ದಿಢೀರನೆ ಹಿನ್ನೆಲೆ ಗಾಯನ ನಿಲ್ಲಿಸುವ ಘೋಷಣೆ ಮಾಡಿದ “ಕ್ಯೂಂಕಿ ತುಮ್ ಹಿ ಹೋ…” ಖ್ಯಾತಿಯ ಅರಿಜಿತ್ ಸಿಂಗ್!
ಖಾತೆ ಹ್ಯಾಕ್ ಆಗಿರಬಹುದೇ ಎಂದು ಶಂಕೆ ವ್ಯಕ್ತಪಡಿಸಿದ ಜನರು
ಶಹಾಪುರ | ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ : ಸಚಿವ ಶರಣಬಸಪ್ಪಗೌಡ ದರ್ಶನಾಪುರ
ಶಹಾಪುರ : ಶಹಾಪುರ ಮತಕ್ಷೇತ್ರದ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿಯಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ತಾಲೂಕಿನ ಬೆನಕನಹಳ್ಳಿ ಕ್ರಾಸ್ನಿಂದ ಕನ್ಯಾಕೊಳ್ಳೂರ ಅಗಸಿ ರಸ್ತೆಯಲ್ಲಿ 2024–25ನೇ ಸಾಲಿನ 5054 ಮಳೆ ಪರಿಹಾರ ಯೋಜನೆ ಅಡಿಯಲ್ಲಿ ಮಂಜೂರಾದ 1 ಕೋಟಿ 25 ಲಕ್ಷ ರೂ. ವೆಚ್ಚದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಪೂರಕ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ತಮ್ಮ ಅಭಿವೃದ್ಧಿ ಪರವಾದ ಚಿಂತನೆಗಳ ಮೇಲೆ ನಂಬಿಕೆ ಇಟ್ಟು ಜನರು ಆಶೀರ್ವಾದ ನೀಡಿರುವುದಾಗಿ ಸಚಿವರು ತಿಳಿಸಿದರು. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದೇ ತಮ್ಮ ರಾಜಕೀಯ ಧೋರಣೆಯಾಗಿದ್ದು, ಇಂದು ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಜನರ ಮೇಲಿನ ಋಣಭಾರವನ್ನು ಸ್ವಲ್ಪ ಮಟ್ಟಿಗೆ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಪ್ರತಿಯೊಂದು ಅಭಿವೃದ್ಧಿ ಕಾರ್ಯ ಯಶಸ್ವಿಯಾಗಲು ಜನಸಹಕಾರ ಅತ್ಯಂತ ಅಗತ್ಯವೆಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ನಗರದ ರಾಕಂಗೇರ ಸಮೀಪ ಸಂಗೂಳ್ಳಿ ರಾಯಣ್ಣರ ಪೂಜೆ ನಾಮಫಲಕವನ್ನು ಸಚಿವರು ಉದ್ಘಾಟಿಸಿದರು. ನಂತರ 50 ಲಕ್ಷ ರೂ. ವೆಚ್ಚದ ತಾಲೂಕು ಪಂಚಾಯತ್ ಸಭಾಂಗಣ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಇಇ ಮಂಜುನಾಥ ಸಂಗಾವಿ, ಜೆಇ ಕಳ್ಳಯ್ಯ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ, ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಡಾ. ಭೀಮಣ್ಣ ಮೇಟಿ, ನೀಲಕಂಠ ಬಡಿಗೇರ, ಮುಸ್ತಫ ದರ್ಬಾನ್, ಅಲ್ಲಾ ಪಟೇಲ್ ಮಕ್ತಾಪುರ, ಶಾಂತಗೌಡ ನಾಗನಟಿಗಿ, ಸದ್ದಾಂ ದಾದುಲ್ಲಾ, ಖಾಲೀದ್, ಮಲ್ಲಣ್ಣ ಉಳಂಡಗೇರಿ, ಮೆಲ್ಲಣಗೌಡ ತಿಪ್ಪನಹಳ್ಳಿ, ಶರಬಣ್ಣ ರಸ್ತಾಪುರ, ರವಿ ರಾಜಾಪುರ, ಭೀಮರಾಯ ಜುನ್ನಾ, ತಲಾಖ್ ಚಾಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ತುಂಬೆ ಗ್ರೂಪ್ನಿಂದ ‘ತುಂಬೆ ಕೇರ್ಸ್’ ಅಭಿಯಾನಕ್ಕೆ ಚಾಲನೆ
► ಉದ್ಯೋಗಿಗಳ ಕಲ್ಯಾಣಕ್ಕೆ ಆದ್ಯತೆ ► 56 ರಾಷ್ಟ್ರಗಳ 3000ಕ್ಕೂ ಅಧಿಕ ಸಿಬ್ಬಂದಿ ► 500ಕ್ಕೂ ಅಧಿಕ ವೈದ್ಯರು
ಮಾದಕದ್ರವ್ಯ ಸೇವನೆ ಆರೋಪದಿಂದ ಬ್ಯಾಡ್ಮಿಂಟನ್ ಆಟಗಾರ ಕೃಷ್ಣಪ್ರಸಾದ್ ಮುಕ್ತ
ಹೊಸದಿಲ್ಲಿ, ಜ. 27: ಭಾರತೀಯ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ಪ್ರಸಾದ್ ಗರಗರ ನಾಲ್ಕು ವರ್ಷಗಳ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯ(ನಾಡಾ) ಮೇಲ್ಮನವಿ ಮಂಡಳಿಯು ತೆರವುಗೊಳಿಸಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ 25 ವರ್ಷದ ಆಟಗಾರ, 2022ರಲ್ಲಿ ಥಾಮಸ್ ಕಪ್ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದ ಸದಸ್ಯನಾಗಿದ್ದರು. ಅವರ ವಿರುದ್ಧದ ನಾಲ್ಕು ವರ್ಷಗಳ ನಿಷೇಧ 2024 ನವೆಂಬರ್ 6ರಂದು ಜಾರಿಗೆ ಬಂದಿತ್ತು. ಆದರೆ, ಜನವರಿ 18ರಿಂದ ಜಾರಿಗೆ ಬರುವಂತೆ ಅವರ ನಿಷೇಧವನ್ನು ತೆರವುಗೊಳಿಸಲು ನಾಡಾದ ಮೇಲ್ಮನವಿ ಮಂಡಳಿಯು ನಿರ್ಧರಿಸಿದೆ. ಹಾಗಾಗಿ, ಈಗ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವರು ಸ್ವತಂತ್ರರಾಗಿದ್ದಾರೆ. ಗರಗ 2019ರ ದಕ್ಷಿಣ ಏಶ್ಯ ಗೇಮ್ಸ್ನಲ್ಲಿ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದರು. ನಾಡಾವು ಕಡ್ಡಾಯ ಮುನ್ನೆಚ್ಚರಿಕಾ ವಿಧಿವಿಧಾನಗಳನ್ನು ಪಾಲಿಸಲು ವಿಫಲವಾಗಿದೆ ಎಂಬುದಾಗಿ ಗರಗ ಅವರ ವಕೀಲರು ವಾದಿಸಿದರು. ಜಾಗತಿಕ ದ್ರವ್ಯ ನಿಗ್ರಹ ಸಂಸ್ಥೆಯ(ವಾಡಾ) ನಿಯಮಗಳ ಪ್ರಕಾರ, ಪುರುಷ ಅತ್ಲೀಟ್ ಒಬ್ಬರಲ್ಲಿ ಎಚ್ಸಿಜಿ ದ್ರವ್ಯ ಇರುವ ಬಗ್ಗೆ ಪ್ರತಿಕೂಲ ವರದಿ ಬಂದರೆ ಅವರನ್ನು ತಕ್ಷಣ ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಅವರಲ್ಲಿ ಇರಬಹುದಾದ ಯಾವುದಾದರೂ ಕಾಯಿಲೆಯು ಇದಕ್ಕೆ ಕಾರಣವಲ್ಲ ಎಂಬುದನ್ನು ಖಾತರಿಪಡಿಸಲು ಇದು ಅಗತ್ಯವಾಗಿದೆ ಎಂಬುದಾಗಿ ವಕೀಲರು ಬೆಟ್ಟು ಮಾಡಿದರು. ‘‘ಎಚ್ಸಿಜಿಯನ್ನು ಹೊರಗಿನಿಂದ ನೀಡಿರುವ ಸಾಧ್ಯತೆ ಇಲ್ಲ. ಯಾಕೆಂದರೆ ಹೊರಗಿನಿಂದ ನೀಡಲಾದ ಎಚ್ಸಿಜಿಯು ಕೆಲವೇ ದಿನಗಳಲ್ಲಿ ದೇಹದಿಂದ ಹೊರಹೋಗುತ್ತದೆ’’ ಎಂದು ಅವರು ವಾದಿಸಿದ್ದರು.
ಯಾದಗಿರಿ | ವಿಬಿ ಜಿ ರಾಮ್ ಜಿ ವಾಪಸ್ ಪಡೆದು ನರೇಗಾ ಪುನರ್ಸ್ಥಾಪನೆಗೆ ಆಗ್ರಹಿಸಿ ಎಐಕೆಕೆಎಂಎಸ್ ಪ್ರತಿಭಟನೆ
ಯಾದಗಿರಿ : ವಿಬಿ ಜಿ ರಾಮ್ ಜಿ ಯೋಜನೆಯನ್ನು ತಕ್ಷಣವೇ ವಾಪಸ್ ಪಡೆದು, ಉದ್ಯೋಗ ಖಾತ್ರಿ ಹೊಂದಿರುವ ನರೇಗಾ ಯೋಜನೆಯನ್ನು ಪುನರ್ಸ್ಥಾಪಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಯಾದಗಿರಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿ ಮಾತನಾಡಿದ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ತಮ್ಮ ಊರುಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ 2005ರಲ್ಲಿ ಜಾರಿಗೊಂಡ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿತ್ತು ಎಂದು ಹೇಳಿದರು. ಆದರೆ ಉದ್ಯೋಗ ಖಾತ್ರಿ ಇಲ್ಲದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರ ಬದುಕನ್ನೇ ಅಪಾಯಕ್ಕೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಒಳಸುರಿವುಗಳ ದರ ಹೆಚ್ಚಳ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಹಾಗೂ ಪ್ರಾಕೃತಿಕ ವಿಕೋಪಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ಆಸರೆಯಾಗಿರುವ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವುದು ಭಾರೀ ಅನ್ಯಾಯ ಎಂದು ಅವರು ಎಚ್ಚರಿಸಿದರು. ಪ್ರತಿ ಕೇಂದ್ರ ಬಜೆಟ್ನಲ್ಲಿ ನರೇಗಾ ಯೋಜನೆಗೆ ಹಣ ಕಡಿತಗೊಳಿಸಲಾಗುತ್ತಿದ್ದು, ಇದೀಗ ಹೊಸ ಯೋಜನೆಯ ಮೂಲಕ ಗ್ರಾಮೀಣ ಉದ್ಯೋಗ ಖಾತ್ರಿಗೆ ಕೊಡಲಿ ಪೆಟ್ಟು ನೀಡಲಾಗಿದೆ ಎಂದು ಟೀಕಿಸಿದರು. ನರೇಗಾ ಯೋಜನೆಯಿಂದ 12 ಕೋಟಿಗೂ ಹೆಚ್ಚು ಜನರು ಜೀವನ ಸಾಗಿಸುತ್ತಿದ್ದು, ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿತ್ತು ಎಂದರು. ಹೊಸ ಯೋಜನೆಯಂತೆ ಕೂಲಿ ವೆಚ್ಚದ ಶೇ.60ನ್ನು ಕೇಂದ್ರ ಸರ್ಕಾರ ಹಾಗೂ ಶೇ.40ನ್ನು ರಾಜ್ಯ ಸರ್ಕಾರ ಭರಿಸಬೇಕಿರುವುದರಿಂದ, ಕೂಲಿ ಕಾರ್ಮಿಕರಿಗೆ ದುಡಿದ ಹಣ ಸಮಯಕ್ಕೆ ಸಿಗುತ್ತದೆಯೇ ಎಂಬ ಅನುಮಾನವಿದೆ. ಈಗಾಗಲೇ ರಾಜ್ಯ ಸರ್ಕಾರ ಹಣಕಾಸಿನ ಕೊರತೆ ಉಲ್ಲೇಖಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಹೇಳಿದರು. ನರೇಗಾ ಯೋಜನೆಯಡಿ ಕೆಲಸ ಕೇಳುವ ಹಕ್ಕು, ಸ್ಪಷ್ಟ ಕ್ರಿಯಾ ಯೋಜನೆಗಳು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಅವಕಾಶವಿತ್ತು. ಆದರೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಸ್ಪಷ್ಟ ಕ್ರಿಯಾ ಯೋಜನೆಗಳಿಲ್ಲದಿರುವುದು ಗ್ರಾಮೀಣ ಬದುಕಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ನರೇಗಾ ಯೋಜನೆಯನ್ನು ವಿಸ್ತರಿಸಿ ವರ್ಷಕ್ಕೆ 200 ಮಾನವ ದಿನಗಳ ಕೆಲಸ ಹಾಗೂ 600 ರೂ. ಕೂಲಿ ನೀಡಬೇಕಿತ್ತು. ಬದಲಾಗಿ ಹೊಸ ಯೋಜನೆಯಿಂದ ನಿರುದ್ಯೋಗ ಮತ್ತು ವಲಸೆ ಹೆಚ್ಚಾಗಲಿದೆ ಎಂದು ಹೇಳಿದರು. ಆದ್ದರಿಂದ ಕೇಂದ್ರ ಸರ್ಕಾರವು ವಿಬಿ ಜಿ ರಾಮ್ ಜಿ ಯೋಜನೆಯನ್ನು ತಕ್ಷಣವೇ ವಾಪಸ್ ಪಡೆದು, ನರೇಗಾ ಯೋಜನೆಯನ್ನು ಪುನರ್ಸ್ಥಾಪಿಸಬೇಕು. ಇಲ್ಲದಿದ್ದರೆ ಗ್ರಾಮೀಣ ಬದುಕಿನ ರಕ್ಷಣೆಗೆ ದೇಶವ್ಯಾಪಿ ಬಲಿಷ್ಠ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ ಹಿರೇಬಾನರ್, ಉಪಾಧ್ಯಕ್ಷರಾದ ಸಿದ್ದಪ್ಪ ಬಡಿಗೇರ, ಜಮಾಲ್ಸಾಬ್, ಸಹ ಕಾರ್ಯದರ್ಶಿ ಸುಭಾಷ್ಚಂದ್ರ ಬಾವನೋರ್, ಜಿಲ್ಲಾ ಸಮಿತಿ ಸದಸ್ಯರಾದ ರಾಜು ಹಿಮ್ಲಾಪುರ, ಮರೆಪ್ಪ ಹಂಪಿನ್, ಮಲ್ಲಪ್ಪ, ಸಿದ್ದಪ್ಪ, ಶೇಖರ್, ಶರಣಪ್ಪ, ಬಸಪ್ಪ, ತರಭಿ, ಸುಶೀಲಮ್ಮ, ರುದ್ರಮ್ಮ, ಭೀಮಮ್ಮ, ಅಭಿದ ಬೇಗಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಟೀಮ್ ಇಂಡಿಯಾಕ್ಕೆ ಮರಳಲು ಸರ್ಫರಾಝ್ಗೆ ಅಝರುದ್ದೀನ್ ಬೆಂಬಲ
ಮುಂಬೈ, ಜ. 27: ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವ ಸರ್ಫರಾಝ್ ಖಾನ್ರ ಪ್ರಯತ್ನಗಳು ಬಲಗೊಳ್ಳುತ್ತಿವೆ ಹಾಗೂ ತನ್ನನ್ನು ನಿರ್ಲಕ್ಷಿಸುವುದು ಅಸಾಧ್ಯ ಎಂಬ ಸಂದೇಶವನ್ನು ಮುಂಬೈ ಬ್ಯಾಟರ್ ನೀಡುತ್ತಿದ್ದಾರೆ. ಅವರು ಭಾರತೀಯ ತಂಡದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು 2024 ನವೆಂಬರ್ನಲ್ಲಿ. ಅಂದಿನಿಂದ ಅವರು ಪರಿವರ್ತನೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅವರು ಈಗ ತನ್ನ ದೇಹ ತೂಕ ಕಡಿಮೆ ಮಾಡಿಕೊಂಡಿದ್ದಾರೆ, ತನ್ನ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಹಾಗೂ ಮುಖ್ಯವಾಗಿ ದೇಶಿ ಕ್ರಿಕೆಟ್ನಲ್ಲಿ ರನ್ಗಳ ಪ್ರವಾಹದ ಮೂಲಕ ಬೌಲರ್ಗಳನ್ನು ದಂಡಿಸಿದ್ದಾರೆ. ಅಂಕಿ-ಅಂಶಗಳೇ ಕತೆಯನ್ನು ಹೇಳುತ್ತವೆ. ವಿಜಯ ಹಝಾರೆ ಟ್ರೋಫಿಯಲ್ಲಿ ಸರ್ಫರಾಝ್ 157, 55 ಮತ್ತು 62 ರನ್ಗಳನ್ನು ಗಳಿಸಿದರು. ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ 227 ರನ್ಗಳನ್ನು ಬಾರಿಸಿದರು. ಅವರ ಪ್ರತಿಯೊಂದು ಇನಿಂಗ್ಸ್ ಕೂಡ, ತಾನು ಮರುಮೌಲ್ಯಮಾಪನಕ್ಕೆ ಸಿದ್ಧನಾಗಿದ್ದೇನೆ ಎಂಬ ಸಂದೇಶವನ್ನು ಆಯ್ಕೆಗಾರರಿಗೆ ನೀಡುವಂತಿತ್ತು. ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ಸರ್ಫರಾಝ್ರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಿವರ್ಸ್ ಸ್ವಿಂಗನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಅವರು ಸರ್ಫರಾಝ್ಗೆ ಮಾರ್ಗದರ್ಶನ ನೀಡಿದ್ದಾರೆ ಎನ್ನಲಾಗಿದೆ. ‘‘ಅವರೊಬ್ಬ ಉತ್ತಮ ಆಕ್ರಮಣಶೀಲ ಆಟಗಾರ. ಅವರು ಅತ್ಯಂತ ಕ್ಷಿಪ್ರವಾಗಿ ಪಂದ್ಯವೊಂದರ ಗತಿಯನ್ನು ಬದಲಿಸಬಲ್ಲರು. ತನ್ನ ಮೇಲೆ ಬೌಲರ್ಗಳು ಪ್ರಾಬಲ್ಯ ಸಾಧಿಸುವುದನ್ನು ಅವರು ಬಯಸುವುದಿಲ್ಲ. ಅವರು ಉತ್ತಮ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸುತ್ತಿರುವುದು ಅವರ ಗುಣಮಟ್ಟವನ್ನು ತೋರಿಸುತ್ತದೆ’’ ಎಂದು ಅಝರುದ್ದೀನ್ ಹೇಳಿದ್ದಾರೆ. ಸರ್ಫರಾಝ್ಗೆ ಇನ್ನೊಂದು ಅವಕಾಶವನ್ನು ನೀಡುವಂತೆ ಅಝರುದ್ದೀನ್, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ನೇರ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಅಲ್ಕರಾಝ್, ಝ್ವೆರೆವ್, ಸ್ವಿಟೋಲಿನಾ, ಸಬಲೆಂಕಾ ಸೆಮಿ ಫೈನಲ್ಗೆ ಲಗ್ಗೆ
ಮೆಲ್ಬರ್ನ್, ಜ.27: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್, ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್, ಎಲಿನಾ ಸ್ವಿಟೋಲಿನಾ ಹಾಗೂ ಅಗ್ರ ಶ್ರೇಯಾಂಕದ ಆರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಕರಾಝ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ರನ್ನು 7-5, 6-2, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದರು. ಟೆನಿಸ್ನಲ್ಲಿ ಐತಿಹಾಸಿಕ ಸಾಧನೆ ಮಾಡುವುದರಿಂದ ಎರಡು ಹೆಜ್ಜೆ ಹಿಂದಿದ್ದಾರೆ. 22ರ ವಯಸ್ಸಿನ ಅಲ್ಕರಾಝ್ ಮೆಲ್ಬರ್ನ್ನಲ್ಲಿ ಈ ತನಕ ಸೆಟ್ ಸೋತಿಲ್ಲ. ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮಾತ್ರ ಈ ತನಕ ಗೆಲ್ಲಲು ಸಾಧ್ಯವಾಗಿಲ್ಲ. ಒಂದು ವೇಳೆ ಅಲ್ಕರಾಝ್ ರವಿವಾರ ನಡೆಯಲಿರುವ ಫೈನಲ್ಗೆ ತಲುಪಿ ಪ್ರಶಸ್ತಿ ಎತ್ತಿ ಹಿಡಿದರೆ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದ ಕಿರಿಯ ಆಟಗಾರ ಎನಿಸಿಕೊಂಡು ಸ್ಪೇನ್ ಸೂಪರ್ಸ್ಟಾರ್ ರಫೆಲ್ ನಡಾಲ್ ದಾಖಲೆಯನ್ನು ಮುರಿಯಲಿದ್ದಾರೆ. ಅಲ್ಕರಾಝ್ ಸೆಮಿ ಫೈನಲ್ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಸವಾಲನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಫೈನಲ್ಗೆ ತಲುಪಿದ್ದ ಝ್ವೆರೆವ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ ಲರ್ನರ್ ಟಿಯೆನ್ರನ್ನು 6-3, 6-7(5/7), 6-1, 7-6(7/3) ಸೆಟ್ಗಳ ಅಂತರದಿಂದ ಮಣಿಸಿದರು. ವಿಶ್ವದ ಮೂರನೇ ರ್ಯಾಂಕಿನ ಆಟಗಾರ ಝ್ವೆರೆವ್ ಇನ್ನಷ್ಟೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಬೇಕಾಗಿದೆ. 28ರ ವಯಸ್ಸಿನ ಝ್ವೆರೆವ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ಗೆ ತಲುಪಿದ್ದರೂ ಜನ್ನಿಕ್ ಸಿನ್ನರ್ಗೆ ಸೋತಿದ್ದರು. 2020ರ ಯು.ಎಸ್. ಓಪನ್ ಹಾಗೂ 2024ರ ಫ್ರೆಂಚ್ ಓಪನ್ ಟೂರ್ನಿಯಲ್ಲೂ ರನ್ನರ್- ಅಪ್ಗೆ ತೃಪ್ತಿಪಟ್ಟಿದ್ದರು. ತಾಪಮಾನ 45 ಡಿಗ್ರಿಗೆ ತಲುಪಲಿದೆ ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಡ್ ಲಾವೆರ್ ಅರೆನಾದಲ್ಲಿ ಮುಚ್ಚಿದ ಮೇಲ್ಛಾವಣಿಯಡಿ ಪಂದ್ಯವನ್ನು ಆಡಲಾಯಿತು. 20ರ ಹರೆಯದ ಟಿಯೆನ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸ್ಪರ್ಧೆಯಲ್ಲಿದ್ದ ಕಿರಿಯ ವಯಸ್ಸಿನ ಹಾಗೂ ಕೆಳ ರ್ಯಾಂಕಿನ ಆಟಗಾರನಾಗಿದ್ದರು. ಮೊದಲ ಬಾರಿ ಗ್ರ್ಯಾನ್ಸ್ಲಾಮ್ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯ ಆಡಿದ್ದರು. ಕೊಕೊ ಗೌಫ್ಗೆ ಕಹಿ, ಸ್ವಿಟೋಲಿನಾಗೆ ಸಿಹಿ ಅಮೆರಿಕದ ಮೂರನೇ ಶ್ರೇಯಾಂಕದ ಕೊಕೊ ಗೌಫ್ಗೆ ಸೋಲಿನ ಕಹಿ ಉಣಿಸಿದ ಎಲಿನಾ ಸ್ವಿಟೋಲಿನಾ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ. ರಾಡ್ ಲಾವೆರ್ ಅರೆನಾದ ಮುಚ್ಚಿದ ಮೇಲ್ಛಾವಣಿಯಡಿ 59 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ 31ರ ವಯಸ್ಸಿನ ಸ್ವಿಟೋಲಿನಾ 6-1, 6-2 ನೇರ ಸೆಟ್ಗಳ ಅಂತರದಿಂದ ಜಯಶಾಲಿಯಾದರು. ಸ್ವಿಟೋಲಿನಾ ತನ್ನ ವೃತ್ತಿಬದುಕಿನಲ್ಲಿ ಮೂರನೇ ಬಾರಿ ಹಾಗೂ ಮೆಲ್ಬರ್ನ್ನಲ್ಲಿ ಮೊದಲ ಬಾರಿ ಸೆಮಿ ಫೈನಲ್ಗೆ ಪ್ರವೇಶಿಸಿದರು. ಆಸ್ಟ್ರೇಲಿಯನ್ ಓಪನ್ನಲ್ಲಿ 2018, 2019 ಹಾಗೂ 2025ರಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಕಾಣಿಸಿಕೊಂಡಿದ್ದರು. 12ನೇ ಶ್ರೇಯಾಂಕದ ಸ್ವಿಟೋಲಿನಾ ಈ ತಿಂಗಳಾರಂಭದಲ್ಲಿ ಆಕ್ಲೆಂಡ್ನಲ್ಲಿ ಪ್ರಶಸ್ತಿ ಗೆದ್ದ ನಂತರ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಸೆಮಿ ಫೈನಲ್ಗೆ ತಲುಪಿರುವ ಸ್ವಿಟೋಲಿನಾ ರ್ಯಾಂಕಿಂಗ್ನಲ್ಲಿ ಅಗ್ರ-10ಕ್ಕೆ ಮರಳುವ ಸಾಧ್ಯತೆಯಿದೆ. ಗೌಫ್ ಅವರು ಪಂದ್ಯದುದ್ದಕ್ಕೂ ಅದರಲ್ಲೂ ಮುಖ್ಯವಾಗಿ ಸರ್ವ್ ವೇಳೆ ಪರದಾಟ ನಡೆಸಿದರು. ತನ್ನ ಮೊದಲ ಸರ್ವ್ ಪಾಯಿಂಟ್ಸ್ನಲ್ಲಿ ಶೇ.40ರಷ್ಟು ಗೆಲುವು ಪಡೆದಿದ್ದ ಗೌಫ್ 19 ಅನಗತ್ಯ ತಪ್ಪೆಸಗಿದರು. ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ 2023ರ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದರು. ಯೋವಿಚ್ಗೆ ಸೋಲು, ಸಬಲೆಂಕಾ ಸೆಮಿ ಫೈನಲ್ಗೆ ಅಗ್ರ ಶ್ರೇಯಾಂಕದ ಆರ್ಯನಾ ಸಬಲೆಂಕಾ ಅಮೆರಿಕದ ಯುವ ಆಟಗಾರ್ತಿ ಈವಾ ಯೋವಿಚ್ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದರು. ಮೆಲ್ಬರ್ನ್ ಪಾರ್ಕ್ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲಾರುಸ್ ಆಟಗಾರ್ತಿ ಸಬಲೆಂಕಾ ಅವರು ಯೋವಿಚ್ರನ್ನು 6-3, 6-0 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಗೆಲುವಿನ ಮೂಲಕ 27ರ ಹರೆಯದ ಸಬಲೆಂಕಾ ಗ್ರ್ಯಾನ್ಸ್ಲಾಮ್ ವೃತ್ತಿಜೀವನದಲ್ಲಿ 14ನೇ ಬಾರಿ ಹಾಗೂ ವರ್ಷದ ಮೊದಲ ಗ್ರ್ಯಾನ್ಸ್ಲಾಮ್ ಟೂನಿಯಲ್ಲಿ ಸತತ ನಾಲ್ಕನೇ ಬಾರಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟರು. ಸಬಲೆಂಕಾ 2023 ಹಾಗೂ 2024ರಲ್ಲಿ ಮೆಲ್ಬರ್ನ್ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಮತ್ತೊಂದು ಪ್ರಶಸ್ತಿಯ ಸನಿಹಕ್ಕೆ ತಲುಪಿದ್ದರು. ಆದರೆ, ಫೈನಲ್ನಲ್ಲಿ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ವಿರುದ್ಧ ಸೋತಿದ್ದರು. ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾಗೆ ಸೋತಿರುವ ಮ್ಯಾಡಿಸನ್ ಅವರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಭಗ್ನವಾಗಿದೆ. ಈ ಸೋಲಿನ ಮೂಲಕ 18ರ ವಯಸ್ಸಿನ ಯೋವಿಚ್ ದಿಟ್ಟ ಹೋರಾಟಕ್ಕೆ ತೆರೆ ಬಿದ್ದಿದೆ. ಮಹಿಳೆಯರ ಅಗ್ರ-100ರಲ್ಲಿರುವ ಕಿರಿಯ ಆಟಗಾರ್ತಿಯಾಗಿರುವ ಯೋವಿಚ್ 29ನೇ ಶ್ರೇಯಾಂಕ ಪಡೆದಿದ್ದರು. ಯೋವಿಚ್ ಅವರು ಪ್ರಸಕ್ತ ಟೂರ್ನಿಯಲ್ಲಿ ಎರಡು ಬಾರಿಯ ಗ್ರ್ಯಾನ್ಸ್ಲಾಮ್ ಫೈನಲಿಸ್ಟ್ ಜಾಸ್ಮಿನ್ ಪಯೋಲಿನಿ ಅವರನ್ನು ಮಣಿಸಿ ಗಮನ ಸೆಳೆದಿದ್ದರು.
ಮೇಲ್ಮನೆಯಲ್ಲಿ ಶಿಡ್ಲಘಟ್ಟದ ಮಹಿಳಾ ಅಧಿಕಾರಿ ನಿಂದನೆ ಪ್ರಕರಣ ಪ್ರತಿಧ್ವನಿ
ಆರೋಪಿಯ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಭೈರತಿ ಸುರೇಶ್
Union Budget 2026 : ರಾಜ್ಯಕ್ಕೆ ಸಿಗಲಿದೆಯೇ ಬಂಪರ್ ಕೊಡುಗೆ? ಶುಭ ಸೂಚನೆ ಕೊಟ್ಟ ಕೇಂದ್ರ ಸಚಿವರು
Feb 1 - Union Budget : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2026ನೇ ಸಾಲಿನ ಆಯವ್ಯಯವನ್ನು ಫೆಬ್ರವರಿ ಒಂದು, ಭಾನುವಾರದಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್’ನಲ್ಲಿ ಕರ್ನಾಟಕಕ್ಕೆ ಉತ್ತಮ ಕೊಡುಗೆ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ ಜೊತೆಗಿನ ವಾಣಿಜ್ಯ ಒಪ್ಪಂದದಿಂದ ಭಾರತಕ್ಕೆ ಭರಪೂರ ಲಾಭವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹೊಸದಿಲ್ಲಿ,ಜ.27: ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸುಂದರವಾದ ಚಿತ್ರಣವನ್ನು ನೀಡುವುದಕ್ಕಾಗಿ ಮೋದಿ ಸರಕಾರವು ದತ್ತಾಂಶಗಳನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಮಂಗಳವಾರ ಆಪಾದಿಸಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹಾಗೂ ಕ್ಷೀಣಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳು, ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರಶ್ನಾರ್ಹವಾಗಿಸಿದೆ ಎಂದರು. ಸಂಸತ್ನ ಬಜೆಟ್ ಅಧಿವೇಶನದ ಆರಂಭಕ್ಕೆ ಮುನ್ನಾ ದಿನವಾದ ಮುಂಗಳವಾರ ಕಾಂಗ್ರೆಸ್, ‘ನೈಜ ಆರ್ಥಿಕ ಸ್ಥಿತಿಗತಿ ವರದಿ 2026’’ ಅನ್ನು ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರವು ದೇಶದ ಆರ್ಥಿಕತೆಯ ಕುರಿತು ಸುಳ್ಳು ಮಾಹಿತಿಯನ್ನು ನೀಡುವುದಕ್ಕೆ ಮೊದಲೇ ಈ ವಾಸ್ತವಾಂಶಗಳನ್ನು ಜನರ ಮುಂದಿಡುತ್ತಿರುವುದಾಗಿ ತಿಳಿಸಿದೆ. ‘‘ಅಸಮಾನತೆಯ ಏರಿಕೆ, ಹಿಂದೆ ಸರಿದ ಅಭಿವೃದ್ಧಿ’’ ಎಂಬ ಶೀರ್ಷಿಕೆಯ ಈ ವರದಿಯನ್ನು ಕಾಂಗ್ರೆಸ್ ವಕ್ತಾರರಾದ ರಾಜೀವ್ ಗೌಡ ಹಾಗೂ ಅಮಿತಾಭ್ ದುಬೆ ಬಿಡುಗಡೆಗೊಳಿಸಿದರು. ‘‘ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಅಂಕಿಅಂಶಗಳಿಗೆ ಸಿ ದರ್ಜೆಯನ್ನು ನೀಡಿದೆ. ಹಣದುಬ್ಬರವು 0.5 ಶೇ. ಹಣದುಬ್ಬರ, ಜನರ ಬದುಕಿನಲ್ಲಿ ವಾಸ್ತವವಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಭಾರತದ ಒಟ್ಟು ಆಂತರಿಕ ಉತ್ಪನ್ನವು 2025-26ನೇ ಸಾಲಿನ ಮೊದಲಾರ್ಧದದಲ್ಲಿ ಶೇ.8.4ರಷ್ಟು ಬೆಳವಣಿಗೆಯನ್ನು ಕಂಡಿತ್ತು. ಆದರೆ ಎಂಟು ಕೋಟಿ ಕೈಗಾರಿಕೆಗಳ ಸೂಚ್ಯಂಕವು ಕೇವಲ 2.9 ಶೇಕಡ ಬೆಳವಣಿಗೆಯನ್ನು ತೋರಿಸಿಕೊಟ್ಟಿದೆ. ಇದೇ ವೇಲೆ 2025ರಲ್ಲಿ ಭಾರತದ ರೂಪಾಯಿ, ಏಶ್ಯದ ಅತ್ಯಂತ ಕಳಪೆ ನಿರ್ವಹಣೆಯ ಕರೆನ್ಸಿಯಾಗಿದೆ ಎಂದು ರಾಜೀವ್ಗೌಡ ಹೇಳಿದರು. 2017-18ರಿಂದ 2023-24ರ ನಡುವೆ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಸಂಖ್ಯೆ 12.1 ಶೇಕಡಿಂದ 11.4 ಶೇಕಡಕ್ಕೆ ಇಳಿದರೆ, ಕೃಷಿ ವಲಯದಲ್ಲಿ ಅವರ ಸಂಖ್ಯೆ 44.1 ಶೇಕಡದಿಂದ 46.1 ಶೇಕಡಕ್ಕೆ ಏರಿದೆ. ಕಡಿಮೆ ಮೌಲ್ಯದ, ಖಾಯಂ ಅಲ್ಲದ ಅಥವಾ ಅಲ್ಪಾವಧಿಯ ಉದ್ಯೋಗಿಗಳ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿದೆ. ದೇಶದ ಒಟ್ಟು ಜನಸಂಖ್ಯೆ ಶೇ.10ರಷ್ಟು ಮಂದಿ ರಾಷ್ಟ್ರೀಯ ಆದಾಯದ ಶೇ.58ರಷ್ಟನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದಾರೆ. ಸಮಾಜದ ತಳಮಟ್ಟದಲ್ಲಿ ಇರುವವರು ಶೇ.15ರಷ್ಟು ಆದಾಯವನ್ನು ಮಾತ್ರವೇ ಗಳಿಸುತ್ತಿದ್ದಾರೆ. ಭಾರತದ ಒಟ್ಟು ಸಂಪತ್ತಿನ ಶೇ.65ರಷ್ಟು ದೇಶದ ಶೇ.10ರಷ್ಟು ಶ್ರೀಮಂತರ ವಶದಲ್ಲಿದೆ. ಪ್ರತಿ ಐವರು ಭಾರತೀಯರ ಪೈಕಿ ನಾಲ್ವರು 200ರೂ.ಗಿಂತಲೂ ಕಡಿಮೆ ದೈನಂದಿನ ಆದಾಯ ಹೊಂದಿದ್ದಾರೆ. ಕೌಟುಂಬಿಕ ಆರ್ಥಿಕ ಉಳಿತಾಯವು ಶೇ.5.2ಕ್ಕೆ ಇಳಿದಿದ್ದು, ಇದು ಐದು ದಶಕಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. 2019ರಲ್ಲಿ ಕೌಟುಂಬಿಕ ಸಾಲದ ಪ್ರಮಾಣವು ಶೇ.35ರಿಂದ ಶೇ.41ಕ್ಕೆ ಏರಿದೆ.
ಯಾದಗಿರಿ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ
ಯಾದಗಿರಿ : ರಾಷ್ಟ್ರವ್ಯಾಪಿ ಬ್ಯಾಂಕ್ಗಳ ಮುಷ್ಕರ ಹಾಗೂ ಕೆಜಿಬಿ ಒಕ್ಕೂಟಗಳ ಜಂಟಿ ವೇದಿಕೆ ನೀಡಿದ್ದ ಮುಷ್ಕರ ಕರೆಗೆ ಬೆಂಬಲವಾಗಿ, ಯಾದಗಿರಿ ಜಿಲ್ಲೆಯಾದ್ಯಂತ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ನೌಕರರು ಮತ್ತು ಸಿಬ್ಬಂದಿ ವರ್ಗ ಮಂಗಳವಾರ ಬೆಳಗ್ಗೆಯಿಂದ ಮುಷ್ಕರ ನಡೆಸಿದರು. ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಕ್ಕೊರಲಿನಿಂದ ಆಗ್ರಹಿಸಿದರು. ಮುಷ್ಕರದ ವೇಳೆ “ಏಕತೆ ನಮ್ಮ ಶಕ್ತಿ, ಗೆಲವು ನಮ್ಮ ಗುರಿ” ಎಂಬ ಘೋಷಣೆಗಳನ್ನು ಕೂಗಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಷ್ಕರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯಾಧ್ಯಕ್ಷ ಸಂಜೀವ್ ಕುಮಾರ ರಾವೂರ, ಎಜಿಸ್ ಸೂರ್ಯಕಾಂತ ಶಿವಪುರ, ಶಿವಕಾಂತ್ ಬಿರಾದಾರ, ಸುಭಾಶ್ಚಂದ್ರ, ವರುಣ ಕುಮಾರ, ಶಶಿಕಾಂತ್, ಅಶೋಕಕುಮಾರ ಸಾಹು, ಷಣ್ಮುಖ ದುಂಪಲ, ವಿಶ್ವನಾಥ ಗಣಾಚಾರಿ, ಜಗದೀಶರೆಡ್ಡಿ, ಶ್ರೀನಾಥ, ರಮೇಶ, ಸುರೇಶ್, ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಇದೇ ವೇಳೆ ನೌಕರರ ಸಂಘದ ಪದಾಧಿಕಾರಿಗಳಾದ ಪ್ರಶಾಂತ, ನರಸಿಂಹರೆಡ್ಡಿ, ಎಸ್ತರಮ್ಮ, ಅಂಬೇಡ್ಕರ್, ಬಾಲದಂಡಪ್ಪ, ಸಿದ್ದಣ್ಣ, ಮಂಜುನಾಥ, ಸೋಫಿಸಾಬ್, ಮಲ್ಲಿಕಾರ್ಜುನ ಮತ್ತಿತರರು ಮುಷ್ಕರದಲ್ಲಿ ಉಪಸ್ಥಿತರಿದ್ದರು.
MSME ಇಂಗಾಲ ಮುಕ್ತಗೊಳಿಸಲು ನೀತಿ ಆಯೋಗ ಕರೆ; ಹಸಿರು ಪರಿವರ್ತನೆಗೆ ಸರಕಾರ ಕೈಗೊಂಡ ಕ್ರಮಗಳೇನು?
ಶ್ರೀಮಂತ ಪಾಶ್ಚಿಮಾತ್ಯ ದೇಶಗಳು ಪರಿಸರ ಸ್ನೇಹಿ ಅಲ್ಲದ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸುವುದು ಅಥವಾ ಅವುಗಳ ಆಮದುಗಳನ್ನು ರದ್ದುಪಡಿಸುವುದು ಹೆಚ್ಚಾಗಿದೆ. ಹೀಗಿರುವಾಗ, ರಫ್ತುದಾರರು ಹಸಿರು ಉತ್ಪನ್ನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುವ ಉದ್ದೇಶದಿಂದ, ಭಾರತದ ವಿಶಾಲವಾದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವನ್ನು ಇಂಗಾಲರಹಿತಗೊಳಿಸಲು ಹೊಸ ಕಾರ್ಯವಿಧಾನಕ್ಕೆ ನೀತಿ ಆಯೋಗ ಕರೆ ನೀಡಿದೆ. ಜ. 22ರ ವರದಿಯಲ್ಲಿ, ಸರಕಾರದ ಚಿಂತಕರ ಚಾವಡಿ ರಾಷ್ಟ್ರೀಯ ಯೋಜನಾ ನಿರ್ವಹಣಾ ಸಂಸ್ಥೆ (NPMA) ಸ್ಥಾಪನೆ, ಕಾರ್ಯಸಾಧ್ಯತಾ ಅಂತರ ನಿಧಿ (VGF) ಒದಗಿಕೆ, MSMEಗಳಿಗೆ ಮೇಲ್ಛಾವಣಿ ಸೌರ ಯೋಜನೆ ರೂಪಣೆ ಮತ್ತು ಸ್ವಚ್ಛ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕ್ಲಸ್ಟರ್ಗಳನ್ನು ಗುರುತಿಸುವುದನ್ನು ಪ್ರಸ್ತಾಪಿಸಿದೆ. ಭಾರತದ ರಫ್ತಿನಲ್ಲಿ 45%, ಆರ್ಥಿಕ ಉತ್ಪಾದನೆಯಲ್ಲಿ 30% ಕೊಡುಗೆ ನೀಡುವ ಮತ್ತು ಸುಮಾರು 330 ಮಿಲಿಯನ್ ಜನರಿಗೆ ಉದ್ಯೋಗ ನೀಡುವ ಈ ವಲಯಕ್ಕೆ ಈ ಪ್ರಯತ್ನ ನಿರ್ಣಾಯಕವಾಗಿದೆ. ►MSME ಕಾರ್ಯಾಚರಣೆಗಳನ್ನು ಇಂಗಾಲ ಮುಕ್ತಗೊಳಿಸುವ ಅಗತ್ಯ ಏಕೆ? ಭಾರತದ ರಫ್ತು ಮಾರುಕಟ್ಟೆಗಳಲ್ಲಿ ಸ್ವಚ್ಛ ಉತ್ಪಾದನಾ ಪದ್ಧತಿಗಳಿಗೆ ಸಂಬಂಧಿಸಿದ ಕಟ್ಟುನಿಟ್ಟಾದ ವ್ಯಾಪಾರ ಅಡೆತಡೆಗಳು ಆರಂಭವಾಗುತ್ತಿರುವುದರಿಂದ, ರಫ್ತುಗಳಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು MSMEಗಳು ತಮ್ಮ ಕಾರ್ಯಾಚರಣೆಗಳನ್ನು ಇಂಗಾಲ ಮುಕ್ತಗೊಳಿಸುವ ಅಗತ್ಯವಿದೆ. ಉದಾಹರಣೆಗೆ, ಯುರೋಪಿಯನ್ ಒಕ್ಕೂಟಕ್ಕೆ ಕಡಿಮೆ ಸುಸ್ಥಿರ ಆಮದುಗಳನ್ನು ತಡೆಯುವ ಕಾರ್ಯವಿಧಾನವಾದ ಯುರೋಪಿಯನ್ ಒಕ್ಕೂಟದ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ (CBAM) ಜನವರಿ 1ರಿಂದ ತನ್ನ ನಿರ್ಣಾಯಕ ಹಂತವನ್ನು ಪ್ರಾರಂಭಿಸಿದೆ. “ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಪ್ರದೇಶಗಳ, ವಿಶೇಷವಾಗಿ ಯುರೋಪ್ ಮತ್ತು ಅಮೆರಿಕಾದ ಹಸಿರು ‘ಮಟ್ಟದ’ ಉತ್ಪನ್ನ ಅಗತ್ಯಗಳನ್ನು ಪೂರೈಸಲು MSMEಗಳ ಪ್ರಕ್ರಿಯೆಗಳನ್ನು (ಉತ್ಪಾದನೆ ಇತ್ಯಾದಿ) ಇಂಗಾಲ ಮುಕ್ತಗೊಳಿಸುವುದು ಅನಿವಾರ್ಯ,” ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ನೀತಿ ಆಯೋಗವು ಈ ಉದ್ಯಮಗಳಿಗೆ ಅಗ್ಗದ ಸಾಲಗಳು ಮತ್ತು ತಾಂತ್ರಿಕ ತರಬೇತಿಯಂತಹ ವಿಶೇಷ ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ‘ಸೇತುವೆ’ಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದರಿಂದ ಸಣ್ಣ ಕಾರ್ಖಾನೆಗಳೂ ಹೊಸ ಅಂತರರಾಷ್ಟ್ರೀಯ ‘ಹಸಿರು’ ಮಾನದಂಡಗಳನ್ನು ಪೂರೈಸಬಹುದಾಗಿದೆ. ಪರಿಣಾಮವಾಗಿ, ಅವುಗಳ ಯುರೋಪ್ ಅಥವಾ ಅಮೆರಿಕಾಕ್ಕೆ ರಫ್ತು ನಿರ್ಬಂಧಿತವಾಗುವುದಿಲ್ಲ. ವರದಿಯು ಐದು ಪ್ರಮುಖ ಉಪವಲಯಗಳನ್ನು ಗುರುತಿಸಿದೆ. ಅವುಗಳೆಂದರೆ — ಜವಳಿ, ಕಾಗದ, ಉಕ್ಕಿನ ಮರು-ರೋಲಿಂಗ್, ಫೌಂಡ್ರಿ ಮತ್ತು ಫೋರ್ಜಿಂಗ್. ಇವು ಇಂಧನ-ಸಮರ್ಥ ಉತ್ಪಾದನೆಯನ್ನು ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಬಲ್ಲವು. ಈ ವಲಯಗಳಲ್ಲಿನ ಕೆಲವು MSME ಕ್ಲಸ್ಟರ್ಗಳು ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಹೊಂದಿದ್ದು, ಹಸಿರು ವಿದ್ಯುತ್ ಮಾರ್ಗಸೂಚಿಗಾಗಿ ಅವುಗಳನ್ನು ಗುರುತಿಸಲಾಗಿದೆ. ►ಸರಕಾರ ಯಾವ ಪರಿಹಾರವನ್ನು ಪ್ರಸ್ತಾಪಿಸಿದೆ? ಆರಂಭಿಕವಾಗಿ, ಸರಕಾರದ ಚಿಂತಕರ ಚಾವಡಿ ಮತ್ತು MSME ಸಚಿವಾಲಯವು NPMA ರಚನೆಗೆ ಕರೆ ನೀಡಿದ್ದು, ಈ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಲು ಶಿಫಾರಸು ಮಾಡಿದೆ. ಇಂಧನ-ಸಮರ್ಥ ಯಂತ್ರೋಪಕರಣಗಳು, ಹಸಿರು ವಿದ್ಯುತ್ ಉತ್ಪಾದನೆ ಮತ್ತು ಪರ್ಯಾಯ ಇಂಧನಗಳಿಗೆ ಬೇಡಿಕೆಯನ್ನು ಒಟ್ಟುಗೂಡಿಸಲು MSME ಕ್ಲಸ್ಟರ್ಗಳು ಹಾಗೂ ಕೈಗಾರಿಕಾ ಸಂಘಗಳೊಂದಿಗೆ ಕೆಲಸ ಮಾಡುವ ಮೂಲಕ NPMA ಡಿಕಾರ್ಬೊನೈಸೇಶನ್ ಯೋಜನೆಯನ್ನು ಜಾರಿಗೆ ತರಲಿದೆ. MSME ಕ್ಲಸ್ಟರ್ಗಳಲ್ಲಿ ಹಳೆಯ ಯಂತ್ರೋಪಕರಣಗಳನ್ನು ಹೆಚ್ಚು ಇಂಧನ-ಸಮರ್ಥ ಯಂತ್ರೋಪಕರಣಗಳೊಂದಿಗೆ ಬದಲಾಯಿಸಲು, NPMA ಬೇಡಿಕೆಯನ್ನು ಒಟ್ಟುಗೂಡಿಸಿದ ಬಳಿಕ ಅನುಷ್ಠಾನ ಏಜೆನ್ಸಿಗಳಾದ ಇಂಧನ ಸೇವಾ ಕಂಪೆನಿಗಳು (ESCOs) ಗುರುತಿಸಲಾಗುತ್ತದೆ. ಈ ಹೊಸ ಯಂತ್ರೋಪಕರಣಗಳ ಮುಂಗಡ ವೆಚ್ಚವನ್ನು ಇಂಧನ ಸೇವಾ ಕಂಪೆನಿಗಳೇ ಭರಿಸುತ್ತವೆ. MSMEಗಳು ಕಾರ್ಯಾಚರಣಾ ವೆಚ್ಚದಲ್ಲಿ ಉಂಟಾಗುವ ಉಳಿತಾಯದಿಂದ ಈ ಕಂಪೆನಿಗಳಿಗೆ ಮರುಪಾವತಿ ಮಾಡಬಹುದು ಎಂದು ಯೋಜನೆ ವಿವರಿಸುತ್ತದೆ. ಈ ಯೋಜನೆಯಡಿ ಇಂಧನ-ಸಮರ್ಥ ತಂತ್ರಜ್ಞಾನಗಳ ತಯಾರಕರಿಗೆ 6,000 ಕೋಟಿ ರೂ.ಕಾರ್ಯಸಾಧ್ಯತಾ ಅಂತರ ನಿಧಿಯನ್ನು ಪ್ರಸ್ತಾಪಿಸಲಾಗಿದೆ. MSME ಸಚಿವಾಲಯವು ಇಂಧನ ದಕ್ಷತೆಯ ಬ್ಯೂರೋ (BEE) ಜೊತೆಗೆ ವ್ಯವಹಾರಗಳಿಗೆ 20% ಕ್ಕಿಂತ ಹೆಚ್ಚು ಉಳಿತಾಯ ಒದಗಿಸಬಲ್ಲ 6–7 ತಂತ್ರಜ್ಞಾನಗಳನ್ನು ಗುರುತಿಸಲಿದೆ. ಈ ತಂತ್ರಜ್ಞಾನಗಳ ತಯಾರಕರು VGF ಬೆಂಬಲಕ್ಕೆ ಅರ್ಹರಾಗುತ್ತಾರೆ. ಹಸಿರು ವಿದ್ಯುತ್ ಉತ್ಪಾದನೆಗಾಗಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಮಾದರಿಯಲ್ಲಿ, 3 kWh ವರೆಗಿನ MSMEಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗೆ 7,000 ಕೋಟಿ ರೂ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮೇಲ್ಛಾವಣಿ ಸೌರ ಘಟಕಗಳ ಸ್ಥಾಪನೆಗೆ ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದ, ಮೇಲಾಧಾರ-ಮುಕ್ತ ಸಾಲಗಳನ್ನು ಒದಗಿಸಲಾಗುತ್ತದೆ. ಜನವರಿ 22ರ ವರದಿಯ ಪ್ರಕಾರ, MSMEಗಳಿಗಾಗಿ ಪ್ರಸ್ತಾವಿತ ಈ ಮೇಲ್ಛಾವಣಿ ಸೌರ ಯೋಜನೆ ಐದು ವರ್ಷಗಳವರೆಗೆ ನಡೆಯಲಿದೆ ಮತ್ತು 1–1.5 ಮಿಲಿಯನ್ ಉದ್ಯಮಗಳನ್ನು ಗುರಿಯಾಗಿಟ್ಟುಕೊಂಡಿದೆ. ಜೊತೆಗೆ, ನವೀಕರಿಸಬಹುದಾದ ಇಂಧನ ಸೇವಾ ಕಂಪೆನಿಗಳು (RESCOಗಳು) MSMEಗಳಲ್ಲಿ ಸೌರಶಕ್ತಿ ಸೌಲಭ್ಯಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಸಣ್ಣ ಉದ್ಯಮಗಳ ಮುಂಗಡ ವೆಚ್ಚ ಕಡಿಮೆಯಾಗುತ್ತದೆ ಹಾಗೂ ಕೈಗೆಟುಕುವ ಹಸಿರು ವಿದ್ಯುತ್ ಲಭ್ಯವಾಗುತ್ತದೆ. MSME ಸಚಿವಾಲಯವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಜೊತೆಗೂಡಿ, ಕಲ್ಲಿದ್ದಲು, ಪೆಟ್ ಕೋಕ್, ಫರ್ನೇಸ್ ಆಯಿಲ್ ಮೊದಲಾದ ಇಂಧನಗಳ ಬದಲಿಗೆ MSME ಕ್ಲಸ್ಟರ್ಗಳಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಲಿದೆ. ಇದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತದೆ. ►MSME ವಲಯದ ಹಸಿರು ಪರಿವರ್ತನೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು? ದೇಶದ MSMEಗಳಿಗೆ ಹಸಿರು ಕಾರ್ಯಾಚರಣೆಗಳಲ್ಲಿ ನೆರವಾಗಲು ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. MSME ಸಚಿವಾಲಯದ ಹಸಿರು ಪೋರ್ಟಲ್ ಅಡಿಯಲ್ಲಿ ಜಾರಿಯಲ್ಲಿರುವ ಎರಡು ಪ್ರಮುಖ ಯೋಜನೆಗಳು — 1. MSME-GIFT (Green Investment and Financing for Transformation) 2. MSME-SPICE (Scheme for Promotion and Investment in Circular Economy) ಈ ಎರಡು ಯೋಜನೆಗಳನ್ನು ಡಿಸೆಂಬರ್ 2023ರಲ್ಲಿ ಆರಂಭಿಸಲಾಗಿದ್ದು, ಒಟ್ಟು ವೆಚ್ಚ 950 ಕೋಟಿ ರೂಪಾಯಿ. GIFT ಯೋಜನೆ ಮಾರ್ಚ್ 2026ರಲ್ಲಿ ಕೊನೆಗೊಳ್ಳಲಿದ್ದು, SPICE ಯೋಜನೆ ಮಾರ್ಚ್ 2027ರವರೆಗೆ ಜಾರಿಯಲ್ಲಿರುತ್ತದೆ. 478 ಕೋಟಿ ವೆಚ್ಚದ GIFT ಯೋಜನೆಯಡಿಯಲ್ಲಿ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಡ್ಡಿದರ ಇಳಿಕೆ ಹಾಗೂ ಸುಲಭ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. SPICE ಯೋಜನೆಯಡಿಯಲ್ಲಿ, ಅಸ್ತಿತ್ವದಲ್ಲಿರುವ ಸಣ್ಣ ಕಾರ್ಖಾನೆಗಳು ತಮ್ಮ ತ್ಯಾಜ್ಯವನ್ನು ಎಸೆಯುವ ಬದಲು ಮರುಬಳಕೆ ಮಾಡಲು ಮುಂದಾದರೆ, ಯಂತ್ರೋಪಕರಣಗಳ ಮೇಲೆ 25% ಸಬ್ಸಿಡಿ ನೀಡಲಾಗುತ್ತದೆ. ಈ ನಿರ್ಧಾರ MSMEಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಜ್ಞರ ಪ್ರಕಾರ, ನಗದು ಕೊರತೆಯಲ್ಲಿರುವ MSMEಗಳಿಗೆ ಸ್ವಚ್ಛ ಉತ್ಪಾದನಾ ಪದ್ಧತಿಗಳಿಗೆ ಹೊಂದಿಕೊಳ್ಳುವುದು ದುಬಾರಿ. ಭಾರತೀಯ MSMEಗಳು ಆಮದು ದೇಶಗಳು ವಿಧಿಸುವ ಇಂಗಾಲ ತೆರಿಗೆಯ ಭಾರವನ್ನು ಭರಿಸಬೇಕಾಗುತ್ತದೆ ಮತ್ತು ರಫ್ತಿಗೆ ಅರ್ಹರಾಗಲು ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸಬೇಕಾಗುತ್ತದೆ. ಭಾರತದ ಉತ್ಪಾದನಾ ವಲಯದ MSMEಗಳು ಕಡಿಮೆ ಕಾರ್ಯನಿರತ ಬಂಡವಾಳದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಇಂಧನ ಪರಿವರ್ತನೆ ದೊಡ್ಡ ಸವಾಲಾಗುತ್ತದೆ ಎಂದು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ನ ಸುಸ್ಥಿರ ಅಭಿವೃದ್ಧಿ ಕೇಂದ್ರದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಗುರುದಾಸ್ ನುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಹೊಸದಿಲ್ಲಿ: ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನಾಲ್ಡ್ 508 ಮೀಟರ್ ಎತ್ತರದ ತೈಪೇಯಿ 101 ಕಟ್ಟಡವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಏರಿ ದಾಖಲೆ ನಿರ್ಮಿಸಿದ್ದಾರೆ. ಈ ಸಾಹಸ ದೃಶ್ಯವನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಿದ್ದರೆ, ನಾನು 5 ಲಕ್ಷ ಡಾಲರ್ಗಿಂತಲೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು MrBeast ಎಂದೇ ಖ್ಯಾತರಾಗಿರುವ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್ ಹೇಳಿದ್ದಾರೆ. ಜನವರಿ 25ರಂದು 1667 ಅಡಿ ಎತ್ತರದ ತೈವಾನ್ನಲ್ಲಿರುವ ಈ ಸ್ಕೈಸ್ಕ್ರೇಪರ್ ಅನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಲೆಕ್ಸ್ ಹೊನಾಲ್ಡ್ ಕೇವಲ ಒಂದು ಗಂಟೆ 32 ನಿಮಿಷಗಳಲ್ಲಿ ಏರಿದ್ದರು. ಈ ಸಾಹಸ ದೃಶ್ಯವನ್ನು ಸ್ಕೈಸ್ಕ್ರೇಪರ್ ಯೋಜನೆಯ ಭಾಗವಾಗಿ ನೆಟ್ಫ್ಲಿಕ್ಸ್ ಒಟಿಟಿ ನೇರ ಪ್ರಸಾರ ಮಾಡಿತ್ತು. The New York Times ಸುದ್ದಿ ಸಂಸ್ಥೆಯ ಪ್ರಕಾರ, ನೆಟ್ಫ್ಲಿಕ್ಸ್ ಒಟಿಟಿ ವೇದಿಕೆ ಅಲೆಕ್ಸ್ ಹೊನಾಲ್ಡ್ಗೆ 5 ಲಕ್ಷ ಡಾಲರ್ ಸಂಭಾವನೆ ನೀಡಿತ್ತು. ಬಳಿಕ ಮಾತನಾಡಿದ ಹೊನಾಲ್ಡ್, “ಈ ಮೊತ್ತ ಬೇರೆ ಪ್ರಮುಖ ವೃತ್ತಿಪರ ಕ್ರೀಡೆಗಳಲ್ಲಿನ ವೇತನಕ್ಕೆ ಹೋಲಿಸಿದರೆ ಮುಜುಗರವಾಗುವಷ್ಟು ಸಣ್ಣದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ತಮಗೆ ನೀಡಿದ ಸಂಭಾವನೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಹೊನಾಲ್ಡ್, ಈ ಮೊತ್ತದಿಂದ ನನ್ನ ಕ್ಯಾಮೆರಾ ತಂಡ ಹಾಗೂ ಆತ್ಮೀಯ ಮಿತ್ರರಿಗೆ ನೆರವು ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ನಾನು ಸಂಭಾವನೆ ಇಲ್ಲದಿದ್ದರೂ ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದೆ ಎಂದೂ ತಿಳಿಸಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ MrBeast, ನನ್ನ ಯೂಟ್ಯೂಬ್ ವೇದಿಕೆಯಲ್ಲಿ ಈ ಸಾಹಸ ಪ್ರಸಾರವಾಗಿದ್ದರೆ, ನಾನು ಇನ್ನೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬರುತ್ತಿದ್ದು, “ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಸಾಹಸಕ್ಕೆ ಮುಂದಾಗಿರಬಹುದು. ಆದರೆ, ಈ ಸಾಹಸವನ್ನು ದಾರಿಹೋಕರಿಗೆ ಯಾವುದೇ ಅಪಾಯವಾಗದಂತೆ ಕಾನೂನುಬದ್ಧವಾಗಿ ನಡೆಸಿದ್ದಾರೆ” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, “ಅವರಿಗೆ ಬಹುಶಃ ಇನ್ನಷ್ಟು ಲೈಕ್ ಗಳು ದೊರೆಯಬಹುದು ಹಾಗೂ ಮತ್ತಷ್ಟು ಸಾಹಸ ದೃಶ್ಯಗಳನ್ನು ಪೋಸ್ಟ್ ಮಾಡಬಹುದು. ಅದರಿಂದ ಅವರಿಗೆ ಹೂಡಿಕೆಯೂ ಮರಳಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಪರೇಶನ್ ಸಿಂಧೂರ ಬಗ್ಗೆ ಪಾಕ್ನಿಂದ ಸುಳ್ಳು ಪ್ರಚಾರ: ವಿಶ್ವಸಂಸ್ಥೆಯಲ್ಲಿ ಭಾರತ ಆಕ್ರೋಶ
ವಿಶ್ವಸಂಸ್ಥೆ,ಜ.26: ಭಾರತವು ಸೋಮವಾರ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಆಪರೇಶನ್ ಸಿಂಧೂರ್ ಬಗ್ಗೆ ಇಸ್ಲಾಮಾಬಾದ್ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಹಾಗೂ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಭಯೋತ್ಪಾದನೆಯನ್ನು ಆಡಳಿತದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಭದ್ರತಾಮಂಡಳಿ ಅಧಿವೇಶನದಲ್ಲಿ ಮಾತನಾಡುತ್ತಾ, ಕಳೆದ ವರ್ಷದ ಮೇನಲ್ಲಿ ಆಪರೇಶನ್ ಸಿಂಧೂರ ಕುರಿತಾಗಿ ಪಾಕಿಸ್ತಾನದ ರಾಯಭಾರಿಯವರು ಸುಳ್ಳು ಹಾಗೂ ಸ್ವಹಿತಾಸಕ್ತಿಯ ವಿವರಣೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು. ‘‘ ಈ ವಿಷಯದ ಕುರಿತಾದ ವಾಸ್ತವಾಂಶಗಳು ಸ್ಪಷ್ಟವಾಗಿವೆ. 2025ರ ಎಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯೊಂದರಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು 26 ಅಮಾಯಕ ನಾಗರಿಕರನ್ನು ಹತ್ಯೆಗೈದಿದ್ದರು. ಈ ಘೋರ ಭಯೋತ್ಪಾದಕ ಕೃತ್ಯದ ಹಿಂದಿರುವ ಸೂತ್ರಧಾರಿಗಳು, ಸಂಘಟಕರು, ಆರ್ಥಿಕ ನೆರವು ನೀಡಿದವರು ಹಾಗೂ ಪ್ರಾಯೋಜಕರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಈ ಮಹಾನ್ ಸಂಸ್ಥೆ (ಭದ್ರತಾ ಮಂಡಳಿ) ಕರೆ ನೀಡಿತ್ತು. ನಾವು ಹಾಗೆಯೇ ಮಾಡಿದ್ದೇವೆ. ಭಾರತದ ಕ್ರಮಗಳು ವಿವೇಚನೆಯಿಂದ ಕೂಡಿದ್ದವು ಮತ್ತು ಸಂಘರ್ಷಾವಸ್ಥೆಯನ್ನು ಉಲ್ಬಣಿಸುವಂತಹದ್ದಾಗಿರಲಿಲ್ಲ ಅಲ್ಲದೆ ಜವಾಬ್ದಾರಿಯುತವಾಗಿದ್ದವು. ಭಯೋತ್ಪಾದಕರ ಮೂಸೌಕರ್ಯಗಳನ್ನು ನಾಶಪಡಿಸುವುದು ಹಾಗೂ ಉಗ್ರರನ್ನು ನಿಷ್ಕ್ರಿಯಗೊಳಿಸುವಂತಹದ್ದಾಗಿದ್ದವು ಎಂದು ಹರೀಶ್ ಹೇಳಿದರು. ಕಳೆದ ವರ್ಷ ಆಪರೇಶನ್ ಸಿಂಧೂರ ನಡೆದ ಬಳಿಕ ಮೇ 9ರವರೆಗೂ ಪಾಕಿಸ್ತಾನವು ಭಾರತದ ಮೇಲೆ ದಾಳಿಗಳನ್ನು ನಡೆಸುವುದಾಗಿ ಬೆದರಿಕೆಗಳನ್ನು ಹಾಕುತ್ತಲೇ ಬಂದಿತ್ತು. ಆದರೆ ಮೇ 10ರಂದು ಪಾಕಿಸ್ತಾನ ಸೇನೆಯು ನಮ್ಮ ಸೇನೆಗೆ ನೇರವಾಗಿ ಕರೆ ಮಾಡಿ, ಕದನವನ್ನು ಕೊನೆಗೊಳಿಸುವಂತೆ ಗೋಗರೆದಿತ್ತು. ಭಾರತ ಹಾಗೂ ಅದರ ಜನರಿಗೆ ಹಾನಿಯುಂಟು ಮಾಡುವ ಏಕೈಕ ಕಾರ್ಯಸೂಚಿಯನ್ನಷ್ಟೇ ಪಾಕಿಸ್ತಾನ ಹೊಂದಿದೆಯೆಂದು ಅವರು ಹೇಳಿದರು. ಹರೀಶ್ ಪರ್ವತನೇನಿ ಭಾಷಣದ ಮುಖ್ಯಾಂಶಗಳು ‘‘ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಜಮ್ಮುಕಾಶ್ಮೀರವು ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುವುದು’’ಎಂದರು. ಸಿಂಧೂ ಜಲ ಒಪ್ಪಂದ ಏರ್ಪಟ್ಟ ಆರೂವರೆ ದಶಕಗಳುದ್ದಕ್ಕೂ ಪಾಕಿಸ್ತಾನವು, ಭಾರತದ ಮೇಲೆ ಮೂರು ಯುದ್ಧಗಳನ್ನು ಹಾಗೂ ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಗಳಿಂದಾಗಿ ಸಾವಿರಾರು ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾದ ಪಾಕಿಸ್ತಾನವು ಗಡಿಯಾಚೆಗಿನ ಹಾಗೂ ಇತರ ಎಲ್ಲಾ ರೀತಿಯ ಭಯೋತ್ಪಾದನೆಗೆ ಬೆಂಬಲವನ್ನು ಶಾಶ್ವತವಾಗಿ ಕೊನೆಗೊಳಿಸುವ ತನಕ ಭಾರತವು ಪಾಕಿಸ್ತಾನದ ಜೊತೆ ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದಿದೆ.
ಜ.31, ಫೆ.1: ಮಂಗಳೂರಿನಲ್ಲಿ ಆಯುಷ್ ಹಬ್ಬ-2026
ಉಡುಪಿ, ಜ.27: ಭಾರತೀಯ ಪರಂಪರೆಯ ವೈದ್ಯ ಪದ್ಧತಿಗಳ ಮಹಾಸಂಭ್ರಮ ‘ಆಯುಷ್ ಹಬ್ಬ-2026’ ಜ.31 ಹಾಗೂ ಫೆ.1ರಂದು ಎರಡು ದಿನಗಳ ಕಾಲ ಮಂಗಳೂರಿನ ಡಾ.ಟಿ.ಎಂ.ಎ.ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಆಯುಷ್ ಹಬ್ಬ ಸಮಿತಿಯ ಗೌವರಾಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾಲಾಡಿ ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಆಯುಷ್ ಸಂಘಟನೆಗಳು, ಆಯುಷ್ ಆಸ್ಪತ್ರೆಗಳು, ಆಯುಷ್ ಕಾಲೇಜುಗಳು ಹಾಗೂ ವೃತ್ತಿ ನಿರತ ಆಯುಷ್ ವೈದ್ಯರ ಸಂಘಟನೆಗಲ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಈ ಆಯುಷ್ ಹಬ್ಬವನ್ನು ಆಯೋಜಿಸಲಾಗಿದೆ ಎಂದರು. ಭಾರತೀಯ ಪರಂಪರೆಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಯೋಗ ಮತ್ತು ನೇಚರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿಗಳ ಕುರಿತು ಚರ್ಚೆ, ಸಂವಾದ, ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳಿರುತ್ತವೆ ಎಂದು ಕಾರ್ಯಕ್ರಮದ ಉಡುಪಿ ಜಿಲ್ಲಾ ಸಂಚಾಲಕ ಡಾ.ನಾರಾಯಣ ಟಿ.ಅಂಚನ್ ತಿಳಿಸಿದರು. ಇದರಲ್ಲಿ ಮಕ್ಕಳಿಗೆ ಮಕ್ಕಳ ಹಬ್ಬ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ, ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ವಿಶೇಷ ಮಾಹಿತಿ ಕಾರ್ಯಕ್ರಮಗಳಿರುತ್ತವೆ. ಆಯುರ್ವೇದಾಧಾರಿತ ಆರೋಗ್ಯಕರ ಖಾದ್ಯಗಳ ಆಹಾರ ಹಬ್ಬ, ಸ್ವದೇಶಿ ಸಾವಯವ ಸಂತೆ, ಸಾಂಸ್ಕೃತಿಕ ಹಬ್ಬಗಳೂ ಇರಲಿವೆ ಎಂದು ಅವರು ವಿವರಿಸಿದರು. ಎರಡು ದಿನಗಳ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ‘ಆಯುಷ್ ರತ್ನ’, ಮೂಡಬಿದರೆಯ ಡಾ.ಮೋಹನ ಆಳ್ವ ಅವರಿಗೆ ‘ ಆಯುಷ್ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೇ ಆಯುಷ್ ಕ್ಷೇತ್ರದ ಸಾಧಕರಿಗೆ ಆಯುಷ್ ಭೂಷಣ, ಆಯುಷ್ಶ್ರೀ, ಆಯುಷ್ ಯುವಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸ ಲಾಗುವುದು ಎಂದೂ ಡಾ.ಆಶಾಜ್ಯೋತಿ ರೈ ತಿಳಿಸಿದರು. ಕಾರ್ಯಕ್ರಮಗಳಲ್ಲಿ ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಫರೀದ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸರಕಾರದ ಮಾಜಿ ಆಯುಷ್ ಸಚಿವ ಶ್ರೀಪಾದ್ ಯಸ್ಸೋನಾಯ್ಕ್ ಮುಂತಾದವರು ಉಪಸ್ಥಿತರಿರುವರು. ಕೊಂಡವೂರಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತದ ಬಿಷಪ್ ಅ.ವಂ.ಡಾ.ಪೀಟರ್ ಪೌಲ್ ಸಲ್ಡಾನಾ, ದ.ಕ.ದ ಎಸ್.ವೈ.ಎಸ್.ನ ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಅಲ್ಲದೇ ಜನಪ್ರತಿನಿಧಿಗಳಾದ ಕ್ಯಾ.ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಡಾ.ಎಚ್.ಎಸ್.ಬಲ್ಲಾಳ್, ಡಾ.ಎಚ್.ಆರ್.ನಾಗೇಂದ್ರ ಹಾಗೂ ಡಾ.ಮೊಹಮ್ಮದ್ ಇಕ್ಬಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಎಸ್ಡಿಎಂ ಕಾಲೇಜಿನ ಡಾ.ಸುಚೇತ, ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.
ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಬಿಜೆಪಿ ಕಳೆದುಕೊಂಡಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಯೋಜನೆಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಕೈಬಿಡುವ ಮೂಲಕ ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟಿಸುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೇಂದ್ರ ಸರಕಾರ ಜಾರಿಗೆ ಹೊರಟಿರುವ ವಿಬಿ-ರಾಮ್-ಜಿ ಯೋಜನೆ ರದ್ದು ಹಾಗೂ ಮನರೇಗಾ ಯೋಜನೆ ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ಮಂಗಳವಾರ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಆದರೆ, ಅವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಜತೆಗೆ ಬಿಜೆಪಿ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆ ಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ.ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು ಎಂದು ಅವರು ಉಲ್ಲೇಖಿಸಿದರು. ಈ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಾಗಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯಿತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆ ಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರಕಾರ ನರೇಗಾ ಯೋಜನೆ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೇಂದ್ರ ಸರಕಾರದ ನೂತನ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎನ್ಡಿಎ ಮೈತ್ರಿ ನಾಯಕ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಈ ಯೋಜನೆಗೆ ಅಪಸ್ವರ ಎತ್ತಿದ್ದು, ಇದನ್ನು ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ನೂತನ ಕಾಯ್ದೆ ಹಿಂಪಡೆಯದಿದ್ದರೆ ಸರಕಾರಕ್ಕೆ ಆಪತ್ತು ಎದುರಾಗಲಿದೆ. ಚಂದ್ರಬಾಬು ನಾಯ್ಡು ಅವರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಯಲ್ಲಿ ಮನರೇಗಾ ಕಾರ್ಮಿಕರನ್ನು ಒಳಗೊಂಡು ತಾಲೂಕು ಮಟ್ಟದಲ್ಲಿ 5 ಕಿಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ ಎಂದು ತಿಳಿಸಿದರು.
ಜ.28: ಡಿಸಿ-ಮಹಾನಗರಪಾಲಿಕೆ ಆಡಳಿತಾಧಿಕಾರಿ ನೇರ ಫೋನ್ ಇನ್ ಕಾರ್ಯಕ್ರಮ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಜನವರಿ 28ರಂದು ಬೆಳಿಗ್ಗೆ 11 ರಿಂದ 12ರವರೆಗೆ ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 0824-2220301 ಮತ್ತು 0824-2220318ಗೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಸ್ಸಾಂ ಎಸ್ಐಆರ್ನಲ್ಲಿ 4-5 ಲಕ್ಷ ಮಿಯಾಗಳ ಹೆಸರುಗಳನ್ನು ಅಳಿಸಲಾಗುವುದು: ಸಿಎಂ ಹಿಮಂತ ಬಿಸ್ವ ಶರ್ಮಾ
ಗುವಾಹಟಿ,ಜ.27: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ಕೈಗೆತ್ತಿಕೊಂಡಾಗ ನಾಲ್ಕರಿಂದ ಐದು ಲಕ್ಷ ಮಿಯಾ ಮತದಾರರ ಹೆಸರುಗಳನ್ನು ಅಳಿಸಲಾಗುವುದು ಎಂದು ಮಂಗಳವಾರ ಇಲ್ಲಿ ತಿಳಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ,ಅವರಿಗೆ ತೊಂದರೆ ನೀಡುವುದು ತನ್ನ ಕೆಲಸವಾಗಿದೆ ಎಂದು ಹೇಳಿದರು. ತಿನ್ಸುಕಿಯಾ ಜಿಲ್ಲೆಯ ದಿಗ್ಬೋಯಿಯಲ್ಲಿ ಸರಕಾರಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ,‘ವೋಟ್ ಚೋರಿ ಎಂದರೇನು? ಹೌದು, ನಾವು ಕೆಲವು ಮಿಯಾ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಅಸ್ಸಾಮಿನಲ್ಲಿ ಮತ ಚಲಾಯಿಸಲು ಬಿಡಬಾರದು. ಬಾಂಗ್ಲಾದೇಶದಲ್ಲಿ ಅವರು ಮತಗಳನ್ನು ಚಲಾಯಿಸಬೇಕು’ ಎಂದು ಹೇಳಿದರು. ‘ಅವರು ಅಸ್ಸಾಮಿನಲ್ಲಿ ಮತ ಚಲಾಯಿಸಲು ಸಾಧ್ಯವಾಗದಂತೆ ನಾವು ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೆ ಇದು ಪ್ರಾಥಮಿಕವಷ್ಟೇ. ಅಸ್ಸಾಮಿನಲ್ಲಿ ಎಸ್ಐಆರ್ ನಡೆಸುವಾಗ ನಾಲ್ಕರಿಂದ ಐದು ಲಕ್ಷ ಮಿಯಾ ಮತಗಳನ್ನು ಕಡಿತಗೊಳಿಸಬೇಕಾಗುತ್ತದೆ’ ಎಂದರು. ‘ಮಿಯಾ’ ಎನ್ನುವುದು ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಉದ್ದೇಶಿಸಿ ಅವಹೇಳನಕಾರಿ ಪದವಾಗಿದೆ. ಅಸ್ಸಾಮಿನ ಆಡಳಿತಾರೂಢ ಪಕ್ಷ ಬಿಜೆಪಿ ಈ ಸಮುದಾಯಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದು, ಅವರು ಸ್ಥಳೀಯ ಜನರ ಸಂಪನ್ಮೂಲಗಳು,ಉದ್ಯೋಗಗಳು ಮತ್ತು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬದಲಾಗಿ ಅಸ್ಸಾಮಿನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಎಸ್ಐಆರ್ನಂತೆ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್-ಎಪ್ರಿಲ್ನಲ್ಲಿ ನಡೆಯುವ ನಿರೀಕ್ಷೆಯಿದೆ. ‘ಕಾಂಗ್ರೆಸ್ ನನ್ನನ್ನು ಎಷ್ಟು ಬೇಕಾದರೂ ನಿಂದಿಸಲಿ, ಆದರೆ ಮಿಯಾಗಳಿಗೆ ಸಂಕಷ್ಟವನ್ನುಂಟು ಮಾಡುವುದು ನನ್ನ ಕೆಲಸವಾಗಿದೆ’ ಎಂದು ಶರ್ಮಾ ಹೇಳಿದರು. ಶರ್ಮಾರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಮನ್ ವದೂದ್ ಅವರು, ಮುಖ್ಯಮಂತ್ರಿಗಳು ಅಸ್ಸಾಮಿನಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಡಿ ಮಿಯಾಗಳಿಗೆ ಮಾತ್ರ ನೋಟಿಸ್ಗಳನ್ನು ನೀಡಲಾಗುತ್ತಿದೆ. ಹಿಂದುಗಳು ಅಥವಾ ಅಸ್ಸಾಮಿ ಮುಸ್ಲಿಮರಿಗೆ ಅಲ್ಲ ಎಂದು ಶರ್ಮಾ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು.
ಮ್ಯಾನ್ಮಾರ್ ಚುನಾವಣೆಯಲ್ಲಿ ಗೆಲುವು: ಯುಎಸ್ಡಿಪಿ ಹೇಳಿಕೆ
ಯಾಂಗಾನ್, ಜ.27: ದೇಶದಲ್ಲಿ ನಡೆದ ಚುನಾವಣೆಯಲ್ಲಿ ಜನ ತಮ್ಮನ್ನು ಗೆಲ್ಲಿಸಿದ್ದಾರೆ ಎಂದು ಮಿಲಿಟರಿ ಪರ ಪಕ್ಷ ಯೂನಿಯನ್ ಸಾಲಿಡಾರಿಟಿ ಆ್ಯಂಡ್ ಡೆವಲಪ್ಮೆಂಟ್ ಪಾರ್ಟಿ(ಯುಎಸ್ಡಿಪಿ)ಯ ಮೂಲಗಳು ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ ಮತ್ತು ಹೊಸ ಸರಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ ಎಂದು ಪಕ್ಷದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಅಧಿಕೃತ ಫಲಿತಾಂಶ ಈ ವಾರಾಂತ್ಯ ಘೋಷಣೆಯಾಗುವ ನಿರೀಕ್ಷೆಯಿದೆ. 2021ರಲ್ಲಿ ಕ್ಷಿಪ್ರದಂಗೆಯ ಮೂಲಕ ಆಂಗ್ ಸಾನ್ ಸೂಕಿ ಅವರ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಪಡಿಸಿಕೊಂಡಿದ್ದ ಸೇನಾಡಳಿತ ಮೂರು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಮೂಲಕ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಅವಕಾಶ ನೀಡುವುದಾಗಿ ಹೇಳಿಕೊಂಡಿತ್ತು. ಆದರೆ ಆಂಗ್ ಸಾನ್ ಸೂಕಿ ಅವರ ಪಕ್ಷ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸ್ಪರ್ಧಿಸದ ಚುನಾವಣೆಯು ಅಧಿಕಾರದಲ್ಲಿ ಮುಂದುವರಿಯಲು ಸೇನಾಡಳಿತ ನಡೆಸಿರುವ ತಂತ್ರವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮಂಗಳೂರು: ಹವಾಮಾನ ಮುನ್ಸೂಚನೆಯಂತೆ ಜನವರಿ 27 ರಿಂದ 31 ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಬೀಸುವುದರಿಂದ ಸಮುದ್ರವು ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರು ಜಾಗರೂಕತೆ ವಹಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಮೆರಿಕಾ ಇಲ್ಲದೆ ಯುರೋಪ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ: ನೇಟೊ ಮುಖ್ಯಸ್ಥ ಮಾರ್ಕ್ ರೂಟ್ಟ್
ಬ್ರಸೆಲ್ಸ್, ಜ.27: ಅಮೆರಿಕಾ ಇಲ್ಲದೆ ಯುರೋಪ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನೇಟೋ ಮುಖ್ಯಸ್ಥ ಮಾರ್ಕ್ ರೂಟ್ಟ್ ಸೋಮವಾರ ಎಚ್ಚರಿಸಿದ್ದಾರೆ. ಗ್ರೀನ್ಲ್ಯಾಂಡ್ ವಿಷಯದಲ್ಲಿ ಅಮೆರಿಕಾ ಮತ್ತು ಯುರೋಪ್ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯುರೋಪ್ ಟ್ರಂಪ್ ವಿರುದ್ಧ ಕಠಿಣ ನಿಲುವು ತಳೆಯಬೇಕು ಮತ್ತು ಅಮೆರಿಕಾದ ಮೇಲಿನ ಮಿಲಿಟರಿ ಅವಲಂಬನೆಯನ್ನು ತ್ಯಜಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಈ ಬಗ್ಗೆ ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ಪ್ರತಿಕ್ರಿಯಿಸಿದ ಮಾರ್ಕ್ ರೂಟ್ಟ್ `ಯುರೋಪಿಯನ್ ಯೂನಿಯನ್ ಅಥವಾ ಯುರೋಪ್, ಅಮೆರಿಕಾ ಇಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂದು ಯೋಚಿಸುವವರು ಕನಸು ಕಾಣಲಿ. ಆದರೆ ಇದು ಸಾಧ್ಯವಿಲ್ಲ. ಕಳೆದ ವರ್ಷ ರಕ್ಷಣಾ ವೆಚ್ಚಕ್ಕೆ ನಿಗದಿಪಡಿಸಿದ 5% ಗುರಿಗಿಂತ ನೇಟೋ ದುಪ್ಪಟ್ಟು ವೆಚ್ಚ ಮಾಡಬೇಕಾಗುತ್ತದೆ ಅಂದರೆ 10% ಅನುದಾನ ಮೀಸಲಿಡಬೇಕಾಗುತ್ತದೆ. ಪರಮಾಣು ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಕೋಟ್ಯಾಂತರ ಹಣ ವೆಚ್ಚ ಮಾಡಬೇಕು. ಇಷ್ಟೇ ಅಲ್ಲ, ನಮ್ಮ ಸ್ವಾತಂತ್ರ್ಯದ ಅಂತಿಮ ಭರವಸೆ, ಅಮೆರಿಕಾ ಪರಮಾಣು ರಕ್ಷಣೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೊಟ್ ` ಯುರೋಪಿಯನ್ನರು ತಮ್ಮ ಸ್ವಂತ ಭದ್ರತೆಯ ಜವಾಬ್ದಾರಿಗೆ ಕ್ರಮ ತೆಗೆದುಕೊಳ್ಳಬಹುದು ಮತ್ತು ತೆಗೆದುಕೊಳ್ಳಲೇಬೇಕು' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಕಾರ್ಮಿಕ ಕಾನೂನುಗಳು ಬಲಿ: ವಸಂತ ಆಚಾರಿ
ಮಂಗಳೂರು, ಜ.27: ದೇಶವನ್ನಾಳುವ ಕೇಂದ್ರ ಸರಕಾರ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಕಾರ್ಮಿಕ ಕಾನೂನುಗಳನ್ನು ಬಲಿತೆಗೆದುಕೊಂಡಿದೆ ಎಂದು ಸಿಐಟಿಯು ದ.ಕ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದ್ದಾರೆ. ಕಾರ್ಮಿಕ ಸಂಹಿತೆಗಳ ವಿರುದ್ದ ಮೂಡಬಿದ್ರೆಯಿಂದ ಮಂಗಳೂರಿಗೆ ಸಂಚರಿಸಲಿರುವ ಪಾದಯಾತ್ರೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿ ಸರಕಾರ ಸರಕಾರಿ ಬಂಡವಾಳ, ಸಾರ್ವತ್ರಿಕ ರಂಗಗಳು, ವಿಮಾರಂಗ ಎಲ್ಲವನ್ನು ಖಾಸಗೀ ಕಂಪನಿಗಳಿಗೆ ಮಾರಾಟ ಮಾಡಿದೆ ಎಂದರು. ಕಾರ್ಪೋರೇಟ್ ಸಂಸ್ಥೆಗಳಿಗಾಗಿ ದೇಶದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಸಂಹಿತೆ ಗಳನ್ನಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಿದೆ. ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ. ಸಾಮಾಜಿಕ ಭದ್ರತೆ ಕನಸಿನ ಮಾತಾಗುತ್ತಿದೆ ಎಂದು ನುಡಿದರು. ಕೇರಳ ರಾಜ್ಯ ಸರಕಾರ ಪರ್ಯಾಯ ಕಾರ್ಯಕ್ರಮವನ್ನು ಸಂಹಿತೆಗಳ ವಿರುದ್ಧ ನೀಡಿದೆ. ಆದರೆ ಸಿದ್ದರಾಮಯ್ಯ ಸರಕಾರ ಬಿಜೆಪಿ ಕೇಂದ್ರ ಸರಕಾರದ ನೀತಿಗಳ ಪರವಾಗಿ ನಿಯಮಾಳಿಯ ಕರಡು ತಯಾರಿಸಿ ಎಂದು ನುಡಿದರು. ರೈತಸಂಘದ ಜಿಲ್ಲಾಧ್ಯಕ್ಷ ಕೆ ಯಾದವ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ನಾಶಗೈಯುತ್ತಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳ್ಳುತ್ತಿದೆ. ಬೀಜ ನೀತಿ ರೈತರಿಗೆ ಮಾರಕವಾಗಿದೆ ಎಂದು ಹೇಳಿದರು. ಉದ್ಘಾಟಕರಾದ ವಸಂತ ಆಚಾರಿಯವರು ಜಾಥಾ ತಂಡದ ನಾಯಕರಾದ ರಾಧಾ ಮತ್ತು ನೋಣಯ ಗೌಡರಿಗೆ ಕೆಂಬಾವುಟವನ್ನು ಹಸ್ತಾಂತರಿಸಿದರು. ಪಾದಯಾತ್ರೆಯ ನೇತೃತ್ವವನ್ನು ಸಿಐಟಿಯು ಮುಂದಾಳುಗಳಾದ ಸದಾಶಿವದಾಸ್, ಗಿರಿಜ, ಶಂಕರ, ವಸಂತಿ, ಭವ್ಯ ಮುಚ್ಚೂರು, ಲಕ್ಷ್ಮೀ , ಕೃಷ್ಣಪ್ಪ, ಹೊನ್ನಯ್ಯ, ಬಾಬು ಪೂಜಾರಿ, ಕೃಷ್ಣಪ್ಪ ಪೂಜಾರಿ, ಬೇಬಿ, ಪದ್ಮಾವತಿ, ಲತಾ ಮತ್ತು ರಕ್ಷಾರವರು ವಹಿಸಿದ್ದರು. ರಮಣಿ ಸ್ವಾಗತಿಸಿದರು.
400 ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿದ ಇಂಗ್ಲೆಂಡ್ನ ಎರಡನೇ ಆಟಗಾರ ಬಟ್ಲರ್
ಕೊಲಂಬೊ, ಜ.27: ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ದಿಗ್ಗಜ ಜೋಸ್ ಬಟ್ಲರ್ ತನ್ನ ದೇಶದ ಪರ 400 ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಶ್ರೀಲಂಕಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಬಟ್ಲರ್ ಈ ಮೈಲಿಗಲ್ಲು ತಲುಪಿದರು. ಇಂಗ್ಲೆಂಡ್ ಪರ ಗರಿಷ್ಠ ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ವೇಗದ ಬೌಲಿಂಗ್ ದಂತಕತೆ ಜೇಮ್ಸ್ ಆ್ಯಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಆನಂತರ 35ರ ಹರೆಯದ ಬಟ್ಲರ್ ಅವರಿದ್ದಾರೆ. ಆ್ಯಂಡರ್ಸನ್ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ 401 ಪಂದ್ಯಗಳನ್ನಾಡಿದ್ದು, ಒಟ್ಟು 991 ವಿಕೆಟ್ಗಳನ್ನು ಕಬಳಿಸಿದ್ದಾರೆ. ವಿಕೆಟ್ಕೀಪರ್-ಬ್ಯಾಟರ್ ಬಟ್ಲರ್ 14 ಶತಕಗಳ ಸಹಿತ 12,291 ಅಂತರ್ರಾಷ್ಟ್ರೀಯ ರನ್ ಗಳಿಸಿದ್ದಾರೆ. ತನ್ನ ತಲೆಮಾರಿನ ಇಂಗ್ಲೆಂಡ್ನ ಅತ್ಯಂತ ಪ್ರಭಾವಶಾಲಿ ಬಿಳಿ ಚೆಂಡಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಬಟ್ಲರ್ 57 ಟೆಸ್ಟ್ ಪಂದ್ಯಗಳ 100 ಇನಿಂಗ್ಸ್ಗಳಲ್ಲಿ 2,907 ರನ್ ಗಳಿಸಿದ್ದು, ಇದರಲ್ಲಿ ಎರಡು ಶತಕ ಹಾಗೂ 18 ಅರ್ಧಶತಕಗಳಿವೆ. 50 ಓವರ್ ಮಾದರಿಯಲ್ಲಿ ಒಟ್ಟು 198 ಪಂದ್ಯಗಳಲ್ಲಿ 11 ಶತಕ ಹಾಗೂ 29 ಅರ್ಧಶತಕಗಳ ಸಹಿತ 5,515 ರನ್ ಗಳಿಸಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ ಹೆಚ್ಚು ಮಿಂಚಿರುವ ಬಟ್ಲರ್ 144 ಪಂದ್ಯಗಳಲ್ಲಿ ಒಂದು ಶತಕ ಹಾಗೂ 28 ಅರ್ಧಶತಕಗಳ ಸಹಿತ 3,869 ರನ್ ಗಳಿಸಿದ್ದಾರೆ. ಎರಡು ಬಾರಿ ಐಸಿಸಿಯ ಬಿಳಿ ಚೆಂಡಿನ ಪ್ರಶಸ್ತಿ ಗೆದ್ದಿರುವ ಬಟ್ಲರ್ ಫೆ.7ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಬಟ್ಲರ್ ಮತ್ತೊಮ್ಮೆ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.
ಪ್ರವಾಸಿ ಬೋಟ್ ದುರಂತ: ಶಾಸಕ ಯಶ್ಪಾಲ್ ಸುವರ್ಣ ಹೇಳಿಕೆಗೆ ಪ್ರಸಾದ್ ರಾಜ್ ಕಾಂಚನ್ ಟೀಕೆ
ಉಡುಪಿ, ಜ.27: ಕೋಡಿಬೆಂಗ್ರೆಯಲ್ಲಿ ನಡೆದ ಪ್ರವಾಸಿ ಬೋಟ್ ದುರಂತಕ್ಕೆ ಸಂಬಂಧಿಸಿ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆ ಕುಣಿಯಲಾಗದವ ನೆಲ ಡೊಂಕು ಎಂಬಂತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಟೀಕಿಸಿದ್ದಾರೆ. ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಹೊರಜಿಲ್ಲೆಯಿಂದ ಬಂದ ಪ್ರವಾಸಿಗರು ಬೋಟ್ ದುರಂತ ದಲ್ಲಿ ಸಾವಿಗೀಡಾಗಿರುವುದು ನೋವಿನ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿ ಕೊಂಡು ಘಟನೆಯ ಕುರಿತು ಕೂಲಂಕುಷವಾದ ತನಿಖೆ ಮಾಡಲು ಸಹಕಾರ ನೀಡಬೇಕಾಗಿದ್ದ ಶಾಸಕರು ವೃತಾ ಹೇಳಿಕೆ ನೀಡುವ ಮೂಲಕ ತನಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುವುದು ಸರಿಯಲ್ಲ. ಪ್ರಸ್ತುತ ಉಡುಪಿಯಲ್ಲಿ ಸ್ಥಳೀಯಾಡಳಿತ ಅಧಿಕಾರದಲ್ಲಿ ಇಲ್ಲ. ಕೋಡಿಬೇಂಗ್ರೆ ಉಡುಪಿ ಶಾಸಕರ ಆಡಳಿತ ವ್ಯಾಪ್ತಿಗೆ ಬರುತ್ತಿದ್ದು ಸರಕಾರದ ಅಡಿಯಲ್ಲಿ ಯಾವೆಲ್ಲ ಇಲಾಖೆಗಳು ಕಾರ್ಯಾಚರಿಸುತ್ತವೆಯೋ ಅದೆಲ್ಲವುದರ ಹೊಣೆಗಾರಿಕೆ ಇರುವುದು ಸ್ಥಳೀಯ ಶಾಸಕರಿಗೆ ಎನ್ನುವುದು ಅವರಿಗೆ ತಿಳಿದಿರುವ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯನ್ನು ಶಾಸಕರೇ ದೂರುವುದು ತಪ್ಪಾಗುತ್ತದೆ. ಜಿಲ್ಲಾಡಳಿತ ಅಥವಾ ಇಲಾಖೆಯಲ್ಲಿ ಸಮಸ್ಯೆಗಳು ಇದ್ದಲ್ಲಿ ಅದನ್ನು ಪರಿಹರಿಸಬೇಕಾಗಿರುವುದು ಸ್ಥಳೀಯ ಶಾಸಕರ ಜವಾಬ್ದಾರಿಯಾಗಿದೆ. ನಮ್ಮ ಉಡುಪಿ ಶಾಸಕರಿಗೆ ಆಡಳಿತ ನಡೆಸುವುದು ಹೇಗೆ ಎನ್ನುವುದು ಇನ್ನೂ ಕೂಡ ತಿಳಿದಿಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ಪ್ರಸಾದ್ರಾಜ್ ಕಾಂಚನ್ ದೂರಿದ್ದಾರೆ.
ರಾಜ್ಯದ ಗ್ರಾಮಪಂಚಾಯಿತ್ ಕಚೇರಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಪ್ರಸ್ತುತ ಸಾಲಿನ ಬಜೆಟ್ನಲ್ಲಿಯೇ ರಾಜ್ಯ ವ್ಯಾಪಿ ಇರುವ 6 ಸಾವಿರ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರ ಜಾರಿಗೆ ಹೊರಟಿರುವ ವಿಬಿ-ರಾಮ್-ಜಿ ಯೋಜನೆ ರದ್ದು ಹಾಗೂ ಮನರೇಗಾ ಯೋಜನೆ ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ಮಂಗಳವಾರ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಬಜೆಟ್ನಲ್ಲಿ 6000 ಗ್ರಾಮ ಪಂಚಾಯತಿಗಳ ಕಚೇರಿಗೂ ಮಹಾತ್ಮಾ ಗಾಂಧಿ ಅವರ ಹೆಸರನ್ನು ಇಡುವ ಬಗ್ಗೆ ಘೋಷಿಸಲಾಗುವುದು ಎಂದು ತಿಳಿಸಿದರು. ಕೇಂದ್ರದ ಇಂತಹ ಜನವಿರೋಧಿ ನೀತಿಯಿಂದ ಹಲವು ರಾಜ್ಯಗಳು ಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ನಮ್ಮ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ, ಕೇಂದ್ರದ ನೀತಿಯನ್ನು ಪ್ರತಿಭಟಿಸುತ್ತಿದೆ. ಈ ಕಾಯ್ದೆಯನ್ನು ರದ್ದುಪಡಿಸಿ, ಪುನಃ ಮನರೇಗಾವನ್ನು ಪುನರ್ ಸ್ಥಾಪಿಸುವವರೆಗೂ ಇಡೀ ದೇಶದ ಜನರು ಈ ಹೋರಾಟ ಮುಂದುವರೆಸಬೇಕಿದೆ. ಈ ಬಾರಿ ರೈತರು, ಕಾರ್ಮಿಕರು, ಮಹಿಳೆಯರು ಈ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ ಎಂದು ಅವರು ಹೇಳಿದರು. ವಿಬಿ ಜಿ ರಾಮ್ ಜಿ ಎಂದ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರೆಸ್ಸೆಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಆರೆಸ್ಸೆಸ್ ಹುನ್ನಾರ ಎಂದು ಟೀಕಿಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಸಮಾನತೆ ಸ್ಥಾಪನೆಯಾಗಿಸಲು ಆರ್ಥಿಕ,ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ಮಹಾತ್ಮಾ ಗಾಂಧಿ ಅವರು ಗ್ರಾಮ ಸ್ವರಾಜ್ಯ ಪ್ರತಿಪಾದಿಸಿದರು. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆಯ ರದ್ದತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಿಜೆಪಿಯವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆದರೆ ರದ್ದತಿಯ ವಿರುದ್ಧ ಸರಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ.53 ರಷ್ಟು ಮಹಿಳೆಯರು, ಶೇ.28 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ಮನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ ಕೇಂದ್ರ ಸರಕಾರ, ಆರೆಸ್ಸೆಸ್ ಅವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದ್ದಾರೆ ಎಂದರು. ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ ‘ವೋಟ್ ಗಾಗಿ ಮಾಡಿದ ಯೋಜನೆಗಳು’ ಎಂದು ಟೀಕಿಸುತ್ತಿದ್ದರು. ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ಮನರೇಗಾ ಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮ ಸಭೆಗಳು ಹಾಗೂ ಗ್ರಾಮ ಪಂಚಾಯತಿಗಳು ಈ ಮೊದಲು ಕೆಲಸವನನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಬಡವರ ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ ಗ್ರಾಮೀಣ ಆಡಳಿತ ಬಿಟ್ಟು, ಹೊಸದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದರು. ‘ಗೋಡ್ಸೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆಯನ್ನು ಮಾಡಿದರೆ, ಬಿಜೆಪಿಯವರು ಈಗ ಮನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಮಹಾತ್ಮಾ ಗಾಂಧಿಯವರನ್ನು ಮತ್ತೊಮ್ಮೆ ಹತ್ಯೆ ಮಾಡಿದಂತಾಗಿದೆ’ -ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಾಸ್ತಾನ ಟೋಲ್ನಲ್ಲಿ ಮಾಜಿ ಯೋಧಗೆ ಅವಮಾನ ಪ್ರಕರಣ: ಕ್ರಮಕ್ಕೆ ಕೋಟ ಠಾಣೆಗೆ ಮನವಿ
ಕೋಟ, ಜ.27: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ 21 ಪ್ಯಾರಾ ಕಮಾಂಡೋ ಸೈನಿಕರಿಗೆ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ ಪ್ರಕರಣ ಸಂಬಂಧ ಟೋಲ್ ಪ್ಲಾಜಾ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಜಿ ಸೈನಿಕರ ಸಂಘ ಕೋಟ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿತು. ಕಾಸರಗೋಡು ಜಿಲ್ಲೆಯ ನಿವೃತ್ತ ಯೋಧ ಶ್ಯಾಮರಾಜ್, ಅವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವೇಳೆ ಸಾಸ್ತಾನ ಟೋಲ್ನಲ್ಲಿ ಟೋಲ್ ವಿನಾಯಿತಿ ಪತ್ರವಿದ್ದರೂ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿ ಅವಮಾನಿ ಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ಸೈನಿಕರಿಗೆ ಈ ರೀತಿ ಅವಮಾನ ಮಾಡುವುದು ದೇಶಕ್ಕೆ ಮಾಡಿದ ಅವಮಾನ ಹಾಗೂ ದೇಶದ್ರೋಹದ ಸಮಾನ ಎಂದು ಮಾಜಿ ಸೈನಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ್ ರೆಡ್ಡಿ, ಟೋಲ್ ಮ್ಯಾನೇಜರ್ ಬಾಬು, ತಿಮ್ಮಯ್ಯ ಹಾಗೂ ಸಿಬ್ಬಂದಿ ಸುರೇಶ್ ಮತ್ತು ಶಿವನಾಗ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಈ ಕುರಿತು ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಎಸ್ಸೈಗಳಾದ ಪ್ರವೀಣ್ ಕುಮಾರ್ ಆರ್., ಮಾಂತೇಶ್ ಜಾಭಗೌಡ ಹಾಜರಿದ್ದರು. ನಿಯೋಗದಲ್ಲಿ ಮಾಜಿ ಸೈನಿಕರಾದ ಕೇಶವ ಮಲ್ಪೆ, ಚಂದ್ರ ಅಮೀನ್, ಅಶೋಕ, ಸುರೇಶ್, ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ ಸುಂದರ್ ನಾಯಿರಿ, ವಿಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ದುಬೈ ಗಲ್ಫ್ ಫುಡ್ 2026: ವಿಶ್ವದ ದೊಡ್ಡ ಆಹಾರ ಮೇಳದಲ್ಲಿ ಕರ್ನಾಟಕದ ನಂದಿನಿ ಮಳಿಗೆ, ಬ್ರ್ಯಾಂಡ್ ಪ್ರದರ್ಶನ
ದುಬೈ: ದುಬೈನಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ವಾರ್ಷಿಕ ಆಹಾರ ಮತ್ತು ಪಾನೀಯ ಸೋರ್ಸಿಂಗ್ ಕಾರ್ಯಕ್ರಮ 'ಗಲ್ಫುಡ್ 2026' ಮೇಳ ಜರುಗಿತು. ಜನವರಿ 26 ರಂದು ಉದ್ಘಾಟನೆಗೊಂಡ ಈ ಮೇಳದಲ್ಲಿ ದೇಶ, ವಿದೇಶಗಳ ಪ್ರತಿಷ್ಠಿತ ಕಂಪನಿಗಳು, ಬ್ರ್ಯಾಂಡ್ಗಳು ಪಾಲ್ಗೊಂಡಿದ್ದರು. ಅದರಲ್ಲಿ ಕರ್ನಾಟಕದ ಹೆಮ್ಮೆಯ 'ಕರ್ನಾಟಕ ಮಿಲ್ಕ್ ಫೆಡೇರಷನ್' ಬ್ರ್ಯಾಂಡ್ ಆದ ನಂದಿನಿ ಮಳಿಗೆ
ಆಸ್ಟ್ರೇಲಿಯ| ವೃತ್ತಿಪರ ಕ್ರಿಕೆಟ್ನಿಂದ ಆಸ್ಟ್ರೇಲಿಯದ ಮಾಜಿ ವೇಗಿ ರಿಚರ್ಡ್ಸನ್ ನಿವೃತ್ತಿ
ಮೆಲ್ಬರ್ನ್, ಜ.27: ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಮಂಗಳವಾರ ವೃತ್ತಿಪರ ಕ್ರಿಕೆಟ್ನಿಂದ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. 2009ರಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿರುವ ರಿಚರ್ಡ್ಸನ್ 16 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು. ಆಸ್ಟ್ರೇಲಿಯನ್ ಕ್ರಿಕೆಟಿಗರ ಅಸೋಸಿಯೇಶನ್ ಪ್ರಕಟನೆ ಹೊರಡಿಸುವ ಮೊದಲೇ 34ರ ಹರೆಯದ ರಿಚರ್ಡ್ಸನ್ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ರಿಚರ್ಡ್ಸನ್ ಈ ವರ್ಷದ ಬಿಗ್ಬ್ಯಾಶ್ ಲೀಗ್ನಲ್ಲಿ ಒಂದು ವರ್ಷದ ಅವಧಿಗೆ ಸಿಡ್ನಿ ಸಿಕ್ಸರ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಅವರು ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ‘‘ನಾನು ಈ ವರ್ಷದ ಬಿಬಿಎಲ್ ಅಂತ್ಯದ ವೇಳೆಗೆ ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಲು ಬಯಸಿದ್ದೇನೆ. ನನ್ನ ಜೀವನಕ್ಕೆ ಹೆಚ್ಚು ಖುಷಿಕೊಟ್ಟಿರುವ ಈ ಕ್ರೀಡೆಗೆ ವಿದಾಯ ಹೇಳುವ ಸರಿಯಾದ ಸಮಯ ಬಂದಿದೆ. ನಾನು ನನ್ನ ವೃತ್ತಿಜೀವನ ರೂಪಿಸಿದ ಎಲ್ಲ ಕೋಚ್ಗಳು, ಆಡಳಿತಗಾರರು ಹಾಗೂ ಸಹ ಆಟಗಾರರಿಗೆ ಧನ್ಯವಾದಗಳನ್ನು ಹೇಳಲು ಬಯಸುವೆ’’ ಎಂದು ರಿಚರ್ಡ್ಸನ್ ಹೇಳಿದ್ದಾರೆ. ಬಿಗ್ ಬ್ಯಾಶ್ ಲೀಗ್ನಲ್ಲಿ ದೀರ್ಘ ನಂಟು ಹೊಂದಿರುವ ರಿಚರ್ಡ್ಸನ್ 2018-19ರ ಋತುವಿನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಪರ ಪ್ರಶಸ್ತಿಯನ್ನು ಜಯಿಸಿದ್ದರು. 142 ವಿಕೆಟ್ಗಳೊಂದಿಗೆ ಬಿಬಿಎಲ್ ಇತಿಹಾಸದಲ್ಲಿ ಐದನೇ ಗರಿಷ್ಠ ವಿಕೆಟ್ಗಳನ್ನು ಉರುಳಿಸಿದ್ದಾರೆ. ರಿಚರ್ಡ್ಸನ್ 25 ಏಕದಿನ ಹಾಗೂ 36 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರಲ್ಲಿ ಯುಎಇನಲ್ಲಿ ಟಿ-20 ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ಮತ್ತೊಂದು ಟಿ-20 ವಿಶ್ವಕಪ್ನಲ್ಲೂ, 2019ರ ಏಕದಿನ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆದಿದ್ದರು.
ಉಡುಪಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಉಡುಪಿ, ಜ.27: ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಸರ್ಜನ್ ಡಾ.ಅಶೋಕ್ ಹೆಚ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಚ್.ಅಶೋಕ್, ದೇಶದಲ್ಲಿರುವ ಲಿಂಗ ತಾರತಮ್ಯ, ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಶಿಕ್ಷಣದ ಅರಿವು, ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಪೋಷಿಸುವ ಕುರಿತು ವಿವರವಾದ ಮಾಹಿತಿ ನೀಡಿದರು. ಪ್ರಸೂತಿ ತಜ್ಞೆ ಡಾ.ಕವಿತಾ ಮತ್ತು ಮಕ್ಕಳ ತಜ್ಞ ಡಾ.ಅಮರನಾಥ್ ಶಾಸ್ತ್ರೀ ಹೆಣ್ಣು ಮಕ್ಕಳ ಮಹತ್ವದ ಬಗ್ಗೆ ಮಾತನಾಡಿದರು. ಇದೇ ವೇಳೆ ಇತ್ತೀಚೆಗೆ ಜನಿಸಿದ ಮೂರು ನವಜಾತ ಶಿಶುಗಳಿಗೆ ಕಿಟ್ಗಳನ್ನು ಸಹ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್, ಪ್ರಸೂತಿ ತಜ್ಞೆ ಡಾ.ಐಶ್ವರ್ಯ, ಶುಶ್ರೂಷಕ ಅಧೀಕ್ಷಕಿ ಪ್ಲೋರಾ ಡಿ’ಆಲ್ಮೇಡ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಬಾಣಂತಿಯರು ಉಪಸ್ಥಿತರಿದ್ದರು. ಆಸ್ಪತ್ರೆಯ ಆಪ್ತ ಸಮಾಲೋಚಕಿ ವಿದ್ಯಾ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಶುಶ್ರೂಷಕಾಧಿಕಾರಿ ರೇಣುಕ ವಂದಿಸಿದರು.
ಉಡುಪಿ ಮಲ್ಲಿಗೆ, ಮಟ್ಟುಗುಳ್ಳ ರಫ್ತು ಅವಕಾಶ; ಕಾರ್ಯಾಗಾರ
ಉಡುಪಿ, ಜ.27: ಉಡುಪಿ ಜಿಲ್ಲೆಯದೇ ಆದ ಎರಡು ವಿಶಿಷ್ಟ ಬೆಳೆಗಳಾದ ಉಡುಪಿ (ಶಂಕರಪುರ) ಮಲ್ಲಿಗೆ ಹಾಗೂ ಮಟ್ಟುಗುಳ್ಳ (ಬದನೆ)ವನ್ನು ರಫ್ತು ಮಾಡಲು ಇರುವ ಅವಕಾಶಗಳ ಕುರಿತಂತೆ ಕಾರ್ಯಾಗಾರವೊಂದು ಉಡುಪಿಯ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ನಡೆದಿ ರುವ ಫಲಪುಷ್ಪ ಪ್ರದರ್ಶನ-2026ರಲ್ಲಿ ಇಂದು ಆಯೋಜಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳಗಳು ಭೌಗೋಳಿಕ ಗುರುತಿಸುವಿಕೆ (ಜಿಐ) ಮಾನ್ಯತೆ ಯನ್ನು ಪಡೆದಿವೆ. ಇವುಗಳನ್ನು ಹಾಳಾಗದಂತೆ ಹೊರರಾಜ್ಯ, ಹೋರದೇಶಗಳಿಗೆ ಕಳುಹಿಸಲು ಇರುವ ಅವಕಾಶ ಗಳ ಕುರಿತು ಅಪೇಡಾ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಅವರು, ಜಿಲ್ಲೆಯ ಉಡುಪಿ ಮಲ್ಲಿಗೆ ಮತ್ತು ಮಟ್ಟು ಗುಳ್ಳ ಬದನೆ ಬೆಳೆಗಳು ಜಿ.ಐ. ಮಾನ್ಯತೆ ಹೊಂದಿದ್ದು, ಈ ಬೆಳೆಗಳಡಿ ರೈತ ಉತ್ಪಾದಕರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಈ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಬೆಳೆಗಾರರು ಬೆಳೆದ ಉತ್ಪನ್ನ ಗಳನ್ನು ರಫ್ತು ಮಾಡುವ ಬಗ್ಗೆ ಆಯೋಜಿಸಿರುವ ಕಾರ್ಯಾಗಾರದ ಪ್ರಯೋಜನೆ ಪಡೆಯುವಂತೆ ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಅಪೇಡಾ ಸಂಸ್ಥೆಯ ವ್ಯವಸ್ಥಾಪಕರಾದ ಮಧುಮತಿ ಹಾಗೂ ಕಾರಂತ, ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳನ್ನು ರಫ್ತು ಮಾಡಲು ಇರುವ ಅವಕಾಶಗಳು ಹಾಗೂ ರಫ್ತು ಮಾಡಲು ಅಪೇಡಾ ಸಂಸ್ಥೆಯಿಂದ ಸಿಗುವ ವಿವಿಧ ಸವಲತ್ತುಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿ ಈ ಬಗ್ಗೆ ಬೆಳೆ ಬೆಳೆಯುವ ರೈತರು ಗಮನ ಹರಿಸುವಂತೆ ತಿಳಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಜಿಲ್ಲೆ ಯಿಂದ ರಫ್ತಾಗುವ ಉತ್ಪನ್ನಗಳಲ್ಲಿ ಜಲೋತ್ಪನ್ನಗಳೇ ಪ್ರಮುಖವಾಗಿದ್ದು, ರಪ್ತು ಗುಣಮಟ್ಟದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆ ಬೆಳೆಗಳನ್ನು ಉತ್ಪಾದನೆ ಮಾಡಿ ಅವಕಾಶದ ಸದುಪಯೋಗ ಪಡೆಯುವಂತೆ ಕೋರಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪಕುಲಪತಿ ಎಂ.ಕೆ.ನಾಯಕ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರಾ ಅಲ್ಲದೇ ವಿವಿಧ ಬೆಳೆಗಾರರು ಉಪಸ್ಥಿತರಿದ್ದರು. ಹೇಮಂತ ಕುಮಾರ್ ಎಲ್ ಕಾರ್ಯಕ್ರಮ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.
ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್ಗಳಿಗೆ ಪರವಾನಿಗೆ ಕಡ್ಡಾಯ: ಡಿಸಿ ಸ್ವರೂಪ ಟಿ.ಕೆ
ಕಡಲ ತೀರದಲ್ಲಿ ಭದ್ರತೆ ಕುರಿತ ಸಭೆ
ರಣಬಾಲಿ ಸಿನಿಮಾದ ಮೊದಲ ಲುಕ್; ತೆರೆ ಮೇಲೆ ಮತ್ತೆ ಒಂದಾದ ವಿಜಯ್
‘ರಣಬಾಲಿ’ಯ ಮೊದಲ ಝಲಕ್ ಹಾಗೂ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 11ರಂದು ಸಿನಿಮಾ ಬಿಡುಗಡೆಯಾಗುವ ಸಿಹಿಸುದ್ದಿಯನ್ನೂ ನೀಡಿದೆ. ತೆಲುಗು ಸಿನಿಮಾರಂಗದ ಜನಪ್ರಿಯ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವದಂದು ಹೊಸ ಸಿನಿಮಾ ‘ರಣಬಾಲಿ’ಯ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಇದೀಗ ಮತ್ತೆ ಆಕ್ಷನ್ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ‘ಟ್ಯಾಕ್ಸಿವಾಲಾ’ ಖ್ಯಾತಿಯ ರಾಹುಲ್ ಸಂಕೃತ್ಯಾನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅವರು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಟಿ-ಸೀರೀಸ್ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ. “ತನ್ನ ಜನರಿಗಾಗಿ ವ್ಯಕ್ತಿ ದಂತಕತೆಯಾದ; ದುಷ್ಟರಿಗೆ ದುಸ್ವಪ್ನನಾದ ಈ ದಂತಕತೆ” ಎನ್ನುವ ವಾಕ್ಯಗಳೊಂದಿಗೆ ‘ರಣಬಾಲಿ’ಯ ಮೊದಲ ಝಲಕ್ ಹಾಗೂ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ, ಸೆಪ್ಟೆಂಬರ್ 11ರಂದು ಸಿನಿಮಾ ಬಿಡುಗಡೆಯಾಗುವುದೆಂಬ ಸಿಹಿಸುದ್ದಿಯನ್ನೂ ನೀಡಿದೆ. ಈ ಸಿನಿಮಾದಲ್ಲಿ 1854ರಿಂದ 1878ರ ಅವಧಿಯ ಬ್ರಿಟಿಷ್ ಭಾರತದ ಹಿನ್ನೆಲೆಯ ನೈಜ ಇತಿಹಾಸದ ಘಟನೆಗಳನ್ನು ಆಧರಿಸಿದ ಕಥೆಯನ್ನು ಹೇಳಲಾಗುತ್ತಿದೆ. ಇತಿಹಾಸದಲ್ಲಿ ಅಡಗಿಹೋದ, ಕರಗಿಹೋದ ಕಹಿ ಘಟನೆಯನ್ನು ಚಿತ್ರವು ಪ್ರಸ್ತುತಪಡಿಸುತ್ತದೆ ಎಂದು ಚಿತ್ರತಂಡ ವಿವರಿಸಿದೆ. ಇದರಿಂದ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ‘ದಿ ಮಮ್ಮಿ’ (1999) ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ದಕ್ಷಿಣ ಆಫ್ರಿಕಾದ ನಟ ಅರ್ನಾಲ್ಡ್ ವೊಸ್ಲೂ ಅವರನ್ನು ಈ ಆಕ್ಷನ್–ಡ್ರಾಮಾ ಶೈಲಿಯ ಸಿನಿಮಾದ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಅವರು ಬ್ರಿಟಿಷ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಅವರು ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ‘ಕಾಕ್ಟೈಲ್’ ಸಿನಿಮಾದ ಚಿತ್ರೀಕರಣದಲ್ಲೂ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾ 2026ರ ಆಗಸ್ಟ್–ಅಕ್ಟೋಬರ್ ನಡುವೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೆ ಆಗ್ರಹಿಸಿ ಬ್ಯಾಂಕ್ ಮುಷ್ಕರ
ಉಡುಪಿ: ಬ್ಯಾಂಕಿನಲ್ಲಿ ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೆ ತರುವಂತೆ ಆಗ್ರಹಿಸಿ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಯ ಒಕ್ಕೂಟ ಯುಎಫ್ಬಿಯು ನೇತೃತ್ವದಲ್ಲಿ ಮಂಗಳವಾರ ಮುಷ್ಕರ ನಡೆಸಲಾಯಿತು. ಉಡುಪಿ ಜಿಲ್ಲಾ ಅಖಿಲ ಭಾರತೀಯ ಬ್ಯಾಂಕ್ ಸಂಘ (ಯುಎಫ್ಬಿಯು)ಗಳ ಮುಖಂಡರು ಉಡುಪಿ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಮುಂದೆ ಧರಣಿ ನಡೆಸಿದರು. ವಾರದಲ್ಲಿ ಐದು ದಿನ ಮಾತ್ರ ಕೆಲಸದಲ್ಲಿ ತೊಡಗಿ ಸಿಕೊಂಡು ಉಳಿದ ಎರಡು ದಿನ ರಜೆ ಜಾರಿ ಮಾಡಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಯುಎಫ್ಬಿಐ ಉಡುಪಿ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಬ್ಯಾಂಕ್ ನೌಕರರ ದೀರ್ಘ ಕಾಲದ ಪ್ರಮುಖ ಬೇಡಿಕೆಯಾದ ಐದು ದಿನಗಳ ಕೆಲಸ ವಾರ ಜಾರಿಗೆ ಸಂಬಂಧಿಸಿ ಈಗಾಗಲೇ ಲಿಖಿತ ಒಪ್ಪಂದವಾಗಿದ್ದು, ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೂ ಕೇಂದ್ರ ಸರಕಾರದಿಂದ ಈ ಬಗ್ಗೆ ಅಂತಿಮ ಅನುಮೋದನೆ ದೊರೆತಿಲ್ಲ ಎಂದು ದೂರಿದರು. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಉದ್ದೇಶದಿಂದ ಯುಎಫ್ಬಿಯು ಹಲವು ಬಾರಿ ರಾಜೀ ಸಂಧಾನ ಸಭೆಗಳಲ್ಲಿ ಭಾಗವಹಿಸಿ ಚರ್ಚೆ ನಡೆಸಿದೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಷ್ಟ ಭರವಸೆ ಅಥವಾ ಅಂತಿಮ ಅನುಮೋದನೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಬ್ಯಾಂಕುಗಳು ಐದು ದಿನ ಕೆಲಸ ನಿರ್ವಹಿಸಿದರೆ ಗ್ರಾಹಕರಿಗೂ ಯಾವುದೇ ಸಮಸ್ಯೆ ಇಲ್ಲದ ಕಾರಣ ಸರಕಾರ ಈ ಕೂಡಲೇ ಈ ಬೇಡಿಕೆ ಈಡೇರಿಸಬೇಕು. ನಮ್ಮ ಬೇಡಿಕೆಗಳು ಕೇವಲ ನೌಕರರಿಗೆ ಮಾತ್ರವಲ್ಲ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಗೆ ಅಗತ್ಯವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಚಿನ್ ಶೆಟ್ಟಿ, ರಮೇಶ್, ಸುಪ್ರಿಯಾ, ಹರೀಶ್ ಶೆಟ್ಟಿ, ರವಿಶಂಕರ್, ಪ್ರದೀಪ್ ಕುಮಾರ್, ಮುರಳೀಧರ್, ಮರಿಯೊ ಮಥಾಯಸ್, ಶ್ಯಾಮಲಾ, ವಿಶಾಲ್ ಸಿಂಗ್, ನಿರಂಜನ್ ಆಚಾರ್ಯ, ಸೂರಜ್ ಉಪ್ಪೂರು, ಸೂರಜ್ ಮೊದಲಾದವರು ಉಪಸ್ಥಿತರಿದ್ದರು. ಈ ಮುಷ್ಕರದಲ್ಲಿ ಜಿಲ್ಲೆಯಾದ್ಯಂತ ಸುಮಾರು 700 ಮಂದಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ‘ಪ್ರಸ್ತುತ ಬ್ಯಾಂಕ್ ಸಿಬ್ಬಂದಿಗಳು, ಸಿಬ್ಬಂದಿ ಕೊರತೆ ನಡುವೆ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣ ಕಟ್ಟಲು, ಹಿಂಪಡೆಯುವ ಸೌಲಭ್ಯಗಳನ್ನು ಎಟಿಎಂನಲ್ಲಿ ಕಲ್ಪಿಸಲಾಗಿದೆ. ಆನ್ಲೈನ್ ಬ್ಯಾಂಕಿಂಗ್ ಉಪಯೋಗಿಸಬಹುದಾಗಿದೆ. ಈಗಾಗಲೇ ಕೇಂದ್ರ ಸರಕಾರದ ನೌಕರರು ಇನ್ಸೂರೆನ್ಸ್, ಆರ್ಬಿಐ, ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವಾರದಲ್ಲಿ ಐದು ದಿನ ಮಾತ್ರ ಕೆಲಸವಿದೆ. ಆದರೆ ಸರಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ವಾರಪೂರ್ತಿ ಕೆಲಸ ಒತ್ತಡಕ್ಕೆ ಕಾರಣವಾಗುತ್ತದೆ’ -ನಾಗೇಶ್ ನಾಯಕ್, ಸಂಚಾಲಕರು, ಯುಎಫ್ಬಿಯು ಉಡುಪಿ
ಕಲಬುರಗಿ | ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಮುಹಮ್ಮದ್ ರಿಜ್ವಾನ್ ಅಹ್ಮದ್ ನೇಮಕ
ಕಲಬುರಗಿ: ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಮುಹಮ್ಮದ್ ರಿಜ್ವಾನ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾಲರಾಜ ಗುತ್ತೇದಾರ ಅವರು ತಿಳಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಬಾಲರಾಜ ಗುತ್ತೇದಾರ, ತಾವು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು, ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಲಬುರಗಿ ಜಿಲ್ಲೆಯಲ್ಲಿ ಜನತಾದಳ (ಜಾತ್ಯಾತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿರೆಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ | S I R ವೇಳೆ ಜನರಿಗೆ ಕಿರುಕುಳ ಆರೋಪ: ಕೋಲ್ಕತ್ತಾದಲ್ಲಿ ಪ್ರತಿಭಟನಾ ಜಾಥಾ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ವೇಳೆ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸಿದ್ದಿಕುಲ್ಲಾ ಚೌಧುರಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಜಾಥಾ ನಡೆಯಿತು. ಜಮಾಯಿತ್ ಇ-ಉಲಾಮಾ-ಇ-ಹಿಂದ್ ನೇತೃತ್ವದಲ್ಲಿ ನಡೆದ ಸುಮಾರು 4.5 ಕಿಮೀ ದೂರದ ಈ ಮೆರವಣಿಗೆ ಉತ್ತರ-ಕೇಂದ್ರ ಕೋಲ್ಕತ್ತಾದ ರಾಜಾಬಝಾರ್ ಪ್ರದೇಶದಿಂದ ಆರಂಭಗೊಂಡು, ನಗರದ ಕೇಂದ್ರ ಭಾಗವಾದ ಎಸ್ಪ್ಲನೇಡ್ ಬಳಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಹಾಗೂ ಹಿರಿಯ ನಾಗರಿಕರು, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿರಿಯ ನಾಗರಿಕರು ಸೇರಿದಂತೆ ಪಶ್ಚಿಮ ಬಂಗಾಳದ ನಾಗರಿಕರು ತಮ್ಮ ಪರಿಶೀಲನೆಗಾಗಿ ಗಂಟೆಗಟ್ಟಲೆ ಉದ್ದವಾದ ಸರತಿ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇದು ಅಮಾನವೀಯವಾಗಿದೆ ಎಂದು ಚೌಧುರಿ ಆರೋಪಿಸಿದ್ದಾರೆ. “ನಾವು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ. ನಮ್ಮ ಮೇಲೆ ಅನ್ಯಾಯ ನಡೆಯುತ್ತಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಹಾಬಾದ್ | ಗಣರಾಜ್ಯ ದಿನವನ್ನು ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಆಚರಿಸಬೇಕು: ನಿಂಗಣ್ಣ ಹುಳಗೋಳಕರ್
ಶಹಾಬಾದ್ : ಗಣರಾಜ್ಯ ದಿನವನ್ನು ನಾವೆಲ್ಲರೂ ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು. ಅವರು ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದಿನ ಬಹುತೇಕ ಜನರು ಗಣರಾಜ್ಯ ದಿನವನ್ನು ಕೇವಲ ರಜೆ ಎಂಬ ಮಟ್ಟಿಗೆ ಮಾತ್ರ ಅರ್ಥಮಾಡಿಕೊಂಡಿರುವುದು ದುರದೃಷ್ಟಕರ. ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶರಕ್ಷಣೆ, ನ್ಯಾಯಾಂಗ ಹಾಗೂ ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬಸವರಾಜ ಬಿರಾದಾರ, ಸಮಾಜದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಕನಸು ಕಂಡು ಸಂವಿಧಾನ ರಚಿಸಿದ ಮಹಾನ್ ನಾಯಕರು ಮತ್ತು ಮಹಾತ್ಮರ ಆಶಯಗಳು ನಿಜವಾಗಿಯೂ ಸಾಕಾರಗೊಳ್ಳಬೇಕಾದರೆ, ನಾವು ದಾರಿ ತಪ್ಪದೇ ಸರಿದಾರಿಯಲ್ಲಿ ಸಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ದಿನೇಶ ಗೌಳಿ, ದೇವದಾಸ ಜಾಧವ, ಶಶಿಕಲಾ ಸಜ್ಜನ, ನೀಲಗಂಗಮ್ಮ ಗಂಟ್ಲಿ, ನಂದಾ ಗುಡೂರ, ಪದ್ಮಾ ಕಟಗೆ, ವಿಜಯಲಕ್ಷ್ಮಿ ನಂದಿ, ರೇಖಾ ಅಡಕೆ, ಬಸಮ್ಮ ನಂದಿ, ಗೀತಾ ಪವಾರ, ಶಿವಕುಮಾರ ಇಂಗಿನಶೆಟ್ಟಿ, ಭಾನುದಾಸ ತುರೆ, ಯಲ್ಲಪ್ಪ ದಂಡಗುಲಕರ, ಬಸವರಾಜ ಸಾತ್ಯಾಳ, ಉಮೇಶ ನಿಂಬಾಳಕರ, ಸಂದೀಪ ಹದನೂರ, ಭೀಮಯ್ಯ ಗುತ್ತೆದಾರ, ಶ್ರೀಧರ ಜೋಶಿ, ಸಂಜಯ ಕೊರೆ, ಶರಣು ಕರಣಗಿ, ಶ್ರೀನಿವಾಸ ದೇವಕರ, ದೊಡ್ಡಪ್ಪ ಹೊಸಮನಿ, ರಹೀಂ ಸಾಹೇಬ, ಬಾಬಾ, ಅವಿನಾಶ್ ಸಾಳುಂಕೆ, ಗೊವಿಂದ ದೊತ್ರೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು UGCಯ ಹೊಸ ನಿಯಮ: ಪರ–ವಿರೋಧ ಚರ್ಚೆ ಮತ್ತು ಪ್ರತಿಭಟನೆ
ಎರಡು ವಾರಗಳ ಹಿಂದೆ, ದೇಶದ ಉನ್ನತ ಶಿಕ್ಷಣದ ನಿಯಂತ್ರಕ ಸಂಸ್ಥೆಯಾದ ವಿಶ್ವವಿದ್ಯಾಲಯ ಅನುದಾನ ಆಯೋಗ (UGC), ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಹೊಸ ನಿಯಮಗಳನ್ನು ಪ್ರಕಟಿಸಿತು. 2019 ಮತ್ತು 2016ರಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸಲ್ಲಿಸಿದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮಗಳು 2012ರಲ್ಲಿ UGC ಮೊದಲ ಬಾರಿಗೆ ಹೊರಡಿಸಿದ್ದ ಸಮಾನತೆಯ ನಿಯಮಗಳ ನವೀಕೃತ ಆವೃತ್ತಿಯಾಗಿವೆ. ಇವು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ “ಕಿರುಕುಳ”ಕ್ಕೆ ಕಾರಣವಾಗಬಹುದು ಎಂದು ಒಂದು ವರ್ಗದ ಜನರು ವಾದಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಪದಾಧಿಕಾರಿಗಳು ಮತ್ತು ಬರೇಲಿ ನಗರದ ಮ್ಯಾಜಿಸ್ಟ್ರೇಟ್ ಅವರು ಈ ನಿಯಮಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ. ►ಹೊಸ UGC ನಿಯಮಗಳು ಜನವರಿ 13ರಂದು UGC, ವಿಶ್ವವಿದ್ಯಾಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಅಧಿಸೂಚನೆ ಹೊರಡಿಸಿದೆ. ಧರ್ಮ, ಲಿಂಗ, ಜಾತಿ ಅಥವಾ ಅಂಗವೈಕಲ್ಯ ಸೇರಿದಂತೆ ವಿವಿಧ ಆಧಾರಗಳ ಮೇಲೆ ಕಾಲೇಜುಗಳಲ್ಲಿ ನಡೆಯುವ ತಾರತಮ್ಯವನ್ನು ಕೊನೆಗೊಳಿಸುವುದು ಇದರ ಗುರಿಯಾಗಿದೆ. ಇದು ವಿಶೇಷವಾಗಿ ಅಂಚಿನಲ್ಲಿರುವ ಅಥವಾ ಅನನುಕೂಲಕರ ಹಿನ್ನೆಲೆಯ ವಿದ್ಯಾರ್ಥಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಈ ಮೂಲಕ ಉನ್ನತ ಶಿಕ್ಷಣವನ್ನು ನ್ಯಾಯಯುತವಾಗಿಯೂ ಎಲ್ಲರನ್ನೂ ಒಳಗೊಂಡಂತೆಯೂ ಮಾಡುವ ಆಶಯ ಈ ನಿಯಮಗಳಲ್ಲಿದೆ. ಈ ನಿಯಮಗಳು 2012ರಿಂದ ಜಾರಿಯಲ್ಲಿದ್ದ ಅದೇ ಹೆಸರಿನ UGC (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳನ್ನು ಬದಲಾಯಿಸುತ್ತವೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವ ಈ ಹೊಸ ನಿಯಮಗಳು, ತಾರತಮ್ಯ ಸಂಬಂಧಿತ ದೂರುಗಳನ್ನು ಸಲ್ಲಿಸಲು ಮತ್ತು ಪರಿಹರಿಸಲು ಸ್ಪಷ್ಟವಾದ ರಚನೆ ಮತ್ತು ಕಾರ್ಯವಿಧಾನವನ್ನು ನಿಗದಿಪಡಿಸುತ್ತವೆ. ►ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ? ಈ ನಿಯಮಗಳ ಉದ್ದೇಶವನ್ನು ಕಾರ್ಯಗತಗೊಳಿಸಲು, ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಸಮಾನ ಅವಕಾಶ ಕೇಂದ್ರ, ಸಮಾನತೆಯ ಸಮಿತಿ ಮತ್ತು ಸಮಾನತೆ ತಂಡಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ►ಸಮಾನ ಅವಕಾಶ ಕೇಂದ್ರ: ಸಮಾನ ಅವಕಾಶ ಕೇಂದ್ರ (ಇಒಸಿ) ಅನನುಕೂಲ ಗುಂಪುಗಳಿಗೆ ಸಂಬಂಧಿಸಿದ ನೀತಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಅಗತ್ಯವಿದ್ದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾನೂನು ನೆರವು ಒದಗಿಸಲು ಸಹಾಯ ಮಾಡುತ್ತದೆ. ಸಮಾನ ಅವಕಾಶ ಕೇಂದ್ರದಲ್ಲಿ ಸಂಸ್ಥೆಯ ಐದು ಅಧ್ಯಾಪಕ ಸದಸ್ಯರು ಇರಬೇಕು. ಈ ಐದು ಸದಸ್ಯರಿಗೆ ಯಾವುದೇ ವರ್ಗದ ಮೀಸಲಾತಿ ಅನ್ವಯಿಸುವುದಿಲ್ಲ. ಒಂದು ಕಾಲೇಜಿನಲ್ಲಿ ಕನಿಷ್ಠ ಐದು ಅಧ್ಯಾಪಕ ಸದಸ್ಯರು ಇಲ್ಲದಿದ್ದಲ್ಲಿ, ಆ ಕಾಲೇಜು ಸಂಯೋಜಿತವಾಗಿರುವ ವಿಶ್ವವಿದ್ಯಾಲಯದ ಇಒಸಿ ಅದರ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ನಿಯಮಗಳು ಹೇಳುತ್ತವೆ. ►ಸಮಾನತೆಯ ಸಮಿತಿ: ಸಮಾನ ಅವಕಾಶ ಕೇಂದ್ರದ ಅಡಿಯಲ್ಲಿ ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಹತ್ತು ಸದಸ್ಯರ ಸಮಾನತೆಯ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಐದು ಸದಸ್ಯರು ಮೀಸಲು ವರ್ಗಗಳಿಂದ ಬಂದಿರಬೇಕು. ಅಂದರೆ ಇತರ ಹಿಂದುಳಿದ ವರ್ಗಗಳು, ಅಂಗವಿಕಲ ವ್ಯಕ್ತಿಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರು. ದೂರುಗಳು ಬಂದಲ್ಲಿ, 24 ಗಂಟೆಗಳ ಒಳಗೆ ಸಭೆ ಸೇರಿ 15 ದಿನಗಳೊಳಗೆ ಸಂಸ್ಥೆಯ ಮುಖ್ಯಸ್ಥರಿಗೆ ವರದಿಯನ್ನು ಸಲ್ಲಿಸಬೇಕು. ಪ್ರತಿಯಾಗಿ, ಸಂಸ್ಥೆಯ ಮುಖ್ಯಸ್ಥರು ಏಳು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ►ಸಮಾನತೆ ತಂಡ: ಕ್ಯಾಂಪಸ್ನಲ್ಲಿ ಎಚ್ಚರ ವಹಿಸಿ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ಸಮಾನತೆ ತಂಡಗಳನ್ನು ರಚಿಸಬೇಕು. ಇವು ಚಲನಶೀಲವಾಗಿರಬೇಕು ಹಾಗೂ ದುರ್ಬಲ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ತಾರತಮ್ಯದ ಘಟನೆಗಳನ್ನು ವರದಿ ಮಾಡಲು ಸಂಸ್ಥೆಗಳು 24 ಗಂಟೆಗಳ ‘ಈಕ್ವಿಟಿ ಸಹಾಯವಾಣಿ’ಯನ್ನೂ ಹೊಂದಿರಬೇಕು. ಈ ತಂಡಗಳು ಸಮಾನತೆಯ ರಾಯಭಾರಿಗಳನ್ನು ನೇಮಿಸಬೇಕು. ►ಈ ನಿಯಮಗಳು 2012ರ ನಿಯಮಗಳಿಗಿಂತ ಹೇಗೆ ಭಿನ್ನ? 2012ರ ನಿಯಮಗಳು ಹೆಚ್ಚಿನವಾಗಿ ಸಲಹಾತ್ಮಕ ಸ್ವರೂಪದ್ದಾಗಿದ್ದವು. ತಾರತಮ್ಯ ಅಥವಾ ಕಿರುಕುಳದ ಸ್ವರೂಪಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಬೇಕು ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ UGCಗೆ ಇರಲಿಲ್ಲ. ಹೊಸ ನಿಯಮಗಳು, ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ಮೂಲಕ ಅವುಗಳ ಅನುಷ್ಠಾನವನ್ನು ನಿಗಾ ವಹಿಸಲು UGCಗೆ ಸ್ಪಷ್ಟವಾದ ವ್ಯವಸ್ಥೆಯನ್ನು ಒದಗಿಸುತ್ತವೆ. ನಿಯಮಗಳನ್ನು ಪಾಲಿಸದ ಸಂಸ್ಥೆಗಳು ಕ್ರಮವನ್ನು ಎದುರಿಸಬೇಕಾಗುತ್ತದೆ. UGC ಆಯೋಗದ ಯೋಜನೆಗಳಲ್ಲಿ ಭಾಗವಹಿಸುವುದು, ಪದವಿ ಹಾಗೂ ಆನ್ಲೈನ್ ಕಾರ್ಯಕ್ರಮಗಳನ್ನು ನಡೆಸುವುದು ನಿಷೇಧವಾಗಬಹುದು. ಜೊತೆಗೆ, ಕೇಂದ್ರ ಅನುದಾನ ಪಡೆಯಲು ಅರ್ಹ ಸಂಸ್ಥೆಗಳ ಪಟ್ಟಿಯಿಂದ ಅವುಗಳನ್ನು ತೆಗೆದುಹಾಕುವ ಸಾಧ್ಯತೆಯೂ ಇದೆ. ಹಿಂದಿನ ನಿಯಮಗಳು ಸಂಸ್ಥೆಗಳಲ್ಲಿ ಸಮಾನ ಅವಕಾಶ ಸೆಲ್ ರಚಿಸಲು ಅವಕಾಶ ನೀಡಿದ್ದರೂ, ತಾರತಮ್ಯದ ಘಟನೆಯ ಸಂದರ್ಭದಲ್ಲಿ ಅವುಗಳ ಸಂಯೋಜನೆ ಮತ್ತು ಅನುಸರಿಸಬೇಕಾದ ಕಾರ್ಯವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿರಲಿಲ್ಲ. ಅದರಲ್ಲಿ ತಾರತಮ್ಯ ವಿರೋಧಿ ಅಧಿಕಾರಿಯ ನೇಮಕ ಕಡ್ಡಾಯವಾಗಿತ್ತು. ತಾರತಮ್ಯ ವಿರೋಧಿ ಅಧಿಕಾರಿಯ ಯಾವುದೇ ನಿರ್ಧಾರದ ವಿರುದ್ಧ ಸಂಸ್ಥೆಯ ಮುಖ್ಯಸ್ಥರ ಮುಂದೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇತ್ತು. ಆದರೆ ಹೊಸ ನಿಯಮಗಳು ದೂರುಗಳನ್ನು ಸಲ್ಲಿಸುವುದು ಮತ್ತು ಅವುಗಳ ವಿಲೇವಾರಿ ಕಾರ್ಯವಿಧಾನಗಳ ಕುರಿತು ವಿವರವಾದ ನಿಬಂಧನೆಗಳನ್ನು ಹೊಂದಿವೆ. 2012ರ ಆವೃತ್ತಿಯಲ್ಲಿ ನಿಯಮಗಳಲ್ಲಿ ಎಲ್ಲಿಯೂ ಒಬಿಸಿ ಬಗ್ಗೆ ಉಲ್ಲೇಖ ಇರಲಿಲ್ಲ. ಅದು “ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡಬಾರದು” ಎಂದು ಮಾತ್ರ ಹೇಳಿದೆ. ►ಹೊಸ ನಿಯಮಗಳು ಕಳೆದ ವರ್ಷ ಬಿಡುಗಡೆಯಾದ ಆರಂಭಿಕ ಕರಡು ನಿಯಮಗಳಿಗಿಂತ ಹೇಗೆ ಭಿನ್ನವಾಗಿವೆ? ಕರಡು ನಿಯಮಗಳನ್ನು ಸಾರ್ವಜನಿಕಗೊಳಿಸಿದ ನಂತರ, ಅದರ ಕೆಲವು ವಿಭಾಗಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಹೀಗಾಗಿ ಅಂತಿಮ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಸೇರಿಸಲಾಗಿದೆ. ಉದಾಹರಣೆಗೆ, ಅಖಿಲ ಭಾರತ ಒಬಿಸಿ ವಿದ್ಯಾರ್ಥಿ ಸಂಘವು ಕರಡು ನಿಯಮಗಳಲ್ಲಿ ಸಮಾನತಾ ಸಮಿತಿಗಳಲ್ಲೂ ಹಾಗೂ ‘ಜಾತಿ ತಾರತಮ್ಯ’ದ ವ್ಯಾಖ್ಯಾನದಲ್ಲೂ ಒಬಿಸಿಗಳನ್ನು ಹೊರಗಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಈ ತಿಂಗಳ ಆರಂಭದಲ್ಲಿ ಅಧಿಸೂಚನೆ ಹೊರಡಿಸಲಾದ ಅಂತಿಮ ಆವೃತ್ತಿಯಲ್ಲಿ ಜಾತಿ ತಾರತಮ್ಯದ ವ್ಯಾಖ್ಯಾನಕ್ಕೆ ಒಬಿಸಿ ವರ್ಗವನ್ನೂ ಸೇರಿಸಲಾಗಿದೆ. “ಜಾತಿ ಆಧಾರಿತ ತಾರತಮ್ಯ ಎಂದರೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರ ವಿರುದ್ಧ ಜಾತಿ ಅಥವಾ ಬುಡಕಟ್ಟು ಆಧಾರದ ಮೇಲೆ ಮಾತ್ರ ನಡೆಯುವ ತಾರತಮ್ಯ” ಎಂದು ಅಂತಿಮ ನಿಯಮಗಳು ಹೇಳುತ್ತವೆ. ಸಮಾನತಾ ಸಮಿತಿಯಲ್ಲಿ ಒಬಿಸಿಗಳ ಪ್ರಾತಿನಿಧ್ಯವನ್ನೂ ಅಂತಿಮ ಆವೃತ್ತಿ ಒದಗಿಸಿದೆ. ಕರಡು ನಿಯಮಗಳಲ್ಲಿ ಮಾತ್ರ ಎಸ್ಟಿ ಮತ್ತು ಎಸ್ಸಿ ವರ್ಗದಿಂದ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿರಬೇಕು ಹಾಗೂ ಕನಿಷ್ಠ ಒಬ್ಬ ಮಹಿಳೆಯನ್ನು ಸೇರಿಸಬೇಕೆಂದು ಸೂಚಿಸಲಾಗಿತ್ತು. ಅಂತಿಮ ನಿಯಮಗಳು ಕರಡಿನಲ್ಲಿ ಸೇರಿಸಲಾಗಿದ್ದ ‘ಸುಳ್ಳು ದೂರುಗಳು’ ಎಂಬ ವಿಭಾಗವನ್ನೂ ಕೈಬಿಟ್ಟಿವೆ. “ತಾರತಮ್ಯದ ಸುಳ್ಳು ದೂರುಗಳ” ಸಂದರ್ಭಗಳಲ್ಲಿ ದಂಡ ಅಥವಾ ಶಿಸ್ತಿನ ಕ್ರಮಗಳನ್ನು ವಿಧಿಸಲು ಕರಡು ನಿಯಮಗಳು ಅವಕಾಶ ನೀಡಿದ್ದವು. ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನೇತೃತ್ವದ ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿಯು ಕಳೆದ ತಿಂಗಳು ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ, ಕರಡು ನಿಯಮಗಳು “ಜಾತಿ ಆಧಾರಿತ ಕಿರುಕುಳದ ವ್ಯಾಖ್ಯಾನದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳು ಮತ್ತು ಇತರ ಪಾಲುದಾರರ ಮೇಲಿನ ಕಿರುಕುಳವನ್ನೂ ಸ್ಪಷ್ಟವಾಗಿ ಸೇರಿಸಬೇಕು” ಎಂದು ಶಿಫಾರಸು ಮಾಡಿತ್ತು. ►ಈ ನಿಯಮಗಳನ್ನು ತರಲು ಕಾರಣ 2019 ಮತ್ತು 2016ರಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಪಾಯಲ್ ತಡ್ವಿ ಮತ್ತು ರೋಹಿತ್ ವೇಮುಲಾ ಅವರ ತಾಯಂದಿರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ 2019ರ ಅರ್ಜಿಯ ನಂತರ ಈ ನಿಯಮಗಳನ್ನು ತರಲಾಗಿದೆ. ಅರ್ಜಿದಾರರಾದ ಅಬೇದಾ ಸಲೀಂ ತಡ್ವಿ ಮತ್ತು ರಾಧಿಕಾ ವೇಮುಲಾ ಅವರು 2012ರ ಸಮಾನತಾ ನಿಯಮಗಳ ಅನುಷ್ಠಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೃಢವಾದ ತಾರತಮ್ಯ ವಿರೋಧಿ ಕಾರ್ಯವಿಧಾನಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್ ಪೀಠವು ಜನವರಿ 3, 2025ರಂದು ನಿಯಮಗಳು ಕೇವಲ ಸಾಂಕೇತಿಕವಾಗಿರಬಾರದು ಎಂದು ಸ್ಪಷ್ಟಪಡಿಸಿತ್ತು. ಹೊಸ ಸಮಾನತಾ ನಿಯಮಗಳ ಕರಡನ್ನು ಫೆಬ್ರವರಿ 2025ರಲ್ಲಿ ಪ್ರತಿಕ್ರಿಯೆಗಾಗಿ ಸಾರ್ವಜನಿಕಗೊಳಿಸಲಾಯಿತು. ಕಳೆದ ವರ್ಷ ಏಪ್ರಿಲ್ನಲ್ಲಿ, UGC ನಿಯಮಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಮಾಡುವ ಮೂಲಕ ಮುಂದುವರಿಯಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ►ವಿವಾದವೇನು? ವಿದ್ಯಾರ್ಥಿಗಳ ಒಂದು ವರ್ಗ ಹಾಗೂ ಲಕ್ನೋದಲ್ಲಿರುವ ಬಿಜೆಪಿ ಪದಾಧಿಕಾರಿಗಳು ಈ ನಿಯಮಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ “ಕಿರುಕುಳ”ಕ್ಕೆ ಕಾರಣವಾಗಬಹುದು ಹಾಗೂ ಜಾತಿಯ ಆಧಾರದ ಮೇಲೆ ವಿಭಜನೆಗಳನ್ನು ಉಂಟುಮಾಡಬಹುದು ಎಂದು ಅವರು ಆರೋಪಿಸಿದ್ದಾರೆ. UGC ಪ್ರಧಾನ ಕಚೇರಿಯ ಹೊರಗೆ “ಸವರ್ಣ ಸೇನೆ” ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಮೇಲೆ ಈ ನಿಯಮಗಳು ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದರೆ, ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವುದಾಗಿ “ಸವರ್ಣ ಸೇನೆ”ಯ ಸಹ-ಸಂಸ್ಥಾಪಕ ಶಿವಂ ಸಿಂಗ್ ಹೇಳಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅಥವಾ ಮೀಸಲು ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರರು, ಹೊಸ ನಿಯಮಗಳಲ್ಲಿ ತಮ್ಮಿಗೆ ಸ್ಪಷ್ಟ ನಿಬಂಧನೆ ಇಲ್ಲದ ಕಾರಣ ದೂರುಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಮೀಸಲಾತಿ ವರ್ಗಗಳಿಂದ ದೂರುಗಳು ಹೆಚ್ಚಾಗಬಹುದು ಎಂಬ ನಂಬಿಕೆ ಇರುವುದರಿಂದ, ಈ ನಿಯಮಗಳು ಸಮಾನತೆಯನ್ನು ಉತ್ತೇಜಿಸುವ ಬದಲು ಅಸಮಾನತೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ದೂರು ಸಲ್ಲಿಸಲು ನಿಯಮಗಳು ಸ್ಪಷ್ಟ ಕಾರ್ಯವಿಧಾನವನ್ನು ಒದಗಿಸುವುದಿಲ್ಲ ಎಂದು ಕೂಡ ಆರೋಪಿಸಿದ್ದಾರೆ. ಜಾತಿ ತಾರತಮ್ಯದ ದೂರುಗಳು 2016–17ರಲ್ಲಿ ಸುಮಾರು 173 ಪ್ರಕರಣಗಳಿಂದ 2023–24 ಶೈಕ್ಷಣಿಕ ವರ್ಷದಲ್ಲಿ 350ಕ್ಕೂ ಹೆಚ್ಚು ಪ್ರಕರಣಗಳಿಗೆ ಏರಿಕೆಯಾಗಿರುವುದನ್ನು ತೋರಿಸುವ ಡೇಟಾವನ್ನು ಉಲ್ಲೇಖಿಸಿ, ಈ ನಿಯಮಗಳು ಅಸಮಾನತೆಯನ್ನು ಹೆಚ್ಚಿಸಬಹುದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪೋಸ್ಟ್–ಡಾಕ್ಟರೇಟ್ ಸಂಶೋಧಕ ಮೃತ್ಯುಂಜಯ್ ತಿವಾರಿ ಅವರು, ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಈ ನಿಯಮಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದಾರೆ. “ಕಾನೂನು ಎಲ್ಲರನ್ನೂ ಸಮಾನವಾಗಿ ಏಕೆ ರಕ್ಷಿಸುವುದಿಲ್ಲ? ಹಾಗಾದರೆ ಕಾನೂನಿನ ಅನುಷ್ಠಾನದಲ್ಲಿ ಈ ತಾರತಮ್ಯ ಏಕೆ? ಸುಳ್ಳು ಆರೋಪಗಳ ಸಂದರ್ಭದಲ್ಲಿ ಏನಾಗುತ್ತದೆ? ಅಪರಾಧವನ್ನು ಹೇಗೆ ನಿರ್ಧರಿಸಲಾಗುತ್ತದೆ? ಪದಗಳು, ಕಾರ್ಯಗಳು ಅಥವಾ ಗ್ರಹಿಕೆಗಳ ಮೂಲಕ ತಾರತಮ್ಯವನ್ನು ಹೇಗೆ ವ್ಯಾಖ್ಯಾನಿಸಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಎಂಎಲ್ಸಿ ದೇವೇಂದ್ರ ಪ್ರತಾಪ್ ಸಿಂಗ್ ಅವರು UGCಗೆ ಪತ್ರ ಬರೆದಿದ್ದು, ದಲಿತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿರುದ್ಧ ನಡೆಯುವ ತಾರತಮ್ಯವನ್ನು ತಡೆಯುವ ಬಗ್ಗೆ ಕಾಳಜಿ ವಹಿಸಬೇಕು. ಆದರೆ ಅದಕ್ಕಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಅಸುರಕ್ಷಿತರಾಗಿಸುವಂತಾಗಬಾರದು ಎಂದು ಅವರು ಹೇಳಿದ್ದಾರೆ. ಉತ್ತರಾಖಂಡದ ನೈನಿತಾಲ್ ನಲ್ಲಿರುವ ಕುಮೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು UGCಗೆ ಪತ್ರ ಬರೆದು, ಈ ನಿಯಮಗಳು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿವೆ ಎಂದು ಹೇಳಿದೆ. ವಿಶ್ವವಿದ್ಯಾಲಯದ ಉಪಕುಲಪತಿಗಳ ಮೂಲಕ ಸಲ್ಲಿಸಿದ ತಮ್ಮ ಪತ್ರದಲ್ಲಿ, ವಿದ್ಯಾರ್ಥಿ ಸಂಘವು ಈ ನಿಯಮಗಳು ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ “ಸಮತೋಲನ”ವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ ಎಂದು ತಿಳಿಸಿದೆ. ಇವು “ಭಯ ಮತ್ತು ಅಪನಂಬಿಕೆಯ” ವಾತಾವರಣವನ್ನು ಸೃಷ್ಟಿಸಬಹುದು; ಇದರಿಂದ ನಿಯಮಗಳ “ದುರುಪಯೋಗ”ಕ್ಕೆ ದಾರಿ ಮಾಡಿಕೊಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ►ಬರೇಲಿ ನಗರ ಮ್ಯಾಜಿಸ್ಟ್ರೇಟ್ ರಾಜೀನಾಮೆ UGC ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು ಹಾಗೂ ಇತರ ಸರ್ಕಾರಿ ಕ್ರಮಗಳು ಜಾತಿ ಆಧಾರಿತ ಅಶಾಂತಿಯನ್ನು ಹೆಚ್ಚಿಸಬಹುದು ಎಂದು ಹೇಳಿ, ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. UGCಯ ಹೊಸ ನಿಯಮಗಳನ್ನು “ಕರಾಳ ಕಾನೂನು” ಎಂದು ಬಣ್ಣಿಸಿದ ಅಗ್ನಿಹೋತ್ರಿ, ಅವು ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿವೆ ಎಂದು ಆರೋಪಿಸಿ, ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ರಾಜೀನಾಮೆ ನಂತರ ಉತ್ತರ ಪ್ರದೇಶ ಸರ್ಕಾರ ಅಲಂಕಾರ್ ಅಗ್ನಿಹೋತ್ರಿ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ. ಜನವರಿ 26ರಂದು ರಾಜ್ಯ ಸರ್ಕಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ, ಬರೇಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಲ್ಲಿಸಿದ ವರದಿಯ ಆಧಾರದಲ್ಲಿ ಅಗ್ನಿಹೋತ್ರಿ ಅವರು ಪ್ರಾಥಮಿಕವಾಗಿ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ, ತನಿಖೆ ನಡೆಸಲು ಬರೇಲಿ ವಿಭಾಗದ ಆಯುಕ್ತರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ►ಮೋದಿಗೆ ಮತ ನೀಡಲ್ಲ’ Residents of Rajput dominated Salawa village Uttar Pradesh's Meerut pledge to not vote for Modi government till the UGC regulation 2026 is withdrawn. pic.twitter.com/PTv1BszIhX — Piyush Rai (@Benarasiyaa) January 27, 2026 ಮೀರತ್ ಜಿಲ್ಲೆಯ ರಜಪೂತ ಪ್ರಾಬಲ್ಯದ ಪ್ರದೇಶವಾದ ಸಲಾವ ಗ್ರಾಮದ ನಿವಾಸಿಗಳು, UGC ಸಮಾನತೆಯ ನಿಯಮಗಳು–2026 ಅನ್ನು ಹಿಂತೆಗೆದುಕೊಳ್ಳುವವರೆಗೆ ಮೋದಿ ನೇತೃತ್ವದ ಸರ್ಕಾರಕ್ಕೆ ಮತ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಗ್ರಾಮಸ್ಥರು ಕೈಗಳನ್ನು ಮುಂದೆ ಚಾಚಿ, UGC ನಿಯಮಗಳ ಕುರಿತು ತಮ್ಮ ಕಳವಳಗಳನ್ನು ಪರಿಹರಿಸದ ಹೊರತು ಪ್ರಸ್ತುತ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಸಾಮೂಹಿಕವಾಗಿ ಪ್ರತಿಜ್ಞೆ ಮಾಡುತ್ತಿರುವುದು ಕಾಣುತ್ತದೆ. ಆದರೆ ಈ ಪ್ರತಿಜ್ಞೆಯ ಕುರಿತು ಸ್ಥಳೀಯ ಆಡಳಿತ ಅಥವಾ ರಾಜಕೀಯ ಪ್ರತಿನಿಧಿಗಳಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ►ಸರ್ಕಾರ ಏನು ಹೇಳಿದೆ? ಹೊಸಾಗಿ ಅಧಿಸೂಚಿಸಲಾದ UGC ನಿಯಮಗಳ ಕುರಿತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ಹಾಗೂ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ನಿಯಮಗಳನ್ನು ಸಂವಿಧಾನಿಕ ಚೌಕಟ್ಟಿನೊಳಗೆ ಹಾಗೂ ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ. “ಈ ಸಂಪೂರ್ಣ ಪ್ರಕ್ರಿಯೆ ಸಂವಿಧಾನದ ಚೌಕಟ್ಟಿನೊಳಗೇ ಇದೆ ಮತ್ತು ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ. ಯಾರೂ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಪ್ರಧಾನ್ ಹೇಳಿದ್ದಾರೆ.
ಕುಂದಾಪುರ| ಗ್ರಾಪಂ ಸದಸ್ಯನ ವಿರುದ್ಧ ದಲಿತ ದೌರ್ಜನ್ಯ ಆರೋಪ; ಪ್ರಕರಣ ದಾಖಲು
ಕುಂದಾಪುರ, ಜ.27: ದಲಿತ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕಂದಾವರ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಶೇರೆಗಾರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಶಿಷ್ಠ ಪಂಗಡಕ್ಕೆ ಸೇರಿದ ಕಂದಾವರ ಗ್ರಾಮದ ಉಳ್ಳೂರು ಜನತಾ ಕಾಲೋನಿಯ ಚಂದ್ರಶೇಖರ ಎಂಬವರ ಅಜ್ಜಿ ಮಿಣುಕು ಎಂಬವರು ದರ್ಕಾಸ್ ಸ್ಥಳದಲ್ಲಿ ವಾಸವಾಗಿದ್ದು, ಜ.26ರಂದು ರಾಮಚಂದ್ರ ಶೇರೆಗಾರ, ಚಂದ್ರಶೇಖರ್ ಅವರ ಒಪ್ಪಿಗೆ ಇಲ್ಲದೆ ಅವರ ಜಾಗದಲ್ಲಿ ಬಲತ್ಕಾರವಾಗಿ ವಿದ್ಯುತ್ ಕಂಬವನ್ನು ಅಳವಡಿಸುವ ಪ್ರಯತ್ನ ಪಟ್ಟಿದ್ದರು. ಅದನ್ನು ಚಂದ್ರಶೇಖರ್ ವಿರೋಧಿಸಿದಾಗ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ರಾಮಚಂದ್ರ ಶೇರೆಗಾರ ನಡೆದು ಕೊಂಡ ರೀತಿಯು ದಲಿತ ದೌರ್ಜನ್ಯ ಕಾಯಿದೆಗೆ ಒಳಪಟ್ಟಿರುವುದರಿಂದ ಅವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವನ್ನು ದಾಖಲಾಗಿದೆ.
ಇಬ್ಬರು ಮಾಜಿ ಸಿಎಂಗಳಿಗೆ ಮರಣೋತ್ತರ ಪದ್ಮ ಪ್ರಶಸ್ತಿ : ವಿಪಕ್ಷಗಳ ತಕರಾರಿಗೆ ಇದೇನಾ ಅಸಲಿ ಕಾರಣ?
Padma Awrads 2026 : 2026ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದಕ್ಕೆ ವಿಪಕ್ಷಗಳು, ಬಿಜೆಪಿ ವಿರುದ್ದ ಗರಂ ಆಗಿದೆ. ಇದು ಅವರ ಸಾಧನೆಗೆ ಸಂದ ಫಲವೋ, ಅಥವಾ ಇದರಲ್ಲೂ ರಾಜಕೀಯವೋ ಎಂದು ಕಾಂಗ್ರೆಸ್ ಆದಿಯಾಗಿ, ವಿರೋಧ ಪಕ್ಷಗಳು ಶಂಕೆ ವ್ಯಕ್ತ ಪಡಿಸಿದೆ.
ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ 14 ದಿನ ನ್ಯಾಯಾಂಗ ಬಂಧನ
ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದ ಉದ್ಯಮಿಗೆ ಷರತ್ತುಬದ್ದ ಜಾಮೀನು
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಎಂಟ್ರಿ - ಎಕ್ಸಿಟ್ ಟೋಲ್ ಕಾಮಗಾರಿ ಆರಂಭ; 700 ಕೋಟಿ ರೂ. ಅನುದಾನ ಬಿಡುಗಡೆ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ನಿರ್ಮಾಣ ಕಾಮಗಾರಿ 15 ದಿನದೊಳಗೆ ಆರಂಭವಾಗಲಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಟಾಯ್ಸ್ ಪಾರ್ಕ್, ಸಿಲ್ಕ್ ಮ್ಯೂಸಿಯಂ ನಿರ್ಮಾಣವಾಗಲಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಎನ್ಎಂಸಿ ಅನುಮತಿ ಸಿಗುವ ಬಗ್ಗೆ ಸಂಸದರು ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಧಾರಣೆ ತರಲಾಗಿದೆ.
Donald Trump: ಡೊನಾಲ್ಡ್ ಟ್ರಂಪ್ ಹಾಗೂ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಭೇಟಿ ಗ್ಯಾರಂಟಿ, ಕಾರಣ ಇಲ್ಲಿದೆ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರವಾದ ನಿರ್ಧಾರಗಳ ಮೂಲಕ ಭಾರಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ನೂರಾರು ವರ್ಷಗಳಿಂದ ಅಮೆರಿಕದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳು ಕೂಡ ಅಮೆರಿಕ ವಿರುದ್ಧ ಕೋಪಗೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗಿದ್ದಾಗ ಸಾಲು ಸಾಲು ದೇಶಗಳು ಟ್ರಂಪ್ ಅವರ ನಿರ್ಧಾರಗಳನ್ನು ವಿರೋಧ ಮಾಡುತ್ತಾ ಇದ್ದು, ಜಾಗತಿಕ ಮಟ್ಟದಲ್ಲಿ ಇದು
ಹೊಸದಿಲ್ಲಿ,ಜ.27: ಬುಧವಾರ ಬಜೆಟ್ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಸರ್ವಪಕ್ಷ ಸಭೆ ನಡೆದಿದ್ದು, ಸದನದ ಕಾರ್ಯನಿರ್ವಹಣೆಯನ್ನು ಸುಗಮವಾಗಿ ನಡೆಸುವ ಕುರಿತು ಗಾಢವಾಗಿ ಚರ್ಚಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಹಿರಿಯ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹಾಗೂ ಪ್ರತಿಪಕ್ಷಗಳ ಹಲವಾರು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರು, ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳ ಕುರಿತು ಸರಕಾರವು ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಳ್ಳದೇ ಇರುವುದರಿಂದ ಪ್ರತಿಪಕ್ಷಗಳ ಅಸಮಾಧಾನಗೊಂಡಿವೆ ಎಂದರು. ಆದರೆ ಸಂಸತ್ ಕಲಾಪದ ಕಾರ್ಯಸೂಚಿಯನ್ನು ಆನಂತರ ಪ್ರಸಾರ ಮಾಡಲಾಗುವುದೆಂದು ಸಚಿವರುಗಳು ತಿಳಿಸಿದ್ದಾರೆ. ಆದರೆ ಈ ವಿವರಣೆಯು ಅತೃಪ್ತಿಕರವಾಗಿದೆ ಮತ್ತು ಸರಕಾರವು ಪಾರದರ್ಶಕತೆಯ ಕೊರತೆಯನ್ನು ಹೊಂದಿದೆ ಎಂದು ಆರೋಪಿಸಿದರು. ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು ಸುದ್ದಿಗಾರರ ಜೊತೆ ಮಾತನಾಡುತ್ತಾ, ಎಂನರೇಗಾವನ್ನು ತೆರವುಗೊಳಿಸಲಿರುವ ನೂತನವಾಗಿ ಜಾರಿಗೊಳಿಸಲಾದ ವಿಬಿ-ಜಿರಾಮ್-ಜಿ ಕಾಯ್ದೆಯನ್ನು ಸರಕಾರವು ಹಿಂತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು. ಈ ಅಧಿವೇಶನದಲ್ಲಿ ಬಜೆಟ್ಗೆ ಸಂಬಂಧಿಸಿದ ವಿಷಯಗಳಿಗಷ್ಟೇ ಸರಕಾರವು ಪ್ರಮುಖ ಆದ್ಯತೆಯನ್ನು ನೀಡಲಿದೆ ಎಂದು ಹೇಳಿದ ಅವರು, ಸಂಸತ್ನ ಸುಗಮ ನಿರ್ವಹಣೆಗಾಗಿ ಸಹಕರಿಸುವಂತೆ ರಿಜಿಜು ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿದರು. ನೂತನ ಯುಜಿಸಿ ಮಾರ್ಗದರ್ಶಿ ಸೂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಚರ್ಚೆಯಾಗಬೇಕೆಂಬ ಕುರಿತ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸಿದ ಅವರು, ಸರಕಾರವು ಚರ್ಚೆಗೆ ಮುಕ್ತವಾಗಿದೆ. ಆದರೆ ಬಜೆಟ್ ಅನ್ನು ಅಂಗೀಕಾರಗೊಳ್ಳುವಂತೆ ಮಾಡುವ ಸಾಂವಿಧಾನಿಕ ಹೊಣೆಗಾರಿಕೆಯೂ ಪ್ರತಿಪಕ್ಷಗಳಿಗಿದೆ ಎಂದರು. ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಸಂಸತ್ನಲ್ಲಿ ಚರ್ಚೆಯಾಗಬೇಕೆಂದು ತನ್ನ ಪಕ್ಷವು ಸರ್ವಪಕ್ಷ ಸಭೆಯಲ್ಲಿ ಬಲವಾಗಿ ಒತ್ತಾಯಿಸಿರುವುದಾಗಿ ಟಿಎಂಸಿ ಸಂಸದೆ ಸಾಗರಿಕಾ ಘೋಷ್ ತಿಳಿಸಿದ್ದಾರೆ. ಎಸ್ಐಆರ್ನ ಲೋಪಗಳಿಂದಾಗಿ ಪ.ಬಂಗಾಳದಲ್ಲಿ 10.50 ಲಕ್ಷಕ್ಕೂ ಆಧಿಕ ಮಂದಿ ಬಾಧಿತರಾಗಿದ್ದಾರೆಂದು ಅವರು ಆಪಾದಿಸಿದರು. ಎಸ್ಐಆರ್ ಬಗ್ಗೆ ಸಂಸತ್ನಲ್ಲಿ ಗಂಭೀರ ಚರ್ಚೆಯಾಗಬೇಕೆಂದು ಐಯುಎಂಎಲ್ ಸಂಸದೆ ಇ.ಟಿ. ಮುಹಮ್ಮದ್ ಬಶೀರ್ ಆಗ್ರಹಿಸಿದ್ದಾರೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರಕಾರಗಳಿಗೆ ಬಿಡುಗಡೆಗೊಳ್ಳಬೇಕಾಗಿರುವ ನಿಧಿಯನ್ನು ಕೇಂದ್ರ ಸರಕಾರ ತಡೆಹಿಡಿಯುತ್ತಿದೆಯೆಂದು ಅವರು ಆಪಾದಿಸಿದರು. ನಾಳೆ ಜಂಟಿ ಅಧಿವೇಶನ, ಫೆ 1ರಂದು ಕೇಂದ್ರ ಬಜೆಟ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಲೋಕಸಭೆ ಹಾಗೂ ರಾಜ್ಯಸಭಾದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಜನವರಿ 29ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಹಾಗೂ ಫೆಬ್ರವರಿ 1ರಂದು ರವಿವಾರ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಮಂಡಿಸಲಿರುವ ಬಜೆಟ್ ಇದಾಗಲಿದೆ. ಮೊದಲನೆ ಹಂತದ ಬಜೆಟ್ ಅಧಿವೇಶನವು ಫೆಬ್ರವರಿ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತ ವಂದನಾ ನಿರ್ಣಯವನ್ನು ಚರ್ಚೆಗಿಡಲಾಗುವುದು ಹಾಗೂ ನಿರ್ಣಯವನ್ನು ಅಂಗೀಕರಿಸಲಾಗುವುದು. ಬಿಡುವಿನ ಬಳಿಕ ಮಾರ್ಚ್ 9ರಂದು ಸಂಸತ್ ಅಧಿವೇಶನ ಪುನಾರಂಭಗೊಳ್ಳಲಿದ್ದು, ಎಪ್ರಿಲ್ 2ರಂದು ಸಮಾರೋಪಗೊಳ್ಳಲಿದೆ.
ಜೈಲಿನಲ್ಲಿ ಹದಗೆಟ್ಟ ಇಮ್ರಾನ್ಖಾನ್ ಆರೋಗ್ಯ : ವರದಿ
ಲಾಹೋರ್, ಜ.27: ಅಡಿಯಾಲಾ ಜೈಲಿನಲ್ಲಿ ಏಕಾಂತ ಬಂಧನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಕಣ್ಣಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿರುವುದಾಗಿ ಸಿಎನ್ಎನ್-ನ್ಯೂಸ್18 ವರದಿ ಮಾಡಿದೆ. ಖಾನ್ ಅವರನ್ನು 2025ರ ಡಿಸೆಂಬರ್ 2ರಿಂದ ಪ್ರತ್ಯೇಕವಾಗಿ ಇರಿಸಲಾಗಿದ್ದು ಸುಮಾರು 55 ದಿನಗಳಿಂದ ಕುಟುಂಬದ ಸದಸ್ಯರು ಅಥವಾ ವಕೀಲರೊಂದಿಗೆ ಸಂಪರ್ಕಕ್ಕೆ ಅವಕಾಶ ನೀಡಲಾಗಿಲ್ಲ. ಇಮ್ರಾನ್ ಅವರು ಪ್ರಸ್ತುತ ತೀವ್ರ ಕಣ್ಣಿನ ಸೋಂಕು ಮತ್ತು ಅಲರ್ಜಿಯಿಂದ ಬಳಲುತ್ತಿದ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ದೃಷ್ಠಿ ಕುಂಠಿತಗೊಳ್ಳುವ ಅಪಾಯವಿದೆ ಎಂದು ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್(ಪಿಐಎಂಎಸ್)ನ ವೈದ್ಯಕೀಯ ತಂಡ ಸೂಚಿಸಿದೆ ಎಂದು ವರದಿಯು ಹೇಳಿದೆ.
ಇಬ್ಬನಿಯ ಕಾಟವಿದ್ದರೂ ವರುಣ್ `ಚಕ್ರವರ್ತಿ'! ಯಾಕೆ ಈತನೇ ಗೇಮ್ ಚೇಂಜರ್ ಎಂದು ವಿವರಿಸಿದ್ದಾರೆ ಅನಿಲ್ ಕುಂಬ್ಳೆ!
Anil Kumble On Varun Chakravarthy- ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಇಬ್ಬನಿಯ ವಾತಾವರಣದಲ್ಲಿ ಬೌಲಿಂಗ್ ನಡೆಸುವುದು ಸವಾಲಿನ ಸಂಗತಿಯಾಗಲಿದೆ. ವಿಶ್ವದ ಘಟಾನುಘಟಿ ಬೌಲರ್ ಗಳೂ ಬ್ಯಾಟರ್ ಗಳಿಂದ ಹೊಡೆಸಿಕೊಳ್ಳುವುದು ಖಚಿತ. ಹೀಗಿರುವಾಗ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮಾತ್ರ ಅಂತಹ ವಾತಾವರಣದಲ್ಲೂ ಪರಿಣಾಮಕಾರಿ ಬೌಲಿಂಗ್ ನಡೆಸಬಲ್ಲರು ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ. ಜೊತೆಗೆ ಭಾರತ ತಂಡ ಸತತ 2ನೇ ಬಾರಿಗೆ ಕಪ್ ಗೆಲ್ಲುವ ಅಪೂರ್ವ ಅವಕಾಶ ಹೊಂದಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ
ಕಲಬುರಗಿ : 12ನೇ ದ್ವಿಪಕ್ಷೀಯ ವೇತನ ಒಪ್ಪಂದದಂತೆ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನದ ಕೆಲಸ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಗ್ರಾಮೀಣ ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆಯ ವತಿಯಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ, ಕುಸನೂರ ರಸ್ತೆ ಆವರಣದಲ್ಲಿ ಮಂಗಳವಾರ ಮುಷ್ಕರ ನಡೆಸಲಾಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಶಿವಕುಮಾರ್ ಬಗಲೂರ, 2024ರ ಮಾರ್ಚ್ 8ರಂದು ಐಬಿಎ (IBA) ಹಾಗೂ ಯುಎಫ್ಬಿಯು (UFBU) ನಡುವೆ 12ನೇ ದ್ವಿಪಕ್ಷೀಯ ವೇತನ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅದರಂತೆ ವಾರಕ್ಕೆ ಐದು ದಿನದ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಒಂದೂವರೆ ವರ್ಷ ಕಳೆದರೂ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಆರ್ಬಿಐ, ನಾಬಾರ್ಡ್, ಎಲ್ಐಸಿ, ಜಿಐಸಿ, ಸೆಬಿ ಹಾಗೂ ಷೇರುಪೇಟೆಗಳಲ್ಲಿ ವಾರಕ್ಕೆ ಐದು ದಿನದ ಕೆಲಸ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಬ್ಯಾಂಕ್ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ತೋರಲಾಗುತ್ತಿದೆ, ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಆದಷ್ಟು ಬೇಗ ಬ್ಯಾಂಕಿಂಗ್ ವಲಯಕ್ಕೂ ವಾರಕ್ಕೆ ಐದು ದಿನದ ಕೆಲಸ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್ಸಿ–ಎಸ್ಟಿ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಹುಲ್ ಹರವಾಳ, ಖಜಾಂಚಿ ಕಿರಣ ಭಾವಿಮನಿ, ರಾಕೇಶ್, ಭೀಮಪ್ಪ, ಅಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷ ಸಿದ್ದಣ್ಣ, ದತ್ತಾತ್ರೇಯ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಶಿವಾನಂದ, ಅಭಿಷೇಕ, ಅರುಣಕುಮಾರ್, ಕಿರಣ ರೆಶ್ಮಿ, ಜ್ಯೋತಿ ವಾಲಿಶೆಟ್ಟಿ, ಹೇಮಾ ಸಕ್ರಿ, ಅಧಿಕಾರಿಗಳ ಜಿಲ್ಲಾ ಅಧ್ಯಕ್ಷ ಸಚಿನ್ ತೆಗ್ಗಿನ, ಕಾರ್ಯದರ್ಶಿ ಶ್ರೀನಿವಾಸ್, ನೌಕರರ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾಧ್ಯಕ್ಷ ಆನಂದ, ಹನುಮಾನ್ ಸಿಂಗ್, ಶಿವಲಿಂಗ ಸೇರಿದಂತೆ ಅನೇಕ ನೌಕರರು ಭಾಗವಹಿಸಿದ್ದರು. ಇದಲ್ಲದೆ ನಿವೃತ್ತ ನೌಕರರಾದ ಎಸ್.ಎಸ್. ಕುಲಕರ್ಣಿ, ರಾಜೇಂದ್ರ ಮದಕುಂಟಿ, ರಾಜಶೇಖರ ಬಬಲಾದಕರ್ ಸೇರಿದಂತೆ ನೂರಾರು ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಅತ್ತೂರು ವಾರ್ಷಿಕ ಮಹೋತ್ಸವ; 10 ಬಲಿಪೂಜೆಗಳು
ಕಾರ್ಕಳ, ಜ.27: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನಡೆದವು. ದಿನದ ಪ್ರಮುಖ ಹಾಗೂ ಆಢಂಬರದ ಸಾಂಭ್ರಮಿಕ ಬಲಿಪೂಜೆಯನ್ನು ಅಲಹಬಾದ್ ಧರ್ಮಪ್ರಾಂತ್ಯದ ಅತಿ ವಂ.ಲುವಿಸ್ ಮಸ್ಕರೇನ್ಹಸ್ ಅರ್ಪಿಸಿ, ನಾವೆಲ್ಲರು ಬಡವೆರೆಡೆಗೆ ನಮ್ಮ ಏಕಾಗ್ರತೆಯನ್ನು ನೀಡಬೇಕು. ಅವರೆಲ್ಲರು ಕ್ರಿಸ್ತನ ಪ್ರತಿರೂಪ. ಬಡವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದು ಸಂದೇಶ ನೀಡಿದರು. ವಿವಿಧ ಯಾಜಕರು ಸಹಭಾಗಿಯಾಗಿ, ಭಕ್ತಾದಿಗಳ ಸಮ್ಮುಖದಲ್ಲಿ ದಿವ್ಯ ಬಲಿಪೂಜೆ, ಆರಾಧನೆ ಮತ್ತು ವಿವಿಧ ಭಕ್ತಿಕಾರ್ಯಗಳನ್ನು ನೆರವೇರಿಸಿದರು. ವಿವಿಧ ಧರ್ಮದ ಭಕ್ತರು ಕೂಡ ಮಹೋತ್ಸವದಲ್ಲಿ ಭಾಗವಹಿಸಿದ್ದು, ಭಕ್ತರು ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳನ್ನು ಕಂಡು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥವನ್ನು ಸ್ವೀಕರಿಸಿದರು. ಮಹೋತ್ಸವಕ್ಕೆ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು, ಭಕ್ತಾದಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಪ್ರಮುಖರಾದ ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹ, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತೆಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದರು.
ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್
ಅಮೆರಿಕದಲ್ಲಿ ವೃದ್ಧರಿಂದ 6.6 ಮಿಲಿಯನ್ ಹಣ, ಚಿನ್ನ ದೋಚಿದ್ದ ಭಾರತೀಯ ಯುವಕನ ಬಂಧನ; ವಂಚನೆ ಯೋಜನೆ ಕೇಳಿ ದಂಗಾದ FBI!
ಹಾಲು ಕುಡಿದ ಅಭ್ಯಾಸ ಮಾಡು ಎಂದು ಪೋಷಕರು ತಮ್ಮ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದರೆ, ಸುಪುತ್ರ ದುಷ್ಟರ ಸಂಗಕ್ಕೆ ಬಿದ್ದು ದುಷ್ಟ ಕೆಲಸಗಳನ್ನು ಮಾಡುತ್ತಾ ಕಡೆಗೆ ಎಫ್ಬಿಐ ಅತಿಥಿಯಾದ ಕಥೆ ಇದು. ಹೌದು, ಅಮೆರಿಕದಲ್ಲಿ ವೃದ್ಧರಿಂದ 6.6 ಮಿಲಿಯನ್ ಹಣ ಮತ್ತು ಚಿನ್ನವನ್ನು ಕದ್ದ ಆರೋಪದ ಮೇಲೆ, 23 ವರ್ಷದ ಅಥರ್ವ ಶೈಲೇಶ್ ಸಥವಾನೆ ಎಂಬ ಭಾರತೀಯ ಮೂಲಕದ ಯುವಕನಿಗೆ, 18 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ರಾಜ್ಯ ವಕೀಲರ ಪರಿಷತ್ಗಳಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಕೋರಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ,ಜ.27: ಸರ್ವೋಚ್ಚ ನ್ಯಾಯಾಲಯವು ರಾಜ್ಯ ವಕೀಲರ ಪರಿಷತ್ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಮೀಸಲಾತಿಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮಂಗಳವಾರ ನಿರಾಕರಿಸಿದೆ. ರಾಜ್ಯ ವಕೀಲರ ಪರಿಷತ್ಗಳಿಗೆ ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಬಳಿಕ ಎಸ್ಸಿ/ಎಸ್ಟಿಗಳಿಗೆ ಪ್ರಾತಿನಿಧ್ಯವನ್ನು ಕೋರಿ ಅರ್ಜಿಯನ್ನು ತಡವಾಗಿ ಸಲ್ಲಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜಾಯಮಾಲ್ಯ ಬಾಗ್ಚಿ ಅವರ ಪೀಠವು ಬೆಟ್ಟು ಮಾಡಿತು. ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ರಾಜ್ಯ ವಕೀಲರ ಪರಿಷತ್ಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವನ್ನು ತಮ್ಮ ವಾದಗಳಿಗೆ ಆಧಾರವಾಗಿಸಿಕೊಂಡಿದ್ದರು. ರಾಮಕುಮಾರ್ ಗೌತಮ ಸೇರಿದಂತೆ ಅರ್ಜಿದಾರರ ಪರ ವಕೀಲರು 1951ರ ವಕೀಲರ ಕಾಯ್ದೆಯು ಮಹಿಳಾ ಮೀಸಲಾತಿ ಅಥವಾ ಪ್ರಾತಿನಿಧ್ಯ ವಿಷಯದಲ್ಲಿ ಮೌನವಾಗಿದ್ದರೂ ರಾಜ್ಯ ವಕೀಲರ ಪರಿಷತ್ಗಳಲ್ಲಿ ಮಹಿಳಾ ನ್ಯಾಯವಾದಿಗಳ ಪ್ರಾತಿನಿಧ್ಯದ ಕುರಿತು ಆದೇಶಗಳನ್ನು ಹೊರಡಿಸಲಾಗಿದೆ ಎಂದು ವಾದಿಸಿದರು. ‘ನ್ಯಾಯಾಂಗದಲ್ಲಿ, ವಕೀಲರಲ್ಲಿ, ಸಂಸತ್ತಿನಲ್ಲಿ...ನೀವು ಎಲ್ಲೆಡೆಯೂ ಇದ್ದೀರಿ. ವಕೀಲರ ಪರಿಷತ್ 1961ರಿಂದಲೂ ಅಸ್ತಿತ್ವದಲ್ಲಿದೆ ಮತ್ತು ನೀವು ಏನನ್ನೂ ಮಾಡಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಮಹಿಳೆಯರಿಗಾಗಿ ಏನೋ ಒಂದನ್ನು ಮಾಡಿದೆ ಎಂಬ ಕಾರಣಕ್ಕಾಗಿ ನೀವು ಈಗ ಬಂದಿದ್ದೀರಿ! ನೀವು ಮೀಸಲಾತಿಯನ್ನು ಹರಿವಾಣದಲ್ಲಿಟ್ಟು ನೀಡಬೇಕು ಎಂದು ಬಯಸಿದ್ದೀರಿ’ ಎಂದು ನ್ಯಾ.ಸೂರ್ಯಕಾಂತ್ ಹೇಳಿದರು. ಹಿಂದಿನ ನಿರ್ದೇಶನಗಳ ವ್ಯಾಪ್ತಿಯನ್ನು ಸ್ಪಷ್ಟಪಡಿಸಿದ ಅವರು, ಪೀಠವು ಮಹಿಳೆಯರಿಗೆ ಮೀಸಲಾತಿಯನ್ನು ಮಂಜೂರು ಮಾಡಿಲ್ಲ, ಆದರೆ ದೀರ್ಘಕಾಲದ ಪ್ರಾತಿನಿಧ್ಯ ಕೊರತೆಯನ್ನು ಪರಿಹರಿಸಲು ಅವರ ‘ಪ್ರಾತಿನಿಧ್ಯ’ವನ್ನು ಮಾತ್ರ ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ನಿರ್ಮಾಣ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ಲೇಔಟ್ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನಕಲಿ ದಾಖಲೆ ನೀಡಿದವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಖಾಲಿ ಸರ್ಕಾರಿ ಜಮೀನುಗಳಿಗೆ ಬೇಲಿ ಹಾಕಲು ಸೂಚನೆ ನೀಡಲಾಗಿದೆ.
ಕಲಬುರಗಿ | ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಬಗ್ಗೆ ಜಾಗೃತಿ ಅಗತ್ಯ : ಡಾ.ಶಂಕ್ರಪ್ಪ ಮೈಲಾರಿ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಹೊಸದಿಲ್ಲಿ,ಜ.27: ಆ್ಯಸಿಡ್ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಇಂತಹ ಪ್ರಕರಣಗಳ ಕುರಿತು ಹಲವಾರು ಮಾಹಿತಿಗಳನ್ನು ಒದಗಿಸುವಂತೆ ಮಂಗಳವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಇಂತಹ ಪ್ರಕರಣಗಳ ಸಂಖ್ಯೆ, ನ್ಯಾಯಾಲಯಗಳಲ್ಲಿ ಅವುಗಳ ಸ್ಥಿತಿಗತಿ ಮತ್ತು ಸಂತ್ರಸ್ತರಿಗೆ ನೆರವಾಗಲು ಪುನರ್ವಸತಿ ಕ್ರಮಗಳ ಕುರಿತು ವರ್ಷವಾರು ವಿವರಗಳು ಇವುಗಳಲ್ಲಿ ಸೇರಿವೆ. ವಿಚಾರಣಾ ನ್ಯಾಯಾಲಯಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ,ಎಷ್ಟು ಪ್ರಕರಣಗಳು ಇತ್ಯರ್ಥಗೊಂಡಿವೆ ಅಥವಾ ಬಾಕಿಯಿವೆ ಎಂಬ ಮಾಹಿತಿಯನ್ನು ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜಾಯಮಾಲ್ಯ ಬಾಗ್ಚಿ ಅವರ ಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು. ನಾಲ್ಕು ವಾರಗಳಲ್ಲಿ ವಿವರಗಳನ್ನು ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ ಪೀಠವು, ಇಂತಹ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯಗಳು ಸೇರಿದಂತೆ ಮೇಲ್ಮನವಿ ನ್ಯಾಯಾಲಯಗಳಲ್ಲಿ ಎಷ್ಟು ಮೇಲ್ಮನವಿಗಳು ಸಲ್ಲಿಕೆಯಾಗಿವೆ ಎಂಬ ಬಗ್ಗೆ ಮಾಹಿತಿಯನ್ನು ಒದಗಿಸುವಂತೆಯೂ ಕೇಳಿದೆ. ಪ್ರತಿಯೊಬ್ಬ ಸಂತ್ರಸ್ತೆಯ ಸಂಕ್ಷಿಪ್ತ ವಿವರಗಳು, ವಿದ್ಯಾರ್ಹತೆ , ಉದ್ಯೋಗ ಮತ್ತು ವೈವಾಹಿಕ ಸ್ಥಿತಿಗತಿ, ವೈದ್ಯಕೀಯ ಚಿಕಿತ್ಸೆ ಮತ್ತು ಭರಿಸಲಾದ ಅಥವಾ ಭರಿಸಬೇಕಿರುವ ವೆಚ್ಚಗಳ ಕುರಿತು ಮಾಹಿತಿ ಹಾಗೂ ಇಂತಹ ಸಂತ್ರಸ್ತರಿಗಾಗಿ ಪುನರ್ವಸತಿ ಯೋಜನೆಯ ಕುರಿತು ವಿವರಗಳನ್ನು ಒದಗಿಸುವಂತೆಯೂ ಪೀಠವು ಸೂಚಿಸಿದೆ. ಆ್ಯಸಿಡ್ ಸೇವಿಸುವಂತೆ ಸಂತ್ರಸ್ತರನ್ನು ಬಲವಂತಗೊಳಿಸಿದ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆಯೂ ಪೀಠವು ತಿಳಿಸಿದೆ. ಆ್ಯಸಿಡ್ ದಾಳಿಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ಕಾನೂನಿನಲ್ಲಿ ಬದಲಾವಣೆಗಳನ್ನು ತರುವುದನ್ನು ಪರಿಗಣಿಸುವಂತೆ ನ್ಯಾ.ಸೂರ್ಯಕಾಂತ್ ಅವರು ಕೇಂದ್ರಕ್ಕೆ ಸೂಚಿಸಿದರು. ಪೀಠವು ಆ್ಯಸಿಡ್ ದಾಳಿ ಸಂತ್ರಸ್ತೆ ಶಾಹೀನ್ ಮಲಿಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಬಲವಂತದಿಂದ ಆ್ಯಸಿಡ್ ಸೇವನೆಯಿಂದ ಆಂತರಿಕ ಅಂಗಾಂಗಗಳಿಗೆ ಮಾರಣಾಂತಿಕ ಹಾನಿಗೊಳಗಾದ ಸಂತ್ರಸ್ತರಿಗೆ ಸಾಕಷ್ಟು ಪರಿಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಇತರ ಸೌಲಭ್ಯಗಳು ಸಿಗುವುದನ್ನು ಖಚಿತಪಡಿಸಲು ಕಾನೂನಿನಡಿ ಅಂಗವಿಕಲ ವ್ಯಕ್ತಿಗಳ ವ್ಯಾಖ್ಯಾನವನ್ನು ವಿಸ್ತರಿಸುವಂತೆ ಅವರು ಕೋರಿದ್ದಾರೆ.
ಕಲಬುರಗಿ | ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ
ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ ಮತ್ತು ವೈಯಕ್ತಿಕ ಜವಾಬ್ದಾರಿಯತ್ತ ದಿಟ್ಟ ಹೆಜ್ಜೆ ಇಡುವ ಅಗತ್ಯವಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ಅವರು ಹೇಳಿದರು. ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಮಂಗಳವಾರ ಕಲಬುರಗಿ ನಗರ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ “ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿ”ಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸ್ ಸಿಬ್ಬಂದಿಯೇ ಮೊದಲು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಮಾಜಕ್ಕೆ ಮಾದರಿಯಾಗಬೇಕು. 2026ನೇ ವರ್ಷ ರಸ್ತೆ ಸುರಕ್ಷತೆಯ ಚಳವಳಿ ಹಾಗೂ ಕ್ರಿಯೆಯ ವರ್ಷವಾಗಬೇಕು ಎಂದು ಅವರು ಘೋಷಿಸಿದರು. ಕಾನೂನು ಜಾರಿಗೆ ತರುವ ಜವಾಬ್ದಾರಿ ಮಾತ್ರವಲ್ಲ, ಕಾನೂನನ್ನು ಗೌರವಿಸಿ ಪಾಲಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಅಮೂಲ್ಯ ಜೀವಗಳು ಕಳೆದುಹೋಗುತ್ತಿದ್ದು, ಅವರ ಮೇಲೆ ಅವಲಂಬಿತ ಕುಟುಂಬಗಳು ಅನುಭವಿಸುವ ದುಃಖ ನಮ್ಮ ಕಣ್ಣೆದುರಿಗೇ ಇದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ನಮಗೂ ಅದೇ ಗತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಹೆಲ್ಮೆಟ್ ಧರಿಸಿದರೆ ಸಾವಿನ ಸಾಧ್ಯತೆ ಶೇ.70 ರಿಂದ 80ರಷ್ಟು ಕಡಿಮೆಯಾಗುತ್ತದೆ. ನೀವು ಹೆಲ್ಮೆಟ್ ಧರಿಸಿದರೆ ಇತರರೂ ಅನುಸರಿಸುತ್ತಾರೆ. ಇದು 2026ರಲ್ಲಿ ಜನಚಳವಳಿಯಾಗಬೇಕು. ರಸ್ತೆ ಸುರಕ್ಷತೆ ಒಂದು ವಾರದ ಕಾರ್ಯಕ್ರಮವಾಗದೆ, ಪ್ರತಿದಿನದ ಬದ್ಧತೆಯಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ ಪ್ರವೀಣ ಎಚ್. ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್, ಟ್ರಾಫಿಕ್ ವಿಭಾಗ-1 ಹಾಗೂ 2ರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಯುನೈಟೆಡ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ನರವೈದ್ಯ ಹಾಗೂ ಮೆದುಳು–ಮೂಳೆ ತಜ್ಞ ಡಾ. ವಿನಯಸಾಗರ್ ಶರ್ಮಾ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆಯಿಂದ ತಲೆ ಹಾಗೂ ಮೆದುಳು ಗಾಯಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ವಿವರಿಸಿದರು. ಟ್ರಾಮಾ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ಮೊಹಮ್ಮದ್ ಅಬ್ದುಲ್ ಬಸೀರ್, ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ತೆಗೆದುಕೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬೈಕ್ ರ್ಯಾಲಿ ಜಗತ್ ವೃತ್ತ, ತಿಮ್ಮಾಪುರ ವೃತ್ತ ಮಾರ್ಗವಾಗಿ ಸಂಚರಿಸಿ ಮತ್ತೆ ಪೊಲೀಸ್ ಮೈದಾನಕ್ಕೆ ತಲುಪಿತು. ಈ ರ್ಯಾಲಿ ರಸ್ತೆ ಸುರಕ್ಷತೆ ಹಾಗೂ ಕಠಿಣ ಶಿಸ್ತು ಪಾಲನೆಯ ಕುರಿತು ಸಾರ್ವಜನಿಕರ ಗಮನ ಸೆಳೆಯಿತು.
ಕಲಬುರಗಿ | ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ದೇಶ ಸೇವೆಗೆ ಮುಂದಾಗಿ : ನಿಸಾರ್ ವಜೀರ್ ಕರೆ
ಕಲಬುರಗಿ: ಮಕ್ಕಳು ಸಮಾಜ ಮತ್ತು ದೇಶದ ಭವಿಷ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಕ್ಕಳು ಐಎಎಸ್, ಐಪಿಎಸ್ ಪರೀಕ್ಷೆ ಪಾಸಾಗುವ ಗುರಿ ಇಟ್ಟುಕೊಳ್ಳಬೇಕೆಂದು ಅಲ್ ಹಸನೈನ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಹಾಗೂ ನಿವೃತ್ತ ತಹಶೀಲ್ದಾರರಾದ ನಿಸಾರ್ ಅಹ್ಮದ್ ವಜೀರ್ ಅಭಿಪ್ರಾಯಪಟ್ಟರು. ಸೋಮವಾರ ಅಂಬಿಕಾ ನಗರದಲ್ಲಿರುವ ಅಲ್ ಹಸನೈನ್ ಪಬ್ಲಿಕ್ ಸ್ಕೂಲ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಕ್ಕಳು ಅಧುನಿಕ ಭಾರತದ ಭವಿಷ್ಯ. ವೈಚಾರಿಕವಾಗಿ ಆಲೋಚನೆಗಳು, ಪ್ರಶ್ನಿಸುವ ಮನೋಭಾವ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮುಖ್ಯ ಗುರುಗಳಾದ ಅಬ್ದುಲ್ ಮಜೀದ್, ಎಸ್.ಎಂ.ಜಿ. ಮುಹಿಯುದ್ದೀನ್, ಹಾಫಿಜ್ ಮುಹಮ್ಮದ್ ಜುಬೇರ್ ಅಹ್ಮದ್ ರಶಾದಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
ವಾಡಿ | ಸಂವಿಧಾನದಿಂದ ದೇಶದಲ್ಲಿ ಸೌಹಾರ್ದತೆ ನೆಲೆಸಿದೆ: ತಿರುಮಲೇಶ.ಕೆ
ವಾಡಿ : ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂದಾಲೋಚನೆಯಲ್ಲಿ ರೂಪುಗೊಂಡಿರುವ ಭಾರತೀಯ ಸಂವಿಧಾನದಿಂದಲೇ ದೇಶದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ತಿರುಮಲೇಶ.ಕೆ ಹೇಳಿದರು. ಪಟ್ಟಣದಲ್ಲಿ ಸೋಮವಾರ ಸಂಜೆ ಸಿದ್ದಾರ್ಥ ತರುಣ್ ಸಂಘದ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನೃತ್ಯ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ, 1950ರ ಜನವರಿ 26ರಂದು ಸಂವಿಧಾನ ಜಾರಿಯಾದ ಬಳಿಕವೇ ಭಾರತ ನಿಜಾರ್ಥದಲ್ಲಿ ಗಣರಾಜ್ಯವಾಯಿತು. ಆ ದಿನದಿಂದಲೇ ದೇಶದಲ್ಲಿ ಪ್ರಜೆಗಳ ಸರ್ಕಾರ ಜಾರಿಗೆ ಬಂದಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸ್ಸು ಸಿರೂರಕರ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿವೆ. ಇಂತಹ ಚಟುವಟಿಕೆಗಳನ್ನು ಕಳೆದ ಎರಡು-ಮೂರು ದಶಕಗಳಿಂದ ನಿರಂತರವಾಗಿ ಆಯೋಜಿಸುತ್ತಿರುವ ಸಿದ್ದಾರ್ಥ ತರುಣ್ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಂತೆಯ ಸಂಘಸೇವಕ ಸಾನಿಧ್ಯ ವಹಿಸಿದ್ದರು. ಬೌದ್ಧ ಸಮಾಜದ ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರ ಅಧ್ಯಕ್ಷತೆ ವಹಿಸಿದ್ದರು. ಜೆಸ್ಕಾಂ ಸಹಾಯಕ ಅಧಿಕಾರಿ ರಾಜಕುಮಾರ ಬಿರಾದಾರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಪೌರ ನೌಕರರ ಸಂಘದ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ, ತಾಯಪ್ಪ, ಅಬ್ದುಲ್ ಖಧೀರ್, ಸೈಯದ್ ಜಿಲಾನಿ, ಮಲ್ಲಯ್ಯ ಗುತ್ತೇದಾರ್, ಚಂದಪ್ಪ ಕಟ್ಟಿಮನಿ, ದೊಡ್ಡೇಶ ಬೆಳಿಗ್ಗೇರ, ಭೀಮ ನಾಟೇಕರ, ಗೊಲ್ಲಾಳಪ್ಪ ಬಡಿಗೇರ, ಮಹಾದೇವ ಮಾಲಗತ್ತಿ, ಭೀಮಶಾ ಮೈನಾಳಕರ, ರಮೇಶ್ ಬಡಿಗೇರ, ಅಮೃತ ಕೋಮಟೆ, ಶೇಖಪ್ಪ ಹೇರೂರ, ಗುರುಪಾದ ದೊಡ್ಡಮನಿ, ಪರಶುರಾಮ ಗಾಯಕವಾಡ, ಶರಣು ಮರೆತೂರ, ರಾಘವೇಂದ್ರ ಕೂಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತರುಣ ಸಂಘದ ಅಧ್ಯಕ್ಷ ದಿಲೀಪ ಮೈನಾಳಕರ, ಮಹೇಶ್ ರಾಜಳ್ಳಿ, ಅರ್ಜುನ ಮರತೂರ, ವಿಶಾಲ ಬಡಿಗೇರ, ಕಲ್ಯಾಣಿ, ಸುಶೀಲ ಕೋಬಾಳಕರ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂತೋಷ ಕೋಮಟೆ ಸ್ವಾಗತಿಸಿದರು, ಸೂರ್ಯಕಾಂತ ರದ್ದೇವಾಡಿ ನಿರೂಪಿಸಿದರು, ಮರಲಿಂಗ ಮಾಲಗತ್ತಿ ವಂದಿಸಿದರು. ನೃತ್ಯ ಸ್ಪರ್ಧೆಯಲ್ಲಿ ಗಂಗಾಮಾತಾ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ. ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಮಿನಿ ರೋಸ್ ಆಂಧ್ರ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.
Iran And USA: ಇರಾನ್ ಸಮೀಪಕ್ಕೆ ಬಂದು ತಲುಪಿದ ಅಮೆರಿಕದ ಯುದ್ಧ ನೌಕೆ, ಕೆಲವೇ ಗಂಟೆಗಳಲ್ಲಿ ಯುದ್ಧ ಶುರು?
ಇರಾನ್ ಮತ್ತು ಅಮೆರಿಕ ನಡುವೆ ಶುರುವಾಗಿರುವ ತಿಕ್ಕಾಟ ಇನ್ನಷ್ಟು ಜೋರಾಗಿದ್ದು, ಯಾವುದೇ ಕ್ಷಣ ಎರಡೂ ದೇಶಗಳ ನಡುವೆ ರಣಭೀಕರ ಯುದ್ಧ ಆರಂಭವಾಗುವ ಮುನ್ಸೂಚನೆ ಸಿಗುತ್ತಿದೆ. ಅದರಲ್ಲೂ ಅಮೆರಿಕದ ಬೃಹತ್ ಹಾಗೂ ಶಕ್ತಿಶಾಲಿ ಯುದ್ಧ ನೌಕೆ ಎಂಬ ಖ್ಯಾತಿ ಪಡೆದಿರುವ, ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಇನ್ನೇನು ಇರಾನ್ ಸಮೀಪಕ್ಕೆ ಬಂದಿದೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ʼನಮ್ ಸಾಲಿʼ ಆಯ್ಕೆ : ರವಿ ಗೌರ
ಅಫಜಲಪುರದ ಯುವ ನಿರ್ದೇಶಕ ಅನೀಲ್ ರೇವೂರ್ ಸಾಧನೆಗೆ ಮೆಚ್ಚುಗೆ
Madikeri | ಆರೆಸ್ಸೆಸ್ 100ರ ಸಂಭ್ರಮದಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ಶಾಸಕ ಮಂತರ್ ಗೌಡ; ಚರ್ಚೆಗೆ ಗ್ರಾಸ
‘ಹಿಂದೂ ಸಂಗಮ’ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ವೀಡಿಯೋ ವೈರಲ್
ಬೀದರ್ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ
ಬೀದರ್ : ವಾರದಲ್ಲಿ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಶನಿವಾರವನ್ನು ಸಂಪೂರ್ಣ ಸಾಮಾನ್ಯ ರಜೆ ಎಂದು ಘೋಷಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ ಬೀದರ್ ಘಟಕದ ವತಿಯಿಂದ ಮಂಗಳವಾರ ಒಂದು ದಿನದ ಮುಷ್ಕರ ನಡೆಸಲಾಯಿತು. ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಶಾಖೆ ಎದುರಿನ ಶಿವಾಜಿ ಚೌಕ್ ಬಳಿ ಬೆಳಗ್ಗೆ 11 ಗಂಟೆಗೆ ಈ ಮುಷ್ಕರ ನಡೆಯಿತು. ಈಗಾಗಲೇ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೂರು ದಿನ ಬ್ಯಾಂಕ್ಗಳು ಕಾರ್ಯನಿರ್ವಹಿಸಿರಲಿಲ್ಲ. ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು ಹಾಗೂ ಶನಿವಾರವನ್ನು ಸಂಪೂರ್ಣ ರಜೆ ಎಂದು ಘೋಷಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ ಎಂದು ಯುಎಫ್ಬಿಯು ಆರೋಪಿಸಿದೆ. ಶನಿವಾರ ರಜೆ ನೀಡಿದಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ಬ್ಯಾಂಕ್ ನೌಕರರು ಸಿದ್ಧರಿದ್ದಾರೆ ಎಂಬುದನ್ನೂ ಯುಎಫ್ಬಿಯು ಕೇಂದ್ರ ಸರ್ಕಾರಕ್ಕೆ ತಿಳಿಸಿದರೂ, ಇದಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ ಎಂದು ಸಂಘಟನೆ ದೂರಿದೆ. ಈ ಮುಷ್ಕರದ ಪರಿಣಾಮವಾಗಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್ಗಳ ಕಾರ್ಯಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಬೀದರ್ ಜಿಲ್ಲೆಯಲ್ಲಿಯೂ ಸಾರ್ವಜನಿಕ ಬ್ಯಾಂಕ್ಗಳ ಸೇವೆಗಳು ಅಸ್ತವ್ಯಸ್ತವಾಗಿದ್ದವು. ಆದರೆ ಖಾಸಗಿ ಬ್ಯಾಂಕ್ಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಬೀದರ್ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಯುಎಫ್ಬಿಯು ಬೀದರ್ ಘಟಕದ ಸಂಚಾಲಕ ರಮೇಶ್ ಶಿಂಧೆ ನೇತೃತ್ವ ವಹಿಸಿದ್ದರು. ಸಂತೋಷಕುಮಾರ್ ಮಿತ್ರಾ, ಪರಮೇಶ್ವರ್ ರೆಡ್ಡಿ, ಶೇಶಿಕಾಂತ್ ಕಾಳೆ, ಶೇಖ್ ನಿಸಾರ್, ಸಿದ್ರಾಮ್ ಸೀತಾ, ಅಶೋಕಕುಮಾರ್, ಸುಧಾರಾಣಿ, ಲಲಿತಾ ಬಿರಾದಾರ್, ದೀಪಿಕಾ ಮೋರೆ, ಕೇನರಾ ಬ್ಯಾಂಕಿನ ಸಂತೋಷ್ ಪರಮ್ಮಾ, ಚಂದ್ರಶೇಖರ್, ಸಂತೋಷ್ ಕೋರೆ ಹಾಗೂ ಬ್ಯಾಂಕ್ ಆಫ್ ಇಂಡಿಯಾದ ಸಚಿನ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಬೀದರ್ | ಬ್ರಿಮ್ಸ್ನಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆ ಖಂಡಿಸಿ ಮುತ್ತಿಗೆ : ಬಾಕಿ ವೇತನ ತಕ್ಷಣ ಬಿಡುಗಡೆಗೆ ಒತ್ತಾಯ
ಬೀದರ್ : ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಆಡಳಿತಾತ್ಮಕ ಅವ್ಯವಸ್ಥೆ ಹಾಗೂ ನೌಕರರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಮಂಗಳವಾರ ಬ್ರಿಮ್ಸ್ ಆಸ್ಪತ್ರೆಗೆ ಮುತ್ತಿಗೆ ಹಾಕಲಾಯಿತು. ಜಿಲ್ಲಾಧಿಕಾರಿಗಳ ಮುಖಾಂತರ ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಕ್ರಮವಾಗಿ ಹುದ್ದೆ ವಹಿಸಿಕೊಂಡಿರುವ ಅಧಿಕಾರಿಗಳಿಂದ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದ್ದು, ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 300ಡಿ ಮತ್ತು ಸಿ ಗ್ರೂಪ್ ನೌಕರರ ಆರು ತಿಂಗಳ ವೇತನ ಬಾಕಿಯಾಗಿದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಯಾವುದೇ ನೋಟಿಸ್ ನೀಡದೆ 40 ಗುತ್ತಿಗೆ ವೈದ್ಯರನ್ನು ವಜಾಗೊಳಿಸಿರುವುದು ಖಂಡನೀಯವಾಗಿದೆ. ಅಕ್ರಮವಾಗಿ ಹುದ್ದೆ ಪಡೆದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೇವೆಯಿಂದ ವಜಾಗೊಳಿಸಬೇಕು. ತಪ್ಪಿತಸ್ಥರಿಂದ ನಷ್ಟ ವಸೂಲಿ ಮಾಡಬೇಕು. ಎಲ್ಲಾ ನೌಕರರ ಬಾಕಿ ವೇತನ ತಕ್ಷಣವೇ ಬಿಡುಗಡೆಗೊಳಿಸಿ, ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರ ಉಮೇಶಕುಮಾರ್ ಸೊರಳ್ಳಿಕರ್, ವೀರ ಕನ್ನಡಿಗರ ಸೇನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಅಶೋಕ್ ಸಂಗಮ್, ಗೌತಮ್ ಚೌಹ್ವಾಣ, ವಿಜಯಕುಮಾರ್ ಬಡಿಗೇರ್, ರುಕ್ಮೀಣಿ ಜೀರ್ಗೆ, ಜೈಭೀಮ್ ಶರ್ಮಾ, ವಿಜಯಕುಮಾರ್ ಸಾಮ್ರಾಟ್, ತುಕರಾಮ್ ಭೂರೆ, ಬಾಬುರಾವ್ ಕೌಠಾ(ಬಿ),ದೇವರಾಜ್ ಡಾಕುಳಗಿ, ಸಿದ್ದಾರ್ಥ ನಾಟೇಕರ್, ಪ್ರಕಾಶ್ ಬಂಗಾರೆ, ರಂಜೀತ್ ವರ್ಮಾ, ಪ್ರಕಾಶ್ ಚಿಕ್ಕಪೇಟ್ ಹಾಗೂ ಸಂದೀಪ್ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Teacher Recruitment: ರಾಜ್ಯದಲ್ಲಿ 10,000ಕ್ಕೂ ಅಧಿಕ ಶಿಕ್ಷಕರ ನೇಮಕಾತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Teacher Recruitment: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10,800 ಶಿಕ್ಷಕರ ನೇಮಕಾತಿ ಮಾಡುವ ಚಿಂತನೆ ನಡೆಸಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಶಿಚಮೊಗ್ಗದಲ್ಲಿ ಜನವರಿ 26ರ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ
ಬೀದರ್ | ಜ.30 ರಿಂದ 24ನೇ ವಚನ ವಿಜಯೋತ್ಸವ : ಡಾ.ಗಂಗಾಂಬಿಕೆ ಅಕ್ಕ
ಬೀದರ್ : ಜ.30 ರಿಂದ ಫೆ.1ರ ವರೆಗೆ ನಗರದ ಬಸವಗಿರಿಯಲ್ಲಿ 24ನೇ ವಚನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಅವರು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 24ನೇ ವಚನ ವಿಜಯೋತ್ಸವವನ್ನು ಜ.30, 31 ಮತ್ತು ಫೆ.1 ರಂದು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದರು. ಬಸವಾದಿ ಶರಣ ವಚನಗಳು, ಮಾನವ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ, ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿ ಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೇ ರೋಚಕ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ 'ವಚನ ಸಾಹಿತ್ಯ ಸಂರಕ್ಷಣೆ' ಸ್ಮರಣೆಗಾಗಿ ಪ್ರತಿ ವರ್ಷ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ನುಡಿದರು. ಜ.30 ರಂದು ಮುಂಜಾನೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ, ಮುಂಜಾನೆ 11.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ, ಮಧ್ಯಾಹ್ನ 3 ಗಂಟೆಗೆ ಸ್ತ್ರೀ ಶಕ್ತಿ ಸಮಾವೇಶ, ಸಾಯಂಕಾಲ 6 ಗಂಟೆಗೆ ಶರಣ ಕಲಾವೈಭ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಜ.31 ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ವಚನ ಪಾರಾಯಣ, ಬೆಳಿಗ್ಗೆ 11 ಗಂಟೆಗೆ ಯುವ ಶಕ್ತಿ ಸಮಾವೇಶ- ವಿಶ್ವಕಲ್ಯಾಣ ಯುವ ಪರಿಷತ್ ನವ ಸಮಾರಂಭ, ಮಧ್ಯಾಹ್ನ 3 ಗಂಟೆಗೆ ಧರ್ಮ ಚಿಂತನಗೋಷ್ಠಿ, ಸಾಯಂಕಾಲ 6 ಗಂಟೆಗೆ ಶರಣ ಕಲಾ ವೈಭವ-ವಚನ ನೃತ್ಯೋತ್ಸವ ಕಾರ್ಯಕ್ರಮ ಜರುಗಲಿವೆ. ಫೆ.1 ರಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ, ಮಧ್ಯಾಹ್ನ 2:30 ಗಂಟೆಗೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿಂತನಕಾರ ಸಿದ್ದಣ್ಣ ಲಂಗೋಟಿ, ಹಿರಿಯರಾದ ಬಸವರಾಜ್ ಬುಳ್ಳಾ, ಸೋಮಶೇಖರ್ ಪಾಟೀಲ್ ಗಾದಗಿ, ರಾಜೇಂದ್ರಕುಮಾರ್ ಗಂದಗೆ, ಶರಣಪ್ಪ ಮಿಠಾರೆ, ಚಂದ್ರಕಾಂತ್ ಮಿರ್ಚೆ, ಸುರೇಶ್ ಚನಶೆಟ್ಟಿ, ಬಾಬು ವಾಲಿ, ರಾಜಕುಮಾರ್ ಟಿಳ್ಳೆಕರ್, ಆದಿಶ್ ವಾಲಿ, ವಿಶ್ವನಾಥ್ ಕಾಜಿ, ಜಯರಾಜ್ ಖಂಡ್ರೆ, ವಿಜಯಲಕ್ಷ್ಮೀ ಸುಲೇಪೇಟ್ ಹಾಗೂ ಶಿವಶಂಕರ್ ಟೋಕರೆ ಸೇರಿದಂತೆ ಇತರರಿದ್ದರು.
ಬೀದರ್ | ಕಾರಂಜಾ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಗೊಳಿಸಲು ಆಗ್ರಹ
ಬೀದರ್ : ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಮಾನವೀಯತೆ ಮತ್ತು ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಸಮರ್ಪಕ ಪರಿಹಾರ ನೀಡಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ವರದಿಯನ್ನು ಆಧರಿಸಿ, ಸಂತ್ರಸ್ತರಿಗೆ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಒತ್ತಾಯಿಸಿದೆ. ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಅವರ ನೇತೃತ್ವದ ನಿಯೋಗವು ರವಿವಾರ ಭಾಲ್ಕಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭದಲ್ಲಿ, ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರು ವಿಶೇಷ ಗಮನಹರಿಸಿ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸಿ ಸಮರ್ಪಕ ಪರಿಹಾರವನ್ನು ಶೀಘ್ರವಾಗಿ ಒದಗಿಸಬೇಕು ಎಂದು ಮನವಿ ಮಾಡಲಾಯಿತು. ಕಾರಂಜಾ ಮುಳುಗಡೆ ಸಂತ್ರಸ್ತರ ದೀರ್ಘಕಾಲದ ಹೋರಾಟವನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಿತ್ತು. ಈ ಸಮಿತಿಯ ಅಧಿಕೃತ ವರದಿಯನ್ನು ಡಿಸೆಂಬರ್ 2025ರ ಅಂತ್ಯದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿ ಈಗಾಗಲೇ ಸರ್ಕಾರದ ಕೈ ಸೇರಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು ಎಂದು ನಿಯೋಗವು ಆಗ್ರಹಿಸಿದೆ. ಈ ಸಂದರ್ಭದಲ್ಲಿ ರಾಜಪ್ಪ ಕಮಲಪೂರೆ, ಡಾ. ರಾಜಶೇಖರ್ ರಂಜೋಳ್, ಮಾದಪ್ಪ ಕೌದೆ, ಇಸೂಫಮಿಯಾ ರೇಕುಳಗಿ, ಮಹಮ್ಮದ್ ಸೋಲಾಪೂರೆ, ಮಹೇಶ್ ಕಮಲಪೂರೆ, ಚಂದ್ರಶೇಖರ್ ಮುತ್ತಣ್ಣ, ಶಂಕರೆಪ್ಪ ಮೂಲಗಿ, ಲಕ್ಷ್ಮೀ ಕೌದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹುಮನಾಬಾದ್ | ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಚಾಲಕ ಸ್ಥಳದಲ್ಲೇ ಮೃತ್ಯು
ಹುಮನಾಬಾದ್ : ಬಸವಕಲ್ಯಾಣದಿಂದ ಹುಮನಾಬಾದ್ ಕಡೆಗೆ ತೆರಳುತ್ತಿದ್ದ ಕಾರೊಂದು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ–65ರಲ್ಲಿ ಸೋಮವಾರ ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ಸಂಭವಿಸಿದೆ. ಮೃತರನ್ನು ಚಿಕನೇಗಾಂವ್ ವಾಡಿ ನಿವಾಸಿ ವಿಶ್ವಜಿತ್ (30) ಎಂದು ಗುರುತಿಸಲಾಗಿದೆ. ಅವರು ಸೋಮವಾರ ಬಸವಕಲ್ಯಾಣದಿಂದ ಹುಮನಾಬಾದ್ನಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬಂದ ಕಾರು ಮಾರ್ಗ ಮಧ್ಯೆ ಸೇವಾ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ತೀವ್ರತೆಗೆ ಚಾಲಕ ವಿಶ್ವಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಸವಕಲ್ಯಾಣ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದೇಶ್ವರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. .
ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ, ಗಿಲ್ಲಿ ಬಿಗ್ ಬಾಸ್ ವಿನ್ನರ್ ಅಲ್ಲ: ಸದನದಲ್ಲಿ ಪ್ರದೀಪ್ ಈಶ್ವರ್ ಅಬ್ಬರ
ಮುಖ್ಯಮಂತ್ರಿಗಳು ನನ್ನ ಪಾಲಿನ ಶ್ರೀರಾಮಚಂದ್ರ, ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ, ಬದಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದು ವಿಧಾನಸಬೆಯಲ್ಲಿ ಇಂದು (ಜ.27-ಮಂಗಳವಾರ) ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಭಾಷಣದಲ್ಲಿ ಅಬ್ಬರಿಸಿದ ಪರಿ. ರಾಜ್ಯಪಾಲರ ಭಾಷಣದ ಮೇಲಿನ ವಂದನ ನಿರ್ಣಯದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರದೀಪ್ ಈಶ್ವರ್, ಹಲವು ವಿಷಯಗಳ ಬಗ್ಗೆ ತೀಕ್ಷ್ಣವಾಗಿ ಭಾಷಣ ಮಾಡಿದರು. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಸಂವಿಧಾನದ ಮೂಲ ಆಶಯ ಯುವ ಪೀಳಿಗೆಗೆ ತಿಳಿಸುವುದು ಅಗತ್ಯ: ಪ್ರೊ.ಸುರೇಂದ್ರನಾಥ್ ಶೆಟ್ಟಿ
ಬ್ರಹ್ಮಾವರ, ಜ.27: ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿ ನಿಂತಿರುವ ಲಿಖಿತ ಸಂವಿಧಾನ. ಭಾರತೀಯ ಸಂವಿಧಾನದ ಮೂಲ ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ. ಬ್ರಹ್ಮಾವರದ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಜಿ.ಎಂ. ಗ್ಲೋಬಲ್ ಸ್ಕೂಲ್ ಜಂಟಿಯಾಗಿ ಹಮ್ಮಿ ಕೊಂಡ 77ನೇ ಗಣರಾಜ್ಯೋತ್ಸವ ದಲ್ಲಿ ಧ್ವಜಾರೋಹಣಗೈದು ಅವರು ವಿಶೇಷ ಉಪನ್ಯಾಸ ನೀಡಿದರು. ವಿಶ್ವದಲ್ಲಿಯೇ ಅತೀ ದೊಡ್ಡ ಹಾಗೂ ಪರಿಪಕ್ವ ಪ್ರಜಾಪ್ರಭುತ್ವ ವ್ಯವಸ್ಥೆ ಮೈಗೂಡಿಸಿಕೊಂಡು ಬೆಳೆಯುತ್ತಿರುವ ದೇಶ ಅನ್ನುವ ಹೆಗ್ಗಳಿಕೆ ಭಾರತಕ್ಕಿದೆ. ವಿವಿಧತೆಯಲ್ಲಿಯೇ ಏಕತೆಯ ಬದುಕನ್ನು ಮೈಗೂಡಿಸಿಕೊಂಡು ಸಹಭಾಗಿತ್ವದಲ್ಲಿ ಬದುಕುವುದೆ ನಮ್ಮ ಅತಿ ದೊಡ್ಡ ಶಕ್ತಿ ಎಂಬುದನ್ನು ನಾವು ಖಂಡಿತವಾಗಿಯೂ ಮರೆಯುವಂತಿಲ್ಲ ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಹಿಸಿದ್ದರು. ಪ್ರಾಂಶುಪಾಲೆ ದೀಪ್ತಿ ಶೆಟ್ಟಿ ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಹಿರಿಯ ಶಿಕ್ಷಕ ಸ್ಯೆಬೇಸ್ಟಿನ್ ಸಂವಿಧಾನದ ಪೀಠಿಕೆಯನ್ನು ಬೇೂಧಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಡಾ.ಅನೂಷ ಸುಬ್ರಹ್ಮಣ್ಯಂ, ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪರವಾಗಿ ಅನುಜಾ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿನಿ ಮಾನ್ಯ ಪೈ ಸ್ವಾಗತಿಸಿ ಮಂಜುಶ್ರೀ ವಂದಿಸಿದರು.
ಬೀದರ್ | ಪತ್ರಕರ್ತರ ಬಗ್ಗೆ ಹಗುರವಾಗಿ ಮಾತಾನಾಡಿರುವ ಶಾಸಕ ಪ್ರಭು ಚೌವ್ಹಾಣ್ ಕ್ಷಮೆಯಾಚಿಸಲಿ : ಸುಧಾಕರ್ ಕೊಳ್ಳುರ್
ಬೀದರ್ : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಸಂಘಟನೆಗಳ ವಿರುದ್ಧ ಹಾಗೂ ಅವರ ಸುದ್ದಿಯನ್ನು ಪ್ರಕಟಿಸುವ ಪತ್ರಕರ್ತರ ವಿರುದ್ಧ ಶಾಸಕರು ಬೆದರಿಕೆಯ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ಸುಧಾಕರ್ ಕೊಳ್ಳುರ್ ಅವರು ಪ್ರಕಟಣೆಯ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾಲ್ಲೂಕು ಆಡಳಿತ ವತಿಯಿಂದ ಔರಾದ್ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಕೆಲವು ಸಂಘಟನೆಗಳು ಬ್ಲಾಕ್ಮೇಲ್ ಮಾಡುತ್ತಿವೆ, ಇವರ ಜೊತೆ ಪತ್ರಕರ್ತರು ಸೇರಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಹೀಗೆ ಸುದ್ದಿ ಮಾಡಿದರೆ ನಾನೇ ಕೇಸ್ ಹಾಕುತ್ತೇನೆ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ. ಶಾಸಕರ ಈ ಹೇಳಿಕೆ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ಧಕ್ಕೆ ತರುವಂತದ್ದು. ಮಾಹಿತಿ ಹಕ್ಕು ಕಾಯ್ದೆಯಡಿ ಕಳಪೆ ಕಾಮಗಾರಿಗಳನ್ನು ಬೆಳಕಿಗೆ ತರುವ ಸಂಘಟನೆಗಳು ಮತ್ತು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸುವವರು ದೇಶದ್ರೋಹಿಗಳೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಸುಧಾಕರ್ ಕೊಳ್ಳುರ್ ಪ್ರಶ್ನಿಸಿದ್ದಾರೆ. ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳು ಸಂಪೂರ್ಣವಾಗಿ ಹಾಳಾಗಲು ಶಾಸಕರೇ ನೇರ ಕಾರಣರಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ವೈಯಕ್ತಿಕ ಪ್ರಚಾರಕ್ಕಾಗಿ ಬಳಸುವ ಶಾಸಕರು, ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಲಿ. ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ, ನಾವು ದಾಖಲೆ ಸಮೇತ ಸಾಬೀತುಪಡಿಸುತ್ತೇವೆ ಎಂದು ಅವರು ಸವಾಲು ಹಾಕಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೆಲಸ ಮಾಡುವ ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಪ್ರಭು ಚೌವ್ಹಾಣ್ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸುಧಾಕರ್ ಕೊಳ್ಳುರ್ ಅವರು ಆಗ್ರಹಿಸಿದ್ದಾರೆ.
ಎಸೆಸೆಲ್ಸಿ -ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಕಾರ್ಯಾಗಾರ
ಉಡುಪಿ, ಜ.27: ಉಡುಪಿ ಜಿಲ್ಲೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ನಿರಂತರವಾಗಿ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಪಡೆದು ಶೈಕ್ಷಣಿಕ ಸಾಧನೆಯ ಮೂಲಕ ಕೀರ್ತಿ ತರುವಲ್ಲಿ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಕಠಿಣ ಪರಿಶ್ರಮದ ಕೊಡುಗೆ ಅಪಾರ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಾಲಾಭಿವೃದ್ಧಿ ಸಮಿತಿ ಪ್ರತಿನಿಧಿಗಳಿಗೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿ, ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸುಮಾರು 40 ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯುವ ನಿಟ್ಟಿನಲ್ಲಿ ಶಿಕ್ಷಕರು ಪ್ರತಿಯೋರ್ವ ವಿದ್ಯಾರ್ಥಿಗಳ ಬಗ್ಗೆ ವೈಯುಕ್ತಿಕ ಗಮನ ಹರಿಸಿ, ಪೋಷಕರೊಂದಿಗೆ ಸಮಾಲೋಚನೆ ಮಾಡಿ ಮನೆಯಲ್ಲಿಯೂ ವಿದ್ಯಾರ್ಥಿಗೆ ಪೂರಕ ವಾತಾವರಣ ಕಲ್ಪಿಸಲು ವಿಶೇಷ ಮುತುವರ್ಜಿ ವಹಿಸ ಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯಲ್ಲಮ್ಮ ಹಾಗೂ ಉಮಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಪೂರಕ ಅಗತ್ಯ ಮಾಹಿತಿ, ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಪ್ರಾಂಶುಪಾಲ ಜಗದೀಶ್, ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯನಿ ಇಂದಿರಾ ಹಾಗೂ ವಿವಿಧ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಂಕರಾಚಾರ್ಯ Vs ಯೋಗಿ ಸಂಘರ್ಷ ತೀವ್ರ: ಬಿಜೆಪಿ ಇಬ್ಭಾಗ, ಅಧಿಕಾರಿಗಳ ಸರಣಿ ರಾಜೀನಾಮೆ! ಯುಪಿಯಲ್ಲಿ ಏನಾಗ್ತಿದೆ?
ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶಂಕರಾಚಾರ್ಯರು ಸಿಎಂ ಮತ್ತು ಪ್ರಧಾನಿ ವಿರುದ್ಧ ಮಾಡುತ್ತಿರುವ ಆರೋಪಗಳಿಂದ ಮನನೊಂದು ಅಯೋಧ್ಯೆಯ ಜಿಎಸ್ಟಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಪ್ರಯಾಗ್ರಾಜ್ ಮಾಘ ಮೇಳದಲ್ಲಿ ಶಂಕರಾಚಾರ್ಯರನ್ನು ತಡೆದಿದ್ದೇ ವಿವಾದದ ಮೂಲ. ಇದಕ್ಕೂ ಮುನ್ನ ಈ ಘಟನೆ ವಿರೋಧಿಸಿ ಬರೇಲಿ ಮ್ಯಾಜಿಸ್ಟ್ರೇಟ್ ಕೂಡ ರಾಜೀನಾಮೆ ನೀಡಿದ್ದರು.
Bidar | ಭಾಲ್ಕಿ ಆಹಾರ ಶಾಖೆಯ ಹೊರಸಂಪನ್ಮೂಲ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ
ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಆರ್ಸಿಬಿ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೇ ನ್ಯಾಟ್ ಸಿವರ್-ಬ್ರಂಟ್ ಆಸಕ್ತಿದಾಯಕ ವೈಯಕ್ತಿಕ ವಿಚಾರ ಭಾರೀ ವೈರಲ್
Nat Sciver-Brunt Life: ಮುಂಬೈ ಇಂಡಿಯನ್ಸ್ ಸ್ಟಾರ್ ಆಲ್ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರು ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಚೊಚ್ಚಲ ಶತಕ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಈ ವಿಶಿಷ್ಟ ದಾಖಲೆಯನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಬ್ರಂಟ್ ವೈಯಕ್ತಿಯ ಜೀವನ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಸೈಕ್ಲಾಥಾನ್ ಆಯೋಜನೆ
ರಾಯಚೂರು : ರಾಯಚೂರು ಜಿಲ್ಲಾ ಉತ್ಸವದ ಕ್ಯಾಲೆಂಡರ್ ಅನ್ವಯ ಜ.27ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಸೈಕ್ಲಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದತ್ತ ವೈದ್ಯರು, ಸೈಕ್ಲಿಂಗ್ ಅಸೋಸಿಯೇಷನ್ ಸದಸ್ಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ತಮ್ಮ ನೆಚ್ಚಿನ ಸೈಕಲ್ಗಳೊಂದಿಗೆ ಆಗಮಿಸಿ ಉತ್ಸಾಹದಿಂದ ಸೈಕಲ್ ಮ್ಯಾರಾಥಾನ್ನಲ್ಲಿ ಭಾಗವಹಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸೈಕಲ್ ತುಳಿಯುತ್ತ ಸೈಕ್ಲಾಥಾನ್ಗೆ ಹಸಿರು ನಿಶಾನೆ ತೋರಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಸೈಕಲ್ ಸವಾರಿ ಬಸವೇಶ್ವರ ವೃತ್ತ, ಜಿಲ್ಲಾ ಪಂಚಾಯತ್, ಕನಕದಾಸ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಯರಮರಸ್ ಬೈಪಾಸ್ ಮೂಲಕ ಯಕ್ಲಾಸಪೂರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾರ್ಗವಾಗಿ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿತು. ಸೈಕಲ್ ಸವಾರರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೈಕಲ್ ಸವಾರರ ಮುಂದೆ ಪೊಲೀಸ್ ಕಾನ್ವೆ ವ್ಯವಸ್ಥೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಲಂ ಪ್ರಕಾಶ್ ಅವರು ಪ್ರಥಮ ಬಹುಮಾನ, ರಾಘವೇಂದ್ರ ಗುಪ್ತ ದ್ವಿತೀಯ ಬಹುಮಾನ ಮತ್ತು ಸಣ್ಣ ವೀರೇಶ ಅವರು ತೃತೀಯ ಬಹುಮಾನ ಗಿಟ್ಟಿಸಿದರು. ಈ ಸ್ಪರ್ಧೆಯಲ್ಲಿ ಏಕೈಕ ಮಹಿಳಾ ಪಟುವಾಗಿ ಡಾ.ಶಿಲ್ಪ ಅವರು ಭಾಗಿಯಾಗಿ ಗಮನ ಸೆಳೆದರು. ಪ್ರಥಮ ಸ್ಥಾನಕ್ಕೆ 10 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 3 ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆ : ಸೈಕ್ಲಾಥಾನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಹಸನ್, ಶ್ರೇಯಸ್, ಗಣೇಶ್ ಮಿಶ್ರಬ್, ಮಹಮ್ಮದ್ ಆಸಂಖಾನ್, ದೇವರಾಜ್, ಮನೀಶ್ ಹಾಗೂ ಶ್ರೇಯಾಂಕ ಅವರು ಸೈಕಲ್ ಸವಾರಿ ಮಾಡಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ್ ವರ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ. ಬಡಿಗೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯಶಂಕರ್, ಎನ್ವಿಡಿ ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ, ಲಿವಿಂಗ್ ಆಫ್ ಆರ್ಟ್ ಸಂಸ್ಥೆಯ ಮಲ್ಲಿಕಾರ್ಜುನ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪ, ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಸವರಾಜ, ಕೃಷ್ಣ ತುಂಗೆ, ರೋಟರಿ ಕ್ಲಬ್ನ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಡುಪಿ | ತನುಶ್ರೀಯ ‘ತನು ಯೋಗ ಭೂಮಿ’ ಹೊಸ ವಿಶ್ವದಾಖಲೆ
ಉಡುಪಿ, ಜ.27: ದಶ ವಿಶ್ವದಾಖಲೆಗಳ ಸರದಾರಿಣಿ ಉಡುಪಿಯ ಯೋಗಬಾಲೆ ತನುಶ್ರೀ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತನುಶ್ರೀ ಪಿತ್ರೋಡಿ ಯೋಗಾಸನ ಮತ್ತು ದೇಶ ಭಕ್ತಿ ಸಾರುವ ತನುಯೋಗ ಭೂಮಿ ಕಾರ್ಯಕ್ರಮ ರಾಜ್ಯದ ಸುಮಾರು 155 ಶಾಲೆಗಳ 52051 ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ರಮ ಇಂಡಿಯನ್ ಬುಕ್ ಆಫ್ ರೆಕಾರ್ಡ್ಗೆ ದಾಖಲಾಗಿದ್ದು ಅದರ ಪ್ರಮಾಣಪತ್ರ ಸ್ವೀಕಾರ ಸಮಾರಂಭ ಸೋಮವಾರ ಉಡುಪಿಯ ಪುರಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತನು ಯೋಗ ಭೂಮಿ ನಿರ್ದೇಶಕ ನಾಗರಾಜ್ ವರ್ಕಾಡಿ, ಯೋಗ ಸಾಧಕ ರಾಜೇಂದ್ರ ಚಕ್ಕೇರಾ, ಮಂಜುಶ್ರೀ ಅನೂಪ್ ಪೂಜಾರಿ, ಮಾಜಿ ಯೋಧ ಶ್ರೀನಿವಾಸ್ ಭಟ್ ಅವರನ್ನು ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಇಂದ್ರಾಳಿ ಜಯಕರ್ ಶೆಟ್ಟಿ, ಹರೀಶ್ ಆರ್., ಪುರುಷೋತ್ತಮ ಶೆಟ್ಟಿ, ತಲ್ಲೂರು ಶಿವರಾಮ್ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಮಕೃಷ್ಣ ಕೊಡಂಚ, ಉಮೇಶ್, ಸೈಂಟ್ ಸಿಸಿಲೀಸ್ ಶಾಲೆಯ ಸಿಸ್ಟರ್ ಪ್ರೀತಿ ಕಾಸ್ತಾ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಂಧ್ಯಾ ಉದಯ್ ದಂಪತಿ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ತನು ಯೋಗ ಭೂಮಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನ ತೀರ್ಪುಗಾರ ಹರೀಶ್ ಆರ್. ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಈ ಕಾರ್ಯಕ್ರಮ ವನ್ನು ಹುತಾತ್ಮಯೋಧ ಅನೂಪ್ ಪೂಜಾರಿಯವರಿಗೆ ಸಮರ್ಪಿಸಲಾಯಿತು. ವಿಜೇತ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ| ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ಪದಾಧಿಕಾರಿಗಳ ಪದಗ್ರಹಣ
ಉಡುಪಿ, ಜ.27: ನಮ್ಮ ನಾಡ ಒಕ್ಕೂಟ(ಎನ್ಎನ್ಒ) ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭ ಇತ್ತೀಚಿಗೆ ಹೋಟೆಲ್ ಮಣಿಪಾಲ ಇನ್ ರಂಜಿತಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷ ಮೊಹಮ್ಮದ್ ಸಲೀಂ ನೂತನ ಅಧ್ಯಕ್ಷ ಡಾ.ರಿಝ್ವಾನ್ ಅಹ್ಮದ್ ಕಾರ್ಕಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಡಾ.ರಿಝ್ವಾನ್ ಅಹ್ಮದ್ ಕಾರ್ಕಳ, ಸಂಘಟನೆಯ ಭವಿಷ್ಯದ ಕಾರ್ಯ ಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳು ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಶೇಖ್ ಇಸ್ಹಾಕ್, ಕೋಶಾಧಿಕಾರಿ ಪೀರು ಸಾಹೇಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಇನಯತುಲ್ಲಾ ಶ್ಯಾಬಂದ್ರೀ, ಉಡುಪಿ ಜಿಲ್ಲಾಧ್ಯಕ್ಷ ನಕ್ವ ಯಾಹ್ಯ, ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೇಂದ್ರ ಸಮಿತಿ ಸದಸ್ಯ ಮುಸ್ತಾಕ್ ಅಹಮದ್ ಬೆಳ್ವೆ, ಕೇಂದ್ರ ಸಮಿತಿ ಸದಸ್ಯರು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಾರತ, ಯುಎಇ, ಈಜಿಪ್ಟ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಗಾಲ್ಫ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಂತಾರಾಷ್ಟ್ರೀಯ ವೃತ್ತಿಪರ ಗಾಲ್ಫ್ ಆಟಗಾರ ಸಾಬಿಕ್ ಸಲೀಂ ಬಾಜಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ವರದಿ ಮಂಡಿಸಿದರು. ಉಪಾಧ್ಯಕ್ಷ ಸಲೀಂ ಬಾಜಿ ಕೈಕಂಬ ಸ್ವಾಗತಿಸಿದರು. ಉಪಾಧ್ಯಕ್ಷ ಹುಸೇನ್ ಹೈಕಾಡಿ ವಂದಿಸಿದರು.
ಪಿತ್ತಕೋಶದಲ್ಲಿ ಕಲ್ಲು ಇದೆ ಎಂದಾದರೆ ಅಲಕ್ಷಿಸುವಿರಾ? ಇಲ್ಲಿದೆ ವೈದ್ಯರ ಎಚ್ಚರಿಕೆ!
ಲ್ಯಾಪ್ರೊಸ್ಕೊಪಿಕ್ ಪಿತ್ತಗಲ್ಲು ತೆಗೆಯುವುದು ಅತಿ ಕಡಿಮೆ ಅಪಾಯದ ವಿಧಾನವಾಗಿರುತ್ತದೆ. ಆದರೆ ಚಿಕಿತ್ಸೆ ನೀಡದ ಪಿತ್ತಗಲ್ಲು ಅನೇಕ ಬಾರಿ ಅಪಾಯಕಾರಿಯಾಗಿ ಪರಿಣನಿಸಬಹುದು. ಪಿತ್ತಕೋಶದ ಶಸ್ತ್ರಚಿಕಿತ್ಸಕರಾದ ಡಾ ಇಸ್ಮಾಯಿಲ್ ಖಾನ್ ಅವರು ಇನ್ಸ್ಟಾಗ್ರಾಂ ರೀಲ್ನಲ್ಲಿ ಒಬ್ಬ ರೋಗಿಯ ವಿವರವನ್ನು ಹಂಚಿಕೊಂಡಿದ್ದಾರೆ. ರೋಗಿಗೆ ಪಿತ್ತಕೋಶದ ಕಲ್ಲುಗಳು ಹೆಚ್ಚು ನೋವುಂಟು ಮಾಡುತ್ತಿರಲಿಲ್ಲ. ಹೀಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಪಿತ್ತಗಲ್ಲುಗಳನ್ನು ಅಲಕ್ಷಿಸಿದ್ದ. ವಾಸ್ತವದಲ್ಲಿ ರೋಗಿಗೆ ಗಂಭೀರ ನೋವು ಇರಲಿಲ್ಲ. ಕೆಲವೊಮ್ಮೆ ಹೊಟ್ಟೆ ಉಬ್ಬರಿಸಿದಂತೆ ಆಗುತ್ತಿತ್ತು. ಅಸಿಡಿಟಿ ಸಮಸ್ಯೆ ಎಂದುಕೊಂಡಿದ್ದರು, ಊಟ ಮಾಡಿದ ನಂತರ ಹೊಟ್ಟೆ ಉಂಬಿದ ಭಾವನೆ ಬರುತ್ತಿತ್ತು. ಅಪರೂಪಕ್ಕೆ ಕೆಲವೊಮ್ಮೆ ನೋವು ಕಾಣಿಸಿಕೊಳ್ಳುತ್ತಿತ್ತು. ಆತ ನೋವನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ಅಲಕ್ಷಿಸಿದ್ದರು! ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ. “ದೊಡ್ಡ ಪಿತ್ತಗಲ್ಲಿನ ನೋವಿರಲಿಲ್ಲ. ಮಾರಕವಾಗೂ ಇರಲಿಲ್ಲ. ಅಪಾಯಕಾರಿ ಎಂದೂ ಅನಿಸಿರಲಿಲ್ಲ. ಹಾಗಿದ್ದರೂ ಕಳೆದ ವಾರ ಆಸ್ಪತ್ರೆಗೆ ಬಂದ ವ್ಯಕ್ತಿ ನೋವಿನಿಂದ ಪರಿಹಾರ ಬಯಸಿದ್ದ. ಗ್ಯಾಸ್ಟ್ರಿಕ್ ಗಂಭೀರವಾಗಿದೆ. ಪ್ರಬಲ ಔಷಧಿ ಕೊಡಿ ಎಂದು ಕೇಳಿದ್ದ. ಆದರೆ ಈ ಸಲ ಏನೋ ವಿಭಿನ್ನ ಸಮಸ್ಯೆ ಕಂಡುಬಂದಿತ್ತು. ನೋವು ಬೆನ್ನಿಗೆ ಹರಡಿತ್ತು. ಕಿಣ್ವಗಳು ಗಗನಕ್ಕೇರಿದ್ದವು. ಅದು ಅನಿಲದ ಸಮಸ್ಯೆಯಾಗಿರಲಿಲ್ಲ. ಪಿತ್ತಗಲ್ಲು ಮೇದೋಜೀರಕ ಗ್ರಂಥಿಯ ಉರಿಯೂತ. ಚಿಕ್ಕ ಕಲ್ಲು ಪಿತ್ತರಸನಾಳಕ್ಕೆ ಜಾರಿ ಮೇದೋಜೀರಕ ಗ್ರಂಥಿಯನ್ನು ನಿರ್ಬಂಧಿಸಿತ್ತು. ಗ್ಯಾಸ್ಟ್ರಿಕ್ ನೋವು ಕ್ರಮೇಣ ಹೊಟ್ಟೆಯಲ್ಲಿ ಉರಿಯೂತದ ಬಿರುಗಾಳಿಯಾಯಿತು. ಗಂಟೆಗಳೊಳಗೆ ರಕ್ತದೊತ್ತಡ ಇಳಿಯಿತು. ಆಮ್ಲಜನಕದ ಮಟ್ಟ ಕುಸಿಯಿತು. ಕಿಡ್ನಿ ಪ್ರತಿಸ್ಪಂದಿಸುತ್ತಿರಲಿಲ್ಲ. ಬಹು ಅಂಗ ವೈಫಲ್ಯವಾಗಿ ಮೃತಪಟ್ಟರು” ಎಂದು ವಿವರಿಸಿದರು ಖಾನ್. “ಅತ್ಯುನ್ನತ ಮಟ್ಟದ ಐಸಿಯು, ವೆಂಟಿಲೇಟರ್, ಡಯಾಲಿಸಿಸ್, ಮಾನವನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದರೂ ಆತ ಬದುಕುಳಿಯಲಿಲ್ಲ. ಈ ಸಮಸ್ಯೆಯನ್ನು ಸರಳವಾಗಿ ಒಂದು ದಿನದ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದಾಗಿತ್ತು. ಇದೀಗ ಜಗತ್ತಿನಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗಿಂತ ಚಿಕಿತ್ಸೆ ನೀಡದ ಪಿತ್ತಗಲ್ಲುಗಳ ಸಮಸ್ಯೆಯಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ” ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ. “ಜನರ ಪ್ರಕಾರ ಸಣ್ಣ ಪಿತ್ತಗಲ್ಲುಗಳು ಅಪಾಯಕಾರಿಯಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಯಲ್ಲ. ಮುಂದೆ ನೋಡೋಣ ಎಂದು ತಳ್ಳಿಹಾಕಬಹುದು. ಆದರೆ, ಮೇದೋಜೀರಕ ಗ್ರಂಥಿಯ ಉರಿಯೂತ ಕಾಯುವುದಿಲ್ಲ” ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಅರುಲ್ವನನ್ ನಂದನ್, “ವಾಸ್ತವದಲ್ಲಿ ಸಣ್ಣ ಕಲ್ಲುಗಳು ಹೆಚ್ಚು ಸಮಸ್ಯೆ ತರುತ್ತವೆ. ಏಕೆಂದರೆ ಅವು ಸುಲಭವಾಗಿ ಪಿತ್ತರಸ ನಾಳಕ್ಕೆ ಜಾರಿ ಮೇದೋಜೀರಕ ಗ್ರಂಥಿಯ ನಾಳವನ್ನು ನಿರ್ಬಂಧಿಸಬಹುದು. ಇದರಿಂದ ಪಿತ್ತಗಲ್ಲು ಮೇದೋಜೀರಕ ಗ್ರಂಥಿಯ ಉರಿಯೂತ ಉಂಟಾಗುತ್ತದೆ. ಈ ಸ್ಥಿತಿ ತ್ವರಿತವಾಗಿ ಉಲ್ಬಣಗೊಂಡು ಜೀವಕ್ಕೆ ಹಾನಿಯುಂಟು ಮಾಡಬಹುದು. ಅನೇಕ ರೋಗಿಗಳು ಆರಂಭಿಕ ಚಿಹ್ನೆಗಳನ್ನು ತಪ್ಪಾಗಿ ಭಾವಿಸಬಹುದು. ಹೊಟ್ಟ ಉಬ್ಬರುವುದು, ಆಸಿಡಿಡಿ, ಹೊಟ್ಟೆಯ ಮೇಲ್ಭಾಗದ ಅಸ್ವಸ್ಥತೆಯನ್ನು ಗ್ಯಾಸ್ಟ್ರಿಕ್ ಎಂದು ತಳ್ಳಿ ಹಾಕುತ್ತಾರೆ. ಇದು ಪಿತ್ತರಸದ ಉದರಶೂಲೆಯ (ಬೈಲರಿ ಕಾಲಿಕ್) ಮೊದಲ ಚಿಹ್ನೆಯಾಗಿದೆ” ಎಂದು ವಿವರಿಸಿದರು. ಲ್ಯಾಪ್ರೊಸ್ಕೊಪಿಕ್ ಪಿತ್ತಗಲ್ಲು ತೆಗೆಯುವುದು ಅತಿ ಕಡಿಮೆ ಅಪಾಯದ ವಿಧಾನವಾಗಿರುತ್ತದೆ. ಆದರೆ ಚಿಕಿತ್ಸೆ ನೀಡದ ಪಿತ್ತಗಲ್ಲು ಅನೇಕ ಬಾರಿ ಅಪಾಯಕಾರಿಯಾಗಿ ಪರಿಣನಿಸಬಹುದು. ಚಿಹ್ನೆಗಳನ್ನು ಪ್ರಕಟಿಸಿದ ಪಿತ್ತಗಲ್ಲುಗಳು ಇದ್ದರೂ, ಬಹಳ ಕಡಿಮೆ ಇರುತ್ತದೆ. ಬಹುತೇಕ ರೋಗಿಗಳಲ್ಲಿ ಚಿಹ್ನೆಗಳು ಕಾಣಿಸುತ್ತವೆ. ಸಾಮಾನ್ಯ ಆರಂಭಿಕ ಚಿಹ್ನೆಗಳು ಹೀಗಿವೆ, ► ಊಟದ ನಂತರ ಪದೇಪದೆ ಹೊಟ್ಟೆ ಉಬ್ಬರಿಸುವುದು ► ವಿಶೇಷವಾಗಿ ಎಣ್ಣೆಮಯ ಆಹಾರದ ನಂತರ ಅಸಿಡಿಟಿ ಅಥವಾ ಅಜೀರ್ಣ ► ಹೊಟ್ಟೆಯ ಮೇಲ್ಭಾಗ ಭಾರವಾದ ಅನುಭವ ► ಆಗಾಗ್ಗೆ ಸ್ವಲ್ಪ ವಾಕರಿಕೆ ► ಬಲಭಾಗದಲ್ಲಿ ಅಥವಾ ಮಧ್ಯೆ ಮಂದ ನೋವು ► ಗ್ಯಾಸ್ಟ್ರಿಕ್ನಂತಹ ನೋವು ಪದೇಪದೆ ಕಾಣಿಸಿಕೊಳ್ಳುವುದು ಕೃಪೆ: indianexpress.com
ರಾಯಚೂರು | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳಿಂದ ಪ್ರತಿಭಟನೆ
ರಾಯಚೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಬ್ಯಾಂಕ್ ಉದ್ಯೋಗಿಗಳು ಮಂಗಳವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬ್ಯಾಂಕ್ಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸಲಾಗುವುದು ಎಂಬ ಭರವಸೆಯನ್ನು ಈ ಹಿಂದೆ ನೀಡಲಾಗಿದ್ದರೂ, ಈ ವಿಷಯವನ್ನು ವರ್ಷಗಳಿಂದ ಬಾಕಿಯೇ ಇಡಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 2022ರಲ್ಲಿ ಸರ್ಕಾರ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸುವ ಕುರಿತು ಕೆಲಸದ ಸಮಯ ಹೆಚ್ಚಿಸುವ ಬಗ್ಗೆ ಐಎಫ್ಬಿಯು ಜೊತೆ ಚರ್ಚಿಸಲು ಒಪ್ಪಿಕೊಂಡಿದ್ದವು. 2023ರಲ್ಲಿ ನಡೆದ ಚರ್ಚೆಯ ಬಳಿಕ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷಗಳಷ್ಟು ಕೆಲಸದ ಸಮಯ ಹೆಚ್ಚಿಸಿ, ಉಳಿದ ಎಲ್ಲಾ ಶನಿವಾರಗಳನ್ನು ರಜೆ ಎಂದು ಘೋಷಿಸಲು ಒಪ್ಪಂದವಾಗಿದೆ. ಈ ಕುರಿತು ಸರ್ಕಾರಕ್ಕೆ ಅಧಿಕೃತ ಶಿಫಾರಸು ಸಲ್ಲಿಸಲಾದರೂ, ಕಳೆದ ಎರಡು ವರ್ಷಗಳಿಂದ ಸರ್ಕಾರದ ಅನುಮೋದನೆ ಇನ್ನೂ ಲಭಿಸಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್ಬಿಐ, ಎಲ್ಐಸಿ ಮತ್ತು ಜಿಐಸಿಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಷೇರುಪೇಟೆಗಳು ಕೂಡ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಮಾತ್ರ ಈ ಸೌಲಭ್ಯ ನೀಡದಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ಗಳಲ್ಲಿ ಈಗಾಗಲೇ 2ನೇ ಮತ್ತು 4ನೇ ಶನಿವಾರ ರಜೆಯಾಗಿರುವುದರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಸಮಯವನ್ನು ಸ್ವಲ್ಪ ಹೆಚ್ಚಿಸಿ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸಿದರೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು. ಸರ್ಕಾರ ಕೂಡಲೇ ಈ ಕುರಿತು ತೀರ್ಮಾನ ಕೈಗೊಂಡು ವಾರಕ್ಕೆ ಐದು ದಿನಗಳ ಕೆಲಸ ವ್ಯವಸ್ಥೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸಹ ಕಾರ್ಯದರ್ಶಿ ಕುಮಾರ ಯಗ್ಗಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಲಾವುದ್ದಿನ್, ಸೋಮಶೇಖರ, ರಾಜೇಶ್ ವಿ.ಜೆ., ಪವನ್ ಕುಮಾರ್, ಮಲ್ಲಿಕಾರ್ಜುನ, ಗಣೇಶ್, ಅಯೂಬ್ ಖಾನ್, ಸಂತೋಷ ಬಿ., ಮಾಲಾ ಸೇರಿದಂತೆ ಅನೇಕ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಿದ್ದರು.
ಆಳಂದ | ಬೆಳೆ ಪರಿಹಾರ ಬಿಡುಗಡೆಗೊಳಿಸಲು ಆಗ್ರಹ
ಆಳಂದ: ಹೋಬಳಿ ಕೇಂದ್ರವಾಗಿರುವ ನಿಂಬರ್ಗಾ ಗ್ರಾಮದಲ್ಲಿ ಅನೇಕ ರೈತರಿಗೆ ಇದುವರೆಗೆ ಬೆಳೆ ಹಾನಿ ಪರಿಹಾರ ದೊರಕಿಲ್ಲ. ಕೂಡಲೇ ಪರಿಹಾರ ವಿತರಣೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ಅವರು ತಾಲೂಕು ಆಡಳಿತವನ್ನು ಒತ್ತಾಯಿಸಿದರು. ಈ ಸಂಬಂಧ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಅವರು, ಬೆಳೆ ಹಾನಿ ಪರಿಹಾರ ಪಡೆಯಲು ಅಗತ್ಯವಿರುವ ಡಾಟಾ ಎಂಟ್ರಿ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. ಹಲವು ರೈತರಿಗೆ ಇನ್ನೂ ಪರಿಹಾರ ಮೊತ್ತ ಜಮೆಯಾಗಿಲ್ಲ. ಕೆಲ ರೈತರ ಡಾಟಾ ಎಂಟ್ರಿಯೇ ಆಗಿಲ್ಲ. ಇನ್ನು ಕೆಲವು ಅರ್ಹ ರೈತರ ಡಾಟಾ ಎಂಟ್ರಿ ನಡೆದಿದ್ದರೂ, ಅವರ ಬೆಳೆ ಸಮೀಕ್ಷೆ ಪೂರ್ಣಗೊಳ್ಳದೆ ಉಳಿದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕೆಲ ಪ್ರಕರಣಗಳಲ್ಲಿ ಬೆಳೆ ಸಮೀಕ್ಷೆ ವೇಳೆ ತಪ್ಪು ಬೆಳೆ ನಮೂದನೆ ಮಾಡಿರುವುದರಿಂದ ರೈತರಿಗೆ ಪರಿಹಾರ ನಿರಾಕರಣೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಹಿಂದೆ ನವೆಂಬರ್ 26ರಂದು ಪ್ರತಿಭಟನಾ ರೂಪದಲ್ಲಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದೆ. ಕೂಡಲೇ ಬೆಳೆ ಹಾನಿ ಪರಿಹಾರ ವಿತರಿಸಿದಲ್ಲಿ ಬೆಳೆ ವಿಮೆ ಪರಿಗಣನೆ ಸಾಧ್ಯವಾಗಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ದೊಡ್ಡ ನೆರವಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿಂಬರ್ಗಾ ಅಧ್ಯಕ್ಷ ಧರ್ಮರಾಯ ಎಸ್. ಕಾಮಣಗೊಳ ಸೇರಿದಂತೆ ಮತ್ತಿತರ ರೈತ ಮುಖಂಡರು ಉಪಸ್ಥಿತರಿದ್ದರು.
ಸುಪ್ರೀಂಕೋರ್ಟ್ ನಲ್ಲಿ ಕಾನೂನು ಪದವೀಧರರಿಗೆ ಕ್ಲರ್ಕ್ ಹುದ್ದೆಗಳು; ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು ಕಾನೂನು ಪದವೀಧರರು ಅಥವಾ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿರಬೇಕು. 20-32 ವರ್ಷ ವಯಸ್ಸಿನವರಾಗಿರಬೇಕು. ಸಂಶೋಧನೆ ಪ್ರವೃತ್ತಿ ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು. ಹೊಸದಿಲ್ಲಿಯ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (SCI) ಗುಮಾಸ್ತರ ಹುದ್ದೆಯ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ಒಂದು ವರ್ಷದ ಒಪ್ಪಂದದ (2026–2027) ಮೇಲೆ ಸುಪ್ರೀಕೋರ್ಟ್ ಲಾ ಕ್ಲರ್ಕ್ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ 90 ಹುದ್ದೆಗಳಿಗೆ ಆಗುತ್ತಿದೆ. ಅರ್ಜಿದಾರರು ಕಾನೂನು ಪದವೀಧರರು ಅಥವಾ ಕಾನೂನು ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರಬೇಕು. 20-32 ವರ್ಷ ವಯಸ್ಸಿನವರಾಗಿರಬೇಕು. ಸಂಶೋಧನೆ ಪ್ರವೃತ್ತಿ ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು. ಆಯ್ಕೆಯು ಬಿಟ್ಟಪದ ತುಂಬಿ ರೀತಿಯ ಪ್ರಶ್ನೆಗಳ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಅರ್ಜಿಗಳು 2026 ಜನವರಿ 20ರಿಂದ 2026 ಫೆಬ್ರವರಿ 7ರವರೆಗೆ ತೆರೆದಿರುತ್ತವೆ. ಪರೀಕ್ಷೆಗಳು 2026 ಮಾರ್ಚ್ 7ರಂದು ನಡೆಯಲಿವೆ. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಟ ವಯಸ್ಸು 32 ವರ್ಷಗಳು. ಸುಪ್ರೀಂಕೋರ್ಟ್ ಲಾ ಕ್ಲರ್ಕ್ಗೆ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://cdn3.digialm.com/EForms/configuredHtml/32912/97660/Registration.html ಪ್ರಮುಖ ದಿನಾಂಕಗಳು • ಆನ್ಲೈನ್ ಅರ್ಜಿ ಆರಂಭ : 20 ಜನವರಿ 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಫೆಬ್ರವರಿ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ : 07 ಫೆಬ್ರವರಿ 2026 • ಪರೀಕ್ಷೆ ದಿನಾಂಕ : 07 ಮಾರ್ಚ್ 2026 • ಭರ್ತಿ ಕಾರ್ಡ್ : ಪರೀಕ್ಷೆಗೆ ಮೊದಲು • ಫಲಿತಾಂಶ ದಿನಾಂಕ : ಶೀಘ್ರವೇ ಅಪ್ಡೇಟ್ ಮಾಡಲಾಗುವುದು. • ಪರೀಕ್ಷಾ ಕೇಂದ್ರಗಳು : ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಲಖನೌ, ಪಾಟ್ನಾ ಇತ್ಯಾದಿ • ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ಸುಪ್ರೀಂಕೋರ್ಟ್ನ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ • ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ- ರೂ 750/- • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ವಯೋಮಿತಿ ಕನಿಷ್ಠ ವಯಸ್ಸು- 20 ವರ್ಷಗಳು ಗರಿಷ್ಠ ವಯಸ್ಸು 32 ವರ್ಷಗಳು ಹೆಚ್ಚುವರಿ ವಯೋಮಿತಿ ಸಡಿಲಿಕೆ ವಿವರಗಳು ಸುಪ್ರೀಕೋರ್ಟ್ನ ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು. ಒಟ್ಟು ಹುದ್ದೆಗಳು 90 ಹುದ್ದೆಗಳು ಹುದ್ದೆಯ ಹೆಸರು ಲಾ ಕ್ಲರ್ಕ್ ಕಮ್ ರೀಸರ್ಚ್ ಅಸೋಸಿಯೇಟ್ – 90 ಹುದ್ದೆಗಳು ವಿದ್ಯಾರ್ಹತೆ ಅಭ್ಯರ್ಥಿಗಳು ಅಂತಿಮ ವರ್ಷದ ಕಾನೂನು ಪದವಿಗೆ ಹಾಜರಾಗುತ್ತಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಥವಾ ಸಂಸ್ಥೆಯಿಂದ ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಗತ್ಯವಿರುವ ಕೌಶಲ್ಯಗಳು: ಸಂಶೋಧನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಬರವಣಿಗೆ ಕೌಶಲ್ಯಗಳು, ಕಂಪ್ಯೂಟರ್ ಪ್ರಾವೀಣ್ಯತೆ (ಎಸ್ಸಿಸಿ ಆನ್ಲೈನ್, ಮನುಪತ್ರ, ಲೆಕ್ಸಿಸ್ನೆಕ್ಸಿಸ್, ವೆಸ್ಟ್ಲಾ ಇತ್ಯಾದಿ) ಪರೀಕ್ಷೆಯ ವಿವರ ಭಾಗ 1 ಲಿಖಿತ ಪರೀಕ್ಷೆ ಅಬ್ಜೆಕ್ಟಿವ್ ವಿಧ (ಕಾನೂನು ಸಂಬಂಧಿತ ಜ್ಞಾನ) ಭಾಗ 2 ಲಿಖಿತ ಪರೀಕ್ಷೆ ಸಬ್ಜೆಕ್ಟಿವ್ ವಿಧ (ವಿಶ್ಲೇಷಣೆ ಮತ್ತು ಬರವಣಿಗೆ ಕೌಶಲ್ಯ) ತಪ್ಪು ಉತ್ತರಕ್ಕೆ 0.25ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ ಕನಿಷ್ಠ ಅರ್ಹತಾ ಅಂಕಗಳು- ಭಾಗ 1ರಲ್ಲಿ ಶೇ 60. ಭಾಗ 2ರಲ್ಲಿ 1:10, ಸಂದರ್ಶನಕ್ಕೆ 1:3. ಅರ್ಹ ವಿದ್ಯಾರ್ಥಿಗಳಿಗೆ ಸಂದರ್ಶನವಿರುತ್ತದೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ವೇತನ-ಭತ್ಯೆ ತಾತ್ಕಾಲಿಕ ಗುತ್ತಿಗೆ ಆಧಾರಿತ ವೇತನ ಪ್ರತಿ ತಿಂಗಳು- 1 ಲಕ್ಷ ರೂಪಾಯಿ.
ಹಿಂದೂ ಸಂಗಮದಲ್ಲಿ ಅಂಬೇಡ್ಕರ್ ಚಿತ್ರ: ಜಯನ್ ಮಲ್ಪೆ ಆಕ್ಷೇಪ
ಉಡುಪಿ, ಜ.27: ಧಾರ್ಮಿಕತೆಯಿಂದ ಜಾತಿಯತೆಯನ್ನು ಭೋಧಿಸುವ, ಕುಡಿಯಲೂ ನೀರು ಕೊಡದ, ಕೊನೆ ಪಕ್ಷ ದೇವರನ್ನೂ ನೋಡಲು ಬಿಡದ ಹಿಂದೂ ಧರ್ಮ ಧರ್ಮವೇ ಅಲ್ಲ ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದರೂ, ಅವರ ಭಾವಚಿತ್ರವನ್ನು ಹಿಂದೂ ಸಮಾಜೋತ್ಸವದಲ್ಲಿ ಬಳಲುತ್ತಿರುವ ಬಗ್ಗೆ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಹಲವು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹಿಂದೂ ಸಂಗಮದ ಹೆಸರಿನಲ್ಲಿ ನಡೆಯುವ ಸಮಾಜ್ಯೋತ್ಸವದ ಬ್ಯಾನರ್, ಹಾಗೂ ಕಟಾಟ್ಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬಳಸಲಾಗುತ್ತಿದೆ. 1956ರ ಅ.14ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲೇ 1935ರ ಅ.13ರಂದು ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿಯೇ ಸಾಯಲಾರೆ ಎಂದು ಘೋಷಿಸಿದ್ದರು. ಈ ವಾಸ್ತವ ವಿಚಾರ ಗೊತ್ತಿದ್ದರೂ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಹಿಂದೂ ಸಮಾಜ್ಯೋತ್ಸವದಲ್ಲಿ ಅವರ ಭಾವಚಿತ್ರ ಬಳಸುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ. ಅಸ್ಪೃಶ್ಯತಾ ಸಮಸ್ಯೆ ಹಿಂದೂ ಮತ್ತು ದಲಿತರ ನಡುವಿನ ಸಂಘರ್ಷ ವಾಗಿದೆ. ಹಿಂದೂಗಳ ಮುಂದೆ ಮಂಡಿಯೂರಿ ಜಾತಿಪದ್ದತಿಯನ್ನು ಒಪ್ಪಕೊಳ್ಳುವ ಬದಲು ದಲಿತರು ಸ್ವಾಭಿಮಾನದಿಂದ ಶಕ್ತಿಶಾಲಿಯಾಗಿ ಇದರ ವಿರುದ್ಧ ಹೋರಾಟದಲ್ಲಿ ಜಯಗಳಿಸಬೇಕು ಎಂದಿದ್ದಾರೆ. ದಲಿತ ಸಮಾಜ ವನ್ನು ಮತ್ತು ಅಂಬೇಡ್ಕರನ್ನು ಉದ್ದೇಶಪೂರ್ವಕ ವಾಗಿ ಅವಮಾನ ಮಾಡುವ ಹಿಂದೂ ಸಮಾಜ್ಯೋತ್ಸವದ ಸಂಘಟಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಏಮ್ಸ್ ಭೋಪಾಲ್ ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳಾ ಉದ್ಯೋಗಿಯ ಸರ ಕಳ್ಳತನ
ಭೋಪಾಲ್: ಏಮ್ಸ್ ಭೋಪಾಲ್ ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳಾ ಉದ್ಯೋಗಿಯೊಬ್ಬರ ಸರ ಕಳ್ಳತನ ನಡೆದಿರುವ ಘಟನೆ ರವಿವಾರ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಿಫ್ಟ್ನಲ್ಲಿ ತೆರಳುತ್ತಿರುವ ಆಸ್ಪತ್ರೆಯ ಮಹಿಳಾ ಉದ್ಯೋಗಿಯೊಬ್ಬರು ಓರ್ವ ಪುರುಷನೊಂದಿಗೆ ಮಾತುಕತೆಯಲ್ಲಿ ತೊಡಗಿರುವುದು ಸೆರೆಯಾಗಿದೆ. ಮಹಿಳಾ ಉದ್ಯೋಗಿಯು ಲಿಫ್ಟ್ನಿಂದ ನಿರ್ಗಮಿಸಲು ಮುಂದಾದಾಗ, ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ನಿಧಾನವಾಗಿ ಆಕೆಯ ಮುಂದೆ ನಡೆದು ಬಂದು, ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತು, ಆಕೆಯನ್ನು ಮತ್ತೆ ಲಿಫ್ಟ್ ಒಳಗೆ ನೂಕಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ. ಆತನನ್ನು ಹಿಂಬಾಲಿಸಲು ಮಹಿಳಾ ಉದ್ಯೋಗಿ ಪ್ರಯತ್ನಿಸಿದರೂ, ಆ ಹೊತ್ತಿಗೆ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಭಾರತದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯಲ್ಲಿನ ಭದ್ರತಾ ಲೋಪವು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ನೆಲ ಮಹಡಿಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆಯ ಬಗ್ಗೆ ಸಾರ್ವಜನಿಕರು ಆಸ್ಪತ್ರೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ, ಬೆಂಗಳೂರಿನ ಗಾಂಧಿನಗರ ವಾರ್ಡ್ಗೆ ನೆಹರು ನಗರ ಎಂದು ಮರುನಾಮಕರಣ ಮಾಡಿರುವುದು ಬಹಿರಂಗವಾಗಿದೆ. ಬಿಜೆಪಿ ಸಂಸದ ಪಿಸಿ ಮೋಹನ್ ಈ ಬಗ್ಗೆ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
India-EU Trade Deal: ಸುಂಕ ಸಮರಕ್ಕೆ ಸಮರ್ಥ ಸಂದೇಶ; ಟ್ರಂಪ್ಗೆ ಅಸ್ತಲಾ ವಿಸ್ತಾ ಬೇಬಿ ಎಂದ ಅಂಟೋನಿಯೊ ಕೋಸ್ಟಾ!
ಅಸ್ತಲಾ ವಿಸ್ತಾ ಎಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಆಮೇಲೆ ಸಿಗೋಣ ಎಂದರ್ಥ. ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಕೋಸ್ಟಾ ಕೂಡ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಮೇಲೆ ನೋಡೋಣ ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಭಾರತ-ಇಯು ವ್ಯಾಪಾರ ಒಪ್ಪಂದವನ್ನು ಸುಂಕ ಸಮರಕ್ಕೆ ಸಮರ್ಥ ಸಂದೇಶ ಎಂದು ಕೋಸ್ಟಾ ಬಣ್ಣಿಸಿದ್ದು, ಈ ಮೂಲಕ ಅಮೆರಿಕಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಲಿಂಗಸುಗೂರು | ತಲೆಕೆಳಗಾಗಿ ಹಾರಿದ ರಾಷ್ಟ್ರ ಧ್ವಜ : ಫೋಟೊ ವೈರಲ್
ಲಿಂಗಸುಗೂರು: 77ನೇ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಘಟನೆ ಲಿಂಗಸುಗೂರು ತಾಲೂಕಿನ ಆಮಿದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿರುವ ವೇಳೆ, ಆಮಿದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಗುರುಪಾದಪ್ಪ ಅವರು ತಪ್ಪಾಗಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದಾರೆ ಎನ್ನಲಾಗಿದೆ. ಬಳಿಕ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸಿ, ನಂತರ ಧ್ವಜವನ್ನು ಕೆಳಗಿಳಿಸಿ ಪುನಃ ಸರಿಯಾದ ರೀತಿಯಲ್ಲಿ ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಗಣರಾಜ್ಯೋತ್ಸವದಂತಹ ಮಹತ್ವದ ರಾಷ್ಟ್ರೀಯ ಹಬ್ಬದಂದು ಇಂತಹ ಅವಘಡ ಸಂಭವಿಸಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವೆಂದು ಆರೋಪಿಸಲಾಗಿದ್ದು, ಪ್ರಭಾರಿ ಮುಖ್ಯಶಿಕ್ಷಕರ ಬೇಜವಾಬ್ದಾರಿತನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮಂಗಳವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದ ಶೇಖ್ಗಳಿಗೆ ರೆಡ್ ಕಾರ್ಪೆಟ್ ಹಾಸುವ ಬಿಜೆಪಿ ನಾಯಕರು, ಸೂಫಿ ಕವಿ ಬಾಬಾ ಬುಲ್ಲೆ ಶಾಹ್ ದರ್ಗಾ ಧ್ವಂಸಗೊಳ್ಳುವಾಗ ಉಲ್ಲಾಸದಿಂದ ನೋಡುತ್ತಾರೆ ಎಂದು ಆರೋಪಿಸಿದರು. ಜನವರಿ 24ರಂದು ಮಸ್ಸೂರಿಯಲ್ಲಿರುವ ಬಾಬಾ ಬುಲ್ಲೆಹ್ ಷಾ ಅವರ ದರ್ಗಾವನ್ನು ಬಲಪಂಥೀಯ ಕಾರ್ಯಕರ್ತರು ಧ್ವಂಸ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಮೆಹಬೂಬ ಮುಫ್ತಿ, ಬಿಜೆಪಿ ನಾಯಕರು ವಿದೇಶಗಳ ಮಸೀದಿಗಳಲ್ಲಿ ಪೋಸ್ ನೀಡುತ್ತಾರೆ. ಮತ್ತು ಮಧ್ಯಪ್ರಾಚ್ಯದ ಶೇಖ್ಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಾರೆ. ಆದರೆ ಇಲ್ಲಿ ಸೂಫಿ ಕವಿ ಬಾಬಾ ಬುಲ್ಲೆ ಶಾಹ್ ಅವರ ದರ್ಗಾ ಧ್ವಂಸಗೊಳ್ಳುವುದನ್ನು ಉಲ್ಲಾಸದಿಂದ ವೀಕ್ಷಿಸುತ್ತಾರೆ ಎಂದು ಬರೆದಿದ್ದಾರೆ. ಕೇಸರಿ ಪಕ್ಷವು ಉದ್ದೇಶಪೂರ್ವಕವಾಗಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಈ ಬೂಟಾಟಿಕೆ ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿದೆ. ಹೆಚ್ಚುತ್ತಿರುವ ಬಡತನ, ಸಾಮೂಹಿಕ ನಿರುದ್ಯೋಗ ಮತ್ತು ಯುವ ಪೀಳಿಗೆಯಿಂದ ಭವಿಷ್ಯ ಕಸಿದಿರುವ ಬಗ್ಗೆ ಉತ್ತರಿಸುವುದಕ್ಕಿಂತ ಸಾಮರಸ್ಯವನ್ನು ನಾಶಮಾಡುವುದು ಸುಲಭ ಎಂದು ಅವರು ಬಿಜೆಪಿಯನ್ನು ಟೀಕಿಸಿದರು.
ಜಾತಿ ತಾರತಮ್ಯವನ್ನು ವ್ಯಾಖ್ಯಾನಿಸಿರುವ ಯುಜಿಸಿ ನಿಯಮ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ
ಹೊಸದಿಲ್ಲಿ: ಇತ್ತೀಚಿಗೆ ಅಧಿಸೂಚಿತ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ನಿಯಮವು ಜಾತಿ ತಾರತಮ್ಯದ ಕುರಿತು ಸೂಕ್ತವಲ್ಲದ ವ್ಯಾಖ್ಯಾನವನ್ನು ಅಳವಡಿಸಿಕೊಂಡಿದೆ ಮತ್ತು ಕೆಲವು ವರ್ಗಗಳನ್ನು ಸಾಂಸ್ಥಿಕ ರಕ್ಷಣೆಯಿಂದ ಹೊರಗಿರಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇತ್ತೀಚಿಗೆ ಅಧಿಸೂಚಿತ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು,2026ರ ನಿಬಂಧನೆ 3(ಸಿ) ಮೀಸಲು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ವಿನೀತ್ ಜಿಂದಾಲ್ ಸಲ್ಲಿಸಿರುವ ಅರ್ಜಿಯು ಜಾತಿ ಆಧಾರಿತ ತಾರತಮ್ಯವನ್ನು ಪರಿಶಿಷ್ಟ ಜಾತಿಗಳು (ಎಸ್ಸಿ),ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರ ವಿರುದ್ಧ ತಾರತಮ್ಯ ಎಂದು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಿದ್ದಕ್ಕಾಗಿ ಈ ನಿಬಂಧನೆಯನ್ನು ಟೀಕಿಸಿದೆ. ಜಾತಿ ಆಧಾರಿತ ತಾರತಮ್ಯದ ವ್ಯಾಪ್ತಿಯನ್ನು ಎಸ್ಸಿ,ಎಸ್ಟಿ ಮತ್ತು ಒಬಿಸಿ ವರ್ಗಗಳಿಗೆ ಮಾತ್ರ ಸೀಮಿತಗೊಳಿಸುವ ಮೂಲಕ ಯುಜಿಸಿಯು ತಮ್ಮ ಜಾತಿ ಗುರುತಿನ ಆಧಾರದಲ್ಲಿ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಬಹುದಾದ ಸಾಮಾನ್ಯ ಅಥವಾ ಮೀಸಲಾತಿರಹಿತ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಸಾಂಸ್ಥಿಕ ರಕ್ಷಣೆ ಮತ್ತು ಅವರ ಕುಂದುಕೊರತೆಗಳಿಗೆ ಪರಿಹಾರವನ್ನು ನಿರಾಕರಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ನಿಬಂಧನೆಯು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 51(1)(ಧರ್ಮ,ಜನಾಂಗ,ಜಾತಿ,ಲಿಂಗ ಅಥವಾ ಜನ್ಮಸ್ಥಳದ ಆಧಾರದಲ್ಲಿ ಸರಕಾರದಿಂದ ತಾರತಮ್ಯ ನಿಷೇಧ) ಅಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿರುವ ಅರ್ಜಿಯು,ನಿಬಂಧನೆಯು ಸಂವಿಧಾನದ 21ನೇ ವಿಧಿಯನ್ನೂ(ಘನತೆಯಿಂದ ಬದುಕುವ ಹಕ್ಕು ಸೇರಿದಂತೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಅಧಿಕಾರಿಗಳು ನಿಬಂಧನೆ 3(ಸಿ) ಅನ್ನು ಅದರ ಪ್ರಸ್ತುತ ರೂಪದಲ್ಲಿ ಜಾರಿಗೊಳಿಸುವುದನ್ನು ನಿರ್ಬಂಧಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿರುವ ಅರ್ಜಿದಾರರು,ಜಾತಿ ತಟಸ್ಥ ಮತ್ತು ಸಂವಿಧಾನಕ್ಕೆ ಅನುಗುಣವಾದ ರೀತಿಯಲ್ಲಿ ಜಾತಿ ಆಧಾರಿತ ತಾರತಮ್ಯದ ಮರುವ್ಯಾಖ್ಯಾನಕ್ಕೆ ನಿರ್ದೇಶವನ್ನು ಕೋರಿದ್ದಾರೆ. ನಿರ್ದಿಷ್ಟ ಜಾತಿ ಗುರುತನ್ನು ಪರಿಗಣಿಸದೆ ಜಾತಿ ಆಧಾರದಲ್ಲಿ ತಾರತಮ್ಯಕ್ಕೊಳಗಾಗಿರುವ ಎಲ್ಲ ವ್ಯಕ್ತಿಗಳಿಗೆ ರಕ್ಷಣೆಯನ್ನು ಒದಗಿಸುವಂತೆ ಜಾತಿ ಆಧಾರಿತ ತಾರತಮ್ಯವನ್ನು ಮರುವ್ಯಾಖ್ಯಾನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ವ್ಯಾಖ್ಯಾನದ ಔಪಚಾರಿಕ ಮರುಪರಿಶೀಲನೆ ಬಾಕಿಯಿರುವಂತೆ,ನೂತನ ನಿಯಮಾವಳಿಗಳಡಿ ಸ್ಥಾಪಿಸಲಾಗಿರುವ ‘ಸಮಾನ ಅವಕಾಶ ಕೇಂದ್ರಗಳು’,ಸಮಾನತೆ ಸಹಾಯವಾಣಿಗಳು’ ಮತ್ತು ‘ಓಂಬುಡ್ಸ್ ಪರ್ಸನ್ (ಪರಿಹಾರಾಧಿಕಾರಿ)’ ಕಾರ್ಯವಿಧಾನಗಳನ್ನು ಭೇದಭಾವವಿಲ್ಲದ ರೀತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಾಗಿಸಲು ಕೇಂದ್ರ ಸರಕಾರ ಮತ್ತು ಯುಜಿಸಿಗೆ ಮಧ್ಯಂತರ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
Indian Energy Sector: ಭಾರತಕ್ಕೆ ಮತ್ತೊಂದು ಬಂಪರ್, ಯುರೋಪ್ ಬಳಿಕ ಕೆನಡಾ ಜೊತೆಗೆ ಭರ್ಜರಿ ಒಪ್ಪಂದಕ್ಕೆ ಸಿದ್ಧತೆ
ಭಾರತ ಮತ್ತು ಯುರೋಪ್ ನಡುವೆ ಮಹತ್ವದ ಒಪ್ಪಂದಕ್ಕೆ ಇಂದು ಅಂತಿಮ ಮುದ್ರೆ ಬಿದ್ದಿದ್ದು, ಆ ಮೂಲಕ ಭಾರತ ಮತ್ತು ಯುರೋಪ್ ಒಕ್ಕೂಟದ ಮಧ್ಯೆ ಬೃಹತ್ ಮಟ್ಟದ ವ್ಯಾಪಾರ ಮತ್ತು ವಹಿವಾಟು ನಡೆಸಲು ಹೊಸ ದಾರಿ ಸೃಷ್ಟಿಯಾಗಿದೆ. ಯುರೋಪ್ ಒಕ್ಕೂಟ ಬರೋಬ್ಬರಿ 20 ವರ್ಷಗಳಿಂದ ಬಾಕಿ ಇದ್ದ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ ಹಾಕಿದೆ. ಹೀಗಿದ್ದಾಗ ಮತ್ತೊಂದು
ಯುರೋಪ್ ಡೀಲ್ನಿಂದ ₹6.4 ಲಕ್ಷ ಕೋಟಿಯಷ್ಟು ಏರಿಕೆಯಾಗಲಿದೆ ರಫ್ತು, ಕರ್ನಾಟಕ ಸೇರಿ 12 ರಾಜ್ಯಗಳಿಗೆ ಬಂಪರ್
ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ರಫ್ತು ವಲಯಕ್ಕೆ 6.4 ಲಕ್ಷ ಕೋಟಿ ರೂ.ಗಳ ಉತ್ತೇಜನ ಸಿಗಲಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳು ಇದರ ನೇರ ಫಲಾನುಭವಿಗಳಾಗಲಿವೆ. ಕರ್ನಾಟಕದ ಬೆಂಗಳೂರು-ತುಮಕೂರು ಕೈಗಾರಿಕಾ ವಲಯದ ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್ ಮತ್ತು ಫಾರ್ಮಾ ರಫ್ತಿಗೆ ವಿಫುಲ ಅವಕಾಶ ದೊರೆಯಲಿದೆ. ಸುಮಾರು 9,425 ಸುಂಕದ ಸಾಲುಗಳನ್ನು ರದ್ದುಗೊಳಿಸಲಾಗಿದ್ದು, ಜವಳಿ, ಚರ್ಮ, ಕೃಷಿ ಮತ್ತು ರತ್ನ-ಆಭರಣ ವಲಯಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಪ್ರವೇಶ ಸಿಗಲಿದೆ.
ಕಲಬುರಗಿ | ಯುವಕನ ಕೊಲೆ ಪ್ರಕರಣ : ನಾಲ್ವರ ಬಂಧನ
ಕಲಬುರಗಿ: ನಗರದ ಸ್ಟೇಷನ್ ಬಝಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಟೇಷನ್ ಬಝಾರ್ ಅಪ್ಪರ್ ಲೈನ್ ಹಮಾಲವಾಡಿ ನಿವಾಸಿ ಸೈಯದ್ ಮೆಹಬೂಬ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಅದೇ ನಗರದ ನಿವಾಸಿಗಳಾದ ಆನಂದ ಜಲಕ್ ಸಿಂಧೆ (34), ಆಶಿತೋಷ್ ಜಲಕ್ ಸಿಂಧೆ (30), ಇಮ್ರಾನ್ ಮೆಹಬೂಬ್ ಶೇಖ್ (28) ಹಾಗೂ ಸೊಹೇಬ್ ಅನ್ವರ್ ಖುರೇಷಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಸೈಯದ್ ಮೆಹಬೂಬ್ ಅವರ ತಂದೆ ಸಯ್ಯದ್ ಇಸ್ಮಾಯಿಲ್ ಅವರು ನೀಡಿದ ದೂರಿನ ಮೇರೆಗೆ ಸ್ಟೇಷನ್ ಬಝಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತ್ವರಿತ ತನಿಖೆ ನಡೆಸಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತಾಲಯದ ಕಚೇರಿ ಪ್ರಕಟಣೆಯಲ್ಲಿ ಶ್ಲಾಘಿಸಲಾಗಿದೆ.

22 C