ತಮಿಳುನಾಡಿನಲ್ಲಿ ಕಮಲ ಅರಳಲು ಡಿಎಂಕೆ ಅವಕಾಶ ನೀಡಿದೆ: ನಟ ವಿಜಯ್ ವಾಗ್ದಾಳಿ
ಚೆನ್ನೈ: ತಮಿಳುನಾಡಿನಲ್ಲಿ ಕಮಲ (ಬಿಜೆಪಿಯ ಚಿಹ್ನೆ) ಅರಳಲು ಆಡಳಿತಾರೂಢ ಡಿಎಂಕೆ ಪಕ್ಷ ಅವಕಾಶ ನೀಡುತ್ತಿದೆ ಎಂದು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಪ್ರಕಟನೆಯೊಂದನ್ನು ಬಿಡುಗಡೆ ಮಾಡಿರುವ ವಿಜಯ್, ಪ್ರಮುಖ ದ್ರಾವಿಡ ಪಕ್ಷವಾದ ಡಿಎಂಕೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಹೆಸರಲ್ಲಿ ಜನರನ್ನು ಗೊಂದಲಗೊಳಿಸಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ನಮ್ಮನ್ನು ಕುಗ್ಗಿಸುವ ವಿಫಲ ಪ್ರಯತ್ನದ ನಂತರ, ನಾವು ಕಾಂಚೀಪುರಂ, ಪುದುಚೇರಿ ಹಾಗೂ ಈರೋಡ್ನಲ್ಲಿ ಮೂರು ಯಶಸ್ವಿ ಸಾರ್ವಜನಿಕ ಸಭೆಗಳಿಗೆ ಸಾಕ್ಷಿಯಾದೆವು. ಜನರ ನಮ್ಮೊಂದಿಗೆ ನಿಂತಿರುವುದನ್ನು ಕಂಡು ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದವರು ತಬ್ಬಿಬ್ಬಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ಡಿಎಂಕೆಯ ಮುಖವಾಣಿ ಮುರಸೋಳಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ಲೇಖನವು ಟಿವಿಕೆಯ ವರ್ಚಸ್ಸಿಗೆ ಕಳಂಕ ಹಚ್ಚುವ ಹಾಗೂ ಅಗೌರವ ತೋರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ, ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮೆ: ಈಶ್ವರ ಖಂಡ್ರೆ
ಬೆಂಗಳೂರು: ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ತಿಳಿಸಿದ್ದಾರೆ. ವನ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ
ವಿಷ್ಣು ಪ್ರತಿಮೆ ಧ್ವಂಸ | ‘ನೋಂದಾಯಿತ ಧಾರ್ಮಿಕ ಸ್ಥಳವಲ್ಲ’: ಭಾರತದ ಆಕ್ಷೇಪಕ್ಕೆ ಥೈಲ್ಯಾಂಡ್ ಸ್ಪಷ್ಟನೆ
ಬ್ಯಾಂಕಾಕ್: ಥೈಲ್ಯಾಂಡ್–ಕಾಂಬೋಡಿಯಾ ಗಡಿ ಪ್ರದೇಶದಲ್ಲಿ ಥಾಯ್ ಸೇನೆಯಿಂದ ವಿಷ್ಣು ಪ್ರತಿಮೆಯನ್ನು ಕೆಡವಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತವು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಥೈಲ್ಯಾಂಡ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೆಡವಲಾದ ಪ್ರತಿಮೆ ನೋಂದಾಯಿತ ಧಾರ್ಮಿಕ ಸ್ಥಳದಲ್ಲಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ವಿವಾದಿತ ಗಡಿ ಪ್ರದೇಶದಲ್ಲಿ 2014ರಲ್ಲಿ ನಿರ್ಮಿಸಲಾದ ವಿಷ್ಣುವಿನ ಪ್ರತಿಮೆಯನ್ನು ಥಾಯ್ ಸೇನೆ ಸೋಮವಾರ ಬ್ಯಾಕ್ಹೋ ಲೋಡರ್ ಬಳಸಿ ತೆರವುಗೊಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಘಟನೆಯ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ ಥಾಯ್–ಕಾಂಬೋಡಿಯನ್ ಗಡಿಯ ಮಾಧ್ಯಮ ಕೇಂದ್ರ, ಈ ಕ್ರಮವು ಧಾರ್ಮಿಕ ನಂಬಿಕೆಗಳನ್ನು ಅಗೌರವಿಸುವ ಉದ್ದೇಶದಿಂದ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. “ಪ್ರದೇಶದ ನಿರ್ವಹಣೆ ಮತ್ತು ಭದ್ರತೆ ದೃಷ್ಟಿಯಿಂದ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಧರ್ಮ ಅಥವಾ ಪವಿತ್ರ ಸಂಕೇತಗಳಿಗೆ ಅವಮಾನ ಮಾಡುವ ಉದ್ದೇಶವಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರತಿಮೆಯನ್ನು ನಂತರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದು, ಅದು ಅಧಿಕೃತವಾಗಿ ನೋಂದಾಯಿತ ಧಾರ್ಮಿಕ ಸ್ಥಳವಲ್ಲ ಎಂದು ಕೇಂದ್ರವು ಹೇಳಿದೆ. ಈ ಪ್ರದೇಶದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು, ತಪ್ಪು ತಿಳುವಳಿಕೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಉದ್ವಿಗ್ನತೆಯನ್ನು ತಪ್ಪಿಸಲು ಈ ಕ್ರಮ ಅಗತ್ಯವಾಯಿತು ಎಂದು ಅದು ವಿವರಿಸಿದೆ. ಚೊಂಗ್ ಆನ್ ಮಾ ಪ್ರದೇಶದ ವಿವಾದಿತ ಗಡಿ ಭಾಗದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದ್ದು, ಥಾಯ್ ಪ್ರದೇಶದ ಮೇಲೆ ಅಕ್ರಮವಾಗಿ ಸಾರ್ವಭೌಮತ್ವ ಪ್ರದರ್ಶಿಸುವ ಸಂಕೇತಗಳಾಗಿ ಕಾಂಬೋಡಿಯನ್ ಪಡೆಗಳು ಇವುಗಳನ್ನು ಸ್ಥಾಪಿಸಿದ್ದವೆಂಬ ಆರೋಪವನ್ನೂ ಥಾಯ್ ಅಧಿಕಾರಿಗಳು ಮಾಡಿದ್ದಾರೆ. ಡಿಸೆಂಬರ್ 22ರಂದು ನಡೆದ ಕಾರ್ಯಾಚರಣೆಯ ನಂತರ ಥಾಯ್ ಸೇನೆ ಈ ಪ್ರದೇಶದ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಮತ್ತು ನಂಬಿಕೆಗಳಿಗೆ ಥೈಲ್ಯಾಂಡ್ ಸಮಾನ ಗೌರವ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದ್ದು, ಈ ಪ್ರದೇಶದ ರಾಷ್ಟ್ರಗಳೊಂದಿಗೆ ಥೈಲ್ಯಾಂಡ್ಗೆ ದೀರ್ಘಕಾಲದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿವೆ ಎಂದು ಅದು ಉಲ್ಲೇಖಿಸಿದೆ.
ಕಡಬ, ಡಿ.25. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ 2025–28ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಕೆ.ಎಸ್. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್., ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರವೀಣ್ ರಾಜ್ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಜಯ ಕುಮಾರ್, ರತ್ನಾಕರ, ಹರೀಶ್ ಬಿ., ನಾಗರಾಜ್ ಎನ್.ಕೆ., ಸ್ವಾತಿ ಕೆ.ವಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.28 : ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ʼರಜತ ರುಕ್ಮಿಣಿʼ ಸಮಾರಂಭ
ಉಳ್ಳಾಲ: ಕುಂಪಲದ ಶ್ರೀ ಬಾಲಕೃಷ್ಣ ಮಂದಿರದ ಅಂಗ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ಇದೇ ಡಿ.28 ರಂದು ಕುಂಪಲ ಬಾಲಕೃಷ್ಣ ಮಂದಿರದ ಕೃಷ್ಣಾಂಗಣದಲ್ಲಿ ರಜತ ರುಕ್ಮಿಣಿ ಸಮಾರಂಭ ನಡೆಯಲಿದೆಯೆಂದು ಕುಂಪಲ ಬಾಲಕೃಷ್ಣ ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ ಹೇಳಿದರು. ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಡಿ.28ರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡು ಬಳಿಕ ದಕ್ಷಿಣ ಕನ್ನಡ-ಕಾಸರಗೋಡು ಉಭಯ ಜಿಲ್ಲಾ ಮಟ್ಟದ ಮಾತೃವಾಣಿ ಮಹಿಳಾ ಭಜನಾ ಸ್ಫರ್ಧೆ ನಡೆಯಲಿದೆ ಎಂದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಮತಾನಂದಮಯೀ ಆಶೀರ್ವಚನ ನೀಡಲಿದ್ದು, ಅನ್ವಿತ್ ಇಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಇದರ ನಿರ್ದೇಶಕಿ ಮೋಹನ ಕುಮಾರಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ಮೀನಾಕ್ಷಿ ಸೀತಾರಾಮ ಶೆಟ್ಟಿ ಭಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಕ್ತಿ ಕಾಂಪ್ಲೆಕ್ಸ್ ತೊಕ್ಕೊಟ್ಟು ಇದರ ಮಾಲಕರಾದ ಮಧುಶ್ರೀ ಸುರೇಶ್ ಭಟ್ನಗರ, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಟ್ಟಿ ಪಿಲಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮಧ್ಯಾಹ್ನ 3 ಗಂಟೆಯಿಂದ ನೃತ್ಯ ದಾಮಿನಿ 2025 ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಫರ್ಧೆ ನಡೆಯಲಿದೆ.ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ 25 ಸಾಧಕ ಮಹಿಳೆಯರು ಮತ್ತು ಮಹಿಳಾ ಸಂಘ ಸಂಸ್ಥೆಗಳಿಗೆ ರಜತ ರಾಣಿಪುರಸ್ಕಾರ ಪ್ರದಾನಿಸಲಾಗುವುದು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಶ್ರೀ ಬಾಲಕೃಷ್ಣ ಮಂದಿರದ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ ಜಯಲಕ್ಷ್ಮಿ ಬಿ.ಜೆ, ಪ್ರಧಾನ ಕಾರ್ಯದರ್ಶಿ ಮಮತಾ ಸತೀಶ್ ಕುಂಪಲ,ಕೋಶಾಧಿಕಾರಿ ಶಾಲಿನಿ ಗಣೇಶ್ ,ಕ್ರೀಡಾ ಕಾರ್ಯದರ್ಶಿ ಗಾಯತ್ರಿ ಜಯಚಂದ್ರ ,ಬಾಲಕೃಷ್ಣ ಮಂದಿರದ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
'ನಾನು ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆʼ : ಕಾರವಾರ ಕರಾವಳಿ ಉತ್ಸವದಲ್ಲಿ ಗಾಯಕ ಸೋನು ನಿಗಮ್ ಮನದಾಳದ ಮಾತು
ಕಾರವಾರ: ನಗರದ ಟ್ಯಾಗೋರ್ ಕಡಲ ತೀರದಲ್ಲಿ ಆಯೋಜಿಸಲಾಗಿರುವ ಕರಾವಳಿ ಉತ್ಸವ ಸಪ್ತಾಹದ ಮೂರನೇ ದಿನದಂದು ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಸುಮಧುರ ಧ್ವನಿಯ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು. ಮಯೂರ ವರ್ಮ ವೇದಿಕೆಯ ಮೇಲೆ ಹಾಡುತ್ತಲೇ ಕನ್ನಡಿಗರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಅವರು, ತಾವು ಹಿಂದಿ ಭಾಷಿಕರಾಗಿದ್ದರೂ ತಮ್ಮ ಅಂತರಾತ್ಮದಲ್ಲಿ ಕನ್ನಡ ಮನೆ ಮಾಡಿದೆ ಎಂದು ಭಾವುಕರಾಗಿ ನುಡಿದರು. ನಾನು ಈ ಜನ್ಮದಲ್ಲಿ ಹಿಂದಿ ಭಾಷಿಕನಾಗಿರಬಹುದು, ಆದರೆ ನನ್ನ ಭಾವನೆಗಳನ್ನು ಗಮನಿಸಿದರೆ ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎನಿಸುತ್ತದೆ. ಇದೇ ಕಾರಣಕ್ಕೆ ಕನ್ನಡ ಹಾಡುಗಳನ್ನು ಹಾಡುವಾಗ ಸಾಹಿತ್ಯಕ್ಕೆ ತಕ್ಕಂತೆ ಸಹಜವಾಗಿಯೇ ನನ್ನಲ್ಲಿ ಭಾವನೆಗಳು ಸ್ಫುರಿಸುತ್ತವೆ ಎಂದು ಅವರು ವೇದಿಕೆಯ ಮೇಲೆ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಸತತ ಎಂಟು ಹಿಂದಿ ಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದ ಸೋನು ನಿಗಮ್, ನಂತರ ಕನ್ನಡಿಗರ ನೆಚ್ಚಿನ ʼಈ ಸಂಜೆ ಯಾಕಾಗಿದೆ..ʼ ಹಾಡನ್ನು ಪ್ರಾರಂಭಿಸಿದರು. ಕಾರ್ಯಕ್ರಮದುದ್ದಕ್ಕೂ 'ನೀ ಸನಿಹಕೆ ಬಂದರೆ', 'ಪರವಶನಾದೆನು', 'ಮಿಂಚಾಗಿ ನೀ ಬರಲು' ಸೇರಿದಂತೆ ಹಲವು ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿದರು. ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಟ್ಯಾಗೋರ್ ಕಡಲತೀರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು.
ಮರಳು ಅಭಾವ; ಅನುದಾನಕ್ಕೆ ಕೊಕ್ : ಇಕ್ಕಟ್ಟಿನಲ್ಲಿ ವಸತಿ ಯೋಜನೆ ಫಲಾನುಭವಿಗಳು
ಚಿತ್ತಾಪುರ: ಮನೆ ಛತ್ತಿನ ಹಂತಕ್ಕೆ ತಲುಪಿದೆ. ಪ್ಲಾಸ್ಟರ್ ಮಾಡಲು ಮರಳಿಲ್ಲ. ಕಟ್ಟಡ ಪೂರ್ಣಗೊಳಿಸಲೂ ಆಗುತ್ತಿಲ್ಲ. ಬುಟ್ಟಿ ಮರಳೂ ಕೈಗೆಟುಕುತ್ತಿಲ್ಲ. ವಸತಿ ಯೋಜನೆಯಡಿ ನಿರ್ಮಿಸುವ ನಮ್ಮ ಮನೆಯ ಅನುದಾನ ಹಿಂದಿರುಗುವ ಭೀತಿ ಕಾಡುತ್ತಿದೆ ಎನ್ನುತ್ತಿದ್ದಾರೆ ಫಲಾನುಭವಿಗಳು. ತಾಲೂಕಿನಲ್ಲಿ ಕಳೆದ 8-10ತಿಂಗಳಿನಿಂದ ಮರಳು ಅಭಾವದಿಂದ ಮನೆ, ವಾಣಿಜ್ಯ ಮಳಿಗೆ ನಿರ್ಮಾಣ ಸೇರಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಪ್ರಧಾನಮಂತ್ರಿ ಆವಾಸ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ,ದೇವರಾಜ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮರಳಿಗೆ ಪರದಾಡುವಂತಾಗಿದೆ. ಬಹಳಷ್ಟು ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ತಲೆನೋವಾಗಿ ಪರಿಣ ಮಿಸಿದೆ. ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿಗಧಿತ ಅವಧಿಯೊಳಗೆ ಮುಗಿಸಬೇಕು. ಇಲ್ಲವಾದಲ್ಲಿ ಸಹಾಯಧನ ಸಿಗದೆ ಅನುದಾನ ವಾಪಸ್ ಹೋಗುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ. ಇನ್ನೊಂದೆಡೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಗಣಿಕಾರಿಕೆ ಬಂದ್: ತಾಲೂಕಿನಲ್ಲಿ ಮರಳು ಕೊರತೆ ಹೆಚ್ಚಾಗಿದೆ. ತಾಲೂಕಿನಲ್ಲೀಗ ಮರಳು ಗಣಿಗಾರಿಕೆ ಬಂದ್ ಇರುವುದರಿಂದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಜನಸಾಮಾನ್ಯರಿಗೆ ನಾನಾ ವಸತಿ ಯೋಜನೆಯಡಿ ಮಂಜೂರಾದ ಮನೆ ಹಾಗೂ ಸ್ವಂತ ಮನೆ ನಿರ್ಮಾಣಕ್ಕೂ ತೊಡಕುಂಟಾಗಿದೆ. ಮರಳು ಗಣಿಗಾರಿಕೆ ಸ್ಥಗಿತದಿಂದ ಕಟ್ಟಡ ಕಾರ್ಮಿಕರು, ಮರಳು ಸಾಗಣೆದಾರರು, ಟ್ರ್ಯಾಕ್ಟರ್ ಮಾಲೀಕರು, ಟಿಪ್ಪರ್ ಮಾಲೀಕರು ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಕಾರ್ಮಿಕರಿಗೆ ಕೆಲಸವಿಲ್ಲ: ಇತ್ತ ಮರಳು ಗಣಿಗಾರಿಕೆ ಸ್ಥಗಿತದಿಂದ ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಸಕಾಲಕ್ಕೆ ಮರಳು ದೊರಕಿದರೆ ಕಟ್ಟಡ ಕಾರ್ಮಿಕರು ದಿನವೂ 400-500 ರೂಪಾಯಿ ಆದಾಯ ಪಡೆಯುತ್ತಿದ್ದೇವು. ಆದಾಯವಿಲ್ಲದೆ ಕಷ್ಟದ ಜೀವನ ಸಾಗಿಸುವಂತಾಗಿದೆ ಎನ್ನುತ್ತಾರೆ ಟ್ರ್ಯಾಕ್ಟರ್, ಟಿಪ್ಪರ್ ಚಾಲಕರು. ಕ್ರಮ ಕೈಗೊಳ್ಳಿ: ತಾಲೂಕಿನಲ್ಲಿ ಸೃಷ್ಟಿಯಾಗಿರುವ ಕೃತಕ ಮರಳು ಅಭಾವ ತಡೆದು, ತುರ್ತಾಗಿ ಮರಳು ಸಿಗುವಂತಾಗಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಖಾಸಗಿ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಪೂರೈಕೆಯಲ್ಲಿ ಆಗಿರುವ ತೀವ್ರ ಕೊರತೆ ಗಮನಹರಿಸಿ, ತಾಲೂಕಿನಲ್ಲಿ ಅಗತ್ಯವಿರುವ ಮರಳನ್ನು ಜಿಲ್ಲಾ ಉಸ್ತುವಾರಿ ಸಮಿತಿ ಗುರುತಿಸಿ ಮುಡಬೂಳ, ಭಾಗೋಡಿ, ದಂಡೋತಿ, ಕಾಟಮದೇವರಹಳ್ಳಿ ಹಾಗೂ ಕದ್ದರಗಿ ಸೇರಿ ವಿವಿಧೆಡೆ ಇರುವ ಬ್ಲಾಕ್ಗಳಲ್ಲಿ ಮರಳು ಎತ್ತುವಳಿ ಮಾಡಿ, ಬಹಿರಂಗ ಹರಾಜು ಕರೆದು ಸರ್ಕಾರಿ ಮರಳು ಬ್ಲಾಕ್ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಅಲ್ಲದೆ ತಾಲೂಕಿನ ಮರಳನ್ನು ಬೇರೆಡೆ ಸಾಗಿಸದೆ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯ ಕಾಮಗಾರಿ ನಿರ್ವಹಣೆಗೆ ಬಳಸುವಂತೆ ಸೂಚಿಸಬೇಕು ಎಂದು ಮರಳು ಸಾಗಣೆದಾರರು ಆಗ್ರಹಿಸಿದ್ದಾರೆ. ನಾವು ಮನೆ ಕಟ್ಟಡ ಕೆಲಸ ಮಾಡೋರು. ಕೆಲಸ ಹಿಡಿದ ಮೇಲೆ ಮನೆಯ ಮಾಲೀಕರು ಮರಳಿಲ್ಲ, ಮರಳು ಬಂದ ಮೇಲೆ ಕೆಲಸಕ್ಕೆ ಬನ್ನಿ ಎನ್ನುತ್ತಿದ್ದಾರೆ. ಹೀಗಾಗಿ ಜೀವನ ನಡೆಸುವುದು ತುಂಬ ಕಷ್ಟವಾಗಿದೆ. -ಮಕ್ಬೂಲ್ ಗೌಂಡಿ (ಮೇಸ್ತ್ರಿ) ಕಳೆದ ಕೆಲ ದಿನಗಳ ಹಿಂದೆಯೇ ಮರಳು ಎತ್ತುವಳಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಪ್ರಾರಂಭಿಸಲಾಗಿದೆ. ವರದಿ ಬಂದ ತಕ್ಷಣ ಜನೇವರಿ ತಿಂಗಳಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಸೋಮಶೇಖರ ಎಂ. ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕಿನಲ್ಲಿ 8-10 ತಿಂಗಳಿನಿಂದ ಮರಳಿನ ಅಭಾವ ಸೃಷ್ಟಿಯಾಗಿದ್ದು, ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆದಷ್ಟು ಬೇಗನೆ ಸ್ಥಗಿತ ಆಗಿರುವ ಮರಳು ಬ್ಲಾಕ್ಗಳನ್ನು ಪುನಃ ಪ್ರಾರಂಭಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರಿಗೆ ಅನುಕೂಲ ಕಲ್ಪಿಸಬೇಕು. -ರಾಜಶೇಖರ, ಸ್ಥಳೀಯ ನಿವಾಸಿ ಮನೆ ಕಟ್ಟುವ ಕೆಲಸ ಒಂದು ವರ್ಷದ ಹಿಂದೆ ಶುರು ಮಾಡಿದ್ದೇವೆ. ಆದರೆ ಇಲ್ಲಿಯವರೆಗೆ ಮುಗಿಯುತ್ತಿಲ್ಲ. ಮನೆ ಕಟ್ಟಲು ಮರಳು ಖಾಲಿ ಆಗಿದೆ. ಹೆಚ್ಚು ದುಡ್ಡು ಕೊಟ್ಟರೂ ಸಿಗುತ್ತಿಲ್ಲ. -ಶೈಬಾಝ್, ಮನೆ ಕಟ್ಟಡ ಮಾಲೀಕ
ಬಸ್ ಅನಾನುಕೂಲ: ವಿದ್ಯಾಭ್ಯಾಸಕ್ಕೆ ತೊಂದರೆ; ಹೆಚ್ಚಿನ ಬಸ್ ಬಿಡಲು ವಿದ್ಯಾರ್ಥಿಗಳು, ಸಾರ್ವಜನಿಕರ ಆಗ್ರಹ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿಯಿಂದ ಗರಗ ಮಾರ್ಗವಾಗಿ ಸಂಡೂರಿನ ಯಶವಂತನಗರಕ್ಕೆ ತೆರಳುವ ಬಸ್ಗಳ ಕೊರತೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಹಳ್ಳಿ ಭಾಗದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಈ ಭಾಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಬೇಕು ಎಂಬುವುದು ಪ್ರಯಾಣಿಕರ ಒಕ್ಕೊರಲ ಆಗ್ರಹ. ನಿತ್ಯವೂ ತಳ್ಳಾಟದ ಪ್ರಯಾಣ: ಮರಿಯಮ್ಮನಹಳ್ಳಿ ವಾಣಿಜ್ಯ ಕೇಂದ್ರ ಮಾತ್ರವಲ್ಲದೆ, ಶಿಕ್ಷಣ ಕೇಂದ್ರವೂ ಆಗಿದ್ದು, ಹೋಬಳಿಯ ಜನರು ವ್ಯಾಪಾರ ವಹಿವಾಟು, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಪಟ್ಟಣವನ್ನು ಅವಲಂಬಿಸಿದ್ದಾರೆ. ಸಂಡೂರು ತಾಲೂಕಿನ ಯಶವಂತ ನಗರಕ್ಕೂ ನೂರಾರು ಪ್ರಯಾಣಿಕರು ನಿತ್ಯವೂ ಸಂಚರಿಸುತ್ತಾರೆ. ಇಷ್ಟಿದ್ದರೂ ಹೊಸಪೇಟೆಯ ರಸ್ತೆ ಸಾರಿಗೆ ಘಟಕದ ಇಲಾಖೆಯಿಂದ ಬೆಳಗ್ಗೆ 9:30 ಸಂಜೆ 6:30ಕ್ಕೆ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರಿಗೆ ಇನ್ನೂ ಹೆಚ್ಚು ಬಸ್ ಓಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈಗಿರುವ ಬಸ್ಗಳಲ್ಲಿ ಜನದಟ್ಟಣೆಯಿಂದ ನೂಕಾಟ, ತಳ್ಳಾಟ ಹೆಚ್ಚುತ್ತಿದ್ದು, ಬಸ್ಸಿಗೆ ಜೋತು ಬಿದ್ದು ಪ್ರಯಾಣ ಮಾಡಬೇಕಿದೆ. ವಯೋವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಅನಿವಾರ್ಯವಾಗಿ ಆಟೋ, ಅವರಿವರ ಬೈಕ್ ಅವಲಂಬಿಸಬೇಕಾದ ಸ್ಥಿತಿ ಬಂದಿದೆ. ಸ್ಪಂದಿಸದ ಅಧಿಕಾರಿಗಳು: ಮರಿಯಮ್ಮನಹಳ್ಳಿಯಿಂದ ಗರಗ-ಯಶವಂತ ನಗರಕ್ಕೆ ಹೆಚ್ಚುವರಿ ಬಸ್ ಬಿಡುವಂತೆ ಹೊಸಪೇಟೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳೋರು ಇಲ್ಲ. ಬಸ್ ಓಡಿಸುವಂತೆ ಆಗ್ರಹ: ಹೊಸಪೇಟೆ ಸಾರಿಗೆಯಿಂದ ಅಥವಾ ಸಂಡೂರು ಡಿಪೋದಿಂದ ಬೆಳಗ್ಗೆ 7ಕ್ಕೆ ಹೆಚ್ಚುವರಿ ಬಸ್ ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಆಗ್ರಹ. ಬಸ್ ಕೊರತೆಯಿಂದವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಳ್ಳುವುದು, ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆ ಹೋಗದಿರುವಂತಾಗಿದೆ. ಆಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. -ವಿನೋದ, ವಿದ್ಯಾರ್ಥಿ, ನಾಗಲಾಪುರ ತಾಂಡಾ ಜಿಲ್ಲೆಯಲ್ಲಿ ಜನರಿಗೆ ಬಸ್ ಸೌಕರ್ಯ ಒದಗಿಸಲು ಬಸ್ಗಳ ಕೊರತೆಯಿದ್ದು, ಸರ್ಕಾರಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಮರಿಯಮ್ಮನಹಳ್ಳಿ, ಯಶವಂತನಗರಕ್ಕೆ ಬಸ್ ಸಂಚಾರದ ಅವಶ್ಯವಿದ್ದರೆ, ಇನ್ನೂ ಎರಡು ಬಸ್ ಓಡಿಸಲಾಗುವುದು. -ರಾಜೇಶ ಉದ್ದಾರ್, ಕರ್ನಾಟಕ ವಿಭಾಗಿಯ ನಿಯಂತ್ರಣಾಧಿಕಾರಿ, ವಿಜಯನಗರ ಜಿಲ್ಲೆ
2005ಕ್ಕೂ ಮುಂಚೆ ತಂದೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಹೊಸ ರೂಲ್ಸ್
ಭಾರತದಲ್ಲಿ ಕುಟುಂಬದ ಆಸ್ತಿ (Ancestral Property) ಹಂಚಿಕೆ ವಿಷಯಕ್ಕೆ ಬಂದರೆ ಅಲ್ಲಿ ಗಂಡು ಮಕ್ಕಳಿಗೆ ಸಿಗುವ ಆದ್ಯತೆ ಹೆಣ್ಣುಮಕ್ಕಳಿಗೆ ಸಿಗುತ್ತಿರಲಿಲ್ಲ. ಎಷ್ಟೋ ವರ್ಷಗಳಿಂದ ತಂದೆಯ ಆಸ್ತಿಯಲ್ಲಿ ಮಗಳ ಪಾಲು ಏನು ಎಂಬ ಬಗ್ಗೆ ಗೊಂದಲಗಳು ಇದ್ದವು. ಅದರಲ್ಲೂ ಪ್ರಮುಖವಾಗಿ, 2005ಕ್ಕೂ ಮೊದಲು ತಂದೆ ತೀರಿಕೊಂಡಿದ್ದರೆ, ಆ ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಲಕ್ಷಾಂತರ ಕುಟುಂಬಗಳಲ್ಲಿತ್ತು. ಈಗ ಸುಪ್ರೀಂ ಕೋರ್ಟ್ ಈ ಗೊಂದಲಗಳಿಗೆ ತೆರೆ ಎಳೆದಿದ್ದು, ತಂದೆಯ ಮರಣದ ದಿನಾಂಕಕ್ಕೂ ಮತ್ತು ಮಗಳ ... Read more The post 2005ಕ್ಕೂ ಮುಂಚೆ ತಂದೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಹೊಸ ರೂಲ್ಸ್ appeared first on Karnataka Times .
ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ. 29 ರಿಂದ ಎರಡು ದಿನಗಳ ಕಾಲ ಕೋಲ್ಕತ್ತಾಗೆ ಭೇಟಿ; ಎಸ್ಐಆರ್ ಬಗ್ಗೆ ಚರ್ಚೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 29 ರಿಂದ ಕೋಲ್ಕತ್ತಾಗೆ ಭೇಟಿ ನೀಡಲಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಧಾನಸಭಾ ಚುನಾವಣೆ ತಂತ್ರಗಾರಿಕೆ ಕುರಿತು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಸ್ವಾಗತಕ್ಕಾಗಿ ಬೃಹತ್ ಬೈಕ್ ಮೆರವಣಿಗೆಯನ್ನು ಆಯೋಜಿಸಲಾಗಿದೆ, ಇದು ಪಕ್ಷದ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುವ ಗುರಿ ಹೊಂದಿದೆ.
Good News: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಸರ್ಕಾರ ಗುಡ್ ನ್ಯೂಸ್
Good News For School Teachers: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕಿಯರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ಋುತುಚಕ್ರ ರಜೆ ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು
ಪುತ್ತೂರು: ಕಳವು ಪ್ರಕರಣ; ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ
ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿನ ರೆಸ್ಟೋರೆಂಟ್ ನಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನೌಕರನಿಗೆ ಪುತ್ತೂರು ಎ.ಎಸ್.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು 3 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಶಿವಪ್ರಸಾದ್ ಈ ಪ್ರಕರಣದ ಆರೋಪಿಯಾಗಿದ್ದು, ಈತ ಈಶ್ವರಮಂಗಲದಲ್ಲಿರುವ ಶನ್ಯ ರೆಸ್ಟೋರೆಂಟ್ನಲ್ಲಿ ಅಡುಗೆ ಕೆಲಸಗಾರನಾಗಿದ್ದ, ಆರೋಪಿಯು 2024ರ ಏಪ್ರಿಲ್ 21ರಿಂದ 24ರ ನಡುವೆ ಕಿಚನ್ ನ ಬಾಗಿಲು ಮುರಿದು ಡ್ರಾವರ್ನಲ್ಲಿದ್ದ ರೂ. 90,000 ನಗದನ್ನು ಕಳವು ಮಾಡಿದ್ದ. ಈ ದೃಶ್ಯವು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು, ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮ ಭಂಡಾರಿ ಅವರು ಪ್ರಕರಣದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಚೇತನಾ ದೇವಿ ಅವರು ವಾದ ಮಂಡಿಸಿದರು. ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಾಧೀಶ ದೇವರಾಜ್ ಅವರು ಆರೋಪಿಗೆ 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
ಡಿ. 27: ಗಜೇಂದ್ರಗಡದಲ್ಲಿ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ; ಕನ್ನಡ, ಉರ್ದು ಕವಿಗೋಷ್ಠಿ
ಗದಗ: ಮುಸ್ಲಿಮ್ ಲೇಖಕರ ಸಂಘವು ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿಯು ಡಿ 27ರಂದು ಬೆಳಿಗ್ಗೆ 10.30ಕ್ಕೆ ಗಜೇಂದ್ರಗಡದ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾl ಐ.ಜೆ. ಮ್ಯಾಗೇರಿ (ಕೃತಿ: ʼಜೈಲ್ ಡೈರಿʼ) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಚಿವ ಡಾl ಎಚ್.ಕೆ. ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹಾಗೂ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಕವಿಗಳಾದ ಎ. ಎಸ್. ಮಕಾನದಾರ, ಡಾ. ಹಸೀನಾ ಖಾದ್ರಿ, ಶಿಲ್ಪಾ ಮ್ಯಾಗೇರಿ, ಮೊಹಮ್ಮದ್ ಅರ್ಶದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ ಮತ್ತು ಖಾಝಿ ಶಬ್ಬೀರ್ ಅಹ್ಮದ್, ಶಬ್ಬೀರ್ ಮನ್ಸೂರಿ ಭಾಗವಹಿಸಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಪ್ರಕಟಣೆ ತಿಳಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ, ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ 20 ಲಕ್ಷ : ಈಶ್ವರ ಖಂಡ್ರೆ
ವನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ 20 ಲಕ್ಷಗಳ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲಾ ಖಾಯಂ ಉದ್ಯೋಗಿಗಳಿಗೆ, ಅವರ ವೇತನ ಮತ್ತು ಶ್ರೇಣಿಯ ಹೊರತಾಗಿ ಎಲ್ಲರಿಗೂ 1 ಕೋಟಿ ರೂ.ಗಳ ಅಪಘಾತ ಮರಣ ವಿಮೆಯನ್ನು ಬ್ಯಾಂಕ್ ನೀಡುತ್ತದೆ, ಒಂದೊಮ್ಮೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಹೆಚ್ಚುವರಿಯಾಗಿ 25ಲಕ್ಷ ರೂ.ಗಳನ್ನು ಬ್ಯಾಂಕ್ ಪಾವತಿಸಲಿದೆ ಎಂದು ರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ ಅವರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ
ಬಂಟ್ವಾಳ : ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಿದರು. ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.
ದೇಪಾಪುರದಲ್ಲಿ ಬೋನಿಗೆ ಬಿದ್ದ ಹುಲಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿಯೊಂದು ಗುಂಡ್ಲುಪೇಟೆ ತಾಲ್ಲೂಕಿನ ದೇಪಾಪುರ ಗ್ರಾಮದಲ್ಲಿಟ್ಟ ಬೋನಿನಲ್ಲಿ ಸೆರೆಯಾಗಿದೆ. ದೇಪಾಪುರ ಸೇರಿದಂತೆ ಹಲವಾರು ಗ್ರಾಮಗಳ ಜನರ ಒತ್ತಾಯದ ಮೇರೆಗೆ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಬೋನಿರಿಸಿದ್ದರು. ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನ್ ಗೆ ಬಿದ್ದ ಹುಲಿಯನ್ನು ನೋಡಲು ಗ್ರಾಮಸ್ಥರು ಕುತೂಹಲದಿಂದ ನೆರೆದಿದ್ದಾರೆ. ದೂರದಿಂದಲೇ ಹುಲಿಯನ್ನು ವೀಕ್ಷಿಸಿದ ಗ್ರಾಮಸ್ಥರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಬೋನ್ ನಲ್ಲಿ ಸೆರೆಯಾಗಿರುವ ಹುಲಿಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲು ಮುಂದಾಗಿದ್ದಾರೆ.
ಆಲಿಗಢ ಮುಸ್ಲಿಂ ವಿವಿ ಕ್ಯಾಂಪಸ್ನಲ್ಲಿ ಗುಂಡಿಕ್ಕಿ ಅಧ್ಯಾಪಕನ ಹತ್ಯೆ
ಆಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಆಲಿಗಢದಲ್ಲಿನ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅಧ್ಯಾಪಕನಿಗೆ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ಅಧ್ಯಾಪಕರನ್ನು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಬಿಕೆ ಶಾಲೆಯಲ್ಲಿ ಬೋಧಿಸುತ್ತಿದ್ದ ರಾವ್ ದಾನಿಶ್ ಅಲಿ ಎಂದು ಗುರುತಿಸಲಾಗಿದೆ. ಅಧ್ಯಾಪಕ ದಾನಿಶ್ ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಮೌಲಾನಾ ಆಝಾದ್ ಗ್ರಂಥಾಲಯದ ಬಳಿ ವಾಯುವಿಹಾರಕ್ಕೆಂದು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ದಾಳಿಕೋರರು ದ್ವಿಚಕ್ರವಾಹನದಲ್ಲಿ ಬಂದಿದ್ದು, ಅವರನ್ನೆಲ್ಲ ಪಿಸ್ತೂಲಿನಲ್ಲಿ ಬೆದರಿಸಿದ್ದಾರೆ. ಬಳಿಕ ಅಲಿ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದರೆ, ತಲೆಗೆ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ರಂಥಾಲಯದ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಲಾಯಿತು. ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣವೇ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಕ್ಟರ್ ಮುಹಮ್ಮದ್ ವಾಸೀಂ ತಿಳಿಸಿದ್ದಾರೆ. ಈ ದಾಳಿಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ವಿಷ್ಣು ಮೂರ್ತಿ ನಾಶವಾಗಿದೆ. ಭಾರತ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾಂಬೋಡಿಯಾ ಥೈಲ್ಯಾಂಡ್ ಸೇನೆಯನ್ನು ದೂಷಿಸಿದೆ. ಭಾರತವು ಆ ಎರಡೂ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿದ್ದು, ಆ ನಿಟ್ಟಿನಲ್ಲಿ ಪರಸ್ಪರ ಶಾಂತಿ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಆಗ್ರಹಿಸಿದೆ.
ನದಿ ಜೋಡಣೆ ಯೋಜನೆ: ಕರ್ನಾಟಕಕ್ಕೆ ಹೆಚ್ಚಿನ ನೀರಿನ ಪಾಲು ನೀಡುವಂತೆ ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯ
ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ನದಿ ಜೋಡಣೆ ಯೋಜನೆಯಡಿ ಹೆಚ್ಚಿನ ನೀರು ನೀಡಲು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಬೆಂಗಳೂರು ಮೆಟ್ರೋ ಎರಡನೇ ಹಂತದ ವೆಚ್ಚ 40,000 ಕೋಟಿಗೆ ಏರಿಕೆಯಾಗಿದ್ದು, ಅನುಮೋದನೆಗೆ ಮನವಿ ಸಲ್ಲಿಸಲಾಗಿದೆ. ಸುರಂಗ ರಸ್ತೆ ಯೋಜನೆ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಕೇಂದ್ರದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಆರ್ಆರ್ಟಿಎಸ್ ಸಂಪರ್ಕ ಕಲ್ಪಿಸಲು ಮನವಿ ಮಾಡಲಾಗಿದೆ.
ಹರಿದ್ವಾರ: ಪದೇಪದೇ ವಿದ್ಯುತ್ ಕಡಿತದಿಂದ ಬೇಸತ್ತಿರುವ ಹರಿದ್ವಾರ ಜಿಲ್ಲೆಯ ಝಬ್ರೇರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ, ವಿದ್ಯುತ್ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳ ನಿವಾಸಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ ವಿದ್ಯುತ್ ಇಲಾಖೆ ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕ ವೀರೇಂದ್ರ ಜಾತಿ ವಿರುದ್ಧ ದೂರು ದಾಖಲಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ನಿವಾಸದಲ್ಲಿ, ಇಲಾಖೆಯ ಮುಖ್ಯ ಎಂಜಿನಿಯರ್ ಅವರದ್ದೂ ಸೇರಿದೆ ಎಂದು ತಿಳಿದು ಬಂದಿದೆ. ಮಂಗಳವಾರ, ಶಾಸಕ ವೀರೇಂದ್ರ ಜಾತಿ ತಮ್ಮ ಬೆಂಬಲಿಗರೊಂದಿಗೆ ಏಣಿ ಹಾಗೂ ತಂತಿ ಕತ್ತರಿಸುವ ಉಪಕರಣಗಳನ್ನು ತೆಗೆದುಕೊಂಡು ರೂರ್ಕಿಗೆ ಆಗಮಿಸಿದರು. ಮೊದಲಿಗೆ ಬೋಟ್ ಕ್ಲಬ್ ಪ್ರದೇಶದಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಏರಿ, ಅವರ ಮನೆಗೆ ಹೋಗುವ ಸಂಪರ್ಕವನ್ನು ಕಡಿತಗೊಳಿಸಿದರು. ಬಳಿಕ ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ನಿವಾಸಗಳಿಗೆ ತೆರಳಿ ಅಲ್ಲಿಯೂ ವಿದ್ಯುತ್ ಸ್ಥಗಿತಗೊಳಿಸಿದರು. ತಮ್ಮ ಕ್ಷೇತ್ರದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳವರೆಗೆ ಅಘೋಷಿತ ವಿದ್ಯುತ್ ಕಡಿತ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವ್ಯಾಪಾರ ಮತ್ತು ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಜಾತಿ ಆರೋಪಿಸಿದರು. ಕಳೆದ ಹತ್ತು ದಿನಗಳಿಂದ ಈ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಅವರು ಹೇಳಿದರು. “ಒಂದು ಗಂಟೆ ವಿದ್ಯುತ್ ಕಡಿತಗೊಂಡರೂ ಅಧಿಕಾರಿಗಳು ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ಆದರೆ ಸಾರ್ವಜನಿಕರು ಪ್ರತಿದಿನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯುತ್ ಇಲಾಖೆ, ಶಾಸಕರು ನಿಗದಿತ ನಿಯಮ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನೇರವಾಗಿ ವಿದ್ಯುತ್ ತಂತಿಗಳನ್ನು ಕತ್ತರಿಸಿದ್ದಾರೆ. ಇದರಿಂದ ದೊಡ್ಡ ಅಪಘಾತ ಸಂಭವಿಸುವ ಅಪಾಯವಿತ್ತು. ಇದು ನಿಯಮ ಉಲ್ಲಂಘನೆಯಷ್ಟೇ ಅಲ್ಲದೆ ಸರ್ಕಾರಿ ಕಾರ್ಯದಲ್ಲಿ ನೇರ ಹಸ್ತಕ್ಷೇಪವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ग्रामीण इलाकों में लगातार बिजली कटौती से नाराज़ होकर हरिद्वार के झबरेड़ा से कांग्रेस विधायक वीरेंद्र जाती ने अनोखा विरोध दर्ज कराया। बिजली विभाग द्वारा क्षेत्र की आपूर्ति काटे जाने पर विधायक ने बिजली विभाग के अधिकारियों के परिसरों की बिजली लाइन खुद खंभे पर चढ़कर काट दी। pic.twitter.com/XMfJsV3EN9 — Amit Bisht (@amitbisht__) December 23, 2025
3 ಹೊಸ ವಿಮಾನಯಾನ ಸಂಸ್ಥೆಗಳಿಗೆ ಹಾರಾಟ ಆರಂಭಿಸಲು ಸಿದ್ಧತೆ ನಡೆಸಲು ಕೇಂದ್ರ ಸರ್ಕಾರ ಅನುಮತಿ
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸ್ಪರ್ಧೆಗೆ ನಾಂದಿ ಹಾಡಲು ಕೇಂದ್ರ ಸರ್ಕಾರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಶಂಖ್ ಏರ್, ಅಲ್ ಹಿಂದ್ ಏರ್, ಫ್ಲೈಎಕ್ಸ್ಪ್ರೆಸ್ ಸಂಸ್ಥೆಗಳು NOC ಪಡೆದಿವೆ. ಇಂಡಿಗೋ ಅಡೆತಡೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ನೀಡಲು ಮತ್ತು ಮಾರುಕಟ್ಟೆಯ ಏಕಸ್ವಾಮ್ಯತೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ಸೇನಾ ಯೋಧರ ಇನ್ಸ್ಟಾಗ್ರಾಮ್ ಬಳಕೆಗೆ ಹೊಸ ನೀತಿ; ವೀಕ್ಷಣೆಗೆ ಅನುಮತಿ, ಪೋಸ್ಟ್ಗೆ ಅಸಮ್ಮತಿ
ಭಾರತೀಯ ಸೇನಾ ಸಿಬ್ಬಂದಿಗಾಗಿ ತನ್ನ ಡಿಜಿಟಲ್ ಚಟುವಟಿಕೆ ನಿರ್ಬಂಧ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿರುವ ರಕ್ಷಣಾ ಇಲಾಖೆ, ಯೋಧರು ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ವಿಕ್ಷಣೆಗೆ ಅನುಮತಿ ನೀಡಿದೆ. ಆದರೆ ಯೋಧರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡುವುದು ಮತ್ತು ಅನ್ಯರ ಪೋಸ್ಟ್ಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಯೋಧರು ಮಾಹಿತಿ ಸಂಗ್ರಹಣೆ ಮತ್ತು ಪೋಸ್ಟ್ಗಳ ಮೇಲ್ವಿಚಾರಣೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಬಹುದಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಗೃಹಲಕ್ಷ್ಮಿ ಹಣ ಎಲ್ಲಿಯೂ ಹೋಗಿಲ್ಲ: ಮಹಿಳೆಯರಿಗೆ ಸತೀಶ್ ಜಾರಕಿಹೊಳಿ ಭರವಸೆ
ಎರಡು ತಿಂಗಳ ಗೃಹ ಲಕ್ಷ್ಮಿ ಯೋಜನೆಗೆ ಹಣವನ್ನು ಫಲಾನುಭವಿಗಳಿಗೆ ಪಾವತಿಸಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಹಣ ಎಲ್ಲೂ ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕೆ ಎನ್ ರಾಜಣ್ಣ ಪತ್ರದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆಯ ವಿವಾದಕ್ಕೆ ಅವರು ಏನಂದ್ರು ಎಂಬ ಮಾಹಿತಿ ಇಲ್ಲಿದೆ.
Harapanahalli | ಖೋಟಾ ನೋಟು ಚಲಾವಣೆ; ಬಾಲಕ ಸೇರಿ 6 ಮಂದಿಯ ಬಂಧನ
ವಿಜಯನಗರ : ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಕ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿ 500 ರೂ. ಮುಖ ಬೆಲೆಯ ಒಟ್ಟು 40,000 ಮೊತ್ತದ 80 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರಾ ಸಮಯದಲ್ಲಿ ಆಟಿಕೆ ನಡೆಸುವ ಶ್ರೀಮಾತ ಅಮ್ಯೂಸ್ಮೆಂಟ್ ಪಾರ್ಕ್ನ ಅಂಗಡಿಯಲ್ಲಿ ಅಪರಿಚಿತರು 500 ರೂ. ಮುಖ ಬೆಲೆಯ ಎರಡು ನೋಟುಗಳನ್ನು ಚಲಾವಣೆ ಮಾಡಿದ್ದರು. ಈ ಕುರಿತು ಆಟಿಕೆ ಅಂಗಡಿ ಮಾಲೀಕ ವೀರಭದ್ರಪ್ಪ ಎಚ್.ಕೆ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅರಸೀಕೆರೆ ಕೆ.ಮಹಮ್ಮದ್ ರಿಹಾನ್ (18), ಉಚ್ಚಂಗಿದುರ್ಗದ ಮುಹಮ್ಮದ್ ಅಖಿಲ್ ( 18), ಆರಸೀಕೆರೆ ನರೇಂದ್ರ ಪ್ರಸಾದ್ ಎನ್.ಪಿ (19), ಕೂಡ್ಲಿಗಿಯ ಅಜಾದ್ ನಗರದ ಬಿ ಬಾಬು (36), ಮೊಳಕಾಲ್ಲೂರು ತಾಲ್ಲೂಕಿನ ರಾಂಪುರ ಗ್ರಾಮ ಟಿ ಕುಮಾರಸ್ವಾಮಿ (43) ಹಾಗೂ ಒಬ್ಬ ಬಾಲಕ ಎಂದು ತಿಳಿದು ಬಂದಿದೆ. ಬಂಧಿತರಿಂದ 500 ರೂ. ಮುಖಬೆಲೆ 80 ಖೋಟಾ ನೋಟುಗಳು, ಪ್ರಕರಣದಲ್ಲಿ ಭಾಗಿಯಾದ ಒಂದು ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್ಗಳು, 5 ಮೊಬೈಲ್ ಪೋನ್ಗಳು ಅಂದಾಜು 4.50.000/-ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿತರ ಪತ್ತೆಗಾಗಿ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐಗಳಾದ ಮಹಾಂತೇಶ ಸಜ್ಜನ್, ವಿಕಾಸ್ ಲಮಾಣಿ, ಸಬ್ ಇನ್ಸ್ಪೆಕ್ಟರ್ ವಿಜಯಕೃಷ್ಣ, ಎ.ಕಿರಣ್ ಕುಮಾರ ಹಾಗೂ ಸಿಬ್ಬಂದಿಗಳಾದ ಆನಂದ, ರವಿದಾದಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ಯು ದಾದಪೀಠ, ಹಸನ್ಸಾಬ್, ಕೆ ಗುರುರಾಜ, ಹರೀಶ್ ದೇವರಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರಾನಾಯ್ಕ್, ರವಿನಾಯ್ಕ, ಅಜ್ಜಪ್ಪ ಎಚ್, ಹಾಗೂ ಕರಿಬಸಪ್ಪ ಇ. ಸಿ.ಡಿ.ಆರ್ ವಿಭಾಗ ಸಿಬ್ಬಂದಿ ಕುಮಾರನಾಯ್ಕ್ ಹಾಗೂ ಜೀಪ್ ಚಾಲಕರಾದ ನಾಗರಾಜನಾಯ್ಕ ಅವರುಗಳನ್ನು ಒಳಗೊಂಡ ತಂಡವನ್ನು ವಿಜಯನಗರ ಪೊಲೀಸ್ ಅಧೀಕ್ಷಕಿ ಜಾಹ್ನವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕರು ಮಂಜುನಾಥ ಜಿ, ಪ್ರಶಂಶಿಸಿದ್ದಾರೆ.
ಡಿಸೆಂಬರ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 25) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಭೂ ಪರಿವರ್ತನೆ ಇನ್ನು ಆನ್ಲೈನ್: ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿಲ್ಲ: ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ
ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಿಸಲು ಮತ್ತು ಭೂ ಪರಿವರ್ತನೆ ಸುಲಭಗೊಳಿಸಲು ಹೊಸ ನಿಯಮ ಜಾರಿಯಾಗಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಡಿಸಿ ಅನುಮತಿ ಇಲ್ಲದೆ ಭೂ ಪರಿವರ್ತನೆ ಸಾಧ್ಯ. ಕೈಗಾರಿಕೆ ಮತ್ತು ಇಂಧನ ಯೋಜನೆಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ನಕಲಿ ದಾಖಲೆ ನೀಡಿದರೆ ಕಠಿಣ ದಂಡ ವಿಧಿಸಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ಪರಿವರ್ತನಾ ಶುಲ್ಕ ನಿಗದಿಪಡಿಸಲಾಗಿದೆ.
ಕ್ರಿಸ್ಮಸ್ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ
ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಚಿನ್ನದ ಬೆಲೆ ವಿಪರೀತವಾಗಿ ಏರಿಕೆಯಾಗುತ್ತದೆ ಎನ್ನುವ ಆತಂಕವಿರುತ್ತದೆ. ಆದರೆ ಈ ಬಾರಿ ಕ್ರಿಸ್ಮಸ್ ಹಬ್ಬದ ದಿನ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದೆ. ಕ್ರಿಸ್ಮಸ್ ಪ್ರಯುಕ್ತ ಮಾರುಕಟ್ಟೆಗಳು ಮುಚ್ಚಿರುವುದರಿಂದ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಕಂಡುಬಂದಿಲ್ಲ. ಬುಧವಾರ ಗ್ರಾಮ್ ಗೆ 30 ರೂ. ಏರಿದ್ದ ಚಿನ್ನದ ಬೆಲೆ ಗುರುವಾರ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಬುಧವಾರ ಗ್ರಾಮ್ಗೆ 10 ರೂ. ಜಿಗಿದಿತ್ತು. ಗುರುವಾರ ಬೆಳಗಿನ ವಹಿವಾಟಿನಲ್ಲಿ ಗ್ರಾಮ್ ಗೆ ಒಂದು ರೂ. ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿದೆ. ಮುಂದಿನ ವರ್ಷ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿರುವ ಕಾರಣ ಖರೀದಿದಾರರು ಈಗಲೇ ಚಿನ್ನ ಖರೀದಿಸಿದರೆ ಉತ್ತಮ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,250 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರೂ. ಇದೆ. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು? ಗುರುವಾರ ಡಿಸೆಂಬರ್ 25ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,925 (+32) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,765 (+30) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,444 (+24) ರೂ. ಬೆಲೆಗೆ ತಲುಪಿದೆ. ಬೆಂಗಳೂರಿನಲ್ಲಿ ಚಿನ್ನ- ಬೆಳ್ಳಿ ಬೆಲೆ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,38,940 ರೂ., 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,27,360 ರೂ. 1 ಕೆಜಿ ಬೆಳ್ಳಿ ಬೆಲೆ 1,90,100 ರೂ. ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) 13,894 ರೂ., 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 12,736 ರೂ., 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,421 ರೂ. ವಿವಿಧ ನಗರಗಳಲ್ಲಿ 22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ ಚೆನ್ನೈ 12,801 ರೂ. ಮುಂಬೈ 12,736 ರೂ. ದೆಹಲಿ 12,751 ರೂ. ಕೋಲ್ಕತ್ತಾ 12,736 ರೂ. ಬೆಂಗಳೂರು 12,736 ರೂ. ಹೈದರಾಬಾದ್ 12,736 ರೂ. ಕೇರಳ 12,736 ರೂ. ಪುಣೆ 12,736 ರೂ. ವಡೋದರಾ 12,741 ರೂ. ಅಹಮದಾಬಾದ್ 12,741 ರೂ.
ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಇಲ್ಲಿನ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಷನ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಪ್ರಾರ್ಥನಾ ಸಭೆಯಲ್ಲಿ ಕರೋಲ್ಗಳು, ಸ್ತುತಿಗೀತೆಗಳು ಹಾಗೂ ವಿಶೇಷ ಪೂಜಾಕ್ರಿಯೆಗಳು ನಡೆಯಿತು. ದಿಲ್ಲಿ ಮತ್ತು ಉತ್ತರ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದಿಲ್ಲಿಯ ಬಿಷಪ್ ಡಾ. ಪೌಲ್ ಸ್ವರೂಪ್ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ಈ ಸಂದರ್ಭದಲ್ಲಿ ಪ್ರಧಾನಿಗಾಗಿ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಯಿತು. ಪ್ರಾರ್ಥನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ದಿಲ್ಲಿಯ ಕ್ಯಾಥೆಡ್ರಲ್ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಸಾರುತ್ತದೆ. ಕ್ರಿಸ್ಮಸ್ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಉತ್ತೇಜಿಸಲಿ ಎಂದು ಆಶಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದರು. May Christmas bring renewed hope, warmth and a shared commitment to kindness. Here are highlights from the Christmas morning service at The Cathedral Church of the Redemption. pic.twitter.com/BzvKYQ8N0H — Narendra Modi (@narendramodi) December 25, 2025
ನಾಯಕತ್ವ ಬದಲಾವಣೆ: ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಹೈಕಮಾಂಡ್! ಕಾರಣ ಏನು
ನಮ್ಮ ನಡುವೆ ಏನೆಲ್ಲಾ ಚರ್ಚೆಯಾಗಿತ್ತು ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಸೇರಿ ಕೆಲಸ ಮಾಡಿ, ಸರ್ಕಾರವನ್ನು ರಚಿಸಿದ್ದೇವೆ. ಪ್ರತಿ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಬೇವರು ಹರಿಸಿ ದುಡಿದಿದ್ದಾರೆ. ನಮಗೆ ಸ್ಪಷ್ಟ ಬಹುಮತ ನೀಡಿದ ರಾಜ್ಯದ ಜನರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಮತ್ತಷ್ಟು ವಿವರ ಇಲ್ಲಿದೆ.
ಹುಣಸಗಿ: ನಿಯಮ ಮೀರಿ ಕಬ್ಬು ಹೇರಿಕೊಂಡು ಬರುವ ಟ್ರ್ಯಾಕ್ಟರ್ಗಳು ರಸ್ತೆ ಪಕ್ಕ ಸಂಚರಿಸುವ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾದಾಗಿನಿಂದ ಗ್ರಾಮದ ಮೂಲಕ ಸಮೀಪದ ಯರಗಲ್ ಸಕ್ಕರೆ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ಗಳು ನಿಯಮ ಮೀರಿ ಕಬ್ಬು ಹೇರಿಕೊಂಡು ಬರುತ್ತಿವೆ. ಆಗಾಗ ಏಕಾಏಕಿ ಟ್ರ್ಯಾಕ್ಟರ್ಗಳು ಹೆಚ್ಚಿದ ತೂಕದಿಂದಾಗಿ ಉರುಳಿ ಬೀಳುತ್ತಿರುವ ಘಟನೆಗಳು ನಡೆಯುತ್ತಿದ್ದು, ಕಡಿವಾಣ ಬೀಳಬೇಕಿದೆ. ಸರ್ಕಾರದ ನಿಯಮ ಮೀರಿ ಸಾಗಣೆ: ನಾಲತವಾಡ ಭಾಗದ ರಸ್ತೆಗಳು ಹದಗೆಟ್ಟಿವೆ. ಆದರೂ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಮಾಲೀಕರು ಮನಬಂದಂತೆ ಕಬ್ಬು ಹೇರಿಸಿ ಸಾಗಿಸುತ್ತಾರೆ. ಹೀಗಾಗಿ ಟ್ರ್ಯಾಕ್ಟರ್ ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಾಸದ ಅವಘಡಗಳು: ಕಬ್ಬು ಸಾಗಣೆಯ ಟ್ರ್ಯಾಕ್ಟರ್ಗಳು ನಗರ ಮತ್ತು ಹಳ್ಳಿಗಳ ಮೂಲಕವೇ ಸಂಚರಿಸುತ್ತವೆ. ಒಮ್ಮೊಮ್ಮೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿರುತ್ತದೆ. ಬಹುತೇಕ ವಾಹನಗಳಿಗೆ ಇಂಡಿಕೇಟರ್, ರಿಫ್ಲೆಕ್ಟರ್ ಹಾಗೂ ರೇಡಿಯಂ ಅಂಟಿಸದೆ ಇರುವುದರಿಂದ ಜನರು ಜೀವ ಸಂರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕಿದೆ. 2023-24 ರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 37 ಕಬ್ಬಿನ ಗಾಡಿಗಳ ಅಪಘಾತಗಳಲ್ಲಿ 44 ಜನರು ಮೃತಪಟ್ಟಿದ್ದರೆ, 2024-25ರ ಕಬ್ಬು ನುರಿಸುವ ಹಂಗಾಮಿನಲ್ಲಿ ಒಟ್ಟು 35 ಜನ ಸಾವಿಗೀಡಾಗಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿಗಳಲ್ಲಿ 34 ರಸ್ತೆ ಅಪಘಾತಗಳಲ್ಲಿ 26 ಜನ ಮೃತಪಟ್ಟಿದ್ದು, ಮೇಲಿಂದ ಘಟನೆಗಳು ಸಂಭವಿಸುತ್ತಿದ್ದರೂ, ಮುಂಜಾಗ್ರತೆ ವಹಿಸುವಂತೆ ಕಬ್ಬು ಸಾಗಣೆ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಸರ್ಕಾರ, ಅಧಿಕಾರಿಗಳು ಮಾಡಬೇಕಿದೆ ಎನ್ನುತ್ತಾರೆ ಜನರು.
₹2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ Swift ಕಾರಿನ EMI ಎಷ್ಟು ಬರುತ್ತೆ?
ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಗೂ ಸ್ವಂತ ಕಾರು ಖರೀದಿಸಬೇಕು ಎಂಬುದು ಒಂದು ದೊಡ್ಡ ಕನಸು. ಅದ್ರಲ್ಲೂ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿರುವ Maruti Suzuki Swift ಎಂದರೆ ಎಲ್ಲಿಲ್ಲದ ಕ್ರೇಜ್. ಮೈಲೇಜ್ ಇರಲಿ, ಲುಕ್ ಇರಲಿ ಅಥವಾ ಮರುಮಾರಾಟದ ಮೌಲ್ಯ (Resale Value) ಇರಲಿ, ಸ್ವಿಫ್ಟ್ ಇಂದಿಗೂ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಕಾರು ಇಷ್ಟವಾದ ತಕ್ಷಣ ಖರೀದಿಸಲು ಆಗುವುದಿಲ್ಲ. ಅದಕ್ಕೆ ಸರಿಯಾದ ಆರ್ಥಿಕ ಯೋಜನೆ ಬೇಕು. ಇತ್ತೀಚೆಗೆ ಶೋರೂಮ್ಗಳಿಗೆ ಭೇಟಿ ನೀಡುವ ಅನೇಕರು ಕೇಳುವ ಸಾಮಾನ್ಯ ... Read more The post ₹2 ಲಕ್ಷ ಡೌನ್ ಪೇಮೆಂಟ್ ಮಾಡಿದರೆ Swift ಕಾರಿನ EMI ಎಷ್ಟು ಬರುತ್ತೆ? appeared first on Karnataka Times .
ಐತಿಹಾಸಿಕ ಎಂಬ ಶಬ್ದ ಬಂದಾಗ ಥಟ್ಟನೆ ನೆನಪಾಗುವುದು ಗುಮ್ಮಟ ನಗರಿ ವಿಜಯಪುರ ಜಿಲ್ಲೆ. ನೂರಾರು ವೈಶಿಷ್ಟ್ಯಪೂರ್ಣ ಸ್ಮಾರಕಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ವಿಜಯಪುರ ಸ್ಮಾರಕಗಳ ನಗರ. ಸ್ಮಾರಕಗಳ ರಾಜಧಾನಿ ಎಂದರೂ ತಪ್ಪಾಗಲಾರದು. ರೋಮ್ ನಗರದಲ್ಲಿರುವ ಸ್ಮಾರಕಗಳಂತೆ ವಿಜಯಪುರದಲ್ಲಿಯೂ ಅಮೋಘ ಸ್ಮಾರಕಗಳಿವೆ. ಹೀಗಾಗಿ ರೋಮ್ ನಗರಕ್ಕೆ ವಿಜಯಪುರವನ್ನು ಹೋಲಿಕೆ ಮಾಡಿದ ಉದಾಹರಣೆಗಳಿವೆ. ಅಲ್ಲದೆ ಶರಣರು, ಸೂಫಿ ಸಂತರ ಬೀಡು. ಸಮಬಾಳು, ಸಮಪಾಲು ತತ್ವವನ್ನು ವಿಶ್ವಕ್ಕೆ ಸಾರಿದ, ಕಾಯಕವೇ ಕೈಲಾಸವೆಂದು ಜಗತ್ತಿಗೆ ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನವರಿಗೆ ಜನ್ಮ ನೀಡಿದ ಪುಣ್ಯಭೂಮಿ. ಐತಿಹಾಸಿಕ ಸ್ಮಾರಕಗಳ ತವರೂರು. ಗೋಳಗುಮ್ಮಟ..! ಗೋಳಗುಮ್ಮಟ ಅರ್ಧ ಗೋಲಾಕಾರದ ಬೃಹತ್ ರಚನೆಯಾಗಿದ್ದು, ಆದಿಲ್ ಶಾಹಿ ಸುಲ್ತಾನನ ಸಮಾಧಿ ಸ್ಮಾರಕವಾಗಿದೆ. ಆದಿಲ್ ಶಾಹಿ ಹಿಂದೆ ವಿಜಯಪುರ ಆಳುತ್ತಿದ್ದ ಶಾಹಿ ಸಾಮ್ರಾಜ್ಯದ ಏಳನೆಯ ದೊರೆಯಾಗಿದ್ದ. ಸರಳ ಹಾಗೂ ಅಷ್ಟೇ ಪರಿಣಾಮಕಾರಿಯಾದ ರಚನೆಯು 1656ರಲ್ಲಿ ದಾಬೂಲ್ ಪ್ರದೇಶದ ಯಾಕೂಬ್ ಎಂಬ ವಾಸ್ತುಶಿಲ್ಪಿಯಿಂದ ಕಟ್ಟಲಾಯಿತು. ಗೋಲಗುಮ್ಮಟದ ಗೋಲವು ಆಂತರಿಕವಾಗಿ 37.92 ಮೀ. ವ್ಯಾಸ, 44 ಮೀ. ಬಾಹ್ಯ ವ್ಯಾಸ ಹೊಂದಿದೆ. ಇನ್ನು ಗೋಲದ ದಪ್ಪವು ಕೆಳಗೆ 3.05 ಮೀ., ಮೇಲೆ 2.74 ಮೀ.ಗಳಷ್ಟಿದೆ. ಇದು ಗುಮ್ಮಟವು ವಿಶಾಲವಾಗಿದೆ ಎಂಬುದನ್ನು ತಿಳಿಸುವ ಮಾನದಂಡವಾಗಿದೆ. ಚೌಕಾಕಾರದ ಸ್ಮಾರಕದ ನಾಲ್ಕು ಮೂಲೆಗಳಲ್ಲಿ ಅಷ್ಟಭುಜಾಕೃತಿಯ ಎತ್ತರವಾದ ಮಿನಾರು(ಗೋಪುರ)ಗಳಿವೆ. ಈ ಗೋಪುರಗಳಲ್ಲಿ ಮೆಟ್ಟಿಲುಗಳಿದ್ದು, ಇದರ ಮೂಲಕ ಸ್ಮಾರಕದ ನೆಲದಿಂದ 33 ಮೀ. ಎತ್ತರದಲ್ಲಿರುವ ‘ವಿಸ್ಟರಿಂಗ್ ಗ್ಯಾಲರಿ’ಗೆ ( ಪಿಸುಮಾತಿನ ಸಭಾಂಗಣ) ಭೇಟಿ ನೀಡಬಹುದು. ವಿಸ್ಟರಿಂಗ್ ಗ್ಯಾಲರಿಯು ಛಾವಣಿ ಗೋಲಾಕಾರವಾಗಿದೆ. ಇನ್ನೂ ಇದು ಶಬ್ಧ ಅಥವಾ ಧ್ವನಿ ವಿಜ್ಞಾನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಗ್ಯಾಲರಿಯಲ್ಲಿ ನಿಂತು ಒಮ್ಮೆ ಚಪ್ಪಾಳೆ ತಟ್ಟಿದರೆ ಕನಿಷ್ಠ ಪಕ್ಷ ಆ ಚಪ್ಪಾಳೆಯ ಧ್ವನಿಯು ಏಳು ಬಾರಿಯಾದರೂ ಪ್ರತಿಧ್ವನಿಸುತ್ತದೆ. ಇಬ್ರಾಹಿಂ ರೋಜಾ ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ವಾಸ್ತುಶಿಲ್ಪದ ದೃಷ್ಟಿಯಿಂದಲೂ ಇಬ್ರಾಹಿಂ ರೋಜಾ ಅತ್ಯಂತ ಅಪರೂಪದ ಕಟ್ಟಡ. ಮಸೀದಿಯ ಎದುರಿಗಿರುವ 2ನೇ ಇಬ್ರಾಹಿಂ ಆದಿಲ್ ಶಾಹಿಯ ಗೋರಿಯ ಮುಂಭಾಗದಲ್ಲಿ ಕಲ್ಲಿನ ಸರಪಳಿಗಳನ್ನು ಇಳಿಬಿಡಲಾಗಿದೆ. ಇದು ದಖನಿ ಶೈಲಿಯ ಅತ್ಯಂತ ಕುಶಲ, ಸೂಕ್ಷ್ಮ, ಶ್ರೀಮಂತ ವಾಸ್ತುಶಿಲ್ಪ. ಮಸೀದಿ ಹಾಗೂ ಗೋರಿಗಳನ್ನು ಎದುರುಬದುರಾಗಿ ಹೊಂದಿರುವ ಅಪರೂಪದ ಸುಂದರ ವಾಸ್ತುಕಲಾ ಸಂಕೀರ್ಣ. ಇಲ್ಲಿನ ಮಸೀದಿ ಹಾಗೂ ಗೋರಿ ಒಂದು ದೊಡ್ಡ ಚಿಲುಮೆ ಮತ್ತು ಜಲಾಶಯದಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ಕಲಾಕೃತಿಗಳ ಗುಂಪು ಎತ್ತರವಾದ ಜಗಲಿಯ ಮೇಲೆ 400 ಚದರ ಅಡಿ ಆಯತಾಕಾರದ ಆವರಣದೊಳಗಿವೆೆ. ನಾಲ್ಕು ಭವ್ಯ ಮಿನಾರುಗಳಿವೆ. ಉತ್ತರ ಬದಿಯ ಮಧ್ಯದಲ್ಲಿ 54 ಚದರ ಅಡಿಯ ಕೋಣೆ ಇದ್ದು, 4 ಕಡೆಗೆ ತೆರೆದ ಕಂಬಗಳ ಮೊಗಸಾಲೆಯಿದೆ. ಈ ಕಂಬಗಳ ಸಾಲಿನ ವಾಸ್ತುಶಿಲ್ಪದ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರ ಇದೆ. ಮಸೀದಿಯ ಪ್ರತಿಯೊಂದು ಮೂಲೆಯಲ್ಲಿಯೂ ಕೋನಾಕಾರದ ಮಿನಾರಗಳು ಚಿತ್ತಾಕರ್ಷಕವಾಗಿವೆ. ಪ್ರತಿ ಮಿನಾರವನ್ನು ಆವರಿಸಿ 6 ಕಿರು ಮಿನಾರಗಳಿವೆ. ಗಾರೆ-ಗಚ್ಚಿನಿಂದ ಇವುಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಬಾರಾ ಕಮಾನ್ ಐತಿಹಾಸಿಕ ಸ್ಮಾರಕ ಬಾರಾ ಕಮಾನನ್ನು 1656ರಿಂದ 1686ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ಶಾಹಿ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ.1672ರಲ್ಲಿ ಅಲಿ ಎರಡನೇ ಆದಿಲ್ ಶಾಹಿ ಬಾರಾ ಕಮಾನ್ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್ ಶಾ ಕೊಲೆ ಮಾಡಿದನು. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್ ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತದೆ ಎಂದು ಭಾವಿಸಿದ ತನ್ನ ತಂದೆಯಿಂದಲೇ ಎರಡನೇ ಆದಿಲ್ ಶಾಹಿ ಕೊಲ್ಲಲ್ಪಟ್ಟನು. ಇದರಿಂದ ಸಮಾಧಿ ಮತ್ತು ಕಮಾನುಗಳು ಅಪೂರ್ಣವಾದವು ಎಂದು ಹೇಳಲಾಗುತ್ತದೆ. ಬಾರಾ ಕಮಾನ್ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಾಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ಒಳಗೊಂಡಿದೆ. ಇದೊಂದು ಸಂಪೂರ್ಣಗೊಳ್ಳದ ಎರಡನೇ ಅಲಿ ಆದಿಲ್ ಶಾಹಿಯ ಭವ್ಯ ಸಮಾಧಿ. ಅಲಿ ಆದಿಲ್ ಶಾಹಿಯು ಭವ್ಯವಾಗಿ ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಅದರ ನಿರ್ಮಾಣ ಕಾರ್ಯವು ಸಂಪೂರ್ಣಗೊಳ್ಳಲಿಲ್ಲ. ಆಸರ್ ಮಹಲ್ ಮೊಹಮ್ಮದ್ ಆದಿಲ್ ಶಾಹ್ನಿಂದ 1646ರಲ್ಲಿ ನಿರ್ಮಿಸಲಾದ ಆಸರ್ ಮಹಲ್ ನ್ಯಾಯ ಬಗೆಹರಿಸುವ ಆಲಯವಾಗಿತ್ತು. ಇಲ್ಲಿ ಮೂರು ಹೊಂಡಗಳಿವೆ. ಮಧ್ಯದಲ್ಲಿರುವ ಹೊಂಡವು 15 ಅಡಿ ಆಳ ಹೊಂದಿದ್ದು, ಉಳಿದೆರಡು ಹೊಂಡಗಳಿಗಿಂತ ದೊಡ್ಡದಾಗಿದೆ. ಇಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕೇಶಗಳನ್ನು ಇರಿಸಲಾಗಿದೆ. ಆಸಾರ್ ಮಹಲ್ನಲ್ಲಿ ಮೀಲಾದುನ್ನಬಿ ಪ್ರಯುಕ್ತ ಉರೂಸ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ಸ್ಮಾರಕದ ಛಾವಣಿಗಳ ಮೇಲೆ ಮೂಡಿ ಬಂದ ಸುಂದರ ವಿನ್ಯಾಸದ ರಚನೆಗಳು ಇಂದಿನ ಹಾಗೆ ಅತ್ಯಾಧುನಿಕ ಯಾವ ಸಲಕರಣೆಗಳಿಲ್ಲದೆಯೂ ಕರಾರುವಕ್ಕಾಗಿಸಿದ ಅಂದಿನ ಶಿಲ್ಪಿಗಳ ನೈಪುಣ್ಯ ತೋರಿಸುತ್ತವೆ. ಜಾಮಿಯಾ ಮಸೀದಿ ದಕ್ಷಿಣ ಭಾರತದ ಅತಿದೊಡ್ಡ ಮಸೀದಿಯಾಗಿದೆ. 1578ರಲ್ಲಿ ಒಂದನೇ ಅಲಿ ಆದಿಲ್ ಶಾ ಜಾಮಿಯಾ ಮಸೀದಿ ಕಟ್ಟಿಸಿದ. 1,16,300 ಚ.ಮೀ. ವಿಸ್ತಾರವಾದ ಆವರಣ ಹೊಂದಿದೆ. 2250 ಜನ ಒಟ್ಟಾಗಿ ಕುಳಿತು ಪ್ರಾರ್ಥಿಸುವ ಸಾಮರ್ಥ್ಯದ ಮಸೀದಿಯಲ್ಲಿ ಸುವರ್ಣ ಅಕ್ಷರಗಳಲ್ಲಿ ಖುರಾನ್ ಬರಹ ಬರೆಯಲಾಗಿದೆ. ಕುರಾನ್ ಜಾಮಿಯಾ ಮಸೀದಿಯ ಒಳಭಾಗದಲ್ಲಿ ಕೆತ್ತಲಾಗಿದೆ. ಜಾಮಿಯಾ ಮಸೀದಿ ಆವರಣದಲ್ಲಿ ದೊಡ್ಡ ಪ್ರಾಂಗಣ, ನೀರಿನ ತೊಟ್ಟಿ ಮತ್ತು ಆಸನ ವ್ಯವಸ್ಥೆ ಇವೆ. ಮಸೀದಿ ಕಟ್ಟಡವು 170 ಮೀಟರ್ ಉದ್ದ, 70 ಮೀಟರ್ ಅಗಲವಿದೆ. ಒಂಬತ್ತು ದೊಡ್ಡ ಕಮಾನುಗಳು, ಪ್ರಭಾವಶಾಲಿ ಗುಮ್ಮಟ, 2250 ಆಯತಾಕಾರದ ಅಂಚುಗಳು ಜಾಮಿಯಾ ಮಸೀದಿಯ ಕೆಲವು ವಿಶಿಷ್ಟ ಲಕ್ಷಣಗಳಾಗಿವೆ. ಉಪ್ಪಲಿ ಬುರುಜ 95 ಅಡಿಯ ಉಪ್ಪಲಿ ಬುರುಜನ್ನು 1583ರಲ್ಲಿ ಅಲಿ ಆದಿಲ್ಶಾಹನ ಕಾಲದಲ್ಲಿ ದಂಡಾಧಿಕಾರಿಯಾಗಿದ್ದ ಹೈದರ್ ಖಾನ್ನಿಂದ ನಿರ್ಮಿತವಾಗಿದೆ. 95 ಅಡಿ ಎತ್ತರವಿದ್ದು, ಮೆಟ್ಟಿಲುಗಳನ್ನು ಹೊಂದಿದೆ. ಇಲ್ಲಿ ಎರಡು ತೋಪುಗಳಿವೆ. ಒಂದು 30 ಅಡಿ 8 ಇಂಚಿನದಾಗಿದೆ. ಇನ್ನೊಂದು 19 ಅಡಿ 8 ಇಂಚಿನದಾಗಿದೆ. ಈ ಬುರುಜ ಕಾವಲುಗಾರರಿಗಾಗಿ ಕಟ್ಟಿಸಿದ್ದಾಗಿದೆ. ಗೋಪುರದ ಮೇಲ್ಭಾಗವು ನಗರದ ಒಂದು ವಿಹಂಗಮ ನೋಟ ನೀಡುತ್ತದೆ. ಗೋಪುರದ ಮೇಲೆ ದೊಡ್ಡ ಗಾತ್ರದ ಎರಡು ಬಂದೂಕುಗಳಿವೆ. ಮೇಲ್ವಿಚಾರಣೆ ಉದ್ದೇಶಗಳಿಗಾಗಿ ಬಳಸಲಾದ ಈ ಗೋಪುರವು ಈಗ ಬೇಲಿಯಿಂದ ಸುತ್ತುವರಿದಿದೆ. ಉಪಲಿ ಬುರುಜ್ನ ಮೇಲಕ್ಕೆ ತಲುಪಲು ವೃತ್ತಾಕಾರದ ಮೆಟ್ಟಿಲು ನಿರ್ಮಿಸಲಾಗಿದೆ. ಸುಂದರ ತಾಜ ಬಾವಡಿ..! ಬಿಜಾಪುರದ ದೊರೆ ಎರಡನೆಯ ಇಬ್ರಾಹಿಮನ ಮೊದಲನೇ ಪತ್ನಿಯಾದ ತಾಜ್ ಸುಲ್ತಾನಾಳ ಗೌರವಾರ್ಥ ಈ ಕೊಳ ನಿರ್ಮಿಸಲಾಯಿತು. ಅಷ್ಟ ಭುಜಗಳುಳ್ಳ ಎರಡು ರಚನೆಗಳಿದ್ದು, ಇದರ ಪೂರ್ವ ಹಾಗೂ ಪಶ್ಚಿಮಕ್ಕೆ ವಿರಮಿಸಲು ನಿರ್ಮಿಸಲಾದ ವಿಶಾಲವಾದ ಕೊಠಡಿಗಳಿವೆ. ಸಂಗೀತ ಸಭೆ ಸಂಗೀತ ಮಹಲ್ ಇದು ವಿಜಯಪುರದ ಪಶ್ಚಿಮಕ್ಕೆ ಸುಮಾರು 8 ಕಿ.ಮೀ. ದೂರದಲ್ಲಿರುವ ತೊರವಿ ಗ್ರಾಮದಲ್ಲಿದೆ. ಎರಡನೇ ಇಬ್ರಾಹಿಂ ಆದಿಲ್ಶಾಹಿ ಕಟ್ಟಿಸಿದ ಈ ಮಹಲ್ನಲ್ಲಿ 16ನೆ ಶತಮಾನದ ವಿಶ್ವದ ಅತಿ ದೊಡ್ಡ ಅಡಿಟೋರಿಯಂ, ದೇಶ-ವಿದೇಶದ ಪ್ರಖ್ಯಾತ ಕಲಾವಿದರು ಇಲ್ಲಿಗೆ ಬಂದು ಗಾಯನ ಪ್ರದರ್ಶನ ನೀಡುತ್ತಿದ್ದರು. ಅಲ್ಲದೆ ಇದೇ ಸ್ಥಳದಲ್ಲಿ ಪ್ರತಿ ವರ್ಷ ಜನವರಿ, ಫೆಬ್ರವರಿ ತಿಂಗಳಲ್ಲಿ ಪ್ರಸಿದ್ಧ ನವರಸಪುರ ಸಂಗೀತ ಉತ್ಸವ ಆಯೋಜಿಸಲಾಗುತ್ತದೆ. ಗಗನ್ ಮಹಲ್ ಅರಕಿಲ್ಲೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡವೆಂದರೆ ಗಗನ ಮಹಲ್. 1561ರ ಆಸುಪಾಸಿನಲ್ಲಿ ಸುಲ್ತಾನರ ಅರಮನೆ ಮತ್ತು ದರ್ಬಾರ್ ಹಾಲ್ ಎಂದು ಕರೆಯಲ್ಪಡುತ್ತಿತ್ತು. ಇದನ್ನು ಗುಮ್ಮಟ, ಮಿನಾರಗಳಿಲ್ಲದೆ ನಿರ್ಮಿಸಲಾಗಿದೆ. ಕೇವಲ ಕಮಾನುಗಳನ್ನು ಒಳಗೊಂಡಿದೆ. ರಾಜ ತನ್ನ ಬಿಡುವಿನ ವೇಳೆಯಲ್ಲಿ ಇಲ್ಲಿ ಕಲಾಕೃತಿ ಚಿತ್ರಿಸುತ್ತಿದ್ದ ಎಂಬ ಪ್ರತೀತಿ ಇದೆ. ಕಥೆ ಹೇಳುವ ಸಾಥ್ ಕಬರ್ ಸಾತ್ ಕಬರ್ ಎಂದರೆ 60 ಸಮಾಧಿಗಳು ಎಂದರ್ಥ. 1659ರಲ್ಲಿ ಆಲಿ ಆದಿಲ್ ಶಾಹನ ಆಸ್ಥಾನದಲ್ಲಿದ್ದ ದಳಪತಿಗಳಲ್ಲೊಬ್ಬ ಅಫೈಲ್ ಖಾನನು ತನ್ನ 60 ಪತ್ನಿಯರನ್ನು ಬಾವಿಗೆ ತಳ್ಳಿ ಕೊಂದು ಅವರಿಗಾಗಿ ನಿರ್ಮಿಸಿದ ಸಮಾಧಿ ಎಂದು ಹೇಳಲಾಗುತ್ತಿದೆ. ಇದು ಬಿಜಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ನವರಸಪುರದಲ್ಲಿದೆ. ಮಲಿಕ್-ಎ- ಮೈದಾನ್ 1549ರಲ್ಲಿ ಅಹ್ಮದ್ನಗರದ ನಿಜಾಮಶಾಹಿಗಳು ನಿರ್ಮಿಸಿದ ಈ ತೋಪನ್ನು ವಿಜಯಪುರಕ್ಕೆ ತರಲಾಯಿತು. ಭೂಪ್ರದೇಶದ ಒಡೆಯ ಎಂಬ ಅಕ್ಷರಶಃ ಅರ್ಥ ಕೊಡುವ ಇದು ಒಂದು ಬೃಹತ್ತಾದ ಸಿಡಿಮದ್ದಿನ ತೋಪು. 4 ಮೀ. ಉದ್ದ, 1.5 ಮೀ. ವ್ಯಾಸ ಹೊಂದಿರುವ ಈ ತೋಪು 55 ಟನ್ತೂಗುತ್ತದೆ. 400 ಎತ್ತುಗಳು, 10 ಆನೆಗಳು ಹಾಗೂ ಹಲವು ಯೋಧರು ಪಾಲ್ಗೊಂಡಿದ್ದ ಯುದ್ಧದಲ್ಲಿ ಜಯಗಳಿಸಿದ ನಂತರ ವಿಜಯಪುರಕ್ಕೆ ತರಲಾಯಿತು. 17ನೇ ಶತಮಾನದಲ್ಲಿ ಮೊಘಲ ಬಾದಷಾ ಔರಂಗಜೇಬ್ ವಿಜಯಪುರದ ಮೇಲೆ ದಂಡೆತ್ತಿ ಬಂದು ದಾಳಿ ಮಾಡಿದಾಗ ಮುಹಮ್ಮದ್ ಆದಿಲ್ಶಾಹಿ ಈ ತೋಪನ್ನು ಯುದ್ಧದಲ್ಲಿ ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ. 85 ಅಡಿ ಎತ್ತರದ ಶಿವನ ಮೂರ್ತಿ ವಿಜಯಪುರದ ಹೊರವಲಯದಲ್ಲಿ 5 ಕಿ.ಮೀ. ದೂರದಲ್ಲಿ ಉಕ್ಕಲಿ ರಸ್ತೆ ಪಕ್ಕದಲ್ಲಿ 85 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸ ಲಾಗಿದೆ. ದೇಶದಲ್ಲಿ ಅತಿ ಎತ್ತರದ ಎರಡನೇ ಶಿವನ ಮೂರ್ತಿ ಇದಾಗಿದೆ. ಮುರ್ಡೇಶ್ವರದಲ್ಲಿ 102 ಅಡಿ ಎತ್ತರದ ಮೊದಲ ಶಿವನಮೂರ್ತಿಯ ನಂತರ ಇದು ಎರಡನೆಯದು. ಇದು 1500 ಟನ್ ತೂಕದ್ದಾಗಿದೆ. ಶಿವನ ಮೂರ್ತಿ ಕೊರಳಲ್ಲಿ ಇರುವ ಪ್ರತಿಯೊಂದು ರುದ್ರಾಕ್ಷಿ 50 ಕೆ.ಜಿ. ತೂಕದ್ದು ಹಾಗೂ 15 ಅಡಿ ವ್ಯಾಸವುಳ್ಳದ್ದಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. 5.20 ಎಕರೆ ವಿಶಾಲವಾದ ಪ್ರದೇಶದಲ್ಲಿ ಉದ್ಯಾನ, ಚಿಕ್ಕ ಮಕ್ಕಳ ರೈಲು ಸೇರಿದಂತೆ ಇತರ ಆಟಿಕೆ ಸಾಮಗ್ರಿಗಳಿವೆ. ಉಚಿತ ಅನ್ನ ಪ್ರಸಾದ, ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಗೋಳ ಗುಮ್ಮಟದಲ್ಲಿದೆ ಪಿಸುಮಾತಿನ ಗ್ಯಾಲರಿ ಗ್ಯಾಲರಿಯ ಒಂದು ಬದಿಯ ಗೋಡೆಗೆ ಮುಖಮಾಡಿ ಪಿಸುಧ್ವನಿಯಲ್ಲಿ ಮಾತಾಡಿದರೆ ಅಥವಾ ಕೈಗಡಿಯಾರವನ್ನು ಗೋಡೆಗೆ ತಾಕಿಸಿದರೆ, ಆ ಗೋಡೆಯ ವಿರುದ್ಧ ದಿಕ್ಕಿನಲ್ಲಿರುವ ಗೋಡೆಯಲ್ಲಿ ಕಿವಿಯನ್ನು ಗೋಡೆಗೆ ತಾಗಿಸಿದರೆ ಆ ಪಿಸುಮಾತು ಅಥವಾ ಗಡಿಯಾರದ ಟಿಕ್ಟಿಕ್ ಶಬ್ದ ಕೇಳಬಹುದು. ಇದು ಗೋಳಗುಮ್ಮಟದ ಗೋಡೆಗಳ ಮೇಲೆ ಕಂಡುಬರುವ ಮನಸೆಳೆವ ಅದ್ಭುತ ಸಂಗತಿ. ಗೋಲಗುಮ್ಮಟದ ಒಳ ಪ್ರವೇಶಿಸಲು ಬೃಹತ್ ಕಮಾನಿನ ಆಕೃತಿಯ ಗೋಡೆಯಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟ ದ್ವಾರ. ನಕ್ಕ ಖಾನಾ ಎಂಬುದೊಂದು ಅರಮನೆಯ ಎದುರಿಗೆ ನಿರ್ಮಿಸಲಾಗುವ ಮನರಂಜನಾ ಚಟುವಟಿಕೆಗಳು ನಡೆಯುವ ಸ್ಥಳ. 400ಕ್ಕೂ ಹೆಚ್ಚು ವರ್ಷ ಸದೃಢವಾಗಿ ನಿಂತಿದೆ. ಇದು ವಿಶ್ವದಲ್ಲಿ ಅಧಿಕ ಜನಪ್ರಿಯತೆ ಪಡೆಯಬೇಕಾಗಿದ್ದರೂ ಎಲೆಮರೆಯ ಕಾಯಿಯಂತೆ ಕರ್ನಾಟಕದಲ್ಲಿ ಪ್ರಶಾಂತವಾಗಿ ನೆಲೆಸಿದೆ. ಈ ಅದ್ಭುತ ಸ್ಮಾರಕವವನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕಾದ ಆಕರ್ಷಣೆಯ ಪ್ರವಾಸಿ ತಾಣವಾಗಿಇತಿಹಾಸದಲ್ಲಿ ಹಿರಿಮೆ ಹೊಂದಿದೆ.
ರಣವೀರ್ ಸಿಂಗ್ ಅಭಿನಯದ 'ಧುರಂಧರ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೂ ಭರ್ಜರಿ ಯಶಸ್ಸು ಕಂಡಿದೆ. ಈ ಯಶಸ್ಸಿನಿಂದಾಗಿ, ಚಿತ್ರದ ಎರಡನೇ ಭಾಗ 'ಧುರಂಧರ 2' 2026ರ ಮಾರ್ಚ್ 19ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲೂ ಈ ಚಿತ್ರ ಬರಲಿದ್ದು, ಕರ್ನಾಟಕದಲ್ಲಿ ಉತ್ತಮ ಕಲೆಕ್ಷನ್ ಕಂಡಿದೆ.
ಚಿತ್ರದುರ್ಗ ಬಸ್ ದುರಂತ | ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಭೀಕರ ಅಪಘಾತದಲ್ಲಿ 5 ಮಂದಿ ಸಜೀವ ದಹನ
ರಾಜಕೀಯ ವಲಯದಲ್ಲಿ ಆಕ್ರೋಶ
Explained: ಸಂಪನ್ಮೂಲಗಳಿಲ್ಲದೆ ನಾನು ವಿಜ್ಞಾನಿಯಾಗಬಹುದೇ? ತರ್ಕದ ಲೋಕದಲ್ಲಿ ವಿಹರಿಸುವ ಧೈರ್ಯವಂತರಿಗಾಗಿ..!
ವಿಜ್ಞಾನ ಕ್ಷೇತ್ರ ರೇ ಸಾಮ್ರಾಜ್ಯ ವಿಹರಿಸುವುದಿಲ್ಲ. ಅದೇನಿದ್ದರೂ ತರ್ಕ ಮತ್ತು ಭೌತಿಕ ಸಾಕ್ಷಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಅದು ಬಾಹ್ಯಾಕಾಶವೇ ಆಗಿರಲಿ ಅಥವಾ ಭೂಗರ್ಭ ಶಾಸ್ತ್ರವೇ ಆಗಿರಲಿ, ತುಲನಾತ್ಮಕ ಸಂಶೋಧನೆ, ಕರಾರುವಕ್ಕಾದ ಫಲಿತಾಂಶಗಳು ವಿಜ್ಞಾನವನ್ನು ವಿಜ್ಞಾನವನ್ನಾಗಿಸುತ್ತವೆ. ವಿಕಸಿತ ಭಾರತವು ವಿಜ್ಞಾನ ಕ್ಷೇತ್ರ ಅದರಲ್ಲೂ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಯ ಗುರಿ ಹೊಂದಿದೆ.ಈ ಗುರಿ ಸಾಧನೆಗೆ ಭಾರತದ ಯುವ ಸಮುದಾಯದ ಜ್ಞಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಯುವ ವಿಜ್ಞಾನಿ ದೀಪಕ್ ಎ.ಎಸ್. ಅವರು ವಿಜ್ಞಾನಿಯಾಗುವ ಬಗೆ ಹೇಗೆಂದು ಈ ಲೇಖನದಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.
ಸಂಪಾದಕೀಯ | ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತಳೇ ಅಪರಾಧಿಯಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಿಕಾರಿಪುರ: ಹೋರಿ ಹಬ್ಬದ ವೇಳೆ ಹೋರಿ ತಿವಿದು ಯುವಕನಿಗೆ ಗಂಭೀರ ಗಾಯ
ಶಿವಮೊಗ್ಗ : ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಸೊರಬ ತಾಲ್ಲುಕು ಮಾವಲಿ ಗ್ರಾಮದಲ್ಲಿ ನಡೆದಿದೆ. ಮಾವಲಿ ಗ್ರಾಮದಲ್ಲಿ ಬುಧವಾರ ಹೋರಿ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹೋರಿ ತಿವಿದು ಶಿಕಾರಿಪುರದ ಆಕಾಶ್ (25) ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ| ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮನಗೌಡ ಬುನ್ನಟ್ಟಿ ನಿಧನ
ಕನಕಗಿರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತಾಲ್ಲೂಕಿನ ಬುನ್ನಟ್ಟಿ ಗ್ರಾಮದ ಮುಖಂಡ ರಾಮನಗೌಡ ನಾಯಕ ಬುನ್ನಟ್ಟಿ (48) ಗುರುವಾರ ನಿಧನರಾದರು. ರಾಮನಗೌಡ ನಾಯಕ ಅವರು ನವಲಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ಈ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಗುರುತಿಸಿಕೊಂಡು ಪ್ರಚಾರ ಮಾಡಿದರು. ಸ್ವ ಗ್ರಾಮ ಬುನ್ನಟ್ಟಿಯಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಚಿತ್ರದುರ್ಗ ಬಸ್ ದುರಂತ ಪ್ರಕರಣ: ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ ಘೋಷಣೆ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದು ಬಸ್ನಲ್ಲಿದ್ದ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ
ಚಿತ್ರದುರ್ಗ ಬಸ್ ದುರಂತ ವೇಳೆ ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ಬಸ್: ಅಪಘಾತದ ಭೀಕರತೆ ವಿವರಿಸಿದ ಕ್ಲೀನರ್
ಚಿತ್ರದುರ್ಗದ ಭೀಕರ ಬಸ್ ಅಪಘಾತದಲ್ಲಿ ಏಕಾಏಕಿ ಡೀಸೆಲ್ ಟ್ಯಾಂಕ್ ನಿಂದ ಬಸ್ಸೆಲ್ಲ ಆವರಿಸಿಕೊಂಡ ಬೆಂಕಿ, ತಕ್ಷಣ ಬಸ್ ಪೂರ್ತಿ ಸ್ಫೋಟಗೊಂಡು ಭಸ್ಮ ಆಗಿದ್ದು, ಅಲ್ಲಿದ್ದವರ ನರಳಾಟ, ಜೀವ ಉಳಿಸಲು ಮಾಡಿದ ಹರಸಾಹದ ಬಗ್ಗೆ ಬಸ್ ಹಿಂದಿದ್ದ ಮತ್ತೊಂದು ಬಸ್ ಚಾಲಕ ವಿವರಿಸಿದ್ದಾರೆ.
ಎಂಟು ವರ್ಷದ ನಂತರ ಭಾರತಕ್ಕೆ ಬಂದ ವಿದೇಶಿಗ…. ಭಾರತದ ಬೆಳವಣಿಗೆ ನೋಡಿ ಶಾಕ್!
ಅಲೋಕ್ ಜೈನ್ ಅವರ ವಿದೇಶಿ ಸ್ನೇಹಿತ ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಸಂಚಾರ, ವೈದ್ಯಕೀಯ ಸೌಲಭ್ಯ, ಇಂಟರ್ನೆಟ್ ವೇಗ ಮತ್ತು ಮೊಬೈಲ್ ಡೇಟಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಸೌಲಭ್ಯಗಳು ಅಗ್ಗವಾಗಿವೆ ಎಂದು ಅವರು ಹೇಳಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಸಾರಿಗೆ ವ್ಯವಸ್ಥೆ ಮತ್ತು ಹೆದ್ದಾರಿಗಳಲ್ಲಿ ಭಾರೀ ಸುಧಾರಣೆ ಕಂಡುಬಂದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷ, ಹಿಂಸೆಯ ಪ್ರಕರಣಗಳ ಪೈಕಿ ಇತ್ತೀಚಿಗೆ ಬೆಂಗಳೂರಿನಲ್ಲಿ ಅಂಧ ಭಕ್ತಿಯ ಪರಾಕಾಷ್ಠೆಗೆ ತಲುಪಿದ ಕೆಲ ಹಿಂದುತ್ವ ಭಯೋತ್ಪಾದಕರು ದೈನಂದಿನ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಡ ವ್ಯಾಪಾರಿಗಳೊಂದಿಗೆ ಧರ್ಮ ದ್ವೇಷದ ಅಮಲೇರಿಸಿಕೊಂಡು ಪುಂಡಾಟಿಕೆ ಮೆರೆದಿರುವ ಕ್ರತ್ಯ ತೀರಾ ಅಮಾನುಷವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು. ಜೀವನೋಪಾಯಕ್ಕಾಗಿ ಸಂತಾ ಟೋಪಿ ಮಾರುತ್ತಿದ್ದ ವ್ಯಾಪಾರಿಗಳನ್ನು ಬೆದರಿಸಿ , ವ್ಯಾಪಾರಕ್ಕೆ ನಿರ್ಬಂಧಿಸುವುದು ಭಯೋತ್ಪಾದನಾ ಕೃತ್ಯವಾಗಿದೆ. ಬಿಜೆಪಿ, ಸಂಘಪರಿವಾರದ ಧರ್ಮಾಂಧತೆಯ, ಹಿಂಸಾ ರೂಪಕ ರಾಜಕೀಯ ಯಾವ ರೀತಿ ಸಮಾಜದಲ್ಲಿ ಅರಾಜಕತೆಯನ್ನು ಸ್ರಷ್ಟಿ ಮಾಡುತ್ತಿದೆ ಎಂಬುದಕ್ಕೆ ಪ್ರಸ್ತುತ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಇಂತಹ ಸಮಾಜ ಘಾತುಕ ಶಕ್ತಿಗಳು ದೇಶದ ಸೌಹಾರ್ದತೆಗೆ ಮಾರಕವಾಗಿದ್ದು ಮಾತ್ರವಲ್ಲದೆ ದೇಶದ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಇಂತಹ ಪ್ರಕರಣಗಳಿಂದಾಗಿ ದೇಶದ ಹಿರಿಮೆ, ಘನತೆಗೆ ಭಂಗ ಉಂಟಾಗುತ್ತಿದೆ. ಇಂತಹ ಅಲ್ಪಸಂಖ್ಯಾತ ವಿರೋಧಿ ಜನಾಂಗೀಯ ದ್ವೇಷ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಿ ದೇಶದ ಪ್ರತಿಯೊಬ್ಬ ಪ್ರಜೆಯ ಭದ್ರತೆ, ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ದೇವನಹಳ್ಳಿ ಶಾಶ್ವತ ಕೃಷಿ ವಲಯ : ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾದ ನಗರಾಭಿವೃದ್ಧಿ ಇಲಾಖೆ
ಬೆಂಗಳೂರು, ಡಿ.24: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ವಿಸ್ತೀರ್ಣದ ಜಮೀನನ್ನು ಶಾಶ್ವತ ಕೃಷಿ ವಲಯ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ನಗರಾಭಿವೃದ್ಧಿ ಇಲಾಖೆಯೂ ಈ ಸಂಬಂಧ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ಶಾಶ್ವತ ಕೃಷಿ ವಲಯ ಎಂದು ರಾಜ್ಯ ಕಾಂಗ್ರೆಸ್ ಸರಕಾರವು ಈಗಾಗಲೇ ಹೊರಡಿಸಿರುವ ಅಧಿಸೂಚನೆಗೆ ಚಿಂತಕರ ವಲಯವೂ ಸಹಿತ ಕೃಷಿಕರಲ್ಲಿಯೂ ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯೂ ಸಮವರ್ತಿತ ಅಧಿಸೂಚನೆ ಹೊರಡಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಬರೆದಿರುವ ಪತ್ರದ ಮೇಲೆ ‘ಯಾವುದೇ ಕಾರಣಕ್ಕೂ ಭೂ ಬಳಕೆಯ ಬದಲಾವಣೆ ಪ್ರಸ್ತಾವವನ್ನು ಸ್ವೀಕರಿಸಬಾರದು’ ಎಂದು ಷರಾ ನಮೂದಿಸಿದ್ದಾರೆ. ಹಾಗೆಯೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನಿನ ಸರ್ವೇ ನಂಬರ್ಗಳಿಗೆ ಸಂಬಂಧಿಸಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ತುರ್ತಾಗಿ ನಮೂದಿಸಬೇಕು ಎಂದೂ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಡತದ (UDD/651/BMR/2025- COMPUTER NUMBER 2010668) ಟಿಪ್ಪಣಿ ಹಾಳೆಗಳು he-file.inಗೆ ಲಭ್ಯವಾಗಿವೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಶಾಶ್ವತ ಕೃಷಿ ವಲಯ ಪ್ರದೇಶ ಎಂದು ಘೋಷಿಸಲು 2025ರ ಡಿಸೆಂಬರ್ 4ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಈ ತೀರ್ಮಾನ ಹೊರಬಿದ್ದ ಎರಡೇ ಎರಡು ದಿನದಲ್ಲಿ ಅಂದರೆ 2025ರ ಡಿಸೆಂಬರ್ 6ರಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಅಧಿಕೃತ ಆದೇಶ ಹೊರಡಿಸಿತ್ತು. ಇದೇ ಆದೇಶದಲ್ಲಿನ ಸಿ ಭಾಗದಲ್ಲಿ ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಗುಂಟೆ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರಿಸುವ ಸಲುವಾಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದೆ. ನಗರಾಭಿವೃದ್ಧಿ ಇಲಾಖೆಯು ಸಂಬಂಧಪಟ್ಟ ಸಮವರ್ತಿತ ಅಧಿಸೂಚನೆಯನ್ನು ಹೊರಡಿಸಬೇಕು’ ಎಂದು ತಿಳಿಸಿತ್ತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ನಗರ ಯೋಜನೆಯ 2025ರ ಡಿಸೆಂಬರ್ 22ರಂದು ತಾಂತ್ರಿಕ ಕೋಶದ ಅಭಿಪ್ರಾಯ ಪಡೆಯಲು ಕಡತವನ್ನು ಮಂಡಿಸಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವಕುಮಾರ್ ಅವರೂ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರಿಗೆ 2025ರ ಡಿಸೆಂಬರ್ 12ರಂದೇ ಪತ್ರ ಬರೆದಿದ್ದರು. ‘ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ವಿಸ್ತೀರ್ಣದ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರಿಸುವ ಸಲುವಾಗಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆಯು ಸಮವರ್ತಿತ ಅಧಿಸೂಚನೆ ಹೊರಡಿಸಲು ಮತ್ತು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು’ ಎಂದು ಕೋರಿದ್ದರು. ಅದೇ ರೀತಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ನಲ್ಲಿಯೂ ಶಾಶ್ವತ ಕೃಷಿ ವಲಯ ಎಂದು ನಮೂದು ಮಾಡಬೇಕು ಎಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೆಲ್ವಕುಮಾರ್ ಅವರು ಬರೆದಿದ್ದ ಪತ್ರದ ಮೇಲೆ Urgent; Please immediately take steps to issue notification accordingly. No change of land use proposal should be entertained at any cost' ಎಂದು ಷರಾ ನಮೂದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನ ನ್ನು ಇದರಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ಈ ಕುರಿತು ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹೇಳಿದ್ದರು. ಚನ್ನರಾಯಪಟ್ಟಣ ಹೋಬಳಿ ಸರಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹೀಗೆ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬುದು ಸುಳ್ಳು. ಸರಕಾರದ ಉದ್ದೇಶ ಈ ಕೃಷಿ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡುವುದನ್ನು ಹಾಗೂ ರೈತರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುವವರಿಗೆ ಕಡಿವಾಣ ಹಾಕುವುದೇ ಆಗಿದೆ. ತಮ್ಮ ಜಮೀನನ್ನು ಮಾರಾಟ ಮಾಡುವ ರೈತರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಂಡಿಲ್ಲ’ ಎಂದು ಅವರು ವಿವರಿಸಿದ್ದರು. ದೇವನಹಳ್ಳಿ ಸಮೀಪ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಸರಕಾರಕ್ಕೆ ಈ ಭೂಮಿಯ ಅಗತ್ಯ ಹೆಚ್ಚು ಇತ್ತು. ಆದರೂ ರೈತರ ಬೇಡಿಕೆಯನ್ನು ಪರಿಗಣಿಸಿ, ಇಲ್ಲಿ ಕೃಷಿ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಇಷ್ಟಾದರೂ, ರೈತರು ತಾವಾಗಿಯೇ ಸರಕಾರಕ್ಕೆ ಜಮೀನು ಕೊಡಲು ಮುಂದೆ ಬಂದರೆ ಅದಕ್ಕೂ ಅವಕಾಶವಿದೆ. ಇಂತಹ ಜಮೀನುಗಳಿಗೆ ಭೂ ದರ ನಿರ್ಧಾರ ಸಮಿತಿಯ ತೀರ್ಮಾನದಂತೆ ಪರಿಹಾರ ಕೊಡಲಾಗುವುದು. ಆದರೆ, ಸರಕಾರಕ್ಕೆ ಮಾತ್ರವೇ ಜಮೀನು ಮಾರಾಟ ಮಾಡಬೇಕು ಎಂಬ ಯಾವ ನಿರ್ಬಂಧವೂ ಇಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ಈ 13 ಗ್ರಾಮಗಳ ಜಮೀನಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿನೋಟಿಫೈ ಮಾಡಿ, ಕೃಷಿ ವಲಯವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಮಾಡಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ. ಜೊತೆಗೆ, ಕೃಷಿ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಸಮಜಾಯಿಷಿ ನೀಡಿದ್ದರು. ಗ್ರಾಮಗಳ ಜಮೀನುಗಳು ಈಗಾಗಲೇ ಹಸಿರು ವಲಯದಲ್ಲಿವೆ. ಇಲ್ಲಿ ಕೈಗಾರಿಕೆ ಬೆಳವಣಿಗೆಗೆ ಸಮಾನಾಂತರವಾಗಿ ಕೃಷಿ ಬೆಳವಣಿಗೆಯೂ ಆಗಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ. ಹೀಗಾಗಿಯೇ ಇದನ್ನು ಶಾಶ್ವತ ವಿಶೇಷ ಕೃಷಿ ವಲಯವನ್ನಾಗಿ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಕೃಷಿ ಕ್ಷೇತ್ರಕ್ಕೂ ಬಂಡವಾಳ ಹೂಡಿಕೆ ಹರಿದು ಬರಲಿದೆ ಎಂದು ವಿವರಿಸಿದ್ದರು. ಶಾಶ್ವತ ವಿಶೇಷ ಕೃಷಿ ವಲಯದಲ್ಲಿ ಹೆಚ್ಚು ಇಳುವರಿ ಕೊಡುವ ಬೀಜಗಳು, ಶೀತಲಗೃಹಗಳು, ಸಾವಯವ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ, ಹೈಡ್ರೋಪೋನಿಕ್ಸ್, ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆ, ನೇರ ಮಾರುಕಟ್ಟೆ ಸೌಲಭ್ಯ, ದಲ್ಲಾಳಿಗಳ ಕಾಟದಿಂದ ಮುಕ್ತಿ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ, ಇ-ಟ್ರೇಡಿಂಗ್ ಮತ್ತು ಡಿಜಿಟಲ್ ಮಾರುಕಟ್ಟೆ, ರೈತರು ಮತ್ತು ಕೃಷಿ ನವೋದ್ಯಮಗಳಿಗೆ ವಿಶೇಷ ತೆರಿಗೆ ರಿಯಾಯಿತಿ/ವಿನಾಯಿತಿ, ಕೃಷಿ-ವಾಣಿಜ್ಯ ಯೋಜನೆಗಳಿಗೆ ತ್ವರಿತ ಅನುಮೋದನೆ, ಕೃಷಿ ಆಧರಿತ ಉದ್ಯಮಗಳ ಬೆಳವಣಿಗೆ, ಕೃಷಿ ಉತ್ಪನ್ನಗಳ ರಫ್ತು ವಹಿವಾಟು, ಉಗ್ರಾಣಗಳ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗ ಇವೆಲ್ಲವೂ ಸಾಧ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದರು. ಈಗಾಗಲೇ ತಮಿಳುನಾಡು, ಛತ್ತೀಸ್ಗಢ, ಉತ್ತರಾಖಂಡ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ರೀತಿಯ ವಿಶೇಷ ಕೃಷಿ ವಲಯಗಳಿವೆ. ಹಾಗೆಯೇ ವಿದೇಶಗಳಲ್ಲಿಯೂ ಇರುವುದನ್ನು ಗಮನಿಸಿದ್ದೇವೆ. ಅಂತಹ ಕಡೆ ರೈತರಿಗೆ ಏನೇನು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನೂ ಸದ್ಯದಲ್ಲೇ ರಚಿಸಲಾಗುವುದು. ಅಂತಹ ಅನುಕೂಲಗಳನ್ನು ಇಲ್ಲೂ ಒದಗಿಸಲಾಗುವುದು ಎಂದು ಅವರು ಹೇಳಿದ್ದನ್ನು ಸ್ಮರಿಸಬಹುದು. ಸರಕಾರವು ಶಾಶ್ವತ ಕೃಷಿ ವಲಯ ಎಂದು ಹೊರಡಿಸಿದ್ದ ಅಧಿಸೂಚನೆಗೆ ಚಿಂತಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು.
ಕರ್ನಾಟಕ ಕಾಂಗ್ರೆಸ್ನ್ನು ಹೊಗಳಿದ ರಾಹುಲ್ ಗಾಂಧಿ; ಇದು ಪ್ರಧಾನಿಯವರ ದೂರದೃಷ್ಟಿ ಎಂದ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರಿನಲ್ಲಿ ಫಾಕ್ಸ್ಕಾನ್ 30,000 ಮಹಿಳೆಯರನ್ನು ನೇಮಿಸಿಕೊಂಡಿರುವುದನ್ನು ರಾಹುಲ್ ಗಾಂಧಿ ಶ್ಲಾಘಿಸಿ, ಕರ್ನಾಟಕದ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ಇದನ್ನು ಪ್ರಧಾನಿ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಯಶಸ್ಸು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇದು ಭಾರತದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಸಂಕೇತವಾಗಿದೆ.
Post Office Offer: ಬರಿ ₹20,000 ಹೊಡಿಕೆಗೆ ಪೋಸ್ಟ್ ಆಫೀಸ್ ನಲ್ಲಿ ಸಿಗುವ ಹಣ ಎಷ್ಟು ಗೊತ್ತಾ?
ನಾವು ಎಷ್ಟೇ ಕಷ್ಟಪಟ್ಟು ದುಡಿದರೂ, ತಿಂಗಳ ಕೊನೆಗೆ ಉಳಿತಾಯ ಮಾಡುವುದು ಕಷ್ಟದ ಕೆಲಸ. ಇನ್ನು ಹರಸಾಹಸ ಪಟ್ಟು ಒಂದಷ್ಟು ಹಣ ಉಳಿಸಿದರೂ, ಅದನ್ನು ಎಲ್ಲಿ ಇಡುವುದು ಎಂಬ ಚಿಂತೆ ಶುರುವಾಗುತ್ತದೆ. ಮನೆಯಲ್ಲಿ ಇಟ್ಟರೆ ಹಣ ಬೆಳೆಯುವುದಿಲ್ಲ, ಶೇರು ಮಾರುಕಟ್ಟೆಗೆ ಹಾಕಿದರೆ ಯಾವಾಗ ಏನಾಗುತ್ತದೋ ಎಂಬ ಭಯ, ಇನ್ನು ಬ್ಯಾಂಕ್ನಲ್ಲಿ ಇಡೋಣ ಎಂದರೆ ಬಡ್ಡಿ ದರ ತೀರಾ ಕಡಿಮೆ ಎನಿಸುತ್ತದೆ. ಹಾಗಾದರೆ ನಿಮ್ಮ ಹಣಕ್ಕೆ ಸಂಪೂರ್ಣ ರಕ್ಷಣೆ ಮತ್ತು ಉತ್ತಮ ಆದಾಯ ಎರಡೂ ಸಿಗುವ ಜಾಗ ಯಾವುದು? ನೀವು ... Read more The post Post Office Offer: ಬರಿ ₹20,000 ಹೊಡಿಕೆಗೆ ಪೋಸ್ಟ್ ಆಫೀಸ್ ನಲ್ಲಿ ಸಿಗುವ ಹಣ ಎಷ್ಟು ಗೊತ್ತಾ? appeared first on Karnataka Times .
Christmas 2025: ನರೇಂದ್ರ ಮೋದಿ ಅವರಿಂದ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ; ಸಾಮಾಜಿಕ ಸಾಮರಸ್ಯಕ್ಕೆ ಕರೆ
ದೇಶಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.25-ಗುರುವಾರ) ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ದೇಶದ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಸಂದೇಶ ಕಳುಹಿಸಿರುವ ಪ್ರಧಾನಿ ಮೋದಿ, ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಕರೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.
Gold Rate Rise: ಭಾರಿ ಹೆಚ್ಚಳ ಕಂಡ ದರ: ಕೇವಲ 4 ದಿನದಲ್ಲಿ ಚಿನ್ನಕ್ಕೆ 5070 ರೂ. ಏರಿಕೆ!
ಚಿನ್ನದ ಬೆಲೆ ಭಾರಿ ಹೆಚ್ಚಳ ಆಗುತ್ತಿದ್ದು, 1 ಲಕ್ಷದ 40 ಸಾವಿರ ರೂಪಾಯಿಗೆ ಕೇವಲ 250 ರೂಪಾಯಿ ಬಾಕಿ ಇದೆ.
Chitradurga |ರಸ್ತೆ ಅಪಘಾತದಲ್ಲಿ 17 ಮಂದಿ ಮೃತ್ಯು : ಸಂತಾಪ ವ್ಯಕ್ತಪಡಿಸಿದ ಸಿಎಂ, ಡಿಸಿಎಂ
ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಲಾರಿ ಮತ್ತು ಸ್ಲೀಪರ್ ಕೋಚ್ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಸಿಎಂ, ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಎಕ್ಸ್ ಪೋಸ್ಟ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
Chitradurga |ರಸ್ತೆ ಅಪಘಾತದಲ್ಲಿ 17 ಮಂದಿ ಮೃತ್ಯು : ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಲಾರಿ ಮತ್ತು ಸ್ಲೀಪರ್ ಕೋಚ್ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ಅವರು ''ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಮೃತರ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು'' ಎಂದು ತಿಳಿಸಿದ್ದಾರೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್)ಯಿಂದ 2 ಲಕ್ಷ… — PMO India (@PMOIndia) December 25, 2025
ಚಿತ್ರದುರ್ಗ ಬಸ್ ಅಪಘಾತ ವಿವರಿಸಿದ ಐಜಿಪಿ ಬಿ.ಆರ್.ರವಿಕಾಂತೇಗೌಡ: 42 ಮಕ್ಕಳಿದ್ದ ಬಸ್ ಜಸ್ಟ್ ಮಿಸ್!
ಹಿರಿಯೂರು: ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 09 ಜನರ ಜೀವ ಬಲಿ ಪಡೆದ ಭೀಕರ ಬಸ್ ಅಪಘಾತ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಅವರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಖಾಸಗಿ ಬಸ್ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಗೊಂದಲಮಯವಾದ H-1B ವೀಸಾ; ಮಾಯವಾದ ಭಾರತೀಯರ ನೆಮ್ಮದಿ, ಟ್ರಂಪ್ ದೋಖಾ ಅರಿಯುವಲ್ಲಿ ತಡ ಮಾಡಿದ್ವಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ಸಮರ ಎಂದು ಕೊನೆಗೊಳ್ಳುವುದೋ ಗೊತ್ತಿಲ್ಲ. ಅದರಲ್ಲೂ H-1B ವೀಸಾ ನಿಯಮಗಳಲ್ಲಿ ಟ್ರಂಪ್ ಆಡಳಿತ ತರುತ್ತಿರುವ ಬದಲಾವಣೆಗಳು ಭಾರತೀಯರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಸಾಮಾಜಿಕ ಮಾಧ್ಯಮ ಪರಿಶೀಲನೆ ನಿಯಮದಿಂದಾಗಿ ಭಾರತದಲ್ಲಿ H-1B ವೀಸಾ ಸಂದರ್ಶನಗಳನ್ನು ಮುಂದೂಡಲಾಗುತ್ತಿದೆ. ಈ ವಿಳಂಬದಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಕಾರ್ಮಿಕರು ತ್ರಿಶಂಕು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಟ್ರಂಪ್ ಆಡಳಿತ ವೀಸಾ ನಿಯಮದಲ್ಲಿ ಇಷ್ಟೆಲ್ಲಾ ಗೊಂದಲಗಳನ್ನು ಸೃಷ್ಟಿಸುತ್ತಿರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Chitradrurga: ಚಿತ್ರದುರ್ಗ ಬಸ್ ದುರಂತ; ಮೃತರ ಕುಟುಂಬಗಳಿಗೆ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ.!
ನವದೆಹಲಿ: ಚಿತ್ರದುರ್ಗದ ಹಿರಿಯೂರು ಬಳಿ ಬೆಳ್ಳಂ ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದು 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ? : ಡಿ ಕೆ ಶಿವಕುಮಾರ್ ರಿಯಾಕ್ಷನ್
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯಾಗಿ ಮಾಡೇ ಮಾಡ್ತೀವಿ, ಇಂದಿರಾಗಾಂಧಿಯಂತೆ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದನ್ನು ನೋಡ್ತಾ ಇರಿ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ. ಇನ್ನೂ ಪ್ರಿಯಾಂಕಾ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯ ಕರ್ನಾಟಕ
ಹಿರಿಯೂರು ಬಳಿ ಬೀಕರ ಬಸ್ ಅಪಘಾತ: ಬೊಮ್ಮಾಯಿ, ಡಿಕೆಶಿ ಸೇರಿದಂತೆ ಗಣ್ಯರ ಸಂತಾಪ
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್ ಚಿತ್ರದುರ್ಗದ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಮೃತಪಟ್ಟಿದ್ದಾರೆ. ಬಸ್ ಸುಟ್ಟು ಕರಕಲಾಗಿದೆ. ಈ ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮೃತರಿಗೆ ಸಂತಾಪ ತಿಳಿಸಿ ಸಾಮಾಜಿಕ ಜಾಲತಾಣ ಎಕ್ಸ್
Christmas 2025: ಜಾಗತಿಕ ಕ್ರಿಸ್ಮಸ್ ಪವಾಡಗಳು, ಏಸುವಿನ ಆಶೀರ್ವಾದಕ್ಕೆ ಸಾಷ್ಟಾಂಗ ನಮಸ್ಕಾರಗಳು
ಜಗತ್ತಿನೆಲ್ಲೆಡೆ ಇಂದು (ಡಿ.25-ಗುರುವಾರ) ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾಗತಿಕ ಕ್ರಿಶ್ಚಿಯನ್ ಬಾಂಧವರು ತಮ್ಮ ಆರಾಧ್ಯ ದೈವ ಏಸುಕ್ರಿಸ್ತನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಭಾರತದಲ್ಲೂ ಕ್ರಿಶ್ಚಿಯನ್ ಸಮುದಾಯ ಕ್ರಿಸ್ಮಸ್ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಿದೆ.ವಿವಿಧ ಕ್ಷೇತ್ರಗಳ ಗಣ್ಯರು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ದಿನದ ಆಸು-ಪಾಸು ಜಾಗತಿಕ ಇತಿಹಾಸದಲ್ಲಿ ಸಂಭವಿಸಿದ ಕೆಲವು ರೋಚಕ ಘಟನೆಗಳು ಮತ್ತು ಅದನ್ನು ಕ್ರಿಸ್ಮಸ್ ಪವಾಡಗಳೊಂದಿಗೆ ಹೋಲಿಸಿದ ನಿರ್ಧಾರಗಳನ್ನು ಈ ಲೇಖನದಲ್ಲಿ ನಾವು ಅರಿಯೋಣ.
ಮಂಡ್ಯದಲ್ಲಿ ಯುಎಸ್ ಕಂಪನಿಗೆ ಜಾಗ ಕೊಡುತ್ತಿಲ್ಲ: ಜೆಡಿಎಸ್ ಅರೋಪಕ್ಕೆ ಎಂಬಿ ಪಾಟೀಲ್ ಸ್ಪಷ್ಟನೆ, ಏನಿದು?
ಮಂಡ್ಯ: ಕರ್ನಾಟಕದಲ್ಲಿ ವಿವಿಧ ಕೈಗಾರಿಕೆಗಳು ಹೂಡಿಕೆ ಮಾಡುತ್ತಿದ್ದು, ಸರ್ಕಾರ ಸ್ಪಂದಿಸಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. ಮಂಡ್ಯದಲ್ಲಿ ಯುಎಸ್ ಮೂಲದ ಕಂಪನಿಯ ಘಟಕ ಸ್ಥಾಪಿಸಲು ಅಗತ್ಯ ಜಾಗ ನೀಡುತಿಲ್ಲ ಎಂದು ತಿಳಿಸಿದೆ. ಈ ಸಂಬಂಧ ಅಧಿವೇಶನದಲ್ಲಿ ಕೈಗಾರಿಕೆ ಎಂಬಿ ಪಾಟೀಲ್ ಅವರು
ಬೆಂದಕಾಳೂರಿನಲ್ಲಿ ‘ಹಿಮಗಿರಿ’ಯ ನಡುಕ
ಈ ದಟ್ಟ ಮಂಜಿನ ಹಿಂದೆ ಅಡಗಿದೆ ಭೌತಶಾಸ್ತ್ರದ ಚಳಕ!
ಮನುಸ್ಮ ತಿ ಸುಟ್ಟಿದ್ದು ಫ್ರಾನ್ಸ್ ಕ್ರಾಂತಿಯಷ್ಟೇ ಮಹತ್ವದ್ದು
ಇಂದು ಅಂಬೇಡ್ಕರ್ ಮನುಸ್ಮ ತಿ ದಹಿಸಿದ ದಿನ
ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ; ಹೊಸವರ್ಷದ ಸ್ವಾಗತಕ್ಕೆ ಮೈಸೂರಲ್ಲಿ ಸಿದ್ಧತೆ ಜೋರು
ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆದಿದೆ. ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಶಬ್ದ ರಹಿತ ಹಸಿರು ಪಟಾಕಿ ಸಿಡಿಸುವಿಕೆ, ಹೋಟೆಲ್ಗಳಲ್ಲಿ ವಿಶೇಷ ಪಾರ್ಟಿಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಪ್ರವಾಸಿಗರು ಮತ್ತು ಸ್ಥಳೀಯರು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ವಿಬಿ-ಜಿ ರಾಮ್ ಜಿ: ಮನರೇಗಾ ನಿರ್ಮಿಸಿದ ಪರಂಪರೆಯ ಬುಡಮೇಲು
ಉದ್ಯೋಗದ ಮಿತಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇ. 2ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ 100 ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು. ಜೀನ್ ಡ್ರೇಜ್ | ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್ ಇಪ್ಪತ್ತು ವರ್ಷಗಳ ಹಿಂದೆ, ಭಾರತವು ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (NREGA) ಜಾರಿಗೆ ತರುವ ಮೂಲಕ ಜಗತ್ತಿಗೆ ಮಾದರಿಯಾಗಿತ್ತು. ಉದ್ಯೋಗ ಖಾತರಿ ಕಲ್ಪನೆ ಸಂಪೂರ್ಣವಾಗಿ ಹೊಸದೇನಲ್ಲ. ಬಿಕ್ಕಟ್ಟಿನ ಸಮಯದಲ್ಲಿ ಪರಿಹಾರವಾಗಿ ಸಾರ್ವಜನಿಕ ಕಾಮಗಾರಿಗಳನ್ನು ಬಳಸುವ ಸುದೀರ್ಘ ಇತಿಹಾಸ ಭಾರತಕ್ಕಿದೆ. ಮಹಾರಾಷ್ಟ್ರವು 1970ರ ದಶಕದ ಆರಂಭದಿಂದಲೇ ತನ್ನ ಉದ್ಯೋಗ ಖಾತರಿ ಯೋಜನೆಯ ಮೂಲಕ ದಾರಿ ತೋರಿಸಿತ್ತು. ಆದರೆ ನರೇಗಾ ಈ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿತು ಮತ್ತು ಜಗತ್ತಿಗೆ ಸ್ಫೂರ್ತಿಯಾಯಿತು. ಇದು ಪಕ್ಷದ ಎಲ್ಲೆ ಮೀರಿ ಬೆಳೆದಿದ್ದ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು ಮತ್ತು ಸಂಸತ್ನಲ್ಲಿ ಸರ್ವಾನುಮತದ ಬೆಂಬಲ ಪಡೆದಿತ್ತು. ಈ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿತ್ತು ಎನ್ನುವುದಕ್ಕೆ ಆರು ವರ್ಷಗಳ ನಂತರ, 2011-12ರಲ್ಲಿ ಪುರಾವೆಗಳೂ ಸಿಕ್ಕವು. ಆ ವೇಳೆಗೆ ‘ಮನರೇಗಾ’ (MGNREGA) ಎಂದು ಮರುನಾಮಕರಣಗೊಂಡಿತ್ತು. ಅಧಿಕೃತವಾಗಿ ವರ್ಷಕ್ಕೆ 5 ಕೋಟಿ ಗ್ರಾಮೀಣ ಕುಟುಂಬಗಳಿಗೆ 200 ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಕೊಟ್ಟಿತ್ತು. ಉದ್ಯೋಗ ಪಡೆದುಕೊಂಡವರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಮತ್ತು ಶೇ. 40ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರು. ಈ ಅಧಿಕೃತ ಅಂಕಿಅಂಶಗಳನ್ನು 68ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಎರಡನೇ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯಂತಹ ಸ್ವತಂತ್ರ ಸಮೀಕ್ಷೆಗಳು ಪುಷ್ಟೀಕರಿಸಿದ್ದವು. ಗ್ರಾಮೀಣ ವೇತನದಲ್ಲೂ ಹಿಂದೆಂದಿಗಿಂತ ಹೆಚ್ಚಿನ ಏರಿಕೆ ಕಾಣತೊಡಗಿತು. ಮನರೇಗಾ ಉತ್ಪಾದಕ ಕೆಲಸಗಳನ್ನು ಕಸಿದುಕೊಳ್ಳಲಿಲ್ಲ, ಬದಲಿಗೆ ಆರ್ಥಿಕ ದಕ್ಷತೆ ಮತ್ತು ಒಟ್ಟು ಉತ್ಪಾದಕತೆಯನ್ನು ಹೆಚ್ಚಿಸಿತು ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಮನರೇಗಾದ ಆರಂಭಿಕ ವರ್ಷಗಳಲ್ಲಿನ ಉತ್ಸಾಹ ಮತ್ತು ಹುರುಪಿನಿಂದ ಈ ಸಾಧನೆಗಳು ಸಾಧ್ಯವಾದವು. ನಂತರದ ದಿನಗಳಲ್ಲಿ, ಅನುಷ್ಠಾನಕ್ಕೆ ಅಡೆತಡೆಗಳು ಪ್ರಾರಂಭವಾದವು. ಕೇಂದ್ರೀಕರಣ, ಅನುದಾನದ ಕೊರತೆ, ವೇತನ ಪಾವತಿಯಲ್ಲಿ ವಿಳಂಬ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ ಇತ್ಯಾದಿ ಕಾರಣಗಳು ಕಾರ್ಯಕ್ರಮಕ್ಕೆ ಅಪಾರ ಹಾನಿ ಮಾಡಿದವು. ಕೋವಿಡ್-19ರ ಬಿಕ್ಕಟ್ಟಿನ ಸಮಯದಲ್ಲಿ ಇದು ಸ್ವಲ್ಪ ಚೇತರಿಸಿಕೊಂಡಂತೆ ಕಂಡರೂ, ಮನರೇಗಾಕ್ಕೆ ಹಳೆಯ ಮೆರುಗು ಮರಳಿ ಬರಲಿಲ್ಲ ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಬಹುದು, ಆದರೆ ಇದಕ್ಕೆ ಪ್ರಬಲ ರಾಜಕೀಯ ಬದ್ಧತೆ ಬೇಕು. ಆದರೆ ‘ವಿಬಿ-ಜಿ ರಾಮ್ ಜಿ’ ಮಸೂದೆ 2025 ಇದಕ್ಕೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದೆ. ಇದು ಐತಿಹಾಸಿಕ ಕಾಯ್ದೆಯನ್ನು ಕೇಂದ್ರ ನಿರ್ದೇಶಿತ ಯೋಜನೆಯಾಗಿ ಬದಲಿಸಲು ಪ್ರಯತ್ನಿಸುತ್ತಿದೆ. ಈ ಮಸೂದೆಯಡಿಯಲ್ಲಿ ಕೇಂದ್ರವು ಸಂಪೂರ್ಣ ಅಧಿಕಾರವನ್ನು ತನ್ನ ಕೈಯಲ್ಲಿಟ್ಟುಕೊಳ್ಳುತ್ತಿದೆ, ಆದರೆ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ಹೊರಲು ಸಿದ್ಧವಿಲ್ಲ. ಉದ್ಯೋಗ ನೀಡುವುದು, ನಿರುದ್ಯೋಗ ಭತ್ತೆ ಪಾವತಿಸುವುದು, ವಿಳಂಬ ಪಾವತಿಗೆ ಕಾರ್ಮಿಕರಿಗೆ ಪರಿಹಾರ ನೀಡುವುದು ಮತ್ತು ಸಮರ್ಪಕ ಹಣಕಾಸು ಒದಗಿಸುವಂತಹ ಎಲ್ಲಾ ಜವಾಬ್ದಾರಿಗಳನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಗಿದೆ. ಯೋಜನೆಯನ್ನು ಎಲ್ಲಿ ಮತ್ತು ಯಾವಾಗ ಜಾರಿಗೆ ತರಬೇಕು ಎಂದು ನಿರ್ಧರಿಸುವ ‘ಸ್ವಿಚ್ ಆಫ್’ ಅಧಿಕಾರ ಕೇಂದ್ರದ ಕೈಯಲ್ಲಿದೆ. ಇದು ಉದ್ಯೋಗ ಖಾತರಿಯ ಮೂಲ ಉದ್ದೇಶವನ್ನೇ ಸೋಲಿಸುತ್ತದೆ ಇದು ಖಾತ್ರಿಯಾಗಿ ಅನ್ವಯವಾಗುತ್ತದೆ ಎನ್ನುವ ಖಾತ್ರಿಯೇ ಇಲ್ಲದೆ ಉದ್ಯೋಗ ಖಾತರಿ ನೀಡಿದಂತೆ! ಹಣಕಾಸಿನ ಹಂಚಿಕೆಯಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಮನರೇಗಾ ಕೇಂದ್ರದಿಂದ ಮುಕ್ತವಾದ ಧನಸಹಾಯದ ತತ್ವದ ಮೇಲೆ ಆಧಾರಿತವಾಗಿತ್ತು. ಹೊಸ ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ರಾಜ್ಯಗಳು ಮಾಡಬಹುದಾದ ವೆಚ್ಚದ ಮಿತಿಯನ್ನು ನಿಗದಿಪಡಿಸುತ್ತದೆ. ನಿಗದಿಪಡಿಸಿದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುತ್ತವೆ. ಅದಕ್ಕೂ ಮೀರಿದ ಎಲ್ಲಾ ಹಣಕಾಸನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ. ಕೇಂದ್ರ ಸರಕಾರವು ತನ್ನ ವಿವೇಚನಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಅಪಾಯ ಕೇವಲ ಕಲ್ಪನೆಯಲ್ಲ; ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ವರ್ಷಗಳಿಂದ ಮನರೇಗಾ ಹಣಕಾಸು ಸ್ಥಗಿತಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಕಠಿಣ ಕ್ರಮಕ್ಕೆ ಕಾರಣಗಳನ್ನು ಕೇಂದ್ರ ಸರಕಾರವು ಸಂಸತ್ತಿನಲ್ಲೂ ಸ್ಪಷ್ಟಪಡಿಸಿಲ್ಲ. ಇದರ ಹಿಂದಿನ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ. ಹೊಸ ಹಣಕಾಸು ವ್ಯವಸ್ಥೆಯಿಂದ ಮನರೇಗಾ ದುರ್ಬಲಗೊಳ್ಳಲಿದೆ. ಇಲ್ಲಿಯವರೆಗೆ ರಾಜ್ಯ ಸರಕಾರಗಳು ಕೇವಲ ಶೇ. 25ರಷ್ಟು ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸಬೇಕಾಗಿತ್ತು, ಉಳಿದೆಲ್ಲಾ ವೆಚ್ಚವನ್ನು ಕೇಂದ್ರವೇ ನೀಡುತ್ತಿತ್ತು. ಇದು ರಾಜ್ಯಗಳಿಗೆ ಯೋಜನೆಯನ್ನು ಹುರುಪಿನಿಂದ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿತ್ತು. ಹೊಸ ಶೇ. 40 ಪಾಲುದಾರಿಕೆಯ ಮಾದರಿಯು ಇದಕ್ಕೆ ದೊಡ್ಡ ಅಡ್ಡಿಯಾಗಲಿದೆ. ಮನರೇಗಾ ಯಶಸ್ಸಿಗೆ ಕೆಲಸದ ಬೇಡಿಕೆಯಷ್ಟೇ ಮುಖ್ಯವಾಗಿದ್ದು ರಾಜ್ಯಗಳಿಗೆ ಕೇಂದ್ರ ನೀಡುತ್ತಿದ್ದ ಆರ್ಥಿಕ ಬೆಂಬಲ. ರೈತರು ಬಾವಿ ನಿರ್ಮಾಣ, ತೋಟಗಾರಿಕೆಗೆ ಉತ್ಸುಕರಾಗಿದ್ದಾರೆ; ಕೆರೆ-ರಸ್ತೆಗಳ ಅಗತ್ಯವಿದೆ. ವೆಚ್ಚದ ಹೊರೆ ಹೆಚ್ಚಾದಂತೆ, ವಿಶೇಷವಾಗಿ ಬಡ ರಾಜ್ಯಗಳು ಹೊಸ ಯೋಜನೆಗಳ ಅನುಮೋದನೆಯನ್ನು ನಿಧಾನಿಸಬಹುದು ಅಥವಾ ತಡೆಹಿಡಿಯಬಹುದು. ಈ ಮಸೂದೆಯ ಪ್ರಕಾರ ಉದ್ಯೋಗ ನೀಡುವ ಜವಾಬ್ದಾರಿ ರಾಜ್ಯಗಳದ್ದು, ಆದರೆ ಹಣಕಾಸಿನ ಖಾತರಿ ಕೇಂದ್ರ ನೀಡುವುದಿಲ್ಲ. ಇದನ್ನು ರಾಜ್ಯಗಳು ವಿರೋಧಿಸುವುದು ನ್ಯಾಯಸಮ್ಮತವಾಗಿದೆ. ಮಸೂದೆಯನ್ನು ಬೆಂಬಲಿಸುವ ಕೆಲವು ಅರ್ಥಶಾಸ್ತ್ರಜ್ಞರು ಇದರಿಂದ ಬಡ ರಾಜ್ಯಗಳಿಗೆ ಹೆಚ್ಚಿನ ಹಣ ಸಿಗುತ್ತದೆ ಎಂದು ವಾದಿಸುತ್ತಾರೆ. ಆದರೆ ಬಡ ರಾಜ್ಯಗಳಿಗೆ ನೆರವಾಗಲು ಅಲ್ಲಿನ ವೇತನ ದರಗಳನ್ನು ಹೆಚ್ಚಿಸುವುದು ಸರಿಯಾದ ಮಾರ್ಗವೇ ಹೊರತು, ವೆಚ್ಚದ ಹೊರೆ ಹೇರುವುದಲ್ಲ. ಎರಡು ವಿಷಯಗಳು ಈ ಮಸೂದೆಯ ವಿನಾಶಕಾರಿ ಸ್ವರೂಪದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆದಿವೆ. ಮೊದಲನೆಯದು, ಕಾಯ್ದೆಯ ಹೆಸರನ್ನು ಮನರೇಗಾ ಬದಲಿಗೆ ‘ವಿಕಸಿತ್ ಭಾರತ್-ಜಿ ರಾಮ್ ಜಿ’ ಎಂದು ಬದಲಿಸಿರುವುದು. ಹೆಸರನ್ನು ಬದಲಿಸುವುದು ಸಮಯ ಮತ್ತು ಹಣದ ಪೋಲು ಮಾತ್ರವಲ್ಲ, ಕಾಯ್ದೆಗಿದ್ದ ಪಕ್ಷಾತೀತ ಸ್ವರೂಪವನ್ನೂ ನಾಶಪಡಿಸುತ್ತದೆ. ದುರದೃಷ್ಟವಶಾತ್, ವಿರೋಧ ಪಕ್ಷಗಳು ಮಸೂದೆಯ ಆಳವಾದ ಸಮಸ್ಯೆಗಳನ್ನು ಚರ್ಚಿಸುವ ಬದಲಿಗೆ ಹೆಸರು ಬದಲಾವಣೆಯ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮತ್ತೊಂದು ವಿಷಯವೆಂದರೆ ಉದ್ಯೋಗದ ಮಿತಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇ. 2ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ 100 ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರದ ಹೊಸ ಮಸೂದೆಯು ಉದ್ಯೋಗ ಖಾತರಿ ಯೋಜನೆಯನ್ನು ಸುಧಾರಿಸುವ ಬದಲಿಗೆ ರಾಜ್ಯಗಳ ಉತ್ಸಾಹ ಕುಂದಿಸುತ್ತಿದೆ. ಮತ್ತು ಕಾರ್ಮಿಕರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಕೃಷಿ ಕಾಯ್ದೆಗಳಂತೆ ಈ ಮಸೂದೆಯೂ ಸಾರ್ವಜನಿಕ ಒತ್ತಡದಿಂದ ರದ್ದಾಗಬೇಕು. ಇಲ್ಲದಿದ್ದರೆ, ಇದು ಒಂದು ಐತಿಹಾಸಿಕ ಯುಗದ ಅಂತ್ಯವಾಗಲಿದೆ. ಕೃಪೆ: The Indian Express
ಕ್ರಿಸ್ಮಸ್ ಶಾಂತಿ, ಸಮಾನತೆ ಮತ್ತು ಭರವಸೆಯ ಹಬ್ಬ
ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ. ಜಗತ್ತು ಹಲವಾರು ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ಯುದ್ಧದ ಭಯ, ಆರ್ಥಿಕ ಅಸಮಾನತೆ, ಪರಿಸರ ನಾಶ ಮತ್ತು ಸಮಾಜದಲ್ಲಿನ ವಿಭಜನೆ- ಈ ಎಲ್ಲಾ ಸವಾಲುಗಳು ನಮ್ಮನ್ನು ವಿವಶಗೊಳಿಸಿವೆ. ಈ ಸಂದರ್ಭದಲ್ಲಿ, 2000 ವರ್ಷಗಳ ಹಿಂದೆ ಬೆತ್ಲೆೆಹೆಮ್ನ ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತರ ಸಂದೇಶವು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಆತನ ಜನನವು ಇಂದಿನ ಜಗತ್ತಿಗೆ ನೀಡುವ ಭರವಸೆ, ಶಾಂತಿ ಮತ್ತು ಸಮಾನತೆಯ ಕರೆಗಳ ಕುರಿತು ಯೋಚಿಸೋಣ. 1. ಯುದ್ಧ ಮತ್ತು ವಿಭಜನೆಯ ನಡುವೆ ಶಾಂತಿಯ ಕರೆ ಇಂದು ಅನೇಕ ದೇಶಗಳಲ್ಲಿ ಯುದ್ಧಗಳು, ರಾಜಕೀಯ ಕಲಹಗಳು ಮತ್ತು ಭಯೋತ್ಪಾದನೆ ಜನರನ್ನು ಭೀತಿಯಲ್ಲಿ ಇರಿಸಿದೆ. ಕ್ರಿಸ್ಮಸ್ ಸಂದೇಶವು ಈ ಅಂಧಕಾರವನ್ನು ಸೀಳುವ ದೈವಿಕ ಬೆಳಕು. ಯೇಸುವು ‘ಶಾಂತಿದಾಯಕ ಪ್ರಭು’. (ಯೆಶಾಯ 9:6) ಅವರ ಜನನದ ಉದ್ದೇಶವೇ ಮಾನವಕುಲಕ್ಕೆ ಶಾಂತಿಯನ್ನು ತರುವುದು. ದೇವದೂತರು ಯೇಸುವಿನ ಜನನದ ರಾತ್ರಿ ಹಾಡಿದ ಸಂದೇಶವು ಸಾರ್ವಕಾಲಿಕವಾಗಿದೆ: ‘‘ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ.’’ (ಲೂಕ 2:14). ಈ ಶಾಂತಿಯು ಕೇವಲ ಯುದ್ಧದ ಅನುಪಸ್ಥಿತಿಯಲ್ಲ, ಅದು ದೇವರೊಂದಿಗೆ ಮತ್ತು ಪರರೊಂದಿಗೆ ಸೌಹಾರ್ದದ ಸ್ಥಿತಿ. ನಮ್ಮ ಕಾಲದ ಸಂಘರ್ಷಗಳನ್ನು ಕುರಿತು ವಿಶ್ವಗುರು ಫ್ರಾನ್ಸಿಸ್ರವರು ಆಳವಾದ ಕಳವಳ ವ್ಯಕ್ತಪಡಿಸಿದ್ದರು. ‘‘ನಾವು ನಮ್ಮ ಸಹೋದರ ಸಹೋದರಿಯರನ್ನು ನೋವಿನಿಂದ ನೋಡಿದಾಗ, ಕ್ರಿಸ್ತನ ಬೆಳಕು ಮಸುಕಾಗುತ್ತದೆ. ಈ ಕ್ರಿಸ್ಮಸ್ನಲ್ಲಿ, ನಮ್ಮ ಹೃದಯಗಳು ಶಾಂತಿಯ ಮಾರ್ಗವನ್ನುಕಂಡುಕೊಳ್ಳಬೇಕು, ಏಕೆಂದರೆ ಯೇಸುವೇ ನಮ್ಮ ಶಾಂತಿ’’ ಎಂದು. 2. ಆರ್ಥಿಕ ಅಸಮಾನತೆ ಮತ್ತು ಬಡತನದ ಸವಾಲು ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ. ದೇವರ ಪ್ರೀತಿ ಕೇವಲ ಮಾತುಗಳಲ್ಲಿರದೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದವರ ಪರವಾದ ಕಾರ್ಯಗಳಲ್ಲಿ ಇರಬೇಕು. ವಿಶ್ವಗುರು ಲಿಯೋಘಿ XIIIರವರು ಬಡವರ ಪರವಾಗಿ ಧ್ವನಿ ಎತ್ತುತ್ತಾ, ‘‘ಯಾವ ವ್ಯಕ್ತಿ ಸಮಾನತೆ ಮತ್ತು ಸಹೋದರತ್ವವನ್ನು ಗೌರವಿಸುತ್ತಾನೋ, ಆತನು ಕ್ರಿಸ್ತನ ದೀನತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತಾನೆ. ಸಂಪತ್ತು ಒಂದುಗುರಿಯಲ್ಲ, ಆದರೆ ಅದನ್ನು ನ್ಯಾಯಯುತವಾಗಿ ಹಂಚಿಕೊಳ್ಳುವ ಸಾಧನ’’ ಎಂದರು. 3. ಪರಿಸರ ಬಿಕ್ಕಟ್ಟು ಮತ್ತು ಸೃಷ್ಟಿಯ ರಕ್ಷಣೆ ಇಂದು ಹವಾಮಾನ ಬದಲಾವಣೆ, ಪ್ರಕೃತಿಯ ಅಸಮತೋಲನ ಮತ್ತು ಅತಿಯಾದ ಶೋಷಣೆಯಿಂದ ಜಗತ್ತು ತತ್ತರಿಸಿದೆ. ಕ್ರಿಸ್ಮಸ್ ಹಬ್ಬವು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಸೌಹಾರ್ದದ ಸಂಬಂಧಕ್ಕೆ ಕರೆ ನೀಡುತ್ತದೆ. ಯೇಸುವು ಕಾಂಕ್ರಿಟ್ ಕಟ್ಟಡದಲ್ಲಿ ಅಲ್ಲ, ಪ್ರಕೃತಿಯ ಮಡಿಲಾದ ಗೋದಲಿಯಲ್ಲಿ ಹುಲ್ಲು ಮತ್ತು ದನ ಕರುಗಳ ನಡುವೆ ಜನಿಸಿದ್ದು ಒಂದು ಸಾಂಕೇತಿಕ ಅರ್ಥವನ್ನು ಹೊಂದಿದೆ. ನಾವು ಪ್ರಕೃತಿಯ ಯಜಮಾನರಲ್ಲ, ಆದರೆ ಅದರ ವಿಶ್ವಾಸಾರ್ಹ ಪಾಲಕರಾಗಿದ್ದೇವೆ. ದೇವರ ಸೃಷ್ಟಿಗೆ ಗೌರವವನ್ನು ನೀಡುವ ಕುರಿತು ಬೈಬಲ್ ಗ್ರಂಥ ಹೀಗೆ ಹೇಳುತ್ತದೆ: ‘‘ಆಕಾಶಮಂಡಲಗಳು ದೇವರ ಮಹಿಮೆಯನ್ನು ಪ್ರಚುರಪಡಿಸುತ್ತವೆ; ಆಕಾಶವು ಆತನ ಕೈಕೆಲಸವನ್ನು ಪ್ರಕಟಿಸುತ್ತದೆ.’’(ಕೀರ್ತನೆಗಳು 19:1). ಈ ಸೃಷ್ಟಿಯನ್ನು ನಾಶಮಾಡುವುದು ದೇವರ ಮಹಿಮೆಯನ್ನು ನಿರಾಕರಿಸಿದಂತೆ.ವಿಶ್ವಗುರು ಫ್ರಾನ್ಸಿಸ್ರವರು ಪರಿಸರ ಕಾಳಜಿಗೆ ಹೆಚ್ಚಿನ ಒತ್ತು ನೀಡುತ್ತಾ ಹೀಗೆನ್ನುತ್ತಾರೆ: ‘‘ನಮಗೆ ಸ್ವಾಭಾವಿಕ ಮನೆಯಾದ ಈ ಭೂಮಿಯನ್ನು ನಾವು ಅದರ ಮೂಲಭೂತ ಅವಶ್ಯಕತೆಗಳಿಗಿಂತ ಹೆಚ್ಚು ಶೋಷಿಸುವಂತಿಲ್ಲ. ದೇವರ ಸೃಷ್ಟಿಯನ್ನು ಪ್ರೀತಿಸುವುದು ದೇವರನ್ನು ಪ್ರೀತಿಸುವ ಭಾಗವಾಗಿದೆ’’. 4. ವೈಯಕ್ತಿಕ ಖಿನ್ನತೆ ಮತ್ತು ಭರವಸೆಯ ಅಗತ್ಯ ಇಂದು, ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಯೇಸುವಿನ ಆಗಮನವು ಕೇವಲ ಜಾಗತಿಕ ಸಮಸ್ಯೆಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಹೋರಾಟಗಳಿಗೂ ಉತ್ತರ ನೀಡುತ್ತದೆ. ಕ್ರಿಸ್ಮಸ್ ಸಂದೇಶವು ಪ್ರತಿಯೊಬ್ಬರಿಗೂ ‘‘ನೀವು ದೇವರ ಪ್ರೀತಿಯ ಮಗು’’ ಎಂಬ ದೃಢೀಕರಣವನ್ನು ನೀಡುತ್ತದೆ. ನಮ್ಮ ಮೌಲ್ಯ ನಮ್ಮ ಸಾಧನೆಗಳಲ್ಲಿ ಅಥವಾ ಸಂಪತ್ತಿನಲ್ಲಿಲ್ಲ, ಆದರೆ ನಾವು ಯೇಸುವಿನ ಮೂಲಕ ದೇವರೊಂದಿಗೆ ಹೊಂದಿರುವ ಆಳವಾದ ಸಂಬಂಧದಲ್ಲಿದೆ. ಪ್ರಸ್ತುತ ವಿಶ್ವಗುರು ಲಿಯೋಘಿ XIIIರವರ ಪ್ರೇರಣೆ, ‘‘ಭರವಸೆಯು ಕ್ರೈಸ್ತ ಜೀವನದ ಸ್ತಂಭವಾಗಿದೆ. ಯೇಸುವಿನ ಜನನವು ಭವಿಷ್ಯದ ಬಗ್ಗೆ ನಾವು ಭಯಪಡಬೇಕಾಗಿಲ್ಲ, ಆದರೆ ಭರವಸೆಯಿಂದ ಎದುರು ನೋಡಬೇಕು ಎಂಬುದನ್ನು ಖಚಿತಪಡಿಸುತ್ತದೆ. ಆ ಭರವಸೆಯು ಕ್ರಿಸ್ತನಲ್ಲಿ ನೆಲೆಯಾಗಿದೆ’’. ಬೈಬಲ್ ಭರವಸೆಯ ಮೂಲವನ್ನು ಹೀಗೆ ವಿವರಿಸುತ್ತದೆ. ‘‘ವಿಶ್ವಾಸದಲ್ಲಿ ಸ್ಥಿರವಾಗಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನವನ್ನು ಹೊಂದಿದ್ದೇವೆ’’ (ರೋಮಾಪುರ 5:1). ಈ ಸಮಾಧಾನವೇ ನಿಜವಾದ ಆಂತರಿಕ ನೆಮ್ಮದಿ ಮತ್ತು ಖಿನ್ನತೆಯನ್ನು ಗೆಲ್ಲುವ ಶಕ್ತಿ. ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ. ಈ ಕ್ರಿಸ್ಮಸ್ ಹಬ್ಬವು ನಮಗೆ ಮರಳಿ ಗೋದಲಿಯ ಸರಳತೆಗೆ ಕರೆನೀಡುತ್ತದೆ. ನಾವು ಹೊಸ ವಸ್ತ್ರಗಳನ್ನು ಧರಿಸುವುದರ ಜೊತೆಗೆ, ನಮ್ಮ ಹೃದಯಕ್ಕೆ ದೀನತೆ ಮತ್ತು ಪ್ರೀತಿಯನ್ನು ಧರಿಸಿಕೊಳ್ಳಬೇಕು. ವರ್ತಮಾನದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ನಾವು ಪ್ರತಿಯೊಬ್ಬರೂ ಶಾಂತಿಯ ರಾಯಭಾರಿಗಳಾಗಿ, ಪ್ರಕೃತಿಯ ಪಾಲಕರಾಗಿ ಮತ್ತು ಬಡವರ ಸಹಾಯಕರಾಗಿ ಬಾಳಲು ಯೇಸುಕ್ರಿಸ್ತನ ಆದರ್ಶವನ್ನು ಅನುಸರಿಸಬೇಕು. ನಮ್ಮ ಬದುಕು ಮತ್ತು ಜಗತ್ತಿನ ಕತ್ತಲೆಯಲ್ಲೂ ಆತನು ಬೆಳಕಾಗಿ ಬರಲು ಸಿದ್ಧನಿದ್ದಾರೆ. ನಿಜವಾದ ಕ್ರಿಸ್ಮಸ್ನ ಶಾಂತಿ, ಭರವಸೆ ಮತ್ತು ಮರುಸಂಧಾನದ ಸಂದೇಶವು ನಿಮ್ಮೆಲ್ಲರೊಂದಿಗೆ ಇರಲಿ.
Vijay Hazare Trophy | ಸೂರ್ಯವಂಶಿ ಬ್ಯಾಟಿಂಗ್ ಕೌಶಲವನ್ನು ಸಚಿನ್ ಗೆ ಹೋಲಿಸಿದ ಶಶಿ ತರೂರ್!
ಹೊಸದಿಲ್ಲಿ: ಹದಿನಾಲ್ಕರ ಹರೆಯದ ಬ್ಯಾಟಿಂಗ್ ಕೌತುಕ ವೈಭವ್ ಸೂರ್ಯವಂಶಿ ಇದೀಗ ಭಾರತದ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದು. ಅದ್ಭುತ ಬ್ಯಾಟಿಂಗ್ ಕೌಶಲದಿಂದ ಅಭಿಮಾನಿಗಳು, ಪರಿಣತರು ಮತ್ತು ಮಾಜಿ ಆಟಗಾರರನ್ನು ಬೆರಗುಗೊಳಿಸಿರುವ ಪೋರ ದೇಶಿ ಕ್ರಿಕೆಟ್ ನಲ್ಲಿ ದಾಖಲೆ ಸೃಷ್ಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹಿರಿಯ ರಾಜಕಾರಣಿ ಮತ್ತು ಕ್ರಿಕೆಟ್ಪ್ರೇಮಿ ಶಶಿ ತರೂರ್ ಈ ಹದಿಹರೆಯದ ಪ್ರತಿಭೆಯ ಬಗೆಗಿನ ರೋಮಾಂಚನವನ್ನು ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಸೂರ್ಯವಂಶಿಯವರ ಇತ್ತೀಚಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಬಾರಿ ಹದಿನಾಲ್ಕು ವರ್ಷದ ಬಾಲಕ ಕ್ರಿಕೆಟ್ ನ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದರು. ಅದು ಸಚಿನ್ ತೆಂಡೂಲ್ಕರ್. ಅವರಿಂದ ಏನಾಯಿತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಯಾವುದಕ್ಕೆ ಕಾಯುತ್ತಿದ್ದೇವೆ? ಭಾರತಕ್ಕೆ ವೈಭವ್ ಸೂರ್ಯವಂಶಿ! ಎಂದು ತರೂರ್ ಹೇಳಿದ್ದಾರೆ. ವಿಜಯ್ ಹಝಾರೆ ಟ್ರೋಫಿ ಪ್ಲೇಟ್ ಲೀಗ್ ನಲ್ಲಿ ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಸಿಡಿಸಿ ಮತ್ತೆ ಸುದ್ದಿಯಾಗಿದ್ದರು. ಕಳೆದ ಸೀಸನ್ ನಲ್ಲಿ ಅಮೋಲ್ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಗಳಿಸಿದ್ದನ್ನು ಹೊರತುಪಡಿಸಿದರೆ ಇದು ಭಾರತದ ಲಿಸ್ಟ್ ಎ ಕ್ರಿಕೆಟ್ನಲ್ಲಿ ಎರಡನೇ ಅತಿವೇಗದ ಶತಕವಾಗಿದೆ. ಜಾಗತಿಕವಾಗಿ ಇದು ನಾಲ್ಕನೇ ಅತಿವೇಗದ ಶತಕವಾಗಿದೆ. ಯುವ ಕ್ರಿಕೆಟರ್ ಅಷ್ಟಕ್ಕೇ ಸೀಮಿತವಾಗದೇ 54 ಎಸೆತಗಳಲ್ಲಿ 150 ರನ್ಗಳ ಗಡಿ ದಾಟಿ, ಅಂತಿಮವಾಗಿ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟ್ ಆದರು. ಬಿಹಾರ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿದರೆ, ಅರುಣಾಚಲ ಪ್ರದೇಶ 177 ರನ್ಗಳಿಗೆ ಆಲೌಟ್ ಆಗಿ 397 ರನ್ಗಳ ಭಾರಿ ಅಂತರದ ಸೋಲೊಪ್ಪಿಕೊಂಡಿತು.
'ರಾಹುಲ್ V/S ಪ್ರಿಯಾಂಕಾ ಪರ್ವ'ಕ್ಕೆ ಕಾಂಗ್ರೆಸ್? ಶುರುವಾಯ್ತು ನಾಯಕತ್ವ ಬದಲಾವಣೆ ಕೂಗು
ಕಾಂಗ್ರೆಸ್ನ ಚುನಾವಣಾ ಸೋಲುಗಳಿಂದ ಹತಾಶರಾದ ಶಾಸಕರು, ಸಂಸದರು ರಾಹುಲ್ ಗಾಂಧಿಗೆ ಬದಲಾಗಿ ಪ್ರಿಯಾಂಕಾ ವಾದ್ರಾ ಅವರಲ್ಲಿ ಪರ್ಯಾಯ ನಾಯಕತ್ವವನ್ನು ಕಾಣುತ್ತಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ದಿಲ್ಲಿಯ ನಾಯಕರು ಪ್ರಿಯಾಂಕಾ ಅವರನ್ನು ಎಐಸಿಸಿ ಅಧ್ಯಕ್ಷೆಯನ್ನಾಗಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಒಡಿಶಾ ಶಾಸಕ ಮೊಹಮ್ಮದ್ ಮೊಕ್ವಿಮ್ ಅವರ ಪತ್ರ ಈ ಚರ್ಚೆಗೆ ಕಾರಣವಾಗಿದೆ.
ಕಳೆದ ಜುಲೈನಲ್ಲಿ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ನಡೆದಿದ್ದ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಅವರ ಹತ್ಯೆಯ ಬಗ್ಗೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಹತ್ಯೆಗೂ ಕೆಲವೇ ಗಂಟೆಗಳ ಮೊದಲು ತಾವು ಇಸ್ಮಾಯಿಲ್ ಹನಿಯೆ ಅವರನ್ನು ಭೇಟಿ ಮಾಡಿದ್ದಾಗಿ ಗಡ್ಕರಿ ತಿಳಿಸಿದ್ದಾರೆ. ಇರಾನ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಹನಿಯೆ ಅವರನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದ ನಿತಿನ್ ಗಡ್ಕರಿ, ಕೆಲವೇ ಗಂಟೆಗಳ ಬಳಿಕ ಅವರ ಹತ್ಯೆಯ ವಿಚಾರ ತಿಳಿದು ಆಘಾತಗೊಂಡಿದ್ದರು.
ಕರೋಲ್ ಹಾಡುತ್ತಿದ್ದ ಮಕ್ಕಳ ಮೇಲೆ ದಾಳಿಯ ಸಮರ್ಥನೆ; ಬಿಜೆಪಿ ಮುಖಂಡನ ವಿರುದ್ಧ ಪೋಷಕರ ಪ್ರತಿಭಟನೆ
ಪಾಲಕ್ಕಾಡ್: ಕ್ರಿಸ್ಮಸ್ ಕರೋಲ್ ಹಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ದಾಳಿ ನಡೆದ ಕ್ರಮ ಒಂದೆಡೆ ಕೇರಳದಲ್ಲಿ ರಾಜಕೀಯ ಪ್ರತಿಭಟನೆಗಳಿಗೆ ಕಾರಣವಾಗಿದ್ದರೆ, ಸಾರ್ವನಿಕರು ಕೂಡಾ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಮುಖಂಡ ಸಿ.ಕೃಷ್ಣಕುಮಾರ್ ಅವರ ವಿರುದ್ಧ ಮಕ್ಕಳ ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕರೋಲ್ ತಂಡ ಅಪರಾಧಿಗಳ ಗುಂಪಾಗಿದ್ದು, ಸದಸ್ಯರು ಪಾನಮತ್ತರಾಗಿದ್ದರು ಎಂದು ಕೃಷ್ಣಕುಮಾರ್ ಹೇಳಿಕೆ ನೀಡಿದ್ದರು. ಸಿಪಿಎಂ ಕ್ಷೇತ್ರ ಸಮಿತಿ ಕಚೇರಿಯಿಂದ ಈ ತಂಡ ಬ್ಯಾಂಡ್ಸೆಟ್ ಆರಂಭಿಸಿತ್ತು. ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕರೋಲ್ ನಡೆಸುತ್ತಿದ್ದರು. ಈ ಘಟನೆ ನಡೆದಾಗ ತಂಡದಲ್ಲಿ 10-15 ವರ್ಷ ವಯಸ್ಸಿನ ಮಕ್ಕಳು ಮಾತ್ರ ಇದ್ದರು. ಯಾವ ವಯಸ್ಕರೂ ಇರಲಿಲ್ಲ ಎಂದು ಪೋಷಕರು ಬುಧವಾರ ಹೇಳಿಕೆ ನೀಡಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರಿಗೆ ತೊಂದರೆಯಾಗಿದೆ. ಕೃಷ್ಣಕುಮಾರ್ ಹೇಳಿಕೆ ಮತ್ತೂ ಕಳವಳಕಾರಿ. ಈ ಹೇಳಿಕೆಯ ಬಳಿಕ ಮಕ್ಕಳು ಅನುಭವಿಸಿದ ಮಾನಸಿಕ ಉದ್ವಿಗ್ನತೆ ಕುರಿತು ದೂರು ನೀಡಲು ಕೂಡಾ ಯೋಚಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಈ ಘಟನೆಯನ್ನು ಖಂಡಿಸುವ ಸಲುವಾಗಿ ಜಿಲ್ಲೆಯ ಎಲ್ಲ 2500 ಘಟಕಗಳಲ್ಲಿ ಕೂಡ ಕರೋಲ್ ನಡೆಸಲಾಗುವುದು ಎಂದು ಡಿವೈಎಫ್ಐ ಹೇಳಿಕೆ ನೀಡಿದೆ. ಕ್ರಿಶ್ಚಿಯನ್ ಸಮುದಾಯದ ಬೆಂಬಲ ಗಳಿಸುವಲ್ಲಿ ವಿಫಲವಾಗಿರುವುದಕ್ಕೆ ಪ್ರತೀಕಾರವಾಗಿ ಬಿಜೆಪಿ ಈ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಇದಾಗಿದೆ ಎಂದು ಆಪಾದಿಸಿದೆ. ಘಟನೆಯ ಸಂಬಂಧ ಆರೆಸ್ಸೆಸ್ ಕಾರ್ಯಕರ್ತ ಅಶ್ವಿನ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
1963 ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆಗಿನ ಪ್ರಧಾನಿ ನೆಹರೂ ಆರೆಸ್ಸಸನ್ನು ಆಹ್ವಾನಿಸಿದ್ದರೆ?
ಆರೆಸ್ಸೆಸ್ 100 ವರ್ಷ ಪೂರೈಸಿದ ಪ್ರಯುಕ್ತ ಈ ಸಂಘಟನೆಯ ಪತ್ರಿಕೆಗಳ ಲೇಖನಗಳಲ್ಲಿ, ನಾಯಕರ ಭಾಷಣಗಳಲ್ಲಿ ಈ ವಿಷಯವನ್ನು ಮತ್ತೆ ಮತ್ತೇ ಹೇಳಲಾಗುತ್ತಿದೆ. 1962 ರಲ್ಲಿ ಚೀನಾದೊಡನೆ ನಡೆದ ಯುದ್ಧದಲ್ಲಿ ಭಾರತ ಸೋತು ಹೋಗಿ ನೆಹರೂ ಹತಾಶರಾಗಿದ್ದರು ಇಂತಹ ವಿಷಮ ಪರಿಸ್ಥಿತಿಯಲ್ಲಿ 1963ರ ಗಣರಾಜ್ಯೋತ್ಸವ ಪಾರಂಪರಿಕ ಪರೇಡ್ ನಲ್ಲಿ ಭಾಗವಹಿಸಲು ನೆಹರೂ ಆರೆಸ್ಸೆಸ್ ವಿನಂತಿಸಿಕೊಂಡರು. ಉಜ್ವಲ ದೇಶಭಕ್ತಿಯನ್ನು ಬೆಳೆಸುವ ಆರೆಸ್ಸೆಸ್ ಈ ಮನವಿಯನ್ನು ಅಂಗೀಕರಿಸಿತು. ಗಣರಾಜ್ಯೋತ್ಸವದಲ್ಲಿ ಅಧಿಕೃತವಾಗಿ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿ ರಾಷ್ಟ್ರ ನಿಷ್ಠೆಯನ್ನು ಪ್ರದರ್ಶಿಸಿದರು. ಹಾಗಾಗಿ ಸ್ವತ: ಪ್ರಧಾನಿ ನೆಹರೂರವರೇ ಆರೆಸ್ಸೆಸ್ ರಾಷ್ಟ್ರ ಭಕ್ತಿಯನ್ನು ಮಾನ್ಯ ಮಾಡಿದ್ದರು ಎಂದು ಪ್ರಚಾರ ಮಾಡುತ್ತಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಯವರು ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೆೇಟಿಯಿತ್ತಾಗ ಭಾರೀ ವಿರೋಧ ವ್ಯಕ್ತವಾಯಿತು. ಆಗ ಕೂಡ ಆರೆಸ್ಸಸ್ ತನ್ನ ರಾಷ್ಟ್ರಭಕ್ತಿಯನ್ನು ಸ್ವತ: ನೆಹರೂವವರೇ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡಿತ್ತು. ‘‘1962ರ ಭಾರತ-ಚೀನಾ ಯುದ್ಧ್ದದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಲ್ಲಿಸಿದ ಸೇವೆಗಳಿಗೆ ಮನಸೋತು ಆಗಿನ ಪ್ರಧಾನಿ ನೆಹರೂ ಅವರು 1963 ರ ಗಣರಾಜ್ಯೋತ್ಸವದ ವಿಶೇಷ ಪಥ ಸಂಚಲನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಆಹ್ವಾನಿಸಿದ್ದರು’’ (ವಿಕ್ರಮ ವಾರ ಪತ್ರಿಕೆ- ಟಿ. ದೇವಿದಾಸ್ 24-8-2025) ‘‘ಪರೇಡ್ನಲ್ಲಿ ಭಾಗವಹಿಸಬೇಕೆಂದು ಕೇವಲ ಒಂದು ವಾರವಿದ್ದಾಗ ದಿಲ್ಲಿಯ ಸಂಘ ಕಾರ್ಯಾಲಯಕ್ಕೆ ಕೇಂದ್ರ ಸರಕಾರದ ಕಡೆಯಿಂದ ಆಮಂತ್ರಣ ನೀಡಲಾಗಿತ್ತು’’ (ದು.ಗ.ಲಕ್ಷ್ಮಣ ಹೊಸ ದಿಗಂತ ದಿನ ಪತ್ರಿಕೆ 8-12-2025) ‘‘ಸಂಘದ ರಾಷ್ಟ್ರೀಯವಾದಿ ಕಾರ್ಯದ ಪ್ರಭಾವ ಎಷ್ಟಿತ್ತೆೆಂದರೆ ಸಂಘದ ಕುರಿತು ದ್ವೇಷ ಭಾವನೆಯನ್ನೇ ಹೊಂದಿದ ನೆಹರೂರವರು ಸಹ ತಮ್ಮ ಭಾವನೆ ಬದಲಿಸಿಕೊಳ್ಳಬೇಕಾಯಿತು. 1963ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಗೆ ಪಥ ಸಂಚಲನ ನಡೆಸಲು ಅವಕಾಶ ನೀಡಿದರು’’ (ಸಂತೋಷ್ ಜಿ. ಆರ್. ಪುಟ 103 ಉತ್ಥಾನ ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ವಿಶೇಷಾಂಕ ಜನವರಿ 2025) ಆದರೆ ವಾಸ್ತವವೇನು?: ಗಣರಾಜ್ಯೋತ್ಸವದ ದಿನದಂದು ದಿಲ್ಲಿಯಲ್ಲಿ ಮಾಮೂಲಾಗಿ ಸಶಸ್ತ್ರ ಪಡೆಗಳು ಭಾಗವಹಿಸುವ ಅದ್ದೂರಿ ಗಣರಾಜ್ಯೋತ್ಸವ ಪರೇಡ್ ಮತ್ತು ದೇಶವನ್ನು ಉದ್ದೇಶಿಸಿ ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿಗಳು ಭಾಷಣ ಮಾಡುವ ಕಾರ್ಯಕ್ರಮಗಳು ಪ್ರಸಿದ್ಧ್ದವಾಗಿವೆೆ. ಆದರೆ 1963 ರಲ್ಲಿ ಚೀನಾದೊಡನೆ ನಡೆದ ಯುದ್ಧ್ದದ ಕಾರಣ ಬಹುತೇಕ ಪಡೆಗಳು ಗಡಿ ಪ್ರದೇಶಗಳಿಗೆ ರವಾನೆಯಾಗಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ಗಣರಾಜ್ಯೋತ್ಸವ ಪರೇಡನ್ನು ರದ್ದು ಪಡಿಸಬೇಕೆಂಬುದು ರಕ್ಷಣಾ ಇಲಾಖೆಯ ಇಂಗಿತವಾಗಿತ್ತು. ಆದರೆ ಪ್ರಧಾನಮಂತ್ರಿ ನೆಹರೂ ಆಗಿನ ರಕ್ಷಣಾ ಮಂತ್ರಿ ವೈ. ಬಿ. ಚವ್ಹಾಣರಿಗೆ ದಿನಾಂಕ 10-12-1962 ರಂದು ದೀರ್ಘ ಪತ್ರವನ್ನು ಬರೆದು ಆ ವರ್ಷದ ಗಣರಾಜ್ಯೋತ್ಸವ ಪರೇಡ್ ಬದಲಿಗೆ ಎಲ್ಲಾ ನಾಗರಿಕರೂ ಭಾಗವಹಿಸುವ ಮೆರವಣಿಗೆಯ ಮೂಲಕ ಆಚರಿಸಬೇಕೆಂದು ಸಲಹೆ ನೀಡಿದರು. ಈ ಮೆರವಣಿಗೆಯಲ್ಲಿ ದಿಲ್ಲಿಯಲ್ಲಿರುವ ಸೈನ್ಯದ ಕೆಲವು ತುಕಡಿಗಳಲ್ಲದೆ ನಾಗರಿಕರು, ಹೋಮ್ ಗಾರ್ಡ್ಸ್, ಎನ್. ಸಿ. ಸಿ. ಕೆಡೆಟ್ಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳ ಮತ್ತು ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸಬಹುದು. ಅವರಿಗೆಲ್ಲ ತರಬೆೇತಿ ಇಲ್ಲದಿರಬಹುದು. ಆದರೆ ಈ ನಡೆಯು ಅದರಲ್ಲಿ ಭಾಗವಹಿಸಿದವರ ಮೇಲೆ ಮತ್ತು ಅದನ್ನು ನೋಡುವವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಂಬ ನಂಬಿಕೆಯಿದೆ ನನಗೆ ಎಂದರು ನೆಹರೂ ಈ ಪತ್ರದಲ್ಲಿ. ಮರು ದಿನ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ‘‘ಈ ಪರೇಡನ್ನು ನಾವು ಸೈನಿಕ ಕಾರ್ಯಕ್ರಮಕ್ಕೆ ಬದಲಾಗಿ ಒಂದು ಸಾರ್ವಜನಿಕ ನಾಗರಿಕ ಕಾರ್ಯಕ್ರಮವಾಗಿ ನಡೆಸುತ್ತೇವೆ. ಹಾಗಾಗಿ ಸಂಸತ್ ಸದಸ್ಯರು ಗುಂಪಾಗಿ ಭಾಗವಹಿಸಬೇಕು’’ ಎಂದರು. ಆ ದಿನ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಒಂದು ಲಕ್ಷ ಸಾರ್ವಜನಿಕರು ಭಾಗವಹಿಸಿದರು. ಸಂಸತ್ ಸದಸ್ಯರು ಮತ್ತು ತನ್ನ ಮಂತ್ರಿ ಮಂಡಲದ ಸದಸ್ಯರೊಂದಿಗೆ ನೆಹರೂ ಈ ಮೆರವಣಿಗೆಯ ಮುಂಚೂಣಿಯಲ್ಲಿದ್ದರು ಎಂದಿತು ಟೈಮ್ಸ್ ಆಫ್ ಇಂಡಿಯಾದ ವರದಿ. ಈ ಮೆರವಣಿಗೆಯ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ 1963ರ ಜನವರಿ 28ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಚೀನೀ ದಾಳಿ ಮತ್ತು ದ್ರೋಹದ ವಿರುದ್ಧ್ದ ಮತ್ತು ಭಾರತದ ಗೌರವ ಮತ್ತು ಏಕ್ಯತೆಯ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಒಂದು ಲಕ್ಷ ಜನರು ಭಾಗವಹಿಸಿದರು. ಆ ವರ್ಷ ಚೀನೀ ದಾಳಿಯಿಂದ ದೇಶವನ್ನು ರಕ್ಷಿಸಲು ಹೆಚ್ಚಿನ ಪಡೆಗಳು ಗಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಹಾಗಾಗಿ ಪರೇಡ್ನಲ್ಲಿ ಸಶಸ್ತ್ರ ಪಡೆಗಳ ಸಂಖ್ಯೆ ಕಡಿಮೆಯಿತ್ತು. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಕಾರಣ ಮತ್ತು ದೇಶದ ಆರ್ಥಿಕತೆಗೆ ಹೊರೆಯಾಗದಂತೆ ಮಿತವ್ಯಯ ಪಾಲಿಸಲು ಈ ನಾಗರಿಕ ಮೆರವಣಿಗೆಯಲ್ಲಿ ಯಾವುದೇ ಆಡಂಬರದ (ವರ್ಣರಂಜಿತ)ಬಹಿರಂಗ ಪ್ರದರ್ಶನಗಳಿರಲಿಲ್ಲ ಎಂದು ವರದಿ ಮಾಡಲಾಗಿತ್ತು. ಆ ದಿನಗಳಲ್ಲಿ ಗಾಂಧಿ ಹತ್ಯೆಯ ಕಳಂಕದಿಂದ ತತ್ತರಿಸಿದ್ದ ಆರೆಸ್ಸೆಸ್ ಹೇಗಾದರೂ ಮಾಡಿ ಸಾಮಾಜಿಕ ಮಾನ್ಯತೆಯನ್ನು ಗಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಹಾಗಾಗಿ ಆರೆಸ್ಸೆಸ್ ಕಾರ್ಯಕರ್ತರು ಸಮವಸ್ತ್ರಧಾರಿಗಳಾಗಿ ಭಾರತೀಯ ಮಜ್ದೂರ್ ಸಂಘದ ಸದಸ್ಯರಾಗಿ ಭಾಗವಹಿಸಿರಬಹುದು. ಆದರೆ ಇದರಲ್ಲಿ ಆರೆಸ್ಸೆಸ್ ವಿಶೇಷ ಪಾತ್ರವೇನೂ ಇರಲಿಲ್ಲ. ಗುಂಪಿನೊಡನೆ ಗೋವಿಂದ ಎಂಬಂತೆ ಆ ಭಾರೀ ಜನಪ್ರವಾಹದ ನಡುವೆ ಹೆಜ್ಜೆ ಹಾಕಿದರು ಆರೆಸ್ಸೆಸ್ ಕಾರ್ಯಕರ್ತರು. ಹಾಗಾಗಿ ಯಾವುದೇ ರಾಷ್ಟ್ರೀಯ ಪತ್ರಿಕೆ ಸಂಘದ ಭಾಗವಹಿಸುವಿಕೆಯ ಬಗ್ಗೆ ವಿಶೇಷ ವರದಿಯನ್ನೇನೂ ಮಾಡಲಿಲ್ಲ. ಹಿಂದೂಸ್ಥಾನ ಎನ್ನುವ ಹಿಂದಿ ದೈನಿಕ ಜನವರಿ 28ರ ಸಂಚಿಕೆಯಲ್ಲಿ ಒಂದು ಪುಟವಿಡೀ ಈ ಮೆರವಣಿಗೆಯ ಪೋಟೊಗಳನ್ನು ಪ್ರಕಟಿಸಿತ್ತು. ಅದರಲ್ಲಿ ಆರೆಸ್ಸೆಸ್ನ ಒಂದಷ್ಟು ಕಾರ್ಯಕರ್ತರು ಭಾಗವಹಿಸಿದ ಪೋಟೊ ಪ್ರಕಟವಾಗಿತ್ತು. ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಪೋಟೊದಲ್ಲಿ ಆರೆಸ್ಸಸ್ ಸನಾತನ ಹಿಂದೂ ಧರ್ಮದ ಪ್ರತೀಕ ಎಂದೆಲ್ಲ ಬಿಂಬಿಸುವ ಕೇಸರಿ ಧ್ವಜವನ್ನು ಹಿಡಿದಿರಲಿಲ್ಲ. ಅದು ರಾಷ್ಟ್ರ ಧ್ವಜವನ್ನು ಹಿಡಿಯಬೇಕಾದ ಅನಿವಾರ್ಯತೆಯಿತ್ತು. ಆರೆಸ್ಸ್ಸೆಸ್ನ ಮುಖವಾಣಿ ಆರ್ಗನೈಸರ್ ವಾರಪತ್ರಿಕೆಯು 1963 ರ ಫೆಬ್ರವರಿ 4ರ ಸಂಚಿಕೆಯಲ್ಲಿ, ಸಮವಸ್ತ್ರ ಧರಿಸಿದ ಎರಡು ಸಾವಿರ ಸ್ವಯಂ ಸೇವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಮತ್ತು ಅದು ದಿಲ್ಲಿ ನಾಗರಿಕರ ಗುಂಪಿನ ಮುಖ್ಯ ಅಂಗವಾಗಿತ್ತು ಎಂದಿತು. ಆರೆಸ್ಸೆಸ್ನ ಈ ಮೆರವಣಿಗೆಯಲ್ಲಿ ಭಾಗವಹಿಸುವುದರ ಕುರಿತು ಹಲವು ಕಾಂಗ್ರೆಸಿಗರು ಆಕ್ಷೇಪಿಸಿದರು. ಅದಕ್ಕೆ ಉತ್ತರಿಸುತ್ತ ನೆಹರೂ ಹೀಗೆಂದಿದ್ದರು ‘‘ಆರೆಸ್ಸೆಸ್ನವರು ಘಾಝಿಯಾಬಾದ್, ಮೀರತ್ ಮತ್ತು ಇತರ ಸ್ಥಳಗಳಿಂದ ಸಮವಸ್ತ್ರಧಾರಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆಂದು ಮೆರವಣಿಗೆಯ ಮುನ್ನಾ ದಿನ ನನಗೆ ಕೆಲವು ಕಾಂಗ್ರೆಸಿಗರು ತಿಳಿಸಿದರು. ನಾನು ಆರೆಸ್ಸೆಸ್ನವರು ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ. ಯಾರನ್ನೂ ನಿರ್ಬಂಧಿಸುವುದು ಸರಿಯಲ್ಲ. ಯಾವುದೇ ಖಾಸಗಿ ವಾದ್ಯ ಮಾತ್ರ ಬೇಡವೆಂದೆ. ಇನ್ನುಳಿದಂತೆ ಯಾವುದೇ ಉಡುಪು ಅಥವಾ ಸಮವಸ್ತ್ರ ಧರಿಸಿ ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ’’ ಹಾಗಾಗಿ ಆರೆಸ್ಸ್ಸೆಸ್ ಭಾಗವಹಿಸಿದ್ದ ಮೆರವಣಿಗೆ ಹಲವಾರು ಸಂಘ ಸಂಸ್ಥೆಗಳು ಭಾಗವಹಿಸಿದ್ದ್ದ ಒಂದು ಬೃಹತ್ ನಾಗರಿಕ ನಡೆಯಾಗಿತ್ತು. 1963ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಪ್ರಧಾನಿ ನೆಹರೂ ಆರೆಸ್ಸೆಸ್ನ ಸರಸಂಘ ಚಾಲಕ ಎಂ. ಎಸ್. ಗೋಳ್ವಾಲ್ಕರವರನ್ನು ಆಹ್ವಾನಿಸಿದ್ದರು ಮತ್ತು ಅದಕ್ಕೆ ಸಮ್ಮತಿಸಿ ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿದ್ದರು ಎನ್ನುವುದೇ ಆರೆಸ್ಸೆಸ್ನ ಸುಳ್ಳಿನ ಕಾರ್ಖಾನೆಯಲ್ಲಿ ತಯಾರಾದ ‘ದೇಶಭಕ್ತ’ ಎಂಬ ಪ್ಯಾಕೇಟಿನೊಳಗೆ ಮಡಚಿಟ್ಟ ಅಪ್ಪಟ ಬೊಗಳೆ. (ಆಧಾರ: ಧಿರೇಂದ್ರ ಕೆ. ಝಾ., ದಿ. ಕಾರವಾನ ಇಂಗ್ಲಿಷ್ ಮಾಸ ಪತ್ರಿಕೆ, ಫೆಬ್ರವರಿ 2023)
ಭಾಷೆ - ಧರ್ಮೋನ್ಮಾದಕ್ಕೆ ಜೀವ ಬಲಿ ಕೊಟ್ಟ ಕೇರಳ- ಬಾಂಗ್ಲಾ: ಉದೈಫ್ ಅನಕ್ಕಲ್ ಬರಹ
ಭಾರತದ ಕೇರಳ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳು ಈಚೆಗೆ ಸಂಭವಿಸಿವೆ. ಈ ಎರಡೂ ಘಟನೆಗಳಲ್ಲಿ ಮೃತಪಟ್ಟವರು ಒಂದೇ ವಯಸ್ಸಿನವರು, ಯುವಕರು ಹಾಗೂ ಕಡಿಮೆ ವೇತನಕ್ಕೆ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಮನಕಲಕುವ, ದಾರುಣ ಘಟನೆ ಹಾಗೂ ಅದರ ಹಿನ್ನೆಲೆಯ ಬಗ್ಗೆ ಹವ್ಯಾಸಿ ಬರಹಗಾರ ಉದೈಫ್ ಅನಕ್ಕಲ್, ಕಾಸರಗೋಡು ಅವರ ವಿಶೇಷ ಬರಹ ಇಲ್ಲಿದೆ. ಎರಡು
ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ. ನನ್ನ ಹಿರಿಯ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೊಂದು ಪ್ರಶ್ನೆ ಹಾಕಿದರು: ನಮ್ಮ ದೇಶದಲ್ಲೇಕೆ ಇಷ್ಟೊಂದು ಹಿಂಸೆ ನಡೆಯುತ್ತಿದೆ? ಅವರ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡಿದೆ. ಅವರು ಮತ್ತೆ ಅದನ್ನು ನೆನಪಿಸುತ್ತಾರೋ ಅಥವಾ ಅವರೇ ಉತ್ತರ ಕಂಡುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಾನಂತೂ ಇದರಿಂದ ಹೊರಬರಲಾಗಲಿಲ್ಲ. ಒಂದಷ್ಟು ಯೋಚನೆಗಳು ಕಾಡುತ್ತಲೇ ಇರುತ್ತವೆ. ಜೊತೆಗೇ ಕರ್ನಾಟಕದಲ್ಲಿ ದ್ವೇಷಭಾಷಣವನ್ನು ನಿಯಂತ್ರಿಸುವ ಒಂದು ಕಾಯ್ದೆ ಶಾಸನಸಭೆಯಲ್ಲಿ ಸ್ವೀಕೃತವಾಗಿದೆ. ಅದಿನ್ನೂ ರಾಜ್ಯಪಾಲರ ಅಂಕಿತ ಪಡೆದಿಲ್ಲ. ಮಸೂದೆ ಅಂಗೀಕಾರವಾಗುವ ಮೊದಲು ಮತ್ತು ಆನಂತರ ಭಾರತೀಯ ಜನತಾ ಪಕ್ಷದ ಒಂದಷ್ಟು ಧುರೀಣರು ಮತ್ತು ಅವರ ಶ್ರದ್ಧಾಳುಗಳು ಈ ಮಸೂದೆಯ ವಿರುದ್ಧ ಕಟುವಾದ ಟೀಕೆಯನ್ನು ಮಾಡುತ್ತಿದ್ದಾರೆ. ಇದು ತಮ್ಮನ್ನು ಗುರಿಯಾಗಿರಿಸಿದ ಮಸೂದೆಯೆಂದು ಅವರು ಹೆಗಲಿನಲ್ಲಿ ಕುಂಬಳಕಾಯಿಯನ್ನು ಹೊತ್ತು ಹೇಳುತ್ತಿರುವಾಗ ಅವರ ಕುರಿತು ನಗು ಮತ್ತು ಅನುಕಂಪದ ಹೊರತಾಗಿ ಇನ್ನೇನು ಹುಟ್ಟೀತು? ಯುದ್ಧ, ದಂಗೆ ಮುಂತಾದ ಸಂದರ್ಭಗಳಲ್ಲಿ ಹಿಂಸೆ ಸಹಜವೆಂಬಂತೆ ಕಾಣುವ, ಕಾಣಿಸಬಲ್ಲ ಅಥವಾ ಅಪೇಕ್ಷಿತ, ಅಗತ್ಯ. ಅನಿವಾರ್ಯವಲ್ಲ. ಅಹಿಂಸೆಯ ಎಲ್ಲ ಕಾಲದಲ್ಲೂ ಹಿಂಸೆ ತಾಂಡವವಾಡಿದೆ. ಅದು ಬುದ್ಧನ, ಮಹಾವೀರನ, ಯೇಸುವಿನ, ಕಾಲ-ದೇಶದಲ್ಲೂ ಅಷ್ಟೇ. ಶರಣ ಚಳವಳಿಯ ಕಾಲದಲ್ಲೂ ಅಷ್ಟೇ. ಗಾಂಧಿ ಅಹಿಂಸಾ ಚಳವಳಿಯನ್ನು ನಡೆಸುತ್ತಿದ್ದಾಗಲೂ ಕೆಲವರು ಹಿಂಸೆಯನ್ನು ವೈಭವೀಕರಿಸುತ್ತಲೇ ಹೋದರು. ಭಾರತ-ಪಾಕಿಸ್ತಾನಗಳ ವಿಭಜನೆ ಕಾಲದಲ್ಲಿ ಮಹತ್ತರ ಹಿಂಸೆ ನಡೆಯಿತು. ಆದರೂ ಸ್ವಾತಂತ್ರ್ಯಾನಂತರ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಬಹುದೆಂಬುದನ್ನು ಆ ತಲೆಮಾರಿನ ನಾಯಕರು ಕಂಡುಕೊಂಡಿದ್ದರಿಂದ ಭಾರತದ ಮೊದಲ ಕೆಲವು ದಶಕಗಳು ಸ್ವಲ್ಪ ಮಟ್ಟಿಗೆ ಗಾಂಧಿಮಾರ್ಗದಲ್ಲಿ ನಡೆದವು. ಆದರೆ ಆನಂತರದ ದಶಕಗಳು ಇಂದಿರಾ, ರಾಜೀವ್ ಹತ್ಯೆಗಳೂ ಸೇರಿದಂತೆ ಹಲವು ರಾಜಕೀಯ ಹತ್ಯೆಗಳನ್ನು ಕಂಡವು; ಈ ದೇಶದ ಕಾಹಿಲೆಗಳ ಪರ್ವಗಳಾಗಿ ಗುರುತಿಸಿಕೊಂಡವು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆದಷ್ಟು ಹಿಂಸೆ ದೈನಂದಿನ ಜೀವನದಲ್ಲಿ ಹಿಂದೆಂದೂ ನಡೆದಿರಲಾರದು. ‘ದೇಶ’ವೆಂಬ ಪದವು ಕೈತಪ್ಪಿ ‘ದ್ವೇಷ’ವೆಂಬುದೇ ಕೆಲವು ಮಂದಿಗೆ ಕೈತುತ್ತಾಗಿದೆ. ಇದರಿಂದಾಗಿ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲವೆಂದು ಅವರಿಗೂ ಗೊತ್ತಿದೆ. ಆದರೆ ಅವರ ಉದ್ದೇಶವೇ ಅದು: ದ್ವೇಷದ ಮೂಲಕ ಸಮಾಜ ನುಚ್ಚುನೂರಾಗುವುದು; ಮತ್ತು ಈ ದ್ವೇಷದ ನಡುವೆ ತಾವು ಅಧಿಕಾರದಲ್ಲಿ ಹಾಯಾಗಿರುವುದು. ಹಿಂಸೆಯೆಂದರೆ ದೈಹಿಕಹಿಂಸೆ, ಸಾವು-ನೋವು ಇವೇ ಆಗಬೇಕಿಲ್ಲವೆಂಬುದನ್ನು ಇತಿಹಾಸ ಹೇಳಿದೆ. ಜನ್ನನ ಯಶೋಧರ ಚರಿತೆ ಮಾನಸಿಕ ಗ್ರಹಿಕೆಯ ಹಿಂಸೆಗೆ ಒಳಗಾದವರ ಕಥೆ. ಶಾಂತಿಯ ಬದಲು, ದ್ವೇಷ, ಒಗ್ಗಟ್ಟಿನ ಬದಲು ಬಿಕ್ಕಟ್ಟು ಇವನ್ನು ಮತ್ತು ಇವುಗಳ ಮೂಲಕ ಶಾಶ್ವತ ಅಧಿಕಾರವನ್ನು ಸ್ಥಾಪಿಸಲು ದ್ವೇಷಕಾರಣಿಕರು ದ್ವೇಷದ, ಹಿಂಸೆಯ ಮಾತನ್ನೇ ಆಡಬೇಕಿಲ್ಲವೆಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕ ಭಾಗವತರು ಸಾಬೀತುಪಡಿಸಿದ್ದಾರೆ. ಅವರು ಎಲ್ಲೂ ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎಂದು ಹೇಳಿದ್ದೇ ಇಲ್ಲ. ಆದರೆ ಒಂದು ಹನಿ ರಕ್ತವೂ ಸೋರದಂತೆ ಸಾಮಾಜಿಕ ಸಾಮರಸ್ಯದ ಕತ್ತನ್ನು ಕುಯ್ಯುವುದರಲ್ಲಿ ತನ್ನ ನಿಸ್ಸೀಮತನವನ್ನು ಸಾರಿ ತೋರಿದ್ದಾರೆ. ಈಗ ಅವರು ಬಿಚ್ಚಿಟ್ಟಿರುವುದು ಕಳೆದ ನೂರು ವರ್ಷಗಳಿಂದ ಬಗಲೊಳಗೆ ಬಚ್ಚಿ ಟ್ಟಿದ್ದ ಹಿಂದೂರಾಷ್ಟ್ರದ ಕಲ್ಪನೆಯನ್ನು. ಅದಕ್ಕೆ ಸಾಂವಿಧಾನಿಕ ಅನುಮೋದನೆಯು ಅಗತ್ಯವಿಲ್ಲವೆಂದಿದ್ದಾರೆ. ಇಂತಹ ತರ್ಕಗಳು ಆರೆಸ್ಸೆಸ್ಗೆ ಸಹಜ. ಚಿವುಟುತ್ತಲೇ ಸಮಾಧಾನ ಮಾಡುವ ತಂತ್ರವನ್ನು ಅವರು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ. ರಾಮಾಯಣದ ಶ್ರೀರಾಮನ ಹೆಸರು ಹೇಳುತ್ತಲೇ ಮಾತು ಹೇಗಿರಬೇಕು ಎಂಬುದರ ಕುರಿತು ವಾಲ್ಮೀಕಿಯ ಕಲ್ಪನೆಯ ರಾಮನ ‘ಅನುದ್ವೇಗಕರಂ ವಾಕ್ಯಂ’ನ್ನು ಧಿಕ್ಕರಿಸಿ ‘ಉದ್ವೇಗಕರಂ ವಾಕ್ಯಂ’ ಎಂಬ ಹೊಸ ಭಾಷ್ಯದಲ್ಲಿ. ರಾಮರಾಜ್ಯದ ಆದರ್ಶವನ್ನು ಎಲ್ಲ ರೀತಿಯಲ್ಲೂ ಸದೆಬಡಿಯುವ ಗುಣ ಸಿದ್ಧಿಸಿದ್ದು ರಾಷ್ಟ್ರೀಯತೆಯ ಮತ್ತು ರಾಷ್ಟ್ರೀಯ ಸಂಘಟನೆಯ ಹೆಸರಿನಲ್ಲಿ; ಸಮಾಜವನ್ನು, ರಾಷ್ಟ್ರವನ್ನು ಒಡೆಯುವುದರಲ್ಲಿ; ದ್ವೇಷದ ವಿಷವನ್ನು ಹರಡುವುದರಲ್ಲಿ. ಮುದ್ರಾಮಂಜೂಷದ ಅಮಾತ್ಯರಾಕ್ಷಸನ ವಿಷಕನ್ಯೆಯ ತಂತ್ರ ಭಾಗವತರ ತಂತ್ರದೆದುರು ಏನೂ ಅಲ್ಲ. ಅವರ ಹೇಳಿಕೆ ಬಂದಿರುವುದು ಕ್ರಿಸ್ಮಸ್, ಬ್ರಿಟಿಷ್ ಕ್ಯಾಲೆಂಡರಿನ ಹೊಸವರ್ಷದ ಕಾಲದಲ್ಲಿ. ಈ ಸಂದರ್ಭಕ್ಕೆ ಭಾಗವತರು ಹೊಸ ಮಂತ್ರ ಸೃಷ್ಟಿಸಿದ್ದಾರೆ: ‘ಸಂಘ ಮುಸ್ಲಿಮ್ ವಿರೋಧಿ ಅಲ್ಲ’ವೆಂದು ಹೇಳಿದ್ದಾರೆ. ಕ್ರೈಸ್ತರನ್ನು ಉದ್ದೇಶಪೂರ್ವಕವಾಗಿಯೇ ಉಲ್ಲೇಖಿಸಿಲ್ಲ. ಏಕೆಂದರೆ ಈ ಸಂದರ್ಭ ಅಂತಹದ್ದು. ಇದರ ತಕ್ಷಣದ ಪರಿಣಾಮವನ್ನು ಉತ್ತರ ಭಾರತ ಎದುರಿಸುತ್ತಿದೆ: ಕ್ರಿಸ್ಮಸ್ ಸಂದರ್ಭಕ್ಕೆ ಮಾರಾಟವಾಗುವ ಸಾಂತಾಕ್ಲಾಸ್ ಗೊಂಬೆಗಳ, ಉಡುಗೆಗಳ, ಮಾರಾಟವನ್ನು ಕೆಲವು ಹಿಂದುತ್ವ ಮತೀಯ ಮೂಲಭೂತವಾದಿಗಳು ತಡೆದು ಬೆದರಿಸಿ ನಿಲ್ಲಿಸಿದ್ದಾರೆ. ಇದಕ್ಕೆ ಪ್ರಚೋದನೆಯು ಬೇರೆ ಯಾವ ದ್ವೇಷಭಾಷಣವೂ ಅಲ್ಲ; ಭಾಗವತರ ಉತ್ತರಾದಿ ಹಿಂದೂರಾಷ್ಟ್ರರಾಗ. ದಕ್ಷಿಣಭಾರತದಲ್ಲಿ ಈ ಮಾತುಗಳು ದಿನನಿತ್ಯದ ಮತ್ತು ಹಬ್ಬಹರಿದಿನಗಳನ್ನು ಬಾಧಿಸುವುದಿಲ್ಲ ಅಥವಾ ಬಾಧಿಸಲಾರದು ಎಂಬ ಅಭಿಪ್ರಾಯ ಅವರಿಗೂ ಇದೆ. ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಆಡಳಿತವಿರುವುದರಿಂದ ದ್ವೇಷವನ್ನು ಸಮೂಹ ಮೂಲಕ ಕಾರ್ಯರೂಪಕ್ಕೆ ಅಂದರೆ ಕ್ರೌರ್ಯರೂಪಕ್ಕೆ ತರಲಾಗುವುದಿಲ್ಲವೆಂಬ ಆತಂಕದಿಂದಲೇ ಭಾಗವತರು ಈಗ ಹೊಸ ಧಾಟಿಯಲ್ಲಿ ಮಾತನಾಡಿದ್ದಾರೆ. ಭಾಗವತರ ಜೊತೆಗೆ ದತ್ತ್ತಾತ್ರೇಯ ಹೊಸಬಾಳೆ ಮುಂತಾದ ಇತರ ಹಿಮ್ಮೇಳದವರು ಹಿಂದೂಯೇತರರು ಹಿಂದೂ ರೀತಿರಿವಾಜುಗಳನ್ನು, ಹಿಂದೂ ನೈತಿಕಮೌಲ್ಯಗಳನ್ನು ಅನುಸರಿಸಬೇಕೆಂದು ಕರೆಕೊಟ್ಟಿದ್ದಾರೆ. ಆದರೆ ವಾಸ್ತವದ ಪ್ರಜ್ಞೆಯಿರುವವರಿಗೆ ರಾಷ್ಟ್ರ ಮತ್ತು ರಾಷ್ಟ್ರೀಯತೆಯು ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೆಂಬುದು ಅರ್ಥವಾಗುತ್ತಿದೆ; ಅರ್ಥವಾಗದವರಿಗೂ ಅನುಭವವಾಗುತ್ತಿದೆ. ಭಾಗವತರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ರಾಜಕೀಯ ಕಾರ್ಯಸೂಚಿಯಿಲ್ಲ. ಇದು ಶತಮಾನದ ನಗೆಗಡಲು. ನೂರು ವರ್ಷದ ದಿಕ್ಸೂಚಿ. ಈ ಮಾತನ್ನು ಅನೇಕರು ತಮ್ಮ ಜೀವನದುದ್ದಕ್ಕೂ ನಂಬಿಕೊಂಡೇ ಬಂದಿದ್ದರು. ಅಂತಹ ಮೂರು ತಲೆಮಾರು ಈಗ ಕಳೆದಿದೆ. ಮೊದಮೊದಲು ಹೀಗಿರಬಹುದೇನೋ ಎಂಬ ಭ್ರಮೆಯ ಪರದೆಯಾದರೂ ಇತ್ತು. ಈಗ ಅದೂ ಕಳಚಿದೆ. ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಮಗುಚಿದರೆ, 1975ರಲ್ಲಿ ಇಂದಿರಾ ಸರಕಾರವು ತುರ್ತುಸ್ಥಿತಿಯನ್ನು ಘೋಷಿಸಿದಾಗ ಆನಂತರದ 18 ತಿಂಗಳ ಹೋರಾಟದಲ್ಲಿ ಸರ್ವಾಧಿಕಾರವನ್ನು ವಿರೋಧಿಸುವ ಎಲ್ಲ ಸಮುದಾಯ-ಸಮೂಹಗಳು ಒಟ್ಟಾದವು. ಎಡ-ಬಲ ಎಲ್ಲವೂ ಒಂದೇ ವಿಚಾರದಲ್ಲಿ ಸರ್ವಾಧಿಕಾರದ ವಿರುದ್ಧ ಕೇಂದ್ರೀಕೃತವಾಗಿದ್ದವು. ಹೀಗಾಗಿ ಯಾರ ಕಾರ್ಯಸೂಚಿ ಯಾವುದು ಎಂಬುದು ಪ್ರವಾಹದ ಕೆಂಪುನೀರಲ್ಲಿ ಗೊತ್ತಾಗುತ್ತಿರಲಿಲ್ಲ. ಆದರೆ ಚುನಾವಣೆ ನಡೆದು ಜನತಾಸರಕಾರ ಅಧಿಕಾರಕ್ಕೆ ಬಂದಾಗ ಈ ಅವಕುಂಠನವು ಹರಿಯಿತು. ಕೇವಲ ಎರಡೂವರೆ ವರ್ಷಗಳಲ್ಲಿ ಸರಕಾರ ಬಿದ್ದುಹೋಯಿತು. ಅದು ಕುಸಿದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಒಂದು ಗುಂಪು ತೋರಿದ ದ್ವಂದ್ವನಿಷ್ಠೆಯಲ್ಲಿ. ಅಧಿಕಾರವನ್ನು ನಿರಂಕುಶವಾಗಿ ನಡೆಸುವ ಮಹತ್ವಾಕಾಂಕ್ಷೆಯಲ್ಲಿ ತನ್ನ ಹಿಡಿತದಲ್ಲಿ ಇಲ್ಲದ ಸರಕಾರ, ಅಧಿಕಾರವು ಮುಂದುವರಿಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬೇಡವಾಯಿತು. ಅಧಿಕಾರದ ವಿಚಾರದಲ್ಲಿ ಸೈದ್ಧಾಂತಿಕವಾಗಿ ತನ್ನ ಮತೀಯ ಪ್ರತ್ಯೇಕತಾವಾದವನ್ನು ಎಂದೂ ಬಿಟ್ಟುಕೊಡದ ಆರೆಸ್ಸೆಸ್ಗೆ ಜಾತ್ಯತೀತತೆಯ ಉದಾರವಾದವು ಹಿಡಿಸದ್ದರಿಂದ ಸರ್ವಾಧಿಕಾರದ ವಿರುದ್ಧದ, ಅಭೇದ್ಯವೆಂದು ಕಂಡ, ಪ್ರಜಾಪ್ರಭುತ್ವದ ಕೋಟೆ ಛಿದ್ರವಾಯಿತು. ಆರೆಸ್ಸೆಸ್ ಈಗಲೂ ತನಗೆ ಅಧಿಕಾರದ ದಾಹ- ಮೋಹವಿಲ್ಲವೆಂದು ಘೋಷಿಸುತ್ತಲೇ ಬಂದಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಸಿದ್ಧವೆಂದು ಸೂಚಿಸುತ್ತಿದೆ. ಆದರೆ ಅದು ಭಾಜಪವನ್ನು ಹೊರತುಪಡಿಸಿ ಇತರ ಪಕ್ಷಗಳನ್ನು ಬೆಂಬಲಿಸಿದ ಇತಿಹಾಸವಿಲ್ಲ. 1975ರಲ್ಲೂ ಅದು ಭಾಜಪವನ್ನು ಅಧಿಕಾರಕ್ಕೇರಿಸಲು ಮಾತ್ರವೇ ಸರ್ವಧಿಕಾರದ ವಿರುದ್ಧ ಹೋರಾಡಿತೆಂಬುದನ್ನು ಆನಂತರದ ಈ ಸುಮಾರು ಐದು ದಶಕಗಳ ಭಾರತೀಯ ಇತಿಹಾಸ ತೋರಿಸಿ ಕೊಟ್ಟಿದೆ. 90ರ ದಶಕದಲ್ಲೂ ಅಯೋಧ್ಯೆಯ ಮೂಲಕ ದಿಲ್ಲಿಯ ಕುರ್ಚಿಯನ್ನು ಹಿಡಿಯಿತೇ ಹೊರತು ತನ್ನ ಪ್ರಕಟಿತ ರಾಷ್ಟ್ರೀಯ ಸಿದ್ಧಾಂತದ ಮೇಲಲ್ಲ. ಈ ಅವಧಿಯಲ್ಲಿ ಆದ ಅದರ ಕ್ರಾಂತಿಕಾರಕ ಬೆಳವಣಿಗೆಯೆಂದರೆ ಬದಲಾವಣೆಯಲ್ಲ; ಬದಲಿಗೆ ಯಾರು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ನಿರೀಕ್ಷಿಸಲಾಗಿತ್ತೋ ಅಂತಹವರನ್ನು ಮತೀಯತೆಯ ಹಳ್ಳಹಿಡಿಸಿದ್ದು. ಇದು ನಮ್ಮ ಇತರ ವಿದ್ಯಾವಂತರನ್ನು, ವಿಷಯತಜ್ಞರನ್ನು, ಸಾಹಿತಿಗಳನ್ನು, ಚಿಂತಕರನ್ನು ಮಾತ್ರವಲ್ಲ ನ್ಯಾಯಾಧೀಶರನ್ನೂ ನ್ಯಾಯಮೂರ್ತಿಗಳನ್ನೂ ಬಿಟ್ಟಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬಿರುಕು ಬಿಡಿಸುವುದು ಮತು ಅಲ್ಲಿ ಮತೀಯತೆಯ ಕೊತ್ತಂಬರಿ ಸೊಪ್ಪನ್ನು ನೆಡುವುದು (ಎ.ಕೆ.ರಾಮಾನುಜನ್ ಕ್ಷಮೆ ಕೋರಿ ಈ ರೂಪಕ!) ಈ ಅವಧಿಯಲ್ಲಿ ನಡೆದ ನಿತ್ಯ ಕಾಯಕ. ಭಾರತೀಯತೆಯೆಂದರೆ ಓಬಿರಾಯನ ಕಾಲದ ಕುರುಡು ಸಂಪ್ರದಾಯವಲ್ಲ. ಆರೆಸ್ಸೆಸ್ಗೆ ಮತ್ತು ಮುಖ್ಯವಾಗಿ ಅದರ ಮುನ್ನೆಲೆಯ ಮುಂದಾಳುಗಳಿಗೆ ಗೊತ್ತಿದೆ. ಅವರಿಗೆ ವಿಶ್ವ ರಾಜಕೀಯದಲ್ಲಿ ಅತಿಮೋಹಕತೆಯ ಸಿದ್ಧಾಂತಗಳು ಹೆಚ್ಚು ಕಾಲ ಬಾಳುವುದಿಲ್ಲವೆಂಬ ಯಥಾರ್ಥಸತ್ಯವೂ ಗೊತ್ತಿದೆ. ಆದ್ದರಿಂದ ಅದು ತನ್ನ ಒಂದುಕಾಲದ ರಾಷ್ಟ್ರೀಯತೆಯನ್ನು ಈಗ ಅಧಿಕಾರಸತ್ಯವಾಗಿ ಕಾಣಲು ಆರಂಭಿಸಿದೆ. ದೇಶದ ಪ್ರಧಾನಿ ದೇಶದ ಪ್ರತಿನಿಧಿ, ಆತ ನಾಯಕನೇ ಹೊರತು ಒಂದು ಸಂಕುಚಿತ ಗುಂಪಿನ ನಾಯಕನಲ್ಲವೆಂಬುದನ್ನು ಮರೆತು ಆತನ ಪ್ರೀತಿ, ದ್ವೇಷಗಳು ಸಮಾನವಾಗಿರಬೇಕೇ ಹೊರತು ಧ್ರುವನನ್ನು ಕಾಡಿಗೆ ಅಟ್ಟುವ ಉತ್ತಾನಪಾದನ ನೀತಿಯಾಗಬಾರದೆಂಬುದನ್ನು ಮರೆತು ಪ್ರಧಾನಿಗೂ ಚಡ್ಡಿಹಾಕಿಸುವ ದುರಂತಕ್ಕಿಂತ ಬೇರೇನಿದೆ? ಪ್ರಧಾನಿಯ ಪಟ್ಟಕ್ಕೇರಿದ ವ್ಯಕ್ತಿಯು ತನ್ನ ಯೋಗ್ಯತೆಯನ್ನು ನಡೆನುಡಿಯಲ್ಲಿ ಪ್ರದರ್ಶಿಸಬೇಕೇ ಹೊರತು ಸಿಂಹಾಸನದಲ್ಲಿ ಕುಳಿತ ಬೆಕ್ಕು ಇಲಿಯನ್ನು ಕಂಡಾಕ್ಷಣ ನೆಗೆಯುವ ಪ್ರವೃತ್ತಿಯಲ್ಲಿ ಅಲ್ಲ. ದೇಶವಿದೇಶಗಳಲ್ಲಿ ಸರಕಾರದ ಹೆಸರಿನಲ್ಲಿ ಪ್ರಜೆಗಳನ್ನೊಡೆದು ಬೆಣ್ಣೆ-ಸುಣ್ಣಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಈ ನೀತಿಯು ಭ್ರಷ್ಟಾಚಾರಕ್ಕಿಂತಲೂ ಕಳಪೆಯ ನೀತಿ. ಪ್ರಾಯಃ ಬ್ರಿಟಿಷರಿಗೆ ಈ ಕಲೆ ಗೊತ್ತಿದ್ದರೆ ಅವರು ಇನ್ನೂ ಹಲವು ಕಾಲ ಭಾರತವೆಂಬ ಈ ಭೂಭಾಗವನ್ನು ಅದರ ಅಸಂಖ್ಯ ಸಾಮ್ರಾಜ್ಯಗಳ ಸಹಿತ ತಮ್ಮ ನಿಯಂತ್ರಣದಲ್ಲಿ ಹಿಡಿದಿಡುತ್ತಿದ್ದರು. ಅವರು ನಾಚುವ ಪರಿಸ್ಥಿತಿ ಈಗ ದೇಶದಲ್ಲಿದೆ. ಆದರೆ ಇವಿಷ್ಟೇ ಆಗಿದ್ದರೆ ಅದನ್ನು ಹಾಳಾಗಿ ಹೋಗಲಿ ಇವರ ಯೋಗ್ಯತೆಯಿಷ್ಟೇ ಇದು ಕಾಲಕ್ರಮದಲ್ಲಿ ಸರಿಯಾಗಬಹುದೆಂದುಕೊಳ್ಳಬಹುದು. ರಾಮನ ಪಾದಸ್ಪರ್ಶಕ್ಕೆ ಕಾದ ಅಹಲ್ಯೆಯಂತೆ ನಿರ್ಜೀವ ಕಲ್ಲಾಗಿ ಸಹಿಸಿಕೊಳ್ಳಬಹುದು. ಆದರೆ ಇದರ ಪರಿಣಾಮದ ಹಿಂಸೆ ಸಹಿಸಲಸಾಧ್ಯ. ಪುನರ್ಜನ್ಮದ ಕಥೆಗಳು ಸುಂದರ. ಆದರೆ ಅವು ಅವಾಸ್ತವ. ಆದ್ದರಿಂದ ಇರುವ ಒಂದೇ ಒಂದು ಜನ್ಮವನ್ನು ಶಾಂತಿಯುತವಾಗಿ, ನೆಮ್ಮದಿಯಿಂದ ಬಾಳುವೆಮಾಡುವ ಆಸೆ, ನಿರೀಕ್ಷೆ ಜಾತಿ-ಮತ-ಧರ್ಮವನ್ನು ಮೀರಿ ಎಲ್ಲರದ್ದು. ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ. ಒಂದು ಸುಖೀಸಮಾಜವನ್ನು ಕಟ್ಟುವುದೆಂದರೆ ಇನ್ನೊಬ್ಬರನ್ನು ಜಾತಿ-ಮತಾಧಾರಿತವಾಗಿ ಹಿಂಸಿಸುವುದು ಎಂಬ ತರ್ಕವನ್ನು ಆರೆಸ್ಸೆಸ್ ಮತ್ತು ಅದನ್ನು ಬೆಂಬಲಿಸುವವರು ಮತ್ತು ಅದು ಬೆಂಬಲಿಸುವ ಸಂಘಟನೆಗಳು ಹೇಳುತ್ತಲೇ ಬಂದಿವೆ. ದೇಶ ಸಾಗುತ್ತಿರುವ ದಿಕ್ಕು ಈಗ ಸದ್ಯಕ್ಕೆ ಬದಲಾಗದು. ಜಾತ್ಯಾಧಾರಿತವಾಗಿಯಾದರೂ ಈ ‘ಹಿಂದೂ ರಾಷ್ಟ್ರ’ ಸುಖವಾಗಿರದು ಎಂಬುದನ್ನು ಸಾಕ್ಷೀಕರಿಸುವಂತೆ ಜಾತ್ಯಾಧಾರಿತ ಹಿಂಸೆ ನಿತ್ಯ ನಡೆಯುತ್ತಲೇ ಇದೆ. ಅಂತರ್ಜಾತೀಯ ವಿವಾಹವಾದ್ದಕ್ಕೇ ಮಗಳನ್ನು ಕೊಂದ ಮೇಲ್ಜಾತಿಯ ‘ಹಿಂದೂ ರಾಷ್ಟ್ರ’ವೂ ಇಲ್ಲಿದೆ. (ಎಲ್ಲ ಜಾತಿ ಮತಗಳಲ್ಲೂ ಈ ಪರಿಯ ಸಣ್ಣ-ಕೀಳು ದ್ವೇಷದ ಮನಸ್ಸು ಇದ್ದೇ ಇದೆ!) ಪ್ರಾಯಃ ಭಾಗವತರು ಇದರ ಮುಂದಾಳತ್ವವನ್ನು ವಹಿಸಿ ಸೂಚಿಸಿದ್ದು ‘ಹಿಂದೂ ರಾಷ್ಟ್ರ’ವನ್ನಲ್ಲ. ಬದಲಿಗೆ ಅದಕ್ಕೂ ಕಿರಿದಾದ, ಸಂಕುಚಿತವಾದ, ಅಧಿಕಾರದಾಹದ, ಉದರವೈರಾಗ್ಯದ, ಜಾತಿತಾರತಮ್ಯದ ಕುತ್ಸಿತ ನರಭಕ್ಷಕ ಸಮಾಜದ ‘ರಾಷ್ಟ್ರ’ ವನ್ನು.
Karnataka Weather: ವರ್ಷಾಂತ್ಯದ 5 ದಿನ ಈ ಜಿಲ್ಲೆಗಳಲ್ಲಿ ವಿಪರೀತ ಚಳಿ, ದಟ್ಟ ಮಂಜು ಮುನ್ಸೂಚನೆ
ಬೆಂಗಳೂರು: ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುತ್ತಿದ್ದು, ವರ್ಷಾಂತ್ಯದ ಮುಂದಿನ ಐದು ದಿನ (ಡಿಸೆಂಬರ್ 31ರವರೆಗೆ) ಒಣಹವೆ ಇರಲಿದೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ವ್ಯಾಪಕವಾಗಿ ಕುಸಿದಿದ್ದು, ಅಲ್ಲೆಲ್ಲ ಮೈಕೊರೆವ ಚಳಿ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಮತ್ತು ವಿಜ್ಞಾನಿ ಡಾ.ಸಿ.ಎಸ್.ಪಾಟೀಲ್ ಅವರು ತಿಳಿಸಿದರು. ರಾಜ್ಯದಲ್ಲಿ ಚಳಿ, ಒಣಹವೆ ಜೊತೆಗೆ ದಟ್ಟ ಮಂಜು ಈ
ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತಳೇ ಅಪರಾಧಿಯಾದರೆ?
ಭ್ರಷ್ಟಾಚಾರದ ವಿರುದ್ಧ, ಆದಿವಾಸಿಗಳು-ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿದ ಹಲವು ಸಾಮಾಜಿಕ ಹೋರಾಟಗಾರರು ವಿಚಾರಣೆಯ ಹೆಸರಿನಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹಲವು ವರ್ಷಗಳಿಂದ ಜೈಲು-ನ್ಯಾಯಾಲಯ ಎಂದು ಅಲೆದಾಡುತ್ತಿರುವ ಉಮರ್ ಖಾಲಿದ್ಗೆ ತಾನು ಯಾಕೆ ಜೈಲಿನಲ್ಲಿದ್ದೇನೆ ಎನ್ನುವುದರ ಕುರಿತಂತೆಯೇ ಅರಿವಿಲ್ಲ. ನ್ಯಾಯಾಲಯವೂ ಇವರನ್ನು ಯಾಕೆ ಜೈಲಿನಲ್ಲಿಟ್ಟುಕೊಂಡಿದ್ದೀರಿ ಎಂದು ಪೊಲೀಸರನ್ನು ಕೇಳುತ್ತಲೂ ಇಲ್ಲ. ಆದರೆ ಇಂದೇ ಸಂದರ್ಭದಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೈಗೈದ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ನ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಬಿಡುಗಡೆ ತಡವಾಗಿದೆ. ಆದರೆ ಯಾವ ಕ್ಷಣದಲ್ಲೂ ಆತ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸೆಂಗರ್ನನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು, ಆತನಿಂದ ತನ್ನ ಕುಟುಂಬಕ್ಕೆ ಜೀವಭಯವಿದೆ ಎಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಕೂಗಿ ಹೇಳುತ್ತಿದ್ದರೂ ನ್ಯಾಯಾಲಯದ ಕಿವಿ ಕಿವುಡಾಗಿದೆ. ಸಂತ್ರಸ್ತೆಯ ಮನೆಯ ಐದು ಕಿಲೋಮೀಟರ್ ಒಳಗೆ ಬರಬಾರದು ಹಾಗೂ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನನ್ನು ನೀಡಿದೆ. ವಿಪರ್ಯಾಸವೆಂದರೆ, ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಮಾತ್ರವಲ್ಲ, ಓರ್ವನನ್ನು ಕೊಂದು ಹಾಕಿದ ಆರೋಪ ಸಾಬೀತಾಗಿ ಸೆಂಗರ್ ಜೈಲು ಶಿಕ್ಷೆ ಅನುಭವಿಸುತಿದ್ದಾರೆ. ಇಷ್ಟಕ್ಕೂ ಸಮಾಜದಲ್ಲಿ ಬಲಿಷ್ಠ ಜಾತಿ, ವರ್ಗಕ್ಕೆ ಸೇರಿದ ಮಾಜಿ ಶಾಸಕನೊಬ್ಬ ನೇರವಾಗಿ ಸಂತ್ರಸ್ತೆಯ ಮನೆಗೆ ನುಗ್ಗುವ ಅಗತ್ಯವಿದೆಯೆ? ತಾನು ಮಾಡಬೇಕಾದ ಕೃತ್ಯವನ್ನು ಬೆಂಬಲಿಗರ ಜೊತೆಗೆ ಮಾಡಿಸುವ ಶಕ್ತಿ ಆರೋಪಿಗಿಲ್ಲ ಎಂದು ನ್ಯಾಯಾಲಯ ಭಾವಿಸುತ್ತಿದೆಯೆ? ಉನ್ನಾವೋ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿ ಆರೋಪಿ ಬಿಜೆಪಿಯ ನಾಯಕನಾಗಿದ್ದ. ಸಂತ್ರಸ್ತೆ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದಾಗ ಆಕೆಯನ್ನು ಅಪಹರಿಸಿ ಆರೋಪಿ ಅತ್ಯಾಚಾರಗೈದಿದ್ದ. ಇದು ಕೇವಲ ಅತ್ಯಾಚಾರ ಪ್ರಕರಣ ಮಾತ್ರವಾಗಿರಲಿಲ್ಲ. ಈ ಅತ್ಯಾಚಾರದ ವಿರುದ್ಧ ದೂರು ನೀಡಿದ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳಲು ಸೆಂಗರ್ ಯೋಜನೆ ರೂಪಿಸಿದ್ದ. ಆರೋಪಿ ಅದೆಷ್ಟು ಬಲಿಷ್ಠನೆಂದರೆ, ದೂರನ್ನು ಹಿಂದೆಗೆಯಲು ಸಿದ್ಧವಿಲ್ಲದ ಸಂತ್ರಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲು ಸೇರುವಂತೆ ಮಾಡಿದ್ದ. ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯ ತಂದೆಗೆ ಕುಲದೀಪ್ ಸಿಂಗ್ ಸೆಂಗರ್ನ ಸೋದರನ ನೇತೃತ್ವದಲ್ಲೇ ಹಲ್ಲೆ ನಡೆದಿತ್ತು. ಅಷ್ಟೇ ಅಲ್ಲ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಹೊರಿಸಿ ಹಲ್ಲೆಗೀಡಾದಾತನನ್ನೇ ಜೈಲಿಗೆ ತಳ್ಳಲಾಗಿತ್ತು. ಬಳಿಕ ಜೈಲಿನಲ್ಲಿ ಆತನನ್ನು ಕೊಂದು ಹಾಕಲಾಗಿತ್ತು. ಇದಾದ ಬಳಿಕ ಸಂತ್ರಸ್ತೆಯ ಮೇಲೂ ದಾಳಿ ನಡೆಯಿತು. ರಸ್ತೆ ಅವಘಡದ ಮೂಲಕ ಆಕೆಯನ್ನು ಸಾಯಿಸಲು ಪ್ರಯತ್ನ ನಡೆಯಿತು. ಈ ಕೃತ್ಯದಲ್ಲಿ ಆಕೆ ಕುಟುಂಬದ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. ಅಂತಿಮವಾಗಿ ಸಂತ್ರಸ್ತೆ ಸಾರ್ವಜನಿಕವಾಗಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದರು. ಹೀಗೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಸರಕಾರ ಸೆಂಗರ್ನ ವಿರುದ್ಧ ದೂರು ದಾಖಲಿಸಲು ಮುಂದಾಯಿತು. ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸುದೀರ್ಘ ಹೋರಾಟ, ಬಲಿದಾನಗಳ ಬಳಿಕವಷ್ಟೇ ಸೆಂಗರ್ನ ವಿರುದ್ಧ ಪೊಲೀಸ್ ವ್ಯವಸ್ಥೆ ಕ್ರಮ ತೆಗೆದುಕೊಂಡಿತು. ನ್ಯಾಯಾಲಯದಲ್ಲಿ ಆರೋಪಗಳು ಸಾಬೀತಾದವು. ಅನಿವಾರ್ಯವಾಗಿ ಬಿಜೆಪಿಯು ಕೂಡ ಸೆಂಗರ್ನನ್ನು ಪಕ್ಷದಿಂದ ಉಚ್ಚಾಟಿಸಿತು. ಸೆಂಗರ್ ಜೈಲಿನಲ್ಲಿದ್ದರೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಜೀವಭಯದಿಂದಲೇ ಬದುಕುತ್ತಾ ಬಂದಿದೆ. ಇದೀಗ ದಿಲ್ಲಿ ಹೈಕೋರ್ಟ್ ಸೆಂಗರ್ನ ಶಿಕ್ಷೆಯನ್ನು ಅಮಾನತಿನಲಿಟ್ಟು, ಜಾಮೀನು ನೀಡಿದೆ. ನ್ಯಾಯಾಲಯದ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ ‘‘ಆತನನ್ನು ಜೈಲಿನಿಂದ ಬಿಡುಗಡೆ ಮಾಡುವುದಾದರೆ, ನನ್ನನ್ನು ಜೈಲಿಗೆ ಹಾಕಿ’’ ಎಂದು ಮನವಿ ಮಾಡಿದ್ದಾರೆ. ಆರೋಪಿಗಿರುವ ರಾಜಕೀಯ ಶಕ್ತಿಯ ಅರಿವಿದ್ದೂ ಆತನನ್ನು ನ್ಯಾಯಾಲಯ ಬಿಡುಗಡೆ ಮಾಡಲು ಮನಸ್ಸು ಮಾಡುತ್ತದೆ ಎಂದಾದರೆ, ಬದಲಿಗೆ ಸಂತ್ರಸ್ತಳನ್ನು ಜೈಲಿಗೆ ವರ್ಗಾಯಿಸುವುದೇ ಹೈಕೋರ್ಟ್ ಸಂತ್ರಸ್ತೆಗೆ ನೀಡಬಹುದಾದ ಪರ್ಯಾಯ ನ್ಯಾಯವಾಗಿದೆ. ಆ ಮೂಲಕ ಆಕೆಯ ಜೀವಕ್ಕಾದರೂ ರಕ್ಷಣೆ ಸಿಕ್ಕಿದಂತಾಗಬಹುದು. ಆದರೆ, ಜೈಲಿನಲ್ಲೂ ಆಕೆಯನ್ನು ಸಾಯಿಸುವಷ್ಟು ಜನಬಲ, ಆರ್ಥಿಕ ಬಲ ಸೆಂಗರ್ನಿಗಿದೆ. ಇದು ನ್ಯಾಯಾಲಯಕ್ಕೆ ತಿಳಿಯದ ವಿಷಯವೇನೂ ಅಲ್ಲ. ವಿಪರ್ಯಾಸವೆಂದರೆ, ಸೆಂಗರ್ ಬಿಡುಗಡೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತೆಯನ್ನು ಪೊಲೀಸರು ತಡೆದಿದ್ದಾರೆ. ಸಂತ್ರಸ್ತೆಯ ಆತಂಕವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಇಂಡಿಯಾಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ಭರ್ ಅಣಕಿಸಿ ನಕ್ಕಿದ್ದಾರೆ. ‘‘ಆಕೆಯ ಮನೆ ಉನ್ನಾವೋದಲ್ಲಿದೆ. ಮತ್ತೆ ದಿಲ್ಲಿಯಲ್ಲಿ ಏನು ಮಾಡುತ್ತಿದ್ದಾಳೆ?’’ ಅವರು ಕೇಳಿದ್ದಾರೆ. ನಿಜಕ್ಕೂ ಆತ ನಕ್ಕಿದ್ದು, ನ್ಯಾಯ ವ್ಯವಸ್ಥೆಯ ಅಸಹಾಯಕತೆಯನ್ನು ನೋಡಿ. ಆತ ಮಾತ್ರವಲ್ಲ, ಈ ದೇಶದ ಜೈಲಿನಲ್ಲಿರುವ ಎಲ್ಲ ಅತ್ಯಾಚಾರ ಆರೋಪಿಗಳೂ ನ್ಯಾಯ ವ್ಯವಸ್ಥೆಯ ವೈಕಲ್ಯವನ್ನು ನೋಡಿ ನಗುತ್ತಿದ್ದಾರೆ. ಸೆಂಗರ್ ಪ್ರಕರಣವು, ಈ ಹಿಂದೆ ಗುಜರಾತ್ನ ದಂಗೆಯ ಸಂದರ್ಭದಲ್ಲಿ ಸಾಮೂಹಿಕ ಹತ್ಯೆ ಮತ್ತು ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಮಧ್ಯ ಪ್ರವೇಶಿಸಿ ಬಿಡುಗಡೆ ಮಾಡಿ ಛೀಮಾರಿಗೊಳಗಾದುದನ್ನು ನೆನಪಿಸುತ್ತದೆ. ಅಂದು ಆ ಅಪರಾಧಿಗಳ ಬಿಡುಗಡೆಯನ್ನು ಬಿಜೆಪಿ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದ್ದರು. ಮಾತ್ರವಲ್ಲ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಸುಪ್ರೀಂಕೋರ್ಟ್ ಆರೋಪಿಗಳ ಬಿಡುಗಡೆಯನ್ನು ಖಂಡಿಸಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಿತ್ತು. ಅಪರಾಧಿಗಳನ್ನು ಮತ್ತೆ ಜೈಲು ಸೇರುವಂತೆ ಮಾಡಿತ್ತು. ವಿಪರ್ಯಾಸವೆಂದರೆ, ಉನ್ನಾವೋ ಅತ್ಯಾಚಾರ ಆರೋಪಿಯ ಬಿಡುಗಡೆಯಲ್ಲಿ ನ್ಯಾಯಾಲಯವೇ ನೇರ ಪಾತ್ರವನ್ನು ವಹಿಸುತ್ತಿರುವುದು. ಹಾಗೊಂದು ವೇಳೆ ಆತ ಬಿಡುಗಡೆಯಾದರೆ, ಅದು ನ್ಯಾಯ ವ್ಯವಸ್ಥೆಯ ಮೇಲೆ ನಡೆಯುವ ಬರ್ಬರ ಅತ್ಯಾಚಾರವೆಂದು ಪರಿಗಣಿಸಲ್ಪಡಲಿದೆ. ಇಂತಹ ತೀರ್ಪಿಗಿಂತ ಅತ್ಯಾಚಾರವನ್ನು ಸಂವಿಧಾನಬದ್ಧವೆಂದು ಘೋಷಿಸುವುದು ಉತ್ತಮ. ಅತ್ಯಾಚಾರಗೈಯುವುದು ರಾಜಕಾರಣಿಗಳ ಹಕ್ಕು ಎಂದು ಘೋಷಿಸಿದರೆ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಅಪರಾಧವನ್ನು ಮಾಡಲಾರರು. ನ್ಯಾಯಾಲಯವನ್ನು ನಂಬಿ ಮೋಸ ಹೋಗಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು, ಅಂತಿಮವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸನ್ನಿವೇಶವಾದರೂ ತಪ್ಪಬಹುದು.
Chitradurga | ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ ದಹನ
ಸ್ಲೀಪರ್ ಕೋಚ್ ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ಗೋಕರ್ಣ ಮೂಲದವರು
ಅರುಣಾಚಲ ಪ್ರದೇಶದ ಬಗ್ಗೆ ಚೀನಾದ ಭವಿಷ್ಯದ ಯೋಜನೆ ಬಯಲು ಮಾಡಿದ ಪೆಂಟಗನ್ ವರದಿ; ಈಗ ಭಾರತದ ಸರದಿ!
ಚೀನಾದ ವಿಸ್ತರಣಾವಾದ ದಶಕಗಳಿಂದ ಈ ಭಾಗದಲ್ಲಿ ಅಶಾಂತಿಗೆ ಕಾರಣವಾಗಿದೆ. ಚೀನಾದಿಂದ ಅದರ ನೆರೆಹೊರೆ ರಾಷ್ಟ್ರಗಳು ನಿರಂತರವಾಗಿ ಕಿರುಕುಳ ಅನುಭವಿಸುತ್ತಿವೆ. ಅದರಲ್ಲೂ ಅರುಣಾಚಲ ಪ್ರದೇಶ ವಿವಾದ ಭಾರತ-ಚೀನಾ ನಡುವೆ ಸುದೀರ್ಘ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಈ ಮಧ್ಯೆ ಅರುಣಾಚಲ ಪ್ರದೇಶದ ಕುರಿತು ಚೀನಾದ ನಿಲುವಿನ ಬಗ್ಗೆ, ಪೆಂಟಗನ್ ತನ್ನ ವರದಿಯನ್ನು ಯುಎಸ್ ಕಾಂಗ್ರೆಸ್ಗೆ ಸಲ್ಲಿಸಿದೆ. ಈ ವರದಿಯು ಗಡಿ ರಾಜ್ಯದ ಮೇಲಿನ ತನ್ನ ಹಕ್ಕಿನ ವಿಚಾರದಲ್ಲಿ ಚೀನಾ ರಾಜಿಗೆ ಸಿದ್ಧವಿಲ್ಲ ಎಂದು ಉಲ್ಲೇಖಿಸಲಾಗಿದೆ.
Arecanut: ರಾಜ್ಯದಲ್ಲಿ ಅಡಿಕೆಗೆ ಎಲೆಚುಕ್ಕೆ-ಹಳದಿ ರೋಗ, ಪರಿಹಾರ ಬಗ್ಗೆ ಸಚಿವ ಮಧು ಬಂಗಾರಪ್ಪ ಏನಂದ್ರು?
ಶಿವಮೊಗ್ಗ: ರಾಜ್ಯದ ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ 'ಎಲೆಚುಕ್ಕಿ ಹಾಗೂ ಹಳದಿ ರೋಗವು ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಇದಕ್ಕೆ ಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ರೋಗಗಳನ್ನು ನಿಯಂತ್ರಿಸುವ ವಿಧಾನಗಳು, ರೈತರಿಗೆ ಜಾಗೃತಿ ಹಾಗೂ ಬೆಳೆ ವಿಮೆ ಕುರಿತು ಚರ್ಚಿಸಿದರು.
ಅರಾವಳಿಯಲ್ಲಿ ಹೊಸ ಗಣಿಗಾರಿಕೆಗೆ ನಿಷೇಧ; ಜನಾಂದೋಲನದ ಕರೆಗೆ ಓಗೊಟ್ಟ ಕೇಂದ್ರ ಸರ್ಕಾರದ ಐತಿಹಾಸಿಕ ಆದೇಶ
ಅರಾವಳಿ ಉಳಿಸಿ ಜನಾಂದೋಲನಕ್ಕೆ ಭಾರೀ ಯಶಸ್ಸು ದೊರೆತಿದೆ. ದೆಹಲಿಯಿಂದ ಗುಜರಾತ್ವರೆಗೆ ಹಬ್ಬಿರುವ ಈ ಬೆಟ್ಟಗಳ ಶ್ರೇಣಿಯಲ್ಲಿ, ಹೊಸದಾಗಿ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೇ ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಹೊಸ ಆದೇಶ, ಅರಾವಾಳಿಗಾಗಿ ಧ್ವನಿ ಎತ್ತಿದ್ದ ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಚಿತ್ರದುರ್ಗ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಚಿತ್ರದುರ್ಗದ ಹೆದ್ದಾರಿಯಲ್ಲಿ ಘನಘೋರ ದುರಂತ ನಡೆದಿದ್ದು, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಅದರಲ್ಲಿದ್ದ 17 ಮಂದಿ ಸಜೀವ ದಹನ ಆಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದೆ.
New Railway Line: ಗಿಣಿಗೇರಾ-ರಾಯಚೂರು ರೈಲು ಮಾರ್ಗ ಯೋಜನೆ ಅಪ್ಡೇಟ್, ತೆಲಂಗಾಣಕ್ಕೆ ಸಂಪರ್ಕ ಸುಲಭ
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಕೆಲವೆಡೆ ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆರಂಭವಾಗಿದ್ದ ಪ್ರಮುಖ ರೈಲ್ವೆ ಯೋಜನೆಯಾಗಿರುವ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಗಿಣಿಗೇರಾ-ರಾಯಚೂರು ರೈಲು ಮಾರ್ಗದ ನಿರ್ಮಾಣವು ಪ್ರಗತಿಯಲ್ಲಿದೆ. ಈ ಯೋಜನೆ ಮುನಿರಾಬಾದ್-ಮಹಬೂಬ್ನಗರ ರೈಲ್ವೆ ಮಾರ್ಗದ ಭಾಗವಾಗಿದೆ. ಒಟ್ಟು 165 ಕಿಲೋ ಮೀಟರ್ ಉದ್ದದ ಈ ಮಾರ್ಗವು ಯಾವೆಲ್ಲ
ಚಾಮರಾಜ ನಗರದಲ್ಲಿ ಮತ್ತೊಂದು ಕೆಎಚ್ಬಿ ಲೇಔಟ್ : ಬೇಡಿಕೆ ಸಮೀಕ್ಷೆಗಾಗಿ ಅರ್ಜಿ
ಚಾಮರಾಜನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ನಾಲ್ಕನೇ ಲೇಔಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಬೇಡಿಕೆ ತಿಳಿಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಡಿ.31 ಕೊನೆಯ ದಿನವಾಗಿದೆ. ಮೈಸೂರಿನ ವಿದ್ವತ್ ಇನ್ಫಾ ಸಂಸ್ಥೆಯೊಂದಿಗೆ ಜಂಟಿ ಸಹಯೋಗದಲ್ಲಿ 24 ಎಕರೆ 13 ಗುಂಟೆ ಜಮೀನಿನಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ.
ಚಿಕ್ಕಮಗಳೂರು| ಕಾರು ಪಲ್ಟಿಯಾಗಿ ವಿದ್ಯಾರ್ಥಿ ಮೃತ್ಯು, ಆರು ಮಂದಿ ಗಂಭೀರ
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿ ಬಳಿ ನಡೆದಿರುವುದಾಗಿ ವರದಿಯಾಗಿದೆ. ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ವಿದ್ಯಾರ್ಥಿ ಮೋಹಿನ್ (19) ಮೃತಪಟ್ಟವರು. ಕೊಟ್ಟಿಗೆಹಾರದಿಂದ ಚಿಕ್ಕಮಗಳೂರಿಗೆ ಆಗಮಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರಿನ ಯುವಕರ ತಂಡ ಕೊಟ್ಟಿಗೆಹಾರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿದ್ದರು. ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆರು ಜನರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಶಿಮೂಲ್ ಮೇಲೆ ಲೋಕಾಯುಕ್ತ ದಾಳಿ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಲೋಕಾಯುಕ್ತರ ತಂಡವು ಶಿಮೂಲ್ ಕಚೇರಿಯ ಲೆಕ್ಕಪತ್ರ ವಿಭಾಗ ಮತ್ತು ಮಾರುಕಟ್ಟೆ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಕಳೆದ ಕೆಲವು ಸಮಯದಿಂದ ಈ ಎರಡೂ ವಿಭಾಗಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ಸಕಲ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್ ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ ಈ ಸಂಬಂಧ ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಸಕ್ತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಎಂ.ಬಿ.ಪಾಟೀಲ್, ಈ ಬಗ್ಗೆ ಅ.31ರಂದು ತಾವು ನಮಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನ.24ರಂದು ಪ್ರತ್ಯುತ್ತರ ಬರೆದಿದ್ದೆವು. ಏತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯಸಾಧ್ಯತೆ ಜೊತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲ ಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಉದ್ದೇಶಿತ ಹೂಡಿಕೆ ಯೋಜನೆ ರಾಜ್ಯದ ಕೈತಪ್ಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬ್ರಾಹ್ಮಣ-ಶ್ರಮಣ ಸಂಘರ್ಷದ ಮುಂದುವರಿದ ಭಾಗ ಬಾಡೂಟದ ಹೋರಾಟ: ಚಿಂತಕ ಶಿವಸುಂದರ್
‘ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯ ಮುನ್ನುಡಿ’ ಕಾರ್ಯಕ್ರಮ
ಹೊಸಂಗಡಿ : ಯುವಕನ ಮೃತದೇಹ ನದಿಯಲ್ಲಿ ಪತ್ತೆ
ಮೂಡುಬಿದಿರೆ : ಹೊಸಂಗಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಸಂಜೆ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ್ ಪೂಜಾರಿ ( 42) ಎಂಬಾತ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದು,ಅಲ್ಲಿಂದ ಹೊಸಂಗಡಿಯಲ್ಲಿರುವ ಹೆಂಡತಿ ಮನೆಗೆ ಬಂದಿದ್ದರೆನ್ನಲಾಗಿದೆ. ರವಿವಾರ ಅದ್ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್ ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದು, ಅವರು ‘ಸರಿಮಾಡುವ, ಆತುರದ ನಿರ್ಧಾರ ಬೇಡ’ ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೆ ಆತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ರಚನಾತ್ಮಕ ಅಂತರವನ್ನು ಸರಿಪಡಿಸುವ ʻವಿಬಿ-ಜಿ ರಾಮ್ ಜಿʼ ಕಾಯ್ದೆ-2025
ʻವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ಗ್ರಾಮೀಣ) ಕಾಯ್ದೆ-2025ʼಕ್ಕೆ ಭಾರತದ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಸಬಲೀಕರಣ, ಏಕೀಕರಣದ ಮತ್ತು ಪರಿಪೂರ್ಣತೆ ಆಧರಿತ ಯೋಜನೆ ಅನುಷ್ಠಾನದ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಮತ್ತಷ್ಟು ಶಕ್ತಿ ತುಂಬಲಾಗಿದೆ. ಸದೃಢ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಅನುವು ಮಾಡಲಾಗಿದೆ. ಕೆಲವರಿಂದ ತಪ್ಪು ಗ್ರಹಿಕೆ ʻವಿಬಿ-ಜಿ ರಾಮ್ ಜಿʼ ಕಾಯ್ದೆಯು ಜಾರಿಯಾದ ಬಳಿಕವೂ ಕೆಲವರು ಕೂಲಂಕಷ ಪರಿಶೀಲನೆ ರಹಿತವಾದ ಊಹಾ ಪೋಹಗಳನ್ನು ಮುಂದಿಟ್ಟಿದ್ದಾರೆ. ಈ ಕಾಯ್ದೆಯ ಮೂಲಕ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸಲಾಗಿದೆ; ವಿಕೇಂದ್ರೀಕರಣ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕುಗಳನ್ನು ಸಮಾಲೋಚನೆಯಿಲ್ಲದೆ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಈ ಸುಧಾರಣೆಯು ಪುನರ್ ರಚನೆ ಸೋಗಿನಲ್ಲಿ ವಿತ್ತೀಯ ನಿಧಿ ಕಡಿತವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರತಿಯೊಂದು ಪ್ರತಿಪಾದನೆಯೂ ಕಾಯ್ದೆಯ ಸತ್ವ ಮತ್ತು ಉದ್ದೇಶವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಹೊರಹೊಮ್ಮಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯು ಪರಸ್ಪರ ವಿರೋದ್ಧ ಆಯ್ಕೆಗಳು ಎಂಬ ಊಹೆ ಹಾಗೂ ಪರಿಕಲ್ಪನೆಯಲ್ಲಿನ ದೋಷವು ಈ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಆದರೆ, ಹೊಸ ಕಾಯಿದೆಯನ್ನು ಇದಕ್ಕೆ ವಿರುದ್ಧವಾದ ತಿಳಿವಳಿಕೆಯ ಮೇಲೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ಶಾಸನಬದ್ಧ ಜೀವನೋಪಾಯದ ಖಾತರಿಯನ್ನು ಹೊಂದಿರುವ ಜನಕಲ್ಯಾಣ ಮತ್ತು ಅಭಿವೃದ್ಧಿ, ದೀರ್ಘಬಾಳಿಕೆಯ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆ ಹೆಚ್ಚಳದ ಮೇಲೆ ಹೊಸ ಕಾಯಿದೆ ನಿಂತಿದೆ. ಇದು ಪರಸ್ಪರ ಬಲವರ್ಧನೆಗೆ ಬೆಂಬಲಿಸುತ್ತದೆ. ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲೀನ ಗ್ರಾಮೀಣ ಉತ್ಪಾದಕತೆಯನ್ನು ನಿರಂತರವಾಗಿ ಪರಿಗಣಿಸಲಾಗುತ್ತದೆ. ಇದು ಮಹತ್ವಾಕಾಂಕ್ಷೆಯ ವಾಕ್ಚಾತುರ್ಯವಲ್ಲ, ಬದಲಿಗೆ ಶಾಸನಬದ್ಧ ವಿನ್ಯಾಸವನ್ನು ಆಧರಿಸಿದ ಕಾರ್ಯವಿಧಾನವಾಗಿದೆ. ಉದ್ಯೋಗದ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸಲಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಈ ಕಾಯ್ದೆಯು ಉದ್ಯೋಗ ಖಾತರಿಯ ಶಾಸನಬದ್ಧ ಮತ್ತು ನ್ಯಾಯಸಮ್ಮತ ಗುಣಲಕ್ಷಣವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದರ ಜಾರಿಯನ್ನು ಬಲಪಡಿಸುತ್ತದೆ. ಉದ್ಯೋಗ ಅರ್ಹತೆಯನ್ನು ಮೊಟಕುಗೊಳಿಸುವ ಬದಲು, ಅರ್ಹತೆಯನ್ನು 100 ರಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಅನರ್ಹತೆ ಮೂಲಕ ನಿರುದ್ಯೋಗ ಭತ್ಯೆಯನ್ನು ನಿರಾಕರಿಸಲು ಅವಕಾಶವಿತ್ತು. ಈಗ ಅಂತಹ ಅರ್ಹತೆ ನಿರಾಕರಣೆ ಷರತ್ತುಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಕ್ಷಿಪ್ರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ. ಈ ಸುಧಾರಣೆಯು ಶಾಸನಬದ್ಧ ಭರವಸೆ ಮತ್ತು ವಾಸ್ತವತೆಯ ನಡುವಿನ ದೀರ್ಘಕಾಲದ ಅಂತರವನ್ನು ಪರಿಹರಿಸುತ್ತದೆ. ಹೊಸ ಯೋಜನೆಯಲ್ಲಿ ಬೇಡಿಕೆ ಆಧಾರಿತ ಉದ್ಯೋಗವನ್ನು ಕೈಬಿಡಲಾಗಿದೆ ಎಂದು ವಾದಿಸಲಾಗಿದೆ. ಇದು ಆಧಾರರಹಿತ. ಕಾರ್ಮಿಕರ ಕಡೆಯಿಂದ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದು ಮುಂದುವರಿಯುತ್ತದೆ. ಆದರೆ ಹೊಸ ಯೋಜನೆಯಲ್ಲಿ ಈ ನಿಟ್ಟಿನಲ್ಲಿ ಒಂದು ಬದಲಾವಣೆ ಎಂದರೆ ಕೇವಲ ಸಂಕಷ್ಟ ಎದುರಾದ ನಂತರವಷ್ಟೇ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಮುಂಚಿತವಾಗಿ ಉದ್ಯೋಗ ಸೃಜನೆಯನ್ನು ಕಾರ್ಯಗತಗೊಳಿಸುವ ಮೂಲಕ, ಸಕ್ರಿಯ ಭಾಗವಹಿಸುವಿಕೆ ಹೊಂದಿರುವ ಗ್ರಾಮ ಮಟ್ಟದ ಯೋಜನೆಯ ಮೂಲಕ ಹೊಸ ಯೋಜನೆಯು ಕಾರ್ಮಿಕರು ಉದ್ಯೋಗವನ್ನು ಹುಡುಕಿದಾಗ ಅವರಿಗೆ ಅದು ಖಚಿತವಾಗಿ ಲಭ್ಯವಾಗುತ್ತದೆ. ಇಲ್ಲಿ ಆಡಳಿತಾತ್ಮಕ ಸಿದ್ಧತೆಯಿಲ್ಲದ ಕಾರಣ ಉದ್ಯೋಗ ನಿರಾಕರಿಸುವ ಸಂದರ್ಭ ಬರುವುದಿಲ್ಲ. ಈ ಯೋಜನೆಯು, ಈ ಅರ್ಥದಲ್ಲಿ, ಬೇಡಿಕೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಅದು ಅದನ್ನು ಕಾರ್ಯಗತಗೊಳಿಸುತ್ತದೆ. ಅಧಿಕಾರ ಕೇಂದ್ರೀಕರಣದ ಆರೋಪ ಮಾಡುವವರು, ಬಹುಶಃ ಈ ಕಾನೂನಿನ ರಚನಾ ಸ್ವರೂಪವನ್ನು ಕಡೆಗಣಿಸಿ ದಂತೆ ಕಾಣುತ್ತದೆ. ಗ್ರಾಮ ಪಂಚಾಯಿತಿಗಳು ಪ್ರಾಥಮಿಕ ಯೋಜನೆ ಮತ್ತು ಅನುಷ್ಠಾನ ಪ್ರಾಧಿಕಾರಗಳಾಗಿ ಉಳಿದಿವೆ ಮತ್ತು ಗ್ರಾಮ ಸಭೆಗಳು ಸ್ಥಳೀಯ ಯೋಜನೆಗಳ ಮೇಲೆ ಅನುಮೋದನೆಯ ಅಧಿಕಾರವನ್ನು ಉಳಿಸಿಕೊಂಡಿವೆ. ಹೊಸ ಯೋಜನೆಯಲ್ಲಿ ಬದಲಾಗಿರುವ ಒಂದು ಸಂಗತಿಯೆಂದರೆ, ವಿಕೇಂದ್ರೀಕೃತ ಯೋಜನೆಯು ಇನ್ನು ಮುಂದೆ ತಾತ್ಕಾಲಿಕ ಅಥವಾ ಸಾಂದರ್ಭಿಕವಾಗಿರುವುದಿಲ್ಲ. ಬದಲಿಗೆ, ರಚನಾತ್ಮಕ ಮತ್ತು ಭಾಗವಹಿಸುವ ಪ್ರಕ್ರಿಯೆಯಾಗಿ ಸಾಂಸ್ಥಿಕ ರೂಪ ಪಡೆಯುತ್ತದೆ. ʻವಿಕಸಿತ ಗ್ರಾಮ ಪಂಚಾಯತ್ ಯೋಜನೆʼಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ, ಇದು ಕ್ಷೇತ್ರಗಳಾದ್ಯಂತ ಸಮನ್ವಯ, ಏಕೀಕರಣ ಮತ್ತು ಗೋಚರತೆಯನ್ನು ಸಕ್ರಿಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ದಮನ ಮಾಡಲು ಅವಕಾಶವಿರುವುದಿಲ್ಲ. ಹೊಸ ಕಾಯಿದೆಯಲ್ಲಿ ಯೋಜನೆಯ ಸುಸಂಬದ್ಧತೆ ವಿಚಾರವಷ್ಟೇ ಕೇಂದ್ರೀಕೃತವಾಗಿರುತ್ತದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಸ್ಥಳೀಯವಾಗಿ ಉಳಿಯುತ್ತದೆ. ಇದು ವಿಕೇಂದ್ರೀಕರಣವನ್ನು ದುರ್ಬಲಗೊಳಿಸದೆಯೇ ವಿಘಟನೆಯನ್ನು ಸರಿಪಡಿಸುತ್ತದೆ. ಸಮಾಲೋಚನೆಯಿಲ್ಲದೆ ಸುಧಾರಣೆಯನ್ನು ಕೈಗೊಳ್ಳಲಾಗಿದೆ ಎಂಬ ವಾದಗಳು ಸಹ ಅಷ್ಟೇ ಅಸಂಗತವಾಗಿವೆ. ಈ ವಿಧೇಯಕ ಮಂಡನೆಗೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳು ನಡೆದವು. ಇದಲ್ಲಿನ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳು - ಗ್ರಾಮ ಯೋಜನಾ ರಚನೆಗಳು, ಒಮ್ಮುಖ ಕಾರ್ಯವಿಧಾನಗಳು ಮತ್ತು ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ರಾಜ್ಯಗಳ ಪ್ರತಿಕ್ರಿಯೆ ಮತ್ತು ಹಲವು ವರ್ಷಗಳ ಅನುಷ್ಠಾನದಿಂದ ಪಡೆದ ಪಾಠಗಳಿಂದ ರೂಪಿಸಲಾಗಿದೆ. ಹಂಚಿಕೆ, ಪಾಲಿನಲ್ಲಿ ಹೆಚ್ಚಳ ಕಳೆದ ದಶಕದಲ್ಲಿ ಉದ್ಯೋಗ ಖಾತರಿಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂಬ ಆರೋಪವು ವಾಸ್ತವಕ್ಕೆ ದೂರವಾದುದು. ಬಜೆಟ್ ಹಂಚಿಕೆಯು 2013-14ರಲ್ಲಿದ್ದ 33,000 ಕೋಟಿ ರೂ.ಗಳ ಮಟ್ಟದಿಂದ 2024-25ರಲ್ಲಿ 286,000 ಕೋಟಿ ರೂ.ಗೆ ಏರಿದೆ. ಸೃಷ್ಟಿಯಾದ ಮಾನವ ದಿನಗಳ ಸಂಖ್ಯೆಯೂ 2013-14ರ ಅವಧಿಯಲ್ಲಿ 1,660 ಕೋಟಿ ಇದ್ದದ್ದು ಈಗ 3,210 ಕೋಟಿಗೆ ಏರಿದೆ. ಬಿಡುಗಡೆ ಮಾಡಲಾದ ಕೇಂದ್ರದ ನಿಧಿ ಪ್ರಮಾಣವೂ 2.13 ಲಕ್ಷ ಕೋಟಿ ರೂ.ಗಳಿಂದ 8.53 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಜೊತೆಗೆ, ಪೂರ್ಣ ಗೊಂಡ ಕಾಮಗಾರಿಗಳ ಸಂಖ್ಯೆ 153 ಲಕ್ಷದಿಂದ 862 ಲಕ್ಷಕ್ಕೆ ಏರಿಕೆಯಾಗಿದೆ. ಮಹಿಳೆಯರ ಭಾಗವಹಿಸುವಿಕೆ ಶೇ.48ರಿಂದ ಶೇ.56.73ಕ್ಕೆ ಏರಿದೆ. ಶೇ.99 ಕ್ಕೂ ಹೆಚ್ಚು ಹಣ ವರ್ಗಾವಣೆ ಆದೇಶಗಳು ಈಗ ಸಕಾಲಿಕವಾಗಿ ಸೃಷ್ಟಿಯಾಗುತ್ತಿವೆ ಮತ್ತು ಸುಮಾರು ಶೇ.99 ರಷ್ಟು ಸಕ್ರಿಯ ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ. ಈ ಪ್ರವೃತ್ತಿಗಳು ನಿರಂತರ ಬದ್ಧತೆ ಮತ್ತು ಸುಧಾರಿತ ವಿತರಣೆಯನ್ನು ಸೂಚಿಸುತ್ತವೆಯೇ ಹೊರತು ನಿರ್ಲಕ್ಷ್ಯವನ್ನಲ್ಲ. ಆದಾಗ್ಯೂ ಕಾಲಾನಂತರದಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಯೋಜನೆಯ ಅನುಷ್ಠಾನದ ಅನುಭವವು ಹಿಂದಿನ ಯೋಜನೆಗಳಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಸಾಂದರ್ಭಿಕ ಉದ್ಯೋಗ, ನಿರುದ್ಯೋಗ ಭತ್ಯೆಯ ದುರ್ಬಲ ಜಾರಿಗೊಳಿಸುವಿಕೆ, ಛಿದ್ರಗೊಂಡ ಆಸ್ತಿ ಸೃಷ್ಟಿ ಮತ್ತು ನಕಲು ನೋಂದಣಿಗಳ ಸಾಧ್ಯತೆ ತಪ್ಪಿದೆ. ಬರಗಾಲದ ವರ್ಷಗಳು, ವಲಸೆಯ ಹೆಚ್ಚಳ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಂತಹ ಅವಧಿಗಳಲ್ಲಿ ಈ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರವಾಗಿವೆ. ಹೊಸ ಕಾಯ್ದೆಯಡಿ ಹಣಕಾಸಿನ ಪುನರ್ ರಚನೆಯನ್ನು ನಿಧಿಯ ಕಡಿತ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಕೇಂದ್ರ ಸರ್ಕಾರದ ಕೊಡುಗೆ ಹೆಚ್ಚುತ್ತಿದೆ - ಕೇಂದ್ರದ ಪಾಲು 86,000 ಕೋಟಿ ರೂ.ಗಳಿಂದ ಸುಮಾರು 295,000 ಕೋಟಿ ರೂ.ಗೆ ಏರುತ್ತದೆ, ಇದು ಗ್ರಾಮೀಣ ಉದ್ಯೋಗಕ್ಕೆ ನಿರಂತರ ಮತ್ತು ಹೆಚ್ಚಿದ ಬೆಂಬಲವನ್ನು ಒತ್ತಿಹೇಳುತ್ತದೆ. 60:40 ಧನಸಹಾಯ ಮಾದರಿಯು ದೀರ್ಘಕಾಲದಿಂದ ಅನುಸರಿಸಿಕೊಂಡು ಬಂದಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ರಚನೆಯನ್ನು ಹೊಂದಿದೆ. ಇದೇವೇಳೆ, ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ 90:10 ಅನುಪಾತದ ಧನಸಹಾಯ ರಚನೆಯನ್ನು ಯೋಜನೆ ಒಳಗೊಂಡಿದೆ. ಈ ಅನುದಾನ ಪಾಲುದಾರಿಕೆಯು ಹಣಕಾಸಿನ ಕಡಿತವನ್ನು ಸೂಚಿಸುವ ಬದಲು, ಹಂಚಿಕೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುತ್ತದೆ. ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯವಾರು ನಿಧಿ ಹಂಚಿಕೆಗಳನ್ನು ನಿರ್ಧರಿಸಲಾಗುತ್ತದೆ. ನಿಯಮ ಆಧಾರಿತ ಪ್ರಮಾಣಕ ಹಂಚಿಕೆಯ ಮೂಲಕ ಸಮಾನತೆಯನ್ನು ಖಾತ್ರಿಪಡಿಸಲಾ ಗುತ್ತದೆ. ರಾಜ್ಯಗಳನ್ನು ಕೇವಲ ಅನುಷ್ಠಾನ ಏಜೆನ್ಸಿಗಳಾಗಿ ಪರಿಗಣಿಸದೆ ಅಭಿವೃದ್ಧಿಯ ಪಾಲುದಾರರಾಗಿ ಪರಿಗಣಿಸ ಲಾಗುತ್ತದೆ, ಶಾಸನಬದ್ಧ ಚೌಕಟ್ಟಿನೊಳಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿ ಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಮ್ಯತೆಯನ್ನು ಸ್ಪಷ್ಟವಾಗಿ ಸಂರಕ್ಷಿಸಲಾಗಿದೆ. ನೈಸರ್ಗಿಕ ವಿಕೋಪಗಳು ಅಥವಾ ಇತರ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯಗಳು ವಿಶೇಷ ಸಡಿಲಿಕೆಗಳನ್ನು ಶಿಫಾರಸು ಮಾಡಬಹುದು, ಇದರಲ್ಲಿ ಅನುಮತಿಸಬಹುದಾದ ಕೆಲಸಗಳ ದಿನಗಳ ವಿಸ್ತರಣೆ ಮತ್ತು ಉದ್ಯೋಗದ ತಾತ್ಕಾಲಿಕ ಹೆಚ್ಚಳವೂ ಸೇರಿದೆ. ನಿಯಮಾಧರಿತ ಹಂಚಿಕೆ ಮತ್ತು ಸಂದರ್ಭೋಚಿತ ಬದಲಾವಣೆಗೆ ಅವಕಾಶದ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅನುಗುಣವಾದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಈ ಕಾಯ್ದೆಯು ಗರಿಷ್ಠ ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ, ಒಂದು ಹಣಕಾಸು ವರ್ಷದಲ್ಲಿ 60 ದಿನಗಳವರೆಗೆ ಕಾಮಗಾರಿಗಳನ್ನು ಕೈಗೊಳ್ಳದ ಅವಧಿಯನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ. ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜಿಲ್ಲೆಗಳು, ಬ್ಲಾಕ್ಗಳು ಅಥವಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಬಹುದು. ಆ ಮೂಲಕ ಸುಧಾರಿತ ಉದ್ಯೋಗ ಖಾತರಿ ಯೋಜನೆಯು ಕೃಷಿ ಕಾರ್ಯಾಚರಣೆಗಳಿಗೆ ಪೂರಕವಾಗಿರುವುದನ್ನು ಖಚಿತಪಡಿಸುತ್ತದೆ. ಯು.ಪಿ.ಎ. ದಾಖಲೆ ತನ್ನ ಮೊದಲ ಅಧಿಕಾರಾವಧಿಯಿಂದಲೇ ಕಾಂಗ್ರೆಸ್ ನೇತೃತ್ವದ ʻಯು.ಪಿ.ಎ.ʼ ಸರ್ಕಾರವು ʻಮನರೇಗಾʼ ವಿಚಾರದಲ್ಲಿ ನುಡಿದಂತೆ ನಡೆಯಲು ವಿಫಲವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದಿನಕ್ಕೆ 100 ರೂ.ಗಳ ನೈಜ ವೇತನದಂತೆ ಕನಿಷ್ಠ 100 ದಿನಗಳ ಕೆಲಸದ ಭರವಸೆ ನೀಡಲಾಗಿದ್ದರೂ, ಸರ್ಕಾರವು 2009ರ ಆರಂಭದಲ್ಲೇ ವೇತನವನ್ನು 100 ರೂ.ಗೆಮಿತಿಗೊಳಿಸಿತು. ಅಷ್ಟೇ ಅಲ್ಲದೆ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟಗಳನ್ನು ನಿರ್ಲಕ್ಷಿಸಿ ಹಲವು ವರ್ಷಗಳವರೆಗೆ ಅದೇ ಮಟ್ಟದಲ್ಲಿ ಮುಂದುವರಿಸಿತು. ಈ ಯೋಜನೆಯಡಿಯಲ್ಲಿ ರಾಜ್ಯಗಳು ಅನಿಯಂತ್ರಿತವಾಗಿ ವರ್ತಿಸುತ್ತಿವೆ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿತು ಮತ್ತು 'ವಿವೇಚನಾರಹಿತ ಹೆಚ್ಚಳ'ಕ್ಕೆ ರಾಜ್ಯ ಸರ್ಕಾರಗಳನ್ನು ದೂಷಿಸುವ ಮೂಲಕ ವೇತನ ಸ್ಥಗಿತಗೊಳಿಸುವಿಕೆಯನ್ನು ಸಮರ್ಥಿಸಿಕೊಂಡಿತು. ಇದು ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ತನ್ನದೇ ರಾಜ್ಯ ಸರ್ಕಾರಗಳನ್ನು ಸಹ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ʻಮನರೇಗಾʼದಲ್ಲಿ ನಿಧಿ ದುರ್ಬಳಕೆ, ನಕಲಿ ಜಾಬ್ ಕಾರ್ಡ್ಗಳ ಸೃಷ್ಟಿ ಮತ್ತು ಆರ್ಥಿಕ ಸೋರಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು. ʻಯುಪಿಎ-2ʼ ಅವಧಿಯಲ್ಲಿ ಯೋಜನೆಯ ಬಗೆಗಿನ ಬದ್ಧತೆ ಸ್ಥಿರವಾಗಿ ಕುಸಿಯಿತು. 2010-11ರಲ್ಲಿ 2,40,100 ಕೋಟಿ ರೂ.ಗಳಷ್ಟಿದ್ದ ಬಜೆಟ್ ಹಂಚಿಕೆಯನ್ನು 2012-13ರ ವೇಳೆಗೆ 33,000 ಕೋಟಿ ರೂ.ಗೆ ಇಳಿಸಲಾಯಿತು. 2013ರಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಸಹಾಯಕ ಸಚಿವರಾಗಿದ್ದ ರಾಜೀವ್ ಶುಕ್ಲಾ ಅವರು, ʻಮನರೇಗಾʼ ಅಡಿಯಲ್ಲಿ ಉದ್ಯೋಗ ಸೃಷ್ಟಿಯು 2010-11ರಲ್ಲಿ 7.55 ಕೋಟಿ ಕಾರ್ಮಿಕರಿಂದ 2013ರ ನವೆಂಬರ್ ವೇಳೆಗೆ ಕೇವಲ 6.93 ಕೋಟಿಗೆ ಕುಸಿದಿದೆ ಎಂದು ಒಪ್ಪಿಕೊಂಡಿದ್ದರು. ವಿಳಂಬವಾದ ನಿಧಿ ಬಿಡುಗಡೆಗಳು, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಆಡಳಿತಾತ್ಮಕ ನಿರಾಸಕ್ತಿಯು ಕಾರ್ಮಿಕರಲ್ಲಿ ಉದ್ಯೋಗ ಶೋಧದ ಉತ್ಸಾಹ ಕುಂದಿಸಿತು. ಇದು ಕಾಯ್ದೆಯಡಿ ಭರವಸೆ ನೀಡಲಾದ ಶಾಸನಬದ್ಧ ಉದ್ಯೋಗ ಖಾತರಿಯನ್ನು ನೇರವಾಗಿ ದುರ್ಬಲಗೊಳಿಸಿತು. ʻಕಂಟ್ರೋಲರ್ ಮತ್ತು ಆಡಿಟರ್ ಜನರಲ್ʼ(ಸಿ.ಎ.ಜಿ.) ಅವರ 2013ರ ವರದಿಯು ಯು.ಪಿ.ಎ. ವರ್ಷಗಳಲ್ಲಿ ʻಮನರೇಗಾʼ ಯೋಜನೆಯ ನೈಜ ಸ್ಥಿತಿಯನ್ನು ಬಹಿರಂಗಪಡಿಸಿದೆ. ವ್ಯಾಪಕವಾದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 4.33 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದೋಷಯುಕ್ತ ಜಾಬ್ ಕಾರ್ಡ್ಗಳು, ಲೆಕ್ಕವಿಲ್ಲದ ಹಣ ಹಿಂಪಡೆಯುವಿಕೆ ಮತ್ತು ಅನಿಯಮಿತ ಕೆಲಸದಿಂದ ಸಾವಿರಾರು ಕೋಟಿ ನಷ್ಟವಾ ಗಿದೆ. 23 ರಾಜ್ಯಗಳಲ್ಲಿ ವೇತನ ವಿಳಂಬವಾಗಿದೆ ಅಥವಾ ನಿರಾಕರಿಸಲಾಗಿದೆ ಮತ್ತು ಭಾರತದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕಳಪೆ ದಾಖಲೆ ನಿರ್ವಹಣೆಯಾಗಿದೆ ಎಂದು ವರದಿಯು ಹೇಳಿತ್ತು. ಗ್ರಾಮೀಣ ಬಡವರ ಸಂಖ್ಯೆ ಅತಿ ಹೆಚ್ಚಾಗಿರುವ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಹಂಚಿಕೆಯಾದ ನಿಧಿಯಲ್ಲಿ ಕೇವಲ ಶೇ.20 ರಷ್ಟು ಮಾತ್ರ ಬಳಸಿಕೊಂಡಿದ್ದವು. ಇದು ಯೋಜನೆಯು ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ನಿಖರ ವಾಗಿ ವಿಫಲವಾಗಿರುವುದನ್ನು ಸಾಬೀತುಪಡಿಸಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯ ನಡುವಿನ ಆಯ್ಕೆ ಎಂಬ ಚರ್ಚೆಯನ್ನು ಮುಂದಿಡುವುದು ಕೃತಿಮ ದ್ವಂದ್ವದ ಸೃಷ್ಟಿಯೇ ಸರಿ. ಜೀವನೋಪಾಯದ ಖಾತರಿಯು ಜನಕಲ್ಯಾಣಕ್ಕೆ ಅಡಿಪಾಯವಾದಾಗ ಮತ್ತು ದೀರ್ಘ ಬಾಳಿಕೆಯ ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆಯು ಅಭಿವೃದ್ಧಿಗೆ ಅಡಿಪಾಯವಾದಾಗ, ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡೂ ಸಹ ಪರಸ್ಪರ ಸ್ಪರ್ಧಿಗಳಾಗುವ ಬದಲು ಪರಸ್ಪರ ಅವಲಂಬಿತ ವಿಷಯಗಳಾಗುತ್ತವೆ. ನಿರೀಕ್ಷಿತ ರೀತಿಯಲ್ಲಿ ಪ್ರಯೋಜನ ತಲುಪಿಸುವಲ್ಲಿ ವಿಫಲವಾದ ಯೋಜನೆಯನ್ನು ಮುಂದುವರಿಸಬೇಕೇ ಅಥವಾ ಅಭಿವೃದ್ಧಿಯ ಮೂಲಕ ಜನಕಲ್ಯಾಣವನ್ನು ಒದಗಿಸುವ, ಸಮಗ್ರ ಉದ್ಯೋಗ ಖಾತರಿ ಒದಗಿಸುವ ಆಧುನಿಕ ಯೋಜನೆಯನ್ನಾಗಿ ಅದನ್ನು ಮಾರ್ಪಡಿಸಬೇಕೆ ಎಂಬುದು ಇಲ್ಲಿ ಮೂಲ ಪ್ರಶ್ನೆಯಾಗಿದೆ. ಹೊಸ ಕಾಯ್ದೆಯು ಕೆಲಸ ಮಾಡುವ ಕಾನೂನು ಬದ್ಧ ಹಕ್ಕನ್ನು ಸಂರಕ್ಷಿಸುತ್ತದೆ, ಅರ್ಹತೆಗಳನ್ನು ವಿಸ್ತರಿಸುತ್ತದೆ, ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುತ್ತದೆ. ಜೊತೆಗೆ ಹಲವು ವರ್ಷಗಳ ಅನುಷ್ಠಾನದ ಮೂಲಕ ಬಯಲಾದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸುತ್ತದೆ. ಇದು ಧ್ವಂಸ ಮಾಡುವ ಕೃತ್ಯವಲ್ಲ, ಬದಲಿಗೆ ಅನುಭವದ ಆಧಾರದ ಮೇಲೆ ನವೀಕರಿಸುವ ಪ್ರಕ್ರಿಯೆ. - ಶಿವರಾಜ್ ಸಿಂಗ್ ಚೌಹಾಣ್ ಲೇಖಕರು, ಭಾರತ ಸರ್ಕಾರದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು.
ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆ | ಸುಪ್ರೀಂಕೋರ್ಟ್ ರಿಟ್ ಅರ್ಜಿಯಲ್ಲಿ ನನ್ನ ಹೆಸರಿದೆ: ಎಚ್.ಡಿ. ದೇವೇಗೌಡ
ಬೆಂಗಳೂರು: ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಕೆಲವು ರೈತರು ಹಾಗೂ ನನ್ನನ್ನು ಉಲ್ಲೇಖ (ಪಾರ್ಟಿ) ಮಾಡಿದೆ. ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದು ತಿಳಿಸಿದರು. ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್ಶಿಪ್ ಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪೆನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪೆನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ದೇವೇಗೌಡರು ದೂರಿದರು.
ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಪೀಕರ್ ಯು.ಟಿ.ಖಾದರ್ಗೆ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಸನ್ಮಾನ
ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯಿಂದ ಗೌರವಿಸಲ್ಪಟ್ಟ ಸ್ಪೀಕರ್ ಡಾ. ಯು .ಟಿ . ಖಾದರ್ ಫರೀದ್ ಅವರನ್ನು ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ ಡಬ್ಲ್ಯೂ ಫ್ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ತುಂಬು ಹೃದಯದ ಹಾರೈಕೆ ಸಲ್ಲಿಸಿದರು. ಎಸ್ ಎಂ ರಶೀದ್ ಹಾಜಿ, ಯು ಚ್ ಉಮರ್, ನಾಸಿರ್ ಲಕ್ಕಿ ಸ್ಟಾರ್, ಹನೀಫ್ ಉಳ್ಳಾಲ್ ಮತ್ತು ಇಕ್ವಾನ್ ಅಹ್ಮದ್ ಉಪಸ್ಥಿತರಿದ್ದರು. ಡಾ । ಯು .ಟಿ .ಖಾದರ್ ರವರು ಸನ್ಮಾನಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ: ಸಚಿವ ಝಮೀರ್ ಅಹ್ಮದ್ ಖಾನ್
ಮೈಸೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಝಮೀರ್ ಅಹ್ಮದ್ ಖಾನ್, 2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯನವರನ್ನು ಕೆಳೆಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು. ಹೈಕಮಾಂಡ್ ಬಿಟ್ಟು ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಹೈಕಮಾಂಡ್ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ . ಅಧಿಕಾರ ಹಂಚಿಕೆ ಒಪ್ಪಂದ ನನಗೆ ಗೊತ್ತಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೆಟ್ರೋ ಪಿಂಕ್, ಬ್ಲೂ ಲೈನ್ ಆರಂಭದ ದಿನಾಂಕ ತಿಳಿಸಿದ ಡಿಕೆ ಶಿವಕುಮಾರ್; ಯಾವ ಮಾರ್ಗ ಯಾವಾಗ ಪ್ರಾರಂಭ?
ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿದ್ದು, ಪಿಂಕ್ ಲೈನ್ ಮತ್ತು ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾರ್ಯಾಚರಣೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. 2027ರ ಅಂತ್ಯದ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲ 175.55 ಕಿ.ಮೀ.ಗೆ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
`ಡ್ರೀಮ್ ಇಲೆವೆನ್' ಕೈತಪ್ಪಿದರೂ ಬಿಸಿಸಿಐ ಸಾಮಾನ್ಯ ನಿಧಿಯಲ್ಲಿ ಅಸಾಮಾನ್ಯ ಏರಿಕೆ! ಎಷ್ಟಿತ್ತು? ಎಷ್ಟಾಯ್ತು?
BCCI And Dream11 Agreement- ಕೇಂದ್ರ ಸರ್ಕಾರ ಆನ್ ಲೈನ್ ಗೇಮಿಂಗ್ ಆ್ಯಪ್ ಕಾಯ್ದೆ 2025ನ್ನು ಜಾರಿಗೆ ತಂದಿದ್ದರಿಂದ ಬಿಸಿಸಿಐ ಮತ್ತು ಡ್ರೀಮ್ 11 ಒಪ್ಪಂದ ಮುರಿದುಬಿತ್ತು. ಇದರಿಂದಾಗಿ ಬಿಸಿಸಿಐಗೆ ನಷ್ಟ ಆಗಬಹುದು ಎಂದು ಎಣಿಸಲಾಗಿತ್ತು. ಅಚ್ಚರಿ ಎಂದರೆ ಡ್ರೀಮ್ 11 ಒಪ್ಪಂದ ಮುರಿದು ಬಿದ್ದ ಬಳಿಕವೂ ಬಿಸಿಸಿಐ ಆರ್ಥಿಕವಾಗಿ ಬಲಿಷ್ಠವಾಗಿದೆ. ಅಡಿಡಾಸ್ (Adidas) ಮತ್ತು ಅಪೊಲೊ ಟೈರ್ಸ್ (Apollo Tyres) ಜೊತೆ ಹೊಸ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಜೊತೆಗೆ ಭರಪೂರ ಲಾಭವನ್ನೂ ಮಾಡಿಕೊಂಡಿದೆ.
ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ: ಹೈಕೋರ್ಟ್
ಬೆಂಗಳೂರು/ಧಾರವಾಡ: ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ. ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ (27) ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದೇಕೆ? ಹಿಂದುಳಿದ ವರ್ಗಗಳ ವಿಭಾಗದ ಅಡಿ ರಾಜು ತಳವಾರ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಆ ವೇಳೆ ಅವರ ಜಾತಿಯು ಒಬಿಸಿ-I ಅಡಿ ಬರುತ್ತಿತ್ತು. 2020ರ ಮಾರ್ಚ್ 20ರಂದು ರಾಜು ತಳವಾರ ಅವರನ್ನು ಕಾರವಾರಕ್ಕೆ ನಿಯೋಜಿಸಿದ್ದಾಗ ಪರಿಶಿಷ್ಟ ಪಂಗಡಗಳ ಆದೇಶಕ್ಕೆ ತಿದ್ದುಪಡಿ ಮಾಡಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಆದ್ದರಿಂದ, 2022ರ ಅಕ್ಟೋಬರ್ 29ರಂದು ರಾಜ್ಯ ಸರ್ಕಾರವು ತಳವಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ತೆಗೆದು ಹಾಕಿತ್ತು. ಈ ಮಧ್ಯೆ, ರಾಜು ತಳವಾರ ಅವರು ಪರಿಶಿಷ್ಟ ಪಂಗಡ ಮೀಸಲಾತಿ ಅಡಿ ಬಡ್ತಿ ಕೋರಿದ್ದು, ಅವರಿಗೆ ಬಡ್ತಿ ಸಿಕ್ಕಿತ್ತು. 2025ರ ಜನವರಿ 29ರಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ರಾಜು ತಳವಾರಗೆ ಹಿಂದುಳಿದ ವರ್ಗಗಳ ಅಡಿ ನೇಮಕವಾಗಿರುವುದಕ್ಕೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ, ಜಾತಿ ತಿಳಿಯುವ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ತಳವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ: ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ವ್ಯಾಪ್ತಿಯು ಉದ್ಯೋಗದಾತರಿಗೆ ಇಲ್ಲ. ಹಲವು ತೀರ್ಪುಗಳಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಈ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ನೆಲೆಯಲ್ಲಿ ಉದ್ಯೋಗದಾತರಿಗೆ ಆ ವ್ಯಾಪ್ತಿ ಇಲ್ಲ ಎಂಬ ಏಕೈಕ ಕಾರಣದ ಮೇಲೆ ಅರ್ಜಿ ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯ ಮೀಸಲಾತಿ ಇತ್ಯಾದಿ) ಕಾಯಿದೆ 1990ರ ಅಡಿ ಮಾತ್ರ ವ್ಯಕ್ತಿಯ ಜಾತಿ ಮಾಹಿತಿ ಕೇಳಬಹುದು. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ಅಧಿಕಾರ ಹೊಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

26 C