ಕೆ-ಪಾಪ್ ಡಿಮನ್ ಹಂಟರ್ಸ್ ಎಂಬ ಅನಿಮೇಟೆಡ್ ಮೂವಿ ಮೂಲಕ ಜಾಗತಿಕ ಸಂಗೀತಲೋಕದಲ್ಲಿ ಹಲವಾರು ಸಾಧನೆ ಮಾಡಿರುವ ಎಜೆ, ನೂನಾ ಹಾಗೂ ರೇ ಅಮಿ ಇದೀಗ ಬಿಲ್ ಬೋರ್ಡ್ ವುಮೆನ್ ಇನ್ ಮ್ಯೂಸಿಕ್ 2026 ರಲ್ಲಿ ಕಾರ್ಯಕ್ರಮದಲ್ಲಿ 2025ರಲ್ಲಿ ವರ್ಷದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವಿಸಲು ಆಯೋಜಿಸಿರುವ ವುಮೆನ್ ಆಫ್ ದಿ ಇಯರ್ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.ಈ ಕುರಿತ ವರದಿ ಇಲ್ಲಿದೆ..
ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ: 90 ದಿನಗಳಲ್ಲಿ ಅಂತಿಮ ವರದಿ
ಪಕ್ಷಪಾತ, ಪ್ರತಿಕೂಲ ದಾಳಿಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ತಪ್ಪು ದಾರಿಗೆ ಒಯ್ಯಲು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಹಾನಿಕಾರಕ ಮಾಹಿತಿಯನ್ನು ಡೇಟಾದಲ್ಲಿ ಸೇರಿಸುವ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಡೀಪ್ಫೇಕ್ಗಳ ದುರುಪಯೋಗದಂತಹ ಅಪಾಯಗಳನ್ನು ಪರಿಹರಿಸಬೆಕಾಗಿದೆ. ಈ ನಿಟ್ಟಿನಲ್ಲಿ ಸ್ವತಂತ್ರ ಲೆಕ್ಕಪರಿಶೋಧನೆಗಳು, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ತುರ್ತು ಘಟನೆಗೆ ಪ್ರತಿಕ್ರಿಯಿಸುವ ನಿಯಮಾವಳಿ ಗಳನ್ನು ಶಿಫಾರಸು ಮಾಡುವ ಬಗ್ಗೆ ಎಐ ಹೊಣೆಗಾರಿಕೆ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
LPG: ಮನೆಯಲ್ಲೇ ಕುಳಿತು ಎಲ್ಪಿಜಿ ಇ-ಕೆವೈಸಿ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು
LPG Gas: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಈಗಾಗಲೇ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವು ಎಲ್ಪಿಜಿ ವಿತರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಎಲ್ಲಾ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗ್ರಾಹಕರು ಇ-ಕೆವೈಸಿ ಮಾಡಿಸುವುದು ಈಗ ಕಡ್ಡಾಯವಾಗಿದೆ. ಇದು ಗ್ರಾಹಕರನ್ನು ಗುರುತಿಸಲು ಮತ್ತು ದುರುಪಯೋಗ
ಕುಕ್ಕಾಜೆ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ: ನೂತನ ಆಡಳಿತ ಕಮಿಟಿ ಅಸ್ತಿತ್ವಕೆ
ಬಂಟ್ವಾಳ : ರಾಜ್ಯ ಹೈಕೋರ್ಟ್ನ ಆದೇಶದಂತೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿರುವ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಕಮಿಟಿಗೆ ಜನವರಿ 25ರಂದು ಕುಕ್ಕಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆದಿತ್ತು. ಈ ಮಧ್ಯೆ ಇತರ ಜಮಾಅತಿನ ಸದಸ್ಯರು ಕುಕ್ಕಾಜೆ ಜಮಾಅತಿನಲ್ಲಿ ಚುನಾವಣೆ ಉದ್ದೇಶಕ್ಕೆ ಮತದಾನಕ್ಕೆ ಸದಸ್ಯತ್ವವನ್ನು ಪಡೆದಿದ್ದು, ಸದ್ರಿಯವರಿಗೆ ಮತದಾನ ಮಾಡಲು ಅವಕಾಶ ಇಲ್ಲವೆಂದು ಚುನಾವಣಾ ಅಧಿಕಾರಿಗಳು ಸದ್ರಿಯವರ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟಿದ್ದರು. ಹಾಗಾಗಿ ಕೆಲವರು ಈ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅದರಂತೆ ವಕ್ಫ್ ಅಧಿಕಾರಿಗಳು ಫಲಿತಾಂಶವನ್ನು ತಡೆ ಹಿಡಿದಿದ್ದರು. ಬಳಿಕ ವಾದ ಪ್ರತಿವಾದಗಳು ನಡೆದಿದ್ದು, ಫೆ.12ರಂದು ಚುನಾವಣೆಯ ಪಲಿತಾಂಶ ಘೋಷಿಸು ವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಮಾ.10ರಂದು ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಮತ್ತು ಜುಮ್ಮಾ ಮಸೀದಿಯ ಆಡಳಿತಾಧಿಕಾರಿಗಳ ಸಮ್ಮುಖ ಚುನಾವಣಾಧಿಕಾರಿಯೂ ಆದ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿಯು 22 ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದರು. ಅದರಲ್ಲಿ 11 ಮಂದಿ ಅಭ್ಯರ್ಥಿಗಳಾದ ಮೊಹಿದಿನಬ್ಬ ಹಾಜಿ, ಅಬ್ದುಲ್ ರಝಾಕ್ ಮಂಚಿ, ಬದ್ರುದ್ದೀನ್, ಅಹ್ಮದ್ ಬೈಲ್, ಮೊಹಿದು ಕುಂಞ ಕುರಿಯಪ್ಪಾಡಿ, ಅಶ್ರಫ್ ನಾಡಾಜೆ, ಮುಹಮ್ಮದ್ ದರ್ಖಾಸು, ಉಮ್ಮರ್ ಬಾಬುಕೋಡಿ, ಮುಹಮ್ಮದ್ ಪಂಜಿಕಲ್ಲು, ಹಮೀದ್ ಬೈಲ್, ಅನ್ಸಾರ್ ಅಝ್ಅರಿ 500ಕ್ಕೂ ಅಧಿಕ ಮತ ಪಡೆದು ಚುನಾಯಿತರಾಗಿ ದ್ದಾರೆ. ಅದರಂತೆ ಈ 11 ಮಂದಿ ಸದಸ್ಯರು ಮುಂದಿನ ಮೂರು ವರ್ಷಗಳ ಅವಧಿಗೆ ಮಸೀದಿಯ ಆಡಳಿತ ಕಮಿಟಿಯ ನೂತನ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
ಹೊಸದಿಲ್ಲಿ: ತನ್ನ ಖಾಸಗಿ ಜಮೀನಿನಲ್ಲಿ ನಮಾಝ್ ಮಾಡದಂತೆ ತಡೆಯಲಾಗುತ್ತಿದೆ ಎಂದು ಕೋರ್ಟ್ ಮೊರೆ ಹೋದ ಮುಹಮ್ಮದ್ ಗಂಜ್ ಗ್ರಾಮದಲ್ಲಿರುವ ಹಸೀನ್ ಖಾನ್ ಅವರ ರಕ್ಷಣೆಗಾಗಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಅಲಹಾಬಾದ್ ಹೈಕೋರ್ಟ್ ಬುಧವಾರ ಆದೇಶಿಸಿದೆ. ಪೊಲೀಸರು ಖಾಲಿ ಕಾಗದದ ಮೇಲೆ ತನ್ನ ಹೆಬ್ಬೆರಳಿನ ಗುರುತನ್ನು ಹಾಕುವಂತೆ ಒತ್ತಾಯಿಸಿದ್ದಾರೆ ಎಂಬ ಖಾನ್ ಅವರ ಹೇಳಿಕೆಯನ್ನು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ್ ನಂದನ್ ಅವರ ವಿಭಾಗೀಯ ಪೀಠವು ದಾಖಲಿಸಿದೆ. ತಮ್ಮ ಸೂಚನೆಗಳ ಪ್ರಕಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡದಿದ್ದರೆ ಆಸ್ತಿಯನ್ನು ಕೆಡವುದಾಗಿ ಕೆಲವರು ಹೇಳಿದ್ದಾರೆ ಎಂದು ವಿಚಾರಣೆಯ ವೇಳೆ ಹಸೀನ್ ಖಾನ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ವೇಳೆ ನ್ಯಾಯಾಲಯ ಖಾನ್ ಅವರಿಗೆ ಭದ್ರತೆ ಒದಗಿಸುವಂತೆ ಆದೇಶವನ್ನು ನೀಡಿದೆ.
ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಮೃತ್ಯು
ಸುಳ್ಯ: ಸುಳ್ಯ ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮೈಸೂರು ಕೆ.ಆರ್ ನಗರದ ಬೇರ್ಯ ಮೂಲದ ಮಂಜು. ಪಿ. (40) ಅವರು ಇಂದು ಮಧ್ಯಾಹ್ನ ವೇಳೆ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಂಜು ಅವರು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ ತನಕ ತರಗತಿ ನಡೆಸಿ ಬಳಿಕ ತಲೆನೋವು ಎಂದು ವಿದ್ಯಾರ್ಥಿಗಳಲ್ಲಿ ಹೇಳಿದ್ದು, ನಂತರ ಉಪನ್ಯಾಸಕರ ರೂಮಿಗೆ ಹೋಗಿ ರೆಸ್ಟ್ ಪಡೆಯುವುದಾಗಿ ತಿಳಿಸಿದ್ದರು. ಆ ಬಳಿಕ ವಿಪರೀತ ನೋವು ಕಾಣಿಸಿದ ಹಿನ್ನಲೆಯಲ್ಲಿ ಸ್ಥಳೀಯ ಖಾಸಗಿ ಮೆಡಿಕಲ್ ಗೆ ತೆರಳಿ ಔಷಧ ಖರೀದಿಸಲು ಹೋದಾಗ ಅಲ್ಲೆ ಕುಸಿದು ಬಿದ್ದಿದ್ದು ಅವರನ್ನು ಸ್ಥಳೀಯ ಮೆಡಿಕಲ್ ನವರು ಆಸ್ಪತ್ರೆಗೆ ದಾಖಲಿಸಿದ್ದು, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮಂಜು ಅವರು ಈ ಹಿಂದೆ ಕೆ.ಆರ್. ನಗರದಲ್ಲಿ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಕೆ ಸೆಟ್ ಪರೀಕ್ಷೆಯನ್ನು ಉತ್ತೀರ್ಣರಾಗಿ 2024ರ ನವಂಬರ್ ನಲ್ಲಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೃಷ್ಣಾ ಕರ್ಕೇರ ನ್ಯಾಶನಲ್ ಸಬ್ ಜೂನಿಯರ್ ಟೇಬಲ್ ಟೆನಿಸ್ ಗೆ ಆಯ್ಕೆ
ಮಂಗಳೂರು, ಮಾ.12: ವೀರೇಶ್ ಮಠಪತಿ ಮಂಗಳೂರು ಟೇಬಲ್ ಟೆನಿಸ್ ಅಕಾಡಮಿಯ ಕೃಷ್ಣಾ ಪಿ. ಕರ್ಕೇರ ಅವರು ಸಬ್ ಜೂನಿಯನರ್ ನ್ಯಾಶನಲ್ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ಗೆ (15 ವರ್ಷದೊಳಗಿನ) ಆಯ್ಕೆಯಾಗಿದ್ದಾರೆ. ಈ ಚಾಂಪಿಯನ್ ಶಿಪ್ ಗುಜರಾತ್ ನ ಗಾಂಧಿ ಧಾಮ್ನಲ್ಲಿ ಮಾ.22ರಿಂದ 31ರವರೆಗೆ ನಡೆಯಲಿದೆ. ಚೈತನ್ಯ ಟೆಕ್ನೋ ಸ್ಕೂಲ್ ನಲ್ಲಿ 7ನೆ ತರಗತಿಯಲ್ಲಿ ಕಲಿಯುತ್ತಿರುವ ಕೃಷ್ಣಾ ಅವರು ಕುಳಾಯಿ ಹೊನ್ನಕಟ್ಟೆಯ ಪರೇಶ್ ವೈ. ಕರ್ಕೇರ ಮತ್ತು ಆರತಿ ಪಿ. ಕರ್ಕೇರ ದಂಪತಿಯ ಪುತ್ರಿ.
ULLALA | ಸ್ಥಳೀಯರ ವಿರೋಧದ ನಡುವೆ ಮುಂದುವರಿದ ವೆಟ್ ವೆಲ್ ಕಾಮಗಾರಿ
ಉಳ್ಳಾಲ: ಸ್ಥಳೀಯರ ವಿರೋಧದ ನಡುವೆಯೂ ಉಳ್ಳಾಲ ನಗರಸಭೆ ವ್ಯಾಪ್ತಿಯ ಕೈಕೋದಲ್ಲಿ ನಿರ್ಮಾಣ ಆಗುತ್ತಿರುವ ವೆಟ್ ವೆಲ್ ಕಾಮಗಾರಿ ಮುಂದುವರಿದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಜನವಸತಿ ಪ್ರದೇಶದಲ್ಲಿ ಸಮುದ್ರ ಕಿನಾರೆ ಸಮೀಪದಲ್ಲೇ ಯುಜಿಡಿ ಕಾಮಗಾರಿಗಾಗಿ ಆಗುತ್ತಿರುವ ವೆಟ್ ವೆಲ್ ನಲ್ಲಿ ನೀರು ತುಂಬಿದೆ. ಸುಮಾರು ಎರಡು ಫೀಟ್ ನಲ್ಲೇ ನೀರು ಸಿಕ್ಕಿದೆ. ಇದರ ಮೂಲಕ ಕೊಳಚೆ ನೀರು ಸರಬರಾಜು ಮಾಡಿದರೆ ಒಂದೆಡೆ ದುರ್ವಾಸನೆ, ಇನ್ನೊಂದೆಡೆ ಬಾವಿ ನೀರು ಹಾಳಾಗುತ್ತದೆ. ಜೊತೆಗೆ ಪರಿಸರ ಹಾಳಾಗಿ ಈ ಪ್ರದೇಶದಲ್ಲಿ ವಾಸ ಮಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ವೆಟ್ ವೆಲ್ ಕಾಮಗಾರಿ ಜನ ವಸತಿ ಕಡಿಮೆ ಇರುವ ಜಾಗದಲ್ಲಿ ಸಮುದ್ರಕ್ಕೆ ದೂರ ಆಗಿ ನಿರ್ಮಿಸಿದರೆ ಬಹಳಷ್ಟು ಉತ್ತಮ. ಇದರಿಂದ ಕೊಳಚೆ ನೀರು ಹರಿದು ಹೋಗಲು ತೊಂದರೆ ಆಗದು. ಸಮುದ್ರ ಕಿನಾರೆ ಸಮೀಪದಲ್ಲೇ ಯುಜಿಡಿ ಕಾಮಗಾರಿಗೆ ವೆಟ್ ವೆಲ್ ನಿರ್ಮಿಸಿದರೆ ಕೊಳಚೆ ನೀರು ಹೇಗೆ ಹರಿದು ಹೋಗಲು ಸಾಧ್ಯ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ. ಈ ವೆಟ್ ವೆಲ್ ನಿರ್ಮಾಣ ಮಾಡಿದಂತೆ ನಾವು ಆಕ್ಷೇಪ ವ್ಯಕ್ತಪಡಿಸಿದರೂ ಒಳಚರಂಡಿ ಮಂಡಳಿ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಮುಂದುವರಿಸಿದೆ. ಇದರಿಂದ ಭೀತಿಯ ವಾತಾವರಣ ನಿರ್ಮಾಣವಾಗಿದೆ. ವೆಟ್ ವೆಲ್ ಕಾಮಗಾರಿಯಿಂದ ಪರಿಸರ, ಬಾವಿ ನೀರು ಹಾಳಾದರೆ ಯಾರು ಹೊಣೆ? ಇದಕ್ಕೆ ಪರಿಹಾರ ಒದಗಿಸುವವರು ಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈ ಕಾಮಗಾರಿ ವಿರೋಧಿಸಿ ಭಯಭೀತರಾದ ಸ್ಥಳೀಯರು ಒಂದೂವರೆ ವರ್ಷಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಮತ್ತು ಒಳಚರಂಡಿ ಮಂಡಳಿ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಆರಂಭಿಸಿತ್ತು. ಇದೀಗ ಕಾಮಗಾರಿ ವೇಳೆ ವೆಟ್ ವೆಲ್ ನಲ್ಲಿ ನೀರು ಸಿಕ್ಕಿದ್ದು, ಇದರಿಂದ ತೊಂದರೆ ಅನುಭವಿಸಬೇಕಾಗಬಹುದು ಎಂದು ಆರೋಪಿಸಿ ಒಂದು ವಾರದ ಹಿಂದೆ ಸ್ಥಳೀಯರು ಎರಡನೇ ಬಾರಿಗೆ ಪ್ರತಿಭಟನೆ ನಡೆಸಿದ್ದರು. ಜನರು ಆತಂಕ ಪಡಬೇಕಾಗಿಲ್ಲ ವೆಟ್ ವೆಲ್ ಕಾಮಗಾರಿಯಲ್ಲಿ ಈಗ ತುಂಬಿರುವ ನೀರನ್ನು ಖಾಲಿ ಮಾಡಿ ಒಳಗೆ ನೀರು ಬರದಂತೆ ಸಿಮೆಂಟ್ ಬಳಸಿ ಕಾಮಗಾರಿ ಮಾಡಲಾಗುತ್ತದೆ. ಇದರಲ್ಲಿ ತುಂಬಿದ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಡಿ ಪ್ರದೇಶಕ್ಕೆ ಪಂಪಿಂಗ್ ಮಾಡಲಾಗುವುದು. ವೆಟ್ ವೆಲ್ ನಲ್ಲಿ ತುಂಬುವ ಕೊಳಚೆ ವಸ್ತುಗಳನ್ನು ಗೊಬ್ಬರವಾಗಿ ಪರಿವರ್ತಿಸಲಾಗುವುದು. ಇದರಿಂದ ಜನರಿಗೆ, ಬಾವಿಗೆ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಈ ಕಾಮಗಾರಿ ನಡೆಯಲಿದೆ. ಬಂಡಿ ಕೊಟ್ಯ ಪರಿಸರದಲ್ಲಿ ನೀರಿನ ಬಣ್ಣ ಬದಲಾಗಲು ಕೊಳಚೆ ನೀರು ಕಾರಣ. ಇದಕ್ಕಾಗಿ ಈ ಕಾಮಗಾರಿ ಅಗತ್ಯ ಇದೆ. ಕಾಮಗಾರಿ ಪೂರ್ಣ ಆಗಲು ಕೆಲವು ವರ್ಷಗಳು ಬೇಕು. ವೆಟ್ ವೆಲ್ ನಲ್ಲಿ ತುಂಬುವ ಕೊಳಚೆ ನೀರಿನ ಒರತೆ ಇನ್ನೊಂದು ಬಾವಿಗೆ ಹೋಗದಂತೆ ಹಾಗೂ ಈ ನೀರು ಸೋರಿಕೆ ಆಗದ ರೀತಿಯಲ್ಲಿ ಕಾಮಗಾರಿ ನಡೆಯಲಿದೆ. ವೆಟ್ ವೆಲ್ ಕಾಮಗಾರಿಯಿಂದ ಜನರು ಆತಂಕ ಪಡಬೇಕಾಗಿಲ್ಲ. -ಶೋಭಾ, ಸಹಾಯಕ ಇಂಜಿನಿಯರ್ ಒಳಚರಂಡಿ ಮಂಡಳಿ ವಿಭಾಗ ಅಭಿವೃದ್ಧಿ ಗೆ ಯುಜಿಡಿ ಅಗತ್ಯ ಇದೆ ಉಳ್ಳಾಲದ ಅಭಿವೃದ್ಧಿಗೆ ಯುಜಿಡಿ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ವಿದ್ಯುತ್, ರಸ್ತೆ, ಯುಜಿಡಿ ಹಾಗೂ ಕುಡಿಯುವ ನೀರು ಇವುಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಇವೆಲ್ಲ ಎಲ್ಲಿ ಆಗಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ನಗರದಲ್ಲಿ ಐವತ್ತು ಅಂತಸ್ತಿನ ಕಟ್ಟಡ ನಿರ್ಮಾಣ ಆಗಿ ಅಭಿವೃದ್ಧಿ ಆಗಲು ಯುಜಿಡಿ ಕಾಮಗಾರಿಯ ಅಗತ್ಯವಿದೆ. -ಯು.ಟಿ.ಖಾದರ್, ವಿಧಾನಸಭೆ ಸ್ಪೀಕರ್, ಸ್ಥಳೀಯ ಶಾಸಕರು
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ
LPG Cylinder Limit & Price: ಮಧ್ಯಪ್ರಾಚ್ಯ ಯುದ್ಧವು ಭಾರತದ ತೈಲ ಪೂರೈಕೆ ಮೇಲೆ ಪ್ರಭಾವ ಬೀರಿದೆ. ಅನೇಕ ನಗರಗಳಲ್ಲಿ LPG ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಜನರಲ್ಲಿ ಅನಿಲದ ದರ ಹೆಚ್ಚಳದ ಆತಂಕ ಉಂಟಾಗಿದೆ. ಅನೇಕ ಮನೆಗಳು ಈಗ ಮೂಲಭೂತ ಸಮಸ್ಯೆಯನ್ನು ಎದುರು ನೋಡುತ್ತಿವೆ. ಅನೇಕ ಜನರು ಡಿಜಿಟಲ್ ವ್ಯವಸ್ಥೆ ಮೂಲಕ ಸಿಲಿಂಡರ್ ಬುಕಿಂಗ್ ವೇಳೆ ಸಮಸ್ಯೆ
ಹಲ್ಲು ಉದುರುವುದು ಮತ್ತು ಅರಿವಿನ ಕೊರತೆಯ ನಡುವೆ ಸಂಬಂಧ; ವೈದ್ಯರು ಹೇಳುವುದೇನು?
ಹಲ್ಲು ಉದುರುವುದನ್ನು ಸಾಮಾನ್ಯವಾಗಿ ವಯಸ್ಸಾಗುವುದು ಅಥವಾ ಬಾಯಿಯ ಆರೋಗ್ಯವನ್ನು ಕಳಪೆಯಾಗಿ ಇರಿಸಿರುವುದರ ಪರಿಣಾಮ ಎಂದು ನಂಬಿಕೊಂಡು ಸುಮ್ಮನಾಗುತ್ತೇವೆ. ಆದರೆ ಯುನೈಟೆಡ್ ಕಿಂಗ್ಡಂನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಸಿದ್ಧ ವೈದ್ಯರಾದ ಡಾ. ಕರಣ್ ರಾಜನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಲ್ಲು ಉದುರುವುದು ಮತ್ತು ಅರಿವಿನ ಸಮಸ್ಯೆಯ ಕುರಿತಂತೆ ವಿವರಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಹಲ್ಲು ಉದುರುವುದು ಎಂದರೆ ಅರಿವಿನ ಕಾರ್ಯದಲ್ಲಿ ದೋಷ ಸಂಭವಿಸುವುದಾಗಿರಬಹುದು. ಅವರು ತಮ್ಮ ಪೋಸ್ಟ್ನಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಂಶೋಧನೆಯ ವಿವರಗಳನ್ನು ಮುಂದಿಟ್ಟಿದ್ದಾರೆ. “ಅಮೆರಿಕದಲ್ಲಿ 35,000 ಮಂದಿ ಭಾಗವಹಿಸಿದ ಅಧ್ಯಯನದಲ್ಲಿ ಹಲ್ಲು ಉದುರುವ ಅಪಾಯ ಎದುರಿಸಿದವರನ್ನು ಸಂದರ್ಶಿಸಲಾಗಿದೆ. ಪ್ರತಿ ಉದುರಿದ ಹಲ್ಲಿಗೂ ಶೇ 1.7ರಷ್ಟು ಅರಿವಿನ ಕುಸಿತದ ಸಮಸ್ಯೆ ಎದುರಾಗಿರುವುದು ಪತ್ತೆಯಾಗಿದೆ. ಹಲ್ಲಿನ ಆರೋಗ್ಯದ ಕಾರಣದಿಂದ ಯಾರಾದರೂ ಒಂದು ಹಲ್ಲನ್ನು ಕಳೆದುಕೊಂಡರೆ ಅವರು ಇನ್ನಷ್ಟು ಹಲ್ಲು ಕಳೆದುಕೊಳ್ಳುವ ಅಪಾಯ ಹೊಂದಿರುತ್ತಾರೆ. ಹೀಗಾಗಿ ಒಟ್ಟು ಅಪಾಯವನ್ನು ಲೆಕ್ಕ ಹಾಕಿದಾಗ, ಹಲ್ಲಿನ ನಷ್ಟದಿಂದ ಆಗುವ ಅರಿವಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಸಮಸ್ಯೆ ಅನೇಕ ಶೇಕಡಾವಾರು ಹೆಚ್ಚಾಗುವ ಸಾಧ್ಯತೆಯಿದೆ. ►ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತಕ್ಕೆ ಇರುವ ಸಂಬಂಧವೇನು? ಕ್ರೌನ್ ಹಬ್ ಡೆಂಟಲ್ ಕ್ಲಿನಿಕ್ನ ಡಾ. ನಿಯತಿ ಅರೋರ ಅವರ ಪ್ರಕಾರ, “ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತಕ್ಕೆ ಸಂಬಂಧವಿದೆ. ಹಲ್ಲಿನ ನಷ್ಟ ಮತ್ತು ಅರಿವಿನ ಕುಸಿತದ ಸಂಬಂಧಕ್ಕೆ ಅನೇಕ ಪುರಾವೆಗಳಿವೆ. ವಯಸ್ಸಾದವರಲ್ಲಿ ಅರಿವಿನ ಕ್ಷೀಣತೆಯ ಸಂಭಾವ್ಯ ಆರಂಭಿಕ ಸಂಕೇತ ಹಲ್ಲಿನ ನಷ್ಟವಾಗಿರಬಹುದು. ಚಿಕಿತ್ಸಾತ್ಮಕ ಅಧ್ಯಯನಗಳು ಹಲ್ಲಿನ ನಷ್ಟದಿಂದಾಗಿ ಮೆದುಳಿನ ಮೇಲೆ ಪರಿಣಾಮವಾಗುವುದನ್ನು ಸಾಬೀತು ಮಾಡಿವೆ. ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯು ಹೆಚ್ಚು ಹಲ್ಲು ಉದುರಿರುವ ವ್ಯಕ್ತಿಗಳಲ್ಲಿ ಅರಿವಿನ ಕುಸಿತದ ಅಪಾಯ ಶೇ 48ರಷ್ಟು ಇರುವುದು ಮತ್ತು ಬುದ್ಧಿಮಾಂದ್ಯತೆಯ ಪ್ರಮಾಣ ಶೇ 28ರಷ್ಟು ಇರುವುದಾಗಿ ಹೇಳಿದೆ. ಹಲ್ಲಿನ ಅನಾರೋಗ್ಯದಿಂದಾಗಿ ಸಂಭವಿಸುವ ಉರಿಯೂತ ಅಥವಾ ಒಸಡು ರೋಗದಂತಹ ಅಂಶಗಳು ಕೂಡ ಅರಿವಿನ ಕುಸಿತಕ್ಕೆ ಕೊಡುಗೆ ನೀಡುತ್ತವೆ. ಕಳಪೆ ಹಲ್ಲುಗಳಿಂದ ಉಂಟಾಗುವ ಉರಿಯೂತ, ತಿನ್ನಲು ಕಷ್ಟವಾಗಿ ಪೌಷ್ಠಿಕಾಂಶದ ಕೊರತೆ ಕಂಡುಬರುವುದು, ಹಲ್ಲಿನ ನಷ್ಟದ ಮಾನಸಿಕ ಪರಿಣಾಮದಿಂದ ಸ್ವಾಭಿಮಾನ ಕುಂದುವುದು ಮತ್ತು ಸಾಮಾಜಿಕ ಸಂವಹನ ಕಷ್ಟವಾಗುವಂತಹ ಮಾನಸಿಕ ಪರಿಣಾಮಗಳು ಅರಿವಿನ ಕುಸಿತಕ್ಕೆ ಕಾರಣವಾಗಬಹುದು. ಅಲ್ಲದೆ, ಬಾಯಿಯ ಆರೋಗ್ಯದ ಕೊರತೆಯು ಅತಿಯಾದ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಪರಿಣಾಮವಾಗಿ ಒಸಡುಗಳ ಸೋಂಕು ರಕ್ತಪ್ರವಾಹಕ್ಕೆ ಪ್ರವೇಶಿಸಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಈ ಪರಿಣಾಮವೇ ಅರಿವಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ►ಹಲ್ಲುಗಳ ನಷ್ಟ ಪೋಷಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹಲ್ಲುಗಳನ್ನು ಕಳೆದುಕೊಳ್ಳುವುದರಿಂದ ಒಟ್ಟಾರೆ ಪೋಷಣೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರವನ್ನು ಅಗಿಯುವುದು ಮತ್ತು ಆನಂದಿಸುವುದು ಕಷ್ಟವಾಗಿ ಪೌಷ್ಠಿಕಾಂಶಗಳ ಕೊರತೆಗೆ ಕಾರಣವಾಗಬಹುದು. ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳಲ್ಲಿ ಕೊರತೆ ಉಂಟಾಗಿ ಮೆದುಳಿನ ಆರೋಗ್ಯ ಸೇರಿದಂತೆ ಒಟ್ಟು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂದರೆ ಅರಿವಿನ ಕಾರ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಒಮೆಗಾ–3 ಕೊಬ್ಬಿನ ಆಮ್ಲಗಳ ಸೇವನೆ ಕಡಿಮೆಯಾಗಿ ಅರಿವಿನ ಕುಸಿತಕ್ಕೆ ಕಾರಣವಾಗಬಹುದು. ಕಳಪೆ ಪೋಷಕಾಂಶಗಳು ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಸೋಂಕುಗಳನ್ನು ತೊಡೆದು ಹಾಕಲು ಸಾಧ್ಯವಾಗದೆ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮೆದುಳಿನ ಆರೋಗ್ಯಕ್ಕಾಗಿ ಉತ್ತಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ►ಹಲ್ಲುಗಳ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು? ವೈದ್ಯರ ಪ್ರಕಾರ ನಿತ್ಯವೂ ಎರಡು ಬಾರಿ ಹಲ್ಲುಜ್ಜುವುದನ್ನು ಖಚಿತಪಡಿಸಬೇಕು. ಪರೀಕ್ಷೆಗಾಗಿ ದಂತಚಿಕಿತ್ಸಕರನ್ನು ಆಗಾಗ್ಗೆ ಭೇಟಿ ಮಾಡುತ್ತಿರಬೇಕು. ಅಗತ್ಯ ಪೋಷಕಾಂಶಗಳು ಇರುವ ಸಮತೋಲಿತ ಆಹಾರ ಸೇವಿಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ನಿಯಮಿತ ದೈಹಿಕ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಬೇಕು. ಮೆದುಳನ್ನು ಸಕ್ರಿಯವಾಗಿರಿಸಬೇಕು. ತಂಬಾಕು ಸೇವನೆ ಕಡಿಮೆ ಮಾಡಬೇಕು. ಮದ್ಯಪಾನವೂ ಮಿತಿಯಲ್ಲಿರಬೇಕು. ಈ ಕ್ರಮಗಳು ಒಟ್ಟಾಗಿ ಹಲ್ಲಿನ ನಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಅರಿವಿನ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತವೆ. ಒಟ್ಟು ಯೋಗಕ್ಷೇಮಕ್ಕೂ ಸಹಾಯಕವಾಗುತ್ತವೆ.
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ
Monalisa Marriage: ತಿರುವನಂತಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಭೋಂಸ್ಲೆ ಮತ್ತು ಅವರ ಪತಿ ಫರ್ಹಾನ್ ಖಾನ್ ತಮ್ಮ ಮದುವೆಯ ಕುರಿತು ಹರಿದಾಡುತ್ತಿದ್ದ ವದಂತಿಗಳನ್ನು ತಳ್ಳಿಹಾಕಿದ್ದಾರೆ. 'ಲವ್ ಜಿಹಾದ್ ನಡೆದಿದೆ' ಅಥವಾ 'ಮತಾಂತರ ಮಾಡಲಾಗಿದೆ' ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ದಂಪತಿ, ತಮ್ಮ ಮದುವೆ ಪರಸ್ಪರ ಒಪ್ಪಿಗೆಯೊಂದಿಗೆ ನಡೆದಿದೆ ಮತ್ತು ಇದರಲ್ಲಿ
‘ನಾಮ್ ನರೇಂದರ್, ಕಾಮ್ ಶರಣಾಗತಿ’,‘ಮೋದಿ ಜಿ, LPG’ ಘೋಷಣೆ ಕೂಗಿದ ಸಂಸದರು
ಇರಾನ್ ಯುದ್ಧದ ನಡುವೆ ಹೊರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಬಂದಿಳಿದ ಮೊದಲ ತೈಲ ಟ್ಯಾಂಕರ್! ಹೇಗಿತ್ತು ಇದರ ಪ್ರಯಾಣ?
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಬೆನ್ನಲ್ಲೇ, ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇದರಿಂದಾಗಿ ಭಾರತದ ತೈಲ ಟ್ಯಾಂಕರ್ ಗಳು ಜಲಸಂಧಿಯಲ್ಲಿ ಸಿಲುಕಿದೆ. ಈ ಹಿನ್ನಲೆಯಲ್ಲಿ ಭಾರತ-ಇರಾನ್ ಮಾತುಕತೆ ನಡೆಸಿದ್ದು,ಈ ಬಳಿಕ ಹೊರ್ಮುಜ್ ಜಲಸಂಧಿಯಿಂದ ಭಾರತದ ಟ್ಯಾಂಕರ್ ಗಳು ಸಾಗಲು ಅನುಮತಿ ನೀಡಿದ್ದು, ಈ ಬೆನ್ನಲ್ಲೇ, ಸದ್ಯ ಮುಂಬೈ ಬಂದರಿಗೆ ಮೊದಲ ಕಚ್ಚಾ ತೈಲ ಟ್ಯಾಂಕರ್ ತಲುಪಿದೆ. ಈ ಕುರಿತ ವರದಿ ಇಲ್ಲಿದೆ..
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆ ಅಗತ್ಯ ಸರಕುಗಳ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ: ಕಾಯ್ದೆಯಲ್ಲಿ ಏನಿದೆ?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಸಾಗಣೆ ನಿಂತುಹೋಗಿದೆ. ಇದು ದೇಶದಲ್ಲಿ ದ್ರವೀಕೃತ ನೈಸರ್ಗಿಕ ಅನಿಲ (LNG) ಕೊರತೆಯನ್ನು ಉಂಟುಮಾಡಿದೆ. ಇದನ್ನು ನಿಭಾಯಿಸಲು ಸರ್ಕಾರ ಸೋಮವಾರ ಅಗತ್ಯ ಸರಕುಗಳ ಕಾಯ್ದೆ ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿದೆ. ಇದು ಅನಿಲ ಪೂರೈಕೆಯ ನಿಯಂತ್ರಣವನ್ನು ತೆಗೆದುಕೊಂಡು ಅದನ್ನು ಮೊದಲು ಆದ್ಯತೆಯ ವಲಯಗಳಿಗೆ ಕಳುಹಿಸಲು ಅನುವು ಮಾಡಿಕೊಡುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG) ಹೊರಡಿಸಿದ ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ–2026 ಕೈಗಾರಿಕಾ ಬಳಕೆಗಿಂತ ದೈನಂದಿನ ಜನರ ಅನಿಲ ಅಗತ್ಯಗಳಿಗೆ ಆದ್ಯತೆ ನೀಡುತ್ತದೆ. ಇದರರ್ಥ ಮನೆಗಳಿಗೆ ಪೈಪ್ ಮಾಡಿದ ನೈಸರ್ಗಿಕ ಅನಿಲ (PNG), ವಾಹನಗಳಿಗೆ ಅನಿಲ (CNG) ಮತ್ತು ಅಡುಗೆ ಅನಿಲ ಸಿಲಿಂಡರ್ಗಳು (LPG)ಗಳನ್ನು ಮೊದಲು ಒದಗಿಸಲಾಗುವುದು. ಭಾರತವು ಸ್ವಂತವಾಗಿ ಸಾಕಷ್ಟು ಅನಿಲವನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಈ ಕ್ರಮವು ನಿರ್ಣಾಯಕವಾಗಿದೆ. ನಾವು ಪ್ರತಿದಿನ ಬಳಸುವ 190 ಮಿಲಿಯನ್ ಘನ ಮೀಟರ್ ಅನಿಲದಲ್ಲಿ ಅರ್ಧದಷ್ಟು ಆಮದು ಮಾಡಿಕೊಳ್ಳಬೇಕಾಗಿದೆ. ಆ ಆಮದುಗಳಲ್ಲಿ 50% ಕ್ಕಿಂತ ಹೆಚ್ಚು ಖತರ್ ಮತ್ತು ಯುಎಇಯಂತಹ ಪಶ್ಚಿಮ ಏಷ್ಯಾದ ದೇಶಗಳಿಂದ ಬರುತ್ತವೆ. ಇದಲ್ಲದೆ ಭಾರತವು ತನ್ನ ಒಟ್ಟು LPG ಅಗತ್ಯಗಳಲ್ಲಿ ಸುಮಾರು 60% ರಷ್ಟು ಆಮದುಗಳನ್ನು ಅವಲಂಬಿಸಿದೆ. ಆ ಪೂರೈಕೆಯ ಸುಮಾರು 80% ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತದೆ, ಇದು ಪ್ರಸ್ತುತ ಸಂಘರ್ಷದಿಂದ ನಿರ್ಬಂಧಿಸಲ್ಪಟ್ಟಿದೆ. ►ಅಗತ್ಯ ಸರಕುಗಳ ಕಾಯ್ದೆ ಎಂದರೇನು? 1955ರಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಕೆಲವು ಸರಕುಗಳ ಉತ್ಪಾದನೆ, ಪೂರೈಕೆ, ವಿತರಣೆ, ವ್ಯಾಪಾರ ಮತ್ತು ವಾಣಿಜ್ಯವನ್ನು ನಿಯಂತ್ರಿಸಲು ಅಗತ್ಯ ಸರಕುಗಳ ಕಾಯ್ದೆ (ECA) ಜಾರಿಗೆ ತರಲಾಯಿತು. ಸಂಗ್ರಹಣೆ ಅಥವಾ ಕಾಳಸಂತೆಯಿಂದಾಗಿ ಅಗತ್ಯ ಸರಕುಗಳು ಅಥವಾ ಉತ್ಪನ್ನಗಳ ಪೂರೈಕೆಯಲ್ಲಿ ಅಡಚಣೆ ಉಂಟಾದರೆ, ಅದು ಜನರ ಸಾಮಾನ್ಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಾಯ್ದೆಯಿಂದ ವ್ಯಾಖ್ಯಾನಿಸಲಾದ ಅಗತ್ಯ ಸರಕುಗಳಲ್ಲಿ ದನದ ಮೇವು, ಕಲ್ಲಿದ್ದಲು ಮತ್ತು ಅದರ ಉತ್ಪನ್ನಗಳು, ಆಟೋಮೊಬೈಲ್ ಘಟಕಗಳು ಮತ್ತು ಪರಿಕರಗಳು, ಹತ್ತಿ ಮತ್ತು ಉಣ್ಣೆಯ ಜವಳಿ, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ–1940ರ ಸೆಕ್ಷನ್ 3ರಲ್ಲಿ ವ್ಯಾಖ್ಯಾನಿಸಲಾದ ಔಷಧಗಳು, ಆಹಾರ ಪದಾರ್ಥಗಳು, ಕಬ್ಬಿಣ ಮತ್ತು ಉಕ್ಕು ಹಾಗೂ ಇವುಗಳಿಂದ ತಯಾರಿಸಿದ ಉತ್ಪನ್ನಗಳು, ಕಚ್ಚಾ ಹತ್ತಿ, ಕಚ್ಚಾ ಸೆಣಬು ಮತ್ತು ಅಧಿಸೂಚಿತ ಆದೇಶದ ಮೂಲಕ ಕೇಂದ್ರವು ಪಟ್ಟಿ ಮಾಡಿದ ಯಾವುದೇ ಇತರ ಉತ್ಪನ್ನಗಳು ಸೇರಿವೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ, ಮಾರ್ಚ್ 2020ರಲ್ಲಿ ಕೇಂದ್ರವು ಫೇಸ್ ಮಾಸ್ಕ್ಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿತು. ನಂತರ ಜುಲೈನಲ್ಲಿ ಅವುಗಳನ್ನು ತೆಗೆದುಹಾಕಿತು. ಮೂಲ ಕಾಯಿದೆಯಡಿಯಲ್ಲಿ ಸರ್ಕಾರವು ಅಗತ್ಯ ಸರಕು ಎಂದು ಪರಿಗಣಿಸಲಾದ ಯಾವುದೇ ಪ್ಯಾಕೇಜ್ ಮಾಡಿದ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬಹುದು. ಜೂನ್ 2020ರಲ್ಲಿ ಕೇಂದ್ರವು ಕೆಲವು ಸರಕುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲು ಕಾಯ್ದೆಯನ್ನು ತಿದ್ದುಪಡಿ ಮಾಡಿತು. ಯುದ್ಧ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಮತ್ತು ಗಂಭೀರ ಸ್ವಭಾವದ ನೈಸರ್ಗಿಕ ವಿಕೋಪದಂತಹ “ಅಸಾಧಾರಣ ಸಂದರ್ಭಗಳಲ್ಲಿ” ಮಾತ್ರ ಸರ್ಕಾರವು ಅವುಗಳ ಪೂರೈಕೆ ಮತ್ತು ಬೆಲೆಗಳನ್ನು ನಿಯಂತ್ರಿಸಲು ಅವಕಾಶ ನೀಡಿತು. ಪಟ್ಟಿಯಿಂದ ತೆಗೆದುಹಾಕಲಾದ ಸರಕುಗಳಲ್ಲಿ ಧಾನ್ಯಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಕಾಳುಗಳು ಮತ್ತು ಎಣ್ಣೆ ಮೊದಲಾದ ಆಹಾರ ಪದಾರ್ಥಗಳು ಸೇರಿವೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗಳು ಹೊಂದಿರುವ ಅಂತಹ ವಸ್ತುಗಳ ದಾಸ್ತಾನುಗಳ ಮೇಲೆ ಮಿತಿಗಳನ್ನು ವಿಧಿಸಬಹುದು. ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಶೇ.100 ರಷ್ಟು ಹೆಚ್ಚಳ ಮತ್ತು ಹಾಳಾಗದ ಕೃಷಿ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಯಲ್ಲಿ ಶೇ.50 ರಷ್ಟು ಹೆಚ್ಚಳವಾದರೆ ಮಾತ್ರ ತಿದ್ದುಪಡಿ ಮಾಡಿದ ಕಾಯ್ದೆಯನ್ನು ವಿಧಿಸಬಹುದು. ಆದಾಗ್ಯೂ ಈ ನಿರ್ಬಂಧಗಳು ದೇಶೀಯ ಸಾರ್ವಜನಿಕ ವಿತರಣೆಗಾಗಿ ಹೊಂದಿರುವ ಆಹಾರ ದಾಸ್ತಾನುಗಳಿಗೆ ಅನ್ವಯಿಸುವುದಿಲ್ಲ. ►ಪ್ರಸ್ತುತ ಆದೇಶವು ಏನು ಹೇಳುತ್ತದೆ? ನೈಸರ್ಗಿಕ ಅನಿಲವನ್ನು ಮೊದಲು ಯಾರು ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ನಾಲ್ಕು ಹಂತದ ಆದ್ಯತೆಯ ಪಟ್ಟಿಯನ್ನು ರಚಿಸಿದೆ. ಸರಬರಾಜು ಸೀಮಿತವಾಗಿರುವುದರಿಂದ ಕಳೆದ ಆರು ತಿಂಗಳುಗಳಲ್ಲಿ ವಿವಿಧ ವಲಯಗಳು ನಿಜವಾಗಿ ಎಷ್ಟು ಅನಿಲವನ್ನು ಬಳಸಿವೆ ಎಂಬುದನ್ನು ಪರಿಗಣಿಸಿ ಈಗ ಅವರಿಗೆ ಎಷ್ಟು ಅನಿಲ ಸಿಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹೊಸ ಆದೇಶದಲ್ಲಿ ಸರ್ಕಾರವು ಮನೆ ಅಡುಗೆ ಅನಿಲಕ್ಕೆ (PNG) ಮೊದಲ ಆದ್ಯತೆ ನೀಡಿದೆ. ಮನೆಗಳು ಕಳೆದ ಆರು ತಿಂಗಳ ಸರಾಸರಿ ಅನಿಲ ಬಳಕೆಯ 100% ಅನ್ನು ಪಡೆಯುತ್ತವೆ. ಇದೇ ಹೆಚ್ಚಿನ ಆದ್ಯತೆಯ ಗುಂಪಿನಲ್ಲಿ ಸಾರಿಗೆಗೆ ಬಳಸುವ ಅನಿಲ (CNG), ಅಡುಗೆ ಅನಿಲ ಸಿಲಿಂಡರ್ಗಳನ್ನು (LPG) ತಯಾರಿಸಲು ಬಳಸುವ ಇಂಧನ ಮತ್ತು ಪೂರೈಕೆ ಪೈಪ್ಲೈನ್ಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅನಿಲವೂ ಸೇರಿದೆ. ಎರಡನೇ ಆದ್ಯತೆ ರಸಗೊಬ್ಬರ ಘಟಕಗಳಿಗೆ ನಿಗದಿಪಡಿಸಲಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಅವರು ಸಾಮಾನ್ಯವಾಗಿ ಬಳಸಿದ ಅನಿಲದ 70% ಅವರನ್ನು ಪಡೆಯುತ್ತಾರೆ. ಈ ಕಾರ್ಖಾನೆಗಳು ಈ ಅನಿಲವನ್ನು ಬೇರೆ ಯಾವುದಕ್ಕೂ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಇಂಧನವನ್ನು ರಸಗೊಬ್ಬರಗಳನ್ನು ತಯಾರಿಸಲು ಮಾತ್ರ ಬಳಸಲಾಗಿದೆ ಎಂದು ದೃಢೀಕರಿಸುವ ಅಧಿಕೃತ ಪ್ರಮಾಣಪತ್ರವನ್ನು ಅವರು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಮೂಲಕ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶಕ್ಕೆ (PPAC) ಸಲ್ಲಿಸಬೇಕು. ಮೂರನೇ ವರ್ಗವು ಚಹಾ ಕಾರ್ಖಾನೆಗಳು, ಉತ್ಪಾದನಾ ಘಟಕಗಳು ಮತ್ತು ರಾಷ್ಟ್ರೀಯ ಅನಿಲ ಗ್ರಿಡ್ ಮೂಲಕ ಸರಬರಾಜು ಮಾಡಲಾದ ಇತರ ಕೈಗಾರಿಕಾ ಗ್ರಾಹಕರನ್ನು ಒಳಗೊಂಡಿದೆ. ಇವರು ತಮ್ಮ ಆರು ತಿಂಗಳ ಸರಾಸರಿ ಬಳಕೆಯ 80% ಅನ್ನು ಪೂರೈಕೆಯಾಗಿ ಪಡೆಯುತ್ತಾರೆ. ನಗರ ಅನಿಲ ವಿತರಣಾ ಕಂಪನಿಗಳ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ನಾಲ್ಕನೇ ವರ್ಗವನ್ನು ಒಳಗೊಂಡಿರುತ್ತಾರೆ. ಅವರು ತಮ್ಮ ಆರು ತಿಂಗಳ ಸರಾಸರಿ ಬಳಕೆಯ 80% ಅನ್ನು ಪಡೆಯುತ್ತಾರೆ. ಇಂಧನ ಪೂರೈಕೆಯಲ್ಲಿನ ಪ್ರಸ್ತುತ ಭೌಗೋಳಿಕ ರಾಜಕೀಯ ಅಡೆತಡೆಗಳು ಮತ್ತು LPG ಪೂರೈಕೆಯ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ತೈಲ ಸಂಸ್ಕರಣಾಗಾರಗಳು ತಮ್ಮ LPG ಉತ್ಪಾದನೆಯನ್ನು ದೇಶೀಯ ಬಳಕೆಗೆ ಹೆಚ್ಚಿಸುವಂತೆ ಆದೇಶಿಸಿರುವುದಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಜನರು ಹೆಚ್ಚುವರಿ ಅನಿಲವನ್ನು ಸಂಗ್ರಹಿಸುವುದನ್ನು ತಡೆಯಲು ಸರ್ಕಾರ ಹೊಸ ನಿಯಮವೊಂದನ್ನು ಪರಿಚಯಿಸಿದೆ. ಇದರ ಪ್ರಕಾರ ಈಗ ಪ್ರತಿ LPG ಬುಕಿಂಗ್ ನಡುವೆ ಕನಿಷ್ಠ 25 ದಿನಗಳು ಕಾಯಬೇಕು. ಆಮದು ಮಾಡಿಕೊಂಡ LPG ಸರಬರಾಜುಗಳಲ್ಲಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ದೇಶೀಯವಲ್ಲದ ವಲಯಗಳಿಗೆ ವಿತರಣೆಯನ್ನು ಆದ್ಯತೆ ನೀಡಲಾಗುತ್ತಿದೆ. ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಇತರ ಕೈಗಾರಿಕೆಗಳಿಗೆ LPG ಪೂರೈಕೆಯ ಕುರಿತು ಬಂದಿರುವ ಪ್ರಾತಿನಿಧ್ಯಗಳನ್ನು ಪರಿಶೀಲಿಸಲು ತೈಲ ಮಾರುಕಟ್ಟೆ ಕಂಪನಿಗಳ ಮೂರು ಕಾರ್ಯನಿರ್ವಾಹಕ ನಿರ್ದೇಶಕರ ಸಮಿತಿಯನ್ನು ರಚಿಸಿರುವುದಾಗಿ ಸಚಿವಾಲಯ ತಿಳಿಸಿದೆ. ►ಭಾರತದಲ್ಲಿ LPG ಪೂರೈಕೆಯಲ್ಲಿ ಕೊರತೆ ಹಾರ್ಮುಜ್ ಜಲಸಂಧಿಯಲ್ಲಿನ ಅಡಚಣೆಯಿಂದಾಗಿ ಭಾರತವು ಅಮೆರಿಕ, ನಾರ್ವೆ ಮತ್ತು ಅಲ್ಜೀರಿಯಾದಂತಹ ದೂರದ ಮೂಲಗಳಿಂದ ಸ್ಪಾಟ್ ಕಾರ್ಗೋಗಳನ್ನು ಹುಡುಕಲು ಒತ್ತಾಯಿಸಲ್ಪಟ್ಟಿದೆ. ಇದರಿಂದ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಸಂಭಾವ್ಯ ಕೊರತೆಯ ಪ್ರಮಾಣದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳಿಲ್ಲದಿದ್ದರೂ ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಪುಣೆಯಂತಹ ನಗರಗಳಲ್ಲಿ ವಾಣಿಜ್ಯ ಸರಬರಾಜುಗಳು ತೀವ್ರ ಒತ್ತಡದಲ್ಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಹೋಟೆಲ್ಗಳು, ರೆಸ್ಟೋರೆಂಟ್ಗಳು, ತಿನಿಸು ಅಂಗಡಿಗಳು, ಬೇಕರಿಗಳು ಮತ್ತು ಫುಡ್ ಕೋರ್ಟ್ ಗಳ ಮೇಲೆ LPG ಕೊರತೆ ಹೆಚ್ಚು ಪರಿಣಾಮ ಬೀರಿದೆ. ಕೆಲವು ಹೋಟೆಲ್ಗಳು ಈಗಾಗಲೇ ಮುಚ್ಚಿದ್ದು, ಇನ್ನು ಕೆಲವು ಮೆನುವಿನಲ್ಲಿ ಕಡಿತಗೊಳಿಸಿವೆ. ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಭಯವೂ ಇದೆ. ಸ್ಮಶಾನಗಳು, ಲಾಂಡ್ರಿಗಳು ಮತ್ತು ಅನಿಲ ಬಳಸಿ ಇಸ್ತ್ರಿ ಮಾಡುವಂತಹ ಇತರ ಸೇವೆಗಳ ಮೇಲೆಯೂ ಇದು ಪರಿಣಾಮ ಬೀರಿದೆ. ►ಈ ಕಾಯ್ದೆಯಡಿ ಸರ್ಕಾರವು ಯಾವ ಅಧಿಕಾರಗಳನ್ನು ಪಡೆಯುತ್ತದೆ? ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಸರ್ಕಾರವು ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕತೆಯನ್ನು ನಿರ್ವಹಿಸಲು ಮಹತ್ವದ ಅಧಿಕಾರಗಳನ್ನು ಪಡೆಯುತ್ತದೆ. ಇದು ಕೇಂದ್ರ ಸರ್ಕಾರಕ್ಕೆ ಅಗತ್ಯ ಸರಕುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕಾರ ನೀಡುತ್ತದೆ. ಅಂದರೆ ಕಾರ್ಖಾನೆಗಳು ಎಷ್ಟು ಉತ್ಪಾದಿಸಬೇಕು ಅಥವಾ ಅಗತ್ಯವಿದ್ದರೆ ಉತ್ಪಾದನೆಯನ್ನು ನಿಲ್ಲಿಸಬೇಕು ಎಂದು ಹೇಳಬಹುದು. ಇದಲ್ಲದೆ ಸರ್ಕಾರವು ಪೂರೈಕೆ ಸರಪಳಿಯನ್ನು ನಿಯಂತ್ರಿಸಿ ರಾಜ್ಯಗಳಾದ್ಯಂತ ಸರಕುಗಳನ್ನು ಹೇಗೆ ವಿತರಿಸಲಾಗಬೇಕು ಎಂಬುದನ್ನು ನಿರ್ದೇಶಿಸಬಹುದು. ಮಾರುಕಟ್ಟೆಯ ಏರಿಳಿತವು ಗ್ರಾಹಕರಿಗೆ ಈ ಸರಕುಗಳ ಲಭ್ಯತೆಗೆ ಅಡ್ಡಿಯಾಗಿದೆಯಾದರೆ ಅಗತ್ಯ ಸರಕುಗಳಿಗೆ ಬೆಲೆ ನಿಗದಿ ಅಥವಾ ಬೆಲೆ ಮಿತಿಗಳನ್ನು ವಿಧಿಸಲು ಈ ಕಾಯ್ದೆ ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಇದಲ್ಲದೆ ಸಂಗ್ರಹಣೆಯನ್ನು ತಡೆಯಲು ಕೇಂದ್ರವು ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಅಥವಾ ಚಿಲ್ಲರೆ ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸುವ ಅಧಿಕಾರವನ್ನು ಹೊಂದಿದೆ.
ಮನೆಯಿಂದ ಹೊರಗೆ ಕಾಲಿಟ್ಟರೆ ನೆತ್ತಿ ಸುಡುತ್ತಿದೆ ಬಿಸಿಲು, ಹೀಗಿರಲಿ ಮುಂಜಾಗ್ರತೆ
ಬೇಸಿಗೆ ಶುರುವಾಗಿದೆ. ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್ ವೇವ್ ಸ್ಟ್ರೋಕ್ನಿಂದಾಗಿ (ಶಾಖದ ಅಲೆ) ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಪ್ರಖರವಾದ ಬಿಸಿಲಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು.
Fact Check | ಬಹ್ರೇನ್ ನಲ್ಲಿ ಮೊಸಾದ್ ಪರವಾಗಿ ಬೇಹುಗಾರಿಕೆ ಆರೋಪದಲ್ಲಿ ಭಾರತೀಯ ಪ್ರಜೆ ನಿತಿನ್ ಮೋಹನ್ ಬಂಧನವಾಗಿಲ್ಲ
ಮನಾಮಾ: ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಿತಿನ್ ಮೋಹನ್ ಎಂಬ ಭಾರತೀಯ ಪ್ರಜೆಯನ್ನು ಬಹ್ರೇನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಹೇಳಿಕೆಯೊಂದಿಗೆ ಕಪ್ಪು ಟಿ–ಶರ್ಟ್ ಧರಿಸಿದ ಗಡ್ಡಧಾರಿ ವ್ಯಕ್ತಿಯೊಬ್ಬರನ್ನು ಬಹ್ರೇನ್ ಆಂತರಿಕ ಸಚಿವಾಲಯದ ಚಿಹ್ನೆಯಿರುವ ಹಿನ್ನೆಲೆಯ ಮುಂದೆ ಕೈಕೋಳ ಹಾಕಿರುವ ಚಿತ್ರವನ್ನೂ ಹಂಚಿಕೊಳ್ಳಲಾಗಿದೆ. ಆದರೆ ಈ ಹೇಳಿಕೆ ಆಧಾರರಹಿತವಾಗಿದ್ದು, ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ. Photo Credit : altnews.in ಪಾಕಿಸ್ತಾನ ಮೂಲದ ಎಕ್ಸ್ ಖಾತೆಯಾದ ದಿ ಇಂಟೆಲ್ ಕನ್ಸೋರ್ಟಿಯಂ ಮೊಸಾದ್ ಗೆ ‘ಸೂಕ್ಷ್ಮ ಜಿಯೋಸ್ಪೇಷಿಯಲ್ ಡೇಟಾ, ಫೊಟೋಗಳು ಹಾಗೂ ಆಯಕಟ್ಟಿನ ಸ್ಥಳಗಳ ವೀಡಿಯೊ’ ರವಾನಿಸಿದ್ದಕ್ಕಾಗಿ ಭಾರತೀಯ ಇಂಜಿನಿಯರ್ ನಿತಿನ್ ಮೋಹನ್ ಅವರನ್ನು ಬಹ್ರೇನ್ ನ ಗುಪ್ತಚರ ಇಲಾಖೆ ಬಂಧಿಸಿದೆ ಎಂದು ಹೇಳಿಕೊಂಡಿದೆ. ಇದೇ ರೀತಿಯ ಹೇಳಿಕೆಯನ್ನು ಅರ್ಟಬನ್ 1727 AD (@3lm_a1) ಎಂಬ ಮತ್ತೊಂದು ಎಕ್ಸ್ ಖಾತೆಯೂ ಅದೇ ಚಿತ್ರದೊಂದಿಗೆ ಹಂಚಿಕೊಂಡಿದೆ. ಇದಲ್ಲದೆ, ಪಾಕಿಸ್ತಾನ ಮೂಲದ ಮತ್ತೊಂದು ಎಕ್ಸ್ ಖಾತೆಯಾದ ಎಕ್ಸ್ಪೋಸ್ ಪ್ರೊಪಗಾಂಡಾ (@EPropoganda1) ಕೂಡ ಮಾರ್ಚ್ 10, 2026 ರಂದು ಇದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಪಾಕಿಸ್ತಾನದ ಪತ್ರಿಕೆ ಮಿನಿಟ್ ಮಿರರ್ ಸಹ ತನ್ನ ವೆಬ್ ಪೋರ್ಟಲ್ ನಲ್ಲಿ ‘ಇಸ್ರೇಲಿನ ಮೊಸಾದ್ ಗಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಹ್ರೇನ್ ಭಾರತೀಯ ಪ್ರಜೆಯನ್ನು ಬಂಧಿಸಿದೆ’ ಎಂಬ ಶೀರ್ಷಿಕೆಯಡಿ ಇದೇ ಚಿತ್ರ ಬಳಸಿ ವರದಿ ಪ್ರಕಟಿಸಿತ್ತು. Photo Credit : altnews.in ಆದರೆ ಈ ಹೇಳಿಕೆಗಳ ಪರಿಶೀಲನೆಯಿಂದ ಅವು ಸತ್ಯಕ್ಕೆ ದೂರವಾದವು ಎಂಬುದು ಸ್ಪಷ್ಟವಾಗಿದೆ. ►ಫ್ಯಾಕ್ಟ್ ಚೆಕ್ ಬಹ್ರೇನ್ ನ ಆಂತರಿಕ ಸಚಿವಾಲಯವು 2026ರ ಮಾರ್ಚ್ 9ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಮತ್ತು ಆರ್ಥಿಕ ಹಾಗೂ ಎಲೆಕ್ಟ್ರಾನಿಕ್ ಭದ್ರತೆಗಾಗಿ ಕಾರ್ಯನಿರ್ವಹಿಸುವ ಜನರಲ್ ಡೈರೆಕ್ಟರೇಟ್ ನ ಸೈಬರ್ ಅಪರಾಧ ವಿಭಾಗವು ಆರು ಏಷ್ಯನ್ ಪ್ರಜೆಗಳನ್ನು ಬಂಧಿಸಿದೆ. ಬಂಧಿತರನ್ನು ಪಾಕಿಸ್ತಾನದ ಮೊಹಮ್ಮದ್ ಮುವಾರ್ ಅಕ್ಬರ್, ಅಫ್ಜಲ್ ಖಾನ್, ಅಹ್ಮದ್ ಮುಮ್ತಾಜ್, ಅರ್ಸ್ಲಾನ್ ಅಲಿ ಸಾಜಿದ್ ಮತ್ತು ಅಬ್ದುಲ್ ರೆಹಮಾನ್ ಅಬ್ದುಲ್ ಸತ್ತಾರ್ ಹಾಗೂ ಬಾಂಗ್ಲಾದೇಶದ ಮುಹಮ್ಮದ್ ಇಸ್ರಾಫಿಲ್ ಮಿರ್ ಎಂದು ಗುರುತಿಸಲಾಗಿದೆ. ಇವರ ಮೇಲೆ ಇರಾನ್ ದಾಳಿಯ ಪರಿಣಾಮಗಳಿಗೆ ಸಂಬಂಧಿಸಿದ ‘ವೀಡಿಯೊ ತುಣುಕುಗಳನ್ನು ಚಿತ್ರೀಕರಿಸುವುದು, ಪ್ರಕಟಿಸುವುದು ಮತ್ತು ಮರುಪ್ರಕಟಿಸುವುದು’ ಎಂಬ ಆರೋಪವಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ದ್ವೇಷಭಾವನೆಗಳನ್ನು ಪ್ರೇರೇಪಿಸುವ ಹಾಗೂ ನಾಗರಿಕರು ಮತ್ತು ನಿವಾಸಿಗಳಲ್ಲಿ ತಪ್ಪು ಮಾಹಿತಿ ಮತ್ತು ಭಯವನ್ನು ಹರಡುವ ವೀಡಿಯೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಚಿವಾಲಯದ ಪ್ರಕಟಣೆಯಲ್ಲಿ ಯಾವುದೇ ಭಾರತೀಯ ಪ್ರಜೆಯನ್ನು ಉಲ್ಲೇಖಿಸಲಾಗಿಲ್ಲ. ಅಲ್ಲದೆ, ಮೊಸಾದ್ ಗೆ ಸಂಬಂಧಿಸಿದ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ವೈರಲ್ ಆಗಿರುವ ಚಿತ್ರದಲ್ಲಿರುವ ವ್ಯಕ್ತಿಯೂ ಬಂಧಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ವೈರಲ್ ಚಿತ್ರದ ಮೇಲೆ ನಡೆಸಿದ ರಿವರ್ಸ್ ಇಮೇಜ್ ಹುಡುಕಾಟದಲ್ಲಿಯೂ ಹಿಂದಿನ ಯಾವುದೇ ಹೊಂದಾಣಿಕೆಗಳು ಕಂಡುಬಂದಿಲ್ಲ. ಇದರಿಂದಾಗಿ ಆ ಚಿತ್ರವು ಕೃತಕವಾಗಿ ಸೃಷ್ಟಿಸಲ್ಪಟ್ಟಿರುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆ, ಮೊಸಾದ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ನಿತಿನ್ ಮೋಹನ್ ಎಂಬ ಭಾರತೀಯ ಪ್ರಜೆಯನ್ನು ಬಹ್ರೇನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಹೇಳಿಕೆ ಸುಳ್ಳು. ಬಹ್ರೇನ್ ನಲ್ಲಿ ಸೈಬರ್ ಅಪರಾಧ ಉಲ್ಲಂಘನೆ ಆರೋಪದ ಮೇಲೆ ಬಂಧಿತರಾದವರು ಐದು ಪಾಕಿಸ್ತಾನಿಗಳು ಮತ್ತು ಒಬ್ಬ ಬಾಂಗ್ಲಾದೇಶಿ ಸೇರಿದ್ದಾರೆ. ಸೌಜನ್ಯ: altnews.in
Afzalpur | ರಸ್ತೆ ಅಪಘಾತದಲ್ಲಿ ಪಶು ವೈದ್ಯ ಮೃತ್ಯು
ಕಲಬುರಗಿ: ಬೈಕೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಪಶು ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಸಮೀಪ ನಡೆದಿದೆ. ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅಫಜಲಪುರ ತಾಲೂಕಿನ ಆನೂರ ಗ್ರಾಮದ ವೈಜನಾಥ ಕಲಶೆಟ್ಟಿ (37) ಮೃತಪಟ್ಟವರು. ಅಫಜಲಪುರದಿಂದ ನಿಂಬರ್ಗಾ ಕಡೆ ಕೆಲಸಕ್ಕಾಗಿ ಬೈಕ್ ಮೇಲೆ ಹೊರಟಿದ್ದರು ಎನ್ನಲಾಗಿದ್ದು, ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಅಫಜಲಪುರ ಪಟ್ಟಣದ ಶವಗಾರಕ್ಕೆ ತರಲಾಗಿದ್ದು, ತನಿಖೆ ಮುಂದುವರೆದಿದೆ. ಘಟನೆ ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ತಿರುವನಂತಪುರ: ಮಹಾ ಕುಂಭಮೇಳ–2025ರಲ್ಲಿ ರಾಷ್ಟ್ರವ್ಯಾಪಿ ಖ್ಯಾತಿಗೆ ಪಾತ್ರರಾದ ಮೊನಾಲಿಸಾ ಭೋಸ್ಲೆ ಅವರು ನಟ ಫರ್ಮಾನ್ ಖಾನ್ ಅವರೊಂದಿಗಿನ ತಮ್ಮ ಅಂತರ್ಧರ್ಮೀಯ ವಿವಾಹವನ್ನು ಸಮರ್ಥಿಸಿಕೊಂಡಿದ್ದು, ಈ ಸಂಬಂಧ ಕೇಳಿಬಂದಿರುವ ‘ಲವ್ ಜಿಹಾದ್’ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಗುರುವಾರ ತಿರುವನಂತಪುರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ, ಫರ್ಮಾನ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ತನ್ನದೇ ಆಗಿತ್ತು ಎಂದು ಹೇಳಿದರು. ಆರಂಭದಲ್ಲಿ ಖಾನ್ ಹಿಂಜರಿದರೂ ಮದುವೆಗೆ ತಾನೇ ಒತ್ತಾಯಿಸಿದ್ದೆ ಎಂದು ಅವರು ಹೇಳಿದರು. “ನನ್ನ ಪೋಷಕರು ನನ್ನ ಸ್ವಂತ ಚಿಕ್ಕಮ್ಮನ ಮಗನನ್ನು ಮದುವೆಯಾಗಬೇಕೆಂದು ಬಯಸಿದ್ದರು. ಆದರೆ ನನಗೆ ಆ ಜೋಡಿ ಇಷ್ಟವಾಗಲಿಲ್ಲ. ನಾನು ಫರ್ಮಾನ್ ಖಾನ್ ಅವರನ್ನು ಮದುವೆಯಾಗಲು ಆಯ್ಕೆ ಮಾಡಿಕೊಂಡೆ,” ಎಂದು ಅವರು ಹೇಳಿದರು. ತನ್ನ ತಂದೆ ತನ್ನೊಂದಿಗೆ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರೂ ಮದುವೆ ಸಮಾರಂಭಕ್ಕೆ ಹಾಜರಾಗಲಿಲ್ಲ ಎಂದು ಅವರು ತಿಳಿಸಿದರು. “ಅವರು ನನ್ನೊಂದಿಗೆ ಇಲ್ಲಿಗೆ ಬಂದರು. ಆದರೆ ಈ ನಿರ್ಧಾರದ ಬಗ್ಗೆ ಅವರು ಇನ್ನೂ ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ನಂತರ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದರು. ►ಅಪ್ರಾಪ್ತ ವಯಸ್ಸಿನ ಆರೋಪ ತಿರಸ್ಕಾರ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯವರಾದ ಫರ್ಮಾನ್ ಖಾನ್ ಅವರು ಮದುವೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ, ವಿಶೇಷವಾಗಿ ಉತ್ತರ ಭಾರತದ ಮಾಧ್ಯಮಗಳಲ್ಲಿ ಹರಿದಾಡಿದ ಆರೋಪಗಳನ್ನು ತಳ್ಳಿಹಾಕಿದರು. “ನಾವಿಬ್ಬರೂ ನಮ್ಮ ಧರ್ಮವನ್ನು ಬದಲಾಯಿಸಿಲ್ಲ. ಅವರು ಹಿಂದೂ ಆಗಿಯೇ ಇದ್ದಾರೆ ಮತ್ತು ನಾನು ಮುಸ್ಲಿಂ ಆಗಿಯೇ ಇದ್ದೇನೆ. ಪ್ರೀತಿಯಲ್ಲಿ ಮತಾಂತರ ಅಗತ್ಯವಿಲ್ಲ,” ಎಂದು ಖಾನ್ ಹೇಳಿದರು. ಮೊನಾಲಿಸಾ ಅವರ ಕೋರಿಕೆಯ ಮೇರೆಗೆ ದೇವಾಲಯದಲ್ಲಿ ಹಿಂದೂ ಆಚರಣೆಗಳ ಪ್ರಕಾರ ಮದುವೆ ನೆರವೇರಿಸಲಾಗಿದೆ ಎಂದು ದಂಪತಿಗಳು ಹೇಳಿದರು. “ಮೊನಾಲಿಸಾ ಸಂತೋಷವಾಗಿರಬೇಕು ಎಂಬುದೇ ನನಗೆ ಮುಖ್ಯ. ಅವರು ಬಯಸಿದ ರೀತಿಯಲ್ಲಿ ಆಚರಣೆಗಳನ್ನು ಅನುಸರಿಸಲು ನಾನು ಒಪ್ಪಿಕೊಂಡೆ. ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ,” ಎಂದು ಖಾನ್ ಹೇಳಿದರು. ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದಾರೆ ಎಂಬ ಆರೋಪಗಳನ್ನು ಖಂಡಿಸಲು ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಅವರು ಮಾಧ್ಯಮಗಳಿಗೆ ತೋರಿಸಿದರು. “ಅವರು ವಯಸ್ಕರು. ಮದುವೆಯನ್ನು ಕೇರಳ ಸರ್ಕಾರದ K-SMART ಆಪ್ ಮೂಲಕ ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ,” ಎಂದು ಖಾನ್ ಹೇಳಿದರು. ದಂಪತಿಗಳ ಪ್ರಕಾರ, ನೋಂದಣಿ ಪ್ರಕ್ರಿಯೆ ಸುಮಾರು ಒಂದು ಗಂಟೆ ತೆಗೆದುಕೊಂಡಿತು. ಜೊತೆಗೆ ಸ್ಥಳೀಯ ದೇವಸ್ಥಾನ ಮತ್ತು ಪೂವಾರ್ ಪಂಚಾಯತ್ ನಿಂದಲೂ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ►ಆರು ತಿಂಗಳ ಹಿಂದೆ ಪರಿಚಯ ನಿರ್ದೇಶಕ ಪಿ. ಬಿನು ವರ್ಗೀಸ್ ಅವರ ‘ನಾಗಮ್ಮ’ ಎಂಬ ಮಲಯಾಳಂ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಆರು ತಿಂಗಳ ಹಿಂದೆ ಇಬ್ಬರೂ ಮೊದಲ ಬಾರಿ ಭೇಟಿಯಾದರು. ಈ ಚಿತ್ರದಲ್ಲಿ ಫರ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಮೊನಾಲಿಸಾ ಭೋಸ್ಲೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೇರಳದಲ್ಲಿ ತಮಗೆ ದೊರೆತ ಬೆಂಬಲದಿಂದ ಸಂತೋಷವಾಗಿದೆ ಎಂದು ದಂಪತಿಗಳು ಹೇಳಿದರು. “ಕೇರಳ ತುಂಬಾ ಒಳ್ಳೆಯದು. ಇಲ್ಲಿನ ಜನರು ತುಂಬಾ ಬೆಂಬಲ ನೀಡಿದ್ದಾರೆ. ಮೊನಾಲಿಸಾಗೆ ಇಲ್ಲಿ ಇಷ್ಟವಾದರೆ, ನಾವು ಇಲ್ಲಿಯೇ ನೆಲೆಸುವುದನ್ನು ಪರಿಗಣಿಸಬಹುದು,” ಎಂದು ಖಾನ್ ಹೇಳಿದರು. ಮದುವೆ ಸಮಾರಂಭದಲ್ಲಿ ಕೇರಳ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎ.ಎ. ರಹೀಮ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಅತಿಥಿಗಳು ಭಾಗವಹಿಸಿದ್ದರು. ದಂಪತಿಗಳು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
Manipur | ಕುಕಿ ಗುಂಪಿನಿಂದ ಯೋಧ ಸೇರಿದಂತೆ 20 ಜನರ ಒತ್ತೆಸೆರೆ; ಬಿಡುಗಡೆಗೆ ಮುಖ್ಯಮಂತ್ರಿ ಮನವಿ
ಇಂಫಾಲ, ಮಾ.12: ಮಣಿಪುರದ ಉಖ್ರುಲ್ ಜಿಲ್ಲೆಯ ಲಿಟಾನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಜೆಯಲ್ಲಿ ತೆರಳುತ್ತಿದ್ದ ಸೇನೆಯ ಓರ್ವ ಯೋಧ ಸೇರಿದಂತೆ 20 ಜನರು ಕುಕಿ ಗುಂಪೊಂದರ ಒತ್ತೆಯಾಳುಗಳಾಗಿ ಅದರ ವಶದಲ್ಲಿದ್ದಾರೆ. ಘಟನೆಯು ಮಣಿಪುರದ ಭದ್ರತಾ ಸ್ಥಿತಿಯ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ. ಉಖ್ರುಲ್ ಜಿಲ್ಲೆಯಲ್ಲಿ ನಾಗಾ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಜಿಲ್ಲೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಕುಕಿ ಸ್ವಯಂಸೇವಕರು 20 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ನಾಗಾ ಗುಂಪೊಂದು ಈ ಮೊದಲು ಕುಕಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಲ್ಲದೆ, ಇಬ್ಬರನ್ನು ಒತ್ತೆಸೆರೆ ಹಿಡಿದಿತ್ತು ಎಂದು ಬುಡಕಟ್ಟು ಏಕತಾ ಸಮಿತಿಯು (ಸಿಒಟಿಯು) ಆಪಾದಿಸಿದೆ. ಇಡೀ ಘಟನೆಯನ್ನು ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ‘ಘರ್ಷಣೆ’ ಎಂದು ಬಣ್ಣಿಸಿರುವ ಮಣಿಪುರ ಪೋಲಿಸರು, ಶೀಘ್ರವೇ ಅದನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಒತ್ತೆಯಾಳುಗಳ ಬಿಡುಗಡೆಗಾಗಿ ಗುರುವಾರವೂ ಮಾತುಕತೆಗಳು ಮುಂದುವರಿದಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳಲು ನಾಗರಿಕ ಸಮಾಜದ ಗುಂಪುಗಳನ್ನೂ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಅಧಿಕೃತ ಹೇಳಿಕೆಯಲ್ಲಿ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಣಿಪುರ ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಅವರು, 20 ಒತ್ತೆಯಾಳುಗಳ ಸುರಕ್ಷಿತ ಮತ್ತು ಬೇಷರತ್ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದಾರೆ. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಇಂತಹ ಹೇಡಿತನದ ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಸಿಒಟಿಯು ವಕ್ತಾರ ಲುನ್ ಕಿಂಗ್ ಪಿನ್ ಅವರು, ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್–ಇಸಾಕ್–ಮುವಿಯ್ಹಾ (ಎನ್ಎಸ್ಸಿಎನ್–ಐಎಂ) ಗೆ ಸೇರಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕುಕಿ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ‘ಬುಧವಾರ ಬೆಳಿಗ್ಗೆ ಎನ್ಎಸ್ಸಿಎನ್–ಐಎಂಗೆ ಸೇರಿದವರು ಎನ್ನಲಾಗಿರುವ ಕೆಲವು ಸಶಸ್ತ್ರ ದುಷ್ಕರ್ಮಿಗಳು ಥವಾಯಿ ಕುಕಿ ಗ್ರಾಮದಲ್ಲಿ ಗುಂಡಿನ ದಾಳಿಯನ್ನು ನಡೆಸಿದ್ದರು. ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸುವವರೆಗೆ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ರಕ್ಷಿಸಲು ಗ್ರಾಮದ ಕುಕಿ ಸ್ವಯಂಸೇವಕರು ಪ್ರತಿದಾಳಿ ನಡೆಸಿದ್ದರು. ಭದ್ರತಾ ಪಡೆಗಳ ಆಗಮನದ ಬಳಿಕ ಎರಡೂ ಕಡೆಗಳಿಂದ ಗುಂಡಿನ ದಾಳಿ ನಿಂತಿತ್ತು. ಆದರೆ ನಮ್ಮ ಇಬ್ಬರು ಸ್ವಯಂಸೇವಕರನ್ನು ನಾಗಾಗಳು ಸೆರೆಹಿಡಿದರು. ಅವರ ಪೈಕಿ ಓರ್ವ ಕಾಲಿಗೆ ಗುಂಡೇಟು ಬಿದ್ದಿದ್ದರೂ ತಪ್ಪಿಸಿಕೊಂಡಿದ್ದಾನೆ; ಇನ್ನೋರ್ವ ಈಗಲೂ ನಾಪತ್ತೆಯಾಗಿದ್ದಾನೆ’ ಎಂದು ಕಿಂಗ್ ಪಿನ್ ಹೇಳಿದರು. ತಮ್ಮವರ ಬಿಡುಗಡೆಗಾಗಿ ಸಂಧಾನ ಮಾತುಕತೆಗಳನ್ನು ನಡೆಸಲು ಕುಕಿ ಸ್ವಯಂಸೇವಕರು ಕೆಲವರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿದ್ದಾರೆ. ನಾಗಾಗಳೂ ಕುಕಿಗಳನ್ನು ಒತ್ತೆಯಿರಿಸಿಕೊಂಡಿದ್ದಾರೆ, ಆದರೆ ಅದರ ಕುರಿತು ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದ ಅವರು, ಮಾತುಕತೆಗಳು ಈಗಲೂ ನಡೆಯುತ್ತಿವೆ ಎಂದರು. ನಾಗಾ ಮೂಲಭೂತವಾದಿ ಗುಂಪಾಗಿರುವ ಎನ್ಎಸ್ಸಿಎನ್–ಐಎಂ ಪ್ರತ್ಯೇಕ ಧ್ವಜ ಮತ್ತು ಸಂವಿಧಾನಕ್ಕೆ ಆಗ್ರಹಿಸುತ್ತಿದೆ. ನಾಗಾಲ್ಯಾಂಡ್ ಹಾಗೂ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮ್ಯಾನ್ಮಾರ್ಗಳಲ್ಲಿ ನಾಗಾಗಳು ವಾಸವಿರುವ ಪ್ರದೇಶಗಳನ್ನೊಳಗೊಂಡ ಸಾರ್ವಭೌಮ ಜನಾಂಗೀಯ ತಾಯ್ನಾಡು ರಚನೆ ಅದರ ಬೇಡಿಕೆಯಾಗಿದೆ. 2015ರಲ್ಲಿ ಎನ್ಎಸ್ಸಿಎನ್–ಐಎಂ ‘ಗ್ರೇಟರ್ ನಾಗಾಲ್ಯಾಂಡ್’ ಅಥವಾ ‘ನಾಗಾಲಿಮ್’ಗಾಗಿ ತನ್ನ ದಶಕಗಳಷ್ಟು ಹಳೆಯ ಬಂಡಾಯವನ್ನು ಅಂತ್ಯಗೊಳಿಸಲು ಕೇಂದ್ರದೊಂದಿಗೆ ಮಾರ್ಗದರ್ಶಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು.
ಕೋವಿಡ್ ಸಮಯದ ಸಂಘರ್ಷವನ್ನು ನೆನಪಿಸಿದ LPG ಬಿಕ್ಕಟ್ಟು
ಆಹಾರ ಉದ್ಯಮಗಳನ್ನು ಮುಚ್ಚಿದ ಪರಿಣಾಮವಾಗಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಆಕ್ರಮಣದಿಂದಾಗಿ ಉಂಟಾಗಿರುವ ಭೌಗೋಳಿಕ-ರಾಜಕೀಯ ಸಂಘರ್ಷದ ಪರಿಣಾಮವಾಗಿ ಜಾಗತಿಕವಾಗಿ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟಾಗಿ ಭಾರತ LPG ಅನಿಲ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಸ್ತುತ ಸ್ಥಿತಿ ಕೋವಿಡ್ ಲಾಕ್ಡೌನ್ನ ನೆನಪುಗಳನ್ನು ಮರುಕಳಿಸಿದೆ. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಮತ್ತು ಆಹಾರ ಉದ್ಯಮಗಳನ್ನು ಮುಚ್ಚಲಾಗಿದೆ. ಹತಾಶೆ ಮತ್ತು ಅನಿಶ್ಚಿತತೆಯ ಪರಿಸ್ಥಿತಿ ಏರ್ಪಟ್ಟಿದೆ. ►ಏರುತ್ತಿರುವ ಬೆಲೆಗಳು ಮತ್ತು ಕಾಳಸಂತೆಯ ಅವಲಂಬನೆ ಏರುತ್ತಿರುವ ಬೆಲೆಗಳಿಂದಾಗಿ ವ್ಯಾಪಾರಿಗಳು ಮತ್ತು ರಸ್ತೆಬದಿಗಳಲ್ಲಿ ಹೊಟೇಲ್ ಗಳನ್ನು ನಡೆಸುತ್ತಿರುವವರ ಉದ್ಯಮಕ್ಕೆ ದೊಡ್ಡ ಏಟು ಬಿದ್ದಿದೆ. ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿರುವ ನೋಯ್ಡಾದ ಪ್ರಮೋದ್ ಕುಮಾರ್ ಅವರ ಪ್ರಕಾರ, LPG ಬೆಲೆಗಳು 1,000 ರೂ.ನಿಂದ 2,300 ರೂ.ಗಳಿಗೆ ಏರಿಕೆಯಾದ ಪರಿಣಾಮವಾಗಿ ಸಮೋಸ ಬೆಲೆಗಳನ್ನು ಶೇ 50ರಷ್ಟು ಏರಿಸಿದ್ದಾರೆ. ಚಹಾ ವ್ಯಾಪಾರಿಗಳು ಬೆಲೆಯನ್ನು 10 ರೂ.ನಿಂದ 15–20 ರೂ.ಗಳಿಗೆ ಏರಿಸಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು 3,000 ರೂ.ಗಳಿಗೆ ಮಾರಲಾಗುತ್ತಿದ್ದು, ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಮೂಡಿದೆ. ಅನೇಕ ಹೊಟೇಲ್ ಗಳು ಬಾಗಿಲು ಮುಚ್ಚಿವೆ ಅಥವಾ ಬೆಲೆಗಳನ್ನು ಏರಿಸಿವೆ. ಕೆಲವರು ಕಟ್ಟಿಗೆ ಒಲೆ ಮತ್ತು ಇತರ ಕಲ್ಲಿದ್ದಲು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ. #WATCH | A long queue of people with LPG gas cylinders seen outside a gas agency in East Delhi's Geeta Colony. pic.twitter.com/BvtBp88uwb — ANI (@ANI) March 12, 2026 ►ಗಿಗ್ ಕಾರ್ಮಿಕರಿಗೆ ಏಟು ಗಿಗ್ ಮತ್ತು ಪ್ಲಾಟ್ಫಾರ್ಮ್ ಸೇವೆಗಳನ್ನು ನೀಡುವ ಕಾರ್ಮಿಕರ ಸಂಘಟನೆಯ ಪ್ರಕಾರ ಪ್ರಮುಖ ನಗರಗಳಾದ ಮುಂಬೈ, ದೆಹಲಿ ಎನ್ಸಿಆರ್, ಬೆಂಗಳೂರು ಮತ್ತು ಚೆನ್ನೈಗಳಲ್ಲಿ ಡೆಲಿವರಿಗಳು ಶೇ 50–60ರಷ್ಟು ಕಡಿಮೆಯಾಗಿವೆ. ರೆಸ್ಟೊರೆಂಟ್ಗಳು ಮುಚ್ಚಿರುವ ಕಾರಣ ಲಕ್ಷಾಂತರ ಗಿಗ್ ಕಾರ್ಮಿಕರು ಆಹಾರ ಡೆಲಿವರಿ ಮಾಡಲಾಗದೆ ಆದಾಯ ಕಳೆದುಕೊಳ್ಳುತ್ತಿದ್ದಾರೆ. ಗಿಗ್ ಕಾರ್ಮಿಕರ ಸಂಘಟನೆ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಯುದ್ಧದ ಕಾರಣ ಜೀವನೋಪಾಯಗಳು ನಷ್ಟವಾಗಿವೆ. ►ಗೃಹಬಳಕೆಯ LPG ಬೆಲೆಯೂ ಏರಿಕೆ ಸರ್ಕಾರವು ಗೃಹಬಳಕೆಯ ಸರಬರಾಜಿಗೆ ಹೆಚ್ಚು ಒತ್ತು ನೀಡಿದ್ದರೂ ಸಿಲಿಂಡರ್ ಡೆಲಿವರಿಯಲ್ಲಿ 5–7 ದಿನಗಳ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. LPG ಏಜೆನ್ಸಿಗಳ ಮುಂದೆ ದೊಡ್ಡ ಸರತಿ ಸಾಲು ಸಾಮಾನ್ಯವೆನಿಸಿದೆ. ಉತ್ತರ ಪ್ರದೇಶದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, LPG ಲಭ್ಯವಿಲ್ಲದೆ ಕಟ್ಟಿಗೆ ಒಲೆ ಬಳಸುತ್ತಿದ್ದಾರೆ. ಬುಕಿಂಗ್ ಗೊಂದಲ ಮತ್ತು ಸೂಕ್ತ ರೀತಿಯಲ್ಲಿ ಸೇವೆಗಳಿಲ್ಲದೆ ಗ್ರಾಹಕರು ಕಾಳಸಂತೆಯಿಂದ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆ ಬೆಳೆದಿದೆ. ►ಸರ್ಕಾರದ ಪ್ರತಿಕ್ರಿಯೆ ಏನು? ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತ ವೈವಿಧ್ಯಮಯ ಮೂಲಗಳು ಮತ್ತು ಹಾದಿಗಳಿಂದ LPG ಪಡೆಯುತ್ತಿರುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯನ್ನು (ಎಸ್ಮಾ) ಜಾರಿಗೆ ತಂದಿದೆ. ಮೊದಲೇ ಸಂಗ್ರಹಿಸಿಡುವುದು ಮತ್ತು ಕಾಳಸಂತೆಯ ಮಾರಾಟವನ್ನು ತಡೆಯುತ್ತಿರುವುದಾಗಿ ಹೇಳಿದೆ. LPG ಉತ್ಪಾದನೆಗೆ ಹೈಡ್ರೋಕಾರ್ಬನ್ ಕಡೆಗೆ ಹೊರಳುವುದಾಗಿ (ಪ್ರೋಪೇನ್, ಬ್ಯುಟೇನ್, ಪ್ರೊಪಿಲೀನ್ ಮತ್ತು ಬ್ಯುಟೀನ್ ಗಳಂತಹ ಕಚ್ಚಾ ವಸ್ತುಗಳನ್ನು ಪೆಟ್ರೋಕೆಮಿಕಲ್ ಉತ್ಪಾದನೆ ಅಥವಾ ಕೈಗಾರಿಕಾ ಬಳಕೆಯಿಂದ ದೂರವಿಟ್ಟು ಗೃಹೋಪಯೋಗಕ್ಕಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಉತ್ಪಾದನೆಯ ಕಡೆಗೆ ನಿರ್ದೇಶಿಸುವುದು) ತಿಳಿಸಿದ್ದಾರೆ. “ಗೃಹಬಳಕೆಗೆ ಬಳಸುತ್ತಿರುವ ಗ್ರಾಹಕರಿಗೆ LPG ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ಗೃಹಬಳಕೆಯ LPG ಉತ್ಪಾದನೆಯು ಶೇ 25ರಷ್ಟು ಏರಿಕೆಯಾಗಿದೆ. ಸಿಲಿಂಡರ್ ಮರುಪೂರಣದ ಕಾಯುವಿಕೆಯನ್ನು 14ರಿಂದ 21 ದಿನಗಳಿಗೆ ವಿಸ್ತರಿಸಲಾಗಿದೆ. ನಂತರ 25ರಿಂದ 30 ದಿನಗಳಿಗೆ ಏರಿಸುವ ಸಾಧ್ಯತೆಯಿದೆ. ಇದರಿಂದ ಆತಂಕದ ಬುಕಿಂಗ್ ಕಡಿಮೆಯಾಗಲಿವೆ” ಎಂದು ಅವರು ಹೇಳಿದ್ದಾರೆ. ಆದರೆ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. 14.2 ಕೆಜಿ ಸಿಲಿಂಡರ್ ಗಳಿಗೆ 60 ರೂ. ಮತ್ತು 19 ಕೆಜಿ ಸಿಲಿಂಡರ್ ಗಳಿಗೆ 115 ರೂ.ಗಳಷ್ಟು ಏರಿಸಲಾಗಿದೆ. ►ತಳಮಟ್ಟದಲ್ಲಿ ಬೆಳೆದ ಆತಂಕ ಸರ್ಕಾರದ ಭರವಸೆಗಳ ಹೊರತಾಗಿಯೂ ತಳಮಟ್ಟದಲ್ಲಿ ಆತಂಕ, ಕೊರತೆ ಮತ್ತು ಕಾಳಸಂತೆ ಚಟುವಟಿಕೆ ಏರಿದೆ. ಆಹಾರ ಉದ್ಯಮಗಳು ಬಿಕ್ಕಟ್ಟು ಎದುರಿಸುತ್ತಿವೆ. ಗಿಗ್ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಗೃಹಬಳಕೆಗೆ LPG ವಿಳಂಬವಾಗಿ ಕಷ್ಟಪಡುತ್ತಿದ್ದಾರೆ. ಈಗಿನ ಬಿಕ್ಕಟ್ಟು ಮತ್ತೆ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದ ಸ್ಥಿತಿಯನ್ನು ನೆನಪಿಸುತ್ತಿದೆ. ಆಗ ಕನಿಷ್ಠ ಆಹಾರವಾದರೂ ಸಿಗುತ್ತಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮರದ ಸ್ಟವ್ಗಳು, ಇಂಡಕ್ಷನ್ ಕಾಯಿಲ್ ಗಳು ಮತ್ತು ಕಲ್ಲಿದ್ದಲು ಬಳಕೆ ಮೊದಲಾದ ಪರ್ಯಾಯ ಮಾರ್ಗಗಳಿಗೆ ಜನರು ಹೊರಳುತ್ತಿದ್ದಾರೆ. ಅಂತಿಮವಾಗಿ ಹೇಳುವುದಾದಲ್ಲಿ LPG ಕೊರತೆಯ ಆರ್ಥಿಕ ಪರಿಣಾಮದಲ್ಲಿ ಲಕ್ಷಾಂತರ ಗಿಗ್ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಆದಾಯ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕವಾಗಿ ಒತ್ತಡ ಏರ್ಪಟ್ಟಿದೆ. LPG ಏಜೆನ್ಸಿಗಳ ಮುಂದೆ ದೊಡ್ಡ ಸರತಿ ಸಾಲುಗಳು, ಬುಕಿಂಗ್ ಗೊಂದಲ, ಕಾಳಸಂತೆಯ ಮಾರಾಟಗಳಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸರ್ಕಾರವು ಕಾಳಸಂತೆಯ ಮಾರಾಟ ತಡೆ ಮತ್ತು ಆತಂಕದ ಖರೀದಿಯನ್ನು ತಡೆಯಲು ಕೈಗೊಂಡ ಕ್ರಮಗಳಿಂದಾಗಿ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ರೆಸ್ಟೊರೆಂಟ್ಗಳು ಮುಚ್ಚುತ್ತಿರುವುದು ಮತ್ತು ಮನೆಗಳಲ್ಲಿ ಅಡುಗೆ ಒಲೆ ಉರಿಸಲು ಕಷ್ಟಪಡುತ್ತಿರುವಾಗ ಜಾಗತಿಕ ಉದ್ವಿಗ್ನತೆ ಏರಿದಲ್ಲಿ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲಿದೆ. ಮಾಹಿತಿ ಕೃಪೆ: India Today Hyderabad’s iconic Shah Ghouse Restaurant switches to traditional firewood cooking for its biryani due to LPG shortage. #LPGShortage #Telangana #Hyderabad pic.twitter.com/Jq4pzennay — Rathnam News (@RathnamNews) March 11, 2026 VIDEO | Noida: Long queue witnessed outside a gas agency in Sector 63 amid reports of LPG shortage due to the ongoing West Asia conflict. #LPG #NoidaNews (Full video available on PTI Videos - https://t.co/n147TvrpG7 ) pic.twitter.com/tm7SJFuPdL — Press Trust of India (@PTI_News) March 11, 2026
ಜಮ್ಮು- ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ಕಮಲ್ ಸಿಂಗ್ ನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಗಳು ಬಹಿರಂಗಗೊಂಡಿವೆ. ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು ಕಳೆದ 20 ವರ್ಷಗಳಿಂದ ಆರೋಪಿ ಕಮಲ್ ಸಿಂಗ್ ಕಾಯುತ್ತಿದ್ದನಂತೆ. ಸದ್ಯ ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿತ್ತಿದೆ. ಘಟನೆಯ ಬಗ್ಗೆ ಫಾರೂಕ್ ಅಬ್ದುಲ್ಲಾ ಅವರು ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ಇರಾಕ್ ನಲ್ಲಿ ಅಮೆರಿಕ ಮಾಲಕತ್ವದ ತೈಲ ಟ್ಯಾಂಕರ್ ‘ಸೇಫ್ ಸೀ ವಿಷ್ಣು’ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಮೃತ್ಯು
ಟೆಹರಾನ್: ಅಮೆರಿಕ ಮಾಲಕತ್ವದ ತೈಲ ಟ್ಯಾಂಕರ್ ‘ಸೇಫ್ ಸೀ ವಿಷ್ಣು’ ಮೇಲೆ ಇರಾನ್ ನಡೆಸಿದ ಆತ್ಮಹತ್ಯಾ ದೋಣಿ ಬಾಂಬ್ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಮೃತಪಟ್ಟಿರುವ ಘಟನೆ ಇರಾಕ್ ಸಮೀಪ ನಡೆದಿದೆ ಎಂದು ವರದಿಯಾಗಿದೆ. ಇರಾಕ್ ಸಾಗರ ವ್ಯಾಪ್ತಿಯಲ್ಲಿನ ಖೋರ್ ಅಲ್ ಝುಬೈರ್ ಬಂದರು ಬಳಿ ಬುಧವಾರ ಅಮೆರಿಕ ಮಾಲಕತ್ವದ ಹಾಗೂ ಮಾರ್ಷಲ್ ಐಲ್ಯಾಂಡ್ ಧ್ವಜ ಹೊಂದಿದ್ದ ‘ಸೇಫ್ ಸೀ ವಿಷ್ಣು’ ತೈಲ ಟ್ಯಾಂಕರ್ ಮೇಲೆ ಇರಾನ್ ನ ಆತ್ಮಹತ್ಯಾ ದೋಣಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಪ್ರಜೆಯು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ತೈಲ ಟ್ಯಾಂಕರ್ನ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ರಕ್ಷಿಸಿ ಬಾಸ್ರಾಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿರುವುದರಿಂದ ತೈಲ ಟ್ಯಾಂಕರ್ ಕಂಪೆನಿಯು ಆಘಾತಕ್ಕೀಡಾಗಿದೆ ಎಂದು ಹೆಸರೇಳಲು ಇಚ್ಛಿಸದ ‘ಸೇಫ್ ಸೀ’ ಸಂಸ್ಥೆಗೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ. ಈ ದಾಳಿಯನ್ನು ಬಲವಾಗಿ ಖಂಡಿಸಬೇಕು ಹಾಗೂ ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿರುವುದರಿಂದ, ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಸಿಬ್ಬಂದಿಗಳ ಸುರಕ್ಷತೆಯನ್ನು ಖಾತರಿಗೊಳಿಸಬೇಕು ಎಂದು ‘ಸೇಫ್ ಸೀ’ ಅಧಿಕಾರಿಗಳು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜೀವನಶೈಲಿ ಬದಲಿಸಿ, ಮೈಗ್ರೇನ್ ನಂತಹ ತಲೆನೋವನ್ನೂ ತಡೆಯಬಹುದು!
ವೈದ್ಯೆ ಪ್ರಿಯಾಂಕಾ ಸೆಹ್ರಾವತ್ ಮೈಗ್ರೇನ್ನಿಂದ ತಪ್ಪಿಸಿಕೊಳ್ಳಲು ಜೀವನಶೈಲಿ ಬದಲಾವಣೆಗಳನ್ನು ಹೇಗೆ ತರುವುದು ಎಂದು ವಿವರಿಸಿದ್ದಾರೆ. ಮೈಗ್ರೇನ್ ಎನ್ನುವುದು ತಡೆತಡೆದು ಬರುವ ತಲೆನೋವು. ಮೈಗ್ರೇನ್ ರೋಗಿಗಳಿಗೆ ತೀವ್ರವಾದ ತಲೆನೋವಿನಿಂದಾಗಿ ನಿತ್ಯ ಜೀವನದ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ. ಅವರಲ್ಲಿ ವಾಕರಿಕೆ, ವಾಂತಿ, ಬೆಳಕು ಮತ್ತು ಧ್ವನಿಗೆ ಬಹಳ ಸೂಕ್ಷ್ಮ ಪ್ರವೃತ್ತಿ ಇರುತ್ತದೆ. ಮೈಗ್ರೇನ್ ಕೆಲವೊಮ್ಮೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಇರುತ್ತದೆ. ದಿಲ್ಲಿ ಏಮ್ಸ್ ನಲ್ಲಿ ನರ ವಿಜ್ಞಾನಿಯಾಗಿರುವ ಡಾ. ಪ್ರಿಯಾಂಕಾ ಸೆಹ್ರಾವತ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಮೈಗ್ರೇನ್ನಿಂದ ತಪ್ಪಿಸಿಕೊಳ್ಳಲು ಜೀವನಶೈಲಿ ಬದಲಾವಣೆಗಳನ್ನು ಮಾಡುವುದು ಹೇಗೆ ಎಂದು ವಿವರಿಸಿದ್ದಾರೆ. ►ಮೈಗ್ರೇನ್ ರೋಗಕ್ಕೆ ಕಾರಣವೇನು? ಪ್ರಿಯಾಂಕಾ ಹೇಳುವ ಪ್ರಕಾರ ಮೈಗ್ರೇನ್ ತಡೆಗಟ್ಟುವ ಮೊದಲು ರೋಗ ಹೇಗೆ ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಯಾವುದರಿಂದ ಮೈಗ್ರೇನ್ ಟ್ರಿಗರ್ ಆಗುತ್ತದೆ ಎನ್ನುವುದನ್ನು ಅವರು ಚಿತ್ರದ ಮೂಲಕ ತೋರಿಸಿದ್ದಾರೆ. * ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು * ಸರಿಯಾಗಿ ನಿದ್ರೆ ಮಾಡದೆ ಇರುವುದು * ಒತ್ತಡದ ಪರಿಣಾಮ * ಫೋನ್ ಪರದೆ ಬಳಕೆ. ಮುಖ್ಯವಾಗಿ ರಾತ್ರಿ ಸಮಯದಲ್ಲಿ ಫೋನ್ ನೋಡುವುದು * ಋತುಚಕ್ರದ ಪರಿಣಾಮ * ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು * ಪ್ರಯಾಣ ಮಾಡುವುದು * ಸಂಸ್ಕರಿತ/ಜಂಕ್ ಆಹಾರ ಸೇವಿಸುವುದು * ಜಡವಾದ ಜೀವನಶೈಲಿ * ಚಾಕಲೇಟು ಮತ್ತು ಬೆಣ್ಣೆ ಹೆಚ್ಚು ಸೇವಿಸುವುದು ►ಮೈಗ್ರೇನ್ ರೋಗಿಗಳು ಜೀವನಶೈಲಿ ಬದಲಿಸಬೇಕು ಮುಂದುವರಿದು ಪ್ರಿಯಾಂಕಾ ಅವರು ನಿತ್ಯ ಜೀವನಕ್ಕೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಜೀವನಶೈಲಿ ಬದಲಾವಣೆಗೆ ಅವರು ನೀಡಿರುವ 10 ಸಲಹೆಗಳು ಯಾವುವು? 1. ನಿಯಮಿತವಾಗಿ ಆಹಾರ ಸೇವಿಸುವುದು. ಪ್ರತಿ ದಿನ 9 ಗಂಟೆಗೆ ಉಪಹಾರ, 2 ಗಂಟೆಗೆ ಮಧ್ಯಾಹ್ನದ ಊಟ ಮತ್ತು 8 ಗಂಟೆಗೆ ರಾತ್ರಿ ಭೋಜನ ಸೇವಿಸಬೇಕು. 2. ಹೃದಯ ಮತ್ತು ಕಿಡ್ನಿ ಸಮಸ್ಯೆ ಇದ್ದವರು ಹೊರತುಪಡಿಸಿ ಉಳಿದವರು ನಿತ್ಯವೂ 2ರಿಂದ 3 ಲೀಟರ್ ನೀರು ಕುಡಿಯಬೇಕು. 3. ಸೋಯಾ ಮೊಸರು, ದ್ವಿದಳ ಧಾನ್ಯಗಳು, ಪನ್ನೀರ್, ಮೊಟ್ಟೆಗಳು, ಕ್ವಿನೋವಾ, ಕಡಲೆಗಳು, ಬಾದಾಮಿಗಳು ಮತ್ತು ಗ್ರೀಕ್ ಯೋಗರ್ಟ್ ಮೊದಲಾದ ಆಹಾರಗಳಿರುವ ಅಧಿಕ ಪ್ರೊಟೀನ್ ಆಹಾರ ಸೇವಿಸಬೇಕು. 4. ಟ್ರಾನ್ಸ್ ಕೊಬ್ಬು/ಸ್ಯಾಚುರೇಟೆಡ್ ಆಹಾರಗಳಾದ ಸಂಸ್ಕರಿತ/ಪ್ಯಾಕೇಜ್ಡ್/ಆಳವಾಗಿ ಹುರಿದ ಆಹಾರ ವಸ್ತುಗಳ ಸೇವನೆ ಕಡಿಮೆ ಮಾಡಿ. 5. ಖಾಲಿ ಹೊಟ್ಟೆಗೆ ಚಹಾ ಅಥವಾ ಕಾಫಿ ಸೇವನೆ ಬೇಡ. ಕೆಫೇನ್ ಪಾನೀಯಗಳ ಬದಲಾಗಿ ಎಳನೀರು ಕುಡಿಯಿರಿ. 6. ಬೆಳಗ್ಗೆ 1 ಚಮಚ (6ರಿಂದ 10) ಕುಂಬಳಕಾಯಿ ಬೀಜಗಳನ್ನು ಸೇವಿಸಿ. 7. ಹಣ್ಣಿನ ರಸದ ಬದಲಾಗಿ ಇಡೀ ಹಣ್ಣುಗಳನ್ನು ತಿನ್ನಿ. 8. ಪ್ರತಿದಿನ 400 ಗ್ರಾಂಗಳಷ್ಟು ಹಣ್ಣುಗಳು ಅಥವಾ ತರಕಾರಿಗಳನ್ನು ತಿನ್ನಿರಿ. 9. ಸಿಹಿ ಬೆರೆಸಿದ ಪಾನೀಯಗಳು, ಎನರ್ಜಿ ಡ್ರಿಂಕ್ಗಳು ಅಥವಾ ಮದ್ಯಪಾನ ತೊರೆಯಿರಿ. 10. ಅತಿಯಾದ ಸಿಹಿಯೂ ಮೈಗ್ರೇನ್ ಗೆ ಕಾರಣವಾಗಬಹುದು. ಹೀಗಾಗಿ ಚಾಕಲೇಟು ಮತ್ತು ಬೆಣ್ಣೆ ಸೇವಿಸಬೇಡಿ. ►ಇತರ ಜೀವನಶೈಲಿ ಬದಲಾವಣೆಗಳು ಕೊನೆಯದಾಗಿ ಪ್ರಿಯಾಂಕಾ ಅವರು ಇನ್ನೂ ಕೆಲವು ಜೀವನಶೈಲಿ ಬದಲಾವಣೆಗಳನ್ನು ಸೂಚಿಸಿದ್ದಾರೆ. ಜಡವಾದ ಜೀವನಶೈಲಿಯನ್ನು ತೊರೆಯಬೇಕು. ಬದಲಾಗಿ ನಡಿಗೆ, ಓಟ, ಜಾಗಿಂಗ್, ಈಜು, ನೃತ್ಯ, ಜುಂಬಾ ನೃತ್ಯ ಅಥವಾ ಇತರ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಬೇಕು. ►ಯಾವಾಗ ವೈದ್ಯರನ್ನು ಕಾಣಬೇಕು? ವೈದ್ಯರನ್ನು ಕಾಣಲೇಬೇಕಾದ ಮೈಗ್ರೇನ್ನ 6 ಚಿಹ್ನೆಗಳನ್ನೂ ಅವರು ಸೂಚಿಸಿದ್ದಾರೆ. ಈ ಕೆಳಗಿನ ಚಿಹ್ನೆಗಳು ನಿಮ್ಮಲ್ಲಿ ಕಂಡುಬಂದಲ್ಲಿ ಖಚಿತವಾಗಿ ವೈದ್ಯರನ್ನು ಕಾಣಬೇಕು ಎಂದು ಅವರು ಸಲಹೆ ನೀಡಿದ್ದಾರೆ. * ದೃಷ್ಟಿ ದೋಷಗಳು * ತಲೆನೋವು ಜೊತೆಗೆ ಜ್ವರ * ಕುತ್ತಿಗೆ ಬಿಗಿತದ ಜೊತೆಗೆ ತಲೆನೋವು * ಹಠಾತ್ ಆಗಿ ಹೊಸದಾಗಿ ತಲೆನೋವು ಕಾಣಿಸಿಕೊಳ್ಳುವುದು * ನಡಿಗೆ, ಸಮತೋಲನ ಕಾಯ್ದುಕೊಳ್ಳಲು ಸಮಸ್ಯೆ ಅಥವಾ ತಲೆತಿರುಗುವಿಕೆ * ವಾರದಲ್ಲಿ ಕನಿಷ್ಠ ಎರಡು ಬಾರಿ ತಲೆನೋವು ಕಾಣಿಸಿಕೊಳ್ಳುವುದು
ಮಂಗಳೂರು, ಮಾ.12: ಪಿವಿಎಸ್ ಸಂಸ್ಥೆಯ ಆಡಳಿತವನ್ನು ತಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ ಹೇಳಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಜೊತೆಯಲ್ಲಿದ್ದು, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳು ನಮ್ಮ ಸಂಸ್ಥೆ ಹಾಗೂ ಆಸ್ತಿಪಾಸ್ತಿ ಕಬಳಿಸುವ ದುರುದ್ದೇಶದಿಂದ ಕೃಷ್ಣದತ್ತ ಎಂಬ ವ್ಯಕ್ತಿಯಿಂದ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ನಾನು ನ್ಯಾಯಾಲಯದ ಮೊರೆ ಹೋಗಿ ಕೃಷ್ಣದತ್ತ ನನ್ನ ಮಗನಲ್ಲ ಎಂಬ ತಡೆಯಾಜ್ಞೆ ತಂದಿದ್ದೇನೆ. ಸರಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಹಾಗೂ ಆತನ ಸಹಚರರ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ತನ್ನ ನ್ಯಾಯಯುತ ಹೋರಾಟದಲ್ಲಿ ಸಹಕಾರ ನೀಡಬೇಕೆಂದು ಕೋರಿದರು. ನನ್ನ ಅಜ್ಜ ದಿ. ಪುತ್ತು ವೈಕುಂಠ ಶೇಟ್ ಅವರ ಪತ್ನಿಯ ತಂಗಿಯ ಮಗಳಾದ ವಸಂತಿ ಎಚ್. ಅವರ ಆಬಾಲ್ಯದಿಂದ ನಮ್ಮ ಜೊತೆಯಲ್ಲಿದ್ದು, ನನ್ನ ಪತಿ ಮೃತಪಟ್ಟ ನಂತರ ತನ್ನ ಹೆಗಲಿಗ ಹೆಗಲು ನೀಡಿ ಪಿವಿಎಸ್ ಕಂಪೆನಿಗಳನ್ನು ನಾವಿಬ್ಬರೂ ಜೊತೆಗೂಡಿ ಮುನ್ನಡೆಸುತ್ತಾ ಬರುತ್ತಿದ್ದೇವೆ ಎಂದು ಸರೋಜಿನಿ ಎಂ. ಕುಶೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವೈಶ್ಯ ಎಜುಕೇಶನ್ ಸೊಸೈಟಿಯ ಸಂತೋಷ್ ಚಂದ್ರ, ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗ್ವೇಕರ್ ಉಪಸ್ಥಿತರಿದ್ದರು.
ತ್ರಿವರ್ಣ ಧ್ವಜ ಸುತ್ತಿಕೊಂಡು ಅಶ್ಲೀಲ ವರ್ತನೆ: ಶಿವಾಜಿನಗರ ಠಾಣೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ದ ದೂರು ದಾಖಲು
Complaint against Hardik Pandya : ಟಿ20 ವಿಶ್ವಕಪ್ ಕ್ರಿಕೆಟ್ ವಿಜಯೋತ್ಸವದ ವೇಳೆ, ಮೈಗೆ ರಾಷ್ಟ್ರಧ್ವಜ ಸುತ್ತಿಕೊಂಡು, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ವಕೀಲರೊಬ್ಬರು ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ವಾಜಿದ್ ಖಾನ್ ಎನ್ನುವವರು ದೂರನ್ನು ನೀಡಿದ್ದಾರೆ.
ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚಿದರೆ ಕಿಡ್ನಿ ವೈಫಲ್ಯ ತಡೆ ಸಾಧ್ಯ: ಡಾ. ಅಶೋಕ್ ಭಟ್
ಮಂಗಳೂರು, ಮಾ.12: ಕಿಡ್ನಿ ಕಾಯಿಲೆ ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ವಂಶಪಾರಂಪರ್ಯವಾಗಿ ಕಿಡ್ನಿ ಕಾಯಿಲೆ ಹೊಂದಿದ್ದರೆ ಅಂತವರು ತಪಾಸಣೆ ನಡೆಸಿ, ಆರಂಭಿಕ ಹಂತದಲ್ಲಿ ಕಿಡ್ನಿ ಕಾಯಿಲೆ ಪತ್ತೆ ಹಚ್ಚಿದರೆ ಕಿಡ್ನಿ ವೈಫಲ್ಯ ತಡೆಗಟ್ಟಬಹುದು ಎಂದು ಮಂಗಳೂರು ಕೆಎಂಸಿಯ ಹಿರಿಯ ನೆಫ್ರೋಲಜಿ ತಜ್ಞ ಡಾ. ಅಶೋಕ್ ಭಟ್ ಹೇಳಿದರು. ವಿಶ್ವ ಕಿಡ್ನಿ ದಿನದ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ, ಹೈಡ್ರೇಟ್ ಆಗಿರುವುದು, ನಿಯಮಿತ ರಕ್ತ, ಮೂತ್ರ ಹಾಗೂ ಆರೋಗ್ಯ ಪರೀಕ್ಷೆ ಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ಅಂಗಾಂಗ ದಾನದ ಬಗ್ಗೆ ದಾನಿಗಳು ನೋಂದಣಿ ಮಾಡಿದ ಬಳಿಕ ಕುಟುಂಬಿಕರಿಗೆ ದಾನದ ವಿಷಯವನ್ನು ತಿಳಿಸಿರಬೇಕು ಎಂದರು. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚಿಸುವ ನೇತೃತ್ವವನ್ನು ಆಸ್ಪತ್ರೆಯ ನೆಫ್ರೊಲಜಿ ವಿಭಾಗ ಕೈಗೊಂಡಿದೆ. ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ಅತಿದೊಡ್ಡದಾದ ಡಯಾಲಿಸಿಸ್ ಘಟಕವನ್ನು ಹೊಂದಿದ್ದು, 24 ಗಂಟೆ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನಫ್ರೋಲಜಿಸ್ಟ್ಗಳನ್ನು ಹೊಂದಿದೆ ಎಂದು ಹೇಳಿದರು. ಹಿರಿಯ ನೆಫ್ರೋಲಜಿ ತಜ್ಞ ಡಾ. ಸುಶಾಂತ್ ಕುಮಾರ್ ಮಾತನಾಡಿ, ಡಯಾಲಿಸಿಸ್ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ. ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆ್ಯಕ್ಟ್ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ ಎಂದರು. ನೆಫ್ರೋಲಜಿ ವಿಭಾಗದ ಎಚ್ಒಡಿ ಡಾ. ಮಯೂರ್ ಪ್ರಭು ಮಾತನಾಡಿ, ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ಅಡ್ವಾನ್ಸ್ಡ್ ಡಯಾಲಿಸಿಸ್ ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ ಡಯಾಗೊಸ್ಟಿಕ್ ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರೋಲಜಿ ಸೌಲಭ್ಯವನ್ನು ರೂಪಿಸಿದ್ದೇವೆ ಎಂದು ಹೇಳಿದರು. ಡಾ. ದುಷ್ಯಂತ್, ಪಿಆರ್ಒ ರಾಕೇಶ್ ಉಪಸ್ಥಿತರಿದ್ದರು.
ಖಮೇನಿ ಪುತ್ರ ಮತ್ತು ಇರಾನ್ ದೇಶದ ನೂತನ ಸರ್ವಾಧಿಕಾರಿಗಾಗಿ ಇಸ್ರೇಲ್ ತೀವ್ರ ಶೋಧ | Operation Roaring Lion
ಇಸ್ರೇಲ್ ಮತ್ತು ಅಮೆರಿಕ ಒಗ್ಗಟ್ಟಿನಿಂದ ಇರಾನ್ ವಿರುದ್ಧ ಹೋರಾಡುತ್ತಿದ್ದರೂ ಯುದ್ಧದಲ್ಲಿ ದೊಡ್ಡ ಗೆಲುವು ಸಿಗುತ್ತಿಲ್ಲ. ಇರಾನ್ ತನ್ನ ಬಳಿ ಇರುವ ಹೊಸ ಹೊಸ ಕ್ಷಿಪಣಿಗಳನ್ನು ಪ್ರಯೋಗ ಮಾಡುತ್ತಾ ಒಂದು ಕಡೆ ಅರಬ್ ದೇಶಗಳನ್ನು ಭಯಪಡಿಸುತ್ತಿದೆ, ಇದೇ ಸಮಯದಲ್ಲಿ ಇನ್ನೊಂದು ಕಡೆ ಇಸ್ರೇಲ್ ದೇಶದ ಮೇಲೆ ಕೂಡ ಭಾರಿ ದೊಡ್ಡ ಪ್ರಮಾಣದ ದಾಳಿ ಆಗುತ್ತಿದೆ. ಹೀಗೆ ಇಬ್ಬರೂ ತಿಕ್ಕಾಟ
ವನ್ಯಜೀವಿ ನಿಯಂತ್ರಣಕ್ಕೆ 116 ಕಿ.ಮೀ. ರೈಲುಹಳಿ ತಡೆಗೋಡೆ ನಿರ್ಮಾಣ: ಈಶ್ವರ ಖಂಡ್ರೆ
ಬೆಂಗಳೂರು, ಮಾ.12: ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರ ಜೊತೆಗೆ ಎಕ್ಸ್ ಪ್ರೆಸ್ ಹೆದ್ದಾರಿ ಮೊದಲಾದ ಮೂಲಭೂತ ಕಾಮಗಾರಿಗೆ ಗಜಪಥ ಛಿದ್ರವಾಗಿ ಆನೆ ಹಾವಳಿಯೂ ಹೆಚ್ಚಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆನೆ-ಮಾನವ ಸಂಘರ್ಷ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ 116 ಕಿ.ಮೀ. ರೈಲು ಹಳಿ ತಡೆಗೋಡೆ (ರೈಲ್ವೆ ಬ್ಯಾರಿಕೇಡ್) ಮಂಜೂರು ಮಾಡಿದ್ದು, 201 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಐದೂವರೆ ಕಿ.ಮೀ. ರೈಲು ಹಳಿ ತಡೆಗೋಡೆಗೆ ಮಂಜೂರಾತಿ ನೀಡಲಾಗಿದ್ದು, 9 ಕೋಟಿ 38 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ಇದರ ಜೊತೆಯಲ್ಲಿ ಟೆಂಟಕಲ್ ಫೆನ್ಸಿಂಗ್, ಕಂದಕ ನಿರ್ಮಾಣ ಮಾಡುತ್ತಿದ್ದೇವೆ. ಆನೆಗಳು ನಾಡಿನತ್ತ ಬಂದಾಗ ಮರಳಿ ಕಾಡಿಗೆ ಅಟ್ಟಲು ಆನೆ ಕಾರ್ಯಪಡೆ ಮಾಡಿದ್ದೇವೆ. ಚಿರತೆ ಕಾರ್ಯಪಡೆ ರಚಿಸಿದ್ದೇವೆ. ಡ್ರೋನ್ ಕ್ಯಾಮರಾ ಬಳಸಿಕೊಂಡು ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡುತ್ತಿದ್ದೇವೆ. ಹೆಚ್ಚಿನ ರೈಲು ಹಳಿ ತಡೆಗೋಡೆಗೆ ಬೇಡಿಕೆ ಬಂದರೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಉಪ ವಲಯ ಅರಣ್ಯಾಧಿಕಾರಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು. ಮಳವಳ್ಳಿಗೆ ಚಿರತೆ ಕಾರ್ಯಪಡೆ ಮತ್ತು ವಾಹನದ ಅವಶ್ಯಕತೆಯನ್ನು ಪೂರೈಸಲು ಸರ್ಕಾರ ಬದ್ಧವಾಗಿದ್ದು, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸದರ್ನ್ ಆಫ್ ರೋಡ್ ಚಾಲೆಂಜ್: ಥಾರ್ ವಿಭಾಗದಲ್ಲಿ ನಿನ್ನಿಕಲ್ಲು ನರ್ಸರಿಯ ಜಾಕ್ ಅನಿಲ್ಗೆ ಪ್ರಥಮ ಸ್ಥಾನ
ಪುತ್ತೂರು: ಉಪ್ಪಿನಂಗಡಿಯ ಇಳಂತಿಲದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಮಟ್ಟದ 'ಸದರ್ನ್ ಆಫ್ ರೋಡ್ ಚಾಲೆಂಜ್ ಸೀಸನ್-3' ಸ್ಪರ್ಧೆಯಲ್ಲಿ ಅಳಕೆಮಜಲಿನ ನಿನ್ನಿಕಲ್ಲು ನರ್ಸರಿಯ ಮಾಲಕ ಜಾಕ್ ಅನಿಲ್ ಅವರು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾಗಿದ್ದ 'ಥಾರ್ ಕ್ಲಾಸ್' ವಿಭಾಗದಲ್ಲಿ ಚಾಲಕರಾಗಿ ಜಾಕ್ ಅನಿಲ್ ಹಾಗೂ ಸಹ ಚಾಲಕರಾಗಿ ಡಾ. ಮಹಾಬಲ ಭಟ್ ಕೆದಿಲ ಅವರು ವಾಹನ ಚಲಾಯಿಸಿದರು. ಮಾರ್ಚ್ 7 ಮತ್ತು 8ರಂದು ಎರಡು ದಿನಗಳ ಕಾಲ ನಡೆದ ಈ ಸಾಹಸಮಯ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಆಫ್ ರೋಡ್ ಸವಾರರು ಭಾಗವಹಿಸಿದ್ದರು. ಜೀಪ್, ಥಾರ್, ಜಿಮ್ಮಿ, ಜಿಪ್ಸಿ ಮತ್ತು ಮೋಡಿಫೈಡ್ ಎಂಬ ಐದು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಸಾಹಸಮಯ ಟ್ರ್ಯಾಕ್ನಲ್ಲಿ ಅದ್ಭುತ ಪ್ರದರ್ಶನ: ಕಲ್ಲು, ಮಣ್ಣು, ಕೆಸರು ಹಾಗೂ ಆಳವಾದ ಗುಂಡಿಗಳಿಂದ ಕೂಡಿದ ಕಠಿಣ ಆಫ್ ರೋಡ್ ಟ್ರ್ಯಾಕ್ನಲ್ಲಿ ಜಾಕ್ ಅನಿಲ್ ತಂಡವು ತಮ್ಮ ಅದ್ಭುತ ಚಾಲನಾ ಸಾಮರ್ಥ್ಯವನ್ನು ಪ್ರದರ್ಶಿಸಿತು. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಹಾಗೂ ಕೇರಳದ ಘಟಾನುಘಟಿ ಸ್ಪರ್ಧಿಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ಭಾಗವಹಿಸಿದ್ದ ಜಾಕ್ ಅನಿಲ್ ತಂಡವು ಅಗ್ರಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಹುಮುಖ ಪ್ರತಿಭೆಯ ಜಾಕ್ ಅನಿಲ್: ವಿವಿಧ ತಳಿಗಳ ಹಲಸಿನ ಗಿಡಗಳನ್ನು ಕಸಿ ಮಾಡಿ, ಸಂರಕ್ಷಿಸುವ ಕಾರ್ಯದಲ್ಲಿ ಗುರುತಿಸಿಕೊಂಡಿರುವ ಜಾಕ್ ಅನಿಲ್ ಅವರು ಕೃಷಿ ಕ್ಷೇತ್ರದಲ್ಲಿ 'ಜಾಕ್ ಅನಿಲ್' ಎಂದೇ ಪ್ರಸಿದ್ಧರು. ಕೃಷಿಯ ಜೊತೆಗೆ ಆಫ್ ರೋಡ್ ರೇಸ್ ಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಈಗಾಗಲೇ ಕರ್ನಾಟಕ ಮತ್ತು ಕೇರಳದ ವಿವಿಧೆಡೆ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದಾರೆ. ಇವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಯಾದಗಿರಿ: ಕ್ರೂಸರ್–ಬೈಕ್ ಢಿಕ್ಕಿ: ಇಬ್ಬರು ಮೃತ್ಯು
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಾದ ಬಸವರಾಜ (55) ಹಾಗೂ ಚಂದಪ್ಪ (38) ಮೃತಪಟ್ಟವರು. ಇಬ್ಬರೂ ಗೋಗಿ ಗ್ರಾಮದ ನಿವಾಸಿಗಳಾಗಿದ್ದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತುಂಬಿಗಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕ್ರೂಸರ್ ವಾಹನ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion
ಇರಾನ್ ಸೇನೆಯನ್ನ ಈಗ ಯಾರೂ ತಡೆದು ನಿಲ್ಲಿಸಲು ಆಗುತ್ತಿಲ್ಲ, ಅದ್ರಲ್ಲೂ ತಮ್ಮ ದೇಶದಲ್ಲಿನ ದಾಳಿಗೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಇರಾನ್ ದೊಡ್ಡ ಮಟ್ಟದ ದಾಳಿ ಸಂಘಟಿಸಿದೆ. ಇದರ ಪರಿಣಾಮ ಅಮೆರಿಕ ಮೇಲೆ ಆಗುತ್ತಿಲ್ಲ, ಬದಲಾಗಿ ಅರಬ್ ಹಾಗೂ ಇಸ್ರೇಲ್ ದೇಶಗಳು ಈಗ ಇರಾನ್ ದಾಳಿ ಹಿನ್ನೆಲೆ ನಲುಗಿ ಹೋಗುವಂತೆ ಆಗಿದೆ. ಹಾಗೇ ಇಸ್ರೇಲ್ ಕೂಡ ಇರಾನ್
ದೇವಸ್ಥಾನದ ಅನ್ನಪ್ರಸಾದಕ್ಕೂ 'ಗ್ಯಾಸ್ ಟ್ರಬಲ್ ' ; ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಇರಾನ್ - ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೋಟೆಲ್, ಪಿಜಿ, ದೇವಸ್ಥಾನಗಳ ಮೇಲೆ ತಟ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾಸ್ ಪೂರೈಕೆ ಕೊರತೆಯಿಂದ ಈಗಾಗಲೇ ಬೆಳಗ್ಗಿನ ಉಪಾಹಾರದಲ್ಲಿ ಬದಲಾವಣೆ ಮಾಡಲಾಗಿದೆ.
ರಾಜ್ಯಸಭಾ ಚುನಾವಣೆ : ಯಡಿಯೂರಪ್ಪ ಶಿಫಾರಸು ಒಂದು, ಬಿಜೆಪಿ ವರಿಷ್ಠರ ಬಳಿ ಇದೆ ಆಪ್ಷನ್ ಎರಡು
Rajya Sabha Election from Karnataka : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಬಿಜೆಪಿ ನಾಯಕರೊಬ್ಬರು ಆಯ್ಕೆಯಾಗುತ್ತಾರಾ ಅಥವಾ ಮೈತ್ರಿಯಿಂದ ಯಾರನ್ನಾದರೂ ಆಯ್ಕೆ ಮಾಡಲಾಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಮೈತ್ರಿ ರಾಜ್ಯದಲ್ಲಿ ಭದ್ರವಾಗಿರಬೇಕು ಎನ್ನುವ ಇಂಗಿತವನ್ನು ಬಿಜೆಪಿಯ ವರಿಷ್ಠರು ಮತ್ತು ದಳಪತಿಗಳು ಮಾತನಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಅಭ್ಯರ್ಥಿಯ ಆಯ್ಕೆ ಮಹತ್ವಕ್ಕೆ ಕಾರಣವಾಗಬಹುದು.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದು ಸದ್ಯ ಭಾರತದ ಪ್ರತಿ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ಭಾರಿ ಮರಿಣಾಮದ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಸದ್ಯ ಗ್ರಾಹಕರು ಇಂಡಕ್ಷನ್ ಸ್ಟೌವ್ ಗಳ ಮೊರೆ ಹೋಗಿದ್ದು, ಇದರ ಖರೀದಿಗೆ ಮುಗಿಬಿದ್ದಿದ್ದಾರೆ.ಈ ಬೆನ್ನಲ್ಲೇ, ಇದೀಗ ಬೆಂಗಳೂರಿನ ಗೃಹೋಪಯೋಗಿ ಉಪಕರಣಗಳ ಅಂಗಡಿ ಹಾಗೂ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಇಂಡಕ್ಷನ್ ಸ್ಟೌವ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ನಗರದಲ್ಲಿ ಬುಹುತೇಕ ಮಳಿಗೆಗಳಲ್ಲಿ ಸ್ಟಾಕ್ ಖಾಲಿಯಾಗುವಂತಹ ಪರಿಸ್ಥಿತಿ ಬಂದಿದೆ. ಈ ಕುರಿತ ವರದಿ ಇಲ್ಲಿದೆ..
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ: ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ, ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಒತ್ತಾಯ
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ -ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ರಾಜ್ಯದ ಸಂಸದರ ಮೌನಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದ ಜನರಿಗೆ ಸಮಸ್ಯೆ ಉಂಟಾಗಿದ್ದು, ರಾಜ್ಯದ ಜನರ ಪರವಾಗಿ ಸಂಸತ್ತಿನಲ್ಲಿ ಮಾತನಾಡಲು ಡಿಕೆಶಿ ಸಂಸದರಿಗೆ ಒತ್ತಾಯ ಮಾಡಿದ್ದಾರೆ. ಅಡುಗೆ ಅನಿಲ ಕೊರತೆಯಿಂದ ಜನರು ಪರದಾಡುತ್ತಿರುವ ಬಗ್ಗೆಯೂ ಅವರು ತಮ್ಮ ಮಾತಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕುರಿತಾಗಿ ಮತ್ತಷ್ಟು ವಿವರ ಇಲ್ಲಿದೆ.
ಮಾತು ಕೇಳ್ಲಿಲ್ಲ ಅಂದ್ರೆ ಹತ್ಯೆಗೆ ಬೆಂಬಲ: ಇರಾನ್ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಗೆ ಟ್ರಂಪ್ ವಾರ್ನಿಂಗ್!
ಅಮೆರಿಕದ ಬೇಡಿಕೆಗಳಿಗೆ ಸಹಕಾರ ಕೊಡದಿದ್ದರೆ, ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರನ್ನ ಗುರಿಯಾಗಿಸುವ ಕಾರ್ಯಾಚರಣೆಗೆ ಬೆಂಬಲ ನೀಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಯಿಂದ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಅಮೆರಿಕದ ಸೊಕ್ಕನ್ನು ಮುರಿಯಿತೇ ಇರಾನ್?
ಈ ಸಂಘರ್ಷದಲ್ಲಿ ಅಮೆರಿಕನ್ನರು ಸಾಯುತ್ತಿದ್ದಾರೆ. ಯುಎಸ್ ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ ಮತ್ತು ಸೌದಿ ಅರೇಬಿಯ ಕೇವಲ ಹೇಳಿಕೆಗಳನ್ನು ನೀಡುತ್ತಿದೆ ಎಂಬುದು ಟ್ರಂಪ್ ಅವರ ಮಿತ್ರ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಆಕ್ಷೇಪ. ಅವರ ಟ್ವೀಟ್ ಅನ್ನು ನೋಡಿದರೆ ಅಮೆರಿಕ ಅಸಹಾಯಕವಾಗಿದೆ ಎಂದು ತೋರುತ್ತದೆ. ಅದು ಸೌದಿ ಅರೇಬಿಯವನ್ನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದೆ. ಆದರೆ ಇರಾನ್ಗೆ ಹೆದರಿರುವ ಸೌದಿ ಅರೇಬಿಯ ಅಮೆರಿಕದೊಂದಿಗೆ ನಿಲ್ಲುತ್ತಿಲ್ಲ. ಈಗಿನ ಸ್ಥಿತಿ ನೋಡಿದರೆ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ದೃಢವಾಗಿ ನಿಂತಿರುವ ಹಾಗೆ ಕಾಣುತ್ತಿದೆ. ಗಲ್ಫ್ ದೇಶಗಳಲ್ಲಿ ಮಾತ್ರ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಟ್ರಂಪ್ ದಿನಕ್ಕೊಂದು ಹೇಳಿಕೆ ಕೊಡುತ್ತಿರುವಾಗ, ಇರಾನ್ ಸರಕಾರ ಮಾತ್ರ ಮಾತು ಬದಲಿಸದೆ ನಿಂತಿದೆ. ಅಗತ್ಯವಿರುವವರೆಗೂ ನಾವು ಹೋರಾಡುತ್ತೇವೆ. ಶರಣಾಗುವ ಪ್ರಶ್ನೆಯೇ ಇಲ್ಲ. ಮಾತುಕತೆ ನಡೆಸುವುದಿಲ್ಲ ಎಂದಿದೆ. ಯಾವುದೇ ದಾಳಿಗಳು ನಡೆಯದಂತೆ ಖಾತರಿ ನೀಡಬೇಕು ಎಂದು ಅದು ಒತ್ತಾಯಿಸುತ್ತಿದೆ. ಇರಾನ್ ಅಮೆರಿಕದ ಮಾರುಕಟ್ಟೆಗಳನ್ನು ಅಲುಗಾಡಿಸಿದೆ. ಪರಿಸ್ಥಿತಿ ಶೀಘ್ರದಲ್ಲೇ ಬದಲಾಗದಿದ್ದರೆ, ಎರಡರಿಂದ ಮೂರು ವಾರಗಳಲ್ಲಿ ಇಡೀ ಪ್ರಪಂಚ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇರಾನ್ ಏನು ಹೇಳುತ್ತಿದೆ ಮತ್ತು ಟ್ರಂಪ್ ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಯಾರು ಹೆದರಿದ್ದಾರೆ, ಯಾರು ತೆರೆಮರೆಯಲ್ಲಿ ಅಡಗಿಕೊಳ್ಳಲು ನೋಡುತ್ತ ಬರೀ ಹೇಳಿಕೆಗಳ ಮೂಲಕ ಅಬ್ಬರಿಸುತ್ತಿದ್ದಾರೆ? ಮತ್ತು ನಿಜವಾಗಿಯೂ ಯಾರು ಬಹಿರಂಗವಾಗಿ ಹೋರಾಡಲು ತಯಾರಿದ್ದಾರೆ? ಈ ನಡುವೆ ಟ್ರಂಪ್ ಇರಾನ್ ಜೊತೆ ಮಾತುಕತೆ ನಡೆಸಲು ಸಿದ್ಧರಿರುವ ಬಗ್ಗೆ ವರದಿಗಳಿವೆ. ಇದು ಟ್ರಂಪ್ ಅವರ ಮತ್ತೊಂದು ತಂತ್ರವೇ ಎಂಬ ಅನುಮಾನವೂ ಇದೆ. ಟ್ರಂಪ್ ನಿರಂತರವಾಗಿ ತಮ್ಮ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ. ಆದರೆ ಕಳೆದ 11 ದಿನಗಳಿಂದ ಇರಾನ್ನ ಹೇಳಿಕೆಗಳು ಬದಲಾಗಿಲ್ಲ. ನಾವು ಹಿಂದೆ ಸರಿಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಸಮಯ ಹೋರಾಡುತ್ತೇವೆ ಎಂಬುದು ಇರಾನ್ನ ನಿಲುವಾಗಿದೆ. ಇರಾನ್ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು Iಖಉಅ ಹೇಳಿದೆ. ಇರಾನ್ ಒಂದು ಕ್ಲಸ್ಟರ್ ಕ್ಷಿಪಣಿಯ ಫೋಟೊವನ್ನು ಬಿಡುಗಡೆ ಮಾಡಿದೆ. ಅದು ಒಂದೇ ತೆಳುವಾದ ಕ್ಷಿಪಣಿಯಂತೆ ಕಾಣುತ್ತದೆ. ಆದರೆ ಅದು ಆಕಾಶ ತಲುಪುತ್ತಿದ್ದಂತೆ ಅದರಿಂದ ಇನ್ನೂ ಹಲವಾರು ಕ್ಷಿಪಣಿಗಳು ಹೊರಹೊಮ್ಮುತ್ತವೆ. ಇರಾನ್ ಈ ಬಾರಿ ಇಸ್ರೇಲ್ ಮೇಲೆ ಕಡಿಮೆ ಕ್ಷಿಪಣಿಗಳನ್ನು ಹಾರಿಸಿದೆಯಾದರೂ, ಅದು ಇಸ್ರೇಲ್ಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ ಇರಾನ್ನ ನಿಜವಾದ ಗುರಿ ಅಮೆರಿಕ ಎಂಬುದು ವಿಶ್ಲೇಷಕರ ಅಭಿಪ್ರಾಯ. ಅಮೆರಿಕದ ಮಿಲಿಟರಿ ನೆಲೆಗಳಿರುವ ಕಾರಣಕ್ಕೆ ಅದು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿದೆ. ಇರಾನ್ನ ತಂತ್ರ ಸ್ಪಷ್ಟವಾಗಿದೆ. ಅದು ಅಮೆರಿಕದ ವಿರುದ್ಧ ಹೋರಾಡುತ್ತಿದೆ. ಗಲ್ಫ್ ರಾಷ್ಟ್ರಗಳು ಯುಎಸ್ ರಾಯಭಾರಿಗಳನ್ನು ಹೊರಹಾಕಿದರೆ ಮಾತ್ರ ಹಾರ್ಮುಝ್ ಮೂಲಕ ತೈಲ ಸಾಗಿಸಲು ಅವಕಾಶ ನೀಡುವುದಾಗಿ ಅದು ಹೇಳಿದೆ. ‘‘ನಮಗೆ ಕದನ ವಿರಾಮ ಬೇಡ. ನಾವು 10 ವರ್ಷಗಳ ಕಾಲ ಹೋರಾಡುತ್ತೇವೆ’’ ಎಂಬುದು ಅದರ ದೃಢವಾದ ನಿಲುವಾಗಿದೆ. ಕದನ ವಿರಾಮ ಬಯಸುವುದಾದಲ್ಲಿ, ಎಂದಿಗೂ ದಾಳಿ ಮಾಡುವುದಿಲ್ಲ ಎಂಬ ಗ್ಯಾರಂಟಿ ನೀಡುವಂತೆ ಅದು ತಾಕೀತು ಮಾಡುತ್ತಿದೆ. ತೈಲ ಸಾಗಾಟಕ್ಕೆ ತಡೆಯಾಗುವ ಮೂಲಕ ಇರಾನ್ ಗಲ್ಫ್ ರಾಷ್ಟ್ರಗಳ ಪ್ರಮುಖ ವ್ಯವಹಾರವನ್ನು ನಿರ್ಧರಿಸುತ್ತಿದೆ ಮತ್ತು ತೈಲ ಮತ್ತು ಅನಿಲ ಉತ್ಪಾದನೆಯಿಂದ ಪೂರೈಕೆ ಸರಪಳಿಯವರೆಗೆ ಎಲ್ಲವನ್ನೂ ಅದು ಅಡ್ಡಿಪಡಿಸಿದೆ. ಗಲ್ಫ್ ಭಾಗದಲ್ಲಿನ ಅತಿದೊಡ್ಡ ಸಂಸ್ಕರಣಾಗಾರಗಳ ಮೇಲಿನ ಇರಾನ್ ದಾಳಿಯ ಬಗ್ಗೆ ವರದಿಗಳು ಬರುತ್ತಲೇ ಇವೆ. ತೈಲ ಮತ್ತು ಅನಿಲ ಪೂರೈಕೆ ಬಿಕ್ಕಟ್ಟನ್ನು ಉಲ್ಬಣಗೊಳಿಸಲು ಇರಾನ್ ನೋಡುತ್ತಿರುವಂತಿದೆ. ಇರಾನ್ನ ಡ್ರೋನ್ಗಳು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು. ಗಲ್ಫ್ ರಾಷ್ಟ್ರಗಳಲ್ಲಿನ ಯುಎಸ್ ಮಿಲಿಟರಿ ನೆಲೆಗಳು ಯುಎಸ್ಗಾಗಲೀ ಅಥವಾ ಗಲ್ಫ್ ರಾಷ್ಟ್ರಗಳಿಗಾಗಲೀ ಪ್ರಯೋಜಕವಾಗಿ ಉಳಿದಿಲ್ಲ. ಅವುಗಳ ಉಪಸ್ಥಿತಿಯ ಹೊರತಾಗಿಯೂ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸಿದೆ. ನವೆಂಬರ್ 2025ರಲ್ಲಿ ಅಮೆರಿಕ ಸೌದಿ ಅರೇಬಿಯದೊಂದಿಗೆ ಆರ್ಥಿಕ ಮತ್ತು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು. ಎರಡೂ ದೇಶಗಳ ನಡುವಿನ ಒಪ್ಪಂದ ಮಿಲಿಟರಿ ಸಹಕಾರ ಹೆಚ್ಚಿಸುವುದಾಗಿತ್ತು. ಆದರೆ ಈ ಯುದ್ಧದಲ್ಲಿ ಸೌದಿ ಅರೇಬಿಯ ಅಮೆರಿಕಕ್ಕೆ ಸಹಾಯ ಮಾಡಲು ಸಾಧ್ಯವೇ? ಟ್ರಂಪ್ ಅವರ ಮಿತ್ರ ಸೆನೆಟರ್ ಲಿಂಡ್ಸೆ ಗ್ರಹಾಂ ಈ ಒಪ್ಪಂದದ ಅರ್ಥವನ್ನು ಪ್ರಶ್ನಿಸಿದ್ದಾರೆ. ರಿಯಾದ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರ ಟ್ವೀಟ್ನಲ್ಲಿ ಹೇಳಲಾಗಿದೆ. ಸೌದಿ ಅರೇಬಿಯ ಇರಾನ್ ವಿರುದ್ಧ ತನ್ನ ಮಿಲಿಟರಿಯನ್ನು ಬಳಸಲು ಬಯಸುವುದಿಲ್ಲ ಎಂದು ಲಿಂಡ್ಸೆ ಹೇಳುತ್ತಾರೆ. ಎರಡೂ ದೇಶಗಳ ಹಿತಾಸಕ್ತಿಯನ್ನು ಪೂರೈಸುವ ಹೋರಾಟದಲ್ಲಿ ತನ್ನೊಂದಿಗೆ ನಿಲ್ಲದ ದೇಶದೊಂದಿಗೆ ಯುಎಸ್ ಏಕೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಈ ಸಂಘರ್ಷದಲ್ಲಿ ಅಮೆರಿಕನ್ನರು ಸಾಯುತ್ತಿದ್ದಾರೆ. ಯುಎಸ್ ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ ಮತ್ತು ಸೌದಿ ಅರೇಬಿಯ ಕೇವಲ ಹೇಳಿಕೆಗಳನ್ನು ನೀಡುತ್ತಿದೆ ಎಂಬುದು ಲಿಂಡ್ಸೆ ಅವರ ಆಕ್ಷೇಪ. ಅವರ ಟ್ವೀಟ್ ಅನ್ನು ನೋಡಿದರೆ ಅಮೆರಿಕ ಅಸಹಾಯಕವಾಗಿದೆ ಎಂದು ತೋರುತ್ತದೆ. ಅದು ಸೌದಿ ಅರೇಬಿಯವನ್ನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದೆ. ಆದರೆ ಇರಾನ್ಗೆ ಹೆದರಿರುವ ಸೌದಿ ಅರೇಬಿಯ ಅಮೆರಿಕದೊಂದಿಗೆ ನಿಲ್ಲುತ್ತಿಲ್ಲ. ಅಮೆರಿಕವನ್ನು ಬೆಂಬಲಿಸಲು ಗಲ್ಫ್ ರಾಷ್ಟ್ರಗಳು ಒಗ್ಗೂಡುತ್ತಿಲ್ಲ. ಇರಾನ್ನ ಹೇಳಿಕೆಗಳಲ್ಲಿ ಯಾವುದೇ ಮಾತುಕತೆ ಅಥವಾ ಹಿಮ್ಮೆಟ್ಟುವಿಕೆಯ ಸುಳಿವು ಕೂಡ ಇಲ್ಲ. ಇರಾನ್ ಮೇಲೆ ದಾಳಿಯಾಗುತ್ತಿಲ್ಲ, ವಿನಾಶ ನಡೆಯುತ್ತಿಲ್ಲ ಎಂದಲ್ಲ. ಅದೆಲ್ಲವೂ ನಡೆಯುತ್ತಿದೆ. ಆದರೆ ಇರಾನ್ ಹಿಂದೆ ಸರಿಯುತ್ತಿಲ್ಲ. ಈ ಯುದ್ಧಕ್ಕೆ ಅದರ ಮಾನಸಿಕ ಸಿದ್ಧತೆ ದೃಢವಾಗಿರುವಂತೆ ಕಾಣುತ್ತಿದೆ. ಇರಾನ್ನ ವಿದೇಶಾಂಗ ಸಚಿವರು ‘‘ನಾವು 20 ವರ್ಷಗಳಿಂದ ಈ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದೇವೆ ಮತ್ತು 10 ವರ್ಷಗಳ ಕಾಲ ಹೋರಾಡುತ್ತೇವೆ’’ ಎಂದಿದ್ದಾರೆ. ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ನಂತರ ಇರಾನ್ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಿದೆ. ಮುಜ್ತಬಾ ಖಾಮಿನೈ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲವಾದರೂ ಜನರು ಅವರನ್ನು ಬೆಂಬಲಿಸಿ ಬೀದಿಗಿಳಿದಿದ್ದಾರೆ. ಇರಾನ್ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಕ್ಷಿಪಣಿ ವಿರೋಧಿ ವ್ಯವಸ್ಥೆಗಳಿಗೆ ಗಮನಾರ್ಹ ಹಾನಿ ಉಂಟುಮಾಡಿದೆ. ಇರಾನ್ನ ಕ್ಷಿಪಣಿಗಳು ಖಾಲಿಯಾಗಲಿವೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಹೇಳುತ್ತಿದ್ದವು. ಇರಾನ್ನ ಶೇ. 80 ವಾಯು ರಕ್ಷಣಾ ಪಡೆಗಳು ಮತ್ತು ಅದರ ಶೇ. 60 ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ನಾಶಪಡಿಸಿದ್ದಾಗಿ ಇಸ್ರೇಲ್ ಹೇಳಿಕೊಂಡಿತು. ಆ ಹೇಳಿಕೆಯ ಕೆಲವೇ ಗಂಟೆಗಳ ನಂತರ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿತು. ಇರಾನ್ ಈಗಲೂ ಯುಎಸ್ ಮತ್ತು ಇಸ್ರೇಲ್ನ ಬೆವರಿಳಿಸುತ್ತಿದೆ. ಈಗ ಯುಎಸ್ ತನ್ನ ಶಸ್ತ್ರಾಸ್ತ್ರಗಳನ್ನು ದಕ್ಷಿಣ ಕೊರಿಯಾ ಮತ್ತು ಹಿಂದೂ ಮಹಾಸಾಗರದಿಂದ ಮಧ್ಯಪ್ರಾಚ್ಯದ ದೇಶಗಳಿಗೆ ಸಾಗಿಸಬೇಕಾಗಿದೆ. ಪೆಂಟಗಾನ್ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿರುವ ತನ್ನ ಪೇಟ್ರಿಯಾಟ್ ಕ್ಷಿಪಣಿ ಸಂಗ್ರಹವನ್ನು ಬಳಸಲು ಉದ್ದೇಶಿಸಿರುವ ಬಗ್ಗೆ ವರದಿಯಿದೆ. ಆದರೆ ಇರಾನ್ ತನ್ನ ದಾಳಿಯನ್ನು ಹೆಚ್ಚಿಸಬಹುದು ಎಂಬ ಆತಂಕವೂ ಇದೆ. ಇರಾನ್ ಬಗೆಗಿನ ಭಯ ಗಮನಾರ್ಹವಾಗಿ ಕಂಡುಬರುತ್ತದೆ. ಇರಾನ್ ಅಂತಹ ಮಹತ್ವದ ಸವಾಲನ್ನು ಒಡ್ಡುತ್ತದೆ ಎಂದು ಅಮೆರಿಕಕ್ಕೆ ತಿಳಿದಿರಲಿಲ್ಲವೇ? ಯುದ್ಧದ ಸಮಯದಲ್ಲಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಯುದ್ಧದ ವಿರುದ್ಧವಾಗಿದ್ದರು ಎಂಬ ಸುದ್ದಿ ಹೊರಬಂದಿದೆ. ವ್ಯಾನ್ಸ್ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆಂದು ಟ್ರಂಪ್ ಈಗ ಒಪ್ಪಿಕೊಂಡಿದ್ದಾರೆ. ಈಗ ಇರಾನ್ ಮಾತುಕತೆಗೆ ಬರಲು ತಯಾರಿಲ್ಲ ಎಂಬ ಕಾರಣದಿಂದ ಟ್ರಂಪ್ ಇರಾನ್ ಮೇಲೆ 20 ಪಟ್ಟು ಹೆಚ್ಚು ದಾಳಿ ಮಾಡಲಾಗುವುದು ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣ ಉತ್ತರವನ್ನು ಇರಾನ್ನ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಕೊಟ್ಟಿದ್ದಾರೆ. ‘‘ಇರಾನ್ನ ಜನರು ನಿಮ್ಮ ಸುಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ’’ ಎಂದಿದ್ದಾರೆ. ‘‘ನಿಮಗಿಂತ ದೊಡ್ಡ ಜನರು ಬಂದು ಹೋಗಿದ್ದಾರೆ. ಆದರೆ ಅವರು ಇರಾನ್ನ ಜನರನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಜಾಗರೂಕರಾಗಿರಿ. ನೀವೇ ನಾಶವಾಗಬಹುದು’’ ಎಂದು ಲಾರಿಜಾನಿ ಪ್ರತಿ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ನ ಚಾನೆಲ್ ಫೋರ್ನಲ್ಲಿ ಇರಾನ್ನ ಪ್ರಾಧ್ಯಾಪಕರೊಂದಿಗಿನ ಸಂದರ್ಶನವನ್ನು ರವೀಶ್ ಕುಮಾರ್ ತಮ್ಮ ವೀಡಿಯೊದಲ್ಲಿ ಪ್ರಸ್ತಾಪಿಸಿದ್ದಾರೆ. ಇಸ್ರೇಲ್ ಇರಾನ್ನ ದೌರ್ಬಲ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿತು ಮತ್ತು ಅಮೆರಿಕಕ್ಕೆ ತಪ್ಪು ಮಾಹಿತಿ ನೀಡಿತು. ಆದ್ದರಿಂದ ಅವರು ಇರಾನ್ ಮೇಲೆ ದಾಳಿ ಮಾಡಿದರು ಎಂದು ಪ್ರೊಫೆಸರ್ ಮುಹಮ್ಮದ್ ಮರಾಂಡಿ ಹೇಳಿದ್ದಾರೆ. ನೆತನ್ಯಾಹು ಟ್ರಂಪ್ಗೆ ನಿಖರವಾದ ಮಾಹಿತಿ ನೀಡಿದ್ದಾರೆಯೇ ಅಥವಾ ಅವರನ್ನು ಇದರಲ್ಲಿ ಸಿಲುಕಿಸಿದ್ದಾರೆಯೇ? ಟ್ರಂಪ್ ನೆತನ್ಯಾಹು ಬಗ್ಗೆ ಯಾವುದೇ ಪ್ರಮುಖ ಹೇಳಿಕೆಗಳನ್ನು ನೀಡಿಲ್ಲ ಮತ್ತು ಅವರ ಅನೇಕ ಹೇಳಿಕೆಗಳಲ್ಲಿ ನೆತನ್ಯಾಹು ಉಲ್ಲೇಖವೇ ಇಲ್ಲ. ಯುದ್ಧ ಮುಗಿದಿದೆ ಎಂದು ಟ್ರಂಪ್ ಸಿಬಿಎಸ್ ನ್ಯೂಸ್ಗೆ ತಿಳಿಸಿದ್ದಾರೆ. ಇರಾನ್ ಶರಣಾಗುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂತಲೂ ಅವರೇ ಹೇಳುತ್ತಾರೆ. ಇರಾನ್ ತನ್ನ ತೈಲ ಸೌಕರ್ಯದ ಮೇಲೆ ದಾಳಿ ಮಾಡಿದರೆ ಅದರ ಮೇಲೆ ಇನ್ನೂ ತೀವ್ರ ದಾಳಿ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ‘‘ಇರಾನ್ ಡ್ರೋನ್ಗಳನ್ನು ಎಲ್ಲಿ ತಯಾರಿಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಅವರ ಮೇಲೆ ದಾಳಿ ಮಾಡುತ್ತೇವೆ’’ ಎನ್ನುತ್ತಾರೆ. ‘‘ನಾವು ಇರಾನ್ ಕ್ಷಿಪಣಿ ಸಾಮರ್ಥ್ಯವನ್ನು ಶೇ. 10ರಷ್ಟು ಕಡಿಮೆ ಮಾಡಿದ್ದೇವೆ. ಇರಾನ್ನಲ್ಲಿರುವ ಪ್ರತಿಯೊಂದು ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ’’ ಎನ್ನುತ್ತಾರೆ. ಒಂದು ಕಡೆ ಇರಾನ್ ಹೋರಾಡುವ ಬಗ್ಗೆ ಮಾತನಾಡುತ್ತಿದೆ ಮತ್ತು ಹೋರಾಡುತ್ತಿದೆ. ಇನ್ನೊಂದು ಕಡೆ ಅಮೆರಿಕ ಕೆಲವೊಮ್ಮೆ ಯುದ್ಧ ನಿಲ್ಲಿಸುವ ಬಗ್ಗೆ ಮಾತನಾಡುತ್ತದೆೆ. ‘‘ಯುದ್ಧ ಮುಗಿದಿದೆ ಎಂದು ಹೇಳುತ್ತೀರಿ. ನಿಮ್ಮ ರಕ್ಷಣಾ ಕಾರ್ಯದರ್ಶಿ ಅದು ಈಗ ಶುರುವಾಗಿದೆ ಎಂದು ಹೇಳುತ್ತಾರೆ. ಹಾಗಾಗಿ ಸತ್ಯ ಯಾವುದು?’’ ಎಂದು ಒಬ್ಬ ಪತ್ರಕರ್ತ ಅವರನ್ನು ಕೇಳಿದರು. ಅದಕ್ಕೆ ಟ್ರಂಪ್ ‘‘ಎರಡೂ ಸರಿ’’ ಎಂದರು. ಟ್ರಂಪ್ ಅವರ ಹೇಳಿಕೆಗಳು ಉದ್ದೇಶ ಅಥವಾ ತಂತ್ರವನ್ನು ತೋರಿಸುವುದಿಲ್ಲ. ಟ್ರಂಪ್ ಒಂದು ರೀತಿಯಲ್ಲಿ ಯುದ್ಧ ತಡೆಯಲು ಮತ್ತು ಗೆಲುವನ್ನು ಘೋಷಿಸಲು ಬಯಸುತ್ತಾರೆ. ಕಳೆದ ವರ್ಷದ ಜೂನ್ನಲ್ಲಿ ಇರಾನ್ ಮೇಲಿನ ದಾಳಿಯ ನಂತರ ಟ್ರಂಪ್ ಏಕಪಕ್ಷೀಯವಾಗಿ ಯುದ್ಧ ಕೊನೆಗೊಳಿಸುವುದಾಗಿ ಘೋಷಿಸಿದರು ಮತ್ತು ತಾವೇ ಗೆದ್ದಿದ್ದೇವೆ ಎಂದು ಹೇಳಿಕೊಂಡರು. ಈ ಬಾರಿಯೂ ಟ್ರಂಪ್ ಇದೇ ರೀತಿ ಮಾಡಲು ಯೋಜಿಸುತ್ತಿದ್ದಾರೆಯೇ ಅಥವಾ ಹಾಗೆ ಮಾಡದಂತೆ ಅವರನ್ನು ತಡೆಯಲಾಗುತ್ತಿದೆಯೇ? ಯುದ್ಧ ಮುಗಿದಿದೆ ಎಂಬ ಹೇಳಿಕೆಯನ್ನು ಅವರು ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ತರಲು ಕೊಟ್ಟಿರಬಹುದು. ಆದರೆ ಅಂತಹ ಹೇಳಿಕೆಗಳ ಮೂಲಕ ಅವರು ಎಷ್ಟು ಕಾಲ ಮಾರುಕಟ್ಟೆಯನ್ನು ದಾರಿತಪ್ಪಿಸಬಹುದು? ಅವರ ಹೇಳಿಕೆಯ ನಂತರ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಕಡಿಮೆಯಾದರೂ ಅದು 90 ಡಾಲರ್ಗಿಂತಲೂ ಮೇಲೆಯೇ ಇದೆ. ಅಮೆರಿಕ ಯುದ್ಧವನ್ನು ನಿಲ್ಲಿಸಬಹುದೇ ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆ. ಈ ಬಾರಿ ಅಮೆರಿಕ ಮೊದಲು ಹೊರಟುಹೋದರೆ ನೆತನ್ಯಾಹು ತೀವ್ರ ರಾಜಕೀಯ ಹೊಡೆತ ಅನುಭವಿಸುತ್ತಾರೆ. ಟ್ರಂಪ್ ಆಡಳಿತವನ್ನು ಗಮನಿಸುವವರು ಹೇಗಾದರೂ ಯುದ್ಧದಿಂದ ಹೊರಬರಲು ತಯಾರಾಗಬೇಕು ಎಂದು ಬಯಸುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಬರೆದಿದೆ. ಟ್ರಂಪ್ ತನ್ನ ಮಿಲಿಟರಿ ಉದ್ದೇಶ ಸಾಧಿಸಿರುವುದಾಗಿ ಘೋಷಿಸಬೇಕು ಎಂದು ಅವರು ಬಯಸುತ್ತಾರೆ. ಏಕೆಂದರೆ ದೀರ್ಘಕಾಲದ ಯುದ್ಧ ಟ್ರಂಪ್ ಅವರ ಬೆಂಬಲ ನೆಲೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಭಯಪಡುತ್ತಾರೆ. ಕಳೆದ ಏಳು ದಿನಗಳಲ್ಲಿ ಅಮೆರಿಕ 6 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ ಮತ್ತು 8 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯವನ್ನು ಪೆಂಟಗಾನ್ ಅಧಿಕಾರಿಗಳು ಕಾಂಗ್ರೆಸ್ಗೆ ತಿಳಿಸಿದ್ದಾರೆ. ಈಗ ಅಮೆರಿಕ ಏಕಪಕ್ಷೀಯವಾಗಿ ಯುದ್ಧ ನಿಲ್ಲಿಸಿದರೆ ಅದು ಇರಾನ್ಗೆ ಪ್ರಮುಖ ಗೆಲುವು ಮತ್ತು ಇಸ್ರೇಲ್ಗೆ ದೊಡ್ಡ ಸೋಲು. ಇಸ್ರೇಲ್ನಲ್ಲಿ ತನ್ನ ಬೆಂಬಲ ನೆಲೆ ಬಲವಾಗಿ ಉಳಿಯಲು ಯುದ್ಧ ಮುಂದುವರಿಯಬೇಕೆಂದು ನೆತನ್ಯಾಹು ಬಯಸುತ್ತಾರೆ ಮತ್ತು ಟ್ರಂಪ್ ಅಮೆರಿಕದಲ್ಲಿ ತನ್ನ ಕ್ಷೀಣಿಸುತ್ತಿರುವ ಬೆಂಬಲ ನೆಲೆ ಉಳಿಸಲು ಯುದ್ಧ ಕೊನೆಗೊಳ್ಳಬೇಕೆಂದು ಬಯಸುತ್ತಾರೆ. ಚುನಾವಣೆ ಗೆಲ್ಲಲು ಇಬ್ಬರೂ ನಾಯಕರು ಪ್ರಪಂಚದೊಂದಿಗೆ ಆಟವಾಡುತ್ತಿದ್ದಾರೆ. ಅಮೆರಿಕ ಈ ಯುದ್ಧದಲ್ಲಿ ಬಹಳ ಬಳಲುತ್ತಿದೆ. ಇದರಿಂದ ಟ್ರಂಪ್ ಏನನ್ನೂ ಸಾಧಿಸಲಿಲ್ಲ. ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರದಿಂದಾಗಿ ಅವರು ಮತ್ತೊಂದು ಸಂಕಷ್ಟದಲ್ಲಿ ಸಿಲುಕಿರುವ ಹಾಗೆ ಕಾಣುತ್ತಿದೆ. ಇಸ್ರೇಲ್ ಕೂಡ ಅಮೆರಿಕವನ್ನು ಯುದ್ಧಕ್ಕೆ ಸೆಳೆದು ಅದನ್ನು ಈ ಇಕ್ಕಟ್ಟಿನ ಬಲೆಗೆ ಬೀಳಿಸಿದೆ ಎಂಬುದು ಸ್ಪಷ್ಟ.
ಯುದ್ಧ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್
ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇದರ ನಡುವೆ ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊತ್ತ ತೈಲ ಟ್ಯಾಂಕರ್ 'ಶೆನ್ಲಾಂಗ್' ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದೆ. ಇರಾನ್ ನಿರ್ಬಂಧಿಸಿದ್ದ 'ಹಾರ್ಮುಜ್ ಜಲಸಂಧಿ'ಯನ್ನು ದಾಟಿ ಸುರಕ್ಷಿತವಾಗಿ ಮುಂಬೈ ತಲುಪಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡ ಬಳಿಕವೂ ಭಾರತಕ್ಕೆ
ಯುದ್ಧದ ಪರಿಣಾಮ ಕೊಪ್ಪಳದಲಿ ಗ್ಯಾಸ್ ಕೊರತೆ
ವಾಣಿಜ್ಯ ಸಿಲಿಂಡರ್ಗೆ ಹೆಚ್ಚುವರಿ ಬೆಲೆ; ಹೋಟೆಲ್ ಉದ್ಯಮ ಮುಚ್ಚುವ ಭೀತಿ
ಇರಾನ್ ಸರ್ಕಾರ ಪತನದ ತಕ್ಷಣದ ಅಪಾಯವಿಲ್ಲ: ಅಮೆರಿಕ ಗುಪ್ತಚರ ವರದಿ
ಯುದ್ದದಿಂದ ಇರಾನ್ ಪತನಗೊಳ್ಳಲ್ಲ ಎಂದ ಇಸ್ರೇಲ್!
West Bengal | 22ನೇ ರಾಜ್ಯಪಾಲರಾಗಿ ಆರ್.ಎನ್. ರವಿ ಪ್ರಮಾಣವಚನ
ಕೋಲ್ಕತ್ತಾ: ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್. ರವಿ ಅವರು ಪಶ್ಚಿಮ ಬಂಗಾಳದ 22ನೇ ರಾಜ್ಯಪಾಲರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಕೋಲ್ಕತ್ತಾದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಅವರು ಅವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ, ಹಿರಿಯ ಸಚಿವ ಹಾಗೂ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹಾಗೂ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಿತು. ಆದರೆ, ವಿರೋಧ ಪಕ್ಷದ ಬಿಜೆಪಿ ಪಾಳಯದ ಯಾವುದೇ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 5ರಂದು ಸಿ.ವಿ. ಆನಂದ ಬೋಸ್ ರಾಜೀನಾಮೆ ನೀಡಿದ ಬಳಿಕ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಆರ್.ಎನ್. ರವಿ ಅವರು ಈ ಹಿಂದೆ ನಾಗಾಲ್ಯಾಂಡ್, ಮೇಘಾಲಯ ಹಾಗೂ ತಮಿಳುನಾಡು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
Gold: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಿಧಿ ನೀಡಿ ಪ್ರಮಾಣಿಕತೆ ಮೆರೆದಿದ್ದ ಪ್ರಜ್ವಲ್ ರಿತ್ತಿ ಕುಟುಂಬವು ಹೊಸ ಬೇಡಿಕೆಯೊಂದನ್ನು ಇರಿಸಿದ್ದು, ಇದು ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕಿತ್ತು. ನಿಧಿ
ವಾಣಿಜ್ಯ ಸಿಲಿಂಡರ್ ಪೂರೈಕೆ ಬಂದ್: ಕಂಗೆಟ್ಟ ಹೋಟೆಲ್ ಉದ್ಯಮ,ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಆತಂಕ
ಕೇಂದ್ರ ಸರಕಾರದ ಸೂಚನೆಯಂತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತದ ಪರಿಣಾಮ ಹೋಟೆಲ್ ಉದ್ಯಮ ಅಕ್ಷರಶಃ ಕಂಗಾಲಾಗಿದೆ. ಸದ್ಯ ಹೋಟೆಲ್ಗಳಲ್ಲಿಇರುವ ಸಿಲಿಂಡರ್ಗಳು ಒಂದೆರಡು ದಿನಕ್ಕೆ ಸಾಕಾಗಬಹುದು. ಮುಂದೆ ಹೇಗೆ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ ಹೋಟೆಲ್ನವರು. ಏತನ್ಮಧ್ಯೆ ಕಟ್ಟಿಗೆ ಬಳಸುವ ಬಗ್ಗೆ ಚರ್ಚೆಗಳು ನಡೆದಿವೆ.
ಮಧ್ಯಪ್ರಾಚ್ಯದಲ್ಲಿನ ಯುದ್ದದ ಹಿನ್ನಲೆಯಲ್ಲಿ ಇರಾನ್ ಹೊರ್ಮುಜ್ ಜಲಸಂಧಿ ನಿಯಂತ್ರಿಸುತ್ತಿದ್ದು ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಎದುರಾಗಿದೆ. ಈ ಬೆನ್ನಲ್ಲೇ, ಭಾರತದಲ್ಲಿ ಎದುರಾಗಿರುವ ಇಂಧನ ಭದ್ರತೆಯ ಆತಂಕವನ್ನು ಶಮನಗೊಳಿಸಲು ಭಾರತದ ವಿದೇಶಾಂಗ ಸಚಿವ ಡಾ.ಜೈಂಕರ್ ಇರಾನ್ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ, ಭಾರತ 2 ತೈಲ ಟ್ಯಾಂಕರ್ ಗಳು ಹೊರ್ಮುಜ್ ಜಲಸಂಧಿ ಮೂಲಕ ಸುರಕ್ಷಿತವಾಗಿ ಹಾದು ಭಾರತಕ್ಕೆ ತಲುಪಲು ಇರಾನ್ ಒಪ್ಪಿಗೆ ಸೂಚಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ..
Uttar Pradesh | ರಸ್ತೆ ಗುಂಡಿಯ ಪವಾಡ; ಪ್ರಜ್ಞೆಗೆ ಮರಳಿದ ಕೋಮಾದಲ್ಲಿದ್ದ ಮಹಿಳೆ!
ಲಕ್ನೋ: ಕೋಮಾದಲ್ಲಿದ್ದ 50 ವರ್ಷದ ಮಹಿಳೆಯೊಬ್ಬರನ್ನು ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ರಸ್ತೆ ಗುಂಡಿಗೆ ಬಿದ್ದು ಮುಂದೆ ಸಾಗುವಾಗ ಪ್ರಜ್ಞೆಗೆ ಮರಳಿರುವ ಘಟನೆ ಬರೇಲಿ–ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 74ರಲ್ಲಿ ನಡೆದಿದೆ. ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟಿದ್ದ ವಿನೀತಾ ಶುಕ್ಲಾ ಎಂಬ ಮಹಿಳೆಯನ್ನು ಬದುಕುಳಿಯುವ ಯಾವುದೇ ಭರವಸೆ ಇಲ್ಲದೆ ಬರೇಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 24ರಂದು ಆಕೆಯ ದುಃಖತಪ್ತ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಮನೆಗೆ ಮರಳಿ ಕರೆದೊಯ್ಯುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ರಸ್ತೆ ಗುಂಡಿಯಿರುವ ಹೆದ್ದಾರಿಯಲ್ಲಿ ಸಿಲುಕಿಕೊಂಡಿತು. ಇದರಿಂದ ಆ್ಯಂಬುಲೆನ್ಸ್ ಗುಂಡಿಗೆ ಬಿದ್ದು ಎದ್ದಿತು. ಈ ದಿಢೀರ್ ಬೆಳವಣಿಗೆ ಊಹಿಸಲೂ ಸಾಧ್ಯವಿಲ್ಲದ ಚಮತ್ಕಾರವನ್ನೇ ಮಾಡಿತು. ಈ ಕುರಿತು ಪ್ರತಿಕ್ರಿಯಿಸಿರುವ ವಿನೀತಾ ಶುಕ್ಲಾರ ಪತಿ ಕುಲ್ದೀಪ್ ಕುಮಾರ್ ಶುಕ್ಲಾ, “ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಾನು ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದೆ. ಆಕೆ ಉಸಿರಾಡುತ್ತಿರಲಿಲ್ಲ. ಆದರೆ, ಇಳಿಮುಖವಾಗುತ್ತಿರುವ ಹೃದಯ ಬಡಿತ ಮಾತ್ರವಿತ್ತು” ಎಂದು ತಿಳಿಸಿದ್ದಾರೆ. “ಆ್ಯಂಬುಲೆನ್ಸ್ ಹಫೀಝ್ಗಂಜ್ ಬಳಿ ತಲುಪಿದಾಗ ಹೆದ್ದಾರಿಯ ದೊಡ್ಡ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿತು. ಈ ವೇಳೆ ವಾಹನವು ತುಂಬಾ ಒರಟಾಗಿ ಚಲಿಸಿತು” ಎಂದು ಅವರು ಮಂಗಳವಾರ ಹೇಳಿದ್ದಾರೆ. “ಅದರ ಮುಂದಿನ ಕ್ಷಣವೇ ಪವಾಡ ನಡೆಯಿತು. ನನ್ನ ಪತ್ನಿ ಮತ್ತೆ ಸಹಜವಾಗಿ ಉಸಿರಾಡಲು ಪ್ರಾರಂಭಿಸಿದಳು. ನಾನು ತಕ್ಷಣವೇ ಎಲ್ಲಾ ಅಂತ್ಯಕ್ರಿಯೆ ಸಿದ್ಧತೆಗಳನ್ನು ತಡೆಹಿಡಿಯುವಂತೆ ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದೆ” ಎಂದು ಅವರು ತಿಳಿಸಿದ್ದಾರೆ. ತಕ್ಷಣವೇ ಕುಲ್ದೀಪ್ ಶುಕ್ಲಾ ತಮ್ಮ ಪತ್ನಿಯನ್ನು ಪಿಲ್ಭಿಟ್ನಲ್ಲಿರುವ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತುರ್ತು ವೈದ್ಯಕೀಯ ನಿಗಾವಣೆಯಡಿ ಚಿಕಿತ್ಸೆ ನೀಡಿದ ನಂತರ ಸೋಮವಾರ ಆಕೆಯನ್ನು ಮನೆಗೆ ಕರೆತರಲಾಗಿದೆ. “ಸಾವನ್ನು ಗೆದ್ದಿರುವ ಆಕೆ ಈಗ ಎಚ್ಚರವಾಗಿರುವುದಷ್ಟೇ ಅಲ್ಲ, ನಮ್ಮೊಂದಿಗೆ ಮಾತನಾಡುತ್ತಲೂ ಇದ್ದಾಳೆ” ಎಂದು ಕುಲ್ದೀಪ್ ಕುಮಾರ್ ಶುಕ್ಲಾ ಸಂತಸ ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯ ಉದ್ವಿಗ್ನ | ತೈಲ ಟ್ಯಾಂಕರ್ ಗಳ ಮೇಲೆ ದಾಳಿ: ಇರಾಕ್ ನ ತೈಲ ಬಂದರು ಕಾರ್ಯಾಚರಣೆ ಸ್ಥಗಿತ
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನಿನಿಂದ ಉಡಾಯಿಸಲಾದ ಹೆಚ್ಚಿನ ಕ್ಷಿಪಣಿಗಳು ಹಾಗೂ ಡ್ರೋನ್ ಗಳನ್ನು ತಡೆಹಿಡಿದಿವೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಎರಡು ವಿದೇಶಿ ತೈಲ ಟ್ಯಾಂಕರ್ ಗಳ ಮೇಲೆ ನಡೆದ ಮಾರಕ ದಾಳಿಯ ನಂತರ ಇರಾಕ್ ತನ್ನ ತೈಲ ಬಂದರುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು Aljazeera ವರದಿ ಮಾಡಿದೆ. ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಗಳ ಮೇಲೆ ನಡೆದ ದಾಳಿಗಳ ಕುರಿತು ಇರಾಕ್ ತೈಲ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಸಮುದಾಯವು ಕಡಲ ಮಾರ್ಗಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ಒತ್ತಾಯಿಸಿದೆ. “ಅಂತರರಾಷ್ಟ್ರೀಯ ಕಡಲ ಮಾರ್ಗಗಳು ಮತ್ತು ಇಂಧನ ಪೂರೈಕೆ ಮಾರ್ಗಗಳಲ್ಲಿ ಸಂಚರಿಸುವ ನೌಕೆಗಳ ಸುರಕ್ಷತೆ ಮತ್ತು ಭದ್ರತೆ ಪ್ರಾದೇಶಿಕ ಸಂಘರ್ಷಗಳು ಮತ್ತು ಪೈಪೋಟಿಯಿಂದ ಪ್ರತ್ಯೇಕವಾಗಿ ಉಳಿಯಬೇಕು,” ಎಂದು ಇರಾಕ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ. ಇರಾಕ್ ಕರಾವಳಿಯ ಬಳಿ ರಾತ್ರೋರಾತ್ರಿ ಎರಡು ತೈಲ ಟ್ಯಾಂಕರ್ ಗಳಿಗೆ ಬೆಂಕಿ ಹಚ್ಚಿದ ಮಾರಕ ದಾಳಿಯ ನಂತರ ಈ ಹೇಳಿಕೆಗಳು ಹೊರಬಂದಿವೆ.
5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ನೂತನ ಟ್ಯಾಂಕ್ ಸೋರಿಕೆ
1.80 ಕೋಟಿ ರೂ. ಕಾಮಗಾರಿ ಅಕ್ರಮ ಆರೋಪ: ತನಿಖೆಗೆ ಆಗ್ರಹ
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಸ್ಥಗಿತ, ಪುನಾರಂಭ ಸಮರ್ಥಿಸಿಕೊಂಡ ಈಶ್ವರ ಖಂಡ್ರೆ
ಬೆಂಗಳೂರು : ಕಳೆದ ನವೆಂಬರ್ ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತುಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷಗಳಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೆ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು. ನವೆಂಬರ್ ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್ ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು. ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿಮೀ ಗಡಿ ಹೆಚ್ಚಿನ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು. 1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. 3 ವರ್ಷಗಳ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ ಹುಲಿಗಳ ಸಂಖ್ಯೆ 175ಕ್ಕೇ ಏರಿದೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸದನಕ್ಕೆ ಈಶ್ವರ ಖಂಡ್ರೆ ತಿಳಿಸಿದರು.
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು
ನವದೆಹಲಿ; ಪರಿಸರ ಸ್ನೇಹಿ ಸಾರಿಗೆ ಉತ್ತೇಜನ, ಇ-ಚಲನಶೀಲತೆ ಹೆಚ್ಚಿಸುವ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಜಾರಿಗೆ ತಂದ 'ಪಿಎಂ ಇ-ಬಸ್ ಯೋಜನೆ' (PM-eBus Scheme) ಭಾಗವಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ನೂರಾರು ಎಲೆಕ್ಟ್ರಿಕಲ್ ಬಸ್ಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಿಗೆ ಎಷ್ಟು ಇ-ಬಸ್ಗಳು ಸಿಗಲಿವೆ? ಪೂರ್ಣ ಮಾಹಿತಿ ಇಲ್ಲಿದೆ. 'ಪಿಎಂ
ದಿಲ್ಲಿ | ಮಟಿಯಾಲ ಕೊಳಗೇರಿಯಲ್ಲಿ ಅಗ್ನಿ ಅನಾಹುತ: ವಿಡಿಯೊ ವೈರಲ್
ಹೊಸದಿಲ್ಲಿ: ಬುಧವಾರ ರಾತ್ರಿ ದಿಲ್ಲಿಯ ಮಟಿಯಾಲ ಗ್ರಾಮದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಈ ಘಟನೆಯಲ್ಲಿ ಕೊಳಗೇರಿಗಳ ಗುಂಪು ಹಾಗೂ ಮೀನು ಮಾರುಕಟ್ಟೆ ಬಳಿ ಇರುವ ಗುಜರಿ ವಸ್ತುಗಳ ಗೋದಾಮುಗಳು ಹಾನಿಗೀಡಾಗಿವೆ. ಆದರೆ, ತಕ್ಷಣಕ್ಕೆ ಈ ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಗಾಯಾಳುಗಳ ವರದಿ ಬಂದಿಲ್ಲ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. #WATCH | Visuals of the aftermath of a massive fire at a fish market in Matiala village in the Uttam Nagar Area of West Delhi, that broke out late last night. As per Delhi Fire Services, Approximately 300 to 400 slums were destroyed. The cause of the fire is still unclear. The… pic.twitter.com/EFbRiWmdb7 — ANI (@ANI) March 12, 2026 ಬುಧವಾರ ರಾತ್ರಿ ಸುಮಾರು 11.54ಕ್ಕೆ ಕೊಳಗೇರಿಗಳ ಗುಂಪಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು ಸ್ವೀಕರಿಸಲಾಯಿತು. ಅದರ ಬೆನ್ನಿಗೇ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತು ಎಂದು ದಿಲ್ಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈರುತ್ಯ ದಿಲ್ಲಿಯ ಮಟಿಯಾಲ ಪ್ರದೇಶದಲ್ಲಿರುವ ಮೀನು ಮಾರುಕಟ್ಟೆ ಬಳಿಯ ಕೊಳಗೇರಿಗಳ ಗುಂಪಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ, ಕನಿಷ್ಠ 80 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ಈ ಅಗ್ನಿ ಅನಾಹುತದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಗುಜರಿ ವಸ್ತುಗಳೂ ಸುಟ್ಟು ಹೋಗಿವೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಗುಡಿಸಲುಗಳನ್ನು ತೀವ್ರ ದಹನಕಾರಿ ವಸ್ತುಗಳಾದ ಬಿದಿರು, ಟಾರ್ಪಾಲಿನ್ ಹಾಗೂ ಪ್ಲಾಸ್ಟಿಕ್ ತಗಡುಗಳಿಂದ ನಿರ್ಮಿಸಲಾಗಿತ್ತು. ಅದೃಷ್ಟವಶಾತ್ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ” ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದರಿಂದ ನೂರಾರು ಕೊಳಗೇರಿಗಳು ನಾಶವಾಗಿವೆ ಎಂದು ವರದಿಯಾಗಿತ್ತು. ಅಂದಾಜು 300ರಿಂದ 400 ಕೊಳಗೇರಿಗಳು ಈ ಅಗ್ನಿ ಅನಾಹುತದಲ್ಲಿ ನಾಶವಾಗಿವೆ ಎಂದು ತಿಳಿಸಲಾಗಿದೆ. ಆದರೆ, ಈ ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಯಾವುದೇ ಸಾವುನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸುಮಾರು 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಹಾಗೂ ಬೆಳಗ್ಗೆ 3.45ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ
ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ವಿಶೇಷ ಬರಹ ಇಲ್ಲಿದೆ. ನಾನು ವಿವಾಹಿತ, ಹಾಗಾಗಿ ಬ್ರಹ್ಮಚಾರಿಯಲ್ಲ. ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ. ನಾನು ಹೀಗೆಂದು ಡೈಲಾಗ್ ಹೊಡೆದರೆ ಅಲ್ಲಿದ್ದ ಸ್ವಾಮೀಜಿಗಳೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕರು. ಯಾಕೆಂದರೆ ಅದು
Andhra Pradesh | ಕಲುಷಿತ ಹಾಲು ಸೇವನೆ: ಮೃತರ ಸಂಖ್ಯೆ 13ಕ್ಕೆ ಏರಿಕೆ
ರಾಜಮಹೇಂದ್ರವರಂ (ಆಂಧ್ರ ಪ್ರದೇಶ): ಈಶಾನ್ಯ ಗೋದಾವರಿ ಜಿಲ್ಲೆಯಲ್ಲಿ ಕಲಬೆರಕೆಯ ಕಲುಷಿತ ಹಾಲು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಏಳು ಮಂದಿ ಆಂಧ್ರ ಪ್ರದೇಶದ ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂತ್ರ ಕಟ್ಟುವಿಕೆ, ವಾಂತಿ, ಹೊಟ್ಟೆ ನೋವು ಹಾಗೂ ಡಯಾಲಿಸಿಸ್ ಅಗತ್ಯವಿರುವ ತೀವ್ರ ಮೂತ್ರಪಿಂಡ ವೈಫಲ್ಯದಂತಹ ರೋಗಲಕ್ಷಣಗಳನ್ನು ಹೊಂದಿದ್ದ ಹಲವಾರು ಸ್ಥಳೀಯ ನಿವಾಸಿಗಳು ಫೆಬ್ರವರಿ 22ರಂದು ಆಸ್ಪತ್ರೆಗಳಿಗೆ ದಾಖಲಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲಾಲಚೆರುವಿನ ಚೌಡೇಶ್ವರನಗರ ಮತ್ತು ಸ್ವರೂಪ್ ನಗರ ಪ್ರದೇಶಗಳಲ್ಲಿ ಕಲಬೆರಕೆ ಮಾಡಿ ಪೂರೈಸಲಾಗಿದ್ದ ಹಾಲನ್ನು ಸೇವಿಸಿದ ಬಳಿಕ ಈ ಪ್ರದೇಶದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. “ಕಲಬೆರಕೆ ಹಾಲು ಪ್ರಕರಣ ಎಂದು ಶಂಕಿಸಲಾಗಿರುವ ಈ ಘಟನೆಯಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಉಳಿದ ಏಳು ಮಂದಿ ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೋಗಲಕ್ಷಣಗಳು ಹಾಲು ಕಲಬೆರಕೆಯಾಗಿರುವುದನ್ನು ಸೂಚಿಸುತ್ತಿದ್ದು, ಇದೇ ಈ ಸಾವುಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ವಿವಿಧ ಇಲಾಖೆಗಳು ಸಮನ್ವಯದ ಕ್ರಮಕ್ಕೆ ಚಾಲನೆ ನೀಡಿವೆ. ಈ ನಡುವೆ, ಈ ಘಟನೆಯೊಂದಿಗೆ ಸಂಬಂಧ ಹೊಂದಿರುವ ಹಾಲು ಘಟಕವನ್ನು ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆ ನಡೆಸಿದ್ದು, ಹಾಲು, ಪನೀರ್, ತುಪ್ಪ, ಕುಡಿಯುವ ನೀರು ಹಾಗೂ ವಿನೆಗರ್ ಮಾದರಿಗಳನ್ನು ನಿಗಾವಹಿಸಲು ಮತ್ತು ಕ್ರಮ ಕೈಗೊಳ್ಳಲು ಸಂಗ್ರಹಿಸಿದೆ.
ಮತ್ತೆ ಕುಸಿಯಿತು ಚಿನ್ನ; ಬೆಳ್ಳಿಗೂ ಬೆಲೆ ಕಡಿಮೆ…
ಹೇಗಿದೆ ಮಂಗಳೂರಿನ ಚಿನಿವಾರ ಪೇಟೆ?
ನಿತೀಶ್ ಬಳಿಕ ಜೆಡಿಯು ಭವಿಷ್ಯವೇನು?
ಸಂಸತ್ನ ಮೇಲ್ಮನೆ ಇರುವುದು ಹಿರಿಯರಿಗೆ. ಒಂದು ಕಾಲಕ್ಕದು ‘ಅನುಭವ ಮಂಟಪ’. ಈಗ ‘ರಾಜಕೀಯ ಪುನರ್ವಸತಿ ಕೇಂದ್ರ’. ಬಿಹಾರ ಮುಖ್ಯಮಂತ್ರಿಯನ್ನೂ ಅಲ್ಲಿಗೆ ಕಳಿಸಲಾಗುತ್ತಿದೆ. ಅವರಿಗೆ ಎಲ್ಲ ದಾರಿಗಳೂ ಬಂದ್ ಆಗಿರುವುದರಿಂದ ಮೋದಿ, ಶಾ ಹೇಳಿದಂತೆ ಕೇಳಬೇಕು. ಅವರದ್ದು ಅಸಹಾಯಕ ಸ್ಥಿತಿ. ಚುನಾವಣೆಗೆ ಮುನ್ನ ‘ಮಹಾಘಟಬಂಧನ್’ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಬಿಜೆಪಿ ನಾಯಕರಿಗೆ ನಿತೀಶ್ ಕುಮಾರ್ ಸುಲಭದ ತುತ್ತಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಕ್ರಿಯ ರಾಜಕಾರಣ ಇಷ್ಟು ಬೇಗ ಮುಗಿಯಲಿದೆ ಎಂದು ಯಾರೂ ಎಣಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೆಡಿಯು ನಾಯಕನನ್ನು ಸುಲಭವಾಗಿ ಪಕ್ಕಕ್ಕೆ ಸರಿಸಬಹುದೆಂಬ ನಿರೀಕ್ಷೆ ಇರಲಿಲ್ಲ. ಬಹುಶಃ ನಿತೀಶ್ಗೇ ಅಂದಾಜು ಸಿಕ್ಕಿರಲಿಕ್ಕಿಲ್ಲ. ವಿಧಾನಸಭೆ ಚುನಾವಣೆಯಲ್ಲೇ ಮಿತ್ರನನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಫಲಿತಾಂಶ ಬಂದ ತಕ್ಷಣ ಗೇಟ್ಪಾಸ್ ಕೊಟ್ಟರೆ ಜನ ಸಿಟ್ಟಾಗಬಹುದೆಂದು ಸುಮ್ಮನಿದ್ದಿರಬಹುದು. ಇದೀಗ ‘ಅಖಾಡ’ ಸಜ್ಜುಗೊಳಿಸಿ, ರಾಜ್ಯ ರಾಜಕಾರಣಕ್ಕೆ ಗುಡ್ ಬೈ ಹೇಳಿಸಲಾಗುತ್ತಿದೆ. ಸಂಸತ್ನ ಮೇಲ್ಮನೆ ಇರುವುದು ಹಿರಿಯರಿಗೆ. ಒಂದು ಕಾಲಕ್ಕದು ‘ಅನುಭವ ಮಂಟಪ’. ಈಗ ‘ರಾಜಕೀಯ ಪುನರ್ವಸತಿ ಕೇಂದ್ರ’. ಬಿಹಾರ ಮುಖ್ಯಮಂತ್ರಿಯನ್ನೂ ಅಲ್ಲಿಗೆ ಕಳಿಸಲಾಗುತ್ತಿದೆ. ಅವರಿಗೆ ಎಲ್ಲ ದಾರಿಗಳೂ ಬಂದ್ ಆಗಿರುವುದರಿಂದ ಮೋದಿ, ಶಾ ಹೇಳಿದಂತೆ ಕೇಳಬೇಕು. ಅವರದ್ದು ಅಸಹಾಯಕ ಸ್ಥಿತಿ. ಚುನಾವಣೆಗೆ ಮುನ್ನ ‘ಮಹಾಘಟಬಂಧನ್’ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಬಿಜೆಪಿ ನಾಯಕರಿಗೆ ನಿತೀಶ್ ಕುಮಾರ್ ಸುಲಭದ ತುತ್ತಾಗಿದ್ದಾರೆ. ಅವರಿಗೆ ಬಂದಿರುವ ಸ್ಥಿತಿ ಬಗ್ಗೆ ಜೆಡಿಯು ಒಳಗಾಗಲೀ ಅಥವಾ ಹೊರಗಾಗಲೀ ಸಣ್ಣ ಪ್ರತಿರೋಧವೂ ಇಲ್ಲ. ನಿತೀಶ್ ಕುಮಾರ್ ‘ಅವಕಾಶವಾದಿ ರಾಜಕಾರಣಿ’ 2005ರಿಂದ ಅಧಿಕಾರದಲ್ಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹೀನಾಯವಾಗಿ ಸೋಲುಂಡಾಗ ಅಲ್ಪ ಕಾಲ ಕುರ್ಚಿ ಖಾಲಿ ಮಾಡಿದ್ದರು. ಅದು ಜನರ ಕಣ್ಣೊರೆಸಲು ಆಡಿದ್ದ ನಾಟಕ. ಅಧಿಕಾರದಲ್ಲಿ ಉಳಿಯಲು ಒಮ್ಮೆ ಮಹಾಘಟಬಂಧನ್, ಮತ್ತೊಮ್ಮೆ ಎನ್ಡಿಎ ಹೀಗೆ ಅತ್ತಿಂದಿತ್ತ, ಇತ್ತಿಂದತ್ತ ಜಿಗಿದಾಟ ಮಾಡಿದ್ದಾರೆ. ‘ಅದಕ್ಕೆ ಪಲ್ಟೂ ರಾಂ’ ಎಂದು ‘ಖ್ಯಾತಿ’ ಪಡೆದಿದ್ದಾರೆ. ಅತೀ ಬುದ್ಧಿವಂತಿಕೆ ಕೆಲವೊಮ್ಮೆ ಹೇಗೆ ಕೈಕೊಡುತ್ತದೆ ಎಂಬುದಕ್ಕೆ ನಿತೀಶ್ ಅವರ ರಾಜಕೀಯ ಬದುಕೇ ಸಾಕ್ಷಿ. ಬಿಹಾರ ವಿಧಾನಸಭೆಗೆ 2015ರಲ್ಲಿ ನಡೆದ ಚುನಾವಣೆ ಸಮೀಕ್ಷೆಗಾಗಿ ಒಂದು ತಿಂಗಳು ಅಲ್ಲಿ ಅಡ್ಡಾಡಿದ್ದೆ. ಕರ್ನಾಟಕ ಮತ್ತಿತರ ರಾಜ್ಯಗಳಿಂದ ನಿತೀಶ್ ಅವರ ಗೆಳೆಯರು, ಅಭಿಮಾನಿಗಳು ಮತ್ತು ಬೆಂಬಲಿಗರು ಬಂದಿದ್ದರು. ಆಳಂದ ಶಾಸಕ ಬಿ.ಆರ್. ಪಾಟೀಲರೂ ಇದ್ದರು. ಜೆಡಿಯು ಪರ ಪ್ರಚಾರ ಮಾಡಲು ಅವರೆಲ್ಲರೂ ಬಂದಿದ್ದರು. ಮೂಲತಃ ಲೋಹಿಯಾ ಹಾಗೂ ಜೆ.ಪಿ. ಚಳವಳಿಯಲ್ಲಿ ಬೆಳೆದಿದ್ದವರು. ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ನಿತೀಶ್ ಹೊಸ ರಾಜಕೀಯ ಶಕ್ತಿ ಕಟ್ಟಬಹುದೆಂಬ ಕನಸು ಅವರಿಗಿತ್ತು. ಪರ್ಯಾಯ ಶಕ್ತಿ ಹೋಗಲಿ, ಅವರದೇ ಪಕ್ಷ ಉಳಿಯುವುದು ಈಗ ಕಷ್ಟವಿದೆ. ‘ಕಾಂಗ್ರೆಸ್ ಮುಕ್ತ ಭಾರತ’ದ ಮಾತಾಡುತ್ತಿರುವ ಬಿಜೆಪಿ, ಪ್ರಾದೇಶಿಕ ಪಕ್ಷಗಳನ್ನೂ ನುಂಗುತ್ತಿದೆ. ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಈ ಅಪಾಯ ಅರ್ಥವಾಗುತ್ತಿಲ್ಲ! ಬಿಜೆಪಿ ಮಿತ್ರ ಪಕ್ಷಗಳಾಗಿದ್ದ ಪಂಜಾಬಿನ ಶಿರೋಮಣಿ ಅಕಾಲಿದಳ, ಒಡಿಶಾದ ಬಿಜು ಜನತಾ ದಳ, ಮಹಾರಾಷ್ಟ್ರದ ಶಿವಸೇನೆ (ಯುಬಿಟಿ) ಪಕ್ಷಗಳಿಗೆ ಬಂದಿರುವ ಸ್ಥಿತಿ ಮಿಕ್ಕ ಮಿತ್ರರಿಗೂ ಬರಬಹುದು. ತಮಿಳುನಾಡು ಮಿತ್ರ ಪಕ್ಷ ಎಐಎಡಿಎಂಕೆ, ಕರ್ನಾಟಕದ ಮಿತ್ರ ಪಕ್ಷ ಜೆಡಿಎಸ್ಗೆ ಇದೇ ಗತಿ ಬಂದರೆ ಅಚ್ಚರಿಯಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಕಥೆ ಮುಗಿದಿದೆ. ಅಲ್ಲಿ ಕಾಂಗ್ರೆಸ್ ಕುಟುಕುಟು ಜೀವ ಹಿಡಿದುಕೊಂಡಿದೆ. ಎಡ ಪಕ್ಷಗಳ ಜಾಗದಲ್ಲಿ ಬಿಜೆಪಿ ಕೂತಿದೆ. ತನ್ನ ಕಡು ವೈರಿ, ಮಮತಾ ಅವರ ಟಿಎಂಸಿ ಮುಗಿಸಲು ಯತ್ನ ನಡೆದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಒಡೆದು, ತಲೆ ಎತ್ತದಂತೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್ಪಿ ಪೂರ್ಣ ನೆಲ ಕಚ್ಚಿದೆ. ಇವುಗಳ ಸಾಲಿಗೀಗ ಜೆಡಿಯು ಸೇರುತ್ತಿದೆ. ನಿತೀಶ್ ನಿರ್ಗಮನದ ಬಳಿಕ ಅವರ ಪಕ್ಷದ ಭವಿಷ್ಯ ಏನಾಗುವುದೋ? ಅನಾರೋಗ್ಯ ಕಾರಣ ನಿತೀಶ್ ಅವರನ್ನು ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಪ್ರಚಾರ ಸಮಯದಲ್ಲಿ ಅವರು ಕೆಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲೇ ಸಮಕಾಲೀನರಾದ ಮೋದಿ ಅವರ ಕಾಲಿಗೆ ಬಿದ್ದಿದ್ದಾರೆ. ಇದು ಸಣ್ಣ ತುಣುಕಷ್ಟೆ. ಇನ್ನೂ ಹಲವು ಎಡವಟ್ಟುಗಳಿವೆ. ಈ ಕಾರಣ ಮುಂದಿಟ್ಟುಕೊಂಡು ರಾಜ್ಯಸಭೆಗೆ ಕಳಿಸಲಾಗುತ್ತಿದೆ. ನಿತೀಶ್ ಪದಚ್ಯುತಿಯ ಹಿಂದೆ ಅವರದೇ ಪಕ್ಷದ ಕೆಲ ಮುಖಂಡರ ಷಡ್ಯಂತ್ರವಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಬಿಹಾರ ಬಿಜೆಪಿ ಮುಖಂಡರೊಬ್ಬರು ನಿತೀಶ್ ಉತ್ತರಾಧಿಕಾರಿ ಆಗಲಿದ್ದಾರೆ. ಈಗಾಗಲೇ ಕೆಲವು ಹೆಸರು ಚಲಾವಣೆಯಲ್ಲಿವೆ. ಇದುವರೆಗೆ ಜೆಡಿಯು ಬೆಂಬಲದಿಂದ ಗೆಲ್ಲುತ್ತಿದ್ದ ಬಿಜೆಪಿ ನಂಬರ್ ಒನ್ ಪಕ್ಷ. ಮುಖ್ಯಮಂತ್ರಿ ಬದಲು, ಜೆಡಿಯುಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಜೆಡಿಯು ಪ್ರಾಥಮಿಕ ಸದಸ್ಯತ್ವ ಪಡೆದಿರುವ ನಿತೀಶ್ ಪುತ್ರ ನಿಶಾಂತ್ ಕುಮಾರ್ಗೆ ಈ ಹುದ್ದೆ ಸಿಗಲಿದೆ ಎಂಬ ಸುದ್ದಿ ಇದೆ. ತಂದೆಯ ರಾಜಕೀಯ ಪರಂಪರೆಯನ್ನು ಮಗ ಮುಂದುವರಿಸಲಿದ್ದಾರೆ. ಪ್ರಶ್ನೆ ಇರುವುದು ಅದಲ್ಲ, ಜೀವನದುದ್ದಕ್ಕೂ ಕುಟುಂಬ ರಾಜಕಾರಣ ವಿರೋಧಿಸಿಕೊಂಡು ಬಂದ ನಿತೀಶ್ ಈಗ ಕುಟುಂಬ ರಾಜಕಾರಣಕ್ಕೆ ಜೋತು ಬೀಳುತ್ತಿದ್ದಾರೆ. ನಿಜಕ್ಕೂ ಇದು ವಿಪರ್ಯಾಸ. ನಿತೀಶ್ ಕುಮಾರ್ ತಮ್ಮ ಮಗನಿಗೆ ಮುಖ್ಯಮಂತ್ರಿ ಸ್ಥಾನವನ್ನೇ ಕೇಳಬಹುದಿತ್ತು. ಅನುಭವ ಇಲ್ಲ ಎಂಬ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. ಹಾಗಿದ್ದರೆ, ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಗಿದ್ದವರು, ಆಗಿರುವವರಿಗೆಲ್ಲರಿಗೂ ಅನುಭವ ಇದೆಯೇ? ಅಷ್ಟೇ ಏಕೆ,. ಯಾವ ಅನುಭವ ಇಲ್ಲದ ಜಯ್ ಶಾ ಬಿಸಿಸಿಐ ಅಧ್ಯಕ್ಷರಾಗಿಲ್ಲವೇ? ಎಷ್ಟೋ ರಾಜಕಾರಣಿಗಳ ಮಕ್ಕಳು ಮುಖ್ಯಮಂತ್ರಿ ಹುದ್ದೆ ನಿಭಾಯಿಸಿಲ್ಲವೇ? ಅದೂ ಹೋಗಲಿ, ಮಗ ಮುಖ್ಯಮಂತ್ರಿ ಆಗುವುದು ಬೇಡ ಎನ್ನುವುದಾದರೆ, ತಮ್ಮ ಪಕ್ಷದ ಹಿರಿಯ ನಾಯಕರೊಬ್ಬರನ್ನು ಕೂರಿಸಬಹುದಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ಜಾಣ್ಮೆ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಒಂದೆಡೆ ಕಾಂಗ್ರೆಸ್ ಮತ್ತು ಆರ್ಜೆಡಿ ನೆಲ ಕಚ್ಚುವಂತೆ ಮಾಡಿದ್ದಾರೆ. ಇನ್ನೊಂದೆಡೆ ಜೆಡಿಯು ಮುಂದೆ ಹೋಗದಂತೆ ನೋಡಿಕೊಂಡಿದ್ದಾರೆ. ಸೀಟು ಹಂಚಿಕೆಯಲ್ಲಿ ಜೆಡಿಯುಗೆ ಹೆಚ್ಚಿನ ಮಹತ್ವ ನೀಡಿಲ್ಲ. ತನ್ನಷ್ಟೇ ಸೀಟು ಹಂಚಲಾಗಿತ್ತು. ಬಳಿಕ ಪ್ರಚಾರ ಸಭೆಗಳಲ್ಲಿ ದೋಸ್ತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ಅಪರೂಪ. ಪ್ರತೀ ಹಂತದಲ್ಲಿ ಮಾಧ್ಯಮದ ಜತೆ ನಿತೀಶ್ ಮಾತನಾಡದಂತೆ ಮಾಡಲಾಯಿತು. ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಇದು ಖಚಿತವಾಗಿತ್ತು ನಿತೀಶ್ ಅವರನ್ನು ‘ಮುಖ್ಯಮಂತ್ರಿ ಅಭ್ಯರ್ಥಿ’ಯಾಗಿ ಎನ್ಡಿಎ ಬಿಂಬಿಸಲಿಲ್ಲ. ‘ಶಾಸಕಾಂಗ ಸಭೆ’ಯಲ್ಲಿ ನಾಯಕನ ಆಯ್ಕೆ ನಡೆಯಲಿದೆ ಎಂದಿದ್ದರು ಶಾ. ‘ಚುನಾವಣೆಗೆ ನಿತೀಶ್ ನೇತೃತ್ವ’ ಎಂದು ಮೋದಿ ಹೇಳಿದ್ದರು. ಈ ಭಲೇ ಜೋಡಿಗೆ ಜೆಡಿಯು ಮುಖಂಡನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಇಷ್ಟವಿರಲಿಲ್ಲ. ಆದರೆ, ಉಭಯ ಪಕ್ಷಗಳ ಎರಡನೇ ಹಂತದ ಕೆಲ ನಾಯಕರು, ‘ನಿತೀಶ್ ಅವರೇ ಮುಖ್ಯಮಂತ್ರಿ’ ಎಂದು ಹೇಳಿ ಗೊಂದಲ ತಿಳಿಗೊಳಿಸಿದರು. ಕಾಕತಾಳೀಯವೆಂಬಂತೆ ಮುಖ್ಯಮಂತ್ರಿ ಆಯ್ಕೆಯೂ ವಿಳಂಬವಾಯಿತು. ಬಿಹಾರದಲ್ಲಿ ಬಿಜೆಪಿಗೆ ನಿತೀಶ್ ಅವರ ಬೆಂಬಲ ಅಗತ್ಯವಿತ್ತು. ಪರಿಣಾಮಕಾರಿಯಾಗಿ ಬಳಸಿಕೊಂಡರು. ಒಟ್ಟಾರೆ ಚುನಾವಣೆಯಲ್ಲಿ ಎನ್ಡಿಎಗಿದ್ದ ಅನುಕೂಲಗಳು ಆರ್ಜೆಡಿ ಮತ್ತು ಕಾಂಗ್ರೆಸ್ಗೆ ಇರಲಿಲ್ಲ. ಬಿಜೆಪಿಗೆ ಅನುಕೂಲವಾಗಿದ್ದೂ ನಿತೀಶ್ ಅವರ ಕಾರಣಕ್ಕೆ. ಜೆಡಿಯುಗೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದರು. ಅದಕ್ಕೆ ಅವರು ಕೈಗೊಂಡಿರುವ ಮಹಿಳಾ ಹಾಗೂ ಶಾಲಾ ಬಾಲಕಿಯರ ಪರವಾದ ಕಾರ್ಯಕ್ರಮಗಳು ಕಾರಣ. ಯಾದವರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ ಹಿಂದುಳಿದವರು, ಅತೀ ಹಿಂದುಳಿದವರು ಹಾಗೂ ಪಸ್ಮಂದ ಮುಸ್ಲಿಮರು ಜೆಡಿಯು ಪರವಾಗಿ ನಿಂತರು. ಬಿಜೆಪಿಯಿಂದಾಗಿ ಮೇಲ್ವರ್ಗದ ಮತಗಳು ಎನ್ಡಿಎ ಪಾಲಿಗೆ ಬಂದವು. ಚಿರಾಗ್ ಪಾಸ್ವಾನ್ ಮತ್ತಿತರರ ಕಾರಣಕ್ಕೆ ದಲಿತರು ಹಾಗೂ ಮಹಾ ದಲಿತರ ಮತಗಳೂ ಬಿದ್ದವು. ಜೆಡಿಯು ಮತ್ತು ಬಿಜೆಪಿ ನಡುವೆ ಸಮಾನವಾಗಿ ಟಿಕೆಟ್ಗಳು ಹಂಚಿಕೆಯಾದರೂ ಸೀಟುಗಳ ಗಳಿಕೆಯಲ್ಲಿ ನಿತೀಶ್ ಹಿಂದೆ ಬಿದ್ದರು. ಬಿಜೆಪಿ 89 ಸ್ಥಾನ ಸಿಕ್ಕಿತು. ಜೆಡಿಯುಗೆ ನಾಲ್ಕು ಸ್ಥಾನ ಕಡಿಮೆಯಾಯಿತು. ಮತ ಗಳಿಕೆಯಲ್ಲೂ ಬಿಜೆಪಿ ಮಿತ್ರ ಪಕ್ಷಕ್ಕಿಂತ ಕೊಂಚ ಮುಂದಿದೆ. ಬಿಜೆಪಿಗೆ ಶೇ 20.08ರಷ್ಟು ಮತಗಳು ಬಿದ್ದಿವೆ. ಜೆಡಿಯುಗೆ ಶೇ. 19.25ರಷ್ಟು ಮತಗಳು ಬಂದಿವೆ. ಮತ ಗಳಿಕೆಯಲ್ಲಿ ಆರ್ಜೆಡಿ ಎಲ್ಲ ಪಕ್ಷಗಳಿಗಿಂತ ಮುಂದಿದ್ದರೂ ಸೀಟುಗಳಾಗಿ ಪರಿವರ್ತನೆ ಆಗಿಲ್ಲ. ಕಾಂಗ್ರೆಸ್ ಮತಗಳು ಇದ್ದಷ್ಟೇ ಇದ್ದರೂ ನಿರೀಕ್ಷಿಸಿದಷ್ಟು ಸ್ಥಾನಗಳು ಸಿಕ್ಕಿಲ್ಲ. ಬಿಜೆಪಿ ನಾಯಕರ ಮುಂದೆ ಜೆಡಿಯು ನಾಯಕ ನಿತೀಶ್ ಮಂಡಿಯೂರಲು ಇವೆಲ್ಲ ಅಂಶಗಳು ಸೇರಿಕೊಂಡಿವೆ. ಬಿಹಾರ ಸಮಾಜವಾದಿ ಚಳವಳಿಯ ಪ್ರಯೋಗ ಶಾಲೆ. ಈ ಪ್ರಯೋಗ ಶಾಲೆಯಲ್ಲಿ ಬೆಳೆದು ಬಂದವರು ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಮತ್ತು ಜೆಡಿಯುನ ನಿತೀಶ್ ಕುಮಾರ್. ಲೋಹಿಯಾ ಅವರ ತತ್ವ ಮತ್ತು ಸಿದ್ಧಾಂತ ಅವರನ್ನು ಪ್ರಭಾವಿಸಿತ್ತು. ಕಾಂಗ್ರೆಸ್ 1990ರ ಸುಮಾರಿಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಲಾಲು ದರ್ಬಾರ್ ನಡೆಯುತಿತ್ತು. ಒಂದೂವರೆ ದಶಕದ ನಂತರ ನಿತೀಶ್ರ ಕಾರುಬಾರು. ಇದೀಗ ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದಾರೆ. ಬಿಜೆಪಿಗೆ ದಾರಿ ಬಿಡುತ್ತಿದ್ದಾರೆ. ಮೂರೂವರೆ ದಶಕಗಳ ಬಳಿಕ ಬಲಪಂಥೀಯ ಚಿಂತನೆಯ ಸರಕಾರವೊಂದು ರಾಜ್ಯದಲ್ಲಿ ತನ್ನ ಆಧಿಪತ್ಯ ಸ್ಥಾಪಿಸುತ್ತಿದೆ. ಜೆಡಿಯು ಪೂರ್ಣ ಬಿಜೆಪಿಯಲ್ಲಿ ವಿಲೀನವಾಗುವುದೇ ಅಥವಾ ಹೋಳಾಗುವುದೇ ಅಥವಾ ಅಸ್ತಿತ್ವ ಉಳಿಸಿಕೊಳ್ಳುವುದೇ?
Sullia | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ, ಮತ್ತೊಂದು ಪ್ರಕರಣ ದಾಖಲು
ಸುಳ್ಯ: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್. (24) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಕಲಂ 457 ಐಪಿಸಿ ರಲ್ಲಿ ಆರೋಪಿಗೆ ಆರು ತಿಂಗಳ ಸಾದ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿಯಲ್ಲಿ 10 ತಿಂಗಳ ಸಾದ ಸಜೆ ಹಾಗೂ 500 ದಂಡವನ್ನು ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 10 ದಿನಗಳ ಹೆಚ್ಚುವರಿ ಸಜೆ ನೀಡಿ ಆದೇಶಿಸಿದೆ. ಮುಂದುವರಿದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆರೋಪಿ ಶರತ್ ವಿರುದ್ಧ ಬಿಎನ್ ಎಸ್ ಕಲಂ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 1000 ರೂ. ದಂಡ ಅಥವಾ 10 ದಿನಗಳ ಕಾರಾಗೃಹ ವಾಸ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ತನಿಖಾಧಿಕಾರಿಗಳಾಗಿ ಎಸ್ಸೈ ಸಂತೋಷ ಬಿ.ಪಿ. ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರಾಗಿ ಪ್ರೀತಿ ಎಂ.ಸಿ. ವಾದ ಮಂಡಿಸಿದ್ದಾರೆ.
Gold and Silver Rate : ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಹಾದಿಯಲ್ಲಿ, ಇಂದಿನ ದರ ಹೀಗಿದೆ
ಚಿನ್ನ ಮತ್ತು ಬೆಳ್ಳಿ ಧಾರಣೆ ತುಸು ಇಳಿಕೆ ಹಾದಿಯಲ್ಲಿದ್ದು ಗ್ರಾಹಕರಿಗೆ ನೆಮ್ಮದಿ ತರುವ ವಿಚಾರ ಇದಾಗಿದೆ. ಈಗ ಶುಭ ಸಮಾರಂಭಗಳ ಸೀಸನ್ ಶುರುವಾಗಲಿದ್ದು, ಚಿನ್ನ ಬೆಳ್ಳಿ ಖರೀದಿಗೆ ಸಕಾಲವಾಗಿದೆ. ಬೆಲೆಯೂ ತುಸು ಇಳಿದಿರುವುದರಿಂದ ನಿರಾಳವಾಗಿದೆ ಎನ್ನಬಹುದು. ಇಂದಿನ ದರ ಹೇಗಿದೆ? ಇಲ್ಲಿದೆ ಮಾಹಿತಿ.
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ
Gold Rate March 12: ಯುದ್ಧದ ಕಾರ್ಮೋಡದ ನಡುವೆಯೇ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಚಿನ್ನದ ಬೆಲೆಯು ಮಾರ್ಚ್ 12ರ ಗುರುವಾರ 10,900 ರೂ. ಇಳಿಕೆಯಾಗಿದೆ. ಮಾರ್ಚ್ 12ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ
Bantwal | ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಭಗವಾಧ್ವಜ ಧ್ವಜ ಹಿಡಿದ ಭಾರತ ಮಾತೆಗೆ ಡಿಎಚ್ಒ ಪುಷ್ಪಾರ್ಚನೆ
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
Belthangady : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ದೂರುದಾರ ಆತ್ಮಹತ್ಯೆಗೆ ಯತ್ನ
ಬೆಳ್ತಂಗಡಿ : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್ಐಟಿ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ ದೂರುದಾರ ಹಾಗೂ ಪ್ರಮುಖ ಸಾಕ್ಷಿಯಾಗಿರುವ ಹರೀಶ್ ಮುಗೇರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ 2022ರ ಡಿಸೆಂಬರ್ 18ರಂದು ನಡೆದ ಶ್ರೀಧರ(30) ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಹರೀಶ್ ಬಿ. ಮುಗೇರ ಕಳೆದ (ಮಾ.11ರಂದು) ರಾತ್ರಿ ಶಿಬಾಜೆಯ ಸಾರಾ ಫಾರ್ಮ್ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಅವರ ಜೊತೆಗೆ ಇದ್ದವರು ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀಧರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ಮಾ.3 ರಂದು ವಿಚಾರಣೆಗಾಗಿ ನೋಟಿಸ್ ನೀಡಿ ಹರೀಶ್ ರನ್ನು ಕರೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದರು. ಈ ಮಧ್ಯೆ ಹರೀಶ್ ಆತ್ಮಹತ್ಯೆಗೆ ಯತ್ನಿಸದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
UDUPI | ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ
ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಚೊಂಬು ತಲೆಗೆ ಸಿಲುಕಿಕೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ಇಂದು ನಡೆದಿದೆ. ಪರಿಸರದಲ್ಲಿ ಚೊಂಬು ತಲೆಗೆ ಹಾಕಿಕೊಂಡು ಒದ್ದಾಡುತ್ತಿದ್ದ ಮಂಗವನ್ನು ಸ್ಥಳಿಯ ಸಮಾಜ ಸೇವಕರು ಮತ್ತು ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲ್, ಸುಕೇಶ್, ಹರೀಶ ರಾಮ ಮತ್ತು ವಿಶ್ವನಾಥ ಎಂಬವರು ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಕೋತಿಯನ್ನು ಹಗ್ಗ ಕಟ್ಟಿ ಹಿಡಿದು, ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರಕ್ಕೆ ಕೊಂಡೊಯ್ದಿದ್ದಾರೆ. ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ನಾಜೂಕಾಗಿ ಚೊಂಬನ್ನು ತಲೆಯಿಂದ ಬೇರ್ಪಡಿಸಿದ್ದಾರೆ. ಚೊಂಬು ತೆಗೆದ ತಕ್ಷಣ ಬದುಕಿದೆಯೋ ಬಡ ಜೀವ ಎಂಬಂತೆ ಕೋತಿ ಜಿಗಿದು ಓಡಿ ಪರಾರಿಯಾಗಿದೆ. ಸ್ಥಳೀಯ ಯುವಕರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇರಾಕ್ ಬಳಿ US ತೈಲ ಟ್ಯಾಂಕರ್ ʼಸೇಫ್ ಸಿ ವಿಷ್ಣುʼ ಮೇಲೆ ಇರಾನ್ ಸೂಸೈಡ್ ಬೋಟ್ ದಾಳಿ: ಓರ್ವ ಭಾರತೀಯ ಪ್ರಜೆ ಸಾವು!
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಇರಾನ್ ಹೊರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ. ಈ ನಡುವೆ ಇರಾಕ್ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್ ಸಿ ವಿಷ್ಣು ಎಂಬ ತೈಲ ಟ್ಯಾಂಕರ್ ಮೇಲೆ ಸೂಸೈಡ್ ದೋಣಿಯ ಮೂಲಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಟ್ಯಾಂಕರ್ ನಲ್ಲಿದ್ದ ಭಾರತೀಯ ಪ್ರಜೆಯೊಬ್ಬ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇನ್ನು, ಈ ದಾಳಿಯ ತೀವ್ರತೆಗೆ ಸಂಪೂರ್ಣ ಹಡಗು ಧ್ವಂಸವಾಗಿದ್ದು, ಬೆಂಕಿ ಕೆನ್ನಾಲಿಗೆ ಆಗಸದೆತ್ತರಕ್ಕೆ ಚಿಮ್ಮುತ್ತಿರುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾರತ - ಗಲ್ಫ್ ವಿಮಾನ ಮಾರ್ಗ: ’ಹಾಲಿಗೆ ಹುಳಿಬಿದ್ದರೂ, ಹುಳಿಗೆ ಹಾಲು ಬಿದ್ದರೂ, ಕೆಡುವುದು ಹಾಲೇ’
India Gulf Aerial Routes : ಮಧ್ಯಪ್ರಾಚ್ಯ ವಲಯದಲ್ಲಿನ ಅಶಾಂತಿ, ಉದ್ವಿಗ್ನತೆ ಮತ್ತು ಸಂಘರ್ಷಗಳು ಭಾರತ ಗಲ್ಫ್ ದೇಶಗಳ ನಡುವಿನ ವಿಮಾನಯಾನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತಿದೆ. ಈ ಭಾಗದ ವಾಯುಪ್ರದೇಶಗಳನ್ನು ಬಳಸಿಕೊಳ್ಳಲು ಆಯಾಯ ದೇಶಗಳು ನಿರ್ಬಂಧಿಸಿರುವ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ.
ಕಾವೇರಿ ಊರಲ್ಲೇ ಜಲದಾಹ ; ಖಾಸಗಿ ಬೋರ್ವೆಲ್ ವಶಕ್ಕೆ ಪಡೆದು ನೀರು ಪೂರೈಸಲು ಸಿದ್ಧತೆ
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಕುಡಿಯುವ ನೀರಿಗಾಗಿ ಬಹುತೇಕ ಅವಲಂಬಿಸಿರುವ ಕೆಆರ್ಎಸ್ ಜಲಾಶಯದ(ಕನ್ನಂಬಾಡಿಕಟ್ಟೆ) ನೀರಿನ ಮಟ್ಟ 111.58 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿಗಳು ಎತ್ತರದ, 49.452ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 33.341 ಟಿಎಂಸಿ ಅಡಿ ನೀಡಿದೆ. ಇದರಲ್ಲಿ24.962 ಟಿಎಂಸಿ ಅಡಿ ನೀರಷ್ಟೇ ಬಳಕೆ ಲಭ್ಯವಿದೆ.
ಈಗ ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಬಿಸಿ ಭಾರತಕ್ಕೂ ಮುಟ್ಟಿದೆ. ತೈಲ ಸರಬರಾಜು ಕ್ಷೀಣಿಸಿದೆ. ಭಾರತದ ಅಗತ್ಯಗಳ ಶೇ. 40 ಪೂರೈಸುತ್ತಿದ್ದ ಖತರ್ ತುರ್ತುಪರಿಸ್ಥಿತಿಯ ಕಾರಣದಿಂದ ಭಾರತಕ್ಕೆ ಅಂತಲ್ಲ ವಿಶ್ವದ ಅನೇಕ ದೇಶಗಳಿಗೆ ಮಾಡುತ್ತಿದ್ದ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಬಹರೈನ್ ಕೂಡಾ ಪೂರೈಕೆಯನ್ನು ನಿಲ್ಲಿಸಿದೆ. ನಮ್ಮಲ್ಲಿ ಸರಕಾರ ಎಷ್ಟೇ ಬಾಯಿ ಬಡಾಯಿ ಕೊಚ್ಚಿಕೊಂಡರೂ ವಾಸ್ತವ ಬೇರೆಯೇ ಕತೆಯನ್ನು ಹೆಳುತ್ತಿದೆ. ಯುದ್ಧ ನಿಲ್ಲದಿದ್ದರೆ ಮುಂದಣ ದಿನಗಳು ಭೀಕರವಾಗಲಿವೆ. ಇರಾನಿನ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲವೆಂಬುದು ಈಗ ಜಗಜ್ಜಾಹೀರಾಗಿದೆ. ಹಲವು ವಾರಗಳಿಂದ ಕೊತಕೊತ ಕುದಿಯುತ್ತಿದ್ದ ಶೀತಲ ಸಮರದ ಬಳಿಕ ಇಂತಹ ಒಂದು ಹಸ್ತಕ್ಷೇಪ ನಡೆಯುತ್ತದೆಯೆಂಬುದನ್ನು ವಿವೇಕಿಗಳು, ಪ್ರಾಜ್ಞರು ಊಹಿಸಿದ್ದರು. ಇದರ ನಡುವೆಯೂ ಭಾರತದ ಪ್ರಧಾನಿ ಇಸ್ರೇಲ್ಗೆ ಐತಿಹಾಸಿಕ ಭೇಟಿ ನೀಡಿ ತಮ್ಮ ಎಂದಿನ ವರಸೆಯಲ್ಲಿ (ಅಂದರೆ ಅಬ್ ಕೀ ಬಾರ್.. ಟ್ರಂಪ್ ಸರಕಾರ್.. ಎಂಬ ಹಾಗೆ) ಇಸ್ರೇಲ್ನೊಂದಿಗೆ ಭಾರತ ಎಂಬ ತಮ್ಮ ಪಲ್ಲವಿಯನ್ನು ಹಾಡಿದ್ದರು. ಈಗ ಯುದ್ಧ ಮುಂದುವರಿದಿದೆ. ಇದಿನ್ನೂ ಮೂರನೇ ವಿಶ್ವ ಸಮರದ ಅಧಿಕೃತ ಮುನ್ನುಡಿಯಾಗಿಲ್ಲ. ಆದರೆ ಮಧ್ಯಪೂರ್ವವೆಂದು ಹಿಂದೆ ಕರೆಸಿಕೊಳ್ಳುತ್ತಿದ್ದ ಈಗ ಪಶ್ಚಿಮ ಏಶ್ಯವೆಂದು ಕರೆಯಲ್ಪಡುವ ಭೂಭಾಗದ ಈ ಬೆಂಕಿ ವಿಶ್ವಾದ್ಯಂತ ಹಬ್ಬಿದೆ. ಪ್ರಾಯಃ ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಜಪಾನ್ ಮತ್ತು ಮ್ಯಾನ್ಮಾರ್ನ ಪೂರ್ವಕ್ಕಿರುವ ಮತ್ತು ದಕ್ಷಿಣ ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳಿಗೆ ತಲುಪಿದಂತಿಲ್ಲ. ಸಕಾರಣ ವಿಶೇಷವೆಂದರೆ ಅಮೆರಿಕದ ಬದ್ಧ ಎದುರಾಳಿಗಳಂತಿರುವ ಎರಡು ಮಹಾನ್ ಶಕ್ತಿಗಳಾದ ರಶ್ಯ ಮತ್ತು ಚೀನಾ ಇನ್ನೂ ಈ ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲು ಮುಂದೆ ಬಂದಿಲ್ಲ. ಪುಟ್ಟ ರಾಷ್ಟ್ರವಾದರೂ ರಶ್ಯ, ಚೀನಾಗಳಂತೆ ಅಮೆರಿಕದ ವಿರುದ್ಧ ಧೋರಣೆಯನ್ನು ಹೊಂದಿರುವ ಉತ್ತರ ಕೊರಿಯಾ ಬೆದರಿಕೆಯ ಮಾತುಗಳನ್ನಾಡಿದರೂ ತನ್ನ ಅಣುಶಕ್ತಿಯನ್ನು ತೆರೆದಿಲ್ಲ. ಅಮೆರಿಕದ ಹೆಡೆಯಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕ್ಯೂಬಾ ಯಾವಾಗ ಬೇಕಾದರೂ ವೆನೆಝುುವೆಲಾದಂತೆ ಅಮೆರಿಕದ ತುತ್ತಾಗಬಹುದೆಂದು ನಿರೀಕ್ಷಿಸಿದರೂ ಹಾಗಾಗದಿರುವುದು ವಿಶ್ವವಿದ್ಯಮಾನಗಳ ಒಂದು ಅಚ್ಚರಿಯೇ ಸರಿ. ಬ್ರಿಟಿಷರು ಬಿಟ್ಟು ಹೋದ ವಸಾಹತುಶಾಹಿ ವಿಕೃತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನವು ಕೈಗೆತ್ತಿಕೊಂಡಿರುವುದು ಈಗ ಹಲವು ದಶಕಗಳ ಕಥೆ. ಅಮೆರಿಕ ಇಂದು ಜಗತ್ತಿನ ಒಂದು ದೈತ್ಯ ಶಕ್ತಿ. ಭಾರತದಂತಹ (ಬಡ ಎನ್ನುವುದಕ್ಕೆ ಅಭಿವೃದ್ಧಿಶೀಲ ಎಂದು ಹೆಸರಿಸಲಾಗಿದೆ!) ದೇಶಗಳ ಕನಸಿನ ಸ್ವರ್ಗ. ಅಮೆರಿಕ ತನ್ನದೇ ಆದ ನಿರುದ್ಯೋಗ, ಬೆಲೆಯೇರಿಕೆ ಮುಂತಾದ ಸಮಸ್ಯೆಗಳಲ್ಲಿ ಮುಳುಗಿದರೂ ಅದನ್ನೆಲ್ಲ ಮೀರಿಸಿಯೋ, ದಾಟಿಯೋ ಜಗತ್ತಿನ ಎಲ್ಲ ದೇಶಗಳ ವ್ಯವಹಾರದಲ್ಲಿ ಸಕ್ರಿಯ ಮತ್ತು ಪರಿಣಾಮಕಾರೀ ಪಾತ್ರವನ್ನು ನಿರ್ವಹಿಸುತ್ತಿದೆ. ಅನೇಕ ಪುಟ್ಟ ದೇಶಗಳ ಆಳ್ವಿಕೆಯನ್ನು ಕೊನೆಗೊಳಿಸುವುದು, ಬದಲಾಯಿಸುವುದು ಮುಂತಾದ ಅನಿಷ್ಟ ಪರಂಪರೆಯನ್ನು ಹಿಂದೆ ಸೋವಿಯೆತ್ ಒಕ್ಕೂಟವೂ ನಡೆಸಿತ್ತು. ಆದರೆ ಈಗ ಇದು ಅಮೆರಿಕದ ಏಕಸ್ವಾಮ್ಯವೆಂಬಂತಿದೆ. ಒಂದೆಡೆ ಇಂದಿನ ಜಗತ್ತು ಆರ್ಥಿಕತೆಯ ಮೇಲೆ ನಿಂತಿದೆಯೆಂದೆನ್ನಿಸಿದರೂ ಅದು ನಿಜವಾಗಿ ಶಸ್ತ್ರಾಸ್ತ್ರ ಮತ್ತು ಕೈಗಾರಿಕೆಗಳ ಆಧಾರದಲ್ಲೇ ಮುನ್ನಡೆಯುತ್ತಿದೆ. ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಪ್ರಚಾರವಾಗಿದೆಯಾದರೂ ಅದು ಬಾಹ್ಯಶಕ್ತಿಗಳನ್ನು ಎಷ್ಟು ಅವಲಂಬಿಸಿದೆಯೆಂದು ಗೊತ್ತಾಗುವುದು ಅದರ ನಿಲುವಿನಲ್ಲಿಯೇ. ಬಹಳ ದಶಕಗಳಿಂದ ಭಾರತವು ಆರ್ಥಿಕವಾಗಿ ಸ್ವಾವಲಂಬಿಯಾಗುವ ಮುನ್ನವೂ ವಿಶ್ವಗೌರವವನ್ನು ಗಳಿಸಿದ್ದರೆ ಅದಕ್ಕೆ ಕಾರಣ ಅದರ ಅಲಿಪ್ತ ನೀತಿ. ಯಾವ ಗುಂಪಿಗೂ ಸೇರದೆ ತನ್ನ ಹಿತವನ್ನು ಭಾರತವು ಗಳಿಸಿಕೊಂಡಿತ್ತು. ಅಮೆರಿಕ ಮತ್ತು ರಶ್ಯಗಳಿಂದ ಸಮಾನ ಅಂತರವನ್ನು ಕಾಪಾಡಿಕೊಂಡಿತ್ತು. ಇನ್ನೊಂದು ದೇಶದ ಆಂತರಿಕ ರಾಜಕೀಯದಲ್ಲಿ ಭಾರತ 1971ರ ಬಾಂಗ್ಲಾ ಯುದ್ಧದ ವರೆಗೂ ಹಸ್ತಕ್ಷೇಪವನ್ನು ಮಾಡಿರಲಿಲ್ಲ. ಆಗಲೂ ಭಾರತವು ಇದು ತನಗೆ ಅನಿವಾರ್ಯವೆಂದು ಜಾಗತಿಕ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳಲು ಯಶಸ್ವಿಯಾಯಿತು. ಆನಂತರ ಭಾರತಕ್ಕೆ ಅಂತಹ ಸಂದರ್ಭವೇ ಬರಲಿಲ್ಲ. ಭಾರತ-ಪಾಕಿಸ್ತಾನ ಕಲಹಗಳು ಸತತವಾಗಿ ನಡೆದರೂ ಅದು ಉಭಯತರ ಅಸ್ತಿತ್ವಕ್ಕೆ ಧಕ್ಕೆ ತರಲಿಲ್ಲ. ಭಾರತವನ್ನು ಹಾಡಿ ಹೊಗಳುವ ವಿಶ್ವದ ಹಿರಿಯ ದೇಶಗಳು ತೀರ ಗಂಭೀರ ಚಿಂತನೆಗಳಲ್ಲಿ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣಿಸುವುದಿಲ್ಲ. ಭಾರತವು ತನ್ನಷ್ಟಕ್ಕೆ ತಾನೇ ವಿಶ್ವಗುರುವೆಂದು ಬಡಾಯಿ ಕೊಚ್ಚಿಕೊಂಡರೂ ಮತ್ತು ನಿವೃತ್ತರಾಗುವ ಅಧಿಕಾರಿ ಸ್ವೀಕರಿಸುವಂತೆ ಪ್ರಶಂಸೆಯನ್ನು ಪಡೆದರೂ ಅದು ಪ್ರತ್ಯಕ್ಷವಾಗಿ ಮೂರ್ತವಾಗಿ ಕಂಡುಬರುವುದಿಲ್ಲ. ಈಚೆಗೆ ರಶ್ಯ-ಉಕ್ರೇನ್ ನಡುವಣ ಯುದ್ಧದಲ್ಲಿ ವಿಶ್ವಸಂಸ್ಥೆಯು ಅಕ್ಷರಶಃ ವಿಫಲವಾಯಿತು. ಅಲ್ಲಿ ನಡೆದ ಅನೇಕ ನಡವಳಿಕೆಗಳು ಪ್ರಹಸನದಂತೆ ನಡೆಯುತ್ತಿವೆ. ಯಾವುದೇ ಗಂಭೀರ ಮತ್ತು ಆಗಬೇಕಾದ ಕ್ರಮದಲ್ಲಿ ಅದರ ಶಾಶ್ವತ ಸದಸ್ಯರುಗಳಲ್ಲಿ ಯಾರಾದರೊಬ್ಬರು ವಿಟೋ ಜಾರಿಗೊಳಿಸಿ ವಿಫಲಗೊಳಿಸುತ್ತಿದ್ದಾರೆ. ಅದರ ಅನೇಕ ಅಂಗಸಂಸ್ಥೆಗಳು ಪ್ರಬಲ ದೇಶಗಳ ಸಹಾಯ ಮತ್ತು ಭಾಗವಹಿಸುವಿಕೆ ಅಷ್ಟೇ ಅಲ್ಲ ಸಹಕಾರದ ಹೊರತಾಗಿ ಮೊಳೆಯವು. ಪುಟಿನ್ ವಿರುದ್ಧದ ದಸ್ತಗಿರಿ ವಾರಂಟ್ ಕಾಗದದಲ್ಲೇ ಉಳಿದಿದೆ. ಗಾಝಾದಲ್ಲಿ ನಡೆದ ಇಸ್ರೇಸ್ನ ದುಂಡಾವರ್ತನೆಯನ್ನು ಜಗತ್ತು ಒಕ್ಕೊರಲಿನಲ್ಲಿ ಖಂಡಿಸಿತಾದರೂ ಇಸ್ರೇಲ್ ನಡೆಸಿದ ನರಮೇಧವನ್ನು ತಡೆಯಲಾರದಾಯಿತು. ವಿಶ್ವಸಂಸ್ಥೆಯು ಇಸ್ರೇಲ್ನ ವಿರುದ್ಧ ಕಠಿನ ನಿಲುವನ್ನು ತಳೆಯಿತಾದರೂ ಅದು ಮಾತಿಗೇ ಸೀಮಿತವಾಯಿತು. ಅಂತರ್ರಾಷ್ಟ್ರೀಯ ನ್ಯಾಯಾಲಯವು ನೆತನ್ಯಾಹುವಿನ ವಿರುದ್ಧ ನೀಡಿದ ಆದೇಶವೂ ಕಾಗದದಲ್ಲೇ ಉಳಿಯಿತು. ಅಮೆರಿಕವು ಇಸ್ರೇಲನ್ನು ದತ್ತು ತೆಗೆದುಕೊಂಡಂತೆ ಫೆಲೆಸ್ತೀನ್ ವಿವಾದದಲ್ಲಿ ವರ್ತಿಸಿದ್ದರಿಂದ ಇತರ ದೇಶಗಳು-ಭಾರತವೂ ಸೇರಿದಂತೆ-ಮೌನವಾದವು. ಮನುಕುಲದ ಒಂದು ಭಾರೀ ದುರಂತಕ್ಕೆ ಸಾಕ್ಷಿಯಾದವು. ಇತ್ತೀಚೆಗಿನ ಅಂತರ್ರಾಷ್ಟ್ರೀಯ ವಿವಾದಗಳ ಸಂದರ್ಭದಲ್ಲಿ ಅನೇಕ ದೇಶಗಳು ಪ್ರಾಯಃ ಭಾರತದ ಜಾಗತಿಕ ಪ್ರಚಾರವೈಖರಿಯನ್ನು ಗಮನಿಸಿ-ಭಾರತದತ್ತ ಮುಖಮಾಡಿದವು. ಆದರೆ ಎಲ್ಲ ವಿವಾದಗಳ ಪಕ್ಷಕಾರದೇಶಗಳು ಅವೆರಡೂ ದೇಶಗಳು ತಮಗನ್ನಿಸಿದಂತೆ ಮುನ್ನಡೆದವು. ಗಾಝಾ ಇರಲಿ, ಉಕ್ರೇನ್ ಇರಲಿ, ಕೊನೆಗೂ ಅಮೆರಿಕ ದೇಶವು ಒಂದಿಷ್ಟು ನಿಯಂತ್ರಣ ಹೊಂದಿದಂತೆ ಭಾಸವಾದರೂ ಅದು ಕೂಡಾ ನಿರೀಕ್ಷಿತ ಫಲಿತಾಂಶವನ್ನು ಕಾಣಲಿಲ್ಲ; ಪರಿಣಾಮವನ್ನೂ ಬೀರಲಿಲ್ಲ. ಅಮೆರಿಕದ ಅಧ್ಯಕ್ಷರು ಪದೇ ಪದೇ ತಾನು ಅಲ್ಲಿನ ಯುದ್ಧವನ್ನು ನಿಲ್ಲಿಸಿದೆನೆಂದು ಹೇಳಿಕೊಂಡರೂ ಅದಿನ್ನೂ ಅಮಾನವೀಯವಾಗಿ ಮುಂದುವರಿಯುತ್ತಲೇ ಇದೆ. ಜೊತೆಗೆ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷವನ್ನೂ ತಾನು ನಿಲ್ಲಿಸಿದೆನೆಂದು ಹೇಳಿದರೂ ಭಾರತ-ಪಾಕಿಸ್ತಾನಗಳ ನಡವಳಿಕೆಯನ್ನು ಗಮನಿಸಿದರೆ ಅದು ಮೇಲ್ನೋಟಕ್ಕೆ ಇರಬಹುದೆಂದು ಅನ್ನಿಸುತ್ತದೆ ಆದರೆ ವಾಸ್ತವ ನೆಲೆಯಲ್ಲಿ ಅಂಕಿ-ಅಂಶಗಳ ಅಭಾವದಲ್ಲಿ ಅದೆಷ್ಟರ ಮಟ್ಟಿನ ಸತ್ಯವೆಂದು ಹೇಳಲಾಗದು. ಇಂತಹ ಹತ್ತಾರು ಉದಾಹರಣೆಗಳು ಅಮೆರಿಕದ ಇತ್ತೀಚೆಗಿನ ಜಾಗತಿಕ ರಾಜನೀತಿಯಲ್ಲಿ ಕಾಣಿಸುತ್ತವೆ. ಭಾರತವು ಇರಾನ್ನೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿತ್ತು. ಈ ಸಂದರ್ಭದಲ್ಲಿ ಭಾರತವು 370 ಕೋಟಿ ಡಾಲರ್ ಬಂಡವಾಳ ಹಾಕಿದ ಹತ್ತು ವರ್ಷಗಳ ಚಾಬಹಾರ್ ಬಂದರಿನ ಒಪ್ಪಂದ ಜಾರಿಯಲ್ಲಿತ್ತು. ಇದರಲ್ಲಿ 120 ಕೋಟಿ ಡಾಲರ್ ಬಂದರಿನ ಮೂಲಭೂತ ಅವಶ್ಯಕತೆಗಳಿಗೂ ಉಳಿದ ಮೊತ್ತವು ಭಾರತಕ್ಕೆ ಬಹಳ ಅಗತ್ಯವಿದ್ದ ಅಂದರೆ ಅಫ್ಘಾನಿಸ್ತಾನ, ಪಾಕಿಸ್ತಾನಗಳನ್ನು ಸಂಪರ್ಕಿಸದೆ ಇರಾನ್ನ ಮೂಲಕ ಭಾರತಕ್ಕೆ ಸರಕು ಸಾಗಣೆಯಾಗುವ ಅನುಕೂಲದ ವ್ಯವಸ್ಥೆಗೂ ಆಗಿತ್ತು. (ಇದರ ಇತರ ವಿವರಗಳು ಇಲ್ಲಿ ಅಪ್ರಸ್ತುತ.) ಇರಾನ್ನಂತಹ ದೇಶ ಭಾರತಕ್ಕೆ ಬಹುಕಾಲದಿಂದ ಸ್ನೇಹಿತನಾದರೂ ಅಮೆರಿಕ-ಇಸ್ರೇಲ್ ಯುದ್ಧ ಅಥವಾ ದಾಳಿಯ ತಯಾರಿಯಲ್ಲಿರುವಾಗ ನಮ್ಮ ಪ್ರಧಾನಿ ಇಸ್ರೇಲ್ಗೆ ಹೋಗಿ ಅಪೂರ್ವ ಸಖ್ಯ ಬೆಳೆಸಿ ಬಂದರು. ಭಾರತದೊಳಗೇ ಇಸ್ರೇಲ್ನ ಕುರಿತು ಸಾಕಷ್ಟು ಅಸಮಾಧಾನವಿರುವಾಗಲೇ ಮತ್ತು ಬಹುಕಾಲದಿಂದ ಇರಾನ್ನೊಂದಿಗೆ ಈ ಒಳ್ಳೆಯ ಸಂಬಂಧವನ್ನು ಹೊಂದಿರುವಾಗಲೇ ನಮ್ಮ ಪ್ರಧಾನಿ ಅನಾಮತ್ತಾಗಿ ನಾವು 140 ಕೋಟಿ ಭಾರತೀಯರು ಇಸ್ರೇಲ್ನೊಂದಿಗಿದ್ದೇವೆ ಎಂದರು. ಅವರಿನ್ನೂ ಭಾರತಕ್ಕೆ ಬಂದು ಉಡುಪು ಬದಲಾಯಿಸಿಕೊಳ್ಳುವ ಮೊದಲೇ ಅಮೆರಿಕ ಮತ್ತು ಇಸ್ರೇಲ್ ಇರಾನ್ನ ಮೇಲೆ ದಾಳಿ ನಡೆಸಿದವು. ಅಷ್ಟೇ ಅಲ್ಲ, ಏನಾಯಿತೆಂದು ಗೊತ್ತಾಗುವ ಹೊತ್ತಿಗೆ ಇಸ್ರೇಲ್ನ ಧಾರ್ಮಿಕ ನಾಯಕ ಖಾಮಿನೈಯವರನ್ನು ಹತ್ಯೆಮಾಡಿದರು. ಈ ಹತ್ಯೆಯನ್ನು ಖಂಡಿಸಲು ಭಾರತ ಮನಸ್ಸು ಮಾಡಲಿಲ್ಲ. ವಿಚ್ಛೇದಗೊಂಡ ಸಂಗಾತಿಯ ಸಾವು ಮಾಜಿ ಜೊತೆಗಾರನಿಗೂ ನೋವು ತರುತ್ತದೆ. ಆದರೆ ಭಾರತವು ಅಮೆರಿಕದ ಭಯವೋ ಇಸ್ರೇಲ್ನೊಂದಿಗಿನ ಹೊಸ ನಿಗೂಢ ಬಾಂಧವ್ಯವೋ ಇರಾನನ್ನು ಮತ್ತು ಅಲ್ಲಿ ಹೂಡಿದ ಬಂಡವಾಳವನ್ನು ಮರೆತೇಬಿಟ್ಟಿತು. ಈಗ ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಬಿಸಿ ಭಾರತಕ್ಕೂ ಮುಟ್ಟಿದೆ. ತೈಲ ಸರಬರಾಜು ಕ್ಷೀಣಿಸಿದೆ. ಭಾರತದ ಅಗತ್ಯಗಳ ಶೇ. 40 ಪೂರೈಸುತ್ತಿದ್ದ ಖತರ್ ತುರ್ತುಪರಿಸ್ಥಿತಿಯ ಕಾರಣದಿಂದ ಭಾರತಕ್ಕೆ ಅಂತಲ್ಲ ವಿಶ್ವದ ಅನೇಕ ದೇಶಗಳಿಗೆ ಮಾಡುತ್ತಿದ್ದ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಬಹರೈನ್ ಕೂಡಾ ಪೂರೈಕೆಯನ್ನು ನಿಲ್ಲಿಸಿದೆ. ನಮ್ಮಲ್ಲಿ ಸರಕಾರ ಎಷ್ಟೇ ಬಾಯಿ ಬಡಾಯಿ ಕೊಚ್ಚಿಕೊಂಡರೂ ವಾಸ್ತವ ಬೇರೆಯೇ ಕತೆಯನ್ನು ಹೆಳುತ್ತಿದೆ. ಯುದ್ಧ ನಿಲ್ಲದಿದ್ದರೆ ಮುಂದಣ ದಿನಗಳು ಭೀಕರವಾಗಲಿವೆ. ಇರಾನ್ ಮತ್ತು ಪಶ್ಚಿಮ ಏಶ್ಯದ ಅರಬ್ ದೇಶಗಳ ನಡುವೆ ಯಾವ ವೈರವೂ ಇಲ್ಲ; ಸ್ಪರ್ಧೆಯೂ ಇಲ್ಲ. ಇರಾನ್ ಪರ್ಶಿಯಾ ಮೂಲದ ದೇಶವಾದರೆ ಇವೆಲ್ಲ ಅರಬ್ ಮೂಲದ ದೇಶಗಳು. ಇರಾನ್ ಧಾರ್ಮಿಕ ಮೂಲಭೂತವಾದವನ್ನು ನಡೆಸಿಯೂ ಅಭಿವೃದ್ಧಿಹೊಂದಿದೆ. ಅಣುಶಕ್ತಿಯನ್ನೂ ಪಡೆದಿದೆ. ರಶ್ಯ-ಚೀನಾಗಳೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದೆ. ಈ ಯುದ್ಧದ ವ್ಯಂಗ್ಯವೆಂದರೆ ಇರಾನ್ ಒಂದೆಡೆ ಏಕಾಂಗಿಯಾಗಿ ಅಮೆರಿಕ ಮತ್ತು ಇಸ್ರೇಲ್ನ ವಿರುದ್ಧವೆಂಬಂತೆ ಹೋರಾಡುತ್ತಿದ್ದರೆ ಇಸ್ರೆಲಿನೊಂದಿಗೆ ನಷ್ಟವನ್ನು ಅನುಭವಿಸುತ್ತಿರುವುದು ಪಶ್ಚಿಮ ಏಶ್ಯದ ಅರಬ್ ದೇಶಗಳು. ಈ ದೇಶಗಳು ಇನ್ನೂ ಪ್ರತಿಕ್ರಿಯಿಸದೇ ಇರುವುದು ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣಿಸಿದರೂ ಅದೊಂದು ಗಹನವಾದ ರಾಜಕಾರಣ. ಎಲ್ಲರಿಗೂ ಗೊತ್ತಿರುವಂತೆ ಈ ಅರಬ್ ದೇಶಗಳು ಅಮೆರಿಕದ ಜೊತೆ ಬಹಳ ನಿಕಟ ಸಂಬಂಧ ಹೊಂದಿ ಅಲ್ಲಿನ ವಾಯು/ಸೇನಾ/ನೌಕಾನೆಲೆಗಳಿಗೆ ತಮ್ಮ ಜಾಗವನ್ನು ನೀಡಿದ್ದವು. ಅಮೆರಿಕ ಈ ರೀತಿಯ ನೆಲೆಗಳನ್ನು ಬಹಳಷ್ಟು ದೇಶಗಳಲ್ಲಿ ಹೊಂದಿದೆ. ಇದರಿಂದಾಗಿ ತನ್ನ ನೆಲದಲ್ಲಿ ಒಂದು ಹನಿರಕ್ತವೂ ಹರಿಯದೆ, ಒಂದಿಷ್ಟೂ ಹಾನಿಯಾಗದೆ ಯುದ್ಧಮಾಡುವ ಅವಕಾಶವನ್ನು ಹೊಂದಿದೆ. ಈಗ ಅವುಗಳ ಈ ನೆಲೆಗಳನ್ನು ನಾಶಮಾಡದೆ ಇರಾನ್ಗೆ ಯುದ್ಧಮಾಡಲು ಸಾಧ್ಯವಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ನೆಲೆ ನೀಡಿದ ದೇಶಗಳಿಗೆ ಹಾನಿಯಾಗುವುದನ್ನು ತಪ್ಪಿಸುವಂತಿಲ್ಲ. ಇರಾನ್ ಈ ವ್ಯವಹಾರದಲ್ಲಿ ಶಿವಲಿಂಗದ ಮೇಲಿನ ಚೇಳನ್ನು ಘಾಸಿಗೊಳಿಸುವಾಗ ಶಿವಲಿಂಗಕ್ಕೂ ಹಾನಿಮಾಡುವ ಅನಿವಾರ್ಯತೆಯನ್ನು ಹೊಂದಿದೆ. ಅರಬ್ ದೇಶಗಳಿಗೆ ಇದು ಅರ್ಥವಾಗಿದೆ. ಅವು ತಮಗೆ ವೈರವಿಲ್ಲದ ಒಂದು ದೇಶದ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುವ ಯುದ್ಧದಲ್ಲಿ ಪ್ರತೀಕಾರದ ದಾಳಿಗೆ ತಾವು ತುತ್ತಾಗುವ ವಿಚಿತ್ರವನ್ನು ಕಾಣುತ್ತಿವೆ. ಈಗಾಗಲೇ ಬಹರೈನ್ನಲ್ಲಿ ಅಲ್ಲಿನ ಜನರು ತಮ್ಮ ಆಡಳಿತದ ವಿರುದ್ಧ ದನಿಯೆತ್ತಿದ್ದಾರೆ. ಖತರ್ ದೇಶವು ಅರಬ್ ದೇಶಗಳ ಪರವಾಗಿ ಅಮೆರಿಕಕ್ಕೆ ಈಗಾಗಲೇ ಅಗತ್ಯ ಸಂದೇಶವನ್ನು ನೀಡಿ ತಮ್ಮನ್ನು ಈ ಯುದ್ಧದಿಂದ ಹೊರಗಿಡುವಂತೆ ಕರೆಕೊಟ್ಟಿದೆ. ಅಬುಧಾಬಿಯ ಆಡಳಿತವು ತಾವೇಕೆ ಇರಾನ್ನ ವಿರುದ್ಧ ಪ್ರತಿದಾಳಿ ನಡೆಸುತ್ತಿಲ್ಲವೆಂಬುದಕ್ಕೆ ವಿವರಣೆ ನೀಡಿದೆ. ಅಮೆರಿಕ ಮತ್ತದರ ಎಲ್ಲ ವಿಶ್ವಾಸಿಗರು ಇರಾನ್ನ ಸಾಮರ್ಥ್ಯವನ್ನು ಕಡೆಗಣಿಸಿದರೇನೋ ಎಂದು ಈ ಕ್ಷಣಕ್ಕೆ ಅನ್ನಿಸುವಂತಿದೆ. ದೇಶದೊಳಗಿನ ಚುನಾವಣೆಗಳನ್ನು ಗೆಲ್ಲುವ ತರಾತುರಿಯಲ್ಲಿ ಭಾರತದ ಅಂತರ್ರಾಷ್ಟ್ರೀಯ ಹೆಜ್ಜೆ ಈಗಾಗಲೇ ಸಾಕಷ್ಟು ಹಾದಿ ತಪ್ಪಿದೆ. ಮುಂದೆ ಯಾದರೂ ಜಾಗರೂಕವಾಗದೇ ಇದ್ದರೆ ಬರಲಿರುವ ದಿನಗಳಲ್ಲಿ ಭಾರತವು ಈ ಬೆಂಕಿಯ ಶಾಖವನ್ನು ತಡೆಯಲಾಗದೇ ಹೋಗಲೂಬಹುದು. ದೇಶ ಮಾತ್ರವಲ್ಲ 140 ಕೋಟಿ ಭಾರತೀಯರು ಈ ಬಾಹ್ಯಶಾಖಕ್ಕೆ ಕುಕ್ಕರಿನೊಳಗಿನ ವಸ್ತುವಿನಂತೆ ಆಂತರಿಕವಾಗಿ ಬೆಂದುಹೋಗಲೂಬಹುದು.
Ganga Expressway: ಭಾರತದ ಅತಿದೊಡ್ಡ ಗ್ರೀನ್ಫೀಲ್ಡ್ ಹೆದ್ದಾರಿ ಯೋಜನೆಯಿಂದ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ
ಭಾರತದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆ ಪೈಕಿ ಒಂದಾದ ಗಂಗಾ ಎಕ್ಸ್ಪ್ರೆಸ್ವೇ, ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದೆ. ವಿಶ್ವದ ಅತ್ಯಂತ ಸಸ್ಯಶ್ಯಾಮಲ ಹಾಗೂ ಜನಸಾಂದ್ರತೆ ಹೆಚ್ಚಿರುವ ಪ್ರದೇಶಕ್ಕೆ ಜೀವನಾಡಿ ಆಗಿರುವ ಗಂಗಾ ನದಿ ಹೆಸರನ್ನು ಹೆದ್ದಾರಿಗೆ ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿ ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್ನಿಂದ ಡ್ರೋನ್ ದಾಳಿ ಸಾಧ್ಯತೆ: ಎಫ್ಬಿಐ ಎಚ್ಚರಿಕೆ
ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್ನಿಂದ ಡ್ರೋನ್ ದಾಳಿ ಸಂಭವಿಸುವ ಸಾಧ್ಯತೆಯ ಬಗ್ಗೆ ಎಫ್ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಅಚ್ಚರಿ ಡ್ರೋನ್ ದಾಳಿ ನಡೆಸುವ ಆಶಯ ಹೊಂದಿತ್ತು ಎಂಬ ಮಾಹಿತಿ ದೊರೆತಿದ್ದರೂ, ಯುದ್ಧ ಆರಂಭವಾದ ನಂತರ ಇರಾನ್ನ ಸೈನಿಕ ಸಾಮರ್ಥ್ಯ ಕುಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಈ ಯುದ್ದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜಿಶ್ಕಿಯಾನ್ ಇರಾನ್ ಯುದ್ದವನ್ನು ನಿಲ್ಲಿಸಿ ಶಾಂತಿಮಂತ್ರ ಜಪಿಸಲು ಸಿದ್ದ ಎಂದು ತಿಳಿಸಿದೆ. ಆದರೆ, ಈ ಯುದ್ದಕ್ಕೆ ತೆರೆ ಬೀಳಬೇಕಾದರೆ 3 ಷರತ್ತುಗಳಿದ್ದು, ಇದನ್ನು ಒಪ್ಪಿಕೊಂಡು ಅದರಂತೆ ನಡೆದುಕೊಂಡರೆ ಮಾತ್ರ ಸಾಮರಸ್ಯ ಸಾಧಿಸಲು ಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಷರತ್ತುಗಳು ರಷ್ಯಾ ಹಾಗೂ ಪಾಕಿಸ್ತಾನದೊಂದಿಗೆ ಮಾತುಕತೆಗಳ ಬೆನ್ನಲ್ಲೇ ಘೋಷಿಸಿದ್ದು, ಏನದು ಯುದ್ದ ನಿಲ್ಲಿಸಲು ಇರಾನ್ ಇಟ್ಟಿರುವ 3 ಷರತ್ತುಗಳು ಎಂಬ ಮಾಹಿತಿ ಇಲ್ಲಿದೆ..
ಗ್ಯಾಸ್ ಸಿಲಿಂಡರ್ ಇಲ್ಲದೆ ಮದುವೆಗೂ ಎದುರಾಯ್ತು ಸಮಸ್ಯೆ, ಗಂಡಿನ ಮನೆಯವರ ಒದ್ದಾಟ... LPG Shortage
ಗ್ಯಾಸ್ ಇಲ್ಲ.. ಗ್ಯಾಸ್ ಇಲ್ಲ.. ಗ್ಯಾಸ್ ಇಲ್ಲ.. ಎಲ್ಲಿ ಕೇಳಿದರೂ ಈಗ ಗ್ಯಾಸ್ ಸಿಲಿಂಡರ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಗ್ಯಾಸ್ ಸಿಲಿಂಡರ್ ಇಲ್ಲದೆ ಜೀವನ ನಡೆಯೋದೆ ಇಲ್ಲ, ಭಾರತದ ಪ್ರತಿ ಮನೆಗಳಲ್ಲೂ ಎಲ್ಪಿಜಿ ಅತ್ಯವಶ್ಯಕ ವಸ್ತುವಾಗಿದೆ. ಆದರೆ ಇರಾನ್ ಹಾಗೂ ಅಮೆರಿಕ ನಡುವೆ ಶುರುವಾದ ಭೀಕರ ಯುದ್ಧದ ಪರಿಣಾಮ ಇದೀಗ ಎಲ್ಪಿಜಿ ಪೂರೈಕೆಗೆ ಬ್ರೇಕ್ ಬಿದ್ದು
ಒಮಾನ್ | ಸಲಾಲ ಬಂದರಿನಲ್ಲಿ ಸ್ಫೋಟ; ತೈಲ ಸಂಗ್ರಹಾಗಾರಕ್ಕೆ ಇರಾನ್ ಡ್ರೋನ್ ಬಡಿದ ಶಂಕೆ
ಟೆಹರಾನ್: ಇರಾನ್- ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದ್ದು, ಕೊಲ್ಲಿ ಪ್ರದೇಶದ ಅತ್ಯಂತ ಆಯಕಟ್ಟಿನ ಮಹತ್ವದ ಸಾಗರ ಕೇಂದ್ರಗಳಿಗೆ ವ್ಯಾಪಿಸಿದೆ. ಬುಧವಾರ ಒಮಾನ್ ದೇಶದ ಸಲಾಲಾ ಬಂದರಿನ ತೈಲ ಸಂಗ್ರಹ ಟ್ಯಾಂಕ್ ಗಳಿಗೆ ಹಲವು ಇರಾನಿ ಡ್ರೋನ್ಗಳು ಬಡಿದಿವೆ. ಇದು ಬೆಂಕಿಗೆ ಕಾರಣವಾಗಿದ್ದು, ಜಾಗತಿಕವಾಗಿ ಇಂಧನ ಹಾಗೂ ಶಿಪ್ಪಿಂಗ್ ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಹಲವು ಡ್ರೋನ್ಗಳನ್ನು ಛೇದಿಸಲಾಗಿದ್ದರೂ ಕೆಲ ಇತರ ಡ್ರೋನ್ಗಳು ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದರಿನಲ್ಲಿ ತೈಲ ಸಂಗ್ರಹ ಮೂಲಸೌಕರ್ಯಕ್ಕೆ ಅಪ್ಪಳಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ದಾಳಿಯಿಂದ ಕನಿಷ್ಠ ಎರಡು ಇಂಧನ ಟ್ಯಾಂಕ್ ಗಳಲ್ಲಿ ದೊಡ್ಡಪ್ರಮಾಣದ ಬೆಂಕಿ ಅನಾಹುತ ಸಂಭವಿಸಿದ್ದರೂ, ಯಾವುದೇ ಸಾವು ನೋವು ಸಂಭವಿಸಿಲ್ಲ. ಅಲ್ಲೇ ಪಕ್ಕದಲ್ಲಿ ಲಂಗರು ಹೂಡಿದ್ದ ವ್ಯಾಪಾರಿ ಹಡಗುಗಳಿಗೂ ಹಾನಿಯಾಗಿಲ್ಲ. ಆದರೆ ಈ ಘಟನೆಯಿಂದ ಯುದ್ಧವು ಇರಾನ್, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ದಾಟಿ ಪಸರಿಸುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯ ಮತ್ತು ಸಾಗರ ವ್ಯಾಪಾರ ಮಾರ್ಗಗಳಿಗೆ ಭಾರಿ ಅಪಾಯ ಒದಗಿದೆ. ಅರಬ್ಬೀ ಸಮುದ್ರದಲ್ಲಿರುವ ಒಮಾನ್ ದೇಶದ ಧೋಫಾರ್ ಪ್ರದೇಶದಲ್ಲಿರುವ ಸಲಾಲಾ ಬಂದರು ಮಧ್ಯಪ್ರಾಚ್ಯದ ಪ್ರಮುಖ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ ಕೇಂದ್ರವಾಗಿದೆ. ಈ ಬಂದರು ಕಂಟೈನರ್ ಸಂಚಾರ ಮತ್ತು ತೈಲ ಸಂಗ್ರಹಾಗಾರಗಳನ್ನು ನಿರ್ವಹಿಸುತ್ತದೆ ಮತ್ತು ಏಷ್ಯಾ, ಯೂರೋಪ್ ಹಾಗೂ ಆಫ್ರಿಕಾ ನಡುವೆ ಸಂಚರಿಸುವ ಹಡಗುಗಳಿಗೆ ಬಂಕರ್ ಕಾರ್ಯಾಚರಣೆ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯ ಮೇಲೆ ಡ್ರೋನ್ ದಾಳಿ ನಡೆದಾಗ ಬಂದರಿನ ಸಂಗ್ರಹ ಪ್ರದೇಶದಲ್ಲಿದ್ದ ತೈಲ ಟ್ಯಾಂಕ್ ಗಳಿಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಆಕಾಶದಲ್ಲಿ ದಟ್ಟವಾದ ಹೊಗೆ ವ್ಯಾಪಿಸಿದೆ. ತೈಲ ಡಿಪೋದ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚುತ್ತಿರುವ ವಿಡಿಯೊಗಳು ವೈರಲ್ ಆಗಿವೆ.
Sullia | ಉಗ್ರಾಣಿ ಅಬ್ದುಲ್ಲಾ ನಿಧನ
ಸುಳ್ಯ : ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ವ್ಯಾಪಾರಿ ಸ್ನೇಹಜೀವಿ ಉಗ್ರಾಣಿ ಅಬ್ದುಲ್ಲಾ (80) ಮಾ.12 ರಂದು ಬೆಳಗಿನ ಜಾವ ನಿಧನರಾದರು. ಸುಳ್ಯ ಅನ್ಸಾರಿಯಯಾ ಯತೀಂ ಖಾನದ ಮಾಜಿ ನಿರ್ದೇಶಕರಾಗಿದ್ದ ಉಗ್ರಾಣಿ ಅಬ್ದುಲ್ಲಾ, ಕಳೆದ ಹಲವು ದಶಕಗಳಿಂದ ಸುಳ್ಯದ ಜನತಾ ಸ್ಟೋರ್ ಹಿಂಬಾಗದಲ್ಲಿ ಗೋಣಿ ಚೀಲ, ಡ್ರಮ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಸಾಮಗ್ರಿಗಳ ವ್ಯಾಪಾರ ನಡೆಸುತ್ತಿದ್ದರು. ಸುಳ್ಯದ ಹಿರಿಯ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದ ಅವರು ಸಾರ್ವಜನಿಕರೊಂದಿಗೆ ಆತ್ಮೀಯ ಹಾಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು (ಮಾ.12 ರಂದು) ಮಧ್ಯಾಹ್ನ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪದಚ್ಯುತಗೊಳಿಸಲು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲು
ಲೋಕಸಭೆಯ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವಂತೆ ಕೋರುವ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸಲಾಯಿತು. ಇದರೊಂದಿಗೆ ನಿರ್ಣಯ ವಜಾಗೊಂಡಿದ್ದು, ಓಂ ಬಿರ್ಲಾ ಅವರ ಸ್ಪೀಕರ್ ಸ್ಥಾನ ಅಬಾಧಿತವಾಗಿದೆ. ವಿಧೇಯಕದ ಪರವಾಗಿ ಅಗತ್ಯ ಮತಗಳನ್ನು ಪಡೆಯುವಲ್ಲಿ ಪ್ರತಿಪಕ್ಷಗಳು ವಿಫಲವಾದವು.
ಅನುದಾನದ ಸಮಸ್ಯೆಯಿಂದ ಸ್ಥಗಿತವಾಗಿದ್ದ ತೆಂಗು ವೈಜ್ಞಾನಿಕ ಸಮೀಕ್ಷೆ ಪುನಾರಂಭ
ಕಳೆದ ಬಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ತೆಂಗು ಸಮೀಕ್ಷೆ, ಈ ವರ್ಷ ಪುನಾರಂಭಗೊಂಡಿದೆ. ಸಮೀಕ್ಷೆ ಪೂರ್ಣಗೊಂಡು ತೆಂಗು ಬೆಳೆಗಾರರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಅನುದಾನಕ್ಕಷ್ಟೇ ಸೀಮಿತವಾಗದೆ ವೈಜ್ಞಾನಿಕವಾಗಿ ನಡೆಯಲೆಂಬುದು ರೈತರ ಆಶಯ.
ಮೂರು ಷರತ್ತುಗಳನ್ನು ಪೂರೈಸಿದರೆ ಮಾತ್ರ ಮಾತುಕತೆ: ಯುದ್ಧ ವಿರಾಮದ ಕುರಿತು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಹೇಳಿಕೆ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ಸಂದರ್ಭದಲ್ಲಿ, ಯುದ್ಧವನ್ನು ಕೊನೆಗೊಳಿಸಲು ಮೂರು ಪ್ರಮುಖ ಷರತ್ತುಗಳನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮುಂದಿಟ್ಟಿದ್ದಾರೆ. ನಿನ್ನೆ ಹಾಗೂ ಇಂದು ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಈ ಷರತ್ತುಗಳು ಈಡೇರಿದರೆ ಇರಾನ್ ಮಾತುಕತೆಗೆ ಮರಳಲು ಸಿದ್ಧವಿದೆ ಎಂದು ಸೂಚಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಪೆಜೆಶ್ಕಿಯನ್ ಹೇಳುವಂತೆ, ಮೊದಲನೆಯದಾಗಿ ಇರಾನ್ನ ಸಾರ್ವಭೌಮ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಮಾನ್ಯತೆ ನೀಡಬೇಕು. ಎರಡನೆಯದಾಗಿ, ಇತ್ತೀಚಿನ ಸಂಘರ್ಷದಿಂದ ದೇಶದಲ್ಲಿ ಉಂಟಾದ ವಿನಾಶಕ್ಕೆ ಪರಿಹಾರ ಪಾವತಿಸಬೇಕು. ಮೂರನೆಯದಾಗಿ, ಭವಿಷ್ಯದಲ್ಲಿ ಇಂತಹ ಆಕ್ರಮಣಗಳು ಮರುಕಳಿಸದಂತೆ ದೃಢವಾದ ಅಂತರರಾಷ್ಟ್ರೀಯ ಭದ್ರತಾ ಖಾತರಿ ನೀಡಬೇಕು. ಈ ಕುರಿತು ಇನ್ನೊಂದು ಕಡೆಯಿಂದ ಪ್ರತಿಕ್ರಿಯೆಗಾಗಿ ಇರಾನ್ ಕಾಯುತ್ತಿದೆ. ಆದರೆ ಎದುರಾಳಿಗಳ ಮೇಲೆ ನಂಬಿಕೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಹಲವು ಬಾರಿ ಹೇಳಿದ್ದಾರೆ. ಇನ್ನೊಂದೆಡೆ, ಕುವೈತ್, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನಿನ ಹಲವು ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಪ್ರತಿಬಂಧಿಸಿರುವುದಾಗಿ ವರದಿಯಾಗಿದೆ. ಇದರ ಮಧ್ಯೆ ಇರಾಕ್ನ ಅಲ್-ಫಾ ಬಂದರಿನಲ್ಲಿ ಎರಡು ವಿದೇಶಿ ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ತೈಲ ಟ್ಯಾಂಕರ್ಗಳನ್ನು ರಕ್ಷಿಸುವುದಾಗಿ ಘೋಷಿಸಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಬ್ಯಾರೆಲ್ಗೆ 200 ಡಾಲರ್ ಮಟ್ಟಕ್ಕೇರಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಇಸ್ರೇಲಿ ಸೇನೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ಭಾರಿ ದಾಳಿಗಳನ್ನು ಮುಂದುವರಿಸುತ್ತಿರುವುದಾಗಿ ವರದಿಯಾಗಿದ್ದು, ಇರಾನ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳು ಇಸ್ರೇಲ್ ಮೇಲೆ ಸಂಯೋಜಿತ ದಾಳಿಗಳನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಈ ಸಂಘರ್ಷದ ಪರಿಣಾಮವಾಗಿ ಪ್ರದೇಶದಾದ್ಯಂತ ಸಾವುನೋವುಗಳು ಹೆಚ್ಚುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.
ವಿಶ್ವಕಪ್ ಪ್ರಶಸ್ತಿ: ಭಾರತದ ಸಾಧನೆ ಶ್ಲಾಘಿಸಿದ ಪಾಕ್ ಆಲ್ ರೌಂಡರ್
ಕರಾಚಿ: ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡವನ್ನು ಪಾಕಿಸ್ತಾನದ ಆಲ್ ರೌಂಡರ್ ಇಮಾದ್ ವಸೀಮ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಪಿಚ್ ಗಳ ಬಗ್ಗೆ ಮತ್ತು ಭಾರತಕ್ಕೆ ಲಾಭದಾಯಕವಾಗುವ ವಾತಾವರಣವಿತ್ತು ಎಂಬ ಟೀಕೆಗಳ ನಡುವೆಯೂ ಇಡೀ ಟೂರ್ನಿಯಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ ಎಂದು ಅವರು ಹೇಳಿದ್ದಾರೆ. ಭಾನುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ನಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್ನುಗಳಿಂದ ಬಗ್ಗುಬಡಿದು ಭಾರತ ಪ್ರಶಸ್ತಿ ಉಳಿಸಿಕೊಂಡಿತ್ತು. ಈ ಮೂಲಕ ಜಾಗತಿಕ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಟೂರ್ನಿಯಲ್ಲಿ ಪರಿಸ್ಥಿತಿಗಳು ಭಾರತಕ್ಕೆ ಪೂರಕವಾಗಿದ್ದವು ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ ಇಂಥ ಪ್ರತಿಪಾದನೆಯನ್ನು ತಳ್ಳಿಹಾಕಿದ ವಾಸಿಂ, ಪಿಚ್ ಗಳು ಎಲ್ಲ ತಂಡಗಳಿಗೂ ನ್ಯಾಯಸಮ್ಮತವಾಗಿದ್ದವು ಎಂದು ವಿಶ್ಲೇಷಿಸಿದ್ದಾರೆ. ಭಾರತಕ್ಕೆ ಪೂರಕವಲ್ಲದ ವಾತಾವರಣದ ನಿದರ್ಶನಗಳೂ ಇವೆ. ಆದಾಗ್ಯೂ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು ಎಂದು ಗುಣಗಾನ ಮಾಡಿದ್ದಾರೆ. ಅಂಪೈರ್ ಗಳು ಭಾರತದ ಪರವಾಗಿದ್ದರು ಅಥವಾ ಸ್ಪಿನ್-ಸ್ನೇಹಿ ಪಿಚ್ಗಳನ್ನು ಸಿದ್ಧಪಡಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಟೂರ್ನಿಯಲ್ಲಿ ಪಿಚ್ ಗಳು ಸಮತೋಲನದಲ್ಲಿದ್ದವು. ಕೆಲವೊಮ್ಮೆ ಭಾರತಕ್ಕೆ ವಿರುದ್ಧವಾದ ಪರಿಸ್ಥಿತಿಯೂ ಇತ್ತು. ಆದಾಗ್ಯೂ ಪ್ರಬಲ ಪ್ರದರ್ಶನ ನೀಡುವಲ್ಲಿ ಭಾರತ ಯಶಸ್ವಿಯಾಯಿತು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು ಎಂದು ಪಾಕಿಸ್ತಾನಿ ಟಿವಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದರು. ಭಾರತದ ಯಶಸ್ಸನ್ನು ಪ್ರಶ್ನಿಸುವ ಬದಲು ಇತರ ತಂಡಗಳು ಭಾರತ ಹೇಗೆ ಉತ್ತಮವಾಗಿ ಆಡಿತು ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಅವರು ಅಭಿಪ್ರಾಯಪಟ್ಟರು.
ಮಧ್ಯಪ್ರಾಚ್ಯಕ್ಕೆ ಚಾಮರಾಜನಗರ ಕಪ್ಪುಶಿಲೆ ರಫ್ತು ಸ್ಥಗಿತ ; ಗಣಿ ಮಾಲೀಕರು, ಸರಕಾರಕ್ಕೆ ನಷ್ಟ
ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಅವರು ಜಿಲ್ಲೆಯಲ್ಲಿ ಕಪ್ಪು ಶಿಲೆ ಗಣಿಗಾರಿಕೆ ಎಷ್ಟು ನಡೆಯುತ್ತಿವೆ. ಅದರಿಂದ ಎಷ್ಟು ರಾಜಧನ ದೊರೆಯುತ್ತಿದೆ ಹಾಗೂ ಎಲ್ಲೆಲ್ಲಿಗೆ ಕಪ್ಪುಶಿಲೆ ರಫ್ತಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಸರಕಾರ ಮಾಹಿತಿ ಒದಗಿಸಿದೆ. ಇದರಿಂದ ರಾಜಧನದಲ್ಲಿಕುಂಠಿತವಾಗಿರುವುದು ಹಾಗೂ ಯುದ್ಧದ ಪರಿಣಾಮ ರಫ್ತಿನ ಪ್ರಮಾಣ ತಗ್ಗಿರುವ ಸಂಗತಿಯನ್ನ ಅಧಿವೇಶನಕ್ಕೆ ನೀಡಲಾಗಿದೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಘಟನೆ ಜಮ್ಮುವಿನಲ್ಲಿ ನಡೆದಿದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದಿದ್ದು, ದಾಳಿ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬುಧವಾರ ಸಂಜೆ ಜಮ್ಮುವಿನ ಹೊರವಲಯದಲ್ಲಿರುವ ಗ್ರೇಟರ್ ಕೈಲಾಶ್ ಪ್ರದೇಶದ ಹೋಟೆಲ್ ರಾಯಲ್ ಪಾರ್ಕ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಸಮಾರಂಭದಲ್ಲಿ ಹಾಜರಿದ್ದರು. ಸ್ಥಳದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ಹಿಂದಿನಿಂದ ಫಾರೂಕ್ ಅಬ್ದುಲ್ಲಾ ಅವರತ್ತ ಬಂದೂಕು ತೋರಿಸಿ ಗುಂಡು ಹಾರಿಸಿರುವುದು ಕಂಡುಬಂದಿದೆ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಹಿಡಿದು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಮ್ಮುವಿನ ಹೊರವಲಯದಲ್ಲಿರುವ ಐಷಾರಾಮಿ ಗ್ರೇಟರ್ ಕೈಲಾಶ್ ಪ್ರದೇಶದ ಹೋಟೆಲ್ ರಾಯಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದ್ದು, ಆತ ಜಮ್ಮುವಿನ ನಿವಾಸಿಯಾಗಿದ್ದು ಕೆಲವು ಅಂಗಡಿಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಕಮಲ್ ಸಿಂಗ್ ಜಮ್ವಾಲ್ (60) ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಫಾರೂಕ್ ಅಬ್ದುಲ್ಲಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪಾರಾಗಿದ್ದು, ಅವರ ಪಕ್ಷದ ಸಹೋದ್ಯೋಗಿ ಹಾಗೂ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಜಮ್ವಾಲ್ ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದು, ಈ ಪ್ರಯತ್ನವನ್ನು ವೈಯಕ್ತಿಕ ಕಾರ್ಯಸೂಚಿ ಎಂದು ಹೇಳಿದ್ದಾನೆ. ದಾಳಿಗೆ ಬಳಸಿದ ಬಂದೂಕು ತನ್ನ ವೈಯಕ್ತಿಕ ಪರವಾನಗಿ ಪಡೆದ ಪಿಸ್ತೂಲ್ ಎಂದು ಆತ ಹೇಳಿದ್ದಾನೆ. ಘಟನೆಯಲ್ಲಿ ಬಳಸಲಾದ ಪಿಸ್ತೂಲ್ ಅನ್ನು ಆರೋಪಿಯ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ವರದಿ ಮಾಡಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ತಮ್ಮ ತಂದೆಯ ಮೇಲೆ ನಡೆದ ಹತ್ಯೆ ಪ್ರಯತ್ನವನ್ನು ಅವರ Z+ ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡ ತಡೆದಿದೆ ಎಂದು ಹೇಳಿದ್ದಾರೆ. “ಅಲ್ಲಾಹನು ದಯಾಮಯಿ. ನನ್ನ ತಂದೆ ತುಂಬಾ ಹತ್ತಿರದಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಸಮಯದಲ್ಲಿನ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಲೋಡ್ ಮಾಡಿದ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೊಬ್ಬನು ಪಾಯಿಂಟ್ ಬ್ಲಾಂಕ್ ವ್ಯಾಪ್ತಿಯಲ್ಲಿ ಬಂದು ಗುಂಡು ಹಾರಿಸಲು ಯತ್ನಿಸಿದ. ನಿಕಟ ರಕ್ಷಣಾ ತಂಡ ತಕ್ಷಣವೇ ಕ್ರಮ ಕೈಗೊಂಡು ಹತ್ಯೆ ಪ್ರಯತ್ನ ವಿಫಲವಾಗಿದೆ . Z+ NSG ರಕ್ಷಣೆ ಹೊಂದಿರುವ ಮಾಜಿ ಮುಖ್ಯಮಂತ್ರಿಯ ಹತ್ತಿರ ಯಾರಾದರೂ ಹೇಗೆ ಬರಲು ಸಾಧ್ಯವಾಯಿತು ಎಂಬುದನ್ನು ಒಳಗೊಂಡಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ,” ಎಂದು ಅವರು X ನಲ್ಲಿ ಬರೆದಿದ್ದಾರೆ. ಈ ಘಟನೆಯನ್ನು ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ “ಗಂಭೀರ ಭದ್ರತಾ ಲೋಪ” ಎಂದು ಬಣ್ಣಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದಾಗ, ಒಬ್ಬ ವ್ಯಕ್ತಿ ಬಂದೂಕು ಹಿಡಿದು ಒಳಗೆ ಪ್ರವೇಶಿಸಬಹುದಾದರೆ ಭದ್ರತಾ ವ್ಯವಸ್ಥೆಗಳು ಹೇಗಿದ್ದವು ಎಂಬುದು ದೊಡ್ಡ ಪ್ರಶ್ನೆಯಾಗಿದೆ,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್
Karnataka Weather Mar 12: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿಸಿಲು ಹೆಚ್ಚಾಗುತ್ತಿದೆ. ಮುಂದಿನ ವಾರದಿಂದ ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ, ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5
ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತಕ್ಕೆ ಐಸಿಸಿಯಿಂದ 24 ಕೋಟಿ; ಇತರ ದೇಶಗಳಿಗೆ ಸಿಕ್ಕಿದ್ದೆಷ್ಟು?
ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ದೇಶಗಳಿಗೆ ಒಟ್ಟು 11.25 ದಶಲಕ್ಷ ಡಾಲರ್ ಅಂದರೆ 103 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ಹಂಚಿಕೆ ಮಾಡಿ ಅಂತಿಮ ವಿತರಣೆಯನ್ನು ಘೋಷಿಸಿದೆ. ಐಸಿಸಿ 2024ರಲ್ಲಿ ಆಟಗಾರರ ಬಹುಮಾನ ಮೊತ್ತವನ್ನು ಹೆಚ್ಚಿಸಿದ ನೀತಿಗೆ ಅನುಸಾರವಾಗಿ ಆಟಗಾರರ ಬಹುಮಾನ ನಿಧಿಯನ್ನು ಹಂಚಿಕೆ ಮಾಡಲಾಗಿದೆ. ಗುಂಪು ಹಂತ, ಸೂಪರ್8, ಸೆಮಿಫೈನಲ್ ಹಾಗೂ ಫೈನಲ್ ತಲುಪಿದ ತಂಡಗಳಿಗೆ ತೆರಿಗೆ ಬದ್ಧತೆ ಪೂರ್ವ ಅಥವಾ ಕಡಿತಕ್ಕೆ ಮೊದಲು ಘೋಷಿಸಲಾದ ಮೊತ್ತ ಇದಾಗಿರುತ್ತದೆ. ಒಟ್ಟಾರೆ ಮೊತ್ತದಲ್ಲಿ ಮೂಲವಾಗಿ ಪಾಲ್ಗೊಂಡಿದ್ದಕ್ಕೆ ತಂಡಗಳಿಗೆ ಪಾವತಿ ಮಾಡುವ ಮೊತ್ತ (2.25 ಲಕ್ಷ ಡಾಲರ್), ತಂಡಗಳ ಅಂತಿಮ ಸ್ಥಾನ, ಗೆಲುವಿನ ಬೋನಸ್ ಗಳು ಹಾಗೂ ಪ್ರತಿ ಹಂತಕ್ಕೆ ಏರಿದಂತೆ ಸಿಗುವ ಮೊತ್ತ ಸೇರಿದೆ. ಐಸಿಸಿ ಪ್ರಕಟಣೆಯ ಪ್ರಕಾರ, ಭಾರತ 26.39 ಲಕ್ಷ ಡಾಲರ್ ಅಂದರೆ ಸುಮಾರು 24.25 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ನ್ಯೂಝಿಲೆಂಡ್ (13.08 ಕೋಟಿ), ಸೆಮಿಫೈನಲ್ ನಲ್ಲಿ ಸೋತ ದಕ್ಷಿಣ ಆಫ್ರಿಕಾ (9.24 ಕೋಟಿ), ಇಂಗ್ಲೆಂಡ್ (8.96 ಕೋಟಿ) ಕೂಡಾ ಭಾರಿ ಮೊತ್ತ ಪಡೆದಿವೆ. ಪಾಕಿಸ್ತಾನ ತಂಡಕ್ಕೆ 4.80 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಮತ್ತು ಬೆಂಬಲ ಸಿಬ್ಬಂದಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ 131 ಕೋಟಿ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದರು. ಇದು ಭಾರತ ತಂಡ ಈ ಹಿಂದೆ ಯಾವುದೇ ಗೆಲುವಿಗೆ ಪಡೆದದ್ದಕ್ಕಿಂತ ದೊಡ್ಡ ಬಹುಮಾನ ಮೊತ್ತವಾಗಿದೆ.
LPG Crisis: ಭಾರತದ ಎಲ್ಪಿಜಿ ಬಿಕ್ಕಟ್ಟಿನ ಚರ್ಚೆಯ ಹಿಂದಿನ ವಾಸ್ತವ: ನೀತಿ ವೈಫಲ್ಯವಲ್ಲ, ಜಾಗತಿಕ ಇಂಧನ ಆಘಾತ
ಇತ್ತೀಚಿನ ವಾರಗಳಲ್ಲಿ ಕೇಂದ್ರ ಸರ್ಕಾರವು ಮಾರ್ಚ್ 7, 2026 ರಂದು ದೇಶೀಯ ಅಡುಗೆ ಅನಿಲದ (ಗ್ಯಾಸ್ ಸಿಲಿಂಡರ್) ಬೆಲೆಯಲ್ಲಿ 60 ರೂಪಾಯಿ ಹೆಚ್ಚಳವನ್ನು ಅನುಮೋದಿಸಿದ ನಂತರ ಭಾರತದ LPG ಬೆಲೆ ನೀತಿಯು ರಾಜಕೀಯ ದಾಳಿಗೆ ಒಳಗಾಗಿದೆ. ಹೆಚ್ಚುತ್ತಿರುವ ಜಾಗತಿಕ ಇಂಧನ ವೆಚ್ಚಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ಪುರಾವೆಯಾಗಿ
ಜೂನ್ ವೇಳೆಗೆ ತುಂಗಭದ್ರಾ ಡ್ಯಾಂಗೆ ಒಳಹರಿವು ಆರಂಭ ಆಗುತ್ತದೆ. ಹೀಗಾಗಿ ಮೇ ತಿಂಗಳ ಅರ್ಧದ ವೇಳೆಗೆ ಗೇಟ್ ಕೆಲಸ ಸಂಪೂರ್ಣ ಮುಗಿಯುವ ಅಗತ್ಯವಿದೆ. ಆದರೆ ಈಗಿರುವ ವೇಗದಲ್ಲೇ ಸಾಗಿದರೆ, ಗೇಟ್ ಅಳವಡಿಕೆ ಕಷ್ಟಸಾಧ್ಯ. ಆದ್ರೆ ಹೆಚ್ಚುವರಿ ತಂಡಗಳ ಜೊತೆಗೂ ಕೆಲಸ ಮಾಡುವ ಅವಕಾಶವಿದೆ. ಈ ಡ್ಯಾಂ ನೀರಿನ್ನೆ ನೆಚ್ಚಿಕೊಂಡು 10 ಲಕ್ಷ ಎಕರೆ ಕೃಷಿಭೂಮಿಯಲ್ಲಿ ಕೃಷಿ ಮಾಡಲಾಗುತ್ತದೆ.
IDFC ಫಸ್ಟ್ ಬ್ಯಾಂಕ್ 590 ಕೋಟಿ ರೂ. ವಂಚನೆ ಪ್ರಕರಣ; ಹರ್ಯಾಣ, ಚಂಡೀಗಢದ 19 ಸ್ಥಳಗಳಲ್ಲಿ ED ಶೋಧ
ಚಂಡೀಗಢ: ಚಂಡೀಗಢದಲ್ಲಿರುವ ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಹರ್ಯಾಣ ಸರ್ಕಾರ ಠೇವಣಿ ಇರಿಸಿದ್ದ 590 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬುಧವಾರ ಹರ್ಯಾಣ ಮತ್ತು ಚಂಡೀಗಢದ ಒಟ್ಟು 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಹಣ ದುರುಪಯೋಗದ ಪ್ರಕರಣದ ತನಿಖೆ ಹಾಗೂ ಅಪರಾಧ ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಲು ಆರೋಪಿಗಳಿಗೆ ವಾಸ್ತವ್ಯಕ್ಕೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ವಿವಿಧ ಉದ್ಯಮ ಸಂಸ್ಥೆಗಳ ವಿರುದ್ಧ ಹರ್ಯಾಣ ಮತ್ತು ಚಂಡೀಗಢದಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ನಿಧಿಗಳನ್ನು ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಯಾಗಿ ಇರಿಸಬೇಕಾಗಿತ್ತು. ಆದರೆ, ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸದೇ ಕೆಲವು ಆರೋಪಿಗಳು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಪ್ರಮುಖ ಆರೋಪಿಗಳು, ಈ ಅಪರಾಧ ಪ್ರಕ್ರಿಯೆ ಬೆಳಕಿಗೆ ಬಂದ ಬ್ಯಾಂಕಿನ ಮಾಜಿ ಅಧಿಕಾರಿಗಳು, ವಂಚನೆಯ ಫಲಾನುಭವಿಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ಗಳು ಸೇರಿದಂತೆ ಆರೋಪಿಗಳಿಗೆ ವಾಸ್ತವ್ಯಕ್ಕೆ ನೆರವು ಒದಗಿಸಿದ್ದರೆಂದು ಶಂಕಿಸಲ್ಪಟ್ಟ ವಿವಿಧ ಉದ್ಯಮ ಸಂಸ್ಥೆಗಳ ಸ್ಥಳಗಳಲ್ಲಿ ದಾಳಿ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಬೃಹತ್ ಮೊತ್ತದ ನಿಧಿಯನ್ನು ಹಲವು ಶೆಲ್ ಕಂಪನಿಗಳ ಮೂಲಕ ಸಣ್ಣಪುಟ್ಟ ಆಭರಣ ಸಂಸ್ಥೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ವಹಿವಾಟುಗಳಲ್ಲಿ ಭಾರಿ ಪ್ರಮಾಣದ ಹಣ ಚಲನವಲನ ನಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಚಿನ್ನ ಖರೀದಿಯ ನೆಪದಲ್ಲಿ ಈ ಮೊತ್ತವನ್ನು ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಣಕಾಸು ವಂಚನೆಯಲ್ಲಿ ಗಮನಾರ್ಹ ಪ್ರಮಾಣದ ನಗದು ಹಿಂಪಡೆಯಲಾಗಿದೆ ಎಂಬುದೂ ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಟ್ರೈಸಿಟಿ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಚಂಡೀಗಢ ಮೂಲದ ಹೋಟೆಲ್ ಉದ್ಯಮಿ ವಿಕ್ರಂ ವಾಧ್ವಾ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ
ನಿಧಿ ಸಿಕ್ಕ ಬಳಿಕ ಭಾರಿ ಕುತೂಹಲ ಕೆರಳಿಸಿದ್ದ ಲಕ್ಕುಂಡಿಯಲ್ಲಿ 47 ದಿನಗಳ ಕಾಲ ಉತ್ಖನನ ಮಾಡಲಾಗಿದೆ. ಇನ್ನೂ ಕೂಡಾ 101 ಗುಡಿಗಳು, ಬಾವಿಗಳನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಸದ್ಯಕ್ಕಂತೂ ಉತ್ಖನನ ಕಾರ್ಯಕ್ಕೆ ತೆರೆ ಎಳೆಯಲಾಗಿದೆ.
ಭಾರತಕ್ಕೆ ಬರುತ್ತಿದ್ದ ನೌಕೆ ಮೇಲೆ ಹರ್ಮುಜ್ ಜಲಸಂಧಿ ದಾಟುತ್ತಿದ್ದಾಗ ಇರಾನ್ ದಾಳಿ : ತೀವ್ರ ಖಂಡನೆ
ಮಧ್ಯಪ್ರಾಚ್ಯ ಸಂದರ್ಷ ಆರಂಭವಾದ ದಿನಗಳಿಂದ ಇದೇ ಮೊದಲು ಭಾರತದ ನೌಕೆ ಮೇಲೆ ನೇರ ದಾಳಿಯಾಗಿದೆ, ನೌಕೆ ಹೊತ್ತಿ ಉರಿದಿದೆ. ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಹಾಗೂ ಇರಾನ್ ರಸಗೊಬ್ಬರ ಉತ್ಪಾನೆ ಹಾಗೂ ರಫ್ತು ಎರಡನ್ನೂ ಸಂಪೂರ್ಣ ಸ್ಥಗಿತಮಾಡಿದ್ದು, ರೈತರಿಗೂ ಈಗ ತಲೆನೋವಾಗಿ ಪರಿಣಮಿಸಿದೆ.
ಕಚ್ಚಾತೈಲ ಸರಬರಾಜು ಮಾಡಲು ಮತ್ತೆ ಇರಾನ್ ಅಡ್ಡಿ, ಪರಿಸ್ಥಿತಿ ಇನ್ನಷ್ಟು ಕಠಿಣ | Operation Roaring Lion
ಅಮೆರಿಕ ತನ್ನ ಮೇಲೆ ದಾಳಿ ಮಾಡಿದೆ ಎಂಬ ಕಾರಣಕ್ಕೆ ಹಾರ್ಮುಜ್ ಜಲಸಂಧಿ ಬಳಿ ಲಾಕ್ ಮಾಡಿ, ಯಾವುದೇ ಕಚ್ಚಾತೈಲ ಹಡಗು ಹಾಗೂ ನೌಕೆಗಳು ಸಂಚಾರ ಮಾಡದಂತೆ ಇರಾನ್ ತಡೆಯುತ್ತಿದೆ. ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಹಾಗೂ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಆರ್ಥಿಕತೆ ನಲುಗುತ್ತಿದೆ. ಇಂತಹ ಪರಿಸ್ಥಿತಿ ಎದುರಾಗಿರುವ ಸಮಯದಲ್ಲಿ ಅಮೆರಿಕ ಕೂಡ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ ವಿರುದ್ಧ ಗುಡುಗಿದ್ದಾರೆ. ಮತ್ತೆ, ಮತ್ತೆ ದೊಡ್ಡ ಮಟ್ಟದಲ್ಲಿ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿರುವ ಇರಾನ್ ಸೇನೆ ಹಾಗೂ ಇರಾನ್ ನಾಯಕರಿಗೆ ಈಗ ಡೊನಾಲ್ಡ್ ಟ್ರಂಪ್ ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ರೀತಿ ಮತ್ತೆ ತಿಕ್ಕಾಟ ಮುಂದುವರಿದರೆ ಅಮೆರಿಕ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ
ಈ ತಿಂಗಳ ಆರಂಭದಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಲವಾರು ವಿರೋಧ ಪಕ್ಷಗಳ ನಾಯಕರಿಗೆ ಕರೆ ಮಾಡಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸಿದ್ದಾರೆಂದು ತಿಳಿಸಿದರು. ಸಭೆಯ ಕಾರಣವನ್ನು ಅವರು ಬಹಿರಂಗಪಡಿಸಲಿಲ್ಲ. ಸಮಾಜವಾದಿ ಪಕ್ಷದೊಂದಿಗಿನ ಅಂತಹ ಒಂದು ಸಭೆ ಮಾರ್ಚ್ 5 ರಂದು ನಿಗದಿಯಾಗಿತ್ತು. ಕಾಕತಾಳೀಯವಾಗಿ, ರಾಜ್ಯಸಭೆಗೆ ಪ್ರವೇಶಿಸಲು ಉತ್ಸುಕರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸುತ್ತಿದ್ದ ದಿನವೂ ಅದೇ ಆಗಿತ್ತು. ಅಮಿತ್ ಶಾ ದೆಹಲಿಯಿಂದ ಪಾಟ್ನಾಗೆ ವಿಮಾನದಲ್ಲಿ ಬಂದಿದ್ದರು. ಸಮಾಜವಾದಿ ಪಕ್ಷದೊಂದಿಗಿನ ಸಭೆಗೆ ಸಮಯಕ್ಕೆ ಸರಿಯಾಗಿ ಅವರು ಸಂಜೆಯ ವೇಳೆಗೆ ರಾಜಧಾನಿಗೆ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಪಾಟ್ನಾದಲ್ಲಿನ ಬೆಳವಣಿಗೆಗಳು ಅವರ ಪ್ರಯಾಣವನ್ನು ವಿಳಂಬಗೊಳಿಸಿದವು. ಹಾಗಾಗಿ ಸಭೆಯನ್ನು ಮರುನಿಗದಿಪಡಿಸಬೇಕಾಯಿತು. ಅಮಿತ್ ಶಾ ಇತ್ತೀಚೆಗೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯ (ಅಧಿಕೃತವಾಗಿ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲಾಗುತ್ತದೆ) ತ್ವರಿತ ಅನುಷ್ಠಾನಕ್ಕೆ ಬಯಸುತ್ತಿದೆ ಎಂದು ಹೇಳಿದರು. ಕಾನೂನು ಪ್ರಸ್ತುತ “ಕಾಯುವ ಅವಧಿಯನ್ನು” ಹೊಂದಿದೆ. ಹೊಸ ಜನಗಣತಿ ಮುಗಿದ ನಂತರ ಮತ್ತು ಡಿಲಿಮಿಟೇಶನ್ ಮಾಡಿದ ಬಳಿಕ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬರುತ್ತದೆ ಎಂದು ಹೇಳುವ ಕಾಯ್ದೆಯ ಸೆಕ್ಷನ್ 5 ವಿಧಿಸಿರುವ ಎರಡು ಮಿತಿಗಳನ್ನು ತೆಗೆದುಹಾಕುವ ಪ್ರಸ್ತಾಪವನ್ನು ಶಾ ಮಂಡಿಸಿದರು. ಈ ಆರಂಭಿಕ ಸಲಹೆಗಳ ಸಮಯವು ಬಹಳ ಮುಖ್ಯವಾಗಿದೆ. 2027ರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಅವುಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಆಡಳಿತದಲ್ಲಿದೆ. ಮಹಿಳಾ ಮೀಸಲಾತಿ ಮಸೂದೆ ಆ ವೇಳೆಗೆ ವಾಸ್ತವವಾಗಿ ಜಾರಿಗೆ ಬಂದರೆ, ಅದು ಆ ಚುನಾವಣೆಗಳ ಮೇಲೆ ಭಾರಿ ಪರಿಣಾಮ ಬೀರಬಹುದು. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಗೆಲ್ಲಲು ಪ್ರಯತ್ನಿಸುತ್ತಿದೆ. ಹಿಂದೆ ಬಿಜೆಪಿ ಲೋಕಸಭಾ ಚುನಾವಣೆ ಗೆಲ್ಲಲು ರಾಜ್ಯವು ಸಹಾಯ ಮಾಡಿದ್ದರೂ, ಈಗ ಹಾಗಿಲ್ಲ. 2017ರಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು, ಆದರೆ 2022ರಲ್ಲಿ ಆ ಸಂಖ್ಯೆ 255ಕ್ಕೆ ಇಳಿದಿದೆ. 2024ರ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಮತ್ತು ಅವುಗಳನ್ನು ರಾಜ್ಯ ವಿಧಾನಸಭೆಗೆ ಅನ್ವಯಿಸಿದರೆ, ಸಮಾಜವಾದಿ ಪಕ್ಷವು ಪ್ರಸ್ತುತ 178 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆಗೆ, ಮೈತ್ರಿಕೂಟವು 403 ಸದಸ್ಯರ ವಿಧಾನಸಭೆಯಲ್ಲಿ 202ರ ಬಹುಮತದ ಗಡಿಯನ್ನು ಆರಾಮವಾಗಿ ದಾಟುತ್ತದೆ. ಚುನಾವಣಾ ಲೆಕ್ಕಾಚಾರವನ್ನು ಬದಿಗಿಟ್ಟರೆ, ಬಿಜೆಪಿಯೊಳಗೆ ಅಸಮಾಧಾನದ ಪ್ರದೇಶಗಳಿವೆ. ಪಕ್ಷವು ಇಲ್ಲಿಯವರೆಗೆ ಆಂತರಿಕ ಕುಂದುಕೊರತೆಗಳು ಬಹಿರಂಗಗೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ, ಆದರೆ ಈಗ ಬಿರುಕುಗಳು ಗೋಚರಿಸುತ್ತಿವೆ. ಉದಾಹರಣೆಗೆ, ಈ ವರ್ಷದ ಜನವರಿಯಲ್ಲಿ ಬುಂದೇಲ್ಖಂಡ್ನ ಗ್ರಾಮೀಣ ಕ್ಷೇತ್ರವಾದ ಚರಖಾರಿಯ ಬಿಜೆಪಿ ಶಾಸಕರು ರಾಜ್ಯ ಜಲ ಸಚಿವ ಸ್ವತಂತ್ರ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದರು. ಅಚ್ಚರಿಯ ಅಂಶ ವಿರೋಧ ಪಕ್ಷಗಳನ್ನು ಅನೌಪಚಾರಿಕವಾಗಿ ಸಂಪರ್ಕಿಸುವ ಮೂಲಕ ಶಾಸಕಾಂಗ ಪೂರ್ವ ಸಮಾಲೋಚನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿದ್ದರೂ, ಸರ್ಕಾರದ ಈ ಕ್ರಮವು ಅಚ್ಚರಿಯ ಅಂಶವನ್ನು ಹೊಂದಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲು ಮಹಿಳೆಯರಿಗೆ ಯಾವ ಸ್ಥಾನಗಳನ್ನು ಮೀಸಲಿಡಲಾಗುವುದು ಎಂಬುದನ್ನು ಆಡಳಿತ ತಿಳಿಸುವವರೆಗೆ ವಿರೋಧ ಪಕ್ಷಗಳು ಕಾಯಬೇಕಾಗುತ್ತದೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಐತಿಹಾಸಿಕವಾಗಿ ಮಹಿಳಾ ಶಾಸಕರ ಉಪಸ್ಥಿತಿ ಕಡಿಮೆಯಾಗಿದೆ. ಯುಪಿ ವಿಧಾನಸಭೆಯ ವೆಬ್ಸೈಟ್ ಪ್ರಕಾರ, 403 ಸದಸ್ಯ ಬಲದಲ್ಲಿ 51 ಮಹಿಳಾ ಶಾಸಕರಿದ್ದಾರೆ. ಅಂದರೆ 12.6%. ಇದು ಲೋಕಸಭೆಯ ದಾಖಲೆಗಿಂತ ಹೆಚ್ಚು ಭಿನ್ನವಾಗಿಲ್ಲ. 18ನೇ ಲೋಕಸಭೆಯಲ್ಲಿ ಕೇವಲ 14% ಮಹಿಳಾ ಸಂಸದರಿದ್ದಾರೆ. 51 ಶಾಸಕಿಯರಲ್ಲಿ 30 ಮಂದಿ ಬಿಜೆಪಿಯವರು ಮತ್ತು 15 ಮಂದಿ ಸಮಾಜವಾದಿ ಪಕ್ಷದವರು. ಮಹಿಳಾ ಅಭ್ಯರ್ಥಿಗಳನ್ನು ಹುಡುಕುವಲ್ಲಿ ಬಿಜೆಪಿ ನಮಗಿಂತ ಉತ್ತಮ ಸ್ಥಾನದಲ್ಲಿದೆ ಎಂಬುದು ನಿಜ, ಏಕೆಂದರೆ ಬಿಜೆಪಿ ನಮಗಿಂತ ಹೆಚ್ಚಿನ ಮಹಿಳೆಯರನ್ನು ಹೊಂದಿದೆ ಎಂದು ಎಸ್ಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ. ಜಾತಿ ಆಧಾರಿತ ಭಿನ್ನಾಭಿಪ್ರಾಯ ಬಿಜೆಪಿ ಪ್ರಸ್ತುತ ವಿವಿಧ ಜಾತಿ ಗುಂಪುಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಪಕ್ಷವನ್ನು ಬೆಂಬಲಿಸುವ ಬ್ರಾಹ್ಮಣರು ಅತೃಪ್ತರಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಅಡಿಯಲ್ಲಿ ಅವರು ಮೂಲೆಗುಂಪಾಗಿದ್ದಾರೆ ಎಂದು ಭಾವಿಸುತ್ತಾರೆ, ಅಲ್ಲಿ ಠಾಕೂರ್ ಗುಂಪು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂದು ತೋರುತ್ತದೆ. ಯುಜಿಸಿ ಸಮಾನತೆಯ ನಿಯಮಗಳ ಕುರಿತು ಇತ್ತೀಚೆಗೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಬ್ರಾಹ್ಮಣ ಪ್ರತಿಭಟನೆಗಳು ಹೆಚ್ಚು ಧ್ವನಿ ಎತ್ತಿದ್ದರೂ, ಪಕ್ಷವು ಒಬಿಸಿ ಬೆಂಬಲವನ್ನು ಕಳೆದುಕೊಳ್ಳುವ ಬಗ್ಗೆ ಹೆಚ್ಚು ಚಿಂತಿತವಾಗಿದೆ. 2024ರ ಚುನಾವಣೆಯಲ್ಲಿ ಅನೇಕ ಒಬಿಸಿ ಮತದಾರರು ಬಿಜೆಪಿಯಿಂದ ದೂರ ಸರಿಯಲು ಪ್ರಾರಂಭಿಸಿದರು. ಇದು ಉತ್ತರ ಪ್ರದೇಶದಲ್ಲಿ ಪಕ್ಷವು ಬಹಳಷ್ಟು ನೆಲೆಯನ್ನು ಕಳೆದುಕೊಳ್ಳಲು ಕಾರಣವಾಯಿತು. 2019ರಲ್ಲಿ 62 ಸ್ಥಾನಗಳಿದ್ದದ್ದು 2024ರಲ್ಲಿ 33ಕ್ಕೆ ಇಳಿದಿದೆ. ಸಮಾಜವಾದಿ ಪಕ್ಷದ (ಎಸ್ಪಿ) ನಾಯಕಿಯೊಬ್ಬರು ಮಹಿಳಾ ಮೀಸಲಾತಿ ಮಸೂದೆಯು ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಭಾವಿಸುವುದಿಲ್ಲ. ಮಹಿಳೆಯರ ಮೇಲೆ ಕೇಂದ್ರೀಕರಿಸುವ ಮೂಲಕ ನೀವು ಜಾತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಮಹಿಳಾ ಅಭ್ಯರ್ಥಿಗಳು ಸಹ ಒಂದು ಜಾತಿಗೆ ಸೇರಿದವರು. ಮತದಾರರು ಇನ್ನೂ ಅದರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದಿದ್ದಾರೆ. ಆರಂಭಿಕ ದಿನಗಳು ಭಾರತದಲ್ಲಿ ಸರ್ಕಾರದಲ್ಲಿ ಮಹಿಳೆಯರ ಸಂಖ್ಯೆ ಯಾವಾಗಲೂ ಕಡಿಮೆಯೇ ಇತ್ತು. ಆರಂಭದಲ್ಲಿ ಸಂವಿಧಾನ ಸಭೆಯಲ್ಲಿ (ಭಾರತದ ಸಂವಿಧಾನವನ್ನು ರಚಿಸಿದ ಸಮಿತಿ) ಕೇವಲ 15 ಮಹಿಳೆಯರು ಮಾತ್ರ ಇದ್ದರು. ಆ ಆರಂಭಿಕ ದಿನಗಳಲ್ಲಿ ರೇಣುಕಾ ರೇ ಅವರಂತಹ ಕೆಲವು ಮಹಿಳಾ ನಾಯಕರು ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವುದರ ವಿರುದ್ಧ ವಾದಿಸಿದರು. ಇತರ “ಮುಂದುವರಿದ” ದೇಶಗಳಲ್ಲಿ ಕಂಡುಬರುವ ಮಹಿಳಾ ಮತದಾನದ ಹಕ್ಕುಗಳಿಗಾಗಿ ನಡೆದ ಚಳುವಳಿಗಳನ್ನು ಅವರು ಕೀಳಾಗಿ ನೋಡಿದರು. ಕೆಲವು ಸ್ಥಾನಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಟ್ಟರೆ, ಅವು ಬೇರೆ ಸ್ಥಾನಗಳನ್ನು ಗೆಲ್ಲುವುದನ್ನು ತಡೆಯಬಹುದು ಎಂದು ಅವರು ಚಿಂತಿಸಿದರು. “ಕೇವಲ ಸಾಮರ್ಥ್ಯ”ದ ಆಧಾರದ ಮೇಲೆ ಜನರನ್ನು ಆಯ್ಕೆ ಮಾಡಿದರೆ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಅವರು ನಂಬಿದ್ದರು. ಆದರೆ ಮುಂದಿನ 50 ವರ್ಷಗಳಲ್ಲಿ ಈ ಅಭಿಪ್ರಾಯ ಬದಲಾಯಿತು. ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಅಧಿಕಾರಕ್ಕೆ ತರಲು “ಕೇವಲ ಸಾಮರ್ಥ್ಯ” ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಯಿತು. 1996ರಲ್ಲಿ ಸಂಸತ್ತಿನಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡಲು ಹೊಸ ಕಾನೂನನ್ನು ಪ್ರಸ್ತಾಪಿಸಲಾಯಿತು. ಸರ್ಕಾರವು ಇದು ಬೇಗ ಅಂಗೀಕಾರವಾಗುತ್ತದೆ ಎಂದು ಆಶಿಸಿತು, ಆದರೆ ಅದು ವಾಗ್ವಾದಗಳಿಗೆ ಕಾರಣವಾಯಿತು. ಕೆಲವು ಸಂಸದರು ಸಾಕಷ್ಟು “ಸಮರ್ಥ ಮಹಿಳೆಯರು” ಇದ್ದಾರೆಯೇ ಎಂದು ಅನುಮಾನಿಸಿದರು. ಇತರರು ಈ ಕಾನೂನಿನಲ್ಲಿ ಹಿಂದುಳಿದ ಜಾತಿಗಳ ಮಹಿಳೆಯರಿಗೆ ವಿಶೇಷ ಉಪ-ಕೋಟಾ ಇರಬೇಕು ಎಂದು ವಾದಿಸಿದರು. 15 ವರ್ಷಗಳ ಅವಧಿಗೆ ಕಾನೂನನ್ನು ತಕ್ಷಣ ಜಾರಿಗೆ ತರಬೇಕು ಎಂದು ಒಂದು ಸಮಿತಿ ಸೂಚಿಸಿತು. ಆದಾಗ್ಯೂ ಈ ಪ್ರಸ್ತಾವನೆ ಅಂಗೀಕಾರವಾಗಲಿಲ್ಲ ಮತ್ತು ಒಂದು ಬಾರಿ ಅವಧಿ ಮೀರಿತು. ನಂತರ 1998ರಿಂದ 2003ರ ನಡುವೆ ನಾಲ್ಕು ಬಾರಿ ಮಸೂದೆ ವಿಫಲವಾಯಿತು. 2008ರಲ್ಲಿ ಹೊಸ ಸರ್ಕಾರವು ಮತ್ತೆ ಪ್ರಯತ್ನಿಸಿತು. ಆದರೆ ಮಸೂದೆ 2014ರಲ್ಲಿ ಮತ್ತೊಮ್ಮೆ ಅವಧಿ ಮೀರಿತು. ಅಂತಿಮವಾಗಿ 2023ರಲ್ಲಿ ಪ್ರಸ್ತುತ ಸರ್ಕಾರವು ಅದನ್ನು ಮತ್ತೆ ತಂದಿತು. ಆದರೆ ಜನಗಣತಿ ಮತ್ತು ಡಿಲಿಮಿಟೇಶನ್ ಮುಗಿದ ನಂತರವೇ ಕಾನೂನು ಜಾರಿಗೆ ಬರಬಹುದು ಎಂದು ಹೇಳುವ ನಿಯಮವನ್ನು ಸೇರಿಸಲಾಯಿತು. ಇದರಿಂದ “ಅನಿರ್ದಿಷ್ಟ ವಿಳಂಬ” ಉಂಟಾಯಿತು. ಅಂದರೆ ಅದು ನಿಜವಾಗಿಯೂ ಯಾವಾಗ ಜಾರಿಗೆ ಬರುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ. ವಿರೋಧ ಪಕ್ಷದ ನಾಯಕರು ಈ ವಿಳಂಬವನ್ನು ಟೀಕಿಸಿದ್ದಾರೆ. ಮಹಿಳಾ ಸ್ಥಾನಗಳನ್ನು ಜನಗಣತಿಗೆ ಸಂಪರ್ಕಿಸಲು ಯಾವುದೇ ಕಾರಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾದಿಸಿದರು. ಸ್ಪಷ್ಟವಾದ ಆರಂಭಿಕ ದಿನಾಂಕವಿಲ್ಲದೆ ಈ ಕಾನೂನು ಕೇವಲ “ಜುಮ್ಲಾ” (ಖಾಲಿ ಭರವಸೆ) ಆಗಿ ಉಳಿಯಬಹುದು ಎಂದು ಅವರು ಎಚ್ಚರಿಸಿದರು. ಮಹಾರಾಷ್ಟ್ರದಿಂದ ಬಿಹಾರದವರೆಗೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಮಹಿಳಾ ಮತದಾರರು ವಿಶ್ವಾಸಾರ್ಹ ಬೆಂಬಲ ನೆಲೆಯಾಗಿದ್ದಾರೆ. ದೀರ್ಘಕಾಲದ ಭರವಸೆಯಿಂದ ನಿಜವಾದ ಮೀಸಲಾತಿಗೆ ಬದಲಾಯಿಸುವುದರಿಂದ ಈ ಬೆಂಬಲ ಮತ್ತಷ್ಟು ಬಲಪಡಿಸಬಹುದು. ಆದರೆ ಮಹಿಳೆಯರು ನಿಜವಾಗಿಯೂ ಮಹಿಳಾ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಬಯಸುತ್ತಾರೆಯೇ ಎಂಬುದು ಸ್ಪಷ್ಟವಿಲ್ಲ. ರಾಜಕೀಯದಲ್ಲಿ ಇಂತಹ ನಡೆಗಳು ಸಾಮಾನ್ಯವಾಗಿ ಒಂದು ಪ್ರಯತ್ನವಾಗಿದ್ದು, ಅದರ ಫಲಿತಾಂಶಗಳು ಅನಿಶ್ಚಿತವಾಗಿರುತ್ತವೆ.
ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ನಿಧನ
ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ (74) ಬುಧವಾರ ಸಂಜೆ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಜಿಲ್ಲೆ ಕೊರಂದರ ಪಾಳ್ಯದಲ್ಲಿ ರಘುರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೇಷ್ಠ ಪುತ್ರರಾಗಿ 1952ರ ನವೆಂಬರ್ 6 ರಂದು ಜನಿಸಿದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ. ಜೆ. ಕುಮಾರ್, ಕನ್ನಡ ಚಿತ್ರ ರಂಗದ ದಿಗ್ಗಜರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ರಜನಿ ಕಾಂತ್, ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಾಳೆ(ಗುರುವಾರ) ಮಧ್ಯಾಹ್ನದ ನಂತರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂತಾಪ: ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ವಿಧಾನಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್ ರದ್ದತಿಗೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ
Satish Jarkiholi Assurance- ರಾಜ್ಯ ಹೆದ್ದಾರಿಗಳಲ್ಲಾಗಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾಗಲಿ ದ್ವಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೆ ನೈಸ್ ರಸ್ತೆಯಲ್ಲಿ ಟೋಲ್ ಹಾಕುವ ಬಗ್ಗೆ ಜನರಿಗೆ ಅಸಮಾಧಾನ ಇತ್ತು. ಇದೀಗ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟೋಲ್ ಸಂಗ್ರಹ ರದ್ದುಪಡಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಟೋಲ್ ಆದಾಯ ಮತ್ತು ಹೂಡಿಕೆಯ ಮರುಪರಿಶೀಲನೆಗೆ ಉಪಸಮಿತಿ ರಚಿಸಲಾಗಿದ್ದು, ಸಮಾಲೋಚಕರ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮಹಾಕುಂಭ ವೈರಲ್ ತಾರೆ ಮೊನಾಲಿಸಾ ಭೋಸ್ಲೆ ಕೇರಳದಲ್ಲಿ ವಿವಾಹ; ರಕ್ಷಣೆ ಕೋರಿದ ದಂಪತಿ
ತಿರುವನಂತಪುರ: ಪ್ರಯಾಗರಾಜ್ ನಲ್ಲಿ 2025ರಲ್ಲಿ ನಡೆದ ಮಹಾಕುಂಭ ಮೇಳದ ವೇಳೆ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಬುಧವಾರ ಕೇರಳದಲ್ಲಿ ತಮ್ಮ ಸಂಗಾತಿ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ತಿರುವನಂತಪುರದ ವಿಝಿಂಜಮ್ ನಲ್ಲಿರುವ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದೆ. ಇಂದೋರ್ ಮೂಲದ ಮೊನಾಲಿಸಾ, ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೇಶದಾದ್ಯಂತ ಗಮನ ಸೆಳೆದಿದ್ದರು. ದಂಪತಿಗಳು ರಜೆಯ ನಿಮಿತ್ತ ಕೇರಳಕ್ಕೆ ಬಂದಿದ್ದು, ಇಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದಾಗಿ ಫರ್ಮಾನ್ ಖಾನ್ ವರದಿಗಾರರಿಗೆ ತಿಳಿಸಿದ್ದಾರೆ. ‘ನಾವು ಆರು ತಿಂಗಳ ಹಿಂದೆ ಭೇಟಿಯಾದೆವು. ಬಳಿಕ ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದೇವೆ. ಅವರು ನನಗೆ ಪ್ರಪೋಸ್ ಮಾಡಿದರು. ಕೇರಳಕ್ಕೆ ಬಂದಾಗ ಈ ದೇವಸ್ಥಾನ ನಮಗೆ ಇಷ್ಟವಾಯಿತು. ಆದ್ದರಿಂದ ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು. ಇನ್ನೊಂದೆಡೆ ಕೆಲವು ವರದಿಗಳ ಪ್ರಕಾರ, ಮೊನಾಲಿಸಾ ಪೂವಾರ್ ಪ್ರದೇಶದಲ್ಲಿ ನಡೆಯುತ್ತಿದ್ದ ಚಲನಚಿತ್ರ ಚಿತ್ರೀಕರಣದ ನಿಮಿತ್ತ ಕೇರಳದಲ್ಲಿದ್ದರು ಎನ್ನಲಾಗಿದೆ. ತಮ್ಮ ಅಂತರ್ಧರ್ಮೀಯ ಸಂಬಂಧಕ್ಕೆ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದು, ಸಂಭಾವ್ಯ ಬೆದರಿಕೆಗಳ ಭೀತಿಯಿಂದ ದಂಪತಿಗಳು ಥಂಪನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದಾರೆ ಎಂದು ವರದಿಯಾಗಿದೆ. ‘ನಮ್ಮ ಸಂಬಂಧವನ್ನು ನನ್ನ ಕುಟುಂಬ ಒಪ್ಪಿಕೊಂಡಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಮೊನಾಲಿಸಾ ಮದುವೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮದುವೆ ರಾಜಕೀಯ ವಲಯದಲ್ಲಿಯೂ ಗಮನ ಸೆಳೆದಿದೆ. ಸಮಾರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) [ಸಿಪಿಐ(ಎಂ)] ನಾಯಕರು ಭಾಗವಹಿಸಿ ದಂಪತಿಗಳಿಗೆ ಬೆಂಬಲ ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ, ‘ಜಾತ್ಯತೀತ ಮೌಲ್ಯಗಳು ಮತ್ತು ಮಾನವೀಯತೆಯ ಮೇಲಿನ ಪ್ರೀತಿಗೆ ಕೇರಳ ಹೆಸರುವಾಸಿಯಾಗಿದೆ. ಈ ಭೂಮಿಯ ಜನರು ಅದಕ್ಕಾಗಿ ಪ್ರಪಂಚದ ಮುಂದೆ ಹೆಮ್ಮೆಯಿಂದ ನಿಲ್ಲಬಹುದು’ ಎಂದು ಹೇಳಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಈ ಮದುವೆಯನ್ನು ‘ನಿಜವಾದ ಕೇರಳ ಸ್ಟೋರಿ’ ಎಂದು ಕರೆದರು. ರಾಜ್ಯವನ್ನು ಧಾರ್ಮಿಕ ಮೂಲಭೂತೀಕರಣದ ಕೇಂದ್ರವಾಗಿ ಚಿತ್ರಿಸಿದ ವಿವಾದಾತ್ಮಕ ಚಲನಚಿತ್ರ ಸರಣಿಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು. ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಎ.ಎ. ರಹೀಮ್ ಮಾತನಾಡಿ, ‘ಅಂತರ್ಧರ್ಮೀಯ ಅಥವಾ ಅಂತರ್ಜಾತಿ ವಿವಾಹಗಳನ್ನು ಭಾರತದ ಅನೇಕ ಭಾಗಗಳಲ್ಲಿ ಜನರು ಯೋಚಿಸಲೂ ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಶಕ್ತಿ ಎಂದರೆ ಅಂತಹ ವಿವಾಹಗಳು ಇಲ್ಲಿ ಸಹಜವಾಗಿ ನಡೆಯುತ್ತವೆ’ ಎಂದು ಹೇಳಿದರು. ಇದಕ್ಕೂ ಮೊದಲೂ ಅಂತರ್ಧರ್ಮೀಯ ದಂಪತಿಗಳು ಸುರಕ್ಷತೆಗಾಗಿ ಕೇರಳಕ್ಕೆ ಆಶ್ರಯ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. 2025ರ ಫೆಬ್ರವರಿಯಲ್ಲಿ ಜಾರ್ಖಂಡ್ ನ ಅಂತರ್ಧರ್ಮೀಯ ದಂಪತಿಗಳಾದ ಮುಹಮ್ಮದ್ ಗಾಲಿಬ್ (30) ಮತ್ತು ಆಶಾ ವರ್ಮಾ (27) ಅವರು ಕೊಲೆ ಬೆದರಿಕೆಗಳು ಮತ್ತು ‘ಲವ್ ಜಿಹಾದ್’ ಆರೋಪಗಳನ್ನು ಎದುರಿಸಿದ ಬಳಿಕ ತಮ್ಮ ರಾಜ್ಯದಿಂದ ಪಲಾಯನ ಮಾಡಿ ಕೇರಳಕ್ಕೆ ಬಂದಿದ್ದರು. ಆ ವೇಳೆ ಗಾಲಿಬ್ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ನೇಹಿತನ ಸಲಹೆ ಹಾಗೂ ಹಿಂದೆ ಕೇರಳಕ್ಕೆ ಭೇಟಿ ನೀಡಿದ ಅನುಭವದ ಆಧಾರದ ಮೇಲೆ ರಾಜ್ಯದ ಕೋಮು ಸಾಮರಸ್ಯದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದರಿಂದ ಕೇರಳವನ್ನು ಆರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಸೌಜನ್ಯ: thenewsminute.com
ಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ಅನ್ಯಾಯ ತಪ್ಪಿಸಲು ಮಾರ್ಗಸೂಚಿ ದರ ಪರಿಷ್ಕರಣೆ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದೊಂದೆ ಪರಿಹಾರವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರ ನೀಡುವ ಸಂಬಂಧ 2013ರ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾನೂನಿನ ಪ್ರಕಾರ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಅಂತಹ ಭೂಮಿಗೆ ಹೊಸದಾಗಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವುದಿಲ್ಲ ಎಂದರು. ಬದಲಾಗಿ ಹಿಂದಿನ ಮಾರ್ಗಸೂಚಿ ದರ ಅಥವಾ ಹಿಂದಿನ ಮೂರು ವರ್ಷದ ಮಾರುಕಟ್ಟೆಯ ನೋಂದಾಯಿತ ಸೇಲ್ ಡೀಡ್(ಮಾರಾಟ ಪತ್ರ) ದರವನ್ನು ಪರಿಗಣಿಸಲಾಗುತ್ತದೆ. ಆ ಪೈಕಿ ಭೂಮಿ ಹೆಚ್ಚಿನ ದರಕ್ಕೆ ವಹಿವಾಟು ಆಗಿರುವ ಆಧಾರದಲ್ಲಿ ಸರಾಸರಿ ಮೊತ್ತವನ್ನು ಪರಿಹಾರವಾಗಿ ನಿಗದಿಪಡಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕೆ.ಎಸ್.ನವೀನ್, ಹಳೆಯ ಮಾರ್ಗಸೂಚಿ ದರದ ಆಧಾರದಲ್ಲೇ ಪರಿಹಾರದ ಮೊತ್ತವನ್ನು ನಿಗದಿಪಡಿಸುವುದು ರೈತರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಎಂಬ ಮರುಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಸರಕಾರ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಭೂ ಸ್ವಾಧೀನ ಮಾಡುತ್ತಲೇ ಇರುತ್ತದೆ. ಕಾಲದಿಂದ ಕಾಲಕ್ಕೆ ದರ ಪರಿಷ್ಕರಣೆ ಮಾಡದಿದ್ದಲ್ಲಿ ರೈತರಿಗೆ ನಷ್ಟವಾಗುತ್ತದೆ ಎಂಬುದು ಸತ್ಯ. ಇದೇ ಕಾರಣಕ್ಕೆ ನಾವೂ ಸಹ ಮಾರ್ಗಸೂಚಿ ದರ ಪರಿಷ್ಕರಣೆ ಆಗಬೇಕು ಎನ್ನುತ್ತೇವೆ. ಆದರೆ, ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವಿಷಾದಿಸಿದರು. ಕೆಲವು ಕಡೆ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕೆಲವು ಕಡೆ ಭೂಮಿ ಮಾರ್ಗಸೂಚಿ ದರ 2 ಲಕ್ಷ ಇದ್ದರೆ, ಮಾರುಕಟ್ಟೆ ಮೌಲ್ಯ 70ರಿಂದ 80 ಲಕ್ಷ ಇದೆ. ಪರಿಣಾಮ ಕಪ್ಪು ಹಣದ ವಹಿವಾಟಿಗೂ ಇದು ಕಾರಣವಾಗಿದೆ. ಹೀಗಾಗಿ ಈ ಎಲ್ಲಾ ಅಕ್ರಮ ವಹಿವಾಟುಗಳನ್ನೂ ನಿಯಂತ್ರಿಸಿ ರೈತರಿಗೂ ನ್ಯಾಯಬದ್ಧ ಪರಿಹಾರ ನೀಡಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆಯೊಂದೇ ಪರಿಹಾರ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.

32 C