Israel | ಯುದ್ಧದ ಅಂತ್ಯಕ್ಕೆ ಆಗ್ರಹಿಸಿ ನೆತನ್ಯಾಹು ಸರ್ಕಾರದ ವಿರುದ್ಧ ನಾಗರಿಕರಿಂದ ಪ್ರತಿಭಟನೆ
ಟೆಲ್ ಅವೀವ್, ಎ. 12: ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಆಗ್ರಹಿಸಿ, ಟೆಲ್ ಅವೀವ್ ನಲ್ಲಿ ಇಸ್ರೇಲಿನ ನೂರಾರು ನಾಗರಿಕರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು ಎಂದು Aljazeera ವರದಿ ಮಾಡಿದೆ. ದೇಶ ನಿರಂತರ ಸಂಘರ್ಷದಲ್ಲಿ ಸಿಲುಕಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಯುದ್ಧ ಮುಂದುವರಿದರೆ ಹಾನಿ ಹೆಚ್ಚಾಗುತ್ತದೆ. “ಕದನ ನಿಲ್ಲಿಸಿ, ಮಾತುಕತೆ ಆರಂಭಿಸಿ” ಎಂದು ಘೋಷಣೆ ಕೂಗಿದರು. ಆರ್ಥಿಕವಾಗಿ ಮತ್ತು ಮಾನವೀಯವಾಗಿ ದೇಶಕ್ಕೆ ಹಾನಿಯುಂಟು ಮಾಡುತ್ತಿರುವ ಯುದ್ಧದ ನಿಲುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
IPL 2026 | ಹ್ಯಾಟ್ರಿಕ್ ಸೋಲಿನ ಬಳಿಕ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಶಕ್ತಿ ಅನಾವರಣಗೊಂಡಿತು. ಚೆನ್ನೈ ಪರ ಮೊದಲ ಮೂರು ಪಂದ್ಯಗಳಲ್ಲಿ 6, 7 ಹಾಗೂ 9 ರನ್ ಮಾತ್ರಗಳಿಸಿದ್ದ ಸಂಜು ನಾಲ್ಕನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಸೋಲಿನ ಬಳಿಕ ಸಿಎಸ್ಕೆ ಗೆಲುವಿನ ಖಾತೆ ತೆರೆಯಿತು. ಕಳೆದ ಮಾರ್ಚ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಮೂರು ಅರ್ಧಶತಕಗಳೊಂದಿಗೆ ಭಾರತ ಕಪ್ ಗೆಲ್ಲಲು ಕೊಡುಗೆ ನೀಡಿದ್ದ ಸಂಜು ಬಗ್ಗೆ ಪ್ರಸಕ್ತ ಐಪಿಎಲ್ನಲ್ಲಿ ಭಾರಿ ಭರವಸೆ ಇತ್ತು. ಶನಿವಾರದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 115 ರನ್ ಸಿಡಿಸುವ ಮೂಲಕ ತಂಡ ತಮ್ಮ ಮೇಲೆ ಇಟ್ಟ ಭರವಸೆಯನ್ನು ಉಳಿಸಿಕೊಂಡರು. ಆಯುಷ್ ಮ್ಹಾತ್ರೆ 36 ಎಸೆತಗಳಲ್ಲಿ 59 ರನ್ ಸಿಡಿಸಿ ಸಂಜುಗೆ ಸಾಥ್ ನೀಡುವ ಮೂಲಕ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಲು ಸಾಧ್ಯವಾಯಿತು. ಈ ಜೋಡಿ ಎರಡನೇ ವಿಕೆಟ್ಗೆ 113 ರನ್ ಗಳಿಸಿತು. ಇದು ನನಗೆ ದೊಡ್ಡದು, ಅವರು ಇರಿಸಿದ ವಿಶ್ವಾಸ, ಹೆಚ್ಚಿನ ಹೊಣೆಗಾರಿಕೆ ನೀಡಿತು. ಅದೃಷ್ಟವೆಂದರೆ ಪ್ರತಿಯೊಂದೂ ಸುಲಲಿತವಾಯಿತು. ನನಗೆ ಬೇರೆ ಫ್ರಾಂಚೈಸಿ ಎನಿಸಲೇ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ನಿಂದ ಬಂದ ಸ್ಯಾಮ್ಸನ್ ಬಣ್ಣಿಸಿದರು. ಸಹ ಆಟಗಾರರು ಒಳ್ಳೆಯವರು, ಮೂರು ಪಂದ್ಯಗಳನ್ನು ಸೋತ ಬಳಿಕವೂ ನಾವು ಇಂದು 50 ಸೆಕೆಂಡ್ ಭೇಟಿ ಮಾಡಿದೆವು ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್ಸನ್ ಬಣ್ಣಿಸಿದರು. ನಾನು ಸಾಕಷ್ಟು ವಿಫಲನಾಗಿದ್ದೆ. ಮನಸ್ಸು ಚಂಚಲವಾಗಿತ್ತು. ನನ್ನ ಮೂಲಭೂತ ಅಂಶಗಳೇನು ಎಂದು ನಾನು ತಿಳಿದುಕೊಳ್ಳಬೇಕಿತ್ತು. ಮೂಲವನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿತ್ತು. ಬೆಂಬಲ ಸಿಬ್ಬಂದಿಯೊಂದಿಗೆ ಒಳ್ಳೆಯ ಸಂವಾದ ನಡೆಯಿತು ಎಂದು ವಿವರಿಸಿದರು. ಇದು ಸ್ಯಾಮ್ಸನ್ ಅವರ ನಾಲ್ಕನೇ ಐಪಿಎಲ್ ಶತಕವಾಗಿದ್ದು, ಸಿಎಸ್ಕೆ ಪರ ಹಾಗೂ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಶತಕ. ಮೊದಲ ಮೂರು ಪಂದ್ಯಗಳನ್ನು ನಿರಾಶಾದಾಯಕವಾಗಿ ಆರಂಭಿಸಿದ ಬಳಿಕ ಇಂದಿನ ಭರ್ಜರಿ ಪ್ರದರ್ಶನ ನಿಜಕ್ಕೂ ಚೇತೋಹಾರಿಯಾಗಿತ್ತು.
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಜೊತೆ ಜೊತೆಗೆ ಒಂದಲ್ಲ ಒಂದು ಕಡೆಗಳಲ್ಲಿ ನಿತ್ಯ ಮಳೆ ಆಗುತ್ತಿದೆ. ಇತ್ತೀಚೆಗೆ ಬೆಂಗಳೂರು, ಕೊಡಗು, ತುಮಕೂರು, ಶಿವಮೊಗ್ಗ ಭಾಗದಲ್ಲಿ ಕೊಂಚ ಮಳೆ ಆಗಿತ್ತು. ಇದೀಗ ಬದಲಾದ ಹವಾಮಾನ ವೈಪರೀತ್ಯಗಳ ಪರಿಣಾಮದಿಂದ ಕರಾವಳಿ ಹಾಗೂ ಒಳನಾಡಿನ ಇತರ ಜಿಲ್ಲೆಗಳಲ್ಲೂ ಪೂರ್ವ ಮುಂಗಾರು ಮಳೆ ಮುಂದುವರಿಯಲಿದೆ. ಏಪ್ರಿಲ್ 13ರಿಂದ 15 ಹಾಗೂ 17ರವಗಿನ ಮಳೆ ಮುನ್ಸೂಚನೆ
ಫಲಪ್ರದವಾಗದ ನೇರ ಮಾತುಕತೆ!
Patna | ವ್ಯಾನ್- ಬಸ್ ಢಿಕ್ಕಿ : 13 ಮಂದಿ ಮೃತ್ಯು, 22 ಮಂದಿಗೆ ಗಾಯ
ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಬಸ್ಸು ಎದುರಿನಿಂದ ಬಂದ ವ್ಯಾನ್ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಕಟಿಯಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 31ರ ಗೆರಬರಿ ಗ್ರಾಮದ ಬಳಿ ನಡೆದಿದೆ. ಘಟನೆಯ ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಯಿತು. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇತರ ಐದು ಮಂದಿ ಕಟಿಯಾರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅಸು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತಕ್ಕೀಡಾದ ವ್ಯಾನ್ನಲ್ಲಿ ಬುಡಕಟ್ಟು ಜನಾಂಗದವರು ಜಾರ್ಖಂಡ್ನಿಂದ ನೌಗಾಚಿಯಾ ಮೂಲಕ ಪುರ್ನಿಯಾಗೆ ವಾಪಸ್ಸಾಗುತ್ತಿದ್ದರು. ಪುರ್ನಿಯಾದಿಂದ ನಗೌಚಿಯಾಗೆ ಬರುತ್ತಿದ್ದ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ. ಬಸ್ಸಿನ ಚಾಲಕ ಪಾನಮತ್ತನಾಗಿದ್ದ ಎಂದು ಗಾಯಾಳು ಪ್ರಯಾಣಿಕರು ಹೇಳಿದ್ದಾರೆ. ಇದಕ್ಕೂ ಮುನ್ನ ಒಂದೆರಡು ಕಡೆ ಬಸ್ಸು ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ದಾತಪುರ ಮುಸಾಹರಿ ಚೌಕ್ಗೆ ತಲುಪಿದಾಗ ಎದುರಿನಿಂದ ಬರುತ್ತಿದ್ದ ವ್ಯಾನ್ಗೆ ಬಸ್ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ನವದೆಹಲಿ: ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ (NASA) ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶಯಾನ ಪೂರ್ಣಗೊಂಡಿದ್ದು, ಗಗನಯಾನಿಗಳು ಭೂಮಿಗೆ ಬಂದಿಳಿದಿದ್ದಾರೆ. ಒಟ್ಟು ಈ 10 ದಿನಗಳ ರೋಮಾಂಚನಕಾರಿ ಈ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ರಕ್ಷಣೆಯೂ ಮುಖ್ಯವಾಗಿರುತ್ತದೆ. ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ
Summer Special Trains: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು, ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಬೇಸಿಗೆ ವಿಶೇಷ ರೈಲುಗಳನ್ನು ನೈಋತ್ಯ ರೈಲು ಆರಂಭಿಸಿದೆ. ಮೈಸೂರು-ದಿಬೂಗಡ ನಡುವೆ ವಿಶೇಷ ಎಕ್ಸ್ ಪ್ರೆಸ್ ಸಂಚಾರ ಮಾಡಲಿದ್ದು, ಇದರ ಮಾರ್ಗ, ನಿಲುಗಡೆ, ವೇಳಾಪಟ್ಟಿ ಮಾಹಿತಿ ಇಲ್ಲಿ ನೀಡಲಾಗಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು,
ಒಂದೆಡೆ ತಾಂಡವವಾಡುತ್ತಿರುವ ನಿರುದ್ಯೋಗ, ಇನ್ನೊಂದೆಡೆ ಸರಕಾರಿ ಹುದ್ದೆ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುವ ನೇಮಕಾತಿ ಪ್ರಕ್ರಿಯೆ. ಹೌದು ಪರೀಕ್ಷೆಗಳನ್ನು ಪಾಸ್ ಆದರೂ ಸಂದರ್ಶನದ ಹಂತದಲ್ಲಿ ವಿದ್ಯಾರ್ಥಿಗಳ ಭವಿಷ್ಯವೂ ನಿಲುಗಡೆ ಆಗಿದೆ.
ಸಂಭ್ರಮದ ವಿಷು ಹಬ್ಬಕ್ಕೆ ಕೇರಳದಾದ್ಯಂತ ಸಿದ್ಧತೆ: ಏನಿದರ ಮಹತ್ವ ಗೊತ್ತಾ?
ದೇವರ ನಾಡು ಕೇರಳದಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಕಾಲ ಎಷ್ಟೇ ಬದಲಾದರೂ ಹಬ್ಬಗಳ ಸಂಭ್ರಮ ಜನರಲ್ಲಿ ಭೇರೆ ಬೇರೆ ರೀತಿಯಾಗಿ ಮನೆಮಾಡಿದೆ. ಬಿತ್ತನೆಯ ಸಂದರ್ಭದಲ್ಲಿ ಬರುವ ವಿಷು ಹಬ್ಬದ ಮಹತ್ವಗಳೇನು, ಆಚರಣೆ ವೀಧಾನಗಳೇನು ಎಂದು ತಿಳಿಯಲು ಆಸಕ್ತಿಗೆ ಇಲ್ಲಿದೆ ಉತ್ತರ..
‘ಶಕ್ತಿಯ ಪ್ರದರ್ಶನ ನಿಲ್ಲಿಸಿ, ಯುದ್ಧ ಸಾಕು’: ಪೋಪ್ ಲಿಯೋ ಸಂದೇಶ
ವ್ಯಾಟಿಕನ್ ಸಿಟಿ, ಎ.12: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಸಂಘರ್ಷದ ಹಿನ್ನೆಲೆ ಪೋಪ್ ಲಿಯೋ XIV ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂಘರ್ಷಗಳಿಗೆ ಕಾರಣವಾಗುತ್ತಿರುವ “ಸರ್ವಶಕ್ತಿಯ ಭ್ರಮೆ”ಯನ್ನು ಖಂಡಿಸಿದ್ದಾರೆ. ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಂಜೆಯ ಪ್ರಾರ್ಥನಾ ವೇಳೆ ಮಾತನಾಡಿದ ಪೋಪ್, “ಸ್ವಾರ್ಥ ಮತ್ತು ಹಣದ ಆರಾಧನೆ ಸಾಕು; ಶಕ್ತಿಯ ಪ್ರದರ್ಶನ ಸಾಕು; ಯುದ್ಧ ಸಾಕು,” ಎಂದು ಹೇಳಿದರು. ಶಕ್ತಿಯ ಆಧಾರದ ಮೇಲೆ ಪ್ರಭುತ್ವ ಸಾಧಿಸುವ ಮನೋಭಾವವೇ ಹಿಂಸಾಚಾರ ಮತ್ತು ಯುದ್ಧಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದರು. ಪೋಪ್ ತಮ್ಮ ಭಾಷಣದಲ್ಲಿ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಸಂದೇಶವು ಅಮೆರಿಕದ ರಾಜಕೀಯ ಹಾಗೂ ಮಿಲಿಟರಿ ವಲಯವನ್ನು ಗುರಿಯಾಗಿರಿಸಿಕೊಂಡಂತೆಯೇ ಕಂಡುಬಂತು. ಅಮೆರಿಕದ ಮಿಲಿಟರಿ ಶ್ರೇಷ್ಠತೆಯ ಬಗ್ಗೆ ಹೆಮ್ಮೆಪಡುವ ಹಾಗೂ ಧಾರ್ಮಿಕ ಪರಿಭಾಷೆಯಲ್ಲಿ ಯುದ್ಧವನ್ನು ಸಮರ್ಥಿಸುವ ಪ್ರವೃತ್ತಿಯ ಮೇಲೆ ಅವರು ಪರೋಕ್ಷವಾಗಿ ಟೀಕಿಸಿದರು. ಜಾಗತಿಕ ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವಂತೆ ಪೋಪ್ ಕರೆ ನೀಡಿದರು.
ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ : ಯಾಸೀರ್ ಖಾನ್ ಪಠಾಣ್
ಹಾವೇರಿ : ʼದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ. ಷಡ್ಯಂತ್ರ ನಡೆದಿದ್ದು ನನ್ನ ಕಣ್ಣಿಗೂ ಕಂಡಿದೆ. ಈ ಬಗ್ಗೆ ಹೈಕಮಾಂಡ್ ವರದಿ ತರಿಸಿದೆʼ ಎಂದು ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಹೇಳಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಲ್ಪಸಂಖ್ಯಾತರು ವೋಟ್ ಹಾಕಬೇಡಿ ಎಂದು ಬೇರೆಯವರು ಅಭಿಯಾನ ನಡೆಸಿದ್ದರು. ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ಗೆ ಮತ ಹಾಕಿ ಎಂದು ನಾವು ಮನವಿ ಮಾಡಿದ್ದೀವಿ. ನಮ್ಮ ಸಮುದಾಯ ಕಾಂಗ್ರೆಸ್ ಪಕ್ಷದ ಋಣ ತೀರಿಸಬೇಕು ಎಂದು ಕರೆ ಕೊಟ್ಟಿದ್ದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು ಎಂಬುದು ನಮ್ಮ ನಿಲುವು. ಸಿದ್ದಾಂತದ ಮೇಲೆ ಹೋರಾಟ ಮುಂದುವರಿಯುತ್ತದೆ. ಉಪಚುನಾವಣೆಯಲ್ಲಿ ಸರಕಾರದ ಪ್ರತಿಷ್ಠೆ ಪ್ರಶ್ನೆ ಇದೆ ಎಂದು ಹೇಳಿದರು. ಜಬ್ಬಾರ್ ಅವರಿಗೆ ಟಿಕೆಟ್ ಕೇಳಿದ್ದು ನಮ್ಮ ದೊಡ್ಡ ತಪ್ಪು, ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ ಎಂದು ಕೇಳಬೇಕಿತ್ತು. ಸಭೆಯಲ್ಲಿ ಮಲ್ಲಣ್ಣ ಇಬ್ಬರ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ಪಕ್ಷದ ಅಧಿಕಾರ ಅನುಭವಿಸಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ, ಹೆತ್ತತಾಯಿಗೆ ದೋಹ್ರ ಮಾಡಿದೆ ಹಾಗೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ ಎಂದು ತಿಳಿಸಿದರು.
ಒಬಿಸಿ ಪಟ್ಟಿಗೆ ಸೇರಲು ಕೊಡವರಿಗೆ ಅರ್ಹತೆಯಿದೆ : ಯದುವೀರ್ ಒಡೆಯರ್
ʼದಿವ್ಯ ಜೀವನ ಭವ್ಯ ಮಾನವʼ, ʼಕೂರ್ಗ್ ದ ಲ್ಯಾಂಡ್ ಆಫ್ ಜನರಲ್ಸ್ ಹಾಗೂ ಡಿವೈನ್ ಲೈಫ್ ಆಫ್ ಸಬ್ಲೈನ್ ಹ್ಯುಮಾನಿಟಿʼ ಕೃತಿಗಳ ಲೋಕಾರ್ಪಣೆ
ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಕೆಪಿಸಿಸಿಯಿಂದ ಚಾಲನೆ
ಬೆಂಗಳೂರು : ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಮಾರ್ಗದರ್ಶನದ ಮೇರೆಗೆ ಪ್ರಾರಂಭಿಸಲಾಗಿದೆ. ಆ ಮೂಲಕ ಪಕ್ಷದ ವಕ್ತಾರರು, ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸುವವರು, ಸಂಶೋಧಕರು ಹಾಗೂ ವಿಶ್ಲೇಷಕರ ಜೊತೆಗೆ ಪ್ರಚಾರ ಸಂಯೋಜಕರನ್ನು ಹೊರ ತೆಗೆಯುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಪ್ರತಿಭಾನ್ವೇಷಣೆ ರಾಷ್ಟ್ರೀಯ ಸಂಯೋಜಕ ಹಾಗೂ ಮಾಜಿ ಶಾಸಕ ಹರಿಶೇಖರ್ ಗುಪ್ತ ತಿಳಿಸಿದ್ದಾರೆ. ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳ ಉಪಚುನಾವಣೆ ಕಾರಣಕ್ಕೆ ಕರ್ನಾಟಕದಲ್ಲಿ ತಡವಾಗಿ ಇದನ್ನು ಆರಂಭಿಸಲಾಗಿದೆ. ಒಟ್ಟು ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಸ್ಥಳೀಯವಾಗಿ ಆಯ್ಕೆ ನಡೆಸಲಾಗುವುದು. ನಂತರ ರಾಜ್ಯಮಟ್ಟದಲ್ಲಿ ಆಯ್ಕೆ ನಡೆಸಲಾಗುವುದು. ಇದರಲ್ಲಿ ಭಾಗವಹಿಸಲು ಇಚ್ಚಿಸುವ ಪ್ರತಿಯೊಬ್ಬರೂ ಎಐಸಿಸಿ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನಿಗದಿತ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅರ್ಜಿಯು ತೆರೆದುಕೊಳ್ಳುವುದು ಎಂದರು. ಅರ್ಜಿಯಲ್ಲಿ ಕೇಳಿದ ಮಾಹಿತಿ ಹಾಗೂ ಮಾಧ್ಯಮ ಅನುಭವವನ್ನು ಭರ್ತಿ ಮಾಡಬೇಕು. ಸಮರ್ಥರು ಇರುವ ತಂಡವು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸ್ವತಃ ರಾಹುಲ್ ಗಾಂಧಿ ಸಂದರ್ಶನ ಮಾಡಲಿದ್ದಾರೆ. ಎಐಸಿಸಿಯ ಸಂಘಟನಾ ಸೃಜನ್ ಅಭಿಯಾನದ ಅಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಬೇರೆ ಬೇರೆ ವಿಭಾಗಗಳು ಇತರೇ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಇದು ಮಾಧ್ಯಮ ವಿಭಾಗದ ವಿನೂತನ ಕಾರ್ಯಕ್ರಮವಾಗಿದೆ ಎಂದರು. ಕೆಪಿಸಿಸಿ ಮಾಧ್ಯಮ ವಿಭಾಗವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹೊಸ, ಅಲೋಚನೆಗಳು ಮಾಧ್ಯಮ ವಿಭಾಗಕ್ಕೆ ಬರಬೇಕು. ಈ ಕಾರಣಕ್ಕೆ ಯುವ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಯುವಜನರಲ್ಲಿನ ಹೊಸ ದೃಷ್ಟಿಕೋನ, ಆಲೋಚನೆ ಪಕ್ಷದೊಳಗೆ ಹರಿಯಬೇಕಿದೆ. ಅದಕ್ಕೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು. ಪರಿಷತ್ ಸದಸ್ಯ ರಮೇಶ್ಬಾಬು ಮಾತನಾಡಿ, ಕೇಂದ್ರ ಸಚಿವ ಎಚ್.ಡಿಕುಮಾರಸ್ವಾಮಿ, ನಮ್ಮ ಪಕ್ಷದ ಡಾ.ಯತೀಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ 25ನೇ ವರ್ಷದ ಸಂಭ್ರಮವನ್ನ ಆಚರಿಸುತ್ತಿದ್ದಾರೆ. ಆದರೆ ಮೂಲವಾಗಿ ಜೆಡಿಎಸ್ ಪಕ್ಷ ಅವರಿಗೆ ಸೇರಿದ್ದಲ್ಲ. ಕರ್ನಾಟಕದಲ್ಲಿ ಜನತಾದಳ ಮೂಲ ಹಾಗೂ ಪರಿವಾರ ಬೇರೆಯಿದೆ ಎಂದು ಟೀಕಿಸಿದರು. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಹಾಗೂ ಸಿದ್ದರಾಮಯ್ಯ ಅವರನ್ನು ಹೊರಗೆ ಹಾಕಿ ಆ ಪಕ್ಷವನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರು ಮಾಡಿದ್ದು ಸಮಾಜವಾದಿ ಜನತಾಪಕ್ಷ. ಯಾವ ಕಾರಣಕ್ಕೆ ಈ ಪಕ್ಷದ ಬೋರ್ಡ್ ಅನ್ನು ತಿರುಗ-ಮುರುಗ ಮಾಡಿದರು ಎಂಬುದನ್ನು ಕುಮಾರಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದರು. ಇವರಿಗೆ ಕರ್ನಾಟಕದ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಇಲ್ಲಿ ಎಷ್ಟು ಕೈಗಾರಿಕಾ ಯೋಜನೆಗಳು ಬಾಕಿ ಉಳಿದಿವೆ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಆಲೋಚನೆ ಮಾಡಿ. ಅದನ್ನು ಬಿಟ್ಟು ಬೇಜವಾಬ್ದಾರಿ ಹೇಳಿಕೆ ಕೊಡುವುದು ನಿಲ್ಲಿಸಿ. ಅನಗತ್ಯ ಟೀಕೆಗಳು ನಿಮಗೆ ರಾಜಕೀಯ ಶಕ್ತಿ ನೀಡುವುದಿಲ್ಲ. ಪಲಾಯನವಾದ ನಿಮಗೆ ಬಲ ತುಂಬುವುದಿಲ್ಲ. ವಿಷಯಾಧಾರಿತವಾಗಿ, ಸೈದ್ದಾಂತಿಕವಾಗಿ ನೀವು ರಾಜಕೀಯ ಮಾಡಿ ಎಂದು ಅವರು ಹೇಳಿದರು.
ಕನ್ನಡ ಭಾಷೆ ಸ್ವಾಭಿಮಾನದ ಪ್ರತೀಕವಾಗಲಿ : ಬರಗೂರು ರಾಮಚಂದ್ರಪ್ಪ
ಕಡೂರು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Belagavi | ಡಿಜಿಟಲ್ ಅರೆಸ್ಟ್ ಮೂಲಕ 15.45 ಕೋಟಿ ರೂ. ವಂಚನೆ: ಇಬ್ಬರ ಬಂಧನ
ಬೆಳಗಾವಿ : ನಗರದಲ್ಲಿರುವ ಉದ್ಯಮಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ 15.45 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರನ್ನು ಫೆಬ್ರವರಿ 7ರಿಂದ ಮಾರ್ಚ್ 9ರವರೆಗೆ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿದ್ದರು. ಈ ಅವಧಿಯಲ್ಲಿ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 15.45 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಈ ಕುರಿತು ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕಮಾಂಡ್ ಅಧಿಕಾರಿಗಳು ವೆಂಕದೋತ ಶರತ್ ನಾಯಕ್ ಹಾಗೂ ದೇಗಾವತ ಶ್ರೀಪಾದ ನಾಯಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಸುಮಾರು 2 ಕೋಟಿ ರೂ.ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
IPL 2026 | ಸ್ಯಾಮ್ಸನ್ ಶತಕ, ಆಯುಷ್ ಅರ್ಧಶತಕ; ಕೊನೆಗೂ ಗೆಲುವಿನ ಖಾತೆ ತೆರೆದ CSK
ಚೆನ್ನೈ, ಎ.11: ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (ಔಟಾಗದೆ 115, 56 ಎಸೆತ, 15 ಬೌಂಡರಿ, 4 ಸಿಕ್ಸರ್) ಅವರ ಶತಕ, ಆಯುಷ್ ಮ್ಹಾತ್ರೆ ಅವರ ಅರ್ಧಶತಕ (59 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಜೇಮಿ ಓವರ್ಟನ್ (4-18) ಅವರ ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 23 ರನ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಈ ವರ್ಷದ ಐಪಿಎಲ್ನಲ್ಲಿ ಸಿಎಸ್ಕೆ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಐಪಿಎಲ್ ಟಿ-20 ಟೂರ್ನಿಯ 18ನೇ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಗೆ ಇಳಿದ ಸಿಎಸ್ಕೆ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಗೆಲ್ಲಲು 213 ರನ್ ಗುರಿ ಪಡೆದಿದ್ದ ಡೆಲ್ಲಿ ತಂಡವು ಟ್ರಿಸ್ಟನ್ ಸ್ಟಬ್ಸ್ (60 ರನ್, 38 ಎಸೆತ, 4 ಬೌಂಡರಿ, 3 ಸಿಕ್ಸರ್), ಪಥುಮ್ ನಿಸ್ಸಾಂಕ (41 ರನ್, 24 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ ಹೋರಾಟದ ಹೊರತಾಗಿಯೂ 20 ಓವರ್ಗಳಲ್ಲಿ 189 ರನ್ ಗಳಿಸಿ ಆಲೌಟ್ ಆಯಿತು. ಕೆ.ಎಲ್. ರಾಹುಲ್ (18), ಸಮೀರ್ ರಿಝ್ವಿ (6), ಅಕ್ಷರ್ ಪಟೇಲ್ (1), ಡೇವಿಡ್ ಮಿಲ್ಲರ್ (17) ಹಾಗೂ ಅಶುತೋಶ್ ಶರ್ಮಾ (19) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸಿಎಸ್ಕೆ ಪರ ಓವರ್ಟನ್ ಯಶಸ್ವಿ ಪ್ರದರ್ಶನ ನೀಡಿದರೆ, ಅನ್ಶುಲ್ ಕಾಂಬೋಜ್ (3-35) ಮೂರು ವಿಕೆಟ್ ಪಡೆದರು. ಇದಕ್ಕೂ ಮೊದಲು ವಿಕೆಟ್ ಕೀಪರ್ ಸ್ಯಾಮ್ಸನ್ ಈ ವರ್ಷದ ಟೂರ್ನಿಯಲ್ಲಿ ಕೊನೆಗೂ ತನ್ನ ಲಯಕ್ಕೆ ಮರಳಿದರು. 52 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಐಪಿಎಲ್ ನಲ್ಲಿ ತನ್ನ ನಾಲ್ಕನೇ ಶತಕ ಪೂರೈಸಿದರು. ಸ್ಯಾಮ್ಸನ್ ಹಿಂದಿನ ಮೂರು ಇನಿಂಗ್ಸ್ಗಳಲ್ಲಿ ಎರಡಂಕೆಯ ದಾಟುವಲ್ಲಿ ವಿಫಲರಾಗಿದ್ದರು. ನಾಲ್ಕನೇ ಪಂದ್ಯದಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ನೆನಪಿಸಿದರು. ಸ್ಯಾಮ್ಸನ್ ಜೊತೆ ಮೊದಲ ವಿಕೆಟ್ಗೆ 62 ರನ್ ಸೇರಿಸಿದ ನಾಯಕ ಋತುರಾಜ್ ಗಾಯಕ್ವಾಡ್ (15) ಪವರ್ಪ್ಲೇ ನಂತರ ಔಟಾದರು. ನಂತರ ಸ್ಯಾಮ್ಸನ್ ಅವರು ಯುವ ಆಟಗಾರ ಆಯುಷ್ ಮ್ಹಾತ್ರೆ ಅವರೊಂದಿಗೆ ನಿರ್ಣಾಯಕ 113 ರನ್ ಜೊತೆಯಾಟ ನಡೆಸಿದರು. 52 ರನ್ ಗಳಿಸಿದ್ದಾಗ ಜೀವದಾನ ಪಡೆದ ಸ್ಯಾಮ್ಸನ್ ಇನಿಂಗ್ಸ್ನುದ್ದಕ್ಕೂ ಹಿಡಿತ ಸಾಧಿಸಿದರು. ವೇಗ ಹಾಗೂ ಸ್ಪಿನ್ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸಿದರು. ಸ್ಯಾಮ್ಸನ್ 400ನೇ ಸಿಕ್ಸರ್: ಇದೇ ವೇಳೆ ಸ್ಯಾಮ್ಸನ್ ಅವರು ಟಿ-20 ಕ್ರಿಕೆಟ್ನಲ್ಲಿ 400ನೇ ಸಿಕ್ಸರ್ ಸಿಡಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಸ್ಯಾಮ್ಸನ್ ಅವರು ಡೆಲ್ಲಿ ವಿರುದ್ಧ ಶತಕ ಗಳಿಸಿದ ಚೆನ್ನೈನ ಎರಡನೇ ಬ್ಯಾಟರ್ ಎನಿಸಿಕೊಂಡರು. 2012ರಲ್ಲಿ ಮುರಳಿ ವಿಜಯ್ ಡೆಲ್ಲಿ ವಿರುದ್ಧ 113 ರನ್ ಗಳಿಸಿದ್ದರು. ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 212/2 (ಸಂಜು ಸ್ಯಾಮ್ಸನ್ ಔಟಾಗದೆ 115, ಆಯುಷ್ ಮ್ಹಾತ್ರೆ 59, ಶಿವಂ ದುಬೆ ಔಟಾಗದೆ 20) ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ಗಳಲ್ಲಿ 189 ರನ್ಗೆ ಆಲೌಟ್ (ಟ್ರಿಸ್ಟನ್ ಸ್ಟಬ್ಸ್ 60, ಪಥುಮ್ ನಿಸ್ಸಾಂಕ 41, ಓವರ್ಟನ್ 4-18, ಅನ್ಶುಲ್ ಕಾಂಬೋಜ್ 3-35)
ಧಾರವಾಡ : ಧಾರವಾಡ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಝ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ ಎಂದು ಹು-ಧಾ ನಗರ ಪೊಲೀಸ್ ಕಮಿಷನರ್ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಡಿರುವ ಆರೋಪಿಗಳು ಫೈರೋಝ್ನ ಸ್ನೇಹಿತರು ಎಂದು ತಿಳಿದುಬಂದಿದ್ದು, ಎಲ್ಲರೂ ಕೂಡ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ಆದರೆ ಇತ್ತೀಚೆಗೆ ಫೈರೋಝ್ ಮತ್ತು ಆರೋಪಿಗಳಿಗೆ ವೈಮನಸ್ಸು ಬೆಳೆದಿತ್ತು ಎನ್ನುವ ಮಾಹಿತಿ ನಮಗೆ ದೊರೆತಿದ್ದು, ಕೊಲೆ ನಡೆದಿರುವ ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
Belagavi | ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಬೆಳಗಾವಿ : ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ ಬೆಳಗಾವಿ ಜಿಲ್ಲಾ ವಿಶೇಷ ಶೀಘ್ರಗತಿ ಪೊಕ್ಸೊ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಕಲ್ಲಪ್ಪ ಪರಶುರಾಮ ಸುತಾರ (22) ಶಿಕ್ಷೆಗೆ ಗುರಿಯಾದ ಆರೋಪಿ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಕಲ್ಲಪ್ಪ, ಪ್ರೀತಿಸಿ ವಿವಾಹವಾಗುವುದಾಗಿ ಪುಸಲಾಯಿಸಿ 2025ರ ಎ.19ರಂದು ಬೈಕ್ ಮೇಲೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ನಂತರ ಮಹಾರಾಷ್ಟ್ರದ ದೇವಗಢಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿಸಿ, ಬಳಿಕ ವಾಪಸ್ ಕರೆದುಕೊಂಡು ಬಂದಿದ್ದಾನೆ. ಈ ಕುರಿತು ಬಾಲಕಿಯ ತಂದೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು 11 ಸಾಕ್ಷಿಗಳು, 76 ದಾಖಲೆಗಳ ಆಧಾರದಲ್ಲಿ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 2 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಕಾಲತ್ತು ವಹಿಸಿದ್ದರು.
IPL 2026- ಸೀಸನ್ ನ ಮೊದಲ ಶತಕವೀರ ಸಂಜು ಸ್ಯಾಮ್ಸನ್; ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ಬಳಗಕ್ಕೆ ಮೊದಲ ಗೆಲುವಿನ ಸವಿ
ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರು ಸೀಸನ್ ನ ಮೊದಲ ಶತಕ ಬಾರಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಸೀಸನ್ ನ ಮೊದಲ ಜಯ ದಾಖಲಿಸುವಲ್ಲಿ ಸಫಲವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ ಗಳ ಜಯ ದಾಖಲಿಸುವ ಮೂಲಕ ಯಲ್ಲಿ ಸಹ ತನ್ನ ಖಾತೆಯನ್ನು ತೆರೆಯುವಲ್ಲಿ ಸಫಲವಾಗಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಏಪ್ರಿಲ್ 11ರ ಶನಿವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು.()ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕಾ(24 ಎಸೆತದಲ್ಲಿ 41 ರನ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ತ್ರಿಸ್ಟನ್ ಸ್ಟಬ್ಸ್ (38 ಎಸೆತದಲ್ಲಿ 60 ರನ್) ಉತ್ತಮ ಆಟ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟರ್ ಗಳಿಂದ ಉತ್ತಮ ಕೊಡುಗೆ ಬಾರದ ಕಾರಣ ತಂಡ ಅಂತಿಮವಾಗಿ ಸೋಲೊಪ್ಪಿಕೊಳ್ಳಲಾಯಿತು. ಸೆಟ್ ಆಗಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರು ಖಲೀಲ್ ಅಹ್ಮದ್ ಅವರ ಬೌಲಿಂಗ್ ನಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಚೆನ್ನೈ ಪರವಾಗಿ ಜಾಮಿ ಓವರ್ಟನ್ 4 ವಿಕೆಟ್, ಅನ್ಶುಲ್ ಕಾಂಬೋಜ್ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್, ಗುರ್ಜನ್ ಪ್ರೀತ್ ಸಿಂಗ್ ಮತ್ತು ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಸಂಜು ಸ್ಯಾಮ್ಸನ್ ಬಿರುಸಿನ ಶತಕ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ನಾಯಕ ಋತುರಾಜ್ ಗಾಯಕ್ವಾಡ್(18 ಎಸೆತದಲ್ಲಿ 15 ರನ್) ಅವರು ಎಚ್ಚರಿಕೆಯ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಸಂಜು ಸ್ಯಾಮ್ಸನ್ ವೇಗವಾಗಿ ಆಡಿದ್ದರಿಂದ ಈ ಜೋಡಿ 61 ರನ್ ಬಾಚುತ್ತದೆ. ಪವರ್ ಪ್ಲೇ ಮುಗಿದೊಡನೆ ಋತುರಾಜ್ ವಿಕೆಟ್ ಪತನವಾಗುತ್ತದೆ. ಇದಾದ ಬಳಿಕ ಆಯುಷ್ ಮ್ಹಾತ್ರೆ ಅವರನ್ನು ಸೇರಿಕೊಂಡ ಸಂಜು ಸ್ಯಾಮ್ಸನ್ ಅವರು ಡೆಲ್ಲಿ ಬೌಲರ್ ಗಳನ್ನು ಗೋಳಾಡಿಸುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಈ ಜೋಡಿಯನ್ನು ಮುರಿಯಲು ಎದುರಾಳಿ ತಂಡಕ್ಕೆ ಸಾಧ್ಯವಾಗುವುದಿಲ್ಲ. 11 ಓವರ್ ಮುಗಿಯುವುದರೊಳಗಾಗಿ ತಂಡ ಮೊತ್ತವನ್ನು 100ರ ಗಡಿ ದಾಟಿಸುತ್ತದೆ ಈ ಜೋಡಿ. ಅದಕ್ಕೂ ಮೊದಲು ಸಂಜು ಸ್ಯಾಮ್ಸನ್ ಅವರು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರಲ್ಲಿ 9 ಬೌಂಡರಿಗಳಿದ್ದವು. ಆದರೆ ಆವರೆಗೂ ಒಂದೇ ಒಂದು ಸಿಕ್ಸರ್ ಅವರು ಸಿಡಿಸಿರಲಿಲ್ಲ. ಇಜಾದ ಬಳಿಕ ಆಯುಷ್ ಮ್ಹಾತ್ರೆ ಅವರು 27 ಎಸೆತದಲ್ಲಿ ಅರ್ಧಶತಕ ಪೂರೈಸಿದರು. 14.3 ಓವರ್ ಗಳಲ್ಲಿ ತಂಡದ ಮೊತ್ತವನ್ನು 150ಕ್ಕೆ ತಲುಪಿಸುತ್ತಾರೆ. ತಂಡದ ಮೊತ್ತ 175 ಆಗಿದ್ದಾಗ ಆಯುಷ್ ಅವರು ರಿಟೈರ್ಡ್ ಔಟ್ ಆಗುವ ನಿರ್ಧಾರಕ್ಕೆ ಬಂದು ಅವರ ಜಾಗಕ್ಕೆ ಶಿವಂ ದುಬೆ ಅವರು ಬರುತ್ತಾರೆ. ಇದಕ್ಕೂ ಮೊದಲು ಆಯುಷ್ ಅವರು 36 ಎಸೆತದಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡ 59 ರನ್ ಗಳಿಸಿದ್ದರು. ಬಳಿಕ ಸಂಜು ಸ್ಯಾಮ್ಸನ್ ಅವರು ಕೇವಲ 52 ಎಸೆತಗಳಲ್ಲಿ ತಮ್ಮಶತಕವನ್ನು ಪೂರೈಸಿಕೊಳ್ಳುತ್ತಾರೆ. ಅದರಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ ಗಳಿರುತ್ತಾರೆ. ಐಪಿಎಲ್ ನಲ್ಲಿ ಇದು ಅವರ 4ನೇ ಶತಕವಾಗಿದೆ. ಅಂತಿಮವಾಗಿ ಅವರು 56 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನೊಳಗೊಂಡ 115 ರನ್ ಬಾರಿಸಿ ಅಜೇಯರಾಗಿ ಉಳಿಯುತ್ತಾರೆ. ಮತ್ತೊಂದು ತುದಿಯಲ್ಲಿ ಶಿವಂ ದುಬೆಯಲ್ಲಿ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಅನ್ನು ಒಳಗೊಂಡ 20 ರನ್ ಗಳಿಸಿ ನಾಟೌಟ್ ಆಗಿ ಉಳಿಯುತ್ತಾರೆ. ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 212/2, ಸಂಜು ಸ್ಯಾಮ್ಸನ್ ಅಜೇಯ 115(56), ಆಯುಷ್ ಮ್ಹಾತ್ರೆ 59(36), ಶಿವಂ ದುಬೆ ನಾಟೌಟ್ 20(10), ಅಕ್ಷರ್ ಪಟೇಲ್ 39ಕ್ಕೆ 1. ಡೆಲ್ಲಿ ಕ್ಯಾಪಿಟಲ್ಸ್
ಫೆ. 13ರಂದೇ ಆರಿಫ್ ಹತ್ಯೆಗೆ ಯತ್ನ ನಡೆದಿತ್ತು: ಪೊಲೀಸರ ತನಿಖೆಯಲ್ಲಿ ಬಹಿರಂಗ
ಮಂಗಳೂರು, ಎ.11: ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರೀಫ್ ಹತ್ಯೆಗೆ ಆರೋಪಿಗಳು ಫೆಬ್ರವರಿ 13ರಂದೇ ಮೊದಲ ಯತ್ನ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಫೆಬ್ರವರಿ 13ರಂದು ಬೆಳ್ಳಂಬೆಳಿಗ್ಗೆ ಆರೋಪಿಗಳು ಆರಿಫ್ನನ್ನು ಹಿಂಬಾಲಿಸಿದ್ದರು. ಆತನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹೊಂಚು ಹಾಕಿದ್ದರು. ಆದರೆ ಆರಿಫ್ನನ್ನು ಹಿಂಬಾಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದ ಕಾರಣ, ಅಂದು ದಾಳಿ ನಡೆಸಲು ಆರೋಪಿಗಳಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಮಾ.27ರಂದು ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್ನಲ್ಲಿ ತೆರಳುತ್ತಿದ್ದ ಆರೀಫ್ನನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಹೊಸಬರ ಕೈವಾಡ: ಮೊದಲ ಪ್ರಯತ್ನದಲ್ಲಿ, ಈಗಾಗಲೇ ಬಂಧಿತರಾಗಿರುವ ಆರೋಪಿಗಳಲ್ಲದೆ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಲಭ್ಯವಾಗಿದೆ. ಮೊದಲ ಪ್ರಯತ್ನದಲ್ಲಿ ಭಾಗಿಯಾದ ಇತರ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಅವರನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು. ಕೊಲೆ ಪ್ರಕರಣದ ಆರೋಪಿಗಳಾದ ರಿಫಾತ್ ,ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ , ರಿಝ್ವಾನ್ ಹಾಗೂ ಇವರಿಗೆ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಎರಡನೇ ದಾಳಿಯಲ್ಲಿ ಭಾಗಿಯಾದವರು ಮತ್ತು ಮೊದಲ ಸಂಚಿನಲ್ಲಿ ಸಾಥ್ ನೀಡಿದವರ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Vijay: ಇದು ತಲೆಮಾರಿನ ಬದಲಾವಣೆಗಾಗಿ ನಡೆಯುತ್ತಿರುವ ಚುನಾವಣೆ: ಕಾರ್ಯಕರ್ತರಿಗೆ ದಳಪತಿ ವಿಜಯ್ ವಿಶೇಷ ಕರೆ
ಚೆನ್ನೈ: ಇತಿಹಾಸವು ತನ್ನ ಗರಿಮೆಯ ಮಾಲೆಗಳೊಂದಿಗೆ ಮತ್ತೆ ಮರಳುತ್ತಿದೆ. ಈ ಚುನಾವಣೆ ಕೇವಲ ನಮಗಾಗಿ ಮಾತ್ರವಲ್ಲ, ಬದಲಿಗೆ ತಮಿಳುನಾಡಿನ ದೊಡ್ಡ ಬದಲಾವಣೆಗಾಗಿ ಮತ್ತು ಮುಂದಿನ ತಲೆಮಾರಿನ ಭವಿಷ್ಯಕ್ಕಾಗಿ ನಡೆಯುತ್ತಿರುವ ಮಹತ್ವದ ಸಮರ ಎಂದು 'ತಮಿಳಗ ವೆಟ್ರಿ ಕಳಗಂ' (TVK) ಅಧ್ಯಕ್ಷ, ನಟ ದಳಪತಿ ವಿಜಯ್ ಹೇಳಿದ್ದಾರೆ. ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ಪತ್ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕ
Hubballi | ಕಡಿಮೆ ಫಲಿತಾಂಶ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಹುಬ್ಬಳ್ಳಿ : ದ್ವಿತೀಯ ಪಿಯುಸಿಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಉಣಕಲ್ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುಬ್ಬಳ್ಳಿ ವಿದ್ಯಾನಗರದ ಕನಕದಾಸ ಕಾಲೇಜಿನ ಶ್ರಾವಣಿ ಮಾರುತಿ ಕಾಳೆ(18) ಮೃತಪಟ್ಟ ವಿದ್ಯಾರ್ಥಿನಿ. ಶ್ರಾವಣಿ ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.71 ಫಲಿತಾಂಶ ಪಡೆದಿದ್ದು, ಶೇ.100 ಫಲಿತಾಂಶ ತೆಗೆದುಕೊಳ್ಳುವುದಾಗಿ ಹೇಳಿದ್ದಳು ಎನ್ನಲಾಗಿದೆ. ತಾನು ನಿರೀಕ್ಷೆ ಮಾಡಿದ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಶ್ರಾವಣಿ ತುಂಬಾ ಬುದ್ಧಿವಂತೆಯಾಗಿದ್ದಳು. ತಂದೆ ಆಟೊ ಓಡಿಸಿ ಜೀವನ ನಡೆಸುತ್ತಾರೆ. ಮನೆಯಲ್ಲಿ ಓದಲು ಆಗುವುದಿಲ್ಲ ಎಂದು ಅಜ್ಜಿ ತಾತನ ಮನೆಯಲ್ಲಿ ಓದುತ್ತಿದ್ದಳು. ಆಕೆ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ತೆಗೆದುಕೊಳ್ಳುವ ಗುರಿ ಇಟ್ಟುಕೊಂಡಿದ್ದಳು. ಎಲ್ಲರ ಮುಂದೆ ಚಾಲೆಂಜ್ ಸಹ ಮಾಡಿದ್ದಳು. ಫಲಿತಾಂಶ ಬಂದ ಬಳಿಕ ಯಾರ ಜೊತೆಗೆ ಮಾತನಾಡದೆ ನೇರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. -ಮಾರುತಿ (ವಿದ್ಯಾರ್ಥಿನಿ ಚಿಕ್ಕಪ್ಪ) ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ವಾರಾಣಸಿ, ಎ. 11: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ CM ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ, ಲೇಖಕಿ ಹಾಗೂ ಶಿಕ್ಷಣ ತಜ್ಞೆ ಪ್ರೊ. ಮಧು ಪೂರ್ಣಿಮಾ ಕಿಶ್ವರ್ ವಿರುದ್ಧ FIR ದಾಖಲಿಸಲು ಆದೇಶಿಸಬೇಕೆಂದು ಕೋರಿ ವಾರಾಣಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು livelaw.in ವರದಿ ಮಾಡಿದೆ. ಕಾಶಿ ಪ್ರಾಂತ್ಯದ ಬಿಜೆಪಿಯ ಕಾನೂನು ವಿಭಾಗದ ಸಂಚಾಲಕ ಶಶಾಂಕ್ ಶೇಖರ್ ತ್ರಿಪಾಠಿ ಸಲ್ಲಿಸಿದ ದೂರಿನಲ್ಲಿ, ಪ್ರೊ. ಕಿಶ್ವರ್ ಅವರು ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್ ಹಾಗೂ ನ್ಯಾಯಾಂಗದ ವಿರುದ್ಧ ದುರುದ್ದೇಶಪೂರಿತ ಮತ್ತು ಪೂರ್ವನಿಯೋಜಿತ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣವನ್ನು ದಾಖಲಿಸಿಕೊಂಡು ಸ್ಥಳೀಯ ಪೊಲೀಸರಿಂದ ವರದಿ ಕೋರಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 173(4) ಅಡಿ ಸಲ್ಲಿಸಿದ ದೂರಿನಲ್ಲಿ, ಪ್ರೊ. ಕಿಶ್ವರ್ ಅವರು ಪ್ರಧಾನಿ ಮೋದಿ ಅವರನ್ನು ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದಾಗಿ ಹೇಳಲಾಗಿದೆ. ಇದರಿಂದ ಉನ್ನತ ಸಾರ್ವಜನಿಕ ಹುದ್ದೆಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಸಿಎಂ ಆದಿತ್ಯನಾಥ್ ವಿರುದ್ಧವೂ ಆಕ್ಷೇಪಾರ್ಹ ಭಾಷೆ ಬಳಸಲಾಗಿದ್ದು, ಅವರ ಆಡಳಿತವನ್ನು ಸರ್ವಾಧಿಕಾರಕ್ಕೆ ಹೋಲಿಸಿರುವ ಮೂಲಕ ಸಾರ್ವಜನಿಕ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Keralaದಲ್ಲಿ ಹೆಚ್ಚಿನ ಪ್ರಮಾಣದ ಮತದಾನ | LDF, ಕಾಂಗ್ರೆಸ್ ಮತ್ತು ಬಿಜೆಪಿಯ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕೇರಳ ವಿಧಾನಸಭಾ ಚುನಾವಣೆಗೆ ಗುರುವಾರ ನಡೆದ ಮತದಾನದಲ್ಲಿ ಶೇಕಡಾ 78.03 ರಷ್ಟು ಮತದಾನವಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ದತ್ತಾಂಶದ ಪ್ರಕಾರ, 2021 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 73.9 ಮತದಾನವಾಗಿತ್ತು. ಮತದಾನದ ಈ ಪ್ರಮಾಣ ವಿಧಾನಸಭಾ ಚುನಾವಣೆಯ ಮಹತ್ವವನ್ನು ಸೂಚಿಸುತ್ತದೆ. ಈ ಬಾರಿ ಕೇರಳದಲ್ಲಿ ಬಿಜೆಪಿ ತನ್ನ ಅತ್ಯಂತ ಸ್ಪರ್ಧಾತ್ಮಕ ಪ್ರಚಾರ ನಡೆಸಿದ್ದು ಮಾತ್ರವಲ್ಲದೆ, ಎಡಪಂಥೀಯರು ತಮ್ಮ ನಿಯಂತ್ರಣದಲ್ಲಿರುವ ಕೊನೆಯ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ತಮ್ಮಿಂದಾಗುವ ಹೋರಾಟ ನಡೆಸಿದ್ದಾರೆ. ಒಂದು, SIR (ವಿಶೇಷ ತೀವ್ರ ಪರಿಷ್ಕರಣೆ) ನಂತರ ಮತದಾರರ ಪಟ್ಟಿಯ ಸುಧಾರಣೆ. ಇದು ಖಂಡಿತವಾಗಿಯೂ ಮತದಾನದ ಗುಣಮಟ್ಟವನ್ನು ಸುಧಾರಿಸಿದೆ, ಇದು ಮತದಾನದ ಪ್ರಮಾಣವನ್ನು ಹೆಚ್ಚಿಸಿದೆ. ಎರಡನೆಯದು ಸ್ಪಷ್ಟವಾದ ನಿರ್ಣಯ. ಇದನ್ನು ನಾವು ಆಡಳಿತ ವಿರೋಧಿ ಎಂದು ಕರೆಯುತ್ತೇವೆ, ಇದು ಹೆಚ್ಚಿನ ಜನರನ್ನು ಮತಗಟ್ಟೆಗಳಿಗೆ ಕರೆತಂದಿತು. ಮೂರನೇ ಕಾರಣ ಬಿಜೆಪಿಯ ಸ್ಪರ್ಧಾತ್ಮಕ ಪ್ರಚಾರ, ಇದು ಹೆಚ್ಚಿನ ಮತದಾರರನ್ನು ಸಜ್ಜುಗೊಳಿಸಿತು, ಇದು ತನ್ನದೇ ಆದ ಮತಪಾಲನ್ನು ಎರಡರಿಂದ ಮೂರು ಪ್ರತಿಶತದಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇತರ ಎರಡು (ಸಿಪಿಐಎಂ ನೇತೃತ್ವದ LDF ಮತ್ತು ಕಾಂಗ್ರೆಸ್ ನೇತೃತ್ವದ UDF) ಸಾಂಪ್ರದಾಯಿಕ ಒಕ್ಕೂಟಗಳಾಗಿವೆ, ಆದರೆ ಈ ಒಕ್ಕೂಟ (NDA) ಎಂದಿಗೂ ಬಂದಿಲ್ಲ. ಬಿಜೆಪಿಗೆ ಹಿಂದಿನದಕ್ಕಿಂತ ಉತ್ತಮ ಆಕರ್ಷಣೆ ಇದೆ ಎಂದು ದಿ ಪ್ರಿಂಟ್ ಜೊತೆ ಮಾತನಾಡಿದ ಕೇರಳ ಕೇಂದ್ರ ವಿಶ್ವವಿದ್ಯಾಲಯದ (CUK) ಮಾಜಿ ಉಪಕುಲಪತಿ ಮತ್ತು ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಜಿ. ಗೋಪ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 2021 ರವರೆಗೆ ಆಡಳಿತ ಬದಲಾವಣೆಗಳು ರೂಢಿಯಾಗಿದ್ದ ಕಾರಣ, ಕೇರಳದ ಮತದಾರರ ಮತದಾನದ ಪ್ರಮಾಣವನ್ನು ಐತಿಹಾಸಿಕವಾಗಿ ಸೂಕ್ಷ್ಮವಾಗಿ ಪರಿಶೀಲಿಸಲಾಗಿಲ್ಲ. 1970 ರ ದಶಕದ ಅಂತ್ಯದಿಂದಲೂ LDF ಮತ್ತು UDF ಚುನಾವಣಾ ಪೂರ್ವ ಮೈತ್ರಿಗಳಾಗಿ ಸ್ಪರ್ಧಿಸಿವೆ. ಅದಕ್ಕೂ ಮೊದಲು ಮೈತ್ರಿಗಳು ಅಸ್ತಿತ್ವದಲ್ಲಿದ್ದರೂ, ಅವು ಇಂದಿನ ಒಕ್ಕೂಟಗಳಿಗಿಂತ ಭಿನ್ನವಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ LDF ಅಧಿಕಾರವನ್ನು ಉಳಿಸಿಕೊಂಡಿತು, ಇದು ಕೇರಳದ ರಾಜಕೀಯ ಇತಿಹಾಸದಲ್ಲೇ ಮೊದಲು. ಅದರ ನಂತರ, ರಾಜಕೀಯ ಪಕ್ಷಗಳು ಮತ್ತು ವೀಕ್ಷಕರು ಮತದಾರರ ಮತದಾನದ ಪ್ರಮಾಣವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದರು. 1967 ರಿಂದ 2021 ರವರೆಗೆ, ಮತದಾನದ ಪ್ರಮಾಣ ಹೆಚ್ಚಾಗಿ 70 ರ ದಶಕದ ಮಧ್ಯಭಾಗದಲ್ಲಿತ್ತು. 1960 ರಲ್ಲಿ ಮತದಾನ ಶೇಕಡಾ 85.7 ಮತ್ತು 1987 ರಲ್ಲಿ ಅದು ಶೇಕಡಾ 80.54 ರಷ್ಟಿತ್ತು. ಮತದಾನದ ಪ್ರಮಾಣದಲ್ಲಿನ ಏರಿಳಿತಗಳು 2021 ರವರೆಗೆ ಅಧಿಕಾರ ಬದಲಾವಣೆಯ ಮೇಲೆ ಕಡಿಮೆ ಪರಿಣಾಮ ಬೀರಿವೆ. ಈ ಬಾರಿ ವಿಭಿನ್ನವಾಗಿರಬಹುದು. 2026 ರ ವಿಧಾನಸಭಾ ಚುನಾವಣೆಗಳು ಕೇರಳದ ಇತಿಹಾಸದಲ್ಲಿ ಅತ್ಯಂತ ಮುಖ್ಯವಾಗಿರುತ್ತವೆ. ಕೇರಳದ ಜನರು ಮತ್ತು ಎಲ್ಲಾ ಮಲಯಾಳಿಗಳು ಸಹ ಅದನ್ನು ನಂಬುತ್ತಾರೆ ಎಂಬುದನ್ನು ಹೆಚ್ಚಿನ ಮತದಾನವು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಏಪ್ರಿಲ್ 10 ರಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ►ಸಂಖ್ಯೆಗಳು ಏನು ಸೂಚಿಸುತ್ತವೆ? 2021 ರಲ್ಲಿ ಕೇರಳದಲ್ಲಿ LDF ಅಧಿಕಾರವನ್ನು ಉಳಿಸಿಕೊಂಡಿತು. ಆದರೆ, ಈ ಚುನಾವಣೆಯಲ್ಲಿ ಹಿಂದಿನ ಪ್ರವೃತ್ತಿ ಮರಳುತ್ತಿದೆ ಎಂದು ಗೋಪ ಕುಮಾರ್ ಹೇಳಿದ್ದಾರೆ. ಹೆಚ್ಚಿನ ಮತದಾನವು ಸರ್ಕಾರದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ. 2016 ರಲ್ಲಿ ಮತದಾನದ ಪ್ರಮಾಣವು 2011 ರ ಚುನಾವಣೆಯಲ್ಲಿ ಶೇಕಡಾ 74.92 ರಿಂದ ಶೇಕಡಾ 77.1 ಕ್ಕೆ ಏರಿತು, ಇದು ಉಮ್ಮನ್ ಚಾಂಡಿ ನೇತೃತ್ವದ UDF ಅನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತು ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ಕಾರಣವಾಯಿತು. LDF ನ 2021 ರ ವಿಜಯವು ಅದರ ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ಹೊಸ ಆರ್ಥಿಕ ಸುಧಾರಣೆಗಳಿಂದ ನಡೆಸಲ್ಪಟ್ಟಿದೆ. ಆದರೂ, ಕಾರ್ಮಿಕ ಹಕ್ಕುಗಳು ಮತ್ತು ಜನರ ಕಲ್ಯಾಣ ಉದ್ದೇಶದ ಮೇಲೆ ನಿರ್ಮಿಸಲಾದ ಕೇರಳದ ಸಮಾಜವಾದಿ ನೀತಿಗಳು ಎಷ್ಟು ಆಳವಾಗಿ ಬೇರೂರಿವೆ ಎಂದರೆ ಅದು UDF ಆಡಳಿತದ ಅಡಿಯಲ್ಲಿಯೂ ಸಹ ಮುಂದುವರಿಯುತ್ತವೆ. ಬಹುಶಃ ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕೇರಳದಲ್ಲಿ ಅಧಿಕಾರ ಕೊಡುವ ಬಗ್ಗೆ ಎಚ್ಚರಿಕೆಯಿಂದ ಇರಲು ಒಂದು ಕಾರಣವಾಗಿರಬಹುದು. ಕೇರಳದ ಹೆಚ್ಚಿನ ಜನಸಂಖ್ಯೆ ಇತರ ವಿಷಯಗಳ ಜೊತೆಗೆ ಬಂಡವಾಳಶಾಹಿ ಪರ ಒಲವುಗಳೊಂದಿಗೆ ಸಂಬಂಧ ಹೊಂದಿದೆ, ಇದು ರಾಜ್ಯದ ಮೂಲ ಸಮಾಜವಾದಿ ಅಡಿಪಾಯಗಳಿಗೆ ಬೆದರಿಕೆಯೊಡ್ಡಬಹುದು. ಆದರೆ ಕೇರಳದಲ್ಲಿ ಅದರ ಹೆಚ್ಚಿನ ಮತಹಂಚಿಕೆ ಮತ್ತು ಪರಿಣಾಮಕಾರಿ ಬೆಂಬಲ ಕ್ರೋಢೀಕರಣವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. 1970 ರ ದಶಕದ ಅಂತ್ಯದಿಂದ, ಕೇರಳದ ರಾಜಕೀಯ ಭೂದೃಶ್ಯವನ್ನು ಹೆಚ್ಚಾಗಿ ಎರಡು 'ರಂಗಗಳು' ವ್ಯಾಖ್ಯಾನಿಸಿವೆ. ಸಮಾನ ಮನಸ್ಕ ಪಕ್ಷಗಳ ಶಾಶ್ವತ ಚುನಾವಣಾ ಪೂರ್ವ ಮೈತ್ರಿಕೂಟ ಒಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತವೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರಚಾರವನ್ನು ನಡೆಸಿತು. ವಿಶೇಷವಾಗಿ ಡಿಸೆಂಬರ್ 2025 ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರಂ ಪುರಸಭೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಬಿಜೆಪಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ನೋಡುತ್ತಿದೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 98 ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟು ಮತಗಳ ಶೇ. 10.53 ರಷ್ಟು ಗಳಿಸಿತು. ಇದರಲ್ಲಿ ಹಿರಿಯ ನಾಯಕ ಓ. ರಾಜಗೋಪಾಲ್ ಅವರು ಮಾತ್ರ ನೇಮಂ ಸೀಟು ಗೆದ್ದಿದ್ದರು. ನಂತರ 2021 ರಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟು ಮತಗಳ ಶೇ. 11.3 ರಷ್ಟು ಗಳಿಸಿತು. ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅದೇ ವೇಳೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಒಟ್ಟು ಮತಗಳ ಶೇ. 7.58 ರಷ್ಟು ಮಾತ್ರ ಗಳಿಸಿದ್ದು 17 ಸೀಟು ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲಬಹುದು ಎಂದು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಾರೆ. ಅದು ಸಂಭವಿಸದಿದ್ದರೂ ಸಹ ಪಕ್ಷದ ಮತಹಂಚಿಕೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಬಹುಶಃ ಶೇಕಡಾ 20 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ►ಹಲವು ಪಕ್ಷಗಳು, 2 ಪ್ರಮುಖ ಒಕ್ಕೂಟಗಳು 1957 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರವನ್ನು ಮುನ್ನಡೆಸಿತು. ಇದರಲ್ಲಿ ಶೇಕಡಾ 65.49 ರಷ್ಟು ಮತದಾನವಾಗಿತ್ತು. ಇದರ ನಂತರ 1960 ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಶೇಕಡಾ 85.72 ರಷ್ಟು ದಾಖಲೆಯ ಮತದಾನವಾಯಿತು. ಇದು 34.42 ರಷ್ಟು ಮತಹಂಚಿಕೆಯೊಂದಿಗೆ 63 ಸ್ಥಾನಗಳನ್ನು ಗೆದ್ದಿತು. 1980 ರಲ್ಲಿ ಶೇಕಡಾ 72.23 ಮತದಾನದ ಹೊರತಾಗಿಯೂ LDF ರಾಜ್ಯದಲ್ಲಿ UDF ಅನ್ನು ಸೋಲಿಸಿತು. 1996 ರಲ್ಲಿ ಮತದಾರರ ಮತದಾನವು ಶೇಕಡಾ 70 ರಷ್ಟಿತ್ತು, ಆಗ UDF ಅಧಿಕಾರಕ್ಕೇರಿತು. ಒಟ್ಟಾರೆಯಾಗಿ ವರ್ಷಗಳಲ್ಲಿ ಮತದಾರರ ಮತದಾನವು ಏರಿಳಿತಗೊಂಡಿದ್ದರೂ, ಕೇರಳದಲ್ಲಿ ಚುನಾವಣಾ ಫಲಿತಾಂಶಗಳೊಂದಿಗೆ ಇದು ಸ್ಥಿರವಾದ ಸಂಬಂಧವನ್ನು ತೋರಿಸುವುದಿಲ್ಲ. ಈ ಮಧ್ಯೆ, LDF ಮತ್ತು UDF ನಲ್ಲಿ ಕೆಲವು ಶಾಶ್ವತ ಹೊಂದಾಣಿಕೆಗಳು ನಡೆದಿವೆ. ಉದಾಹರಣೆಗೆ ಎಡ ಮೈತ್ರಿಕೂಟದ ವಿವಿಧ ಆವೃತ್ತಿಗಳ ಹೊರತಾಗಿಯೂ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪ್ರಬಲ ಪಕ್ಷವಾಗಿ ಉಳಿದಿದೆ. ಅದೇ ರೀತಿ UDF ನಲ್ಲಿ ಕಾಂಗ್ರೆಸ್ನ ನಾಯಕತ್ವದ ಪಾತ್ರ ಮತ್ತು ಆಲ್ ಇಂಡಿಯಾ ಮುಸ್ಲಿಂ ಲೀಗ್ (AIMUL) ಜೊತೆಗಿನ ದೃಢ ಪಾಲುದಾರಿಕೆ ಅಸ್ತಿತ್ವದಲ್ಲಿವೆ. ಕೇರಳದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಂತರ ರಾಜಕೀಯ ಪಕ್ಷಗಳು ಆಗಾಗ್ಗೆ ತಮ್ಮ ಮಿತ್ರ ಪಕ್ಷಗಳನ್ನು ಬದಲಾಯಿಸಿಕೊಂಡಿವೆ. ಆದರೆ ಮತದಾರರ ಮೇಲಿನ ಅವರ ಹಿಡಿತ ಇನ್ನೂ ಬಲವಾಗಿದೆ. ಅಂತಹ ಒಂದು ಪಕ್ಷವೆಂದರೆ ಮುಸ್ಲಿಂ ಲೀಗ್, ಇದು ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡಿನಂತಹ ಉತ್ತರ ಜಿಲ್ಲೆಗಳಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ UDF ಗೆಲುವು ಎಂದರೆ 1967 ರಿಂದ ದೇಶದಲ್ಲಿ ಎಲ್ಲಿಯೂ ಎಡಪಂಥೀಯ ನೇತೃತ್ವದ ಸರ್ಕಾರ ಇರುವುದಿಲ್ಲ ಎಂದು ಸೆಫಾಲಜಿಸ್ಟ್ ಮತ್ತು ರಾಜಕೀಯ ವಿಶ್ಲೇಷಕ ಜೆ.ವಿ.ಸಿ. ಶ್ರೀರಾಮ್ ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ LDF ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡರೆ ಅದು ಅಷ್ಟೇ ಐತಿಹಾಸಿಕವಾಗಿರುತ್ತದೆ. ಪ್ರೊಫೆಸರ್ ಕುಮಾರ್ 2026 ರ ಕೇರಳ ವಿಧಾನಸಭಾ ಚುನಾವಣೆಯನ್ನು 1967 ರ ಮಧ್ಯಂತರ ಸಮೀಕ್ಷೆಗೆ ಹೋಲಿಸಿದ್ದಾರೆ, ಅಲ್ಲಿ CPI(M) ನೇತೃತ್ವದ ಏಳು ಪಕ್ಷಗಳ ಒಕ್ಕೂಟವು ಸಿಪಿಐ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅನ್ನು ಒಳಗೊಂಡಿದ್ದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಎದುರಿಸಲು ರಚಿಸಲಾಯಿತು. ಆದಾಗ್ಯೂ, ಅಂದಿನ ಮೈತ್ರಿಗಳ ಸ್ವರೂಪವು ಇಂದು ಕಂಡುಬರುವ ರಚನಾತ್ಮಕ ರಂಗಗಳಿಗಿಂತ ಹೆಚ್ಚು ಅಸ್ಥಿರವಾಗಿತ್ತು ಎಂದು ಅವರು ಹೇಳಿದ್ದಾರೆ. ಅತಂತ್ರ ವಿಧಾನಸಭೆ ರಚನೆಯಾದರೂ ಒಂದು ಅಥವಾ ಇನ್ನೊಂದು ಸಣ್ಣ LDF ಘಟಕವು UDF ಗೆ ಅಥವಾ ಪ್ರತಿಯಾಗಿ ಬದಲಾಗಬಹುದು, ಏಕೆಂದರೆ ಈ ಮೈತ್ರಿಗಳು ಸೈದ್ಧಾಂತಿಕವಲ್ಲ. ಆದ್ದರಿಂದ ಅಂಥಾ ತೀರ್ಪು ಬಂದರೂ ಸರ್ಕಾರ ಇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ಪ್ರೊಫೆಸರ್ ಕುಮಾರ್ ಹೇಳಿದ್ದಾರೆ. ಕೇರಳದ ರಾಜಕೀಯದಲ್ಲಿ ಬಿಜೆಪಿ ಗಮನಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತದೆ ಎಂಬುದು ಒಂದು ನಿರ್ದಿಷ್ಟ ಅಂಶವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಹಿಂದೂ ಮತಗಳನ್ನು ಕಸಿದುಕೊಂಡ ನಂತರ ಪಕ್ಷವು ಈ ಬಾರಿ 'ಅಭಿವೃದ್ಧಿ ಮಂತ್ರ'ದ ಮೇಲೆ ಪ್ರಚಾರ ಮಾಡಿ ಮಂಜೇಶ್ವರ, ಕಾಸರಗೋಡು, ಪಾಲಕ್ಕಾಡ್ ಮತ್ತು ನೇಮಂ ನಂತಹ ಪ್ರದೇಶಗಳಲ್ಲಿ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಎಲ್ಲದಕ್ಕೂ ಮೇ 4 ರಂದು ಉತ್ತರ ಸಿಗಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಈಗ ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಬಿರುಗಾಳಿ ಎಬ್ಬಿಸಿದೆ. ಚುನಾವಣಾ ಕಣದಲ್ಲಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಟಿಕೆಟ್ ಹಂಚಿಕೆ ಮತ್ತು ಬಂಡಾಯದ ಕಿಡಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ
Artemis II: ಚಂದ್ರನ ಸುತ್ತ ಪ್ರಯಾಣ ಮುಗಿಸಿ ಭೂಮಿಗೆ ಮರಳಿದ ಗಗನಯಾನಿಗಳು, ಮುಂದಿನ ಪ್ರಕ್ರಿಯೆಗಳು ಹೇಗಿರುತ್ತವೆ?
ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್– II’ನ ನಾಲ್ವರು ಗಗನಯಾನಿಗಳ ತಂಡ ಚಂದ್ರನ ಸುತ್ತಲಿನ ಪ್ರಯಾಣವನ್ನು ಮುಗಿಸಿ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ನಾಸಾದ ‘ಇಂಟೆಗ್ರಿಟಿ’ ಎಂದು ಹೆಸರಿಸಲಾದ ಓರಿಯನ್ ಕ್ಯಾಪ್ಸುಲ್ ಪೆಸಿಫಿಕ್ ಕಾಲಮಾನ ಶುಕ್ರವಾರ ಸಂಜೆ 5 ಗಂಟೆಗೆ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ಯಾರಾಚೂಟ್ ಸಹಾಯದಿಂದ ಸಮುದ್ರಕ್ಕೆ ಇಳಿಯಿತು. ಈ ಮೂಲಕ ಆರ್ಟೆಮಿಸ್ II ಮಿಷನ್ನ ಗಗನಯಾನಿಗಳು 10 ದಿನಗಳ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈಗ ಮುಂದಿನದು ಚೇತರಿಕೆ ಮತ್ತು ವೈದ್ಯಕೀಯ ತಪಾಸಣೆಗಳನ್ನು ಒಳಗೊಂಡ ಎಚ್ಚರಿಕೆಯಿಂದ ಯೋಜಿತ ಪ್ರಕ್ರಿಯೆಯಾಗಿದೆ. ನಾಸಾ ಸಿಬ್ಬಂದಿ ಸದಸ್ಯರ ಆರೋಗ್ಯ ಅಥವಾ ಖಾಸಗಿ ಜೀವನದ ಬಗ್ಗೆ ವಿವರಗಳನ್ನು ಬಿಡುಗಡೆ ಮಾಡುವುದಿಲ್ಲ. ಗಗನಯಾತ್ರಿಗಳಾದ ರೀಡ್ ವೈಸ್ಮನ್, ಕ್ರಿಸ್ಟಿನಾ ಕೋಚ್, ವಿಕ್ಟರ್ ಗ್ಲೋವರ್ ಮತ್ತು ಜೆರೆಮಿ ಹ್ಯಾನ್ಸೆನ್ ಈಗ ಭೂಮಿಗೆ ಹಿಂತಿರುಗಿದ್ದು, ಮುಂದಿನ ಪ್ರಕ್ರಿಯೆ ಈ ರೀತಿ ಇರುತ್ತದೆ. 1. ಸಮುದ್ರದಲ್ಲಿ ತಕ್ಷಣದ ಚೇತರಿಕೆ ಸುರಕ್ಷಿತವಾಗಿ ಇಳಿದ ಆದ ಕೆಲವೇ ನಿಮಿಷಗಳಲ್ಲಿ, ಚೇತರಿಕೆ ಕಾರ್ಯಾಚರಣೆಗಳು ಕಾರ್ಯರೂಪಕ್ಕೆ ಬರುತ್ತವೆ. ರಾಯಿಟರ್ಸ್ ವರದಿ ಪ್ರಕಾರ, ಕ್ಯಾಪ್ಸುಲ್ ಅನ್ನು ಸುರಕ್ಷಿತವಾಗಿರಿಸಲು ಮತ್ತು ಗಗನಯಾತ್ರಿಗಳನ್ನು ಹೊರಗೆ ಕರೆದೊಯ್ಯಲು ಯುಎಸ್ ನೌಕಾಪಡೆಯ ತಂಡಗಳನ್ನು ಮುಂಚಿತವಾಗಿ ನಿಯೋಜಿಸಲಾಗಿತ್ತು. ಈ ಪ್ರಕ್ರಿಯೆಯು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಸಿಬ್ಬಂದಿ ದೋಣಿಗಳನ್ನು ಬಳಸಿಕೊಂಡು ಕ್ಯಾಪ್ಸುಲ್ ಅನ್ನು ಸಮೀಪಿಸುತ್ತಾರೆ. ಅದರ ಹ್ಯಾಚ್ಗೆ ಗಾಳಿ ತುಂಬಬಹುದಾದ ವೇದಿಕೆಯನ್ನು ಜೋಡಿಸುತ್ತಾರೆ. ದಿ ಗಾರ್ಡಿಯನ್ ವರದಿ ಮಾಡಿದಂತೆ, ಗಗನಯಾತ್ರಿಗಳನ್ನು ನಂತರ ಎಚ್ಚರಿಕೆಯಿಂದ ಹೊರತೆಗೆದು ಪರೀಕ್ಷಿಸಲಾಗುತ್ತದೆ. ಆನಂತರ ಹತ್ತಿರದ ನೌಕಾ ಹಡಗಿಗೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತದೆ. 2. ಆರೋಗ್ಯ ತಪಾಸಣೆ ಹಡಗಿನಲ್ಲಿ ಗಗನಯಾತ್ರಿಗಳು ಆರಂಭಿಕ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ. ಸುಗಮ ಕಾರ್ಯಾಚರಣೆಯ ನಂತರವೂ, ನಾಸಾ ಆಳವಾದ ಬಾಹ್ಯಾಕಾಶ ಪ್ರಯಾಣ ಮತ್ತು ಮರು-ಪ್ರವೇಶದ ಭೌತಿಕ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹೂಸ್ಟನ್ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತಲುಪುವ ಮುನ್ನ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 3. ಬಾಹ್ಯಾಕಾಶ ನೌಕೆ ಪರಿಶೀಲನೆ ಮತ್ತು ದತ್ತಾಂಶ ಪರಿಶೀಲನೆ ಗಗನಯಾತ್ರಿಗಳು ಚೇತರಿಸಿಕೊಳ್ಳುತ್ತಿರುವಾಗ, ಎಂಜಿನಿಯರ್ಗಳು ಓರಿಯನ್ ಬಾಹ್ಯಾಕಾಶ ನೌಕೆಯ ಮೇಲೆ ಕೇಂದ್ರೀಕರಿಸುತ್ತಾರೆ. ಭೂಮಿಗೆ ಹಿಂತಿರುಗುವಾಗ ಕ್ಯಾಪ್ಸುಲ್ 5,000°F ನ ಸುಡುವ ತಾಪಮಾನವನ್ನು ಯಶಸ್ವಿಯಾಗಿ ತಡೆದುಕೊಳ್ಳುವ ಮೂಲಕ ಮರುಪ್ರವೇಶವು ಕಾರ್ಯಾಚರಣೆಗೆ ಒಂದು ನಿರ್ಣಾಯಕ ಮೈಲಿಗಲ್ಲಾಗಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಸಂಗ್ರಹಿಸಲಾದ ಡೇಟಾವನ್ನು, ವಿಶೇಷವಾಗಿ ಹೀಟ್ ಶೀಲ್ಡ್ ಮತ್ತು ಆನ್ಬೋರ್ಡ್ ವ್ಯವಸ್ಥೆಗಳಲ್ಲಿ, ಭವಿಷ್ಯದ ವಿಮಾನಗಳನ್ನು ಪರಿಷ್ಕರಿಸಲು ಈಗ ವಿಶ್ಲೇಷಿಸಲಾಗುತ್ತದೆ. 4. ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಸಿದ್ಧತೆ ಚೇತರಿಕೆ ಮತ್ತು ವಿಶ್ಲೇಷಣೆಯ ಹೊರತಾಗಿ, ಆರ್ಟೆಮಿಸ್ II ನಾಸಾದ ದೀರ್ಘಕಾಲೀನ ಗುರಿಗಳಲ್ಲಿ ಪಾತ್ರವಹಿಸುತ್ತದೆ. ದಿ ಗಾರ್ಡಿಯನ್ ವರದಿ ಹೇಳುವಂತೆ, ಈ ಕಾರ್ಯಾಚರಣೆಯು ಮಾನವರು ಮತ್ತೊಮ್ಮೆ ಭೂಮಿ ಮತ್ತು ಚಂದ್ರನ ನಡುವಿನ ಪ್ರದೇಶವಾದ ಸಿಸ್ಲುನಾರ್ ಬಾಹ್ಯಾಕಾಶದ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂಬುದನ್ನು ತೋರಿಸಿತು. ಗಗನಯಾತ್ರಿಗಳು ಜೀವ ಬೆಂಬಲ, ವಿಕಿರಣ ಪತ್ತೆ ಮತ್ತು ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಾದ ಕಾರ್ಯಾಚರಣೆಯ ಕಾರ್ಯವಿಧಾನಗಳು ಸೇರಿದಂತೆ ನಿರ್ಣಾಯಕ ವ್ಯವಸ್ಥೆಗಳನ್ನು ಸಹ ಪರೀಕ್ಷಿಸಿದರು. ಈ ಒಳನೋಟಗಳು ಈ ದಶಕದ ನಂತರ ಮಾನವರನ್ನು ಚಂದ್ರನ ಮೇಲ್ಮೈಗೆ ಹಿಂದಿರುಗಿಸುವ ಗುರಿಯನ್ನು ಹೊಂದಿರುವ ಆರ್ಟೆಮಿಸ್ III ಗಾಗಿ ಯೋಜನೆಗೆ ನೇರವಾಗಿ ಪೂರಕವಾಗಿರುತ್ತವೆ. 1972ರಲ್ಲಿ ‘ಅಪೋಲೊ–13’ ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. ಅದು 2,48,655 ಮೈಲಿ ದೂರವನ್ನು ಕ್ರಮಿಸಿತ್ತು. ಇದೀಗ ‘ಆರ್ಟೆಮಿಸ್– II’ರ ಗಗನಯಾನಿಗಳ ತಂಡವು ಒಟ್ಟು 6,94,392 ಮೈಲಿ ಪ್ರಯಾಣಿಸಿದ್ದು ಅಪೋಲೊದ ದಾಖಲೆಯನ್ನು ಮುರಿದಿದೆ. 54 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆ ಕೂಡಾ ಆರ್ಟೆಮಿಸ್–II ತಂಡದ್ದಾಗಿದೆ. ►ಭೂಮಿಯ ಬಗ್ಗೆ ಹೊಸ ದೃಷ್ಟಿಕೋನ ‘ಅಪೋಲೊ’ದ ನಂತರ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಆರ್ಟೆಮಿಸ್ II ಮುನ್ನುಡಿಯಾಗಿದೆ. ಆರ್ಟೆಮಿಸ್ II ಅನ್ನು ಭವಿಷ್ಯದ ಚಂದ್ರ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ಅಪೊಲೊ ಯುಗದ ನಂತರ ಮೊದಲ ಬಾರಿಗೆ ಚಂದ್ರನ ಮೇಲ್ಮೈಯಲ್ಲಿ ಗಗನಯಾತ್ರಿಗಳನ್ನು ಇಳಿಸುವ ಗುರಿಯನ್ನು ಹೊಂದಿರುವ ಆರ್ಟೆಮಿಸ್ IV ಗಾಗಿ ನಿರ್ಣಾಯಕ ಪರೀಕ್ಷಾ ಹಾರಾಟ ಎಂದು ವ್ಯಾಪಕವಾಗಿ ನೋಡಲಾಗುತ್ತದೆ. ಇಂಜಿನಿಯರ್ ಗಳು ಈಗ ಕಾರ್ಯಾಚರಣೆಯ ಪ್ರಮುಖ ಡೇಟಾವನ್ನು ವಿಶ್ಲೇಷಿಸುತ್ತಾರೆ. ಇದರಲ್ಲಿ ಓರಿಯನ್ ಕ್ಯಾಪ್ಸುಲ್ ನ ಶಾಖ ಕವಚದ ಕಾರ್ಯಕ್ಷಮತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ಜೀವ ಬೆಂಬಲ ತಂತ್ರಜ್ಞಾನ ಸೇರಿವೆ. ಇವೆಲ್ಲವೂ ಮಾನವರನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಆಳವಾಗಿ ಸಾಗಿಸಲು ಅವಶ್ಯಕವಾಗಿದೆ. ಪ್ರಯಾಣದಲ್ಲಿ ಅತ್ಯಂತ ಕಷ್ಟಕರವಾದ ಹಂತವೆಂದರೆ ಮರು-ಪ್ರವೇಶದ ಅಡಚಣೆ. ಬಾಹ್ಯಾಕಾಶ ನೌಕೆಯ ಸುತ್ತಲೂ ತೀವ್ರವಾದ ಶಾಖವು ನಿರ್ಮಾಣವಾಗುವುದರಿಂದ ಇದು ಹಲವಾರು ನಿರ್ಣಾಯಕ ನಿಮಿಷಗಳ ಕಾಲ ಸಿಬ್ಬಂದಿ ಮತ್ತು ಮಿಷನ್ ನಿಯಂತ್ರಣದ ನಡುವಿನ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಈ ಮಿಷನ್ ಹಲವಾರು ಪ್ರಥಮಗಳನ್ನು ಕಂಡಿದೆ. ಗ್ಲೋವರ್ ಚಂದ್ರನ ಸುತ್ತ ಪ್ರಯಾಣಿಸಿದ ಮೊದಲ ಕಪ್ಪು ವರ್ಣೀಯ ವ್ಯಕ್ತಿಯಾದರು. ಕೋಚ್ ಮೊದಲ ಮಹಿಳೆ ಮತ್ತು ಹ್ಯಾನ್ಸೆನ್ ಮೊದಲ ಅಮೆರಿಕನ್ ಅಲ್ಲದ ವ್ಯಕ್ತಿ ಆಗಿದ್ದರು. ತಮ್ಮ ಪ್ರಯಾಣದ ಸಮಯದಲ್ಲಿ, ಸಿಬ್ಬಂದಿ ಚಂದ್ರನ ಮೇಲ್ಮೈಯ ಎದ್ದುಕಾಣುವ ವಿವರವಾದ ವೈಶಿಷ್ಟ್ಯಗಳನ್ನು ವರದಿ ಮಾಡಿದರು. ಅವರು ಸೂರ್ಯಗ್ರಹಣ ಮತ್ತು ಉಲ್ಕೆಯ ಪ್ರಭಾವಗಳಿಗೆ ಸಾಕ್ಷಿಯಾದರು. ನಮ್ಮ ಗ್ರಹವು ವಿಶ್ವದಲ್ಲಿ ಅಪರೂಪದ ಮತ್ತು ಸುಂದರವಾದ ಮನೆಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಮಿಷನ್ ಜಗತ್ತನ್ನು ಪ್ರೋತ್ಸಾಹಿಸುತ್ತದೆ ಎಂದು ಮಿಷನ್ ಕಮಾಂಡರ್ ವೈಸ್ಮನ್ ಹೇಳಿದ್ದಾರೆ.
ಯುವಕನಿಂದ HIV ರಕ್ತವಿರುವ ಇಂಜೆಕ್ಷನ್ ಚುಚ್ಚಲ್ಪಟ್ಟ ಯುವತಿ ಸಾವಿಗೆ ಶರಣು
ಹೈದರಾಬಾದ್, ಎ. 11: ಮದುವೆಯಾಗಲು ನಿರಾಕರಿಸಿದ ಕಾರಣ ಯುವಕನೊಬ್ಬ ಇಂಜೆಕ್ಷನ್ ಮೂಲಕ HIV ಸೋಂಕಿತ ರಕ್ತವನ್ನು ಚುಚ್ಚಿದ ಘಟನೆದಿಂದ ಖಿನ್ನಳಾದ 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ರಮಣಿ ಸಾವಿಗೆ ಶರಣಾದ ಯುವತಿ. ಆಕೆ ಆರೋಪಿ ಮನೋಹರ್ ನ ಸಂಬಂಧಿಯಾಗಿದ್ದು, ಆತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಆತ HIV ಸೋಂಕಿತನೆಂದು ತಿಳಿದುಬಂದ ಬಳಿಕ ರಮಣಿ ವಿವಾಹವನ್ನು ರದ್ದುಪಡಿಸಿದ್ದಳು. ಕಳೆದ ತಿಂಗಳು ಮನೋಹರ್ ಯುವತಿಯ ಮನೆಗೆ ನುಗ್ಗಿ, ಬಲವಂತವಾಗಿ ಆಕೆಗೆ HIV ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ಚುಚ್ಚಿದ್ದ. ಮನೋಹರ್ ನ ಪಾಲಕರು HIV ಸೋಂಕು ಪೀಡಿತರಾಗಿದ್ದರಿಂದ, ರಮಣಿಯ ಹೆತ್ತವರು ಆತನನ್ನು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಆತ ಕೂಡ HIV ಸೋಂಕಿತನೆಂದು ದೃಢಪಟ್ಟಿತ್ತು. ಆ ನಂತರ ಯುವತಿ ತಕ್ಷಣವೇ ವಿವಾಹವನ್ನು ರದ್ದುಪಡಿಸಿದಳು. ಇದರಿಂದ ಕೆರಳಿದ ಮನೋಹರ್ ಆಕೆಯ ಮೇಲೆ ದಾಳಿ ನಡೆಸಿ HIV ರಕ್ತವಿರುವ ಇಂಜೆಕ್ಷನ್ ಚುಚ್ಚಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. HIV ಇಂಜೆಕ್ಷನ್ ಚುಚ್ಚಿದ ಕಾರಣ ಭಯಭೀತಳಾದ ಯುವತಿ ಸಾಮಾಜಿಕ ಕಳಂಕ ಹಾಗೂ ಮಾನಸಿಕ ಯಾತನೆಯಿಂದಾಗಿ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಹೊಸದಿಲ್ಲಿ, ಎ. 11: ಅಪ್ರಾಪ್ತ ವಯಸ್ಸಿನ ಬಾಲಕಿ ಸ್ವಇಚ್ಛೆಯಿಂದ ಯಾರೊಂದಿಗಾದರೂ ಓಡಿ ಹೋದರೆ, ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಚತ್ತೀಸ್ ಗಢ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ ಎಂದು barandbench.com ಶನಿವಾರ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ 2022ರ ಸೆಪ್ಟೆಂಬರ್ ನಲ್ಲಿ 15 ವರ್ಷದ ಬಾಲಕಿ ಓಡಿ ಹೋದ ಪ್ರಕರಣದಲ್ಲಿ ಪೊಕ್ಸೊ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ 24 ವರ್ಷದ ವ್ಯಕ್ತಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಯಾವುದೇ ಸಮಯದಲ್ಲಿ ಮೇಲ್ಮನವಿದಾರನು ಬಾಲಕಿಯನ್ನು ಬಲವಂತವಾಗಿ ಮನೆ ತ್ಯಜಿಸುವಂತೆ ಮನವೊಲಿಸಿದ್ದಾನೆ ಅಥವಾ ಪ್ರೇರೇಪಿಸಿದ್ದಾನೆ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗ್ರವಾಲ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಬಾಲಕಿ ಸ್ವಇಚ್ಛೆಯಿಂದ ಆರೋಪಿಯ ಜೊತೆಗೆ ಹೋಗಿದ್ದಾಳೆ. ಯಾವುದೇ ವಿರೋಧ ತೋರದೆ, ದೂರು ನೀಡದೆ ಅವನ ಜೊತೆ ಉಳಿದಿದ್ದಾಳೆ ಎಂದು ಪೀಠ ತಿಳಿಸಿದೆ. ಶಾಲೆಗೆ ಹೋದ ಬಾಲಕಿ ಹಿಂದಿರುಗದೇ ಇದ್ದಾಗ ಆಕೆಯ ತಂದೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಆತನ ವಿರುದ್ಧ 2022ರ ಸೆಪ್ಟೆಂಬರ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಾಲಕಿ ಈ ವ್ಯಕ್ತಿಯೊಂದಿಗೆ ರಾಯಪುರಕ್ಕೆ ಹಾಗೂ ಅನಂತರ ಹೈದರಾಬಾದ್ ಗೆ ಓಡಿ ಹೋಗಿದ್ದಳು. ನಂತರ ಆತನೊಂದಿಗೆ ಆಂಧ್ರಪ್ರದೇಶದ ವಿಜಯವಾಡಕ್ಕೆ ಪ್ರಯಾಣಿಸಿದ್ದಳು. ಬಳಿಕ ಅಗ್ರಪಳ್ಳಿ ತಲುಪಿದ್ದಳು. ಅಗ್ರಪಳ್ಳಿಯಲ್ಲಿ ಅವರು ಸುಮಾರು ಒಂದು ತಿಂಗಳು ತಂಗಿದ್ದರು. ಈ ನಡುವೆ ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ಪೊಲೀಸರು ಅವರಿಬ್ಬರನ್ನು ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ 2023ರ ಅಕ್ಟೋಬರ್ ನಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ವ್ಯಕ್ತಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.
Middle East Conflict- ಡೀಸೆಲ್, ವಿಮಾನ ಇಂಧನದ ಮೇಲಿನ ಆಕಸ್ಮಿಕ ತೆರಿಗೆ ಹೆಚ್ಚಿಸಿದೆ ಕೇಂದ್ರ ಸರ್ಕಾರ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ, ದೇಶೀಯವಾಗಿ ಇಂಧನದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರ ಇಂಧನ ರಫ್ತಿನ ಮೇಲಿನ ಆಕಸ್ಮಿಕ ಲಾಭದ ಮೇಲೆ ಹಾಕುವ ತೆರಿಗೆ() ತೆರಿಗೆಗಳನ್ನು (duties) ಪರಿಷ್ಕರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಇಂಧನಗಳ ಬೆಲೆಯಲ್ಲಿ ಕಂಡುಬಂದ ಏರಿಳಿತಗಳಿಗೆ ಅನುಗುಣವಾಗಿ ಭಾರತ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ನೂತನ ಅಧಿಸೂಚನೆಯ ಪ್ರಕಾರ ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು () ಪ್ರತಿ ಲೀಟರ್ಗೆ 55.5 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ 42 ರೂಪಾಯಿಗಳಿಗೆ ಏರಿಸಲಾಗಿದೆ. ಈ ಬದಲಾವಣೆಗಳು ಏಪ್ರಿಲ್ 11ರಿಂದಲೇ ಜಾರಿಗೆ ಬರಲಿವೆ.
ಮಂಗಳೂರು: ಲಾರಿ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು
ಮಂಗಳೂರು: ರಾ.ಹೆ. 66ರ ನಂತೂರು-ಪಂಪ್ವೆಲ್ ಸರ್ವಿಸ್ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ಸವಾರನನ್ನು ಗೋಪಾಲ್ (29) ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಗುರುಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ ಮುಳಿಹಿತ್ಲು ಬಳಿ ವಾಸವಾಗಿದ್ದರು ಎನ್ನಲಾಗಿದೆ. ಈ ಅಪಘಾತದಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು, ಸವಾರನಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Kasaragod ತಾಲೂಕಿನಲ್ಲಿ ಸರಕಾರಿ ವ್ಯವಹಾರಗಳಲ್ಲಿ ಕನ್ನಡ ಬಳಕೆ ಕುರಿತು ನಿರ್ಧರಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ
ಕೊಚ್ಚಿ, ಎ.11: ಕಾಸರಗೋಡು ತಾಲೂಕಿನಲ್ಲಿ ಸರಕಾರಿ ಪತ್ರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಅನುಮತಿಸಿರುವ 1982ರ ಸುತ್ತೋಲೆಯ ಅನುಷ್ಠಾನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಎರಡು ತಿಂಗಳೊಳಗೆ ಪರಿಶೀಲಿಸಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಕಾಸರಗೋಡು ಮೂಲದ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೌಮೇನ್ ಸೇನ್ ಹಾಗೂ ನ್ಯಾ. ಶ್ಯಾಮಕುಮಾರ ಅವರ ಪೀಠವು ಈ ನಿರ್ದೇಶನವನ್ನು ಹೊರಡಿಸಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳು ಮತ್ತು ಕಚೇರಿಗಳು ಕನ್ನಡದಲ್ಲಿರುವ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. 1982ರ ಮಾರ್ಚ್ 5ರಂದು ಕಣ್ಣೂರು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯಲ್ಲಿ ಅಂದಿನ ಕಾಸರಗೋಡು ತಾಲೂಕನ್ನು ಕನ್ನಡ ಭಾಷಿಕ ಪ್ರದೇಶ ಎಂದು ಘೋಷಿಸಲಾಗಿದ್ದು, ಅಧಿಕೃತ ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಲಾಗಿತ್ತು. ಸುತ್ತೋಲೆಯ ಅನುಷ್ಠಾನಕ್ಕಾಗಿ ಎಲ್ಲ ಸಂಬಂಧಿತ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಈ ವರ್ಷದ ಜನವರಿಯಲ್ಲಿ ಸರಕಾರಕ್ಕೆ ಅಹವಾಲು ಸಲ್ಲಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ನ್ಯಾಯಾಲಯವು ನಿರ್ದೇಶಿಸಿದರೆ ಸೂಕ್ತ ಪ್ರಾಧಿಕಾರವು ಅರ್ಜಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಸರಕಾರ ತಿಳಿಸಿದ ಬಳಿಕ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು. ಈ ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ಎಂಟು ವಾರಗಳೊಳಗೆ ಅರ್ಜಿದಾರರಿಗೆ ತಮ್ಮ ಅಭಿಪ್ರಾಯ ಮಂಡನೆಗೆ ಸಮಂಜಸವಾದ ಅವಕಾಶ ನೀಡಿದ ಬಳಿಕ ಕಾನೂನಿನ ಪ್ರಕಾರ ಅರ್ಜಿಯನ್ನು ಪರಿಶೀಲಿಸಿ ನಿರ್ಧರಿಸಬೇಕು. ನಂತರ ಒಂದು ವಾರದೊಳಗೆ ಕಾರಣಸಹಿತ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.
ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಸುಲಿಗೆಗೆ ಯತ್ನ ಆರೋಪ: ಪ್ರಕರಣ ದಾಖಲು
ಸುಳ್ಯ: ಐವರ್ನಾಡಿನಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಕಾರಿಗೆ ಹತ್ತುವಾಗ ಅಪರಿಚಿತ ವ್ಯಕ್ತಿಗಳು ಕಾರಿನ ಚಾಲಕನಿಗೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಗುಡಲೂರು ನೀಲಗಿರಿಯ ಅರುಣ್ ಕುಮಾರ್ ಎಂಬವರು ತಮಿಳುನಾಡಿನಿಂದ ಮೈಸೂರು ಆಗಿ ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ಧಾಳಕ್ಕೆ ಹೋಗುವಾಗ ರಾತ್ರಿ 12.00 ಗಂಟೆ ಸಮಯಕ್ಕೆ ಐವರ್ನಾಡು ಗ್ರಾಮದ ಪುತ್ತಿಲ ಸಮೀಪ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದರು. ಬಳಿಕ ಕಾರು ಚಲಾಯಿಸಲು ಕಾರಿನ ಹತ್ತಿರ ಬಂದಾಗ ದೂರದಿಂದ ವಿಶಲ್ ಹಾಕಿದ ಶಬ್ದ ಕೇಳಿದ್ದು ಈ ವೇಳೆ ಕಾರಿನ ಮೇಲೆ ಕಲ್ಲು ಎಸೆದುದಿದ್ದಾರೆ. ಕಲ್ಲು ಕಾರಿನ ಗ್ಲಾಸಿಗೆ ಬಿದ್ದಿದ್ದು ಕಾರಿನ ಮುಂದಿನ ಗ್ಲಾಸ್ ಬಿರುಕುಬಿಟ್ಟಿದೆ. ಈ ವೇಳೆ ಕಾರನ್ನು ಮುಂದೆ ಚಲಿಸಲು ಪ್ರಯತ್ನಿಸಿದಾಗ ಇಬ್ಬರು ಬೈಕಲ್ಲಿ ಬಂದ ವ್ಯಕ್ತಿಗಳು ಅರುಣ್ ಅವರ ಶರ್ಟ್ ಕಾಲರ್ ಹಿಡಿದೆಳೆದು ಮುಖದ ಮೇಲೆ ಖಾರದ ಪುಡಿ ಎರಚಿದ್ದು ಅರುಣ್ ತಪ್ಪಿಸಿಕೊಂಡು ಮುಂದೆ ಹೋಗಿ ರಸ್ತೆ ಬದಿ ಇದ್ದವರಲ್ಲಿ ಘಟಣೆಯ ಬಗ್ಗೆ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅರುಣ್ ಕುಮಾರ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಲಾಂಛನ ಬಿಡುಗಡೆ
ಮಂಗಳೂರು: ಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ ಕೂಡ ಕೊಂಕಣಿಗರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯ ಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಇದು ವಿಶ್ವ ದಾಖಲೆ ಆಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಾಂಡ್ ಸೊಭಾಣ್ ಕೊಂಕಣಿಯ ಸಾಂಸೃತಿಕ ಸಂಘಟನೆಯ ಮಾಣಿಕ್ಯ ಮಹೋತ್ಸವ ಆಚರಣೆಯ ಪ್ರಯುಕ್ತ ನ.3ರಿಂದ 15ರವರೆಗೆ ನಡೆಯಲಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತವನ್ನು ವೀಣೆಯ ಪ್ರತಿಕೃತಿ ಮೇಲಿರುವ 12 ವಿಭಿನ್ನ ರಂಗಿನ ದೀಪಗಳನ್ನು ಬೆಳಗಿಸಿ ಮತ್ತು ಹೂವಿನ ಮೊಗ್ಗಿನಿಂದ ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ ಅವರಿಗೆ ಸಂಗೀತ ಬೇಟನ್ ಹಸ್ತಾಂತರಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಮತ್ತು ಕಲಾವಿದ ಮೈಕಲ್ ಗ್ರೇಶಿಯಸ್ ಶುಭ ಹಾರೈಸಿದರು. ಪ್ರಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಲುವಿ ಪಿಂಟೊ ಕೊಂಕಣಿ ಸಂಗೀತಕ್ಕೆ ಮಹೋನ್ನತ ಹಿರಿಮೆ ತಂದು ಕೊಟ್ಟ ಎರಿಕ್ ಒಝೇರಿಯೊರವರ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ. ಇದು ಕೇವಲ ಗಿನ್ನೆಸ್ ದಾಖಲೆಯ ಪ್ರಯತ್ನವಾಗದೆ ಕೊಂಕಣಿಯ ಒಗ್ಗಟ್ಟನ್ನು ಆಚರಿಸುವ, ಕೊಂಕಣಿಯ ಬಾವುಟ ವನ್ನು ಜಗದೆತ್ತರಕ್ಕೆ ಏರಿಸುವ ಹಾಗೂ ಈ ಮೂಲಕ ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಅವಕಾಶವಾಗಲಿದೆ ಎಂದು ಹೇಳಿದರು. ಗಾಯಕಿ ಜೊಯ್ಸ್ ಒಝೇರಿಯೊರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಮತ್ತು ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು. ರೈನಾ ಸಿಕ್ವೇರಾ ನೇತೃತ್ವದಲ್ಲಿ ಸುಮೇಳ್ ತಂಡದಿಂದ ಗಾಯನ ನಡೆಯಿತು. ಮಾಂಡ್ ಸೊಭಾಣ್ ನಡೆದು ಬಂದ ಹಾದಿಯ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಲಾಂಗಣ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ ವಂದಿಸಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
ಮೀಫ್ ಸ್ಕೌಟ್ ಮತ್ತು ಗೈಡ್ಸ್ ಕಾರ್ಯಗಾರಕ್ಕೆ ಚಾಲನೆ
ಮಂಗಳೂರು, ಎ.11: ಮೀಫ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಶಿಸ್ತು, ಸೌಹಾರ್ದ ಹಾಗೂ ರಾಷ್ಟ್ರೀಯತೆಯನ್ನು ಬಳಪಡಿಸುವ ಉದ್ದೇಶದಿಂದ ಮೀಫ್ ಶೀಕ್ಷಕ- ಶಿಕ್ಷಕಿಯರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಗಾರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ. ಇದರ ಸಹಯೋಗದೊಂದಿಗೆ ಶನಿವಾರ ಪಿಲಿಕುಳ ನಿಸರ್ಗಧಾಮ ತರಬೇತಿ ಕೇಂದ್ರದಲ್ಲಿ ಆರಂಭ ಗೊಂಡಿತು. ಜಿಲ್ಲಾ ಸ್ಕೌಟ್ಸ್ ಪ್ರಧಾನ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕಾರ್ಯಗಾರದ ರೂಪು ರೇಖೆಗಳನ್ನು ವಿವರಿಸಿದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಪರ್ವೀಝ್ ಅಲಿ ಮತ್ತು ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಅಂಬರ್ವ್ಯಾಲಿ ಉಪಸ್ಥಿತರಿದ್ದರು. ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಶಿಬಿರದ ಪ್ರಯೋಜಕತ್ವ ವಹಿಸಿದ್ದು, 25 ವಿದ್ಯಾ ಸಂಸ್ಥೆ ಯಿಂದ 50 ಶಿಬಿರಾರ್ಥಿಗಳು ಒಂದು ವಾರದ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
Tamil Nadu | ಅಲ್ಪಸಂಖ್ಯಾತರನ್ನು ಭೀತಿಯಲ್ಲಿ ಇರಿಸುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿ: ಸ್ಟಾಲಿನ್
ಚೆನ್ನೈ, ಎ. 11: ಅಲ್ಪಸಂಖ್ಯಾತರನ್ನು ಭೀತಿಯಲ್ಲಿ ಇರಿಸುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ರಾಜ್ಯಗಳಲ್ಲಿ ಮುಸ್ಲಿಮರು ದಾಳಿಗೆ ಗುರಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಈಗ ಕ್ರಿಸ್ಮಸ್ ಅನ್ನು ಕೂಡ ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಕ್ರೈಸ್ತರನ್ನು ಗುರಿ ಮಾಡಲಾಗುತ್ತಿದೆ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರ ಅಭದ್ರತೆಯ ಸ್ಥಿತಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಬೇಕು ಎಂಬುದು ಬಿಜೆಪಿಯ ಕಾರ್ಯಯೋಜನೆಯಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಅದಕ್ಕಾಗಿಯೇ ಅದು ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತು. ಅನಂತರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತು. ಈಗ ಅದು FCRA ಅನ್ನು ತಿದ್ದುಪಡಿ ಮಾಡುವ ಆತುರದಲ್ಲಿದೆ ಎಂದು ಅವರು ತಿಳಿಸಿದರು. ಈ ಮೂರು ತಿದ್ದುಪಡಿಗಳನ್ನು ಬೆಂಬಲಿಸುವ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಳನಿಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಯೋಗಕ್ಷೇಮದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ಭಾರತ ಯಾವಾಗಲೂ ಜಾತ್ಯತೀತ ರಾಷ್ಟ್ರವಾಗಿರಬೇಕು; ಎಲ್ಲಾ ಧರ್ಮಗಳಿಗೆ ಸೇರಿದ ಜನರನ್ನು ಸಮಾನವಾಗಿ ಗೌರವಿಸಬೇಕು ಹಾಗೂ ಅಲ್ಪಸಂಖ್ಯಾತರಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿಯಬೇಕು ಎಂಬುದು ಪಕ್ಷದ ಅಚಲ ನಿಲುವಾಗಿದೆ ಎಂದು ಅವರು ಹೇಳಿದರು. ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಬೆದರಿಕೆ ಬಂದರೆ, ಅದರ ವಿರುದ್ಧ ಧ್ವನಿ ಎತ್ತುವ ಮೊದಲ ಪಕ್ಷ ಡಿಎಂಕೆಯಾಗಿರುತ್ತದೆ ಎಂದು ಸ್ಟಾಲಿನ್ ಹೇಳಿದರು.
Thailandನಿಂದ ಗಡಿಪಾರಾದ ಭೂಗತ ಪಾತಕಿ: ಸಾಹಿಲ್ ಚೌಹಾಣ್ ಬಂಧನ
ಗುರ್ಗಾಂವ್, ಎ. 11: ಥೈಲ್ಯಾಂಡ್ ನಿಂದ ಗಡಿಪಾರು ಮಾಡಲಾದ ಭೂಗತ ಪಾತಕಿ ಸಾಹಿಲ್ ಚೌಹಾಣ್ ನನ್ನು ವಿಶೇಷ ಕಾರ್ಯ ಪಡೆ (STF) ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಗತ ಪಾತಕಿ ಕೌಸಲ್ ಚೌಧರಿಯ ಸಹಚರ ಚೌಹಾಣ್ ನನ್ನು ಅಂಬಾಲದ STF ತಂಡ ದಿಲ್ಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿತು. ಅಧಿಕಾರಿಗಳ ಪ್ರಕಾರ, ಚೌಹಾಣ್ ಹರಿಯಾಣದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ರಾಜ್ಯಗಳ ಇತರ ತನಿಖಾ ಸಂಸ್ಥೆಗಳು ಆತನ ಮೇಲೆ ಕಣ್ಣಿಟ್ಟಿದ್ದವು. ಚೌಹಾಣ್ ವಿರುದ್ಧ 16 ಪ್ರಕರಣಗಳಿವೆ. ಈತ ಕೌಸಲ್ ಚೌಧರಿ ಗ್ಯಾಂಗ್, ಭೂಪ್ಪಿ ರಾಣಾ ಗ್ಯಾಂಗ್ ಹಾಗೂ ದವೀಂದರ್ ಬಂಬಿಹಿಯಾ ಗ್ಯಾಂಗ್ ನ ನಿಕಟ ಸಹಚರ. ಚೌಹಾಣ್ ಥೈಲ್ಯಾಂಡ್ ತಲುಪಿದ್ದಾನೆ ಎಂದು ಪಂಜಾಬ್ ಪೊಲೀಸರು ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದ ಬಳಿಕ ಹರಿಯಾಣದ ವಿಶೇಷ ಕಾರ್ಯ ಪಡೆ ಕ್ರಮ ಕೈಗೊಂಡು ಆತನನ್ನು ಥೈಲ್ಯಾಂಡ್ ನಿಂದ ಗಡಿಪಾರು ಮಾಡಿಸಿತು.
2028ರಿಂದ ದಿಲ್ಲಿಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯಿಲ್ಲ!
ಹೊಸದಿಲ್ಲಿ, ಎ. 11: ದಿಲ್ಲಿ ಸರಕಾರ ಸಾರ್ವಜನಿಕ ಪ್ರತಿಕ್ರಿಯೆಗಾಗಿ ದಿಲ್ಲಿ ಇಲೆಕ್ಟ್ರಿಕ್ ವಾಹನ (EV) ನೀತಿ 2026-30ರ ಕರಡನ್ನು ಬಿಡುಗಡೆ ಮಾಡಿದ್ದು, ಹೊಸ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು 2028ರಿಂದ ಹಾಗೂ ತ್ರಿಚಕ್ರ ವಾಹನಗಳ ನೋಂದಣಿಯನ್ನು 2027ರಿಂದ ನಿಷೇಧಿಸುವ ಮೂಲಕ ಇಲೆಕ್ಟ್ರಿಕ್ ಚಾಲಿತ ವಾಹನಗಳತ್ತ ಪ್ರಮುಖ ಪರಿವರ್ತನೆಯನ್ನು ಪ್ರಸ್ತಾವಿಸಿದೆ. ಕರಡು ನೀತಿಯನ್ನು ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ದಿನಗಳವರೆಗೆ ಸಾರ್ವಜನಿಕ ಅಭಿಪ್ರಾಯಗಳಿಗೆ ಮುಕ್ತವಾಗಿರುತ್ತದೆ. ಅನಂತರ ಅಂತಿಮ ನೀತಿಯನ್ನು ಅಧಿಸೂಚಿಸಲಾಗುತ್ತದೆ ಹಾಗೂ 2030ರವರೆಗೆ ಜಾರಿಯಲ್ಲಿರುತ್ತದೆ. ಕರಡಿನ ಪ್ರಕಾರ, ದಿಲ್ಲಿ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುವ ಹೊಗೆಯು ಸುಮಾರು ಶೇ. 23 ಕೊಡುಗೆ ನೀಡುವುದರಿಂದ, ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಹಾಗೂ ದಿಲ್ಲಿಯಲ್ಲಿ ಸ್ವಚ್ಛ ವಾಹನ ಸಂಚಾರವನ್ನು ಉತ್ತೇಜಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ದ್ವಿಚಕ್ರ, ತ್ರಿಚಕ್ರ ಕುರಿತಂತೆ ದಿಲ್ಲಿ EV ಕರಡು ನೀತಿ ಏನು ಹೇಳುತ್ತದೆ: 2028ರಿಂದ ದಿಲ್ಲಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಹೊಸ ನೋಂದಣಿಗೆ ಅವಕಾಶ ನೀಡಲಾಗುವುದು. ಅದೇ ರೀತಿ 2027ರಿಂದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು. 2030ರ ವೇಳೆಗೆ ಶಾಲಾ ಬಸ್ ಗಳಲ್ಲಿ ಕನಿಷ್ಠ ಶೇ. 30 ಎಲೆಕ್ಟ್ರಿಕ್ ಚಾಲಿತವಾಗಿರಬೇಕು. ಸರಕಾರಿ ವಾಹನಗಳನ್ನು ಕ್ರಮೇಣ ಎಲೆಕ್ಟ್ರಿಕ್ ಚಾಲಿತ ವಾಹನಗಳಾಗಿ ಬದಲಾಯಿಸಬೇಕು ಎಂದು ಕರಡು ನೀತಿ ಪ್ರಸ್ತಾವಿಸಿದೆ. ಕರಡು ಖರೀದಿದಾರರಿಗೆ ಬ್ಯಾಟರಿ ಸಾಮರ್ಥ್ಯಕ್ಕೆ ಸಂಬಂಧಿಸಿದ ಖರೀದಿ ಪ್ರೋತ್ಸಾಹಕಗಳನ್ನು ಪ್ರಸ್ತಾವಿಸಿದೆ. 2.25 ಲಕ್ಷ ರೂ.ವರೆಗಿನ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರೋತ್ಸಾಹ ಧನ ಮೊದಲ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 10,000 ರೂ.ನಿಂದ ಪ್ರಾರಂಭವಾಗುತ್ತದೆ (ಗರಿಷ್ಠ 30 ಸಾವಿರ ರೂ.). ಎರಡನೇ ವರ್ಷದಲ್ಲಿ ಇದು ಪ್ರತಿ ಕಿ.ವ್ಯಾ.ಗೆ 6,600 ರೂ. (ಗರಿಷ್ಠ 20 ಸಾವಿರ ರೂ.)ಗೆ ಇಳಿಯುತ್ತದೆ ಹಾಗೂ ಮೂರನೇ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 3,300 ರೂ. (ಗರಿಷ್ಠ 10,000 ರೂ.)ಗೆ ಕಡಿಮೆಯಾಗುತ್ತದೆ. ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಇ-ರಿಕ್ಷಾ) ಮೊದಲ ವರ್ಷ 50,000 ರೂ., ಎರಡನೇ ವರ್ಷ 40,000 ರೂ. ಹಾಗೂ ಮೂರನೇ ವರ್ಷ 30,000 ರೂ.ವನ್ನು ಪಡೆಯುತ್ತವೆ. ಇಲೆಕ್ಟ್ರಿಕ್ ಸರಕು ಸಾಗಾಟ ವಾಹನಗಳು (ಎನ್ಐ ವರ್ಗ) ಮೊದಲ ವರ್ಷ 1 ಲಕ್ಷ ರೂ., ಎರಡನೇ ವರ್ಷ 75,000 ರೂ. ಹಾಗೂ ಮೂರನೇ ವರ್ಷ 50 ಸಾವಿರ ರೂ. ಪಡೆಯಲು ಅರ್ಹವಾಗಿವೆ.
ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆ: ಆರ್ಯನ್ ಕರ್ಕೇರಗೆ ಚಿನ್ನದ ಪದಕ
ಮಂಗಳೂರು, ಎ.11: ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಆರ್ಯನ್ ಕರ್ಕೇರ ಅವರು ಜೂನಿಯರ್ ರಾಜ್ಯ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಶಿವಮೊಗ್ಗದ ರಾವ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಅಲ್ಲಿನ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ಪಂದ್ಯಾಟ ನಡೆದಿದ್ದು, ಜೂನಿಯರ್ ವಿಭಾಗದಲ್ಲಿ ಆರ್ಯನ್ ಅವರು ಸೆಮಿಫೈನಲ್ನಲ್ಲಿ ಮಂಗಳೂರಿನ ಲಕ್ಷ್ ದೇವಾಡಿಗ ಹಾಗೂ ಫೈನಲ್ ನಲ್ಲಿ ಹೊನ್ನಹಳ್ಳಿಯ ಪ್ರಣವ್ ಅವರ ವಿರುದ್ಧ ಜಯ ಗಳಿಸಿದರು. ಮಂಗಳೂರಿನ ಮಣಿಪಾಲ ಶಾಲೆಯ ವಿದ್ಯಾರ್ಥಿಯಾಗಿರುವ ಆರ್ಯನ್ ಕರ್ಕೇರ ಅವರು ಉರ್ವಾದ ಒಳಾಂಗಣ ಕ್ರೀಡಾಂಗಣದಲ್ಲಿ ಕೋಚ್ಗಳಾದ ಅನಿರುದ್ಧ ಪಟವರ್ಧನ್ ಮತ್ತು ವಿವೇಕ್ ಜಾನ್ ಅವರಿಂದ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾರೆ.
ಎರಡು ಪೂರ್ವಭಾವಿ ಷರತ್ತುಗಳನ್ನು ಅಮೆರಿಕ ಒಪ್ಪಿಕೊಂಡಿದೆ: ಇರಾನ್
ಷರತ್ತುಗಳನ್ನು ನಿರ್ಲಕ್ಷಿಸಿದರೆ ಮಾತುಕತೆ ರದ್ದಾಗಬಹುದು
ಕೆಎಸ್ಸಾರ್ಟಿಸಿಗೆ 3 ರಾಷ್ಟ್ರಮಟ್ಟದ ಆಡ್ವರ್ಲ್ಡ್ ಶೋಡೌನ್ ಪ್ರಶಸ್ತಿ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಅತ್ಯುತ್ತಮ ಗ್ರಾಹಕ ಸ್ವಾಧೀನ ಮತ್ತು ಧಾರಣ ವರ್ಗದಲ್ಲಿ ನಿಗಮದ ಬಸ್ಗಳ ಬ್ರ್ಯಾಂಡಿಂಗ್ಗೆ ಹಾಗೂ ತಂತ್ರಜ್ಞಾನದ ಅತ್ಯುತ್ತಮ ಬಳಕೆ ವರ್ಗದಲ್ಲಿ ಅವತಾರ್ 4.0, ಯುಪಿಐ ಸೌಲಭ್ಯ ಸೇರಿ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಪ್ರಶಸ್ತಿ ಲಭಿಸಿವೆ. ‘ಅವತಾರ್’ ವ್ಯವಸ್ಥೆ ಮೂಲಕ ಆನ್ಲೈನ್ ಟಿಕೆಟ್ ಕಾಯ್ದಿರಿಸುವಿಕೆ, ನೈಜ-ಸಮಯ ಆಸನ ಮಾಹಿತಿ ಮತ್ತು ನಗದು ರಹಿತ ಯುಪಿಐ ಪಾವತಿಗಳು ಸುಲಭವಾಗಿವೆ. ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಹಾಗೂ ನಿಗಮದ ಬಸ್ ಬ್ರ್ಯಾಂಡಿಂಗ್ ‘ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0, ಅಶ್ವಮೇಧ’ ಬಸ್ಗಳು ಪ್ರಯಾಣಿಕರಲ್ಲಿ ಹೆಚ್ಚು ಜನಮನ್ನಣೆ ಗಳಿಸಿದೆ ಎಂಬುದಾಗಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಮಾರ್ಕೆಟಿಂಗ್ ಲೀಡರ್ ನಿಧಿ ಎಸ್.ಮಿತ್ತಲ್ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿ ಬಾಬು, ಎಸ್.ಎಸ್.ದಶರಥ್ ಮತ್ತಿತರರು ಉಪಸ್ಥಿತರಿದ್ದರು.
ಸಿಸಿಲಿಯಾ ಫರೀದಾ ಗೋವಿಯಸ್ಗೆ ಪಿಎಚ್ಡಿ ಪದವಿ
ಕೊಣಾಜೆ; ಸಿಸಿಲಿಯಾ ಫರೀದಾ ಗೋವಿಯಸ್ ಅವರು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡದ ವಾಣಿಜ್ಯ ಬ್ಯಾಂಕುಗಳು ಒದಗಿಸುವ ಇ-ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗ್ರಾಹಕರ ತೃಪ್ತಿ ಎಂಬ ವಿಷಯದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂದಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಅವರಿಗೆ ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಗೋವಿಯಸ್ ಅವರು ಪ್ರಸ್ತುತ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ (ಸ್ವಾಯತ್ತ) ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದಿ.ಫ್ರಾನ್ಸಿಸ್ ಪೆರೇರಾ ಮತ್ತು ಕ್ಯಾಥರೀನ್ ಪೆರೇರಾ ದಂಪತಿಗಳ ಪುತ್ರಿ ಹಾಗೂ ಶ್ರೀ ಕಾನ್ಫ್ರೆಡ್ ಗೋವಿಯಸ್ ಅವರ ಪತ್ನಿ.
‘90 ಎಂಎಲ್’ಗೆ ತುಳು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ’
ಉಡುಪಿ, ಎ.11: ಸೆನ್ಸಾರ್ ಮಂಡಳಿಯಿಂದ ಹಸಿರುನಿಶಾನೆ ಪಡೆಯಲು ವಿಳಂಬವಾದ ಕಾರಣ ನಿನ್ನೆಯಷ್ಟೇ ಬಿಡುಗಡೆಗೊಂಡ ‘90 ಎಂಎಲ್’ ತುಳು ಚಲನಚಿತ್ರಕ್ಕೆ ತುಳುನಾಡಿನ ಪ್ರೇಕ್ಷಕರು ಭರ್ಜರಿ ಸ್ವಾಗತ ನೀಡಿದ್ದಾರೆ ಎಂದು ಚಿತ್ರದ ನಾಯಕ ನಟ ವಿನೀತ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿಂದು ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿನೀತ್ ಕುಮಾರ್, ಅದ್ಧೂರಿಯಾಗಿ ತೆರೆಕಂಡ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ತಿಳಿಸಿದರು. ಡಿ.ಡಿ. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದಾರೆ. ಅಶ್ಲೀಲತೆ ಅಥವಾ ನೇತ್ಯಾತ್ಮಕ ವಿಷಯಕ್ಕೆ ಅವಕಾಶ ನೀಡದೆ, ಕುಟುಂಬ ಸಮೇತವಾಗಿ ನೋಡಬಹುದಾದ ಹಾಸ್ಯಭರಿತ ಮನರಂಜನಾ ಕಥೆಯನ್ನು ನೀಡಿದ್ದೇವೆ. ಜನ ಅದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ ಎಂಬುದು ನಮಗೆ ಸಂತೋಷ ತಂದಿದೆ ಎಂದರು. ಚಿತ್ರದಲ್ಲಿ ವಿನೀತ್ ಕುಮಾರ್ ಹಾಗೂ ರುಹಾನಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ನಮಿತಾ, ಶೈಲಾಶ್ರೀ ಹಾಗೂ ಧೃತಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ನಟಿಸಿದ್ದಾರೆ. ಡೋಲ್ಸಿ ಡಿ ಸೋಜ ನಿರ್ಮಾಣದ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವಿದೆ. ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದು, ಸೃಜನ್ ಕುಮಾರ್ ತೋನ್ಸೆ ಸಂಗೀತವಿದೆ. ಪ್ರಸ್ತುತ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಸುರತ್ಕಲ್, ಪಡುಬಿದ್ರೆ, ಕಾರ್ಕಳ ಹಾಗೂ ದೇರಳಕಟ್ಟೆ ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಗೊಳ್ಳು ತ್ತಿದೆ. ಉಡುಪಿಯ ಕಲ್ಪನಾ, ಭಾರತ್ ಹಾಗೂ ಮಣಿಪಾಲದಲ್ಲೂ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿನೀತ್ ನುಡಿದರು. ಚಿತ್ರದ ಕುರಿತು ನಿರ್ದೇಶಕ ರಂಜಿತ್ ಸಿ. ಬಜಾಲ್ ಮಾತನಾಡಿ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ ಮತ್ತು ಮನರಂಜನೆಯೊಂದಿಗೆ ಉತ್ತಮ ಕಥೆಯನ್ನು ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಪ್ರದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಟಿ ರುಹಾನಿ ಶೆಟ್ಟಿ ಹಾಗೂ ನಟ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.
ಮಾತುಕತೆ ವಿಫಲಗೊಂಡರೆ ಮುಂದಿನ ಕ್ರಮಕ್ಕೆ ಸಿದ್ಧವಿದ್ದೇವೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಎ.11: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆ ವಿಫಲವಾದರೆ ನಾವು ಮುಂದಿನ ಕ್ರಮಕ್ಕೆ ಸಿದ್ಧವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಝ್ ಜಲಸಂಧಿ ಶೀಘ್ರದಲ್ಲೇ ಮತ್ತೆ ತೆರೆಯಲಿದೆ ಎಂದೂ ಹೇಳಿದ್ದಾರೆ. ಇರಾನ್ ಒಂದು ವಿಫಲ ರಾಷ್ಟ್ರವಾಗಿದೆ ಎಂದು ಲೇವಡಿ ಮಾಡಿದ ಟ್ರಂಪ್, ಹಲವು ರಾಷ್ಟ್ರಗಳು ಈಗಾಗಲೇ ತೈಲ ಸಾಗಣೆಗೆ ಹಾರ್ಮುಝ್ ಬದಲಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ ಎಂದು ಪ್ರತಿಪಾದಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಉಡುಪಿ, ಎ.11: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031ನೇ ಸಾಲಿನ ಚುನಾವಣೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಅಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿ ದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಗಾಗಿ ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎ.11ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗ ಬೇಕಾಗಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೇಂದ್ರ ಸಮಿತಿಯು ಉಡುಪಿ ಜಿಲ್ಲೆಯ ಮತದಾರರ ಪಟ್ಟಿಯನ್ನು ಫೆಬ್ರವರಿ ತಿಂಗಳಿನಲ್ಲಿ ನಡೆದ ರಾಜ್ಯ ಮಟ್ಟದ ಧನ್ಯತಾ ಸಮಾವೇಶಕ್ಕೆ ಜಿಲ್ಲೆಯ ಶಿಕ್ಷಕರಿಂದ ಹಣ ವಸೂಲಿ ಮಾಡಿ ರಾಜ್ಯಸಂಘಕ್ಕೆ ನೀಡದೇ ಇರುವ ಕಾರಣಕ್ಕೆ ಅನುಮೋದನೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಶಾಖೆಗಳಿಗೆ ಶಿಕ್ಷಕರ ಸದಸ್ಯತ್ವ ಶುಲ್ಕದ ಮೊತ್ತದ ಪಾಲನ್ನು ಪಾವತಿ ಮಾಡದೇ ಇರುವುದರಿಂದ, ತಾನು ಮತ್ತೆ ಕೇಂದ್ರ ಸಮಿತಿಯ ಚುನಾವಣೆ ಯಲ್ಲಿ ಬಾಗವಹಿಸಬಾರದು ಎಂಬ ಕಾರಣಕ್ಕಾಗಿ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಮತದಾರ ಪಟ್ಟಿ ಮತ್ತು ಚುನಾವಣಾ ಅಧಿಕಾರಿಗಳ ನೇಮಕ ಪ್ರಕ್ರಿಯೆಗೆ ಅನುಮೋದನೆ ನೀಡಿಲ್ಲ ಎಂದು ಜಿಲ್ಲಾಧ್ಯಕ್ಷ ಕೆ ದಿನಕರ ಶೆಟ್ಟಿ ಅಂಪಾರು ಆರೋಪಿಸಿದ್ದಾರೆ. ತಾನು ಜಿಲ್ಲೆಯ ಇತರೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಜಿಲ್ಲೆಯ ಸಮಸ್ತ ನೌಕರರ, ಶಿಕ್ಷಕರ ಸಮಸ್ಯೆಗಳಿಗೆ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸ್ಪಂದಿಸುತ್ತಾ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಕಾರಣಕ್ಕಾಗಿಯೂ ಕೇಂದ್ರ ಸಮಿತಿ ಜಿಲ್ಲಾ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತದೊಳಿಸಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸಮಿತಿಯ ಈ ನಡೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ಕೇಂದ್ರ ಸಮಿತಿಯಿಂದ ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಆದ ಅನ್ಯಾಯ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಂವಿಧಾನದ ಆಶಯ ಗಳಿಗೆ ಧಕ್ಕೆ ತಂದಿದೆ. ಈ ಎಲ್ಲ ಪ್ರಕ್ರಿಯೆಗೆ ಕೆಲವು ವ್ಯಕ್ತಿಗಳು ಉಡುಪಿ ಜಿಲ್ಲೆಯ ಒಗ್ಗಟ್ಟನ್ನು ಒಡೆದು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಕೈಜೋಡಿಸಿ ರುವುದು ವಿಷಾದನೀಯ ಎಂದವರು ಹೇಳಿದ್ದಾರೆ. ಉಡುಪಿ ಜಿಲ್ಲೆಯ ಸಮಸ್ತ ಶಿಕ್ಷಕರಿಗೆ, ಸಂಘಟನೆಯ ಆಶಯಗಳಿಗೆ ಕುಂದಾಗುತ್ತಿರುವುದರ ಜೊತೆಗೆ ಅನ್ಯಾಯವನ್ನು ಉಡುಪಿ ಜಲ್ಲೆಯ ಸಮಸ್ತ ಶಿಕ್ಷಕರು ಖಂಡಿಸಿದ್ದಾರೆ ಎಂದು ಜಿಲ್ಲಾಧ್ಯಕ್ಷರ ಪ್ರಕಟನೆ ತಿಳಿಸಿದೆ.
‘ಇಸ್ರೇಲ್ ಫಸ್ಟ್’ ಬದಲಿಗೆ ‘ಅಮೆರಿಕ ಫಸ್ಟ್’ ಮೇಲೆ ಕೇಂದ್ರೀಕರಿಸಿದರೆ ಒಪ್ಪಂದ ಸಾಧ್ಯ: ಇರಾನ್
ಟೆಹರಾನ್, ಎ.11: ‘ಇಸ್ರೇಲ್ ಫಸ್ಟ್’ ಬದಲಿಗೆ ‘ಅಮೆರಿಕ ಫಸ್ಟ್’ ಮೇಲೆ ಅಮೆರಿಕ ಕೇಂದ್ರೀಕರಿಸಿದರೆ ಒಪ್ಪಂದ ಸಾಧ್ಯ ಎಂದು ಇರಾನ್ ನ ಮೊದಲ ಉಪಾಧ್ಯಕ್ಷ ಮುಹಮ್ಮದ್ ರೆಜಾ ಅರೆಫ್ ಶನಿವಾರ ಹೇಳಿದ್ದಾರೆ. ಮಾತುಕತೆ ಸಂದರ್ಭ ‘ಇಸ್ರೇಲ್ ಫಸ್ಟ್’ ಪ್ರತಿನಿಧಿಗಳನ್ನು ಎದುರಿಸಿದರೆ ಇರಾನ್ ಯಾವುದೇ ಒಪ್ಪಂದವನ್ನು ರದ್ದುಗೊಳಿಸಿ ಹೋರಾಟವನ್ನು ಮುಂದುವರಿಸುತ್ತದೆ. ‘ಅಮೆರಿಕ ಫಸ್ಟ್’ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರೆ ಎರಡೂ ಕಡೆಯವರಿಗೆ ಹಾಗೂ ಜಗತ್ತಿಗೆ ಪ್ರಯೋಜನಕಾರಿ ಒಪ್ಪಂದದ ಸಾಧ್ಯತೆಯಿದೆ. ಒಪ್ಪಂದ ಆಗದಿದ್ದರೆ ನಾವು ಅನಿವಾರ್ಯವಾಗಿ ನಮ್ಮ ರಕ್ಷಣೆಯನ್ನು ಮೊದಲಿಗಿಂತ ಹೆಚ್ಚು ತೀವ್ರವಾಗಿ ಮುಂದುವರಿಸುತ್ತೇವೆ ಮತ್ತು ಜಗತ್ತು ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪ್ರಮುಖ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದೆ.
ಬೀದರ್| ಗ್ಯಾರೇಜ್ನಲ್ಲಿ ಅಗ್ನಿ ಅವಘಡ : 7 ಬೈಕ್ಗಳು ಸುಟ್ಟು ಭಸ್ಮ
ಹುಮನಾಬಾದ್: ಗ್ಯಾರೇಜ್ವೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ 7 ಬೈಕ್ ಗಳು ಸುಟ್ಟು ಭಸ್ಮವಾದ ಘಟನೆ ಚಿಟಗುಪ್ಪ ತಾಲೂಕಿನ ಮನ್ನಾ ಏಖ್ಖೆಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತಂಗಿ ಗ್ರಾಮದಲ್ಲಿ ನಡೆದಿದೆ. ಶಾಹಬುದ್ದೀನ್ ಶಾ ನಿರ್ಣಾ ಅವರ ಗ್ಯಾರೇಜ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಬೈಕ್ಗಳು ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಐದರಿಂದ ಆರು ಲಕ್ಷ ರೂ.ಹಾನಿಯಾಗಿದೆ ಎಂದು ಗ್ಯಾರೇಜ್ ಮಾಲಿಕ ಶಾಹಬುದ್ದೀನ್ ಅವರು ತಿಳಿಸಿದ್ದಾರೆ.
Reelಗಾಗಿ ಮಗುವಿನ ಪ್ರಾಣ ಅಪಾಯಕ್ಕೊಡ್ಡಿದ ತಂದೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಹೊಸದಿಲ್ಲಿ, ಎ.11: ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೀಕ್ಷಕರನ್ನು ಗಳಿಸುವ ಹುಚ್ಚಾಟದಲ್ಲಿ ಹೆತ್ತ ತಂದೆಯೇ ಸಣ್ಣ ಮಗುವನ್ನು ಮೊದಲ ಅಂತಸ್ತಿನ ಬಾಲ್ಕನಿಯಿಂದ ಕೆಳಕ್ಕೆ ಹಾರುವಂತೆ ಪ್ರೇರೇಪಿಸಿದ ವೀಡಿಯೊ ವೈರಲ್ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. Just North Indian things. Endangering a child’s life for a mere 30-second reel. pic.twitter.com/YZqQNnN1ow — Manish RJ (@mrjethwani1) April 10, 2026 ಎರಡು ರಿಂದ ಮೂರು ವರ್ಷ ಪ್ರಾಯದ ಮಗು ಬಾಲ್ಕನಿಯ ರೇಲಿಂಗ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಚಪ್ಪಾಳೆ ಹೊಡೆಯುತ್ತಿದ್ದನ್ನು ಮತ್ತು ಕೆಳಗೆ ನಿಂತಿದ್ದ ವ್ಯಕ್ತಿ ತನ್ನ ತೋಳುಗಳನ್ನು ಮುಂದಕ್ಕೆ ಚಾಚಿ ಕೆಳಕ್ಕೆ ಜಿಗಿಯುವಂತೆ ಉತ್ತೇಜಿಸಿದ್ದನ್ನು, ಕೆಲ ಕ್ಷಣಗಳ ಬಳಿಕ ಮಗು ಕೆಳಕ್ಕೆ ಹಾರಿದ್ದನ್ನು ವೈರಲ್ ವೀಡಿಯೊ ತೋರಿಸಿದೆ. ಮಗು ತಂದೆಯ ತೋಳುಗಳಲ್ಲಿ ಸೆರೆಯಾಗಿದ್ದರೂ ಜಾರಿ ನೆಲದ ಮೇಲಿರಿಸಿದ್ದ ಹಾಸಿಗೆಯ ಮೇಲೆ ಬಿದ್ದಿತ್ತು. ಆತ ಮಗುವನ್ನು ಎತ್ತಿ ಲಘುವಾಗಿ ಮೇಲಕ್ಕೆ ಎಸೆದಿದ್ದನ್ನೂ ಎಕ್ಸ್ ನಲ್ಲಿ ವೈರಲ್ ಆಗಿರುವ ವೀಡಿಯೊ ತೋರಿಸಿದೆ. ವೀಡಿಯೊ ಕ್ಲಿಪ್ಗೆ ಆನ್ಲೈನ್ ನಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘Reelಗಾಗಿ ಯಾವುದೇ ಮಟ್ಟಕ್ಕೂ ಹೋಗುವುದು ಮೂರ್ಖತನ’ ಎಂದು ಓರ್ವ ಬಳಕೆದಾರ ಬರೆದಿದ್ದಾರೆ. ಹಲವಾರು ಟ್ವೀಟ್ ಗಳು ಮಗುವಿಗೆ ಉಂಟಾಗಬಹುದಾದ ಅಪಾಯವನ್ನು ಬೆಟ್ಟು ಮಾಡಿವೆ. ಕೇವಲ Reelಗಾಗಿ ಆತ ಸ್ವಂತ ಮಗುವಿನ ಜೀವವನ್ನು ಅಪಾಯಕ್ಕೊಡ್ಡಿದ್ದಾನೆ ಎಂದು ಹಲವರು ಕಿಡಿ ಕಾರಿದ್ದಾರೆ. ಆನ್ ಲೈನ್ ಕಂಟೆಂಟ್ ಗಾಗಿ ಮಕ್ಕಳನ್ನು ಬಳಸುವ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಬೆಟ್ಟು ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಜನರು, ಪೋಷಕರು ತಮ್ಮ ಮಕ್ಕಳನ್ನು ಕಂಟೆಂಟ್ ಸಾಮಗ್ರಿಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ಮಗುವಿಗೆ ಅಪ್ಪನಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ, ಆದರೆ ಯಾರೂ ಈ ರೀತಿಯಲ್ಲಿ ಮಗುವಿನ ಜೀವವನ್ನು ಅಪಾಯಕ್ಕೊಡ್ಡಬಾರದು ಎಂದು ಕೆಲವರು ಹೇಳಿದ್ದಾರೆ. ಇದು ತಪ್ಪು ಮಾತ್ರವಲ್ಲ, ಕಾನೂನಿನಡಿ ಅಪರಾಧವೂ ಆಗಿದೆ. ತಂದೆಯ ವಿರುದ್ಧ FIR ದಾಖಲಿಸಬೇಕು ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ.
ಬೆಂಗಳೂರು-ಮುಂಬೈ ವಂದೇ ಭಾರತ ಸ್ಲೀಪರ್ ರೈಲಿಗೆ ಅನುಮೋದನೆ
ಬೆಂಗಳೂರು, ಎ.11: ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ ಸ್ಲೀಪರ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅನುಮೋದನೆ ನೀಡಿದ್ದಾರೆ. ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲು ಜನವರಿಯಲ್ಲಿ ಕಾಮಾಖ್ಯ–ಹೌರಾ ನಡುವೆ ಸಂಚಾರ ಆರಂಭಿಸಿತ್ತು. ವೈಷ್ಣವ್ ಅವರು ಬೆಂಗಳೂರು ಸೆಂಟ್ರಲ್ ನ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರಿಗೆ ಬರೆದಿರುವ ಪತ್ರದಲ್ಲಿ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ನಡುವೆ ನೂತನ ಸ್ಲೀಪರ್ ರೈಲಿಗೆ ಅನುಮೋದನೆ ಲಭಿಸಿರುವ ಮಾಹಿತಿ ನೀಡಿದ್ದಾರೆ. ಮೋಹನ್ ಈ ಹಿಂದೆ ವೈಷ್ಣವ್ ಅವರನ್ನು ಭೇಟಿಯಾಗಿ ಈ ರೈಲಿಗಾಗಿ ಬೇಡಿಕೆ ಸಲ್ಲಿಸಿದ್ದರು. ಬೆಂಗಳೂರು–ಮುಂಬೈ ವಂದೇ ಭಾರತ ಸ್ಲೀಪರ್ ರೈಲು ಉಭಯ ನಗರಗಳ ನಡುವೆ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣ ಸಮಯವನ್ನು ಕಡಿಮೆ ಮಾಡಿ, ವಿಶ್ವದರ್ಜೆಯ ಅನುಭವ ನೀಡಲಿದೆ.
Dehradun | ISI ಜೊತೆ ಸಂಪರ್ಕ ಹೊಂದಿದ್ದ ವಿಕ್ರಾಂತ್ ಕಶ್ಯಪ್ ಬಂಧನ
ಡೆಹ್ರಾಡೂನ್, ಎ.11: ಉತ್ತರಾಖಂಡ ಪೋಲಿಸ್ನ ವಿಶೇಷ ಕಾರ್ಯ ಪಡೆಯು (ಎಸ್ಟಿಎಫ್) ಪಾಕಿಸ್ತಾನ ಮೂಲದ ಭಯೋತ್ಪಾದಕನೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದ ಆರೋಪದಲ್ಲಿ ಡೆಹ್ರಾಡೂನ್ ನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಆರೋಪಿ ವಿಕ್ರಾಂತ್ ಕಶ್ಯಪ್ (29) ಎಂಬಾತನನ್ನು ಪ್ರೇಮ್ ನಗರ್ಪ್ರದೇಶದಿಂದ ಬಂಧಿಸಲಾಗಿದ್ದು, ಆತನ ಬಳಿಯಿಂದ .32 ಬೋರ್ ಪಿಸ್ತೂಲು, ಏಳು ಸಜೀವ ಗುಂಡುಗಳು ಮತ್ತು ಸ್ಪ್ರೇ ಪೇಂಟ್ ಕ್ಯಾನ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಎಸ್ಪಿ ಅಜಯ್ ಸಿಂಗ್ ತಿಳಿಸಿದ್ದಾರೆ. ಪಾಕಿಸ್ತಾನದ ISI ಜೊತೆ ಸಂಪರ್ಕ ಹೊಂದಿರುವ ಶೆಹಜಾದ್ ಭಟ್ಟಿ ಎಂಬಾತನ ಸೂಚನೆಯಂತೆ ಕಶ್ಯಪ್ ಕೆಲಸ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆಪ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಭಟ್ಟಿ ಮತ್ತು ಇತರ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಕಶ್ಯಪ್ ಪೋಲಿಸ್ ಮುಖ್ಯ ಕಚೇರಿ ಮತ್ತು ಅಂತರರಾಜ್ಯ ಬಸ್ ಟರ್ಮಿನಲ್ ಸೇರಿದಂತೆ ಡೆಹ್ರಾಡೂನ್ ನ ಪ್ರಮುಖ ತಾಣಗಳ ಚಿತ್ರಗಳು ಮತ್ತು ಲೊಕೇಶನ್ ವಿವರಗಳನ್ನು ಹಂಚಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಈ ಸ್ಥಳಗಳಲ್ಲಿ ದಾಳಿಗಳನ್ನು ನಡೆಸುವಂತೆ ಆತನಿಗೆ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಹ್ರಾಡೂನ್ ನ ಪ್ರಮುಖ ಕಟ್ಟಡಗಳ ಮೇಲೆ ಸ್ಪ್ರೇ ಪೇಂಟ್ನಿಂದ ‘ತೆಹ್ರೀಕೆ ತಾಲಿಬಾನ್ ಹಿಂದುಸ್ಥಾನ್’ ಎಂದು ಬರೆಯುವಂತೆ ಮತ್ತು ಕೃತ್ಯದ ವೀಡಿಯೊಗಳನ್ನು ಚಿತ್ರೀಕರಿಸುವಂತೆಯೂ ಆತನಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ►ಉದ್ದೇಶ ಮತ್ತು ಹಿನ್ನೆಲೆ ತಾನು ಗಾಯಕ ಸಿದ್ದು ಮೂಸೆವಾಲಾ ಅವರ ಅಭಿಮಾನಿಯಾಗಿದ್ದು, ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಭಟ್ಟಿಯನ್ನು ಸಂಪರ್ಕಿಸಿದ್ದಾಗಿ ಕಶ್ಯಪ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಮೂಸೆವಾಲಾರನ್ನು ಮೇ 2022ರಲ್ಲಿ ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆರೋಪಿಯು 2024 ಮತ್ತು 2025ರ ನಡುವೆ ಪಂಜಾಬಿನ ನಭಾದಲ್ಲಿ ವಾಸವಾಗಿದ್ದನು ಮತ್ತು ಆತನ ಹ್ಯಾಂಡ್ಲರ್ ಗಳು ನೇಪಾಳದ ಮೂಲಕ ದುಬೈಗೆ ಕಳುಹಿಸುವ ಭರವಸೆ ನೀಡಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ. ಪೋಲಿಸರು ಕಶ್ಯಪ್ನ ಮೊಬೈಲ್ ಫೋನ್ ನಿಂದ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಿದ್ದು, ಆತನ ಸಂಪರ್ಕ ಜಾಲದ ವ್ಯಾಪ್ತಿ ಮತ್ತು ಯಾವುದೇ ಹೆಚ್ಚುವರಿ ಸಂಪರ್ಕಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಂಭಾವ್ಯ ಭದ್ರತಾ ಬೆದರಿಕೆಗಳನ್ನು ಕಂಡುಹಿಡಿಯಲು ಮತ್ತು ಭಾಗಿಯಾಗಿರಬಹುದಾದ ಇತರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ಗಲಾಟೆ ಕೇಸ್; ಪ್ರಕರಣದಿಂದ ಪುತ್ರನನ್ನು ಕೈಬಿಡಲು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್ಗೆ ಮನವಿ
ಬೆಂಗಳೂರು : ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರ ಅಶುತೋಷ್ ಹೆಗಡೆಗೆ ಗಲಾಟೆ ಪ್ರಕರಣದಿಂದಾಗಿ ಪಾಸ್ಪೋರ್ಟ್ ಪಡೆಯಲು ಸಮಸ್ಯೆಯಾಗಿದೆ. ಆದ್ದರಿಂದ, ಅವರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ದಾಬಸ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಅನಂತಕುಮಾರ್ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಿಚಾರಣೆ ನಡೆಸಿತು. ಅನಂತಕುಮಾರ್ ಹೆಗಡೆ ಪರ ವಕೀಲ ಪವನ್ಚಂದ್ರ ಶೆಟ್ಟಿ ವಾದ ಮಂಡಿಸಿ, ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್ ಹೆಗಡೆ ಅವರು ತನ್ನ ಅಜ್ಜಿ ಅವರನ್ನು ನೋಡಲು ಅನಂತಕುಮಾರ್ ಜತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚತ್ತೀಸಗಢ ರಾಜ್ಯದಲ್ಲಿ ನೋಂದಣಿಯಾಗಿರುವ ಕಾರೊಂದು ಅನಂತಕುಮಾರ್ ಕಾರನ್ನು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಢಿಕ್ಕಿ ಸಹ ಹೊಡೆಯಿತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದರ ಚಾಲಕ ಹಾಗೂ ಅಂಗರಕ್ಷಕ ದೂರುದಾರರ ಜತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್ ಪಾತ್ರವಾಗಲಿ, ಅವರ ಪುತ್ರ ಅಶುತೋಷ್ ಪಾತ್ರವಾಗಲಿ ಇಲ್ಲ ಎಂದರು. ಮುಂದುವರಿದು, ಇನ್ನೋವಾ ಕ್ರಿಸ್ಟಾ ಕಾರ್ನ ಹಿಂದಿನ ಸೀಟಿನಲ್ಲಿ ಅಶುತೋಷ್ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದೇ ಇರಲಿಲ್ಲ. ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಅದರಿಂದ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಯು ಅಶುತೋಷ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆಕ್ಷೇಪಿಸಿದರು. ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಅನಂತಕುಮಾರ್ ಅಥವಾ ಅಶುತೋಷ್ ಬಗ್ಗೆ ಒಂದೇ ಒಂದು ಸಾಲಿನ ಉಲ್ಲೇಖವಿಲ್ಲ. ಅಂಗರಕ್ಷಕ ಮತ್ತು ಚಾಕನ ಮೇಲೆ ಆರೋಪ ಮಾಡಲಾಗಿದೆ. ಘಟನೆ ನಡೆದಾಗ ಅನಂತ ಕುಮಾರ್ ಮತ್ತು ಅಶುತೋಷ್ ಕಾರಿನಿಂದ ಕೆಳಗೆ ಇಳಿದೇ ಇಲ್ಲ. ಅಶುತೋಷ್ ವಿರುದ್ಧ ದೂರು, ಎಫ್ಐಆರ್, ಆರೋಪ ಯಾವುದೂ ಇಲ್ಲ. ಅಶುತೋಷ್ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಹಾಲಿ ಪ್ರಕರಣವು ಅವರ ಪಾಸ್ಪೋರ್ಟ್ ಪಡೆಯುವುದಕ್ಕೆ ಅಡ್ಡಿಯಾಗಿದೆ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಸದ್ಯಕ್ಕೆ ಆರೋಪಪಟ್ಟಿಯ ಪ್ರತಿ ಇಲ್ಲ. ಮುಂದಿನ ವಿಚಾರಣೆ ವೇಳೆಗೆ ನಾಲ್ಕನೇ ಆರೋಪಿ ಅಶುತೋಷ್ಗೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅನಂತಕುಮಾರ್ ಹೆಗಡೆ, ಅಂಗರಕ್ಷಕ ಮತ್ತು ಕಾರಿನ ಚಾಲಕ ಹಲ್ಲೆ ನಡೆಸುತ್ತಿರುವ ವಿಡಿಯೊ ಇದೆ ಎಂದರು. ವಾದ ಆಲಿಸಿದ ನ್ಯಾಯಪೀಠ, ಏಪ್ರಿಲ್ 16ಕ್ಕೆ ವಿಚಾರಣೆ ಮುಂದೂಡಿತಲ್ಲದೆ, ಅಂದು ಅಶುತೋಷ್ ಮನವಿ ಕುರಿತು ಪರಿಗಣಿಸುವುದಾಗಿ ಹೇಳಿತು. ಪ್ರಕರಣವೇನು? ತುಮಕೂರಿನಲ್ಲಿ ಮದುವೆಯಲ್ಲಿ ಪಾಲ್ಗೊಂಡು ಕಾರ್ನಲ್ಲಿ ಹಳೇ ನಿಜಗಲ್ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಮತ್ತೊಂದು ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ, ನಮ್ಮೊಂದಿಗಿದ್ದ ಸಲ್ಮಾನ್ ಖಾನ್ ಎಂಬಾತನ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್ ಖಾನ್ ದೂರು ನೀಡಿದ್ದರು. ಅನಂತ್ ಕುಮಾರ್ ಹೆಗಡೆ ಅವರು ಆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್ ಕುಮಾರ್ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ಆಧರಿಸಿ ದಾಬಸ್ಪೇಟೆ ಠಾಣೆ ಪೊಲೀಸರು ಅನಂತ್ ಕುಮಾರ್ ಹೆಗಡೆ, ಅವರ ಭದ್ರತಾ ಸಿಬ್ಬಂದಿ ಶ್ರೀಧರ್ ಹಾಗೂ ಕಾರು ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Uttar Pradesh | ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ: ಅಖಿಲೇಶ್ ಯಾದವ್ ಆರೋಪ
ಲಕ್ನೋ, ಎ.11: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಅಕ್ರಮಗಳು ನಡೆದಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಬಿಜೆಪಿಯು ಚುನಾವಣಾ ಸವಾಲುಗಳನ್ನು ಎದುರಿಸುವಾಗ ‘ಸಂಸ್ಥೆಗಳ ಹಿಂದೆ ಅಡಗಿಕೊಳ್ಳುತ್ತದೆ’ ಎಂದೂ ಅವರು ಆಪಾದಿಸಿದ್ದಾರೆ. ಶುಕ್ರವಾರ ರಾಜ್ಯ ಚುನಾವಣಾ ಅಧಿಕಾರಿಗಳು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಈಗ ಹೊರಬಂದಿರುವ ಮತದಾರರ ಪಟ್ಟಿಯನ್ನು ನೋಡಿದರೆ ಬಿಜೆಪಿಯು ಸೋಲು ಎದುರಾದಾಗ ಸಂಸ್ಥೆಗಳ ಹಿಂದೆ ಅಡಗಿಕೊಂಡು ಚುನಾವಣೆಗಳನ್ನು ಎದುರಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳು ಈಗಾಗಲೇ ಬೆತ್ತಲಾಗಿವೆ ಮತ್ತು ಈಗ ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಚುನಾವಣೆಗಳನ್ನು ಎದುರಿಸುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ನಡೆದ ಉಪಚುನಾವಣೆಗಳು ‘ಲೂಟಿ ಮತ್ತು ದರೋಡೆ’ಗೆ ಸಾಕ್ಷಿಯಾಗಿವೆ ಎಂದು ಪ್ರತಿಪಾದಿಸಿದ ಯಾದವ್, ಪರಿಸ್ಥಿತಿಯನ್ನು ಬಣ್ಣಿಸಲು ಇನ್ನೂ ಕಟುವಾದ ಪದಗಳನ್ನು ಬಳಸಬಹುದು ಎಂದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಹಲವಾರು ಅಸಂಗತತೆಗಳಿವೆ ಎಂದು ಆರೋಪಿಸಿದ ಅವರು, ನಕಲಿ ದಾಖಲೆಗಳನ್ನು ಬಳಸಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು. ನಿದರ್ಶನವೊಂದನ್ನು ನೀಡಿದ ಅವರು, ನಂದಲಾಲ್ ಎಂಬ ಮತದಾರನಿಗೆ ಬರೆಯಲು ಬರದಿದ್ದರೂ ‘ನಕಲಿ ಸಹಿಗಳನ್ನು’ ಬಳಸಿ ಆತನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದರು. ಬಿಜೆಪಿ ಕಾರ್ಯಕರ್ತರು ಆತನ ಸಹಿಯನ್ನು ನಕಲು ಮಾಡಿದ್ದರು ಮತ್ತು ಈ ಬಗ್ಗೆ ಚುನಾವಣಾ ಆಯೋಗವು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅದು ಚುನಾವಣಾ ಆಯೋಗವು ಅವರೊಂದಿಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.
ಅಮೆರಿಕ ವೀಸಾ ವಂಚನೆ ಸಂಚು : 10 ಭಾರತೀಯರ ವಿರುದ್ಧ ದೋಷಾರೋಪಣೆ
ಬೋಸ್ಟನ್, ಎ.11: ಅಂಗಡಿಗಳಲ್ಲಿ ನಕಲಿ ಶಸ್ತ್ರಸಜ್ಜಿತ ದರೋಡೆಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬೋಸ್ಟನ್ ನ ಫೆಡರಲ್ ಗ್ರ್ಯಾಂಡ್ ಜ್ಯೂರಿ 10 ಭಾರತೀಯ ಪ್ರಜೆಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಈ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತರು ವಲಸೆ ಅರ್ಜಿಗಳಲ್ಲಿ ತಾವು ಅಪರಾಧ ಸಂತ್ರಸ್ತರೆಂದು ಸುಳ್ಳು ಹೇಳಿಕೆಗಳನ್ನು ದಾಖಲಿಸಲು ಅನುಕೂಲ ಕಲ್ಪಿಸುವುದು ಈ ಸಂಚಿನ ಉದ್ದೇಶವಾಗಿತ್ತು. ಮಾ. 2026ರಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿತ್ತು. ಆರೋಪಿಗಳನ್ನು ಜಿತೇಂದ್ರ ಕುಮಾರ್ ಪಟೇಲ್ (39), ಮಹೇಶಕುಮಾರ್ ಪಟೇಲ್ (36), ಸಂಜಯಕುಮಾರ್ ಪಟೇಲ್ (45), ದೀಪಿಕಾಬೆನ್ ಪಟೇಲ್ (40), ರಮೇಶ್ ಭಾಯಿ ಪಟೇಲ್ (52), ಅಮಿತಾ ಬಹೆನ್ ಪಟೇಲ್ (43), ರೋನಕ್ ಕುಮಾರ್ ಪಟೇಲ್ (28), ಸಂಗೀತಾ ಬೆನ್ ಪಟೇಲ್ (36), ಮಿಂಕೇಶ್ ಪಟೇಲ್ (42) ಮತ್ತು ಸೋನಲ್ ಪಟೇಲ್ (42) ಎಂದು ಹೆಸರಿಸಲಾಗಿದೆ. ಹೆಚ್ಚಿನ ಆರೋಪಿಗಳು ಅಮೆರಿಕದ ವಿವಿಧೆಡೆಗಳಲ್ಲಿ ಕಾನೂನುಬಾಹಿರವಾಗಿ ವಾಸವಾಗಿದ್ದರೆ, ಒಬ್ಬರನ್ನು ಈಗಾಗಲೇ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ರಮೇಶ್ ಭಾಯಿ ಪಟೇಲ್ ಮತ್ತು ರೋನಕ್ ಕುಮಾರ್ ಪಟೇಲ್ ವಲಸೆ ಇಲಾಖೆಯ ಕಸ್ಟಡಿಯಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಎಲ್ಲ 10 ಆರೋಪಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ, ಬಳಿಕ ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ಯು.ಎಸ್. ಅಟಾರ್ನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ. ಆರೋಪಿಗಳು ತಮಗೆ ವಿಧಿಸಲಾದ ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ. ಸಂಚಿನ ರೂವಾರಿ ರಾಮಭಾಯಿ ಪಟೇಲ್ ಮತ್ತು ನಕಲಿ ‘ದರೋಡೆಕೋರ’ನಾಗಿ ಪಾತ್ರ ನಿರ್ವಹಿಸುತ್ತಿದ್ದ ಚಾಲಕ ಬಲ್ವಿಂದರ್ ಸಿಂಗ್ ಅವರ ಕುರಿತು ನಡೆಸಿದ ತನಿಖೆಯ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ಈ ಇಬ್ಬರ ವಿರುದ್ಧ ಡಿಸೆಂಬರ್ 2023ರಲ್ಲಿ ಆರೋಪ ಹೊರಿಸಲಾಗಿದ್ದು, ಮೇ 2025ರಲ್ಲಿ ಶಿಕ್ಷೆ ವಿಧಿಸಲಾಗಿದೆ. ದೋಷಾರೋಪ ಪಟ್ಟಿಯ ಪ್ರಕಾರ, ಮಾರ್ಚ್ 2023ರಲ್ಲಿ ರಾಮ್ ಭಾಯಿ ಪಟೇಲ್ ಮತ್ತು ಆತನ ಸಹವರ್ತಿಗಳು ಮಸಾಚುಸೆಟ್ಸ್ ಮತ್ತು ಇತರೆಡೆಗಳಲ್ಲಿನ ಕನಿಷ್ಠ ಆರು ಮದ್ಯದಂಗಡಿಗಳು ಮತ್ತು ಫಾಸ್ಟ್ಫುಡ್ ರೆಸ್ಟೋರಂಟ್ಗಳಲ್ಲಿ ನಕಲಿ ಶಸ್ತ್ರಸಜ್ಜಿತ ದರೋಡೆಗಳನ್ನು ನಡೆಸಿದ್ದರು. ಅಂಗಡಿಗಳ ಗುಮಾಸ್ತರು ಯು-ವೀಸಾಕ್ಕಾಗಿ ಅರ್ಜಿಗಳಲ್ಲಿ ತಾವು ಹಿಂಸಾತ್ಮಕ ಅಪರಾಧದ ಸಂತ್ರಸ್ತರು ಎಂದು ಸುಳ್ಳು ಹೇಳಿಕೆಗಳನ್ನು ದಾಖಲಿಸಲು ಅನುವು ಮಾಡಿಕೊಡುವುದು ಈ ದರೋಡೆಗಳ ಉದ್ದೇಶವಾಗಿತ್ತು. ಮಾನಸಿಕ ಅಥವಾ ದೈಹಿಕ ಕಿರುಕುಳಕ್ಕೆ ಒಳಗಾದ ಮತ್ತು ಕ್ರಿಮಿನಲ್ ಚಟುವಟಿಕೆಯ ತನಿಖೆ ಅಥವಾ ವಿಚಾರಣೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ನೆರವಾಗುವ ಕೆಲವು ಅಪರಾಧಗಳ ಸಂತ್ರಸ್ತರಿಗೆ ಯು-ವೀಸಾಗಳನ್ನು ನೀಡಲಾಗುತ್ತದೆ. ನಕಲಿ ದರೋಡೆಗಳ ಸಂದರ್ಭದಲ್ಲಿ ‘ದರೋಡೆಕೋರ’ ಪಿಸ್ತೂಲು ತೋರಿಸಿ ಅಂಗಡಿಗಳ ಗುಮಾಸ್ತರು ಅಥವಾ ಮಾಲಿಕರನ್ನು ಬೆದರಿಸಿ ಹಣವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು; ಇದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗುತ್ತಿತ್ತು. ‘ದರೋಡೆಕೋರ’ ಪರಾರಿಯಾದ 5–10 ನಿಮಿಷಗಳ ಬಳಿಕ ಗುಮಾಸ್ತರು ಅಥವಾ ಮಾಲಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿಯನ್ನು ನೀಡುತ್ತಿದ್ದರು. ಈ ‘ದರೋಡೆ ಯೋಜನೆ’ಗಾಗಿ ಈ ‘ಸಂತ್ರಸ್ತರು’ ರಾಮಭಾಯಿ ಪಟೇಲ್ಗೆ ಹಣ ನೀಡುತ್ತಿದ್ದರು. ನಂತರ ತಮ್ಮ ಅಂಗಡಿಗಳನ್ನು ‘ದರೋಡೆ’ಗೆ ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಆತ ಮಾಲಿಕರಿಗೆ ಹಣ ಪಾವತಿಸುತ್ತಿದ್ದನು ಎಂದು ಆರೋಪಿಸಲಾಗಿದೆ.
ಅಮೆರಿಕದ ಹಡಗುಗಳು ಹಾರ್ಮುಝ್ ಜಲಸಂಧಿ ದಾಟಿಲ್ಲ: ಇರಾನ್
ಟೆಹರಾನ್: ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಯಾವುದೇ ಹಡಗುಗಳು ದಾಟಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ದೇಶದ ಸರಕಾರಿ ಮಾಧ್ಯಮ ‘IRIIB’ ಈ ಕುರಿತು ವರದಿ ಮಾಡಿದೆ. ಹಾರ್ಮುಝ್ ಜಲಸಂಧಿಯನ್ನು ಹಲವು ಅಮೆರಿಕ ಹಡಗುಗಳು ದಾಟಿವೆ ಎಂದು ಅಮೆರಿಕದ ಅಧಿಕಾರಿಯನ್ನು ಉಲ್ಲೇಖಿಸಿ ‘ಆಕ್ಸಿಯೊಸ್’ ಸುದ್ದಿ ಜಾಲ ವರದಿ ಮಾಡಿದ್ದ ಹಿನ್ನೆಲೆಯಲ್ಲಿ, ಇರಾನ್ ಈ ವರದಿಯನ್ನು ಖಂಡಿಸಿದೆ. ಇದಕ್ಕೂ ಮೊದಲು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಸಾಮಾಜಿಕ ಜಾಲತಾಣದಲ್ಲಿ, ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಇಟ್ಟಿರುವ ಸ್ಪೋಟಕ ಸಾಧನಗಳು ದೊಡ್ಡ ಬೆದರಿಕೆ ಎಂದು ಹೇಳಿದ್ದರು. ಜಲಸಂಧಿಯನ್ನು ಸುರಕ್ಷಿತಗೊಳಿಸಲು ಅಮೆರಿಕ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದ ಅವರು, “ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳಿಗೆ ನೆರವಾಗುವ ಉದ್ದೇಶದಿಂದ ತೆರವು ಕಾರ್ಯ ಆರಂಭಿಸಿದ್ದೇವೆ” ಎಂದು ಹೇಳಿದ್ದಾರೆ. “ಈ ಕಾರ್ಯವನ್ನು ಸ್ವತಃ ಕೈಗೊಳ್ಳುವ ಧೈರ್ಯವನ್ನು ಕೆಲವು ದೇಶಗಳು ಕಳೆದುಕೊಂಡಿವೆ” ಎಂದು ಅವರು ಟೀಕಿಸಿದ್ದಾರೆ.
ಯಾದಗಿರಿ| ನಗನೂರು ಮಠದಲ್ಲಿ 50 ನವ ಜೋಡಿಗಳ ಅದ್ದೂರಿ ಸಾಮೂಹಿಕ ವಿವಾಹ
ಕೆಂಭಾವಿ: ಅನ್ನ ದಾಸೋಹಕ್ಕೆ ಹೆಸರಾಗಿರುವ ಕಲ್ಯಾಣ ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಸುರಪುರ ತಾಲೂಕಿನ ನಗನೂರು ಗ್ರಾಮದ ಶ್ರೀ ಶರಣಬಸವೇಶ್ವರ ಮಠದಲ್ಲಿ, ಸಮಾಜದ ಬಡ ಕುಟುಂಬಗಳ ಪಾಲಿಗೆ ಕಲ್ಯಾಣ ಭಾಗ್ಯ ಕರುಣಿಸಲಾಗಿದೆ. ಮಠದ 179ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 50 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸತತವಾಗಿ 24 ವರ್ಷಗಳ ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಿಕೊಂಡು ಬರುತ್ತಿರುವ ನಗನೂರು ಮಠ, ಕೇವಲ ಧಾರ್ಮಿಕ ಕೇಂದ್ರವಾಗಿರದೆ ಬಡವರ ಪಾಲಿನ ಸಂಜೀವಿನಿಯಾಗಿದೆ. ಅನ್ನ ದಾಸೋಹದ ಜೊತೆಗೆ, ಸಾವಿರಾರು ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂತನ ದಂಪತಿಗಳಿಗೆ ಮಠದ ಸ್ವಾಮೀಜಿಗಳು ಹಾಗೂ ಗಣ್ಯರು ಅಕ್ಷತೆ ಹಾಕಿ ಸುಖಿ ಸಂಸಾರಕ್ಕೆ ಹರಸಿದರು. ಈ ಸಂಭ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ, ಮುಖಂಡರಾದ ಅಮೀನರಡ್ಡಿ ಯಾಳಗಿ ಹಾಗೂ ಇತರರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗನೂರು ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ದಾಸೋಹ ಮತ್ತು ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾದ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಆರ್ಥಿಕವಾಗಿ ಹಿಂದುಳಿದ ನೂರಾರು ಕುಟುಂಬಗಳಿಗೆ ಈ ಸಾಮೂಹಿಕ ವಿವಾಹವು ಆಸರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
RCB Playing 11 Vs MI: ಮುಂಬೈನ ವಾಂಖೆಡೆ ಸ್ಡೇಡಿಯಂನಲ್ಲಿ ಭಾನುವಾರ (ಏಪ್ರಿಲ್ 12) ನಡೆಯಲಿರುವ ಐಪಿಎಲ್ 2026ರ 20ನೇ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸುಳಿವು ಸಿಕ್ಕಿದೆ. ಕನ್ನಡಿಗ ದೇವತ್ ಪಡಿಕ್ಕಲ್ ಅವರು ಆಡಿದ ಮೊದಲೆರಡು ಪಂದ್ಯಗಳಲ್ಲಿ ಅದ್ಭುತ
Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತ: ಮುಂಬೈ ಆಸ್ಪತ್ರೆಗೆ ದಾಖಲು
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಶನಿವಾರ (ಏಪ್ರಿಲ್ 11) ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆಯ ವೈದ್ಯರಾದ ಪ್ರದೀತ್ ಸಮದಾನಿ ಅವರು ನೀಡಿರುವ ಮಾಹಿತಿಯಂತೆ, ಶನಿವಾರ ಸಂಜೆ ಆಶಾ ಭೋಸ್ಲೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ಅವರು
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ; ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಶನಿವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು India Today ವರದಿ ಮಾಡಿದೆ. 92 ವರ್ಷದ ಆಶಾ ಭೋಸ್ಲೆ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮ್ದಾನಿ ಅವರ ಪ್ರಕಾರ, ಹೃದಯಾಘಾತದ ನಂತರ ಅವರನ್ನು ತುರ್ತು ವೈದ್ಯಕೀಯ ಸೇವೆಗಳ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೋಟೆಲ್ ಆಹಾರ ಎಷ್ಟು ಸುರಕ್ಷಿತ: ಗುಣಮಟ್ಟ ಉಲ್ಲಂಘಿಸಿದ 75 ಉದ್ದಿಮೆದಾರಿಗೆ 2.22 ಲಕ್ಷ ದಂಡ
ಹೋಟೆಲ್ಗಳಲ್ಲಿ ಗ್ರಾಹಕರನ್ನು ಸೆಳೆಯಲು ಆಹಾರ ಪದಾರ್ಥಗಳಿಗೆ ಟೇಸ್ಟಿಂಗ್ ಪೌಡರ್ ಹಾಗೂ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೋಟೆಲ್ಗಳಲ್ಲಿ ಹಾಗೂ ಬೀದಿ ಬದಿಯ ಆಹಾರದ ಅಂಗಡಿಗಳಲ್ಲಿ ತಯಾರಿಸಿ ಮಾರಲ್ಪಡುವ ವಿವಿಧ ಆಹಾರ ಪದಾರ್ಥಗಳಲ್ಲಿ ಬಣ್ಣಗಳ ಫುಡ್ ಸೇಫ್ಟೀ ಆಂಡ್ ಸ್ಟಾಂಡರ್ಡ್ಸ್ ರೆಗ್ಯುಲೇಷನ್ 2011 ನಿಯಮದಡಿಯ ಪ್ರಿಪಾರ್ಡ್ ಫುಡ್ ವರ್ಗಕ್ಕೆ ಸೇರುವ ಆಹಾರ ಪದಾರ್ಥಗಳಾಗಿವೆ. ಇಂತಹ ಆಹಾರ ಪದಾರ್ಥಗಳಲ್ಲಿ ಬಣ್ಣಗಳನ್ನು ಉಪಯೋಗಿಸಲು ಅವಕಾಶವಿರುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
`ಎಂಎಸ್ ಧೋನಿ ಎಲ್ಲಿ? ಮೈದಾನಕ್ಕೆ ಯಾವಾಗ ಬರ್ತಾರೆ?': ಹೀಗಿತ್ತು ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಉತ್ತರ!
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಸೀಸನ್ ನ ನಾಲ್ಕನೇ ಲೀಗ್ ಪಂದ್ಯವನ್ನು ಆಡುತ್ತಿದ್ದರೂ ಎಂ.ಎಸ್. ಧೋನಿ ಅವರು ಮಾತ್ರ ತಂಡಕ್ಕೆ ಇನ್ನೂ ಮರಳಿಲ್ಲ. ಸ್ನಾಯು ಸೆಳೆತದಿಂದಾಗಿ ಧೋನಿ ಆರಂಭದ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ತಂಡದ ಮ್ಯಾನೇಜ್ ಮೆಂಟ್ ಸೀಸನ್ ಗೆ ಮುನ್ನವೇ ತಿಳಿಸಿತ್ತು. ಆದರೆ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳದಾಗ ರವಿಶಾಸ್ತ್ರಿ ಅವರು ಸಿಎಸ್ ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಳಿ ಧೋನಿ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಧೋನಿ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರೆ ಎಂದು ರುತುರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಯಾವಾಗ ಎಂದು ಮಾತ್ರ ತಿಳಿಸಿಲ್ಲ.
ಇಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ‘ಕದನ ವಿರಾಮ’ದ ಆರು ತಿಂಗಳ ನಂತರ ಗಾಝಾದ ಪರಿಸ್ಥಿತಿ ಹೇಗಿದೆ?
2025 ಅಕ್ಟೋಬರ್ 10 ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದಾಗಿ ಆರು ತಿಂಗಳಾದರೂ ಗಾಝಾದಲ್ಲಿ ಶಾಂತಿ ನೆಲೆಸಿಲ್ಲ; ಫೆಲೆಸ್ತೀನಿಯನ್ ನಾಗರಿಕರ ಮಾನವೀಯ ಅಥವಾ ಭದ್ರತಾ ಪರಿಸ್ಥಿತಿಗಳಲ್ಲಿ ಯಾವುದೇ ಸ್ಪಷ್ಟ ಸುಧಾರಣೆ ಕಂಡುಬಂದಿಲ್ಲ. ಎರಡು ವರ್ಷಗಳ ಕಾಲ ಸಂಘರ್ಷದ ಪರಿಣಾಮವಾಗಿ 72,000 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಸಾವಿಗೀಡಾದ ನಂತರ, ಇಸ್ರೇಲ್ ಮತ್ತು ಹಮಾಸ್ ನಡುವಿನ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಒಪ್ಪಂದವು ಯುದ್ಧದಿಂದ ನಿರ್ಣಾಯಕ ನಿರ್ಗಮನ ಮಾರ್ಗವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಯುದ್ಧವನ್ನು ನಿಲ್ಲಿಸುವುದರ ಹೊರತಾಗಿ, ಗಾಝಾ ಪಟ್ಟಿಯ ತುರ್ತು ಮಾನವೀಯ ನೆರವು ಮತ್ತು ಪುನಃಸ್ಥಾಪನೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ. ಒಪ್ಪಂದದ ಮೂಲತತ್ವವು ತಕ್ಷಣದ ಕದನ ವಿರಾಮ ಮತ್ತು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿತ್ತು. ನಾಗರಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಪಡೆಗಳು ಗಾಝಾ ಪಟ್ಟಿಯಿಂದ ಕ್ರಮೇಣ ಹಿಂದೆ ಸರಿಯುವುದು, ವಿಶೇಷವಾಗಿ ಜನನಿಬಿಡ ಪ್ರದೇಶಗಳಿಂದ ನಿರ್ಗಮಿಸುವುದು ಅಗತ್ಯವಾಗಿತ್ತು. ಒಪ್ಪಂದದ ಅಡಿಯಲ್ಲಿ ಮುಖ್ಯವಾಗಿ ರಫಾ ಕ್ರಾಸಿಂಗ್ ಅನ್ನು ನಿಯಮಿತವಾಗಿ ತೆರೆಯುವ ಮೂಲಕ ಮಾನವೀಯ ಪ್ರಯತ್ನಗಳನ್ನು ಹೆಚ್ಚಿಸಲಾಯಿತು. ಇದು ಹೆಚ್ಚಿನ ಸಂಚಾರ, ಆಹಾರ ಮತ್ತು ಇಂಧನದಂತಹ ಅಗತ್ಯ ಸಾಮಗ್ರಿಗಳನ್ನು ತುಂಬಿದ ನೂರಾರು ಟ್ರಕ್ಗಳ ದೈನಂದಿನ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಜೊತೆಗೆ, ಪ್ರದೇಶದಾದ್ಯಂತ ಅಡೆತಡೆಯಿಲ್ಲದ ವಿತರಣೆಗೆ ಕಟ್ಟುನಿಟ್ಟಿನ ಖಾತರಿಗಳನ್ನು ನೀಡುತ್ತದೆ. ಈ ಒಪ್ಪಂದವು ಗಾಝಾದ ಪುನರ್ನಿರ್ಮಾಣದ ಅಂತರರಾಷ್ಟ್ರೀಯ ಮೇಲ್ವಿಚಾರಣೆಗಾಗಿ, ಮನೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವ ಯೋಜನೆಯನ್ನು ಸಹ ವಿವರಿಸಿದೆ. ಇದು ಹಂತ ಹಂತವಾಗಿ ಕೈದಿಗಳ ವಿನಿಮಯ ಮತ್ತು ಈ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಅಂತರರಾಷ್ಟ್ರೀಯ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ. ಆರು ತಿಂಗಳ ನಂತರ, ಸ್ಥಳೀಯ ವರದಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವರದಿಗಳು ಈ ಬದ್ಧತೆಗಳನ್ನು ಭರವಸೆ ನೀಡಿದಂತೆ ಪೂರೈಸಲಾಗಿಲ್ಲ ಎಂದು ತೋರಿಸುತ್ತವೆ. ಸಂಪೂರ್ಣ ಕದನ ವಿರಾಮ ಸಾಧ್ಯವಾಗಿಲ್ಲ; ಸಮಗ್ರ ಪಡೆಗಳನ್ನೂ ಹಿಂತೆಗೆದುಕೊಳ್ಳಲಾಗಿಲ್ಲ. ನೆರವು ಒಪ್ಪಿದ ಮಟ್ಟಕ್ಕಿಂತ ಕಡಿಮೆಯಾಗಿದೆ. ಬದಲಾಗುತ್ತಿರುವ ಭದ್ರತೆ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಗಡಿ ದಾಟುವಿಕೆಗಳು ಮಧ್ಯಂತರವಾಗಿ ಕಾರ್ಯನಿರ್ವಹಿಸುತ್ತಲೇ ಇವೆ. ಗಾಝಾದಲ್ಲಿ ನಡೆಯುತ್ತಿರುವ ಉಲ್ಲಂಘನೆಗಳು ಮತ್ತು ವ್ಯವಸ್ಥಿತ ಅಸ್ಥಿರತೆಯು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಸ್ತುತ ಒಪ್ಪಂದದ ವ್ಯಾಪ್ತಿಯನ್ನು ದುರ್ಬಲಗೊಳಿಸುತ್ತಿದೆ. ಪರಿಣಾಮವಾಗಿ, ಕದನ ವಿರಾಮವನ್ನು ಯುದ್ಧಕ್ಕೆ ಸಮಗ್ರ ಪರಿಹಾರಕ್ಕಿಂತ ಹೆಚ್ಚಾಗಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಬಳಸುವ ಭಾಗಶಃ ಕದನ ವಿರಾಮವೆಂದು ಹೆಚ್ಚಾಗಿ ನೋಡಲಾಗುತ್ತಿದೆ. ► ‘ಕದನ ವಿರಾಮ’ದ ಸಮಯದಲ್ಲಿ ಕನಿಷ್ಠ 700 ಜನರು ಸಾವು ಒಪ್ಪಂದ ಜಾರಿಯಲ್ಲಿರುವ ತಿಂಗಳುಗಳಲ್ಲಿ ಇಸ್ರೇಲಿ ಸೇನೆಯು ತನ್ನ ದಾಳಿಗಳನ್ನು ಮುಂದುವರೆಸಿದೆ. ಇದು ಕದನ ವಿರಾಮದ ದುರ್ಬಲತೆ ಮತ್ತು ಅದರ ನಿಯಮಗಳನ್ನು ಜಾರಿಗೊಳಿಸುವಲ್ಲಿ ಮಧ್ಯವರ್ತಿಗಳ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಕ್ಟೋಬರ್ 2025 ಮತ್ತು ಮಾರ್ಚ್ 2026ರ ನಡುವೆ ಗಾಝಾದ ಸರ್ಕಾರಿ ಮಾಧ್ಯಮ ಕಚೇರಿಯು ಇಸ್ರೇಲಿ ವೈಮಾನಿಕ ದಾಳಿಗಳು, ಗುಂಡಿನ ದಾಳಿ ಮತ್ತು ಅತಿಕ್ರಮಣಗಳು ಸೇರಿದಂತೆ 2,073 ಕ್ಕೂ ಹೆಚ್ಚು ಉಲ್ಲಂಘನೆಗಳನ್ನು ದಾಖಲಿಸಿದೆ. ಯುದ್ಧ ವಿರಾಮದ ಮೊದಲ ವಾರಗಳಲ್ಲಿ ಮಾತ್ರ ಸುಮಾರು 497 ಉಲ್ಲಂಘನೆಗಳು ದಾಖಲಾಗಿವೆ. ಇದರ ಪರಿಣಾಮವಾಗಿ 342 ಫೆಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಡಿಸೆಂಬರ್ ವೇಳೆಗೆ 379 ಜನರು ಸಾವಿಗೀಡಾಗಿದ್ದು, 992 ಜನರು ಗಾಯಗೊಂಡಿದ್ದಾರೆ. ನಂತರದ ತಿಂಗಳುಗಳಲ್ಲಿ ಉಲ್ಲಂಘನೆಗಳು ಕಡಿಮೆ ಆಗಿದ್ದರೂ ನಿಲ್ಲಲಿಲ್ಲ. ಶಾಲೆಗಳು ಮತ್ತು ವಸತಿ ಪ್ರದೇಶಗಳ ಬಳಿ ದಾಳಿಗಳು ಸೇರಿದಂತೆ ವೈಮಾನಿಕ ದಾಳಿಗಳು ಮತ್ತು ಗುಂಡಿನ ದಾಳಿಯಿಂದ ಉಂಟಾದ ಸಾವುಗಳನ್ನು ವರದಿಗಳು ಸ್ಥಿರವಾಗಿ ದಾಖಲಿಸಿವೆ. ಈ ವರ್ಷದ ಏಪ್ರಿಲ್ ವೇಳೆಗೆ, ಕದನ ವಿರಾಮ ಪ್ರಾರಂಭವಾದಾಗಿನಿಂದ ಒಟ್ಟು ಸಾವಿನ ಸಂಖ್ಯೆ 700 ಮೀರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಅಂಕಿಅಂಶಗಳು ಒಪ್ಪಂದವು ಪರಿಣಾಮಕಾರಿ ಜಾರಿ ಅಥವಾ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಹೊಂದಿಲ್ಲ ಎಂಬುದನ್ನು ಸೂಚಿಸುತ್ತವೆ. ನೆಲದ ಮೇಲೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯವಿರುವ ಯಾವುದೇ ಖಾತರಿ ಇಲ್ಲ. ಪ್ರಾಯೋಗಿಕವಾಗಿ, ಕದನ ವಿರಾಮವು ಹತ್ಯೆಯನ್ನು ನಿಲ್ಲಿಸಲಿಲ್ಲ; ಅದು ಅದನ್ನು ಕಡಿಮೆ ತೀವ್ರತೆಯ ನಿರಂತರ ಮಾದರಿಯಾಗಿ ಮರುರೂಪಿಸಿತು. ► ಮಾನವೀಯ ಅಗತ್ಯಗಳು: ಹೆಚ್ಚಿನ ವೆಚ್ಚ, ಕಡಿಮೆ ಪೂರೈಕೆ ಅಕ್ಟೋಬರ್ ಕದನ ವಿರಾಮದ ನಂತರದ ಅವಧಿಯಲ್ಲಿ ಗಾಝಾಗೆ ಆಹಾರ ನೆರವಿನಲ್ಲಿ ಸುಧಾರಣೆ ಕಂಡುಬಂದಿದ್ದರೂ, ಇದು ಸೀಮಿತ ಮತ್ತು ದುರ್ಬಲವಾಗಿದ್ದು, ಮಾನವೀಯ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ (OCHA) ಪ್ರಕಾರ, ಒಪ್ಪಂದವು ದಿನಕ್ಕೆ ಸುಮಾರು 600 ನೆರವು ಟ್ರಕ್ಗಳ ಪ್ರವೇಶಕ್ಕೆ ಕರೆ ನೀಡಿತು. ಆದರೆ ಆರಂಭಿಕ ವಾರಗಳಲ್ಲಿ ನಿಜವಾದ ವಿತರಣೆಗಳು ಈ ಮಿತಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದ್ದವು. ಇದು ನಂತರ ನಿರಂತರವಾಗಿ ಏರಿಳಿತಗೊಂಡಿವೆ. ಎರಡು ವರ್ಷಗಳ ಯುದ್ಧದ ಸಮಯದಲ್ಲಿ ಪೂರೈಕೆಯಲ್ಲಿನ ತೀವ್ರ ಕುಸಿತವನ್ನು ಸರಿದೂಗಿಸಲು ಈ ಮಟ್ಟಗಳು ವಿಫಲವಾಗಿವೆ ಎಂದು ವಿಶ್ವಸಂಸ್ಥೆಯ ಅಂದಾಜುಗಳು ಸೂಚಿಸುತ್ತವೆ. ಅಂದರೆ, ಆಹಾರ ಮಾರುಕಟ್ಟೆಗಳು ಮತ್ತು ವೆಚ್ಚಗಳು ಇನ್ನೂ ಸ್ಥಿರವಾಗಿಲ್ಲ. ಆಹಾರ ಪ್ರವೇಶದ ಮೇಲಿನ ತೀವ್ರ ನಿರ್ಬಂಧಗಳು ಆಹಾರ ಭದ್ರತೆಯಲ್ಲಿ ಕುಸಿತ, ವ್ಯಾಪಕ ಅಪೌಷ್ಟಿಕತೆ ಮತ್ತು ಯುದ್ಧದ ಸಮಯದಲ್ಲಿ ಕ್ಷಾಮದಂತಹ ಪರಿಸ್ಥಿತಿಗಳಿಗೆ ಕಾರಣವಾಯಿತು ಎಂದು ಯುಎನ್ ಮತ್ತು ಮಾನವೀಯ ಸಂಸ್ಥೆಗಳ ವರದಿಗಳು ತೋರಿಸುತ್ತವೆ. ಕದನ ವಿರಾಮದ ನಂತರವೂ ಈ ಪರಿಣಾಮಗಳು ಮುಂದುವರೆದಿವೆ. ಇತ್ತೀಚಿನ ತಿಂಗಳುಗಳಲ್ಲಿ ಅನಿಯಮಿತ ಟ್ರಕ್ ಹರಿವು ಮತ್ತು ವಿತರಣಾ ಸವಾಲುಗಳಿಂದಾಗಿ ಕೆಲವು ಆಹಾರ ವಿತರಣೆಗಳ ಹೊರತಾಗಿಯೂ, ಪ್ರಮಾಣಗಳು ಇನ್ನೂ ಕನಿಷ್ಠ ಅವಶ್ಯಕತೆಗಳಿಗಿಂತ ಕಡಿಮೆಯಿವೆ. ಇದು ನಿರಂತರ ಕೊರತೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವಾಗಿದೆ. ಅಡೆತಡೆಯಿಲ್ಲದ ಸಹಾಯ ಪ್ರವೇಶಕ್ಕಾಗಿ ಯುಎನ್ ಪದೇ ಪದೇ ಕರೆ ನೀಡಿದೆ. ಕ್ರಾಸಿಂಗ್ಗಳು ಮತ್ತು ವಿತರಣಾ ವ್ಯವಸ್ಥೆಗಳ ಮೇಲಿನ ನಿರ್ಬಂಧಗಳು ಅತ್ಯಂತ ದುರ್ಬಲ ಜನರಿಗೆ ಪ್ರವೇಶವನ್ನು ಅಡ್ಡಿಪಡಿಸುತ್ತವೆ ಎಂದು ಎಚ್ಚರಿಸಿದೆ. ಇರಾನ್ ಯುದ್ಧ: ಪ್ರಾದೇಶಿಕ ಸಂಘರ್ಷ ಇತ್ತೀಚಿನ ತಿಂಗಳುಗಳಲ್ಲಿ, ಫೆಬ್ರವರಿ 28 ರಂದು ಪ್ರಾರಂಭವಾಗಿ ಏಪ್ರಿಲ್ 8 ರಂದು ಎರಡು ವಾರಗಳ ಕದನ ವಿರಾಮ ಘೋಷಿಸುವವರೆಗೆ 40 ದಿನಗಳವರೆಗೆ ನಡೆದ ಯುಎಸ್ ಮತ್ತು ಇಸ್ರೇಲ್ನ ಇರಾನ್ ಮೇಲಿನ ಯುದ್ಧಕ್ಕೆ ಸಂಬಂಧಿಸಿದ ಪ್ರಾದೇಶಿಕ ಸಂಘರ್ಷಗಳು ಇಲ್ಲಿನ ಜನರ ಮೇಲೆ ಮತ್ತಷ್ಟು ಪರಿಣಾಮ ಬೀರಿವೆ. ತಾತ್ಕಾಲಿಕ ಮುಚ್ಚುವಿಕೆಗಳು ಮತ್ತು ಪ್ರಾದೇಶಿಕ ಸಂಘರ್ಷಗಳು ಕ್ರಾಸಿಂಗ್ಗಳು ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿವೆ. ಈ ಅಡ್ಡಿಯು ಗಾಝಾ ಕದನ ವಿರಾಮ ನಿಬಂಧನೆಗಳ ಅನುಷ್ಠಾನದ ಒಂದು ಭಾಗದ ಮೇಲೆ ಪರಿಣಾಮ ಬೀರಿತು. ಉದಾಹರಣೆಗೆ, ಕ್ರಾಸಿಂಗ್ಗಳ ಮೂಲಕ ನೆರವು ಮತ್ತು ಸಂಚಾರದ ಮೇಲೆ ಪರಿಣಾಮ ಬೀರಿತು ಎಂದು ಅಧಿಕೃತ ಮೂಲಗಳು ಸೂಚಿಸುತ್ತವೆ. ಮಾನವೀಯ ನೆರವಿಗಾಗಿ ಕಳುಹಿಸಲಾದ 23,400 ಟ್ರಕ್ಗಳಲ್ಲಿ ಕೇವಲ 4,999 ನೆರವು ಟ್ರಕ್ಗಳು ಗಾಝಾವನ್ನು ಪ್ರವೇಶಿಸಿವೆ. ಅದೇ ವೇಳೆ, 7,800 ಜನರ ಪೈಕಿ 625 ಜನರಿಗೆ ಮಾತ್ರ ಕ್ರಾಸಿಂಗ್ಗಳ ಮೂಲಕ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ಕಡಿಮೆಯಾದ ನೆರವಿನ ಹರಿವುಗಳು, ಸೀಮಿತ ಸರಬರಾಜು ಮತ್ತು ಹೆಚ್ಚಿನ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ ಆಹಾರದ ಬೆಲೆಗಳು ಏರಿಕೆಯಾಗಲು ಕಾರಣವಾಗಿವೆ. ಇದು ಗಾಝಾ ನಿವಾಸಿಗಳಲ್ಲಿ ಆಹಾರ ಅಭದ್ರತೆಯನ್ನು ಹೆಚ್ಚಿಸಿದೆ. ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಗಾಝಾದ ಮೇಲೆ ಇಸ್ರೇಲ್ನ ದಾಳಿಗಳು ಮುಂದುವರೆದವು. ಈ ಅವಧಿಯಲ್ಲಿ ಗಾಝಾ ಸರ್ಕಾರಿ ಮಾಧ್ಯಮ ಕಚೇರಿಯು 434 ಇಸ್ರೇಲಿ ಉಲ್ಲಂಘನೆಗಳನ್ನು ದಾಖಲಿಸಿದ್ದು, ಇದರ ಪರಿಣಾಮವಾಗಿ 104 ಸಾವುಗಳು ಸಂಭವಿಸಿವೆ. 341 ಮಂದಿಗೆ ಗಾಯಗಳಾಗಿವೆ. ಈ ಅಂಕಿಅಂಶಗಳು ಪ್ರಾದೇಶಿಕ ಸಂಘರ್ಷದ ಸಮಯದಲ್ಲಿ ಅನುಷ್ಠಾನದಲ್ಲಿನ ಕುಸಿತವನ್ನು ಪ್ರತಿಬಿಂಬಿಸುತ್ತವೆ. ಬಾಹ್ಯ ಸಂಘರ್ಷವು ಗಾಝಾದ ಆಂತರಿಕ ಪರಿಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ನೆರವು, ಆರೈಕೆ, ಸರಬರಾಜುಗಳನ್ನು ನಿಲ್ಲಿಸುವುದು ಅಕ್ಟೋಬರ್ ಒಪ್ಪಂದದ ನಂತರ ರಫಾ ಕ್ರಾಸಿಂಗ್ ಒಂದು ಕೇಂದ್ರೀಯ ಉದ್ವಿಗ್ನ ತಾಣವಾಗಿ ಉಳಿದಿದೆ. ಸಂಚಾರವನ್ನು ಸುಗಮಗೊಳಿಸಲು ಮತ್ತು ಸಾರಿಗೆ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾದ ನಿಬಂಧನೆಗಳ ಹೊರತಾಗಿಯೂ, ಅನುಷ್ಠಾನವು ಸ್ಥಗಿತಗೊಂಡಿದೆ. ಅಕ್ಟೋಬರ್ ಕದನ ವಿರಾಮದ ನಂತರ, ಕ್ರಾಸಿಂಗ್ಗಳನ್ನು ತೆರೆಯುವ ಮತ್ತು ಚಲನೆಯನ್ನು ಸುಗಮಗೊಳಿಸುವ ಒಪ್ಪಂದದ ನಿಬಂಧನೆಗಳನ್ನು ಇಲ್ಲಿ ಸಂಪೂರ್ಣವಾಗಿ ಜಾರಿಗೆ ತರದ ಕಾರಣ, ರಫಾ ಕ್ರಾಸಿಂಗ್ ವಿವಾದದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಕದನ ವಿರಾಮ ವ್ಯವಸ್ಥೆಗಳ ಅಡಿಯಲ್ಲಿ ಫೆಬ್ರವರಿಯಲ್ಲಿ ರಫಾ ಭಾಗಶಃ ಪುನಃ ತೆರೆಯಲ್ಪಟ್ಟ ನಂತರವೂ, ಚಲನೆ ತೀವ್ರವಾಗಿ ನಿರ್ಬಂಧಿತವಾಗಿಯೇ ಉಳಿದಿದೆ. ಸಂಪೂರ್ಣ ಮಾನವೀಯ ಮತ್ತು ವಾಣಿಜ್ಯ ಪ್ರವೇಶ ಹಾಗೂ ಪುನರ್ನಿರ್ಮಾಣಕ್ಕೆ ಕರೆ ನೀಡುವ ನಿಬಂಧನೆಗಳ ಹೊರತಾಗಿಯೂ, ಕಾರ್ಯಾಚರಣೆಗಳು ಸೀಮಿತವಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಇತರ ವಿಶ್ವಸಂಸ್ಥೆಯ ಏಜೆನ್ಸಿಗಳ ಪ್ರಕಾರ, ಆರಂಭಿಕ ವಾರಗಳಲ್ಲಿ ನೂರು ರೋಗಿಗಳಿಗೆ ಮಾತ್ರ ಗಾಝಾದಿಂದ ಹೊರಗೆ ಹೋಗಲು ಸಾಧ್ಯವಾಯಿತು. ಆದರೆ 20,000 ಕ್ಕೂ ಹೆಚ್ಚು ರೋಗಿಗಳಿಗೆ ಗಾಝಾದ ಹೊರಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇದು ಅಗತ್ಯ ಮತ್ತು ಪ್ರತಿಕ್ರಿಯೆಯ ನಡುವಿನ ದೊಡ್ಡ ಅಂತರವನ್ನು ಎತ್ತಿ ತೋರಿಸುತ್ತದೆ. ಸ್ಥಳಾಂತರಿಸುವ ದರಗಳು ಕನಿಷ್ಠ ಅವಶ್ಯಕತೆಗಳಿಗಿಂತ ಕಡಿಮೆ ಉಳಿದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುತ್ತದೆ. ಅಂದರೆ, ಈ ಪ್ರಕ್ರಿಯೆಯು ಅಸ್ತಿತ್ವದಲ್ಲಿರುವ ಅಗತ್ಯಗಳನ್ನು ಪೂರೈಸಲು ವರ್ಷಗಳೇ ತೆಗೆದುಕೊಳ್ಳಬಹುದು. ಇದು ರಫಾವನ್ನು ಅತ್ಯಂತ ನಿರ್ಬಂಧಿತ ಮತ್ತು ಆಯ್ದ ಕ್ರಾಸಿಂಗ್ ಆಗಿ ಪರಿವರ್ತಿಸಿದೆ. ವೈದ್ಯಕೀಯ ನೆರವು ಬಹು ಭದ್ರತಾ ಅನುಮೋದನೆಗಳು ಮತ್ತು ಸಂಕೀರ್ಣ ಆದ್ಯತೆಯ ಕಾರ್ಯವಿಧಾನಗಳಿಗೆ ಒಳಪಟ್ಟಿದೆ. ಇದರಿಂದಾಗಿ ಸಾವಿರಾರು ನಿರ್ಣಾಯಕ ಪ್ರಕರಣಗಳು ಅನುಮೋದನೆಗಾಗಿ ಗಾಝಾದೊಳಗೆ ಕಾಯುತ್ತಿವೆ. ಈ ನಡುವೆ, ನಿರ್ಬಂಧಗಳು ಪುನರ್ನಿರ್ಮಾಣ ಸಾಮಗ್ರಿಗಳಿಗೂ ವಿಸ್ತರಿಸಲ್ಪಟ್ಟಿವೆ. ಉಕ್ಕು, ಸಿಮೆಂಟ್ ಮತ್ತು ಭಾರೀ ಉಪಕರಣಗಳಂತಹ ದ್ವಿ-ಬಳಕೆ ವಸ್ತುಗಳ ಮೇಲೆ ನಿರಂತರ ನಿಷೇಧಗಳು ಅಥವಾ ಬಿಗಿಯಾದ ನಿಯಂತ್ರಣಗಳನ್ನು OCHA ವರದಿ ಮಾಡಿದೆ. ಇದು ಪುನರ್ನಿರ್ಮಾಣ ಪ್ರಯತ್ನಗಳನ್ನು ತೀವ್ರವಾಗಿ ವಿಳಂಬಗೊಳಿಸಿದೆ. ರಫಾ ಮುಕ್ತ ಕಾರಿಡಾರ್ನಿಂದ ರಾಜಕೀಯ ನಿಯಂತ್ರಣದ ಸಾಧನವಾಗಿ ಬದಲಾಗಿದೆ. ಈ ಪರಿವರ್ತನೆಯು ಚಲನೆಯನ್ನು ಸೀಮಿತಗೊಳಿಸುವುದು, ತುರ್ತು ವೈದ್ಯಕೀಯ ಆರೈಕೆಗೆ ಅಡ್ಡಿಯಾಗುವುದು ಮತ್ತು ನಾಶವಾದ ಮನೆಗಳ ದುರಸ್ತಿಯನ್ನು ಸ್ಥಗಿತಗೊಳಿಸುವುದು ಮೊದಲಾದವುಗಳ ಮೇಲೆ ಭೀಕರ ಪರಿಣಾಮಗಳನ್ನು ಬೀರಿದೆ. ಹಳದಿ ರೇಖೆ: ಇಸ್ರೇಲಿ ನಿಯಂತ್ರಣವನ್ನು ಬಲಪಡಿಸುವುದು ಹಿಂತೆಗೆದುಕೊಳ್ಳುವ ಯೋಜನೆಯಿಂದ ವಿಮುಖವಾಗಿ, ಇಸ್ರೇಲಿ ಸೈನ್ಯವು ಗಾಝಾ ಪಟ್ಟಿಯೊಳಗೆ ತನ್ನ ಉಪಸ್ಥಿತಿಯನ್ನು ಉಳಿಸಿಕೊಂಡಿದೆ. ಅದು 'ಹಳದಿ ರೇಖೆ'ಯನ್ನು ಗಡಿ ಗುರುತಿಸುವ ರೇಖೆಯಾಗಿ ಜಾರಿಗೆ ತಂದಿದೆ. ಇದು ಗಾಝಾವನ್ನು ಪ್ರತ್ಯೇಕ ಆಡಳಿತ ಮತ್ತು ಮಿಲಿಟರಿ ವಲಯಗಳಾಗಿ ವಿಭಜಿಸಿದೆ. ಮಿಲಿಟರಿ ಮ್ಯಾಪಿಂಗ್ ಮತ್ತು ಯುಎನ್-ಸಂಬಂಧಿತ ವಿಶ್ಲೇಷಣೆಗಳ ಆಧಾರದ ಮೇಲೆ ಅಂದಾಜಿನ ಪ್ರಕಾರ, ಇಸ್ರೇಲ್ ರಫಾ, ಖಾನ್ ಯೂನಿಸ್ ಮತ್ತು ಉತ್ತರ ಗಾಝಾದ ದೊಡ್ಡ ಪ್ರದೇಶಗಳನ್ನು ಒಳಗೊಂಡಂತೆ ಪಟ್ಟಿಯ ಸರಿಸುಮಾರು 50–55 ಪ್ರತಿಶತದಷ್ಟು ಪ್ರದೇಶದ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಹೊಂದಿದೆ. ಅಂದರೆ, ಒಪ್ಪಂದದಲ್ಲಿ ನಿಗದಿಪಡಿಸಿದ ಸಂಪೂರ್ಣ ಹಿಂತೆಗೆದುಕೊಳ್ಳುವಿಕೆಯನ್ನು ಕಾರ್ಯಗತಗೊಳಿಸಲಾಗಿಲ್ಲ. ಒಸಿಎಚ್ಎ ಮತ್ತು ಸ್ಥಳೀಯ ವರದಿಗಳು ಈ ರೇಖೆಯನ್ನು ಸ್ಥಿರ ಗಡಿಯಾಗಿ ಅಲ್ಲ, ಬದಲಾಗಿ ಬದಲಾಗುತ್ತಿರುವ ಬಫರ್ ವಲಯವಾಗಿ ವಿವರಿಸುತ್ತವೆ. ಕೆಲವೊಮ್ಮೆ ಹಳದಿ ಸೂಚಕಗಳು ಅಥವಾ ತಾತ್ಕಾಲಿಕ ಅಡೆತಡೆಗಳಿಂದ ಗುರುತಿಸಲಾಗುತ್ತದೆ. ಇವು ನೆಲದ ಮೇಲೆ ಹೆಚ್ಚಾಗಿ ಅಸ್ಪಷ್ಟವಾಗಿರುತ್ತವೆ. ನಾಗರಿಕರು ತಮ್ಮ ಮನೆಗಳಿಗೆ ಅಥವಾ ಕೃಷಿಭೂಮಿಗೆ ಮರಳಲು ಇದು ಕಷ್ಟವಾಗುತ್ತದೆ. ಯುಎನ್ ಮತ್ತು ವೈದ್ಯಕೀಯ ವರದಿಗಳು ಹಳದಿ ರೇಖೆಯ ಬಳಿ ಹಲವಾರು ಮಾರಕ ಘಟನೆಗಳನ್ನು ಅದರ ಆರಂಭಿಕ ಹಂತಗಳಲ್ಲಿ ದಾಖಲಿಸಿವೆ. ಇದರಲ್ಲಿ ನೂರಾರು ಮಂದಿಗೆ ಗಾಯಗಳಾಗಿವೆ. ಗಡಿ ದಾಟುವ ಪ್ರಯತ್ನಗಳಿಂದಾಗಿ ಕಡಿಮೆ ಅವಧಿಯಲ್ಲಿ ಕನಿಷ್ಠ 90 ಸಾವುಗಳು ಸಂಭವಿಸಿವೆ. ವರದಿಗಳು ಈ ಪ್ರದೇಶದಲ್ಲಿ ಕ್ವಾಡ್ಕಾಪ್ಟರ್ ಡ್ರೋನ್ಗಳ ಹೆಚ್ಚಿದ ಬಳಕೆಯನ್ನು ಸೂಚಿಸುತ್ತವೆ. ಇದು ಕಣ್ಗಾವಲು ಮತ್ತು ದಾಳಿಗಳಿಗೆ ಕಾರಣವಾಗುತ್ತದೆ. ಇದು ನಾಗರಿಕರ ಚಲನೆಯನ್ನು ಮತ್ತಷ್ಟು ನಿರ್ಬಂಧಿಸುತ್ತದೆ. ಆರು ತಿಂಗಳ ಕದನ ವಿರಾಮದ ಅರ್ಥವೇನು? ಆರು ತಿಂಗಳ ಹಿಂದೆ ಹಲವಾರು ರಾಜಕಾರಣಿಗಳು, ಅಂತರರಾಷ್ಟ್ರೀಯ ಶಾಂತಿ ಮಂಡಳಿ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯ ಪ್ರಕ್ರಿಯೆಯು ಕಾಗದದ ಮೇಲೆ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು. ಆದರೆ ಗಾಝಾದಲ್ಲಿನ ಜನರಿಗೆ, ಇದು ಯುದ್ಧವೂ ಅಲ್ಲ, ಶಾಂತಿಯೂ ಅಲ್ಲ ಎಂಬ ಪರಿಸ್ಥಿತಿಯಾಗಿದೆ. ಹಿಂಸಾಚಾರದ ತೀವ್ರತೆ ಕಡಿಮೆಯಾಗಿದೆ, ಆದರೆ ದಾಳಿಗಳು ನಿಂತಿಲ್ಲ. ಯಾವುದೇ ಅರ್ಥಪೂರ್ಣ ರಾಜಕೀಯ ಅಥವಾ ಮಾನವೀಯ ಸ್ಥಿರೀಕರಣವೂ ಸಾಧಿಸಲಾಗಿಲ್ಲ. ಅದೇ ಸಮಯದಲ್ಲಿ, ಯಾವುದೇ ಸಮಗ್ರ ಪುನರ್ನಿರ್ಮಾಣ ಪ್ರಾರಂಭವಾಗಿಲ್ಲ. ಜೀವನ ಪರಿಸ್ಥಿತಿಗಳಲ್ಲಿಯೂ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಇಲ್ಲಿ ಎರಡು ಮಿಲಿಯನ್ಗಿಂತಲೂ ಹೆಚ್ಚು ಜನರು ಗಂಭೀರ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈ ಅವಧಿಯಲ್ಲಿ, 2026ರಲ್ಲಿ ಜಾಗತಿಕ ಗಮನವು ಯುಎಸ್–ಇಸ್ರೇಲ್ ವಿರುದ್ಧ ಇರಾನ್ ಯುದ್ಧದ ಕಡೆಗೆ ತಿರುಗಿದ ಕಾರಣ, ಗಾಝಾದ ಅಂತರರಾಷ್ಟ್ರೀಯ ಮಾಧ್ಯಮ ವರದಿಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಗಾಝಾದೊಳಗಿನ ಪರಿಸ್ಥಿತಿಗಳು ಬದಲಾಗದೆ ಇದ್ದರೂ ಸಹ, ಈ ಬದಲಾವಣೆಯು ಸುದ್ದಿ ಆದ್ಯತೆಗಳನ್ನು ಮರುರೂಪಿಸಿದೆ. ಪ್ರಮುಖ ಘರ್ಷಣೆಗಳು ಇತರ ಬಿಕ್ಕಟ್ಟುಗಳ ವರದಿಯನ್ನು ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತವೆ ಎಂದು ತಜ್ಞರು ಸೂಚಿಸುತ್ತಾರೆ. ಕೃಪೆ: aljazeera.com
ಸರ್ಕಾರಿ ಶಾಲೆಗಳಲ್ಲಿ ಕಟ್ಟಡ ಸಮಸ್ಯೆ ಮಾತ್ರವಲ್ಲ, ಪಾಠ ಮಾಡಲು ಶಿಕ್ಷಕರೂ ಇಲ್ಲ! 58 ಸಾವಿರ ಹುದ್ದೆ ಖಾಲಿ
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ದಿ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಟ್ಟಡ ಸಮಸ್ಯೆ ಮಾತ್ರವಲ್ಲ, ಪಾಠ ಮಾಡಲು ಶಿಕ್ಷಕರೂ ಇಲ್ಲದಂತಹ ಸ್ಥಿತಿ ಇದೆ. ರಾಜ್ಯದಲ್ಲಿ ಒಟ್ಟು 58 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಅಷ್ಟೇ ಅಲ್ಲದೆ, ಮೂಲಭೂತ ಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಶೌಚಾಲಯ, ಕಾಪೌಂಡು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯವೂ ಇದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ಫಿಸಿಯೋಥೆರಪಿ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಯಿಂದ ಯಶಸ್ಸು ಸಾಧ್ಯ: ಸ್ಪೀಕರ್ ಯು.ಟಿ.ಖಾದರ್
‘ಮಂಗಳೂರು ಫಿಸಿಯೋಕಾನ್- 2026’ ಸಮಾರೋಪ ಸಮಾರಂಭ
ಝಕಾತ್ನಿಂದ ಅರ್ಹರಿಗೆ ಆಟೋ ರಿಕ್ಷಾಗಳ ವಿತರಣೆ
ಉಡುಪಿ, ಎ.11: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಸಂಗ್ರಹಿಸಿದ ಝಕಾತ್ ಮೊತ್ತದಿಂದ ಅರ್ಹ ಇಬ್ಬರು ಫಲಾನುಭವಿಗಳಿಗೆ ಎರಡು ಆಟೊ ರಿಕ್ಷಾಗಳನ್ನು ಶುಕ್ರವಾರ ಉಡುಪಿ ಜಾಮಿಯ ಮಸೀದಿಯ ವಠಾರದಲ್ಲಿ ವಿತರಿಸಲಾಯಿತು. ಜಾಮಿಯ ಮಸೀದಿಯ ಅಧ್ಯಕ್ಷ ರಿಯಾಝ್ ಅಹಮದ್ ಮತ್ತು ಜಾಮಿಯ ಮಸೀದಿಯ ಇಮಾಮ್ ಮೌಲಾನ ರಶೀದ್ ಅಹಮದ್ ನದ್ವಿ ಉಮ್ರಿ ರಿಕ್ಷಾದ ಕೀಲಿಕೈಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುನೀರ್ ಮೊಹಮ್ಮದ್ ವಹಿಸಿದ್ದರು. ಸಂಸ್ಥೆಯ ಸಮಿತಿ ಸದಸ್ಯರಾದ ಗಫೂರ್ ಆದಿಉಡುಪಿ, ಹನೀಫ್, ಶಮೀಮ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ರಿಯಾಜ್ ಅಹಮದ್ ಕುಕ್ಕಿಕಟ್ಟೆ ವಂದಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು. ಈವರೆಗೆ ಸಂಸ್ಥೆಯ ವತಿಯಿಂದ 27 ರಿಕ್ಷಾಗಳು ಮತ್ತು 17 ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ.
ಪಿಯುಸಿ ಫಲಿತಾಂಶ: ಕೋಡಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ
ಕುಂದಾಪುರ, ಎ.11: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೋಡಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ ಶೇ.100 ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ಒಟ್ಟು 92 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಮಿಷ 570(ಶೇ.95), ಕಶಿಫಾ 556(ಶೇ.92.6), ಅಸಿಫಾ 542(ಶೇ.90.33), ವಿಜ್ಞಾನ ವಿಭಾಗದಲ್ಲಿ ತ್ರಿಶಾ 577(ಶೇ.96.16), ಮೊಹಮ್ಮದ್ ರಿಲಾ 564(ಶೇ.94), ಇರ್ಫಾನ್ ಶರ್ಫುದ್ದಿನ್ 554(ಶೇ.92.33)ಫಾತಿಮಾ ನಿಶಾ 543(ಶೇ.90.5) ಅಂಕಗಳನ್ನು ಪಡೆದಿದ್ದಾರೆ. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಮಾನ್ ಬ್ಯಾರಿ, ಟ್ರಸ್ಟಿ ಡಾ.ಆಸೀಫ್ ಬ್ಯಾರಿ, ನಿರ್ದೇಶಕಿ ಹಾಗೂ ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿಶೇಷ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ರಾಯಚೂರು| ಕಾರು- ಟ್ರಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ
ರಾಯಚೂರು: ಕಾರು ಹಾಗೂ ಟ್ರಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಟ್ರಾಕ್ಟರ್ ಮತ್ತು ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ರಾಯಚೂರು ತಾಲೂಕಿನ ಗಾಣಧಾಳ ಗ್ರಾಮದಿಂದ ಗಿಲ್ಲೆಸುಗೂರು ಕ್ಯಾಂಪ್ ಕಡೆ ಹೊರಟಿದ್ದ ಟ್ರಾಕ್ಟರ್ಗೆ ದೇವಸುಗೂರು ಗ್ರಾಮದಿಂದ ಪಂಚಮುಖಿ ಕಡೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಕಲಬುರಗಿ| ಅಂಬೇಡ್ಕರ್ ಜಯಂತಿ: ಮಹಿಳೆಯರಿಗೆ ರಂಗೋಲಿ, ಮೆಹಂದಿ ಸ್ಪರ್ಧೆ
ಕಲಬುರಗಿ: ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಅವರ ಸಂಯುಕ್ತ ಆಶ್ರಯದಲ್ಲಿ ವಿಶ್ವರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವದ ಅಂಗವಾಗಿ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣದಲ್ಲಿ ಮಹಿಳೆಯರಿಗಾಗಿ ರಂಗೋಲಿ, ನಿಬಂಧ ಮತ್ತು ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಡಾ.ಅನುಸೂಯಾ ಕೆ. ಸೊಲೆಕರ್, ಇಂಟರ್ನ್ಯಾಷನಲ್ ಅಥ್ಲೆಟ್, ಕರ್ನಾಟಕ ವಾಲಿಬಾಲ್ ಕೋಚ್ ಡಾ. ಶಶಿಕಲಾ ನಾಯ್ಡು, ಕಾರ್ಯದರ್ಶಿ ಮಾಯಾ ಸೂಗೂರ, ಕವಿತಾ ಕುರಳ್ಳಿ, ಸಾಹಸ ಕ್ರೀಡಾಪಟು ದೇವರಾಜ್ ಕನ್ನಡಿಗ, ವಾರ್ಡನ್ಗಳಾದ ಶಶಿಕಲಾ, ಗಂಗಾ, ಸೈದಾ ಬೇಗ, ಸಂಗೀತ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಡಿವೈಡರ್ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಕುಂದಾಪುರ, ಎ.11: ಬೈಕೊಂದು ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಶಾಸ್ತ್ರೀ ಪಾರ್ಕ್ ಫ್ಲೈ ಓವರ್ನಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಅರುಣ್(17) ಎಂದು ಗುರುತಿಸಲಾಗಿದೆ. ಎ.10ರಂದು ಬೆಳಗ್ಗೆ 11ಗಂಟೆಗೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಬೈಕ್, ರಸ್ತೆಯ ಬದಿ ಡಿವೈಡರ್ಗೆ ಹಾಗೂ ಕಬ್ಬಿಣದ ಗ್ರಿಲ್ಸ್ಗಳಿಗೆ ಡಿಕ್ಕಿ ಹೊಡೆದು ಬೈಕ್ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅರುಣ್, ಎ.11ರಂದು ನಸುಕಿನ ವೇಳೆ 1.30ರ ಸುಮಾರಿಗೆ ಅಜ್ಜರಕಾಡಿ ನಲ್ಲಿರುವ ಜಿಲ್ಲಾ ಆಸ್ಪತ್ರೆ ಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿಯ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿ ಬಂಧನ
ಕಾರ್ಕಳ, ಎ.11: ಬೆಳ್ತಂಗಡಿಯ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೌಮ್ಯ ಶೆಟ್ಟಿ (28)ಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪುತ್ತೂರು ನೆಲ್ಯಾಡಿಯ ಸುದೀಪ್ ರೈ ಮತ್ತು ಕಾರ್ಕಳ ಕಜೆ ನಿವಾಸಿ, ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಸೌಮ್ಯ ಶೆಟ್ಟಿ ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಸುದೀಪ್ ಮತ್ತು ಸೌಮ್ಯ ಕಾರ್ಕಳ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿದ್ದರು. ಮಾ.17ರಂದು ಸುದೀಪ್ ಕಾರಿನಲ್ಲಿ ತನ್ನ ತಾಯಿಯೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ಹೋಗುತ್ತಿದ್ದಾಗ ಸೌಮ್ಯ, ಸ್ಕೂಟಿಯಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಳು ಎಂದು ದೂರಲಾಗಿತ್ತು. ನಂತರ ಸುದೀಪ್ ಕಾರ್ಕಳಕ್ಕೆ ಹೋಗಿದ್ದು, ಮಾ.22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಎ.24ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುದೀಪ್ಗೆ ಸೌಮ್ಯ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ಮೃತರ ತಂದೆ ದಾಮೋದರ್ ರೈ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಎ.1ರಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಕಾರ್ಕಳ ನಗರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ವಹಿಸಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಪ್ರಾಥಮಿಕ ತನಿಖೆ ನಡೆಸಿ, ಸಾಕ್ಷ್ಯ ಪುರಾವೆಗಳಿಂದ ಆರೋಪಿ ಸೌಮ್ಯ ಶೆಟ್ಟಿಯನ್ನು ಎ.11ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಬೀದರ್| ಕಾರಂಜಾ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಸಿಎಂಗೆ ಮನವಿ
ಬೀದರ್ : ಕಾರಂಜಾ ರೈತ ಸಂತ್ರಸ್ತರಿಗೆ ಮಾನವೀಯತೆ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಸಮರ್ಪಕ ಪರಿಹಾರ ನೀಡಲು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯಿಂದ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಗರಕ್ಕೆ ಆಗಮಿಸಿದಾಗ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯ ಏಕೈಕ ದೊಡ್ಡ ನೀರಾವರಿ ಯೋಜನೆಯಾದ ಕಾರಂಜಾ ನೀರಾವರಿ ಯೋಜನೆಗೆ ಇಲ್ಲಿನ ರೈತರು ಯತಾರ್ಥವಾಗಿ ಯಾವುದೇ ಷರತ್ತುಗಳು ಹಾಕದೆ ಭೂಮಿ ನೀಡಿದ್ದಲ್ಲದೆ, ಮನೆ, ಮಠ ಕಳೆದುಕೊಂಡು ಪ್ರಸ್ತುತ ದಿನಗಳಲ್ಲಿ ಮುಂಬೈ, ಪೂನಾ, ಹೈದರಾಬಾದ್ನಲ್ಲಿ ಕೂಲಿ ಕೆಲಸ ಮಾಡಿ ಬದುಕುವ ಪರಿಸ್ಥಿತಿಯಲ್ಲಿದ್ದಾರೆ. ಪರಿಹಾರಕ್ಕಾಗಿ ಸಂತ್ರಸ್ತರು ದಶಕಗಳ ಕಾಲದಿಂದ ಸಮರ್ಪಕ ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಕಾರಂಜಾ ಯೋಜನೆಗೆ ಭೂಮಿ ನೀಡಿದ ರೈತ ಸಂತ್ರಸ್ತರಲ್ಲಿ ಬಹುತೇಕ ಜನರು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತ ಸಂತ್ರಸ್ತರು ದಶಕಗಳ ಕಾಲದಿಂದ ಸಮರ್ಪಕ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸರಕಾರಗಳು ರೈತರ ಬೇಡಿಕೆ ಈಡೇರಿಸುವ ಬಗ್ಗೆ ನಿರಂತರ ಭರವಸೆ ನೀಡುತ್ತಾ ಬರುತ್ತಿದ್ದು, ಇಲ್ಲಿವರೆಗೆ ನಮ್ಮ ಬೇಡಿಕೆಯ ಅನುಷ್ಠಾನವಾಗಿಲ್ಲ ಎಂದು ದೂರಲಾಗಿದೆ. ನಿರ್ಗತಿಕ, ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಕೋರ್ಟಿಗೆ ಹೋಗಲು ಆಗದ ಕಾರಂಜಾ ನೀರಾವರಿ ಯೋಜನೆಗೆ ತಾಯಿ ಸಮಾನ ಭೂಮಿ ನೀಡಿರುವ ರೈತ ಸಂತ್ರಸ್ತರಿಗೆ, ಮಾನವೀಯತೆಯ ಮಾನದಂಡ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಸಮರ್ಪಕ ಪರಿಹಾರ ಹಣ ಮಂಜೂರು ಮಾಡಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ, ಗೌರವಾಧ್ಯಕ್ಷ ಬಸವರಾಜ್ ದೇಶಮುಖ್, ಪ್ರೋ.ಆರ್.ಕೆ ಹುಡಗಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹುಚಕನಹಳ್ಳಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಹಂಚೆ ಹಾಗೂ ವಿನಯಕುಮಾರ್ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ನನ್ನ ಮತ- ನನ್ನ ಹಕ್ಕು’ ಎಸ್ಐಆರ್ ಕುರಿತ ಕಾರ್ಯಾಗಾರ
ಉಡುಪಿ, ಎ.11: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಶ್ರೀಸಾಮಾನ್ಯ ಆಯೋಗ, ಉಡುಪಿ ಡಯಾಸಿಸ್, ಅಲ್ಪಸಂಖ್ಯಾತರ ವೇದಿಕೆ ಉಡುಪಿ ಜಿಲ್ಲೆ ಇವುಗಳ ವತಿಯಿಂದ ‘ನನ್ನ ಮತ- ನನ್ನ ಹಕ್ಕು’ ಎಸ್ಐಆರ್ ಕುರಿತ ಕಾರ್ಯಾಗಾರವನ್ನು ಶನಿವಾರ ಉಡುಪಿ ಮದರ್ ಆಫ್ ಸಾರೋಸ್ ಚರ್ಚ್ನ ಅವೆ ಮರಿಯಾ ಹಾಲ್ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಚರ್ಚಿನ ಪ್ರಧಾನ ಧರ್ಮಗುರು ಫಾ.ಚಾರ್ಲ್ಸ್ ಮೆನೇಜಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು. ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರಾನ್ಹ, ಉಡುಪಿ ಸುಗಮ್ಯ ಮಹಿಳಾ ಸಂಘಟನೆಯ ಸಿಲ್ವಿಯಾ ಸುವಾರಿಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹಸಂಚಾಲಕಿ ರೋಶನಿ ಒಲಿವೇರಾ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಪಸಂಖ್ಯಾತರ ವೇದಿಕೆಯ ಜಿಲ್ಲಾಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್ ಸ್ವಾಗತಿಸಿದರು. ಅಝೀಜ್ ಉದ್ಯಾವರ ಹಾಗೂ ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಸಂಪರ್ಕ ಪತ್ರಿಕೆಯ ಸಂಪಾದ ಡಾ.ಜೆರಾಲ್ಡ್ ಪಿಂಟೋ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಕೀಲ ವಿನಯ್ ಶ್ರೀನಿವಾಸ ಹಾಗೂ ಐಶ್ವರ್ಯ ರವಿಕುಮಾರ್ ಎಸ್ಐಆರ್ ಬರುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡಿದರು.
ಉಡುಪಿ| ಹೊಸಾಳ ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆರೋಪ
► ಎ.13ರಿಂದ ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕೆ ಸಜ್ಜು► ಬಾವಿಗಳ ನೀರೆಲ್ಲಾ ಉಪ್ಪು, ಕೃಷಿ ಭೂಮಿಗೆ ಹಾನಿ► ಭೂಸವಕಳಿಯ ಭೀತಿ, ಶಾಲಾ ಮಕ್ಕಳಿಗೆ ತೊಂದರೆ
ನಾನು ಯಾವತ್ತೂ ಕೇಂದ್ರ ಸರಕಾರದ ಮುಂದೆ ಕೈಕಟ್ಟಿ ನಿಂತವನಲ್ಲ : ಎಚ್.ಡಿ.ಕುಮಾರಸ್ವಾಮಿ
ಜನತಾ ಸಮಾವೇಶ ಹಾಗೂ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮ
PBKS VS SRH: ಹೈದರಾಬಾದ್ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡ ಪಂಜಾಬ್ ಕಿಂಗ್ಸ್
PBKS VS SRH IPL 2026: ಮುಲ್ಲನ್ಪುರ್ನಲ್ಲಿ ಇಂದು (ಏಪ್ರಿಲ್ 11) ನಡೆದ ಐಪಿಎಲ್ 2026ರ 17ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ಜಯಭೇರಿ ಬಾರಿಸಿದೆ.
Maharashtra | ಹೆಲಿಪ್ಯಾಡ್ ಬದಲು ಪಾರ್ಕಿಂಗ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿದ ಪೈಲಟ್!
ಪುಣೆ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ಬದಲು ವಾಹನ ನಿಲುಗಡೆ ತಾಣದ ಸಮೀಪ ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಪುರಂದರ್ ತಾಲ್ಲೂಕಿನಲ್ಲಿ ನಡೆದಿದೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದು ಕೇವಲ ಮೂರು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. “ಪೈಲಟ್ ತಪ್ಪಾಗಿ ಹೆಲಿಕಾಪ್ಟರ್ ಅನ್ನು ಬೇರೆ ಸ್ಥಳದಲ್ಲಿ ಇಳಿಸಿದ್ದಾರೆ,” ಎಂದು ಛಗನ್ ಭುಜಬಲ್ ತಿಳಿಸಿದ್ದಾರೆ. ಅವರು ಸಮಾಜ ಪರಿವರ್ತಕ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುರಂದರ್ಗೆ ತೆರಳಿದ್ದರು. “ಈ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗುವುದು. ಪೈಲಟ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ,” ಎಂದು ಪುಣೆ ಗ್ರಾಮಾಂತರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆ ಕುರಿತು ಹೆಲಿಕಾಪ್ಟರ್ ನಿರ್ವಹಣಾ ಕಂಪನಿ ಅಥವಾ ಪೈಲಟ್ ರಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಹೆಲಿಕಾಪ್ಟರ್ ಭೂಸ್ಪರ್ಶದ ವೇಳೆ ಸ್ಥಳದಲ್ಲಿ ದೊಡ್ಡ ಪ್ರಮಾಣದ ಧೂಳು ಏರಿದ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. #BREAKING : Chhagan Bhujbal narrowly avoided a mishap after the helicopter he was in landed in a parking area instead of a helipad in Pune. Chhagan Bhujbal, Maharashtra’s Food and Civil Supplies Minister, was involved in a near miss on Saturday after the helicopter he was… pic.twitter.com/rw3z2wFBAf — upuknews (@upuknews1) April 11, 2026 ಇದಕ್ಕೂ ಮೊದಲು, ಜನವರಿ 28, 2026ರಂದು ಲಿಯರ್ ಜೆಟ್ 45 ಚಾರ್ಟರ್ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ನಾಲ್ವರು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದರು. ಅಪಘಾತಕ್ಕೂ ಮುನ್ನ ವಿಮಾನವು ನಿಯಂತ್ರಣ ಕಳೆದುಕೊಂಡು ವಾಲಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಜಿಲ್ಲಾ ಪರಿಷತ್ ಚುನಾವಣೆಗೆ ಮುನ್ನ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಪ್ರಯಾಣಿಸುತ್ತಿದ್ದರು.
ಕುಂದಾಪುರ| ಶತಮಾನ ಕಂಡ ವಂಡ್ಸೆ ಶಾಲೆಗೆ ಬಂದ ‘AI ಟೀಚರ್’
ರಾಜ್ಯದ ಸರಕಾರಿ ಶಾಲೆಯಲ್ಲಿಯೇ ಪ್ರಥಮ ಪ್ರಯೋಗ
ಮುಸ್ಲಿಂ ಮಹಿಳೆಯರ ಕುರಿತು ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು
ಧಾರವಾಡ : ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಹರ ಪೋಲಿಸ್ ಠಾಣೆಯಲ್ಲಿ ಸುವೊಮೊಟೊ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ತುಕಾರಾಂ ನೀಡಿದ ದೂರಿನ ಮೇರೆಗೆ ಸುವೊಮೊಟೊ ಕೇಸ್ ದಾಖಲಿಸಲಾಗಿದೆ. ಎ.8ರಂದು ಧಾರವಾಡ ಶಹರದ ಸುಭಾಷ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲೆಬೆಲೆ, ಮುಸಲ್ಮಾನ್ ಹುಡುಗಿಯರಿದ್ದಾರಲ್ಲಾ ಗಂಡಸರಿಗಿಂತ ಡೆಂಜರ್, ನಮ್ಮ ಹೆಣು ಮಕ್ಕಳಿಗೆ ಮನೆಗೆ ಹೋಗಿ ಹೇಳಿಕೊಡಿ ಅಕಸ್ಮಾತ್ ಮುಸ್ಲಿ ಹುಡುಗನ್ನು ಫ್ರೆಂಡ್ ಶಿಪ್ ಮಾಡಿದರೆ ಒಕೆ ಮುಸ್ಲಿಂ ಹೆಣು ಮಕ್ಕಳನ್ನು ಫ್ರೆಂಡ್ ಶಿಪ್ ಮಾಡಲೇ ಬೇಡಿ ಬಹಳ ಡೆಂಜರ್ ಎಂದು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ದ್ವೇಷ ಭಾವನೆ ಬರುವಂತೆ ಪ್ರಚೋದನಕಾರಿಯಾಗಿ ಭಾಷಣ ಮಾಡಿರುತ್ತಾರೆ. ಈ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಕಲಬುರಗಿ| ಸೂಗೂರು ದೇವಸ್ಥಾನ ಉದ್ಘಾಟಣೆ, ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಕಲಬುರಗಿ: ಜಾತಿ ರಹಿತ ಸಮ-ಸಮಾಜ ನಿರ್ಮಾಣವಾಗಬೇಕಾದರೆ ದ್ವೇಷ ಬಿಟ್ಟು ಎಲ್ಲರು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ಚಿತ್ತಾಪುರ ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ಮಹಾತ್ಮ ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದಿಂದ ಆಯೋಜಿಸಿದ ಶ್ರೀ ಭೋಜಲಿಂಗೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ, ನೂತನ ಬೆಳ್ಳಿ ರಥೋತ್ಸವಕ್ಕೆ ಚಾಲನೆ ಹಾಗೂ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ಅನೇಕ ಜಾತಿ ಧರ್ಮಗಳಿವೆ. ಅನೇಕ ಭಾಷೆ ಸಂಸ್ಕೃತಿಗಳಿವೆ. ವೈವಿದ್ಯತೆ ಇರುವ ಸಮಾಜದಲ್ಲಿ ಏಕತೆ ಪ್ರದರ್ಶನ ಮಾಡುವುದು ಅತ್ಯವಶ್ಯಕ. ಯಾವುದೇ ಧರ್ಮ ದ್ವೇಷ ಮಾಡಲು ಹೇಳುವುದಿಲ್ಲ. ಎಲ್ಲರನ್ನೂ ಪ್ರೀತಿಸಿದಾಗಲೇ ಮಾನವ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಧರ್ಮದ ಹೆಸರಲ್ಲಿ ಜಾತಿಯನ್ನು ಒಡೆದು, ಒಂದು ಧರ್ಮದ ಜನರನ್ನು ಮತ್ತೊಂದು ಧರ್ಮದ ವಿರುದ್ದ ಎತ್ತಿಕಟ್ಟುವ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ನಡುವೆ ಇದ್ದಾರೆ. ನೀವು ಅಂತಹ ಪಟ್ಟಭದ್ರರ ಮಾತು ಕೇಳಬಾರದು. ಸರ್ವರನ್ನು ಪ್ರೀತಿಸುವ ಮನೋಬಾವನೆ ಬೆಳೆಸಿಕೊಳ್ಳಬೇಕು ಮತ್ತು ಒಗ್ಗಟ್ಟಾಗಿರಬೇಕು ಎಂದು ಸಮುದಾಯಕ್ಕೆ ಕರೆ ನೀಡಿದ ಸಿಎಂ ಅವರು, ಇದನ್ನೆ ಪೂಜ್ಯ ಭೋಜಲಿಂಗೇಶ್ವರ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದರು. ಸ್ವಚ್ಛ ಮನಸ್ಸಿನಿಂದ ದೇವಸ್ಥಾನಕ್ಕೆ ಹೋಗಿ ನಮಗಷ್ಟೇ ಅಲ್ಲದೇ ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸಿದಾಗ ಮಾತ್ರ ಫಲ ಸಿಗುತ್ತದೆ. ಬಸವಣ್ಣ, ಸೂಫಿ, ಸಂತರು ಕೂಡಾ ಇದನ್ನೇ ಪ್ರತಿಪಾದಿಸಿದರು. ಬಸವಣ್ಣ ಕಾಯಕ ಹಾಗೂ ದಾಸೋಹ ಎರಡನ್ನು ಒತ್ತಿ ಹೇಳಿದ್ದಾರೆ. ಎಲ್ಲರೂ ಕಷ್ಟಪಟ್ಟು ದುಡಿಯಬೇಕು. ಹಾಗೆ ಬಂದದನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು. ಕಾಯಕ ಹಾಗೂ ದಾಸೋಹಗಳನ್ನು ಎಲ್ಲರೂ ಮಾಡಬೇಕು. ಕೆಲವರೇ ಮಾಡಿದರೆ ಅಸಮಾನತೆ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಿಗೆ ಸಮಾನತೆ ಹಾಗೂ ಆರ್ಥಿಕಶಕ್ತಿ ಬಂದಾಗ ಮಾತ್ರ ಸಮಾನತೆ ಬರಲು ಸಾಧ್ಯ ಎಂದರು. ಬಸವಣ್ಣನವರ, ಕನಕದಾಸರ, ಶರಣರ, ಸಾಧು ಸಂತರ ಸಮಾನತೆಯ ತತ್ವಗಳು ಇದ್ದರೂ ಕೂಡಾ ಇನ್ನೂಜಾತಿ ವ್ಯವಸ್ಥೆ ಹೋಗಿಲ್ಲ. ಇವನಾರವ ಎನ್ನುತ್ತೇವೆ ಹೊರತು ಇವ ನಮ್ಮವ ಎನ್ನುತ್ತಿಲ್ಲ. ಕನಕದಾಸರ ಉಕ್ತಿಯಂತೆ ಕುಲದ ಆಚೆಗೆ ನಾವೆಲ್ಲ ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದ ಸಿಎಂ, ಡಾ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನವಾಗಿ ಬಾಳಬೇಕು. ಈ ಎಲ್ಲ ತತ್ವಗಳು ಜಾರಿಗೆ ಬರಲು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಜಾತಿ ವ್ಯವಸ್ಥೆಯ ವಿರುದ್ದ ಚಾಲನೆ ಸಿಗಬೇಕೆಂದರೆ ಶಿಕ್ಷಣ ದೊರಕಿದಾಗ ಮಾತ್ರ ಸಮಾನತೆ ಸಿಗುತ್ತದೆ. ದೇವಸ್ಥಾನ ಉದ್ಘಾಟನೆ ನೆರವೇರಿಸಿದ್ದೇನೆ. ಇದು ಸಾರ್ಥಕವಾಗಬೇಕಾದರೆ ನೀವೆಲ್ಲ ಮನುಷ್ಯರಾಗಿ ಬಾಳಬೇಕು ಎಂದರು. ಜಾತಿ ವ್ಯವಸ್ಥೆ ಸ್ವಲ್ಪ ಕಡಿಮೆಯಾಗಿದೆಯಾದರು ಇನ್ನೂ ಪೂರ್ಣವಾಗಿ ಹೋಗಿಲ್ಲ. ಅದು ತುಂಬಾ ಜಡತ್ವ ಹೊಂದಿದೆ. ಪ್ರತಿಯೊಬ್ಬರು ವೈಚಾರಿಕತೆ ಹಾಗೂ ವೈಜ್ಞಾನಿಕ ಹಿನ್ನೆಲೆಯ ಇರುವ ವಿದ್ಯೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಮೂಢನಂಬಿಕೆಗಳ ದಾಸರಾಗಬೇಡಿ. ಬಸವಣ್ಣನವರು ಆ ಕಾಲದಲ್ಲಿಯೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದ್ದರು. ಈಗಲೂ ವಿದ್ಯಾವಂತರು ಇದನ್ನು ನಂಬುತ್ತಿರುವುದು ದುರಂತ. ಕರ್ಮಸಿದ್ದಾಂತವೇ ಶುದ್ಧ ಸುಳ್ಳು. ಅದನ್ನು ನಂಬಬೇಡಿ ಎಂದು ಜನ ಸಮುದಾಯಕ್ಕೆ ಕರೆ ನೀಡಿದರು. ಪೂಜ್ಯ ಹಿರಗಪ್ಪ ತಾತನವರ ಬೇಡಿಕೆಯಂತೆ ಸುಕ್ಷೇತ್ರದಲ್ಲಿ ವಸತಿ ನಿಲಯ ನಿರ್ಮಾಣ ಹಾಗೂ ಭಕ್ತಾದಿಗಳಿಗೆ ಯಾತ್ರಿ ನಿವಾಸ ಸ್ಥಾಪಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಯಾತ್ರಿ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು 1 ಕೋಟಿ ರೂ. ಹಣ ನೀಡುವ ಭರವಸೆ ನೀಡಿದ್ದಾರೆ. ವಸತಿ ನಿಲಯ ಪ್ರಾರಂಭಕ್ಕೆ ಸರಕಾರಕ್ಕೆ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಭಕ್ತರ ಕೋರಿಕೆಯಂತೆ ಸುಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಇದಲ್ಲದೆ ಭಕ್ತರಿಂದ ನಿರ್ಮಿಸಲಾದ ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸಹ ತಾವು ಬದ್ದ ಇರುವುದಾಗಿ ತಿಳಿಸಿದರು. ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಪೂಜ್ಯ ಹಿರಗಪ್ಪ ತಾತನವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಚೆನ್ನಾರೆಡ್ಡಿ ತುನ್ನೂರು, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ್ ಹುಮನಾಬಾದ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವರದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕರ್ನಾಟಕ ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಬೂಬ್ ಚಿಸ್ತಿ ಸಾಹೇಬ್, ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ಶರಣಪ್ಪ ಮಾನೆಗಾರ, ಲಿಂಗಾರೆಡ್ಡಿ ಭಾಸರೆಡ್ಡಿ, ಭೀಮಣ್ಣ ಸಾಲಿ, ಭಾಗಣ್ಣಗೌಡ ಸಂಕನೂರ, ಶಿವಾನಂದ ಪಾಟೀಲ ಮರತೂರು, ಮಹೇಶ ರೆಡ್ಡಿ ಮುದ್ನಾಳ, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಮೊದಲ ಬಾರಿಗೆ ಅಮೆರಿಕ–ಇರಾನ್ ನೇರ ಮಾತುಕತೆ; ಇಸ್ಲಾಮಾಬಾದ್ ನಲ್ಲಿ ಮಹತ್ವದ ಬೆಳವಣಿಗೆ
ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಎರಡೂ ದೇಶಗಳ ನಿಯೋಗಗಳು ಮೊದಲ ಬಾರಿಗೆ ನೇರವಾಗಿ ಮುಖಾಮುಖಿ ಸಂವಾದದಲ್ಲಿ ತೊಡಗಿವೆ ಎಂದು Aljazeera ದ ಆಬಿದ್ ಹುಸೇನ್ ವರದಿ ಮಾಡಿದ್ದಾರೆ. ಇಲ್ಲಿಯವರೆಗೆ ಈ ಪ್ರಕ್ರಿಯೆಯನ್ನು ‘ಪರೋಕ್ಷ ಮಾತುಕತೆ ಅಥವಾ ಸಾಮೀಪ್ಯ ಮಾತುಕತೆ’ ಎಂದು ಕರೆಯಲಾಗುತ್ತಿತ್ತು. ಅಮೆರಿಕ ಮತ್ತು ಇರಾನ್ ನಿಯೋಗಗಳು ಪ್ರತ್ಯೇಕ ಕೊಠಡಿಗಳಲ್ಲಿ ಕುಳಿತುಕೊಂಡು, ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ಪರಸ್ಪರ ಸಂದೇಶಗಳನ್ನು ರವಾನಿಸುತ್ತಿದ್ದವು ಎಂದು ಶುಕ್ರವಾರ ವರದಿಯಾಗಿತ್ತು. ಆದರೆ ಇದೀಗ ಮಹತ್ತರ ಬದಲಾವಣೆಯೊಂದರಲ್ಲಿ, ಮಧ್ಯಸ್ಥಿಕೆಗೆ ಹತ್ತಿರವಿರುವ ಮೂಲಗಳ ಪ್ರಕಾರ, ಎರಡೂ ರಾಷ್ಟ್ರಗಳು ನೇರ ಮಾತುಕತೆಗಳಲ್ಲಿ ಭಾಗಿಯಾಗಿವೆ. ಈ ಮಾತುಕತೆಗಳಲ್ಲಿ ಪಾಕಿಸ್ತಾನದ ಮಧ್ಯವರ್ತಿಗಳೂ ಹಾಜರಿದ್ದು, ಸಂವಾದ ಪ್ರಕ್ರಿಯೆಗೆ ನೆರವಾಗುತ್ತಿದ್ದಾರೆ. ಈ ಬೆಳವಣಿಗೆ ಮಾತುಕತೆ ಪ್ರಕ್ರಿಯೆಯಲ್ಲಿ ಹೊಸ ತಿರುವಾಗಿ ಪರಿಗಣಿಸಲ್ಪಡುತ್ತಿದ್ದು, ಮುಂದಿನ ಹಂತಗಳಲ್ಲಿ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಇದು ಸಹಕಾರಿಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ‘ಪ್ರಾಸ್ಪೆರಾ’ ಬಿಸಿನೆಸ್ ಫೆಸ್ಟ್
ಕುಂದಾಪುರ: ಎ:11: ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಹೊಸ ಆಲೋಚನೆಗಳು ಅವಕಾಶಗಳಾಗಿ ಬದಲಾಗಲಿ ಎಂಬ ಆಶಯ ದೊಂದಿಗೆ ’ಪ್ರಾಸ್ಪೆರಾ- ದಿ ಬಿಸಿನೆಸ್ ಫೆಸ್ಟ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಅಧ್ಯಕ್ಷ ಸಂಪತ್ ಶೆಟ್ಟಿ ಮಾತ ನಾಡಿ, ಆತ್ಮವಿಶ್ವಾಸ ಇರುವ ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸುತ್ತಾನೆ, ಹೋರಾಡುತ್ತಾನೆ ಮತ್ತು ಅಂತಿಮವಾಗಿ ಗೆಲುವನ್ನು ಸಾಧಿಸುತ್ತಾನೆ. ಯಶಸ್ಸಿನ ಹಾದಿಯಲ್ಲಿ ಸರಿಯಾದ ಸಮಯ ದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಜೀವನದ ಪ್ರತಿಯೊಂದು ಹಂತದಲ್ಲೂ, ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ’ ಎಂದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪದವಿ ವ್ಯಾಸಂಗದ ಅವಧಿಯಲ್ಲೇ ಪ್ರಾಯೋಗಿಕ ಅನುಭವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಇದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಂಡದ ಕೆಲಸ ಮತ್ತು ಸಂವಹನ ಕೌಶಲಗಳನ್ನು ವೃದ್ಧಿಸಲು ಸಹಕಾರಿ’ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಸಂಸ್ಥೆಯು ಸದಾ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಪ್ರಾಸ್ಪೆರಾ ಬ್ಯುಸಿನೆಸ್ ಫೆಸ್ಟ್ ಗಳು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಮೂಡಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿ ಯಾಗಿವೆ. ವಿದ್ಯಾರ್ಥಿಗಳು ಇಲ್ಲಿ ಕೇವಲ ಶೈಕ್ಷಣಿಕ ಜ್ಞಾನವನ್ನಷ್ಟೇ ಪಡೆಯದೆ, ಗ್ರಾಹಕರನ್ನು ಒಪ್ಪಿಸುವ ಮತ್ತು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಯೋಗಿಕ ಕೌಶಲಗಳನ್ನು ಕಲಿಯಬೇಕು’ ಎಂದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ಯಶಸ್ವಿ ಉದ್ಯಮಿಯಾಗಲು ದೊಡ್ಡ ಕನಸುಗಳನ್ನು ಕಾಣುವುದು ಎಷ್ಟು ಮುಖ್ಯವೋ, ಅಷ್ಟೇಮುಖ್ಯವಾಗಿ ಆತ್ಮವಿಶ್ವಾಸದಿಂದ ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸಮಯೋಚಿತ ನಿರ್ಧಾರಗಳು ಮತ್ತು ಸೃಜನಶೀಲ ಆಲೋಚನೆ ಗಳು ಒಬ್ಬ ವ್ಯಕ್ತಿಯನ್ನು ಭವಿಷ್ಯದ ನಾಯಕನನ್ನಾಗಿ ರೂಪಿಸುತ್ತವೆ’ ಎಂದು ತಿಳಿಸಿದರು. ದೇವಸ್ಥಾನದ ಧರ್ಮದರ್ಶಿ ಗೋಪಾಲ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಇನ್ನೂ ಹೆಚ್ಚಿನ ಅವಕಾಶಗಳನ್ನು ಅವರಿಗೆ ಒದಗಿಸಿಕೊಡಬೇಕು ಎಂದು ಹೇಳಿದರು. ಶಾಲಾ ಅಭಿವೃದ್ಧಿ ಸಲಹಾ ಮಂಡಳಿ ಸದಸ್ಯರು ಮತ್ತು ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲೆ ಆಫ್ರಿನ್ ಖಾನ್, ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲೆ ಪ್ರೊ.ಪ್ರವೀಣ್ ಕುಮಾರ್ ಕೆ.ಪಿ., ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿನುತ ಯು.ಎನ್., ಗಣಕ ವಿಭಾಗದ ಮುಖ್ಯಸ್ಥೆ ನೂತನ್ ಎಸ್., ಕಾರ್ಯಕ್ರಮದ ಸಂಯೋಜಕ ನಾಗರಾಜ್ ದೇವ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗಣಕ ವಿಭಾಗದ ಉಪನ್ಯಾಸಕಿಯ ಐಶ್ವರ್ಯ ಸ್ವಾಗತಿಸಿದರು. ಪ್ರೊ.ಅಹಮದ್ ಖಲೀಲ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವ್ಯವಹಾರ ಮೇಳದಲ್ಲಿ ಸುಮಾರು 18 ವ್ಯಾಪಾರ ಮಳಿಗೆಗಳಿಗೆ ಗಣ್ಯರು ಭೇಟಿ ನೀಡಿ, ಯುವ ವಿದ್ಯಾರ್ಥಿ ಉದ್ಯಮಿ ಗಳಿಗೆ ಉಪಯುಕ್ತವಾದ ವ್ಯವಹಾರದ ಚಾಕ ಚಕ್ಯತೆಯನ್ನು ಕುರಿತು ವಿವರಿಸಿದರು. ಈ ಬಿಸಿನೆಸ್ ಫೆಸ್ಟ್ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತ ವ್ಯವಹಾರದ ಯೋಜನೆಯ ಕುರಿತು, ಎರಡನೇ ಹಂತ ವ್ಯವಹಾರದ ಕಾರ್ಯರೂಪ, ತೃತೀಯ ಹಂತ ಹಣಕಾಸಿನ ವಿವರಗಳ ಪಟ್ಟಿ ಕಾರ್ಯಗಳ ಮೂಲಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಟಾಲ್ಗಳು ಮತ್ತು ವಿವಿಧ ಉಪಯುಕ್ತ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಎ.12ರಂದು ಕಟಪಾಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಎ.11: ಉಡುಪಿ ಮಿಷನ್ ಆಸ್ಪತ್ರೆಯ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕಟಪಾಡಿಯ ಲೊಂಬಾರ್ಡ್ ಮಿಷನ್ ಹೆಲ್ತ್ ಸೆಂಟರ್ನಲ್ಲಿ ಎ.12ರಂದು ಬೆಳಗ್ಗೆ 9ಗಂಟೆ ಯಿಂದ ಮಧ್ಯಾಹ್ನ 1ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ನೇತ್ರ, ಸ್ತ್ರೀ ರೋಗ, ಕಿವಿ, ಮೂಗು, ಗಂಟಲು, ಮಧುಮೇಹ, ಇಸಿಜಿ ತಪಾಸಣೆ ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಪಿಯುಸಿ ಫಲಿತಾಂಶ: ಕಾವ್ಯಾಗೆ ವಾಣಿಜ್ಯ ವಿಭಾಗದಲ್ಲಿ 595 ಅಂಕ
ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 595(ಶೇ.99.16) ಅಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉರ್ತ್ತೀಣರಾಗಿದ್ದಾರೆ. ಇವರು ಕಾಪು ಕಳತ್ತೂರು ಚಂದ್ರನಗರ ನಿವಾಸಿ ಸತೀಶ್ ಮೂಲ್ಯ ಹಾಗೂ ರತ್ನಾ ದಂಪತಿ ಪುತ್ರಿ.
IPL 2026- ಶ್ರೇಯಸ್ ಅಯ್ಯರ್ ನಾಯಕನಾಟ; ಬೃಹತ್ ಮೊತ್ತ ಪೇರಿಸಿಯೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಸನ್ ರೈಸರ್ಸ್
ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರಾನ್ ಸಿಂಗ್ ಅವರ ಉತ್ತಮ ಜೊತೆಯಾಟದ ಬಳಿಕ ಶ್ರೇಯಸ್ ಅಯ್ಯರ್ ಅವರ ನಾಯಕನಾಟಕ್ಕೆ ದಂಗಾದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳ ಪರಾಭವ ಅನುಭವಿಸಿದೆ. ಈ ಮೂಲಕ ಪಂಜಾಬ್ ತಂಡ ಆಡಿರುವ 4 ಪಂದ್ಯಗಳಲ್ಲಿ 3 ಜಯ ಮತ್ತು ಒಂದು ರದ್ದಿನೊಂದಿಗೆ 7 ಅಂಕಗಳನ್ನು ಗಳಿಸಿದ್ದು ಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದೆ. ಹೈದರಾಬಾದ್ ತಂಡ 4 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು 2 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ನ್ಯೂ ಚಂಡೀಗಢದ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್ 11ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. () ಪ್ರಿಯಾಂಶ್- ಪ್ರಭಸಿಮ್ರಾನ್ ಜೊತೆಯಾಟ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್ ಆರ್ಯ(20 ಎಸೆತಗಳಲ್ಲಿ 57) ಮತ್ತು ಪ್ರಭಸಿಮ್ರಾನ್ ಸಿಂಗ್ (25 ಎಸೆತಗಳಲ್ಲಿ 57 ರನ್) ಮೊದಲ ವಿಕೆಟ್ ಗೆ 6.2 ಓವರ್ ಗಳಲ್ಲಿ 97 ರನ್ ಗಳಿಸಿದ್ದು ಸನ್ ರೈಸರ್ಸ್ ಪಾಲಿಗೆ ನುಂಗಲಾರದ ತುತ್ತಾಯಿತು. ಬಳಕ ನಾಯಕ ಶ್ರೇಯಸ್ ಅಯ್ಯರ್ ಅವರು ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದ ಅಜೇಯ 69 ರನ್ ಗಳನ್ನು ಬಾರಿಸಿದ್ದು ಸಹ ಮುಳುವಾಯಿತು. ಹೀಗಾಗಿ ಪಂಜಾಬ್ ತಂಡ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡದ ಸನ್ ರೈಸರ್ಸ್ ತಂಡ ಅಬಿಷೇಕ್ ಶರ್ಮಾ(28 ಎಸೆತದಿಂದ 74) ಮತ್ತು ಟ್ರಾವಿಸ್ ಹೆಡ್(23 ಎಸೆತದಲ್ಿ 38) ಅವರ ಸ್ಫೋಟಕ ಆರಂಭದಿಂದಾಗಿ 250ರ ಮೇಲಿನ ಮೊತ್ತದತ್ತ ಸಾಗುತ್ತಿತ್ತು. ಆದರೆ ಪಂಜಾಬ್ ಕಿಂಗ್ಸ್ ಬೌಲರ್ ಮಧ್ಯಮ ಓವರ್ ಗಳಲ್ಲಿ ಹಿಡಿತ ಸಾಧಿಸಿದರು. ಅರ್ಶದೀಪ್ ಸಿಂಗ್ ಅವರ ಬೌಲಿಂಗ್ ನಲ್ಲಿ ಇಶಾನ್ ಕಿಶನ್ ಅವರ ಕ್ಯಾಚನ್ನು ಪಂದ್ಯದಲ್ಲಿ ತಿರುವು ಕಾಣಲು ಸಾಧ್ಯವಾಯಿತು. ಸಂಕ್ಷಿಪ್ತ ಸ್ಕೋರ್ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 219/6, ಅಭಿಷೇಕ್ 74(28), ಹೆಡ್ 38(23), ಕ್ಲಾಸನ್ 39(33), ಇಶಾನ್ ಕಿಶನ್ 27(17), ಅರ್ಶದೀಪ್ 50ಕ್ಕೆ 2, ಶಶಾಂಕ್ 20ಕ್ಕೆ 2, ಬಾರ್ಲೆಟ್ 42ಕ್ಕೆ1. ಪಂಜಾಬ್ ಕಿಂಗ್ಸ್ 18.5 ಓವರ್ ಗಳಲ್ಲಿ 223/4, ಪ್ರಿಯಾಂಶ್ ಆರ್ಯ 57(20), ಪ್ರಭಸಿಮ್ರಾನ್ ಸಿಂಗ್ 51(25), ಶ್ರೇಯಸ್ ಅಯ್ಯರ್ 69(33), ಶಿವಾಂಗ್ ಕುಮಾರ್ 33ಕ್ಕೆ 3, ಹರ್ಷ್ ದುಬೆ 38ಕ್ಕೆ 1.
ಪಿಯುಸಿ ಫಲಿತಾಂಶ: ಅಲ್ಫಿಯಾಗೆ ವಾಣಿಜ್ಯ ವಿಭಾಗದಲ್ಲಿ 573 ಅಂಕ
ಕಾಪು ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲ್ಫಿಯಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 573(95.5) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉರ್ತ್ತೀಣರಾಗಿದ್ದಾರೆ. ಇವರು ಮುಹಮ್ಮದ್ ನಝೀಮ್ ಹಾಗೂ ರುಕಿಯಾ ದಂಪತಿ ಪುತ್ರಿ.
ಕಲಬುರಗಿ| ಕಾಳಗಿ ಕ್ರೀಡಾ ಉತ್ಸವ; ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
ಕಾಳಗಿ : ಪಟ್ಟಣದ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಗುತ್ತೇದಾರ್ ನೇತೃತ್ವದಲ್ಲಿ ಹಮ್ಮಿಕೊಂಡ ಕಾಳಗಿ ಕ್ರೀಡಾ ಉತ್ಸವದಲ್ಲಿ ನಡೆದ ಹೊನಲು ಬೆಳಕಿನ ರೋಚಕ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ಜನಸಾಗರವೇ ಸೇರಿತ್ತು. ಪ್ರೊ ಕಬಡ್ಡಿ ಲೀಗ್ ಮಾದರಿಯಲ್ಲೇ ಕಾಳಗಿ ಕ್ರೀಡಾ ಉತ್ಸವದಲ್ಲಿ ಎಂಟು ಜನ ಮಾಲೀಕರು ಎಂಟು ಕಬಡ್ಡಿ ತಂಡಗಳನ್ನು ರಚನೆ ಮಾಡಿ ಕ್ರೀಡಾಪಟುಗಳನ್ನು ಖರೀದಿ ಮಾಡಿದರು. ಈ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ತಾಲೂಕಿನ ವಿವಿಧ ಹಳ್ಳಿಗಳಿಂದ ಜನಸಾಗರವೇ ಸೇರಿತ್ತು. ಪ್ರತಿಯೊಂದು ಪಂದ್ಯವು ರಣಾರೋಚಕದಿಂದ ಕೂಡಿದವು. ಪಂದ್ಯಕ್ಕೂ ಮೊದಲು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಗೀತೆ ಹಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಗುತ್ತೇದಾರ್ ಮಾತನಾಡಿ, ಗಂಡೆದೆಯ ಬಲಶಾಲಿ ಆಟವಾದ ಕಬಡ್ಡಿಯನ್ನು ಗ್ರಾಮೀಣ ಜನತೆ ಪೋಷಿಸಿ ಬೆಳೆಸಬೇಕು. ಅಪ್ಪಟ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಕಬಡ್ಡಿ ಕ್ರೀಡೆಯೊಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕಬಡ್ಡಿ ರಾಷ್ಟ್ರದ 4ನೇ ಆಟವಾಗಿದ್ದು, ಈ ಆಟವು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರದ ಹಿರಿಮೆ ಹೆಚ್ಚಿಸಬೇಕು ಎಂದರು. ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರಹಾಕಲು ಕಾಳಗಿ ಕ್ರೀಡಾ ಉತ್ಸವ ಉತ್ತಮ ವೇದಿಕೆಯಾಗಿದೆ. ಈ ವರ್ಷ ಕಾಳಗಿ ಕ್ರೀಡಾ ಉತ್ಸವ ಸೀಸನ್ - 1 ಪ್ರಾರಂಭವಾಗಿದ್ದು ಇನ್ಮೂಂದೆ ಪ್ರತಿವರ್ಷ ಜಾತ್ರಾ ಮಹೋತ್ಸವ ವೇಳೆಯಲ್ಲಿ ಕ್ರೀಡಾ ಉತ್ಸವವನ್ನು ಇನ್ನೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕಾಳಗಿ ಕ್ರೀಡಾ ಉತ್ಸವ ಅಂದರೆ ಇಡೀ ರಾಜ್ಯವೇ ಕಾಳಗಿಯತ್ತ ತಿರುಗಿ ನೋಡುವಂತೆ ಕ್ರೀಡೆಗಳನ್ನು ಕಾಳಗಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಕ್ರೀಡಾ ಉತ್ಸವ ಸಂಯೋಜಕ ಸಂತೋಷ್ ಪತಂಗೆ ಮಾತನಾಡಿ, ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ತಾಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಹೆಸರನ್ನು ಬೆಳೆಸುವಂತಹ ಕ್ರೀಡಾಪಟುಗಳಾಗಬೇಕು” ಎಂದು ಸಲಹೆ ನೀಡಿದರು. ಪ್ರಮುಖರಾದ ರಾಘವೇಂದ್ರ ಗುತ್ತದಾರ್, ನೀಲಕಂಠ ಗುತ್ತೇದಾರ, ಮಲ್ಲಿಕಾರ್ಜುನ್ ಗಾಜರೆ, ವಿಶ್ವನಾಥ ವನಮಾಲಿ, ಶರಣು ಸಾಲಿಮಠ, ಜಗದೀಶ್ ಮಾಲಿಪಾಟೀಲ್, ಶರಣು ಮಜ್ಜಿಗಿ, ಶರಣಬಸಪ್ಪ ಮಮಶೆಟ್ಟಿ, ನಾಗರಾಜ್ ಚಿನ್ನ, ಪರಮೇಶ್ವರ ಮಡಿವಾಳ, ರಾಜು ಸಿಳಿನ್, ಅಂಬರೀಶ್ ಸಾಲಹಳ್ಳಿ, ವಿಜಯಕುಮಾರ್ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಿಯುಸಿ ಫಲಿತಾಂಶ: ಅಬೂಬಕ್ಕರ್ ನುಹೈದ್ಗೆ ವಿಜ್ಞಾನ ವಿಭಾಗದಲ್ಲಿ 554 ಅಂಕ
ಮಡಿಕೇರಿಯ ಸೈಂಟ್ ಮೈಕಲ್ಸ್ ಎಜ್ಯುಕೇಶನಲ್ ಇಸ್ಟಿಟ್ಯೂಟಶನ್ಸ್ನ ವಿದ್ಯಾರ್ಥಿ ಅಬೂಬಕ್ಕರ್ ನುಹೈದ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 554(ಶೇ.92) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಡಿಕೇರಿಯ ಸನಾವುಲ್ಲಾ ಹಾಗೂ ಉಲ್ಫಾ ದಂಪತಿ ಪುತ್ರ.
ರಾಯಚೂರು| ಹಟ್ಟಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸಂಸ್ಥಾಪನಾ ದಿನಾಚರಣೆ
ರಾಯಚೂರು: ಅಖಿಲ ಭಾರತ ಕಿಸಾನ್ ಸಭಾದ ಸಂಸ್ಥಾಪನಾ ದಿನದ ಅಂಗವಾಗಿ ಹಟ್ಟಿಯ ಪೈ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ್ ವೀರಾಪೂರು ಮಾತನಾಡಿ, ಭಾರತದ ರೈತ ಚಳುವಳಿಯ ಇತಿಹಾಸದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪನೆ ಪ್ರಮುಖ ಘಟ್ಟವಾಗಿದೆ ಎಂದು ಹೇಳಿದರು. 1936ರ ಏಪ್ರಿಲ್ 11ರಂದು ಲಖ್ನೋದಲ್ಲಿ ಆರಂಭವಾದ ಈ ಸಂಘಟನೆ, ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ನಡೆದಿದ್ದ ರೈತ ಚಳುವಳಿಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಮಟ್ಟದ ವೇದಿಕೆಯಾಗಿ ರೂಪುಗೊಂಡಿತು ಎಂದರು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಉತ್ತರಪ್ರದೇಶ, ಬಿಹಾರ, ಬಂಗಾಳ, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡುಗಳಲ್ಲಿ ರೈತರ ಭೂಹಕ್ಕು, ಗೇಣಿದಾರರ ಸಮಸ್ಯೆಗಳು ಮತ್ತು ಕೂಲಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟಗಳು ನಡೆದವು. ಈ ಹೋರಾಟಗಳು ಸ್ವಾತಂತ್ರ್ಯ ಚಳುವಳಿಯ ಭಾಗವಾಗಿಯೂ ರೂಪುಗೊಂಡವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪೆಂಚಲಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರೈತ ಚಳುವಳಿಯ ಇತಿಹಾಸ, ರೈತರ ಹಕ್ಕುಗಳಿಗಾಗಿ ನಡೆದ ಹೋರಾಟಗಳ ಮಹತ್ವ ಹಾಗೂ ಇಂದಿನ ಕೃಷಿ ಸಂಕಷ್ಟಗಳ ಕುರಿತು ಚರ್ಚಿಸಲಾಯಿತು. ರೈತ ಸಂಘಟನೆಗಳು ಒಗ್ಗೂಡಿ ಕೃಷಿ ನೀತಿಗಳಲ್ಲಿ ಬದಲಾವಣೆ ತರಲು ಹೋರಾಟಗಳನ್ನು ಬಲಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಕಿಸಾನ್ ಸಭಾ ಘೋಷಣೆಗಳನ್ನು ಕೂಗಿ ರೈತರ ಐಕ್ಯತೆಗೆ ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಿಐಟಿಯು ಹಟ್ಟಿ ಘಟಕದ ಫಕೃದ್ದೀನ್, ಕಾರ್ಯದರ್ಶಿ ವೆಂಕಟೇಶ್ ಗೋರ್ ಕಲ್, ಮುಖಂಡರಾದ ನಿಂಗಪ್ಪ, ದಾವೂದ್, ಮಹಾಂತೇಶ್, ಶ್ರೀಧರ್, ಶಂಶುದ್ದೀನ್ ಔಟಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಸಾಹಿರಾಬಾನು, ದುರುಗಮ್ಮ, ರಜಿಯಾ ಬೇಗಂ, ಗಾಯತ್ರಿ, ಹುಲಿಗೆಮ್ಮ, ಶಿವಮ್ಮ, ಅನುರಾಧಾ, ಭಾರತಿ, ಹುಸೇನಬೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
PBKS Vs SRH Highlights- ಒಂದೇ ಕೈಯಲ್ಲಿ ಅದ್ಙುತ ಕ್ಯಾಚ್ ಹಿಡಿದ ಮಾರ್ಕೋ ಯಾನ್ಸನ್! ಬೌಂಡರಿ ಬಳಿಯ ಸಾಹಸ ವೈರಲ್
Marco Jansen Clever Catch- ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 219 ರನ್ ಕಲೆಹಾಕಿತು. ಅಭಿಷೇಕ್ ಶರ್ಮಾ (74) ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪಂದ್ಯದ ಪ್ರಮುಖ ಆಕರ್ಷಣೆಯೆಂದರೆ ಮಾರ್ಕೋ ಯಾನ್ಸನ್ ಹಿಡಿದ ಅದ್ಭುತ ಕ್ಯಾಚ್. ಇಶಾನ್ ಕಿಶನ್ ಸಿಕ್ಸರ್ ಕಡೆಗೆ ಅಟ್ಟಿದ್ದ ಚೆಂಡನ್ನು ಬೌಂಡರಿಯಲ್ಲಿ ಯಾನ್ಸನ್ ಏಕಹಸ್ತದಿಂದ ಹಿಡಿದು ಎಲ್ಲರನ್ನೂ ಬೆರಗುಗೊಳಿಸಿದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿ, ಹೈದರಾಬಾದ್ ತಂಡವನ್ನು ಬೃಹತ್ ಮೊತ್ತಕ್ಕೆ ನಿಯಂತ್ರಿಸಲು ಪಂಜಾಬ್ ತಂಡಕ್ಕೆ ನೆರವಾಯಿತು.
ಹೊಸಪೇಟೆ : ರಾಜ್ಯದ ಬಗರ್ ಹುಕುಂ ಸಾಗುವಳಿದಾರರು ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದು, ಒಂದು ತಿಂಗಳೊಳಗೆ ಭೂಮಿ ಮಂಜೂರಾತಿ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದಿದ್ದರೆ “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೇ 1ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಹಲವು ದಶಕಗಳಿಂದ ಅರಣ್ಯ, ಗೋಮಾಳ ಹಾಗೂ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದರೂ ಭೂಮಿ ಮಂಜೂರಾತಿ ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ. ಸರಕಾರಗಳು ಭರವಸೆ ನೀಡಿದರೂ ಜಾರಿಗೆ ತರುವಲ್ಲಿ ವಿಫಲವಾಗಿದ್ದು, ಬಡವರ ಭೂಮಿ ಹಕ್ಕಿನ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿವೆ. ಇತ್ತ ಭೂರಹಿತರು ಕೃಷಿ ಮಾಡುತ್ತಿರುವ ಭೂಮಿಗಳನ್ನು ಕಂಪೆನಿಗಳಿಗೆ ನೀಡುತ್ತಿರುವುದು ಅನ್ಯಾಯಕರವಾಗಿದೆ ಎಂದು ಸಮಿತಿ ಟೀಕಿಸಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು, ನೋಟೀಸ್ಗಳನ್ನು ಹಿಂಪಡೆಯಬೇಕು ಹಾಗೂ ವಸತಿ ರಹಿತರಿಗೆ ನಿವೇಶನ-ಮನೆಗಳನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಸರಕಾರ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಸಮಿತಿ ಎಚ್ಚರಿಸಿದೆ.
ಗ್ರಾಹಕರಿಗೆ ತೂಕದಲ್ಲಿ ಮೋಸ: ರಾಜ್ಯದಲ್ಲಿ 3 ವರ್ಷಗಳಲ್ಲಿ 2,26,291 ಕಡೆ ದಾಳಿ, 57,098 ಪ್ರಕರಣ ದಾಖಲು
ಗ್ರಾಹಕರಿಗೆ ತೂಕ ಮತ್ತು ಮೌಲ್ಯದ ಪ್ರಮಾಣದಲ್ಲಿ ಮೋಸ ಮಾಡುವ ಅನೇಕ ವ್ಯಾಪಾರಸ್ಥರಿದ್ದಾರೆ. ಆಹಾರದ ಪೊಟ್ಟಣಗಳಲ್ಲಿ ನಮೂದು ಮಾಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪದಾರ್ಥ ಇರುತ್ತದೆ. ಅಲ್ಲದೆ, ಅಂಗಡಿಗಳಲ್ಲಿ ತೂಕದ ಪ್ರಮಾಣದಲ್ಲೂ ಮೋಸ, ವಂಚನೆ ಮಾಡಲಾಗುತ್ತಿದೆ. ಇದರ ವಿರುದ್ಧ ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಅನೇಕ ಕಡೆಗಳಲ್ಲಿ ದಾಳಿಗಳನ್ನು ನಡೆಸಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಸುಮಾರು 2,26,291 ಕಡೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 57,098 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮತ್ತಷ್ಟು ವಿವರ ಇಲ್ಲಿದೆ.
ಭಾರತದಲ್ಲಿ ನಿರ್ಮಾಣಗೊಂಡ ಹೈಡ್ರೋಜನ್ ಮೂಲಕ ಉರಿಯುವ ಸ್ಟವ್!
ಒಂದು ಯುನಿಟ್ಗೆ 1,50,000 ರೂ. ಬೆಲೆಯ ಈ ಪ್ಲಗ್ ಆಂಡ್ ಯೂಸ್ ಸಿಸ್ಟಂ ಹಸಿರು ಹೈಡ್ರೋಜನ್ನಲ್ಲಿ ಚಲಿಸುತ್ತದೆ ಮತ್ತು ಮನೆ ಮತ್ತು ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲೇ ತಯಾರಾದ ಹೈಡ್ರೋಜನ್ ಕುಕಿಂಗ್ ಸ್ಟವ್ಗಳು ಇದೀಗ ಸುದ್ದಿಯಲ್ಲಿವೆ. ಇವು ಎಲ್ಪಿಜಿ ಅಡುಗೆಯಂತಲ್ಲ. ಹಸಿರು ಹೈಡ್ರೋಜನ್ ಸ್ಟವ್ಗಳು. ಈ ಸಾಧನ ಗ್ಯಾಸ್ ಸಿಲಿಂಡರ್ಗಳ ಬದಲಿಗೆ ಹೈಡ್ರೋಜನ್ನಲ್ಲಿ ಚಲಿಸುತ್ತದೆ. ಈಗಾಗಲೇ ಪ್ರಯೋಗಾಲಯಗಳು ಮತ್ತು ಅಡುಗೆ ಮನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಹೈಡ್ರೋಜನ್ ಸ್ಟವ್ಗಳು ಅಡುಗೆ ಮನೆಯಿಂದ ಎಲ್ಪಿಜಿ ಸಿಲಿಂಡರ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತಿವೆ. ಒಂದು ಯುನಿಟ್ಗೆ 1,50,000 ರೂ. ಬೆಲೆಯ ಈ ಪ್ಲಗ್ ಆಂಡ್ ಯೂಸ್ ಸಿಸ್ಟಂ ಹಸಿರು ಹೈಡ್ರೋಜನ್ನಲ್ಲಿ ಚಲಿಸುತ್ತದೆ ಮತ್ತು ಮನೆ ಮತ್ತು ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಸಂಗ್ರಹಿಸಿದ ಅನಿಲವನ್ನು ಬಳಸುವ ಸಾಂಪ್ರದಾಯಿಕ ಸ್ಟವ್ಗಳಿಗಿಂತ ಭಿನ್ನವಾಗಿ ಇದು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುತ್ತದೆ. ಅಡುಗೆ ಮಾಡಲು ಪರ್ಯಾಯ ಮಾರ್ಗವನ್ನು ನೀಡುತ್ತಿದೆ. ಭಾರತದಲ್ಲೇ ತಯಾರಾಗಿರುವ ಈ ಉತ್ಪನ್ನವನ್ನು ಎಲ್ಲಾ ಕ್ಷೇತ್ರಗಳಲ್ಲೂ ಪರೀಕ್ಷಿಸಲಾಗಿದೆ. ಸಮುದಾಯ ಅಡುಗೆಮನೆಗಳಲ್ಲಿ ಮತ್ತು ಸಂಶೋಧನಾ ಅಧ್ಯಯನಗಳಲ್ಲಿ ಇವುಗಳ ಬಳಕೆಯನ್ನು ಸಾಬೀತು ಮಾಡಲಾಗಿದೆ. ಈ ಹೈಡ್ರೊಜನ್ ಸ್ಟವ್ ಭಿನ್ನ ಏಕೆ? ಇದು ಸಾಮಾನ್ಯ ಗ್ಯಾಸ್ ಸ್ಟವ್ ಅಲ್ಲ. ಸಂಪೂರ್ಣವಾಗಿ ಹೈಡ್ರೊಜನ್ನಿಂದ ಚಲಿಸಲು ಸಾಧ್ಯವಾಗುವಂತೆ ನಿರ್ಮಾಣಗೊಂಡಿದೆ. ಪ್ರಮುಖ ಅಂಶಗಳು • 100 % ಹಸಿರು ಹೈಡ್ರೋಜನ್ ಅನ್ನು ಅನಿಲವಾಗಿ ಬಳಸುತ್ತದೆ • 2 ಬರ್ನರ್ಗಳಲ್ಲಿ ಸಿಗುತ್ತದೆ • ಸ್ಟೇನ್ಲೆಸ್ ಸ್ಟೀಲ್ ಬಾಡಿ ಜೊತೆಗೆ ಸಿಗುತ್ತದೆ • ಮನೆ ಮತ್ತು ವಾಣಿಜ್ಯ ಅಡುಗೆಮನೆಗಳಿಗೆ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಸ್ಟವ್ನಂತೆಯೇ ಇದನ್ನು ಚಲಾಯಿಸಬಹುದಾದರೂ ಇದು ಸಂಪೂರ್ಣ ಭಿನ್ನವಾಗಿ ಕೆಲಸ ಮಾಡುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ? ಸ್ಟವ್ ಕ್ಯಾಟಲಿಟಿಕ್ ಹೈಡ್ರೋಜನ್ ಬರ್ನರ್ ಬಳಸುತ್ತದೆ, ಅಂದರೆ, • ಮುಖ್ಯ ಇಂಧನವಾಗಿ ಹೈಡ್ರೋಜನ್ ಬಳಕೆಯಾಗುತ್ತದೆ • ಬರ್ನರ್ ಮೂಲಕ ನಿಯಂತ್ರಿತ, ಕಡಿಮೆ ಜ್ವಾಲೆ ಅಥವಾ ಜ್ವಾಲೆಯಿಲ್ಲದೆಯೂ ಅಡುಗೆ ಮಾಡಬಹುದು! • ಅಡುಗೆಯ ಸಂದರ್ಭದಲ್ಲಿ ಶಾಖ ಸಮಾನವಾಗಿ ಹಂಚಿಕೆಯಾಗುತ್ತದೆ. ಎಲ್ಪಿಜಿ ಸ್ಟವ್ಗಳಂತಲ್ಲದೆ, ಇವು ಸಂಗ್ರಹಿತ ಅನಿಲ ಸಿಲಿಂಡರ್ಗಳ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಇವು ನಿಯಂತ್ರಿತ ಹೈಡ್ರೋಜನ್ ಹರಿವು ವ್ಯವಸ್ಥೆಯ ಮೂಲಕ ಕೆಲಸ ಮಾಡುತ್ತದೆ. ಹೊರ ಸೂಸುವ ಧೂಮ? ಶೂನ್ಯ ಮಾಲಿನ್ಯವನ್ನು ಹೊರಸೂಸುತ್ತಿರುವುದು ಅತಿ ದೊಡ್ಡ ಅಂಶವಾಗಿದೆ. ಅಂದರೆ • ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುವುದಿಲ್ಲ. • ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾಗುವುದಿಲ್ಲ • ಯಾವುದೇ ಹೊಗೆ ಕಾಣುವುದಿಲ್ಲ. ಇದು ಮೌನವಾಗಿ ಕಂಪನವಿಲ್ಲದೆ ಕೆಲಸ ಮಾಡುತ್ತದೆ. ಹೀಗಾಗಿ ಒಳಾಂಗಣ ಪರಿಸರದಲ್ಲಿ ಸ್ವಚ್ಛ ಅಡುಗೆಗೆ ಸೂಕ್ತವಾಗಿದೆ. ಮನೆಯನ್ನು ಮೀರಿದ ಬಳಕೆ ಮನೆಗಳ ಅಡುಗೆಮನೆಗಳಲ್ಲಿ ಇದನ್ನು ಬಳಸಬಹುದಾದರೂ ಪ್ರಸ್ತುತ ವಿಶಾಲವಾದ ಉದ್ದೇಶ ಹೊಂದಿದೆ. • ಸರ್ಕಾರದ ಸ್ವಚ್ಛ-ಇಂಧನ ಯೋಜನೆಗಳು • ಸಂಶೋಧನೆ ಮತ್ತು ಪರೀಕ್ಷಾ ಪ್ರಯೋಗಗಳು • ಸಮುದಾಯ ಅಡುಗೆಮನೆಗಳು ಮತ್ತು ಕ್ಯಾಂಟೀನ್ಗಳು • ರಕ್ಷಣೆ ಮತ್ತು ಕುಗ್ರಾಮದಂತಹ ಪ್ರದೇಶಗಳು • ಸಾಂಸ್ಥಿಕ ಮತ್ತು ಕೈಗಾರಿಕಾ ಅಡುಗೆ ಮನೆಗಳು ಇದು ಕೇವಲ ಗ್ರಾಹಕ ಉತ್ಪನ್ನವಲ್ಲ. ಬೃಹತ್ ಇಂಧನ ಪ್ರಯೋಗಗಳ ಭಾಗವಾಗಿದೆ. ಸುರಕ್ಷೆ ಮತ್ತು ನಿರ್ಮಾಣದ ವಿವರಗಳು ಹೈಡ್ರೋಜನ್ ಒಳಗೊಂಡಿರುವ ಕಾರಣ ಸುರಕ್ಷೆಗೆ ನಿರ್ಮಾಣದಲ್ಲಿ ಅತಿ ಹೆಚ್ಚು ಗಮನ ನೀಡಲಾಗಿದೆ. • ಜ್ವಾಲೆ ನಂದಿಸುವಿಕೆ • ಒತ್ತಡ ನಿಯಂತ್ರಣ ವ್ಯವಸ್ಥೆ • ಹೈಡ್ರೋಜನ್-ಹೊಂದಿಕೆ ವಾಲ್ವ್ಗಳು • ಬಾಳಿಕೆ ಬರುವ ಸ್ಟೇನ್ಲೆಸ್- ಸ್ಟೀಲ್ ಬಾಡಿ ದೀರ್ಘ ಅವಧಿಗೆ ಇವು ಸ್ಥಿರವಾದ ಮತ್ತು ನಿಯಂತ್ರಿತ ಬಳಕೆಗೆ ನೆರವಾಗುತ್ತದೆ. ಬೆಲೆ ಮತ್ತು ವಾಸ್ತವದ ಬಳಕೆ ಪ್ರತಿ ಯುನಿಟ್ಗೆ ರೂ. 1,50,000 ಬೆಲೆ ಇದೆ. ಹೀಗಾಗಿ ಪ್ರಸ್ತುತ ಎಲ್ಲಾ ಮನೆಗಳೂ ಇದನ್ನು ಬಳಸಲು ಸಾಧ್ಯವಿಲ್ಲ. ಇದರ ಪ್ರಸ್ತುತ ಪಾತ್ರ ಹೆಚ್ಚಾಗಿ ಸೀಮಿತ ಬಳಕೆಯಲ್ಲಿದೆ • ಪ್ರಾಯೋಗಿಕ ಯೋಜನೆಗಳು • ಸ್ವಚ್ಛ ಇಂಧನ ಪರೀಕ್ಷಿಸುತ್ತಿರುವ ಸಂಸ್ಥೆಗಳು • ದೊಡ್ಡ-ಪ್ರಮಾಣದ ಅಡುಗೆಮನೆಗಳು ವ್ಯಾಪಕ ಅಳವಡಿಕೆಯು ವೆಚ್ಚ ಮತ್ತು ಹೈಡ್ರೋಜನ್ ಪಡೆಯುವುದು ಮತ್ತು ನಿತ್ಯ ಬಳಕೆಯ ಸರಳತೆ ಮೊದಲಾದ ಅಂಶಗಳು ಅನ್ವಯಿಸುತ್ತವೆ. ಆದರೆ ಈ ಹೈಡ್ರೋಜನ್ ಅಡುಗೆ ಸ್ಟವ್ಗಳು ಅಡುಗೆ ತಂತ್ರಜ್ಞಾನ ಸಾಗುತ್ತಿರುವ ಹೊಸ ಹಾದಿಯನ್ನು ತೋರಿಸುತ್ತಿದೆ. ಸಿಲಿಂಡರ್ಗಳಿಂದ ದೂರವಾಗಿ ಪರ್ಯಾಯ ಇಂಧನಗಳತ್ತ ಸಾಗುತ್ತಿದ್ದೇವೆ. ತಕ್ಷಣವೇ ಇದು ಮನೆಗಳಿಂದ ಎಲ್ಪಿಜಿಯನ್ನು ಬದಲಿಸದೆ ಇರಬಹುದು. ಆದರೆ ಹೊಸ ರೀತಿಯ ಅಡುಗೆ ಕಡೆಗೆ ಹೊಸ ಹಾದಿಯನ್ನು ತೋರಿಸಿದೆ. ಕೃಪೆ: indiatoday.in

24 C