ಉಸ್ಮಾನ್ ಹಾದಿ ಹತ್ಯೆ ಕೇಸ್; ಮೇಘಲಾಯ ಗಡಿ ಮೂಲಕ ಭಾರತಕ್ಕೆ ನುಸುಳಿದ ಇಬ್ಬರು ಶಂಕಿತರು
ಬಾಂಗ್ಲಾದೇಶದ ಪ್ರಭಾವಿ ಹೋರಾಟಗಾರ ಮತ್ತು ಶೇಖ್ ಹಸೀನಾ ಅವರು ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ಉಸ್ಮಾನ್ ಹಾದಿಯವರನ್ನು ಹತ್ಯೆ ಮಾಡಲಾಗಿತ್ತು. ಅವರ ತಲೆಗೆ ಗುಂಡು ಹಾರಿಸಿದ ಇಬ್ಬರು ಪ್ರಮುಖ ಶಂಕಿತರು ಮೇಘಾಲಯದ ಗಡಿಯ ಮೂಲಕ ಭಾರತಕ್ ಬಂದು ತಲೆ ಮರೆಸಿಕೊಂಡಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರನ್ನು ಬಂಧಿಸಿ ಹಸ್ತಾಂತರಿಸುವಂತೆ ಬಾಂಗ್ಲಾ ಸರ್ಕಾರವು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ
ಕರ್ನಾಟಕ ಕಂದಾಯ ಇಲಾಖೆ ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಬ್ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಖಾತಾ ಬದಲಾವಣೆ ತಾನಾಗಿಯೇ ಆಗಲಿದೆ. ಅಧಿಕಾರಿಗಳ ಹಸ್ತಕ್ಷೇಪ ಮತ್ತು ವಿಳಂಬ ತಪ್ಪಲಿದೆ. ಬ್ಯಾಂಕ್ ಸಾಲ, ಭೂಸ್ವಾಧೀನ, ಅಡಮಾನ ಸಂಬಂಧಿತ ದಾಖಲೆಗಳ ವರ್ಗಾವಣೆ ನೇರವಾಗಿ ಸ್ವಯಂಚಾಲಿತವಾಗಲಿದೆ. ಇದು ಆಸ್ತಿ ಖರೀದಿದಾರರು ಮತ್ತು ರೈತರಿಗೆ ವೇಗವಾಗಿ ಹಕ್ಕು ವರ್ಗಾವಣೆ ದಾಖಲೆಗಳನ್ನು ಒದಗಿಸಲಿದೆ. ಈ ಕುರಿತ ವಿವರಗಳು ಇಲ್ಲಿವೆ.
ಛೂ ಬಾಣ – ಪಿ. ಮೊಹಮ್ಮದ್ ಕಾರ್ಟೂನ್
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಮಹಿಳೆಯರಿಗೆ 25 ಸಾವಿರ ರೂ. ಶುಲ್ಕ ಇರಲಿದೆ. ವಿದ್ಯಾರ್ಥಿ ಚುನಾವಣೆ ನಡೆಸಲು ಹೊಸ ಸಮಿತಿ ರಚನೆ ಮಾಡಲಾಗಿದೆ.
ತನ್ನ ವಿಕೆಟ್ ಎಗರಿಸಿದ ವಿಶಾಲ್ ಜೈಸ್ವಾಲ್ ಗೆ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ಹೇಳಿದ್ದೇನು?
Vishal Jayswal On Virat Kohli- ವಿಜಯ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ವಿಶ್ವವಿಖ್ಯಾತ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಗುಜರಾತ್ನ ಯುವ ಬೌಲರ್ ವಿಶಾಲ್ ಜೈಸ್ವಾಲ್ಸಂ ಬಹಳ ಸಂಭ್ರಮದಲ್ಲಿದ್ದಾರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ನೀಡಿದ ಪ್ರೋತ್ಸಾಹ ಮತ್ತು ಸಲಹೆಗಳು ವಿಶಾಲ್ ಜೈಸ್ವಾಲ್ ಅವರಿಗೆ ಸ್ಫೂರ್ತಿಯಾಗಿದೆ. ತಾಯಿಯ ಬೆಂಬಲದಿಂದ ಕಠಿಣ ಸವಾಲುಗಳನ್ನು ಎದುರಿಸಿ ಯಶಸ್ಸು ಕಂಡಿರುವ ಜೈಸ್ವಾಲ್ ತಮ್ಮ ರಾಜ್ಯದವರೇ ಆಗಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಮಾರ್ಗದರ್ಶನವನ್ನೂ ನೆನಪಿಸಿಕೊಂಡಿದ್ದಾರೆ.
BSNL: ದಿನಕ್ಕೆ 7 ರೂಪಾಯಿ ಸಾಕು: ದಿನಕ್ಕೆ 2GB ಡೇಟಾ + ವರ್ಷಪೂರ್ತಿ ಅನ್ಲಿಮಿಟೆಡ್ ಟಾಕ್ ಟೈಮ್
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅತಿದೊಡ್ಡ ಚಿಂತೆಯೆಂದರೆ ಅದು ಮೊಬೈಲ್ ರೀಚಾರ್ಜ್ ದರ. ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಸುಂಕದ ದರಗಳನ್ನು ಹೆಚ್ಚಿಸಿದ ನಂತರ, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಪ್ರತಿ ತಿಂಗಳು ರೀಚಾರ್ಜ್ ಮಾಡಿಸುವುದು ಹಲವರಿಗೆ ಹೊರೆಯಾಗಿ ಪರಿಣಮಿಸಿದೆ. ಅನೇಕರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ದಿನಗಳ ವ್ಯಾಲಿಡಿಟಿ (Validity) ಮತ್ತು ಇಂಟರ್ನೆಟ್ ಸೌಲಭ್ಯ ನೀಡುವ ಯೋಜನೆಯ ಹುಡುಕಾಟದಲ್ಲಿದ್ದಾರೆ. ಅಂತಹ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಅಚ್ಚರಿಯ ಆಯ್ಕೆಯೊಂದನ್ನು ಮುಂದಿಟ್ಟಿದೆ. ಈ ಯೋಜನೆಯ ... Read more The post BSNL: ದಿನಕ್ಕೆ 7 ರೂಪಾಯಿ ಸಾಕು: ದಿನಕ್ಕೆ 2GB ಡೇಟಾ + ವರ್ಷಪೂರ್ತಿ ಅನ್ಲಿಮಿಟೆಡ್ ಟಾಕ್ ಟೈಮ್ appeared first on Karnataka Times .
ಶಿಕ್ಷಣವು ಅಂಕಗಳಿಗೆ ಸೀಮಿತವಾಗದೆ ಜೀವನ ಮೌಲ್ಯಗಳು ಸಿಗುವಂತಾಗಬೇಕು: ಪ್ರೊ.ಗಣೇಶ್ ಸಂಜೀವ್
ಕೊಣಾಜೆ: ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಪ್ರತಿಭೆಗಳನ್ಬು ಅವಕಾಶಗಳನ್ನಾಗಿ ಮಾಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಶಿಕ್ಷಣವು ಅಂಕಗಳಿಗೆ ಮಾತ್ರವಲ್ಲ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಅವರು ಹೇಳಿದರು. ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಗಣೇಶ್ ಸಂಜೀವ್, ಮಕ್ಕಳು ಸಾಧನೆ ಮಾಡಿದಾಗ ಪಾಲಕರು ಮಾತ್ರವಲ್ಲ ಶಿಕ್ಷಕರೂ ಸಂತಸಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಗೌರವ ನೀಡುವ ಮನೋಭಾವನೆ, ನಾಯಕತ್ವ ಗುಣವನ್ನು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದ್ದಾಗಿದೆ ಎಂದು ಹೇಳಿದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಎಷ್ಟೋ ಜನರು ಶಿಕ್ಷಣಕ್ಕೆ ಸೀಮಿತವಾಗಿ ಹೋಗುತ್ತಿರುವುದನ್ನು ಕಾಣುತ್ತೇವೆ. ಸಮಾನತೆ, ಸಾಮರಸ್ಯ, ಮಾನವೀಯತೆಯ ಮನೋಭಾವಗಳು ಶಿಕ್ಷಣದ ಮೂಲಕ ಸಿಗುವಂತಾಗಲಿ ಎಂದು ಹೇಳಿದರು. ವಿಶ್ವಮಂಗಳ ಆಡಳಿತ ಅಧ್ಯಕ್ಷರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ನಾರಾಯಣ ಗುರು, ಬಸವಣ್ಣ ,ಗಾಂಧೀಜಿಯವರಂತಹ ಮಹಾತ್ಮರ ಆದರ್ಶ ತತ್ವಗಳನ್ನು ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಚಿತ್ರನಟಿ ವಂಶಿ ರತ್ನಕುಮಾರ್, ತೃಷಾ ಹಾಗೂ ಫಾತಿಮತ್ ನಿಶಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿದ ವಿಭಾಗಗಳ ಮುಖ್ಯಸ್ಥರಾದ ಶೋಭಾವತಿ ಬಿ, ಪ್ರಿಯಾ ಎನ್, ಹಂಸಗೀತ ಅವರು ವಾರ್ಷಿಕ ವರದಿ ಮಂಡಿಸಿದರು. ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ, ಕಾರ್ಯದರ್ಶಿ ಡಾ.ಗೋವಿಂದ ರಾಜು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೀವ್ ನಾಯ್ಜ್ ಮೊದಲಾದವರು ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ ಶೆಟ್ಟಿ ಸ್ಬಾಗತಿಸಿದರು. ಕೋಶಾಧಿಕಾರಿ ಸುಬ್ಬ ನಾಯ್ಕ್ ಅವರು ವಂದಿಸಿದರು. ಮಾನ್ವಿ ಎಸ್ ಹಾಗೂ ಮಹಮ್ಮದ್ ಝಹೀದ್ ನಿರೂಪಿಸಿದರು.
Udupi | ಎಕೆಎಂಎಸ್ ಬಸ್ ಮಾಲಕ ಸೈಫ್ ಹತ್ಯೆ ಪ್ರಕರಣ; 6 ಮಂದಿ ಆರೋಪಿಗಳ ವಿರುದ್ಧ ʼಕೋಕಾʼ ಪ್ರಕರಣ ದಾಖಲು
ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ 3 ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮುಹಮ್ಮದ್ ಫೈಸಲ್ ಖಾನ್(27), ಕರಂಬಳ್ಳಿಯ ಮುಹಮ್ಮದ್ ಶರೀಫ್(37), ಕೃಷ್ಣಾಪುರದ ಅಬ್ದುಲ್ ಶುಕೂರ್(43), ಫೈಸಲ್ ಖಾನ್ ಪತ್ನಿ ರಿಧಾ ಶಭನಾ(27), ಮಾಲಿ ಮುಹಮ್ಮದ್ ಸಿಯಾನ್(31) ಎಂಬವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ತಲೆಮರೆಸಿಕೊಂಡ ಆರೋಪಿ ಸೇರಿದಂತೆ ಎಲ್ಲಾ 6 ಆರೋಪಿಗಳ ವಿರುದ್ಧವೂ ಅಳವಡಿಸಲಾಗಿದೆ. ಯಾವುದೇ ಪ್ರಕರಣಕ್ಕೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ಅಳವಡಿಸಿದಾಗ ಆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಸರ್ಕಾರದಿಂದ ಪಡೆದ 250 ಕೋಟಿ ರೂ. ಭೂಮಿ ಇನ್ಫೋಸಿಸ್ ಮಾರಾಟ ಆರೋಪ! ಅಂದಿನ CFO ಮೋಹನ್ ದಾಸ್ ಪೈ ಪ್ರತಿಕ್ರಿಯೆ
ಇನ್ಫೋಸಿಸ್ ಕರ್ನಾಟಕ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಖಾಸಗಿ ಸಂಸ್ಥೆಗೆ ದುಬಾರಿ ದರಕ್ಕೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಮೋಹನ್ ದಾಸ್ ಪೈ ಸ್ಪಷ್ಟನೆ ನೀಡಿದ್ದಾರೆ. ಈ ಭೂಮಿಯನ್ನು ಮಾರುಕಟ್ಟೆಯಿಂದಲೇ ಖರೀದಿಸಲಾಗಿತ್ತು, ಸರ್ಕಾರದಿಂದ ರಿಯಾಯಿತಿ ಪಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಸಂಸದ ಕೆ.ವಿ.ಆರ್. ಕೃಷ್ಣಮೂರ್ತಿ ಅವರು ಈ ಮಾರಾಟದ ಬಗ್ಗೆ ಪ್ರಶ್ನಿಸಿ, ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ವಾದಿಸಿದ್ದಾರೆ.
ಹೊಸ ವರ್ಷದ ಸಂದೇಶದ ರೂಪದಲ್ಲಿ ಬರುತ್ತಿದೆ APK ಫೈಲ್, ತೆರೆಯುವಾಗ ಜಾಗ್ರತೆ!
ಈ ಹೊಸ ವರ್ಷದಲ್ಲಿ ದುರುದ್ದೇಶಪೂರಿತ Apk ಫೈಲ್ ನಿಂದ ಎಚ್ಚರವಾಗಿರಿ. ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ! ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ! ಸಂದೇಶದಲ್ಲಿ ಲಗತ್ತಿಸಿರಬಹುದಾದ ಎಪಿಕೆ ಫೈಲ್ ತೆರೆಯದಿರಿ. ನಿಮಗೆ ಮೇಲ್ನೋಟಕ್ಕೆ ಹೊಸ ವರ್ಷದ ಶುಭಾಶಯದ ವಾಟ್ಸ್ ಆ್ಯಪ್ ಸಂದೇಶವಾಗಿ ಕಾಣಬಹುದು. ಸಂದೇಶದಲ್ಲಿ ಒಂದು ಎಪಿಕೆ ಫೈಲ್ ಲಗತ್ತಿಸಲಾಗಿರುತ್ತದೆ ಮತ್ತು ಡೌನ್ಲೋಡ್ ಮಾಡುವಂತೆ ಆಮಿಷ ಒಡ್ಡಲಾಗಿರುತ್ತದೆ. ನಿಮಗಾಗೇ ಪ್ರತ್ಯೇಕವಾಗಿ ರೂಪಿಸಿದ ಶುಭಾಶಯಗಳನ್ನು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಂಚಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ ಈ ಎಪಿಕೆ ಫೈಲ್ ಅನ್ನು ನೀವು ಡೌನ್ಲೋಡ್ ಮಾಡಿದರೆ ಗಂಟೆಗಳೊಳಗೆ, ಅನುಮಾನಾಸ್ಪದ ಚಟುವಟಿಕೆ ಫೋನ್ ನಲ್ಲಿ ಕಾಣಿಸಬಹುದು. ತಮ್ಮಷ್ಟಕ್ಕೆ ನಿಮ್ಮ ಮೊಬೈಲ್ ನಲ್ಲಿರುವ ಆ್ಯಪ್ ಗಳು ತೆರೆದುಕೊಳ್ಳಬಹುದು. ಸಂಪರ್ಕ ಸಂಖ್ಯೆಗಳಿಗೆ ದುರುಳರು ಪ್ರವೇಶ ಪಡೆಯುತ್ತಾರೆ. ಮತ್ತು ಕೆಲವು ಪ್ರಕರಣಗಳಲ್ಲಿ ಅನಧಿಕೃತ ಬ್ಯಾಂಕ್ ವ್ಯವಹಾರಗಳೂ ಸಂಭವಿಸಬಹುದು. ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ APK ಫೈಲ್ಗಳು ಸೈಬರ್ ತಜ್ಞರು ಹೇಳುವ ಪ್ರಕಾರ ಈ ದುರುದ್ದೇಶಪೂರಿತ ಎಪಿಕೆ ಫೈಲ್ಗಳನ್ನು ಕಳುಹಿಸುವ ಮೂಲಕ ಸದ್ದೇ ಇಲ್ಲದೆ ನಿಮ್ಮ ಫೋನ್ ಅನ್ನು ದುರುಳರು ನಿಯಂತ್ರಿಸಲು ಆರಂಭಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಇಂತಹ ಸಂದೇಶಗಳು ಹೆಚ್ಚಾಗುತ್ತವೆ. ಜನರು ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡುವುದು ಹೆಚ್ಚಾಗಿರುತ್ತದೆ. ಅಥವಾ ಫೈಲ್ಗಳನ್ನು ಗಮನಿಸದೆ ಡೌನ್ಲೋಡ್ ಮಾಡಿರುತ್ತಾರೆ. ಈ ಕುರಿತಂತೆ ಹೈದರಾಬಾದ್ ಪೊಲೀಸರು ಇತ್ತೀಚೆಗೆ ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ.” ವಂಚಕರು ವಾಟ್ಸ್ಆ್ಯಪ್, ಎಸ್ಎಂಎಸ್ ಮತ್ತು ಇಮೇಲ್ಗಳ ಮೂಲಕ ಹಬ್ಬದ ಸಂದರ್ಭದಲ್ಲಿ ಜನರನ್ನು ಮರಳುಗೊಳಿಸಲು ಪ್ರಯತ್ನಿಸುತ್ತಾರೆ. ಅಮಾಯಕ ಆನ್ಲೈನ್ ಬಳಕೆದಾರರನ್ನು ಗುರಿಯಾಗಿಸಿ ಈ ಸಂದೇಶಗಳನ್ನು ಕಳುಹಿಸಲಾಗುತ್ತದೆ ಮತ್ತು ಹಣಕಾಸು ಮತ್ತು ವೈಯಕ್ತಿಕ ಡಾಟಾ ಕದಿಯಲಾಗುತ್ತಿದೆ” ಎಂದು ಪೊಲೀಸರು ಎಚ್ಚರಿಸಿದ್ದಾರೆ. APK ಫೈಲ್ ಎಂದರೇನು? ಒಂದು ಆಂಡ್ರ್ಯಾಡ್ ಪ್ಯಾಕೇಜ್ ಕಿಟ್ ಅಥವಾ ಎಪಿಕೆ ಫೈಲ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ಗಳು ಮುಖ್ಯವಾಗಿ ಆಂಡ್ರಾಯ್ಡ್ ಫೋನ್ಗಳಲ್ಲಿ ಅಪ್ಲಿಕೇಶನ್ ಗಳನ್ನು ಇನ್ ಸ್ಟಾಲ್ ಮಾಡಲು ಬಳಸಲಾಗುತ್ತದೆ. ಮುಖ್ಯವಾಗಿ ವಿಂಡೋಸ್ ಕಂಪ್ಯೂಟರ್ನಲ್ಲಿ ಬಳಸಲಾಗುವ .exe ಫೈಲ್ ನಂತೆಯೇ ಇರುತ್ತದೆ. ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಬೇಕಾಗಿರುವುದೆಲ್ಲವೂ ಅದರಲ್ಲಿರುತ್ತದೆ. ಎಲ್ಲವನ್ನೂ ಒಂದೇ ಪ್ಯಾಕ್ ನಲ್ಲಿ ಕೊಡಲಾಗಿರುತ್ತದೆ. ಸಾಮಾನ್ಯವಾಗಿ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಲಾಗುತ್ತದೆ. ಆದರೆ ಎಪಿಕೆ ಫೈಲ್ ಗಳನ್ನು ಇತರ ವೆಬ್ ತಾಣಗಳು ಅಥವಾ ಹಂಚಿಕೊಳ್ಳುವ ತಾಣಗಳಾದ ವಾಟ್ಸ್ಆ್ಯಪ್, ಎಸ್ಎಂಎಸ್ ಅಥವಾ ಇಮೇಲ್ ಮೂಲಕವೂ ಕಳುಹಿಸಬಹುದು. ಇದನ್ನು ಸೈಡ್ ಲೋಡಿಂಗ್ ಎಂದು ಕರೆಯುತ್ತಾರೆ. ಅಪಾಯಕಾರಿ ಸೈಡ್ ಲೋಡಿಂಗ್ ಸೈಡ್ಲೋಡಿಂಗ್ ಕೆಲವೊಮ್ಮೆ ಉತ್ತಮವಾಗಿದ್ದರೂ, ಅಪಾಯಕಾರಿ. ಎಪಿಕೆ ಫೈಲ್ಗಳು ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ಮೂಲದಿಂದ ಬಂದಲ್ಲಿ ಅದರಲ್ಲಿ ಮಾಲ್ವರೆಗಳು ಇರಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು. ನಿಮ್ಮ ಫೋನಿಗೆ ಪ್ರವೇಶ ಪಡೆಯಬಹುದು ಮತ್ತು ಹಣಕಾಸು ನಷ್ಟವೂ ಸಂಭವಿಸಬಹುದು. ಹೀಗಾಗಿ ಎಪಿಕೆ ಫೈಲ್ ಗಳನ್ನು ಡೌನ್ಲೋಡ್ ಮಾಡುವಾಗ ಅವು ವಿಶ್ವಾಸಾರ್ಹ ಮೂಲವೇ ಎಂದು ಗಮನಿಸಬೇಕು. ಅಪರಿಚಿತ ಸಂದೇಶಗಳು ಅಥವಾ ಲಿಂಕ್ ಮೂಲಕ ಬಂದಲ್ಲಿ ಅದನ್ನು ಅಲಕ್ಷಿಸಬೇಕು. ಪರಿಚಿತರಿಂದಲೇ ಖೆಡ್ಡಾ ಬಹಳಷ್ಟು ಬಾರಿ ಎಪಿಕೆ ಫೈಲ್ ಗಳು ಪರಿಚಿತರಿಂದಲೇ ಬರಬಹುದು. ಆರಂಭದಲ್ಲಿ ಹ್ಯಾಪಿ ನ್ಯೂ ಇಯರ್ ಎನ್ನುವ ಸಂದೇಶ ಬರಬಹುದು. ನಂತರ ಕ್ಲಿಕ್ ಮಾಡಿದರೆ ನಿಮಗಾಗಿ ವಿಶೇಷ ಗ್ರೀಟಿಂಗ್ ಎಂದು ಇರಬಹುದು. ಕೆಲವೊಮ್ಮೆ ಸಹೋದ್ಯೋಗಿ, ದೂರದ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದಲೂ ಬರಬಹುದು. ಯಾವುದೇ ಪ್ರಕರಣಗಳಲ್ಲಿ ದಾಳಿಕೋರರು ಲಿಂಕ್ ಹರಡಲು ವಾಟ್ಸ್ಆ್ಯಪ್ ಬಳಸುವುದೇ ಹೆಚ್ಚು. ಹೀಗಾಗಿ ವಿಶ್ವಾಸಾರ್ಹ ಮೂಲವೆಂದು ತಿಳಿದು ಡೌನ್ಲೋಡ್ ಮಾಡುವ ಅಪಾಯ ಹೆಚ್ಚಾಗಿರುತ್ತದೆ. ಹೊಸ ವರ್ಷದ ಶುಭಾಶಯ ಎನ್ನುವ ಸಂದೇಶ ಬಂದ ನಂತರ ಅದರಲ್ಲಿ ಸಂದೇಶ ನೋಡಲು ಆ್ಯಪ್ ಇರುತ್ತದೆ. ಅದನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡುವುದಿಲ್ಲ. ಬದಲಾಗಿ ಎಪಿಕೆ ಫೈಲ್ ಆಗಿರುತ್ತದೆ. ಅದು ನಿಮ್ಮನ್ನು ಜಾಲಕ್ಕೆ ಬೀಳಿಸುವ ತಂತ್ರವಾಗಿದೆ. ಸರ್ಕಾರದ ಹೆಸರಿನಲ್ಲೂ ಎಪಿಕೆ ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಪ್ರಸಾರ ಮಾಡಲಾಗುತ್ತಿರುವ ಎಪಿಕೆ ಫೈಲ್ಗಳನ್ನು ಸರ್ಕಾರದಿಂದ ಬಂದಿರುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. RTO ಚಲನ್.ಎಪಿಕೆ, SBI ಯೋಜನಾ.ಎಪಿಕೆ ಅಥವಾ ಕಿಸಾನ್ಯೋಜನಾ.ಎಪಿಕೆ ಎಂಬ ಹೆಸರಿನಲ್ಲಿ ಕಳುಹಿಸಲಾಗುತ್ತಿದೆ. ಜನರು ಭಯ ಅಥವಾ ಆಸೆಯಿಂದ ಟ್ರಾಫಿಕ್ ಚಲನ್ ಅಥವಾ ಸರ್ಕಾರದ ಯೋಜನೆಗಳ ಕುರಿತಾದ ಸಂದೇಶ ಎಂದುಕೊಂಡು ಎಪಿಕೆಯನ್ನು ಕ್ಲಿಕ್ ಮಾಡುತ್ತಾರೆ. ಆದರೆ ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಕಳುಹಿಸಿರುವ ಸಂದೇಶ ಹೊಸದಾಗಿದೆ. ವಂಚಕರು ಹೊಸ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಅದರಲ್ಲಿ ಹೊಸ ವರ್ಷದ ಗಿಫ್ಟ್.ಎಪಿಕೆ, ಕ್ರಿಸ್ಮಸ್ ಗ್ರೀಟಿಂಗ್.ಎಪಿಕೆ ಅಥವಾ ಲಾಸ್ಟ್ ಇಯರ್ ನ್ಯೂಯಿರ್ ಪಾರ್ಟಿ ಪಿಕ್ಸ್.ಎಪಿಕೆ ಮೊದಲಾಗಿ ಕಳುಹಿಸುತ್ತಿದ್ದಾರೆ. ಫೈಲ್ ಹೆಸರುಗಳನ್ನು ಸ್ಮರಣೀಯ ವೀಡಿಯೋ ಅಥವಾ ಫೋಟೋ ಎನ್ನುವಂತೆ ಕಾಣುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. ಹೆಸರುಗಳು ಬದಲಾಗಿದ್ದರೂ ಅದರಲ್ಲಿರುವ ಮಾಲ್ವರೆ ಒಂದೇ ಆಗಿರುತ್ತದೆ. ಒಮ್ಮೆ ಇನ್ ಸ್ಟಾಲ್ ಮಾಡಿದರೆ ನಿಮ್ಮ ಫೋನ್ ನಿಯಂತ್ರಣ ದುರುಳರ ಕೈಗೆ ಹೊರಟು ಹೋಗಲಿದೆ. ವೈಯಕ್ತಿಕ ಡಾಟಾದಿಂದ ಹಣಕಾಸು ವಿವರಗಳವರೆಗೆ ಎಲ್ಲವೂ ಬಹಿರಂಗವಾಗಿಬಿಡುತ್ತದೆ.
ಹಳೇ ಪ್ರೀತಿಯೇ ಗಾನವಿ ಆತ್ಮಹ್ಮತ್ಯೆಗೆ ಕಾರಣವಾಯ್ತಾ?; ಸೂರಜ್ ಕುಟುಂಬಸ್ಥರು ಹೇಳಿದ್ದಿಷ್ಟು
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗಾನವಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಕುಟುಂಬಸ್ಥರು ಸೂರಜ್ ವರದಕ್ಷಿಣೆ ಕಿರುಕುಳ ನೀಡಿದ್ದರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾನವಿ ಪತಿ ಸೂರಜ್ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಗಾನವಿ ಕುಟುಂಬದ ವಿರುದ್ಧವೇ ದೂರು ದಾಖಲಾಗಿದೆ. ಗಾನವಿಗಿದ್ದ ಹಳೆಯ ಪ್ರೇಮ ಸಂಬಂಧವೇ ಈ ಎಲ್ಲಾ ದುರಂತಗಳಿಗೆ ಕಾರಣ ಎನ್ನುವುದು ಬಯಲಾಗಿದೆ.
ಪ್ರಧಾನಿ ಮೋದಿ ಸಂಪುಟದೊಂದಿಗೆ ಸಮಾಲೋಚಿಸದೆ ಮನರೇಗಾವನ್ನು ರದ್ದುಗೊಳಿಸಿದ್ದಾರೆ: ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ,ಡಿ.28: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬಂಟಿಯಾಗಿ ಮನರೇಗಾವನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಪುಟದೊಂದಿಗೆ ಸಮಾಲೋಚಿಸದೆ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ, ಅದು ದುಡಿಯುವ ಹಕ್ಕನ್ನು ಆಧರಿಸಿದ್ದ ಪರಿಕಲ್ಪನೆಯಾಗಿತ್ತು. ಮನರೇಗಾ ಮೂಲಕ ದೇಶದ ಕೋಟ್ಯಂತರ ಜನರಿಗೆ ಕನಿಷ್ಠ ವೇತನವನ್ನು ಖಚಿತಗೊಳಿಸಲಾಗಿತ್ತು. ಪಂಚಾಯತ್ ರಾಜ್ನಲ್ಲಿ ನೇರ ರಾಜಕೀಯ ಸಹಭಾಗಿತ್ವ ಮತ್ತು ಹಣಕಾಸು ಬೆಂಬಲಕ್ಕೆ ಮನರೇಗಾ ಮಾರ್ಗವಾಗಿತ್ತು. ಪ್ರಧಾನಿಯವರು ತನ್ನ ಸಂಪುಟದೊಂದಿಗೆ ಸಮಾಲೋಚಿಸದೆ ಮತ್ತು ಈ ವಿಷಯವನ್ನು ಅಧ್ಯಯನ ಮಾಡದೆ ಏಕಾಂಗಿಯಾಗಿ ಅದನ್ನು ನಾಶಗೊಳಿಸುತ್ತಿದ್ದಾರೆ ಎಂದು ಹೇಳಿದರು. ಮನರೇಗಾವನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಹಕ್ಕುಗಳ ಪರಿಕಲ್ಪನೆ ಮತ್ತು ಒಕ್ಕೂಟ ರಚನೆಯ ಮೇಲೆ ದಾಳಿ ನಡೆಸುತ್ತಿದೆ. ಅದು ರಾಜ್ಯಗಳಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ. ಇದು ಅಧಿಕಾರ ಮತ್ತು ಹಣಕಾಸಿನ ಕೇಂದ್ರೀಕರಣವಾಗಿದ್ದು, ದೇಶಕ್ಕೆ ಮತ್ತು ಬಡವರಿಗೆ ಹಾನಿಯನ್ನುಂಟು ಮಾಡುತ್ತದೆ. ಪ್ರಧಾನಿ ಕಚೇರಿಯು ಸಚಿವರು ಅಥವಾ ಸಂಪುಟದೊಂದಿಗೆ ಸಮಾಲೋಚಿಸದೇ ನೇರವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ದೇಶದಲ್ಲಿ ‘ಒನ್-ಮ್ಯಾನ್ ಶೋ’ ನಡೆಯುತ್ತಿದೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು. ಮನರೇಗಾ ರದ್ದತಿಯಿಂದ ಗೌತಮ್ ಅದಾನಿಯಂತಹ ಕೆಲವೇ ಬಂಡವಾಳಶಾಹಿಗಳಿಗೆ ಲಾಭವಾಗಲಿದೆ ಎಂದು ಹೇಳಿದ ರಾಹುಲ್ ಗಾಂಧಿ, ಬಡವರಿಂದ ಹಣವನ್ನು ಕಿತ್ತುಕೊಳ್ಳುವುದು ಮತ್ತು ಅದನ್ನು ಅದಾನಿಯಂತಹ ವ್ಯಕ್ತಿಗಳಿಗೆ ನೀಡುವುದು ಮನರೇಗಾ ರದ್ದತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕರುಳಿನ ಆರೋಗ್ಯಕ್ಕೆ ಉತ್ತಮ ಸಕ್ಕರೆ ಯಾವುದು?
ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡಿದ್ದಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ವಯಸ್ಕರು ಮತ್ತು ಮಕ್ಕಳು ಸಕ್ಕರೆ ಸೇವನೆ ಪ್ರಮಾಣವನ್ನು ಪ್ರತಿದಿನ 58 ಗ್ರಾಂಗಳಷ್ಟು ಅಥವಾ 14 ಚಮಚ ಅಥವಾ ಶೇ 5ರಿಂದ ಶೇ 10ರಷ್ಟು ಒಟ್ಟು ಕ್ಯಾಲರಿಗೆ ಸೀಮಿತಗೊಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡುತ್ತಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು! ಆದರೆ ಸಂಸ್ಕರಿತ ಸಕ್ಕರೆಯ ಬಳಕೆ ಬದಲಿಸಿದಲ್ಲಿ ಸಿಹಿಯನ್ನು ತೊಡೆದು ಹಾಕಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಸಿಹಿಯ ಬಯಕೆಗೆ ನೈಸರ್ಗಿಕವಾಗಿ ಬೇಕಾದಷ್ಟು ಆರೋಗ್ಯಕರ ಬದಲಿಗಳು ಸಿಗುತ್ತವೆ. ಬೆಂಗಳೂರಿನ ಸಿಎಂಐ ಆಸ್ಪತ್ರೆಯಲ್ಲಿ ವೈದ್ಯಕೀಯ ಜಠರಕರುಳಿನಶಾಸ್ತ್ರ (ಗ್ಯಾಸ್ಟ್ರೋಎಂಟರಾಲಜಿ) ಸಲಹಾತಜ್ಞರಾದ ಡಾ ಅನುಪಮ ಎನ್ಕೆ ಹೇಳುವ ಪ್ರಕಾರ,” ಜಠರಕರುಳಿನತಜ್ಞರ ದೃಷ್ಟಿಕೋನದಲ್ಲಿ ಸಿಹಿ ಮುಖ್ಯವಾಗಿ ಜೀರ್ಣಕ್ರಿಯೆ, ಕರುಳಿನ ಆರೋಗ್ಯ, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಮತ್ತು ದೀರ್ಘಕಾಲೀನ ಕರುಳಿನ ಸಮತೋಲನ ತಪ್ಪಿಸುವಲ್ಲಿ ಪರಿಣಾಮ ಬೀರುವುದು ಆಗಿರುತ್ತದೆ. ಯಾವುದೇ ಸಿಹಿ ಸಂಪೂರ್ಣ ಹಾನಿಕರವಲ್ಲ. ಆದರೆ ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ.” ಜಠರಕರುಳಿಗೆ ಯಾವ ಸಿಹಿ ಉತ್ತಮ? ವೈಟ್ ಶುಗರ್ (ಬಿಳಿ ಸಕ್ಕರೆ) ಕರುಳಿನ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಅದು ಬಹಳ ಸಂಸ್ಕರಿತ ಆಹಾರ ಮತ್ತು ಹಾನಿಕರ ಕರುಳಿನ ಬ್ಯಾಕ್ಟೀರಿಯಕ್ಕೆ ನೆಲೆ ನೀಡುತ್ತದೆ. ಅದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಿಡಿಟಿ, ಗ್ಯಾಸ್ ಮತ್ತು ಉರಿಯೂತ ಹೆಚ್ಚಾಗಬಹುದು. ನಿಯಮಿತವಾಗಿ ಸೇವಿಸುವುದಿಂದ ಆಸಿಡ್ ರಿಫ್ಲಕ್ಸ್ ಹೆಚ್ಚಾಗಬಹುದು, ಕರುಳಿನ ಉರಿಯೂತದ ಲಕ್ಷಣಗಳೂ ಮತ್ತು ಫ್ಯಾಟಿ ಲಿವರ್ ರೋಗಕ್ಕೆ ಕಾರಣವಾಗಬಹುದು. ಬ್ರೌನ್ ಶುಗರ್ (ಕಂದು ಸಕ್ಕರೆ)ಯು ವೈಟ್ ಶುಗರ್ನಿಂದ ಸ್ವಲ್ಪ ಮಟ್ಟಿಗೆ ಉತ್ತಮ. ಅದು ಕರುಳಿನಲ್ಲಿ ಸಂಸ್ಕರಿತ ಸಕ್ಕರೆಯಂತೆಯೇ ಪರಿಣಾಮ ಬೀರುತ್ತದೆ. ಹೊಟ್ಟೆ ಉಬ್ಬರಿಸುವಿಕೆ ಮತ್ತು ಆಮ್ಲೀಯತೆ ತರುತ್ತದೆ. ಸಣ್ಣ ಪ್ರಮಾಣದಲ್ಲಿರುವ ಖನಿಜಗಳಿಂದ ಜೀರ್ಣಾಂಗ ವ್ಯವಸ್ಥೆಯ ರಕ್ಷಣೆಯಾಗದು. ಬೆಲ್ಲ ಕಡಿಮೆ ಸಂಸ್ಕರಿತ ಆಹಾರ ಮತ್ತು ಸಕ್ಕರೆಗಿಂತ ಬೇಗನೆ ಜೀರ್ಣವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಬಳಸಿದರೆ ಕರುಳಿನ ಚಲನೆಗಳಿಗೆ ನೆರವಾಗಬಹುದು. ಆದರೆ ಅತಿಯಾಗಿ ಸೇವಿಸಿದರೆ ಗ್ಯಾಸ್, ಬೇಧಿ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಮುಖ್ಯವಾಗಿ ಸೂಕ್ಷ್ಮ ಹೊಟ್ಟೆಗಳಿದ್ದವರಿಗೆ ಸಮಸ್ಯೆ ಕಂಡುಬರಬಹುದು. ಜೇನುತುಪ್ಪವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಅದರಲ್ಲಿರುವ ಬ್ಯಾಕ್ಟೀರಿಯವಿರೋಧಿ ತತ್ವಗಳು ಕರುಳಿನ ಸಮಸ್ಯೆ ಗುಣಪಡಿಸಲು ನೆರವಾಗಬಹುದು. ಆದರೆ ಅತಿಯಾದರೆ ಅಧಿಕ ಫ್ರಕ್ಟೋಸ್ ಇರುವುದರಿಂದ ಹೊಟ್ಟೆ ಉಬ್ಬರಿಸುವಿಕೆ, ಬೇಧಿ, ರಿಫ್ಲಕ್ಸ್ ಕಂಡುಬರಬಹುದು. ಎರೊಥ್ರಿಟಾಲ್ ಅನ್ನು ಮುಖ್ಯವಾಗಿ ಸಣ್ಣ ಕರುಳಿನಲ್ಲಿ ಹೀರಿಕೊಳ್ಳುವುದರಿಂದ ಕರುಳಿನ ಆರೋಗ್ಯಕ್ಕೆ ಸುರಕ್ಷಿತ. ಸಕ್ಕರೆ ಆಲ್ಕೋಹಾಲ್ಗಿಂತ ಕಡಿಮೆ ಗ್ಯಾಸ್ ತರುತ್ತದೆ. ಹಾಗಿದ್ದರೂ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಸೂಕ್ಷ್ಮ ಹೊಟ್ಟೆಯಿರುವವರಿಗೆ ಅಹಿತಕರ ಭಾವನೆ ತರಬಹುದು. ಸ್ಟೆವಿಯಾ (ಮಧುವಂತ) ರಕ್ತದ ಸಕ್ಕರೆ ಪ್ರಮಾಣದ ಮೇಲೆ ಹಾನಿ ತರದು. ಜೀರ್ಣಕ್ರಿಯೆಗೆ ಉತ್ತಮ. ಆದರೆ ಸಂಸ್ಕರಿತ ಸ್ಟೆವಿಯ ಉತ್ಪನ್ನಗಳಿಂದ ಹೊಟ್ಟೆ ಉಬ್ಬರಿಸಬಹುದು ಅಥವಾ ವಾಕರಿಕೆಯ ಅನುಭವವಾಗಬಹುದು. ಮಾಂಕ್ ಫ್ರುಟ್ ಅನ್ನು ಕರುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅದು ಕರುಳಿನಲ್ಲಿ ಹುದುಗುವುದಿಲ್ಲ. ಹೊಟ್ಟೆ ಉಬ್ಬರಿಸುವುದಿಲ್ಲ. ಆಮ್ಲೀಯತೆ ಹೆಚ್ಚಿಸುವುದಿಲ್ಲ. ಐಬಿಎಸ್ ಇದ್ದ ಮಂದಿಗೂ ಉತ್ತಮವಾಗಿರುತ್ತದೆ.
ಡಿವೋರ್ಸ್ ಕೇಸ್: ಪತ್ನಿಗಿಲ್ಲ ಜೀವನಾಂಶ –ಹೈಕೋರ್ಟ್ ಮಹತ್ವದ ಆದೇಶ! ಯಾರಿಗೆ ಅನ್ವಯ?
ವಿಚ್ಛೇದನ (Divorce) ಪ್ರಕರಣಗಳಲ್ಲಿ ಬಹುಮುಖ್ಯವಾಗಿ ಕೇಳಿಬರುವ ವಿಷಯವೆಂದರೆ ಅದು ‘ಜೀವನಾಂಶ’ ಅಥವಾ ‘Alimony’. ಸಾಮಾನ್ಯವಾಗಿ ಡಿವೋರ್ಸ್ ಆದಾಗ ಪತಿಗೆ ಪತ್ನಿಯ ನಿರ್ವಹಣೆಗಾಗಿ ಹಣ ನೀಡುವಂತೆ ಕೋರ್ಟ್ ಆದೇಶಿಸುವುದನ್ನು ನಾವು ನೋಡಿದ್ದೇವೆ. “ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗಲೇಬೇಕು” ಎಂಬುದು ಬಹುತೇಕರ ನಂಬಿಕೆ. ಆದರೆ, ದೆಹಲಿ ಹೈಕೋರ್ಟ್ (Delhi High Court) ನೀಡಿರುವ ಇತ್ತೀಚಿನ ಮಹತ್ವದ ತೀರ್ಪು ಈ ನಂಬಿಕೆಯನ್ನು ಬದಲಿಸಿದೆ. ಸುಶಿಕ್ಷಿತ ಹಾಗೂ ಸ್ವಂತ ಕಾಲಿನ ಮೇಲೆ ನಿಂತಿರುವ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕು ಇದೆಯೇ? ಎಂಬ ... Read more The post ಡಿವೋರ್ಸ್ ಕೇಸ್: ಪತ್ನಿಗಿಲ್ಲ ಜೀವನಾಂಶ – ಹೈಕೋರ್ಟ್ ಮಹತ್ವದ ಆದೇಶ! ಯಾರಿಗೆ ಅನ್ವಯ? appeared first on Karnataka Times .
ಉಸ್ಮಾನ್ ಹಾದಿ ಹಂತಕರ ಪೈಕಿ ಇಬ್ಬರು ಮೇಘಾಲಯ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ: ಢಾಕಾ ಪೊಲೀಸರು
ಢಾಕಾ: ಬಾಂಗ್ಲಾದೇಶದ ರಾಜಕೀಯ ಹೋರಾಟಗಾರ ಉಸ್ಮಾನ್ ಹಾದಿ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಹಂತಕರ ಪೈಕಿ ಇಬ್ಬರು ಹಂತಕರು ಹತ್ಯೆಯ ನಂತರ ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಮಹಾನಗರ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಡಿಎಂಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎನ್.ನಝ್ರುಲ್ ಮಸೂದ್, ಶಂಕಿತ ಹಂತಕರಾದ ಫೈಸಲ್ ಕರೀಮ್ ಮಸೂದ್ ಹಾಗೂ ಅಲಾಮ್ಗಿರ್ ಶೇಖ್ ತಮ್ಮ ಸ್ಥಳೀಯ ಸಹಚರರ ಮೂಲಕ ಮೈಮೆನ್ ಸಿಂಗ್ ನಲ್ಲಿರುವ ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. “ನಮಗಿರುವ ಮಾಹಿತಿ ಪ್ರಕಾರ, ಶಂಕಿತ ಹಂತಕರು ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾರೆ. ಅವರು ಗಡಿ ದಾಟಿದ ಬಳಿಕ ಪೂರ್ತಿ ಎಂಬ ವ್ಯಕ್ತಿ ಅವರನ್ನು ಬರಮಾಡಿಕೊಂಡಿದ್ದಾನೆ. ಇದಾದ ನಂತರ, ಸಾಮಿ ಎಂಬ ಟ್ಯಾಕ್ಸಿ ಚಾಲಕನು ಅವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ದಿದ್ದಾನೆ” ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು The Daily Star ವರದಿ ಮಾಡಿದೆ. ಶಂಕಿತ ಆರೋಪಿಗಳಿಗೆ ನೆರವು ನೀಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಅನಧಿಕೃತ ಮಾಹಿತಿ ನಮಗೆ ದೊರೆತಿದೆ ಎಂದೂ ಅವರು ತಿಳಿಸಿದ್ದಾರೆ. ಬಾಂಗ್ಲಾದೇಶದ ಪ್ರಮುಖ ರಾಜಕೀಯ ಹೋರಾಟಗಾರರಾಗಿದ್ದ ಉಸ್ಮಾನ್ ಹಾದಿ ಭಾರತ ಮತ್ತು ಅವಾಮಿ ಲೀಗ್ ನ ಕಟು ಟೀಕಾಕಾರರಾಗಿದ್ದರು. ಕಳೆದ ಜುಲೈ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಳ್ಳಲು ಕಾರಣವಾಗಿದ್ದ ವಿದ್ಯಾರ್ಥಿಗಳ ಹಿಂಸಾತ್ಮಕ ಹೋರಾಟದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ನಾಯಕರಲ್ಲಿ ಅವರು ಕೂಡ ಒಬ್ಬರಾಗಿದ್ದರು.
ಕೊಪ್ಪಳ: ಜೀರೋ ಟ್ರಾಫಿಕ್ ನಲ್ಲಿ ನವಜಾತ ಶಿಶು ರವಾನೆ
ಕೊಪ್ಪಳ ಕಿಮ್ಸ್ನಿಂದ ಹುಬ್ಬಳ್ಳಿ ಕಿಮ್ಸ್ಗೆ ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು. ಕರುಳು ಹೊರಬಂದಿದ್ದ ಮಗುವಿಗೆ ಜೀವ ರಕ್ಷಣೆಗಾಗಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಐದು ಅಂಬ್ಯುಲೆನ್ಸ್ಗಳ ಮೂಲಕ ಪೊಲೀಸ್ ಸಹಕಾರದೊಂದಿಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ವೈದ್ಯರು ಮಗುವಿನ ಜೀವ ಉಳಿಸಲು ನಿರಂತರ ಪ್ರಯತ್ನದಲ್ಲಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಜಿಮ್ ಬಿಡುವುದು ಸೋಮಾರಿತನವಲ್ಲ,ಜಾಣತನ!: ಜಿಮ್ಗೆ ಹೋಗದಿರುವುದು ಯಾವಾಗ ಉತ್ತಮ?
ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು? ಜಿಮ್ಗೆ ಹೋಗುವ ಅಭ್ಯಾಸ ಹೊಂದಿರುವವರು ಒಂದು ದಿನವೂ ತಪ್ಪಿಸುವುದಿಲ್ಲ. ಆದರೆ ನಿಮ್ಮ ದೇಹದಲ್ಲಿರುವ ಶಕ್ತಿಯ ಪ್ರತಿ ಬಿಂದುವನ್ನೂ ತೊಡೆದು ಹಾಕುವುದು ಎಲ್ಲ ಸಂದರ್ಭಗಳಲ್ಲೂ ಬದ್ಧತೆ ಎಂದು ಹೇಳಲಾಗದು. ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು? ಕೆಲವೊಮ್ಮೆ ದೇಹ ಸುಸ್ತಿನಿಂದ ಜಡವಾಗುತ್ತದೆ ಮತ್ತು ಗಮನವಿಲ್ಲದೆ ಜಿಮ್ ಸಲಕರಣೆಗಳನ್ನು ಬಳಸಲು ಹೋಗಿ ಗಾಯಗಳೂ ಆಗಬಹುದು! ಅದೇ ಕಾರಣಕ್ಕೆ ಫಿಟ್ನೆಸ್ ತರಬೇತುದಾರರಾಗಿರುವ ಆದಿ ರ್ಯಾಡ್ ಅವರು ಇತ್ತೀಚೆಗೆ ಒಂದು ಪಟ್ಟಿಯನ್ನು ಮಾಡಿ ಯಾವ ಕ್ಷಣದಲ್ಲಿ ಜಿಮ್ಗೆ ಹೋಗುವುದನ್ನು ತಪ್ಪಿಸುವುದು ಸೋಮಾರಿತನವಲ್ಲ, ಬದಲಾಗಿ ಜಾಣತನ ಎಂದು ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಜಿಮ್ ಬಿಡಬೇಕು? ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅವರು ಬರೆದಿರುವ ಪ್ರಕಾರ, “ವಾಸ್ತವದಲ್ಲಿ ಜಿಮ್ ಬಿಡಬೇಕಾದ ದಿನಗಳು” ಯಾವುವು ಎಂದು ಹೇಳಿದ್ದಾರೆ. ಅವರು ಕೆಲವು ಸನ್ನಿವೇಶಗಳನ್ನು ಮುಂದಿಟ್ಟಿದ್ದು, ಅಂತಹ ಸನ್ನಿವೇಶದಲ್ಲಿ ಜಿಮ್ಗೆ ಹೋದರೆ ವಿರುದ್ಧ ಪರಿಣಾಮವಾಗಬಹುದು ಎಂದು ಎಚ್ಚರಿಸಿದ್ದಾರೆ. ಅನಾರೋಗ್ಯವಿದ್ದರೆ ಜಿಮ್ ಬೇಡ ನಿಮಗೆ ಅನಾರೋಗ್ಯವಿದ್ದಾಗ ಜಿಮ್ಗೆ ಹೋಗಲೇಬಾರದು. ಅಂದರೆ ಜ್ವರ, ಸೋಂಕು, ಫ್ಲೂ ಇದ್ದಾಗ! ದೇಹ ಸ್ವಲ್ಪ ಸುಸ್ತಾಗಿದೆ ಜಿಮ್ಗೆ ಹೋಗದೆ ಇರುವುದು ಸರಿಯಲ್ಲ ಎಂದು ಅಂದುಕೊಳ್ಳುವುದೇ ತಪ್ಪು. ನಿಮ್ಮ ದೇಹ ಸ್ವಲ್ಪ ಸುಸ್ತಾಗಿರುವುದಿಲ್ಲ, ನಿಜವಾಗಿಯೂ ಆರೋಗ್ಯ ಕೆಟ್ಟಿರುತ್ತದೆ. ಗುಣಮುಖರಾಗಲು ನಿಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಜಿಮ್ಗೆ ಹೋಗಿ ವ್ಯಾಯಾಮ ಮಾಡುವುದರಿಂದ ಸ್ಥಿತಿ ಹದಗೆಡಬಹುದು. ಜಿಮ್ ನಿಯಮ “ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ಕಟ್ಟುನಿಟ್ಟಾಗಿ ಅನುಸರಿಸಬೇಕು. ಕುತ್ತಿಗೆಯ ಮೇಲೆ ಅಂದರೆ ನೆಗಡಿ ಅಥವಾ ಕೆಮ್ಮು ಇದ್ದರೆ ಸ್ವಲ್ಪ ವ್ಯಾಯಾಮ ಮಾಡಬಹುದು. ಆದರೆ ಕುತ್ತಿಗೆ ಕೆಳಗೆ ಅಂದರೆ ಜ್ವರದಿಂದ ದೇಹ ಸುಸ್ತಾಗಿದ್ದರೆ, ಎದೆ ನೋವು, ಹೊಟ್ಟೆನೋವು ಮೊದಲಾದ ಸಂದರ್ಭದಲ್ಲಿ ವಿಶ್ರಮಿಸಬೇಕು. ಹಸಿದಿದ್ದರೆ ಜಿಮ್ ಮಾಡಬಾರದು ಅಥವಾ ನೀವು ಇಡೀ ದಿನ ಏನೂ ತಿಂದಿರದೆ ಇದ್ದರೆ ವ್ಯಾಯಾಮ ಮಾಡಬಾರದು. ದೇಹದಲ್ಲಿ ಶಕ್ತಿ ಇಲ್ಲದಿದ್ದರೆ ಜಿಮ್ಗೆ ಹೋಗುವುದರಿಂದ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲು ಪ್ರೊಟೀನ್ + ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಬೇಕು. ನಂತರ ಜಿಮ್ನಲ್ಲಿ ವ್ಯಾಯಾಮ ಮಾಡಬೇಕು. ನಿದ್ರೆ ಮಾಡದ ದಿನ ಜಿಮ್ ಮರೆಯಿರಿ ಹಿಂದಿನ ರಾತ್ರಿ ನಿದ್ರೆ ಸರಿಯಾಗಿ ಮಾಡದ ದಿನ ಮನೆಯಲ್ಲೇ ಇರುವುದು ಒಳಿತು. ಸರಿಯಾಗಿ ನಿದ್ರೆಯಾಗದೆ ಇದ್ದರೆ ಗಮನ ಕುಂದುತ್ತದೆ ಮತ್ತು ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೀಲು ನೋವು ಇದ್ದಾಗ ಜಿಮ್ ಬೇಡ ಕೀಲು ನೋವು ಅಥವಾ ಇತರ ಕಡೆಗೆ ನೋವು ಇದ್ದಾಗ ವ್ಯಾಯಾಮಕ್ಕೆ ಇಳಿಯಬಾರದು. ಚಲನೆ ಸಾಧ್ಯವಿದೆ. ಆದರೆ ನೋವುಂಟು ಮಾಡುವ ಸ್ನಾಯು ಇದ್ದರೆ ಜಿಮ್ ಕಸರತ್ತು ತೊರೆಯಬೇಕು. ಅಂತಹ ಸಂದರ್ಭದಲ್ಲಿ ನಡೆಯುವುದು, ವ್ಯಾಯಾಮ ಮಾಡುವುದು ಉತ್ತಮ. ಭಾವನಾತ್ಮಕ ಆರೋಗ್ಯ ಮುಖ್ಯ ಭಾವನಾತ್ಮಕವಾಗಿಯೂ ಆರೋಗ್ಯವಾಗಿರಬೇಕು. ತೀವ್ರ ಹತಾಶೆಯ ನಂತರ ತಕ್ಷಣ ಜಿಮ್ಗೆ ಹೋಗಿ ವ್ಯಾಯಾಮ ಮಾಡುವುದು ಸರಿಯಲ್ಲ. ಆಗ ನಡಿಗೆ, ಉಸಿರಾಟದ ವ್ಯಾಯಾಮ ಮತ್ತು ಶಾಂತ ಸ್ಥಿತಿಗೆ ಮರಳುವುದು ಮುಖ್ಯವಾಗುತ್ತದೆ. ಮನಸ್ಸು ಶಾಂತವಾದಾಗ ಅದ್ಭುತ ಅನುಭವ ಸಿಗುತ್ತದೆ. ಬದಲಾಗಿ ಹತಾಶೆಯನ್ನು ಮರೆತು ದೇಹ ದಂಡಿಸಿದರೆ ಸಾಮರ್ಥ್ಯ ಕಳೆದುಕೊಳ್ಳಬಹುದು. ಗುಣಮುಖರಾಗದೆ ಇದ್ದಾಗ, ಗಮನ ಕೇಂದ್ರೀಕೃತವಾಗದೆ ಇದ್ದಾಗ, ಹಸಿವೆಯಿಂದ ಇದ್ದಾಗ ದೇಹ ದಂಡಿಸಬಾರದು ಬದಲಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. “ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ನಿಯಮ ಸರಿಯೆ? ಹಿರಿಯ ಫಿಟ್ನೆಸ್ ಮತ್ತು ಲೈಫ್ಸ್ಟೈಲ್ ಸಲಹೆಗಾರರಾದ ಸಾಧನಾ ಸಿಂಗ್ ಹೇಳುವ ಪ್ರಕಾರ, “ಕುತ್ತಿಗೆ ಮೇಲಿನ ಅಸ್ವಸ್ಥತೆಯಲ್ಲಿ ಜಿಮ್ಗೆ ಹೋಗಬಹುದು ಎನ್ನುವುದು ಸಾಮಾನ್ಯ ನಿರ್ದೇಶನಗಳು. ಆದರೆ ಅದನ್ನು ವೈದ್ಯಕೀಯವಾಗಿ ಸರಿ ಎಂದು ಹೇಳಲಾಗದು. ಜ್ವರ ಅಥವಾ ದೇಹದಲ್ಲಿ ನೋವಿಲ್ಲದೆ ನೆಗಡಿಗೆ ಸೀಮಿತವಾದ ರೋಗವಾಗಿದ್ದರೆ ಲಘು ವ್ಯಾಯಾಮ ಮಾಡಬಹುದು. ಆದರೆ ಜ್ವರ ಬಂದಾಗ, ಚಳಿ ಜ್ವರ ಇದ್ದಾಗಲೂ ವ್ಯಾಯಾಮ ಮಾಡುವುದು ತಪ್ಪು. “ಜ್ವರ, ಶೀತ, ಏರಿದ ಹೃದಯಬಡಿತ, ಉಸಿರಾಟದ ತೊಂದರೆ, ಎದೆ ಬಿಗಿತ, ತಲೆ ತಿರುಗುವಿಕೆ ಅಥವಾ ತೀವ್ರ ಕೆಮ್ಮು ಇದ್ದರೆ ಜಿಮ್ನಲ್ಲಿ ಕಸರತ್ತು ಮಾಡಬಾರದು. ಅಂತಹ ಸಂದರ್ಭಗಳು ರೋಗ ನಿರೋಧಕ ವ್ಯವಸ್ಥೆ ಒತ್ತಡದಲ್ಲಿರುವುದರ ಸ್ಪಷ್ಟ ಚಿಹ್ನೆಯಾಗಿದೆ ಮತ್ತು ಕಸರತ್ತು ಮಾಡುವುದರಿಂದ ಗುಣಮುಖರಾಗಲು ತಡವಾಗಬಹುದು ಮತ್ತು ಹೃದಯಾಘಾತದ ಅಪಾಯ ಬರಬಹುದು” ಎನ್ನುತ್ತಾರೆ ಸಾಧನಾ ಸಿಂಗ್. ನಿದ್ರಾ ರಾಹಿತ್ಯ, ಆಹಾರದ ಕೊರತೆ ಮತ್ತು ಅತಿಯಾದ ಭಾವನಾತ್ಮಕ ಒತ್ತಡವು ಕಸರತ್ತಿನ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗದಂತೆ ಮಾಡುತ್ತದೆ. ಅದರಿಂದ ಅಪಾಯ ಸಂಭವಿಸಬಹುದು. ಒಟ್ಟು ಕಸರತ್ತಿನ ಸುರಕ್ಷೆಯ ಮೇಲೆ ಪರಿಣಾಮ ಬೀರಬಹುದು. ಮೆದುಳಿಗೆ ಸುಸ್ತಾಗಿದ್ದಾಗ ಚಲನೆಯ ನಿಯಂತ್ರಣ ನಿಖರವಾಗಿ ಇರುವುದಿಲ್ಲ. ಸಮತೋಲನ ತಪ್ಪುತ್ತದೆ. ಸಂಧಿಗಳ ಸ್ಥಿರತೆ ಕಡಿಮೆಯಾಗಬಹುದು. ಅದರಿಂದ ನೋವು, ಉಳುಕು ಉಂಟಾಗಬಹುದು. ಉಪವಾಸ ಅಥವಾ ಹಸಿವೆ ಇರುವಾಗ ಕಸರತ್ತು ಮಾಡಲು ಹೋದರೆ ತಲೆ ತಿರುಗಬಹುದು, ನರ ದೌರ್ಬಲ್ಯ ಕಂಡುಬರಬಹುದು ಮತ್ತು ಕಸರತ್ತಿನ ಸಂದರ್ಭದಲ್ಲಿ ನಿಖರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರಬಹುದು.
Year Ender 2025- ಹೀಗಿದೆ 2026ರ ಕ್ರೀಡಾಲೋಕದ ಮಹಾಸಂಭ್ರಮ; ವರ್ಷದುದ್ದಕ್ಕೂ ಕಾದಿದೆ ರಸದೌತಣ
2025ರ ಅಂತೂ ಭಾರತದ ಕ್ರೀಡಾಪ್ರೇಮಿಗಳ ಪಾಲಿಗೆ ಸಿಹಿಕಹಿಗಳ ಸಮ್ಮಿಳಿತವಾಗಿತ್ತು. ಇದೀಗ 2026 ಕ್ರೀಡಾ ಪ್ರೇಮಿಗಳ ಪಾಲಿಗೆ ಮಹಾಹಬ್ಬವಾಗಲಿದೆ. ಐಪಿಎಲ್, ಪ್ರೊ ಕಬಡ್ಡಿ ಜೊತೆಗೆ ಫಿಫಾ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಹಾಕಿ ವಿಶ್ವಕಪ್ಗಳು ಒಂದೇ ವರ್ಷದಲ್ಲಿ ನಡೆಯಲಿವೆ. ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ನಂತೂ ಹಾಲಿ ಚಾಂಪಿಯನ್ ಭಾರತವವೇ ಫೇವರಿಟ್. ಇನ್ನು ಹಾಕಿ ವಿಶ್ವಕಪ್ನಲ್ಲೂ ಭಾರತದಿಂದ ಐತಿಹಾಸಿಕ ಸಾಧನೆ ನಿರೀಕ್ಷಿಸಲಾಗಿದೆ. ಉತ್ತರ ಅಮೆರಿಕದಲ್ಲಿ ಫುಟ್ಬಾಲ್ ವಿಶ್ವಕಪ್, ಟೆನಿಸ್ ಗ್ರಾನ್ ಸ್ಲಾಂಗಳು, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸಹ ನಡೆಯಲಿವೆ.
ಸಂಘಟನೆಯನ್ನು ಬಲಪಡಿಸಬೇಕು: ಆರೆಸ್ಸೆಸ್ಗೆ ಶ್ಲಾಘಿಸಿ ವಿವಾದಕ್ಕೀಡಾಗಿದ್ದ ದಿಗ್ವಿಜಯ ಸಿಂಗ್ಗೆ ಶಶಿ ತರೂರ್ ಬೆಂಬಲ
ಹೊಸದಿಲ್ಲಿ: RSS ಹಾಗೂ BJP ಸಂಘಟನಾ ಬಲವನ್ನು ಹೊಗಳಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಉಂಟಾದ ವಿವಾದದ ನಡುವೆಯೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ, ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಅವರು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ತರೂರ್, ದಿಗ್ವಿಜಯ ಸಿಂಗ್ ಅವರೊಂದಿಗೆ ನಡೆದ ಸಂವಹನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾವು ಸ್ನೇಹಿತರು, ಪರಸ್ಪರ ಸಂಭಾಷಣೆ ಸಹಜ, ಸಂಘಟನೆಯನ್ನು ಬಲಪಡಿಸಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದರು. ಈ ದಿನವನ್ನು ಕಾಂಗ್ರೆಸ್ಗೆ ಮಹತ್ವದ ದಿನವೆಂದು ಬಣ್ಣಿಸಿದ ಶಶಿ ತರೂರ್, “ಪಕ್ಷದ ದೀರ್ಘ ಹಾಗೂ ಗಮನಾರ್ಹ ಇತಿಹಾಸವನ್ನು ಮತ್ತು ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ಹಿಂತಿರುಗಿ ನೋಡುವ ಸಂದರ್ಭ ಇದು” ಎಂದರು. ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಳೆಯ ಛಾಯಾಚಿತ್ರದ ಬಳಿಕ ಈ ಚರ್ಚೆಗಳು ಆರಂಭವಾಗಿವೆ. ಆ ಚಿತ್ರದಲ್ಲಿ ನರೇಂದ್ರ ಮೋದಿ ಕಾರ್ಯಕರ್ತನಂತೆ ನೆಲದ ಮೇಲೆ ಕುಳಿತಿರುವುದು ಹಾಗೂ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕುರ್ಚಿಯಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಈ ಚಿತ್ರವನ್ನು ‘ಪ್ರಭಾವಶಾಲಿ’ ಎಂದು ವರ್ಣಿಸಿದ್ದ ಸಿಂಗ್, ಗುಜರಾತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಪೋಸ್ಟ್ ನಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ RSSನ ಸಂಘಟನಾ ಬಲವನ್ನು ಉಲ್ಲೇಖಿಸಿರುವುದಾಗಿ ವ್ಯಾಖ್ಯಾನಿಸಲಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಒಳಗೂ ಹೊರಗೂ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೇ ವೇಳೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪವಾಗಿರುವುದು ಗಮನಸೆಳೆಯಿತು. ಈ ಹೇಳಿಕೆಗಳ ಕುರಿತು ಬಿಜೆಪಿ, ಇದನ್ನು ಕಾಂಗ್ರೆಸ್ ನಾಯಕತ್ವದ ವಿರುದ್ಧದ “ಬಹಿರಂಗ ಭಿನ್ನಾಭಿಪ್ರಾಯ” ಎಂದು ಆರೋಪಿಸಿತು. ಆದರೆ, ಬಳಿಕ ಸ್ಪಷ್ಟನೆ ನೀಡಿದ ದಿಗ್ವಿಜಯ ಸಿಂಗ್, ನಾನು ಸಂಘಟನೆ ಮತ್ತು ಅದರ ಬಲದ ಬಗ್ಗೆ ಮಾತ್ರ ಮಾತನಾಡಿದ್ದು, ಬಿಜೆಪಿ ಅಥವಾ RSS ಕುರಿತು ಅಲ್ಲ ಎಂದು ತಿಳಿಸಿದರು. ಇಬ್ಬರ ವಿರುದ್ಧವೂ ತಮ್ಮ ನಿಲುವು ಅಚಲವಾಗಿದೆ ಎಂದು ಹೇಳಿದರು.
ಮಂಗಳೂರು: ಪ್ರವಾಸಿಗರ ಕಳೆದುಹೋದ ಮೊಬೈಲ್ ಮರಳಿಸಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ
ಮಂಗಳೂರು: ತಣ್ಣೀರು ಬಾವಿ ಬೀಚ್ ನಲ್ಲಿ ಡಿ. 27ರಂದು ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರವಾಸಿಗರ ಗುಂಪಿನ ಸದಸ್ಯರೊಬ್ಬರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳೆದುಹೋಗಿದ್ದ ಘಟನೆ ನಡೆದಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ (ಪ್ರವಾಸಿ ಮಿತ್ರ) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೆಲವೇ ಸಮಯದಲ್ಲಿ ಮೊಬೈಲ್ ಮತ್ತೊಬ್ಬರ ಕೈ ಸೇರಿರುವುದನ್ನು ಪತ್ತೆಹಚ್ಚಿ, ಕಳೆದುಕೊಂಡ ಪ್ರವಾಸಿಗರ ಕೈಗೆ ಮೊಬೈಲ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ಪ್ರವಾಸಿಗರ ವಿಶ್ವಾಸ ಮತ್ತು ಪ್ರಶಂಸೆಗೆ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಪಾತ್ರರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಯೋಜನೆಯಡಿ ಕರ್ನಾಟಕ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಪ್ರವಾಸಿ ಮಿತ್ರ’ ಸಿಬ್ಬಂದಿಗಳು ಪ್ರವಾಸಿಗರು ಎದುರಿಸುವ ವಿವಿಧ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆ, ಸುರಕ್ಷತೆ ಹಾಗೂ ಆಸ್ತಿಯ ಭದ್ರತೆಗೆ ಅವರು ನೀಡುತ್ತಿರುವ ಸೇವೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದು, ಇದು ಪ್ರವಾಸೋದ್ಯಮ ಇಲಾಖೆಗೆ ಗೌರವ ತಂದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಪಿಐ ಪಾವತಿ ವೇಳೆ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಆಗಿದೆಯೇ? ಇಲ್ಲಿದೆ ಪರಿಹಾರ
ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ವಾರದ ಹಿಂದೆ ಒಂದು ದೂರು ದಾಖಲಾಗಿದೆ. ವೈದ್ಯಕೀಯ ತುರ್ತುಗಾಗಿ ಒಬ್ಬರು ರೂ. 19,000 ಫೋನ್ ಪೇ ಮಾಡಿದ್ದರು. ಆದರೆ ಆ ಹಣ ಅವರ ಸಂಬಂಧಿಕರಾದ ರಾಜಸ್ಥಾನದ ಲಕ್ಷ್ಮೀಚಂದ್ರಿಗೆ ಹೋಗುವ ಬದಲಾಗಿ ಉಜಿರೆಯ ಉದ್ಯಮಿಗೆ ಹೋಗಿತ್ತು. ಉದ್ಯಮಿ ಹಣ ಮರಳಿ ಕೊಡಲು ನಿರಾಕರಿಸಿದರು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ತ್ವರಿತ ವಿಧಾನವಾಗಿರುವ ಯುಪಿಐ ಪಾವತಿ ಡಿಜಿಟಲ್ ಪಾವತಿಯ ಬಳಕೆಗಳು ಹೆಚ್ಚಾಗುತ್ತಿರುವಾಗ ಯುಪಿಐ ಪಾವತಿ ಭಾರತದಲ್ಲಿ ಸರಳ ವ್ಯವಹಾರಗಳಿಗೆ ತ್ವರಿತ ವಿಧಾನವಾಗಿರುತ್ತದೆ. ಆದರೆ ಯುಪಿಐ ವ್ಯವಹಾರದಲ್ಲಿ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಮಾಡಿದಲ್ಲಿ ಏನಾಗುತ್ತದೆ? ಕಳುಹಿಸಿದವರಿಗೆ ಮತ್ತು ಸ್ವೀಕರಿಸುವವರಿಗೆ ದೊಡ್ಡ ನಷ್ಟವಾಗಿಬಿಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕುಂದುಕೊರತೆ ಆಲಿಸುವ ಸಹಾಯವಾಣಿ ಸಂಖ್ಯೆಯನ್ನು ಸರಕಾರ ನೀಡಿದೆ. ಯುಪಿಐ ಮೂಲಕ ತಪ್ಪಿ ಇನ್ಯಾರಿಗೋ ಹಣ ಕಳುಹಿಸಿದ್ದೀರಾ? ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ದ 24/7 ಸಹಾಯವಾಣಿಗೆ 48 ಗಂಟೆಗಳ ಒಳಗೆ ದೂರು ಸಲ್ಲಿಸಬೇಕು. ಯುಪಿಐ ಸಮಸ್ಯೆಗಳಿಗೆ NPCI ವೆಬ್ತಾಣದ ಮೂಲಕ ಆನ್ಲೈನ್ ಮೂಲಕ ದೂರು ಸಲ್ಲಿಕೆಯ ಅವಕಾಶವೂ ಇದೆ. ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ತಪ್ಪು ಸಂಖ್ಯೆಗೆ ಯುಪಿಐ ಪಾವತಿಯೆ? ಇಲ್ಲಿದೆ ಪರಿಹಾರ ಸಂಖ್ಯೆ ಯಾರಾದರೂ ತಪ್ಪು ಸಂಖ್ಯೆಗೆ ಯುಪಿಐ ವ್ಯವಹಾರ ಮಾಡಿರುವುದು ಅಥವಾ ಪಾವತಿ ಸಮಸ್ಯೆಗಳನ್ನು ಎದುರಿಸಿದಲ್ಲಿ, ಅಧಿಕೃತ NPCI ನ ಯುಪಿಐ ದೂರು ಸಂಖ್ಯೆ 1800-120-1740 ಅನ್ನು ಸಂಪರ್ಕಿಸಬಹುದು. ಆದರೆ ಈ ದೂರನ್ನು ವ್ಯವಹಾರವಾದ 48 ಗಂಟೆಗಳ ಒಳಗೆ ಸಲ್ಲಿಸಬೇಕಾಗುತ್ತದೆ. ಈ ಸಹಾಯವಾಣಿ 24/7 ಲಭ್ಯವಿರುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಈ ಸಂಖ್ಯೆಗೆ ದೂರು ಸಲ್ಲಿಸಬಹುದು. ನಿಖರವಾಗಿ ವಿಷಯವನ್ನು ಬರೆದಲ್ಲಿ ದೂರನ್ನು ಸುಗಮವಾಗಿ ಮತ್ತು ಸಮರ್ಥವಾಗಿ ಪರಿಹರಿಸಬಹುದು. ವ್ಯವಹಾರ ವಿಫಲವಾದಾಗ, ಪಿನ್ ಸಮಸ್ಯೆಯಾದಾಗ ಅಥವಾ ಅಸಮರ್ಪಕ ಪಾವತಿ ಮಾಡಿದಾಗ ಬಳಕೆದಾರರು ಈ ಸಂಖ್ಯೆಗೆ ದೂರು ಸಲ್ಲಿಸಬಹುದು. ಆನ್ಲೈನ್ನಲ್ಲಿ ಯುಪಿಐ ವ್ಯವಹಾರದ ದೂರು ಸಲ್ಲಿಸುವುದು ಹೇಗೆ? NPCIಗೆ ಕರೆ ಮಾಡುವ ಹೊರತಾಗಿ ಅಧಿಕೃತ ವೆಬ್ತಾಣದ ಮೂಲಕ ಆನ್ಲೈನ್ನಲ್ಲಿ ದೂರು ಸಲ್ಲಿಸಬಹುದು. ಆನ್ಲೈನ್ನಲ್ಲಿ ವಿವರವಾಗಿ ದೂರು ಸಲ್ಲಿಸುವುದರಿಂದ ದೂರಿನ ಕುರಿತಾಗಿ ಕೈಗೊಂಡ ಕ್ರಮವನ್ನು ತಿಳಿದುಕೊಳ್ಳಲು ಸುಗಮವಾಗುತ್ತದೆ. ಅದಕ್ಕಾಗಿ ಎನ್ಪಿಸಿಐ ವೆಬ್ತಾಣದಲ್ಲಿ https://www.npci.org.in/upi-complaint ದೂರು ಸಲ್ಲಿಸಬಹುದು. NPCI ವೆಬ್ತಾಣಕ್ಕೆ ಹೋದರೆ ‘ಕಸ್ಟಮರ್’ ವಿಭಾಗಕ್ಕೆ ಹೋಗಿ ಅಲ್ಲಿ ‘ಗೆಟ್ ಹೆಲ್ಪ್’ ವಿಭಾಗಕ್ಕೆ ಹೋಗಬೇಕು. ಅದರಲ್ಲಿ ‘ಯುಪಿಐ ಕಂಪ್ಲೇಂಟ್’ ಅನ್ನು ಕ್ಲಿಕ್ ಮಾಡಿ ದೂರು ಸಲ್ಲಿಸಬಹುದು. ಅಲ್ಲಿ ‘ಕಂಪ್ಲೇಂಟ್ ವಿಧ’ ಕ್ಲಿಕ್ ಮಾಡಿ, ‘ವ್ಯವಹಾರ ಕುರಿತ ವಿವರ’ದಲ್ಲಿ ನಿಮ್ಮ ಆಯ್ಕೆಯನ್ನು ಸಲ್ಲಿಸಲು ಅವಕಾಶವಿದೆ.
ಜನವರಿ 1 ರಿಂದ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ವಂದೇ ಭಾರತ್, ಇಂಟರ್ಸಿಟಿ, ಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಮಯ ಪರಿಷ್ಕರಣೆಗೊಂಡಿದೆ. ಕೆಲ ರೈಲುಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ತಡವಾಗಿ ಆಗಮಿಸಲಿವೆ. ಪ್ರಯಾಣಿಕರು ತಮ್ಮ ರೈಲಿನ ಹೊಸ ಸಮಯವನ್ನು ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ ಅಥವಾ ನೈರುತ್ಯ ರೈಲ್ವೆಯ ಜಾಲತಾಣದಲ್ಲಿ ಪರಿಶೀಲಿಸಬಹುದು. ಇದು ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾದ ಬದಲಾವಣೆಯಾಗಿದೆ.
ಕಾಲಿನ ಉಗುರು ಕಪ್ಪಾಗಿದೆಯೆ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?
ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇ ಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಆನ್ಲೈನ್ ವೇದಿಕೆಯಾದ ‘ಕ್ಯೂರಾ’ದಲ್ಲಿ ಮಹಿಳೆಯೊಬ್ಬರು ತಮ್ಮ ಕಾಲಿನ ಉಗುರು ಕಪ್ಪಾಗಿರುವ ಬಗ್ಗೆ ಪ್ರಶ್ನೆ ಕೇಳಿದ್ದರು. “ನನ್ನ ಕಾಲಿನ ಉಗುರಿನಲ್ಲಿ ಒಣಗಿದ ರಕ್ತವಿದೆ. ಏಳು ತಿಂಗಳಾದರೂ ಹೋಗಿಲ್ಲ. ಅದನ್ನು ಹೋಗಿಸುವುದು ಹೇಗೆ?” ಎಂದು ಪ್ರಶ್ನೆ ಹಾಕಿದ್ದರು. ‘ಕ್ಯೂರಾ’ದಲ್ಲಿ ಬರುವ ಉತ್ತರಗಳು ಸಮಂಜಸವಾಗಿರುತ್ತದೆಯೇ ಇಲ್ಲವೆ ಎಂದು ಹೇಳಲಾಗದು. ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ? ಆಸ್ಟರ್ ಆರ್ವಿ ಆಸ್ಪತ್ರೆಯ ಚರ್ಮತಜ್ಞರಾದ ಡಾ ಸುನೀಲ್ ಕುಮಾರ್ ಪ್ರಭು ಅವರನ್ನು ಸಂಪರ್ಕಿಸಿದರೆ “ಭಯಪಡುವ ಅಗತ್ಯವಿಲ್ಲ” ಎಂದು ಉತ್ತರಿಸಿದರು. ಉಗುರಿನಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿ ಡಾ. ಪ್ರಭು ಅವರು ವಿವರಿಸುವ ಪ್ರಕಾರ ಉಗುರು ಕಪ್ಪಾಗುವುದನ್ನು ಸಬ್ಉನ್ಗ್ವಲ್ ಹೀಮಟೊಮ ಎಂದು ಕರೆಯಲಾಗುತ್ತದೆ. ಅಂದರೆ ಉಗುರಿನ ಒಳಗೆ ರಕ್ತ ಒಣಗಿರುವುದು. ಏನಾದರೂ ಗಾಯಗಳಾದರೆ ಹೀಗೆ ಉಗುರಿನೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ನೆನಪಿಲ್ಲದಂತಹ ಸಣ್ಣ-ಪುಟ್ಟ ಗಾಯಗಳಿಂದಲೂ ಇದು ಸಂಭವಿಸಬಹುದು. “ನಿಮ್ಮ ಉಗುರು ಎಲ್ಲಿಗಾದರೂ ಚುಚ್ಚಿ ಹೋಗಿರುವುದು ಅಥವಾ ಭಾರವಾದ ವಸ್ತು ಉಗುರಿನ ಮೇಲೆ ಬಿದ್ದಾಗ ಬಣ್ಣ ಬದಲಾಗುತ್ತದೆ. ಕೆಲವೊಮ್ಮೆ ಬಿಗಿಯಾದ ಚಪ್ಪಲಿಯನ್ನು ನಿತ್ಯವೂ ಧರಿಸುವುದರಿಂದ ಅಥವಾ ಸರಿಯಾಗಿ ಹೊಂದಿಕೆಯಾಗದ ಚಪ್ಪಲಿ ಧರಿಸಿದರೆ ಉಗುರು ಕಪ್ಪಾಗಬಹುದು. ದೀರ್ಘ ಸಮಯದವರೆಗೆ ಓಡಿದರೆ ಅಥವಾ ನಡೆದರೂ ರಕ್ತ ಹೆಪ್ಪುಗಟ್ಟಿ ಉಗುರಿನ ಬಣ್ಣ ಬದಲಾಗಬಹುದು. ಉಗುರು ಬೆಳೆದಾಗ ಬಣ್ಣ ಮರೆಯಾಗುತ್ತದೆ ಬಹಳಷ್ಟು ಸಂದರ್ಭದಲ್ಲಿ ಉಗುರಿನ ಗಾಯ ಸಣ್ಣದಾಗಿರಬಹುದು. ಅನೇಕರಿಗೆ ಯಾವಾಗ ಬಣ್ಣ ಬದಲಾಗಿದೆ ಎಂದು ತಿಳಿಯದೆ ಇರಬಹುದು. “ಬಹಳ ಸಂದರ್ಭದಲ್ಲಿ ಯಾವ ಗಾಯದಿಂದ ಬಣ್ಣ ಬದಲಾಗಿದೆ ಎಂದು ತಿಳಿದು ಬರುವುದಿಲ್ಲ. ಕೆಲವೊಮ್ಮೆ ಉಗುರು ಬೆಳೆದಂತೆ ಬಣ್ಣ ಬದಲಾಗಿರುವುದನ್ನು ಗಮನಿಸಿರಬಹುದು. ಮುಖ್ಯವಾಗಿ ವಯಸ್ಕರಲ್ಲಿ ಕಾಲಿನ ಉಗುರುಗಳು ನಿಧಾನವಾಗಿ ಬೆಳೆಯುತ್ತವೆ. ಹೀಗಾಗಿ ರಕ್ತ ಹೆಪ್ಪುಗಟ್ಟಿದಲ್ಲಿ ಅನೇಕ ತಿಂಗಳುಗಳವರೆಗೆ ಹಾಗೇ ಇರುತ್ತದೆ. ಉಗುರು ಬೆಳೆದಂತೆ ನಿಧಾನವಾಗಿ ಅದು ಹೋಗಬಹುದು.” ರಕ್ತ ಹೆಪ್ಪುಗಟ್ಟಲು ಕಾರಣ ತಿಳಿಯುವುದು ಹೇಗೆ? “ಒಣಗಿದ ರಕ್ತ ಸಾಮಾನ್ಯವಾಗಿ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ ಕಡು ನೇರಳೆ ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ಮುಖ್ಯವಾಗಿ ಉಗುರು ಬೆಳೆದಂತೆ ಅವು ಮುಂದಕ್ಕೆ ಸಾಗುತ್ತವೆ” ಎನ್ನುತ್ತಾರೆ ವೈದ್ಯರು. ಅದಕ್ಕೆ ಬದಲಾಗಿ ಉಗುರಿಗೆ ಶಿಲೀಂಧ್ರ ರೋಗ ಹಿಡಿದಲ್ಲಿ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಉಗುರು ದಪ್ಪವಾಗುತ್ತದೆ, ಉಗುರುಗಳ ಕೆಳಗೆ ಬಿರುಕು ಬಿಟ್ಟಿರುತ್ತದೆ ಮತ್ತು ಕಸ ತುಂಬಿರುತ್ತದೆ. ಕಪ್ಪಾಗಿರುವುದು ಬದಲಾಗದೆ ಮುಂದುವರಿದರೆ ಏನು ಮಾಡಬೇಕು? ವೈದ್ಯರ ಪ್ರಕಾರ, “ಮನೆಯಲ್ಲಿಯೇ ಉಗುರಿನ ಅಡಿಯಲ್ಲಿರುವ ಒಣಗಿದ ರಕ್ತವನ್ನು ತೆಗೆಯಲು ಪ್ರಯತ್ನಿಸುವುದು ಸರಿಯಲ್ಲ. ಕೆತ್ತುವುದು ಅಥವಾ ತುಂಡು ಮಾಡುವುದು ಅಥವಾ ಉಗುರು ಕತ್ತರಿಸುವ ಮೂಲಕ ಒಣರಕ್ತವನ್ನು ತೆಗೆಯಲು ಪ್ರಯತ್ನಿಸಿದಲ್ಲಿ ಸೋಂಕು ತಗಲಬಹುದು. ಉಗುರಿಗೆ ಹಾನಿಯಾಗಿ ಗುಣಮುಖರಾಗಲು ಬಹಳ ಸಮಯ ಹಿಡಿಯಬಹುದು. ಕೆಲವೊಮ್ಮೆ ಶಾಶ್ವತವಾಗಿ ಉಗುರು ವಿರೂಪಗೊಳ್ಳಬಹುದು.” ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆ? ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಬಹಳಷ್ಟು ಮಂದಿಗೆ ವೈದ್ಯರನ್ನು ಸಂಪರ್ಕಿಸುವ ಅಗತ್ಯ ಬರದೆ ಇರಬಹುದು. ಹಾಗೆಯೇ ಬಹುತೇಕ ಪ್ರಕರಣಗಳಲ್ಲಿ ಚಿಕಿತ್ಸೆಯ ಅಗತ್ಯವೇ ಇರದು. ಉಗುರು ಬೆಳೆದಂತೆ ಕಪ್ಪಾಗಿರುವುದೂ ಹೋಗಿಬಿಡಬಹುದು. ಕಾಲಿನ ಉಗುರುಗಳು ಉದ್ದವಾಗಲು/ 9ರಿಂದ 12 ತಿಂಗಳುಗಳ ಕಾಲ ಹಿಡಿಯುತ್ತದೆ. ಕೆಲವೊಮ್ಮೆ ಇನ್ನೂ ದೀರ್ಘ ಸಮಯ ಹಿಡಿಯಬಹುದು. ಉಗುರನ್ನು ಟ್ರಿಮ್ ಮಾಡುವುದು, ಹೊಂದಿಕೊಳ್ಳುವ ಚಪ್ಪಲಿ ಧರಿಸುವುದು, ಉಗುರಿಗೆ ಗಾಯವಾಗದಂತೆ ನೋಡಿಕೊಳ್ಳುವಂತಹ ಸರಳ ಕ್ರಮಗಳಿಂದ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಉಗುರು ಸಡಿಲವಾಗಿ, ನೋವು ಇದ್ದಲ್ಲಿ ಅಥವಾ ಸೌಂದರ್ಯದ ಬಗ್ಗೆ ಕಳವಳ ಇದ್ದರೆ ವೈದ್ಯರನ್ನು ಕಾಣಬಹುದು. ನೈರ್ಮಲ್ಯಯುತ ಸ್ಥಿತಿಯಲ್ಲಿ ವೈದ್ಯರು ಉಗುರು ಟ್ರಿಮ್ ಮಾಡಬಹುದು ಅಥವಾ ತೆಗೆಯಬಹುದು. ಕಾಲಾನುಸಾರದಲ್ಲಿ ಬಣ್ಣ ಮಾಸಿರುವುದು ಬದಲಾಗದೆ ಇದ್ದರೆ, ಉಗುರು ಕತ್ತರಿಸುವುದು, ಅರ್ಧ ಉಗುರು ತೆಗೆಸುವುದು ಮಾಡಬಹುದು. ವೈದ್ಯರು ಇನ್ನೇನಾದರೂ ಸಮಸ್ಯೆಯಿದೆಯೇ ಎಂದೂ ಪರಿಶೀಲಿಸಬಹುದು. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
ಮಂಜನಾಡಿ: ಒಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕೆ ನಮ್ಮನ್ನು ಬಳಕೆ ಮಾಡಲು ನಾವು ಅವಕಾಶ ನೀಡಬಾರದು. ನಾವು ಶಾಂತಿ ಸೌಹಾರ್ದತೆ ಯಿಂದ ಬದುಕಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಮಂಗಳೂರು ವಿವಿ ಉಪಕುಲಪತಿ ಪಿ.ಎಲ್ ಧರ್ಮ ಹೇಳಿದರು. ಅವರು ಮಂಜನಾಡಿ ಉರೂಸ್ ಸಮಾರೋಪ ಹಾಗೂ ಭಾವೈಕ್ಯತಾ ಸಂಗಮ ದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮ ಹಲವು ಇದ್ದರೂ ಸಮಾಜದಲ್ಲಿ ಯಾವುದೇ ಭಿನ್ನತೆ ಇಲ್ಲ. ಧಾರ್ಮಿಕ ಕಾರ್ಯಕ್ರಮಗಳು ಸೌಹಾರ್ದತೆಯಿಂದ ನಡೆಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಇದಕ್ಕೆ ನಾವು ಒತ್ತು ನೀಡಬೇಕು ಎಂದು ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಳ ಹೇಳಿದರು. ಅಸಯ್ಯಿದ್ ಇಬ್ರಾಹೀಮ್ ಖಲೀಲ್ ತಂಙಳ್ ಕಡಲುಂಡಿ ದುಆ ಆಶೀರ್ವಚನ ನೀಡಿದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಸಮಾರೋಪ ಉಪನ್ಯಾಸ ನೀಡಿದರು.ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಜಾಯ್ ಸೆಬಾಸ್ಟಿಯನ್ ಮಾತನಾಡಿದರು. ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಕೊಣಾಜೆ ಸಬ್ ಇನ್ಸ್ಪೆಕ್ಟರ್ ನಾಗರಾಜ್, ಯು.ಟಿ ಫರೀದ್, ಹೈದರ್ ಪರ್ತಿಪ್ಪಾಡಿ, ವಕ್ಫ್ ಅಧಿಕಾರಿ ಅಬೂಬಕ್ಕರ್, ಪ್ರಶಾಂತ್ ಕಾಜವ, ಉದ್ಯಮಿ ರಾಮಚಂದ್ರ ಪಿಲಾರ್, ಮುರಳೀಧರ ಶೆಟ್ಟಿ ಮೋರ್ಲ, ತಾ.ಪಂ.ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು , ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮೊಹಮ್ಮದ್ ಮಸ್ಊದ್ ಸಅದಿ, ರಿಯಾಝ್ ಪಾಷಾ ಮೈಸೂರು, ಕೆ.ಎನ್.ರಾಘವೇಂದ್ರ ಮೈಸೂರು, ಮಂಜನಾಡಿ ಜಮಾಅತ್ ಉಪಾಧ್ಯಕ್ಷರಾದ ಆಲಿ ಕುಂಞಿ ಪಾರೆ, ಮುನೀರ್ ಬಾವ, ಮೊಯಿದಿನ್ ಕುಟ್ಟಿ ಪರ್ತಿಪ್ಪಾಡಿ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಹಮೀದ್ ಆರಂಗಡಿ, ಬಾಪ ಕುಂಞಿ, ಕುಂಞಿ ಬಾವ ಕಟ್ಟೆಮಾರ್, ನರಿಂಗಾನ ಗ್ರಾ.ಪಂ.ಅಧ್ಯಕ್ಷ ನವಾಝ್ ನರಿಂಗಾನ, ಅತ್ತಾವುಲ್ಲ ಪರ್ತಿಪ್ಪಾಡಿ,ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ರಹ್ಮಾನ್ ರಝ್ವಿ, ಉಪ ಸಂಚಾಲಕ ಇಬ್ರಾಹಿಂ ಅಹ್ಸನಿ, ಮೊಯ್ದಿನ್ ಹಾಜಿ ಬಸರ, ಕೆಎಂಕೆ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ , ವಂದಿಸಿದರು.
ಶಿರ್ವ: ಡಿ.29ರಂದು ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ನಲ್ಲಿ ‘ತಿಬ್ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’
ಉಡುಪಿ: ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ (FIPS) ಆಶ್ರಯದಲ್ಲಿ ‘ತಿಬ್ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’ ಕಾರ್ಯಕ್ರಮವು ಡಿ. 29ರಂದು ಶಾಲಾ ಕ್ಯಾಂಪಸ್ನಲ್ಲಿ ನಡೆಯಲಿದೆ. ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಖಾಲಿದ್ ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಕ್ಸ್ಪರ್ಟೈಸ್ ಸಂಸ್ಥೆಯ ಸಿಒಒ ಕೆ.ಎಸ್. ಶೇಖ್ ಕರ್ನಿರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಎಚ್.ಎಂ. ಅಫ್ರೋಝ್ ಅಸ್ಸಾದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಡೆವಲಪ್ಮೆಂಟ್ ಬೋರ್ಡ್ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಉದ್ಯಾವರದ ಹಲೀಮಾ ಸಾಬ್ಜು ಆಡಿಟೋರಿಯಂ ಮಾಲೀಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ನ ಅಸ್ಥಿ ತಜ್ಞ ವೈದ್ಯ ಡಾ. ರಿಝ್ವಾನ್ ಅಹಮದ್, ಉದ್ಯಮಿ ಹಾಗೂ ಸಮಾಜಸೇವಕ ಮೊಹ್ಸಿನ್ ಹೊನ್ನಾಳ, ಉದ್ಯಮಿ ಅಶ್ರಫ್ ಕೋಡಿಬೆಂಗ್ರೆ, ಉಡುಪಿ ಸಮಾಜಸೇವಕ ಇಕ್ಬಾಲ್ ಮನ್ನಾ ಹಾಗೂ ಫೈಝುಲ್ ಇಸ್ಲಾಂ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಫಿ ಅಹಮದ್ ಖಾಝಿ, ಫಾತಿಮಾ ಅಝ್ಬಃ ಪಾಲ್ಗೊಳ್ಳಲಿದ್ದಾರೆ. FIPS ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್, ಹಸನಬ್ಬ ಶೇಖ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಜಂಟಿ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಮುಖ್ಯೋಪಾಧ್ಯಾಯಿನಿ ಖೈರುನ್ನಿಸಾ, ಶಾಲಾಪ್ರತಿನಿಧಿ ಮೊಹಮ್ಮದ್ ಯೂನುಸ್, ಕೋಶಾಧಿಕಾರಿ ಪರ್ವೇಝ್ ಸಲೀಮ್, ಅರಬಿಕ್ ದೀನಿಯಾತ್ ವಿಭಾಗದ ಮುಖ್ಯಸ್ಥ ಉಬೈದುರ್ರಹ್ಮಾನ್ ನದ್ವಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಒಂದು ದಿನದಲ್ಲಿ ಈ ಲಿಮಿಟ್ ಗಿಂತ ಹೆಚ್ಚಿಗೆ ಕ್ಯಾಶ್ ವ್ಯವಹಾರ ಮಾಡುವವರಿಗೆ ಬರಲಿದೆ IT ನೋಟಿಸ್! ಹಾಗೂ ಭಾರಿ ದಂಡ
ನಮ್ಮ ದಿನನಿತ್ಯದ ಜೀವನದಲ್ಲಿ ಹಣದ ವ್ಯವಹಾರ (Cash Transaction) ತೀರಾ ಸಾಮಾನ್ಯ. “ನನ್ನದೇ ದುಡ್ಡು, ನಾನು ಹೇಗೆ ಬೇಕಾದರೂ ಖರ್ಚು ಮಾಡುತ್ತೇನೆ, ಯಾರಿಗೆ ಬೇಕಾದರೂ ಕೊಡುತ್ತೇನೆ” ಎಂದು ನೀವು ಅಂದುಕೊಂಡಿದ್ದರೆ, ಎಚ್ಚರ! ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ನಗದು ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣವನ್ನು ನೀವು ಒಂದೇ ದಿನದಲ್ಲಿ ಪಡೆದರೆ ಅಥವಾ ನೀಡಿದರೆ, ನಿಮಗೆ ಕೇವಲ ನೋಟಿಸ್ ಬರುವುದಲ್ಲ, ಬರೋಬ್ಬರಿ 100% ದಂಡ ಕೂಡ ... Read more The post ಒಂದು ದಿನದಲ್ಲಿ ಈ ಲಿಮಿಟ್ ಗಿಂತ ಹೆಚ್ಚಿಗೆ ಕ್ಯಾಶ್ ವ್ಯವಹಾರ ಮಾಡುವವರಿಗೆ ಬರಲಿದೆ IT ನೋಟಿಸ್! ಹಾಗೂ ಭಾರಿ ದಂಡ appeared first on Karnataka Times .
'ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ': ದಿಗ್ವಿಜಯ್ ಸಿಂಗ್ ಆರ್ಎಸ್ಎಸ್-ಬಿಜೆಪಿ ಹೊಗಳಿಕೆಗೆ ಕಾಂಗ್ರೆಸ್ ತಿರುಗೇಟು
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆರ್ಎಸ್ಎಸ್ ಅನ್ನು ಗೋಡ್ಸೆಯೊಂದಿಗೆ ಗುರುತಿಸಿ, ಅದರಿಂದ ಕಲಿಯಲು ಏನೂ ಇಲ್ಲ ಎಂದು ಹೇಳಿದ್ದಾರೆ. ಸಲ್ಮಾನ್ ಖುರ್ಷಿದ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿ ಇತಿಹಾಸ ನಿರ್ಮಿಸಿದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ಡಾ. ಎಪಿಜೆ ಅಬ್ದುಲ್ ಕಲಾಂ ನಂತರ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಎರಡನೇ ರಾಷ್ಟ್ರಪತಿ ಇವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಗೋವಾ, ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಐಎನ್ಎಸ್ ವಾಗ್ಶೀರ್ ಸ್ವದೇಶಿ ತಂತ್ರಜ್ಞಾನದ ಹೆಮ್ಮೆಯಾಗಿದೆ.
ರಾಯಚೂರು ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕ
ರಾಯಚೂರು:ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಂತ ನಡೆಯುತ್ತಿರುವ ಸಂಘಟನಾ ಪರ್ವದ ಭಾಗವಾಗಿ ರಾಯಚೂರು ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ ಆದೇಶ ಹೊರಡಿಸಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಜೊತೆಗೆ ಹೊಸ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶಂಕರರೆಡ್ಡಿ, ಶರಣಪ್ಪಗೌಡ ನಕ್ಕುಂದಿ, ಚಂದ್ರಶೇಖರ ಪಾಟೀಲ್ ಗೂಗೆಬಾಳ, ವರಪ್ರಸಾದ ಗೌಡ, ಟಿ. ಶ್ರೀನಿವಾಸರೆಡ್ಡಿ, ಬಿ. ಗೋವಿಂದ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಹಾಗೂ ಲಿಂಗರಾಜ ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರವೀಂದ್ರ ಜಲ್ದಾರ್, ಸಂತೋಷ ರಾಜಗುರು ಹಾಗೂ ಜಂಬಣ್ಣ ನಿಲೋಗಲ್ ಅವರನ್ನು ನೇಮಕಗೊಳಿಸಲಾಗಿದೆ. ಜಿಲ್ಲಾ ಕಾರ್ಯದರ್ಶಿಗಳಾಗಿ ಬಸ್ಸಮ್ಮ ಯಾದವ, ಶಾರದಾ ರಾಥೋಡ, ಶಿವರಾಜ ಪತ್ತೇಪುರ, ಕೆ. ನಾಗಲಿಂಗಸ್ವಾಮಿ, ಚಂದಪ್ಪ ಬುದ್ದಿನ್ನಿ, ವಾಣಿಶ್ರೀ, ಶೈಲಜಾ ಷಡಾಕ್ಷರಪ್ಪ ಹಾಗೂ ಟಿ. ಸುಬ್ಬಾರಾವ್ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಕೋಶಾಧ್ಯಕ್ಷರಾಗಿ ಅಯ್ಯಪ್ಪ ಮಾಳೂರು, ವಕ್ತಾರರಾಗಿ ಸಿದ್ದನಗೌಡ ನೆಲಹಾಳ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿ ಮಂಜುನಾಥ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬಾಂಗ್ಲಾದೇಶದ ಹಿಂದೂ ಹತ್ಯೆಗಳು ಪ್ರತ್ಯೇಕ ಅಪರಾಧಗಳಲ್ಲ, ಅವು ವೈಫಲ್ಯದ ಮಾದರಿ
2025ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶದಾದ್ಯಂತ ನಡೆದ ಹಿಂದೂ ಪುರುಷರ ಹತ್ಯೆಗಳು ಪ್ರತ್ಯೇಕ ಅಪರಾಧಗಳಲ್ಲ, ಬದಲಾಗಿ ಹಿಂದೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ದೀರ್ಘಕಾಲೀನ ಕಿರುಕುಳದ ಮಾದರಿಯ ಇತ್ತೀಚಿನ ಅಭಿವ್ಯಕ್ತಿಯಾಗಿದೆ. ಒಂದು ತಿಂಗಳೊಳಗೆ, ಕನಿಷ್ಠ ಹನ್ನೆರಡು ಹಿಂದೂಗಳು ಕೊಲ್ಲಲ್ಪಟ್ಟರು. ಅವರಲ್ಲಿ ಹಲವರು ಗುಂಪು ಹಿಂಸಾಚಾರ ಮತ್ತು ಕಾನೂನುಬಾಹಿರ ಶಿಕ್ಷೆಯ ಮೂಲಕ ಕೊಲ್ಲಲ್ಪಟ್ಟರು. ಇದು ರಾಜಕೀಯ ಅಶಾಂತಿ ಧಾರ್ಮಿಕ ಮೂಲಭೂತವಾದ ಮತ್ತು ಸಾಂಸ್ಥಿಕ ವೈಫಲ್ಯದೊಂದಿಗೆ
ಯಾದಗಿರಿ: ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹುಟ್ಟು ಹಬ್ಬ ಆಚರಣೆ
ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ
ವಿದ್ಯಾರ್ಥಿ ಸಂಘ ಚುನಾವಣೆ: ಅಧ್ಯಯನ ಸಮಿತಿ ರಚಿಸಿದ ಕೆಪಿಸಿಸಿ
ಡಾ. ಶರಣಪ್ರಕಾಶ್ ಪಾಟೀಲ್ ಸಂಚಾಲಕರಾಗಿ ನೇಮಕ
Shivamogga | ಲಾರಿಯಡಿಗೆ ಸಿಲುಕಿ ಬೈಕ್ ಸವಾರ ಮೃತ್ಯು
ಶಿವಮೊಗ್ಗ : ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಯ ತಿರುವಿನಲ್ಲಿ ಸಂಭವಿಸಿದೆ. ಚನ್ನಗಿರಿ ತಾಲೂಕಿನ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದಾರೆ. ಲಾರಿ ಮತ್ತು ಬೈಕ್ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂಗೆ ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ವರ್ಷವಿಡೀ ಕಾಂಡೋಮ್ ಖರೀದಿಗೆ 1,00,000 ರೂಪಾಯಿ ಖರ್ಚು ಮಾಡಿದ ವ್ಯಕ್ತಿ: ಇಲ್ಲಿದೆ ಶಾಕಿಂಗ್ ವರದಿ
Condom News: ಇದೀಗ ಡಿಜಿಟಲ್ ಯುಗ ಆಗಿದ್ದು, ಕುಂತಲ್ಲಿಯೇ ಬೇಕಾದದ್ದನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡಬಹುದಾಗಿದೆ. ಯುವಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಬಹುತೇಕ ಮಂದಿ ಇದೀಗ ಇದೇ ಮಾದರಿ ಅನುಸರಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಈ ವರ್ಷದಲ್ಲಿ ಇಲ್ಲಿಯವರೆಗೂ 1,00,000ಕ್ಕೂ ಅಧಿಕ ಹಣ ಖರ್ಚು ಮಾಡಿ ಕಾಂಡೋಮ್ ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ಹಾಗಾದ್ರೆ, ಅವರು ಎಷ್ಟು ಬಾರಿ ಖರೀದಿಸಿದ್ದಾರೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026: ಟಿಎಂಸಿ ಘೋಷಣೆ, ಲೋಗೋ ಬಿಡುಗಡೆ
2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, 'ಜೊತೋಯ್ ಕರೋ ಹಮ್ಲಾ, ಆಬಾರ್ ಜಿತ್ಬೆ ಬಾಂಗ್ಲಾ' ಎಂಬ ಹೊಸ ಘೋಷಣೆ ಮತ್ತು ಲೋಗೋ ಬಿಡುಗಡೆ ಮಾಡಿದೆ. ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮೀನ್ದಾರರು' ಎಂದು ಟೀಕಿಸಿರುವ ಟಿಎಂಸಿ, ವಲಸೆ ಹೋದವರ ಮೇಲಿನ ದೌರ್ಜನ್ಯವನ್ನು ಪ್ರಸ್ತಾಪಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025 ರ ಭಾರತದ ಸಾಧನೆಗಳನ್ನು ಶ್ಲಾಘಿಸಿದರು. ರಾಷ್ಟ್ರೀಯ ಭದ್ರತೆ, ಕ್ರೀಡಾ ಕ್ಷೇತ್ರದಲ್ಲಿನ ಗೆಲುವುಗಳು, ರಾಮ ಮಂದಿರ ಉದ್ಘಾಟನೆ, ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನದ ಯಶಸ್ಸು ಗಮನ ಸೆಳೆದವು. ದುಬೈನಲ್ಲಿ 'ಕನ್ನಡ ಪಾಠಶಾಲೆ'ಯ ಸ್ಥಾಪನೆಯನ್ನು ಪ್ರಧಾನಿ ಪ್ರಶಂಸಿಸಿದರು. ಯುವ ಮುಖಂಡರ ಸಂವಾದ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆಯೂ ಅವರು ಮಾತನಾಡಿದರು.
ಬಿಹಾರ| ಹಳಿ ತಪ್ಪಿದ ಗೂಡ್ಸ್ ರೈಲಿನ ಎಂಟು ಬೋಗಿಗಳು: ಪಾಟ್ನಾ-ದಿಲ್ಲಿ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ
ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ ಎಂಟು ಬೋಗಿಗಳು ಶನಿವಾರ ತಡರಾತ್ರಿ ಹಳಿ ತಪ್ಪಿವೆ. ಹೌರಾ-ಪಾಟ್ನಾ-ದಿಲ್ಲಿ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಯಾವುದೇ ಸಾವುನೋವು ವರದಿಯಾಗಿಲ್ಲ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಶನಿವಾರ ರಾತ್ರಿ ಸುಮಾರು 11.25ರ ವೇಳೆಗೆ ಪೂರ್ವ ರೈಲ್ವೆಯ ಅಸನ್ಸೋಲ್ ವಿಭಾಗದಡಿಯ ಲಹಬೋನ್ ಮತ್ತು ಸಿಮುಲ್ತಲ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಘಟನೆಯಿಂದ ರಾತ್ರೋರಾತ್ರಿ ಹತ್ತಾರು ರೈಲು ಸಂಚಾರಗಳಲ್ಲಿ ವ್ಯತ್ಯಯವುಂಟಾಗಿದ್ದು, ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಿದ್ದಾರೆ. ರೈಲು ಸಂಚಾರವನ್ನು ಮರು ಸ್ಥಾಪಿಸುವ ಕೆಲಸಗಳು ಸದ್ಯ ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್ ಕಟ್ಟಡದಲ್ಲಿರುವ ತಮ್ಮ ಶಾಸಕರ ಕಚೇರಿಯನ್ನು ಖಾಲಿ ಮಾಡುವಂತೆ ಬಿಜೆಪಿ ಕೌನ್ಸಿಲರ್ ಆರ್. ಶ್ರೀಲೇಖಾ ಒತ್ತಾಯಿಸಿದ್ದಾರೆ ಎಂದು ವಟ್ಟಿಯೂರ್ಕಾವು ಕ್ಷೇತ್ರದ ಸಿಪಿಐ(ಎಂ) ಶಾಸಕ ವಿ.ಕೆ. ಪ್ರಶಾಂತ್ ಆರೋಪಿಸಿದ್ದಾರೆ. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ನಿವೃತ್ತ ಡಿಜಿಪಿ ಹಾಗೂ ಬಿಜೆಪಿ ಕೌನ್ಸಿಲರ್ ಆರ್. ಶ್ರೀಲೇಖಾ ದೂರವಾಣಿ ಮೂಲಕ ಸಂಪರ್ಕಿಸಿ ಸಾಸ್ತಮಂಗಲಂನಲ್ಲಿರುವ ಕಾರ್ಪೊರೇಷನ್ ಕಟ್ಟಡದ ತಮ್ಮ ಕಚೇರಿಯನ್ನು ತೆರವುಗೊಳಿಸುವಂತೆ ಹೇಳಿದ್ದಾರೆ ಎಂದು ತಿಳಿಸಿದರು. ನಿವೃತ್ತ ಡಿಜಿಪಿಯಾಗಿರುವ ಶ್ರೀಲೇಖಾ ಅವರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್ ನಲ್ಲಿ 101 ವಾರ್ಡ್ ಗಳಲ್ಲಿ ಬಿಜೆಪಿಯು 50 ವಾರ್ಡ್ಗಳನ್ನು ಗೆದ್ದು ಅಧಿಕಾರ ವಹಿಸಿಕೊಂಡಿದೆ. “ಅದೇ ಕಟ್ಟಡದಲ್ಲಿರುವ ಕೌನ್ಸಿಲರ್ ಕಚೇರಿಯಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ. ಶಾಸಕರು ಬಳಸುತ್ತಿರುವ ಸ್ಥಳವು ನನಗೆ ಬೇಕು. ಅದನ್ನು ಪಡೆದುಕೊಳ್ಳಲು ಬಯಸಿರುವುದಾಗಿ ಹೇಳಿದ್ದಾರೆ ಎಂದು ಪ್ರಶಾಂತ್ ಹೇಳಿದರು. ಕಳೆದ ಏಳು ವರ್ಷಗಳಿಂದ ತಮ್ಮ ಶಾಸಕರ ಕಚೇರಿ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಿಂದೆಯೂ ಬಿಜೆಪಿ ಕೌನ್ಸಿಲರ್ ಗಳು ಅದೇ ಕಟ್ಟಡದ ಒಂದು ಭಾಗವನ್ನು ಕಚೇರಿಯಾಗಿ ಬಳಸುತ್ತಿದ್ದರು ಎಂದರು. ನಾನು ಮೇಯರ್ ಆಗಿದ್ದ ಅವಧಿಯಲ್ಲಿ ವಾರ್ಡ್ ಕೌನ್ಸಿಲರ್ ಗಳಿಗೆ ಕಚೇರಿ ಜಾಗ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಶಾಸಕರಾದ ನಂತರ ನಿಗಮಕ್ಕೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಕಾರ್ಪೊರೇಷನ್ ನಿಂದ ಬಾಡಿಗೆಗೆ ಪಡೆದುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು. ಕಾರ್ಯವಿಧಾನದ ಪ್ರಕಾರ ಕಚೇರಿ ತೆರವಿಗೆ ಕಾರ್ಪೊರೇಷನ್ ಕಾರ್ಯದರ್ಶಿಯೇ ನೋಟಿಸ್ ನೀಡಬೇಕು. ಆದರೆ ಇಲ್ಲಿ ಕೌನ್ಸಿಲರ್ ನೇರವಾಗಿ ಶಾಸಕರಿಗೆ ಕರೆ ಮಾಡಿ ತೆರವುಗೆ ಒತ್ತಾಯಿಸುತ್ತಿರುವುದು ಅಸಂಗತವಾಗಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅನುಸರಿಸುತ್ತಿರುವ ನೀತಿಗಳನ್ನು ಇಲ್ಲಿ ಪುನರಾವರ್ತಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಕ್ರಮವನ್ನು ‘ಬುಲ್ಡೋಝರ್ ರಾಜ್’ಗೆ ಹೋಲಿಸಿದರು. ಕೌನ್ಸಿಲರ್ ಗಾಗಿ ಮೀಸಲಾದ ಜಾಗವನ್ನು ಶಾಸಕರ ಕಚೇರಿ ಆಕ್ರಮಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ತಮ್ಮ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿರುವ ಕಾರಣ ಹೆಚ್ಚುವರಿ ಜಾಗವನ್ನು ಬಳಸಲಾಗುತ್ತಿದೆ ಎಂದರು. ಆದರೆ ಕೌನ್ಸಿಲರ್ ಕಚೇರಿಯೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ನಾಮಫಲಕ ಅಳವಡಿಸಲಾಗಿದೆ ಎಂದರು. “ಯಾವುದೇ ದೂರು ಇದ್ದರೆ ಅದನ್ನು ಪರಿಶೀಲಿಸಬಹುದು. ಒಪ್ಪಂದದ ಅವಧಿ ಮುಗಿಯುವವರೆಗೆ ನಮಗೆ ಮಂಜೂರಾದ ಜಾಗದಲ್ಲಿ ಕಾರ್ಯನಿರ್ವಹಿಸುವ ಹಕ್ಕಿದೆ. ನಮ್ಮ ಕಚೇರಿಗೆ ಮಾರ್ಚ್ 31, 2026ರವರೆಗೆ ಅನುಮತಿ ನೀಡಲಾಗಿದ್ದು, ಮುಂದಿನ ವರ್ಷ ಮೇನಲ್ಲಿ ವಿಧಾನಸಭೆ ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ ಎಂದರು. ಈ ನಿರ್ಧಾರವನ್ನು ಕೌನ್ಸಿಲರ್ ಸ್ವತಃ ತೆಗೆದುಕೊಂಡಿರಲಿಕ್ಕೆ ಸಾಧ್ಯವಿಲ್ಲ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು. “ಮುಂದಿನ ವರ್ಷ ಮಾರ್ಚ್ವರೆಗೆ ಜಾಗ ಮಂಜೂರಾಗಿರುವುದರಿಂದ ಅದಕ್ಕೂ ಮೊದಲು ಖಾಲಿ ಮಾಡುವ ಪ್ರಶ್ನೆಯೇ ಇಲ್ಲ. ತಕ್ಷಣ ತೆರವು ಬೇಕಿದ್ದರೆ ಅವರು ಕಾನೂನು ಕ್ರಮಕ್ಕೆ ಮುಂದಾಗಬಹುದು; ಅದನ್ನು ನಾವು ಕಾನೂನುಬದ್ಧವಾಗಿ ಎದುರಿಸುತ್ತೇವೆ,” ಎಂದು ಪ್ರಶಾಂತ್ ಹೇಳಿದರು.
ಹರಿದ್ವಾರ: ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನಡೆದಿದ್ದ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ಯಾಂಗ್ ಸ್ಟರ್ ವಿನಯ್ ತ್ಯಾಗಿ, ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಯ್ ತ್ಯಾಗಿ ಹತ್ಯೆಗೆ ಪೊಲೀಸರ ಪಿತೂರಿ ಕಾರಣ ಎಂದು ಆರೋಪಿಸಿರುವ ಕುಟುಂಬದ ಸದಸ್ಯರು, ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಬುಧವಾರ ರೂರ್ಕೀ ಜೈಲಿನಿಂದ ಲಕ್ಸರ್ ನ್ಯಾಯಾಲಯಕ್ಕೆ ವಿನಯ್ ತ್ಯಾಗಿಯನ್ನು ಕರೆದೊಯ್ಯುವಾಗ, ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಲಕ್ಸರ್ ಫ್ಲೈಓವರ್ ಬಳಿ ಆತನಿದ್ದ ಪೊಲೀಸ್ ವಾಹನದ ಮೇಲೆ ಮತ್ತು ವಿನಯ್ ತ್ಯಾಗಿ ಮೇಲೆ ಗುಂಡಿಕ್ಕಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಖ್ಯಾತ ಸುನೀಲ್ ರಾಠಿ ಗ್ಯಾಂಗಿಗೆ ಸೇರಿದ ವಿನಯ್ ತ್ಯಾಗಿ ಮೇಲೆ ದುಷ್ಕರ್ಮಿಗಳು ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ರಿಷಿಕೇಶ್ ಏಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಚಾಲಕರ ವಿಶ್ರಾಂತಿ, ತುರ್ತು ನಿರ್ಗಮನ ದ್ವಾರಗಳ ಕಡ್ಡಾಯ ಅಳವಡಿಕೆ ಬಗ್ಗೆಯೂ ಚಿಂತನೆ ನಡೆದಿದೆ. ಸೀಬರ್ಡ್ ಬಸ್ ಚಾಲಕನೊಬ್ಬ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಘಟನೆಯೂ ನಡೆದಿದೆ.
ಕಾರವಾರ: ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು; ಗಣ್ಯರಿಂದ ಸ್ವಾಗತ
ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ್ದು, ಅವರನ್ನು ರಾಜ್ಯಪಾಲರು ಹಾಗೂ ಸಚಿವರು ಆತ್ಮೀಯವಾಗಿ ಬರಮಾಡಿಕೊಂಡರು. ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಅವರು ಸ್ಥಳದಲ್ಲಿದ್ದರು. ಇವರೊಂದಿಗೆ ಕಾರವಾರ ನೌಕಾನೆಲೆಯ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ನೌಕಾಪಡೆಯ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ದೇಶಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿಗೆ
ಭಾರತೀಯ ಕುಟುಂಬಗಳಲ್ಲಿ ತುರ್ತು ಹಣಕಾಸಿನ ಅಗತ್ಯ ಬಂದರೆ ಮೊದಲು ನೆನಪಾಗುವುದು ‘ಚಿನ್ನದ ಸಾಲ’ (Gold Loan). ಬ್ಯಾಂಕ್ಗೆ ಹೋಗಿ, ಚಿನ್ನ ಅಡವಿಟ್ಟು, ಕೆಲವೇ ನಿಮಿಷಗಳಲ್ಲಿ ಹಣ ಪಡೆಯುವ ಸರಳ ದಾರಿ ಇದು. ಆದರೆ, ಇನ್ನು ಮುಂದೆ ಈ ಪ್ರಕ್ರಿಯೆ ಹಳೆಯ ರೀತಿಯಲ್ಲಿ ಇರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಹೊರಡಿಸಿರುವ ಮಹತ್ವದ ಆದೇಶವೊಂದು ಚಿನ್ನದ ಸಾಲದ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ನೀವು ಈಗಾಗಲೇ ಚಿನ್ನದ ಸಾಲ ಪಡೆದಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಪಡೆಯುವ ಆಲೋಚನೆಯಲ್ಲಿದ್ದರೆ, ... Read more The post ದೇಶಾದ್ಯಂತ ಚಿನ್ನದ ಮೇಲೆ ಲೋನ್ ಗೆ 6 ಹೊಸ ರೂಲ್ಸ್! 2026 ರಿಂದಲೇ ಜಾರಿಗೆ appeared first on Karnataka Times .
ವಾಷಿಂಗ್ಟನ್: ಗುಟೆಮಾಲಾದಲ್ಲಿ ಕಂದಕಕ್ಕೆ ಬಿದ್ದ ಬಸ್; ಕನಿಷ್ಠ 15 ಮಂದಿ ಸಾವು
ಗುಟೆಮಾಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟೊಟೊನಿಕಾಪನ್ ಬಳಿ ಪ್ರಯಾಣಿಕರ ಬಸ್ ಕಂದಕಕ್ಕೆ ಬಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ಈ ದುರಂತವು ದೇಶದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ಮೂಡಿಸಿದೆ, ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಚಿತ್ರದುರ್ಗ ಬಸ್ ಅಗ್ನಿ ದುರಂತ ಪ್ರಕರಣ: ಪ್ರಯಾಣಿಕರ ಲಗೇಜ್ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ
Chitradurga Bus Accident: ಚಿತ್ರದುರ್ಗದ ಬಳಿ ಸಂಭವಿಸಿದ ಖಾಸಗಿ ಬಸ್ ಅಗ್ನಿ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ರಾಶಿ ರಾಶಿ ಆಯಿಲ್ ಬಾಟಲಿಗಳ ಬಾಕ್ಸ್ಗಳು ಇದ್ದ ಕಾರಣ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಪ್ರಯಾಣಿಕರ ಲಗೇಜ್ ವಿಚಾರವಾಗಿ ಮಹತ್ವದ ಆದೇಶ
Aravali Row |ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಅರಾವಳಿ ಬೆಟ್ಟಗಳ ಕುರಿತ ನ.20ರ ಆದೇಶದ ವಿರುದ್ಧ ಪರಿಸರವಾದಿಗಳು ಹಾಗೂ ನಾಗರಿಕ ವಲಯದಿಂದ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತ(ಸುಮೊಟೊ)ವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ. ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ, ‘ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳು ಹಾಗೂ ಸಂಬಂಧಿತ ವ್ಯಾಖ್ಯಾನ’ ಕುರಿತ ಸ್ವಯಂ ಪ್ರೇರಿತ ಸಿವಿಲ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರೊಂದಿಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನವೆಂಬರ್ನಲ್ಲಿ ನೀಡಿದ್ದ ತೀರ್ಪಿನಲ್ಲಿ, ಅರಾವಳಿ ಜಿಲ್ಲೆಗಳಲ್ಲಿ ಅಳೆಯುವಾಗ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರ ಹೊಂದಿರುವ ಯಾವುದೇ ಭೂರೂಪವನ್ನು ‘ಅರಾವಳಿ ಬೆಟ್ಟ’ ಎಂದು ಪರಿಗಣಿಸಬೇಕು ಎಂಬ ತಜ್ಞರ ಸಮಿತಿಯ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು. ಪರಸ್ಪರ 500 ಮೀಟರ್ ಒಳಗೆ ಇರುವ ಎರಡು ಅಥವಾ ಹೆಚ್ಚಿನ ಬೆಟ್ಟಗಳನ್ನು ‘ಅರಾವಳಿ ಶ್ರೇಣಿ’ ಎಂದು ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ, ಎನ್ಸಿಟಿ ದಿಲ್ಲಿ, ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳ ಅರಣ್ಯ ಇಲಾಖೆ ಕಾರ್ಯದರ್ಶಿಗಳು, ಭಾರತದ ಅರಣ್ಯ ಸಮೀಕ್ಷೆ, ಕೇಂದ್ರಿಯ ಅಧಿಕಾರ ಸಮಿತಿ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಸಚಿವಾಲಯದ ಜಂಟಿ ಕಾರ್ಯದರ್ಶಿಯ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯು ನೀಡಿತ್ತು. ಆದರೆ ಈ ತೀರ್ಪು ಪರಿಸರ ಸಂರಕ್ಷಣೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 100 ಮೀಟರ್ ಗಿಂತ ಕಡಿಮೆ ಎತ್ತರದ ಬೆಟ್ಟಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡುವುದರಿಂದ ವ್ಯಾಪಕ ಗಣಿಗಾರಿಕೆ ನಡೆಯುವ ಅಪಾಯವಿದ್ದು, ಇದರ ಪರಿಣಾಮವಾಗಿ ಅರಾವಳಿ ಪ್ರದೇಶದ ಪರಿಸರ ಸಮತೋಲನಕ್ಕೆ ಗಂಭೀರ ಹಾನಿಯಾಗಬಹುದು ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಹೊಸ ವರ್ಷಾಚರಣೆ ಹೈ ಜೋಶ್, ಎಲ್ಲೆಡೆ ರಶ್ಯೋ ರಶ್ಯು!
ಹೊಸ ವರ್ಷದ ಸ್ವಾಗತಕ್ಕೆ ಚಾಮರಾಜನಗರ ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಬಂಡೀಪುರ, ಕೆ.ಗುಡಿ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರಬೆಟ್ಟಗಳಲ್ಲಿ ವಸತಿಗೃಹಗಳು ಈಗಾಗಲೇ ಬುಕ್ ಆಗಿದ್ದು, ಪ್ರಭಾವಿಗಳಿಂದ ಶಿಫಾರಸು ಪಡೆಯುವ ಪ್ರಕ್ರಿಯೆ ಜೋರಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ.
Himachal Pradesh |ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ: ಪೈಲಟ್ ಮೃತ್ಯು
ಕಾಂಗ್ರಾ (ಹಿಮಾಚಲ ಪ್ರದೇಶ): ಪ್ಯಾರಾಗ್ಲೈಡರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡ ಪರಿಣಾಮ ಪೈಲಟ್ ಒಬ್ಬರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಪೈಲಟ್ ಅನ್ನು ಮಂಡಿ ಜಿಲ್ಲೆಯ ನಿವಾಸಿ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸ್ಥಳದಲ್ಲಿ ನಡೆದಿದೆ. ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ ಅಧಿಕಾರಿಗಳ ಪ್ರಕಾರ, ಪ್ಯಾರಾಗ್ಲೈಡರ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ಹಾರಾಟದ ಮಾರ್ಗಮಧ್ಯದಲ್ಲೇ ತನ್ನ ನಿಯಂತ್ರಣ ಕಳೆದುಕೊಂಡಿದೆ. ಬಳಿಕ, ಲಾಂಚ್ ಸೈಟ್ ನಿಂದ ಕೆಳಗಿರುವ ರಸ್ತೆಯೊಂದರ ಮೇಲೆ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲಟ್ ಮೃತಪಟ್ಟರೆ, ಅವರೊಂದಿಗಿದ್ದ ಪ್ರವಾಸಿಗನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು, ಪೈಲಟ್ ಹಾಗೂ ಪ್ರವಾಸಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಮೋಹನ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಈ ಅಪಘಾತಕ್ಕೆ ನಿಖರ ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.
ಸಕಲೇಶಪುರ ನಗರ ಠಾಣೆ ಪೊಲೀಸರ ಕಾರ್ಯಾಚರಣೆ; 269 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ
ಸಕಲೇಶಪುರ: ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 269 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಡಿ. 26, ರಂದು ಹೊಸ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಜೋಯಲ್ ಬಿನ್ ಥಾಮಸ್ ಮ್ಯಾಥ್ಯೂ, ಸಫಾನ್ ಬಿನ್ ಅಬ್ದುಲ್ ಸತ್ತಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ತಿಳಿದುಬಂದಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವನರಾಜು, ಸಬ್ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿಗಳಾದ ಪೃಥ್ವಿ, ರೇವಣ್ಣ, ಶ್ರೀಧರ್, ಸೋಮಶೇಖರ್, ಚಂದ್ರಕಾಂತ್ ಮತ್ತು ಮಧು ಅವರು ಭಾಗವಹಿಸಿದ್ದರು. ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
IMD Weather: 3.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲು; ಈ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಡಿಸೆಂಬರ್ 30ರಿಂದ ಜನವರಿ 2ರವರೆಗೆ ಜಮ್ಮು-ಕಾಶ್ಮೀರ-ಲಡಾಖ್-ಮುಜಫರಾಬಾದ್ನಲ್ಲಿ ಚದುರಿದಂತೆ ವ್ಯಾಪಕ ಮಳೆ, ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚದುರಿದಂತೆ ಹಗುರ ಮಳೆಯಾಗಲಿದೆ. ಡಿಸೆಂಬರ್ 31ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 30-40 ಕಿ.ಮೀ ವೇಗದಲ್ಲಿ ಬಿರುಗಾಳಿಯ ವೇಗದೊಂದಿಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ
ಮಿತ್ತೂರು : ಕೆ.ಜಿ.ಎನ್ನಲ್ಲಿ ಅಜ್ಮೀರ್ ಮೌಲಿದ್, ಸನದುದಾನ ಸಮಾರಂಭ
ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿʼ ಪ್ರದಾನ
ರಾಯಗಢ: ಛತ್ತೀಸ್ ಗಢದ ರಾಯಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಶನಿವಾರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಸರಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿ ನಾಶಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರ ಗುಂಪು ಜಿಂದಾಲ್ ಪವರ್ ಲಿಮಿಟೆಡ್ಗೆ ಸೇರಿದ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ನುಗ್ಗಿ ಎರಡು ಟ್ರ್ಯಾಕ್ಟರ್ಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದೆ. ಘಟಕದ ಕಚೇರಿ ಆವರಣವನ್ನೂ ಧ್ವಂಸಗೊಳಿಸಲಾಗಿದೆ. ಜಿಲ್ಲಾಡಳಿತದ ಹೇಳಿಕೆಯಂತೆ, ತಮ್ನಾರ್ ಪ್ರದೇಶದ ಗೇರ್ ಪೆಲ್ಮಾ ಸೆಕ್ಟರ್–I ಕಲ್ಲಿದ್ದಲು ಬ್ಲಾಕ್ ವ್ಯಾಪ್ತಿಗೆ ಒಳಪಡುವ 14 ಹಳ್ಳಿಗಳ ನಿವಾಸಿಗಳು, ಡಿಸೆಂಬರ್ 8ರಂದು ಧೌರಭಟದಲ್ಲಿ ನಡೆದ ಸಾರ್ವಜನಿಕ ವಿಚಾರಣೆಗೆ ವಿರೋಧ ವ್ಯಕ್ತಪಡಿಸಿ, ಡಿ. 12ರಿಂದ ಲಿಬ್ರಾ ಗ್ರಾಮದ ಸಿಎಚ್ಪಿ ಚೌಕ್ನಲ್ಲಿ ಧರಣಿ ನಡೆಸುತ್ತಿದ್ದರು. ಶನಿವಾರ ಬೆಳಿಗ್ಗೆ ಸುಮಾರು 300 ಮಂದಿ ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿ, ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಉದ್ವಿಗ್ನತೆ ಹೆಚ್ಚಾಗಿ ಕಲ್ಲು ತೂರಾಟ ನಡೆದಿದೆ. ಪ್ರತಿಭಟನಾಕಾರರ ದಾಳಿಯಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ವಿಶ್ವಕರ್ಮ, ತಮ್ನಾರ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲಾ ಪುಸಮ್ ಹಾಗೂ ಒಬ್ಬ ಕಾನ್ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳಾ ಸಿಬ್ಬಂದಿ ಸೇರಿದಂತೆ ಇನ್ನೂ ಹಲವರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸ್ ಬಸ್, ಜೀಪ್ ಹಾಗೂ ಆಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ್ದು, ಹಲವಾರು ಇತರ ಸರಕಾರಿ ವಾಹನಗಳಿಗೂ ಹಾನಿಯಾಗಿದೆ. ಬಳಿಕ ಗುಂಪು ಕಲ್ಲಿದ್ದಲು ನಿರ್ವಹಣಾ ಘಟಕದತ್ತ ಒಳನುಗ್ಗಿ ಮತ್ತೊಮ್ಮೆ ಬೆಂಕಿ ಹಚ್ಚಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಶಾಸಕಿ ವಿದ್ಯಾವತಿ ಸಿದರ್, ರಾಯಗಢ ಜಿಲ್ಲಾಧಿಕಾರಿ ಮಾಯಾಂಕ್ ಚತುರ್ವೇದಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ಅವರು ಪರಿಸ್ಥಿತಿ ಶಮನಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾನು ಭಾರತೀಯ ಜನಾಂಗೀಯ ದ್ವೇಷಕ್ಕೆ ಕೊಲೆಯಾದ ತ್ರಿಪುರಾ ವಿದ್ಯಾರ್ಥಿ ನುಡಿದ ಕೊನೆಯ ಮಾತು!
ಡೆಹ್ರಾಡೂನ್ನಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ, ತ್ರಿಪುರಾದ 24 ವರ್ಷದ ಎಂಬಿಎ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಡಿಸೆಂಬರ್ 9 ರಂದು ನಡೆದ ಈ ಘಟನೆಯಲ್ಲಿ ಗಾಯಗೊಂಡಿದ್ದ ಅಂಜಲ 14 ದಿನಗಳ ನಂತರ ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯಕ್ಕಾಗಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಕಾರ್ಕಳ: ಕಾರ್ಕಳ ತಾಲೂಕಿನ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಾರ್ಕಳದ ಪ್ರಸಿದ್ಧ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಗೂ ಪತ್ರಕರ್ತ ವಾಸುದೇವ ಭಟ್ ಸಿದ್ದಾಪುರ ಅವರ ಅಧ್ಯಕ್ಷತೆಯಲ್ಲಿ ಶುಭಾರಂಭಗೊಂಡಿತು. ಸಮ್ಮೇಳನದ ಅಂಗವಾಗಿ ಪೂರ್ವಾಹ್ನ 8 ಗಂಟೆಗೆ ರಾಷ್ಟ್ರಧ್ವಜಾರೋಹಣವನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ-ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ ಉಪಸ್ಥಿತರಿದ್ದರು. ಪುಸ್ತಕ ಮನೆಯಿಂದ ಜೋಡು ರಸ್ತೆಯ ಮೂಲಕ ಸಮ್ಮೇಳನಾಧ್ಯಕ್ಷರ ಗೌರವಪೂರ್ವಕ ಸ್ವಾಗತದೊಂದಿಗೆ ನಡೆದ ಮೆರವಣಿಗೆಯನ್ನು ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷ ವಿಜಯ ಶೆಟ್ಟಿ ಉದ್ಘಾಟಿಸಿದರು. ಕಾರ್ಕಳ ಜೋಡು ರಸ್ತೆಯ ಪುಸ್ತಕ ಮನೆಯಿಂದ ಹಿರ್ಗಾನ ಕ್ರಿಯೇಟಿವ್ ಕಾಲೇಜು ವರೆಗೆ ನಡೆದ ಕನ್ನಡ ಭುವನೇಶ್ವರಿ ಭವ್ಯ ಪುರಮೆರವಣಿಗೆಯಲ್ಲಿ ಕನ್ನಡತಾಯಿ ಭುವನೇಶ್ವರಿ ದೇವಿಯ ಶೋಭಾಯಾತ್ರೆ, ಸ್ಥಳೀಯ ಸಾಂಸ್ಕೃತಿಕ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಚೆಂಡೆ ಹಾಗೂ ಗೊಂಬೆ ತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ-ಸಂಸ್ಥಾಪಕ ಅಶ್ವತ್ ಎಸ್.ಎಲ್., ಕಾರ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ಬೇಬಿ ಈಶ್ವರ ಮಂಗಳ, ಕಸಾಪ್ ಪದಾಧಿಕಾರಿಗಳಾದ ದೇವದಾಸ್ ಕೆರೆಮನೆ, ನಿತ್ಯಾನಂದ ಪೈ ಹಾಗೂ ಕ್ರಿಯೇಟಿವ್ ಕಾಲೇಜಿನ ಸಹ-ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಸುಮಾರು 49 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದಾರೆ. 2026ರ ಜನವರಿಯಿಂದ ಸಂಬಳ ಹೆಚ್ಚಳದ ಸಾಧ್ಯತೆ ಇದೆ. ಕನಿಷ್ಠ ವೇತನ 18,000 ರೂ. ನಿಂದ 34,500-41,000 ರೂ. ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಫಿಟ್ಮೆಂಟ್ ಫ್ಯಾಕ್ಟರ್ 2.57 ರಿಂದ 2.86 ಕ್ಕೆ ಏರಲಿದೆ. ಭತ್ಯೆಗಳು ಮತ್ತು ಪಿಂಚಣಿ ಕೂಡ ಪರಿಷ್ಕರಣೆಯಾಗಲಿದೆ. ಈ ಕುರಿತಾದ ವಿವರಗಳು
ವಿರಾಮ ಕಳೆದುಕೊಂಡ ಮನುಷ್ಯ ಮತ್ತು ಮನಸ್ಸು!
ಕಥೆ ಹುಟ್ಟಬೇಕಾದ ಜಾಗದಲ್ಲಿ ವೌನ ಕೂತಿದೆ. ಭೂತದ ಮನೆಯಲ್ಲೂ ಈಗ ಯಂತ್ರದ ಹಾವಳಿ. ಪೂಜೆ ನಡೆಯುತ್ತಿರುತ್ತದೆ, ಆದರೆ ಕಣ್ಣು ಪರದೆಯಲ್ಲಿ. ಗಂಟೆಯ ಸದ್ದು ಇದೆ, ಆದರೆ ಮಾತಿನ ಸದ್ದು ಇಲ್ಲ. ಪೂಜೆಯ ನಂತರ ಊಟದ ಸಾಲಿನಲ್ಲಿ ಕೂತವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ; ಅನ್ನಕ್ಕೆ ಕೈ ಇಡುವುದಷ್ಟೇ. ರುಚಿ, ಸ್ವಾದ, ಸವಿ ಬೇಕಾಗಿಲ್ಲ. ಅದರ ಅನುಭವ ಆಗದಷ್ಟೂ ಅಲ್ಲೂ ಎಲ್ಲರ ಕೈಯಲ್ಲೂ ಒಂದೊಂದು ಯಂತ್ರ!. ಈಗ ಊರೊಳಗಡೆಯೂ ಕಲಾತ್ಮಕತೆಯನ್ನು ಕಳೆದುಕೊಂಡು ಅದು ಕೇವಲ ಸುದ್ದಿಯಾಗಿ ವೇಗವಾಗಿ ಓಡುತ್ತದೆ. ನಮ್ಮ ಬದುಕಿನ ದುಡಿಮೆ ಎಂದಿಗೂ ನಿರಂತರ ಹರಿವಲ್ಲ. ಮನುಷ್ಯನ ಶ್ರಮಕ್ಕೆ ಮಧ್ಯೆ ಮಧ್ಯೆ ಚಿಕ್ಕ ನಿಲುಗಡೆಗಳು ಬೇಕು. ಹೊಲ ಉಳುವಾಗ, ಬತ್ತ ಕುಟ್ಟುವಾಗ, ಮಡಿಕೆ ಮಾಡುವಾಗ, ರಾಗಿ ಬೀಸುವಾಗ, ಯಕ್ಷಗಾನ ಕುಣಿಯುವಾಗ, ಬೆಟ್ಟ ಏರುವಾಗ, ಕಣಿವೆ ಇಳಿಯುವಾಗ, ಹಾಡುವಾಗ, ಓಡುವಾಗ, ಓದುವಾಗ, ನೋಡುವಾಗ ಎಲ್ಲೆಲ್ಲೂ ಆ ಚಿಕ್ಕ ವಿರಾಮಗಳು ಸಹಜವಾಗಿ ಹುಟ್ಟುತ್ತವೆ. ಹೊಲಗದ್ದೆ, ತೋಟ, ಶಾಲೆ, ಮನೆ, ಕಾರ್ಖಾನೆ, ಮೈದಾನ, ಕಾಡು, ಲ್ಯಾಬ್, ಬಯಲು, ರಂಗಸ್ಥಳ, ಚೌಕಿ ಎಲ್ಲ ಕಡೆ ದುಡಿಯುವ ಮನುಷ್ಯ ಒಂದು ಕ್ಷಣ ನಿಂತು ನಿಟ್ಟುಸಿರು ಬಿಡುತ್ತಾನೆ. ಮೈಕೈ ಚೆಲ್ಲುತ್ತಾನೆ. ತಾಂಬೂಲ ಮೆಲ್ಲುತ್ತಾನೆ. ನೀರು ಕುಡಿಯುತ್ತಾನೆ. ಬೀಡಿ ಸೇದುತ್ತಾನೆ. ಯಂತ್ರವಲ್ಲದ ಮನುಷ್ಯನಿಗೆ ಬಿಡುವಿಲ್ಲದೆ ದುಡಿಯುವುದು ಅಸಹಜ. ಆ ಚಿಕ್ಕ ವಿರಾಮಗಳು ದುಡಿಮೆಯ ವಿರೋಧಿಗಳಲ್ಲ; ಅವೇ ದುಡಿಮೆಯನ್ನು ಮುಂದಕ್ಕೆ ಒಯ್ಯುವ ಚೇತೊಹಾರಿ ಬಿಡುವುಗಳು. ಆ ಕ್ಷಣಗಳಲ್ಲಿ ನಾವು ಯಂತ್ರಗಳಾಗಿರಲಿಲ್ಲ. ಪಕ್ಕದಲ್ಲಿರುವ ಮತ್ತೊಬ್ಬನ ಜೊತೆ ನಗುತ್ತಾ, ಸುಖದುಃಖ ಹಂಚಿಕೊಳ್ಳುತ್ತಾ ಮನುಷ್ಯರಾಗುತ್ತಿದ್ದೆವು. ರಾವಣ, ಕೌರವನ ವೇಷ ಹಾಕಿಕೊಂಡು ರಂಗಸ್ಥಳವನ್ನೇ ಪುಡಿಗಟ್ಟಿದ ಕಲಾವಿದರು, ಚೌಕಿಯೊಳಗಡೆ ಬೀಡಿ ಸೇದುತ್ತಾ ಸೀತೆ, ದ್ರೌಪದಿಯ ಜೊತೆ ಹರಟೆ ಹೊಡೆಯುತ್ತಿದ್ದ ದೃಶ್ಯಗಳನ್ನು ನಾನು ಕಂಡಿದ್ದೇನೆ. ಕುಬೇರನ ವೇಷದಲ್ಲೇ ತಾಂಬೂಲ ಮೆಲ್ಲುತ್ತಾ ನಿಜ ಬದುಕಿನ ಸಾಲ, ಸಂಕಟಗಳ ಬಗ್ಗೆ ಮಾತಾಡುತ್ತಿದ್ದ ನಾಟಕ ಕಲಾವಿದನನ್ನೂ ನೋಡಿದ್ದೇನೆ. ಉಳುಮೆಯ ಹೊತ್ತು ಎತ್ತುಗಳನ್ನು ಗದ್ದೆಯಲ್ಲೇ ನಿಲ್ಲಿಸಿ, ಕಟ್ಟಪುಣಿಗೆ ಏರಿ, ನನ್ನ ಅಪ್ಪಯ್ಯ ಪಕ್ಕದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಇಬ್ರಾಹೀಂ ಬ್ಯಾರಿಯವರ ಜೊತೆ ಒಂದೈದು ನಿಮಿಷ ತಮಾಷೆ ಮಾತನಾಡಿ ಮತ್ತೆ ಗದ್ದೆಗೆ ಇಳಿಯುತ್ತಿದ್ದ ಕ್ಷಣಗಳು ಇನ್ನೂ ನೆನಪಿನಲ್ಲಿವೆ. ಒಂದು ಕ್ಲಾಸ್ ಮುಗಿಸಿ ಇನ್ನೊಂದು ಕ್ಲಾಸ್ ಶುರುವಾಗುವ ನಡುವಿನ ಚಿಕ್ಕ ಬಿಡುವಿನಲ್ಲಿ, ಸಹೋದ್ಯೋಗಿಗಳ ಜೊತೆ ಹರಟೆ ಹೊಡೆಯುತ್ತಿದ್ದ ದಿನಗಳಿವೆ. ಶಸ್ತ್ರಚಿಕಿತ್ಸೆ ಮುಗಿಸಿ ಬಂದ ವೈದ್ಯರು, ಇನ್ನೊಂದು ಆಪರೇಷನ್ ಮುಂಚೆ, ಮಗಳ ಮದುವೆಯ ತಯಾರಿಯ ಬಗ್ಗೆ ಸಹ ವೈದ್ಯರ ಜೊತೆ ಮಾತನಾಡುತ್ತಿದ್ದ ಕ್ಷಣಗಳೂ ಇದ್ದವು. ಆ ಮಾತುಗಳಾವುದೂ ನಮ್ಮ ನಮ್ಮ ಮುಂದಿನ ಕೆಲಸವನ್ನು ತಡೆಯಲಿಲ್ಲ; ಬದಲಾಗಿ ಕೆಲಸಕ್ಕೆ ಮನಸ್ಸನ್ನು ಸಿದ್ಧಗೊಳಿಸುತ್ತಿದ್ದವು. ಬಸ್ಸಿನಲ್ಲಿ ಪ್ರಯಾಣಿಸುವಾಗ ಪಕ್ಕದ ಸೀಟಿನ ಅಪರಿಚಿತ ಹಿರಿಯನ ಜೊತೆ ಊರು, ಮಳೆ, ಬೆಳೆ, ಮಕ್ಕಳ ಭವಿಷ್ಯದ ಮಾತುಗಳು ಸಹಜವಾಗಿ ಹರಿಯುತ್ತಿದ್ದವು. ಎದುರಿನ ಸೀಟಿನ ಅಳುವ ಮಗುವನ್ನು ಮುದ್ದಾಡಿ ಸಮಾಧಾನಪಡಿಸುತ್ತಿದ್ದೆವು. ನಗುವ ಪುಟ್ಟನನ್ನು ಕ್ಷಣಕಾಲ ಎದೆಗೊತ್ತಿಕೊಂಡು ರಮಿಸುತ್ತಿದ್ದೆವು. ಆಚೆಯವರು ಓದುತ್ತಿದ್ದ ಪತ್ರಿಕೆಯ ಒಂದೆರಡು ಪುಟಗಳನ್ನು ಕಸಿದುಕೊಂಡು ಗಮನಿಸುತ್ತಿದ್ದೆವು. ಆ ಚಿಕ್ಕ ಚಿಕ್ಕ ಕ್ಷಣಗಳಲ್ಲೇ ಪ್ರಯಾಣದುದ್ದಕ್ಕೂ ಸಹವಾಸ ಬೆಳೆಯುತ್ತಿತ್ತು. ಇವತ್ತು ಆ ವಿರಾಮಗಳು, ದುಡಿಮೆಯ ನಡು ಎಡೆಯ ಆರಾಮಗಳು ನಿಧಾನವಾಗಿ ಮಾಯವಾಗುತ್ತಿವೆ. ಶ್ರಮದ ಮಧ್ಯೆ ಸಿಗುವ ಆ ಪುಟ್ಟ ಬಿಡುವುಗಳನ್ನು ನಮ್ಮ ಅಂಗೈಯಲ್ಲಿರುವ ಯಂತ್ರ ಕಬಳಿಸಿದೆ. ಕಾಲೇಜು, ಸಭೆ, ಸೆಮಿನಾರ್, ಸತ್ಯನಾರಾಯಣ ಪೂಜೆ, ಮದುವೆ- ಮುಂಜಿ ಅದೆಲ್ಲ ಪಕ್ಕಕ್ಕಿರಲಿ, ಪುಟ್ಟ ಮನೆಯಲ್ಲಿ ಬದುಕುವ ಆರೇಳು ಮಂದಿ ನೆಟ್ಟಗೆ ಅಕ್ಕಪಕ್ಕ ಕೂತು ಸುಖ-ದುಃಖ ಮಾತನಾಡಿದ, ಒಟ್ಟಿಗೆ ಕೂತು ಊಟ ಮಾಡಿದ ಸಂದರ್ಭಗಳೆಷ್ಟು ಎಂಬುದನ್ನು ನೀವೇ ಲೆಕ್ಕಹಾಕಿ. ಬೇರೆ ಊರು, ಸಮಾರಂಭ, ಮನೆಗಳೇ ಯಾಕೆ? ನೀವು ಬದುಕುವ ಮನೆ, ಪರಿಸರಗಳಲ್ಲಿ ಇಂಥ ಹರಟೆಗಳಿಗೆ ಎಷ್ಟು ಅವಕಾಶಗಳಿವೆ ಎಂದು ಯೋಚಿಸಿ. ಸಂಜೆ ಎಲ್ಲರೂ ಒಟ್ಟಿಗೆ ಕೂತು ಕೂಡೂಟ ಮಾಡುವಾಗ ಅಕ್ಕನ ಕಥೆ, ಅಪ್ಪನ ಕಥೆ, ತಂಗಿ ತನ್ನ ಶಾಲೆಯ ಕಥೆ, ಅಜ್ಜ ತನ್ನ ಬಾಲ್ಯದ ಕಥೆ ಹಂಚಿಕೊಂಡು ಬಟ್ಟಲ ಅನ್ನವನ್ನು ಸುಖಿಸಿದ ದಿನಗಳು ಈಗ ನಿಮ್ಮ ಮನೆಯಲ್ಲಿ ಇವೆಯೇ ಲೆಕ್ಕ ಹಾಕಿ. ಮನೆ, ನಗರ ಬಿಡಿ, ಗದ್ದೆಯೋ, ಮನೆಯೋ, ತೋಟವೋ, ಗುಡ್ಡೆಯೋ ಒಂದು ವೇಳೆ ಅಲ್ಲೆಲ್ಲದುಡಿಯುತ್ತಿದ್ದರೂ ಕೆಲಸ ನಿಂತ ಕ್ಷಣಕ್ಕೆ ನಮ್ಮ ಕಣ್ಣು ಈಗ ಪಕ್ಕದ ಮನುಷ್ಯನ ಕಡೆ ಹೋಗುವುದಿಲ್ಲ; ಕೈ ಸ್ವಯಂಚಾಲಿತವಾಗಿ ಮೊಬೈಲ್ ಪರದೆಯ ಕಡೆ ಜಾರುತ್ತದೆ. ಪಕ್ಕದಲ್ಲೊಬ್ಬ ಇದ್ದಾನೆ, ಆದರೆ ಇಲ್ಲದಂತೆಯೇ. ಮನೆಯಲ್ಲೊಬ್ಬ ಇದ್ದಾನೆ, ಆದರೆ ಇಲ್ಲದಂತೆಯೇ. ಬದುಕಿನ ಪ್ರಯಾಣದುದ್ದದ ವೌನವನ್ನು ಈಗ ಯಂತ್ರ ಕಟ್ಟಿಕೊಂಡ ಯಾವ ಮನುಷ್ಯನು ತುಂಬು ಮಾತಿನಿಂದ ತುಂಬುವುದಿಲ್ಲ; ಬರೀ ಮೊಬೈಲ್- ಡಿಜಿಟಲ್ ಪರದೆಗಳೇ ತುಂಬುತ್ತದೆ. ರಂಗಸ್ಥಳದಲ್ಲಿ ರಾವಣನಾಗಿ ಮೆರೆದವನು, ವೇಷ ಕಳಚಿ ಚೌಕಿಯಲ್ಲಿ ಕೂತ ಶ್ರೀರಾಮನ ಹೆಗಲಿಗೆ ಕೈ ಹಾಕಿ ತಾನು ರಂಗದಲ್ಲಿ ಆಡಿರುವ ಮಾತಿನ ಬಗ್ಗೆ ಚರ್ಚಿಸುವುದಿಲ್ಲ, ಅವನ ಆವೇಶ, ದರ್ಪ, ಯುದ್ಧದ ಕಣ್ಣೀರು ಇವೆಲ್ಲವೂ ಬರೀ ರಂಗಸ್ಥಳಕ್ಕೆ ಮಾತ್ರ ಸೀಮಿತ. ವೇಷ ಕಳಚಿದ ಕ್ಷಣ ಅವನ ಕಣ್ಣು ಮಾತ್ರ ಮೊಬೈಲ್ ಪರದೆ ಮೇಲೆ ಜೀವಂತ. ಪಕ್ಕದಲ್ಲೇ ಕೂತ ಮತ್ತೊಬ್ಬ ಕಲಾವಿದನ ಮುಖ ಅವನಿಗೆ ಕಾಣುವುದಿಲ್ಲ. ಗದ್ದೆಯಲ್ಲಿ ಸುಗ್ಗಿ ಉಳುಮೆ ಮಾಡುತ್ತಿದ್ದ ರಾಮಣ್ಣ, ಎತ್ತುಗಳನ್ನು ನಿಲ್ಲಿಸಿ ಬದುವಿನ ಮೇಲೆ ಕೂತು ಮೊಬೈಲ್ ಉಜ್ಜುತ್ತಾನೆ. ಹಿಂದೆ ಇದೇ ಬದುವಿನಲ್ಲಿ ಕೂತು, ‘‘ಈ ಬಾರಿ ಮಳೆ ಸರಿಯಾಗಿದೆಯಾ?’’ ಎಂದು ಪಕ್ಕದ ಗದ್ದೆಯವರನ್ನು ಕೇಳುತ್ತಿದ್ದ. ಈಗ ಮಳೆಯ ಸುದ್ದಿಯೂ ಮೊಬೈಲ್ ಒಳಗೆ; ಮನುಷ್ಯ ಮಾತ್ರ ಹೊರಗಡೆ ಕೇವಲ ಒಂಟಿ. ಒಂದು ಕ್ಲಾಸ್ ಮುಗಿಸಿ ಬಂದ ಕನ್ನಡದ ಮೇಷ್ಟ್ರು, ಇನ್ನೊಂದು ಕ್ಲಾಸ್ಗೆ ಹೋಗುವ ಮುಂಚಿನ ಚಿಕ್ಕ ಗ್ಯಾಪ್ನಲ್ಲಿ ಈಗ ಮೊಬೈಲ್ ನೋಡುತ್ತಿದ್ದಾರೆ. ಹಿಂದೆ ಇದೇ ಬಿಡುವಿನಲ್ಲಿ ಒಂದು ಸಾಲು ಕಾವ್ಯ, ಒಂದು ಸಾಲು ವಚನ, ಅಥವಾ ‘‘ಇವತ್ತು ಮಕ್ಕಳು ಚೆನ್ನಾಗಿ ಕೇಳಿದ್ರು’’ ಅನ್ನುವ ಹಗುರ ಮಾತು ಹರಿಯುತ್ತಿತ್ತು. ಈಗ ಆ ಮಾತುಗಳ ಜಾಗವನ್ನು ವೌನ ಆಕ್ರಮಿಸಿಕೊಂಡಿದೆ. ಗದ್ದೆ, ಶಾಲೆ, ಕಾರ್ಖಾನೆ, ಮದುವೆ ಚಪ್ಪರ, ಬೊಜ್ಜದ ಮನೆ ಎಲ್ಲೆಲ್ಲೂ ಒಂದೇ ದೃಶ್ಯ. ಚಿಕ್ಕ ಬಿಡುವು ಸಿಕ್ಕರೂ ಸಾಕು; ಪಕ್ಕದಲ್ಲಿರುವ ಮನುಷ್ಯನ ಕಡೆ ಮುಖ ಮಾಡುವ ಬದಲು, ದೇಹಕ್ಕೆ ಅಂಟಿಕೊಂಡಿರುವ ಯಂತ್ರದೊಳಗೆ ತಲೆ ಹಾಕುತ್ತೇವೆ. ಅಲ್ಲಿ ಯಾರೋ ಇದ್ದಾರೆ, ಇಲ್ಲದವರೇ ಇದ್ದಾರೆ; ಆದರೆ ನಮ್ಮ ಪಕ್ಕದಲ್ಲಿರುವವರು ನಿಧಾನವಾಗಿ ಕಾಣೆಯಾಗುತ್ತಿದ್ದಾರೆ. ಚಿಕ್ಕ ಬಿಡುವಿನಲ್ಲಿ ಮೊಬೈಲ್ನ್ನು ಜೇಬಿನಲ್ಲಿ ಇಟ್ಟು, ಪಕ್ಕದಲ್ಲಿರುವವನ ಮುಖ ನೋಡಿದರೆ ಸಾಕು, ಕೇವಲ ಒಂದು ಮಾತು, ಒಂದು ನಗು, ಒಂದು ಹರಟೆ ಮನುಷ್ಯ ಮತ್ತೆ ಮನುಷ್ಯನಾಗಲು ಅಷ್ಟೇ ಸಾಕು. ಗ್ರಾಮಗಳ ಆತ್ಮ ದೊಡ್ಡ ದೊಡ್ಡ ಘೋಷಣೆಯಲ್ಲಿ ಉಳಿಯುವುದಿಲ್ಲ. ಅದು ಚಿಕ್ಕ ಮಾತಿನಲ್ಲಿ, ಚಿಕ್ಕ ನಗುವಿನಲ್ಲಿ, ಚಿಕ್ಕ ವಿರಾಮದಲ್ಲಿ ಉಳಿಯುತ್ತದೆ. ಅದನ್ನು ನಾವು ಕಳೆದುಕೊಳ್ಳಬಾರದು. ನಗರಗಳನ್ನು ಬಿಡಿ, ಹಳ್ಳಿಗಳ ಕಥೆ ಕೇಳಿ ಎಂದು ಹೇಳಿದರೆ ಅದು ಹಳೆಯ ಕಾಲದ ನಾಸ್ತಾಲ್ಜಿಯಾ ಅಲ್ಲ. ಅದು ಮನುಷ್ಯ ಬದುಕಿನ ಮೂಲವನ್ನು ನೆನಪಿಸುವ ಮಾತು. ಒಂದು ಕಾಲದಲ್ಲಿ ಕಥೆಗಳು ಪುಸ್ತಕಗಳಲ್ಲಿ ಹುಟ್ಟುತ್ತಿರಲಿಲ್ಲ. ಅವು ಹುಟ್ಟಿದ್ದು ಅರಳಿ ಕಟ್ಟೆಯ ಕೆಳಗೆ, ಗ್ರಾಮಚಾವಡಿಯಲ್ಲಿ, ಅಜ್ಜನ ಜಗಲಿಯಲ್ಲಿ, ಗದ್ದೆಯ ಬದುವಿನಲ್ಲಿ. ಹಾಗಂತ ಅಲ್ಲಿಯಾರೂ ‘ಕಥೆ ಹೇಳೋಣ’ ಅಂತ ಕುಳಿತುಕೊಳ್ಳುತ್ತಿರಲಿಲ್ಲ. ಮಾತು ಮಾತಾಗಿ, ಘಟನೆ ಘಟನೆಗೆ ಜೋಡಿಸಿ, ಕಥೆಗಳು ತಾನಾಗಿಯೇ ಹುಟ್ಟುತ್ತಿದ್ದವು. ಅರಳಿ ಕಟ್ಟೆ ಎಂದರೆ ಕೇವಲ ಮರದ ನೆರಳಲ್ಲ. ಅದು ಊರಿನ ನೆನಪಿನ ಸಂಗ್ರಹಾಲಯ. ಯಾರು ಯಾರಿಗೆ ಏನು ಹೇಳಿದರು, ಯಾರು ಯಾರ ಜೊತೆ ಮಾತಾಡುವುದಿಲ್ಲ, ಯಾರು ಯಾರ ಜೊತೆ ಓಡಿ ಹೋದಳು, ಯಾವ ಮಳೆಯ ವರ್ಷ ಯಾವ ಬೆಳೆ ಚೆನ್ನಾಗಿತ್ತು ಎಲ್ಲವೂ ಅಲ್ಲಿ ಜಮೆಯಾಗುತ್ತಿತ್ತು. ಗ್ರಾಮಚಾವಡಿ ಎಂದರೆ ಸಭಾಭವನ ಅಲ್ಲ; ಅದು ಊರಿನ ಹೃದಯ. ಅಲ್ಲಿ ಕೂತವರು ಸುದ್ದಿಯನ್ನು ಮಾತ್ರ ಹಂಚಿಕೊಳ್ಳುತ್ತಿರಲಿಲ್ಲ, ಸುದ್ದಿಗೆ ಅರ್ಥ ಕೊಟ್ಟವರು. ಅಜ್ಜನ ಜಗಲಿ ಎಂದರೆ ಮನೆ ಮುಂದಿನ ಆಸನ ಮಾತ್ರವಲ್ಲ; ಅದು ತಲೆಮಾರಿನಿಂದ ತಲೆಮಾರಿಗೆ ಹರಿದ ಕಥೆಗಳ ವೇದಿಕೆ. ಗದ್ದೆಯ ಬದುವಿನಲ್ಲಿ ಕೂತಾಗ ಕಥೆಗಳು ಇನ್ನಷ್ಟು ಜೀವಂತವಾಗುತ್ತಿತ್ತು. ಉಳುಮೆಯ ನಡುವೆ ನಿಂತು, ಎತ್ತುಗಳಿಗೆ ಉಸಿರೊದಗಿಸುತ್ತಾ, ಪಕ್ಕದ ಗದ್ದೆಯವರ ಜೊತೆ ಎರಡು ಮಾತು ಆಡಿದರೆ ಸಾಕು ಅಲ್ಲಿಂದಲೇ ಕಥೆ ಶುರು. ಯಾರೋ ಹೇಳಿದ ಒಂದು ಸಾಲು, ಇನ್ನೊಬ್ಬನ ನೆನಪಿನ ಒಂದು ತುಣುಕು, ಮೂರನೆಯವನ ಅನುಭವದ ಒಂದು ನೆನಪು ಹೀಗೆ ಕಥೆಗೆ ರೆಕ್ಕೆಪುಕ್ಕ ಸೇರುತ್ತಿತ್ತು. ನಾಟಿ ಮನುಷ್ಯರು ಆ ಕಥೆಗಳನ್ನು ಹೊತ್ತುಕೊಂಡು ಊರಿನಿಂದ ಊರಿಗೆ ಸಾಗುತ್ತಿದ್ದರು. ಕಥೆಗಳು ಅಲ್ಲೇ ಹುಟ್ಟಿ ಅಲ್ಲೇ ಬೆಳೆದು, ಅಲ್ಲೇ ರೂಪಾಂತರಗೊಳ್ಳುತ್ತಿದ್ದವು. ಆ ಕಥೆಗಳು ಸಂಬಂಧಗಳನ್ನು ಕಟ್ಟುತ್ತಿದ್ದವು. ಭೂತದ ಮನೆ, ಸತ್ಯನಾರಾಯಣ ಪೂಜೆ ಇವು ಧಾರ್ಮಿಕ ಸ್ಥಳಗಳಷ್ಟೇ ಅಲ್ಲ; ಸಂಬಂಧಗಳ ನವೀಕರಣ ಕೇಂದ್ರಗಳು. ವರ್ಷಕ್ಕೊಮ್ಮೆ ಅಲ್ಲಿ ಸೇರಿದರೆ ಸಾಕು, ಹಳೆಯ ಮನಸ್ತಾಪಗಳಿಗೆ ಮಣ್ಣು ಬೀಳುತ್ತಿತ್ತು. ಕೂಡು ಸಂಬಂಧಗಳು ಮತ್ತೆ ಗಟ್ಟಿಯಾಗುತ್ತಿದ್ದವು. ಯಾರ ಜೊತೆ ಮಾತಾಡಬೇಕು, ಯಾರನ್ನು ತಪ್ಪಿಸಿಕೊಳ್ಳಬೇಕು ಅನ್ನೋದನ್ನೂ ಅಲ್ಲೇ ಮೃದುವಾಗಿ ಸರಿಪಡಿಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ. ಕಥೆ ಹುಟ್ಟುವ ಗ್ರಾಮ ಲೋಕವೂ ಯಂತ್ರದ ದಾಳಿಗೆ ಒಳಗಾಗಿದೆ. ಅರಳಿ ಕಟ್ಟೆ ಇನ್ನೂ ನಿಂತಿದೆ, ಆದರೆ ಅದರ ಕೆಳಗೆ ಕೂತವರು ಕಡಿಮೆ. ಗ್ರಾಮಚಾವಡಿ ಇದೆ, ಆದರೆ ಮಾತಿಲ್ಲ. ಜಗಲಿ ಇದೆ, ಆದರೆ ಅಲ್ಲಿ ಕೂತು ಕಥೆ ಕೇಳುವ ಕಿವಿಗಳು ಇಲ್ಲ. ಗದ್ದೆಯ ಬದು ಅಗಲಗೊಂಡು ಡಾಂಬರು ರಸ್ತೆಯಾಗಿದೆ. ಅಲ್ಲಿ ಕೂತು ಮಾತಾಡುವ ಮನಸ್ಸು ಮಾಯವಾಗಿದೆ. ಕಥೆ ಹುಟ್ಟಬೇಕಾದ ಜಾಗದಲ್ಲಿ ವೌನ ಕೂತಿದೆ. ಭೂತದ ಮನೆಯಲ್ಲೂ ಈಗ ಯಂತ್ರದ ಹಾವಳಿ. ಪೂಜೆ ನಡೆಯುತ್ತಿರುತ್ತದೆ, ಆದರೆ ಕಣ್ಣು ಪರದೆಯಲ್ಲಿ. ಗಂಟೆಯ ಸದ್ದು ಇದೆ, ಆದರೆ ಮಾತಿನ ಸದ್ದು ಇಲ್ಲ. ಪೂಜೆಯ ನಂತರ ಊಟದ ಸಾಲಿನಲ್ಲಿ ಕೂತವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ; ಅನ್ನಕ್ಕೆ ಕೈ ಇಡುವುದಷ್ಟೇ. ರುಚಿ, ಸ್ವಾದ, ಸವಿ ಬೇಕಾಗಿಲ್ಲ. ಅದರ ಅನುಭವ ಆಗದಷ್ಟೂ ಅಲ್ಲೂ ಎಲ್ಲರ ಕೈಯಲ್ಲೂ ಒಂದೊಂದು ಯಂತ್ರ!. ಈಗ ಊರೊಳಗಡೆಯೂ ಕಲಾತ್ಮಕತೆಯನ್ನು ಕಳೆದುಕೊಂಡು ಅದು ಕೇವಲ ಸುದ್ದಿಯಾಗಿ ವೇಗವಾಗಿ ಓಡುತ್ತದೆ. ಯಾವತ್ತೂ ಸುದ್ದಿ ಕ್ಷಣಿಕ; ಕಥೆ ಕಾಲಾತೀತ. ಸುದ್ದಿ ತಿಳಿಸುತ್ತದೆ; ಕಥೆ ಜೋಡಿಸುತ್ತದೆ. ಗ್ರಾಮಗಳು ಇವತ್ತು ಕಥೆ ಕಳೆದುಕೊಂಡಂತಿವೆ. ಆದರೆ ಕಥೆ ಹೇಳುವ ಮನುಷ್ಯ ಇನ್ನೂ ಇದ್ದಾನೆ. ಅವನು ಯಂತ್ರವನ್ನು ಜೇಬಿನಲ್ಲಿ ಇಟ್ಟು, ಪಕ್ಕದಲ್ಲಿರುವವನ ಕಡೆ ಮುಖ ಮಾಡಿದರೆ ಸಾಕು. ಒಂದು ಮಾತು ಶುರುವಾದರೆ, ಕಥೆ ಮತ್ತೆ ಉಸಿರಾಡುತ್ತದೆ. ಅರಳಿ ಕಟ್ಟೆಗೆ ಮತ್ತೆ ಧ್ವನಿ ಬರುತ್ತದೆ. ಜಗಲಿಗೆ ಮತ್ತೆ ನೆನಪು ಮರಳುತ್ತದೆ. ಕಥೆಗಳು ಇಲ್ಲದ ಊರು ಉಳಿಯಬಹುದು, ಆದರೆ ಬದುಕುವುದಿಲ್ಲ. ಕಥೆಗಳು ಉಳಿದ ಊರು ಯಾವತ್ತೂ ತನ್ನ ಆತ್ಮವನ್ನು ಉಳಿಸಿಕೊಂಡೇ ಇರುತ್ತದೆ. ಮಾತುಕತೆ ಎಂಬುದು ಇಬ್ಬರು ವ್ಯಕ್ತಿಗಳ ಸಮ್ಮುಖದಲ್ಲೇ ಪದರ ಪದರವಾಗಿ ರೂಪುಗೊಳ್ಳುವ, ಅಲ್ಲೇ ಹುಟ್ಟಿ ಆಕಾರ ಪಡೆಯುವ ಒಂದು ಮನೋಕ್ರಿಯೆ.ಇಲ್ಲಿ ಪ್ರಶ್ನೆ, ತರ್ಕ, ಸಂವಾದ, ಸರಿ-ತಪ್ಪು, ಸ್ವೀಕಾರ, ನಿರ್ಧಾರ, ಪ್ರೀತಿ, ಆಕ್ಷೇಪ ಎಲ್ಲವೂ ಇರುತ್ತದೆ. ಈ ಕಾರಣಕ್ಕಾಗಿಯೇ ಮನುಷ್ಯನ ಮಾತುಕತೆಯ ಲೋಕಶಾಲೆ ಕೂಡ ಕಲಿಕೆಯ ಒಂದು ಸುಸಂಸ್ಕೃತ ನೆಲೆಯೇ.
ಕಣ್ಣಿಗೆ ಕಾಣದ ಅದೃಶ್ಯ ಶಕ್ತಿಯೊಂದು ಮನುಷ್ಯನ ಹೊರಗೂ ಮತ್ತು ಒಳಗೂ ಕೆಲಸ ಮಾಡುತ್ತಿದೆ ಎಂಬುದನ್ನೇನೋ ನಮ್ಮ ಹಿರೀಕರು ತಮ್ಮ ಅರಿವು, ಗಮನ, ಗ್ರಹಿಕೆ ಮತ್ತು ಅನುಭವಗಳಿಂದ ಕಂಡುಕೊಂಡಿದ್ದರು. ಆದರೆ ಆ ವಿಷಯವು ಅದೃಶ್ಯವಾಗಿರುವ ಕಾರಣದಿಂದಲೇ ಅಸ್ಪಷ್ಟವೂ ಆಗಿತ್ತು. ಆದರೂ ಅಸ್ಪಷ್ಟದಲ್ಲೇ ಸ್ಪಷ್ಟತೆಯನ್ನು ಕಂಡುಕೊಳ್ಳಲು ಪರಿಕಲ್ಪನೆಗಳ ನೆರವನ್ನು ಪಡೆಯಲು ಯತ್ನಿಸಿದ್ದರು. ಮನುಷ್ಯನ ಒಳಗಿನ ಅದೃಶ್ಯ ಶಕ್ತಿಯನ್ನು ಮನಸ್ಸು ಎಂದೂ, ಹೊರಗಿನ ಅದೃಶ್ಯ ಶಕ್ತಿಗೆ ದೇವರು ಎಂದೂ ಒಂದು ಹಂತಕ್ಕೆ ಒಮ್ಮತಕ್ಕೆ ಬಂದಿದ್ದರು. ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಭಿನ್ನ ಭಿನ್ನ ನೋಟಗಳಿಂದ, ಆಯಾಮಗಳಿಂದ ಮತ್ತು ನಿರೂಪಣೆಗಳನ್ನು ಕಟ್ಟಿಕೊಟ್ಟರು. ಅವರವರ ಕಾಲದಲ್ಲಿ, ಅವರವರ ದೇಶಗಳಲ್ಲಿ ಇದ್ದಂತಹ ಸಾಮಾಜಿಕ ಒತ್ತಡ, ಶೋಷಣೆ, ದೌರ್ಜನ್ಯವೇ ಮೊದಲಾದ ವಿಷಯಗಳಿಂದ ಅಸಹಾಯಕರನ್ನು, ಬಳಲಿದವರನ್ನು ವಿಮೋಚನೆ ಮಾಡಲೆಂದೇ ಒಂದು ನೈತಿಕತೆಯ ಆಯಾಮಗಳ ರಚನೆಗಳನ್ನು ರೂಪಿಸಲು ಯತ್ನಿಸಿದರು. ಅವುಗಳನ್ನು ನಾವು ಇಂದು ಧರ್ಮಗಳು ಎನ್ನುತ್ತೇವೆ. ಮಾನವ ಇತಿಹಾಸದಲ್ಲಿ ಧರ್ಮಗಳು ಹುಟ್ಟಿಕೊಂಡದ್ದು ಭಯ ಹುಟ್ಟಿಸಲು ಅಲ್ಲ, ಭಯದಿಂದ ಮನುಷ್ಯನ ಮನಸ್ಸನ್ನು ಮುಕ್ತಗೊಳಿಸಲು. ಅವುಗಳ ಮೂಲ ಉದ್ದೇಶ ವ್ಯಕ್ತಿಯನ್ನು ಶೋಷಣೆಯಿಂದ, ಅಪರಾಧ ಭಾವದಿಂದ ಮತ್ತು ಅಸಹಾಯಕತೆಯಿಂದ ಬಿಡಿಸಿ ಮಾನಸಿಕ ಸ್ವಾತಂತ್ರ್ಯ (psychological freedom) ನೀಡುವುದು. ಒಂದು ಕಾಲಘಟ್ಟದಲ್ಲಿ ಸಮಾಜಗಳು ಅಸಮಾನತೆ, ಹಿಂಸೆ ಮತ್ತು ಶೋಷಣೆಯಿಂದ ಕೂಡಿದ್ದವು. ಬಲಹೀನರು ವೌನವಾಗಿದ್ದರು, ಶಕ್ತಿಶಾಲಿಗಳು ನಿಯಂತ್ರಿಸುತ್ತಿದ್ದರು. ಈ ಪರಿಸ್ಥಿತಿ ವ್ಯಕ್ತಿಗಳಲ್ಲಿ ಅಸಹಾಯಕತೆಯ ರೂಢಿಯನ್ನು (learned helplessness) ಮತ್ತು ಕೀಳರಿಮೆಯ ಗುರುತನ್ನು (shame-based identity) ಬೆಳೆಸಿತ್ತು. ಅಂತಹ ಸಂದರ್ಭದಲ್ಲಿ ಧರ್ಮಗಳು ಒಂದು ಕ್ರಾಂತಿಕಾರಿ ಸಂದೇಶವನ್ನು ತಂದವು: ‘ನೀನು ಮಾನವ; ನಿನ್ನ ಜೀವನ ವೌಲ್ಯವುಳ್ಳದ್ದು’. ಈ ಸಂದೇಶವು ವ್ಯಕ್ತಿಯ ಒಳಜಗತ್ತಿನಲ್ಲಿ ದೊಡ್ಡ ಬದಲಾವಣೆ ತಂದಿತು. ‘ನಾನು ಪಾಪಿ’, ‘ನಾನು ಕೀಳು’, ‘ನಾನು ಪ್ರಶ್ನಿಸಬಾರದು’’ ಎಂಬ ಆಂತರಿಕವಾಗಿ ಬಂದಿಯಾಗಿರುವುದನ್ನು (internalized oppression) ಒಡೆಯಿತು. ಮನಸ್ಸಿಗೆ ಮೊದಲ ಬಾರಿ ಧರ್ಮ ಭರವಸೆ ನೀಡಿದ್ದು, ‘‘ನಿನ್ನ ಅಂತರಾತ್ಮವೂ ಪವಿತ್ರ; ನಿನ್ನ ನೋವಿಗೂ ಮಾನ್ಯತೆ ಇದೆ’’ ಎಂದು. ಧರ್ಮಗಳ ಮನೋವೈಜ್ಞಾನಿಕ ಪಾತ್ರ ಇಲ್ಲಿ ಆರಂಭವಾಗುತ್ತದೆ. ಅವು ವ್ಯಕ್ತಿಯನ್ನು ಅಪರಾಧಿ ಪ್ರಜ್ಞೆ ಮತ್ತು ಭಯದ ಹಿಡಿತದಿಂದ ಬಿಡಿಸಿ, ಆತ್ಮ ಗೌರವ, ನೈತಿಕ ಬಲ ಮತ್ತು ತನ್ನರಿವು ಬೆಳೆಸಲು ಬಂದವು. ವಾಸ್ತವ ದಲ್ಲಿ ಇದು ವ್ಯಕ್ತಿಯನ್ನು ಅಧೀನವಾಗಿಸುವುದಲ್ಲ, ಬದಲಿಗೆ ಜಾಗೃತ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಾಗಿಸುವ ಪ್ರಕ್ರಿಯೆಯಾಗಿತ್ತು. psychological healing ಭಾವನಾತ್ಮಕವಾಗಿ, ಧರ್ಮಗಳು ಕರುಣೆ ಮತ್ತು ಕ್ಷಮೆಯನ್ನು ಭಾವನೆಗಳ ನಿಯಂತ್ರಣ ಮತ್ತು ಸ್ವಕರುಣೆ ರೂಪದಲ್ಲಿ ಕಲಿಸಿವೆ. ತಪ್ಪು ಮಾಡಿದ ವ್ಯಕ್ತಿಯನ್ನು ದಂಡಿಸಲು ಅಲ್ಲ, ಅವನನ್ನು ಮಾನಸಿಕವಾಗಿ ಗುಣಮುಖನನ್ನಾಗಿಸಲು ಅಥವಾ ಕಡೆಗೆ ಕರೆದೊಯ್ಯಲು. ಇಲ್ಲಿ ವ್ಯಕ್ತಿಯನ್ನು ತನ್ನ ತಪ್ಪಿನಿಂದ ಗುರುತಿಸದೆ, ತನ್ನ ಮಾನವೀಯತೆಯಿಂದ ಗುರುತಿಸಲಾಗುತ್ತದೆ. ಸಾಮಾಜಿಕವಾಗಿ, ಧರ್ಮಗಳ ಗುರಿ ವಿಭಜನೆ ಅಲ್ಲ. ಅವು ಪರಾನುಭೂತಿ (empathy), ಸಾಮಾಜಿಕ ಬೆಸುಗೆ (social bonding) ಮತ್ತು ಸಂಕಲಿತ ಸ್ಥಿತಿಸ್ಥಾಪಕತ್ವ ಗುಣ (collective resilience) ನಿರ್ಮಿಸಲು ಬಂದವು. ಬಲವಂತದ ಶಾಂತಿ ಅಲ್ಲದೆ, ನ್ಯಾಯ ಮತ್ತು ಗೌರವದಿಂದ ರೂಪುಗೊಂಡ ಶಾಂತಿಯೇ ಧರ್ಮಗಳ ಸಾಮಾಜಿಕ ಸಂವೇದನೆಯ ಮನೋವೈಜ್ಞಾನಿಕ ಉದ್ದೇಶವಾಗಿತ್ತು. ಈ ವೌಲ್ಯಗಳನ್ನು ಜೀವನದಲ್ಲಿ ತರಲು ಧರ್ಮಗಳು ನೈತಿಕ ಶಿಸ್ತುಗಳನ್ನು ಮುಂದಿಟ್ಟವು. ಇವು ಅವರನ್ನು ಹೊರಗಿನಿಂದ ನಿಯಂತ್ರಿಸಲು ಅಲ್ಲ. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಮತ್ತು ಚಾರಿತ್ರ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ. ನೈತಿಕತೆ ಎಂದರೆ ಭಯದಿಂದ ನಡೆಯುವ ಬದುಕಲ್ಲ; ಅದು ಅರಿವು ಮತ್ತು ಜವಾಬ್ದಾರಿಯಿಂದ ರೂಪುಗೊಂಡ ಬದುಕು. ಹೀಗಾಗಿ ಧರ್ಮಗಳ ನಿಜವಾದ ಕರ್ತವ್ಯ ಜೀವನವನ್ನು ಕುಗ್ಗಿಸುವುದಲ್ಲ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಜೀವನವನ್ನು ಅರಳಿಸುವುದು. ವ್ಯಕ್ತಿಯ ಮನಸ್ಸನ್ನು ಮುಕ್ತಗೊಳಿಸುವುದು, ಸಾಮೂಹಿಕ ಮನಸ್ಸಿನಲ್ಲಿ ಸಹಾನುಭೂತಿ ಬೆಳೆಸುವುದು ಮತ್ತು ಸಮಾಜವನ್ನು ಮಾನವೀಯತೆಯ ನೆಲೆಯ ಮೇಲೆ ಕಟ್ಟುವುದು. ಯಾವ ನಂಬಿಕೆ ಈ ಕೆಲಸ ಮಾಡುತ್ತದೋ, ಅದೇ ಮನಸ್ಸಿಗೆ ಸ್ನೇಹಿ, ಜೀವನಪರ ಧರ್ಮ. ಮನೋವೈಜ್ಞಾನಿಕವಾಗಿ ಒಂದು ಸಾಲಿನಲ್ಲಿ ಹೇಳುವುದಾದರೆ, ಮಾನಸಿಕವಾಗಿ ಆರೋಗ್ಯಕರ ಧರ್ಮ ಭಯದಿಂದಲ್ಲ, ಜಾಗೃತಿಯಿಂದ ಬದುಕಲು ಕಲಿಸುವ ಉದ್ದೇಶದ್ದಾಗಿರಬೇಕು. ಆದರೆ ಯಾವುದೇ ಧರ್ಮಕ್ಕೆ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಂವೇದನೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ. ಧರ್ಮಗಳು ಹುಟ್ಟಿಕೊಂಡದ್ದು ಮಾನವನ ಜೀವನವನ್ನು ಸುಧಾರಿಸಲು. ಮನಸ್ಸಿಗೆ ನೆಮ್ಮದಿ, ಹೃದಯಕ್ಕೆ ಕರುಣೆ, ಸಮಾಜಕ್ಕೆ ನ್ಯಾಯ ತರುವ ಉದ್ದೇಶವೇ ಅದರ ಬೇರು.
ಚುನಾವಣಾ ಟ್ರಸ್ಟ್ಗಳಿಂದ ಪಾರದರ್ಶಕತೆ ಸಾಧ್ಯವೇ?
2024ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನಬಾಹಿರ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದಾಗ, ಇನ್ನು ಎಲ್ಲವೂ ಸರಿಹೋಗಬಹುದು ಎನ್ನುವ ಸಣ್ಣ ಭರವಸೆ ಮೂಡಿತ್ತು. ಆ ತೀರ್ಪು ಬಂದಾಗ, ರಾಜಕೀಯ ಪಕ್ಷಗಳಿಗೆ ಹರಿದು ಬರುವ ಹಣದ ಮೂಲ ತಿಳಿದುಕೊಳ್ಳಲು ಜನರಿಗೆ ಹಕ್ಕು ಇದೆ ಎನ್ನಲಾಯಿತು. ಆ ತೀರ್ಪಿನಲ್ಲಿ ಪಾರದರ್ಶಕತೆಯ ಭರವಸೆ ಸಿಕ್ಕಿತ್ತು. ಆದರೆ 2024-25ರಲ್ಲಿ ಆದದ್ದೇನು? ಬೃಹತ್ ಕಾರ್ಪೊರೇಟ್ ಬಂಡವಾಳ ಮತ್ತು ರಾಜಕೀಯ ಶಕ್ತಿಯ ನಡುವಿನ ಸಂಬಂಧ ಮುಗಿದೇ ಹೋಗಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಸುಳ್ಳಾಗಿದೆ. ಚುನಾವಣಾ ಟ್ರಸ್ಟ್ ಮೂಲಕ ಜಾಸ್ತಿಯೇ ಹಣ ಬಿಜೆಪಿಯಂಥ ಪಕ್ಷಕ್ಕೆ ಹರಿದುಬಂದಿರುವಾಗ, ಚುನಾವಣಾ ಬಾಂಡ್ ರದ್ದಾದರೂ, ಕಾರ್ಪೊರೇಟ್ ದುಡ್ಡಿಗೆ ಪ್ರತಿಯಾಗಿ ಗುತ್ತಿಗೆ ನೀಡುವ ಸರಕಾರದ ಚಾಳಿ ಮುಂದುವರಿಸಿರುವುದು ಸ್ಪಷ್ಟವಾಗಿದೆ. ಈಗ ಚುನಾವಣಾ ಟ್ರಸ್ಟ್ ಒಂದು ವೈಭವೀಕರಿಸಿದ ಹಣ ವರ್ಗಾವಣೆ ಯಂತ್ರವಾಗಿದೆ. ಅಲ್ಲಿಯೂ ಮೂಲಗಳನ್ನು ಮರೆಮಾಚಲಾಗಿದೆ. ಹಣ ಎಲ್ಲಿಗೆ ಹೋಗಬೇಕೆನ್ನುವುದು ಮೊದಲೇ ನಿರ್ಧಾರವಾಗಿರುತ್ತದೆ ಮತ್ತದು ಸಮನಾದ ಆಟದ ಮೈದಾನದ ಪರಿಕಲ್ಪನೆಯನ್ನೇ ಅಣಕಿಸುತ್ತದೆ. ಅಲ್ಲಿಗೆ, ಪ್ರಜಾಪ್ರಭುತ್ವ ಎಂಬುದು ಎಲ್ಲಿ ಉಳಿದಿದೆ ಎಂದು ಕೇಳಿಕೊಳ್ಳಬೇಕಾಗುತ್ತದೆ, ಅಷ್ಟೆ. ಈ ವಂಚನೆ ಯಾವ ಮಟ್ಟದ್ದೆಂದು ತಿಳಿಯಲು ಚುನಾವಣಾ ಟ್ರಸ್ಟ್ಗಳು ಪಾರದರ್ಶಕ ಎಂಬ ಸುಳ್ಳನ್ನು ಮೊದಲು ಗ್ರಹಿಸಬೇಕಾಗುತ್ತದೆ. ಕಾಗದದ ಮೇಲಷ್ಟೇ ಅವುಗಳ ಪಾರದರ್ಶಕತೆ ಎನ್ನುವುದು ತೀರಾ ರಹಸ್ಯವೇನಲ್ಲ. ಕಂಪೆನಿಗಳು ಟ್ರಸ್ಟ್ಗೆ ದೇಣಿಗೆ ನೀಡುತ್ತವೆ ಮತ್ತು ಟ್ರಸ್ಟ್ ಪಕ್ಷಗಳಿಗೆ ದೇಣಿಗೆ ನೀಡುತ್ತದೆ. ಎಲ್ಲವೂ ದಾಖಲಾಗಿದೆ ಮತ್ತು ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗಿದೆ. ಆದರೆ ಇಲ್ಲೊಂದು ಗಂಭೀರ ಲೋಪವಿದೆ; ಈ ಹಿಂದೆ ಕಂಪೆನಿಗಳು ತಮ್ಮ ಲಾಭದ ಶೇ. 7.5ರಷ್ಟು ಮಾತ್ರ ದೇಣಿಗೆ ನೀಡಬಹುದಿತ್ತು. ಆದರೆ ಮೋದಿ ಸರಕಾರ ಆ ಮಿತಿಯನ್ನು ತೆಗೆದುಹಾಕಿರುವುದರಿಂದ, ಈಗ ನಷ್ಟದಲ್ಲಿರುವ ಅಥವಾ ಶೆಲ್ ಕಂಪೆನಿಗಳೂ ಬೇಕಾಬಿಟ್ಟಿ ಹಣ ಸುರಿಯಲು ಹಾದಿ ಮಾಡಿಕೊಟ್ಟಂತಾಗಿದೆ. ಇದು ಕಪ್ಪುಹಣ ಬಿಳಿಯಾಗುವ ನೇರ ಮಾರ್ಗವಲ್ಲವೇ? ಚುನಾವಣಾ ಟ್ರಸ್ಟ್ಗೆ ವಿವಿಧ ಕಂಪೆನಿಗಳು ಕೋಟಿಗಟ್ಟಲೆ ಲೆಕ್ಕದಲ್ಲಿ ಹಣ ಕೊಡುತ್ತವೆ. ಅದೆಲ್ಲವೂ ಒಟ್ಟಿಗೆ ಸೇರುತ್ತದೆ ಮತ್ತು ಅದರಿಂದ ಟ್ರಸ್ಟ್ ವಿವಿಧ ಪಕ್ಷಗಳಿಗೆ ಇಷ್ಟಿಷ್ಟು ಎಂದು ಕೊಡುತ್ತದೆ. ಟ್ರಸ್ಟ್ ಯಾವ ಪಕ್ಷಕ್ಕೆ ಹಣ ಕೊಟ್ಟಿದೆ ಎಂಬುದು ತನಗೆ ಗೊತ್ತಿಲ್ಲ ಅಥವಾ ಅದರ ಮೇಲೆ ತನಗೆ ಹಿಡಿತವಿಲ್ಲ ಎಂದು ಹಣ ಕೊಟ್ಟ ಕಂಪೆನಿ ಹೇಳಬಹುದು. ಆದರೆ ಅದು ಸತ್ಯವೆ? ಅಂದರೆ, ಕಾನೂನಾತ್ಮಕ ಪ್ರಶ್ನೆಗಳು ಎದ್ದಾಗ ಅಥವಾ ಅಗತ್ಯ ಬಿದ್ದಾಗ ತಾಂತ್ರಿಕವಾಗಿ ಉತ್ತರಿಸಲು ಅಥವಾ ನುಣಚಿಕೊಳ್ಳಲು ಇದೊಂದು ಪೂರ್ವನಿಯೋಜಿತ ವ್ಯವಸ್ಥೆಯಾಗಿದೆ. ಒಂದು ನಿರ್ದಿಷ್ಟ ಕಂಪೆನಿ ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಪಕ್ಷಕ್ಕೆಂದೇ ಹಾಕುತ್ತದೆ ಎಂಬ ಸತ್ಯವನ್ನು ನಿರಾಕರಿಸಲು ಇದೊಂದು ವ್ಯವಸ್ಥೆ. ಚುನಾವಣಾ ಟ್ರಸ್ಟ್ ಫೈರ್ವಾಲ್ ಆಗಿ ಕೆಲಸ ಮಾಡುತ್ತದೆ. ಅದು ನೇರ ವಹಿವಾಟಿನ ಸ್ವರೂಪವನ್ನು ರಕ್ಷಿಸುತ್ತ, ಹಣ ಅಧಿಕಾರಸ್ಥರಿಗೇ ಹೋಗುವುದನ್ನು ಖಚಿತಪಡಿಸುತ್ತದೆ. ನೋಡುವುದಕ್ಕೆ ಪಾರದರ್ಶಕ. ಆದರೆ ಆಟ ಹೊರಗಿನಿಂದ ನೋಡುವವರಿಗೆ ಕಾಣದಷ್ಟು ಅಸ್ಪಷ್ಟ. ರಾಜಕೀಯದಲ್ಲಿ ಹಣವೇ ಜೀವಾಳ ಎನ್ನುವಾಗ, ಭಾರತದಲ್ಲಿ ಕಾರ್ಪೊರೇಟ್ ಹಣವೆಲ್ಲ ಅಧಿಕಾರಸ್ಥರ ಬಳಿ ಹರಿಯುತ್ತದೆ ಮತ್ತು ವಿರೋಧ ಪಕ್ಷಗಳನ್ನು ಬರಿಗೈಯಾಗಿಸಿ ನಿಲ್ಲಿಸಲಾಗುತ್ತಿದೆ. ಆಡಳಿತಾರೂಢ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬಲಪಡಿಸಲಾಗುತ್ತಿದ್ದು, 2024-25ರಲ್ಲೂ ಅದು ನಡೆದಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ, ಈ ವರ್ಷ ಪಕ್ಷಗಳಿಗೆ ನೀಡಲಾದ ಎಲ್ಲಾ ರಾಜಕೀಯ ದೇಣಿಗೆಗಳಲ್ಲಿ ಬಿಜೆಪಿ ಶೇ. 85 ರಷ್ಟನ್ನು ಪಡೆದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅದರ ನಿಧಿ ರೂ. 6,000 ಕೋಟಿಗೂ ಹೆಚ್ಚು ಬೆಳೆದಿದೆ. 2023-24ರಲ್ಲಿ ಪಡೆದಿರುವುದಕ್ಕಿಂತ ಶೇ. 50 ಹೆಚ್ಚಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಿಧಿಯಲ್ಲಿ ಅರ್ಧದಷ್ಟು ಕಡಿತವಾಗಿದೆ. ರೂ. 522 ಕೋಟಿ ಒಟ್ಟುಗೂಡಿಸಲು ಅದು ಹೈರಾಣಾಗಿಬಿಟ್ಟಿದೆ ಮತ್ತು ಬಿಜೆಪಿಯ ಗಳಿಕೆ ಈಗ ಕಾಂಗ್ರೆಸ್ಗಿಂತ 12 ಪಟ್ಟು ಹೆಚ್ಚಾಗಿದೆ. ಹೀಗೆ ಒಂದಿಡೀ ವ್ಯವಸ್ಥೆಯನ್ನೇ ಆಡಳಿತಾರೂಢ ಪಕ್ಷ ಹೇಗೆ ಕಬ್ಜಾ ಮಾಡಿಕೊಂಡಿದೆ ಎಂಬುದನ್ನು ನೋಡಬಹುದು. ಹೀಗಿರುವಾಗ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ಎಂಬುದು ಲೊಳಲೊಟ್ಟೆ ಮಾತ್ರ. ಈ ಹಣಬಲದಿಂದ ಅದು ಜಾಹೀರಾತು ಪ್ರಾಬಲ್ಯವನ್ನು ಖರೀದಿಸುತ್ತದೆ, ಡೇಟಾ ವಿಶ್ಲೇಷಣೆಯನ್ನು ಖರೀದಿಸುತ್ತದೆ, ಲಾಜಿಸ್ಟಿಕಲ್ ಬಲವನ್ನು ಖರೀದಿಸುತ್ತದೆ ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಳುಗಿಸುವ ವ್ಯವಸ್ಥೆಯೊಂದನ್ನು ಸೃಷ್ಟಿಸುತ್ತದೆ. ಕಾರ್ಪೊರೇಟ್ ವಲಯ ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಮಾಡದೆ, ತನಗಾಗಿ ಏನು ಬೇಕೋ ಅದನ್ನು ಪಡೆಯುವುದಕ್ಕಾಗಿ ಹೂಡಿಕೆ ಮಾಡುತ್ತಿದೆ ಎನ್ನುವುದು ಸ್ಪಷ್ಟ. ಚುನಾವಣಾ ಬಾಂಡ್ ಹೋದರೂ, ಈಗ ಚುನಾವಣಾ ಟ್ರಸ್ಟ್ ಮೂಲಕ ಪೇ-ಟು-ಪ್ಲೇ ಅಥವಾ ‘ಕ್ವಿಡ್ ಪ್ರೊ ಕೋ’ ಸಂಸ್ಕೃತಿ ಮುಂದುವರಿದಿದೆ. ಮತ್ತದು ಇನ್ನೂ ವ್ಯವಸ್ಥಿತಗೊಂಡಿದೆ. ಲಾರ್ಸೆನ್ ಆಂಡ್ ಟೂಬ್ರೊ (ಎಲ್ ಆಂಡ್ ಟಿ) ಅನ್ನೇ ಗಮನಿ ಸಿದರೆ, ಅದಕ್ಕೆ ಸಂಬಂಧಿಸಿದ ಎಲಿವೇಟೆಡ್ ಅವೆನ್ಯೂ ರಿಯಾಲ್ಟಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಪ್ರುಡೆಂಟ್ ಟ್ರಸ್ಟ್ಗೆ ಏಕೈಕ ಅತಿದೊಡ್ಡ ದೇಣಿಗೆದಾರ ಕಂಪೆನಿಯಾಗಿದ್ದು, 500 ಕೋಟಿ ರೂ. ನೀಡಿದೆ. ಅದು ಬಿಜೆಪಿಯ ಅತಿದೊಡ್ಡ ಫಲಾನುಭವಿಯಾಗಿದ್ದು, ಈ ವ್ಯವಸ್ಥೆಯಲ್ಲಿ ಎಲ್ ಆಂಡ್ ಟಿ ಪಡೆದುಕೊಂಡಿರುವುದರ ಪಟ್ಟಿ ದೊಡ್ಡದಿದೆ. MMRDA ಪ್ರತಿಷ್ಠಿತ ಕೇಂದ್ರ ಸಚಿವಾಲಯ ಕಟ್ಟಡಗಳು, ಕೆ9 ವಜ್ರ ಗನ್ ರಕ್ಷಣಾ ಒಪ್ಪಂದ, ತೆಲಂಗಾಣದಲ್ಲಿ ಬೃಹತ್ ನೀರಾವರಿ ಯೋಜನೆಗಳು, ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಹಳಿ ಕೆಲಸ ಮತ್ತು ಹಿಂದೆ ರದ್ದಾದ 14,000 ಕೋಟಿ ರೂ. ಸುರಂಗ ಟೆಂಡರ್ ಅದರ ಪಾಲಾಗಿದೆ. ಇನ್ನು ಟಾಟಾ ಗ್ರೂಪ್ ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ ಅನ್ನು ನಿಯಂತ್ರಿಸುತ್ತದೆ. ಅದು ಬಿಜೆಪಿಗೆ 757 ಕೋಟಿ ಮತ್ತು ಕಾಂಗ್ರೆಸ್ಗೆ 77 ಕೋಟಿ ರೂ. ದೇಣಿಗೆ ನೀಡಿದೆ. ಟಾಟಾ ಗ್ರೂಪ್ ಗುಜರಾತ್ ಮತ್ತು ಅಸ್ಸಾಮಿನಲ್ಲಿನ ಸೆಮಿಕಂಡಕ್ಟರ್ ಸ್ಥಾವರಗಳಿಗಾಗಿ ಭಾರೀ ರಾಜ್ಯ ಸಬ್ಸಿಡಿ ಪಡೆದಿದೆ. ಏರ್ ಇಂಡಿಯಾ ಸ್ವಾಧೀನ ಮತ್ತು ಆಧುನೀಕರಣ ಒಪ್ಪಂದಗಳು, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ಗಾಗಿ ರಕ್ಷಣಾ ಉತ್ಪಾದನಾ ಆದೇಶಗಳು, ಪಾಸ್ಪೋರ್ಟ್ ಸೇವೆ ಮತ್ತು ಜಿಎಸ್ಟಿ ವ್ಯವಸ್ಥೆಯಂತಹ ಐಟಿ ಯೋಜನೆಗಳು ಟಾಟಾ ಪಾಲಾಗಿವೆ. ಸರಕಾರ ಸಾರ್ವಜನಿಕ ಆಸ್ತಿಗಳು ಮತ್ತು ಸಬ್ಸಿಡಿಗಳನ್ನು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ಅದು ನೂರಾರು ಕೋಟಿ ರೂ.ಗಳನ್ನು ಟ್ರಸ್ಟ್ ಮೂಲಕ ಬಿಜೆಪಿಗೆ ಮುಟ್ಟಿಸುತ್ತದೆ. ಆದಿತ್ಯ ಬಿರ್ಲಾ ಗ್ರೂಪ್ ಎಬಿ ಜನರಲ್ ಟ್ರಸ್ಟ್ ಮೂಲಕ ಬಿಜೆಪಿಗೆ ರೂ. 606 ಕೋಟಿಗಳನ್ನು ಒದಗಿಸಿದೆ. ಅದಕ್ಕೆ ಪ್ರತಿಯಾಗಿ, ಒಡಿಶಾದಲ್ಲಿ ಹಿಂಡಾಲ್ಕೊದ ಬೃಹತ್ ವಿಸ್ತರಣೆ, ಗಣಿಗಾರಿಕೆ ಮತ್ತು ಸಂಸ್ಕರಣಾಗಾರ ಕ್ಲಿಯರೆನ್ಸ್, ಅಲ್ಟ್ರಾಟೆಕ್ಗಾಗಿ ಗ್ರೀನ್ಫೀಲ್ಡ್ ಮತ್ತು ಬ್ರೌನ್ಫೀಲ್ಡ್ ಸಿಮೆಂಟ್ ಸ್ಥಾವರ ಕ್ಲಿಯರೆನ್ಸ್ ಅನ್ನು ಪಡೆದಿದೆ. ಉದ್ಯಮ ಜಗತ್ತಿನಲ್ಲಿ ಸರಕಾರ ಅಡ್ಡಗಾಲಿಟ್ಟರೆ ಲಾಭ ಇಲ್ಲವಾಗುತ್ತದೆ. ಹಾಗಾಗದಂತೆ ತಪ್ಪಿಸಲು ಕೆಲವು ನೂರು ಕೋಟಿ ರೂ. ಕೊಟ್ಟುಬಿಡುವುದು ಸುರಕ್ಷಿತ ಎಂದೇ ಭಾವಿಸಲಾಗುತ್ತದೆ. ಹಣವನ್ನು ಸರಿಯಾದ ಟ್ರಸ್ಟ್ಗೆ ನೀಡುವುದು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ತೋರುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರದ ಕ್ರೋಡೀಕರಣ ಕಂಡರೆ, ಪ್ರಾದೇಶಿಕ ಮಟ್ಟದಲ್ಲಿ ಕಾರ್ಪೊರೇಟ್ ಆಟ ಇನ್ನೂ ವಿಚಿತ್ರವಾಗಿದೆ. ಆಂಧ್ರಪ್ರದೇಶದಲ್ಲಿನ ರಿನ್ಯೂ ಎನರ್ಜಿಯ ವ್ಯವಹಾರ ಇದಕ್ಕೊಂದು ಉದಾಹರಣೆ. ಹೆಸರಿಗಷ್ಟೇ ಹಸಿರಿನ ಕಾಳಜಿ ತೋರಿಸುವ ರಿನ್ಯೂ ಎನರ್ಜಿ ಕಂಪೆನಿ ಆಡಿರುವುದು ಅತ್ಯಂತ ಕೊಳಕು ಆಟ. ತನ್ನ ಅಂಗಸಂಸ್ಥೆಗಳ ಮೂಲಕ, ಅದು ಟಿಡಿಪಿಗೆ ಸುಮಾರು 3 ಕೋಟಿ ರೂ. ದೇಣಿಗೆ ನೀಡಿತು. ಈ ದೇಣಿಗೆಗಳನ್ನು 2024ರ ಮೇ 16 ಮತ್ತು 17ರಂದು ನೀಡಲಾಗಿದೆ. ಅಂದರೆ ಮತದಾನದ ಮೂರು ದಿನಗಳ ನಂತರ ಮತ್ತು ಜೂನ್ 4ರಂದು ಫಲಿತಾಂಶ ಘೋಷಿಸುವ ವಾರಗಳ ಮೊದಲು ಈ ವ್ಯವಹಾರ ನಡೆದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಇದೆಲ್ಲವೂ ನಡೆಯಿತೆಂದರೆ, ಇದಕ್ಕೆ ಕಾರಣ ಕ್ರೋನಿ ಕ್ಯಾಪಿಟಲಿಸಂ. ಇಲ್ಲಿ ಗೆಲ್ಲುವವರು ಯಾರೆಂಬ ಪ್ರಶ್ನೆಯೇ ಬರುವುದಿಲ್ಲ, ಗೆಲುವನ್ನು ಮೊದಲೇ ಖರೀದಿಸಲಾಗುತ್ತದೆ. ತಿಂಗಳುಗಳ ನಂತರ, ಹೊಸ ಟಿಡಿಪಿ ಸರಕಾರದೊಂದಿಗೆ 60,000 ಕೋಟಿ ರೂ. ವೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿತು. ಈ ಚುನಾವಣಾ ಟ್ರಸ್ಟ್ ವ್ಯವಸ್ಥೆಯ ಮೂಲಕ ಪಕ್ಷಕ್ಕೆ ಅಗತ್ಯವಿದ್ದಾಗ ಹಣ ಹರಿದುಬರುತ್ತದೆ ಮತ್ತು ಗೆಲುವು ಸಿಕ್ಕಾಗ ಕಂಪೆನಿಗೆ ಸಿಗಬೇಕಾದ ಡೀಲ್ಗಳು ಸಿಗುತ್ತವೆ. ಬಹುಶಃ ಎಲೆಕ್ಟೋರಲ್ ಟ್ರಸ್ಟ್ನ ಅತ್ಯಂತ ಕಪಟ ಅಂಶವೆಂದರೆ, ಯಾವುದೇ ಕಾರ್ಪೊರೇಟ್ ತನ್ನ ರಾಜಕೀಯ ಸಿದ್ಧಾಂತವನ್ನು ಮರೆಮಾಚಲು ಅವಕಾಶ ನೀಡುತ್ತದೆ ಎಂಬುದು. ಇದು ಅವರಿಗೆ ನಾವು ತಟಸ್ಥರು ಎಂದು ಹೇಳಲು ಅವಕಾಶ ನೀಡುತ್ತದೆ. ಇದು ಮಹೀಂದ್ರಾ ಗ್ರೂಪ್ ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ಗೆ ಹಣಕಾಸು ಒದಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದು ನಂತರ ಬಿಜೆಪಿಗೆ 150 ಕೋಟಿ ರೂ.ಗಳನ್ನು ಮುಟ್ಟಿಸಿ, ಉಳಿದ ಪಕ್ಷಗಳಿಗೆ ಚೂರುಪಾರು ಹಂಚುತ್ತದೆ. ಇವೆಲ್ಲವೂ ಕಾರ್ಪೊರೇಟ್ ತಟಸ್ಥತೆಯ ಮುಖವನ್ನು ಉಳಿಸುತ್ತವೆ. ಇಂಡಿಗೋ ಅಂಥ ಕಂಪೆನಿಗಳು ತಮ್ಮ ವಿಮಾನಯಾನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿವಾದಗಳ ನಡುವೆಯೇ ಪ್ರುಡೆಂಟ್ ಟ್ರಸ್ಟ್ಗೆ 40 ಕೋಟಿ ರೂ. ದೇಣಿಗೆ ನೀಡುವುದು ಸಾಧ್ಯವಾಗುತ್ತದೆ. ನೇರ ದೇಣಿಗೆಯಿಂದ ಬರುವ ನೇರ ಸಾರ್ವಜನಿಕ ಪರಿಶೀಲನೆಯನ್ನು ಇದು ತಪ್ಪಿಸುತ್ತದೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಒಂದೆಡೆಗಾದರೆ, ರಾಜಕೀಯ ಪಕ್ಷಪಾತದ ಅಪಾಯ ಎದುರಿಸಬೇಕಿಲ್ಲ ಎನ್ನುವುದು ಇನ್ನೊಂದೆಡೆಯಿಂದ ಲಾಭದಾಯಕವಾಗಿದೆ.
1920ರ ದಶಕದಲ್ಲಿ, ಗಾಂಧಿ ಮತ್ತು ಲೆನಿನ್ ನಡುವಿನ ಹೋಲಿಕೆಯು ಅತ್ಯುತ್ತಮ ಅರ್ಥವನ್ನು ನೀಡಿತು. ಇಬ್ಬರು ವ್ಯಕ್ತಿಗಳು ಹತ್ತಿರದ ಸಮಕಾಲೀನರಾಗಿದ್ದರು, ಅವರು ಪರಸ್ಪರ ಆರು ತಿಂಗಳ ಅಂತರದಲ್ಲಿ ಈ ಜಗತ್ತನ್ನು ಪ್ರವೇಶಿಸಿದರು. ಇಬ್ಬರೂ ಮಧ್ಯಮ ವರ್ಗದಲ್ಲಿ ಜನಿಸಿದರು, ಇಬ್ಬರೂ ಬಡವರನ್ನು ವಿಮೋಚನೆಗೊಳಿಸುವ ಮತ್ತು ಅನ್ಯಾಯವನ್ನು ಕೊನೆಗೊಳಿಸುವ ಉತ್ಕಟ ಬಯಕೆಯುಳ್ಳವರಾಗಿದ್ದರು. ಆದರೂ, ಪ್ರಮುಖ ವ್ಯತ್ಯಾಸಗಳೂ ಇದ್ದವು. ಲೆನಿನ್ ತಮ್ಮ ಬರಹಗಳಲ್ಲಿ ಅತಿ ವಿವಾದಿತ ವ್ತಕ್ತಿಯಾಗಿದ್ದರು. ಆದರೆ ಗಾಂಧಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ನಾಗರಿಕತೆಯುಳ್ಳವರಾಗಿದ್ದರು. ಸಂಬಂಧಿತ, ಆದರೆ ಹೆಚ್ಚು ಮುಖ್ಯವಾದ ವ್ಯತ್ಯಾಸವೆಂದರೆ, ಒಬ್ಬರು ಹಿಂಸೆಯ ಬಲಿಪೀಠವನ್ನು ಪೂಜಿಸಿದರು, ಆದರೆ ಇನ್ನೊಬ್ಬರು ಅಹಿಂಸೆಯ ಆಚರಣೆಗೆ ಸಮರ್ಪಿಸಿಕೊಂಡಿದ್ದರು. ಇತ್ತೀಚೆಗೆ ನಾನು ‘Lenin and Gandhi’ ಎಂಬ ಕುತೂಹಲಕಾರಿ ಶೀರ್ಷಿಕೆಯ ಪುಸ್ತಕವನ್ನು ಓದಿದೆ. ಇದರ ಲೇಖಕರು ಆಸ್ಟ್ರಿಯನ್ ಬರಹಗಾರ ರೆನೆ ಫುಲೋಪ್-ಮಿಲ್ಲರ್. ಈ ಪುಸ್ತಕವನ್ನು ಮೂಲತಃ ಫ್ರೆಂಚ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು; ನಾನು ಓದಿದ್ದು 1927ರಲ್ಲಿ ಪ್ರಕಟವಾದ ಇಂಗ್ಲಿಷ್ ಅನುವಾದ. 1920ರ ದಶಕದಲ್ಲಿ, ಗಾಂಧಿ ಮತ್ತು ಲೆನಿನ್ ನಡುವಿನ ಹೋಲಿಕೆಯು ಅತ್ಯುತ್ತಮ ಅರ್ಥವನ್ನು ನೀಡಿತು. ಇಬ್ಬರು ವ್ಯಕ್ತಿಗಳು ಹತ್ತಿರದ ಸಮಕಾಲೀನರಾಗಿದ್ದರು, ಅವರು ಪರಸ್ಪರ ಆರು ತಿಂಗಳ ಅಂತರದಲ್ಲಿ ಈ ಜಗತ್ತನ್ನು ಪ್ರವೇಶಿಸಿದರು. ಇಬ್ಬರೂ ಮಧ್ಯಮ ವರ್ಗದಲ್ಲಿ ಜನಿಸಿದರು, ಇಬ್ಬರೂ ಬಡವರನ್ನು ವಿಮೋಚನೆಗೊಳಿಸುವ ಮತ್ತು ಅನ್ಯಾಯವನ್ನು ಕೊನೆಗೊಳಿಸುವ ಉತ್ಕಟ ಬಯಕೆಯುಳ್ಳವರಾಗಿದ್ದರು. ಆದರೂ, ಪ್ರಮುಖ ವ್ಯತ್ಯಾಸಗಳೂ ಇದ್ದವು. ಲೆನಿನ್ ತಮ್ಮ ಬರಹಗಳಲ್ಲಿ ಅತಿ ವಿವಾದಿತ ವ್ಯಕ್ತಿಯಾಗಿದ್ದರು. ಆದರೆ ಗಾಂಧಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ನಾಗರಿಕತೆಯುಳ್ಳವರಾಗಿದ್ದರು. ಸಂಬಂಧಿತ, ಆದರೆ ಹೆಚ್ಚು ಮುಖ್ಯವಾದ ವ್ಯತ್ಯಾಸವೆಂದರೆ, ಒಬ್ಬರು ಹಿಂಸೆಯ ಬಲಿಪೀಠವನ್ನು ಪೂಜಿಸಿದರು, ಆದರೆ ಇನ್ನೊಬ್ಬರು ಅಹಿಂಸೆಯ ಆಚರಣೆಗೆ ಸಮರ್ಪಿಸಿಕೊಂಡಿದ್ದರು. ನನಗೆ ತಿಳಿದಿರುವಂತೆ, ಗಾಂಧಿ ಮತ್ತು ಲೆನಿನ್ ಅವರನ್ನು ಬರವಣಿಗೆಯಲ್ಲಿ ಹೋಲಿಸಿದ್ದು ಮೊದಲು ಬಾಂಬೆಯ ಬಂಡಾಯ ಸಾಹಿತಿ ಶ್ರೀಪಾದ ಅಮೃತ್ ಡಾಂಗೆ. ಎಪ್ರಿಲ್ 1921ರಲ್ಲಿ ಡಾಂಗೆ ‘Gandhi vs Lenin’ ಎಂಬ ನೇರ ಶೀರ್ಷಿಕೆಯ ಅರವತ್ತು ಪುಟಗಳಷ್ಟು ಉದ್ದದ ಕಿರು ಹೊತ್ತಗೆಯನ್ನು ಪ್ರಕಟಿಸಿದರು. ಕಮ್ಯುನಿಸ್ಟರಾಗಿ, ಡಾಂಗೆ ಗಾಂಧಿವಾದಕ್ಕಿಂತ ಲೆನಿನಿಸಂಗೆ ಆದ್ಯತೆ ನೀಡಿದರು. ಆದರೆ-ಬಹುಶಃ ಅವರು ಗಾಂಧಿಯನ್ನು ದೇಹದಲ್ಲಿ ಗಮನಿಸಿದ್ದರಿಂದ - ತಮ್ಮ ದೇಶವಾಸಿಗಳ ಬಗ್ಗೆ ಉಳಿದಿರುವ ಸಹಾನುಭೂತಿಯನ್ನು ಉಳಿಸಿಕೊಂಡರು. ಹೀಗಾಗಿ ಅವರು, ಪ್ರಾಯೋಗಿಕ ಜೀವನದಲ್ಲಿ ಎರಡೂ ವ್ಯವಸ್ಥೆಗಳ ಸಿದ್ಧಾಂತಗಳ ಸಂಪೂರ್ಣ ಸಾಕ್ಷಾತ್ಕಾರವು ಅಸಾಧ್ಯ ಎಂದು ಗಮನಿಸಿದರು. ಗಾಂಧಿವಾದವು ಮಾನವ ಸ್ವಭಾವದ ನೈಸರ್ಗಿಕ ಒಳ್ಳೆಯತನದಲ್ಲಿ ಅತಿಯಾದ ಅನಗತ್ಯ ನಂಬಿಕೆಯಿಂದ ಬಳಲುತ್ತಿದ್ದರೆ, ಬೋಲ್ಶೆವಿಸಂ ಮಾನವ ಹಿತಾಸಕ್ತಿಗಳು ಮತ್ತು ಭಾವನೆಗಳ ಅತಿಯಾದ ನಿರ್ಲಕ್ಷ್ಯದಿಂದ ಬಳಲುತ್ತಿದೆ ಎಂದರು. ಡಾಂಗೆ ಬರವಣಿಗೆಯ ನಾಲ್ಕು ವರ್ಷಗಳ ನಂತರ, ಹ್ಯಾರಿ ವಾರ್ಡ್ ಎಂಬ ಅಮೆರಿಕನ್ ಮೆಥೋಡಿಸ್ಟ್ ಮಂತ್ರಿ ಎಪ್ರಿಲ್ 1925ರ ‘ದಿ ವರ್ಲ್ಡ್ ಟುಮಾರೋ’ ಎಂಬ ಜರ್ನಲ್ನ ಸಂಚಿಕೆಯಲ್ಲಿ ಲೆನಿನ್ ಮತ್ತು ಗಾಂಧಿ ಎಂಬ ಲೇಖನವನ್ನು ಪ್ರಕಟಿಸಿದರು. ಲೆನಿನ್ ಮತ್ತು ಗಾಂಧಿ ತಮ್ಮ ಮಧ್ಯಮ ವರ್ಗದ ಹಿನ್ನೆಲೆಯನ್ನು ಮೀರಿ ತಮ್ಮ ಜೀವನದ ಸರಳತೆಯ ಮೂಲಕ ಜನಸಾಮಾನ್ಯರೊಂದಿಗೆ ತಮ್ಮನ್ನು ಗುರುತಿಸಿಕೊಂಡರು ಎಂದು ವಾರ್ಡ್ ಗಮನಿಸಿದರು. ನಂತರ ಅವರು ವ್ಯತಿರಿಕ್ತತೆಗಳತ್ತ ತಿರುಗಿದರು. ವಾರ್ಡ್ ಹೇಳಿದಂತೆ, ಲೆನಿನ್ ಅವರ ತತ್ವಶಾಸ್ತ್ರವು ಅಧಿಕಾರದ ತತ್ವಶಾಸ್ತ್ರ, ಅವರ ಕಾರ್ಯಕ್ರಮವು ಬಲದ ಕಾರ್ಯಕ್ರಮ. ಗಾಂಧಿಯವರ ತತ್ವಶಾಸ್ತ್ರವು ಪ್ರೀತಿಯ ತತ್ವಶಾಸ್ತ್ರವಾಗಿದ್ದರೆ, ಅವರ ಕಾರ್ಯಕ್ರಮವು ಅಹಿಂಸೆಯ ಕಾರ್ಯಕ್ರಮವಾಗಿದೆ. ‘‘ನಾವು ದಬ್ಬಾಳಿಕೆಗಾರನ ಬಲವನ್ನು ಅದೇ ರೀತಿಯ ಹೆಚ್ಚಿನ ಬಲದ ಮೂಲಕ ಜಯಿಸುತ್ತೇವೆ’’ ಎಂದು ಲೆನಿನ್ ಹೇಳುತ್ತಾರೆ. ಗಾಂಧಿಯವರು ‘‘ನಾವು ಅದನ್ನು ಬೇರೆ ರೀತಿಯ ಬಲದಿಂದ ಜಯಿಸುತ್ತೇವೆ’’ ಎಂದು ಹೇಳುತ್ತಾರೆ. ಹ್ಯಾರಿ ವಾರ್ಡ್ ಲೆನಿನ್ ಮತ್ತು ಗಾಂಧಿಯನ್ನು ಆ ಕಾಲದ ಇಬ್ಬರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಎಂದು ನೋಡಿದರು. ಅವರು ಬರೆದಂತೆ, ಲೆನಿನ್ ಮತ್ತು ಗಾಂಧಿಯವರು ಸಾಕಾರಗೊಳಿಸಿದ ವಿಚಾರಗಳು ಮತ್ತು ಆದರ್ಶಗಳ ಸಂಘರ್ಷವು ಮಾನವಕುಲದ ಭವಿಷ್ಯವನ್ನು ಬದಲಿಸುತ್ತದೆ. ತಳಮಟ್ಟದಲ್ಲಿರುವ ಜನರು ದೊಡ್ಡ ಜೀವನಕ್ಕೆ ಬರಬೇಕು. ಅವರು ಈಗ ಹೆಚ್ಚಿನ ಸವಲತ್ತುಗಳು ಮತ್ತು ಅವಕಾಶಗಳನ್ನು ಹೊಂದಿರುವವರ ಕಡೆಯಿಂದ ಕ್ರಮೇಣ ಸಂಗ್ರಹಣೆ ಮತ್ತು ಹಂಚಿಕೆಯ ಮೂಲಕ ಅದನ್ನು ಪಡೆಯಬೇಕೇ ಅಥವಾ ನಾಗರಿಕತೆಯ ಅಂಶಗಳನ್ನು ನಾಶಮಾಡುವ ಅಧಿಕಾರದ ಹೋರಾಟಕ್ಕೆ ಅವರನ್ನು ಒತ್ತಾಯಿಸಲಾಗುತ್ತದೆಯೇ? 1927ರಲ್ಲಿ ಗಾಂಧಿ ಮತ್ತು ಲೆನಿನ್ ಕುರಿತಾದ ತಮ್ಮ ಪುಸ್ತಕವನ್ನು ಪ್ರಕಟಿಸುವಾಗ, ರೆನೆ ಫುಲೋಪ್-ಮಿಲ್ಲರ್ ಅವರಿಗೆ ಡಾಂಗೆ ಮತ್ತು ವಾರ್ಡ್ ತನಗಿಂತ ಮೊದಲು ಅದೇ ಹಾದಿಯಲ್ಲಿ ಸಾಗಿದ್ದಾರೆಂದು ತಿಳಿದಿರಲಿಲ್ಲ ಎಂದು ತೋರುತ್ತದೆ. ಅವರಂತೆಯೇ, ಗಾಂಧಿ ಮತ್ತು ಲೆನಿನ್ ಇಬ್ಬರೂ ತಮ್ಮ ವ್ಯಕ್ತಿತ್ವದ ಬಲವಾದ ಶಕ್ತಿಯ ಮೂಲಕ ತಮ್ಮ ದೇಶ ಮತ್ತು ಇತಿಹಾಸದ ಹಾದಿಯನ್ನು ಪರಿವರ್ತಿಸಿದರು ಎಂದು ಅವರು ಹೇಳಿದರು. ಇಬ್ಬರೂ ತಮ್ಮ ನಂಬಿಕೆಗಳ ಧೈರ್ಯದಿಂದ ಮುನ್ನಡೆದರು. ಹಿಂದೆ ಜೊತೆಗಿದ್ದವರು ತಮ್ಮನ್ನು ತೊರೆದಾಗಲೂ ಏಕಾಂಗಿಯಾಗಿ ಹೋರಾಡಲು ಸಿದ್ಧರಿದ್ದರು. ಇಬ್ಬರೂ ಸಮಾಜದ ವಿವಿಧ ವರ್ಗಗಳ ನಡುವೆ, ಲೆನಿನ್ ಅವರ ರಶ್ಯದ ಸಂದರ್ಭದಲ್ಲಿ ರೈತರು ಮತ್ತು ಕಾರ್ಮಿಕರ ನಡುವೆ ಮತ್ತು ಗಾಂಧಿಯವರ ಭಾರತದ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ರಚನಾತ್ಮಕ ಒಕ್ಕೂಟಗಳನ್ನು ತರಲು ಅವಿಶ್ರಾಂತವಾಗಿ ಶ್ರಮಿಸಿದರು. ಕೆಲವು ರೀತಿಯಲ್ಲಿ, ಫುಲೋಪ್-ಮಿಲ್ಲರ್ ಅವರ ವಿಶ್ಲೇಷಣೆಯು ಅವರ ಹಿಂದಿನವರಂತೆಯೇ ಇತ್ತು. ಆದರೂ, ಲೆನಿನ್ ಮತ್ತು ಗಾಂಧಿಯವರ ರಾಜಕೀಯ ರೀತಿಯ ನಡುವಿನ ನೈತಿಕ ಅಂತರದ ಬಗ್ಗೆ ಅವರಲ್ಲಿ ಕಡಿಮೆ ದ್ವಂದ್ವವಿತ್ತು. ಹೀಗಾಗಿ ಅವರು ದ್ವೇಷವು ಲೆನಿನ್ನ ಅಂಶವಾಗಿತ್ತು ಎಂದು ಬರೆದರು. ರಾಜಕೀಯ ವಿರೋಧಿಗಳೊಂದಿಗೆ ವ್ಯವಹರಿಸಲು ಅವರನ್ನು ದಮನಿಸುವುದರ ಹೊರತಾಗಿ ಬೇರೆ ಯಾವುದೇ ಮಾರ್ಗವನ್ನು ಅವರು ತಿಳಿದಿರಲಿಲ್ಲ. ದಬ್ಬಾಳಿಕೆಯಿಲ್ಲದ ವರ್ಗ ರಹಿತ ಜಗತ್ತನ್ನು ಬಯಸಿದ ಲೆನಿನ್, ತನ್ನ ಗುರಿಯನ್ನು ಸಾಧಿಸಲು ಕ್ರೂರ ಬಲವನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗವನ್ನು ನೋಡಲಿಲ್ಲ. ಅದು ಅವರ ದಾರಿಯಲ್ಲಿ ಅತ್ಯಂತ ಆಳವಾದ ದುರಂತವಾಗಿದೆ. ಮತ್ತೊಂದೆಡೆ, ಅಹಿಂಸೆಯ ಸಾರ್ವತ್ರಿಕ ಸತ್ಯದ ಬಗ್ಗೆ ಗಾಂಧಿಯವರ ಆಳವಾದ ನಂಬಿಕೆಯು ವೈಯಕ್ತಿಕ ಮತ್ತು ರಾಜಕೀಯ ಶತ್ರುಗಳ ವಿರುದ್ಧ ಎಲ್ಲಾ ಸಂದರ್ಭಗಳಲ್ಲಿಯೂ ಪ್ರೀತಿಯಿಂದ ಮಾತ್ರ ಹೋರಾಡಲು ನಿರ್ಧರಿಸುವಂತೆ ಮಾಡಿತು ಎಂದು ಫುಲೋಪ್-ಮಿಲ್ಲರ್ ಬರೆದಿದ್ದಾರೆ. ಗಾಂಧಿಯವರ ಕ್ರಾಂತಿಯು ಇತಿಹಾಸದಲ್ಲಿ ಒಳ್ಳೆಯತನ ಮತ್ತು ಅಹಿಂಸೆಯ ಕ್ರಾಂತಿಯಾಗಿ ವಿಶಿಷ್ಟವಾಗಿದೆ, ತಿಳುವಳಿಕೆಯನ್ನು ಬೋಧಿಸುವ ಮತ್ತು ಅವರ ಧ್ಯೇಯವಾಕ್ಯ ನಿಮ್ಮ ಶತ್ರುಗಳನ್ನು ಪ್ರೀತಿಸಿ ಎನ್ನುವ ಅವರ ನಾಯಕತ್ವದಲ್ಲಿದೆ ಎಂದಿದ್ದಾರೆ. 1926ರಲ್ಲಿ -ಹ್ಯಾರಿ ವಾರ್ಡ್ ಅವರ ಲೇಖನ ಪ್ರಕಟವಾದ ಒಂದು ವರ್ಷದ ನಂತರ, ಆದರೆ ರೆನೆ ಫುಲೋಪ್-ಮಿಲ್ಲರ್ ಅವರ ಪುಸ್ತಕ ಪ್ರಕಟವಾಗುವ ಒಂದು ವರ್ಷದ ಮೊದಲು - ಫಿಲಿಪ್ ಸ್ಪ್ರಾಟ್ ಎಂಬ ಯುವ ಬ್ರಿಟಿಷ್ ಕಮ್ಯುನಿಸ್ಟ್ ಕ್ರಾಂತಿಯನ್ನು ಹುಟ್ಟುಹಾಕಲು ಭಾರತಕ್ಕೆ ಬಂದರು. ಆಸ್ಟ್ರಿಯನ್ ಅಥವಾ ಅಮೆರಿಕನ್ನರಂತೆ ಅವರು ಬರಹಗಾರರಾಗಿರಲಿಲ್ಲ. ಆದರೆ ಹೋರಾಟಗಾರರಾಗಿದ್ದರು. ಮತ್ತು ಅವರಿಗೆ ನಾಜೂಕಾಗಿ ಮಾತನಾಡಲು ಸಮಯವಿರಲಿಲ್ಲ. ಅವರು ಲೆನಿನ್ ಮಾರ್ಗವನ್ನು ಆರಿಸಿಕೊಂಡಿದ್ದರು. ಒಂದೆರಡು ವರ್ಷಗಳ ಕಾಲ, ಸ್ಪ್ರಾಟ್ ಉಪಖಂಡದಲ್ಲಿ ಸುತ್ತಾಡಿದರು, ಭಾರತೀಯ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದರು ಮತ್ತು ಕ್ರಾಂತಿಯ ನಿರೀಕ್ಷೆಗಳನ್ನು ನಿರ್ಣಯಿಸಿದರು. ನಂತರ, ಮೇ 1929ರಲ್ಲಿ ಅವರನ್ನು ಬಂಧಿಸಲಾಯಿತು ಮತ್ತು ಮೀರತ್ ಪಿತೂರಿ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಲು ಅವರ ಭಾರತೀಯ ಒಡನಾಡಿಗಳೊಂದಿಗೆ ಕಳುಹಿಸಲಾಯಿತು. Gandhism: An Analysis ಸ್ಪ್ರಾಟ್ ಸುಮಾರು ಒಂದು ದಶಕದ ಕಾಲ ಜೈಲಿನಲ್ಲಿದ್ದರು. ಬಂಧನದಲ್ಲಿದ್ದಾಗ ಅವರು ಭಾರತೀಯ ಇತಿಹಾಸ ಮತ್ತು ತತ್ವಶಾಸ್ತ್ರದ ಬಗ್ಗೆ ಬಹಳಷ್ಟು ಓದಲು ಪ್ರಾರಂಭಿಸಿದರು, ಈ ವಿಷಯಗಳ ಬಗ್ಗೆ ಅವರಿಗೆ ಹಿಂದೆ ಕಡಿಮೆ ಜ್ಞಾನವಿತ್ತು. ಅವರ ಓದು ಅವರ ಲೆನಿನಿಸ್ಟ್ ನಂಬಿಕೆಗಳನ್ನು ಮೀರಿ ಹೆಚ್ಚು ಸಹಾನುಭೂತಿಯಿಂದ ಗಾಂಧಿಯನ್ನು ನೋಡುವಂತೆ ಮಾಡಿತು. ಬಿಡುಗಡೆಯಾದ ನಂತರ ಅವರು ಗಾಂಧಿಯನ್ನು ಭೇಟಿಯಾಗಲು ಸೇವಾಗ್ರಾಮಕ್ಕೆ ಹೋದರು. ಅವರೊಂದಿಗಿನ ಮಾತುಕತೆಯನ್ನು ಆಧರಿಸಿ, ಆದರೆ ಗಾಂಧಿಯವರ ಸ್ವಂತ ಬರಹಗಳ ಮೇಲೆ ಹೆಚ್ಚಿನ ಒತ್ತುಕೊಟ್ಟು, ಅವರು ಆ ಕಾಲದ ಶ್ರೇಷ್ಠ ವೌಲ್ಯಮಾಪನವನ್ನು ಪ್ರಕಟಿಸಿದರು. ಇಲ್ಲಿ, ಸ್ಪ್ರಾಟ್ ಅವರು ಈಗ ಹೆಚ್ಚಿನ ಮೆಚ್ಚುಗೆಯನ್ನು ಪಡೆದಿರುವ ಗಾಂಧಿಯೊಂದಿಗೆ ಪೂಜಿಸಲು ಕಲಿಸಲಾದ ಲೆನಿನ್ ಅನ್ನು ವೀರೋಚಿತವಾಗಿ ಸಮನ್ವಯಗೊಳಿಸಲು ಪ್ರಯತ್ನಿಸಿದರು. ಎಂಬ ತಮ್ಮ ಪುಸ್ತಕದಲ್ಲಿ ಸ್ಪ್ರಾಟ್ ಹೀಗೆ ಬರೆದಿದ್ದಾರೆ: ಭಾರತೀಯ ಹಳ್ಳಿಗಳ ಪ್ರಸ್ತುತ ಪರಿಸ್ಥಿತಿಗಳಲ್ಲಿ ಕೋಟ್ಯಂತರ ಜನರನ್ನು ಅಗತ್ಯಕ್ಕಿಂತ ಹೆಚ್ಚು ದಿನ ಬಿಡುವುದು ಅಪರಾಧ. ವಿದೇಶಿ ಆಕ್ರಮಣದ ಅಪಾಯದಿಂದಾಗಿ ರಶ್ಯನ್ನರು ಅತಿಯಾಗಿ ಆತುರಪಡಬೇಕಾಯಿತು, ಹೆಚ್ಚಿನ ಬಡತನಕ್ಕೆ ಒಳಗಾಗಬೇಕಾಯಿತು ಮತ್ತು ತೀವ್ರವಾದ ಬಲವಂತದ ಕ್ರಮಗಳಿಗೆ ತುತ್ತಾಗಬೇಕಾಯಿತು. ಸಾಂಪ್ರದಾಯಿಕ ಸಮಾಜವಾದವು ಅಂತಹ ಅಸಹಜ ಹೆಜ್ಜೆಗಳಿಂದ ದೂರವಿರಲು ಸಾಧ್ಯವಾದರೆ, ಅರ್ಧ ಶತಮಾನದಲ್ಲಿ ಭಾರತವನ್ನು ವಿದ್ಯಾವಂತ, ಸಂತೋಷ ಮತ್ತು ಸಮೃದ್ಧಿಯುಳ್ಳ ಜನರೊಂದಿಗೆ ವಾಸಯೋಗ್ಯ ದೇಶವನ್ನಾಗಿ ಮಾಡಬಹುದು. ಗಾಂಧಿಯವರ ವಿಧಾನವು ಬಹುಶಃ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅದರ ಫಲಿತಾಂಶಗಳು ಅಹಿಂಸೆಯಲ್ಲಿನ ಪ್ರಯೋಗ, ಮಾನವ ವ್ಯವಹಾರಗಳಿಂದ ದ್ವೇಷವನ್ನು ನಿರ್ಮೂಲನೆ ಮಾಡುವುದು ಮತ್ತು ಸತ್ಯದ ಆಚರಣೆಯಂತಹ ಆಸಕ್ತಿಯನ್ನು ಹೊಂದಿದ್ದು, ಯಾರೇ ಆದರೂ ಅದನ್ನು ಬಹುತೇಕ ಇಷ್ಟಪಡಬಹುದು. ಇಲ್ಲಿ ಹ್ಯಾರಿ ವಾರ್ಡ್ನ ಪ್ರಜ್ಞಾಪೂರ್ವಕವಲ್ಲದ ಧ್ವನಿಗಳನ್ನು ನಾವು ಕಾಣುತ್ತೇವೆ, ಲೆನಿನ್ರ ವಿಧಾನಗಳು ಬಹುಶಃ ಹೆಚ್ಚು ಪರಿಣಾಮಕಾರಿಯಾಗಿರಬಹುದು, ಆದರೆ ಗಾಂಧಿಯವರ ವಿಧಾನಗಳು ಖಂಡಿತವಾಗಿಯೂ ಹೆಚ್ಚು ಮಾನವೀಯವಾಗಿದ್ದವು ಎಂದು ಸ್ಪ್ರಾಟ್ ಪ್ರತಿಪಾದಿಸಿದ್ದಾರೆ. ಸ್ಪ್ರಾಟ್ ಒಬ್ಬ ದೃಢನಿಶ್ಚಯದ ಮಾರ್ಕ್ಸ್ವಾದಿಯಾಗಿ ಜೈಲು ಪ್ರವೇಶಿಸಿದ್ದವರು, ಗೊಂದಲಮಯವಾಗಿ ಅದನ್ನು ಬಿಟ್ಟರು. ಲೆನಿನಿಸಂ ಮತ್ತು ಗಾಂಧಿವಾದದ ನಡುವಿನ ಅರ್ಧದಾರಿಯಲ್ಲೇ ನೆಲೆಯನ್ನು ಹುಡುಕುತ್ತಾ, ಅವರು ಎಂ.ಎನ್. ರಾಯ್ ಸುತ್ತಲಿನ ವಲಯಕ್ಕೆ ಸೇರಿದರು. 1930ರ ದಶಕದ ಉತ್ತರಾರ್ಧದಲ್ಲಿ ಲೆನಿನ್ ಅವರ ಮಾಜಿ ಒಡನಾಡಿ ಮತ್ತು ಗಾಂಧಿಯವರ ದೀರ್ಘಕಾಲದ ವಿಮರ್ಶಕರಾಗಿದ್ದ ಇವರು ಹೊಸ ರಾಡಿಕಲ್ ಡೆಮಾಕ್ರಟಿಕ್ ಪಕ್ಷವನ್ನು ಪ್ರಾರಂಭಿಸಿದರು. ಅದು ‘ಇಂಡಿಪೆಂಡೆಂಟ್ ಇಂಡಿಯಾ’ ಎಂಬ ಪತ್ರಿಕೆಯನ್ನು ನಡೆಸುತ್ತಿತ್ತು. ಅದರ ವಿಷಯಗಳನ್ನು ರಾಯ್ ಸ್ವತಃ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಡಿಸೆಂಬರ್ 1941ರಲ್ಲಿ, ಆಗ ಭಾರತೀಯ ಮಹಿಳೆಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸ್ಪ್ರಾಟ್, ಎಂ.ಎನ್. ರಾಯ್ ಅವರ ಪತ್ರಿಕೆಯಲ್ಲಿ ಪ್ರಕಟಣೆಗಾಗಿ ಒಂದು ಲೇಖನವನ್ನು ಕಳುಹಿಸಿದರು. ಗಾಂಧಿಯವರ ಬಗ್ಗೆ ಅತಿಯಾದ ಸಹಾನುಭೂತಿ ಇದೆ ಎಂದು ರಾಯ್ ಲೇಖನವನ್ನು ತಿರಸ್ಕರಿಸಿದರು. ಲೇಖನದ ಹಸ್ತಪ್ರತಿ ದುರದೃಷ್ಟವಶಾತ್ ಲಭ್ಯವಿಲ್ಲ. ಆದರೆ ಅದರ ವಿಷಯಗಳ ಸ್ವರೂಪವನ್ನು ಸ್ಪ್ರಾಟ್ ರಾಯ್ ಬರೆದ ಪತ್ರದಲ್ಲಿ ಬಹಿರಂಗಪಡಿಸಲಾಗಿದೆ. ಇಲ್ಲಿ ಗಾಂಧಿವಾದವು ಸ್ವಾವಲಂಬನೆ, ಪ್ರಾಮಾಣಿಕತೆ, ಸಾರ್ವಜನಿಕ ವ್ಯವಹಾರಗಳಲ್ಲಿ ಆಸಕ್ತಿ, ಸಹಕರಿಸುವ ಸಾಮರ್ಥ್ಯ ಮತ್ತು ಕೋಮುವಾದದಿಂದ ಸ್ವಾತಂತ್ರ್ಯವನ್ನು ಬೆಳೆಸಿದೆ ಎಂದು ಸ್ಪ್ರಾಟ್ ವಾದಿಸಿದರು. ಹೀಗಾಗಿ ಅದು ದೇಶವನ್ನು ಸ್ವಾತಂತ್ರ್ಯಕ್ಕೆ ಯೋಗ್ಯವಾಗಿಸಲು (ನಾನು ಸಮಾಜವಾದಕ್ಕೆ ಸೂಕ್ತ ಎಂದು ಹೇಳಲಿಲ್ಲ) ಪ್ರಮುಖ ಶಕ್ತಿಯಾಗಬಹುದು ಎಂದು ಅವರು ನಂಬಿದ್ದರು. ಸ್ಪ್ರಾಟ್, ಲೆನಿನ್ ಅವರ ದೋಷವನ್ನು ಸಹ ಎತ್ತಿ ತೋರಿಸಿದ್ದರು, ಅಂದರೆ, ಬೂರ್ಜ್ವಾ ಪ್ರಜಾಪ್ರಭುತ್ವವು ಸಂಪೂರ್ಣ ವಂಚನೆಯಾಗಿದೆ, ಕ್ರಾಂತಿಕಾರಿ ಉದ್ದೇಶಗಳಿಗಾಗಿ ಬಳಸಲು ಯೋಗ್ಯವಾಗಿದೆ, ಆದರೆ ಅದರಲ್ಲಿ ಯಾವುದೇ ವೌಲ್ಯವಿಲ್ಲ ಎಂದು ಅವರು ಭಾವಿಸಿದ್ದರು. ವಾಸ್ತವವಾಗಿ, ಇದು ಅತ್ಯಂತ ಅಮೂಲ್ಯವಾದ ಸಾಧನೆಯಾಗಿದೆ ಮತ್ತು ಅದರ ಮುಖ್ಯ ಲಕ್ಷಣಗಳನ್ನು ಅಂದರೆ ರಾಜಕೀಯ ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ್ಯಗಳು, ಚಿಂತನೆಯ ಸ್ವಾತಂತ್ರ್ಯ ಇತ್ಯಾದಿಗಳನ್ನು ಸಂರಕ್ಷಿಸದ ಹೊರತು, ಸಮಾಜವಾದವು ಯಾವುದೇ ಲಾಭವನ್ನು ಪಡೆಯುವುದಿಲ್ಲ. ಫಿಲಿಪ್ ಸ್ಪ್ರಾಟ್ ಪ್ರಜಾಪ್ರಭುತ್ವಕ್ಕಾಗಿ ತಮ್ಮ ಎರಡು ಘೋಷಣೆಗಳನ್ನು ನೀಡಿದ ಎಂಭತ್ತು ವರ್ಷಗಳ ನಂತರ, ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ ಆಡಳಿತಗಳು ಮುತ್ತಿಗೆಗೆ ಒಳಗಾಗಿವೆ. ಟ್ರಂಪ್ ಅವರ ಅಮೆರಿಕ, ಓರ್ಬನ್ ಅವರ ಹಂಗೇರಿ, ನೆತನ್ಯಾಹು ಅವರ ಇಸ್ರೇಲ್, ಎರ್ದೋಗನ್ ಅವರ ತುರ್ಕಿಯ, (ಮತ್ತು ಕಡಿಮೆಯಿರದ) ಮೋದಿಯವರ ಭಾರತದಲ್ಲಿ, ಬಲಪಂಥೀಯ ಸರ್ವಾಧಿಕಾರಿಗಳು ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತೆಯನ್ನು ಕಸಿದುಕೊಳ್ಳಲು ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಸಾಧ್ಯತೆಗಳನ್ನು ಜೋಡಿಸಲು ಶ್ರಮಿಸುತ್ತಿದ್ದಾರೆ. ಆದರೂ, ಅಂತಹ ಪ್ರಜಾಪ್ರಭುತ್ವದ ಹಿನ್ನಡೆಗೆ ಉತ್ತರವು ರಕ್ತಸಿಕ್ತ, ಲೆನಿನಿಸ್ಟ್ ಶೈಲಿಯ ಕ್ರಾಂತಿಯಲ್ಲ, ಅದು ಸರ್ವಾಧಿಕಾರಿ ಏಕಪಕ್ಷೀಯ ರಾಜ್ಯಕ್ಕೆ ಕಾರಣವಾಗುತ್ತದೆ. ಬದಲಾಗಿ, ನಿಜವಾದ ನ್ಯಾಯಯುತ ಚುನಾವಣೆಗಳು, ಪತ್ರಿಕಾ ಸ್ವಾತಂತ್ರ್ಯ, ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ನಾಗರಿಕ ಸೇವೆ ಮತ್ತು ಬೂರ್ಜ್ವಾ ಪ್ರಜಾಪ್ರಭುತ್ವವನ್ನು ಮಾನವಕುಲದ ಅತ್ಯಂತ ವೌಲ್ಯಯುತ ಸ್ವರೂಪಕ್ಕೆ ಬದಲಿಸಲು ಸಹಾಯ ಮಾಡಿದ ಇತರ ಸಂಸ್ಥೆಗಳ ಚೈತನ್ಯ ಮತ್ತು ಭರವಸೆಯನ್ನು ನವೀಕರಿಸಲು ಪ್ರಯತ್ನಿಸಬೇಕು.
ಭಾರತದ ಮೊದಲ ಹ್ಯೂಮನ್ ರೇಟೆಡ್ ರಾಕೆಟ್: ಸುರಕ್ಷತೆಯೇ ಆದ್ಯತೆ
ಗಗನಯಾನ ಯೋಜನೆಗೆ ಭಾರತ ತನ್ನ ಅತ್ಯಂತ ನಂಬಿಕಾರ್ಹವಾದ ಎಲ್ವಿಎಂ-3 ರಾಕೆಟ್ ಅನ್ನು ಆರಿಸಿದೆ. ಇಸ್ರೋ ರಾಕೆಟ್ಗೆ ಹೆಚ್ಚುವರಿ ಬ್ಯಾಕಪ್ ವ್ಯವಸ್ಥೆಗಳು, ಇಂಜಿನ್ ನಂಬಿಕಾರ್ಹತೆ ಸುಧಾರಣೆ ಮತ್ತು ಕ್ಷಿಪ್ರ ಕ್ರ್ಯೂ ಎಸ್ಕೇಪ್ ಸಿಸ್ಟಮ್ಗಳನ್ನು ಅಳವಡಿಸಿ, ಅದನ್ನು ಇನ್ನಷ್ಟು ಬಲಪಡಿಸಿದೆ. ಒಂದು ಬಾರಿ ಪ್ರಮಾಣೀಕೃತವಾದ ಬಳಿಕ, ರಾಕೆಟ್ ಎಚ್ಎಲ್ವಿಎಂ-3 ಎಂದು ಮರುನಾಮಕರಣ ಹೊಂದಲಿದೆ. ಭಾರತ ಗಗನಯಾನ ಯೋಜನೆಯಡಿ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯಲ್ಲಿ ಇಟ್ಟಿರುವ ಒಂದು ವೌನವಾದ, ಆದರೆ ಪ್ರಮುಖವಾದ ಹೆಜ್ಜೆಯೆಂದರೆ, ರಾಕೆಟ್ಗೆ ಹ್ಯೂಮನ್ ರೇಟಿಂಗ್ ಪಡೆಯುವುದು, ಅಂದರೆ ಮಾನವ ಸಹಿತ ಹಾರಾಟಕ್ಕೆ ರಾಕೆಟ್ ಅನ್ನು ಸೂಕ್ತವಾಗಿಸುವುದು. ಎಲ್ವಿಎಂ-3ರಂತಹ ರಾಕೆಟ್ಗಳು ಈಗಾಗಲೇ ತಾವು ಉಪಗ್ರಹಗಳನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಒಯ್ಯಬಲ್ಲೆವು ಎಂದು ಸಾಬೀತುಪಡಿಸಿದ್ದರೂ, ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವುದು ಒಂದು ಸಂಪೂರ್ಣ ಭಿನ್ನವಾದ ಸವಾಲು. ಮಾನವ ಜೀವಗಳನ್ನು ಒಳಗೊಂಡ ಯೋಜನೆಯಲ್ಲಿ ಒಂದು ಸಣ್ಣ ತಪ್ಪೂ ಆಗುವಂತಿಲ್ಲ. ಇಲ್ಲಿ ಎದುರಾಗುವ ವೈಫಲ್ಯವನ್ನು ಕೇವಲ ತಾಂತ್ರಿಕ ಸಮಸ್ಯೆ ಎನ್ನಲಾಗದು. ಅದು ಮಾನವ ದುರಂತವಾಗಿಬಿಡಬಹುದು. ಆದ್ದರಿಂದಲೇ ರಾಕೆಟ್ ಹ್ಯೂಮನ್ ರೇಟಿಂಗ್ ಹೊಂದುವುದು ಅತಿ ಮುಖ್ಯವಾಗಿದೆ. ಹ್ಯೂಮನ್ ರೇಟಿಂಗ್ ಎಂದರೆ, ಪ್ರತಿಯೊಂದು ಬಾಹ್ಯಾಕಾಶ ವ್ಯವಸ್ಥೆಯ ವಿನ್ಯಾಸ, ಪರೀಕ್ಷೆ ಮತ್ತು ಅನುಮೋದನೆ ಎಲ್ಲವೂ ಬಾಹ್ಯಾಕಾಶ ವ್ಯವಸ್ಥೆ ಮಾನವರಿಗೆ ಸುರಕ್ಷಿತ ಎಂದು ಖಾತರಿ ಪಡಿಸುವುದಾಗಿದೆ. ಇದು ರಾಕೆಟ್, ಸಿಬ್ಬಂದಿ ಕ್ಯಾಪ್ಸೂಲ್ ಮತ್ತು ಗಗನಯಾತ್ರಿಗಳನ್ನು ಸುರಕ್ಷಿತವಾಗಿಡುವ ಎಲ್ಲ ವ್ಯವಸ್ಥೆಗಳನ್ನೂ ಒಳಗೊಂಡಿದೆ. ಮಾನವರು ಬಾಹ್ಯಾಕಾಶ ನೌಕೆಯಲ್ಲಿರುವಾಗ, ಅದಕ್ಕೆ ಎದುರಾಗಬಹುದಾದ ಅಪಾಯ ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರುತ್ತದೆ ಎಂದು ಖಾತ್ರಿಪಡಿಸುವ ಪ್ರಕ್ರಿಯೆ ಇದಾಗಿದೆ. ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ನ ಸ್ಥಾಪಕ ನಿರ್ದೇಶಕ ಉನ್ನಿಕೃಷ್ಣನ್ ನಾಯರ್ ಅವರು ಈ ಪ್ರಕ್ರಿಯೆಯ ಉದ್ದೇಶ ಅಪಾಯವನ್ನು ಸಂಪೂರ್ಣವಾಗಿ ತೆಗೆದುಹಾಕುವುದಲ್ಲ ಎಂದಿದ್ದಾರೆ. ಅಪಾಯ ಇಲ್ಲವೇ ಇಲ್ಲ ಎನ್ನುವಂತೆ ಮಾಡಲು ಸಾಧ್ಯವೇ ಇಲ್ಲ. ಆದರೆ, ಅಪಾಯದ ಮಟ್ಟವನ್ನು ಅತ್ಯಂತ ಸುರಕ್ಷಿತ ಎನ್ನಲಾದ ಮಿತಿಯೊಳಗೆ ಇರುವಂತೆ ನೋಡಿಕೊಳ್ಳುವುದು ಇದರ ಗುರಿ ಎಂದು ಅವರು ವಿವರಿಸಿದ್ದಾರೆ. ನಾಸಾದ ಸುರಕ್ಷತಾ ಮಟ್ಟಗಳ ಪ್ರಕಾರ, ಬಾಹ್ಯಾಕಾಶ ಯಾನದ ಅತ್ಯಂತ ಅಪಾಯಕರ ಹಂತಗಳಾದ ಉಡಾವಣೆ ಮತ್ತು ಭೂಮಿಗೆ ಪುನರಾಗಮನದ ಸಂದರ್ಭದಲ್ಲಿ, ಗಗನಯಾತ್ರಿಗಳ ಜೀವಕ್ಕೆ ಅಪಾಯ ಉಂಟುಮಾಡಬಲ್ಲ ಅಪಘಾತದ ಸಾಧ್ಯತೆ ಕೇವಲ ಶೇ. 0.2 ಒಳಗಿರಬೇಕು. ಈ ಮಟ್ಟವನ್ನು ಸಾಧಿಸುವ ಸಲುವಾಗಿ, ಇಂಜಿನಿಯರ್ಗಳು ಹಲವಾರು ಪದರಗಳ ಸುರಕ್ಷತೆಯನ್ನು ಅಳವಡಿಸುತ್ತಾರೆ. ಉದಾಹರಣೆಗೆ, ಒಂದು ಹಾರಾಟ ಕಂಪ್ಯೂಟರ್ ಬದಲಿಗೆ, ಹ್ಯೂಮನ್ ರೇಟೆಡ್ ರಾಕೆಟ್ ಮೂರು ಅಥವಾ ನಾಲ್ಕು ಕಂಪ್ಯೂಟರ್ಗಳನ್ನು ಹೊಂದಿರುತ್ತದೆ. ಆದ್ದರಿಂದ ಒಂದು ಕಂಪ್ಯೂಟರ್ ಏನಾದರೂ ವಿಫಲವಾದರೆ, ತಕ್ಷಣವೇ ಇತರ ಕಂಪ್ಯೂಟರ್ಗಳು ಜವಾಬ್ದಾರಿ ತೆಗೆದುಕೊಳ್ಳುತ್ತವೆ. ರಾಕೆಟ್ ಅತ್ಯಂತ ಸಮರ್ಥ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಹೊಂದಿದ್ದು, ಉಡಾವಣೆಯ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಉಂಟಾದರೆ, ಇದು ತಕ್ಷಣವೇ ಗಗನಯಾತ್ರಿಗಳನ್ನು ಹೊರಗೆ ಎಳೆಯುತ್ತದೆ. ಕ್ಯಾಪ್ಸೂಲ್ ಒಳಗೆ ನಂಬಿಕಾರ್ಹ ಜೀವ ಬೆಂಬಲ ವ್ಯವಸ್ಥೆಯಿದ್ದು, ಇದು ಗಗನಯಾತ್ರಿಗಳಿಗೆ ಶುದ್ಧ ಗಾಳಿ, ಸರಿಯಾದ ಒತ್ತಡ ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸುತ್ತದೆ. ಇದರ ಪ್ರತಿಯೊಂದು ಭಾಗವನ್ನೂ ಮತ್ತೆ ಮತ್ತೆ, ಅತ್ಯಂತ ವಿಸ್ತೃತವಾಗಿ ಪರೀಕ್ಷಿಸಿ, ದಾಖಲಿಸಲಾಗಿದ್ದು, ಕೇವಲ ವಸ್ತುಗಳನ್ನಷ್ಟೇ ಸಾಗಿಸುವ ರಾಕೆಟ್ಳಿಗಿಂತ ಅತ್ಯಂತ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ. ಹ್ಯೂಮನ್ ರೇಟಿಂಗ್ ಸಾಧಿಸುವುದು ಅತ್ಯಂತ ಕಷ್ಟಕರ ಪ್ರಕ್ರಿಯೆಯಾಗಿದ್ದು, ಬಾಹ್ಯಾಕಾಶವನ್ನು ತಲುಪುವುದೇ ಅತ್ಯಂತ ಕಷ್ಟದ ಮತ್ತು ತಪ್ಪಿಗೆ ಅವಕಾಶವೇ ಇಲ್ಲದ ಪ್ರಕ್ರಿಯೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಒಂದು ರಾಕೆಟ್ ಪ್ರತೀ ಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತಾ, ಕೇವಲ 8ರಿಂದ 10 ನಿಮಿಷಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯಿಂದ ಬಿಡಿಸಿಕೊಂಡು ಮುಂದೆ ಸಾಗಬೇಕು. ಈ ಸಣ್ಣ ಅವಧಿಯಲ್ಲಿ, ರಾಕೆಟ್ ಅತಿಯಾದ ಅದುರುವಿಕೆ, ಉಷ್ಣತೆ ಮತ್ತು ಅಪಾರವಾದ ಭೌತಿಕ ಒತ್ತಡಗಳಿಗೆ ತುತ್ತಾಗುತ್ತದೆ. ಅದರಲ್ಲೂ ಗಾಳಿಯ ಒತ್ತಡ ಮತ್ತು ವೇಗ ಜೊತೆಯಾಗಿ ರಾಕೆಟ್ ಮೇಲೆ ಗರಿಷ್ಠ ಒತ್ತಡ ಹೇರುತ್ತವೆ. ರಾಕೆಟ್ ಅನ್ನು ನಿಧಾನಗೊಳಿಸಲಾಗಲಿ, ಹಿಂದಕ್ಕೆ ತರಲಾಗಲಿ, ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸಲಾಗಲಿ ಯಾವುದೇ ಅವಕಾಶವಿರುವುದಿಲ್ಲ. ಇದು ನಾಗರಿಕ ವಿಮಾನಕ್ಕಿಂತ ಅತ್ಯಂತ ಭಿನ್ನವಾಗಿದೆ. ವಿಮಾನ ಸಾಮಾನ್ಯವಾಗಿ ಎರಡು ಇಂಜಿನ್ಗಳನ್ನು ಹೊಂದಿ, ಪ್ರತೀ ಗಂಟೆಗೆ 1,000 ಕಿಲೋಮೀಟರ್ಗಿಂತ ಕಡಿಮೆ ವೇಗದಲ್ಲಿ ಸುಗಮವಾಗಿ ಸಾಗುತ್ತಿರುತ್ತದೆ. ಇದರ ಸುರಕ್ಷತೆಯ ಪ್ರಮಾಣವೂ ಸಾಕಷ್ಟು ಹೆಚ್ಚಿರುತ್ತದೆ. ಒಂದು ಇಂಜಿನ್ ಏನಾದರೂ ವಿಫಲವಾದರೆ, ವಿಮಾನ ಇನ್ನೊಂದು ಇಂಜಿನ್ನ ಮೂಲಕ ಹಾರಾಟ ಮುಂದುವರಿಸಬಹುದು. ಒಂದು ವೇಳೆ ಅವಶ್ಯಕತೆ ಎದುರಾದರೆ, ಅದು ಸನಿಹದ ವಿಮಾನ ನಿಲ್ದಾಣದತ್ತ ಹಾರಬಹುದು. ಈ ವ್ಯತ್ಯಾಸದ ಕಾರಣದಿಂದ, ಅತ್ಯಂತ ನಂಬಿಕಾರ್ಹ ರಾಕೆಟ್ಗಳೂ ಸಹ ಕೇವಲ ಶೇ.98ರಿಂದ 99.5 ಯಶಸ್ಸಿನ ದರ ಹೊಂದಿರುತ್ತವೆ. ಆದರೆ, ವಾಣಿಜ್ಯಿಕ ವಿಮಾನಗಳು ಅತ್ಯಂತ ಹೆಚ್ಚು ಸುರಕ್ಷಿತವಾಗಿದ್ದು, 1-2 ಕೋಟಿ ಹಾರಾಟದಲ್ಲಿ ಎಲ್ಲೋ ಒಂದು ಗಂಭೀರ ಅಪಘಾತ ಉಂಟಾಗಬಹುದು. ಆದ್ದರಿಂದಲೇ ಜಗತ್ತಿನಲ್ಲಿ ಅತ್ಯಂತ ಕಡಿಮೆ ರಾಕೆಟ್ಗಳಿಗೆ ಮಾನವರನ್ನು ಬಾಹ್ಯಾಕಾಶಕ್ಕೆ ಒಯ್ಯಲು ಸೂಕ್ತವೆಂಬ ಪ್ರಮಾಣಪತ್ರ ನೀಡಲಾಗಿದೆ. ಇಂದು ಕೇವಲ ಮೂರು ರಾಕೆಟ್ಗಳು ಮಾತ್ರ ನಿಯಮಿತವಾಗಿ ಗಗನಯಾತ್ರಿಗಳನ್ನು ಭೂಮಿಯ ಕಕ್ಷೆಗೆ ಒಯ್ಯುತ್ತಿವೆ. ಅವೆಂದರೆ, ರಶ್ಯದ ಸೊಯುಝ್, ಚೀನಾದ ಲಾಂಗ್ ಮಾರ್ಚ್-2ಎಫ್ ಹಾಗೂ ಸ್ಪೇಸ್ಎಕ್ಸ್ ಸಂಸ್ಥೆಯ ಫಾಲ್ಕನ್-9. ಅಮೆರಿಕದಲ್ಲಿ ಅಟ್ಲಾಸ್ ವಿ ಗಗನಯಾತ್ರಿಗಳನ್ನು ಬೋಯಿಂಗ್ನ ಸ್ಟಾರ್ಲೈನರ್ ಅನ್ನು ಬಳಸಿಕೊಂಡು ಪರೀಕ್ಷಾ ಹಾರಾಟದಲ್ಲಿ ಬಾಹ್ಯಾಕಾಶಕ್ಕೆ ತೆರಳಿತ್ತು. ಆದರೆ ಅದಕ್ಕೆ ತಾಂತ್ರಿಕ ಪರಿಶೀಲನೆಯ ಬಳಿಕ ಗಗನಯಾತ್ರಿಗಳನ್ನು ನಿಯಮಿತವಾಗಿ ಬಾಹ್ಯಾಕಾಶಕ್ಕೆ ಕರೆದೊಯ್ಯಲು ಇನ್ನೂ ಅಧಿಕೃತ ಅನುಮತಿ ದೊರೆಯಬೇಕಿದೆ. ನಾಸಾದ ಸ್ಪೇಸ್ ಲಾಂಚ್ ಸಿಸ್ಟಮ್ಗೂ (ಎಸ್ಎಲ್ಎಸ್) ಮಾನವ ಸುರಕ್ಷತಾ ಪ್ರಮಾಣೀಕರಿಸಲಾಗಿದ್ದರೂ, ಅದು ಇಲ್ಲಿಯ ತನಕ ಕೇವಲ ಮಾನವರಹಿತ ಯೋಜನೆಗಳಲ್ಲಷ್ಟೇ ಪಾಲ್ಗೊಂಡಿದೆ. ಈಗ ಮೊದಲ ಮಾನವ ಸಹಿತ ಹಾರಾಟಕ್ಕೆ ಸಜ್ಜಾಗುತ್ತಿದೆ. ವಿವಿಧ ದೇಶಗಳು ಹ್ಯೂಮನ್ ರೇಟಿಂಗ್ ನೀಡಲು ವಿವಿಧ ವ್ಯವಸ್ಥೆ ಹೊಂದಿವೆ. ಅಮೆರಿಕದಲ್ಲಿ, ಗಗನಯಾತ್ರಿಗಳ ಸುರಕ್ಷತೆಗೆ ಕ್ಯೂ ಡ್ರ್ಯಾಗನ್ ಮತ್ತು ಸ್ಟಾರ್ಲೈನರ್ನಂತಹ ಖಾಸಗಿ ಯೋಜನೆಗಳಿಗೂ ನಾಸಾವೇ ಅಂತಿಮ ಅನುಮೋದನೆ ನೀಡುತ್ತದೆ. ಎಫ್ಎಎ ಕೇವಲ ಭೂಮಿಯಲ್ಲಿ ಮಾತ್ರವೇ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆಯೇ ಹೊರತು, ಗಗನಯಾತ್ರಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದಿಲ್ಲ. ಚೀನಾದಲ್ಲಿ, ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಸಿಎ) ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಅನುಮತಿ ನೀಡಿದರೆ, ರಶ್ಯದಲ್ಲಿ ರಾಸ್ಕಾಸ್ಮೋಸ್ ಸೊಯುಝ್ ವ್ಯವಸ್ಥೆಗೆ ಅನುಮತಿ ನೀಡುತ್ತದೆ. ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳು ಎಷ್ಟು ಕಷ್ಟಕರ ಮತ್ತು ದೋಷಕ್ಕೆ ಅವಕಾಶವೇ ಇಲ್ಲದವು ಎನ್ನುವುದನ್ನು ಇತಿಹಾಸವೇ ತೋರಿಸಿದೆ. 1967ರ ಬಳಿಕ ಸೊಯುಝ್ 150ಕ್ಕೂ ಹೆಚ್ಚು ಮಾನವ ಸಹಿತ ಹಾರಾಟ ನಡೆಸಿದ್ದು, ಶೇ. 98 ಯಶಸ್ಸು ಸಾಧಿಸಿದೆ. 1967 ಮತ್ತು 1971ರ ಆರಂಭಿಕ ದುರಂತಗಳ ಬಳಿಕ ಸುರಕ್ಷತೆ ಅಸಾಧಾರಣ ಹೆಚ್ಚಳ ಕಂಡಿತು. ಅಂದಿನಿಂದ ಸೊಯುಝ್ ಶೇ. 100 ಸಿಬ್ಬಂದಿ ರಕ್ಷಣಾ ದರವನ್ನು ಹೊಂದಿದೆ. ಇದರ ಎಸ್ಕೇಪ್ ವ್ಯವಸ್ಥೆ ಹಲವು ಬಾರಿ ಜೀವಗಳನ್ನುಳಿಸಿದೆ. ಅಮೆರಿಕದ ಸ್ಪೇಸ್ ಶಟಲ್ 135 ಯೋಜನೆಗಳಲ್ಲಿ ಹಾರಾಟ ನಡೆಸಿದ್ದು, ಎರಡು ಬಾರಿ ದುರಂತ ಕಂಡಿವೆ. ಸ್ಪೇಸ್ಎಕ್ಸ್ನ ಫಾಲ್ಕನ್-9 ಇಲ್ಲಿಯ ತನಕ 20 ಮಾನವ ಸಹಿತ ಯೋಜನೆಗಳಲ್ಲಿ ಶೇ. 100 ಯಶಸ್ಸು ಸಾಧಿಸಿದೆ. ಇದರಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿದ್ದ ಆಕ್ಸಿಯಮ್-4ನಂತಹ ಖಾಸಗಿ ಯೋಜನೆಗಳೂ ಸೇರಿವೆ. ಚೀನಾದ ಶೆನ್ಜೌ ಯೋಜನೆಯೂ ಪ್ರಬಲ ಸುರಕ್ಷತೆ ಪ್ರದರ್ಶಿಸಿದ್ದು, ಬಾಹ್ಯಾಕಾಶ ತ್ಯಾಜ್ಯದಂತಹ ಸವಾಲುಗಳನ್ನು ಎದುರಿಸಿದ ಬಳಿಕವೂ ಅದರ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿ ಮರಳಿದ್ದಾರೆ. ಹೆಚ್ಚಿನ ರಾಕೆಟ್ಗಳು ಯಾಕೆ ಹ್ಯೂಮನ್ ರೇಟೆಡ್ ಅಲ್ಲ ಎನ್ನುವುದಕ್ಕೆ ಇರುವ ಕಾರಣ ಸರಳ. ಸುರಕ್ಷತೆಗೆ ಹೆಚ್ಚಿನ ಹಣ ಮತ್ತು ರಾಕೆಟ್ ಸಾಮರ್ಥ್ಯದ ವೆಚ್ಚ ತಗಲುತ್ತದೆ. ಹ್ಯೂಮನ್ ರೇಟಿಂಗ್ ಸಾಧಿಸುವುದರಿಂದ ರಾಕೆಟ್ಗಳು ಹೆಚ್ಚು ತೂಕ ಮತ್ತು ಸಂಕೀರ್ಣತೆ ಹೊಂದಿ, ಅಪಾರ ವೆಚ್ಚದಾಯಕವಾಗುತ್ತವೆ. ಹೆಚ್ಚುವರಿ ಸಿಸ್ಟಮ್ಗಳು ಪೇಲೋಡ್ ಸಾಮರ್ಥ್ಯ ಕಡಿಮೆಗೊಳಿಸಿ, ಉಡಾವಣಾ ವೆಚ್ಚಗಳನ್ನು ಹೆಚ್ಚಿಸುತ್ತವೆ. ಸರಕು ಸಾಗಣೆಯ ಯೋಜನೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ಹೊರೆಯೇ ಆದ್ಯತೆಯಾಗಿರುತ್ತದೆ. ಆದರೆ, ಮಾನವ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸುವುದರಿಂದ ಉಡಾವಣೆ ಆರ್ಥಿಕವಾಗಿ ಲಾಭದಾಯಕವಾಗುವುದಿಲ್ಲ. ಗಗನಯಾನ ಯೋಜನೆಗೆ ಭಾರತ ತನ್ನ ಅತ್ಯಂತ ನಂಬಿಕಾರ್ಹವಾದ ಎಲ್ವಿಎಂ-3 ರಾಕೆಟ್ ಅನ್ನು ಆರಿಸಿದೆ. ಇಸ್ರೋ ರಾಕೆಟ್ಗೆ ಹೆಚ್ಚುವರಿ ಬ್ಯಾಕಪ್ ವ್ಯವಸ್ಥೆಗಳು, ಇಂಜಿನ್ ನಂಬಿಕಾರ್ಹತೆ ಸುಧಾರಣೆ ಮತ್ತು ಕ್ಷಿಪ್ರ ಕ್ರ್ಯೂ ಎಸ್ಕೇಪ್ ಸಿಸ್ಟಮ್ಗಳನ್ನು ಅಳವಡಿಸಿ, ಅದನ್ನು ಇನ್ನಷ್ಟು ಬಲಪಡಿಸಿದೆ. ಒಂದು ಬಾರಿ ಪ್ರಮಾಣೀಕೃತವಾದ ಬಳಿಕ, ರಾಕೆಟ್ ಎಚ್ಎಲ್ವಿಎಂ-3 ಎಂದು ಮರುನಾಮಕರಣ ಹೊಂದಲಿದೆ. ಚಂದ್ರಯಾನ-3 ಸೇರಿದಂತೆ ಏಳು ಯಶಸ್ವಿ ಹಾರಾಟ ನಡೆಸಿರುವ, ವಿಕಾಸ್, ಸಿ25 ಕ್ರಯೋಜನಿಕ್ ಇಂಜಿನ್ನಂತಹ ಭಾರತೀಯ ಇಂಜಿನ್ಗಳು ಮತ್ತು ಎಸ್200 ಬೂಸ್ಟರ್ಗಳನ್ನು ಹೊಂದಿರುವ ರಾಕೆಟ್ ಆತ್ಮನಿರ್ಭರ ಭಾರತದತ್ತ ದೇಶದ ಹಾದಿಯನ್ನು ಸೂಚಿಸುತ್ತದೆ. ಹ್ಯೂಮನ್ ರೇಟಿಂಗ್ ಸಾರ್ವಜನಿಕರಿಗೆ ಕಾಣುವಂತಹದ್ದಲ್ಲದಿರಬಹುದು. ಆದರೆ, ಇದು ನಮ್ಮ ಗಗನಯಾತ್ರಿಗಳನ್ನು ರಕ್ಷಿಸುವ ಅತ್ಯಂತ ಬಲಿಷ್ಠ ಗುರಾಣಿಯಂತಿದೆ. ಇದು ಮಹತ್ವಾಕಾಂಕ್ಷೆಯನ್ನು ಜವಾಬ್ದಾರಿಯಾಗಿ, ಕನಸುಗಳನ್ನು ಶಿಸ್ತಿನ ವಾಸ್ತವಗಳಾಗಿ ಪರಿವರ್ತಿಸುತ್ತಿದೆ.
ಸಿಂಧನೂರು: ಮರಕ್ಕೆ ಬೈಕ್ ಢಿಕ್ಕಿ; ಇಬ್ಬರು ಮೃತ್ಯು
ರಾಯಚೂರು: ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಮೂಡಲಗಿರಿಕ್ಯಾಂಪ್ ಬಳಿ ರವಿವಾರ ಮಧ್ಯರಾತ್ರಿ ನಡೆದಿದೆ. ಮೃತಪಟ್ಟವರು ಗಾಂಧಿನಗರದ ಸಂತೋಷ (22), ಹನುಮಂತರಾಯ (22) ಎನ್ನಲಾಗಿದೆ. ಇವರಿಬ್ಬರು ಬೈಕ್ ನಲ್ಲಿ ಗಾಂಧಿನಗರದಿಂದ ಸಿಂಧನೂರಿಗೆ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಬಳಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ಜರುಗಿದೆ.
►ವ್ಯವಹಾರ ಕುದುರಿಸಿಕೊಂಡಿದ್ದನ್ನು ಸ್ಟಾಕ್ ಎಕ್ಸ್ಚೇಂಜ್ ಗೆ ತಿಳಿಸಿದ ಕಂಪೆನಿ ►ವ್ಯವಹಾರದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಸಂಸದ ಕಾರ್ತಿ ಚಿದಂಬರಂ
Kodi Mutt Seer Prediction: 2026ರ ಹೊಸ ವರ್ಷದ ಬಗ್ಗೆ ಕೋಡಿಮಠ ಶ್ರೀಗಳ ಭವಿಷ್ಯವಾಣಿ
Kodi Mutt Seer Prediction: ಕೋಡಿಮಠ ಶ್ರೀಗಳು ರಾಜ್ಯ, ರಾಷ್ಟ್ರ ರಾಜಕೀಯ, ಸಮಾಜದಲ್ಲಿನ ಹಾಗೂ ಹೋಗುಗಳ ಬಗ್ಗೆ ಭವಿಷ್ಯ ನುಡಿಯುತ್ತಲಿರುತ್ತಾರೆ. ಇವುಗಳಲ್ಲಿ ಹಲವು ನಿಜ ಕೂಡ ಆಗಿವೆ ಹಾಗೂ ಆಗುತ್ತವೆ ಎನ್ನುವ ನಂಬಿಕೆ ಭಕ್ತಗಣದ್ದಾಗಿದೆ. ಇದೀಗ 2026ರ ಹೊಸ ವರ್ಷದ ಬಗ್ಗೆ ಸ್ಫೋಟಕ ಭವಿಷ್ಯವಾಣಿಯನ್ನು ಹೇಳಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕೋಡಿಮಠ ಸಂಸ್ಥಾನದ ಡಾ.ಶಿವಾನಂದ
ಶಿವಮೊಗ್ಗ: ವ್ಯಕ್ತಿಗೆ ಚಾಕು ಇರಿತ, ಗಂಭೀರ ಗಾಯ
ಶಿವಮೊಗ್ಗ : ಮಲವಗೊಪ್ಪದ ಪೆಟ್ರೋಲ್ ಬಂಕ್ ಎದುರು ನಿನ್ನೆ ರಾತ್ರಿ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರಿಗೆ ಚಾಕು ಇರಿಯಲಾಗಿದೆ. ಮಲವಗೊಪ್ಪ ನಿವಾಸಿ ವಿನೋದ್ (35) ಚಾಕು ಇರಿತಕ್ಕೊಳಗಾದವರು. ಆರೋಪಿ ವಿಕ್ರಂ (42) ಎಂಬಾತ ವಿನೋದ್ ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾನೆ. ದಾಳಿಯ ರಭಸಕ್ಕೆ ವಿನೋದ್ ಅವರ ಮುಖ, ಕೈ ಹಾಗೂ ಮೈಮೇಲೆ ತೀವ್ರ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ವಿಕ್ರಂನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈಯಕ್ತಿಕ ಕಾರಣಕ್ಕೆ ಜಗಳವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರ ಯಾವಾಗ?
ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ 3.07 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಮಾಡಿಸಿದ 1.34 ಲಕ್ಷ ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ವಿಮೆ ಕಂಪನಿಗಳು ಸರ್ವೇ ಪೂರ್ಣಗೊಳಿಸಿದ್ದರೂ, ಮಧ್ಯಂತರ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಜಿಲ್ಲಾಡಳಿತ 234 ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಿದೆ.
ಮಲೆನಾಡು-ಕರಾವಳಿ ನಡುವಿನ ಹೆದ್ದಾರಿ ಕನಸು ನನಸು ಯಾವಾಗ? ಖ್ಯಾತ ಪ್ರವಾಸಿತಾಣಗಳ ರಸ್ತೆ ಬಗ್ಗೆ ನಿರ್ಲಕ್ಷ್ಯ
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಶಿವಮೊಗ್ಗ-ನರಸಿಂಹರಾಜಪುರ-ಬಾಳೆಹೊನ್ನೂರು-ಕಳಸ-ಕುದುರೆಮುಖ ಮಾರ್ಗದ ರಸ್ತೆ ಅಭಿವೃದ್ಧಿಯಾಗದೆ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಕುದುರೆಮುಖ, ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನ, ಜೈನರ ಬಸ್ತಿ ಮಠ ಮೊದಲಾದ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ರಸ್ತೆ ಸಂಪರ್ಕ ಸರಿ ಇಲ್ಲದೆ ಒಮ್ಮೆ ಬಂದವರು, ಮತ್ತೊಮ್ಮೆ ಬರಲು ಹಿಂಜರಿಯುವಂತಾಗಿದೆ.
ಡಿಸೆಂಬರ್ 28ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 28) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
Uttar Pradesh | ಪಾಶ್ಚಿಮಾತ್ಯ ಪ್ರಭಾವ ತಡೆಗೆ ಖಾಪ್ ಪಂಚಾಯತ್ ಕ್ರಮ; ಮೊಬೈಲ್ ನಿಷೇಧ, ಮದುವೆಗಳಿಗೆ ಹೊಸ ಮಾರ್ಗಸೂಚಿ
ಲಕ್ನೋ: ಪಾಶ್ಚಿಮಾತ್ಯ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಮತ್ತು ಸಾಂಪ್ರದಾಯಿಕ ಮೌಲ್ಯಗಳು ನಶಿಸುವುದನ್ನು ತಡೆಯಲು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಖಾಪ್ ಪಂಚಾಯತ್, ಹದಿಯರೆಯದವರಿಗೆ ಮೊಬೈಲ್ ಫೋನ್ ಬಳಕೆ ನಿಷೇಧ, ಹುಡುಗರು ಮತ್ತು ಹುಡುಗಿಯರು ತುಂಡು ವಸ್ತ್ರ ಧರಿಸುವುದನ್ನು ತಡೆಯವುದು ಸೇರಿದಂತೆ ಸರಣಿ ಸಾಮಾಜಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಥಾಂಬಾ ದೇಶ್ ಖಾಪ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾಜಿಕ ಶಿಸ್ತು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಗ್ರಾಮಗಳ ನಡುವೆ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಸಮರ್ಥಿಸಿಕೊಳ್ಳಲಾಗಿದೆ. ವಿವಾಹ ಸಮಾರಂಭಗಳಿಗೂ ಹಲವು ನಿರ್ಬಂಧಗಳನ್ನು ಹೇರಲಾಗಿದ್ದು, ಅತಿಥಿಗಳ ಪಟ್ಟಿಯ ಮೇಲೆ ನಿರ್ಬಂಧ ವಿಧಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ತಡೆಯುವ ಉದ್ದೇಶಗಳಿಂದ ಈ ಕ್ರಮ ಕೈಗೊಂಡಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಖಾಪ್ ಪಂಚಾಯತ್ ನಿರ್ಣಯದಂತೆ ಹದಿಹರೆಯದವರು, ಅದರಲ್ಲೂ ಮುಖ್ಯವಾಗಿ 18-20 ವರ್ಷ ವಯಸ್ಸಿನ ಯುವಕ ಯುವತಿಯರು ಸ್ಮಾರ್ಟ್ ಫೋನ್ಗಳನ್ನು ಬಳಸುವಂತಿಲ್ಲ. ಅನಿವಾರ್ಯವಾಗಿ ಫೋನ್ಗಳನ್ನು ಬಳಸುವುದಾದಲ್ಲಿ ಮನೆಯಲ್ಲಿ ಇಟ್ಟುಕೊಳ್ಳಬಹುದೇ ವಿನಃ ನೇರವಾಗಿ ಮಕ್ಕಳಿಗೆ ನೀಡುವಂತಿಲ್ಲ. ಅಂತೆಯೇ ವಿವಾಹ ಸಮಾರಂಭಗಳನ್ನು ಗ್ರಾಮಗಳಲ್ಲಿ ಅಥವಾ ಮನೆಗಳಲ್ಲೇ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಮದುವೆ ಹಾಲ್ ಗಳಲ್ಲಿ ಏರ್ಪಡಿಸಿದಲ್ಲಿ ದೊಡ್ಡ ವಾಣಿಜ್ಯ ಸಮಾರಂಭಗಳು ಸಂಬಂಧಗಳನ್ನು ಹಾಳುಮಾಡುತ್ತವೆ ಹಾಗೂ ಹಣಕಾಸು ಸ್ಥಿತಿಯನ್ನು ಹದಗೆಡಿಸುತ್ತವೆ. ಅಂತೆಯೇ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುವ ಬದಲು ವಾಟ್ಸಪ್ ಮೂಲಕವಷ್ಟೇ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಇದು ಸಮಾಜದ ಸಂಘಟಿತ ಇಂಗಿತವಾಗಿದೆ ಎಂದು ಥಾಂಬಾ ದೇಶ್ ಖಾಪ್ ಚೌಧರಿ ಬೃಜ್ಪಾಲ್ ಸಿಂಗ್ ಹೇಳಿದ್ದಾರೆ. ಈ ಸಮಾಜ ಕೈಗೊಂಡಿರುವ ನಿರ್ಧಾರ ಅಂತಿಮ. ರಾಜಸ್ಥಾನದಲ್ಲಿ ಇಂಥದ್ದೇ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ನಾವು ಕೂಡಾ ಹದಿಹರೆಯದವರಿಗೆ ಸ್ಮಾರ್ಟ್ ಫೋನ್ ಹಾಗೂ ತುಂಡುಡುಗೆಯನ್ನು ನಿಷೇಧಿಸಲು ಉದ್ದೇಶಿಸಿದ್ದೇವೆ. ಶಿಕ್ಷಣ ಮತ್ತು ಸಾಮಾಜಿಕ ಮಾರ್ಗದರ್ಶನ ಪಡೆಯಲು ಮಕ್ಕಳು ಕುಟುಂಬದ ಹಿರಿಯರ ಜತೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಅವರು ವಿಶ್ಲೇಷಿಸಿದ್ದಾರೆ. ದಗಧ್ ಖಾಪ್ ಚೌಧರಿ ಓಂಪಾಲ್ ಸಿಂಗ್ ಕೂಡಾ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಂಗಾರ ಮತ್ತಷ್ಟು ದುಬಾರಿ: ₹1,41,220 ತಲುಪಿದ 10 ಗ್ರಾಂ ಚಿನ್ನ, ಇಂದಿನ ದರ ಹೀಗಿದೆ
ಚಿನ್ನದ ದರಗಳು ಈ ವಾರಪೂರ್ತಿ ನಿರಂತರವಾಗಿ ಏರಿಕೆ ಕಾಣುವ ಮೂಲಕ ಬಿರುಸಿನ ಓಟ ಮುಂದುವರಿಸಿದೆ. ಹೊಸ ವರ್ಷಕ್ಕೂ ಮುನ್ನ ಚಿನ್ನ ಮತ್ತಷ್ಟು ದುಬಾರಿಯಾಗಿದೆ. ಶನಿವಾರವೂ ಚಿನ್ನದ ದರಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನವು ಗ್ರಾಂ ಮೇಲೆ 120 ರೂಪಾಯಿವರೆಗೆ, ಹಾಗೂ 22 ಕ್ಯಾರೆಟ್ ಚಿನ್ನ ಗ್ರಾಂ ಮೇಲೆ 110 ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ
ಮಕ್ಕಳ ಪ್ರವಾಸಕ್ಕೆ ಅಧಿವೇಶನ ಅಡ್ಡಿ!
ಡಿಸೆಂಬರ್ನಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರಿಂದ ಬೆಳಗಾವಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯು ಡಿಸೆಂಬರ್ ಅಂತ್ಯದೊಳಗೆ ಪ್ರವಾಸ ಮುಗಿಸಬೇಕು, ಇಲಾಖೆಯ ಅನುಮತಿ ಪಡೆಯಬೇಕು ಮತ್ತು ಕೆಎಸ್ಆರ್ಟಿಸಿ ಅಥವಾ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಪ್ರಯಾಣಿಸಬೇಕು ಎಂದು ನಿಯಮಿಸಿದೆ. ಖಾಸಗಿ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ.
ದಟ್ಟ ಮಂಜು; ಹಲವು ವಿಮಾನ ರದ್ದುಪಡಿಸಿದ ಇಂಡಿಗೊ
ಹೊಸದಿಲ್ಲಿ: ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಹಾಗೂ ದಟ್ಟ ಮಂಜು ಮುಸುಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆ ರವಿವಾರ 13 ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ. ಚಂಡೀಗಢ, ಮುಂಬೈ, ಅಹ್ಮದಾಬಾದ್, ಹೈದ್ರಾಬಾದ್, ಬೆಂಗಳೂರು, ಅಮೃತಸರ, ದೆಹಲಿ, ಗಯಾ, ಕೊಲ್ಕತ್ತಾ, ಚೆನ್ನೈ, ಜೈಪುರ ಮತ್ತು ಪುಣೆ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿವೆ ಎಂದು ಪ್ರಕಟಿಸಿದೆ. ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ನೀಡಿ ಇಂಡಿಗೊ ಶನಿವಾರ 57 ವಿಮಾನಗಳನ್ನು ರದ್ದುಪಡಿಸಿತ್ತು. ಪೈಲಟ್ ಗಳ ಕೆಲಸದ ಅವಧಿ ಮತ್ತು ವಿಶ್ರಾಂತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ, ಹಲವು ವಿಮಾನಗಳ ಸೇವೆಯನ್ನು ರದ್ದುಪಡಿಸಿದ್ದ ಇಂಡಿಗೊ ಇದೀಗ ಪ್ರತಿಕೂಲ ಹವಾಮಾನದ ಕಾರಣ ನೀಡಿ ಸೇವೆ ರದ್ದುಪಡಿಸಿದೆ. ಏತನ್ಮಧ್ಯೆ ಹಲವು ವಿಮಾನ ನಿಲ್ದಾಣಗಳಲ್ಲಿ ದಟ್ಟ ಮಂಜು ಮತ್ತು ದೃಶ್ಯತೆಯ ಸಮಸ್ಯೆ ಕಾರಣದಿಂದ ವಿಮಾನ ಪ್ರಯಾಣಿಕರಿಗೆ ಹಲವು ನಿರ್ದೇಶನಗಳನ್ನು ಏರ್ಇಂಡಿಯಾ ಕೂಡಾ ಬಿಡುಗಡೆ ಮಾಡಿದೆ. ಪ್ರತಿಕೂಲ ಪರಿಸ್ಥಿತಿಯಿಂದಾಗಿ ಚಂಡೀಗಢ, ಅಮೃತಸರ ಮತ್ತು ವಾರಣಾಸಿಯಲ್ಲಿ ರವಿವಾರ ಮುಂಜಾನೆ ವಿಮಾನ ಸಂಚಾರ ವೇಳಾಪಟ್ಟಿ ವ್ಯತ್ಯಯವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಅನಿವಾರ್ಯ ವಿಳಂಬ ಮತ್ತು ವಿಮಾನ ಪಥ ಬದಲಿಸುವ ಸಂದರ್ಭದಲ್ಲಿ ಪ್ರಯಾಣಿಕರು ಸಹಕರಿಸಬೇಕು ಮತ್ತು ನಿಮ್ಮ ನೆರವಿಗೆ ಸಿಬ್ಬಂದಿ ಸದಾ ಸಿದ್ಧರಿದ್ದಾರೆ ಎಂದು ಏರ್ಇಂಡಿಯಾ ಹೇಳಿಕೆ ನೀಡಿದೆ. ನಾಳೆ ನಮ್ಮ ವಿಮಾನದಲ್ಲಿ ಪ್ರಯಾಣಿಸುವುದಾದಲ್ಲಿ, ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಹಾಗೂ ನಿಮ್ಮ ಪ್ರಯಾಣಕ್ಕೆ ಹೆಚ್ಚುವರಿ ಸಮಯಾವಕಾಶ ಹೊಂದಿಸಿಕೊಳ್ಳಬೇಕು ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
Rain Alert: ಡಿ.31ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಚಳಿ ಜೊತೆಗೆ ಮಳೆ ಸಾಧ್ಯತೆ
ರಾಜ್ಯದಲ್ಲಿ ಈಗಾಗಲೇ ಮೈಕೊರೆಯುವ ಚಳಿಗೆ ಜನ ತತ್ತರಿಸಿದ್ದಾರೆ. ಕೆಲವೆಡೆ ಶೀತಗಾಳಿಯ ಪರಿಸ್ಥಿತಿ ಇದ್ದು, ಸಂಜೆಯಿಂದಲೇ ಚಳಿಗೆ ನಡುಗುವಂತಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆ ಕಂಡುಬಂದಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಿಲ್ಲ. ಆದರೆ ಡಿಸೆಂಬರ್ 31 ಹಾಗೂ ಜನವರಿ 1ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ
ಮೈಸೂರಿಗೆ ಹೊಸದಾಗಿ ಬರಲಿದೆ 3 ಫೈರ್ ಸ್ಟೇಷನ್ : ಈ ವರ್ಷ ನಡೆದಿದೆ 600 ಅಗ್ನಿ ಅವಘಡ
ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಅಗ್ನಿ ಅವಘಡ ಸಂಭವಿಸಿರುವುದರಿಂದ, ಜನಸಂಖ್ಯೆ ಮತ್ತು ವಿಸ್ತರಣೆಗೆ ಅನುಗುಣವಾಗಿ ಮೂರು ಹೊಸ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ತವರು ಕ್ಷೇತ್ರ ವರುಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಒಂದು ಠಾಣೆ ನಿರ್ಮಾಣವಾಗಲಿದ್ದು, ಜೆಪಿನಗರ ಮತ್ತು ಕಡಕೊಳದಲ್ಲಿಯೂ ಹೊಸ ಠಾಣೆಗಳು ಬರಲಿವೆ.
ಅಗ್ರಹಾರ ಲೇಔಟ್ನಲ್ಲಿ ದಂಪತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರು ಸಂಪಿಗೆಹಳ್ಳಿ ಬಳಿ ಕೌಟುಂಬಿಕ ಜಗಳದಲ್ಲಿ ಪತ್ನಿ ಆಯೇಷಾಳನ್ನು ಪತಿ ಸೈಯದ್ ಜಬಿ ಕೊಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನೊಂದೆಡೆ, ಬಿಟಿಎಂ ಲೇಔಟ್ನಲ್ಲಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಮೂವರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಸಾರಿಗೆ ಸಚಿವರು ಘೋಷಣೆ ಮಾಡಿದ ವರ್ಷ ಮುಗಿದರೂ ರಾಮನಗರಕ್ಕೆ ಬಾರದ ಬಿಎಂಟಿಸಿ
ರಾಮನಗರ ಜಿಲ್ಲೆಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಮೂರು ತಿಂಗಳ ಹಿಂದಿನ ಘೋಷಣೆ ಇನ್ನೂ ಈಡೇರಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ರಾಮನಗರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿದ್ದರೂ, ಇದುವರೆಗೂ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಇದರಿಂದಾಗಿ ಜಿಲ್ಲಾ ಕೇಂದ್ರದ ಜನತೆ ನಿರಾಸೆಗೊಂಡಿದ್ದಾರೆ.
ದೇಗುಲಗಳ ಆದಾಯದಲ್ಲಿ ಕರಾವಳಿ ಟಾಪ್: ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡು, ಶಕ್ತಿ ಯೋಜನೆಯಿಂದಲೂ ಭರ್ಜರಿ ಪ್ರವಾಸ
ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ಕರಾವಳಿ ದೇವಾಲಯಗಳು ಆದಾಯದಲ್ಲಿ ಅಗ್ರಸ್ಥಾನ ಪಡೆದಿವೆ. ಕುಕ್ಕೆ ಸುಬ್ರಹ್ಮಣ್ಯ 155.95 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಆದಾಯದಲ್ಲೂ ಏರಿಕೆಯಾಗಿದೆ.
ಬಂಟ್ವಾಳ: ವಿಸ್ಡಮ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ
ಬಂಟ್ವಾಳ: ಇಲ್ಲಿಗೆ ಸಮೀಪದ (ಬಂಟ್ವಾಳ ತಾಲೂಕಿನ) ಕಡೇಶಿವಾಲಯ ಗ್ರಾಮದಲ್ಲಿರುವ ವಿಸ್ಡಮ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಬುಡೋಳಿ (ಅಬುಧಾಬಿ) ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಶಾಲಾ ಆವರಣದಲ್ಲಿ ಆಚರಿಸಲಾಯಿತು. ಡಿ. ವೈ. ಪಾಟೀಲ್ ಅಂತರ್ ರಾಷ್ಟ್ರೀಯ ವಿಶ್ವ ವಿದ್ಯಾನಿಲಯ ಪುಣೆ (ಮಹಾರಾಷ್ಟ್ರ ) ಕುಲಸಚಿವರಾದ ಡಾ. ಬೀರಾನ್ ಮೊಯ್ದಿನ್ ಹಾಗೂ ಸಮಾರಂಭದ ಉದ್ಘಾಟಕರಾಗಿ ಗ್ಲೋಬಲ್ ಗ್ಯಾನ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಡಾ. ರುಕ್ಸಾನಾ ಹಸನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ, ಕಡೇಶಿವಾಲಯ ಗ್ರಾಮದ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೋಟ್, ಗ್ರಾಮಾಭಿವೃದ್ಧಿ ಅಧಿಕಾರಿಯವರಾದ ಸುನಿಲ್ ಕುಮಾರ್, ವಿಸ್ಡಮ್ ಶಾಲಾ ಸಂಚಾಲಕರಾದ ಅಬ್ದುಲ್ ಖಾದರ್ ಕುಕ್ಕಾಜೆ, ಮುಖ್ಯ ಶಿಕ್ಷಕಿ ಆಮಿನಾ ಬಾನು, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆತಿ ರಾಜೇಶ್ವರಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕಿ ಮುರ್ಷಿದಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ರುಕ್ಸಾನಾ ಹಸನ್, ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವಂತಹ ಪ್ರತಿಭೆಯನ್ನು ಹೊರಹಾಕುವ ಸಂದರ್ಭ ಇದು ಎಂದು ಮಾರ್ಗದರ್ಶನವನ್ನು ನೀಡಿದರು. ಮಾತ್ರವಲ್ಲದೆ, ಅವರ ಪೋಷಕರಿಗೂ ತಮ್ಮ ಮಕ್ಕಳ ಪ್ರಗತಿಗೆ ಪೂರಕವಾದ ಕೆಲವೊಂದು ಹಿತವಚನಗಳನ್ನು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ. ಬೀರಾನ್ ಮೊಯ್ದಿನ್ ಬಿ.ಯಂ.ರವರು ಮಾತನಾಡಿ, ಈ ವಿದ್ಯಾ ಸಂಸ್ಥೆಯು ನೆಲೆಗೊಂಡಿರುವ 'ಗಡಿಯಾರ' ಎಂಬ ಪರಿಸರವು ತನ್ನ ತವರೂರು ಎಂಬುವುದನ್ನು ನೆನಪಿಸಿಕೊಂಡು. ಈ ಊರಿನ ಬಗೆಗಿನ ಪ್ರೀತಿ ಮತ್ತು ಆತ್ಮೀಯತೆ ಅಷ್ಟೊಂದು ದೂರದಿಂದ ಪ್ರಯಾಣ ಮಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಲ್ಲಿ ನನಗೆ ಪ್ರೇರಣೆಯಾಯಿತು ಎಂದರು. ಕಡೇಶಿವಾಲಯ ಗ್ರಾಮದ ಪಂಚಾಯತ್ ಅಧ್ಯ ಭಾರತಿಯವರು ಮಾತನಾಡಿ, ಕಡೇಶಿವಾಲಯ ಗ್ರಾಮದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವ ವಿಸ್ಡಮ್ ವಿದ್ಯಾಸಂಸ್ಥೆಯ ಬೆಳವಣಿಗೆ ಹಾಗೂ ಅದಕ್ಕಾಗಿ ಆಡಳಿತ ಮಂಡಳಿಯ ಶ್ರಮವನ್ನು ಶ್ಲಾಘಿಸಿದರು. ಸಂಸ್ಥೆಗೆ, ಸ್ಥಳೀಯಾಡಳಿತ ಪಂಚಾಯತ್ ವತಿಯಿಂದ ಸರ್ವ ರೀತಿಯ ಸಹಕಾರವನ್ನು ಒದಗಿಸುವ ಭರವಸೆಯನ್ನು ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಸುನಿಲ್ ಕುಮಾರ್ ಈ ಶಾಲೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ತಲುಪಲೆಂದು ಶುಭ ಹಾರೈಸಿದರು. ಅಲ್ಲದೆ ಶೈಕ್ಷಣಿಕ ರಂಗಕ್ಕೆ ನೀಡುವ ಸರಕಾರದ ಯಾವುದೇ ಯೋಜನೆಗಳನ್ನು ಕ್ಷಿಪ್ರವಾಗಿ ಸದುಪಯೋಗವಾಗಿಸಲು ಸಹಕರಿಸುವ ವಾಗ್ದಾನವನ್ನು ಆಡಳಿತ ಮಂಡಳಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಅಬ್ದುಲ್ ಖಾದರ್ ಕುಕ್ಕಾಜೆ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ಅನುಭವಿಸಿರುವ ಎಡರು-ತೊಡರುಗಳ ಬಗ್ಗೆ ಹೇಳುತ್ತಾ, ಇವೆಲ್ಲವುಗಳನ್ನು ಅನಿವಾಸಿ ಮಿತ್ರರ ಬಲಿಷ್ಠವಾದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಮೆಟ್ಟಿ ನಿಂತು, ಇಂದು ಈ ಮಟ್ಟಕ್ಕೆ ತಲುಪುವಲ್ಲಿ ಸಹಕರಿಸಿದ ವಿದ್ಯಾರ್ಥಿಗಳ ಪೋಷಕರು, ಸ್ಥಳೀಯ ನಾಗರಿಕರು ಮತ್ತು ಸ್ಥಳೀಯಾಡಳಿತದ ಮಹತ್ತರ ಪಾತ್ರವನ್ನು ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಆಮಿನಾ ಬಾನು 2025-26ನೇ ಶೈಕ್ಷಣಿಕ ವರ್ಷದ ಪ್ರಗತಿ ಮತ್ತು ಸಾಧನೆಗಳ ಬಗ್ಗೆ ವಿಸ್ತಾರವಾದ ವರದಿಯನ್ನು ಮಂಡಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ , ಬುಡೋಳಿ (ಅಬುಧಾಬಿ) ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ವಿಷಯದಲ್ಲಿ ಸಂಸ್ಥೆಯು ಯಾವುದೇ ರಾಜಿಗೆ ಸಿದ್ಧವಿಲ್ಲ. ಅವರ ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದರು. ಈ ಕಾರ್ಯಕ್ರಮವು ವಿದ್ಯಾರ್ಥಿನಿಗಳಾದ ಝಿಯಾನಾ, ಹಿಬಾ, ಫಿದಾ, ರಿಝಾ, ಧನ್ಯಶ್ರೀ ಮತ್ತು ಆರಿಫಾ ರವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಬಳಿಕ ಸಹ ಶಿಕ್ಷಕಿ ಅಲಿಮತ್ ಸಅದಿಯಾ ಅವರು ಅತಿಥಿ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು. ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು ಕ್ರಮವಾಗಿ, ಸಹಶಿಕ್ಷಕಿಯರುಗಳಾದ ಆಬಿದಾ ಬೇಗಂ, ತಸ್ಮಿನಾ ಹಾಗೂ ಸಹ ಶಿಕ್ಷಕರಾದ ಹೈದರ್ ಮತ್ತು ಕ್ರೀಡಾ ಸ್ಪರ್ಧೆಯಲ್ಲಿನ ಬಹುಮಾನ ವಿಜೇತರ ಹೆಸರುಗಳನ್ನು ಸಹ ಶಿಕ್ಷಕ ಫಝಲ್ ರವರು ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಾನಪದ, ದೇಶಭಕ್ತಿ ಹಾಗೂ ಆಧುನಿಕ ನೃತ್ಯಗಳು ನೆರೆದಿದ್ದ ಪೋಷಕರ ಹಾಗೂ ಪ್ರೇಕ್ಷಕರ ಮನಸೂರೆಗೊಂಡವು. ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳಿಂದ ಕರಾಟೆ ಶಿಕ್ಷಕ ಅಬ್ದುಲ್ ರಹಮಾನ್ ನಿರ್ದೇಶನದಲ್ಲಿ ಆತ್ಮ ರಕ್ಷಣಾ ಕಲಾ ಮನೋರಂಜನೆಯ ಪ್ರದರ್ಶನಗಳನ್ನು ನೀಡಲಾಯಿತು. ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಸಹ ಶಿಕ್ಷಕಿಯರುಗಳಾದ ಮುಬೀನಾ ಶುಭಾನ್ , ಸಮ್ರೀನಾ, ಆಶಿಕಾ, ಮುಬೀನಾ ಹಾಗೂ ಅಶ್ಫಿಯಾರವರು ನಿರ್ವಹಿಸಿದರು. ಸಹ ಶಿಕ್ಷಕಿ ಫಾತಿಮತ್ ಸಿನಾನರವರು ಕಾರ್ಯಕ್ರಮವನ್ನು ನಿರೂಪಣೆಗೈದರು ಮತ್ತು ಸಹ ಶಿಕ್ಷಕಿ ಮೀನಾಕ್ಷಿಯವರು ಧನ್ಯವಾದವಿತ್ತರು.
ಕಂಬಳ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಜ್ಯದ ಅಸ್ಮಿತೆ: ಬಿ.ವೈ.ವಿಜಯೇಂದ್ರ
ಮಂಗಳೂರು ಕಂಬಳಕ್ಕೆ ಚಾಲನೆ
ಮನೆಗಳನ್ನು ಧ್ವಂಸಗೊಳಿಸಿದ ಪ್ರದೇಶಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ನಿಯೋಗ ಭೇಟಿ
ಬೆಂಗಳೂರು : ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಮ್ ಲೇಔಟ್ ಗಳಲ್ಲಿ ಕಳೆದ 30 ವರ್ಷಗಳಿಂದ ಆಶ್ರಯ ಕಂಡುಕೊಂಡಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ, ಬುಲ್ಡೋಜರ್ಸ್ ಮೂಲಕ ಏಕಾಏಕಿ ಧ್ವಂಸಗೊಳಿಸಲಾಗಿದ್ದು, ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿ ಆಯಿಶಾ ಶಬೀರ್ ನೇತೃತ್ವದ ತಂಡ ಆ ಪ್ರದೇಶಗಳಿಗೆ ಭೇಟಿ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಆಯಿಶಾ ಶಬೀರ್, ಸರಕಾರದ ಈ ಆದೇಶವು ಅತ್ಯಂತ ಅಮಾನವೀಯವಾಗಿದೆ. ಸಣ್ಣ ಮಕ್ಕಳು, ಮಹಿಳೆಯರು, ಗರ್ಭಿಣಿಯರು ಇರುವ ಕುಟುಂಬಗಳನ್ನು ಪೂರ್ವ ಸೂಚನೆ ಇಲ್ಲದೆ ಬೀದಿಪಾಲು ಮಾಡಿರುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರು ನಿಷ್ಪ್ರಯೋಜಕರು ಎಂದು ಹೇಳಿದರು. ತಮ್ಮ ಕನಸು, ಸೂರು, ಸುರಕ್ಷತೆಯನ್ನು ಕಳೆದುಕೊಂಡಿರುವ ಕುಟುಂಬಗಳೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಸದಾ ಜೊತೆಯಾಗಿರುತ್ತದೆ. ಈ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಆ ಕುಟುಂಬಗಳ ಧ್ವನಿಯಾಗಲು ನಾವು ತಯಾರಿದ್ದೇವೆ. ಅವರ ಜೀವನವನ್ನು ಆತ್ಮವಿಶ್ವಾಸದೊಂದಿಗೆ, ಭರವಸೆಯೊಂದಿಗೆ ಮತ್ತೆ ರೂಪಿಸಿಕೊಳ್ಳಲು ನಮ್ಮ ತಂಡದ ಸಹಕಾರ ಯಾವತ್ತೂ ಇರಲಿದೆ ಎಂದು ಅವರು ತಿಳಿಸಿದರು.
17 ವರ್ಷ ಬಳಿಕ ಬಾಂಗ್ಲಾದಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿದ ತಾರಿಕ್, ಫೆ.12ರ ಚುನಾವಣೆಯಲ್ಲಿ ಸ್ಪರ್ಧೆ
17 ವರ್ಷಗಳ ಸ್ವಯಂ ಗಡೀಪಾರಿನ ನಂತರ ಲಂಡನ್ನಿಂದ ಬಾಂಗ್ಲಾದೇಶಕ್ಕೆ ಮರಳಿರುವ ಬಿಎನ್ಪಿ ಹಂಗಾಮಿ ಅಧ್ಯಕ್ಷ ತಾರೀಕ್ ರೆಹಮಾನ್, ಢಾಕಾದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಇದೇ ವೇಳೆ, ಮೂಲಭೂತವಾದಿಗಳು ಖ್ಯಾತ ಗಾಯಕ ಜೇಮ್ಸ್ ಅವರ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಚ್ಚಿಲದ ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ನ ಸಂಭ್ರಮ
ಉಳ್ಳಾಲ: ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್(ರಿ)ಉಚ್ಚಿಲ ಇದರ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉಚ್ಚಿಲ ಕಿಯಾಂಝ ಗಾರ್ಡನ್ ನಡೆಯಿತು. ಉಚ್ಚಿಲ 407 ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಊರಿನ ಹಿರಿಯರಾದ ಎಂ.ಎಚ್. ಪೋಕರ್ ಕುಂಞಿ ಹಾಗೂ ಧಾರ್ಮಿಕ ಸ್ಥಾಪನೆಗಳ ಅಭಿವೃದ್ಧಿಯಲ್ಲಿ ಸಕ್ರಿಯರಾದ ಕುಂಞ ಅಹ್ಮದ್ ಹಾಜಿ, ಕನ್ನಡ ರಾಜ್ಯೋತ್ಸವ ಸಂದರ್ಭದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಅಲಿ ಜಿ.ಎಂ.ಎಚ್ ಉಚ್ಚಿಲ ಅವರನ್ನು ಸನ್ಮಾನಿಸಲಾಯಿತು. ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕಾಲ್ಚೆಂಡು ತಂಡದ ಸಮವಸ್ತ್ರವನ್ನು ಪ್ರಧಾನ ಕಾರ್ಯದರ್ಶಿ ಅಹ್ಮದ್ ಝಿಶಾನ್, ಕೋಶಾಧಿಕಾರಿ ಸಿರಾಜ್ ಕೆ ಉಚ್ಚಿಲ ಬಿಡುಗಡೆಗೊಳಿಸಿದರು. ಹೋಪ್ ಫೌಂಡೇಶನ್ ಸ್ಥಾಪಕ ಸೈಫ್ ಸುಲ್ತಾನ್ ʼಪೋಷಣೆ ಮತ್ತು ಪೋಷಕತ್ವ ಇಂದಿನ ಜವಾಬ್ದಾರಿಗಳುʼ ಹಾಗೂ ಸವಾದ್ ಅಲಿ ʼಮಂಗಳೂರು ಯುವಜನತೆ ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಜಾಗೃತಿʼ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಕ್ರೀಡಯಿಂದ ಸೇವೆಗೆ-ಮೂರು ದಶಕಗಳ ಪಯಣ ಅಫೀಫಾ ಸ್ಮರಣ ಸಂಚಿಕೆಯನ್ನು ಆಫೀಫ ಸಂಘಟನೆ ಸ್ಥಾಪಕ ಮುಹಮ್ಮದ್ ಶಮೀರ್ ಬಿಡುಗಡೆಗೊಳಿಸಿದರು. ಉಚ್ಚಿಲಗುಡ್ಡೆ ರಹ್ಮಾನಿಯಾ ಇಮಾಮ್ ಆಕ್ಬರ್ ಆಲಿ ಸಅದಿ, ಉಚ್ಚಿಲ 407 ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಪೆರಿಬೈಲ್ ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ಬಾಸ್ ಹಾಜಿ, ಅಜ್ಜಿನಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ಬೈತುಲ್ಲಾ ಮಸೀದಿಯ ಅಧ್ಯಕ್ಷ ಮೊಹಿದ್ದೀನ್ ಕುಂಞಿ, ಯು.ಆರ್. ಅಕಾಡಮಿಯ ಪ್ರಚಾರಕ ಉಮೇಶ್ ಉಚ್ಚಿಲ್, ಫಲಾಹ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಯು.ಬಿ. ಮುಹಮ್ಮದ್ ಹಾಜಿ, ಲೈಫ್ಲೈನ್ ಫೌಂಡೇಶನ್ ಅಧ್ಯಕ್ಷ ಅಬ್ಬಾಸ್ ಹಾಜಿ ಪೋಕರ್, ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ರಾಜ್ಯಾಧ್ಯಕ್ಷ ಝಕೀರ್ ಹುಸೈನ್ ಉಚ್ಚಿಲ್, ಅಜ್ಜಿನಡ್ಕ ಬದ್ರಿಯಾ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಸೋಮೇಶ್ವರ ಪುರಸಭೆ ಸದಸ್ಯ ಅಬ್ದುಲ್ ಸಲಾಂ ಯು, ಮ್ಯಾಕ್ ಬ್ರದರ್ಸ್ ಅಧ್ಯಕ್ಷ ಹಾರಿಸ್ ಯು.ಎ, ನೂರುಲ್ ಇಸ್ಲಾಮ್ ಅಧ್ಯಕ್ಷ ಇಬ್ರಾಹಿಂ ಹಿಮಮಿ, ಬಿಎಸ್ಬಿ ಅಧ್ಯಕ್ಷ ಅನಸ್ ಉಚ್ಚಿಲ, ಬಿಬಿಜಿ ಅಧ್ಯಕ್ಷ ಝುಲ್ಫಾಝ್ ಉಚ್ಚಿಲ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಝೈನುದ್ದೀನ್ ನವಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಉಮರ್ ಮುಹಮ್ಮದ್ ಫಾಹಿಂ ಪ್ರಾರ್ಥನೆಗೈದರು. ಸದಸ್ಯ ಶಬೀರ್ ಇಸ್ಮಾಯಿಲ್ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಇಬ್ರಾಹಿಂ ಖಲೀಲ್ ಅರೀಫ್ ವಂದಿಸಿದರು. ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಸದಸ್ಯ ನಾಸೀರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.
ಸಿಎಂ-ಡಿಸಿಎಂ ಜೊತೆ ಮಾತುಕತೆ ನಡೆಸಿದ ಕೆ.ಸಿ.ವೇಣುಗೋಪಾಲ್
ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಡಿ.29 ರಂದು ನಡೆಸುತ್ತಿರುವ ಬೃಹತ್ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಸಂಘಟಕರಿಗೆ ಒತ್ತಾಯಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ್, ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನಮ್ಮ ಸಮುದಾಯವನ್ನು ಎಸ್ಟಿ ಸೇರ್ಪಡೆ ಮಾಡಿಸಲು ಭರವಸೆ ನೀಡಿದ್ದಾರೆ, ಹಾಗಾಗಿ ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕೆಂದು ಹೇಳಿದರು. ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ಕ್ರಮ ವಹಿಸುವುದಾಗಿ ನಾವು ತಿಳಿಸಿದ್ದೆವು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಹ ಭರವಸೆ ನೀಡಿದಂತೆ ತಳವಾರ ಸಮುದಾಯಕ್ಕೆ ಪ್ರಮಾಣ ಪತ್ರ ಒದಗಿಸುವಂತೆ ಸರಕಾರದಿಂದ ಆದೇಶ ಹೊರಡಿಸುವಲ್ಲಿ ಪ್ರಾಮಾಣಿಕ ಪಾತ್ರ ವಹಿಸಿದ್ದಾರೆ. ಇದೀಗ ಅದರಂತೆಯೂ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗಾಗಿ ಸಚಿವ ಖರ್ಗೆ ಅವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇಂತಹ ವೇಳೆಯಲ್ಲಿ ಹೋರಾಟ ಮಾಡುವುದು ಸೂಕ್ತವಲ್ಲ ಎಂದರು. 12ನೇ ಶತಮಾನದಲ್ಲಿ ಹೆಸರು ಮಾಡಿದ ನಮ್ಮ ಸಮಾಜದ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳದ ಅಭಿವೃದ್ಧಿಗೆ ಚರ್ಚೆ ನಡೆಸಲಾಗಿದೆ. ಸದ್ಯ ಸ್ಥಳ ಪುರಾತತ್ವ ಇಲಾಖೆಯಲ್ಲಿದ್ದನ್ನು ರಾಜ್ಯ ಸರಕಾರದ ಅಧೀನತೆಗೆ ತೆಗೆದುಕೊಳ್ಳಲು ಮಾತುಕತೆ ನಡೆಸಲಾಗಿದೆ. ಅದರಂತೆಯೇ ವಿಧಾನ ಸೌಧದ ಎದುರುಗಡೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಕೂಡ ಸ್ಥಾಪನೆಗೆ ಒಪ್ಪಿಗೆ ಸಿಗುತ್ತಿದೆ. ಹೀಗೆ ನಮ್ಮ ಸಮುದಾಯಕ್ಕೆ ಅನೇಕ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರಕಾರವು, ಎಸ್ಟಿ ಸೇರ್ಪಡೆ ಕುರಿತಾಗಿಯೂ ಪ್ರಗತಿಯಲ್ಲಿಟ್ಟುಕೊಂಡಿದೆ. ಶೀಘ್ರದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತದೆ ಎಂದು ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು. ಜನರನ್ನು ದಿಕ್ಕುತಪ್ಪಿಸಲು 29 ರಂದು ಹೋರಾಟ ಕೈಗೊಳ್ಳಲಾಗುತ್ತಿದೆ, ಕೂಡಲೇ ಸಂಘಟಕರು ಈ ಹೋರಾಟವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ, ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ರಮೇಶ್ ನಾಟೀಕಾರ, ಶಾಂತಪ್ಪ ಕೂಡಿ, ಸಾಯಬಣ್ಣ ಜಾಲಗಾರ್, ಶರಣು ಭಾಗೋಡಿ, ಶಿವು ಹೊನಗುಂಟಿ, ಶಿವಕುಮಾರ್ ಯಾಗಪುರ, ಮಹಾರಾಯ ಅಗಸಿ, ಬಸವರಾಜ ಗುಂಡಲಗೇರಿ, ಪ್ರಕಾಶ್ ಜಮಾದಾರ, ಗುಂಡು ಐನಾಪುರ, ಸಂತೋಷ್ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹಿಳೆಯರು ಕುಟುಂಬ ನಿರ್ವಹಣೆ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು: ಪಿಎಸ್ಐ ಕೆ ನಾಗರತ್ನ
ಹರಪನಹಳ್ಳಿ: ದೇವರ ತಿಮಲಾಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶನಿವಾರ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಪಿಎಸ್ಐ ಕೆ ನಾಗರತ್ನ, ಮಹಿಳೆಯರು ಮನೆಯಿಂದ ಯಾವುದೇ ಸಭೆ ಸಮಾರಂಭಗಳಿಗೆ ತೆರಳಿದಾಗ ನಿಮ್ಮ ಬಂಗಾರದ ಒಡವೆಗಳ ಬಗ್ಗೆ ಹೆಚ್ಚಿನ ಗಮನವಿರಬೇಕು. ಪೋಲೀಸ್ ಇಲಾಖೆ ಮಹಿಳೆಯರ ರಕ್ಷಣೆಗಾಗಿ ವಿಜಯ ಪೋಲೀಸ್ ಪಡೆಯನ್ನು ನೇಮಿಸಿದೆ. ಮಹಿಳೆಯರ ಅಭಿವೃದ್ದಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಚಿತ್ರದುರ್ಗ ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ. ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಮಾನವಿದೆ, ತಾಯಂದಿರು ಹೆಚ್ಚು ಮೊಬೈಲ್, ಟಿವಿಗಳಿಗೆ ಮಾರು ಹೋಗದೆ ತನ್ನ ಕುಟುಂಬ ಮತ್ತು ಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕಾರ, ನಮ್ಮ ಪರಂಪರೆಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು ಎಂದರು. ಹೆಣ್ಣು ಕೇವಲ ಕುಟುಬಂಕ್ಕೆ ಸೀಮಿತವಾಗಿರದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು, ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯು ಕಾರ್ಯ ನಿರ್ವಹಿಸುತ್ತಿದ್ದಾಳೆ. ಧರ್ಮಸ್ಥಳ ಸಂಘ ನೀಡುವ ಸಾಲ ಸೌಲಭ್ಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎನ್ ಎಸ್ ಮಮತಾ, ಕುಸುಮಾ ಜಗದೀಶ್, ಕ್ಷೇತ್ರ ಯೋಜನಾಧಿಕಾರಿ ಬಾಬು, ಗೀತಾ, ಅನಿತಾ ಮತ್ತು ಉಪನ್ಯಾಸಕಿ ಸುವರ್ಣ ಆರುಂಡಿ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕಿಯರು ಹಾಗೂ ಸೇವಾ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರ್ಷಾರಂಭಕ್ಕೆ ಹೈಕಮಾಂಡ್ ಮಧ್ಯಸ್ಥಿಕೆ ಸಾಧ್ಯತೆ, ದಿಲ್ಲಿಗೆ ಬರುವಂತೆ ಡಿಕೆ ಶಿವಕುಮಾರ್ಗೆ ಸೂಚನೆ
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಸಂಪುಟ ಪುನಾರಚನೆ ಮತ್ತು ನಾಯಕತ್ವದ ವಿಚಾರವಾಗಿ ಕುತೂಹಲ ಮೂಡಿದೆ. ಹೊಸ ವರ್ಷದ ಆರಂಭದಲ್ಲೇ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಗೊಂದಲ ಬಗೆಹರಿಸುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ರನ್ನು ದಿಲ್ಲಿಗೆ ಕರೆಸಿ ಚರ್ಚೆ ನಡೆಸುವ ಸಾಧ್ಯತೆಯಿದೆ.
ಕೊಣಾಜೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ʼಚೈತನ್ಯ ಚಿಲುಮೆʼ ಕಾರ್ಯಾಗಾರ ಉದ್ಘಾಟನೆ
ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ: ವಿದ್ಯಾರ್ಥಿಗಳಿಗೆ ಕೆ.ಕೆ ಶಾಹುಲ್ ಹಮೀದ್ ಕರೆ
ವಿಜಯನಗರ| ಜ.1ರಿಂದ 30ರವರೆಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ: ನ್ಯಾ.ಕೆ.ಎಂ.ರಾಜಶೇಖರ್
ವಿಜಯನಗರ: ಜನವರಿ 1 ರಿಂದ 30 ರವರೆಗೆ ವಿಜಯನಗರ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಪಘಾತಗಳ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ವಿಜಯನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಹೇಳಿದರು. ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಂ.ರಾಜಶೇಖರ್, ಸಂಚಾರ ನಿಯಮಗಳ ಪಾಲನೆ ಇಲ್ಲದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಪಘಾತಗಳನ್ನು ಕಡಿಮೆ ಮಾಡಲು ಜನರಲ್ಲಿ ಹಾಗೂ ವಿಶೇಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಾರವನ್ನು ಮಾಡಬೇಕು ಎಂದು ತಿಳಿಸಿದರು. ನ್ಯಾಯಾಂಗ ಇಲಾಖೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಡಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಹಮ್ಮಿಕೊಳ್ಳಬೇಕು. ವಿವಿಧ ಇಲಾಖೆಯವರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಬೆಂಕಿ ಅನಾಹುತಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಸ್ಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ಹಾಗೂ ಲಗೇಜ್ ಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ರಾಜ್ಯದಲ್ಲಿ ಬರುವ ಜ.1 ರಿಂದ 30 ರವರೆಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ಜ.3ರಂದು ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದು, ಜಾಗೃತಿ ಜಾಥಾವು ವೃತ್ತದಿಂದ ಆರಂಭಗೊಂಡು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಲಿದೆ ಎಂದು ತಿಳಿಸಿದರು. ವಿಜಯನಗರ ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ವ್ಯಾಪಕವಾಗಿ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಗೂ ಶಿಕ್ಷೆ ವಿಧಿಸುವುದು ಗ್ಯಾರಂಟಿ ಎಂದು ಹೇಳಿದರು. ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರಾದ ಡಿ.ಪಿ.ಕುಮಾರಸ್ವಾಮಿ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್ ಚಾಲಕರು ಬೇಕಾಬಿಟ್ಟಿಯಾಗಿ ಬಸ್ನ ಚಾಲನೆ ಮಾಡುತ್ತಾರೆ. ಇದರಿಂದ ಇನ್ನುಳಿದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಬಸ್ ಚಾಲಕರಿಗೆ ಚಾಲನೆ ನಿಯಮ ಪಾಲಿಸಲು ತಿಳಿಸಿರಿ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸೂಚಿಸಿದರು. ಗೌರವಾನ್ವಿತ ಸಿಜೆಎಂ ಅಧ್ಯಕ್ಷರು ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಮಣ್ಯ.ಎನ್ ಮಾತನಾಡಿ, ಜನರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಬೇಕು. ಈ ಉದ್ದೇಶದಿಂದ ಜ.3ರಂದು ಹಮ್ಮಿಕೊಂಡಿರುವ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಗೌರವಾನಿತ್ವ ಅಪರ ಸಿವಿಲ್ ನ್ಯಾಯಾಧೀಶರಾದ ಚೈತ್ರ.ಜೆ ಮಾತನಾಡಿ, ನಗರದಲ್ಲಿ ಹಲವು ವಾಹನಗಳ ನಂಬರ್ ಪ್ಲೇಟ್ಗಳು ಸರಿಯಾಗಿ ಕಾಣುವುದಿಲ್ಲ, ಸಂಚಾರಿ ಇಲಾಖೆ ಪೊಲೀಸರು ಇಂತಹ ವಾಹನಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಪೊಲೀಸ್ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹುಲಗಪ್ಪ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರುತಿ ತೇಲಿ, ನಗರಸಭೆ ಪೌರಾಯುಕ್ತ ಶಿವಕುಮಾರ್, ವಕೀಲರಾದ ಈ.ಪುಷ್ಪಲತಾ, ಪಿ.ಶ್ರೀನಿವಾಸಮೂರ್ತಿ, ಪಟ್ಟಣ ಪೊಲೀಸ್ ಠಾಣೆ ಪಿ.ಐ ಲಖನ್ ಮಸಗುಪ್ಪಿ, ಪಿಎಸ್ಐ ಹೆಚ್.ನಾಗರತ್ನ, ಹಂಪಿ ಸಿಪಿಐ ಅ.ರಾಜೇಶ ಭಟಕುರ್ಕಿ, ಪಿ.ಯು.ಡಿಡಿ ನಾಗರಾಜ ಹವಾಲ್ದಾರ. ಕೆಕೆಆರ್ಟಿಸಿಯ ಡಿಟಿಒ ಆರ್.ಪಿ.ಭಜಂತ್ರಿ, ಡಾ.ದಿವ್ಯಶ್ರೀ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ಫೋಸಿಸ್ ವಿರುದ್ಧ ಕೆಐಎಡಿಬಿಯಿಂದ ಪಡೆದ ಬಹುಕೋಟಿ ಮೌಲ್ಯದ ಭೂಮಿ ಮಾರಾಟ ಆರೋಪ; ಕಾನೂನು ಕ್ರಮ ಜರುಗಿಸಲು ಆಗ್ರಹ
ಬೆಂಗಳೂರು : ಉದ್ಯಮ ನೆಪದಲ್ಲಿ ಕೆಐಎಡಿಬಿಯಿಂದ ಭೂಮಿ ಪಡೆದ ಬಳಿಕ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರೂ.ಗೆ ಇನ್ಫೋಸಿಸ್ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಜ್ಯ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಗತಿಪರ ಹೋರಾಟಗಾರರು, ಚಿಂತಕರು ಆಗ್ರಹಿಸಿದ್ದಾರೆ. ಶನಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ್ತಿ ಕವಿತಾ ರೆಡ್ಡಿ, ಹಲವು ವರ್ಷಗಳ ಹಿಂದೆ ಕೆಐಎಡಿಬಿಯಿಂದ ಕಡಿಮೆ ಬೆಲೆಗೆ ಭೂಮಿಯನ್ನು ಪಡೆದುಕೊಂಡಿದ್ದ ಇನ್ಫೋಸಿಸ್ ಈ ರೀತಿ ವಂಚನೆ ಮಾಡಿರುವ ಮಾಹಿತಿ ನೋಡಿ ಅಚ್ಚರಿಯಾಗಿದ್ದೇನೆ. ಸದಾ ರೈತರನ್ನು ಟೀಕಿಸುವ ಉದ್ಯಮಿಗಳು ಈಗ ಇದರ ವಿರುದ್ಧ ಮಾತನಾಡಲಿ ಎಂದಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಮತ್ತು ಹೂಡಿಕೆಯ ಭರವಸೆ ನೀಡಿ ಹಲವಾರು ವರ್ಷಗಳಿಂದ ಕೆಐಎಡಿಬಿಯಿಂದ ಭೂಮಿಯನ್ನು ಕಸಿದುಕೊಂಡಿದ್ದರು. ಈಗ ಅದೇ ಭೂಮಿಯನ್ನು 250 ಕೋಟಿ ರೂ.ಗೆ ಮಾರಾಟ ಮಾಡಲು ರಿಯಲ್ ಎಸ್ಟೇಟ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದ್ದು, ಈಗ ಇನ್ಫೋಸಿಸ್ ಅನ್ನು ಏನೆಂದು ಕರೆಯಬೇಕು ಎಂದು ಕೇಳಿದ್ದಾರೆ. ಅದೇ ರೀತಿ, ಆನೇಕಲ್ನ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆಯೇ ಇನ್ಫೋಸಿಸ್ಗೆ ಮಂಜೂರು ಮಾಡಲಾಗಿದ್ದ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಕ್ಕೆ 250 ಕೋಟಿ ರು.ಗೆ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಎಕ್ಸ್ನಲ್ಲಿ ನೆಟ್ಟಿಗರು ಇನ್ಫೋಸಿಸ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತ -ಶ್ರೀಲಂಕಾ ಮಧ್ಯೆ ಉತ್ತಮ ಸಂಬಂಧ ಮುಂದುವರಿದಿದೆ: ನಿಶಾಂತ ಆಲ್ವಿಸ್
ಮಂಗಳೂರು ಪ್ರೆಸ್ಕ್ಲಬ್ಗೆ ಶ್ರೀಲಂಕಾದ ಅಧಿಕಾರಿಗಳ-ಪತ್ರಕರ್ತರ ನಿಯೋಗ ಭೇಟಿ
ಸತ್ನಾ (ಮಧ್ಯಪ್ರದೇಶ): ಬಿಜೆಪಿ ನಾಯಕನೊಬ್ಬ ಅತ್ಯಾಚಾರ ಸಂತ್ರಸ್ತೆಗೆ ಚಾಕು ತೋರಿಸಿ ಹಾಗೂ ಆಕ್ಷೇಪಾರ್ಹ ವಿಡಿಯೊವೊಂದನ್ನು ಮಾಡಿ ಬೆದರಿಕೆ ಒಡ್ಡಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಮ್ಪುರ್ ಬಘೇಲನ್ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ವೈರಲ್ ಆಗಿದೆ. ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ, ತನ್ನೊಂದಿಗೆ ಮತ್ತೊಮ್ಮೆ ದೈಹಿಕ ಸಂಪರ್ಕ ಬೆಳೆಸುವಂತೆ ಬಿಜೆಪಿ ನಾಯಕ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ. रेप पीड़िता गिड़गिड़ा कर कह रही है- 'मैं सोशल मीडिया में वीडियो डाल दूंगी' BJP नेता अशोक सिंह ने कहा- 'उससे मेरा कुछ नहीं होगा, मुझे कोई डर नहीं है' वीडियो में जो आदमी दिख रहा है, ये BJP नेता अशोक सिंह है. इसपर आरोप है कि इसने चाकू की नोक पर रेप किया और वीडियो बना लिया. अब… pic.twitter.com/iuvRASrLAf — Ranvijay Singh (@ranvijaylive) December 27, 2025 ಆರೋಪಿ ಬಿಜೆಪಿ ನಾಯಕ ತನಗೆ ಬೆದರಿಕೆ ಒಡ್ಡಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ ಬೆನ್ನಿಗೇ, ಆತ ಬೆದರಿಕೆ ಒಡ್ಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆರೋಪಿಯು ಪೊಲೀಸ್ ಅಧಿಕಾರಿಯೊಬ್ಬರನ್ನು ನಿಂದಿಸುತ್ತಾ, “ನನಗೇನಾಗುತ್ತದೆ? ನನಗೇನೂ ಆಗುವುದಿಲ್ಲ. ನೀನು ಎಲ್ಲಿ ಬೇಕಾದರೂ ದೂರು ನೀಡು. ನನಗೇನೂ ಆಗುವುದಿಲ್ಲ” ಎಂದು ಬೆದರಿಕೆ ಒಡ್ಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ, ಅತ್ಯಾಚಾರ ಸಂತ್ರಸ್ತೆಯು ಅಳುತ್ತಾ, ನಾನು ದೂರು ನೀಡುತ್ತೇನೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಸಂಬಂಧ ಅತ್ಯಾಚಾರ ಸಂತ್ರಸ್ತೆಯು ಡಿ. 22ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆ ಕಳೆದ ಐದು ದಿನಗಳಿಂದ ನಡೆಯುತ್ತಿದ್ದು, ಸಂತ್ರಸ್ತೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಈ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಸಂತ್ರಸ್ತೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನ್ಸ್ ರಾಜ್ ಸಿಂಗ್ ಗೆ ಲಿಖಿತ ದೂರು ನೀಡಿದ್ದು, ಆರು ತಿಂಗಳ ಹಿಂದೆ ಕರ್ಹಿ (ಹನುಮಾನ್ ಗಂಜ್) ನಿವಾಸಿ ಆರೋಪಿ ಅಶೋಕ್ ಸಿಂಗ್ ನನ್ನ ಮನೆಯನ್ನು ಪ್ರವೇಶಿಸಿದ್ದ ಎಂದು ಆರೋಪಿಸಿದ್ದಾರೆ. ಆತ ನನಗೆ ಚಾಕು ತೋರಿಸಿ ಬೆದರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ್ದು, ಆ ಆಕ್ಷೇಪಾರ್ಹ ಸ್ಥಿತಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾನೆ. ನಾನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ನನ್ನನ್ನು ಕೊಲೆ ಮಾಡುವುದಾಗಿ ಆತ ನನಗೆ ಬೆದರಿಕೆ ಒಡ್ಡಿದ್ದಾನೆ. ಹೀಗಾಗಿಯೇ ನಾನು ಮೌನಕ್ಕೆ ಜಾರಿದೆ ಎಂದು ಅತ್ಯಾಚಾರ ಸಂತ್ರಸ್ತೆಯು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತ್ರಿವೇದಿಗೆ ಪೊಲೀಸ್ ವರಿಷ್ಠಾಧಿಕಾರಿ ಹನ್ಸ್ ರಾಜ್ ಸಿಂಗ್ ಹಸ್ತಾಂತರಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತಿವಾರಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಾಮರ್ಶೆ ನಡೆಸಿದ ನಂತರವಷ್ಟೇ ನಾನು ಯಾವುದೇ ಬಗೆಯ ವಿಸ್ತೃತ ಮಾಹಿತಿಯನ್ನು ನೀಡಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2nd PUC Exam 2026: ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ರಿಲೀಸ್: ಮೌಲ್ಯಮಾಪನದಲ್ಲಿ ಬಾರೀ ಬದಲಾವಣೆ
ಬೆಂಗಳೂರು: ಪ್ರಸಕ್ತ ವರ್ಷದ 2026 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುಡ್ ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ (Practical) ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿ ಶನಿವಾರ ಸುತ್ತೋಲೆ ಹೊರಡಿಸಿದೆ. ಜನವರಿ 27 ರಿಂದ ನಡೆಯಲಿರುವ ಈ ಪರೀಕ್ಷೆಗಳ ಸಂಪೂರ್ಣ ಜವಾಬ್ದಾರಿ ಹೊಣೆಯನ್ನು ಆಯಾ ಜಿಲ್ಲಾ ಉಪನಿರ್ದೇಶಕರಿಗೆ

25 C