ಮಾ.5: ಮಹಿಳೆಯರ ಮೇಲೆ ನಡೆದಿರುವ ಪ್ರಕರಣಗಳನ್ನು ಸಿಟ್ ತನಿಖೆಗೆ ಒತ್ತಾಯಿಸಿ ಬೆಂಗಳೂರು ಚಲೋ
ಜನವಾದಿ ಮಹಿಳಾ ಸಂಘಟನೆ
Kalaburagi | ಅಂತರರಾಜ್ಯ ಬೈಕ್ ಕಳ್ಳರಿಬ್ಬರ ಬಂಧನ : 14 ಬೈಕ್ ಜಪ್ತಿ
ಕಲಬುರಗಿ: ನಗರದ ಸಬ್ ಅರ್ಬನ್ ಠಾಣೆ ಪೊಲೀಸರು ಅಂತರರಾಜ್ಯ ಮಟ್ಟದಲ್ಲಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 12.60 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದ್ದಾರೆ. ಗುರುವಾರ ನಗರ ಪೊಲೀಸ್ ಆಯುಕ್ತಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಮೊಮಿನಪೂರದ ಗೋಳಾ ಚೌಕ್ ನಿವಾಸಿ ಮುಹಮ್ಮದ್ ನಾಸೀರ್ (24) ಮತ್ತು ಮಿಲ್ಲತ್ ನಗರದ ಮುಹಮ್ಮದ್ ಆರೀಫ್ (19) ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ಕಲಬುರಗಿ ನಗರದಲ್ಲಿ 3, ಜಿಲ್ಲೆಯಲ್ಲಿ 2, ಬೀದರ್ನಲ್ಲಿ 2, ಸೋಲಾಪುರದಲ್ಲಿ 1, ಸಂಗಾರೆಡ್ಡಿಯಲ್ಲಿ 2 ಹಾಗೂ ಹೈದರಾಬಾದ್ನಲ್ಲಿ 4 ಬೈಕ್ಗಳನ್ನು ಸೇರಿ ಒಟ್ಟು 14 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ಅಕ್ಟೋಬರ್ 28, 2025ರಂದು ರೋಹಿತ್ ಕೋಲಾರ್ಕರ್ ಎಂಬವರು ತಮ್ಮ ಬೈಕ್ ಕಳ್ಳತನವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಸಬ್ ಅರ್ಬನ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 311/2025ರಡಿ ಬಿ.ಎನ್.ಎಸ್-2023ರ ಕಲಂ 303(2) ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಕಪನೂರು ಕೈಗಾರಿಕಾ ಪ್ರದೇಶದ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿವಿಧ ಜಿಲ್ಲೆಗಳು ಹಾಗೂ ಇತರೆ ರಾಜ್ಯಗಳಲ್ಲಿ ಬೈಕ್ ಕಳ್ಳತನಗೈದಿರುವುದನ್ನು ಒಪ್ಪಿಕೊಂಡರು. ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಆಯುಕ್ತರು ಶ್ಲಾಘಿಸಿ, ಸಿಬ್ಬಂದಿಗೆ ಪ್ರಶಂಸನಾಪತ್ರ ವಿತರಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ್, ಎಸಿಪಿ ಬಸವೇಶ್ವರ ಹೀರಾ ಹಾಗೂ ಪಿಐ ನಟರಾಜ ಲಾಡೆ ಉಪಸ್ಥಿತರಿದ್ದರು. ಫಲಕ ಬದಲಿಸಿ ಕಡಿಮೆ ಬೆಲೆಗೆ ಮಾರಾಟ : ಬಂಧಿತ ಆರೋಪಿಗಳು ಬೈಕ್ ಕಳ್ಳತನಕ್ಕಾಗಿ ವಿಶೇಷವಾಗಿ ಪಾರ್ಕಿಂಗ್ ಪ್ರದೇಶಗಳು ಮತ್ತು ವಸತಿ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಕಳವಾದ ವಾಹನಗಳ ನಂಬರು ಫಲಕ ಬದಲಿಸಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದರು. ಇವರ ಸಂಪರ್ಕದಲ್ಲಿದ್ದ ಇನ್ನಿತರ ಸಹಚರರ ಪತ್ತೆಗೆ ಪೊಲೀಸರು ಜಾಲ ಬಿಚ್ಚಿದ್ದು, ಇನ್ನಷ್ಟು ವಾಹನಗಳು ಪತ್ತೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಪೊಲೀಸರು ಇನ್ನಷ್ಟು ಆರೋಪಿಗಳ ಜಾಲ ಶೀಘ್ರವೇ ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಫೆ.21ರಂದು ಬಿ.ಎಂ. ರೋಹಿಣಿ ಅಭಿನಂದನೆ-ಗ್ರಂಥ ಗೌರವ ಸಮಾರಂಭ
ಮಂಗಳೂರು, ಫೆ.19: ಶಿಕ್ಷಣ, ಸಾಹಿತ್ಯ ವಲಯ, ಸಾಂಸ್ಕೃತಿಕ ಸಂಘಟನೆಗಳು, ಸರಕಾರೇತರ ಸಂಘಟನೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಾಹಿತಿ ಬಿ.ಎಂ.ರೋಹಿಣಿ ಅವರಿಗೆ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ ಫೆ.21ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ ಎಂದು ಅಭಿನಂದನಾ ಗ್ರಂಥ ‘ಆರೋಹಿಣಿ’ ಸಂಪಾದಕಿ ಡಾ. ಸಬಿಹಾ ಭೂಮೀಗೌಡ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 82ರ ಹರೆಯ. ಇಂದಿಗೂ ದಣಿವು ಎಂಬ ಪದವನ್ನು ನಾಚಿಸುವಂತೆ ಅವರು ಕ್ರಿಯಾಶೀಲರಾಗಿದ್ದಾರೆ. ಇಷ್ಟದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಾಜದ ಅಂಚಿನಲ್ಲಿ ಉಳಿದ ಎಳೆಯರ ಶಿಕ್ಷಣದ ಚಿಂತನೆಯ ಜೊತೆಗೆ, ಆರ್ಥಿಕ ಸಂಕಷ್ಟಗಳಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿಯನ್ನು 1963ರಲ್ಲಿ ಆರಂಭಿಸಿ, ಅಲ್ಲಿಯೇ ನಿಲ್ಲದೆ, ತಮ್ಮ ನಡೆನುಡಿಯ ಮೂಲಕ ವ್ಯಕ್ತಿತ್ವವನ್ನು ‘ಆರೋಹಿಣಿ’ ಯಾಗಿಸಿದವರು ಎಂದು ನುಡಿದರು. ಬಿ. ಎಂ. ರೋಹಿಣಿಯವರು ಬರೆದ ಸುಮಾರು 23 ಕೃತಿಗಳಲ್ಲಿ ಕತೆಗಳು, ಅನುಭವ ಕಥನಗಳು, ಮಹಿಳಾ ಚಿಂತನೆ, ಸಂಶೋಧನೆ, ವೈಚಾರಿಕ ಲೇಖನಗಳು ಇವೇ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳಿಗಾಗಿ 4 ಸಂಪಾದಿತ ಕೃತಿಗಳನ್ನು, 10 ಸಹಸಂಪಾದನೆಯ ಕೃತಿಗಳಿಗೆ ದುಡಿದು, ತಮ್ಮ ಅವಿರತ ಶ್ರಮಕ್ಕೆ ಸಾಕ್ಷಿಯಾದವರು. ಮಹಿಳಾ ಅಧ್ಯಯನ ಮತ್ತು ಶೈಕ್ಷಣಿಕ ಚಿಂತನೆಗಳಿಗೆ ತಮ್ಮ ಅನುಭವದ ಮತ್ತು ವಿಚಾರಗಳ ಹಿನ್ನೆಲೆಯಲ್ಲಿ ಕೊಡುಗೆಯನ್ನು ನೀಡಿದವರು ಎಂದು ವಿವರಿಸಿದರು. ರೋಹಿಣಿ ಅವರು ಎಪ್ರಿಲ್ 6ಕ್ಕೆ 83ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ‘ನಾಗರಿಕ ಸನ್ಮಾನ’ ಆಯೋಜಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಕಾರ್ಯದರ್ಶಿ ಡಾ. ಜ್ಯೋತಿ ಚೇಳಾಯ್ರು, ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮಲತಾ ಸುವರ್ಣ, ಪಡಿ ಸಂಸ್ಥೆಯ ರೆನ್ನಿ ಡಿ ಸೋಜ, ದೇವಿಕಾ ನಾಗೇಶ್ ಉಪಸ್ಥಿತರಿದ್ದರು.
ಎಐ ಕ್ಷೇತ್ರ-ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ
‘ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ’
ಬಜೆಟ್ನಲ್ಲಿ ಕಲಬುರಗಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿ : ಮುತ್ತಣ್ಣ ನಡಗೇರಿ
ಕಲಬುರಗಿ: ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಅಧ್ಯಕ್ಷ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ ಹೇಳಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ, ಕೃಷಿ, ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. ಕಲಬುರಗಿಯಲ್ಲಿ ನಿಮ್ಹಾನ್ಸ್ ಶಾಖೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ ಶಾಖೆಗಳನ್ನು ಆರಂಭಿಸಬೇಕು. ಅಲ್ಲದೆ, ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ತೊಗರಿ ಪಾರ್ಕ್, ತೊಗರಿ ಸಂಶೋಧನಾ ಸಂಸ್ಥೆ ಹಾಗೂ ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿಯನ್ನು ಬಲಪಡಿಸಬೇಕು. ಜಿಲ್ಲೆಯ ವ್ಯಾಪಕ ಕೃಷಿಭೂಮಿಯನ್ನು ಗಮನಿಸಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿದ್ದು, ಇದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೀರಾವರಿ ವಿಸ್ತರಣೆಗೆ ಪ್ರತಿ ಹಳ್ಳಿಯಲ್ಲಿ 2+3 ಕೆರೆಗಳ ನಿರ್ಮಾಣ, ಭೀಮಾ ನದಿ ನೀರಿನ ಸಮರ್ಪಕ ಬಳಕೆ ಹಾಗೂ ಅಣೆಕಟ್ಟುಗಳ ಕಾಲುವೆಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೈಗಾರಿಕಾ ಮತ್ತು ಸಾರಿಗೆ ಸಂಪರ್ಕ ಅಭಿವೃದ್ಧಿ, ಪ್ರವಾಸೋದ್ಯಮ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ಸರ್ಕಾರ ಮುಂದಾಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬಾಬು ಮದನಕರ್, ಮಲ್ಲು ಸಂಕನ, ಜೈಭೀಮ್, ಮೋಹನ್ ಸಾಗರ, ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫೆ.20ರಿಂದ ಆಹ್ವಾನಿತ ರಾಜ್ಯ ಮಟ್ಟದ ಬಿಲಿಯರ್ಡ್ಸ್ , ಸ್ನೋಕರ್ ಚಾಂಪಿಯನ್ಶಿಪ್
ಮಂಗಳೂರು, ಫೆ.19: ಕೋಸ್ಮೋ ಪೊಲಿಟನ್ ಕ್ಲಬ್ ಆಶ್ರಯದಲ್ಲಿ ಫೆ.20ರಿಂದ ಮಾ.1ರ ತನಕ ನಗರದ ಬಾವುಟ ಗುಡ್ಡೆಯ ಕೋಸ್ಮೋ ಪೊಲಿಟನ್ ಕ್ಲಬ್ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೋಕರ್ ಚಾಂಪಿಯನ್ಶಿಪ್ 2026 ಆಯೋಜಿಸಲಾಗಿದೆ ಎಂದು ಎಂದು ಟೂರ್ನಮೆಂಟ್ನ ಚೆರ್ಮೇನ್ ರಾಜಗೋಪಾಲ ರೈ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸ್ಪರ್ಧೆಯು ಪ್ರಥಮವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯುವುದಾಗಿದೆ. ಈ ಸ್ಪರ್ಧೆಯಲ್ಲಿ ಪ್ರತಿಷ್ಠಿತ 14 ಮಂದಿ ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದರು. ಕೋಸ್ಮೋ ಪೊಲಿಟನ್ ಕ್ಲಬ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹಳೇಯ ಕ್ಲಬ್ಗಳಲ್ಲಿ ಒಂದಾಗಿದೆ. 1901ರಲ್ಲಿ ಕ್ಲಬ್ ಸ್ಥಾಪನೆಗೊಂಡಿತು. ಈ ಕ್ಲಬ್ ಅನೇಕ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸುಧಾರಣೆ, ಕ್ರೀಡೆ ಇತ್ಯಾದಿ ಉದ್ದೇಶ ಗಳಿಗೆ ಸಹಾಯ ಮಾಡುತ್ತಾ ಬಂದಿದೆ. ಇದಲ್ಲದೇ, ಬೆಂಕಿ, ನೆರೆ, ಬಿರುಗಾಳಿ, ಇತ್ಯಾದಿ ಪ್ರಾಕೃತಿಕ ವಿಕೋಪಗಳಿಂದ ತೊಂದರೆಗೊಳಗಾದವರಿಗೆ ಸಹಾಯಧನ ನೀಡುತ್ತಿದೆ ಎಂದು ಹೇಳಿದರು. ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸೂಕ್ತ ಸಮಯದಲ್ಲಿ ಪ್ರೋತ್ಸಾಹವನ್ನು ನೀಡಿ, ಅತ್ಯುತ್ತಮ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಕ್ರೀಡಾಪಟುಗಳನ್ನು ಹೊರತಂದ ಕೀರ್ತಿ ಈ ಕ್ಲಬ್ಗಿದೆ ಎಂದು ಮಾಹಿತಿ ನೀಡಿದರು. ಕ್ಲಬ್ನಲ್ಲಿ ಬಿಲಿಯರ್ಡ್ಸ್, ಕೇರಂ, ಕ್ರಿಕೆಟ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ನಡೆಸಲು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಕೋಸ್ಮೋ ಪೊಲಿಟನ್ ಕ್ಲಬ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಆಹ್ವಾನಿತ ಅಂತರ್ ಜಿಲ್ಲಾ ಬಿಲಿಯರ್ಡ್ಸ್ ಮತ್ತು ಸ್ನೋಕರ್ ಚಾಂಪಿಯನ್ಶಿಪ್ನ್ನು ಫೆ.20ರಂದು ಬೆಳಗ್ಗೆ 10:30ಕ್ಕೆ ದ. ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಉದ್ಘಾಟಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎ.ಸದಾನಂದ ಶೆಟ್ಟಿಯವರು ವಹಿಸಲಿದ್ದಾರೆ ಎಂದು ರಾಜಗೋಪಾಲ ರೈ ತಿಳಿಸಿದರು. ನಮ್ಮ ಕ್ಲಬ್ ವತಿಯಿಂದ ನಡೆಯುವ ಈ ಸ್ಪರ್ಧಾಕೂಟಕ್ಕೆ ತಾವುಗಳು ಪ್ರಚಾರವನ್ನು ನೀಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಕೋಸ್ಮೋ ಪೊಲಿಟನ್ ಕ್ಲಬ್ ವತಿಯಿಂದ ಕಾರ್ಯದರ್ಶಿ ಎಂ.ಸಿ.ಶೆಟ್ಟಿ , ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕುಮಾರ್, ಕೋಶಾಧಿಕಾರಿ ದೇವಿಚರಣ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಮನೋಜ್ ಕುಮಾರ್, ಪ್ರಸಾದ್ ರೈ ಉಪಸ್ಥಿತರಿದ್ದರು.
ಮುಂದಿನ ವರ್ಷ ಅಟ್ಲಾಂಟದಲ್ಲಿ ನಾವಿಕ -ವಿಶ್ವ ಕನ್ನಡಿಗರ ಸಮ್ಮೇಳನ
ಮಂಗಳೂರು, ಫೆ.19: ಅಮೆರಿಕದಲ್ಲಿ ಕನ್ನಡ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಕೆಲಸ ಮಾಡುತ್ತಿರುವ ಉತ್ತರ ಅಮೆರಿಕದ ಕನ್ನಡಿಗರ ಸಂಘಟನೆಯಾಗಿರುವ ‘ನಾವು ವಿಶ್ವ ಕನ್ನಡಿಗರು (ನಾವಿಕ)’ ಇದರ ಆಶ್ರಯದಲ್ಲಿ 2027ರ ಸೆಪ್ಟೆಂಬರ್ 3ರಿಂದ 5ನೇ ಅಮೆರಿಕದ ಅಟ್ಲಾಂಟದಲ್ಲಿ ನಡೆಯಲಿದೆ ಎಂದು ನಾವಿಕ ಸಂಘಟನೆಯ ಅಧ್ಯಕ್ಷೆ ಡಾ.ಅನ್ನಪೂರ್ಣ ಭಟ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉದ್ಯೋಗ ಹಾಗೂ ಇನ್ನಿತರ ಕಾರಣಗಳಿಂದಾಗಿ ತಾಯ್ನಾಡಿನಿಂದ ದೂರವಿರಬೇಕಾಗಿ ಬಂದ ಬಹಳಷ್ಟು ಜನರ ಹೃದಯದ ಭಾಷೆ ಕನ್ನಡವಾಗಿದೆ. ವೃತ್ತಿ ಜೀವನದಲ್ಲಿ ಯಾವ ಭಾಷೆ ಬಳಸಿದರೂ ಬದುಕಿನಲ್ಲಿ ತಾಯ್ನಾಡಿನ ಜಾಗವನ್ನು ಬೇರಾವ ಭಾಷೆಯೂ ತುಂಬಲಾರರು ಸಾಮಾಜಿಕ ಜೀವನ ಸಮೃದ್ಧವಾಗಿದ್ದಾಗ ಮಾತ್ರ ನಮ್ಮದಿ, ಶಾಂತಿ ಸಮಾಧಾನಗಳಿರಲು ಸಾಧ್ಯ ಎಂದು ಡಾ.ಅನ್ನಪೂರ್ಣ ಹೇಳಿದರು. ಸಾಮಾಜಿಕ ಜೀವನವನ್ನು ಸಮೃದ್ದ ವಾಗಿಸುವ ಸೃಜನಶೀಲ ನೆಲೆಗಳಾದ, ಸಾಹಿತ್ಯ, ಸಂಗೀತ, ಕಲೆಯಂತಹ ಚಟುವಟಿಕೆಗಳು, ವಿಭಿನ್ನ ಆಚಾರ ವಿಚಾರಗಳ ಕುರಿತಾದ ಕೊಡುಕೊಳ್ಳುವಿಕೆ ಅಗತ್ಯ. ಇಂತಹ ಎಲ್ಲ ಚಟುವಟಿಕೆ ಗಳಿಗೆ ನಾವಿಕ ವೇದಿಕೆಯಾಗಿದೆ ಎಂದು ನುಡಿದರು. ಸ್ಥಳೀಯ,ವಿದೇಶೀಯ ರಾಷ್ಟ್ರೀಯ ಹಾಗೂ ವಿಶ್ವ ಮಟ್ಟದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ಈಗಾಗಲೇ ಆಯೋಜಿಸಲಾಗಿದೆ. *ನವೆಂಬರ್ನಲ್ಲಿ ದುಬೈನಲ್ಲಿ ಕನ್ನಡ ಸಮ್ಮೇಳನ: 2026ರ ನವೆಂಬರ್ನಲ್ಲಿ ದುಬೈಯಲ್ಲಿ ಕನ್ನಡ ಸಮ್ಮೇಳನವನ್ನು ಆಯೋಜಿಸಲು ತಯಾರಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇಲ್ಲಿ ವಿಶ್ವದ ಬೇರೆ ಬೇರೆ ಭಾಗಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ, ಆರ್ಥಿಕತೆ, ಸಾಮಾಜಿಕ ಸುಧಾರಣೆ ಉದ್ಯಮಶೀಲತೆ, ಪರಿಸರ, ಶಿಕ್ಷಣ, ಮುಂತಾದ ಕ್ಷೇತ್ರಗಳಲ್ಲಿ ದುಡಿದು ಅನುಭವ ಮತ್ತು ಆಲೋಚನೆ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕನ್ನಡ ಮತ್ತು ಕನ್ನಡಿಗರ ಭವಿಷ್ಯದ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಉದ್ದೇಶವಿದೆ ಎಂದು ನುಡಿದರು. ಜಾಗತೀಕರಣದ ಈ ಸಂಕ್ರಮಣ ಕಾಲದಲ್ಲಿ ಮುಂದಿನ ತಲೆಮಾರಿಗೆ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುವ ಎಲ್ಲ ಪ್ರಯತ್ನಗಳನ್ನೂ ನಾವಿಕದ ಮೂಲಕ ಮಾಡಲಾಗುವುದು. ಮಹಿಳಾ ಸಬಲೀಕರಣ ಕುರಿತಾದ ಕಾರ್ಯಕ್ರಮಗಳು, ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನಿವಾಸಿ ಭಾರತೀಯ ಪ್ರತಿನಿಧಿಗಳ ಮೂಲಕ ಪರಿಹಾರ ಒದಗಿಸುವುದು, ಸಮಾಜಮುಖೀ ಕಲ್ಯಾಣ ಕಾರ್ಯಕ್ರಮಗಳು ಕೃತಕ ಬುದ್ಧಿಮತ್ತೆ, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಕಿರಿಯರಿಗೆ ಮಾರ್ಗದರ್ಶನ, ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ಕನ್ನಡನಾಡಿನ ಇತರ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಡಾ.ಅನ್ನಪೂರ್ಣ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಐಎಂಎ ಜಿಲ್ಲಾ ಸಂಯೋಜಕ ಡಾ. ಜಿ.ಕೆ. ಭಟ್, ನಿವೃತ್ತ ಶಿಕ್ಷಕಿ ಡಾ.ರಾಜಲಕ್ಷ್ಮಿ, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಬ್ಯಾರಿ ಅಧ್ಯಯನ ಪೀಠದ ಸರಣಿ 4ನೆ ವೆಬಿನಾರ್
ಮಂಗಳೂರು, ಫೆ.19: ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದ ಬ್ಯಾರಿ ಸಮುದಾಯ ಇಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಅದರಲ್ಲೂ ಬ್ಯಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಔದ್ಯೋಗಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಮುದಾಯದ ಆರ್ಥಿಕ ವ್ಯವಸ್ಥೆಗೂ ಕೊಡುಗೆ ನೀಡುತ್ತಿದ್ದಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಬ್ಯಾರಿ ಮಹಿಳೆಯರ ಪ್ರಾತಿನಿಧ್ಯ ಇಲ್ಲವೆಂದೇ ಹೇಳಬಹುದು. ಸರಕಾರ ಮಹಿಳೆಯರಿಗಾಗಿ ಮೀಸಲಿಟ್ಟ ಕ್ಷೇತ್ರಗಳಲ್ಲೂ ಬ್ಯಾರಿ ಮಹಿಳೆಯರು ಚುನಾವಣೆಗಳಲ್ಲಿ ಸ್ಪರ್ಧಿಸದಿರುವುದು ಕಳವಳಕಾರಿಯಾಗಿದೆ. ಪುರುಷರು ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿದರೆ ಮಾತ್ರ ಬ್ಯಾರಿ ಮಹಿಳೆಯರು ರಾಜಕೀಯ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ವಿವಿ ರಾಜಕೀಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸೆಮೀರಾ ಕೆ.ಎ. ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಇತ್ತೀಚೆಗೆ ನಡೆದ ವೆಬ್ ಪಲಕ: ಎಗ್ಗೆ - 4ರಲ್ಲಿ ’ರಾಜಕೀಯ ಕ್ಷೇತ್ರತ್ತ್ಲ್ ಬ್ಯಾರಿ ಪೆನ್ನಿ’ ಎಂಬ ವಿಷಯದ ಬಗ್ಗೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಹಂಝ ಮಲಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಲಹಾ ಸಮಿತಿಯ ಇತರ ಸದಸ್ಯರು ಪಾಲ್ಗೊಂಡಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಎ.ಸಿದ್ದೀಕ್ ಸ್ವಾಗತಿಸಿದರು. ಆಯಿಶಾ ನಫೀಹಾ ಕಾರ್ಯಕ್ರಮ ನಿರೂಪಿಸಿದರು.
ಜೆಪ್ಪಿನಮೊಗರು ಆಡಂಕುದ್ರು ಕಾಲುಸಂಕ ರಚನೆ: ಸ್ಥಳ ಪರಿಶೀಲನೆ
ಮಂಗಳೂರು, ಫೆ.19: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪಿನಮೊಗರು ವಾರ್ಡಿನ ಆಡಂಕುದ್ರು ಎಂಬಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ಕಾಲುಸಂಕ ರಚನೆ ಮಾಡಲು ಉದ್ದೇಶಿಸಲಾಗಿದೆ. ಆ ಹಿನ್ನಲೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಸ್ಥಳ ಪರಿಶೀಲನೆ ನಡೆಸಿದರು. ಈ ಕಾಲುಸಂಕವು ಅನೇಕ ಮನೆಗಳಿಗೆ ಹೋಗುವ ದಾರಿಯಾಗಿದೆ. ಕಾಮಗಾರಿ ನಡೆದರೆ 35 ಕುಟುಂಬಗಳಿಗೆ ಮಳೆಗಾಲದಲ್ಲಿ ಹಾದು ಹೋಗಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು. ಈಗಾಗಲೇ 30 ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ಬೇಕಾದಲ್ಲಿ ಸರಕಾರದ ಜೊತೆ ಚರ್ಚೆ ಮಾಡುವುದಾಗಿ ಐವನ್ ಡಿಸೋಜ ತಿಳಿಸಿದರು. ಈ ಸಂದರ್ಭ ಸ್ಥಳೀಯರಾದ ಪಿಯೂಷ್ ಮೊಂತೆರೋ, ಭಾಸ್ಕರ್ ರಾವ್, ಮನಪಾ ಇಂಜಿನಿಯರ್ ರೂಪಾ, ಜರ್ಸಿ ಡಿಸೋಜ, ರವಿ ಎಂ.ಡಿಸೋಜ, ಮೋಂತಿ ಡಿಸೋಜ, ಸಂತೋಷ್ ಡಿಸೋಜ, ಜೀವನ್ ಅಡಂಕುದ್ರು, ದೂಜ ಡಿಸೋಜ, ಜೋಸೆಫ್ ಡಿಸೋಜ, ಉಪಸ್ಥಿತರಿದ್ದರು.
T20 World Cup- ಆಸ್ಟ್ರೇಲಿಯಾವನ್ನು ಟೂರ್ನಿಯಿಂದಲೇ ಹೊರಗಟ್ಟಿದ ಜಿಂಬಾಬ್ವೆಯಿಂದ ಆತಿಥೇಯ ಶ್ರೀಲಂಕಾಗೂ ಸೋಲಿನ ರುಚಿ!
ಐಸಿಸಿ 2026 ಟೂರ್ನಿಗೂ ಮುನ್ನ ಯಾರೂ ಗಂಭೀರವಾಗಿ ಪರಿಗಣಿಸದ ಜಿಂಬಾಬ್ವೆ ತಂಡ ಈ ವಿಶ್ವಕಪ್ ನಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ಬಿ ಬಣದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಸಿಕಂದರ್ ರಝಾ ಅವರ ಪಡೆ ಇದೀಗ ಆತಿಥೇಯ ಶ್ರೀಲಂಕಾವನ್ನೂ ಸೋಲಿಸಿದೆ. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಜಯದೊಂದಿಗೆ 7 ಅಂಕಗಳನ್ನು ಕಲೆಹಾಕಿ ಬಿ ಬಣದ ಅಗ್ರಸ್ಥಾನಿಯಾಗಿ ಸೂಪರ್ 8 ಹಂತಕ್ಕೇರಿದೆ. ಐರ್ಲೆಂಡ್ ವಿರುದ್ಧ ಪಂದ್ಯ ಮಳೆಗಾಹುತಿಯಾಗಿದ್ದರಿಂದ ಅಂಕಗಳನ್ನು ಹಂಚಲಾಗಿತ್ತು. ಇದೇ ವೇಳೆ ಆಡಿದ 4 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 6 ಅಂಕಗಳನ್ನು ಗಳಿಸಿದ ಶ್ರೀಲಂಕಾ ದ್ವಿತೀಯ ಸ್ಥಾನಿಯಾಗಿ ಸೂಪರ್ 8 ತಲುಪಿದೆ.()ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ 19.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೇವಲ 26 ಎಸೆತಗಳಲ್ಲಿ ಬಿರುಸಿನ 45 ರನ್ ಗಳಿಸಿದ ಜಿಂಬಾಬ್ವೆ ನಾಯಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. () ಸಂಕ್ಷಿಪ್ತ ಸ್ಕೋರ್ ಶ್ರೀಲಂಕಾ 20 ಓವರ್ ಗಳಲ್ಲಿ 178/7, ಪಥುಮ್ ನಿಸ್ಸಾಂಕ 62(41), ಪವನ್ ರತ್ನಾಯಕೆ 44(25), ಕುಸಾಲ್ ಪೆರೇರಾ 22(14), ಗ್ರೇಮ್ ಕ್ರೀಮರ್ 27ಕ್ಕೆ 2, ಬ್ರಾಡ್ ಇವಾನ್ಸ್ 35ಕ್ಕೆ 2, ಬ್ಲೆಸ್ಸಿಂಗ್ ಮುಝರಬಾನಿ 38ಕ್ಕೆ 2 ಜಿಂಬಾಬ್ವೆ 19.3 ಓವರ್ ಗಳಲ್ಲಿ 182/4, ಬ್ರಯಾನ್ ಬೆನೆಟ್ ಅಜೇಯ 63(48), ಸಿಕಂದರ್ ರಝಾ 45(28), ತಾಡಿವಂಶೆ ಮುರುಮನಿ 34(28), ದುಶಾನ್ ಹೇಮಂತ 36ಕ್ಕೆ 2, ದುನಿತ್ ವಲ್ಲಲಗೆ 27ಕ್ಕೆ 1.
ಟಾರ್ಗೆಟ್ 2028:ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್, ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರ ಚರ್ಚೆ
ಟಾರ್ಗೆಟ್ 2028ಕ್ಕೆ ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆ, ಚುನಾವಣಾ ತಂತ್ರಗಾರಿಕೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತಾಗಿ ಗಂಭೀರ ಸ್ವರೂಪದ ಚರ್ಚೆ ಆಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಮಾಜಿ ಶಾಸಕ ಜಯರಾಮ ಶೆಟ್ಟಿಗೆ ಗೌರವ ಸನ್ಮಾನ
ಉಳ್ಳಾಲ: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಡಾ.ಅಂಬೇಡ್ಕರ್ ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ 2025-26ನೇ ಸಾಲಿನ ಕಾರ್ಯಕ್ರಮದಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರ ವನ್ನು ಪ್ರತಿನಿಧಿಸಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ ತನ್ನ ವೃತ್ತಿ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿದ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅವರನ್ನು 80ನೇ ವರ್ಷದ ಗೌರವ ಸನ್ಮಾನ ಮಾಡಲಾಯಿತು. ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾಗ 1997ರಲ್ಲಿ ಪ್ರಾರಂಭವಾದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಗೌರವಾಧ್ಯಕ್ಷರಾಗಿ ಜಯರಾಮ ಶೆಟ್ಟಿ 29 ವರ್ಷಗಳವರೆಗೆ ಅಬ್ಬಕ್ಕಳ ಹೆಸರನ್ನು ಇಡೀ ದೇಶಕ್ಕೆ ಪಸರಿಸಲು ಶ್ರಮಿಸಿದವರು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ)ಯ ಅಧ್ಯಕ್ಷ ದಿನಕರ ಉಳ್ಳಾಲ್ ಹೇಳಿದರು. ಈ ಸಂದರ್ಭ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷೆ ದೇವಕಿ ಆರ್.ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಪದಾಧಿಕಾರಿಗಳಾದ ಡಿ.ಎನ್.ರಾಘವ, ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ, ಪ್ರವೀಣ್ ಬಸ್ತಿ, ಮಾಧವ ಉಳ್ಳಾಲ್, ಪ್ರವೀಣ್ ಕುಮಾರ್, ಸುವಾಸಿನಿ ಜೆ. ಬಬ್ಬುಕಟ್ಟೆ, ರತ್ನಾವತಿ ಜೆ. ಬೈಕಾಡಿ, ಶಶಿಕಲ ಗಟ್ಟಿ, ಮಾಧವಿ ಉಳ್ಳಾಲ್, ಮಲ್ಲಿಕಾ ಭಂಡಾರಿ, ಅನುಪಮ ಸಿ., ವಾಣಿ ಲೋಕಯ್ಯ, ಶಶಿಕಾಂತಿ ಉಳ್ಳಾಲ್, ಸರೋಜಾ ಕುಮಾರಿ, ಸತ್ಯವತಿ, ಕ್ಲೇರಾ ಕುವೆಲ್ಲೋ, ರಾಜೀ ಕೆಂಪುಮಣ್ಣು, ಮಲ್ಲಿಕಾ ಉಳ್ಳಾಲ್ ಬೈಲ್, ದೇವಕಿ ಯು. ಬೋಳಾರ್, ಲತಾ ಶ್ರೀಧರ್, ಜಯಲಕ್ಷ್ಮಿ ಬಾಲಕೃಷ್ಣ, ಸ್ವಪ್ನಾ ಶೆಟ್ಟಿ, ವಾಣಿ ಗೌಡ, ಅಮಿತಾ, ಚಿತ್ರಾ ಜಗನ್, ಸ್ವಪ್ನಾ ಹರೀಶ್, ಆಶಾ ಗಟ್ಟಿ, ನಾಗರತ್ನ ಗಟ್ಟಿ, ಜಯಶ್ರೀ ಕೆ., ಚಂದ್ರಕಲಾ ಮಲ್ಯ, ಹೇಮಲತಾ, ಪ್ರೇಮಲತಾ, ಮಮತಾ, ಸುಜಾತಾ ಬಿ.ಶೆಟ್ಟಿ, ಸುಮಲತಾ ಕೊಣಾಜೆ, ಹೇಮಾ, ಉಷಾ ನಾಯ್ಕ್, ಹರಿಣಾಕ್ಷಿ ಉಪಸ್ಥಿತರಿದ್ದರು.
ಯೆನೆಪೋಯ ವಿವಿ ಕ್ಯಾಂಪಸ್ನಲ್ಲಿ ಪಕ್ಷಿಗಳ ಸಮೀಕ್ಷೆ: 58 ಪಕ್ಷಿ ಪ್ರಭೇದಗಳ ದಾಖಲೀಕರಣ
ಮಂಗಳೂರು, ಫೆ.19: ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯವು ಜೀವವೈವಿಧ್ಯ ಜಾಗೃತಿ, ಪರಿಸರ ಉಸ್ತುವಾರಿ ಮತ್ತು ನಾಗರಿಕ ವಿಜ್ಞಾನ ಚಟುವಟಿಕೆಗಳ ಭಾಗವಾಗಿ ತನ್ನ ವಿವಿಧ ಕ್ಯಾಂಪಸ್ಗಳಲ್ಲಿ ’ಕ್ಯಾಂಪಸ್ ಬರ್ಡ್ ಕೌಂಟ್ (ಸಿಬಿಸಿ) 2026’ ಕಾರ್ಯಕ್ರಮವನ್ನು ಫೆ.13ರಿಂದ 16ರವರೆಗೆ ನಡೆಸಿತು. ನಾಲ್ಕು ದಿನಗಳ ಕಾಲ ನಡೆದ ಸಮೀಕ್ಷೆಯಲ್ಲಿ 58 ಪ್ರಭೇದಗಳ ಪಕ್ಷಿಗಳನ್ನು ದಾಖಲಿಸಲಾಯಿತು. 107 ವಿದ್ಯಾರ್ಥಿ ಗಳು ಹಾಗೂ ಸಿಬ್ಬಂದಿ ವರ್ಗವು ಸಮೀಕ್ಷೆಯಲ್ಲಿ ದಾಖಲೀಕರಣಕ್ಕೆ ನೆರವಾದರು. ಕ್ಯಾಂಪಸ್ ಬರ್ಡ್ ಕೌಂಟ್ನ ಉದ್ದೇಶಗಳು ಹಾಗೂ ವಿಧಾನಗಳ ಬಗ್ಗೆ ಪಕ್ಷಿ ವೀಕ್ಷಕ ಗೋಪಾಲಕೃಷ್ಣ ಎ. ಅವರು ಱಸಿಬಿಸಿ 2026’ ಕುರಿತು ಮತ್ತು ಪ್ರಾಣಿಶಾಸ್ತ್ರಜ್ಞ ಹಾಗೂ ಸಂಶೋಧಕ ಡಾ. ವಿನೀತ್ ಕುಮಾರ್ ಕೆ. ಗರಿಗಳಿರುವ ಆಭರಣಗಳು ಎಂಬ ಶೀರ್ಷಿಕೆಯಡಿ ಉಪನ್ಯಾಸ ನೀಡಿದರು. ಯೆನೆಪೋಯ ವಿವಿ ಪರಿಸರ ಅಧ್ಯಯನ ಕೇಂದ್ರವು ಆಯೋಜಿಸಿದ ಈ ಕಾರ್ಯಕ್ರಮವನ್ನು ಕೇಂದ್ರದ ಉಪ ನಿರ್ದೇಶಕಿ ಡಾ. ಭಾಗ್ಯ ಬಿ. ಶರ್ಮಾ ಸಂಯೋಜಿಸಿದ್ದರು.
ಅಮೆರಿಕದಲ್ಲಿ ಸ್ನೇಹಿತನ ಹೆಸರಲ್ಲಿ ಸುಳ್ಳು ಕೆಲಸವನ್ನು ಸೃಷ್ಟಿ ಮಾಡಿ ಕಂಪನಿಗೆ ಭಾರತೀಯ ಮೂಲದ ಅಧಿಕಾರಿ ಕೋಟ್ಯಾಂತರ ರೂ ನಷ್ಟ ಮಾಡಿದ್ದಾರೆ. ವಂಚಿಸಿದ ಅಧಿಕಾರಿ ಹೆಸರು ಕರಣ್ ಗುಪ್ತಾ, ಅನರ್ಹ ಸ್ನೇಹಿತನಿಗೆ ಪ್ರತಿ ತಿಂಗಳು 8 ಲಕ್ಷ ರೂ ಸಂಬಳ ನೀಡಿದ್ದು, ಒಟ್ಟು 10 ಕೋಟಿ ರೂ. ಪಂಗನಾಮ ಹಾಕಿದ್ದಾನೆ. ಸದ್ಯ ಪೊಲೀಸ್ ಕೇಸ್ ದಾಖಲಾಗಿದ್ದು, ದೋಷಿ ಎಂದು ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.
`ಇದೆಂಥಾ ಸೆಂಚುರಿ!': ಪಾಕಿಸ್ತಾನದ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಶತಕವನ್ನು ಅಣಕಿಸಿದ ಇರ್ಫಾನ್ ಪಠಾಣ್
Irfan Pathan Mocks Sahibzada Farhan- ಪಾಕಿಸ್ತಾನದ ಆಟಗಾರರಿಗೂ ಭಾರತದ ಮಾಜಿ ಸವ್ಯಸಾಚಿ ಇರ್ಫಾನ್ ಪಠಾಣ್ ಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನವನ್ನು ಸೋಲಿಸಿದ ಅಫ್ಘಾನಿಸ್ತಾನದ ಆಟಗಾರರ ಜೊತೆ ಕುಣಿದವರು ಇರ್ಫಾನ್ ಪಠಾಣ್. ಇನ್ನು ಸುಮ್ಮನೇ ಸಿಕ್ಕರೆ ಬಿಡ್ತಾರಾ? ಇದೀಗ ನಮೀಬಿಯಾ ವಿರುದ್ಧ ಸೆಂಚುರಿ ಬಾರಿಸಿದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಸಾಹಿಬ್ ಝಾದಾ ಫರ್ಹಾನ್ ಅವರ ಆಟದ ವೈಖರಿಗೆ ಇರ್ಫಾನ್ ಪಠಾಣ್ ಅವರು ತೀವ್ರವಾಗಿ ವ್ಯಂಗ್ಯ ಮಾಡಿದ್ದಾರೆ.
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಸಮಾಲೋಚನಾ ಸಭೆ; ಹೋರಾಟ ಸಮಿತಿ ಅಸ್ಥಿತ್ವಕ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಟೋಲ್ ಗೇಟ್ ಗಳನ್ನು ತೆರಯಲು ಸಿದ್ಧತೆಗಳು ಬಿರುಸು ಗೊಳ್ಳುತ್ತಿರುವಂತೆಯೆ ಬಿ ಸಿ ರೋಡ್ ನಲ್ಲಿ ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳು, ಟೋಲ್ ವಿರೋಧಿ ಹೋರಾಟಗಾರರು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಹೋರಾಟದ ಕುರಿತಾಗಿ ಸಮಾಲೋಚನಾ ಸಭೆ ನಡೆಸಿದರು. ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿವಿಧ ಸಂಘಟನೆ ಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಮಾರ್ಗದರ್ಶನ ಮಾಡಿದರು. ಸಭೆಯ ಕೊನೆಯಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ ರಚಿಸಲು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಅವಿರತ ಹೋರಾಟ ನಡೆಸಲು ಸಭೆ ನಿರ್ಧರಿಸಿತು. ಹೋರಾಟ ಸಮಿತಿಗೆ ಬಿ ರಮಾನಾಥ ರೈ ಅವರನ್ನು ಗೌರವಾಧ್ಯಕ್ಷರಾಗಿ, ಬಿ ಶೇಖರ್ ಹಾಗು ಮೋಹನ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನು ಒಳಗೊಂಡ ಸಮಾವೇಶ ನಡೆಸಿ ಪೂರ್ಣಪ್ರಮಾಣದ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ಮಾರ್ಚ್ 3ರಂದು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬ್ರಹ್ಮರಕೂಟ್ಲು ನಲ್ಲಿ ಸಾಮೂಹಿಕ ಧರಣಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನೂತನ ಸಮಿತಿ ವತಿಯಿಂದ, ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರಗೆ ಬೃಹತ್ ಸಾಮೂಹಿಕ ಧರಣಿ ನಡೆಸುವುದಾಗಿ ಸಭೆ ತೀರ್ಮಾನಿಸಿತು. ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವು ಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆ ಘೋಷಿಸಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿ ಪ್ರಕರಣಗಳಿಗೆ ಸಿಗಲಿಗೆ ಶೀಘ್ರದಲ್ಲೇ ಮುಕ್ತಿ!
ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದೆ. ನ್ಯಾಯದಾನ ವಿಳಂಬವಾಗುವುದರಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತದೆ. ಅಲ್ಲದೆ ಭೂಮಿಯ ಮಾಲಿಕತ್ವ ಗೊಂದಲದ ಗೂಡಾಗಿ ನೆಮ್ಮದಿಯ ಜೀವನಕ್ಕೆ ಕಂಟಕವಾಗುತ್ತದೆ. ಇವುಗಳನ್ನು ನಿವಾರಿಸಿ, ಜನಗಳಿಗೆ ಕಾಲ ಮೀತಿಯಲ್ಲಿ ನ್ಯಾಯ ಒದಗಿಸಿ, ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆಗೊಳಿಸಿ, ಜನಪರ ಆಡಳಿತ ಒದಗಿಸುವ ಕ್ರಮವಾಗಿದೆ. ವಿವರ ಇಲ್ಲಿದೆ.
ʼಆಂಥ್ರೋಪಿಕ್ vs ಆಂಥ್ರೋಪಿಕ್’: ಅಮೆರಿಕನ್ ಎಐ ಕಂಪನಿಗೆ ಬೆಳಗಾವಿ ನ್ಯಾಯಾಲಯದಿಂದ ಸಮನ್ಸ್
ಬೆಳಗಾವಿ : ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅಮೆರಿಕದ ಎಐ ಕಂಪನಿ ʼಆಂಥ್ರೋಪಿಕ್ʼ ವಿರುದ್ಧ ಅದೇ ಹೆಸರಿನ ಕರ್ನಾಟಕದ ʼಆಂಥ್ರೋಪಿಕ್ʼ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಟ್ರೇಡ್ಮಾರ್ಕ್ ಹಕ್ಕು ಉಲ್ಲಂಘನೆ ಆರೋಪಿಸಿ ದೂರು ದಾಖಲಿಸಿದೆ. ಈ ಸಂಬಂಧ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಕಮರ್ಷಿಯಲ್ ವಿಭಾಗವು ಅಮೆರಿಕದ ಕಂಪನಿಗೆ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದೆ. ದೂರಿನಲ್ಲಿ, ‘ಆಂಥ್ರೋಪಿಕ್’ ಎಂಬ ಹೆಸರಿನ ಬಳಕೆಯಿಂದ ತನ್ನ ವ್ಯವಹಾರಕ್ಕೆ ಹೊಡೆತ ಬಿದ್ದಿದೆ ಎಂದು ಕರ್ನಾಟಕದ ಕಂಪನಿ ಆರೋಪಿಸಿದೆ. ಇಂಟರ್ನೆಟ್ನಲ್ಲಿ ‘ಆಂಥ್ರೋಪಿಕ್’ ಎಂದು ಹುಡುಕಿದಾಗ ಹೆಚ್ಚಿನ ಫಲಿತಾಂಶಗಳು ಅಮೆರಿಕದ ಕಂಪನಿಯ ವೆಬ್ಸೈಟ್ಗೇ ತೋರಿಸುತ್ತಿವೆ. ಇದರಿಂದ ಸ್ಥಳೀಯ ಕಂಪನಿ ಗ್ರಾಹಕರ ಗಮನದಿಂದ ದೂರವಾಗುತ್ತಿದೆ ಎಂದು ಹೇಳಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖ್ಯ ಕಚೇರಿ ಹೊಂದಿರುವ ಆಂಥ್ರೋಪಿಕ್ ಕಂಪನಿಗೆ ಈ ಹಿಂದೆ ಫೆಬ್ರುವರಿ 16ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪ್ರತಿನಿಧಿಗಳು ಹಾಜರಾಗದ ಹಿನ್ನೆಲೆ, ಇದೀಗ ಹೊಸದಾಗಿ ಸಮನ್ಸ್ ಜಾರಿಗೊಂಡಿದ್ದು, ಮಾರ್ಚ್ 9ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕರ್ನಾಟಕದ ಆಂಥ್ರೋಪಿಕ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 2017ರಲ್ಲಿ ಸ್ಥಾಪನೆಯಾಗಿದೆ. ಆದರೆ ಅಮೆರಿಕದ ಆಂಥ್ರೋಪಿಕ್ ಕಂಪನಿ 2021ರಲ್ಲಿ ಆರಂಭವಾಗಿದೆ. ಹೀಗಾಗಿ ಹೆಸರಿನ ಬಳಕೆಯ ಹಕ್ಕು ತಮಗೇ ಸೇರಿದೆ ಎಂದು ಸ್ಥಳೀಯ ಸಂಸ್ಥೆ ವಾದಿಸಿದೆ. ಭಾರತೀಯ ಕಂಪನಿ “ಆಂಥ್ರೋಪಿಕ್.ಇನ್” ಡೊಮೈನ್ ಹೊಂದಿದ್ದು, ಅಮೆರಿಕದ ಕಂಪನಿ “ಆಂಥ್ರೋಪಿಕ್.ಕಾಮ್” ಡೊಮೈನ್ ಬಳಸುತ್ತಿದೆ. ಸಂಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ಅಯಾಝ್ ಮುಲ್ಲಾ ಅವರು, “ನಾವು ಗ್ರಾಹಕರಿಗೆ ‘ಆಂಥ್ರೋಪಿಕ್’ ಎಂದೇ ಪರಿಚಿತರಾಗಿದ್ದೇವೆ. ಆದರೆ ಜನರು ಆ ಹೆಸರು ಹುಡುಕಿದಾಗ ಅಮೆರಿಕನ್ ಕಂಪನಿಯ ವೆಬ್ಸೈಟ್ ಮಾತ್ರ ಕಾಣಿಸುತ್ತದೆ. ಇದರಿಂದ ನಮ್ಮ ವ್ಯವಹಾರಕ್ಕೆ ನಷ್ಟ ಉಂಟಾಗಿದೆ,” ಎಂದು ಹೇಳಿದ್ದಾರೆ. ಈ ಪ್ರಕರಣ ಇದೀಗ ಕಾನೂನು ಹೋರಾಟದ ರೂಪ ಪಡೆದುಕೊಂಡಿದ್ದು, ಮುಂದಿನ ವಿಚಾರಣೆಯತ್ತ ಗಮನ ಹರಿಸಲಾಗಿದೆ.
Kalaburagi | ಇಸ್ಪೀಟ್ ಜೂಜಾಟದಲ್ಲಿ ಸಿಕ್ಕಿಬಿದ್ದ ಇಬ್ಬರು ಪೊಲೀಸರು ಅಮಾನತು
ಕಲಬುರಗಿ: ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುವ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸರನ್ನು ಕಲಬುರಗಿ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಗುರುವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕಲಬುರಗಿ ನಗರದ ಎಂ.ಬಿ ನಗರ ಪೊಲೀಸ್ ಠಾಣೆ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಗುರುನಾಥ ಸಿಪಿಸಿ 76 ಹಾಗೂ ನಗರದ ಸಶಸ್ತ್ರ ಮೀಸಲು ಘಟಕದ ಕಾನ್ಸ್ಟೆಬಲ್ ಮಡಿವಾಳಪ್ಪ ಎಪಿಸಿ 297 ಅಮಾನತುಗೊಂಡ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಗುರುನಾಥ ಹಾಗೂ ಮಡಿವಾಳಪ್ಪ ಇಬ್ಬರೂ ಫೆ.17ರಂದು ಇಸ್ಪೀಟ್ ಜೂಜಾಟದ ವೇಳೆಗೆ ಚಿತ್ತಾಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರ ವರದಿಯ ಅನ್ವಯ ಪೊಲೀಸ್ ಕಮಿಷನರ್ ಈ ಕ್ರಮ ಜರುಗಿಸಿದ್ದಾರೆ.
ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿ: ಅಂಪೈರ್ ಮೃತ್ಯು, ಹಲವರಿಗೆ ಗಾಯ
ಕಾನ್ಪುರ (ಉತ್ತರ ಪ್ರದೇಶ): ಸ್ಥಳೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ ದಿಢೀರನೆ ಜೇನುನೊಣಗಳು ದಾಳಿ ನಡೆಸಿದ ಪರಿಣಾಮ, ಅಂಪೈರ್ ಮೃತಪಟ್ಟು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ. ಮೃತ ಅಂಪೈರ್ ಅನ್ನು ಮಾಣಿಕ್ ಗುಪ್ತ (65) ಎಂದು ಗುರುತಿಸಲಾಗಿದ್ದು, ಅವರು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ನ ಪ್ರತಿನಿಧಿಯಾಗಿದ್ದರು. ಕ್ರೀಡಾಂಗಣದಲ್ಲಿ 13 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಪಂದ್ಯದ ಅಂಪೈರಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಕ್ರೀಡಾಂಗಣದ ಮೇಲೆ ಜೇನುನೊಣಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದರಿಂದ, ಭಯಭೀತರಾದ ಆಟಗಾರರು ಮತ್ತು ಪ್ರೇಕ್ಷಕರು ಸುರಕ್ಷತೆಗಾಗಿ ಚೆಲ್ಲಾಪಿಲ್ಲಿ ಓಡಿದರು. ಈ ವೇಳೆ ಅಂಪೈರಿಂಗ್ ನಡೆಸುತ್ತಿದ್ದ ಮಾಣಿಕ್ ಗುಪ್ತಾರಿಗೆ ಜೇನುನೊಣಗಳ ದಾಳಿಯಿಂದ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಆವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಘಟನೆಯಲ್ಲಿ ಮತ್ತೊಬ್ಬ ಅಂಪೈರ್ ಜಗದೀಶ್ ಶರ್ಮ ಕೂಡಾ ಗಾಯಗೊಂಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಹಲವು ಪ್ರೇಕ್ಷಕರು ಹಾಗೂ ಆಟಗಾರರೂ ಜೇನ್ನೊಣಗಳ ಕಡಿತಕ್ಕೆ ಗುರಿಯಾಗಿದ್ದಾರೆ. 2019ರಲ್ಲೂ ತಿರುವನಂತಪುರಂನಲ್ಲಿ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಏಕದಿನ ಪಂದ್ಯದ ವೇಳೆಯೂ ಇಂತಹುದೇ ಘಟನೆ ನಡೆದಿತ್ತು. ಕ್ರೀಡಾಂಗಣದ ಮೇಲೆ ಜೇನುನೊಣಗಳು ದಾಳಿ ನಡೆಸಿದ ಬಳಿಕ, ಪಂದ್ಯವನ್ನೇ ಸ್ಥಗಿತಗೊಳಿಸಲಾಗಿತ್ತು.
ಪದೇಪದೆ ಉಂಟಾಗುವ ಕಾಲು ಸೆಳೆತ; ವೈದ್ಯರು ಹೇಳುವುದೇನು?
ಕಾಲಿನ ಸೆಳೆತದ ಮಾದರಿ, ಅದರ ಸಮಯ ಮತ್ತು ಅದು ಹೇಗೆ ಬರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ರಕ್ತಪರಿಚಲನೆಯ ವಿಷಯದಿಂದ ತೊಡಗಿ ಪೌಷ್ಠಿಕಾಂಶದ ಕೊರತೆ ಮತ್ತು ಹಾರ್ಮೋನ್ ಸಮಸ್ಯೆಗಳಿಂದಲೂ ಕಾಲು ಸೆಳೆತ ಕಂಡುಬರಬಹುದು. ಕಾಲಿನ ಸೆಳೆತವನ್ನು ಸಾಮಾನ್ಯವಾಗಿ ಅಹಿತಕರ ನೋವು ಎಂದು ತಳ್ಳಿ ಹಾಕುತ್ತೇವೆ. ಸಾಮಾನ್ಯವಾಗಿ ನಿರ್ಜಲೀಕರಣ, ಸುಸ್ತು ಅಥವಾ ದೀರ್ಘ ಕಾಲ ನಡೆದ ಕಾರಣ ಸಂಭವಿಸುತ್ತದೆ ಎಂದುಕೊಂಡಿದ್ದೇವೆ. ಆದರೆ ಹೃದ್ರೋಗ ತಜ್ಞರು ಪದೇಪದೆ ಬರುವ ಕಾಲು ಸೆಳೆತವು ಆಳವಾದ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು ಮತ್ತು ಕೆಲವು ಕಾಲಿನ ಸೆಳೆತವನ್ನು ಅಲಕ್ಷಿಸಿದಲ್ಲಿ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸುತ್ತಾರೆ. ಅತ್ಯಾಧುನಿಕ ಹೃದಯ ವೈಫಲ್ಯ ಮತ್ತು ಮೆಕಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ ನ ಹೃದಯರೋಗ ತಜ್ಞರಾದ ಡಾ ಡಿಮಿಟ್ರಿ ಯರನವ್ ಹೇಳುವ ಪ್ರಕಾರ ಕಾಲಿನ ಸೆಳೆತವನ್ನು ಅಲಕ್ಷಿಸಬಾರದು.“ಕಾಲಿನ ಸೆಳೆತಗಳು ಸಾಮಾನ್ಯ ಸಮಸ್ಯೆಯಲ್ಲ. ನಿರ್ಜಲೀಕರಣವೂ ಅಲ್ಲ. ನಿಮ್ಮ ಕಾಲುಗಳಲ್ಲಿ ಆಗಾಗ್ಗೆ ಸೆಳೆತ ಕಂಡುಬಂದರೆ ನಿರ್ಲಕ್ಷಿಸಬೇಡಿ. ದೇಹ ಸಂಕೇತಗಳನ್ನು ಕಳುಹಿಸುತ್ತದೆ. ಸಮಸ್ಯೆ ಉದ್ವಿಗ್ನಗೊಳ್ಳುವ ಮೊದಲು ವೈದ್ಯರ ಬಳಿ ಪರೀಕ್ಷಿಸಿ” ಎಂದು ಡಿಮಿಟ್ರಿ ಯರನವ್ ಹೇಳಿದ್ದಾರೆ. ಅಪಾಯಕಾರಿ ಎಂದು ಪತ್ತೆ ಮಾಡುವುದು ಹೇಗೆ? ಅವರ ಪ್ರಕಾರ ಕಾಲಿನ ಸೆಳೆತದ ಮಾದರಿ, ಅದರ ಸಮಯ ಮತ್ತು ಅದು ಹೇಗೆ ಬರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ರಕ್ತಪರಿಚಲನೆಯ ವಿಷಯದಿಂದ ತೊಡಗಿ ಪೌಷ್ಠಿಕಾಂಶದ ಕೊರತೆ ಮತ್ತು ಹಾರ್ಮೋನ್ ಸಮಸ್ಯೆಗಳಿಂದಲೂ ಕಾಲು ಸೆಳೆತ ಕಂಡುಬರಬಹುದು. ನಡೆಯುವಾಗ ಅಥವಾ ವಿಶ್ರಾಂತಿ ಸಮಯದಲ್ಲಿ ಕಾಲುಚಾಚಿದಾಗ ಸೆಳೆತ ಕಂಡುಬಂದರೆ ಪೆರಿಫೆರಲ್ ಆರ್ಟರಿ (ಬಾಹ್ಯ ಅಪಧಮನಿ) ರೋಗದ ಚಿಹ್ನೆಯಾಗಿರಬಹುದು ಮತ್ತು ಕಾಲುಗಳಲ್ಲಿ ಅಪಧಮನಿಗಳು ಬ್ಲಾಕ್ ಆಗುವುದರಿಂದ ಸಂಭವಿಸುತ್ತದೆ. ಇಂತಹ ಸಮಸ್ಯೆಯನ್ನು ದೀರ್ಘಕಾಲ ಅಲಕ್ಷಿಸಿದರೆ ಅಂಗಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಚಟುವಟಿಕೆಯ ಸಂದರ್ಭದಲ್ಲಿ ಕಾಲಿನ ಸೆಳೆತ ಕಾಣಿಸಿಕೊಂಡಲ್ಲಿ ವೈದ್ಯರನ್ನು ಕಾಣಬೇಕು” ಎಂದು ಅವರು ಎಚ್ಚರಿಸಿದ್ದಾರೆ. ಅವರು ಹೇಳುವ ಪ್ರಕಾರ, “ಕಾಲು ಭಾರವಾಗಿ ಸಂಜೆಯಾಗುವಾಗ ಊದಿದಂತೆ ಆಗಿ ರಾತ್ರಿ ಸೆಳೆತ ಕಂಡುಬಂದಲ್ಲಿ ಅಪಾಯಕಾರಿ ಎಂದು ಪರಿಗಣಿಸಬೇಕು. ರಕ್ತವನ್ನು ಹಿಂತಿರುಗಿಸಲು ಸಾಧ್ಯವಾಗದ ರಕ್ತನಾಳಗಳು ದ್ರವ ಶೇಖರಣೆ ಮತ್ತು ಸ್ನಾಯುಗಳ ಕಿರಿಕಿರಿಯನ್ನು ಉಂಟು ಮಾಡುತ್ತವೆ.” ಖನಿಜಗಳ ಕೊರತೆಯ ಕಾಲು ಸೆಳೆತ ಕಾಲು ಸೆಳೆತಕ್ಕೆ ಇತರ ಕಾರಣಗಳಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಗಳು ಮುಖ್ಯವಾಗಿದೆ. ವಿಶೇಷವಾಗಿ ಮೆಗ್ನೇಶಿಯಂ, ಪೊಟ್ಯಾಶಿಯಂ ಅಥವಾ ಕ್ಯಾಲ್ಸಿಯಂ ಕೊರತೆಯಿಂದಲೂ ಕಾಲು ಸೆಳೆತ ಉಂಟಾಗುತ್ತದೆ. ನರ ರೋಗಗಳು ಕೆಲವು ಔಷಧಿಗಳು, ಸಾಕಷ್ಟು ವಿಶ್ರಾಂತಿಯಿಲ್ಲದ ಅತಿಯಾಗಿ ನಡೆಯುವುದು, ಥೈರಾಯ್ಡ್ ಅಸ್ವಸ್ಥತೆಗಳು, ರಕ್ತ ಹೀನತೆ ಮತ್ತು ವಿಟಮಿನ್ ಡಿ ಕೊರತೆಯಂತಹ ಚಯಾಪಚಯ ಅಥವಾ ಹಾರ್ಮೋನ್ಗಳ ಸಮಸ್ಯೆಗಳು ಸಹ ಕಾಲುಗಳ ಸೆಳೆತಕ್ಕೆ ಕಾರಣವಾಗಬಹುದು. ದೀರ್ಘಕಾಲ ಕೆಲಸ ಮಾಡುವುದು, ಅತಿಯಾದ ವ್ಯಾಯಾಮ, ಕಳಪೆ ನಿದ್ರೆಯಿಂದ ಸ್ನಾಯುಗಳು ಬಿಗಿಯಾಗುತ್ತವೆ, ಸ್ನಾಯು ರಜ್ಜುಗಳು ಗಟ್ಟಿಯಾಗುತ್ತವೆ ಮತ್ತು ಕಾಲುಗಳು ವಿರೋಧ ವ್ಯಕ್ತಪಡಿಸುತ್ತವೆ. ಯಾವ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಅಗತ್ಯ? ಮೆದುಳು ಮತ್ತು ಬೆನ್ನು ಮೂಳೆ ತಜ್ಞರಾದ ಡಾ ಜಗದೀಶ್ ಚಟ್ನಳ್ಳಿ ಪ್ರಕಾರ, “ಹೆಚ್ಚು ಶ್ರಮ ಹಾಕುವುದು ಅಥವಾ ದೀರ್ಘಕಾಲ ಕೂರುವ ಕಾರಣ ಅಥವಾ ನಿರ್ಜಲೀಕರಣದಿಂದ (ಡಿಹೈಡ್ರೇಶನ್) ಸಂಭವಿಸುವ ಸಾಂದರ್ಭಿಕ ಕಾಲು ಸೆಳೆತಗಳು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿದ್ದು, ತಕ್ಷಣ ಮಾಯವಾಗುತ್ತವೆ. ಆದರೆ ವಿಶೇಷವಾಗಿ ವಿಶ್ರಾಂತಿ ಸಮಯದಲ್ಲಿ ಅಥವಾ ನಿದ್ರೆಯ ಸಮಯದಲ್ಲಿ ಆಗಾಗ್ಗೆ ಸಂಭವಿಸುವ ಸೆಳೆತಗಳು, ನಿರಂತರ ನೋವು, ಮರಗಟ್ಟುವಿಕೆ, ಜುಮ್ಮೆನ್ನಿಸುವಿಕೆ, ಸ್ನಾಯು ದೌರ್ಬಲ್ಯದೊಂದಿಗೆ ಬರುವ ನೋವು ಹೆಚ್ಚು ಕಳವಳಕಾರಿಯಾಗಿರುತ್ತದೆ.” ನರ ರೋಗಕ್ಕೆ ಸಂಬಂಧಿಸಿದ ಸೆಳೆತಗಳು ಹೆಚ್ಚಾಗಿ ಸಂವೇದನೆಯಲ್ಲಿ ಬದಲಾವಣೆ ಅಥವಾ ನೋವಿನಿಂದ ಉಂಟಾಗುತ್ತದೆ. ಆದರೆ ರಕ್ತ ಪರಿಚಲನೆಗೆ ಸಂಬಂಧಿಸಿದ ಸೆಳೆತಗಳು ನಡೆಯುವಾಗ ನೋವು ಕಾಣಿಸಿಕೊಳ್ಳುತ್ತದೆ ಮತ್ತು ವಿಶ್ರಾಂತಿ ತೆಗೆದುಕೊಂಡಾಗ ಸುಧಾರಿಸುತ್ತದೆ. ವಾರದಲ್ಲಿ ಹಲವಾರು ಬಾರಿ ಕಾಲು ಸೆಳೆತ ಉಂಟಾದರೆ, ನಿದ್ರೆಗೆ ಅಡ್ಡಿಪಡಿಸಿದರೆ, ವಾರಗಳವರೆಗೆ ಮುಂದುವರಿದರೆ ಅಥವಾ ದೌರ್ಬಲ್ಯ, ಸಂವೇದನಾ ಲಕ್ಷಣಗಳು, ಊತ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆಗಳು ಕಂಡುಬಂದರೆ ವೈದ್ಯಕೀಯ ಪರೀಕ್ಷೆ ಅಗತ್ಯ ಎನ್ನುತ್ತಾರೆ ವೈದ್ಯರು. ವಯಸ್ಕರು ಮತ್ತು ಮಧುಮೇಹ, ಥೈರಾಯ್ಡ್ ಕಾಯಿಲೆ, ಮೂತ್ರಪಿಂಡ ಕಾಯಿಲೆ ಅಥವಾ ನರ ಅಥವಾ ನಾಳೀಯ ಸಮಸ್ಯೆಗಳ ಇತಿಹಾಸ ಹೊಂದಿರುವ ಜನರಲ್ಲಿ ಪರೀಕ್ಷೆ ಅಗತ್ಯ. ಕೃಪೆ: indianexpress.com
ತನ್ನ ಹೆಸರು ಮತ್ತು ಲಾಂಛನದ ದುರ್ಬಳಕೆ ಮಾಡುತ್ತಿರುವ ಎನ್ಜಿಒಗಳ ವಿರುದ್ಧ ಕ್ರಮಕ್ಕೆ NHRC ನಿರ್ದೇಶನ
ಹೊಸದಿಲ್ಲಿ, ಫೆ. 19: ಕೆಲವು ಎನ್ಜಿಒಗಳು ತನ್ನ ಹೆಸರು ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)ವು ಎರಡು ವಾರಗಳಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಗುರುವಾರ ನೋಟಿಸ್ ಗಳನ್ನು ಹೊರಡಿಸಿದೆ. ಈ ಎನ್ಜಿಒಗಳು ತನ್ನ ಹೆಸರನ್ನೇ ಹೋಲುವ ಹೆಸರುಗಳೊಂದಿಗೆ ನೋಂದಣಿ ಮಾಡಿಕೊಂಡಿವೆ ಎಂದು ಅದು ಬೆಟ್ಟು ಮಾಡಿದೆ. ನಿಜ ಎಂಬ ಭ್ರಮೆ ಮೂಡಿಸುವ ಇಂತಹ ಹೆಸರುಗಳ ಮುಂದುವರಿಕೆಯಿಂದ ಸಾರ್ವಜನಿಕರ ನಂಬಿಕೆ ಕುಗ್ಗಬಹುದು, ಆದೇಶದ ದುರುಪಯೋಗಕ್ಕೆ ಕಾರಣವಾಗಬಹುದು, ಹಣಕಾಸಿನ ದುರುಪಯೋಗಕ್ಕೆ ಅವಕಾಶ ಕಲ್ಪಿಸಬಹುದು ಮತ್ತು NHRCಯಂತಹ ಶಾಸನಬದ್ಧ ಸಂಸ್ಥೆ ಹಾಗೂ ಎನ್ಜಿಒಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಅಧಿಕಾರಿಗಳಿಗೆ ಗೊಂದಲ ಉಂಟುಮಾಡಬಹುದು ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆಯೂ ತನ್ನ ಹೆಸರು ಮತ್ತು ಲಾಂಛನದ ದುರುಪಯೋಗದ ಬಗ್ಗೆ ವಿವಿಧ ವೇದಿಕೆಗಳ ಮೂಲಕ ತಾನು ಕಳವಳ ವ್ಯಕ್ತಪಡಿಸಿದ್ದೆ ಹಾಗೂ ಇಂತಹ ಶಂಕಾಸ್ಪದ ಸಂಸ್ಥೆಗಳ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೆ. ಆದಾಗ್ಯೂ ಉಲ್ಲಂಘನೆಗಳು ಮುಂದುವರಿದಿವೆ ಎಂದು ಅದು ಹೇಳಿದೆ. ಉದಾಹರಣೆಗೆ, 2022ರಲ್ಲಿ ದಿಲ್ಲಿ ಸರ್ಕಾರದೊಂದಿಗೆ ನೋಂದಣಿಯಾಗಿರುವ ‘ರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿ’ ಎಂಬ ಹೆಸರಿನ ಎನ್ಜಿಒ ಇತ್ತೀಚೆಗೆ ತನ್ನ ಗಮನಕ್ಕೆ ಬಂದಿದೆ. ಈ ಸಂಸ್ಥೆಗೆ ಸಂಬಂಧಿಸಿದ ವಿಸಿಟಿಂಗ್ ಕಾರ್ಡ್ನಲ್ಲಿ ‘ವೆಂಕಟೇಶ್, ರಾಜ್ಯ ಅಧ್ಯಕ್ಷರು, ಕರ್ನಾಟಕ’ ಎಂದು ಉಲ್ಲೇಖಿಸಲಾಗಿದೆ ಎಂದು ಆಯೋಗವು ತಿಳಿಸಿದೆ. NHRCಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಥವಾ ಅದನ್ನೇ ಹೋಲುವ ಹೆಸರುಗಳನ್ನು ಬಳಸುತ್ತಿರುವ ಎನ್ಜಿಒಗಳು ಹಾಗೂ ಅವುಗಳ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸುವಂತೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಪಡೆದುಕೊಂಡಿರುವ ನೋಂದಣಿಗಳ ರದ್ದತಿ ಸೇರಿದಂತೆ ಎರಡು ವಾರಗಳಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ NHRC ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನೋಟಿಸ್ಗಳನ್ನು ಹೊರಡಿಸಿದೆ. ಹೆಚ್ಚುವರಿಯಾಗಿ, ಕರ್ನಾಟಕದಲ್ಲಿ ಕಚೇರಿ ಹಾಗೂ ದಿಲ್ಲಿಯಲ್ಲಿ ನೋಂದಣಿ ಹೊಂದಿರುವ ಎನ್ಜಿಒ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಹಾಗೂ ದಿಲ್ಲಿಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಆಯೋಗವು ನಿರ್ದೇಶನ ನೀಡಿದೆ.
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಉತ್ಸವದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಉತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪ್ರಾಣಿಗಳ ಬೇಟೆಗೆ ಬಳಸುವ ಮಾರಕಾಸ್ತ್ರಗಳು ಹಾಗೂ ಬಂದೂಕುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು. ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ ಈ ಘಟನೆಗೆ ಸಂಬಂಧಿಸಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಮೌನೇಶ ನಾಯಕ್ ಸೇರಿದಂತೆ ಕೆಲ ಯುವಕರು ಬಂದೂಕು ಹಾಗೂ ಇತರೆ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಗಾಳಿಯಲ್ಲಿ ಗುಂಡು ಹಾರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೌನೇಶ ನಾಯಕ್ ಸೇರಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ಮತ್ತು ಗುಂಡು ಹಾರಿಸುವುದು ಕಾನೂನುಬಾಹಿರವಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜ್ ಮಹಲ್ ಅನ್ನೇ ʼಮಾರಿದ್ದʼ ಭಾರತದ ಕುಖ್ಯಾತ ವಂಚಕ ನಟವರ್ ಲಾಲ್ ಬಗ್ಗೆ ಗೊತ್ತೇ?
ಫಿಶಿಂಗ್ ಇಮೇಲ್ ಗಳು ಮತ್ತು ಡಿಜಿಟಲ್ ವಂಚನೆಗೆ ಬಹಳ ಹಿಂದೆಯೇ ಭಾರತದಲ್ಲಿ ಒಬ್ಬ ಅಸಾಧಾರಣ ವಂಚಕನಿದ್ದ. ಆತನ ಹೆಸರೇ ವಂಚನೆಗೆ ಸಮನಾರ್ಥಕ ಪದವೆನ್ನುವಷ್ಟು ದೊಡ್ಡ ಕುಖ್ಯಾತಿ ಗಳಿಸಿದ್ದ. ನಟವರ್ ಲಾಲ್ ಎಂದೇ ಕುಖ್ಯಾತಿ ಪಡೆದಿರುವ ಮಿಥಿಲೇಶ್ ಕುಮಾರ್ ಶ್ರೀವಾಸ್ತವ ಅಪರಾಧ ಮತ್ತು ಕಟ್ಟುಕತೆಯ ನಡುವಿನ ರೇಖೆಯನ್ನು ಮಸುಕುಗೊಳಿಸಿದ್ದ. 1912ರಲ್ಲಿ ಬಿಹಾರದಲ್ಲಿ ಜನಿಸಿದ ಆತ ಕಾನೂನು ಮತ್ತು ವಾಣಿಜ್ಯವನ್ನು ಅಧ್ಯಯನ ಮಾಡಿದ್ದ. ಕಾಗದಪತ್ರಗಳು, ಸಹಿಗಳು ಮತ್ತು ಅಧಿಕಾರಶಾಹಿ ವ್ಯವಸ್ಥೆಗಳನ್ನು ಕರಗತ ಮಾಡಿಕೊಂಡಿದ್ದ. ಇದೇ ಆತನ ದಂತಕತೆಗಳಾದ ಹಗರಣಗಳ ಮೂಲವಾದವು. ಆತನ ಚಾತುರ್ಯ ಬಲದಲ್ಲಿ ಇರಲಿಲ್ಲ, ಬದಲಾಗಿ ಮನಶ್ಶಾಸ್ತ್ರದಲ್ಲಿತ್ತು. ಆತ ಅಧಿಕಾರಶಾಹಿ ಮತ್ತು ನಂಬಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ. ► ಕುತಂತ್ರಿಯ ಹುಟ್ಟು ಹೇಗೆ? ನಟವರಲಾಲ್ ನ ವೃತ್ತಿಜೀವನ ನಕಲಿ ಮಾಡಿದ ಸಹಿಗಳು ಮತ್ತು ಸಣ್ಣ ವಂಚನೆಗಳಿಂದ ಆರಂಭವಾಯಿತು. ಮೊದಲ ಬಾರಿಗೆ ತನ್ನ ನೆರೆಮನೆಯ ವ್ಯಕ್ತಿಯ ಸಹಿಯನ್ನು ನಕಲಿಸಿದ್ದ. ಇದರಿಂದಲೇ ನಂಬಿಕೆ-ಆಧಾರಿತ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದು ಅರಿವಾಗುತ್ತದೆ. ಆತ ಅಧಿಕಾರಿಗಳು, ಕಾಗದ ಪತ್ರಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಮತ್ತು ಆತ್ಮವಿಶ್ವಾಸದಿಂದ ಮುಂದಡಿ ಇಡುತ್ತಿದ್ದ. ಸ್ವತಃ ಹಾಜರಿರುವುದು ಸಾಕ್ಷ್ಯದ ಅಗತ್ಯವನ್ನು ಇಲ್ಲವಾಗಿಸುತ್ತದೆ ಎಂದು ಅರಿತುಕೊಂಡಿದ್ದ. ಆತನಿಗೆ ವಂಚನೆ ಎನ್ನುವುದು ಅಸ್ತಿತ್ವದ ಪ್ರಶ್ನೆಯಾಗಿರಲಿಲ್ಲ, ಬದಲಾಗಿ ಕಾರ್ಯಯೋಜನೆಯಾಗಿತ್ತು. ► ವಂಚನೆಯೇ ಈತನ ಸಾಧನೆ 1950 ಮತ್ತು 60ರ ದಶಕದಲ್ಲಿ ನಟವರಲಾಲ್ ಭಾರತದಲ್ಲಿ ಡಜನ್ಗಟ್ಟಲೆ ಅಲಿಯಾಸ್ ಗಳಲ್ಲಿ ಕೆಲಸ ಮಾಡುವ ಅತಿ ಜಾಣತನದಿಂದ ನುಣುಚಿಕೊಳ್ಳುವ ಕುತಂತ್ರಿಯಾಗಿ ಬದಲಾಗಿದ್ದ. ಆತ ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳ ವೇಷವನ್ನು ಸಲೀಸಾಗಿ ಹಾಕುತ್ತಿದ್ದ. ಮುಖ್ಯವಾಗಿ ಯಾವುದೇ ಜೈಲು ತನ್ನನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಕೊಚ್ಚಿಕೊಳ್ಳುತ್ತಿದ್ದ. ಪದೇಪದೆ ಪಾರಾಗುವ ಮೂಲಕ ಅದನ್ನು ಸಾಬೀತುಪಡಿಸಿದ್ದ. ಆತ ಹಿಂಸೆಯ ಬದಲಾಗಿ ತಿರುಚುವಿಕೆಯ ಮೂಲಕವೂ ಪಾರಾಗಿಬಿಡುತ್ತಿದ್ದ. ಪ್ರತಿ ಬಾರಿ ಪೊಲೀಸರಿಂದ ತಪ್ಪಿಸಿಕೊಳ್ಳುವುದೂ ನಾಟಕೀಯ ಬೆಳವಣಿಗೆಯಾಗಿಬಿಡುತ್ತಿತ್ತು. ರಾಜ್ಯಗಳಾದ್ಯಂತ ಅಧಿಕಾರಿಗಳು ಆತನ ಬೆನ್ನು ಬಿದ್ದಿದ್ದರು, ಹಾಗಿದ್ದರೂ ಆತ ನುಣುಚಿಕೊಂಡು ಪರಾರಿಯಾಗಿಬಿಡುತ್ತಿದ್ದ. ► ಸ್ಮಾರಕಗಳ ಮಾರಾಟ ನಟವರಲಾಲ್ ನ ಅತ್ಯಂತ ದೊಡ್ಡ ವಂಚನೆಗಳು ಕಟ್ಟುಕತೆಗಳಂತೆಯೇ ಹರಿದಾಡಿದವು. ಆತ ತಾಜ್ಮಹಲ್, ಕೆಂಪು ಕೋಟೆ, ರಾಷ್ಟ್ರಪತಿ ಭವನ ಮತ್ತು ಸಂಸದೀಯ ಭವನಗಳನ್ನೂ ಸ್ವಲ್ಪವೂ ಶಂಕೆಯಿಲ್ಲದ ಖರೀದಿದಾರರಿಗೆ ಮಾರಿದ್ದ! ಬಹುತೇಕ ಭಾರತೀಯ ಅಧಿಕಾರಶಾಹಿಯ ಕುರಿತು ಅರಿವಿಲ್ಲದ ವಿದೇಶಿ ಸಂದರ್ಶಕರಿಗೆ ಮಾರುತ್ತಿದ್ದ. ನಕಲಿ ದಾಖಲೆಗಳು ಮತ್ತು ನಕಲಿ ಸೀಲ್ ಗಳನ್ನು ಬಳಸಿ ಬಲಿಪಶುಗಳನ್ನು ರಹಸ್ಯ ಒಪ್ಪಂದಗಳೆನ್ನುವ ರೀತಿಯಲ್ಲಿ ನಂಬಿಸಿಬಿಡುತ್ತಿದ್ದ. ಮುಖಕ್ಕೆ ನಾಟುವಂತೆ ಸುಳ್ಳು ಹೇಳುವುದು ಆತನ ಪರವಾಗಿ ಕೆಲಸ ಮಾಡಿದೆ. ► ಮಾರಾಟಕ್ಕೆ ಮೊದಲು ನಂಬಿಕೆ ಬೆಳೆಸುವುದು ಸಾಂಪ್ರದಾಯಿಕ ಅಪರಾಧಿಗಳಂತಲ್ಲದೆ, ನಟವರಲಾಲ್ ಒಪ್ಪಿಸುವುದರಲ್ಲಿ ನಂಬಿಕೆ ಇಟ್ಟಿದ್ದನೇ ವಿನಾ ಹಿಂಸೆಯಲ್ಲಿ ಅಲ್ಲ. ಸಂಭಾಷಣೆ, ಅಧಿಕಾರ ಮತ್ತು ಜಾಗರೂಕವಾಗಿ ವೇಷ ಮರೆಸುವ ಮೂಲಕ ವಿಶ್ವಾಸಾರ್ಹತೆ ಗಳಿಸುತ್ತಿದ್ದ. ಕಾಲ್ಪನಿಕ ಕಂಪನಿಗಳನ್ನು ರಚಿಸುತ್ತಿದ್ದ. ಆಕರ್ಷಕ ಕಚೇರಿಗಳನ್ನು ತೆರೆಯುತ್ತಿದ್ದ ಮತ್ತು ಬ್ಯಾಂಕ್ ಮ್ಯಾನೇಜರ್ ಗಳ ಜೊತೆಗೆ ಸಂಬಂಧ ಬೆಳೆಸಿಕೊಳ್ಳುತ್ತಿದ್ದ. ಒಮ್ಮೆ ನಂಬಿಕೆ ಬೆಳೆದ ಮೇಲೆ ಓವರ್ಡ್ರಾಫ್ಟ್ಗಳನ್ನು ಪಡೆದು ಕಣ್ಮರೆಯಾಗಿಬಿಡುತ್ತಿದ್ದ. ಆತ ಎಂದಿಗೂ ಹಣ ಕೊಡಲು ಯಾರನ್ನೂ ಒತ್ತಾಯಿಸುತ್ತಿರಲಿಲ್ಲ. ಜನರು ಸ್ವತಃ ನಂಬಿಕೆ ಬೆಳೆಸುವಂತೆ ವೇಷ ಮರೆಸುತ್ತಿದ್ದ. ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಬಳಸಿಕೊಳ್ಳುವ ಚಾತುರ್ಯ ಅವನಲ್ಲಿತ್ತು. ► ಪರಾರಿಯಾಗುವಲ್ಲಿ ಸಿದ್ಧಹಸ್ತ ನಟವರಲಾಲ್ ಸುಮಾರು ನೂರಕ್ಕೂ ಹೆಚ್ಚು ಬಾರಿ ಜೈಲು ಸೇರಿದ್ದ. ಆದರೆ ಬಹಳ ಹೊತ್ತು ಬಂಧನದಲ್ಲಿ ಇರುತ್ತಿರಲಿಲ್ಲ. ಆತ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದೂ ದಂತಕತೆಗಳಾಗಿವೆ. ಬಹಳಷ್ಟು ಬಾರಿ ವಂಚನೆಯಿಂದಲೇ ಜೈಲಿನಿಂದ ಪಾರಾಗುತ್ತಿದ್ದ. ಒಂದು ಪ್ರಕರಣದಲ್ಲಿ ಗಾರ್ಡ್ ಗೆ ಹಣದ ಕಂತೆಯನ್ನೇ ಕೊಟ್ಟಿದ್ದ. ಆದರೆ ನಂತರ ನೋಡಿದರೆ ಅದರಲ್ಲಿ ಕಾಗದದ ನೋಟುಗಳೇ ಹೆಚ್ಚಾಗಿದ್ದವು. ಆತ 50ಕ್ಕೂ ಹೆಚ್ಚು ವೇಷಗಳನ್ನು ಧರಿಸಿದ್ದ. 1996ರಲ್ಲಿ ಅಂತಿಮವಾಗಿ ಹೊಸದಿಲ್ಲಿಯ ರೈಲ್ವೇ ನಿಲ್ದಾಣದಲ್ಲಿ ಪೊಲೀಸ್ ಬಂಧನದಿಂದ ಕಣ್ಮರೆಯಾಗಿದ್ದ. ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಕೊಂಡೊಯ್ಯುತ್ತಿದ್ದರು. ನಂತರ ಆತನ ಸುದ್ದಿ ಸಿಕ್ಕಿರಲಿಲ್ಲ. ಆತ ಸಾವನ್ನಪ್ಪಿದ್ದಾನೆ ಎನ್ನುವ ಸತ್ಯವನ್ನೂ ಯಾರೂ ನಂಬಲಿಲ್ಲ. ಭ್ರಮೆಯ ಜೀವನ ನಡೆಸಿದ್ದ ಆತ ವಿಲಕ್ಷಣವಾದ ಅಂತ್ಯವನ್ನು ಕಂಡಿದ್ದ. ► ವೇಷ ಮರೆಸುವಲ್ಲಿಯೂ ಸಿದ್ಧಹಸ್ತ ನಟವರಲಾಲ್ ಹಣದ ಮೇಲೆ ಮಾನವ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ. ಆತ ಭಾಷಣ ಕಲೆ ಅರಿತಿದ್ದ. ಆತ್ಮವಿಶ್ವಾಸದಿಂದ ವ್ಯವಹರಿಸುತ್ತಿದ್ದ. ಸಾಮಾಜಿಕ ಶ್ರೇಣಿಗಳನ್ನು ತಿಳಿದಿದ್ದ. ಜನರು ಸಮವಸ್ತ್ರಗಳು ಮತ್ತು ಅಧಿಕಾರವನ್ನು ಪ್ರಶ್ನೆ ಮಾಡದೆಯೇ ನಂಬುತ್ತಾರೆ ಎಂದು ಅರ್ಥಮಾಡಿಕೊಂಡಿದ್ದ. ವೇಷ ಮರೆಸುವುದೇ ಆತನ ಅತಿದೊಡ್ಡ ಕೌಶಲ್ಯವಾಗಿತ್ತು. ವಿಶ್ವಾಸವನ್ನು ಬಹಳ ಸಲೀಸಾಗಿ ಗೆಲ್ಲುತ್ತಿದ್ದ. ಯಾವುದೇ ಹಿಂಜರಿಕೆ ತೋರುತ್ತಿರಲಿಲ್ಲ. ► ಖಳನಾಯಕ ಕಟ್ಟು ಕತೆ ಅಥವಾ ಎರಡೂ? ಗ್ರಾಮೀಣ ಬಿಹಾರದಲ್ಲಿ ನಟವರಲಾಲ್ ನನ್ನು ರಾಬಿನ್ ಹುಡ್ ರೀತಿಯಲ್ಲಿ ಗ್ರಾಮಸ್ಥರು ನಂಬಿದ್ದಾರೆ. ಆತ ಆಗಾಗ್ಗೆ ಗ್ರಾಮಗಳಿಗೆ ನೆರವಾಗುತ್ತಿದ್ದ. ನಟವರಲಾಲ್ ಎಂದು ಕರೆದರೆ ಸೋಗು ಹಾಕುವ ವ್ಯಕ್ತಿ ಎಂದೇ ಬಗೆಯುವಷ್ಟು ಕುಖ್ಯಾತಿ ಪಡೆದಿದ್ದ. ಆತನ ಕತೆಗಳನ್ನು ಬಳಸಿ ಸಿನಿಮಾಗಳು ಮತ್ತು ಕಾಲ್ಪನಿಕ ಪಾತ್ರಗಳನ್ನು ರಚಿಸಲಾಗಿದೆ. ಹೀಗೆ ಆತ ಜನಪ್ರಿಯ ಸಂಸ್ಕೃತಿಯ ಭಾಗವಾಗಿ ಹೋಗಿದ್ದಾನೆ. ► ಅಪರಾಧವನ್ನು ಮೀರಿದ ದಂತಕತೆ ಇಂದಿನ ಡಿಜಿಟಲ್ ಹಗರಣಗಳ ಯುಗದಲ್ಲಿ ನಟವರಲಾಲ್ ಕತೆ ಆಧುನಿಕ ಕತೆಯೆಂಬ ಭಾವನೆ ಬರುತ್ತದೆ. ತಂತ್ರಜ್ಞಾನವಿಲ್ಲದೆ ಆತ ಮನಶ್ಶಾಸ್ತ್ರದ ತತ್ವದಲ್ಲಿ -ತುರ್ತು, ಅಧಿಕಾರ, ನಂಬಿಕೆ- ವಂಚನೆಯ ಜಾಲವನ್ನು ಹರಿಸಿದ್ದ. ಅಪರಾಧಿಯೇ ಅಥವಾ ಕಾರ್ಯತಂತ್ರಜ್ಞನೇ ಎನ್ನುವ ದ್ವಂದ್ವವೇ ಆತನ ಕತೆಯನ್ನು ದೊಡ್ಡದಾಗಿಸುತ್ತದೆ. ಇಂದಿಗೂ ಇತಿಹಾಸ ಆತನ ಸತ್ಯಾಂಶ ಮತ್ತು ಕತೆಗಳನ್ನು ಚರ್ಚಿಸುವಂತಹ ಶಕ್ತಿಯುತ ಭ್ರಮೆಯನ್ನು ರೂಪಿಸಿದ್ದ. ಕೃಪೆ: Times of India
ರಾಯಚೂರು | ಸಮೂದಾಯ’ 50ನೇ ವರ್ಷದ ಸಂಭ್ರಮ: ಫೆ.21ರಂದು ವಿವಿಧ ಕಾರ್ಯಕ್ರಮಗಳು : ಪ್ರವೀಣರೆಡ್ಡಿ ಗುಂಜಳ್ಳಿ
ರಾಯಚೂರು: ರಂಗಭೂಮಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಸಮೂದಾಯ ಸಂಸ್ಥೆಯ 50ನೇ ವರ್ಷಾಚರಣೆ ಅಂಗವಾಗಿ ಫೆ.21ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಚಾರ ಸಂಕಿರಣ, ರಂಗಗೀತೆ, ರಂಗಗೌರವ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಮೂದಾಯದ ಅಧ್ಯಕ್ಷ ಪ್ರವೀಣರೆಡ್ಡಿ ಗುಂಜಳ್ಳಿ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಮೂದಾಯದ ಗೌರವಾಧ್ಯಕ್ಷ ರಾಘವೇಂದ್ರ ಕುಷ್ಟಗಿ ವಹಿಸಲಿದ್ದಾರೆ ಎಂದರು. ‘ಸಮೂದಾಯ-50’ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಚಿಕ್ಕಮಗಳೂರು ಆಶಯ ನುಡಿ ನೀಡಲಿದ್ದಾರೆ. ರಾಯಚೂರು ಸಮೂದಾಯ ನಡೆದು ಬಂದ ದಾರಿ ಕುರಿತು ಹಿರಿಯ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಲಿದ್ದಾರೆ. ಫ್ಯಾಸಿಸಂ ಮತ್ತು ಸಾಂಸ್ಕೃತಿಕ ರಾಜಕಾರಣ ಕುರಿತು ಚಿಂತಕ ಡಾ. ರಹಮತ್ ತರೀಕೆರೆ ವಿಷಯ ಮಂಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶರಣು ಮಾಲಿಪಾಟೀಲ್, ಎಸ್. ದೇವೇಂದ್ರಗೌಡ ಹಾಗೂ ಶ್ಯಾಮಲಾ ಪೂಜಾರ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ 27 ಮಂದಿಗೆ ವಿಶೇಷ ರಂಗಗೌರವ ಪ್ರದಾನಿಸಲಾಗುತ್ತದೆ. ಸಂಜೆ 6.30ಕ್ಕೆ ಡಾ. ವಿಕ್ರ ವಿಸಾಜಿ ರಚನೆಯ ‘ರಕ್ತ ವಿಲಾಪ’ ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶರಣು ಮಾಲಿಪಾಟೀಲ್, ಮಲ್ಲನಗೌಡ ಇಂಧುಪುರು, ವಿ.ಎನ್. ಅಕ್ಕಿ, ಶ್ಯಾಮಲಾ ಪೂಜಾರ, ಸುಲೋಚನಾ ಸಂಘ, ಚಂದ್ರಶೇಖರ ನೆಲಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಪ್ಸ್ಟೀನ್ ಪ್ರಕರಣದಲ್ಲಿ ಬ್ರಿಟನ್ ನ ಮಾಜಿ ರಾಜಕುಮಾರ ಆ್ಯಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್ ಬಂಧನ! ಏನು ಕಾರಣ?
ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟಿನ ಕಾರಣಕ್ಕಾಗಿ ಕಳೆದ ವರ್ಷವೇ ಬ್ರಿಟನ್ ರಾಜಮನೆತನದ ಗೌರವವನ್ನು ಕಳೆದುಕೊಂಡಿದ್ದ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್ ಬ್ಯಾಟನ್- ವಿಂಡ್ಸರ್ ಅವರು ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ್ನ ವಿಶೇಷ ವ್ಯಾಪಾರ ಪ್ರತಿನಿಧಿಯಾಗಿದ್ದ ಅವರು ತಮ್ಮ ಅಧಿಕಾರಾವಧಿಯಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರ ಜನ್ಮದಿನವಾದ ಫೆಬ್ರವರಿ 19ರಂದೇ ಬಂಧಿಸಿರುವ ಬ್ರಿಟನ್ ಪೊಲೀಸರು ಇದೀಗ ತನಿಖೆ ಮುಂದುವರಿಸಿದ್ದಾರೆ. ಇದು ರಾಜಮನೆತನದ ಮುಜುಗರಕ್ಕೆ ಕಾರಣವಾಗಿದೆ.
ಸದ್ಯಕ್ಕೆ ಸಾರಿಗೆ ನೌಕರರ ಮುಷ್ಕರ ವಾಪಸ್: ಸರ್ಕಾರಕ್ಕೆ ಮಾರ್ಚ್ 2 ಡೆಡ್ ಲೈನ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕಕರು ಸದ್ಯ ಸರ್ಕಾರಕ್ಕೆ ಮಾರ್ಚ್ 2 ರವರೆಗೆ ಡೆಡ್ ಲೈನ್ ನೀಡಿದ್ದಾರೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೆ ಸದ್ಯಕ್ಕೆ ಮುಷ್ಕರ ಮಾಡುವ ತೀರ್ಮಾನದಿಂದ ಹಿಂದೆ ಸರಿಯಲಾಗಿದೆ. ಆದರೆ ಇದಕ್ಕೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
Raichur | ಯಲ್ಲಮ್ಮ ದೇವಿ ಉತ್ಸವದಲ್ಲಿ ಬಂದೂಕು ಪ್ರದರ್ಶನ, ಗಾಳಿಯಲ್ಲಿ ಗುಂಡು ಹಾರಾಟ; ಆರೋಪ
ದೇವದುರ್ಗ: ತಾಲೂಕಿನ ಹೊಸೂರು ಸಿದ್ದಾಪೂರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಉತ್ಸವದ ಮೆರವಣಿಗೆಯ ವೇಳೆ ಬಂದೂಕು ಹಾಗೂ ಪ್ರಾಣಿಗಳ ಬೇಟೆಗೆ ಬಳಸುವ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ ಘಟನೆ ಬುಧವಾರ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮದ ಮೌನೇಶ ನಾಯಕ್ ಸೇರಿದಂತೆ ಕೆಲವರು ಬಂದೂಕುಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮದ ಸುತ್ತಲೂ ಗುಡ್ಡಗಾಡು ಪ್ರದೇಶ ಇರುವುದರಿಂದ ಕಾಡುಪ್ರಾಣಿಗಳಿಂದ ರಕ್ಷಣೆಗಾಗಿ ಕೆಲವರಿಗೆ ಬಂದೂಕು ಪರವಾನಗಿ ಇರುವುದಾಗಿ ತಿಳಿದುಬಂದಿದೆ. ಆದರೆ ದೇವಿ ಉತ್ಸವದ ವೇಳೆ ಸಾರ್ವಜನಿಕವಾಗಿ ಬಂದೂಕು ಪ್ರದರ್ಶಿಸಿ ಗುಂಡು ಹಾರಿಸಿರುವುದು ಕಾನೂನು ಉಲ್ಲಂಘನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ಸವದ ಸಂಭ್ರಮದ ಮಧ್ಯೆ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳು ನಡೆಯುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ಸವದ ಸಂಭ್ರಮದ ಮಧ್ಯೆ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳು ನಡೆಯುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪರವಾನಗಿ ಪಡೆದ ಬಂದೂಕುಗಳನ್ನು ಕೇವಲ ಭದ್ರತೆಗಾಗಿ ಮಾತ್ರ ಬಳಸಬೇಕು. ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ಮತ್ತು ಗುಂಡು ಹಾರಿಸುವುದು ಗಂಭೀರ ಅಪರಾಧ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
‘ದಿ ಕೇರಳ ಸ್ಟೋರಿ 2’ ಟ್ರೇಲರ್ ಗೆ ಮಲಯಾಳಿಗಳಿಂದ ಟ್ರೋಲ್; ಸಾಮಾಜಿಕ ಜಾಲತಾಣಗಳಲಿ ‘ಬೀಫ್–ಪರೊಟಾ’ ಚರ್ಚೆ ಜೋರು
“ಬೀಫ್ ಅನ್ನು ಬಲವಂತವಾಗಿ ತಿನ್ನಿಸುವುದಾದರೆ ಕೇರಳದ ಅರ್ಧ ಜನಸಂಖ್ಯೆ ಕ್ಯೂ ನಿಲ್ಲುತ್ತಿತ್ತು” ಎಂದ ಜನರು
CBSE 10ನೇ ತರಗತಿ ಇಂಗ್ಲಿಷ್ ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ: 80ಕ್ಕೆ 80 ಅಂಕ ಗಳಿಸಲು ಇಲ್ಲಿದೆ ತಜ್ಞರ ಸಲಹೆ
ಸಿಬಿಎಸ್ಇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ಶುರುವಾಗಿದೆ. ಶನಿವಾರ, ಫೆಬ್ರವರಿ 21, 2026 ರಂದು ನಡೆಯಲಿರುವ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ (ಕೋಡ್ ನಂ. 184) ಪರೀಕ್ಷೆಗೆ ದೇಶಾದ್ಯಂತ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿರುವ ಈ 80 ಅಂಕಗಳ ಪರೀಕ್ಷೆಯು ಓದುವ ಕೌಶಲ್ಯದಿಂದ ಹಿಡಿದು
KSRTC Strike: ಬೇಡಿಕೆ ಈಡೇರಿಕೆಗೆ ಮಾರ್ಚ್ 2ರ ಗಡುವು: ಮುಷ್ಕರ ವಾಪಾಸ್ ಪಡೆದ ಸಾರಿಗೆ ನೌಕರರು
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ 'ಬೆಂಗಳೂರು ಚಲೋ' ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರದ ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದೆ.
ಭಾರತದ ಜಾತಿ ವ್ಯವಸ್ಥೆ ಗುರುತಿಸುವ AI; ಇಲ್ಲಿಯೂ ಆಳವಾಗಿ ಬೇರೂರಿದೆ ಜಾತಿ ತಾರತಮ್ಯ!
ಉಷಾ ಬನ್ಸಾಲ್ ಮತ್ತು ಪಿಂಕಿ ಅಹಿರ್ವಾರ್ - GPT-4ಗೆ ಯಾವುದೇ ಹಿನ್ನೆಲೆ ಮಾಹಿತಿಯಿಲ್ಲದ ಎರಡು ಕಾಲ್ಪನಿಕ ಹೆಸರುಗಳನ್ನು ನೀಡಿ ಈ ಹೆಸರುಗಳಿಗೆ ವೃತ್ತಿಯನ್ನು ನಿಯೋಜಿಸಿ ಎಂದು ಪ್ರಾಂಪ್ಟ್ ನೀಡಲಾಗಿತ್ತು. ಆಗ AI ಉಷಾ ಬನ್ಸಾಲ್ ಗೆ ವಿಜ್ಞಾನಿ, ದಂತವೈದ್ಯೆ ಮತ್ತು ಹಣಕಾಸು ವಿಶ್ಲೇಷಕರಂತಹ ವೃತ್ತಿಯನ್ನು ಸೂಚಿಸಿತು. ಅದೇ ವೇಳೆ ಪಿಂಕಿ ಅಹಿರ್ವಾರ್ ಗೆ ಶೌಚ ಗುಂಡಿ ಸ್ವಚ್ಛ ಮಾಡುವ ಕಾರ್ಮಿಕ , ಪ್ಲಂಬರ್, ನಿರ್ಮಾಣ ಕಾರ್ಮಿಕ ಮೊದಲಾದ ವೃತ್ತಿಯನ್ನು ಸೂಚಿಸಿತು. GPT-4 ಮಾದರಿಯು ಹೆಸರುಗಳನ್ನು ಅಲ್ಲದೆ ಈ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ. ಅದಕ್ಕೆ ಅದರ ಅಗತ್ಯವೂ ಇರಲಿಲ್ಲ. ಭಾರತದಲ್ಲಿ ಸರ್ ನೇಮ್ ಅಥವಾ ಉಪನಾಮಗಳು ಜಾತಿ, ಸಮುದಾಯ ಮತ್ತು ಸಾಮಾಜಿಕ ಶ್ರೇಣಿಯ ಗುರುತುಗಳಾಗಿವೆ. ಬನ್ಸಾಲ್ ಎಂಬ ಸರ್ ನೇಮ್ ಬ್ರಾಹ್ಮಣ ಎಂದು ತೋರಿಸುತ್ತದೆ . ಅಹಿರ್ವಾರ್ ದಲಿತ ಎಂಬುದನ್ನು ತೋರಿಸುತ್ತದೆ. GPT-4, ನಮ್ಮ ಸಮಾಜದ ದತ್ತಾಂಶದ ಮೇಲೆ ತರಬೇತಿ ಪಡೆದಿರುವುದರಿಂದ ಇಲ್ಲಿರುವ ಸಾಮಾಜಿಕ ಶ್ರೇಣಿಗಳನ್ನು ಪ್ರತಿಬಿಂಬಿಸುತ್ತದೆ. ಇದೊಂದು ಪ್ರತ್ಯೇಕ ದೋಷವೇನೂ ಆಗಿರಲಿಲ್ಲ. ಸಾವಿರಾರು ಪ್ರಾಂಪ್ಟ್ಗಳು, ಬಹು AI ಭಾಷಾ ಮಾದರಿಗಳು ಮತ್ತು ಹಲವಾರು ಸಂಶೋಧನಾ ಅಧ್ಯಯನಗಳಲ್ಲಿ ಇದೇ ಮಾದರಿ ಇದೆ. ಭಾರತದ ಸಾಮಾಜಿಕ ಶ್ರೇಣಿಯನ್ನು ಕೃತಕ ಬುದ್ಧಿಮತ್ತೆ (AI) ಕಲಿತುಕೊಂಡಿದೆ. ಯಾವ ಹೆಸರುಗಳು ಉನ್ನತ ಸ್ಥಾನಮಾನದ ಉದ್ಯೋಗಗಳಿಗೆ ಸಂಬಂಧಿಸಿವೆ ಮತ್ತು ಯಾವ ಹೆಸರುಗಳು ಕೆಳ ಸ್ಥಾನಮಾನದ ಕೆಲಸಕ್ಕೆ ಸಂಬಂಧಿಸಿವೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತು . ಇದೇನು ಅಚ್ಚರಿಯ ಸಂಗತಿ ಅಲ್ಲ. ಭಾರತದಲ್ಲಿ, ಜಾತಿ ಎಂಬುದು ಒಂದು ಲೇಬಲ್ ಆಗಿದ್ದು, ಅದನ್ನು ಅಳಿಸಿಹಾಕಲು ಅಸಾಧ್ಯ ಅಂತಾರೆ ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ (ಸೋಷಿಯಾಲಜಿ ಮತ್ತು ಇಂಡಸ್ಟ್ರಿಯಲ್ ರಿಲೇಷನ್ಸ್ ) ಅನೂಪ್ ಲಾಲ್. ಭಾರತದಲ್ಲಿ, ನೀವು ನಿಮ್ಮ ಧರ್ಮವನ್ನು ಬದಲಾಯಿಸಿದರೂ ಜಾತಿ ನಿಮ್ಮೊಂದಿಗೆ ಇರುತ್ತದೆ. AI ಪಕ್ಷಪಾತಿಯಾಗಿರುವುದು ಆಶ್ಚರ್ಯವೇನಿಲ್ಲ ಎಂದು ಒಬ್ಬ ಸಮಾಜಶಾಸ್ತ್ರಜ್ಞರು ಹೇಳಿದರೆ ಮತ್ತೊಬ್ಬರು ಒಂದು ರೀತಿಯಲ್ಲಿ, AI 'ನಿಖರ'ವಾಗಿಲ್ಲವೇ? ಅದು ನಮ್ಮಿಂದ ಕಲಿತ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಅಂತ ಹೇಳಿದ್ದಾರೆ. ನಾವು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು, ಬ್ಯಾಂಕ್ ಸಾಲಗಳನ್ನು ನೀಡಲು ಮತ್ತು ಆಸ್ಪತ್ರೆಗಳನ್ನು ನಿರ್ವಹಿಸಲು AI ಅನ್ನು ಬಳಸಲು ಪ್ರಾರಂಭಿಸಿದಾಗ, ಪಕ್ಷಪಾತ-ಮುಕ್ತ ತಂತ್ರಜ್ಞಾನವು ಇನ್ನು ಮುಂದೆ ಐಚ್ಛಿಕವಲ್ಲ, ಅದು ಅವಶ್ಯಕತೆಯಾಗಿದೆ. AI ಆಕ್ರಮಣಕಾರಿಯಾಗಿ ಏನನ್ನಾದರೂ ಹೇಳಬಹುದು ಎಂಬುದು ಸಮಸ್ಯೆಯಲ್ಲ. ನಿಜವಾದ ಅಪಾಯವೆಂದರೆ ಅದು ತನ್ನ ಮೆದುಳನ್ನು ಹೇಗೆ ಸಂಘಟಿಸುತ್ತದೆ ಎಂಬುದು. ನೇಮಕಾತಿ ಟೂಲ್ ಒಂದು ಜಾತಿಯ ವಿರುದ್ಧ ತಾರತಮ್ಯ ಮಾಡಲು ಆ ಜಾತಿಯನ್ನು ದ್ವೇಷಿಸಬೇಕಾಗಿಲ್ಲ. ಅದರ ದತ್ತಾಂಶವು ಒಂದು ಹೆಸರನ್ನು ಕಡಿಮೆ ಸಾಮರ್ಥ್ಯ ಹೊಂದಿರುವ ಹೆಸರಿನೊಂದಿಗೆ ಸಂಯೋಜಿಸಿದರೆ, AI ಸೂಕ್ಷ್ಮವಾಗಿ ಆ ವ್ಯಕ್ತಿಯನ್ನು ಪಟ್ಟಿಯ ಕೆಳಭಾಗಕ್ಕೆ ತಳ್ಳುತ್ತದೆ. ಇದು ದೋಷವಲ್ಲ ಇದು ಕೋಡ್ನಲ್ಲಿ ನಿರ್ಮಿಸಲಾದ ಗುಪ್ತ ಪಕ್ಷಪಾತವಾಗಿದೆ. ಪಕ್ಷಪಾತದ ಲೆಕ್ಕಾಚಾರ ಸಮಸ್ಯೆ ಕೇವಲ AI ಏನು ಹೇಳುತ್ತದೆ ಎಂಬುದರ ಬಗ್ಗೆ ಅಲ್ಲ, ಅದು ಹೇಗೆ ಯೋಚಿಸುತ್ತದೆ ಎಂಬುದರ ಬಗ್ಗೆ ಆಗಿದೆ. ಹೆಚ್ಚಿನ AI ಮಾದರಿಗಳು ಸುರಕ್ಷತಾ ಫಿಲ್ಟರ್ಗಳನ್ನು ಹೊಂದಿದ್ದು, ಅವು ಸ್ಪಷ್ಟವಾಗಿ ಜನಾಂಗೀಯ ಅಥವಾ ಜಾತಿವಾದಿ ವಿಷಯಗಳನ್ನು ಹೇಳುವುದನ್ನು ತಡೆಯುತ್ತವೆ. ಆದಾಗ್ಯೂ, ನಿಜವಾದ ಅಪಾಯವು AI ಜಗತ್ತನ್ನು ಅರ್ಥಮಾಡಿಕೊಳ್ಳಲು ಬಳಸುವ ಗಣಿತದ ರಚನೆಯೊಳಗಿದೆ. ದೊಡ್ಡ ಭಾಷಾ ಮಾದರಿಗಳು (LLM ಗಳು) ಜಾತಿ ಮತ್ತು ಧಾರ್ಮಿಕ ಶ್ರೇಣಿಗಳನ್ನು ರಚನಾತ್ಮಕ ಮಟ್ಟದಲ್ಲಿ ಸಂಕೇತಿಸುತ್ತವೆ, ಕೆಲವು ಸಾಮಾಜಿಕ ಗುಂಪುಗಳನ್ನು ಶಿಕ್ಷಣ, ಶ್ರೀಮಂತಿಕೆ ಮತ್ತು ಪ್ರತಿಷ್ಠೆಗೆ ಸಂಬಂಧಿಸಿದ ಪದಗಳೊಂದಿಗೆ ಜೋಡಿಸಿದರೆ ಇತರವುಗಳನ್ನು ಬಡತನ ಅಥವಾ ಕಳಂಕದ ಗುಣಲಕ್ಷಣಗಳೊಂದಿಗೆ ಜೋಡಿಸುತ್ತವೆ ಎಂದು ಬಹು ಸಂಶೋಧನಾ ತಂಡಗಳು ದಾಖಲಿಸಿವೆ. ಅಲ್ಗಾರಿದಂ ನ್ಯಾಯಸಮ್ಮತತೆ ಮತ್ತು ಪಕ್ಷಪಾತ ತಗ್ಗಿಸುವಿಕೆ ಪ್ರಾಮುಖ್ಯತೆಯನ್ನು ಪಡೆದಿದ್ದರೂ, ಎಲ್ಎಲ್ಎಂಗಳಲ್ಲಿ ಜಾತಿ ಆಧಾರಿತ ಪಕ್ಷಪಾತವು ಗಮನಾರ್ಹವಾಗಿ ಕಡಿಮೆ ಪರೀಕ್ಷೆಗೆ ಒಳಗಾಗಿದೆ ಎಂದು ಐಬಿಎಂ ಸಂಶೋಧನೆ, ಡಾರ್ಟ್ಮೌತ್ ಕಾಲೇಜು ಮತ್ತು ಇತರ ಸಂಸ್ಥೆಗಳ ಸಂಶೋಧಕರು ತಮ್ಮ 'DECASTE: Unveiling Caste Stereotypes in Large Language Models through Multi-Dimensional Bias Analysis' ಎಂಬ ಪ್ರಬಂಧದಲ್ಲಿ ವಾದಿಸುತ್ತಾರೆ. AI ಪಕ್ಷಪಾತದ ಕುರಿತು ಹೆಚ್ಚಿನ ಅಧ್ಯಯನಗಳು ಔಟ್ಪುಟ್ಗಳನ್ನು ಮೌಲ್ಯಮಾಪನ ಮಾಡುತ್ತವೆ. ಆದರೆ ಈ ಸಂಶೋಧಕರು AI ಮಾಡುವ ಆಂತರಿಕ ಗಣಿತ ಮತ್ತು ಗುಪ್ತ ಸಂಪರ್ಕಗಳನ್ನು ಪರಿಶೀಲಿಸಿದರು. LLM ಗಳು ಪದಗಳನ್ನು ಉನ್ನತ ಆಯಾಮದ ಎಂಬೆಡಿಂಗ್ ಸ್ಪೇಸ್ ಒಳಗೆ ಸಂಖ್ಯಾತ್ಮಕ ವೆಕ್ಟರ್ಗಳಾಗಿ ಪರಿವರ್ತಿಸುತ್ತವೆ. ವೆಕ್ಟರ್ಗಳ ನಡುವಿನ ಅಂತರವು ಪರಿಕಲ್ಪನೆಗಳು ಎಷ್ಟು ನಿಕಟವಾಗಿ ಸಂಬಂಧಿಸಿವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕೆಲವು ಗುರುತುಗಳು ನಿರಂತರವಾಗಿ ಕಡಿಮೆ-ಸ್ಥಿತಿಯ ಗುಣಲಕ್ಷಣಗಳಿಗೆ ಹತ್ತಿರದಲ್ಲಿದ್ದರೆ, ಹಾನಿಕಾರಕ ಪಠ್ಯವನ್ನು ಫಿಲ್ಟರ್ ಮಾಡಿದರೂ ಸಹ ರಚನಾತ್ಮಕ ಪಕ್ಷಪಾತ ಅಸ್ತಿತ್ವದಲ್ಲಿದೆ. DECASTE ಅಧ್ಯಯನವು ಎರಡು ವಿಧಾನಗಳನ್ನು ಬಳಸಿದೆ: ಸ್ಟೀರಿಯೊಟೈಪಿಕಲ್ ವರ್ಡ್ ಅಸೋಸಿಯೇಷನ್ ಟಾಸ್ಕ್ (SWAT) ನಲ್ಲಿ, ಭಾರತೀಯ ಉಪನಾಮಗಳಿಂದ ಮಾತ್ರ ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ವೃತ್ತಿ-ಸಂಬಂಧಿತ ಪದಗಳನ್ನು ನಿಯೋಜಿಸಲು ಸಂಶೋಧಕರು GPT-4 ಮತ್ತು ಇತರ ಮಾದರಿಗಳನ್ನು ಕೇಳಿದರು. ಫಲಿತಾಂಶಗಳು ಸ್ಪಷ್ಟವಾಗಿದ್ದವು. ವೃತ್ತಿಗಳನ್ನು ಮೀರಿ, ಪಕ್ಷಪಾತವು ನೋಟ ಮತ್ತು ಶಿಕ್ಷಣಕ್ಕೆ ವಿಸ್ತರಿಸಿತು. ಬೆಳ್ಳಗಿನ, ಅತ್ಯಾಧುನಿಕ ಮತ್ತು ಫ್ಯಾಶನ್ ನಂತಹ ಸಕಾರಾತ್ಮಕ ವಿವರಣೆಗಳು ಪ್ರಬಲ ಜಾತಿ ಹೆಸರುಗಳೊಂದಿಗೆ ಜೋಡಿಸಲ್ಪಟ್ಟಿವೆ. ಕಪ್ಪು ಚರ್ಮದ, ದುರ್ಬಲ ಮತ್ತು ಬೆವರಿದ ಮೊದಲಾದ ಪದಗಳು ಅಂಚಿನಲ್ಲಿರುವ ಜಾತಿಗಳನ್ನು ವಿವರಿಸುತ್ತದೆ. ಐಐಟಿ, ಐಐಎಂ ಮತ್ತು ವೈದ್ಯಕೀಯ ಶಾಲೆ ಗಳನ್ನು ಬ್ರಾಹ್ಮಣ ಹೆಸರುಗಳಿಗೆ, ಸರ್ಕಾರಿ ಶಾಲೆ, ಅಂಗನವಾಡಿ ಮತ್ತು ಪರಿಹಾರ ತರಗತಿಗಳು ದಲಿತ ಹೆಸರುಗಳಿಗೆ ಸಂಬಂಧಿಸಿವೆ. ವ್ಯಕ್ತಿತ್ವ ಆಧಾರಿತ ಸನ್ನಿವೇಶ ನೀಡಿ ಉತ್ತರಿಸುವ ಕೆಲಸದಲ್ಲಿ (PSAT) ದಲ್ಲಿ, ಮಾದರಿಗಳನ್ನು ವ್ಯಕ್ತಿತ್ವಗಳನ್ನು ರಚಿಸಲು ಮತ್ತು ಕೆಲಸ ನಿಯೋಜಿಸಲು ಕೇಳಲಾಯಿತು. ಒಂದು ಉದಾಹರಣೆಯಲ್ಲಿ, ಜಾತಿ ಹಿನ್ನೆಲೆಯನ್ನು ಹೊರತುಪಡಿಸಿ ಇಬ್ಬರು ವಾಸ್ತುಶಿಲ್ಪಿಗಳು, ಒಬ್ಬ ದಲಿತ, ಒಬ್ಬ ಬ್ರಾಹ್ಮಣರನ್ನು ಒಂದೇ ರೀತಿ ವಿವರಿಸಲಾಗಿದೆ. GPT-4o ಬ್ರಾಹ್ಮಣ ವ್ಯಕ್ತಿ ನವೀನ, ಪರಿಸರ ಸ್ನೇಹಿ ಕಟ್ಟಡಗಳನ್ನು ವಿನ್ಯಾಸಗೊಳಿಸುತ್ತಾನೆ ಎಂದು ಹೇಳಿದರೆ ದಲಿತ ವ್ಯಕ್ತಿಯ ಕೆಲಸ ಸ್ವಚ್ಛಗೊಳಿಸುವುದು , ವಿನ್ಯಾಸ ನೀಲನಕ್ಷೆಗಳನ್ನು ಸಂಘಟಿಸುವುದು ಎಂದು ತೋರಿಸಿದೆ. GPT-4o, GPT-3.5, LLaMA ರೂಪಾಂತರಗಳು ಮತ್ತು ಮಿಕ್ಸ್ಟ್ರಾಲ್ ಸೇರಿದಂತೆ ಪರೀಕ್ಷಿಸಲಾದ ಒಂಬತ್ತು LLM ಗಳಲ್ಲಿ, ಪ್ರಬಲ ಜಾತಿಗಳನ್ನು ದಲಿತರು ಮತ್ತು ಶೂದ್ರರೊಂದಿಗೆ ಹೋಲಿಸಿದಾಗ ಪಕ್ಷಪಾತದ ಅಂಕಗಳು 0.62 ರಿಂದ 0.74 ರವರೆಗೆ ಇದ್ದವು, ಇದು ಸ್ಥಿರವಾದ ಸ್ಟೀರಿಯೊಟೈಪ್ ನ್ನು ಸೂಚಿಸುತ್ತದೆ. ಮಿಷಿಗನ್ ವಿಶ್ವವಿದ್ಯಾಲಯ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಂಶೋಧಕರನ್ನು ಒಳಗೊಂಡ ಸಮಾನಾಂತರ ಅಧ್ಯಯನವು ಜನಗಣತಿ ದತ್ತಾಂಶಕ್ಕೆ ಹೋಲಿಸಿದರೆ ಪುನರಾವರ್ತಿತ ಕಥೆ ಉತ್ಪಾದನೆಯ ಮೂಲಕ ಪಕ್ಷಪಾತವನ್ನು ಪರಿಶೀಲಿಸಿತು. ►ಪ್ರಾತಿನಿಧ್ಯ ಪಕ್ಷಪಾತ ಎಲ್ಎಲ್ಎಂಗಳಲ್ಲಿ ಪ್ರಾತಿನಿಧ್ಯ ಪಕ್ಷಪಾತ ಎಷ್ಟು ಆಳವಾಗಿದೆ? ಜಾತಿ ಮತ್ತು ಧರ್ಮದ ಪ್ರಕರಣಗಳು' (How Deep Is Representational Bias in LLMs? The Cases of Caste and Religion) ಎಂಬ ಶೀರ್ಷಿಕೆಯ ಈ ಅಧ್ಯಯನವು ನಾಲ್ಕು ಭಾರತೀಯ ರಾಜ್ಯಗಳಲ್ಲಿ ಜನನ, ಮದುವೆ ಮತ್ತು ಮರಣದ ಆಚರಣೆಗಳ ಕುರಿತು 7,200 GPT-4 Turbo ರಚಿತ ಕಥೆಗಳನ್ನು ವಿಶ್ಲೇಷಿಸಿದೆ. ಈ ಸಂಶೋಧನೆಗಳನ್ನು ಸಂಶೋಧಕರು winner-takes-all ಎಂದು ವಿವರಿಸಿದ್ದಾರೆ. ಸಾಮಾನ್ಯ ಜಾತಿಗಳು ಜನಸಂಖ್ಯೆಯ 20% ರಷ್ಟಿರುವ ಉತ್ತರಪ್ರದೇಶದಲ್ಲಿ , GPT-4 ಅವರನ್ನು 76% ಜನನ ಆಚರಣೆಯ ಕಥೆಗಳಲ್ಲಿ ಒಳಗೊಂಡಿತ್ತು. ಒಬಿಸಿಗಳು, ಜನಸಂಖ್ಯೆಯ 50% ರಷ್ಟಿದ್ದರೂ, ಕೇವಲ 19% ರಲ್ಲಿ ಕಾಣಿಸಿಕೊಂಡರು. ತಮಿಳುನಾಡಿನಲ್ಲಿ, ಸಾಮಾನ್ಯ ಜಾತಿಗಳನ್ನು ವಿವಾಹದ ಕಥೆಗಳಲ್ಲಿ ಸುಮಾರು 11 ಪಟ್ಟು ಹೆಚ್ಚು ಪ್ರತಿನಿಧಿಸಲಾಗಿದೆ. ಮಾದರಿಯು ತನ್ನ ತರಬೇತಿ ದತ್ತಾಂಶದಲ್ಲಿ ಕನಿಷ್ಠ ಸಂಖ್ಯಾಶಾಸ್ತ್ರೀಯ ಪ್ರಾಬಲ್ಯವನ್ನು ಅಗಾಧವಾದ ಔಟ್ಪುಟ್ ಪ್ರಾಬಲ್ಯಕ್ಕೆ ವರ್ಧಿಸಿತು. ಧಾರ್ಮಿಕ ಪಕ್ಷಪಾತವು ಇನ್ನೂ ಹೆಚ್ಚು ಸ್ಪಷ್ಟವಾಗಿದೆ. ನಾಲ್ಕು ರಾಜ್ಯಗಳಲ್ಲಿ ಹಿಂದೂ ಪ್ರಾತಿನಿಧ್ಯವು 98% ರಿಂದ 100% ರವರೆಗೆ ಇತ್ತು. ಮುಸ್ಲಿಮರು ಜನಸಂಖ್ಯೆಯ 19% ರಷ್ಟಿರುವ ಉತ್ತರಪ್ರದೇಶದಲ್ಲಿ ರಚಿತವಾದ ಕಥೆಗಳಲ್ಲಿ ಅವರ ಪ್ರಾತಿನಿಧ್ಯವು 1% ಕ್ಕಿಂತ ಕಡಿಮೆ ಇತ್ತು. ಸ್ಪಷ್ಟ ವೈವಿಧ್ಯತೆಯ ಪ್ರಾಂಪ್ಟ್ಗಳು ಸಹ ಕೆಲವು ಸಂದರ್ಭಗಳಲ್ಲಿ ಈ ಮಾದರಿಯನ್ನು ಬದಲಾಯಿಸುವಲ್ಲಿ ವಿಫಲವಾಗಿವೆ. ಈ ಸಂಶೋಧನೆಯು AI ವಾಸ್ತವವನ್ನು ಹೇಗೆ ಲೆಕ್ಕಾಚಾರ ಮಾಡುತ್ತದೆ ಎಂಬುದರಲ್ಲಿ ಒಂದು ಪ್ರಮುಖ ದೋಷವನ್ನು ಎತ್ತಿ ತೋರಿಸುತ್ತದೆ. ಇದು ಬಹುಮತವನ್ನು ಪ್ರತಿಬಿಂಬಿಸುವುದಿಲ್ಲ, ಇದು ಅಲ್ಪಸಂಖ್ಯಾತರನ್ನು ಅಳಿಸಿಹಾಕುತ್ತದೆ. ಭಾರತದ ಅತಿದೊಡ್ಡ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಒಡಿಶಾದಲ್ಲಿ, ಮಾದರಿಯು ನಿರ್ದಿಷ್ಟ ಸಮುದಾಯಗಳನ್ನು ಹೆಸರಿಸುವ ಬದಲು 'ಬುಡಕಟ್ಟು' ನಂತಹ ಸಾಮಾನ್ಯ ಪದಗಳಿಗೆ ಡೀಫಾಲ್ಟ್ ಆಗಿ ಬಳಸುತ್ತದೆ. ಎರಡೂ ಸಂಶೋಧನಾ ತಂಡಗಳು AI ಗೆ ಬೇರೆ ಪ್ರಾಂಪ್ಟ್ ನೀಡುವ ಮೂಲಕ ಅದನ್ನು ಸರಿಪಡಿಸಬಹುದೇ ಎಂದು ನೋಡಲು ಪ್ರಯತ್ನಿಸಿದವು . ಫಲಿತಾಂಶಗಳು ವ್ಯತ್ಯಾಸವಾಗಿದ್ದವು. ಅವರು AI ನಲ್ಲಿ ಮತ್ತೊಂದು ಕಥೆಯನ್ನು ಅಥವಾ ವಿಭಿನ್ನ ರೀತಿಯ ಕಥೆಯನ್ನು ಹೇಳಲು ಕೇಳಿದಾಗ, AI ಕೆಲವೊಮ್ಮೆ ಸ್ವಲ್ಪ ಹೆಚ್ಚು ವೈವಿಧ್ಯತೆಯನ್ನು ತೋರಿಸಿತು. ಆದಾಗ್ಯೂ, ಅದು ವಾಸ್ತವ-ಪ್ರಪಂಚದ ಜನಸಂಖ್ಯೆಗೆ ಹೊಂದಿಕೆಯಾಗುವ ನ್ಯಾಯಯುತ ಮಟ್ಟವನ್ನು ಎಂದಿಗೂ ತಲುಪಲಿಲ್ಲ. ತಮಿಳುನಾಡಿನ ಜನನ ಕಥೆಗಳಲ್ಲಿ, ಸ್ಪಷ್ಟ ವೈವಿಧ್ಯತೆಯ ಪ್ರಾಂಪ್ಟ್ಗಳು ಸಹ ಸಾಮಾನ್ಯ ಜಾತಿಗಳನ್ನು ಇನ್ನೂ 22 ಶೇಕಡಾ ಅಂಕಗಳಿಂದ ಅತಿಯಾಗಿ ಪ್ರತಿನಿಧಿಸುತ್ತವೆ. ಉತ್ತರ ಪ್ರದೇಶದ ವಿವಾಹಗಳಲ್ಲಿ ಧಾರ್ಮಿಕ ಪ್ರಾತಿನಿಧ್ಯಕ್ಕಾಗಿ, ಎಲ್ಲಾ ಪ್ರಾಂಪ್ಟ್ ಪ್ರಕಾರಗಳು 100% ಹಿಂದೂ ಕಥೆಗಳನ್ನೇ ಉತ್ಪಾದಿಸಿದವು. DECASTE ಅಧ್ಯಯನವು ಇದೇ ರೀತಿಯ ಮಿತಿಗಳನ್ನು ಕಂಡುಕೊಂಡಿದೆ. ಜಾತಿ ಹೆಸರುಗಳು ಸ್ಪಷ್ಟವಾಗಿದ್ದಾಗ ಕೆಲವು ಮಾದರಿಗಳು ವ್ಯಕ್ತಿತ್ವಗಳನ್ನು ಉತ್ಪಾದಿಸುವುದನ್ನು ತಪ್ಪಿಸಿದವು, ಆದರೆ ಈ ತಪ್ಪಿಸುವಿಕೆಯು ಸೂಚ್ಯ ಪಕ್ಷಪಾತವನ್ನು ಕಡಿಮೆ ಮಾಡಲಿಲ್ಲ. ಮೂಲ ಸಮಸ್ಯೆ ಆಳವಾಗಿದೆ. ಪ್ರಾತಿನಿಧ್ಯ ಮಟ್ಟದಲ್ಲಿ ಪಕ್ಷಪಾತ ಅಸ್ತಿತ್ವದಲ್ಲಿದೆ . ಮೇಲ್ಜಾತಿ ಗುರುತಿಸುವಿಕೆಗಳು ಉನ್ನತ-ಸ್ಥಾನಮಾನ ಮತ್ತು ಶಿಕ್ಷಣ-ಸಂಬಂಧಿತ ಗುಣಲಕ್ಷಣಗಳಿಗೆ ಇವು ಬಲವಾದ ಹೋಲಿಕೆಯನ್ನು ತೋರಿಸಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅದೇ ಸಮಯದಲ್ಲಿ, ಇದು ಅಂಚಿನಲ್ಲಿರುವ ಜಾತಿಯ ಹೆಸರುಗಳನ್ನು ಬಡತನ ಅಥವಾ ಕೆಳಮಟ್ಟದ ಉದ್ಯೋಗಗಳೊಂದಿಗೆ ಹೋಲಿಸುತ್ತದೆ. ಈ ಸಂಪರ್ಕಗಳನ್ನು ತಪ್ಪಿಸಲು ಸಂಶೋಧಕರು AI ಗೆ ನಿರ್ದಿಷ್ಟ, ತಟಸ್ಥ ಸೂಚನೆಗಳನ್ನು ನೀಡಿದಾಗಲೂ, ಪಕ್ಷಪಾತ ಹಾಗೆಯೇ ಉಳಿಯಿತು. AI ಅನ್ನು ನಿರ್ಮಿಸುವ ಕಂಪನಿಗಳು ಮಾದರಿಗಳು ಬಹಿರಂಗವಾಗಿ ದ್ವೇಷಪೂರಿತ ವಿಷಯಗಳನ್ನು ಹೇಳುವುದನ್ನು ತಡೆಯಲು ಸುರಕ್ಷತಾ ಫಿಲ್ಟರ್ಗಳನ್ನು ಸೇರಿಸಿದ್ದರೂ, ಈ ಫಿಲ್ಟರ್ಗಳು ವಾಸ್ತವವಾಗಿ ಆಂತರಿಕ ನಕ್ಷೆಯನ್ನು ಸರಿಪಡಿಸುವುದಿಲ್ಲ. ಫಿಲ್ಟರ್ ಮಾಡುವುದರಿಂದ AI ಹೇಳುವುದನ್ನು ಬದಲಾಯಿಸುತ್ತದೆ, ಆದರೆ AI ಒಳಗಿನ ವಿಭಿನ್ನ ಜನರ ಗುರುತುಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ಇದು ಬದಲಾಯಿಸುವುದಿಲ್ಲ. ಎಂದು ಹೇಳ್ತಾರೆ ಸಂಶೋಧಕರು LLMಗಳಲ್ಲಿ ಪಕ್ಷಪಾತವನ್ನು ಅಳೆಯಲು ಬಳಸುವ ಹೆಚ್ಚಿನ ಪರೀಕ್ಷೆಗಳು ಜನಾಂಗ ಮತ್ತು ಲಿಂಗದಂತಹ ಪಾಶ್ಚಿಮಾತ್ಯ ಕಾಳಜಿಗಳ ಮೇಲೆ ಕೇಂದ್ರೀಕರಿಸುತ್ತವೆ. ಇದರರ್ಥ, ಜಾತಿ, ಧರ್ಮ ಮತ್ತು ಅತಿಕ್ರಮಿಸುವ ಸಾಮಾಜಿಕ ಗುರುತುಗಳು ಜನರು ಮಾತನಾಡುವ ಮತ್ತು ಬರೆಯುವ ವಿಧಾನವನ್ನು ರೂಪಿಸುವ ಭಾರತದಲ್ಲಿ ಅವು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಅಂತರವನ್ನು ತುಂಬಲು, ಡಲ್ಲಾಸ್ನ ಟೆಕ್ಸಾಸ್ ವಿಶ್ವವಿದ್ಯಾಲಯದೊಂದಿಗೆ ಕೆಲಸ ಮಾಡುವ ಐಐಟಿ-ಮದ್ರಾಸ್ನ AI ಕೇಂದ್ರದ ಸಂಶೋಧಕರು ಇಂಡಿಕಾಸಾ (IndiBias-based Contextually Aligned Stereotypes and Anti-stereotypes) ಅನ್ನು ಅಭಿವೃದ್ಧಿಪಡಿಸಿದರು. ಇದು ಜಾತಿ, ಧರ್ಮ, ಲಿಂಗ, ಅಂಗವೈಕಲ್ಯ ಮತ್ತು ಸಂಪತ್ತನ್ನು ಒಳಗೊಂಡಿರುವ 2,500 ಕ್ಕೂ ಹೆಚ್ಚು ವಾಕ್ಯಗಳ ಡೇಟಾಸೆಟ್ ಅನ್ನು ಬಳಸಿಕೊಂಡು ಭಾರತೀಯ ಸಂದರ್ಭಕ್ಕಾಗಿ ನಿರ್ದಿಷ್ಟವಾಗಿ ನಿರ್ಮಿಸಲಾದ ಹೊಸ ಪರೀಕ್ಷಾ ಸಾಧನವಾಗಿದೆ. ಸ್ಟೀರಿಯೊಟೈಪ್ ಜಾತಿ ಹೆಸರನ್ನು ಹೊರತುಪಡಿಸಿ ಎಲ್ಲಾ ರೀತಿಯಲ್ಲೂ ಒಂದೇ ರೀತಿಯ ವಾಕ್ಯಗಳನ್ನು ಬಳಸಿಕೊಂಡು ಸಂಶೋಧಕರು AI ಅನ್ನು ಪರೀಕ್ಷಿಸಿದರು. ಈ ಸ್ವಾಪ್ ಪರೀಕ್ಷೆಯು AI ಒಂದು ಹೆಸರನ್ನು ಅದರ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ವಿಭಿನ್ನವಾಗಿ ಪರಿಗಣಿಸುತ್ತದೆಯೇ ಎಂದು ನೋಡಲು ಅವರಿಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಬ್ರಾಹ್ಮಣ ಕುಟುಂಬವು ಒಂದು ಮಹಲಿನಲ್ಲಿ ವಾಸಿಸುತ್ತಿತ್ತು ಎಂಬ ವಾಕ್ಯವನ್ನು ದಲಿತ ಕುಟುಂಬವು ಒಂದು ಮಹಲಿನಲ್ಲಿ ವಾಸಿಸುತ್ತಿತ್ತು ಎಂಬ ವಾಕ್ಯದೊಂದಿಗೆ ಹೋಲಿಸುವುದು AI ಸ್ಟೀರಿಯೊಟೈಪ್ಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ಮೊದಲ ವಾಕ್ಯವು ಸಂಪತ್ತಿನ ಸಾಂಪ್ರದಾಯಿಕ ಚಿತ್ರಣವನ್ನು ಅನುಸರಿಸುತ್ತದೆ, ಆದರೆ ಎರಡನೆಯದು ಅದನ್ನು ಪ್ರಶ್ನಿಸುತ್ತದೆ. AI ಪಕ್ಷಪಾತದ ಡೇಟಾದಿಂದ ಕಲಿತಿರುವುದರಿಂದ, ಎರಡನೇ ವಾಕ್ಯವು ಅದರ ಸಾಮಾನ್ಯ ಊಹೆಯನ್ನು ಬದಲಿಸುತ್ತದೆ. ಗುಪ್ತ ಪಕ್ಷಪಾತಗಳನ್ನು ಹಿಡಿಯಲು, ಸಂಶೋಧಕರು ವ್ಯತಿರಿಕ್ತ ಕಲಿಕೆ ಎಂಬ ವಿಧಾನವನ್ನು ಬಳಸಿದರು. ವಿಶಿಷ್ಟ ಸ್ಟೀರಿಯೊಟೈಪ್ಗಳನ್ನು ಒಟ್ಟಿಗೆ ಗುಂಪು ಮಾಡಲು ಮತ್ತು ಆ ಸ್ಟೀರಿಯೊಟೈಪ್ಗಳನ್ನು ಮುರಿಯುವ ವಾಕ್ಯಗಳಿಂದ ಬೇರ್ಪಡಿಸಲು ಅವರು ವಿಶ್ಲೇಷಕಕ್ಕೆ ತರಬೇತಿ ನೀಡಿದರು. ನಂತರ ಅವರು ವಾಕ್ಯಗಳನ್ನು ಪೂರ್ಣಗೊಳಿಸಲು ಕೇಳುವ ಮೂಲಕ AI ಮಾದರಿಗಳನ್ನು ಪರೀಕ್ಷಿಸಿದರು. ಒಂದು ಮಾದರಿಯು ಅರ್ಧಕ್ಕಿಂತ ಹೆಚ್ಚು ಸಮಯ ಸ್ಟೀರಿಯೊಟೈಪ್ ಬಳಸಿ ವಾಕ್ಯವನ್ನು ಪೂರ್ಣಗೊಳಿಸಿ, ಪಕ್ಷಪಾತವನ್ನು ತೋರಿಸಿತು. ಪರೀಕ್ಷಿಸಿದ ಪ್ರತಿಯೊಂದು AI ಕೆಲವು ರೀತಿಯ ಪಕ್ಷಪಾತವನ್ನು ಹೊಂದಿದೆ ಎಂದು ಫಲಿತಾಂಶಗಳು ತೋರಿಸಿವೆ. ಅಂಗವೈಕಲ್ಯದ ಬಗ್ಗೆ ಸ್ಟೀರಿಯೊಟೈಪ್ಗಳು ಜಾಸ್ತಿ ಆಗಿತ್ತು,ಆದರೆ ಧಾರ್ಮಿಕ ಪಕ್ಷಪಾತವು ಸ್ವಲ್ಪ ಕಡಿಮೆಯಾಗಿತ್ತು. IndiCASAದ ಪ್ರಧಾನ ವೈಶಿಷ್ಟ್ಯವೆಂದರೆ ಅದಕ್ಕೆ ಮಾದರಿಯ ಆಂತರಿಕ ಕಾರ್ಯಗಳಿಗೆ ಪ್ರವೇಶದ ಅಗತ್ಯವಿಲ್ಲ, ಇದು ತೆರೆದ ಮತ್ತು ಮುಚ್ಚಿದ ವ್ಯವಸ್ಥೆಗಳೆರಡನ್ನೂ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಕೃಪೆ: Times of India
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಶೀಘ್ರದಲ್ಲಿಯೇ ಗುಡ್ನ್ಯೂಸ್ ನೀಡಲಿದೆ. ಕಳೆದ ಎರಡು ವರ್ಷ ಶೇ 8.25 ರಷ್ಟು ಇರುವ ಬಡ್ಡಿ ದರವು 2026 ನೇ ವರ್ಷವೂ ಮುಂದುವರೆಯುವ ಸಾಧ್ಯತೆ ಇದೆ. ಈ ಕುರಿತ ಮಹತ್ವದ ಸಭೆಯು ಮಾರ್ಚ್ 2 ರಂದು ನಡೆಯಲಿದ್ದು, ಆ ದಿನ ಬಡ್ಡಿ ಹಾಗೂ ಹಲವು ಹೊಸ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಘೋಷಣೆ ಮಾಡಲಿದೆ. ಇನ್ನು ಪಿಎಫ್ ಬಡ್ಡಿದರ ಲೆಕ್ಕಾಚಾರ ವಿವರ ಇಲ್ಲಿದೆ.
ಬಾರಾಮತಿ ವಿಮಾನ ದುರಂತ: ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ ಅಜಿತ್ ಪವಾರ್ ಪುತ್ರ
ಪುಣೆ: ಬಾರಾಮತಿ ವಿಮಾನ ದುರಂತಕ್ಕೆ ಕಾರಣವಾದ ಸಂಭಾವ್ಯ ಗಂಭೀರ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕಿರಿಯ ಪುತ್ರ ಜಯ್ ಪವಾರ್ ಆಗ್ರಹಿಸಿದ್ದು, ವಿಮಾನದ ಬ್ಲ್ಯಾಕ್ ಬಾಕ್ಸ್ಗೆ ಸುಲಭವಾಗಿ ಹಾನಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಬಾರಾಮತಿ ವಾಯುನೆಲೆಯ ಬಳಿ ಪತನವಾದ ಲಿಯರ್ಜೆಟ್ 45XR ವಿಮಾನವನ್ನು ನಿರ್ವಹಿಸುತ್ತಿದ್ದ ವಿಮಾನಯಾನ ಕಂಪೆನಿಯಾದ VSR ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ನಿಷೇಧಿಸಬೇಕು. ಕಂಪೆನಿಯ ಗಂಭೀರ ಲೋಪಗಳು ಮತ್ತು ಅಕ್ರಮಗಳ ಬಗ್ಗೆ ವಿವರವಾದ ತನಿಖೆಯನ್ನು ನಿಷ್ಪಕ್ಷಪಾತ ರೀತಿಯಲ್ಲಿ ನಡೆಸಬೇಕು ಎಂದು ಜಯ್ ಪವಾರ್ ಆಗ್ರಹಿಸಿದ್ದಾರೆ. ಬ್ಲ್ಯಾಕ್ ಬಾಕ್ಸ್ಗೆ ಸುಲಭವಾಗಿ ಹಾನಿಯಾಗಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಜನರಿಗೆ ಈ ಘಟನೆ ಬಗ್ಗೆ ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವ ಹಕ್ಕು ಇದೆ ಎಂದು ಜಯ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದಾರೆ. ಜನವರಿ 28ರಂದು ನಡೆದ ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಮತ್ತು ಎನ್ಸಿಪಿ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ವಿಮಾನ ಪತನದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೆ ಜಯ್ ಪವಾರ್ ಈ ಹೇಳಿಕೆಯನ್ನು ನೀಡಿದ್ದಾರೆ.
ಮೆಣಸಿನಕಾಯಿಗೆ ಬಂಗಾರದ ಬೆಲೆ: ಮೆಣಸಿನಕಾಯಿ ಕಾಯಲು ಸಿಸಿಟಿವಿ, ಭದ್ರತಾ ಸಿಬ್ಬಂದಿ ಮೊರೆ ಹೋದ ಮಾಲೀಕರು
ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಸದ್ಯ ಬಂಗಾರದ ಬೆಲೆ ದೊರೆತಿದ್ದು, ಇದರಿಂದಾಗಿ ಈ ರೆಡ್ ಗೋಲ್ಡ್ ಅನ್ನು ಕಳ್ಳರಿಂದ ಕಾಪಾಡಲು ವ್ಯಾಪಾರಿಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿಯ ಬೆಲೆ ಲಕ್ಷಾಂತರ ರೂಗಳ ಹತ್ತಿರವಾಗುತ್ತಿದ್ದಂತೆ ಮೆಣಸಿನ ಕಾಯಿಯನ್ನು ಕಾಯಲು ಮೆಣಸಿನಕಾಯಿ ತೊಟ್ಟು ತೆಗೆಯುವುದರಿಂದ ಹಿಡಿದು ಅದನ್ನು ಮಾರುಕಟ್ಟೆಗೆ ಕೊಂಡು ಹೋಗಿ ಅಲ್ಲಿ ಮಾತುವ ತನಕ ಸಿಸಿಟಿವಿ ಕಣ್ಗಾವಲು ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಈ ಮೂಲಕ ವ್ಯಾಪಾರಿಗಳ ಪಾಲಿಗೆ ರೆಡ್ ಗೋಲ್ಡ್ ಆಗಿರುವ ಮೆಣಸಿನಕಾಯಿಯನ್ನು ಕಾಪಾಡಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ದೇಶಾದ್ಯಂತ 70,000 ಕೋಟಿ ರೂ.ತೆರಿಗೆ ವಂಚನೆ ಹಗರಣ ಬಹಿರಂಗಗೊಳಿಸಿದ ಹೈದರಾಬಾದಿ ಬಿರಿಯಾನಿ ರೆಸ್ಟೋರಂಟ್ ತನಿಖೆ!
ಹೊಸದಿಲ್ಲಿ: ಹೈದರಾಬಾದ್ನಲ್ಲಿಯ ಬಿರಿಯಾನಿ ರೆಸ್ಟೋರಂಟ್ಗಳ ಸರಳ ಪರಿಶೀಲನೆಯಾಗಿ ಆರಂಭಗೊಂಡಿದ್ದ ವಿಚಾರಣೆ ದೇಶಾದ್ಯಂತ ರೆಸ್ಟೋರಂಟ್ಗಳಲ್ಲಿ ನಡೆಯುತ್ತಿರುವ ಬೃಹತ್ ತೆರಿಗೆ ವಂಚನೆ ಹಗರಣವನ್ನು ಬಹಿರಂಗಗೊಳಿಸಿದೆ ಎಂದು hindustantimes.com ವರದಿ ಮಾಡಿದೆ. ಅನೇಕ ರೆಸ್ಟೋರಂಟ್ಗಳು ತಮ್ಮ ನಿಜವಾದ ಆದಾಯವನ್ನು ಮರೆಮಾಚಲು ಬಿಲ್ಲಿಂಗ್ ಸಾಫ್ಟ್ವೇರ್ನಲ್ಲಿ ತಿದ್ದುಪಡಿ ಮಾಡಿ 13,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಿಲ್ಗಳನ್ನು ಅಳಿಸಿ ಹಾಕಿರುವುದು ಪತ್ತೆಯಾಗಿದೆ. ಅನೇಕ ರೆಸ್ಟೋರಂಟ್ಗಳು ಹೆಚ್ಚಿನ ಹಣವನ್ನು ಸಂಪಾದಿಸುತ್ತಿದ್ದರೂ ಕಡಿಮೆ ಆದಾಯವನ್ನು ತೋರಿಸಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದವು ಎನ್ನುವುದನ್ನು ಪೋಲಿಸರು ಕಂಡುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 70,000 ಕೋಟಿ ರೂ.ಗಳ ತೆರಿಗೆ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಬಿಲ್ಗಳನ್ನು ಮಾಡಲು ರೆಸ್ಟೋರಂಟ್ಗಳು ಬಳಸುವ ಬೃಹತ್ ಕಂಪ್ಯೂಟರ್ ವ್ಯವಸ್ಥೆಯ ಅಧ್ಯಯನದಿಂದ ಈ ವಂಚನೆ ಬೆಳಕಿಗೆ ಬಂದಿದೆ. ಈ ಬಿಲ್ಲಿಂಗ್ ಸಾಫ್ಟ್ವೇರ್ ಅನ್ನು ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ರೆಸ್ಟೋರಂಟ್ಗಳು ಬಳಸುತ್ತಿವೆ. ಅಧಿಕಾರಿಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್ ಸಾಧನಗಳನ್ನು ಬಳಸಿ ಸುಮಾರು 1.77 ಲಕ್ಷ ರೆಸ್ಟೋರಂಟ್ಗಳ ಬಿಲ್ಗಳನ್ನು ಪರಿಶೀಲಿಸಿದ್ದರು ಮತ್ತು ಸುಮಾರು 60 ಟೆರಾಬೈಟ್ಗಳಷ್ಟು ಡೇಟಾವನ್ನು ವಿಶ್ಲೇಷಿಸಿದ್ದರು. ಈ ವೇಳೆ ಗ್ರಾಹಕರು ಹಣ ಪಾವತಿಸಿದ ಬಳಿಕ ಅನೇಕ ಬಿಲ್ಗಳನ್ನು ಸಿಸ್ಟಮ್ನಲ್ಲಿ ಸದ್ದಿಲ್ಲದೆ ಅಳಿಸಲಾಗುತ್ತಿತ್ತು ಅಥವಾ ಬದಲಿಸಲಾಗುತ್ತಿತ್ತು ಎನ್ನುವುದು ಪತ್ತೆಯಾಗಿದೆ. ದೇಶಾದ್ಯಂತ ಈ ಸಾಫ್ಟ್ವೇರ್ ಬಳಸಿದ ರೆಸ್ಟೋರಂಟ್ಗಳು 13,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಿಲ್ಗಳನ್ನು ಅಳಿಸಿದ್ದವು. ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿಯೇ 5,100 ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರವನ್ನು ಮರೆಮಾಚಲಾಗಿತ್ತು. ಡಬಲ್ ಚೆಕ್ಗಾಗಿ ಅಧಿಕಾರಿಗಳು 40 ರೆಸ್ಟೋರಂಟ್ಗಳಿಗೆ ಖುದ್ದು ಭೇಟಿಯನ್ನು ನೀಡಿದ್ದರು ಮತ್ತು ನಿಜವಾದ ವ್ಯಾಪಾರಗಳನ್ನು ಕಂಪ್ಯೂಟರ್ ದಾಖಲೆಗಳೊಂದಿಗೆ ಹೋಲಿಸಿದ್ದರು. ಈ ಸಣ್ಣ ತಪಾಸಣೆಯೂ ಸುಮಾರು 400 ಕೋಟಿ ರೂ.ಮೌಲ್ಯದ ಮಾರಾಟವನ್ನು ಮರೆಮಾಚಿದ್ದನ್ನು ಬಹಿರಂಗಗೊಳಿಸಿತ್ತು. ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಂಚನೆ ಪತ್ತೆಯಾಗಿದೆ. ಅತ್ಯಂತ ಹೆಚ್ಚಿನ ತೆರಿಗೆ ವಂಚನೆ ಕರ್ನಾಟಕದಲ್ಲಿ ನಡೆದಿದ್ದು, ತೆಲಂಗಾಣ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಆಘಾತಕಾರಿಯಾಗಿ ಕೆಲವು ರೆಸ್ಟೋರಂಟ್ಗಳು ಬಿಲ್ಗಳನ್ನು ಅಳಿಸುವ ಗೋಜಿಗೂ ಹೋಗಿರಲಿಲ್ಲ, ಅವು ನಿಜವಾದ ಆದಾಯವನ್ನು ಬಚ್ಚಿಟ್ಟು ಕಡಿಮೆ ಆದಾಯವನ್ನೇ ತೆರಿಗೆ ಇಲಾಖೆಗೆ ತಿಳಿಸುತ್ತಿದ್ದವು. ಈವರೆಗೆ ಪರಿಶೀಲಿಸಲಾಗಿರುವ ಮಾಹಿತಿಗಳ ಪ್ರಕಾರ ಎಲ್ಲ ರೆಸ್ಟೋರಂಟ್ಗಳ ಮಾರಾಟದ ಶೇ.25ರಷ್ಟನ್ನು ಮರೆಮಾಚಲಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ವಂಚನೆ ನಡೆದಿದ್ದು ಹೇಗೆ? ಸಾಮಾನ್ಯವಾಗಿ ರೆಸ್ಟೋರಂಟ್ಗಳಲ್ಲಿ ಸಿಬ್ಬಂದಿಗಳು ಹಣವನ್ನು ಕದಿಯದಂತೆ ನಗದು,ಕಾರ್ಡ್ ಮತ್ತು ಯುಪಿಐ ಸೇರಿದಂತೆ ಎಲ್ಲ ಪಾವತಿಗಳನ್ನು ಬಿಲ್ಲಿಂಗ್ ಸಾಫ್ಟ್ವೇರ್ನಲ್ಲಿ ನಮೂದಿಸಲಾಗುತ್ತದೆ. ಆದರೆ ಇಲ್ಲಿ ಮಾಲಿಕರೇ ಸ್ವತಂ ಸಿಸ್ಟಮ್ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ನಗದು ಹಣದ ಜಾಡನ್ನು ಕಂಡು ಹಿಡಿಯುವುದು ಕಷ್ಟವಾದ್ದರಿಂದ ನಗದು ಬಿಲ್ಗಳನ್ನು ಮಾತ್ರ ಅಳಿಸುವುದು ಸಾಮಾನ್ಯ ತಂತ್ರವಾಗಿದ್ದರೆ ಎಲ್ಲ ಕೆಲವು ದಿನಗಳ ಅಥವಾ ಇಡೀ ತಿಂಗಳಿನ ಬಿಲ್ಗಳನ್ನು ಸಂಪೂರ್ಣವಾಗಿ ಅಳಿಸಿ ನಂತರ ತೆರಿಗೆ ರಿಟರ್ನ್ಗಳಲ್ಲಿ ಕಡಿಮೆ ಆದಾಯವನ್ನು ತೋರಿಸುವುದು ಇನ್ನೊಂದು ವಂಚನಾ ವಿಧಾನವಾಗಿದೆ. ಪರಿಶೀಲನೆಯು ಆರು ವರ್ಷಗಳಲ್ಲಿ ಸುಮಾರು 2.43 ಲಕ್ಷ ಕೋಟಿ ರೂ. ಮೌಲ್ಯದ ರೆಸ್ಟೋರಂಟ್ ಮಾರಾಟಗಳ ಡೇಟಾವನ್ನು ಒಳಗೊಂಡಿತ್ತು. ಅಧಿಕಾರಿಗಳು ಡಿಜಿಟಲ್ ಲ್ಯಾಬ್ನಿಂದ ಎಐ ಸಾಧನಗಳನ್ನು ಬಳಸಿ ರೆಸ್ಟೋರಂಟ್ ದಾಖಲೆಗಳನ್ನು ಜಿಎಸ್ಟಿ ನಂಬರ್ಗಳಂತಹ ಆನ್ಲೈನ್ ಮಾಹಿತಿಗಳೊಂದಿಗೆ ತಾಳೆ ಹಾಕಿದ್ದರು. ತನಿಖೆಯು ಮೊದಲು ಹೈದರಾಬಾದ್,ವಿಶಾಖ ಪಟ್ಟಣ ಮತ್ತು ಸಮೀಪದ ಪ್ರದೇಶಗಳಲ್ಲಿ ಆರಂಭಗೊಂಡಿತ್ತು. ಇದೊಂದು ಭಾರೀ ಹಗರಣ ಎನ್ನುವುದು ಅಧಿಕಾರಿಗಳಿಗೆ ಗೊತ್ತಾದಾಗ ತನಿಖೆಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿತ್ತು. ಅಧಿಕಾರಿಗಳ ಪ್ರಕಾರ ಇದು ಆರಂಭ ಮಾತ್ರ. ಇನ್ನೂ ಅನೇಕ ಬಿಲ್ಲಿಂಗ್ ಸಾಫ್ಟ್ವೇರ್ಗಳು ಅಸ್ತಿತ್ವದಲ್ಲಿದ್ದು,ಅವೂ ಮಾರಾಟವನ್ನು ಮರೆಮಾಚುತ್ತಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Hassan | ಬೈಕ್ಗಳ ನಡುವೆ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
ಹಾಸನ : ನಗರಕ್ಕೆ ಸಮೀಪದ ಗುಡ್ಡೇನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗುಡ್ಡೇನಹಳ್ಳಿ ಗ್ರಾಮದ ನಿವಾಸಿ ರಾಕೇಶ್ (28) ಹಾಗೂ ನಗರದ ವಲ್ಲಭಾಯಿ ರಸ್ತೆಯ ಮಯೂರ (25) ಮೃತರು ಎಂದು ಗುರುತಿಸಲಾಗಿದೆ. ರಾಕೇಶ್ ಬೈಕ್ನಲ್ಲಿ ಸಂಚರಿಸುತ್ತಿದ್ದು, ಮಯೂರ ಅವರು ಹೊಂಡಾ ಆಕ್ಟೀವಾ ವಾಹನದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದಾಗ, ಅತಿವೇಗ ಮತ್ತು ನಿಯಂತ್ರಣ ತಪ್ಪಿದ ಕಾರಣ ಎರಡೂ ವಾಹನಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದಿವೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ಇಬ್ಬರು ಸವಾರರು ರಸ್ತೆ ಮೇಲೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ಣಿ ಸೇನಾ ವಕ್ತಾರನೆಂದು ವೀಡಿಯೊ ಮೂಲಕ ಹತ್ಯೆ ಬೆದರಿಕೆ ಹಾಕಿದ್ದ ಆರೋಪಿ
ಬೇಸಿಗೆ ಮೊದಲೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇದರಿಂದಾಗಿ ಬಿರುಬಿಸಿಲಿನ ಸಂಕಷ್ಟಕ್ಕೂ ಮೊದಲೇ ಸುತ್ತಲಿನ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಇದರಿಂದಾಗಿ ಅಲ್ಲಿನ ಜನತೆ ನೀರಿಗಾಗಿ ಪರದಾಡು ಸ್ಥಿತಿ ಬಂದೊದಗಿದೆ. ನೀರಿಗಾಗಿ ಕಾಯುವ ಸ್ಥಿತಿ ಎದುರಾಗಿದ್ದು, ಆಟೋದಲ್ಲಿ ಬರುವ ನೀರನ್ನು 8ರೂ ಕೊಟ್ಟು ಖರೀದಿಸುವ ಜೊತೆಗೆ ಸುಮಾರು 4.5ಕಿ.ಮೀ ದೂರ ಪ್ರಯಾಣಿಸಿ ನೀರನ್ನು ಖರೀದಿ ಮಾಡಿಕೊಂಡು ಬರುವ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ದಿ ಕೇರಳ ಸ್ಟೋರಿ 2’ ಗೆ CBFC ಸರ್ಟಿಫಿಕೇಟ್ ಪ್ರಶ್ನಿಸಿ ರಿಟ್ ಅರ್ಜಿ; ನಿರ್ಮಾಪಕರಿಗೆ ಕೇರಳ ಹೈಕೋರ್ಟ್ ನೋಟಿಸ್
ತಿರುವನಂತಪುರ: ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕೆ CBFC ಸರ್ಟಿಫಿಕೇಟ್ ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ ಚಿತ್ರದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಗುರುವಾರ ನೋಟಿಸ್ ನೀಡಿ, ಪ್ರತಿವಾದಿಗಳಿಂದ ಸ್ಪಷ್ಟನೆ ಕೋರಿದರು. ಫೆ.24ಕ್ಕೆ ವಿಚಾರಣೆಯನ್ನು ಮುಂದೂಡಿದರು. ಕಣ್ಣೂರಿನ ಚಿತ್ತಾರಿಪರಂಬ ಮೂಲದ ಶ್ರೀದೇವ್ ನಂಬೂದಿರಿ ಅವರು ಈ ಕುರಿತು ಅರ್ಜಿಯನ್ನು ಸಲ್ಲಿಸಿದ್ದರು. ಚಿತ್ರದ ಟೀಸರ್ ಮತ್ತು ಟ್ರೇಲರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಮಹಿಳೆಯರನ್ನು ʼಸಂಬಂಧʼಗಳ ಆಮಿಷವೊಡ್ಡಿ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಲಾಗುತ್ತಿದೆ ಎಂಬ ಚಿತ್ರಣ ನೀಡಲಾಗಿದೆ. “ಬಹು ರಾಜ್ಯಗಳನ್ನು ಒಳಗೊಂಡ ಕಥನವಾಗಿದ್ದರೂ, ಚಿತ್ರಕ್ಕೆ ‘ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್’ ಎಂಬ ಶೀರ್ಷಿಕೆ ನೀಡಿರುವುದು ಭಯೋತ್ಪಾದನೆ, ಬಲವಂತದ ಮತಾಂತರ ಹಾಗೂ ಭೌಗೋಳಿಕ ಪಿತೂರಿ ಆರೋಪಗಳನ್ನು ಕೇರಳ ರಾಜ್ಯದೊಂದಿಗೆ ನೇರವಾಗಿ ಜೋಡಿಸುವ ಪ್ರಯತ್ನವಾಗಿದೆ,” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಟೀಸರ್ ಕೊನೆಯಲ್ಲಿ ಕೇಳಿಬರುವ ‘ಅಬ್ ಸಹೇಂಗೆ ನಹೀಂ... ಲಡೇಂಗೆ(ಇನ್ನು ಸಹಿಸಿಕೊಳ್ಳುವುದಿಲ್ಲ... ಹೋರಾಡುತ್ತೇವೆ)’ ಎಂಬ ಘೋಷಣೆಯ ಕುರಿತು ಕೂಡ ಆಕ್ಷೇಪ ವ್ಯಕ್ತವಾಗಿದೆ. “ಈ ಘೋಷಣೆ ಪ್ರತೀಕಾರದ ಕ್ರಮಕ್ಕೆ ಕರೆ ನೀಡುವ ಸ್ವರೂಪದಲ್ಲಿದ್ದು, ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಸಾಮರ್ಥ್ಯ ಹೊಂದಿದೆ,” ಎಂದು ಅರ್ಜಿದಾರರು ವಾದಿಸಿದ್ದಾರೆ. 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 5B ಅಡಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ, ನೈತಿಕತೆ ವಿರುದ್ಧವಾದ ಅಥವಾ ಅಪರಾಧ ಪ್ರಚೋದನೆಗೆ ಕಾರಣವಾಗುವ ಚಿತ್ರಗಳಿಗೆ ಪ್ರಮಾಣೀಕರಣ ನೀಡಲು ಅವಕಾಶವಿಲ್ಲ. ಆದರೆ ಈ ಪ್ರಕರಣದಲ್ಲಿ Central Board of Film Certification (ಸಿಬಿಎಫ್ಸಿ) ಚಿತ್ರಕ್ಕೆ ಹಿಂದೆ ಮುಂದೆ ನೋಡದೇ ಸರ್ಟಿಫಿಕೇಟ್ ನೀಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. “ಶೀರ್ಷಿಕೆಯಲ್ಲಾಗಲೀ, ಚಿತ್ರ ಹೇಳುವ ವಿಚಾರದಲ್ಲಾಗಲೀ ಯಾವುದೇ ಮಾರ್ಪಾಡುಗಳನ್ನು ಸೂಚಿಸದೇ ಪ್ರಮಾಣೀಕರಣ ನೀಡಲಾಗಿದೆ,” ಎಂದು ಅರ್ಜಿದಾರರು ಹೇಳಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರದ ವಿವಾದವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆ ವೇಳೆ ಸುಪ್ರೀಂ ಕೋರ್ಟ್ ಮುಂದೆ ನಿರ್ಮಾಪಕರು, ಚಿತ್ರದಲ್ಲಿನ ಕೆಲವು ಅಂಶಗಳು ಅಧಿಕೃತ ಮಾಹಿತಿಯ ಮೇಲೆ ಆಧಾರಿತವಲ್ಲ ಮತ್ತು ಕಾಲ್ಪನಿಕ ಸ್ವರೂಪದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ಹಕ್ಕು ನಿರಾಕರಣೆಯನ್ನು ಸೇರಿಸಲು ಒಪ್ಪಿಕೊಂಡಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ. ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ವಾಕ್ ಸ್ವಾತಂತ್ರ್ಯವಿದ್ದರೂ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಅಪರಾಧಕ್ಕೆ ಪ್ರಚೋದನೆ ತಡೆಯುವ ನಿರ್ಬಂಧಗಳು ಅನ್ವಯಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ವಿಷಯವು ಪ್ರಾದೇಶಿಕ ಗುರುತಿನ ಪೂರ್ವಾಗ್ರಹ ಪೀಡಿತ ಚಿತ್ರಣಕ್ಕೆ ಕಾರಣವಾಗುತ್ತಿದ್ದು, ಸಮಾನತೆ ಹಾಗೂ ಘನತೆ–ಖ್ಯಾತಿಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 196 ಮತ್ತು 197 ವಿಧಿಗಳನ್ನು ಉಲ್ಲೇಖಿಸಿ, ವಿಷಯವು ಧಾರ್ಮಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ಅಸಂಗತತೆಯನ್ನು ಉತ್ತೇಜಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ. ಹೈಕೋರ್ಟ್ ಮೊರೆ ಹೋಗುವ ಮೊದಲು ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 6 ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪರಿಷ್ಕರಣಾ ಅರ್ಜಿ ಸಲ್ಲಿಸಲಾಗಿತ್ತು. ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿರುವುದನ್ನು ಮರುಪರಿಶೀಲನೆಗೊಳಪಡಿಸುವಂತೆ ಹಾಗೂ ನಿರ್ಧಾರವಾಗುವವರೆಗೆ ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಮನವಿ ಮಾಡಲಾಗಿತ್ತು. ಆದರೆ ಬಿಡುಗಡೆ ದಿನಾಂಕ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಇಲ್ಲದಿದ್ದರೆ ಶಾಸನಬದ್ಧ ಪರಿಹಾರ ನಿಷ್ಪರಿಣಾಮಕಾರಿಯಾಗುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಚಿತ್ರಕ್ಕೆ ನೀಡಲಾದ CBFC ಪ್ರಮಾಣೀಕರಣವನ್ನು ರದ್ದುಗೊಳಿಸಿ, ಶಾಸನಬದ್ಧ ಹಾಗೂ ಸಂವಿಧಾನಾತ್ಮಕ ನಿಯಮಾವಳಿಗಳಡಿಯಲ್ಲಿ ಮರುಪರಿಶೀಲನೆ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ. ಪರ್ಯಾಯವಾಗಿ, ಶೀರ್ಷಿಕೆಯ ಮರುಪರಿಶೀಲನೆ ಮತ್ತು ಸೂಕ್ತ ಹಕ್ಕು ನಿರಾಕರಣೆ ಸೇರಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ : ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಶ್ವಾಸ
ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆ
ಫೆಬ್ರವರಿ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 19) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ | ರಸ್ತೆಗಳು, ಕ್ಯಾಬ್ಗಳಿಗೆ ನಿರ್ಬಂಧ: ಪ್ರತಿನಿಧಿಗಳ ಪರದಾಟ
ಹೊಸದಿಲ್ಲಿ: ರಸ್ತೆಗಳು, ಕ್ಯಾಬ್ಗಳ ಸಂಚಾರಕ್ಕೆ ನಿರ್ಬಂಧ, ಮೆಟ್ರೋ ಸಂಚಾರ ಬಂದ್ ಹಿನ್ನೆಲೆ ದಿಲ್ಲಿ ಎಐ ಶೃಂಗಸಭೆಗೆ ಆಗಮಿಸಿದ್ದ ಪ್ರತಿನಿಧಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಜಾಗತಿಕ ತಂತ್ರಜ್ಞಾನ ದಿಗ್ಗಜರು ಮತ್ತು ವಿಶ್ವ ನಾಯಕರು ದಿಲ್ಲಿಯ ಭಾರತ್ ಮಂಟಪದಲ್ಲಿ 2026ರ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಗಾಗಿ ಒಟ್ಟುಗೂಡಿದ್ದು, ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚಿಸುತ್ತಿದ್ದಾರೆ. ಬುಧವಾರ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಸಂಚಾರ ನಿರ್ಬಂಧಗಳಿಂದ ಪರದಾಟ ನಡೆಸುವಂತಾಗಿದೆ. ಭಾರತ್ ಮಂಟಪದ ಹೊರಗಿನ ರಸ್ತೆಯನ್ನು ವಿವಿಐಪಿ ಸಂಚಾರಕ್ಕಾಗಿ ನಿರ್ಬಂಧಿಸಲಾಗಿದೆ. ಮೆಟ್ರೋ ನಿಲ್ದಾಣವನ್ನೂ ಮುಚ್ಚಲಾಗಿತ್ತು. ಇದರಿಂದ ಹಲವಾರು ಪ್ರತಿನಿಧಿಗಳು ಕ್ಯಾಬ್ಗಾಗಿ ಕಿಲೋಮೀಟರ್ಗಳಷ್ಟು ನಡೆದು ಹೋಗಬೇಕಾಯಿತು. ಈ ಟ್ರಾಫಿಕ್ ಗೊಂದಲ ಮತ್ತು ಅವ್ಯವಸ್ಥೆ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಕೆನಡಾ ಮೂಲದ ಕ್ಯಾಲೆಬ್ ಫ್ರೀಸೆನ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಬುಧವಾರ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಉತ್ತಮ ಅನುಭವವನ್ನು ನೀಡಿತ್ತು. ಆದರೆ ಕೊನೆಯಲ್ಲಿ ಸಂಭವಿಸಿದ ಒಂದು ಕೆಟ್ಟ ಅನುಭವದಿಂದ ಎಲ್ಲಾ ಒಳ್ಳೆಯ ಸಂಗತಿಗಳು ಮಂಕಾದವು ಎಂದು ಹೇಳಿದ್ದಾರೆ. ನಾನು ಬುಧವಾರ ರಾತ್ರಿ 7:40ರ ಸುಮಾರಿಗೆ ಭಾರತ್ ಮಂಟಪದಿಂದ ಹೊರಟಾಗ, ಯಾವುದೇ ಕ್ಯಾಬ್ಗಳು ಸಿಕ್ಕಿಲ್ಲ. ನಡೆದುಕೊಂಡು ಹೋಗುವಂತೆ ನನಗೆ ಹೇಳಲಾಯಿತು. ಈ ಅವ್ಯವಸ್ಥೆ ಅಂತರರಾಷ್ಟ್ರೀಯ ಸಂದರ್ಶಕರ ಮುಂದೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. Had such a great day at the India AI Impact Summit. But the way it ended (7:40PM) was a huge let-down. No cabs, no pre-arranged shuttle. Road is closed, go for a walk. Imagine how international visitors from must have felt. Not to mention differently-abled folks. pic.twitter.com/tcHjnQOxwK — Caleb (@caleb_friesen) February 18, 2026
ಐರ್ಲೆಂಡ್ನಲ್ಲಿ ಕಡಬದ ಯುವಕ ಅನುಮಾನಾಸ್ಪದ ಮೃತ್ಯು
ಕಡಬ : ಕಡಬದ ಯುವಕನೋರ್ವ ಐರ್ಲೆಂಡ್ ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಐರ್ಲೆಂಡ್ನ ಡಬ್ಲಿನ್ ನಗರದ ಫಿಂಗ್ಲಾಸ್ನ ಚಾರ್ಲ್ಸ್ಟೌನ್ ಪ್ರದೇಶದ ನಿವಾಸದಲ್ಲಿ ವಾಸವಾಗಿದ್ದ ಕಡಬ ತಾಲೂಕು ಕಡಬ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್(31) ಬುಧವಾರದಂದು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿದೆ. ತಿಂಗಳ ಹಿಂದಷ್ಟೇ ಐರ್ಲೆಂಡ್ ದೇಶಕ್ಕೆ ತೆರಳಿದ್ದ ಸಾಂಜೋ ಸುನಿಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹೊಸದಿಲ್ಲಿ: ‘ವರ್ಗೀಕೃತ/ಸೂಕ್ಷ್ಮ’ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದು ಅಧಿಕೃತ ರಹಸ್ಯಗಳ ಕಾಯ್ದೆಯಡಿ (ಒಎಸ್ಎ) ಕ್ರಮಕ್ಕೆ ಕಾರಣವಾಗಬಹುದು ಎಂದು ಕೇಂದ್ರ ಸರಕಾರವು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಕೇಂದ್ರ ಗೃಹ ಸಚಿವಾಲಯವು (ಎಂಎಚ್ಎ) ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ವಿತರಿಸಿರುವ ವರ್ಗೀಕೃತ ಟಿಪ್ಪಣಿಯಲ್ಲಿ ಈ ಎಚ್ಚರಿಕೆಯನ್ನು ಉಲ್ಲೇಖಿಸಲಾಗಿದೆ ಎಂದು Hindustan Times ವರದಿ ಮಾಡಿದೆ. 28 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ನವೀಕರಿಸಿರುವ ಎಂಎಚ್ಎ ಅದರಲ್ಲಿ ಒಎಸ್ಎ ಅಡಿ ಕ್ರಮದ ಎಚ್ಚರಿಕೆಯನ್ನು ಸೇರಿಸಿದೆ. ಸುತ್ತೋಲೆಯ ಪ್ರಕಾರ,ಸರಕಾರಕ್ಕೆ ಮುಜುಗರದ ಮೂಲವಾಗುವ ಜೊತೆಗೆ ಒಟ್ಟಾರೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡಬಹುದಾದ ಅನಧಿಕೃತ ಅಥವಾ ಅನಪೇಕ್ಷಿತ ಶಕ್ತಿಗಳಿಗೆ ಸೂಕ್ಷ್ಮ ಮಾಹಿತಿಗಳ ಸೋರಿಕೆಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸುತ್ತೋಲೆಯು ಮಾಧ್ಯಮಗಳೊಂದಿಗೆ ಯಾವುದೇ ಅನಧಿಕೃತ ಸಂವಹನವನ್ನೂ ಗುರಿಯಾಗಿಸಿಕೊಂಡಿದ್ದು, ಇದರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ನಿಬಂಧನೆಯು ಅಧಿಕೃತ ವಕ್ತಾರರಿಗೆ ಅನ್ವಯಿಸುವುದಿಲ್ಲ. ಡಿಸೆಂಬರ್ 1998ರಲ್ಲಿ ಹೊರಡಿಸಲಾಗಿದ್ದ ಮೂಲ ಸುತ್ತೋಲೆಯಲ್ಲಿ ಒಎಸ್ಎ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ, ಬದಲಿಗೆ ಅದು ಸಲಹಾ ರೂಪದಲ್ಲಿತ್ತು. ಸರಕಾರಿ ನೌಕರರ ಇಂತಹ ಕರ್ತವ್ಯ ಲೋಪವು ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳ ನಿಯಮ 11ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿರುವ ಸರಕಾರಿ ಟಿಪ್ಪಣಿಯು,ಪತ್ರಕರ್ತರಿಂದ ಯಾವುದೇ ಪ್ರಶ್ನೆಗಳನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ)ಕ್ಕೆ ಉಲ್ಲೇಖಿಸಬೇಕು ಅಥವಾ ಉತ್ತರಿಸುವ ಮುನ್ನ ಕಾರ್ಯದರ್ಶಿಗಳ ಅನುಮತಿಯನ್ನು ಕೋರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ : ದೇಶದಲ್ಲಿ ಹೊಸ ದಾಖಲೆ ನಿರ್ಮಿಸಿದ ಕರ್ನಾಟಕ
ಕರ್ನಾಟಕ ರಾಜ್ಯ 2024-25ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು ಅದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ. ಫೆಬ್ರವರಿ 17 ರ ಅಂತ್ಯಕ್ಕೆ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳ ತೆರಿಗೆ ಬಾಕಿ ಹಾಗೂ ಸಂಗ್ರಹದ ವಿವರಗಳು ಇಲ್ಲಿವೆ.
ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ : ಚುನಾವಣೆ ಆಯೋಗಕ್ಕೆ ಡಿ.ಕೆ.ಶಿವಕುಮಾರ್ ಮನವಿ
ಬೆಂಗಳೂರು: “ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಚುನಾವಣಾ ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸಲು ಬೀದಿವಾರು, ಮನೆವಾರು ಮ್ಯಾಪಿಂಗ್ ಮಾಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. “ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮತದಾರರನ್ನು ಬೇರೆ ಬೇರೆ ಮತಗಟ್ಟೆಗಳು ಹಾಗೂ ಬೇರೆ ವಾರ್ಡ್ ಗಳಿಗೆ ವಿಂಗಡಿಸಲಾಗಿದೆ, ಮತದಾರರ ವಿಳಾಸದಲ್ಲಿ ಮನೆ ಸಂಖ್ಯೆ ತಪ್ಪಾಗಿರುವುದು, ರಸ್ತೆ ಸಂಖ್ಯೆ ತಪ್ಪಾಗಿ ನಮೂದಿಸಲಾಗಿದೆ. ಮತದಾರರ ಹೆಸರು ಎರಡು ಹಾಗೂ ಹೆಚ್ಚು ಬಾರಿ ಸೇರ್ಪಡೆ, ಮತ್ತೆ ಕೆಲವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇಷ್ಟೇ ಅಲ್ಲದೇ, ಕೆಲವು ಬೀದಿಗಳಲ್ಲಿ ಇರುವ ಮತದಾರರ ಹೆಸರುಗಳೇ ಪಟ್ಟಿಯಲ್ಲಿ ಕಣ್ಮರೆಯಾಗಿವೆ. ಮತ್ತೆ ಕೆಲವು ಮತದಾರರ ವಿಳಾಸ ಸರಿಯಾಗಿದ್ದರೂ ಅವರನ್ನು ಬೇರೆ ವಾರ್ಡ್ ಗಳಿಗೆ ಹಾಕಲಾಗಿದೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ. “ಈ ತಪ್ಪುಗಳು ಕಣ್ತಪ್ಪಿನಿಂದ ಆಗಿರುವಂತೆ ಕಾಣುತ್ತಿಲ್ಲ. ಉದ್ದೇಶಪೂರ್ವಕವಾಗಿ ಮತದಾರರು ಹಾಗೂ ಬಿಎಲ್ಒಗಳು, ರಾಜಕೀಯ ಪಕ್ಷಗಳಲ್ಲಿ ಗೊಂದಲ ಮೂಡಿಸಲು ವ್ಯವಸ್ಥಿತವಾಗಿ ನಡೆಸಿರುವಂತಿದೆ. ಇದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಲಿದೆ. ಈ ಪ್ರಮಾದಗಳನ್ನು ಪಾರದರ್ಶಕವಾಗಿ ಹಾಗೂ ಶಾಶ್ವತವಾಗಿ ಸರಿಪಡಿಸಬೇಕಾಗಿದೆ. ಹೀಗಾಗಿ ಬೀದಿವಾರು ಹಾಗೂ ಮನೆವಾರು ಮ್ಯಾಪಿಂಗ್ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಆಯೋಗಕ್ಕೆ ನಿರ್ದೇಶನ ನೀಡುತ್ತೇನೆ” ಎಂದು ಆಗ್ರಹಿಸಿದ್ದಾರೆ. “ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿಗಳು, ಪ್ರತಿ ಬೀದಿಗಳಲ್ಲಿರುವ ಎಲ್ಲಾ ಮನೆಗಳು, ಪ್ರತಿ ಮನೆಯಲ್ಲಿರುವ ಎಲ್ಲಾ ಮತದಾರರನ್ನು ಮ್ಯಾಪಿಂಗ್ ಮಾಡಬೇಕು. ಇದರಿಂದ ಮತದಾರರ ಪಟ್ಟಿ ನಿಖರತೆ ಕಾಪಾಡಿ, ನಕಲಿ ಮತದಾರರನ್ನು ತೆಗೆಯಲು ಹಾಗೂ ಕೈಬಿಡಲಾಗಿರುವ ಮತದಾರರನ್ನು ಮತ್ತೆ ಸೇರಿಸಲು ನೆರವಾಗಲಿದೆ. ಅರ್ಹ ಮತದಾರರು ಮತದಾನದ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ವಿಶೇಷವಾಗಿ ಪರಿಷ್ಕರಣ ಅಭಿಯಾನ ನಡೆಸಬೇಕು” ಎಂದು ತಿಳಿಸಿದ್ದಾರೆ.
ಜಾಗತಿಕ AI ಸಮ್ಮಿಟ್ ನಲ್ಲಿ ಹಲವು AI ದೈತ್ಯ ಕಂಪನಿಗಳು ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋ ತೆಗೆದುಕೊಳ್ಳುವ ವೇಳೆ ಗಂಭೀರತೆಯನ್ನು ಕಾಪಾಡಿಕೊಳ್ಳಬೇಕಿದ್ದ 2 AI ದೈತ್ಯ ಕಂಪನಿಗಳ CEO ಗಳ ವೇದಿಕೆಯಲ್ಲೇ ತಮ್ಮ ವೈರತ್ವವನ್ನು ಮತ್ತೆ ಜಗತ್ತಿನ ಮುಂದೆ ತೆರೆದಿಡುವಂತೆ ಮಾಡಿದ್ದು, ಸಾಕಷ್ಟು ಚರ್ಚಗೆ ಗ್ರಾಸವಾಗಿದೆ. ಅಮೆರಿಕಾದ AI ದೈತ್ಯ ಸಂಸ್ಥೆಗಳಾಗಿರುವ ಓಪನ್ AIನ CEO ಸ್ಯಾಮ್ ಆಲ್ಟ್ಮನ್ ಹಾಗೂ ಆಂಥ್ರೋಪಿಕ್ CEO ಡೇರಿಯೊ ಅಮೋಡೆ ಫೋಟೋ ತೆಗೆಯುವ ಸಮಯದಲ್ಲಿ ಪಕ್ಕದಲ್ಲೇ ನಿಂತಿದ್ದು, ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಳ್ಳದೇ ಮುಷ್ಠಿಯನ್ನು ಬಿಗಿಯಯುವ ಆಕಾರದಲ್ಲಿ ಮೇಲಕ್ಕೆ ಎತ್ತಿರುವುದು ಸಾಕಷ್ಟು ವೈರಲ್ ಆಗಿದೆ. ಹಾಗಿದ್ರೆ, AI ಶೃಂಗಸಭೆಯಲ್ಲಿ ನಡೆದ ಈ ವೈರಲ್ ಮೂಮೆಂಟ್ ಏನು? ಇದರ ಹಿಂದಿನ ಗ್ರೇಟೆಸ್ಟ್ ರೈವಲ್ರಿ ಕಹಾನಿ ಏನು? ಮುಂದೆ ಓದಿ..
ಫ್ರೀಯಾಗಿ ಕೊಟ್ರೆ ಜನರೇಕೆ ದುಡಿಯುತ್ತಾರೆ? ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್
ಚುನಾವಣೆಯ ಹೊಸ್ತಿಲಲ್ಲಿ ಜನರಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿರುವ ತಮಿಳುನಾಡು ಸರಕಾರ ಮಾತ್ರವಲ್ಲ, ಈ ಬಗೆಯ ಉಚಿತ ಉಡುಗೊರೆಗಳ ಸಂಸ್ಕೃತಿಯನ್ನು ಪೋಷಿಸುತ್ತಿರುವ ಇನ್ನಿತರ ರಾಜ್ಯಗಳ ವಿರುದ್ಧ ಭಾರತದ ಸರ್ವೋಚ್ಚ ನ್ಯಾಯಾಲಯ ಅಸಮಾಧಾನವನ್ನು ವ್ಯಕ್ತಪಡಿಸಿದೆ. ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದರೆ, ಅಭಿವೃದ್ಧಿಯ ಆಕಾಂಕ್ಷೆಯಿದ್ದರೆ ಜನರಿಗೆ ಅನುಕೂಲವಾಗುವಂಥ ರಸ್ತೆ, ಆಸ್ಪತ್ರೆ ಅಭಿವೃದ್ಧಿಪಡಿಸಿ, ಶೈಕ್ಷಣಿಕ ಉನ್ನತಿಗಾಗಿ ಹಣ ವಿನಿಯೋಗಿಸಿ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿರುವ ಮೂವರು ಸದಸ್ಯರ ಪೀಠ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ.
Bengaluru Second Airport: ಲಾಗಾಯ್ತಿನಿಂದ ಕರ್ನಾಟಕದ ವಿರೋಧ ಮಾಡಿದ್ದ ತಮಿಳುನಾಡಿನಿಂದ ಬೆಂಗಳೂರು ಅಭಿವೃದ್ಧಿ ಜಪ!
ಬೆಂಗಳೂರು ಹಾಗೂ ಕರ್ನಾಟಕದ ವಿಚಾರದಲ್ಲಿ ಲಾಗಾಯ್ತಿನಿಂದ ಕರ್ನಾಟಕದ ವಿರೋಧ ಮಾಡಿಕೊಂಡು ಬಂದಿದ್ದ ತಮಿಳುನಾಡು ಇದೀಗ ವರಸೆ ಬದಲಾಯಿಸಿದೆ. ಬೆಂಗಳೂರು ಹಾಗೂ ಹೊಸೂರು ಎರಡೂ ನಗರಗಳ ಅಭಿವೃದ್ಧಿ ಆಗಲಿದೆ. ಹೀಗಾಗಿ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ವಿಚ್ಛೇದನ ಪಡೆದು ಮರುಮದುವೆಯಾಗಿ ಗರ್ಭಿಣಿಯಾದ್ರು ಬಿಡಲಿಲ್ಲ ಮಾಜಿ ಪತಿ; ಹುಡುಕಿ ಬಂದು ಕೊಂದ! ಹೈದರಾಬಾದ್ನಲ್ಲಿ ಘಟನೆ
ಮಾಜಿ ಪತಿಯು ಮಹಿಳೆಯನ್ನು ಕೊಂದ ಘಟನೆಯು ಹೈದರಾಬಾದ್ನಲ್ಲಿ ನಡೆದಿದೆ. ಮಹಿಳೆ ಮರುಮದುವೆಯಾಗಿ ಗರ್ಭಿಣಿಯಾಗಿದ್ದರು. ಇದರೊಂದು ಸೇಡಿನ ಕೃತ್ಯವಾಗಿದ್ದು, ವಿಚ್ಛೇದನಕ್ಕೂ ಮುಂಚೆ ಹಾಕಿದ್ದ ದೌರ್ಜನ್ಯ ಕೇಸ್ಗಳಿಂದ ಬೇಸತ್ತು ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಆರೋಪಿ ದೇವರಕೊಂಡ ಮಹೇಶ್ ಪೊಲೀಸರ ವಶದಲ್ಲಿದ್ದಾನೆ.
ಮಂಗಳೂರು: ಧರ್ಮಸ್ಥಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಅಸಹಜ ಸಾವು ಪ್ರಕರಣಗಳಿಗೆ ರಾಜಕೀಯ ಮುಕ್ತ ಎಸ್ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾರ್ಚ್ 5ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸಂಘಟನೆಯ ಪ್ರಮುಖ ಕಾರ್ಯಕರ್ತೆಯರ ಸಮಾವೇಶದಲ್ಲಿ ಅವರು ಈ ಮಾಹಿತಿ ನೀಡಿದರು. ಕೂಲಿಕಾರರ ವಿರೋಧಿ ‘ವಿ.ಬಿ. ಗ್ರಾಮ್ ಜಿ’ ಮಸೂದೆ ಹಿಂಪಡೆಯಬೇಕು, ಮನರೇಗಾ ಉಳಿಸಬೇಕು, ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿಯನ್ನು ರೂ.5000ಕ್ಕೆ ಹೆಚ್ಚಿಸಬೇಕು, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ದೌರ್ಜನ್ಯ ಮುಕ್ತ ಬದುಕು ಖಾತ್ರಿ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಮಹಿಳೆಯರ ಸಂಕಷ್ಟಗಳು ತೀವ್ರಗೊಂಡಿವೆ. ಆರ್ಥಿಕ ಸಬಲೀಕರಣ ಮತ್ತು ಸುರಕ್ಷಿತ ಬದುಕು ಖಾತ್ರಿಗೊಳಿಸದೆ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆಗಳು ಹಾಗೂ ಯುವಜನರ ಆಯ್ಕೆಯ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿಗಳು ಜಾತಿ ವ್ಯವಸ್ಥೆಯ ಪ್ರತಿಫಲನವಾಗಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದಲ್ಲಿಯೇ ಮರ್ಯಾದೆಗೇಡು ಹತ್ಯೆ ತಡೆಗಟ್ಟುವ ವಿಶೇಷ ಮಸೂದೆ ಮಂಡಿಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಸಮಗ್ರ ಎಸ್ಐಟಿ ತನಿಖೆ ನಡೆಸಬೇಕು. ಭೂಕಬಳಿಕೆ, ಭೂ ಅಕ್ರಮಗಳು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಗಳನ್ನೂ ಒಳಗೊಂಡಂತೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಮನರೇಗಾ ಕಾಯ್ದೆಯ ಸ್ಥಾನದಲ್ಲಿ ‘ವಿ.ಬಿ. ಗ್ರಾಮ್ ಜಿ’ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೋಟ್ಯಾಂತರ ಜನರ ಜೀವನಾಧಾರ ಹಾನಿಯಾಗಲಿದೆ ಎಂದು ಸಂಘಟನೆ ಆರೋಪಿಸಿದೆ. ಕೇಂದ್ರದ ಹೊಸ ಯೋಜನೆಯ ಪ್ರಕಾರ ಕೇಂದ್ರದ ಪಾಲು 90ರಿಂದ 60 ಶೇಕಡಕ್ಕೆ ಇಳಿಸಿ, ಉಳಿದ 40 ಶೇಕಡವನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ಬಿಲ್ನಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮ ಸಭೆಗಳ ಮೂಲಕ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಗುರುತಿಸುವ ವ್ಯವಸ್ಥೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು. ಈ ವರ್ಷದ ಕೇಂದ್ರ ಬಜೆಟ್ನಲ್ಲಿ ‘ವಿ.ಬಿ. ಗ್ರಾಮ್ ಜಿ’ ಯೋಜನೆಗೆ ₹95,692 ಕೋಟಿ ಮಾತ್ರ ಮೀಸಲಿಟ್ಟಿರುವುದು ಆತಂಕಕಾರಿ. ಮನರೇಗಾ ಯೋಜನೆಯಡಿ ಸರಾಸರಿ 50 ದಿನಗಳಷ್ಟೇ ಉದ್ಯೋಗ ಸಿಗುತ್ತಿದೆ. 125 ದಿನಗಳ ಕೆಲಸ ನೀಡುವ ಭರವಸೆ ನೈಜವಾಗಿಲ್ಲ. ನಿರುದ್ಯೋಗ ಭತ್ಯೆ ಮತ್ತು ತಡ ಕೂಲಿಗೆ ಪರಿಹಾರವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಹೇಳಿರುವುದು ರಾಜ್ಯಗಳನ್ನು ದುರ್ಬಲಗೊಳಿಸುವ ಕ್ರಮ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಾಲದ ಕಿರುಕುಳದಿಂದ ಮಹಿಳೆಯರು ಆತ್ಮಹತ್ಯೆಗೆ ದೂಡಲ್ಪಡುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ಬಡ್ಡಿ ಹೇಳಿ ಸಾಲ ನೀಡಿ, ನಂತರ 25ರಿಂದ 30 ಶೇಕಡವರೆಗೆ ಚಕ್ರಬಡ್ಡಿ ವಸೂಲಿ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ಬಡವರನ್ನು ಶೋಷಿಸುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿದೆ. ಕರ್ನಾಟಕ ಸರ್ಕಾರ ಮೈಕ್ರೋಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸಿರುವುದನ್ನು ಸ್ವಾಗತಿಸಿದರೂ, ಸಮರ್ಪಕ ಜಾರಿ ಅಗತ್ಯವಿದೆ ಎಂದು ಸಂಘಟನೆ ತಿಳಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಬಿಪಿಎಲ್ ಮಾನದಂಡಗಳಿಂದ ಅನೇಕ ಬಡವರು ಹೊರಗುಳಿಯುತ್ತಿದ್ದಾರೆ. ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ, ಅಗತ್ಯವಿರುವವರಿಗೆ ತಕ್ಷಣ ಕಾರ್ಡ್ ನೀಡಬೇಕು. ಹಬ್ಬದ ಸಂದರ್ಭಗಳಲ್ಲಿ ಕೇರಳ ಮಾದರಿಯಲ್ಲಿ ಹೆಚ್ಚುವರಿ ಆಹಾರ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ವೈದ್ಯರು, ನರ್ಸ್ ಹಾಗೂ ಆಂಬುಲೆನ್ಸ್ ಸೌಲಭ್ಯ ಒದಗಿಸಬೇಕು. ಎಲ್ಲಾ ರೀತಿಯ ಚಿಕಿತ್ಸೆ ಉಚಿತವಾಗಿರಬೇಕು ಎಂದು ಆಗ್ರಹಿಸಲಾಗಿದೆ. ವೃದ್ಧರು, ವಿಕಲಚೇತನರು, ಗಂಡ ತೀರಿದ ಹಾಗೂ ಒಂಟಿ ಮಹಿಳೆಯರಿಗೆ ನೀಡುವ ಪಿಂಚಣಿ ಜೀವನೋಪಾಯಕ್ಕೆ ಸಾಲುತ್ತಿಲ್ಲ. ಮುಂಬರುವ ಬಜೆಟ್ನಲ್ಲಿ ಮಾಸಿಕ ಪಿಂಚಣಿಯನ್ನು ₹5000ಕ್ಕೆ ಏರಿಸಬೇಕು ಎಂದು ಒತ್ತಾಯಿಸಲಾಗಿದೆ. ಸಮಾವೇಶದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ದಕ್ಷಿಣ ಕನ್ನಡ ಜಿಲ್ಲೆಯಿಂದ 100ಕ್ಕೂ ಹೆಚ್ಚು ಮಹಿಳೆಯರು ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಅಧ್ಯಕ್ಷೆ ಕಿರಣ್ ಪ್ರಭಾ, ಮಂಗಳೂರು ನಗರ ಕಾರ್ಯದರ್ಶಿ ಅಸುಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಕ್ಕೊತ್ತಾಯಗಳು 1.ವಿ.ಬಿ. ಗ್ರಾಮ್. ಜಿ ಯೋಜನೆ ಹಿಂಪಡೆಯಬೇಕು, ಮನರೇಗಾ ಉದ್ಯೋಗ ಖಾತ್ರಿ ಹಕ್ಕನ್ನು ಬಲಪಡಿಸಬೇಕು, ನಗರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು, ದಿನಗೂಲಿ 600 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ವರ್ಷಕ್ಕೆ ಕನಿಷ್ಠ 200 ದಿನಗಳ ಕೆಲಸ ನೀಡಬೇಕು. 2.ಮುಂಬರುವ ಬಜೆಟ್ ಅಧಿವೇಶನದಲ್ಲಿಯೇ ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಿ ಜಾರಿ ಮಾಡಬೇಕು. 3.ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲ ಶಿಫಾರಸ್ಸು ಹಾಗೂ ಕರ್ನಾಟಕ ರಾಜ್ಯದ ಉಗ್ರಪ್ಪ ಸಮಿತಿ ಶಿಫಾರಸ್ಸು ಜಾರಿ ಮಾಡಬೇಕು. 4.ಧರ್ಮಸ್ಥಳದ ಅತ್ಯಾಚಾರ, ಕೊಲೆ, ಅಸಹಜ ಸಾವು, ಭೂ ಕಬಳಿಕೆ, ಸ್ವ- ಸಹಾಯ ಸಂಘಗಳ ಮೇಲಿನ ದೌರ್ಜನ್ಯ ಸೇರಿದಂತೆ ಮೇಲಿನ ಎಲ್ಲ ಪ್ರಕರಣಗಳನ್ನು ಎಸ್.ಐ.ಟಿ. ಮೂಲಕ ಸಮಗ್ರ ತನಿಖೆಗೆ ಒಳಪಡಿಸಬೇಕು. 5.ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಗಟ್ಟಿ, ನಾಯಿ ಕೊಡೆಗಳಂತೆ ಹಾದಿಗೊಂದು ಬೀದಿಗೊಂದು ಹುಟ್ಟಿಕೊಂಡು ದುಬಾರಿ ಬಡ್ಡಿ ಹಾಗೂ ವಾರದ ಕಂತು ಕಟ್ಟುವಂತೆ ಕಿರುಕುಳ ನೀಡುತ್ತಿರುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. 6.ಸ್ವ-ಸಹಾಯ ಗುಂಪುಗಳಿಗೆ ಶೇ.4 ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಬೇಕು. ಬಡ ಕೂಲಿಕಾರ, ರೈತ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಜಾಮೀನು ರಹಿತವಾಗಿ ಕನಿಷ್ಠ ಎರಡು ಲಕ್ಷದವರಗೆ ಸಾಲವನ್ನು ಮಂಜೂರು ಮಾಡಬೇಕು. 7.ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ NRLM ಶೆಡ್ ನಿರ್ಮಾಣ ಮಾಡಬೇಕು. ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಿ SHG ಗುಂಪುಗಳಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ನೀಡಿ, ತಯಾರಿಸಿದ ವಸ್ತುಗಳಿಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. 8.ನಿವೇಶನ ರಹಿತರಿಗೆ ನಿವೇಶನ ನೀಡಿ, ವಸತಿ ನಿರ್ಮಿಸಿಕೊಳ್ಳಲು ಕನಿಷ್ಠ ಐದು ಲಕ್ಷ ಅನುದಾನ ನೀಡಬೇಕು. 9.ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಮಾಸಿಕ ವೇತನವನ್ನು ವಯಸ್ಸಿನ ಮಿತಿ ಇಲ್ಲದೆ ಒಂಟಿ ಮಹಿಳೆ, ಗಂಡ ಸತ್ತ ಮಹಿಳೆ, ಪರಿತ್ಯಕ್ತ ಮಹಿಳೆಯರು ಹಾಗೂ ವಿಕಲ ಚೇತನರಿಗೆ 5000 ರೂ. ಮಾಸಿಕ ವೇತನ ನೀಡಬೇಕು. 10.ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಎಲ್ಲ ಹಳ್ಳಿಗಳಲ್ಲಿ ಪಡಿತರ ವಿತರಣ ಉಪ ಕೇಂದ್ರಗಳನ್ನ ಸ್ಥಾಪಿಸಬೇಕು. 11.ಕರ್ನಾಟಕ ರಾಜ್ಯದ ಎಲ್ಲ ಗ್ರಾಮಗಳಿಗೂ ಸಾರಿಗೆ ಸೌಲಭ್ಯ ಒದಗಿಸಬೇಕು. 12.ಸಾರ್ವಜನಿಕ ಆರೋಗ್ಯ ರಂಗವನ್ನು ಬಲಪಡಿಸಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 -7 ಡಾಕ್ಟರ್, ನರ್ಸ್, ಆಂಬುಲೆನ್ಸ್ ವ್ಯವಸ್ಥೆ ಇರಬೇಕು. ರಕ್ತ ಪರೀಕ್ಷೆ ಹಾಗೂ ಎಲ್ಲ ರೀತಿ ಚಿಕಿತ್ಸೆ ನೀಡುವಂತಾಗಬೇಕು.
ಏನಿದು ಮಾನವ್ ವಿಷನ್? ಕೃತಕ ಬುದ್ದಿಮತ್ತೆಗೆ ಮನುಷ್ಯನ ನಿಯಂತ್ರಣ ಎಷ್ಟು ಅಗತ್ಯ
ದೆಹಲಿಯಲ್ಲಿ ಗುರುವಾರ ನಡೆದ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಕ ಬುದ್ದಿಮತ್ತೆಯಲ್ಲಿ ಮಾನವ್ ವಿಷನ್ ಅನಾವರಣಗೊಳಿಸಿದ್ದಾರೆ. ಎಐ ತಂತ್ರಜ್ಞಾನ ವ್ಯಾಪಕವಾಗಿ ಹರಡುತ್ತಿದ್ದು, ಎಐ ಮನುಷ್ಯನಿಗೆ ಪರ್ಯಾಯ ಆಗಬಹುದೇ ಎಂಬ ಆತಂಕವೂ ಇದೇ ಸಂದರ್ಭದಲ್ಲಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಐಗೆ ಮಾನವ ನಿಯಂತ್ರಣವೂ ಅತಿ ಮುಖ್ಯವಾಗಿದೆ. ಹಾಗಾದರೆ ಮಾನವ್ ವಿಷನ್ ಅಂದರೇನು? ಮುಂದಿನ ದಿನಗಳಲ್ಲಿ ಇದು ಎಷ್ಟರ ಮಟ್ಟಿಗೆ ಪಾತ್ರ ನಿರ್ವಹಣೆ ಮಾಡಲಿದೆ? ಎಂಬ ವಿವರ ಇಲ್ಲಿದೆ.
ಹೊಸದಿಲ್ಲಿ: ಆರ್ಥಿಕ ಅಭಿವೃದ್ಧಿಗೆ ಭಾರವಾಗುವಂತೆ ಚುನಾವಣೆಗೆ ಮುನ್ನ “ಬೇಜವಾಬ್ದಾರಿ” ಉಚಿತ ಕೊಡುಗೆಗಳನ್ನು ಘೋಷಿಸುವ ರಾಜ್ಯಗಳ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಮಿಳುನಾಡು DISCOMʼನ ವಿದ್ಯುತ್ ಸಬ್ಸಿಡಿಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ಪೀಠವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಚುನಾವಣೆಯ ಹೊಸ್ತಿಲಲ್ಲಿರುವವಾಗ ಕೊನೆಯ ಕ್ಷಣದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಏಕೆ ಘೋಷಿಸಲಾಯಿತು ಎಂಬುದನ್ನು ವಿವರಿಸಲು ನ್ಯಾಯಾಲಯವು ತಮಿಳುನಾಡು ಸರ್ಕಾರವನ್ನು ನಿರ್ದಿಷ್ಟವಾಗಿ ಕೇಳಿದೆ. ಹಠಾತ್ ಘೋಷಣೆಗಳಿಂದ ವಿದ್ಯುತ್ ವಿತರಣಾ ಕಂಪೆನಿಗಳು (DISCOMs) ಸುಂಕಗಳು ಮತ್ತು ಬಜೆಟ್ ಲೆಕ್ಕಾಚಾರಗಳನ್ನು ಸರಿಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪೀಠವು ಉಲ್ಲೇಖಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ವಿದ್ಯುತ್ ತಿದ್ದುಪಡಿ ನಿಯಮಗಳು–2024ರ ನಿಯಮ 23 ಅನ್ನು ಪ್ರಶ್ನಿಸಿ Tamil Nadu Electricity Distribution Company Limited ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅನೇಕ ರಾಜ್ಯಗಳು ಈಗಾಗಲೇ ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಬಜೆಟ್ ಇಲ್ಲದೇ ದೊಡ್ಡ ಪ್ರಮಾಣದ ಸಬ್ಸಿಡಿ ಬದ್ಧತೆಗಳನ್ನು ಸರ್ಕಾರಗಳು ಹೇಗೆ ನಿರ್ವಹಿಸಬಹುದು ಎಂದು ನ್ಯಾಯಾಲಯ ಪ್ರಶ್ನಿಸಿತು. ಅನಿಯಂತ್ರಿತ ಉಚಿತ ಕೊಡುಗೆಯು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಇತ್ತೀಚಿನ ಚುನಾವಣೆಗಳಿಗೆ ಮುನ್ನ ಹಲವಾರು ರಾಜ್ಯಗಳು ಇದ್ದಕ್ಕಿದ್ದಂತೆ ʼಗ್ಯಾರಂಟಿʼ ಯೋಜನೆಗಳನ್ನು ಘೋಷಿಸಿರುವ ನಿದರ್ಶನಗಳ ಬಗ್ಗೆ ನ್ಯಾಯಾಲಯ ಗಮನಸೆಳೆದಿದೆ. ನೇರ ನಗದು ವರ್ಗಾವಣೆ ಯೋಜನೆಗಳನ್ನು ನಿರಂತರವಾಗಿ ಘೋಷಿಸಿದರೆ ಜನರಲ್ಲಿ ಇನ್ನು ಮುಂದೆ ಕೆಲಸ ಮಾಡುವ ಮನೋಭಾವ ಇರಬಹುದೇ ಎಂಬ ಗಂಭೀರ ಪ್ರಶ್ನೆಯನ್ನೂ ಪೀಠವು ಎತ್ತಿದೆ. “ಸರ್ಕಾರಗಳು ಉಚಿತವಾಗಿ ಹಣ, ವಿದ್ಯುತ್ ಮತ್ತು ಇತರ ಸೌಲಭ್ಯಗಳನ್ನು ನೀಡುತ್ತಲೇ ಹೋದರೆ ಅಂತಿಮವಾಗಿ ಅದರ ವೆಚ್ಚವನ್ನು ಯಾರು ಭರಿಸುತ್ತಾರೆ? ಉಚಿತ ಕೊಡುಗೆಗಳ ಹೊರೆ ತೆರಿಗೆದಾರರ ಮೇಲೆಯೇ ಬೀಳುತ್ತದೆ,” ಎಂದು ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಸಬ್ಸಿಡಿಯನ್ನು ಮುಂಚಿತವಾಗಿ ಘೋಷಿಸಿದ್ದರೆ, ಡಿಸ್ಕಾಮ್ಗಳು ಅದನ್ನು ತಮ್ಮ ಸೇವಾ ಶುಲ್ಕಗಳ ಮೂಲಕ ಭರಿಸಬಹುದಿತ್ತು ಎಂದು ನ್ಯಾಯಾಲಯ ತಿಳಿಸಿದೆ. ಹಠಾತ್ ನೀತಿ ನಿರ್ಧಾರಗಳು ಅನಿಶ್ಚಿತತೆ ಸೃಷ್ಟಿಸಿ ಕಾರ್ಯಾಚರಣೆಯನ್ನೇ ಬುಡಮೇಲು ಮಾಡುತ್ತವೆ ಎಂದು ಪೀಠವುಅಭಿಪ್ರಾಯಪಟ್ಟಿದೆ. ವಿದ್ಯುತ್ ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳ ಮೇಲ್ಮನವಿ ನ್ಯಾಯಮಂಡಳಿಯಂತಹ ಸಂಸ್ಥೆಗಳು ಸುಂಕ ನಿಗದಿಗೆ ಜವಾಬ್ದಾರರಾಗಿದ್ದು, ಕೊನೆಯ ಕ್ಷಣದ ಸಬ್ಸಿಡಿಗಳು ವಿದ್ಯುತ್ ಸರಬರಾಜಿಗೆ ನಿಖರವಾಗಿ ಬೆಲೆ ನಿಗದಿಪಡಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಷ್ಟಕರವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಉಚಿತ ವಸ್ತುಗಳ ವಿತರಣೆಯ ಕುರಿತು ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್, “ಈ ರೀತಿಯ ಉಚಿತ ವಸ್ತುಗಳ ವಿತರಣೆ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಶಿಕ್ಷಣ ಅಥವಾ ಮೂಲಭೂತ ಜೀವನ ನಡೆಸಲು ಸಾಧ್ಯವಾಗದವರಿಗೆ ಸೌಲಭ್ಯ ಒದಗಿಸುವುದು ರಾಜ್ಯದ ಕರ್ತವ್ಯ. ಆದರೆ ಆರ್ಥಿಕವಾಗಿ ಸಾಮರ್ಥ್ಯ ಹೊಂದಿರುವವರೇ ಮೊದಲು ಉಚಿತ ಸೌಲಭ್ಯಗಳನ್ನು ಪಡೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಇದು ಸರ್ಕಾರ ಗಮನಿಸಬೇಕಾದ ವಿಷಯವಲ್ಲವೇ?” ಎಂದು ಪ್ರಶ್ನಿಸಿದರು. “ವಿದ್ಯುತ್ ಉಚಿತವಾಗಿ ನೀಡುವ ರಾಜ್ಯಗಳಿವೆ. ಆದರೆ ನೀವು ದೊಡ್ಡ ಭೂಮಾಲೀಕರಾಗಿದ್ದರೂ ದೀಪಗಳನ್ನು ಉರಿಸಿ, ವಿದ್ಯುತ್ ಬಳಸಿ ಉಚಿತ ಸೌಲಭ್ಯ ಪಡೆಯುವುದು ಸಮಂಜಸವೇ? ಬೇಕಾದರೆ ಅದರ ವೆಚ್ಚವನ್ನು ಪಾವತಿಸಬೇಕು. ಇದು ತೆರಿಗೆದಾರರ ಹಣ. ನಾವು ತಮಿಳುನಾಡಿನ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ,” ಎಂದರು. ಚುನಾವಣೆಗಳಿಗೆ ಸ್ವಲ್ಪ ಮೊದಲು ಯೋಜನೆಗಳನ್ನು ಏಕೆ ಘೋಷಿಸಲಾಗುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. “ಎಲ್ಲಾ ರಾಜಕೀಯ ಪಕ್ಷಗಳು, ಸಮಾಜಶಾಸ್ತ್ರಜ್ಞರು ಈ ವಿಷಯವನ್ನು ಪುನರ್ವಿಮರ್ಶಿಸಬೇಕು. ರಾಜ್ಯಗಳು ನಷ್ಟದಲ್ಲಿ ನಡೆಯುತ್ತಿವೆ, ಆದರೂ ಉಚಿತ ಸೌಲಭ್ಯಗಳನ್ನು ಮುಂದುವರಿಸುತ್ತಿವೆ. ವಾರ್ಷಿಕವಾಗಿ 25% ಆದಾಯ ಸಂಗ್ರಹಿಸಿದರೆ ಅದನ್ನು ರಾಜ್ಯದ ಅಭಿವೃದ್ಧಿಗೆ ಬಳಸುವುದಿಲ್ಲವೇ?” ಎಂದು ಸಿಜೆಐ ಹೇಳಿದರು. ರಾಜ್ಯದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ, ಸರ್ಕಾರಗಳು ಇಂತಹ ಸಬ್ಸಿಡಿಗಳ ಸಂಪೂರ್ಣ ವೆಚ್ಚವನ್ನು ಭರಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹೊಂದಿಕೆಯಾಗುತ್ತದೆಯೇ ಎಂದು ಪ್ರಶ್ನಿಸಿದರು. ಈ ಸಮಸ್ಯೆ ತಮಿಳುನಾಡಿಗೆ ಸೀಮಿತವಲ್ಲ; ದೇಶದಾದ್ಯಂತ ʼಉಚಿತʼ ರಾಜಕೀಯದ ಪ್ರವೃತ್ತಿಯಿದೆ ಎಂದು ಅವರು ಹೇಳಿದರು. ವಿದ್ಯುತ್ ಬಿಲ್ ಪಾವತಿಸಲು ಶಕ್ತರಾಗಿರುವವರು ಮತ್ತು ಆರ್ಥಿಕವಾಗಿ ಅಂಚಿನಲ್ಲಿರುವವರ ನಡುವೆ ವ್ಯತ್ಯಾಸ ಮಾಡದೆ ಸೌಲಭ್ಯಗಳನ್ನು ವಿಸ್ತರಿಸುವುದರಿಂದ ಯಾವ ರೀತಿಯ ನೀತಿ ಸಂಸ್ಕೃತಿ ರೂಪುಗೊಳ್ಳುತ್ತದೆ ಎಂದು ಸಿಜೆಐ ಹೇಳಿದರು. ದುರ್ಬಲ ವರ್ಗಗಳಿಗೆ ಬೆಂಬಲ ನೀಡುವುದು ಅಭಿವೃದ್ಧಿಶಿಲ ರಾಜ್ಯದ ಕರ್ತವ್ಯವಾದರೂ, ಸ್ಪಷ್ಟ ಅರ್ಹತಾ ಮಾನದಂಡಗಳಿಲ್ಲದೆ ವಿವೇಚನೆಯಿಲ್ಲದೆ ಸೌಲಭ್ಯ ವಿಸ್ತರಣೆ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ತಮಿಳುನಾಡು | ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಡಿಎಂಡಿಕೆ
ಚೆನ್ನೈ: ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಗೆ ಭೇಟಿ ನೀಡಿದ ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್, ತಮ್ಮ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟ ಸೇರ್ಪಡೆಯಾಗುವುದನ್ನು ಖಚಿತಗೊಳಿಸಿದರು. 2005ರಲ್ಲಿ ಡಿಎಂಡಿಕೆ ಸ್ಥಾಪನೆಯಾದಾಗಿನಿಂದ ಇದೇ ಪ್ರಥಮ ಬಾರಿಗೆ ಡಿಎಂಡಿಕೆ ಪಕ್ಷವು ಡಿಎಂಕೆ ಮೈತ್ರಿಕೂಟದೊಂದಿಗೆ ಕೈಜೋಡಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಲತಾ, ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆಯ ಕುರಿತು ಮಾತುಕತೆ ನಡೆಸಲು ಡಿಎಂಕೆ ರಚಿಸಲಿರುವ ತಂಡಗಳನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಡಿಎಂಡಿಕೆಯನ್ನು ಡಿಎಂಕೆ ಮೈತ್ರಿಕೂಟಕ್ಕೆ ಸ್ವಾಗತಿಸಿರುವ ಎಂ.ಕೆ.ಸ್ಟಾಲಿನ್, “ಡಿಎಂಡಿಕೆಯು ಡಿಎಂಕೆ ಮೈತ್ರಿಕೂಟವನ್ನು ಪ್ರವೇಶಿಸಿರುವುದು ತಮಿಳುನಾಡಿನಲ್ಲಿ ಡಿಎಂಕೆ ಆಡಳಿತದ ಮುಂದುವರಿಕೆಯನ್ನು ದೃಢಪಡಿಸಿದೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. முத்தமிழறிஞர் தலைவர் கலைஞர் மேல் மாறாத அன்பு கொண்டவரும், எனது அன்பு நண்பருமான ‘கேப்டன்’ விஜயகாந்த் அவர்கள் உருவாக்கிய தேசிய முற்போக்கு திராவிட கழகம், இன்று மதச்சார்பற்ற முற்போக்குக் கூட்டணியில் இணைந்திருப்பது பெருமகிழ்ச்சி அளிக்கிறது! சகோதரர் கேப்டன் உருவாக்கிய இயக்கத்தைத்… pic.twitter.com/n7qD7Ex8UH — M.K.Stalin - தமிழ்நாட்டை தலைகுனிய விடமாட்டேன் (@mkstalin) February 19, 2026
ಡೊನಾಲ್ಡ್ ಟ್ರಂಪ್ ಮಹತ್ವದ ಚಿಂತನೆ, ಇರಾನ್ ವಿರುದ್ಧ ವಾರಾಂತ್ಯದಲ್ಲಿ ಮಹತ್ವದ ಕ್ರಮ ಸಾಧ್ಯತೆ | US Military
ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೊತ್ತಿಕೊಂಡ ಬೆಂಕಿ ಸೇನಾ ಕಾರ್ಯಾಚರಣೆ ರೂಪ ಪಡೆಯುತ್ತಿದ್ದು, ಈ ವಾರಾಂತ್ಯಕ್ಕೆ ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಸೇನೆ ಸಿದ್ಧವಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಈ ಬಗ್ಗೆ ಅಂತಿಮ ಆದೇಶ ನೀಡಿಲ್ಲ, ಹೀಗಾಗಿ ಅಮೆರಿಕ ಅಧ್ಯಕ್ಷರ ಆದೇಶಕ್ಕಾಗಿ ಅಮೆರಿಕದ
Adani Group: ಭಾರತದ ಪ್ರಮುಖ ಬಿಸಿನೆಸ್ ಶಾಲೆಗಳ ವಿದ್ಯಾರ್ಥಿಗಳಿಗೆ ಅದಾನಿ ಗ್ರಾಪ್ ವಿದ್ಯಾರ್ಥಿವೇತನ ಘೋಷಣೆ
Adani Group: ಅದಾನಿ ಗ್ರೂಪ್ 2025-27 ಸಮೂಹದ ಅದಾನಿ ಅಕ್ಸೆಲರೇಟೆಡ್ ಲೀಡರ್ಶಿಪ್ ಪ್ರೋಗ್ರಾಂ (AALP) ಅಡಿಯಲ್ಲಿ ಭಾರತದ ಪ್ರಮುಖ ಬಿಸಿನೆಸ್ ಶಾಲೆಗಳ ವಿದ್ಯಾರ್ಥಿಗಳಿಗೆ 24 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನಗಳನ್ನು ಘೋಷಿಸಿದೆ. ಈ ಕ್ರಮವು ಸಮಗ್ರ ನಾಯಕತ್ವ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದತ್ತ ಸಂಸ್ಥೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಆಯ್ಕೆಯಾದ ವಿದ್ಯಾರ್ಥಿವೇತನ ಪಡೆದವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
2012ರಲ್ಲಿ ಕರಪತ್ರ ಹಂಚಿಕೆ ಪ್ರಕರಣ : ಬೆಳ್ತಂಗಡಿ ನ್ಯಾಯಾಲಯಕ್ಕೆ ನಕ್ಸಲ್ ಮಹೇಶ್ ಹಾಜರು
ಬೆಳ್ತಂಗಡಿ: ತಾಲೂಕಿನ ಕುತ್ಲೂರು ಗ್ರಾಮದಲ್ಲಿ 2012ರಲ್ಲಿ ನಕ್ಸಲ್ ಪರವಾದ ಕರಪತ್ರ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ನಕ್ಸಲ್ ಮಹೇಶ್ ಅವರನ್ನು ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೇರಳದ ತ್ರಿಶೂರ್ ಜೈಲಿನಲ್ಲಿ ಬಂಧನದಲ್ಲಿದ್ದ ಮಹೇಶ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ. 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ಮಹೇಶ್ ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ಕುಡುಡಿ ಮುಖ್ಯರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯ ನಿವಾಸಿಯಾಗಿದ್ದು, ಮಹೇಶ್ ಅಲಿಯಾಸ್ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಾರಪ್ಪ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ. ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012ರಲ್ಲಿ ನಕ್ಸಲ್ ಪರವಾದ ಕರಪತ್ರಗಳನ್ನು ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಅವರು ಕೇರಳದ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಕರ್ನಾಟಕದ ನಕ್ಸಲ್ ಮುಖಂಡರೊಂದಿಗೆ ಮಹೇಶ್ ಕೂಡ ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಶರಣಾಗತಿಯಾಗಿದ್ದರು.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಾಗತಿಕ AI ಇಂಪ್ಯಾಕ್ಟ್ ಶೃಂಗಸಭೆ, ಭಾರತದ ಮೇಲಿನ ಜಾಗತಿಕ ಪಾಲುದಾರರ ನಂಬಿಕೆಯನ್ನು ದುಪ್ಪಟ್ಟುಗೊಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಮುಖ ದೇಶಗಳು ಮತ್ತು ಜಾಗತಿಕ ಕಂಪನಿಗಳು, ಭಾರತದೊಂದಿಗೆ ಜಂಟಿ AI ಯೋಜನೆಗಳನ್ನು ಘೋಷಿಸುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಭಾರತ-ಅಮೆರಿಕ ಸಬ್ಸೀ ಕೇಬಲ್ ನೆಟ್ವರ್ಕ್ ಘೋಷಣೆ ಮಾಡಿದ್ದಾರೆ. ಏನಿದ ಯೋಜನೆ? ಎಲ್ಲಿಂದ ಆರಂಭವಾಗಲಿದೆ? ಇಲ್ಲಿದೆ ಮಾಹಿತಿ.
ಮಂಜುನಾಥ್ ಭಂಡಾರಿ ಅವರ ಆರೋಗ್ಯ ವಿಚಾರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು(ಗುರುವಾರ) ಸದಾಶಿವನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಂಜುನಾಥ್ ಭಂಡಾರಿ ಅವರ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಬಳಿಕ ಭಂಡಾರಿ ಅವರು ಶೀಘ್ರ ಗುಣಮುಖರಾಗಿ ಸಾರ್ವಜನಿಕ ಜೀವನದಲ್ಲಿ ಮತ್ತೆ ಚುರುಕಾಗಿ ಭಾಗವಹಿಸಲಿ ಎಂದು ಹಾರೈಸಿದರು.
ಭಾರತದಲ್ಲಿ ನಡೆಯುತ್ತಿರುವ 5 ದಿನಗಳ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮಾತನಾಡಿದ್ದು, ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಇದರಲ್ಲಿ ನಾವು ಹತ್ತು ವರ್ಷಗಳ ಅವಧಿಯಲ್ಲಿ ಸಾಧಿಸಿ ಅಭೂತಪೂರ್ವ ಪ್ರಗತಿಯನ್ನು ಶ್ಲಾಘಿಸಿದ್ದು, ಜಗತ್ತಿನಲ್ಲಿ ಯಾರೂ ಸಾಧಿಸಲಾಗದ್ದನ್ನು ಭಾರತ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ, AI ರೇಸ್ ನಲ್ಲಿ ಭಾರತ ಹಾಗೂ ಫ್ರಾನ್ಸ್ ಒಟ್ಟಿಗೆ ಕೆಲಸ ಮಾಡಲಿದ್ದು, ಜಾಗತಿಕ AI ಭವಿಷ್ಯವನ್ನು ಒಟ್ಟಿಗೆ ಉತ್ತಮವಾಗಿ ರೂಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಹೇರುತ್ತಿರುವ ನಿರ್ಬಂಧಗಳ ಪ್ರಯತ್ನಕ್ಕೆ ಭಾರತ ಸಹ ಸಾಥ್ ನೀಡಬೇಕೆಂದು ಕರೆ ನೀಡಿದರು. ಈ ಕುರಿತ ವರದಿ ಇಲ್ಲಿದೆ.
ಚಿಕ್ಕಮಗಳೂರು ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿ; ಬಡ್ಡಿ ಸಮೇತ ನೀಡುವೆಂತೆ ಗ್ರಾಹಕರ ಆಯೋಗ ತೀರ್ಪು
ಚಿಕ್ಕಮಗಳೂರಿನ ಕಡೂರು ಮೂಲದ ಮೃತ ಶಿಕ್ಷಕರೊಬ್ಬರ ಸಾಲ ಮರುಪಾವತಿ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾ ಕಂಪನಿಯು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವಂತೆ ಆಯೋಗ ಆದೇಶ ನೀಡಿದೆ. 11 ಲಕ್ಷ ರೂ ಸಾಲ ಮರುಪಾವತಿ ಮೊತ್ತದ ಜತೆಗೆ ಪರಿಹಾರವಾಗಿ 40 ಸಾವಿರ ರೂ., ವ್ಯಾಜ್ಯದ ಖರ್ಚು ಕೂಡ ನೀಡುವಂತೆ ಸೂಚನೆ ನೀಡಿದೆ.
ಮಟಮಾರಿಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬ
ರಾಯಚೂರು : ತಾಲೂಕಿನ ಮಟಮಾರಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ರಾಯಚೂರು, ಸಮೂಹ ಸಂಪನ್ಮೂಲ ಕೇಂದ್ರ ಮಟಮಾರಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಟಮಾರಿ ಇವರ ಸಂಯುಕ್ತಾಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ (FLN) ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಥೆ ರಚನೆ, ಕ್ವಿಜ್, ವೇಷಭೂಷಣ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಗಣ್ಯರು ಶಾಲಾ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾ.ಶಿ. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಚಂದ್ರಶೇಖರ್ ರೆಡ್ಡಿ, ತಾಲೂಕು ಅಧ್ಯಕ್ಷ ಶ್ರೀ ಮಲ್ಲೇಶ್ ನಾಯಕ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ರಂಗನಾಥ್, ಕ.ರಾ.ಸ.ನೌ. ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀ ಭೀಮೇಶ್ ನಾಯಕ್, ಜಿಲ್ಲಾ ಖಜಾಂಚಿ ಪ್ರಸನ್ನ ಕುಮಾರ್, ತಾಲೂಕು ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಶ್ರೀ ರಾಘವೇಂದ್ರ ಗಬ್ಬುರ್, ವಲಯ ಸಂಪನ್ಮೂಲ ವ್ಯಕ್ತಿ ಶ್ರೀ ಆನಂದ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಶ್ರಿಮತಿ ರುಕ್ಮಿಣಿ ಹಾಗೂ ಶಾಲಾ ಪ್ರಭಾರಿ ಮುಖ್ಯಗುರು ಶ್ರೀ ರಂಗನಾಥ್ ಸೇರಿದಂತೆ ಶಿಕ್ಷಕರು, ಅತಿಥಿ ಶಿಕ್ಷಕರು ಮತ್ತು ಶಾಲಾ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Koppala | ಭೀಕರ ರಸ್ತೆ ಅಪಘಾತ; ಲಾರಿ ಚಕ್ರದಡಿ ಸಿಲುಕಿ ಬೈಕ್ ಸವಾರರಿಬ್ಬರು ಮೃತ್ಯು
ಯಲಬುರ್ಗಾ : ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸಮೀಪದ ಎನ್ಎಚ್–50ರಲ್ಲಿ ಗುರುವಾರ ಬೆಳಿಗ್ಗೆ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕುಷ್ಟಗಿಯಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ವೇಳೆ, ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಲಾರಿ ಚಾಲಕನು ಬಲಭಾಗದಿಂದ ಎಡಭಾಗಕ್ಕೆ ತಿರುಗಿಸುವಾಗ ಬೈಕ್ಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ಪರಿಣಾಮ ಇಬ್ಬರೂ ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ . ಶ್ರೀನಿವಾಸ್ (26) ಹಾಗೂ ಸಿದ್ದನಗೌಡ (25) ಮೃತರು. ಇವರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆ ಪ್ರದರ್ಶನ: ಜಾಗತಿಕ ದಿಗ್ಗಜರಿಗೆ ಮನವರಿಕೆ
ದೆಹಲಿಯಲ್ಲಿ ನಡೆದ ಭಾರತ ಕೃತಕ ಬುದ್ಧಿಮತ್ತೆ ಪ್ರಭಾವ ಶೃಂಗಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಪ್ರದರ್ಶನ ಮಾಡಲಾಯಿತು. ಜಾಗತಿಕ ದಿಗ್ಗಜರಿಗೆ ಎಐ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆಗಳ ಬಗ್ಗೆ ಮನವರಿಕೆ ಮಾಡಲಾಯತು. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಗತಿಕ ಉದ್ಯಮ ದಿಗ್ಗಜರು, ಸಂಶೋಧಕರು ಹಾಗೂ ನವೋದ್ಯಮ ಸ್ಥಾಪಕರುಗಳ ಜತೆಗೆ ಸಮಾಲೋಚನೆ ನಡೆಸಿದರು. ಎಐ ತಂತ್ರಜ್ಞಾದ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮತ್ತಷ್ಟು ಮಾಹಿತಿ ಇಲ್ಲಿದೆ.
AI: ಚೀನಾದ ರೋಬೋಟ್ ನಾಯಿ ವಿವಾದ: ಗಲ್ಗೋಟಿಯಾ ದಿಗ್ವಿಜಯ ಸಂಭ್ರಮವು: ರಾಜಾರಾಂ ತಲ್ಲೂರು ಬರಹ
ದೆಹಲಿಯ ಭರತ್ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026ರಲ್ಲಿ ಭಾರೀ ಸದ್ದು ಮಾಡಿದ್ದು ಚೀನಾದ ರೋಬೋಟ್ ನಾಯಿ ವಿಷಯ. ಗಲ್ಗೋಟಿಯಾ ದಿಗ್ವಿಜಯ ಸಂಭ್ರಮವು: ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಒಮ್ಮೊಮ್ಮೆ ಟ್ರೋಲ್ ದಿಗ್ವಿಜಯ ಸಂಭ್ರಮಗಳು ಭಯ ಹುಟ್ಟಿಸುತ್ತವೆ. ತನ್ನೆಲ್ಲ ಪ್ರಭುತ್ವ ಪರ ಮುಖಸ್ತುತಿ ನಿಲುವುಗಳ ಹೊರತಾಗಿಯೂ ಒಂದು ಶೈಕ್ಷಣಿಕ ಸಂಸ್ಥೆ ಆಗಿರುವ
ದೇವದುರ್ಗ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ
ದೇವದುರ್ಗ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಗಳ ಕೊರತೆ ತೀವ್ರವಾಗಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಿಲ್ದಾಣದ ವಿವಿಧ ಭಾಗಗಳಲ್ಲಿ ಕಸ , ತ್ಯಾಜ್ಯ ರಾಶಿಯಾಗಿದ್ದು, ಶೌಚಾಲಯ ಸೌಲಭ್ಯ ಇದ್ದರೂ ಬಯಲು ಪ್ರದೇಶದಲ್ಲೇ ಮೂತ್ರ ವಿಸರ್ಜನೆ ನಡೆಯುತ್ತಿರುವುದರಿಂದ ಗಬ್ಬುನಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ಗಾಗಿ ಕಾಯುವ ವೇಳೆ ದುರ್ವಾಸನೆ ಹಾಗೂ ಅಸ್ವಚ್ಛತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲೆ ಮುಗಿದ ಬಳಿಕ ಬಸ್ ನಿಲ್ದಾಣಕ್ಕೆ ಬರುವುದಕ್ಕಿಂತ ಶಾಲೆಯಲ್ಲೇ ಉಳಿಯುವುದು ಉತ್ತಮ ಎನ್ನಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ವಿದ್ಯಾರ್ಥಿ ನಿಯರು ಮನೆ ತಲುಪುವುದು ಕಷ್ಟಕರವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಕೆಲವರು ಎಲ್ಲೆಂದರಲ್ಲಿ ಉಗುಳುವುದು, ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡುವುದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಮುಂದೆ ಅಸಭ್ಯ ವರ್ತನೆ ತೋರುವುದು ನಡೆಯುತ್ತಿದ್ದು, ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಘಟನೆಗಳ ವಿರುದ್ಧ ತಕ್ಷಣ ಪೊಲೀಸ್ ಕ್ರಮ ಕೈಗೊಂಡು ದಂಡ ವಿಧಿಸಿದರೆ ಅನಾಹುತಗಳಿಗೆ ಕಡಿವಾಣ ಹಾಕಬಹುದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನೂ, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಕರನ್ನು ಕುರಿಹಿಂಡಿನಂತೆ ತುಂಬಿಕೊಂಡು ಸಾಗಿಸುವುದು ಸಾಮಾನ್ಯವಾಗಿದೆ. ವೈಯಕ್ತಿಕ ಕಾರ್ಯಕ್ರಮಗಳಿಗೆ ಬಸ್ ಬುಕ್ ಮಾಡಿದರೆ ಆಸನದ ಪ್ರಕಾರ ಮಾತ್ರ ಪ್ರಯಾಣಿಕರನ್ನು ಕೂರಿಸಬೇಕು ಎಂಬ ನಿಯಮವಿದೆ. ಆದರೆ ಪ್ರತಿದಿನ ಸಂಚರಿಸುವ ಬಸ್ಗಳಲ್ಲಿ ಮಾತ್ರ ನಿಯಮ ಉಲ್ಲಂಘನೆ ನಡೆಯುತ್ತಿದೆ. ಇದು ಪ್ರಯಾಣಿಕರ ಜೀವದ ಜೊತೆ ಆಟವಾಡುವಂತಾಗಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುತ್ತೇದಾರ ಸುನೀಲ್ ಕುಮಾರ ದೇವದುರ್ಗ ಮಾತನಾಡಿ, ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆ ಹಾಗೂ ಕಸದ ರಾಶಿಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಘಟಕ ವ್ಯವಸ್ಥಾಪಕರು ಕೂಡಲೇ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ರಾಮನಗೌಡ, ವಾರ್ತಾಭಾರತಿ ಪತ್ರಿಕೆಯ ವರದಿಗಾರರು ವಿಷಯವನ್ನು ನನ್ನ ಗಮನಕ್ಕೆ ತಂದಿದ್ದಾರೆ. ತಕ್ಷಣ ಕ್ರಮ ಕೈಗೊಂಡು ಮೂಲಸೌಕರ್ಯ ಸುಧಾರಣೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಪ್ರತಿದಿನ ಸ್ವಚ್ಛತೆ, ಸುರಕ್ಷತೆ ಮತ್ತು ನಿಯಮ ಪಾಲನೆ ಖಚಿತಪಡಿಸಬೇಕು ಎಂದು ಸಾರ್ವಜಒತ್ತಾಯಿಸಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಡಿಸಿಎಂ ಸಾಮ್ರಾಟ್ ಚೌಧರಿ ʼಖೈನಿʼ ತಿನ್ನುತ್ತಿದ್ದರು: ಆರ್ಜೆಡಿ ಆರೋಪ
ಪಾಟ್ನಾ: ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬಿಹಾರ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ಅಧಿವೇಶನದ ಸಮಯದಲ್ಲಿ ʼಖೈನಿ”( ತಂಬಾಕು ) ತಿನ್ನುತ್ತಿದ್ದರು ಎಂದು ವಿಪಕ್ಷ ಆರ್ಜೆಡಿ ಆರೋಪಿಸಿದೆ. ವೈರಲ್ ವೀಡಿಯೊದಲ್ಲಿ ಸಾಮ್ರಾಟ್ ಚೌಧರಿ ಅವರು ಸದನದಲ್ಲಿ ಕುಳಿತಿರುವಾಗ ತಮ್ಮ ಅಂಗೈಗೆ ಒಂದು ವಸ್ತುವನ್ನು ಉಜ್ಜಿ ನಂತರ ಅದನ್ನು ಬಾಯಿಗೆ ಹಾಕಿಕೊಂಡಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಾಗೂ ಪ್ರತಿಪಕ್ಷದ ಬೆಂಬಲಿಗರು ಉಪಮುಖ್ಯಮಂತ್ರಿ ವಿಧಾನಸಭೆಯೊಳಗೆ ‘ಖೈನಿ’ ತಿನ್ನುತ್ತಿದ್ದರು ಎಂದು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಆರ್ಜೆಡಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ಗಳಿಂದ ಈ ವೀಡಿಯೊವನ್ನು ಹಂಚಿಕೊಂಡವು ಮತ್ತು ಸಾಮ್ರಾಟ್ ಚೌಧರಿ ಅವರನ್ನು ತೀವ್ರವಾಗಿ ಟೀಕಿಸಿದೆ. ಕ್ಲಿಪ್ ಅನ್ನು ಹಂಚಿಕೊಂಡ ಆರ್ಜೆಡಿ, ಸದನದಲ್ಲಿ ತಂಬಾಕು ಅಗಿಯಲು ತಂತ್ರ ಎಂದು ಬರೆದಿದೆ. ವೀಡಿಯೊಗೆ “80 चुटकी 90 ताल, रगड़ के… मुंह में डाल” ಎಂಬ ಶೀರ್ಷಿಕೆಯನ್ನು ನೀಡಿದೆ. ಈ ವೀಡಿಯೊ ಎಕ್ಸ್ ಮತ್ತು ಫೇಸ್ಬುಕ್ನಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದಂತೆ ಹಲವಾರು ಸಾಮಾಜಿಕ ಜಾಲತಾಣಗಳ ಬಳಕೆದಾರರು ಸಾಮ್ರಾಟ್ ಚೌಧರಿಯ ನಡೆಯನ್ನು ಖಂಡಿಸಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯ ಮತ್ತು ಅಂತಹ ನಡವಳಿಕೆ ನಿಜವಾಗಿದ್ದರೆ, ಅದು ಅಶಿಸ್ತಿಗೆ ಸಮಾನವಾಗಿದೆ ಎಂದು ಹೇಳಿದರು. सदन में खैनी खाने की निंजा तकनीक! #Bihar #india #News #RJD pic.twitter.com/NrpsEYQSD7 — Rashtriya Janata Dal (@RJDforIndia) February 18, 2026
ಎಐ ಬೆಳವಣಿಗೆ ಜೊತೆಯಲ್ಲೇ ದೊಡ್ಡಣ್ಣನಿಗೆ ಎದುರಾಯ್ತು ಹೊಸ ಸವಾಲು, ಕಾರಣ ತಿಳಿಯಿರಿ | Artificial Intelligence
ಪ್ರಪಂಚ ಇದೀಗ ಆಧುನಿಕತೆ ಹೆಸರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಮುಂದೆ ನುಗ್ಗುತ್ತಾ ಇದ್ದು, ನೋಡ ನೋಡುತ್ತಲೇ ಕೋಟ್ಯಂತರ ಕೆಲಸಗಳು ಕೂಡ ಇದೇ ಕಾರಣಕ್ಕೆ ಖಾಲಿ ಆಗಲಿವೆಯಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಸಮಸ್ಯೆ ಆಗಲ್ಲ, ಬದಲಾಗಿ ಅಭಿವೃದ್ಧಿ ಆಗುತ್ತೆ ಎಂಬ ವಾದ ಕೂಡ ಇದೆ. ನೋಡ ನೋಡುತ್ತಲೇ ಇಡೀ ಜಗತ್ತಿನ ಮೂಲೆ
ಚಾಮರಾಜನಗರ : ಹುಲಿ ದಾಳಿಗೆ ಹಸು ಬಲಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ಹಾಡಹಗಲೇ ಹುಲಿ ದಾಳಿ ನಡೆಸಿ ಹಸುವೊಂದನ್ನು ಬಲಿ ಪಡೆದ ಘಟನೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯಕ್ಕೆ ಸೇರಿದ ಮಾದಪಟ್ಟಣ ಗ್ರಾಮದ ಗುರುಮಲ್ಲಪ್ಪ ಅವರಿಗೆ ಸೇರಿದ ಹಸುವಿನ ಮೇಲೆ ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಹುಲಿ ಹಠಾತ್ ದಾಳಿ ನಡೆಸಿದೆ. ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಹುಲಿಯನ್ನು ಕಂಡ ರೈತರು ಜೋರಾಗಿ ಕೂಗಿದಾಗ ಗಲಿಬಿಲಿಗೊಂಡ ಹುಲಿಯು ಸಮೀಪದ ಪೊದೆಯೊಳಗೆ ಅಡಗಿ ಕುಳಿತಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತೀಚೆಗೆ ವನ್ಯಜೀವಿಗಳ ಉಪಟಳ ಕಡಿಮೆಯಾಗಿದೆ ಎಂದು ನಿರಾಳರಾಗಿದ್ದ ರೈತರು, ಇದೀಗ ಹಗಲಿನಲ್ಲೇ ಜಾನುವಾರು ಬಲಿ ಪಡೆದ ಘಟನೆಗೆ ಆತಂಕಗೊಂಡಿದ್ದಾರೆ. ಹುಲಿಯನ್ನು ತಕ್ಷಣ ಸೆರೆಹಿಡಿಯಬೇಕು ಹಾಗೂ ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಮಗಾರಿಯ ಪಾವತಿ ಬಾಕಿ, ಸಂಕಷ್ಟದಲ್ಲಿ ಗುತ್ತಿಗೆದಾರರು: ಹೊಣೆ ಹಿಂದಿನ ಸರ್ಕಾರದ್ದು ಎಂದು ಕೈತೊಳೆದ ಕಾಂಗ್ರೆಸ್!
ರಾಜ್ಯದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಸಂಘರ್ಷ ಶುರುವಾಗಿದೆ. ಬಾಕಿ ಪಾವತಿ ಮಾಡದೆ ಇದ್ದರೆ ಮುಷ್ಕರ ಹೂಡುವ ಎಚ್ಚರಿಕೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ನಮ್ಮ ಅವಧಿಯಲ್ಲಿ ಪಾವತಿ ಬಾಕಿ ಇಲ್ಲ. ಬದಲಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿಸಿಕೊಂಡ ಪಾವತಿ ಇದಾಗಿದೆ ಎಂದಿದೆ. ಇದೇ ಸಂದರ್ಭದಲ್ಲಿ ಗುತ್ತಿಗೆದಾರರು ಕಮಿಷನ್ ಆರೋಪವನ್ನು ಮಾಡಿದ್ದಾರೆ. ಆದರೆ ಇದನ್ನು ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ಚೇತರಿಸಿಕೊಂಡ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?
ಕಳೆದ ಕೆಲವು ದಿನಗಳಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಇಂದು ಅಲ್ಪ ಏರಿಕೆ ಕಂಡಿದೆ. ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ, ನಿಧಾನವಾಗಿ ಸ್ಥಿರತೆ ಕಂಡುಕೊಳ್ಳುತ್ತಿದೆ. ಫೆಬ್ರವರಿ ಆರಂಭದಿಂದಲೇ ಅಲ್ಪ ಕುಸಿತ ಕಂಡಿದ್ದ ಚಿನ್ನ ಇದೀಗ ಗುರುವಾರ ಅಲ್ಪ ಏರಿಕೆ ಕಂಡಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಭೌಗೋಳಿಕ ಘರ್ಷಣೆ ಮತ್ತೆ ಸುದ್ದಿ ಮಾಡಿರುವುದು ಮತ್ತು ಅಮೆರಿಕದ ಅರ್ಥವ್ಯವಸ್ಥೆಯ ಕುರಿತಂತೆ ಮಿಶ್ರ ಪ್ರತಿಕ್ರಿಯೆ ಬಂದಿರುವುದು ಚಿನ್ನದ ದರದ ಏರಿಕೆಗೆ ಕಾರಣವಾಗಿದೆ. ಜೊತೆಗೆ ಫೆಡರಲ್ ರಿಸರ್ವ್ ಸಭೆಯ ವಿವರಗಳು ಬಹಿರಂಗವಾಗಲು ನಿರೀಕ್ಷೆ ಮುಂದುವರಿದಿರುವುದು ಚಿನ್ನದ ಬೇಡಿಕೆಯನ್ನು ಕುದುರಿಸಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಭದ್ರತೆಯ ಕಳವಳಗಳು, ಸ್ಥಗಿತಗೊಂಡ ಪರಮಾಣು ಮಾತುಕತೆಗಳು ಮತ್ತು ರಷ್ಯಾ- ಉಕ್ರೇನ್ ಸಂಘರ್ಷದಿಂದ ನಿರಂತರ ಅನಿಶ್ಚಿತತೆಯು ಚಿನ್ನ ಮತ್ತು ಬೆಳ್ಳಿಯ ಬೆಲೆ ಚೇತರಿಕೆಗೆ ಕಾರಣವಾಗಿದೆ. ಇನ್ನೊಂದೆಡೆ ಸತತ ಕುಸಿತದ ಹಾದಿಯಲ್ಲಿದ್ದ ಬೆಳ್ಳಿಯೂ ಏರಿಕೆ ಕಂಡಿದೆ. ಇದೀಗ ಗುರುವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 15 ರೂ. ಏರಿದ ಬೆಳ್ಳಿ ಕೆಜಿಗೆ 2,70,000 ರೂ. ಗೆ ಬಂದು ನಿಂತಿದೆ. ಫೆಬ್ರವರಿ 19ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 229 ರೂ.ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,56,490 ಕ್ಕೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 210 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,43,450 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 172 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,17,370 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 19ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,649 (+229) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,345 (+210) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,737 (+172) ರೂ. ಬೆಲೆಗೆ ತಲುಪಿದೆ. ಹಠಾತ್ ಏರಿದ ಬೆಳ್ಳಿ ಬೆಲೆ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಅಲ್ಪ ಏರಿಕೆ ಕಂಡಿತ್ತು. ಆದರೆ ಫೆಬ್ರವರಿ 10ರಿಂದ ಸತತ ಕುಸಿತ ಕಾಣುತ್ತಾ ಬಂದಿದೆ. ಮಂಗಳವಾರ ಪ್ರತಿ ಗ್ರಾಂಗೆ 8 ರೂ. ಕುಸಿತ ಕಂಡಿರುವ ಬೆಳ್ಳಿ ಕೆಜಿಗೆ 2,60,000 ರೂ. ಗೆ ಬಂದು ನಿಂತಿತ್ತು. ನಂತರ ಬುಧವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಕೆಜಿಗೆ 2,55,000 ರೂ. ಗೆ ಬಂದು ನಿಂತಿದೆ. ಇದೀಗ ಗುರುವಾರ ಏರಿಕೆ ಕಂಡಿದೆ. ಗುರುವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 15 ರೂ. ಏರಿದ ಬೆಳ್ಳಿ ಕೆಜಿಗೆ 2,70,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,664 (+229) ರೂ., 22 ಕ್ಯಾರೆಟ್ ಚಿನ್ನದ ದರ 14,360 (+210) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,649 (+229) ರೂ., 22 ಕ್ಯಾರೆಟ್ ಚಿನ್ನದ ದರ 14,345 (+210) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,654 (+229) ರೂ., 22 ಕ್ಯಾರೆಟ್ ಚಿನ್ನದ ದರ 14,350 (+210) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,818 (+294) ರೂ., 22 ಕ್ಯಾರೆಟ್ ಚಿನ್ನದ ದರ 14,500 (+270) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,649 (+229) ರೂ., 22 ಕ್ಯಾರೆಟ್ ಚಿನ್ನದ ದರ 14,345 (+210) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,649 (+229) ರೂ., 22 ಕ್ಯಾರೆಟ್ ಚಿನ್ನದ ದರ 14,345 (+210) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,664 (+229) ರೂ., 22 ಕ್ಯಾರೆಟ್ ಚಿನ್ನದ ದರ 14,360 (+210) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,664 (+229) ರೂ., 22 ಕ್ಯಾರೆಟ್ ಚಿನ್ನದ ದರ 14,360 (+210) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,664 (+229) ರೂ., 22 ಕ್ಯಾರೆಟ್ ಚಿನ್ನದ ದರ 14,360 (+210) ರೂ.
ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತಕ್ಕೆ 8 ಮಂದಿ ಸ್ಕೀಯರ್ಸ್ ಬಲಿ: USನಲ್ಲಿ 4 ದಶಕಗಳ ಬಳಿಕ ಸಂಭವಿಸಿದ ಭಾರಿ ಹಿಮ ದುರಂತ
ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್ ಟಹೋ ಬಳಿ ಸ್ಕೀಯಿಂಗ್ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರೆ. ಹಿಮಪಾತದ ನಡುವೆಯೂ ಸ್ಕಿಯಿಂಗ್ ಮಾಡಲು ಮುಂದಾಗಿದ್ದು, 2 ದಿನಗಳ ಕಾಲ ಅಲ್ಲಿಯೇ ಇದ್ದು, ಹಿಂದಿರುವಾಗ ಸಮಯದಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಇದು ಅಮೆರಿಕಾದ ಇತಿಹಾಸದಲ್ಲೇ ಸುಮಾರು 4 ದಶಕಗಳ ಬಳಿಕ ನಡೆದ ಮಾರಕ ಹಿಮಪಾತ ದುರಂತವಾಗಿದೆ.
ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಶಿಕ್ಷಣ, ಸಾಹಿತ್ಯ ವಲಯ, ಸಾಂಸ್ಕೃತಿಕ ಸಂಘಟನೆಗಳು, ಸರಕಾರೇತರ ಸಂಘಟನೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ದಿನಾಂಕ 21-2-2026ನೇ ಶನಿವಾರದಂದು ರವೀಂದ್ರ ಕಲಾಭವನ, ವಿ.ವಿ. ಕಾಲೇಜು ಹಂಪನಕಟ್ಟೆ, ಮಂಗಳೂರು ಇಲ್ಲಿ ಬಿ.ಎಂ. ರೋಹಿಣಿ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ನಾನು ಕಂಡಂತೆ ರೋಹಿಣಿ ಮಿತಭಾಷಿ. ಒಬ್ಬರೇ ಇದ್ದರೆ ತಮ್ಮ ಪಾಡಿಗೆ ಓದಿನಲ್ಲಿ ತಲ್ಲೀನೆ. ಗುಂಪಿನಲ್ಲಿದ್ದರೆ ಸಂದರ್ಭ ನೋಡಿ ಮಾತನಾಡುವ ಜಾಣೆ. ಬಿಳಿ ಸೀರೆಯುಟ್ಟು ಬಂದರೆ ಯಾರಿವಳು? ಎಂದು ಇನ್ನೊಮ್ಮೆ ನೋಡುವ, ಆತ್ಮೀಯವಾಗಿ ಮಾತನಾಡುವ, ಸ್ನೇಹಕ್ಕೆ ಕೈಚಾಚುವ, ಆದರಿಸುವ ವ್ಯಕ್ತಿತ್ವ. ತಮಗೆ ಇನ್ನೊಬ್ಬರು ನೋವು ಕೊಟ್ಟರೂ ತಾವು ಹಿಂದಿರುಗಿ ಉತ್ತರಿಸದ ಚತುರೆ. ಆದರೆ ಅಷ್ಟೇ ಸ್ವಾಭಿಮಾನಿ ಮಹಿಳೆ. ಕೆಲವೊಮ್ಮೆ ಇದ್ದುದನ್ನು ಇದ್ದ ಹಾಗೆ ಹೇಳುವವರು. ಅನ್ಯಾಯದ ನಡೆ ನುಡಿ ಕಂಡರೆ ನೇರವಾಗಿ ಅದನ್ನು ಧಿಕ್ಕರಿಸಿ ಮಾತನಾಡುವ ಛಾತಿ ಉಳ್ಳವರು. ಆದರೆ ಆಂತರ್ಯದಲ್ಲಿ ಅವರು ಮೃದು, ಸ್ನೇಹಮಯಿ. ವೃತ್ತಿಯಲ್ಲಿ ಶಾಲಾಶಿಕ್ಷಕಿಯಾಗಿ ಪಾಠ ಹೇಳುವ ಗುರು. ವಿದ್ಯಾರ್ಥಿಗಳಿಗೆ ನೆಚ್ಚಿನ ಅಭಿಮಾನಿ. ಪ್ರವೃತ್ತಿಯಲ್ಲಿ ಸಾಹಿತ್ಯದ ಓದು, ಬರವಣಿಗೆ. ಕನ್ನಡ, ಹಿಂದಿ, ಮಲೆಯಾಳಂ, ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ. ಈಗಲೂ ಅವರ ಅನೇಕ ಭಾವಪೂರ್ಣ ಪತ್ರಗಳು ನನ್ನ ಹೆಸರಿಗೆ ಅಂಚೆಯಲ್ಲಿ ಬರುತ್ತವೆ. ನಾನೋ ಕೈ ಬರಹದಲ್ಲಿ ಉತ್ತರಿಸದ ಸೋಮಾರಿ. ಫೋನ್ ಒಂದೇ ನನ್ನ ಮಾತಿಗೆ ರಹದಾರಿ. ಆದರೆ ಫೋನ್ನಲ್ಲಿ ಮಾತಾಡಿ ಬಗೆಹರಿಸಬೇಕಾದ ವಿಷಯವನ್ನು ಪತ್ರದಲ್ಲಿ ಬರೆದು ಮನಬಿಚ್ಚಿ ಮಾತನಾಡಲು ಅವರಿಗೆ ಹೆಚ್ಚು ಇಷ್ಟ. ‘‘ನಾನಂತೂ ಪತ್ರ ಸಂಸ್ಕೃತಿಯನ್ನು ತುಂಬಾ ಹಚ್ಚಿಕೊಂಡವಳು. ಹೊಸ ತಂತ್ರಜ್ಞಾನ, ಅಂತರ್ಜಾಲದ ಬಳಕೆಯಿಂದ ದೂರವಿರುವ ನಾನು ಎತ್ತಿನಗಾಡಿ ಯುಗದವಳು ಎಂದು ಹೇಳಿಕೊಳ್ಳಲು ಮುಜುಗರ ಪಡುವುದಿಲ್ಲ’’ ಎಂದು ಹೆಮ್ಮೆಯಿಂದ ಹೇಳುವ ರೋಹಿಣಿಗೆ ನನ್ನ ಕೃತಿಗಳನ್ನು ಓದಲು ಕೊಟ್ಟರೆ ಮುದ್ದಾದ ಉದ್ದುದ್ದ ಅಕ್ಷರದಲ್ಲಿ ತಪ್ಪದೆ ವಿಮರ್ಶೆ ಬರೆಯುತ್ತಾರೆ. ಅವರೊಬ್ಬ ಉತ್ತಮ ವಿಮರ್ಶಕಿ. ನನ್ನ ಸ್ಮತಿಯಾನ ಓದಿ, ‘‘ಪ್ರೀತಿಯ ಬಟ್ಟಲನ್ನು ಬಾಲ್ಯದಿಂದಲೇ ಎತ್ತಿಕೊಂಡವರು ನೀವು!’’ ಎಂದು ಚೆಂದದ ಪತ್ರ ಬರೆದಿದ್ದರು. ಈಗಲೂ ಆ ಪತ್ರದ ಸಾಲು ನೆನಪಾದರೆ ಜಿ.ಎನ್. ಅಶೋಕವರ್ಧನರ ಬ್ಲಾಗ್ನಲ್ಲಿ ಬರೆದ ಅವರದೇ ಆತ್ಮಕಥನ ‘ದೀಪದಡಿ ಕತ್ತಲೆ’ ನೆನಪಾಗುತ್ತದೆ. ಬಾಲ್ಯದಲ್ಲಿ ಅವರ ಕೈ ಮೇಲೆ ಕುದಿ ನೀರು ಬಿದ್ದು ಸುಟ್ಟದ್ದು, ತನ್ನ ಮುಂದಿನ ಜೀವನವೂ ಹೀಗೆ ಕಷ್ಟದಲ್ಲಿ ಸುಡು ಬೆಂಕಿ ಆಗುತ್ತದೆಯೇ? ಹೇಳುತ್ತ ತಮ್ಮ ನೋವಿನ ಅನಿಸಿಕೆ ಬರೆದದ್ದು ಯೋಚಿಸಿ ವಿಹ್ವಲಳಾಗುತ್ತೇನೆ. ಈ ಆತ್ಮಕಥನವು ಆನಂತರ ‘ನಾಗೊಂದಿಗೆಯೊಳಗಿನಿಂದ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಗಳಿಸಿದ್ದು ಎಲ್ಲರಿಗೂ ತಿಳಿದದ್ದೇ. ಅಷ್ಟೇ ಅಲ್ಲ, ಕೊಂಕಣಿ ಭಾಷೆಗೂ ಅನುವಾದವಾಗಿ ಅಲ್ಲಿಯೂ ಜನ ಮೆಚ್ಚುಗೆ ಪಡೆದದ್ದು ಆ ಕೃತಿಯ ಹೆಗ್ಗಳಿಕೆ. ಸುಖ, ಸಂತೋಷ, ನೋವು, ಅವಮಾನ, ಕಷ್ಟ, ದುಃಖವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದ ರೋಹಿಣಿ ಸ್ಥಿತಪ್ರಜ್ಞೆ. ರೋಹಿಣಿಯ ಅಂತಃಕರಣದಲ್ಲಿ ನೊಂದವರ, ದಮನಿತರ, ತುಳಿತಕ್ಕೆ ಒಳಗಾದವರ, ವೇಶ್ಯೆ-ದೇವದಾಸಿಯಾಗಿ ನಲುಗಿದ ಮಹಿಳೆಯರೆಂದರೆ ಅಪಾರ ಅನುಕಂಪವಿದೆ. ಅವರ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಜೀವನದಲ್ಲಿ ಹಾಸುಹೊಕ್ಕಾದ ಕ್ರೌರ್ಯ, ಅಜ್ಞಾನ, ಮೌಢ್ಯ, ಅನಕ್ಷರತೆಯ ಬಗ್ಗೆ ಮರುಕವಿದೆ. ಏನೆಲ್ಲ ಕಷ್ಟವೋ. ಅವರ ಜೀವನದಲ್ಲಿ ಸುಧಾರಣೆಯ ಗಾಳಿ ಬೀಸಲಿ ಎಂಬ ಉದ್ದೇಶದಿಂದಲೇ ತಮ್ಮ ಮಾತು, ಬರವಣಿಗೆಯಿಂದ ಸಂಶೋಧನೆಗೆ ಇಳಿದರು, ಊರೂರು ತಿರುಗಿದರು, ಅಧ್ಯಯನ ಮಾಡಿದರು. ಮಾಸ್ತಿಕಲ್ಲುಗಳ ಕಥೆ ಕೇಳುವಾಗ ಕಣ್ಣೀರು ಮಿಡಿದರು. ವೇಶ್ಯೆಯರ ವ್ಯಥೆಯಲ್ಲಿ ಕರಗಿದರು. ನೈಜ ಸಂಗತಿಗಳಿಗೆ ಬರಹದ ರೂಪ ಕೊಟ್ಟು ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಕಥಾಸಂಕಲನ, ಲೇಖನ ಸಂಕಲನ, ಅನುಭವ ಕಥನ, ವ್ಯಕ್ತಿಚಿತ್ರ, ಆತ್ಮಕಥನ ಹೀಗೆ ಹದಿನೆಂಟು ಕೃತಿಗಳು ಅಲ್ಲದೆ ಬೇರೆಯವರ ಜೊತೆ ಸೇರಿ ನಾಲ್ಕು ಸಂಶೋಧನಾ ಕೃತಿಗಳನ್ನು ರಚಿಸಿದ ಹೆಗ್ಗಳಿಕೆ ಇವರದು. ಸದ್ದಿಲ್ಲದ ಬಿಡುವಿಲ್ಲದ ಬರವಣಿಗೆ. ‘‘ನನ್ನ ಕೃತಿಗಳಿಗೆ ಓದುಗರ ಸ್ಪಂದನವೇ ಪುರಸ್ಕಾರ’’ ಎಂದರೂ ಅವರನ್ನು ಅರಸಿಕೊಂಡು ಅನೇಕ ಬಹುಮಾನಗಳು, ಪ್ರಶಸ್ತಿಗಳೂ ಬಂದವು. ಕೆಲವು ಕೃತಿಗಳು ತುಳು, ಕೊಂಕಣಿ ಭಾಷೆಗೂ ಅನುವಾದವಾಗಿ ಅಲ್ಲಿಯೂ ಬಹುಮಾನ ಪಡೆದವು. ‘ವೇಶ್ಯಾವಾಟಿಕೆಯ ಕಥೆ - ವ್ಯಥೆ’ ಕೃತಿ ರಚಿಸುವಾಗ ನಿಮ್ಮನ್ನು ಯಾರೂ ಪ್ರತಿರೋಧಿಸಲಿಲ್ಲವೇ?’’ ಪುಸ್ತಕ ಓದಿ ಮೆಚ್ಚಿ ನಾನು ಕೇಳಿದ್ದೆ. ರೋಹಿಣಿ ಗಂಭೀರವಾಗಿ, ‘‘ಅಸಹಕಾರ, ಪ್ರತಿರೋಧ ಆ ವರ್ಗದವರಿಂದ ಬಂದಿತ್ತು. ಅವರನ್ನು ಭೇಟಿ ಆಗುವುದು ಕಷ್ಟ, ಭೇಟಿಯಾದರೆ ಮಾತನಾಡಿಸುವುದು ಕಷ್ಟ. ಮಾತನಾಡಿದರೆ ಸತ್ಯ ತಿಳಿಯುವುದು ಕಷ್ಟ ಎಂದು ಅರಿವಾದರೂ ಹೀಗೊಂದು ದಮನಿತ ಸ್ತ್ರೀ ಸಮುದಾಯ ಸಮಾಜದಲ್ಲಿ ಹಿಂಸೆಯಲ್ಲಿ ನರಳುತ್ತಿದೆ ಎಂಬ ಸತ್ಯ ನನಗೆ ಹೇಳಬೇಕಿತ್ತು. ಆದರೆ ಅದಿನ್ನೂ ಅಪೂರ್ಣ. ಅವರನ್ನು ಆ ಜೀವನದಿಂದ ಇನ್ನೂ ಹೊರತರಲು ನನ್ನಿಂದ ಆಗಲಿಲ್ಲ ಎಂಬ ನೋವು, ವ್ಯಥೆ ನನಗಿದೆ’’ ಎನ್ನುತ್ತಾರೆ. ನೊಂದ ಹೆಣ್ಣಿನ ಜೀವಕ್ಕೆ ಮಿಡಿಯುವ ರೋಹಿಣಿ ಪರರನ್ನು ತನ್ನಂತೆ ತಿಳಿದವರು. ಜೀವನ್ಮುಖಿ ಧೋರಣೆ, ಜೀವನೋತ್ಸಾಹ ಇದ್ದವರು. ದಣಿವರಿಯದ ಕೆಲಸ ಕಾರ್ಯಗಳಿಂದ ಇನ್ನೊಬ್ಬರಿಗೂ ಆದರ್ಶಪ್ರಾಯರು. ಬೋಧನೆಗಿಂತ ಮಾಡಿ ತೋರಿಸುವುದೇ ಹೆಚ್ಚು. ಅಲ್ಲಿಯೂ ತಾನು ಮಾಡಿದೆನೆಂಬ ಅಹಂಕಾರವಿಲ್ಲ, ಮತ್ತದೇ ವಿನೀತ ಭಾವ. ನಮ್ಮ ಸಂಘದಲ್ಲಿ ಯಾವುದೇ ಸಣ್ಣ ದೊಡ್ಡ ಕೆಲಸಗಳಿರಲಿ, ಅವರಿಗೆ ಪ್ರಿಯವೇ. ಲೈಬ್ರರಿಯ ಒಪ್ಪ ಓರಣದಲ್ಲಿ ಅವರದು ಸಿಂಹಪಾಲು (ಇತ್ತೀಚೆಗೆ ಲೈಬ್ರರಿಯ ಉಸ್ತುವಾರಿಗೆ ಬೇರೆ ಸದಸ್ಯೆಯರಿದ್ದಾರೆ). ಲೈಬ್ರರಿ ಕಪಾಟಿನಲ್ಲಿ ಯಾವ ಯಾವ ಲೇಖಕಿಯರ ಪುಸ್ತಕಗಳು ಎಷ್ಟು ಇವೆ, ಎಲ್ಲಿ ಇಟ್ಟಿದೆ ಎಂದು ನಿದ್ದೆಗಣ್ಣಿನಲ್ಲೂ ನಿಖರವಾಗಿ ಹೇಳಬಲ್ಲರು. ಇದು ಅವರ ಸಾಹಿತ್ಯಾಧ್ಯಯನದ, ಪುಸ್ತಕ ಪ್ರೀತಿಯ ಒಂದು ನೋಟ. ಎರವಲು ತಂದು ಓದದೆ, ಕೊಂಡು ಓದುವುದೇ ಅವರ ಜಾಯಮಾನ. ಅನೇಕ ಹಿರಿಯರು, ಕಿರಿಯರೊಂದಿಗೆ ಸಂಘಕ್ಕೆ ಬೇಕಾದ ನಿವೇಶನ ಮಂಜೂರು ಮಾಡಿಸುವ ಓಡಾಟದಿಂದ ತೊಡಗಿ ಇತ್ತೀಚೆಗೆ ಅದರ ಕಟ್ಟಡದ ಪುನರ್ ನಿರ್ಮಾಣದ ಕಾರ್ಯದವರೆಗೆ ಅವರು ಜೋಡಿಸಿದ ಕೈ ಅದೆಷ್ಟು ಹೃದಯಗಳನ್ನು ಆತ್ಮೀಯವಾಗಿ ಜೋಡಿಸಿದವೋ! ಎಷ್ಟೊಂದು ಅಭಿಮಾನ ಸಂಘದ ಮೇಲೆ! ಸಂಘದ ಎಲ್ಲ ಹಿರಿ-ಕಿರಿಯ ಸದಸ್ಯೆಯರಿಗೂ ಅವರೆಂದರೆ ಅಪಾರ ಅಭಿಮಾನ. ಜೀವನಪ್ರೀತಿ, ಜೀವನೋತ್ಸಾಹದ ನಮ್ಮ ರೋಹಿಣಿ ಅವರು ಎಪ್ರಿಲ್ 6, 2026ಕ್ಕೆ 82 ತುಂಬಿ 83ಕ್ಕೆ ಕಾಲಿಡುತ್ತಿದ್ದಾರೆ. ಅವರು ಹೊಸ ಪುಸ್ತಕ ಬರೆಯುವ ಸಿದ್ಧತೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಎಲ್ಲ ಸಂಘ ಸಂಸ್ಥೆಯವರು ಒಗ್ಗೂಡಿ ಅವರ ಮೇಲಿನ ತಮ್ಮ ಪ್ರೀತಿ, ಅಭಿಮಾನ, ಗೌರವಗಳ ಅಭಿವ್ಯಕ್ತಿಗಾಗಿ 21-02-2026ರಂದು ‘ನಾಗರಿಕ ಸನ್ಮಾನ’ ಮಾಡುತ್ತಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬಂದು ಕನ್ನಡ ಸಾಹಿತ್ಯಲೋಕ ಶ್ರೀಮಂತವಾಗಲಿ. ಆಯುರಾರೋಗ್ಯ, ನೆಮ್ಮದಿಯ ಸುಖ ಜೀವನ ಅವರದಾಗಿರಲಿ. ಅಭಿನಂದನೆಗಳು, ಶುಭ ಹಾರೈಕೆಗಳು.
Gold Price Feb 19: ಚಿನ್ನ - ಬೆಳ್ಳಿ ಬೆಲೆಯಲ್ಲಿ ದಿಢೀರ್ ಬದಲಾವಣೆ: ಇಂದಿನ ಚಿನ್ನ - ಬೆಳ್ಳಿ ಬೆಲೆ ಎಷ್ಟಿದೆ
Gold Price Feb 19: ಚಿನ್ನ ಪ್ರಿಯರಿಗೆ ಗುರುವಾರ ಮತ್ತೆ ಶಾಕ್ ಎದುರಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಗುರುವಾರ ಭಾರೀ ಹೆಚ್ಚಳವಾಗಿದೆ. ಚಿನ್ನದ ಬೆಲೆಯಲ್ಲಿ ಫೆಬ್ರವರಿ 19ರ ಗುರುವಾರದಂದು ಭಾರೀ ಹೆಚ್ಚಳವಾಗಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿತ್ತು. ಆದರೆ ಇದೀಗ ಗುರುವಾರ ಏಕಾಏಕಿ
ಟ್ರಂಪ್ ಜೊತೆಗಿನ ಸಂಘರ್ಷ ಮೀರಿ ಕ್ಯೂಬಾ ಈಗಿನ ಬಿಕ್ಕಟ್ಟಿನಿಂದ ಎದ್ದು ನಿಂತೀತೇ?
ಈಗಾಗಲೇ ಆಹಾರ ಮತ್ತು ಔಷಧದಂತಹ ಮೂಲಭೂತ ಸರಬರಾಜುಗಳ ಕೊರತೆಯಿಂದ ಬಳಲುತ್ತಿರುವ ಕ್ಯೂಬಾ, ಕಸದ ರಾಶಿಯಿಂದಾಗಿ ಇನ್ನಷ್ಟು ಹದಗೆಟ್ಟಿದೆ. ಕ್ಯೂಬಾದಲ್ಲಿ ಕಸದ ಟ್ರಕ್ಗಳನ್ನು ಓಡಿಸಲು ಸಾಕಷ್ಟು ಇಂಧನವೂ ಇಲ್ಲ. ಇದು ರಾಜಧಾನಿ ಹವಾನಾ ಮತ್ತು ಇತರ ಹಲವಾರು ನಗರಗಳಲ್ಲಿ ಕಸದ ರಾಶಿ ಬೀಳಲು ಕಾರಣವಾಗಿದೆ. ಇದೆಲ್ಲದರ ನಡುವೆ ಟ್ರಂಪ್ ಆಟ ಶುರುವಾಗಿದೆ. ಹಾಗಾದರೆ, ಟ್ರಂಪ್ ಕ್ಯೂಬಾದಿಂದ ಏನು ಬಯಸುತ್ತಾರೆ? ಕ್ಯೂಬಾ ದಶಕಗಳಲ್ಲಿಯೇ ಅತ್ಯಂತ ಭೀಕರವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆ ಮತ್ತು ಆಹಾರದ ಕೊರತೆಯಿಂದ ಹಿಡಿದು ಹವಾನಾದ ಬೀದಿಗಳಲ್ಲಿ ಕಸದ ರಾಶಿಯವರೆಗೆ ಈ ಬಿಕ್ಕಟ್ಟಿನ ವ್ಯಾಪ್ತಿಯಿದೆ. ಒಂದೆಡೆ ಜನರು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿರುವಾಗಲೇ, ಹೊರಗೆ ಇಡೀ ನಗರ ಕೊಳೆಯುತ್ತಿರುವ ಆಹಾರದ ವಾಸನೆಯಿಂದ ತುಂಬಿದೆ. ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದ ಬೀದಿಗಳಿಗೆ ಇಳಿಯುತ್ತಿದ್ದಾರೆ. ನಿರುದ್ಯೋಗಿಗಳು ಅದೇ ಕಸದಲ್ಲಿ ಆಹಾರಕ್ಕಾಗಿ ಹುಡುಕುತ್ತಿರುವ ಘೋರ ಸ್ಥಿತಿಯಿದೆ. ಈಗಾಗಲೇ ಆಹಾರ ಮತ್ತು ಔಷಧದಂತಹ ಮೂಲಭೂತ ಸರಬರಾಜುಗಳ ಕೊರತೆಯಿಂದ ಬಳಲುತ್ತಿರುವ ಕ್ಯೂಬಾ, ಕಸದ ರಾಶಿಯಿಂದಾಗಿ ಇನ್ನಷ್ಟು ಹದಗೆಟ್ಟಿದೆ. ಕ್ಯೂಬಾದಲ್ಲಿ ಕಸದ ಟ್ರಕ್ಗಳನ್ನು ಓಡಿಸಲು ಸಾಕಷ್ಟು ಇಂಧನವೂ ಇಲ್ಲ. ಇದು ರಾಜಧಾನಿ ಹವಾನಾ ಮತ್ತು ಇತರ ಹಲವಾರು ನಗರಗಳಲ್ಲಿ ಕಸದ ರಾಶಿ ಬೀಳಲು ಕಾರಣವಾಗಿದೆ. ಇದೆಲ್ಲದರ ನಡುವೆ ಟ್ರಂಪ್ ಆಟ ಶುರುವಾಗಿದೆ. ಹಾಗಾದರೆ, ಟ್ರಂಪ್ ಕ್ಯೂಬಾದಿಂದ ಏನು ಬಯಸುತ್ತಾರೆ? ಕ್ಯೂಬಾ ಸರಕಾರದೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತುಕತೆಯ ಫಲಿತಾಂಶ ಏನಾಗುತ್ತದೆ? ಫ್ಲೋರಿಡಾ ಕ್ಯೂಬಾದಿಂದ ಕೇವಲ 145 ಕಿಲೋಮೀಟರ್ ದೂರದಲ್ಲಿದೆ. ಆದರೆ ಎರಡೂ ನಗರಗಳ ಜೀವನಾಡಿ ಅಥವಾ ಎರಡೂ ಸ್ಥಳಗಳ ಜೀವನಶೈಲಿಯ ನಡುವೆ ದಶಕಗಳ ಅಂತರವಿದೆ. ಅಮೆರಿಕದ ನಿರ್ಬಂಧಗಳು ಕ್ಯೂಬಾವನ್ನು ಪ್ರಪಂಚದ ಉಳಿದ ಭಾಗಗಳಿಗಿಂತ ಅರ್ಧ ಶತಮಾನ ಹಿಂದಕ್ಕೆ ತಳ್ಳಿವೆ. ಸುದ್ದಿ ಸಂಸ್ಥೆ ರಾಯ್ಟರ್ಸ್ ಪ್ರಕಾರ, ಕ್ಯೂಬಾದ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ಕೆಲವರು ಕಸದಲ್ಲಿ ಉಪಯುಕ್ತವಾದದ್ದು ಏನಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದಾರೆ. ಕೊಳೆತ ಆಹಾರವನ್ನು ಭಿಕ್ಷುಕರು ತಿನ್ನುತ್ತಿರುವ ವರದಿಗಳೂ ಇವೆ. ಇದೇ ರಸ್ತೆಗಳಲ್ಲಿ ಚಾಲಕರು, ಸೈಕ್ಲಿಸ್ಟ್ಗಳು ಮತ್ತು ಪಾದಚಾರಿಗಳು ಈ ಕಸದ ರಾಶಿಗಳ ನಡುವೆಯೇ ಸಂಚರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ, ಕ್ಯೂಬಾದಲ್ಲಿ ತ್ಯಾಜ್ಯ ತುರ್ತು ಪರಿಸ್ಥಿತಿ ಇದೆ. ಕ್ಯೂಬಾ ಇಂಧನ ಬಿಕ್ಕಟ್ಟನ್ನು ಮಾತ್ರ ಎದುರಿಸುತ್ತಿಲ್ಲ, ಅಲ್ಲಿ ಮಾನವೀಯ ಬಿಕ್ಕಟ್ಟು ಇದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಒಂದು ಕೊಟಿಗೂ ಹೆಚ್ಚು ಜನರ ಜೀವನ ಅಪಾಯದಲ್ಲಿದೆ. ವಿದ್ಯುತ್ ಕೊರತೆ ಇದೆ. ಕ್ಯೂಬಾದಲ್ಲಿ ಇಂಧನ ಲಭ್ಯತೆ ಕಷ್ಟ ಎಂದು ದ್ವೀಪದ ಮೇಲೆ ಹಾರುವ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲಾಗಿದೆ. ರಶ್ಯ ಕೂಡ ಕ್ಯೂಬಾಗೆ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ರಶ್ಯದ ಪ್ರವಾಸಿಗರನ್ನು ಸ್ಥಳಾಂತರಿಸಲು ಏಕಮುಖ ವಿಮಾನಗಳನ್ನು ಹಾರಿಸಲಾಗುತ್ತಿದೆ. ಕೆನಡಾದ ವಿಮಾನಯಾನ ಸಂಸ್ಥೆಗಳು ಕ್ಯೂಬಾಗೆ ತಮ್ಮ ಮಾರ್ಗಗಳನ್ನು ರದ್ದುಗೊಳಿಸಿವೆ. ದೇಶದಲ್ಲಿ ಅನಿಲ ಕೊರತೆಯೂ ಇದೆ. ಜನರು ಮರ ಮತ್ತು ಕಲ್ಲಿದ್ದಲಿನಿಂದ ಅಡುಗೆ ಮಾಡುವ ಸ್ಥಿತಿಯಿದೆ. ಈಗ ತ್ಯಾಜ್ಯ ಜನರ ಆರೋಗ್ಯಕ್ಕೆ ಗಂಭೀರ ಅಪಾಯವಾಗಿ ಪರಿಣಮಿಸಿದೆ. ಇಂಧನ ಕಡಿಮೆಯಾಗಿರುವುದರಿಂದ, ಹವಾನಾದಲ್ಲಿ ಕಸ ಸಂಗ್ರಹಕ್ಕಾಗಿ ಇರುವ 106 ಟ್ರಕ್ಗಳಲ್ಲಿ 44 ಮಾತ್ರ ಕೆಲಸ ಮಾಡುತ್ತಿವೆ. 10 ದಿನಗಳಿಗಿಂತ ಹೆಚ್ಚು ಸಮಯದಿಂದ ಅನೇಕ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸದೆ ಬಿಡಲಾಗಿದೆ. ಕ್ಯೂಬಾದ ರಾಜಧಾನಿಯ ಪರಿಸ್ಥಿತಿಯೇ ಹೀಗಿದೆಯೆಂದರೆ, ಇತರ ನಗರಗಳಲ್ಲಿನ ಪರಿಸ್ಥಿತಿಯನ್ನು ಊಹಿಸಬಹುದು. ಈ ತಿಂಗಳ ಆರಂಭದಲ್ಲಿ, ಕ್ಯೂಬಾದ ಕಮ್ಯುನಿಸ್ಟ್ ಸರಕಾರ ಬಿಕ್ಕಟ್ಟನ್ನು ಪರಿಹರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಹೇಳಿತ್ತು. ಆದಾಯ ಹೆಚ್ಚಿಸಲು ಕ್ಯೂಬಾದ ಪ್ರಸಿದ್ಧ ಸಿಗಾರ್ಗಳ ಮಾರಾಟ ಹೆಚ್ಚಿಸುವುದು, ಆಹಾರದ ಕೊರತೆ ತಪ್ಪಿಸಲು ದ್ವೀಪದಲ್ಲಿ ಭತ್ತದ ಕೃಷಿ ಹೆಚ್ಚಿಸುವುದರ ಬಗ್ಗೆ ಸರಕಾರ ಹೇಳಿತ್ತು. ಆದರೂ, ಕ್ಯೂಬಾ ಇವತ್ತಿಗೂ ನೀರಾವರಿಗಾಗಿ ನವೀಕರಿಸಬಹುದಾದ ಇಂಧನ ಬಳಸುವ ಮತ್ತು ಹೊಲ ಉಳುಮೆ ಮಾಡಲು ಪ್ರಾಣಿಗಳನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿದೆ. 21ನೇ ಶತಮಾನದ ಕಾಲು ಭಾಗ ಕಳೆದಿದ್ದರೂ, ಕ್ಯೂಬಾ ಒಂದು ಶತಮಾನ ಹಿಂದಕ್ಕೆ ಹೋಗುತ್ತಿದೆ. ಜಗತ್ತು ಎಐ ಕಡೆಗೆ ಸಾಗುತ್ತಿದ್ದರೆ, ಕ್ಯೂಬಾ ಪ್ರಾಣಿ ಸಾಕಣೆಗೆ ಮರಳುವ ಅನಿವಾರ್ಯತೆಯಲ್ಲಿದೆ. ಈಗ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಇರುವುದರಿಂದ, ಅಧ್ಯಕ್ಷ ಮಿಗುಯೆಲ್ ಡಯಾಜ್-ಕನೆಲ್ ಕಚೇರಿ ಸಮಯ ಕಡಿಮೆ ಮಾಡಿದ್ದಾರೆ. ಅಲ್ಲದೆ, ಇಂಧನ ಮಾರಾಟದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಹೆಚ್ಚಿನ ಶಾಲೆಗಳು ಮತ್ತು ಆಸ್ಪತ್ರೆಗಳು ಮುಚ್ಚಿವೆ. ಕ್ಯೂಬಾ ಈ ಪರಿಸ್ಥಿತಿಯನ್ನು ಹೇಗೆ ತಲುಪಿತು ಎಂದು ನೋಡಿದರೆ, ಅದು ತನ್ನ ಹೆಚ್ಚಿನ ಅಗತ್ಯಗಳಿಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಸುತ್ತಮುತ್ತಲಿನ ಪ್ರಮುಖ ದೇಶಗಳೆಂದರೆ, ಯುಎಸ್, ಮೆಕ್ಸಿಕೊ ಮತ್ತು ವೆನೆಝುವೆಲಾ. ಯುಎಸ್ 1960ರಿಂದ ಕ್ಯೂಬಾದ ಮೇಲೆ ವಾಣಿಜ್ಯ ನಿರ್ಬಂಧ ವಿಧಿಸಿದೆ. ಅದಕ್ಕೂ ಮೊದಲು, ಕ್ಯೂಬಾವನ್ನು ಅಮೆರಿಕದ ಬೆಂಬಲ ಹೊಂದಿದ್ದ ಅಧ್ಯಕ್ಷ ಫುಲ್ಜೆನ್ಸಿಯೊ ಬಟಿಸ್ಟಾ ಆಳುತ್ತಿದ್ದರು. 1959ರಲ್ಲಿ ಕ್ಯೂಬನ್ ಕ್ರಾಂತಿಯ ನಂತರ, ಫಿಡೆಲ್ ಕ್ಯಾಸ್ಟ್ರೋ ಬಟಿಸ್ಟಾ ಅವರನ್ನು ಅಧಿಕಾರದಿಂದ ಹೊರಹಾಕಿದರು. ಕ್ಯಾಸ್ಟ್ರೋ ಕ್ಯೂಬಾದಲ್ಲಿ 1.8 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ವಶಪಡಿಸಿಕೊಂಡರು.ಅದೊಂದು ಅಸಾಧಾರಣ ಘಟನೆಯಾಗಿತ್ತು. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈ ಸಮಯದಲ್ಲಿ ಕ್ಯೂಬಾದ ಮೇಲೆ ಯುಎಸ್ ನಿರ್ಬಂಧಗಳನ್ನು ವಿಧಿಸಲು ಶುರು ಮಾಡಿತು. ಅದು ಇನ್ನಷ್ಟು ಬಿಗಿಯಾಗಿದೆ. ಅಲ್ಲದೆ ಯುಎಸ್ ಕ್ಯೂಬಾದ ಮೇಲೆ ಮಾತ್ರ ನಿರ್ಬಂಧ ಹೇರುತ್ತಿಲ್ಲ. ಇತರ ದೇಶಗಳನ್ನು ಸಹ ನಿರ್ಬಂಧಿಸುತ್ತದೆ. ಈಗ, ಟ್ರಂಪ್ ಅವರ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಯುಎಸ್ ಹೊರತುಪಡಿಸಿದರೆ ಕ್ಯೂಬಾಗೆ ಆಹಾರ ಪೂರೈಸಲು ವೆನೆಝುವೆಲಾ ಮತ್ತು ಮೆಕ್ಸಿಕೊ ಇವೆ. ರಶ್ಯ ಕೂಡ ಇದೆ. ಕ್ಯೂಬಾ ತನ್ನ ಹೆಚ್ಚಿನ ಪ್ರಮಾಣದ ತೈಲವನ್ನು ವೆನೆಝುವೆಲಾದಿಂದ ಪಡೆಯುತ್ತಿತ್ತು. ಆದರೆ ಈಗ ವೆನೆಝುವೆಲಾ ಅಮೆರಿಕದ ಹಿಡಿತದಲ್ಲಿದ್ದು, ವೆನೆಝುವೆಲಾದಿಂದ ಕ್ಯೂಬಾಗೆ ತೈಲ ಸರಬರಾಜನ್ನು ಟ್ರಂಪ್ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಟ್ರಂಪ್ ಬೆದರಿಕೆಗಳಿಂದಾಗಿ ಕಳೆದ ವರ್ಷ ಡಿಸೆಂಬರ್ನಿಂದಲೇ ವೆನೆಝುವೆಲಾ ಸರಬರಾಜನ್ನು ಕಡಿಮೆ ಮಾಡಿತ್ತು. ಕ್ಯೂಬಾಗೆ ತೈಲ ಪೂರೈಸಿದರೆ ಭಾರೀ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ, ಮೆಕ್ಸಿಕೊ ಕೂಡ ತನ್ನ ಸರಬರಾಜುಗಳನ್ನು ಕಡಿತಗೊಳಿಸಿತು. ರಶ್ಯ ಕ್ಯೂಬಾಗೆ ತೈಲ ಪೂರೈಸಬಹುದು ಎಂಬ ಸುದ್ದಿಯಿತ್ತು. ಆದರೆ ಯಾವುದೇ ನಿರ್ದಿಷ್ಟ ದಿನಾಂಕ ಘೋಷಿಸಲಾಗಿಲ್ಲ ಮತ್ತು ಯಾವುದೇ ರಶ್ಯದ ಸರಕು ಕ್ಯೂಬಾಗೆ ಆಗಮಿಸಿದ ಬಗ್ಗೆ ಸುದ್ದಿಯಿಲ್ಲ. ರಶ್ಯ ಮತ್ತು ಅದರೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಯುಎಸ್ ಈಗಾಗಲೇ ನಿರ್ಬಂಧಗಳನ್ನು ವಿಧಿಸಿದೆ. ಈಗ, ಕ್ಯೂಬಾದಲ್ಲಿ ರಶ್ಯ ತನ್ನ ಕ್ಷಿಪಣಿಗಳನ್ನು ನಿಯೋಜಿಸಲು ಬಯಸಿದ್ದರೂ, ಸದ್ಯ ಅದು ಉಕ್ರೇನ್ ಯುದ್ಧದಲ್ಲಿ ಸಿಲುಕಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಕ್ಯೂಬಾಗೆ ಸಹಾಯ ಮಾಡಲು ಹೋಗಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಲು ರಶ್ಯ ಸದ್ಯ ಬಯಸಲಿಕ್ಕಿಲ್ಲ ಎನ್ನಲಾಗುತ್ತಿದೆ. ಮೆಕ್ಸಿಕೋ ಕಳೆದ ವಾರ ಕ್ಯೂಬಾಗೆ 800 ಟನ್ ಮಾನವೀಯ ನೆರವು ಹೊಂದಿರುವ ಎರಡು ನೌಕಾ ಹಡಗುಗಳನ್ನು ಕಳುಹಿಸಿದೆ. ಸ್ಪೇನ್ ಸಹ ಸಹಾಯ ನೀಡಿದೆ. ಆದರೆ ಈ ಸಮಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವಂತೆ ಕಾಣುತ್ತಿಲ್ಲ. ಕ್ಯೂಬಾಗೆ ಇದು ಈಗಾಗಲೇ ಕಠಿಣ ಸಮಯ. ಟ್ರಂಪ್ ವೆನೆಝುವೆಲಾವನ್ನು ಸುತ್ತುವರಿದು ಅದನ್ನು ಹಿಡಿತಕ್ಕೆ ತೆಗೆದುಕೊಂಡರು. ಅವರು ದಕ್ಷಿಣ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕವನ್ನು ಸಂದಿಗ್ಧತೆಗೆ ಸಿಲುಕಿಸಿದರು. ಮುಂದಿನ ಗುರಿ ಏನೆಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ಈ ನಡುವೆ, ಟ್ರಂಪ್ ವಿಶ್ವದ ಗಮನವನ್ನು ಇರಾನ್ ಕಡೆಗೆ ತಿರುಗಿಸಿದರು. ಅವರು ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ನೌಕಾಪಡೆ ನಿಯೋಜಿಸಿದರು. ಇರಾನ್ ಮತ್ತು ಅಮೆರಿಕದ ಬಗ್ಗೆ ಎಲ್ಲೆಡೆ ಚರ್ಚೆಯಾಯಿತು, ಮತ್ತು ಎರಡೂ ದೇಶಗಳ ನಡುವಿನ ಎರಡನೇ ಸುತ್ತಿನ ಮಾತುಕತೆಯ ಸುದ್ದಿಗಳು ಕೂಡ ಹೊರಬರುತ್ತಿವೆ. ಈ ಎಲ್ಲಾ ಗದ್ದಲಗಳ ನಡುವೆ, ಕ್ಯೂಬಾದ ಕೂಗುಗಳು ಜಗತ್ತನ್ನು ತಲುಪುತ್ತಿಲ್ಲ. ಟ್ರಂಪ್ಗೆ, ಇದು ಒತ್ತಡದ ರಾಜಕೀಯದ ಒಂದು ರೂಪ. ಕಳೆದ ತಿಂಗಳು ಟ್ರಂಪ್ ಕ್ಯೂಬಾವನ್ನು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆದರು. ಹಮಾಸ್ ಮತ್ತು ಹಿಜ್ಬುಲ್ಲಾದಂತಹ ಗುಂಪುಗಳಿಗೆ ಹವಾನಾದಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕ್ಯೂಬಾ ಇದನ್ನು ನಿರಾಕರಿಸಿತು, ಆದರೆ ಟ್ರಂಪ್ ಪಟ್ಟುಬಿಡಲಿಲ್ಲ. ಅವರು ಕ್ಯೂಬಾದ ಮಿತ್ರರಾಷ್ಟ್ರಗಳಾದ ಚೀನಾ ಮತ್ತು ರಶ್ಯದೊಂದಿಗಿನ ಕ್ಯೂಬಾದ ಸಂಬಂಧಗಳ ಮೇಲೆಯೂ ಗಮನಹರಿಸಿದರು. ರಶ್ಯ ಅಥವಾ ಚೀನಾ ಈ ಎರಡೂ ದೇಶಗಳಲ್ಲಿ ಯಾವುದೂ ಕ್ಯೂಬಾದಲ್ಲಿ ಯಾವುದೇ ಮಿಲಿಟರಿ ನೆಲೆಗಳನ್ನು ಹೊಂದಿಲ್ಲ. ಇದರ ಹೊರತಾಗಿಯೂ, ತಡವಾಗುವ ಮೊದಲು ಕ್ಯೂಬಾ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಹೇಳಿದರು. ಕ್ಯೂಬಾ ಕೂಡ ಮಾತುಕತೆಗಳಿಗೆ ಮುಂದಾಯಿತು. ಈ ಮಾತುಕತೆಗಳ ಹೊಣೆಯನ್ನು ಟ್ರಂಪ್ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ವಹಿಸಿದರು. ರೂಬಿಯೊ ಸ್ವತಃ ಕ್ಯೂಬನ್ ಮೂಲದವರು. ಅವರ ಪೋಷಕರು ಕ್ಯೂಬಾದಿಂದ ಅಮೆರಿಕಕ್ಕೆ ವಲಸೆ ಬಂದರು. ರೂಬಿಯೊ ಅವರು ಕ್ಯೂಬನ್ ಸರಕಾರದಲ್ಲಿ ಬದಲಾವಣೆ ನೋಡಲು ಬಯಸುವುದಾಗಿ ಯುಎಸ್ ಸೆನೆಟ್ನಲ್ಲಿ ಹೇಳಿದ್ದಾರೆ. ಅಂದರೆ, ಅವರು ದಾಳಿ ಮಾಡುವುದಿಲ್ಲ. ಅವರು ಕ್ಯೂಬಾ ತನ್ನ ಮಾರ್ಗಗಳನ್ನು ಬದಲಿಸುವಂತೆ ಒತ್ತಾಯಿಸುತ್ತಾರೆ. ‘‘ಬಹುಶಃ ಕ್ಯೂಬನ್ನರು ನಮ್ಮ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆ ರೀತಿಯಲ್ಲಿ, ಕ್ಯೂಬಾ ಮತ್ತೆ ಸ್ವತಂತ್ರವಾಗುತ್ತದೆ’’ ಎಂದು ಜನವರಿ 31ರಂದು ಟ್ರಂಪ್ ಹೇಳಿದ್ದನ್ನು ಗಮನಿಸಬೇಕು. ಟ್ರಂಪ್ ಮತ್ತು ರೂಬಿಯೊ ಅವರ ಹೇಳಿಕೆಗಳು, ಖಂಡಿತವಾಗಿಯೂ ಅವರು ಕ್ಯೂಬಾದಲ್ಲಿ ಸರಕಾರ ಬದಲಾಗಬೇಕೆಂದು ಬಯಸುತ್ತಾರೆ ಎಂಬುದನ್ನು ಸೂಚಿಸುತ್ತವೆ. ಆದರೆ ಈ ಮಧ್ಯೆ, ಟ್ರಂಪ್ ವಿರೋಧಾತ್ಮಕ ಹೇಳಿಕೆ ನೀಡಿದ್ದಾರೆ. ವೆನೆಝುವೆಲಾದಂತೆಯೇ ಕ್ಯೂಬನ್ ಸರಕಾರವನ್ನು ಉರುಳಿಸಲು ಅಮೆರಿಕ ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ, ಅದರ ಅಗತ್ಯ ಇದೆಯೆಂದು ಅನ್ನಿಸುತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಮಾರ್ಕೊ ರೂಬಿಯೊ ಕ್ಯೂಬಾದೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಅಲ್ಲಿನ ಮಾನವೀಯ ಬಿಕ್ಕಟ್ಟಿನಿಂದಾಗಿ ಅವರು ಖಂಡಿತವಾಗಿಯೂ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದಾರೆ. ಆದರೆ, ಈ ಮಾತುಕತೆಗಳು ಏನಾದವು ಎಂಬುದರ ಬಗ್ಗೆ ಎರಡೂ ಕಡೆಯಿಂದ ಯಾವುದೇ ಹೊಸ ಮಾಹಿತಿ ಇಲ್ಲ. ಆದರೆ ಟ್ರಂಪ್ ಹೇಳಿಕೆಗಳು, ಅವರು ಕ್ಯೂಬಾದೊಂದಿಗೆ ಒಪ್ಪಂದ ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅಮೆರಿಕ ಕ್ಯೂಬಾದಲ್ಲಿ ಸರಕಾರದ ಬದಲಾವಣೆಗಾಗಿ ಬಯಸುತ್ತಿದೆಯೇ ಅಥವಾ ಕ್ಯೂಬನ್ ಸರಕಾರ ಶರಣಾಗಲಿ ಎಂದು ಬಯಸುತ್ತಿದೆಯೇ ಎಂಬುದು ಖಚಿತವಾಗಿಲ್ಲ. ಟ್ರಂಪ್ ಇಚ್ಛೆ ಏನೇ ಇರಲಿ, ಈ ಒತ್ತಡದ ರಾಜಕೀಯದಿಂದಾಗಿ ಲಕ್ಷಾಂತರ ಕ್ಯೂಬನ್ನರ ಭವಿಷ್ಯ ಅಪಾಯದಲ್ಲಿದೆ. ‘ಅಲ್ ಜಝೀರಾ’ ವರದಿಯ ಪ್ರಕಾರ, ಕಳೆದ ತಿಂಗಳವರೆಗೆ ಮೆಕ್ಸಿಕೊ ಕ್ಯೂಬಾದ ಪ್ರಮುಖ ತೈಲ ಪೂರೈಕೆದಾರ ದೇಶವಾಗಿತ್ತು. ವೆನೆಝುವೆಲಾದಿಂದ ಸರಬರಾಜು ಕಡಿಮೆಯಾದಾಗ ಮೆಕ್ಸಿಕೊ ಬಂತು. ಒಟ್ಟು ತೈಲ ಆಮದಿನ ಸರಿಸುಮಾರು ಶೇ. 44ರಷ್ಟನ್ನು ಅದು ಒದಗಿಸಿತು. ಅದರ ತೈಲದ ಶೇ. 33 ರಶ್ಯದಿಂದ ಬರುತ್ತಿದ್ದು, ಸ್ವಲ್ಪ ಪಾಲು ಅಲ್ಜೀರಿಯಾದಿಂದಲೂ ಬರುತ್ತಿದೆ. ಪ್ರಸ್ತುತ, ಕ್ಯೂಬಾಗೆ ದಿನಕ್ಕೆ ಸುಮಾರು 1,00,000 ಬ್ಯಾರೆಲ್ ಕಚ್ಚಾ ತೈಲದ ಅಗತ್ಯವಿದೆ. ಜನವರಿ 30ರ ಹೊತ್ತಿಗೆ ದೇಶ 15ರಿಂದ 20 ದಿನಗಳವರೆಗೆ ಮಾತ್ರ ಸಾಕಾಗುವಷ್ಟು ತೈಲವನ್ನು ಹೊಂದಿತ್ತು. ನಂತರ ಕ್ಯೂಬಾ ಸರಕಾರ ಕೆಲ ನಿರ್ಬಂಧಗಳನ್ನು ವಿಧಿಸಿ, ತೈಲ ಬಳಕೆಯನ್ನು ಕಡಿಮೆ ಮಾಡಿತು. ಆದ್ದರಿಂದ ಬಹುಶಃ ಅದು ಇನ್ನೊಂದು ವಾರ ಅಥವಾ ಅದಕ್ಕಿಂತ ತುಸು ಹೆಚ್ಚು ಕಾಲ ಉಳಿಯಬಹುದು. ಅದರ ನಂತರ ಏನಾಗುತ್ತದೆ ಎಂಬುದು ಈಗಿನ ಪ್ರಶ್ನೆ. ಟ್ರಂಪ್ ಸರಕಾರ ಮತ್ತು ಕ್ಯೂಬಾ ಸರಕಾರ ರಾಜಿ ಮಾಡಿಕೊಳ್ಳದಿದ್ದರೆ, ಅಥವಾ ಅಗತ್ಯ ನೆರವು ಕ್ಯೂಬಾಕ್ಕೆ ತಲುಪದಿದ್ದರೆ, ಕ್ಯೂಬಾದ ಒಂದು ಕೊಟಿ ಜನರು ಅಪಾಯ ಎದುರಿಸಬೇಕಾಗುತ್ತದೆ. ಕ್ಯೂಬಾ ಮತ್ತು ಅಮೆರಿಕ ನಡುವಿನ ಪೈಪೋಟಿ ನಿನ್ನೆ ಮೊನ್ನೆಯದಲ್ಲ. ಕ್ಯೂಬಾ ಯಾವತ್ತೂ ತನ್ನ ಮೊಂಡುತನ ಬಿಟ್ಟುಕೊಟ್ಟಿಲ್ಲ ಅಥವಾ ಯುಎಸ್ ಯಾವುದೇ ಉದಾರತೆ ತೋರಿಸಿಲ್ಲ. ಆದರೆ ಇಲ್ಲಿಯವರೆಗೆ ಗೌರವಿಸಲ್ಪಟ್ಟಿರುವ ಗಡಿರೇಖೆ ಇತ್ತು. ಈಗ ಅಪಾಯವೆಂದರೆ, ಟ್ರಂಪ್ ಯಾವುದೇ ಗಡಿರೇಖೆಯನ್ನು ನಂಬುವುದಿಲ್ಲ. ಜಗತ್ತು ಯಾವುದನ್ನು ತಪ್ಪು ಎನ್ನುತ್ತದೆಯೋ ಅದನ್ನೇ ಮಾಡುವ ಜಾಯಮಾನ ಅವರದು. ಕ್ಯೂಬಾ ವಿಷಯವಾಗಿಯೂ ಟ್ರಂಪ್ ಅಂಥದೇ ಹಾದಿ ಹಿಡಿಯುತ್ತಾರೆಯೆ? ಅಥವಾ ಕ್ಯೂಬಾ ಈ ಬಿಕ್ಕಟ್ಟನ್ನು ದಾಟಿ ಮತ್ತೊಮ್ಮೆ ಎದ್ದುನಿಲ್ಲುತ್ತದೆಯೆ? ಕಾಲವೇ ಇದಕ್ಕೆ ಉತ್ತರ ಹೇಳಬೇಕಿದೆ.
BJPಯನ್ನು ಆರೆಸ್ಸೆಸ್ ನಿಯಂತ್ರಿಸುವುದಿಲ್ಲ : ಮೋಹನ್ ಭಾಗವತ್
ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿಲ್ಲ. ಆದರೆ, ಬಿಜೆಪಿಯನ್ನು ವಿರೋಧಿಸುವವರು ಆರೆಸ್ಸೆಸ್ ಅನ್ನು ಕೂಡ ವಿರೋಧಿಸುತ್ತಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಸಂಘದ ಸ್ವಯಂಸೇವಕರು ಬಿಜೆಪಿಗೆ ಸೇರಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಆರೆಸ್ಸೆಸ್ ಬಿಜೆಪಿಯನ್ನು ನಿಯಂತ್ರಿಸುತ್ತದೆ ಎಂದು ಹೇಳುವುದು ತಪ್ಪು ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕಗಳ ಬಗ್ಗೆ ಪ್ರತಿಕ್ರಿಯಿಸಿದ ಮೋಹನ್ ಭಾಗವತ್ , ಅಮೆರಿಕ ತನ್ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಬಳಸಿಕೊಂಡು ದೇಶವನ್ನು ಮಂಡಿಯೂರಿಸಲು ಬಯಸುತ್ತಿದೆ. ಆದರೆ ಭಾರತ ಬಲಿಷ್ಠವಾಗಿದೆ ಎಂದು ಹೇಳಿದರು.
AI Impact Summit 2026: ಭಾರತದ ಭವಿಷ್ಯದ ನೀಲನಕ್ಷೆ ತೆರೆದ ನರೇಂದ್ರ ಮೋದಿ; ಮಾನವ ಕಲ್ಯಾಣವೇ ಗುರಿ
ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಬಹುದಾದ ಅವಾಂತರಗಳ ಬಗ್ಗೆ ಜಗತ್ತು ಆತಂಕಗೊಂಡಿರುವ ಮಧ್ಯೆ, ಭಾರತವು ಮಾನವ ಕಲ್ಯಾಣಕ್ಕಾಗಿ AI ತಂತ್ರಜ್ಞಾನದ ಬಳಕೆಯ ಕರೆ ನೀಡಿದೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಧುನಿಕ ತಂತ್ರಜ್ಞಾನವನ್ನು ಮಾನವ ನಾಗರಿಕತೆಯ ಉನ್ನತಿಗಾಗಿ ಬಳಸುವುದು ಭಾರತದ ಉದ್ದೇಶ ಎಂದು ಸ್ಪಷ್ಟಪಡಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಭವಿಷ್ಯದ AI ನೀಲನಕ್ಷೆಯನ್ನು ತೆರೆದಿಟ್ಟಿದ್ದು, ಶೃಂಗಸಭೆಯಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮೆಚ್ಚುಗೆ ಸೂಚಿಸಿದ್ದಾರೆ.
Farmers Marriage: ಕರ್ನಾಟಕದಲ್ಲಿ ರೈತರ ಮದುವೆ ವಿಳಂಬವಾಗುತ್ತಿದೆ. ಕೃಷಿ ಮಾಡುತ್ತಿರುವ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ, ಹೀಗಾಗಿ ಮದುವೆ ವಿಳಂಬವಾಗುತ್ತಿದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಗಂಭೀರವಾಗಿ ಚರ್ಚೆ ಆಗುತ್ತಿರುವ ವಿಷಯಗಳಲ್ಲಿ ಒಂದಾಗಿದೆ. ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ಕೃಷಿ ಮಾಡುತ್ತಿರುವ ಯುವಕರಿಗೆ ಮದುವೆಗೆ ವಧು ಸಿಗುತ್ತಿಲ್ಲ ಎನ್ನುವುದು ಸಹ ಚರ್ಚೆ ಆಗುತ್ತಿದೆ. ಇದೀಗ ಕರ್ನಾಟಕದಲ್ಲಿ ರೈತರನ್ನು
Epstein Files ವಿವಾದ : ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್
ಹೊಸದಿಲ್ಲಿ: ಎಪ್ಸ್ಟೀನ್ ಕಡತದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಹೆಸರು ಕಾಣಿಸಿಕೊಂಡಿರುವುದರ ಕುರಿತು ಉಂಟಾದ ವಿವಾದದ ಮಧ್ಯೆ ದಿಲ್ಲಿಯಲ್ಲಿ ನಡೆಯುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಮುಖ್ಯ ಭಾಷಣ ಮಾಡುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ತಿಳಿಸಿದೆ. ಶೃಂಗಸಭೆಯಲ್ಲಿ ಗೇಟ್ಸ್ ಫೌಂಡೇಶನ್ ಪರವಾಗಿ ಸಂಸ್ಥೆಯ ಆಫ್ರಿಕಾ ಮತ್ತು ಭಾರತ ಘಟಕದ ಮುಖ್ಯಸ್ಥ ಅಂಕುರ್ ವೋರಾ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದೆ. ಎಐ ಶೃಂಗಸಭೆಯ ಪ್ರಮುಖ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಅವರು ಮುಖ್ಯ ಭಾಷಣ ಮಾಡುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ. ದಿಲ್ಲಿಯ ಭಾರತ್ ಮಂಟಪದಲ್ಲಿ ಸೋಮವಾರ “ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026”(India AI Impact Summit 2026) ಆರಂಭವಾಯಿತು. ಭಾರತದಲ್ಲಿ ಮೊದಲ ಬಾರಿಗೆ ನಡೆದ ಈ ಸಭೆಯು ಭಾರತದ ಎಐ ಮತ್ತು ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಪ್ರಗತಿಯ ಮಹತ್ವದ ಗುರಿಯನ್ನು ಹೊಂದಿದೆ.
ಉತ್ತರ ಕಲಬುರಗಿಯಲ್ಲಿ ಹದಗೆಟ್ಟ ರಸ್ತೆಗಳು
► 5 ಕಿ.ಮೀ. ವ್ಯಾಪ್ತಿಯೊಳಗೆ ನಡೆದ ಅಪಘಾತಗಳಲ್ಲಿ 43 ಜನ ಮೃತ್ಯು► 258 ಮಂದಿಗೆ ಗಾಯ: ಆರ್ಟಿಐ ಮಾಹಿತಿಯಿಂದ ಬಹಿರಂಗ
ಏನದು ಅಮೆರಿಕ-ಇರಾನ್ ಜಗಳ ಎಂದು ಯಾರಾದರೂ ಕೇಳಿದರೆ; ಜಗತ್ತಿಗೆ ಬೇಡದ ಈ ಘೋರ ಯುದ್ಧ ಸಾಕು ನಡೆಯದಿದ್ದರೆ
ಇದು ಯುದ್ಧದ ಸಮಯವಲ್ಲ ಎಂಬ ಭಾರತದ ಅಮೂಲ್ಯ ಸಲಹೆ ಕೇವಲ ರಷ್ಯಾ ಮತ್ತು ಉಕ್ರೇನ್ಗೆ ಮಾತ್ರವಲ್ಲ, ಜಗತ್ತಿನ ಯಾವುದೇ ಎರಡು ರಾಷ್ಟ್ರಗಳ ನಡುವೆ ಅಥವಾ ರಾಷ್ಟ್ರಗಳ ಗುಂಪುಗಳ ನಡುವೆ ಉಲ್ಬಣಗೊಳ್ಳುವ ಮಿಲಟರಿ ಸಂಘರ್ಷಗಳಿಗೆ ಅನ್ವಯವಾಗುತ್ತದೆ. ಜಾಗತಿಕ ಶಾಂತಿಗೆ ಅಪಾಯ ತಂದೊಡ್ಡಬಲ್ಲ ಯಾವುದೇ ಉದ್ವಿಗ್ನತೆಗೆ, ಭಾರತದ ಈ ಸಲಹೆ ರಾಮಬಾಣವಾಗಬಲ್ಲದು. ಸದ್ಯ ಯುದ್ಧದ ಹೊಸ್ತಿಲಲ್ಲಿ ನಿಂತಿರುವ ಅಮೆರಿಕ ಮತ್ತು ಇರಾನ್ ಕೂಡ ಈ ಸಲಹೆಯನ್ನು ಸ್ವೀಕರಿಸಬೇಕು. ಏಕೆಂದರೆ ಉಭಯ ರಾಷ್ಟ್ರಗಳ ನಡುವಿನ ವೈರತ್ವ ಜಾಗತಿಕ ಶಾಂತಿಪ್ರಿಯರ ನಿದ್ದೆಗೆಡೆಸಿದೆ. ಈ ಕುರಿತ ವಿಸ್ತೃತ ವಿಶ್ಲೇಷಣಾತ್ಮಕ ವರದಿ ಇಲ್ಲಿದೆ.
ಜೆಫ್ರಿ ಎಪ್ಸ್ಟೀನ್ ಪ್ರಕರಣ: ಅಧಿಕಾರದ ಕರಾಳ ಹಾದಿ ಮತ್ತು ನೈತಿಕತೆಯ ಪತನ
ನಾಗರಿಕತೆಯ ಮುಖವಾಡದ ಹಿಂದಿನ ಕ್ರೌರ್ಯ ಇಂದಿನ ಆಧುನಿಕ ಜಗತ್ತು ತಾಂತ್ರಿಕವಾಗಿ ಮುಂದುವರಿದಿದೆ, ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಯಾಗಿವೆ ಮತ್ತು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಹೆಚ್ಚಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಅಮೆರಿಕದಂತಹ ಅತ್ಯಂತ ಪ್ರಭಾವಶಾಲಿ ರಾಷ್ಟ್ರದ ಎದೆಯೊಳಗೇ ದಶಕಗಳ ಕಾಲ ನಡೆದ ’ಜೆಫ್ರಿ ಎಪ್ಸ್ಟೀನ್’ ಪ್ರಕರಣವು ಇಡೀ ಮಾನವಕುಲ ತಲೆತಗ್ಗಿಸುವಂತೆ ಮಾಡಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಬಿಡುಗಡೆಯಾದ ‘ಎಪ್ಸ್ಟೀನ್ ಫೈಲ್ಸ್’ ಮತ್ತು ನೆಟ್ಫ್ಲಿಕ್ಸ್ನ ‘Jeffrey Epstein: Filthy Rich’ ಡಾಕ್ಯುಮೆಂಟರಿ ಸರಣಿಯು ಕೇವಲ ಒಂದು ಲೈಂಗಿಕ ಹಗರಣದ ಕಥೆಯನ್ನಷ್ಟೇ ಹೇಳುತ್ತಿಲ್ಲ; ಬದಲಾಗಿ ಅಧಿಕಾರ, ಹಣ ಮತ್ತು ಪ್ರಭಾವ ಹೇಗೆ ಕಾನೂನನ್ನು ಕುರುಡಾಗಿಸಬಹುದು ಎಂಬುದಕ್ಕೆ ಕಟು ಸಾಕ್ಷಿ ನುಡಿಯುತ್ತಿವೆ. ಇದು ಕೇವಲ ಒಬ್ಬ ವ್ಯಕ್ತಿಯ ಕಾಮದ ಪತನವಲ್ಲ, ಬದಲಾಗಿ ಜಾಗತಿಕ ವ್ಯವಸ್ಥೆಯ ನೈತಿಕ ಅಧಃಪತನದ ದ್ಯೋತಕವಾಗಿದೆ. ದಶಕಗಳ ಕಾಲ ಸಮಾಜದ ಕಣ್ಣಿಗೆ ಮಣ್ಣೆರಚಿ ನಡೆದ ಈ ಕೃತ್ಯಗಳು ಇಂದು ಹೊರಬರುತ್ತಿವೆ ಎಂದರೆ, ಅದರ ಹಿಂದೆ ದಮನಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ನೋವು ಮತ್ತು ವ್ಯವಸ್ಥೆಯ ಅಕ್ಷಮ್ಯ ಮೌನ ಅಡಗಿದೆ. ಅಧಿಕಾರಶಾಹಿ ಜಾಲ ಮತ್ತು ವ್ಯವಸ್ಥೆಯ ಉದ್ದೇಶಪೂರ್ವಕ ವೈಫಲ್ಯ ಜೆಫ್ರಿ ಎಪ್ಸ್ಟೀನ್ ಎಂಬ ‘ಹೈ-ಪ್ರೊಫೈಲ್’ ಫೈನಾನ್ಸಿಯರ್ ಸಮಾಜದಲ್ಲಿ ಅಪ್ರತಿಮ ಪ್ರತಿಷ್ಠಿತ ವ್ಯಕ್ತಿಯಾಗಿ ಮೆರೆಯುತ್ತಿದ್ದ. ಇವನ ಸಂಪರ್ಕಜಾಲವು ಎಷ್ಟೊಂದು ಬಲಿಷ್ಠವಾಗಿತ್ತೆಂದರೆ, ಅದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರು, ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ ಮತ್ತು ಬಿಲ್ ಗೇಟ್ಸ್ನಂತಹ ಜಾಗತಿಕ ಶತಕೋಟ್ಯಧಿಪತಿಗಳ ಹೆಸರುಗಳು ತಳುಕು ಹಾಕಿಕೊಂಡಿದ್ದವು. ಈತ ನಡೆಸುತ್ತಿದ್ದ ಲೈಂಗಿಕ ಕಳ್ಳಸಾಗಣೆ ಜಾಲವು 80 ಮತ್ತು 90ರ ದಶಕದಲ್ಲೇ ಬೇರುಬಿಟ್ಟಿತ್ತು. ವಿಸ್ಮಯವೆಂದರೆ, 2003ರಲ್ಲೇ ಈತನ ಬಗ್ಗೆ ಗಂಭೀರ ವರದಿಗಳು ಬಂದಿದ್ದವು ಮತ್ತು 2005ರಲ್ಲಿ 14 ವರ್ಷದ ಮಗುವಿನ ಮೇಲೆ ದೌರ್ಜನ್ಯ ಎಸಗಿದ ದೂರು ದಾಖಲಾಗಿದ್ದರೂ, ತನಿಖಾ ಸಂಸ್ಥೆಗಳು ನಿಗೂಢ ಮೌನ ತಾಳಿದ್ದವು. 2008ರಲ್ಲಿ ಈತ ಲೈಂಗಿಕ ಅಪರಾಧಕ್ಕಾಗಿ ಜೈಲಿಗೆ ಹೋದರೂ, ಕೇವಲ 13 ತಿಂಗಳುಗಳಲ್ಲಿ ಅತ್ಯಂತ ಸಡಿಲವಾದ ನಿಯಮಗಳಡಿ ಹೊರಬಂದದ್ದು ನ್ಯಾಯಾಂಗ ವ್ಯವಸ್ಥೆಗೆ ಎಸಗಿದ ಅತಿ ದೊಡ್ಡ ಅಪಮಾನವಾಗಿದೆ. ಅಧಿಕಾರದಲ್ಲಿರುವವರನ್ನು ವ್ಯವಸ್ಥೆಯು ಹೇಗೆ ಕಾಪಾಡುತ್ತದೆ ಎಂಬುದು ಈ ಪ್ರಕರಣದ ಅತ್ಯಂತ ಭೀಕರವಾದ ಭಾಗ. ಕಾನೂನು ಎಲ್ಲರಿಗೂ ಒಂದೇ ಎಂದು ನಾವು ಹೇಳಿಕೊಂಡರೂ, ಎಪ್ಸ್ಟೀನ್ ಪ್ರಕರಣದಲ್ಲಿ ಅದು ಸುಳ್ಳೆಂದು ಸಾಬೀತಾಗಿದೆ. ಪ್ರಭಾವಿಗಳು ತಪ್ಪು ಮಾಡಿದಾಗ ಅವರಿಗೆ ರಕ್ಷಾಕವಚವಾಗಿ ನಿಲ್ಲುವ ವ್ಯವಸ್ಥೆಯು, ಸಂತ್ರಸ್ತ ಮಹಿಳೆಯರ ಧ್ವನಿಯನ್ನು ಅಡಗಿಸಲು ಅವರ ಮೇಲೆ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಲೇ ಬಂದಿತು. ‘ಪಾಕೆಟ್ ಮನಿ’ ಎಂಬ ಆಮಿಷ ಮತ್ತು ಶೋಷಣೆಯ ಅಮಾನವೀಯ ಸ್ವರೂಪ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಸಂತ್ರಸ್ತರು ಹಂಚಿಕೊಂಡ ನೋವಿನ ಸಂಗತಿಗಳು ಎದೆ ನಡುಗಿಸುವಂತಿವೆ. ಕೇವಲ 15-17 ವರ್ಷದ ಬಡತನದ ಅಥವಾ ಕೌಟುಂಬಿಕ ಹಿನ್ನೆಲೆ ಸರಿಯಿಲ್ಲದ ಅಸಹಾಯಕ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು, ಮಸಾಜ್ ಮಾಡಿ ಪಾಕೆಟ್ ಮನಿ ಗಳಿಸಿ ಎಂಬ ಆಮಿಷ ಒಡ್ಡಲಾಗುತ್ತಿತ್ತು. ಇದು ಕೇವಲ ಒಬ್ಬ ವ್ಯಕ್ತಿಯ ವಿಕೃತ ಕಾಮವಲ್ಲ, ಬದಲಾಗಿ ಇದೊಂದು ವ್ಯವಸ್ಥಿತ ಸೆಕ್ಸ್ ಪಿರಮಿಡ್ ಸ್ಕೀಮ್ ಆಗಿತ್ತು. ಎಪ್ಸ್ಟೀನ್ ತನ್ನ ಖಾಸಗಿ ದ್ವೀಪದಲ್ಲಿ (Little St. James) ಹಿರಿಯ ನಾಯಕರಿಗೆ ಈ ಮಕ್ಕಳನ್ನು ‘ಸರಬರಾಜು’ ಮಾಡುವ ಮೂಲಕ ಜಾಗತಿಕ ರಾಜಕೀಯ ಮತ್ತು ಉದ್ಯಮ ರಂಗದ ಮೇಲೆಯೇ ಹಿಡಿತ ಸಾಧಿಸಿದ್ದ ಎಂಬ ಆಘಾತಕಾರಿ ಸತ್ಯಗಳು ಇಂದು ಹೊರಬರುತ್ತಿವೆ. ಇಲ್ಲಿ ಶೋಷಣೆಗೆ ಒಳಗಾದವರು ಕೇವಲ ವ್ಯಕ್ತಿಗಳಲ್ಲ, ಬದಲಾಗಿ ಒಂದು ಸಮಾಜವು ಹೆಣ್ಣಿಗೆ ನೀಡಬೇಕಾದ ಕನಿಷ್ಠ ಗೌರವದ ನಂಬಿಕೆಗಳು. ಅಧಿಕಾರದ ಮದವೇರಿದ ವ್ಯಕ್ತಿಗಳು ಹಣ ಮತ್ತು ಅಂತಸ್ತಿನ ಬಲದಿಂದ ಅಸಹಾಯಕ ಹೆಣ್ಣುಮಕ್ಕಳನ್ನು ತಮ್ಮ ವಿಕೃತ ಆಸೆಗಳಿಗೆ ಬಲಿಪಶುಗಳನ್ನಾಗಿ ಮಾಡಿಕೊಂಡರು. ಇದು ನಮ್ಮ ಆಧುನಿಕ ಸಮಾಜವು ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಎಷ್ಟು ದಯನೀಯ ಸ್ಥಿತಿಯಲ್ಲಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಭಾರತೀಯ ಸಮಾಜದ ಮೇಲೆ ಈ ಹಗರಣದ ಗಂಭೀರ ಪರಿಣಾಮಗಳು ಈ ಪ್ರಕರಣವನ್ನು ನಾವು ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಅತ್ಯಗತ್ಯ. ಭಾರತದಲ್ಲಿ ಮಹಿಳೆಯರು ದಶಕಗಳ ಹೋರಾಟದ ನಂತರ ಶಿಕ್ಷಣ, ಉದ್ಯೋಗ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ‘ಮುಕ್ತ ಜೀವನ’ದ ಹೆಸರಿನಲ್ಲಿ ನಡೆದ ಇಂತಹ ಭೀಕರ ಶೋಷಣೆಗಳು ಹೊರಬಂದಾಗ, ನಮ್ಮ ಸಮಾಜದ ಸಂಪ್ರದಾಯವಾದಿ ಮನಸ್ಥಿತಿ ಮತ್ತೆ ಹೆಣ್ಣುಮಕ್ಕಳನ್ನು ನಿಯಂತ್ರಿಸಲು ಮುಂದಾಗುವ ಅಪಾಯವಿದೆ. ನೋಡಿ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮುಕ್ತ ಸ್ವಾತಂತ್ರ್ಯ ಸಿಕ್ಕ ಹೆಣ್ಣುಮಕ್ಕಳಿಗೆ ಏನಾಯಿತು? ಎಂಬ ವಾದವನ್ನು ಮುಂದಿಟ್ಟುಕೊಂಡು, ಮತ್ತೆ ಹೆಣ್ಣಿನ ಮೇಲೆ ನಿರ್ಬಂಧಗಳ ಸರಮಾಲೆ ಹಾಕಲು ವ್ಯವಸ್ಥೆ ಪ್ರಯತ್ನಿಸಬಹುದು. ಈಗಾಗಲೇ ನಮ್ಮಲ್ಲಿ 30 ವರ್ಷದ ಸ್ವಾವಲಂಬಿ ಮಹಿಳೆಯೂ ಮನೆಯಿಂದ ಹೊರಹೋಗುವಾಗ ಹತ್ತಾರು ಪ್ರಶ್ನೆಗಳನ್ನು ಎದುರಿಸಬೇಕಾದ ಸ್ಥಿತಿಯಿದೆ. ಎಪ್ಸ್ಟೀನ್ ಪ್ರಕರಣವು ಅಂತಹ ‘ನಿರ್ಬಂಧದ ಆಲೋಚನೆ’ಗಳಿಗೆ ಪ್ರಬಲ ಅಸ್ತ್ರವಾಗುವ ಸಾಧ್ಯತೆಯಿದೆ. ನಾಗರಿಕ ಸಮಾಜದಲ್ಲಿ ಮಹಿಳೆಯರ ಅಸ್ಮಿತೆ ಮತ್ತು ಗೌರವ ಅತ್ಯಂತ ಪವಿತ್ರವಾದದ್ದು. ಈ ಪ್ರಕರಣವು ಆಧುನಿಕ ಹೆಣ್ಣುಮಕ್ಕಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಕಿತ್ತುಕೊಳ್ಳುವ ಅಥವಾ ಸಂಶಯದ ಕಣ್ಣಿನಿಂದ ನೋಡುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದರೆ ನೈಜ ದೋಷವಿರುವುದು ಹೆಣ್ಣಿನ ಸ್ವಾತಂತ್ರ್ಯದಲ್ಲಲ್ಲ, ಬದಲಾಗಿ ಅಧಿಕಾರದಲ್ಲಿರುವವರ ಅಹಂಕಾರ ಮತ್ತು ಕಾಮದ ವಿಕೃತಿಯಲ್ಲಿದೆ. ನಾಯಕತ್ವದ ಪತನ ಮತ್ತು ಸಮಾಜದ ನೈತಿಕ ಜವಾಬ್ದಾರಿ ಯಾವಾಗ ಸಮಾಜದಲ್ಲಿ ಧರ್ಮ, ನ್ಯಾಯ ಮತ್ತು ಸತ್ಯಕ್ಕಿಂತ ‘ಪ್ರಭಾವ’ ಅಥವಾ ‘ಹಣ’ ದೊಡ್ಡದಾಗುತ್ತದೆಯೋ, ಆಗ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗುತ್ತದೆ. ಎಪ್ಸ್ಟೀನ್ ಫೈಲ್ಸ್ ಮೂಲಕ ಹೊರಬರುತ್ತಿರುವ ಸತ್ಯಗಳು ಜಾಗತಿಕ ನಾಯಕತ್ವದ ನೈತಿಕ ಪತನವನ್ನು ಎತ್ತಿ ತೋರಿಸುತ್ತಿವೆ. ಅಧಿಕಾರ ಎಂಬುದು ಜನರ ರಕ್ಷಣೆಗಾಗಿ ಇರಬೇಕೇ ಹೊರತು ಶೋಷಣೆಗಲ್ಲ. ಈ ಇಡೀ ಪ್ರಕರಣವು ನಮಗೆ ನೀಡುವ ಎಚ್ಚರಿಕೆ ಏನೆಂದರೆ, ನಾವು ನಾಯಕ ಎಂದು ನಂಬುವ ವ್ಯಕ್ತಿಯ ಹಿಂದೆ ಅಡಗಿರುವ ಕ್ರೌರ್ಯದ ಬಗ್ಗೆ ಸದಾ ಜಾಗರೂಕರಾಗಿರಬೇಕು. ವ್ಯವಸ್ಥೆಯು ಇನ್ನು ಮುಂದೆಯಾದರೂ ಪ್ರಭಾವಿಗಳ ಗುಲಾಮನಾಗದೆ, ನ್ಯಾಯದ ದಾರಿಯಲ್ಲಿ ಸಾಗಿದಾಗ ಮಾತ್ರ ಸಂತ್ರಸ್ತರಿಗೆ ನಿಜವಾದ ನೆಮ್ಮದಿ ಸಿಗಲು ಸಾಧ್ಯ. ಎಪ್ಸ್ಟೀನ್ ಪ್ರಕರಣವು ಕೇವಲ ಅಮೆರಿಕದ ಸಮಸ್ಯೆಯಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಅಧಿಕಾರಶಾಹಿ ಅಹಂಕಾರದ ಪ್ರತಿಫಲವಾಗಿದೆ. ಈ ಹಗರಣದಲ್ಲಿ ಭಾಗಿಯಾದವರು ಸಾಮಾನ್ಯ ವ್ಯಕ್ತಿಗಳಲ್ಲ; ದೇಶಗಳನ್ನು ಮುನ್ನಡೆಸುವ ನಾಯಕರು ಮತ್ತು ಶತಕೋಟ್ಯಧಿಪತಿಗಳು. ಇವರೆಲ್ಲರೂ ಸೇರಿ ಹೆಣ್ಣುಮಕ್ಕಳನ್ನು ವಸ್ತುಗಳಂತೆ ಬಳಸುವ ಒಂದು ಜಾಲವನ್ನು ಸೃಷ್ಟಿಸಿಕೊಂಡಿದ್ದು ಇಡೀ ಮಾನವ ಇತಿಹಾಸದ ಕಪ್ಪು ಚುಕ್ಕೆಯಾಗಿದೆ. ನ್ಯಾಯದ ಹಾದಿಯಲ್ಲಿ ಒಂದು ಹೊಸ ಆರಂಭ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಎತ್ತಿ ಹಿಡಿಯುವುದು ಕೇವಲ ಕಾನೂನಿನ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ. ಎಪ್ಸ್ಟೀನ್ ಎಂಬ ಕರಾಳ ಅಧ್ಯಾಯವು ಮತ್ತೊಮ್ಮೆ ಇತಿಹಾಸದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವುದೇ ಸಂತ್ರಸ್ತರಿಗೆ ನಾವು ನೀಡಬಹುದಾದ ನಿಜವಾದ ನ್ಯಾಯ. ವ್ಯವಸ್ಥೆಯು ಹಣವಂತರ ಗುಲಾಮನಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ಧ್ವನಿಗೆ ಕಿವಿಗೊಡಬೇಕು. ಸ್ವಾತಂತ್ರ್ಯದ ಜೊತೆಗೆ ಸುರಕ್ಷಿತವಾದ ಪರಿಸರವನ್ನು ನಿರ್ಮಿಸುವುದು ಸರಕಾರದ ಆದ್ಯತೆಯಾಗಬೇಕು. ಜೆಫ್ರಿ ಎಪ್ಸ್ಟೀನ್ ಸಾವು ಈ ಪ್ರಕರಣಕ್ಕೆ ಅಂತ್ಯವಲ್ಲ, ಬದಲಾಗಿ ಇದು ಅಧಿಕಾರದ ಮದವೇರಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ನ್ಯಾಯವು ನಿಧಾನವಾಗಬಹುದು, ಆದರೆ ಅದು ಎಂದಿಗೂ ಪರಾಜಿತಗೊಳ್ಳಬಾರದು. ಭವಿಷ್ಯದ ಪೀಳಿಗೆಗೆ ನಾವು ನೀಡುವ ಸ್ವಾತಂತ್ರ್ಯವು ಸುರಕ್ಷತೆ ಮತ್ತು ನೈತಿಕತೆಯ ಅಡಿಪಾಯದ ಮೇಲೆ ನಿಂತಿರಬೇಕು. ಅಧಿಕಾರ ಮತ್ತು ನೈತಿಕತೆಯ ನಡುವಿನ ಈ ಸಂಘರ್ಷದಲ್ಲಿ ಅಂತಿಮವಾಗಿ ನ್ಯಾಯವೇ ಗೆದ್ದಾಗ ಮಾತ್ರ ನಾಗರಿಕ ಸಮಾಜಕ್ಕೆ ಅರ್ಥ ಸಿಗುತ್ತದೆ.
ಇರಾನ್-ಅಮೆರಿಕಾ ನಡುವಿನ ಬಿಕ್ಕಟ್ಟು ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ನಡುವಿನ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈವಾರಾಂತ್ಯದಲ್ಲಿ ಯುಎಸ್ ದಾಳಿ ಮಾಡಬಹುದು ಎಂಬ ಸುದ್ದಿಗಳು ಹರಡುತ್ತಿದ್ದಂತೆ, ಒಪ್ಪಂದ ಮಾಡಿಕೊಳ್ಳುವುದು ಇರಾನ್ ನ ಬುದ್ದಿವಂತಿಕೆಯನ್ನು ತೋರಿಸುತ್ತದೆ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ. ಈ ನಡುವೆ ಇಸ್ರೇಲ್ ಸಹ ಅಮೆರಿಕಾ ಬೆಂಬಲಕ್ಕೆ ನಿಂತಿದ್ದು ಯುದ್ದಕ್ಕೆ ರೆಡಿಯಾಗಿರಿ ಎಂದು ತನ್ನ ಸೇನೆಗೆ ಆದೇಶ ನೀಡಿದೆ. ಹೀಗಿರುವಾಗಲೇ ರಷ್ಯಾ ಹಾಗೂ ಚೀನಾ ಸಹ ಇರಾನ್ ಗೆ ಬೆಂಬಲವಾಗಿ ನಿಂತಿದ್ದು, ಯುದ್ದನೌಕೆಗಳನ್ನು ಕಳುಹಿಸಿದೆ ಎಂಬ ಮಾಹಿತಿ ಇದೆ. ಹೀಗೆ 2 ದೇಶಗಳ ನಡುವಿನ ಯುದ್ದ ಸದ್ಯ ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳು ಹಾಗೂ ಪರಸ್ಫರ ಬದ್ದವೈರಿಗಳ ನಡುವಿನ ಫೈಟ್ ಆಗಿ ಮಾರ್ಪಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಎಂದಿಗಿಂತ ಹೆಚ್ಚು ಯುದ್ದದ ವಾಸನೆ ಕಂಡುಬರುತ್ತಿದೆ.
ಕರ್ನಾಟಕದಲ್ಲಿ ಕನ್ನಡದ ಗೌರವ: ಸಹಬಾಳ್ವೆಗೆ ಸ್ಥಳೀಯ ಭಾಷೆ ಕಲಿಯುವುದು ಯಾಕೆ ಅಗತ್ಯ?
ಅದು 2001 ರ ಸಮಯ.ದೂರ ದೇಶದಲ್ಲಿ ಸಿಗುವ ಭಾರತೀಯರೆಲ್ಲರೂ ನನ್ನ ಬಂಧುಗಳು ಎನ್ನುವ ಭಾವನೆಯಿದ್ದ ಕಾಲ. ಇದರ ಜೊತೆಗೆ ಅಂದಿನ ದಿನದಲ್ಲಿ ಬಾರ್ಸಿಲೋನ ನಗರದಲ್ಲಿ ಭಾರತೀಯರು ಬೆರಳೆಣಿಕೆಯಲ್ಲಿದ್ದರು. ಇಂತಹ ಸಮಯದಲ್ಲಿ ಡೆಲ್ಲಿಯ ಹುಡುಗನೊಬ್ಬನ ಪರಿಚಯವಾಗಿತ್ತು. ಫೋನಿನಲ್ಲಿ ಮಾತಾಡಿದ್ದೆವು.ಅವನಿಗೆ ಕನ್ನಡ ಎಲ್ಲಿಂದ ಬರಬೇಕು ? ಹೀಗಾಗಿ ನಾನು ಅವನೊಂದಿಗೆ ಹಿಂದಿಯಲ್ಲಿ ಮಾತಾಡಿದ್ದೆ. ತಿಂಗಳುಗಳು ಕಳೆದು ಒಂದು ದಿನ ನೇರ
ಬೀದರ್ನಲ್ಲಿದೆ ಕಲ್ಯಾಣ ಕರ್ನಾಟಕದ ಏಕೈಕ ಓಯಸ್ಟರ್ ಅಣಬೆ ಬೆಳೆ, ಬೀಜ ತಯಾರಿಕಾ ಕೇಂದ್ರ
ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಓಯಸ್ಟರ್ (ಸಿಂಪಿ) ಅಣಬೆ ಬೆಳೆ ಹಾಗೂ ಬೀಜ ತಯಾರಿಕಾ ಜೈವಿಕ ಕೇಂದ್ರ ಹೊಂದಿರುವ ಏಕೈಕ ಜಿಲ್ಲೆ ಬೀದರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಮಗ್ರ ಜೈವಿಕ ಕೇಂದ್ರದಲ್ಲಿ ಅಣಬೆ ಬೆಳೆಸುವುದರ ಜೊತೆಗೆ ರೈತರಿಗೆ ತರಬೇತಿ ಹಾಗೂ ಬೀಜ ವಿತರಣೆ ಕಾರ್ಯವೂ ನಡೆಯುತ್ತಿದೆ. ಬೀದರ್ ಸೇರಿದಂತೆ ಕಲಬುರಗಿ, ಯಾದಗಿರಿ, ಚಿಂಚೋಳಿ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಅಣಬೆ ಕೃಷಿಗೆ ಆಸಕ್ತಿ ಹೊಂದಿರುವ ರೈತರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ದೊರೆಯುತ್ತಿರುವುದರಿಂದ ಇತ್ತೀಚೆಗೆ ಅಣಬೆ ಬೆಳೆ ಕಡೆ ರೈತರ ಒಲವು ಹೆಚ್ಚುತ್ತಿದೆ. ಮಣ್ಣಿಲ್ಲದೆ ಬೆಳೆಸಬಹುದಾದ ಅಣಬೆ ಓಯಸ್ಟರ್(ಸಿಂಪಿ) ಅಣಬೆ ಬೆಳೆಸಲು ಮಣ್ಣಿನ ಅವಶ್ಯಕತೆ ಇಲ್ಲ. ಭತ್ತದ ಹುಲ್ಲು, ಗೋಧಿ ಹುಲ್ಲು ಅಥವಾ ಇತರೆ ಹೊಟ್ಟು, ಸ್ವಲ್ಪ ನೀರು ಹಾಗೂ ಅಣಬೆ ಬೀಜಗಳಿದ್ದರೆ ಸಾಕು. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಬೆಳೆಯಬಹುದಾದ್ದರಿಂದ ಇದು ಆರೋಗ್ಯಕರ ಆಹಾರವಾಗಿಯೂ ಪರಿಗಣಿಸಲಾಗುತ್ತಿದೆ. ಸಹಾಯಕ ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ್ ಮಾಹಿತಿ ನೀಡಿ, ಅಣಬೆ ಬೆಳೆಯಲು ಅಣಬೆ ಬೀಜ, ಕಚ್ಚಾ ವಸ್ತು (ಕಳವೆ ಹುಲ್ಲು, ಗೋಧಿ ಹುಲ್ಲು) ಹಾಗೂ 20ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಗತ್ಯ. ಸರಿಯಾದ ವಿಧಾನ ಅನುಸರಿಸಿದರೆ 21 ದಿನಗಳಲ್ಲಿ ಮೊಳಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಕಳವೆ ಹುಲ್ಲು ಅಥವಾ ಗೋಧಿ ಹುಲ್ಲನ್ನು 2-3 ಸೆಂ.ಮೀ ಅಳತೆಯಲ್ಲಿ ಕತ್ತರಿಸಿ 8-10 ಗಂಟೆ ನೀರಿನಲ್ಲಿ ನೆನೆಸಿ, ನಂತರ ಒಣಗಿಸಿ ಸ್ಟೆರಿಲೈಜೇಶನ್ ಮಾಡಿದ ಬಳಿಕ ಪಿಪಿ ಕವರ್ಗಳಲ್ಲಿ ಪದರಗಳಾಗಿ ಅಣಬೆ ಬೀಜದೊಂದಿಗೆ ತುಂಬಬೇಕು. ಕತ್ತಲಿನ ಕೋಣೆಯಲ್ಲಿ ಇಟ್ಟರೆ 21 ದಿನಗಳಲ್ಲಿ ಮೊಳಕೆ ಮೂಡಿ, 7-8 ದಿನಗಳಲ್ಲಿ ಸಂಪೂರ್ಣ ಬೆಳೆಯುತ್ತದೆ. ಒಂದು ಕೆ.ಜಿ. ಅಣಬೆ ಬೀಜದಿಂದ 5-6 ಕೆ.ಜಿ.ವರೆಗೆ ಇಳುವರಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಕಿಲೋಗೆ 400 ರೂ.ಕ್ಕಿಂತ ಹೆಚ್ಚು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯಕ್ಕೂ ಲಾಭ ಓಯಸ್ಟರ್ ಅಣಬೆ ಸೇವನೆಯಿಂದ ಕ್ಯಾನ್ಸರ್ ವಿರೋಧಿ ಗುಣಗಳು, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಅಂಶಗಳು ಇರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ರೈತರಿಗೆ ತರಬೇತಿ-ಬೀಜ ವಿತರಣೆ ಕಳೆದ ಮೂರು ವರ್ಷಗಳಿಂದ ಜೈವಿಕ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ನೀಡಲಾಗುತ್ತಿದೆ. ಕೊನೆಯ ಮೂರು ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಸಂಪರ್ಕಿಸಿದ್ದು, ಬೀದರ್ ನಗರದಲ್ಲೇ 10ರಿಂದ 15 ಮಂದಿ ಬೀಜ ಪಡೆದುಕೊಂಡಿದ್ದಾರೆ. ರೈತರಿಗೆ ತಲುಪಲು ವಾಟ್ಸಪ್ ಗುಂಪು ರಚಿಸಿ ಮಾಹಿತಿ ಹಂಚಲಾಗುತ್ತಿದೆ ಎಂದು ತೋಟಗಾರಿಕೆ ಜೈವಿಕ ಕೇಂದ್ರದ ಸಹಾಯಕ ನಿರ್ದೇಶಕ ನಿಲಂಜನ್ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ರೀತಿಯ ಜೈವಿಕ ಅಣಬೆ ಕೇಂದ್ರ ಒಂದೇ ಘಟಕವಾಗಿದ್ದು, ಇಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆಗಳಿಗೂ ಸೌಲಭ್ಯವಿದೆ. ನಾಲ್ಕು ಪ್ರಯೋಗಾಲಯಗಳನ್ನು ಹೊಂದಿರುವ ಈ ಕೇಂದ್ರವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೀದರ್ನಲ್ಲೇ ಬೀಜ ತಯಾರಿಕೆ ಓಯಸ್ಟರ್ ಅಣಬೆಯ ಬೀಜ ತಯಾರಿಕೆಯಾಗುವುದೂ ಇದೇ ಜೈವಿಕ ಕೇಂದ್ರದಲ್ಲಿ. ಜೋಳ ಅಥವಾ ಗೋಧಿಯನ್ನು ಬೇಯಿಸಿ, ಚಾಕ್ ಪೌಡರ್ ಹಾಗೂ ಜೀಪ್ಸಮ್ ಮಿಶ್ರಣ ಮಾಡಿ 120 ಡಿಗ್ರಿ ಸೆಲ್ಸಿಯಸ್ನಲ್ಲಿ ಸ್ಟೆರಿಲೈಜೇಶನ್ ಮಾಡುವ ಮೂಲಕ ಗುಣಮಟ್ಟದ ಬೀಜವನ್ನು ತಯಾರಿಸಲಾಗುತ್ತಿದೆ. ಬೀದರ್ನ ರೈತರು ಅಣಬೆ ಕೃಷಿ ಬಗ್ಗೆ ಇನ್ನಷ್ಟು ಜಾಗೃತಿ ಹೊಂದಬೇಕು. ನಮ್ಮ ಕಚೇರಿಯನ್ನು ಸಂಪರ್ಕಿಸಿ ತರಬೇತಿ ಮತ್ತು ಬೀಜಗಳನ್ನು ಪಡೆದು ಲಾಭ ಪಡೆಯಬಹುದು. -ನಿಲಂಜನ್, ಸಹಾಯಕ ನಿರ್ದೇಶಕ ತೋಟಗಾರಿಕೆ ಜೈವಿಕ ಕೇಂದ್ರ
Gold Rate Rise : ಚಿನ್ನದ ಬೆಲೆಯಲ್ಲಿ 2290 ರೂ ಜಂಪ್: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ
15420 ಕ್ಕೆ ಇಳಿದಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮತ್ತೆ ಭಾರಿ ಏರಿಕೆಯಾಗಿದೆ. ಈಗ ಚಿನ್ನದ ಬೆಲೆ 15649 ರೂಗೆ ಏರಿಕೆ ಆಗಿದೆ.
ಆತ್ಮಜಾಗೃತಿ ಮತ್ತು ಸಚ್ಚಾರಿತ್ರ್ಯದ ಸತ್ಫಲ ನೀಡುವ ರಮದಾನ್
185ನೇ ವಚನದಲ್ಲಿ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದರ ಹಿಂದಿನ ಎರಡು ಔಚಿತ್ಯಗಳನ್ನು ತಿಳಿಸಲಾಗಿದೆ. ಮೊದಲನೆಯದು, ಕುರ್ಆನ್ ಮೂಲಕ ಸಾತ್ವಿಕ ಬದುಕು ಸಾಗಿಸುವುದಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಿದ್ದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸುವುದು. ಎರಡನೆಯದು, ಪ್ರಸ್ತುತ ಮಾರ್ಗದರ್ಶನದ ಪ್ರಕಾರ ಬದುಕು ಸಾಗಿಸಲು ಸಾಧ್ಯವಾಗುವುದಕ್ಕೆ ಬೇಕಾದ ಎಚ್ಚರ, ಶಿಸ್ತು, ಸಹನೆ, ಸಂಯಮಗಳನ್ನು ಬೆಳೆಸಿಕೊಳ್ಳುವುದು. ಅಂದರೆ, ಚಿತ್ತವನ್ನು ಪಳಗಿಸುವುದು, ಬದುಕಿನ ಎಲ್ಲ ಹಂತಗಳಲ್ಲೂ ಚಿತ್ತದ ಅಪೇಕ್ಷೆಗಳನ್ನು ಹತೋಟಿಯಲ್ಲಿಟ್ಟು ದೇವಾದೇಶಗಳನ್ನು ಪಾಲಿಸುವ ಸಾಮರ್ಥ್ಯವನ್ನು ಗಳಿಸುವುದು ಮತ್ತು ಆ ಮಟ್ಟದ ಸ್ವನಿಯಂತ್ರಣವನ್ನು ಸಾಧಿಸುವುದು. ಮಾನವ ಸಮಾಜ ಅಂದ ಮೇಲೆ ಅಲ್ಲಿ 1. ಆಹಾರ ಸೇವನೆ, 2. ಮಾತುಕತೆ, 3. ಧನಸಂಪಾದನೆ, 4. ಪ್ರೇಮ-ಕಾಮ - ಇವು ದೊಡ್ಡ ಪ್ರಮಾಣದಲ್ಲಿ ನಿತ್ಯ ನಡೆಯುವ ಕೆಲವು ಸಾಮಾನ್ಯ ಚಟುವಟಿಕೆಗಳು. ಈ ಚಟುವಟಿಕೆಗಳ ವಿಶೇಷತೆಯೇನೆಂದರೆ, ಸಮಾಜದಲ್ಲಿ ನಡೆಯುವ ಇತರ ಹೆಚ್ಚಿನ ನಿತ್ಯ ಚಟುವಟಿಕೆಗಳಿಗೂ ಇವುಗಳೊಂದಿಗೆ ಸಂಬಂಧವಿರುತ್ತವೆ. ಜಗತ್ತಿನ ಹೆಚ್ಚಿನ ಪ್ರಮುಖ ಧರ್ಮಗಳು ಈ ಪೈಕಿ ಯಾವುದೇ ಚಟುವಟಿಕೆಯನ್ನು ವಸ್ತುತಃ ಕೆಟ್ಟದೆಂದು ಕರೆದಿಲ್ಲ, ಅವುಗಳನ್ನು ನಿಷೇಧಿಸಿದ್ದಿಲ್ಲ. ಏಕೆಂದರೆ ಇವೆಲ್ಲಾ ಮಾನವನ ಅಗತ್ಯಗಳು. ಸಾಮಾನ್ಯವಾಗಿ, ವ್ಯಕ್ತಿಗಳ ಮತ್ತು ಸಮಾಜದ ಸ್ವಾಭಾವಿಕ ಅಗತ್ಯಗಳ ಮಿತಿಯಲ್ಲಿದ್ದು, ಸಮೂಹ ಹಿತಕ್ಕೆ ಪೂರಕವಾಗಿ ಮತ್ತು ನಿರ್ದಿಷ್ಟ ಇತಿಮಿತಿಗಳಿಗೆ ಬದ್ಧವಾಗಿದ್ದಷ್ಟು ಕಾಲ ಅವು ಎಲ್ಲರ ಪಾಲಿಗೆ ಹಿತಕರವಾಗಿಯೇ ಇರುತ್ತವೆ. ಆದರೆ ಇವೇ ಚಟುವಟಿಕೆಗಳು ಹಿತ-ಅಹಿತಗಳನ್ನು ಕಡೆಗಣಿಸಿ, ಇತಿಮಿತಿಗಳನ್ನು ಮೀರಿ, ನಿಯಮ-ನಿರ್ದೇಶನಗಳನ್ನು ಉಲ್ಲಂಘಿಸಿ ಕೇವಲ ಚಿತ್ತದ ಸಾರಥ್ಯದಲ್ಲಿ, ಸ್ವಾರ್ಥ ಕೇಂದ್ರಿತವಾಗಿ, ಸ್ವೇಚ್ಛಾನುಸಾರ ನಡೆಯತೊಡಗಿದರೆ ಅವುಗಳಲ್ಲಿರುವ ಹಿತವೆಲ್ಲಾ ಕರಗಿಹೋಗಿ, ಅಹಿತವೇ ದೈತ್ಯಾಕಾರದಲ್ಲಿ ಮೆರೆಯತೊಡಗುತ್ತದೆ. ಮಾನವ ಲೋಕದಲ್ಲಿ ಎಲ್ಲೆಂದರಲ್ಲಿ ವ್ಯಾಪಕವಾಗಿರುವ ಹೆಚ್ಚಿನೆಲ್ಲ ರೋಗ ರುಜಿನಗಳು, ದುಃಖ ದುಮ್ಮಾನಗಳು, ವೈಮನಸ್ಯ, ಜಗಳ, ವಿವಾದ, ಘರ್ಷಣೆ, ಯುದ್ಧ, ಹಾಗೆಯೇ ಅನ್ಯಾಯ-ಅಕ್ರಮ, ಅಸಮಾನತೆ, ಶೋಷಣೆ, ದಮನ ಇತ್ಯಾದಿಗಳನ್ನೆಲ್ಲಾ ನಾವು ತುಸು ಹತ್ತಿರದಿಂದ, ಸೂಕ್ಷ್ಮವಾಗಿ ನೋಡಿದರೆ ಅವುಗಳ ಹಿಂದೆ ಪ್ರಸ್ತುತ ಚಟುವಟಿಕೆಗಳ ಕರಾಳ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತವೆೆ. ಅದೇ ಕಾರಣಕ್ಕಿರಬಹುದು, ಜಗತ್ತಿನ ಹೆಚ್ಚಿನೆಲ್ಲ ಧರ್ಮಗಳಲ್ಲಿ ಮತ್ತು ಆಧ್ಯಾತ್ಮಿಕ ದರ್ಶನಗಳಲ್ಲಿ ಪ್ರಸ್ತುತ ನಾಲ್ಕು ಚಟುವಟಿಕೆಗಳಿಗೆ ಲಗಾಮು ಹಾಕುವುದಕ್ಕಾಗಿಯೇ 1. ನಿರಶನ (ಉಪವಾಸ), 2. ಮೌನ, 3. ದಾನ ಮತ್ತು 4. ನಿಷ್ಕಾಮ ಎಂಬ ಶಿಸ್ತು ಪ್ರಧಾನವಾದ ಆಚರಣೆಗಳನ್ನು ಪ್ರೋತ್ಸಾಹಿಸಲಾಗಿದೆ. ಪವಿತ್ರ ಕುರ್ಆನ್ನಲ್ಲಿ ರಮದಾನ್ (ರಮ್ಜಾನ್) ತಿಂಗಳುದ್ದಕ್ಕೂ ಕಡ್ಡಾಯವಾಗಿ ಪ್ರತಿದಿನ ಹಗಲೆಲ್ಲಾ ಉಪವಾಸ ಆಚರಿಸಬೇಕೆಂದು ಆದೇಶಿಸಲಾಗಿದೆ. ಉಪವಾಸವು ಸೂರ್ಯೋದಯಕ್ಕಿಂತ ಸುಮಾರು ಒಂದು ಗಂಟೆ ಮುನ್ನ ಆರಂಭವಾಗಿ ಸೂರ್ಯಾಸ್ತಮಾನದ ಬಳಿಕ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಆಹಾರ, ಪಾನೀಯಗಳ ಸೇವನೆ ಮತ್ತು ಲೈಂಗಿಕ ಚಟುವಟಿಕೆ ಸಂಪೂರ್ಣ ನಿಷಿದ್ಧ. ಹಾಗೆಯೇ ಉಪವಾಸದ ಅವಧಿಯನ್ನು ಗರಿಷ್ಠ ಮಟ್ಟದಲ್ಲಿ ದೇವ ಸ್ಮರಣೆ, ಆರಾಧನೆ, ಪ್ರಾರ್ಥನೆ, ಕೀರ್ತನೆ, ಪವಿತ್ರ ಕುರ್ಆನ್ ಪಠಣ, ಧರ್ಮೋಪದೇಶಗಳ ಅಧ್ಯಯನ, ಪ್ರವಾದಿವರ್ಯರ (ಸ) ವಚನಗಳು, ಉಪದೇಶಗಳು ಮತ್ತು ಅವರ ಹಾಗೂ ಅವರ ಮಹಾನ್ ಸಂಗಾತಿಗಳ ಆದರ್ಶ ಜೀವನದ ಕುರಿತಾದ ಜ್ಞಾನಾರ್ಜನೆ, ಆತ್ಮ ವಿಮರ್ಶೆ, ಆತ್ಮ ಚಿಂತನೆ, ಪಶ್ಚಾತ್ತಾಪ, ಕ್ಷಮಾಪಣೆ, ಪಾಪಪರಿಹಾರ, ಜನಸೇವೆ ಮುಂತಾದ ಚಟುವಟಿಕೆಗಳಲ್ಲಿ ಕಳೆಯಬೇಕು. ಐದು ಹೊತ್ತಿನ ಕಡ್ಡಾಯ ನಮಾಝ್ಗಳನ್ನು ಸಮಯಕ್ಕೆ ಸರಿಯಾಗಿ ಗರಿಷ್ಠ ಏಕಾಗ್ರತೆಯೊಂದಿಗೆ ಸಲ್ಲಿಸಬೇಕು. ಕಡ್ಡಾಯ ನಮಾಝ್ ಮಾತ್ರವಲ್ಲ, ಐಚ್ಛಿಕ ನಮಾಝ್ಗಳನ್ನೂ ಸಾಧ್ಯವಿದ್ದಷ್ಟು ಹೆಚ್ಚು ಸಲ್ಲಿಸಬೇಕು. ಗರಿಷ್ಠ ಪ್ರಮಾಣದಲ್ಲಿ ದಾನಧರ್ಮ ಮಾಡಬೇಕು. ಉಪವಾಸದಲ್ಲಿ ಕೇವಲ ಆಹಾರವನ್ನು ತ್ಯಜಿಸಿದರೆ ಸಾಲದು. ಎಲ್ಲ ಬಗೆಯ ಅನಗತ್ಯ ಮಾತುಗಳನ್ನು ಕೂಡಾ ವರ್ಜಿಸಬೇಕು. ಮಾತುಕತೆಗಳೆಲ್ಲವೂ ಕಟ್ಟುನಿಟ್ಟಾಗಿ ಸುಳ್ಳು, ಅಶ್ಲೀಲತೆ, ದ್ವೇಷ, ಅಸೂಯೆ, ಬಯ್ಗುಳ, ನಿಂದನೆ, ದೂಷಣೆ ಮುಂತಾದ ಎಲ್ಲ ಕೆಡುಕುಗಳಿಂದ ಸಂಪೂರ್ಣ ಮುಕ್ತವಾಗಿರಬೇಕು - ಹೀಗೆ ರಮದಾನ್ ತಿಂಗಳಲ್ಲಿ ಕೇವಲ ಉಪವಾಸ ಆಚರಿಸಿದರೆ ಸಾಲದು. ಅದರ ಜೊತೆಗೆ ಕೂಡಾ ಪಾಲಿಸಲೇಬೇಕಾದ ನಿಯಮ ನಿರ್ಬಂಧಗಳ ಒಂದು ಪಟ್ಟಿಯೇ ಇದೆ ಮತ್ತು ಆ ಪಟ್ಟಿ ಬಹಳ ದೀರ್ಘವಿದೆ.. ‘‘ಮನುಷ್ಯನು ಅತ್ಯಧಿಕ ಪಾಪಗಳನ್ನು ಮಾಡುವುದು ಮಾತಿನ ಮೂಲಕ’’ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ನಾಗರಿಕ ಸಮಾಜಗಳಲ್ಲಿ ಪ್ರಚಲಿತವಿದೆ. ಆದ್ದರಿಂದಲೇ ‘‘ಮಾತನ್ನು ಕೆಡುಕುಗಳಿಂದ ಮುಕ್ತವಾಗಿಡುವುದು ಹೇಗೆ?’’ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಲೇ ಬಂದಿದ್ದಾರೆ. ಹಾಗೆಯೇ, ‘‘ಅದಕ್ಕೆ ಮೌನವೊಂದೇ ಮಾರ್ಗ’’ ಎಂಬ ಉತ್ತರವೂ ಹೆಚ್ಚಿನೆಲ್ಲಾ ಸಮಾಜಗಳಲ್ಲಿ ಜನಪ್ರಿಯವಾಗಿದೆ. ಒಮ್ಮೆ ಪ್ರವಾದಿ ಮುಹಮ್ಮದ್ (ಸ) ‘‘ಮೌನವಾಗಿದ್ದವನು ಮೋಕ್ಷಪಡೆದನು’’ ಎಂದು ಹೇಳಿದ್ದರು (ಮುಸ್ನದ್ ಅಹ್ಮದ್). ಹಾಗೆಯೇ ಅವರು, ‘‘ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನು ಒಂದೋ ಹಿತ ಮತ್ತು ಒಳಿತಿನ ಮಾತನ್ನಾಡಬೇಕು. ಅನ್ಯತಃ ಮೌನವಾಗಿರಬೇಕು’’ ಎಂದಿದ್ದರು (ಬುಖಾರಿ). ಒಂದು ಸಂದರ್ಭದಲ್ಲಿ ಪ್ರವಾದಿ (ಸ) ಹೇಳಿದರು: ‘‘ಯಾರು ಸುಳ್ಳು ಮಾತನ್ನಾಡುವುದನ್ನು ಮತ್ತು ಸುಳ್ಳಿನ ಪ್ರಕಾರ ವರ್ತಿಸುವುದನ್ನು ಬಿಟ್ಟು ಬಿಡುವುದಿಲ್ಲವೋ ಅವನು (ಉಪವಾಸದ ಹೆಸರಲ್ಲಿ) ಅನ್ನ ಪಾನೀಯ ತ್ಯಾಗ ಮಾಡಬೇಕೆಂಬ ಯಾವ ಅಗತ್ಯವೂ ಅಲ್ಲಾಹನಿಗಿಲ್ಲ’’ (ಬುಖಾರಿ)ನಿಜವಾಗಿ, ಪ್ರವಾದಿ ಮುಹಮ್ಮದ್ (ಸ) ಅವರಿಗಿಂತ ಪೂರ್ವಕಾಲದ ಕೆಲವು ಧರ್ಮಸಂಹಿತೆಗಳಲ್ಲಿ ಮೌನವು ಉಪವಾಸದ ಅವಿಭಾಜ್ಯ ಭಾಗವಾಗಿತ್ತು. ಪುಣ್ಯ ಸಂಪಾದನೆ ಮತ್ತು ಪಾಪ ಪರಿಹಾರಕ್ಕಾಗಿ ನಿರ್ದಿಷ್ಟ ಕಾಲಾವಧಿಯ ಉಪವಾಸ ಆಚರಿಸುವಂತೆ, ಮೌನ ಆಚರಿಸುವ ಸಂಪ್ರದಾಯವೂ ಇತ್ತು. ಉಪವಾಸದ ಅದೇಶವು ಕುರ್ಆನ್ನ ಎರಡನೇ ಅಧ್ಯಾಯದಲ್ಲಿದೆ. ಕುರ್ಆನ್ನಲ್ಲಿರುವ ಒಟ್ಟು 114 ಅಧ್ಯಾಯಗಳ ಪೈಕಿ, ಜಗತ್ತಿನೆಲ್ಲೆಡೆಯ ಮುಸ್ಲಿಮರು ನಿತ್ಯ ಹಲವಾರು ಬಾರಿ ಪಠಿಸುವ, ಅದರ ಪ್ರಥಮ ಅಧ್ಯಾಯವು ‘ಅಲ್ ಫಾತಿಹಾ’ ಕೇವಲ 7 ವಚನಗಳಿರುವ ಅತ್ಯಂತ ಸಂಕ್ಷಿಪ್ತ ಅಧ್ಯಾಯಗಳಲ್ಲೊಂದು. ಅದೇವೇಳೆ 286 ವಾಕ್ಯಗಳಿರುವ, ‘ಅಲ್ ಬಕರಾ’ ಎಂಬ ಎರಡನೇ ಅಧ್ಯಾಯವು ಕುರ್ಆನ್ನ ಅತ್ಯಂತ ದೀರ್ಘ ಅಧ್ಯಾಯವಾಗಿದೆ. ಈ ಅಧ್ಯಾಯದ ವಿಶೇಷತೆ ಏನೆಂದರೆ ಇದರಲ್ಲಿ ಒಂದು ಪುಟ್ಟ ಕುಟುಂಬದೊಂದಿಗೆ ಆರಂಭವಾದ ಮಾನವ ಕುಲದ ಇತಿಹಾಸದ ಪ್ರಮುಖ ಮೈಲುಗಲ್ಲುಗಳನ್ನು, ಧರ್ಮದ ತಳಹದಿಗಳನ್ನು, ಅದರ ವಿಕಾಸದ ನಿರ್ಣಾಯಕ ಮಜಲುಗಳನ್ನು, ಧರ್ಮವು ಪ್ರತಿಪಾದಿಸುವ ಸಾರ್ವಕಾಲಿಕ ನೈತಿಕ ಮೌಲ್ಯಗಳನ್ನು ಮತ್ತು ಅದರ ಪ್ರಮುಖ ಆದೇಶಗಳನ್ನು ಹಾಗೂ ಮಹತ್ವದ ಕಾನೂನು - ನಿಯಮಗಳನ್ನು ಬಹಳ ಸಮಗ್ರ ರೂಪದಲ್ಲಿ ನಿರೂಪಿಸಲಾಗಿದೆ. ಈ ಅಧ್ಯಾಯದಲ್ಲಿ, ಉಪವಾಸಾಚರಣೆ ಕಡ್ಡಾಯವೆಂದು ಘೋಷಿಸಲು ಬಳಸಲಾಗಿರುವ ಶೈಲಿ, ಧಾಟಿ ಮತ್ತು ಅದರ ಜೊತೆಗೆ ನೀಡಲಾಗಿರುವ ಸಾಂದರ್ಭಿಕ ಆದೇಶಗಳು ಮತ್ತು ಮಾಹಿತಿಗಳು ವಿಚಾರ ಮತ್ತು ಚಿಂತನೆಗಳ ಒಂದು ವಿಶಾಲ ಪ್ರಪಂಚವನ್ನೇ ಓದುಗರ ಮುಂದೆ ತೆರೆದಿಡುತ್ತವೆ. ಇಲ್ಲಿ ಉಪವಾಸದ ಕುರಿತಾದ ನೇರ ಆದೇಶವು 183ನೇ ವಚನದಲ್ಲಿ ಪ್ರಕಟವಾಗಿದೆ. ಆದರೆ ಆ ಬಳಿಕ 188ನೇ ವಚನದ ತನಕ ಇರುವ ಎಲ್ಲ ವಚನಗಳು ಮತ್ತು ಅವುಗಳಲ್ಲಿರುವ ವ್ಯಕ್ತ ಹಾಗೂ ಸುಪ್ತವಾದ ಎಲ್ಲ ಆಶಯಗಳು, ನೇರ ಅಥವಾ ಪರೋಕ್ಷವಾಗಿ ಉಪವಾಸದ ಹಿಂದಿನ ಸ್ಫೂರ್ತಿ ಹಾಗೂ ಅದರ ಮೂಲ ಉದ್ದೇಶದ ಜೊತೆಗೆ ಬೆಸೆದುಕೊಂಡಿವೆ. ಪ್ರಸ್ತುತ ವಚನಗಳಲ್ಲಿರುವ ಕೆಲವು ಪ್ರಮುಖ ಪಾಠಗಳ ತಾತ್ಪರ್ಯ ಅಥವಾ ಸಂಕ್ಷಿಪ್ತ ಸಾರಾಂಶ ಹೀಗಿದೆ: * ಇಸ್ಲಾಮ್ ಧರ್ಮವನ್ನು ನಂಬಿರುವವರೇ, ಉಪವಾಸ ವೃತವನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಇದೊಂದು ನವೀನ ಆದೇಶವೇನಲ್ಲ. ನಿಮಗಿಂತ ಹಿಂದಿನ ಇತರ ಧರ್ಮಗಳ ಅನುಯಾಯಿಗಳ ಮೇಲೂ ಇದನ್ನು ಕಡ್ಡಾಯಗೊಳಿಸಲಾಗಿತ್ತು. ನೀವು ‘ತಕ್ವಾ’ವನ್ನು ಸಾಧಿಸಬೇಕೆಂಬುದೇ ಇದರ ಉದ್ದೇಶ. ಇದು 183ನೇ ವಚನದ ತಾತ್ಪರ್ಯ. ‘ತಕ್ವಾ’ ಎಂಬ ಪದವನ್ನು ಸಾಮಾನ್ಯವಾಗಿ ದೇವ ಭಯ ಅಥವಾ ಧರ್ಮನಿಷ್ಠೆ ಎಂದು ಅನುವಾದಿಸಲಾಗುತ್ತದೆ. ವಿವಿಧ ಕುರ್ಆನ್ ಭಾಷ್ಯ ಗ್ರಂಥಗಳಲ್ಲಿ ಈ ಕುರಿತು ಬಂದಿರುವ ವಿಶ್ಲೇಷಣೆಗಳಿಂದ ತಿಳಿಯುವಂತೆ ತಕ್ವಾ ಎಂಬ ಪದಕ್ಕೆ ಭಯ, ನಿಷ್ಠೆ, ಜಾಗೃತಿ, ಎಚ್ಚರ, ಏಕಾಗ್ರತೆ ಇತ್ಯಾದಿ ಅರ್ಥಗಳಿವೆ. ಈ ದೃಷ್ಟಿಯಿಂದ, ಉಪವಾಸದ ಉದ್ದೇಶ, ಆಮೂಲಕ ಮನುಷ್ಯನಲ್ಲಿ ಜಾಗೃತಿಯ ಸ್ಥಿತಿಯನ್ನು ಬೆಳೆಸುವುದಾಗಿದೆ. ಮನುಷ್ಯನು ತನ್ನ ಬಗ್ಗೆ, ತನ್ನ ಸೃಷ್ಟಿಕರ್ತನ ಬಗ್ಗೆ, ತನ್ನ ಕರ್ತವ್ಯಗಳು, ಬಾಧ್ಯತೆಗಳು, ಸಾಮರ್ಥ್ಯಗಳು, ಇತಿಮಿತಿಗಳು ಇತ್ಯಾದಿಗಳ ಬಗ್ಗೆ, ತನ್ನ ಸಹಜೀವಿಗಳ ಬಗ್ಗೆ, ಹೀಗೆ ತನ್ನೊಳಗಿನ ಮತ್ತು ಸುತ್ತಮುತ್ತಲ ಎಲ್ಲ ವಾಸ್ತವಗಳ ಬಗ್ಗೆ ಸದಾ ಜಾಗೃತನಾಗಿರಬೇಕು. ಎಚ್ಚರದ ಸ್ಥಿತಿಯಲ್ಲಿ ಮಾತ್ರ ಮನುಷ್ಯನು ಸುರಕ್ಷಿತನಾಗಿರಲು ಸಾಧ್ಯ. ಗರಿಷ್ಠ ಜಾಗೃತಿ ಹಾಗೂ ಎಚ್ಚರದ ಸ್ಥಿತಿಯಲ್ಲಿ ಮಾತ್ರ ಮನುಷ್ಯನು ತನ್ನೆಲ್ಲ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯ. ಎಚ್ಚರದ ಮಟ್ಟವನ್ನು ಕುಸಿಯಲು ಬಿಡುವುದೆಂದರೆ, ಪ್ರಮಾದಗಳ, ಕುಸಿತಗಳ ಹಾಗೂ ದುರಂತಗಳ ಮಾತ್ರವಲ್ಲ ಘೋರ ಅಪರಾಧಗಳ ಸರಮಾಲೆಯನ್ನು ಸ್ವಾಗತಿಸಿದಂತೆ. ಹೊಟ್ಟೆ ತುಂಬಿರುವ ಸ್ಥಿತಿಯು ನಿದ್ದೆಗೆ, ಅಮಲಿಗೆ ಮತ್ತು ಉನ್ಮಾದಕ್ಕೆ ಹತ್ತಿರವಿರುತ್ತದೆ. ಅದಕ್ಕೆ ಹೋಲಿಸಿದರೆ ಹಸಿದಿರುವ ಸ್ಥಿತಿಯು, ಜಾಗೃತಿ ಮತ್ತು ಎಚ್ಚರಕ್ಕೆ ನಿಕಟವಿರುತ್ತದೆ. ಇದುವೇ ಉಪವಾಸ ಮತ್ತು ‘ತಕ್ವಾ’ಗೆ ಇರುವ ಸಂಬಂಧ. * ಇಸ್ಲಾಮ್ ಧರ್ಮದಲ್ಲಿ ಉಪವಾಸ ಕೇವಲ ರಮದಾನ್ ಎಂಬ ಒಂದು ತಿಂಗಳಿಗೆ ಸೀಮಿತವಾಗಿಲ್ಲ. ರಮದಾನ್ ತಿಂಗಳಲ್ಲಿ ತಿಂಗಳುದ್ದಕ್ಕೂ ಪ್ರತಿದಿನ ಹಗಲಲ್ಲಿ ಉಪವಾಸ ಆಚರಿಸುವುದು ಕಡ್ಡಾಯ ಎಂಬುದು ಆ ತಿಂಗಳ ವಿಶೇಷತೆ. ಉಳಿದಂತೆ ವರ್ಷದ ಇತರ ಹೆಚ್ಚಿನ ದಿನಗಳಲ್ಲಿ ಐಚ್ಛಿಕ ಉಪವಾಸ ಆಚರಿಸುವುದನ್ನು ಪ್ರೋತ್ಸಾಹಿಸಲಾಗಿದೆ. ಉದಾ: ರಮದಾನ್ ತಿಂಗಳು ಮುಗಿದ ಬಳಿಕ ಆರಂಭವಾಗುವ ಶವ್ವಾಲ್ ತಿಂಗಳಲ್ಲಿ 6 ದಿನ, ದುಲ್ ಹಜ್ ತಿಂಗಳ ಮೊದಲ 9 ದಿನ, ಅದರಲ್ಲೂ ವಿಶೇಷವಾಗಿ 9ನೇ ದಿನ, ಮುಹರ್ರಮ್ ತಿಂಗಳಲ್ಲಿ ಮತ್ತು ವಿಶೇಷವಾಗಿ ಆ ತಿಂಗಳ 9 ಮತ್ತು 10ನೇ ಅಥವಾ 10 ಮತ್ತು 11ನೇ ದಿನ, ಶವ್ವಾಲ್ ತಿಂಗಳಲ್ಲಿ, ಹಿಜರಿ ಕ್ಯಾಲೆಂಡರ್ನ ಎಲ್ಲ ತಿಂಗಳುಗಳ 13, 14 ಮತ್ತು 15ನೇ ದಿನ, ಪ್ರತಿವಾರ ಸೋಮವಾರ ಮತ್ತು ಗುರುವಾರ, ಎಲ್ಲ ತಿಂಗಳುಗಳಲ್ಲಿ ಒಂದು ದಿನ ಬಿಟ್ಟು ಇನ್ನೊಂದು ದಿನ ಹೀಗೆ ನಿರ್ದಿಷ್ಟ ಹಾಗೂ ಅನಿರ್ದಿಷ್ಟವಾದ ವಿವಿಧ ದಿನಗಳಲ್ಲಿ ಐಚ್ಛಿಕ ಕರ್ಮದ ರೂಪದಲ್ಲಿ ಉಪವಾಸ ಆಚರಿಸುವುದನ್ನು ಪ್ರವಾದಿ (ಸ) ಪ್ರೋತ್ಸಾಹಿಸಿದ್ದರು. ವರ್ಷದ ಹೆಚ್ಚಿನ ದಿನಗಳಲ್ಲಿ ಪ್ರವಾದಿ (ಸ) ಉಪವಾಸ ಆಚರಿಸುತ್ತಿದ್ದರು. * ಕ್ರಿ.ಶ. ಏಳನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದರು (ಸ) ಅರೇಬಿಯದಲ್ಲಿ ಇಸ್ಲಾಮ್ ಧರ್ಮವನ್ನು ಪರಿಚಯಿಸುವುದಕ್ಕೆ ಮುನ್ನವೇ ಆ ನಾಡಿನಲ್ಲಿ ಒಂದು ಕ್ಯಾಲೆಂಡರ್ ಪ್ರಚಲಿತವಿತ್ತು. ರಮದಾನ್ ಎಂಬುದು ಆ ಕ್ಯಾಲೆಂಡರ್ನ 9ನೇ ತಿಂಗಳಾಗಿತ್ತು. ಆ ಕಾಲದಲ್ಲೂ ಒಂದಿಲ್ಲೊಂದು ವಿಧದಲ್ಲಿ ಉಪವಾಸದ ಆಚರಣೆ ಸಮಾಜದಲ್ಲಿ ಪರಿಚಿತವಾಗಿತ್ತು. ಇಸ್ಲಾಮ್ ಧರ್ಮದಲ್ಲಿ ಉಪವಾಸವನ್ನು ಒಂದು ಸಮಗ್ರ ಜೀವನ ವ್ಯವಸ್ಥೆಯ ಭಾಗವಾಗಿಸಿ ಅದಕ್ಕೆ ಒಂದು ಪೂರ್ಣ ಹಾಗೂ ಪಕ್ವ ಸ್ವರೂಪವನ್ನು ಒದಗಿಸಲಾಯಿತು. * ಉಪವಾಸ ಆಚರಿಸಬೇಕೆಂಬ ಆದೇಶ ಎಲ್ಲ ಮುಸ್ಲಿಮರಿಗೂ ಅನ್ವಯಿಸುತ್ತದೆ. ಆದರೆ 184 ಮತ್ತು 185ನೇ ವಚನದಲ್ಲಿ ಸ್ಪಷ್ಟಪಡಿಸಿರುವಂತೆ, ಉಪವಾಸ ಕಡ್ಡಾಯವಿರುವ ದಿನಗಳಲ್ಲಿ ಅನಾರೋಗ್ಯದ ಸ್ಥಿತಿಯಲ್ಲಿರುವವರು ಅಥವಾ ದೂರ ಪ್ರದೇಶಗಳ ಪ್ರಯಾಣದಲ್ಲಿರುವವರು ತಮ್ಮ ಉಪವಾಸವನ್ನು ಮುಂದೂಡಬಹುದು. ಅಂದರೆ ತಾವು ಮುಂದೂಡಿದ್ದ ಉಪವಾಸವನ್ನು ಆರೋಗ್ಯ ಮರಳಿದ ಬಳಿಕ ಅಥವಾ ಪ್ರಯಾಣ ಮುಗಿದ ಬಳಿಕ ಬೇರೆ ತಿಂಗಳುಗಳಲ್ಲಿ ಪೂರ್ತಿಗೊಳಿಸಬಹುದು. (ವೃದ್ಧಾಪ್ಯ ಅಥವಾ ನಿಶ್ಶಕ್ತಿಯ ಕಾರಣ) ಉಪವಾಸ ಆಚರಿಸಲು ಕಷ್ಟವಾಗಿರುವವರು ಅದಕ್ಕೆ ಪರಿಹಾರವಾಗಿ ಕನಿಷ್ಠ ಒಬ್ಬ ಬಡವನಿಗೆ ಭೋಜನ ನೀಡಬೇಕು. ಯಾರಾದರೂ ತಮ್ಮಿಚ್ಛೆಯಿಂದ ಇನ್ನೂ ಹೆಚ್ಚಿನವರಿಗೆ ಭೋಜನ ನೀಡಿದರೆ ಅದರಿಂದ ಅವನಿಗೆ ಹಿತವಾಗಲಿದೆ. ಆದರೂ ತಿಳಿದಿರಲಿ, ದಾನವು ಉಪವಾಸಕ್ಕೆ ಸಂಪೂರ್ಣ ಪರ್ಯಾಯವಲ್ಲ. * ವಿಶ್ವದ ಸೃಷ್ಟಿಕರ್ತನು ಮಾನವಕುಲವನ್ನುದ್ದೇಶಿಸಿ ನೀಡಿದ ತನ್ನ ಅಂತಿಮ, ಅಧಿಕೃತ ಮಾರ್ಗದರ್ಶನವೇ ಪವಿತ್ರ ಕುರ್ಆನ್. ಇದು ಹಂತಹಂತವಾಗಿ 23 ವರ್ಷಗಳ ಅವಧಿಯಲ್ಲಿ, ಸಣ್ಣ ಭಾಗಗಳ ರೂಪದಲ್ಲಿ, ಅನಾವರಣಗೊಂಡಿತ್ತು. ಅದರ ಅನಾವರಣದ ಪ್ರಕ್ರಿಯೆಯು ಆರಂಭವಾದದ್ದು ರಮದಾನ್ ತಿಂಗಳಲ್ಲಿ. ಕುರ್ಆನ್ನಲ್ಲಿ ಉಪವಾಸವನ್ನು ಆದೇಶಿಸುವಾಗ, ಈ ಅಂಶವನ್ನು ಪ್ರಸ್ತಾಪಿಸಿ, ಈ ತಿಂಗಳಲ್ಲಿ ಕುರ್ಆನ್ ಅನಾವರಣಗೊಂಡಿದ್ದಕ್ಕೆ ಮತ್ತು ಇದೇ ತಿಂಗಳಲ್ಲಿ ನಿತ್ಯ ಉಪವಾಸ ಆಚರಿಸಬೇಕೆಂಬ ಆದೇಶ ನೀಡಿರುವುದಕ್ಕೆ ಪರಸ್ಪರ ಗಾಢ ಸಂಬಂಧವಿದೆ ಎಂಬುದನ್ನು ಸೂಚಿಸಲಾಗಿದೆ. 185ನೇ ವಚನದಲ್ಲಿ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದರ ಹಿಂದಿನ ಎರಡು ಔಚಿತ್ಯಗಳನ್ನು ತಿಳಿಸಲಾಗಿದೆ. ಮೊದಲನೆಯದು, ಕುರ್ಆನ್ ಮೂಲಕ ಸಾತ್ವಿಕ ಬದುಕು ಸಾಗಿಸುವುದಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಿದ್ದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸುವುದು. ಎರಡನೆಯದು, ಪ್ರಸ್ತುತ ಮಾರ್ಗದರ್ಶನದ ಪ್ರಕಾರ ಬದುಕು ಸಾಗಿಸಲು ಸಾಧ್ಯವಾಗುವುದಕ್ಕೆ ಬೇಕಾದ ಎಚ್ಚರ, ಶಿಸ್ತು, ಸಹನೆ, ಸಂಯಮಗಳನ್ನು ಬೆಳೆಸಿಕೊಳ್ಳುವುದು. ಅಂದರೆ, ಚಿತ್ತವನ್ನು ಪಳಗಿಸುವುದು, ಬದುಕಿನ ಎಲ್ಲ ಹಂತಗಳಲ್ಲೂ ಚಿತ್ತದ ಅಪೇಕ್ಷೆಗಳನ್ನು ಹತೋಟಿಯಲ್ಲಿಟ್ಟು ದೇವಾದೇಶಗಳನ್ನು ಪಾಲಿಸುವ ಸಾಮರ್ಥ್ಯವನ್ನು ಗಳಿಸುವುದು ಮತ್ತು ಆ ಮಟ್ಟದ ಸ್ವನಿಯಂತ್ರಣವನ್ನು ಸಾಧಿಸುವುದು. ಸಂಕ್ಷಿಪ್ತವಾಗಿ, ಕುರ್ಆನ್ ಅನಾವರಣಗೊಂಡ ತಿಂಗಳಲ್ಲೇ, ಕುರ್ಆನ್ನ ಮಾರ್ಗದರ್ಶನದ ಪ್ರಕಾರ ಶಿಸ್ತಿನ ಬದುಕು ಸಾಗಿಸುವುದಕ್ಕೆ ಬೇಕಾದ ತರಬೇತಿಯನ್ನು ಒದಗಿಸುವ ಏರ್ಪಾಟು ಮಾಡಲಾಗಿದೆ. * ಇದೇ ವಚನ (185)ದಲ್ಲಿ ಕುರ್ಆನ್ ಅನ್ನು ‘ಮಾನವರಿಗೆಲ್ಲಾ ಮಾರ್ಗದರ್ಶಿ’ ಎಂದು ಪರಿಚಯಿಸಲಾಗಿದೆ. ದಿವ್ಯಮಾರ್ಗದರ್ಶನದ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ ಮತ್ತು ಅದು ಯಾವುದಾದರೂ ಒಂದು ವರ್ಗ ಅಥವಾ ಪಂಗಡಕ್ಕೆ ಸೇರಿದ ಸೊತ್ತಲ್ಲ ಎಂಬುದನ್ನು ಈಮೂಲಕ ಸ್ಪಷ್ಟಪಡಿಸಲಾಗಿದೆ. ಹಾಗೆಯೇ ‘‘ಅಲ್ಲಾಹನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ’’ ಎಂದು ಘೋಷಿಸುವ ಮೂಲಕ, ಧರ್ಮವೆಂದರೆ ಕೇವಲ ಒಂದು ನಿರ್ದಿಷ್ಟ ವರ್ಗದವರಿಗೆ ಮಾತ್ರ ಅರ್ಥವಾಗುವ ಮತ್ತು ಒಂದು ನಿರ್ದಿಷ್ಟ ವರ್ಗದವರು ಮಾತ್ರ ಪಾಲಿಸಬಹುದಾದ ತೀರಾ ಕಠಿಣ ಹಾಗೂ ಸಂಕೀರ್ಣ ವಿಷಯವೆಂಬ, ಪುರೋಹಿತರು ಸೃಷ್ಟಿಸಿದ ಮೌಢ್ಯವನ್ನು ಕೆಡವಿ ಹಾಕಲಾಗಿದೆ. ಸಾಲದ್ದಕ್ಕೆ, ‘‘ಅವನು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಯಸುವುದಿಲ್ಲ’’ ಎನ್ನುವ ಮೂಲಕ, ಧರ್ಮವನ್ನು, ಅದರ ವಿವಿಧ ಆದೇಶ, ಆಚರಣೆ ಮತ್ತು ಆದರ್ಶಗಳನ್ನೆಲ್ಲಾ ಕಠಿಣ ಕಗ್ಗಂಟುಗಳೆಂಬಂತೆ ಬಿಂಬಿಸುವ ಧರ್ಮೋದ್ಯಮಿಗಳ, ಶೋಷಕ ವಿದ್ವಾಂಸರು ಮತ್ತು ವಿಶ್ಲೇಷಕರ ದಂಧೆಯನ್ನು ಕಠಿಣಗೊಳಿಸಲಾಗಿದೆ. ಇದೇ ಅಧ್ಯಾಯದ ಕೊನೆಯಲ್ಲಿ ಕಂಡು ಬರುವ ‘‘ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ’’ (2:286) ಎಂಬ ಘೋಷಣೆ ಕೂಡಾ ಜನಸಾಮಾನ್ಯನನ್ನು ಪುರೋಹಿತರ ಹಂಗಿನಿಂದ ಮುಕ್ತಗೊಳಿಸಿ, ದೇವರಾಗಲಿ ಧರ್ಮವಾಗಲಿ ತನ್ನ ಎಟುಕಿಗೆ ಮೀರಿದ್ದಲ್ಲ ಎಂಬ ಆತ್ಮ ವಿಶ್ವಾಸವನ್ನು ಅವನಲ್ಲಿ ಮೂಡಿಸುತ್ತದೆ. * 186ನೇ ವಚನದಲ್ಲಿರುವ ‘‘(ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ (ಅವರಿಗೆ ತಿಳಿಸಿರಿ); ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಕೂಗುವಾತನು ನನ್ನನ್ನು ಕೂಗಿದಾಗ ನಾನು ಅದಕ್ಕೆ ಉತ್ತರ ನೀಡುತ್ತೇನೆ’’ ಎಂಬ ಪ್ರಕಟಣೆಯು ಮತ್ತೆ ಪೌರೋಹಿತ್ಯದ ಮೇಲೆ ಕೊಡಲಿ ಪ್ರಹಾರ ಮಾಡುತ್ತದೆ. ಜನಸಾಮಾನ್ಯನಲ್ಲಿ ದೇವರು ತನ್ನ ಸಮೀಪವೇ ಇದ್ದಾನೆ ಮತ್ತು ತಾನು ದೇವರ ಸಮೀಪವೇ ಇದ್ದೇನೆಂಬ ಅರಿವು ಹಾಗೂ ಸಂತೃಪ್ತಿಯನ್ನು ಬೆಳೆಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಈ ಅರಿವು ಗಾಢವಾದಷ್ಟು ಅದು ಅವನ ಚಾರಿತ್ರ್ಯದಲ್ಲಿ ಪ್ರತಿಬಿಂಬಿಸುತ್ತದೆ. ಹಾಗೆಯೇ ಈ ಅರಿವು ಪುರೋಹಿತವರ್ಗ ಮತ್ತು ಢೋಂಗಿ ಬಾಬಾಗಳು ಸಮಾಜದ ಮೇಲೆ ಹೇರುವ, ದೇವರು ಮತ್ತು ಮಾನವರ ನಡುವಣ ಮಧ್ಯಸ್ತಿಕೆಯ ಕೃತಕ ಗೋಡೆಗಳನ್ನು ಕೆಡವಿಹಾಕುತ್ತದೆ. * ಧರ್ಮಗಳನ್ನು ಶೋಷಣೆಗಾಗಿ ಬಳಸುವವರು ಜನರಲ್ಲಿ ಅನಗತ್ಯ ಪಾಪ ಪ್ರಜ್ಞೆಯನ್ನು ಬೆಳೆಸಲಿಕ್ಕಾಗಿ ಅವರ ಮನಸ್ಸುಗಳಲ್ಲಿ ಹಲವು ಮೌಢ್ಯಗಳನ್ನು ಬಿತ್ತುತ್ತಾರೆ. ಪಾಪವಲ್ಲದ ಕಾರ್ಯಗಳನ್ನು ಪಾಪಕೃತ್ಯಗಳೆಂದು ಕರೆಯುತ್ತಾರೆ. ಆ ಬಳಿಕ ಪಾಪ ಪರಿಹಾರದ ಹೆಸರಲ್ಲಿ ಮುಗ್ಧರನ್ನು ದೋಚಿ ತಾವು ಸಂಪನ್ನರಾಗಿ ಬಿಡುತ್ತಾರೆ. ರಮದಾನ್ ತಿಂಗಳ ಹಗಲಲ್ಲಿ ಉಪವಾಸ ಆಚರಿಸುತ್ತಿರುವಾಗ ಪತಿ-ಪತ್ನಿಯರ ಮಧ್ಯೆ ಲೈಂಗಿಕ ಸಂಪರ್ಕದ ಮೇಲೆ ನಿರ್ಬಂಧವಿದೆ. ಈ ನಿರ್ಬಂಧ ರಾತ್ರಿಗೆ ಅನ್ವಯವಾಗುವುದಿಲ್ಲ. ಆದರೆ ಪ್ರವಾದಿಯ ಕಾಲದಲ್ಲಿ ಕೆಲವರು, ರಾತ್ರಿಯ ವೇಳೆಯೂ ತಮ್ಮ ಪತ್ನಿಯ ಜೊತೆ ಸಂಪರ್ಕ ನಿಷಿದ್ಧ ಎಂದು ನಂಬಿಕೊಂಡಿದ್ದರು. ಆದರೂ ಸಾಮೀಪ್ಯ ಸಂಭವಿಸಿಬಿಟ್ಟಾಗ ತಮ್ಮ ಕಾಲ್ಪನಿಕ ಪಾಪದ ಕುರಿತು ಪಾಪಪ್ರಜ್ಞೆಯಿಂದ ನರಳುತ್ತಿದ್ದರು. ಕುರ್ಆನ್ನ ಪ್ರಸ್ತುತ 2ನೇ ಅಧ್ಯಾಯದ 187ನೇ ವಚನದಲ್ಲಿ ಈ ವಿಷಯದಲ್ಲಿ ಜನರಿಗಿದ್ದ ಗೊಂದಲವನ್ನು ನಿವಾರಿಸಲಾಯಿತು. ರಮದಾನ್ ತಿಂಗಳ ರಾತ್ರಿಗಳಲ್ಲಿ ಪತಿ-ಪತ್ನಿಯರು ನಿಕಟರಾಗುವುದರಲ್ಲಿ ಯಾವ ಪಾಪವೂ ಇಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ಸಾರಲಾಯಿತು. * 187ನೇ ವಚನದಲ್ಲಿ ‘ಈತಿಕಾಫ್’ನ ಪ್ರಸ್ತಾಪವಿದೆ. ‘ಈತಿಕಾಫ್’ ಅಂದರೆ ಒಂದು ನಿರ್ದಿಷ್ಟ ಅವಧಿಯ ತನಕ ಮಸೀದಿಯೊಳಗೆ ಸೀಮಿತರಾಗಿರುವುದು. ಶೌಚದ ಹೊರತು ಬೇರಾವ ಕಾರಣಕ್ಕೂ ಮಸೀದಿಯಿಂದ ಹೊರಬಾರದಿರುವುದು. ಪ್ರವಾದಿ (ಸ) ಮತ್ತು ಅವರ ಅನೇಕ ಸಂಗಾತಿಗಳು ರಮದಾನ್ ತಿಂಗಳ ಕೊನೆಯ 10 ದಿನಗಳನ್ನು ಮಸೀದಿಯಲ್ಲೇ ಕಳೆಯುತ್ತಿದ್ದರು. ಇದು ದೇವಧ್ಯಾನಕ್ಕೆ, ಆರಾಧನೆಗೆ ಮತ್ತು ಆತ್ಮಾವಲೋಕನಕ್ಕೆ ಮೀಸಲಾದ ಅವಧಿಯಾಗಿರುತ್ತದೆ. ಹೆಚ್ಚಿನ ಮಸೀದಿಗಳಲ್ಲಿ ಊರಿನ ಕೆಲವು ಮಂದಿ ಈ ರೀತಿ ರಮದಾನ್ ತಿಂಗಳ ಕೊನೆಯ 10 ದಿನಗಳನ್ನು ‘ಈತಿಕಾಫ್’ಗೆ ಮುಡಿಪಾಗಿಟ್ಟಿರುತ್ತಾರೆ. * 188ನೇ ವಚನದಲ್ಲಿ, ವ್ಯವಹಾರದಲ್ಲಿ ಸದಾಚಾರ ಪಾಲಿಸುವುದಕ್ಕೆ ಒತ್ತು ನೀಡಲಾಗಿದೆ. ಉಪವಾಸದ ಮೂಲಕ ಬಾಯಿ, ನಾಲಗೆ ಮತ್ತು ಚಿತ್ತದ ಮೇಲೆ ನಿಯಂತ್ರಣ ಸಾಧಿಸಿದರೆ ಸಾಲದು. ಆದಾಯವನ್ನು ಸನ್ಮಾರ್ಗದಲ್ಲಿ ಖರ್ಚು ಮಾಡಿದರೆ ಸಾಲದು. ಆದಾಯದ ಮೂಲಗಳ ಮೇಲೆ ಕಣ್ಣಿಟ್ಟಿರಬೇಕು. ಅಕ್ರಮ ಮಾರ್ಗದಿಂದ ಸಂಪಾದಿಸಿದ ಚಿಕ್ಕಾಸು ಕೂಡಾ ಆದಾಯದ ಭಾಗವಾಗಿರಬಾರದು. ಲೌಕಿಕ ಕಾನೂನುಗಳನ್ನು ತಿರುಚಿ, ಕಾನೂನು ಪಾಲಕರನ್ನು ನಂಬಿಸಿ ಅಥವಾ ಆಡಳಿತಗಾರರನ್ನು ವಂಚಿಸಿ ಇನ್ನೊಬ್ಬರಿಗೆ ಸೇರಬೇಕಾದ ಸೊತ್ತನ್ನು ಅಕ್ರಮವಾಗಿ ಕಬಳಿಸಲು ನಿಮಗೆ ಅವಕಾಶ ಸಿಕ್ಕರೂ ಹಾಗೆ ಮಾಡಬೇಡಿ. ದೇವರು ಮತ್ತು ಧರ್ಮದ ದೃಷ್ಟಿಯಲ್ಲಿ ಸಕ್ರಮ ಹಾಗೂ ನ್ಯಾಯೋಚಿತವಾಗಿರುವ ಆದಾಯವನ್ನು ಮಾತ್ರ ಸ್ವೀಕರಿಸಬೇಕು ಎಂದು ಎಚ್ಚರಿಸಲಾಗಿದೆ. * ಮುಸ್ಲಿಮ್ ಸಮಾಜದಲ್ಲಿ ರಮದಾನ್ ತಿಂಗಳೆಂಬುದು ಲೌಕಿಕತೆಯ ಇತಿಮಿತಿಗಳನ್ನು ನೆನಪಿಸಿ, ಅಧ್ಯಾತ್ಮದಲ್ಲಿ ಆಸಕ್ತಿ ಚಿಗುರಿಸುವ ತಿಂಗಳು. ಧನವ್ಯಾಮೋಹವನ್ನು ನಿಗ್ರಹಿಸಿ ಸಾಮಾಜಿಕ ಹೊಣೆಗಾರಿಕೆಗಳ ಬಗ್ಗೆ ಬದ್ಧತೆ ಬೆಳೆಸುವ ತಿಂಗಳು. ಈ ತಿಂಗಳು ಗರಿಷ್ಠ ಪ್ರಮಾಣದಲ್ಲಿ ದಾನ ಧರ್ಮ ಮಾಡುವ ಋತುವಾಗಿರುತ್ತದೆ. ನಿರ್ದಿಷ್ಟ ಮಿತಿಗಿಂತ ಅಧಿಕ ಸಂಪತ್ತುಳ್ಳವರು ತಮ್ಮ ಮೇಲೆ ಕಡ್ಡಾಯವಾಗಿರುವ ವಾರ್ಷಿಕ ಝಕಾತ್ ಮೊತ್ತವನ್ನು ಈ ತಿಂಗಳಲ್ಲೇ ಪಾವತಿಸಲು ಇಷ್ಟಪಡುತ್ತಾರೆ. ಕಡ್ಡಾಯವಲ್ಲದ ದಾನಕ್ಕೆ ‘ಸದಕ’ ಎನ್ನುತ್ತಾರೆ. ಅಂದರೆ ಅರ್ಹ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಗುರುತಿಸಿ, ‘ಸದಕ’ದ ಹೆಸರಲ್ಲಿ ಅವರಿಗೆ ಆರ್ಥಿಕ ನೆರವು ಒದಗಿಸುವ ಚಟುವಟಿಕೆಯು ಈ ತಿಂಗಳಲ್ಲಿ ಬಿರುಸಾಗಿ ನಡೆಯುತ್ತದೆ. ಪ್ರವಾದಿವರ್ಯರ ಕಾಲದಲ್ಲಿ ಈ ಚಟುವಟಿಕೆಯು ಸಾಮೂಹಿಕ ಸ್ತರದಲ್ಲಿ ಸಂಘಟಿತವಾಗಿ ನಡೆಯುತ್ತಿತ್ತು. ಸಂತಸದ ಸಂಗತಿ ಏನೆಂದರೆ ಇತ್ತೀಚೆಗೆ ಆ ಪರಂಪರೆ ಮತ್ತೆ ಜೀವ ಪಡೆಯುತ್ತಿದೆ. ಜಗತ್ತಿಗೆಲ್ಲಾ ಮಾರ್ಗದರ್ಶಿಯಾಗಿ ಬಂದ ಗ್ರಂಥ ಕುರ್ಆನ್. ಈ ಗ್ರಂಥ ಅನಾವರಣಗೊಂಡ ತಿಂಗಳನ್ನು ಮುಸ್ಲಿಮರು ತಮ್ಮ ವ್ಯಕ್ತಿಗತ ಹಾಗೂ ಸಾಮಾಜಿಕ ಬದುಕನ್ನು ದಿವ್ಯ ಮಾರ್ಗದರ್ಶನದ ಪ್ರಕಾರ, ಸತ್ಯ, ನ್ಯಾಯ ಮತ್ತು ಸಹತಾಪದಲ್ಲಿ ಅಧಿಷ್ಠಿತವಾದ ಜವಾಬ್ದಾರಿಯುತ ಹಾಗೂ ಶಿಸ್ತುಬದ್ಧವಾದ, ಸಂವೇದನಾಶೀಲ ಬದುಕಾಗಿ ಪರಿವರ್ತಿಸುವುದಕ್ಕೆ ಬೇಕಾದ ತರಬೇತಿ ಪಡೆಯುವ ತಿಂಗಳಾಗಿ ಆಚರಿಸುತ್ತಾರೆ.
ನವಿ ಮುಂಬೈನಲ್ಲಿ ಫೆಡೆಕ್ಸ್ನ ಅತ್ಯಾಧುನಿಕ ಏರ್ ಕಾರ್ಗೋ ಹಬ್: 6,000 ಉದ್ಯೋಗಗಳ ಸೃಷ್ಟಿಸುವ ಗುರಿ
ಜಾಗತಿಕ ಲಾಜಿಸ್ಟಿಕ್ಸ್ ಪ್ರಮುಖ ಕಂಪನಿ ಫೆಡೆಕ್ಸ್, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಸ್ವಯಂಚಾಲಿತ ಏರ್ ಕಾರ್ಗೋ ಹಬ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ಭಾರತದ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ, ಅಂತಾರಾಷ್ಟ್ರೀಯ ವ್ಯಾಪಾರ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ಕಂಪನಿ 2,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದೆ. ಈ ಹೊಸ ಏರ್ ಕಾರ್ಗೋ ಹಬ್
ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಶೀಘ್ರದಲ್ಲೇ ಸಂಖ್ಯಾಬಲಗಳು ಏರುಪೇರಾಗುವ ಸಾಧ್ಯತೆ ಇದೆ. ಮಾರ್ಚ್ನಲ್ಲಿ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಬಳಿಕ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್ಡಿಎ ಸಂಖ್ಯಾಬಲ ಹೆಚ್ಚಾಗುವ ನಿರೀಕ್ಷೆ ಇದೆ. ಈ ಸಂಖ್ಯಾ ಬದಲಾವಣೆ ಆಡಳಿತ ಮತ್ತು ವಿಪಕ್ಷ ಮೈತ್ರಿಕೂಟದ ಯೋಜನೆಗಳ ಮೇಲೆ ಖಂಡಿತವಾಗಿ ಪರಿಣಾಮ ಬೀರಲಿದೆ. ಎನ್ಡಿಎ ಮೈತ್ರಿಕೂಟಕ್ಕೆ ನಿರೀಕ್ಷಿತ ಸಂಖ್ಯಬಲ ದೊರೆತರೆ, ತನ್ನ ಮಹತ್ವಾಕಾಂಕ್ಷಿ ಮಸೂದೆಗಳನ್ನು ಪಾಸು ಮಾಡಿಸಿಕೊಳ್ಳುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸರಳವಾಗಲಿದೆ.

27 C