SENSEX
NIFTY
GOLD
USD/INR

Weather

28    C
... ...View News by News Source

ರಾಯಚೂರು ಜಿಲ್ಲಾ ಉತ್ಸವದ ಆಹಾರ ಮೇಳ : ಮೊದಲ ದಿನವೇ ತಿಂಡಿ–ತಿನಿಸುಗಳಿಗೆ ಜನರ ದಂಡು

ರಾಯಚೂರು :ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶಾಲವಾಗಿ ಆಯೋಜಿಸಲಾದ ಆಹಾರ ಮೇಳಕ್ಕೆ ಉತ್ಸವದ ಮೊದಲ ದಿನವೇ ಜನರಿಂದ ಭರ್ಜರಿ ಸ್ಪಂದನೆ ದೊರೆತಿತು. ಬೆಳಿಗ್ಗೆಯಿಂದಲೇ ವಿವಿಧ ಬಗೆಯ ತಿಂಡಿ–ತಿನಿಸುಗಳನ್ನು ಸವಿಯಲು ಜನರು ಮಳಿಗೆಗಳತ್ತ ಮುಗಿಬಿದ್ದ ದೃಶ್ಯ ಕಂಡುಬಂದಿತು. ಆಹಾರ ಮೇಳವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರು ವಿವಿಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ತಾಜಾ ಜಿಲೇಬಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮಳಿಗೆಯಲ್ಲಿ ವಿಶೇಷವಾಗಿ ತಯಾರಿಸಲಾದ ಕೇಕ್‌ನ್ನು ಕತ್ತರಿಸಿ ಆಹಾರ ಮೇಳದ ಸಂಭ್ರಮಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಆಗಮಿಸಿದ್ದ ಗಣ್ಯರು ಕೂಡ ತಿಂಡಿ–ತಿನಿಸುಗಳ ರುಚಿಯನ್ನು ಆಸ್ವಾದಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ್ ಕಾಂದು, ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಸ್ಥರು ತಮ್ಮದೇ ಆದ ವಿಶೇಷ ತಿಂಡಿ–ಖಾದ್ಯಗಳನ್ನು ಜನರಿಗೆ ಪರಿಚಯಿಸಿದರು. ಫಾಸ್ಟ್ ಫುಡ್‌ಗಳಿಂದ ಹಿಡಿದು, ಹಣ್ಣುಗಳ ಜ್ಯೂಸ್‌, ಮಂಡಾಳು ಒಗ್ಗರಣೆ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಪಾಪ್ ಕಾರ್ನ್‌, ಗೋಬಿ ಮಂಚೂರಿ, ನೂಡಲ್ಸ್‌, ಆಂಧ್ರಾ ಸ್ವೀಟ್ಸ್‌, ನಾನಾ ಬಗೆಯ ಹಪ್ಪಳ–ಸಂಡಿಗೆಗಳವರೆಗೆ ನಾಡಿನ ನಾನಾ ಭಾಗಗಳ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿದ್ದವು. ಉತ್ಸವದ ಮೊದಲ ದಿನವೇ ಆಹಾರ ಮೇಳಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದು, ರಾಯಚೂರು ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳಿಂದಲೂ ಜನರು ಉತ್ಸವವನ್ನು ಕಣ್ಣಾರೆ ನೋಡಲು ಬಂದಿದ್ದರು. ಹಲವು ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮೇಳಕ್ಕೆ ಭೇಟಿ ನೀಡಿ ತಿಂಡಿ–ತಿನಿಸುಗಳನ್ನು ಸವಿದು ಸಂಭ್ರಮಿಸಿದರು. ಆಹಾರ ಮೇಳದ ಮೊದಲ ದಿನವೇ ಮಳಿಗೆಗಳಲ್ಲಿ ಉತ್ತಮ ವ್ಯಾಪಾರವಾಗಿದ್ದು, ಫೆ.7ರವರೆಗೆ ನಡೆಯುವ ಉತ್ಸವದಲ್ಲಿ ಇನ್ನಷ್ಟು ವ್ಯಾಪಾರ ಮತ್ತು ಲಾಭ ದೊರೆಯುವ ನಿರೀಕ್ಷೆಯಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Feb 2026 4:01 pm

KSRTC: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡ್ರಗ್ಸ್ ಜಾಗೃತಿ ಮೂಡಿಸಲು ಸರ್ಕಾರದಿಂದ ಚಿಂತನೆ

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಡ್ರಗ್ಸ್‌ ಜಾಲ ವಿಸ್ತರಣೆ ಆಗುತ್ತಿದೆ ಎನ್ನುವ ಆರೋಪದ ನಡುವೆ ಕರ್ನಾಟಕ ಸರ್ಕಾರವು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡ್ರಗ್ಸ್ ಜಾಗೃತಿ ಮೂಡಿಸುವ ಚಿಂತನೆ ನಡೆಸಿದೆ. ಈ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಘೋಷಣೆ ಮಾಡಿದೆ. ಡ್ರಗ್ಸ್ ಬಳಕೆಯಿಂದಾಗುವ ದುಷ್ಪರಿಣಾಮ, ಹಾನಿಯ

ಒನ್ ಇ೦ಡಿಯ 5 Feb 2026 3:56 pm

ಶ್ರೀನಿವಾಸ ಜೋಕಟ್ಟೆ ಅವರ 'ಅದೆಲ್ಲಾ ಬಿಟ್ಟು' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ

ಬೆಂಗಳೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ 2024 ರ ಅಂತ್ಯದವರೆಗೆ ಪ್ರಕಟವಾದ ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದು ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಮುಂಬಯಿಯ ಸಾಹಿತಿ‌ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ 'ಅದೆಲ್ಲಾ ಬಿಟ್ಟು' ಕತಾಸಂಕಲನವು ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಸ್ಪರ್ಧೆಗೆ ಬಂದಿದ್ದು, ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು ಎಂದು ಆಡಳಿತಾಧಿಕಾರಿ ಕೆ ಎಂ ಗಾಯಿತ್ರಿ ತಿಳಿಸಿದ್ದಾರೆ. ಶ್ರೀನಿವಾಸ ಜೋಕಟ್ಟೆ ಅವರು ಈಗಾಗಲೇ 46 ಕೃತಿಗಳನ್ನು ಪ್ರಕಟಿಸಿದ್ದು, ಅವರ ಏಳು ಕೃತಿಗಳಿಗೆ ಈ ತನಕ ವಿವಿಧ ಪ್ರಶಸ್ತಿಗಳು ದೊರೆತಿವೆ. ಮಂಗಳೂರು ವಿವಿ ದ್ವಿತೀಯ ಬಿಕಾಂ ಪಠ್ಯದಲ್ಲೂ ಇವರ ಕತೆ ಆಯ್ಕೆಯಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಸೇತು‌ ಪ್ರಶಸ್ತಿ,ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ,, ವಿಕಾಸ ಪುಸ್ತಕ‌ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ , ಕಸಾಪದ ಕೆ ವಾಸುದೇವಾಚಾರ್ ದತ್ತಿ‌ಪ್ರಶಸ್ತಿ ದೊರೆತಿದೆ.

ವಾರ್ತಾ ಭಾರತಿ 5 Feb 2026 3:50 pm

ಕರ್ನಾಟಕ ವಿಧಾನಸಭೆ ಅಧಿವೇಶನ: HD ವಿಡಿಯೋ ಬಂದಿದೆ ನೋಡಿದ್ರಾ ? ವೈರಲ್ ಪೋಸ್ಟ್‌

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಈ ಬಾರಿ ಚರ್ಚೆಗಿಂತಲೂ ಆರ್ಭಟದ್ದೇ ಹೆಚ್ಚು ಸುದ್ದಿಯಾಗಿದೆ. ಕರ್ನಾಟಕ ವಿಧಾನಸಭೆ ಅಧಿವೇಶನ ಹಾಗೂ ರಾಜಕಾರಣಿಗಳ ವರ್ತನೆಯ ಬಗ್ಗೆ ಹವ್ಯಾಸಿ ಬರಹಗಾರ ಬೆಳಗಾವಿ ಪ್ರಕಾಶ್ ಅವರ ಬರಹ ಇಲ್ಲಿದೆ. ಹೌದು ನಿನ್ನೆಯಿಂದ ಒಂದು ಸಖತ್ ಆಗಿರುವ HD ವಿಡಿಯೋ ಬಂದಿದೆ. ತುಂಬಾ ಜನ ನೋಡಿರ್ತೀರ ಕೂಡ. ಅದೇ ಅದೇ ಯಾವ್ದು HD ವಿಡಿಯೋ ಅಂದ್ರೆ

ಒನ್ ಇ೦ಡಿಯ 5 Feb 2026 3:39 pm

ಮೋದಿ ಸರಕಾರದಲ್ಲಿ ಜೈಜವಾನ್‌ ಘೋಷಣೆಗಳೂ ಸಾಯಲಿ ಜವಾನ್‌, ಸಾಯಲಿ kisaan ಗೆ ತಿರುಗಿವೆ: ನಟ ಕಿಶೋರ್‌ ಕುಮಾರ್‌ ಕಳವಳ

ಬೆಂಗಳೂರು: ಲಾಲ್ ಬಹದ್ದೂರ್ ಶಾಸ್ತ್ರಿಯವರ ʼಜೈ ಜವಾನ್ ಜೈ ಕಿಸಾನ್ʼ ಘೋಷಣೆಗೆ ವಿರುದ್ಧವಾಗಿ ಮೋದಿ ಸರಕಾರದ ನೀತಿಗಳು ʼಸಾಯಲಿ ಸೈನಿಕರು, ಸಾಯಲಿ ರೈತರುʼ ಎಂಬ ಅರ್ಥಕ್ಕೆ ತಿರುಗಿವೆ ಎಂದು ನಟ ಕಿಶೋರ್ ಕುಮಾರ್ ಅವರು ಟೀಕಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರೈತ ಹೋರಾಟದ ವೇಳೆ ಹುತಾತ್ಮರಾದ ರೈತರ ಕುರಿತು “ನನಗಾಗಿ ಸತ್ತರೆ ಏನು?” ಎಂದು ಇವರೇ ಕೇಳಿದ್ದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಕುರಿತು ಕಾಶ್ಮೀರದ ದಿವಂಗತ ಗವರ್ನರ್ ಸತ್ಯಪಾಲ್ ಮಲಿಕ್ ಅವರ ಹೇಳಿಕೆಗಳನ್ನು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ. ಅದೇ ಮನುಷ್ಯ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ಮೃತದೇಹಗಳನ್ನು ಮುಂದಿಟ್ಟುಕೊಂಡು ಮತ ಕೇಳಿದ್ದನ್ನು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ. ಯಾರೋ ನಿರ್ಧರಿಸಿದ ಆಪರೇಷನ್ ಸಿಂಧೂರದಂತೆ ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರದ ಕರಾರಿನಂತೆ ಅದರ ಬಗ್ಗೆ ಏನೂ ಗೊತ್ತಿಲ್ಲದ, ಅಧಿಕಾರಕ್ಕಾಗಿ ಯಾವ ನೀಚ ಕೃತ್ಯಕ್ಕೂ ಹೇಸದ ಮೂರ್ಖರ ದಂಡು ಮತ್ತು ಅವರ ಮೂಕ ನಾಯಕನ ಪ್ರತಿಕ್ರಿಯೆಗಳನ್ನು ನೋಡಿದರೆ ಎಪ್ಸ್ಟೀನ್ ಫೈಲ್, ಅದಾನಿ ಕೇಸುಗಳಿಗಾಗಿ ದೇಶದ ಭದ್ರತೆ ಮತ್ತು ದೇಶದ ರೈತರ ಭವಿಷ್ಯ ಮಾರಾಟವಾಗಿದ್ದು ಕಾಕತಾಳೀಯವಲ್ಲ ಎಂದು ಕಿಶೋರ್ ಕುಮಾರ್ ಆರೋಪಿಸಿದ್ದಾರೆ. ಇದಕ್ಕೇ ಘೋಷಿಸಿದ್ದೇನು ‘ಅಬ್ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು. ಅದು ಭಾರತದಲ್ಲಿ ಎಂದು ತಿಳಿಯದ ನಾವೇ ದಡ್ಡರು ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 5 Feb 2026 3:31 pm

Kerala Kumbh Mela: ಪುಟ್ಟ ಬಾಲಕಿಗೆ ನಮಸ್ಕರಿಸಿದ ಹಿರಿಯ ಸನ್ಯಾಸಿ; ಇದುವೇ ನಿಜವಾದ ಸಂಸ್ಕೃತಿ ಎಂದ ನೆಟ್ಟಿಗರು

ಕೇರಳ: ಧರ್ಮ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿರುವ ಕೇರಳದ ಕುಂಭಮೇಳದಲ್ಲಿ (Mahamaham) ನಡೆದ ಘಟನೆಯೊಂದು ನೋಡುಗರ ಕಣ್ಮನ ಸೆಳೆದಿದೆ. ಸಾಮಾನ್ಯವಾಗಿ ಭಕ್ತರು ಸನ್ಯಾಸಿಗಳಿಂದ ಆಶೀರ್ವಾದ ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಹಿರಿಯ ಸನ್ಯಾಸಿ ಪುಟ್ಟ ಬಾಲಕಿಯೊಬ್ಬಳಿಗೆ ನಮಸ್ಕಾರ ಮಾಡಿ ಅವಳಿಂದ ಆಶೀರ್ವಾದ ಪಡೆದು, ಹೆಣ್ಣುಮಗುವಿಗೆ ನೀಡಬೇಕಾದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ವೈರಲ್ ಆದ ಭಾವನಾತ್ಮಕ ಕ್ಷಣ

ಒನ್ ಇ೦ಡಿಯ 5 Feb 2026 3:12 pm

ವಜಾಗೊಂಡಾಗ ಆಕೆ ನಿಂತಿದ್ದು ಯುದ್ದಭೂಮಿಯಲ್ಲಿ, ಕೆಲಸ ಹೋದಾಗ್ಲೂ ಪೆನ್‌ ಇತ್ತು ಕೈಯಲ್ಲಿ; ವಾಷಿಂಗ್ಟನ್‌ ಪೋಸ್ಟ್‌ ನ ಉಕ್ರೇನ್‌ ವರದಿಗಾರ್ತಿಯ ನೋವಿನ ಕಥೆ!

ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ನಡುವೆ ಅಮೆರಿಕಾದ ಖ್ಯಾತ ದಿನಪತ್ರಿಕೆ ದಿ ವಾಷಿಂಗ್ಟನ್ ಪೋಸ್ಟ್‌ ನಲ್ಲಿ ಭಾರಿ ಉದ್ಯೋಗ ಕಡಿತ ನಡೆದಿದೆ. ಇದರಲ್ಲಿ ಹಲವು ವರದಿಗಾರರನ್ನು ವಜಾಗೊಳಿಸಿದ್ದು, ಇದರಲ್ಲಿ ಉಕ್ರೇನ್‌ ನ ಯುದ್ದಭೂಮಿಯಲ್ಲಿ ನಿಂತು ಸುದ್ದಿ ಬಿತ್ತರಿಸುತ್ತಿದ್ದ ಉಕ್ರೇನ್‌ ನ ಅಂತರಾಷ್ಟ್ರೀಯ ವರದಿಗಾರ್ತಿಗೆ ಈ ವಜಾ ಸುದ್ದಿ ಕೇಳಿ ಭರಸಿಡಿಲು ಬಡಿದಂತಹ ಅನುಭವವಾಗಿದೆ. ಈ ಕುರಿತು ಆಕೆ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್‌ ಸದ್ಯ ಭಾರಿ ವೈರಲ್‌ ಆಗುತ್ತಿದ್ದು, ಸುದ್ದಿ ಬಿತ್ತರಿಸಲು, ಅದರಲ್ಲೂ ಕಠಿಣ ಪರಿಸ್ಥಿತಿಗಳಲ್ಲಿ ಸುದ್ದಿ ಹಂಚಿಕೊಳ್ಳಲು ವರದಿಗಾರರು ಎಷ್ಟೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ಅರ್ಥತೋರಿಸುವಂತಿದೆ.

ವಿಜಯ ಕರ್ನಾಟಕ 5 Feb 2026 3:00 pm

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ : ಜೋಶಿ, ಎಚ್ಡಿಕೆ ಸ್ಪಂದನೆ ಸ್ವಾಗತಾರ್ಹ ಎಂದ ಎಂ‌ ಬಿ ಪಾಟೀಲ

ಬೆಂಗಳೂರು- ಪುಣೆ ನಡುವೆ ಹೈಸ್ಪೀಡ್ ಕಾರಿಡಾರ್ ಆರಂಭ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಕುರಿತಾಗಿ ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದರು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್ ಜೋಶಿ ಮತ್ತು ಎಚ್‌ಡಿಕೆ ಸ್ಪಂದನೆ ಸ್ವಾಗತಾರ್ಹ ಎಂದರು. ಈ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 5 Feb 2026 2:32 pm

ರವಿ ಡಿ ಚನ್ನಣ್ಣನವರ್ ಸೇರಿ ಇಬ್ಬರು IPS ಅಧಿಕಾರಿಗಳ ವರ್ಗಾವಣೆ - ರಾಜ್ಯ ಸರ್ಕಾರ ಆದೇಶ; ಪೊಲೀಸ್‌ ಇಲಾಖೆಯಿಂದ ದೂರ!

ಕರ್ನಾಟಕ ಜನಪ್ರಿಯ ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆಯಾಗಿದೆ. ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ​ಗೆ ವರ್ಗಾವಣೆ ಮಾಡಲಾಗಿದೆ. ಹೊಸ ವರ್ಷದ ಬಳಿಕ ರಾಜ್ಯದಲ್ಲಿ ಸಾಲು ಸಾಲಾಗಿ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗುತ್ತಿವೆ.

ವಿಜಯ ಕರ್ನಾಟಕ 5 Feb 2026 2:22 pm

ಆಗಸದಲ್ಲಿ ಚಂದ್ರ ಯಾವಾಗಲೂ ಇರುತ್ತಾನೋ, ಅಥವಾ ನಾವು ನೋಡಿದಾಗ ಮಾತ್ರ ಕಾಣಿಸುತ್ತಾನೋ?

ಮಾತ್ರಾ-ಭೌತಶಾಸ್ತ್ರದಲ್ಲಿ ಏನೋ ಕೊರತೆಯಿದೆ, ನೀಲ್ಸ್ ಬೋರ್ ಹೇಳುವುದರಲ್ಲಿ ಅರ್ಥವಿಲ್ಲ, ಸಾಮಾನ್ಯ ಬುದ್ಧಿವಂತಿಕೆಗೆ ವಿರುದ್ಧವಾಗಿದ್ದು - ಹೀಗೆಂದು ಓತಪ್ರೋತವಾಗಿ ಚಿಂತಿಸುತ್ತಿದ್ದ ಖ್ಯಾತ ವಿಜ್ಞಾನಿ ಜಾನ್ ಕ್ಲಾಸರ್ ಹುಚ್ಚಾಟಕ್ಕೆ ಆತನ ಪಿಎಚ್ಡಿ ಗೈಡ್ ಪ್ರೊಫೆಸರ್ ಪ್ಯಾಟ್ ತಡ್ಡಿಯಸ್ ರೋಸಿಹೋಗಿದ್ದರು. ಆದರೆ, ಇದೇ ಜಾನ್ ಕ್ಲಾಸರ್ ಗೆ 2022ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಪ್ರಾಯೋಗಿಕ ಭೌತಶಾಸ್ತ್ರದ ವಿಜ್ಞಾನಿಯಾಗಿದ್ದ ಕ್ಲಾಸರ್ ಅವರು ಮತ್ತೊಬ್ಬ ವಿಜ್ಞಾನಿ ಸ್ಟುವರ್ಟ್ ಅವರೊಂದಿಗೆ ವಿಜ್ಞಾನಿ ಬೆಲ್ ಅಸಮಾನತೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದ ಮೊದಲ ವಿಜ್ಞಾನಿ.

ವಿಜಯ ಕರ್ನಾಟಕ 5 Feb 2026 2:09 pm

ಕರ್ನಾಟಕದಲ್ಲಿ ಈ ಸರ್ಕಾರಿ ಹುದ್ದೆಗಳ ನೇಮಕಾತಿ ಬೇಗ ಆಗಬೇಕು: ವಿಜಯಪುರ- ಬೆಂಗಳೂರು “ವಿಧಾನಸೌಧ ಚಲೋ” ಯತ್ನಾಳ್ ಎಚ್ಚರಿಕೆ

Karnataka Govt Job: ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಾಗೂ ತಕ್ಷಣ ಜಾರಿಗೆ ತರಬೇಕಾದ ಬೇಡಿಕೆಗಳು ಎಂದು 13 ಅಂಶಗಳನ್ನು ಶಾಸಕ ಬಸನಗೌಡ ಪಾಟೀಲ್ ಅವರು ಹಂಚಿಕೊಂಡಿದ್ದಾರೆ. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 1. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ

ಒನ್ ಇ೦ಡಿಯ 5 Feb 2026 2:04 pm

ಶುಭ ಶುಕ್ರವಾರ ಅಮೆರಿಕ ಮತ್ತು ಇರಾನ್ ನಡುವೆ ನ್ಯೂಕ್ಲಿಯರ್ ಮಾತುಕತೆಗೆ ಮುಹೂರ್ತ ಫಿಕ್ಸ್ | USA Military

ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗುವ ಲಕ್ಷಣ ಈಗ ಗೋಚರಿಸುತ್ತಿದೆ, ಯಾಕೆ ಅಂದ್ರೆ ಪರಮಾಣು ಯುದ್ಧ ಭೀತಿ ಹುಟ್ಟು ಹಾಕಿರುವ ಈ ಇಬ್ಬರ ಜಗಳ ಆದಷ್ಟು ಬೇಗ ಅಂತ್ಯ ಅಗಬೇಕಿದೆ. ಹೀಗಿದ್ದಾಗ ಖುದ್ದು ಮಧ್ಯಪ್ರಾಚ್ಯ ಭಾಗದ ಶ್ರೀಮಂತ ದೇಶಗಳೇ ಮಹತ್ವದ ಹೆಜ್ಜೆ ಇಟ್ಟು ಇಬ್ಬರ ಕಲಹ ತಣ್ಣಗಾಗಿಸಿ, ಶಾಂತಿ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ

ಒನ್ ಇ೦ಡಿಯ 5 Feb 2026 1:59 pm

ಹನಿಮೂನ್ 2.0 ಮರ್ಡರ್ : ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಪತ್ನಿ

ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಹತ್ಯೆಗೈದು ಪೊಲೀಸರ ಅತಿಥಿಯಾಗಿದ್ದಾಳೆ. ಮೊದಲಿಗೆ ಹಿಟ್ ಅಂಡ್ ರನ್ ಅಪಘಾತ ಎಂಬಂತೆ ಬಿಂಬಿಸಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರ, ಈಕೆ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ ನಡೆದಿದೆ.

ವಿಜಯ ಕರ್ನಾಟಕ 5 Feb 2026 1:55 pm

Explained: K-ಕಲ್ಚರ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ʼಗಾಜಿಯಾಬಾದ್‌ನ 3 ಸಿಸ್ಟರ್ಸ್‌ʼ: ಏನಿದು K-ಕಲ್ಚರ್, ಇದು ನಿಜಕ್ಕೂ ಅಪಾಯಕಾರಿಯೇ?

ಕೊರಿಯನ್ ಕಲ್ಚರ್ ಗೀಳಿಗೆ ಬಿದ್ದಿದ್ದ ಗಾಜಿಯಾಬಾದ್‌ ನ ಅಪ್ರಾಪ್ತ ಸಹೋದರಿಯರು ತಮ್ಮ ಗೀಳಿನಿಂದ ಹೊರಬರುವಂತೆ ಪೋಷಕರು ಒತ್ತಾಯಿಸಿದ್ದು, ಅವರ ಹವ್ಯಾಸಳಿಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಆ ಜೀವನದಿಂದ ಹೊರಬರಲು ಇಚ್ಛಿಸದೇ ತಮ್ಮ ಜೀವನವನ್ನೇ ಅಂತ್ಯಗೊಳಿಸಕೊಂಡ ಭಯಾನಕ ಘಟನೆ ನಡೆದಿದೆ. ಈ ದುರಂತದಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿರುವುದು ಈ ಬಾಲಲಕಿಯರಿಗಿದ್ದ ಕೆ-ಕಲ್ಚರ್‌ ನ ಗೀಳು. ಆದರೆ, ಈ ಕೆ-ಕಲ್ಚರ್‌ ಎಂದರೇನು? ಇದು ಅವರ ಬದುಕಿನ ಬಂಡಿಯನ್ನೇ ನಿಲ್ಲಸಿದ್ದು ಹೇಗೆ? ಇದರ ಪ್ರಭಾವ ಅತಿಯಾದರೆ ಆಗುವುದು ಏನು ಎಂಬ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 5 Feb 2026 1:54 pm

ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾಲು: ದಕ್ಷಿಣ ರಾಜ್ಯಗಳ ನಿಯಂತ್ರಿಸುವ ಸುಲಭ ತಂತ್ರ: ರಾಜಾರಾಂ ತಲ್ಲೂರು ಬರಹ

Central Budget 2026: ಕೇಂದ್ರ ಸರ್ಕಾರದ 2026ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದ ತೆರಿಗೆ ಪಾಲು ಹೆಚ್ಚಳವಾಗಿದೆ ಎನ್ನುವ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಂಸದರು ಸಹ ಕರ್ನಾಟಕದ ತೆರಿಗೆ ಪಾಲು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಪಾಲು ಕಿಂಚಿತ್ ಏರಿದ್ದು ಹೌದು ಆದರೆ...: ಹಿರಿಯ ಪತ್ರಕರ್ತ ರಾಜಾರಾಂ

ಒನ್ ಇ೦ಡಿಯ 5 Feb 2026 1:52 pm

ಬೆಂಗಳೂರು ಹುಬ್ಬಳ್ಳಿ ರೈಲ್ವೇ ಮಾರ್ಗ ಕಾಮಗಾರಿ: ವಂದೇ ಭಾರತ್, ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿ 7 ರೈಲು ರದ್ದು! ಯಾವಾಗ?

ಕರ್ನಾಟಕದ ಪ್ರಮುಖ ರೈಲು ಮಾರ್ಗವಾದ ಬೆಂಗಳೂರು ಹುಬ್ಬಳ್ಳಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ವಂದೇ ಭಾರತ್, ಜನಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನು ಸೇರಿ 7 ರೈಲುಗಳನ್ನು ರದ್ದು ಮಾಡಲಾಗುತ್ತಿದೆ. 11 ವಿವಿಧ ರೈಲುಗಳು ಮಾರ್ಗ ಬದಲಾವಣೆ, ತಡವಾಗಿ ಸಂಚಾರ ಮಾಡಲಿವೆ. ಪ್ರಯಾಣಿಕರು ಈ ಬಗ್ಗೆ ನಿಗವಹಿಸಬೇಕು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ ಕರ್ನಾಟಕ 5 Feb 2026 1:47 pm

ಟಿ20 ವಿಶ್ವಕಪ್ : ಭಾರತ Vs ಪಾಕ್ ಫೈಟ್ ರದ್ದು - ಪಾಕ್ ಪಿಎಂ ಅಂತಿಮ ನಿರ್ಧಾರದ ಹಿಂದಿನ ’Force Majeure’ ಮಸಲತ್ತೇನು?

India Vs Pakistan Match : ಭಾರತದ ವಿರುದ್ದ ಟಿ20 ಪಂದ್ಯದಲ್ಲಿ ಆಡದ ನಿರ್ಧಾರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಪಾಕಿಸ್ತಾನ ನಿಲ್ಲಲಿದೆ ಎನ್ನುವ ಸರ್ಕಾರದ ನಿಲುವಿನಲ್ಲಿ ಯಾವುದೇ ರಾಜಿಯಿಲ್ಲ ಎಂದು ಪಾಕ್ ಪ್ರಧಾನಿಗಳು ಹೇಳಿದ್ದಾರೆ. ಹಾಗಾಗಿ, ಫೆಬ್ರವರಿ ಹದಿನೈದರ ಭಾರತ - ಪಾಕ್ ಪಂದ್ಯ ಬಹುತೇಕ ರದ್ದಾದಂತೆ.

ವಿಜಯ ಕರ್ನಾಟಕ 5 Feb 2026 1:36 pm

ಮತ್ತೆ ಮುಂದೂಡಿದ ಸದನ; ರಾಷ್ಟ್ರಪತಿ ಭಾಷಣಕ್ಕೆ ಪ್ರಧಾನಿಯವರ ಪ್ರತಿಕ್ರಿಯೆ ಇಲ್ಲದೆ ವಂದನಾ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರ

ಹೊಸದಿಲ್ಲಿ: ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆಗಳು ಮತ್ತು ಗದ್ದಲದ ನಡುವೆ ಲೋಕಸಭೆಯ ಕಲಾಪ ಗುರುವಾರ ಹಲವು ಬಾರಿ ಮುಂದೂಡಲ್ಪಟ್ಟಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸದನದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪರಿಣಾಮ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ಒಂದು ಗಂಟೆಯ ವಿರಾಮದ ಬಳಿಕ ಮಧ್ಯಾಹ್ನ 12ಕ್ಕೆ ಸದನ ಮತ್ತೆ ಸೇರಿದ್ದರೂ ಗದ್ದಲ ಶಮನವಾಗಲಿಲ್ಲ. ಈ ವೇಳೆ ಕಾಗದಗಳನ್ನು ಮೇಜಿನ ಮೇಲೆ ಇಡುವ ಪ್ರಕ್ರಿಯೆಗೆ ಮಾತ್ರ ಅವಕಾಶ ನೀಡಲಾಯಿತು. ಬಳಿಕವೂ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮತ್ತೆ ಮುಂದೂಡಿದರು. ಗದ್ದಲದ ನಡುವೆಯೇ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿತು. ವಿರೋಧ ಪಕ್ಷದ ಸದಸ್ಯರು ಮಂಡಿಸಿದ್ದ ತಿದ್ದುಪಡಿಗಳನ್ನು ಮತಕ್ಕೆ ಹಾಕಿದರೂ ಅವು ತಿರಸ್ಕೃತವಾದವು. ಜನವರಿ 28ರಂದು ರಾಷ್ಟ್ರಪತಿಗಳು ನೀಡಿದ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಪ್ರಧಾನಿಯವರ ಉತ್ತರ ಇಲ್ಲದೇ ಧನ್ಯವಾದ ನಿರ್ಣಯ ಅಂಗೀಕಾರವಾದುದು ಗಮನಾರ್ಹವಾಗಿದೆ. ಪ್ರತಿಭಟನೆಗಳು ಮುಂದುವರಿದ ಹಿನ್ನೆಲೆ ಸ್ಪೀಕರ್ ಮತ್ತೆ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು.

ವಾರ್ತಾ ಭಾರತಿ 5 Feb 2026 12:53 pm

ಐಷಾರಾಮಿ ಮನೆಗೆ ಪಿಎಂಎವೈಜಿ ಯೋಜನೆಯಡಿ ಮನೆಗೆ ಕೊಟ್ಟ ಅನುದಾನ ವಾಪಸ್‌

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಬಡವರಿಗೆ ಸೂರು ನಿರ್ಮಾಣಕ್ಕೆ ಅನುಕೂಲವಾಗಲಿ ಎಂದು ರೂಪಿಸಿರುವ ಯೋಜನೆ. ಆದರೆ ಇಲ್ಲಿ ಮನೆಗೆ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಪಿಎಂಎವೈಜಿ ಯೋಜನೆಯಡಿ ಮನೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ದೂರು ದಾಖಲಾದ ಹಿನ್ನಲೆಯಲ್ಲಿ ಮಾಲೀಕರು ಅನುದಾನವನ್ನು ಬಡ್ಡಿ ಸಹಿತ ಸರಕಾರಕ್ಕೆ ವಾಪಸ್‌ ನೀಡಿದ್ದಾರೆ.

ವಿಜಯ ಕರ್ನಾಟಕ 5 Feb 2026 12:51 pm

ಕೋಟಿ ರೂ. ಮಂಜೂರಾದರೂ ಸೌಲಭ್ಯ ಶೂನ್ಯ

ಬೆಳಕು, ರಸ್ತೆ, ಶೌಚಾಲಯವಿಲ್ಲ; ಯಲಬುರ್ಗಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ

ವಾರ್ತಾ ಭಾರತಿ 5 Feb 2026 12:49 pm

ಮಕ್ಕಳು ಸಹಜವಾಗಿ ಬೆಳೆಯಲಿ

ಅಪ್ಪ ಅಮ್ಮನಿಗಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಸತ್ಯ ಅದಕ್ಕಿಂತಲೂ ದೊಡ್ಡದು ಎಂದೂ, ಅದನ್ನೇ ಜೀವನ ಮೌಲ್ಯವನ್ನಾಗಿ ಉಳಿಸಿಕೊಂಡು ಬಾಳಿ ಬದುಕಿದ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಿದ ಜೀವನ ಪಾಠವೆಂದರೆ ಅವರನ್ನು ಹೊರತುಪಡಿಸಿಯೂ ಅವರ ಮಕ್ಕಳು ಹೇಗೆ ಬದುಕಬೇಕೆಂಬುದನ್ನು. ಜೀವನ ಎಂದರೆ ನಿರಂತರವಾಗಿ ಕಲಿಯುವುದು ಎಂದು ಹಿರಿಯರಿಗೆ ಗೊತ್ತಿತ್ತು. ಯಾರು ಕಲಿಯಲಾರರೋ ಅವರಿಗೆ ಕಲಿಸುವ ಅಗತ್ಯವನ್ನು, ಅವಶ್ಯವನ್ನು ತಾವು ಕಲ್ಪಿಸಬೇಕು, ಕಲಿಸಬೇಕು. ಹೇಗೆಂದರೆ, ಕೊರತೆ ಮತ್ತು ಕಷ್ಟವನ್ನು ಅಪರೋಕ್ಷವಾಗಿ ನೀಡುವ ಮೂಲಕ. ಮಕ್ಕಳನ್ನು ಲಾಲಿಸುವ, ಪಾಲಿಸುವ, ಮುದ್ದಿಸುವ, ಪೋಷಿಸುವ ಪ್ರಧಾನ ಜೀವನಿಷ್ಠೆ ಪ್ರಕ್ರಿಯೆಯಲ್ಲಿ ವಸ್ತುನಿಷ್ಠವಾಗಿ, ಭಾವನಾತ್ಮಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಹಿರಿಯರು ನಿಷ್ಠೆಯನ್ನು ಉಳಿಸಿಕೊಂಡರೇ ವಿನಾ ಯಾವ ಶ್ರಮವನ್ನೂ ಪ್ರತ್ಯೇಕವಾಗಿ ಪಟ್ಟವರಲ್ಲ. ಮಕ್ಕಳನ್ನು ಮಕ್ಕಳಂತೆಯೇ ಕಂಡು ಬೆಳೆಸಿದರು. ಮಕ್ಕಳ ಸ್ವಾತಂತ್ರ್ಯಕ್ಕೆ ಯಾವ ತೊಂದರೆಯೂ ತಮ್ಮಿಂದಾಗದಂತೆ ಬದುಕನ್ನು ರೂಢಿಸಿಕೊಂಡರು. ಯಾವ ಕೊರತೆಯೂ ಇಲ್ಲದೆ ಮಕ್ಕಳನ್ನು ಬೆಳೆಸಬಾರದೆಂಬ ಪ್ರಜ್ಞೆಯೇ ಅವರಿಲ್ಲದೆಯೂ ಅವರ ಮಕ್ಕಳು ಬದುಕುವುದನ್ನು ಕಲಿತಿದ್ದರು. ಅದನ್ನೇ ತಮ್ಮ ಮಕ್ಕಳಿಗೂ ಕಲಿಸಿದರು. ಬದುಕೆಂದರೆ ಹೀಗೆ ಎಂದು ಅಪರೋಕ್ಷವಾಗಿ ಮಕ್ಕಳಿಗೆ ಹೇಳಿಕೊಟ್ಟರು. ಹೆತ್ತವರು ತಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಶಕ್ತಿಯೆಂದರೆ ತಮ್ಮನ್ನು ಅಗಲಿಯೂ ತಮ್ಮ ಮಕ್ಕಳು ಬದುಕುವುದನ್ನು ಕಲಿಯುವುದು. ಹಿರಿಯರಿಗೆ ಗೊತ್ತಿತ್ತು; ಕಷ್ಟ ಕೊರತೆಗಳು ನಮ್ಮನ್ನು ಬೆಳೆಸಿದರೆ, ಕರುಣೆ ಮತ್ತು ದುಃಖ ಮಾನವೀಯಗೊಳಿಸುವುದೆಂದು! ಇಂದಿನ ಪೋಷಕರಲ್ಲಿ ಬಹುತೇಕರು ತಮ್ಮ ಮಕ್ಕಳಿಗೆ ತೋರುವ ಅತಿಯಾದ ಪ್ರೀತಿ, ಸ್ವಾತಂತ್ರ್ಯ, ಸವಲತ್ತು ಸೌಲಭ್ಯ, ಎಚ್ಚರ, ಅತಿಯಾದ ನಂಬಿಕೆ, ಮಕ್ಕಳನ್ನು ಪ್ರಶ್ನಿಸದ ಧೋರಣೆ, ಆ ಮೂಲಕ ಮಕ್ಕಳಲ್ಲಿ ಹುಟ್ಟಿಕೊಳ್ಳುವ ಸ್ವೇಚ್ಛೆ- ಇವೆಲ್ಲ ಅವರನ್ನು ವೈಚಾರಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕವಾಗಿ ಸಾಮಾಜಿಕವಾಗಿ ಪ್ರಬುದ್ಧಗೊಳಿಸದೆ ಅವರಲ್ಲಿ ಅಸಹನೀಯ ಹಠ, ಮೊಂಡುತನ, ಅಗೌರವ, ದಾರ್ಷ್ಟ್ಯ, ಕೀಳರಿಮೆ, ಮೇಲರಿಮೆ, ತಿರಸ್ಕಾರ, ಗಾಸಿಪಿಂಗ್, ಅಪಹಾಸ್ಯ, ಹಣದ ಸೊಕ್ಕು, ದುರುಳುತನದ ಅಭಿವ್ಯಕ್ತಿ ಹೆಚ್ಚುತ್ತಿದೆ. ಇದಕ್ಕೆಲ್ಲ ಪೋಷಕರಲ್ಲದೆ ಮತ್ಯಾರು ಕಾರಣವಾಗುತ್ತಾರೆ? ವಯೋಗುಣಕ್ಕನುಗುಣವಾಗಿ ಅವರಲ್ಲಿ ಬೆಳೆಯಬೇಕಾದ ಅರಿವಿನ ಬಗ್ಗೆ ಪೋಷಕರಲ್ಲಿಯೇ ಸರಿಯಾದ ಜ್ಞಾನವಿಲ್ಲ. ಪೋಷಕರ ದುಡಿಮೆ, ಸಾಮಾಜಿಕ ಸ್ಥಾನಮಾನ, ಅಸ್ತಿತ್ವ ಮತ್ತು ಒಟ್ಟು ಬದುಕಿನ ಇತಿಮಿತಿಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಹೆತ್ತವರು ಮೂಡಿಸುವುದು ಸಾಧ್ಯವಾಗದಾಗ ಮಕ್ಕಳು ಮಕ್ಕಳಾಗಿ ಇರುವುದಿಲ್ಲ. ಅವರ ನಡವಳಿಕೆ ಅಥವಾ ವರ್ತನೆ ಎಲ್ಲ ಸಂದರ್ಭಗಳಲ್ಲೂ ದಾರಿ ತಪ್ಪುತ್ತದೆ. ಮುಖ್ಯವಾಗಿ, ಕಲಿಯುವ ಹಂತದಲ್ಲಿ ದಾರಿ ತಪ್ಪುತ್ತದೆ. ಕೊನೆಗೆ ಶಾಲಾ ಕಾಲೇಜುಗಳನ್ನು ದೂರುವುದು ಮಾಮೂಲಿಯಾಗಿ ಬಿಟ್ಟಿದೆ ಈ ದಿನಮಾನಗಳಲ್ಲಿ! ನೆನಪಿಡಬೇಕಾದ ಸಂಗತಿಯೇನೆಂದರೆ, ಕಷ್ಟಗಳನ್ನು ಎದುರಿಸಿ ಗೆಲ್ಲುವುದರಲ್ಲಿ, ನೋವನ್ನು ನುಂಗಿ ನಗುವನ್ನು ತಂದುಕೊಳ್ಳುವುದರಲ್ಲಿಯೇ ಬದುಕಿನ ಥ್ರಿಲ್ ಇರುವುದು! ಮಕ್ಕಳಿಗೆ ಇದನ್ನು ಕಲಿಸಬೇಕಿದೆ. ಶ್ರಮಪಡದೆ ಎಲ್ಲವೂ ತನಗೇ ದಕ್ಕಲೆಂಬ ಹಂಬಲದಿಂದ ನಮ್ಮ ಮಕ್ಕಳು ಬೆಳೆಯುವುದನ್ನು ತಪ್ಪಿಸಬೇಕಿದೆ. ಕೊರತೆಯನ್ನು ತುಂಬಿಸಿಕೊಳ್ಳುವ ದಾರಿಯನ್ನು, ಸವಾಲನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ಕೊಡಬೇಕಿದೆ. ಮನೆಯ ಸದಸ್ಯರನ್ನು, ಬಂಧು ಬಾಂಧವರನ್ನು, ಆತ್ಮೀಯರನ್ನು, ನೆರೆಹೊರೆಯವರನ್ನು, ಶಿಕ್ಷಕರನ್ನು, ಹಿರಿಯರನ್ನು ಗೌರವಿಸುವ ಪಾಠ ಮನೆಯಿಂದಲೇ ಆಗಬೇಕಿದೆ. ಶಾಲೆಗಳಲ್ಲಿ ಇದಕ್ಕೆ ಅವಕಾಶಗಳು ಯಥೇಚ್ಛವಾಗಿ ಇರುವುದಾದರೂ ಸಮಯ ಅಷ್ಟಾಗಿ ಇರುವುದಿಲ್ಲ. ಮೇಲಾಗಿ, ಮಕ್ಕಳ ವರ್ತನೆಯಲ್ಲಿ, ನಡವಳಿಕೆಯಲ್ಲಿ ಏನೇ ಉದ್ಧಟತನವಿದ್ದರೂ ಶಾಲೆಗಳಲ್ಲಿ ಮಕ್ಕಳನ್ನು ತಿದ್ದಿ ಬುದ್ಧಿಯ ಮಾತನ್ನು ಹೇಳುವಂತಿಲ್ಲ. ದುರ್ವರ್ತನೆ ದುಃಶೀಲಗಳು ಮಿತಿಮೀರಿದರೂ ಮಕ್ಕಳನ್ನು ಸಣ್ಣದಾಗಿ ಶಿಕ್ಷಿಸುವಂತೆಯೂ ಇಲ್ಲ. ಶಿಕ್ಷಕರನ್ನು ಅತಿಕೆಟ್ಟ ಪದಗಳಿಂದ ಏಕವಚನದಲ್ಲಿ ಆಡಿಕೊಂಡರೂ ಅಣಕಿಸಿದರೂ ಪೆಟ್ಟು ಕೊಟ್ಟು ಅವರನ್ನು ತಿದ್ದುವಂತಿಲ್ಲ. ಹಾಗೆ ಮಾಡಿದರೆ ಪೋಷಕರು ಮಕ್ಕಳ ಆಯೋಗಕ್ಕೆ ದೂರು ಕೊಡುತ್ತಾರೆ. ಆಮೇಲೆ ಶಾಲೆ ಪೋಷಕ-ಸಮಾಜದ ಸಂಬಂಧದಲ್ಲಿ ಶೈಥಿಲ್ಯತೆ ಹುಟ್ಟಿಕೊಳ್ಳುತ್ತದೆ. ಇಂಜಿನಿಯರೋ, ಡಾಕ್ಟರೋ ಆಗಬೇಕೆಂಬ ಹಂಬಲದಲ್ಲಿ ಅಗತ್ಯಕ್ಕೂ ಮೀರಿ ಹಣವನ್ನು ವ್ಯಯಿಸಿ ವಿದ್ಯೆಯನ್ನು ಕೊಡಿಸುವ ಪೋಷಕರು ಮಕ್ಕಳನ್ನು ಸರಿಯಾಗಿ ಬೆಳೆಸಿದ್ದೇವೆಂದು ಅಹಂ ಪಡುತ್ತಾರೆ. ಹಾಗಾಗದಿದ್ದಾಗ ನೊಂದುಕೊಳ್ಳುತ್ತಾರೆ. ಆದರೆ, ಮಕ್ಕಳನ್ನು ಜೀವನಮೌಲ್ಯಗಳಿಗೆ ನಿಷ್ಠರಾಗುವಂತೆ ಬೆಳೆಸಬೇಕೆಂಬ ಪ್ರಜ್ಞೆ ಹುಟ್ಟುವುದೇ ಇಲ್ಲ. ಇಂಥದ್ದೇ ಉದ್ಯೋಗವನ್ನು ಮಾಡಬೇಕೆಂದು ತಾಕೀತು ಮಾಡುವ ಪೋಷಕರು ಮಕ್ಕಳನ್ನು ಸರಿಯಾಗಿ ಬೆಳೆಸಿದ್ದೇವೆಂಬ ದೊಡ್ಡಸ್ಥಿಕೆಯ ಭಾವದಲ್ಲಿ ಜೀವನಮೌಲ್ಯಗಳನ್ನು ಕಲಿಸುವುದನ್ನು ಮರೆಯುತ್ತಾರೆ. ಹೆತ್ತವರು, ಸಂಬಂಧಿಕರು, ಗೆಳೆಯರು, ಶಿಕ್ಷಕರು, ಸಮಾಜವನ್ನು ಅರ್ಥೈಸಿಕೊಳ್ಳುವ ಬಗೆಯಲ್ಲಿ ದೊಡ್ಡವರು ತುಳಿದ ಹಾದಿಯನ್ನು ಮಕ್ಕಳು ಅನುಕರಿಸುತ್ತಾರೆ, ಅನುಸರಿಸುತ್ತಾರೆಯೇ ವಿನಾ ಹೇಳಿದ್ದನ್ನಲ್ಲ! ಶ್ರೀಮಂತಿಕೆಯ ದರ್ಪದಿಂದಾಗುವ ಕೆಡುಕುಗಳಿಂದ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಬೇಕೆಂಬ ಪ್ರಜ್ಞೆ ಹೆತ್ತವರಲ್ಲಿರಬೇಕು. ಮಕ್ಕಳು ಏನೇ ಆದರೂ ಸರಿಮಾಡುತ್ತೇನೆಂಬ ಉದ್ಧಟತನ, ಧೋರಣೆಯಿಂದ ಹೆತ್ತವರು ಹೊರಬರಬೇಕು. ಅನುಚಿತವಾಗಿ ವರ್ತಿಸಿದಾಗ ಶಾಲೆಯಲ್ಲಿ ತಿದ್ದಿದಾಗ ವಿರೋಧಿಸುವಾಗಲೂ ಹಣದಿಂದ ಎಲ್ಲವನ್ನೂ ಸರಿಮಾಡುತ್ತೇನೆಂಬ ದಾರ್ಷ್ಟ್ಯದಿಂದ ಕಳಚಿಕೊಳ್ಳಬೇಕು. ಅಂಕಗಳಿಗಾಗಿ ಮಕ್ಕಳನ್ನು ಕಾಡಬಾರದೆಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಸೋಲನ್ನು, ಅವಮಾನವನ್ನು, ಕಷ್ಟವನ್ನು ಎದುರಿಸುವ ಮನೋಸ್ಥೈರ್ಯವನ್ನು ಎಳವೆಯಲ್ಲೇ ಬೆಳೆಸಬೇಕು. ಶ್ರಮಗೌರವ, ಸಹನೆಯನ್ನು ಬೆಳೆಸಿಕೊಳ್ಳುವಂತೆ ದೊಡ್ಡವರು ನಡೆನುಡಿಯಲ್ಲಿ ಅಭಿವ್ಯಕ್ತಿಸಬೇಕು. ಅನಾಗರಿಕ, ಅಸಂಸ್ಕೃತಿಯ ರೂಢಿಗತ ಮೌಲ್ಯಗಳಿಂದ ಮಕ್ಕಳನ್ನು ದೂರವಿರುವಂತೆ ಮಕ್ಕಳನ್ನು ಸರಿಯಾಗಿ ಅಲ್ಲ, ಸಹಜವಾಗಿ ಬೆಳೆಸಬೇಕು; ನಮ್ಮ ಹಿರಿಯರು ನಮ್ಮನ್ನು ಬೆಳೆಸಿದಂತೆ!

ವಾರ್ತಾ ಭಾರತಿ 5 Feb 2026 12:37 pm

ಅರ್ಧಕ್ಕೆ ನಿಂತ ಕೆಂಭಾವಿ-ಹುಣಸಗಿ ರಸ್ತೆ ಕಾಮಗಾರಿ

ಧೂಳಲ್ಲೇ ದಿನನಿತ್ಯದ ಬದುಕು, ಜನರ ಪರದಾಟ.!

ವಾರ್ತಾ ಭಾರತಿ 5 Feb 2026 12:35 pm

ಹೆಚ್ಚುತ್ತಿರುವ ಹೆದ್ದಾರಿ ದರೋಡೆ, ಕಳ್ಳತನ

ಗಡಿಭಾಗದಲ್ಲಿ ಸಿಸಿ ಕ್ಯಾಮರಾ, ಚೆಕ್‌ಪೋಸ್ಟ್ ಅಳವಡಿಕೆಗೆ ಆಗ್ರಹ

ವಾರ್ತಾ ಭಾರತಿ 5 Feb 2026 12:27 pm

ಪ್ರಚೋದನೆ, ವ್ಯಕ್ತಿನಿಂದನೆ ಹಾಗೂ ಅಸಭ್ಯ ಪದಗಳ ಬಳಕೆ: ಸದನದ ಗೌರವಕ್ಕೆ ಚ್ಯುತಿ ತಂದಿದೆ ಘಟನೆ, ಜನಪ್ರತಿನಿಧಿಗಳು ಹಿಂಗ್ಯಾಕೆ

ಪ್ರಚೋದನೆ, ವ್ಯಕ್ತಿನಿಂದನೆ ಹಾಗೂ ಅಸಭ್ಯ ಪದಗಳ ಬಳಕೆಗೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಗಿದೆ. ಬುಧವಾರ ಸದನದಲ್ಲಿ ಬಿಜೆಪಿ ಸದಸ್ಯರ ಪ್ರಚೋದನೆಗೆ ರೊಚ್ಚಿಗೆದ್ದ ಶಿವಲಿಂಗೇಗೌಡ ಕೆಂಡಾಮಂಡಲರಾಗಿದ್ದರು. ಅವರು ಬಳಕೆ ಮಾಡಿದ ಪದಗಳು ವೈರಲ್ ಆಗುತ್ತಿವೆ. ತಾಳ್ಮೆ ಕಳೆದುಕೊಂಡ ಶಿವಲಿಂಗೇಗೌಡರು ಬಿಜೆಪಿಯ ಸದಸ್ಯರಾದ ಶರಣು ಸಲಗಾರ್ ಮತ್ತು ವೇದವ್ಯಾಸ್ ಕಾಮತ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜನಪ್ರತಿನಿಧಿಗಳ ಇಂತಹ ನಡವಳಿಕೆ ಎಷ್ಟರ ಮಟ್ಟಿಗೆ ಸರಿ? ಸದನದ ಗೌರವಕ್ಕೆ ಚ್ಯುತಿ ತರದಂತೆ ಜನಪ್ರತಿನಿಧಿಗಳು ನಡೆದುಕೊಳ್ಳಬೇಕಾದ ಅಗತ್ಯತೆ ಇದೆ.

ವಿಜಯ ಕರ್ನಾಟಕ 5 Feb 2026 12:20 pm

ಲೋಕಸಭೆಯಲ್ಲಿ ಭಾಷಣ ಮಾಡದ ನರೇಂದ್ರ ಮೋದಿ; ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲ!

ಸಂಸತ್ತಿನ ಬಜೆಟ್‌ ಅಧಿವೇಶನ ತೀವ್ರ ಗದ್ದಲದಲ್ಲಿ ಮುಳುಗಿದ್ದು, ಲೋಕಸಭೆ ಮತ್ತು ರಾಜ್ಯಸಭೆಗಳೆರೆಡೂ ಪ್ರತಿಪಕ್ಷಗಳ ಆಕ್ರೋಶಕ್ಕೆ ಸಾಕ್ಷಿಯಾಗಿವೆ. ನಿನ್ನೆ (ಫೆ. 4-ಬುಧವಾರ) ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ಮೋದಿ ಅವರಿಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಂದು (ಫೆ.5-ಗುರುವಾರ) ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಬೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಭಾಷಣ ಮಾಡಲು ಬಿಡದಿರುವುದನ್ನು ಪ್ರಶ್ನಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 12:19 pm

ದಖನ್‌ನಲ್ಲಿ ಚಿಶ್ತಿಯಾ ಕಂಪು ಹರಡಿದ ಖ್ವಾಜಾ ಬಂದಾ ನವಾಝ್ (ಭಾಗ-2)

ಸಾಹಿತ್ಯಕ ಕೊಡುಗೆಗಳು

ವಾರ್ತಾ ಭಾರತಿ 5 Feb 2026 12:18 pm

Maharashtra | 33 ಗಂಟೆಗಳ ಟ್ರಾಫಿಕ್‌ ಜಾಮ್ ಬಳಿಕ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ವೇ ಸಂಚಾರ ಪುನರಾರಂಭ

ಗ್ಯಾಸ್ ಟ್ಯಾಂಕರ್ ತೆರವು; ಖಂಡಾಲಾ ಘಾಟ್‌ ವಿಭಾಗದಲ್ಲಿ ದಟ್ಟಣೆ ಸಡಿಲ

ವಾರ್ತಾ ಭಾರತಿ 5 Feb 2026 12:18 pm

ವಿಷ ಸಸ್ಯಗಳು: ಇರಲಿ ಎಚ್ಚರ

ಪ್ರಕೃತಿ ವಿಸ್ಮಯ

ವಾರ್ತಾ ಭಾರತಿ 5 Feb 2026 12:14 pm

ತಿಳುವಳಿಕೆಯ ಬೆಳಕನ್ನು ನಂದಿಸುವ ಕೋಮುವಾದಿಗಳು

ಹುಲಿಕಲ್ ನಟರಾಜ್‌ರವರ ಕಾರ್ಯಕ್ರಮಗಳು ಕೂಡಾ ಮೂಢನಂಬಿಕೆಗಳ, ಧಾರ್ಮಿಕ ಅಂಧಶ್ರದ್ಧೆಯ ವಿರುದ್ಧ ತಿಳುವಳಿಕೆಯನ್ನು ಹರಡುವ ವಿಶಾಲ ಭೂಮಿಕೆಯನ್ನು ನಿರ್ಮಿಸಿರುವುದರಿಂದ ಅವರ ವಿರುದ್ಧ ಶಿಕ್ಷಾರ್ಹ ಅಪರಾಧದ ಆರೋಪ ಹೊರಿಸುವುದು ಕಾನೂನಿಗೆ ವಿರೋಧವಾಗಿದೆ ಎಂದು ತೀರ್ಪು ನೀಡಿ ಅವರ ಮೇಲಿನ ಮೊಕದ್ದಮೆಯನ್ನು ಅಂದು ಹೈಕೋರ್ಟ್ ವಜಾಗೊಳಿಸಿತು. ತಮ್ಮನ್ನು ತಾವು ಹಿಂದುತ್ವವಾದಿಗಳೆಂದು ಕರೆದುಕೊಳ್ಳುವ ಕೆಲವು ಸಂಘಟನೆಗಳ ಕಾರ್ಯಕರ್ತರು ಕಲಾವಿದರ ಚಿತ್ರಪ್ರದರ್ಶನಗಳಿಗೆ ಅಡ್ಡಿ ಪಡಿಸುವುದು, ಪತ್ರಿಕಾ ಕಚೇರಿಗಳಿಗೆ ನುಗ್ಗಿ ದಾಂಧಲೆ ನಡೆಸುವುದು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಸುಟ್ಟು ಹಾಕುವುದು, ಆಟದ ಮೈದಾನವನ್ನು ಹಾಳುಗೆಡುವುದು, ತಮ್ಮನ್ನು ವಿರೋಧಿಸುವವರ ಮೇಲೆ ಹಲ್ಲೆ ಮಾಡುವುದು ಇತ್ಯಾದಿ ಕುಕೃತ್ಯಗಳನ್ನು ಕೆಲವಾರು ವರ್ಷಗಳಿಂದ ನಡೆಸುತ್ತಿದ್ದಾರೆ. ಕಳೆದ ಕ್ರಿಸ್ಮಮಸ್ ಹಬ್ಬದಂದು ದಿಲ್ಲಿಯಲ್ಲಿ ಪ್ರಧಾನ ಮಂತ್ರಿಗಳು ಇಗರ್ಜಿಯಲ್ಲಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರೆ, ಅವರ ಮಾತೃ ಸಂಘಟನೆಯ ಪರಿವಾರದ ಕಾಲಾಳುಗಳು ದೇಶದ ಹಲವೆಡೆ ಇಗರ್ಜಿಗಳಲ್ಲಿ, ಶಾಲೆಗಳಲ್ಲಿ, ಹಬ್ಬ ಆಚರಿಸುತ್ತಿದ್ದ ಕ್ರೈಸ್ತರ ಮೇಲೆ ದಾಳಿ ನಡೆಸುತ್ತಿದ್ದರು. ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಎಂ.ಎಫ್. ಹುಸೇನ್ ಅವರು ಬಿಡಿಸಿದ ಚಿತ್ರಗಳು ತಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂಬ ನೆಪವನ್ನೊಡ್ಡಿದ ಮತಾಂಧ ಸಂಘಟನೆಗಳು ಅವರಿಗೆ ಪ್ರಾಣ ಬೆದರಿಕೆ ಹಾಕಿ ಅವರ ವಿರುದ್ಧ ಭಾರತದ ಹಲವು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಿದ ಪರಿಣಾಮ ಸತತ ಕಿರುಕುಳ ಮತ್ತು ಅಪಪ್ರಚಾರಗಳಿಂದ ತೀರ ನೊಂದುಕೊಂಡ ಹುಸೇನ್ ಭಾರತವನ್ನು ಬಿಟ್ಟು ಸ್ವಯಂ ದೇಶಭ್ರಷ್ಟರಾಗಿ ಬೇರೆ ದೇಶದಲ್ಲಿ ನೆಲೆಸಬೇಕಾಗಿ ಬಂದಿತು. ಭಾರತದ ಖ್ಯಾತಿಯನ್ನು ಜಗತ್ತಿನಲ್ಲೆಲ್ಲ ಪಸರಿಸಿದ ಈ ಮಹಾನ್ ಕಲಾವಿದ 2011ರಲ್ಲಿ ಹೊರದೇಶದಲ್ಲಿ ಮೃತರಾದದ್ದು ನಮ್ಮ ಇತಿಹಾಸದ ದುರಂತ. ಕರ್ನಾಟಕದ ಓರ್ವ ವಿಚಾರವಾದಿಗೆ ಕೂಡ ಸಂಘ ಪರಿವಾರದ ಸಂಘಟನೆಯೊಂದು 2006ರಲ್ಲಿ ಕಿರುಕುಳ ನೀಡುವ ದುರುದ್ದೇಶದಿಂದ ಮೊಕದ್ದಮೆ ಹೊಡಿದ ಪ್ರಕರಣದ ವಿವರಗಳು ಈ ರೀತಿ ಇವೆ. ನಾಡಿನಾದ್ಯಂತ ಪವಾಡಗಳ ರಹಸ್ಯವನ್ನು ಬಯಲು ಮಾಡುವ ಕಾರ್ಯಕ್ರಮಗಳ ಮೂಲಕ, ಧಾರ್ಮಿಕ ಮೂಢ ನಂಬಿಕೆಗಳು, ವಾಮಾಚಾರ ಮತ್ತು ನಕಲಿ ದೇವಮಾನವರ ವಿರುದ್ಧ ನಿರಂತರವಾಗಿ ಜನಜಾಗೃತಿ ಮೂಡಿಸುತ್ತಿರುವ ಹುಲಿಕಲ್ ನಟರಾಜ್, ವೃತ್ತಿಯಲ್ಲಿ ಓರ್ವ ಅಧ್ಯಾಪಕ. ಅವರ ಕಾರ್ಯಕ್ರಮಗಳು ದೂರದರ್ಶನದಲ್ಲಿ ಪ್ರಸಾರಗೊಂಡು ಜನಪ್ರಿಯವಾಗಿವೆ. ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು ಜನ ಸಾಮಾನ್ಯರ ನಡುವೆ ರೂಢಿಯಲ್ಲಿರುವ ವಿಚಿತ್ರ ಆಚರಣೆಗಳ ನಿಜ ಕಾರಣಗಳನ್ನು ಮನೋಜ್ಞವಾಗಿ ವಿವರಿಸುತ್ತದೆ. ರಾಷ್ಟ್ರಕವಿ ಕುವೆಂಪುರವರ ಜನ್ಮದಿನ ಹಾಗೂ ವೈಚಾರಿಕ ದಿನಾಚರಣೆ ಅಂಗವಾಗಿ 2025ರ ಡಿಸೆಂಬರ್ 28ರಿಂದ 30ರ ತನಕ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಯಾದಗಿರಿಯಲ್ಲಿ ನಡೆಯಿತು. ಈ ಸಮ್ಮೇಳನದ ರೂವಾರಿಯಾದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಾಂಸ್ಕೃತಿಕ ಅಧ್ಯಕ್ಷರು ಡಾ. ಹುಲಿಕಲ್ ನಟರಾಜ್. 26-2-2006ರಲ್ಲಿ ಅವರು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಈ ಪವಾಡ ರಹಸ್ಯ ಬಯಲು ಮಾಡುವ ಕಾರ್ಯಕ್ರಮವನ್ನು ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಜನತಾ ಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಹಲವು ಸಾರ್ವಜನಿಕರು ಭಾಗವಹಿಸಿದ್ದರು. ಮರುದಿನ ಬಜರಂಗದಳದ ಕಾರ್ಯಕರ್ತರೊಬ್ಬರು ಮಡಿಕೇರಿ ಪೊಲೀಸರಿಗೆ ಒಂದು ದೂರನ್ನು ಸಲ್ಲಿಸಿದರು. ತಾನು ಹಿಂದಿನ ದಿನ ರಾತ್ರಿ ಟಿ.ವಿ. ನೋಡುತ್ತಿ ದ್ದಾಗ ಒಂದು ವಾಹಿನಿಯಲ್ಲಿ ನಟರಾಜ್‌ರವರ ಸಂದರ್ಶನವಿತ್ತು. ಅದರಲ್ಲಿ ಅವರು ಮಾತನಾಡುತ್ತ ತಲಕಾವೇರಿಯ ತೀರ್ಥೋದ್ಭವವನ್ನು ತಾನು ಬೇಕಾದರೂ ಸೃಷ್ಟಿಸುವುದಾಗಿಯೂ, ಅಯ್ಯಪ್ಪಸ್ವಾಮಿ ದೇವಸ್ಥಾನದ ಗರುಡಗಂಬದ ಮೇಲೆ ಗರುಡ ಪಕ್ಷಿ ಹಾರಾಡುವುದೆಂಬ ನಂಬಿಕೆ ಸುಳ್ಳು, ಅದೇ ರೀತಿ ಶಬರಿಮಲೆಯಲ್ಲಿ ಮಕರ ಸಂಕ್ರಾತಿಯಂದು ಕಾಣುವ ಬೆಳಕು ಕೂಡಾ ದೈವ ಸೃಷ್ಟಿಯಲ್ಲ, ಎಂದು ಹೇಳಿರುವುದಾಗಿಯೂ ಮತ್ತು ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆ ಆಚರಣೆ ಮತ್ತು ಸಂಪ್ರದಾಯಗಳಿಗೆ ಆಘಾತವುಂಟಾಗಿದೆ ಎನ್ನುವುದು ಈ ದೂರಿನ ಸಾರಾಂಶ. ಈ ದೂರನ್ನು ಸ್ವೀಕರಿಸಿದ ಮಡಿಕೇರಿ ಪೋಲೀಸ್ ಠಾಣಾಧಿಕಾರಿಯು ಅದನ್ನು ನೋಂದಾಯಿಸಿಕೊಂಡು ತನಿಖೆಯನ್ನು ಪೂರೈಸಿ ದೂರಿನಲ್ಲಿ ಸತ್ಯಾಂಶವಿದೆಯೆಂದು ಆರೋಪಿಸಿ ಹುಲಿಕಲ್ ನಟರಾಜ್‌ರವರ ವಿರುದ್ಧ ಭಾರತ ದಂಡ ಸಂಹಿತೆಯ 298ನೇ ವಿಧಿಯನ್ವಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದರು. ನ್ಯಾಯಾಧೀಶರು, ನಟರಾಜ್‌ರವರ ವಿರುದ್ಧ ಬಂಧನದ ವಾರಂಟನ್ನು ಜಾರಿಗೊಳಿಸಿದರು. ಯಾವುದೇ ವ್ಯಕ್ತಿ ಇನ್ನೊಬ್ಬನ ಧಾರ್ಮಿಕ ಭಾವನೆಗಳಿಗೆ ಆಘಾತ ಮಾಡುವ ದುರುದ್ದೇಶದಿಂದ ಯಾವುದೇ ಹೇಳಿಕೆ ನೀಡಿದರೆ, ಲೇಖನ ಪ್ರಕಟಿಸಿದರೆ ಅಥವಾ ಇನ್ಯಾವುದೇ ರೀತಿಯ ಕೃತ್ಯವನ್ನು ಎಸಗಿದಲ್ಲಿ ಅದು ಭಾರತ ದಂಡ ಸಂಹಿತೆಯ 298ನೇ ವಿಧಿಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಅಪರಾಧ ಸಾಬೀತಾದರೆ ಆರೋಪಿಗೆ ಒಂದು ವರ್ಷದ ತನಕ ಜೈಲು ಶಿಕ್ಷೆ ನೀಡುವ ಮತ್ತು ದಂಡ ವಿಧಿಸುವ ಅಧಿಕಾರ, ನ್ಯಾಯಾಲಯಕ್ಕಿದೆ. ಈಗ ಕಾನೂನು ಬದಲಾಗಿದೆ. ಈಗ ಭಾರತೀಯ ನ್ಯಾಯ ಸಂಹಿತೆ ಎಂಬ ಕಾನೂನಿನಲ್ಲಿ ಇದೇ ವಿಧಿಯನ್ನು ಹಾಗೆಯೇ ಭಟ್ಟಿ ಇಳಿಸಿದ್ದಾರೆ. ಆದರೆ ಪೊಲೀಸರು ಆರೋಪಿಸಿದಂತೆ ತಾನು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಯಾವುದೇ ಕೃತ್ಯವನ್ನು ಎಸಗಿಲ್ಲ. ತನ್ನ ಮೇಲಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಹುಲಿಕಲ್ ನಟರಾಜ್‌ರವರು ಕರ್ನಾಟಕ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್‌ರವರು (ಈಗ ನಿವೃತ್ತ) 2010ರಲ್ಲಿ ನೀಡಿದ ತೀರ್ಪು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಸಂವಿಧಾನದ ಉದಾತ್ತ ಆಶಯದ ಬೆಳಕಿನಲ್ಲಿ ಯಾವುದು ಮೂಢನಂಬಿಕೆ, ಯಾವುದು ವೈಜ್ಞಾನಿಕ ಮನೋಭಾವ ಎಂಬುದರ ವ್ಯತ್ಯಾಸವನ್ನು ಅವರು ಈ ತೀರ್ಪಿನಲ್ಲಿ ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ‘‘ಸಾಮಾನ್ಯ ನಂಬಿಕೆ ಮತ್ತು ಶ್ರದ್ಧೆ ಹಾಗೂ ಮೂಢ ನಂಬಿಕೆ ಮತ್ತು ಕುರುಡು ವಿಶ್ವಾಸ ಇವುಗಳ ನಡುವಿನ ವ್ಯತ್ಯಾಸ ಬಹು ತೆಳುವಾಗಿದೆ. ಜನತೆಯಲ್ಲಿ ಆತ್ಮ ಸಂತೃಪ್ತಿಯನ್ನೂ, ಆತ್ಮ ವಿಶ್ವಾಸವನ್ನೂ ಮೂಡಿಸುವ ಅಹಿಂಸಾತ್ಮಕ ನಂಬಿಕೆ ಮತ್ತು ವಿಶ್ವಾಸಗಳಿವೆ. ಆದೇ ರೀತಿ ವಿವೇಕ, ಜ್ಞಾನ ಅಥವಾ ಅನುಭವದ ಆಧಾರವಿಲ್ಲದ ಕುರುಡು ನಂಬಿಕೆ ಅಥವಾ ಶ್ರದ್ಧೆಯನ್ನು ಮೂಢನಂಬಿಕೆ ಎನ್ನುತ್ತಾರೆ. ಭಾರತದಲ್ಲಿ ಹೆಚ್ಚಿನವರು ಮೂಢನಂಬಿಕೆಗಳಿಗೇ ಶರಣಾದವರು. ಅವರ ದಿನ ನಿತ್ಯದ ಜೀವನವನ್ನು ಇವುಗಳು ನಿಯಂತ್ರಿಸುತ್ತವೆ. ಈ ಮೂಢನಂಬಿಕೆಗಳನ್ನು ಹೋಗಲಾಡಿಸುವುದೇ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಕರ್ತವ್ಯವಾಗಿದೆ. ಇಂಥ ನಂಬಿಕೆಗಳನ್ನು ಪೋಷಿಸುವ ಆಚರಣೆಗಳನ್ನು ಟೀಕಿಸಲು ಆತನಿಗೆ ಸ್ವಾತಂತ್ರ್ಯವಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಸಂವಿಧಾನ ಅಂಗೀಕರಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿದೆ. ಪ್ರತಿಯೊಬ್ಬ ನಾಗರಿಕನಲ್ಲೂ ಮಾನವತಾವಾದದ ನೆಲೆಗಟ್ಟಿನ ಮೇಲೆ ವಿವೇಚಿಸುವ, ಅನ್ವೇಷಿಸುವ ದಿಟ್ಟತನವನ್ನು ಬೆಳೆಸುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ವಿಕಾಸಗೊಳಿಸುವುದು ಸಾಂವಿಧಾನಿಕ ಕರ್ತವ್ಯ. ಇದು ಭಾರತದ ಸಂವಿಧಾನ ನಿರ್ದೇಶಿಸುವ ನಿರ್ದೇಶನ ತತ್ವದ ಒಂದು ಮುಖ್ಯ ಅಂಶವಾಗಿದೆ. ಈ ಕರ್ತವ್ಯವನ್ನು ಸಮರ್ಥವಾಗಿ, ನಿರ್ಭೀತವಾಗಿ, ಯಶಸ್ವಿಯಾಗಿ ನಿರ್ವಹಿಸಲು ಅಗತ್ಯವಿರುವ ರಕ್ಷಣೆಯನ್ನು ತನ್ನ ಪ್ರಜೆಗಳಿಗೆ ನೀಡುವುದು ರಾಜ್ಯದ ಕರ್ತವ್ಯ. ಸಾಂಪ್ರದಾಯಿಕವಾದ ವಿಚಾರಹೀನ ಆಚರಣೆಗಳನ್ನು ತೊಡೆದು ಹಾಕುವಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮಹತ್ತರ ಸಾಧನವಾಗಿದೆ. ವರ್ಗ ಪಕ್ಷಪಾತ, ಗುಲಾಮಗಿರಿ, ಜೀತ ದುಡಿತ, ಅಸ್ಪಶ್ಯತೆ, ಲಿಂಗ ತಾರತಮ್ಯ ಮತ್ತು ಜನಾಂಗೀಯ ಭೇದವನ್ನು ನಿರ್ಮೂಲಗೊಳಿಸಲು ಅಗತ್ಯವಾದ ಪೂರಕ ಭೂಮಿಕೆಯನ್ನು ಈ ದೃಷ್ಟಿಕೋನ ನಿರ್ಮಿಸುತ್ತದೆ. ಸತ್ಯಾನ್ವೇಷಣೆಯ ಸದುದ್ದೇಶದಿಂದ ಮೂಢ ನಂಬಿಕೆಗಳನ್ನು ಪ್ರಶ್ನಿಸುವ ಭಾರತದ ಪರಂಪರೆ ಧೀಮಂತವಾಗಿದೆ. ನೀರೀಶ್ವರ ಚಾರ್ವಾಕ ಎಂದು ಕರೆಯಲ್ಪಡುವ ದೇವಗುರು ಬೃಹಸ್ಪತಿ, ಗೌತಮ ಬುದ್ಧ ಮತ್ತು ಹನ್ನೆರಡನೇ ಶತಮಾನದ ಕರ್ನಾಟಕದ ಸಾಮಾಜಿಕ ಸುಧಾರಕ ಬಸವೇಶ್ವರ - ಇವರುಗಳೆಲ್ಲ ರೂಢಿಗತವಾದ ನಂಬಿಕೆಗಳನ್ನು ಪ್ರಶ್ನಿಸುವ ಮೂಲಕ ವಿಚಾರವಾದವನ್ನು ಬೆಳೆಸಿದ್ದಾರೆ. ಜ್ಞಾನ ಅಥವಾ ಸಾಮಾನ್ಯ ವಿವೇಕ ಎನ್ನುವುದು ಆಕಾಶದಿಂದ ಉದುರುವುದಲ್ಲ ಅಥವಾ ಅವು ಮೊದಲೇ ತಯಾರಾದ ಸರಕುಗಳಲ್ಲ. ಮಾನವನ ಅನುಭವವು ವರ್ತಮಾನದ ಅವಶ್ಯಕತೆಗಳೊಂದಿಗೆ ಮಿಳಿತವಾದಾಗ ಸಮಕಾಲೀನ ಜ್ಞಾನ ಅಂಕುರವಾಗುತ್ತದೆ. ವಿಮರ್ಶೆಯ ಅಗ್ನಿ ಪರೀಕ್ಷೆಯ ಮೂಲಕ ಪ್ರಗತಿಶೀಲ ವೈಚಾರಿಕತೆ ಮೂಡಿ ಬರುತ್ತದೆ. ಸಾಮಾನ್ಯ ನಂಬಿಕೆ ಮತ್ತು ಶ್ರದ್ಧೆ ಮತ್ತು ಕುರುಡು ನಂಬಿಕೆ ಮತ್ತು ಅಂಧ ಶ್ರದ್ಧೆಯ ನಡುವಿನ ಗೆರೆ ಬಹಳ ತೆಳುವಾಗಿದೆ. ಯಾವುದೇ ಜ್ಞಾನ, ವಿವೇಚನೆ ಆಥವಾ ಅನುಭವದ ಆಧಾರವಲ್ಲದ ನಂಬಿಕೆಗಳಾಗಿವೆ. ಮೂಢ ನಂಬಿಕೆಗಳು ಜಗತ್ತಿನಾದ್ಯಂತ ಜನ ಜೀವನದ ಎಲ್ಲ ಮಜಲುಗಳಲ್ಲಿ, ಎಲ್ಲ ಚಟುವಟಿಕೆಗಳಲ್ಲಿ ಹಾಸು ಹೊಕ್ಕಿವೆ. ಭಾರತೀಯರೂ ಸೇರಿದಂತೆ ಪ್ರಪಂಚದಾದ್ಯಂತ ಹೆಚ್ಚಿನವರು ಮೂಢ ನಂಬಿಕೆಗಳ ದಾಸರಾಗಿದ್ದಾರೆ. ಮೇಲರಿಮೆ, ಜಾತಿ, ಪಂಥ ಮತ್ತು ವರ್ಣಾಧಾರಿತ ಅಸಮಾನತೆಗಳನ್ನು ಈ ಮೂಢ ನಂಬಿಕೆಗಳು ಶಾಶ್ವತಗೊಳಿಸುತ್ತವೆ. ಭಾರತದ ಸಂವಿಧಾನದ ಪರಿಚ್ಛೇದ 51ಎ ಪ್ರಕಾರ ವೈಜ್ಞಾನಿಕ ಮನೋಭಾವ, ಮಾನವೀಯತೆ, ಅನ್ವೇಷಿಸುವ ಪ್ರವೃತ್ತಿ ಮತ್ತು ಸುಧಾರಣಾ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ’’ ಎಂದು ತೀರ್ಪಿನಲ್ಲಿ ನ್ಯಾಯ ಮೂರ್ತಿಗಳು ವಿವರಿಸಿದರು. ಆರೋಪಣಾ ಪತ್ರವನ್ನು ದಾಖಲಿಸಿದ ತನಿಖಾಧಿಕಾರಿಯ ಕಾರ್ಯ ವೈಖರಿಯನ್ನು ಟೀಕಿಸಿದ ನ್ಯಾಯಾಲಯ ದಿನಾಂಕ 4-6-2010ರಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿಯನ್ನು ನ್ಯಾಯಾಲಯಕ್ಕೆ ಖುದ್ದು ಕರೆಸಿ ಪೊಲೀಸ್ ಅಧಿಕಾರಿಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸೃಷ್ಟೀಕರಣ ಕೇಳಿದಾಗ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಒಪ್ಪಿಕೊಂಡರು ಮತ್ತು ದಿನಾಂಕ 6-7-2010ರಂದು ಆ ಅಧಿಕಾರಿಯ ವೇತನದ ಇನ್‌ಕ್ರಿಮೆಂಟನ್ನು ಒಂದು ವರ್ಷದ ಅವಧಿಗೆ ಕಡಿತಗೊಳಿಸಿರುವುದಾಗಿ ತಿಳಿಸಿದರು. ತನ್ನ ಮುಂದಿರುವ ಪ್ರಕರಣದಲ್ಲಿ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಯಾಂತ್ರಿಕವಾಗಿ ಹುಲಿಕಲ್ ನಟರಾಜ್‌ರವರಿಗೆ ವಾರಂಟ್ ಕಳುಹಿಸಿದ ವಿಚಾರಣಾ ನ್ಯಾಯಾಲಯದ ನಡೆಗೂ ಹೈ ಕೋರ್ಟ್ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು (ಇಂಡಿಯನ್ ಲಾ ರಿಪೋರ್ಟ್ ಕರ್ನಾಟಕ 2011 ಪುಟ 4469). ಹುಲಿಕಲ್ ನಟರಾಜ್‌ರವರ ಕಾರ್ಯಕ್ರಮಗಳು ಕೂಡಾ ಮೂಢನಂಬಿಕೆಗಳ, ಧಾರ್ಮಿಕ ಅಂಧಶ್ರದ್ಧೆಯ ವಿರುದ್ಧ ತಿಳುವಳಿಕೆಯನ್ನು ಹರಡುವ ವಿಶಾಲ ಭೂಮಿಕೆಯನ್ನು ನಿರ್ಮಿಸಿರುವುದರಿಂದ ಅವರ ವಿರುದ್ಧ ಶಿಕ್ಷಾರ್ಹ ಅಪರಾಧದ ಆರೋಪ ಹೊರಿಸುವುದು ಕಾನೂನಿಗೆ ವಿರೋಧವಾಗಿದೆ ಎಂದು ತೀರ್ಪು ನೀಡಿ ಅವರ ಮೇಲಿನ ಮೊಕದ್ದಮೆಯನ್ನು ಅಂದು ಹೈಕೋರ್ಟ್ ವಜಾಗೊಳಿಸಿತು.

ವಾರ್ತಾ ಭಾರತಿ 5 Feb 2026 12:05 pm

ದಿಲ್ಲಿಯಲ್ಲಿ ಖಲಿಸ್ತಾನಿ ಸ್ಲಿಪರ್‌ ಸೆಲ್‌ನ 2 ಉಗ್ರರ ಬಂಧನ: ಗಣತಂತ್ರ ದಿನದ ಮುನ್ನ ಅಶಾಂತಿ ಸೃಷ್ಟಿಗೆ ಪ್ರಚೋದನಕಾರಿ ಬರಹ, ಕೆನಡಾದಲ್ಲಿದ್ದ ಪನ್ನುನ್ ಪಿತೂರಿ!

ಗಣರಾಜ್ಯೋತ್ಸವದ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವ ಸಲುವಾಗಿ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್‌ಗೆ ಸಂಬಂಧಿಸಿದ ಸ್ಲೀಪರ್ ಸೆಲ್‌ನ 2 ಖಲೀಸ್ತಾನಿ ಉಗ್ರರು ನಗರದ 2 ಪ್ರತ್ಯೇಕ ಕಡೆಗಳಲ್ಲಿ ಪ್ರಚೋದನಾಕರಿ ಬರಹಗಳು ಸೇರಿದಂತೆ ಖಲಿಸ್ತಾನಿ ಜಿಂದಾಬದ್‌ ಎಂದು ಬರೆದಿದ್ದರು. ಸದ್ಯ ಈ 2 ಉಗ್ರರನ್ನು ಬಂಧಿಸಲಾಗಿದ್ದು, ಹಲವು ಕರಾಳ ಸತ್ಯಗಳು ಹೊರಬಿದ್ದಿವೆ. ಈ ಕುರಿತ ವರದಿ ಇಲ್ಲಿದೆ...

ವಿಜಯ ಕರ್ನಾಟಕ 5 Feb 2026 11:58 am

ಔರಾದ್ | ಶಿಕ್ಷಕನ ಅಮಾನತು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಔರಾದ್ : ತಾಲೂಕಿನ ಜಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಮರಾಠಿ ಮಾಧ್ಯಮ) ವಿದ್ಯಾರ್ಥಿಗಳು, ಶಿಕ್ಷಕ ನಜೀರ್ ಅಹ್ಮದ್ ಅವರ ಅಮಾನತನ್ನು ವಾಪಸ್ ಪಡೆದು ಅವರನ್ನೇ ಪುನರ್‌ ನಿಯುಕ್ತಿ ಮಾಡಬೇಕು ಎಂದು ಆಗ್ರಹಿಸಿ, ಬೆಳಿಗ್ಗೆ ಶಾಲೆಗೆ ಬೀಗ ಹಾಕಿ ಶಾಲೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕ ನಜೀರ್ ಅಹ್ಮದ್ ಅವರು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಅಮಾನತು ಮಾಡಿರುವುದು ಅನ್ಯಾಯ. ಕೂಡಲೇ ಅವರನ್ನು ನಮ್ಮ ಶಾಲೆಗೆ ಕರೆಸಬೇಕು. ನಮಗೆ ನಜೀರ್ ಅಹ್ಮದ್ ಸರ್ ಅವರೇ ಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ. ಘಟನೆ ಹಿನ್ನೆಲೆ :  ಫೆ.3ರಂದು ಮಂಗಳವಾರ, ಶಾಲೆಯ ಖಾಯಂ ಮುಖ್ಯಗುರುಗಳು ರಜೆಯಲ್ಲಿದ್ದ ಕಾರಣ ನಜೀರ್ ಅಹ್ಮದ್ ಅವರು ಪ್ರಭಾರಿ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದೇ ದಿನ ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ವಾರ್ತಾ ಭಾರತಿ 5 Feb 2026 11:54 am

ಮಂಜನಾಡಿ | ಯೆನೆಪೋಯ ಆಯುಷ್ ಕ್ಯಾಂಪಸ್ ನಲ್ಲಿ ಉಚಿತ ಯೋಗ , ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ಉಳ್ಳಾಲ: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮವನ್ನು ಫೆ. 6ರಿಂದ ಫೆ. 25ರವರೆಗೆ ಮಂಜನಾಡಿಯ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಯೆನೆಪೋಯ ನ್ಯಾಚುರೋಪತಿ ಅಂಡ್ ಯೋಗ ಸೈನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಪುನೀತ್ ತಿಳಿಸಿದ್ದಾರೆ. ತೊಕ್ಕೊಟ್ಟು ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸಾ ವಿಧಾನಗಳು, ಆಹಾರ ನಿಯಂತ್ರಣ ಮತ್ತು ಜೀವನಶೈಲಿ ಪರಿವರ್ತನೆಯ ಮೂಲಕ ಸ್ಥೂಲಕಾಯದ ಸಮಗ್ರ, ಸುರಕ್ಷಿತ ಹಾಗೂ ಸಹಜ ನಿರ್ವಹಣೆಯನ್ನು ಪರಿಣಿತ ವೈದ್ಯರ ಮಾರ್ಗದರ್ಶನದಲ್ಲಿ ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿ ಪ್ರಮಾಣಾಧಾರಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳು, ಔಷಧ ರಹಿತ ಹಾಗೂ ಸಹಜ ತೂಕ ನಿಯಂತ್ರಣ ಕ್ರಮಗಳು ಮತ್ತು ಅನುಭವಿ ಹಾಗೂ ಅರ್ಹ ವೈದ್ಯರಿಂದ ಮಾರ್ಗದರ್ಶನ ಲಭ್ಯವಾಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮವು ಸ್ಥೂಲಕಾಯದ ಸಹಜ ಹಾಗೂ ಸಮಗ್ರ ನಿರ್ವಹಣೆಯನ್ನು ಬಯಸುವ ಎಲ್ಲ ಆಸಕ್ತರಿಗೆ ಮುಕ್ತವಾಗಿದೆ. ಆಸನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಆಸಕ್ತರು ತ್ವರಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಫೆಬ್ರವರಿ 21 ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಂಗವಾಗಿ, ಸ್ಥೂಲಕಾಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಫೆಬ್ರವರಿ 14ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಅದೇ ರೀತಿ, ಯೆನೆಪೋಯ ಪ್ರಕೃತಿ ಚಿಕಿತ್ಸೆ ವಿದ್ಯಾರ್ಥಿಗಳಿಗಾಗಿ ಸ್ಥೂಲಕಾಯದ ತಡೆ ಮತ್ತು ನಿರ್ವಹಣೆ ಕುರಿತು ವಿಶೇಷ ಅತಿಥಿ ಉಪನ್ಯಾಸವನ್ನು ಸಹ ಆಯೋಜಿಸಲಾಗಿದ್ದು, ಈ ಉಪನ್ಯಾಸದಲ್ಲಿ ಸ್ಥೂಲಕಾಯದ ವೈಜ್ಞಾನಿಕ ಹಿನ್ನೆಲೆ, ಜೀವನಶೈಲಿ ಪರಿವರ್ತನೆ ಮತ್ತು ಯೋಗ–ಪ್ರಕೃತಿ ಚಿಕಿತ್ಸೆಯ ಪಾತ್ರ ಕುರಿತು ವಿವರವಾಗಿ ಚರ್ಚಿಸಲಾಗುತ್ತದೆ ಎಂದರು. ಇದರ ಜೊತೆಗೆ, ಸಾಮಾನ್ಯ ಜನರಿಗಾಗಿ ಸ್ಥೂಲಕಾಯ ಹಾಗೂ ಅದರೊಂದಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಅವುಗಳ ತಡೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕಿ ಡಾ. ಪದ್ಮಶ್ರೀ, ಡಾ. ವಜ್ರಾಕ್ಷಿ ಹಾಗೂ ಕ್ಯಾಂಪ್ ಮುಖ್ಯಸ್ಥ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 11:54 am

ಮೈಸೂರು ಮಹಾನಗರ ಪಾಲಿಕೆ ಆಸ್ತಿ ಸಂಗ್ರಹದಲ್ಲಿ ಭಾರಿ ಸುಧಾರಣೆ ; ಫಲಿಸಿದ ಅಧಿಕಾರಿಗಳ ತಂತ್ರ

ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ನೂತನ ಐಡಿಯಾದಿಂದ ಮೈಸೂರು ಮಹಾನಗರ ಪಾಲಿಕೆ ಆಸ್ತಿ ಸಂಗ್ರಹದಲ್ಲಿ ಭಾರಿ ಸುಧಾರಣೆ ಕಂಡು ಬಂದಿದೆ. 2025ರ ವರ್ಷಾಂತ್ಯಕ್ಕೆ ಶೇ. 88 ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ. ಭಾರಿ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ಪಾಲಿಕೆಯ ವೆಬ್‌ಸೈಟಿನಲ್ಲಿ ಪ್ರಕಟಗೊಳಿಸಲಾಗಿತ್ತು.

ವಿಜಯ ಕರ್ನಾಟಕ 5 Feb 2026 11:52 am

ಕೈಗೆಟುಕದ, ಊಹೆಗೂ ನಿಲುಕದ ಚಿನಿವಾರ ಪೇಟೆ | ಮತ್ತೆ ಕುಸಿದ ಚಿನ್ನ, ಬೆಳ್ಳಿ; ಮಂಗಳೂರಿನಲ್ಲಿ ಇಂದಿನ ದರ ಎಷ್ಟು?

ಕಳೆದ ಶುಕ್ರವಾರದಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಬುಧವಾರ ಸ್ವಲ್ಪ ಏರಿಕೆಯಾಗಿದ್ದರೂ, ಇದೀಗ ಗುರುವಾರ ಮತ್ತೆ ಕುಸಿತ ಕಂಡಿದೆ.  ಮಂಗಳವಾರ ಹಾಗೂ ಬುಧವಾರ ಚೇತರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಮತ್ತೆ ಕುಸಿಯುವ ಆತಂಕ ಉಂಟುಮಾಡಿವೆ. ಕಳೆದ ಶುಕ್ರವಾರದಿಂದ ಸತತ ಕುಸಿತದಲ್ಲಿದ್ದ ಚಿನ್ನದ ದರ ಬುಧವಾರ ಸ್ವಲ್ಪ ಏರಿಕೆಯಾಗಿದ್ದರೂ, ಇದೀಗ ಗುರುವಾರ ಮತ್ತೆ ಇಳಿಕೆಗೆ ತುತ್ತಾಗಿದೆ. ಇಂದು ದಿಲ್ಲಿ ಮತ್ತು ಮುಂಬೈನಲ್ಲಿ ಶುದ್ಧ ಚಿನ್ನದ ದರ ಪ್ರತಿ ಗ್ರಾಂಗೆ 502 ರೂ. ಕುಸಿದಿದೆ. ಆಭರಣ ಚಿನ್ನದ ದರ 460 ರೂ. ಇಳಿಕೆಯಾಗಿದೆ. ಗುರುವಾರ ಬೆಳ್ಳಿ ಬೆಲೆಗಳೂ ಪ್ರತಿ ಗ್ರಾಂಗೆ 20 ರೂ.ರಷ್ಟು ಕುಸಿದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ದೇಶೀಯ ಮಾರುಕಟ್ಟೆಯಲ್ಲೂ ಪ್ರತಿಫಲಿಸಿದೆ. ಕಳೆದ ವಾರಾಂತ್ಯದಲ್ಲಿಯೂ ಚಿನ್ನ–ಬೆಳ್ಳಿ ಬೆಲೆಗಳು ತೀವ್ರ ಕುಸಿತ ಕಂಡಿದ್ದವು. ಇದೀಗ ಈ ವಾರಾಂತ್ಯದಲ್ಲೂ ಅಂತಹದೇ ಒತ್ತಡ ಎದುರಾಗುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟು? ಗುರುವಾರ, ಫೆ. 5ರಂದು ಬೆಳಿಗ್ಗೆ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,442 ರೂ. (-502 ರೂ.)ಕ್ಕೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,155 ರೂ. (-460 ರೂ.) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,582 ರೂ. (-376 ರೂ.)ಕ್ಕೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಬುಧವಾರ ಏರಿಕೆ ಕಂಡಿದ್ದ ಬೆಳ್ಳಿ ಗುರುವಾರ ಮಾರುಕಟ್ಟೆ ತೆರೆದ ತಕ್ಷಣ ಕುಸಿತ ಕಂಡಿದೆ. ಇಂದು ಗ್ರಾಂಗೆ 20 ರೂ.ರಷ್ಟು ಕುಸಿದ ಬೆಳ್ಳಿ ಕೆಜಿಗೆ 3,00,000 ರೂ.ಕ್ಕೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು): ದಿಲ್ಲಿ: 24 ಕ್ಯಾರೆಟ್ 15,457 ರೂ. (-502 ರೂ.), 22 ಕ್ಯಾರೆಟ್ 14,170 ರೂ. (-460 ರೂ.) ಮುಂಬೈ: 24 ಕ್ಯಾರೆಟ್ 15,442 ರೂ. (-502 ರೂ.), 22 ಕ್ಯಾರೆಟ್ 14,155 ರೂ. (-460 ರೂ.) ಅಹಮದಾಬಾದ್: 24 ಕ್ಯಾರೆಟ್ 15,447 ರೂ. (-502 ರೂ.), 22 ಕ್ಯಾರೆಟ್ 14,160 ರೂ. (-460 ರೂ.) ಚೆನ್ನೈ: 24 ಕ್ಯಾರೆಟ್ 15,622 ರೂ. (-634 ರೂ.), 22 ಕ್ಯಾರೆಟ್ 14,320 ರೂ. (-580 ರೂ.) ಕೋಲ್ಕತ್ತಾ: 24 ಕ್ಯಾರೆಟ್ 15,442 ರೂ. (-502 ರೂ.), 22 ಕ್ಯಾರೆಟ್ 14,155 ರೂ. (-460 ರೂ.) ಹೈದರಾಬಾದ್: 24 ಕ್ಯಾರೆಟ್ 15,442 ರೂ. (-502 ರೂ.), 22 ಕ್ಯಾರೆಟ್ 14,155 ರೂ. (-460 ರೂ.) ಜೈಪುರ: 24 ಕ್ಯಾರೆಟ್ 15,457 ರೂ. (-502 ರೂ.), 22 ಕ್ಯಾರೆಟ್ 14,170 ರೂ. (-460 ರೂ.) ಭೋಪಾಲ್: 24 ಕ್ಯಾರೆಟ್ 15,447 ರೂ. (-502 ರೂ.), 22 ಕ್ಯಾರೆಟ್ 14,160 ರೂ. (-460 ರೂ.) ಲಖನೌ: 24 ಕ್ಯಾರೆಟ್ 15,457 ರೂ. (-502 ರೂ.), 22 ಕ್ಯಾರೆಟ್ 14,170 ರೂ. (-460 ರೂ.) ಚಂಡೀಗಢ: 24 ಕ್ಯಾರೆಟ್ 15,457 ರೂ. (-502 ರೂ.), 22 ಕ್ಯಾರೆಟ್ 14,170 ರೂ. (-460 ರೂ.)

ವಾರ್ತಾ ಭಾರತಿ 5 Feb 2026 11:50 am

ನಾಲ್ಕು ದಿನದ ಅಂತರ, ಎರಡು ದೈವವಾಣಿ : ಹರಪನಹಳ್ಳಿ, ಮೈಲಾರ ಕಾರ್ಣಿಕ ನುಡಿಗಳ ವ್ಯತ್ಯಾಸವೇನು ?

Karnika Of Mylara and Dodda Mylara : ನಾಡಿನ ಎರಡು ಪ್ರಸಿದ್ದ ಕಾರ್ಣಿಕ ಭವಿಷ್ಯ ನುಡಿಗಳು ಹೊರಬಿದ್ದಿದೆ. ಎರಡೂ ಕಾರ್ಣಿಕದಲ್ಲಿ ಜನರು ಭೀತಿ ಪಡುವಂತಹ ಅಂಶಗಳಿಲ್ಲ. ಬದಲಿಗೆ, ನಾಡಿಗೆ ಒಳ್ಳೆಯದಾಗುತ್ತದೆ ಎನ್ನುವ ಕಾರ್ಣಿಕವನ್ನು ಗೊರವಯ್ಯ ನುಡಿದಿದ್ದಾರೆ. ಹೂವಿನ ಹಡಗಲಿ ಮತ್ತು ಹರಪನಹಳ್ಳಿ ಕಾರ್ಣಿಕ ಭವಿಷ್ಯವಾಣಿಯಲ್ಲಿ ಹೇಳಿದ್ದೇನು? ಈ ಕಾರ್ಣಿಕದ ಬಗ್ಗೆ ಜನರಿಗೆ ಅಪಾರ ನಂಬಿಕೆಯಿದೆ.

ವಿಜಯ ಕರ್ನಾಟಕ 5 Feb 2026 11:47 am

Lokasabha | ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು; ಆರಂಭವಾದ ಕೆಲವೇ ನಿಮಿಷಗಳಲ್ಲಿ ಸದನ ಮುಂದೂಡಿಕೆ

ಹೊಸದಿಲ್ಲಿ, ಫೆ. 5: ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆಯೇ ಲೋಕಸಭೆಯ ಕಲಾಪ ಗುರುವಾರ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುಂದೂಡಲಾಯಿತು. ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ವಿವಿಧ ವಿಚಾರಗಳನ್ನು ಮುಂದಿರಿಸಿ ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಇಂಧನ ಸಹಕಾರ ಸಂಬಂಧಿತ ವಿಷಯವು ‘ಗಂಭೀರ ಸಾರ್ವಜನಿಕ ಪ್ರಾಮುಖ್ಯತೆ’ ಹೊಂದಿದೆ ಎಂದು, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ನಿಲುವಳಿ ಸೂಚನೆ ಮಂಡಿಸಿದರು. ಈ ವಿಷಯದ ಬಗ್ಗೆ ಸದನದಲ್ಲಿ ತಕ್ಷಣ ಚರ್ಚೆ ನಡೆಸಬೇಕೆಂದು ಅವರು ಆಗ್ರಹಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳ ಪ್ರಕಾರ ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕ ಹಾಗೂ ವೆನೆಝುವೆಲಾದಿಂದ ತೈಲ ಆಮದುಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದೆ ಎಂಬ ವರದಿಗಳನ್ನು ಸದನದ ಗಮನಕ್ಕೆ ತರಬೇಕಿದೆ ಎಂದು ತಿವಾರಿ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದರು. ಭಾರತದ ಸುಂಕಗಳು ಮತ್ತು ಸುಂಕ ರಹಿತ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುವ ವಿಚಾರ ಹಾಗೂ 500 ಶತಕೋಟಿ ಡಾಲರ್‌ ಗಿಂತ ಹೆಚ್ಚಿನ ಮೌಲ್ಯದ ಅಮೆರಿಕದ ಸರಕುಗಳನ್ನು ಖರೀದಿಸುವ ಬದ್ಧತೆ ಕುರಿತು ಸಮಗ್ರ ಚರ್ಚೆ ನಡೆಯಬೇಕೆಂದು ಮನೀಷ್‌ ತಿವಾರಿ ಅವರು ಒತ್ತಾಯಿಸಿದ್ದರು.

ವಾರ್ತಾ ಭಾರತಿ 5 Feb 2026 11:43 am

Delhi | ಖಾಲಿಸ್ತಾನ್ ಪರ ಗೋಡೆಬರಹ: SFJಯೊಂದಿಗೆ ಸಂಪರ್ಕಕ ಹೊಂದಿದ್ದ ಇಬ್ಬರ ಬಂಧನ

ಹೊಸದಿಲ್ಲಿ, ಫೆ.5: ಗಣರಾಜ್ಯೋತ್ಸವದ ಮುನ್ನ ದಿಲ್ಲಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗೋಡೆಗಳಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆದ ಆರೋಪದ ಮೇಲೆ ‘ಸಿಖ್ಸ್ ಫಾರ್ ಜಸ್ಟೀಸ್’ (SFJ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಇಬ್ಬರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಂಬ್ಯುಲೆನ್ಸ್ ಚಾಲಕ ಬಲ್ಜಿಂದರ್ ಹಾಗೂ ಅವರ ಸಹಚರ ರೋಹಿತ್ ಅಲಿಯಾಸ್ ಕಿರ್ತ್ ಎಂದು ಗುರುತಿಸಲಾಗಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಹಾಗೂ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ್ದಾಗಿ ಆರೋಪಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಈ ಕೃತ್ಯಕ್ಕೆ ಕೆನಡಾ ಮೂಲದ SFJ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ನ ನಿರ್ದೇಶನವಿದ್ದು, ಆರೋಪಿಗಳಿಗೆ 2 ಲಕ್ಷ ರೂ. ಹಣದ ಭರವಸೆ ನೀಡಲಾಗಿತ್ತು ಎಂಬುದು ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕ್ರಿಪ್ಟ್ ಸಂವಹನ ವೇದಿಕೆಗಳ ಮೂಲಕ ಸಂಪರ್ಕ ಸಾಧಿಸಿ ಸ್ಥಳಗಳ ಗುರುತು ಹಾಗೂ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಲಾಗಿತ್ತು ಎನ್ನಲಾಗಿದೆ. ವಿಚಾರಣೆ ವೇಳೆ ಬಲ್ಜಿಂದರ್ ಹಣದ ಆಮಿಷಕ್ಕೆ ಒಳಗಾಗಿದ್ದಾಗಿ ಒಪ್ಪಿಕೊಂಡಿದ್ದು, ರೋಹಿತ್ ಸ್ಥಳಗಳನ್ನು ಗುರುತಿಸುವುದು ಹಾಗೂ ಗೋಡೆ ಬರಹ ಬರೆಯಲು ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪನ್ನುನ್ ಮತ್ತು ಅವನ ಜಾಲಕ್ಕೆ ಸಂಬಂಧಿಸಿದ ಇತರರ ಪತ್ತೆಗೆ ಶೋಧ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ವಾರ್ತಾ ಭಾರತಿ 5 Feb 2026 11:33 am

ವಿಕ್ಟೋರಿಯಾ ಆಸ್ಪತ್ರೆಯಲ್ಲಿ UPI ಸ್ಕ್ಯಾನರ್‌ ಸ್ಕ್ಯಾಮ್‌: ಕಾಂಗ್ರೆಸ್‌ ಅಸಲಿ PayCM ಸರ್ಕಾರ ಎಂಬುದಕ್ಕೆ ಈ ಲೂಟಿಯೇ ಸಾಕ್ಷಿ ಎಂದು ಆರ್.‌ ಅಶೋಕ್‌ ವಾಗ್ದಾಳಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯಕೀಯ ಶುಲ್ಕ ಕಟ್ಟಲು ಸುಲಭವಾಗಲೆಂದು ಅಳವಡಿಸಿರುವ UPI ಸ್ಕ್ಯಾನರ್‌ ಗಳನ್ನು ತಮ್ಮ ವೈಯಕ್ತಿಕ ಸ್ಕ್ಯಾನರ್‌ ಗಳಿಗೆ ಬದಲಾಯಿಸಿಕೊಂಡು ಕೆಲ ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆಯ ಬರೋಬ್ಬರಿ 23 ಲಕ್ಷ ಹಣವನ್ನು ಕೊಳ್ಳೇ ಹೊಡೆದಿರುವ ಹಗರಣ ಬಯಲಾಗಿದೆ. ಈ ಕುರಿತು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ವಿಪಕ್ಷ ನಾಯಕ ಆರ್ ಅಶೋಕ್‌ ಕಾಂಗ್ರೆಸ್‌ ಸರ್ಕಾರ ಅಸಲಿ PayCM ಸರ್ಕಾರ ಎನ್ನುವುದಕ್ಕೆ ಈ ಹಗರಣವೇ ಸಾಕ್ಷಿ ಎಂದು, ಮಂತ್ರಿಗಳೆ ಲೂಟಿ ಮಾಡುವಾಗ ಸಾಮಾನ್ಯ ಸಿಬ್ಬಂದಿ ಸುಮ್ಮನೇ ಇರುತ್ತಾರೆಯೇ ಎಂದು ಕಿಡಿಕಾರಿದ್ದಾರೆ. ಹಾಗದ್ರೆ ಏನಿದು ವಿಕ್ಟೋರಿಯಾ ಆಸ್ಪತ್ರೆಯ UPI ಸ್ಕ್ಯಾನರ್‌ ಸ್ಕ್ಯಾಮ್‌ ಎಂಬುದನ್ನು ತಿಳಿಯೋಣ ಬನ್ನಿ...

ವಿಜಯ ಕರ್ನಾಟಕ 5 Feb 2026 11:21 am

Kerala | ಪಾಲಕ್ಕಾಡ್‌ ನಲ್ಲಿ ಪಿಕ್‌ಅಪ್ ವ್ಯಾನ್‌ನಿಂದ 100ಕ್ಕೂ ಹೆಚ್ಚು ಸ್ಫೋಟಕಗಳು ವಶ

ಪಾಲಕ್ಕಾಡ್, ಫೆ. 5: ಇಲ್ಲಿಗೆ ಸಮೀಪ 100ಕ್ಕೂ ಹೆಚ್ಚು ಸ್ಫೋಟಕವಿರುವ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಪಿಕ್‌ ಅಪ್ ವ್ಯಾನ್‌ ಅನ್ನು ಪೊಲೀಸರು ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಾಹನ ತಪಾಸಣೆ ವೇಳೆ ವ್ಯಾನ್‌ನ್ನು ತಡೆದು ಪರಿಶೀಲಿಸಿದಾಗ, 100ಕ್ಕೂ ಹೆಚ್ಚು ಬಾಕ್ಸ್ ಜೆಲಾಟಿನ್ ಕಡ್ಡಿಗಳು ಹಾಗೂ 20ಕ್ಕೂ ಹೆಚ್ಚು ಬಾಕ್ಸ್ ಡಿಟೋನೇಟರ್‌ ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟಕಗಳನ್ನು ಕಲ್ಲಂಗಡಿ ಹಣ್ಣುಗಳ ಸರಕಿನ ಕೆಳಗೆ ಮರೆಮಾಚಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಚಾಲಕನು ಕೊಯಮತ್ತೂರಿನಿಂದ ಪೆಟ್ಟಿಗೆಗಳನ್ನು ಲೋಡ್ ಮಾಡಿಕೊಂಡು ತ್ರಿಶೂರ್‌ ನಲ್ಲಿರುವ ಕ್ವಾರಿಗೆ ಸಾಗಿಸುತ್ತಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜ್ಯಕ್ಕೆ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ತರಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವ್ಯಾನ್‌ ಅನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ವಾಹನ ನಿಲ್ಲಿಸದೇ ಮುಂದುವರಿದಿದ್ದರಿಂದ ಬೆನ್ನಟ್ಟಿ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಚಾಲಕನ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. തണ്ണിമത്തൻ ലോഡിന് താഴെ സ്ഫോടകശേഖരം'; വാഹനം തടഞ്ഞ് പിടികൂടി പൊലീസ്, നൂറിലധികം പെട്ടികളിലായാണ് സ്ഫോടക വസ്തുക്കൾ സൂക്ഷിച്ച നിലയിലാണ് കണ്ടെത്തിയത്.... @PrasanthSbjp @BjpPalakkad @RajeevRC_X @AmitShahOffice @narendramodi @IAjitDoval_IND @AnoopKaippalli @GeorgekurianBjp @TheSureshGopi pic.twitter.com/44dVFC8Dey — Tom Mathews Moolamattom (@TMoolamattom) February 5, 2026

ವಾರ್ತಾ ಭಾರತಿ 5 Feb 2026 11:20 am

ಕೆಂಪು ಬಣ್ಣಕ್ಕೆ ತಿರುಗಿದ ಷೇರು ಮಾರುಕಟ್ಟೆ, ಸೆನ್ಸೆಕ್ಸ್‌, ನಿಫ್ಟಿ ಸೂಚ್ಯಂಕ ಕುಸಿತ; ಬಿಎಸ್‌ಇ ಅಪ್ಡೇಟ್ಸ್‌

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಳಿಕ ತುಸು ಚೇತರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆ, ಇಂದು (ಫೆ.5-ಗುರುವಾರ) ಮತ್ತೆ ಮಂದಗತಿಯ ವಹಿವಾಟನ್ನು ದಾಖಲಿಸಿದೆ. ಬೆಳಗ್ಗೆ ಮಾರುಕಟ್ಟೆ ತೆರೆಯುತ್ತಿದ್ದಂತೇ ಸೆನ್ಸೆಕ್ಸ್‌ 400 ಪಾಯಿಂಟ್ಸ್‌ಗಳಿಗಿಂತಲೂ ಹೆಚ್ಚು ಕುಸಿತ ದಾಖಲಿಸಿತು. ಅದೇ ರೀತಿ ನಿಫ್ಟಿ 50 ಕೂಡ ಬರೋಬ್ಬರಿ ​25,700​ ಪಾಯಿಂಟ್‌ಗಳಿಗಿಂತ ಕಡಿಮೆಗೆ ಇಳಿಯಿತು. ಪ್ರಮುಖವಾಗಿ ಐಟಿ ಷೇರುಗಳು ಇಂದು ದುರ್ಬಲ ವಹಿವಟನ್ನು ನಡೆಸಿವೆ. ಹೇಗಿದೆ ಮುಂಬೈ ಷೇರು ಮಾರುಕಟ್ಟೆ ಪರಿಸ್ಥತಿ? ಇಲ್ಲದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 5 Feb 2026 11:16 am

ಅಸಲಿ ಉದ್ಯೋಗ-ನಕಲಿ ಸರ್ಟಿಫಿಕೇಟು-ಚಾಲಾಕಿ ಪ್ರಾಧ್ಯಾಪಕರು

ಶಿಕ್ಷಣವು ಯಾವುದೇ ಸಮಾಜದ ಬೆಳಕು, ಅದರ ಆತ್ಮ ಮತ್ತು ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ. ಶಿಕ್ಷಕರು ಈ ಬೆಳಕು ನೀಡುವ ಜ್ಯೋತಿಯಾಗಿದ್ದಾರೆ. ಅವರ ಕಾರ್ಯ ಸರಿಯಾದ ಜ್ಞಾನ, ನೈತಿಕತೆ ಮತ್ತು ಶಿಸ್ತು ವಿದ್ಯಾರ್ಥಿಗಳಿಗೆ ವರ್ಗಾಯಿಸುವುದು ಪ್ರಮುಖ ಅಂಶವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಚಾಲಾಕಿ ಪ್ರಾಧ್ಯಾಪಕರು ನಕಲಿ ಸರ್ಟಿಫಿಕೇಟ್‌ಗಳ ಮೂಲಕ ಅಸಲಿ ಉದ್ಯೋಗಗಳನ್ನು ಪಡೆದಿರುವುದು ಗಮನಾರ್ಹವಾಗಿದೆ. ಇದು ಶಿಕ್ಷಣ ಕ್ಷೇತ್ರದ ಪ್ರಾಮಾಣಿಕತೆಗೆ ಧಕ್ಕೆ ನೀಡುತ್ತದೆ ಮತ್ತು ಯುವ ಜನರಿಗೆ ಸುಳ್ಳಿನ ಯಶಸ್ಸಿನ ಸಂದೇಶವನ್ನು ಹಂಚುತ್ತದೆ. ನಕಲಿ ಸರ್ಟಿಫಿಕೇಟ್ ಎಂದರೆ ಮಾನ್ಯತೆ ಇಲ್ಲದ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ ಪ್ರಮಾಣಪತ್ರ, ಕೃತ್ರಿಮ ದಾಖಲೆ, ಸುಳ್ಳು ಅನುಭವ ಪ್ರಮಾಣಪತ್ರ ಅಥವಾ ನಕಲಿ ಸಂಶೋಧನಾ ಪ್ರಕಟಣೆ. ಇವುಗಳನ್ನು ಬಳಸಿ ವ್ಯಕ್ತಿಯೊಬ್ಬ ತನ್ನ ಅರ್ಹತೆಯನ್ನು ಹೆಚ್ಚಾಗಿ ತೋರಿಸಿಕೊಂಡು ಪ್ರಾಧ್ಯಾಪಕರ ಹುದ್ದೆ ಪಡೆಯುತ್ತಾನೆ. ಉದಾಹರಣೆಗೆ, 2017ರಲ್ಲಿ ಕರ್ನಾಟಕದ ಹಲವಾರು ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ನಡೆದ ಪರಿಶೀಲನೆಯಿಂದ ಕೆಲವು ಪ್ರಾಧ್ಯಾಪಕರ ಪಿಎಚ್.ಡಿ. ಮತ್ತು ಎಂಫಿಲ್ ಸರ್ಟಿಫಿಕೇಟ್ ನಕಲಿ ಎಂದು ಪತ್ತೆಯಾಗಿತ್ತು. ಅವರೊಳಗೆ ಹಲವರು ಬಹಳ ವರ್ಷಗಳಿಂದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು, ಆದರೆ ಅವರು ಅಸಲಿ ಪದವಿಯನ್ನು ಹೊಂದಿರಲಿಲ್ಲ. ಚಾಲಾಕಿ ಪ್ರಾಧ್ಯಾಪಕರು ತಮ್ಮ ಬುದ್ಧಿವಂತಿಕೆಯನ್ನು ದುರುಪಯೋಗ ಮಾಡುತ್ತಾರೆ. ಅವರು ಸರ್ಟಿಫಿಕೇಟ್ ಪರಿಶೀಲನೆ ಸಡಿಲವಾಗಿರುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು, ಶಿಫಾರಸು ಪತ್ರಗಳು ಮತ್ತು ಪ್ರಭಾವಿಗಳ ನೆರವಿನಿಂದ ಹುದ್ದೆ ಪಡೆಯುತ್ತಾರೆ, ಸಂದರ್ಶನದಲ್ಲಿ ಮಾತಿನ ಚಾತುರ್ಯದಿಂದ ಅಧಿಕಾರಿಗಳನ್ನು ಮೋಸಗೊಳಿಸುತ್ತಾರೆ. ಕೆಲವರು ತಮ್ಮ ಹೆಸರು ಅಂತರ್‌ರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಣೆಯಾಗಿದ್ದು ಎಂದು ತೋರಿಸುತ್ತಾರೆ, ಆದರೆ ನಿಜವಾಗಿಯೂ ಅದು ಕೃತಿಮ ವೆಬ್‌ಸೈಟ್‌ನ ಲೇಖನವಾಗಿರುತ್ತದೆ. 2019ರಲ್ಲಿ ಉತ್ತರ ಕರ್ನಾಟಕದ ವಿಶ್ವವಿದ್ಯಾನಿಲಯದ ಸಂಶೋಧನಾ ಪರಿಶೀಲನೆಯಾಗಿದ್ದ ಸಂದರ್ಭದಲ್ಲಿ, ಮೂವರು ಪ್ರಾಧ್ಯಾಪಕರ ಪಿಎಚ್.ಡಿ. ಪ್ರಬಂಧಗಳು ನಕಲಿ ಎಂದು ಪತ್ತೆಯಾಗಿತ್ತು. ನಕಲಿ ಪ್ರಾಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾನಿ ಸಂಭವಿಸುತ್ತದೆ. ವಿಷಯದ ಆಳವಾದ ಜ್ಞಾನ ಇಲ್ಲದ ಕಾರಣ ಅವರು ಪಠ್ಯವನ್ನು ಯಾಂತ್ರಿಕವಾಗಿ ಬೋಧಿಸುತ್ತಾರೆ. ವಿದ್ಯಾರ್ಥಿಗಳ ವಿಮರ್ಶಾತ್ಮಕ ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಿಸಿಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಯ ಆಸಕ್ತಿ ಕಳೆದುಕೊಳ್ಳುತ್ತಾರೆ, ಆತ್ಮವಿಶ್ವಾಸ ಕುಗ್ಗುತ್ತದೆ ಮತ್ತು ಸಂಶೋಧನಾ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ, 2020ರಲ್ಲಿ ಬೆಂಗಳೂರಿನ ಕಾಲೇಜಿನ ಒಂದು ಘಟನೆಯಲ್ಲಿ, ‘‘ಆಧುನಿಕ ಭಾಷಾಶಾಸ್ತ್ರದಲ್ಲಿ ಪಠ್ಯ ವಿಮರ್ಶೆಯ ಪ್ರಕ್ರಿಯೆ’’ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪ್ರಾಧ್ಯಾಪಕ ಉತ್ತರಿಸಲು ಅಸಮರ್ಥನಾಗಿದ್ದರಿಂದ ವಿದ್ಯಾರ್ಥಿ ಬಹಳ ನಿರಾಶಗೊಂಡಿದ್ದ. ಈ ಸಮಸ್ಯೆಯ ಪರಿಣಾಮವಾಗಿ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಗುಣಮಟ್ಟವು ಪ್ರಭಾವ ಬೀರುತ್ತದೆ. ನಕಲಿ ಪ್ರಾಧ್ಯಾಪಕರಿಂದ ಬೋಧನೆಗೆ ಒಳಗಾಗುವ ವಿದ್ಯಾರ್ಥಿಗಳು, ವಿದ್ಯಾರ್ಥಿ ಕಲಿಕೆಯಲ್ಲಿ ಅಸಮರ್ಥತೆ ಹೊಂದಿದವರಾಗಿ ನಂತರ ಉದ್ಯೋಗ ಕ್ಷೇತ್ರದಲ್ಲಿ, ಉದ್ಯೋಗ ಪಡೆಯಲು ಅಸಮರ್ಥರಾಗುತ್ತಾರೆ. 2018ರಲ್ಲಿ ತಮಿಳುನಾಡಿನ ಒಂದು ಕಾಲೇಜಿನಲ್ಲಿ ನಡೆದ ಪರಿಶೀಲನೆಯಿಂದ, ಐದು ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಉದ್ಯೋಗ ಪಡೆದರು, ನಂತರ ಅವರ ಮಹಾವಿದ್ಯಾನಿಲಯದಲ್ಲಿ ಬೋಧಿಸಿರುವ ಪ್ರಾಧ್ಯಾಪಕ ನಕಲಿ ಪ್ರಮಾಣಪತ್ರ ಹೊಂದಿದ್ದರು ಎಂಬುದು ಪತ್ತೆಯಾಗಿತ್ತು. ಇಂತಹ ಅಸಮರ್ಥತೆ ದೇಶದ ಮಾನವ ಸಂಪನ್ಮೂಲಕ್ಕೆ ದೊಡ್ಡ ಹೊಡೆತ ನೀಡುತ್ತದೆ. ನಿಜವಾದ ಅರ್ಹ ಅಭ್ಯರ್ಥಿಗಳಿಗೆ ಈ ಸಮಸ್ಯೆಯಿಂದ ಅನ್ಯಾಯವಾಗುತ್ತದೆ. ವರ್ಷಗಳ ಪರಿಶ್ರಮದಿಂದ NET ಅಥವಾ SET ಪಾಸ್ ಆದವರು, ಸಂಶೋಧನೆ ಮಾಡಿ ಪಿಎಚ್.ಡಿ. ಪಡೆದವರು ಹಾಗೂ ಎಲ್ಲಾ ಅರ್ಹತೆ ಇದ್ದು ಶ್ರಮಪಡುವವರು, ಉದ್ಯೋಗವಿಲ್ಲದೆ ಉಳಿಯುತ್ತಾರೆ, ಆದರೆ ನಕಲಿ ಪ್ರಮಾಣಪತ್ರ ಹೊಂದಿದವರು ಸುಲಭವಾಗಿ ಹುದ್ದೆ ಪಡೆಯುತ್ತಾರೆ. ಉದಾಹರಣೆಗೆ, ಕರ್ನಾಟಕದಲ್ಲಿ 2007-2008ರಲ್ಲಿ ನೇಮಕಾತಿಯಾದ ಹಲವಾರು ಪ್ರಾಧ್ಯಾಪಕರ ಸರ್ಟಿಫಿಕೇಟ್‌ಗಳು ಪರಿಶೀಲನೆಯಾಗಿದ್ದು, ನಕಲಿ ಪ್ರಮಾಣಪತ್ರ ಹೊಂದಿದ ವ್ಯಕ್ತಿಗಳೇ ಮೊದಲ ಸ್ಥಾನ ಪಡೆದಿದ್ದರು ಎಂಬ ವಿಚಾರ ನಂತರ ಪತ್ತೆಯಾಗಿತ್ತು, ಆದರೆ ಅವರು ಆಗಲೇ ಪ್ರಾಧ್ಯಾಪಕರಾಗಿ ಕೆಲಸ ಪ್ರಾರಂಭಿಸಿದ್ದರು. ಈ ಸಮಸ್ಯೆಗೆ ಕಾರಣ ಆಡಳಿತಾತ್ಮಕ ವೈಫಲ್ಯ, ಸರ್ಟಿಫಿಕೇಟ್ ಪರಿಶೀಲನೆಯ ಕೊರತೆ, ಭ್ರಷ್ಟಾಚಾರ ಮತ್ತು ರಾಜಕೀಯ ಒತ್ತಡ. ಕೆಲವೆಡೆ ಖಾಸಗಿ ಕಾಲೇಜುಗಳು ಲಾಭದಾಸೆಯ ಉದ್ದೇಶದಿಂದ ಈ ಅಕ್ರಮವನ್ನು ಅನುಮತಿಸುತ್ತಿದ್ದಾರೆ. ನೈತಿಕತೆಯ ಕುಸಿತ ಮತ್ತು ಸುಳ್ಳು ಸಾಧನೆಯ ಸಾಧನೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಕೆಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಿಂದ ಅಸಲಿ ಪಠ್ಯ ಬೋಧನೆಯಿಲ್ಲದೆ ಪ್ರಾಯೋಗಿಕ ತರಗತಿ ಮಾಡಿಸಲಾಗುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ನಿಲ್ಲುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಡಿಜಿಟಲ್ ಸರ್ಟಿಫಿಕೇಟ್ ಪರಿಶೀಲನೆ, ರಾಷ್ಟ್ರೀಯ ಡೇಟಾಬೇಸ್ ಸಂಪರ್ಕ, ಕಠಿಣ ಕಾನೂನು ಕ್ರಮಗಳು, ನಿಯಮಿತ ಮೌಲ್ಯಮಾಪನ ಮತ್ತು ನೈತಿಕ ಶಿಕ್ಷಣ ಕ್ರಮಗಳನ್ನು ಜಾರಿಗೆ ತರಬೇಕು. ನಕಲಿ ದಾಖಲೆ ಬಳಸಿದವರು ಉದ್ಯೋಗದಿಂದ ವಜಾಗೊಳ್ಳುವ ಜೊತೆಗೆ ದಂಡ ಅಥವಾ ಜೈಲು ಶಿಕ್ಷೆ ಪಡೆಯಬೇಕು. ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ನೈತಿಕ ಮೌಲ್ಯಗಳನ್ನು ಬೋಧಿಸುವುದು ಅನಿವಾರ್ಯ. ಸಾರಾಂಶವಾಗಿ, ಅಸಲಿ ಉದ್ಯೋಗವನ್ನು ನಕಲಿ ಸರ್ಟಿಫಿಕೇಟ್ ಮೂಲಕ ಪಡೆದ ಚಾಲಾಕಿ ಪ್ರಾಧ್ಯಾಪಕರು ಶಿಕ್ಷಣ ಕ್ಷೇತ್ರಕ್ಕೆ ಶಾಪವಾಗಿದ್ದಾರೆ. ಅವರು ಕೇವಲ ಕಾನೂನು ಉಲ್ಲಂಘನೆಯನ್ನಷ್ಟೇ ಮಾಡುತ್ತಿಲ್ಲ, ಅವರು ದೇಶದ ಭವಿಷ್ಯವನ್ನೇ ಹಾಳುಮಾಡುತ್ತಿದ್ದಾರೆ. ಶಿಕ್ಷಕರ ನೈತಿಕತೆ, ಪ್ರಾಮಾಣಿಕತೆ ಮತ್ತು ಜ್ಞಾನಕ್ಕೆ ಗೌರವ ನೀಡುವ ಮೂಲಕ ಮಾತ್ರ ಒಂದು ಶಕ್ತಿಶಾಲಿ, ಸುದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ. ಇಂತಹ ಅಕ್ರಮಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ 2009ರಲ್ಲಿ ಪದವಿ ಕಾಲೇಜುಗಳಲ್ಲಿ, ಎರಡು ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಸರಕಾರ ನೇಮಕಮಾಡಿಕೊಂಡಿತ್ತು. ಅದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನಕಲಿ ಎಂದು ಗೊತ್ತಾಗಿದೆ. ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಎನ್‌ಇಟಿ ಮತ್ತು ಎಸ್‌ಇಟಿ ಅರ್ಹತಾ ಪ್ರಮಾಣಗಳು ಉದ್ಯೋಗಕ್ಕೆ ಕಡ್ಡಾಯವೆಂದು ನಿಯಮ ಇದ್ದರೂ ಸಹ ಪಿಎಚ್.ಡಿ. ಮತ್ತು ಎಂಫಿಲ್ ಪ್ರಮಾಣ ಪತ್ರಗಳು ಉದ್ಯೋಗಕ್ಕೆ ಅರ್ಹತೆ ಎಂದು ಪಟ್ಟಭದ್ರ ಹಿತಾಸಕ್ತಿಗಳು ನಿಯಮವನ್ನು ರೂಪಿಸಿದ್ದವು. ಆ ನಿಯಮಗಳ ಅನ್ವಯ ಕೆಲವರು ರಾತ್ರೋರಾತ್ರಿ ಎಂಫಿಲ್ ಮತ್ತು ಪಿಎಚ್. ಡಿ. ಪದವಿ ಪ್ರಮಾಣ ಪತ್ರಗಳನ್ನು ಖರೀದಿ ಮಾಡಿಕೊಂಡು ಸಾಕಷ್ಟು ಹಣವನ್ನು ನೀಡಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದು ಇತಿಹಾಸ. ಈಗಾಗಲೇ ಅದರಲ್ಲಿ ಕೆಲವರು ಪ್ರಾಂಶುಪಾಲರಾಗಿ ಮತ್ತು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಇನ್ನೂ ಕೆಲವರು ನಿವೃತ್ತಿಯಾಗಿದ್ದಾರೆ. ಅಲ್ಲದೆ ಕೆಲವು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವರ್ಕ್‌ಲೋಡ್ ಇಲ್ಲದಿದ್ದರೂ ಸಹ ಬೋಗಸ್ ವರ್ಕ್ ಲೋಡ್ ತೋರಿಸಿ ವಿದ್ಯಾರ್ಥಿಗಳಿಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇವೆ ಎಂದು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುತ್ತಿದ್ದಾರೆ. ಪ್ರಾಮಾಣಿಕವಾಗಿ ಎನ್‌ಇಟಿ, ಎಸ್‌ಎಲ್‌ಇ ಟಿ, ಪಿಎಚ್.ಡಿ. ಪಡೆದ ಅಭ್ಯರ್ಥಿಗಳು ಕಳೆದ ಎರಡು ದಶಕಗಳಿಂದ ಅರೆಕಾಲಿಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಕಲಿ ಸರ್ಟಿಫಿಕೇಟ್‌ಗಳನ್ನು ಪಡೆದವರು ರಾಜಾರೋಷವಾಗಿ ಲಕ್ಷಾಂತರ ರೂಪಾಯಿಗಳನ್ನು ಸರಕಾರಿ ಸಂಬಳವಾಗಿ ಪಡೆದು ಓಡಾಡುತ್ತಿದ್ದಾರೆ. ಇದನ್ನು ಕಂಡರೂ ಸರಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಲ್ಲಾ ಅರ್ಹತೆ ಉಳ್ಳಂತಹ 20 ವರ್ಷಗಳಿಂದ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಪಿಎಚ್.ಡಿ., ಎಂಫಿಲ್ ಪ್ರಮಾಣ ಪತ್ರಗಳು ಅವು ಪದವಿ ಪ್ರಮಾಣ ಪತ್ರಗಳೇ ಹೊರತು ಉದ್ಯೋಗ ಆಧಾರಿತ ಪ್ರಮಾಣಪತ್ರಗಳಲ್ಲ. ಎನ್‌ಇಟಿ ಮತ್ತು ಎಸ್‌ಎಲ್‌ಇಟಿ ಹಾಗೂ ಸಿಎಸ್‌ಐಆರ್ ಪ್ರಮಾಣ ಪತ್ರಗಳು ಮಾತ್ರ ಉದ್ಯೋಗ ಆಧಾರಿತ ಪ್ರಮಾಣ ಪತ್ರಗಳೆಂದು ಯುಜಿಸಿಯ 96ರ ನಿಯಮಗಳಿದ್ದರೂ ಸಹ 2009ರಲ್ಲಿ ಇವೆಲ್ಲ ಉದ್ಯೋಗ ಆಧಾರಿತ ಪ್ರಮಾಣ ಪತ್ರಗಳನ್ನು ಹೊರಗಿಟ್ಟು ಎಂಫಿಲ್, ಪಿಎಚ್.ಡಿ. ಮುಂತಾದ ನಕಲಿ ಪ್ರಮಾಣ ಪತ್ರಗಳಿಗೆ ಮಾನ್ಯತೆ ನೀಡಿ ಡೀಲ್ ಮಾಡಿಕೊಂಡು ಉದ್ಯೋಗ ಪಡೆದಿರುವುದು ಕಾನೂನು ಬಾಹಿರವಲ್ಲವೇ? ಆದುದರಿಂದ ಸಂಬಂಧಪಟ್ಟ ಸರಕಾರ ಮತ್ತು ಉನ್ನತ ಶಿಕ್ಷಣ ನಿರ್ದೇಶಕರು ಮತ್ತು ಉನ್ನತ ಶಿಕ್ಷಣ ಆಯುಕ್ತರು ಪಿಎಚ್.ಡಿ. ಮತ್ತು ಎಂಫಿಲ್ ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ನೇಮಕಾತಿ ಹೊಂದಿರುವವರ ಮೇಲೆ ಕ್ರಮ ಕೈಗೊಂಡು ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಹಾಗೂ ವರ್ಕ್‌ಲೋಡ್ ಇಲ್ಲದಿದ್ದರೂ ಇದೆ ಎಂದು ತೋರಿಸಿ ವಿದ್ಯಾರ್ಥಿಗಳಿಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇವೆ ಎಂದು, ಖಾಲಿಯಾಗಿ ಓಡಾಡುತ್ತಿರುವ ಪ್ರಾಧ್ಯಾಪಕರ ಮೇಲೆಯೂ ಸಹ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.

ವಾರ್ತಾ ಭಾರತಿ 5 Feb 2026 11:09 am

ಹಾಸನ | ಗಾಂಜಾ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

3 ಲಕ್ಷ ರೂ. ಮೌಲ್ಯದ 2 ಕೆಜಿಗೂ ಅಧಿಕ ಗಾಂಜಾ ವಶ

ವಾರ್ತಾ ಭಾರತಿ 5 Feb 2026 11:05 am

Gold Rate Feb 5 2026: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಚಿನ್ನದ ಬೆಲೆ 5,020 ರೂ. ಕಡಿಮೆ

Gold Rate Feb 5 2026: ಚಿನ್ನ ಪ್ರಿಯರಿಗೆ ಬಹಳ ದಿನಗಳ ನಂತರ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯು ಫೆಬ್ರವರಿ 5ರ ಗುರುವಾರ ಭರ್ಜರಿ ಇಳಿಕೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿತ್ತು. ಇದೀಗ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. 18, 22 ಹಾಗೂ 24 ಕ್ಯಾರೆಟ್‌ನ ಚಿನ್ನದ ಬೆಲೆಯು ಬೆಂಗಳೂರು

ಒನ್ ಇ೦ಡಿಯ 5 Feb 2026 11:02 am

ಸತ್ತಂತಿಹರನು...

ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು, ದೇಶವನ್ನು, ಜನರನ್ನು ಬಳಸಿಕೊಳ್ಳುವವರು ಸತ್ತವರ ಸಾಲಿಗೆ ಸೇರುತ್ತಾರೆಯೇ ಹೊರತು ಬಾಳಿದವರ ಸಾಲಿಗಲ್ಲ. ವಸಾಹತುಶಾಹಿಯ ಗುಲಾಮಸ್ಥಿತಿಯಿಂದ ಭಾರತವು ಹೊರಬಂದು ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಏಳು ದಶಕಗಳ ಬಳಿಕ ಈಗ ಎಂಟನೇ ದಶಕದ ಹೊಸ್ತಿಲಲ್ಲಿ ಮತ್ತೆ ವಸಾಹತುಶಾಹಿಗೆ ಮರಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ನೆಹರೂ ಕಾಲದಲ್ಲಿ ಅಮೆರಿಕ-ಸೋವಿಯೆತ್ ಒಕ್ಕೂಟದ ನಡುವೆ ಅಲಿಪ್ತವೆಂಬ ನೀತಿಯ ಮೂಲಕ ಪಾರಾಗಿ ಬಂದ ಭಾರತವು ಈಗ ಸಿದ್ಧಾಂತರಹಿತ ದಡ್ಡ ರಾಜಕಾರಣದ ಮೂಲಕ ಅಮೆರಿಕ-ರಶ್ಯಗಳ ನಡುವೆ ಅಪ್ಪಚ್ಚಿಯಾಗುವತ್ತ ದಾಪುಗಾಲಿಟ್ಟಿದೆ. ನೀವು ತಪ್ಪು ಮಾಡುತ್ತಿದ್ದೀರಿ ಎಂದು ಅಮೆರಿಕದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಸವಾಲೊಡ್ಡಿದ ಇಂದಿರಾಯುಗದಿಂದ ಐದು ದಶಕಗಳ ನಂತರ ಯಾವುದೇ ದಿಟ್ಟ ಇಲ್ಲವೇ ಬುದ್ಧಿವಂತಿಕೆ ಮುತ್ಸದ್ದಿತನವನ್ನು ತೋರಿಸಲು ಅಶಕ್ತವಾಗಿ ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಾಲಮಡಚಿ ಕುಳಿತರೂ ದೇಶದ ಜನರಿಗೆ ಮಂಕುಬೂದಿಯನ್ನೆರಚಲು ಸಮರ್ಥವಾದ ಈಗಿನ ಒಕ್ಕೂಟ ಸರಕಾರವು ತನ್ನೆಲ್ಲ ದಾರಿಯನ್ನು ಮುಚ್ಚಿಕೊಂಡಂತಿದೆ. ದೇಶದೊಳಗೆ ಮತೀಯ ವ್ಯವಹಾರದ ಬೆಂಕಿಯನ್ನೇ ಬೆಳಕೆಂದು ಬೆಂಬಲಿಗರಿಗೆ ತೋರಿಸಿ ಮಾಧ್ಯಮಗಳ ಮೂಲಕ ತಪ್ಪುಗಳನ್ನು ಸರಿಯೆಂದು ಬಿಂಬಿಸಿ ಸರಕಾರವು ಬೆತ್ತಲೆಯಾದರೂ ತಾನು ಸರ್ವಾಂಗ ಸುಂದರನೆಂಬ ಹಾಗೆ ನಿಂತಿದೆ. ಈಗಷ್ಟೇ ಯುರೋಪಿಯನ್ ಒಕ್ಕೂಟದೊಂದಿಗೆ ಮತ್ತು ಆನಂತರ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿ ದೇಶಕ್ಕೆ ಭಾರೀ ಅನುಕೂಲವಾಗಿದೆಯೆಂದು ಹೇಳುವ ಮೂಲಕ ಸುಳ್ಳನ್ನು ಅಧಿಕೃತವಾಗಿ ಸ್ಥಾಪಿಸಿಕೊಂಡಿದೆ. ನೆನಪಿರಬಹುದು: ಈಚೆಗೆ ಅಮೆರಿಕವು ಭಾರೀ ಪ್ರಮಾಣದ ಟಾರಿಫ್‌ನ್ನು ವಿಧಿಸಿದಾಗ ರಶ್ಯದೊಂದಿಗೆ ತೈಲ ಒಪ್ಪಂದವನ್ನು ಮಾಡಿಕೊಂಡು ಅಮೆರಿಕಕ್ಕೆ ಪಾಠಕಲಿಸಿದೆನೆಂದು ಹೇಳಿದ ಭಾರತದ ಅಧಿಕೃತ ನಾಯಕರು ಇದನ್ನು ದೇಶಾದ್ಯಂತ ಪ್ರಚಾರದ ವ್ಯವಸ್ಥೆಯನ್ನು ತನ್ನ ಬೆಂಬಲಿಗ ಭಕ್ತರಿಗೂ ಗೋದಿ ಮಾಧ್ಯಮಕ್ಕೂ ಗುತ್ತಿಗೆ ನೀಡಿತ್ತು. ಅಷ್ಟರಲ್ಲೇ ಈ ಹೊಸ ಒಪ್ಪಂದಗಳು ಬಂದವು. ಈಗ ರಶ್ಯಕ್ಕೆ ಕೈಕೊಟ್ಟು ಅಮೆರಿಕದ ಬಾಗಿಲ ಬಳಿ ನಿಲ್ಲುವ ಸರದಿ ಭಾರತದ್ದು. ಯಾರು ಹಿತವರು ನಿನಗೆ ಈ ಇಬ್ಬರೊಳಗೆ ಎಂದು ಕೇಳಿದರೆ ಅತ್ತ ನೋಡಲು ನಾಚಿಕೆ; ಇತ್ತ ನೋಡಲು ಭಯ. ಇಷ್ಟಕ್ಕೂ ಅಮೆರಿಕದ ಅಧ್ಯಕ್ಷರು ಭಾರತವನ್ನು ಎಷ್ಟು ಬಾರಿ ಅವಮಾನಿಸಿದರೆಂದು ಹೇಳಲು ಸಾಧ್ಯವಿಲ್ಲ. ಭಾರತ-ಪಾಕಿಸ್ತಾನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆಂದು ಹೇಳುವುದರಿಂದ ಹೊರಟು ಇನ್ನು ಮುಂದೆ ಭಾರತವು ರಶ್ಯದಿಂದ ತೈಲ ಖರೀದಿಯನ್ನು ಕೈಬಿಟ್ಟು ವೆನೆಝುವೆಲದಿಂದ ತೈಲ ಖರೀದಿಸುತ್ತದೆಂದು ಟ್ರಂಪ್ ಹೇಳುವಾಗ ಅದನ್ನು ಧಿಕ್ಕರಿಸಲು ಭಾರತದ ಆದಿಶೇಷನ ಸಹಸ್ರ ನಾಲಗೆಗಳಿಗೂ ಸಾಧ್ಯವಾಗಿಲ್ಲ. ಬದಲಾಗಿ ಈ ಒಪ್ಪಂದಗಳನ್ನು ಬೇಕಾಬಿಟ್ಟಿ ತಿರುಚಿ ಜನರ ಮುಂದಿಡುವ ತಯಾರಿಯಲ್ಲಿ ಮೋದಿ ಸರಕಾರವಿದೆ. ಅಮೆರಿಕದಿಂದ ವರ್ಷಕ್ಕೆ ಐವತ್ತು ಬಿಲಿಯನ್ ಡಾಲರ್‌ಗೂ ಕಡಿಮೆ ವಹಿವಾಟು ಮಾಡುತ್ತಿರುವ ಭಾರತವು ಈಗ ಒಂದೊಮ್ಮೆಗೇ ಐನೂರು ಬಿಲಿಯನ್ ಡಾಲರಿನ ಮಾತನ್ನು ಹೇಳುತ್ತಿದೆ. ಒಟ್ಟಾರೆ ಭಾರತದ ಆಮದು ಏಳುನೂರು ಬಿಲಿಯನ್ ಡಾಲರ್ ಎಂದು ಅಂದಾಜಿಸಿದ ಹೊತ್ತಿನಲ್ಲಿ ಅಮೆರಿಕದಿಂದಲೇ ಐನೂರು ಬಿಲಿಯನ್ ಡಾಲರ್ ಆಮದು ಹೇಗೆ ಸಾಧ್ಯವೆಂಬ ಸಾಮಾನ್ಯ ಜ್ಞಾನವೂ ಈ ದೇಶದ ಜನರಿಗಿಲ್ಲ. ಹೋಗಲಿ ಯಾವ ಪದಾರ್ಥಗಳನ್ನು ರಫ್ತು-ಆಮದು ಮಾಡಲಿದೆಯೆಂಬುದೂ ಸ್ಪಷ್ಟವಿಲ್ಲ. ಅಮೆರಿಕದಿಂದ ತರಿಸುವ ಸರಕುಗಳಿಗೆ ಭಾರತವು ಶೂನ್ಯ ಶತಾಂಶ ಟಾರಿಫ್‌ನ್ನು ವಿಧಿಸಲಿದೆಯೆಂಬುದನ್ನು ಗಮನಿಸಿದರೆ ಅಮೆರಿಕವು ತೋರಿಸಿದ ರಿಯಾಯಿತಿಯ ಶೇ. 18 ಟಾರಿಫ್ ಕಡಿಮೆಯೇನಲ್ಲ. ಇದಕ್ಕೆ ಯುರೋಪಿಯನ್ ಒಕ್ಕೂಟದ ಒಪ್ಪಂದಕ್ಕೂ ಹೇಗೆ ತಾಳೆಯಾಗುತ್ತದೆಂಬುದರ ವಿವರವೂ ಇಲ್ಲ. ಯಾವತ್ತಿಂದ ಈ ಒಪ್ಪಂದಗಳು ಜಾರಿಯಾಗುತ್ತದೆಂಬ ವಿವರಣೆಯೂ ಇಲ್ಲ. ಹಿಂದೆ ಅಮೆರಿಕವು ಅಲ್ಲಿ ಉಪಯೋಗವಾಗದ ಪಿಎಲ್-480 ಕಳಪೆ ಗೋಧಿಯನ್ನು ಭಾರತಕ್ಕೆ ರಫ್ತು ಮಾಡಿದ ಇತಿಹಾಸವಿದೆ. ಅಧಿಕೃತ ಮಾಹಿತಿಯಂತೆ ಜುಲೈ 2026ರ ಮೊದಲಂತೂ ಈ ಹೊಸ ವ್ಯಾಪಾರವು ಜಾರಿಯಾಗುವುದಿಲ್ಲ. ಆಮೇಲೆ ಯಾವಾಗ ಎಂಬುದು ಈಗ ಖಾತ್ರಿಯಿಲ್ಲ. ಇನ್ನೂ ತಮಾಷೆಯೆಂದರೆ ಈ ಬಗ್ಗೆ ಒಪ್ಪಂದಗಳು ಸಹಿಯಾಗುವ ಮೊದಲೇ ಇವು ಅದ್ದೂರಿಯ ಪ್ರಚಾರಭಾಗ್ಯವನ್ನು ಪಡೆದಿವೆ. ಭಕ್ತಸಂದೋಹವು ಈ ರಫ್ತು-ಆಮದು, ರಿಯಾಯಿತಿಯ ಟಾರಿಫ್ ಇನ್ನೇನು ನಡೆದೇ ಹೋಯಿತೇನೋ ಎಂಬಂತೆ ಜಿಗಿಯುತ್ತಿದ್ದಾರೆ. ಇವನ್ನೆಲ್ಲ ಗಮನಿಸಿದರೆ ಈ ಎರಡೂ ಒಪ್ಪಂದಗಳು ಅಂತರ್‌ರಾಷ್ಟ್ರೀಯ ಅಗತ್ಯಗಳಾಗಿರದೆ ಸದ್ಯ ದೇಶದ ಕೆಲವು ರಾಜ್ಯಗಳಲ್ಲಿ ನಡೆಯಲಿರುವ (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಅಧಿಕಾರದಲ್ಲಿವೆಯೆಂಬುದು ಮುಖ್ಯವಾದ ವಿಚಾರ!) ನಡೆಯುವ ಚುನಾವಣೆಗಳಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಹೊರಟ ಹುನ್ನಾರವೋ ಎಂಬ ಗಂಭೀರ ಸಂಶಯವು ಹುಟ್ಟುತ್ತದೆ. 1970ರ ದಶಕದ ತುರ್ತುಸ್ಥಿತಿಯ ಬಳಿಕ ಇದೊಂದು ಎರಡನೆಯ ಸ್ವಾತಂತ್ರ್ಯ ಹೋರಾಟವನ್ನು ಮುಂಗಾಣಿಸುವ ವಾತಾವರಣವನ್ನು ಸೃಷ್ಟಿಸಿದೆ. ಮತೀಯತೆ, ಭ್ರಷ್ಟಾಚಾರದೊಂದಿಗೆ ಇದನ್ನು ಚರ್ಚಿಸುವುದು ಮತ್ತು ಸರಕಾರದ ಸುಳ್ಳಿನ ಗುಳ್ಳೆಯನ್ನು ಒಡೆಯಲು ಎಲ್ಲ ಪ್ರಜ್ಞಾವಂತರೂ ಮಾಡಬೇಕಾದ ಆದ್ಯ ಕರ್ತವ್ಯ. ಇದೇ ದೇಶಸೇವೆ; ಸಮಾಜ ಸೇವೆ; ಜನಸೇವೆ. ಇವಕ್ಕೆ ಪ್ರತ್ಯೇಕವಾದ ಅಭಿದಾನದ ಅಗತ್ಯವಿಲ್ಲ. ಒಂದು ಸಣ್ಣ ಉದಾಹರಣೆಯನ್ನು ನೀಡುವುದಾದರೆ ಅರ್ಥಸಚಿವರ ಪತಿ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಖ್ಯಾತ ಇತಿಹಾಸಕಾರ ರಾಮಚಂದ್ರಗುಹ, ಸಿದ್ಧಾರ್ಥ ವರದರಾಜನ್‌ರಂತಹ ಪತ್ರಕರ್ತರು, ಕನ್ನಡದ ಸಂದರ್ಭದಲ್ಲಿ ಪ್ರಕಾಶ್‌ರಾಜ್, ಶಿವಸುಂದರ್‌ರಂತಹ ಸಾಮಾಜಿಕ ಹೋರಾಟಗಾರರು, ಖ್ಯಾತ ಲೇಖಕಿ ಅರುಂಧತಿರಾಯ್, ಕನ್ನಡದ ದೇವನೂರು, ಎ. ನಾರಾಯಣ, ಸುರೇಶ ಮುಂತಾದ (ಇನ್ನೂ ಕೆಲವು ಹಿರಿಕಿರಿಯ ಹೆಸರುಗಳಿವೆ: ಸ್ಥಳಾವಕಾಶದಿಂದ ಹೆಸರಿಸಿಲ್ಲ.) ಸಾಂಸ್ಕೃತಿಕ ಅಕಾಡಮಿಕ್‌ಗಳು ತಮ್ಮ ವೇಳೆಯನ್ನು ಎಳ್ಳಷ್ಟೂ ವ್ಯರ್ಥಮಾಡದೆ ಮೋದಿ ಸರಕಾರದ ಸುಳ್ಳುಗಳನ್ನು ಜನತೆಯ ಮುಂದೆ ಬಿಚ್ಚಿಡುತ್ತಿದ್ದಾರೆ. ಇದನ್ನು ಮೊದಮೊದಲು ಸರಕಾರದ ಅಂಧಾಭಿಮಾನಿಗಳು ನಂಬದಿರಬಹುದು; ಅಲಕ್ಷಿಸಬಹುದು; ಆದರೆ ನಿಧಾನವಾಗಿ ಜನರು ಈ ಹೋರಾಟದ ಹಾದಿಯನ್ನು ತಿರಸ್ಕರಿಸರು. ಆಗ ಈ ಪ್ರತಿಭಟನೆಯ ಪ್ರವಾಹವು ಸದ್ಯದ ಆಡಳಿತವನ್ನು ಕೊಚ್ಚಿಕೊಂಡುಹೋಗಬಹುದು. ಆದರೆ ಇದನ್ನು ನಮ್ಮ ಇತರ ಪ್ರವೃತ್ತ-ನಿವೃತ್ತ ಪ್ರಜೆಗಳು ಮಾಡುತ್ತಿದ್ದಾರೆಯೇ? ಖಂಡಿತಾ ಇಲ್ಲ. ಈ ಕುರಿತು ಕೆಲವಂಶಗಳನ್ನು ಉದಾಹರಣೆಗಳೊಂದಿಗೆ ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು: ವಕೀಲವೃತ್ತಿಯೊಂದಿಗೆ ಸಮಾಜಸೇವೆಯಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಬರವಣಿಗೆ, ಭಾಷಣ, ಚಳವಳಿ, ವಿಚಾರ ಸಂಕಿರಣ ಮುಂತಾದವುಗಳಲ್ಲಿ ಭಾಗಿಯಾಗಲು ತಮ್ಮ ವೃತ್ತಿಯ ಒಂದಷ್ಟು ಸಮಯವನ್ನು ನೀಡುವವರು ಅನೇಕರಿದ್ದಾರೆ. ಒಮ್ಮೊಮ್ಮೆ ಅನಿವಾರ್ಯವಾಗಿ ನಿಗದಿಯಾದ ಪ್ರಕರಣಗಳ ನಿರ್ವಹಣೆಯನ್ನು ಮುಂದೂಡುವುದೂ ಇದೆ. ಇಂಥ ಸಂದರ್ಭಗಳಲ್ಲಿ ಸಹಜವಾಗಿಯೇ ಕಕ್ಷಿದಾರರಿಗೂ ನ್ಯಾಯಾಧೀಶರಿಗೂ ತಮ್ಮ ಕೆಲಸಕ್ಕೆ ಅಡ್ಡಿ ಅಥವಾ ತೊಡಕುಂಟಾಯಿತೆಂಬ ಕಸಿವಿಸಿಯಾಗುತ್ತದೆ. ಸ್ವಲ್ಪ ಉದಾರಿಗಳಾದವರು ‘ಆಗಲಿ, ಮುಂದಿನ ದಿನ ಇದನ್ನು ಮಾಡಿದರಾಯಿತು’ ಎಂದು ನ್ಯಾಯವಾದಿಯನ್ನು ಕ್ಷಮಿಸುತ್ತಾರೆ. ಕೆಲವುಬಾರಿ ನ್ಯಾಯವಾದಿಗಳಿಗೂ ಕಕ್ಷಿದಾರರಿಗೂ ದಂಡ ಬೀಳುವುದುಂಟು. ಪ್ರಾಯಃ ಇಂಥ ನ್ಯಾಯವಾದಿ ಗಳನ್ನುದ್ದೇಶಿಸಿಯೇ ಅಧೀನ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ‘‘ನ್ಯಾಯವಾದಿಗಳು ಚೆನ್ನಾಗಿ ತಮ್ಮ ಕಕ್ಷಿದಾರರ ಪ್ರಕರಣವನ್ನು ನಿರ್ವಹಿಸುವುದೇ ನೈಜ ಸಮಾಜಸೇವೆ, ಜನಸೇವೆ’’ ಎನ್ನುತ್ತಿದ್ದರು. ಇದು ನಾನು ನಿರ್ವಹಿಸುವ ನ್ಯಾಯಾಂಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲ ವೃತ್ತಿಗಳಲ್ಲಿ ಮತ್ತು ಖಾಸಗಿ ಹಾಗೂ ಇತರ ಸ್ವತಂತ್ರ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಆದರೆ ಪ್ರಶ್ನೆಯಿರುವುದು ಎಲ್ಲರೂ ಅವರವರ ವೃತ್ತಿ, ಉದ್ಯೋಗಕ್ಕೆ ಶತಾಂಶ ಅರ್ಪಿಸಿಕೊಂಡರೆ ಈ ಸಮಾಜಸೇವೆ, ಜನಸೇವೆ ಎನ್ನುವುದು ಯಾರಿಗಾಗಿ? ಸಮಾಜ, ಜನತೆ ಯಾರನ್ನು ಈ ಕೆಲಸಕ್ಕಾಗಿ ಇದಿರು ನೋಡಬೇಕು? ಕಾಯಬೇಕು? ಸಮಾಜಸೇವೆ, ಜನಸೇವೆ ಎಂಬುದು ಐಚ್ಛಿಕವಾದ ಕರ್ತವ್ಯ. ಐಚ್ಛಿಕವೂ ಹೌದು; ಕರ್ತವ್ಯವೂ ಹೌದು. ಆದರೆ ಅದಕ್ಕೆ ಆಸ್ಪದವಿರುವವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಕಡಿಮೆ. ಸರಕಾರಿ ಮತ್ತು ಅಂತಹ ಇತರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಇಂತಹ ಐಚ್ಛಿಕತೆ ಕಡಿಮೆ. ಸಿಡಿದು ಹೊರಬರಬೇಕಾದ, ಕೆಲಸವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಯಾರೂ ಮೈಮೇಲೆಳೆದುಕೊಳ್ಳುವುದಿಲ್ಲ. ಈ ಪೈಕಿ ಕೆಲವರಿಗೆ ತಮ್ಮ ಕ್ಷೇತ್ರವೇ ಒಂದು ನೆಪ. ತಾವು ಈ ಬಗ್ಗೆ ಆಸಕ್ತಿಯಿದ್ದರೂ ಭಾಗವಹಿಸುವಂತಿಲ್ಲವೆಂದು ಹೇಳುವವರೇ ಹೆಚ್ಚು. ತಮ್ಮ ಕ್ಷೇತ್ರಗಳ ಮೂಲಕ ಸಲ್ಲಿಸುವ ಸೇವೆಗಳ ಗೊಡವೆಗೆ ಹೋಗುವವರ ಸಂಖ್ಯೆಯೂ ಕಡಿಮೆ. ಏಕೆಂದರೆ ಅನೇಕರಿಗೆ ಈ ಕ್ಷೇತ್ರಗಳ ಉದ್ಯೋಗಗಳು ಭಾಗ್ಯದ ಬಾಗಿಲುಗಳು. ಅಲ್ಲಿ ಕ್ರಮ ಮತ್ತು ಅಕ್ರಮ ಎರಡಕ್ಕೂ ಅವಕಾಶಗಳಿದ್ದರೂ ಕ್ರಮಾವಕಾಶದ ಲಾಭಕ್ಕಿಂತಲೂ ಅಕ್ರಮಾವಕಾಶದ ಲಾಭ ಹೆಚ್ಚಾದಾಗ ಅದರ ಬಾಗಿಲು ಬಡಿಯುವವರೇ ಜಾಸ್ತಿ. ಒಟ್ಟಾರೆ ಸಮಾಜಕ್ಕೆ ಸಮಾಜವೇ ಭ್ರಷ್ಟವಾಗುವ ಅವಕಾಶಗಳಿರುವಾಗ ಮತ್ತು ಕಾಂಚಾಣವೇ ಕಾರ್ಯಸಿದ್ಧಿಯ ಸೂತ್ರವಾದಾಗ ಈ ಅವಕಾಶ ಯಾರಿಗೆ ಬೇಡ? ಇಷ್ಟೊಂದು ಲಕ್ಷಣಗಳನ್ನು ಎಣಿಸಿ ಶಿಕ್ಷಣ, ಅದಾದ ಮೇಲೆ ಉದ್ಯೋಗ, ಭಡ್ತಿ, ತಮ್ಮ ಆಸಕ್ತಿಗೆ, ಅನುಕೂಲಕ್ಕೆ ಅನುಗುಣವಾಗಿ ವರ್ಗಾವಣೆ ಪಡೆದವರು, ಅದನ್ನು ಮರಳಿ ಪಡೆಯುವುದನ್ನೇ ಆದ್ಯತೆಯಾಗಿ ಕಾಣುವುದು ಸಹಜ. ಜೊತೆಗೇ ಪಡೆಯುವ ಅಧಿಕಾರ, ಪ್ರತಿಷ್ಠೆ ಇವುಗಳಿಂದಾಗಿ ಸಮಾಜ ಮತ್ತು ಜನತೆ ಅಲಕ್ಷ್ಯವಾಗುವ ಕ್ಷೇತ್ರಗಳಾಗುತ್ತವೆ. ಎಲ್ಲರೂ ತಮ್ಮ ಪಾಡಿಗೆ ತಾವು ಬದುಕಿದ್ದರೆ ಗಾಂಧಿಯಂತಹ ನಾಯಕರು ಇರುತ್ತಿರಲಿಲ್ಲ. ನ್ಯಾಯವಾದಿಯಾಗಿದ್ದ ಗಾಂಧಿಗೆ ಒಳ್ಳೆಯ ಸಂಪಾದನೆಯಿತ್ತು. ಪ್ರತಿಷ್ಠೆಯಿತ್ತು. ಆದರೆ ಅವರಿಗೆ ತನ್ನ ವೃತ್ತಿಯಿಂದ ದೇಶವನ್ನು, ಅಲ್ಲ, ಸಮಾಜವನ್ನು, ಬವಣೆಯ ಬದುಕಿನ ಜನರನ್ನು ಬೇರೆಯಾಗಿ ಕಾಣಲು ಸಾಧ್ಯವಾಗಲಿಲ್ಲ. ವಕೀಲ ವೃತ್ತಿಯೆಂದಲ್ಲ, ಆಗಿನ ಐಸಿಎಸ್ ಮುಂತಾದ ಅಧಿಕಾರಯುತ, ಅಧಿಕಾರಯುಕ್ತ ಉದ್ಯೋಗಗಳನ್ನು ಬಿಟ್ಟು ಬಂದವರು ಸಾಕಷ್ಟಿದ್ದರು. ಗಾಂಧಿ ಬಿಡಿ, ಸಮಾಜಸೇವೆ, ಜನಸೇವೆಯೆಂದು ತಮ್ಮ ವೃತ್ತಿ-ಉದ್ಯೋಗಗಳಿಂದ ಹೊರಬಂದು ಬದುಕಿದ, ಸತ್ತ ಅನೇಕರನ್ನು ನಾವು ಕಾಣುತ್ತಿರಲಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ಸತ್ತರು; ಸೆರೆವಾಸ, ವನವಾಸವನ್ನು ಅನುಭವಿಸಿದರು. ತಾವು ಮಾತ್ರ ಕಷ್ಟವನ್ನು ಅನುಭವಿಸಿದ್ದಲ್ಲ; ತಮ್ಮ ಸ್ವಂತ ಸಂಸಾರವನ್ನು ಬಡತನದ, ಸಂಕಟದ ಬೀದಿಗೆ ತಳ್ಳಿದರು. ಇಂದಲ್ಲ ನಾಳೆ ನಾಡಿಗೆ, ಜನರಿಗೆ ಒಳ್ಳೆಯದಾಗುತ್ತದೆಂದು ನಂಬಿದರು. ಹಾಗೆ ನಂಬಿದವರೆಲ್ಲ ತಮ್ಮ ದುಡಿಮೆಯ ಫಲವನ್ನು ನೋಡಲು ಬದುಕಲಿಲ್ಲ. ತಮ್ಮ ಮಕ್ಕಳುಮರಿಗಾದರೂ ಒಳ್ಳೆಯದಾಗುತ್ತದೆಂದು ಆಶಿಸಿದರು. ಅದರ ಫಲವನ್ನುಣ್ಣುವವರು ಅವರನ್ನು ಸ್ಮರಿಸಿದರೆ ಅವರ ಶ್ರಮ ಸಾರ್ಥಕ. ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು, ದೇಶವನ್ನು, ಜನರನ್ನು ಬಳಸಿಕೊಳ್ಳುವವರು ಸತ್ತವರ ಸಾಲಿಗೆ ಸೇರುತ್ತಾರೆಯೇ ಹೊರತು ಬಾಳಿದವರ ಸಾಲಿಗಲ್ಲ. ಇಂದು ದೇಶದ ಸ್ಥಿತಿ ಹೇಗಿದೆ ನೋಡಿ. ದೇವರು-ಧರ್ಮ ಮತಪೆಟ್ಟಿಗೆಯ ಒಳಗೆ ಅವಿತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಮ್ಮ ಅನೇಕ ಲೇಖಕರು-ಚಿಂತಕರು ಈ ವಾಸ್ತವಕ್ಕೆ ಬೆನ್ನುಹಾಕಿ ತಮ್ಮ ಪಾಡಿಗೆ ತಾವು ಸಾಹಿತ್ಯ, ವಿಮರ್ಶೆ, ಕೃತಿ ಪ್ರಕಟಣೆ ಮುಂತಾದ ಸಂಗತಿಗಳಲ್ಲಿ ತೊಡಗಿಕೊಂಡಿದ್ದಾರೆ. ಬರೆಯುವ ತಾಕತ್ತಿದ್ದವರು ಬರೆಯುತ್ತಿಲ್ಲ; ಮಾತನಾಡುವ ತಾಕತ್ತಿದ್ದವರು ಮಾತನಾಡುತ್ತಿಲ್ಲ; ಹೇಳಬೇಕಾದ ಮತ್ತು ಹೇಳಿದರೆ ಕೇಳುವ ಶಿಷ್ಯಗಣವಿರುವವರು ಹೇಳುತ್ತಿಲ್ಲ. ಹೇಳುವ ಧೈರ್ಯವನ್ನು ತೋರುತ್ತಿಲ್ಲ. ಹಿಂದೆ ಮಾಸ್ತಿಯಂತಹ ಸಾಂಪ್ರದಾಯಿಕರ ನಡುವೆ ಕಾರಂತ, ಕುವೆಂಪು ಇದ್ದರು; ಕೆಲವು ದಶಕಗಳ ಹಿಂದಷ್ಟೇ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮುಂತಾದ ಜನಮನ್ನಣೆಯ ಸಾಹಿತಿ ಚಿಂತಕರು ತಮ್ಮ ಸಾಹಿತ್ಯ ಕ್ಷೇತ್ರದಿಂದ ಹೊರಬಂದು ದೇಶದ ಹಿತವನ್ನು ಗ್ರಹಿಸಿದ್ದಾರೆ. ನಮ್ಮ ನೆಲದಲ್ಲಿ ನಡೆಯುವ ದೈನಂದಿನ ಸಂತೆಗಳು, ಸಡಗರಗಳು, ಉತ್ಸವಗಳು, ಪ್ರಶಸ್ತಿಗಳು ದೇಶವನ್ನು, ಸಮಾಜವನ್ನು, ಜನರನ್ನೂ ಕೊನೆಗೆ ಮಾರಾಟಮಾಡುವ ಸಂಚನ್ನು ಮರೆತರೆಂಬಂತಿವೆ. ಸತ್ತಂತಿರುವ ಇವರನ್ನೆಲ್ಲ ಬಡಿದೆಬ್ಬಿಸುವುದು ಹೇಗೆ? ಈ ಪ್ರಶ್ನೆ ನಮ್ಮ ಮುಂದಿದೆ. ಬಡಿದೆಬ್ಬಿಸಲು ಸಾಧ್ಯವಾಗದವರನ್ನು ಬಡಿದು ಹಾಕಬೇಕೆಂಬಷ್ಟು ಸಿಟ್ಟು ಬಂದರೂ ಅದನ್ನು ತಾಳಿಕೊಂಡು ಸಾಂಸ್ಕೃತಿಕ ಸಕ್ರಿಯರು ಕಾರ್ಯಶೀಲರಾಗಬೇಕಾಗಿದೆ. ನಮಗೆ ಜಯಪ್ರಕಾಶ್ ನಾರಾಯಣರಂತಹ ನಾಯಕರು ಈಗ ಮುಂದೆ ಬಂದಿಲ್ಲ. ಅಲ್ಲಿಯವರೆಗೆ ಈ ಹರಿವು ಬತ್ತದಂತೆ ನೋಡಿಕೊಳ್ಳಬೇಕಾದಂತಹ ಹೊಣೆ ಯೋಚಿಸಬಲ್ಲವರಿಗಿದೆ.

ವಾರ್ತಾ ಭಾರತಿ 5 Feb 2026 11:00 am

ಮಾಧ್ಯಮ ಲೋಕದಲ್ಲಿ ತಲ್ಲಣ, ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಸಂಸ್ಥೆಯಿಂದ 300 ಉದ್ಯೋಗ ಕಡಿತ | Washington Post

ಮಾಧ್ಯಮ ಲೋಕದಲ್ಲಿ ಮತ್ತೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ, ಅದರಲ್ಲೂ ಇಡೀ ಜಗತ್ತಿನಲ್ಲೇ ದೊಡ್ಡ ಮಟ್ಟಿಗೆ ಹೆಸರು ಮಾಡಿರುವ ದೈತ್ಯ ಮಾಧ್ಯಮ ಸಂಸ್ಥೆಗಳೇ ಇದೀಗ ಉದ್ಯೋಗ ಕಡಿತ ಮಾಡುತ್ತಿವೆ. ಈ ಪೈಕಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ, ದಿ ವಾಷಿಂಗ್ಟನ್ ಪೋಸ್ಟ್ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿ ಆದೇಶ ಹೊರಡಿಸಿದೆ. ಸುಮಾರು 800 ಪತ್ರಕರ್ತರ

ಒನ್ ಇ೦ಡಿಯ 5 Feb 2026 10:36 am

Breaking: ಬೆಂಗಳೂರು ಮೆಟ್ರೋ ದರ ಏರಿಕೆ ಫೆಬ್ರವರಿ 9 ರಿಂದ ಫಿಕ್ಸ್: ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ನೀಡಿದೆ. ಬೆಲೆ ಏರಿಕೆ ಮಾಡಿದ್ದು, ಜನರಿಗೆ ಮತ್ತಷ್ಟು ಮೆಟ್ರೋ ಪ್ರಯಾಣ ದುಬಾರಿ ಆಗಲಿದೆ.

ವಿಜಯ ಕರ್ನಾಟಕ 5 Feb 2026 10:31 am

ಪ್ರತ್ಯೇಕತಾವಾದಿಗಳ ಪಾಕ್ ವ್ಯಾಮೋಹಕ್ಕೆ ಕೊನೆ ಎಂದು?

ಅಪಾರ ದೇವಭಕ್ತಿ ಬೆಳೆಸಿಕೊಂಡವರಿಗೆ ಎಲ್ಲೆಲ್ಲೂ ಎಲ್ಲರಲ್ಲೂ ದೇವರೇ ಕಾಣುತ್ತಾನೆ ಎನ್ನುತ್ತಾರೆ. ಅದೇ ರೀತಿ ಪಾಕಿಸ್ತಾನದ ಬಗ್ಗೆ ಅಪಾರ ವ್ಯಾಮೋಹ ಬೆಳೆಸಿಕೊಂಡು ಪಾಕ್ ಭಕ್ತಿ ಪರವಶರಾದವರಿಗೆ ಎಲ್ಲೆಲ್ಲೂ, ಎಲ್ಲರಲ್ಲೂ ಪಾಕಿಸ್ತಾನವೇ ಕಾಣಿಸುತ್ತದೆ. ಜನರ ಮುಖಗಳಲ್ಲಿ ಮಾತ್ರವಲ್ಲ, ಕಣ್ಣು, ಕಿವಿ, ಮೂಗು, ನಾಲಗೆ ಇತ್ಯಾದಿಗಳಲ್ಲೂ ಇವರು ಪಾಕಿಸ್ತಾನದ ದರ್ಶನ ಮಾಡುತ್ತಿರುತ್ತಾರೆ. ಈ ಪಾಕ್ ಅಭಿಮಾನಿಗಳು ಭಾರತದಲ್ಲಿದ್ದುಕೊಂಡು, ಭಾರತದ ವಾಯುವನ್ನು ಸೇವಿಸುತ್ತಾ, ಭಾರತದ ನೀರು ಕುಡಿಯುತ್ತಾ, ಭಾರತದ ಅನ್ನ ತಿನ್ನುತ್ತಾ ಸದಾ ಪಾಕಿಸ್ತಾನವನ್ನು ಸ್ಮರಿಸುತ್ತಾ, ಪಾಕಿಸ್ತಾನದ ನಾಮ ಜಪಿಸುತ್ತಾ ಇರುತ್ತಾರೆ. ಈ ಮಟ್ಟದ ಕೊಳಕು ಪಾಕ್ ವ್ಯಾಮೋಹವನ್ನು ಮೊನ್ನೆ ತಾನೇ ನಮ್ಮ ರಾಜ್ಯದ ವಿಧಾನ ಪರಿಷತ್ತಿನಲ್ಲೂ ಪ್ರದರ್ಶಿಸಲಾಯಿತು. ಏನಾದರೂ ಮಾಡಿ ಪಾಕಿಸ್ತಾನದ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬ ಸಂಕಲ್ಪ ಮಾಡಿರುವ ಪಾಕ್ ವ್ಯಾಮೋಹಿಗಳ ಛಲ ನಮ್ಮ ನೆಲದಲ್ಲಿ ಆಗಾಗ ಪ್ರಕಟವಾಗುತ್ತಲೇ ಇರುತ್ತದೆ. ಇವರು ಕಂಡಕಂಡವರೊಡನೆ, ‘‘ನೀವು ಪಾಕಿಸ್ತಾನಕ್ಕೆ ಹೋಗಿ’’ ಎಂದು ಅಂಗಲಾಚುತ್ತಲೇ ಇರುತ್ತಾರೆ. ಅದಕ್ಕೆ ಪೀಠಿಕೆಯಾಗಿ ನಿಮ್ಮಲ್ಲಿ ನನಗೆ ಪಾಕಿಸ್ತಾನ ಕಾಣಿಸುತ್ತಿದೆ ಎನ್ನುತ್ತಾರೆ. ಭಾರತೀಯರನ್ನು ಪಾಕಿಸ್ತಾನಕ್ಕೆ ಕಳಿಸುವ ಇವರ ಅಮಿತೋತ್ಸಾಹ ನೋಡಿದರೆ ಇವರು ಪಾಕಿಸ್ತಾನದ ಪರ ರಿಕ್ರೂಟ್ಮೆಂಟ್ ಏಜೆನ್ಸಿ ನಡೆಸುತ್ತಿರುವಂತೆ ತೋರುತ್ತದೆ. ವಿಪರ್ಯಾಸವೇನೆಂದರೆ ರಾಷ್ಟ್ರಪಿತನನ್ನು, ಸ್ವಾತಂತ್ರ್ಯ ಹೋರಾಟವನ್ನು, ರಾಷ್ಟ್ರಧ್ವಜ ವನ್ನು ವಿರೋಧಿಸಿದ ಕರಾಳ ಕಳಂಕ ತಮ್ಮ ತಲೆಮೇಲಿದ್ದರೂ ‘ನಾವು ಮಾತ್ರ ದೇಶಭಕ್ತರು’ ಎಂದು ಪೊಳ್ಳು ಬೊಗಳೆ ಕೊಚ್ಚಿಕೊಳ್ಳುತ್ತಲಿರುವ ಬಿಜೆಪಿಯ ಪಾಳಯದಲ್ಲಿ ಇಂತಹ ಪಾಕಿಸ್ತಾನ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. 1927ರಲ್ಲಿ ಕರಾಚಿಯಲ್ಲಿ ಜನಿಸಿದ್ದ, ಬಿಜೆಪಿಯ ಅತ್ಯಂತ ಹಿರಿಯ ಜೀವಂತ ನಾಯಕ ಎಲ್.ಕೆ. ಅಡ್ವಾಣಿಯವರು 2005ರಲ್ಲಿ ತಮ್ಮ ತಾಯಿನಾಡಿಗೆ ಬಹಿರಂಗ ಭೇಟಿ ನೀಡಿದ್ದರು. ಆರು ದಿನಗಳ ಆ ತಮ್ಮ ಪಾಕಿಸ್ತಾನ ಭೇಟಿಯ ವೇಳೆ ಅಡ್ವಾಣಿಯವರು ತುಂಬಾ ಭಾವುಕರಾಗಿ ಬಿಟ್ಟಿದ್ದರು. ಕರಾಚಿ ನಗರದೊಂದಿಗೆ ತಮಗಿರುವ ಬಾಂಧವ್ಯದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದರು. ತಾನು ಮತ್ತು ಆಗಿನ ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ‌್ರಫ್ - ಇಬ್ಬರೂ ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್ ಎಂಬ ಒಂದೇ ಶಾಲೆಯಲ್ಲಿ ಕಲಿತವರೆಂಬುದನ್ನು ಅಭಿಮಾನಪೂರ್ವಕವಾಗಿ ಜಗತ್ತಿಗೆಲ್ಲಾ ತಿಳಿಸಿದ್ದರು. ಜನರಲ್ ಮುಷರ‌್ರಫ್ ಜೊತೆಗಿನ ಮಾತುಕತೆಯ ವೇಳೆಯೂ ಅವರು ಈ ವಿಷಯವನ್ನು ಆತ್ಮೀಯವಾಗಿ ಪ್ರಸ್ತಾಪಿಸಿದ್ದರು. ಸಾಲದ್ದಕ್ಕೆ ತಾನು ಬಾಲ್ಯದಲ್ಲಿ ಕಲಿತಿದ್ದ ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್‌ಗೆ ಅಡ್ವಾಣಿಯವರು ಭೇಟಿ ನೀಡಿದ್ದರು. ಹಾಗೆಂದು ಸ್ವಾತಂತ್ರ್ಯಾನಂತರ ಇದು ಪಾಕಿಸ್ತಾನಕ್ಕೆ ಅಡ್ವಾಣಿಯವರ ಮೊದಲ ಭೇಟಿಯಾಗಿರಲಿಲ್ಲ. ಸ್ವತಃ ಅವರೇ ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವಂತೆ 1978ರಲ್ಲೂ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಹೀಗೆ 2005ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಎಲ್.ಕೆ. ಅಡ್ವಾಣಿಯವರು ಕರಾಚಿಯಲ್ಲಿ ಪ್ರಥಮವಾಗಿ ಭೇಟಿ ನೀಡಿದ್ದು ಎಲ್ಲಿಗೆ ಗೊತ್ತೇ? ಬೇರೆಲ್ಲಿಗೂ ಅಲ್ಲ. ಪಾಕಿಸ್ತಾನದ ಸ್ಥಾಪಕ ಹಾಗೂ ರಾಷ್ಟ್ರಪಿತ ಮುಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಗೆ. ಅವರ ಆ ಭೇಟಿ ಕೂಡಾ ಕೇವಲ ಔಪಚಾರಿಕ ಸ್ವರೂಪದ್ದಾಗಿರಲಿಲ್ಲ. ಅಲ್ಲೂ ಅವರು ತುಂಬಾ ಭಾವುಕರಾಗಿ ಬಿಟ್ಟಿದ್ದರು. ಅಲ್ಲಿ ಅವರು ‘ಸಂದರ್ಶಕರ ಪುಸ್ತಕ’ದಲ್ಲಿ ಬರೆದ ಸಂದೇಶವು ಐತಿಹಾಸಿಕವಾಗಿ ಬಿಟ್ಟಿತು: ಎಲ್.ಕೆ. ಅಡ್ವಾಣಿಯವರು ಜಿನ್ನಾ ಸ್ಮಾರಕದಲ್ಲಿ ಬರೆದ ಸಂದೇಶದ ಕನ್ನಡ ಅನುವಾದ ಇಲ್ಲಿದೆ: ಇತಿಹಾಸದ ಪುಟಗಳ ಮೇಲೆ ಅಳಿಸಲಾಗದ ಛಾಪನ್ನುಮೂಡಿಸಿ ಹೋಗುವವರು ಅನೇಕರಿದ್ದಾರೆ. ಆದರೆ ನಿಜವಾಗಿಯೂ ಇತಿಹಾಸವನ್ನು ಸೃಷ್ಟಿಸುವವರು ಬಹಳ ವಿರಳ. ಕಾಯಿದೆ ಆಝಮ್ (ಮಹಾನಾಯಕ) ಮುಹಮ್ಮದ್ ಅಲಿ ಜಿನ್ನಾ ಅವರು ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಆರಂಭಿಕ ದಿನಗಳಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕಿಯಾಗಿದ್ದ ಸರೋಜಿನಿ ನಾಯ್ಡು ಅವರು ಜಿನ್ನಾ ಅವರನ್ನು ‘ಹಿಂದೂ-ಮುಸ್ಲಿಮ್ ಏಕತೆಯ ರಾಯಭಾರಿ’ ಎಂದು ಬಣ್ಣಿಸಿದ್ದರು. ಆಗಸ್ಟ್ 11, 1947ರಂದು ಪಾಕಿಸ್ತಾನದ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಅವರು ಮಾಡಿದ ಭಾಷಣವು ಒಂದು ಸಾರ್ವಕಾಲಿಕ ಶ್ರೇಷ್ಠ ದಾಖಲೆಯಾಗಿದೆ. ಅದು ಜಾತ್ಯತೀತ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ; ಅಂತಹ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಧರ್ಮವನ್ನು ಪಾಲಿಸಲು ಸ್ವತಂತ್ರನಾಗಿರುತ್ತಾನೆ ಮತ್ತು ಸರಕಾರವು ಧರ್ಮದ ಆಧಾರದ ಮೇಲೆ ನಾಗರಿಕರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಈ ಮಹಾನ್ ವ್ಯಕ್ತಿಗೆ ನನ್ನ ಗೌರವಪೂರ್ವಕ ನಮನಗಳು. ನೆನಪಿರಲಿ ಇವೆಲ್ಲಾ ನಮ್ಮ ರಾಜ್ಯದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರ ಹೇಳಿಕೆಗಳಲ್ಲ. ಸಿ.ಟಿ. ರವಿಯವರ ಪಕ್ಷದ ಅತ್ಯುನ್ನತ ಮಟ್ಟದ ಹಿರಿಯ ನಾಯಕರಾದ ಸಾಕ್ಷಾತ್ ಎಲ್.ಕೆ. ಅಡ್ವಾಣಿಯವರು, ಯಾರೂ ಅಳಿಸಲಾಗದ ರೀತಿಯಲ್ಲಿ ಬರೆದು ದಾಖಲಿಸಿರುವ ಮಾತುಗಳು. ಅಡ್ವಾಣಿಯವರು ಜಿನ್ನಾ ಅವರ ಕುರಿತು ಬರೆದ ಈ ಉತ್ಪ್ರೇಕ್ಷಿತ ಪ್ರಶಂಸೆಯ ಮಾತುಗಳನ್ನು ಖುದ್ದಾಗಿ ಓದಬಯಸುವವರು ಬಿಜೆಪಿಯ ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಅದನ್ನು ಓದಿ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. https://www.bjp.org/pressreleases/shri-advani-visits-jinnah-mausoleum-karachi ಇದು ‘ರಥಯಾತ್ರೆ’ ಖ್ಯಾತಿಯ ಅಡ್ವಾಣಿಯವರ ಕತೆಯಾದರೆ 1999 ಫೆಬ್ರವರಿ ತಿಂಗಳಲ್ಲಿ, ಆಗ ದೇಶದ ಪ್ರಧಾನಿಯಾಗಿದ್ದ ಎ.ಬಿ. ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್‌ಗೆ ಒಂದು ‘ಬಸ್ ಯಾತ್ರೆ’ ನಡೆಸಿದ್ದರು. ಆಗ ಪಾಕ್ ಪ್ರಧಾನಿಯಾಗಿದ್ದ ನವಾಝ್ ಷರೀಫ್ ಅವರನ್ನು ಭೇಟಿಯಾಗಿ ಒಂದು ಶಾಂತಿ ಒಪ್ಪಂದಕ್ಕೆ ಸಹಿಹಾಕಿದ್ದರು. ಲಾಹೋರ್‌ನಲ್ಲಿರುವ 70 ಅಡಿ ಎತ್ತರದ ‘ನಿಶಾನೆ ಪಾಕಿಸ್ತಾನ್’ ಸ್ಮಾರಕವನ್ನು ಸಂದರ್ಶಿಸಿ ತಮ್ಮ ಶ್ರದ್ಧಾ ಪೂರ್ವಕ ನಮನ ಸಲ್ಲಿಸಿದ್ದರು. ಅದೇ ಪಾಕ್ ಭೇಟಿಯ ಸಂದರ್ಭದಲ್ಲಿ ಲಾಹೋರ್‌ನಲ್ಲಿ ವಾಜಪೇಯಿ ಅವರು ಒಂದು ಅದ್ಭುತ ಭಾಷಣವನ್ನೂ ಮಾಡಿದ್ದರು. ಅವರ ಭಾಷಣ ಕೇಳಿದ ಪಾಕ್ ಪ್ರಧಾನಿ ನವಾಝ್ ಷರೀಫ್ ಅವರು, ವಾಜಪೇಯಿ ಜೀ, ಈಗ ನೀವು ಪಾಕಿಸ್ತಾನದಲ್ಲೂ ಚುನಾವಣೆ ಗೆಲ್ಲಬಲ್ಲಿರಿ ಎಂದಿದ್ದರು. 2015 ಡಿಸೆಂಬರ್‌ನಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತ ಭೇಟಿಗಾಗಿ ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಭೇಟಿ ಮುಗಿಸಿ ಅವರು ಭಾರತಕ್ಕೆ ಮರಳುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಡಿಸೆಂಬರ್ 25 ರಂದು ಮೋದಿಯವರು ಹಠಾತ್ತನೆ ಪಾಕಿಸ್ತಾನದಲ್ಲಿ ಪ್ರತ್ಯಕ್ಷರಾಗಿ ಬಿಟ್ಟರು. ಕಾರಣ ಗೊತ್ತೇ? ಡಿಸೆಂಬರ್ 25 ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಝ್ ಷರೀಫ್ ಅವರ ಜನ್ಮದಿನವಾಗಿತ್ತು. ಪಾಕ್ ಪ್ರಧಾನಿಯವರು ತನ್ನ ಜನ್ಮ ದಿನವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಸೇರಿ ಸಂಭ್ರಮದಿಂದ ಆಚರಿಸಿದರು. ಅಪ್ಪುಗೆ, ತಬ್ಬುಗೆ, ಔತಣ, ಭೋಜನ ಇತ್ಯಾದಿ ಎಲ್ಲವೂ ನಡೆಯಿತು. ತಮ್ಮ ನಾಯಕರುಗಳ ಈಮಟ್ಟದ ಪಾಕಿಸ್ತಾನ ಪ್ರೇಮ, ಜನರಲ್ ಮುಷರ‌್ರಫ್ ಪ್ರೇಮ ಮತ್ತು ನವಾಝ್ ಷರೀಫ್ ಪ್ರೇಮವನ್ನು ಸಿ.ಟಿ. ರವಿಯವರು ಹೇಗೆಂದು ವರ್ಣಿಸುತ್ತಾರೆ? ತಮ್ಮ ಪ್ರಸ್ತುತ ನಾಯಕರನ್ನು ಪೂಜಿಸುವ ಈ ಮಟ್ಟದ ಪಾಕ್ ಪ್ರೇಮಿ ಮಂದಿಗೆ ಎಲ್ಲೆಂದರಲ್ಲಿ ಪಾಕಿಸ್ತಾನ ಕಾಣಿಸಿದರೆ ಅಚ್ಚರಿಯೇನಿಲ್ಲ. ಆದರೆ ಇಂಥವರು ಭಾರತೀಯರ ದೇಶನಿಷ್ಠೆಯನ್ನು ಪ್ರಶ್ನಿಸುವ ಭಂಡತನ ತೋರಿದರೆ ಅದು ನಿಜವಾದ ದೇಶದ್ರೋಹ. ದ್ರೋಹಗಳ ಪೈಕಿ ಅತ್ಯಂತ ಅಕ್ಷಮ್ಯ ದ್ರೋಹ.

ವಾರ್ತಾ ಭಾರತಿ 5 Feb 2026 10:29 am

Epstein files | ಎಪ್ಸ್ಟೀನ್ ಜೊತೆ ಕಳೆದ ‘ಪ್ರತಿ ನಿಮಿಷ’ಕ್ಕೂ ವಿಷಾದ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್, ಫೆ. 4: ಶಿಕ್ಷೆಗೆ ಗುರಿಯಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಕಳೆದ “ಪ್ರತಿ ನಿಮಿಷಕ್ಕೂ ವಿಷಾದಿಸುತ್ತೇನೆ, ಕ್ಷಮೆಯಾಚಿಸುತ್ತೇನೆ” ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಕೊಡುಗೈದಾನಿ ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ. ಇದೇ ವೇಳೆ, ಎಪ್ಸ್ಟೀನ್ ಜೊತೆಗಿನ ಸಂಬಂಧದ ಕುರಿತು ಇನ್ನೂ ಅನೇಕ ಪ್ರಶ್ನೆಗಳು ಉಳಿದಿವೆ ಎಂದು ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಹೇಳಿದ್ದಾರೆ. ಕಳೆದ ವಾರ ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಗಳ ಇತ್ತೀಚಿನ ಕಂತಿನಲ್ಲಿ ಎಪ್ಸ್ಟೀನ್ ಮತ್ತು ಅನೇಕ ಪ್ರಮುಖ ವ್ಯಕ್ತಿಗಳ ನಡುವಿನ ಇಮೇಲ್‌ ಗಳು, ಸಂಪರ್ಕಗಳು ಹಾಗೂ ಉಲ್ಲೇಖಗಳು ಬಹಿರಂಗಗೊಂಡಿವೆ. ಈ ದಾಖಲೆಗಳಲ್ಲಿ ಆತ್ಮೀಯ ಸ್ನೇಹ, ಅಕ್ರಮ ಹಣಕಾಸು ವ್ಯವಹಾರಗಳು ಮತ್ತು ಖಾಸಗಿ ಫೋಟೋಗಳಿಗೆ ಸಂಬಂಧಿಸಿದ ವಿವರಗಳು ಸೇರಿರುವುದಾಗಿ ತಿಳಿದುಬಂದಿದೆ. ದಾಖಲೆಗಳ ಪೈಕಿ ಒಂದು ಕರಡು ಇಮೇಲ್‌ ನಲ್ಲಿ, ಗೇಟ್ಸ್ ಅವರು ವಿವಾಹೇತರ ಸಂಬಂಧಗಳಲ್ಲಿ ತೊಡಗಿದ್ದಾರೆ ಎಂದು ಎಪ್ಸ್ಟೀನ್ ಆರೋಪಿಸಿರುವುದು ಕಾಣಿಸಿಕೊಂಡಿದೆ. ಗೇಟ್ಸ್ ಅವರೊಂದಿಗೆ ತನ್ನ ಸಂಬಂಧವು “ರಷ್ಯಾದ ಹುಡುಗಿಯರೊಂದಿಗೆ ಲೈಂಗಿಕ ಸಂಪರ್ಕಗಳ ಪರಿಣಾಮಗಳನ್ನು ಎದುರಿಸಲು ಬಿಲ್‌ ಗೆ ಮಾದಕ ದ್ರವ್ಯಗಳನ್ನು ಒದಗಿಸುವುದರಿಂದ ಹಿಡಿದು, ವಿವಾಹಿತ ಮಹಿಳೆಯರೊಂದಿಗೆ ಅವರ ಅಕ್ರಮ ಸಂಬಂಧಗಳನ್ನು ಸುಗಮಗೊಳಿಸುವವರೆಗೆ” ವ್ಯಾಪಿಸಿದೆ ಎಂದು ಆ ಕರಡು ಇಮೇಲ್‌ ನಲ್ಲಿ ಉಲ್ಲೇಖಿಸಿದ್ದಾಗಿ ದಾಖಲೆಗಳು ಸೂಚಿಸುತ್ತವೆ. ಈ ಕುರಿತು ಪ್ರತಿಕ್ರಿಯಿಸಿದ ಬಿಲ್ ಗೇಟ್ಸ್ ಅವರು ಬುಧವಾರ (ಫೆ. 4, 2026) ಪ್ರಸಾರವಾದ ‘9 ನ್ಯೂಸ್ ಆಸ್ಟ್ರೇಲಿಯಾ’ ಸಂದರ್ಶನದಲ್ಲಿ, “ಆ ಇಮೇಲ್ ಎಂದಿಗೂ ಕಳುಹಿಸಲಾಗಿಲ್ಲ. ಅದು ಸುಳ್ಳು. ಅವರ ಉದ್ದೇಶವೇನು ಎಂಬುದು ನನಗೆ ತಿಳಿದಿಲ್ಲ. ಯಾವುದೋ ರೀತಿಯಲ್ಲಿ ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ. 2019ರಲ್ಲಿ ಜೈಲಿನಲ್ಲಿ ಮೃತಪಟ್ಟ ಎಪ್ಸ್ಟೀನ್ ಅವರ ತನಿಖೆಗೆ ಸಂಬಂಧಿಸಿದ ಲಕ್ಷಾಂತರ ಫೈಲ್‌ ಗಳ ಹೊಸ ಸಂಗ್ರಹ ಬಿಡುಗಡೆಯಾದ ಬಳಿಕ ಗೇಟ್ಸ್ ಅವರ ವಕ್ತಾರರೂ ಆರೋಪಗಳನ್ನು ನಿರಾಕರಿಸಿದ್ದಾರೆ. “ಈ ದಾಖಲೆಗಳು ತೋರಿಸುವ ಏಕೈಕ ಸಂಗತಿ ಎಂದರೆ, ಬಿಲ್ ಗೇಟ್ಸ್ ಅವರೊಂದಿಗೆ ನಿರಂತರ ಸಂಪರ್ಕ ಹೊಂದಲು ಸಾಧ್ಯವಾಗದೇ ಎಪ್ಸ್ಟೀನ್ ಹೊಂದಿದ್ದ ಹತಾಶೆ ಮತ್ತು ಅವರನ್ನು ಬಲೆಗೆ ಬೀಳಿಸಲು, ಮಾನಹಾನಿ ಮಾಡಲು ಆತನ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧರಾಗಿದ್ದ ಎಂಬುದು,” ಎಂದು ವಕ್ತಾರರು ತಿಳಿಸಿದ್ದಾರೆ. ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರು ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ದಾಖಲೆಗಳ ಬಿಡುಗಡಯು “ನನ್ನ ವಿವಾಹ ಜೀವನದ ಕೆಲವು ನೋವಿನ ಸಂದರ್ಭಗಳ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತು” ಎಂದಿದ್ದಾರೆ. “ಆ ವಿವರಗಳು ಹೊರಬಂದಾಗಲೆಲ್ಲಾ ನನಗೆ ವೈಯಕ್ತಿಕವಾಗಿ ತುಂಬಾ ನೋವಾಗುತ್ತದೆ. ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ, ಎಲ್ಲವನ್ನೂ ತಿಳಿದುಕೊಳ್ಳಲು ಸಹ ಸಾಧ್ಯವಿಲ್ಲ. ಆ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ಆ ವ್ಯಕ್ತಿಗಳೇ, ನನ್ನ ಮಾಜಿ ಪತಿಯೂ ಸೇರಿ,” ಎಂದು ಹೇಳಿದ್ದಾರೆ. ಗೇಟ್ಸ್ ದಂಪತಿಗಳು 2021ರಲ್ಲಿ ವಿಚ್ಛೇದನ ಪಡೆದಿದ್ದರು. ‘9 ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಗೇಟ್ಸ್ ಅವರು, 2011ರಲ್ಲಿ ಎಪ್ಸ್ಟೀನ್ ನನ್ನು ಮೊದಲ ಬಾರಿ ಭೇಟಿಯಾದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಹಲವಾರು ಬಾರಿ ಭೋಜನಕೂಟಗಳಲ್ಲಿ ಭಾಗವಹಿಸಿದ್ದೇನೆ ಎಂದರೂ, ಎಪ್ಸ್ಟೀನ್ ನ ಕೆರಿಬಿಯನ್ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿಲ್ಲ ಹಾಗೂ ಮಹಿಳೆಯರೊಂದಿಗೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. “ಆತ ಸದಾ ಗಮನ ಸೆಳೆಯುವ ವ್ಯಕ್ತಿಯಾಗಿದ್ದ. ಅನೇಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಹೊಂದಿದ್ದ ಮತ್ತು ಜಾಗತಿಕ ಆರೋಗ್ಯ ಯೋಜನೆಗಳಿಗೆ ಅವರಿಂದ ಹಣ ಸಂಗ್ರಹಿಸಬಹುದು ಎಂದು ಹೇಳುತ್ತಿದ್ದ. ಹಿಂತಿರುಗಿ ನೋಡಿದಾಗ ಅದು ತಪ್ಪು ನಿರ್ಧಾರವಾಗಿತ್ತು,” ಎಂದಿದ್ದಾರೆ.

ವಾರ್ತಾ ಭಾರತಿ 5 Feb 2026 10:28 am

ಗದಗ | ಭೀಕರ ರಸ್ತೆ ಅಪಘಾತ : 3 ಮಹಿಳೆಯರು ಸ್ಥಳದಲ್ಲೇ ಮೃತ್ಯು, 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಗದಗ : ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ಗಜೇಂದ್ರಗಡದ ಶಿವಾಜಿ ಪೇಟೆಯ ನಿವಾಸಿಗಳಾದ ಮರಿಯಂಬ ಹುನಗುಂದ (55), ಅನ್ನಪೂರ್ಣ ಚಂಗಳಿ (45) ಹಾಗೂ ಸುಜಾತ ಹೊಸಮನಿ (30) ಎಂದು ಪೊಲೀಸರು ಗುರುತಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರು ಕ್ರೂಸರ್ ವಾಹನದಲ್ಲಿದ್ದರು ಎನ್ನಲಾಗಿದೆ. ಮೃತರು ಹಾಗೂ ಗಾಯಾಳುಗಳು ಗಜೇಂದ್ರಗಡದಿಂದ ರೋಣ ಕಡೆಗೆ ಕಡಲೆ ಕೀಳುವ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ರೋಣ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರೋಣದಿಂದ ಗಜೇಂದ್ರಗಡದತ್ತ ಹೊರಟಿದ್ದ ಕ್ಯಾಂಟರ್ ಲಾರಿ ಕ್ರೂಸರ್ ವಾಹನ ಢಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖೆ ಪ್ರಕಾರ ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದರು. ಅಪಘಾತ ಸಂಭವಿಸಿದ ಕೆಲವೇ ಹೊತ್ತಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮೃತದೇಹಗಳನ್ನು ರೋಣ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಾರ್ತಾ ಭಾರತಿ 5 Feb 2026 10:28 am

Trade Deal: ತಾತ್ಕಾಲಿಕವಾಗಿತ್ತು ಸುಂಕ ಸಮರ, ಭಾರತ-ಅಮೆರಿಕ ಸಂಬಂಧ ಅಜರಾಮರ; ಭವಿಷ್ಯದ ನಡೆ ಇನ್ನೂ ರೋಚಕ!

ಭಾರತದೊಂಗಿನ ವ್ಯಾಪಾರ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲೆ ಈ ಮೊದಲು ಹೇರಲಾಗಿದ್ದ ಶೇ. 50ರಷ್ಟು ಸುಂಕವನ್ನು ಶೇ.18ಕ್ಕೆ ಇಳಿಕೆ ಮಾಡಿದೆ. ಅಷ್ಟೇ ಅಲ್ಲದೇ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಜೊತೆಗಿನ ವ್ಯಾಪಾರ ಒಪ್ಪಂದವೂ ಜಾರಿಯಾಗಿರುವುದಾಗಿ ಘೋಷಿಸಿದ್ದಾರೆ. ಈ ದಿಢೀರ್‌ ಬೆಳವಣಿಗೆಗಳು, ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಸುಧಾರಣೆಗೂ ಮುನ್ನುಡಿ ಬರೆದಿದೆ. ಹಾಗಾದರೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಗಳೇನು? ಈ ಕುರಿತು ಇಲ್ಲಿದೆ ಸಮಗ್ರ ವಿಶ್ಲೇಷಣೆ.

ವಿಜಯ ಕರ್ನಾಟಕ 5 Feb 2026 10:07 am

Gold Rate Fall : ಏರಿದಷ್ಟೇ ವೇಗವಾಗಿ ಇಳಿದ ಚಿನ್ನದ ಬೆಲೆ- ಭರ್ಜರಿ 5 ಸಾವಿರ ರೂ ಇಳಿಕೆ, ಬೆಳ್ಳಿಯೂ ಇಳಿಕೆ

ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ನಾಗಾಲೋಟದಲ್ಲಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಬೆಲೆ 3 ಲಕ್ಷದ ಸಮೀಪಕ್ಕೆ ಬಂದಿದ್ದು, ಚಿನ್ನದ ಬೆಲೆಯು 1.54 ಸಾವಿರದ ಆಸುಪಾಸಲ್ಲಿದೆ.

ವಿಜಯ ಕರ್ನಾಟಕ 5 Feb 2026 10:05 am

ಚೆನ್ನಾಗಿ ಓದಿದ್ರೂ ಪರೀಕ್ಷೆಯಲ್ಲಿ ಗೊಂದಲವೇಕೆ ? CBSE ವಿದ್ಯಾರ್ಥಿಗಳಿಗೆ ಸವಾಲಾಗಿರುವ ಹೊಸ ಮಾದರಿ ಪ್ರಶ್ನೆಗಳು

ನವದೆಹಲಿ: ತಿಂಗಳುಗಟ್ಟಲೆ ರಾತ್ರಿ ಹಗಲು ಎನ್ನದೆ ಓದಿ, ಪಠ್ಯಪುಸ್ತಕದ ಪ್ರತಿ ಸಾಲನ್ನೂ ಬಾಯಿಪಾಠ ಮಾಡಿ ಪರೀಕ್ಷಾ ಕೊಠಡಿಗೆ ಹೋಗುವ ವಿದ್ಯಾರ್ಥಿಗಳು, ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಕಂಗಾಲಾಗುತ್ತಿದ್ದಾರೆ. ನಾನು ಎಲ್ಲವನ್ನೂ ಓದಿದ್ದೆ, ಆದರೆ ಉತ್ತರ ಬರೆಯಲು ಗೊತ್ತಾಗಲಿಲ್ಲ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಸಿಬಿಎಸ್‌ಇ (CBSE) ವಿದ್ಯಾರ್ಥಿಗಳಿಂದ ಸಾಮಾನ್ಯವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಪಠ್ಯಕ್ರಮದ ಹೊರಗಿನ ಪ್ರಶ್ನೆಗಳಲ್ಲ,

ಒನ್ ಇ೦ಡಿಯ 5 Feb 2026 10:01 am

ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮಾತುಕತೆ, ಕುತೂಹಲ ಕೆರಳಿಸಿದ ಚರ್ಚೆ | Donald Trump

ಅಮೆರಿಕ ಮತ್ತು ಚೀನಾ ನಡುವೆ ದೊಡ್ಡ ತಿಕ್ಕಾಟ ಶುರುವಾಗಿ, ಒಬ್ಬರು ಮತ್ತೊಬ್ಬರ ಮೇಲೆ ಭಾರಿ ಗಂಭೀರ ಆರೋಪ &ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುರೋಪ್ ದೇಶಗಳು ಚೀನಾ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ಈ ಬೆಂಕಿ ಇನ್ನಷ್ಟು ಧಗಧಗ ಅಂತಿದೆ. ಫ್ರಾನ್ಸ್, ಬ್ರಿಟನ್ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ಚೀನಾ ಜೊತೆಗೆ ಈಗ ಮುಕ್ತವಾದ ನೇರ

ಒನ್ ಇ೦ಡಿಯ 5 Feb 2026 9:48 am

SSLC Exam 2026: ಹಿಂದಿ ಹೇರಿಕೆ ವಿರುದ್ಧ ಧ್ವನಿ; ತೃತೀಯ ಭಾಷೆ 'ಪಾಸ್' ಕಡ್ಡಾಯ ಮಾಡದಂತೆ ಸರ್ಕಾರಕ್ಕೆ ಒತ್ತಾಯ

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಜ್ಯದ ಶಿಕ್ಷಣ ವಲಯದಲ್ಲಿ ಮಹತ್ವದ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿರುವ ಹಿಂದಿ ವಿಷಯದಲ್ಲಿ ತೇರ್ಗಡೆಯಾಗುವುದನ್ನು (Pass) ಕಡ್ಡಾಯಗೊಳಿಸಬಾರದು ಎಂಬ ಒತ್ತಾಯವು ವಿದ್ಯಾರ್ಥಿಗಳು, ಪೋಷಕರು ಹಾಗೂ ಕನ್ನಡ ಪರ ಹೋರಾಟಗಾರರಿಂದ ಬಲವಾಗಿ ಕೇಳಿಬರುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳ ಸಂಕಷ್ಟ ರಾಜ್ಯದ

ಒನ್ ಇ೦ಡಿಯ 5 Feb 2026 9:44 am

ಸುಪ್ರೀಂ’ನಲ್ಲಿ ವಾದಿಸಿದ ಮೊದಲ ಸಿಎಂ ಯಾರು? ಮಮತಾ ಬ್ಯಾನರ್ಜಿ ಅಲ್ಲ - ನಮ್ಮ ಹೆಮ್ಮೆಯ 'ಕನ್ನಡಿಗ'!

CM Argument in Supreme Court : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಖುದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ್ದಾರೆ. ಸುಪ್ರೀಂಕೋರ್ಟ್’ನಲ್ಲಿ ವಾದ ಮಂಡಿಸಿದ ಮೊದಲ ಸಿಎಂ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಆದರೆ, ಈ ಕೆಲಸವನ್ನು ಮೊದಲು ಮಾಡಿದವರು ನಮ್ಮ ಹೆಮ್ಮೆಯ ದೇವೆಗೌಡರು, ಇಲ್ಲಿದೆ ಇತಿಹಾಸದ ಪುಟ..

ವಿಜಯ ಕರ್ನಾಟಕ 5 Feb 2026 9:44 am

ನನ್ನ ಹೃದಯ ಒಡೆದಿದೆ; ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಶಶಿ ತರೂರ್‌ ಪುತ್ರ ಇಶಾನ್‌! ಏನು ಕಾರಣ?

ಅಮೆರಿಕದಲ್ಲಿ ಭವಿಷ್ಯದ ಅನಿಶ್ಚಿತತೆ ಎದುರಿಸುತ್ತಿರುವ ಲಕ್ಷಾಂತರ ಭಾರತೀಯರಿದ್ದಾರೆ. ಯಾವ ಕ್ಷಣದಲ್ಲಿ ತಮ್ಮ ಕೆಲಸ ಕಸಿದುಕೊಳ್ಳಲಾಗುತ್ತದೆಯೋ ಎಂಬ ಆತಂಕ ಇವರನ್ನು ಕಾಡುತ್ತಿದೆ. ಇದು ಕೇವಲ ಸಾಮಾನ್ಯ ಭಾರತೀಯರ ಪಾಡಲ್ಲ, ಬದಲಿಗೆ ಭಾರತದ ಪ್ರತಿಷ್ಠಿತ ಕುಟುಂಬಗಳ ಸದಸ್ಯರೂ ಕೂಡ ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪುತ್ರ ಇಶಾನ್‌ ತರೂರ್‌ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 9:42 am

ನಕಲಿ ದಾಖಲೆ ಪ್ರಕರಣ | ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ಬಂಧನ

ಹೊಸದಿಲ್ಲಿ, ಫೆ. 5: ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ದಿಲ್ಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಚಾರಣೆ ಆರಂಭಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪುಕೋಟೆ ಸಮೀಪ ನಡೆದ ಸ್ಫೋಟದ ಬಳಿಕ ಖಾಸಗಿ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳಲ್ಲಿ ಅಕ್ರಮಗಳು ಹಾಗೂ ನಕಲಿ ದಾಖಲೆಗಳ ಬಳಕೆ ನಡೆದಿರುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನೀಡಿದ ದೂರಿನ ಮೇರೆಗೆ ದಿಲ್ಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಬಂಧಿತ ಸಿದ್ದಿಕಿ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ವಾರ್ತಾ ಭಾರತಿ 5 Feb 2026 9:29 am

ಮನೋಜ್ ಬಾಜ್ಪೇಯಿ ಅವರ ‘ಘೂಷ್‌ಖೋರ್ ಪಂಡತ್‌’ ಟೀಸರ್‌ ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

“ಶೀರ್ಷಿಕೆ ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನಕ್ಕೆ ಅಡ್ಡಿ” ಹೊಸದಿಲ್ಲಿ, ಫೆ. 5: ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ನಟ ಮನೋಜ್ ಬಾಜ್‌ಪೇಯಿ ಅಭಿನಯದ ‘ಘೂಷ್‌ಖೋರ್ ಪಂಡತ್‌’ ಸರಣಿಯ ಟೀಸರ್‌ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಆಕ್ಷೇಪಕ್ಕೆ ಗುರಿಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ‘ಪಂಡತ್‌’ ಪದವನ್ನು ಪಾತ್ರದ ವಿವರಣೆಗೆ ಬಳಸಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. “ಏಕೆ ಪಂಡಿತ್ ಮಾತ್ರ? ಏಕೆ ಮೌಲಾನಾ ಅಲ್ಲ? ಏಕೆ ʼಫಾದರ್ʼ ಅಲ್ಲ? ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ” ಎಂದು ಬಾಂಬೆ ಹೈಕೋರ್ಟ್‌ನ ವಕೀಲ ಅಶುತೋಷ್ ಜೆ. ದುಬೆ ಕಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. “ಶೀರ್ಷಿಕೆ ಕೆಟ್ಟದು, ಆಕ್ರಮಣಕಾರಿ ಮತ್ತು ಸೂಕ್ಷ್ಮವಲ್ಲದ್ದು. ಅದನ್ನು ತೆಗೆದುಹಾಕಲು ಚಲನಚಿತ್ರ ನಿರ್ಮಾಪಕರನ್ನು ಕೇಳುವುದು ಉತ್ತಮ” ಎಂದು ನವಿಕಾ ಚೌಹಾಣ್ ಎಂಬ ಬಳಕೆದಾರರ ಮತ್ತೊಂದು ಕಮೆಂಟ್ ಹೇಳಿದೆ. ಶುಭಂ ತಿವಾರಿ ಬಾಬಾ ಎಂಬವರು, ಬಾಜ್‌ಪೇಯಿ ಸ್ವತಃ ಬ್ರಾಹ್ಮಣರಾಗಿದ್ದು, ಬ್ರಾಹ್ಮಣ ಸಮುದಾಯವನ್ನು ಕೆಣಕಲು ಹಣ ಮತ್ತು ಅಧಿಕಾರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ►‘ತುಂಬಾ ಆಕ್ಷೇಪಾರ್ಹ’ ಈ ಸರಣಿಯ ನಿರ್ಮಾಪಕ ನೀರಜ್ ಪಾಂಡೆ. ಇವರು ಹಿಂದೆ ನೆಟ್‌ಫ್ಲಿಕ್ಸ್‌ನ ‘ಖಾಕೀ: ದಿ ಬಿಹಾರ್ ಚಾಪ್ಟರ್’ (2023) ಹಾಗೂ ಅದರ 2025ರ ಮುಂದುವರಿದ ಭಾಗವನ್ನೂ ನಿರ್ಮಿಸಿದ್ದರು. ಇತ್ತೀಚಿನ ಚಿತ್ರವು ನೆಟ್‌ಫ್ಲಿಕ್ಸ್ ಇಂಡಿಯಾದ 2026ರ ಕಂಟೆಂಟ್ ಸ್ಲೇಟ್‌ ನ ಭಾಗವಾಗಿದೆ. ಗಾಯಗೊಂಡ ಯುವತಿಯನ್ನು ಚಲಿಸುವ ಕಾರಿನಿಂದ ಹೊರಕ್ಕೆ ತಳ್ಳುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಬಳಿಕ “ತನಿಖಾ ಅಧಿಕಾರಿ ಯಾರು?” ಎಂಬ ವಾಯ್ಸ್‌ಓವರ್ ಕೇಳಿಸುತ್ತದೆ. “ಅವರ ಹೆಸರು ಅಜಯ್ ದೀಕ್ಷಿತ್ ಆದರೆ ಅವರು ದಿಲ್ಲಿ ಪೊಲೀಸ್ ವಲಯದಲ್ಲಿ ಪಂಡತ್‌ ಎಂದು ಕುಖ್ಯಾತರಾಗಿದ್ದಾರೆ. ಅವರು ವಿವಾಹಿತರು, ಆದರೆ ಪರಸ್ತ್ರೀ ವ್ಯಾಮೋಹಿ. ಅವರ ಸೇವಾ ದಾಖಲೆಯೂ ತುಂಬಾ ಕೆಟ್ಟದಾಗಿದೆ” ಎಂದು ಪುರುಷ ಧ್ವನಿ ಹೇಳುತ್ತಿದ್ದಂತೆ ಮನೋಜ್ ಬಾಜ್‌ಪೇಯಿ ಫ್ರೇಮ್‌ ಗೆ ಪ್ರವೇಶಿಸುತ್ತಾರೆ. ನಂತರ ಟೀಸರ್‌ ನಲ್ಲಿ ಇತರ ಪಾತ್ರಗಳ ಕ್ಷಿಪ್ರ ದೃಶ್ಯಗಳು ಕಾಣಿಸುತ್ತವೆ. ನೆಟ್‌ಫ್ಲಿಕ್ಸ್ ಇಂಡಿಯಾದ ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಲಾದ ಟೀಸರ್‌ ಗೆ “ಹರ್ ಭ್ರಷ್ಟ ಅಧಿಕಾರಿ ಕೋ ಬದಲ್ನೇ ಕಾ ಏಕ್ ಮೌಕಾ ಮಿಲ್ತಾ ಹೈ… ಅಬ್ ಆಫೀಸರ್ ಅಜಯ್ ದೀಕ್ಷಿತ್ ಕಿ ಬಾರಿ” (ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಗೂ ಬದಲಾಗಲು ಒಂದು ಅವಕಾಶ ಸಿಗುತ್ತದೆ… ಈಗ ಅಧಿಕಾರಿ ಅಜಯ್ ದೀಕ್ಷಿತ್ ಸರದಿ) ಎಂಬ ಶೀರ್ಷಿಕೆ ನೀಡಲಾಗಿದೆ. ಈ ʼರೀಲ್ʼ 20 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. “ಇಂದು, ಬ್ರಾಹ್ಮಣರನ್ನು ದೂಷಿಸಲಾಗುತ್ತಿದೆ, ಅವಮಾನಿಸಲಾಗುತ್ತಿದೆ ಮತ್ತು ಕೊಳಕು ಮತಬ್ಯಾಂಕ್ ರಾಜಕೀಯಕ್ಕಾಗಿ ಬಲಿಪಶುಗಳಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ, ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ(ಮದುವೆ ಮಾಡಿಕೊಡುವವರೆಗೆ) ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದರು. ‘ಬ್ರಾಹ್ಮಣ ಭಾರತ್ ಛೋಡೋ’ ಮತ್ತು ‘ಬ್ರಾಹ್ಮಣವಾದ್ ಸೆ ಆಝಾದಿ’ ನಂತಹ ಘೋಷಣೆಗಳು ತುಂಬಾ ಸಾಮಾನ್ಯವಾಗುತ್ತಿವೆ. ಬ್ರಾಹ್ಮಣರ ವಿರುದ್ಧ ದ್ವೇಷ ನಿಜವಾಗಿಯೂ ಮುಂದಿನ ಹಂತವಾಗಿರುವ ಸಮಯದಲ್ಲಿ, ಚಲನಚಿತ್ರಕ್ಕೆ ಅಂತಹ ಹೆಸರುಗಳನ್ನು ನೀಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ” ಎಂದು ಧರ್ಮ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕಿ ಹಾಗೂ ಸ್ವಯಂ ಘೋಷಿತ ಬ್ರಾಹ್ಮಣ ಹಕ್ಕುಗಳ ಕಾರ್ಯಕರ್ತೆ ಅನುರಾಧಾ ತಿವಾರಿ ಹೇಳಿದ್ದಾರೆ. ಶೀರ್ಷಿಕೆಯನ್ನು ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನ ನಿಷೇಧಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಸೌಜನ್ಯ:theprint.in

ವಾರ್ತಾ ಭಾರತಿ 5 Feb 2026 9:18 am

ಗೌರವ ಖರೀದಿಸಲು ಸಾಧ್ಯವಿಲ್ಲ; ಭಾರತ-ಯುಎಸ್‌ ವ್ಯಾಪಾರ ಒಪ್ಪಂದದ ಬಳಿಕ ಷರೀಫ್-ಮುನೀರ್‌ಗೆ ಪಾಕಿಸ್ತಾನಿಯರಿಂದ ಮಂಗಳಾರತಿ!

ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಭಾರತೀಯರನ್ನಲ್ಲ, ನೆರೆಯ ಪಾಕಿಸ್ತಾನಿಯರನ್ನು ಕೇಳಬೇಕು. ಭಾರತವನ್ನು ಹೊಗಳಿ ಅಟ್ಟಕ್ಕೇರಿಸುವ ಪಾಕಿಸ್ತಾನಿಯರು, ತಮ್ಮದೇ ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ನೋಡಬಹುದು. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಭಾರತವನ್ನು ಅಭಿನಂದಿಸಿರುವ ಅನೇಕ ಪಾಕಿಸ್ತಾನಿಯರು, ಗೌರವವನ್ನು ಸಂಪಾದಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಶೆಹಬಾಜ್‌ ಷರೀಫ್‌ ಮತ್ತು ಅಸಿಮ್‌ ಮುನೀರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 8:56 am

ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ಬಸ್‌ ಪ್ರಾರಂಭ: ಶೀಘ್ರವೇ ಉಜ್ಜಯಿನಿಗೆ ಬಸ್ , ಕಲ್ಯಾಣಕ್ಕೆ 4 ತಿಂಗಳಲ್ಲಿ 56 ಹೊಸ ಬಸ್‌ಗಳ ನಿರೀಕ್ಷೆ

ಕಲ್ಯಾಣ ಕರ್ನಾಟಕಕ್ಕೆ ಹಾಗೂ ರಾಜಧಾನಿ ಬೆಂಗಳೂರಿಗೆ ಜನರ ಸಂಪರ್ಕ ಸೇತುವೆಯಾಗಿ ಅಮೋಘವರ್ಷ ಬಸ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಖಾಸಗಿ ದುಬಾರಿ ಬಸ್‌ ಟಿಕೆಟ್ ಕೊಡುವ ಬದಲು ಕಡಿಮೆ ವೆಚ್ಚದಲ್ಲಿ ಜನರಿಗೆ ಸ್ಲೀವರ್ ಬಸ್ ಮೂಲಕ ಬರಲು ಅನುಕೂಲವಾಗಿದೆ. ಇನ್ನೂ 56 ಬಸ್ ಗಳು ಆರಂಭ ಆಗುವ ನಿರೀಕ್ಷೆ ಇವೆ.

ವಿಜಯ ಕರ್ನಾಟಕ 5 Feb 2026 8:44 am

ಉತ್ತರ ಪ್ರದೇಶ | ನಾಲ್ಕು ದಶಕಗಳ ಬಳಿಕ ಹತ್ಯೆ ಪ್ರಕರಣದ ಶತಾಯುಷಿ ಆರೋಪಿ ದೋಷಮುಕ್ತ

ಪ್ರಯಾಗ್‌ರಾಜ್: ನಾಲ್ಕು ದಶಕಗಳ ಕಾಲ ನಡೆದ ಕಾಯುವಿಕೆ ಬಳಿಕ ಶತಾಯುಷಿಯೊಬ್ಬರಿಗೆ ಕೊನೆಗೂ ನ್ಯಾಯ ದೊರೆತಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಮೀರ್ಪುರ ಜಿಲ್ಲೆಯ ಧನಿರಾಮ್ ಅವರನ್ನು ಅಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿದೆ. 1982ರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 1984ರಲ್ಲಿ ವಿಚಾರಣಾ ನ್ಯಾಯಾಲಯ ಧನಿರಾಮ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಅದೇ ವರ್ಷ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ 42 ವರ್ಷಗಳ ಬಳಿಕ ಅವರ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅವರನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿದೆ. ನ್ಯಾಯಮೂರ್ತಿಗಳಾದ ಚಂದ್ರಧರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, 23 ಪುಟಗಳ ತೀರ್ಪಿನಲ್ಲಿ ಅಭಿಯೋಜಕರ ಸಾಕ್ಷ್ಯಗಳಲ್ಲಿ ಕಂಡುಬಂದ ವೈರುದ್ಧ್ಯಗಳ ಆಧಾರದ ಮೇಲೆ ತೀರ್ಪು ನೀಡಿದೆ. ಪ್ರಕರಣದಲ್ಲಿ ಉಲ್ಲೇಖಿಸಲಾದ ಇಬ್ಬರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ನಂಬಿಕೆಗೆ ಅರ್ಹವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜೊತೆಗೆ ಎಫ್‌ಐಆರ್‌ನಲ್ಲಿರುವ ದೋಷಗಳನ್ನು ಉಲ್ಲೇಖಿಸಿ, ಆರೋಪಗಳು ಅಸಂಭವನೀಯವಾಗಿವೆ ಎಂದು ಹೇಳಿದೆ. ಪ್ರಕರಣದ ಮುಖ್ಯ ಆರೋಪಿ ಹಾಗೂ ಗುಂಡು ಹಾರಿಸಿದ್ದಾನೆ ಎನ್ನಲಾದ ವ್ಯಕ್ತಿ 1982ರಿಂದಲೇ ತಲೆಮರೆಸಿಕೊಂಡಿದ್ದು, ತಾರ್ಕಿಕ ಸಂಶಯಗಳಿಗೆ ಅತೀತವಾಗಿ ಆರೋಪವನ್ನು ಸಾಬೀತುಪಡಿಸಲು ಅಭಿಯೋಜಕರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ವಾರ್ತಾ ಭಾರತಿ 5 Feb 2026 8:10 am

ಕರ್ನಾಟಕದ 4 ಏರ್‌ಪೋರ್ಟ್ ಹೆಸರು ಮರುನಾಮಕರಣ ಕೇಂದ್ರಕ್ಕೆ ಸಂಸದ ಜಗದೀಶ್ ಶೆಟ್ಟರ್ ಮನವಿ

ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಬೆಂಗಳೂರಿನ ಹೈಸ್ಪೀಡ್ ರೈಲಿನಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಪ್ರಯೋಜನವಿಲ್ಲ ಎನ್ನುವ ಚರ್ಚೆಯ ನಡುವೆಯೇ ಕೇಂದ್ರ ಸರ್ಕಾರವು ಕೆಲವೊಂದು ನಿರ್ದಿಷ್ಟ ಬದಲಾವಣೆಗೆ ಮುಂದಾಗುತ್ತಿದೆ ಎನ್ನಲಾಗಿದೆ. ಇದೀಗ ಬೆಳಗಾವಿಗೆ ಸಂಬಂಧಿಸಿದಂತೆಯೂ ಅಪ್ಡೇಟ್ಸ್‌ ಬರುತ್ತಿದೆ. ಇದರೊಂದಿಗೆ ಕರ್ನಾಟಕದ 4 ಪ್ರಮುಖ ಏರ್‌ಪೋರ್ಟ್‌ಗಳ ಹೆಸರು ಮರುನಾಮಕರಣದ ಬಗ್ಗೆಯೂ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ವಿಮಾನಯಾನ

ಒನ್ ಇ೦ಡಿಯ 5 Feb 2026 7:46 am

ಭಾರತ ತಾನು ಬಯಸಿದ ರಾಷ್ಟ್ರದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ; ರಷ್ಯಾದಿಂದ ತೀವ್ರ ಬೇಸರದ ಹೇಳಿಕೆ! ಮುಂದೇನು?

ಕಳೆದ ಡಿಸೆಂಬರ್‌ವರೆಗೂ ಚೆನ್ನಾಗಿಯೇ ಇದ್ದ ಭಾರತ-ರಷ್ಯಾ ತೈಲ ಸಂಬಂಧ, ಇದೀಗ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಬಾಗಿ ಮಂಕಾಗುತ್ತಿದೆ. ಈ ಒಪ್ಪಂದದ ಭಾಗವಾಗಿ ಭಾರತಕ್ಕೆ ತನ್ನ ನಿಯಂತ್ರಣದ ವೆನೆಜುವೆಲಾ ತೈಲವನ್ನು ಮಾರಾಟ ಮಾಡುವುದಾಗಿ ಅಮೆರಿಕ ಹೇಳಿದ್ದೇ ತಡ, ರಷ್ಯಾ ತೀವ್ರ ಬೇಸರ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ತನ್ನ ಪರಿಷ್ಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾಸ್ಕೋ, ನವದೆಹಲಿ ತಾನು ಬಯಸಿದ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ ಎಂದು ಹೇಳಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 7:33 am

ಅಮೆರಿಕ | ಟ್ರಂಪ್ ಹತ್ಯೆಗೆ ಯತ್ನ; ಆರೋಪಿಗೆ ಜೀವಾವಧಿ ಶಿಕ್ಷೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಮೊದಲು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ರ‍್ಯಾನ್ ರುತ್ ಎಂಬ ಬಂದೂಕುಧಾರಿಗೆ ಅಮೆರಿಕ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅರೆ-ಸ್ವಯಂಚಾಲಿತ ರೈಫಲ್ ನೊಂದಿಗೆ ಫ್ಲೋರಿಡಾ ಗಾಲ್ಫ್ ಕೋರ್ಸ್ ನ ಪೊದೆಗಳ ಹಿಂದೆ ಅವಿತಿದ್ದ ರುತ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ಎಂದು ರಾಯ್ಟರ್ಸ್ ವರದಿ ಮಾಡಿದೆ. 2024ರ ಸೆಪ್ಟೆಂಬರ್ 15ರಂದು ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಅಧ್ಯಕ್ಷ ಟ್ರಂಪ್ ಗಾಲ್ಫ್ ಆಡುತ್ತಿದ್ದ ಸಂದರ್ಭ ಗಾಲ್ಫ್ ಕ್ಲಬ್ ನಿಂದ ಸರಿಸುಮಾರು ನೂರು ಗಜಗಳಷ್ಟು ದೂರದ ಪೊದೆಗಳಲ್ಲಿ ಅವಿತಿದ್ದ ಆರೋಪಿಯನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಪತ್ತೆ ಮಾಡಿದ್ದರು. ರುತ್ ತನ್ನ ರೈಫಲ್ ನೊಂದಿಗೆ ತಪ್ಪಿಸಿಕೊಂಡಿದ್ದರೂ, ಬಳಿಕ ಬಂಧಿಸಲಾಗಿತ್ತು. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಅಲೀನ್ ಕ್ಯಾನನ್, ಫ್ಲೋರಿಡಾದ ಫೋರ್ಟ್ ಪೀರ್ಸ್ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದರು. ಮನುಷ್ಯ ಜೀವ ತೆಗೆಯುವ ಲೆಕ್ಕಾಚಾರದ ಹಾಗೂ ಪೂರ್ವಯೋಜಿತ ಕೃತ್ಯದಲ್ಲಿ ತೊಡಗಿರುವುದು ಸ್ಪಷ್ಟ ಎಂದು ತೀರ್ಪಿನಲ್ಲಿ ಹೇಳಲಾಗಿದೆ. 2025ರ ಸೆಪ್ಟೆಂಬರ್ ನಲ್ಲಿ ನ್ಯಾಯಾಧೀಶರು ಐದು ಅಪರಾಧಗಳಲ್ಲಿ ರುತ್ ದೋಷಿ ಎಂದು ನಿರ್ಣಯಿಸಿದ್ದರು. ಇದರಲ್ಲಿ ಯಾವುದೇ ಔಪಚಾರಿಕ ಕಾನೂನು ತರಬೇತಿ ಇಲ್ಲದೆಯೂ ತಾನೇ ವಕೀಲನಾಗಿ ಕಾರ್ಯನಿರ್ವಹಿಸಿದ ಹಾಗೂ ಹತ್ಯೆಗೆ ಯತ್ನಿಸಿದ ಆರೋಪಗಳು ಸೇರಿದ್ದವು.

ವಾರ್ತಾ ಭಾರತಿ 5 Feb 2026 7:33 am

ಭಾರತದ ವಿರುದ್ಧ ಆಡುವುದಿಲ್ಲ ಎಂಬ ನಿಲುವು ಸ್ಪಷ್ಟ: ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಮ್ಮ ನಿಲುವು ಅಚಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಈ ತಿಂಗಳ 15ರಂದು ನಡೆಯುವ ಪಂದ್ಯವನ್ನು ಬಹಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟ ಎಂದು ಪಾಕ್ ಪ್ರಧಾನಿಯ ಹೇಳಿಕೆಯನ್ನು ಉಲ್ಲೇಖಿಸಿ 'ಡಾನ್' ವರದಿ ಮಾಡಿದೆ. ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ನಾವು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ ಎಂದು ಇಸ್ಲಾಮಾಬಾದ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟಪಡಿಸಿದರು. ಪರಿಸ್ಥಿತಿಯನ್ನು ಜಾಗೃತೆಯಿಂದ ಅವಲೋಕಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಂಡು ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಿವರಿಸಿದರು. ಕ್ರೀಡೆಯಲ್ಲಿ ರಾಜಕೀಯ ಇರಬಾರದು. ತೀರಾ ಜಾಗೃತೆಯಿಂದ ಅವಲೋಕಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದೇವೆ. ಇದು ಸೂಕ್ತ ನಿರ್ಧಾರ ಎಂದು ಅವರು ಸಮರ್ಥಿಸಿಕೊಂಡರು. ಇದಕ್ಕೂ ಮುನ್ನ ಪಾಕಿಸ್ತಾನ ಸರ್ಕಾರ ಎಕ್ಸ್ ಹ್ಯಾಂಡಲ್ ನಿಂದ ಪೋಸ್ಟ್ ಮಾಡಿ, ಟಿ20 ವಿಶ್ವಕಪ್ ನಲ್ಲಿ ಭಾರತ ವಿರುದ್ದದ ಪಂದ್ಯವನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿತ್ತು. ಆದರೆ ಇದಕ್ಕೆ ಯಾವುದೇ ಕಾರಣ ನೀಡಿರಲಿಲ್ಲ.

ವಾರ್ತಾ ಭಾರತಿ 5 Feb 2026 7:23 am

Karnataka Weather: ವಾಯು ಚಂಡಮಾರುತ ಪರಿಚಲನೆ ಕಡಿಮೆ: 5 ದಿನ ಹವಾಮಾನದಲ್ಲಿ ಮಹತ್ವದ ಬದಲಾವಣೆ ಇಲ್ಲ: ಐಎಂಡಿ

Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಫೆಬ್ರವರಿ 5ರಂದು ಕನಿಷ್ಠ ತಾಪಮಾನದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಚಳಿ ಹೆಚ್ಚಳವಾಗಿದೆ. ಇನ್ನು ಮುಂದಿನ ಐದು ದಿನಗಳ ವರೆಗೆ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ದಕ್ಷಿಣ ಕೇರಳ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5

ಒನ್ ಇ೦ಡಿಯ 5 Feb 2026 7:12 am

ಕರಾವಳಿ ಜನರಿಗೆ ಗುಡ್‌ನ್ಯೂಸ್: ಎ ಖಾತಾ ಪಡೆಯುವುದು ಇನ್ನು ಸುಲಭ, ಏಕವಿನ್ಯಾಸ ನಕ್ಷೆ ಸರಳೀಕರಣಕ್ಕೆ ಸರಕಾರ ನಿರ್ಧಾರ

ಕರಾವಳಿ ಜಿಲ್ಲೆಗಳಿಗೆ ಜಟಿಲವಾಗಿದ್ದ ಖಾತೆ ಸಮಸ್ಯೆ ಈಗ ಸರಳೀಕರಣಗೊಳಿಸಲಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸೌಲಭ್ಯ, ಖಾತೆ ಸೌಲಭ್ಯವೂ ಸರಳೀಕರಣಗೊಂಡಿದೆ. ಸರಕಾರದ ಹೊಸ ಆದೇಶ ಇದಕ್ಕೆಲ್ಲ ಪರಿಹಾರ ಕೊಟ್ಟಿದೆ,

ವಿಜಯ ಕರ್ನಾಟಕ 5 Feb 2026 7:02 am

ಭಾರತವನ್ನು ಅಮೆರಿಕ ಬೆದರಿಸಲಾಗದು; ಅಜಿತ್‌ ದೋವಲ್-ಮಾರ್ಕೊ ರುಬಿಯೊ ರಹಸ್ಯ ಸಭೆಯ ಮಾಹಿತಿ ಬಹಿರಂಗ!

ಭಾರತದ ಜೊತೆಗಿನ ತನ್ನ ವ್ಯಾಪಾರ ಸಂಬಂಧವನ್ನು ಸುಧಾರಿಸುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದೆ. ಇದೀಗ ಕಳೆದ ಸೆಪ್ಟೆಂಬರ್‌ನಲ್ಲಿ ಇದೇ ವಿಚಾರವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನಡೆದ ಭಾರೀ ಮಹತ್ವದ ಸಭೆಯ ಬಗ್ಗೆ ಹೆಚ್ಚಿನ ವಿವರಗಳ ಲಭ್ಯವಾಗಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 6:44 am

ತೆಂಗಿಗೆ ಬೇಕಿದೆ ಖರೀದಿ ಕೇಂದ್ರದ ಬಲ; ಕನಿಷ್ಠ ಬೆಂಬಲ ಬೆಲೆ ದೊರೆತರೆ ಅನ್ನದಾತನಿಗೆ ನೂರಾನೆ ಬಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆಂಗು ಬೆಳೆಗೆ ಭಾರೀ ಬೇಡಿಕೆ ಇದೆ. ಆದರೆ ರೈತರು ಹೆಚ್ಚಿನ ಲಾಭ ಸಿಗದೇ ಪರದಾಡುತ್ತಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ತೆಂಗು ಖರೀದಿ ಕೇಂದ್ರಗಳ ಸ್ಥಾಪನೆ, ತೆಂಗಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆಯ ರೈತ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರ ಈ ನಿಟ್ಟಿನಲ್ಲಿ ರೈತರ ಧ್ವನಿಯನ್ನು ಆಲಿಸಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 5 Feb 2026 5:48 am

ಸದನದಲ್ಲಿ ರಾಮನಗರ ಮರುನಾಮಕರಣ ಸದ್ದು; ಇವರಿಗೆ ಅವರು, ಅವರಿಗೆ ಇವರು ನೀಡಿದರು ಗುದ್ದು!

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವುದು, ಈಗಲೂ ರಾಜ್ಯ ರಾಜಕಾರಣದಲ್ಲಿ ವಾದ-ವಿವಾದಗಳಿಗೆ ಕಾರಣವಾಗುತ್ತಿದೆ. ನಿನ್ನೆ (ಫೆ.4-ಬುಧವಾರ) ವಿಧಾನಸಭೆಯಲ್ಲಿ ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ವಿಪಕ್ಷ ನಾಯಕ ಆರ್.‌ ಅಶೋಕ್‌ ನಡುವೆ ವಾಗ್ವಾದ ನಡೆದಿದೆ. ಆರ್‌. ಅಶೋಕ್‌ ರಾಮನಗರ ಮರುನಾಮಕರಣ ವಿಚಾರವಾಗಿ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ, ಸಚಿವರು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ಕುರಿತು ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 5 Feb 2026 5:22 am

Ladakh ಉದ್ವಿಗ್ನತೆ ಸಂದರ್ಭ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದ ಮೋದಿ: ರಾಹುಲ್ ಗಾಂಧಿ ಆರೋಪ

►‘ಯಾವುದು ಸಮಂಜಸವೆಂದು ಅನಿಸುವುದೋ ಅದನ್ನೇ ಮಾಡಿ ಎಂದು ನರವಣೆಗೆ ತಿಳಿಸಿದ್ದ ಪ್ರಧಾನಿ’►ನಿವೃತ್ತ ಸೇನಾ ವರಿಷ್ಠ ಜನರಲ್ ನರವಣೆ ಕೃತಿ ಉಲ್ಲೇಖಿಸಿದ ರಾಹುಲ್

ವಾರ್ತಾ ಭಾರತಿ 5 Feb 2026 12:29 am

ಅಂಡರ್-19 ವಿಶ್ವಕಪ್: ಫೈನಲ್‌ ಗೆ ಭಾರತ, ಇಂಗ್ಲೆಂಡ್ ಎದುರಾಳಿ

ಸೆಮಿ ಫೈನಲ್‌ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಜಯ, ಆ್ಯರೊನ್ ಜಾರ್ಜ್ ಶತಕ

ವಾರ್ತಾ ಭಾರತಿ 5 Feb 2026 12:22 am

ರೈಫಲ್, ಪಿಸ್ತೂಲ್ ಏಷ್ಯನ್ ಚಾಂಪಿಯನ್‌ಶಿಪ್ | ಬಂಗಾರ ಗೆದ್ದ ಇಶಾ ಸಿಂಗ್

ಭಾರತದ ಮಹಿಳಾ ತಂಡಕ್ಕೂ ಚಿನ್ನ; 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಾಮ್ರಾಟ್‌ ಗೆ ಕಂಚು ಹೊಸದಿಲ್ಲಿ, ಫೆ.4: ರಾಷ್ಟ್ರ ರಾಜಧಾನಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ರೈಫಲ್, ಪಿಸ್ತೂಲ್ ಏಷ್ಯನ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಪುರುಷರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಶಾ 239.8 ಅಂಕ ಗಳಿಸಿದರೆ, ಚೈನೀಸ್ ತೈಪೆಯ ಯೆನ್–ಚಿಂಗ್ ಚೆಂಗ್ (235.4) ಎರಡನೇ ಸ್ಥಾನ ಪಡೆದರು. ಚೆಂಗ್ ಅವರ ಸಹ ಆಟಗಾರ್ತಿ ವೆನ್ ಯು 217.7 ಅಂಕ ಗಳಿಸಿದರು. ಸ್ಪರ್ಧೆಯಲ್ಲಿದ್ದ ಭಾರತೀಯರಾದ ಸುರುಚಿ ಸಿಂಗ್ (197.7) ಹಾಗೂ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ (135.3) ಕ್ರಮವಾಗಿ ನಾಲ್ಕನೇ ಹಾಗೂ ಏಳನೇ ಸ್ಥಾನ ಪಡೆದಿದ್ದಾರೆ. ಸುರುಚಿ ಸಿಂಗ್ (576), ಮನು ಭಾಕರ್ (575) ಹಾಗೂ ಇಶಾ ಸಿಂಗ್ (575) ಎಂಟು ಮಹಿಳೆಯರಿದ್ದ ಫೈನಲ್‌ಗೆ ಅರ್ಹತೆ ಪಡೆದರು. ಈ ಮೂವರು ಒಟ್ಟು 1,726 ಅಂಕ ಗಳಿಸಿದ ಕಾರಣ ಭಾರತದ ಮಹಿಳಾ ತಂಡಕ್ಕೆ ಚಿನ್ನದ ಪದಕ ಲಭಿಸಿತು. 10 ಮೀ. ಏರ್ ಪಿಸ್ತೂಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಾಮ್ರಾಟ್ ರಾಣಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 220.3 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಉಜ್ಬೇಕಿಸ್ತಾನದ ವ್ಲಾಡಿಮಿರ್ ಸ್ವೆಚ್ನಿಕೋವ್ (242.0) ಹಾಗೂ ರಖೀಂಖಾನ್ (241.0) ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ಫೈನಲ್‌ನಲ್ಲಿದ್ದ ಭಾರತದ ಇನ್ನೋರ್ವ ಆಟಗಾರ ಶ್ರವಣ್ ಕುಮಾರ್ (198.6) ಪದಕ ಸ್ಪರ್ಧೆಯಿಂದ ಹೊರಗುಳಿದರು. ಒಟ್ಟು 1,732 ಅಂಕ ಗಳಿಸಿದ ಶ್ರವಣ್, ಸಾಮ್ರಾಟ್ ಹಾಗೂ ವರುಣ್ ತೋಮರ್ ಭಾರತೀಯ ಪುರುಷರ ತಂಡಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.

ವಾರ್ತಾ ಭಾರತಿ 5 Feb 2026 12:17 am

165 ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ: ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಫೆ‌.4: ಕೇಂದ್ರ ಬಿಜೆಪಿಯದ್ದು ಕಾರ್ಪೋರೆಟ್ ಸ್ಟೈಲ್ ಬಜೆಟ್ ಮತ್ತು ಬೇಸ್ ಲೆಸ್, ವಿಷನ್ ಲೆಸ್ ಬಜೆಟ್ ಇದಾಗಿದೆ. ಅಲ್ಲದೆ, 165ಲಕ್ಷ ಕೋಟಿ ಸಾಲ ಮಾಡಿರುವುದೇ ಬಿಜೆಪಿ ಸಾಧನೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, 2026ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಒಂಭತ್ತನೇ ಬಜೆಟ್ ಸಾಧನೆಯಲ್ಲಿ 53.50 ಲಕ್ಷ ಗಾತ್ರದ ಬಜೆಟ್ ಮಂಡಿಸಿ 4 ಲಕ್ಷ ಕೋಟಿಯಷ್ಟು ಬಜೆಟ್ ಗಾತ್ರ ಹೆಚ್ಚಳ ಆಗಿದೆ. 1947ರಿಂದ 2014 ಮಾ.21ರವರೆಗೆ ದೇಶ ಸಾಲದ ಒಟ್ಟಾರೆ ಮೊತ್ತ 53.2 ಲಕ್ಷ ಕೋಟಿ ಇತ್ತು, ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಈ 12ವರ್ಷ ಅದು 218.6 ಲಕ್ಷ ಕೋಟಿ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 165 ಲಕ್ಷ ಕೋಟಿ ಸಾಲ ಮಾಡಿರುವುದೇ ಕೇಂದ್ರದ ಸಾಧನೆ ಆಗಿದೆ. ಇಷ್ಟೆಲ್ಲಾ ಸಾಲ ಮಾಡಿ ಎಷ್ಟು ಯೋಜನೆ ಜಾರಿಗೊಳಿಸಿದ್ದಾರೆ ಎಂದು ಪ್ರಶ್ನಿಸಿದರು. ಪ್ರತಿ ವರ್ಷ ನಮ್ಮ ದೇಶ 13 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದ್ದು, ಅಸಲು 18 ಲಕ್ಷ ಕೋಟಿ ಇದೆ. ಇಂತಹ ವ್ಯವಸ್ಥೆ ನಿರ್ಮಾಣ ಮಾಡಿರುವುದೇ ಬಿಜೆಪಿ ಸಾಧನೆ. 4.27 ಲಕ್ಷ ರೂ. ಸಾಲ ಪ್ರತಿಯೊಬ್ಬರ ಮೇಲಿರುವ ಸಾಲವಾಗಿದೆ. ಮೈಸೂರು-ಬೆಂಗಳೂರು ರಸ್ತೆ ನಿರ್ಮಾಣ ಸಾಧನೆ ಎನ್ನುವುದಾದರೆ 15ಸಾವಿರ ಕೋಟಿ ಬಂಡವಾಳ ಖಾಸಗಿ ಕಂಪನಿ ಹಾಕಿದ್ದು, ಒಮ್ಮೆ ಓಡಾಡಲು 1 ಸಾವಿರ ಟೋಲ್ ಕಟ್ಟಬೇಕಿದೆ ಎಂದು ಹೇಳಿದರು.   ಈ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅತಿ ಹೆಚ್ಚು ತೆರಿಗೆ ಸಂಗ್ರಹಿಸುವುದರಲ್ಲಿ ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲೇ ನಾವು 2 ಸ್ಥಾನದಲ್ಲಿದ್ದೇವೆ. ಪ್ರತಿ ವರ್ಷ ರಾಜ್ಯದಿಂದ ಒಂಭತ್ತು ವಿಧವಾದ ತೆರಿಗೆಗಳ ಮೂಲಕ 5ಲಕ್ಷದ 26ಸಾವಿರ ಕೋಟಿ ರೂ. ಕಟ್ಟುತ್ತಿದ್ದೇವೆ. 14ನೇ ಹಣಕಾಸು ನೀತಿ ಆಯೋಗದ ಪ್ರಕಾರ ಶೇ.41ರಷ್ಟು ರಾಜ್ಯದ ಪಾಲು ಕೇಂದ್ರ ಹಿಂದಿರುಗಿಸಬೇಕಿದೆ. ಹೀಗಾಗಿ 2 ಲಕ್ಷ ಕೋಟಿ ಕೊಡುವ ಜಾಗದಲ್ಲಿ 60 ಸಾವಿರ ಕೋಟಿ ಕೊಡುತ್ತಿದ್ದಾರೆ. ಉತ್ತರ ಪ್ರದೇಶದ 6 ಲಕ್ಷ ಕೋಟಿ ತೆರಿಗೆ ಕಟ್ಟಿದ್ದು, ಸದರಿ ರಾಜ್ಯಕ್ಕೆ 2 ಲಕ್ಷ 18ಸಾವಿರ ಕೋಟಿ ಕೊಡುತ್ತಿದ್ದಾರೆ. ಮದ್ಯಪ್ರದೇಶ 2.5 ಲಕ್ಷ ಕೋಟಿ ತೆರಿಗೆಗೆ 1.11 ಲಕ್ಷ ಕೋಟಿ ಹಣ ನೀಡುತ್ತಿದ್ದಾರೆ. ಆದರೆ, ಅತಿಹೆಚ್ಚು ತೆರಿಗೆ ಕಟ್ಟಿಸಿಕೊಂಡು ಅತಿ ಕಡಿಮೆ ಹಣ ನೀಡುವ ಮೂಲಕ ರಾಜ್ಯವನ್ನು ಕಡೆಗಣಿಸಿದ್ದಾರೆಂದರು. ಬೆಂಗಳೂರಿನಿಂದ ಹೈದರಾಬಾದ್ ವರೆಗೆ ಬಿಟ್ಟಿರುವುದು ಬುಲೆಟ್ ಟ್ರೈನ್ ಅಲ್ಲ, ಇದು ಕೇವಲ ಪುಂಗಿ ಊದುವ ವಿಚಾರ. ಈಗಿರುವ ಟ್ರೈನ್ ವೇಗ ಹೆಚ್ಚಿಸಿ ಹೈಸ್ಪೀಡ್ ಟ್ರೇನ್ ಎಂದು ಬದಲಾಯಿಸಿದ್ದು, ಇದು ಒಂದು ತಾಸು ಕಡಿಮೆ ಆಗಬಹುದಷ್ಟೇ ಆಗಿದೆ. ರಾಜ್ಯದ ಭ್ರದಾ ಮೇಲ್ದಂಡೆ, ಕಷ್ಣ ಮೇಲ್ದಂಡೆ, ಮೇಕೆದಾಟು, ಮಹಾದಾಯಿ ಯೋಜನೆಗೆ ನಾಯಪೈಸೆ ಹಣ ಕೊಡುತ್ತಿಲ್ಲ. ಹಣ ಕೊಡದಿದ್ದರೂ ಪರವಾಗಿಲ್ಲ ಅನುಮತಿ ಸಹ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾದ್ಯಮ ವಕ್ತಾರ ಮಹೇಶ್, ಕೆಪಿಸಿಸಿ ವಕ್ತಾರೆ ನಜ್ಮಾನಸೀರ್, ಉಪಾಧ್ಯಕ್ಷ ಗೋಪಿ, ಯುವಘಟಕದ ಅಧ್ಯಕ್ಷ ಅಬ್ರಾರ್, ಮಹದೇವ್, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Feb 2026 12:10 am

ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್ | ಭೂತಾನ್ ವಿರುದ್ಧ ಭರ್ಜರಿ ಜಯ, ಭಾರತ ಫೈನಲ್‌ ಗೆ

ಪೊಖಾರ, ಫೆ.4: ಭೂತಾನ್ ತಂಡವನ್ನು 8–0 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ತಂಡವು ಸ್ಯಾಫ್ ಅಂಡರ್–19 ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ನೇಪಾಳದ ಪೊಖಾರ ರಂಗಸಲದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಯುವ ಫುಟ್ಬಾಲ್ ಆಟಗಾರ್ತಿಯರು ಈ ಸಾಧನೆ ಮಾಡಿದರು. ಬುಧವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಆತಿಥೇಯ ನೇಪಾಳವನ್ನು 4–0 ಅಂತರದಿಂದ ಮಣಿಸಿದ ಹಿನ್ನೆಲೆಯಲ್ಲಿ ಭಾರತ ತಂಡವು ಫೈನಲ್‌ ನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿತು. ಪ್ರಶಸ್ತಿ ಸುತ್ತಿನಲ್ಲಿ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲಿದೆ. ಪ್ರಶಸ್ತಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಭಾರತ ತಂಡಕ್ಕೆ ಕನಿಷ್ಠ ಡ್ರಾ ಸಾಧಿಸುವ ಅಗತ್ಯವಿತ್ತು. ಆಕ್ರಮಣಕಾರಿ ಆಟ ಆಡಿದ ಭಾರತವು ಆರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ನಾಲ್ಕು ನಿಮಿಷಗಳ ನಂತರ ಅಭಿಷ್ಠಾ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಆ ನಂತರ ಗೋಲುಗಳ ಸುರಿಮಳೆಯಾಯಿತು. ಪರ್ಲ್ ಫೆರ್ನಾಂಡಿಸ್ ಹ್ಯಾಟ್ರಿಕ್ ಗೋಲು ಗಳಿಸಿದರೆ, ದಿವ್ಯಾನಿ ಲಿಂಡಾ ಹಾಗೂ ಪ್ರತಿಕಾ ಬರ್ಮನ್ ಕೂಡ ಗೋಲು ಗಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತವು 7–0 ಮುನ್ನಡೆ ಸಾಧಿಸಿ ಸಂಪೂರ್ಣ ಮೇಲುಗೈ ಸಾಧಿಸಿತು. ಬರ್ಮನ್ ತಮ್ಮ ಎರಡನೇ ಹಾಗೂ ಭಾರತದ ಪರ ಎಂಟನೇ ಗೋಲು ಗಳಿಸಿದರು. ಈ ಗೆಲುವಿನ ನಂತರ ಭಾರತ ತಂಡವು ಮೂರು ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶದ (9 ಅಂಕ) ನಂತರ ಎರಡನೇ ಸ್ಥಾನ ಪಡೆದಿದೆ. ಆತಿಥೇಯ ನೇಪಾಳ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಭೂತಾನ್ ಒಂದೂ ಪಂದ್ಯ ಗೆಲ್ಲದೆ ಕೊನೆಯ ಸ್ಥಾನದಲ್ಲಿದೆ.

ವಾರ್ತಾ ಭಾರತಿ 5 Feb 2026 12:07 am

ರಶ್ಯ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ: ಶ್ವೇತಭವನ

ವಾಷಿಂಗ್ಟನ್, ಫೆ.4: ಹೊಸದಾಗಿ ಘೋಷಿಸಲಾದ ಭಾರತ–ಅಮೆರಿಕಾ ಒಪ್ಪಂದದ ಅಡಿಯಲ್ಲಿ ರಶ್ಯದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ದವಾಗಿದೆ ಮತ್ತು ಅಮೆರಿಕದಿಂದ ಆಮದುಗಳನ್ನು ಹೆಚ್ಚಿಸಲಿದೆ ಎಂದು ಶ್ವೇತಭವನ ಬುಧವಾರ ಪ್ರತಿಪಾದಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ನೇರ ಮಾತುಕತೆಯ ಬಳಿಕ ಬದ್ದತೆ ಜಾರಿಗೆ ಬಂದಿದೆ. ಭಾರತವು ರಶ್ಯದ ತೈಲ ಖರೀದಿಯನ್ನು ನಿಲ್ಲಿಸುವ ಜೊತೆಗೆ ಅಮೆರಿಕಾ ಹಾಗೂ ಬಹುಶಃ ವೆನೆಝುವೆಲಾದಿಂದ ತೈಲ ಖರೀದಿಸಲಿದೆ. ಇದರಿಂದ ಅಮೆರಿಕಾ ಹಾಗೂ ಅಲ್ಲಿನ ಜನರಿಗೆ ನೇರ ಪ್ರಯೋಜನವಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಸಾರಿಗೆ, ಇಂಧನ ಮತ್ತು ಕೃಷ್ಯುತ್ಪನ್ನ ಸೇರಿದಂತೆ ಅಮೆರಿಕಾದಲ್ಲಿ 500 ಶತಕೋಟಿ ಡಾಲರ್ ಹೂಡಿಕೆಗೆ ಪ್ರಧಾನಿ ಮೋದಿ ಬದ್ದರಾಗಿದ್ದಾರೆ. ಇದು ಮತ್ತೊಂದು ಮಹತ್ವದ ಒಪ್ಪಂದವಾಗಿದೆ ಎಂದರು. ಒಪ್ಪಂದದ ಪ್ರಕಾರ ಭಾರತವು ರಶ್ಯದ ತೈಲ ಖರೀದಿಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಸಂಪೂರ್ಣ ನಿಲ್ಲಿಸಲಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ. ಭಾರತೀಯ ತೈಲ ಸಂಸ್ಕರಣಾಗಾರಗಳು ಅಸ್ತಿತ್ವದಲ್ಲಿರುವ ಖರೀದಿ ಬದ್ಧತೆಗಳನ್ನು ಗೌರವಿಸುವುದನ್ನು ಮುಂದುವರಿಸುತ್ತವೆ. ಆದರೆ ಹೊಸ ಆರ್ಡರ್‌ಗಳನ್ನು ಮುಂದಿಡುವುದಿಲ್ಲ. ಆಮದುಗಳು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ವಾರ್ತಾ ಭಾರತಿ 5 Feb 2026 12:05 am

ಫೆ.5ರಂದು ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್; RCB–ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಹೊಸದಿಲ್ಲಿ, ಫೆ.4: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ಏಕಪಕ್ಷೀಯವಾಗಿ ಸಾಗಿದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ ಗಳ ಅಂತರದಿಂದ ಮಣಿಸಿ ಸತತ ನಾಲ್ಕನೇ ಬಾರಿ ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿದೆ. ಡೆಲ್ಲಿ ತಂಡವು ಗುರುವಾರ ವಡೋದರದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಜೆಮಿಮಾ ರೊಡ್ರಿಗ್ಸ್ ನಾಯಕತ್ವದಲ್ಲಿ ಡೆಲ್ಲಿ ತಂಡವು ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡಿದ್ದು, ಮೊದಲ ಬಾರಿ ಡಬ್ಲ್ಯುಪಿಎಲ್ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಜೆಮಿಮಾರ ಆತ್ಮೀಯ ಸ್ನೇಹಿತೆ ಸ್ಮೃತಿ ಮಂಧಾನ ಆರ್‌ಸಿಬಿ ತಂಡದ ಸಾರಥ್ಯವಹಿಸಿದ್ದು, ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಲ್ಕು ಬಾರಿ ಫೈನಲ್‌ಗೆ ತಲುಪಿದ ಹೊರತಾಗಿಯೂ ತನ್ನ ಚೊಚ್ಚಲ ಪ್ರಶಸ್ತಿಗಾಗಿ ಹುಡುಕಾಟವನ್ನು ಮುಂದುವರಿಸಿದೆ. 169 ರನ್‌ಗಳನ್ನು ಚೇಸ್ ಮಾಡಿದ ಡೆಲ್ಲಿ ತಂಡವು ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿತು. ಶೆಫಾಲಿ ವರ್ಮಾ (31 ರನ್, 21 ಎಸೆತ) ಹಾಗೂ ಲಿಝೆಲ್ ಲೀ (43 ರನ್, 24 ಎಸೆತ) ಮೊದಲ ವಿಕೆಟ್‌ಗೆ 89 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಲೌರಾ ವೋಲ್ವಾರ್ಟ್ (ಔಟಾಗದೆ 32) ಹಾಗೂ ರೊಡ್ರಿಗ್ಸ್ (41 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ►ತಂಡಗಳು RCB: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರಿ, ಲೌರೆನ್ ಬೆಲ್, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೊಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ದಯಾಳನ್ ಹೇಮಲತಾ. ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗ್ಸ್ (ನಾಯಕಿ), ತನಿಯಾ ಭಾಟಿಯಾ, ಚಿನ್ಲೆ ಹೆನ್ರಿ, ಲಿಝೆಲ್ ಲೀ, ನಿಕಿ ಪ್ರಸಾದ್, ಶೆಫಾಲಿ ವರ್ಮಾ, ಲೌರಾ ವೋಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮರಿಝಾನ್ ಕಾಪ್, ಅಲನಾ ಕಿಂಗ್, ಸ್ನೇಹ ರಾಣಾ, ಪ್ರಗತಿ ಸಿಂಗ್, ಮಿನ್ನು ಮಣಿ, ನಂದಿನಿ ಶರ್ಮಾ, ಶ್ರೀಚರಣಿ, ಎಡ್ಲಾ ಸ್ರುಜಾನಾ. ಪಂದ್ಯ ಆರಂಭದ ಸಮಯ: ರಾತ್ರಿ 7:30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಾರ್ತಾ ಭಾರತಿ 4 Feb 2026 11:57 pm

ಹರಪನಹಳ್ಳಿ | ವಾರ್ತಾಭಾರತಿ ವರದಿ ಫಲಶ್ರುತಿ : ಗುಡಿಹಳ್ಳಿ–ಕಬ್ಬಳ್ಳಿ ರಸ್ತೆ ತಾತ್ಕಾಲಿಕ ದುರಸ್ತಿ

ಹರಪನಹಳ್ಳಿ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಮಾರ್ಗದಿಂದ ಗಡಿ ಭಾಗದ ಚಿಕ್ಕ ಕಬ್ಬಳ್ಳಿ ಗ್ರಾಮದವರೆಗೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿತ್ತು. ಈ ಅವ್ಯವಸ್ಥೆ ಕುರಿತು ಜ.24ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ‘ಗುಡಿಹಳ್ಳಿ–ಕಬ್ಬಳ್ಳಿ ಗುಂಡಿಗಳಾಗಿ ಮಾರ್ಪಟ್ಟ ರಸ್ತೆ; ತಿಂಗಳೊಳಗೆ ದುರಸ್ತಿ ಮಾಡುವುದಾಗಿ ಹೇಳಿ ನಾಪತ್ತೆಯಾದ ಇಂಜಿನಿಯರ್’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವಾರ್ತಾಭಾರತಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಸಂಬಂಧಪಟ್ಟ ಇಲಾಖೆಯ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಹಾಗೂ ವಾಹನ ಸವಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ವಾಹನ ಸವಾರರ ಸುರಕ್ಷಿತ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅರಸೀಕೆರೆ ಮಾರ್ಗವಾಗಿ ಕಬ್ಬಳ್ಳಿ ಗ್ರಾಮದವರೆಗೆ ಸಂಪೂರ್ಣ ಸಿಸಿ ರಸ್ತೆ ನಿರ್ಮಾಣಕ್ಕೆ ಲೆಕ್ಕಾಚಾರ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು. -ಕಿರಣ್ ದಿವಾಕರ್, ಇಂಜಿನಿಯರ್, ಹರಪನಹಳ್ಳಿ

ವಾರ್ತಾ ಭಾರತಿ 4 Feb 2026 11:57 pm

ದಮ್ಮಾಮ್| heLPy ಲೈವ್ಲಿಹುಡ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ರಿಯಾದ್:‌ heLPy ಲೈವ್ಲಿಹುಡ್ ನ ವಾರ್ಷಿಕ ಮಹಾಸಭೆಯು ʼರೆಡ್ ಪಾಟ್ʼ ರೆಸ್ಟೋರೆಂಟ್ ದಮ್ಮಾಮ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಮೊಹಮ್ಮದ್ ರಿಯಾಝ್ ಅವರಿಂದ heLPyಯ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭ‌ವಾಯಿತು. ಅವರು ಕಳೆದ 14 ವರ್ಷಗಳಲ್ಲಿ ಸಂಸ್ಥೆಯ ಸಾಮಾಜಿಕ ಸೇವೆಯನ್ನು ವಿವರಿಸಿದರು. ಸಭೆಯು ಬದ್ರುದ್ದೀನ್ ಕೊಲ್ನಾಡ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ನಂತರ ಮೊಹಿದ್ದೀನ್ ಬಾವ ಸ್ವಾಗತಿಸಿದರು. ಮನ್ಸೂರ್ ಮಂಜೇಶ್ವರ ಅವರು 2025ರ ವಾರ್ಷಿಕ ವರದಿ ಮಂಡಿಸಿದರು, heLPy ಸಂಘಟನೆಯ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತು ಸಭಿಕರಿಗೆ ವಿವರಿಸಿದರು. ಸೌದಿ ಅರೇಬಿಯಾದಲ್ಲಿ ಇಲ್ಲದಿದ್ದರೂ ಸಹ, ವಿವರವಾದ ವರದಿ ಮತ್ತು ನಿರಂತರ ಬೆಂಬಲಕ್ಕಾಗಿ ಪ್ರಧಾನ ಕಾರ್ಯದರ್ಶಿ ಸುನೀರ್ ಅಹ್ಮದ್ ರಿಗೆ ಅವರು ಧನ್ಯವಾದ ಅರ್ಪಿಸಿದರು. ಸಭೆಯಲ್ಲಿ, heLPy ತಂಡವು ಮೊಹಮ್ಮದ್ ಆಸಿಫ್ ಜೆಪ್ಪು ಅವರ ನೇತೃತ್ವ ದಲ್ಲಿ 2025 ರ ಸಂಘಟನೆಯ ಯಶೋಗಾಥೆಗಳನ್ನು ಪ್ರತಿಬಿಂಬಿಸಿತು. ಪ್ರಮುಖ ಮುಖ್ಯಾಂಶಗಳಲ್ಲಿ ಫಲಾನುಭವಿಗಳಿಗಾಗಿ ಮಂಗಳೂರಿನಲ್ಲಿ ಆಯೋಜಿಸಲಾದ heLPy ಮೀಟ್ ಮತ್ತು ಪ್ರೇರಣಾ ಕಾರ್ಯಕ್ರಮ, ಜುಬೈಲ್‌ನಲ್ಲಿ ನಡೆದ heLPy ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಮತ್ತು ಉಸ್ಮಾನ್ ಶರೀಫ್ ನೇತೃತ್ವದಲ್ಲಿ ದಮ್ಮಾಮ್‌ನಲ್ಲಿ ಆಯೋಜಿಸಲಾದ ಸ್ಮರಣೀಯ ಫ್ಯಾಮಿಲಿ ಫೆಸ್ಟ್ -25 ಸೇರಿವೆ. ಕೋಶಾಧಿಕಾರಿ ಮೊಹಮ್ಮದ್ ನಿಝಾರ್ 2025 ರ ಹಣಕಾಸು ವರದಿಯನ್ನು ಸಿದ್ಧಪಡಿಸಿದರು, ಅದನ್ನು ಖಾದರ್ ಶಹೀರ್ ಅವರು ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರಗಳನ್ನು ಪರಿಶೀಲಿಸಿ, ಹಾಜರಿದ್ದ ಸದಸ್ಯರು ಸರ್ವಾನುಮತದಿಂದ ಅನುಮೋದಿಸಲಾಯಿತು. ನಿರ್ಗಮಿತ ಅಧ್ಯಕ್ಷ ಆಸಿಫ್ ಜೆಪ್ಪು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ತಾಯ್ನಾಡಿನ ಫಲಾನುಭವಿಗಳನ್ನು ಭೇಟಿ ಮಾಡಿದ ನಂತರ ತಮ್ಮ ವೈಯಕ್ತಿಕ ಅನುಭವಗಳು ಮತ್ತು ಭಾವನೆಗಳನ್ನು ಹಂಚಿ ಕೊಂಡು ಕೃತಜ್ಞತೆ ವ್ಯಕ್ತಪಡಿಸಿದರು. ಅಶ್ರಫ್ ಯೂಸುಫ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಅಸ್ತಿತ್ವದಲ್ಲಿರುವ ಸಮಿತಿಯನ್ನು ಔಪಚಾರಿಕವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ, 2026ರ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಶಹೀರ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಆಸಿಫ್, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಿಯಾಝ್‌, ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ತೌಫೀಕ್, ಸಲಹಾ ಕಾರ್ಯದರ್ಶಿಯಾಗಿ ಸುನೀರ್ ಅಹಮದ್, ಕೋಶಾಧಿಕಾರಿಯಾಗಿ ಮೊಹಮ್ಮದ್ ನಿಝಾರ್, ಜಂಟಿ ಕೋಶಾಧಿಕಾರಿಗಳಾಗಿ ಉಸ್ಮಾನ್ ಶರೀಫ್, ಅಬ್ದುಲ್ ಸಲಾಂ ಶಾವಾಝ್‌, ಶಿಕ್ಷಣಾಧಿಕಾರಿಯಾಗಿ ಮನ್ಸೂರ್ ಮಂಜೇಶ್ವರ, ಕಾರ್ಯಕ್ರಮಗಳ ಸಂಯೋಜಕರಾಗಿ ಸುನೈನ್ ಅಹ್ಮದ್, ಲೆಕ್ಕ ಪರಿಶೋಧಕರಾಗಿ ಸಮೀರ್ ಅಹ್ಮದ್, Feed The Needy ಮೇಲ್ವಿಚಾರಕರಾಗಿ ಮೊಹಿದ್ದೀನ್ ಬಾವ, Feed The Needy ಸಹಾಯಕ ಮೇಲ್ವಿಚಾರಕರಾಗಿ ಆಸಿಫ್ ಮೊಹಿಯುದ್ದೀನ್ ಇದರ ಜೊತೆಗೆ, ಮುಂಬರುವ ವರ್ಷಗಳಲ್ಲಿ heLPy ಲೈವ್ಲಿಹುಡ್ ಚಟುವಟಿಕೆಗಳನ್ನು ಬಲಪಡಿಸಲು 20 ಸಂಯೋಜಕರನ್ನು ನೇಮಿಸಲಾಯಿತು ಮತ್ತು ಅವರು 2026 ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಶಹೀರ್ ಅವರು ಕೃತಜ್ಞತೆ ಸಲ್ಲಿಸಿದರು ಮತ್ತು ಅರ್ಹ ಕುಟುಂಬಗಳನ್ನು ಗುರುತಿಸುವ ಮೂಲಕ heLPy ತನ್ನ ಸಹಾಯ ಹಸ್ತವನ್ನು ಚಾಚುತ್ತಲೇ ಇದೆ ಎಂದು ಹೇಳಿದರು. ಸಂಸ್ಥೆಯ ದೃಷ್ಟಿಕೋನವನ್ನು ಸಾಧಿಸಲು ಮತ್ತು ಹೆಚ್ಚಿನ ಫಲಾನುಭವಿಗಳನ್ನು heLPy ಅಡಿಯಲ್ಲಿ ತರಲು ಎಲ್ಲರ ಸಹಕಾರ ವನ್ನು ಅವರು ಕೋರಿದರು. ನೂತನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಝ್ ಅವರು ಧನ್ಯವಾದ ಸಮರ್ಪಿಸಿ, ನಿರ್ಗತಿಕ ಕುಟುಂಬ‌ ಗಳನ್ನು ಬೆಂಬಲಿಸುವ ಉದ್ದೇಶದಿಂದ ಸಂಸ್ಥೆಯನ್ನು ಬಲಪಡಿಸಲು ಎಲ್ಲಾ ಸದಸ್ಯರು ಒಂದೇ ತಂಡವಾಗಿ ಒಟ್ಟಾಗಿ ಕೆಲಸ ಮಾಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಅಲ್ ಖೋಬರ್, ದಮ್ಮಾಮ್ ಮತ್ತು ಜುಬೈಲ್‌ನ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು heLPy ಸದಸ್ಯರು ಭಾಗವಹಿಸಿದ್ದರು. ಅಬ್ದುಲ್ ವದೂದ್ ಅವರ ಕಫರಾ ಮಜ್ಲಿಸ್‌ನೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ವಾರ್ತಾ ಭಾರತಿ 4 Feb 2026 11:52 pm

ಸಂಡೂರು | ‘ವಾರ್ತಾಭಾರತಿ’ ವರದಿ ಫಲಶ್ರುತಿ : ನಿಡುಗುರ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪುನಶ್ಚೇತನ

ಸಂಡೂರು (ಬಳ್ಳಾರಿ ಜಿಲ್ಲೆ) :ಸಂಡೂರು ತಾಲ್ಲೂಕಿನ ನಿಡುಗುರ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಿಂಬಿಸಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಫಲ ನೀಡಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಒಂದು ಘಟಕವನ್ನು ತಕ್ಷಣ ದುರಸ್ತಿ ಮಾಡಿ ಪುನಃ ಸಾರ್ವಜನಿಕ ಬಳಕೆಗೆ ಲಭ್ಯವಾಗಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕದಿಂದಾಗಿ ನಿಡುಗುರ್ತಿ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ವಾರ್ತಾಭಾರತಿ ಪತ್ರಿಕೆ ವಾಸ್ತವಾಂಶಗಳೊಂದಿಗೆ ವರದಿಯನ್ನು ಪ್ರಕಟಿಸಿತ್ತು. ವರದಿ ಪ್ರಕಟವಾದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟಕದಲ್ಲಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಿ ನೀರಿನ ಘಟಕವನ್ನು ಮರುಚಾಲನೆಗೆ ತಂದಿದ್ದಾರೆ. ಇದರಿಂದ ನಿಡುಗುರ್ತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ನಿರಾಳರಾಗಿದ್ದಾರೆ.  ಮುಂದಿನ ದಿನಗಳಲ್ಲಿ ಇಂತಹ ಮೂಲಭೂತ ಸೌಕರ್ಯಗಳು ಮತ್ತೆ ಸ್ಥಗಿತಗೊಳ್ಳದಂತೆ ನಿಯಮಿತ ನಿರ್ವಹಣೆ ನಡೆಸಬೇಕು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:52 pm

ಕರ್ನಾಟಕವನ್ನು ರಕ್ಷಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ಹೆಚ್.ಡಿ. ದೇವೇಗೌಡ

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿಗಳಿಂದ ಭಾಷಣ

ವಾರ್ತಾ ಭಾರತಿ 4 Feb 2026 11:51 pm

ಇರಾನ್‌ ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ: ಟ್ರಂಪ್

ವಾಷಿಂಗ್ಟನ್, ಫೆ. 4: ಅಮೆರಿಕಾ ಇರಾನ್ ಜೊತೆ ಸಕ್ರಿಯ ಮಾತುಕತೆಯಲ್ಲಿದೆ. ಅವರು (ಇರಾನ್) ಮತ್ತೊಂದು ಮಿಲಿಟರಿ ಮುಖಾಮುಖಿಯನ್ನು ತಪ್ಪಿಸಲು ಉತ್ಸುಕರಾಗಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ‘ಇರಾನಿಯನ್ನರು ಈಗಾಗಲೇ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂಘರ್ಷ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಏನನ್ನಾದರೂ ಮಾಡಲು ಅವರಿಗೆ ಅವಕಾಶವಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಾವು ಸರಿಯಾಗಿಯೇ ಹೊಡೆತ ನೀಡಿದ್ದೆವು. ಅದು ಮತ್ತೊಮ್ಮೆ ಸಂಭವಿಸಬೇಕೆಂದು ಅವರು ಭಾವಿಸುವುದಿಲ್ಲ ಎಂಬ ವಿಶ್ವಾಸವಿದೆ. ಈಗ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಇರಾನ್ ಅಧಿಕಾರಿಗಳನ್ನು ಭೇಟಿಯಾಗುವ ಯೋಜನೆಯಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ದೃಢಪಡಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಯಾವಾಗಲೂ ಮೊದಲು ರಾಜತಾಂತ್ರಿಕತೆಯನ್ನು ಮುಂದುವರಿಸಲು ಬಯಸುತ್ತಾರೆ. ಆದರೆ ರಾಜತಾಂತ್ರಿಕತೆ ಯಶಸ್ವಿಯಾಗಬೇಕಿದ್ದರೆ ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕು. ಸ್ಟೀವ್ ವಿಟ್ಕಾಫ್ ಇದನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ.

ವಾರ್ತಾ ಭಾರತಿ 4 Feb 2026 11:49 pm

ವಿಜಯನಗರ | ರೇಣುಕಾ ಪಿಯು ಕಾಲೇಜಿನ ಉಪನ್ಯಾಸಕ ವಿಜಯಕುಮಾರ್‌ಗೆ ಪಿಎಚ್‌ಡಿ ಪದವಿ

ಹೊಸಪೇಟೆ (ವಿಜಯನಗರ) : ಹಗರಿಬೊಮ್ಮನಹಳ್ಳಿ ಪಟ್ಟಣದ ರೇಣುಕಾ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕ ವಿಜಯಕುಮಾರ್ ಎಸ್.ಎಂ. ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ವಿಜಯಕುಮಾರ್ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ, “ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ಬುದ್ಧಿಶಕ್ತಿ, ಕಲಿಕಾ ಶೈಲಿ ಮತ್ತು ಕಲಿಕಾ ಮನೋಭಾವಗಳು ಬೀರುವ ಪ್ರಭಾವಗಳ ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ವಿಜಯಕುಮಾರ್ ಮಂಡಿಸಿದ್ದರು. ಈ ಸಂಶೋಧನಾ ಪ್ರಬಂಧವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದ್ದು, 21ನೇ ಘಟಿಕೋತ್ಸವ ಸಮಾರಂಭದಲ್ಲಿ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ವಿಜಯಕುಮಾರ್ ಅವರ ಈ ಶೈಕ್ಷಣಿಕ ಸಾಧನೆಗೆ ಶಿಕ್ಷಣ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 4 Feb 2026 11:46 pm

ಒಮಾನ್‌ ನಲ್ಲಿ ಇರಾನ್–ಅಮೆರಿಕಾ ಪರಮಾಣು ಮಾತುಕತೆ?

ಟರ್ಕಿಯಿಂದ ಸ್ಥಳಾಂತರಕ್ಕೆ ಇರಾನ್ ಪಟ್ಟು: ವರದಿ

ವಾರ್ತಾ ಭಾರತಿ 4 Feb 2026 11:45 pm

ಅಕ್ರಮ ವಲಸಿಗರ ವಿಚಾರದಲ್ಲಿ ಕೈಗೊಂಡ ಕ್ರಮಗಳೇನು?: ರಾಜ್ಯ ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಅಕ್ರಮ ವಲಸಿಗರಿಂದ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಸರಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಇಂಥವರ ವಿಚಾರದಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ, ಬಾಂಗ್ಲಾ ಅಕ್ರಮ ವಲಸಿಗರ ವಿಚಾರವಾಗಿ ಹೋರಾಟ ಮಾಡಿದ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ಒಂದು ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಸರಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ  ಸಲ್ಲಿಸಿರುವ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ‌ ನಿರ್ದೇಶನ‌ ನೀಡಿತು. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಆರ್‌ಒ) ನೋಂದಣಿ ಮಾಡಿಸದವರನ್ನು ಪತ್ತೆ ಮಾಡುವುದು ರಾಜ್ಯ ಸರಕಾರದ ಕೆಲಸ. ಸರಕಾರ ಕೆಲಸ ಮಾಡುತ್ತಿಲ್ಲ ಎಂದು ಅರ್ಜಿದಾರರು ತೋರಿಸಿದ್ದಾರೆ. ಅದಕ್ಕೆ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಹೇಗೆ? ವಿದೇಶದಿಂದ ಬಂದಿರುವವರು ಬೆಂಗಳೂರಿನ ಎಲ್ಲ ಕಡೆ ನೆಲೆಸಿದ್ದಾರೆ. ಯಾರ ಬಳಿಯೂ ವೀಸಾ, ಅನುಮತಿ ಇಲ್ಲ. ಅದಾಗ್ಯೂ, ಅವರು ಇಲ್ಲಿ ನೆಲೆಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅರ್ಜಿದಾರರು ಅದನ್ನು ತೋರಿಸಿದ್ದಕ್ಕೆ ನಿಮಗೆ ಸಮಸ್ಯೆಯೇ? ಎಂದು ಸರಕಾರವನ್ನು ಕುಟುಕಿತು. ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿದಾರರು ದಾಖಲೆ ತೋರಿಸಲಿ. ಅಕ್ರಮ ವಲಸಿಗರನ್ನು ಗುರುತಿಸಲು ವಿಧಾನವಿದೆ. ನೇರವಾಗಿ ಅಲ್ಲಿಗೆ ಹೋಗಿ ಹಲ್ಲೆ ನಡೆಸಲಾಗದು. ಅಕ್ರಮ ವಲಸಿಗರನ್ನು ಬಂಧನದಲ್ಲಿ ಇಡಲಾಗಿದೆ. ದೇಶದಿಂದ ಹೊರಗೆ ಕಳುಹಿಸುವುದರ ಕುರಿತು ಎಫ್‌ಆರ್‌ಆರ್‌ಒ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದ ವಲಸಿಗರ ಕುರಿತು ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ನ್ಯಾಯಪೀಠ, ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಸರಕಾರದ ಕೆಲಸ. ಅರ್ಜಿದಾರರು ಅದನ್ನು ಬಿಂಬಿಸಿದ್ದಾರೆ ಅಷ್ಟೆ. ತನಿಖೆ ನಡೆಸಿ, ಸರಕಾರ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಸರಕಾರ ಏನಾದರೂ ಕ್ರಮ ಕೈಗೊಂಡಿದೆಯೇ? ಯಾವ ಕ್ರಮ ಕೈಗೊಂಡಿದ್ದೀರಿ? ಅವಧಿ ಮೀರಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಸಲ್ಲಿಸಬೇಕು. ಯಾವಾಗ ಅವರನ್ನು ದೇಶದಿಂದ ಹೊರಗೆ ಕಳುಹಿಸುತ್ತೀರಿ? ಎಫ್‌ಆರ್‌ಆರ್‌ಒಗೆ ಸಮನ್ಸ್‌ ಜಾರಿ ಮಾಡಲಾಗುವುದು. ಒಂದು ದೇಶ ಅಥವಾ ಇನ್ನೊಂದು ದೇಶದ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಕ್ರಮ ವಲಸಿಗರು ಎಲ್ಲಾ ಕಡೆ ಇದ್ದಾರೆ ಎಂದು ಹೇಳಿತು. ಅಂತಿಮವಾಗಿ ನ್ಯಾಯಪೀಠ, ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತಲ್ಲದೆ, ಒಂದು ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ವಾರ್ತಾ ಭಾರತಿ 4 Feb 2026 11:45 pm

ಬಳ್ಳಾರಿ | ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಕರೆ

ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆ ಕಲ್ಪಿಸಲು ಸರ್ಕಾರದ ವಿಶೇಷ ಕ್ರಮ : ತಹಶೀಲ್ದಾರ್ ಜೂಗಲ್ ಮಂಜುನಾಯಕ

ವಾರ್ತಾ ಭಾರತಿ 4 Feb 2026 11:43 pm

ಮನರೇಗಾ ರದ್ದು ಮಾಡಿ ಕಾರ್ಮಿಕರ ಸ್ವಾಭಿಮಾನದ ಬದುಕು, ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ ಸರಕಾರ: ಡಿಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು, ಫೆ. 4: ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ಹಾಗೂ ಉದ್ಯೋಗದ ಹಕ್ಕು ನೀಡಿತ್ತು. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸ್ವಾಭಿಮಾನ ಉಳಿಸಿಕೊಂಡು ಉದ್ಯೋಗ ಕೇಳುವ ಅವಕಾಶ ಮನರೇಗಾ ಯೋಜನೆಯಡಿ ಇತ್ತು. ಜನರ ಈ ಹಕ್ಕನ್ನು ಕೇಂದ್ರ ಬಿಜೆಪಿ ಸರಕಾರ ಕಸಿದುಕೊಂಡಿದೆ ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ವಿಬಿ ಜಿ ರಾಮ್ ಜಿ ವಿರುದ್ಧ ಮುಖ್ಯಮಂತ್ರಿಯವರು ಮಂಡಿಸಿದ ನಿರ್ಣಯವನ್ನು ಬೆಂಬಲಿಸಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಡಿಸಿಎಂ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.ಈಗ ಹೊಸ ಕಾಯ್ದೆಯಲ್ಲಿ ಗುತ್ತಿಗೆದಾರನ ಬಳಿ ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಪಂಚಾಯಿತಿ ಮಟ್ಟದ‌ ಕೆಲಸಗಳನ್ನು ದಿಲ್ಲಿಯಲ್ಲಿ ಕುಳಿತು ಹೇಗೆ ನಿರ್ಧಾರ ಮಾಡಲಾಗುತ್ತದೆ. ಎಐ ತಂತ್ರಜ್ಞಾನದ ಮೂಲಕ ಎಲ್ಲೆಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತಾರಂತೆ. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ತೀರ್ಮಾನ ಎಂದರು. ಮುಖ್ಯಮಂತ್ರಿಯವರು ವಿಬಿ ಜಿ ರಾಮ್ ಜಿ ವಿರುದ್ಧ ತಂದಿರುವ ನಿರ್ಣಯಕ್ಕೆ ಅರ್ಥವಿದೆ. ರೈತರ ವಿರುದ್ಧ ತಂದಿದ್ದ ಕರಾಳ ಕಾಯ್ದೆಗಳನ್ನು ಹಿಂಪಡೆಯುವ ತನಕ ಹೇಗೆ ಹೋರಾಟ ಮಾಡಲಾಯಿತೋ ಅದೇ ರೀತಿ ಮನರೇಗಾ ಬದಲಾವಣೆ ವಿರುದ್ಧ ಅದನ್ನು ಮರುಜಾರಿ ಮಾಡುವ ತನಕ ನಾವು ಹೋರಾಟ ಮಾಡುತ್ತೇವೆ. ನಿರ್ಣಯಕ್ಕೆ ಇಡೀ ಆಡಳಿತ ಪಕ್ಷದ ಶಾಸಕರ ಬೆಂಬಲವಿದೆ. ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡುವ ಹಕ್ಕು ನೀಡಲಾಗಿತ್ತು. ಆದರೆ ಅವರು ಸಭಾತ್ಯಾಗ ಮಾಡಿ ಅದನ್ನು ಕಳೆದುಕೊಂಡಿದ್ದಾರೆ ಎಂದು ಕುಟುಕಿದರು. ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಕೆಯಾಗುತ್ತದೆ ಎಂದಾದರೆ ರೈತರು ಅವರ ಸ್ವಂತ ಜಮೀನಿನಲ್ಲೇ ಕೃಷಿ ಹೊಂಡ ಮಾಡಿಕೊಳ್ಳಬಹುದು, ಮನೆ ಕಟ್ಟಿಕೊಳ್ಳಬಹುದು ಹೀಗೆ ಹಲವಾರು ಕೆಲಸಗಳನ್ನು ಮಾಡಿಕೊಳ್ಳಬಹುದು. ಅದನ್ನೂ ಸಹ ನರೇಗಾ ಯೋಜನೆಯಡಿ ತಂದು ರೈತನೇ ಕೂಲಿ ಪಡೆಯಬಹುದು ಎಂದು ಸೋನಿಯಾಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಸರಕಾರ ಅವಕಾಶ ನೀಡಿತ್ತು ಎಂದರು. 2013-18ರ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನನ್ನದೇ ಕನಕಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ನರೇಗಾ ಕಾಮಗಾರಿಗಳು ನಡೆದವು. ಸುಮಾರು 40 ಸಾವಿರ ಕೃಷಿ ಹೊಂಡಗಳು, 54 ಸಾವಿರ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಯಿತು. 9,300 ಕ್ಕೂ ಹೆಚ್ಚು ಚರಂಡಿ ಕಾಮಗಾರಿಗಳು, 9 ಸಾವಿರ ಗ್ರಾಮೀಣ ರಸ್ತೆಗಳು, 4,200ಕ್ಕೂ ಅಧಿಕ ನಾಲಾ ಅಭಿವೃದ್ಧಿ ಕಾಮಗಾರಿ, ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಇದಕ್ಕೆ ನಾವು ಅವ್ಯವಹಾರ ಮಾಡಿದ್ದೇವೆ ಎಂದು ಕೇಂದ್ರ ಸರಕಾರ ಐದಾರು ಬಾರಿ ತನಿಖೆ ಮಾಡಿಸಿತು ಎಂದರು. 2017 ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಅತ್ಯುತ್ತಮ ಕೆಲಸ ಮಾಡಲಾಗಿದೆ ಎಂದು ರಾಮನಗರ ಜಿಲ್ಲೆಗೆ ಪ್ರಶಂಸೆ ನೀಡಿತು. ನನ್ನ ಕನಕಪುರ ಕ್ಷೇತ್ರವು ನರೇಗಾ ಅಡಿ ತೆಗೆದುಕೊಂಡಿದ್ದ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿದ ಕಾರಣಕ್ಕೆ ಇಡೀ ದೇಶದಲ್ಲಿಯೇ ಮೊದಲ ಸ್ಥಾನ ಗಳಿಸಿತು. ನನ್ನನ್ನು ಕರೆದು ಪ್ರಶಸ್ತಿ ನೀಡಬೇಕು ಎಂದು ನಮ್ಮ ತಾಲೂಕು  ಪಂಚಾಯತಿ ಅಧ್ಯಕ್ಷರನ್ನು ಕರೆದು ಪ್ರಶಸ್ತಿ ನೀಡಲಾಯಿತು. ಅಂದು ಕೆ.ಎಸ್.ಈಶ್ವರಪ್ಪ ಅವರು ಸಚಿವರಾಗಿದ್ದರು ಎಂದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ನೂತನ ಕಾಯ್ದೆ ಜಾರಿಗೆ ತರಲು ಆಗುವುದಿಲ್ಲ. ಶೇ. 60/40 ಅನುದಾನ ಹಂಚಿಕೆಗೆ ಒಪ್ಪಲು ಆಗುವುದಿಲ್ಲ. ಶೇ.40 ರಷ್ಟು ಅನುದಾನ ಯಾರು ನೀಡಲು ಆಗುತ್ತದೆ. ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದಾದರೆ ಬೇರೆಯವರ ಜಮೀನಿಗೆ ತೆರಳಿ ಕೆಲಸ ಮಾಡಲು ಸಾಧ್ಯವೇ? ಎಂದರು. ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಉದ್ಯೋಗ ಗ್ಯಾರಂಟಿ ನೀಡುತ್ತಿತ್ತು. ಪ್ರತಿಪಕ್ಷ ಬಿಜೆಪಿಗೆ ಕೇಂದ್ರ ಸರಕಾರ ತಂದಿರುವ ಹೊಸ ಕಾನೂನು ಬಗ್ಗೆ ಚರ್ಚೆ‌ ಮಾಡಲು ಬೇಕಾದಷ್ಟು ಅವಕಾಶವಿತ್ತು. ಸದನದಲ್ಲಿ ಬಿಜೆಪಿಯವರಿಗೆ ಹೇಳಲು ಧೈರ್ಯವಿಲ್ಲ. ಹೊರಗೆಯಾದರೂ ಇದರ ಬಗ್ಗೆ ಮಾತನಾಡಲಿ ಎಂಬುದು ನನ್ನ ಅಪೇಕ್ಷೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷ, ಸರಕಾರ ಮಹಾತ್ಮ ಗಾಂಧಿ ಅವರ ಹೆಸರನ್ನು ಮರಳಿ ತರುವ ತನಕ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದರು.

ವಾರ್ತಾ ಭಾರತಿ 4 Feb 2026 11:38 pm

ಕನಕಗಿರಿ | ಯುವತಿ ನಾಪತ್ತೆ

ಕನಕಗಿರಿ : ತಾಲ್ಲೂಕಿನ ಹುಲಿಹೈದಾರ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿಂಗಮ್ಮ ಕೋಮಾರ್ ಎಂಬ ಯುವತಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಯುವತಿಯ ತಾಯಿ ದ್ಯಾಮವ್ವ ದೇವಪ್ಪ ಅವರು ಸಂಬಂಧಿಕರು ಹಾಗೂ ಪರಿಚಿತರ ಮೂಲಕ ಮಗಳನ್ನು ಹುಡುಕಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಪತ್ತೆಹಚ್ಚಿ ಕೊಡುವಂತೆ ದ್ಯಾಮವ್ವ ದೇವಪ್ಪ ಅವರು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 4 Feb 2026 11:33 pm