ಸಿಂಧನೂರು | ಗೋಮರ್ಸಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಕೆಆರ್ಎಸ್ ಪಾರ್ಟಿಯಿಂದ ಪ್ರತಿಭಟನೆ
ಸಿಂಧನೂರು: ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟವನ್ನು ತಡೆಗಟ್ಟಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ನೇತೃತ್ವದಲ್ಲಿ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕೆಆರ್ಎಸ್ ಪಕ್ಷದ ಮುಖಂಡ ನಿರುಪಾದಿ ಕೆ. ಗೋಮರ್ಸಿ ಮಾತನಾಡಿ, ಗ್ರಾಮದಲ್ಲಿ ಕೆಲವರು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳಗಳು ಹಾಗೂ ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು, ಕಾರ್ಮಿಕರು ಹಾಗೂ ರೈತಾಪಿ ವರ್ಗ ಮದ್ಯವ್ಯಸನಕ್ಕೆ ಒಳಗಾಗುತ್ತಿದ್ದು, ಕುಟುಂಬ ಕಲಹಗಳು ಹಾಗೂ ಸಾರ್ವಜನಿಕ ಅಶಾಂತಿ ಹೆಚ್ಚುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಗ್ರಾಮದ ಕಿರಾಣಿ ಅಂಗಡಿಗಳು, ಅಂಗಡಿಗಳ ಮುಗ್ಗಟ್ಟುಗಳು ಹಾಗೂ ಕೆಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಕ್ರಮ ಮದ್ಯಮಾರಾಟ ತಕ್ಷಣ ನಿಲ್ಲಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವಿರುಪಮ್ಮ, ಲಕ್ಷ್ಮೀ ಪತ್ತಾರ, ಬಸವರಾಜ ಗೋಡಿಹಾಳ, ದಾವಲಸಾಬ್ ದೊಡ್ಮನಿ, ಶ್ರೀನಿವಾಸ (ಗೋಮರ್ಸಿ), ವೀರೇಶ್ ಸೇರಿದಂತೆ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಿಂಧನೂರು: ಸ್ಥಳೀಯ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಂ. ದೊಡ್ಡಬಸವರಾಜ್ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಅವರು ಮೂರನೇ ಅವಧಿಗೆ (ಹ್ಯಾಟ್ರಿಕ್) ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿನ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅರುಣಕುಮಾರ್ ದೇಸಾಯಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಪಿಎಲ್ಡಿ ಬ್ಯಾಂಕ್ನ 63 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೊದಲಿಗರು ಎಂಬ ಗೌರವಕ್ಕೂ ಎಂ. ದೊಡ್ಡಬಸವರಾಜ್ ಪಾತ್ರರಾದರು. ನಂತರ ಮಾತನಾಡಿದ ಎಂ. ದೊಡ್ಡಬಸವರಾಜ್, ರೈತರು ಹಾಗೂ ಎಲ್ಲಾ ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಋಣಿ. ಬ್ಯಾಂಕ್ ಅನ್ನು ಸಹಕಾರ ಮತ್ತು ಪಾರದರ್ಶಕತೆಯೊಂದಿಗೆ ಮುನ್ನಡೆಸುತ್ತೇನೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಮುಖ್ಯವಾಗಿ ಅವಕಾಶ ವಂಚಿತರಿಗೆ ಆದ್ಯತೆ ನೀಡಲಾಗುವುದು. 2026ರಿಂದ 2031ರವರೆಗೆ ಆಡಳಿತ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು. ಸಾಲಗುಂದಾ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ.ಕರಿಲಿಂಗಪ್ಪ, ಗುಡುದೂರು ಕ್ಷೇತ್ರದಿಂದ ರಮೇಶ ಅಮರಪ್ಪ, ಮಾಡಸಿರವಾರದಿಂದ ರಾಮಣ್ಣ ಗಿಣಿವಾರ, ಜವಳಗೇರಾದ ರೇವಣಸಿದ್ದಪ್ಪ, ಬಳಗಾನೂರು ಕ್ಷೇತ್ರದಿಂದ ಲಿಂಗಪ್ಪ, ಕುನ್ನಟಗಿಯ ವೆಂಕಣ್ಣ ತಿಪ್ಪನಹಟ್ಟಿ, ಹುಡಾದಿಂದ ರಮೇಶ ಮುಕ್ಕುಂದಾ, ವಲ್ಕಂದಿನ್ನಿ ಕ್ಷೇತ್ರದಿಂದ ಹನುಮಂತಮ್ಮ ಮಣ್ಣಿಕೇರಿ ಕ್ಯಾಂಪ್, ಗೋರೆಬಾಳದಿಂದ ಶಿವಪ್ಪ ಸಾಸಲಮರಿ, ತುರುವಿಹಾಳದಿಂದ ಲಲಿತಮ್ಮ ಉಮಲೂಟಿ, ಜಾಲಿಹಾಳದಿಂದ ಹೇಮಾವತಿ ಭೀಮರಾಜ ಕ್ಯಾಂಪ್, ಕೆ.ಬಸಾಪರ ಕ್ಷೇತ್ರದ ಈರಣ್ಣ ಅವರೂ ಕೂಡ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಭೀಮಣ್ಣ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಸಿಂಧನೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಸಹಾಯಕ ಚುನಾವಣಾಧಿಕಾರಿ ಕಿರಣಕುಮಾರ್, ಪಿಎಲ್ಡಿ ಬ್ಯಾಂಕ್ ಮ್ಯಾನೇಜರ್ ಮಲ್ಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು | ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ನಾಗರಿಕರ ವೇದಿಕೆಯಿಂದ ಪ್ರತಿಭಟನೆ
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಆರ್ಟಿಪಿಎಸ್ ಘಟಕಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿರುವುದನ್ನು ಖಂಡಿಸಿ, ರಾಯಚೂರು ಜಿಲ್ಲಾ ನಾಗರಿಕರ ವೇದಿಕೆಯ ನೇತೃತ್ವದಲ್ಲಿ ಗುರುವಾರ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಭಾರೀ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಅಣು ವಿದ್ಯುತ್ ಸ್ಥಾವರವು ಜೀವ ವಿರೋಧಿ, ಪರಿಸರ ವಿರೋಧಿ ಹಾಗೂ ವಿನಾಶಕಾರಿ ಯೋಜನೆ ಆಗಿದ್ದು, ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತವಾಗಲಿ ಅಥವಾ ಆರ್ಟಿಪಿಎಸ್ ಅಧಿಕಾರಿಗಳಾಗಲಿ, ಅಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿಯೇ ಯಾವುದೇ ಅಧಿಕಾರಿಗಳಿಗೆ ಸ್ಥಳ ವೀಕ್ಷಣೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು. ಪ್ರಧಾನಮಂತ್ರಿಯವರಿಗೆ ಸಲ್ಲಿಸಲಾದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಸ್ವೀಕರಿಸಿ, “ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶ ನೀಡುವುದಿಲ್ಲ” ಎಂಬ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು. ಪ್ರತಿಭಟನೆಯಲ್ಲಿ ಡಾ.ಬಸವರಾಜ್ ಕಳಸ, ವಕೀಲ ಎಸ್. ಮಾರೆಪ್ಪ, ಅಶೋಕ್ ಕುಮಾರ್ ಜೈನ್, ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್, ಪ್ರಭಾಕರ್, ಆರ್ಟಿಪಿಎಸ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನೆ, ವಕೀಲರ ಸಂಘದ ಉಪಾಧ್ಯಕ್ಷ ನಜೀರ್ ಅಹ್ಮದ್ ಶೇರ್ ಅಲಿ, ಅನಿತಾ ನವಲ್ಕಲ್, ನಿವೇದಿತ, ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯರಾಜೇಂದ್ರ, ಎಸ್ಯುಸಿಐನ ವೀರೇಶ್, ಚನ್ನಬಸವ ಜಾನೇಕಲ್, ಸಿಂಧನೂರಿನ ಚಂದ್ರಶೇಖರ್ ಗೊರೆಬಾಳ್, ಕೊಪ್ಪಳದ ಡಿ.ಎಚ್. ಪೂಜಾರ್, ಗ್ರೀನ್ ರಾಯಚೂರಿನ ರಾಜೇಂದ್ರ ಶಿವಾಳೆ, ಸಾಹಿತಿಗಳಾದ ಬಾಬು ಬಂಡಾರಿಗಲ್, ಆಂಜನೇಯ ಜಾಲಿಬೆಂಚಿ, ಸಿಪಿಐಎಂನ ಕೆ.ಜಿ. ವೀರೇಶ್, ಹೆಚ್. ಪದ್ಮ, ಅಮರೇಗೌಡ ಪಾಟೀಲ್, ಡಾ. ಜಗದೀಶ್ ಪೂರ ತಿಪ್ಪಲಿ, ಎಸ್. ಹನುಮಂತಪ್ಪ, ವೆಂಕಟರೆಡ್ಡಿ ದಿನ್ನಿ, ಪ್ರಸನ್ನ ಆಲಮ್ಪಲ್ಲಿ, ಶ್ರೀನಿವಾಸ್ ಕಲವಲ ದೊಡ್ಡಿ, ತಾಯಣ್ಣ ಗದಾರ್, ವಿನಯ್ ಕುಮಾರ್ ಚಿತ್ರಗಾರ, ಬಸವರಾಜ್ ಮಿಮಿಕ್ರಿ, ಅಶ್ವತ್ ರಾವ್, ನರಸಿಂಹಲು ಮೈತ್ರಿಕರ್, ರಾಮಣ್ಣ ಮೇದಾರ್, ನರಸಪ್ಪ ಬಾಡಿಯಲ್, ಜಾನ್ ವೆಸ್ಲಿ, ಸಾದಿಖಾನ್ ಯರಗೇರಾ, ನಾಸಿರ್ ಹೊಸೂರ್, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವೀರೇಶ್ ಸೋನಾ, ಶಾಹಿನ ಕಾಲೇಜಿನ ಪ್ರಾಚಾರ್ಯ ಆದಿಲ್, ಎಂ.ಆರ್. ಭೇರಿ, ಆಂಜನೇಯ ಕುರುಬದೊಡ್ಡಿ, ಮೊಹಮ್ಮದ್ ಇಸಾಕ್, ವಿಕ್ರಂ, ನರಸಿಂಹಮೂರ್ತಿ, ಕಾಮರಾಜ್ ಪಾಟೀಲ್ ಸೇರಿದಂತೆ ರೈತಪರ, ಕನ್ನಡಪರ ಸಂಘಟನೆಗಳು, ಆರ್ಟಿಪಿಎಸ್ ಹೊರಗುತ್ತಿಗೆ ನೌಕರರು ಹಾಗೂ ದೇವಸುಗೂರಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿನ್ನದ ಟ್ರಿಲಿಯನ್ ಡಾಲರ್ ದಿನ : ಇತಿಹಾಸದಲ್ಲೇ ಕಂಡರಿಯದ ಏಕದಿನದ ಮಾರುಕಟ್ಟೆ ಏರಿಳಿತ!
ಈಗಿನ ಚಿನ್ನದ ಬೆಲೆಯಲ್ಲಿನ ಚಂಚಲತೆಯನ್ನು “ಐತಿಹಾಸಿಕ ಟ್ರೇಡಿಂಗ್ ಸ್ಥಿತಿಗಳು” ಎಂದು ವ್ಯಾಖ್ಯಾನಿಸಲಾಗುತ್ತಿದೆ. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ನೋಡಿರುವುದಕ್ಕಿಂತಲೂ ಹೆಚ್ಚಿನ ಚಂಚಲತೆ ಚಿನ್ನದ ವಹಿವಾಟಿನಲ್ಲಿ ಕಂಡುಬರುತ್ತಿದೆ ಎಂದು ವರದಿಯಾಗಿದೆ. ಈ ವಾರ ಚಿನ್ನದ ಮಾರುಕಟ್ಟೆಯಲ್ಲಿ ಅತೀವ ಚಂಚಲತೆ ಕಾಣಿಸಿಕೊಂಡಿದೆ. ಗುರುವಾರದಂದು ಚಿನ್ನದ ಬೆಲೆಯಲ್ಲಿ ಇತಿಹಾಸದಲ್ಲೇ ಕಂಡರಿಯದಂತಹ ಏಕದಿನದ ಮಾರುಕಟ್ಟೆ ಏರಿಳಿತವನ್ನು ದಾಖಲಿಸಿದೆ ಎಂದು ಷೇರು ವ್ಯವಹಾರದ ಬಗ್ಗೆ ಬರೆಯುವ ಮಾಧ್ಯಮವಾದ The Kobeissi Letter ಹೇಳಿದೆ. Kobeissi ತನ್ನ ‘ಎಕ್ಸ್’ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿವರಗಳ ಪ್ರಕಾರ, ಒಂದೇ ವಹಿವಾಟು ದಿನದಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯವು ಅಭೂತಪೂರ್ವ 5.5 ಟ್ರಿಲಿಯನ್ ಡಾಲರ್ ನಷ್ಟು ಏರಿಳಿತ ದಾಖಲಿಸಿದೆ. ಇದು ಪ್ರಸ್ತುತ ಜಾಗತಿಕ ಸರಕು ಮಾರುಕಟ್ಟೆಗಳ ಹಿಡಿತದ ಚಲನೆಗಳ ತೀವ್ರತೆಯನ್ನು ಒತ್ತಿ ಹೇಳುತ್ತದೆ. ಅಂದರೆ 2026ರ ಆರಂಭದಲ್ಲಿ ಜಾಗತಿಕ ಸರಕು ಮಾರುಕಟ್ಟೆಗಳು ತೀವ್ರ ಏರಿಳಿತ ಮತ್ತು ದಾಖಲೆಯ ಸ್ಥಾಪನೆಯನ್ನು ಎದುರಿಸುತ್ತಿರುವುದನ್ನು ಎತ್ತಿ ತೋರಿಸಿದೆ. This is absolutely insane: Gold just posted its largest daily swing in market cap in history, at $5.5 TRILLION. Between 9:30 AM ET and 10:25 AM ET, gold lost -$3.2 trillion in market cap, or -$58 billion PER MINUTE. Then, between 10:25 AM ET and 4:00 PM ET, gold added back… pic.twitter.com/9BmnY9g6Ap — The Kobeissi Letter (@KobeissiLetter) January 29, 2026 ಅಭೂತಪೂರ್ವ ಏಕದಿನದ ಚಂಚಲತೆ The Kobeissi Letter ಹೇಳಿರುವ ಪ್ರಕಾರ ಅಮೆರಿಕದ ಕಾಲಮಾನದಲ್ಲಿ ಗುರುವಾರ ಬೆಳಗ್ಗೆ 9.30 ಯಿಂದ 10.25 ನಡುವೆ (ಭಾರತೀಯ ಕಾಲಮಾನ ಸಂಜೆ 8 ಗಂಟೆಯಿಂದ 8.30 ನಡುವೆ) ಚಿನ್ನ 3.2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ. ಎಂದರೆ ಪ್ರತಿ ನಿಮಿಷಕ್ಕೆ 58 ಬಿಲಿಯನ್ ಡಾಲರ್! ಅದಾದ ಕೆಲವೇ ಸಮಯದಲ್ಲಿ ಟ್ರೆಂಡ್ ಹಿಮ್ಮುಖವಾಯಿತು. ಅಮೆರಿಕದ ಕಾಲಮಾನ ಬೆಳಿಗ್ಗೆ 10.25ರಿಂದ ಸಂಜೆ 4.00 ನಡುವೆ (ಬೆಳಿಗ್ಗೆ 10.40) ಮಾರುಕಟ್ಟೆ ಮುಕ್ತಾಯವಾದಾಗ ಚಿನ್ನವು 2.3 ಟ್ರಿಲಿಯನ್ ಡಾಲರ್ ಮೌಲ್ಯವನ್ನು ಮರಳಿ ಪಡೆದಿದೆ. ಇತರ ಸ್ವತ್ತುಗಳಲ್ಲಿ ಇಂತಹ ಚಂಚಲತೆ ಇಲ್ಲ ಎಂದು The Kobeissi Letter ಹೇಳಿದೆ. ಬಿಟ್ ಕಾಯ್ನ್ ನ 850 ಬಿಲಿಯನ್ ಡಾಲರ್ ಮಾರುಕಟ್ಟೆಗೆ ಹೋಲಿಸಿದರೆ ಚಿನ್ನದ ದಿನದ ಏರಿಳಿತವು ಒಟ್ಟು ಕ್ರಿಪ್ರೊಕರೆನ್ಸಿ ಮಾರುಕಟ್ಟೆಯ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು! ಮತ್ತು ಆರು ಗಂಟೆಗಳ ನಡುವೆ ಈ ಚಂಚಲತೆ ಕಾಣಿಸಿಕೊಂಡಿದೆ. ಈ ಚಂಚಲತೆಯನ್ನು The Kobeissi Letter “ಐತಿಹಾಸಿಕ ಟ್ರೇಡಿಂಗ್ ಸ್ಥಿತಿಗಳು” ಎಂದು ವ್ಯಾಖ್ಯಾನಿಸಿದೆ. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ನೋಡಿರುವುದಕ್ಕಿಂತಲೂ ಹೆಚ್ಚಿನ ಚಂಚಲತೆ ಚಿನ್ನದ ವಹಿವಾಟಿನಲ್ಲಿ ಕಂಡುಬರುತ್ತಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ತೀಕ್ಷ್ಣವಾದ ಏರಿಳಿತಗಳು ಸಂಭವಿಸಿವೆ. ನಿರಂತರ ಹಣದುಬ್ಬರ ಅಪಾಯಗಳು, ಅಸ್ಪಷ್ಟ ಬಡ್ಡಿದರದ ಟ್ರಾಜೆಕ್ಟರಿಗಳು (ಪಥಗಳು), ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ವ್ಯಾಪಾರ ಯುದ್ಧಗಳ ನಡುವೆ ಕರೆನ್ಸಿ ಸ್ಥಿರತೆಗಳ ಕುರಿತ ಕಾಳಜಿಗಳನ್ನು ಹೂಡಿಕೆದಾರರು ಎದುರಿಸುತ್ತಿದ್ದಾರೆ. ಹೀಗಾಗಿ ಈ ಕಾಳಜಿಗಳು ಸಾಂಪ್ರದಾಯಿಕವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದ ಸ್ವತ್ತು ಆಗಿರುವ ಚಿನ್ನದತ್ತ ಹೂಡಿಕೆದಾರರನ್ನು ತಳ್ಳುತ್ತಿವೆ. ಇದೇ ಸಂದರ್ಭದಲ್ಲಿ ದೊಡ್ಡ ಸಂಸ್ಥೆಗಳು ಆಕ್ರಮಣಕಾರಿಯಾಗಿ ಮರುಸ್ಥಾಪಿಸಲು ಪ್ರಯತ್ನಿಸುವುದು, ಆಲ್ಗಾರಿದಂ ಚಾಲಿತ ಷೇರು ವ್ಯವಹಾರ, ಉತ್ಪನ್ನ ಮಾರುಕಟ್ಟೆಗಳ ಮೇಲಿನ ನಂಬಿಕೆಗಳು (ಅಂದರೆ ಹೂಡಿಕೆದಾರರು ಮಾರ್ಜಿನ್ ಇಟ್ಟು ವಹಿವಾಟು ನಡೆಸುವುದು) ಚಿನ್ನದ ಚಂಚಲತೆಗೆ ಕೊಡುಗೆ ನೀಡುತ್ತಿವೆ. ತಜ್ಞರು ಹೇಳುವ ಪ್ರಕಾರ ಆಧುನಿಕ ಚಿನ್ನದ ಟ್ರೇಡಿಂಗ್ ಭೌತಿಕ ಬೇಡಿಕೆಯನ್ನು ಮೀರಿದ ಹಣಕಾಸಿನ ಹರಿವಿನಿಂದ ಪ್ರಭಾವಿತವಾಗಿವೆ. ಇತರ ಲೋಹಗಳ ಮೇಲೂ ಪರಿಣಾಮ ಚಂಚಲತೆ ಚಿನ್ನಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಳ್ಳಿ, ಪ್ಲಾಟಿನಂ ಮತ್ತು ಪಲಡಿಯಂನಂತಹ ಲೋಹಗಳೂ ಇತ್ತೀಚೆಗಿನ ದಿನಗಳಲ್ಲಿ ತೀಕ್ಷ್ಣವಾದ ಮೌಲ್ಯ ಏರಿಕೆಯನ್ನು ಕಂಡಿವೆ. ಇದು ಸರಕು ಮಾರುಕಟ್ಟೆ ಮೇಲಿನ ವಿಸ್ತರಿತ ಒತ್ತಡದ ಪ್ರತಿಫಲವಾಗಿದೆ. ಈ ಚಂಚಲತೆಗಳು ಗಂಟೆಗಳ ನಡುವೆ ಹೂಡಿಕೆದಾರರು ಅಪಾಯವಿರುವ ಅಥವಾ ಅಪಾಯವಿಲ್ಲದ ವಹಿವಾಟಿಗೆ ಬದಲಾಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಗುರುವಾರದಂದು ಭಾರತೀಯ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್)ನಲ್ಲಿ ಬೆಳ್ಳಿ ದಾಖಲೆ ಪ್ರತಿ ಕೆಜಿಗೆ ರೂ 4 ಲಕ್ಷದಷ್ಟು ವಹಿವಾಟು ನಡೆದಿದೆ. ಶೇ 6.3ರಷ್ಟು ಏರಿಕೆ ದಾಖಲಿಸಿತ್ತು. ಚಿನ್ನ ಸಾರ್ವಕಾಲಿಕ ಅಧಿಕ ಹತ್ತು ಗ್ರಾಂಗೆ 1.8 ಲಕ್ಷವನ್ನು ಸ್ಪರ್ಶಿಸಿತ್ತು. 2026ರಲ್ಲಿ ಪ್ರಮುಖ ಬ್ಯಾಂಕ್ ಗಳಾದ ಗೋಲ್ಡ್ಮನ್ ಸ್ಯಾಚ್ಸ್ ತಮ್ಮ ಬೆಲೆಯ ಗುರಿಗಳನ್ನು ಏರಿಸಿವೆ (ಷೇರು ಮೌಲ್ಯವನ್ನು ಏರಿಸುವುದು). ಹೀಗಾಗಿ ಚಿನ್ನದ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆಯಿದೆ. ಕೆಲವರ ಪ್ರಕಾರ ವರ್ಷಾಂತ್ಯಕ್ಕಾಗುವಾಗ ಚಿನ್ನ ಔನ್ಸ್ಗೆ 6000 ಡಾಲರ್ (ರೂ. 5.51 ಲಕ್ಷ) ತಲುಪುವ ಸಾಧ್ಯತೆಯಿದೆ. ಕೃಪೆ: NDTV
ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿರುವ ಬಿಜೆಪಿ ಸಂಸದರು: ಡಿಸಿಎಂ ಡಿ.ಕೆ. ಶಿವಕುಮಾರ್
ಶಿವಮೊಗ್ಗ, ಜ.30: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಮುಂದುವರಿದಿದ್ದರೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಯಾರೂ ದನಿ ಎತ್ತಿಲ್ಲ. ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ತೀವ್ರ ವ್ಯಂಗ್ಯವಾಡಿದರು. ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು “ಕೇಂದ್ರ ಬಜೆಟ್ನಲ್ಲಿ ಕೊಟ್ಟ ಮಾತನ್ನೇ ಉಳಿಸಿಕೊಂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಹೇಳಿ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ” ಎಂದರು. ಕಾಂಗ್ರೆಸ್ ಭ್ರಷ್ಟಾಚಾರ ಎಂದು ಆರೋಪಿಸಿ ಬಿಜೆಪಿ ಪೋಸ್ಟರ್ ಅಭಿಯಾನ ನಡೆಸುತ್ತಿರುವುದು ಹಾಗೂ ತಿಮ್ಮಾಪುರ ಅವರ ರಾಜಿನಾಮೆಗೆ ಪಟ್ಟು ಹಿಡಿದಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿದ್ದೇವೆ. ಕೋವಿಡ್ ಸೇರಿದಂತೆ ಹಿಂದಿನ ಅವಧಿಯ ಅನೇಕ ಆರೋಪಗಳಿವೆ. ಅವುಗಳನ್ನು ಬಯಲು ಮಾಡೋಣ. ರಾಜಕೀಯ ಮಾಡಬೇಕಲ್ಲ ಎಂದು ಮಾಡುತ್ತಿದ್ದಾರೆ. ಏನೋ ಒಂದು ಬೇಕಲ್ಲ ಅವರಿಗೆ. ಇದರ ಬಗ್ಗೆ ತನಿಖೆ ಮುಗಿಯಲಿ” ಎಂದರು. ಮನರೇಗಾ ಕುರಿತು ವಿಶೇಷ ಅಧಿವೇಶನ ವಿಸ್ತರಿಸಿರುವ ಬಗ್ಗೆ ಮಾತನಾಡಿದ ಅವರು, “ಮನರೇಗಾ ವಿಚಾರವನ್ನು ಕಾರ್ಯಕಲಾಪ ಸಲಹಾ ಸಮಿತಿ ಮುಂದೆ ಇಟ್ಟು ಚರ್ಚಿಸಲಾಗಿದೆ. ವಿಬಿ ಗ್ರಾಮ ಜಿ ಕಾಯ್ದೆಯನ್ನು ಏಕೆ ರದ್ದು ಮಾಡಬೇಕು ಎಂಬುದನ್ನು ವಿವರಿಸುತ್ತೇವೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ರಾಜ್ಯದಲ್ಲಿಯೂ ಇದನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ನಾಲ್ಕೈದು ತಿಂಗಳು ಕೃಷಿ ಕೆಲಸದ ಕಾಲವಾಗಿದ್ದು, ಈ ಸಮಯದಲ್ಲಿ ರೈತರು ತಮ್ಮ ಕೂಲಿಯನ್ನು ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆ ಕೈಬಿಟ್ಟರೆ ಯಾರಿಗೂ ಪ್ರಯೋಜನವಿಲ್ಲ” ಎಂದು ಹೇಳಿದರು. ಮಾನವ ದಿನಗಳನ್ನು 125 ದಿನಗಳಿಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಲಾಗುತ್ತಿದೆಯಾದರೂ, ಇತರ ಸಮಯದಲ್ಲಿ ಅಷ್ಟೊಂದು ದಿನಗಳ ಕಾಲ ಕೆಲಸ ನೀಡಲು ಸಾಧ್ಯವಿಲ್ಲ. ಇದರಿಂದ ಪ್ರತಿಯೊಂದು ಪಂಚಾಯತಿಗೆ ತಲಾ 1 ರಿಂದ 1.5 ಕೋಟಿ ರೂ. ಅನುದಾನ ನಷ್ಟವಾಗುತ್ತಿದ್ದು, ಜಾಬ್ ಕಾರ್ಡ್ ಹೊಂದಿರುವವರಿಗೂ ಹಾನಿಯಾಗಿದೆ ಎಂದು ಅವರು ತಿಳಿಸಿದರು. ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಕುರಿತು ಪರಿಶೀಲಿಸಿ ಮಾಹಿತಿ ನೀಡುತ್ತೇನೆ” ಎಂದು ಹೇಳಿದರು.
Rajasthan| ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು: ಪೊಲೀಸರಿಂದ ತನಿಖೆ
ಜೈಪುರ: ರಾಜಸ್ಥಾನದ ಜೋಧ್ಪುರದ ರದ ಬೋರನಾಡ ಆಶ್ರಮದ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ನಿಗೂಢವಾಗಿ ಮೃತಪಟ್ಟಿದ್ದಾರೆ. ಘಟನೆ ಅವರ ಅನುಯಾಯಿಗಳಿಗೆ ಆಘಾತವನ್ನುಂಟುಮಾಡಿದೆ. ರಾಜಕೀಯ ನಾಯಕ ಹನುಮಾನ್ ಬೇನಿವಾಲ್ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಸಾಧ್ವಿ ಪ್ರೇಮ್ ಬೈಸಾ ಅವರು ಕಳೆದ ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು. ಬುಧವಾರ ಆಶ್ರಮಕ್ಕೆ ಬಂದ ವ್ಯಕ್ತಿ ಅವರಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ಸ್ವಲ್ಪ ಸಮಯದ ನಂತರ ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಸಾಧ್ವಿ ಅವರ ತಂದೆ ಆಕೆಯನ್ನು ಪಾಲ್ ರಸ್ತೆಯಲ್ಲಿರುವ ಪ್ರೇಕ್ಷಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಸಾಧ್ವಿ ಪ್ರೇಮ್ ಬೈಸಾ ನಿಧನದ ಸುದ್ದಿ ಅವರ ಬೆಂಬಲಿಗರಲ್ಲಿ ಆಘಾತವನ್ನುಂಟು ಮಾಡಿದೆ. ಆಸ್ಪತ್ರೆಯ ನಿರ್ದೇಶಕ ಡಾ.ಪ್ರವೀಣ್ ಜೈನ್ ಈ ಕುರಿತು ಪ್ರತಿಕ್ರಿಯಿಸಿ, ಪ್ರೇಮ್ ಬೈಸಾ ಅವರನ್ನು ಮೃತಪಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು. ಶಿಷ್ಟಾಚಾರದ ಪ್ರಕಾರ ಶಾಸ್ತ್ರಿ ನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಎಂಡಿಎಂ ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬಕ್ಕೆ ಸೂಚಿಸಲಾಗಿದೆ. ಆದರೆ ಅವರು ಮೃತದೇಹವನ್ನು ಬೊರನಾಡದಲ್ಲಿರುವ ಆಕೆಯ ಆಶ್ರಮಕ್ಕೆ ಕೊಂಡೊಯ್ದರು ಎಂದು ಹೇಳಿದ್ದಾರೆ. ಮಾಹಿತಿ ಪಡೆದ ನಂತರ, ಬೋರನಾಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹೇಮರಾಜ್ ಆಶ್ರಮಕ್ಕೆ ತೆರಳಿ ಸಾಧ್ವಿ ಪ್ರೇಮ್ ಬೈಸಾ ಅವರ ಕೊಠಡಿಯನ್ನು ಬಂದ್ ಮಾಡಿದ್ದಾರೆ. ತಡರಾತ್ರಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಡಿಎಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇದಾದ ಸುಮಾರು ನಾಲ್ಕು ಗಂಟೆಗಳ ನಂತರ, ರಾತ್ರಿ 9.30ರ ಸುಮಾರಿಗೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆತ್ಮಹತ್ಯೆ ಟಿಪ್ಪಣಿಯನ್ನು ಹೋಲುವ ಪೋಸ್ಟ್ ಕಂಡು ಬಂದಿದೆ. ಇದಾದ ಬಳಿಕ ಪ್ರಕರಣ ವಿಭಿನ್ನ ತಿರುವು ಪಡೆದುಕೊಂಡಿದೆ. ಪೋಸ್ಟ್ನಲ್ಲಿ ಅಗ್ನಿ ಪರೀಕ್ಷೆ, ವಿದಾಯ ಮತ್ತು ನ್ಯಾಯ ಎಂದು ಉಲ್ಲೇಖಿಸಲಾಗಿದೆ. “ನಾನು ಈ ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಆದರೆ ನನಗೆ ದೇವರು ಮತ್ತು ಪೂಜ್ಯ ಸಂತರು ಮತ್ತು ಋಷಿಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ನನ್ನ ಜೀವಿತಾವಧಿಯಲ್ಲಿ ಇಲ್ಲದಿದ್ದರೆ, ನನ್ನ ಮರಣದ ನಂತರ ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಪೋಸ್ಟ್ ಅನ್ನು ಬೇರೆ ಯಾರಾದರೂ ಅಪ್ಲೋಡ್ ಮಾಡಿದ್ದಾರೋ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಜುಲೈನಲ್ಲಿ ಸಾಧ್ವಿ ಪ್ರೇಮ್ ಬೈಸಾ ತನ್ನ ಗುರುವಾದ ಸ್ವಾಮೀಜಿಯನ್ನು ತಬ್ಬಿಕೊಂಡು, ಅಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ವಿವಾದವನ್ನು ಸೃಷ್ಟಿಸಿತ್ತು.
Bengaluru Second Airport: 2033ರವರೆಗೆ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಇಲ್ಲ: ಕೇಂದ್ರ ಸರ್ಕಾರ
ಬೆಂಗಳೂರು: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭಾರೀ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಭವಿಷ್ಯದ ದೃಷ್ಟಿಯಿಂದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮುಂದಾಗಿತ್ತು. ಆದರೆ, ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ
ಹಟ್ಟಿ ಚಿನ್ನದ ಗಣಿಯಲ್ಲಿ ಉತ್ಪಾದನೆ ಕುಸಿತ
ಡಿಸೆಂಬರ್ 2025ರ ಗುರಿಗೆ 285ಕೆಜಿ ಹಿನ್ನಡೆ
ನೂರು ಜನ್ಮ ಹುಟ್ಟಿ ಬಂದ್ರು ನೀನು ಲೀಡರ್ ಆಗೋಕೆ ಆಗಲ್ಲ! ಗುಡುಗಿದ ಜನಾರ್ದನ ರೆಡ್ಡಿ, ಸವಾಲು ಸ್ವೀಕರಿಸಿದ ನಾಗೇಂದ್ರ
ಬಳ್ಳಾರಿ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ.ನಾಗೇಂದ್ರ ನಡುವೆ ತೀವ್ರ ವಾಕ್ಸಮರ ನಡೆಯಿತು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಎದುರು ನೀನು ನಾಯಕನಾಗಲು ಸಾಧ್ಯವಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿ, ನೂರು ಜನ್ಮ ಹುಟ್ಟಿ ಬಂದರು ನೀನು ನಾಯಕನಾಗೋಕೆ ಸಾಧ್ಯವಿಲ್ಲ ಎಂದು ಬಿ. ನಾಗೇಂದ್ರ ವಿರುದ್ದ ಗುಡುಗಿದರು. ಇದಕ್ಕೆ ನಾಗೇಂದ್ರ ವಾಲ್ಮೀಕಿ ನಮ್ಮ ಸಮಾಜ, ನಮ್ಮ ಜನರು ನನ್ನ ಜೊತೆಗಿದ್ದಾರೆ ಎಂದು ಹೇಳುವ ಮೂಲಕ ಸವಾಲು ಸ್ವೀಕರಿಸಿ ತಿರುಗೇಟು ನೀಡಿದರು. ಈ ವೇಳೆ, ಸದನದಲ್ಲಿ ವಾಕ್ಸಮರದ ಕಾವು ಜೋರಾಗಿ, ಪರಿಸ್ಥಿತಿ ನಿಯಂತ್ರಿಸಲು ಸ್ಪೀಕರ್ ಹರಸಾಹಸ ಪಡಬೇಕಾಯಿತು.
ಭಾರತದ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರ ಒಪ್ಪಂದ
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಜಾಗತಿಕ ವ್ಯಾಪಾರ ಮತ್ತು ಸುಂಕ ಯುದ್ಧದ ಮಧ್ಯೆ ಸಹಿ ಮಾಡಲಾದ ಈ ಒಪ್ಪಂದವನ್ನು ಎಲ್ಲ ಒಪ್ಪಂದಗಳ ತಾಯಿ ಎಂದು ಕರೆಯಲಾಗಿದೆ. ಇದು ಟ್ರಂಪ್ ಸುಂಕಗಳಿಂದ ತೊಂದರೆಗೊಳಗಾದ ಭಾರತೀಯ ರಫ್ತುದಾರರಿಗೆ ಹೊಸ ಚೈತನ್ಯ ತರಬಹುದು ಎನ್ನಲಾಗುತ್ತಿದೆ. ಆದರೆ ಈ ಒಪ್ಪಂದ ಟ್ರಂಪ್ ಅವರ ಒತ್ತಡ ಮತ್ತು ವ್ಯಾಪಾರ ಯುದ್ಧದಿಂದಾಗಿ ಮಾಡಿದ್ದಲ್ಲ. ಎರಡು ದಶಕಗಳಿಂದ ಇದರ ತಯಾರಿ ನಡೆದಿತ್ತು. ಭಾರತ 2007ರಲ್ಲಿ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಿತು. ನಂತರ ಮಾತುಕತೆ ಸ್ಥಗಿತಗೊಳಿಸಲಾಯಿತು. 2022ರಲ್ಲಿ ಮಾತುಕತೆ ಪುನರಾರಂಭಿಸಲಾಯಿತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಒಕ್ಕೂಟದ ಉರ್ಸುಲಾ ವಾನ್ಡೆರ್ ಲೇಯೆನ್ ಈ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಈ ವ್ಯಾಪಾರ ವಲಯ ವಿಶ್ವದ ಜಿಡಿಪಿಯ ಶೇ.25 ಅನ್ನು ಒಳಗೊಂಡಿರುತ್ತದೆ. ಈ ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ಯುರೋಪಿಯನ್ ರಾಷ್ಟ್ರಗಳು ಭಾರತದಂತಹ ಬೃಹತ್ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತವೆ. ಶೇ. 96 ಕ್ಕಿಂತ ಹೆಚ್ಚು ಯುರೋಪಿನ ಸರಕುಗಳು ಸುಂಕವಿಲ್ಲದೆ ಅಥವಾ ಕಡಿಮೆ ಸುಂಕದೊಂದಿಗೆ ಭಾರತದ ಮಾರುಕಟ್ಟೆಗೆ ಬರಲಿವೆ. ಇಲ್ಲಿಯವರೆಗೆ ಭಾರತ ಯಾವುದೇ ವ್ಯಾಪಾರ ಪಾಲುದಾರರಿಗೆ ಯುರೋಪಿಗೆ ನೀಡುತ್ತಿರುವಷ್ಟು ರಿಯಾಯಿತಿಗಳನ್ನು ನೀಡಿಲ್ಲ. ಯುರೋಪಿಯನ್ ಒಕ್ಕೂಟಕ್ಕೆ ಉಳಿತಾಯ ವಾರ್ಷಿಕವಾಗಿ 4 ಬಿಲಿಯನ್ ಯುರೋಗಳಿಗಿಂತ ಹೆಚ್ಚಾಗಿರುತ್ತದೆ ಮತ್ತು ಭಾರತಕ್ಕೆ ಯುರೋಪಿನ ರಫ್ತುಗಳು ಮುಂದಿನ ಆರೇಳು ವರ್ಷಗಳಲ್ಲಿ ಡಬಲ್ ಆಗುವ ನಿರೀಕ್ಷೆಯಿದೆ. ಭಾರತ ಯುರೋಪಿಯನ್ ಮಾರುಕಟ್ಟೆಗಳಿಗೆ ನೇರ ಪ್ರವೇಶ ಪಡೆಯುತ್ತದೆ. ಭಾರತೀಯ ರಫ್ತುಗಳಲ್ಲಿ ಶೇ. 99 ರಷ್ಟು ಈಗ ಆದ್ಯತೆಯ ಪ್ರವೇಶ ಪಡೆಯುತ್ತವೆ. ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ತೀವ್ರ ವಲಯಗಳಿಗೆ ಭಾರೀ ಉತ್ತೇಜನ ನೀಡುತ್ತದೆ. 27 ಯುರೋಪಿಯನ್ ರಾಷ್ಟ್ರಗಳ ಗುಂಪಾದ ಯುರೋಪಿಯನ್ ಒಕ್ಕೂಟ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುವ ಒಟ್ಟು ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿದೆ. ಆದ್ದರಿಂದ ಪ್ರಮಾಣ ಮತ್ತು ಮಹತ್ವದ ದೃಷ್ಟಿಯಿಂದ ಇದು ಎಲ್ಲಾ ಒಪ್ಪಂದಗಳ ತಾಯಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿರುವ ರೀತಿ ನಾಳೆಯಿಂದಲೇ ಎಲ್ಲವೂ ಶುರು ಎಂಬ ರೀತಿಯಲ್ಲಿದೆ. ಆದರೆ ಈ ಘೋಷಣೆ ಕೇವಲ ಆರಂಭ. ಇದು ಕೇವಲ ಒಂದು ಒಪ್ಪಂದ. ದೀರ್ಘವಾದ ಕಾನೂನು ಪ್ರಕ್ರಿಯೆ ಪ್ರಾರಂಭವಾಗಬೇಕಿದೆ. ಅದರ ನಂತರ ಇದನ್ನು ಯುರೋಪಿಯನ್ ಯೂನಿಯನ್ ಸಂಸತ್ತು ಮತ್ತು ಭಾರತೀಯ ಸಂಸತ್ತಿನಲ್ಲಿ ಅಂಗೀ ಕರಿಸಬೇಕು. ಈ ಒಪ್ಪಂದ 2027 ರೊಳಗೆ ಜಾರಿಯಾಗುವ ಸಾಧ್ಯತೆ ಇಲ್ಲ. ಜಾರಿ ಆದ ನಂತರವೇ ಯಾರಿಗೆ ಪ್ರಯೋಜನ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ಒಪ್ಪಂದದ ಪ್ರಮುಖ ಅಂಶವೆಂದರೆ, ಇದರ ಹಿನ್ನೆಲೆಯಲ್ಲಿರುವ ಭೌಗೋಳಿಕ ರಾಜಕೀಯ. ಯುರೋಪಿಯನ್ ಯೂನಿಯನ್ ಮತ್ತು ಭಾರತ ಎರಡೂ ಅಮೆರಿಕದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಾಗಿವೆ. ಆದರೆ ಟ್ರಂಪ್ ಎರಡನ್ನೂ ಬಿಡಲಿಲ್ಲ ಮತ್ತು ಭಾರೀ ಸುಂಕಗಳನ್ನು ವಿಧಿಸಿದರು. ಯುಇ ಟ್ರಂಪ್ ಅವರನ್ನು ಮನವೊಲಿಸುವಲ್ಲಿ ಮತ್ತು ಕೆಲವು ವಾರಗಳಲ್ಲಿ ಇತ್ಯರ್ಥಕ್ಕೆ ಬರುವಲ್ಲಿ ಯಶಸ್ವಿಯಾಯಿತು. ಆದರೆ ಭಾರತ ಮಾತ್ರ ಶೇ. 50 ಸುಂಕದ ಹೊರೆ ಎದುರಿಸುತ್ತಿದೆ. ಟ್ರಂಪ್ ವಿಶ್ವಾಸಾರ್ಹ ವ್ಯಕ್ತಿಯಲ್ಲ ಎಂದು ಯುಇ ಗೆ ತಿಳಿದಿದೆ. ಅದಕ್ಕಾಗಿಯೇ ಅದು ಈಗ ಭಾರತದಂತಹ ದೇಶದೊಂದಿಗೆ ವ್ಯವಹರಿಸುವುದು ಉತ್ತಮ ಎಂದು ಭಾವಿಸಿದೆ. ಈ ಒಪ್ಪಂದದೊಂದಿಗೆ ಭಾರತ ತನ್ನ ಆಟೋ ವಲಯವನ್ನು ಕ್ರಮೇಣ ತೆರೆಯಲು ಪ್ರಾರಂಭಿಸಿದೆ. ಯುರೋಪಿನಿಂದ ಬರುವ ಪ್ರೀಮಿಯಂ ಕಾರುಗಳ ಮೇಲಿನ ಸುಂಕವನ್ನು ಈಗ ಹಂತಹಂತವಾಗಿ ಕಡಿತಗೊಳಿಸಲಾಗುವುದು. ಹೆಚ್ಚುವರಿಯಾಗಿ, ಯುರೋಪಿಯನ್ ವೈನ್, ಆಲಿವ್ ಎಣ್ಣೆ, ಬ್ರೆಡ್, ಮಿಠಾಯಿ ಇತ್ಯಾದಿಗಳು ಭಾರೀ ಸುಂಕ ಕಡಿತ ಕಾಣಲಿವೆ. ಭಾರತ ಈಗ ತನ್ನ ನಿಲುವನ್ನು ಮೃದುಗೊಳಿಸಲು ಪ್ರಾರಂಭಿಸಿದೆ. ಟ್ರಂಪ್ ಇತ್ತೀಚೆಗೆ ಗ್ರೀನ್ಲ್ಲಾಂಡ್ ಕಾರಣಕ್ಕೆ ಯುರೋಪಿ ಯನ್ ರಾಷ್ಟ್ರಗಳಿಗೆ ಸುಂಕ ಬೆದರಿಕೆ ಹಾಕಿದರು. ಹಾಗಾಗಿ ಯುರೋಪಿಯನ್ ರಾಷ್ಟ್ರಗಳು ಈಗ ಭಾರತೀಯ ಉತ್ಪನ್ನಗಳಿಗೆ ತಮ್ಮ ಮಾರುಕಟ್ಟೆ ತೆರೆಯಲು ಸಿದ್ಧವಾಗಿವೆ. ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಗತ್ಯವನ್ನು ಎರಡೂ ಮನವರಿಕೆ ಮಾಡಿಕೊಂಡಿವೆ. ಅಲ್ಲದೆ ಚೀನಾ ಎರಡಕ್ಕೂ ವಿಶ್ವಾಸಾರ್ಹ ದೀರ್ಘಕಾಲೀನ ಪಾಲುದಾರನಾಗಿರಲಿಲ್ಲ. ಅದಕ್ಕಾಗಿಯೇ ಯುರೋಪಿಯನ್ ಯೂನಿಯನ್ ಮತ್ತು ಭಾರತ ಒಟ್ಟಿಗೆ ಬರಲು ನಿರ್ಧರಿಸಿದವು ಮತ್ತು ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಕೆಲಸ ಈಗ ಕೆಲವು ತಿಂಗಳುಗಳಲ್ಲಿ ಪೂರ್ಣಗೊಂಡಿತು. ಆದ್ದರಿಂದ, ಈ ಒಪ್ಪಂದದ ಹಿಂದೆ ವ್ಯಾಪಾರವಿದೆ ಮತ್ತು ಟ್ರಂಪ್ ನೆರಳು ಕೂಡ ಇದೆ. ಭಾರತಕ್ಕೆ ಈ ಒಪ್ಪಂದದ ದೊಡ್ಡ ಪ್ರಯೋಜನವೆಂದರೆ ರಫ್ತು ತಾಣ. ಯುರೋಪಿಯನ್ ಯೂನಿಯನ್ ಸಾಂಪ್ರದಾಯಿಕವಾಗಿ ಭಾರತದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿರಲಿಲ್ಲ. ಸರಾಸರಿ, ಸರಕುಗಳ ಮೇಲೆ ಶೇ. 3.8 ಸುಂಕವಿತ್ತು. ಜವಳಿ ಉಡುಪುಗಳಂತಹ ಕಾರ್ಮಿಕ ತೀವ್ರ ವಲಯಗಳಲ್ಲಿ ಸುಂಕಗಳು ಹೆಚ್ಚಿದ್ದವು. 2023 ರ ನಂತರ ಯುರೋಪಿಯನ್ ಯೂನಿಯನ್ ಸುಂಕಗಳು ಹೆಚ್ಚಾಗಲು ಪ್ರಾರಂಭಿಸಿದವು. ಉಡುಪುಗಳು, ಔಷಧಗಳು ಮತ್ತು ಯಂತ್ರೋಪಕರಣಗಳಂತಹ ಕ್ಷೇತ್ರಗಳಲ್ಲಿ ಅದರಿಂದ ನಷ್ಟವಾಯಿತು. ಈ ಹೊಸ ಒಪ್ಪಂದದೊಂದಿಗೆ, ಭಾರತೀಯ ರಫ್ತುದಾರರು ಈಗ ಆ ರಿಯಾಯಿತಿಗಳನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ. ಅಮೆರಿಕದಿಂದ ಉಂಟಾದ ಉದ್ಯೋಗ ನಷ್ಟ ಮತ್ತು ಆರ್ಥಿಕ ನಷ್ಟಗಳಿಂದ ಚೇತರಿಸಿಕೊಳ್ಳಲು ಇದರಿಂದ ಅವಕಾಶವಾಗಲಿದೆ. ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಗಳಲ್ಲಿ ಯುಇ ಸುಂಕವನ್ನು ಶೂನ್ಯಕ್ಕೆ ಇಳಿಸುತ್ತದೆ. ಭಾರತ ಈ ಒಪ್ಪಂದದ ಮೂಲಕ ಯುರೋಪಿಯನ್ ಯೂನಿಯನ್ ನಲ್ಲಿ ಐಟಿ ಸೇವೆಗಳಿಗೆ ಪ್ರವೇಶ ಪಡೆಯಬಹುದು. ಈ ಮೂಲಕ, ಭಾರತೀಯ ಐಟಿ ಕಂಪನಿಗಳು ಯುರೋಪಿಯನ್ ಗ್ರಾಹಕರ ಡೇಟಾ ನಿರ್ವಹಿಸುವುದು ಸುಲಭವಾಗುತ್ತದೆ. ಯುರೋಪಿಯನ್ ಯೂನಿಯನ್ ಅನುಮೋದಿತ ಸಂಸ್ಥೆಯಿಂದ ಪದವಿ ಪಡೆದರೆ, ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶವಿರುತ್ತದೆ. ಎಲ್ಲಾ ಸದಸ್ಯ ರಾಷ್ಟ್ರಗಳು ಅದನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ ಎಂಬುದು ಬೇರೆ ವಿಷಯ. ಈ ಒಪ್ಪಂದದಿಂದ ಯುರೋಪಿಯನ್ ಒಕ್ಕೂಟ ಏನು ಪಡೆಯಲಿದೆ? ಭಾರತ ಯುರೋಪಿನಿಂದ ಬರುವ ಶೇ. 96 ಕ್ಕಿಂತ ಹೆಚ್ಚು ಸರಕುಗಳ ಮೇಲಿನ ಸುಂಕ ಕಡಿತಗೊಳಿಸಿದೆ. ವೈನ್, ಸ್ಪಿರಿಟ್, ತೈಲ, ಆಟೋ ವಲಯಗಳಲ್ಲಿ ಹೆಚ್ಚಿನ ಕಡಿತ ಕಾಣಬಹುದು. ಶೇ. 150 ಸುಂಕ ಹೊಂದಿದ್ದ ವೈನ್ ಮತ್ತು ಸ್ಪಿರಿಟ್ಗ್ ಳ ಮೇಲೆ ಈಗ ಶೇ.20 ರಿಂದ ಶೇ.40 ವರೆಗೆ ಸುಂಕ ಇಳಿಸುವ ಮಾತನಾಡಲಾಗುತ್ತಿದೆ. ಆಲ್ಕೊಹಾಲ್ ಅಲ್ಲದ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಒಪ್ಪಂದದ ಅಡಿಯಲ್ಲಿ ಯುರೋಪಿನಿಂದ ಬರುವ ವಾಹನಗಳ ಮೇಲಿನ ಆಮದು ಸುಂಕವನ್ನು ಭಾರತ ಶೇ. 110 ರಿಂದ ಶೇ.40 ಕ್ಕೆ ಇಳಿಸುತ್ತದೆ. ಕೆಲವು ವರ್ಷಗಳಲ್ಲಿ ಅದು ಶೇ.10 ಕ್ಕೆ ಇಳಿಯುತ್ತದೆ ಎಂದು ಹೇಳಲಾಗುತ್ತಿದೆ. ರಿಯಾಯಿತಿಗಳು ಕೇವಲ ಹೈ-ಎಂಡ್, ಟಾಪ್- ಆಂಡ್ ಐಷಾರಾಮಿ ಕಾರುಗಳ ಮೇಲೆ ಮಾತ್ರವಲ್ಲ. ಬದಲಾಗಿ 20 ಲಕ್ಷ ರೂ.ಗಳವರೆಗಿನ ಪ್ರೀಮಿಯಂ ವಿಭಾಗದ ವಾಹನಗಳ ಮೇಲೂ ಲಭ್ಯವಿರುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ, ಬಿಎಂಡಬ್ಲ್ಯು, ಮರ್ಸಿಡಿಸ್, ಆಡಿಯಂತಹ ಕಾರುಗಳು ಮಾತ್ರವಲ್ಲದೆ ಪ್ರೀಮಿಯಂ ಕಾರು, ಎಸ್ಯುವಿ ವಿಭಾಗ ಎಂದು ಕರೆಯಲ್ಪಡುವ ಫೋಕ್ಸ್ವ್ಯಾಗನ್, ಸ್ಕೋಡಾದಂತಹ ವಾಹನಗಳ ಬೆಲೆ ಕೂಡ ಭಾ ಕಡಿತ ಕಾಣಲಿದೆ. ಈ ವಿನಾಯಿತಿ ಇವಿಗಳ ಮೇಲೆ ಇಲ್ಲ ಎಂಬುದು ನಿಜ. ದೇಶೀಯ ಇವಿ ತಯಾರಕರನ್ನು ರಕ್ಷಿಸುವ ಬಗ್ಗೆ 5 ವರ್ಷಗಳ ಕಾಲ ಚರ್ಚೆ ನಡೆಯುತ್ತಿದೆ. ಕಾರುಗಳ ಹೊರತಾಗಿ, ಯುರೋಪಿಯನ್ ಯುನಿಯನ್ನಿಂದ ಬರುವ ಯಂತ್ರೋಪಕರಣಗಳು ಸಹ ಶೂನ್ಯ ಸುಂಕ ಅಥವಾ ಅತ್ಯಲ್ಪ ಸುಂಕದಲ್ಲಿ ಬರಲಿವೆ. ಕೃಷಿ ಮತ್ತು ಡೈರಿಯನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿ ಡಲಾಗಿದೆ ಎಂಬುದು ಸಮಾಧಾನಕರ ವಿಷಯ. ಹಾಗಾಗಿ ಭಾರತೀಯ ರೈತರು ಈ ಒಪ್ಪಂದದ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗ ಮುಂದಿನ ಹಂತವೆಂದರೆ, ಇಡೀ ಯುರೋಪಿಯನ್ ಸಂಸತ್ತು ಇದನ್ನು ಚರ್ಚಿಸಿ ಅನುಮೋದಿಸಬೇಕಿದೆ. ಕಾನೂನು ಪರಿಶೀಲನೆಗೆ ತಿಂಗಳುಗಳು ಬೇಕಾಗುತ್ತವೆ. ಹಾಗಾಗಿ, ಈ ಒಪ್ಪಂದ 2027 ರ ಮೊದಲು ಜಾರಿಗೆ ಬರುವುದಿಲ್ಲ. ಮುಂಬರುವ ತಿಂಗಳುಗಳಲ್ಲಿ ಎಲ್ಲಾ ತೆರಿಗೆ ಮತ್ತು ಸೆಸ್ಗಗಳನ್ನು ತೆಗೆದುಹಾಕಲು ಸಾಧ್ಯವಾದರೆ, ಬಹುಶಃ ನಾವು ಈ ವ್ಯಾಪಾರ ಒಪ್ಪಂದದ ಸಂಪೂರ್ಣ ಪ್ರಯೋಜನ ಪಡೆಯಬಹುದು. ಇಲ್ಲದಿದ್ದರೆ, ಇದು ಕೇವಲ ರಾಜಕೀಯ ಸಂದೇಶವಾಗಿ ಉಳಿಯುತ್ತದೆ ಮತ್ತು ಯುಇ ಹೆಚ್ಚಿನ ಲಾಭ ಪಡೆಯಬಹುದು. ಆತುರದಿಂದ ಸಹಿ ಹಾಕಲಾದ ಈ ಒಪ್ಪಂದ ವ್ಯಾಪಾರ, ಹೂಡಿಕೆ, ಅಭಿವೃದ್ಧಿಯ ಮೇಲೆ ತಕ್ಷಣದ ಗಮನ ಕೊಟ್ಟಿದೆ ಎಂಬುದು ಸ್ಪಷ್ಟ. ಇದೊಂದು ಸಂದೇಶವನ್ನು ಕೂಡ ಮುಟ್ಟಿಸಬಹುದು. ಮಹಾ ಶಕ್ತಿ ರಾಜಕೀಯದಿಂದ ನಾವು ನಾಶವಾಗುವುದಿಲ್ಲ, ನಾವು ಒಬ್ಬಂಟಿಯಾಗಿಲ್ಲ. ನಮಗೆ ಮಿತ್ರರಾಷ್ಟ್ರಗಳಿವೆ ಎಂಬ ಸಂದೇಶ ಅದು. ಯುರೋಪಿಯನ್ ಒಕ್ಕೂಟ ದಕ್ಷಿಣ ಅಮೆರಿಕದ ದೇಶಗಳೊಂದಿಗೆ ವ್ಯವಹರಿಸುತ್ತದೆ ಅಥವಾ ಇಂಡೋನೇಶ್ಯ ಮತ್ತು ಭಾರತದಂತಹ ದೇಶಗಳೊಂದಿಗೆ ಎಫ್ಟಿಎಗೆ ಸಹಿ ಹಾಕುತ್ತದೆ. ಮಹಾ ಶಕ್ತಿಗಳ ಬೆದರಿಕೆ ವಿರುದ್ಧ ಮಧ್ಯಮ ಶಕ್ತಿಗಳು ಒಂದಾಗಲು ಇದು ಒಂದು ಮಾರ್ಗ. ಪಾಲುದಾರಿಕೆಯನ್ನು ತೋರಿಸಬೇಕಾಗಿತ್ತು ಮತ್ತು ಸಂದೇಶವನ್ನು ಅಮೆರಿಕಕ್ಕೆ ನೀಡಬೇಕಾಗಿತ್ತು. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪಾಲುದಾರಿಕೆ ಅಂತರ್ರಾಷ್ಟ್ರೀಯ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಬಲಪಡಿಸುತ್ತದೆ. ಇಂದು ವಿಶ್ವದ ಮಧ್ಯಮ ಶಕ್ತಿಗಳು ಒಟ್ಟಿಗೆ ಬರುತ್ತಿವೆ ಎಂಬುದು ಗಮನಾರ್ಹ ಬದಲಾವಣೆ ತರಬಹುದು. ಯುಎಸ್ ಮತ್ತು ಚೀನಾವನ್ನು ಹೊರತುಪಡಿಸಿ ಈ ಎರಡು ಶಕ್ತಿಗಳನ್ನು ಅನುಮಾನದಿಂದ ನೋಡುತ್ತಿರುವ ಮೂರನೇ ಧ್ರುವ ಹೊರಹೊಮ್ಮುತ್ತಿದೆ. ಭಾರತ ತನ್ನ ಕಾರ್ಡ್ಗಳನ್ನು ಸರಿಯಾಗಿ ಆಡಿದರೆ, ನಾವು ಈ ಮೂರನೇ ಧ್ರುವದ ಪ್ರಮುಖ ಭಾಗವಾಗಬಹುದು. ಯುರೋಪಿಯನ್ ಯೂನಿಯನ್ ಭಾರತದೊಂದಿಗೆ ವ್ಯಾಪಾರದಲ್ಲಿ ಮಾತ್ರವಲ್ಲದೆ ತಂತ್ರಜ್ಞಾನ, ಸ್ಟಾರ್ಟ್ಅಪಗಳು, ರಕ್ಷಣೆ, ಸಂಶೋಧನೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವ ಆಸಕ್ತಿ ತೋರಿಸಿದೆ. ಇಲ್ಲಿನ ಒಂದು ಸತ್ಯವೆಂದರೆ, ಯುರೋಪಿಯನ್ ಯೂನಿಯನ್ಗೆ ಹೊಸ ಮಾರುಕಟ್ಟೆಗಳು ಬೇಕಾಗಿವೆ. ಮತ್ತು ಅದು ಭಾರತಕ್ಕೆ ಬಹಳಷ್ಟು ಸರಕುಗಳನ್ನು ಮಾರಾಟ ಮಾಡುತ್ತದೆ. ಪರಮಾಣು ರಿಯಾಕ್ಟರ್ಗಳು, ವಿಮಾನಗಳು, ವೈದ್ಯಕೀಯ ಉಪಕರಣಗಳು ಆ ಸರಕುಗಳಲ್ಲಿ ಸೇರಿವೆ. ಈ ಒಪ್ಪಂದದಿಂದ ಭಾರತ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆಯೇ? ಈ ಹೊತ್ತಲ್ಲಿ ನಾವು ಮಟನ್, ಮೊಗಲ್ ಮಂದಿರ, ಮಸೀದಿ ಎನ್ನುತ್ತಲೇ ಕಳೆದುಹೋದರೆ ಯುರೋಪಿಯನ್ ಯೂನಿಯನ್ ಮತ್ತೆ ಹೊಸ ಯುಗದ ಈಸ್ಟ್ ಇಂಡಿಯಾ ಕಂಪೆನಿಯಂತೆ ಆಟ ಆಡಬಹುದು. ಟ್ರಂಪ್ ಬೆದರಿಕೆಯಿಂದಾಗಿ ಇಂಗ್ಲೆಂಡ್, ಯುರೋಪ್ ಮತ್ತು ಕೆನಡಾ ಕೂಡ ಭಾರತದೊಂದಿಗೆ ವ್ಯವಹರಿಸಲು ಬರುತ್ತಿರುವಾಗ, ಹೊಸ ಮೈತ್ರಿಗಳು ರೂಪುಗೊಳ್ಳುತ್ತಿವೆ. ಆದರೆ ನಾಳೆ ಗಾಳಿ ಬದಲಾದರೆ ಪರಿಣಾಮ ಏನು? ನಾಳೆ ಅಮೆರಿಕ ಮತ್ತೆ ಹಳೆಯ ಮಿತ್ರರಾಷ್ಟ್ರಗಳತ್ತ ಸ್ನೇಹದ ಹಸ್ತ ಚಾಚಿದರೆ ಈ ಒಪ್ಪಂದಗಳು ನಿಲ್ಲುತ್ತವೆಯೇ ಅಥವಾ ಭಿನ್ನಾಭಿಪ್ರಾಯಗಳು ತಲೆದೋರುತ್ತವೆಯೇ? ಯುರೋಪ್ ತನ್ನ ಸ್ವಾರ್ಥಕ್ಕಾಗಿ ಈ ಒಪ್ಪಂದವನ್ನು ಮಾಡುತ್ತಿದೆ ಎಂಬುದು ನಿಜ. 20 ವರ್ಷಗಳಿಂದ ಬಾಕಿ ಉಳಿದಿದ್ದ ಒಪ್ಪಂದ ಇಂದು ಇಷ್ಟು ಬೇಗ ಪೂರ್ಣಗೊಂಡಿದೆ. ಮುಂದಿನ ವರ್ಷದ ವೇಳೆಗೆ ಜಾರಿಗೆ ಬಂದರೆ ನಾವು ಈ ದೊಡ್ಡ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧರಿದ್ದೇವೆಯೇ ಎಂಬ ಪ್ರಶ್ನೆಯೂ ಇದೆ.
Ukraine President: ರಷ್ಯಾಗೆ ತೆರಳಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಿರಾಕರಣೆ ಸಾಧ್ಯತೆ, ಕಾರಣ ಇಲ್ಲಿದೆ
ರಷ್ಯಾ ಇದೀಗ ಯುದ್ಧ ನಿಲ್ಲಿಸಲು ಮನಸ್ಸು ಮಾಡಿದ್ದು, ತನ್ನ ಶತ್ರು ಉಕ್ರೇನ್ ಜೊತೆಗೆ ಮಾತುಕತೆ ಮೂಲಕ ಎಲ್ಲಾ ಬಗೆಹರಿಸಲು ಮುಂದಾಗಿದೆ. ಅದರಲ್ಲೂ ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ಇದೇ ರಷ್ಯಾ ಮತ್ತು ಉಕ್ರೇನ್ ಈಗಲಾದರೂ ನೆಮ್ಮದಿಯಾಗಿ ಇರಬೇಕು ಅಂತಾ ನಿರ್ಧಾರ ಮಾಡಿರುವ ರೀತಿ ಕಾಣುತ್ತಿದೆ. ಹೀಗಾಗಿಯೇ ನೇರವಾಗಿ ಉಕ್ರೇನ್ ಅಧ್ಯಕ್ಷರನ್ನೇ ಮಾಸ್ಕೋಗೆ ಕರೆಸಿ, ಮಾತುಕತೆಯ ಮೂಲಕ ಎಲ್ಲ
ಅವಹೇಳನಕಾರಿ ಹೇಳಿಕೆ ನೀಡದಂತೆ ಯತ್ನಾಳ್ಗೆ ಕೋರ್ಟ್ ನಿರ್ಬಂಧ
ಸಚಿವ ಶಿವಾನಂದ ಪಾಟೀಲ ದಾಖಲಿಸಿರುವ ಕ್ರಿಮಿನಲ್ ದೂರು
Donald Trump: ಇರಾನ್ ಕಡೆಗೆ ಮತ್ತಷ್ಟು ಯುದ್ಧ ನೌಕೆಗಳು, ಭೀಕರ ಯುದ್ಧ ಭೀತಿಯಲ್ಲಿ ಮಧ್ಯಪ್ರಾಚ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ನೇರವಾಗಿ ವಾರ್ನಿಂಗ್ ಕೊಟ್ಟು, ಈಗ ತಮ್ಮ ಸೇನೆಯಲ್ಲಿ ಇರುವ ಬಲಿಷ್ಠ ನೌಕೆಗಳನ್ನು ಆ ಕಡೆಗೆ ನುಗ್ಗಿಸುತ್ತಿದ್ದಾರೆ. ಈಗಾಗಲೇ ಯುದ್ಧ ಭೀತಿ &ಹಿಂಸಾಚಾರದ ಆತಂಕ ಎದುರಾಗಿರುವ ಸಮಯದಲ್ಲೇ ಟ್ರಂಪ್ ಈ ಪ್ರಮುಖ ನಿರ್ಧಾರ ಕೈಗೊಂಡು ಶತ್ರು ದೇಶಕ್ಕೆ ನಡುಕ ಹುಟ್ಟುವಂತೆ ಮಾಡಿದ್ದಾರೆ. ಈಗಾಗಲೇ ಯುಎಸ್ಎಸ್ ಅಬ್ರಹಾಂ ಲಿಂಕನ್ ಎಂಬ
ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯಿಂದ ಮೇಘಾಲಯಕ್ಕೆ ಮಾಧ್ಯಮ ಪ್ರವಾಸ
ಮೇಘಾಲಯದ ವೈವಿಧ್ಯಮಯ ಪರಂಪರೆಯ ಅಧ್ಯಯನ
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ಶೀಘ್ರ ತೆರೆಯಲಿದೆ! ಯಾವಾಗ? ಯಾರಿಗೆ ಅನುಕೂಲ?
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡದವರೆಗೆ ಮಾರ್ಚ್ ವೇಳೆಗೆ ಸಂಪೂರ್ಣ ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ. ಫೆಬ್ರುವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ.
ಬೆಟ್ಟಿಂಗ್ ಪ್ರಕರಣ : ಕೆ.ಸಿ.ವೀರೇಂದ್ರಗೆ ಸಂಬಂಧಿಸಿದ 177.3 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಈಡಿ
ಬೆಂಗಳೂರು: ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ನಡೆಸುತ್ತಿದ್ದರೆಂದು ಆರೋಪಿಸಲಾದ ಆನ್ಲೈನ್ ಅಕ್ರಮ ಬೆಟ್ಟಿಂಗ್ ಹಾಗೂ ಜೂಜಾಟ ಜಾಲಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಈಡಿ) ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಸುಮಾರು 177.3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜ.29ರಂದು ಪಿಎಂಎಲ್ಎ ಕಾಯ್ದೆ–2002ರ ನಿಬಂಧನೆಗಳ ಅಡಿ ಈ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದೆ ಎಂದು ಈಡಿ ಮೂಲಗಳು ತಿಳಿಸಿವೆ. ಈಇಡಿ ನೀಡಿರುವ ಮಾಹಿತಿಯಂತೆ, ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಕೃಷಿ ಭೂಮಿಗಳು, ವಸತಿ ನಿವೇಶನಗಳು ಸೇರಿದ್ದು, ಇವುಗಳನ್ನು ಅಕ್ರಮ ಆನ್ಲೈನ್ ಬೆಟ್ಟಿಂಗ್ ಹಾಗೂ ಜೂಜಾಟದಿಂದ ಗಳಿಸಿದ ಹಣ ಬಳಸಿ ಸಂಪಾದಿಸಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಬಹು ಎಫ್ಐಆರ್ಗಳ ಆಧಾರದ ಮೇಲೆ ತನಿಖೆ : ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ದಾಖಲಿಸಿದ ಬಹು ಎಫ್ಐಆರ್ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ದಾಖಲಾಗಿರುವ ಈ ಪ್ರಕರಣಗಳನ್ನು ಪಿಎಂಎಲ್ಎ ಕಾಯ್ದೆಯ ಅಡಿ ನಿಗದಿತ ಅಪರಾಧಗಳಾಗಿ ಪರಿಗಣಿಸಿ, ಈಡಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ, ಅಕ್ರಮ ಆನ್ಲೈನ್ ಬೆಟ್ಟಿಂಗ್ಗೆ ಸಂಬಂಧಿಸಿದ ವೆಬ್ಸೈಟ್ಗಳು ಸೇರಿದಂತೆ ಹಲವು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ಇದೇ ರೀತಿಯ ಪ್ಲಾಟ್ಫಾರ್ಮ್ಗಳನ್ನು ಬಳಸಿ ರಾಷ್ಟ್ರವ್ಯಾಪಿ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲವನ್ನು ನಿರ್ವಹಿಸುತ್ತಿದ್ದರು ಎಂದು ಈಡಿ ತಿಳಿಸಿದೆ. ಶೋಧ, ಬಂಧನ ಮತ್ತು ಆಸ್ತಿ ಮುಟ್ಟುಗೋಲು : ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮುನ್ನ, ಪಿಎಂಎಲ್ಎ ಸೆಕ್ಷನ್ 17ರ ಅಡಿ ಈಡಿ ಅಧಿಕಾರಿಗಳು ಹಲವಾರು ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು, ನಗದು ಹಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ ಪುರಾವೆಗಳು ಸಂಗ್ರಹವಾದ ಬಳಿಕ ಕೆ.ಸಿ. ವೀರೇಂದ್ರ ಅವರನ್ನು ಪಿಎಂಎಲ್ಎ ಸೆಕ್ಷನ್ 19ರ ಅಡಿ ಬಂಧಿಸಲಾಗಿದೆ. ಪಿಎಂಎಲ್ಎ ಪ್ರಕರಣಗಳ ವಿಚಾರಣೆಗೆ ನಿಗದಿತ ವಿಶೇಷ ನ್ಯಾಯಾಲಯದ ಮುಂದೆ ದೂರು ಕೂಡ ದಾಖಲಿಸಲಾಗಿದೆ ಎಂದು ಈಡಿ ತಿಳಿಸಿದೆ. ಈಡಿ ತನ್ನ ಇತ್ತೀಚಿನ ಮಾಧ್ಯಮ ಪ್ರಕಟಣೆಯಲ್ಲಿ, ಇದುವರೆಗೆ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 320 ಕೋಟಿ ರೂ.ಗಳನ್ನು ಮೀರಿದೆ ಎಂದು ಮಾಹಿತಿ ನೀಡಿದೆ. ತನಿಖೆಯ ಅವಧಿಯಲ್ಲಿ 2,300 ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮ ಹಣಕಾಸು ವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದ್ದು, ಸಂಗ್ರಹಿಸಲಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ವಿಜಯಪುರ | ಲೋಣಿ ಬಿ.ಕೆ. ಗ್ರಾಮದಲ್ಲಿ ದೇವಾಲಯದ ಬೀಗ ಒಡೆದು ಬಂಗಾರ, ಹುಂಡಿ ಹಣ ಕಳ್ಳತನ
ಇಂಡಿ: ಲೋಣಿ ಬಿ.ಕೆ. ಗ್ರಾಮದಲ್ಲಿರುವ ಗತ್ತರಗಿ ಭಾಗಮ್ಮನ ದೇವಸ್ಥಾನದಲ್ಲಿ ನಿನ್ನೆ ತಡರಾತ್ರಿ ಕಳ್ಳರು ದೇವಸ್ಥಾನದ ಬೀಗ ಒಡೆದು ದೇವಿಯ ಕೊರಳಿನ ಬಂಗಾರ ಹಾಗೂ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ ಆಗಮಿಸಿದ ಪೂಜಾರಿ ಸುರೇಶ್ ಕೋಳಿ ಈ ಘಟನೆ ಗಮನಿಸಿ ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬಳಿಕ ಝಳಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಮತ್ತು ಇಂಡಿ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳಖದೀಮರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ಷ್ಮ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದರ ಜೊತೆಗೆ, ರಾತ್ರಿ ಗಸ್ತಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಗಲು-ರಾತ್ರಿ ಎನ್ನದೆ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದು, ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ಪ್ರಕರಣದಲ್ಲಿಯೂ ಸುಳಿವು ಸಿಕ್ಕಿಲ್ಲದಿರುವುದು ಶೋಚನೀಯವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ವಿಶೇಷ ರಹಸ್ಯ ತಂಡವನ್ನು ನೇಮಕ ಮಾಡಿ ಕಳ್ಳತನ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಲೋಣಿ ಬಿ.ಕೆ. ಗ್ರಾಮದ ಮುಖಂಡ ರಮೇಶ್ ಜಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಾಸ್ಟ್ಟ್ಯಾಗ್ನಿಂದ, ಸಿಗರೇಟ್, ಬಜೆಟ್ವರೆಗೆ... ಫೆ.1ರಿಂದ ಹಲವು ಬದಲಾವಣೆ; ಏನೇನು? ಇಲ್ಲಿದೆ ವಿವರ
ಫೆಬ್ರವರಿ 1, 2026 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಲಿವೆ. ಅಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಭಾನುವಾರವಾಗಿದ್ದರೂ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸಲಿವೆ. ವಾಹನ ಸವಾರರಿಗೆ ಫಾಸ್ಟ್ಟ್ಯಾಗ್ ಕೆವೈಸಿ ನಿಯಮವನ್ನು ಸಡಿಲಿಸಲಾಗಿದ್ದು, ಬ್ಯಾಂಕ್ಗಳೇ ಪರಿಶೀಲನೆ ನಡೆಸಲಿವೆ. ಎಲ್ಪಿಜಿ, ಸಿಎನ್ಜಿ ಮತ್ತು ವಿಮಾನ ಇಂಧನ ದರಗಳು ಪರಿಷ್ಕರಣೆಯಾಗಲಿದ್ದು, ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
West Bengal Survey : ಜನಪ್ರಿಯತೆಯಲ್ಲಿ ಹಿಗ್ಗಿದ ಮೋದಿ, ಕುಗ್ಗಿದ ದೀದಿ - ಈಗ ಚುನಾವಣೆ ನಡೆದರೆ..
C-Voter MOTN Survey : ಈ ಹೊತ್ತಿನಲ್ಲಿ ಚುನಾವಣೆ ನಡೆದರೆ ನಿಮ್ಮ ಬೆಂಬಲ ಯಾರಿಗೆ ಎನ್ನುವ ಸಮೀಕ್ಷೆಯನ್ನು ಸಿವೋಟರ್ ನಡೆಸಿದೆ. ಅದರ ಪ್ರಕಾರ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಇನ್ನು, ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಸ್ವಲ್ಪ ಹಿನ್ನಡೆ ಎದುರಿಸಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.
ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಐಟಿ ವಿದ್ಯಾರ್ಥಿ, ವಕೀಲರಂತೆ ಬಿಂಬಿಸಿ ಆಸ್ತಿ ಮಾರಾಟ ಮಾಡುವುದಾಗಿ ವಂಚನೆ ಮಾಡಿರುವ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಪಾತ್ರನಾಗಿದ್ದಾನೆ.ವಕೀಲನಂತೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಆಸ್ಟ್ರೇಲಿಯಾದಲ್ಲಿ ಮನೆ ಖರೀದಿದಾರನೊಬ್ಬನಿಂದ ಬರೋಬ್ಬರಿ 1.28 ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿದ್ದಾನೆ. ಈತನ ವಂಚನೆ ಬಯಲಾದ ನಂತರ, ನ್ಯಾಯಾಲಯವು ಆತನಿಗೆ 14 ತಿಂಗಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಈಗಾಗಲೇ ಆತನ ಬಂಧನ ಸಮಯದಿಂದ ಈವರೆಗೂ ಸಾಕಷ್ಷು ಸಮಯ ಕಳೆದಿದ್ದು, ಜೂನ್ ನಲ್ಲಿ ಬಿಡುಗಡೆಯ ನಂತರ ಗಡೀಪಾರು ಸಾಧ್ಯತೆ ಇದೆ.
ಮಹಾರಾಷ್ಟ್ರ ಸರ್ಕಾರದಿಂದ 'ಮಹಾ' ಹೆಜ್ಜೆ ; ಮಹಿಳೆಯರಿಗಾಗಿ ಪ್ರತ್ಯೇಕ 'ಋತುಬಂಧ ಕ್ಲಿನಿಕ್' ಗಳ ಆರಂಭ
ಮಹಾರಾಷ್ಟ್ರವು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ 'ಋತುಬಂಧ ಕ್ಲಿನಿಕ್'ಗಳನ್ನು ಪ್ರಾರಂಭಿಸಿದೆ. ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಉಪಕ್ರಮವು ಋತುಬಂಧದ ಸಮಯದಲ್ಲಿ ಎದುರಾಗುವ ದೈಹಿಕ, ಭಾವನಾತ್ಮಕ ಮತ್ತು ಹಾರ್ಮೋನುಗಳ ಸಮಸ್ಯೆಗಳಿಗೆ ಸಮಗ್ರ ಪರಿಹಾರ ನೀಡುತ್ತದೆ. ಇದು ಮಹಿಳಾ-ಕೇಂದ್ರಿತ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿದೆ.
ಯುಜಿಸಿ ಹೊಸ ನಿಯಮ 2026: ಏನಿದು 'ಸಮಾನತೆ ನಿಯಮಾವಳಿ'? ವಿವಾದದ ಮೂಲ ಏನು? ಸಾಧಕ-ಬಾಧಕಗಳ ಸಂಪೂರ್ಣ ವಿಶ್ಲೇಷಣೆ
ದೇಶದ ಉನ್ನತ ಶಿಕ್ಷಣದಲ್ಲಿ ಸಮಾನತೆ ತರಲು ಯುಜಿಸಿ ರೂಪಿಸಿರುವ ನೂತನ ನಿಯಮಗಳು ಭಾರೀ ಚರ್ಚೆಗೆ ಕಾರಣವಾಗಿವೆ. ಎಲ್ಲರನ್ನೂ ಒಳಗೊಳ್ಳುವ ಈ ಹೆಜ್ಜೆ ಸ್ವಾಗತಾರ್ಹವಾದರೂ, ಅನುಷ್ಠಾನದ ಹಾದಿಯಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಈ ವಿಚಾರ, ದೇಶದ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ನಿಯಮಗಳ ಸಾಧಕ-ಬಾಧಕಗಳ ಕುರಿತು ಆಳವಾದ ವಿಶ್ಲೇಷಣೆ ಇಲ್ಲಿದೆ.
Ajit Pawar: ಸ್ಕೂಟಿ ಚಲಾಯಿಸದವರಿಗೆ ವಿಮಾನ ಕೊಟ್ಟರೆ ಹಿಂಗೇ ಆಗೋದು: ಸೋಷಿಯಲ್ ಮೀಡಿಯಾ ಟ್ರೋಲ್ಗೆ ನೆಟ್ಟಿಗರು ಕೆಂಡ
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಜನವರಿ 28ರ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳು ಅಸಹ್ಯಕರವಾಗಿದೆ. ಪುರುಷ ಪ್ರಧಾನ ಅಥವಾ ಇನ್ನೂ ಹಳೆಯ ಚಿಂತನೆಯಲ್ಲೇ ಇರುವ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಎನ್ನುವುದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯೇ ಸಾಕ್ಷಿಯಾಗಿದೆ.
ಬ್ರಹ್ಮಾವರ | ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವ ಪೋಸ್ಟ್: ಇಬ್ಬರು ಆರೋಪಿಗಳ ಬಂಧನ
ಬ್ರಹ್ಮಾವರ : ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡಿಸುವ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಮೂಡು ಗರಡಿ ರಸ್ತೆಯ ಸಂತೋಷ ಕುಮಾರ್ ಶೆಟ್ಟಿ(56) ಹಾಗೂ ಕೋಟೇಶ್ವರ ಗ್ರಾಮದ ಹಾಲಾಡಿ ರೋಡ್ನ ಕೆ.ನಾಗರಾಜ(62) ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಧರ್ಮಗಳ ಮಧ್ಯೆ ದ್ವೇಷ ಹರಡಿಸುವಂತಹ ವಿಡಿಯೋ ಹಾಕಿದ ಬಗ್ಗೆ ಇವರಿಬ್ಬರ ವಿರುದ್ಧ ಜ.29ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾರ ಪತಿ ವಿ.ಶ್ರೀನಿವಾಸನ್ ನಿಧನ
ಹೊಸದಿಲ್ಲಿ: ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾರ ಪತಿ ವಿ.ಶ್ರೀನಿವಾಸನ್ ಶುಕ್ರವಾರ ನಿಧನರಾಗಿದ್ದಾರೆ. ಅವರು ಕೋಝಿಕ್ಕೋಡ್ನ ತಿಕ್ಕೋಟಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶ್ರೀನಿವಾಸನ್, ನಿವೃತ್ತರಾದ ಬಳಿಕ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಸಂಸ್ಥೆ ಟಿಂಕು ಲೂಕು ಹಾಗೂ ಜಿಸ್ನಾ ಮ್ಯಾಥ್ಯೂ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಅಥ್ಲೀಟ್ಗಳನ್ನು ತಯಾರು ಮಾಡಿದೆ. ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ಶ್ರೀನಿವಾಸನ್, 1998ರ ಪಿ.ಟಿ.ಉಷಾ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮೂಲಕ ಸ್ಪರ್ಧಾತ್ಮಕ ಕ್ರೀಡಾಕೂಟಕ್ಕೆ ಮರಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಸಿಎಂ, ಡಿಸಿಎಂ ವಿರುದ್ಧ ಮಾನಹಾನಿಕರ ಪೋಸ್ಟ್: ಬಿಜೆಪಿ ಎಕ್ಸ್ ಖಾತೆ ವಿರುದ್ಧ ದೂರು ದಾಖಲು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಎಕ್ಸ್’ ಖಾತೆಯಲ್ಲಿ ಮಾನಹಾನಿಕರ ಪೋಸ್ಟ್ ಪ್ರಕಟಿಸಿರುವ ಕುರಿತು ಬಿಜೆಪಿ ‘ಎಕ್ಸ್’ ಖಾತೆ ವಿರುದ್ಧ ದೂರು ದಾಖಲಾಗಿರುವುದಾಗಿ ವರದಿಯಾಗಿದೆ. ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ಇತರ ಸಚಿವರನ್ನು “ಸ್ಕ್ಯಾಮ್ ಲಾರ್ಡ್” ಎಂದು ಉಲ್ಲೇಖಿಸಿ ಮಾನಹಾನಿಕರ ಪೋಸ್ಟ್ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಪ್ರತಿನಿಧಿಸುವ ವಕೀಲರ ತಂಡವು ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ. ‘ಸ್ಕ್ಯಾಮ್ ಲಾರ್ಡ್’ ಎಂಬ ಶೀರ್ಷಿಕೆಯ ಪೋಸ್ಟ್ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಇತರ ಸಚಿವರ ಚಿತ್ರಗಳನ್ನು ಬಳಸಲಾಗಿದ್ದು, “ಇದು ಹಗರಣಗಳ ಕಥೆಯಲ್ಲ, ಅವರ ಹಿಂದಿನವರ ಕಥೆ” ಎಂಬ ವ್ಯಂಗ್ಯಾತ್ಮಕ ವಾಕ್ಯವನ್ನು ಸೇರಿಸಲಾಗಿದೆ. ಇದು ಕರ್ನಾಟಕವನ್ನು ಹಗಲು-ರಾತ್ರಿ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಹಗರಣ ಸಾಮ್ರಾಜ್ಯದ ನಿಜವಾದ ಕಥೆ ಎಂದು ಬಿಜೆಪಿ ಹೇಳಿದೆ. ಬಿಜೆಪಿ ‘ಲೂಟಿ’ ಮತ್ತು ‘ಸ್ಕ್ಯಾಮ್’ ಎಂಬ ಪದಗಳನ್ನು ಪದೇಪದೇ ಬಳಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಹಾಗೂ ತಪ್ಪು ಕಲ್ಪನೆ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕೇವಲ ರಾಜಕೀಯ ಟೀಕೆಯಲ್ಲ; ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ಗೌರವ ಮತ್ತು ವ್ಯಕ್ತಿತ್ವವನ್ನು ಅವಹೇಳನ ಮಾಡುವ ವ್ಯವಸ್ಥಿತ ಪಿತೂರಿಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಇಂತಹ ಪೋಸ್ಟ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
5,000 ಕೋಟಿ ಗೃಹಲಕ್ಷ್ಮೀ ನಂತರ ಅನ್ನಭಾಗ್ಯ 657 ಕೋಟಿ ಹಣವೂ ಗುಳುಂ: ಆರ್ ಅಶೋಕ್
ಬೆಂಗಳೂರು: ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಯಲಿಗೆ ಬಂದ ಗೃಹಲಕ್ಷ್ಮಿ ಹಗರಣಕ್ಕೆ ಇನ್ನೂ ಉತ್ತರ ಬಂದಿಲ್ಲ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪಾವತಿ ಆಗಬೇಕಾಗಿದ್ದ ₹5,000 ಕೋಟಿ ಗೃಹಲಕ್ಷ್ಮಿ ಹಣ ಏನಾಯ್ತು? ಯಾವಾಗ ಬಿಡುಗಡೆ ಆಗುತ್ತೆ? ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗದಿರುವಾಗಲೇ ಈಗ ಅನ್ನಭಾಗ್ಯದ ಹಣದಲ್ಲೂ ಭ್ರಷ್ಟಾಚಾರ ನಡೆದಿರುವ ವಾಸನೆ ಬರುತ್ತಿದೆ
ಮಹಿಳೆಯಿಂದ ಕಿರುಕುಳ ಆರೋಪ ಬೆನ್ನಲ್ಲೆ ಇಂದೋರ್ನ 'Dancing Cop' ರಂಜೀತ್ ಸಿಂಗ್ಗೆ ಹಿಂಬಡ್ತಿ
ಇಂದೋರ್: ಮಹಿಳೆಯೋರ್ವರು ಕಿರುಕುಳ ಆರೋಪಿಸಿದ ಬಳಿಕ ಇಂದೋರ್ನ 'ಡ್ಯಾನ್ಸಿಂಗ್ ಕಾಪ್'(Dancing Cop) ಎಂದೇ ಖ್ಯಾತಿ ಪಡೆದಿದ್ದ ರಂಜೀತ್ ಸಿಂಗ್ಗೆ ಪೊಲೀಸ್ ಇಲಾಖೆ ಹೆಡ್ ಕಾನ್ಸ್ಟೇಬಲ್ ಹುದ್ದೆಯಿಂದ ಕಾನ್ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿದೆ. ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಇಂದೋರ್ಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ರಂಜೀತ್ ಸಿಂಗ್ ವಿರುದ್ಧ ಮುಂಬೈನ ಮಹಿಳೆಯೊಬ್ಬರು ಆರೋಪಗಳನ್ನು ಮಾಡಿದ ನಂತರ ಅವರ ವಿರುದ್ಧ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಹಿಳೆಯ ಆರೋಪದ ಬಳಿಕ ರಂಜೀತ್ ಸಿಂಗ್ ವರ್ತನೆಯ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿತ್ತು. ವಿವಾದದ ನಂತರ ಪೊಲೀಸ್ ಇಲಾಖೆ ರಂಜೀತ್ ಸಿಂಗ್ ಅವರಿಗೆ ಹಿಂಬಡ್ತಿ ನೀಡಿದೆ. ನಂತರ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಡಿಸಿಪಿಗೆ ಹಸ್ತಾಂತರಿಸಲಾಗಿದೆ. ಆಂತರಿಕ ತನಿಖಾ ವರದಿಯ ಆಧಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ರಂಜೀತ್ ಸಿಂಗ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಆರೋಪವನ್ನು ಸುಳ್ಳು ಎಂದು ಹೇಳಿದ್ದು, ಪ್ರಚಾರ ಗಿಟ್ಟಿಸಿಕೊಳ್ಳಲು ಆರೋಪವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಇಂದೋರ್ನ ರಾಡ್ ಕ್ರಾಸಿಂಗ್ನಲ್ಲಿ ನೃತ್ಯ ಮಾಡುವ ಮೂಲಕ ಸಂಚಾರವನ್ನು ನಿರ್ವಹಿಸುವ ವಿಶಿಷ್ಟ ವಿಧಾನಕ್ಕೆ ರಂಜೀತ್ ಸಿಂಗ್ ಪ್ರಸಿದ್ಧರಾಗಿದ್ದರು. ವಿಭಿನ್ನ ರೀತಿಯಲ್ಲಿ ಸಂಚಾರ ಜಾಗೃತಿ ಮೂಡಿಸುವ ಮೂಲಕ ಅವರು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದರು.
ʻಅವ್ರು ಹಿಂದಿ ಹೇರಿಕೆ ನಿಲ್ಲಿಸಲ್ಲ, ನಾವು ಹೋರಾಟ ನಿಲ್ಲಿಸಲ್ಲʼ: ಡಿಎಂಕೆ ಸಂಸದೆ ಕನಿಮೊಳಿ
Tamil Nadu Language Conflict ಚೆನ್ನೈನ ಪಾರ್ಕ್ ಟೌನ್ ರೈಲು ನಿಲ್ದಾಣದಲ್ಲಿ ಇಂಗ್ಲಿಷ್ ನಾಮಫಲಕ ಅಳವಡಿಸುವ ಬದಲಾಗಿ ಹಿಂದಿ ನಾಮಫಲಕಗಳನ್ನು ಅಳವಡಿಸಿರುವುದರ ಕುರಿತು ಸಂಸದೆ ಕನಿಮೋಳಿ ಕಿಡಿಕಾರಿದ್ದಾರೆ. ಮತ್ತೆ ಕೇಂದ್ರ ತಮಿಳುನಾಡಿನಲ್ಲಿ ತನ್ನ ಭಾಷಾ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅವರು ಹೇರಿಕೆ ಮಾಡುವುದನ್ನು ನಿಲ್ಲಿಸದಿದ್ದರೆ ನಾವು ಪ್ರತಿಭಟನೆ ಮಾಡೋದನ್ನ ನಿಲ್ಲಿಸೋದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ
ಅಮೆರಿಕದಲ್ಲಿ ಕೋರ್ಟ್ ಸಮರಕ್ಕೆ ಸಜ್ಜಾದ ಅದಾನಿ, ಟ್ರಂಪ್ ಪರ ವಾದಿಸುವ ದಿಗ್ಗಜ ವಕೀಲನ ನೇಮಕ! ಏನಿದು ಕೇಸ್?
ಅಮೆರಿಕದ ಎಸ್ಇಸಿ ಹೂಡಿರುವ ವಂಚನೆ ಮತ್ತು ಲಂಚದ ಆರೋಪದ ಪ್ರಕರಣವನ್ನು ಎದುರಿಸಲು ಗೌತಮ್ ಅದಾನಿ ಅವರು ಖ್ಯಾತ ವಕೀಲ ರಾಬರ್ಟ್ ಗಿಯುಫ್ರಾ ಜೂನಿಯರ್ ಅವರನ್ನು ನೇಮಿಸಿಕೊಂಡಿದ್ದಾರೆ. ಗಿಯುಫ್ರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿಯೂ ವಕಾಲತ್ತು ವಹಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಪ್ರಕರಣಕ್ಕೆ ಚಾಲನೆ ನೀಡಲು ಎಸ್ಇಸಿ ಪ್ರಯತ್ನಿಸುತ್ತಿರುವಾಗ ಈ ನೇಮಕ ನಡೆದಿದೆ.
15 ಲಕ್ಷ ರೂಪಾಯಿ ನಾಯಿಗಾಗಿ ಖರ್ಚು ಮಾಡಿದ ಗಂಡ, ಹೆಂಡತಿ: ಕಾರಣ ಕೇಳಿದರೆ ಆಘಾತ ಗ್ಯಾರಂಟಿ... 15 Lakh Rupees
ನಾಯಿ ಅಂದ್ರೆ ನಮ್ಮ ಪ್ರಾಣ ಅಂತಾರೆ ಕೆಲವರು, ಇನ್ನೂ ಕೆಲವರು ತಾವು ಸಾಕಿದ ನಾಯಿಗಳಿಗಾಗಿ ಹಣ ನೀರಿನಂತೆ ಖರ್ಚು ಮಾಡುತ್ತಾರೆ. ಹೊರ ದೇಶಗಳಲ್ಲಿ ಮಾತ್ರ ಅಲ್ಲ ಭಾರತದಲ್ಲಿ ಕೂಡ ಇದೇ ರೀತಿ ಸಂಸ್ಕೃತಿ ಬೆಳೆದು ಬರುತ್ತಿದೆ, ಶ್ವಾನಗಳಿಗೆ ಐಷಾರಾಮಿ ಜೀವನ ಕೊಡುತ್ತಾರೆ ಮಾಲೀಕರು. ಹೀಗೆ ಇದ್ದಾಗ ಮುತ್ತಿನ ನಗರಿ ಹೈದರಾಬಾದ್ನಲ್ಲಿ ಇನ್ನೂ ವಿಚಿತ್ರ ಘಟನೆಯೊಂದು ಈಗ ನಡೆದಿದೆ.
ನಾಟಕ: ಆಳಿದ ಮಾಸ್ವಾಮಿಗಳು ರಚನೆ: ರವಿಕಿರಣ್ ಆರ್. ಬಳ್ಳಗೆರೆ ಬೆಳಕು: ಕೃಷ್ಣಕುಮಾರ್ ನಾರ್ಣಕಜೆ ಪ್ರಸಾಧನ: ಅಶ್ವಥ್ ಕದಂಬ, ನಾಗೇಶ್ ಹಾಡುಗಳು ರಚನೆ, ಸಂಗೀತ: ಗೋವಿಂದಸ್ವಾಮಿ ಗುಂಡಾಪುರ, ಹನಸೋಗೆ ಸೋಮಶೇಖರ್, ಸೋಸಲೆ ಗಂಗಾಧರ್, ನಾಗೇಶ್ ಕಂದೇಗಾಲ. ಸಂಗೀತ ಸಾಂಗತ್ಯ: ಕೃಷ್ಣ ಚೈತನ್ಯ, ಸುನೀಲ್ ನಾಯಕ, ವಿಶ್ವನಾಥ್ ಚಂಗಚಹಳ್ಳಿ ರಂಗ ಪರಿಕರ: ಮಧುಸೂದನ್ (ನೀನಾಸಂ) ಮುಖ್ಯ ಪಾತ್ರಧಾರಿಗಳ ವಸ್ತ್ರವಿನ್ಯಾಸ: ನಂದನಕುಮಾರ್ ನಾಟಕದ ವಸ್ತ್ರವಿನ್ಯಾಸ, ವಿನ್ಯಾಸ, ನಿರ್ದೇಶನ: ದಿನೇಶ್ ಚಮ್ಮಾಳಿಗೆ ರಂಗಸಜ್ಜಿಕೆ: ಅಯ್ಯಣ್ಣ, ಸುದೀಪ್, ಚಂದ್ರಶೇಖರ್, ವಿಶ್ವನಾಥ್ ‘‘ಸಾವಿರಾರು ವರುಷ ಕಳೆದರೂ ಸವೆಯದಂಥ ಸಾಧನೆಯ ಹಗಲಿರುಳು ಪರಿಹರಿಸಿ ಬಹುಜನರ ವೇದನೆಯ ಆಳರಸರಿಗೆ ಮಾದರಿಯಾದ ರಾಜಾ ಯೋಗಿಯ ಮರೆಯೋದುಂಟೆ ಮೈಸೂರ ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯಾ...’’ ಈ ಹಾಡನ್ನು ಮೈಸೂರು ಭಾಗದಲ್ಲಿ ಕೇಳದವರೇ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಈ ಹಾಡೂ ಈಗಲೂ ಜನಪ್ರೀತಿ ಗಳಿಸಿದೆ. ಇದನ್ನು ಗಾಯಕರಾದ ಜನ್ನಿ, ದೇವಾನಂದ್ ವರಪ್ರಸಾದ್ ಸೇರಿದಂತೆ ಅನೇಕರು ಹಾಡಿದ್ದಾರೆ, ಹಾಡುತ್ತಿದ್ದಾರೆ. ಇದು ‘ಆಳಿದ ಮಾಸ್ವಾಮಿಗಳು’ ನಾಟಕದಲ್ಲೂ ಇದೆ. ಇದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ನಾಟಕ. ಇದು ಮೈಸೂರು ರಂಗಾಯಣದಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಜನವರಿ 16ರಂದು ರಂಗಾಯಣದ ವನರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಬಹುರೂಪಿಯಲ್ಲಿ ಈ ನಾಟಕದ ಪ್ರದರ್ಶನಕ್ಕೆ ಮುಖ್ಯ ಕಾರಣ; ಮೀಸಲಾತಿಯನ್ನು ಜಾರಿಗೆ ತಂದವರು ನಾಲ್ವಡಿಯವರು. ‘ಈ ಜನಗಳು ತಮ್ಮ ಮನೆಯೊಳಗೆ ಸೇರಿಸಿಕೊಳ್ಳೋಕೆ ಹಿಂದೆಮುಂದೆ ನೋಡುವಾಗ ಆ ಕಾಲದಲ್ಲೇ ಅರಮನೆಯೊಳಗೆ ಬಿಟ್ಟುಕೊಂಡಿದ್ರು’ ಎನ್ನುವ ದಲಿತರ ಮೂಲಕ ನಾಲ್ವಡಿಯವರು ಮೀಸಲಾತಿಯನ್ನು, ಈ ಮೂಲಕ ಜನಸಾಮಾನ್ಯರಿಗೂ ಅರಮನೆ ಎಂಬುದನ್ನು ಸಾಬೀತುಪಡಿಸಿದ್ದರು. ಹೀಗಾಗಿ ‘ಬಹುರೂಪಿ’ಗೆ ತಮ್ಮ ನಾಟಕ ಸೂಕ್ತ ಆಯ್ಕೆಯೆಂದು ಸಾಬೀತುಪಡಿಸಿದವರು ಈ ನಾಟಕದ ನಿರ್ದೇಶಕ ದಿನೇಶ್ ಚಮ್ಮಾಳಿಗೆ. ಇದರಲ್ಲಿ ಅಭಿನಯಿಸಿದ ಎಪ್ಪತ್ತು ಕಲಾವಿದರಲ್ಲಿ ಅನೇಕರು ಹೊಸಬರು. ವಿವಿಧ ಉದ್ಯೋಗದೊಂದಿಗೆ ರಂಗಭೂಮಿ ನಂಟನ್ನು ಗಳಿಸಿಕೊಂಡು, ಬೆಳೆಸಿಕೊಂಡು ಬಂದ ಅವರನ್ನು ಬಳಸಿಕೊಂಡು ಈ ನಾಟಕ ಕಟ್ಟಿದ ದಿನೇಶ್ ಚಮ್ಮಾಳಿಗೆ ಅವರನ್ನು ಅಭಿನಂದಿಸುವೆ. ಅದರಲ್ಲೂ ತಮ್ಮ ನಾಟಕ ಕಟ್ಟುವ ಮೊದಲು ತಮ್ಮ ಕಲಾವಿದರಿಗೆ ಮೈಸೂರಿನ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ವಸ್ತುಸಂಗ್ರಾಹಲಯವನ್ನು ದಿನೇಶ್ ತೋರಿಸಿದ್ದಾರೆ. ಅದರಲ್ಲೂ ಅರಮನೆಯ ದರ್ಬಾರ್ ಹಾಲ್, ಸಿಂಹಾಸನವನ್ನು ತೋರಿಸಿ ಕಲಾವಿದರಿಗೆ ವಿವರಿಸಿದ್ದಾರೆ. ತಿಂಗಳವರೆಗೆ ಮೈಸೂರಿನ ಕಲಾಮಂದಿರದ ಆವರಣದಲ್ಲಿ ತಾಲೀಮು ನಡೆಸಿದ್ದರು. ಈಗಲೂ ಈ ನಾಟಕದ ತಾಲೀಮಿಗೆ ಕಲಾಮಂದಿರದ ಆವರಣವನ್ನು ಅವರು ಮೊರೆಹೋಗುತ್ತಾರ. ಇಂಥ ಮಹತ್ವಾಕಾಂಕ್ಷಿಯ ಈ ನಾಟಕದ ಮೂಲಕ ಈ ತಲೆಮಾರಿನವರಿಗೆ ನಾಲ್ವಡಿಯವರ ಸಾಧನೆ ಪರಿಚಯಿಸಬೇಕೆಂಬ ಅವರ ಉದ್ದೇಶ ಈಡೇರಿದೆ. ಇದನ್ನು ನಾಲ್ವಡಿ ಸೋಷಿಯಲ್ ಕಲ್ಚರಲ್ ಆಂಡ್ ಎಜುಕೇಷನಲ್ ಟ್ರಸ್ಟ್ ಮೂಲಕ ಅವರು ಪ್ರಸ್ತುತಪಡಿಸುತ್ತಿದ್ದಾರೆ. ಬಾಲ್ಯದ ನಾಲ್ವಡಿಯವರಿಂದ ಹಿಡಿದು ಅವರು ಮಹಾರಾಜರಾಗಿ ಆಡಳಿತ ನಡೆಸಿದ ಕುರಿತ ನಾಟಕವಿದು. ಕನ್ನಂಬಾಡಿ ಅಣೆಕಟ್ಟೆ ಕಟ್ಟುವಾಗ ಕೆಲಸಗಾರರನ್ನು ಪ್ರವಾಹದಿಂದ ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊನೆಗೆ ಮುಳುಗಿ ಪ್ರಾಣ ಬಿಟ್ಟ ಬ್ರಿಟಿಷ್ ಕ್ಯಾಪ್ಟನ್ ನಿಕೊಲಸ್ ದಾಸ್ ಅವರಿಂದ ಹಿಡಿದು ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಸ್ಮರಿಸುವ ನಾಟಕವಿದು. ಅದರಲ್ಲೂ ನೊಂದವರ ನೋವಿಗೆ ಸ್ಪಂದಿಸುತ್ತಿದ್ದ, ಮಹಾರಾಜರಾಗಿ ಮೆರೆಯದೆ ಸಾಮಾನ್ಯರ ಒಡೆಯರಾದ ನಾಲ್ವಡಿ ಅವರ ಬಗ್ಗೆ ಹಳೆಯ ಮೈಸೂರು ಭಾಗದಲ್ಲಿ ಈಗಲೂ ಅತ್ಯಂತ ಗೌರವ. ಮಹಾತ್ಮಾ ಗಾಂಧೀಜಿ ಅವರಿಂದ ‘ರಾಜರ್ಷಿ’ ಎಂದು ಕರೆಸಿಕೊಂಡ, ಬ್ರಿಟಿಷರಿಂದಲೂ ಗೌರವಕ್ಕೆ ಪಾತ್ರರಾದ, ಅಭಿವೃದ್ಧಿಯ ಹರಿಕಾರರಾದ ನಾಲ್ವಡಿಯವರ ಕನ್ನಂಬಾಡಿ ಅಣೆಕಟ್ಟೆ ಕಟ್ಟದಿದ್ದರೆ ಈ ಭಾಗ ನೀರಾವರಿ ಆಗುತ್ತಿರಲಿಲ್ಲ. ಇದರಿಂದ ಕುಡಿಯುವ ನೀರಿಗೆ ಮತ್ತು ಬೆಳೆಗೆ ಕೊರತೆಯಾಗದಂತೆ ನೋಡಿಕೊಂಡರು. ಈ ನಾಟಕದ ಮೊದಲ ದೃಶ್ಯದಲ್ಲಿ ತಮಟೆ ಬಡಿಯುವವರೂ ದೇವಸ್ಥಾನ ಬಾಗಿಲ ಬಳಿ ಬರುವುದನ್ನು ಕಂಡಾಗ ಊರವರು ‘‘ಕೇರಿಯವರೂ ದೇವಸ್ಥಾನದ ಒಳಗೆ ಬರುವ ಹಾಗಿದೆ’’ ಎಂದು ವಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೂ ಮೊದಲು ‘’ನೀವಿದ್ರೆ ಹಬ್ಬ’’ ಎಂದುದನ್ನು ಕೇರಿಯವರು ನೆನಪಿಸುತ್ತಾರೆ. ಆಗ ‘‘ನಮ್ಮ ತಾತ, ಮುತ್ತಾತನ ಕಾಲದಲ್ಲಿ ಹೀಗಿರಲಿಲ್ಲ. ನಾಲ್ವಡಿಯವರು ತಮ್ಮ ಅರಮನೆಗೆ ಪ್ರವೇಶ ಕೊಟ್ಟಿದ್ದರು’’ ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಹೀಗೆ ಆರಂಭವಾಗಿ ನಾಲ್ವಡಿಯವರ ಸಾಧನೆಗಳ ದೃಶ್ಯಗಳು ಅನಾವರಣಗೊಳ್ಳುತ್ತವೆ. ಹೀಗೆ ಹಿಂದುಳಿದವರ ಬಾಳಿಗೆ ಬೆಳಕಾದ ನಾಲ್ವಡಿಯವರ ಕುರಿತ ನಾಟಕ. ಆದರೆ ನಾಟಕ ಕುರಿತ ಟಿಪ್ಪಣಿಯಲ್ಲಿ ‘ಇದು ನಾಟಕವಾ? ಇದು ಜೀವನ ಚರಿತ್ರೆಯಾ? ಇದು ದೃಶ್ಯಗಳನ್ನು ಹೊಲಿದು ಕಟ್ಟಿದ ರೂಪಕವಾ? ಅಸಲು ಇದಕ್ಕೊಂದು ಹೆಸರು ಕಟ್ಟಿ ಒಂದು ವಿಭಾಗಕ್ಕೆ ಸೇರಿಸಲು ಸಾಧ್ಯವಾಗದು. ಇದು ನಾಲ್ವಡಿ ಎನ್ನುವ ನಮ್ಮೊಳಗಿನ ಅಂತಃಸತ್ವದ ಸಾಕ್ಷಿಪ್ರಜ್ಞೆಯ ಅವತರಿಣಿಕೆ ಅಷ್ಟೆ. ಇದು ಒಂದೊಂದು ಪ್ರದರ್ಶನಕ್ಕೂ ಬದಲಾಗುವ, ಬದಲಾಗಬೇಕಿರುವ ಜೀವಂತ ಹೊನಲು ಅವರ ಋಣಭಾರ ಹೊತ್ತಿರುವ ಸಕಲರೂ ಅನುದಿನವೂ ನೆನೆಯಬೇಕಿದ್ದ ಕಾಲಘಟ್ಟದಲ್ಲಿ ಕೇವಲ ಜೂನ್ 4ರಂದು ಮಾತ್ರ ಅವರನ್ನು ನೆನೆದು ಅವರ ಹೆಸರಿಗೊಂದು ಜಯಂತಿ ಮಾಡಿ, ಮುಗಿಸುವ ವ್ಯಕ್ತಿತ್ವವಲ್ಲ. ಅದು ನಿತ್ಯ ನಿರಂತರ ನಿತ್ಯೋತ್ಸವ. ದಿನಂಪ್ರತಿ ದೇದೀಪ್ಯಮಾನವಾಗಿ ಪ್ರಜ್ವಲಿಸುವ ಜೀವ ಜ್ಯೋತಿ. ಅದು ಅಖಂಡ ಪ್ರಭೆಯಲ್ಲಿ ದಾರಿ ಕಾಣುತ್ತಿರುವ ಕರುನಾಡಿನ ಕೋಟಿ ಕೋಟಿ ಮನಸ್ಸುಗಳಲ್ಲಿ ಅಚ್ಚೊತ್ತಬೇಕಾದ ತೇಜಸ್ಸು’ ಎನ್ನುವುದು ದಿಟ. ಬಾಲ್ಯದ ನಾಲ್ವಡಿಯವರಿಂದ ಅವರು ಬೆಳೆದ ಬಗೆಯ ಜೊತೆಗೆ ಜಾತಿ, ಮತ, ಧರ್ಮ, ರಾಜಕೀಯ ಮೀರಿ ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುವ ನಾಟಕವಿದಾಗಿದೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಹೊಸ ಕಲಾವಿದರ ಉತ್ಸಾಹ ದೊಡ್ಡದು. ಆದರೆ ಇನ್ನಷ್ಟು ತಾಳ್ಮೆಯಿಂದ ಕಲಾವಿದರು ಅಭಿನಯಿಸಬೇಕು ಅಂದರೆ ನಾಟಕವಾಡುತ್ತಿದ್ದೇವೆ ಎಂದು ತಿಳಿಯದೆ ಪಾತ್ರಗಳನ್ನು ಅನುಭವಿಸಿ ಅಭಿನಯಿಸಿದರೆ ಇನ್ನಷ್ಟು ಯಶಸ್ವಿಯಾಗಲಿದೆ.
ಗಾಂಧಿಯನ್ನು ಕೊಂದ ವಿಚ್ಛಿದ್ರಕಾರಿ ಮನಸ್ಥಿತಿಗಳೇ ಇಂದು ಗಾಂಧಿಯ ಸಿದ್ಧಾಂತವನ್ನು ಕೊಲ್ಲುತ್ತಿವೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಅಂದು ಮಹಾತ್ಮ ಗಾಂಧಿಯನ್ನು ಹತ್ಯೆಗೈದ ಮನಸ್ಥಿತಿಗಳು ಇಂದು ಗಾಂಧಿಯ ಸಿದ್ಧಾಂತವನ್ನು ನಿತ್ಯವೂ ಕೊಲ್ಲುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ಇಡೀ ವಿಶ್ವವೇ ಒಪ್ಪಿಕೊಂಡು ಅಪ್ಪಿಕೊಂಡಿರುವ ಗಾಂಧಿ ಹಾಗೂ ಗಾಂಧಿವಾದವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ. ದ್ವೇಷ, ಹಿಂಸೆ ಮತ್ತು ಮತೀಯವಾದದತ್ತ ವಾಲುತ್ತಿದ್ದ ಭಾರತೀಯ ಸಮಾಜವನ್ನು ಸತ್ಯ, ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ಸಂತ ಮಹಾತ್ಮ ಗಾಂಧಿಯವರು, ಅದೇ ಮೌಲ್ಯಗಳ ಕಾರಣಕ್ಕೆ ಕೊನೆಗೆ ಹುತಾತ್ಮರಾಗಬೇಕಾದದ್ದು ದುರಂತಕರ ಸಂಗತಿ ಎಂದು ಸಿಎಂ ಹೇಳಿದ್ದಾರೆ. ಜಾತಿ, ಧರ್ಮ ಮತ್ತು ಗಡಿಗಳನ್ನು ಮೀರಿ ಲೋಕದ ನೋವಿಗೆ ಸ್ಪಂದಿಸಿದ್ದ ಮಹಾತ್ಮ ಗಾಂಧಿ ಒಬ್ಬ ದಾರ್ಶನಿಕ, ಸಂತ ಮತ್ತು ಮಾನವತಾವಾದಿ. ಅಂಥ ಮಹಾನ್ ವ್ಯಕ್ತಿತ್ವಕ್ಕೆ ಕೋಟಿ ಕೋಟಿ ನಮನಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ.
ಬಂಗಾರದ ಭಾರೀ ಕುಸಿತಕ್ಕೆ ಕಾರಣವೇನು?; ಇಂದಿನ ದರವೆಷ್ಟು?
ಬೆಳ್ಳಿ ಬೆಲೆಯಲ್ಲೂ ಕುಸಿತ
Ajit Pawar: ನಾವು ವಿಮಾನದಲ್ಲಿ ಪ್ರಯಾಣಿಸುವಾಗ…: ಬಾರಾಮತಿ ವಿಮಾನ ಅಪಘಾತದ ಬೆನ್ನಲ್ಲೇ ಅಜಿತ್ ಪವಾರ್ ಟ್ವೀಟ್ ವೈರಲ್
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಜನವರಿ 28ರ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅಜಿತ್ ಪವಾರ್ ನಿಧನದ ನಂತರ ಅವರು ಎರಡು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ
ಕಲಬುರಗಿ| ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಾಧ್ಯಾಪಕ ಮೃತ್ಯು
ಕಲಬುರಗಿ: ಬೈಕ್ ಸ್ಕಿಡ್ ಆಗಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ (49) ಅವರು ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ನಗರದ ಹೊಸ ಆರ್ ಟಿಒ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ. ಸದ್ಯ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಎನ್ಎಸ್ಎಸ್ ಅಧಿಕಾರಿಯೂ ಆಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಅಪಾಯಕಾರಿ ಪ್ಲಾಟ್ಫಾರ್ಮ್ ಅಂತರಗಳನ್ನು ನಿವಾರಿಸುವುದು ಭಾರತೀಯ ರೈಲ್ವೆಯ ಕರ್ತವ್ಯ
ರೈಲು ನಿಲ್ದಾಣಗಳಲ್ಲಿನ ಅಪಾಯಕಾರಿ ಪ್ಲಾಟ್ಫಾರ್ಮ್ ಮತ್ತು ರೈಲು ಮಧ್ಯದ ಅಂತರಗಳನ್ನು ನಿವಾರಿಸುವುದು ಭಾರತೀಯ ರೈಲ್ವೆಯ ಮೂಲಭೂತ ಕರ್ತವ್ಯವಾಗಿದ್ದು, ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ಲೋಪ ಸಹಿಸಲಾಗದು ಎಂದು ಮಹಾರಾಷ್ಟ್ರ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ಪಶ್ಚಿಮ ರೈಲ್ವೆಯನ್ನು ಗಂಭೀರ ನಿರ್ಲಕ್ಷ್ಯಕ್ಕೆ ಹೊಣೆಗಾರನಾಗಿ ಘೋಷಿಸಿ, ಬೊರಿವಿಲಿ ನಿಲ್ದಾಣದಲ್ಲಿ ನಡೆದ ಅಪಘಾತದ ಪ್ರಕರಣದಲ್ಲಿ ಬಾಧಿತರಿಗೆ ರೂ. 27 ಲಕ್ಷ ಪರಿಹಾರ ನೀಡಲು ಆದೇಶಿಸಿದೆ. ಪ್ಲಾಟ್ಫಾರ್ಮ್ ಎತ್ತರವೇ ಅಪಘಾತಕ್ಕೆ ಕಾರಣ 2014ರಲ್ಲಿ ಬೊರಿವಿಲಿ ರೈಲು ನಿಲ್ದಾಣದಲ್ಲಿ ಸುರ್ಯನಗರಿ ಎಕ್ಸ್ಪ್ರೆಸ್ ರೈಲಿಗೆ ಹತ್ತಲು ಯತ್ನಿಸಿದ ವೇಳೆ, ಎಲ್ಐಸಿ ಏಜೆಂಟ್ ಹಿತೇಂದ್ರ ಜೋಷಿ ಅವರು ಪ್ಲಾಟ್ಫಾರ್ಮ್ ಮತ್ತು ರೈಲು ನಡುವಿನ ಅಂತರಕ್ಕೆ ಜಾರಿ ಬಿದ್ದಿದ್ದರು. ಚಲಿಸುತ್ತಿದ್ದ ರೈಲು ಅವರ ಎರಡೂ ಕಾಲುಗಳ ಮೇಲೆ ಹರಿದು ಹೋಗಿದ್ದು, ಎರಡೂ ಕಾಲುಗಳನ್ನು ಮಣಿಕಟ್ಟಿನ ಮೇಲ್ಭಾಗದಲ್ಲಿ ಕತ್ತರಿಸಬೇಕಾಯಿತು. ಆಯೋಗದ ಮುಂದೆ ಸಲ್ಲಿಸಲಾದ ದೂರಿನಲ್ಲಿ, ಪ್ಲಾಟ್ಫಾರ್ಮ್ ಎತ್ತರವು Research Designs and Standards Organisation (RDSO)ನ ಭದ್ರತಾ ಮಾನದಂಡಗಳಿಗೆ ಹೊಂದಿಕೆಯಾಗಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದೇ ಸಮಸ್ಯೆ ಕೊಂಕಣ ರೈಲು ಮಾರ್ಗ ಹಾಗೂ ಮಂಗಳೂರು ಬೆಂಗಳೂರು ರೈಲು ಮಾರ್ಗದಲ್ಲಿಯೂ ವ್ಯಾಪಕವಾಗಿದೆ. ಆಂಬುಲೆನ್ಸ್ ಬದಲು ಲಗೇಜ್ ಟ್ರಾಲಿಯಲ್ಲಿ ಸಾಗಣೆ ಅಮಾನವೀಯ ವರ್ತನೆ ಅಪಘಾತದ ನಂತರ ಗಾಯಗೊಂಡ ಜೋಷಿಯವರನ್ನು ಆಂಬುಲೆನ್ಸ್ ನಲ್ಲಿ ಕರೆದೊಯ್ಯಬೇಕಾದ ರೈಲ್ವೆ ಸಿಬ್ಬಂದಿ, ಅವರನ್ನು ಲಗೇಜ್ ಟ್ರಾಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯಾವುದೇ ವೈದ್ಯಾಧಿಕಾರಿ ಜೊತೆಗಿರಲಿಲ್ಲ. ಅಲ್ಲದೆ, ಮೊದಲಿಗೆ ಕರೆದೊಯ್ದ ಆಸ್ಪತ್ರೆಯಲ್ಲಿ ಅಗತ್ಯವಾದ ನಿಗದಿತ ಸೌಲಭ್ಯಗಳೇ ಇರಲಿಲ್ಲ ಎಂದು ಆಯೋಗ ಕಟುವಾಗಿ ಟೀಕಿಸಿದೆ. ಇಂತಹದ್ದೇ ಘಟನೆ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದರೆ, ಪ್ರಯಾಣಿಕರ ಜೀವ ಉಳಿಸುವ ಯಾವುದೇ ರೀತಿಯ ಸೂಕ್ತ ಅವಕಾಶವಿಲ್ಲ. ‘‘ಇದು ಕೇವಲ ಅಪಘಾತವಲ್ಲ, ಬಳಿಕ ನಡೆದ ವರ್ತನೆಯೂ ಸಹ ಗಂಭೀರ ನಿರ್ಲಕ್ಷ್ಯದ ಉದಾಹರಣೆ’’ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ರೈಲ್ವೆಯ ವಾದ ತಿರಸ್ಕೃತ ಪಶ್ಚಿಮ ರೈಲ್ವೆ, ಜೋಷಿ ಅವರು ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿದ್ದು ಅವರದೇ ತಪ್ಪು ಎಂದು ವಾದಿಸಿತು. ಜೊತೆಗೆ ಅವರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು ಎಂದು ಆರೋಪಿಸಲಾಯಿತು. ಆದರೆ, ಜೋಷಿ ಅವರು ಬೊರಿವಿಲಿಯಿಂದ ವಲ್ಸಾಡ್ಗೆ ಮಾನ್ಯ ಟಿಕೆಟ್ ಹೊಂದಿದ್ದನ್ನು ಆಯೋಗ ದೃಢಪಡಿಸಿದೆ. ಸಿಬ್ಬಂದಿ ಸುರಕ್ಷತಾ ಪ್ರೋಟೊಕಾಲ್ ಪಾಲಿಸಿದ್ದಾರೆ ಎಂಬುದನ್ನು ರೈಲ್ವೆ ಸಾಬೀತುಪಡಿಸಲು ವಿಫಲವಾಯಿತು. ಜೀವನಪೂರ್ತಿ ನೋವು, ಶೇ. 90 ಶಾಶ್ವತ ಅಂಗವೈಕಲ್ಯ ಈ ಅಪಘಾತದಿಂದ ಜೋಷಿ ಅವರ ಉದ್ಯೋಗ ಜೀವನ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಅವರಿಗೆ ಶೇ. 90 ಶಾಶ್ವತ ಅಂಗವೈಕಲ್ಯ ಉಂಟಾಗಿದೆ. ಈಗಾಗಲೇ ರೂ. 20.7 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ವೆಚ್ಚ ಭರಿಸಲಾಗಿದ್ದು, ಮುಂದಿನ ಪುನಶ್ಚೇತನ ಚಿಕಿತ್ಸೆಗೆ ರೂ. 23 ಲಕ್ಷ ಹಾಗೂ ಕೃತಕ ಕಾಲುಗಳಿಗೆ ರೂ. 5.8 ಲಕ್ಷ ಅಗತ್ಯವಿದೆ. ಕೊಂಕಣ ಮತ್ತು ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ತಕ್ಷಣ ಕ್ರಮ ಅಗತ್ಯ ಈ ತೀರ್ಪು, ಕೊಂಕಣ ರೈಲು ಮಾರ್ಗ ಹಾಗೂ ಮಂಗಳೂರು-ಬೆಂಗಳೂರು ಮಾರ್ಗದ ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಎತ್ತರ ಮತ್ತು ಅಂತರವನ್ನು ತಕ್ಷಣ ಪರಿಶೀಲಿಸಿ ಸರಿಪಡಿಸಬೇಕಾದ ಅಗತ್ಯವನ್ನು ಮತ್ತೆ ಒತ್ತಿ ಹೇಳುತ್ತದೆ. ಪ್ರಯಾಣಿಕರ ಸುರಕ್ಷತೆ ಕೇವಲ ಘೋಷಣೆಯಲ್ಲ, ಅದು ಕಡ್ಡಾಯ ಕರ್ತವ್ಯ ಎಂದು ಈ ಪ್ರಕರಣ ಸ್ಪಷ್ಟಪಡಿಸಿದೆ. ಪ್ರಯಾಣಿಕರ ಜೀವಕ್ಕೆ ಬೆಲೆ ಕಟ್ಟಲಾಗದು. ರೈಲ್ವೆ ಮೂಲಸೌಕರ್ಯದಲ್ಲಿ ಸುರಕ್ಷತೆ ಮೊದಲ ಆದ್ಯತೆಯಾಗಬೇಕು -ಒಲಿವರ್ ಡಿ’ಸೋಜಾ ಕಾರ್ಯಕಾರಿ ಕಾರ್ಯದರ್ಶಿ, ಮುಂಬೈ ರೈಲು ಯಾತ್ರಿ ಸಂಘ
ವಿಧಾನಸಭೆಯಲ್ಲಿ ಧರ್ಮಸ್ಥಳ ವಿಚಾರ ಪ್ರಸ್ತಾಪ: ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದ ಸುರೇಶ್ ಕುಮಾರ್
ವಿಧಾನಸಭೆಯಲ್ಲಿ ಧರ್ಮಸ್ಥಳದ ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ಎಸ್ಐಟಿ ತನಿಖೆಯ ಸ್ಥಿತಿಗತಿ, ಮಧ್ಯಂತರ ವರದಿ ನೀಡದಿರುವುದು, ಹಾಗೂ ಶ್ರದ್ಧಾ ಕೇಂದ್ರದ ಬಗ್ಗೆ ಅಪನಂಬಿಕೆ ಮೂಡಿಸುವ ಪ್ರಯತ್ನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬಳ್ಳಾರಿ ಗಲಾಟೆ ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆಯೂ ಕಿಡಿಕಾರಿದರು. ಈ ವೇಳೆ, ಒಳ ಜಗಳದಿಂದ ಕೂಡಿರುವ ಈ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ʻನಿಮ್ಮ ಜೊತೆ ಚರ್ಚೆಗೆ ನಮ್ಮ BMTC MD ರೆಡಿ, ಧೈರ್ಯವಿದ್ದರೆ ಬನ್ನಿʼ; ಮೋಹನ್ದಾಸ್ ಪೈಗೆ ಸಾರಿಗೆ ಸಚಿವರ ಸವಾಲ್
ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಯೋಕಾನ್ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರ ಹಗ್ಗ ಜಗ್ಗಾಟಕ್ಕೆ ಕೊನೆ ಹಾಡಿದ ನಂತರ ಈಗ ಉದ್ಯಮಿ ಮೋಹನ್ದಾಸ್ ಪೈ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ಜಟಾಪಟಿ ಶುರುವಾಗಿದೆ. ಬಿಎಂಟಿಸಿ ಬಸ್ ವ್ಯವಸ್ಥೆ ಸರಿಯಿಲ್ಲ. ಖಾಸಗಿ ಸಾರಿಗೆಗೆ ಅವಕಾಶ ಕೊಡಿ ಎಂದು ದನಿ ಎತ್ತಿದ ಉದ್ಯಮಿಗೆ ರಾಮಲಿಂಗಾರೆಡ್ಡಿ ಅವರು ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಹಾಗೆ ಬ್ಯಾಲೆನ್ಸ್ ಶೀಟ್ ನೋಡೋರಲ್ಲ. ಹಳ್ಳಿಗಳಲ್ಲಿರುವ ಜನರಿಗೆ ಬಸ್ ಸೇವೆ ಕಡಿಮೆ ದರದಲ್ಲಿ ನೀಡೋದು ನಮ್ಮ ಉದ್ದೇಶ. ನಮಗೆ ಲಾಭ ಮಾಡಿಕೊಳ್ಳೋದು ಮುಖ್ಯ ಅಲ್ಲ. ಸಾರ್ವಜನಿಕರ ಸೇವೆ ಮುಖ್ಯ ಎಂದಿದ್ದಾರೆ. ಜೊತೆಗೆ ಟ್ವೀಟ್ ಮಾಡೋದು ಬಿಟ್ಟು ಚರ್ಚೆಗೆ ಬನ್ನಿ ಎಂದು ಸವಾಲ್ಹಾಕಿದ್ದಾರೆ.
ಕೊಪ್ಪಳ | ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ- ಕಚೇರಿ, ಕುಟುಂಬದ ಒಡೆತನದ ಶಾಲೆಯ ಮೇಲೆ ಲೋಕಾಯುಕ್ತ ದಾಳಿ
ಕೊಪ್ಪಳ : ಕಿಮ್ಸ್ (ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಡಳಿತಾಧಿಕಾರಿ ಬಿ.ಕಲ್ಲೇಶ ಅವರ ಮನೆ, ಕುಟುಂಬದ ಒಡೆತನದಲ್ಲಿರುವ ಶಾಲೆ–ಕಾಲೇಜು ಹಾಗೂ ಕಿಮ್ಸ್ನಲ್ಲಿನ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆಯೆಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಅಧಿಕಾರಿಗಳು ವಿವಿಧ ತಂಡಗಳಾಗಿ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಿ. ಕಲ್ಲೇಶ ಅವರ ಕುಟುಂಬಕ್ಕೆ ಸಂಬಂಧಿಸಿದ ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿರುವ ನವಚೇತನ ಶಾಲೆ ಮತ್ತು ಕಾಲೇಜು, ಹಾಗು ಕಿಮ್ಸ್ ಕಚೇರಿಯಲ್ಲಿ ಹಣಕಾಸು ಹಾಗೂ ಆಸ್ತಿ ಸಂಬಂಧಿತ ದಾಖಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಇವರ ಹೆಸರು ಕೇಳಿಬಂದಿದ್ದು, ಆ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತ್ತು ಕೂಡ ಆಗಿದ್ದರು ಎಂದು ತಿಳಿದು ಬಂದಿದೆ.
ಚಾಮರಾಜನಗರ | ಹಸಮಣೆ ಏರಬೇಕಿದ್ದ ವರನ ಮೇಲೆ ಚಾಕು ಇರಿತ: ನಿಗದಿಯಾಗಿದ್ದ ಮದುವೆ ರದ್ದು
ಚಾಮರಾಜನಗರ : ಹಸಮಣೆ ಏರಬೇಕಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಯತ್ನ ನಡೆಸಿದ ಪರಿಣಾಮ, ನಿಗದಿಯಾಗಿದ್ದ ಮದುವೆ ರದ್ದಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹ, ಗುರುವಾರ ರಾತ್ರಿ ನಡೆದ ಹಲ್ಲೆಯ ಹಿನ್ನೆಲೆ ರದ್ದಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಕುಣಿಗಳ್ಳಿ ಗ್ರಾಮದ ರವೀಶ್ ಎಂಬವರು ಕಾರಿನಲ್ಲಿ ಕಲ್ಯಾಣ ಮಂಟಪದತ್ತ ಆಗಮಿಸುತ್ತಿದ್ದ ವೇಳೆ, ಎಂ.ಜಿಎಸ್.ವಿ ಕಾಲೇಜು ರಸ್ತೆಯಲ್ಲಿ 4–5 ಜನರಿದ್ದ ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಈ ವೇಳೆ ದುಷ್ಕರ್ಮಿಗಳು ವರ ರವೀಶ್ಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಯ ಸಂದರ್ಭ ವರನ ಸಂಬಂಧಿಕರು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ರವೀಶ್ ಅವರನ್ನು ತಕ್ಷಣವೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹವನ್ನು ರದ್ದುಗೊಳಿಸಿದ ವರನ ಪೋಷಕರು ಮತ್ತು ಕುಟುಂಬಸ್ಥರು ಮದುವೆ ಮನೆಯಿಂದ ಹಿಂದಿರುಗಿದ್ದಾರೆ.
Gold Rate Jan 30: ಚಿನ್ನ ಪ್ರಿಯರಿಗೆ ಶುಕ್ರವಾರವು ಶುಭ ಶುಕ್ರವಾರವಾಗಿ ಬದಲಾಗಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಹಾಗೂ ಗುರುವಾರ ಒಂದೇ ದಿನ 11,000 ಸಾವಿರ ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ / ಜನವರಿ 30ರಂದು ಭರ್ಜರಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಶುಕ್ರವಾರದಂದು ಬರೋಬ್ಬರಿ 8,230 ರೂಪಾಯಿ ಕಡಿಮೆಯಾಗಿದೆ. ಜನವರಿ 30ರ ಚಿನ್ನ
ಕೇಂದ್ರ-ರಾಜ್ಯ ಸಂಬಂಧ ಮರು ಚಿಂತನೆ ಅಗತ್ಯ
ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ. ರಾಜ್ಯ ಸರಕಾರ- ರಾಜ್ಯಪಾಲರ ನಡುವಣ ಸಂಘರ್ಷ ಅತಿರೇಕಕ್ಕೆ ತಲುಪಿದೆ. ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರಗಳನ್ನು ವಜಾ ಮಾಡುತ್ತಿದ್ದ ಕೇಂದ್ರದ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬಳಿಕ ರಾಜ್ಯಗಳ ಮೇಲೆ ಸವಾರಿ ಮಾಡಲು ಹೊಸ ಮಾರ್ಗ ಹಿಡಿಯಲಾಗಿದೆ. ಇತ್ತೀಚೆಗೆ ಕರ್ನಾಟಕ, ಕೇರಳ, ತಮಿಳುನಾಡು ಶಾಸನ ಸಭೆಗಳಲ್ಲಿ ನಡೆದ ರಾಜ್ಯಪಾಲರ ‘ಹೈ ಡ್ರಾಮಾ’ ಇದಕ್ಕೊಂದು ಉದಾಹರಣೆ. ‘ರಾಜಭವನ ರಾಜಕೀಯ ಪುನರ್ವಸತಿ ಕೇಂದ್ರ’ ಸಾಮಾನ್ಯವಾಗಿ ಪ್ರಮುಖ ರಾಜಕೀಯ ಹುದ್ದೆಗಳು ಕೈತಪ್ಪುವ ಪಕ್ಷದ ನಾಯಕರಿಗೆ ರಾಜ್ಯಪಾಲರ ಹುದ್ದೆಗೆ ನೇಮಿಸ ಲಾಗುತ್ತದೆ. ಇದೊಂದು ಆಲಂಕಾರಿಕ ಹುದ್ದೆಯಾದರೂ, ರಾಜಕೀಯ ನೇಮಕವಾಗಿರುವುದರಿಂದ ‘ರಾಜಕೀಯ ಚದುರಂಗದಾಟ’ಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ರಾಜ್ಯಪಾಲರಿಗೆ ಬಗ್ಗಲು ಹೇಳಿದರೆ, ತೆವಳುತ್ತಾರೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಪಾಲರೂ ಮಾಡಿದ್ದು ಇದನ್ನೇ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಬದಲು ಎನ್ಡಿಎ ಸರಕಾರ ಜಾರಿಗೊಳಿಸಿರುವ ‘ವಿಬಿ- ಜಿ ರಾಮ್ ಜಿ’ಯನ್ನು ವಿರೋಧಿಸುತ್ತಿರುವ ರಾಜ್ಯ ಸರಕಾರಗಳಿಗೆ ಬೆಂಬಲವಾಗಿ ನಿಲ್ಲದೆ ಪಲಾಯನ ಮಾಡಿದ್ದಾರೆ. ಕೇಂದ್ರ ಸರಕಾರವನ್ನು ಓಲೈಸಲು ಮೂವರು ರಾಜ್ಯಪಾಲರು ಮೂರು ದಾರಿ ಹಿಡಿದರು. ರಾಜ್ಯಗಳಿಗೆ ಸೆಡ್ಡು ಹೊಡೆದು, ಸಂವಿಧಾನಕ್ಕೆ ಅಪಚಾರ ಎಸಗಿದರು. ಕರ್ನಾಟಕದ ಕಾಂಗ್ರೆಸ್ ಸರಕಾರ ಸಿದ್ಧಪಡಿಸಿದ್ದ ಭಾಷಣದ ಒಂದೆರಡು ವಾಕ್ಯವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಓದಿದರು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಕೆಲ ಆಯ್ದ ಭಾಗಗಳನ್ನು ಓದಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಭಾಷಣ ಓದದೆ ಹಿಂದಿರುಗಿದರು. ಹೊಸ ಶಿಕ್ಷಣ ನೀತಿ ಭಾಗವಾಗಿರುವ ‘ಪಿಎಂಶ್ರೀ’ ಯೋಜನೆಯನ್ನು ಕೇರಳ ಜಾರಿಗೊಳಿಸಿಲ್ಲ. ಈ ಕಾರಣಕ್ಕೆ ಕೇಂದ್ರ ಸರಕಾರ ವಿವಿಧ ಶೈಕ್ಷಣಿಕ ಯೋಜನೆಯಡಿ ಸುಮಾರು ಎರಡು ಸಾವಿರ ಕೋಟಿ ರೂ. ಅನುದಾನ ತಡೆಹಿಡಿದಿರುವುದನ್ನು ಎಲ್ಡಿಎಫ್ ಸರಕಾರ ಖಂಡಿಸಿದೆ. ಮನರೇಗಾ ಹೆಸರು ಮತ್ತು ಸ್ವರೂಪ ಬದಲಾಯಿಸಿ, ‘ವಿಬಿ- ಜಿ ರಾಮ್ ಜಿ’ ಜಾರಿಗೊಳಿಸಿದ್ದನ್ನು ಸಿದ್ದರಾಮಯ್ಯ ಸರಕಾರ ವಿರೋಧಿಸಿದೆ. ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟಕ್ಕೆ ಕೊನೆ ಇಲ್ಲವಾಗಿದೆ. ರಾಜ್ಯಪಾಲರು ಶಾಸನ ಸಭೆಯಲ್ಲಿ ಭಾಷಣ ಮಾಡದಿರುವುದು ಮೂರನೇ ಸಲ. ಡಿಎಂಕೆ ಸರಕಾರಕ್ಕೆ ಕಾಟ ಕೊಡುವುದಕ್ಕಾಗಿಯೇ ರವಿ ಅವರನ್ನು ತಮಿಳುನಾಡಿಗೆ ಕಳಿಸಿದಂತಿದೆ ಈ ಮೊದಲು ಶಾಸನಸಭೆ ಅಂಗೀಕರಿಸಿದ್ದ 10 ಮಸೂದೆಗಳಿಗೆ ರವಿ ಅಂಕಿತ ಹಾಕದೆ ತಡೆ ಹಿಡಿದಿದ್ದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್, ಮಸೂದೆ ತಡೆಹಿಡಿದ ರಾಜ್ಯಪಾಲರ ಕ್ರಮವನ್ನು ಆಕ್ಷೇಪಿಸಿತು. ‘ಇದು ಕಾನೂನುಬಾಹಿರ, ದೋಷ ಪೂರಿತ’. ನಿರ್ದಿಷ್ಟ ಅವಧಿಯೊಳಗೆ ರಾಜ್ಯಪಾಲರು ಕ್ರಮ ಕೈಗೊಳ್ಳದಿದ್ದರೆ, ‘ಪರಿಭಾವಿತ ಸಮ್ಮತಿ ದೊರೆತಿದೆ’ ಎಂದು ಪರಿಗಣಿಸಬಹುದು ಎಂಬ ತೀರ್ಪು ನೀಡಿತು. ಅಲ್ಲದೆ, ರಾಜ್ಯಪಾಲರ ಕ್ರಮಕ್ಕೆ ಕಾಲಮಿತಿ ನಿಗದಿಪಡಿಸಿತು. ಈ ತೀರ್ಪನ್ನು ಕೋರ್ಟ್ ಬಳಿಕ ಪರಾಮರ್ಶೆಗೆ ಒಳಪಡಿಸಿತ್ತು. ಇನ್ನು ರಾಜ್ಯಪಾಲರ ಭಾಷಣದ ವಿಷಯಕ್ಕೆ ಮರಳಿದರೆ, ಸಂವಿಧಾನದ 163ನೇ ಕಲಂ ಅನ್ವಯ, ರಾಜ್ಯ ಸರಕಾರದ (ಸಚಿವ ಸಂಪುಟ) ಸಲಹೆ ಅಂತಿಮ. ರಾಜ್ಯಪಾಲರ ಒಲವು- ನಿಲುವುಗಳಿಗೆ ಅವಕಾಶವಿಲ್ಲ. 176ನೇ ಕಲಂನಲ್ಲಿ ಹೇಳಿರುವಂತೆ, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯ ಸರಕಾರ ಅನುಮೋದಿಸಿದ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಭಾಷಣದಲ್ಲಿರುವ ಎಲ್ಲ ಅಂಶಗಳನ್ನು ಪ್ರಸ್ತಾಪಿಸಬೇಕು. ಸಣ್ಣಪುಟ್ಟ ಬದಲಾವಣೆಗೂ ರಾಜ್ಯಪಾಲರಿಗೆ ಅಧಿಕಾರವಿಲ್ಲ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಪಾಲರು ಶಾಸನಸಭೆಯಲ್ಲಿ ನಡೆದುಕೊಂಡ ರೀತಿ ವಿಭಿನ್ನವಾದರೂ ಉದ್ದೇಶ ಮಾತ್ರ ಒಂದೇ. ಬಿಜೆಪಿಯೇತರ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ವಿಮರ್ಶಾರ್ಹ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ಮುಂದಿನ ಕ್ರಮ ಕುರಿತು ಚರ್ಚಿಸಬೇಕು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲರ ನಡೆಯನ್ನು ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಜ್ಯಪಾಲರ ಭಾಷಣ ರದ್ದುಪಡಿಸಲು ಸಂವಿಧಾನ ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ನಡೆದ ಸಮಾಜವಾದಿಗಳ ಸಮಾವೇಶದಲ್ಲಿ, ಕೇಂದ್ರದ ಅನುದಾನ ಹಂಚಿಕೆ ಬಗ್ಗೆ ಚರ್ಚಿಸಲು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಯೇತರ ರಾಜ್ಯಗಳು ಒಟ್ಟಾಗಿ ಕಾನೂನು- ರಾಜಕೀಯ ಹೋರಾಟ ನಡೆಸಿದರೆ ಬೇಡಿಕೆಗೂ ಬಲ ಬರಲಿದೆ. ‘ರಾಜ್ಯಪಾಲರ ಜತೆ ರಾಜ್ಯ ಸರಕಾರ ಸಂಘರ್ಷಕ್ಕೆ ಇಳಿಯುವ ಅಗತ್ಯವಿತ್ತೇ?’ ಎಂಬ ಪ್ರಶ್ನೆ ಎದ್ದಿದೆ. ‘ಸರಕಾರದ ಜತೆ ಗೆಹ್ಲೋಟ್ ಹೊಂದಾಣಿಕೆಯಿಂದ ನಡೆಯುತ್ತಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊರತುಪಡಿಸಿದರೆ, ಈವರೆಗೆ ಗಂಭೀರ ಸಮಸ್ಯೆಯೇನೂ ಇರಲಿಲ್ಲ. ಈಗ ವಿಬಿ-ಜಿ ರಾಮ್ ಜಿ ವಿಷಯದಲ್ಲಿ ಸಂಘರ್ಷ ನಡೆದಿದೆ. ರಾಜ್ಯ ಸರಕಾರ ಕೇಂದ್ರದ ಯೋಜನೆಯನ್ನು ಸೂಕ್ಷ್ಮವಾಗಿ ಟೀಕಿಸಬಹುದಿತ್ತು. ವಿವರವಾಗಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ’ ಎಂಬ ವಾದವೂ ಇದೆ. ಕಾಂಗ್ರೆಸ್ ಸರಕಾರಕ್ಕೆ ರಾಜ್ಯಪಾಲರ ಜತೆಗಿರುವುದು ವೈಯಕ್ತಿಕ ಜಗಳವಲ್ಲ. ತಾತ್ವಿಕ ಸಂಘರ್ಷ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ವೈಯಕ್ತಿಕ ಜಗಳವಿದ್ದರೆ ಲಘುವಾಗಿ ನೋಡಬಹುದಿತ್ತು. ವಿಬಿ-ಜಿ ರಾಮ್ ಜಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದರಿಂದ ರಾಜ್ಯ ಸರಕಾರ ಉಳಿದ ಬಿಜೆಪಿಯೇತರ ರಾಜ್ಯಗಳಿಗಿಂತ ಕಠಿಣ ನಿಲುವು ತಳೆಯಬೇಕು. ವಿಧಾನಮಂಡಲದಲ್ಲಿ ಕೇಂದ್ರದ ಯೋಜನೆ ವಿರೋಧಿಸುವ ನಿರ್ಣಯ ಕೈಗೊಳ್ಳಬಹುದು. ಮನರೇಗಾ ಮರು ಜಾರಿಗೆ ಒತ್ತಾಯಿಸಬಹುದು. ಆದರೆ, ರಾಜ್ಯಪಾಲರನ್ನು ವಾಪಸ್ ಕರೆಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಕೈಗೊಳ್ಳುವುದೇ? ರಾಜ್ಯಪಾಲರ ಹುದ್ದೆಯನ್ನೇ ತೆಗೆಯಬೇಕೆಂದು ಸಿಪಿಐ, ಸಿಪಿಎಂ ಮತ್ತಿತರ ಎಡ ಪಕ್ಷಗಳು ಒತ್ತಾಯಿಸುತ್ತಿವೆ. ಈ ಕೂಗಿಗೆ ಕಾಂಗ್ರೆಸ್ ದನಿಗೂಡಿಸುವುದೇ? ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿ, ಅತೀ ಹೆಚ್ಚು ರಾಜ್ಯ ಸರಕಾರಗಳನ್ನು ವಜಾ ಮಾಡಿದ ದಾಖಲೆ ಕಾಂಗ್ರೆಸ್ ಹೆಸರಲ್ಲಿದೆ. ಕೇರಳದ ಇಎಂಎಸ್ ನಂಬೂದರಿಪಾಡ್ ನೇತೃತ್ವದ ಎಡರಂಗದ ಸರಕಾರ 1959ರಲ್ಲಿ ವಜಾ ಆಯಿತು. ಆಗ ಜವಾಹರಲಾಲ್ ನೆಹರೂ ಪ್ರಧಾನಿ. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. 1957ರಲ್ಲಿ ಎರಡನೇ ಚುನಾವಣೆ. ಮೊತ್ತಮೊದಲ ಚುನಾಯಿತ ಸರಕಾರ ವಜಾಗೊಂಡಾಗ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆ ಬೆಳವಣಿಗೆ ಆಗುತ್ತಿತ್ತು. ಆಗಲೇ ಎಲ್ಡಿಎಫ್ ಸರಕಾರ ಅಧಿಕಾರ ಕಳೆದುಕೊಂಡಿದ್ದು. ನೆಹರೂ ಅವರೇ ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿದ್ದರೆಂದರೆ, ಬೇರೆಯವರು ಇನ್ನೆಷ್ಟು ದುರ್ಬಳಕೆ ಮಾಡಿರಬಹುದು? ಇಂದಿರಾಗಾಂಧಿ ರಾಜ್ಯ ಸರಕಾರಗಳನ್ನು ಯದ್ವಾತದ್ವಾ ವಜಾ ಮಾಡಿದ್ದರು. 1994ರಲ್ಲಿ ಎಸ್.ಆರ್. ಬೊಮ್ಮಾಯಿ ವರ್ಸಸ್ ಕೇಂದ್ರ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ರಾಜ್ಯ ಸರಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂವಿಧಾನದ 356ನೇ ಕಲಮಿನ ಪ್ರಾಮುಖ್ಯತೆ, ಇತಿಮಿತಿಗಳನ್ನು ಕುರಿತು ವ್ಯಾಖ್ಯಾನಿಸಿತು. ರಾಜ್ಯ ಸರಕಾರಗಳನ್ನು ವಜಾ ಮಾಡುವುದು ರಾಷ್ಟ್ರಪತಿಗಳ (ಕೇಂದ್ರ ಸರಕಾರ) ಪರಮಾಧಿಕಾರ ಅಲ್ಲ. ವಿರಳಾತಿವಿರಳವಾಗಿ ಕಲಂ 356 ಬಳಸಬೇಕು ಎಂದು ಹೇಳಿತು. 356ನೇ ಕಲಮಿನ ಅನ್ವಯಕ್ಕೆ ಮಾರ್ಗಸೂಚಿ ನೀಡಿತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಸಲ ಈ ಅಧಿಕಾರ ಬಳಸಲಾಗಿದೆ. ಈಗ ಬಿಜೆಪಿಯೇತರ ಸರಕಾರಗಳಿಗೆ ಕಿರುಕುಳ ಕೊಡಲು ಬೇರೆ ದಾರಿಗಳನ್ನು ಕಂಡುಕೊಳ್ಳಲಾಗುತ್ತಿದೆ. ಶಾಸನಸಭೆಯಲ್ಲಿ ರಾಜ್ಯಪಾಲರ ಭಾಷಣ ಇದರಲ್ಲಿ ಒಂದು. ಅನುದಾನ ಹಂಚಿಕೆ ಇನ್ನೊಂದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ. ಕೇಂದ್ರ-ರಾಜ್ಯ ಸಂಬಂಧ ಕುರಿತು ಅಧ್ಯಯನ ನಡೆಸಿದ ನ್ಯಾ. ಸರ್ಕಾರಿಯಾ ಆಯೋಗ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಮುಖ್ಯಮಂತ್ರಿ ಜತೆ ಸಮಾಲೋಚಿಸಿ ರಾಜ್ಯಪಾಲರನ್ನು ನೇಮಿಸಬೇಕು. ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಅಂದರೆ, ಸರಕಾರ ಬಹುಮತ ಕಳೆದುಕೊಂಡಾಗ ಸಂವಿಧಾನದ 356ನೇ ವಿಧಿ ಪ್ರಯೋಗ ಮಾಡಬೇಕು. ರಾಜ್ಯಪಾಲರಿಗೆ ಐದು ವರ್ಷದ ಅವಧಿ ನಿಗದಿಪಡಿಸಬೇಕು. ದುರ್ನಡತೆ ಕಂಡುಬಂದಾಗ ಮಾತ್ರ ರಾಜ್ಯಪಾಲರನ್ನು ವಜಾ ಮಾಡಬೇಕು. ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆ ಕೊಡಬೇಕು ಎಂದು ಶಿಫಾರಸು ಮಾಡಿದೆ. ಬಹುಶಃ ವರದಿ ಗೆದ್ದಲಿಗೆ ಆಹಾರವಾಗಿರಬಹುದು. ಕೇಂದ್ರದ ಎನ್ಡಿಎ ಸರಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಕೇಂದ್ರ-ರಾಜ್ಯ ಸಂಬಂಧವನ್ನು ಹಾಳು ಮಾಡುತ್ತದೆ. ಒಕ್ಕೂಟ ವ್ಯವಸ್ಥೆಗೂ ಅಪಾಯ ತಂದೊಡ್ಡಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಚರ್ಚೆ ಆಗಬೇಕಿದೆ. ಬಿಜೆಪಿಯೇತರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕಿದೆ. ಎನ್ಡಿಎ ಭಾಗವಾಗಿರುವ ಜೆಡಿಯು, ಟಿಡಿಪಿಗಳನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕಿದೆ.
ನೇಪಥ್ಯಕ್ಕೆ ಸರಿದ ದಂತಕಥೆ ಮಾರ್ಕ್ ಟುಲ್ಲಿ
ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ. ಪತ್ರಕರ್ತ ವಿಲಿಯಂ ಮಾರ್ಕ್ ಟುಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು (ಅಕ್ಟೋಬರ್ 24,1935-ಜನವರಿ 25, 2026), ದಂತಕತೆಯೊಂದು ಕಣ್ಮರೆಯಾಗಿದೆ. ಆದರೆ, ಟುಲ್ಲಿ ಅವರ ಬೆಚ್ಚಗಿನ, ನಿರ್ಭೀತ ಮತ್ತು ನಿಷ್ಪಕ್ಷಪಾತ ಧ್ವನಿಯು ದಕ್ಷಿಣ ಏಶ್ಯ ಮತ್ತು ಪ್ರಪಂಚದಾದ್ಯಂತದ ಶ್ರೋತೃಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಕಲ್ಕತ್ತಾದಲ್ಲಿ ಜನನ; ತಂದೆ ವಿಲಿಯಂ ಸ್ಕಾರ್ಥ್ ಕಾರ್ಲೈಸ್ಲ್ ಟುಲ್ಲಿ ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿ ಗಿಲ್ಯಾಂಡರ್ ಅರ್ಬುತ್ನಾಟ್ಸ್ನ ಹಿರಿಯ ಪಾಲುದಾರ ಮತ್ತು ತಾಯಿ ಪೇಷನ್ಸ್ ಟ್ರೆಬಿ. ತಾಯಿಯ ಹಿರಿಯರು ಬಾಂಗ್ಲಾದಲ್ಲಿ ತಲೆಮಾರುಗಳಿಂದ ನೆಲೆಸಿದ್ದರು. ಡಾರ್ಜಿಲಿಂಗ್ನ ಬ್ರಿಟಿಷ್ ಬೋರ್ಡಿಂಗ್ ಶಾಲೆ, ಇಂಗ್ಲೆಂಡ್ನ ಮಾರ್ಲ್ಬರೋ ಕಾಲೇಜಿನ ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಹಾಲ್ನಲ್ಲಿ ಥಿಯಾಲಜಿ(ದೇವತಾ ಶಾಸ್ತ್ರ)ಯನ್ನು ಅಧ್ಯಯನ ಮಾಡಿದರು; ಆದರೆ, ಧರ್ಮಗುರುವಾಗಲಿಲ್ಲ. ‘ಧರ್ಮಗುರು ವೃತ್ತಿ, ಬಿಯರ್-ವಿಸ್ಕಿ ಉಲ್ಲೇಖ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದು ನನಗೆ ಆಗಿಬರುವುದಿಲ್ಲ’ ಎಂದು ಹೇಳುತ್ತಿದ್ದರು. 1994ರಲ್ಲಿ ‘ದಿ ಇಂಡಿಪೆಂಡೆಂಟ್’ ಪತ್ರಿಕೆ ಜೊತೆ ಮಾತನ್ನಾಡುತ್ತ, ‘‘ನನ್ನ ವ್ಯಕ್ತಿತ್ವದಲ್ಲಿ ದ್ವಂದ್ವ ಇದೆ- ತುಂಬಾ ಧಾರ್ಮಿಕತೆ; ಆದರೂ, ನೈತಿಕವಾಗಿ ಕೆಟ್ಟತನ’’. ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘‘ನನ್ನ ವೈಯಕ್ತಿಕ ನೈತಿಕತೆ ಬಗ್ಗೆ ನನಗೆ ವಿಶ್ವಾಸ ಇರಲಿಲ್ಲ. ಚರ್ಚ್ ನನಗೆ ಮಹತ್ವದ್ದಾಗಿತ್ತು; ಈಗಲೂ ಕೂಡ. ಆದ್ದರಿಂದ, ಅದನ್ನು ವಂಚಿಸಲು ಬಯಸಲಿಲ್ಲ’’ ಎಂದು ಹೇಳಿದ್ದರು. ಚರ್ಚ್ನ ನಷ್ಟವು ಪತ್ರಿಕೋದ್ಯಮಕ್ಕೆ ವರವಾಗಿ ಪರಿಣಮಿಸಿತು. ಬಿಬಿಸಿಗೆ ಸೇರ್ಪಡೆ ಧರ್ಮಗುರು ವೃತ್ತಿ ಸೂಕ್ತವಲ್ಲ ಎಂದು ನಿರ್ಧರಿಸಿದ ಬಳಿಕ ಕೆಲಕಾಲ ಬೋಧನೆ, ಆನಂತರ ನಾಲ್ಕು ವರ್ಷ ಚೆಷೈರ್ನಲ್ಲಿ ವಸತಿ ದತ್ತಿಯೊಂದಿಗೆ ಕೆಲಸ ಮಾಡಿದರು. ಕ್ವಿಟ್ ಇಂಡಿಯಾ ಚಳವಳಿ, ಕೋಮುಹಿಂಸೆ, 2ನೇ ಮಹಾಯುದ್ಧ ಹಾಗೂ ಬ್ರಿಟಿಷ್ ಆಡಳಿತದ ಅಂತ್ಯ ಸಮೀಪಿಸುತ್ತಿದ್ದ ಕಾಲ ಅದು. 1965ರಲ್ಲಿ ಬಿಬಿಸಿಯ ಸಹಾಯಕ ಪ್ರತಿನಿಧಿಯಾಗಿ ಆಡಳಿತ ವಿಭಾಗದಲ್ಲಿ ಕೆಲಸ ಆರಂಭಿಸಿ, 1971ರಲ್ಲಿ ಹೊಸ ದಿಲ್ಲಿ ವರದಿಗಾರ ಆದರು. ಸಹೋದ್ಯೋಗಿ ಆಂಡ್ರ್ಯೂ ವೈಟ್ಹೆಡ್, ಟುಲ್ಲಿ ಅವರನ್ನು ‘ಬ್ರಿಟಿಷ್ ರಾಜ್ನ ಮಗು’ ಎಂದು ಕರೆದಿದ್ದರು. 1960ರಲ್ಲಿ ಆಕಾಶವಾಣಿಯದೇ ಸಾಮ್ರಾಜ್ಯ. ಹಲವು ಅಡೆತಡೆ ಹಾಗೂ ಸರಕಾರದ ಒತ್ತಡದ ನಡುವೆಯೂ ಬಿಬಿಸಿಯನ್ನು ಕಟ್ಟಿದರು; 20 ವರ್ಷ ದಕ್ಷಿಣ ಏಶ್ಯ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸಹೋದ್ಯೋಗಿ ಸತೀಶ್ ಜೇಕಬ್ ಮತ್ತು ಆನಂತರ ಗಿಲಿಯನ್ ರೈಟ್ (ಗಿಲ್ಲಿ) ಜೊತೆಗೆ ಉಪಖಂಡವನ್ನು ಸುತ್ತಿದರು. ರಾಜಕೀಯ ನಾಯಕರು, ಜನಸಾಮಾನ್ಯರೊಟ್ಟಿಗೆ ಸಂಪರ್ಕ ಬೆಳೆಸಿಕೊಂಡರು. ಬದಲಾಗುತ್ತಿದ್ದ ದೇಶ ಕುರಿತು ವರದಿ ಮಾಡಲು ಇವರೆಲ್ಲರೂ ನೆರವಾದರು. ಬಿಬಿಸಿಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಯತ್ನಿಸುತ್ತಿದ್ದ ಮಹಾನಿರ್ದೇಶಕ ಜಾನ್ ಬ್ರಿಟ್ ಅವರೊಂದಿಗೆ ಮನಸ್ತಾಪ ಉಂಟಾಯಿತು. ಬಿಬಿಸಿಯ ವಾಣಿಜ್ಯೀಕರಣ ಅವರಿಗೆ ಪಥ್ಯವಾಗಲಿಲ್ಲ; ಚಿಂತನೆಯಲ್ಲಿ ಬದಲಾವಣೆಯು ವಿಕಾಸದಿಂದ ಬರಬೇಕೇ ಹೊರತು ಕ್ರಾಂತಿಯಿಂದಲ್ಲ ಎಂದು ಹೇಳುತ್ತಿದ್ದರು. ಟೀಕೆ ಮಾಡಬಾರದೆಂದು ಹೇಳಿದ್ದರಿಂದ, ಬಿಬಿಸಿಗೆ 1994ರಲ್ಲಿ ರಾಜೀನಾಮೆ ನೀಡಿದರು. ಆದರೆ, ಕಾರ್ಯಕ್ರಮ ನೀಡುವುದನ್ನು ಮುಂದುವರಿಸಿದರು. 1994ರಲ್ಲಿ ಗ್ರೇಟ್ ರೈಲ್ವೆ ಜರ್ನೀಸ್ ಸರಣಿಯಲ್ಲಿ ‘ಕರಾಚಿ ಟು ದಿ ಖೈಬರ್ ಪಾಸ್’ಗೋಸ್ಕರ ಪಾಕಿಸ್ತಾನದಾದ್ಯಂತ ರೈಲಿನಲ್ಲಿ ಪ್ರಯಾಣಿಸಿದರು; ವರ್ಲ್ಡ್ ಸ್ಟೀಮ್ ಕ್ಲಾಸಿಕ್ಸ್ ಸರಣಿಯ ಭಾಗವಾದ ‘ಸ್ಟೀಮ್ಸ್ ಇಂಡಿಯನ್ ಸಮ್ಮರ್’ಗೆ ಕೆಲಸ ಮಾಡಿದರು. 1995ರಲ್ಲಿ ಬಿಬಿಸಿಯ ರೇಡಿಯೊ 4ಕ್ಕೆ ಪ್ರತೀ ರವಿವಾರ ‘ಸಮ್ಥಿಂಗ್ ಅಂಡರ್ಸ್ಟುಡ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂಬಿಕೆ, ಆಧ್ಯಾತ್ಮಿಕತೆ ಮತ್ತು ಮನುಷ್ಯರ ಜೀವನವನ್ನು ಆಧರಿಸಿದ್ದ ಈ ಜನಪ್ರಿಯ ಕಾರ್ಯಕ್ರಮವನ್ನು 2019ರಲ್ಲಿ ನಿಲ್ಲಿಸಲಾಯಿತು. ‘‘ಇದು ತಮಗೆ ನೋವುಂಟು ಮಾಡಿತು. ಅದು ಅಪಾರ ಶ್ರೋತೃಗಳಿದ್ದ ಕಾರ್ಯಕ್ರಮ. ರೇಡಿಯೊ ಇರಬೇಕಾದ್ದು ಹೀಗೆ ಎಂದು ಶ್ರೋತೃಗಳು ಹೇಳುತ್ತಿದ್ದರು’’ ಎಂದು ರೇಡಿಯೊ ಟೈಮ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಚರಿತ್ರೆಯನ್ನು ದಾಖಲಿಸಿದ ವರದಿಗಳು ಭಾರತ-ಪಾಕಿಸ್ತಾನ ಯುದ್ಧ, ಅಫ್ಘಾನಿಸ್ತಾನದ ಮೇಲೆ ರಶ್ಯ ಆಕ್ರಮಣ, ಬಾಂಗ್ಲಾದೇಶದ ಉದಯ, ಶ್ರೀಲಂಕಾ ಮತ್ತು ಇತರೆಡೆಗಳಲ್ಲಿ ದಂಗೆ, 1980ರ ಆರಂಭದಲ್ಲಿ ಪಂಜಾಬ್ನಲ್ಲಿ ತಲೆಯೆತ್ತಿದ ಖಾಲಿಸ್ತಾನ್ ಚಳವಳಿ, ಅಮೃತಸರದ ಹರ್ಮಂದಿರ್ ಸಾಹಿಬ್(ಸ್ವರ್ಣ ಮಂದಿರ) ಮೇಲೆ ಸೇನೆ ಕಾರ್ಯಾಚರಣೆ, ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮತ್ತು ಯೂನಿಯನ್ ಕಾರ್ಬೈಡ್ನ ಭೋಪಾಲ್ ಅನಿಲ ದುರಂತಗಳನ್ನು ವರದಿ ಮಾಡಿದರು. ಡಿಸೆಂಬರ್ 1979ರಲ್ಲಿ ರಶ್ಯ, ಅಫ್ಘಾನಿಸ್ತಾದ ಮೇಲೆ ದಾಳಿ ನಡೆಸಿತು; ರಶ್ಯದ ಟ್ಯಾಂಕ್ಗಳು ಪ್ರವೇಶಿಸುತ್ತಿದ್ದಂತೆ, ವಿದೇಶಿ ಸುದ್ದಿಸಂಸ್ಥೆಗಳು ದೇಶ ತೊರೆದವು. ಟುಲ್ಲಿ ಮತ್ತು ಸಹೋದ್ಯೋಗಿ ಸತೀಶ್ ಜೇಕಬ್ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಕಾಬೂಲ್ನಿಂದ ಆಗಮಿಸಿದ ಪ್ರಯಾಣಿಕರಿಂದ ಸುದ್ದಿ ಸಂಗ್ರಹಿಸಿ, ವರದಿ ಮಾಡಿದರು. ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಜಿಯಾ ಉಲ್ ಹಕ್ ಅವರಿಂದ ಹತ್ಯೆಯಾದ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಹಿರಿಯ ಮಗ ಮುರ್ತಝಾ ಭುಟ್ಟೋ, ಬೆಂಬಲಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಆಗುತ್ತಿದ್ದರು ಎನ್ನುವುದು ಗೊತ್ತಾಯಿತು. ಮುರ್ತಝಾ ಅವರನ್ನು ದಿಲ್ಲಿಯ ಹೋಟೆಲ್ ಒಂದರಲ್ಲಿ ಟುಲ್ಲಿ-ಜೇಕಬ್ ಭೇಟಿ ಮಾಡಿದರು. ಜನರಲ್ ಜಿಯಾ ಉಲ್ ಹಕ್ ಅವರನ್ನು ಪದಚ್ಯುತಗೊಳಿಸುವ ಗುರಿ ಹೊಂದಿದ್ದ ‘ಮೂವ್ಮೆಂಟ್ ಫಾರ್ ದಿ ರಿಸ್ಟೋರೇಶನ್ ಆಫ್ ಡೆಮಾಕ್ರಸಿ (ಎಂಆರ್ಡಿ)’ ಕುರಿತು ವ್ಯಾಪಕ ವರದಿ ಮಾಡಿದರು. 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರದ ಆವರಣದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿದ್ದ ಸಿಖ್ ಪ್ರತ್ಯೇಕವಾದಿಗಳನ್ನು ಹೊರತೆಗೆಯಲು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಟುಲ್ಲಿ ಮತ್ತು ಅವರ ಸತೀಶ್ ಜೇಕಬ್, ಮಂದಿರದ ಒಳಗಿನಿಂದ ಕಾರ್ಯಾಚರಣೆಯನ್ನು ವರದಿ ಮಾಡಿದರು. ಡಿಸೆಂಬರ್ 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯನ್ನು ಉರುಳಿಸಿದ ಕರಸೇವಕರು ಕಾರಿನಲ್ಲಿದ್ದ ಟುಲ್ಲಿ ಅವರನ್ನು ಗುರುತಿಸಿ ಹಲ್ಲೆ ನಡೆಸಿದರು ಮತ್ತು ಅವರು ಸೇರಿದಂತೆ ಐವರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದರು. ‘‘ಡೆತ್ ಟು ಮಾರ್ಕ್ ಟುಲ್ಲಿ ಮತ್ತು ಡೆತ್ ಟು ಬಿಬಿಸಿ ಎಂದು ಕಿರುಚುತ್ತಿದ್ದ ದೊಡ್ಡ ಗುಂಪು ನಮ್ಮನ್ನು ಸುತ್ತುವರಿದಿತ್ತು’’ ಎಂದು ಅವರು ಲಾಸ್ ಏಂಜಲೀಸ್ ಟೈಮ್ಸ್ಗೆ ಹೇಳಿದರು. 2 ಗಂಟೆ ಕಾಲ ಬಂಧಿತರಾಗಿದ್ದ ಅವರನ್ನು ಬಡಾ ಸ್ಥಾನ್ನ ಮಹಂತ ಬಿಡಿಸಿದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಟುಲ್ಲಿ ಅವರು ಸೆನ್ಸರ್ಶಿಪ್ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರಿಂದ, ದೇಶ ತೊರೆಯಲು 24 ಗಂಟೆ ಕಾಲಾವಕಾಶ ನೀಡಲಾಯಿತು. ಇತರ ವಿದೇಶಿ ಬಾತ್ಮೀದಾರರ ಜೊತೆಗೆ ಅವರನ್ನು ದೇಶದಿಂದ ಹೊರಹಾಕಲಾಯಿತು. ‘‘ಶ್ರೀಮತಿ ಗಾಂಧಿ ಅವರಲ್ಲದೆ, ಸರಕಾರ ಕೂಡ ನಮ್ಮನ್ನು ದ್ವೇಷಿಸುತ್ತಿತ್ತು. ಕಚೇರಿಯನ್ನು ಮುಚ್ಚಿ ಮತ್ತು ನನ್ನನ್ನು ಹೊರಹಾಕಿ, ಬಿಬಿಸಿಯ ಬಾಯಿ ಮುಚ್ಚಿಸಬಹುದು ಎಂಬ ಅವರ ಅನಿಸಿಕೆ ಸುಳ್ಳಾಯಿತು. ಬಿಬಿಸಿ ಮುಂದುವರಿಯಿತು. ನಮ್ಮ ವಿಶ್ವಾಸಾರ್ಹತೆಗೆ ನಾವು ಧಕ್ಕೆಯುಂಟು ಮಾಡಿಕೊಳ್ಳಲಿಲ್ಲ’’ ಎಂದು ಹೇಳಿದ್ದರು. ತುರ್ತುಪರಿಸ್ಥಿತಿ ಹಾಗೂ ಇಂದಿರಾ ಅವರ ಹತ್ಯೆ ಸಮಯದಲ್ಲಿ ಮಾಧ್ಯಮಗಳ ಉಸಿರು ನಿಂತಿದ್ದಾಗ, ಅಸಂಖ್ಯ ಭಾರತೀಯರು ಶಾರ್ಟ್ವೇವ್ ರೇಡಿಯೊದಿಂದ ಬಿಬಿಸಿಯಿಂದ ಸುದ್ದಿಗಳನ್ನು ಕೇಳಿದರು. ಗೌರವ-ಪುಸ್ತಕ ಸರಕಾರ ಅವರಿಗೆ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಿತು; ಪದ್ಮಶ್ರೀ (1992) ಮತ್ತು ಪದ್ಮಭೂಷಣ (2005). ಬ್ರಿಟಿಷ್ ಸರಕಾರದಿಂದ ನೈಟ್ ಹುದ್ದೆ ಪಡೆದರೂ, ಹೆಸರಿನ ಮುಂದೆ ‘ಸರ್’ ಬಳಸಲಿಲ್ಲ. ಅವರ ಮೊದಲ ಪುಸ್ತಕ- ‘ಅಮೃತಸರ: ಮಿಸ್ಟ್ರೆಸ್ ಗಾಂಧೀಸ್ ಲಾಸ್ಟ್ ಬ್ಯಾಟಲ್’(1985), ಸಹಲೇಖಕ ಸತೀಶ್ ಜೇಕಬ್; ಕೊನೆಯ ಪುಸ್ತಕ ಉತ್ತರ ಭಾರತದ ಗ್ರಾಮೀಣ ಕಥೆಗಳನ್ನು ಒಳಗೊಂಡ ‘ಅಪ್ಕಂಟ್ರಿ ಟೇಲ್ಸ್: ಒನ್ಸ್ ಅಪಾನ್ ಎ ಟೈಮ್ ಇನ್ ದಿ ಹಾರ್ಟ್ ಆಫ್ ಇಂಡಿಯಾ’(2017). ಆಪರೇಷನ್ ಬ್ಲೂಸ್ಟಾರ್ಗೆ ಕಾರಣವಾದ ಘಟನೆಗಳು ಹಾಗೂ ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳ ಕುರಿತ ಅವರ ಪ್ರಬಂಧಗಳ ಸಂಕಲನ ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’(1991); ಪುಸ್ತಕದ ಮುನ್ನುಡಿಯಲ್ಲಿ ‘ಆರ್ಥಿಕ ಬೆಳವಣಿಗೆಯೊಂದಿಗೆ ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಸಹ ಅಗತ್ಯ. ಪ್ರಗತಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ನಿರ್ಜೀವ ಉಪಯೋಗವಾದದ ನಕಲು ಮಾಡುವುದಲ್ಲ’’ ಎಂದು ಹೇಳಿದ್ದರು. ವರದಿಗಾರಿಕೆಯ ಹೊರೆ ತಪ್ಪಿದ ಬಳಿಕ ‘ಇಂಡಿಯಾ ಇನ್ ಸ್ಲೋ ಮೋಷನ್’ ಮತ್ತು ‘ಇಂಡಿಯಾಸ್ ಅನ್ಎಂಡಿಂಗ್ ಜರ್ನಿ’ ಪ್ರಕಟಿಸಿದರು; ಆತ್ಮಚರಿತ್ರೆ ಬರೆಯುತ್ತಿದ್ದರು. 1960ರ ದಶಕದ ಆರಂಭದಲ್ಲಿ ಲಂಡನ್ನಲ್ಲಿ ಮಾರ್ಗರೆಟ್ ಅವರನ್ನು ವಿವಾಹವಾದರು; ಅವರಿಂದ ಪ್ರತ್ಯೇಕಗೊಂಡ ಬಳಿಕ ಗಿಲಿಯನ್ (ಗಿಲ್ಲಿ) ರೈಟ್ ಜೊತೆ ಸಹಜೀವನ ನಡೆಸಿದರು. ‘ಮಾರ್ಗರೆಟ್ ಮತ್ತು ಗಿಲಿಯನ್ ಅವರಿಗೆ ಋಣಿಯಾಗಿದ್ದೇನೆ. ಪತ್ನಿ ಜೊತೆಗೆ ಸುದೀರ್ಘ ಕಾಲ ಕಳೆದಿದ್ದರಿಂದ, ಅವರಿಂದ ವಿಚ್ಛೇದನ ಪಡೆಯಲಿಲ್ಲ; ಪತ್ನಿ ಮತ್ತು ಮಕ್ಕಳೊಂದಿಗೆ ಸ್ನೇಹದಿಂದ ಇರಲು ಬಯಸಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 2004ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯತಕಾಲಿಕೆ ಕ್ಯಾಮ್ಗೆ ನೀಡಿದ ಸಂದರ್ಶನದಲ್ಲಿ, ‘ಪತ್ನಿ ಅಥವಾ ಗಿಲಿಯನ್ ಅವರ ಮಾತುಗಳನ್ನು ನಾನು ಆಡುವುದು ಸರಿಯಲ್ಲ’ ಎಂದು ಹೇಳಿದ್ದರು. 2003ರಲ್ಲಿ ಬಿಬಿಸಿಯ ಡೆಸರ್ಟ್ ಐಲ್ಯಾಂಡ್ ಡಿಸ್ಕ್ಸ್ನಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸಿದ್ದರು; ‘ನಾವು ಜಾತಿ ವ್ಯವಸ್ಥೆಯಲ್ಲಿನ ಒಳಿತು ಮತ್ತು ಕೆಡುಕನ್ನು ನೋಡಬೇಕು; ಒಳ್ಳೆಯ ಅಂಶವೆಂದರೆ, ಅದು ಭದ್ರತೆ, ಒಡನಾಟ ಮತ್ತು ಸಮುದಾಯದಲ್ಲಿ ಒಳಗೊಳ್ಳುವಿಕೆಯನ್ನು ನೀಡುತ್ತದೆ’ ಎಂದು ಹೇಳಿದ್ದರು. ಆದರೆ, ಭಾರತದ ಜಾತಿ ವ್ಯವಸ್ಥೆಯಲ್ಲಿ ಒಳ್ಳೆಯದು ಎಂಬುದು ಏನೂ ಇಲ್ಲ ಎನ್ನುವ ಅಂಶ ಅವರ ತಿಳಿವನ್ನು ಮೀರಿತ್ತು. ಜಾತ್ಯತೀತತೆ ಪರ ಹಾಗೂ ಹಿಂದೂ ರಾಷ್ಟ್ರೀಯತೆಯ ಕಟು ವಿಮರ್ಶಕರಾಗಿದ್ದರು. ಸಾಂಪ್ರದಾಯಿಕ ಜೀವನಶೈಲಿ ಮತ್ತು ಆಚರಣೆಗಳನ್ನು ಬದಲಿಸಿದ ಅಭಿವೃದ್ಧಿ ಹಾಗೂ ಆಧುನೀಕರಣವನ್ನು ವಿರೋಧಿಸಿದ್ದರು; ಗ್ರಾಹಕೀಕರಣ ಮತ್ತು ಇನ್ನಿತರ ಬದಲಾವಣೆಗಳು ಪ್ರಗತಿಯನ್ನು ಸಾಧಿಸುವ ಮಾರ್ಗವೆಂದು ಒಪ್ಪಿಕೊಳ್ಳಲು ನಿರಾಕರಿಸಿದರು. ದಿಲ್ಲಿಯ ಸೆಳೆತ ಪತ್ನಿ ಮಾರ್ಗರೆಟ್, ಮಕ್ಕಳಾದ ಸಾರಾ, ಸ್ಯಾಮ್, ಎಮ್ಮಾ ಮತ್ತು ಪ್ಯಾಟ್ರಿಕ್ ಹಾಗೂ ಮೀರತ್ನ ಬಾಣಸಿಗ ಗರೀಬ್ ಒಟ್ಟಿಗೆ ದಿಲ್ಲಿಯ ಹೌಜ್ ಖಾಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದರು. ಗರೀಬ್ ಮರಣದ ಬಳಿಕ ಅವರ ಮಗಳು ಬಬ್ಲಿ ತಂದೆಯ ಸ್ಥಾನ ತುಂಬಿದರು; ಆಕೆಯ ಮಗ ಕಾಕಾ, ಟುಲ್ಲಿ ಅವರ ಚಾಲಕ. 1994ರಿಂದ ಹೊಸ ದಿಲ್ಲಿಯ ಪೂರ್ವ ನಿಝಾಮುದ್ದೀನ್ನಲ್ಲಿ ನೆಲೆಸಿದ್ದ ಅವರು, ಮನೆಯೊಡತಿ ಮಾಸಿಕ ಒಂದು ಲಕ್ಷ ರೂ. ಬಾಡಿಗೆಗೆ ಬೇಡಿಕೆಯಿಟ್ಟಾಗ ಸ್ವಂತ ಫ್ಲಾಟ್ ಖರೀದಿಸಲು ನಿರ್ಧರಿಸಿದರು. 2010ರಲ್ಲಿ ನಿಝಾಮುದ್ದೀನ್ ಪಶ್ಚಿಮದಲ್ಲಿ ಫ್ಲ್ಯಾಟ್ ಖರೀದಿಸಿದರು. ನಿವೃತ್ತಿ ಬಳಿಕ ಹಿಮಾಲಯದ ತಪ್ಪಲಿನಲ್ಲಿ ಪ್ರಕೃತಿಯ ನಡುವೆ ಬದುಕಬಹುದಿತ್ತು; ಆದರೆ, ಲೋಧಿ ಗಾರ್ಡನ್ಸ್, ಇಂಡಿಯಾ ಇಂಟರ್ನ್ಯಾಶನಲ್ ಸೆಂಟರ್, ಜಿಮ್ಖಾನಾ ಕ್ಲಬ್, ಖಾನ್ ಮಾರ್ಕೆಟ್ನ ಫಕೀರ್ ಚಂದ್ ಆಂಡ್ ಸನ್ಸ್ ಪುಸ್ತಕದ ಅಂಗಡಿ, ಕೆಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್, ಜನಪಥ್ನ ಶರವಣ ಭವನ ಇವೆಲ್ಲದರ ಸೆಳೆತ ಅವರನ್ನು ಬಿಡಲಿಲ್ಲ. ರಾಜಧಾನಿಯ ಮಾಲಿನ್ಯ, ಕೆಟ್ಟ ರಸ್ತೆಗಳು, ರಸ್ತೆಯಲ್ಲಿ ವಾಹನ ಚಾಲಕರ ಆಕ್ರೋಶ, ಬಿಲ್ಡರ್ ಗಳ ಅಟ್ಟಹಾಸ, ದಲ್ಲಾಳಿಗಳ ದುಷ್ಟತನ ಅವರನ್ನು ತಟ್ಟಿತ್ತು. ‘‘ದಿಲ್ಲಿಯ ಜನ ಹೆಚ್ಚು ಒತ್ತಡವನ್ನು ನಿಭಾಯಿಸುತ್ತಾರೆ; ಅದು ಅವರ ವರ್ತನೆಯಲ್ಲಿ ಕಾಣಿಸುತ್ತದೆ. ವಾಹನ ಚಾಲಕರಿಗೆ ಸಂಬಂಧಿಸಿದಂತೆ ಇದು ಸತ್ಯ; ಪರಿಸ್ಥಿತಿ ಭಯಾನಕವಾಗಿದೆ. ದಿಲ್ಲಿಯು ಪಾಣಿಪತ್ (ಹರ್ಯಾಣ), ನೊಯ್ಡಾದವರೆಗೆ ಕೊಳಕಾಗಿ ವಿಸ್ತರಿಸಿದೆ; ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ.
Tamil Nadu - ಬಿಜೆಪಿಯ ಮಾಸ್ಟರ್ ಪ್ಲಾನ್ ಸಕ್ಸಸ್ : ದಿನಕರನ್ ಬೆನ್ನಲ್ಲೇ NDA ತೆಕ್ಕೆಗೆ ಮತ್ತೊಬ್ಬ ಪವರ್ಫುಲ್ ನಾಯಕ?
Former TN CM O Panneerselvam : ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಒಂದು ಕಾಲದಲ್ಲಿ ಜಯಲಲಿತಾ ಅವರ ಪರಮಾಪ್ತರಾಗಿದ್ದ ಓ ಪನ್ನೀರ್’ಸೆಲ್ವಂ, ಎನ್ಡಿಎ ಮೈತ್ರಿಕೂಟಕ್ಕೆ ವಾಪಸ್ ಆಗುವ ಸುಳಿವನ್ನು ನೀಡಿದ್ದಾರೆ. ಆ ಮೂಲಕ, ಬಿಜೆಪಿಯ ಪರಿಶ್ರಮ ದಿನದಿಂದ ದಿನಕ್ಕೆ ಫಲ ಕೊಡುತ್ತಿದೆ. ಪನ್ನೀರ್’ಸೆಲ್ವಂ, ವಾಪಸಾತಿ ಸಾಧ್ಯತೆಯ ಹಿಂದೆ, ಬಿಜೆಪಿಯ ನಾಯಕರ ಪರಿಶ್ರಮವಿದೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಬಂಧನದಲ್ಲಿದ್ದ 23 ಮೀನುಗಾರರು ಭಾರತಕ್ಕೆ ವಾಪಾಸ್
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಬಂಧನದಲ್ಲಿದ್ದ 23 ಮೀನುಗಾರರು ಗುರುವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ 128 ಬಾಂಗ್ಲಾದೇಶಿ ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆಯನ್ನು ದಾಟಿದ ಭಾರತೀಯ ಮೀನುಗಾರರನ್ನು ಬಾಂಗ್ಲಾದೇಶದ ಅಧಿಕಾರಿಗಳು ಬಂಧಿಸಿದ್ದರು. ಬಾಂಗ್ಲಾದೇಶದ ಮೀನುಗಾರರನ್ನು ಸಹ ಭಾರತೀಯ ಅಧಿಕಾರಿಗಳು ಇದೇ ರೀತಿ ಬಂಧಿಸಿದ್ದರು. 23 ಭಾರತೀಯ ಮೀನುಗಾರರು ಮತ್ತು 128 ಬಾಂಗ್ಲಾದೇಶಿ ಮೀನುಗಾರರನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಎರಡೂ ಸರಕಾರಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಭಾರತ ಸರಕಾರವು ಭಾರತೀಯ ಮೀನುಗಾರರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕಾ ಮತ್ತು ಕೆನಡಾ ನಡುವೆ ಭಿನ್ನತೆ ಹೆಚ್ಚಾಗಿದೆ. ಕೆನಡಾ ಅಮೆರಿಕನ್ ಗಲ್ಫ್ಸ್ಟ್ರೀಮ್ ಜೆಟ್ಗಳನ್ನು ಪ್ರಮಾಣೀಕರಿಸದಿದ್ದರೆ, ಕೆನಡಾದಿಂದ ಬರುವ ಎಲ್ಲಾ ವಿಮಾನಗಳ ಮೇಲೆ ಶೇ.50% ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕೆನಡಾದಲ್ಲಿ ತಯಾರಾದ ವಿಮಾನಗಳ ಪ್ರಮಾಣೀಕರಣವನ್ನು ರದ್ದುಗೊಳಿಸುವುದಾಗಿಯೂ ತಿಳಿಸಿದ್ದಾರೆ. ಈ ವಿಚಾರವಾಗಿ ಕೆನಡಾ ಹೇಗೆ ಪ್ರತಿಕ್ರಿಯಿಸಲಿದೆ ಕಾದು ನೋಡಬೇಕಿದೆ.
ಚಿನ್ನ - ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಒಂದೇ ದಿನದಲ್ಲಿ 14%ವರೆಗೆ ಇಳಿಕೆ ಕಂಡ ಇಟಿಎಫ್ಗಳು! ಕಾರಣ ಏನು?
ದಾಖಲೆಯ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ (ಜ. 30) ದಿಢೀರ್ ಕುಸಿತ ಕಂಡಿವೆ. ಎಂಸಿಎಕ್ಸ್ನಲ್ಲಿ ಚಿನ್ನ ಶೇಕಡಾ 5 ಮತ್ತು ಬೆಳ್ಳಿ ಶೇಕಡಾ 6ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಸಿಲ್ವರ್ ಇಟಿಎಫ್ಗಳು ಶೇಕಡಾ 14ರವರೆಗೆ ಮತ್ತು ಗೋಲ್ಡ್ ಇಟಿಎಫ್ಗಳು ಶೇಕಡಾ 10 ರವರೆಗೆ ಪತನಗೊಂಡಿವೆ. ಅಮೆರಿಕದ ಫೆಡರಲ್ ರಿಸರ್ವ್ಗೆ ಹೊಸ ಮತ್ತು ಕಠಿಣ ನಿಲುವಿನ ಮುಖ್ಯಸ್ಥರ ನೇಮಕವಾಗುವ ಸಾಧ್ಯತೆಯೇ ಈ ಕುಸಿತಕ್ಕೆ ಪ್ರಮುಖ ಕಾರಣ.
DK Shivakumar: ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲಾತಿ ನಿಗದಿ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ನಾವು ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ಈ ಚುನಾವಣೆಗಳ ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಾವು ಪಂಚಾಯ್ತಿ ನಾಯಕರಿಗೆ ಸಿದ್ಥತೆ ಮಾಡಿಕೊಳ್ಳಲು ಹೇಳಿದ್ದೇವೆ. ರಾಜ್ಯ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮತಪತ್ರ ಬಳಸಲು ತೀರ್ಮಾನಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಸಮಯ ನಿಗದಿಯಾಗಬೇಕು ಅಷ್ಟೇ. ಸಂವಿಧಾನದ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿಗತಿ ಹೇಗಿದೆ? ಬೆಚ್ಚಿ ಬೀಳಿಸುವಂತಿದ್ಯಾ 2025 ರ ಅಂಕಿ-ಅಂಶಗಳು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳ ಆರೋಪ. ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಸೈಬರ್ ಕ್ರೈಂ ವಂಚನೆಗಳು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿವೆ.ಈ ಕುರಿತ 2025ರ ಅಂಕಿ-ಅಂಶಗಳು ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸೈಬರ್ ಕ್ರೈಂ ಅಪರಾಧಗಳಲ್ಲಿ ಹೆಚ್ಚಳವನ್ನು ಎತ್ತಿ ತೋರಿಸುತ್ತಿವೆ. ಕಳೆದ ವರ್ಷ ರಾಜ್ಯದಲ್ಲಿ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಅಂಕಿ-ಅಂಶಗಳು ಏನು ಹೇಳುತ್ತಿವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ನಿಮ್ಮ ಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ರೂ. ಅನುದಾನ: ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ, ಸಾಂಸ್ಕೃತಿಕ ಏಳಿಗೆಗೆ ಸಮುದಾಯ ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡುತ್ತಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಶುಭ ಸಮಾರಂಭ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಅವಕಾಶವಿದೆ. 20 ಲಕ್ಷದಿಂದ 4 ಕೋಟಿ ರೂ.ವರೆಗೆ ಸಹಾಯಧನ ಸಿಗಲಿದೆ.
Karnataka Weather Updates: ಜನವರಿ 30: ಕರ್ನಾಟಕದ ಹವಾಮಾನ ಹೇಗಿದೆ ಇಲ್ಲಿದೆ ಐಎಂಡಿ ರಿಪೋರ್ಟ್
Karnataka Weather Updates: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ಮುಂಜಾನೆ ಸಮಯದಲ್ಲಿ ಚಳಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಬಿಸಿಲು ಸಣ್ಣಗೆ ಪ್ರಾರಂಭವಾಗಿದೆ. ವಾಯು ಚಂಡಮಾರುತದ ಪರಿಚಲನೆ ಹಾಗೂ ವಾಯುಭಾರ ಕುಸಿತ ಇರುವುದರಿಂದ ಎರಡು ಮೂರು ದಿನಗಳ ನಂತರ ಹವಾಮಾನದಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ. ಜನವರಿ 30ರ ಹವಾಮಾನ ವರದಿ ಇಲ್ಲಿದೆ. ಆಗ್ನೇಯ
ದಶಕಗಳು ಉರುಳಿದರೂ ಪೂರ್ಣಗೊಂಡಿಲ್ಲ ಕೃಷ್ಣಾ ಮೇಲ್ದಂಡೆ ಯೋಜನೆ ; ಸಿಕ್ಕಿತೇ ‘ರಾಷ್ಟ್ರ’ ಮನ್ನಣೆ?
ಕೇಂದ್ರ ಸರಕಾರ ಈ ಬಾರಿಯ ಬಜೆಟ್ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಇಚ್ಛಾಶಕ್ತಿ ಅಗತ್ಯವಿದೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ, ರೈಲು ಮಾರ್ಗಗಳ ಅಭಿವೃದ್ಧಿ, ಮತ್ತು ಜೋಡಿ ಹಳಿ ಕಾಮಗಾರಿಗಳಿಗೆ ಅನುದಾನ ದೊರಕುವ ಸಾಧ್ಯತೆ ಇದೆ. ಇದರಿಂದಾಗಿ ಯೋಜನೆಗಳು ಶೀಘ್ರ ಪೂರ್ಣಗೊಳ್ಳುವ ವಿಶ್ವಾಸ ಜನರಲ್ಲಿದೆ.
ವರದಕ್ಷಿಣೆ ಕಿರುಕುಳ; ಗರ್ಭಿಣಿಯಾಗಿದ್ದ ಕಮಾಂಡೋ ಪತ್ನಿಯನ್ನು ಡಬಲ್ನಿಂದ ಕೊಂದ ಪತಿ ಅಮಾನತು
ನಿನ್ನ ತಂಗಿಯನ್ನು ಕೊಲೆ ಮಾಡುತ್ತಿದ್ದೇನೆ ಈ ವಾಯ್ಸ್ ರೆಕಾರ್ಡ್ ಮಾಡಿಕೋ ಇದು ಪೊಲೀಸರಿಗೆ ಬೇಕಾಗುತ್ತದೆ ಎಂದು ಆಕೆಯನ್ನು ಕೊಲೆಗೈದಿದ್ದಾನೆ. ಐದು ನಿಮಿಷದ ನಂತರ ಪುನಃ ಕರೆ ಮಾಡಿ ಆಕೆ ಸತ್ತಿದ್ದಾಳೆ ಎಂದು 'ಸ್ವಾಟ್' ಟೀಮ್ನಲ್ಲಿ ಕಮಾಂಡೋ ಆಗಿದ್ದ ಮೃತ ಕಾಜಲ್ ಅಣ್ಣ ಅತ್ತರು. ದೆಹಲಿಯಲ್ಲಿ ಕಾಜಲ್ ಚೌಧರಿ ಎಂಬ ಗರ್ಭಿಣಿಯನ್ನು ಆಕೆಯ ಪತಿಯೇ ಡಂಬಲ್ಸ್ನಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ
ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಆರೋಪದ ಹಿನ್ನೆಲೆ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ ಕಲ್ಲೇಶ ಅವರ ಮನೆ, ಕಾಲೇಜುಗಳ ಮೇಲೆ ದಾಳಿಯಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಹಬ್ಬ-ಹರಿದಿನಗಳನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗಾಗಿ ದುಡಿಯುವ ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ಇಲಾಖೆಯು ಭರ್ಜರಿ ಸಿಹಿ ಸುದ್ದಿಯನ್ನ ನೀಡಿದೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಸಾಂದರ್ಭಿಕ ರಜೆ ನೀಡುವಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ
ಕಾರವಾರ ಶೈಕ್ಷಣಿಕ ಜಿಲ್ಲೆಯ ಶಾಲೆಗಳಲ್ಲಿ 3,493 ಬೀದಿನಾಯಿಗಳು ಇರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕುಮಟಾ ತಾಲೂಕಿನಲ್ಲಿ ಅತಿಹೆಚ್ಚು ನಾಯಿಗಳು ಕಂಡುಬಂದಿವೆ. ನಗರ ಪ್ರದೇಶ, ತ್ಯಾಜ್ಯ ವಿಲೇವಾರಿ ಘಟಕಗಳು, ಮೀನು ಮಾರಾಟ ಸ್ಥಳಗಳು ಇದಕ್ಕೆ ಕಾರಣವಾಗಿವೆ. ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಿವೆ.
ಇಪ್ಪತ್ತರ ಹರೆಯದಲ್ಲೇ ಕೆಲಸದ ಬಗ್ಗೆ ಚಿಂತಿಸಿ, ದುಡಿಯಲು ಶುರು ಮಾಡಿ. ಸಮಾಜ ನಿಮ್ಮ ಬಗ್ಗೆ ಏನು ಯೋಚಿಸುತ್ತೋ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಯಾರಿಗೂ ಯಾವುದರ ಬಗ್ಗೆಯೂ ಮಾತನಾಡುವಷ್ಟು ಸಮಯವಿಲ್ಲ. ಜೀವನದಲ್ಲಿ ಹೊಸತನ್ನು ಕಲಿತು ಮುನ್ನುಗ್ಗಿ ಎಂದು ಇಪ್ಪತ್ತಾರು ವರ್ಷದ ಮೈಕ್ರೋಸಾಫ್ಟ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಈ ಜೀವನದ ಪಾಠಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಕೊಹ್ಲಿ ಇನ್ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ; ಅನುಷ್ಕಾ ರಿಂದ ಉತ್ತರ ಬಯಸಿದ ಅಭಿಮಾನಿಗಳು!
ಮುಂಬೈ, ಜ.30: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಖಾತೆ ದಿಢೀರನೇ ನಿಷ್ಕ್ರಿಯಗೊಂಡಿರುವುದು ಡಿಜಿಟಲ್ ಜಗತ್ತಿನಲ್ಲಿ ಅಚ್ಚರಿಗೂ ಆತಂಕಕ್ಕೂ ಕಾರಣವಾಗಿದೆ. ಶುಕ್ರವಾರದವರೆಗೆ 27.4 ಕೋಟಿ (274 ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದ ಅವರ ಅಧಿಕೃತ ಖಾತೆ ಸಂಪೂರ್ಣವಾಗಿ ಕಾಣೆಯಾಗಿರುವುದು ಲಕ್ಷಾಂತರ ಅಭಿಮಾನಿಗಳಲ್ಲಿ ಗೊಂದಲ ಮತ್ತು ಹತಾಶೆ ಮೂಡಿಸಿದೆ. ಖಾತೆ ನಿಷ್ಕ್ರಿಯಗೊಂಡಿರುವುದು ಶುಕ್ರವಾರ ಮುಂಜಾನೆ ಮೊದಲ ಬಾರಿ ಬೆಳಕಿಗೆ ಬಂದಿದೆ. ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಪ್ರೊಫೈಲ್ ತೆರೆಯಲು ಅಭಿಮಾನಿಗಳು ಪ್ರಯತ್ನಿಸಿದಾಗ, “This page isn’t available” ಅಥವಾ “The link may be broken” ಎಂಬ ತಾಂತ್ರಿಕ ಸಂದೇಶಗಳು ಕಾಣಿಸುತ್ತಿವೆ. ಭಾರತದ ಮಾಜಿ ನಾಯಕ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದು, ಅದ್ಭುತ ಫಾರ್ಮ್ನಲ್ಲಿರುವ ನಡುವೆಯೇ ಈ ಬೆಳವಣಿಗೆ ಸಂಭವಿಸಿರುವುದು ಅಭಿಮಾನಿಗಳನ್ನು ಇನ್ನಷ್ಟು ಅಚ್ಚರಿಗೆ ದೂಡಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 124 ರನ್ಗಳ ಶತಕ ಸಿಡಿಸಿದ್ದರು. ವಿರಾಟ್ ಅವರ ‘ಎಕ್ಸ್’ (ಟ್ವಿಟರ್) ಖಾತೆ ಸದ್ಯ ಸಕ್ರಿಯವಾಗಿದ್ದರೂ, ಈ ಕುರಿತು ಯಾವುದೇ ಪೋಸ್ಟ್ ಅಥವಾ ಸ್ಪಷ್ಟನೆ ನೀಡಿಲ್ಲ. ‘ಕಿಂಗ್ ಕೊಹ್ಲಿ’ ಮೌನ ವಹಿಸಿರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಮುಂದಿನ ವಿಶ್ವಾಸಾರ್ಹ ಮಾಹಿತಿ ಮೂಲವೆಂದು ಪರಿಗಣಿಸಲಾದ ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ಪೋಸ್ಟ್ಗಳು ಆತಂಕದಲ್ಲಿರುವ ಅಭಿಮಾನಿಗಳಿಗೆ ತಾತ್ಕಾಲಿಕ “ಹೆಲ್ಪ್ಡೆಸ್ಕ್” ಆಗಿರುವಂತಾಗಿದೆ. ಹತಾಶೆಯಿಂದ ಹಿಡಿದು ಹಾಸ್ಯದವರೆಗಿನ ಅನೇಕ ಪ್ರತಿಕ್ರಿಯೆಗಳು ಅವರ ಕಾಮೆಂಟ್ ವಿಭಾಗದಲ್ಲಿ ಹರಿದುಬರುತ್ತಿವೆ. ಆದರೆ ಅನುಷ್ಕಾ ಈವರೆಗೆ ಸಾವಿರಾರು ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಕುಟುಂಬದ ಖಾಸಗಿತನ ಹಾಗೂ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಕುರಿತು ದಂಪತಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಅಭಿಮಾನಿಗಳು ಇದು ಜಾಲತಾಣಗಳಿಂದ ಶಾಶ್ವತ ನಿವೃತ್ತಿಯೇ ಅಥವಾ ತಾತ್ಕಾಲಿಕ ವಿರಾಮವೇ ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಈ ನಿಗೂಢ ಬೆಳವಣಿಗೆಯ ಕುರಿತಂತೆ ಅನುಷ್ಕಾ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರಿಂದ ಸ್ಪಷ್ಟನೆ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಪಶ್ಚಿಮ ಬಂಗಾಳ ಎಸ್ಐಆರ್ | ಸುಪ್ರೀಂ ಕೋರ್ಟ್ನ ದಾರಿ ತಪ್ಪಿಸಿದ ಚುನಾವಣಾ ಆಯೋಗ: ವರದಿ
ಪಶ್ಚಿಮ ಬಂಗಾಳದಲ್ಲಿನ ಎಸ್ಐಆರ್ ಪ್ರಕ್ರಿಯೆ ನಿಜಕ್ಕೂ ಗೊಂದಲದ ಗೂಡಾಗಿರುವ ಮಧ್ಯೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ಕೋಟ್ಯಂತರ ಜನರಿಗೆ ನೀಡಲಾಗಿರುವ ನೋಟಿಸ್ ಸಂಬಂಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ನ ಹಾದಿ ತಪ್ಪಿಸಿದೆ ಎಂದು reporters-collective.in ವರದಿ ಹೇಳಿದೆ. ಒಂದೂವರೆ ಕೊಟಿ ಮತದಾರರಿಗೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೀಡಿರುವ ನೋಟಿಸ್ಗಳು ಸ್ವಯಂಚಾಲಿತವಲ್ಲ ಎಂದು ನ್ಯಾಯಾಲಯದೆದುರು ಆಯೋಗ ಹೇಳಿದ್ದರೂ, ದೋಷಪೂರಿತ ಮತ್ತು ಸರಿಯಾಗಿ ಪರಿಶೀಲಿಸದ ಪ್ರಕ್ರಿಯೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅಸೆಂಬ್ಲಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಪೌರತ್ವ, ಗುರುತು, ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ, ಅವುಗಳು ಯಾಂತ್ರೀಕೃತವಾಗಿ ಕಳಿಸಿದ ನೋಟಿಸ್ಗಳಾಗಿವೆ ಎಂದು ಆಯುಷಿ ಕರ್ ಅವರ ತನಿಖಾ ವರದಿ ಬಹಿರಂಗಪಡಿಸಿದೆ. ಚುನಾವಣಾ ಆಯೋಗ ಕೇಂದ್ರೀಕೃತ, ದೋಷಪೂರಿತ ಕ್ರಮ ಅನುಸರಿಸಿರುವುದರಿಂದ ಮತ್ತು ನಿಯಮಿತವಾಗಿ ಪರಿಷ್ಕರಿಸದೇ ಇರುವ ಸಾಫ್ಟ್ವೇರ್ ಅನ್ನು ಬಳಸಿರುವುದರಿಂದ ಪಶ್ಚಿಮ ಬಂಗಾಳದ ಅಧಿಕಾರಿಗಳು 20 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ 1.5 ಕೋಟಿ ಮತದಾರರ ಪೌರತ್ವ, ಗುರುತು ಮತ್ತು ಮತದಾನದ ಹಕ್ಕುಗಳನ್ನು ನಿರ್ಧರಿಸಲು ಬೇಕಾಬಿಟ್ಟಿ ವಿಚಾರಣೆ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಗದ ಅಧಿಕೃತ ದಾಖಲೆಗಳು ಮತ್ತು ಆಂತರಿಕ ಡೇಟಾವನ್ನು ಪರಿಶೀಲಿಸಿದ್ದಲ್ಲದೆ, ಅದರ ಸಾಫ್ಟ್ವೇರ್ ಅಪ್ಲಿಕೇಶನ್ಗಳ ಕಾರ್ಯನಿರ್ವಹಣೆಯನ್ನು ಗಮನಿಸಿದ ನಂತರ ರಿಪೋರ್ಟರ್ಸ್ ಕಲೆಕ್ಟಿವ್ ಈ ಸತ್ಯವನ್ನು ಕಂಡುಕೊಂಡಿದೆ. ಐದು ವಿಧಾನಸಭಾ ಮಟ್ಟದ ಚುನಾವಣಾಧಿಕಾರಿಗಳು, ಆಯೋಗದ ರಾಜ್ಯ ಕಚೇರಿಯ ಮೂಲ ಮತ್ತು ಹಲವಾರು ಬೂತ್ ಮಟ್ಟದ ಅಧಿಕಾರಿಗಳನ್ನು ಮಾತನಾಡಿಸಿರುವುದಾಗಿ ವರದಿ ಹೆಳಿದೆ. ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಎಲ್ಲವನ್ನೂ ಪರಿಶೀಲಿಸಿ ಸಹಿ ಮಾಡಿ ನೋಟಿಸ್ ಕಳಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದಾಗಿದೆ ಎಂದು ಕಂಡುಕೊಂಡಿದ್ದಾಗಿ ವರದಿ ಹೇಳಿದೆ. ಇಆರ್ಒಗಳು ಕ್ಷೇತ್ರ ಮಟ್ಟದ ಅಧಿಕಾರಿಗಳಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿ ಸಿದ್ಧಪಡಿಸುವ, ನವೀಕರಿಸುವ ಮತ್ತು ಪರಿಷ್ಕರಿಸುವ ಅಧಿಕಾರ ಮತ್ತು ಹೊಣೆ ಅವರದ್ದಾಗಿದೆ. ನಿಯಮಗಳ ಆಧಾರದ ಮೇಲೆ ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸುವ ಅಧಿಕಾರ ಇಆರ್ಒಗಳದ್ದಾಗಿದೆ. ಸುಪ್ರೀಂ ಕೋರ್ಟ್ನ ಮುಂದೆ ಆಯೋಗ ಹೇಳಿರುವುದೇ ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ, ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಕೃತ ಮತ್ತು ಪರೀಕ್ಷಿಸದ ಕ್ರಮದ ಮೂಲಕ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ಗಳನ್ನು ಸಾಮೂಹಿಕವಾಗಿ ರಚಿಸಲಾಗಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ವರದಿ ಹೇಳಿದೆ. ಪ್ರತಿದಿನ ಸಾವಿರಾರು ಪ್ರಕರಣಗಳನ್ನು ಪರಿಶೀಲಿಸಬೇಕಾದ ಒತ್ತಡದ ಹಿನ್ನೆಲೆಯಲ್ಲಿ ಇಆರ್ಒಗಳು ಆಯೋಗದ ಅನುಮಾನಾಸ್ಪದ ಸಾಫ್ಟ್ ವೇರ್ ಮೂಲಕ ನೋಟಿಸ್ ರಚಿಸಿದ್ದಾರೆ. ಆಯೋಗ 2002ರ ಮತದಾರರ ಪಟ್ಟಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. ಹೆಚ್ಚಿನ ದಾಖಲೆಗಳು ಬಾಂಗ್ಲಾ(ಬಂಗಳಿ)ದಲ್ಲಿದ್ದವು. ಅವುಗಳನ್ನು ಪರೀಕ್ಷಿಸದ ಸಾಫ್ಟ್ವೇರ್ ಮೂಲಕ ಇಂಗ್ಲಿಷ್ಗೆ ಅನುವಾದಿಸಲಾಯಿತು. ಇದಾದ ಬಳಿಕ ಸಾಫ್ಟ್ವೇರ್ 1.31 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದ ಎಂದು ಗುರುತಿಸಿದೆ ಎಂದು ವರದಿ ಹೇಳಿದೆ. ಪರಿಷ್ಕರಣಾ ಕಾರ್ಯದ ಮಧ್ಯದಲ್ಲಿಯೇ ಸಾಫ್ಟ್ವೇರ್ ದೋಷಗಳಿಂದ ತುಂಬಿತ್ತು ಎಂಬುದನ್ನು ಪಶ್ಚಿಮ ಬಂಗಾಳದ ಸಿಇಒ ಕಚೇರಿ ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೊಷಗಳನ್ನು ಕಂಡುಕೊಂಡ ಬಳಿಕ ಪ್ರತಿಯೊಬ್ಬ ಮತದಾರರ ಪ್ರಕರಣವನ್ನೂ ಅಧಿಕಾರಿಗಳು ಸ್ವತಃ ಪರೀಕ್ಷಿಸುವುದು, ದೋಷಗಳನ್ನು ಬಗೆಹರಿಸುವುದು ಅಸಾಧ್ಯದ ಕೆಲಸವಾಗಿತ್ತು. ತಪ್ಪಾಗುವ ರಿಸ್ಕ್ ತೆಗೆದುಕೊಳ್ಳಲು ಬಯಸದ ಮತ್ತು ಕಡಿಮೆ ಗಡುವಿನೊಳಗೆ ಕೆಲಸ ಪೂರೈಸುವ ಒತ್ತಡದಲ್ಲಿದ್ದ ಸ್ಥಳೀಯ ಚುನಾವಣಾಧಿಕಾರಿಗಳು ವಿವೇಚನೆ ಕೈಬಿಟ್ಟರು. ಕ್ಷೇತ್ರ ಮಟ್ಟದ ಅಧಿಕಾರಿಗಳು ನೋಟಿಸ್ಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಲು ಮತ್ತು ನಂತರ ಸಾಮೂಹಿಕವಾಗಿ ಸಹಿ ಮಾಡಲು ಸಾಫ್ಟ್ವೇರ್ ಬಳಸಿದರು. ಹೀಗಾಗಿ, ಸಣ್ಣ ದೋಷವಿದ್ದರೂ ಅಂಥವರಿಗೂ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ ಹೋಗಿದೆ ಎಂಬುದನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅವರೆಲ್ಲರೂ ವಿಚಾರಣೆಗಾಗಿ ಹಾಜರಾಗಬೇಕಾದ ಅನಿವಾರ್ಯತೆ ಇದೆ. ಇಆರ್ಒಗಳು ಸಣ್ಣ ದೋಷಗಳನ್ನು ಪರಿಶೀಲಿಸುವುದು ಮತ್ತು ಕೈಬಿಡುವುದು ಅಸಾಧ್ಯವಾದ ಕೆಲಸವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. 1.5 ಕೋಟಿಗೂ ಹೆಚ್ಚು ಸಮನ್ಸ್ಗಳನ್ನು ಸಿದ್ಧಪಡಿಸಲಾಗಿದ್ದರೂ, ಅಧಿಕಾರಿಗಳು ಕೇವಲ 95.39 ಲಕ್ಷ ಮತದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ ಎಂಬುದನ್ನು ಜನವರಿ 24 ರವರೆಗಿನ ಡೇಟಾ ಹೇಳುತ್ತಿರುವುದಾಗಿ ವರದಿ ಹೇಳಿದೆ. ಜನವರಿ 24ರ ವೇಳೆಗೆ ಕೇವಲ 30 ಲಕ್ಷ ಮತದಾರರು ವಿಚಾರಣೆಗೆ ಹಾಜರಾಗಿದ್ದಾರೆ. ಒಂದು ತಿಂಗಳ ನಂತರ, ಆಯೋಗ ತನ್ನ ಯೋಜಿತ ವಿಚಾರಣೆಗಳಲ್ಲಿ ಕೇವಲ ಶೇ.20 ಅನ್ನು ಪೂರ್ಣಗೊಳಿಸಿದೆ. ಫೆಬ್ರವರಿ 14ರಂದು ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಉಳಿದ ಶೇ.80ರಷ್ಟು, ಅಂದರೆ ಸುಮಾರು 1.2 ಕೋಟಿ ಮತದಾರರ ಪರಿಶೀಲನೆ ನಡೆಸಲು ಮೂರು ವಾರಗಳು ಮಾತ್ರ ಉಳಿದಿವೆ. ಇಲ್ಲಿಯವರೆಗೆ ಪರಿಶೀಲಿಸಲಾದ ಮತದಾರರ ಸಂಖ್ಯೆ ಶೇ.7.24ರಷ್ಟಿದೆ. ಆರಂಭದಲ್ಲಿ 2002-2004ರ ಪಟ್ಟಿಗೆ ಬಹುಪಾಲು ಮತದಾರರನ್ನು ಡಿಜಿಟಲ್ ಲಿಂಕ್ ಮಾಡಲು ಆಯೋಗ ಆಂತರಿಕ ಮ್ಯಾಪಿಂಗ್ ಸಾಫ್ಟ್ವೇರ್ ಅನ್ನು ಸಿದ್ಧಪಡಿಸುತ್ತಿತ್ತು. ಈ ಡಿಜಿಟಲ್ ಪರಿಶೀಲನೆಯಲ್ಲಿ ತೇರ್ಗಡೆಯಾದವರು ಎಣಿಕೆಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎನ್ನಲಾಗಿತ್ತು. ಆದರೆ, ಸರಿಯಾದ ಪರಿಶೀಲನೆಗೆ ಒಳಪಟ್ಟಿರದ ಸಾಫ್ಟ್ವೇರ್ ಕಾರಣದಿಂದಾಗಿ ಕೋಟಿಗಟ್ಟಲೆ ಜನರ ಮತದಾನದ ಹಕ್ಕು ಅತಂತ್ರವಾಗುವ ಸ್ಥಿತಿ ಎದುರಾಗಿದೆ. ಡಿಸೆಂಬರ್ 16ರಂದು ಪ್ರಕಟವಾದ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 32 ಲಕ್ಷಕ್ಕೂ ಹೆಚ್ಚು ಮತದಾರರು ಮ್ಯಾಪ್ ಮಾಡದವರಾಗಿದ್ದರು. ಅಂದರೆ, ಅವರಾಗಲಿ ಅಥವಾ ಅವರ ಪೂರ್ವಜರಾಗಲಿ 2002ರ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಆಯೋಗ ಗುರುತಿಸಿತ್ತು. ಆದರೆ, ನಂತರ ಸಾಫ್ಟ್ವೇರ್ ಅನ್ನೇ ದೋಷಪೂರಿತ ಎಂದು ಹೇಳಲಾಯಿತು. 2002ರ ಮತದಾರರ ಪಟ್ಟಿಯ ಡಿಜಟಲೀಕರಣದಲ್ಲಿ ದೋಷಗಳಿವೆ ಎಂದು ಡಿಸೆಂಬರ್ 29ರಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಯೋಗದ ಪಶ್ಚಿಮ ಬಂಗಾಳ ಕಚೇರಿ ಒಪ್ಪಿಕೊಂಡಿದ್ದಾಗಿ ವರದಿ ಉಲ್ಲೇಖಿಸಿದೆ. ಪರಿಣಾಮವಾಗಿ, ಮ್ಯಾಪ್ ಮಾಡದ ಮತದಾರರನ್ನು ವೈಯಕ್ತಿಕ ವಿಚಾರಣೆಗೆ ಕರೆಸಲು ಚುನಾವಣಾಧಿಕಾರಿಗಳಿಗೆ ಆಯೋಗ ಅವಕಾಶ ನೀಡಿತು. ಮ್ಯಾಪ್ ಮಾಡದವರು ಎಂದು ಗುರುತಿಸುವ ಮೂಲಕ, ಆಯೋಗ ರಾಜ್ಯದ ಮತದಾರರ ಪಟ್ಟಿಗೆ ಮೋಸದಿಂದ ಸೇರಿಸಲಾದ ಅಕ್ರಮ ವಲಸಿಗರು ಸೇರಿದಂತೆ ಸಂಶಯಾಸ್ಪದ ಮತದಾರರನ್ನು ಗುರುತಿಸುವ ಸಾಧ್ಯತೆ ಇದೆಯಾದರೂ, ಬಂಗಾಳದ ಮತದಾರರಲ್ಲಿ ಕೇವಲ ಶೇ.3 ಮಾತ್ರ ಮ್ಯಾಪ್ ಮಾಡದವರು ಎಂದು ಹೇಳಲಾಗಿದೆ. ಮ್ಯಾಪ್ ಮಾಡಲಾದ ಮತದಾರರಲ್ಲಿ ತಾರ್ಕಿಕ ವ್ಯತ್ಯಾಸಗಳನ್ನು ಕಂಡುಹಿಡಿಯಲು ಈಗ ಅದೇ ಸಾಫ್ಟ್ವೇರ್ ಅನ್ನು ಬಳಸಲಾಗಿದೆ. 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ನಡುವೆ ಕಾಗುಣಿತ ವ್ಯತ್ಯಾಸಗಳಿದ್ದರೆ, ಆರು ಅಥವಾ ಹೆಚ್ಚಿನ ಮತದಾರರು ಒಂದೇ ಪೂರ್ವಜರಿಗೆ ಸಂಬಂಧಿಸಿದ್ದರೆ ಅಥವಾ ಮತದಾರರು ಮತ್ತು ಪೂರ್ವಜರ ನಡುವಿನ ವಯಸ್ಸಿನ ವ್ಯತ್ಯಾಸ ಆಯೋಗದ ಮಾನದಂಡಗಳಿಗೆ ಹೊಂದದಿದ್ದರೆ ಅಂಥವರನ್ನು ತಾರ್ಕಿಕ ವ್ಯತ್ಯಾಸದ ಅಡಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ. ಈಗ 1.31 ಕೋಟಿ ಮತದಾರರು ಇದರ ಅಡಿಯಲ್ಲಿ ಅತಂತ್ರರಾಗಿದ್ದಾರೆ ಮತ್ತು ಇವುಗಳಲ್ಲಿ ಗಂಭೀರ ವ್ಯತ್ಯಾಸಗಳಿಗಿಂತ ಸಣ್ಣಪುಟ್ಟ ದೋಷಗಳಿರುವ ಪ್ರಕರಣಗಳು ಹೆಚ್ಚು ಎಂದು ಬಿಎಲ್ಒಗಳು ಒಪ್ಪಿಕೊಂಡಿದ್ದಾಗಿ ವರದಿ ಹೇಳುತ್ತದೆ. ಇದು ಸಾಮಾನ್ಯವಾಗಿ ಬಾಂಗ್ಲಾದಿಂದ ಇಂಗ್ಲಿಷ್ಗೆ ಮತದಾರರ ಪಟ್ಟಿಯನ್ನು ಸಾಫ್ಟ್ವೇರ್ ಮೂಲಕ ಬದಲಿಸಿರುವಲ್ಲಿ ಆಗಿರುವ ದೋಷ ಎನ್ನಲಾಗಿದೆ. ಈ ನಡುವೆ, ತಾರ್ಕಿಕ ವ್ಯತ್ಯಾಸಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಟಿಎಂಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿರುವ ಆಯೋಗ, ಇಆರ್ಒಗಳು ವಿವೇಚನೆ ಬಳಸಿ ನೋಟಿಸ್ ನೀಡಿದ್ದಾಗಿ ಹೇಳಿದೆ. ಆದರೆ ವಾಸ್ತವದಲ್ಲಿ ಸೀಮಿತ ಅವಧಿಯಲ್ಲಿ ಇಷ್ಟೊಂದು ನೋಟಿಸ್ ನೀಡುವುದು ಅಸಾಧ್ಯ ಎಂಬುದು ಟಿಎಂಸಿ ವಾದ. ಸಣ್ಣ ದೋಷಗಳನ್ನು ಆಂತರಿಕವಾಗಿ ಪರಿಹರಿಸಲು ಮತ್ತು ಅವರನ್ನು ವಿಚಾರಣೆಗೆ ಕರೆಯದಿರಲು ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಹಾಗಾಗಿಲ್ಲ. ತಾರ್ಕಿಕ ವ್ಯತ್ಯಾಸ ಎನ್ನಲಾಗಿರುವ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಒಂದೇ ಅಕ್ಷರ ವ್ಯತ್ಯಾಸವಾಗಿದ್ದರೂ, ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದು ಬಿಎಲ್ಒಗಳು ಹೇಳಿರುವುದನ್ನು ವರದಿ ಉಲ್ಲೆಖಿಸಿದೆ. ಈ ಪರಿಸ್ಥಿತಿ ಈಗ ಪಶ್ಚಿಮ ಬಂಗಾಳದ 1.5 ಕೋಟಿ ಜನರು ತಮ್ಮ ಅಸ್ತಿತ್ವ ಮತ್ತು ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ವಿಷಯದಲ್ಲಿ ಆಯೋಗ ಸುಪ್ರೀಂ ಕೋರ್ಟ್ ಅನ್ನು ಹಾದಿ ತಪ್ಪಿಸಿರುವುದು ಸ್ಪಷ್ಟ ಎಂದು ವರದಿ ಹೇಳಿದೆ.
ಗೌಡ್ರನ್ನು ಭೇಟಿಯಾಗಿ ಗ್ರೇಟ್ ಲೀಡರ್ ಎಂದ ಮೋದಿ : ಕಾಮೆಂಟ್ ಬಾಕ್ಸ್ನಲ್ಲಿ ಬಂತು 'My President' ರಿಪ್ಲೈ!
PM Modi Meets Deve Gowda : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಅವರೊಬ್ಬರು ಗ್ರೇಟ್ ಲೀಡರ್ ಎಂದು ಮೋದಿ, ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ತರಹೇವಾರಿ ಕಾಮೆಂಟ್’ಗಳು ಬಂದಿದ್ದು, ಅದರಲ್ಲಿ ಒಬ್ಬರು My ರಾಷ್ಟ್ರಪತಿ ಎಂದು ಕಾಮೆಂಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಎತ್ತಿನಹೊಳೆ ಯೋಜನೆ
►ಸಿಎಜಿ ವರದಿಯಲ್ಲಿ ಬಹಿರಂಗ ►ಅಧಿವೇಶನದಲ್ಲಿ ವರದಿ ಮಂಡನೆ
Bangladesh out of U19 World Cup: BCB made a lame excuse!
ಢಾಕಾ: U19 ವಿಶ್ವಕಪ್ನಲ್ಲಿ ಬಾಂಗ್ಲಾ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಆದರೆ ತಂಡದ ವೈಫಲ್ಯ ಒಪ್ಪಿಕೊಳ್ಳುವ ಬದಲು ಪಂದ್ಯಗಳ ವೇಳಾಪಟ್ಟಿ ಮತ್ತು ಪ್ರಯಾಣ ವ್ಯವಸ್ಥೆಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೂಷಿಸಿದೆ. ನ್ಯಾಯಸಮ್ಮತವಲ್ಲದ ವೇಳಾಪಟ್ಟಿ ಹಾಗೂ ಪದೇ ಪದೇ ಪ್ರಯಾಣ ಬೆಳೆಸಬೇಕಾದ ಕಾರಣ, ತಂಡದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಬಿಸಿಬಿ ಆಪಾದಿಸಿದೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಭಾರತಕ್ಕೆ ತಂಡ ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿ ಟೂರ್ನಿಯನ್ನು ಬಹಿಷ್ಕರಿಸಿರುವ ನಡುವೆಯೇ ಬಿಸಿಬಿ ಈ ಹೇಳಿಕೆ ನೀಡಿದೆ. ಪುರುಷರ ಟಿ20 ಟೂರ್ನಿಗೆ ಇದೀಗ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಲಭ್ಯವಾಗಿದೆ. ಇದೀಗ ಬಿಸಿಬಿ ಮ್ಯಾಚ್ ಡೆವಲಪ್ಮೆಂಟ್ ಸಂಚಾಲಕ ಹಬೀಬುಲ್ ಹಶೀರ್ ದೇಶದ 19ರ ವಯೋಮಿತಿಯ ತಂಡದ ಪ್ರವಾಸ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಂಡದ ಮನಸ್ಥಿತಿಯ ಬದಲಾಗಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧ ನಮ್ಮ ಲೆಕ್ಕಾಚಾರಗಳು ಕೈಕೊಟ್ಟವು. ನಾನು ನೆಪಗಳನ್ನು ಮುಂದಿಡುತ್ತಿದ್ದೇನೆ ಎಂದು ಜನ ಭಾವಿಸಿದರೂ ಪ್ರಯಾಣದ ವೇಳಾಪಟ್ಟಿಯ ಬಗ್ಗೆ ನಾನು ಹೇಳಲೇಬೇಕು. ಭಾರತ ವಿರುದ್ಧದ ಪಂದ್ಯಗಳ ಮುನ್ನ ನಮ್ಮ ಹುಡುಗರು ಸುಧೀರ್ಘ ಬಸ್ ಪ್ರಯಾಣ ಮಾಡಿ ತೀರಾ ದಣಿಯುವುದನ್ನು ತಪ್ಪಿಸಲು, ನೇರ ವಿಮಾನ ಇಲ್ಲದ ಕಾರಣ ಬಿಸಿಬಿ ಬಸ್ ಪ್ರಯಾಣದ ಬದಲು ದೇಶೀಯ ವಿಮಾನ ಪ್ರಯಾಣಕ್ಕೆ ಪಾವತಿಸಿತ್ತು ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದ ಮುಖ್ಯ ಕೋಚ್ ನವೀದ್ ನವಾಝ್ ಮತ್ತು ಹಲವು ಆಟಗಾರರು ಪಂದ್ಯಗಳ ವೇಳಾಪಟ್ಟಿ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಪಂದ್ಯಕ್ಕೆ ತಂಡ ಹರಾರೆಯಿಂದ ಬುಲವಯೊ ಪಟ್ಟಣಕ್ಕೆ ಮಳೆಗಾಲದಲ್ಲಿ ಒಂಬತ್ತು ಗಂಟೆ ಕಾಲ ಬಸ್ ಪ್ರಯಾಣ ಕೈಗೊಳ್ಳಬೇಕಾಯಿತು. ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಮಹತ್ವದ ಪಂದ್ಯಗಳಿಗಾಗಿ ಬಿಸಿಬಿ ಆಂತರಿಕ ವಿಮಾನ ವ್ಯವಸ್ಥೆ ಮಾಡಿತ್ತು. ಜನವರಿ 23ರಂದು ಹರಾರೆಯಲ್ಲಿ ಅಮೆರಿಕ ವಿರುದ್ಧದ ಪಂದ್ಯಕ್ಕೂ ಬಸ್ಸಿನಲ್ಲಿ ಮರಳುವ ಬದಲು ವಿಮಾನ ಪ್ರಯಾಣಕ್ಕೆ ಬೇಡಿಕೆ ಇತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ಜ.26ರಂದು ನಡೆದ ಸೂಪರ್ ಸಿಕ್ಸ್ ಪಂದ್ಯಕ್ಕೂ ಬುಲವಯೊಗೆ ಪ್ರಯಾಣಿಸಲು ವಿಮಾನದ ಬೇಡಿಕೆ ಇತ್ತು. ವೇಳಾಪಟ್ಟಿಗಳು ನಮಗೆ ನ್ಯಾಯಸಮ್ಮತವಾಗಿರಲಿಲ್ಲ. ಆರಂಭಿಕ ವೇಳಾಪಟ್ಟಿಯಂತೆ ನಾವು ಎರಡು ಅಭ್ಯಾಸ ಪಂದ್ಯಗಳನ್ನು ಮಸ್ವಿಂಗೊ ಮತ್ತು ಬುಲಾವಿಯೊದಲ್ಲಿ ಆಡಬೇಕಿತ್ತು. ಬಳಿಕ ಐಸಿಸಿ ದಿಢೀರನೇ ವೇಳಾಪಟ್ಟಿ ಬದಲಿಸಿ, ಸ್ಥಳಗಳನ್ನು ಬದಲಿಸಿದ್ದರಿಂದ ಹೆಚ್ಚಿನ ಪ್ರಯಾಣ ಮಾಡಬೇಕಾಯಿತು ಎಂದು ಹಶೀರ್ ಹೇಳಿದ್ದಾರೆ.
COMEDK–UGET 2026 ಪ್ರವೇಶ ಪರೀಕ್ಷೆ ಮೇ 9ಕ್ಕೆ ನಿಗದಿ, ಫೆಬ್ರವರಿ 3ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ
ಬೆಂಗಳೂರು: ಕಾಮೆಡ್ಕೆ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಬಂದಿದೆ. ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ಕಾಲೇಜುಗಳ ಒಕ್ಕೂಟ (COMEDK) 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪರೀಕ್ಷೆಯನ್ನು ಮೇ 9 (ಶನಿವಾರ) ರಂದು ನಡೆಸಲು ನಿರ್ಧರಿಸಲಾಗಿದೆ. COMEDK-UGET ಎಂದು ಕರೆಯಲ್ಪಡುವ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿವಿಧ
Uttar Pradesh| ದಂಪತಿ ಮೃತ್ಯು, ಮೂವರು ಮಕ್ಕಳು ಗಂಭೀರ; ವಿಷಪ್ರಾಶನ ಶಂಕೆ
ಗ್ರೇಟರ್ ನೋಯ್ಡಾ, ಜ.30: ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಪತಿ–ಪತ್ನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಪೋಷಕರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ವಿಷಪ್ರಾಶನದಿಂದ ಸಂಭವಿಸಿದ ಪ್ರಕರಣವೇ ಎಂಬುದರ ಜೊತೆಗೆ, ಕೊಲೆ–ಆತ್ಮಹತ್ಯೆ ಯತ್ನದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಹಣಕಾಸು ತೊಂದರೆ ಅಥವಾ ಯಾವುದೇ ತಕ್ಷಣದ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯೊಳಗೆ ಕುಟುಂಬದ ಎಲ್ಲ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತು. ಮೇಲ್ನೋಟಕ್ಕೆ ಐವರಲ್ಲಿಯೂ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, 42 ಮತ್ತು 38 ವರ್ಷದ ಪತಿ–ಪತ್ನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರ 10 ವರ್ಷದ ಪುತ್ರಿ, 8 ವರ್ಷದ ಪುತ್ರ ಮತ್ತು 4 ವರ್ಷದ ಪುತ್ರಿಯನ್ನು ಗಂಭೀರ ಸ್ಥಿತಿಯಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ತನಿಖೆಯಲ್ಲಿದೆ. ಪ್ರಸ್ತುತ ಇದು ಆತ್ಮಹತ್ಯೆಯ ಪ್ರಕರಣವಾಗಿರಬಹುದು ಎಂದು ತೋರುತ್ತಿದೆ,” ಎಂದು ಎಡಿಸಿಪಿ ಸಂತೋಷ್ ಕುಮಾರ್ ಹೇಳಿದ್ದಾರೆ. 10 ವರ್ಷದ ಪುತ್ರಿ ನೀಡಿದ ಮಾಹಿತಿಯಂತೆ, ಕುಟುಂಬದವರು ಕೊನೆಯದಾಗಿ ಬುಧವಾರ ರಾತ್ರಿ ಭೋಜನ ಸೇವಿಸಿದ್ದರು. ಗುರುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಆಕೆ ಎಚ್ಚರಗೊಂಡು, ತನ್ನ ತಾಯಿ–ತಂದೆ ಎಚ್ಚರಗೊಳ್ಳುತ್ತಿಲ್ಲ ಎಂದು ಅಜ್ಜನಿಗೆ ತಿಳಿಸಿದ್ದಾಳೆ. ಭೋಜನದಲ್ಲಿ ವಿಷ ಮಿಶ್ರಣವಾಗಿರಬಹುದೆಂಬ ಶಂಕೆಯಿದ್ದು, ಯಾವ ವಿಧದ ವಿಷ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ಹಾಗೂ ಫೊರೆನ್ಸಿಕ್ ವರದಿಗಳ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.
Uttar Pradesh| ವಿಷಪ್ರಾಶನ, ಆತ್ಮಹತ್ಯೆ ಶಂಕೆ: ದಂಪತಿ ಮೃತ್ಯು; ಮೂವರು ಮಕ್ಕಳು ಗಂಭೀರ
ನೋಯ್ಡಾ: ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಘಟನೆಯಲ್ಲಿ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ದಂಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಸಮಸ್ಯೆ ಅಥವಾ ಇತರೆ ಕಾರಣಗಳು ಈ ಕೃತ್ಯಕ್ಕೆ ಕಾರಣವಾಗಿರಬಹುದೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುರುವಾರ ಬೆಳಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತ್ತು. ಮೇಲ್ನೋಟಕ್ಕೆ ಎಲ್ಲರೂ ವಿಷಸೇವಿಸಿದಂತೆ ಕಾಣುತ್ತಿದೆ ಎಂದು ಎಡಿಸಿಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 42 ಹಾಗೂ 38 ವರ್ಷದ ದಂಪತಿ ಮೃತಪಟ್ಟಿದ್ದಾರೆ. 10 ಮತ್ತು 4 ವರ್ಷದ ಇಬ್ಬರು ಪುತ್ರಿಯರು ಹಾಗೂ 8 ವರ್ಷದ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯುಜಿಸಿ ನಿಯಮಾವಳಿಗೆ ತಡೆ: ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಹುನ್ನಾರ!
ಎಡಗೈಯಲ್ಲಿ ಕೊಟ್ಟು, ಬಲಗೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದೇ ಇರಬೇಕು. ಸುಪ್ರೀಂಕೋರ್ಟ್ನ ಸೂಚನೆಯನ್ವಯ ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿತ್ತು. ಇದೀಗ ಆ ನಿಯಮಾವಳಿಗಳಿಗೆ ಅದೇ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ನಿಯಮಾವಳಿಗಳು ಜನರನ್ನು ವಿಂಗಡಿಸುತ್ತವೆ, ತಾರತಮ್ಯದಿಂದ ಕೂಡಿದೆ ಹಾಗೂ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಯಮಾವಳಿಗಳು ಜಾರಿಗೆ ಬಂದ ದಿನದಿಂದ ಇದರ ವಿರುದ್ಧ ಮೇಲ್ಜಾತಿಯ ಕೆಲವು ಗುಂಪುಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿಯೊಳಗಿರುವ ಕೆಲವು ಜನಪ್ರತಿನಿಧಿಗಳು ತಮ್ಮದೇ ಸರಕಾರದ ವಿರುದ್ಧ ಧ್ವನಿಯೆತ್ತ ತೊಡಗಿದ್ದರು. ಭವಿಷ್ಯದಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಮೇಲೆ ನಡೆಯಬಹುದಾದ ದೌರ್ಜನ್ಯಗಳನ್ನು ಊಹಿಸಿ ಕೆಲವರು ಈ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ, ದೌರ್ಜನ್ಯಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸಂಘಟನೆಗಳು ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಸಂತ್ರಸ್ತ ಸಮುದಾಯಗಳ ನೋವಿಗೆ ಸುಪ್ರೀಂಕೋರ್ಟ್ ಕಿವಿಯಾಗುವ ಬದಲು, ಆರೋಪಿ ಸ್ಥಾನದಲ್ಲಿ ನಿಂತಿರುವ ಜನರ ಧ್ವನಿಯಾಗಲು ಹೊರಟಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.ನಿಯಮಾವಳಿಗಳಲ್ಲಿ ಇರುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳ ಕಾರಣಕ್ಕಾಗಿ ಮತ್ತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ತಡೆಯಾಜ್ಞೆಯನ್ನು ನೀಡಿರುವುದಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ತಡೆಯಾಜ್ಞೆಯನ್ನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆಡಿರುವ ಮಾತುಗಳು ಬೇರೆಯೇ ಅರ್ಥವನ್ನು, ಸಂದೇಶವನ್ನು ನೀಡುತ್ತದೆ. ‘‘ಜಾತಿ ಆಧಾರಿತ ತಾರತಮ್ಯವನ್ನು ರೂಪಿಸುವ ಕೆಲವು ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರುಪಯೋಗ ಪಡಿಸಿಕೊಳ್ಳಬಹುದಾಗಿದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಡುತ್ತಿದೆ. ಹಾಗೆ ನೋಡಿದರೆ ದುರುಪಯೋಗದ ಮಾತುಗಳು ಕೇವಲ ಯುಜಿಸಿ ನಿಯಮಾವಳಿಗೆ ಮಾತ್ರ ಅನ್ವಯಿಸುತ್ತದೆಯೆ? ಯುಎಪಿಎ ಕಾಯ್ದೆಗಳ ದುರುಪಯೋಗಕ್ಕಾಗಿ ಇಂದು ಭಾರತವು ವಿಶ್ವದಲ್ಲೇ ಕುಖ್ಯಾತವಾಗಿದೆ. ಪ್ರತಿ ನಿತ್ಯ ಗೋಹತ್ಯೆ ನಿಷೇಧ ಕಾಯ್ದೆಗಳು, ಮತಾಂತರ ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಸುಪ್ರೀಂಕೋರ್ಟ್ಗೆ ಕಾಣುತ್ತಿಲ್ಲವೆ? ದೇಶದಲ್ಲಿ ಕೆಲವು ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಎಷ್ಟು ನಿಜವೋ, ಇನ್ನು ಕೆಲವು ಕಾಯ್ದೆಗಳನ್ನು ದುರುಪಯೋಗ ಪಡಿಸುವುದಕ್ಕಾಗಿಯೇ ಜಾರಿಗೆ ತರಲಾಗಿದೆ ಎನ್ನುವುದು ಅಷ್ಟೇ ನಿಜ. ಸುಪ್ರೀಂಕೋರ್ಟ್ ಇವೆಲ್ಲದರ ಕುರಿತಂತೆ ಮೌನವಾಗಿದ್ದು, ಯುಜಿಸಿಯ ಈ ನಿಯಮಗಳ ಬಗ್ಗೆ ಮಾತ್ರ ಯಾಕೆ ತಲೆಕೆಡಿಸಿಕೊಳ್ಳುತ್ತಿದೆ? ಈ ದೇಶದಲ್ಲಿ ತಲೆತಲಾಂತರಗಳಿಂದ ಜಾತಿ ತಾರತಮ್ಯ, ಜಾತಿ ದೌರ್ಜನ್ಯಗಳು ಅಸ್ತಿತ್ವದಲ್ಲಿವೆ. ವಿಪರ್ಯಾಸವೆಂದರೆ ಈ ಜಾತಿ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಮೇಲ್ಜಾತಿಯ ಜನರು, ಜಾತಿದೌರ್ಜನ್ಯ ವಿರೋಧಿ ಕಾನೂನು ಎಲ್ಲೋ ಒಂದೆರಡು ಬಾರಿ ದುರುಪಯೋಗವಾದಾಕ್ಷಣ, ಆ ಕಾನೂನಿನ ಔಚಿತ್ಯವನ್ನೇ ಪ್ರಶ್ನಿಸತೊಡಗುತ್ತಾರೆ. ಇದೀಗ ಯುಜಿಸಿ ನಿಯಮಗಳನ್ನು ಪ್ರಶ್ನಿಸುತ್ತಿರುವವರೂ ಅದೇ ವರ್ಗದ ಜನರು. ಅವರ ರಾಗಕ್ಕೆ ಸುಪ್ರೀಂಕೋರ್ಟ್ ತಾಳ ಹಾಕಲು ಮುಂದಾಗಿರುವುದು ಕಳವಳಕಾರಿಯಾಗಿದೆ. ‘‘ದೇಶವು ಹಿಂದಕ್ಕೆ ಚಲಿಸುತ್ತಿದೆಯೆ? ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಏನು ಸಾಧಿಸಿದ್ದೇವೆಯೋ ಈಗ ನಾವು ಅದರಿಂದ ಹಿಂದೆ ಹೋಗಬೇಕೆ?’’ ಎಂದೂ ಸುಪ್ರೀಂಕೋರ್ಟ್ ಕೇಳಿದೆ. ಈ ಪ್ರಶ್ನೆಯನ್ನು ನಿಯಮಾವಳಿಯನ್ನು ವಿರೋಧಿಸುತ್ತಿರುವವರೊಂದಿಗೆ ಕೇಳಿದೆಯೋ ಅಥವಾ ಸರಕಾರವನ್ನು ಕೇಳಿದೆಯೋ ಎನ್ನುವ ಗೊಂದಲವಿದೆ. ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಸಂಪೂರ್ಣ ವಿಫಲವಾಗಿದೆ ಎನ್ನುವುದರಲ್ಲಿ ಸುಪ್ರೀಂಕೋರ್ಟ್ಗೆ ಅನುಮಾನವಿದೆಯೆ? ನ್ಯಾಯದೇವತೆಯ ಪ್ರತಿಮೆಯ ಕಣ್ಣಿನ ಪಟ್ಟಿ ಬಿಚ್ಚಿದ ಬಳಿಕವೂ ಈ ದೇಶದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳು, ಜಾತಿ ಅಸಮಾನತೆಗಳು ಯಾಕೆ ನ್ಯಾಯಾಲಯಕ್ಕೆ ಕಾಣುತ್ತಿಲ್ಲ? ಯುಜಿಸಿಯ ಈ ನಿಯಮಗಳಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಜಾತಿ ತಾರತಮ್ಯ ಸೃಷ್ಟಿಯಾಗಿದೆ ಎಂದು ಸುಪ್ರೀಂಕೋರ್ಟ್ ಭಾವಿಸುತ್ತದೆಯೆ ? ಯುಜಿಸಿಯು ಕಠಿಣ ಕಾನೂನನ್ನು ಜಾರಿಗೆ ತರಲು ಹೊರಟಿರುವುದೇ ಜಾತಿ ರಹಿತ ಸಮಾಜವನ್ನು ಸಾಧಿಸುವುದಕ್ಕಾಗಿ ಎನ್ನುವುದು ಸುಪ್ರೀಂಕೋರ್ಟ್ಗೆ ಯಾಕೆ ಅರ್ಥವಾಗಿಲ್ಲ? ಅಥವಾ ಜಾತಿ ತಾರತಮ್ಯದ ವಿಷಯದಲ್ಲಿ ಸುಪ್ರೀಂಕೋರ್ಟ್ ನಿದ್ರೆಯಲ್ಲಿರುವಂತೆ ನಟಿಸುತ್ತಿದೆಯೆ? ಈ ದೇಶದ ಉನ್ನತ ಶಿಕ್ಷಣದಲ್ಲಿ ಎಲ್ಲ ಜಾತಿ, ಸಮುದಾಯ ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಜಾತಿ ತಾರತಮ್ಯ ಅಳಿಯಬೇಕು. ಅದಕ್ಕಾಗಿ ಕಠಿಣ ಕಾನೂನಿನ ಮಾತ್ರ ಅದನ್ನು ಸಾಧಿಸಬಹುದಾಗಿದೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಕುರಿತಂತೆ ಹಲವು ಸಂಘಟನೆಗಳು ವರದಿಗಳನ್ನು ನೀಡಿವೆ. ಈ ತಾರತಮ್ಯಕ್ಕೆ ಬಲಿಯಾದವರ ಕುರಿತಂತೆ ಸರಕಾರದ ಬಳಿ ಅಧಿಕೃತ ಅಂಕಿಅಂಶಗಳೂ ಇವೆ. ಈ ಹಿನ್ನೆಲೆಯಲ್ಲಿ ಯುಜಿಸಿಗೆ ಇಂತಹದೊಂದು ನಿಯಮಗಳನ್ನು ಜಾರಿಗೆ ತರುವ ಅನಿವಾರ್ಯ ಸೃಷ್ಟಿಯಾಯಿತು. ಇದು ಸುಪ್ರೀಂಕೋರ್ಟ್ಗೆ ತಿಳಿಯದಿರುವುದೇನೂ ಅಲ್ಲ. ಇತ್ತ ಬಿಜೆಪಿಯೂ ಅಡ್ಡಗೋಡೆಯಲ್ಲಿ ದೀಪವಿಡುವ ಪ್ರಯತ್ನ ನಡೆಸುತ್ತಿದೆ. ಹಿಂದುಳಿದವರ್ಗಗಳನ್ನು ಒಲಿಸಿಕೊಳ್ಳಲು ನಿಯಮಗಳನ್ನು ಜಾರಿಗೆ ತರುವ ನಟನೆಯನ್ನಷ್ಟೇ ಮಾಡಿ, ಒಳಗಿನಿಂದಲೇ ಅದರ ವಿರುದ್ಧ ಸಂಚುಗಳನ್ನು ನಡೆಸುತ್ತಿದೆ. ಯುಜಿಸಿಯ ನಿಯಮಗಳ ವಿರುದ್ಧ ಆರೆಸ್ಸೆಸ್ ಸಂಘಟನೆಯೂ ಅಸಮಾಧಾನವನ್ನು ಹೊಂದಿದ್ದು ಸರಕಾರದ ಮೇಲೆ ಒತ್ತಡಗಳನ್ನು ಹಾಕತೊಡಗಿದೆ. ಹೇಗೆ ಯಾವ ಹೋರಾಟಗಳೂ ಇಲ್ಲದೆ ಈ ದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10 ಮೀಸಲಾತಿಯನ್ನು ನೀಡಲಾಯಿತೋ, ಅದೇ ರೀತಿಯಲ್ಲಿ ಒಂದು ಸಣ್ಣ ಗುಂಪಿನ ಆಕ್ಷೇಪಗಳನ್ನೇ ಈ ದೇಶದ ಆಕ್ಷೇಪವೆಂಬಂತೆ ಬಿಂಬಿಸಿ ಯುಜಿಸಿ ನಿಯಮಗಳನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರವೇ ಒಳಗಿಂದೊಳಗೆ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ ಸುಪ್ರೀಂಕೋರ್ಟ್ನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಅಜಿತ್ ಪವಾರ್ ಪತ್ನಿಗೆ ಡಿಸಿಎಂ ಪಟ್ಟ, ಮಗನಿಗೆ ಉಪಚುನಾವಣಾ ಟಿಕೆಟ್: ಎನ್ಸಿಪಿ ಬೇಡಿಕೆ
ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಬೆನ್ನಲ್ಲೇ, ತೆರವಾಗಿರುವ ಡಿಸಿಎಂ ಹುದ್ದೆಯನ್ನು ಪವಾರ್ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಅವರಿಗೆ ನೀಡಬೇಕು ಹಾಗೂ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಿತ್ ಪವಾರ್ ಪುತ್ರ ಜಯ್ ಅವರಿಗೆ ಟಿಕೆಟ್ ನೀಡಬೇಕು ಎಂದು ಎನ್ಸಿಪಿ ಬೇಡಿಕೆ ಮುಂದಿಟ್ಟಿದೆ. ಗುರುವಾರ ಸುನೇತ್ರಾ ಪವಾರ್ (62) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪಕ್ಷದ ಪ್ರಮುಖರು, ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೇ ಎನ್ಸಿಪಿ ನೇತೃತ್ವ ವಹಿಸಿ ಮಹಾಯುತಿ ಸರ್ಕಾರ ಸೇರಬೇಕು ಎಂಬ ಬೇಡಿಕೆ ಮುಂದಿಟ್ಟರು. ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತತ್ಕರೆ ಮತ್ತು ಸಚಿವ ಛಗನ್ ಭುಜಬಲ್ ನಿಯೋಗದಲ್ಲಿದ್ದರು. ಸಚಿವ ಹಾಗೂ ಅಜಿತ್ ಪವಾರ್ ಅವರ ಕಟ್ಟಾ ಅನುಯಾಯಿ ನರಹರಿ ಝಿರ್ವಾಲ್ ಬಹಿರಂಗವಾಗಿ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ನಾನು ಎಲ್ಲ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದು, ಸುನೇತ್ರಾ ಸಂಪುಟ ಸೇರಬೇಕು ಎಂದು ಬಯಸಿದ್ದಾರೆ. ನಾನು ಇದನ್ನು ಬೆಂಬಲಿಸುತ್ತೇನೆ. ಪಕ್ಷದ ಹಿರಿಯ ಸದಸ್ಯರ ಜತೆಗೆ ಈ ಬಗ್ಗೆ ಚರ್ಚಿಸಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಜಿತ್ ದಾದಾ ತಮ್ಮ ಪುತ್ರ ಜಯ್ ಅವರನ್ನು ಹೆಚ್ಚಿನ ಹೊಣೆಗಾರಿಕೆಗೆ ಸಜ್ಜುಗೊಳಿಸುತ್ತಿದ್ದರು. ಅವರ ನಿಧನದ ಬಳಿಕ ಜಯ್ ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಎಲ್ಲ ಎನ್ಸಿಪಿ ಹಿರಿಯ ಮುಖಂಡರು ಇದನ್ನು ಬೆಂಬಲಿಸಿದ್ದಾರೆ ಎಂದು ನರಹರಿ ತಿಳಿಸಿದರು.
Bandipur: ಕರ್ನಾಟಕ - ಕೇರಳ ಬಂಡೀಪುರ ಸಂಚಾರ: ಪ್ರಿಯಾಂಕಾ ಗಾಂಧಿ ಸರ್ಕಸ್; ಸಚಿವ ನಿತಿನ್ ಗಡ್ಕರಿ ಸಾಥ್
ಬಂಡೀಪುರ: ಬಂಡೀಪುರ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರ್ನಾಟಕ ಹಾಗೂ ಕೇರಳಕ್ಕೆ ಪ್ರಮುಖ ಸಂಚಾರ ಮಾರ್ಗ ಕಲ್ಪಿಸುವ ಬಂಡೀಪುರ ಮಾರ್ಗದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೇರಳ ಸರ್ಕಾರವು ಪ್ರಯತ್ನ ಮಾಡುತ್ತಲ್ಲೇ ಇದೆ. ಅಷ್ಟು ಮಾತ್ರವಲ್ಲ ಕೇರಳ ವಾಯನಾಡ್ನ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಹ ಸರ್ಕಸ್ ಮಾಡುತ್ತಿದ್ದಾರೆ. ವಯನಾಡ್ನ ಲೋಕಸಭೆ ಉಪ
ಬೆಂಗಳೂರಲ್ಲಿ ಕುಡಿದು ವಾಹನ ಚಾಲಾಯಿಸಿದ 19,548 ವಾಹನಗಳ ಡಿಎಲ್ ಅಮಾನತಿಗೆ ಪೊಲೀಸರ ಶಿಫಾರಸು
ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, 19,548 ಚಾಲಕರ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ. 2025ರಲ್ಲಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೂ, ಪರವಾನಗಿ ಅಮಾನತು ಪ್ರಕ್ರಿಯೆ ವಿಳಂಬವಾಗುತ್ತಿರುವುದು ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ.
ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ಫೆ.12ರಿಂದ ಐದು ದಿನ ಅಣಬೆ ಮೇಳ ನಡೆಯುತ್ತಿತ್ತು. ಪ್ರತಿ ವರ್ಷವೂ ಇಲ್ಲಿನ ತೋಟಗಾರಿಕಾ ಇಲಾಖೆಯೂ ಒಂದೊಂದು ದುಬಾರಿ ಆಹಾರ ಪದಾರ್ಥವನ್ನು ಪ್ರದರ್ಶನಕ್ಕಿಡುತ್ತಾರೆ. ಅಂತೆಯೇ ಈ ಬಾರಿ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನದಲ್ಲಿ ವಿಶ್ವದ ದುಬಾರಿ ಅಣಬೆ 'ಯಾರ್ಸಾ ಗುಂಬಾ' ಪ್ರದರ್ಶನಕ್ಕಿಡಲಾಗುತ್ತಿದೆ. 15 ಲಕ್ಷ ರೂ. ಬೆಲೆ ಬಾಳುವ ಈ ಅಣಬೆಯನ್ನು 2 ಲಕ್ಷ ರೂ. ವೆಚ್ಚದಲ್ಲಿ ಹಿಮಾಲಯದಿಂದ ತರಿಸಲಾಗುತ್ತಿದೆ. ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಮೇಳದ ಉದ್ದೇಶವಾಗಿದೆ.
ಎತ್ತಿನಹೊಳೆ ಯೋಜನೆಗೆ 7,954 ಕೋಟಿ ರೂ. ಹಣಕಾಸಿನ ಕೊರತೆ ಎದುರಾಗಿದೆ. ಹಣ ಹೊಂದಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆಯ್ಕೆ ಮತ್ತು ಹಣಕಾಸು ಒದಗಿಸುವಲ್ಲಿ ಲೋಪಗಳು ಕಂಡುಬಂದಿವೆ. 12 ವರ್ಷಗಳಲ್ಲಿ 15,297 ಕೋಟಿ ರೂ. ಖರ್ಚಾದರೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಲಭ್ಯವಾಗಿಲ್ಲ. ಯೋಜನೆ ಅನುಷ್ಠಾನದಲ್ಲಿ ವಿಳಂಬ ಮತ್ತು ಅಡಚಣೆಗಳು ಎದುರಾಗಿವೆ.
ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಇದ್ದವ ಈಗ ಕ್ಯಾಬ್ ಡ್ರೈವಿಂಗ್ ನಿಂದ ದಿನಕ್ಕೆ 4 ಸಾವಿರ ರೂ. ಸಂಪಾದನೆ
ಬೆಂಗಳೂರಿನಲ್ಲಿ 1.5 ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟ್ಯಾಕ್ಸಿ ಚಾಲ vettoreರೊಬ್ಬರು, ಬದುಕಿಗಾಗಿ ರೈಡ್-ಹೇಲಿಂಗ್ ಆ್ಯಪ್ಗಳ ಮೊರೆಹೋಗಿದ್ದಾರೆ. ಪ್ರತಿದಿನ 16 ಗಂಟೆ ದುಡಿದರೂ, ಕಾರಿನ ಬಾಡಿಗೆ, ಗ್ಯಾಸ್, ಊಟದ ಖರ್ಚುಗಳ ನಂತರ ದಿನಕ್ಕೆ ಕೇವಲ 1000 ರೂ. ಉಳಿಯುತ್ತಿದ್ದು, ಈ ಕಠಿಣ ಪರಿಸ್ಥಿತಿಯನ್ನು ಅವರು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಆ್ಯಪ್ಗಳ ಒತ್ತಡ ಮತ್ತು ಕಡಿಮೆ ಆದಾಯದಿಂದಾಗಿ ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಸೇತುವೆಯು ಪೂರ್ವ-ಪಶ್ಚಿಮ ಸಂಚಾರ ಮಾರ್ಗವನ್ನು ಪುನಃಸ್ಥಾಪಿಸಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ.
ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂಕಿ ಮಾಲಿ ಮತ್ತು ಭದ್ರತಾ ಸಿಬ್ಬಂದಿ ವಿದಿಪ್ ಜಾಧವ್ ಮೃತಪಟ್ಟಿದ್ದಾರೆ. ಕಡಿಮೆ ಗೋಚರತೆಯಿಂದ ಲ್ಯಾಂಡಿಂಗ್ ವೇಳೆ ತಪ್ಪು ನಿರ್ಣಯ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ವಿಮಾನ ತಾಂತ್ರಿಕ ದೋಷಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು ಅಮೆರಿಕದ ನಿಯಂತ್ರಣಕ್ಕೆ ಬರಲಿವೆ. ಜಾಗತಿಕ ಇಸ್ಲಾಂ ರಾಷ್ಟ್ರಗಳ ಪ್ರಾಬಲ್ಯವೂ ಕುಗ್ಗಲಿದೆ. ಇದು ದೇಶದಲ್ಲಿ ಅಂತರ್ಯುದ್ಧಕ್ಕೂ ಕಾರಣವಾಗಬಹುದು.
ನಿಮಾನ್ಸ್ ಆಸ್ಪತ್ರೆಗೆ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ರ ಮೃತದೇಹ ಹಸ್ತಾಂತರ
ಬೆಂಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಸದಸ್ಯರು ಹಾಗೂ ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ಅವರ ಕುಟುಂಬಸ್ಥರು ಹಿರಿಯ ಕಾರ್ಮಿಕ ಮುಖಂಡ ಎಚ್.ವಿ. ಅನಂತಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಇಲ್ಲಿನ ನಿಮಾನ್ಸ್ ಆಸ್ಪತ್ರೆಗೆ ಗುರುವಾರ ಹಸ್ತಾಂತರ ಮಾಡಿದ್ದಾರೆ. ‘ತಾನು ಸತ್ತ ನಂತರ ತಮ್ಮ ಇಡೀ ದೇಹವನ್ನು ದಾನಮಾಡಬೇಕು’ ಎಂದು ಅನಂತ್ ಸುಬ್ಬರಾವ್ ಅವರು ಹೇಳಿದ್ದರು. ಅವರ ಆಶಯದಂತೆ ಮೃತದೇಹವನ್ನು ನಿಮಾನ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೋರಾಟಗಾರ ಅನಂತ್ ಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರ ವರೆಗೆ ವೈಯಾಲಿಕಾವಲ್ನ ಜಿಡಿ ಪಾರ್ಕ್ ಬಡಾವಣೆ ಸಿಪಿಐ ರಾಜ್ಯ ಕಚೇರಿ, ಘಾಟಿ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಪ್ರಿಯಕೃಷ್ಣ ಸೇರಿ ಹಲವರು ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೊಳ್ಳೇಗಾಲದಲ್ಲಿ ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ವರನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಧುವಿನ ಮಾಜಿ ಬಾಯ್ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಘಟನೆ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Davanagere | ಇಡ್ಲಿ ಸಾಂಬಾರಿಗೆ ಬಿದ್ದ ಹುಳು; ತಟ್ಟೆ ಸಮೇತ ಎಡಿಸಿಗೆ ವಿದ್ಯಾರ್ಥಿಗಳಿಂದ ದೂರು
ದಾವಣಗೆರೆ: ನಗರದ ಬೂದಾಳ್ ರಸ್ತೆಯ ಎಸ್ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಹುಳ ಬಿದ್ದ ಸಂಬಾರ್, ಇಡ್ಲಿ ತಟ್ಟೆಯ ಸಮೇತವೇ ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ನಿತ್ಯವೂ ಕೂದಲು, ಹರಳು, ಸಣ್ಣ ಕಲ್ಲು, ಕಡ್ಡಿಗಳು, ಹುಳಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಅಡುಗೆ ಸಿಬ್ಬಂದಿಯಾಗಲಿ, ವಾರ್ಡನ್ ಆಗಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಾರ್ಡನ್, ಅಡುಗೆ ಸಿಬ್ಬಂದಿಯ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾನೇ ಶೀಘ್ರ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿದ್ದಾರೋ ಇಲ್ಲವೋ, ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಭರವಸೆ ನೀಡಿದರು.
MP Sports Festival: ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟಕ್ಕೆ ತೆರಳುವ ಕ್ರೀಡಾ ಪ್ರತಿಭೆಗಳಿಗೆ ಬೆಂಬಲ: ಬೊಮ್ಮಾಯಿ
ಹಾವೇರಿ/ರಾಣೆಬೆನ್ನೂರು: ಕರ್ನಾಟಕದಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳಲು ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಯನ್ನು ನಾನು ಮಾಡಿಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಯ ನೀಡಿದರು. ರಾಣೆಬೆನ್ನೂರಿನಲ್ಲಿ ಆಯೋಜಿಸಿದ್ದ ಸಂಸದರ ಕ್ರೀಡಾ ಮಹೋತ್ಸವ
European Union: ಇರಾನ್ಗೆ ದೊಡ್ಡ ಆಘಾತ ನೀಡಿದ ಯುರೋಪ್ ಒಕ್ಕೂಟ, ಯುದ್ಧಕ್ಕೆ ಮೊದಲೇ ಬಿಗ್ ಶಾಕ್
ಮಧ್ಯಪ್ರಾಚ್ಯದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಪದೇ ಪದೇ ಈ ಭಾಗದಲ್ಲೇ ಯುದ್ಧಗಳು ಆರಂಭ ಆಗುತ್ತಿವೆ. ಒಂದು ಕಡೆ ಇರಾನ್ ಮತ್ತು ಅಮೆರಿಕ ಯಾವುದೇ ಕ್ಷಣದಲ್ಲಿ ಭಾರಿ ರಣಕಾಳಗ ಶುರು ಮಾಡಬಹುದು ಎಂಬ ಆತಂಕ ಆವರಿಸಿದ ಸಮಯದಲ್ಲೇ, ಒಂದೊಂದೇ ದೇಶಗಳು ಇರಾನ್ ಬೆನ್ನಿಗೆ ನಿಲ್ಲುತ್ತಿವೆ. ಇದರ ನಡುವೆ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಇರಾನ್ ವಿರುದ್ಧ
`ಪುಕ್ಕಲ ಪಾಕ್ ಗೆ ಅಷ್ಟೊಂದು ಧಮ್ ಇದ್ಯಾ?': ಕಣ್ಣಾಮುಚ್ಚಾಲೆ ಆಡುತ್ತಿರುವ ಪಿಸಿಬಿಗೆ ಅಜಿಂಕ್ಯ ರಹಾನೆ ಮಂಗಳಾರತಿ!
ICC T20 World Cup 2025 - ಪಾಕಿಸ್ತಾನ ನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಮಾತನಾಡುತ್ತಿರುವುದು ಕ್ರಿಕೆಟ್ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕಿಸ್ತಾನವು ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದೆ. ಆದರೆ ಪಾಕಿಸ್ತಾನಕ್ಕೆ ಅಷ್ಟೊಂದು ಧೈರ್ಯ ಇದೆ ಎಂದು ನಾನು ಭಾವಿಸುವುದಿಲ್ಲ ಎಂದು ಭಾರತದ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಕಾಲೆಳೆದಿದ್ದಾರೆ. ಪಾಕಿಸ್ತಾನವು ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಸಿಎಂ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ: ಡಿಕೆ ಶಿವಕುಮಾರ್
ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ, ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು. ಜಾರ್ಜ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ವಿಪಕ್ಷದವರು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಲೇ ಇರುತ್ತಾರೆ. ಆಗ ಅಧಿಕಾರಿಗಳಿಗೆ ನಾವು ಕೆಲವೊಂದು ಸೂಚನೆ ನೀಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಹಸ್ತಕ್ಷೇಪದ ವಿಚಾರ ನನಗೆ ಗೊತ್ತಿಲ್ಲ ಎಂದರು. ಮನರೇಗಾ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ವಿಚಾರ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ರದ್ದು ಪಡಿಸಿರುವ ವಿಚಾರವನ್ನು ಜಾಹೀರಾತು ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ?. ಮನರೇಗಾ ವಿಚಾರದಲ್ಲಿ ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಅದನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಮನರೇಗಾ ಯೋಜನೆಯಿಂದ ಒಳ್ಳೆಯ ಕೆಲಸ ನಡೆಯುತ್ತಿದೆ. ಹಸಿದವರಿಗೆ ಆಹಾರ ಕೊಡಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಗಾಂಧಿ ಹೆಸರನ್ನು ತೆಗೆದು ಹಾಕಿ, ಅದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಡಿಕೆಶಿ, ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಮಹಾತ್ಮಾ ಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ ಎಂದರು. ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ. ಇದ್ದ ವಾಹನ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಲಿ, ಎಲ್ಲಿತ್ತು ಎಂದು ಹೇಳಲಿ. ಅದು ಕಾಂಗ್ರೆಸ್ಗೆ ಸೇರಿದ್ದು ಎಂದು ಹೇಳಿ ಸುಮ್ಮನೆ ನಗೆ ಪಾಟಲಿಗೀಡಾಗುವುದು ಬೇಡ ಎಂದು ತಿರುಗೇಟು ನೀಡಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳಿಗೂ ಶೀಘ್ರದಲ್ಲೇ ಚುನಾವಣೆ ನಡೆಸಲು ಕ್ರಮ ವಹಿಸಲಾಗುವುದು ಎಂದರು. ಐದು ಗ್ಯಾರಂಟಿ ಕುರಿತು ಮನೆಗೊಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು ೭೩ ಸಾವಿರ ಜನ ಇದರಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಮುಸ್ಲಿಮರಿಗೆ ಮೆಹಂದಿ, ಮಕ್ಕಳಿಗೆ ಚಿತ್ರಕಲೆ, ಯೋಗ ಸ್ಪರ್ಧೆ ನಡೆಯುತ್ತಿದೆ ಎಂದು ಡಿಕೆಶಿ ತಿಳಿಸಿದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು. ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು. ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಮಂಜೂರು ಆಗಿ ಕೆಲವು ಕಡೆ ಅಭಿವೃದ್ಧಿ ಕಾಮಗಾರಿ ಆಗಿ ಹಣ ಉಳಿಕೆ ಆಗಿದೆ. ಆದರೂ ಕೂಡ ನಾಲ್ಕು ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಆಗಿಲ್ಲ.ಕೆಲಸ ಆಗದ ವಾರ್ಡ್ ಗಳ ಕೆಲಸ ಮಾಡಿಸಿ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು. ಸುಜಿತ್ ಮಾಡೂರು ಅಭಿವೃದ್ಧಿ ಕಾಮಗಾರಿ ಗೆ ಹಣ ಇಡಿ, ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಆಗ್ರಹಿಸಿದರು. ಅಭಿವೃದ್ಧಿ ಯಲ್ಲಿ ತಾರತಮ್ಯ ಆಗಿಲ್ಲ.ಎಲ್ಲದಕ್ಕೂ ದಾಖಲಾತಿ ಇದೆ. ಈ ವಿಚಾರದಲ್ಲಿ ತಪ್ಪು ಸಂದೇಶ ನೀಡುವುದು ಬೇಡ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು. ಪ್ರತಿ ವಾರ್ಡ್ ಗೆ ಐದು ಲಕ್ಷ ಕೊಟ್ಟಿದ್ದೀರಿ.ಬಹಳಷ್ಟು ಕಡೆ ಕೆಲಸ ಆಗಿದೆ.ನಮ್ಮ ವಾರ್ಡ್ ಗೆ ಮೀಸಲಿಟ್ಟು ಹಣ ದ ಟೆಂಡರ್ ಪ್ರಕ್ರಿಯೆ ಯಾಕಾಗಿಲ್ಲ, ಈ ತಾರತಮ್ಯ ಯಾಕೆ ಬೇಕು ಎಂದು ಅಹ್ಮದ್ ಅಜ್ಜಿನಡ್ಕ ಪ್ರಶ್ನಿಸಿದರು. 27 ಲಕ್ಷ ನೀರು ಬಿಲ್ ಬಾಕಿ ಇದೆ ಎಂದು ಚರ್ಚೆ ಆಗಿದೆ. ಈ ಬಗ್ಗೆ ಯಾವ ಕ್ರಮ ಆಗಿದೆ ಎಂಬ ಪ್ರಶ್ನೆಗೆ ಮಾಲಿನಿ ಅವರು ಈಗಾಗಲೇ ಒಂದು ಲಕ್ಷ ವಸೂಲಿ ಆಗಿದೆ.ಉಳಿದ ಮೊತ್ತ ಶೀಘ್ರ ಮಾಡಲಾಗುವುದು ಎಂದರು. ಮೆಸ್ಕಾಂ ಜೆಇ ಮಾರಪ್ಪ ವಿದ್ಯುತ್ ಸಮಸ್ಯೆ ಮತ್ತದರ ಪರಿಹಾರ ಬಗ್ಗೆ ಮಾಹಿತಿ ನೀಡಿದರು. ಕೋಟಿ ಕಾರ್ ವ್ಯಾಪ್ತಿಯಲ್ಲಿ ಗೂಡಂಗಡಿ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ದೂರು ಬಂದಿವೆ. ಮದ್ಯಪಾನ ಮಾಡಿ ಪಾರ್ಕಿಂಗ್ ಮಾಡುತ್ತಾರೆ ಎಂಬ ಸಂಶಯವೂ ಇದೆ. ಈ ರೀತಿ ಪಾರ್ಕಿಂಗ್ ಮಾಡುವುದು ಕಂಡಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಟ್ರಾಫಿಕ್ ಎಎಸ್ಐ ಸಂತೋಷ್ ಪಡೀಲ್ ಮಾಹಿತಿ ನೀಡಿದರು. ಎಚ್ ಪಿಟಿ ಕ್ಯಾನ್ಸರ್ ಇದೆ. ಇದು ವೈರಸ್ ನಿಂದ ಬರುತ್ತದೆ. ಈ ಮಾರಕ ಕಾಯಿಲೆಗೆ ಲಸಿಕೆ ಇದೆ. ಸರ್ಕಾರ ದಿಂದ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆ ಯಲ್ಲಿ ಒಂದು ಡೋಸ್ ಔಷಧಿ ಗೆ 11ಸಾವಿರ ಇದೆ. ವ್ಯಾಕ್ಸಿನ್ ಶೀಘ್ರ ಬರಲಿದೆ. ಈ ವ್ಯಾಕ್ಸಿನ್ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಯಲ್ಲಿ 14 ರಿಂದ 15 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಆರೋಗ್ಯ ಅಧಿಕಾರಿ ತಿಳಿಸಿದರು. ಅನುದಾನ ಕೋರಿ ಪ್ರತಿಭಟನೆ ಪನೀರ್ ನಲ್ಲಿ ಮಳೆ ಬಂದು ಕಾಂಪೌಂಡ್ ಗೋಡೆ ಹೋಗಿದೆ.ಈ ವಾರ್ಡ್ ಗೆ ತುರ್ತು ಕಾಮಗಾರಿಗೆ ಶಾಸಕ ರ ಫಂಡ್ ಸಿಕ್ಕಿಲ್ಲ. ಪಂಚಾಯತ್ ಕೂಡ ನೀಡುವುದಿಲ್ಲ. ಇದರಿಂದ ನನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ ಅಧ್ಯಕ್ಷ ರ ಟೇಬಲ್ ಮುಂದೆ ಕುಳಿತು ಆಡಳಿತದ ವಿರುದ್ಧ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲಾ ವಾರ್ಡ್ ಗೆ ಅನುದಾನ ಇಟ್ಟ ಪಂಚಾಯತ್ ನನ್ನ ವಾರ್ಡ್ ನ್ನು ಕಡೆಗಣನೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.
‘ನಾವೆಲ್ಲ ಗೌರಿ’ ಕಾರ್ಯಕ್ರಮ
Gaza Peace: ಗಾಜಾ ಪಟ್ಟಿ ಹಸ್ತಾಂತರ ವಿಚಾರದಲ್ಲಿ ಇಸ್ರೇಲ್ ದಿಟ್ಟ ನಿರ್ಧಾರ, ಹಮಾಸ್ ಸೈಲೆಂಟ್?
ಗಾಜಾ ಪಟ್ಟಿ ಇದೀಗ ಒಂದಷ್ಟು ನೆಮ್ಮದಿ ನೋಡುವ ದಿನಗಳು ಬರುತ್ತಿವೆ, ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ನಂತರ ಇಡೀ ಗಾಜಾ ಪಟ್ಟಿ ಹಿಂಸಾಚಾರದ ಬೆಂಕಿಗೆ ಧಗಧಗಿಸಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುವ ವಾತಾವರಣ ನಿರ್ಮಾಣ ಆಗಿದೆ, ಹತ್ತಾರು ಸಾವಿರ ಜನ ಈ ಯುದ್ಧದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗ ಹಮಾಸ್ ಮೇಲೆ ಹಿಡಿತಕ್ಕೆ
WPL 2026- ಯುಪಿ ವಾರಿಯರ್ಸ್ ಗೆ ನೀರು ಕುಡಿಸಿದ ಗ್ರೇಸ್ ಹ್ಯಾರಿಸ್! ರಾಜಾರೋಷವಾಗಿ RCB ಫೈನಲ್ ಪ್ರವೇಶ
RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿ ಅಗ್ರಸ್ಥಾನಿಯಾದ ಆರ್ ಸಿಬಿ ನೇರವಾಗಿ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆಲ್ರೌಂಡ್ ಪ್ರದರ್ಶನ ನೀಡಿ ಗ್ರೇಸ್ ಹ್ಯಾರಿಸ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಏರಿದ ಬಳಿಕ ಇಳಿದ ಚಿನ್ನದ ದರ; ಬೆಳ್ಳಿ ಶೇ.6 ಕುಸಿತ
'ಚಿನ್ನ' ದ ಓಟಕ್ಕೆ ಬಿತ್ತು ಬ್ರೇಕ್!
ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಝಿನೆಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು. ಸಮುದಾಯದಲ್ಲಿ ಗುಬ್ಬಿ ತೋಟದಪ್ಪ, ಸರ್ ಪುಟ್ಟಣ್ಣ ಶೆಟ್ಟಿ ಅವರಂತಹ ಮಹಾಮಹಿಮರು ಉದ್ಯಮಶೀಲರಾಗಿ ಸಾಧನೆಗಳನ್ನು ಮಾಡಿ, ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 1906ರಷ್ಟು ಹಿಂದೆಯೇ ಶಿರಸಂಗಿಯ ದೇಸಾಯಿ ಅವರಿಂದ ಇದಕ್ಕೆ ಭದ್ರ ಬುನಾದಿ ಬಿದ್ದಿದೆ. ಜತೆಗೆ ವೀರಶೈವ ಮಹಾಸಭಾ ಕೂಡ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರಿಂದಾಗಿ ವೀರಶೈವ ಲಿಂಗಾಯತ ಸಮುದಾಯವು ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣುವುದು ಸಾಧ್ಯವಾಗಿದೆ ಎಂದು ಅವರು ನೆನಪಿಸಿ ಕೊಂಡಿದ್ದಾರೆ. ನಾವು ಕೈಗಾರಿಕೆ, ವ್ಯಾಪಾರ ಇತ್ಯಾದಿಗಳನ್ನು ಉದಾಸೀನ ಮಾಡಬಾರದು. ಇವು ಕೃಷಿಗೆ ಪೂರಕವಾಗಿ ನಮ್ಮ ಸಮುದಾಯದ ಆರ್ಥಿಕ ಬೆಳವಣಿಗೆಗೆ ಆಧುನಿಕ ಕಾಲದಲ್ಲಿ ನಿರ್ಣಾಯಕವಾಗಿವೆ. ಸರಕಾರದ ನೀತಿಗಳು ಕೂಡ ಉಪಯುಕ್ತವಾಗಿವೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಾದರೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ಕಾರ್ಯ ಪರಿಸರ ಇದೆ. ಸಮುದಾಯದ ಪ್ರತಿಭಾವಂತರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ರೀತಿಯ ಸಮಾವೇಶಗಳನ್ನು ಸರಕಾರವೂ ಪ್ರೋತ್ಸಾಹಿಸುತ್ತದೆ. ಇದರಿಂದ ಅಸ್ಮಿತೆ, ನೆಟ್ವರ್ಕಿಂಗ್ ಮತ್ತು ಹೂಡಿಕೆಗೆ ಇರುವ ಅವಕಾಶಗಳು ಗೊತ್ತಾಗುತ್ತವೆ. ರಾಜ್ಯದಲ್ಲಿ ನಾವೀನ್ಯತೆ, ಸಂಶೋಧನೆ, ತಯಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ನವೀನ್, ಫೋರಂನ ಬೆಂಗಳೂರು ಘಟಕದ ಅಧ್ಯಕ್ಷ ಸಂತೋಷ್ ಕೆಂಚಾಂಬ, ಮಾಜಿ ಶಾಸಕ ರುದ್ರಗೌಡ ಮುಂತಾದವರು ಉಪಸ್ಥಿತರಿದ್ದರು.

28 C