Breaking News: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ಗೆ ಕೊಕ್!
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಆದೇಶದ ಪ್ರತಿ ಕೂಡಾ ಪ್ರಕಟವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನಸೀರ್ ಅಹ್ಮದ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಅವರು, ರಾಜೀನಾಮೆ ನೀಡಿರಲಿಲ್ಲ.
ಬೆಂಗಳೂರಿನ ವೇಗದ ಬದುಕಿನಲ್ಲಿ ನೆಲಸಲು ಸೂರು ಸಿಗುವುದೇ ಕಷ್ಟ, ಅಂತದ್ದರಲ್ಲಿ ಬಾಡಿಗೆ ಮನೆಗಳಿಗೆ ಇರುವ ಪೈಪೋಟಿ ನಡುವೆ ನಿಮಗೆ ಇಷ್ಟವಾಗುವ ಬಾಡಿಗೆ ಮನೆ ಸಿಗುವುದು ಇನ್ನಷ್ಟು ಕಠಿಣವಾದ ಕೆಲಸ. ಒಂದು ವೇಳೆ ಸಿಕ್ಕರೂ ಮಾಲೀಕರ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡರೆ ಮಾತ್ರವೇ ಆ ಮನೆಯಲ್ಲಿ ನೀವು ನೆಲಸಲು ಸಾಧ್ಯ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ಸುಮಾರು 1 ತಿಂಗಳ ಪ್ರಯಾಸದ ಬಳಿಕ ಒಂದು ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಮುಂದಾಗಿದ್ದು ಮಾಲೀಕರ ಎಲ್ಲಾ ಷರತ್ತುಗಳಿ ಒಪ್ಪಿಕೊಂಡಿದ್ದು, ಠೇವಣಿ ನೀಡಲು ಕೇವಲ 1 ಗಂಟೆ ತಡವಾಗಿದ್ದಕ್ಕೆ ಆ ಮನೆ ಬೇರೆಯವರ ಪಾಲಾದ ಘಟನೆ ನಡೆದಿದೆ. ಈ ವಿಚಾರವನ್ನು ಮಹಿಳೆ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ..
ಅಂಬೇಡ್ಕರ್ ವಿಚಾರಧಾರೆ: ಜಾತಿನಾಶದ ಹೋರಾಟ ಮತ್ತು ನಮ್ಮ ಜವಾಬ್ದಾರಿ
ಇಂದು ಅಂಬೇಡ್ಕರ್ ಜನ್ಮದಿನ
‘‘ಸಾಧ್ಯವಿದ್ದ ಎಲ್ಲ ವಿಧಾನಗಳಿಂದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಈ ವಾದವನ್ನು ನಾನು ಮುಂದಿಡುತ್ತಿರುವುದಕ್ಕೆ ಕಾರಣವೆಂದರೆ ಸಮಾಜದ ಕೆಳವರ್ಗದವರು ಹೈಸ್ಕೂಲು, ಮಿಡಲ್ ಸ್ಕೂಲುಗಳಲ್ಲಿ ಮತ್ತು ಮಹಾವಿದ್ಯಾನಿಲಯಗಳಲ್ಲಿ ಈಗೀಗ ಪ್ರವೇಶ ಪಡೆಯುತ್ತಿದ್ದಾರೆ. ಕಾರಣ ಇಲಾಖೆಯ ನೀತಿಯು ಉಚ್ಚ ಶಿಕ್ಷಣವು ಕೆಳವರ್ಗದವರಿಗೆ ಸಾಧ್ಯವಿದ್ದಷ್ಟು ಕಡಿಮೆ ಖರ್ಚಿನಲ್ಲಿ ಲಭ್ಯವಾಗುವಂತೆ ಮಾಡುವುದಾಗಬೇಕು’’ ಎಂದು ಎಚ್ಚರಿಸುತ್ತಾರೆ ಡಾ. ಅಂಬೇಡ್ಕರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂದೇಶಗಳಲ್ಲಿ ಸಾಮಾನ್ಯವಾಗಿ ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಸೂತ್ರವನ್ನು ಕಾಣುತ್ತೇವೆ. ದಮನಿತರೆಲ್ಲರೂ ಶಿಕ್ಷಿತರಾಗಿ, ಜಾಗೃತ ರಾದ ನಂತರ ಒಟ್ಟಾಗಿ ಸಂಘಟಿತರಾಗಿ, ನಿಮ್ಮ ಹಕ್ಕುಗಳ ಪಡೆಯಲು ಹೋರಾಟ ಮಾಡಿ ಎನ್ನುವ ಕ್ರಿಯೆಯನ್ನು ಅಂಬೇಡ್ಕರ್ ಹೇಳುತ್ತಾರೆ. ಈ ಒಂದೊಂದು ಸಂಗತಿಯ ಬಗ್ಗೆಯೂ ಅಂಬೇಡ್ಕರ್ ಆಳವಾಗಿ ಚಿಂತಿಸಿದ್ದರು. ಅಂತೆಯೇ ತರ್ಕ- ಪ್ರಯೋಗ-ಆನ್ವಯಿಕತೆಯ ವೈಜ್ಞಾನಿಕ ನೆಲೆಯಿಂದ ಕಂಡುಕೊಂಡ ಸತ್ಯದ ನೆಲೆಯಲ್ಲಿ ಅಂಬೇಡ್ಕರ್ ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ ಎಂಬ ಸೂತ್ರವನ್ನು ನೀಡಿದ್ದಾರೆ. ಇದರಲ್ಲಿ ಅಂಬೇಡ್ಕರ್ ಅವರ ಮೊದಲ ಆದ್ಯತೆ ಶಿಕ್ಷಣ. ಅಂಬೇಡ್ಕರ್ ಶಿಕ್ಷಣವನ್ನು ಯಾಕೆ ಅಷ್ಟು ಗಂಭೀರವಾಗಿ ಪರಿಗಣಿಸಿದರು, ಶಿಕ್ಷಣದ ಚಿಂತನೆಯನ್ನು ಪ್ರಭಾವಿಸಿದವರಾರು, ಶಿಕ್ಷಣದ ಪ್ರಾಯೋಗಿಕತೆಯಿಂದ ಅಂಬೇಡ್ಕರ್ ಕಲಿತದ್ದೇನು ಎನ್ನುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಿದೆ. ಈ ಬರಹದಲ್ಲಿ ಅಂಬೇಡ್ಕರ್ ಅವರ ಶಿಕ್ಷಣದ ಬಗೆಗಿನ ಚಿಂತನೆಯ ಒಂದೆರಡು ಎಳೆಗಳನ್ನು ಮಾತ್ರ ಗುರುತಿಸಲು ಪ್ರಯತ್ನಿಸುವೆ. ಅಂಬೇಡ್ಕರ್ ಅವರು 1904ರಲ್ಲಿ ಮುಂಬೈನ ಎಲ್ಫಿನ್ಸ್ಟನ್ ಹೈಸ್ಕೂಲಲ್ಲಿ ಓದುವಾಗ ಒಬ್ಬ ಬ್ರಾಹ್ಮಣ ಶಿಕ್ಷಕ ‘‘ನೀನೊಬ್ಬ ಮಹಾರ್, ಶಿಕ್ಷಣ ಪಡೆದುಕೊಂಡು ಏನು ಮಾಡುತ್ತೀ?’’ ಎಂದು ಪ್ರಶ್ನಿಸುತ್ತಾನೆ. ತಕ್ಷಣಕ್ಕೆ ಅಂಬೇಡ್ಕರ್ ‘‘ಗುರೂಜಿ, ನಾನು ಶಿಕ್ಷಣ ಪಡೆದು ಏನು ಮಾಡುತ್ತೇನೆ ಎನ್ನುವುದು ನಿಮಗೆ ಸಂಬಂಧವಿಲ್ಲದ ವಿಷಯ. ಮುಂದೆ ಈ ತರಹದ ಪ್ರಶ್ನೆಗಳನ್ನು ಕೇಳಬೇಡಿ. ಪರಿಣಾಮ ನೆಟ್ಟಗಿರಲ್ಲ’’ ಎಂದು ಗಡುಸಾಗಿಯೇ ಉತ್ತರಿಸುತ್ತಾರೆ (ಅಶೋಕ್ ಗೋಪಾಲ್:97/2023). ಈ ಉತ್ತರದಲ್ಲಿ ಪ್ರೌಢಶಾಲೆಯಲ್ಲಿಯೇ ಆಗಲೇ ಅಂಬೇಡ್ಕರ್ ಅವರು ಶಿಕ್ಷಣದ ಶಕ್ತಿ ಏನು ಎನ್ನುವುದನ್ನು ಗ್ರಹಿಸಿದ್ದರು ಎನ್ನುವುದು ಮನವರಿಕೆಯಾಗುತ್ತದೆ. ಭಾರತದಲ್ಲಿನ ಶಿಕ್ಷಣದ ಬಗ್ಗೆ ಅಂಬೇಡ್ಕರ್ ಅವರಿಗೆ ಖಚಿತವಾದ ತಿಳಿವಿತ್ತು. ಹಾಗಾಗಿಯೇ, ‘ಭಾರತದಲ್ಲಿ ಬುದ್ಧಿಜೀವಿಗಳಾದ ಬ್ರಾಹ್ಮಣರು ಶಿಕ್ಷಣದಲ್ಲಿ ತಮ್ಮ ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದೂ ಅಲ್ಲದೆ, ಕೆಳವರ್ಗದವರು ಶಿಕ್ಷಣ ಪಡೆಯುವುದನ್ನು ಅಪರಾಧವೆಂದು ಪರಿಗಣಿಸಿ ಅದಕ್ಕಾಗಿ ಅವರ ನಾಲಿಗೆ ಕತ್ತರಿಸುವ, ಅವರ ಕಿವಿಗಳಲ್ಲಿ ಕಾಯ್ದ ಸೀಸವನ್ನು ಸುರಿಯುವ ಶಿಕ್ಷೆಯನ್ನು ವಿಧಿಸುವ ಕಟ್ಟಳೆಯನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಇದರ ಪರಿಣಾಮವಾಗಿ ಭಾರತದಲ್ಲಿ ಶತಶತಮಾನಗಳಿಂದ ಬ್ರಾಹ್ಮಣರು ಗುಲಾಮವರ್ಗಗಳವರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಿದ್ದಾರೆ. ಇಂದೂ ಕೂಡ ಬ್ರಾಹ್ಮಣರೂ ದಾಸ್ಯವರ್ಗಗಳ ಶಿಕ್ಷಣಕ್ಕೆ ವಿರೋಧ ಒಡ್ಡುತ್ತಿದ್ದಾರೆ’ (ಸಂ:7/ಪು:438) ಎಂಬುದನ್ನು 1930ರ ಸಂದರ್ಭದಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ಬಾಬಾ ಸಾಹೇಬರ ಶಿಕ್ಷಣದ ಬಗೆಗಿನ ಅಗಾಧವಾದ ಸೆಳೆತಕ್ಕೆ ತಾತ್ವಿಕ ತಳಹದಿಯನ್ನು ಹಾಕಿದವರು ಯಾರು ಎನ್ನುವ ಪ್ರಶ್ನೆ ಕಾಡುತ್ತದೆ. ಡಾ.ಅಂಬೇಡ್ಕರ್ ಅವರು 1913ರಲ್ಲಿ ಅಮೆರಿಕದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಹೋದ ನಂತರ ಶಿಕ್ಷಣದ ಕುರಿತಾದ ತಾತ್ವಿಕ ನೆಲೆಗಳನ್ನು ಶೋಧಿಸತೊಡಗಿದರು. ಶಿಕ್ಷಣದ ಬಗ್ಗೆ ಆರಂಭದ ಚಿಂತನೆಗಳು ಜಾನ್ ಡಿವೆ (John Dewey) ಅವರ ಪ್ರಭಾವದಿಂದ ರೂಪುಗೊಂಡಿತು. ಜಾನ್ ಡಿವೆ ಅವರ ‘ಡೆಮಾಕ್ರಸಿ ಆ್ಯಂಡ್ ಎಜುಕೇಷನ್’ ಕೃತಿಯನ್ನು ಮತ್ತೆ ಮತ್ತೆ ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ವಿಶೇಷವಾಗಿ ಈ ಕೃತಿಯ ‘ಶಿಕ್ಷಣದಲ್ಲಿ ಪ್ರಜಾಸತ್ತಾತ್ಮಕ ಪರಿಕಲ್ಪನೆ’ ಎನ್ನುವ ಅಧ್ಯಾಯದಲ್ಲಿ ಪ್ರಜಾಪ್ರಭುತ್ವದ ಆದರ್ಶದ ಬಗ್ಗೆ ಮಾತನಾಡುತ್ತಾರೆ. ಶಾಲಾ ಶಿಕ್ಷಣದ ಬಗ್ಗೆ ಡಿವೆಯವರು ಮಾತನಾಡುತ್ತಾ ‘ಶಾಲಾ ಶಿಕ್ಷಣವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮತ್ತು ಮಾನವ ಅಭಿವೃದ್ಧಿಯನ್ನು ಹೆಚ್ಚಿಸಲು ಬಹಳ ಮುಖ್ಯ ಸಾಧನವಾಗಿದೆ’ ಎನ್ನುತ್ತಾರೆ. (ಅಶೋಕ್ ಗೋಪಾಲ್:132/2023) ಈ ಚಿಂತನೆಯನ್ನು ಆಧರಿಸಿ ಅಂಬೇಡ್ಕರ್ ‘ಭಾರತದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ’ ಎಂಬ ಲೇಖನವನ್ನು ಬರೆಯುತ್ತಾರೆ. ಡಿವೆ ಅವರ ಎಲ್ಲಾ ಆಲೋಚನೆಗಳನ್ನು ಅಂಬೇಡ್ಕರ್ ಕುರುಡಾಗಿ ಅನುಕರಿಸಲಿಲ್ಲ, ಆದರೆ ಯಾವುದೇ ದೇಶದಲ್ಲಿ ಪ್ರಜಾಸತ್ತಾತ್ಮಕ ಸಮಾಜ ಉಳಿಯಬೇಕಾದರೆ ಆಯಾ ದೇಶದ ಜನರು ಹೆಚ್ಚೆಚ್ಚು ಶಿಕ್ಷಣ ಪಡೆಯಬೇಕು ಎನ್ನುವ ನಿಲುವು ಮಾತ್ರ ಅಂಬೇಡ್ಕರ್ ಅವರನ್ನು ಗಾಢವಾಗಿ ಪ್ರಭಾವಿಸುತ್ತದೆ. ಡಿವೆಯವರ ಶಾಲಾ ಶಿಕ್ಷಣವನ್ನು ರೂಪಿಸುವ ಬಗೆಗಿನ ಆಲೋಚನೆಯ ಪರಿಣಾಮ 1945ರಲ್ಲಿ ಅಂಬೇಡ್ಕರ್ ‘ಪೀಪಲ್ ಎಜುಕೇಷನ್ ಸೊಸೈಟಿ’ ಸ್ಥಾಪಿಸುವ ತನಕ ಮುಂದುವರಿಯುತ್ತದೆ. ಮುಂದೆ ಪಿ.ಎ.ಸೊ. (ಪೆಸ್) ಮೂಲಕ 1946ರಲ್ಲಿ ಮುಂಬೈನಲ್ಲಿ ಸಿದ್ಧಾರ್ಥ ಕಾಲೇಜು, ಔರಾಂಗಾಬಾದ್ನಲ್ಲಿ ಮಿಲಿಂದ್ ಕಾಲೇಜ್ ಸ್ಥಾಪಿಸುತ್ತಾರೆ. ಅಂದರೆ ಶಿಕ್ಷಣದ ಥಿಯರಿಯಿಂದ ಪ್ರಾಯೋಗಿಕ ನೆಲೆಗೆ ಇಳಿಯುತ್ತಾರೆ. ಮುಂಬೈನ ಶಾಸಕಾಂಗದ ನಾಮನಿರ್ದೇಶಿತ ಸದಸ್ಯರಾಗಿದ್ದಾಗ ಮುಂಬೈ ಶಾಸನ ಸಭೆಯಲ್ಲಿ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಲ್ಲಿ ಅಸ್ಪಶ್ಯ ಸಮುದಾಯದವರನ್ನು ಹೇಗೆ ಕಡೆಗಣಿಸಲಾಗಿದೆ ಎನ್ನುವುದರ ಬಗ್ಗೆ ಅಧ್ಯಯನ ಮಾಡಿ ಅಂಕಿ ಸಂಖ್ಯೆಗಳೊಂದಿಗೆ ವಿಶ್ಲೇಷಿಸುತ್ತಾರೆ. ಈ ಮೂಲಕ ಬ್ರಿಟಿಷ್ ಸರಕಾರವನ್ನು ದಮನಿತ ಸಮುದಾಯಗಳ ಶಿಕ್ಷಣದ ಕಡೆಗೆ ಗಮನ ಸೆಳೆಯಲು ಪ್ರಯತ್ನಿಸಿದರು. ಬಾಂಬೆ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ 1927ರಲ್ಲಿ ಶಿಕ್ಷಣಕ್ಕೆ ಹಣಕಾಸು ನಿಗದಿಮಾಡುವ ಬಗ್ಗೆ ದೀರ್ಘವಾಗಿ ಚರ್ಚಿಸುತ್ತಾರೆ. ‘‘ನನ್ನ ಗೌರವಾನ್ವಿತ ಸ್ನೇಹಿತರಾದ ಶಿಕ್ಷಣ ಮಂತ್ರಿಗಳ ಲಕ್ಷ್ಯವನ್ನು ಸೆಳೆಯಬೇಕೆಂದಿರುವ ಇನ್ನೊಂದು ವಿಷಯವಿದೆ. ಅದೆಂದರೆ ನಾವು ಈಗ ಪಾಥಮಿಕ ಶಿಕ್ಷಣದ ಬಗ್ಗೆ ಖರ್ಚು ಮಾಡುತ್ತಿರುವ ಹಣವು ಹೆಚ್ಚಿನ ಮಟ್ಟಿಗೆ ವ್ಯರ್ಥವಾಗಿ ಖರ್ಚಾಗುತ್ತಿದೆ ಎಂಬುದು. ಪ್ರಾಥಮಿಕ ಶಾಲೆಯ ಆವರಣವನ್ನು ಪ್ರವೇಶಿಸುವ ಪ್ರತಿಯೊಂದು ಮಗುವೂ ಶಿಕ್ಷಣ ಪಡೆದುಕೊಂಡೇ ಅದನ್ನು ಬಿಡತಕ್ಕದು ಎಂಬುದೇ ಪ್ರಾಥಮಿಕ ಶಿಕ್ಷಣದ ಗುರಿಯಾಗಿರಬೇಕು. ಆದರೆ ನಾವು ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಪ್ರಾಥಮಿಕ ಶಾಲೆಯನ್ನು ಪ್ರವೇಶಿಸುವ ಪ್ರತೀ ನೂರು ಮಕ್ಕಳಲ್ಲಿ ಕೇವಲ ಹದಿನೆಂಟು ಮಕ್ಕಳು ನಾಲ್ಕನೆಯ ವರ್ಗದವರೆಗೆ ಓದುತ್ತಾರೆ. ಉಳಿದವರೆಲ್ಲ ಅಂದರೆ ಪ್ರತೀ ನೂರರಲ್ಲಿ 82 ಮಕ್ಕಳು ಪುನಃ ಅಶಿಕ್ಷಿತರಾಗಿಯೇ ಉಳಿಯುತ್ತಾರೆ. ಈ ಪರಿಸ್ಥಿತಿಗೆ ಪರಿಹಾರವೇನು?’’ (ಸಂ-2,ಪು 50,2015) ಎಂದು ಪ್ರಶ್ನಿಸುತ್ತಾರೆ. ಮುಂದುವರಿದು, ‘‘ಸಾಧ್ಯವಿದ್ದ ಎಲ್ಲ ವಿಧಾನಗಳಿಂದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಈ ವಾದವನ್ನು ನಾನು ಮುಂದಿಡುತ್ತಿರುವುದಕ್ಕೆ ಕಾರಣವೆಂದರೆ ಸಮಾಜದ ಕೆಳವರ್ಗದವರು ಹೈಸ್ಕೂಲು, ಮಿಡಲ್ ಸ್ಕೂಲುಗಳಲ್ಲಿ ಮತ್ತು ಮಹಾವಿದ್ಯಾನಿಲಯಗಳಲ್ಲಿ ಈಗೀಗ ಪ್ರವೇಶ ಪಡೆಯುತ್ತಿದ್ದಾರೆ. ಕಾರಣ ಇಲಾಖೆಯ ನೀತಿಯು ಉಚ್ಚ ಶಿಕ್ಷಣವು ಕೆಳವರ್ಗದವರಿಗೆ ಸಾಧ್ಯವಿದ್ದಷ್ಟು ಕಡಿಮೆ ಖರ್ಚಿನಲ್ಲಿ ಲಭ್ಯವಾಗುವಂತೆ ಮಾಡುವುದಾಗಬೇಕು’’ ಎಂದು ಎಚ್ಚರಿಸುತ್ತಾರೆ. ದಮನಿತ ಸಮುದಾಯಗಳು ನೀತಿ ನಿರೂಪಣೆಗಳನ್ನು ಜಾರಿಗೊಳಿಸುವ ಅಧಿಕಾರಿಗಳಾಗಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಹಾಗಾಗಿಯೇ ಅವರು ನಿಮ್ನವರ್ಗಗಳಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕೆಂದು ಚರ್ಚಿಸುವಷ್ಟು ಮುಖ್ಯವಾಗಿಯೇ ದಮನಿತ ಸಮುದಾಯಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಶಿಕ್ಷಣ ದೊರೆಯಬೇಕೆಂದು ಆಲೋಚಿಸುತ್ತಿದ್ದರು. ಈ ಬಗ್ಗೆ ಮಾತನಾಡುತ್ತಾ, ‘‘ದಕ್ಷತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೇಮಕಾತಿಯ ಆಧಾರವನ್ನಾಗಿಟ್ಟುಕೊಳ್ಳುವುದರ ಮೂಲಕ, ಅಸ್ಪಶ್ಯರ ಬಗೆಗಿರುವ ತಮ್ಮ ವಿರೋಧ ನ್ಯಾಯಸಮ್ಮತವೆನಿಸುವಂತೆ ಮಾಡಲು ಹಿಂದೂಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿ ಕೂಡ ಅವರ ವಾದ ಅಸಂಬದ್ಧವೆನಿಸುತ್ತದೆ. ಸಾರ್ವಜನಿಕ ಸೇವಾಕ್ಷೇತ್ರಗಳಿಗೆ ದಕ್ಷ ವ್ಯಕ್ತಿಗಳನ್ನು ಆರಿಸಲು ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಸೂಕ್ತ ವ್ಯವಸ್ಥೆ ಹೌದೇ ಅಲ್ಲವೇ ಎನ್ನುವುದು ಮುಖ್ಯವಲ್ಲ. ಎಲ್ಲಾ ಜಾತಿ, ಪಂಗಡದವರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವಕಾಶವಿರುತ್ತದೆ ಎಂಬ ಏಕೈಕ ಕಾರಣದಿಂದಾಗಿ ಸಾರ್ವಜನಿಕ ಸೇವೆಗಳಲ್ಲಿ ಅವಕಾಶ ಲಭಿಸುತ್ತದೆಯೆ ಎಂಬುದೇ ಈಗಿನ ಪ್ರಶ್ನೆಯಾಗಿದೆ. ಅದು ಸರಕಾರದ ಶೈಕ್ಷಣಿಕ ಪದ್ಧತಿಯನ್ನು ಅವಲಂಬಿಸಿರುತ್ತದೆ. ಅದು ಸಾಕಷ್ಟು ಪ್ರಜಾಸತ್ತಾತ್ಮಕವಾಗಿದೆಯೆ? ಎಲ್ಲಾ ವರ್ಗದ ಜನರೂ ಸ್ಪರ್ಧಿಸಲು ಮುಂದಾಗುವಷ್ಟು ಶಿಕ್ಷಣ ವ್ಯಾಪಕವಾಗಿದೆಯೆ? ಮತ್ತು ಸಾಕಷ್ಟು ಬಳಕೆಯಾಗಿದೆಯೆ? ಇಲ್ಲವಾದಲ್ಲಿ ಮುಕ್ತ ಸ್ಪರ್ಧಾತ್ಮಕ ವ್ಯವಸ್ಥೆ ಇದ್ದಾಗಲೂ ಕೂಡ ಬಹಳಷ್ಟು ಜನರು ಸ್ಪರ್ಧೆಯಿಂದ ಹೊರಗುಳಿಯಬೇಕಾಗುತ್ತದೆ. ವ್ಯಾಪಕ ಶಿಕ್ಷಣವೆಂಬ ಮೂಲಭೂತ ಅವಶ್ಯಕತೆ ಭಾರತದಲ್ಲಿ ಇಲ್ಲವಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಹಿಂದೂಗಳು ಅದರಲ್ಲೂ ವಿಶೇಷವಾಗಿ ಸವರ್ಣೀಯ ಹಿಂದೂಗಳ ಏಕಸ್ವಾಮ್ಯವಾಗಿದೆ. ಅಸ್ಪಶ್ಯತೆಯ ಕಾರಣದಿಂದಾಗಿ ಅಸ್ಪಶ್ಯರು ಶಿಕ್ಷಣದಲ್ಲಿನ ಅವಕಾಶಗಳಿಂದ ವಂಚಿತರಾಗಿದ್ದಾರೆ. ಉನ್ನತ ಹುದ್ದೆಗಳಿಗೆ ಅವಶ್ಯಕವಾದದ್ದು ಉನ್ನತ ಶಿಕ್ಷಣ; ಅದಕ್ಕಿರುವ ಮಹತ್ವದಿಂದಾಗಿ ಸಾರ್ವಜನಿಕ ಸೇವಾಕ್ಷೇತ್ರದಲ್ಲಿರುವ ಉನ್ನತ ಹುದ್ದೆಗಳು ಬಹಳ ಮುಖ್ಯ. ಇವುಗಳು ಅನಕ್ಷರತೆ, ದಾರಿದ್ರ್ಯದ ಕಾರಣದಿಂದಾಗಿ ಅಸ್ಪಶ್ಯರಿಗೆ ನಿಲುಕುವುದೇ ಇಲ್ಲ. ಸರಕಾರ ಅವರಿಗೆ ಉನ್ನತ ಶಿಕ್ಷಣ ನೀಡುವ ಆರ್ಥಿಕ ಜವಾಬ್ದಾರಿಯನ್ನು ಹೊಂದಿಲ್ಲ- ಅದನ್ನು ಅಸ್ಪಶ್ಯರು ತಮ್ಮ ಗೊತ್ತುವಳಿಯ ಮೂಲಕ ಒತ್ತಾಯಿಸುತ್ತಿದ್ದಾರೆ. ಹಿಂದೂಗಳ ಉದಾರತೆ ನಾಚಿಕೆಯಾಗುವಷ್ಟು ಜಾತೀಯ ಸ್ವರೂಪದ್ದಾಗಿದೆ. ಹೀಗಾಗಿ, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವಲಂಬಿಸಿ ಎಂದು ಅಸ್ಪಶ್ಯರಿಗೆ ಹೇಳುವುದು ಅವರಿಗೆ ಅನ್ಯಾಯವೆಸಗಿದಂತೆ.’’ (ಸಂ:7/ಪು:397-98) ಎಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಮನಿತ ಸಮುದಾಯಗಳು ಹಿಂದುಳಿದಿರುವುದನ್ನು ಗಮನ ಸೆಳೆಯುತ್ತಾರೆ. 1930ರ ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ವಿದ್ಯಾರ್ಥಿಗಳನ್ನು ಕುರಿತು ಹಲವು ಭಾಷಣಗಳನ್ನು ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ‘‘ಕಲಿಯಲು ನನ್ನ ಕಾಲದಲ್ಲಿದ್ದ ಸೀಮಿತ ಅವಕಾಶಗಳಿಗಿಂತ ದಮನಿತ ಸಮುದಾಯಗಳಿಗೆ ಈಗ ಕಲಿಯಲು ಸಾಕಷ್ಟು ಅವಕಾಶದ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಕಠಿಣ ಪರಿಶ್ರಮದಿಂದ ವಿದ್ಯೆ ಕಲಿಯಿರಿ’’ ಎಂದು ಹೇಳುತ್ತಾರೆ. ಹೀಗೆ ಹೇಳುವಾಗ ತಮ್ಮದೇ ಉದಾಹರಣೆಗಳನ್ನು ಕೊಡುತ್ತಾರೆ. 1932 ಅಕ್ಟೋಬರ್ 28ರಂದು ಮುಂಬೈನಲ್ಲಿ ಮಾತನಾಡುತ್ತಾ ‘‘ಪಾರಂಪರಿಕ ವೃತ್ತಿಗಳನ್ನು ಬಿಟ್ಟು ಶಿಕ್ಷಣ ಕಲಿಯಿರಿ’’ ಎಂದು ಕರೆಕೊಡುತ್ತಾರೆ. ಮೇಲ್ಜಾತಿಗಳು ಹೇಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೋ ಹಾಗೆ ದಲಿತ ಸಮುದಾಯದವರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕು ಎನ್ನುತ್ತಾರೆ. ಅನೇಕರು ತಮ್ಮ ಶಿಕ್ಷಣದಿಂದ ಇತರರನ್ನು ಹೇಗೆ ಶೋಷಿಸಬಹುದೆಂದು ಕಲಿಯುತ್ತಾರೆ. ಪಂಡಿತ, ಶೇಟ್ಜಿ, ಭಟ್ಟಿ, ವಕೀಲರು ಶಿಕ್ಷಣವನ್ನು ಶೋಷಣೆಯ ಅಸ್ತ್ರವಾಗಿ ಬಳಸುತ್ತಾರೆ. ಹಾಗಾಗಿಯೇ ಕೆಳಜಾತಿಗಳು, ದಮನಿತ ಸಮುದಾಯಗಳು ಶಿಕ್ಷಣ ಪಡೆಯಬೇಕಾಗಿರುವುದು ಶೋಷಣೆಯಿಂದ ಮುಕ್ತವಾಗುವ ಮತ್ತು ಶೋಷಣೆಯ ವಿರುದ್ಧ ಬಂಡೇಳುವ ಅಸ್ತ್ರವಾಗಿ ಎನ್ನುತ್ತಾರೆ. ಎಲ್ಲರೂ ವಿದ್ಯಾವಂತರಿಗೆ ಭಯ ಪಡುವಂತಾಗಬೇಕು. ಹಾಗಾಗಿ ಶಿಕ್ಷಣದ ಜತೆ ಒಳ್ಳೆಯ ನಡೆನುಡಿಗಳನ್ನು ಕಲಿಯಬೇಕಾಗುತ್ತದೆ. ಶಿಕ್ಷಣವು ನೈತಿಕತೆಯನ್ನು ಕಲಿಸಬೇಕು ಎನ್ನುತ್ತಾರೆ. ಹೀಗೆ ಬಾಬಾ ಸಾಹೇಬರು ಶಿಕ್ಷಣದ ಬಗೆಗಿನ ಅರಿವಿನ ನೆಲೆಗಳನ್ನು ಪಾಶ್ಚಿಮಾತ್ಯರಿಂದ ಕಲಿತರೂ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಶಿಕ್ಷಣದ ಬಗೆಗೆ ಆಳವಾದ ತಿಳಿವನ್ನು ಮಂಡಿಸಿದ್ದಾರೆ. ಭಾರತದಂತಹ ಜಾತಿವಾದಿ ದೇಶದಲ್ಲಿ ದಮನಿತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಲು ಪಡುತ್ತಿರುವ ಬಿಕ್ಕಟ್ಟುಗಳನ್ನು ಬಾಬಾ ಸಾಹೇಬರು ತಾವೇ ಸ್ಥಾಪಿಸಿದ ಶಾಲೆ-ಕಾಲೇಜು ವಸತಿ ಶಾಲೆಗಳ ಅನುಭವದ ಮೂಲಕ ಕಂಡುಕೊಂಡಿದ್ದರು. ಪೀಪಲ್ ಎಜುಕೇಷನ್ ಸೊಸೈಟಿಯ ಮೂಲಕ ಸ್ಥಾಪಿಸಿದ ಶಾಲೆ-ಕಾಲೇಜುಗಳಲ್ಲಿ ಕಲಿಯುವ ಅಸ್ಪಶ್ಯ ವಿದ್ಯಾರ್ಥಿಗಳನ್ನು ಗಮನಿಸಿ ಪ್ರಾಯೋಗಿಕ ನೆಲೆಯಲ್ಲಿಯೂ ಅಂಬೇಡ್ಕರ್ ಶಿಕ್ಷಣದ ಒಳಸುಳಿಗಳನ್ನು ಅರಿಯುತ್ತಾರೆ. ಯಾಕೆ ದಮನಿತ ಸಮುದಾಯಗಳ ಮಕ್ಕಳಿಗೆ ವಸತಿಶಾಲೆಗಳ ಅಗತ್ಯವಿದೆ ಎಂದು ಹೇಳುತ್ತಾ, ‘‘ದಮನಿತ ಸಮುದಾಯದ ಮಕ್ಕಳು ಮನೆಯ ಕಡುಕಷ್ಟಗಳನ್ನು ದಿನ ದಿನವೂ ನೋಡುತ್ತಾ, ಅನುಭವಿಸುತ್ತಾ ಅಂತಹ ಮನೆಗಳಿಂದ ಶಾಲೆಗಳಿಗೆ ಕಲಿಯಲು ಬಂದಾಗಲೂ ಮಕ್ಕಳಿಗೆ ಮನೆಯ ಕಡುಕಷ್ಟವೇ ಕಣ್ಮುಂದೆ ಇರುತ್ತದೆ. ಹಾಗಾಗಿ ಅವರು ಕಲಿಕೆಯಲ್ಲಿ ಆಸಕ್ತಿ ತೋರುವುದು ಕಷ್ಟ. ಇದೇ ಮಕ್ಕಳು ಊಟ ವಸತಿ ಇರುವ ಹಾಸ್ಟೆಲ್ಗಳಲ್ಲಿದ್ದು ಶಾಲೆಗಳಲ್ಲಿ ಕಲಿತರೆ ಕಲಿಕಾ ವಾತಾವರಣ ಬದಲಾಗಿ ಜತೆಗಿರುವ ವಿದ್ಯಾರ್ಥಿಗಳನ್ನು ನೋಡುತ್ತಾ ತಾನೂ ಕಲಿಯಬೇಕೆಂಬ ಛಲ ಬರುತ್ತದೆ’’ ಎನ್ನುತ್ತಾರೆ. ಹೀಗಾಗಿ ಮುಂದೆ ಬಾಬಾ ಸಾಹೇಬರು ಸಂವಿಧಾನ ರಚನೆಯಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನೂ, ವಸತಿ ಶಾಲೆಗಳನ್ನೂ ಪರಿಚಯಿಸುತ್ತಾರೆ. ಈಗಿನ ಪರಿಶಿಷ್ಟ ಜಾತಿ/ ಪಂಗಡ/ ಹಿಂದುಳಿದ ವರ್ಗ/ ಧಾರ್ಮಿಕ ಅಲ್ಪಸಂಖ್ಯಾತರ ಮಕ್ಕಳ ಸರಕಾರಿ ಹಾಸ್ಟೆಲ್ಗಳು ಅಂಬೇಡ್ಕರ್ ಕಂಡ ಕನಸಾಗಿವೆ.
Adani Green Energy: ಇಎಸ್ಜಿ ರೇಟಿಂಗ್: ಭಾರತೀಯ ಕಂಪನಿಗಳ ಪಟ್ಟಿಯಲ್ಲಿ ಅದಾನಿ ಗ್ರೀನ್ ಎನರ್ಜಿಗೆ ಅಗ್ರಸ್ಥಾನ
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ಸಂಸ್ಥೆಯು 'ಕೇರ್ಎಡ್ಜ್-ಇಎಸ್ಜಿ' (CareEdge-ESG) ಮೌಲ್ಯಮಾಪನಕ್ಕ ಒಳಪಟ್ಟ ಭಾರತೀಯ ಕಂಪನಿಗಳಲ್ಲೇ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ. ಒಟ್ಟಾರೆ 87.3 ಅಂಕಗಳೊಂದಿಗೆ 'ಕೇರ್ಎಡ್ಜ್-ಇಎಸ್ಜಿ 1+' ರೇಟಿಂಗ್ ಅನ್ನು ಪಡೆದುಕೊಂಡಿದೆ. ಸೆಬಿ ಅಡಿಯಲ್ಲಿ ನೋಂದಾಯಿತ ಇಎಸ್ಜಿ ರೇಟಿಂಗ್ ಸಂಸ್ಥೆಯಾದ 'ಕೇರ್ ಇಎಸ್ಜಿ ರೇಟಿಂಗ್ಸ್ ಲಿಮಿಟೆಡ್' ಈ ಶ್ರೇಯಾಂಕವನ್ನು ನೀಡಿದೆ. ಈ ಅಂಕವು ಸುಸ್ಥಿರತೆಯ ಕಾರ್ಯಕ್ಷಮತೆಯಲ್ಲಿ
ಅವಾಂತರಕಾರಿ ಮತ್ತು ಕುಲಾಂತರಿ ಮ್ಯಾಗ್ನೆಟ್ ಶಾಲೆಗಳು
‘ತಮ್ಮ ಹತ್ತಿರದ ವಾಸ ಪರಿಸರ ಅಥವಾ ನೆಲೆಯ ವ್ಯಾಪ್ತಿಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ದೊರೆಯುವಂತಾಗಬೇಕೆಂಬುದೇ ಸಂವಿಧಾನದ 21(ಎ) ಪರಿಚ್ಛೇದದ ಆಶಯ’ ಎಂಬುದು ತಜ್ಞರ ಅಭಿಮತ. ಆದರೆ ರಾಜ್ಯ ಸರಕಾರವು ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಹೊರಟಿರುವ ಉದ್ದೇಶದ ಸಂದೇಶವಾದರೂ ಏನನ್ನು ಸಾರುತ್ತದೆ? ಈ ಮ್ಯಾಗ್ನೆಟ್ ಶಾಲೆಗಳು ತನ್ನ ಪರಿವ್ಯಾಪ್ತಿಯ ಆಜುಬಾಜು 4ರಿಂದ 5 ಕಿ.ಮೀ.ನ ಹತ್ತಾರು ಶಾಲೆಗಳನ್ನು ಅಪೋಷನ ತೆಗೆದುಕೊಂಡು, ಶಾಲಾ ಮಕ್ಕಳ ಹೊರಗುಳಿಯುವಿಕೆಯ (ಹೊರದಬ್ಬುವಿಕೆಯೆನ್ನಿ!) ಪ್ರಮಾಣವನ್ನು ಅಂದರೆ ಡ್ರಾಪ್ ಔಟ್ ರೇಟ್ನ್ನು ಹೆಚ್ಚಿಸಿ, ಪ್ರಾಥಮಿಕ ಶಿಕ್ಷಣದ ಮೂಲ ಆಶಯವನ್ನೇ ಬಲಿಕೊಡ ಹೊರಟಿವೆ. ಹೀಗೆ ತನ್ನ ವಾಸ ಪರಿಸರದಿಂದ ನಾಲ್ಕೈದು ಕಿ.ಮೀ. ದೂರಕ್ಕೆ ಹೋಗಬೇಕಾದಾಗ ಮೊದಲ ತೀವ್ರ ಹೊಡೆತ ಬೀಳುವುದು ದಲಿತ, ಹಿಂದುಳಿದ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳಿಗೆ. ಏಕೆಂದರೆ ಸಾರಿಗೆ, ಸುರಕ್ಷತೆಯಂತಹ ಆರ್ಥಿಕ ಮತ್ತಿತರ ಸಾಮಾಜಿಕ ಕಾರಣಗಳಿಂದಾಗಿ ದೂರದ ಪಬ್ಲಿಕ್ ಶಾಲೆಗೆ ಮಕ್ಕಳನ್ನು ಪೋಷಕರು ಕಳುಹಿಸಲು ಹಿಂಜರಿಯುವುದು ಸ್ವಾಭಾವಿಕ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಹೊಡೆತ ಬೀಳುವುದು ದುರಂತ. ಮಕ್ಕಳಿಗೆ ಮೂಲ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ಒದಗಿಸಿ ಸಂವಿಧಾನದ ಆಶಯವನ್ನು ಕಾಪಾಡಬೇಕಾದ ಸರಕಾರವೊಂದು, ಒಂದು ಅಂದಾಜಿನಂತೆ 25ಸಾವಿರಕ್ಕೂ ಮಿಗಿಲಾದಷ್ಟು ಸರಕಾರಿ ಶಾಲೆಗಳನ್ನು ಮುಚ್ಚ ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯರು ಹೇಳುವಂತೆ, ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ 4,600 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಹಾಗೆಯೇ ಶಾಲೆ ಮುಚ್ಚುವ ರಾಜ್ಯಗಳ ಸ್ಟಾಂಡಿಂಗ್ನಲ್ಲಿ 4ನೇ ರಾಜ್ಯವೆನಿಸಿರುವುದು, ದೇಶದಲ್ಲಿಯೇ ಒಂದು ಪ್ರಮುಖ ಪ್ರಗತಿಪರ ರಾಜ್ಯವೆನಿಸಿಕೊಂಡಿರುವ ಕರ್ನಾಟಕಕ್ಕೆ ಶೋಭೆ ತರುವಂತಹದ್ದಲ್ಲ. ಇಂತಹ ಶೋಚನೀಯ ಶೈಕ್ಷಣಿಕ ಪರಿಸ್ಥಿತಿಯಲ್ಲಿ, ಈ ಅವಾಂತರಕಾರಿ ಮತ್ತು ಕುಲಾಂತರಿ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಯ ನೆಪವೊಡ್ಡಿ ಮತ್ತೆ 25 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚ ಹೊರಟಿರುವ ಸರಕಾರದ ನಿರ್ಧಾರದ ಹಿಂದಿನ ಹುನ್ನಾರವಾದರೂ ಏನು? ‘ಖಾಸಗಿ ಲಾಬಿ’ಯ ಕಾರ್ಪೊರೇಟ್ ಆಶಯಗಳು ಇದರ ಹಿಂದೆ ಇದ್ದು, ಕಾಣದ ಕೈಗಳಂತೆ ಕೆಲಸ ಮಾಡುತ್ತಿರುವುದು ಖಂಡಿತ. ಈ ಮ್ಯಾಗ್ನೆಟ್ ಪಬ್ಲಿಕ್ ಶಾಲೆಗಳನ್ನು ಕುಲಾಂತರಿ ಎಂದು ಹೇಳಲು ಕಾರಣವಿದೆ. ಇವು ನಮ್ಮ ಮಣ್ಣಿನ ಗುಣಕ್ಕೆ ಒಗ್ಗಿ, ಸಹಜವಾಗಿ ನಮ್ಮ ನಾಡು, ನುಡಿ, ಪರಿಸರದಲ್ಲಿ ವಿಕಾಸಗೊಂಡವುಗಳಲ್ಲ, ಬದಲಿಗೆ ಅಮೆರಿಕದಿಂದ ಆಮದಾದ ಕಾರ್ಪೋರೇಟ್ ಬಂಡವಾಳಶಾಹಿ ಶಿಕ್ಷಣ ವ್ಯವಸ್ಥೆಯ ಪಡಿಯಚ್ಚು. ಈ ಶಾಲೆ ಮುಚ್ಚುವ ಹುನ್ನಾರದಲ್ಲಿ ಪ್ರಸ್ತುತ ಯುವ ಶಿಕ್ಷಣ ಸಚಿವರಿಗೆ ಸರಿಯಾದ ಮಾರ್ಗದರ್ಶನವಿದ್ದಂತಿಲ್ಲ. ಅವರು ಬ್ಯೂರಾಕ್ರಾಟಿಕ್ ಇಕ್ಕಳದಲ್ಲಿ ಸಿಕ್ಕಂತಿದೆ. ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಅವರು ಬೇರು ಮಟ್ಟದ ಶೈಕ್ಷಣಿಕ ಪರಿಸರ ಮತ್ತು ಅಗತ್ಯಗಳ ಪರಿಚಯವಿಲ್ಲದ ಅಧಿಕಾರಿಗಳ ಇಕ್ಕಳದಲ್ಲಿ ಸಿಲುಕಿರುವಂತಿದೆ.ಸಾವಿರಾರು ಶಾಲೆಗಳನ್ನು ಮುಚ್ಚುವ ಅಧಿಕಾರಿಗಳ ಶಿಫಾರಸಿನಲ್ಲಿ ಆರ್ಥಿಕ ಕಾರಣಗಳನ್ನು ಮುಂದುಮಾಡಿ, ಕಡಿಮೆ ದಾಖಲಾತಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬುದು ಸರ್ವತಾ ಸಮರ್ಥನೀಯವಲ್ಲ. ಶಿಕ್ಷಣ ಹಕ್ಕು ಕಾಯ್ದೆಯ ಪ್ಯಾರಾ 4ನ್ನು ಈ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಯ ಉದ್ದೇಶ ಉಲ್ಲಂಘಿಸುತ್ತದೆ ಎಂಬುದು ನಿರಂಜನಾರಾಧ್ಯರು ಸೇರಿದಂತೆ, ಅನೇಕ ಶಿಕ್ಷಣ ತಜ್ಞರ ವಾದ. ಪ್ರತಿಯೊಂದು ಮಗುವಿಗೂ 14 ವರ್ಷದ ವಯೋಮಾನದವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಸಂವಿಧಾನ ಕೊಡಮಾಡಿರುವಾಗ, ಶಿಕ್ಷಣ ನೀಡಿಕೆಯನ್ನು ಇನ್ನೊಂದು ಆಯಾಮದಲ್ಲಿ ಆರ್ಥಿಕ ಹೊರೆ ಎಂದು ಭಾವಿಸಲು ಸಾಧ್ಯವಿಲ್ಲ ಮತ್ತು ಇದು ಸಹಜ ಮತ್ತು ಸಾಮಾಜಿಕ ನ್ಯಾಯಕ್ಕೆ ಕೊಡುವ ದೊಡ್ಡ ಕೊಡಲಿ ಪೆಟ್ಟು! ಇಲ್ಲಿ ಇನ್ನೊಂದು ಹುನ್ನಾರವನ್ನು ಗಮನಿಸಬಹುದು. ಇದು ವಿಪರ್ಯಾಸವೂ ಮತ್ತು ದುರಂತವೂ ಹೌದು. ಯಾವ ರಾಜಕೀಯ ಪಕ್ಷ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ವಿರೋಧಿಸಿ, ನಮ್ಮ ಸ್ಥಳೀಯತೆ ಮತ್ತು ಪ್ರಾದೇಶಿಕ ಅಸ್ಮಿತೆಗೆ ಪೂರಕವಾದ ‘‘ನಮ್ಮದೇ ‘ರಾಜ್ಯ ಶಿಕ್ಷಣ ನೀತಿ’ಗಳನ್ನು ಜಾರಿಗೆ ತರುತ್ತೇವೆ’’ ಎಂದು 2023ರ ವಿಧಾನಸಭಾ ಚುನಾವಣೆಗಳಿಗೆ ಮುಂಚೆ ಆಶ್ವಾಸನೆ ನೀಡಿತ್ತೋ ಅದೇ ಪಕ್ಷದ ಸರಕಾರ ಇಂದು ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುತ್ತಿರುವುದು ಅದರ ಇಬ್ಬಂದಿತನಕ್ಕೆ ಸಾಕ್ಷಿ. ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆ ಇದಕ್ಕೆ ಜ್ವಲಂತ ನಿದರ್ಶನ. ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರೂಪಣೆಗಾಗಿ ದಕ್ಷ ಆಡಳಿತಗಾರರಾಗಿದ್ದ ಸುಖದೇವ್ ಥೋರಟ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಶಿಫಾರಸುಗಳನ್ನು ಮೂರು ವರ್ಷಗಳ ನಂತರ ಇಂದಿಗೂ ಯಥಾವತ್ತು ಜಾರಿಗೊಳಿಸದ ಹುನ್ನಾರವಾದರೂ ಏನು? ಸರಕಾರ ನಾಯಿಕೊಡೆಗಳಂತೆ ಮ್ಯಾಗ್ನೆಟ್ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವ ಬದಲು ಪ್ರತೀ ಸಣ್ಣ ಸರಕಾರಿ ಶಾಲೆಯನ್ನು ದಕ್ಷಗೊಳಿಸಿ ಸಾರ್ವಜನಿಕ ಶಿಕ್ಷಣದ ಮೂಲ ಆಶಯವನ್ನು ಎತ್ತಿ ಹಿಡಿಯಲು ಸಾಧ್ಯವಿದೆ. ಕೋಟ್ಯಂತರ ಬಂಡವಾಳವನ್ನು ಮ್ಯಾಗ್ನೆಟ್ ಶಾಲೆಗಳ ಮೇಲೆ ಹೂಡುವುದರ ಬದಲು ಪ್ರತೀ ಸಣ್ಣ ಸರಕಾರಿ ಶಾಲೆಯ ಮೇಲೆ ಕೆಲವೇ ಲಕ್ಷ ರೂ.ಗಳನ್ನು ವ್ಯಯಿಸಿ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯವಿಲ್ಲ, ಸರಿಯಾದ ಕೊಠಡಿ ಮತ್ತು ಸೂರಿಲ್ಲ. ಒಂದು ಅಂದಾಜಿನಂತೆ, ರಾಜ್ಯದಲ್ಲಿನ ಒಟ್ಟು ಸರಕಾರಿ ಶಾಲೆಗಳ ಪೈಕಿ ಕೇವಲ ಪ್ರತಿ ಶತ 23.5ರಲ್ಲಿ ಮಾತ್ರ ಅಗತ್ಯ ಮೂಲ ಸೌಕರ್ಯಗಳಿವೆ. ಅದೂ ನಗರ ಕೇಂದ್ರಿತವಾದವುಗಳಲ್ಲೇ ಹೆಚ್ಚು. ಇದಕ್ಕಿಂತಲೂ ಬಹುಮುಖ್ಯವಾದ ಶೋಚನೀಯ ಸಂಗತಿಯೆಂದರೆ ಬಹುತೇಕ ಶಾಲೆಗಳಲ್ಲಿ ಅಗತ್ಯ ಶಿಕ್ಷಕರಿಲ್ಲ. ಇರುವ ಕೆಲವೇ ಶಿಕ್ಷಕರೂ ಶಿಕ್ಷಣೇತರ ಚಟುವಟಿಕೆ ಮತ್ತು ಮಾಹಿತಿ ರವಾನಿಸುವ ರೋಬೊಟ್ಗಳಾಗಿದ್ದಾರೆ. ಅವರನ್ನು ಕೇವಲ ಬೋಧನೆಯ ಜವಾಬ್ದಾರಿಯ ಕಡೆ ತಿರುಗಿಸುವ ಕೆಲಸವಾಗಬೇಕಿದೆ. ರಾಜ್ಯದ 7,600 ಸರಕಾರಿ ಶಾಲೆಗಳು ಏಕ ಶಿಕ್ಷಕ ಶಾಲೆಗಳಾಗಿವೆ ಎಂದು ಸರಕಾರಿ ಅಂಕಿ ಅಂಶಗಳೇ ತಿಳಿಸುತ್ತವೆ. 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿಯಿವೆ. ಈ ಹುದ್ದೆಗಳನ್ನು ತುಂಬಿದರೆ ಪ್ರತೀ ಸರಕಾರಿ ಶಾಲೆಯೂ ಪಬ್ಲಿಕ್ ಶಾಲೆಯಾಗುವುದರಲ್ಲಿ ಸಂಶಯವಿಲ್ಲ. ಮೊದಲು ಈ ಘನಕಾರ್ಯ ಕೈಗೊಂಡು ನಾಡಿನ ಮಕ್ಕಳ ಹೆಮ್ಮೆಯ ‘ನಮ್ಮೂರ ಶಾಲೆ’ಗಳನ್ನು ಉಳಿಸಿ ಬೆಳೆಸಬೇಕಿದೆ. ಹಾಗೆಯೇ ಸರಕಾರಿ ಶಾಲೆಗಳಲ್ಲಿ ಎಲ್ಲಿಯವರೆಗೆ ಸಿಎಸ್ಆರ್ (ಸಾಮಾಜಿಕ ಕಾರ್ಪೊರೇಟ್ ಹೊಣೆಗಾರಿಕೆ ಯೋಜನೆ) ಮತ್ತು ಪಿಪಿಪಿ (ಖಾಸಗಿ ಸಹಭಾಗಿತ್ವ) ದಂತಹ ಆಕರ್ಷಕ ನುಡಿಗಟ್ಟುಗಳ ಯೋಜನೆಗಳು ಮುಂದುವರಿಯುತ್ತವೆಯೋ ಅಲ್ಲಿಯವರೆಗೂ ಅದನ್ನು ಸರಕಾರದ ರಣಹೇಡಿ ಕೃತ್ಯ ಎಂದೇ ಭಾವಿಸಬೇಕಾಗುತ್ತದೆ. ಏಕೆಂದರೆ ಇದು ಶಿಕ್ಷಣ ನೀಡಿಕೆಯಂತಹ ಶ್ರೇಷ್ಠ ಹೊಣೆಗಾರಿಕೆಯಿಂದ ಸರಕಾರ ನುಣುಚಿಕೊಳ್ಳುವ ಕೆಲಸವೆಂದೇ ಅರ್ಥ. ಇದು ಮುಂದಿನ ತಲೆಮಾರಿಗೆ ಸರಕಾರ ಬಿಟ್ಟು ಹೋಗುವ ಕೆಟ್ಟ ಸಂಪ್ರದಾಯ ಕೂಡ. ಮುಂದಿನ ತಲೆಮಾರು ಸರಕಾರವನ್ನು ಕ್ಷಮಿಸುವುದೂ ಇಲ್ಲ. ಇದೆಲ್ಲವೂ ಸಮಾಜವಾದಿ ಹಿನ್ನೆಲೆಯವರೆಂದೇ ಬಿಂಬಿಸಿಕೊಂಡಿರುವ ಪ್ರಸ್ತುತ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೆಂದಲ್ಲ. ಅನನುಭವಿಯಾದರೂ ಉತ್ಸಾಹಿ ಎನ್ನಲಾಗುವ ಪ್ರಸ್ತುತ ಶಿಕ್ಷಣ ಸಚಿವರಿಗೆ ಮಾರ್ಗದರ್ಶನ ಮಾಡಬೇಕಿದೆ ಮತ್ತು ಎಲ್ಲಾ ‘ನಮ್ಮೂರ ಸರಕಾರಿ ಶಾಲೆಗಳ’ನ್ನು ಮುಚ್ಚದೆ, ಅವಾಂತರಕಾರಿ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಯನ್ನು ಈಗಿಂದೀಗಲೇ ಕೈ ಬಿಡಬೇಕಿದೆ. ಇದಕ್ಕಾಗಿ ಇತಿಹಾಸ ಪ್ರಸ್ತುತ ಸರಕಾರವನ್ನು ನೆನೆಸಿಕೊಳ್ಳುತ್ತದೆ.
ಎಂಡೋ ಸಂತ್ರಸ್ತರ ಕೈಬಿಟ್ಟಿತೇ ಕೇರಳ ರಾಜ್ಯ ಸರಕಾರ ?
ಎಣ್ಮಕಜೆ ಪಂಚಾಯಿತಿಯ ಪೆರ್ಲ ಬಜಕೂಡ್ಲುವಿನ ಸಾಯಿ ಗ್ರಾಮದಲ್ಲಿ ನೆಲೆಸಿರುವ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ಆದೇಶದಂತೆ ಸಾಯಿ ಗ್ರಾಮದ ನಿರಾಶ್ರಿತ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮಾಸಿಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ.
ರಾಹುಲ್ ಗಾಂಧಿ, ಎಡಪಕ್ಷಗಳಿಗೆ Keralam Election Result ನಿರ್ಣಾಯಕ: ಒಬ್ಬೊಬ್ಬರದ್ದು ಒಂದೊಂದು ಕಾರಣ
Kerala Assembly Election 2026: 140 ಸ್ಥಾನವನ್ನು ಹೊಂದಿರುವ ಕೇರಳದ ವಿಧಾನಸಭೆಗೆ ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಸುಭದ್ರವಾಗಿದೆ. ಮೇ ನಾಲ್ಕರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕೇರಳದ ಚುನಾವಣಾ ಫಲಿತಾಂಶ ಎಡಪಕ್ಷಗಳಿಗೆ ಅಸ್ತಿತ್ವದ ಪ್ರಶ್ನೆಯಾದರೆ, ರಾಹುಲ್ ಗಾಂಧಿಗೆ, ರಾಷ್ಟ್ರ ಮಟ್ಟದಲ್ಲಿ ಬಹಳ ಮುಖ್ಯವಾಗಿದೆ.
Trump vs Pope: ಯುದ್ಧ-ಶಾಂತಿ ವಿಚಾರದಲ್ಲಿ ಟ್ರಂಪ್-ಪೋಪ್ ನಡುವೆ ಉದ್ವಿಗ್ನತೆ
Trump vs Pope:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅಲ್ಲಿನ ಕ್ಯಾಥೋಲಿಕ್ ಚರ್ಚ್ನ ಮೊದಲ ಅಮೆರಿಕನ್ ನಾಯಕರಾದ ಪೋಪ್ ಲಿಯೋ 14 ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಅವರು ಪೋಪ್ರನ್ನು 'ವೀಕ್' (ದುರ್ಬಲ) ರೆಂದು ಕರೆದು ಟೀಕಿಸಿದ್ದಾರೆ. ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಪೋಪ್, ಟ್ರಂಪ್ ಆಡಳಿತದಿಂದ ತಮಗೆ 'ಭಯವಿಲ್ಲ' ಎಂದಿದ್ದಾರೆಂದು ಎನ್ಬಿಸಿ
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕಾರ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಲೇ ಇಲ್ಲ. ಅದರಲ್ಲೂ ಸ್ಲೀಪರ್ ಕೋಚ್ ಮತ್ತು ಹವಾ ನಿಯಂತ್ರಿತ ಬಸ್ಸುಗಳು ಪದೇ ಪದೇ ಅಪಘಾತಗಳಿಗೆ ಈಡಾಗುತ್ತಲೇ ಇವೆ. ಹೀಗೆ ಅಪಘಾತಕ್ಕೀಡಾಗುವ ವಾಹನಗಳಲ್ಲಿ ಹೆಚ್ಚಿನವು ಖಾಸಗಿ ಸ್ಲೀಪರ್ ಬಸ್ಗಳಾಗಿವೆ, ಅಮಾಯಕ ಜನರ ಸಾವುಗಳಿಗೂ ಖಾಸಗಿ ಸ್ಲೀಪರ್ ಬಸ್ಗಳೇ ಕಾರಣವಾಗಿವೆ ಎಂಬುದು ಕೇವಲ ಆರೋಪವಲ್ಲ. ಇದು ವಾಸ್ತವ ಸಂಗತಿಯಾಗಿದೆ. ಖಾಸಗಿ ಬಸ್ಗಳ ಮಾಲಕರಿಗೆ ಪ್ರಯಾಣಿಕರ ಸುರಕ್ಷತೆಗಿಂತ ಲಾಭ ಪಡೆಯುವುದು ಮುಖ್ಯವಾಗಿದೆ. ರಾಜ್ಯದ ಶೇ. 90ರಷ್ಟು ಸ್ಲೀಪರ್ ಬಸ್ಗಳಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳು ಕಡೆಗಣಿಸಲ್ಪಟ್ಟಿವೆ. ಸಾರಿಗೆ ಇಲಾಖೆ ಸುರಕ್ಷಿತ ಮಾರ್ಗಸೂಚಿಗೆ ಗಡುವು ವಿಧಿಸುತ್ತಾ ಬಂದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಖಾಸಗಿ ಬಸ್ ಹಾಗೂ ಟ್ರಾವಲ್ ಏಜೆನ್ಸಿಗಳ ಮಾಲಕರು ತೋರಿಸುತ್ತಾ ಬಂದಿರುವ ನಿರ್ಲಕ್ಷ್ಯ ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದಂತೆ. ದುಬಾರಿ ಪ್ರಯಾಣ ದರವನ್ನು ವಸೂಲಿ ಮಾಡುವ ಖಾಸಗಿ ಬಸ್ ಮಾಲಕರು ಅದಕ್ಕೆ ತಕ್ಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಹಾಗಾಗಿಯೇ ಸ್ಲೀಪರ್ ಬಸ್ಗಳನ್ನು ಜನ ‘ಸಂಚರಿಸುವ ಶವದ ಪೆಟ್ಟಿಗೆ’ ಎಂದು ಕರೆಯುತ್ತಾರೆ. ಖಾಸಗಿ ಬಸ್ ಮಾಲಕರು ಯಾವುದೇ ಕಾರಣಕ್ಕೂ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸಬಾರದು. ಇಂಥ ಅಮಾನವೀಯ ನಿರ್ಲಕ್ಷ್ಯ ಅವರ ಬೇಜವಾಬ್ದಾರಿತನಕ್ಕೆ ಒಂದು ಉದಾಹರಣೆಯಾಗಿದೆ. ಖಾಸಗಿ ಬಸ್ ಮಾಲಕರು ಲಾಭ ಮಾಡಿಕೊಳ್ಳಬಾರದೆಂದಿಲ್ಲ, ಆದರೆ ತಮ್ಮ ಬಸ್ಗಳಲ್ಲಿ ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನದ ಕಿಟಕಿಗಳು ಮತ್ತು ಸುಲಭವಾಗಿ ಒಡೆಯಬಹುದಾದ ಗಾಜುಗಳನ್ನು ಅಳವಡಿಸಬೇಕು. ಇವುಗಳಿಗಾಗಿ ಖಾಸಗಿ ಬಸ್ ಮಾಲಕರು ಖರ್ಚು ಮಾಡುವ ಹಣಕ್ಕಿಂತ ಪ್ರಯಾಣಿಕರ ಜೀವ ಮುಖ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹಿಂದೆ ಇಂತಹ ಸ್ಲೀಪರ್ ಬಸ್ಗಳು ಅಪಘಾತಕ್ಕೀಡಾದಾಗ ಬೆಂಕಿಗಿಂತ ಹೊಗೆ ಮತ್ತು ಉಸಿರು ಗಟ್ಟಿಸುವಿಕೆಯಿಂದಲೇ ಜನರು ಸಾವಿಗೀಡಾಗಿದ್ದಾರೆ. ಖಾಸಗಿ ಬಸ್ ಮಾಲಕರ ಈ ಹೊಣೆಗೇಡಿತನದ ಬಗ್ಗೆ ಸರಕಾರ ಕೇವಲ ಗಡುವು ನೀಡಿ ಕೈ ತೊಳೆದುಕೊಳ್ಳಬಾರದು. ಗಡುವಿನ ನಂತರದಲ್ಲೂ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಪರವಾನಿಗೆಯನ್ನು ರದ್ದುಪಡಿಸಬೇಕು. ಅಷ್ಟೇ ಅಲ್ಲ ಭಾರೀ ಪ್ರಮಾಣದ ದಂಡವನ್ನು ವಿಧಿಸುವ ಉಗ್ರ ಕ್ರಮಗಳಿಗೆ ಮುಂದಾಗಬೇಕು. ಪ್ರಯಾಣಿಕರ ಸುರಕ್ಷತೆ ಎಂಬುದು ಕೇವಲ ಕಾಗದದ ಮೇಲಿನ ನಿಯಮವಾಗಿರಬಾರದು. ತಮಗೆ ಬರುವ ಲಾಭಕ್ಕಿಂತ ಪ್ರಯಾಣಿಕರ ಪ್ರಾಣ ಮುಖ್ಯ ಎಂಬುದನ್ನು ಖಾಸಗಿ ಬಸ್ ಮಾಲಕರು ಅರಿತುಕೊಳ್ಳದಿದ್ದರೆ ಸರಕಾರವೇ ಇಂತಹ ವಾಹನಗಳನ್ನು ರಸ್ತೆಗಳಿಂದ ದೂರವಿಡುವ ದೃಢ ನಿರ್ಧಾರಕ್ಕೆ ಬರಬೇಕು. ಇಂತಹ ಖಾಸಗಿ ಬಸ್ಗಳ ಆನ್ಲೈನ್ ಹಾಗೂ ಆಫ್ಲೈನ್ ಟಿಕೆಟ್ ಬುಕಿಂಗ್ನ್ನು ತಡೆ ಹಿಡಿಯಬೇಕು. ಸರಕಾರ ಮಾತ್ರವಲ್ಲ, ಸಾರ್ವಜನಿಕರು ಕೂಡ ಇಂತಹ ಸುರಕ್ಷತೆಯಿಲ್ಲದ ಖಾಸಗಿ ಬಸ್ಸುಗಳ ವಿರುದ್ಧ ದನಿಯೆತ್ತುವ ಮೂಲಕ ಬಸ್ ಮಾಲಕರ ಉದ್ಧಟತನಕ್ಕೆ ಪಾಠ ಕಲಿಸಬೇಕಾಗಿದೆ. ಅಲ್ಲದೆ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸದೆ ಬಹಿಷ್ಕಾರ ಹಾಕಬೇಕು. ಖಾಸಗಿ ಬಸ್ಗಳಿಗೆ ಹೋಲಿಸಿದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಹಾಗೂ ಸ್ಲೀಪರ್ ಬಸ್ಗಳು ಎಷ್ಟೋ ವಾಸಿ. ಅವುಗಳು ಅಪಘಾತಕ್ಕೀಡಾಗುವುದಿಲ್ಲ ಎಂದಲ್ಲ. ಆದರೆ ತುಂಬಾ ಕಡಿಮೆ.ಸಾರಿಗೆ ಸಂಸ್ಥೆಯ ದೂರ ಪ್ರಯಾಣದ ಬಸ್ಗಳಲ್ಲಿ ನುರಿತ ಚಾಲಕರಿರುತ್ತಾರೆ.ಅವುಗಳಲ್ಲೂ ಹೊರ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವ ಇದೆಯಂತೆ, ಅದಕ್ಕೆ ಅವಕಾಶ ನೀಡಬಾರದು. ಬಸ್ ಅಪಘಾತಗಳಿಗೆ ನಿರ್ವಹಣೆ ಇಲ್ಲದ ಹದಗೆಟ್ಟ ರಸ್ತೆಗಳು ಕೂಡ ಕಾರಣ. ಅದರಲ್ಲೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಈಗ ಸಾಕಷ್ಟು ವಿಸ್ತಾರವಾಗಿದ್ದರೂ ಅವುಗಳ ನಿರ್ವಹಣೆ ಸರಿಯಾಗಿಲ್ಲ. ಟೋಲ್ ವಸೂಲಿ ಮಾಡುವ ಸರಕಾರ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುವುದು ಮಾತ್ರವಲ್ಲ, ನಮ್ಮ ರಾಜ್ಯದ ಮತ್ತು ದೇಶದ ಮಹಾನಗರದ ರಸ್ತೆಗಳು ಕೂಡ ಸುರಕ್ಷಿತವಾಗಿಲ್ಲ. ಉದಾಹರಣೆಗೆ ನಮ್ಮ ರಾಜಧಾನಿ ಬೆಂಗಳೂರನ್ನು ತೆಗೆದುಕೊಂಡರೆ ಈ ಮಹಾನಗರದ ರಸ್ತೆಗಳು 30 ರಿಂದ 50 ಲಕ್ಷ ಜನಸಂಖ್ಯೆಯಿದ್ದಾಗ ನಿರ್ಮಾಣಗೊಂಡವುಗಳು. ಈಗ ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಹಾಗೂ ಎಂಭತ್ತು ಲಕ್ಷ ವಾಹನಗಳ ಒತ್ತಡವನ್ನು ಈ ರಸ್ತೆಗಳು ನಿಭಾಯಿಸಬೇಕಾಗಿದೆ. ಈ ಒತ್ತಡವನ್ನು ತಡೆಯಬೇಕಾದರೆ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು (ಸರಕಾರಿ ಬಸ್ ಸಂಚಾರ) ಬಲಪಡಿಸಬೇಕಾಗಿದೆ. ಇದಲ್ಲದೆ ಹೊಸ ವಾಹನಗಳಿಗೆ ಸದ್ಯಕ್ಕೆ ಯಾವುದೇ ಅನುಮತಿ ನೀಡಬಾರದು. ಮೂವರು ಸದಸ್ಯರು ಇರುವ ಒಂದೊಂದು ಮನೆಗಳಲ್ಲಿ ನಾಲ್ಕು ಕಾರುಗಳು ಹಾಗೂ ಒಂದೆರಡು ದ್ವಿಚಕ್ರ ವಾಹನಗಳು ಇರುತ್ತವೆ. ಇಂತಹದ್ದಕ್ಕೆ ಸರಕಾರ ಅವಕಾಶ ನೀಡಬಾರದು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸದ್ಯ ಕೆಲವು ವರ್ಷಗಳ ಕಾಲವಾದರೂ ಖಾಸಗಿ ವಾಹನಗಳಿಗೆ ಪರವಾನಿಗೆ ನೀಡುವುದನ್ನು ಸ್ಥಗಿತಗೊಳಿಸುವುದರ ಬಗ್ಗೆ ಸರಕಾರ ಯೋಚಿಸಬೇಕು. ಅದಕ್ಕೆ ಪರ್ಯಾಯವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಆಗ ಮಾತ್ರ ದುರಂತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ನಿತ್ಯ ಎರಡು ಸಾವಿರ ಹೊಸ ವಾಹನಗಳು ಆರ್ಟಿಒ ಅನುಮತಿ ಪಡೆದು ರಸ್ತೆಗೆ ಬರುತ್ತವೆ. ಇನ್ನು ಮುಂದೆ ಅದಕ್ಕೆ ಅವಕಾಶ ನೀಡಬಾರದು. ಜಾಗತೀಕರಣದ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿ ದೇಶದಲ್ಲಿ ಜಾರಿಗೆ ಬಂದ ನಂತರ ಆಟೊಮೊಬೈಲ್ ಉದ್ದಿಮೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಖಾಸಗಿ ವೈಯಕ್ತಿಕ ವಾಹನಗಳಿಗೆ ಬೇಕಾಬಿಟ್ಟಿಯಾಗಿ ಪರವಾನಿಗೆ ನೀಡುತ್ತಾ ಬರಲಾಯಿತು. ಆದರೆ ಅದಕ್ಕೆ ತಕ್ಕ ಮೂಲಭೂತ ಸೌಕರ್ಯಗಳು ಇರಲಿಲ್ಲ. ಹೆದ್ದಾರಿಗಳ ಹಾಗೂ ಒಳನಾಡಿನ ರಸ್ತೆಗಳ ಸುಧಾರಣೆ ಮತ್ತು ಅಗಲೀಕರಣ ಪ್ರಕ್ರಿಯೆ ಸರಿಯಾಗಿ ನಡೆಯಲಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ರಸ್ತೆಗಳ ನಿರ್ವಹಣೆ ಕಾರ್ಯವೂ ಸರಿಯಾಗಿ ನಡೆಯಲಿಲ್ಲ. ಹೀಗಾಗಿ ಈ ದುರಂತಗಳು ಸಂಭವಿಸುತ್ತಲೇ ಇವೆ. ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಸ್ತೆಗಳ ಸುರಕ್ಷತೆ ಹಾಗೂ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಿ.
ರಾಜ್ಯದಲ್ಲಿ ಪದವಿಪೂರ್ವ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, 2026-27ನೇ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಲು ಮುಂದಾಗಿದೆ. ಇದುವರೆಗೂ ಕೇವಲ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿತ್ತು. ಆದರೆ, ಇದೀಗ ಈ ಯೋಜನೆಯನ್ನು ಪಿಯುಸಿಗೂ ವಿಸ್ತರಿಸಿದ್ದು, ಸುಮಾರು 61 ಲಕ್ಷ ವಿದ್ಯಾರ್ಥಿಗಳಿಗೆ 30 ಕೋಟಿ 83 ಲಕ್ಷದ 25 ಸಾವಿರ ರೂಗಳ ವೆಚ್ಚದಲ್ಲಿ ನೀಡಲು ಸಿದ್ದವಾಗಿದೆ. ಇನ್ನು, ದ್ವಿತೀಐ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಡೆದ ಗರಿಷ್ಠ ಅಂಕವೇ ಸಿಇಟಿಗೆ ಪರಿಗಣಿಸಲಾಗುವುದು.
ಕೇರಳ ಇಲೆಕ್ಟ್ರಿಕಲ್ ಆಂಡ್ ಅಲೈಡ್ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ಗೆ 4(ಜಿ) ವಿನಾಯಿತಿ
ಕರ್ನಾಟಕ ವಿದ್ಯುತ್ ಇಲಾಖೆಗೆ 174.73 ಕೋ. ರೂ. ಆದಾಯ ನಷ್ಟ
ಪೋಪ್ ಕುರಿತು ಟೀಕೆ: ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಇಟಲಿಯ ಪ್ರಧಾನಿ ಮೆಲೋನಿ
ರೋಮ್, ಏ.14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ಲಿಯೋ ಕುರಿತು ಮಾಡಿದ್ದ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಟ್ರಂಪ್ ಹೇಳಿಕೆಗಳನ್ನು ಖಂಡಿಸಿದ್ದಾರೆ. ಟ್ರಂಪ್ ವಿರುದ್ಧ ಮೆಲೋನಿ ಅವರು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿರುವುದು ಇದೇ ಮೊದಲು! “ಫಾದರ್ ಬಗ್ಗೆ ಟ್ರಂಪ್ ಅವರ ಮಾತುಗಳು ಸ್ವೀಕಾರಾರ್ಹವಲ್ಲ. ಪೋಪ್ ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥರು. ಶಾಂತಿಗಾಗಿ ಕರೆ ನೀಡುವುದು ಹಾಗೂ ಯುದ್ಧವನ್ನು ಖಂಡಿಸುವುದು ಅವರ ಕರ್ತವ್ಯ,” ಎಂದು ಮೆಲೋನಿ ಹೇಳಿದರು. ಟ್ರಂಪ್ ಅವರ ಹೇಳಿಕೆಗಳು ಇಟಲಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ ಎಂದು ಅವರು ಸೂಚಿಸಿದರು. 2025ರಲ್ಲಿ ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಯುರೋಪಿನ ಏಕೈಕ ನಾಯಕಿಯಾಗಿದ್ದ ಮೆಲೋನಿ, ಆರಂಭದಲ್ಲಿಯೇ ಪೋಪ್ ಲಿಯೋ ಅವರಿಗೆ ಬೆಂಬಲ ಸೂಚಿಸಿದ್ದರು. ಆದರೆ ಟ್ರಂಪ್ ಅವರ ಟೀಕೆಯನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ಇದೀಗ ಅವರು ಸ್ಪಷ್ಟವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಘಟನೆ ನಂತರ ಇಟಲಿಯ ರಾಜಕೀಯ ವಲಯದಲ್ಲೂ ಹಾಗೂ ಕ್ರೈಸ್ತ ಸಮುದಾಯದಲ್ಲೂ ಟ್ರಂಪ್ ವಿರುದ್ಧದ ಟೀಕೆಗಳು ಹೆಚ್ಚುತ್ತಿದೆ.
ಕೃಷ್ಣಾ ನದಿ ಒಡಲು ಬಹುತೇಕ ಬರಿದು , ಕೊಯ್ನಾ ಡ್ಯಾಂನಿಂದ 2 ಟಿಎಂಸಿಗೆ ಬೇಡಿಕೆ
ಬಿರು ಬಿಸಿಲಿನಿಂದಾಗಿ ಕೃಷ್ಣಾ ನದಿಯ ಒಡಲು ಬಹುತೇಕ ಖಾಲಿಯಾಗುತ್ತಿದ್ದು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಪ್ರಸ್ತುತ ಹಿಪ್ಪರಗಿ ಬ್ಯಾರೇಜ್ನಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇರುವುದರಿಂದ, ಮೇ ತಿಂಗಳ ಮಧ್ಯಭಾಗದಲ್ಲಿ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ.
ಹುಬ್ಬಳ್ಳಿ ಮಾರ್ಗವಾಗಿ ಓಡಲಿ 'ವಂದೇ ಭಾರತ್ ಸ್ಲೀಪರ್': ಹೆಚ್ಚಿದ ಸಾರ್ವಜನಿಕರ ಒತ್ತಾಯ
ಬೆಂಗಳೂರು ಮತ್ತು ಮುಂಬಯಿ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲಕ ಸಾಗಿ, ಕರ್ನಾಟಕದ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳನ್ನು ಮಾತ್ರ ಸ್ಪರ್ಶಿಸಿ ಮಹಾರಾಷ್ಟ್ರವನ್ನು ಸೇರುತ್ತದೆ. ಈ ರೈಲು ಕರ್ನಾಟಕದ ಕೋಟಾದಡಿ ಮಂಜೂರಾಗಿದ್ದರೂ, ಇದು ರಾಜ್ಯದ ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ನಗರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ
Kalyana Karnataka Train: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ರೈಲುಗಳ ಸಮಸ್ಯೆ ತೀವ್ರವಾಗಿ ಮುಂದುವರಿದಿದೆ. ಕರ್ನಾಟಕದವರೇ ಆಗಿರುವ ವಿ ಸೋಮಣ್ಣ ಅವರು, ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದರೂ ಈ ಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಭಾಗದ ರೈಲು ಸಮಸ್ಯೆಯ ಬಗ್ಗೆ ಹವ್ಯಾಸಿ ಬರಹಗಾರ
ಮೋದಿ ಆಹ್ವಾನ ಸ್ವೀಕರಿಸಿ ಭಾರತ ಭೇಟಿಗೆ ನೇಪಾಳ ಪ್ರಧಾನಿ ನಿರ್ಧಾರ
ಹೊಸದಿಲ್ಲಿ: ದೇಶದಲ್ಲಿ ವಿಐಪಿ ಸಂಸ್ಕೃತಿ, ಕ್ಯಾಂಪಸ್ ಮತ್ತು ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವ, ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಬಡವರಿಗೆ ಉಚಿತ ಆರೋಗ್ಯ ಸೌಲಭ್ಯ, ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಮತ್ತು ಪುಟ್ಟ ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣಸೌಲಭ್ಯವನ್ನು ಗುರಿ ಮಾಡಿ 100 ಅಂಶಗಳ ಕ್ರಾಂತಿಕಾರಿ ಆಡಳಿತ ಕಾರ್ಯಸೂಚಿಗೆ ಚಾಲನೆ ನೀಡಿದ ಬೆನ್ನಲ್ಲೇ ನೇಪಾಳ ಪ್ರಧಾನಿ ಬಲೇಂದ್ರ ಬಲೇನ್ ಶಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಭಾರತದ ಆಹ್ವಾನವನ್ನು ನೇಪಾಳ ಸರ್ಕಾರ ಸ್ವೀಕರಿಸಿದೆ. ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳು ಬಲೇನ್ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ. ಬಲೇನ್ ಶಾ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊಟ್ಟಮೊದಲ ವಿದೇಶಿ ಭೇಟಿಯಾಗಲಿದೆ ಎಂದು ಮೂಲಗಳು ಹೇಳಿವೆ. ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಾಹಲ್ ಪ್ರಚಂಡ 2023ರ ಜೂನ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಇದು ನೇಪಾಳ ಪ್ರಧಾನಿಯ ಕೊನೆಯ ಭಾರತ ಭೇಟಿಯಾಗಿತ್ತು. ಏತನ್ಮಧ್ಯೆ ದೇಶದಲ್ಲಿ ಕ್ರಾಂತಿಕಾರಿ ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಹೊಸ ಸರ್ಕಾರ ಮುಂದಾಗಿದ್ದು, ಕೇಂದ್ರೀಯ ಸಚಿವಾಲಯಗಳ ಸಂಖ್ಯೆಯಲ್ಲಿ ಕಡಿತ, ಸರ್ಕಾರಿ ಆಡಳಿತ ಯಂತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ, ಪಕ್ಷಪಾತ ರಹಿತ ವೇದಿಕೆಗಾಗಿ ರಾಜಕೀಯ ನಂಟು ರಹಿತವಾದ ವಿದ್ಯಾರ್ಥಿ ಸಂಘಟನೆಗಳ ಸ್ಥಾಪನೆಯಂಥ ನಿರ್ಧಾರಗಳನ್ನು ಕೈಗೊಂಡಿದೆ. ಶಿಕ್ಷಣ ಮತ್ತು ನಾಗರಿಕ ಸೇವೆಗಳಲ್ಲಿ ರಾಜಕೀಯ ಪ್ರಭಾವವನ್ನು ಕೊನೆಗೊಳಿಸುವ ಗುರಿಯನ್ನು ಈ ಸುಧಾರಣೆಗಳು ಹೊಂದಿವೆ. ಹೊಸ ಯೋಜನೆಯ ಪ್ರಕಾರ ಶಾಲೆ- ಕಾಲೇಜುಗಳಲ್ಲಿ ಇರುವ ರಾಜಕೀಯ ಪಕ್ಷಗಳ ಜತೆ ಸಂಪರ್ಕ ಹೊಂದಿರುವ ವಿದ್ಯಾರ್ಥಿ ಸಂಘಟನೆಗಳನ್ನು 90 ದಿನಗಳ ಒಳಗಾಗಿ ವಿಸರ್ಜಿಸಿ, ಪಕ್ಷ ರಹಿತವಾದ ವಿದ್ಯಾರ್ಥಿ ಧ್ವನಿಗೆ ವೇದಿಕೆ ಒದಗಿಸುವ ಸಂಘಟನೆಗಳನ್ನು ರಚಿಸಬೇಕಾಗುತ್ತದೆ.
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಉರಿಬಿಸಿಲು ಸಹಿತ ಮಳೆ ಮುನ್ಸೂಚನೆ, ಐಎಂಡಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿ ಅಲ್ಲಲ್ಲಿ ಮಳೆ ನಿರೀಕ್ಷೆ ಇದೆ. ವಿಶೇಷವೆಂದರೆ ರಾಜ್ಯದ ಗರಿಷ್ಠ ತಾಪಮಾನ ಏರಿಕೆ ಆಗುತ್ತಿದ್ದು, ಎಲ್ಲೆಡೆ 'ಉಷ್ಣಅಲೆ' ನಿರೀಕ್ಷೆ ಇದೆ. ಈಗಾಗಲೇ ಕರಾವಳಿ ಸೇರಿ ಕೆಲವು ಜಿಲ್ಲೆಗಳಿಗೆ ಉಷ್ಣ ಅಲೆ (Heat Wave) ಹಿನ್ನೆಲೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ ಒಂದು ವಾರ (ಏಪ್ರಿಲ್
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಾಡುತ್ತಿದ್ದ ಬಹುದೊಡ್ಡ ಗೊಂದಲವೊಂದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದೆ. ಮುಂಬರುವ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ - KCET Ranking 2026) ರ್ಯಾಂಕಿಂಗ್ಗೆ ದ್ವಿತೀಯ ಪಿಯುಸಿಯ ಯಾವ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಇದ್ದ ಆತಂಕಕ್ಕೆ ತೆರೆ ಎಳೆಯಲಾಗಿದೆ.
ಇರಾನ್ ನ ಕಚ್ಚಾತೈಲ ಹೊತ್ತ ಎರಡು ಹಡಗುಗಳು ಭಾರತಕ್ಕೆ
ಹೊಸದಿಲ್ಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಶಾಂತಿಸ್ಥಾಪನೆ ಪ್ರಯತ್ನಗಳು ಫಲ ನೀಡದೇ ಅನಿಶ್ಚಿತತೆ ಮುಂದುವರಿದಿದ್ದರೂ, ಇರಾನ್ ನಿಂದ ಕಚ್ಚಾತೈಲ ಹೊತ್ತ ಎರಡು ಟ್ಯಾಂಕರ್ ಗಳು ಭಾರತೀಯ ಬಂದರುಗಳಿಗೆ ಬಂದಿಳಿದಿವೆ. 2019ರ ಮೇ ತಿಂಗಳ ಬಳಿಕ ಮೊದಲ ಬಾರಿಗೆ ಇರಾನ್ ಕಚ್ಚಾತೈಲ ಭಾರತವನ್ನು ತಲುಪಿವೆ. ಕೆಪ್ಲರ್ ಹಡಗು ಟ್ರ್ಯಾಕಿಂಗ್ ಸೌಲಭ್ಯದ ಮಾಹಿತಿಯ ಪ್ರಕಾರ, ಭಾರಿ ಗಾತ್ರದ ಕಚ್ಚಾತೈಲ ಹೊತ್ತ ಫೆಲಿಸಿಟಿ ಟ್ಯಾಂಕರ್ ಸುಮಾರು 20 ಲಕ್ಷ ಬ್ಯಾರಲ್ ತೈಲವನ್ನು ಭಾರತಕ್ಕೆ ಹೊತ್ತು ತಂದಿವೆ. ಇವು ರವಿವಾರ ತಡರಾತ್ರಿ ಗುಜರಾತ್ ಕರಾವಳಿಯ ಸಿಕ್ಕಾ ಬಂದರಿನ ಬಳಿ ಲಂಗರು ಹೂಡಿವೆ. ಇಷ್ಟೇ ಪ್ರಮಾಣದ ಕಚ್ಚಾತೈಲವನ್ನು ಹೊತ್ತು ತಂದಿರುವ ಜಯಾ ಹಡಗು ಇದೇ ವೇಳೆಗೆ ಒಡಿಶಾದ ಪಾರಾದೀಪ್ ಕರಾವಳಿಯನ್ನು ತಲುಪಿದೆ. ಫೆಲಿಸಿಟಿ ಹಾಗೂ ಜಯಾ ತೈಲ ಸಾಗಾಣಿಕೆ ಹಡಗುಗಳಿಗೆ ಇರಾನ್ ನ ಅತಿದೊಡ್ಡ ಬಂದರು ಸೌಲಭ್ಯವಾದ ಖರ್ಗ್ ದ್ವೀಪದಲ್ಲಿ ತೈಲ ಭರ್ತಿ ಮಾಡಲಾಗಿದೆ. ದೇಶದ ಒಟ್ಟು ತೈಲ ರಫ್ತಿನ ಶೇಕಡ 90ರಷ್ಟು ಪಾಲನ್ನು ಇದು ನಿರ್ವಹಿಸುತ್ತದೆ. ಫೆಲಿಸಿಟಿ ಹಡಗಿನ ಸಂಚಾರ ಮಾರ್ಚ್ ಮಧ್ಯದ ವೇಳೆ ಆರಂಭವಾಗಿದ್ದು, ಜಯಾ ಹಡಗು ಫೆಬ್ರುವರಿ ಕೊನೆ ವೇಳೆಗೆ ಅಂದರೆ ಇರಾನ್-ಅಮೆರಿಕ- ಇಸ್ರೇಲ್ ಸಂಘರ್ಷ ಆರಂಭಕ್ಕೆ ಮುನ್ನ ಪ್ರಯಾಣ ಆರಂಭಿಸಿವೆ. ಆದರೆ ಈ ಎರಡು ಹಡಗುಗಳು ಭಾರತಕ್ಕೆ ಆಗಮಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಶಿಪ್ಪಿಂಗ್ ಸಚಿವಾಲಯ ತಿಳಿಸಿದೆ.
ಇರಾನ್ ನ ಕಚ್ಚಾತೈಲ ಹೊತ್ತ ಎರಡು ಟ್ಯಾಂಕರ್ ಹಡಗುಗಳು ಭಾರತಕ್ಕೆ
ಹೊಸದಿಲ್ಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಶಾಂತಿಸ್ಥಾಪನೆ ಪ್ರಯತ್ನಗಳು ಫಲ ನೀಡದೇ ಅನಿಶ್ಚಿತತೆ ಮುಂದುವರಿದಿದ್ದರೂ, ಇರಾನ್ ನಿಂದ ಕಚ್ಚಾತೈಲ ಹೊತ್ತ ಎರಡು ಟ್ಯಾಂಕರ್ ಗಳು ಭಾರತೀಯ ಬಂದರುಗಳಿಗೆ ಬಂದಿಳಿದಿವೆ. 2019ರ ಮೇ ತಿಂಗಳ ಬಳಿಕ ಮೊದಲ ಬಾರಿಗೆ ಇರಾನ್ ಕಚ್ಚಾತೈಲ ಭಾರತವನ್ನು ತಲುಪಿವೆ. ಕೆಪ್ಲರ್ ಹಡಗು ಟ್ರ್ಯಾಕಿಂಗ್ ಸೌಲಭ್ಯದ ಮಾಹಿತಿಯ ಪ್ರಕಾರ, ಭಾರಿ ಗಾತ್ರದ ಕಚ್ಚಾತೈಲ ಹೊತ್ತ ಫೆಲಿಸಿಟಿ ಟ್ಯಾಂಕರ್ ಸುಮಾರು 20 ಲಕ್ಷ ಬ್ಯಾರಲ್ ತೈಲವನ್ನು ಭಾರತಕ್ಕೆ ಹೊತ್ತು ತಂದಿವೆ. ಇವು ರವಿವಾರ ತಡರಾತ್ರಿ ಗುಜರಾತ್ ಕರಾವಳಿಯ ಸಿಕ್ಕಾ ಬಂದರಿನ ಬಳಿ ಲಂಗರು ಹೂಡಿವೆ. ಇಷ್ಟೇ ಪ್ರಮಾಣದ ಕಚ್ಚಾತೈಲವನ್ನು ಹೊತ್ತು ತಂದಿರುವ ಜಯಾ ಹಡಗು ಇದೇ ವೇಳೆಗೆ ಒಡಿಶಾದ ಪಾರಾದೀಪ್ ಕರಾವಳಿಯನ್ನು ತಲುಪಿದೆ. ಫೆಲಿಸಿಟಿ ಹಾಗೂ ಜಯಾ ತೈಲ ಸಾಗಾಣಿಕೆ ಹಡಗುಗಳಿಗೆ ಇರಾನ್ ನ ಅತಿದೊಡ್ಡ ಬಂದರು ಸೌಲಭ್ಯವಾದ ಖರ್ಗ್ ದ್ವೀಪದಲ್ಲಿ ತೈಲ ಭರ್ತಿ ಮಾಡಲಾಗಿದೆ. ದೇಶದ ಒಟ್ಟು ತೈಲ ರಫ್ತಿನ ಶೇಕಡ 90ರಷ್ಟು ಪಾಲನ್ನು ಇದು ನಿರ್ವಹಿಸುತ್ತದೆ. ಫೆಲಿಸಿಟಿ ಹಡಗಿನ ಸಂಚಾರ ಮಾರ್ಚ್ ಮಧ್ಯದ ವೇಳೆ ಆರಂಭವಾಗಿದ್ದು, ಜಯಾ ಹಡಗು ಫೆಬ್ರುವರಿ ಕೊನೆ ವೇಳೆಗೆ ಅಂದರೆ ಇರಾನ್-ಅಮೆರಿಕ- ಇಸ್ರೇಲ್ ಸಂಘರ್ಷ ಆರಂಭಕ್ಕೆ ಮುನ್ನ ಪ್ರಯಾಣ ಆರಂಭಿಸಿವೆ. ಆದರೆ ಈ ಎರಡು ಹಡಗುಗಳು ಭಾರತಕ್ಕೆ ಆಗಮಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಶಿಪ್ಪಿಂಗ್ ಸಚಿವಾಲಯ ತಿಳಿಸಿದೆ.
ಭಾರತದ ನೌಕಾಯಾನಕ್ಕೆ ಬೆಂಬಲ: ಅಮೆರಿಕ ದಿಗ್ಬಂಧನದ ನಡುವೆಯೇ ಇರಾನ್ ಘೋಷಣೆ
ಟೆಹರಾನ್: ಭಾರತದ ಜತೆ ಉತ್ತಮ ಸಂಪರ್ಕ ಹೊಂದಿರುವ ಇರಾನ್, ಹಾರ್ಮುಝ್ ಜಲಸಂಧಿಯ ಮೂಲಕ ಭಾರತದ ಹಡಗುಗಳು ಸರಾಗವಾಗಿ ಸಾಗಲು ಅವಕಾಶ ಮಾಡಿಕೊಡುವುದಾಗಿ ಇರಾನ್ ಪ್ರಕಟಿಸಿದೆ. ಹಾರ್ಮುಝ್ ಜಲಸಂಧಿ ಮೂಲಕ ಭಾರತೀಯ ಹಡಗುಗಳು ಹಾದುಹೋಗುವಾಗ ಭಾರತೀಯ ಟ್ಯಾಂಕರ್ ಗಳಿಗೆ ಸುಂಕ ವಿಧಿಸಲಾಗುತ್ತಿದೆ ಎಂಬ ಆರೋಪವನ್ನು ಇರಾನ್ ಬಲವಾಗಿ ತಳ್ಳಿಹಾಕಿದೆ. ಭಾರತದಲ್ಲಿ ಇರಾನ್ ರಾಯಭಾರಿಯಾಗಿರುವ ಮೊಹ್ಮದ್ ಫತ್ಹಾಲಿ ಈ ಸಂಬಂಧ ಮಾಧ್ಯಮದ ಜತೆಗೆ ಮಾತನಾಡಿ, ಭಾರತ ಹಾಗೂ ಇರಾನ್ ಸಮಾನ ಭವಿಷ್ಯ ಮತ್ತು ಹಿತಾಸಕ್ತಿಯನ್ನು ಹಂಚಿಕೊಳ್ಳುತ್ತಿವೆ. ಉಭಯ ದೇಶಗಳು ಸವಾಲಿನ ಸಂದರ್ಭದಲ್ಲಿ ಕೂಡಾ ಗಾಢವಾದ ಸಂಬಂಧವನ್ನು ನಿರ್ವಹಿಸಿಕೊಂಡು ಬರುತ್ತಿವೆ ಎಂದು ಸ್ಪಷ್ಟಪಡಿಸಿದರು. ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಸಂಬಂಧಗಳು ಉತ್ತಮವಾಗಿವೆ. ಭಾರತ ಹಾಗೂ ಇರಾನ್ ಸಮಾನ ಹಿತಾಸಕ್ತಿ ಹಾಗೂ ಭವಿಷ್ಯವನ್ನು ಹೊಂದಿವೆ ಎನ್ನುವುದು ನನ್ನ ಭಾವನೆ ಎಂದು ಹೇಳಿದರು. ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳು ಇರಾನ್ ಗೆ ಸುಂಕ ಪಾವತಿ ಮಾಡುವುದನ್ನು ತಡೆಯುವ ಸಲುವಾಗಿ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ಭಾರತೀಯ ಹಡಗುಗಳಿಗೆ ಸುಂಕ ವಿಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಭಾರತದ ಟ್ಯಾಂಕರ್ ಗಳಿಗೆ ಸುಂಕ ವಿಧಿಸಲಾಗುತ್ತಿದೆಯೇ ಎನ್ನುವುದನ್ನು ನೀವು ಭಾರತ ಸರ್ಕಾರವನ್ನು ಕೇಳಿ ದೃಢಪಡಿಸಿಕೊಳ್ಳಬಹುದು ಎಂದರು. ಈ ಜಲಮಾರ್ಗದ ಮೂಲಕ ಆಗಮಿಸುತ್ತಿರುವ ಒಂಬತ್ತು ಹಡಗುಗಳಿಗೆ ಭಾರತ ಯಾವುದೇ ಸುಂಕ ಪಾವತಿಸಿಲ್ಲ ಎಂದು ಭಾರತ ಹಲವು ಬಾರಿ ಸ್ಪಷ್ಟನೆ ನೀಡಿತ್ತು. ಹಾರ್ಮುಝ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ನಿಷೇಧ ಹೇರಿದ ಬಳಿಕ ಭಾರತದ ಒಂಬತ್ತು ಎಲ್ ಪಿಜಿ ಟ್ಯಾಂಕರ್ ಗಳು ಈ ಮೂಲಕ ಹಾದು ಬಂದಿವೆ. 15 ಭಾರತೀಯ ಟ್ಯಾಂಕರ್ ಗಳು ಇನ್ನೂ ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ.
ರೈತರಿಗೆ ಗುಡ್ ನ್ಯೂಸ್! ಸಿಗಲಿದೆ ಫಸಲ್ ಬಿಮಾ ಆರ್ಥಿಕ ಬಲ
ಕೇಂದ್ರ ಸರ್ಕಾರದ ಈ ವಿಮಾ ಯೋಜನೆಯು ಪ್ರಕೃತಿ ವಿಕೋಪಗಳಾದ ಬರ, ಪ್ರವಾಹ, ಕೀಟಬಾಧೆ ಹಾಗೂ ರೋಗಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶೇಷವಾಗಿ ಬರಪೀಡಿತ ಪ್ರದೇಶದ ರೈತರಿಗೆ ಇದು ಆರ್ಥಿಕ ಚೈತನ್ಯ ತುಂಬಿದ್ದು, ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಈ ಯೋಜನೆ ಒಂದು ದೊಡ್ಡ ವರದಾನವಾಗಿ ಪರಿಣಮಿಸಿದೆ.
ತಿಪಟೂರು ಕೊಬ್ಬರಿಗೆ ದಾಖಲೆಯ 38 ಸಾವಿರ ರೂ ಬೆಲೆ: 40 ಸಾವಿರ ರೂ ತಲುಪುವ ನಿರೀಕ್ಷೆ! ರೈತರು ಖುಷ್
ತುಮಕೂರು ಜಿಲ್ಲೆ ತಿಪಟೂರಿನ ಕೊಬ್ಬರಿಗೆ ಉತ್ತರ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಕೇವಲ 10 ದಿನದಲ್ಲೇ 8 ಸಾಔಇರ ರೂಪಾಯಿ ಬೆಲೆ ಏರಿಕೆ ಆಗಿದೆ. ಇದು 40 ಸಾವಿರ ದಾಟುವ ನಿರೀಕ್ಷೆಯೂ ಇದೆ.
ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ರೊಬೊಟಿಕ್ಸ್ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದೆ. ಆದರೆ, ಈ ಯಂತ್ರಗಳಿಗೆ ಮನುಷ್ಯರಂತೆ ಕೆಲಸ ಮಾಡಲು ಕಲಿಸುವುದು ಎಷ್ಟು ಕಷ್ಟ ಮತ್ತು ದುಬಾರಿ ಎಂಬುದನ್ನು ಇತ್ತೀಚಿನ ಒಂದು ವಿದ್ಯಮಾನ ಜಗತ್ತಿಗೆ ಪರಿಚಯಿಸಿದೆ. ಹೌದು, ಭಾರತದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇದೀಗ ತಮ್ಮ ತಲೆಗೆ ಕ್ಯಾಮೆರಾಗಳನ್ನು (Head-mounted cameras)
ನಾಳೆಯಿಂದ (ಏ.15) ತುಳುನಾಡಿಗೆ ಹೊಸ ವರ್ಷ: ಮನೆ ಮನೆಗಳಲ್ಲಿ ಬಿಸು ಪರ್ಬ ಆಚರಣೆ , ಪ್ರಕೃತಿಯಲ್ಲಿ ಹೊಸತನದ ತೆನೆ
ಪ್ರಕೃತಿ ಆರಾಧನೆ ಬಹುಮುಖ್ಯ ಭಾಗವಾಗಿರುವ ಉಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಾಳೆ ಬಿಸುಪರ್ಬ ಆಚರಿಸಲಾಗುತ್ತಿದ್ದು, ಹೊಸವರ್ಷಕ್ಕೆ ಹೊಸದಾಗಿ ಬೆಳೆದ ತರಕಾರಿ, ಹೂ ಹಣ್ಣು ಹಾಗೂ ದೇವರ ಭಾವಚಿತ್ರ-ಕನ್ನಡಿ ಇಟ್ಟು ದೀಪ ಬೆಳಗಿ ಹೊಸ ವರ್ಷದ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ.
ಪಿಯುಸಿಯ ಎರಡೂ ಪರೀಕ್ಷೆಗಳಲ್ಲಿ ಪಡೆದ ಅಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2 ಅನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಎರಡು ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆಯುತ್ತಾರೋ, ಆ ಅಂಕಗಳನ್ನೇ ಸಿಇಟಿ ಪರೀಕ್ಷೆಯ ಫಲಿತಾಂಶಕ್ಕೆ ಪರಿಗಣನೆ ಮಾಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಕೆಲ ಅಭ್ಯರ್ಥಿಗಳು ಪರೀಕ್ಷೆ-1 ರಲ್ಲಿ ಪಡೆದ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಎರಡನೇ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ಹಿಂದಿನ ವರ್ಷದಂತೆ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನು ಸಿಇಟಿ ರಾಂಕ್ಗೆ ಪರಿಗಣಿಸಲಾಗುತ್ತದೆ ಎಂದಿದ್ದಾರೆ. ದ್ವಿತೀಯ ಪಿಯುಸಿಯ ಎರಡೂ ಪರೀಕ್ಷೆಗಳ ಫಲಿತಾಂಶ ಬಂದ ನಂತರವೇ ಸಿಇಟಿ ಫಲಿತಾಂಶ ಪ್ರಕಟಿಸುವುದು. ಹೀಗಾಗಿ ಎರಡನೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದಿಲ್ಲ ಎನ್ನುವುದು ಸುಳ್ಳು. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ. ಹಾಗೆಯೇ ಕರ್ನಾಟಕ ರಾಜ್ಯ ಪಠ್ಯಕ್ರಮದ ಪಿಯುಸಿ ಅಭ್ಯರ್ಥಿಗಳಿಗೆ ಮಾತ್ರ ಈ ಎರಡು ಪರೀಕ್ಷೆಗಳ ನಿಯಮ ಅನ್ವಯವಾಗುತ್ತದೆ. ಉಳಿದಂತೆ ಕೇಂದ್ರ ಹಾಗೂ ಇತರ ರಾಜ್ಯಗಳ ಬೋರ್ಡ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
1700 ಕೋಟಿ ರೂ. ಗಳಿಕೆಯ ದಾಖಲೆ ನಿರ್ಮಿಸಿದ ಮೊದಲ ಹಿಂದಿ ಚಿತ್ರ ʼಧುರಂಧರ್ 2ʼ!
ಮುಂಬೈ: 'ಧುರಂಧರ್2: ದಿ ರಿವೇಂಜ್' ಚಿತ್ರ ನಾಲ್ಕನೇ ವಾರಾಂತ್ಯದಲ್ಲಿ 1700 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದ್ದು, ಈ ಮೈಲುಗಲ್ಲು ಸ್ಥಾಪಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ. ನಾಲ್ಕನೇ ವಾರಾಂತ್ಯವಾದ ರವಿವಾರ ಚಿತ್ರ 14.75 ಕೋಟಿ ರೂಪಾಯಿ ನಿವ್ವಳ ಮತ್ತು 17.68 ಕೋಟಿ ರೂಪಾಯಿ ಒಟ್ಟಾರೆ ಆದಾಯ ಗಳಿಸಿದೆ ಎಂದು ಸ್ಕ್ಯಾನ್ಲಿಕ್ ವರದಿ ಮಾಡಿದೆ. ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಗೂಢಚರ್ಯ-ಆ್ಯಕ್ಷನ್ ಚಿತ್ರ ನಾಲ್ಕನೇ ವಾರ 35.25 ಕೋಟಿ ರೂಪಾಯಿ ನಿವ್ವಳ ಹಾಗೂ 42.25 ಕೋಟಿ ರೂಪಾಯಿ ಒಟ್ಟು ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ ಧುರಂಧರ್ ಚಿತ್ರ ನಾಲ್ಕನೇ ವಾರ ಸೃಷ್ಟಿಸಿದ್ದ ದಾಖಲೆಯನ್ನು ಹಿಂದಿಕ್ಕುವಲ್ಲಿ ಧುರಂಧರ್-2 ವಿಫಲವಾಗಿದೆ. ಸರಣಿಯ ಮೊದಲ ಚಿತ್ರ ನಾಲ್ಕನೇ ವಾರ ನಿವ್ವಳ 35.25 ಕೋಟಿ ಹಾಗೂ ಒಟ್ಟಾರೆ 58 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ನಿಧಾನ ಇಳಿಕೆ ಕಾಣುತ್ತಾ ಬಂದಿದೆ. ಮೊದಲ ವಾರ 674.17 ಕೋಟಿ ಆದಾಯ ಗಳಿಸಿದ್ದ ಚಿತ್ರ 2 ಹಾಗೂ 3ನೇ ವಾರದಲ್ಲಿ ಕ್ರಮವಾಗಿ 263.65 ಹಾಗೂ 110.60 ಕೋಟಿ ಆದಾಯ ಗಳಿಸಿತು. ಭಾರತದಲ್ಲಿ ಈ ಚಿತ್ರದ ಗಳಿಕೆ ಒಟ್ಟು 1083.67 ಕೋಟಿ ರೂಪಾಯಿ. ಚಿತ್ರ ನಿವ್ವಳ 1297.48 ಕೋಟಿ ಆದಾಯ ಗಳಿಸಿದ್ದು, 415.50 ಕೋಟಿ ರೂಪಾಯಿ ಸಾಗರೋತ್ತರ ಆದಾಯ ಗಳಿಸಿದೆ. ಧುರಂಧರ್-2 ಒಟ್ಟುಆದಾಯ 1700 ಕೋಟಿ ರೂಪಾಯಿ ದಾಟಿದೆ. ಚಿತ್ರದ ವಿಶ್ವವ್ಯಾಪಿ ಗಳಿಕೆ 1712.98 ಕೋಟಿ ಆಗಿದ್ದು, ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗದಿದ್ದರೂ, 25 ದಿನಗಳಲ್ಲಿ ವಿಶ್ವಾದ್ಯಂತ 1700 ಕೋಟಿ ರೂಪಾಯಿ ಗಳಿಸಿದ ಮೊದಲ ಚಿತ್ರ ಎನಿಸಿದೆ ಎಂದು ವರದಿಯಾಗಿದೆ.
Ponnampet | ಧರಣಿನಿರತರು ಬಳಸುತ್ತಿದ್ದ ಬಾವಿ ನೀರನ್ನು ಕಲುಷಿತಗೊಳಿಸಿದ ಕಿಡಿಗೇಡಿಗಳು
ಮಡಿಕೇರಿ : ನಿವೇಶನಕ್ಕಾಗಿ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಡ ಕುಟುಂಬಗಳು ಬಳಸುತ್ತಿದ್ದ ಬಾವಿ ನೀರನ್ನು ಕಿಡಿಗೇಡಿಗಳು ಕಲುಷಿತಗೊಳಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋತ್ರಿಕಾಡು ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆ ಹಾಗೂ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕೋತ್ರಿಕಾಡು ಎಂಬಲ್ಲಿ ನಿವೇಶನಕ್ಕಾಗಿ ಒತ್ತಾಯಿಸಿ ಸುಮಾರು 185 ಕುಟುಂಬಗಳು ಧರಣಿ ನಡೆಸುತ್ತಿವೆ. ಧರಣಿನಿರತರು ಬಳಸುತ್ತಿದ್ದ ಕುಡಿಯುವ ನೀರಿನ ಬಾವಿಗೆ ಕಿಡಿಗೇಡಿಗಳು ಬಟ್ಟೆ ಒಗೆಯುವ ಸರ್ಫ್ ಪೌಡರ್ ಹಾಕಿ ಕಲುಷಿತಗೊಳಿಸಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿ ಧರಣಿನಿರತರು ಅಳಲನ್ನು ತೋಡಿಕೊಂಡ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಆಲೀರ ರಶೀದ್ ಅವರು ಟ್ಯಾಂಕರ್ ಮೂಲಕ ಹೋರಾಟಗಾರರಿಗೆ ಕುಡಿಯುವ ನೀರು ಸರಬರಾಜಿನ ವ್ಯವಸ್ಥೆ ಮಾಡಿದರು. ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಯತಿರಾಜ್ ಸೂಚನೆ ಮೇರೆಗೆ ಆರೋಗ್ಯ ಸಿಬ್ಬಂದಿ ಧರಣಿನಿರತರ ಆರೋಗ್ಯ ತಪಾಸಣೆ ಮಾಡಿದರು. ಅಗತ್ಯವಿದ್ದವರಿಗೆ ಮಾತ್ರೆ ಹಾಗೂ ಔಷಧಿ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಎಚ್.ಆರ್.ಮಾದೇಶ, ಕೋತ್ರಿಕಾಡು ಪೈಸಾರಿ ಎಂಬಲ್ಲಿ ಸೂರಿಗಾಗಿ ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇದೆ. ಈ ಭಾಗದಲ್ಲಿ ಜಿಲ್ಲಾ ಪಂಚಾಯತ್ಗೆ ಒಳಪಟ್ಟ ಬಾವಿ ಇದ್ದು, ಅದರಿಂದ ಅಲ್ಪಸ್ವಲ್ಪ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಬಾವಿಯೊಳಗೆ ಯಾರೋ ಕಿಡಿಗೇಡಿಗಳು ಬಟ್ಟೆ ಒಗೆಯಲು ಉಪಯೋಗಿಸುವ ಸರ್ಫ್ ಪೌಡರ್ ಹಾಕಿ ಕುಡಿಯಲು ಯೋಗ್ಯವಿಲ್ಲದಂತೆ ಮಾಡಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಕೋತ್ರಿಕಾಡು ಪೈಸಾರಿ ಬಹುಜನ ಕಾರ್ಮಿಕ ಸಂಘಟನಾ ಸಮಿತಿ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಯಶೋದಾ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಜೆ.ಎ.ಲಕ್ಷ್ಮಿ, ಗೀತಾ, ಕವಿತಾ, ಕಾವೇರಿ, ರಾಣಿ, ಕೌಶಿಕ್, ಜ್ಯೋತಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್ ಮಾರಕ ಬೌಲಿಂಗ್ ದಾಳಿಗೆ ಮಣಿದ ಆರ್ಆರ್
SRH VS RR IPL 2026: ಹೈದರಾಬಾದ್ನಲ್ಲಿ ಸೋಮವಾರ (ಏಪ್ರಿಲ್ 13) ನಡೆದ ಐಪಿಎಲ್ 2026ರ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 57 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ರೋಚಕ ಹಣಾಹಣಿಯಲ್ಲಿ ವೇಗಿಗಳಾದ ಸಾಕಿಬ್ ಹುಸೇನ್ ಮತ್ತು ಪ್ರಫುಲ್ ಹಿಂಗೆ ತಲಾ 4 ವಿಕೆಟ್ ಪಡೆಯುವ ಮೂಲಕ ಎಸ್ಆರ್ಎಚ್
IPL 2026- SRHನಲ್ಲಿ ಪದಾರ್ಪಣೆ ವೀರರದ್ದೇ ಕಾರುಬಾರು! ಪ್ರಫುಲ್ ಹಿಂಗೆ, ಸಕಿಬ್ ದಾಳಿಗೆ ಸಿಲುಕಿ ಹೆಂಗೆಂಗೋ ಆಡಿದ RR!
ಇದಕ್ಕೇ ಹೇಳುವುದು ಐಪಿಎಲ್ ಎಂದರೆ ಅಚ್ಚರಿಗಳ ಮೂಟೆ ಎಂದು! ಸೀಸನ್ ನಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ನೀಡಿದ್ದು ಸನ್ ರೈಸರ್ಸ್ ತಂಡದ ಪರವಾಗಿ ಪದಾರ್ಪಣೆ ಪಂದ್ಯವನ್ನಾಡಿದ ಅಬ್ಬಾ ಪ್ರಫುಲ್ ಕುಮಾರ್ ಹಿಂಗೆ ಮತ್ತು ಸಕಿಬ್ ಹುಸೇನ್! ಇಬ್ಬರು ಮಧ್ಯಮವೇಗಿಗಳ ಬಿಗು ದಾಳಿಗೆ ನಿರುತ್ತರವಾದ ರಿಯಾನ್ ಪರಾಗ್ ಬಳಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಂದೆ 57 ರನ್ ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನ ಮೂಲಕ ಆಡಿರುವ 5 ರಪದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲಿನೊಂದಿಗೆ 4 ಅಂಕ ಸಂಪಾದಿಸಿರುವ ಸನ್ ರೈಸರ್ಸ್ ತಂಡ ಯಲ್ಲಿ 4ನೇ ಸ್ಥಾನಕ್ಕೇರಿತು. ಸೀಸನ್ ನಲ್ಲಿ ಮೊದಲ ಸೋಲಾಗಿದ್ದರೂ 5 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕ ಹೊಂದಿರುವ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏಪ್ರಿಲ್ 13ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ 19 ಓವರ್ ಗಳಲ್ಲಿ 159 ರನ್ ಗಳಿಗೆ ಆಲೌಟ್ ಆಯಿತು. () ಸಂಕ್ಷಿಪ್ತ ಸ್ಕೋರ್ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 216/6, ಇಶಾನ್ ಕಿಶನ್ 91(44), ಹೆನ್ರಿಚ್ ಕ್ಲಾಸನ್ 40(26), ನಿತೀಶ್ ರೆಡ್ಡಿ 28(13) ಸಲಿಲ್ ಅರೋರಾ 24(13), ಜೋಫ್ರಾ ಆರ್ಚರ್ 37ಕ್ಕೆ 2, ಸಂದೀಪ್ ಶಕರ್ಮಾ
ಎಲ್ಲೇ ಇದ್ದರೂ ಸಮಾನತೆ ಕಾಪಾಡಿಕೊಳ್ಳುತ್ತೇನೆ : ದುನಿಯಾ ವಿಜಯ್
ಬೆಂಗಳೂರು : ನಾನು ಎಲ್ಲೇ ಇದ್ದರೂ ಸಮಾನತೆಯನ್ನು ಕಾಪಾಡಿಕೊಳ್ಳುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡುತ್ತಾ, ಸಮಾನವಾಗಿ ಮಾತನಾಡಿಸುತ್ತೇನೆ. ಜೀವನದಲ್ಲಿ ಯಾರೂ ಬಡವರಾಗಿ ಬದುಕಬಾರದು. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ನಟ ದುನಿಯಾ ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ನಗರದ ಸ್ಫೂರ್ತಿಧಾಮದಲ್ಲಿ ಅಂಬೇಡ್ಕರ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಯುವಜನರಿಗಾಗಿ ಅಂಬೇಡ್ಕರ್’ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ಕೆಲಸದಲ್ಲಿ ಶ್ರದ್ಧೆಯಿರಬೇಕು. ಅದು ನಮ್ಮನ್ನು ಹೆಚ್ಚು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರು 40 ವರ್ಷ ಕಷ್ಟಪಟ್ಟು ನಮಗಾಗಿ ಅವರ ಜೀವನವೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು. ಎಲ್ಲರೂ ಸಮಾನವಾಗಿರಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟಪಟ್ಟು ಬರೆದ ಸಂವಿಧಾನವನ್ನು ನಾವು ಮರೆಯುತ್ತಿದ್ದೇವೆ. ಆದ್ದರಿಂದ ಪ್ರಶ್ನೆ ಕೇಳುವುದನ್ನು ಕಲಿಯುವುದೇ ಜೀವನವಾಗಿದೆ ಎಂದು ಹೇಳಿದರು. ಚಿಂತಕ ಡಾ.ಸಿ.ಜಿ.ಲಕ್ಷ್ಮೀಪತಿ ಮಾತನಾಡಿ, ಭಾರತದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹಾಡು ಹಾಡುವ ರ್ಯಾಪರ್ಗಳು ಈಗ ಹೆಚ್ಚಾಗಿದಾರೆ. ಒಂದು ವಿಚಾರವೆಂದರೆ ಕೇವಲ ಭಾಷಣ, ಚಳವಳಿ ಮಾತ್ರ ಅಲ್ಲ. ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದಾಗ ಮಾತ್ರ ಅದಕ್ಕೆ ಒಂದು ಅರ್ಥ ಬರುತ್ತದೆ. ಅಂಬೇಡ್ಕರ್ ಅವರು ಈಗ ಸಿನೆಮಾದ ಒಳಗಡೆ ಕೂಡ ಪ್ರವೇಶ ಮಾಡಿದ್ದಾರೆ ಎಂದು ಹೇಳಿದರು. ನನಗೆ ನೆನಪು ಇರುವ ಹಾಗೆ ಕನ್ನಡ ಸಿನೆಮಾಗಳಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಗಳನ್ನು ತೋರಿಸುತ್ತಿದ್ದರು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೋರಿಸುತ್ತಿರಲಿಲ್ಲ. ಅಷ್ಟೊಂದು ಪೂರ್ವಾಗ್ರಹ, ತಪ್ಪು ಕಲ್ಪನೆ ಹಾಗೂ ಜಾತಿಯ ಮನೋಭಾವದಿಂದ ನೋಡುತ್ತಿದ್ದರು. ಈಗ ತಮಿಳು ಹಾಗೂ ಕನ್ನಡ ಸಿನೆಮಾಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ವಿಚಾರಗಳನ್ನು ಹೇಳುವಷ್ಟು ಬೆಳವಣಿಗೆಯಾಗಿದೆ ಎಂದು ತಿಳಿಸಿದರು. ನಾಳೆಯ ಕನಸು ಮತ್ತು ಭವಿಷ್ಯವನ್ನು ನಾಶ ಮಾಡುವವರು ಬರುತ್ತಾರೆ. ಭಾರತದಲ್ಲಿ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆಯಾಗಿದೆ. ಹಾಗೂ ಅತೀ ಕಡಿಮೆ ಸಂಬಳಕೊಟ್ಟು ಗುಲಾಮಗಿರಿಯ ಜೀತಗಾರಿಕೆಯನ್ನು ಮಾಡಿಸಲಾಗುತ್ತಿದೆ. ಬಂಡವಾಳಶಾಹಿಗಳ ಕೈಯಲ್ಲಿ ಒಳಗಾಗಿದ್ದೇವೆ. ಮಹಿಳೆಯರ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ನಾವು ಎಷ್ಟು ಮೂರ್ಖರಾಗಿರುತ್ತೇವೆ ಎಂದರೆ, ನಮ್ಮ ಜನರನ್ನು ತುಳಿಯುವವರನ್ನೇ ಹೆಗಲ ಮೇಲೆ ಹೊತ್ತು ಮೆರೆಸುತ್ತೇವೆ. ಅವರನ್ನು ಚುನಾವಣೆಯಲ್ಲಿ ಮತ್ತೆ ಮತ್ತೆ ಗೆಲ್ಲಿಸುತ್ತೇವೆ. ಗೆದ್ದ ನಂತರ ಅವರು ನಮ್ಮ ಜನರಿಗೆ ಅನ್ಯಾಯವನ್ನು ಮಾಡೇ ಮಾಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಸ್ಫೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ, ಸಂವಾದದ ನಿರ್ದೇಶಕ ಜನಾರ್ಧನ ಕೆಸರಗದ್ದೆ, ಡಾ.ಮುರುಳಿ ಮೋಹನ್ ಕಾಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು-ಮುಂಬೈ ʼವಂದೇ ಭಾರತ್ ಸ್ಲೀಪರ್ ರೈಲುʼ ಸಂಚಾರಕ್ಕೆ ಅಸ್ತು
ಹೊಸದಿಲ್ಲಿ : ಐಟಿ-ಸಿಟಿ ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈಗೆ ನೂತನ ‘ವಂದೇ ಭಾರತ್ ಸ್ಲೀಪರ್ ರೈಲು’ ಸಂಚಾರಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸಂಪರ್ಕಕ್ಕೆ ಅನುಕೂಲವಾಗುವಂತೆ ನೂತನ ವಂದೇ ಭಾರತ್ ರೈಲು ಆರಂಭಿಸಲು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಕೇಂದ್ರ ಸರಕಾರವು ಸಚಿವ ಜೋಶಿ ಅವರ ಮನವಿಗೆ ಸ್ಪಂದಿಸಿದ್ದು, ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಬೆಂಗಳೂರು-ಮುಂಬೈ ಮಧ್ಯೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಈ ನೂತನ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ಗೆ ಸಂಚರಿಸಲಿದೆ. ಬೆಂಗಳೂರಿನಿಂದ ಕರ್ನಾಟಕದ ಮಧ್ಯದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ‘ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್' ರೈಲು ಕಲ್ಪಿಸುವಂತೆ ಸಚಿವ ಜೋಶಿ ಕೋರಿದ್ದರು. ಶೀಘ್ರವೇ ಈ ಸೂಪರ್ ಫಾಸ್ಟ್ ರೈಲು ಸಂಚಾರ ಪ್ರಾರಂಭಿಸಿ, ನಂತರದ ದಿನಗಳಲ್ಲಿ ‘ಅದನ್ನು ವಂದೇ ಭಾರತ್ ಸ್ಲೀಪರ್ ರೈಲು' ಆಗಿ ಬದಲಾಯಿಸುವ ಜೋಶಿ ಪ್ರಸ್ತಾವಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮನ್ನಣೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ : ರಾಜ್ಯದ ಅಭಿವೃದ್ದಿ ಜತೆ ಕಲ್ಯಾಣ ಕರ್ನಾಟಕ ಭಾಗಕ್ಕೂ ಕೇಂದ್ರ ಆದ್ಯತೆ ನೀಡುತ್ತಿದ್ದು, ಇದರಿಂದ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆಗಳ ಜೊತೆಗೆ ಉತ್ತಮ ಸಂಚಾರ ಸೌಲಭ್ಯವನ್ನೂ ಈ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ ಎಂದು ಜೋಶಿ ತಿಳಿಸಿದ್ದಾರೆ.
ರಸ್ತೆ ಅಪಘಾತ ಪ್ರಕರಣ | ಮೃತ ಎಫ್ಡಿಎ ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಿಸಿದ ಹೈಕೋರ್ಟ್
ಬೆಂಗಳೂರು : ಹತ್ತು ವರ್ಷದ ಹಿಂದೆ ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಒಬ್ಬರ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ಹೈಕೋರ್ಟ್ 51.6 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಿದೆ. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ನಿಗದಿಪಡಿಸಿದ್ದ 41.5 ಲಕ್ಷ ರೂ. ಪರಿಹಾರವನ್ನು ಪ್ರಶ್ನಿಸಿ ವಿಮಾ ಕಂಪನಿ ಹಾಗೂ ಪರಿಹಾರ ಹೆಚ್ಚಳ ಕೋರಿ ಮೃತನ ಕುಟುಂಬದವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಅಪಘಾತದ ನಡೆದ ಸ್ಥಳದಲ್ಲಿ ಕೇರಳ ನೋಂದಾಯಿತ ಕಾರು ಎಡಭಾಗದಲ್ಲಿ 25 ಅಡಿ ದೂರದಲ್ಲಿತ್ತು. ಆದರೆ, ಮೃತ ಮತ್ತು ಗಾಯಗೊಂಡವರು ಪ್ರಯಾಣಿಸುತ್ತಿದ್ದ ಕಾರು ಎಡಭಾಗದಲ್ಲಿ ಕೇವಲ 15 ಅಡಿ ದೂರದಲ್ಲಿತ್ತು. ಕೇರಳ ಮೂಲದ ಕಾರಿನ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತಯೇ ಅಪಘಾತ ಸಂಭವಿಸಲು ಕಾರಣ ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮೃತ ವ್ಯಕ್ತಿ ತಿಂಗಳಿಗೆ 2 ಲಕ್ಷ ರೂ. ಮಿಲಿಟರಿ ಪಿಂಚಣಿ ಪಡೆಯುತ್ತಿದ್ದರು, ಅದನ್ನು ನ್ಯಾಯಮಂಡಳಿ ಪರಿಗಣಿಸಬೇಕಾಗಿತ್ತು, ಅದನ್ನು ಪರಿಗಣಿಸುವಲ್ಲಿ ಎಂಎಸಿಟಿ ವಿಫಲವಾಗಿದೆ ಎಂದು ಹೇಳಿರುವ ವಿಭಾಗೀಯ ನ್ಯಾಯಪೀಠವು, ಅದೇ ಅಂಶವನ್ನು ಆಧರಿಸಿ ಪರಿಹಾರ ಮೊತ್ತವನ್ನು 51.6 ಲಕ್ಷ ರೂ.ಗಳ ಹೆಚ್ಚಿಸಿದೆ. ಜತೆಗೆ, ಮೃತರ ಮಗಳಿಗೆ ನಿಗದಿಪಡಿಸಿದ್ದ ಪರಿಹಾರವನ್ನು 3.9 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವ ನ್ಯಾಯಪೀಠ, ಮಗನಿಗೆ ನೀಡಲಾದ ಪರಿಹಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಕರಣವೇನು? ಮಿಲಿಟರಿ ಸೇವೆಯಲ್ಲಿದ್ದು ನಿವೃತ್ತಿ ನಂತರ ಶಹಾಬುದ್ದೀನ್ ಖಾನ್ ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದರು. ಅವರು 2016ರ ಅಕ್ಟೋಬರ್ 10ರಂದು ಬೆಂಗಳೂರಿನಿಂದ ಊಟಿಗೆ ಕಾರಿನಲ್ಲಿ ತೆರಳುತ್ತಿದ್ದರು. ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕೇರಳದ ಕಡೆಯಿಂದ ಬರುತ್ತಿದ್ದ ಕಾರೊಂದು ಇವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಖಾನ್ ಮೃತಪಟ್ಟಿದ್ದರು. ಕಾರಿನಲ್ಲಿದ್ದ 16 ವರ್ಷದ ಪುತ್ರಿ ಹಾಗೂ 18 ವರ್ಷದ ಪುತ್ರ ಸಹ ಗಾಯಗೊಂಡಿದ್ದರು. ಮೃತರ ಪತ್ನಿ, ಪುತ್ರಿ ಹಾಗೂ ಪುತ್ರ ಪರಿಹಾರ ಕೋರಿ ಎಂಎಸಿಟಿ ಮುಂದೆ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮಂಡಳಿ 2023ರ ಜೂನ್ 23ರಂದು ಮೃತರ ಪತ್ನಿಗೆ 41.5 ಲಕ್ಷ, ಪುತ್ರನಿಗೆ 4.7ಲಕ್ಷ ಹಾಗೂ ಪುತ್ರಿಗೆ 3.5 ಲಕ್ಷ ರೂ. ಪರಿಹಾರವನ್ನು ನಿಗದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವಿಮಾ ಕಂಪನಿ, ನ್ಯಾಯಮಂಡಳಿ ಕಾರು ಚಲಾವಣೆ ಮಾಡುತ್ತಿದ್ದ ಶಹಾಬುದ್ದೀನ್ ನಿರ್ಲಕ್ಷ್ಯವನ್ನು ಪರಿಗಣಿಸಿಯೇ ಇಲ್ಲ ಎಂದು ವಾದಿಸಿತ್ತು. ಮತ್ತೊಂದೆಡೆ ಮೃತರ ಕುಟುಂಬದವರು, ಅಪಘಾತ ನಡೆದ ಸ್ಥಳದ ನಕ್ಷೆ (ಸ್ಕೆಚ್) ಸಲ್ಲಿಸಿ ಅದರ ಪ್ರಕಾರ ಕೇರಳ ನೋಂದಾಯಿತ ಕಾರು ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿದೆ. ಆದರೆ, ಅದನ್ನು ಎಂಎಸಿಟಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದ್ದರು.
ರಾಜ್ಯದ ಜೈಲುಗಳಲ್ಲಿನ ಭ್ರಷ್ಟ್ಟಾಚಾರ ತಡೆಯಲು ವರ್ಗಾವಣೆ ಅಸ್ತ್ರ ಪ್ರಯೋಗ : ಡಿಜಿಪಿ ಅಲೋಕ್ ಕುಮಾರ್
ಕೆಜಿಎಫ್ : ರಾಜ್ಯದ ಜೈಲುಗಳಲ್ಲಿನ ಭ್ರಷ್ಟಾಚಾರ ಮತ್ತು ಕೈದಿಗಳಿಗೆ ನೀಡುವ ರಾಜಾತಿಥ್ಯ ತಡೆಯಲು ವರ್ಗಾವಣೆ ಅಸ್ತ್ರ ಪ್ರಯೋಗಿಸಲಾಗಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಕೆಜಿಎಫ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅನೈತಿಕ ಚಟುವಟಿಕೆಗಳಲ್ಲಿ ಶಿಕ್ಷೆಗೊಳಪಟ್ಟು ಜೈಲಿನಲ್ಲಿರುವ ಕೈದಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಕಾರಾಗೃಹಗಳಲ್ಲಿ ದೀರ್ಘಕಾಲ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾಯಿಲು ನಿರ್ಧರಿಸಲಾಗಿದೆ. ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಮತ್ತು ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಈ ಕ್ರಮ ಕೈಗೊಳ್ಳಲಾಗಿದ್ದು, ಜೈಲುಗಳಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆೆ ಎಂದರು. ಸಮಾಜದ ಮುಖ್ಯವಾಹಿನಿಗೆ ಬರಬೇಕು ತಪ್ಪುಮಾಡಿ ಜೈಲಿಗೆ ಬಂದಿದ್ದಿರಾ, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬದುಕಿ, ಜೈಲಿಗೆ ಬಂದ ನಂತರ ಇಲ್ಲಿಯೂ ಅನೈತಿಕ ಚಟುವಟಿಕೆಗಳು ನಡೆಸುವುದು ಎಷ್ಟು ಸರಿ. ಮನೆಯಲ್ಲಿ ನಿಮ್ಮನ್ನು ನಂಬಿಕೊಂಡು ನಿಮ್ಮ ಪತ್ನಿ, ಮಕ್ಕಳು ಇದ್ದಾರೆ. ಸಮಾಜದಲ್ಲಿ ಅವರ ಗೌರವ ಕೂಡ ಮುಖ್ಯವಾಗಿರುತ್ತದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಡಿಜಿಪಿ ಅಲೋಕ್ ಕುಮಾರ್ ಖೈದಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ; ಮೇ.29ರಿಂದ ಶಾಲೆಗಳು ಆರಂಭ
ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 29ರಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅ.2 ರವರೆಗೆ ಮತ್ತು ಎರಡನೇ ಅವಧಿ ಅ.22 ರಿಂದ 2027ರ ಎ.10ರವರೆಗೆ ನಡೆಯಲಿದೆ. ಅ.3 ರಿಂದ ಅ.21ರವರೆಗೆ ದಸರಾ ರಜೆ ಇರಲಿದೆ. ಹೀಗಾಗಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂ.30ರ ಒಳಗೆ ಪೂರ್ಣಗೊಳಿಸಬೇಕು, ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ಸರಕಾರ ತಿಳಿಸಿದೆ. ಶೈಕ್ಷಣಿಕ ವರ್ಷದ ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳಿರಲಿದ್ದು, 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆ 4 ದಿನಗಳು ಮತ್ತು ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡಲಾಗಿದೆ.
IPL 2026 | ರಾಜಸ್ಥಾನ ರಾಯಲ್ಸ್ ವಿರುದ್ಧ SRH ಗೆ ಭರ್ಜರಿ ಗೆಲುವು
ನಡೆಯದ ಸೂರ್ಯವಂಶಿ ಆಟ; ಸಕೀಬ್ ಹುಸೈನ್, ಪ್ರಫುಲ್ ದಾಳಿಗೆ ಆಲೌಟಾದ RR
Keytruda ಎಂದರೇನು? ಭಾರತದ ಕ್ಯಾನ್ಸರ್ ಹೋರಾಟದಲ್ಲಿ ಇದರ ಪಾತ್ರವೇನು?
The Indian Express ತನಿಖಾ ವರದಿಯಲ್ಲಿ ಬಹಿರಂಗವಾದ ಸಂಗತಿಗಳೇನು?; ಇಲ್ಲಿದೆ ಮಾಹಿತಿ
ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯ; ಕುಟುಂಬಸ್ಥರ ಆರೋಪ
ಬೆಳಗಾವಿ : ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬಳು ಮೃತಪಟ್ಟಿರುವ ಆರೋಪ ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಕೇಳಿಬಂದಿದ್ದು, ಮೃತರ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಮೃತರನ್ನು ಕಿತ್ತೂರು ತಾಲೂಕಿನ ಹುಣಶಿಕಟ್ಟಿ ಗ್ರಾಮದ ನಿವಾಸಿ ಈರಮ್ಮಾ ನಾಗಪ್ಪ ಮಾಟೋಳ್ಳಿ (20) ಎಂದು ಗುರುತಿಸಲಾಗಿದೆ. ಎ.10ರಂದು ಹೆರಿಗೆಗಾಗಿ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬಸ್ಥರ ಮಾಹಿತಿ ಪ್ರಕಾರ, ಬಾಣಂತಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಭೇದಿ ಸಮಸ್ಯೆ ಕಾಣಿಸಿ ಕೊಂಡಿತ್ತು. ಈ ಹಿನ್ನೆಲೆ ಸೀಜರಿಯನ್ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರಿಗೆ ಮನವಿ ಮಾಡಿದ್ದರೂ, ವೈದ್ಯರು ಸಾಮಾನ್ಯ ಹೆರಿಗೆ (ನಾರ್ಮಲ್ ಡೆಲಿವರಿ) ಮಾಡುವ ನಿರ್ಧಾರ ಕೈಗೊಂಡಿದ್ದರು ಎಂದು ಆರೋಪಿಸಲಾಗಿದೆ. ಹೆರಿಗೆ ಪ್ರಕ್ರಿಯೆ ವೇಳೆ ಏಕಾಏಕಿ ಬಾಣಂತಿಯ ಸ್ಥಿತಿ ಗಂಭೀರಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ತಾಯಿಯ ಕಣ್ಣೆದುರೇ ಯುವತಿ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ. ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಘಟನೆಯ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣವು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿರಾಟ್ ಕೊಹ್ಲಿಗೆ ಕಾಲು ನೋವು; ಮುಂಬೈ ವಿರುದ್ಧದ ಪಂದ್ಯದಲ್ಲಿ ಮೈದಾನ ತೊರೆದಿದ್ದ ಸ್ಟಾರ್ ಆಟಗಾರ
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ಗಳಿಂದ ರೋಚಕ ಜಯ ಸಾಧಿಸಿದ್ದು, ಈ ವೇಳೆ ಕಾಲುನೋವಿನಿಂದಾಗಿ ವಿರಾಟ್ ಕೊಹ್ಲಿ ಮೈದಾನವನ್ನು ತೊರೆದಿದ್ದು ಕಳವಳಕ್ಕೆ ಕಾರಣವಾಗಿದೆ. 38 ಎಸೆತಗಳಲ್ಲಿ 50 ರನ್ ಗಳಿಸಿದ್ದ ಕೊಹ್ಲಿ ಅವರು ಮುಂಬೈ ತಂಡವು ರನ್ ಚೇಸ್ ಮಾಡುತ್ತಿದ್ದಾಗ ಫೀಲ್ಡಿಂಗ್ ಸಕ್ರಿಯರಾಗಿರಲಿಲ್ಲ. ಕೊಹ್ಲಿ ಬದಲಿಗೆ ಜೇಕಬ್ ಬೆಥೆಲ್ ಬದಲಿ ಫೀಲ್ಡರ್ ಆಗಿ ಆಡಿದ್ದರು. ಆರ್ಸಿಬಿಯ ಮಾಜಿ ನಾಯಕ ಮೈದಾನದಿಂದ ದೂರವೇ ಉಳಿದಿದ್ದರು. ಕೊಹ್ಲಿ ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ರೊಂದಿಗೆ ನಿರ್ಣಾಯಕ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಲ್ಲದೆ, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1,000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡು ವೈಯಕ್ತಿಕ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಮುಂಬೈ ವಿರುದ್ಧ 36 ಇನಿಂಗ್ಸ್ಗಳಲ್ಲಿ 32.18ರ ಸರಾಸರಿಯಲ್ಲಿ ಏಳು ಅರ್ಧಶತಕಗಳ ಸಹಿತ 1,030 ರನ್ ಗಳಿಸಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ 47ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದರು. ಕ್ರಿಸ್ ಗೇಲ್ ದಾಖಲೆಯನ್ನು(46)ಮುರಿದ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಪಂದ್ಯದ ನಂತರ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್, ‘‘ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಅವರು ಈಗ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ’’ ಎಂದರು. ► ರೋಹಿತ್ ಶರ್ಮಾರನ್ನು ಕಾಡಿದ ಗಾಯದ ಸಮಸ್ಯೆ ಇದೇ ವೇಳೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಮಂಡಿರಜ್ಜು ಸಮಸ್ಯೆ ಎದುರಿಸಿದ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಮೈದಾನವನ್ನು ತೊರೆದಿದ್ದರು. ಮುಂಬೈ ತಂಡವು 241 ರನ್ ಗುರಿ ಚೇಸ್ ಮಾಡುತ್ತಿದ್ದಾಗ ಐದನೇ ಓವರ್ನಲ್ಲಿ ರೋಹಿತ್ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಮೈದಾನದಲ್ಲಿ ಚಿಕಿತ್ಸೆ ಪಡೆದರು. ಸಾಧ್ಯವಾದಷ್ಟು ಹೊತ್ತು ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದರು. ಬಳಿಕ ಮೈದಾನವನ್ನು ತೊರೆದರು. ರೋಹಿತ್ ಗಾಯಾಳು ನಿವೃತ್ತಿಯಾದಾಗ 13 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ರೋಹಿತ್ ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಮತ್ತೊಮ್ಮೆ ಬ್ಯಾಟಿಂಗ್ಗೆ ಇಳಿಯದ ಕಾರಣ ಮುಂಬೈ ತಂಡವು 18 ರನ್ಗಳಿಂದ ಸೋಲುಂಡಿತು.
ಸಿಎಸ್ಕೆ, ಗುಜರಾತ್ ನಡುವಿನ ಎರಡೂ ಪಂದ್ಯಗಳ ಸ್ಥಳ ಬದಲಾವಣೆ
ಹೊಸದಿಲ್ಲಿ, ಎ.13: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡು ಪಂದ್ಯಗಳ ಸ್ಥಳಗಳನ್ನು ಬದಲಾವಣೆ ಮಾಡಲಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಎಪ್ರಿಲ್ 26ರಂದು ಮಧ್ಯಾಹ್ನ 3:30ಕ್ಕೆ ಅಹ್ಮದಾಬಾದ್ನಲ್ಲಿ ಹಾಗೂ ಮೇ 21ರಂದು ರಾತ್ರಿ 7:30ಕ್ಕೆ ಚೆನ್ನೈನಲ್ಲಿ ಪಂದ್ಯ ನಿಗದಿಯಾಗಿತ್ತು. ಆದರೆ ಎಪ್ರಿಲ್ 26ರ ಪಂದ್ಯವು ಇದೀಗ ಚೆನ್ನೈನಲ್ಲಿ ನಡೆಯಲಿದ್ದು, ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಮೇ 21ರ ಪಂದ್ಯವನ್ನು ಅಹ್ಮದಾಬಾದ್ಗೆ ಸ್ಥಳಾಂತರಿಸಲಾಗಿದ್ದು, ಇದು ರಾತ್ರಿ 7:30ಕ್ಕೆ ನಡೆಯಲಿದೆ. ಎಪ್ರಿಲ್ 26ರಂದು ಗುಜರಾತ್ನ ಅಹ್ಮದಾಬಾದ್ ಹಾಗೂ ಇತರ ಭಾಗಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುತ್ತಿರುವ ಕಾರಣ ಪಂದ್ಯಗಳ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಪ್ರಕಟನೆಯಲ್ಲಿ ತಿಳಿಸಿದೆ. ಗುಜರಾತ್ ತಂಡವು ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಹಾಗೂ ಎರಡರಲ್ಲಿ ಸೋತಿದೆ. ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಗಳಿಸಿರುವ ಸಿಎಸ್ಕೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ತನಕ ಉಭಯ ತಂಡಗಳು ಐಪಿಎಲ್ನಲ್ಲಿ 8 ಬಾರಿ ಮುಖಾಮುಖಿಯಾಗಿವೆ. ತಲಾ 4ರಲ್ಲಿ ಜಯ ಗಳಿಸಿವೆ. 2025ರ ಐಪಿಎಲ್ನಲ್ಲಿ ಒಂದು ಬಾರಿ ಮುಖಾಮುಖಿಯಾಗಿದ್ದವು. ಆಗ ಗುಜರಾತ್ ತಂಡವು ಸಿಎಸ್ಕೆ ತಂಡವನ್ನು 63 ರನ್ಗಳಿಂದ ಸೋಲಿಸಿತ್ತು. ಸಿಎಸ್ಕೆ ಹಾಗೂ ಗುಜರಾತ್ ಮುಂದಿನ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿವೆ. ಸಿಎಸ್ಕೆ ಮಂಗಳವಾರ ಚೆನ್ನೈನಲ್ಲಿ ಹಾಗೂ ಗುಜರಾತ್ ತಂಡವು ಎ.17ರಂದು ಅಹ್ಮದಾಬಾದ್ನಲ್ಲಿ ಕೆಕೆಆರ್ ತಂಡದ ಸವಾಲನ್ನು ಎದುರಿಸಲಿದೆ.
ಮೂಡುಬಿದಿರೆಯಲ್ಲಿ ಹೆಚ್ಚುತ್ತಿರುವ ಅಪಘಾತ: ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಸುರಿದು ಪ್ರತಿಭಟಿಸಿದ ಸ್ಥಳೀಯರು
ಮೂಡುಬಿದಿರೆ: ಪದೇ ಪದೇ ಅಪಘಾತ ನಡೆಯುತ್ತಿರುವ ರಿಂಗ್ ರೋಡ್ ಆಲಂಗಾರು -ಕಾರ್ಕಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಗೆ ಸ್ಥಳೀಯರು ಸೋಮವಾರ ಟಿಪ್ಪರ್ ನಲ್ಲಿ ಮಣ್ಣು ಸುರಿದು ಮುಚ್ವಿ ಪ್ರತಿಭಟನೆ ನಡೆಸಿದರು. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಭದ್ರತಾ ಕ್ರಮಗಳ ಕೊರತೆ ಎದ್ದು ಕಾಣು ತ್ತಿದೆ. ಕಳೆದ ಕೆಲ ದಿನಗಳಲ್ಲಿ ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದು ಹಲವು ಜೀವಗಳು ಬಲಿಯಾ ಗಿವೆ. ಸೋಮವಾರವೂ ಕಾರೊಂದು ಅಪಘಾತಕ್ಕೀಡಾಗಿ ಸವಾರರು ಗಾಯಗೊಂಡಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಸಾವ೯ಜನಿಕರ ಮನವಿಗೆ ಸ್ಪಂದಿಸದೆ ಇರುವುದರಿಂದ ರೊಚ್ವಿಗೆದ್ದ ಗ್ರಾಮಸ್ಥರು ಟಿಪ್ಪಲ್ ಲಾರಿಯ ಮೂಲಕ ಮಣ್ಣು ತರಿಸಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡ ಸುರಿದು ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸಿದರು. ಈ ರೀತಿ ಪ್ರತಿಭಟಿಸಿದರೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆ ಮೂಲಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ನಡೆಯಬಹುದಾದ ಸಂಬಾವ್ಯ ಅಪಘಾತಗಳನ್ನು ತಪ್ಪಿಸಲು ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇರಾನ್ ಬಂದರುಗಳಿಗೆ ಅಮೆರಿಕ ದಿಗ್ಬಂಧನ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ ಇರಾನ್: ಮುಂದೇನು?
ಇಸ್ಲಾಮಾಬಾದ್ನಲ್ಲಿ ರವಿವಾರ ನಡೆದ ಮಾತುಕತೆ ವಿಫಲವಾದ ನಂತರ ಸೋಮವಾರ ಬೆಳಿಗ್ಗೆ 10:00 ET (20:30 IST) ರಿಂದ ಇರಾನಿನ ಬಂದರುಗಳ ದಿಗ್ಬಂಧನವನ್ನು ಪ್ರಾರಂಭಿಸುವುದಾಗಿ ಅಮೆರಿಕ ಘೋಷಿಸಿದೆ. ಯುಎಸ್ ಮಿಲಿಟರಿ ದಿಗ್ಬಂಧನವು ಹಾರ್ಮುಜ್ ಜಲಸಂಧಿಯ ಮೂಲಕ ಇತರ ದೇಶಗಳಿಗೆ ಅಥವಾ ಅಲ್ಲಿಂದ ಪ್ರಯಾಣಿಸುವ ಹಡಗುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಿರ್ದಿಷ್ಟಪಡಿಸಿದರೂ, ಈ ಅನಿಶ್ಚಿತತೆಯಿಂದಾಗಿ ಈಗಾಗಲೇ ತೈಲ ಬೆಲೆ 100 ಡಾಲರ್ ದಾಟಿದೆ. ವಾಷಿಂಗ್ಟನ್ ಡಿಸಿಯ ಇತ್ತೀಚಿನ- ಸ್ಪಷ್ಟೀಕರಣವು ರವಿವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್ ನಲ್ಲಿ ಮಾಡಿದ ಪೋಸ್ಟ್ಗೆ ವ್ಯತಿರಿಕ್ತವಾಗಿದೆ. ಅದರಲ್ಲಿ ಅವರು ಯುಎಸ್ ನೌಕಾಪಡೆಯು ಜಲಸಂಧಿಯನ್ನು ಸಾಗಿಸಲು ಪ್ರಯತ್ನಿಸುವ ಯಾವುದೇ ಮತ್ತು ಎಲ್ಲಾ ಹಡಗುಗಳನ್ನು ದಿಗ್ಬಂಧನಗೊಳಿಸುತ್ತದೆ ಎಂದಿದ್ದರು. ಇರಾನ್ ಈ ನಿಲುವನ್ನು ವಿರೋಧಿಸಿದ್ದು ಜಲಮಾರ್ಗವನ್ನು ಸಮೀಪಿಸುವ ಯಾವುದೇ ಮಿಲಿಟರಿ ಹಡಗುಗಳನ್ನು 'ಎದುರಿಸಲಾಗುವುದು ಎಂದು ಎಚ್ಚರಿಸಿತು. ಸಂಪೂರ್ಣ ದಿಗ್ಬಂಧನಕ್ಕೆ ಟ್ರಂಪ್ ಕರೆ ನೀಡಿರುವುದು ಮಾತುಕತೆಗಳ ವೈಫಲ್ಯ ಮತ್ತು ಇತ್ತೀಚೆಗೆ ಇರಾನಿನ ತೈಲ ರಫ್ತಿನ ಮೇಲಿನ ಅಮೆರಿಕದ ನಿರ್ಬಂಧಗಳನ್ನು ತೆಗೆದುಹಾಕಿದ್ದಕ್ಕಿರುವ ಪ್ರತಿಕ್ರಿಯೆಯಾಗಿ ಕಂಡುಬರುತ್ತಿದೆ. ಪೂರೈಕೆಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಆ ಹಿಂದಿನ ನೀತಿಯನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಆ ಯೋಜನೆಗೆ ಹಿನ್ನಡೆಯಾಯಿತು. ಬೆಲೆಗಳನ್ನು ಸ್ಥಿರಗೊಳಿಸುವ ಬದಲು, ಅದು ಪರಿಣಾಮಕಾರಿಯಾಗಿ ಟೆಹ್ರಾನ್ಗೆ ತೈಲವನ್ನು ರಫ್ತು ಮಾಡಲು ಮತ್ತು ಸುಂಕಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿತು,.ಇದು ಪ್ರತಿಯಾಗಿ ಅದರ ಮಿಲಿಟರಿ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸಿತು. ಪ್ರಸ್ತುತ ಅಮೆರಿಕನ್ ಮರುಮಾಪನಾಂಕ ನಿರ್ಣಯವು, ವಿಶೇಷವಾಗಿ ವಿಫಲವಾದ ಇಸ್ಲಾಮಾಬಾದ್ ನೇತೃತ್ವದ ಮಾತುಕತೆ ನಂತರ ಇರಾನಿನ ರಫ್ತುಗಳನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು, ಅವರ ಯುದ್ಧ ಪ್ರಯತ್ನವನ್ನು ದುರ್ಬಲಗೊಳಿಸಲು ಅತ್ಯಗತ್ಯವೆಂದು ಪರಿಗಣಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.ಮಿಲಿಟರಿಯ ಸಂದೇಶವು ಅಧ್ಯಕ್ಷರ ಆರಂಭಿಕ ಬೆದರಿಕೆಯನ್ನು ಮಿತಗೊಳಿಸುವಂತೆ ತೋರುತ್ತದೆ. ಇದು ಗಲ್ಫ್ ಮಿತ್ರರಾಷ್ಟ್ರಗಳಿಗೆ ಧೈರ್ಯ ತುಂಬುವ ಮತ್ತು ಹಠಾತ್ ಬೆಲೆ ಏರಿಕೆಯ ವಿರುದ್ಧ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಮತ್ತೊಂದೆಡೆ, ಯಾವುದೇ ಹೊಸ ದಿಗ್ಬಂಧನವು ಇರಾನಿಯನ್ನರಿಗೆ ಉಳಿದವರೆಲ್ಲರೂ ಜಲಸಂಧಿಯ ಮೂಲಕ ಸಾಗುವುದನ್ನು ತಡೆಯುವ ಆಯ್ಕೆಯನ್ನು ನೀಡುತ್ತದೆ. ಇರಾನ್ ಪ್ರಸ್ತುತ ಹೊಂದಿರುವ ಏಕೈಕ ಹತೋಟಿಯಾಗಿದೆ ಹಾರ್ಮುಝ್ ಜಲಸಂಧಿಯ ನಿಯಂತ್ರಣ. ಟ್ರಂಪ್ ಅವರ ಆರಂಭಿಕ ದಿಗ್ಬಂಧನದ ಘೋಷಣೆಯು ಒಂದು ವಿಚಿತ್ರ ನಡೆಯಾಗಿತ್ತು. ಬಹುಶಃ ಒಂದು ಹಠಾತ್ ಪ್ರವೃತ್ತಿಯ ತಪ್ಪು ಹೆಜ್ಜೆಯಾಗಿರಬಹುದು. ಅದು ಆಡಳಿತವು ತನ್ನ ಕಾರ್ಯತಂತ್ರವನ್ನು ಪರಿಷ್ಕರಿಸುವಂತೆ ಮಾಡಿತು. CENTCOM ನ ನಂತರದ ಸ್ಪಷ್ಟೀಕರಣವು ಸೂಕ್ಷ್ಮ ವ್ಯತ್ಯಾಸದಿಂದ ಇದ್ದರೂ ಇನ್ನೂ ಇರಾನಿಯನ್ನರು ಎಲ್ಲರನ್ನೂ ತಡೆಯಲು ಮುಕ್ತವಾಗಿರಿಸುತ್ತದೆ ಎಂದು ಗಲ್ಫ್ ಪ್ರದೇಶದ ಅನುಭವ ಹೊಂದಿರುವ ಹಡಗು ತಜ್ಞರು ʼದಿ ಇಂಡಿಯನ್ ಎಕ್ಸ್ಪ್ರೆಸ್ʼಗೆ ತಿಳಿಸಿದ್ದಾರೆ. ವಾಸ್ತವವೆಂದರೆ ಟೆಹ್ರಾನ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವ ಸಾಧ್ಯತೆಯಿಲ್ಲ, ಏಕೆಂದರೆ ಅದು ಅವರ ಅತ್ಯಂತ ಪ್ರಬಲವಾದ ಕಾರ್ಯತಂತ್ರದ ಹತೋಟಿಯಾಗಿ ಉಳಿದಿದೆ. ಪರಿಣಾಮವಾಗಿ, ಪರಿಸ್ಥಿತಿಯು ನೌಕಾ ಬೆಂಗಾವಲುಗಳ ಮೇಲೆ ಮತ್ತು ಕರಾವಳಿ ವಲಯಗಳ ಭೌತಿಕ ಆಕ್ರಮಣಕ್ಕೆ ತಿರುಗಬಹುದು. ಪರಿಪೂರ್ಣ ಪರಿಹಾರದಿಂದ ದೂರವಿದ್ದರೂ, ಜಾಗತಿಕ ತೈಲ ಬೆಲೆಗಳನ್ನು ಸ್ಥಿರಗೊಳಿಸಲು ಇದು ಏಕೈಕ ಲಭ್ಯವಿರುವ ಮಾರ್ಗವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಕೆಟ್ಟ ಕ್ರಮವಲ್ಲ ಎಂದು ನಾನು ಭಾವಿಸುತ್ತೇನೆ. ಇದು ಇರಾನಿಯನ್ನರ ಆದಾಯವನ್ನು ಕಸಿದುಕೊಳ್ಳುತ್ತದೆ ಮತ್ತು ಟ್ರಂಪ್ ಅವರನ್ನು ಹಿಂದೆ ಸರಿಯುವಂತೆ ಮಾಡುವ ಹತೋಟಿಯನ್ನು ನೀಡುತ್ತದೆ. ಹಾರ್ಮುಝ್ ವಿರುದ್ಧ ಮಿಲಿಟರಿ ರೀತಿಯಲ್ಲಿ ಹೋರಾಡಬೇಕಿಲ್ಲ ಎಂದು ಯೋಚಿಸಿ ಅಮೆರಿಕ ಇದರಲ್ಲಿ ತೊಡಗಿಕೊಂಡಿರುವುದು ನನಗೆ ಸ್ವಲ್ಪ ಆಶ್ಚರ್ಯ ತಂದಿದೆ ಅಂತಾರೆ ತಜ್ಞರು. ನೀತಿಯ ಬದಲಾವಣೆ: ಹಾರ್ಮುಝ್ ಜಲಸಂಧಿಯನ್ನು ನಿಯಂತ್ರಿಸಲು ಇರಾನ್ ಜೊತೆ ಜಂಟಿ ಉದ್ಯಮದ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಸಲಹೆಯು ಶತಮಾನಗಳ ಅಮೆರಿಕದ ಕಡಲ ನೀತಿಗೆ ವಿರುದ್ಧವಾಗಿದೆ. ಸ್ವಾತಂತ್ರ್ಯದ ನಂತರ, ಯುನೈಟೆಡ್ ಸ್ಟೇಟ್ಸ್ ಸಾಗಣೆ ಸ್ವಾತಂತ್ರ್ಯ ತತ್ವವನ್ನು ನಿರಂತರವಾಗಿ ಪ್ರತಿಪಾದಿಸಿದೆ. ವಾಸ್ತವವಾಗಿ, ರಾಷ್ಟ್ರದ ಮೊದಲ ಅಂತರರಾಷ್ಟ್ರೀಯ ಸಂಘರ್ಷವು ಅದರ ಮಿತ್ರ ಫ್ರಾನ್ಸ್ನೊಂದಿಗೆ ತಟಸ್ಥ ವ್ಯಾಪಾರ ಹಕ್ಕುಗಳ ಮೇಲೆ ಆಗಿತ್ತು. ಕ್ವಾಸಿ ಯುದ್ಧ ಎಂದು ಕರೆಯಲ್ಪಡುವ ಈ ಅಘೋಷಿತ ನೌಕಾ ಸಂಘರ್ಷವು ಪ್ರಾಥಮಿಕವಾಗಿ ಕೆರಿಬಿಯನ್ನಲ್ಲಿ ಅಮೆರಿಕನ್ ವ್ಯಾಪಾರಿ ಹಡಗುಗಳನ್ನು ವಶಪಡಿಸಿಕೊಂಡ ಫ್ರೆಂಚ್ ಖಾಸಗಿಯವರನ್ನು ಗುರಿಯಾಗಿಸಿಕೊಂಡಿತು. ಯುಎಸ್ ಸಂವಿಧಾನ ಮ್ಯೂಸಿಯಂ ಪ್ರಕಾರ, ಈ ಅವಧಿಯು ಯುನೈಟೆಡ್ ಸ್ಟೇಟ್ಸ್ ವಿದೇಶದಲ್ಲಿ ತನ್ನ ವಾಣಿಜ್ಯ ಸಾಗಣೆಯನ್ನು ರಕ್ಷಿಸಲು ಮಿಲಿಟರಿ ಬಲವನ್ನು ಬಳಸಿದ ಮೊದಲ ಬಾರಿಗೆ ಮತ್ತು ಕೆರಿಬಿಯನ್ ಮೇಲೆ ನೌಕಾ ನಿಯಂತ್ರಣವನ್ನು ಹೇರುವ ತನ್ನ ಆರಂಭಿಕ ಪ್ರಯತ್ನವನ್ನು ಪ್ರತಿನಿಧಿಸಿತು. ಫ್ರೆಂಚ್ ಯುದ್ಧನೌಕೆಗಳು ವಿರಳವಾಗಿ ಅಮೆರಿಕನ್ ನೌಕಾಪಡೆಯೊಂದಿಗೆ ನೇರವಾಗಿ ತೊಡಗಿಸಿಕೊಂಡಿದ್ದರೂ, ಜಾಗತಿಕ ವ್ಯಾಪಾರ ಮಾರ್ಗಗಳನ್ನು ಮುಕ್ತವಾಗಿಡಲು ಯುಎಸ್ ತನ್ನ ನೌಕಾಪಡೆಯನ್ನು ಬಳಸುವುದಕ್ಕೆ ಸಂಘರ್ಷವು ಐತಿಹಾಸಿಕ ಪೂರ್ವನಿದರ್ಶನವನ್ನು ಸ್ಥಾಪಿಸಿತು. ಮುಕ್ತ ವ್ಯಾಪಾರ ಮತ್ತು ಮುಕ್ತ ಸಮುದ್ರ ಸಂಚಾರಕ್ಕೆ ಅಮೆರಿಕದ ಬದ್ಧತೆ ಕಾಲಾನಂತರದಲ್ಲಿ ಇನ್ನಷ್ಟು ಗಂಭೀರ ರೂಪ ಪಡೆಯಿತು. ಆಧುನಿಕ ಯುಗದಲ್ಲಿ ಅಮೆರಿಕವು ತನ್ನ ಮಿತ್ರರಾಷ್ಟ್ರಗಳೊಂದಿಗೆ ವಿಶ್ವದ ಸಾಗರಗಳಲ್ಲಿ ಗಸ್ತು ತಿರುಗಿದೆ. ಹಾರ್ಮುಝ್ ಜಲಸಂಧಿಯಿಂದ ಮಲಕ್ಕಾ ಜಲಸಂಧಿಯವರೆಗಿನ ನಿರ್ಣಾಯಕ ಜಲಸಂಧಿಗಳು ತೆರೆದಿರುವುದನ್ನು ಖಚಿತಪಡಿಸಿಕೊಂಡಿದೆ. ಸಿಎನ್ಎನ್ ಅಂಕಣಕಾರ ಫರೀದ್ ಜಕಾರಿಯಾ ಅವರ ಪ್ರಕಾರ, ಸಾರ್ವಜನಿಕ ಒಳಿತಿಗಿಂತ ಹೆಚ್ಚಾಗಿ ವಾಣಿಜ್ಯ ಉದ್ಯಮವಾಗಿ ಭದ್ರತೆಯನ್ನು ರೂಪಿಸುವ ಟ್ರಂಪ್ ಅವರ ಪ್ರವೃತ್ತಿಯು ವಿಶಾಲವಾದ ವಿಶ್ವ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ. ಈ ದೃಷ್ಟಿಕೋನದಲ್ಲಿ, ಅಂತರರಾಷ್ಟ್ರೀಯ ಸಂಬಂಧಗಳನ್ನು ಸಾಮಾನ್ಯ ಮೌಲ್ಯಗಳ ಮೇಲೆ ನಿರ್ಮಿಸಲಾದ ಹಂಚಿಕೆಯ ಕ್ರಮವಾಗಿ ನೋಡಲಾಗುವುದಿಲ್ಲ, ಆದರೆ ವೈಯಕ್ತಿಕ ವಹಿವಾಟುಗಳ ಸರಣಿಯಾಗಿ ನೋಡಲಾಗುತ್ತದೆ. ಈ ಚೌಕಟ್ಟಿನೊಳಗೆ, ಪ್ರತಿಯೊಂದು ಬದ್ಧತೆಯನ್ನು ಮಾತುಕತೆಗೆ ಒಳಪಡಿಸಬಹುದು, ಪ್ರತಿಯೊಂದು ಮೈತ್ರಿ ಷರತ್ತುಬದ್ಧವಾಗಿರುತ್ತದೆ ಮತ್ತು ಪ್ರತಿಯೊಂದು ಸಾರ್ವಜನಿಕ ಒಳಿತನ್ನು ಸಂಭಾವ್ಯ ಲಾಭ ಕೇಂದ್ರವಾಗಿ ಮರು ಕಲ್ಪಿಸಲಾಗುತ್ತದೆ. ಅನಿಶ್ಚಿತತೆ, ಸ್ಪಷ್ಟತೆಯ ಕೊರತೆ: ಟ್ರಂಪ್ ಅವರ ಘೋಷಣೆಗಳು ಮತ್ತು CENTCOM ನ ನಂತರದ ಸ್ಪಷ್ಟೀಕರಣಗಳ ಹೊರತಾಗಿಯೂ, ದಿಗ್ಬಂಧನದ ಜಾರಿ ಮತ್ತು ಒಟ್ಟಾರೆ ಪರಿಣಾಮಕಾರಿತ್ವದ ಬಗ್ಗೆ ಇನ್ನೂ ಸಂದೇಹಗಳು ಉಳಿದಿವೆ. ಲಾಜಿಸ್ಟಿಕ್ ಅಡಚಣೆಗಳು ಜಾಸ್ತಿ ಆಗಿವೆ. ವಿಶೇಷವಾಗಿ ಈ ಪ್ರದೇಶದಲ್ಲಿ GPS ವಂಚನೆ ಮತ್ತು ಮೋಸದ ಬಂದರು ದಾಖಲಾತಿಗಳ ವ್ಯಾಪಕತೆಯನ್ನು ಗಮನಿಸಿದರೆ, ಯುಎಸ್ ನೌಕಾಪಡೆಯು ಟೆಹ್ರಾನ್ಗೆ ಯಾವ ಹಡಗುಗಳು ಸುಂಕವನ್ನು ಪಾವತಿಸಿವೆ ಎಂಬುದನ್ನು ಹೇಗೆ ಪರಿಶೀಲಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇದಲ್ಲದೆ, ಸಂಘರ್ಷದ ಬೆದರಿಕೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಸಿಲುಕಿರುವ ವಿದೇಶಿ ಧ್ವಜ ಹೊಂದಿರುವ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ಹೆಚ್ಚಿನ ಅಪಾಯವಿದೆ. ಹೆಚ್ಚುವರಿಯಾಗಿ, ಯೆಮೆನ್ ಮೂಲದ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿನ ಹಡಗು ಮಾರ್ಗಗಳ ವಿರುದ್ಧ ಬೆಂಬಲಿತ ದಾಳಿಗಳನ್ನು ಪ್ರಾರಂಭಿಸುವ ಸಾಧ್ಯತೆಯಿರುವುದರಿಂದ ಪರಿಸ್ಥಿತಿ ಅನಿಶ್ಚಿತವಾಗಿಯೇ ಉಳಿದಿದೆ, ಇದು ಕಡಲ ಭದ್ರತಾ ಭೂದೃಶ್ಯವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಅಲ್ಲದೆ, ಅಮೆರಿಕದ ಪಡೆಗಳು ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಲು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸುತ್ತವೆಯೇ ಅಥವಾ ಹಡಗುಗಳ ಮೇಲೆ ಹಿಡಿತ ಸಾಧಿಸಲು ಅವುಗಳನ್ನು ಹತ್ತುತ್ತವೆಯೇ? ಈ ಹಡಗುಗಳು ಯಾವ ದೇಶಗಳಿಗೆ ಸೇರಿವೆ ಅಥವಾ ಅವು ಸರಕುಗಳೊಂದಿಗೆ ಎಲ್ಲಿಗೆ ಹೋಗಬಹುದು ಎಂಬ ದೇಶಗಳು ಹೇಗೆ ಪ್ರತಿಕ್ರಿಯಿಸುತ್ತವೆ? ವಿಶೇಷವಾಗಿ ಇರಾನಿನ ತೈಲವನ್ನು ಬಹಳಷ್ಟು ಖರೀದಿಸುವ ಚೀನಾದ ಪ್ರತಿಕ್ರಿಯೆ ಏನು? ಈ ಹಂತದಲ್ಲಿ, ಅಮೆರಿಕವು ಈ ಪ್ರಶ್ನೆಗಳಲ್ಲಿ ಹೆಚ್ಚಿನವುಗಳ ಬಗ್ಗೆ ಯಾವುದೇ ಮಹತ್ವದ ವಿವರಗಳನ್ನು ಒದಗಿಸಿಲ್ಲ. ಕೆಲವು ತಜ್ಞರ ಪ್ರಕಾರ, ದಿಗ್ಬಂಧನವನ್ನು ಘೋಷಿಸುವುದು ಮತ್ತು ಅದನ್ನು ವಾಸ್ತವವಾಗಿ ಜಾರಿಗೊಳಿಸುವುದು ಎರಡು ವಿಭಿನ್ನ ವಿಷಯಗಳಾಗಿವೆ. ಹೀಗಿರುವಾಗ ಅಮೆರಿಕನ್ನರು ತಮ್ಮ ಉದ್ದೇಶವನ್ನು ಸಾಧಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ದಿಗ್ಬಂಧನವನ್ನು ಇರಾನ್ಗೆ ಸೀಮಿತವಾಗಿಡುವಲ್ಲಿ ಅವರು ಎಷ್ಟು ಪರಿಣಾಮಕಾರಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಯುದ್ಧದ ಮೊದಲು, ದಿನಕ್ಕೆ ಸರಾಸರಿ 150 ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟುತ್ತಿದ್ದವು. ಅಂದಾಜಿನ ಪ್ರಕಾರ, ಮಾರ್ಚ್ ತಿಂಗಳಿನ ಸಂಪೂರ್ಣ ಸಂಖ್ಯೆ ಸುಮಾರು 150 ಹಡಗುಗಳಾಗಿತ್ತು. ಮಾರ್ಚ್ ಆರಂಭದಿಂದಲೂ ಜಲಸಂಧಿಯನ್ನು ದಾಟಿದ ಬಹುತೇಕ ಎಲ್ಲಾ ಹಡಗುಗಳು ಟೆಹ್ರಾನ್ನ ಅನುಮತಿಯೊಂದಿಗೆ ದಾಟಿವೆ. ಕೆಲವು ಹಡಗುಗಳು ಚಾಕ್ಪಾಯಿಂಟ್ ಅನ್ನು ಸುರಕ್ಷಿತವಾಗಿ ದಾಟಲು ಟೋಲ್ಗಳು ಅಥವಾ ಸಾರಿಗೆ ಶುಲ್ಕವನ್ನು ಪಾವತಿಸಬೇಕಾಗಿತ್ತು ಎಂದು ವರದಿಗಳು ಸೂಚಿಸುತ್ತವೆ. ಜಲಸಂಧಿಯನ್ನು ದಾಟಲು ಬಯಸುವ ಯಾವುದೇ ಹಡಗು ದೇಶದ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯದಿಂದ ಅದನ್ನು ಮಾಡಬೇಕು ಎಂದು ಇರಾನ್ ಹೇಳುತ್ತಿದೆ. ದಿಗ್ಬಂಧನದ ಘೋಷಣೆಯ ನಂತರ ತಕ್ಷಣದ ಬೆಲೆ ಏರಿಕೆಯ ಹೊರತಾಗಿಯೂ, ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಮಧ್ಯಮಾವಧಿಯ ಪರಿಣಾಮಗಳು ಅನಿಶ್ಚಿತವಾಗಿಯೇ ಉಳಿದಿವೆ. ಮಾರುಕಟ್ಟೆಯಿಂದ ಇರಾನಿನ ಕಚ್ಚಾ ತೈಲವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಇತರ ಗಲ್ಫ್ ಪೂರೈಕೆಗಳಿಗೆ ನಿರಂತರ ಅಡಚಣೆಗಳು ಜಾಗತಿಕ ಲಭ್ಯತೆಯನ್ನು ತೀವ್ರವಾಗಿ ಬಿಗಿಗೊಳಿಸಬಹುದು ಮತ್ತು ವೆಚ್ಚವನ್ನು ಹೆಚ್ಚಿಸಬಹುದು. ಇದಕ್ಕೆ ವಿರುದ್ಧವಾಗಿ, ದಿಗ್ಬಂಧನವು ಇರಾನಿನ ರಫ್ತುಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದರೆ ಮತ್ತು ಅದೇ ಸಮಯದಲ್ಲಿ ಇತರ ಮಧ್ಯಪ್ರಾಚ್ಯ ಉತ್ಪಾದಕರಿಗೆ ಮಾರ್ಗವನ್ನು ಸುರಕ್ಷಿತಗೊಳಿಸಿದರೆ, ಮಾರುಕಟ್ಟೆಯ ಒತ್ತಡಗಳು ಕಡಿಮೆಯಾಗಬಹುದು. ಅದು ಮುಖ್ಯವಾಗಿ ಹಡಗು ಮಾಲೀಕರು ಮತ್ತು ಕಡಲ ವಿಮಾದಾರರು ಇರಾನ್ನ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಮತ್ತು ಅಮೆರಿಕದ ದಿಗ್ಬಂಧನವನ್ನು ಅವಲಂಬಿಸಿ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸೂತ್ರದ ಮೂಲಕ ಪ್ರತಿಕ್ರಿಯಿಸಿದ ಇರಾನ್ : ಅಮೆರಿಕದೊಂದಿಗಿನ ಮಾತುಕತೆ ವಿಫಲವಾದ ನಂತರ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಝ್ ಜಲಸಂಧಿಯನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ ಇರಾನ್ ಅಸಾಮಾನ್ಯ ಸಂದೇಶದೊಂದಿಗೆ ಪ್ರತಿಕ್ರಿಯಿಸಿತು. ಪ್ರಮಾಣಿತ ರಾಜಕೀಯ ಹೇಳಿಕೆಯ ಬದಲಿಗೆ, ಅದು ಎಚ್ಚರಿಕೆಯನ್ನು ಕಳುಹಿಸಲು ಗಣಿತ-ಶೈಲಿಯ ಸೂತ್ರವನ್ನು ಬಳಸಿತು. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಶ್ವೇತಭವನದ ಬಳಿ ಪೆಟ್ರೋಲ್ ಬೆಲೆಗಳನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಪಂಪ್ ಅಂಕಿಅಂಶಗಳನ್ನು ಆನಂದಿಸಿ ಎಂದು ಪೋಸ್ಟ್ ನಲ್ಲಿ ಬರೆದಿರುವ ಅವರ ಅದರ ಜತೆ ಸೂತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದು ಈ ರೀತಿ ಇದೆ ΔO_BSOH>0 ⇒ f(f(O))>f(O) ಸರಳವಾಗಿ ಹೇಳುವುದಾದರೆ, ತೈಲ ಬೆಲೆಗಳು ದಿಗ್ಬಂಧನಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸೂತ್ರವು ವಿವರಿಸುತ್ತದೆ. ಇಲ್ಲಿ, “O” ಎಂದರೆ ತೈಲ ಬೆಲೆಗಳನ್ನು ಸೂಚಿಸುತ್ತದೆ. “BSOH” ಎಂದರೆ ಹಾರ್ಮುಝ್ ಜಲಸಂಧಿಯ ದಿಗ್ಬಂಧನವನ್ನು ಸೂಚಿಸುತ್ತದೆ. ಮೊದಲ ಭಾಗವು ದಿಗ್ಬಂಧನ ಹೆಚ್ಚಾದರೆ, ತೈಲ ಬೆಲೆಗಳು ಏರಿಕೆಯಾಗುತ್ತವೆ ಎಂದರ್ಥ. ΔOBSOH>0ΔOBSOH>0 = ದಿಗ್ಬಂಧನವು ತೈಲ ಬೆಲೆಗಳನ್ನು ಹೆಚ್ಚಿಸುತ್ತದೆ. f(f(O))>f(O)f(f(O))>f(O) = ಎರಡನೇ ಸುತ್ತಿನ ಪರಿಣಾಮವು ಮೊದಲ ಸುತ್ತಿನ ಪರಿಣಾಮಕ್ಕಿಂತ ಕೆಟ್ಟದಾಗಿದೆ. ಎರಡನೇ ಭಾಗವು ಪರಿಣಾಮ ಅಲ್ಲಿಗೆ ನಿಲ್ಲುವುದಿಲ್ಲ ಎಂದು ತೋರಿಸುತ್ತದೆ. ಪರಿಣಾಮವು ಕಾಲಾನಂತರದಲ್ಲಿ ಬಲವಾಗಿ ಬೆಳೆಯುತ್ತದೆ. ಬೆಲೆಗಳಲ್ಲಿ ಮೊದಲ ಏರಿಕೆಯ ನಂತರ ಇನ್ನೂ ದೊಡ್ಡ ಏರಿಕೆ ಕಂಡುಬರುತ್ತದೆ. ಇದು ಪ್ಯಾನಿಕ್, ಪೂರೈಕೆ ಅಡಚಣೆಗಳು, ಹೆಚ್ಚಿನ ಸಾಗಣೆ ವೆಚ್ಚಗಳು ಮತ್ತು ಮಾರುಕಟ್ಟೆ ಪ್ರತಿಕ್ರಿಯೆಗಳಿಂದಾಗಿ ಸಂಭವಿಸುತ್ತದೆ. ಈ ಮೂಲಕ ಹಾನಿಯು ಕ್ರಮೇಣ ಹೆಚ್ಚಾಗುವ ಬದಲು ಪ್ರತಿ ಹಂತದಲ್ಲೂ ವೇಗವಾಗಿ ಬೆಳೆಯುತ್ತದೆ ಎಂದು ಇರಾನ್ ಹೇಳಿದೆ.
ರ್ಯಾಂಕ್ ವಿಜೇತೆ ದಿಶಾ ಪೂಜಾರಿಗೆ ವಿಶ್ವ ಬಂಟರ ಪ್ರತಿಷ್ಠಾನದ ವತಿಯಿಂದ ಸನ್ಮಾನ
ಮೂಡುಬಿದಿರೆ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿಯ ಮುಂದಿನ ಶಿಕ್ಷಣಕ್ಕೆ ಸಂಪೂಣ೯ ನೆರವು ನೀಡುವುದಾಗಿ ಉದ್ಯಮಿ, ವಿಶ್ವ ಬಂಟರ ಪ್ರತಿಷ್ಠಾನದ ಮಹಾಪೋಷಕ, ಡಾ. ಬಿ. ಆರ್. ಶೆಟ್ಟಿ ಭರವಸೆ ನೀಡಿದ್ದಾರೆ. ಸೋಮವಾರ ಸಾಯಂಕಾಲ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಕಚೇರಿಯಲ್ಲಿ ದಿಶಾ ಪೂಜಾರಿಯನ್ನು ವಿಶ್ವ ಬಂಟರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಡಾ. ಬಿ. ಆರ್. ಶೆಟ್ಟಿ ಅವರು ದೂರವಾಣಿ ಮೂಲಕ ದಿಶಾಳೊಂದಿಗೆ ಸಂವಾದ ನಡೆಸಿ ಅಭಿನಂದನೆ ಸಲ್ಲಿಸಿದರು. ಆಕೆಯ ಕನಸಿನಂತೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಹಾಗೂ ಮುಂದಿನ ಗುರಿಯಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಶಿಕ್ಷಣದವರೆಗಿನ ಸಂಪೂರ್ಣ ಟ್ಯೂಷನ್ ಶುಲ್ಕ, ಊಟ ಮತ್ತು ವಸತಿ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದಿಶಾ ಪೂಜಾರಿ ಆಳ್ವಾಸ್ ಆವರಣದಲ್ಲಿರುವ ಡಾ. ಬಿ. ಆರ್. ಶೆಟ್ಟಿ ಅವರ ಹೆಸರಿನ ಬ್ಲಾಕ್ನಲ್ಲಿ ಸ್ಮರಣಾರ್ಥ ಚಿತ್ರಗಳನ್ನು ತೆಗೆಸಿಕೊಂಡರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿಶ್ವ ಬಂಟರ ಪ್ರತಿಷ್ಠಾನದ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಸಂಜೀವ್ ರೈ, ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ, ಉಪಾಧ್ಯಕ್ಷ ಸಿಎ ಸುದೀರ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸಿಎ ಪ್ರವೀಣ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಡಾ. ಶಿಶಿರ್ ಶೆಟ್ಟಿ, ಪ್ರಕಾಶ್ ಮಾಣೈ ಹಾಗೂ ಸದಸ್ಯರಾದ ದೀಪಕ್ ಪ್ರಸಾದ್, ಜೀವರಾಜ್ ಶೆಟ್ಟಿ ಉಪಸ್ಥಿತರಿದ್ದು ದಿಶಾ ಪೂಜಾರಿಯನ್ನು ಅಭಿನಂದಿಸಿ ಶುಭ ಹಾರೈಸಿದರು.
ಮಾಂಟೆ ಕಾರ್ಲೊ ಮಾಸ್ಟರ್ಸ್: ಸಿನ್ನರ್ ಚಾಂಪಿಯನ್, ನಂ.1 ಸ್ಥಾನ ಮತ್ತೆ ಕೈವಶ
ಮಾಂಟೆ ಕಾರ್ಲೊ: ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ಮೊದಲ ಬಾರಿ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ಪಟ್ಟಕ್ಕೇರಿದ್ದಾರೆ. ಈ ಮೂಲಕ ಅಲ್ಕರಾಝ್ರಿಂದ ನಂ.1 ರ್ಯಾಂಕಿಂಗ್ ವಶಪಡಿಸಿಕೊಂಡಿದ್ದಾರೆ. ಕಳೆದ ತಿಂಗಳು ಇಂಡಿಯನ್ ವೇಲ್ಸ್ ಹಾಗೂ ಮಯಾಮಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದ ಸಿನ್ನರ್ ಅವರು ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅಲ್ಕರಾಝ್ರನ್ನು 7-6(5), 6-3 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ. ಇದರೊಂದಿಗೆ ಈ ವರ್ಷ ತನ್ನ ಮೂರನೇ ಎಟಿಪಿ-1000 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸತತ ನಾಲ್ಕು ಎಟಿಪಿ-1000 ಪ್ರಶಸ್ತಿಗಳನ್ನು ಗೆದ್ದಿರುವ ಮೂರನೇ ಆಟಗಾರನಾಗಿರುವ 24ರ ಹರೆಯದ ಸಿನ್ನರ್ ಅವರು ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ‘‘ನಾನು ಇಲ್ಲಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಲು ಆಗಮಿಸಿದ್ದೇನೆ. ಇತರ ಪ್ರಮುಖ ಪಂದ್ಯಾವಳಿಗಿಂತ ಉತ್ತಮ ತಯಾರಿ ನಡೆಸಿದ್ದೇನೆ. ನಮಗಿಬ್ಬರಿಗೂ ಇದು ಮಹತ್ವದ ಪಂದ್ಯವಾಗಿತ್ತು’’ ಎಂದು ಸಿನ್ನರ್ ಹೇಳಿದ್ದಾರೆ. ಅಲ್ಕರಾಝ್ ಅವರು ಕಳೆದೊಂದು ವರ್ಷದಿಂದ ಆವೆಮಣ್ಣಿನ ಅಂಗಣದಲ್ಲಿ 17 ಪಂದ್ಯಗಳನ್ನು ಗೆದ್ದಿದ್ದಾರೆ. ರೋಮ್ ಹಾಗೂ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿಗಳನ್ನು ಎತ್ತಿ ಹಿಡಿದಿದ್ದಾರೆ. ನವೆಂಬರ್ನಲ್ಲಿ ನಡೆದಿದ್ದ ಎಟಿಪಿ ಫೈನಲ್ಸ್ ಟೂರ್ನಿಯ ನಂತರ ಸಿನ್ನರ್ ಹಾಗೂ ಅಲ್ಕರಾಝ್ ಮೊದಲ ಬಾರಿ ಮುಖಾಮುಖಿಯಾಗಿದ್ದಾರೆ. ಸಿನ್ನರ್ ಇದೀಗ ಅಲ್ಕರಾಝ್ ವಿರುದ್ದ ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಜಯ ಸಾಧಿಸಿದ್ದಾರೆ. ಈ ವರ್ಷದಲ್ಲಿ ಮೊದಲ ಬಾರಿ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಸಿನ್ನರ್ ಅವರು ಹಿಂದಿನ 17 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, 2015ರ ನಂತರ ವರ್ಷದ ಮೊದಲ ಮೂರು ಎಟಿಪಿ-1000 ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ಆಟಗಾರನಾಗಿದ್ದಾರೆ. 2015ರಲ್ಲಿ ಜೊಕೊವಿಕ್ ಈ ಸಾಧನೆ ಮಾಡಿದ್ದರು.
Tamil Nadu ಚುನಾವಣೆಯಲ್ಲಿ ವರ್ಚುವಲ್ ವಿಜಯ್; ಪ್ರಚಾರದಲ್ಲಿ ಹೊಲೊಗ್ರಾಫಿಕ್ AI ಬಳಸಿದ TVK ಅಭ್ಯರ್ಥಿ
ತ್ರಿಚಿ: ಪಕ್ಷದ ನಾಯಕ ವಿಜಯ್ ಅವರ ಅನುಪಸ್ಥಿತಿಯನ್ನು ಸರಿದೂಗಿಸಲು ತಮಿಳಗ ವೆಟ್ರಿ ಕಳಗಂ (TVK) ಅಭ್ಯರ್ಥಿಯೊಬ್ಬರು ಹೊಲೊಗ್ರಾಫಿಕ್ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿದ್ದಾರೆ. ಕುಂಭಕೋಣಂ ಕ್ಷೇತ್ರದ ಅಭ್ಯರ್ಥಿ ವಿನೋತ್ ರವಿ, ತಮ್ಮ ಪ್ರಚಾರ ವಾಹನದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ವಿಜಯ್ ಅವರ 3D ಚಿತ್ರಣವನ್ನು ರ್ಯಾಲಿಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಅವರು ನೇರವಾಗಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಎಪ್ರಿಲ್ 23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ವಿಜಯ್ ಅನೇಕ ಪ್ರಚಾರ ಸಭೆಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಈ ವಿಧಾನಕ್ಕೆ ಮೊರೆ ಹೋಗಲಾಗಿದೆ. ಪ್ರಚಾರ ವಾಹನದ ಮೇಲ್ಭಾಗದಲ್ಲಿ ಅಳವಡಿಸಲಾದ ಈ ವ್ಯವಸ್ಥೆ ‘ದೃಷ್ಟಿಯ ನಿರಂತರತೆ’ (Persistence of Vision) ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರೊಜೆಕ್ಷನ್ ಫ್ಯಾನ್ ಡಿಸ್ಪ್ಲೇ, ಹೈ-ಸ್ಪೀಡ್ ಮೋಟಾರ್ ಗಳು ಹಾಗೂ ವಾಹನದ ಜನರೇಟರ್ ನಿಂದ ಚಾಲಿತವಾಗುವ ಸಿಂಕ್ರೊನೈಸ್ಡ್ ಆಡಿಯೊ ವ್ಯವಸ್ಥೆ ಇವುಗಳ ಸಂಯೋಜನೆಯಿಂದ ವಿಜಯ್ ಅವರ ತಲೆಯಿಂದ ಕಾಲಿನವರೆಗೆ 3D ಚಿತ್ರ ಮೂಡಿಸಲಾಗುತ್ತದೆ. ವಿಜಯ್ ಅವರ ಹಿಂದಿನ ಭಾಷಣಗಳ ಆಡಿಯೊವನ್ನು ಈ ಚಿತ್ರಣದೊಂದಿಗೆ ಜೋಡಿಸಲಾಗಿದ್ದು, AI ತಂತ್ರಜ್ಞಾನವು ತುಟಿ ಚಲನೆ, ಕೈ ಬಳಕೆ ಹಾಗೂ ದೇಹಭಾಷೆಯನ್ನು ಧ್ವನಿಗೆ ಹೊಂದುವಂತೆ ಸಮನ್ವಯಗೊಳಿಸುತ್ತದೆ. ಈ ನಿಖರ ಸಿಂಕ್ರೊನೈಸೇಶನ್ ನಿಂದ ಜನರಿಗೆ ನೇರ ಭಾಷಣದ ಅನುಭವ ದೊರಕುತ್ತದೆ. ಈ ವ್ಯವಸ್ಥೆಯನ್ನು ಕಾಮಾ ಟೆಕ್ನಾಲಜೀಸ್ ಸಂಸ್ಥೆಯಿಂದ ದಿನಕ್ಕೆ ಸುಮಾರು 50,000 ರೂ. ವೆಚ್ಚದಲ್ಲಿ ಪಡೆಯಲಾಗಿದ್ದು, ಚುನಾವಣಾ ಆಯೋಗವು ನಾಲ್ಕು ದಿನಗಳ ಕಾಲ ಬಳಸಲು ಅನುಮತಿ ನೀಡಿದೆ. ಕಾಮಾ ಟೆಕ್ನಾಲಜೀಸ್ ಸಂಸ್ಥಾಪಕ ಕಾರ್ತಿಕ್ ಮಾರಿ ಪಿಚೈ ಅವರು, “ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ಈ ರೀತಿಯ ಹೊಲೊಗ್ರಾಫಿಕ್ AI ಬಳಕೆ ಇದೇ ಮೊದಲ ಪ್ರಯೋಗವಾಗಿದೆ. ನಾಯಕರು ಭೌತಿಕವಾಗಿ ಹಾಜರಿಲ್ಲದಿದ್ದರೂ ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಇದು ಸಹಾಯಕವಾಗುತ್ತದೆ. ಹೈ-ಡೆಫಿನಿಷನ್ ದೃಶ್ಯಗಳು ಮತ್ತು ಸಿಂಕ್ರೊನೈಸ್ಡ್ ಆಡಿಯೊ ಜನರಿಗೆ ನೈಜತೆಯ ಅನುಭವವನ್ನು ನೀಡುತ್ತದೆ,” ಎಂದು ತಿಳಿಸಿದ್ದಾರೆ. ‘ವಿಜಯ್ ಅವರ ವರ್ಚುವಲ್ ಉಪಸ್ಥಿತಿ ನಮ್ಮ ಪ್ರಚಾರಕ್ಕೆ ಹೆಚ್ಚಿನ ಬಲ ನೀಡಲಿದೆ’ ಎಂದು ಅಭ್ಯರ್ಥಿ ವಿನೋತ್ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂತ ಅಲೋಶಿಯಸ್ ರೆಕ್ಟರ್ ಮೆಲ್ವಿನ್ ಪಿಂಟೊಗೆ ಭಾವಪೂರ್ಣ ವಿದಾಯ
ಮಂಗಳೂರು, ಎ.13: ಮೂರು ದಿನಗಳ ಹಿಂದೆ ನಿಧನರಾಗಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ನಗರದ ಫಾತಿಮಾ ರೆಟ್ರೀಟ್ ಹೌಸ್ ಆವರಣದ ಪ್ರಾರ್ಥನಾ ಮಂದಿರಲ್ಲಿ, ಮಂಗಳೂರು, ಉಡುಪಿ, ಕಾರವಾರ ಮತ್ತು ಮೈಸೂರು ಧರ್ಮ ಪ್ರಾಂತ್ಯದ ನಾಲ್ವರು ಧರ್ಮಾಧ್ಯಕ್ಷರುಗಳ ನೇತೃತ್ವದಲ್ಲಿ ಸೋಮವಾರ ದಿವ್ಯ ಬಲಿಪೂಜೆಯೊಂದಿಗೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನಾ ಪ್ರಧಾನ ಅರ್ಚಕರಾಗಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ ಮುಖ್ಯ ಪ್ರವಚನಕಾರರಾಗಿ ಬಲಿಪೂಜೆಗೆ ನೇತೃತ್ವ ನೀಡಿದರು. ತಮ್ಮ ಪ್ರವಚನದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಯೇಸುಸಭೆಯ ವಂ. ಡಾ. ಫ್ರಾನ್ಸಿಸ್ ಸೆರಾವೊ ವಂ. ಮೆಲ್ವಿನ್ ಕ್ರಿಸ್ತನಿಗೆ ಸಾಕ್ಷಿಯಾಗಿ ಬದುಕಿದರು ಎಂದರು. ಕೋವಿಡ್ನಂತಹ ಸಂಕಷ್ಟ ಸಮಯದಲ್ಲಿ ಅವರು ನೀಡಿದ ನೇತೃತ್ವ ಮತ್ತು ಮೆರೆದ ಮಾನವೀಯತೆ ಅನುಕರ ಣೀಯ. ಅವರ ಆದರ್ಶ ಮತ್ತು ಮಾನವೀಯ ಗುಣಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡಬಹುದಾದ ನೈಜ ಶ್ರದ್ಧಾಂಜಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚರ್ಚ್ ಆವರಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ದ್ ಐಸಾಕ್ ಲೋಬೊ ಮತ್ತು ದಫನ ಭೂಮಿಯಲ್ಲಿ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ. ದುಮಿಂಗ್ ಡಾಯಸ್ ಸಂಸ್ಕಾರದ ಪ್ರಾರ್ಥನಾ ವಿಧಿಗೆ ನೇತೃತ್ವ ನೀಡಿದರು. ಬಲಿಪೂಜೆಯ ನಂತರ ಯೇಸು ಧರ್ಮಸಭೆಯ ಪರವಾಗಿ ಸಹಪಾಠಿ ವಂ. ಜೋಸೆಫ್ ಲೋಬೊ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಪರವಾಗಿ ಎನ್. ಜಿ. ಮೋಹನ್, ಕುಟುಂಬದ ಪರವಾಗಿ ಸಹೋದರಿ ವಿನಯಾ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ಧರ್ಮಾಧ್ಯಕ್ಷ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನಾ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರಿಗೆ ನುಡಿ ನಮನ ಸಲ್ಲಿಸಿದರು. ಅಂತಿಮ ಯಾತ್ರೆಗೂ ಮುನ್ನ ಕರ್ನಾಟಕ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಆಗಮಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಯೇಸು ಸಭೆಯ ಪ್ರಾಂತೀಯ ಮುಖ್ಯಸ್ಥರಾದ ವಂ, ಡಯ್ನೋಶಿಯಸ್ ವಾಸ್ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಸಚಿವ ವಂ. ಡಾ. ಮೆಲ್ವಿನ್ ಡಿಕುನ್ಹಾ ವಂದಿಸಿದರು. ಎ.10ರಂದು ನಿಧನರಾಗಿದ್ದ ಮೆಲ್ವಿನ್ ಜೋಸೆಫ್ ಪಿಂಟೊ ಅವರ ಪಾರ್ಥಿವ ಶರೀರವನ್ನು ಪೂರ್ವಾಹ್ನ ಸಂತ ಆಲೋಶಿಯಸ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಾರ್ವಜನಿಕರು ಅಗಲಿದ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರಿಗೆ ಅಂತಿಮ ನಮನ ಸಲ್ಲಿಸಿ, ಭಾವಪೂರ್ಣ ವಿದಾಯ ಕೋರಿದರು.
ಸರ್ಕಾರಿ ಗೌರವಗಳೊಂದಿಗೆ ಖ್ಯಾತ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ತ್ರಿವರ್ಣ ಧ್ವಜದಲ್ಲಿ ಹೊದಿಸಲಾದ ಅವರ ಪಾರ್ಥಿವ ಶರೀರವನ್ನು ನಿವಾಸದಿಂದ ಶಿವಾಜಿ ಪಾರ್ಕ್ ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ, ಮುಂಬೈ ಬೀದಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾವನಾತ್ಮಕವಾಗಿ ಅಂತಿಮ ವಿದಾಯ ಹೇಳಿದರು. ಅಂತಿಮ ವಿಧಿವಿಧಾನಗಳಲ್ಲಿ ಪುತ್ರ ಆನಂದ್ ಭೋಸ್ಲೆ, ಸಹೋದರರಾದ ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಭಾಗವಹಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು. ರಾಜಕೀಯ ನಾಯಕರು, ನಟರು, ಸಂಗೀತಗಾರರು ಮತ್ತು ಚಿತ್ರರಂಗದ ಗಣ್ಯರು ಸಹ ಭಾಗವಹಿಸಿ ಗೌರವ ಸಲ್ಲಿಸಿದರು. 92ನೇ ವಯಸ್ಸಿನಲ್ಲಿ ರವಿವಾರ ಸಂಜೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಶಾ ಭೋಸ್ಲೆ ಅವರು ನಿಧನರಾದರು. ಎಂಟು ದಶಕಗಳಿಗೂ ಹೆಚ್ಚು ಕಾಲ ಸಾಗಿದ ಅವರ ಸಂಗೀತ ಪಯಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಶಾಸ್ತ್ರೀಯ ಸಂಗೀತ, ಗಝಲ್, ಹಾಗೂ ಪಾಪ್ ಶೈಲಿಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ಅವರು, ಅತ್ಯಂತ ಬಹುಮುಖ ಗಾಯಕಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಹೆಚ್ಚಿನ ಸ್ಟುಡಿಯೋ ಧ್ವನಿಮುದ್ರಣಗಳಿಗಾಗಿ ಗಿನ್ನೆಸ್ ವಿಶ್ವ ದಾಖಲೆ ಪಡೆದಿದ್ದ ಅವರು, ತಮ್ಮ ಸಹೋದರಿ ಲತಾ ಮಂಗೇಶ್ಕರ್ ಅವರೊಂದಿಗೆ ಹಿಂದಿ ಚಿತ್ರ ಸಂಗೀತದ ಸುವರ್ಣ ಯುಗವನ್ನು ರೂಪಿಸಲು ಪ್ರಮುಖ ಪಾತ್ರವಹಿಸಿದ್ದರು. ಶಾಸ್ತ್ರೀಯ ಗಾಯಕ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ಪುತ್ರಿಯಾದ ಅವರು ಬಾಲ್ಯದಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸಿದರು. ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರೊಂದಿಗೆ ಅವರ ಸಹಯೋಗ ಹಲವು ಜನಪ್ರಿಯ ಹಾಡುಗಳನ್ನು ನೀಡಿತು. “ಪಿಯಾ ತು ಅಬ್ ತೊ ಆಜಾ”, “ದಮ್ ಮಾರೋ ದಮ್”, “ದಿಲ್ ಚೀಜ್ ಕ್ಯಾ ಹೈ”, “ಚುರಾ ಲಿಯಾ ಹೈ ತುಮ್ನೆ” ಮತ್ತು “ಯೇ ಮೇರಾ ದಿಲ್” ಸೇರಿದಂತೆ ಅನೇಕ ಗೀತೆಗಳು ಅವರ ಖ್ಯಾತಿಯನ್ನು ಹೆಚ್ಚಿಸಿವೆ.
ಹಿಮಾಚಲಪ್ರದೇಶ: ಕಾಲೇಜು ವಿದ್ಯಾರ್ಥಿನಿಯ ಶಿರಚ್ಛೇದನ; ಆರೋಪಿಯ ಬಂಧನ
ಚಂಡಿಗಢ: ಹತ್ತೊಂಬತ್ತು ವರ್ಷದ ಕಾಲೇಜು ವಿದ್ಯಾರ್ಥಿನಿಯ ತಲೆ ಕತ್ತರಿಸಿ ಹತ್ಯೆಗೈದ ಘಟನೆ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್ ಉಪ ವಿಭಾಗದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಹತ್ಯೆಯಾದ ಯುವತಿಯನ್ನು ಸಿಯಾ ಗುಲೇರಿಯಾ ಎಂದು ಗುರುತಿಸಲಾಗಿದೆ. ಈಕೆ ನೈನಾ ಗ್ರಾಮದ ನಿವಾಸಿ. ಯುವತಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಅಪರಿಚಿತ ದುಷ್ಕರ್ಮಿ ಆಕೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಆತ ಅಲ್ಲಿಂದ ಓಡಲು ಪ್ರಯತ್ನಿಸಿದಾಗ ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಆತನಿಂದ ಹತ್ಯೆಗೆ ಬಳಸಲಾದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಿಯಾ ಗುಲೇರಿಯಾಳ ಕತ್ತು ಕೊಯ್ದಿದ್ದಾನೆ. ಅನಂತರ ತಲೆ ಕತ್ತರಿಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಯುವತಿ ಗೋಪಾಲಪುರ ಬಸ್ ನಿಲ್ದಾಣದತ್ತ ಬೆಳಗ್ಗೆ ಸುಮಾರು 9.30ಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಆರೋಪಿ ಯುವತಿಯ ಕತ್ತು ಹಾಗೂ ತೋಳಿಗೆ ಹಲವು ಬಾರಿ ಇರಿದಿದ್ದಾನೆ. ಈ ಘಟನೆಗೆ ಸಂಬಂಧಿಸಿ ಸರ್ಕಾಘಾಟ್ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಂಡಿಯ ಪೊಲೀಸ್ ಅಧೀಕ್ಷಕ ವಿನೋದ್ ಕುಮಾರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ವಿಕಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಹಿಂದಿನ ಕಾರಣ ತಿಳಿಯಲು ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಎ.16ರಿಂದ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ; 856 ಪದವೀಧರರಿಂದ ಆರೋಗ್ಯ ಸೇವೆಯ ಪ್ರತಿಜ್ಞೆ ಸ್ವೀಕಾರ
ಮಂಗಳೂರು, ಎ.13: ಫಾದರ್ ಮುಲ್ಲರ್ ಚಾರಿಟೇಬಲ್ ಶಿಕ್ಷಣ ಸಂಸ್ಥೆಗಳ (ಎಫ್ಎಂಸಿಐ) ಪದವಿ ಪ್ರದಾನ ಸಮಾರಂಭ ಎ.16ರಿಂದ 18ರ ತನಕ ನಡೆಯಲಿದ್ದು, ಆರೋಗ್ಯ ಕ್ಷೇತ್ರದ 856 ಪದವೀಧರರರು ಆರೋಗ್ಯ ಸೇವೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ ಎಫ್ಎಂಸಿಐ ನಿರ್ದೇಶಕ ಫಾದರ್ ಫಾಸ್ಟಿನ್ ಲೂಕಾಸ್ ಲೋಬೊ ಅವರು ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಎಫ್ಎಂಸಿಐನ ಪದವಿ ಪ್ರದಾನ ಸಮಾರಂಭಗಳು ಸಂಸ್ಥೆಯ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಮೌಲ್ಯಾಧಾರಿತ ಶಿಕ್ಷಣದ ನಿರಂತರ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು. ಪದವಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಆಕ್ಸ್ಫರ್ಡ್ ಕ್ಯಾಪ್ ಅನ್ನು ಈ ವರ್ಷ ಕೈಬಿಡಲಾಗಿದೆ. ಇದರ ಬದಲಾಗಿ, ಪದವೀಧರರು ತಮ್ಮ ಕಾಲೇಜುಗಳನ್ನು ಪ್ರತಿನಿಧಿಸುವ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಯಾಶ್ (ವಸ್ತ್ರ) ಧರಿಸಲಿದ್ದಾರೆ ಮತ್ತು ಫ್ರೇಮ್ ಮಾಡಿದ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು. ಕಾರ್ಯಕ್ರಮಗಳ ವಿವರ : ಎ.16 ಮತ್ತು 17ನೇ ದಿನ ನಡೆಯುವ ಪದವಿ ಪ್ರದಾನ ಸಮಾರಂಭಗಳ ಅಧ್ಯಕ್ಷತೆ ಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಎಫ್ಎಂಸಿಐ ಅಧ್ಯಕ್ಷ ವಂ. ಡಾ. ಪೀಟರ್ ಪಾಲ್ ಸಲ್ಡಾನಾ ವಹಿಸಲಿದ್ದಾರೆ. ಎಪ್ರಿಲ್ 18ರ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ನಿವೃತ್ತ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ವಹಿಸಲಿದ್ದಾರೆ ಎಂದು ಫಾಸ್ಟಿನ್ ಲೂಕಾಸ್ ಲೋಬೊ ತಿಳಿಸಿದರು. ಎ.16ರಂದು ಬೆಳಗ್ಗೆ 10:00 ಗಂಟೆಗೆ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪದವೀಧರ ರಿಗೆ ಪದವಿ ಪ್ರದಾನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ತಾರಕೇಶ್ವರ್ ಜೈನ್ ಮತ್ತು ಯೆನೆಪೋಯ (ಪರಿಗಣಿತ) ವಿವಿ ಉಪಕುಲಪತಿ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ ಭಾಗವಹಿಸಲಿದ್ದಾರೆ . 19 ಸ್ನಾತಕೋತ್ತರ ಪದವೀಧರರು ಸೇರಿದಂತೆ ಒಟ್ಟು 111 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಈ ವೇಳೆ ಅಧ್ಯಕ್ಷರ ಚಿನ್ನದ ಪದಕ ಮತ್ತು ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಎ.17ರಂದು 3:00 ಗಂಟೆಗೆ ವೈದ್ಯಕೀಯ, ಅಲೈಡ್ ಹೆಲ್ತ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಆರ್. ಪಾಟೀಲ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಐರಾಣಿ ಮಹಮ್ಮದ್ ಖಾನ್ ಭಾಗವಹಿಸಲಿದ್ದಾರೆ. 22ನೇ ಎಂಬಿಬಿಎಸ್ ಬ್ಯಾಚ್ನ , ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈಯನ್ಸ್ನ ಒಟ್ಟು 518 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು. ಎ.18ರಂದು ಮಧ್ಯಾಹ್ನ 3 ಗಂಟೆಗೆ ನರ್ಸಿಂಗ್ ಮತ್ತು ಸ್ಪೀಚ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಮಣಿಪಾಲದ ಮಾಹೆ ವಿವಿಯ ಸಹಾಯಕ ಡೀನ್ ಡಾ. ವೆಂಕಟರಾಜ ಐತಾಳ್ ಮತ್ತು ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾ ಪಿ. ಶೆಟ್ಟಿ. ಪಾಲ್ಗೊಳ್ಳಲಿದ್ದಾರೆ. ಕಾಲೇಜ್ ಮತ್ತು ಸ್ಕೂಲ್ ಆಫ್ ನರ್ಸಿಂಗ್ನ 177 ವಿದ್ಯಾರ್ಥಿಗಳು ಹಾಗೂ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ನ 50 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಆಡಳಿತಾಧಿಕಾರಿಗಳಾದ ಡಾ. ಮೈಕೆಲ್ ಸಾಂತುಮಾಯೋರ್, ? ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಫಾ. ನೆಲ್ಸನ್ ಧೀರಜ್ ಪಾಯಸ್, ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಡೀನ್ ಡಾ. ಆಂಟನಿ ಸಿಲ್ವನ್ ಡಿ ಸೋಜ, ಪ್ರಾಂಶುಪಾಲರಾದ ಡಾ. ಶಿವಶಂಕರ ಎ.ಆರ್, ಪ್ರೊ. ಚರಿಷ್ಮಾ ಡಿಸಿಲ್ವ, ಭಗಿನಿ ಧನ್ಯಾ ದೇವಸಿಯಾ, ಪ್ರೊ. ಸಿಂಥಿಯಾ ಸಾಂತುಮಾಯೋರ್, ಡಾ. ಇ.ಎಸ್.ಜೆ. ಪ್ರಭು ಕಿರಣ್, ಡಾ. ಸತೀಶ್ ಎಸ್, ಡಾ. ಪೌಲಿನ್ ಆನಂದ್, ಎಫ್ಎಂಸಿಐ ಸಂಪರ್ಕಾಧಿಕಾರಿ ಡಾ. ಕೆಲ್ವಿನ್ ಪೀಟರ್ ಪಾಯಸ್, ಪೋರ್ವಿಂಡ್ಸ್ನ ಎಲಿಯಾಸ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ: ರಾಹುಲ್ ಗಾಂಧಿ
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ ಪತ್ನಿ ರಿನಿಕಿ ಭೂಯನ್ ಶರ್ಮಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬುದಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬಣ್ಣಿಸಿರುವ ರಾಹುಲ್, ಅವರು ರಾಜಕೀಯ ಎದುರಾಳಿಗಳ ವಿರುದ್ಧ ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡುತ್ತಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮಾಡಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ ಅವರು, ‘‘ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಕಾನೂನಿನ ಆಡಳಿತ ನಮ್ಮ ಸಂವಿಧಾನದ ಪ್ರಾಥಮಿಕ ತತ್ವಗಳಾಗಿವೆ’’ ಎಂದರು. ಪಕ್ಷವು ಖೇರಾ ಪರವಾಗಿ ದೃಢವಾಗಿ ನಿಂತಿದೆ ಎಂದು ಘೋಷಿಸಿದ ಅವರು, ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದರು. ಎಪ್ರಿಲ್ 10ರಿಂದ ಒಂದು ವಾರದ ಕಾಲ ಪವನ್ ಖೇರಾಗೆ ತೆಲಂಗಾಣ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಮುಂದಿನ ಪರಿಹಾರಕ್ಕಾಗಿ ಅಸ್ಸಾಮ್ನ ಸೂಕ್ತ ನ್ಯಾಯಾಲಯಕ್ಕೆ ಹೋಗುವಂತೆ ತೆಲಂಗಾಣ ಹೈಕೋರ್ಟ್ ಅವರಿಗೆ ನಿರ್ದೇಶನ ನೀಡಿತ್ತು. ಭೂಯನ್ ಶರ್ಮಾ ಹಲವಾರು ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಹಾಗೂ ಅವರ ಕುಟುಂಬವು ಅಮೆರಿಕದಲ್ಲಿ 52,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂಬುದಾಗಿ ಖೇರಾ ಆರೋಪಿಸಿದ್ದಾರೆ. ಈ ಆರೋಪದ ಬಳಿಕ, ಭೂಯನ್ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಅಸ್ಸಾಂ ಪೊಲೀಸರು ಖೇರಾ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಅವರ ನಿವಾಸದಲ್ಲಿ ಶೋಧ ನಡೆಸಿದ್ದರು.
ಕಣ್ಣೂರು ಆಂಗ್ಲಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ, ಕಣ್ಣೂರು ಅಲ್ಬಿರ್ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ
ಕಣ್ಣೂರು: ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಯುತ ಆಯುಧವಾಗಿದೆ. ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ,ತಾಳ್ಮೆ,ಆತ್ಮವಿಶ್ವಾಸ ಈ ಎಲ್ಲಾ ಗುಣಗಳು ಮಕ್ಕಳು ತಮ್ಮ ಬಾಲ್ಯದಲ್ಲಿ ಅಳವಡಿ ಸದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಹಾಗೆಯೇ ಈ ದಿನವು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಅತ್ಯುತ್ತಮ ವಾದ ದಿನವಾಗಿದೆ ಎಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ನಿಯಾಝ್ ಪಣಕಜೆ ಅಭಿಪ್ರಾಯ ಪಟ್ಟರು. ಇವರು ಕಣ್ಣೂರು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಕಣ್ಣೂರು ಅಲ್ಬೀರ್ ಶಾಲೆಯ ಶಾಲಾ ಘಟಿಕೋತ್ಸವ - Genesis ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಮಹಮ್ಮದ್ ಅವರು ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ರಿಯಾಝ್ ಅಹಮದ್ ಕೆ. ಬಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಡಾ. ಹೈದರ್ ಇವರು ಮಕ್ಕಳಿಗೆ ಹಿತನುಡಿಗಳನ್ನು ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಗೂ ಸದಸ್ಯರಾದ ಹೈದರ್ ಹಾಜಿ ಹಾಗೂ ಹಮೀದ್ ರವರು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿ ಶೈಮ ಧನ್ಯವಾದವಿತ್ತರು. ಶಿಕ್ಷಕಿ ಜಯಲತ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು | ಲಂಚಕ್ಕೆ ಬೇಡಿಕೆ: ಇಬ್ಬರು ಆರ್ಟಿಒ ಅಧಿಕಾರಿಗಳ ಸಹಿತ ಮೂವರು ಲೋಕಾಯುಕ್ತ ವಶಕ್ಕೆ
ಬೆಂಗಳೂರು : ನೆಲಮಂಗಲ ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರ್ಟಿಒ ಅಧಿಕಾರಿಗಳ ಸಹಿತ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಓವರ್ಲೋಡ್ ಟ್ರಕ್ ಬಿಡಲು 30ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಸಂಬಂಧ ಬೆಂ. ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಆರ್ಟಿಒ ಕಚೇರಿಯ ಪ್ರೊ ಬೇಷನರಿ ಇನ್ಸ್ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ.ಕೋನವಂಶಿ ಕೃಷ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದ ಇಬ್ಬರು ಆರ್ಟಿಓ ಅಧಿಕಾರಿಗಳು ವಾಹನಗಳ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿದ್ದಾರೆ ಎಂಬ ದೂರು ಸಂಬಂಧ ಮಾಹಿತಿ ಆಧಾರದ ಮೇರೆಗೆ ಈ ಕ್ರಮ ಜರುಗಿಸಲಾಗಿದೆ.
ಬಂಟ್ವಾಳ ಪುರಸಭಾ ಮಾಜಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ನಿಧನ
ಬಂಟ್ವಾಳ : ಬಂಟ್ವಾಳ ಪುರಸಭಾ ಮಾಜಿ ಉಪಾಧ್ಯಕ್ಷ, ನಿಕಟಪೂರ್ವ ಸದಸ್ಯ ಮುಹಮ್ಮದ್ ನಂದರಬೆಟ್ಟು (66) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಂಟ್ವಾಳ ಪುರಸಭೆಗೆ ಮೂರು ಬಾರಿ ಚುನಾಯಿತರಾಗಿದ್ದ ಅವರು ಒಂದು ಅವಧಿಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದರಸ ಹಾಗೂ ಮದೀನಾ ಜುಮಾ ಮಸೀದಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು 16 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ಥಳೀಯವಾಗಿ ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳಲ್ಲೂ ಅವರು ಸಕ್ರಿಯರಾಗಿದ್ದರು. ಕಾಲೇಜು ಹಂತದಲ್ಲಿ ಉತ್ತಮ ವಾಲಿಬಾಲ್ ಪಟುವಾಗಿದ್ದ ಇವರು ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಮೃತರ ದಫನ ಕ್ರಿಯೆಯು ಮಂಗಳವಾರ ಮುಂಜಾನೆ ವೇಳೆಗೆ ಪರ್ಲಿಯಾ ಅರಫಾ ಜುಮಾ ಮಸೀದಿಯ ವಠಾರದಲ್ಲಿರುವ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮುಹಮ್ಮದ್ ನಂದರಬೆಟ್ಟು ಅವರ ಅಗಲಿಕೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್ ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಸ ಸೂಚಿಸಿದ್ದಾರೆ.
West Bengal | ನ್ಯಾಯಾಧೀಶರಿಗೆ ಘೇರಾವ್ ಹಾಕಿದ ಪ್ರಕರಣ: ಇಬ್ಬರು ಕಾಂಗ್ರೆಸ್ ನಾಯಕರ ಬಂಧನ
ಕೋಲ್ಕತಾ: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವೇಳೆ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರತಿಭಟಿಸುತ್ತಿದ್ದ ಸ್ಥಳೀಯರು ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಸೆರೆಯಲ್ಲಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ರವಿವಾರ ಇಬ್ಬರು ಕಾಂಗ್ರೆಸ್ ನಾಯಕರನ್ನು ಬಂಧಿಸಿದೆ. ಎಪ್ರಿಲ್ ಒಂದರಂದು ಮಾಲ್ಡಾ ಜಿಲ್ಲೆಯ ಕಲಿಯಚಕ್ ಬ್ಲಾಕ್ನಲ್ಲಿ ಏಳು ನ್ಯಾಯಾಂಗ ಅಧಿಕಾರಿಗಳಿಗೆ ಘೇರಾವ್ ಹಾಕಿದ ಪ್ರಕರಣದಲ್ಲಿ ಎನ್ಐಎ ಇಬ್ಬರು ಸ್ಥಳೀಯ ನಾಯಕರಾದ ಶಹಾದತ್ ಹುಸೈನ್ ಮತ್ತು ಆಸಿಫ್ ಶೇಖ್ರನ್ನು ಬಂಧಿಸಿದೆ. ಇದಕ್ಕೂ ಮೊದಲು, ಎನ್ಐಎ ಈ ಘಟನೆಗೆ ಸಂಬಂಧಿಸಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್)ನ ಅಭ್ಯರ್ಥಿ ಸೇರಿದಂತೆ ಹಲವಾರು ಮಂದಿಯನ್ನು ಬಂಧಿಸಿತ್ತು. ಅದು ರವಿವಾರ ಮಾಲ್ಡಾದ ಮುತಾಬಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಯನ್ ಚೌಧರಿಯನ್ನು ವಶಕ್ಕೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಗೆ ಅವರ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದೆ. ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ. ‘‘ಚುನಾವಣಾ ಪ್ರಚಾರದ ನಡುವೆ ಸುದೀರ್ಘ ಕಾಲ ನನ್ನನ್ನು ಕೂಡಿ ಹಾಕಿರುವುದು ವ್ಯವಸ್ಥಿತ ರಾಜಕೀಯ ಪಿತೂರಿಯಾಗಿದೆ’’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ ಆರೋಪಿಸಿದರು.
CBSE ಫಲಿತಾಂಶಕ್ಕಾಗಿ ಕಾಯಬೇಡಿ: ಈಗಲೇ ನಿಮ್ಮ ಡಿಜಿಲಾಕರ್ ಖಾತೆ ತೆರೆಯಿರಿ, ಕ್ಷಣಾರ್ಧದಲ್ಲಿ ರಿಸಲ್ಟ್ ಪಡೆಯಿರಿ
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 2026ನೇ ಸಾಲಿನ 10ನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಫಲಿತಾಂಶದ ದಿನಾಂಕ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕುತೂಹಲ ಹಾಗೂ ಆತಂಕ ಹೆಚ್ಚಾಗುವುದು ಸಹಜ. ಆದರೆ, ಫಲಿತಾಂಶ ಪ್ರಕಟವಾದ ತಕ್ಷಣ ಏಕಕಾಲಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡುವುದರಿಂದ
ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
ಬೆಂಗಳೂರು : ಕರ್ನಾಟಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ವಿವಿಧ ವರ್ಗದ ಶಿಕ್ಷಕರ ವರ್ಗಾವಣೆ ಸಂಬಂಧಿಸಿದಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಿಂದ ಅಂಗೀಕಾರಗೊಂಡಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2026ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯ, ಪಿಎಂಶ್ರೀ ಎಂದು ಶಾಲೆಗಳಲ್ಲಿರುವ ಶಿಕ್ಷಕರು ಕನಿಷ್ಠ 12 ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸಿರಬೇಕು. ನಂತರ ಅವರಿಗೆ ಕೌನ್ಸಲಿಂಗ್ ನಡೆಸುವ ಮೂಲಕ ವರ್ಗಾವಣೆಗೆ ಅವಕಾಶ ದೊರೆಯಲಿದೆ. ವರ್ಗಾವಣೆಯಲ್ಲಿ ಗರ್ಭಿಣಿ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿರುವ ಶಿಕ್ಷಕಿಯರಿಗೆ ಬಯಸಿದ ಸ್ಥಳದ ಆಯ್ಕೆಗೆ ಆದ್ಯತೆ ನೀಡಲಾಗಿದೆ. ಇನ್ನೂ ಬೋಧಕೇತರ ಹುದ್ದೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಪಿಯುಸಿ ಫಲಿತಾಂಶ: ಮುಹಮ್ಮದ್ ಇಶಾನ್ ಹುಸೈನ್ಗೆ ವಿಜ್ಞಾನ ವಿಭಾಗದಲ್ಲಿ 562 ಅಂಕ
ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಶಾನ್ ಹುಸೈನ್ ವಿಜ್ಞಾನ ವಿಭಾಗದಲ್ಲಿ 562 (93.67%) ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಂತರ್ ರಾಷ್ಟ್ರೀಯ ಕರಾಟೆಪಟು ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಮತ್ತು ನಿಟ್ಟೆ ಕೈರಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶಾಹಿನ್ ದಂಪತಿಯ ಪುತ್ರ.
ಪವನ್ ಖೇರಾಗೆ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ
ಹೊಸದಿಲ್ಲಿ/ಗುವಾಹಟಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ನೀಡಿರುವ ಒಂದು ವಾರದ ತಾತ್ಕಾಲಿಕ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಸ್ಸಾಂ ಪೊಲೀಸರು ದಾಖಲಿಸಿರುವ ನಕಲಿ ದಾಖಲೆ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳ ಹಿನ್ನೆಲೆಯಲ್ಲಿ ಖೇರಾಗೆ ನೀಡಿದ ಜಾಮೀನಿಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಆದೇಶವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಕುರಿತು ಖೇರಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಿನಿಕಿ ಭುಯಾನ್ ವಿದೇಶಗಳಲ್ಲಿ ಬಹು ಪಾಸ್ಪೋರ್ಟ್ ಗಳು ಮತ್ತು ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಖೇರಾ ಆರೋಪಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಎ. 7ರಂದು ಅಸ್ಸಾಂ ಪೊಲೀಸರು ದಿಲ್ಲಿಯಲ್ಲಿರುವ ಖೇರಾ ನಿವಾಸಕ್ಕೆ ಭೇಟಿ ನೀಡಿದಾಗ ಅವರು ಅಲ್ಲಿರಲಿಲ್ಲ. ಬಳಿಕ ಖೇರಾ ಅವರು ತಾತ್ಕಾಲಿಕ ನಿರೀಕ್ಷಣಾ ಜಾಮೀನು ಕೋರಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸುಜನಾ ಅವರು ಎಪ್ರಿಲ್ 10ರಂದು ಖೇರಾಗೆ ಒಂದು ವಾರದ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು. ಈ ಅವಧಿಯಲ್ಲಿ ಸಂಬಂಧಿತ ನ್ಯಾಯಾಲಯದ ಮುಂದೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನ್ಯಾಯಾಲಯ ತನ್ನ ಆದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ಗಳು 175, 3(5), 3(6), 318, 336(4), 337, 338, 340, 341(1), 351(1), 352, 353, 356 ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಿದೆ. ಸೆಕ್ಷನ್ 338 ಹೊರತುಪಡಿಸಿ ಉಳಿದ ಎಲ್ಲಾ ಅಪರಾಧಗಳು ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಪಡುವವು ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದೇ ಅವಧಿಯಲ್ಲಿ ನಿಯಮಿತ ಜಾಮೀನಿಗಾಗಿ ಸಂಬಂಧಿತ ನ್ಯಾಯಾಲಯವನ್ನು ಸಂಪರ್ಕಿಸಲು ಖೇರಾಗೆ ಒಂದು ವಾರದ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸದಿಲ್ಲಿ: ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣೆ ಸಂದರ್ಭ ಮತಗಟ್ಟೆಗಳಲ್ಲಿ ಬೆರಳು ಹಾಗೂ ಐರಿಸ್ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸು ಜಾರಿ ಮಾಡಿದೆ. ಅರ್ಜಿದಾರರ ವಾದವನ್ನು ಕೇಳಿದ ಬಳಿಕ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ಜೋಯ್ಮಲ್ಯ ಬಾಗ್ಚಿ ಅವರ ಪೀಠ ಚುನಾವಣಾ ಆಯೋಗ, ಕೇಂದ್ರ ಸರಕಾರ ಹಾಗೂ ಇತರರ ಪ್ರತಿಕ್ರಿಯೆ ಕೋರಿತು. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ಗುರುತಿನ ಪರಿಶೀಲನೆಯಲ್ಲಿ ಯಾವುದೇ ಕೊರತೆ ಇದ್ದರೆ, ಅದು ಚುನಾವಣಾ ಫಲಿತಾಂಶದ ನ್ಯಾಯಸಮ್ಮತತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಕಲ್ಚರ್ಪೆ: 25 ಅಡಿ ಆಳದ ಬಾವಿಗೆ ಬಿದ್ದ ಕಾಡಾನೆ; ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ
ಕಲ್ಚರ್ಪೆ: ಆಳವಾದ ಪಾಳು ಬಾವಿಗೆ ಬಿದ್ದು ದಿಕ್ಕು ತೋಚದೆ ಅಸಹಾಯಕ ಸ್ಥಿತಿಯಲ್ಲಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಸೋಮವಾರ ನಡೆದಿದೆ. ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚರ್ಪೆಯಲ್ಲಿ ಅಂದಾಜು 20 ರಿಂದ 22 ವರ್ಷ ಪ್ರಾಯದ ಗಂಡಾನೆಯೊಂದು ರಾಮ ನಾಯ್ಕ ಅವರ ಅರಣ್ಯದಂಚಿನ ತೋಟದ ಬದಿಯಲ್ಲಿದ್ದ 25 ಅಡಿ ಆಳದ ಪಾಳು ಬಾವಿಗೆ ಭಾನುವಾರ ರಾತ್ರಿ 11.30ರ ವೇಳೆಗೆ ಬಿದ್ದಿದೆ. ಈ ವೇಳೆ ಕಾಡಾನೆಯ ರೋಧನೆಯನ್ನು ಕೇಳಿದ ರಾಮ ನಾಯ್ಕ ಅವರ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಿಬ್ಬಂದಿಗಳು ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬೆಳಗ್ಗೆ 6 ಗಂಟೆಗೆ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎಂಟು ಗಂಟೆಯಿಂದ ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಬಾವಿಯ ಒಂದು ಬದಿಯಿಂದ ಆಳ ಮಾಡಿ ದಾರಿ ಮಾಡಿ ಕೊಡಲಾಯಿತು. ಮಧ್ಯಾಹ್ನ 12.50ರ ವೇಳೆಗೆ ಹಿಟಾಚಿ ತೋಡಿದ ದಾರಿಯ ಮೂಲಕ ಮೇಲಕ್ಕೆ ಬಂತ್ತು. ಸುಮಾರು 6 ರಿಂದ 7 ಗಂಟೆ ಕಾರ್ಯಾಚರಣೆ ಅರಣ್ಯ ಇಲಾಖೆ ನಡೆಸಿತ್ತು. ಬಾವಿಯಿಂದ ಮೇಲೆದ್ದು ಬಂದ ಆನೆಯು ಮೇಲಕ್ಕೆ ಬಂದು ತೋಟದ ಮೇಲಿನ ಭಾಗದ ರಾಷ್ಟೀಯ ಹೆದ್ದಾರಿ ಕಡೆ ಓಡಿತ್ತು. ಇದರಿಂದ ಕೆಲ ಕಾಲ ಆತಂಕ ಸೃಷ್ಠಿಸಿತು. ಬಾವಿಯಿಂದ ಮೇಲೆ ಬಂದಾಗ ಎದುರಿಗಿದ್ದ ಹಿಟಾಚಿಗೆ ಹಾದು ಕೊಂಡು ಕೆಳ ಭಾಗಕ್ಕೆ ನುಗ್ಗಿತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಸರಿಸಿತು. ಕೆಲ ಕಾಲದ ಬಳಿಕ ತೋಟಕ್ಕೆ ತೆರಳಿ ಅದೇ ದಾರಿಯಾಗಿ ಬಂದ ಕಾಡಾನೆ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಸಾಗಿತ್ತು. ಕಾರ್ಯಾಚರಣೆಯಲ್ಲಿ ಸಿಸಿಎಫ್ ಕರಿಕಾಳನ್, ಡಿಎಫ್ಒ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಎಸಿಎಫ್ ಸಂಕೇತ್ ಅದಾವ್, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ಬಾಬು, ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ, ಅಗ್ನಿಶಾಮಕ ದಳದ ಎಸ್.ಐ ಕಿರಣ್ ಕುಮರ್, ಪಶು ವೈದ್ಯಾಧಿಕಾರಿ ಡಾ. ನಿತೀನ್ ಪ್ರಭು, ಆನೆ ಕಾರ್ಯಪಡೆಯ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿಗಳು, ಸಿಬ್ಬಂದಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದರು.
SRH Vs RR Highlights- ಇತಿಹಾಸ ನಿರ್ಮಿಸಿದ ಪ್ರಫುಲ್! ಪದಾರ್ಪಣೆ ಪಂದ್ಯದ ಮೊದಲ ಓವರ್ ನಲ್ಲೇ 3 ವಿಕೆಟ್! ಯಾರೀತ?
1-0-1-3! ಇದು ಪದಾರ್ಪಣೆ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಮಧ್ಯಮ ವೇಗದ ಬೌಲರ್ ಪ್ರಫುಲ್ ಹಿಂಜ್ ಅವರ ಆರಂಭಿಕ ಓವರ್ ಅಂಕಿ ಅಂಶ! ಆರು ಎಸೆತಗಳು ಮುಗಿಯುವುದರೊಳಗೆ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್, ಪ್ರೆಟೋರಿಯಸ್ ವಿಕೆಟ್! ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲೇ ಇಂತಹ ಡ್ರೀಮ್ ಸ್ಟಾರ್ಟ್ ಪಡೆದ ಮತ್ತೊಬ್ಬ ಬೌಲರ್ ಇಲ್ಲ! ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ತಂಡ ಎಸೆದ ಮೊದಲ ಓವರ್ ನಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಕಾರಣರಾದವರು ನಾಗ್ಪುರ ಮೂಲದ 24 ವರ್ಷದ ಬೌಲರ್ ಪ್ರಫುಲ್ ಪ್ರಕಾಶ್ ಹಿಂಜ್! () ಯಾರು ಈ ಹೊಸ ಬೌಲರ್? 2002ರ ಜನವರಿ 18ರಂದು ನಾಗ್ಪುರದಲ್ಲಿ ಜನಿಸಿದ ಪ್ರಫುಲ್ ಪ್ರಕಾಶ್ ಹಿಂಜ್ ವಿದರ್ಭ ತಂಡದ ಉದಯೋನ್ಮುಖ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ ನಲ್ಲಿ ಹಿಟ್-ದಿ-ಡೆಕ್ ಸ್ಪೆಷಲಿಸ್ಟ್ ಆಗಿ ಹೊರಹೊಮ್ಮುತ್ತಿರುವ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 2026ರ ಮಿನಿ ಹರಾಜಿನಲ್ಲಿ ಮೂಲಧನ 30 ಲಕ್ಷ ರೂಪಾಯಿಗೆ ಸಹಿ ಮಾಡಿಕೊಂಡಿದೆ. ದೇಶೀಯ ಕ್ರಿಕೆಟ್ ನಲ್ಲಿ ಇವರು ಈಗಾಗಲೇ ಗಮನ ಸೆಳೆದಿದ್ದಾರೆ. 2025-26 ರ ಸೀಸನ್ ನಲ್ಲಿ ವಿದರ್ಭ ತಂಡಕ್ಕೆ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲೂ ಮಿಂಚಿದ್ದರು. ವಿದರ್ಭ ತಂಡದ ಪರ ಆಡಿರುವ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಬಳಿಸಿದ್ದಾರೆ. ಇನ್ನು 6 ಲಿಸ್ಚ್ ಎ ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಇದು ಅವರ ಪ್ರಥಮ ಪಂದ್ಯ. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಮವಾರ ಭಯ ಇದ್ದಿದ್ದು ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಬಗ್ಗೆ. ಭಯವಿತ್ತು. ಆದರೆ ಎಲ್ಲ ಭಯ, ಆತಂಕಗಳಿಗೆ ತೆರೆ ಎಳೆದವರು ಪ್ರಫುಲ್! ಹೀಗಿತ್ತು ಮ್ಯಾಜಿಕ್ ಓವರ್ ಪ್ರಫುಲ್ ಅವರು ಆಫ್ ಸೈಡಿನಾಚೆಗೆ ಎಸೆದ ಮೊದಲ ಓವರ್ ನ ಮೊದಲ ಎಸೆತವನ್ನು ಡೀಪ್ ಥರ್ಡ್ ಮ್ಯಾನ್ ಕಡೆಗೆ ತಳ್ಳಿದ ಯಶಸ್ವಿ ಜೈಸ್ವಾಲ್ ಅವರು ಒಂಟಿ ರನ್ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ಟ್ರೈಕ್ ಗೆ ಬಂದ ವೈಭವ್ ಸೂರ್ಯವಂಶಿಗೆ ಪ್ರಫುಲ್ ಅವರು ಬೌನ್ಸರ್ ಎಸೆಯುತ್ತಾರೆ. ತಬ್ಬಿಬ್ಬಾದ ವೈಭವ್ ಅವರು ದೊಡ್ಡ ಹೊಡೆತಕ್ಕೆ ಪ್ರಯತ್ನಿಸುತ್ತಾರೆ. ಆ ವೇಳೆ ಚೆಂಡು ಆಗಸದೆತ್ತರಕ್ಕೆ ಚಿಮ್ಮಿತು. ಕೀಪರ್ ಅರೋರಾ ಅವರು ಕ್ಯಾಚ್ ಹಿಡಿಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಇದು ಪ್ರಫುಲ್ ಅವರ ಮೊದಲ ವಿಕೆಟ್. ವೈಭವ್ ಸೂರ್ಯವಂಶಿ ಅವರು ಔಚಾದ ಬಳಿಕ ಕ್ರೀಸಿಗೆ ಬರುವ ಧ್ರುವ್ ಜ್ಯುರೆಲ್ ಅವರು ಪ್ರಫಲ್ ಅವರು ಆಫ್ ಸ್ಟಂಪಿನಾಚೆಗೆ ಎಸೆದ ಚೆಂಡನ್ನು ಕವರ್ ಪಾಯಿಂಟ್ ಕಡೆಗೆ ಹೊಡಯುತ್ತಾರೆ. ಆದರೆ ಯಾವುದೇ ರನ್ ದೊರಕುವುದಿಲ್ಲ. 4ನೇ ಎಸೆತದಲ್ಲಿ ಧ್ರುವ್ ಜ್ಯುರೆಲ್ ಕ್ಲೀನ್ ಬೌಲ್ಡ್ ! ಅಲ್ಲಿಗೆ ಇಬ್ಬರು ಡಕೌಟ್ ಮತ್ತು ಪ್ರಫುಲ್ ಗೆ 2 ವಿಕೆಟ್. ಕ್ರೀಸಿಗೆ ಆಗಮಿಸಿದ ಪ್ರಿಟೋರಿಯಸ್ 5 ಎಸೆತದಲ್ಲಿ ಯಾವುದೇ ರನ್ ಗಳಿಸುವಲ್ಲಿ ಸಫಲರಾಗುವುದಿಲ್ಲ. 6ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದಾಗ ಡೀಪ್ ಬ್ಯಾಕ್ ವರ್ಡ್ ಸ್ಕೇರ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಕ್ಯಾಚ್ ಹಿಡಿಯುವಲ್ಲಿ ಯಾವುದೇ ತಪ್ಪನ್ನು ಮಾಡುವುದಿಲ್ಲ. ಅಲ್ಲಿಗೆ ಪ್ರಫುಲ್ ಗೆ ಒಂದೇ ಓವರ್ ನಲ್ಲಿ 3 ವಿಕೆಟ್. ಸನ್ ರೈಸರ್ಸ್ 1 ರನ್ ಗಳಿಸುವುದರೊಳಗೆ 3 ವಿಕೆಟ್ ಪತನ!
ಸಿರುಗುಪ್ಪ | ಶಾನವಾಸಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ: ಶಾಸಕ ಬಿ.ಎಂ. ನಾಗರಾಜ ಚಾಲನೆ
ಸಿರುಗುಪ್ಪ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2025-26ನೇ ಸಾಲಿನ ಸಿಎಂ ಐಡಿಪಿ (ಮುಖ್ಯಮಂತ್ರಿ ಮೂಲಭೂತ ಸೌಕರ್ಯ ಅಭಿವೃದ್ಧಿ) ಯೋಜನೆಯಡಿ 15 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಶಂಕುಸ್ಥಾಪನೆ ನೆರವೇರಿಸಿದರು. ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಶ್ರೀ ಸುಂಕ್ಲಮ್ಮ ದೇವಸ್ಥಾನದ ಸಮೀಪ ಈ ಸಮುದಾಯ ಭವನ ನಿರ್ಮಾಣವಾಗಲಿದ್ದು, ಗ್ರಾಮಸ್ಥರಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ನಾಗರಾಜ, ಶರಣಗೌಡ, ಅಯ್ಯಪ್ಪ, ನೀಲಕಂಠಗೌಡ, ಅಕ್ಬರ್ ಸಾಬ್, ಇಸ್ಮಾಯಿಲ್ ಸಾಬ್, ಜೀಲಾನ್ ಸಾಬ್, ನಡವಿ ಶಂಕ್ರಪ್ಪ, ಹೊನ್ನೂರಪ್ಪ, ಎರೆಪ್ಪ ಗೌಡ, ತಿಪ್ಪೇರುದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ರಾಜ್ ಎಇಇ ಇಂಜಿನಿಯರ್ ತಿಪ್ಪೇಸ್ವಾಮಿ, ಶಾನವಾಸಪುರ ಗ್ರಾಮ ಪಂಚಾಯತ್ ಪಿಡಿಓ ವೀರೇಶ್, ಬಿ. ವೆಂಕಟೇಶ್, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಸಿರುಗುಪ್ಪ | ದಾಸಪುರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು: ಶಾಸಕ ಬಿ.ಎಂ.ನಾಗರಾಜ ಚಾಲನೆ
ಸಿರುಗುಪ್ಪ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) 2025-26ನೇ ಯೋಜನೆಯಡಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಅಡಿಗಲ್ಲು ನೆರವೇರಿಸಿದರು. ತಾಲೂಕಿನ ದಾಸಪುರ ಗ್ರಾಮದಲ್ಲಿ ಸಿರಿಗೇರಿ ಮಲ್ಲಪ್ಪನ ಮನೆಯಿಂದ ತಳವಾರ ರೇಣುಕಮ್ಮನ ಮನೆಯವರೆಗೆ ಹಾಗೂ ಟಿ. ದ್ಯಾವಣ್ಣ ಮನೆಯಿಂದ ತಳವಾರ ಮಲ್ಲಯ್ಯನ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮುಖಂಡರಾದ ಕೊಂಚಿಗೇರಿ ಸಿದ್ದನಗೌಡ, ದಾಸಪುರ ಶೇಖರಪ್ಪ, ಬಸವರಾಜ, ರುದ್ರಪ್ಪ, ಹನುಮಂತಪ್ಪ, ಬುಳ್ಳಪ್ಪ, ದೊಡ್ಡ ಮುದುಕನಗೌಡ, ವೀರಭದ್ರಗೌಡ, ಡಿ. ನಾಗಪ್ಪ, ಮುದ್ದು ವೀರಪ್ಪ, ಸಣ್ಣ ಮುದುಕನಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ರಾಜ್ ಎಇಇ ಇಂಜಿನಿಯರ್ ತಿಪ್ಪೇಸ್ವಾಮಿ, ಬಿ. ವೆಂಕಟೇಶ್, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಸಿರುಗುಪ್ಪ | ಜುಮ್ಮಾ ಮಸೀದಿ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರು : ಶಾಸಕರಿಂದ ಕಾಮಗಾರಿ ಪರಿಶೀಲನೆ
ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಅನುದಾನದಡಿ ಜುಮ್ಮಾ ಮಸೀದಿ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಶಾಸಕ ಬಿ.ಎಂ. ನಾಗರಾಜ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದ ಅವರು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ಅಕ್ಬರ್ ಸಾಬ್, ಬಳಿಗೇರು ಪೀರಾ ಸಾಬ್, ಚೀಣಿಗಿ ಸಾಬ್, ಟಿ. ಬಾಷಾ, ಟಿ. ಶೇಖ್ ಸಾಬ್, ಇಸ್ಮಾಯಿಲ್ ಸಾಬ್, ಜಿಲಾನ್ ಸಾಬ್, ಅಬ್ದುಲ್ ನಬಿ, ನಾಗರಾಜ, ಶರಣಗೌಡ, ನೀಲಕಂಠಗೌಡ, ಹೆಚ್. ಗಣೇಶ್, ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಬ್ರಹ್ಮಾವರ: ವಿಪರೀತ ಕುಡಿತದ ಚಟ ಹಾಗೂ ಮದುವೆ ಆಗದೇ ಇರುವ ಬಗ್ಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೇರ್ಕಾಡಿ ಗ್ರಾಮದ ರಾಧಾ ಎಂಬವರ ಮಗ ಮಂಜುನಾಥ(39) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಎ.12ರಂದು ಮಧ್ಯಾಹ್ನ ಮನೆಯ ಎದುರು ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರ್ವ: ಮದ್ಯಪಾನ ಮಾಡುವ ಚಟ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿರ್ವ ಮಟ್ಟಾರು ನಿವಾಸಿ ಪ್ರಕಾಶ್ ಆಚಾರ್ಯ(38) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.13ರಂದು ನಸುಕಿನ ವೇಳೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಎ.13: ಬಾವಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎಂಬಲ್ಲಿ ಎ.12ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಪರಾರಿ ನಿವಾಸಿ ರಾಜೇಶ್ ಶೆಟ್ಟಿ ಎಂಬವರ ಮಗ ರಿತಿಕ್ ಆರ್.ಶೆಟ್ಟಿ(11) ಎಂದು ಗುರುತಿಸಲಾಗಿದೆ. ರಾಜೇಶ್ ಶೆಟ್ಟಿ ತಮ್ಮ ಮನೆಯ ಮುಂದಿನ ಅಡಿಕೆ ತೋಟಕ್ಕೆ ನೀರು ಬಿಡಲು ನೀರಿನ ಪಂಪ್ ಸ್ವಿಚ್ ಹಾಕಿದ್ದು, ಆಗ ಪೈಪ್ನಲ್ಲಿ ನೀರು ಬರುತ್ತಿರಲಿಲ್ಲ. ಈ ವೇಳೆ ಇವರ ಮಗ ರಿತಿಕ್ ಶೆಟ್ಟಿ ಬಾವಿಯ ಬಳಿಗೆ ಹೋಗಿ, ಬಾವಿಯಲ್ಲಿ ಅಳವಡಿಸಿದ್ದ ಪೈಪ್ನ್ನು ಮೇಲಕ್ಕೆತ್ತಲು ಪ್ರಯತ್ನಿಸಿದನು ಎನ್ನಲಾಗಿದೆ. ಆಗ ಅವರು ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಡ್ಜ್ನಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿ ಮೃತ್ಯು
ಮಣಿಪಾಲ, ಎ.13: ಲಾಡ್ಜ್ನಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.12ರಂದು ರಾತ್ರಿ ವೇಳೆ ಮಣಿಪಾಲದ ಈಶ್ವರನಗರ ಎಂಬಲ್ಲಿ ನಡೆದಿದೆ. ಮೃತರನ್ನು ದಾವಣಗೆರೆಯ ಮಾರುತಿ ಬಿ.ಎನ್.(41) ಎಂದು ಗುರುತಿಸ ಲಾಗಿದೆ. ಇವರು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ತಮ್ಮ ಊರಿನಿಂದ ಹೊರಟು ರಾತ್ರಿ ಮಣಿಪಾಲ ತಲುಪಿದ್ದು, ರಾತ್ರಿ ಮಣಿಪಾಲದ ಈಶ್ವರನಗರ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡಿ ಮಲಗಿದ್ದ ಇವರು ಎ.13ರಂದು ಬೆಳಗ್ಗೆ ಎಬ್ಬಿಸುವಾಗ ಮೃತಪಟ್ಟಿ ರುವುದು ಕಂಡುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 1ರಂದು ಭಗವಾನ್ ಬುದ್ಧ ಜಯಂತಿ ಆಚರಣೆ
ಉಡುಪಿ, ಎ.13: ಭಗವಾನ್ ಬುದ್ಧ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಮೇ 1ರಂದು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿ ಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣ ವಾಗಿ ಹಾಗೂ ಅವರು ನೀಡಿದ ಕೊಡುಗೆಯ ಸಂದೇಶಗಳನ್ನು ಸಮಾಜಕ್ಕೆ ತಿಳಿಸಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ಸಾರಲು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದರು. ಜಿಲ್ಲಾಡಳಿತ ಹಾಗೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ಮೇ 01ರಂದು ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು ಎಂದ ಅವರು, ಕಾರ್ಯಕ್ರಮದ ಯಶಸ್ಸಿಗೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದರು. ಶಾಂತಿ, ಅಹಿಂಸೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದ ಭಗವಾನ್ ಬುದ್ಧರ ಚಿಂತನೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನು ಏರ್ಪಡಿಸಬೇಕು ಎಂದ ಅವರು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಗಿಸುವಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಇದರ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಫಜಲಪುರ ಕಾಂಗ್ರೆಸ್ನಲ್ಲಿ ಅಸಮಾಧಾನ : ಶಾಸಕ ಎಂ.ವೈ ಪಾಟೀಲ್ ವಿರುದ್ಧ ಗುತ್ತೇದಾರ್ ಬಣ ಆಕ್ರೋಶ
ಕಲಬುರಗಿ: ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಹಾಗೂ ಅವರ ಪುತ್ರ, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರ ವರ್ತನೆಗೆ ವಿರೋಧವಾಗಿ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಭುಗಿಲೆದ್ದಿದ್ದು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತೇದಾರ್ ಅವರು, ತಂದೆ-ಮಗ ಇಬ್ಬರೂ ಸ್ವಜಾತಿ ಪರ ಆಡಳಿತ ನಡೆಸುತ್ತಿದ್ದು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕಾಂಗ್ರೆಸ್ನ ಹಿರಿಯ ಮುಖಂಡರಿಗೆ ಅಗೌರವ ತೋರಲಾಗುತ್ತಿದೆ ಎಂದು ಹೇಳಿದರು. ಶಾಸಕರು ವಯಸ್ಸಿನ ಕಾರಣದಿಂದ ಹೆಚ್ಚಿನ ಅಧಿಕಾರವನ್ನು ಪುತ್ರನಿಗೆ ಒಪ್ಪಿಸಿದ್ದರಿಂದ, ಅರುಣಕುಮಾರ್ ಪಾಟೀಲ್ ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ನೇಮಕಾತಿಗಳನ್ನು ಒಂದೇ ಜಾತಿಗೆ ನೀಡುತ್ತಿದ್ದಾರೆ. 26 ಸೋಸೈಟಿಗಳಲ್ಲಿ 14ನ್ನು ಒಂದೇ ಜಾತಿಗೆ ನೀಡಲಾಗಿದ್ದು, ಕೇವಲ ಒಂದನ್ನು ಮಾತ್ರ ದಲಿತ ಸಮುದಾಯಕ್ಕೆ ನೀಡಲಾಗಿದೆ ಎಂದು ಆರೋಪಿಸಿದರು. ಇದಲ್ಲದೆ, ವಿವಿಧ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಭ್ರಷ್ಟಾಚಾರ ನಡೆಸಲಾಗುತ್ತಿದೆ. ವಸತಿ ಯೋಜನೆಗಳಲ್ಲಿಯೂ ಬೆಂಬಲಿಗರಿಂದ ಬಡವರಿಗೆ ಹಣ ಕೇಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಹೇಳಿದರು. ಈ ಎಲ್ಲಾ ವಿಚಾರಗಳ ಕುರಿತು ಪಕ್ಷದ ಹೈಕಮಾಂಡ್ಗೆ ನಿಯೋಗದೊಂದಿಗೆ ದೂರು ಸಲ್ಲಿಸಲಾಗುವುದು ಎಂದು ಗುತ್ತೇದಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾನಾಸಾಹೇಬ್, ಮಲ್ಲಿನಾಥ, ವಿಶ್ವನಾಥ ಕರ್ನಾಡ್, ಶ್ರೀಮಂತ, ಸಿದ್ದರಾಮ ಸಾಲಿಮನಿ, ದೇವೇಂದ್ರ ಜಮಾದಾರ್, ಜಮೀಲ್ ಗೌಂಡಿ, ವಿಜಯಕುಮಾರ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. “ನಾನು ಯಾವ ಪಕ್ಷದಲ್ಲಿದ್ದೇನೆ ಎಂದು ಶಾಸಕರು ಹೇಳುತ್ತಿದ್ದಾರೆ. ನಾನು 17 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಬ್ಲಾಕ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅರುಣಕುಮಾರ್ ಹುಟ್ಟುವ ಮುಂಚೆಲೇ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಅಂತಹ ವ್ಯಕ್ತಿಗೆ ಕೆಕೆಆರ್ಟಿಸಿ ಅಧ್ಯಕ್ಷ ಸ್ಥಾನ ನೀಡಲು ಯಾವ ನೈತಿಕತೆ?” -ಮಕ್ಬೂಲ್ ಪಟೇಲ್, ಕಾಂಗ್ರೆಸ್ ಮುಖಂಡ “ಪಕ್ಷಕ್ಕೆ ಮುಜುಗರ ಉಂಟುಮಾಡುವ ಕೆಲಸ ನಾವು ಮಾಡುವುದಿಲ್ಲ. ಹೈಕಮಾಂಡ್ ಆದೇಶದ ಮೇರೆಗೆ 2023ರಲ್ಲಿ ಎಂ.ವೈ ಪಾಟೀಲ್ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದೇವೆ. ಆದರೆ ಮೂರು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಾಸಕರು ಅಫಜಲಪುರದಲ್ಲೇ ನೆಲೆಸಬೇಕು, ಕಾರ್ಯಕರ್ತರಿಗೆ ಸೌಲಭ್ಯ ಒದಗಿಸಬೇಕು.” -ಜೆ.ಎಂ. ಕೊರಬು, ಹಿರಿಯ ಮುಖಂಡ
ಕರ್ನಾಟಕ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ: ಏಪ್ರಿಲ್ 15 ಆರಂಭ; ನಿಮಯಗಳು, ಅರ್ಹತೆಯ ಮಾರ್ಗಸೂಚಿ ಬಿಡುಗಡೆ
ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆಯು ಏಪ್ರಿಲ್ 15 ರಿಂದ ಆರಂಭವಾಗಲಿದೆ. ಮೇ 31ರವರೆಗೆ ಗಡುವು ನೀಡಲಾಗಿದೆ. ಈ ಸಾರ್ವತ್ರಿಕ ವರ್ಗಾವಣೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪತಿ ಪತ್ನಿ ಪ್ರಕರಣ, ಗಂಭೀರ ಕಾಯಿಲೆ, ನಿವೃತ್ತಿ ಅಂಚಿನಲ್ಲಿರುವವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಇಲಾಖಾ ಸಚಿವರಿಗೆ ಎ, ಬಿ ದರ್ಜೆ ಅಧಿಕಾರಿಗಳ ಟ್ರಾನ್ಸ್ಫರ್ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುಮನಾಬಾದ್ | ವಿವಿಧ ಕಾಮಗಾರಿಗಳಿಗೆ ಶಾಸಕ ಸಿದ್ದು ಪಾಟೀಲ್ ಶಂಕುಸ್ಥಾಪನೆ
ಹುಮನಾಬಾದ್: ಪಟ್ಟಣದ ಬೀರಲಿಂಗೇಶ್ವರ್ ದೇವಸ್ಥಾನ ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿದ್ದು ಪಾಟೀಲ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಅನುದಾನದಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಹುಮನಾಬಾದ್ ಪಟ್ಟಣಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದೆ. ಅದರಂತೆ ಕುರುಬ, ಕೋಲಿ, ಹೇಳುವ ಹಾಗೂ ಭೂವಿ ಸಮಾಜಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ” ಎಂದು ತಿಳಿಸಿದರು. ಪಟ್ಟಣದಲ್ಲಿ ಜಾತಿ ತಾರತಮ್ಯವಿಲ್ಲದೆ ಎಲ್ಲ ಸಮುದಾಯಗಳು ಒಂದಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತೋಷಕರ ಸಂಗತಿ. ಎಲ್ಲಾ ವರ್ಗಗಳ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದರು. ಸರ್ಕಾರದ ಅನುದಾನ ಹಂಚಿಕೆ ಕುರಿತು ಆರೋಪಿಸಿದ ಅವರು, “ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ ರೂ. ನೀಡುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ 25–30 ಕೋಟಿ ರೂ. ಮಾತ್ರ ನೀಡುತ್ತಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಹಾಲುಮತ ಸಮಾಜದ ಬಹುಕಾಲದ ಬೇಡಿಕೆ ಈಡೇರಿದ್ದು ಸಂತೋಷದ ವಿಷಯವಾಗಿದೆ ಎಂದರು. ಹಿಂದೆ ಜಾಗದ ಸಮಸ್ಯೆಯಿಂದ ಬಜೆಟ್ ಮಂಜೂರು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿಎಂ ಅನುದಾನದಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಶೀಘ್ರ ಆರಂಭವಾಗಬೇಕು ಎಂದು ಅವರು ವಿನಂತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಪಾಟೀಲ್, ಸಮಾಜದ ಮುಖಂಡರಾದ ಸತೀಶ್ ರಾಂಪುರೆ, ಶಿವರಾಜ್ ಚೀನಕೆರಿ, ಅಶೋಕ್ ಸೊಂಡೆ, ವಿನಾಯಕ್ ಮಣಕೋಜಿ, ಸಂಜೀವಕುಮಾರ್ ವಡ್ಡನಕೇರಾ, ಶಿವಕುಮಾರ್ ಬೆಳೆಕೇರಿ, ಉಮೇಶ್ ದಾಡಗಿ ಹಾಗೂ ಸಚಿನ್ ಕಲ್ಲೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಔರಾದ್ | ಸಮಾನತೆ, ಸ್ತ್ರೀ ಗೌರವವೇ ಬಸವ ತತ್ತ್ವಗಳ ಹೃದಯ : ಡಾ. ರೇಣುಕಾ ಸ್ವಾಮಿ
ಔರಾದ್: ಭಕ್ತಿ, ಜ್ಞಾನ ಹಾಗೂ ಸಮಾಜ ಪರಿವರ್ತನೆಯ ಸಂದೇಶ ಸಾರಿದ ಬಸವಣ್ಣನ ತತ್ವಗಳು ಮನುಷ್ಯನ ಬದುಕಿಗೆ ದಾರಿದೀಪ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಹೇಳಿದರು. ತಾಲ್ಲೂಕಿನ ಎಕಲಾರ ಬಸವ ಮಂಟಪದಲ್ಲಿ ರವಿವಾರ ರಾತ್ರಿ ನಡೆದ 73ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣರು ಸೂಚಿಸಿದ ಸರಳ ಮತ್ತು ಸತ್ಯ ಮಾರ್ಗದಲ್ಲಿ ನಡೆಯುವುದೇ ಬಸವ ಜ್ಯೋತಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಮೂಢ ನಂಬಿಕೆಗಳನ್ನು ತೊರೆದು, ಲಿಂಗ ಸಮಾನತೆ, ಸ್ತ್ರೀ ಗೌರವ ಮತ್ತು ಏಕದೇವೋಪಾಸನೆ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ ಅವರು ಮಾತನಾಡಿ, ಇಂದಿನ ಯುವಕರಿಗೆ ಬಸವತತ್ವವು ಉತ್ತಮ ಸಂಸ್ಕಾರ ಕಲಿಸಿಕೊಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಲ್ಫಾವತಿ ಜೀರ್ಗೆ ಹಾಗೂ ನೀಲಮ್ಮ ಮಜಗೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು ಇದ್ದರು. ಶಿವಕುಮಾರ್ ಪಾರಾ ಸ್ವಾಗತಿಸಿದರು. ಶಿಕ್ಷಕ ಸತೀಶ್ ಮಜಗೆ ನಿರೂಪಿಸಿದರು.
ಭಾಲ್ಕಿ | ಮಹಾಪುರುಷರ ಜಯಂತಿಯಲ್ಲಿ ಶಾಂತತೆ ಕಾಪಾಡಿ : ಸಿಪಿಐ ಹನುಮರೆಡ್ಡೆಪ್ಪ
ಭಾಲ್ಕಿ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಬಸವೇಶ್ವರ ಅವರ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಮದ್ಯ ನಿಷೇಧ ಜಾರಿ ಮಾಡಿ, ಶಾಂತಿ ಕಾಪಾಡಿಕೊಳ್ಳಬೇಕು ಎಂದು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಹನುಮರೆಡ್ಡೆಪ್ಪ ತಿಳಿಸಿದ್ದಾರೆ. ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಬಸವಣ್ಣ ಜಯಂತಿ ನಿಮಿತ್ತ ಅಬಕಾರಿ ಇಲಾಖೆಯ ಸಹಯೋಗದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಮಹಾಪುರುಷರ ಜಯಂತಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ವೈನ್ಶಾಪ್, ಧಾಬಾ ಹಾಗೂ ಹೋಟೆಲ್ ಮಾಲಿಕರ ಸಭೆ ಕರೆಯಲಾಗಿದೆ. ಎಲ್ಲಾ ಅಂಗಡಿಗಳು ಮತ್ತು ಹೋಟೆಲ್ಗಳು ಪ್ರತಿದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ತೆರೆಯಬೇಕು. ನಂತರ ಕಡ್ಡಾಯವಾಗಿ ಮುಚ್ಚಬೇಕು ಎಂದು ಸೂಚನೆ ನೀಡಿದರು. ಧಾಬಾಗಳಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು. ಎಲ್ಲಾ ಹೋಟೆಲ್ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಒಟ್ಟಾರೆ ಜಯಂತಿ ಸಮಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆಯ ಪಿಎಸ್ಐ ಅಶೋಕ್ ಪಾಟೀಲ್, ಮೆಹಕರ್ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ, ಖಟಕಚಿಂಚೋಳಿ ಠಾಣೆಯ ಪಿಎಸ್ಐ ಪ್ರಭಾಕರ್ ಪಾಟೀಲ್, ಧನ್ನೂರ್ ಠಾಣೆಯ ಪಿಎಸ್ಐ ರಾಜಕುಮಾರ್ ಜಾಮಗೊಂಡ್ ಸೇರಿದಂತೆ ಇತರರು ಇದ್ದರು.
ರಾಯಚೂರು | ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ
ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ರಾಜ್ಯದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ–ಎನ್ಡಿಎ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು. ಜೊತೆಗೆ ಇದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ, ಕೇಂದ್ರ ಮಟ್ಟದಲ್ಲಿ ಶೇ.17 ಮತ್ತು ಶೇ.7ರ ಮೀಸಲಾತಿ ಜಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲೆಯ ಸಂಸದರು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಆಗ್ರಹಿಸಿದರು. ನಿರುದ್ಯೋಗ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಾರದು. ಸುಮಾರು 3 ಲಕ್ಷ ಖಾಲಿ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50 ಮಿತಿಯನ್ನು ದಾಟಬಾರದು ಎಂಬುದಕ್ಕೆ ಉಲ್ಲೇಖವಾಗುತ್ತಿರುವ ಇಂದ್ರಾಸಹಾನಿ ಪ್ರಕರಣ ತೀರ್ಪಿನಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಮಿತಿಯನ್ನು ಮೀರುವ ಅವಕಾಶವಿದೆ. ಆದ್ದರಿಂದ ಜನಸಂಖ್ಯೆ ಆಧಾರಿತ ಮೀಸಲಾತಿ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ರೋಸ್ಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಲ್ಲಾ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಒಳಮೀಸಲಾತಿ ಜಾರಿಯಲ್ಲಿ ಸಮಾನ ಅವಕಾಶ ಕಲ್ಪಿಸಲು ಕಾನೂನು ತಜ್ಞರು, ಚಳವಳಿ ಸಂಘಟನೆಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಾಲೋಚನಾ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪ್ರಮುಖರಾದ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ನರಸಣ್ಣ ನಾಯಕ, ಗಿರಿಯಪ್ಪ, ಶಬ್ಬೀರ ಜಾಲಹಳ್ಳಿ, ದೇವೇಂದ್ರಗೌಡ, ಗೋಕುರಮ್ಮ, ಗಂಗಮ್ಮ ಸೇರಿ ಅನೇಕರಿದ್ದರು
ಉಪ್ಪಿನಂಗಡಿ: ಜೀಪು - ಥಾರ್ ಮಧ್ಯೆ ಅಪಘಾತ; ಸವಾರರಿಗೆ ಗಾಯ
ಉಪ್ಪಿನಂಗಡಿ: ಜೀಪು ಹಾಗೂ ಥಾರ್ ಜೀಪಿನ ಮಧ್ಯೆ ಢಿಕ್ಕಿಯಾಗಿ ಜೀಪು ಪಲ್ಟಿಯಾದ ಘಟನೆ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. 34 ನೆಕ್ಕಿಲಾಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಜೀಪುಗಳು ಸಂಚರಿ ಸುತ್ತಿದ್ದು, ಇಂದ್ರಪ್ರಸ್ಥ ವಿದ್ಯಾಲಯದ ಎದುರು ಬದಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀಪು ಚಾಲಕ ಸೇಸಪ್ಪ ಎಂಬ ವರು ತನ್ನ ಜೀಪನ್ನು ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿರುವ ಸರ್ವೀಸ್ ರಸ್ತೆಯತ್ತ ಏಕಾಏಕಿ ತಿರುಗಿಸಿದ್ದು, ಈ ಸಂದರ್ಭ ನೆಲ್ಯಾಡಿ ಕಡೆಗೆ ಸಾಗುತ್ತಿದ್ದ ಥಾರ್ ಜೀಪು ಜೀಪಿಗೆ ಢಿಕ್ಕಿಯಾಗಿ ನೆಕ್ಕಿಲಾಡಿಯತ್ತ ಮುಖ ಮಾಡಿ ತಿರುಗಿ ನಿಂತಿದೆ. ಢಿಕ್ಕಿಯ ತೀವೃತೆಗೆ ಜೀಪು ಹೆದ್ದಾರಿಯಲ್ಲಿ ನೆಕ್ಕಿಲಾಡಿಯತ್ತ ಮುಖಮಾಡಿ ಮಗುಚಿ ಬಿದ್ದಿದೆ. ಅಪಘಾತದಿಂದ ಥಾರ್ ಜೀಪಿನ ಮುಂಭಾಗ ಹಾಗೂ ಜೀಪು ಜಖಂಗೊಂಡಿದೆ. ಥಾರ್ ಜೀಪನ್ನು ಕಾವಳಕಟ್ಟೆಯ ಮುಹಮ್ಮದ್ ಅಕ್ರಂ ಚಲಾಯಿಸುತ್ತಿದ್ದರು. ಅಪಘಾತದ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೊಂದಲಕ್ಕೆ ಕಾರಣವಾಗುತ್ತಿರುವ ಹೆದ್ದಾರಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಭಾಗಶಃ ಪೂರ್ಣಗೊಂಡಿದೆ. ಇದರಿಂದ ಇಲ್ಲಿ ವಾಹನಗಳು ಅತೀ ವೇಗವಾಗಿ ಸಾಗುತ್ತಿವೆ. ಅಪಘಾತ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಎಡಬದಿಗೆ ಕವಲೊಡೆದ ಸವೀಸ್ ರಸ್ತೆ ಉಪ್ಪಿನಂಗಡಿ ಪೇಟೆ ಕಡೆ ಸಾಗಿದರೆ, ಬಲ ಬದಿಗೆ ಕವಲೊಡೆದ ಸರ್ವೀಸ್ ರಸ್ತೆಯು ಉಪ್ಪಿನಂಗಡಿ ಪೇಟೆಯಿಂದ ಬರುವ ರಸ್ತೆಯಾಗಿದೆ. ಆದರೆ ಇಲ್ಲಿ ಯಾವುದೇ ಸೂಚನಾ ಫಲಕವಿಲ್ಲ. ಉಪ್ಪಿನಂಗಡಿ ಪೇಟೆ ಕಡೆ ಸಾಗುವ ರಸ್ತೆಯಲ್ಲಿ ಸೂಚನಾ ಫಲಕವಿದ್ದರೂ, ಅದನ್ನು ಓದಲು ಭೂತಗನ್ನಡಿಯ ಅವಶ್ಯಕತೆಯಿದೆ. ಇಲ್ಲಿ ಜೀಪು ಚಾಲಕ ಏಕಾಏಕಿ ರಸ್ತೆಯ ವಿರುದ್ಧ ದಿಕ್ಕು ಅಂದರೆ ಉಪ್ಪಿನಂಗಡಿ ಪೇಟೆಯಿಂದ ಬರುವ ಸರ್ವೀಸ್ ರಸ್ತೆಗೆ ವಾಹನವನ್ನು ತಿರುಗಿಸಿದ್ದರಿಂದಲೇ ಅಪಘಾತಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯು ಸಮರ್ಪಕವಾಗಿ ಪೂರ್ಣಗೊಳ್ಳದಿರುವುದರಿಂದ ಈ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಉದ್ಯಮಿ ಝಕಾರಿಯಾ ಕೊಡಿಪ್ಪಾಡಿ ಆರೋಪಿಸಿದ್ದಾರೆ.
ಉಡುಪಿ, ಎ.13: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ‘ಹೆಲೋಜನ್ ಕಾರ್ಪೊರೇಷನ್’ ಜೊತೆ ಬಾಹ್ಯಾಕಾಶ ಆಧಾರಿತ ಜೀವವೈದ್ಯಕೀಯ ಸಂಶೋಧನೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಹೆ ಮತ್ತು ಹೆಲೋಜನ್ ಕಾರ್ಪೊರೇಷನ್ ಜಂಟಿಯಾಗಿ ಸುಧಾರಿತ ಬಯೋಮಟಿರಿಯಲ್ ಕುರಿತು ಸಂಶೋಧನೆ ನಡೆಸಲು, ಮಿಷನ್ ಸಿದ್ಧಪಡಿಸಲು ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಈ ಪಾಲುದಾರಿಕೆ ಸಹಕಾರಿಯಾ ಗಲಿದೆ ಎಂದು ಮಾಹೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಹಂತ ಹಂತವಾಗಿ ಈ ಸಂಶೋಧನೆ ನಡೆಯಲಿದ್ದು, ಭೂಮಿ ಮತ್ತು ಬಾಹ್ಯಾಕಾಶದಲ್ಲಿ ಬಳಸಬಹುದಾದ ಸ್ನಾಯು ಮಾದರಿಗಳನ್ನು ಒಳಗೊಂಡಂತೆ ಜೀವಕೋಶಗಳ ಮಾದರಿ ಅಭಿವೃದ್ಧಿ ಮತ್ತು ಮೂಳೆ ಸವೆತದ ಅಧ್ಯಯನದ ಬಗ್ಗೆ ಈ ಸಹಯೋಗವು ಗಮನ ಹರಿಸಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಈ ಒಪ್ಪಂದದ ಅಡಿಯಲ್ಲಿ, ಮಾಹೆಯು ಬಾಹ್ಯಾಕಾಶ ಜೀವಶಾಸ್ತ್ರದ ಸಂಶೋಧನೆಯ ನೇತೃತ್ವ ವಹಿಸಲಿದೆ. ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪೂರಕವಾದ ಹೊಸ ಪ್ರಯೋಗಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ. ಈ ಒಪ್ಪಂದ ಮೂಲಕ ನಡೆಯುವ ಸಂಶೋಧನೆಗಳು ಭಾರತದ ಹೊಸ ಬಾಹ್ಯಾಕಾಶ ನಿಲ್ದಾಣ ಯೋಜನೆಗಳಿಗೆ ಪೂರಕವಾಗಿರಲಿದೆ. ಮುಖ್ಯವಾಗಿ, ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮೂಲಕ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೀರ್ಘಕಾಲದವರೆಗೆ ಮತ್ತು ಶಾಶ್ವತವಾಗಿ ಸಂಶೋಧನೆಗಳನ್ನು ನಡೆಸಲು ಇದು ಸಹಾಯ ಮಾಡಲಿದೆ. ಸಮಾಜಕ್ಕೆ ಉಪಯುಕ್ತ: ‘ಜೀವವೈದ್ಯಕೀಯ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂಧಿಸುವ ಕ್ಷೇತ್ರದಲ್ಲಿ, ಭವಿಷ್ಯಕ್ಕೆ ಪೂರಕವಾದ ಸಂಶೋಧನೆಗಳನ್ನು ಉತ್ತೇಜಿಸಲು ಮಾಹೆ ಸದಾ ಸಿದ್ಧವಾಗಿದೆ ಎಂಬುದನ್ನು ಈ ಸಹ ಯೋಗವು ಸಾಬೀತುಪಡಿಸುತ್ತದೆ. ಶೈಕ್ಷಣಿಕ ಜ್ಞಾನ ಮತ್ತು ವೈದ್ಯಕೀಯ ಅನುಭವವನ್ನು ಬಾಹ್ಯಾಕಾಶ ತಂತ್ರಜ್ಞಾನ ದೊಂದಿಗೆ ಬಳಸಿಕೊಳ್ಳುವ ಮೂಲಕ, ವಿಜ್ಞಾನದ ದೃಷ್ಟಿಯಿಂದ ನಿಖರವಾದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಹೊಸ ಮಾಹಿತಿಯನ್ನು ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಹೇಳಿದ್ದಾರೆ. ಪ್ರಮುಖ ಹೆಜ್ಜೆ: ಮುಂದಿನ ತಲೆಮಾರಿನ ಜೀವವೈದ್ಯಕೀಯ ಸಂಶೋಧನೆ ಯಲ್ಲಿ ಮಹತ್ವದ ಸಾಧನೆ ಮಾಡಲು ಬಾಹ್ಯಾಕಾಶದ ‘ಶೂನ್ಯ ಗುರುತ್ವಾಕರ್ಷಣೆ’ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಒಪ್ಪಂದವು ಒಂದು ಪ್ರಮುಖ ಹೆಜ್ಜೆಯಾ ಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗ ನಡೆಸಿದ ಅನುಭವವಿರುವ ಮಾಹೆಯ ಪರಿಣಿತ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಹಯೋಗಗಳಲ್ಲಿ ಒಂದಾಗಲಿದೆ’ ಎಂದು ಹೆಲೋಜನ್ ಕಾರ್ಪೊರೇಶನ್ ಸಿಇಒ ಶಿಶಿರ್ ಬಂಕಾಪುರ ಅಭಿಪ್ರಾಯಪಟ್ಟಿದ್ದಾರೆ. ಹೆಲೋಜನ್ ಜತೆಗಿನ ಒಪ್ಪಂದದಿಂದ ನಮ್ಮ ಸಂಶೋಧಕರಿಗೆ ಬಾಹ್ಯಾಕಾಶ ಆಧಾರಿತ ವಿಶಿಷ್ಟ ತಂತ್ರಜ್ಞಾನಗಳನ್ನು ಬಳಸುವ ಅವಕಾಶ ಸಿಗಲಿದೆ. ಸಂಶೋಧನೆ ಕ್ಷೇತ್ರದಲ್ಲಿ ಮಾಹೆ ಸಂಸ್ಥೆಗೆ ಇದೊಂದು ಹೊಸ ಗರಿ ಮೂಡಿಸಲಿದೆ ಎಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್ನ ಸಹ ಪ್ರಾಧ್ಯಾಪಕ ಡಾ. ಮಾನಶ್ ಕೆ. ಪಾಲ್ ಹೇಳಿದ್ದಾರೆ. ಸಹಯೋಗದ ಪ್ರಮುಖಾಂಶಗಳು: ಸುಧಾರಿತ ಸಂಶೋಧನಾ ತಂತ್ರಜ್ಞಾನ: ಮಾಹೆ ತನ್ನದೇ ಆದ ’ಆರ್ಗನಾಯ್ಡ್’ (ಅಂಗಾಂಶ ಮಾದರಿ) ಸಂಶೋಧನೆ ಯನ್ನು ಹೆಲೋಜನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಿದೆ. ಇದು ಬಾಹ್ಯಾಕಾಶದಲ್ಲಿ ಬಯೋಮಟಿರಿಯಲ್ ಅಭಿವೃದ್ಧಿ, ಅವುಗಳ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ. ವೈಜ್ಞಾನಿಕ ನಾಯಕತ್ವ: ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್ನ ಸಹ ಪ್ರಾಧ್ಯಾಪಕರಾದ ಡಾ. ಮಾನಶ್ ಕೆ. ಪಾಲ್ ಅವರು ಈ ಕಾರ್ಯಕ್ರಮದ ಮುಖ್ಯ ಸಂಶೋಧಕರಾಗಿ ಒಟ್ಟಾರೆ ವೈಜ್ಞಾನಿಕ ನಾಯಕತ್ವ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಇವರು ಮಾಹೆಯ ಸೆಂಟರ್ ಫಾರ್ ಆರ್ಗನಾಯ್ಡ್ ಬಯೋ ಇಂಜಿನಿಯರಿಂಗ್, ಬಯೋಪ್ರಿಂಟಿಂಗ್, ಬಯೋಬ್ಯಾಂಕಿಂಗ್ ಮತ್ತು ಬಯೋಮೆಡಿಕಲ್ ಸಾಯನ್ಸ್ನ ಸಂಯೋಜಕರೂ ಆಗಿದ್ದಾರೆ. ಮಣಿಪಾಲದ ಕೆಎಂಸಿ ಹಾಗೂ ಎಂಐಟಿಗಳ ತಜ್ಞರ ತಂಡ ಇವರಿಗೆ ಬೆಂಬಲ ನೀಡಲಿದೆ.
ರಾಯಚೂರು | ಮಂತ್ರಾಲಯ ರಾಘವೇಂದ್ರ ಸ್ವಾಮಿ ಜಪದ ಕಟ್ಟೆ ಸರ್ವೆಗೆ ಅಡ್ಡಿ : 12 ಮಂದಿ ವಶಕ್ಕೆ
ರಾಯಚೂರು: ಗಡಿಭಾಗದ ತಾಲ್ಲೂಕಿನ ಎಲೆಬಿಚ್ಚಾಲಿ ಪ್ರದೇಶದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ತಪಸ್ಸು ಮಾಡಿದ ಜಪಕಟ್ಟೆಗೆ ಸಂಬಂಧಿಸಿದ ಭೂ ವಿವಾದ ತೀವ್ರಗೊಂಡಿದ್ದು, ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 12 ಜನರನ್ನು ಯರಗೇರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪಕಟ್ಟೆಗೆ ಸಂಬಂಧಿಸಿದ ಒಟ್ಟು 4 ಎಕರೆ ಭೂಮಿಯಲ್ಲಿ 2.33 ಎಕರೆ ಜಮೀನು ಸರ್ಕಾರದಾಗಿದ್ದು, ಅದರ ಸರ್ವೆ ನಡೆಸಲು ಅಧಿಕಾರಿಗಳು ಬಂದ ಸಂದರ್ಭದಲ್ಲಿ ರೈತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಅನೇಕ ವರ್ಷಗಳಿಂದ ಈ ಜಮೀನನ್ನು ಉಳುಮೆ ಮಾಡುತ್ತಿರುವ ರೈತರು, ಯಾವುದೇ ನೋಟಿಸ್ ನೀಡದೇ ಸರ್ವೆಗೆ ಬಂದಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಆದರೆ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಸರ್ವೆ ನಂಬರಿನಲ್ಲಿ ಭೂಮಿ ಸರ್ಕಾರದಾಗಿ ದಾಖಲಾಗಿರುವುದರಿಂದ ನೋಟಿಸ್ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ರಾಯರ ಜಪದಕಟ್ಟೆಯನ್ನು ಮಂತ್ರಾಲಯ ಮಠದ ಸುಪರ್ದಿಗೆ ಪಡೆಯುವ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಟ್ರಸ್ಟ್ನ ಪದಾಧಿಕಾರಿಗಳು ಕೊರ್ಟ್ ಮೊರೆ ಹೋಗಿದ್ದರು. ಟ್ರಸ್ಟ್ ಸ್ವಾಧೀನದಲ್ಲಿಯೇ ಜಪಕಟ್ಟೆ ನಿರ್ವಹಣೆ ಮಾಡಲಾಗುತ್ತಿದೆ. ಈಗ ಸರ್ವೆಗೆ ಅಡ್ಡಿಪಡಿಸಿದ ಘಟನೆಯ ನಡುವೆಯೂ ಪೊಲೀಸರ ನೆರವಿನಿಂದ ಸರ್ವೆ ಮುಂದುವರೆದಿದೆ.
ರಾಜ್ಯಸಭಾ ಉಪಸಭಾಪತಿ ಹುದ್ದೆ ತುಂಬಲು ಯಾಕಿಷ್ಟು ಅವಸರ?: ಪ್ರತಿಪಕ್ಷಗಳ ಪ್ರಶ್ನೆ
ಹೊಸದಿಲ್ಲಿ: ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ್ರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಆಡಳಿತಾರೂಢ ಎನ್ಡಿಎ ಮುಂದಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ಆಡಳಿತಾರೂಢ ಘಟಕದ ನಾಯಕ ಜೆ.ಪಿ. ನಡ್ಡಾ, ಹರಿವಂಶರ ಮರು ಆಯ್ಕೆ ಬಗ್ಗೆ ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ ಒಮ್ಮತವೊಂದಕ್ಕೆ ಬರಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, 2019ರಿಂದ ಖಾಲಿ ಬಿದ್ದಿರುವ ಲೋಕಸಭೆಯ ಉಪ ಸ್ಪೀಕರ್ ಹುದ್ದೆಯನ್ನು ತುಂಬುವ ಬಗ್ಗೆ ಚಿಂತಿಸದೆ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಯನ್ನು ತುಂಬಲು ಚುನಾವಣೆ ನಡೆಸಲು ಆಡಳಿತಾರೂಢ ಪಕ್ಷ ತೋರಿಸುತ್ತಿರುವ ಉತ್ಸಾಹಕ್ಕೆ ಕಾಂಗ್ರೆಸ್, ಟಿಎಮ್ಸಿ ಮತ್ತು ಎಡ ಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯಸಭಾ ಉಪ ಸಭಾಪತಿ ಹುದ್ದೆಯನ್ನು ತುಂಬಲು ಅಧಿಸೂಚನೆಯನ್ನು ಹೊರಡಿಸಿಲ್ಲವಾದರೂ, ಎಪ್ರಿಲ್ 16 ಅಥವಾ 17ರಂದು ಚುನಾವಣೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ. ಅಂದು ಮಹಿಳಾ ಮೀಸಲಾತಿ ಕಾನೂನಿಗೆ ತರಲಾಗಿರುವ ತಿದ್ದುಪಡಿಗೆ ಅನುಮೋದನೆ ನೀಡಲು ಸಂಸತ್ನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಬಲವಂತದ ನೇಮಕಾತಿಯನ್ನು ಮಾಡಲು ಸರಕಾರ ಬಯಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಲೋಕಸಭೆಯ ಉಪಸ್ಪೀಕರ್ ಹುದ್ದೆಗೆ ಏಳು ವರ್ಷಗಳಿಂದ ನೇಮಕಾತಿಯನ್ನು ಮಾಡದ ಸರಕಾರವೊಂದು, ರಾಜ್ಯಸಭೆಯ ಉಪ ಸಭಾಪತಿ ಹುದ್ದೆಗೆ ನಾಲ್ಕು ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಬಲವಂತದ ನೇಮಕಾತಿಯನ್ನು ಮಾಡಲು ಬಯಸಿದೆ’’ ಎಂದು ರಮೇಶ್ ಹೇಳಿದ್ದಾರೆ. ‘‘ಲೋಕಸಭೆಯ ಉಪ ಸ್ಪೀಕರ್ ಹುದ್ದೆ 2019ರಿಂದ ಖಾಲಿ ಬಿದ್ದಿದೆ. ರಾಜ್ಯಸಭಾ ಉಪಸಭಾಪತಿ ಹುದ್ದೆ ಕೇವಲ 10 ದಿನಗಳಿಂದ ಖಾಲಿಯಾಗಿದೆ. ಅದನ್ನು ತುಂಬಲು ಬಿಜೆಪಿಗೆ ಇಷ್ಟೊಂದು ಅವಸರ ಯಾಕೆ? ಸರಕಾರವು ಮತ್ತೊಮ್ಮೆ ಸಂಸತ್ಗೆ ಅವಹೇಳನ ಮಾಡುತ್ತಿದೆ’’ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯನ್ ಸಾಮಾಜಿಕ ಮಾಧ್ಯಕ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
ಟರ್ಕಿಯನ್ನು ಹೊಸ ಶತ್ರುವೆಂದು ಘೋಷಿಸಲು ಇಸ್ರೇಲ್ ಪ್ರಯತ್ನ: ಟರ್ಕಿ ವಿದೇಶಾಂಗ ಸಚಿವ ಆರೋಪ
ಅಂಕಾರ: ಶತ್ರುಗಳಿಲ್ಲದೆ ಇಸ್ರೇಲ್ಗೆ ಬದುಕಲು ಸಾಧ್ಯವಿಲ್ಲ. ಇದೀಗ ಆ ದೇಶದ ಸರಕಾರವು ಟರ್ಕಿಯನ್ನು ಹೊಸ ಶತ್ರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್ ಸೋಮವಾರ ಟೀಕಿಸಿದ್ದಾರೆ. 2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಗಾಝಾ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಟರ್ಕಿ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಗಳೂ ಉಲ್ಬಣಗೊಂಡಿವೆ. ಕಳೆದ ವಾರದಿಂದ ಉಭಯ ದೇಶಗಳ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. `ನೆತನ್ಯಾಹು ನಮ್ಮ ಕಾಲದ ಹಿಟ್ಲರ್' ಎಂದು ಟರ್ಕಿಯ ವಿದೇಶಾಂಗ ಇಲಾಖೆ ಬಣ್ಣಿಸಿದ್ದು ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯನ್ನು ಹಾಳುಮಾಡುವುದು ಅವರ ಉದ್ದೇಶವಾಗಿದೆ' ಎಂದು ಇಸ್ರೇಲ್ ಆರೋಪಿಸಿದೆ. `ಟರ್ಕಿಯು ತನ್ನದೇ ನಾಗರಿಕರ ಹತ್ಯಾಕಾಂಡ ನಡೆಸಿದೆ' ಎಂದು ಇಸ್ರೇಲ್ ತಿರುಗೇಟು ನೀಡಿತ್ತು. `ಇಸ್ರೇಲ್ಗೆ ಶತ್ರುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಇರಾನ್ನ ಬಳಿಕ ಇದೀಗ ಟರ್ಕಿಯನ್ನು ಹೊಸ ಶತ್ರು ಎಂದು ಘೋಷಿಸಲು ನೆತನ್ಯಾಹು ಮಾತ್ರವಲ್ಲ, ಅಲ್ಲಿನ ಕೆಲವು ವಿರೋಧ ಪಕ್ಷಗಳ ನಾಯಕರೂ ಬಯಸಿದ್ದಾರೆ. ಇದು ಇಸ್ರೇಲ್ನಲ್ಲಿ ಹೊಸ ಬೆಳವಣಿಗೆಯಾಗಿದ್ದು ರಾಷ್ಟ್ರದ ಕಾರ್ಯತಂತ್ರವಾಗಿ ರೂಪುಗೊಳ್ಳುತ್ತಿದೆ' ಎಂದು ಫಿದಾನ್ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಲಬುರಗಿ | ಎಸ್ಸಿ–ಎಸ್ಟಿ ಮೀಸಲಾತಿ ಹೆಚ್ಚಳ ಜಾರಿಗೆ ಸಿಪಿಐ(ಎಂ) ಒತ್ತಾಯ
ಕಲಬುರಗಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮುಖಂಡರು ನಗರದ ಲೋಕಸಭಾ ಸದಸ್ಯರ ಕಚೇರಿ ಎದುರು ಪ್ರತಿಭಟಿಸಿ, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕನ್ನಡ ಭವನದಿಂದ ಸಂಸದರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಅನೇಕ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದಲ್ಲಿ ಎಸ್ಸಿ–ಎಸ್ಟಿ ಸಮುದಾಯಗಳ ಜನಸಂಖ್ಯೆ ಆಧಾರಿತ ಮೀಸಲಾತಿ ಹೆಚ್ಚಳ ಕುರಿತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಕ್ರಮವಾಗಿ ಶೇ.17 ಮತ್ತು ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿತ್ತು. ಆದರೆ ಈ ತೀರ್ಮಾನಕ್ಕೆ ಇನ್ನೂ ಕೇಂದ್ರದ ಅಂತಿಮ ಅನುಮೋದನೆ ಲಭ್ಯವಾಗಿಲ್ಲ. ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಮೂಲಕ ಈ ಮೀಸಲಾತಿ ಜಾರಿಗೆ ತರಬೇಕಾಗಿದೆ ಎಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯ ಸಾಧನೆಗಾಗಿ ಒಳ ಮೀಸಲಾತಿ ಅಗತ್ಯವಿದ್ದು, ದೇವಿಂದರ್ ಸಿಂಗ್ ವಿರುದ್ಧ ಪಂಜಾಬ್ ಪ್ರಕರಣ ತೀರ್ಪು ಇದಕ್ಕೆ ಪೂರಕವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಸೂಕ್ತ ಕ್ರಮಗಳನ್ನು ವಿಳಂಬಿಸದೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಎಸ್ಸಿ–ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು, 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ಆಗ್ರಹಿಸಿದರು. ದಲಿತರಿಗೆ ಹಕ್ಕುಗಳು ನೀಡುವ ಒಳಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ತಾಳುತ್ತಿವೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹಾಗೂ ಗುತ್ತಿಗೆ ಸಿಬ್ಬಂದಿಯನ್ನು ತೆಗೆದುಹಾಕಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪ್ರಭು ಖಾನಾಪುರೆ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಪದ್ಮಿನಿ ಕಿರಣಗಿ, ಪಾಂಡುರಂಗ ಮಾವಿನಕರ, ಶಾಂತಾ ಗಂಟೆ, ವಿರುಪಾಕ್ಷಪ್ಪ ತಡಕಲ್, ಸಾಬಮ್ಮ, ಚಂದಮ್ಮ ಗೋಳಾ, ಸಾಬಮ್ಮ ಎಂ.ಕಾಳಗಿ, ಗುರು ಚಂದಕವಠೆ, ನಾಗಪ್ಪ ರಾಯಚೂರಕರ, ಸೇರಿದಂತೆ ಹಲವರು ಇದ್ದರು. ಒಂದು ಸಮುದಾಯವನ್ನು ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಳ್ಳುತ್ತದೆ, ಇನ್ನೊಂದು ಸಮುದಾಯವನ್ನು ಬಿಜೆಪಿ ಮತಬ್ಯಾಂಕ್ ಮಾಡಿಕೊಳ್ಳುತ್ತದೆ. ಇವೆರಡು ಪಕ್ಷಗಳು ದಲಿತ ಅಣ್ಣ ತಮ್ಮಂದಿರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿವೆ. ಇದನ್ನ ಕೈಬಿಟ್ಟು ಮೊದಲು ವೈಜ್ಞಾನಿಕವಾಗಿ ಒಳಮೀಸಲಾತಿ ಪರಿಶೀಲಿಸಿ, ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಜಾರಿ ಮಾಡಬೇಕು. ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದತ್ತ ಹೋದರೂ ಬಿಜೆಪಿ 9ನೆಯ ಶೆಡ್ಯೂಲ್ ಗೆ ತಿದ್ದುಪಡಿ ಮಾಡಿಲ್ಲ. ಇದು ದಲಿತ ವಿರೋಧಿ ಸರ್ಕಾರ. -ಮೀನಾಕ್ಷಿ ಬಾಳಿ (ಲೇಖಕಿ)
ಇರಾನ್ ಮೇಲೆ ನೌಕಾ ದಿಗ್ಬಂಧನಕ್ಕೆ ಇಸ್ರೇಲ್ ಬೆಂಬಲ: ನೆತನ್ಯಾಹು ಘೋಷಣೆ
ಜೆರುಸಲೇಂ: ಇರಾನ್ ಮೇಲೆ ನೌಕಾ ದಿಗ್ಬಂಧನವನ್ನು ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದು ಈ ವಿಷಯದಲ್ಲಿ ತಮ್ಮ ಸರಕಾರ ಅಮೆರಿಕದೊಂದಿಗೆ ಸಂಪೂರ್ಣ ಸಮನ್ವಯದಲ್ಲಿದೆ ಎಂದಿದ್ದಾರೆ. ʼಇರಾನ್ ನಿಯಮಗಳನ್ನು(ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯ) ಉಲ್ಲಂಘಿಸಿದೆ. ಅಧ್ಯಕ್ಷ ಟ್ರಂಪ್ ನೌಕಾ ದಿಗ್ಬಂಧನ ವಿಧಿಸಲು ನಿರ್ಧರಿಸಿದ್ದಾರೆ. ಸಹಜವಾಗಿ ನಾವು ಈ ದೃಢ ನಿಲುವನ್ನು ಬೆಂಬಲಿಸುತ್ತೇವೆ ಮತ್ತು ಅಮೆರಿಕದೊಂದಿಗೆ ನಿರಂತರ ಸಮನ್ವಯದಲ್ಲಿದ್ದೇವೆ' ಎಂದು ಸೋಮವಾರ ಸಂಪುಟ ಸಭೆಯಲ್ಲಿ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ. ಕದನ ವಿರಾಮ ಜಾರಿಯಾಗಬೇಕು ಮತ್ತು ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಬೇಕು ಎಂಬುದು ಒಪ್ಪಂದದ ಮೂಲ ಅಂಶವಾಗಿತ್ತು. ಮಾತುಕತೆಯ ನಿಯಮಗಳನ್ನು ಇರಾನ್ ಸ್ಪಷ್ಟವಾಗಿ ಉಲ್ಲಂಘಿಸಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾತುಕತೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ತನಗೆ ತಿಳಿಸಿದ್ದಾರೆ ಎಂದು ನೆತನ್ಯಾಹು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಹೇಳಿದರು. ಇರಾನ್ನಿಂದ ಸಂವರ್ಧಿತ ಯುರೇನಿಯಂ ಅನ್ನು ವರ್ಗಾಯಿಸುವುದು ಮತ್ತು ಮುಂದಿನ ವರ್ಷಗಳಲ್ಲಿ ಇರಾನ್ ಯುರೇನಿಯಂ ಸಂವರ್ಧನೆ ನಡೆಸುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಟ್ರಂಪ್ಗೆ ಮುಖ್ಯ ವಿಷಯವಾಗಿತ್ತು. ಇದು ನಮಗೆ ಕೂಡಾ ಮುಖ್ಯವಾಗಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.
ನೆತನ್ಯಾಹುರಿಂದ ಬಂದ ಫೋನ್ ಕರೆ ಶಾಂತಿ ಮಾತುಕತೆಯ ಹಳಿತಪ್ಪಿಸಿತು: ಇರಾನ್
ಟೆಹರಾನ್: ಇಸ್ಲಮಾಬಾದ್ನಲ್ಲಿ ಅಮೆರಿಕ-ಇರಾನ್ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಯ ಸಂದರ್ಭ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ಗೆ ಮಾಡಿದ ಫೋನ್ ಕರೆ ಮಾತುಕತೆಯ ಹಳಿತಪ್ಪಿಸಿತು ಎಂದು ಇರಾನ್ ಸೋಮವಾರ ಪ್ರತಿಪಾದಿಸಿದೆ. ಮಾತುಕತೆ ಸುಸೂತ್ರವಾಗಿ ಸಾಗಿತ್ತು. ಆ ಸಂದರ್ಭದಲ್ಲಿ ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರಿಂದ ಜೆ.ಡಿ.ವ್ಯಾನ್ಸ್ಗೆ ಬಂದ ಫೋನ್ ಕರೆ ಮಾತುಕತೆಯ ದಿಕ್ಕನ್ನು ಬದಲಿಸಿತು. ಇರಾನ್-ಅಮೆರಿಕದ ನಡುವಿನ ಮಾತುಕತೆ ಇಸ್ರೇಲ್ ಹಿತಾಸಕ್ತಿಗೆ ಆದ್ಯತೆ ನೀಡುವತ್ತ ತಿರುಗಿತು ಮತ್ತು ಮಾತುಕತೆಯ ಹಳಿ ತಪ್ಪಿಸಿತು. ಅಮೆರಿಕ ಯುದ್ಧ ಭೂಮಿಯಲ್ಲಿ ಸಾಧಿಸಲು ವಿಫಲವಾಗಿರುವುದನ್ನು ಸಂಧಾನ ಪ್ರಕ್ರಿಯೆಯಲ್ಲಿ ಗಳಿಸಿಕೊಳ್ಳಲು ಅಮೆರಿಕ ಮುಂದಾಯಿತು' ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಯನ್ನು ಉಲ್ಲೇಖಿಸಿ ಇರಾನ್ನ ʼಪ್ರೆಸ್ ಟಿವಿʼ ವರದಿ ಮಾಡಿದೆ. ಅಮೆರಿಕ ಮುಂದಿರಿಸಿದ್ದ ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿತ್ತು ಎಂದು ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದರು. ಪರಮಾಣು ಕಾರ್ಯಕ್ರಮಗಳನ್ನು ಕೈಬಿಡಲು ಇರಾನ್ ನಿರಾಕರಿಸಿದ್ದರಿಂದ ಮಾತುಕತೆ ವಿಫಲಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು. ಹಲವು ವಾರಗಳ ಹಗೆತನದ ನಂತರ ಆಳವಾದ ಅಪನಂಬಿಕೆ ಮಾತುಕತೆಗೆ ಪ್ರಮುಖ ಅಡಚಣೆಯಾಗಿತ್ತು. ಯುದ್ಧ ಮತ್ತು ಸಂದೇಹದಿಂದ ರೂಪುಗೊಂಡ ವಾತಾವರಣದಲ್ಲಿ ಮಾತುಕತೆಗಳು ನಡೆದವು ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದು, ಒಂದೇ ಹಂತದಲ್ಲಿ ಪ್ರಗತಿ ಅಸಂಭವವಾಗಿದ್ದು ಭವಿಷ್ಯದ ರಾಜತಾಂತ್ರಿಕ ಪ್ರಯತ್ನಗಳಿಗೆ ಇರಾನ್ ಮುಕ್ತವಾಗಿದೆ ಎಂದಿದ್ದಾರೆ. ಹೇಳಿಕೆ ನಿರಾಕರಿಸಿದ ನೆತನ್ಯಾಹು: ತಾನು ಮಾಡಿದ ಫೋನ್ ಕರೆ ಶಾಂತಿ ಮಾತುಕತೆಯ ಹಳಿ ತಪ್ಪಿಸಿದೆ ಎಂಬ ಇರಾನ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ನಿರಾಕರಿಸಿದ್ದು, ಮಾತುಕತೆಯ ನಿಯಮಗಳನ್ನು ಇರಾನ್ ಉಲ್ಲಂಘಿಸಿದ್ದರಿಂದ ಅಮೆರಿಕ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಕಲಬುರಗಿ: ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿರುವ ಆಳಂದ, ವಾಡಿ, ಕಾಳಗಿ ಮತ್ತು ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಮತ್ತು ಸರಣಿ ಜಾನುವಾರುಗಳ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಆಳಂದ ಉಪ-ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಲಕ್ಷಾಂತರ ರೂ. ಮೌಲ್ಯದ 71 ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಲಾಗಿದೆ ಎಂದರು. ಆಳಂದ ಠಾಣೆ ವ್ಯಾಪ್ತಿಯಲ್ಲಿ 3.75 ಲಕ್ಷ ರೂ. ಮೌಲ್ಯದ 16 ಮೊಬೈಲ್ಗಳು, ನರೋಣಾ ಠಾಣೆ ವ್ಯಾಪ್ತಿಯಲ್ಲಿ 3,20 ಲಕ್ಷ ರೂ. ಮೌಲ್ಯದ 15 ಮೊಬೈಲ್ಗಳು, ದೇವಲಗಾಣಗಾಪುರ ಠಾಣೆ ವ್ಯಾಪ್ತಿಯಲ್ಲಿ 2.10 ಲಕ್ಷ ರೂ. ಮೌಲ್ಯದ 10 ಮೊಬೈಲ್ಗಳು, ಮಾದನಹಿಪ್ಪರಗಾ ಠಾಣೆ ವ್ಯಾಪ್ತಿಯಲ್ಲಿ ಒಂದು ಲಕ್ಷ ರೂ. ಮೌಲ್ಯದ 8 ಮೊಬೈಲ್ಗಳು, ಅಫಜಲಪುರ ಠಾಣೆ ವ್ಯಾಪ್ತಿಯಲ್ಲಿ 2,67,359 ರೂ. ಮೌಲ್ಯದ 16 ಮೊಬೈಲ್ಗಳು, ರೇವೂರ ಠಾಣೆ ವ್ಯಾಪ್ತಿಯಲ್ಲಿ 45 ಸಾವಿರ ರೂ. ಮೌಲ್ಯದ 2 ಮೊಬೈಲ್ಗಳು, ನಿಂಬರ್ಗಾ ಠಾಣೆ ವ್ಯಾಪ್ತಿಯಲ್ಲಿ 60 ಸಾವಿರ ರೂ. ಮೌಲ್ಯದ 4 ಮೊಬೈಲ್ಗಳು ಸೇರಿ 13,77,359 ರೂ. ಮೌಲ್ಯದ 71 ಮೊಬೈಲ್ಗಳು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 5 ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಮುತ್ತಗಾ ಗ್ರಾಮದ ವೀರಭದ್ರಪ್ಪ ಅಲಿಯಾಸ್ ವೀರಭದ್ರ ಸದಾಶಿವ ಪಂಚಾಳ ಎಂಬಾತನನ್ನು ಬಂಧಿಸಿ 8.80 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದರು. ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 8 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 119 ಗ್ರಾಂ. ಬಂಗಾರದ ಒಡವೆ, 85 ಗ್ರಾಂ. ಬೆಳ್ಳಿ ಆಭರಣ, 28 ಸಾವಿರ ರೂ. ನಗದು ಸೇರಿ 18.46 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ 8 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ತಾಲೂಕಿನ ಕಾಮ್ಸರನಾಯಕ ತಾಂಡಾದ ಅಪ್ಪಾಜಿ ಗಂಗಾರಾಮ ಚವ್ಹಾಣ್ (22), ಹೊನ್ನಳ್ಳಿ ತಾಂಡಾದ ಮಿಥುನ್ ಲಕ್ಷ್ಮಣ ಚವ್ಹಾಣ್ (23) ಎಂಬುವವರನ್ನು ಬಂಧಿಸಲಾಗಿದೆ. ಇವರು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎಂದರು. ನರೋಣಾ ಮತ್ತು ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತರ ಹೊಲಗಳಲ್ಲಿ ಕಟ್ಟಿದ್ದ ಒಂದು ಖಿಲಾರಿ ಹೆಣ್ಣು ಕರು, ಎರಡು ದೇವಣಿ ಹೋರಿಗಳು ಸೇರಿ ಒಟ್ಟು 1.15 ಲಕ್ಷ ರೂ. ಮೌಲ್ಯದ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶರಣಪ್ಪ ಬೇನೂರ, ಫಾರುಕ ಖುರೇಶಿ ಮತ್ತು ರಬ್ಬಾನಿ ಅತ್ತಾರ ಎಂಬುವರನ್ನು ಬಂಧಿಸಿ ಅವರಿಂದ ಜಾನುವಾರು ಮಾರಾಟ ಮಾಡಿ ಬಂದ ಒಟ್ಟು 2.15 ಲಕ್ಷ ರೂ. ನಗದು ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಶಹಾಬಾದ ಸಿಪಿಐ ಎಸ್.ಸಿ.ಪಾಟೀಲ, ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಜಗದೀಶ ಕೆ.ಜಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಮತ್ತಿತ್ತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.
ಇರಾನ್ ಯುದ್ಧದಿಂದಾಗಿ ಇಂಧನ ಕೊರತೆಯುಂಟಾಗಿದ್ದರೂ ಆಹಾರ ಕೊರತೆಯುಂಟಾಗಿಲ್ಲ, ಕಾರಣವೇನು?
2008 ಜುಲೈ 11ರಂದು ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 147.50 ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಜಾಗತಿಕ ಆಹಾರ ಬೆಲೆಗಳು ನವೆಂಬರ್ 2006 ಮತ್ತು ಆಗಸ್ಟ್ 2008 ರ ನಡುವೆ ಸತತ 22 ತಿಂಗಳುಗಳ ಕಾಲ ಎರಡಂಕಿಯ ವಾರ್ಷಿಕ ಬೆಳವಣಿಗೆಯನ್ನು ಕಾಯ್ದುಕೊಂಡಿವೆ. ಈ ನಿರಂತರ ಹಣದುಬ್ಬರದ ಅವಧಿಯಲ್ಲಿ, ಬೆಲೆ ಏರಿಕೆಗಳು ಸರಾಸರಿ 34.8% ರಷ್ಟಿತ್ತು. ಫೆಬ್ರವರಿ 2022 ರ ಅಂತ್ಯದಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದ ನಂತರದ ತೈಲ ಕೊರತೆಯ ಸಮಯದಲ್ಲಿಯೂ ಇದು ಹಾಗೆಯೇ ಇತ್ತು. 2022 ಮಾರ್ಚ್ 7ರಂದು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 139.13 ಡಾಲರ್ ತಲುಪಿತು. ನಂತರ, ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿದ್ದು, ಜನವರಿ 2021 ರಿಂದ ಜುಲೈ 2022 ರವರೆಗೆ ಸತತ 19 ತಿಂಗಳುಗಳ ಕಾಲ ಎಫ್ಎಒ ಸೂಚ್ಯಂಕದಲ್ಲಿ ಎರಡಂಕಿಯ ಹಣದುಬ್ಬರ ಮತ್ತು ವರ್ಷದಿಂದ ವರ್ಷಕ್ಕೆ ಸರಾಸರಿ 26.8% ರಷ್ಟಿತ್ತು. ಈ ಬಾರಿ ಅದು ಭಿನ್ನವಾಗಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಇಂಧನ ಕೊರತೆಯಿಂದಾಗಿ ಬ್ರೆಂಟ್ ಬೆಲೆಗಳು ಜನವರಿಯಲ್ಲಿ ಪ್ರತಿ ಬ್ಯಾರೆಲ್ಗೆ ಸರಾಸರಿ 64.6 ಡಾಲರ್ ಆಗಿತ್ತು. ಫೆಬ್ರವರಿಯಲ್ಲಿ ಇದು 69.2 ಡಾಲರ್ ಆಗಿದ್ದು 2026 ಮಾರ್ಚ್ ತಿಂಗಳಲ್ಲಿ 98.2 ಡಾಲರ್ ಗೆ ಏರಿದೆ. ಮಾರ್ಚ್ 9 ರಂದು ಇದು 119.5 ಡಾಲರ್ ತಲುಪಿದೆ. ಎಪ್ರಿಲ್ 8 ರಿಂದ ದುರ್ಬಲವಾದ ಕದನ ವಿರಾಮ ಮತ್ತು ಹಾರ್ಮುಝ್ ಜಲಸಂಧಿಯು ಇನ್ನೂ ಹೆಚ್ಚಿನ ತೈಲ ಮತ್ತು ಅನಿಲ ಸಂಚಾರಕ್ಕೆ ಮುಕ್ತವಾಗಿಲ್ಲದ ಕಾರಣ, ಬ್ರೆಂಟ್ ಕಳೆದ ವಾರ ಪ್ರತಿ ಬ್ಯಾರೆಲ್ಗೆ 95.2 ಡಾಲರ್ ಆಗಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2022 ಮತ್ತು 2008 ರಂತೆ ಅಂತರರಾಷ್ಟ್ರೀಯ ಆಹಾರ ಬೆಲೆಗಳಲ್ಲಿ ಏರಿಕೆ ಆಗಿಲ್ಲ ಎಂಬುದು. ಮಾರ್ಚ್ 2026 ರ ಹೊತ್ತಿಗೆ, ಎಫ್ಎಒ ಆಹಾರ ಬೆಲೆ ಸೂಚ್ಯಂಕ (ಇದು 2014-16 ರ ಬೇಸ್ಲೈನ್ 100 ಕ್ಕೆ ಹೋಲಿಸಿದರೆ ಜಾಗತಿಕ ಆಹಾರ ಸರಕುಗಳ ಬೆಲೆಗಳ ಸರಾಸರಿಯನ್ನು ಅಳೆಯುತ್ತದೆ) 128.5 ಅಂಕಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1% ಕ್ಕಿಂತ ಕಡಿಮೆಯಿರುವ ಅಲ್ಪ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಸೆಪ್ಟೆಂಬರ್ 2025 ರಿಂದ, ವಾರ್ಷಿಕ ಆಹಾರ ಹಣದುಬ್ಬರವು ಸ್ಥಿರವಾಗಿ ಕಡಿಮೆ ಅಥವಾ ಋಣಾತ್ಮಕವಾಗಿ ಉಳಿದಿದೆ. ಇದು 2021-22 ರ ಹೆಚ್ಚಿನ ಎರಡಂಕಿಯ ದರಗಳಿಗೆ ವ್ಯತಿರಿಕ್ತವಾಗಿದೆ. ಅರ್ಜೆಂಟೀನಾ, ಯುರೋಪಿಯನ್ ಒಕ್ಕೂಟ ಮತ್ತು ರಷ್ಯಾದಿಂದ ರಫ್ತಾಗುವ ಗೋಧಿಯ ರಫ್ತು ಬೆಲೆಗಳು ಪ್ರಸ್ತುತ ಪ್ರತಿ ಟನ್ಗೆ 230 ಡಾಲರ್, 238 ಡಾಲರ್ ಮತ್ತು 239 ಡಾಲರ್ ಗೆ ತಲುಪಿವೆ. ಹಿಂದಿನ ವರ್ಷದ ಇದೇ ದರಗಳು ಕ್ರಮವಾಗಿ 248 ಡಾಲರ್, 247 ಡಾಲರ್ ಮತ್ತು 254 ಡಾಲರ್ ಆಗಿತ್ತು. ಭಾರತದಿಂದ ಅಕ್ಕಿ ರಫ್ತು ಪ್ರತಿ ಟನ್ಗೆ ಕಳೆದ ವರ್ಷ 372 ಡಾಲರ್ ಇದ್ದದ್ದು 367 ಡಾಲರ್ ಆಗಿ ಇಳಿಕೆ ಕಂಡಿದೆ. ಈ ಪ್ರವೃತ್ತಿಯು ಥೈಲ್ಯಾಂಡ್ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ತೀವ್ರವಾಗಿ ಪ್ರತಿಫಲಿಸುತ್ತದೆ, ಅಲ್ಲಿ ಬೆಲೆಗಳು ಕ್ರಮವಾಗಿ 382 ಡಾಲರ್ ಮತ್ತು 351 ಡಾಲರ್ ಗೆ ಇಳಿದಿವೆ. ಜೋಳ ಮಾರುಕಟ್ಟೆಯಲ್ಲಿ ರಫ್ತು ಬೆಲೆ ಇದೇ ರೀತಿ ಕಡಿಮೆಯಾಗಿದೆ. ಅರ್ಜೆಂಟೀನಾದಲ್ಲಿ ರಫ್ತು ಬೆಲೆಗಳು ಪ್ರತಿ ಟನ್ಗೆ 219 ಡಾಲರ್ ನಿಂದ 209 ಡಾಲರ್ ಗೆ, ಉಕ್ರೇನ್ ನಲ್ಲಿ 240 ಡಾಲರ್ ನಿಂದ 227 ಡಾಲರ್ ಗೆ ಇಳಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದಲ್ಲಿ ಮೆಕ್ಕೆಜೋಳ ರಫ್ತು ಬೆಲೆಗಳು 214 ಡಾಲರ್ ಇದ್ದದ್ದು 217 ಡಾಲರ್ ಆಗಿಯೂ ಬ್ರೆಜಿಲ್ ನಲ್ಲಿ 223 ಡಾಲರ್ ಇದ್ದದ್ದು 225 ಡಾಲರ್ ಆಗಿಯೂ ಏರಿಕೆ ಆಗಿದೆ. ನ್ಯೂಯಾರ್ಕ್ನಲ್ಲಿ ಕಚ್ಚಾ ಸಕ್ಕರೆ ಬೆಲೆಗಳು ಸಹ ಪ್ರತಿ ಪೌಂಡ್ಗೆ 13.75 ಸೆಂಟ್ಗಳಷ್ಟಿದ್ದು, ಕಳೆದ ವರ್ಷ ಈ ಸಮಯದಲ್ಲಿ 18.1 ಸೆಂಟ್ಗಳಷ್ಟಿತ್ತು. ಮಾರ್ಚ್ನಲ್ಲಿ ಎಫ್ಎಒ ಡೈರಿ ಬೆಲೆ ಉಪಸೂಚ್ಯಂಕವು ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ 18.7% ಕಡಿಮೆಯಾಗಿತ್ತು. ಇತ್ತೀಚಿನ ಅವಧಿಯಲ್ಲಿ ಖಾದ್ಯ ತೈಲಗಳು ಮಾತ್ರ ಗಮನಾರ್ಹ ಬೆಲೆ ಏರಿಕೆಯನ್ನು ದಾಖಲಿಸಿವೆ. ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಚ್ಚಾ ತಾಳೆ ಎಣ್ಣೆಯ ಬೆಲೆಗಳು ಟನ್ಗೆ 1,265 ಡಾಲರ್ ಆಗಿದ್ದು, ಎಪ್ರಿಲ್ 2025 ರ ಸರಾಸರಿ 1,112 ಡಾಲರ್ ಗಿಂತ ಹೆಚ್ಚಾಗಿದೆ. ಅದೇ ರೀತಿ ಸೋಯಾಬೀನ್ ಬೆಲೆ ಮತ್ತು ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿಯೂ ಏರಿಕೆ ಕಂಡಿದೆ. ಈ ಬದಲಾವಣೆಗೆ ಕಾರಣವೇನು? ಈ ಬದಲಾವಣೆಗೆ ಕಾರಣ ಜಾಗತಿಕ ಪೂರೈಕೆಯ ಕೊರತೆಯಾಗಿದ್ದು, ದಾಖಲೆಯ ಉತ್ಪಾದನಾ ಮಟ್ಟಗಳಿಂದ ಇದು ಉತ್ತೇಜಿಸಲ್ಪಟ್ಟಿದೆ. ಅಮೆರಿಕದ ಕೃಷಿ ಇಲಾಖೆ 2025-26 ರ ಋತುವಿನಲ್ಲಿ ಗೋಧಿ ಉತ್ಪಾದನೆ 844.2 ಮಿಲಿಯನ್ ಟನ್, ಜೋಳ 1,301.1 ಮಿಲಿಯನ್ ಟನ್, ಎಣ್ಣೆಕಾಳುಗಳು 698.2 ಮಿಲಿಯನ್ ಟನ್ ಮತ್ತು ಸಕ್ಕರೆ 189.3 ಮಿಲಿಯನ್ ಟನ್ ಎಂದು ಅಂದಾಜಿಸಿದೆ. 2025-26ನೇ ಸಾಲಿಗೆ ಜಾಗತಿಕವಾಗಿ ಅಕ್ಕಿ ದಾಸ್ತಾನುಗಳು ಸಾರ್ವಕಾಲಿಕ ಗರಿಷ್ಠ 192.3 ಮಿಲಿಯನ್ ಟನ್ ತಲುಪುವ ನಿರೀಕ್ಷೆಯಿದೆ. 2007-08ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆ ಅವಧಿಯಲ್ಲಿ, ಪೂರೈಕೆ ಕೊರತೆ, ಮೆಕ್ಕೆಜೋಳ ಮತ್ತು ಕಬ್ಬನ್ನು ಜೈವಿಕ ಇಂಧನ ಉತ್ಪಾದನೆಗೆ ಬಳಸಿದ ಕಾರಣ ಅಂತರರಾಷ್ಟ್ರೀಯ ಆಹಾರ ಬೆಲೆಗಳು ಗಗನಕ್ಕೇರಿದವು. ಸಾಂಸ್ಥಿಕ ಹೂಡಿಕೆದಾರರು ಸ್ಟಾಕ್ಗಳು ಮತ್ತು ಬಾಂಡ್ಗಳಂತಹ ಕೃಷಿ ಸರಕುಗಳನ್ನು ಪರಿಗಣಿಸಲು ಪ್ರಾರಂಭಿಸಿದಾಗ ಇದು ಹಣಕಾಸಿನ ಊಹಾಪೋಹದಿಂದ ಮತ್ತಷ್ಟು ತೀವ್ರಗೊಂಡಿತು. ಪರಿಣಾಮವಾಗಿ, ಆಹಾರ ಮತ್ತು ಕಚ್ಚಾ ತೈಲ ಬೆಲೆಗಳು ಒಟ್ಟಿಗೆ ಏರಿ, ಮಾರ್ಚ್ ಮತ್ತು ಜುಲೈ 2008 ರ ನಡುವೆ ಗರಿಷ್ಠ ಮಟ್ಟವನ್ನು ತಲುಪಿದವು. ಆದರೆ ಅಕ್ಟೋಬರ್ ವೇಳೆಗೆ ಇದು ಕುಸಿತ ಕಂಡಿತು. ಅದೇ ರೀತಿ, 2022 ರಲ್ಲಿ, ಜಾಗತಿಕ ಆಹಾರ ಮತ್ತು ಕಚ್ಚಾ ತೈಲ ಬೆಲೆಗಳು ಏರಿಕೆ ಕಂಡವು. ಲಾಕ್ಡೌನ್ಗಳನ್ನು ಸಡಿಲಿಸುವುದರೊಂದಿಗೆ ಕೋವಿಡ್ ನಂತರದ ಬೇಡಿಕೆಯೇ ಇದಕ್ಕೆ ಕಾರಣ. ರಷ್ಯಾ-ಉಕ್ರೇನ್ ಯುದ್ಧದ ಈ ಪ್ರವೃತ್ತಿಯನ್ನು ವೇಗಗೊಳಿಸಿತು, 2022 ರ ಮಾರ್ಚ್ನಲ್ಲಿ ಎಫ್ಎಒ ಸೂಚ್ಯಂಕವು 160.2 ಪಾಯಿಂಟ್ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು, ಅದೇ ತಿಂಗಳಲ್ಲಿ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 139.13 ಡಾಲರ್ ತಲುಪಿತು. ► ಆಹಾರದ ಬೆಲೆಗಳು ಮತ್ತೆ ಮೊದಲಿನಂತೆ ಏರಬಹುದೇ? ಮಾರ್ಚ್ 2026 ರಲ್ಲಿ ಎಫ್ಎಒ ಸೂಚ್ಯಂಕವು ಕೇವಲ 128.5 ಅಂಕಗಳನ್ನು ಗಳಿಸಿದ್ದರೂ ಮತ್ತು ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಸಕ್ಕರೆಯ ಹೇರಳವಾದ ನಿಕ್ಷೇಪಗಳೊಂದಿಗೆ ಜಗತ್ತು ಈ ಬಿಕ್ಕಟ್ಟಿಗೆ ಸಿಲುಕಿದ್ದರೂ ಸಹ, ಆ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಪ್ರಸ್ತುತ ದಾಸ್ತಾನುಗಳಿಗೆ ಸಂಬಂಧಿಸಿದಂತೆ ಭಾರತವೂ ಉತ್ತಮ ಸ್ಥಾನದಲ್ಲಿದೆ. ಇದು ಬಂಪರ್ ರಾಬಿ ಬೆಳೆಯನ್ನು ಕೊಯ್ಲು ಮಾಡಲು ಸಜ್ಜಾಗಿದೆ. ► ಮುಂಬರುವ ತಿಂಗಳುಗಳಲ್ಲಿ ಆಹಾರ ಬೆಲೆ ಏರಿಕೆಯಾಗಲು ಎರಡು ಕಾರಣಗಳಿವೆ ಮೊದಲನೆಯದು ಇರಾನ್ ಯುದ್ಧ ಮತ್ತು ನಿರ್ಣಾಯಕ ಹಾರ್ಮುಝ್ ಜಲಮಾರ್ಗದ ಮುಚ್ಚುವಿಕೆಯು ತೈಲವನ್ನು ಮಾತ್ರವಲ್ಲದೆ, ರಸಗೊಬ್ಬರಗಳು ಮತ್ತು ಬೆಳೆ ಸಂರಕ್ಷಣಾ ರಾಸಾಯನಿಕಗಳು ಸೇರಿದಂತೆ ಹಲವಾರು ಕೈಗಾರಿಕೆಗಳಿಗೆ ಹೋಗುವ ಪೆಟ್ರೋಕೆಮಿಕಲ್ ಫೀಡ್ಸ್ಟಾಕ್ಗಳು ಮತ್ತು ಮಧ್ಯವರ್ತಿಗಳ ಪೂರೈಕೆಯ ಮೇಲೆಯೂ ಪರಿಣಾಮ ಬೀರುವ ಪೂರ್ಣ ಪ್ರಮಾಣದ ಇಂಧನ ಕೊರತೆಯನ್ನು ಉಂಟುಮಾಡಿದೆ. ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ, ಯೂರಿಯಾ (ಮಧ್ಯಪ್ರಾಚ್ಯ ಮೂಲ) ಮತ್ತು ಡೈ-ಅಮೋನಿಯಂ ಫಾಸ್ಫೇಟ್ ಸರಾಸರಿ ಬೆಲೆಗಳು ಮಾರ್ಚ್ 2026 ರಲ್ಲಿ ಕ್ರಮವಾಗಿ ಪ್ರತಿ ಟನ್ಗೆ 725.6 ಡಾಲರ್ ಮತ್ತು 658.3 ಡಾಲರ್ ನಷ್ಟಿದ್ದವು, ಇದು ಮಾರ್ಚ್ 2025 ರ ವೇಳೆಗೆ ಕ್ರಮವಾಗಿ 394.5 ಡಾಲರ್ ಮತ್ತು 615.1 ಡಾಲರ್ ಆಗಿ ಹೆಚ್ಚಾಗಿದೆ. ಸೀಮಿತ ಲಭ್ಯತೆ ಮತ್ತು ರಸಗೊಬ್ಬರಗಳು, ಕಳೆನಾಶಕಗಳು, ಕೀಟನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಡೀಸೆಲ್ಗಳ ಹೆಚ್ಚಿನ ವೆಚ್ಚವು 2026-27ರ ಬೆಳೆಗಳ ಎಕರೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರಬಹುದು. ಅಮೆರಿಕದಲ್ಲಿ, ಜೋಳದ ನಾಟಿ ಏಪ್ರಿಲ್-ಮೇ ತಿಂಗಳಲ್ಲಿ ಮತ್ತು ಸೋಯಾಬೀನ್ ನಾಟಿ ಮೇ-ಜೂನ್ನಲ್ಲಿ ನಡೆಯುತ್ತದೆ. ಭಾರತದ ಖಾರಿಫ್ (ಮಾನ್ಸೂನ್) ಬಿತ್ತನೆ ಮುಖ್ಯವಾಗಿ ಜೂನ್ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ ಮಾಡಲಾಗುತ್ತದೆ. ಪ್ರಸ್ತುತ ಕದನ ವಿರಾಮವು ಹಾರ್ಮುಝ್ ಅನ್ನು ಸಂಪೂರ್ಣವಾಗಿ ಪುನರಾರಂಭಿಸದಿದ್ದರೆ ಇದು ಮುಂಬರುವ ಕೃಷಿ ಋತುವಿನ ನಿರೀಕ್ಷೆಗಳಿಗೆ ಅಪಾಯವನ್ನುಂಟುಮಾಡಬಹುದು ಮತ್ತು ಪ್ರತಿಯಾಗಿ, ಆಹಾರ ಬೆಲೆಗಳನ್ನು ಹೆಚ್ಚಿಸಬಹುದು. ಆಹಾರ ಹಣದುಬ್ಬರಕ್ಕೆ ಎರಡನೇ ಕಾರಣವೆಂದರೆ ಬೆಳೆಗಳನ್ನು ಜೈವಿಕ ಇಂಧನಗಳಾಗಿ ಪರಿವರ್ತಿಸುವುದು. ಕಚ್ಚಾ ವಸ್ತುಗಳ ಬೆಲೆಗಳು ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಪೆಟ್ರೋಲ್ನೊಂದಿಗೆ ಬೆರೆಸಬಹುದಾದ ಎಥೆನಾಲ್ ತಯಾರಿಸಲು ಜೋಳ, ಅಕ್ಕಿ ಅಥವಾ ಕಬ್ಬನ್ನು ಬೇರೆಡೆಗೆ ತಿರುಗಿಸಲು ಹೆಚ್ಚಿನ ಪ್ರೋತ್ಸಾಹವಿರುತ್ತದೆ. ಅದೇ ರೀತಿ, ಪಾಮ್, ಸೋಯಾಬೀನ್ ಮತ್ತು ರೇಪ್ಸೀಡ್ನಂತಹ ಸಸ್ಯಜನ್ಯ ಎಣ್ಣೆಗಳನ್ನು ಡೀಸೆಲ್ ಬದಲಿಯಾಗಿ ಫ್ಯಾಟಿ ಆಸಿಡ್ ಮೀಥೈಲ್ ಎಸ್ಟರ್ (FAME) ಉತ್ಪಾದಿಸಲು ಬಳಸಬಹುದು. 2025-26ರಲ್ಲಿ ಜಾಗತಿಕವಾಗಿ 80.7 ಮಿಲಿಯನ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದ್ದರೂ, ತಾಳೆ ಎಣ್ಣೆ (ಪಾಮ್ ಆಯಿಲ್) ಬೆಲೆಗಳು ಏರಲು ಒಂದು ಕಾರಣವೆಂದರೆ ಇಂಡೋನೇಷ್ಯಾದ ಜೈವಿಕ ಇಂಧನ ಮಿಶ್ರಣ ಆದೇಶಗಳ ಆಕ್ರಮಣಕಾರಿ ಬಳಕೆ. ವಿಶ್ವದ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವು ಜನವರಿ 2025 ರಿಂದ ತನ್ನ ಡೀಸೆಲ್ನಲ್ಲಿ FAME ಅಂಶವನ್ನು 35% ರಿಂದ 40% ಕ್ಕೆ ಹೆಚ್ಚಿಸಿದೆ. ಈ ವರ್ಷದ ಜುಲೈನಿಂದ 50% FAME ಮತ್ತು 50% ಸಾಮಾನ್ಯ ಡೀಸೆಲ್ ಹೊಂದಿರುವ ಮಿಶ್ರಣವಾದ B50 ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. 2028ರ ವೇಳೆಗೆ ದೇಶಾದ್ಯಂತ ಮಾರಾಟವಾಗುವ ಎಲ್ಲಾ ಡೀಸೆಲ್ಗಳಿಗೆ B50 ಮಾನದಂಡವನ್ನು ಕಡ್ಡಾಯಗೊಳಿಸಲು ಇಂಡೋನೇಷ್ಯಾ ಸರ್ಕಾರವು ಆದೇಶವನ್ನು ಹೊರಡಿಸಿದೆ. ಅಂತಿಮವಾಗಿ, ಎಲ್ಲವೂ ಈ ಇಂಧನ ಪೂರೈಕೆ ಬಿಕ್ಕಟ್ಟಿನ ಅವಧಿಯನ್ನು ಅವಲಂಬಿಸಿದೆ, ಇದು 1970 ರ ದಶಕದ ನಂತರದ ಅತ್ಯಂತ ಪರಿಣಾಮ ಬೀರುವ ಬಿಕ್ಕಟ್ಟಾಗಿದೆ. ಕೃಪೆ: indianexpress.com
IAS ರೋಹಿಣಿ ಸಿಂಧೂರಿ ವಿರುದ್ಧ ತನಿಖೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್! ಹೈಕೋರ್ಟ್ ತೀರ್ಪಿಗೆ ತಡೆ
ಕೈಚೀಲ ಅಕ್ರಮ ಖರೀದಿ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ಈ ಹಿಂದೆ ಹೈಕೋರ್ಟ್ ಸೂಚನೆ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ರೋಹಿಣಿ ಸಿಂಧೂರಿಯವರಯ ಸುಪ್ರೀಂ ಕೋರ್ಟ್ ಮರೆಹೋಗಿದ್ದರು. ಸದ್ಯ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಐಎಎಸ್ ಅಧಿಕಾರಿಗೆ ರಿಲೀಫ್ ಸಿಕ್ಕಂತಾಗಿದೆ.
Kalaburagi | ಡಾ.ಅಂಬೇಡ್ಕರ್ ಜಯಂತಿ : ಮದ್ಯ ಮಾರಾಟ ನಿಷೇಧಿಸಿ ಡಿ.ಸಿ ಆದೇಶ
ಕಲಬುರಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಾದ್ಯಂತ ಎ.14ರ ಬೆಳಿಗ್ಗೆ 6 ಗಂಟೆಯಿಂದ ಎ.15ರ ಬೆಳಿಗ್ಗೆ 6 ಗಂಟೆ ವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ-21 ರನ್ವಯ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯಪಾನ ನಿಷೇಧಿಸಿ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಿ.ಸಿ ಬಿ.ಫೌಝಿಯಾ ತರನ್ನುಮ್ ಅವರು ಆದೇಶಿಸಿದ್ದಾರೆ.
ಜೇವರ್ಗಿಯಲ್ಲಿ ದಲಿತ ಪೌರಕಾರ್ಮಿಕರ ಧರಣಿ ತೀವ್ರ: ವೇತನ ಬಾಕಿ, ನೇಮಕಾತಿ ಸಮಸ್ಯೆ ವಿರುದ್ಧ ಆಕ್ರೋಶ
ಜೇವರ್ಗಿ: ದಲಿತ ಪೌರಕಾರ್ಮಿಕರ ಬಾಕಿ ವೇತನ ಹಾಗೂ ನೇಮಕಾತಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಜೇವರ್ಗಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ತೀವ್ರಗೊಂಡಿದ್ದು, ಕಾರ್ಮಿಕ ಸಂಘಟನೆ ಮುಖಂಡರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುರಸಭೆ ದಲಿತ ಪೌರಕಾರ್ಮಿಕರ ಸಂಘಟನೆಯ ಮುಖಂಡ ಮಹೇಶ್ ಕುಮಾರ್ ರಾಠೋಡ್ ಮಾತನಾಡಿ, “ಇಲ್ಲಿನ ಶಾಸಕರು ದಲಿತ ಪೌರಕಾರ್ಮಿಕರು ಹಾಗೂ ದುಡಿಯುವ ವರ್ಗದ ಪರ ನಿಜವಾದ ಬದ್ಧತೆ ಹೊಂದಿದ್ದರೆ, ತಕ್ಷಣ ಧರಣಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಕಾಳಜಿಯನ್ನು ತೋರಿಸಬೇಕು” ಎಂದು ಒತ್ತಾಯಿಸಿದರು. ಮುಂದುವರಿಸಿ, ಶಾಸಕರು, ತಹಶೀಲ್ದಾರ್ ಹಾಗೂ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧರಣಿ ಸತ್ಯಾಗ್ರಹದಲ್ಲಿ ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷೆ ಶಂಕರಮ್ಮ, ಕಾರ್ಯದರ್ಶಿ ರಾಘವೇಂದ್ರ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಚೌದ್ರಿ ಕೊಡ್ಚಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೆಲ್ಲೂರ್, ಮುಖಂಡರಾದ ರಾಜ ಪಟೇಲ್ ಯಳ್ವಾರ್, ಪೌರಕಾರ್ಮಿಕರಾದ ಗಂಗಮ್ಮ, ಶರಣಮ್ಮ, ದೊಡ್ಡಮ್ಮ, ದೇವಕಿ, ಶಾರದಬಾಯಿ ಸೇರಿದಂತೆ ಅನೇಕರು ನಿರಂತರ ಧರಣಿಯಲ್ಲಿ ಭಾಗಿಯಾಗಿದ್ದಾರೆ.
IPL 2026- ಅಭಿಷೇಕ್ ಶರ್ಮಾ ಗೋಲ್ಡನ್ ಡಕ್ ಗೆ ನೆಟ್ಟಿಗರ ಗೇಲಿ; ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗೆ ಒತ್ತಾಯ
ಕ್ರಿಕೆಟ್ ಪ್ರೇಮಿಗಳೇ ಹಾಗೆ ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಕೆಟ್ಟದಾಗಿ ಆಡಿದಾಗ ತೆಗಳುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ವಿಪರೀತ ಟ್ರೋಲ್ ಆಗಿದ್ದಾರೆ. ಅಪರೂಪಕ್ಕೆ ಆಡುವ ಈತನನ್ನು ಭಾರತ ತಂಡದಿಂದ ಕಿತ್ತ ಹಾಕಿ ಆ ಜಾಗಕ್ಕೆ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಏಪ್ರಿಲ್ 13ರ ಸೋಮವಾರ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಸನ್ ರೈಸರ್ಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ನಾಯಕ ಇಶಾನ್ ಕಿಶನ್ ಅವರ ಅಮೋಘ 91(44 ಎಸೆತ) ರನ್ ಗಳ ನೆರವಿನಿಂದ ಹೈದರಾಬಾದ್ ತಂಡ 6 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ()ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಜೋಫ್ರಾ ಆರ್ಚರ್ ಅವರ ಮಿಡಲ್ ಮತ್ತು ಲೆಗ್ ಸ್ಟಂಪ್ ಮೇಲಿದ್ದ ಎಸೆತಕ್ಕೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ಅಭಿಷೇಕ್ ಅವರು ಡೀಪ್ ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರವಿ ಬಿಷ್ಣೋಯಿಗೆ ಕ್ಯಾಚಿತ್ತು ಔಟಾದರು. ಇದು ಈ ವರ್ಷ ಟಿ20 ಕ್ರಿಕೆಟ್ ನಲ್ಲಿ ಅವರು ಸೊನ್ನೆ ರನ್ ಗೆ ಔಟಾಗುತ್ತಿರುವುದು 7ನೇ ಬಾರಿ. ಈ ಕೆಟ್ಟ ದಾಖಲೆ ಈ ಹಿಂದೆ ರೋಹಿತ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಜಂಟಿಯಾಗಿ ಹಂಚಿಕೊಂಡಿದ್ದರು. ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಡಕ್ ಔಟ್ ಆದ ಭಾರತೀಯರು 7 ಬಾರಿ- ಅಭಿಷೇಕ್ ಶರ್ಮಾ 2026 ರಲ್ಲಿ (18 ಇನ್ನಿಂಗ್ಸ್) 6 ಬಾರಿ- ರೋಹಿತ್ ಶರ್ಮಾ 2018 ರಲ್ಲಿ (32 ಇನ್ನಿಂಗ್ಸ್) 6 ಬಾರಿ- ಸಂಜು ಸ್ಯಾಮ್ಸನ್ 2024 ರಲ್ಲಿ (32 ಇನ್ನಿಂಗ್ಸ್) 5 ಬಾರಿ- ಗುರುಕೀರತ್ ಸಿಂಗ್ ಮಾನ್ 2013 ರಲ್ಲಿ (19 ಇನ್ನಿಂಗ್ಸ್) ಭಾರತ ತಂಡದ ಆರಂಭಿಕನಾಗಿ ಅಬಿಷೇಕ್ ಶರ್ಮಾ ಈ ವರ್ಷ 6 ಬಾರಿ ಶೂನ್ಯ ರನ್ ಗೆ ಔಟಾಗಿದ್ದರು. ೀಅದರಲ್ಲಿ 3 ಬಾರಿ ಟಿ20 ವಿಶ್ವಕಪ್ ನಲ್ಲಿಯೇ ಸೊನ್ನೆ ರನ್ ಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದೀಗ ಐಪಿಎಲ್ ನಲ್ಲಿ ಮೊದಲ ಬಾರಿಗೆ ಶುೂನ್ಯ ಸಂಪಾದನೆ ಮಾಡಿದ್ದಾರೆ. ಅಲ್ಲಿಗೆ 7 ಬಾರಿ ಆದ ಹಾಗಾಯಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

29 C