LSG Vs DC Match- ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಮತ್ತು ಲಖನೌ ತಂಡದ ನಾಯಕ ರಿಷಭ್ ಪಂತ್ ಅವರ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಶಮಿ ಮತ್ತು ನೋರ್ಜೆ ಅವರ ಸೇರ್ಪಡೆಯಿಂದ ಲಱನೌ ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಅತ್ತ ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದೆ. ಏಕನಾ ಮೈದಾನದ ಸಮತೋಲಿತ ಪಿಚ್ನಲ್ಲಿ ಟಾಸ್ ನಿರ್ಣಾಯಕವಾಗಲಿದೆ.
Bengaluru | ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್ಗಳ ಮಾರಾಟ: ಐವರ ಬಂಧನ
ಬೆಂಗಳೂರು, ಮಾ.31: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಾಚ್ಗಳನ್ನು ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ 25 ಲಕ್ಷ ಮೌಲ್ಯದ 670 ವಾಚ್ ಹಾಗೂ 414 ಬಿಡಿ ಭಾಗಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಚಿಕ್ಕಪೇಟೆ, ಸುಲ್ತಾನ್ಪಾಳ್ಯ ಮುಖ್ಯರಸ್ತೆ, ಗಂಗಾನಗರ, ದಿಣ್ಣೂರು ಮುಖ್ಯರಸ್ತೆಯಲ್ಲಿರುವ ವಾಚ್ ಅಂಗಡಿಗಳಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರಿನ ವಾಚ್ಗಳು ಹಾಗೂ ಬಿಡಿ ಭಾಗಗಳನ್ನು ನಕಲಿ ಮಾಡಿ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿರುವುದರ ಬಗ್ಗೆ ಟೈಟಾನ್ ಕಂಪೆನಿಯ ಅಧಿಕೃತ ಕಾನೂನು ಪ್ರತಿನಿಧಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಸದ್ಯಕ್ಕೆ ನಗರದ 5 ಅಂಗಡಿಗಳ ಮೇಲೆ ದಾಳಿ ಮಾಡಿ ನಕಲಿ ವಾಚ್ಗಳು ಹಾಗೂ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಚ್ಗಳನ್ನು ಎಲ್ಲಿ ತಯಾರು ಮಾಡಲಾಗುತ್ತಿತ್ತು, ಹೇಗೆ ಸರಬರಾಜು ಮಾಡಿ ಅಂಗಡಿಗಳಲ್ಲಿಟ್ಟು ಜನರಿಗೆ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಜಾಲದ ಹಿಂದೆ ಯಾರಿದ್ದಾರೆ ಎಂಬುವುದನ್ನು ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಿಜೆಪಿ ನಾಯಕರದ್ದು ರಾಜಕೀಯಕ್ಕಾಗಿ ಕನ್ನಡ ವಿರೋಧಿ ಧೋರಣೆ: ಟಿ.ಎ.ನಾರಾಯಣಗೌಡ
ಬೆಂಗಳೂರು: ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕನ್ನಡಿಗರ ಮೇಲಿನ ಅನಗತ್ಯ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿ ಕಡ್ಡಾಯ ಕಲಿಕೆ ವಿರೋಧಿಸುತ್ತಿರುವವರು ದೇಶದ್ರೋಹಿಗಳು ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ದ್ವಿಭಾಷಾ ನೀತಿ ಪರವಾಗಿ ಮಾತನಾಡಿದ್ದ ರಾಷ್ಟ್ರಕವಿ ಕುವೆಂಪು ಅವರನ್ನು ಅವರು ದೇಶದ್ರೋಹಿಗಳೆಂದು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಹಿಡಿದು ಕನ್ನಡದ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು ತ್ರಿಭಾಷಾ ನೀತಿಯ ವಿರುದ್ಧ ನಿರಂತರವಾಗಿ ಮಾತನಾಡುತ್ತ ಬಂದಿದ್ದಾರೆ. ಇವರೆಲ್ಲ ದೇಶದ್ರೋಹಿಗಳೇ? ಅಶ್ವತ್ಥ್ ನಾರಾಯಣ್ ಅವರಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಹಿಂದಿ ಹೇರಿಕೆ ಪರವಾಗಿ ಮಾತನಾಡುತ್ತಿರುವವರೇ ನಿಜವಾದ ದೇಶದ್ರೋಹಿಗಳು, ನಾಡದ್ರೋಹಿಗಳು. ಈ ದೇಶವನ್ನು ಕೇವಲ ಹಿಂದಿ ಮತ್ತು ಸಂಸ್ಕೃತ ಎರಡೇ ಭಾಷೆಗಳನ್ನು ಇಟ್ಟುಕೊಂಡು ಆಳಲು ಹೊರಟಿದ್ದೀರಾ? ಈ ನುಡಿಗಳು ಮಾತ್ರ ರಾಷ್ಟ್ರೀಯತೆಯನ್ನು ಮೆರೆಸುವ ಭಾಷೆಗಳೇ? ಹಾಗಿದ್ದರೆ ನಮ್ಮ ಭಾಷೆಗಳೆಲ್ಲ ಏನು? ಎಂದು ಪ್ರಶ್ನಿಸಿದರು. ಪಾಕಿಸ್ತಾನ ಯಾಕೆ ವಿಭಜನೆ ಆಯಿತು ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ಭಾಷೆ ಹೋರಾಟದಿಂದಲೇ ಬಾಂಗ್ಲಾದೇಶ ಬೇರೆ ಆಯಿತು. ಭಾರತದಲ್ಲೂ ಅಂಥದ್ದೇ ಆಗಲಿ ಎಂದು ಬಿಜೆಪಿ ನಾಯಕರು ಬಯಸುತ್ತಿದ್ದಾರೆಯೇ? ಹಿಂದಿಯೇತರ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆಯೇ? ಇದರಿಂದ ದೇಶಕ್ಕೆ ಒಳಿತಾಗುವುದಿಲ್ಲ. ಬಿಜೆಪಿ ನಾಯಕರು ತಮಗೆ ದಿಲ್ಲಿಯಿಂದ ಬರುವ ಸಂದೇಶ ಕೇಳಿಕೊಂಡು ನಾಡದ್ರೋಹದ ಮಾತುಗಳನ್ನು ಆಡಬಾರದು ಎಂದು ತಿಳಿಸಿದರು. ‘ಮುಂದಿನ ಚುನಾವಣೆಯಲ್ಲಿ ಗೆದ್ದುಬಂದರೆ ಮತ್ತೆ ತ್ರಿಭಾಷಾ ನೀತಿ ಜಾರಿಗೆ ತರುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳಲಿ ನೋಡೋಣ, ಬಿಜೆಪಿ ನಾಯಕರು ಧೋರಣೆ ಬದಲಾಯಿಸಿಕೊಳ್ಳದಿದ್ದರೆ, ಎಲ್ಲ ಕಡೆಗಳಲ್ಲೂ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಹಾತ್ಮಗಾಂಧಿಯವರನ್ನು ಎಳೆದು ತಂದು ಮಾತನಾಡುತ್ತಿದ್ದಾರೆ. ನಿಮ್ಮ ರಾಜಕಾರಣ ನೀವು ಮಾಡಿಕೊಳ್ಳಿ. ಆದರೆ ಕನ್ನಡದ ತಂಟೆಗೆ ಬರಬೇಡಿ. ಕನ್ನಡದ ಅಸ್ತಿತ್ವದ ವಿರುದ್ಧ ಮಾತನಾಡಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಹರುಕು ಮುರುಕು ಹಿಂದಿಯಲ್ಲಿ ಮಾತಾಡಿ ದಿಲ್ಲಿಯ ತಮ್ಮ ನಾಯಕರನ್ನು ಮೆಚ್ಚಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಿಂದಿ ಕಡ್ಡಾಯ ಕಲಿಕೆಯ ಪರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ವಾಸ್ತವವಾಗಿ ವಿಷಯ ಜ್ಞಾನವೇ ಇಲ್ಲ. ತಮ್ಮ ನಾಯಕರನ್ನು ಓಲೈಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
Belagavi | ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ
ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 19 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ.ಎಂ. ಮಠಪತಿ, ಪಿಎಸ್ಐ ಎಲ್.ಬಿ. ಮಾಳಿ, ಎಎಸ್ಐ ಬಿ.ಕೆ. ರಂಗಣ್ಣವರ ಹಾಗೂ ಸಿಬ್ಬಂದಿಗಳಾದ ವಿಠ್ಠಲ ಭಾಂಗಿ, ಎಂ.ಬಿ. ಸಣ್ಣನಾಯ್ಕ, ರಮೇಶ ತೇಲಿ, ಈರಣ್ಣ ವಕ್ಕುಂದ ಮತ್ತು ಪಶುವೈದ್ಯಾಧಿಕಾರಿ ಎಂ.ವಿ. ಪಾಟೀಲ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Vijayapura | ಕನ್ನೊಳ್ಳಿ ಅಪಘಾತ ಪ್ರಕರಣಕ್ಕೆ ತಿರುವು: ಯುವಕ ಆತ್ಮಹತ್ಯೆ ಶಂಕೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್ಗೇಟ್ ಸಮೀಪ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರೊಬ್ಬರು ಸಜೀವ ದಹನಗೊಂಡ ಪ್ರಕರಣಕ್ಕೆ ಬೇರೆ ತಿರುವು ದೊರಕಿದ್ದು, ಆತ್ಯಹತ್ಮೆಯ ಶಂಕೆ ವ್ಯಕವಾಗಿದೆ. ಮೃತರನ್ನು ದೇವರ ಹಿಪ್ಪರಗಿ ಪಟ್ಟಣದ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಯಬಾಗೌಡ ನಾಗರಾಳ (19) ಎಂದು ಗುರುತಿಸಲಾಗಿದೆ. ಅಭಿಷೇಕ್ ಸಾಯಬಾಗೌಡ ನಾಗರಾಳ ಈ ಘಟನೆಗೂ ಮುನ್ನ ವಿಡಿಯೋ ಮಾಡಿ ಇನ್ಸ್ಟಾಗ್ರಾಂ ಹರಿಬಿಟ್ಟಿದ್ದಾರೆ. ಮೂವರ ಹೆಸರು ಉಲ್ಲೇಖಿಸಿ ನನ್ನ ಸಾವಿಗೆ ಅವರೇ ಕಾರಣ, ನಾನು ಪ್ರೀತಿಸಿದ ಹುಡುಗಿಯನ್ನು ನನ್ನಿಂದ ಅವರು ದೂರ ಮಾಡಿದ್ದಾರೆ. ಅವಳಿಲ್ಲದೇ ನಾನು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಘಟನೆಯ ನಂತರ ಕನ್ನೊಳ್ಳಿ ಟೋಲ್ ಗೇಟ್ ಬಳಿ ದುರ್ಘಟನೆ ನಡೆದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಗಿತ್ತು. ಘಟನೆಯಲ್ಲಿ ಬೈಕ್ ಮೇಲಿದ್ದ ಅಭಿಷೇಕ್ ಸಂಪೂರ್ಣವಾಗಿ ಸಜೀವ ದಹನಗೊಂಡಿದ್ದರು. ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಯುವಕ ಹರಿಬಿಟ್ಟಿದ್ದ ವಿಡಿಯೋ ಇಡೀ ಪ್ರಕರಣಕ್ಕೆ ತಿರುವು ಕೊಟ್ಟಿದೆ. ಪ್ರೇಮ ವೈಫಲ್ಯದಿಂದ ಈ ರೀತಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ.
ಸ್ಕ್ವಾಷ್: ಅನಾಹತ್, ಅಭಯ್ ಗೆ ಏಷ್ಯನ್ ವರ್ಷದ ಆಟಗಾರ ಪ್ರಶಸ್ತಿ
ಚೆನ್ನೈ, ಮಾ.31: ಭಾರತದ ಅಭಯ್ ಸಿಂಗ್ ಏಷ್ಯನ್ ಸ್ಕ್ವಾಷ್ ಫೆಡರೇಶನ್ (ಎಎಸ್ಎಫ್)ನಿಂದ 2025ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳೆಯರ (ಜೂನಿಯರ್) ವಿಭಾಗದಲ್ಲಿ ಯುವ ಆಟಗಾರ್ತಿ ಅನಾಹತ್ ಸಿಂಗ್ ಅಗ್ರ ಗೌರವಕ್ಕೆ ಪಾತ್ರರಾಗಿದ್ದಾರೆ. ಈಜಿಪ್ಟ್ ನಲ್ಲಿ 2025ರಲ್ಲಿ ನಡೆದ ವರ್ಲ್ಡ್ ಜೂನಿಯರ್ ಟೀಮ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಬಾಲಕರ ತಂಡವು ಪುರುಷರ ತಂಡ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಎಎಸ್ಎಫ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಿದೆ. ಸದ್ಯ ವಿಶ್ವದ 25ನೇ ರ್ಯಾಂಕಿನ ಆಟಗಾರ ಅಭಯ್, ಹಲವು ಬಾರಿ ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ ಮೊದಲ ಬಾರಿ ವರ್ಲ್ಡ್ ಕಪ್ ಮಿಕ್ಸ್ಡ್ ಟೀಮ್ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದರು. ವಿಶ್ವದ ನಂ.20ನೇ ಆಟಗಾರ್ತಿ ಅನಾಹತ್ ಕೂಡ ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2025ರಲ್ಲಿ ಕೈರೊದಲ್ಲಿ ನಡೆದ ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದರು. ವರ್ಲ್ಡ್ ಕಪ್ ಮಿಕ್ಸ್ಡ್ ಟೀಮ್ ನಲ್ಲಿ ಚಿನ್ನದ ಪದಕ ವಿಜೇತ ಭಾರತ ತಂಡದ ಭಾಗವಾಗಿದ್ದರು. ಈ ಹಿಂದೆ 2022ರಲ್ಲಿ ಎಎಸ್ಎಫ್ ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯ ಆಟಗಾರರು ಇದ್ದರು. ಸೌರವ್ ಘೋಷಾಲ್ ಹಾಗೂ ಜೋಶ್ನಾ ಚಿನ್ನಪ್ಪ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.
ಪತ್ನಿ ಕೊಲೆ ಪ್ರಕರಣ | LPG ಬುಕ್ಕಿಂಗ್ ನಿಂದ ಸಿಕ್ಕಿಬಿದ್ದ ಸೇನೆಯ ಮಾಜಿ ಕ್ಯಾಪ್ಟನ್!
ಭೋಪಾಲ, ಮಾ. 31: ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ನನ್ನು ಬಂಧಿಸಲು ಪೊಲೀಸರಿಗೆ LPG ಸಿಲಿಂಡರ್ ಬುಕ್ಕಿಂಗ್ ನೆರವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಾಜಿ ಕ್ಯಾಪ್ಟನ್ ಸಂದೀಪ್ ತೋಮರ್ ನನ್ನು ಮಧ್ಯಪ್ರದೇಶದ ಪಂಧುರ್ನಾ ಜಿಲ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ತೋಮರ್ ನನ್ನು 2013ರಲ್ಲಿ ಅಬೋಹರ್ನಲ್ಲಿ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆತ ಪತ್ನಿ ಶ್ವೇತಾ ಸಿಂಗ್ ಅವರನ್ನು ಹತ್ಯೆಗೈದಿದ್ದ. ಆರಂಭದಲ್ಲಿ ಈ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಈತ ಪ್ರಯತ್ನಿಸಿದ್ದ. ಆದರೆ, ವಿಸ್ತೃತ ತನಿಖೆಯಿಂದ ಅದು ಯೋಜಿತ ಹತ್ಯೆ ಎಂಬುದು ಬಹಿರಂಗಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣಾ ನ್ಯಾಯಾಲಯ 2014ರಲ್ಲಿ ತೋಮರ್ ದೋಷಿ ಎಂದು ಪರಿಗಣಿಸಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಈ ತೀರ್ಪನ್ನು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ 2022ರಲ್ಲಿ ಎತ್ತಿ ಹಿಡಿದಿತ್ತು. 2019ರಲ್ಲಿ ತೋಮರ್ಗೆ ಜಾಮೀನು ನೀಡಲಾಗಿತ್ತು. ಆದರೆ, ಉಚ್ಚ ನ್ಯಾಯಾಲಯ 2022ರಲ್ಲಿ ಶಿಕ್ಷೆಯನ್ನು ಎತ್ತಿ ಹಿಡಿದ ಬಳಿಕವೂ ಆತ ಶರಣಾಗತನಾಗಿರಲಿಲ್ಲ. ಅಂದಿನಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಆತ ತಾನಿರುವ ಸ್ಥಳ ಮತ್ತು ಗುರುತನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತೋಮರ್ ನ ಮಾವ ರಾಮ್ ನರೇಶ್ 2024ರಲ್ಲಿ ಆತನನ್ನು ಬಂಧಿಸುವಂತೆ ಒತ್ತಾಯಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನಂತರ ಉಚ್ಚ ನ್ಯಾಯಾಲಯ ತೋಮರ್ನನ್ನು ವಶಕ್ಕೆ ತೆಗೆದುಕೊಳ್ಳಲು ಕೈಗೊಂಡ ಕ್ರಮಗಳ ಕುರಿತು ವಿವರಿಸಿ, ಏಪ್ರಿಲ್ 8ರೊಳಗೆ ಅಫಿಡಾವಿಟ್ ಸಲ್ಲಿಸುವಂತೆ ಪಂಜಾಬ್ ಡಿಜಿಪಿಗೆ ಆದೇಶಿಸಿತ್ತು. ಬಳಿಕ ಫಾಝಿಲ್ಕಾದ ಹಿರಿಯ ಪೊಲೀಸ್ ಅಧೀಕ್ಷಕರು ತೋಮರ್ ನನ್ನು ಬಂಧಿಸಲು ಎಸ್ಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದರು. ಫಾಝಿಲ್ಕಾ ಪೊಲೀಸರು ತೋಮರ್ ನ ಪಾನ್ ಕಾರ್ಡ್ಗೆ ಜೋಡಣೆಯಾಗಿದ್ದ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಮಹತ್ವದ ಸುಳಿವು ಸಿಕ್ಕಿತು. ಈ ಖಾತೆಯನ್ನು ಆತ LPG ಸಿಲಿಂಡರ್ ಬುಕ್ ಮಾಡಲು ಬಳಸಿದ್ದ. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಮಧ್ಯಪ್ರದೇಶದಲ್ಲಿ ಆತನ ಇರುವಿಕೆಯನ್ನು ಪತ್ತೆ ಹಚ್ಚಿ ಬಂಧಿಸಿದರು.
ಭದ್ರತೆಗೆ ಒತ್ತು: ಚೀನಾದ ಸಿಸಿಕ್ಯಾಮರಾಗಳಿಗೆ ಭಾರತದಿಂದ ನಿರ್ಬಂಧ
ಹೈಕ್ವಿಷನ್ ಮತ್ತು ದಹುವಾಗೆ ಭಾರತದಿಂದ ಗೇಟ್ ಪಾಸ್
ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ, ನಾವೇ ಮುಖ್ಯಮಂತ್ರಿ ಆಗಿರ್ತೀವಿ: ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಇರುತ್ತೆ. ನಾವೇ ಮುಖ್ಯಮಂತ್ರಿ ಆಗಿರ್ತೀವಿ. ಎಚ್.ವೈ.ಮೇಟಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಮುಂದುವರೆಯಲು ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿಗಳು ಐಹೊಳೆ ಮತ್ತು ಅಮೀನಘಡ ಗ್ರಾಮಗಳಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ನೀವು ಉತ್ತಮ ಜನಪ್ರತಿನಿಧಿಯನ್ನು ಆರಿಸಬೇಕಾಗಿದೆ. ನಿಮ್ಮ ಪ್ರತಿನಿಧಿ ಹೇಗಿರಬೇಕೆಂದು ಸರಿಯಾಗಿ ನಿರ್ಧರಿಸಿ ಎಂದು ಸಿಎಂ ಕರೆ ನೀಡಿದರು. ಮೋದಿಯವರು ಪ್ರಧಾನಿಯಾಗಿ 12 ವರ್ಷ ಆಯ್ತು. ಅಚ್ಚೆ ದಿನ್ ಎಂದರು, ಸಬ್ ಕಾ ಸಾಥ್ - ಸಬ್ ಕಾ ವಿಕಾಸ್ ಎಂದರು. ಪ್ರತಿ ಕುಟುಂಬಕ್ಕೆ 15 ಲಕ್ಷ ಕೊಡ್ತೀವಿ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದರು. ಅವರು ಹೇಳಿದ್ದರಲ್ಲಿ ಒಂದನ್ನೂ ಮಾಡಲಿಲ್ಲ. ದೇಶದ ಸಾಲವನ್ನು 50 ಲಕ್ಷ ಕೋಟಿಯಿಂದ 218 ಲಕ್ಷ ಕೋಟಿಗೆ ಹೆಚ್ಚಿಸಿದ್ದೇ ಮೋದಿಯವರ ಸಾಧನೆ. ಹೀಗಿದ್ದೂ ಬಿಜೆಪಿ ನಾಯಕರು ಯಾವ ಮುಖ ಇಟ್ಟುಕೊಂಡು ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿ ಎಂದು ಕೇಳ್ತೀರಿ ಎಂದು ವ್ಯಂಗ್ಯವಾಡಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೃಷ್ಣ ಮೇಲ್ದಂಡೆ ಮತ್ತು ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದ್ದರಿಂದಲೇ ಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ. ನಾನು ಮುಖ್ಯಮಂತ್ರಿಯಾಗಿ ಸಭೆ ನಡೆಸಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ, ಒಣ ಭೂಮಿಗೆ 30 ಲಕ್ಷ ರೂ ಪರಿಹಾರ ಕೊಡುವ ತೀರ್ಮಾನ ಮಾಡಿ ಕೆಲಸ ಪ್ರಾರಂಭ ಮಾಡಿದ್ದು ಮೂರು ವರ್ಷದಲ್ಲಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು. ಹೀಗಾಗಿ ಬಿಜೆಪಿಗೆ ಮತ ಹಾಕಬೇಡಿ. ಎಚ್.ವೈ.ಮೇಟಿಯವರ ಒತ್ತಾಯದಂತೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ತರಲು ಶಂಕುಸ್ಥಾಪನೆ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಟ್ರಾಮಾ ಸೆಂಟರನ್ನೂ ನಾವು ಮಾಡುತ್ತೇವೆ. ಐಹೊಳೆಯನ್ನು ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಿರುವ ಎಲ್ಲಾ ಕೆಲಸಗಳನ್ನೂ ಮಾಡುತ್ತೇವೆ ಎಂದು ಭರವಸೆ ನೀಡಿದರು. ಉಮೇಶ್ ಮೇಟಿಯವರು ಗೆದ್ದರೆ ನನ್ನ ಕೈ ಬಲಪಡಿಸಿದಂತಾಗುತ್ತದೆ. ಅಹಿಂದ ಸಮುದಾಯದ ಪ್ರಗತಿಗೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತದೆ. ಆದ್ದರಿಂದ ಇವರನ್ನೇ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಮಾರಣಾಂತಿಕ ದಾಳಿ ಪ್ರಕರಣಗಳ ದೋಷಿಗಳಿಗೆ ಗಲ್ಲು ವಿಧಿಸುವ ಮಸೂದೆಗೆ ಇಸ್ರೇಲ್ ಸಂಸತ್ ಅಸ್ತು
ಟೆಲ್ ಅವೀವ್, ಮಾ.31: ಪಶ್ಚಿಮ ದಂಡೆಯಲ್ಲಿ ಮಾರಣಾಂತಿಕ ದಾಳಿಗಳನ್ನು ನಡೆಸಿದ ಪ್ರಕರಣಗಳಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಫೆಲೆಸ್ತೀನಿಯರನ್ನು ಗಲ್ಲಿಗೇರಿಸುವುದಕ್ಕೆ ಅವಕಾಶ ನೀಡುವ ವಿವಾದಾತ್ಮಕ ಮಸೂದೆಯನ್ನು ಇಸ್ರೇಲ್ ಸಂಸತ್ ಅಂಗೀಕರಿಸಿದೆ. ನೆತನ್ಯಾಹು ಸರ್ಕಾರದ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ನೂತನ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಇಸ್ರೇಲ್ ನ ಸಾಮಾಜಿಕ ಹೋರಾಟಗಾರರು ಘೋಷಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ 62 ಮಂದಿ ಸಂಸದರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 48 ಮಂದಿ ವಿರೋಧಿಸಿದ್ದರು ಹಾಗೂ ಓರ್ವ ಗೈರುಹಾಜರಾಗಿದ್ದರು. ಇಸ್ರೇಲ್ ನ ಕಟ್ಟಾ ಬಲಪಂಥೀಯ ರಾಜಕಾರಣಿ, ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಅವರು ಮಸೂದೆಯನ್ನು ಮಂಡಿಸಿದ್ದರು. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘‘ನಾವು ಇತಿಹಾಸ ನಿರ್ಮಿಸಿದ್ದೇವೆ. ನಾವು ಭರವಸೆ ನೀಡಿದ್ದೆವು. ಈಗ ಅದನ್ನು ಈಡೇರಿಸಿದ್ದೇವೆ’’ ಎಂದು ಹೇಳಿದ್ದಾರೆ. ನೂತನ ಕಾಯ್ದೆಯಡಿ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಉದ್ದೇಶಪೂರ್ವಕವಾಗಿ ಫೆಲೆಸ್ತೀನಿಯರು ನಡೆಸುವ ದಾಳಿಗಳನ್ನು ಭಯೋತ್ಪಾದನಾ ಕೃತ್ಯವೆಂದು ಇಸ್ರೇಲ್ ನ ಮಿಲಿಟರಿ ಕೋರ್ಟ್ ಪರಿಗಣಿಸಿದಲ್ಲಿ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕಾಗುತ್ತದೆ. ಆದರೆ ವಿಶೇಷ ಸನ್ನಿವೇಶಗಳಲ್ಲಿ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಅವಕಾಶವಿದೆ.
PBKS Vs GT: ಪಂಜಾಬ್ ಕಿಂಗ್ಸ್ ಪರ ಕೂಪರ್ ಕಾನೊಲಿ ಹರಿಸಿದ ರನ್ ಮಳೆಗೆ ಕೊಚ್ಚಿಹೋದ ಗುಜರಾತ್ ಟೈಟನ್ಸ್
IPL 2026 PBKS Vs GT: ಮುಲ್ಲನ್ಪುರ್ನಲ್ಲಿ ಮಂಗಳವಾರ (ಮಾರ್ಚ್ 31) ನಡೆದ ಐಪಿಎಲ್ 2026ರ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಕಲಬುರಗಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಮಂಡನೆ
► 234.44 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ
ಎ.1ರಿಂದ ಭಾರತದ ಮೊದಲ ಡಿಜಿಟಲ್ ಜನಗಣತಿ ಆರಂಭ
ಸ್ವಯಂ-ಗಣತಿ ಮೂಲಕ ವಿವರಗಳನ್ನು ಸಲ್ಲಿಸಲು ಅವಕಾಶ
GT Vs PBKS Highlights- ನ್ಯೂ ಚಂಡೀಗಢದಲ್ಲಿ ಕನ್ನಡಿಗರ ಮೆರೆದಾಟ; ಕೊನೆಗೆ ಗೆದ್ದಿದ್ದು ಕೂಪರ್ ಕಾನಲಿ ಹೋರಾಟ
ಐಪಿಎಲ್ 2026ರ ಸೀಸನ್ ಪ್ರಾರಂಭವಾದಾಗಿಂದ ಒನ್ ಸೈಡೆಡ್ ಪಂದ್ಯಗಳನ್ನು ನೋಡಿ ಬೋರ್ ಆಗಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ಸ್ ಕಿಂಗ್ಸ್ ನಡುವಿನ ಪಂದ್ಯ ಚುಟುಕು ಕ್ರಿಕೆಟ್ ನ ರೋಚಕತೆಯನ್ನು ಉಣಬಡಿಸಿತು. ಬೌಲರ್ ಗಳೇ ಮಿಂಚಿದ ಪಂದ್ಯದಲ್ಲಿ ಕೂಪರ್ ಕಾನಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಸೀಸನ್ ಶುಭಾರಂಭ ಮಾಡಿತು. ಕರ್ನಾಟಕದ ಮಧ್ಯಮ ವೇಗದ ಬೌಲರ್ ಗಳಾದ ವಿಜಯಕುಮಾರ್ ವೈಶಾಖ್ ಮತ್ತು ಪ್ರಸಿದ್ಧ ಕೃಷ್ಣ ಅವರು ಪಂದ್ಯದುದ್ದಕ್ಕೂ ಹೈಲೈಟ್ ಆದರು. ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕಟ್ ಕ್ರೀಡಾಂಗಣದಲ್ಲಿ ಮಾರ್ಚ್ 31ರ ಮಂಗಳವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಚ್ ಕಳೆದುಕೊಂಡು 162 ರನ್ ಗಳಿಸಿತು. ಈ ಗುರಿ ಬೆಂಬತ್ತಿ ಹೊರಟ ಪಂಜಾಬ್ ಕಿಂಗ್ಸ್ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಗಳಿಂದ ಜಯ ಗಳಿಸಿತು. ()ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೂ ಬಂಡೆಗಲ್ಲಿನಂತೆ ನಿಂತ ಕೂಪರ್ ಕಾನಲಿ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 44 ಎಸೆತಗಳಲ್ಲಿ 72 ರನ್ ಗಳಿಸಿ ಅವರು ಅಜೇಯರಾಗುಳಿದರು. ಅವರ ಇನ್ನಿಂಗ್ಸ್ ನಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಗಳಿದ್ದವು. ಪ್ರಸಿದ್ಧ ಕೃಷ್ಣ ಅವರು 3 ವಿಕೆಟ್ ಗಳಿಸುವ ಮೂಲಕ ಪಂಜಾಬ್ ಪಾಳಯದಲ್ಲಿ ಆತಂಕ ಮೂಡಿಸಿದ್ದರು. ಆದರೆ ಕಾನಲಿ ಅವರ ಜಾಣ್ಮೆಯ ಬ್ಯಾಟಿಂಗ್ ಮುಂದು ಗುಜರಾತ್ ಬೌಲಿಂಗ್ ನಿರುತ್ತರವಾಯಿತು. ವೈಶಾಖ್ ಬೆಂಕಿ ಬೌಲಿಂಗ್ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ತಂಡ ಪವರ್ ಪ್ಲೇನ 6 ಓವರ್ ಗಳಲ್ಲಿ 54 ರನ್ ಗಳಿಸಿ ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿತ್ತು. ಆದರೆ ಆ ಬಳಿಕ ಪಂಜಾಬ್ ತಂಡದ ಬೌಲರ್ ಗಳ ಮೊನಚಾದ ದಾಳಿಗೆ ರನ್ ರೇಟ್ ಕುಸಿಯಿತು. ತಂಡದ ಯಾವ ಬ್ಯಾಟರ್ ಸಹ ಅರ್ಧಶತಕ ಗಳಿಸಲು ಸಾಧ್ಯವಾಗದ್ದೇ ಇದಕ್ಕೆ ಸಾಕ್ಷಿ. ಕರ್ನಾಟಕದ ಮಧ್ಯಮ ವೇಗಿ ವಿಜಯ್ ಕುಮಾರ್ ವೈಖಾಖ್, ದಕ್ಷಿಣ ಆಫ್ರಿಕಾದ ಮಾರ್ಚೋ ಯಾನ್ಸನ್ ಮತ್ತು ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರು ಗುಜರಾತ್ ಬ್ಯಾಟರ್ ಗಳನ್ನು ಸರಾಗವಾಗಿ ಆಡಲು ಬಿಡಲೇ ಇಲ್ಲ. ಅದರಲ್ಲೂ ವೈಶಾಖ್ ಅವರು 34 ರನ್ ಗೆ 3 ವಿಕೆಟ್ ಕಿತ್ತು ಮಿಂಚಿದರು. ಸಂಕ್ಷಿಪ್ತ ಸ್ಕೋರ್ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 162/6, ಶುಭಮನ್ ಗಿಲ್ 39(27), ಜಾಸ್ ಬಟ್ಲರ್ 39(27), ಗ್ಲೆನ್ ಫಿಲಿಪ್ಸ್ 25(17), ವಿಜಯ ಕುಮಾರ್ ವೈಶಾಖ್ 34ಕ್ಕೆ 3, ಯುಜುವೇಂದ್ರ ಚಹಲ್ 28ಕ್ಕೆ 2. ಪಂಜಾಬ್ ಕಿಂಗ್ಸ್ 19.1 ಓವರ್ ಗಳಲ್ಲಿ 165/7, ಕೂಪರ್ ಕಾನಲಿ ಅಜೇಯ 72(44), ಪ್ರಭಸಿಮ್ರಾನ್ ಸಿಂಗ್ 37(24), ಶ್ರೇಯಸ್ ಅಯ್ಯರ್ 18(11), ಪ್ರಸಿದ್ಧ ಕೃಷ್ಣ 29ಕ್ಕೆ 3. ವಾಶಿಂಗ್ಟನ್ ಸುಂದರ್ 27ಕ್ಕೆ 1.
IPL 2026 | ಗುಜರಾತ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ
ಕೂಪರ್ ಅರ್ಧಶತಕ, ವಿಜಯಕುಮಾರ್ ಗೆ ಮೂರು ವಿಕೆಟ್
ಎ.1 ರಿಂದ ಟೋಲ್ ಬೂತ್ ಗಳಲ್ಲಿ ಕ್ಯಾಶ್ ಪಾವತಿಯಿಲ್ಲ; ಫಾಸ್ಟ್ಯಾಗ್, ಯುಪಿಐ ಮೂಲಕವೇ ಶುಲ್ಕ ಸಂಗ್ರಹ
NHAI ವ್ಯವಹಾರಗಳು ಇನ್ಮುಂದೆ ಸಂಪೂರ್ಣ ಡಿಜಿಟಲ್
ವಿದೇಶಿ ಗಣ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ತಮಾಷೆಯಾಗಿ ತೋರಿಸಿದ್ದರು ಕಂಟೆಂಟ್ ಕ್ರಿಯೇಟರ್ ಪುಲ್ಕಿತ್ ಮಾಣಿ. ಅವರ ಈ ವಿಡಿಯೊ ವೈರಲ್ ಆಗಿದ್ದು, ಮಾರ್ಚ್ ಮಧ್ಯದಲ್ಲಿ ಸರ್ಕಾರದ ಆದೇಶದ ಮೇರೆಗೆ ಇನ್ ಸ್ಟಾ ಗ್ರಾಮ್ ನಿಂದ ತೆಗೆದುಹಾಕಲ್ಪಟ್ಟಾಗ 16 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಎರಡು ದಿನಗಳ ನಂತರ, ಯೂಟ್ಯೂಬರ್ ಧ್ರುವ್ ರಾಠಿ ಅದನ್ನು ಸಣ್ಣ ಪರಿಚಯದೊಂದಿಗೆ ಮತ್ತೆ ಪೋಸ್ಟ್ ಮಾಡಿದ್ದರು. ನೀವು ಮೋದಿಯನ್ನು ಹೊಗಳಿದರೆ, ಅವರು (ಸರ್ಕಾರ) ನಿಮ್ಮ ಸಿನಿಮಾಗಳನ್ನು ದೊಡ್ಡ ಪರದೆಗಳಲ್ಲಿ ಪ್ರದರ್ಶಿಸುತ್ತಾರೆ. ಆದರೆ ನೀವು ಮೋದಿಯ ವಾಸ್ತವತೆಯನ್ನು ಹಾಸ್ಯದ ಮೂಲಕ ತೋರಿಸಿದರೆ, ಅವರು ನಿಮ್ಮ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಿಂದ ಕಿತ್ತು ಹಾಕುತ್ತಾರೆ ಎಂದು ಧ್ರುವ್ ರಾಠಿ ತಮ್ಮ ವಿಡಿಯೊದಲ್ಲಿ ಹೇಳಿದ್ದಾರೆ. ಇತ್ತೀಚಿನ ವಾರಗಳಲ್ಲಿ ಪ್ರಧಾನ ಮಂತ್ರಿಯವರ ವಿರುದ್ಧ, ವಿಶೇಷವಾಗಿ ವಿದೇಶಾಂಗ ನೀತಿ ಬಗ್ಗೆ ಅವರನ್ನು ಗೇಲಿ ಮಾಡುವ ಮೀಮ್ಸ್, ವೀಡಿಯೊಗಳು ಮತ್ತು ವ್ಯಂಗ್ಯಚಿತ್ರಗಳು ವ್ಯಾಪಕವಾಗಿ ಪೋಸ್ಟ್ ಆಗಿವೆ. ಸರ್ಕಾರ ಇಂಥಾ ನೂರಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ತೆಗೆದುಹಾಕಿದೆ. ಈ ರೀತಿಯ ವಿಡಂಬನಾತ್ಮಕ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹಲವಾರು ಬಳಕೆದಾರರ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಕೆಲವು ಪೋಸ್ಟ್ಗಳಿಗೆ ತೆಗೆದುಹಾಕುವಿಕೆ ಸೂಚನೆಗಳನ್ನು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ನೀಡಲಾಗಿದೆ. ಅವುಗಳು ಯಾವಾಗಲೂ ಕಾರಣಗಳನ್ನು ನಿರ್ದಿಷ್ಟಪಡಿಸುವುದಿಲ್ಲ. ಇದು ಬಳಕೆದಾರರು ತಮ್ಮ ಪೋಸ್ಟ್ ಅನ್ನು ತೆಗೆದುಹಾಕುವ ಮೊದಲು ಪ್ರತಿಕ್ರಿಯಿಸಲು ಸಮಯವನ್ನು ನೀಡುವುದಿಲ್ಲವಾದ್ದರಿಂದ, ಕಾನೂನು ತಜ್ಞರು ಅವುಗಳನ್ನು ನಿರಂಕುಶವೆಂದು ಟೀಕಿಸಿದ್ದಾರೆ. ಪ್ರಧಾನಿಯನ್ನು ತಮಾಷೆ ಮಾಡುವುದು ಕೇವಲ ಹಾಸ್ಯನಟರು, ವ್ಯಂಗ್ಯಚಿತ್ರಕಾರರು, ಕಂಟೆಂಟ್ ಕ್ರಿಯೇಟರ್ಸ್ ಮತ್ತು ಪತ್ರಕರ್ತರಿಗೆ ಮಾತ್ರ ಸೀಮಿತವಾಗಿಲ್ಲ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತದಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಗೆ ಕಾರಣವಾಗಿರುವುದರಿಂದ, ವಿರೋಧ ಪಕ್ಷಗಳು ಕೂಡಾ ವಿಡಂಬನೆಯ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿವೆ. ಹಿಂದಿ ಭಾಷಿಗರ ಪ್ರದೇಶದಾದ್ಯಂತ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ತಿಂಗಳು ಒಳಚರಂಡಿಯಿಂದ ಗ್ಯಾಸ್ ಬಳಸಿ ಸ್ಟೌವ್ ಉರಿಸುವುದು ಹೇಗೆ ಎಂಬ ವಿಡಿಯೊಗಳನ್ನು ಮಾಡಿದ್ದಾರೆ. 2018ರಲ್ಲಿ ಮೋದಿ ತಮ್ಮ ಭಾಷಣದಲ್ಲಿ ಚಹಾ ಮಾರುವವನೊಬ್ಬ ಒಳಚರಂಡಿಗೆ ಒಂದು ಪೈಪ್ ಹಾಕಿ ಅದರಿಂದ ಗ್ಯಾಸ್ ತೆಗೆದು ಸ್ಟೌವ್ ಉರಿಸಿ ಚಹಾ ಮಾರುತ್ತಿದ್ದ ಎಂದು ಹೇಳಿದ್ದರು. ಈ ಭಾಷಣದ ತುಣುಕು ಬಳಸಿ ಹಲವಾರು ಕಂಟೆಂಟ್ ಕ್ರಿಯೇಟರ್ಗಳು ವಿಡಿಯೊ ಮಾಡಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಆನ್ಲೈನ್ ಅಭಿಯಾನಗಳಲ್ಲಿಯೂ ಮೋದಿಯ ಕಾಲೆಳೆದಿದೆ. ಕಾಂಗ್ರೆಸ್ ಖಾತೆಗಳಿಂದ ಅಪ್ ಲೋಡ್ ಮಾಡಲಾದ ಒಂಭತ್ತು AI ಆಧಾರಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ. ►‘ವಿಶ್ವಗುರು’ ನಿರೂಪಣೆಗೆ ಟಾಂಗ್ 2017ರಿಂದ ʼದಿ ಹಿಂದೂʼ ಪತ್ರಿಕೆಯಲ್ಲಿ ವಿಡಂಬನಾತ್ಮಕ ಅಂಕಣ ಬರೆಯುತ್ತಿರುವ ಪತ್ರಕರ್ತ ಜಿ. ಸಂಪತ್, ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಸುತ್ತಲಿನ ಹಾಸ್ಯದ ಉಲ್ಬಣವು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ನೇರ ಪರಿಣಾಮವಾಗಿದೆ ಎಂದು ಸೂಚಿಸುತ್ತಾರೆ. ಭಾರತದ ಅಂತರರಾಷ್ಟ್ರೀಯ ಸಂಬಂಧಗಳ ಕುರಿತು ಅವರ ಇತ್ತೀಚಿನ ವ್ಯಾಖ್ಯಾನ - ನಿರ್ದಿಷ್ಟವಾಗಿ ಅಪ್ಪುಗೆಗಳು, ಪದಕಗಳು ಮತ್ತು ಫೋಟೋ-ಆಪ್ ಗಳ ಕಾರ್ಯತಂತ್ರದ ಬಳಕೆಯನ್ನು ಅಣಕಿಸುವುದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಮನಾರ್ಹ ಆಕರ್ಷಣೆಯನ್ನು ಗಳಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಮೋದಿ ಅಧಿಕಾರವಧಿಯಲ್ಲಿ ದೇಶದ ಜಾಗತಿಕ ಸ್ಥಾನಮಾನ ಹೆಚ್ಚಾಗಿದೆ ಎಂದು ನಂಬಿದ್ದ ಅನೇಕ ಭಾರತೀಯರನ್ನು “ವಿಶ್ವಗುರು” ನಿರೂಪಣೆಯನ್ನು ಪ್ರಶ್ನಿಸುವಂತೆ ಮಾಡಿತು. “ಭಾರತವು ಅಂತಹ ಪ್ರಭಾವಶಾಲಿ ಶಕ್ತಿಯಾಗಿದ್ದರೆ ಅದು ನಿಜವೇ?”. “ನಮಗೆ ಬೇಕಾದುದನ್ನು ನಾವು ಪಡೆಯುತ್ತಿದ್ದೇವೆಯೇ? ಈ ಸಮಯದಲ್ಲಿ ಭಾರತೀಯ ಜನರಿಗೆ ಅಗತ್ಯವಿರುವುದನ್ನು ಪಡೆಯಲು ನಾವು ನಮ್ಮ ಜಾಗತಿಕ ಸ್ಥಾನಮಾನವನ್ನು ಬಳಸಿಕೊಳ್ಳಲು ಸಮರ್ಥರಾಗಿದ್ದೇವೆಯೇ?” ಎಂದು ಸಂಪತ್ ಕೇಳಿದ್ದಾರೆ ಎಂದು scroll.in ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ Rofl Gandhi ಎಂಬ ಹೆಸರಿನಿಂದ ಕರೆಯಲ್ಪಡುವ ವಿಡಂಬನಕಾರ ಸುನಿಲ್ ಅವರ ಹಲವಾರು ಪೋಸ್ಟ್ ಗಳನ್ನು ಸರ್ಕಾರ ತೆಗೆದುಹಾಕಿದೆ. ವಿದೇಶಾಂಗ ನೀತಿಯ ಬಗ್ಗೆ ವಿಡಂಬನೆಯು ಅವರಿಗೆ (ಸರ್ಕಾರಕ್ಕೆ) ತುಂಬಾ ನೋವುಂಟು ಮಾಡುತ್ತದೆ. ಏಕೆಂದರೆ ಬಡವರು ಅವರಿಗೆ ಮನ್ನಣೆ ನೀಡುವ ಒಂದು ಅಮೂರ್ತ ವಿಷಯ ಇದು. ಅದೇ ಬಡ ಜನರು ಅನಿಲ ಬೆಲೆಗಳ ಏರಿಕೆಯ ಬಗ್ಗೆ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದರೆ, ಅವರಿಗೆ ತೋರಿಸಲು ಏನೂ ಉಳಿದಿರುವುದಿಲ್ಲ ಎಂದಿದ್ದಾರೆ ಸುನಿಲ್. ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ನಂತರ ಈ ಗ್ರಹಿಕೆಯಲ್ಲಿನ ಬದಲಾವಣೆ ಪ್ರಾರಂಭವಾಯಿತು ಅಂತಾರೆ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಶ್ರೀನೇತ್. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರಂತರ ಹೇಳಿಕೆಗಳು ಮೋದಿಯನ್ನು ಇಕ್ಕಟ್ಟಿನಲ್ಲಿ ಇರಿಸಿತು. ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸುವ ಟ್ರಂಪ್ ಆಡಳಿತದ ನಿರ್ಧಾರವು ಪ್ರಧಾನಿಯವರ ಖ್ಯಾತಿಗೆ ತೀವ್ರ ಹಾನಿ ಮಾಡಿದೆ. 56 ಇಂಚಿನ ಎದೆಯ 'ಬಲಿಷ್ಠ ವ್ಯಕ್ತಿಗೆ' ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸುಪ್ರಿಯಾ ಟೀಕಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಹೇಳುವ ಪ್ರಕಾರ, ಮೋದಿ ಸರ್ಕಾರ ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಪ್ರಮಾದವಾಗಿತ್ತು. ಇರಾನ್ ಮೇಲೆ ದಾಳಿ ನಡೆಸುವ ಎರಡು ದಿನಗಳ ಮೊದಲು ಪ್ರಧಾನಿ ಇಸ್ರೇಲ್ ಗೆ ಭೇಟಿ ನೀಡಿದ್ದರು. ಇದು ಇರಾನ್ ನೊಂದಿಗೆ ಭಾರತದ ಹತೋಟಿಯನ್ನು ಕಡಿಮೆ ಮಾಡಿದೆ, ಹಾರ್ಮುಝ್ ಜಲಸಂಧಿಯಲ್ಲಿ ಸಿಲುಕಿರುವ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸುವುದು ಕಷ್ಟಕರವಾಗಿದೆ ಮತ್ತು ಅನಿಲ ಪೂರೈಕೆಯಲ್ಲಿ ವ್ಯಾಪಕ ಅಡ್ಡಿ ಉಂಟು ಮಾಡಿದೆ ಎಂದು ವಿಪಕ್ಷ ಹೇಳಿದೆ. ಅವರ (ಮೋದಿ) ವಿದೇಶಾಂಗ ನೀತಿ ಅವರ ಬಗ್ಗೆ ಮಾತ್ರವಾಗಿದೆ. ಅವರು ಪದಕಗಳನ್ನು ಪಡೆಯುವ ದೇಶಗಳಿಗೆ ಹೋಗುತ್ತಾರೆ ಅಂತಾರೆ ಸುಪ್ರಿಯಾ ಶ್ರೀನೇತ್. ಕಳೆದ ತಿಂಗಳು ಇಸ್ರೇಲ್ ಶಾಸಕಾಂಗವಾದ ನೆಸ್ಸೆಟ್ ಅನ್ನು ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣವನ್ನು ಅವರು ಉಲ್ಲೇಖಿಸಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ನೆಸ್ಸೆಟ್ ಸ್ಪೀಕರ್ ಅವರಿಂದ ಪದಕ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ ಮೋದಿ. ಒಳಚರಂಡಿಯಿಂದ ಗ್ಯಾಸ್ ತೆಗೆದು ಅಡುಗೆಗೆ ಬಳಸುವ ಟೆಕ್ನಾಲಜಿ ಬಗ್ಗೆ ಮೋದಿಯವರ ಹೇಳಿಕೆಯನ್ನು ಜೋಕ್ ಮಾಡುತ್ತಾ ಬೀದಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಸರ್ಕಾರವು ಅದನ್ನು ಕೇಳುವುದನ್ನು ನಿಲ್ಲಿಸಿದ್ದರಿಂದ ವಿರೋಧ ಪಕ್ಷಗಳು ಇಂತಹ ಗಿಮಿಕ್ ಗಳನ್ನು ಆಶ್ರಯಿಸಬೇಕಾಯಿತು ಎಂದಿದ್ದಾರೆ. ಇರಾನ್ ನಲ್ಲಿನ ಯುದ್ಧದ ಕುರಿತು ಚರ್ಚೆಗಾಗಿ ನಾನು ಸಂಸತ್ತಿನಲ್ಲಿ ವೈಯಕ್ತಿಕವಾಗಿ ನಾಲ್ಕು ನೋಟಿಸ್ ಗಳನ್ನು ಸಲ್ಲಿಸಿದೆ, ಆದರೆ ಅವುಗಳನ್ನು ಸ್ವೀಕರಿಸಲಾಗಿಲ್ಲ. ಇಂತಿರುವಾಗ ನಾವು ಏನು ಮಾಡಬೇಕು? ಸರ್ಕಾರವು ಜನರನ್ನು ಹೇಗೆ ದಾರಿ ತಪ್ಪಿಸುತ್ತಿದೆ ಎಂಬುದನ್ನು ನಾವು ತೋರಿಸಬೇಕು ಎಂದಿದ್ದಾರೆ ಸಿಂಗ್. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪಕ್ಷವು ಹಿಂದೆ ಇದೆ ಎಂದು ಭಾರತೀಯ ಜನತಾ ಪಕ್ಷದ ವಕ್ತಾರ ಆರ್ ಪಿ ಸಿಂಗ್ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅನಿಲ ಪೂರೈಕೆ ಸುಧಾರಿಸಿದ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎಂದ ಅವರು ಈಗಾಗಲೇ, ನಮ್ಮ ಹಡಗುಗಳು ಹಾರ್ಮುಝ್ ಜಲಸಂಧಿಯಿಂದ ಬರಲು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ. ವಿಡಂಬನಾತ್ಮಕ ವಿಷಯದ ಸೆನ್ಸಾರ್ ಶಿಪ್ ಬಗ್ಗೆ ಕೇಳಿದಾಗ, ಭಯ ಹುಟ್ಟುಹಾಕಲು ಉದ್ದೇಶಿಸಲಾದ ವಾಸ್ತವಿಕವಾಗಿ ತಪ್ಪಾದ ಮಾಹಿತಿಯನ್ನು ಮಾತ್ರ ಸರ್ಕಾರ ತೆಗೆದುಹಾಕಿದೆ. ವಿರೋಧ ಪಕ್ಷವು ತನ್ನ ದೃಷ್ಟಿಕೋನವನ್ನು ಹೇಗೆ ಬೇಕಾದರೂ ವ್ಯಕ್ತಪಡಿಸುವ ಪ್ರಜಾಸತ್ತಾತ್ಮಕ ಹಕ್ಕಿನೊಳಗೆ ಇದ್ದರೂ, ವಿದೇಶಾಂಗ ನೀತಿಯ ಕುರಿತು ಸರ್ಕಾರವನ್ನು ಪ್ರಶ್ನಿಸುವ ಅದರ ಹಿಂದಿನ ಪ್ರಯತ್ನಗಳು ಹೆಚ್ಚಾಗಿ ವಿಫಲವಾಗಿವೆ ಎಂದು ಆರ್ ಪಿ ಸಿಂಗ್ ಹೇಳಿದ್ದಾರೆ. ಪ್ರಧಾನಿಯವರ ವಿಶ್ವ ನಾಯಕರನ್ನು ಅಪ್ಪಿಕೊಳ್ಳುವ ಒಲವನ್ನು hugplomacy ಎಂದು ಹಣೆಪಟ್ಟಿ ಕಟ್ಟಲು ಕಾಂಗ್ರೆಸ್ ಪಕ್ಷ 2018ರಲ್ಲಿ ಮಾಡಿದ ಪ್ರಯತ್ನವು ಹೆಚ್ಚು ಗಮನ ಸೆಳೆಯುವಲ್ಲಿ ವಿಫಲವಾಯಿತು. ವಿಡಂಬನೆಗಳ ಹೊರತಾಗಿಯೂ, ಟೀಕೆಗಳು ಅವರ ಜನಪ್ರಿಯತೆಯ ಮೇಲೆ ಕಡಿಮೆ ಪರಿಣಾಮ ಬೀರಿತು. 2019ರ ಚುನಾವಣೆಯಲ್ಲಿ ಅವರು ಇನ್ನೂ ದೊಡ್ಡ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದರು. ಆದರೆ ಇತ್ತೀಚಿನ ವಾರಗಳಲ್ಲಿ ಪ್ರಧಾನಿಯವರ ಕುರಿತಾದ the wire ನ ವಿಡಂಬನಾತ್ಮಕ ವೀಡಿಯೊಗಳಲ್ಲಿ ಒಂದನ್ನು ತೆಗೆದುಹಾಕಿದ್ದರ ಬಗ್ಗೆ ಪ್ರತಿಕ್ರಿಯಿಸಿದ the wire ನ ಸಂಪಾದಕಿ ಸೀಮಾ ಚಿಶ್ತಿ, ಅಂದಿನಿಂದ ಪರಿಸ್ಥಿತಿ ಬದಲಾಗಿದೆ. ಮೋದಿಯವರ ವಿದೇಶಾಂಗ ನೀತಿಯ ಪರಿಣಾಮಗಳು ಈಗ ಹೆಚ್ಚಿನ ಭಾರತೀಯರಿಗೆ ಸ್ಪಷ್ಟವಾಗುತ್ತಿವೆ ಎಂದು ಹೇಳಿದ್ದಾರೆ. ಸೌಜನ್ಯ: scroll.in
ಇರಾನ್ ನಿಂದ ಮೈಕ್ರೋಸಾಫ್ಟ್, ಗೂಗಲ್ ಸಹಿತ ಅಮೆರಿಕನ್ ಕಂಪೆನಿಗಳ ವಿರುದ್ಧ ದಾಳಿ ಬೆದರಿಕೆ
ಟೆಹರಾನ್, ಮಾ.31: ಪಶ್ಚಿಮ ಏಷ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ದಾಳಿ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಬೃಹತ್ ತಂತ್ರಜ್ಞಾನ ಕಂಪೆನಿಗಳಾದ ಮೈಕ್ರೋಸಾಫ್ಟ್, ಆ್ಯಪಲ್, ಗೂಗಲ್, ಇಂಟೆಲ್ ಹಾಗೂ ಬೋಯಿಂಗ್ ವಿರುದ್ಧ ತಾನು ದಾಳಿ ನಡೆಸುವುದಾಗಿ ಇರಾನ್ ನ ಸಶಸ್ತ್ರ ಸೇನಾಪಡೆ IRGC ಮಂಗಳವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಅಮೆರಿಕದ ಮಾಹಿತಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (AI) ಕಂಪೆನಿಗಳು ಇರಾನ್ ನ ಗಣ್ಯರ ಹತ್ಯೆಗಳನ್ನು ರೂಪಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ಕೇಂದ್ರ ಪಾತ್ರ ವಹಿಸಿವೆ ಎಂದು IRGC ಆಪಾದಿಸಿದೆ. ಇರಾನ್ ನಲ್ಲಿ ನಡೆದಿರುವಂತಹ ಪ್ರತಿಯೊಂದು ಭಯೋತ್ಪಾದಕ ಕೃತ್ಯಗಳಿಗಾಗಿ ಈ ಕಂಪೆನಿಗಳ ಸ್ಥಾವರಗಳ ಮೇಲೆ ದಾಳಿ ನಡೆಸಲಾಗುವುದು ಎಂದು IRGC ಹೇಳಿಕೆ ತಿಳಿಸಿದೆ. ಅಲ್ಲದೆ ಅಮೆರಿಕದ ತಂತ್ರಜ್ಞಾನ ಕಂಪೆನಿಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ಹಾಗೂ ಆಸುಪಾಸಿನ ನಿವಾಸಿಗಳು ತೆರವುಗೊಳ್ಳಬೇಕೆಂದು IRGC ಹೇಳಿಕೆ ತಿಳಿಸಿದೆ. ಈ ಪ್ರತೀಕಾರ ದಾಳಿಗಳನ್ನು ಬುಧವಾರದಿಂದ ಆರಂಭಿಸುವುದಾಗಿಯೂ ಅದು ತಿಳಿಸಿದೆ.
ಇರಾನ್ ಜೊತೆ ಅಮೆರಿಕದ ಶಾಂತಿ ಒಪ್ಪಂದ ಏರ್ಪಟ್ಟರೂ ಹಿಝ್ಬುಲ್ಲಾ ವಿರುದ್ಧ ಯುದ್ಧ ನಿಲ್ಲದು: ನೆತನ್ಯಾಹು
ಟೆಲ್ ಅವೀವ್, ಮಾ.31: ಒಂದು ವೇಳೆ ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದ ಏರ್ಪಟ್ಟರೂ, ಹಿಝ್ಬುಲ್ಲಾ ಹೋರಾಟಗಾರರ ವಿರುದ್ಧ ಇಸ್ರೇಲ್ ಯುದ್ಧವನ್ನು ಮುಂದುವರಿಸಲಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಇರಾನ್ ಜೊತೆ ಶಾಂತಿ ಒಪ್ಪಂದವನ್ನು ಏರ್ಪಡಿಸುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸುತ್ತಿದ್ದರೆ, ತನ್ನ ಜೊತೆಗಾರ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ದಾಳಿಯನ್ನು ಕೂಡ ನಿಲ್ಲಿಸಬೇಕೆಂದು ಇರಾನ್ ಆಗ್ರಹಿಸುತ್ತಿದೆ. ಯುದ್ಧವನ್ನು ನಿಲ್ಲಿಸುವ ಬಗ್ಗೆ ಭವಿಷ್ಯದಲ್ಲಿ ಇರಾನ್ ಹಾಗೂ ಅಮೆರಿಕದ ನಡುವೆ ಒಪ್ಪಂದವೇನಾದರೂ ಏರ್ಪಟ್ಟರೂ, ಲೆಬನಾನ್ ನಲ್ಲಿ ಇಸ್ರೇಲ್ ನ ಯುದ್ಧವು ನಿಲ್ಲುವುದಿಲ್ಲವೆಂದು ನೆತನ್ಯಾಹು ಅವರು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಜೈಶೆ ವರಿಷ್ಠ ಮಸೂದ್ ಅಝರ್ ನ ಸೋದರ ಅನ್ವರ್ ನಿಗೂಢ ಮರಣ
ಇಸ್ಲಾಮಾಬಾದ್, ಮಾ.31: ಜೈಶೆ ಮೊಹಮ್ಮದ್ ತೀವ್ರವಾದಿ ಸಂಘಟನೆಯ ವರಿಷ್ಠ ಮೌಲಾನಾ ಮಸೂದ್ ಅಝರ್ ನ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢ ಸನ್ನಿವೇಶಗಳಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ನಿಷೇಧಿತ ಸಂಘಟನೆಯಾದ ಜೈಶೆ ಮೊಹಮ್ಮದ್ ನ ಅಧಿಕೃತ ಸುದ್ದಿ ವಾಹಿನಿಯೊಂದು ಅನ್ವರ್ ನಿಧನದ ಸುದ್ದಿಯನ್ನು ಪ್ರಕಟಿಸಿದೆ. ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಉಸ್ಮಾನ್ ವಲಿ ಜಾಮಿಯಾ ಮಸೀದಿಯಲ್ಲಿ ಸೋಮವಾರ ಮೃತದೇಹದ ಅಂತ್ಯಸಂಸ್ಕಾರ ನೆರವೇರಿದೆಯೆಂದು ಅದು ತಿಳಿಸಿದೆ. ಆದಾಗ್ಯೂ, ತಾಹಿರ್ ಅನ್ವರ್ ನ ಸಾವಿಗೆ ನಿಖರ ಕಾರಣವನ್ನು ಇನ್ನೂ ಬಹಿರಂಗಪಡಿಸಲಿಲ್ಲ. ಮಸೂದ್ ಅಝರ್ ನ ಐವರು ಸಹೋದರರಲ್ಲಿ ಒಬ್ಬನಾದ ಅನ್ವರ್, ಜೈಶೆ ಮೊಹಮ್ಮದ್ ಗುಂಪಿನಲ್ಲಿ ಸಕ್ರಿಯನಾಗಿದ್ದಾನೆ. ಆಪರೇಶನ್ ಸಿಂಧೂರ್ ನಡಿ ಭಾರತೀಯ ಸೇನೆ ನಡೆಸಿದ ಯೋಜಿತ ದಾಳಿಯಲ್ಲಿ ತನ್ನ ಕುಟುಂಬದ 10 ಮಂದಿ ಸದಸ್ಯರು ಹಾಗೂ ತನ್ನ ನಾಲ್ವರು ಸಹಾಯಕರು ಸಾವನ್ನಪ್ಪಿದ್ದರೆಂದು ಮಸೂದ್ ಅಝರ್ ಕಳೆದ ವರ್ಷ ಹೇಳಿಕೊಂಡಿದ್ದ.
ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ಪರಂವಾ ಸ್ಟುಡಿಯೋಸ್ಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಸಿದ್ದಕ್ಕೆ ಈ ದಂಡ ವಿಧಿಸಿದೆ. 20 ಲಕ್ಷ ರೂ. ಕಾಪಿರೈಟ್ ಉಲ್ಲಂಘನೆಗೆ ಉಳಿದ 5 ಲಕ್ಷ ರೂ. ನ್ಯಾಯಾಲಯದ ಆದೇಶ ಪಾಲಿಸದ ಕಾರಣಕ್ಕೆ ದಂಡ ಹಾಕಲಾಗಿದೆ. ಎಂಆರ್ಟಿ ಮ್ಯೂಸಿಕ್ ಕಂಪನಿಯು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಈ ಆದೇಶ ನೀಡಿದೆ.
ಮುಂಬೈನಲ್ಲಿ ಬರೋಬ್ಬರಿ 20,00,00,000 ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಖರೀದಿಸಿದ ಶುಭ್ಮನ್ ಗಿಲ್: ವರದಿ
Shubman Gill Property: ಟಿ20 ವಿಶ್ವಕಪ್ 2026 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ನಂತರ, ಶುಭ್ಮನ್ ಗಿಲ್ ಇದೀಗ ಐಪಿಎಲ್ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ನಡುವೆಯೇ ಮೈದಾನದ ಹೊರಗಿನ ಅವರ ವೈಯಕ್ತಿಕ ವಿಚಾರಗಳು ಸಖತ್ ಸದ್ದು ಮಾಡುತ್ತಿವೆ. ವೈಯಕ್ತಿಕ ಗುರಿ ಬಗ್ಗೆ ಮಾತನಾಡಿದ ಶುಭ್ಮನ್ ಗಿಲ್ ಅವರು,
ಎ.28: ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಸಹಯೋಗದೊಂದಿಗೆ ಎ.28ರಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇತ್ತೀಚೆಗೆ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಆಶ್ರಯದಲ್ಲಿ ನಡೆದ ಸಮ್ಮೇಳನದ ಪೂರ್ವ ಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಮ್ಮೇಳನದ ಅಂಗವಾಗಿ ಮಹಿಳೆಯರು, ಪುರುಷರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಉಪಾಧ್ಯಕ್ಷ ಎಂ.ಎ. ನಾಸಿರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಸಮ್ಮೇಳನದ ಸ್ವರೂಪ ಮತ್ತು ಹಮ್ಮಿಕೊಳ್ಳಬಹುದಾಗ ಕಾರ್ಯಕ್ರಮಗಳ ವಿವರ ನೀಡಿದರು. ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಬಿ.ಎ. ಶಂಷುದ್ದೀನ್ ಮಡಿಕೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ನ ನಿಕಟಪೂರ್ವ ಅಧ್ಯಕ್ಷ ಎಸ್.ಪಿ. ಮುನೀರ್ ಅಹ್ಮದ್ ಸ್ವಾಗತಿಸಿದರು. ಅಬ್ದುಲ್ಲಾ ವಂದಿಸಿದರು. ಎಂ.ಯು. ಖಾಲಿದ್, ಅಬ್ದುಲ್ ರಹಿಮಾನ್, ಅಹ್ಮದ್ ಕಬೀರ್, ಅಶ್ರಫ್, ತಾಜುದ್ದೀನ್, ಕಲೀಂ ಅಹ್ಮದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು ಎಂದು ಅಕಾಡೆಮಿಯ ಪ್ರಕಟನೆ ತಿಳಿಸಿದೆ.
ಎ.2, 3ರಂದು ಸಾವಿರ ಕಂಬದ ಬಸದಿಯಲ್ಲಿ ರಥೋತ್ಸವ
ಮೂಡುಬಿದಿರೆ: ಶ್ರೀ ಜೈನಮಠದ ಅಧೀನದಲ್ಲಿರುವ ತ್ರಿಭುವನ ತಿಲಕ ಚೂಡಾಮಣಿ (ಸಾವಿರ ಕಂಬದ ಬಸದಿ) ಬಸದಿಯಲ್ಲಿ ಭಗವಾನ್ ಶ್ರೀ 1008 ಮಹಾವೀರ ಸ್ವಾಮಿಯ 2625ನೇ ಜನ್ಮಕಲ್ಯಾಣ ಹಾಗೂ ಹಿರಿಯ-ಕಿರಿಯ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿದ್ದು, ಎ.3ರವರೆಗೆ ನಡೆಯಲಿವೆ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನಲ್ಲಿ ಎ.2ರಂದು ಮಹಾವೀರ ಜಯಂತಿ ಹಾಗೂ ಕಿರಿಯ ರಥೋತ್ಸವ ನಡೆಯಲಿದೆ. ಏ.3ರಂದು ಶ್ರಮಣ ಸಂಸ್ಕೃತಿ ಸಮ್ಮೇಳನ ಹಾಗೂ ಹಿರಿಯ ರಥೋತ್ಸವ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಬೂಟು ನೆಕ್ಕುವವರಿಗಷ್ಟೇ ಬಿಜೆಪಿಯಲ್ಲಿಅವಕಾಶವೇ? ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದ ಎಸ್ಟಿ ಸೋಮಶೇಖರ್!
ಬಿಜೆಪಿ ನಾಯಕ ರುದ್ರೇಶ್ ಅವರ ಟೀಕೆಯಿಂದ ಕೆರಳಿದ ಶಾಸಕ ಎಸ್ಟಿ ಸೋಮಶೇಖರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳ ಖಾರವಾದ ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಬೂಟು ನೆಕ್ಕುವವರಿಗಷ್ಟೇ ಅವಕಾಶವೇ? ಎಂದು ಪ್ರಶ್ನಿಸಿರುವ ಅವರು, ತಮ್ಮ ರಾಜಕೀಯ ತ್ಯಾಗಕ್ಕೆ ಬೆಲೆಯಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಾಲ್ಕರ ಹರೆಯದ ಬಾಲಕನನ್ನು ಎತ್ತಿ ತಲೆಯನ್ನು ರಸ್ತೆಗೆ ಹೊಡೆದು ಕ್ರೂರ ಹಲ್ಲೆ!
ಮುಂಬೈ, ಮಾ.31: ಆಟೋ ಚಾಲಕನೋರ್ವ ತನ್ನದೇ ಹೌಸಿಂಗ್ ಸೊಸೈಟಿಯ ನಿವಾಸಿಯೊಂದಿಗೆ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಅವರ ನಾಲ್ಕರ ಹರೆಯದ ಪುತ್ರನ ಮೇಲೆ ಕ್ರೂರ ಹಲ್ಲೆಗೈದ ಆಘಾತಕಾರಿ ಘಟನೆ ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್ಲೆಯ ವಸಯಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕ್ರೂರ ಘಟನೆ ಹೌಸಿಂಗ್ ಸೊಸೈಟಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಾಲಕ ವಿಘ್ನೇಶ ಸೊಸೈಟಿಯ ಆವರಣದಲ್ಲಿ ನಿಲ್ಲಿಸಿದ್ದ ಆರೋಪಿ ಪವಾರ್ ಗೆ ಸೇರಿದ ಆಟೊರಿಕ್ಷಾದಲ್ಲಿ ಕುಳಿತು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಈ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಬಾಲಕನ ತಂದೆಯೊಂದಿಗೆ ಜಗಳವಾಡಿದ್ದ ಸಂದೀಪ್, ಇದೇ ದ್ವೇಷದಿಂದ ಕಾಲುಗಳನ್ನು ಹಿಡಿದು ವಿಘ್ನೇಶನನ್ನು ರಿಕ್ಷಾದಿಂದ ಹೊರಗೆಳೆದು ಮೇಲಕ್ಕೆತ್ತಿ ಆತನ ತಲೆಯನ್ನು ರಸ್ತೆಗೆ ಅಪ್ಪಳಿಸಿದ್ದಾನೆ. ಇಷ್ಟಕ್ಕೇ ಸುಮ್ಮನಾಗದ ಆತ ಬಾಲಕನನ್ನು ಹಿಡಿದುಕೊಂಡು ಕಟ್ಟಡದ ಒಳಗೆ ಓಡಿ, ಅಲ್ಲಿ ಸ್ಟೇರ್ ಕೇಸ್ ನ ಲೋಹದ ಕಂಬಿಗೆ ಮತ್ತೆ ಆತನ ತಲೆಯನ್ನು ಅಪ್ಪಳಿಸಿ ನೆಲಕ್ಕೆ ಎಸೆದಿದ್ದಾನೆ. ಬಾಲಕನನ್ನು ತಕ್ಷಣ ಮೀರಾ ರೋಡ್ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಪ್ರದೇಶದಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ.
ಬಂಟ್ವಾಳ : ಹಜ್ ನಿರ್ವಹಣಾ ಸಮಿತಿ ಮಂಗಳೂರು, ಸಿಟಿ ಗೋಲ್ಡ್ ಪುತ್ತೂರು, ಹೆಲ್ಪ್ ಲೈನ್ ಸರ್ವಿಸ್ ಪುತ್ತೂರು ಹಾಗೂ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರವು ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಹಜ್ ಕಮಿಟಿ ಸದಸ್ಯ ಸಯ್ಯಿದ್ ಅಶ್ರಫ್ ತಂಙಳ್ ಮಾತನಾಡಿ, ಹಜ್ಜ್, ಉಮ್ರಾ ಯಾತ್ರಾರ್ಥಿಗಳು ನಿಸ್ವಾರ್ಥತೆ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಪೂರ್ಣವಾಗಿ ಆರಾಧನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು. ಹಜ್ಜ್ ,ಉಮ್ರಾದ ವಿಧಿವಿಧಾನಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದ ಉಪ್ಪಿನಂಗಡಿ ಮಾಲೀಕುದ್ದೀನಾರ್ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಪ್ರತಿಯೊಬ್ಬ ಮುಸ್ಲಿಂ ವಿಶ್ವಾಸಿ ತನ್ನ ಕಡ್ಡಾಯ ಕರ್ತವ್ಯವಾದ ಹಜ್ಜ್ ಮತ್ತು ಉಮ್ರಾವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸಬೇಕು. ಯಾತ್ರೆ ಯುದ್ದಕ್ಕೂ ಸಹನೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಕೂಡ ಅತ್ಯಂತ ಮುಖ್ಯ ಅದೇ ರೀತಿ ಹಜ್ಜ್ ನಿರ್ವಹಿಸಿದ ನಂತರವೂ ಅದರ ಪಾವಿತ್ರ್ಯತೆಯನ್ನು ಬದುಕುಪೂರ್ತಿ ಮುಂದುವರಿಸಿ ಕೊಂಡು ಹೋಗುವ ಸಂಕಲ್ಪವನ್ನು ಪ್ರತಿಯೊಬ್ಬ ಯಾತ್ರಾರ್ಥಿಯೂ ಕೈಗೊಳ್ಳಬೇಕು ಎಂದರು. ಅತಿಥಿಗಳಾಗಿ ಭಾಗವಹಿಸಿದ್ದ ಕರೀಂ ಹಾಜಿ ಸಿಟಿ ಗೋಲ್ಡ್ , ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ ಮಾತನಾಡಿದರು. ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಸುಲೈಮಾನ್ ಹಾಜಿ ಗಲ್ಫ್ ಟೂರ್, ಫಝಲ್ ಹಾಜಿ ಹೆಲ್ಫ್ ಲೈನ್ ಪುತ್ತೂರು, ಅಬ್ದುಲ್ ಹಮೀದ್ ಕರಾವಳಿ, ಝುಬೈರ್ ದಾರಿಮಿ ಅಕ್ಕರಂಗಡಿ, ಇಬ್ರಾಹಿಂ ಕೋಣಾಜೆ, ಫಾರೂಕ್ ಕಿನ್ಯ, ಲತೀಫ್ ಹಾಜಿ ಬೋಳಿಯಾರ್, ಸಿಟಿ ಗೋಲ್ಡ್ ಮೆನೇಜರ್ ಶೌಕತ್ ಪುತ್ತೂರು, ಕೆ.ಬಿ. ಸಲೀಂ ಹಾಜಿ ಕುಕ್ಕರಬೆಟ್ಟು, ಅಹ್ಮದ್ ಹಾಜಿ ಕುಕ್ಕರಬೆಟ್ಟು, ಕೆ.ಬಿ.ಸಿರಾಜ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿ.ವಿ.| 68.34 ಕೋಟಿ ರೂ. ಕೊರತೆ ಬಜೆಟ್ ಮಂಡನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2026-27ನೇ ಸಾಲಿನ ಬಜೆಟ್ ನಲ್ಲಿ 68.34 ಕೋಟಿ ರೂ. ಕೊರತೆಯಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ 4ನೇ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಪ ಕುಲಸಚಿವೆ ಲಲಿತ ಬಜೆಟ್ ಮಂಡಿಸುತ್ತಾ ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು ಸ್ವೀಕೃತಿ 194.09 ಕೋಟಿ ಅಂದಾಜಿಸಿದ್ದು, ಖರ್ಚು 262.43 ಕೋಟಿ ಅಂದಾಜಿಸ ಲಾಗಿದೆ. ಕೊರತೆ 68.34ಕೋಟಿ ಆಗಲಿದೆ. 2025-26ನೇ ಸಾಲಿನಲ್ಲಿ 36.98 ಕೋಟಿ ಕೊರತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ 31.36 ಕೋಟಿ ಕೊರತೆ ಹೆಚ್ಚಾಗಿರುತ್ತದೆ ಎಂದರು. ಖರ್ಚು ವಿಭಾಗದಲ್ಲಿ ಮಾಸಿಕ ಪಿಂಚಣಿ, ನಿವೃತ್ತಿ ಸೌಲಭ್ಯಗಳು, ತಾತ್ಕಾಲಿಕ ಸಿಬ್ಬಂದಿಗಳ ವೇತನ, ಹೊರಗುತ್ತಿಗೆ ಸಿಬ್ಬಂದಿಗಳ ವೇತನ, ಅತಿಥಿ ಉಪನ್ಯಾಸ ಜಕರುಗಳ ವೇತನ. ಆಡಳಿತಾತ್ಮಕ ವೆಚ್ಚ, ಘಟಕ ಕಾಲೇಜುಗಳ ವೆಚ್ಚ, ಪರೀಕ್ಷಾ ವೆಚ್ಚ ಹಾಗೂ ಇನ್ನಿತರ ವೆಚ್ಚಗಳು ಸೇರಿವೆ. ಯೋಜನೆ ಆದಾಯ 2026-27 ಸಾಲಿನಲ್ಲಿ 54.90 ಕೋಟಿ ರೂಪಾಯಿ ಆಗಿರುತ್ತದೆ ಎಂದರು. 2025-26ನೇ ಸಾಲಿನಲ್ಲಿ ಈ ಮೊತ್ತ 28.79 ಕೋಟಿ ಆಗಿದ್ದು, ಈ ಬಾರಿ 26.11 ಕೋಟಿ ಹೆಚ್ಚಾಗಿರುತ್ತದೆ. ಇದರಲ್ಲಿ ಅಭಿವೃದ್ಧಿ ಅನುದಾನ,ಎಸ್ ಸಿಪಿ/ಟಿಎಸ್ ಪಿ ಅನುದಾನ, ಪಿ.ಎಂ.ಉಷಾ ಅನುದಾನ 19.95 ಕೋಟಿ ಸೇರಿದ್ದು, ಇತರೆ ಅನುದಾನ, ಯುಜಿಸಿ, ಜಿಐಎಎನ್ ಕಾರ್ಯಕ್ರಮ, ದತ್ತಿನಿಧಿ ಹಾಗೂ ಪ್ರಾಯೋಜಿತ ಕಾರ್ಯಕ್ರಮಗಳು ಸೇರಿವೆ ಎಂದರು. ಅಂತರಾಷ್ಟ್ರೀಯ ವಸತಿ ನಿಲಯಕ್ಕೆ ಸಂಬಂಧಿಸಿ ಕೋರ್ಟ್ ನಿರ್ಣಯದಂತೆ ಪಾವತಿಸಬೇಕಾಗಿರುವುದರಿಂದ ಅಂದಾಜು 38.00 ಕೋಟಿ ಮೊತ್ತವು ಸೇರಿದೆ ಮತ್ತು ದತ್ತಿ ನಿಧಿ ಹಾಗೂ ಪ್ರಾಯೋಜಿತ ಕಾರ್ಯಕ್ರಮಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ಲಲಿತ ತಿಳಿಸಿದ್ದಾರೆ. * ಕೊರತೆ ಹಾಗೂ ಕೊರತೆಯನ್ನು ಸರಿದೂಗಿಸುವುದು:-ಸರ್ಕಾರದ ಅನುದಾನದಿಂದ ಬಿಡುಗಡೆಯಾಗಿರುವ ಖಾಯಂ ಸಿಬ್ಬಂದಿಗಳ ವೇತನ ಎಚ್ ಆರ್ ಎಂಎಸ್ ಮೂಲಕ ಪಾವತಿಯಾಗು ತ್ತಿರುವುದರಿಂದ ವಿಶ್ವ ವಿದ್ಯಾನಿಲಯಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಪ್ರೊ.ಧರ್ಮ ವಿವರಿಸಿದರು. *ಪಿಂಚಣಿ ನಿವೃತ್ತಿ ಸೌಲಭ್ಯಕ್ಕಾಗಿ ಬಜೆಟ್ ನಲ್ಲಿ ಶೇ.48 ವೆಚ್ಚ:- ಮುಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಒಟ್ಟು 447 ಮಂದಿ ಣಿದಾರರಿದ್ದು, ಅದರಲ್ಲಿ 362 ಮಂದಿ ಪಿಂಚಣಿದಾರರು ಹಾಗೂ ಮಂದಿ ಕುಟುಂಬ ಪಿಂಚಣಿ ದಾರರಿದ್ದಾರೆ. ಇವರಿಗೆ ವಾರ್ಷಿಕವಾಗಿ ರೂ. 31.20 ಕೋಟಿ ಪಿಂಚಣಿ/ಕುಟುಂಬ ಪಿಂಚಣಿಗಾಗಿ ವ್ಯಹಿಸಲಾಗುತ್ತಿದೆ ಇದು ಒಟ್ಟು ಬಜೆಟ್ ನ ವೆಚ್ಚದಲ್ಲಿ ಶೇ48 ಪಾಲು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದರು. ಆಯವ್ಯಯ ಅಂದಾಜುಗಳನ್ನು ತಯಾರಿಸುವಾಗ ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಈ ಹಿಂದೆ ಆಯವ್ಯಯ ಪ್ರಸ್ತಾವನೆಗಳಲ್ಲಿ ಕಂಡುಬಂದಿರುವ ಕೊರತೆಗಳನ್ನು ಗಮನಿಸಿ ಇನ್ನು ಮುಂದೆ ಅವುಗಳ ಕೊರತೆಗಳು (ದುಂದುವೆಚ್ಚ) ಮರುಕಳಿಸದಂತೆ ಜಾಗ್ರತೆ ವಹಿಸಲು ಕ್ರಮಕೈಗೊಳ್ಳಲಾಗಿದೆ. ಸರ್ಕಾರದಿಂದ ಪಡೆಯಬಹುದಾದ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಬಹುದಾದ ಆದಾಯವನ್ನು ವ್ಯವಸ್ಥಿತ ರೀತಿಯಲ್ಲಿ ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಹಾಗೂ ಅನಿವಾರ್ಯವಾದ ತುರ್ತು ಬೇಡಿಕೆಗಳಿಗೆ ಅನುಗುಣವಾಗಿ ಖರ್ಚು-ವೆಚ್ಚಗಳನ್ನು ಪರಿಷ್ಕೃತ ಆಯವ್ಯಯದಲ್ಲಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರೊ.ಧರ್ಮ ತಿಳಿಸಿದ್ದಾರೆ. * ಪಿಂಚಣಿ ಟ್ರಸ್ಟ್ ಫಂಡ್ :-ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಪ್ರಥಮ ಬಾರಿಗೆ ಆಂತರಿಕ ಸಂಪನ್ಮೂಲಗಳನ್ನು ಉಳಿಸಿ ಕೊಂಡು ಪಿಂಚಣಿ ಟ್ರಸ್ಟ್ ಫಂಡ್ ನ್ನು ಆರಂಭಿಸಲಾಗಿದೆ ಎಂದು ಪ್ರೊ.ಪಿ. ಎಲ್.ಧರ್ಮ ತಿಳಿಸಿದ್ದಾರೆ. 2026-27 ನೆ ಸಾಲಿಗೆ ಪ್ರಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇನ್ನೋವೇಶನ್ ಜಪ್ಪಿನಮೊಗರು ಎಂಬ ವಿದ್ಯಾಸಂಸ್ಥೆಗೆ ಹೊಸ ಸಂಯೋಜನೆಗೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸ ಲಾಯಿತು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ನಿಯಂತ್ರಿಸುವ ತಿದ್ದುಪಡಿಗೆ ಸಭೆ ಅನುಮೋದಿಸಿತು. ಸಭೆಯಲ್ಲಿ ಕುಲಸಚಿವ ಪ್ರೊ.ದೇವೇಂದ್ರಪ್ಪ (ಪರೀಕ್ಷಾಂಗ )ಗಣೇಶ್ ಸಂಜೀವ (ಪ್ರಭಾರ),ಉಪ ಕುಲಸಚಿವೆ ಲಲಿತ ಮೊದಲಾದವರು ಉಪಸ್ಥಿತರಿದ್ದರು.
Air India ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊಗೆ; ತುರ್ತು ಭೂಸ್ಪರ್ಶ
ಹೊಸದಿಲ್ಲಿ, ಮಾ.31: ಪಶ್ಚಿಮ ಬಂಗಾಳದ ಬಾಗ್ಡೋಗ್ರದಿಂದ ದಿಲ್ಲಿಗೆ ಸಂಚರಿಸುತ್ತಿದ್ದ ಸಂದರ್ಭ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಹೊಗೆ ಎಚ್ಚರಿಕೆ ಸಾಧನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅದು ಲಖ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಈ ವಿಮಾನದಲ್ಲಿ 148 ಮಂದಿ ಪ್ರಯಾಣಿಕರಿದ್ದರು. ಏರ್ಬಸ್ ಎ320ರಿಂದ ನಿರ್ವಹಿಸುತ್ತಿದ್ದ ಈ ವಿಮಾನದ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಹೊಗೆ ಪತ್ತೆಯಾದ ಬಳಿಕ ಸೋಮವಾರ ಸಂಜೆ ಲಖ್ನೋದಲ್ಲಿರುವ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಥ ಬದಲಾವಣೆ ಮಾಡಲಾಯಿತು. ಪೈಲಟ್ ಅಪಾಯದ ಕರೆ ನೀಡಿದ ಬಳಿಕ ಲಖ್ನೋದಲ್ಲಿರುವ ವಿಮಾನ ಸಂಚಾರ ನಿಯಂತ್ರಣ (ಎಟಿಸಿ) ಕೂಡಲೇ ಜಾಗೃತವಾಯಿತು ಹಾಗೂ ವಿಮಾನ ಸಂಜೆ 5.30ಕ್ಕೆ ಸುರಕ್ಷಿತವಾಗಿ ಕೆಳಗೆ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಯಾರಿಗೂ ಗಾಯಗಳಾಗಿಲ್ಲ ಎಂದು ವರದಿ ಹೇಳಿದೆ. ಘಟನೆಯನ್ನು ದೃಢಪಡಿಸಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು, ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ನೀಡುವುದರೊಂದಿಗೆ ವಿಮಾನವನ್ನು ಲಖ್ನೋದಲ್ಲಿ ಇಳಿಸಲಾಗಿದೆ ಎಂದಿದ್ದಾರೆ. ನಂತರ ಪ್ರಯಾಣಿಕರನ್ನು ಇನ್ನೊಂದು ವಿಮಾನದಲ್ಲಿ ದಿಲ್ಲಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಳೆಪುಣಿಯ ಕಣಂತೂರು ಪುಷ್ಪ -ಕೇಶವರಿಗೆ ' ಸ್ವಚ್ಛ ಮನೆ 'ಪ್ರಶಸ್ತಿ ಪ್ರದಾನ
ಮಂಗಳೂರು,ಮಾ.31;ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಪರಿಸರ -ಸ್ವಚ್ಛಮನೆ ಕಾರ್ಯಕ್ರಮದ ಅಂಗವಾಗಿ ಮುಡಿಪು ಅಪ್ನಾದೇಶ್ ಸ್ವಚ್ಛತಾ ಬಳಗ ಜನಶಿಕ್ಷಣ ಟ್ರಸ್ಟ್ ವತಿಯಿಂದ ಕಣಂತೂರು ಪುಷ್ಪ -ಕೇಶವರ ಮನೆಗೆ ಸ್ವಚ್ಛ ಮನೆ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ನ ಸರ್ವೋದಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಅಪ್ನಾ ದೇಶ್ ಸ್ವಚ್ಛತಾ ಬಳಗದ ಮುಖಂಡ ರಾದ ರಮೇಶ್ ಶೇಣವ ಪ್ರಶಸ್ತಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಮನೆಯ ಸುತ್ತ ಹಸಿರು ಪರಿಸರ,ಪ್ರಾಣಿ ಪಕ್ಷಿಗಳ ಒಡನಾಟದ ಹವ್ಯಾಸ ನಮ್ಮ ದೈಹಿಕ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.ಈ ನಿಟ್ಟಿನಲ್ಲಿ ಸ್ವಚ್ಛ ಮನೆ ಪ್ರಶಸ್ತಿ ಇತರರಿಗೆ ಪ್ರೇರಣೆಯಾಗಲಿ ಎಂದರು. ಸ್ವಚ್ಛ, ಪರಿಸರದ ಜೊತೆ ಗಿನ ಬದುಕು ನಮಗೆ ಮಾನಸಿಕ ನೆಮ್ಮದಿಯನ್ನು ನೀಡಿದೆ.ಮನೆಯ ಸುತ್ತ ಸಾಕಷ್ಟು ಹೂ,ಹಣ್ಣಿನ ಗಿಡಗಳು ಇರುವ ಕಾರಣ ವಿವಿಧ ಜಾತಿಯ ಪಕ್ಷಿಗಳು ನಿರಂತರ ಭೇಟಿ ನೀಡುತ್ತವೆ.ಗಿಡಗಳನ್ನು ಬೆಳೆಸುವುದು ಅದರ ಪಾಲನೆಯಲ್ಲಿ ನಾವಿಬ್ಬರು ತೊಡಗಿಕೊಳ್ಳುವ ಚಟುವಟಿಕೆಯಲ್ಲಿ ನಮಗೆ ಒಂದು ರೀತಿಯ ಮಾನಸಿಕ ತೃಪ್ತಿ ಇದೆ. ನಮಗೆ ಬೇಕಾದ ತರಕಾರಿ ಸೊಪ್ಪು ನಾವೆ ಬೆಳೆಸುತ್ತೇವೆ, ಸಾವಯವ ಗೊಬ್ಬರ ಬಳಸು ತ್ತೇವೆ,ಸ್ವಚ್ಛ ಪರಿಸರ ನಮ್ಮ ಬದುಕಿನ ಭಾಗವಾಗಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ಪುಷ್ಪ ಹಾಗೂ ಕೇಶವ ದಂಪತಿ ಅಭಿಪ್ರಾಯ ಪಡುತ್ತಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ತುಳು ಸಾಹಿತಿ ಚಂದ್ರಹಾಸ ಕಣಂತೂರು ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನಶೆಟ್ಟಿ ಸ್ವಾಗತಿಸಿ ಮಾತನಾ ಡುತ್ತಾ,ಜಿಲ್ಲೆಯಲ್ಲಿ ಪ್ರಥಮವಾಗಿ ಪುಷ್ಪ- ಕೇಶವ ಅವರ ಮನೆಯನ್ನು ಸ್ವಚ್ಛ ಮನೆ ಯೆಂದು ಗುರುತಿಸಿ ಗೌರವಿಸಲಾಗಿದೆ ಈ ಅಭಿಯಾನ ಮುಂದುವರಿಯಲಿದೆ.ಸ್ವಚ್ಛ ಮನೆ ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ ಜನರ ಮೂಲಕ ವ್ಯಾಪಿಸಬೇಕು,ಪರಿಸರವಸ್ನೇಹಿ ಬದುಕು ನಮ್ಮದಾಗ ಬೇಕು ಎಂದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್ ಬಿ.ಎನ್,ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಯೋಗಿ ಶ್ಯಾಮ್ ಭಟ್ ಅಪ್ನಾದೇಶ್ ಸ್ವಚ್ಛತಾ ಬಳಗದ ಮುಖಂಡ ರಾದ ಇಸ್ಮಾಯಿಲ್ ಕಣಂತೂರು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
Kodagu | ಯಶಸ್ವಿ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು
ಮಡಿಕೇರಿ: ತಿತಿಮತಿ ಅರಣ್ಯ ವಲಯಕ್ಕೆ ಒಳಪಡುವ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಿತಿಮತಿಯ ತೋಟದಲ್ಲಿ ಬೀಡುಬಿಟ್ಟಿದ್ದ ಮರಿಯಾನೆ ಸೇರಿದಂತೆ ಸುಮಾರು ಐದು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಮತ್ತಿಗೋಡು ಅರಣ್ಯಕ್ಕೆ ಮರಳಿ ಅಟ್ಟಲಾಗಿದೆ. ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯವರ ಆದೇಶದಂತೆ ತಿತಿಮತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರ ನಿರ್ದೇಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಪ್ರಶಾಂತ್, ಡಿಎಫ್ಓ ದೇವರಾಜ್ ಮಾರ್ಗದರ್ಶನದಲ್ಲಿ ಪ್ರಾದೇಶಿಕ ವಲಯ ಸಿಬ್ಬದಿಗಳು ಹಾಗೂ ಇಟಿಎಫ್ ತಂಡದವರು ಕಾರ್ಯಾಚರಣೆ ನಡೆಸಿ ಆನೆಗಳನ್ನು ಅರಣ್ಯಕ್ಕೆ ಅಟ್ಟಿದರು.
ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಗಿದು ಸಕಾಲ ಎಂದು ಹಲವರ ಒತ್ತಾಯ; ಈಗಲೇ ಬೇಡ ಎಂದ ಅಶ್ವಿನ್! ಯಾಕೆ?
Ravichandran Ashwin On Vaibhav Suryavanshi- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಕ ವೈಭವ್ ಸೂರ್ಯವಂಶಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಕ್ರಿಕೆಟ್ ತಜ್ಞರ ಅಭಿಪ್ರಾಯ. ಆದರೆ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅವರು ಮಾತ್ರ ಈ ವಿಚಾರದಲ್ಲಿ ಆತುರ ಬೇಡ ಎಂದು ಸಲಹೆ ನೀಡಿದ್ದಾರೆ. ವೈಭವ್ ಇನ್ನೂ ಮಗು, ಅವರ ಮುಂದೆ ಸುದೀರ್ಘ ಕ್ರಿಕೆಟ್ ಭವಿಷ್ಯವಿದೆ. ಅವರ ಮೇಲೆ ಅನಗತ್ಯ ಒತ್ತಡ ಹೇರದೆ ಮುಕ್ತವಾಗಿ ಆಡಲು ಬಿಡಬೇಕು ಎಂದಿದ್ದಾರೆ.
ಅಮರೇಶ ನುಗಡೋಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಯಚೂರು: ಜಿಲ್ಲೆಯ ಪ್ರಸಿದ್ಧ ಕಥೆಗಾರ, ಸೃಜನಶೀಲ ಬರಹಗಾರ ಅಮರೇಶ ನುಗಡೋಣಿ ಅವರಿಗೆ ದಿಲ್ಲಿಯ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮರೇಶ ನುಗಡೋಣಿ ಅವರ 'ದಡ ಸೇರಿಸು ತಂದೆ' ಕಥಾ ಸಂಕಲನಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದು ಇದು ರೂ.1,00,000 ನಗದು ಬಹುಮಾನ, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಅಮರೇಶ ನುಗಡೋಣಿ ಅವರು ಸಿರವಾರ( ಮಾನ್ವಿ) ತಾಲೂಕಿನ ನುಗಡೋಣಿ ಎಂಬ ಪುಟ್ಟ ಗ್ರಾಮದವರಾಗಿದ್ದು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಸಾಹಿತ್ಯ ಕೃಷಿಯನ್ನು ಆದಾರವಾಗಿಟ್ಟುಕೊಂಡು ʼದಡ ಸೇರಿಸು ತಂದೆ ಕಥೆʼಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ.
ಸರಬಿ ನದಿ ಶುದ್ಧೀಕರಣಕ್ಕೆ 10 ಕೋಟಿ ರೂ. ಮಂಜೂರಾದರೂ ಕಾಮಗಾರಿ ವಿಳಂಬ; ಸರಬಿ ನದಿ ಹೋರಾಟ ಸಮಿತಿ ಆಕ್ರೋಶ
ಭಟ್ಕಳ: ಸರಬಿ ನದಿಯ ಶುದ್ಧೀಕರಣ ಮತ್ತು ಹೂಳು ತೆಗೆದು ಆಳಗೊಳಿಸಲು ಸರ್ಕಾರದಿಂದ ಸುಮಾರು 10 ಕೋಟಿ ಮಂಜೂರಾದರೂ ಕಾಮಗಾರಿ ಆರಂಭವಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ‘ಸರಬಿ ನದಿ ಹೋರಾಟ ಸಮಿತಿ’ ಯ ಸದಸ್ಯರು ತಂಝೀಮ್ ಕಚೇರಿಗೆ ಆಗಮಿಸಿ ಪದಾಧಿಕಾರಿಗಳೂ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ರಾತ್ರಿ ನಗರದ ತಂಝೀಮ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು, “ಧನ ಮಂಜೂರಾದ ಬಳಿಕವೂ ಕೆಲಸ ಏಕೆ ಪ್ರಾರಂಭವಾಗಿಲ್ಲ? ವಿಳಂಬಕ್ಕೆ ಹೊಣೆ ಯಾರು?” ಎಂದು ಪ್ರಶ್ನಿಸಿದರು. ಮಳೆಗಾಲ ಸಮೀಪಿ ಸುತ್ತಿದ್ದರೂ ನದಿ ಶುದ್ಧೀಕರಣ ಕಾರ್ಯ ಆರಂಭವಾಗದಿರುವುದು ಆಡಳಿತದ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು. ಸಮಿತಿ ಸದಸ್ಯರು, ಜನರ ಮತಗಳಿಂದ ಆಯ್ಕೆಯಾದ ಸಚಿವರು ಈ ವಿಷಯದಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ? ಸಂಬಂಧಿತ ಇಲಾಖೆಗಳ ಪ್ರಗತಿ ವರದಿ ಕೇಳಲಾಗಿದೆಯೇ? ಅಥವಾ ಯೋಜನೆ ನಿರ್ಲಕ್ಷ್ಯಕ್ಕೆ ಗುರಿಯಾಗಿದೆವೇ? ಎಂದು ಪ್ರಶ್ನಿಸಿದರು. ಚುನಾವಣಾ ಸಮಯದಲ್ಲಿ ಸರಬಿ ನದಿ ಶುದ್ಧೀಕರಣವನ್ನು ಪ್ರಮುಖ ವಿಚಾರವನ್ನಾಗಿ ಮಾಡಿಕೊಂಡು ಬೆಂಬಲ ಕೋರಲಾಗಿತ್ತು. ಈಗ ಅದೇ ಪ್ರತಿನಿಧಿಗಳು ಅಧಿಕಾರದಲ್ಲಿದ್ದರೂ, ಅವರಿಂದ ಸ್ಪಷ್ಟ ಉತ್ತರ ಸಿಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಮಳೆಗಾಲದ ಮೊದಲು ಕಾಮಗಾರಿ ಆರಂಭವಾಗದಿದ್ದರೆ ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿತ ಅಧಿಕಾರಿಗಳು ಮತ್ತು ರಾಜಕೀಯ ನಾಯಕತ್ವವೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು. ಐತಿಹಾಸಿಕ ನದಿ ದುಸ್ಥಿತಿ: ಸರಬಿ ನದಿ, ಅರಬ್ಬೀ ಸಮುದ್ರ ಸೇರುವ ಪ್ರಮುಖ ಜಲಮಾರ್ಗವಾಗಿದ್ದು, ಹಿಂದೆ ಅರಬ್ ವ್ಯಾಪಾರಿಗಳ ಸಂಚಾರಕ್ಕೂ ಕಾರಣವಾಗಿತ್ತು. ಆದರೆ ಈಗ ಮಣ್ಣು, ಕೆಸರು ಮತ್ತು ಒಳಚರಂಡಿ ನೀರಿನಿಂದ ದುರ್ವಾ ಸನೆಯ ಕಾಲುವೆಯಾಗಿ ಮಾರ್ಪಟ್ಟಿದ್ದು, ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಘೌಸಿಯಾ ಸ್ಟ್ರೀಟ್ನ ಯುಜಿಡಿ ಪಂಪಿಂಗ್ ಸ್ಟೇಷನ್ನಿಂದ ಹೊರಬರುವ ಮಲಿನ ನೀರು ನದಿಗೆ ಸೇರುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದರಿಂದ ಸುತ್ತಮುತ್ತಲಿನ ಬಾವಿಗಳೂ ಮಾಲಿನ್ಯಗೊಂಡಿವೆ ಎಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿ ಪ್ರಾರಂಭಕ್ಕೆ ಸ್ಪಷ್ಟ ಗಡುವು ಪ್ರಕಟಿಸಬೇಕು ಮತ್ತು ಯೋಜನೆಯ ಪ್ರಸ್ತುತ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಸಭೆಯಲ್ಲಿ ವಿವಿಧ ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಯೋಜನೆಗಾಗಿ ಎರಡು ವರ್ಷಗಳ ಹಿಂದೆ ಸಂಘಟಿತ ಹೋರಾಟ ನಡೆದಿದ್ದು, ನಂತರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಯೋಜನೆಗೆ 10 ಕೋಟಿ ಮಂಜೂರು ಘೋಷಿಸಿದ್ದರು. ತಾಂತ್ರಿಕ ಪರಿಶೀಲನೆ ಕೂಡ ನಡೆದಿದ್ದರೂ ನೆಲಮಟ್ಟದಲ್ಲಿ ಯಾವುದೇ ಪ್ರಗತಿ ಕಾಣದಿರುವುದರಿಂದ ಸಮಿತಿ ಕಳವಳ ವ್ಯಕ್ತಪಡಿಸಿದೆ. ಈ ವೇಳೆ ತಂಝೀಮ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಂದಿನ ಸಭೆಯಲ್ಲಿ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಿ ಸಂಬಂಧಿತ ಸಚಿವರೊಂದಿಗೆ ಸಂಪರ್ಕ ಸಾಧಿಸಿ ತಕ್ಷಣದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಮಿತಿ ಕೂಡ ಶೀಘ್ರದಲ್ಲಿ ಸ್ಪಷ್ಟ ಕ್ರಮ ಕಾಣದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಘೋಷಿಸುವುದಾಗಿ ತಿಳಿಸಿದೆ. ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಮುಖಂಡರಾದ ಅಝೀಝುರ್ರಹ್ಮಾನ್ ನದ್ವಿ, ಸರಾಬಿ ನದಿ ಹೋರಾಟ ಸಮಿತಿಯ ಖೈಸರ್ ಮೊಹತೆಶಮ್, ಇಸ್ಮಾಯಿಲ್ ಅಂಜುಮನ್ ಗಂಗಾವಳಿ, ಉಬೈದುಲ್ಲಾ ಇಸ್ಹಾಖಿ ಮುಂತಾದವರು ಉಪಸ್ಥಿತರಿದ್ದರು.
ಸರಕಾರಿ ಕಾಲೇಜಿಗೆ ಕೊಟ್ಟ ದೇಣಿಗೆ ವಿದ್ಯೆಯಿಂದ ಸಫಲ: ಸತೀಶ್ ಪೈ
ಹೆಬ್ರಿ, ಮಾ.31: ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ದಿ.ಹೆಬ್ರಿ ಪ್ರಫುಲ್ಲಾ ಪೈ ಅವರ ಸ್ಮರಣಾರ್ಥ ಸುಶೀಲಾ ಆನಂದ್ರಾಯ ಪೈ ಮತ್ತು ಮಕ್ಕಳು 5 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ಕಾಲೇಜಿನ ಸಭಾಂಗಣ ಹಾಗೂ ವೇದಿಕೆ ಸಂಪೂರ್ಣ ವಿದ್ಯುದ್ದೀಕರಣದ ಉದ್ಘಾಟನೆಯನ್ನು ಉದ್ಯಮಿ, ದಾನಿ ಸತೀಶ್ ಪೈ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ವಿದ್ಯಾಲಯ, ಧಾರ್ಮಿಕ ಪ್ರಜ್ಞೆ ಮೂಡಿಸುವ ದೇಗುಲ ಇವುಗಳೆರಡು ಸರಿಸಮಾನವಾಗಿದ್ದು, ಮಾತನಾಡುವ ದೇವರು ಇರುವ ವಿದ್ಯಾಲಯಕ್ಕೆ ಕೊಟ್ಟ ದೇಣಿಗೆ ವಿದ್ಯೆಯ ಮೂಲಕ ಸಾರ್ಥಕ್ಯ ಪಡೆಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಬ್ರಿ ತಹಶೀಲ್ದಾರ್ ಎಸ್.ಎ. ಪ್ರಸಾದ್ ಮಾತನಾಡಿ, ಸಮಾಜದ ಆಶೋತ್ತರ, ಸರಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಇಂತಹ ದಾನಿಗಳನ್ನು ವಿದ್ಯಾರ್ಥಿ ಗಳು ನೆನಪಿನಲ್ಲಿ ಇಡಬೇಕು. ಸಮಾಜದ ಬಗ್ಗೆ ತುಡಿತ ಇಟ್ಟುಕೊಂಡಿರುವ ಸತೀಶ್ ಪೈ ಅವರು ಅಭಿನಂದನೀಯರು ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ವಿದ್ಯಾಧರ ಹೆಗ್ಡೆ ಎಸ್. ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಶ್ಯಾಮಲಾ ವಿಠಲ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸುಷ್ಮಾ ರಾವ್ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸುಧೀರ್ ಜೈನ್ ವಂದಿಸಿದರು. ಕನ್ನಡ ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.
ಇಸ್ಮಾಯಿಲ್ ಕಂಡಕರೆಗೆ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಜಿ.ನಾರಾಯಣಸ್ವಾಮಿ (ಅತ್ಯುತ್ತಮ ಗ್ರಾಮಾಂತರ ಪ್ರಶಸ್ತಿಗೆ) ವಾರ್ತಾಭಾರತಿ ವಿಶೇಷ ವರದಿಗಾರ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರು ಭಾಜನರಾಗಿದ್ದಾರೆ. ಜೂ.26, 2024 ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರ ʼಅತ್ಯಾಡಿ ಗ್ರಾಮಸ್ಥರಿಗೆ ಮರೀಚಿಕೆಯಾದ ಶಾಶ್ವತ ಸೇತುವೆ | ಅಡಿಕೆ ಪಾಲದ ಅಪಾಯಕಾರಿ ನಡಿಗೆಯೇ ಆಸರೆʼ ವರದಿಗೆ ಪ್ರಶಸ್ತಿ ಲಭಿಸಿದೆ. ಬೀದರ್ ನಲ್ಲಿ ಎಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಂದೂರು, ಮಾ.31: ಹೇರೂರು ಗ್ರಾಮದ ಯರುಕೋಣೆ ಸಮೀಪ ಮಾ.30ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಕಿರಿಮಂಜೇಶ್ವರ ಗ್ರಾಮದ ಲಕ್ಷ್ಮಣ ನಾಯ್ಕ(43), ನಾವುಂದ ಗ್ರಾಮದ ಉಮೇಶ ದೇವಾಡಿಗ(53), ಹೇರೂರು ಗ್ರಾಮದ ಶೀನ ಪೂಜಾರಿ(62), ಉದಯ ಶೆಟ್ಟಿ(60) ಬಂಧಿತ ಆರೋಪಿಗಳು. ಇವರಿಂದ 2,560ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಜಾರು ದೇವಸ್ಥಾನದಿಂದ ಕಳವು ಪ್ರಕರಣ : ಆರೋಪಿ ಬಂಧನ
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಮಿಳುನಾಡು ದಿಂಡಿಗುಲ್ನ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಾ.3ರಂದು ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿ, 3 ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ರೂ. 25,000 ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿದ್ದು, ಬಜಪೆ ಪೊಲೀಸರು ಖಚಿತ ಮಾಹಿತಿಯ ಆಧಾರದ ಆರೋಪಿ ಶಬಿಕ್ ಅಹಮ್ಮದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆತಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕಳವಾಗಿದ್ದ ಕಾಣಿಕೆ ಹುಂಡಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀರ ಪ್ರಕಟನೆ ತಿಳಿಸಿದೆ. ಆರೋಪಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದ ಆರೋಪಿಯಾಗಿರು ತ್ತಾನೆ. ಅಲ್ಲದೇ ಕಳೆದ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲೂ ಭಾಗಿಯಾಗಿರುತ್ತಾನೆ. ಆರೋಪಿತನು ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳ್ಳತನ ಮಾಡಿ, ಮತ್ತೆ ತಮಿಳುನಾಡಿಗೆ ತೆರಳಿ ತಪ್ಪಿಸಿ ಕೊಳ್ಳುವ ಪ್ರವೃತ್ತಿ ಹೊಂದಿದವನಾಗಿದ್ದು, ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಮತ್ತು ಠಾಣಾ ಕ್ರೈಂ ಸಿಬ್ಬಂದಿ ನೂತನ್, ರಾಜೇಶ್ ಮತ್ತು ಪ್ರಕಾಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ: ಎ.4ಕ್ಕೆ ಆಟಿಸಂ ಸೊಸೈಟಿಯಿಂದ ಮಕ್ಕಳ ಕಲಾಸೌರಭ
ಉಡುಪಿ, ಮಾ.31: ಜಿಲ್ಲೆಯಾದ್ಯಂತ ಆಟಿಸಂ ಮಕ್ಕಳ ಹಾಗೂ ಅವರ ಆರೈಕೆದಾರರ ಕಾಳಜಿಗೆ ಮೀಸಲಾಗಿರುವ ಆಟಿಸಂ ಸೊಸೈಟಿ ಆಫ್ ಉಡುಪಿ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ ಹಮ್ಮಿಕೊಳ್ಳುತ್ತಿರುವ ‘ಕಲಾಸೌರಭ’ ಈ ಬಾರಿ ಎಪ್ರಿಲ್ 4ರ ಶನಿವಾರ ಉಡಪಿ ಬನ್ನಂಜೆಯಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ಬೆಳಗ್ಗೆ 9 ರಿಂದ ಸಂಜೆ 4:30ರವರೆಗೆ ನಡೆಯಲಿದೆ ಎಂದು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ಭಂಡಾರಿ, ಕಾರ್ಯಕ್ರಮ ವನ್ನು ಆಟಿಸಂ ಸೊಸೈಟಿ ಉಡುಪಿ ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೋಷಕರನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಕಲ್ಪಿಸ ಲಾಗುವುದು. ಈ ಮೂಲಕ ಪೋಷಕರು ಸಾಮಾಜಿಕ ಕಳಂಕವನ್ನು ತೊಡೆದು ತಮ್ಮ ವಿಶೇಷ ಮಗುವಿ ನೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು. ಕಲಾಸೌರಭದ ಉದ್ಘಾಟನಾ ಸಮಾರಂಭ ಎ.4ರ ಬೆಳಿಗ್ಗೆ 9:45ಕ್ಕೆ ನಡೆಯಲಿದೆ. ಮೈಸೂರಿನ ಸ್ವಾಮಿ ವಿವೇಕಾ ನಂದ ಯೂತ್ ಮೂಮೆಂಟ್ನ ಕಾರ್ಯ ನಿರ್ವಾಹಕ ಅಧಿಕಾರಿ ಸವಿತಾ ಸುಲುಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರತ್ನ ಸುವರ್ಣ, ಬಡಗುಬೆಟ್ಟು ಸೊಸೈಟಿಯ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಪಿ.ವಿ. ಭಂಡಾರಿ, ರೋಟರಿ ಜಿಲ್ಲೆ 3182ರ ಮಾಜಿ ಜಿಲ್ಲಾ ಗವರ್ನರ್ ಡಾ. ಗೌರಿ ಹಾಗೂ ಇತರರು ಭಾಗವಹಿಸಲಿದ್ದಾರೆ. ವಿಶೇಷ ಮಕ್ಕಳ ಪೋಷಕರಿಗೆ ಅಗತ್ಯವಾದ ಮಾಹಿತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಮುಖ್ಯ ಭಾಷಣಕಾರರಾಗಿ ಬೆಂಗಳೂರು ಸೃಷ್ಟಿ ಸ್ಪೆಷಲ್ ಅಕಾಡೆಮಿಯ ಸುಚಿತ್ರಾ ಸೋಮಶೇಖರಯ್ಯ, ಬೆಂಗಳೂರಿನ ತುಳಸಿ, ಕೊಪ್ಪಳದ ಡಾ.ರಾಘವೇಂದ್ರ ಭಟ್, ಮೈಸೂರಿನ ಡಾ.ದೀಪಶ್ರೀ ಉಪನ್ಯಾಸ ನೀಡಲಿದ್ದಾರೆ ಎಂದರು. ಆಟಿಸಂ ಹಾಗೂ ವಿಶೇಷ ಮಕ್ಕಳ ವಿಶೇಷ ಅಗತ್ಯತೆಗಳಿಗೆ ಪೂರಕ ವಸ್ತು ಗಳು, ಬಟ್ಟೆ, ಚಿಕಿತ್ಸಾ ಸಾಮಗ್ರಿಗಳು, ವೃತ್ತಿಪರ ಚಿಕಿತ್ಸೆಗಳ ಸ್ಟಾಲ್ಗಳು ಇರುತ್ತವೆ. ವಿಶೇಷ ಮಕ್ಕಳ ಚಿತ್ರಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಸರಕಾರಿ ಸೌಲಭ್ಯಗಳ ಮಾಹಿತಿ ಸ್ಟಾಲ್ಗಳು ಸಹ ಇರಲಿವೆ. ಉಡುಪಿ ಜಿಲ್ಲೆಯ ಎಲ್ಲಾ ವಿಶೇಷ ಶಾಲೆಗಳ ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ನೀಡಲಿದ್ದಾರೆ. ಸಾರ್ವಜನಿಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಡಾ.ಭಂಡಾರಿ ವಿನಂತಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಡುಪಿ ಆಟಿಸಂ ಸೊಸೈಟಿ ಅಧ್ಯಕ್ಷ ಹಾಗೂ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಸೌಜನ್ಯ ಶೆಟ್ಟಿ, ವಿಠಲ ಭಕ್ತ ಹಾಗೂ ಕಾರ್ಯಕ್ರಮ ಸಂಯೋಜಕ ಕೀರ್ತೇಶ್ ಎಸ್. ಉಪಸಿತರಿದ್ದರು.
ಅಭಿವೃದ್ಧಿ ಕಾಣದ ಬೀಜಾಡಿ ಮೂಡುಕೊಳ-ಪಡುಕೊಳ ಕೆರೆಗಳು !
ತುರ್ತಾಗಿ ಆಗಬೇಕಿದೆ ಕಾಯಕಲ್ಪ
ಕಲಬುರಗಿ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್, ಎಲ್ಪಿಜಿ ಸಿಲಿಂಡರ್ ಕೊರತೆಯಿಲ್ಲ: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್
ಕಲಬುರಗಿ: ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಎಲ್.ಪಿ.ಜಿ ಸಿಲಿಂಡರ್ಗಳ ಕೊರತೆ ಇಲ್ಲ. ಎಲ್ಲವು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕೊವಿಗೊಡಬಾರದು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲಾ ತೈಲ ಕಂಪೆನಿ ಬಳಿ ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದೆ. ಪೆಟ್ರೋಲ್ ಬಂಕ್ಗಳಿಗೆ ನಿರಂತರವಾಗಿ ಇಂಧನ ಪೂರೈಕೆಯಾಗುತ್ತಿದೆ. ಅದೇ ರೀತಿ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ಜನರು ಆತಂಕಗೊಳ್ಳಬಾರದು. ಇನ್ನು ಸಿಲಿಂಡರ್, ಇಂಧನ ಅಭಾವ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್ಗಳನ್ನು ಪಡೆಯಲು ಈ ಹಿಂದೆ ಪಡೆದ ದಿನಂಕದಿಂದ 25 ದಿನಗಳ ಬಳಿಕವೇ ನಗರ ಪ್ರದೇಶದ ಗ್ರಾಹಕರು ಬುಕ್ಕಿಂಗ್ ಮಾಡಬೇಕಾಗುತ್ತದೆ. ಅದೇ ರೀತಿ ಗ್ರಾಮಾಂತರ ಪ್ರದೇಶದ ಗ್ರಾಹಕರು 45 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾಸ್ತವದ ವಿಷಯವನ್ನು ಅರಿಯದೆ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಮುಗಿಬೀಳುತ್ತಿರುವುದರಿಂದ ಅನಗತ್ಯ ಜನಸಂದಣಿಯಾಗಿ ಗೊಂದಲು ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ. ಗೃಹ ಬಳಕೆಯ ಅಡುಗೆ ಅನಿಲ ಗ್ರಾಹಕರು ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರಾದ ಹೊಟೇಲ್, ರೆಸ್ಟೋರೆಂಟ್ ಇತ್ಯಾದಿ ಬಳಕೆದಾರರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತವು ಎಚ್ಪಿಸಿ, ಐಓಸಿ ಮತ್ತು ಬಿಪಿಸಿ ತೈಲ ಕಂಪೆನಿಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪೆಟ್ರೋಲ್, ಡಿಸೇಲ್ ಮತ್ತು ಎಲ್.ಪಿ.ಜಿ ಸಿಲಿಂಡರ್ಗಳ ಕೊರತೆ ಉಂಟಾಗದೇ ಬೇಡಿಕೆಗೆ ಅನುಗುಣವಾಗಿ ಅಗತ್ಯವಾದ ದಾಸ್ತಾನನ್ನು ಸಂಗ್ರಹಿಸಿಟ್ಟಿಕೊಳ್ಳಲು ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಮತ್ತು ಹೆಚ್ಚುವರಿಯಾಗಿ ದಾಸ್ತಾನು ಮಾಡಿಟ್ಟುಕೊಳ್ಳಬಾರದೆಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಹೇಳಿದ್ದಾರೆ.
1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ | ಹೈದರಾಬಾದ್ ನಲ್ಲಿ ಜಯಲಲಿತಾ ಬಂಗಲೆಗೆ ಬೀಗ ಜಡಿದ ಅಧಿಕಾರಿಗಳು
ಹೈದರಾಬಾದ್, ಮಾ.31: ಹಲವಾರು ವರ್ಷಗಳಿಂದ 1.5 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿಯಿರುವ ಹಿನ್ನೆಲೆಯಲ್ಲಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಅಧಿಕಾರಿಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಇಲ್ಲಿನ ಬಂಗಲೆಗೆ ಬೀಗಮುದ್ರೆ ಹಾಕಿದ್ದಾರೆ. ತೆರಿಗೆ ಬಾಕಿಯನ್ನು ಪಾವತಿಸುವಂತೆ ಸೂಚಿಸಿ ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಹಲವಾರು ನೋಟಿಸ್ ಗಳನ್ನು ನೀಡಿದ್ದರೂ ಪ್ರತಿಕ್ರಿಯಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಯಲಲಿತಾ 2016ರಲ್ಲಿ ನಿಧನರಾಗಿದ್ದರು. ಮಂಗಳವಾರ ಅಂತಿಮ ಗಡುವು ಮುಗಿದ ಬಳಿಕ ಅಧಿಕಾರಿಗಳು ಜಯಲಲಿತಾ ಅವರ ಬಂಗಲೆಗೆ ತೆರಳಿ ಬೀಗಮುದ್ರೆ ಹಾಕಿದರು. ಶ್ರೀನಗರ ಕಾಲನಿಯಲ್ಲಿರುವ ಈ ಆಸ್ತಿಗೆ 2017ರಿಂದ ತೆರಿಗೆ ಪಾವತಿಸಿರಲಿಲ್ಲ. ಫೆಬ್ರವರಿಯಲ್ಲಿ ಮತ್ತೆ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಈ ಬಂಗಲೆಯನ್ನು ಹಿಂದೆ ಉದ್ಯಮಿ ವಿಜಯ ಮಲ್ಯ ಅವರಿಗೆ ಲೀಸ್ನಲ್ಲಿ ನೀಡಲಾಗಿತ್ತು. ಆ ಅವಧಿಯಲ್ಲಿ ತೆರಿಗೆ ಬಾಕಿಯಾಗಲು ಆರಂಭಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಮಾ.31ಕ್ಕೆ ಮುನ್ನ ತೆರಿಗೆ ಬಾಕಿ ಪಾವತಿಸುವಂತೆ ಎಲ್ಲ ಸುಸ್ತಿದಾರರಿಗೆ ನೋಟಿಸ್ ಗಳನ್ನು ನೀಡಲಾಗಿತ್ತು. ಜಯಲಲಿತಾ ಅವರ ಉತ್ತರಾಧಿಕಾರಿಗಳಿಗೂ ನೋಟಿಸ್ ನೀಡಿದ್ದೇವೆ. ಎಲ್ಲ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ’ ಎಂದು GHMC ಆಯುಕ್ತ ಆರ್.ವಿ. ಕರ್ಣನ್ ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ
ಸೋಮವಾರ (ಮಾರ್ಚ್ 30) ನಡೆದ ಐಪಿಎಲ್ 2026ರ 3ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್ಆರ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಅವರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರೀಡಾಭಿಮಾನಿಗಳ ಮೊಬೈಲ್ ಕಳವು ಪ್ರಕರಣ: ನಾಲ್ವರು ಸೆರೆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮೊಬೈಲ್ಗಳನ್ನು ಕಳವು ಮಾಡಿದ ಆರೋಪದಡಿ ನಾಲ್ವರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರು ಅಪ್ರಾಪ್ತರ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಮೈದಾನ ಪ್ರವೇಶಿಸುವ ಗಡಿಬಿಡಿ ಹಾಗೂ ಪಂದ್ಯ ಮುಗಿದ ನಂತರ ಜನಸಂದಣಿ ಉಂಟಾಗುವ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದ ಆರೋಪಿಗಳು, ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ ವಿವಿಧ ಕಂಪೆನಿಗಳಿಗೆ ಸೇರಿದ ಒಟ್ಟು 21 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಜನತೆಗೆ ಶುಭಸುದ್ದಿ : ಹುಬ್ಬಳ್ಳಿಯಿಂದ ಹೊಸ ವಿಮಾನಸೇವೆ ಆರಂಭ - ವೇಳಾಪಟ್ಟಿ ಬಿಡುಗಡೆ
Hubli - Hyderabad Flight Service : ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗವಾಗಿ ಸಹಾಯವಾಗುವ ವಿಮಾನಯಾನ ಸೇವೆ ಹೊಸದಾದಿ ಆರಂಭಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಹೈದರಾಬಾದ್’ಗೆ ಹೊಸ ವಿಮಾನಯಾನ ಸೇವೆ ಏಪ್ರಿಲ್ ಎರಡನೇ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಬಿಸಿಲಿನ ತಾಪಮಾನ ಹಿನ್ನೆಲೆ: ಎ.1ರಿಂದ ಸರಕಾರಿ ಕಚೇರಿ ಸಮಯದಲ್ಲಿ ಬದಲಾವಣೆ
ಕಲಬುರಗಿ: 2026ನೇ ಸಾಲಿನ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಎಪ್ರಿಲ್ 1ರಿಂದ ಅನ್ವಯವಾಗುವಂತೆ (2026ರ ಎಪ್ರಿಲ್ ಹಾಗೂ ಮೇ ತಿಂಗಳು ಅಂದರೆ ಎರಡು ತಿಂಗಳು ಕಾಲ) ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳಾದ ವಿಮಲಾಕ್ಷಿ ಬಿ. ಅವರು ಮಂಗಳವಾರ ಅದೇಶ ಹೊರಡಿಸಿದ್ದಾರೆ. ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿನ ಸರಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಹಾಗೂ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
Kanpur | 50,000 ರೂ. ಕುರಿತ ವಿವಾದದಿಂದ ಬಹುಕೋಟಿ ರೂ.ಗಳ ಕಿಡ್ನಿ ದಂಧೆ ಬಯಲು
ಕಾನ್ಪುರ (ಉತ್ತರ ಪ್ರದೇಶ), ಮಾ.31: 50,000 ರೂ.ಗಳನ್ನು ಪಾವತಿಸುವ ಕುರಿತು ಉಂಟಾದ ವಿವಾದವು ಕಾನ್ಪುರದಲ್ಲಿನ ಬಹುಕೋಟಿ ರೂ.ಗಳ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ಬಹಿರಂಗಗೊಳಿಸಿದೆ. ಈ ಜಾಲವು ಹಲವಾರು ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿತ್ತು ಮತ್ತು ಅಸಹಾಯಕ ಯುವಜನರನ್ನು ಗುರಿಯಾಗಿಸಿಕೊಂಡಿತ್ತು. ಸುಮಾರು 90 ಲಕ್ಷ ರೂ.ಗಳಷ್ಟು ಹೆಚ್ಚಿನ ಬೆಲೆಗೆ ಮೂತ್ರಪಿಂಡಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವುದು ಬಯಲಾಗಿದೆ. ಪ್ರಕರಣವು ರಾವತ್ಪುರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರ ಸುತ್ತ ಕೇಂದ್ರೀಕೃತವಾಗಿದ್ದು, ಅಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮೂತ್ರಪಿಂಡ ಕಸಿಗಳನ್ನು ಮಾಡಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ತನಗೆ ಹಣ ಪಾವತಿ ಬಾಕಿಯುಳಿದಿರುವ ಕುರಿತು ಮೂತ್ರಪಿಂಡ ದಾನಿಯೋರ್ವ ದೂರಿಕೊಂಡ ಬಳಿಕ ಸೋಮವಾರ ತನಿಖೆ ಆರಂಭಿಸಿದ ಪೋಲಿಸರು, ಆಸ್ಪತ್ರೆಯ ನಿರ್ವಾಹಕ ಮತ್ತು ಓರ್ವ ಮಧ್ಯವರ್ತಿ ಸೇರಿದಂತೆ ನಾಲ್ಕೈದು ಜನರನ್ನು ಬಂಧಿಸಿದ್ದಾರೆ. ತನಗೆ 10 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಲಾಗಿತ್ತು, ಆದರೆ 50,000 ರೂ. ಕಡಿಮೆ ಹಣವನ್ನು ಪಾವತಿಸಲಾಗಿತ್ತು. ಪದೇ ಪದೇ ಕೇಳಿದರೂ ಅದನ್ನು ನೀಡಿರಲಿಲ್ಲ. ಇದರಿಂದ ಹತಾಶನಾಗಿ ಪೋಲಿಸರನ್ನು ಸಂಪರ್ಕಿಸಿದ್ದಾಗಿ ದಾನಿ ಹೇಳಿದ್ದಾನೆ. ಬಂಧಿತ ಮಧ್ಯವರ್ತಿ ಕಲ್ಯಾಣಪುರದ ಶಿವಂ ಅಗರವಾಲ್ ಎಂಬಾತ ತನ್ನ ಸಂಬಂಧಿಯೋರ್ವರಿಗೆ ಮೂತ್ರಪಿಂಡದ ಅಗತ್ಯವಿದೆ ಎಂದು ಹೇಳಿ, ಉತ್ತರಾಖಂಡದ ಯುವಕನಿಗೆ 10 ಲಕ್ಷ ರೂ.ಗಳನ್ನು ನೀಡುವ ಆಮಿಷವೊಡ್ಡಿದ್ದ. ಆರ್ಥಿಕ ಸಂಕಷ್ಟದಲ್ಲಿದ್ದ ಯುವಕ ಇದಕ್ಕೆ ಒಪ್ಪಿಕೊಂಡಿದ್ದ. ರಾವತ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಮೂತ್ರಪಿಂಡವನ್ನು ತೆಗೆಯಲಾಗಿತ್ತು. ಬಳಿಕ ಅದನ್ನು 90 ಲಕ್ಷ ರೂ.ಗೂ ಹೆಚ್ಚಿನ ಬೆಲೆಗೆ ಮುಝಫ್ಫರ್ನಗರದ 35 ವರ್ಷದ ಮಹಿಳೆಯ ಕುಟುಂಬಕ್ಕೆ ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ದಾನಿಗೆ ಆರು ಲಕ್ಷ ರೂ. ನಗದು ಮತ್ತು ಚೆಕ್ ಮೂಲಕ 3.5 ಲಕ್ಷ ರೂ.ಗಳನ್ನು ಮಾತ್ರ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಮೂತ್ರಪಿಂಡ ದಾನಿಯನ್ನು ಮತ್ತು ಅದನ್ನು ಸ್ವೀಕರಿಸಿದ್ದ ಮಹಿಳೆಯನ್ನು ಒಂದು ದಿನ ಅದೇ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ಪ್ರತ್ಯೇಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಅಕ್ರಮ ವ್ಯವಹಾರ ಪತ್ತೆಯಾಗುವುದನ್ನು ತಪ್ಪಿಸಲು ಈ ಜಾಲವು ಮೂರು ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿತ್ತು. ಒಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದರೆ, ದಾನಿ ಮತ್ತು ಸ್ವೀಕರಿಸಿದವರ ಆರೈಕೆಗಾಗಿ ಎರಡು ಪ್ರತ್ಯೇಕ ಆಸ್ಪತ್ರೆಗಳನ್ನು ಬಳಸಲಾಗುತ್ತಿತ್ತು. ಈ ವೇಳೆ ದಾನಿಗೆ ಬೇರೆಯೇ ಹೆಸರನ್ನು ಬಳಸಲಾಗುತ್ತಿತ್ತು. ಯಾವುದೇ ಒಂದು ಆಸ್ಪತ್ರೆಗೆ ಸಂಪೂರ್ಣ ಮಾಹಿತಿ ಸಿಗುವುದನ್ನು ತಪ್ಪಿಸಲು ಜಾಲವು ಈ ತಂತ್ರವನ್ನು ಅನುಸರಿಸುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಜಾಲವು ವಿದ್ಯಾರ್ಥಿಗಳು ಸೇರಿದಂತೆ ಆರ್ಥಿಕವಾಗಿ ದುರ್ಬಲ ಜನರನ್ನು ಗುರಿಯಾಗಿಸಿಕೊಳ್ಳುತ್ತಿತ್ತು ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ದಾನಿಗಳನ್ನು ಹೆಚ್ಚಾಗಿ ಭಾವನಾತ್ಮಕ ಹೇಳಿಕೆಗಳು ಮತ್ತು ಸುಳ್ಳು ಭರವಸೆಗಳ ಮೂಲಕ ಬಲೆಗೆ ಬೀಳಿಸಲಾಗುತ್ತಿತ್ತು. ಪೋಲಿಸರ ಪ್ರಕಾರ, ಈ ದಂಧೆಯಲ್ಲಿ ಮಧ್ಯವರ್ತಿಗಳು, ಆಸ್ಪತ್ರೆ ನಿರ್ವಾಹಕರು ಮತ್ತು ವೈದ್ಯಕೀಯ ವೃತ್ತಿಪರರ ಸಂಘಟಿತ ಜಾಲವು ಭಾಗಿಯಾಗಿತ್ತು. ಪೋಲಿಸ್ ಮತ್ತು ಆರೋಗ್ಯ ಇಲಾಖೆಯ ಜಂಟಿ ತಂಡಗಳು ಹಲವಾರು ಆಸ್ಪತ್ರೆಗಳ ಮೇಲೆ ದಾಳಿಗಳನ್ನು ನಡೆಸಿ, ಕಸಿ ಪ್ರಕ್ರಿಯೆಗಳು ಮತ್ತು ರೋಗಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿವೆ. ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೋಲಿಸರು ವೈದ್ಯ ದಂಪತಿ ಮತ್ತು ಇನ್ನೂ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಜಾಲವು ಹಲವು ರಾಜ್ಯಗಳಿಗೆ ವಿಸ್ತರಿಸಿಕೊಂಡಿದೆ ಎಂದು ಪೋಲಿಸರು ಶಂಕಿಸಿದ್ದಾರೆ.
ಕೇಂದ್ರ ಸರಕಾರದಿಂದ ಜನರ ಮೇಲೆ ಬೆಲೆ ಏರಿಕೆ ಯುದ್ಧ: ಡಿ.ಕೆ. ಶಿವಕುಮಾರ್
ಬೆಂಗಳೂರು: ಒಂದೆಡೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮುಂದುವರೆದರೆ, ಇತ್ತ ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ. ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಎ.1ರಿಂದ ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿರುವ ವಿಚಾರವಾಗಿ ಪತ್ರಿಕೆಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುದ್ಧಗಳ ನೆಪ, ಕೇಂದ್ರ ಸರಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಒಟ್ಟಿನಲ್ಲಿ ಸಾಮಾನ್ಯ ಜನರ ಮೇಲೆ ಕೇಂದ್ರ ಸರಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ ಎಂದರು. ಕೇಂದ್ರ ಸರಕಾರ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಲು ಮುಂದಾಗಿದೆ.ಆದರೆ, ಬಿಜೆಪಿ ನಾಯಕರು ಹೇಳುತ್ತಿದ್ದ ಅಚ್ಛೇದಿನ ಏನಾಯಿತು ಎಂದು ಪ್ರಶ್ನಿಸಿದ ಅವರು, ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಶೇ.10 ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು? ಎಂದು ಅವರು ಲೇವಡಿ ಮಾಡಿದರು. 900 ಔಷಧಗಳ ದರ ಏರಿಕೆ ಮಾಡಲಾಗಿದೆ. ಶೇ.12ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಎನ್ಪಿಪಿಎ ಬೆಲೆ ಏರಿಕೆ ಮಾಡಿ ಇವುಗಳಿಗೆ ಶೇ.10.7ರಷ್ಟು ಇದ್ದ ತೆರಿಗೆಯನ್ನು ಶೇ.12ಕ್ಕೆ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳಾದ ಪ್ಲಾಸ್ಟಿಕ್ ಪೈಪ್ ಸೇರಿದಂತೆ ಇತರೇ ವಸ್ತುಗಳ ಬೆಲೆಯನ್ನು ಟನ್ಗೆ 7 ಸಾವಿರ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಬಿಟುಮಿನ್ ಹಾಕಲು ಟೆಂಡರ್ ಕರೆಯಲಾಗಿದೆ. ಈಗಾಗಲೇ ಕೆಲಸ ಪ್ರಾರಂಭ ಮಾಡಲಾಗಿದೆ. ಬೆಲೆ ಹೆಚ್ಚಳದಿಂದ ಕೆಲಸ ನಿಲ್ಲಿಸುವುದು ಬೇಡ ಸರಕಾರವೇ ನೇರವಾಗಿ ಬಿಟುಮಿನ್ ಅನ್ನು ಸರಬರಾಜು ಮಾಡಲಿದೆ ಎಂದು ಬೆಂಗಳೂರಿನ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಸಿಮೆಂಟ್ ಬೆಲೆಯೂ ಸಹ 50 ರಿಂದ 100 ರೂಪಾಯಿಗೆ ಹೆಚ್ಚಳವಾಗಿದೆ. ಇದರ ಹಿಂದೆ ದೊಡ್ಡ ಸಿಮೆಂಟ್ ಮಾಫಿಯಾವೇ ಇದೆ. ಇದನ್ನು ಯಾರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಬ್ಬಿಣದ ಬೆಲೆ 47 ಸಾವಿರದಿಂದ 59 ಸಾವಿರಕ್ಕೆ ಹೆಚ್ಚಳವಾಗಿದೆ. ಹೀಗಾದರೆ ಜನಸಾಮಾನ್ಯ ಮನೆ ಕಟ್ಟುವುದು ಹೇಗೆ. ಇದಿರಿಂದ ಸರಕಾರದ ಕಾಮಗಾರಿಗಳಿಗೂ ಹಿನ್ನಡೆಯಾಗುತ್ತಿದೆ. ಅಲ್ಲದೇ ಇದ್ದಕ್ಕಿದ್ದಂತೆ ವಿಮಾನ ಪ್ರಯಾಣದರವನ್ನ ಶೇ.18 ರಷ್ಟು ಏರಿಕೆ ಮಾಡಲಾಗಿದೆ ಎಂದೂ ಅವರು ಉಲ್ಲೇಖಿಸಿದರು. ಕೇಂದ್ರದಿಂದ ಜೇಬು ಕಳ್ಳತನ: ‘ಕೇಂದ್ರದ ಪ್ರಧಾನಿ ಮೋದಿ ಸರಕಾರ ಪ್ರತಿನಿತ್ಯ ಜನರ ಜೋಬಿನಿಂದ ಕಳ್ಳತನ(ಪಿಕ್ ಪಾಕೆಟ್) ಮಾಡುತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೇಂದ್ರ ಸರಕಾರ 900 ಕೋಟಿ ರೂ. ವಸೂಲಿ ಮಾಡಿದೆ. ಕೇಂದ್ರ ಸರಕಾರ ಅದೇ ಹಣ ನಮಗೆ ಕೊಟ್ಟರೆ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಬಹುದು’ -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಗುವಾಹಟಿ, ಮಾ. 31: ಅಸ್ಸಾಂನ ಆಡಳಿತಾರೂಢ ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ಸಮಾನ ನಾಗರಿಕ ಸಂಹಿತೆ (UCC) ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಬಿಜೆಪಿಯ ‘ಸಂಕಲ್ಪ ಪತ್ರ’ವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಉಪಸ್ಥಿತಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದರು. ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಕೊನೆಗೊಳಿಸಲು ಪರಿಣಾಮಕಾರಿ ಕಾನೂನು ತರಲಾಗುವುದು ಸೇರಿದಂತೆ ಬಿಜೆಪಿ ಪ್ರಣಾಳಿಕೆಯಲ್ಲಿ 31 ಭರವಸೆಗಳಿವೆ. ಅಸ್ಸಾಂ ಜನರ ಪೌರತ್ವ, ಪರಂಪರೆ ಮತ್ತು ಹಕ್ಕುಗಳನ್ನು ಸಂರಕ್ಷಿಸಲು ಶಾಸನಾತ್ಮಕ ಕ್ರಮಗಳನ್ನು ಬಲಪಡಿಸಲಾಗುವುದು ಹಾಗೂ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಅದು ಹೇಳಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ವೇಗ ನೀಡಲು 1950ರ ವಲಸಿಗರ ಕಾಯ್ದೆ(ಅಸ್ಸಾಂನಿಂದ ಹೊರಹಾಕುವುದು)ಯನ್ನು ಜಾರಿಗೊಳಿಸಲಾಗುವುದು. ರಾಜ್ಯದ ಮೂಲನಿವಾಸಿಗಳ ಜಮೀನು, ಪರಂಪರೆ ಮತ್ತು ಘನತೆಯನ್ನು ರಕ್ಷಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ. ಅಸ್ಸಾಂವನ್ನು ಭಾರತದ ಪೂರ್ವದ ಮಹಾದ್ವಾರವಾಗಿಸಲು ಐದು ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂಬ ಭರವಸೆಯನ್ನೂ ಅದು ನೀಡಿದೆ.
ದಿನಸಿ ಖರೀದಿಗೆ 2,500 ರೂ., ಮಹಿಳೆಯರಿಗೆ 3,000 ರೂ. ಪಿಂಚಣಿ; ಕೇರಳದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ
ತಿರುವನಂತಪುರಂ, ಮಾ. 31: ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಮಂಗಳವಾರ ಕೇರಳ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬಗಳ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಪಾವತಿಸುವುದಾಗಿ ಭರವಸೆ ನೀಡಿದೆ. ‘ವಿಕಸಿತ ಕೇರಳಂ’ ಸಾಧಿಸುವ ನಿಟ್ಟಿನಲ್ಲಿ ಕಲ್ಯಾಣ ಮತ್ತು ಅಭಿವೃದ್ಧಿ ಕೇಂದ್ರಿತ ಮಾರ್ಗನಕ್ಷೆಯೊಂದನ್ನೂ ಅದು ಬಿಡುಗಡೆಗೊಳಿಸಿದೆ. ಮೂಲಸೌಕರ್ಯ ವಿಸ್ತರಣೆ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ನೇರವಾಗಿ ಹಣ ನೀಡುವುದಾಗಿಯೂ ಅದು ಘೋಷಿಸಿದೆ. ಪ್ರಣಾಳಿಕೆಯ ಪ್ರಮುಖ ಅಂಶವೆಂದರೆ, ಬಡ ಮತ್ತು ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ‘ಭಕ್ಷ್ಯ ಆರೋಗ್ಯ ಸುರಕ್ಷಾ ಕಾರ್ಡ್’ ನೀಡುವುದು. ಆ ಕಾರ್ಡ್ ಬಳಸಿ ಕುಟುಂಬಗಳು ದಿನಸಿ ಸಾಮಗ್ರಿಗಳು ಮತ್ತು ಔಷಧಗಳನ್ನು ಖರೀದಿಸಬಹುದಾಗಿದೆ. ಈ ಕಾರ್ಡ್ ಗಳಿಗೆ ಪ್ರತಿ ತಿಂಗಳು 2,500 ರೂ. ರಿಚಾರ್ಜ್ ಮಾಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆ ಹೇಳಿದೆ. ಇದಕ್ಕೆ ಹೆಚ್ಚುವರಿಯಾಗಿ, 70 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಬಡ ಕುಟುಂಬಗಳ ಮಹಿಳಾ ಮುಖ್ಯಸ್ಥರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ತಿಂಗಳಿಗೆ 3,000 ರೂ. ಪಿಂಚಣಿ ನೀಡುವುದಾಗಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅದರೊಂದಿಗೆ, ಎಲ್ಲಾ ಸಮುದಾಯಗಳ ಜನರನ್ನು ಸೆಳೆಯುವ ಉದ್ದೇಶದಿಂದ, ಓಣಂ ಮತ್ತು ಕ್ರಿಸ್ಮಸ್ ಸಂದರ್ಭಗಳಲ್ಲಿ ವರ್ಷಕ್ಕೆ ಎರಡು ಉಚಿತ ಅಡುಗೆ ಅನಿಲ ಸಿಲಿಂಡರ್ಗಳು ಹಾಗೂ ಪ್ರತಿಯೊಂದು ಮನೆಗೆ ತಿಂಗಳಿಗೆ 20,000 ಲೀಟರ್ ಉಚಿತ ನೀರು ನೀಡುವುದಾಗಿಯೂ ಅದು ಭರವಸೆ ನೀಡಿದೆ.
ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ. ಮಾ.31ರಂದು ಸೂರ್ಯ ಮುಳುಗುತ್ತಿದ್ದಂತೆ, ಎ.1ರಂದು ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಷ್ಟರಲ್ಲಾಗಲೇ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ, ಗ್ರಾಮಗಳಿಗೆ ತಲುಪಿಸಲು ಬೇಕಾದ ಅಗತ್ಯ ರೂಪುರೇಷೆಗಳನ್ನು ಕೇಂದ್ರ ಸರಕಾರ ಸಿದ್ಧಪಡಿಸಬೇಕಿತ್ತು, ಆದರೆ ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ ಎಂದು ಹೇಳಿದ್ದಾರೆ. ನಿಧಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ, ಗ್ರಾಮ ಪಂಚಾಯತ್ಗಳನ್ನು ವರ್ಗೀಕರಿಸಲು ಯಾವುದೆ ಅಂತಿಮ ನಿಯತಾಂಕಗಳು ತಯಾರಾಗಿಲ್ಲ, ಸಾಮಾಜಿಕ ಲೆಕ್ಕ ಪರಿಶೋಧನೆಯಂತಹ ಪ್ರಮುಖ ಪ್ರಕ್ರಿಯೆಗಳು ವ್ಯಾಖ್ಯಾನಿಸಲ್ಪಟ್ಟಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಅತ್ಯಂತ ಕೆಟ್ಟ ಸಮಯದಲ್ಲಿ ಗ್ರಾಮೀಣ ಉದ್ಯೋಗದ ಬಗೆಗಿನ ಈ ನಿರ್ವಾತವು ತಲೆದೋರಿದೆ. ಈ ಬೇಸಿಗೆಯ ಸಮಯವು ಗ್ರಾಮೀಣ ಜನರಿಗೆ ಉದ್ಯೋಗದ ಗರಿಷ್ಠ ಬೇಡಿಕೆಯ ತಿಂಗಳುಗಳಾಗಿವೆ, ಉದ್ಯೋಗ ಖಾತರಿಗೆ ಹೆಚ್ಚಿನ ಅವಲಂಬನೆ ಹೊಂದುವ ಸಮಯವಿದು, ಇಂತಹ ಸಮಯದಲ್ಲೆ ಉದ್ಯೋಗ ಒದಗಿಸುವ ಯೋಜನೆಯು ಸ್ಥಗಿತಗೊಂಡಿದೆ ಎಂದು ಅವರು ಟೀಕಿಸಿದ್ದಾರೆ. ಅನುಮೋದನೆಗಳು ವಿಳಂಬವಾಗುತ್ತಿವೆ ಮತ್ತು ಬೇಡಿಕೆಯ ಹೊರತಾಗಿಯೂ ಕುಟುಂಬಗಳು ಉದ್ಯೋಗವನ್ನು ಪಡೆಯಲಾಗುತ್ತಿಲ್ಲ ಎಂಬ ವರದಿಗಳು ಬಂದಿವೆ. ಕೇಂದ್ರ ಸರಕಾರವು ಕಾನೂನಾತ್ಮಕ ಉದ್ಯೋಗದ ಖಾತರಿಯನ್ನು ತೆಗೆದು ನಿಯಮ ಆಧಾರಿತ ಹಂಚಿಕೆಯಾಗಿ ಬದಲಾವಣೆ ಮಾಡಿರುವುದು ನಕಾರಾತ್ಮಕ ಪರಿಣಾಮವನ್ನು ತೋರಿಸಲು ಪ್ರಾರಂಭಿಸಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಕೃಷಿ ಚಟುವಟಿಕೆಗಳ ಅವಧಿಗಳಲ್ಲಿ 60 ದಿನಗಳ ಕಡ್ಡಾಯ ಸ್ಥಗಿತವು ಗ್ರಾಮೀಣ ಜನರು ಉದ್ಯೋಗ ಪಡೆಯುವ ಅವಕಾಶವನ್ನು ಮತ್ತಷ್ಟು ನಿಬರ್ಂಧಿಸುತ್ತದೆ. ಕೇಂದ್ರದ ಬಿಜೆಪಿ ಸರಕಾರ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಭಾರತವನ್ನು ಪರಿವರ್ತಿಸುತ್ತದೆ ಎಂದು ಹೇಳಿಕೊಂಡಿತ್ತು, ಆದರೆ ಅದು ಹೀಗೆ ಜನರ ಜೀವನೋಪಾಯಕ್ಕೆ ಮಾರಕವಾಗಿ ಮತ್ತು ನಕಾರಾತ್ಮಕ ಪರಿವರ್ತನೆ ಎನ್ನುವುದು ಈಗ ವಾಸ್ತವವಾಗಿ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಭಾರತದಲ್ಲಿ ಮನರೇಗಾ ಯೋಜನೆಯ ಸ್ಥಗಿತದಿಂದಾಗಿರುವ ಬಿಕ್ಕಟ್ಟು ಈಗ ತೆರೆದುಕೊಳ್ಳುತ್ತಿದೆ. ಬಿಜೆಪಿಯ ಕೇಂದ್ರ ಸರಕಾರವು ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಹಿಂದಿನ ದಾಖಲೆಯನ್ನು ಗಮನಿಸಿದರೆ, ಗ್ರಾಮೀಣ ಜನರ ಜೀವನೋಪಾಯದ ಭರವಸೆ ಕಳೆದುಹೋಗುವ ಆತಂಕವು ನಮ್ಮೆಲ್ಲರನ್ನೂ ಚಿಂತೆಗೀಡು ಮಾಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಹೊಸದಿಲ್ಲಿ, ಮಾ. 31: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಗಝೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ ಹಿನ್ನೆಲೆಯಲ್ಲಿ ಈ ಮಸೂದೆ ಈಗ ಕಾಯ್ದೆಯಾಗಿದೆ. ಈ ಮಸೂದೆಗೆ ಸಹಿ ಹಾಕದಂತೆ ಸುಮಾರು 140 ನ್ಯಾಯವಾದಿಗಳು ಹಾಗೂ ಸ್ತ್ರೀವಾದಿಗಳು ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಮಸೂದೆಯ ನಿಯಮಗಳಲ್ಲಿ ಸಂವಿಧಾನಾತ್ಮಕ ಉಲ್ಲಂಘನೆ ಹಾಗೂ ಮಸೂದೆ ಅಂಗೀಕರಿಸಿದ ವಿಧಾನದಲ್ಲಿನ ಲೋಪದೋಷಗಳ ಬಗ್ಗೆ ಅವರು ರಾಷ್ಟ್ರಪತಿ ಅವರ ಗಮನ ಸೆಳೆದಿದ್ದರು.
ಉದ್ಯಮಿ ಸುದೀಪ್ ರೈ ಸಾವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಊಟದಲ್ಲಿ ವಿಷ ಹಾಕಿದ್ದೆ ಸಾವಿಗೆ ಕಾರಣ ಎಂದು ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ ತಿಳಿಸಿದ್ದಾರೆ. ಇನ್ನು ಪತ್ನಿ ಸೌಮ್ಯ ಶೆಟ್ಟಿಯವರ ಬಗ್ಗೆ ಮಾಜಿ ಪ್ರಿಯಕರ ಕಲಾವಿದ ವೇಣು ಅವರು ಗಂಭೀರ ಆರೋಪ ಮಾಡಿದ್ದಾರೆ. ಸೌಮ್ಯಗೆ 2 ಮದುವೆಯಾಗಿದ್ದು, ನನ್ನ ಜತೆ ಮೂರನೇ ಮದುವೆ ನಿಶ್ಚಯವಾಗಿತ್ತು. ಕೊನೆಯ ಕ್ಷಣದಲ್ಲಿ ಹಿಂದೆ ಸರಿದೆ ಎಂದು ವೇಣು ಹೇಳಿದ್ದಾರೆ.
ತಣ್ಣೀರುಬಾವಿ| ಬಡವರ ಭೂಮಿಯ ಹಕ್ಕು ನಿರಾಕರಣೆ ಸಂವಿಧಾನ ಬಾಹಿರ : ಬಿಕೆ ಇಮ್ತಿಯಾಝ್
ಮಂಗಳೂರು: ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭಾರೆ ಮಾಡಿ ಕೆಐಎಡಿಬಿ ಅಧಿಕಾರಿಗಳು ಬೇಲಿ ಹಾಕಲು ಹೊರಟಿರುವುದು ಬಡವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು ಇದು ಸಂವಿಧಾನ ಬಾಹಿರ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ. ಬೈಕಂಪಾಡಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಂದೆ ಮಂಗಳವಾರ ತಣ್ಣೀರು ಬಾವಿ ಜನ ವಸತಿ ಪ್ರದೇಶದಲ್ಲಿ ಕೆಐಎಡಿಬಿ ಅಧಿಕಾರಿಗಳು ಮನೆ ಮತ್ತು ಸಮುದ್ರಕ್ಕೆ ತಡೆಬೇಲಿ ಹಾಕಿರುವ ನೀತಿ ಯನ್ನು ಖಂಡಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ, ತಣ್ಣೀರುಬಾವಿ ಹೋರಾಟ ಸಮಿತಿ, ದಲಿತ ಹಕ್ಕುಗಳ ಸಮನ್ವಯ ಸಮಿತಿ ತಣ್ಣೀರುಬಾವಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೇಲಿಗಳನ್ನು ಕಟ್ಟಿ ಸಮುದ್ರವನ್ನೇ ನಂಬಿ ಬದುಕುವ ಬಡವರ ಕಡಲ ಸಂಬಂಧವನ್ನು ತಡೆಯಲಾಗುತ್ತಿದೆ. ತಣ್ಣೀರುಬಾವಿ ಯಲ್ಲಿ ಹಾಕಿರುವ ಬೇಲಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಬಡವರಿಗೆ ಕಿರುಕುಳ ಮುಂದುವರಿದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸ್ಥಳೀಯ ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಣ್ಣೀರುಬಾವಿಯ ನಾಗರಿಕರಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ. ಇವರಿಗೆ ಚುನಾವಣೆ ಬಂದಾಗ ಮಾತ್ರ ಬಡವರ ನೆನಪಾಗುತ್ತದೆ ಎಂದು ಆಪಾದಿಸಿದರು. ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ಯೋಗೀಶ್ ಅಮೀನ್, ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಮಾತನಾಡಿದರು. ತಣ್ಣೀರುಬಾವಿ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ಹೋರಾಟ ಸಮಿತಿಯ ಪ್ರಮುಖರಾದ ಅಜೀಜ್ ತಣ್ಣೀರುಬಾವಿ, ರಿಯಾಜ್ ಬಿ. ಎಚ್, ಜೋಹರ, ಫ್ಲೋರಿನ್, ದೀಪಾ, ಜಯಂತಿ, ರೇಖಾ, ನೌಫಲ್, ರಶೀದ್ ಖಾನ್,ಸಿಮ್ರಾನ್, ಸುಪ್ರಿತಾ ಕವಿತಾ,ಫೌಝಿಯ, ತಣ್ಣೀರುಬಾವಿ ಯೂತ್ ಕ್ಲಬ್ ಅಧ್ಯಕ್ಷ ನವೀನ್ ಸುವರ್ಣ, ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನಾಸಿರ್ ಬಾಸ್, ತೌಸೀಫ್ ಬೈಕಂಪಾಡಿ, ಫರಾನ್ಯಾಸೀರ್ ಅಂಗರಗುಂಡಿ ಮುಂತಾದವರು ಉಪಸ್ಥಿತರಿದ್ದರು. ದಲಿತ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷೆ ಶಮೀಮಾ ಬಾನು ವಂದಿಸಿದರು *ತಡೆಬೇಲಿ ಹಾಕಲು ಎಲ್ಲಿಂದ ಬಂತು? ಈ ಸಂದರ್ಭದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ತಡೆ ಬೇಲಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು. ಹೊಂಡ ಗುಂಡಿಗಳಿಂದ ತುಂಬಿ ಹೋಗಿರುವ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಿ ಎಂದು ಪ್ರತಿಭಟನೆ ಮಾಡಿದರೆ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಉತ್ತರ ನೀಡುವ ಕೆಐಎಡಿಬಿ ಅಧಿಕಾರಿಗಳಿಗೆ ಬಡವರ ಕಾಲನಿಗೆ ಬೇಲಿ ಹಾಕಲು ಹಣ ಮಂಜೂರು ಎಲ್ಲಿಂದ ಆಯಿತು ಎಂದು ಮನವಿ ಸ್ವೀಕರಿಸಲು ಬಂದ ಅಧಿಕಾರಿಯನ್ನು ಬಿ.ಕೆ ಇಮ್ತಿಯಾಝ್ ಪ್ರಶ್ನಿಸಿದರು
ಕೇರಳ ಚುನಾವಣೆ: ಮದ್ಯ ಮಾರಾಟ ನಿಷೇಧ
ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಎ.7 ಸಂಜೆ 5ಗಂಟೆಯಿಂದ ಎಪ್ರಿಲ್ 9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 4ರ ಮಧ್ಯರಾತ್ರಿ 12 ಗಂಟೆಯ ತನಕ ‘‘ಒಣ ದಿನ’’ ಎಂದು ಘೋಷಿಸಿ ಈ ದಿನಗಳಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಗಡಿಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಮದ್ಯದಂಗಡಿ /ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಈ ದಿನಗಳಂದು ನಿಷೇಧಿಸಿರುವ ಪ್ರದೇಶಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.
ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಮಾ.31 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಸಖಿ ಒನ್ ಸ್ಟಾಪ್ ಸೆಂಟರ್ ಲೇಡಿಗೋಶನ್ಆಸ್ಪತ್ರೆ ಮಂಗಳೂರು ಇಲ್ಲಿ ಗುತ್ತಿಗೆ ಆಧಾರದ ಮೇಲೆ ಕಾನೂನು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 25 ಸಾವಿರ ರೂ. ಗೌರವಧನ ಆಧಾರದಲ್ಲಿ ಕಾನೂನು ವ್ಡಿಯದಲ್ಲಿ ಪದವಿ ಹಾಗೂ ಸರಕಾರಿ/ ಸ್ವಯಂ ಸೇವಾ ಸಂಸ್ಥೆಯಲ್ಲಿ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಅಥವಾ ಯಾವುದೇ ನ್ಯಾಯಾಲಯದಲ್ಲಿ ಕನಿಷ್ಠ್ಠ 2 ವರ್ಷಗಳ ದಾವೆ ಅನುಭವ ಹೊಂದಿರುವ 35 ವಷರ್ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಎಪ್ರಿಲ್ 10ರೊಳಗೆ ಸೂಕ್ತ ದಾಖಲೆಗಳೊಂದಿಗೆ ನಗರದ ಬಿಜೈ ಮೆಸ್ಕಾಂ ಬಳಿ ಇರುವ ಸ್ತ್ರಿ ಶಕ್ತಿಭವನದ 2 ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೆೇರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
ಫಾದರ್ ಮುಲ್ಲರ್ ಕಾಂಪ್ಲೆಕ್ಸ್, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಕ್ಯಾಂಪಸ್; ನವೀಕೃತ 4ಎ ಫ್ಲೆಬೋಟಮಿ ಸೆಂಟರ್ ಉದ್ಘಾಟನೆ
ಮಂಗಳೂರು, ಮಾ.31: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ಸ್ (ಎಫ್ಎಂಸಿಐ) ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ದೇರಳಕಟ್ಟೆ ಭಾಗದ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಿರುವ ಆಧುನಿಕ ವಾಣಿಜ್ಯ ಸಂಕೀರ್ಣ ‘ಫಾದರ್ ಮುಲ್ಲರ್ ಕಮರ್ಶಿಯಲ್ ಕಾಂಪ್ಲೆಕ್ಸ್’ , ಬಜ್ಜೋಡಿಯ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ನೂತನ ಕ್ಯಾಂಪಸ್ ಮತ್ತು ಸ್ಥಳಾಂತರಗೊಂಡಿರುವ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ರಕ್ತ ಸಂಗ್ರಹಣಾ ಕೇಂದ್ರ ನವೀಕೃತ 4ಂ ಫ್ಲೆಬೋಟಮಿ ಸೆಂಟರ್ ಮಂಗಳವಾರ ಲೋಕಾರ್ಪಣೆಗೊಂಡಿದೆ. ‘ಫಾದರ್ ಮುಲ್ಲರ್ ಕಾಂಪ್ಲೆಕ್ಸ್’ನ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ‘ ಫಾದರ್ ಆಗಸ್ಟಸ್ ಮುಲ್ಲರ್ ಅವರು ಮಾನವೀಯತೆಯ ದೃಷ್ಟಿಯಿಂದ ಆರಂಭಿಸಿದ ಈ ಸೇವೆ ಇಂದು ಹೆಮ್ಮರವಾಗಿ ಬೆಳೆದಿದೆ. ಈ ವಾಣಿಜ್ಯ ಸಂಕೀರ್ಣವು ಈ ಭಾಗದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು. ಬಜ್ಜೋಡಿಯ ನೂತನ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ವಂ. ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು, ಭಾಷೆ, ವಿಷಯ ಜ್ಞಾನ ಮತ್ತು ಕೌಶಲ್ಯ - ಈ ಮೂರು ಸ್ತಂಭಗಳು ಆರೋಗ್ಯ ಕ್ಷೇತ್ರದ ವೃತ್ತಿಪರರ ಯಶಸ್ಸಿಗೆ ಅಡಿಪಾಯವಾಗಿದೆ ಎಂದರು. ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನವೀಕೃತಗೊಂಡ ಫ್ಲೆಬೋಟಮಿ ಕೇಂದ್ರವು ಇನ್ಮುಂದೆ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದು ನಿರ್ದೇಶಕರಾದ ವಂ. ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸಂಸ್ಥೆಯ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮುದಾಯಕ್ಕೆ ಒಗ್ಗ ಟ್ಟಿನ ಅಗತ್ಯವಿದೆ, ಒಟ್ಟಿಗೆ ಕೆಲಸ ಮಾಡುವುದರಿಂದ ಸಾಮರಸ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿ ಗಳಾದ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ , ಫಾ. ಜಾರ್ಜ್ ಜೀವನ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ಫಾ. ಅಶ್ವಿನ್ ಲಾರೆನ್ಸ್ ಕ್ರಾಸ್ತಾ , ಫಾ. ನೆಲ್ಸನ್ ಧೀರಜ್ ಪೈಸ್, ಡಾ. ಮೈಕೆಲ್ ಸಾಂತುಮೇಯರ್ , ಫಾ. ವಿಯಂ ಡಿ ಸೋಜ, ಫಾ. ರೋಹನ್ ಡಯಾಸ್, ಪ್ರಾಂಶುಪಾಲರಾದ ಡಾ. ಶಿವಶಂಕರ್ ಎ.ಆರ್, ಡಾ. ಪಾಲಿನ್ ಆನಂದ್ ಮತ್ತು ಕ್ಲಿನಿಕಲ್ ಮನಶಾಸ್ತ್ರಜ್ಞೆ ವ್ಯಾಲೆರಿ ಲೋಬೊ , ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪೈಸ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರೇ ಬಂದು ಪ್ರಚಾರ ನಡೆಸಿದರೂ ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಬಂದು ನಮ್ಮ ಅಭ್ಯರ್ಥಿಗಳ ಪ್ರಚಾರ ಮಾಡಿದರೂ ಸ್ವಾಗತಿಸುತ್ತೇವೆ. ಯಾರೇ ಬಂದರೂ ಪ್ರಚಾರ ನಡೆಸಲು ಅವಕಾಶ ಇದೆ. ಅವರು ಪ್ರಚಾರಕ್ಕೆ ಬರಲಿ, ಸ್ವಾಗತ ಮಾಡುತ್ತೇವೆ. ನಮಗೆ ಗೆಲುವು ಮುಖ್ಯವಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವಿವರಣೆ ನೀಡಿದರು. ನಾನು ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತೇನೆ. ಎ.5, 6ರಂದು ಬಾಗಲಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕೆ ತೆರಳುತ್ತೇನೆ. ನನಗೆ ನೂರಕ್ಕೆ ನೂರು ವಿಶ್ವಾಸ ಇದೆ. ಎರಡೂ ಕಡೆಯೂ ದೊಡ್ಡ ಅಂತರದಲ್ಲಿ ನಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದು ಯಡಿಯೂರಪ್ಪ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಇಡೀ ಸರಕಾರವೇ ಉಪಚುನಾವಣೆ ಪ್ರಚಾರದಲ್ಲಿದೆ. ಸ್ವತಃ ಸಿಎಂ ಅವರೇ ನಾಲ್ಕೈದು ದಿನ ಅಲ್ಲಿ ಹೋಗಿ ಕೂತಿದ್ದಾರೆ. ಅದರರ್ಥ ಚುನಾವಣಾ ಸೋಲಿನ ಭಯ ಅವರಿಗೆ ಕಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದ ಅವರು, ಹಿಂದಿ ಭಾಷೆ ವಿಚಾರಕ್ಕೆ ಸಂಬಂಧಿಸಿದತೆ ನಾನು ಆ ಬಗ್ಗೆ ಸದ್ಯಕ್ಕೆ ಏನೂ ಮಾತಾಡಲು ಇಷ್ಟಪಡುವುದಿಲ್ಲ ಎಂದರು.
ಹಾರ್ಮುಝ್ ಜಲಸಂಧಿ ಮೇಲೆ ಇರಾನ್ ಬಿಗಿ ಹಿಡಿತ: ಜಾಗತಿಕ ಆರ್ಥಿಕತೆಗೆ ಆತಂಕದ ಅಲೆ
ಟೆಹ್ರಾನ್, ಮಾ.31: ಜಾಗತಿಕ ತೈಲ ಸರಬರಾಜಿನ ಜೀವನಾಡಿ ಎಂದೇ ಗುರುತಿಸಲ್ಪಡುವ ಹಾರ್ಮುಝ್ ಜಲಸಂಧಿ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಲು ಇರಾನ್ ಕೈಗೊಂಡಿರುವ ಹೊಸ ಕ್ರಮ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಂದ ‘ಟೋಲ್ ಟ್ಯಾಕ್ಸ್’ (ಸುಂಕ) ವಸೂಲಿ ಮಾಡುವ ಪ್ರಸ್ತಾವನೆಗೆ ಇರಾನ್ ಸಂಸತ್ತು ಅಧಿಕೃತ ಮುದ್ರೆ ಒತ್ತಿದ್ದು, ಇದರಿಂದ ಇಂಧನ ಮಾರುಕಟ್ಟೆ ಮತ್ತು ಅಂತರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಭಾರೀ ಪರಿಣಾಮ ಬೀರುವ ಸಾಧ್ಯತೆ ವ್ಯಕ್ತವಾಗಿದೆ. ಈ ಕ್ರಮವು ಕೇವಲ ಆರ್ಥಿಕ ಉದ್ದೇಶಕ್ಕೆ ಸೀಮಿತವಾಗಿಲ್ಲ; ಅದರ ಹಿಂದೆ ಗಂಭೀರ ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂಬುದು ವಿಶ್ಲೇಷಕರ ಅಭಿಪ್ರಾಯ. ಅಮೆರಿಕ ಮತ್ತು ಇಸ್ರೇಲ್ ದೇಶಗಳ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರಕ್ಕೆ ಸಂಪೂರ್ಣ ನಿಷೇಧ ವಿಧಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಜಾಗತಿಕ ತೈಲ ಸರಬರಾಜಿನ ಶೇಕಡಾ 20ಕ್ಕಿಂತ ಹೆಚ್ಚು ಪಾಲು ಈ ಕಿರಿದಾದ ಜಲಮಾರ್ಗದ ಮೂಲಕ ಸಾಗುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ನ ಈ ಕ್ರಮವು ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗುವ ಭೀತಿ ಇದೆ. ಇದರಿಂದ ಭಾರತ ಸೇರಿದಂತೆ ತೈಲ ಆಮದು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗಲಿದೆ. ಮಾರ್ಚ್ 30ರಂದು ಇರಾನ್ ಸಂಸದೀಯ ಸಮಿತಿಯು ಅಂಗೀಕರಿಸಿದ ಹೊಸ ಯೋಜನೆಯಡಿ, ಹಾರ್ಮುಝ್ ಜಲಸಂಧಿಯ ಭದ್ರತೆಯನ್ನು ಬಲಪಡಿಸುವುದು ಹಾಗೂ ಹಡಗುಗಳ ಸಂಚಾರಕ್ಕೆ ಕಟ್ಟುನಿಟ್ಟಿನ ಪ್ರೋಟೋಕಾಲ್ ಗಳನ್ನು ಜಾರಿಗೊಳಿಸುವುದು ಉದ್ದೇಶವಾಗಿದೆ. ಮುಖ್ಯವಾಗಿ, ಸುಂಕವನ್ನು ಇರಾನ್ ಕರೆನ್ಸಿಯಾದ ‘ರಿಯಾಲ್’ನಲ್ಲಿ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಇರಾನ್ ನ ಸರ್ಕಾರಿ ಮಾಧ್ಯಮ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್’ (IRIB) ಮಾಹಿತಿ ನೀಡಿದೆ. ಹಾರ್ಮುಝ್ ಜಲಸಂಧಿಯು ಒಂದು ಕಡೆ ಇರಾನ್ ಹಾಗೂ ಮತ್ತೊಂದು ಕಡೆ ಒಮಾನ್ ದೇಶದ ಗಡಿಯನ್ನು ಹಂಚಿಕೊಂಡಿರುವುದರಿಂದ, ಈ ವಿಚಾರದಲ್ಲಿ ಒಮಾನ್ ಜೊತೆಗೂಡಿ ಕಾನೂನು ಚೌಕಟ್ಟನ್ನು ರೂಪಿಸಲು ಇರಾನ್ ಮುಂದಾಗಿದೆ. ಇದರಿಂದ ತನ್ನ ಕ್ರಮಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನುಬದ್ಧ ಬೆಂಬಲ ದೊರಕಿಸಿಕೊಳ್ಳುವ ಉದ್ದೇಶ ಇರಾನ್ ನದ್ದು ಎಂದು ತಿಳಿದುಬಂದಿದೆ. ಇರಾನ್ ಮೇಲೆ ಏಕಪಕ್ಷೀಯ ನಿರ್ಬಂಧ ಹೇರಿರುವ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪಾಠ ಕಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈಗಾಗಲೇ ಇರಾನ್–ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ನಿರ್ಬಂಧಿಸುವುದು ಜಾಗತಿಕ ಸಾಗಣೆ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಬಹುದು. ಇದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಗಣನೀಯ ಏರಿಕೆ ಸಂಭವಿಸುವ ಸಾಧ್ಯತೆ ಇದೆ. ಇದು ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕ ಸ್ಥಿತಿಗೆ ಹೊರೆ ಆಗಲಿದೆ. ಈ ನಡುವೆ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಅದರ ವಿದ್ಯುತ್ ಸ್ಥಾವರಗಳು, ತೈಲ ಬಾವಿಗಳು ಹಾಗೂ ಪ್ರಮುಖ ದ್ವೀಪಗಳನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಚೋದನಾತ್ಮಕ ಹೇಳಿಕೆಗಳ ನಡುವೆ ಇರಾನ್ ಸುಂಕ ವಸೂಲಿಗೆ ಮುಂದಾಗಿರುವುದು ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇರಾನ್ ಈ ಹಿಂದೆ ಅನೌಪಚಾರಿಕವಾಗಿ ಹಡಗುಗಳಿಂದ ಶುಲ್ಕ ವಸೂಲಿ ಮಾಡುತ್ತಿದ್ದರೆಂಬ ಆರೋಪಗಳಿದ್ದರೂ, ಇದೀಗ ಅದಕ್ಕೆ ಅಧಿಕೃತ ರೂಪ ನೀಡಿದೆ. ವರದಿಗಳ ಪ್ರಕಾರ, ಪ್ರತಿ ಹಡಗಿನಿಂದ ಸುಮಾರು 20 ಲಕ್ಷ ಡಾಲರ್ (ಅಂದಾಜು 17 ಕೋಟಿ ರೂಪಾಯಿ) ವರೆಗೆ ಸುಂಕ ವಿಧಿಸುವ ಸಾಧ್ಯತೆ ಇದೆ. ಇದರಿಂದ ಜಾಗತಿಕ ಸಾಗಾಟ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದೆ. ಒಟ್ಟಾರೆ, ಈ ಬೆಳವಣಿಗೆ ಕೇವಲ ಆರ್ಥಿಕ ಬಿಕ್ಕಟ್ಟಿಗೆ ಸೀಮಿತವಾಗದೆ, ದೊಡ್ಡ ಮಟ್ಟದ ಸೈನಿಕ ಸಂಘರ್ಷದ ಸಾಧ್ಯತೆಯನ್ನೂ ಸೂಚಿಸುತ್ತಿದೆ. ಒಂದು ವೇಳೆ ಅಮೆರಿಕ ತನ್ನ ನೌಕಾಪಡೆಯ ಮೂಲಕ ಈ ಮಾರ್ಗವನ್ನು ಬಲವಂತವಾಗಿ ತೆರೆಯಲು ಮುಂದಾದರೆ, ಅದು ನೇರ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹಾರ್ಮುಝ್ ಜಲಸಂಧಿ ಕುರಿತ ಇರಾನ್ ನ ಈ ಕಠಿಣ ನಿರ್ಧಾರ ಜಾಗತಿಕ ರಾಜತಾಂತ್ರಿಕ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು. ಜಲಸಂಧಿಯನ್ನು ಮುಚ್ಚುವುದು ಅಥವಾ ಅತಿಯಾದ ಸುಂಕ ವಿಧಿಸುವುದು ಜಾಗತಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಿಸಲು ಕಾರಣವಾಗಬಹುದು ಮತ್ತು ಅನೇಕ ದೇಶಗಳ ಆರ್ಥಿಕ ಸ್ಥಿರತೆಯನ್ನು ದುರ್ಬಲಗೊಳಿಸಬಹುದು. ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸುವುದು ಅಂತರಾಷ್ಟ್ರೀಯ ಸಮುದಾಯದ ಮುಂದಿರುವ ದೊಡ್ಡ ಸವಾಲಾಗಿದೆ. ಇಲ್ಲವಾದರೆ, ಹಾರ್ಮುಝ್ ಜಲಸಂಧಿಯು ಜಾಗತಿಕ ಆರ್ಥಿಕತೆಗೆ ಭಾರೀ ಸಂಕಷ್ಟದ ಕೇಂದ್ರವಾಗುವ ಸಾಧ್ಯತೆ ಇದೆ. ಇರಾನ್ ನ ಕ್ರಮಗಳು ಮತ್ತು ಅಮೆರಿಕದ ಪ್ರತಿಕ್ರಿಯೆಗಳು ಎಲ್ಲಿಗೆ ಬಂದು ನಿಲ್ಲುತ್ತವೆ ಎಂಬುದನ್ನು ಇಡೀ ಜಗತ್ತು ಕಾದುನೋಡುತ್ತಿದೆ.
ಸ್ಮಾರ್ಟ್ ಸಿಟಿಯ ಸೈಕಲ್ ಟ್ರ್ಯಾಕ್| ಸಿಆರ್ಝೆಡ್ನಡಿ ನಿಷೇಧಿತ ಯೋಜನೆ: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ
ಮಂಗಳೂರು, ಮಾ.31: ಬೋಳಾರದ ಹೊಳೆಯ ತೀರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಸೈಕಲ್ ಟ್ರ್ಯಾಕ್ ಸಿಆರ್ಝೆಡ್ ಅಧಿಸೂಚನೆಯ ಪ್ರಕಾರ ನಿಷೇಧಿತ ಕಾಮಗಾರಿಯಾಗಿದೆ. ಹಾಗಾಗಿ ಯೋಜನೆಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಚೆನ್ನೈನ ಹಸಿರುಪೀಠದ ಆದೇಶದ ಮೇರೆಗೆ ಪತ್ರ ಬರೆಯಲಾಗಿದೆ. 15 ದಿನಗಳಲ್ಲಿ ಕ್ರಮ ಆಗದಿದ್ದರೆ ಎನ್ಜಿಟಿಯಲ್ಲಿ ಮತ್ತೆ ಆದೇಶ ಅನುಷ್ಟಾನದ ದೂರನ್ನು ದಾಖಲಿ ಸಲಾಗವುದು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್ಇಸಿಎಫ್)ದ ಪದಾಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎನ್ಇಸಿಎಫ್ನ ಅಧ್ಯಕ್ಷ ಜೋಸನ್ ಡಿಸೋಜಾ, ನಿಗದಿತ ಅವಧಿಯಲ್ಲಿ ಯೋಜನೆ ರದ್ದುಗೊಳಿಸುವ ಕಾರ್ಯ ಆಗದಿದ್ದರೆ ಆದೇಶ ಪಾಲನೆಗೆ ಸಂಬಂಧಿಸಿ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದರು. ಎನ್ಇಸಿಎಫ್ನ ಗೌರವ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ಸೈಕಲ್ ಪಾಥ್ ಕಾಮಗಾರಿಯ ಕುರಿತಂತೆ ತಮ್ಮ ಸಂಘಟನೆಯು ಚೆನ್ನೈಯ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾಖಲಿಸಿರುವ ದೂರಿಗೆ ಸಂಬಂಧಿಸಿ ಅಂತಿಮ ಆದೇಶ ನೀಡಲಾಗಿದ್ದು, ಅದರಂತೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಡ್ಡಾಯವಾಗಿ 2011ರ ಸಿಆರ್ಝೆಡ್ ನಿಯಮವನ್ನು ಪಾಲಿಸಬೇಕಾಗುತ್ತದೆ. ನಿಯಮದಂತೆ ನೇತ್ರಾವತಿ ನದಿ ದಂಡೆ ಮತ್ತು ಜಪ್ಪಿನಮೊಗರು ಗ್ರಾಮದ ಜಲಮುಖಿ ವಾಯು ವಿಹಾರ ಅಭಿವೃದ್ಧಿಗಾ ನಿರ್ಮಿಸಲಾ ಎಲ್ಲಾ ಶಾಶ್ವತ ಕಾಂಕ್ರೀಟ್ ರಚನೆಗಳನ್ನು ಕೆಡವಬೇಕಿದೆ ಎಂದವರು ಹೇಳಿದರು. ಈ ಭಾಗದಲ್ಲಿ ಈಗಾಗಲೇ ಸಿಆರ್ಝೆಡ್ ನಿಯಮವನ್ನು ಉಲ್ಲಂಘಿಸಿ ಶೌಚಾಲಯ ಬ್ಲಾಕ್, ಆಹಾರ ಕಿಯೋಸ್ಕ್, ಟಿಕೆಟ್ ಕೌಂಟರ್ ನಿರ್ಮಾಣವಾಗಿದೆ. ಇಲ್ಲಿ ಮ್ಯಾಂಗ್ರೋವ್ಗಳನ್ನು ದೊಡ್ಡ ಪ್ರಮಾಣದಲ್ಲಿ ಕತ್ತರಿಸಲಾಗಿದೆ ಎಂದು ಆರೋಪಿಸಿದರು. ಎನ್ಇಸಿಎಫ್ನ ಸದಸ್ಯರಾದ ಬೆನೆಡಿಕ್ಟ್ ಫೆರ್ನಾಂಡಿಸ್ ಮಾತನಾಡಿ, ಹಸಿರು ನ್ಯಾಯ ಪೀಠದ ಆದೇಶಧ ಪ್ರಕಾರ ಈಗಾಗಲೇ ಮಾಡಲಾಇರುವ ಎಲ್ಲಾ ಶಾಶ್ವತ ರಚನೆಗಳನ್ನು ಕೆಡವಬೇಕಿದೆ. ಸಂಪೂರ್ಣ ಪ್ರದೇಶವನ್ನು ಅದರ ಮೂಲಸ್ಥಿತಿಗೆ ತರಬೇಕಿದೆ ಎಂದರು. ಸಿಆರ್ಝೆಡ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮನರಂಜನಾ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಸೈಕಲ್ ಪಾಥ್ ಹಾಗೂ ಜಲಮುಖಿ ಯೋಜನೆಗಾಗಿ ಈಗಾಗಲೇ 70 ಕೋಟಿ ರೂ.ಗಳ ಯೋಜನೆಯನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಇದು ಜನರ ತೆರಿಗೆ ಹಣದ ದುರುಪಯೋಗವಾಗಿದೆ. ಈ ಭಾಗದಲ್ಲಿ ಬಂದರು ಮತ್ತು ಜೆಟ್ಟಿಗಳು, ಕ್ವೇಗಳು, ವಾರ್ವ್ಗಳು, ಸವೆತ ನಿಯಂತ್ರಣ ಕ್ರಮಗಳು, ಬ್ರೇಕ್ ವಾಟರ್, ಪೈಪಲೈನ್, ಲೈಟ್ ಹೌಸ್ಗಳು, ನ್ಯಾವಿಗೇಶನಲ್ ಸುರಕ್ಷತಾ ಸೌಲಭ್ಯಗಳು, ಕರಾವಳಿ ಪೊಲೀಸ್ ಠಾಣೆ ಮೊದಲಾದ ಕಾರ್ಯಾಚರಣೆ ನಡೆಸಬಹುದು. ಆದರೆ ಸೈಕಲ್ಪಾಥ್ನಂತಹ ಯೋಜನೆ ನಡೆಸುವಂತಿಲ್ಲ. 2019ರ ಕಾನೂನು ಪ್ರಕಾರ ಮಾಡಬಹುದು ಎಂದು ಪ್ರತಿವಾದಿಗಳು ವಾದಿಸಬಹುದಾದರೂ ಸೈಕಲ್ ಪಾಥ್ ನದಿ ಅಥವಾ ಹೊಳೆ ದಂಡೆಯಿಂದ 10 ಮೀಟರ್ ದೂರದಲ್ಲಿ ಮಾಡಬೇಕಾಗಿದೆ. ಆದರೆ ಈ ಯೋಜನೆ ಹೊಳೆ ದಂಡೆಯಲ್ಲೇ ಮಾಡಲಾಗಿರುದು ಕಾನೂನಿನ ವಿರುದ್ಧವಾಗಿದೆ. ಈ ಕುರಿತಂತೆ ಎನ್ಇಸಿಎಫ್ನಿಂದ 2024ರಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಅಂತಿಮ ಆದೇಶವಾಗಿದೆ ಎಂದು ಅವರು ಹೇಳಿದರು. ಎಮ್ಮೆಕೆರೆಯಲ್ಲಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ಈಜುಕೊಳ ಜಾಗವೂ ಕೆರೆಗೆ ಮಣ್ಣು ಹಾಕಿ ಮಾಡಲಾ ಗಿದೆ. ಬಫರ್ ರೆನ್ ನಿಯಮ ಉಲ್ಲಂಘಿಸಿ ಈ ಯೋಜನೆ ರೂಪಿಸಲಾಗಿದ್ದು, ಇದರ ವಿರುದ್ಧವೂ ಹಸಿರು ನ್ಯಾಯ ಪೀಠದಲ್ಲಿ ಎನ್ಇಸಿಎಫ್ನಿಂದ ದೂರು ದಾಖಲಿಸಲಾಗಿದ್ದು, ಎ. 16ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಸಂಘಟನೆಯ ಗೌರವ ಕಾರ್ಯದರ್ಶಿ ಶಶಿಧರ ಶೆಟ್ಟಿ ತಿಳಿಸಿದರು.
ತಿಂಗಳ ಯುದ್ಧದಲ್ಲಿ ಇರಾನ್ ಶಕ್ತಿ ಕಡಿಮೆಯಾಗಿಲ್ಲ; Associated Press ವರದಿಯಲ್ಲೇನಿದೆ?
94/ಸಿಯಡಿ ಹಕ್ಕುಪತ್ರ- ಉಚಿತ ಉಪಕರಣಗಳ ವಿತರಣೆ
ಕಾಪು, ಮಾ.31: ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/ಸಿ ಹಾಗೂ 94/ಸಿಸಿ ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ತಮ್ಮ ಶಾಸಕರ ಕಚೇರಿಯಲ್ಲಿ ವಿತರಿಸಿದರು. ಸುಮಾರು 20ಕ್ಕೂ ಅಧಿಕ ವರ್ಷಗಳಿಂದ ವಾಸವಾಗಿರುವ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಣಗುಡ್ಡೆ ನಿವಾಸಿ ಮಂಜುಳಾ ರಾಣಿ, ವಿಮಲಾ ಅಮೀನ್, ಮೂಡಬೆಟ್ಟು ಗ್ರಾಮದ ಇಂದಿರಾ ಆಚಾರ್ಯ, ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಭವಿತಾ, ಪಾದೆಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಿಜ ಸೇರಿದಂತೆ ಒಟ್ಟು 5 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಉಡುಪಿ ಜಿಲ್ಲಾ ಪಂಚಾಯತ್ ಗ್ರಾಮಾಂತರ ಕೈಗಾರಿಕೆ ಉಪನಿರ್ದೇಶಕರು ವತಿಯಿಂದ ವೃತ್ತಿಪರ ಕುಶಲಕರ್ಮಿ ಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲ ಕರ್ಮಿಗಳಿಗೆ ಗರಿಷ್ಠ 8000ರೂ.ವರೆಗೆ ಟೈಲರಿಂಗ್, ಮರಗೆಲಸ, ಗಾರೆಕೆಲಸ, ಎಲೆಕ್ಟ್ರೀಶೀಯನ್, ಬ್ಯೂಟಿಪಾರ್ಲರ್, ಕ್ಷೌರಿಕ ವೃತ್ತಿಯವರಿಗೆ ಸೇರಿದಂತೆ ಒಟ್ಟು 81 ಫಲಾನುಭವಿಗಳಿಗೆ ಉಚಿತ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು.
ಉಡುಪಿ, ಮಾ.31: ವಾಹನಕ್ಕೆ ಬಳಕೆ ಮಾಡುವ ಎಲ್ಪಿಜಿ ಹಾಗೂ ಸಿಎನ್ಜಿ ಅನಿಲಗಳನ್ನು ತೈಲ ಕಂಪೆನಿಗಳು ನಿಗದಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತಿ ಸಿಲಿಂಡರ್ಗೆ ನಿಗದಿಪಡಿಸಿರುವ ಮೊತ್ತವನ್ನು ಹಾಗೂ ದಾಸ್ತಾನನ್ನು ತಮ್ಮ ವಿತರಣಾ ಕೇಂದ್ರದಲ್ಲಿ ಜನಸಾಮಾನ್ಯರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಒಂದೊಮ್ಮೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎಚ್ಚರಿಸಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಗೃಹ ಬಳಕೆಯ ಅನಿಲ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಅನಿಲ ವಿತರಣೆ ಕುರಿತಂತೆ ಕರೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಗೃಹ ಬಳಕೆಯ ಸಿಲಿಂಡರ್ಗಳನ್ನು ಇತರ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಇತರೆ ಉದ್ದೇಶಕ್ಕೆ ಬಳಸಿದಲ್ಲಿ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಏಕಬಳಕೆ ಸಿಲಿಂಡರ್ ಹೊಂದಿರುವ ಗ್ರಾಹಕರು ಸಿಲಿಂಡರ್ ಪಡೆದ 25 ದಿನಗಳ ನಂತರ ಹಾಗೂ ಎರಡು ಸಿಲಿಂಡರ್ ಗಳನ್ನು ಹೊಂದಿರುವ ಗ್ರಾಹಕರು ಅನಿಲ ಪೂರೈಕೆ ಮಾಡಿದ 35 ದಿನಗಳ ನಂತರ ಮತ್ತೊಂದು ಸಿಲಿಂಡರ್ಗೆ ಬುಕ್ಕಿಂಗ್ ಮಾಡಲು ಅವಕಾಶವಿದೆ. ಆದಷ್ಟು ಮನೆ ಮನೆಗೆ ಗೃಹ ಬಳಕೆಯ ಸಿಲಿಂಡರ್ಗಳನ್ನು ವಿತರಣೆ ಮಾಡುವ ಮೂಲಕ ಏಜನ್ಸಿಗಳ ಮುಂದೆ ಬಳಕೆದಾರರು ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲೆಯ ಅನಿಲ ವಿತರಕರಿಗೆ ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಗಳಿಗೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಗೃಹಬಳಕೆ ಸಿಲಿಂಡರ್ಗಳ ವಿತರಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಏಕ ಸಿಲಿಂಡರ್ ಹೊಂದಿರುವವರಿಗೆ ವಿತರಣೆ ಯಲ್ಲಿ ಸಮಸ್ಯೆಗಳಾಗುತ್ತಿರುವ ಬಗ್ಗೆ ನನಗೆ ದೂರುಗಳು ಬಂದಿವೆ. ಈ ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯವಾಗುತ್ತಿತ್ತು. ಆದರೆ ಪಶ್ಚಿಮ ಏಷ್ಯಾ ದೇಶಗಳಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಸದ್ಯ ಸಮರ್ಪಕವಾಗಿ ಅನಿಲಗಳು ಆಮದು ಆಗದೆ ಇರುವ ಹಿನ್ನೆಲೆಯಲ್ಲಿ ಸ್ವಲ್ಪ ತೊಂದರೆಗಳಾಗಿವೆ ಎಂದರು. ಸರಕಾರ ಬದ್ಧ: ಆದರೂ ಗೃಹಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿತರಿಸಲು ಸರಕಾರ ಬದ್ಧವಿದೆ. ಗೃಹ ಬಳಕೆ ವಿತರಣೆಯಲ್ಲಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಹಾಗೂ ವಿತರಣಾ ಸಂಸ್ಥೆಗಳಿಗೆ ಸೂಚಿಸಿದರು. ವಾಣಿಜ್ಯ ಬಳಕೆಯ ಗ್ರಾಹಕರಿಗೆ ನಿಗದಿಯ ಶೇ.20ರಷ್ಟು ಪ್ರಮಾಣದಲ್ಲಿ ಕೊಡುವ ಉದ್ದೇಶವನ್ನು ಹೊಂದಿರುವ ಬಗ್ಗೆ ಸರಕಾರ ತಿಳಿಸಿದೆ. ವಿದ್ಯಾರ್ಥಿ ನಿಲಯಗಳಿಗೆ, ಆಸ್ಪತ್ರೆ, ಶಾಲೆ ಸೇರಿದಂತೆ ತುರ್ತು ಮತ್ತು ಅತೀ ಅಗತ್ಯವಿರುವ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ವಾಣಿಜ್ಯ ಸಿಲಿಂಡರ್ಗಳ ವಿತರಣೆಯನ್ನು ಮಾಡಬೇಕು ಎಂದೂ ಅವರು ಸ್ಪಷ್ಟ ನಿರ್ದೇಶನ ನೀಡಿದರು. ಮಣಿಪಾಲ ವ್ಯಾಪ್ತಿಯಲ್ಲಿ ವಾಣಿಜ್ಯ ಸಿಲಿಂಡರ್ ನೋಂದಾಯಿತ ಗ್ರಾಹಕರಿಗೆ ನೋಂದಣಿ ಮಾಡಿಕೊಂಡ ಸಂಸ್ಥೆ ಗಳಿಂದ ಅನಿಲ ವಿತರಣೆ ಆಗುತ್ತಿಲ್ಲ. ಇದರಿಂದ ತೊಂದರೆ ಉಂಟಾಗುತ್ತಿದೆ. ನೋಂದಣಿಯನ್ನು ಇತರೆ ಸಂಸ್ಥೆಗಳಿಗೆ ವರ್ಗಾಯಿಸುವ ಅಗತ್ಯವಿದ್ದು, ಈ ಬಗ್ಗೆ ಅನಿಲ ಕಂಪನಿ ಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ತೈಲಗಳಿಗೆ ಸಮಸ್ಯೆಯಿಲ್ಲ: ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಗಳಿಲ್ಲ. ಆದರೆ ಅನಧಿಕೃತವಾಗಿ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಈಗಾಗಲೇಸಾಕಷ್ಟು ದಿನಗಳಿಂದ ಜನರೇಟರ್ಗಳಿಗೆ ಹಾಗೂ ಮೀನುಗಾರಿಕಾ ಬೋಟ್ಗಳಿಗೆ, ನಿರಂತರವಾಗಿ ಕೊಂಡೊಯ್ಯುವವರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರವೀಂದ್ರ, ಜಿಲ್ಲೆಯ ವಿವಿಧ ಗ್ಯಾಸ್ ಏಜನ್ಸಿಗಳ ಹಾಗೂ ಬಂಕುಗಳ ಮಾಲಕರು, ವಿತರಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ
ವಾರ್ತಾಭಾರತಿಯ ಯೋಗೇಶ್ ಮಲ್ಲೂರು, ಅಬ್ದುಲ್ ರಹಿಮಾನ್ ತಲಪಾಡಿಗೆ ಪ್ರಶಸ್ತಿ
ಹಾರ್ಮುಝ್ ಜಲಸಂಧಿ ನೀವೇ ವಶಪಡಿಸಿಕೊಳ್ಳಿ: ಬ್ರಿಟನ್, ಫ್ರಾನ್ಸ್ ಗೆ ಟ್ರಂಪ್ ತಾಕೀತು
ವಾಷಿಂಗ್ಟನ್, ಮಾ. 31: ಇರಾನ್ ಮೇಲಿನ ಇಸ್ರೇಲ್–ಅಮೆರಿಕ ದಾಳಿಗೆ ಸಹಕಾರ ನೀಡದ ದೇಶಗಳು ಅಮೆರಿಕದ ತೈಲವನ್ನು ಖರೀದಿಸಬೇಕು ಅಥವಾ ಹಾರ್ಮುಝ್ ಜಲಸಂಧಿಯನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಾಕೀತು ಮಾಡಿದರು. ಒಂದು ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ನೆರವು ನೀಡದ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳನ್ನು ಅವರು ತಮ್ಮ ‘ಟ್ರುತ್’ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ, ಇಂಧನದ ಬೆಲೆಗಳು ಗಗನಕ್ಕೇರಿರುವ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ. ಈ ನಡುವೆ ಹಾರ್ಮುಝ್ ಜಲಸಂಧಿ ಮೂಲಕ ಸಾಗುವ ತೈಲ ಟ್ಯಾಂಕರ್ ಗಳ ಸಂಚಾರವನ್ನು ಇರಾನ್ ಪರಿಣಾಮಕಾರಿಯಾಗಿ ತಡೆಹಿಡಿದಿದೆ. ಇದರಿಂದ ಜಾಗತಿಕ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. “ಇರಾನ್ ಆಡಳಿತ ಬದಲಾವಣೆಯಲ್ಲಿ ಭಾಗವಹಿಸಲು ನಿರಾಕರಿಸಿದ ಬ್ರಿಟನ್ ನಂತಹ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಪರಿಣಾಮವಾಗಿ ಯುದ್ಧ ವಿಮಾನಗಳಿಗೆ ಇಂಧನ ಕೊರತೆ ಎದುರಾಗಿದೆ. ಅಂತಹ ದೇಶಗಳು ಅಮೆರಿಕದಿಂದ ಇಂಧನ ಖರೀದಿಸಬೇಕು ಅಥವಾ ಧೈರ್ಯ ತೋರಿಸಿ ಹಾರ್ಮುಝ್ ಜಲಸಂಧಿಯನ್ನು ವಶಪಡಿಸಿಕೊಳ್ಳಬೇಕು,” ಎಂದು ಟ್ರಂಪ್ ವ್ಯಂಗ್ಯವಾಡಿದರು. “ನೀವು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದನ್ನು ಕಲಿಯಬೇಕು. ಇನ್ನು ಮುಂದೆ ನಿಮ್ಮ ನೆರವಿಗೆ ಅಮೆರಿಕ ಇರುವುದಿಲ್ಲ. ನೀವು ಹೇಗೆ ನಮ್ಮೊಂದಿಗೆ ನಿಂತಿರಲಿಲ್ಲವೋ, ಹಾಗೆಯೇ ನಾವು ಕೂಡ,” ಎಂದು ಅವರು ಕಟುವಾಗಿ ಹೇಳಿದರು. ಫ್ರಾನ್ಸ್ ತನ್ನ ಪ್ರಾಂತ್ಯದ ಮೇಲೆ ಸೇನಾ ಪೂರೈಕೆ ಸಾಗಿಸುವ ವಿಮಾನಗಳಿಗೆ ಹಾರಾಟಕ್ಕೆ ಅವಕಾಶ ನೀಡದಿರುವುದನ್ನೂ ಅವರು ಟೀಕಿಸಿದರು.
IPL ವರದಿ ಮಾಡುತ್ತಿದ್ದ ಬ್ರಿಟಿಷ್ ಪ್ರಸಾರ ಎಂಜಿನಿಯರ್ ಮುಂಬೈಯ ಹೋಟೆಲ್ ನಲ್ಲಿ ಶವವಾಗಿ ಪತ್ತೆ
ಮುಂಬೈ, ಮಾ. 31: ಐಪಿಎಲ್ ನ ಪ್ರಸಾರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮುಂಬೈಯ ಟ್ರೈಡೆಂಟ್ ಹೋಟೆಲ್ ನ ಕೊಠಡಿಯೊಂದರಲ್ಲಿ ಸೋಮವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯನ್ನು 76 ವರ್ಷದ ಜಾನ್ ವಿಲಿಯಂ ಲ್ಯಾಂಗ್ಫೋರ್ಡ್ ಎಂದು ಗುರುತಿಸಲಾಗಿದೆ. ಅವರು ಐಪಿಎಲ್ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 24ರಿಂದ ಟ್ರೈಡೆಂಟ್ ಹೋಟೆಲ್ ನಲ್ಲಿ ತಂಗಿದ್ದರು. ಮಾರ್ಚ್ 29ರಂದು ಪಂದ್ಯದ ನಂತರ ಲ್ಯಾಂಗ್ಫೋರ್ಡ್ ತಮ್ಮ ಕೊಠಡಿಗೆ ಮರಳಿದ್ದರು. ಮರುದಿನ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಅನಂತರ ಶೋಧ ತಂಡ ಮಾಸ್ಟರ್ ಕೀ ಬಳಸಿ ಕೊಠಡಿಯ ಬಾಗಿಲು ತೆರೆಯಿತು ಮತ್ತು ಒಳ ಪ್ರವೇಶಿಸಿತು. ಆಗ ಲ್ಯಾಂಗ್ಫೋರ್ಡ್ ನೆಲದ ಮೇಲೆ ಬಿದ್ದಿರುವುದು ಕಂಡುಬಂತು. ಕೂಡಲೇ ಹೋಟೆಲ್ ನ ವೈದ್ಯರನ್ನು ಕರೆಸಲಾಯಿತು. ಅವರು ಲ್ಯಾಂಗ್ಫೋರ್ಡ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮರೈನ್ ಡ್ರೈವ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
(ವಿಕ ಫೋಕಸ್) `ನೋ ಕಿಂಗ್ಸ್ ಲ್ಯಾಂಡ್'! ಅಮೆರಿಕದ ಅಧಿಪತಿಯ ವಿರುದ್ಧ ಇದೇನು ಮಹಾಕ್ರೋಶ?
Protest Against Donald Trump- ಐಲು ದೊರೆ, ಸರ್ವಾಧಿಕಾರಿ ಗುಣ, ಗಳಿಗೆ ಗಂಡಾಂತರಿ, ಯುದ್ಧದಾಹಿ... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇತರೆ ದೇಶಗಳ ಜನ ಈ ಬಗೆಯಲ್ಲಿ ಕಾಣುತ್ತಿದ್ದಾರೆ. ಆದರೆ, ಸ್ವತಃ ಅಮೆರಿಕನ್ನರು ಟ್ರಂಪ್ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಎನ್ನುವ ಕುತೂಹಲ ಜಗಕ್ಕೆ. ಇದೇ ಸಂದರ್ಭದಲ್ಲಿ, ಅಮೆರಿಕದಲ್ಲಿ ಸೈಕ್ಲೋನ್ನಂತೆ ಎದ್ದು ಬಂದ `ನೋ ಕಿಂಗ್ಸ್ ಲ್ಯಾಂಡ್' ಟ್ರಂಪ್ ವಿರುದ್ಧ ಬಹುದೊಡ್ಡ ಅಸಮಾಧಾನ ಬಹಿರಂಗಗೊಳಿಸಿದೆ. ಅಮೆರಿಕ ತನಗೆ ರಾಜ ಬೇಡ ಎನ್ನುತ್ತಿದೆ ಏಕೆ?
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು
Iran War Udates: ಕದನ ವಿರಾಮ, ಷರತ್ತಿಗೆ ಒಪ್ಪಿದರೆ ಸಂಧಾನ ಎನ್ನುತ್ತಲೆ ಅಮೆರಿಕ ಮತ್ತು ಇಸ್ರೇಲ್ ಇರಾನಿನ ಮೇಲೆ ಜಂಟಿ ದಾಳಿ ಮುಂದುವರಿಸಿವೆ. ಸದ್ಯಕ್ಕೆ ಮಧ್ಯಪ್ರಾಚ್ಯ ಯುದ್ಧ ಕೊನೆಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇರಾನ್ ಅಕ್ಷರಶಃ ಸ್ಮಶಾನವಾಗಿದೆ. ಇಂದಿಗೆ 32ನೇ ದಿನಕ್ಕೆ ಕಾಲಿಟ್ಟ ಯುದ್ಧದ ಸನ್ನಿವೇಶಗಳು ರಣಭೀಕರವಾಗಿವೆ. ಇಂದು ಮಾರ್ಚ್ 31ರಂದು ಮಂಗಳವಾರ ಇರಾನಿನ ಇಸ್ಫಹಾನ್ನಲ್ಲಿರುವ ಮಿಲಿಟರಿ
Hyderabad | ಅಕ್ರಮ LPG ಜಾಲ ಪತ್ತೆ; 10 ಮಂದಿಯ ಬಂಧನ, 414 ಸಿಲಿಂಡರ್ ವಶ
ಹೈದರಾಬಾದ್, ಮಾ. 31: LPG ಸಿಲಿಂಡರ್ ಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆಯುಕ್ತರ ಕಾರ್ಯಪಡೆ (ಜುಬಿಲಿ ಹಿಲ್ಸ್ ವಲಯ) ಹಾಗೂ ಬಂಜಾರಾ ಹಿಲ್ಸ್ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಬಂಜಾರಾ ಹಿಲ್ಸ್ನ ನಾಗಾರ್ಜುನ ಎಕ್ಸ್ ರೋಡ್ನಲ್ಲಿರುವ ಸ್ಮಶಾನದ ಸಮೀಪದ ಸ್ಥಳದ ಮೇಲೆ ರವಿವಾರ ದಾಳಿ ನಡೆಸಿದರು. ಸಿಲಿಂಡರ್ ಗಳನ್ನು ದಾಸ್ತಾನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ವಿವಿಧ ಸಾಮರ್ಥ್ಯದ ಒಟ್ಟು 414 LPG ಸಿಲಿಂಡರ್ ಗಳು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡರು. ವಶಪಡಿಸಿಕೊಳ್ಳಲಾದ ಸೊತ್ತಿನ ಮೌಲ್ಯ ಸುಮಾರು 21.88 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರ ಪ್ರಕಾರ, ಪ್ರಧಾನ ಆರೋಪಿ ಮುಹಮ್ಮದ್ ಅಮೀರ್ ‘ಮೆಟ್ರೊ ಗ್ಯಾಸ್ ಏಜೆನ್ಸಿ’ ಎಂಬ ಗ್ಯಾಸ್ ಏಜೆನ್ಸಿಯನ್ನು ನಡೆಸುತ್ತಿದ್ದ. ಆತ ನಿಗದಿತ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. LPG ಸಿಲಿಂಡರ್ ಗಳನ್ನು ತೆರೆದ ಸ್ಥಳದಲ್ಲಿ ದಾಸ್ತಾನು ಇಟ್ಟುಕೊಂಡಿದ್ದ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. LPGಗೆ ಹೆಚ್ಚಿನ ಬೇಡಿಕೆ ಇದ್ದು, ಆರೋಪಿಗಳು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿತರಣಾ ಸಿಬ್ಬಂದಿ, ಚಾಲಕರು ಹಾಗೂ ಕಾರ್ಮಿಕರ ನೆರವಿನಿಂದ LPG ಪೂರೈಕೆಯನ್ನು ಬೇರೆಡೆಗೆ ತಿರುಗಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ವಾಣಿಜ್ಯ ಹಾಗೂ ಗೃಹಬಳಕೆಯ LPG ಸಿಲಿಂಡರ್ ಗಳು (ತುಂಬಿದ ಹಾಗೂ ಖಾಲಿ ಸಿಲಿಂಡರ್ ಗಳು) ಸೇರಿವೆ. ಸಾಗಾಟಕ್ಕೆ ಬಳಸಲಾಗುತ್ತಿದ್ದ ಡಿಸಿಎಂ ವ್ಯಾನ್, ಬೊಲೆರೊ, ಟಾಟಾ ಎಸ್, ಟಾಟಾ ಇಂಟ್ರಾ ಹಾಗೂ ಹಲವು ಆಟೊ ರಿಕ್ಷಾ ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅತ್ಯಗತ್ಯ ವಸ್ತುಗಳನ್ನು ಅಕ್ರಮವಾಗಿ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಕಾರ್ಯಪಡೆ) ಗಾಯಕ್ವಾಡ್ ವೈಭವ್ ರಘುನಾಥ್ ತಿಳಿಸಿದ್ದಾರೆ.
ಉಡುಪಿ: ಅಂತರ್ ಕಾಲೇಜು ಉತ್ಸವ ಉದ್ಘಾಟನೆ
ಉಡುಪಿ, ಮಾ.31: ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ವತಿಯಿಂದ ಅಂತರ್ ಕಾಲೇಜು ಉತ್ಸವವನ್ನು ಮಾ.27ರಂದು ಕಾಲೇಜಿನ ಟಿ.ಎಂ.ಎ. ಪೈ ಪ್ಲಾಟಿನಮ್ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಸಂದರ್ಭ ದಲ್ಲಿ, ಇಂತಹ ಉತ್ಸವಗಳು ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಕರು ತಮ್ಮ ಚಿಂತನೆ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿ, ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಮಾಜದ ಬಗ್ಗೆ ಜವಾಬ್ದಾರಿತನವನ್ನು ಬೆಳೆಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಮಣಿಪಾಲದ ಎಜಿಇ ಆಡಳಿತಾಧಿಕಾರಿ ಡಾ. ಕೆ.ಶ್ರೀಧರ್ ಆರ್.ಪೈ ಮಾತನಾಡಿದರು. ಅಧ್ಯಕ್ಷತೆಯನ್ನು ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯಕ್ ವಹಿಸಿದ್ದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಎಂ.ಜಿ.ಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಎಂ.ಜಿ.ಎಂ ಪದವಿ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಬಿಸಿಎ ಸಂಯೋಜಕ ಡಾ.ಎಂ. ವಿಶ್ವನಾಥ್ ಪೈ, ಬಿ.ಬಿ.ಎ ಹಾಗು ಬಿಕಾಂ ಸಂಯೋಜಕರಾದ ಡಾ.ಮಲ್ಲಿಕಾ ಎ.ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಯಾಸಿನ್ ಮನ್ನಾ, ಎಂಜಿಎಂ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರತಿನಿಧಿ ನಂದನ್ ಕುಂದರ್ ಹಾಗೂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರತಿನಿಧಿ ಧೀರಜ್ ಉಪಸ್ಥಿತರಿದ್ದರು.
71 ದಿನದಲ್ಲಿ 1,079 ಪ್ರಕರಣ ವಿಲೇವಾರಿ: ಮಾಹಿತಿ ಆಯುಕ್ತ ಬಿ.ವೆಂಕಟ ಸಿಂಗ್
ರಾಯಚೂರು: ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ಕಳೆದ ಐದು ತಿಂಗಳಲ್ಲಿ 71 ದಿನ ಕಲಾಪ ನಡೆಸಿ 1,079 ಪ್ರಕರಣಗಳು ವಿಲೇವಾರಿ ಮಾಡಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿ.ವೆಂಕಟ ಸಿಂಗ್, 2025ರ ನವೆಂಬರ್ 24ರಿಂದ ಮಾರ್ಚ್ ಅಂತ್ಯಕ್ಕೆ 2,520 ಪ್ರಕರಣಗಳು ವಿಚಾರಣೆಗೆ ಕೈಗೆತ್ತಿಕೊಂಡು 1,079 ಪ್ರಕರಣಗಳು ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾರೆ. ಅರ್ಜಿದಾರರಿಗೆ ಮಾಹಿತಿ ನೀಡಲು ಕಾಲ ಹರಣ ಮಾಡಿ ಸಮಯ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ ಕಾರಣ ನೊಂದ ಅರ್ಜಿದಾರರಿಗೆ 34 ಸಾವಿರ ಪರಿಹಾರ ನೀಡಲು ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಸೌಕೂರು ದಸ್ತಾಗಿರ್ಗೆ ಕರ್ನಾಟಕ ಸರ್ವಾಭೌಮ ಪ್ರಶಸ್ತಿ
ಉಡುಪಿ, ಮಾ.31: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಸೌಕೂರು ದಸ್ತಾಗಿರ್ ಅವರಿಗೆ ಕರ್ನಾಟಕ ಸರ್ವಾಭೌಮ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್ಟೀಜ್ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಸಮಾಜ ಸೇವೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೋರಿದ ಅತ್ಯುತ್ತಮ ಸೇವೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು, ಸಂಘಟನಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಸೌಕೂರು ದಸ್ತಾಗಿರ್, ಈ ಗೌರವವನ್ನು ತಮ್ಮ ಸಂಘಟನೆಯ ಎಲ್ಲಾ ಸದಸ್ಯರಿಗೆ ಸಮರ್ಪಿಸುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಸಮಾಜ ಸೇವೆಯನ್ನು ಇನ್ನಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಸೇರಿದಂತೆ ಪದಾಧಿಕಾರಿಗಳು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕುಂಜಾಲು ಸ್ಟ್ರೈಕರ್ಸ್ಗೆ ಮಟಪಾಡಿ ಪ್ರೀಮಿಯರ್ ಲೀಗ್ ಪ್ರಶಸ್ತಿ
ಬ್ರಹ್ಮಾವರ, ಮಾ.31: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಬ್ರಹ್ಮಾವರ ವತಿಯಿಂದ ಮಟಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರಗಿತು. ಸ್ಥಳೀಯ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು ಕುಂಜಾಲು ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಫ್ರೆಂಡ್ಸ್ ಮಟಪಾಡಿ ರನ್ನರ್ಸ್ ಆಗಿ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ನಲ್ಲಿ ಪಂದ್ಯ ಶ್ರೇಷ್ಠರಾಗಿ ಸ್ಟ್ರೈಕರ್ಸ್ ತಂಡದ ರಂಜಿತ್ ಕುಂಜಾಲು, ಸರಣಿ ಶ್ರೇಷ್ಠರಾಗಿ ಫ್ರೆಂಡ್ಸ್ ಮಟಪಾಡಿಯ ಪ್ರದೀಪ್ ಶೆಟ್ಟಿ, ಉತ್ತಮ ದಾಂಡಿಗರಾಗಿ ಫ್ರೆಂಡ್ಸ್ ಮಟಪಾಡಿಯ ವಿಶಾಲ್ ನಾಯಕ್, ಉತ್ತಮ ಎಸೆತಗಾರರಾಗಿ ಸ್ಟ್ರೈಕರ್ಸ್ ತಂಡದ ಗುರುರಾಜ್ ಕುಂಜಾಲು, ಉತ್ತಮ ಕ್ಷೇತ್ರ ರಕ್ಷಕರಾಗಿ ಫ್ರೆಂಡ್ಸ್ ಮಟಪಾಡಿಯ ರಾಘವೇಂದ್ರ ಪಶಸ್ತಿ ಪಡೆದರು. ನಾಯಕ್ ಫ್ರೆಂಡ್ಸ್ ಮಟಪಾಡಿ ಮತ್ತು ನಂದಿ ಫ್ರೆಂಡ್ಸ್ ಮಟಪಾಡಿ ಸೆಮಿಫೈನಲ್ ತಂಡಗಳಾಗಿ ಮೂಡಿ ಬಂದವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಮಟಪಾಡಿಯ ಮುಖ್ಯಅರ್ಚಕ ಸುಬ್ರಹ್ಮಣ್ಯ ಉಂಗ್ರಪಳ್ಳಿ, ಸ್ಟಾಲಿನ್ ಸಿಕ್ವೇರಾ ಮತ್ತು ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಬ್ರಹ್ಮಾವರ ರೋಟರಿ ರೊಯಲ್ ಅಧ್ಯಕ್ಷರಾದ ಚಂದ್ರಶೇಖರ ನಾಯರಿ, ಮಟಪಾಡಿ ಶಾಲಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಮಾಜಿ ತಾಪಂ ಸದಸ್ಯೆ ಉಷಾ ಕೃಷ್ಣ ಪೂಜಾರಿ, ಉದ್ಯಮಿಗಳಾದ ಅಲ್ತಾಫ್ ಅಹಮ್ಮದ್, ಮಿಥುನ್ ಅಮೀನ್, ಉದಯ್ ಚಿರಾಗ್, ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ವಿಜಯ್ ನಾಯಕ್, ಕ್ಲಬ್ಬಿನ ಗೌರವ ಸಲಹೆಗಾರರಾದ ಶರೋನ್ ಸಿಕ್ವೇರಾ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕ್ಲಬ್ಬಿನ ಅಧ್ಯಕ್ಷ ಚೇತನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜೊಯ್ಸನ್ ಬಾಂಜ್, ಕೋಶಾಧಿಕಾರಿ ಚೇತನ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅಂಕುಶ್ ನಾಯಕ್ ಉಪಸ್ಥಿತರಿದ್ದರು. ಶರೋನ್ ಮತ್ತು ಅಂಕುಶ್ ಸ್ವಾಗತಿಸಿದರು. ಚೇತನ್ ಆಚಾರ್ಯ ಮತ್ತು ಸುಬ್ರಹ್ಮಣ್ಯ ವಂದಿಸಿದರು. ಶರತ್ ಮತ್ತು ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸೀನಿಯರ್ ಚೇಂಬರ್ಗೆ ಹುಸೇನ್ ಹೈಕಾಡಿ ನೇಮಕ
ಕುಂದಾಪುರ, ಮಾ.31: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹುಸೇನ್ ಹೈಕಾಡಿ ನೇಮಕಗೊಂಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಜರಗಿದ ಸಂಸ್ಥೆಯ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ಕೇರಳದ ವಾಸುದೇವನ್ ಈ ಆಯ್ಕೆ ಮಾಡಿದರು. ಇವರು ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷರು, ಜೆಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಸಂಯೋಜ ಕರು, ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಜೋನ್ ಇದರ 2026/27ರ ಸಾಲಿನ ಅಧ್ಯಕ್ಷರಾಗಿ ಚುನಾಯಿತರಾಗಿ ದ್ದಾರೆ. ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಅಂಗದಾನ -ನಶಾಮುಕ್ತ ಅಭಿಯಾನ ಕುರಿತ ಜಾಗೃತಿ ಜಾಥ
ಕುಂದಾಪುರ, ಮಾ.31: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ಎನ್ಎಸ್ಎಸ್ ಘಟಕ ಹಾಗೂ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಸಮಿತಿಗಳ ವತಿಯಿಂದ ಅಂಗದಾನ ಮತ್ತು ನಶಾಮುಕ್ತ ಅಭಿಯಾನ ಕುರಿತು ಜಾಗೃತಿ ಜಾಥವು ಶುಕ್ರಕವಾರ ನಡೆಯಿತು. ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಂಡ್ಲೂರುವರೆಗೆ ನಡೆದ ಈ ಜಾಥಕ್ಕೆ ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ನಾಯಕ್ ಚಾಲನೆ ನೀಡಿದರು. ಸಮಾಜದಲ್ಲಿ ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕುಮಾರ್, ಪ್ರಾಂಶುಪಾಲೆ ಪ್ರೊ.ಜೆನ್ನಿಫರ್ ಫ್ರೀಡಾ ಮೆನೆಜಸ್, ಉಪ ಪ್ರಾಂಶುಪಾಲೆ ರೂಪಶ್ರೀ ಕೆ.ಎಸ್. ಹಾಗೂ ಎನ್ಎಸ್ಎಸ್ ಸಂಯೋಜಕ ಚಂದ್ರಶೇಖರ್ ಉಪಸ್ಥಿತರಿದ್ದರು. ರ್ಯಾಲಿಯಲ್ಲಿ ವಿದ್ಯಾರ್ಥಿ ಗಳು ಉತ್ಸಾಹದಿಂದ ಭಾಗವಹಿಸಿ, ಅಂಗದಾನದ ಮಹತ್ವ ಹಾಗೂ ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ಅಣ್ಣಾಮಲೈ : ’ಮೋದಿ ಹುಡುಗನ’ ಈ ನಿರ್ಧಾರಕ್ಕೆ ಇದೊಂದೇ ಕಾರಣವಾಯಿತೇ?
Annamalai Not contesting in Election : ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸೀಟು ಶೇರಿಂಗ್ ಹೊಂದಾಣಿಕೆ ಸರಿಯಾಗಿ ನಡೆದಿಲ್ಲ ಎನ್ನುವ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಪಕ್ಷದ ಪರವಾಗಿ ಪ್ರಚಾರ ನಡೆಸುವುದಾಗಿ ಅಣ್ಣಾಮಲೈ ಹೇಳಿದ್ದಾರೆ.
ಪ್ರಶಸ್ತಿ ಮೊತ್ತ ಬಡವರ ಚಿಕಿತ್ಸೆಗೆ ನೀಡಿದ ವಿಶುಶೆಟ್ಟಿ
ಉಡುಪಿ, ಮಾ.31: ಮುಂಬೈ ನಾಲಾ ಸೋಪಾರದಲ್ಲಿ ತುಳುಕೂಟ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಅವರಿಗೆ 2026ರ ತುಳುನಾಡ ಐಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ತುಳುಕೂಟದ ಅಧ್ಯಕ್ಷ ಶಶಿಧರ ಕೆ.ಶೆಟ್ಟಿ ಇನ್ನಂಜೆ ಹಾಗೂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಯಶೋಧ ಎಸ್. ಕೊಟ್ಯಾನ್, ವಿಶು ಶೆಟ್ಟಿಗೆ 25,000ರೂ. ಗೌರವ ಧನನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ವಿಶು ಶೆಟ್ಟಿ ಪ್ರಶಸ್ತಿ ಮೊತ್ತವನ್ನು ಬನ್ನಂಜೆಯ ದಲಿತ ಮಹಿಳೆ ಶಕುಂತಳಾ ಅವರ ಪತಿಯ ಚಿಕಿತ್ಸೆಗೆ 20,000 ಹಾಗೂ 5000ರೂ. ಕಾಪುವಿನ ಬಾಲಕಿ ಹಿಮಾನಿ ಶೆಟ್ಟಿಯ ಚಿಕಿತ್ಸೆಗೆ ನೀಡಿದ್ದಾರೆ.
ರಾಯಚೂರು| 135 ಲೀಟರ್ ಕಲಬೆರಿಕೆ ಸೇಂದಿ ವಶಕ್ಕೆ
ರಾಯಚೂರು: ರೈಲುಗಾಡಿಯ ಮೂಲಕ ಅಕ್ರಮವಾಗಿ ಕಲಬೆರಕೆ ಸೇಂದಿ ತಂದು ಮಾರಾಟ ಮಾಡಲು ಯತ್ನಿಸಿದಾಗ ನಗರದ ರೈಲ್ವೆ ನಿಲ್ದಾಣದಲ್ಲಿ ಸುಮಾರು 135 ಲೀಟರ್ ಸೇಂದಿಯನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಆಂದ್ರಪ್ರದೇಶ, ತೆಲಂಗಾಣ ಗಡಿ ಹಂಚಿಕೊಂಡಿರುವ ರಾಯಚೂರು ನಗರದ ಹಲವೆಡೆ ಎಗ್ಗಿಲ್ಲದೇ ಕಲಬೆರಕೆ ಸಿ.ಹೆಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡಲಾಗುತ್ತಿದೆ. ರೈಲುಗಾಡಿಯ ಮೂಲಕ ಅಂತರರಾಜ್ಯದಿಂದ ತಂದು ಸೇಂದಿ ಮಾರಾಟಕ್ಕೆ ಯತ್ನಿಸಿದಾಗ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಸೇಂದಿಯ ಬಾಟಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಅಬಕಾರಿ ಪೊಲೀಸರು ಪರಿಶೀಲನೆ ನಡೆಸಿ ಸಿಎಚ್ ಪೌಡರ್ ಮಿಶ್ರಿತ ಸೇಂದಿಯ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಯಚೂರು ವಲಯ ನಿರೀಕ್ಷಕರಾದ ಇ.ಸತ್ಯನಾರಾಯಣ, ಸಬ್ ಇನ್ಸ್ ಪೆಕ್ಟರ್ ಮಾರುತಿ, ಸಿಬ್ಬಂದಿಗಳಾದ ಅಮೃತ ಬಿಂದು, ತಿರುಪತಿ, ಮಲ್ಲಮ್ಮ, ಮಧು ನರೇಂದ್ರ ಉಪಸ್ಥಿತರಿದ್ದರು.
ಕಲಬುರಗಿ| ಜನಗಣತಿಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮನವಿ
ಕಲಬುರಗಿ: ಎಪ್ರಿಲ್ 1 ರಿಂದ 15ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಭಾರತದ ಜನಗಣತಿ-2027ರ ಭಾಗವಾಗಿ ಮೊದಲನೇ ಹಂತದ ಡಿಜಿಟಲ್ ಗಣತಿ ಕಾರ್ಯ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಕಾರ್ಯದ ಯಶಸ್ಸಿಗೆ ಸಹಕರಿಸಬೇಕೆಂದು ಪ್ರಧಾನ ಜನಗಣತಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ. ಜನಗಣತಿ ಕಾಯ್ದೆ-1948ರ ಪ್ರಕಾರ ಭಾರತದ ಜನಗಣತಿ-2027 ಕಾರ್ಯ ಎರಡು ಹಂತದಲ್ಲಿ ನಡೆಯಲಿದೆ. ಏಪ್ರಿಲ್ 1 ರಿಂದ 15ರ ವರೆಗೆ ನಿವಾಸಿಗಳಿಗೆ https://se.census.gov.in/ಅಂತರ್ಜಾಲದ ಮೂಲಕ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಿದೆ. ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು ಪಡೆದುಕೊಂಡು ಎರಡನೇ ಹಂತದಲ್ಲಿ ಏಪ್ರಿಲ್ 16 ರಿಂದ ಮೇ 15ರ ವರೆಗೆ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಸದರಿ ಸಂಖ್ಯೆ ನೀಡಿ ಗಣತಿ ಕಾರ್ಯ ಪೂರ್ಣಗೊಳಿಸಬಹುದಾಗಿದೆ. ಇನ್ನು ನಿವಾಸಿಗಳು ಸ್ವಯಂ ಮಾಡಿಕೊಂಡ ಗಣತಿಯನ್ನು ನಿಖರತೆ ಮತ್ತು ಸಂಪೂರ್ಣತೆ ಖಚಿತಪಡಿಸಿಕೊಳ್ಳಲು ಮೇಲ್ವಿಚಾರಕರ ಪರಿಶೀಲನೆ ಅಗತ್ಯವಾಗಿರುತ್ತದೆ ಎಂದು ಹೇಳಿದರು.
`ವೈಭವ್ ಸೂರ್ಯವಂಶಿಗಾಗಿ 10 ಕೋಟಿ ರೂ ಎತ್ತಿಡಿ ಎಂದಿದ್ದೆ': RR ಆಯ್ಕೆ ಟ್ರಯಲ್ಸ್ ರೋಚಕತೆ ಬಿಚ್ಚಿಟ್ಟ ಜುಬಿನ್ ಭರುಚಾ!
ವೈಭವ ಸೂರ್ಯವಂಶಿಯ ಆರ್ಭಟ ಇದೀಗ 2025ರ ಐಪಿಎಲ್ ಸೀಸನ್ ನಲ್ಲೂ ಮುಂದುವರಿದಿದೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಸೋಮವಾರ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದಾಗ ಈತ ಸಾಮಾನ್ಯನಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 13 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ₹1.1 ಕೋಟಿಗೆ ಖರೀದಿಸಿತ್ತು. ಆದರೆ ಅವರ ಪ್ರತಿಭೆಯನ್ನು ನೋಡಿ ಮಾರುಹೋಗಿದ್ದ ತಂಡದ ಪರ್ಫಾರ್ಮೆನ್ಸ್ ಡೈರೆಕ್ಟರ್ ಜುಬಿನ್ ಭರುಚಾ ಅವರು ಈ ಬಾಲಕನಿಗಾಗಿ ₹10 ಕೋಟಿ ವರೆಗೂ ವ್ಯಯಿಸಲು ಸಿದ್ಧರಿರುವಂತೆ ಫ್ರಾಂಚೈಸಿಗೆ ತಿಳಿಸಿದ್ದರಂತೆ!
ಎಸೆಸೆಲ್ಸಿ: ತೃತೀಯ ಭಾಷಾ ಪರೀಕ್ಷೆಗೆ 62 ಮಂದಿ ಗೈರು
ಉಡುಪಿ, ಮಾ.31: ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದ ಈ ಸಾಲಿನ ಎಸೆಸೆಲ್ಸಿಯ ತೃತೀಯ ಭಾಷಾ ಪರೀಕ್ಷೆಗೆ ಒಟ್ಟು 62 ಮಂದಿ ಪರೀಕ್ಷಾರ್ಥಿಗಳು ಗೈರುಹಾಜರಾಗಿದ್ದರು. ಜಿಲ್ಲೆಯಾದ್ಯಂತ ಪರೀಕ್ಷೆ ಯಾವುದೇ ಅವ್ಯವಹಾರಗಳಿಲ್ಲದೇ, ಶಾಂತಿಯುತವಾಗಿ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ತೃತೀಯ ಭಾಷಾ ಪರೀಕ್ಷೆಗೆ ಒಟ್ಟು 13,774 ಮಂದಿ ಹೆಸರು ನೊಂದಾಯಿ ಸಿಕೊಂಡಿದ್ದು, ಇವರಲ್ಲಿ ಇಂದು 13,712 ಮಂದಿ ಪರೀಕ್ಷೆ ಬರೆದಿದ್ದಾರೆ. ಬೈಂದೂರು ವಲಯದಲ್ಲಿ 10, ಕುಂದಾಪುರ ವಲಯದಲ್ಲಿ 6, ಕಾರ್ಕಳದಲ್ಲಿ 11, ಬ್ರಹ್ಮಾವರದಲ್ಲಿ 14 ಹಾಗೂ ಉಡುಪಿಯಲ್ಲಿ 21 ಮಂದಿ ಸೇರಿದಂತೆ ಒಟ್ಟು 62 ಮಂದಿ ಗೈರುಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ, ವರ್ಗಾವಣೆ ಉದ್ಯಮವಾಗಿದೆ: ಬಸವರಾಜ ಬೊಮ್ಮಾಯಿ ಗಂಭೀರ ಆರೋಪ!
ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಅಖಾಡ ರಂಗೇರಿದ್ದು, ಆಡಳಿತ ಮತ್ತು ವಿಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು, ಇಂದು (ಮಾ.31-ಮಂಗಳವಾರ) ದಾವಣೆಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಪರವಾಗಿ ಪ್ರಚಾರ ನಡೆಸಿದರು. ಇದೇ ವೇಳೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೆರಿಗೆ ಭಯೋತ್ಪಾದನೆ ಆರೋಪ ಹೊರಿಸಿದರು. ಇಲ್ಲಿದೆ ಮಾಹಿತಿ.
ರಾಷ್ಟ್ರ ಮಟ್ಟದ ದೀನ್ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ: ಉಡುಪಿಯ 5 ಗ್ರಾಮ ಪಂಚಾಯತ್ ಆಯ್ಕೆ
ಮುದ್ರಾಡಿ, ಮಡಾಮಕ್ಕಿ, ವಂಡ್ಸೆ, ಹಕ್ಲಾಡಿ, ಸಾಣೂರು ಗ್ರಾಪಂಗೆ ಪ್ರಶಸ್ತಿಯ ಗರಿ
ಅಹಮದಾಬಾದ್: ತನ್ನ ಗುಪ್ತಾಂಗದಲ್ಲಿ 83.29 ಲಕ್ಷ ರೂ. ಮೌಲ್ಯದ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ್ದ ಕೌಲಾಲಂಪುರ್ ನಿಂದ ಆಗಮಿಸಿದ್ದ ಮಹಿಳೆಯೊಬ್ಬಳನ್ನು ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಸುಳಿವು ಹಾಗೂ ಪ್ರಯಾಣಿಕಳ ವಿವರಗಳ ಆಧಾರದಲ್ಲಿ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ಯೂನಿಟ್ ಸಿಬ್ಬಂದಿ ಮಹಿಳೆಯನ್ನು ತಡೆದಿದ್ದಾರೆ. ಆಕೆ ಗ್ರೀನ್ ಚಾನೆಲ್ ಮೂಲಕ ನಿರ್ಗಮಿಸಲು ಯತ್ನಿಸುತ್ತಿದ್ದಾಗ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದೆ. ವಿಚಾರಣೆ ವೇಳೆ ಸಮಾಧಾನಕರ ಉತ್ತರ ನೀಡಲು ವಿಫಲಳಾದ ಕಾರಣ ಆಕೆಯನ್ನು ವಿಸ್ತೃತ ತಪಾಸಣೆಗೆ ಒಳಪಡಿಸಲಾಯಿತು. ತಪಾಸಣೆ ಸಂದರ್ಭದಲ್ಲಿ ಆಕೆಯ ಗುಪ್ತಾಂಗದಿಂದ ಕಪ್ಪು ಟೇಪ್ ನಲ್ಲಿ ಸುತ್ತಿದ್ದ ಮೊಟ್ಟೆಯಾಕಾರದ ಕ್ಯಾಪ್ಸೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ಯಾಪ್ಸೂಲ್ ಗಳಲ್ಲಿ ಚಿನ್ನದೊಂದಿಗೆ ಮಿಶ್ರಣಗೊಂಡ ರಾಸಾಯನಿಕ ಪೇಸ್ಟ್ ಇರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮಹಿಳೆಯಿಂದ ವಶಪಡಿಸಿಕೊಂಡ ವಸ್ತುವಿನ ಒಟ್ಟು ತೂಕ 643.28 ಗ್ರಾಂ ಆಗಿದ್ದು, ತಜ್ಞರ ಸಮ್ಮುಖದಲ್ಲಿ ಶುದ್ಧೀಕರಣ ಪ್ರಕ್ರಿಯೆ ಕೈಗೊಂಡ ಬಳಿಕ 24 ಕ್ಯಾರಟ್ ನ 999 ಪರಿಶುದ್ಧತೆಯ 553.07 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ. ವಶಪಡಿಸಿಕೊಂಡ ಚಿನ್ನದ ಅಂದಾಜು ಮೌಲ್ಯ 83,29,234 ರೂ. ಆಗಿದ್ದು, ಅದಕ್ಕೆ ಸಂಬಂಧಿಸಿದ ಸುಂಕ ಮೊತ್ತ 75,58,393 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಂಕವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಿನ್ನವನ್ನು ಘೋಷಣೆ ಮಾಡದೆ ಬಚ್ಚಿಟ್ಟುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಕಸ್ಟಮ್ಸ್ ಕಾಯ್ದೆ, 1962ರ ಅಡಿಯಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಅಂತಾರಾಷ್ಟ್ರೀಯ ಚಿನ್ನ ಕಳ್ಳ ಸಾಗಾಣಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ.
ಭಗವಾನ್ ಮಹಾವೀರರು ಅಹಿಂಸೆ, ಸತ್ಯದ ಪ್ರತಿಪಾದಕರು; ಶಾಸಕ ಚನ್ನಾರೆಡ್ಡಿ ಪಾಟೀಲ್
ಯಾದಗಿರಿ: ಭಗವಾನ್ ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರು. ಇವರು ಸತ್ಯ, ಅಹಿಂಸೆ, ಮತ್ತು ತ್ಯಾಗ ತತ್ವಗಳ ಮೂಲಕ ಜಗತ್ತಿಗೆ ಶಾಂತಿ ಮತ್ತು ಆತ್ಮಜ್ಞಾನವನ್ನು ಬೋಧಿಸಿದರೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಗವಾನ ಶ್ರೀ ಮಹಾವೀರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶರಣ ನಗರದ ಗೌರಿಶಂಕರ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಭಗವಾನ ಶ್ರೀ ಮಹಾವೀರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರಿ.ಪೂ. 6ನೇ ಶತಮಾನದಲ್ಲಿ ಬಿಹಾರದ ಕುಂದಲಪುರದಲ್ಲಿ ಜನಿಸಿದ ಇವರು, 30ನೇ ವಯಸ್ಸಿನಲ್ಲಿ ಸಂಸಾರ ತ್ಯಜಿಸಿ, 12 ವರ್ಷಗಳ ತಪಸ್ಸಿನ ನಂತರ ಸರ್ವಜ್ಞಾನ ಪಡೆದು, ಜೈನ ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ಮಾತನಾಡಿ, ಜಗತ್ತಿಗೆ ಶಾಂತಿ ಸಂದೇಶ ಸಾರುವ ಮೂಲಕ ಪ್ರತಿ ಜೀವಕ್ಕೂ ತನ್ನದೇ ಆದ ಬೆಲೆ, ಬದುಕು ಇದೆ. ಯಾರನ್ನು ಹಿಂಸಿಸಬಾರದೆಂಬ ತತ್ವ ಇವರದಾಗಿತ್ತೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುನಿಶ್ರೀ ನವೀನ್ ಪ್ರಜ್ಞಾಜೀ ಮಾಹಾರಾಜ್ ಅವರು, ವರ್ಧಮಾನ ಮಹಾವೀರರು ಕ್ರಿ.ಪೂ. 599ರಲ್ಲಿ ಜ್ಞಾತ್ರಿಕ ಕುಲದ ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲೆಯ ಮಗನಾಗಿ ಜನಿಸಿದರು. ತಮ್ಮ ಇಂದ್ರಿಯಗಳನ್ನು ಮತ್ತು ಕೋಪ, ದುರಾಸೆಯಂತಹ ಆಂತರಿಕ ಶತ್ರುಗಳನ್ನು ಜಯಿಸಿದ ಕಾರಣಕ್ಕೆ ಇವರಿಗೆ 'ಜಿನ' (ವಿಜಯಶಾಲಿ) ಮತ್ತು 'ಮಹಾವೀರ' (ಮಹಾ ಪರಾಕ್ರಮಿ) ಎಂಬ ಹೆಸರುಗಳು ಬಂದಿವೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಲವೀಶ್ ಒರ್ಡಿಯಾ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಯೋಜನಾ ನಿರ್ದೇಶಕ ಲಕ್ಷ್ಮೀ ಕಾಂತರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಜೈನ ಸಮುದಾಯದ ಪ್ರಮುಖರಾದ ಪಾರಸಮಲ್ ಜೈನ್, ಗೌತಮ ದೋಕಾ, ಬಾಬು ಸೇರಿದಂತೆ ಇತರರಿದ್ದರು.
ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ: ಖ್ಯಾತ ಕೊಂಕಣಿ ಸಾಹಿತಿ/ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಂಕಣಿ ಸಾಹಿತ್ಯ ಕ್ಷೇತ್ರದ ಗಮನಾರ್ಹ ಕೃತಿಯಾದ ‘ಕೊಂಕಣಿ ಕಾವ್ಯೆಂ: ರೂಪಾಂ ಆನಿ ರೂಪಕಾಂ (ಕಾವ್ಯ ವಿಮರ್ಶೆ)’ ಗಾಗಿ ಎಚ್. ಎಂ. ಪೆರ್ನಾಲ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಹೊಸದಿಲ್ಲಿಯ ಕಮಾನಿ ಸಭಾಂಗಣದಲ್ಲಿ ಮಂಗಳವಾರ (ಮಾರ್ಚ್ 31, 2026) ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್ ಕೌಶಿಕ್ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಸಿದ್ಧ ಹಿಂದಿ ಸಾಹಿತಿ ವಿಶ್ವನಾಥ್ ತಿವಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಿದರು. ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷೆ ಪ್ರೊ. ಕುಮುದ್ ಶರ್ಮಾ, ಕಾರ್ಯದರ್ಶಿ ಪಲ್ಲವಿ ಹೋಳ್ಕರ್, ಸಂಸ್ಕೃತಿ ಸಚಿವಾಲಯದ ಉಪ ಕಾರ್ಯದರ್ಶಿ ಅನೀಶ್ ಪಿ. ರಾಜನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಟ್ಟು 23 ಭಾಷೆಗಳಲ್ಲಿನ ಸಾಹಿತ್ಯ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಅನಾರೋಗ್ಯದ ಕಾರಣ ಮಲಯಾಳಂ ಭಾಷೆಯ ಲೇಖಕರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ►ಎಚ್.ಎಂ. ಪೆರ್ನಾಲ್ ಪರಿಚಯ ಉಡುಪಿ ಜಿಲ್ಲೆಯ ಪೆರ್ನಾಲ್ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಹಾಗೂ ಎಂ.ಎಸ್.ಆರ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಮುಂಬೈಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿದ್ದಾರೆ. ಕನ್ನಡದಲ್ಲಿ ತರಂಗ, ಸಂಕ್ರಮಣ, ಶೂದ್ರ ಮುಂತಾದ ಪತ್ರಿಕೆ ಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಕಥೆಗಾರ, ಕವಿ, ವಿಮರ್ಶಕ, ಸಂಪಾದಕ ಹಾಗೂ ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. 2011ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ–ಕಿರಿಯ ಲೇಖಕರನ್ನು ಒಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕ ಗಳಿಗೆ ಸಾಹಿತ್ಯ ಲೋಕದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನದ ಮೂಲಕ ಈವರೆಗೆ 15ಕ್ಕೂ ಹೆಚ್ಚು ಮೌಲಿಕ ಸಾಹಿತ್ಯ ಕೃತಿಗಳನ್ನು ಪೆರ್ನಾಲ್ ಪ್ರಕಟಿಸಿದ್ದಾರೆ. ಈವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು — ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು — ದೆವಾಕ್ ಸೊಡುಲ್ಲೊ ಪಾಡೊ (2002) ಮತ್ತು ಬೀಗ್ ಆನಿ ಬಿಗಾತ್ (2016), ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ. ಕೊಂಕಣಿ ಸಾಹಿತ್ಯ ಸಮುದಾಯದಲ್ಲಿ ಸಮರ್ಪಿತ ನಾಯಕರಾಗಿರುವ ಪೆರ್ನಾಲ್ ಅವರು 2023ರಲ್ಲಿ ಮಂಗಳೂರಿ ನಲ್ಲಿ ನಡೆದ ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಖಿಲ ಭಾರತ ಕೊಂಕಣಿ ಪರಿಷತ್ನಲ್ಲಿ ಕೋಶಾಧಿಕಾರಿಯಾಗಿದ್ದಾರೆ. ಅವರು ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.
West Bengal | 35 ವರ್ಷಗಳ ಬಳಿಕ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿದ ಅಧೀರ್ ರಂಜನ್ ಚೌಧರಿ
ಕೋಲ್ಕತ್ತಾ: ಲೋಕಸಭೆಯಲ್ಲಿ ಮಾಜಿ ವಿಪಕ್ಷ ನಾಯಕ, ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸುಮಾರು 35 ವರ್ಷಗಳ ಬಳಿಕ ವಿಧಾನಸಭಾ ಚುನಾವಣಾ ಸ್ಪರ್ಧೆಗೆ ಧುಮುಕಿದ್ದಾರೆ. 1991ರಲ್ಲಿ ಅಧೀರ್ ರಂಜನ್ ಚೌಧರಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಪರಾಭವಗೊಂಡಿದ್ದ ವೇಳೆ ದಿ. ಪಿ.ವಿ.ನರಸಿಂಹರಾವ್ ದೇಶದ ಪ್ರಧಾನಿಯಾಗಿದ್ದರು ಹಾಗೂ ದಿ. ಜ್ಯೋತಿ ಬಸು ಪಶ್ಚಿ ಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಇದಾದ ಮೂರೂವರೆ ದಶಕಗಳ ಬಳಿಕ, ಸತತ ಐದು ಬಾರಿ ಸಂಸದರಾದ ನಂತರ ಅವರು ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇದಾದ ಬಳಿಕ, ಅವರೀಗ ಬಹರಂಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕೆ ಮರಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, “ನಾನು ನನ್ನ ನಗರದಿಂದ ಸ್ವಲ್ಪ ದೂರವಿದ್ದ ನಬಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದೆ. ಆ ಕ್ಷೇತ್ರದ ಮೇಲೆ ಎಡರಂಗದ ಎಂಥ ಹಿಡಿತವಿತ್ತೆಂದರೆ, ಆ ಕ್ಷೇತ್ರವನ್ನು ಹೆಮ್ಮೆಯಿಂದ ‘ಮುರ್ಷಿದಾಬಾದ್ ನ ವಿಯೆಟ್ನಾಂ’ ಎಂದು ಕರೆಯುತ್ತಿದ್ದರು. ಭಾರಿ ಮತಗಳವಿನ ಹೊರತಾಗಿಯೂ ನಾನು ಕೇವಲ 1,300 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೆ” ಎಂದು ಸ್ಮರಿಸುತ್ತಾರೆ. ಇದಾದ ಐದು ವರ್ಷಗಳ ಬಳಿಕ ಬಹರಂಪುರ್ ಮತದಾರರ ಆಶೀರ್ವಾದದಿಂದ ನಾನು ಗೆಲುವು ಸಾಧಿಸಿದೆ” ಎಂದೂ ಅವರು ನೆನಪಿಸಿಕೊಳ್ಳುತ್ತಾರೆ. “ನಾನು 2024ರ ಲೋಕಸಭಾ ಚುನಾವಣೆಯಲ್ಲಿ ಬಹರಂಪುರ್ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದೆ. ಪಕ್ಷದ ನಾಯಕತ್ವವು ಪಶ್ಚಿ ಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಸೂಚಿಸಿತು. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನದನ್ನು ಒಪ್ಪಿಕೊಂಡೆ. ನಾನೀಗ ಶೂನ್ಯದಿಂದ ಪ್ರಾರಂಭಿಸುತ್ತಿದ್ದೇನೆ” ಎಂದು “ನೀವೇಕೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರಿ?” ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಅಧೀರ್ ರಂಜನ್ ಚೌಧರಿಯವರ ಸ್ಪರ್ಧೆಯ ಬಗ್ಗೆ ವದಂತಿಗಳು ಗರಿಗೆದರಿದ್ದರೂ, ಅವರ ಬೆಂಬಲಿಗರೂ ಉತ್ತಮವಾಗಿ ಸನ್ನದ್ಧರಾಗಿರುವಂತೆ ಕಂಡು ಬರುತ್ತಿದೆ. ಈಗಾಗಲೇ ಅವರ ಕಚೇರಿಯಲ್ಲಿ ಕಟೌಟ್ ಗಳು, ಬ್ಯಾನರ್ ಗಳು, ತೋರಣ ಹಾಗೂ ಭಿತ್ತಿಚಿತ್ರಗಳನ್ನು ಪೇರಿಸಲಾಗಿದೆ. ಅಧೀರ್ ರಂಜನ್ ಚೌಧರಿಯವರ ಸ್ಪರ್ಧೆಯನ್ನು ಕಾಂಗ್ರೆಸ್ ರವಿವಾರ ಅಧಿಕೃತವಾಗಿ ಪ್ರಕಟಿಸಿರುವುದರಿಂದ, ಗೋರಾ ಬಝಾರ್ ಪ್ರದೇಶದಲ್ಲಿರುವ ಅವರ ನಿವಾಸ ಹಾಗೂ ಪದೇ ಪದೇ ‘ಅಧೀರ್ ದಾ ಕಚೇರಿ’ ಎಂದು ಕರೆಯಲಾಗುವ ಪಕ್ಷದ ಕಚೇರಿಯಲ್ಲಿ ಚಟುವಟಿಕೆಗಳು ಶುರುವಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, “ಇದು ನಮಗೆ ಮಾಡು ಇಲ್ಲವೆ ಮಡಿ ಹೋರಾಟ” ಎಂದು ಹೇಳಿದರು. ಅಧೀರ್ ರಂಜನ್ ಚೌಧರಿ ಅವರು ತಮ್ಮ ಮಾಜಿ ಸಹೋದ್ಯೋಗಿ, ಬಹರಂಪುರ್ ನಗರ ಪಾಲಿಕೆಯ ಅಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಾರುಗೋಪಾಲ್ ಮುಖರ್ಜಿ ಹಾಗೂ ಹಾಲಿ ಬಿಜೆಪಿ ಶಾಸಕ ಸುಬ್ರತಾ ಮೈತ್ರರನ್ನು ಈ ಕ್ಷೇತ್ರದಲ್ಲಿ ಎದುರಿಸುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಸಿಪಿಎಂ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿದ್ದರೂ, ಇದುವರೆಗೆ ಅವರ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ದಾವಣಗೆರೆ, ಬಾಗಲಕೋಟೆ ಫಲಿತಾಂಶ : ರಾಜ್ಯದ 4 ಪ್ರಮುಖ ನಾಯಕರಿಗೆ ಪ್ರತಿಷ್ಠೆ, ಸವಾಲಿನ ಅಗ್ನಿಪರೀಕ್ಷೆ
Congress Vs BJP : ಕರ್ನಾಟಕದ ಎರಡು ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ, ನಾಲ್ವರು ರಾಜ್ಯದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಚುನಾವಣೆಯ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಅಂತಹ ಬದಲಾವಣೆಯನ್ನು ತರುವುದಿಲ್ಲವಾದರೂ, ವೈಯಕ್ತಿಕವಾಗಿ ಅಗ್ನಿಪರೀಕ್ಷೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ, ಉಪಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು, ಸವಾಲಾಗಿ ಸ್ವೀಕರಿಸಿದ್ದಾರೆ.
ಕಲಬುರಗಿ| ಕೇಂದ್ರ ಕಾರಾಗೃಹದಲ್ಲಿ ನಶಾಮುಕ್ತ ಭಾರತ ಅಭಿಯಾನ
ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ನಶಾಮುಕ್ತ ಭಾರತ ಅಭಿಯಾನದಡಿ ಕೈದಿಗಳಿಗೆ ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಕೆ. ಶಿವಲೀಲಾ, ಇಂದಿನ ಯುವ ಪೀಳಿಗೆಯು ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ದುರ್ಬಲರಾಗಿ ತಮ್ಮ ಜೊತೆ ಕುಟುಂಬವನ್ನು ಕೂಡ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ. ಆದ್ದರಿಂದ ದುಶ್ಚಟಗಳಿಂದ ಮುಕ್ತರಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ರಾಜೇಶ್ವರಿ, ಎಲ್ಲರಿಗೂ ವ್ಯಸನಮುಕ್ತ ಭಾರತ ಕುರಿತು ಪ್ರತಿಜ್ಞೆಯನ್ನು ಬೋಧಿಸಿದರು. ನಶಾ ಮುಕ್ತ ಮತ್ತು ಸದೃಢ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು ಕರೆ ನೀಡಿದರು. ರಾಕೇಶ್ ಕಾಂಬಳೆ ಅವರು ಮಾತನಾಡಿ, ಈಗಾಗಲೇ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ತಾವು ಇದಕ್ಕೆ ಕೈಜೋಡಿಸಿ ಒಳ್ಳೆಯ ವ್ಯಕ್ತಿತ್ವವನ್ನು ಗುರುತಿಸಿಕೊಂಡು ಆದಷ್ಟು ಬೇಗ ಕಾರಾಗೃಹದಿಂದ ಬಿಡುಗಡೆಯಾಗಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥರಾದ ಕೆ. ಸುರೇಶ್ ಅವರು ವಹಿಸಿದ್ದರು. ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಾಟಗಲ್, ಜಗದೀಶ್ ಪಾಟೀಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೇಸಿಗೆ ತಾಪ: ಕರ್ನಾಟಕದ 9 ಜಿಲ್ಲೆಗಳ ಕಚೇರಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶ; ಮಧ್ಯಾಹ್ನ 1.30ವರೆಗೂ ಮಾತ್ರ ಕೆಲಸ
ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ತಾಪ ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ 1.30 ರವರೆಗೆ ಮಾತ್ರ ಕಚೇರಿ ಕೆಲಸ ನಡೆಯಲಿದೆ. ಯಾವೆಲ್ಲಾ ಜಿಲ್ಲೆಗಳು? ನೌಕರರಿಗೆ ಸರ್ಕಾರದ ಸೂಚನೆ ಏನು? ವಿವರ ಇಲ್ಲಿದೆ.

22 C