಎಸೆತದಲ್ಲಿ 27) ಮತ್ತು ಹಾರ್ದಿಕ್ ಪಾಂಡ್ಯ (14 ಎಸೆತದಲ್ಲಿ 17) ಅವರ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಅಂತಿಮವಾಗಿ ಶಿವಂ ದುಬೆ(4 ಎಸೆತದಲ್ಲಿ 8)ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವೆಸ್ಚ್ ಇಂಡೀಸ್ ತಂಡಕ್ಕೆ ನಾಯಕ್ ಶಾಯ್ ಹೋಪ್(33 ಎಸೆತದಲ್ಲಿ 32) ಮತ್ತು ರೋಸ್ಟನ್ ಚೇಸ್ (25 ಎಸೆತದಲ್ಲಿ 40) ಅವರು ಉತ್ತಮ ಆರಂಭ ನೀಡಿದರು. ಪವರ್ ಪ್ಲೇನ 6 ಓವರ್ ಗಳಲ್ಲಿ 53 ರನ್ ಗಳಿಸಿದ ಅವರು ಮೊದಲ ವಿಕೆಟ್ ಗೆ 8.5 ಓವರ್ ಗಳಲ್ಲಿ 68 ರನ್ ಗಳಿಸುವಲ್ಲಿ ಯಶಸ್ವಿಯಾದರು. 3ನೇ ಕ್ರಮಾಂಕದಲ್ಲಿ ಕ್ರೀಸಿಗೆ ಆಗಮಿಸಿದ ಶಿಮ್ರಾನ್ ಹೆಟ್ಮೆಯರ್ ಅವರು 12 ಎಸೆತದಲ್ಲಿ ವೇಗದ 27 ರನ್ ಹೊಡೆದಿದ್ದರಿಂದ ತಂಡ 11 ಓವರ್ ಗಳಲ್ಲಿ 100ರ ಗಡಿ ದಾಟಿತು. ಅಂತಿಮ ಓವರ್ ಗಳಲ್ಲಿ ರೋಮನ್ ಪೋವೆಲ್(19 ಓವರ್ ಗಳಲ್ಲಿ ಅಜೇಯ 34) ಮತ್ತು ಜೇಸನ್ ಹೋಲ್ಡರ್ (22 ಎಸೆತಗಳಲ್ಲಿ ಅಜೇಯ 37) ಸಂಕ್ಷಿಪ್ತ ಸ್ಕೋರ್ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 195/4, ಶಾಯ್ ಹೋಪ್ 32(33), ರೋಸ್ಟನ್ ಚೇಸ್ 40(25), ಜೇಸನ್ ಹೋಲ್ಡರ್ 37(22), ರೋವ್ಮನ್ ಪೋವೆಲ್ 34(19), ಜಸ್ಪ್ರೀತ್ ಬುಮ್ರಾ 36ಕ್ಕೆ 2, ವರುಣ್ ಚಕ್ರವರ್ತಿ 40ಕ್ಕೆ 1, ಹಾರ್ದಿಕ್ ಪಾಂಡ್ಯ 40ಕ್ಕೆ1 ಸಂಜು ಸ್ಯಾಮ್ಸನ್ 97(50), ತಿಲಕ್ ವರ್ಮಾ 27(15), ಹಾರ್ದಿಕ್ ಪಾಂಡ್ಯ 17(14), ಸೂರ್ಯಕುಮಾರ್ ಯಾದವ್ 18(16), ಜೇಸನ್ ಹೋಲ್ಡರ್ 38ಕ್ಕೆ 2, ಶಮರ್ ಜೋಸೆಫ್ 42ಕ್ಕೆ 2.
ಯುದ್ದ ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ: ಇರಾನ್ ವೈಮಾನಿಕ ದಾಳಿಗೆ ಯುಎಇ ಖಂಡನೆ
ಅಬುಧಾಬಿ: ಅಮೆರಿಕ-ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಯುಎಇಯ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಇರಾನ್ ನಡೆಸಿದ ವೈಮಾನಿಕ ದಾಳಿಯನ್ನು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರರು ಖಂಡಿಸಿದ್ದಾರೆ. `ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ನ ಆಕ್ರಮಣವು ತನ್ನ ಗುರಿಯನ್ನು ಕಳೆದುಕೊಂಡಿದೆ ಮತ್ತು ನಿರ್ಣಾಯಕ ಕ್ಷಣದಲ್ಲಿ ಇರಾನ್ ಅನ್ನು ಪ್ರತ್ಯೇಕಿಸಿದೆ. ನಿಮ್ಮ ಯುದ್ದವು ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ. ಮತ್ತು ಈ ಪ್ರತಿದಾಳಿಯ ಮೂಲಕ ಇರಾನ್ ಅನ್ನು ಪ್ರದೇಶದ ಪ್ರಾಥಮಿಕ ಅಪಾಯದ ಮೂಲವಾಗಿ ಮತ್ತು ಅದರ ಕ್ಷಿಪಣಿ ಕಾರ್ಯಕ್ರಮವನ್ನು ಅಸ್ಥಿರತೆಯ ಪ್ರಕ್ರಿಯೆಯ ಭಾಗವೆಂದು ನೋಡುವವರ ನಿರೂಪಣೆಗೆ ಶಕ್ತಿ ತುಂಬುತ್ತಿದ್ದೀರಿ. ವಿವೇಕದಿಂದ ವರ್ತಿಸಿ ಮತ್ತು ಉಲ್ಬಣ ವ್ಯಾಪಕಗೊಳ್ಳುವ ಮುನ್ನ ನಿಮ್ಮ ನೆರೆಯವರೊಂದಿಗೆ ಜವಾಬ್ದಾರಿಯಿಂದ ವರ್ತಿಸಿ' ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಷ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ?
ನವದೆಹಲಿ: ದೇಶಾದ್ಯಂತ ರೈಲು ಜಾಲ ವಿಸ್ತರಣೆ ಆಗುತ್ತಿದೆ. ರೈಲ್ವೆ ಮೂಲ ಸೌಕರ್ಯ ಸುಧಾರಿಸುವ ಜೊತೆಗೆ ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಸಹಸ್ರಾರು ರೈಲು ನಿಲ್ದಾಣಗಳು ಪುನರ್ ಅಭೀವೃದ್ಧಿಯಾಗಿ, ಆಧುನಿಕರಣಗೊಳ್ಳುತ್ತಿವೆ. ಈ ಮಧ್ಯೆ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣಗಳನ್ನು (ಪ್ಯಾಸೆಂಜರ್ ಹೋಲ್ಡಿಂಗ್ ಏರಿಯಾ) ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ರೈಲ್ವೆ ಸಚಿವ ಸಚಿವರಾದ
ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ಮಾಡಲು ನಾವು ಬಿಡುವುದಿಲ್ಲ : ಸಚಿವ ಬೋಸರಾಜು
ಸಿರವಾರ: ಸಿರವಾರ ತಾಲೂಕನ್ನು ಪ್ರಸ್ತಾವಿತ ಸಿಂಧನೂರು ಜಿಲ್ಲೆಗೆ ಸೇರ್ಪಡೆ ಮಾಡುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ತಾಲೂಕಿನ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಸ್ಪಷ್ಟಪಡಿಸಿದರು. ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿರವಾರ ತಾಲೂಕಿನ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಹೊಸ ಜಿಲ್ಲೆ ರಚನೆ ಕುರಿತು ಸರ್ಕಾರದ ಮುಂದೆ ಸದ್ಯ ಯಾವುದೇ ಪ್ರಸ್ತಾವನೆ ಇಲ್ಲ. ಅಖಂಡ ಮಾನ್ವಿ ಹಾಗೂ ಸಿರವಾರ ತಾಲೂಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ಸಿರವಾರ ತಾಲೂಕು ಸಿಂಧನೂರು ಜಿಲ್ಲೆಗೆ ಸೇರುತ್ತದೆ ಎಂಬುದು ಸುಳ್ಳು ಸಂದೇಶವಾಗಿದ್ದು, ಇಂತಹ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಹೇಳಿದರು. ಶಾಸಕ ಜಿ. ಹಂಪಯ್ಯ ನಾಯಕ ಮಾತನಾಡಿ, ಸಿರವಾರ ತಾಲೂಕು ಸಿಂಧನೂರು ಜಿಲ್ಲೆಗೆ ಸೇರ್ಪಡೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಸ್ವಗ್ರಾಮ ಬಲ್ಲಟಿಗಿಯೂ ಸಿರವಾರ ತಾಲೂಕಿನಲ್ಲೇ ಇದೆ. ತಾಲೂಕಿನ ಜನರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ತಾಲೂಕಿನ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇಬ್ಬರೂ ನಾಯಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪಗೌಡ, ಮಹಾಂತೇಶ ಪಾಟೀಲ್ ಅತ್ತನೂರು, ರುದ್ರಪ್ಪ ಅಂಗಡಿ, ಜಿ.ಲೋಕರೆಡ್ಡಿ, ಟಿ.ಆರ್.ಪಾಟೀಲ್, ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿ, ಜೆ.ದೇವರಾಜಗೌಡ, ಬ್ರಿಜೇಶ್ ಪಾಟೀಲ್, ಅರಕೇರಿ ಶಿವಶರಣ ಸಾಹುಕಾರ್, ರಮೇಶ ದರ್ಶನಕರ್, ವೈ.ಭೂಪನಗೌಡ, ಮಲ್ಲಪ್ಪ ಸಾಹುಕಾರ್, ಅಯ್ಯನಗೌಡ ಎರಡ್ಡಿ, ಚಂದ್ರಶೇಖರಯ್ಯಸ್ವಾಮಿ, ಕಲ್ಲೂರು ಬಸವರಾಜ ನಾಯಕ, ಜೆ.ಅಬ್ರಹಾಂ ಹೊನ್ನಟಿಗಿ, ಶಿವಪ್ಪಗೌಡ ಹಳ್ಳಿಹೊಸೂರು, ಡಿ.ಜಯಪ್ಪ, ಮಲ್ಲಿಕಾರ್ಜುನಗೌಡ ಮರಕಂದಿನ್ನಿ, ಅರಳಪ್ಪಯದ್ದಲದಿನ್ನಿ ಸೇರಿದಂತೆ ಅನೇಕರು ಇದ್ದರು.
ಗಲ್ಫ್ನಲ್ಲಿರುವ ಮಲಯಾಳಿಗಳ ಸುರಕ್ಷೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪಿಣರಾಯಿ ವಿಜಯನ್ ಪತ್ರ
ವಯನಾಡು: ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮಲೆಯಾಳಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಲ್ಪೆಟ್ಟಾದಲ್ಲಿ ರವಿವಾರ ವಯನಾಡ್ ಮಾದರಿ ಪಟ್ಟಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಪತ್ರದಲ್ಲಿ ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದೇನೆ. ಪರಿಸ್ಥಿತಿ ಹದಗೆಟ್ಟರೆ, ಗಲ್ಫ್ ದೇಶಗಳಲ್ಲಿ ವಾಸಿಸುವ ಹಾಗೂ ಕೆಲಸ ಮಾಡುವ ಭಾರತೀಯರು, ವಿಶೇಷವಾಗಿ ಮಲೆಯಾಳಿಗಳು ಅಪಾಯಕ್ಕೆ ಸಿಲುಕಬಹುದು ಎಂದು ತಾನು ಎಚ್ಚರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಭಾಷಣದ ವೇಳೆ ಅವರು ಇರಾನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಸೇನಾ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ ಎಂದು ಅವರು ಹೇಳಿದರು. ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬದ ಹತ್ಯೆಯನ್ನು ಅವರು ಖಂಡಿಸಿದರು. ಇದು ಬರ್ಬರ ಕೃತ್ಯ ಎಂದು ಅವರು ಕರೆದರು. ಜಗತ್ತಿನಲ್ಲಿ ಹಲವು ಒರಟು ದೇಶಗಳಿವೆ. ಅಮೆರಿಕ ಅವುಗಳ ನೇತೃತ್ವವನ್ನು ವಹಿಸಿದೆ. ಇರಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಪರಿಸ್ಥಿತಿ ಇರಲಿಲ್ಲ. ಆಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬವನ್ನು ಗುರಿಯಾಗಿರಿಸಿಕೊಂಡಿರುವುದು ಗಂಭೀರ ಕ್ರೌರ್ಯದ ಕೃತ್ಯ ಎಂದು ಮುಖ್ಯಮಂತ್ರಿ ಹೇಳಿದರು. ಭಾರತವು ಅಮೆರಿಕ ಹಾಗೂ ಇಸ್ರೇಲ್ ಅನ್ನು ಬಲವಾಗಿ ಖಂಡಿಸಬೇಕು ಎಂದು ಪಿಣರಾಯಿ ವಿಜಯನ್ ಹೇಳಿದರು.
ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ದಾಳಿ ಖಂಡನೀಯ: ಜನವಾದಿ ಮಹಿಳಾ ಸಂಘಟನೆ
ಕಲಬುರಗಿ: ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ಅವರು, ಸಾಮ್ರಾಜ್ಯಶಾಹಿ ಮನೋಭಾವದಿಂದ ನಡೆದ ಈ ಕ್ರೂರ ದಾಳಿ ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಿ, ವಿನಾಶಕಾರಿ ಪರಿಣಾಮಗಳನ್ನು ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದಿಂದಾಗಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಭೀಕರ ಪರಿಣಾಮ ಬೀರಲಿದ್ದು, ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಿಂದ ಹಲವಾರು ಮಕ್ಕಳು ಸಾವನ್ನಪ್ಪಿರುವುದು ಅಮಾನವೀಯ ಕೃತ್ಯವೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್ ದೀರ್ಘಕಾಲದಿಂದ ಭಾರತದ ಸ್ನೇಹಿ ರಾಷ್ಟ್ರವಾಗಿದ್ದು, ಭಾರತ ಸರ್ಕಾರವು ಇರಾನ್ ಮೇಲಿನ ಈ ಆಕ್ರಮಣಕಾರಿ ದಾಳಿಯನ್ನು ಖಂಡಿಸಿ, ಯುದ್ಧ ನಿಲ್ಲಿಸಲು ತುರ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕಲಬುರಗಿ | ಎಸ್ಐಆರ್ ವಿರೋಧಿಸದಿದ್ದರೆ ಎರಡನೇ ದರ್ಜೆ ನಾಗರಿಕರಾಗಿ ಬದುಕುವ ಸ್ಥಿತಿ: ಶಿವಸುಂದರ್
ಎಸ್ಐಆರ್ ಪರಿಣಾಮ - ಸವಾಲು ಸಂವಾದ ಗೋಷ್ಠಿ
ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಬಂದ್: ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ
ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನಯಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಯುಎಇ (ದುಬೈ) ಸೇರಿದಂತೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರಯಾಣಿಕರ ನೆರವಿಗೆ ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ. ಇರಾನ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ ಮತ್ತು ಖತಾರ್ ಸೇರಿದಂತೆ ಸುಮಾರು 11 ದೇಶಗಳ ವಾಯುಪ್ರದೇಶವನ್ನು ಮಾರ್ಚ್ 2ರವರೆಗೆ ಮುಚ್ಚಲಾಗಿದೆ.
“ಹೇಯ ಕೃತ್ಯ” : ಆಯತುಲ್ಲಾ ಅಲಿ ಖಾಮಿನೈ ಹತ್ಯೆಯನ್ನು ಖಂಡಿಸಿದ ಪ್ರಿಯಾಂಕಾ ಗಾಂಧಿ
“ಕಣ್ಣಿಗೆ ಕಣ್ಣು ಇಡೀ ಜಗತ್ತನ್ನೇ ಕುರುಡಾಗಿಸುತ್ತದೆ” ಮಹತ್ಮಾ ಗಾಂಧಿಯ ಮಾತುಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಂಸದೆ
ಮಾನವಕುಲಕ್ಕೆ ಜಗದ್ಗುರು ರೇಣುಕಾಚಾರ್ಯರ ತತ್ವಗಳೇ ದಾರಿದೀಪ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಆಳಂದ | ಗುರುಸ್ಮರಣೆ–ಸ್ನೇಹಬಂಧದ ಭಾವನಾತ್ಮಕ ಸಂಭ್ರಮ
ಆಳಂದ: “ಕಲಿತ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಭಾವನಾತ್ಮಕ ಗುರುವಂದನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೇರಣೆಯ ದಾರಿ ದೀಪವಾಗುತ್ತವೆ” ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು. ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಶ್ರೀ ಶಿವಲಿಂಗೇಶ್ವರ ಪ್ರೌಢ ಶಾಲೆಯ 1999–2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಬೃಹತ್ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಾನವನ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯವಾದದ್ದು. ಸಮಾಜದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ತ್ಯಾಗ, ಶ್ರಮ ಹಾಗೂ ಮಾರ್ಗದರ್ಶನ ನೀಡಿದ ಗುರುಗಳ ಕೈಚಳಕ ಅಡಗಿದೆ ಎಂದರು. ಗುರುವಂದನೆ ಸ್ವೀಕರಿಸಿದ ಸಾಹಿತಿ ಎಸ್.ಬಿ. ಪಾಟೀಲ ಹಾಗೂ ಹಿರಿಯ ನಿವೃತ್ತ ಶಿಕ್ಷಕ ಎಸ್.ಎಂ. ಧುಲಂಗೆ ಮಾತನಾಡಿ, “ಗುರು–ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಮಹತ್ವದ ಅಡಿಪಾಯ. ಈ ಪರಂಪರೆಯನ್ನು ಜೀವಂತವಾಗಿಡುವ ಇಂತಹ ಕಾರ್ಯಕ್ರಮಗಳು ಸಮಾಜದ ನೈತಿಕ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ಹೇಳಿದರು. ಸಮಾರಂಭದ ಸಾನಿಧ್ಯವನ್ನು ಗ್ರಾಮದ ಸಂಸ್ಥಾನ ಹಿರೇಮಠದ ಸಿದ್ಧಮಲ್ಲ ಶಿವಾಚಾರ್ಯರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಹುಂಡೇಕಾರ, ಉಪಾಧ್ಯಕ್ಷೆ ನಿರ್ಮಲಾ ಶಾಂತಪ್ಪಾ, ಕಾರ್ಯದರ್ಶಿ ಶ್ರೀಮಂತ ನಾಮಣೆ ಹಾಗೂ ನಿರ್ದೇಶಕರು ಹಳೆಯ ವಿದ್ಯಾರ್ಥಿಗಳ ಈ ಸಾರ್ಥಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದರು. ಹಳೆಯ ವಿದ್ಯಾರ್ಥಿ ಬಳಗದ ಅರುಣಕುಮಾರ ಸಿ. ಬಿರಾದಾರ, ಗುರುಶರಣ ಕಸ್ತೂರೆ, ಸಂತೋಷಕುಮಾರ ಸಿರಸೆ, ಈಶ್ವರ ಬಿರಾದಾರ, ಸಂತೋಷಕುಮಾರ ಬುಜುರ್ಕೆ, ಮಲ್ಲಿನಾಥ ವಾಲಿ, ಮಮತಾ ದೇಗಾಂವ, ಸೂರ್ಯಕಾ ಮಹಾಜನ, ವಿಜಯಲಕ್ಷೀ ಎನ್. ಮಂಠಾಳೆ, ಶ್ರೀದೇವಿ ಮಂಠಾಳೆ, ಸಂತೋಷ ಸಿರಸೆ, ಮಹಾದೇವಿ ಮುಗಳೆ, ಕನ್ನಯ್ಯಾ ಜಮಾದಾರ, ನೀಲಮ್ಮ ಗೌರಿ ಸೇರಿದಂತೆ 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಎಸ್.ಎಂ. ಧುಲಂಗೆ, ಎಂ.ಎಸ್. ಬೆಳ್ಳೆ, ಎಸ್.ಬಿ. ಪಾಟೀಲ, ಪಿ.ಪಿ. ಶಿವಶೆಟ್ಟಿ, ಎ.ಎಸ್. ಗುಂಡೆ, ಸಿ.ಜಿ. ಕಲಶೆಟ್ಟಿ, ಬಿ.ಪಿ. ಜಾಧವ, ರತನಚಂದ ಪಾಟೀಲ ಹಾಗೂ ಚಂದ್ರಕಾoತ ಅಟ್ಟೂರ ಅವರಿಗೆ ಗೌರವ ಸನ್ಮಾನ ನೆರವೇರಿತು. ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊoಡು, ವಿದ್ಯಾರ್ಥಿಗಳ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯಗುರು ಚಂದ್ರಕಾoತ ಕಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ತೀರ್ಥೆ ನಿರೂಪಿಸಿದರು. ಅರುಣಕುಮಾರ ಬಿರಾದಾರ ಸ್ವಾಗತಿಸಿದರು. ಉಮಾದೇವಿ ಮುಗಳೆ ಪ್ರಸ್ತಾವಿಕ ಮಾತನಾಡಿದರು.
ಇರಾನ್ ಬಿಕ್ಕಟ್ಟು: ಸಾಗಣೆ ಅಡ್ಡಿ, ಪಾವತಿ ವಿಳಂಬ ಎದುರಿಸುತ್ತಿರುವ ಅಕ್ಕಿ ರಫ್ತುದಾರರು
ಚಂಡಿಗಢ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸೇನಾ ದಾಳಿಯ ಹಿನ್ನೆಲೆಯಲ್ಲಿ ಹರ್ಯಾಣದ ಅಕ್ಕಿ ರಫ್ತುದಾರರು ಪಾವತಿ ವಿಳಂಬ ಎದುರಿಸುತ್ತಿದ್ದಾರೆ ಹಾಗೂ ಇರಾನ್, ಅಪಘಾನಿಸ್ತಾನಕ್ಕೆ ಸಾಗಣೆಗೆ ಅಡ್ಡಿ ಉಂಟಾಗುತ್ತಿದೆ. ‘‘ಸಂಘರ್ಷದ ಕೆಲವು ಪರಿಣಾಮಗಳು ವ್ಯಾಪಾರದ ಮೇಲೆ ಈಗಾಗಲೇ ಆರಂಭವಾಗಿದೆ’’ ಎಂದು ಅಕ್ಕಿ ರಫ್ತುದಾರರ ಅಸೋಸಿಯೇಶನ್ನ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಕುಮಾರ್ ಜೈನ್ ತಿಳಿಸಿದ್ದಾರೆ. ಇರಾನ್ನ ಅತಿ ದೊಡ್ಡ ಬಂದರು ‘ಬಂದರ್ ಅಬ್ಬಾಸ್’ ಮೂಲಕ ಇರಾನ್ ಅಥವಾ ಅಫಘಾನಿಸ್ತಾನಕ್ಕೆ ಹೋಗುವ ಸಾಗಣೆಗಳನ್ನು ತಡೆ ಹಿಡಿಯಲಾಗಿದೆ. ಪರಿಸ್ಥಿತಿ ಸುಧಾರಿಸುವ ವರೆಗೆ ಈ ಸಾಗಣೆಗಳು ಸ್ಥಗಿತಗೊಳ್ಳಲಿವೆ. ಇದರಿಂದ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಲಿವೆ. ಪಾವತಿ ಕೂಡ ವಿಳಂಬವಾಗಬಹುದು ಎಂದು ಜೈನ್ ತಿಳಿಸಿದ್ದಾರೆ.
Ind Vs Wi Highlights- ಅಭಿಷೇಕ್ ಶರ್ಮಾ ಔಟ್ ಆದಾಗ ಅಖೈಲ್ ಹೊಸೇನ್ `ಶ್' ಸೆಲೆಬ್ರೇಶನ್! ಮೌನವಾದ ಈಡನ್ ಗಾರ್ಡನ್ಸ್
india Vs West Indies Super 8 Match- ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧವೂ ಸಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಭಾರತದ ಅಭಿಮಾನಿಗಳು. ಆದರೆ ವಿಂಡೀಸ್ ಮಧ್ಯಮವೇಗಿ ಅಖೈಲ್ ಹೊಸೈನ್ ಎಸೆತಕ್ಕೆ ಲೆಕ್ಕಾಚಾರ ತಪ್ಪಿದ ಅವರು ಹೆಟ್ಮೆಯರ್ ಗೆ ಕ್ಯಾಚ್ ನೀಡಿ ಔಟಾದರು. ಈ ಕ್ಷಣ ಇಡೀ ಈಡನ್ ಗಾರ್ಡನ್ಸ್ ಮೈದಾನವೇ ಅಕ್ಷರಶಃ ಸೈಲೆಂಟ್ ಆಗಿತ್ತು. ಈ ವೇಳೆ ಹೊಸೈನ್ ಮಾಡಿದ `ಶ್' ಸಂಭ್ರಮಾಚರಣೆ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಕೇಂದ್ರ ಸರಕಾರದ ನಿಲುವು ಖಂಡಿಸಿದ ಸಂಜಯ್ ರಾವತ್
ಮುಂಬೈ: ಇರಾನ್ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರನ್ನು ಬಲಿ ತೆಗೆದುಕೊಂಡ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ನ ದಾಳಿಯ ಕುರಿತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿಲುವನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ರವಿವಾರ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಇರಾನ್ ದುರ್ಬಲವಾಗುವುದು ಭಾರತಕ್ಕೆ ಕೂಡ ಅಪಾಯಕಾರಿ. ಯಾಕೆಂದರೆ, ಇರಾನ್ ಅನ್ನು ಅಮೆರಿಕ ಹಾಗೂ ಇಸ್ರೇಲ್ ನಿಯಂತ್ರಿಸಿದರೆ, ಅವರು ಮುಂದಿನ ಹೆಜ್ಜೆ ಭಾರತದತ್ತ ಎಂದಿದ್ದಾರೆ. ‘‘ಈ ವಿಷಯದ ಬಗ್ಗೆ ಭಾರತ ಇದುವರೆಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಯುದ್ಧ ಅದರ ಮನೆ ಬಾಗಿಲಿಗೆ ತಲುಪಿದೆ’’ ಎಂದು ಅವರು ಪ್ರತಿಪಾದಿಸಿದ್ದಾರೆ. ನರೇಂದ್ರ ಮೋದಿ ಅವರ ಕಳೆದ ವಾರ ಇಸ್ರೇಲ್ ಭೇಟಿ ನೀಡಿರುವುದನ್ನು ‘‘ಭಾರತೀಯರ ಜಾಗತಿಕ ನೀತಿಗೆ ಆಘಾತ’’ ಎಂದು ರಾವತ್ ಬಣ್ಣಿಸಿದರು. ಅಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ಇಸ್ರೇಲ್ ಹಾಗೂ ಅಮೆರಿಕದ ಕ್ರೌರ್ಯ ಹಾಗೂ ಬೆದರಿಕೆ ಎಂದು ಅವರು ಕರೆದರು. ‘‘ಇರಾನ್ ಭಾರತದ ಸ್ನೇಹಿತ. ಅದೇ ರೀತಿ ಇಸ್ರೇಲ್ ಕೂಡ. ಕಾಶ್ಮೀರ ವಿಷಯದಲ್ಲಿ ಇರಾನ್ ಬಹಿರಂಗವಾಗಿ ನಮಗೆ ಬೆಂಬಲ ನೀಡಿದೆ. ಭಾರತದೊಂದಿಗಿನ ಗೆಳೆತನದ ಕಾರಣಕ್ಕೆ ಅದು ನಮಗೆ ಕಡಿಮೆ ಬೆಲೆಗೆ ತೈಲವನ್ನು ಒದಗಿಸಿದೆ’’ ಎಂದು ಅವರು ಹೇಳಿದರು. ಆದುದರಿಂದ ಇರಾನ್ ಕುರಿತಂತೆ ಭಾರತ ಒಂದು ನಿಲುವು ತಳೆಯಬೇಕು ಎಂದು ಅವರು ತಿಳಿಸಿದರು. ‘‘ಅಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬವನ್ನು ಹತೈಗೈಯುವಾಗ ಭಾರತದ ನಾಯಕತ್ವ ಹಾಗೂ ಅದರ ವಿದೇಶಿ ನೀತಿ ಏನು ಮಾಡುತ್ತಿತ್ತು ? ಇದು ವಿಶ್ವ ರಾಜಕೀಯದಲ್ಲಿ ದುರಾದೃಷ್ಟಕರ ಘಟನೆ. ಪಶ್ಚಿಮ ಏಷ್ಯದ ಸ್ಥಿರತೆಗೆ ಹಾನಿಕರ’’ ಎಂದು ಅವರು ಹೇಳಿದ್ದಾರೆ. ಅಫಘಾನಿಸ್ತಾನದ ಮೇಲಿನ ದಾಳಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಬೆಂಬಲ ನೀಡಿದೆ ಎಂದು ಅವರು ಗಮನ ಸೆಳೆದರು. ಬಿಕ್ಕಟ್ಟು ಭಾರತದ ಮನೆ ಬಾಗಿಲಿಗೆ ತಲುಪಿದೆ. ಅದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು. ಭೌಗೋಳಿಕೆಯನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.
ಒಂದು ತಿಂಗಳಲ್ಲಿ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸೂಚನೆ
ಬೆಂಗಳೂರು, ಮಾ.1: ರಾಜ್ಯ ಸರಕಾರವು ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ, ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆಶಾ ಕುಮಾರಿ ಎ.ಜೆ. ಆದೇಶ ಹೊರಡಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗಧಿಪಡಿಸಿ ನೇಮಕಾತಿ ಅಧಿಸೂಚನೆಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ. ಆದರೆ, ಹೈಕೋರ್ಟ್ನ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಗಳು /ನೇಮಕಾತಿ ಪ್ರಾಧಿಕಾರಗಳು ಮುಂದಿನ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಶೇ.6ರಷ್ಟು(ಪರಿಶಿಷ್ಟ ಜಾತಿಗೆ ಶೇ.2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.4) ಹುದ್ದೆಗಳನ್ನು ಕಾಯ್ದಿರಿಸಬೇಕು ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ 2025ರ ನ.27ರ ಮದ್ಯಂತರ ಆದೇಶಕ್ಕಿಂತ ಹಿಂದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿರುವ ಪ್ರಕರಣಗಳನ್ನು ಯಥಾಪ್ರಕಾರ ಮುಂದುವರೆಸಿ, ಅಂತಿಮಗೊಳಿಸಬೇಕು. ಆದರೆ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ “ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ” ಎಂದು ಷರಾ ದಾಖಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ | ಡಾ.ಅಂಬೇಡ್ಕರ್ 135 ನೆಯ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಶೋಕ್ ವೀರನಾಯಕ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ರವರ 135 ನೇ ಜಯಂತ್ಯೋತ್ಸವ ನಿಮಿತ್ತ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಶೋಕ ವೀರನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಅದರಂತೆಯೇ ಸಮಿತಿಯ ಗೌರವಾಧ್ಯಕ್ಷರಾಗಿ ದಶರಥ ಬಾಬು ಒಂಟಿ ಅವರನ್ನು ಹಿರಿಯರಾದ ಡಾ.ವಿಠ್ಠಲ ದೊಡ್ಡಮನಿ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಪಣ್ಣ ಗಂಜಗೇರಿ, ದಿಗಂಬರ ಬೆಳಮಗಿ, ಗಣೇಶ ವಳಕೇರಿ, ಅಂಬಾರಾಯ ಅಷ್ಟಗಿ, ಗುಂಡಪ್ಪ ಲಂಡನಕರ್, ಅರ್ಜುನ್ ಭದ್ರೆ, ವಿಶಾಲ ಧರ್ಗಿ, ರಾಹುಲ ಉಪಾರೆ, ಸುರೇಶ ಹಾದಿಮನಿ, ಎಸ್ ಎಸ್ ತವಡೆ, ದೇವೇಂದ್ರ ಸಿನ್ನೂರ್, ಪ್ರಕಾಶ ಮೂಲಭಾರತಿ, ವಿಶಾಲ ನವರಂಗ್, ರಾಜಕುಮಾರ ಕಪನೂರ, ಅವಿನಾಶ ಗಾಯಕವಾಡ, ಪ್ರಕಾಶ ಔರಾದಕರ, ಶ್ರೀನಿವಾಸ ಲಾಖೆ, ದಿನೇಶ ದೊಡ್ಡಮನಿ, ರಾಜು ಸಂಕಾ, ವಾಸು ಒಂಟಿ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
22ಕ್ಕೂ ಅಧಿಕ ಅಂತರ ರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಳಿಸಿದ ಏರ್ ಇಂಡಿಯಾ
ಹೊಸದಿಲ್ಲಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಏರ್ ಇಂಡಿಯಾ 22ಕ್ಕೂ ಅಧಿಕ ಅಂತರ ರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರವಿವಾರ ರದ್ದುಗೊಳಿಸಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದುವರೆಗೆ ಸಂಚಾರವನ್ನು ರದ್ದುಗೊಳಿಸಲಾದ ವಿಮಾನಗಳ ಒಟ್ಟು ಸಂಖ್ಯೆ 50ಕ್ಕೆ ತಲುಪಿದೆ. ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಿಗದಿತ ವಿಮಾನಗಳ ಸಂಚಾರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಟಾಟಾ ಸಮೂಹ ಒಡೆತನದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ರವಿವಾರ ತಿಳಿಸಿದೆ. ಮುಂಬೈ-ಲಂಡನ್ ನಡುವೆ ಸಂಚರಿಸುವ ದಿಲ್ಲಿ-ಬರ್ಮಿಂಗ್ಹ್ಯಾಮ್, ದಿಲ್ಲಿ-ಆ್ಯಮ್ಸ್ಟರ್ಡ್ಯಾಮ್, ದಿಲ್ಲಿ-ಝುರಿಕ್, ದಿಲ್ಲಿ-ಮಿಲನ್, ದಿಲ್ಲಿ-ವಿಯೆನ್ನಾ ಹಾಗೂ ಬೆಂಗಳೂರು-ಲಂಡನ್ ವಿಮಾನಗಳ ಸಂಚಾರವನನು ಒಂದು ದಿನಕ್ಕೆ ರದ್ದುಗೊಳಿಸಲಾಗಿದೆ ಎಂದು ಅದು ತಿಳಿಸಿದೆ. ದಿಲ್ಲಿ-ಕೋಪನ್ಹ್ಯಾಗನ್, ದಿಲ್ಲಿ-ಲಂಡನ್ ಹಾಗೂ ದಿಲ್ಲಿ-ಫ್ರಾಂಕ್ಫಟ್ ಮಾರ್ಗಗಳಲ್ಲಿ ಕೂಡ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ‘ಎಕ್ಸ್’ನ ಪೋಸ್ಟ್ನಲ್ಲಿ ತಿಳಿಸಿದೆ.
ರೆಸಾರ್ಟ್ನಲ್ಲಿ ಮಲಗಿದ್ದ ಪ್ರವಾಸಿ ಮಹಿಳೆ ಮೃತ್ಯು
ಮಲ್ಪೆ, ಮಾ.1: ರೆಸಾರ್ಟ್ನಲ್ಲಿ ತಂಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಎಲ್.ಜಾಕ್ಸನ್ ಎಂಬವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ(36) ಎಂದು ಗುರುತಿಸಲಾಗಿದೆ. ಇವರು ಫೆ.26ರಂದು ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಫೆ.27ರಂದು ಮಲ್ಪೆ ಬೀಚ್ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು. ಫೆ.28ರಂದು ಬೆಳಗ್ಗೆ 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಿದಾಗ ಏಳದೆ ಇದ್ದು, ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು. ಲೆನ್ಸಿ ಮೇರಿ ಹೃದಯಾಘಾತದಿಂದಲೋ ಅಥವಾ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗದಿದೆ.
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಮೃತ್ಯು: ವರದಿ
ಟೆಹ್ರಾನ್: ಇರಾನ್ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರು ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ನ ಸುದ್ದಿ ಸಂಸ್ಥೆ ILNA ವರದಿ ಮಾಡಿದೆ. ILNA ತಿಳಿಸಿದಂತೆ, ಟೆಹ್ರಾನ್ ನಗರದ ನರ್ಮಕ್ ಪ್ರದೇಶದಲ್ಲಿ ನಡೆದ ವಾಯುದಾಳಿಯಲ್ಲಿ ಅಹ್ಮದಿನೆಜಾದ್ ಅವರ ನಿವಾಸ ಗುರಿಯಾಗಿದ್ದು, ದಾಳಿಯ ಪರಿಣಾಮವಾಗಿ ಅವರು ಹಾಗೂ ಅವರ ಮೂವರು ಅಂಗರಕ್ಷಕರು ಸಾವನ್ನಪ್ಪಿದ್ದಾರೆ. ಫೆಬ್ರವರಿ 28ರಂದು ಅಂಗರಕ್ಷಕರ ಸಾವಿನ ಬಗ್ಗೆ ಪ್ರಾಥಮಿಕ ಮಾಹಿತಿ ಹೊರಬಂದಿತ್ತು. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಹ್ಮದಿನೆಜಾದ್, ತಮ್ಮ ಅಧಿಕಾರಾವಧಿಯಲ್ಲಿ ಇಸ್ರೇಲ್ ವಿರುದ್ಧದ ಕಠಿಣ ನಿಲುವು ಹಾಗೂ ಪರಮಾಣು ಕಾರ್ಯಕ್ರಮಕ್ಕೆ ನೀಡಿದ ವೇಗದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. 2009ರ ವಿವಾದಾತ್ಮಕ ಮರುಚುನಾವಣೆಯ ನಂತರ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು ‘ಗ್ರೀನ್ ಮೂವ್ಮೆಂಟ್’ ಎಂದು ಪ್ರಸಿದ್ಧಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆಯ ವಿರುದ್ಧ ಟೀಕಾತ್ಮಕ ಧೋರಣೆ ತಾಳಿದ್ದ ಅವರು, ಎಕ್ಸ್ಪೆಡಿಯೆನ್ಸಿ ವಿವೇಚನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ: ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ
ಬೆಂಗಳೂರು : ಇಸ್ರೇಲ್–ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಹಿನ್ನಲೆಯಲ್ಲಿ ನಗರದ ಜಾನ್ಸನ್ ಮಾರುಕಟ್ಟೆ ಸಮೀಪವಿರುವ ಅಸ್ಕರಿ ಮಸೀದಿಯ ಮುಂಭಾಗದಲ್ಲಿ ಶಿಯಾ ಮುಸ್ಲಿಮರು ರವಿವಾರ ಮೌನ ಪ್ರತಿಭಟನೆ ನಡೆಸುವ ಮೂಲಕ ಶೋಕ ವ್ಯಕ್ತಪಡಿಸಿದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಪ್ರತಿಕ್ರಿಯಿಸಿರುವ ಅಂಜುಮನ್ ಇ ಇಸ್ಲಾಮಿಯಾ ಬೆಂಗಳೂರಿನ ಅಧ್ಯಕ್ಷ ಸೈಯದ್ ಜಮೀನ್ ರಜಾ, ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಮಿಲಿಟರಿ ದಾಳಿಗಳು ಅತ್ಯಂತ ಖಂಡನೀಯವಾಗಿವೆ. ಈ ದಾಳಿಗಳಿಗೆ ಸಂಬಂಧಪಟ್ಟಂತೆ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಮೂಕಪ್ರೇಕ್ಷಕರಾಗಿರುವುದು ದುರದೃಷ್ಟಕರ. ಇದು ಕೇವಲ ಒಂದು ದೇಶದ ಮೇಲಿನ ದಾಳಿಯಲ್ಲ, ಬದಲಿಗೆ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಇಂತಹ ಕೃತ್ಯಗಳಿಗೆ ಯಾರೇ ಜವಾಬ್ದಾರರಾಗಿದ್ದರೂ ಸಹ ಅದನ್ನು ಖಂಡಿಸಬೇಕು ಎಂದರು. ಇಸ್ರೇಲ್ ಮತ್ತು ಅಮೆರಿಕ ದಾಳಿಯಲ್ಲಿ ಇರಾನ್ ನಾಯಕ ಖಾಮಿನೈ ಮೃತಪಟ್ಟಿದ್ದು, ಇದು ಖಂಡನೀಯವಾದದ್ದು. ನಾವೆಲ್ಲ ಇಲ್ಲಿ ಸೇರಿಕೊಂಡು ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ ಎಂದು ಸೈಯದ್ ಜಮೀನ್ ಹೇಳಿದರು.
ಕಲಬುರಗಿಯ ಐಟಿಎಫ್ ಮಹಿಳಾ ಟೂರ್ನಿ : ಅರ್ಹತಾ ಸುತ್ತಿನಲ್ಲಿ ಮಿಂಚಿದ ಭಾರತೀಯರು
ಕಲಬುರಗಿ : ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ನಿಮಿತ್ತ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ಮೊದಲ ದಿನದಂದು ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. 11 ನೇ ಶ್ರೇಯಾಂಕದ ವಂಶಿತಾ ಪಠಾನಿಯಾ 6-3, 6-1 ಅಂತರದಲ್ಲಿ ಅರುಣ್ಕುಮಾರ್ ಲಕ್ಷ್ಮಿ ಪ್ರಭಾ ಅವರನ್ನು ಸೋಲಿಸಿದರು, ಅಗ್ರ ಶ್ರೇಯಾಂಕದ ಮರಿಯಾ ಮಿಖೈಲೋವಾ 6-2, 6-1 ಅಂತರದಲ್ಲಿ ಚಂದನಾ ಪೋಟುಗರಿ ಅವರ ಅಭಿಯಾನವನ್ನು ಕೊನೆಗೊಳಿಸಿದರು. ಎರಡನೇ ಶ್ರೇಯಾಂಕದ ಸಿಂಗಾಪುರದ ಇವಾ ಮೇರಿ ಡೆಸ್ವಿಗ್ನೆಸ್ ಕೂಡ ವೈಲ್ಡ್ಕಾರ್ಡ್ ಓಮ್ನಾ ಯಾದವ್ ದಾವುನಬೋಯಿನಾ ಅವರನ್ನು 6-1, 6-3 ಅಂತರದಲ್ಲಿ ಸೋಲಿಸಿ ಮುನ್ನಡೆದರು. ಸೌಮ್ಯ ರೋಂಡೆ 15 ನೇ ಶ್ರೇಯಾಂಕದ ದಿಶಾ ಬೆಹೆರಾ ಅವರನ್ನು 7-5, 6-4 ಅಂತರದಿಂದ ಸೋಲಿಸಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಕಾಶಿಶ್ ಭಾಟಿಯಾ ನಾಲ್ಕನೇ ಶ್ರೇಯಾಂಕದ ಪೂಜಾ ಇಂಗಲೆ ಅವರನ್ನು 6-4, 6-0 ಅಂತರದಿಂದ ಸೋಲಿಸಿದರು. 12ನೇ ಶ್ರೇಯಾಂಕದ ಆಹಾನ್ ಆಹಾನ್ ನಾಟಕೀಯ ಟೈ-ಬ್ರೇಕರ್ ಮುಖಾಮುಖಿಯಲ್ಲಿ ಡ್ಯಾನಿಕಾ ಫರ್ನಾಂಡೊ ಅವರನ್ನು ಎದುರಿಸಿದರು, 5-7, 6-4, 11-9 ಅಂತರದಿಂದ ಗೆಲುವು ಸಾಧಿಸಿದರು. ಉಳಿದಂತೆ, ಐಶ್ವರ್ಯಾ ಜಾಧವ್ ಐದನೇ ಶ್ರೇಯಾಂಕದ ಪ್ರತ್ಯುಷಾ ರಾಚಪುಡಿ ವಿರುದ್ಧ 6-3, 6-1 ಅಂತರದಿಂದ ಜಯಗಳಿಸಿ, 16 ನೇ ಶ್ರೇಯಾಂಕದ ಶ್ರೀಮಾನ್ಯ ರೆಡ್ಡಿ ಅನುಗೊಂಡ ಸಂಜನಾ ಸಿರಿಮಲ್ಲ ಅವರನ್ನು 3-6, 6-4, 10-6 ಅಂತರದಿಂದ ಸೋಲಿಸುವ ಮೂಲಕ ದೃಢತೆಯನ್ನು ತೋರಿಸಿದರು. ಏತನ್ಮಧ್ಯೆ, 13 ನೇ ಶ್ರೇಯಾಂಕದ ಮಹಿಕಾ ಖನ್ನಾ ಯಾವುದೇ ತಪ್ಪುಗಳನ್ನು ಮಾಡದಂತೆ ಖಚಿತಪಡಿಸಿಕೊಂಡರು, ವೈಲ್ಡ್ಕಾರ್ಡ್ ಹೃದಯೇಶಿ ಪೈ ಅವರನ್ನು 6-1, 6-3 ಅಂತರದಿಂದ ಸೋಲಿಸಿದರು. ವೈಲ್ಡ್ಕಾರ್ಡ್ ಸ್ನಿಗ್ಧಾ ಕಾಂತಾ ಕೂಡ ಪ್ರಭಾವಶಾಲಿ ಪ್ರದರ್ಶನ ನೀಡಿದರು, ಆರನೇ ಶ್ರೇಯಾಂಕದ ಮಲೇಷ್ಯಾದ ಎಲ್ಸಾ ವಾನ್ ಅವರನ್ನು 6-1, 5-7, 10-3 ಅಂತರದಿಂದ ಸೋಲಿಸಿದರು, ಇದು ಭಾರತೀಯ ತಂಡದ ಹೋರಾಟದ 9ನೇ ಶ್ರೇಯಾಂಕದ ಸಂದೀಪ್ತಿ ಸಿಂಗ್ ರಾವ್ ಸೈಲಿ ಪ್ರಶಾಂತ್ ಕುಮಾರ್ ಥಕ್ಕರ್ ವಿರುದ್ಧ 7-5, 6-2 ಅಂತರದಿಂದ ಜಯಗಳಿಸಿದರು, ಆದರೆ 10 ನೇ ಶ್ರೇಯಾಂಕದ ಯಶಸ್ವಿನಿ ಪನ್ವಾರ್ ಆಕೃತಿ ಸೋಂಕುಸಾರೆ ನಾರಾಯಣ್ ಸೋಂಕುಸಾರೆ ವಿರುದ್ಧ 6-4, 6-4 ಅಂತರದಲ್ಲಿ ಸ್ಥಿರ ಫಲಿತಾಂಶವನ್ನು ಪಡೆದರು. ಎಂಟನೇ ಶ್ರೇಯಾಂಕದ ಬೇಲಾ ತಮ್ಹಂಕರ್ ಮತ್ತು 14 ನೇ ಶ್ರೇಯಾಂಕದ ಲಕ್ಷ್ಮಿಸಿರಿ ದಂಡು ಕ್ರಮವಾಗಿ ಜಿಗ್ಯಾಸಾ ನರಸಿಂಘಾನಿ ಮತ್ತು ಜೀತೇಶ್ ಕುಮಾರಿ ವಿರುದ್ಧ ನೇರ ಸೆಟ್ಗಳ ಗೆಲುವು ಸಾಧಿಸುವ ಮೂಲಕ ಮೊದಲ ಅರ್ಹತಾ ದಿನವನ್ನು ಸಂಪನ್ನಗೊಳಿಸಿದರು.
ಟೆಹ್ರಾನ್: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಇತ್ತೀಚಿನ ದಿನಗಳಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿರುವ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಫೆಬ್ರವರಿ 17ರಂದು ಪೂರ್ವ ಅಝರ್ ಬೈಜಾನ್ ಪ್ರಾಂತದ ಜನರೊಂದಿಗೆ ನಡೆಸಿದ ಸಭೆಯಲ್ಲಿ ಖಾಮಿನೈ ನನ್ನ ದೇಹಕ್ಕೆ ಹೆಚ್ಚಿನ ಮೌಲ್ಯವಿಲ್ಲ. ಒಂದು ವೇಳೆ ಅವರು ನನ್ನನ್ನು ಕೊಂದರೂ ನೀವು ಇಮಾಮ್ ಹುಸೇನ್ ಅವರ ತತ್ವಗಳ ಮೇಲೆ ದೃಢವಾಗಿ ಉಳಿಯುವವರೆಗೆ ಅದನ್ನು ನಮ್ಮ ನಷ್ಟವೆಂದು ಪರಿಗಣಿಸಬೇಡಿ' ಎಂದಿದ್ದರು. ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಂದಾಗಿ ಅಮೆರಿಕವು ಪತನದ ಅಂಚಿನತ್ತ ಸಾಗುತ್ತಿದೆ. ಅಮೆರಿಕದ ಜನಸಂಖ್ಯೆಯ 50%ಕ್ಕೂ ಹೆಚ್ಚಿನವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿರೋಧಿಸುತ್ತಿದ್ದಾರೆ. ಅಮೆರಿಕದ ವ್ಯವಸ್ಥೆಯೂ ಕುಸಿತದತ್ತ ಸಾಗುತ್ತಿದೆ ಎಂದು ಖಾಮಿನೈ ಹೇಳಿರುವ ವೀಡಿಯೊ ವೈರಲ್ ಆಗಿದೆ. ನಮ್ಮಲ್ಲಿ ನಿರೋಧಕ(ತಡೆಗಟ್ಟುವ) ಆಯುಧಗಳು ಇರಬೇಕು. ಒಂದು ದೇಶದ ಬಳಿ ಇಂತಹ ಆಯುಧಗಳಿಲ್ಲದಿದ್ದರೆ ಆ ದೇಶವು ಶತ್ರುಗಳ ಪಾದದಡಿ ಅಪ್ಪಚ್ಚಿಯಾಗುತ್ತದೆ. ಅಮೆರಿಕ ತನಗೆ ಅಗತ್ಯವೇ ಇಲ್ಲದ ವಿಷಯಗಳಲ್ಲಿ ಮಧ್ಯಪ್ರವೇಶಿಸುತ್ತಿದೆ. ನಿಮ್ಮ ಬಳಿ ಅಂತಹ ಶಸ್ತ್ರಾಸ್ತ್ರ(ಪರಮಾಣು ಶಸ್ತ್ರಾಸ್ತ್ರ)ಗಳಿದ್ದರೆ ಅದಕ್ಕೂ ಅವರಿಗೂ ಏನು ಸಂಬಂಧ? ಅದು ಇರಾನ್ ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯ. ತಮ್ಮ ಸೇನೆ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸೇನೆ ಎಂದು ಅಮೆರಿಕ ಅಧ್ಯಕ್ಷರು ಹೇಳುತ್ತಾ ಬಂದಿದ್ದಾರೆ. ಜಗತ್ತಿನ ಅತ್ಯಂತ ಬಲಿಷ್ಠ ಸೇನೆಗೂ ಒಮ್ಮೊಮ್ಮೆ ಎದ್ದು ನಿಲ್ಲಲೂ ತ್ರಾಣವಿಲ್ಲದಂತೆ ಕಪಾಳಮೋಕ್ಷ ಆಗಬಹುದು' ಎಂದು ಖಾಮಿನೈ ಹೇಳಿರುವ ಮತ್ತೊಂದು ವೀಡಿಯೊ ಕೂಡಾ ವೈರಲ್ ಆಗಿದೆ.
Bengaluru | ಹಾಸಿಗೆ, ಸೋಫ ಗೋದಾಮಿನಲ್ಲಿ ಬೆಂಕಿ ಅವಘಡ
ಬೆಂಗಳೂರು, ಮಾ.1: ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾನಪುರ ಸಮೀಪದ ಕೆಂಬತ್ತಹಳ್ಳಿಯಲ್ಲಿರುವ ಬೃಹತ್ತಾದ ಹಾಸಿಗೆ, ಸೋಫ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ರವಿವಾರ ವರದಿಯಾಗಿದೆ. ಈ ಗೋದಾಮಿನಲ್ಲಿ ಹಾಸಿಗೆ ಹಾಗೂ ಸೋಫಾ ತಯಾರಿಸಲಾಗುತ್ತದೆ. ಮಾ.1ರ ಬೆಳಗ್ಗೆ 8.15ರ ಸುಮಾರಿನಲ್ಲಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ 8 ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಗೋದಾಮಿನ ಕಾಂಪೌಂಡ್ನೊಳಗೆ ನಿಲ್ಲಿಸಿದ್ದ ಮೂರು ಕಾರುಗಳು ಹಾಗೂ ಎರಡು ಗೂಡ್ಸ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಗೊತ್ತಾಗಿದೆ. ಈ ಗೋದಾಮು ಅಕ್ಕಪಕ್ಕದ ಅಪಾರ್ಟ್ಮೆಂಟ್ಗಳಲ್ಲಿರುವ ನಿವಾಸಿಗಳನ್ನು ಮತ್ತೊಂದು ಬ್ಲಾಕ್ಗೆ ಸ್ಥಳಾಂತರಿಸಲಾಗಿದೆ. ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಲ್ಲಘಟ್ಟಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಪ್ಪಳ | ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಿಢೀರ್ ದಾಳಿ: 9 ಟ್ರಕ್, 15 ಟ್ರ್ಯಾಕ್ಟರ್ ಸೇರಿ ಹಲವು ವಾಹನ ವಶ
ಕೊಪ್ಪಳ : ತಾಲೂಕಿನ ಶಿವಪುರ, ಬಂಡಿಹರ್ಲಾಪುರ, ಬಸಾಪುರ ಹಾಗೂ ಹುಸೇನಪುರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಭಾನುವಾರ ವಿವಿಧ ಇಲಾಖೆಗಳ ಸಂಯುಕ್ತ ತಂಡ ದಿಢೀರ್ ದಾಳಿ ನಡೆಸಿ ಟ್ರ್ಯಾಕ್ಟರ್, ಟಿಪ್ಪರ್, ಜೆಸಿಬಿ ಸೇರಿದಂತೆ ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹಿಟ್ನಾಳ ಹೋಬಳಿಯ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿಕೊಂಡು ಕಾರ್ಯಾಚರಣೆ ನಡೆಸಿದವು. ದಾಳಿಯಲ್ಲಿ 9 ಟ್ರಕ್ಗಳು, 15 ಟ್ರ್ಯಾಕ್ಟರ್ಗಳು, ಕಾಂಪ್ರೆಸ್ಸರ್ಗಳು, 13 ಜೆಸಿಬಿ ಮತ್ತು ಹಿಟಾಚಿಗಳು ಹಾಗೂ ಎರಡು ಕ್ರೇನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಲು ಸ್ಫೋಟಕ್ಕೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ದಿ ಅವರ ನೇತೃತ್ವದಲ್ಲಿ ಸ್ಥಳವನ್ನು ಪರಿಶೀಲಿಸಲಾಯಿತು. ಈ ವೇಳೆ ಅವರು ಮಾತನಾಡಿ, “ಸಾರ್ವಜನಿಕರ ದೂರಿನ ಅನ್ವಯ ಹಾಗೂ ಐಜಿಪಿ ಮಾರ್ಗದರ್ಶನದಂತೆ ಅಡಿಷನಲ್ ಎಸ್ಪಿ, ಇಬ್ಬರು ಇನ್ಸ್ಪೆಕ್ಟರ್, ಮೂವರು ಪಿಎಸ್ಐ ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ವಾಹನಗಳು ಮತ್ತು ಸಾಮಗ್ರಿಗಳ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ,” ಎಂದು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ತಮ್ಮ ಖಾಸಗಿ ಜಮೀನಿನಲ್ಲಿ ನಡೆಯುತ್ತಿದೆ ಎಂದು ಹೇಳುವವರು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಪರವಾನಿಗೆಗಳನ್ನು ಪಡೆದು ಮಾತ್ರ ಕಾರ್ಯಾಚರಣೆ ನಡೆಸಬೇಕು ಎಂದು ಎಚ್ಚರಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಳೆಯಲಾಗುತ್ತಿದ್ದು, ಅಕ್ರಮ ನಡೆಸಿದವರ ವಿರುದ್ಧ ದಂಡ ವಿಧಿಸಲಾಗುವುದು. ವಶಪಡಿಸಿಕೊಂಡ ವಾಹನಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
IRGC ಮುಖ್ಯಸ್ಥರಾಗಿ ಅಹ್ಮದ್ ವಹಿದಿ ಅವರನ್ನು ನೇಮಿಸಿದ ಇರಾನ್
ಟೆಹ್ರಾನ್: ಇಸ್ಲಾಮಿಕ್ ರೆವುಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC)ಯ ಹೊಸ ಮುಖ್ಯ ಕಮಾಂಡರ್ ಆಗಿ ಅನುಭವಿ ಮಿಲಿಟರಿ ಅಧಿಕಾರಿ, ಮಾಜಿ ರಕ್ಷಣಾ ಸಚಿವ ಮತ್ತು ಆಂತರಿಕ ಸಚಿವರಾಗಿರುವ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿಯನ್ನು ನೇಮಿಸಲಾಗಿದೆ ಎಂದು ಇರಾನ್ನ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ ಐಆರ್ಜಿಸಿಯ ಮುಖ್ಯ ಕಮಾಂಡರ್ ಮೊಹಮ್ಮದ್ ಪಾಕ್ಪೂರ್ ಅವರ ಸ್ಥಾನದಲ್ಲಿ ವಹಿದಿಯನ್ನು ನೇಮಿಸಲಾಗಿದೆ ಎಂದು ವರದಿ ತಿಳಿಸಿದೆ.
ವಾಟ್ಸಾಪ್ ಸಂದೇಶದಿಂದ ಲಕ್ಷಾಂತರ ರೂ. ಹಣ ವಂಚನೆ: ಪ್ರಕರಣ ದಾಖಲು
ಅಮಾಸೆಬೈಲು, ಮಾ.1: ವಾಟ್ಸಾಪ್ ಸಂದೇಶದ ಮೂಲಕ ಹಣ ಕಳುಹಿಸುವಂತೆ ಹೇಳಿ ಯುವಕನೋರ್ವನಿಗೆ ಲಕ್ಷಾಂತರ ರೂ. ಹಣ ಮೋಸ ಮಾಡಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಂಗಡಿ ಗ್ರಾಮದ ರವಿಚಂದ್ರ(29) ಎಂಬವರು ಮೂರು ವರ್ಷಗಳ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದು ಅನುಷಾಳ ಹೆತ್ತವರಿಗೆ ಈ ವಿಷಯದಲ್ಲಿ ಒಪ್ಪಿಗೆ ಇಲ್ಲದ ಕಾರಣ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಪ್ರಕರಣ ಇತ್ಯರ್ಥ ಮಾಡಲಾಗಿತ್ತು. ನಂತರ 2025ರ ಅ.24ರಂದು ಈ ಹಿಂದೆ ಅನುಷಾಳು ಉಪಯೋಗಿ ಸುತ್ತಿದ್ದ ಮೊಬೈಲ್ ನಂಬರಿನಿಂದ ದಿವ್ಯಾ ಎಂಬಾಕೆ ರವಿಚಂದ್ರ ಅವರ ವಾಟ್ಸಾಪ್ಗೆ ಹುಟ್ಟುಹಬ್ಬದ ಶುಭಾಶಯ ಎಂದು ಮೆಸೆಜ್ ಕಳುಹಿಸಿದ್ದರು. ಈ ಸಂದೇಶ ಅನುಷಾಳೆ ಕಳುಹಿಸಿರಬಹುದೆಂದು ರವಿಚಂದ್ರ, ಮರು ಸಂದೇಶ ಕಳುಹಿಸಿದ್ದು ನಂತರ ಇಬ್ಬರೂ ಪರಸ್ಪರ ಸಂದೇಶ ವಿನಿಮಯ ಮಾಡಿಕೊಂಡಿದ್ದರು. ಈ ಮಧ್ಯೆ ಸಂದೇಶದ ಮೂಲಕ ಆರೋಪಿ ದಿವ್ಯಾ, ತನಗೆ ಮನೆಯಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದು, ಅದನ್ನು ನಂಬಿದ ರವಿಚಂದ್ರ, ಆಕೆ ಕಳುಹಿಸಿದ ಸ್ಕ್ಯಾನರ್ ಮೂಲಕ ಒಟ್ಟು 1,80,200ರೂ. ಹಣವನ್ನು ಕಳುಹಿಸಿದ್ದರು. ಆರೋಪಿ ದಿವ್ಯಾ, ಮೋಸ ಮಾಡುವ ಉದ್ದೇಶದಿಂದ ವಾಟ್ಸಾಪ್ನಲ್ಲಿ ಚಾಟ್ ಮಾಡಿ ಅನ್ಯ ವ್ಯಕ್ತಿಯಂತೆ ನಟಿಸಿ ರವಿಚಂದ್ರ ಅವರಿಂದ ಹಣ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.
ಮಧ್ಯಪ್ರಾಚ್ಯ ಉದ್ವಿಗ್ನ | ಕನ್ನಡಿಗರ ರಕ್ಷಣೆಗಾಗಿ ಸಕ್ರಿಯವಾಗಿರಲು ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಸೂಚನೆ
ಭಾರತೀಯ ರಾಯಭಾರಿ ಕಚೇರಿಗಳ ಸಹಾಯವಾಣಿ ಇಲ್ಲಿದೆ..
ಮೀನುಗಾರಿಕೆ ದೋಣಿಯಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ, ಮಾ.1: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಲ್ಲಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಗ್ರಾಮದ ಜಗನ್ನಾಥ ಖಾರ್ವಿ(43) ಎಂದು ಗುರುತಿಸಲಾಗಿದೆ. ಇವರು ನಾಡದೋಣಿಯಲ್ಲಿ ಫೆ.27ರಂದು ಬೆಳಗ್ಗೆ ಇತರರೊಂದಿಗೆ ದಾಕುಹಿತ್ಲುವಿನಿಂದ ಹೊರಟು ಸುಮಾರು 5 ಮಾರು ದೂರದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ವಿಪರೀತ ಗಾಳಿಯಿಂದ ದೋಣಿ ಅಲುಗಾಡಿದ್ದು, ಜಗನ್ನಾಥ ಖಾರ್ವಿ ಆಯತಪ್ಪಿ ದೋಣಿಯೊಳಗೆ ಬಿದ್ದರೆನ್ನಲಾಗಿದೆ. ಇದರಿಂದ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿ ಸಲಾಯಿತು. ಆದರೆ ಅವರು ಮಾ.1ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ವಿದಾಯ ಪಂದ್ಯದಲ್ಲಿ ಪತ್ನಿ ಅಲಿಸ್ಸಾ ಹೀಲಿ ಶತಕ ಬಾರಿಸಿದಾಗ ಭಾವುಕರಾದ ಮಿಚೆಲ್ ಸ್ಟಾರ್ಕ್; ವೈರಲ್ ಆಗಿದೆ ವಿಡಿಯೋ
India W Vs Australia W- ಮಿಚೆಲ್ ಸ್ಟಾರ್ಕ್ ಮತ್ತು ಅಲಿಸ್ಸಾ ಹೀಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ದಂಪತಿ ಎಂದರೆ ಖಂಡಿತ ತಪ್ಪಿಲ್ಲ. ಪತಿ ಆಸ್ಟ್ರೇಲಿಯಾ ತಂಡದ ಮುಂಚೂಣಿ ವೇಗಿಯಾಗಿದ್ದರೆ, ಪತ್ನಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ. ಇಬ್ಬರೂ ಯಶಸ್ವಿ ಕ್ರಿಕೆಟಿಗರು. ಇದೀಗ ಅಲಿಸ್ಸಾ 17 ವರ್ಷದ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಸಾರಿದ್ದಾರೆ. ಭಾರತ ಮಹಿಳಾ ತಂಡದ ವಿರುದ್ಧ ಹೋಬರ್ಟ್ ನಲ್ಲಿ ನಡೆದ 3ನೇ ಏಕದಿನ ಪಂದ್ಯ ಅವರ ವಿದಾಯದ ಪಂದ್ಯವಾಗಿತ್ತು. ಈ ವೇಳೆ ಅವರ ಶತಕ ಹೊಡೆದಾಗ ಮಿಚೆಲ್ ಸ್ಟಾರ್ಕ್ ಭಾವುಕರಾಗಿರುವ ವಿಡಿಯೋ ವೈರಲ್ ಆಗಿದೆ.
ಉಡುಪಿ ಜಿಲ್ಲೆಯಲ್ಲಿ 58,676 ಅರ್ಜಿದಾರರ ಮ್ಯುಟೇಶನ್ಗಳು ಸ್ವಯಂಚಾಲಿತ ಅನುಮೋದನೆ: ಡಿಸಿ ಸ್ವರೂಪ ಟಿ.ಕೆ.
ಉಡುಪಿ, ಮಾ.1: ಭೂಮಿ ಮ್ಯುಟೇಷನ್ಗಳಿಗೆ ಸಂಬಂಧಿಸಿದಂತೆ ಆಕ್ಷೇಪ ರಹಿತ 7 ದಿನಗಳ (ನೋಂದಾಯಿತ) ಹಾಗೂ 15 ದಿನಗಳ(ನೋಂದಾಯಿತ ವಲ್ಲದ) ನೋಟೀಸು ಅವಧಿ ಹೊಂದಿರುವ ಮ್ಯುಟೇಶನ್ಗಳನ್ನು ನೋಟೀಸು ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಈ ಸ್ವಯಂ ಚಾಲಿತ ಮ್ಯುಟೇಶನ್ಗೆ ಫೆ.24ರಂದು ಕಂದಾಯ ಸಚಿವರು ಚಾಲನೆಯನ್ನು ನೀಡಿದ್ದು, ಜಿಲ್ಲೆಯಲ್ಲಿ ಈ ಹಿಂದೆ ನೋಟೀಸು ರಹಿತ ಅಂದರೆ 9 ರೀತಿಯ(ಹಕ್ಕು ಋಣ, ಭೂಪರಿವರ್ತನೆ, ಪೋಡಿ, ಭೂಸ್ವಾಧೀನ, ಕೋರ್ಟ್ ಆದೇಶ, ಕೋರ್ಟ್ ತಡೆ/ತಡೆ ಬಿಡುಗಡೆ, ಸರಕಾರಿ ಆದೇಶ, ಸಾಗುವಳಿದಾರರು ಮತ್ತು ಪಹಣಿ ವರ್ಗಾವಣೆ) ಮ್ಯುಟೇಶನ್ಗಳು ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 2025ರ ಎ.1ರಿಂದ ಒಟ್ಟು 58,676 ಅರ್ಜಿದಾರರ ಮ್ಯುಟೇಶನ್ಗಳು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಅನುಮೋದನೆ ಯಾಗಿವೆ. ಇದರಿಂದಾಗಿ ಸಾರ್ವಜನಿಕರು ತಮ್ಮ ನೋಂದಾಯಿತ ದಸ್ತಾವೇಜುಗಳ (ಕ್ರಯ, ವಿಭಾಗ, ದಾನ) ಮ್ಯುಟೇಶನ್ ಪ್ರಕ್ರಿಯೆಗಾಗಿ ತಾಲ್ಲೂಕು ಕಛೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದು ತಪ್ಪಿದಂತಾಗಿದೆ. ಸಾರ್ವ ಜನಿಕರು ಸುಲಭ ಹಾಗೂ ಸುಲಲಿತವಾಗಿ ಅವರ ಜಮೀನಿನ ಮ್ಯುಟೇಶನ್ ಗಳನ್ನು ಕ್ಲಪ್ತ ಸಮಯದಲ್ಲಿ ಪಡೆಯಬಹುದಾಗಿದೆ ಹಾಗೂ ಜಮೀನಿನ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲು ಬಾಕಿ ಇರುವ ಸಾರ್ವಜನಿಕರು ಈ ಕೂಡಲೇ ಆಧಾರ್ ಜೋಡಣೆ ಮಾಡಿಸಿಕೊಂಡು ಅಕ್ರಮ ಖಾತಾ ಬದಲಾವಣೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalaburagi | ಎಸ್ಐಆರ್ ಎನ್ನುವುದು ಭಾರತೀಯರ ಮೇಲಿನ ಎಫ್ಐಆರ್ : ಶಿವಸುಂದರ್
►ಎಸ್ಐಆರ್ ಮೂಲಕ ದಲಿತ, ಮುಸ್ಲಿಂ ಹೆಣ್ಣುಮಕ್ಕಳ ಟಾರ್ಗೆಟ್ ►ಎಸ್ಐಆರ್ ಒಂದು ಚಿಂತನೆ ಕಾರ್ಯಗಾರ
T20 ವಿಶ್ವಕಪ್ | ಭಾರತಕ್ಕೆ 196 ರನ್ ಗಳ ಗುರಿ ನೀಡಿದ ವೆಸ್ಟ್ ಇಂಡೀಸ್
ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ನ ಭಾರತದ ಎದುರಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಪಂದ್ಯ ಗೆಲ್ಲಲು ಭಾರತಕ್ಕೆ 196 ರನ್ ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ | ಭಾರತದ 850 ಮಂದಿ ಸಿಲುಕಿರುವ ಮಾಹಿತಿ : ಆರತಿ ಕೃಷ್ಣ
ಬೆಂಗಳೂರು : ‘ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಕರ್ನಾಟಕದವರು ಸೇರಿದಂತೆ ಭಾರತ ದೇಶದ 850ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ. ಈ ಪೈಕಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದು, ವಿವಿಧ ವಿಶ್ವ ವಿದ್ಯಾನಿಲಯಗಳಲ್ಲಿದ್ದಾರೆ. ಅವರು ಇರುವ ಸ್ಥಳಗಳಲ್ಲೆ ಸುರಕ್ಷಿತವಾಗಿರಲು ಸೂಚನೆ ನೀಡಲಾಗಿದೆ’ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ. ರವಿವಾರ ‘ವಾರ್ತಾಭಾರತಿ’ಯೊಂದಿಗೆ ಹೊಸದಿಲ್ಲಿಯಿಂದ ದೂರವಾಣಿಯಲ್ಲಿ ಮಾತನಾಡಿದ ಅವರು, ‘ನಮ್ಮ ರಾಜ್ಯದಿಂದ ವಿವಿಧ ದೇಶಗಳಿಗೆ ತೆರಳಿದ ಅನಿವಾಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರಿಗೆ ತ್ವರಿತಗತಿಯಲ್ಲಿ ಅನಿವಾಸಿ ಭಾರತೀಯ ಸಮಿತಿ ನೆರವಾಗಿದೆ. ಇದೀಗ ಭಾರತ ಹಾಗೂ ಇರಾನ್ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಹೇಳಿದರು. ‘ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಸ್ಥಿತಿ ಇನ್ನೂ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬುದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಇನ್ನೂ ಒಂದೆರಡು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಗೊತ್ತಾಗಿದೆ. ಹೀಗಾಗಿ ನಮ್ಮ ದೇಶದ ವಿದ್ಯಾರ್ಥಿಗಳು ಸೇರಿದಂತೆ ನಮ್ಮ ನಾಗರಿಕರಿಗೆ ತಾವು ಇರುವ ಜಾಗಗಳಲ್ಲೇ ಸುರಕ್ಷಿತವಾಗಿ ಇರಲು ರಾಯಭಾರಿ ಕಚೇರಿಯಿಂದ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲೀಪುರದಲ್ಲಿನ ಶಿಯಾ ಮುಸ್ಲಿಮರು ಧಾರ್ಮಿಕ ಅಧ್ಯಯನಕ್ಕಾಗಿ ಇರಾನ್ಗೆ ತೆರಳುತ್ತಾರೆ. ಹೀಗಾಗಿ ಅವರು ಅಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಇರಾನ್ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಅವರು ಸಾವನ್ನಪ್ಪಿದ್ದಾರೆ. ಆದುದರಿಂದ ಯುದ್ಧದ ಪರಿಸ್ಥಿತಿ ಯಾವ ರೀತಿಯಲ್ಲಿ ಮುಂದುವರಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ದುಬೈ, ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ವೈದ್ಯಕೀಯ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ಗಳ ಕಲಿಕೆಗೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ತೆರಳಿದ್ದಾರೆ. ಈ ಮಧ್ಯೆ ಕೆಲವರು ಪ್ರವಾಸಕ್ಕಾಗಿ ತೆರಳಿದ್ದು ವಿವಿಧೆಡೆಗಳಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ತಿಳಿಸಿದರು. ಯುದ್ಧದ ಸ್ಥಿತಿ ತಿಳಿಯಾಗಿ ಶಾಂತಿಯ ವಾತಾವರಣ ಏರ್ಪಟ್ಟ ಬಳಿಕ, ವಿಮಾನಯಾನ ಆರಂಭಗೊಂಡ ನಂತರವಷ್ಟೇ ಅನಿವಾಸಿಗಳನ್ನು ನಮ್ಮ ದೇಶಕ್ಕೆ ಕರೆತರಲು ಪ್ರಯತ್ನ ನಡೆಸಲಾಗುವುದು. ಭಾರತೀಯ ರಾಯಭಾರಿ ಕಚೇರಿ ಮೂಲಕ ನಮಗೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ್ದೇವೆ. ಇರಾನ್ನಲ್ಲಿ ಸಿಲುಕಿರುವ ನಮ್ಮ ಎಲ್ಲ ಅನಿವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಶ್ರಮಿಸಲಾಗುವುದು ಎಂದು ಆರತಿ ಕೃಷ್ಣ ಹೇಳಿದರು.
ಅಮೆರಿಕದ ದಾಳಿ ಮಾನವೀಯತೆಯ ವಿರುದ್ದದ ಅಪರಾಧ: ಭದ್ರತಾ ಮಂಡಳಿಯಲ್ಲಿ ಇರಾನ್ ಪ್ರತಿಪಾದನೆ
ವಿಶ್ವಸಂಸ್ಥೆ: ಇರಾನ್ನ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿ ಮತ್ತು ಇರಾನ್ನ ಪ್ರತಿದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿರುವ ಉದ್ವಿಗ್ನತೆಯ ಬಗ್ಗೆ ಚರ್ಚಿಸಲು ಶನಿವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಯಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ತೀವ್ರ ವಾಗ್ಯುದ್ದ ನಡೆದಿರುವುದಾಗಿ ವರದಿಯಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಇರಾನ್ನ ಕಾಯಂ ಪ್ರತಿನಿಧಿ ಅಮೀರ್ ಸಯೀದ್ ಇರಾವಾನಿ ` ವೈಮಾನಿಕ ದಾಳಿಯು ನೂರಾರು ಇರಾನಿಯನ್ ಪ್ರಜೆಗಳ ಸಾವು-ನೋವಿಗೆ ಕಾರಣವಾಗಿದ್ದು ಇದು ಯುದ್ದಾಪರಾಧ ಮತ್ತು ಮಾನವೀಯತೆಯ ವಿರುದ್ದದ ಅಪರಾಧವಾಗಿದೆ' ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಅಮೆರಿಕದ `ಯುದ್ದೋತ್ಸಾಹದ ಹೇಳಿಕೆಗಳ' ಬಗ್ಗೆ ಇರಾನ್ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಿದ ಅವರು ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಗೆ ಅಮೆರಿಕದ ವಿಶೇಷ ಪ್ರತಿನಿಧಿ ಮೈಕ್ ವಾಲ್ಟ್ಸ್ ` ಇರಾನ್ ರಕ್ತಪಾತ ಮತ್ತು ಸಾಮೂಹಿಕ ಹತ್ಯೆಯ ಅಂತ್ಯವಿಲ್ಲದ ಅಭಿಯಾನವನ್ನು ನಡೆಸುತ್ತಿದೆ. ಇರಾನ್ನ ಆಡಳಿತವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಹತ್ಯೆಗೆ ಪ್ರಯತ್ನಿಸಿತ್ತು. ಆದರೆ ಈಗ ಇರಾನ್ನ ನಾಯಕತ್ವ ತನ್ನನ್ನು ಬಲಿಪಶು ಎಂದು ಬಿಂಬಿಸುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಇದು ರಾಜಕೀಯಕ್ಕೆ ಸಂಬಂಧಿಸಿದ ವಿಷಯವಲ್ಲ, ಜಾಗತಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯವಾಗಿದೆ. ಆದ್ದರಿಂದ ನಾವು ಈಗ ಕಾನೂನುಬದ್ದ ಕ್ರಮ ಕೈಗೊಂಡಿದ್ದೇವೆ' ಎಂದು ಪ್ರತಿಪಾದಿಸಿದರು. ಉಲ್ಬಣಗೊಳ್ಳುವುದನ್ನು ತಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ. ಇಲ್ಲದಿದ್ದರೆ ಸಂಭಾವ್ಯ ವ್ಯಾಪಕ ಸಂಘರ್ಷವು ನಾಗರಿಕರ ಮತ್ತು ಪ್ರದೇಶದ ಸ್ಥಿರತೆಗೆ ಗಂಭೀರ ಪರಿಣಾಮ ಬೀರುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಸಭೆಗೆ ತಿಳಿಸಿದರು. ಸಮಿತಿಯ ಐದು ಸದಸ್ಯರಾದ ಫ್ರಾನ್ಸ್, ರಶ್ಯ, ಚೀನಾ, ಕೊಲಂಬಿಯಾ ಮತ್ತು ಬಹ್ರೇನ್ ಮನವಿಯಂತೆ ತುರ್ತು ಸಭೆಯನ್ನು ಕರೆಯಲಾಗಿತ್ತು.
War Update: ಯುದ್ಧದ ಇಂದಿನ 10 ಪ್ರಮುಖಾಂಶಗಳು: ಅಲಿ ಖಮೇನಿ ಸಾವಿನ ಸೇಡಿಗಾಗಿ ಇರಾನ್ ಭೀಕರ ಪ್ರತಿದಾಳಿ
Iran War Highlights Today: ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿ ವೈಮಾನಿಕ ದಾಳಿಯು ಮುಂದುವರಿದಿದೆ. ಇಂದೂ ಸಹ ಇರಾನ್ ಪ್ರತಿದಾಳಿ ಮುಂದುವರಿಸಿದೆ. ಇರಾನ್ನ ಸರ್ವೋಚ್ಚ ನಾಯಕರನ್ನು ಹತ್ಯೆಗೈದಿರುವುದಾಗಿ ಭಾನುವಾರ ಬೆಳಗ್ಗೆ ಯುಎಸ್ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದರು. ಅಲ್ಲದೇ ಇರಾನ್ ರಕ್ಷಣಾ ಸಚಿವ, ಕಮಾಂಡರ್ ಸಹ ದಾಳಿಯಲ್ಲಿ ಶನಿವಾರವೇ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಪ್ರತಿಯಾಗಿ ಭಾನುವಾರ
ಅಜ್ಜಾವರ| ರಸ್ತೆ ಅಭಿವೃದ್ಧಿ ವಿಳಂಬ ಖಂಡಿಸಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಕೆ
ಅಜ್ಜಾವರ: ರಸ್ತೆ ಅಭಿವೃದ್ಧಿ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಸಲಾಗಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್ನ ಅಡ್ಡರಸ್ತೆಯಿಂದ ಬೇಲ್ಯ 4ನೇ ವಾರ್ಡ್ನ ಬೀನಡ್ಕದವರೆಗೆ ಸುಮಾರು 3.ಕಿ.ಮೀ. ರಸ್ತೆ ಡಾಮರೀಕರಣ ಮಾಡಲು ವಿಳಂಬ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್ನ ಅಡ್ಡರಸ್ತೆಯಿಂದ ಬೇಲ್ಯ 4ನೇ ವಾರ್ಡ್ನ ಬೀನಡ್ಕದವರೆಗೆ ಸುಮಾರು 3.ಕಿ.ಮೀ. ರಸ್ತೆ ಡಾಮರೀಕರಣಕ್ಕೆ 40 ವರ್ಷಗಳಿಂದ ಅನೇಕ ಬಾರಿ ಬೇಡಿಕೆ ಇಟ್ಟಿದ್ದು ಹಾಗೂ ಸಮರ್ಪಕ ಕುಡಿ ಯುವ ನೀರಿನ ಸೌಲಭ್ಯ ದೊರಕದೇ ಇದ್ದು, ಯಾವುದೇ ಮನವಿಗೆ ಸ್ಪಂದಿಸದೆ ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಬಂದು ಮತದಾನ ಯಾಚಿಸುವ ರಾಜಕಾರಣಿಗಳಿಗೆ „ಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಸೌಲಭ್ಯ ವಂಚಿತ ಶಿರಾಜೆ, ಬೇಲ್ಯ ಬೀನಡ್ಕ ನಾಗರೀಕರು ಎಂಬ ಬ್ಯಾನರ್ ಅಳವಡಿಸಲಾಗಿದೆ.
ಮಂಗಳೂರು ವಿವಿ ಹಳೆ ವಿದ್ಯಾರ್ಥಿ ಸಂಘ ಇಡೀ ರಾಜ್ಯಕ್ಕೆ ಮಾದರಿ: ಪ್ರೊ. ಎ.ಎಂ.ಖಾನ್
ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮ
ಮಲಾರ್ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಕೊಣಾಜೆ: ಹರೇಕಳ ಗ್ರಾಮದಲ್ಲಿ ಹಿಂದೆ ಮಣ್ಣಿನ ರಸ್ತೆಯಾಗಿದ್ದ ಮಾರ್ಗಗಳೆಲ್ಲವೂ ಈಗ ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಒತ್ತಡ ಹಾಕಿದ್ದರಿಂದ ಹೆಚ್ಚುವರಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು. ಹರೇಕಳ ಗ್ರಾಮದ ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆಯ ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಾರ್ ಮತ್ತು ಕೋಡಿ ಭಾಗದ ಎಲ್ಲಾ ರಸ್ತೆಗಳು ಗ್ರಾಮ ಪಂಚಾಯಿತಿಗೆ ನೇರ ಸಂಪರ್ಕ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ ಹಾಗೂ ನೀರಿನ ಸಮಸ್ಯೆ ಬಾರ ದಂತೆ ಸುದೀರ್ಘ ಕಾಲದ ಯೋಜನೆ ರೂಪಿಸಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಹಿರಿಯರಾದ ಮಹಮ್ಮದ್ ಮಲಾರ್ ರಸ್ತೆ ಉದ್ಘಾಟಿಸಿದರು. ಮಸೀದಿಯ ಖತೀಬ್ ಸಿರಾಜುದ್ದೀನ್ ದಾರಿಮಿ ಉಸ್ತಾದ್ ದುವಾ ನೆರವೇರಿಸಿದರು. ಮುಅದ್ದೀನ್ ಶರೀಫ್ ಉಮೈದಿ, ಅಧ್ಯಕ್ಷ ಎಸ್.ಎಂ. ಆಸಿಫ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ರಹ್ಮತುಲ್ಲಾ, ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಿಯಾಝ್ ಅಹ್ಮದ್, ಸಂಶುದ್ದೀನ್, ಹರೇಕಳ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ. ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಎಚ್.ಎಂ. ಮಹಮ್ಮದ್, ಇಸ್ಮಾಯಿಲ್ ಮಾಸ್ಟರ್, ಝಕರಿಯಾ ಮಲಾರ್, ಝಾಯಿದ್ ಮಲಾರ್, ಅಶ್ರಫ್ ಮದೀನಾ, ಹಸನ್ ಕುಂಞಿ ಮಲಾರ್, ಇಬ್ರಾಹಿಂಮೋನು, ಹಾರಿಸ್ ಮಲಾರ್, ಮುನೀರ್ ಆಲಡ್ಕ, ಹಮೀದ್ ಕಂಡಿಲ, ಅಬ್ದುಲ್ ರಹ್ಮಾನ್, ಹಮೀದ್ ಎಂ.ಬಿ, ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುತ್ತೂರು: ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮ
ಪುತ್ತೂರು; ಗಾಣಿಗ ಸಮಾಜದಿಂದ ವಿಶ್ವದಲ್ಲಿಯೇ ಭಾರತದ ಹೆಸರು ಚಿರಸ್ಥಾಯಿಯಾಗಿದೆ. ಗಾಣಿಗ ಸಮಾಜದ ಮಗನಿಂದ ದೇಶದಲ್ಲಿಯೇ ದೊಡ್ಡ ಬದಲಾವಣೆ ಉಂಟಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಿದೆ. ಸಭ್ ಕಾ ಸಾಥ್ ಸಭ್ ಕಾ ವಿಕಾಸ್ನಿಂದ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಅಭಿಪ್ರಾಯಪಟ್ಟರು. ಅವರು ರವಿವಾರ ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಾಣಿಗ ಸಮಾಜದ ಸಂಗಟಯಾಗುವ ಮೂಲಕ ನಾವು ಏನೆಂದು ತೋರಿಸಬೇಕಾದ ಅವಶ್ಯಕತೆ ಇದೆ. ದೇಶದಾದ್ಯಂತ 14 ಕೋಟಿ ಗಾಣಿಗ ಸಮಾಜದವರಿದ್ದೇವೆ. ರಾಮಾಯಣದಲ್ಲೂ ಗಾಣಿಗರ ಪಾತ್ರವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಣಿಗರ ಕೊಡುಗೆ ಇದೆ. ಆದರೆ ನಾವು ಸಂಘಟಿತರಾಗಿಲ್ಲ ಎಂಬುವುದು ಸತ್ಯ ಎಂದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್ ಸುದರ್ಶನ್ ಅವರು ಮಾತನಾಡಿ, ಸಮುದಾಯದ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ ಬೆಳೆಯಬೇಕು. ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿಯೂ ಗಾಣಿಗ ಸಮಾಜದ ಮಂದಿ ಅಧಿಕಾರಿಗಳಾಗಿ ಬರಬೇಕು. ಗಾಣಿಗ ಸಮಾಜದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಚಿಂತನೆಗಳನ್ನು ನಡೆಸಬೇಕು. ಕೇವಲ ಹೆಸರಿಗೋಸ್ಕರ ಸಂಘಟನೆ ಬೇಡ. ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಸದ ಬ್ರಿಜೇಶ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯೊಬ್ಬ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕಾದರೆ ಅದರಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಯುವಜನತೆ ಹೆಚ್ಚು ಹೆಚ್ಚಾಗಿ ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ. ಅದು ಇಡೀ ಭಾರತದೇಶದ ಸಂಕಲ್ಪವಾಗಿದೆ. ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಅದರಲ್ಲೂ ವಿಶೇಷ ವಾಗಿ ಮಹಿಳೆಯರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ಗಾಣಿಗ ಸಮಾಜ ಗಟ್ಟಿಯಾಗಬೇಕಾದರೆ ಅದಕ್ಕೆ ಹಿಂದುತ್ವದ ಹಿನ್ನಲೆ ಬೇಕು. ದಕ ಜಿಲ್ಲೆಯಲ್ಲಿ ನಾವು ಹಿಂದುತ್ವದ ಗಟ್ಟಿತನ ಕಾಣಬಹುದಾಗಿದೆ. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದ ಕಡೆಗೆ ಹೆಜ್ಜೆ ಹಾಕಬೇಕಾದರೆ ನಮ್ಮ ಒಗ್ಗಟ್ಟು ಅತೀ ಅಗತ್ಯ ಎಂದರು. ಶಾಸಕ ಅಶೋಕ್ ರೈ ಅವರು ಮಾತನಾಡಿ, ಗಾಣಿಗ ಸಮಾಜದ ಅಭಿವೃದ್ಧಿಯಾಗಬೇಕಾದರೆ ಮೊದಲು ವಿದ್ಯೆಯತ್ತ ಆದ್ಯತೆ ನೀಡಬೇಕು. ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಯೋಜನೆಗಳು ಸಾಕಾರ ಗೊಳ್ಳುತ್ತವೆ. ಗಾಣಿಗ ಸಮಾಜದ ಅಭಿವೃದ್ಧಿಗೆ ಗಾಣಿಗ ನಿಗಮ ಇದೆ. ಅದಕ್ಕೆ ಶಕ್ತಿ ತುಂಬುವ ಕೆಲಸವಾದರೆ ಅಭಿವೃದ್ಧಿಯ ಹಂತಕ್ಕೇರಬಹುದಾಗಿದೆ. ಪುತ್ತೂರಿನಲ್ಲಿ ಗಾಣಿಗ ಸಭಾಭವನ ನಿರ್ಮಾಣಕ್ಕೆ ಪಹಣಿಪತ್ರ ಸಹಿತ ಜಾಗ ಹುಡುಕಿಕೊಡಿ. ಅದಕ್ಕೆ ಮುಖ್ಯಮಂತ್ರಿಯವರ ಅನುಮೋದನೆ ಮಾಡಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ ಅವರು ಮಾತನಾಡಿ, ಇಚ್ಛಾಶಕ್ತಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ನಡೆದಿರುವುದು ಗಾಣಿಗ ಸಂಗಮ ಅಲ್ಲ. ಅದು ಗಾಣಿಗರ ಆತ್ಮಾವ ಲೋಕನ. ಗಾಣಿಗ ಸಮಾಜದ ಭವಿಷ್ಯವನ್ನು ನಿರ್ಧರಿಸುವ ಚಿಂತನೆಯಾಗಿದೆ. ಗಾಣಿಗ ಸಮಾಜದ ಆಚಾರ-ವಿಚಾರಗಳು ಪ್ರಸ್ತುತ ದಿಕ್ಕು ತಪ್ಪುತ್ತಿದೆ. ಅದಕ್ಕಾಗಿ ಸಂಘಟನೆ ಅತೀ ಅಗತ್ಯವಾಗಿದೆ. ಗಾಣಿಗರ ಜೀವನ ಸಂಸ್ಕೃತಿಯನ್ನು ಬಿಂಬಿಸುವ ವೆಬ್ಸೈಟ್ ಗಳ ಅಗತ್ಯವಿದ್ದು, ಸಂಘಟನೆ ಈ ಬಗ್ಗೆ ಚಿಂತನೆ ಮಾಡುವ ಕಾಲ ಬಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮುಂಬೈ ಉದ್ಯಮಿ ವಸಂತ ಜಿ ಸಪಲ್ಯ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಮಾಧವ ಮಾವೆ, ಉಪ್ಪಿನಂಗಡಿ ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ, ಉದ್ಯಮಿ ಭುವನೇಶ್ ರಘು ಸಪಲ್ಯ ಪಾಣೆಮಂಗಳೂರು, ಪ್ರಹ್ಲಾದ್ ಮೋದಿ ಪುತ್ರಿ ಸೋನಾಲ್ ಬೆನ್ ಮೋದಿ, ಪ್ರವೀಣ್ ತೆಲಂಗಾಣ, ವಿನಯಕುಮಾರ್ ಬಾರ್ಕೂರು, ವಿಜಯಕುಮಾರ್, ಉದ್ಯಮಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ವಿವಿಧಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸೀರೆ ವಿತರಣೆ ನಡೆಯಿತು. ವಧು-ವರರ ಅನ್ವೇಷಣೆಯ ನೋಂದಾವಣೆ ನಡೆಸಲಾಯಿತು. ಡ್ಯಾನ್ಸ್ ಗಾಣಿಗ ಡ್ಯಾನ್ಸ್ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ಬೆಟ್ಟ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಎಂಸಿಸಿ ಬ್ಯಾಂಕ್ ಮೂಲಕ ಶೀಘ್ರ ಯುಪಿಐ, ಗೂಗಲ್ ಪೇ ಸೌಲಭ್ಯ: ಅನಿಲ್ ಲೋಬೊ
ಎಂಸಿಸಿ ಬ್ಯಾಂಕ್ ಬೆಳ್ಮಣ್ ಪ್ರಥಮ ವಾರ್ಷಿಕೋತ್ಸವ
T20 World Cup 2026: ಸೆಮಿಫೈನಲ್ ಸ್ಥಾನಕ್ಕಾಗಿ ಟೀಂ ಇಂಡಿಯಾ ಕಾದಾಟ
T20 World Cup 2026: ಕೋಲ್ಕತ್ತಾದಲ್ಲಿ ಭಾನುವಾರ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ನ ಕೊನೆಯ ಉಳಿದ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಈಗಾಗಲೇ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳು ತಮ್ಮ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈಗಾಗಲೇ ಸೂಪರ್
ರಾಮಕೃಷ್ಣ ಮಿಷನ್ನಿಂದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಶ್ರಮದಾನ
ಮಂಗಳೂರು,ಮಾ.1:ನಗರದ ರಾಮಕೃಷ್ಣ ಮಿಷನ್ನಿಂದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ರವಿವಾರ ನಡೆದ ಶ್ರಮದಾನಕ್ಕೆ ಮಂಗಳೂರು ಮನಪಾ ಹಿರಿಯ ಆರೋಗ್ಯಾಧಿಕಾರಿ ಡಾ. ಮಂಜಯ್ಯಶೆಟ್ಟಿ ಹಾಗೂ ಕೆನಡಾ ಓಂಟಾರಿಯೊ ಸರಕಾರದ ಆರ್ಥಿಕ ತಜ್ಞ ಪ್ರಾಂಜಲ್ ಘಾಟೆ ಚಾಲನೆ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕ ರಂಜನ್ ಬೆಳ್ಳರ್ಪಾಡಿ ಉಪಸ್ಥಿತರಿದ್ಧರು. ಬಾಲಕೃಷ್ಣ ಭಟ್,ಅನಿರುದ್ಧ ನಾಯಕ್, ಪ್ರಕಾಶ್, ರಾಮಚಂದ್ರ ಭಟ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಸಾಲಿಯನ್, ಅವಿನಾಶ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುಕುಮಾರ್ ಸಾಲಿಯಾನ್, ಉಪನ್ಯಾಸಕ ಡಾ.ಪುರುಷೋತ್ತಮನ್ ಚಿಪ್ಪಾಲ, ಡಾ. ಜಯೇಶ್ ಚಂದ್ರನ್, ಡಾ. ರುಚಿತಾ, ಡಾ. ಹೇಮಂತ್ ಶ್ರಮದಾನದ ನೇತೃತ್ವ ವಹಿಸಿದ್ದರು. *ಈ ಸಂದರ್ಭ ಲಭಿಸಿದ ದೇವತೆಗಳ ಚಿತ್ರಪಟಗಳು ಮತ್ತು ಮೂರ್ತಿಗಳನ್ನು ತಾರಾನಾಥ ಆಳ್ವ, ಕಮಲಾಕ್ಷ ಪೈ, ದಿಲ್ರಾಜ್ ಆಳ್ವ, ಸಚಿನ್ ಶೆಟ್ಟಿ, ಭತ್ ಸಾಲಿಯನ್, ವರುಣ್, ಗಗನ್, ಯಲ್ಲಪ್ಪ, ಮಂಜುನಾಥ್ ಮತ್ತಿತರರು ಸಂಗ್ರಹಿಸಿದರು. ಇದನ್ನು ಮುಂದಿನ ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ವಿದೇಶಿಗನಿಂದ ಶಿರ್ವದ ಮಹಿಳೆಗೆ 14 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಶಿರ್ವ, ಮಾ.1: ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿತನಾದ ವಿದೇಶದ ವ್ಯಕ್ತಿ ಕೋರಿಯರ್ ಕಳುಹಿಸಿರುವುದಾಗಿ ನಂಬಿಸಿ ಶಿರ್ವದ ಮಹಿಳೆಗೆ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾ ಎಂಬವರಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಪರಿಚಯ ಆಗಿದ್ದು ಆತನು ತಾನು ವಿದೇಶದಲಿದ್ದು, ಅಲ್ಲಿಂದ ಗಿಫ್ಟ್ ಕೋರಿಯರ್ ಮಾಡಿರುವುದಾಗಿ ಫೆ.22ರಂದು ತಿಳಿಸಿದ್ದನು. ಫೆ.23ರಂದು ವಿದ್ಯಾ ಅವರಿಗೆ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ವಿದೇಶದಿಂದ ಕೋರಿಯರ್ ಬಂದಿದ್ದು, ಅದು ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ 49,700ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ವಿದ್ಯಾ ಹಣ ಪಾವತಿಸಿದ್ದರು. ಬಳಿಕ ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿ, ಕೋರಿಯರ್ನಲ್ಲಿ 30,000 ವಿದೇಶದ ಪೌಂಡ್ ಇದ್ದು, ಇದಕ್ಕೆ ಕೂಡಲೇ 1,89,000ರೂ. ಹಣವನ್ನು ಹಾಕುವಂತೆ ತಿಳಿಸಿದ್ದಳು. ಹಾಗೇ ವಿದ್ಯಾ ಮತ್ತೆ ಹಣ ಪಾವತಿಸಿ ದರು. ಅದೇ ದಿನ ಸಂಜೆ ಕರೆ ಮಾಡಿ ಮನಿ ಎಕ್ಸ್ಚೇಂಜ್ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದಳು. ಅದರಂತೆ ಒಟ್ಟು 2,50,000ರೂ. ಹಣವನ್ನು ಪಾವತಿಸಿದ್ದರು. ಹೀಗೆ ಹಲವು ಬಾರಿ ಫೆ.23ರಿಂದ ಫೆ.27ರವರೆಗೆ ಒಟ್ಟು 13,99,700ರೂ. ಹಣವನ್ನು ಬೇರೆ ಬೇರೆ ಖಾತೆಗೆ ಹಾಕಿದ್ದರು. ಆದರೆ ಕೋರಿಯರ್ ಮಾತ್ರ ಬಂದಿರುವುದಿಲ್ಲ. ಸ್ನೇಹಿತನ ಹೆಸರಿನಲ್ಲಿ ವಿದೇಶದ ವ್ಯಕ್ತಿ ವಿದ್ಯಾ ಅವರಿಗೆ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು
ಕಾರ್ಕಳ, ಮಾ.1: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಫೆ.28ರಂದು ರಾತ್ರಿ 8.45ರ ಸುಮಾರಿಗೆ ಕುಕ್ಕುಂದೂರು ಗ್ರಾಮದ ಮಹಾತ್ಮ ಗಾಂಧಿ ಶಾಲೆ ಎದುರುಗಡೆ ನಡೆದಿದೆ. ಮೃತರನ್ನು ಎರ್ಲಪಾಡಿ ಗೋವಿಂದೂರಿನ ಬೈಕ್ ಸವಾರ ರಕ್ಷೀತ್(18) ಮತ್ತು ಅವರ ಸಂಬಂಧಿ ಸಹ ಸವಾರ ಶಿವಾನಂದ(19) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರು, ಎದುರಿ ನಲ್ಲಿದ್ದ ವಾಹನವನ್ನು ಒವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಅಂದರೆ ಕಾರ್ಕಳದಿಂದ ಬೈಲೂರು ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸವಾರರು ಬೈಕ್ ಸಮೇತ ರಸ್ತೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷೀತ್ ಮತ್ತು ಶಿವಾನಂದ ಕಾರ್ಕಳ ಸರಕಾರಿ ಆಸ್ಪತ್ರಗೆ ಕೆರೆದೊಯ್ಯುತ್ತಿರುವ ದಾರಿ ಮದ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಕಾರು ಚಾಲಕ ಅಪಘಾತ ಉಂಟು ಮಾಡಿದ ನಂತರ ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ನೀಡದೇ ಸ್ಥಳದಿಂದ ಓಡಿ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೇ ಹಲವು ದೇಶಗಳಲ್ಲಿ ವಿಮಾನ ಸೇವೆ ರದ್ದುಪಡಿಸಲಾಗಿದೆ. ಹಾಗೆಯೇ ಪ್ರಯಾಣ ನಿರ್ಬಂಧಗಳಿಂದಾಗಿ ಅಬುಧಾಬಿಯಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರವು ನೆರವು ಘೋಷಿಸಿದೆ. ಚೆಕ್-ಔಟ್ ಅವಧಿ ಮುಗಿದಿದ್ದರೂ ಪ್ರಯಾಣಿಸಲು ಸಾಧ್ಯವಾಗದ ಅತಿಥಿಗಳ ವಾಸ್ತವ್ಯವನ್ನು ವಿಸ್ತರಿಸುವಂತೆ ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಹೋಟೆಲ್ಗಳಿಗೆ ಸೂಚನೆ ನೀಡಿದೆ. ಪ್ರಯಾಣ ನಿರ್ಬಂಧಗಳಿಂದಾಗಿ ತಮ್ಮ ದೇಶಗಳಿಗೆ
‘ಪೊಲೀಸ್ ರನ್’ ಮ್ಯಾರಾಥಾನ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
ಬೆಂಗಳೂರು, ಮಾ.1: ಮಾದಕ ದ್ರವ್ಯ (ಡ್ರಗ್ಸ್) ಮುಕ್ತ ಕರ್ನಾಟಕ, ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಎಸ್ಬಿಐ ವತಿಯಿಂದ ಆಯೋಜಿಸಿದ್ದ ‘ಪೊಲೀಸ್ ರನ್' 3ನೇ ಆವೃತ್ತಿಯ ಮ್ಯಾರಥಾನ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ರವಿವಾರ ಬೆಳಗ್ಗೆ ವಿಧಾನಸೌಧದ ಎದುರು ಮಾದಕ ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಧ್ಯೇಯವಾಕ್ಯದಡಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಮ್ಯಾರಥಾನ್ನಲ್ಲಿ 10 ಕಿ.ಮೀ ಹಾಗೂ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಆಯುಕ್ತ ಮಹೇಶ್ವರ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಸ್ಬಿಐ ಬೆಂಗಳೂರು ವಲಯ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಒಂದೆರಡು ದಿನದಲ್ಲಿ ಸರ್ವೋಚ್ಚ ನಾಯಕನ ಆಯ್ಕೆ: ಇರಾನ್ ವಿದೇಶಾಂಗ ಸಚಿವ ಅರಘ್ಚಿ ಹೇಳಿಕೆ
ಟೆಹ್ರಾನ್: ಇರಾನ್ ನಲ್ಲಿ ಸರ್ವೋಚ್ಚ ನಾಯಕನ ಆಯ್ಕೆ ಪ್ರಕ್ರಿಯೆ ಇನ್ನೂ ಒಂದು ಅಥವಾ ಎರಡು ದಿನಗಳಲ್ಲಿ ಮಹತ್ವದ ಹಂತ ತಲುಪುವ ಸಾಧ್ಯತೆ ಇದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ ಎಂದು aljazeera.com ವರದಿ ಮಾಡಿದೆ. ಟೆಹ್ರಾನ್ ನಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಸಂಸ್ಥೆಗಳು ಪ್ರಸ್ತುತ ಸಕ್ರಿಯವಾಗಿದ್ದು, ಆಡಳಿತದಲ್ಲಿ ಯಾವುದೇ ಸ್ಥಗಿತ ಅಥವಾ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಇರಾನ್ ಸ್ಪಷ್ಟವಾದ ಸಾಂವಿಧಾನಿಕ ವ್ಯವಸ್ಥೆ ಹಾಗೂ ನಿಗದಿತ ಕ್ರಮಗಳನ್ನು ಹೊಂದಿರುವುದರಿಂದ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. “ಒಂದು ಅಥವಾ ಎರಡು ದಿನಗಳೊಳಗೆ ಸರ್ವೋಚ್ಚ ನಾಯಕನ ಆಯ್ಕೆ ಕುರಿತ ಬೆಳವಣಿಗೆಗಳನ್ನು ನೀವು ನೋಡಬಹುದು,” ಎಂದು ಅರಘ್ಚಿ ಹೇಳಿದರು. ಸರ್ವೋಚ್ಚ ನಾಯಕನ ಸ್ಥಾನ ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಾವಶಾಲಿ ಸ್ಥಾನವೆಂದು ಪರಿಗಣಿಸಲಾಗುತ್ತದೆ. ರಾಜಕೀಯ, ಧಾರ್ಮಿಕ ಮತ್ತು ರಕ್ಷಣಾ ಕ್ಷೇತ್ರಗಳ ಪ್ರಮುಖ ನೀತಿಗಳ ಮೇಲೆ ಈ ಹುದ್ದೆ ನಿರ್ಣಾಯಕ ಪ್ರಭಾವ ಬೀರುತ್ತದೆ.
ದೇವರಾಯನದುರ್ಗ ಜಾತ್ರೆ: ಮಾ.3ರ ಮಧ್ಯಾಹ್ನವೇ ಅದ್ಧೂರಿ ರಥೋತ್ಸವ, ಗ್ರಹಣ ಪ್ರಭಾವದಿಂದ ತೇರು ಸಾಗದೆಂಬ ಚರ್ಚೆ
ತುಮಕೂರು: ತಾಲೂಕಿನ ಸುಪ್ರಸಿದ್ಧ ಯಾತ್ರೆ ಸ್ಥಳ ದೇವರಾಯನದುರ್ಗದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದೆ. ಈಗಾಗಲೇ ಜಾತ್ರೆಯ ಆಚರಣೆಗಳು ಶುರುವಾಗಿವೆ. ಶ್ರೀ ಯೋಗ ಮತ್ತು ಭೋಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ದೇವಸ್ಥಾನ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ದೇವಸ್ಥಾನ ಸಮಿತಿ ಹಾಗೂ ಊರ ಭಕ್ತರು ಜಾತ್ರೆಯ ಆರಂಭಕ್ಕೆ ಸಾಕ್ಷಿಯಾದರು. ಈ ಬಾರಿ ಚಂದ್ರಗ್ರಹಣ
Ayatollah Ali Khamenei | ಜಾಗತಿಕ ಪ್ರತಿರೋಧ ರಾಜಕೀಯವನ್ನು ರೂಪಿಸಿದ ಇರಾನಿನ ಸರ್ವೋಚ್ಚ ನಾಯಕ
ಟೆಹ್ರಾನ್: ಅಮೆರಿಕ–ಇಸ್ರೇಲ್ ಜಂಟಿ ವಾಯುದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ (86) ಮೃತಪಟ್ಟಿದ್ದಾರೆ ಎಂದು ಇರಾನಿನ ರಾಜ್ಯ ಮಾಧ್ಯಮ ರವಿವಾರ ಮುಂಜಾನೆ ಅಧಿಕೃತವಾಗಿ ಪ್ರಕಟಿಸಿದೆ. ಫೆಬ್ರವರಿ 28ರಂದು ಟೆಹ್ರಾನ್ನಲ್ಲಿರುವ ಅವರ ಅಧಿಕೃತ ನಿವಾಸ ‘ಕಾಂಪೌಂಡ್ ’ ಮೇಲೆ ನಡೆದ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ಇರಾನಿನ ಅರೆಸರಕಾರಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ. ದಾಳಿಯಲ್ಲಿ ಖಾಮಿನೈ ಅವರ ಮಗಳು, ಅಳಿಯ ಮತ್ತು ಮೊಮ್ಮಗ ಕೂಡ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಮೇರಿಕ ಹಾಗೂ ಇಸ್ರೇಲ್ ನಂತಹ ಬಲಾಢ್ಯರ ವಿರುದ್ಧ ಸೆಟೆದು ನಿಂತು ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಾವು ನಿಮ್ಮ ಮುಂದೆ ಶರಣಾಗುವುದಿಲ್ಲ ಎಂದು ಘಂಟಾ ಘೋಷವಾಗಿ ಸಾರಿದ ಖಾಮಿನೈ ಇಡೀ ಜಗತ್ತಿನಲ್ಲಿ ಪ್ರತಿರೋಧ ರಾಜಕೀಯದ ಸಂಕೇತವಾಗಿ ಕಂಡಿದ್ದರು. ರಾಜಿಯಿಲ್ಲದ ನಾಯಕನಾಗಿ, ದಿಟ್ಟ ನೇತಾರನಾಗಿ, ಜೀವ ಹೋದರೂ ಸ್ವಾಯತ್ತತೆ ಬಿಟ್ಟು ಕೊಡದೆ ಇರುವ ನಿಲುವಿಗಾಗಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಪಡೆದವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾತ್ರಿ ಇರಾನಿನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಘೋಷಿಸಿದ್ದರು. ಖಾಮಿನೈ ಮತ್ತು ಇತರ ಇರಾನಿನ ಅಧಿಕಾರಿಗಳು ಅಮೆರಿಕದ ಗುಪ್ತಚರ ಮತ್ತು ಮುಂದುವರಿದ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು. 1939ರಲ್ಲಿ ಈಶಾನ್ಯ ಇರಾನಿನ ಶಿಯಾ ನಗರ ಮಶ್ಹಾದ್ನಲ್ಲಿ ಜನಿಸಿದ ಖಾಮಿನೈ, ಅಜೆರ್ಬೈಝಾನಿ ಮೂಲದ ಧಾರ್ಮಿಕ ಕುಟುಂಬಕ್ಕೆ ಸೇರಿದವರು. ಅವರ ತಂದೆ ಮಸೀದಿಯನ್ನು ಮುನ್ನಡೆಸುತ್ತಿದ್ದ ಪಂಡಿತರು. ತಾಯಿ ಖದೀಜಾ ಮಿರ್ದಮಾದಿ ಕುರಾನ್ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ನಾಲ್ಕನೇ ವಯಸ್ಸಿನಲ್ಲಿ ಕುರಾನ್ ಅಧ್ಯಯನ ಆರಂಭಿಸಿದ ಖಾಮಿನೈ ಅವರು, ಪ್ರೌಢಶಾಲೆ ಪೂರ್ಣಗೊಳಿಸದೆ ಧಾರ್ಮಿಕ ಶಿಕ್ಷಣ ಅಧ್ಯಯನ ಪ್ರಾರಂಭಿಸಿದರು. ಮಶ್ಹಾದ್ನ ಪ್ರಾಥಮಿಕ ಇಸ್ಲಾಮಿಕ್ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ನಜಾಫ್ ಮತ್ತು ಕೋಮ್ ನ ಶಿಯಾ ವಿದ್ಯಾಕೇಂದ್ರಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. ►1953ರ ಇರಾನ್ ದಂಗೆ 1953ರಲ್ಲಿ ಇರಾನಿನಲ್ಲಿ ನಡೆದ ದಂಗೆ ದೇಶದ ಆಧುನಿಕ ಇತಿಹಾಸದ ನಿರ್ಣಾಯಕ ತಿರುವಾಯಿತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಮಂತ್ರಿ ಮೊಹಮ್ಮದ್ ಮೊಸದ್ದೇಗ್ ಅವರು ತೈಲ ಉದ್ಯಮವನ್ನು ರಾಷ್ಟ್ರೀಕರಿಸಿದ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಅಮೆರಿಕದ ಅಸಮಾಧಾನ ಹೆಚ್ಚಾಯಿತು. ಬ್ರಿಟಿಷ್ ಗುಪ್ತಚರ ಸಂಸ್ಥೆ MI6 ಮತ್ತು ಅಮೆರಿಕನ್ ಗುಪ್ತಚರ ಸಂಸ್ಥೆ CIA ಸಂಯುಕ್ತವಾಗಿ ರೂಪಿಸಿದ “ಆಪರೇಶನ್ ಅಜಾಕ್ಸ್” ಮೂಲಕ ಮೊಸದ್ದೇಗ್ ಸರ್ಕಾರವನ್ನು ಪತನಗೊಳಿಸಲಾಯಿತು ಎಂಬುದು ಬಳಿಕ ದಾಖಲೆಗಳಿಂದ ಬಹಿರಂಗವಾಯಿತು. ದಂಗೆಯ ನಂತರ ಷಾ ಮೊಹಮ್ಮದ್ ರೆಜಾ ಪಹ್ಲವಿ ಸಂಪೂರ್ಣ ಅಧಿಕಾರವನ್ನು ಮರಳಿ ಪಡೆದು ಕೇಂದ್ರೀಕೃತ ಆಡಳಿತವನ್ನು ಬಲಪಡಿಸಿದರು. ಈ ಘಟನೆ ಇರಾನಿನ ಜನಮನದಲ್ಲಿ ಪಶ್ಚಿಮ ರಾಷ್ಟ್ರಗಳ ಮೇಲಿನ ಗಾಢ ಅನುಮಾನಕ್ಕೆ ಕಾರಣವಾಗಿ, ಮುಂದಿನ ದಶಕಗಳಲ್ಲಿ ರಾಜಪ್ರಭುತ್ವ ವಿರೋಧಿ ಚಳುವಳಿ ಮತ್ತು 1979ರ ಇಸ್ಲಾಮಿಕ್ ಕ್ರಾಂತಿಗೆ ಭೂಮಿಕೆಯಾಗಿತು. ಈ ಬೆಳವಣಿಗೆಗಳ ನಂತರ ಖಾಮಿನೈ ರಾಜಪ್ರಭುತ್ವ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರು. ಷಾ ಅವರ ರಹಸ್ಯ ಪೊಲೀಸರು (SAVAK) ಅವರನ್ನು ಪದೇಪದೇ ಬಂಧಿಸಿ ಆಗ್ನೇಯ ಇರಾನಿನ ಇರಾನ್ಶಹರ್ ನಗರಕ್ಕೆ ಗಡಿಪಾರು ಮಾಡಿದರು. 1978ರ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಅವರು ಮರಳಿದರು. ►1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ 1978–79ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ರಾಜಪ್ರಭುತ್ವ ಪತನಗೊಂಡಿತು. ಹೊಸ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯ ಸಂದರ್ಭದಲ್ಲಿ ಖಾಮಿನೈ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. ಅವರು ರಕ್ಷಣಾ ಸಚಿವರಾಗಿ ಮತ್ತು ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು. ಟೆಹ್ರಾನ್ ನ ಶುಕ್ರವಾರದ ಪ್ರಾರ್ಥನಾ ನಾಯಕರಾಗಿ ಅವರ ಪ್ರಭಾವ ಹೆಚ್ಚಾಯಿತು. 1981ರಲ್ಲಿ ಮೊಜಾಹೆದಿನ್-ಇ ಖಲ್ಕ್ (MEK) ಸಂಘಟನೆ ನಡೆಸಿದ ಹತ್ಯಾ ಯತ್ನದಿಂದ ಸ್ವಲ್ಪದರಲ್ಲೇ ಪಾರಾದ ಅವರು ತಮ್ಮ ಬಲಗೈ ಕಳೆದುಕೊಂಡರು. ಅದೇ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿ, ಇರಾನಿನ ಮೊದಲ ಧಾರ್ಮಿಕ ಗುರು ಅಧ್ಯಕ್ಷರಾದರು. ►ಇರಾಕ್ ವಿರುದ್ಧ ಎಂಟು ವರ್ಷದ ಯುದ್ಧ 1981ರಿಂದ 1989ರವರೆಗೆ ಇರಾಕ್ ವಿರುದ್ಧ ನಡೆದ ರಕ್ತಸಿಕ್ತ ಯುದ್ಧದಲ್ಲಿ ಅವರು ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಂಘರ್ಷದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂದು ಅಂದಾಜಿಸಲಾಗಿದೆ. ಇರಾಕ್ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಮಾಡಿದ ಘಟನೆಗಳು ಇರಾನಿನ ಜನಮನದಲ್ಲಿ ಪಶ್ಚಿಮದ ವಿರುದ್ಧ ಗಾಢ ಅಪನಂಬಿಕೆ ಮೂಡಿಸಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ►1989ರಲ್ಲಿ ಸರ್ವೋಚ್ಚ ನಾಯಕತ್ವ 1989ರಲ್ಲಿ ಆಯತುಲ್ಲಾ ರುಹೊಲ್ಲಾ ಖೋಮೇನಿ ನಿಧನದ ಬಳಿಕ ಸಂವಿಧಾನ ಪರಿಷ್ಕರಣೆ ಮೂಲಕ ಖಾಮಿನೈಯವರನ್ನು ಸರ್ವೋಚ್ಚ ನಾಯಕನಾಗಿ ನೇಮಿಸಲಾಯಿತು. ದೇಶದ ಅತ್ಯುನ್ನತ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಸಡಿಲಗೊಳಿಸಲಾಯಿತು. “ನಾನು ಈ ಹುದ್ದೆಗೆ ಅರ್ಹನಲ್ಲ” ಎಂದು ಅವರು ಆ ವೇಳೆ ಹೇಳಿದ್ದರೂ, ನಂತರ ಸಂಪೂರ್ಣ ಅಧಿಕಾರವನ್ನು ಕೇಂದ್ರೀಕರಿಸಿದರು. ಇರಾನ್ ಸದಾ ಮುತ್ತಿಗೆಗೆ ಒಳಗಾಗಿರುವ ರಾಷ್ಟ್ರ ಎಂಬ ನಿಲುವಿನಿಂದ “ಮುಂದಿನ ರಕ್ಷಣಾ” ತಂತ್ರವನ್ನು ಸ್ಥಾಪಿಸಿದರು. ►IRGC ಬಲವರ್ಧನೆ, ‘ಪ್ರತಿರೋಧದ ಆರ್ಥಿಕತೆ’ ಖಾಮಿನೈ ಆಡಳಿತದಲ್ಲಿ IRGC ಅರೆಸೈನಿಕ ಪಡೆಯಿಂದ ಪ್ರಬಲ ಭದ್ರತಾ, ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಯಿತು. ಬಸಿಜ್ ಸ್ವಯಂಸೇವಕ ಪಡೆ ಬಲಪಡಿಸಲಾಯಿತು. ಪಾಶ್ಚಿಮಾತ್ಯ ನಿರ್ಬಂಧಗಳ ನಡುವೆಯೂ ಸ್ವಾವಲಂಬನೆಗೆ ಒತ್ತು ನೀಡುವ ‘ಪ್ರತಿರೋಧ ಆರ್ಥಿಕತೆ’ಯನ್ನು ಉತ್ತೇಜಿಸಿದರು. ಪಶ್ಚಿಮದೊಂದಿಗೆ ಹೊಂದಾಣಿಕೆಗೆ ಅವರು ಗಾಢ ಸಂದೇಹ ವ್ಯಕ್ತಪಡಿಸುತ್ತಿದ್ದರು. ►1997 ಸುಧಾರಣಾ ಅಲೆ, 2009 ಗ್ರೀನ್ ಮೂವ್ಮೆಂಟ್ 1997ರಲ್ಲಿ ಸುಧಾರಣಾವಾದಿ ಮೊಹಮ್ಮದ್ ಖಾತಮಿ ಗೆಲುವು ಸಾಧಿಸಿದರೂ, ಪಶ್ಚಿಮದೊಂದಿಗೆ ಹೊಂದಾಣಿಕೆ ವಿಚಾರದಲ್ಲಿ ಖಾಮಿನೈಯ ನಿಲುವು ಬದಲಾಗಲಿಲ್ಲ. 2009ರಲ್ಲಿ ಮಹಮೂದ್ ಅಹ್ಮದಿನೆಜಾದ್ ವಿವಾದಿತ ಗೆಲುವಿನ ಬಳಿಕ ‘ಗ್ರೀನ್ ಮೂವ್ಮೆಂಟ್’ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು. ಸಾವಿರಾರು ಬಂಧನಗಳು, ಡಝನ್ಗಟ್ಟಲೆ ಸಾವಿನ ವರದಿಗಳು ಹೊರಬಂದವು. ►2015 ಪರಮಾಣು ಒಪ್ಪಂದ ಮತ್ತು ನಂತರದ ನಿರ್ಬಂಧಗಳು 2015ರಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಮೂಲಕ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವೆ ಪರಮಾಣು ಒಪ್ಪಂದಕ್ಕೆ ಖಾಮಿನೈ ಹಸಿರು ನಿಶಾನೆ ತೋರಿದರು. ನಿರ್ಬಂಧ ಪರಿಹಾರಕ್ಕೆ ಬದಲಾಗಿ ಪರಮಾಣು ಚಟುವಟಿಕೆ ಮಿತಿಗೊಳಿಸಲಾಯಿತು. ಆದರೆ 2018ರಲ್ಲಿ ಅಮೆರಿಕ ಒಪ್ಪಂದದಿಂದ ಹಿಂದೆ ಸರಿಯುತ್ತಿದ್ದಂತೆ, ಇರಾನ್ ಯುರೇನಿಯಂ ಪುಷ್ಟೀಕರಣವನ್ನು 60% ಮಟ್ಟಕ್ಕೆ ಹೆಚ್ಚಿಸಿತು. 2003ರಲ್ಲಿ ಇದೇ ಸರ್ಕಾರ ಪರಮಾಣು ಶಸ್ತ್ರಾಸ್ತ್ರ ನಿಷೇಧಿಸುವ ಫತ್ವಾ ನೀಡಿತ್ತು. ►2019, 2022 ಮತ್ತು 2026 ಅಶಾಂತಿ 2019ರಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು. 2022ರಲ್ಲಿ ಮಹ್ಸಾ ಅಮಿನಿ ಸಾವಿನ ಬಳಿಕ ಮಹಿಳಾ ಹಕ್ಕುಗಳ ಚಳುವಳಿ ರಾಷ್ಟ್ರವ್ಯಾಪಿಯಾಗಿ ಹರಡಿತು. ಅಮ್ನೆಸ್ಟಿ ವರದಿಗಳ ಪ್ರಕಾರ ನೂರಾರು ಮಂದಿ ಸಾವನ್ನಪ್ಪಿದರು. ಜನವರಿ 2026ರಲ್ಲಿ ಕರೆನ್ಸಿ ಕುಸಿತ ಮತ್ತು ನಿರ್ಬಂಧ ಒತ್ತಡದಿಂದ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಕ್ರಾಂತಿಯಾಗಿ ಮಾರ್ಪಟ್ಟವು. ಸಾವಿರಾರು ಪ್ರತಿಭಟನಾಕಾರರ ಸಾವುಗಳ ಆರೋಪ ಕೇಳಿಬಂದವು. ►ಪ್ರತಿರೋಧದ ತಂತ್ರ ಖಾಮಿನೈ ಲೆಬನಾನ್ ನ ಹಿಜ್ಬೊಲ್ಲಾ, ಸಿರಿಯಾದ ಬಶರ್ ಅಲ್-ಅಸ್ಸದ್, ಫೆಲೆಸ್ತೀನಿನ ಹಮಾಸ್, ಯೆಮೆನ್ ನ ಹೌತಿಗಳು ಹಾಗೂ ಇರಾಕ್ ನ ಶಿಯಾ ಗುಂಪುಗಳೊಂದಿಗೆ ಮೈತ್ರಿ ಬಲಪಡಿಸಿದರು. IRGC ಕುದ್ಸ್ ಪಡೆಗಳ ಕಮಾಂಡರ್ ಖಾಸೆಮ್ ಸೊಲೈಮಾನಿ ಈ ತಂತ್ರದ ಹಿಂದಿನ ವ್ಯಕ್ತಿಯಾಗಿದ್ದರು. 2020ರಲ್ಲಿ ಅಮೆರಿಕ ದಾಳಿಯಲ್ಲಿ ಅವರು ಸಾವನ್ನಪ್ಪಿದರು. 2025 ಜೂನ್ 13ರಂದು ಇಸ್ರೇಲ್ ಇರಾನಿನ ಪರಮಾಣು ಮತ್ತು ಸೇನಾ ನೆಲಗಳ ಮೇಲೆ ದಾಳಿ ನಡೆಸಿತು. ಸುಮಾರು ಎರಡು ವಾರಗಳ ಕಾಲ ಯುದ್ಧ ನಡೆಯಿತು. ಅಮೆರಿಕ ಮೂರು ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ಬಂಕರ್ ಬಸ್ಟರ್ ದಾಳಿ ನಡೆಸಿದ ಬಳಿಕ ಉದ್ವಿಗ್ನತೆ ತಾತ್ಕಾಲಿಕವಾಗಿ ಕಡಿಮೆಯಾಯಿತು. ಸೌಜನ್ಯ: Aljazeera.com
ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ ; ಕೊಡಗು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ
ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಕೊಡಗು ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಘಟನೆ ಸಂಬಂಧ ಗ್ರಾಮಸ್ಥರು 2 ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
T20 World Cup- ಪಾಕ್ ಸೋಲಿಗೆ ಮೊಹ್ಸಿನ್ ನಖ್ವಿ ಗುರಿಯಾಗಿಸಿ ಶೊಯೇಬ್ ಅಖ್ತರ್ ಟೀಕೆ; ಈ ಬಾರಿ ನಾಜೂಕಾಗಿ ತರಾಟೆ!
Shoib Akhtar On Mohsin Naqvi- ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಬಗ್ಗೆ ವಿಪರೀತ ಟೀಕೆ ಮಾಡಿ ಬಳಿಕ ಯೂ ಟರ್ನ್ ಹೊಡೆದಿದ್ದರು. ಇದೀಗ ಮತ್ತೊಮ್ಮ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮಾತ್ರ ಮೊದಲು ನಖ್ವಿ ಅವರೊಬ್ಬ ಉತ್ತಮ ಆಡಳಿತಗಾರ, ಪ್ರಭಾವಿ ಎಂದೆಲ್ಲಾ ಹೊಗಳಿ, ಬಳಿಕ ನಾಜೂಕಾಗಿ ಟೀಕಿಸಿದ್ದಾರೆ. ಪಾಕಿಸ್ತಾನ ತಂಡದ ಆಯ್ಕೆ ಪ್ರಕ್ರಿಯೆಯೇ ಸರಿಯಿಲ್ಲ ಎಂದು ಹೀಗಳೆದಿದ್ದಾರೆ.
ಮಂಗಳೂರು: ಪೊಲೀಸ್ ಇಲಾಖೆ ಮತ್ತು ಎಸ್ಬಿಐನಿಂದ ಓಟ
ಮಂಗಳೂರು, ಮಾ.1: ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರವಿವಾರ ಱನಮ್ಮ ಪೊಲೀಸ್-ನಮ್ಮ ಹೆಮ್ಮೆ-2026 ಫಿಟ್ನೆಸ್ ಫಾರ್ ಆಲ್, ಡ್ರಗ್ ಫ್ರೀ ಕರ್ನಾಟಕ, ಸೈಬರ್ ಕ್ರೈಂ ಕುರಿತು ಅರಿವು ಮೂಡಿಸುವ ಧ್ಯೇಯದೊಂದಿಗೆ ಓಟ ಆಯೋಜಿಸಲಾಯಿತು. ಮಂಗಳಾ ಕ್ರೀಡಾಂಗಣದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. 5 ಕಿ.ಮೀ, 10 ಕಿ.ಮೀ ಓಟದಲ್ಲಿ ಸುಮಾರು 2,800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರಡ್ಡಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಡಿಸಿಪಿಗಳಾದ ಮಿಥುನ್ ಎಚ್.ಎನ್. ರವಿಶಂಕರ್ ಕೆ., ಎಎಸ್ಪಿಅನಿಲ್ ಕುಮಾರ್ ಭೂಮರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ರೋಟರಿ ಜಿಲ್ಲಾಮಟ್ಟದ ರಸಪ್ರಶ್ನಾ ಸ್ಪರ್ಧೆ ರೋಟರಿ ಮೈಸೂರು, ವಿಜಯನಗರ ಸಂಸ್ಥೆಗೆ ಪ್ರಶಸ್ತಿ
ಮಂಗಳೂರು, ಮಾ.1: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 20ನೇ ವಾರ್ಷಿಕ ‘‘ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ’ ಶುಕ್ರವಾರ ನಗರದ ಬಿಜೈ ಓಷನ್ ಪಾರ್ಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು. ರೋಟರಿ ಕ್ಲಬ್, ಮೈಸೂರು ವಿಜಯನಗರ ಸಂಸ್ಥೆಯನ್ನು ಪ್ರತಿನಿಧಿಸಿದ ಎಚ್, ಎಮ್. ಹರೀಶ್ ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡರು. ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ಡಾ. ರಂಜನ್ ಮತ್ತು ಸುಮಿತ್ ರಾವ್ ತಂಡ ದ್ವಿತೀಯ ಸ್ಥಾನ ಪಡೆದರು. ರೋಟರಿ ಮಂಗಳೂರು ಕೋಸ್ಟಲ್ ಸಂಸ್ಥೆಯನ್ನು ಪ್ರತಿನಿಧಿಸಿದ ಸುಬೋದ್ ಕುಮಾರ್ದಾಸ್ ಮತ್ತು ಕಿರಣ್ ಪ್ರಸಾದ್ ರೈ ತೃತೀಯ ಸ್ಥಾನವನ್ನು ಪಡೆಯಿತು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಚ್. ಆರ್. ಕೇಶವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಲಯ ಸಹಾಯಕ ಗವರ್ನರ್ ರೋ. ಚಿನ್ನಗಿರಿ ಗೌಡರವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ ‘ಸೆಂಟೋರ್’ ರನ್ನು ಬಿಡುಗಡೆಗೊಳಿಸಿದರು. ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಪ್ರತಿನಿಧಿ ರೋ. ರವಿ ಜಲಾನ್, ಸಂಸ್ಥೆಯ ನಿಯೋಜಿತ ಅಧ್ಯಕ್ಷ ರವೀಂದ್ರ ಬಿ.ಎನ್. ಉಪಸ್ಥಿತರಿದ್ದರು. ಮೈಸೂರು, ಕೊಳ್ಳೆಗಾಲ, ಎಲಂದೂರ್, ಮಂಗಳೂರು, ಸುರತ್ಕಲ್, ಪುತ್ತೂರು, ದೇರಳಕಟ್ಟೆ ಸಿದ್ದಕಟ್ಟೆ ಸೇರಿದಂತೆ ಜಿಲ್ಲೆಯ 14 ರೋಟರಿ ತಂಡಗಳು ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಡಾ. ದೇವದಾಸ್ ರೈ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ರೋಟರಿ ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್ ಮಾಸಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ಸಾಯಿಬಾಬಾ ರಾವ್ ವಂದಿಸಿದರು.
ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು, ಮಾ. 1: ‘ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಸ್ಥಿತಿಯಿಂದ ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಸಹಿತ 150ಕ್ಕೂ ಹೆಚ್ಚು ಕನ್ನಡಿಗರು, ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ಮಾಹಿತಿ ಸಿಕ್ಕಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳ ಬಗ್ಗೆ ಅಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಲು ನಮ್ಮ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು. ಯುದ್ಧದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ರಾಜ್ಯ ಸರಕಾರವು ಕಾರ್ಯಪ್ರವೃತ್ತವಾಗಿದೆ. ನಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳ ಮೂಲಕ ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಅವರು ತಿಳಿಸಿದರು.
ಎನ್ಐಟಿಕೆ ಸುರತ್ಕಲ್ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಮಂಗಳೂರು: ಎನ್ಐಟಿಕೆ ಸುರತ್ಕಲ್ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಗಳು, ಪ್ರದರ್ಶನಗಳು ಮತ್ತು ಸಂವಾದಾತ್ಮಕ ಅವಧಿಗಳ ಮೂಲಕ ಯುವ ಮನಸ್ಸುಗಳನ್ನು ಪ್ರೇರೇಪಿಸಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ) ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕಿ ಪ್ರೊ. ಮಾರಿಯಾ ಥಾಕರ್ ಪ್ರಮುಖ ಭಾಷಣಕಾರರಾಗಿ ಮಾತನಾಡಿ ಜಿಪಿಎಸ್ ಕಾಲರ್ಗಳು, ರೇಡಿಯೋ ಟ್ರ್ಯಾಕಿಂಗ್, ಉಪಗ್ರಹ ದತ್ತಾಂಶ ಮತ್ತು ತಾಪಮಾನ ಸಂವೇದಕಗಳನ್ನು ಬಳಸಿಕೊಂಡು ಆನೆಗಳು ಮತ್ತು ಇತರ ದೊಡ್ಡ ಪ್ರಾಣಿಗಳ ಚಲನೆಯನ್ನು ವಿಜ್ಞಾನಿಗಳು ಹೇಗೆ ಅಧ್ಯಯನ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ 21 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕುತೂಹಲ ಮತ್ತು ಸೃಜನಶೀಲತೆ ವೈಜ್ಞಾನಿಕ ಪ್ರಗತಿಯ ಅಡಿಪಾಯವನ್ನು ರೂಪಿಸುತ್ತದೆ ಎಂದರು. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಪ್ರಭಾವವನ್ನು ಸಹ ಉಲ್ಲೇಖಿಸಿದರು ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಆನ್ಲೈನ್ ಪರಿಸರದಲ್ಲಿ ಪ್ರಯೋಗಾಲಯ ಪ್ರಯೋಗಗಳನ್ನು ನಡೆಸಲು ಅನುವು ಮಾಡಿಕೊಡುವ ವರ್ಚುವಲ್ ಲ್ಯಾಬ್ಸ್ ಉಪಕ್ರಮಕ್ಕೆ ಎನ್ಐಟಿಕೆ ಕೊಡುಗೆಯನ್ನು ವಿವರಿಸಿದರು. ಎನ್ಐಟಿಕೆ ಸುರತ್ಕಲ್ನ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಮತ್ತು ಕಂಪ್ಯೂಟೇಶನಲ್ ವಿಜ್ಞಾನ ವಿಭಾಗಗಳ ಸಂಶೋಧನಾ ವಿದ್ವಾಂಸರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ನಡೆಸಿದ 30 ಕ್ಕೂ ಹೆಚ್ಚು ನೇರ ಪ್ರಯೋಗಗಳನ್ನು ಪ್ರದರ್ಶಿಸಲಾಗಿತ್ತು. ವೈಜ್ಞಾನಿಕ ಜ್ಞಾನ ಮತ್ತು ಉತ್ಸಾಹವನ್ನು ಪರೀಕ್ಷಿಸುವ ಅಂತರ-ಶಾಲಾ ರಸಪ್ರಶ್ನೆ ಸ್ಪರ್ಧೆಯೊಂದಿಗೆ ದಿನವು ಮುಕ್ತಾಯವಾಯಿತು, ನಂತರ ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಇರಾನ್ ನಿಂದ ಪ್ರತಿರೋಧದ ದಾಳಿ: ಇಸ್ರೇಲ್ನಲ್ಲಿ ಕನಿಷ್ಠ 9 ಮಂದಿ ಮೃತ್ಯು
ಟೆಲ್ ಅವೀವ್: ಮಧ್ಯ ಇಸ್ರೇಲ್ನ ಬೈತ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು aljazeera.com ವರದಿ ಮಾಡಿದೆ. ಮ್ಯಾಗೆನ್ ಡೇವಿಡ್ ಆಡಮ್ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ಜೆರುಸಲೇಂನ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿರುವ ಮಧ್ಯ ಇಸ್ರೇಲ್ನ ಬೈತ್ ಶೆಮೇಶ್ ನಗರದಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆಯು ಟೆಲಿಗ್ರಾಮ್ನಲ್ಲಿ ನೀಡಿದ ಹೇಳಿಕೆಯಲ್ಲಿ, ರಕ್ಷಣಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು ಗಾಯಾಳುಗಳ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ ಎಂದು ತಿಳಿಸಿದೆ.
ವಿಜಯನಗರ | ಕೊಟ್ಟೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ವಿಜಯನಗರ : ಕೊಟ್ಟೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಶನಿವಾರ ಆಚರಿಸಲಾಯಿತು. ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸಮಾರಂಭವನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್ ರೆಡ್ಡಿ ಉದ್ಘಾಟಿಸಿದರು. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಪ್ರಾಂಶುಪಾಲ ಎಂ.ರವಿಕುಮಾರ್ ಮಾತನಾಡಿ, ಈ ವರ್ಷದ ವಿಷಯವಾದ “ವಿಕಸಿತ ಭಾರತಕ್ಕಾಗಿ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ” ಎಂಬ ಆಶಯದಡಿ ಎಲ್ಲರೂ ವಿಜ್ಞಾನ ಜ್ಞಾನವನ್ನು ಪಡೆದು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿ.ಬಸವರಾಜ್, ಸ್ವಾಮಿ ಆರಾಧ್ಯ ಮಠ, ಚೇತನ ಚವಾಣ್, ಕೆ.ಎಂ.ಪೂಜಾ, ಪಿ.ಎಚ್.ವಿಜಯಲಕ್ಷ್ಮಿ ಮಾತನಾಡಿದರು. ಕೆ.ನಾಗರಾಜ್, ನವ್ಯ, ಕೆ.ಎಚ್.ದ್ರಾಕ್ಷಾಯಿಣಿ, ಅನುಷಾ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಾವಣಗೆರೆ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ 50 ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರವಾಸಿಗರ ತಂಡವು 23 ರಂದು ಬೆಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸಕ್ಕೆ ತೆರಳಿದ್ದರು. ಒಟ್ಟು 50 ಮಂದಿ ಪ್ರವಾಸಿಗರಲ್ಲಿ 15 ಮಂದಿ ಜಗಳೂರು ತಾಲ್ಲೂಕಿನವರಾಗಿದ್ದು, ಉಳಿದ 35 ಮಂದಿ ನೆರೆಯ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯರಾಗಿದ್ದಾರೆ. ಇವರ ವಾಪಸ್ ವಿಮಾನವು 28-02-2026 ರಂದು ರಾತ್ರಿ 9:30ಕ್ಕೆ ನಿಗದಿಯಾಗಿದ್ದರೂ, ಅಂತಿಮ ಕ್ಷಣದಲ್ಲಿ ವಿಮಾನ ರದ್ದುಗೊಂಡಿರುವುದರಿಂದ ಪ್ರವಾಸಿಗರು ದುಬೈನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಕಾರಣದಿಂದ ವಿಮಾನ ಸೇವೆಗಳು ವ್ಯತ್ಯಯಗೊಂಡಿರುವುದು ತಿಳಿದುಬಂದಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಶೀಘ್ರ ವಾಪಸ್ಗಾಗಿ ಭಾರತ ಸರಕಾರ ತುರ್ತು ಹಸ್ತಕ್ಷೇಪ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಯೋಜನೆ ನಡೆಸಿ, ಸಿಲುಕಿರುವ ನಾಗರಿಕರನ್ನು ಬೇಗನೇ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಪ್ರವಾಸಿಗರ ವಿವರಗಳನ್ನು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಯಭಾರ ಕಚೇರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಲಬುರಗಿ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ನಾರಿ ಶಕ್ತಿ ಬೈಕ್ ರ್ಯಾಲಿಗೆ ಚಾಲನೆ
ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜೆಎಸ್ಜಿ ಸಂಗಿನಿ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ ಉತ್ತರ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ ದಕ್ಷಿಣ, ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲ್ಬರ್ಗಾ ಸನ್ಸಿಟಿ ಹಾಗೂ ಆರ್ಯ ವೈಶ್ಯ ವಾಸವಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ನಾರಿ ಶಕ್ತಿ ಬೈಕ್ ರ್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪಾ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಪಾಟೀಲ ರೇವೂರ, ನವಿತಾ ಶಹಾ, ಜ್ಯೋತಿ ತೇಗನೂರ, ಜೆಎಸ್ಜಿ ಸಂಗಿನಿ ಅಧ್ಯಕ್ಷೆ ಅನುಜಾ ಶಹಾ, ಕಾರ್ಯದರ್ಶಿ ಮೋನಿಕಾ ಚಕೋರ ಮೇಹತಾ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ ಉತ್ತರ ಅಧ್ಯಕ್ಷೆ ನಮೃತಾ ಎಸ್. ಫಟಾಟೆ, ಕಾರ್ಯದರ್ಶಿ ಸವಿತಾ ಹಳಹಳ್ಳಿ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ ಅಧ್ಯಕ್ಷೆ ಕಲ್ಯಾಣೇಶ್ವರಿ ಚಕ್ಕಿ, ಕಾರ್ಯದರ್ಶಿ ಶಿವಲೀಲಾ ಮಾಮನಿ, ಇನ್ನರ್ವ್ಹಿಲ್ ಕ್ಲಬ್ ಗುಲ್ಬರ್ಗಾ ದಕ್ಷಿಣ ಅಧ್ಯಕ್ಷೆ ಪೂರ್ಣಿಮಾ ಕುಲಕರ್ಣಿ, ಕಾರ್ಯದರ್ಶಿ ಅಶ್ವಿನಿ ಹತ್ತಿ, ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲ್ಬರ್ಗಾ ಸನ್ಸಿಟಿ ಅಧ್ಯಕ್ಷೆ ಸ್ವಾತಿ ಪವಾರ್, ಕಾರ್ಯದರ್ಶಿ ಶಿಲ್ಪಾ ಜೈನ್, ಆರ್ಯ ವೈಶ್ಯ ವಾಸವಿ ಕ್ಲಬ್ ಅಧ್ಯಕ್ಷೆ ಅಧ್ಯಕ್ಷೆ ನೀತಾ ಮಾದಮಶೆಟ್ಟಿ, ಕಾರ್ಯದರ್ಶಿ ಮಂಜುಷಾ ಮೈಲಾಪುರ ಸೇರಿದಂತೆ ಇತರರು ಇದ್ದರು.
ವಾಡಿ |ನೈತಿಕ ಮೌಲ್ಯಗಳಿಲ್ಲದೆ ಶಿಕ್ಷಣ ಅಪೂರ್ಣ: ಸುಭಾಷ ರಾಠೋಡ
ವಾಡಿ: ಮಕ್ಕಳಿಗೆ ಕೇವಲ ಅಕ್ಷರಜ್ಞಾನ ನೀಡುವುದು ಶಿಕ್ಷಣವಲ್ಲ, ಜೀವನದ ನೈತಿಕ ಮೌಲ್ಯಗಳನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ನಿವೃತ್ತ ನ್ಯಾಯಾಧೀಶ ಸುಭಾಷ ರಾಠೋಡ ಹೇಳಿದರು. ಪಟ್ಟಣದ ಬಂಜಾರಾ ಮಹಿಳಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಷರ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಕೊರತೆಯಿಲ್ಲದಿದ್ದರೂ, ಸಂಸ್ಕಾರ ಬೋಧನೆಯಲ್ಲಿ ಹಲವಾರು ಸಂಸ್ಥೆಗಳು ವಿಫಲವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಉನ್ನತ ಶಿಕ್ಷಣ ಪಡೆದು ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸುವವರೇ ತಮ್ಮ ಪೋಷಕರೊಂದಿಗೆ ಸರಿಯಾಗಿ ನಡೆದುಕೊಳ್ಳದಿರುವುದು ನೈತಿಕ ಮೌಲ್ಯಗಳ ಕುಸಿತದ ಲಕ್ಷಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಗುಳನಾಗಾಂವ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮದ ಪೂಜ್ಯ ಶ್ರೀ ಜೇಮಸಿಂಗ್ ಮಹಾರಾಜರು, ಬಂಜಾರಾ ಮಹಿಳಾ ಶಿಕ್ಷಣ ಸಂಸ್ಥೆ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಸರಸ್ವತಿ ಮಾತಾ ದೇವಾಪುರ, ನಿವೃತ್ತ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿವರಾಮ ಪವಾರ, ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರುಮಠ, ಈಶ್ವರ ರಾಠೋಡ, ಹರೀಶ್ಚಂದ್ರ ಚೌವ್ಹಾಣ, ಚಂದು ಪವಾರ, ವಿನೋದ ಚೌವ್ಹಾಣ, ಕುಮಾರ ಜಾಧವ, ಮಲ್ಲಿಕಾರ್ಜುನ ಬಳಗಾರ ಅಣಕೇರಿ, ರವಿ ಸಿಂಧಗಿ, ದಾನುಬಾಯಿ ಪಾಂಡು ರಾಠೋಡ, ಹಾಸಕಿಬಾಯಿ ಶಂಕರ ಚೌವ್ಹಾಣ, ಲಕ್ಷ್ಮೀ ಜಾಧವ, ರಾಜು ಕೋಲಿ ಸೇರಿದಂತೆ ಶಿಕ್ಷಕರು ಹಾಗೂ ನೂರಾರು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಗುಡಾಳ ಕಾರ್ಯಕ್ರಮ ನಿರೂಪಿಸಿದರು. ಮಲ್ಲಮ್ಮ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸುರಪುರ | ಕಕ್ಕೇರಾ ತಾಲೂಕು ಕೇಂದ್ರ ಘೋಷಣೆಗೆ ಆಗ್ರಹಿಸಿ ಪಟ್ಟಣ ಬಂದ್
ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಕರೆ ನೀಡಿದ್ದ ಕಕ್ಕೇರಾ ಪಟ್ಟಣ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿಯೇ ಕಕ್ಕೇರಾ ದೊಡ್ಡ ಹೋಬಳಿಯಾಗಿದ್ದು ತಾಲೂಕ ಕೇಂದ್ರವಾಗಲು ಅಗತ್ಯವಾದ ಎಲ್ಲಾ ಸೌಲಭ್ಯಗಳು ಹಾಗೂ ಅರ್ಹತೆಗಳನ್ನು ಹೊಂದಿದೆ ಎಂದು ತಿಳಿಸಿದರು. ಕಕ್ಕೇರಾ ಪಟ್ಟಣಕ್ಕಿಂತಲೂ ಚಿಕ್ಕದಾದ ಅನೇಕ ಊರುಗಳಿಗೆ ಸರ್ಕಾರ ತಾಲೂಕ ಕೇಂದ್ರ ಸ್ಥಾನಮಾನ ನೀಡಿರುವುದನ್ನು ಉದಾಹರಿಸಿ, ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಆಯವ್ಯಯ ಮಂಡನೆ ವೇಳೆ ಕಕ್ಕೇರಾವನ್ನು ತಾಲೂಕ ಕೇಂದ್ರವಾಗಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ ಅವರ ಮೂಲಕ ಸಲ್ಲಿಸಲಾಯಿತು. ಬಂದ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಕೊಡೇಕಲ್ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ರಸ್ತೆ ತಡೆದು ಸಮಾವೇಶ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡಿದರು. ಪ್ರತಿಭಟನೆಯಲ್ಲಿ ದೇವೇಂದ್ರಪ್ಪ ಬಳಿಚಕ್ರ, ಅಯ್ಯಣ್ಣ ಪೂಜಾರಿ, ನಿಂಗನಗೌಡ ಬೂದಗುಂಪಿ, ತಿಪ್ಪಣ್ಣ ಜಂಪಾ, ರಮೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಚಂದ್ರಕಾಂತ್ ಸಕ್ರಿ, ಮೌನೇಶ ಗುರಿಕಾರ, ಸಂಗಮೇಶ ಕುರಿ, ಮಲ್ಲಣ್ಣಗೌಡ ಹೆಗ್ಗಣದೊಡ್ಡಿ, ಮರೆಪ್ಪ ಕಾಂಗ್ರೆಸ್, ಮಹಾಂತೇಶ ಇಂಗಳಗಿ, ಬಸವರಾಜ ಹೊಸಮನಿ, ಚಂದ್ರು ನಡಿಗೇರಿ, ಭೀಮಣ್ಣ ಮ್ಯಾಗೇರಿ, ಸೋಮರಾಯಗೌಡ, ಪರಮಣ್ಣ ದೊಡ್ಡಮನಿ, ಅಯೂಬ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ರಾಜ್ಯಕ್ಕೆ 3.15 ಲಕ್ಷ ಕೋಟಿ ರೂ. ಸಾಲದ ಹೊರೆ : ಆರ್ ಅಶೋಕ್ ಟೀಕೆ
ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ರಾಜ್ಯವನ್ನು ಪಾಪರ್ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಪ್ರತಿ ಸಾರ್ವಜನಿಕರ ತಲೆ ಮೇಲೆ ತಲಾ 1 ಲಕ್ಷ ರೂ. ಸಾಲದ ಹೊರೆ ಹೊರೆಸುತ್ತಾರೆ ಎಂದು ಆರೋಪಿಸಿದರು.
Ranji Trophy 2026: ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಣಜಿ 2026 ಫೈನಲ್ ಪಂದ್ಯಲ್ಲಿ ಕರ್ನಾಟಕ ತಂಡವನ್ನು ಸೋಲಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ಜಮ್ಮು-ಕಾಶ್ಮೀರ ತಂಡಕ್ಕೆ ಪ್ರಶಂಸೆ ಜೊತೆಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಜೆ &ಕೆ ಸಿಎಂ ಒಮರ್ ಅಬ್ದುಲ್ಲಾ 2,00,00,000 ರೂಪಾಯಿ ನಿಡಿದ್ದು, ಬಿಸಿಸಿಐ ಕೂಡ ಹಣದ ಹೊಳೆಯನ್ನೇ ಹರಿಸಿದೆ. ಹಾಗಾದ್ರೆ, ರನ್ನರ್
ಹಾವೇರಿ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ಸಾವು
ಹಾವೇರಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ರವಿವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇವಲ 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸಿದೆ. ಹಾವೇರಿಯ ಕಾರ್ತಿಕ್ ಹೂಗಾರ್ (33), ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿಗಳು.

22 C