ಮಂಗಳವಾರ ಎಸ್ಐಆರ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ; ಪ್ರತಿಪಕ್ಷಕ್ಕೆ ರಾಹುಲ್ ಗಾಂಧಿ ನೇತೃತ್ವ
ಹೊಸದಿಲ್ಲಿ: ಲೋಕಸಭೆಯಲ್ಲಿ ಮಂಗಳವಾರ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಷಯದ ಬಗ್ಗೆ ಮಹತ್ವದ ಚರ್ಚೆ ನಡೆಯಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳು ಕೋರಿದ ಈ ಚರ್ಚೆಯ ನೇತೃತ್ವವನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಹಿಸಲಿದ್ದಾರೆ. ಈ ಚರ್ಚೆಯಲ್ಲಿ ಕಾಂಗ್ರೆಸ್ ನಿಂದ ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ವರ್ಷಾ ಗಾಯಕ್ವಾಡ್, ಮುಹಮ್ಮದ್ ಜಾವೇದ್, ಉಜ್ವಲ್ ರಮಣ್ ಸಿಂಗ್, ಇಶಾ ಖಾನ್ ಚೌಧರಿ, ಮಲ್ಲು ರವಿ, ಇಮ್ರಾನ್ ಮಸೂದ್, ಗೊವಾಲ್ ಪದವಿ ಮತ್ತು ಜ್ಯೋತಿಮಣಿ ಭಾಗವಹಿಸಲಿದ್ದಾರೆ. ಈ ಇಡೀ ಚರ್ಚೆಗೆ ಒಟ್ಟು 10 ಗಂಟೆಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಚರ್ಚೆಗೆ ಬುಧವಾರ ಉತ್ತರ ನೀಡಲಿದ್ದಾರೆ. ಚರ್ಚೆಯ ವೇಳೆ, ರಾಹುಲ್ ಗಾಂಧಿ ‘‘ಮತಗಳ್ಳತನ’’ ಮತ್ತು ಭಾರತೀಯ ಚುನಾವಣಾ ಆಯೋಗದ ಉತ್ತರದಾಯಿತ್ವ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಈ ವಿಷಯವು ಅವರ ಇತ್ತೀಚಿನ ರಾಜಕೀಯ ಭಾಷಣಗಳ ಪ್ರಮುಖ ವಿಷಯಗಳ ಪೈಕಿ ಒಂದಾಗಿದೆ. ಮತದಾರರ ಪಟ್ಟಿಗಳಲ್ಲಿ ವೈರುಧ್ಯಗಳಿವೆ, ಚುನಾವಣಾ ವಿಧಿವಿಧಾನಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆ ಮತ್ತು ಚುನಾವಣಾ ಆಯೋಗವು ಆಯ್ದ ಪ್ರಕರಣಗಳಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳುತ್ತದೆ. ಇದು ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ಮಾಡಿವೆ ಎಂಬುದಾಗಿ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ನಾಯಕರು ದೊಡ್ಡ ಧ್ವನಿಯಲ್ಲಿ ಹೇಳುತ್ತಾ ಬಂದಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವೇಳೆ, ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳ ಮೇಲೆ ಹೇರಲಾಗುತ್ತಿದೆ ಎನ್ನಲಾದ ಅಗಾಧ ಒತ್ತಡದ ಬಗ್ಗೆಯೂ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ಮಾತನಾಡುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಬೆಂಗಳೂರು : ರವಿವಾರದಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸುವ ಮೂಲಕ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್, ಖಜಾಂಜಿ ಸ್ಥಾನಕ್ಕೆ ಮಧುಕರ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ. ವೆಂಕಟೇಶ್ ಪ್ರಸಾದ್ ಅವರು ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. 20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 749 ಮತಗಳಿಂದ ಗೆಲುವು ಸಾಧಿಸಿದ್ದು, ಕೆ.ಎನ್. ಶಾಂತಕುಮಾರ್ 558 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಪರಿಶೀಲನೆಯಲ್ಲಿ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಶಾಂತಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಅವರ ನಾಮಪತ್ರ ಸಿಂಧುಗೊಳಿಸಿ, ಡಿ.7ರಂದು ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.
ಸಾಮಾಜಿಕ, ಆರ್ಥಿಕ ಅಸಮಾನತೆ ಇದ್ದಾಗ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿಲ್ಲ : ಶಿವಸುಂದರ್
ವಿಜಯನಗರ: ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರಿದಷ್ಟು ಕಾಲ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿರುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಎನ್ನುವುದು ಸರ್ವಾಧಿಕಾರತ್ವವನ್ನು ತರುತ್ತದೆ ಎಂದು ಚಿಂತಕರಾದ ಶಿವಸುಂದರ್ ಅವರು ಹೇಳಿದರು. ಹಂಪಿ ಮಹಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸುಂದರ್, ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರನ್ನು ಯಾವುದೇ ಒಂದು ನಿಲುವಿಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ನಿಧನದ ನಂತರ ಅವರನ್ನು, ಅವರ ವಿಚಾರಗಳನ್ನು ಕಡೆಗಣಿಸುವ ಮೂಲಕ ವೈಚಾರಿಕತೆ, ವೈಜ್ಞಾನಿಕತೆಗಳಿಗೆ ಬ್ರಾಹ್ಮಣಶಾಹಿಗಳು ವಿದಾಯ ಹೇಳಿದ್ದರು. 1990ರ ದಶಕದಲ್ಲಿ ಜಾಗೃತ ದಲಿತ ಪ್ರಜ್ಞೆಯ ಭಾಗವಾಗಿ ಅವರು ಮತ್ತೆ ಚರ್ಚೆಗೆ ಬಂದರು. ಅಂಬೇಡ್ಕರ್ ಅವರು ಬೌದ್ಧ ಧರ್ಮವು ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ನಿಂತಿರುವುದನ್ನು ತಿಳಿಸಿಕೊಟ್ಟರು. ಇಂದು ಧರ್ಮಗಳು ಈ ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ಪುನರ್ ರೂಪಿತವಾಗಬೇಕು ಎಂದು ಹೇಳಿದರು. ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿತ್ವ ದೇಶದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವಗಳು ಸಾಮಾಜಿಕವಾಗಿ ಸಾಯುತ್ತಿವೆ ಮತ್ತು ಚುನಾವಣಾ ಪ್ರಜಾತಂತ್ರವನ್ನು ಟೊಳ್ಳು ಮಾಡುತ್ತಿದೆ. ಇದು ಜನರ ಬದುಕು ಅತಂತ್ರವಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಯಾವ ಪಕ್ಷಗಳು ಕೂಡ ಸಮಾಜದ ಒಳತಿನ ಕಡೆಗೆ ಗಮನಹರಿಸುತ್ತಿಲ್ಲ. ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲರು ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು. ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಬಯಸಿದ್ದ ಬ್ರಾತೃತ್ವ ಭಾರತ, ಮಾನವೀಯ ಭಾರತ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಭಾರತ ಎನ್ನುವ ಮಾನ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಭಾರತ ತಲೆ ಎತ್ತುತ್ತಿದೆ. ಇದರ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಇದು ಇದೇ ರೀತಿ ಮುಂದುವರಿದರೆ ಸಂವಿಧಾನವನ್ನು ಮೀರಿದ ನಿಯಮಗಳು ಜಾರಿಗೆ ಬರಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಸಿಂಡಿಕೇಟ್ ಸದಸ್ಯರಾದ ಸೋಮಶೇಖರ್ ಬಣ್ಣದ ಮನೆ, ಬಳ್ಳಾರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪೀರ್ ಭಾಷಾ, ವಿವಿಧ ವಿಭಾಗದ ಡೀನ್ಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಹನ ಸವಾರರೇ ಗಮನಿಸಿ; ಡಿ.7ರಿಂದ 9 ತಿಂಗಳು ಬೆಂಗಳೂರಿನ ಈ ರಸ್ತೆಗಳು ಸಂಪೂರ್ಣ ಬಂದ್
ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ, ಡಿಸೆಂಬರ್ 7 ರಿಂದ ಮುಂದಿನ 9 ತಿಂಗಳ ಕಾಲ ಬೆಂಗಳೂರು-ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಿಲ್ಲ ಎಂದು ರೈಲ್ವೆ ಇಲಾಖೆ ಹೇಲಿದೆ. ದಟ್ಟಣೆ ತಪ್ಪಿಸುವುದು ಈ ಕಾಮಗಾರಿಯ ಮುಖ್ಯ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಬೆಂಗಳೂರು ಸಂಚಾರ ಪೊಲೀಸರು ಶೀಘ್ರದಲ್ಲೇ ಪರ್ಯಾಯ ಮಾರ್ಗದ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ನಿಟ್ಟೆ | ಡಿ.8ರಿಂದ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ
ನಿಟ್ಟೆ, ಡಿ.7: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಎಐಸಿಟಿಇ-ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) - ಎಪ್ಲಿಕೇಶನ್ ಆಫ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಇನ್ ಹೆಲ್ತ್ಕೇರ್ ಎಂಬ ವಿಷಯದ ಕುರಿತಂತೆ ಸೋಮವಾರದಿಂದ ಡಿ.13ರವರೆಗೆ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಿದೆ. ಆರು ದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಡಿ.8ರ ಬೆಳಗ್ಗೆ 9:30ಕ್ಕೆ ನಿಟ್ಟೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಭಾಗವಹಿಸುವರು. ನಿಟ್ಟೆ (ಡಿಮ್ಡ್) ವಿವಿಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ನಿರಂಜನ ಎನ್. ಚಿಪ್ಳೂಣಕರ್ ವಹಿಸಲಿದ್ದಾರೆ. ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಗಳ ಬಳಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಐಐಎಸ್ಸಿ ಬೆಂಗಳೂರು, ಎನ್ಐಟಿಕೆ ಸುರತ್ಕಲ್, ಎಂಐಟಿ ಮಣಿಪಾಲ, ಎಚ್ಪಿಇ ಬೆಂಗಳೂರು ಹಾಗೂ ನಿಟ್ಟೆ ಸಂಸ್ಥೆಗಳಿಂದ ಶೈಕ್ಷಣಿಕ ಹಾಗೂ ಕೈಗಾರಿಕಾ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಕಳ | ಡಿ.9ರಂದು ನಾಡು ನುಡಿ ಚಿಂತನೆ -ಸಂವಾದ ಕಾರ್ಯಕ್ರಮ
ಕಾರ್ಕಳ, ಡಿ.7: ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯುಕ್ತ ಆಶ್ರಯದಲ್ಲಿ ನಾಡು ನುಡಿ ಚಿಂತನೆ ಮತ್ತು ಸಂವಾದ, ‘ಕನ್ನಡ ಭಾವಗಾಯನ ಕಾರ್ಯಕ್ರಮ ಡಿ.9ರಂದು ಮಧ್ಯಾಹ್ನ 2ಗಂಟೆಗೆ ಕಾಲೇಜಿನ ಎ.ವಿ.ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.8ರಿಂದ 11ರ ತನಕ ದಿನನಿತ್ಯ 8 ಇಂಡಿಗೊ ವಿಮಾನಗಳ ಯಾನ ರದ್ದು
ಮಂಗಳೂರು , ಡಿ.7: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಆಗಮಿಸುವ ಮತ್ತು ನಿರ್ಗಮಿಸುವ ಇಂಡಿಗೊದ 8 ವಿಮಾನಗಳ ಯಾನ ಡಿ.8 ರಿಂದ 11ರ ತನಕ ರದ್ದಾಗಿದೆ. ಮಂಗಳೂರಿಗೆ ದಿನನಿತ್ಯ ಆಗಮಿಸುವ ಇಂಡಿಗೊದ ಬೆಂಗಳೂರು -ಮಂಗಳೂರು ( 6ಇ 6858)ಬೆಳಗ್ಗೆ 7:10, ಮುಂಬೈ -ಮಂಗಳೂರು(6ಇ 6674) ಬೆಳಗ್ಗೆ 8:40, ಬೆಂಗಳೂರು -ಮಂಗಳೂರು (6ಇ109) ಸಂಜೆ 5:20 ಮತ್ತು ಬೆಂಗಳೂರು -ಮಂಗಳೂರು (6ಇ6119) ರಾತ್ರಿ 10:15ಕ್ಕೆ ಆಗಮಿಸುವ ವಿಮಾನಗಳು ರದ್ದಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 7:40ಕ್ಕೆ ಹೊರಡುವ ಮಂಗಳೂರು -ಬೆಂಗಳೂರು (6ಇ 306), ಬೆಳಗ್ಗೆ 9:10 ಮಂಗಳೂರು-ಮುಂಬೈ (6ಇ6205) , ಸಂಜೆ 5:50ರ ಮಂಗಳೂರು-ಬೆಂಗಳೂರು (6ಇ388), ರಾತ್ರಿ 10:45ಕ್ಕೆ ನಿರ್ಗಮಿಸುವ ಮಂಗಳೂರು-ಬೆಂಗಳೂರು (6ಇ6120) ವಿಮಾನಗಳ ಯಾನ ರದ್ದಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಯಶವಂತಪುರ - ವಿಜಯಪುರ ನಡುವಿನ ವಿಶೇಷ ರೈಲು ಇನ್ನು ಮುಂದೆ ಖಾಯಂ; ಟಿಕೆಟ್ ದರ ಇಳಿಕೆ; ಎಷ್ಟಿತ್ತು? ಎಷ್ಟಾಯ್ತು?
ಯಶವಂತಪುರ - ವಿಜಯಪುರ ವಿಶೇಷ ರೈಲು ಡಿಸೆಂಬರ್ 8 ರಿಂದ ಖಾಯಂ ಆಗಲಿದ್ದು, ಟಿಕೆಟ್ ದರಗಳಲ್ಲಿ ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಲೀಪರ್ ಟಿಕೆಟ್ ದರಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ರೈಲಿನ ಸಂಖ್ಯೆ ಬದಲಾಗಲಿದ್ದು, ಆದರೆ, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಚೀನಾದೊಂದಿಗೆ ಭೀಕರ ಘರ್ಷಣೆಯ ಐದು ವರ್ಷಗಳ ಬಳಿಕ ಗಲ್ವಾನ್ ನಲ್ಲಿ ಯುದ್ಧ ಸ್ಮಾರಕ ಅನಾವರಣ
ಲೇಹ್ (ಲಡಾಖ್): ಐದು ವರ್ಷಗಳ ಹಿಂದೆ ಚೀನಿ ಸೈನಿಕರೊಂದಿಗೆ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರ ಅನಾವರಣಗೊಳಿಸಿದರು. ಇದು ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡ ಯುದ್ಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಡಾಖ್ ನ ಆಯಕಟ್ಟಿನ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯಲ್ಲಿ ಕೆಎಂ-120 ಪೋಸ್ಟ್ ನ ಬಳಿ ಸ್ಮಾರಕವು ತಲೆಯೆತ್ತಿದ್ದು, ಇದು ವಿಶ್ವದ ಅತ್ಯಂತ ಕಠಿಣ ಮಿಲಿಟರಿ ನಿಯೋಜನೆ ವಲಯಗಳಲ್ಲಿ ಒಂದಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ, ಕಡಿಮೆ ಆಮ್ಲಜನಕ ಮಟ್ಟಗಳು ಮತ್ತು ಪ್ರತಿಕೂಲ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಸೇನಾ ದಿನದಂದು ಘೋಷಿಸಲಾಗಿದ್ದ ‘ಭಾರತ ರಣಭೂಮಿ ದರ್ಶನ’ ಉಪಕ್ರಮದಡಿ ಸ್ಮಾರಕವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಉಪಕ್ರಮವು ಪ್ರಮುಖ ಯುದ್ಧಭೂಮಿಗಳಿಗೆ ಭೇಟಿ ನೀಡಲು,ತಮ್ಮ ಗೌರವ ಸಲ್ಲಿಸಲು ಮತ್ತು ರಾಷ್ಟ್ರಸೇವೆಯಲ್ಲಿ ಮಾಡಿದ ತ್ಯಾಗದ ಮಹತ್ವವನ್ನು ಗ್ರಹಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುತ್ತದೆ. ತ್ಯಾಗ ಮತ್ತು ಶೌರ್ಯವನ್ನು ಸಂಕೇತಿಸುವ ಕೆಂಪು ಮತ್ತು ಬಿಳಿ ಗ್ರಾನೈಟ್ ಬಳಿಸಿ ನಿರ್ಮಿಸಲಾಗಿರುವ ಸ್ಮಾರಕವು ತ್ರಿಶೂಲ ಮತ್ತು ಡಮರು ರೂಪವನ್ನು ಹೊಂದಿದೆ. ಸ್ಮಾರಕದ ಮಧ್ಯಭಾಗದಲ್ಲಿ ಶಕ್ತಿಯನ್ನು ಪ್ರತಿನಿಧಿಸುವ ತ್ರಿಕೋನ ಸ್ಥಾಪನೆ,ಶಾಶ್ವತ ಜ್ವಾಲೆ ಮತ್ತು ರಾಷ್ಟ್ರಧ್ವಜದಿಂದ ಸುತ್ತುವರಿಯಲ್ಪಟ್ಟಿರುವ ಪರ್ವತಗಳಿವೆ. ಸ್ಮಾರಕದ ಸುತ್ತ ಗಲ್ವಾನ್ ಕಣಿವೆಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದ ಯೋಧರನ್ನು ಪ್ರತಿನಿಧಿಸುವ 20 ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಯುದ್ಧ ಸ್ಮಾರಕ ಸಂಕೀರ್ಣವು ಗಲ್ವಾನ್ ಘರ್ಷಣೆ,ಲಡಾಖ್ ನ ಮಿಲಿಟರಿ ಇತಿಹಾಸ ಮತ್ತು ತಲೆಮಾರುಗಳಾದ್ಯಂತ ಧೈರ್ಯದ ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಮತ್ತು ಡಿಜಿಟಲ್ ಗ್ಯಾಲರಿಯನ್ನು ಒಳಗೊಂಡಿದೆ. ಶೌರ್ಯ ಕಥನಗಳನ್ನು ಪ್ರದರ್ಶಿಸಲು ಸಭಾಂಗಣವೊಂದನ್ನು ಸಹ ನಿರ್ಮಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ಸೇನೆಯು ಮೂರು ಕೆಫೆಗಳು,ಸ್ಮರಣಿಕೆಗಳ ಮಳಿಗೆ,ಸೆಲ್ಫಿ ಪಾಯಿಂಟ್ ಮತ್ತು ಸೇನಾ ಮಾದರಿಯ ಮಾಹಿತಿ ಕೇಂದ್ರ ಸೇರಿದಂತೆ ಸೌಲಭ್ಯಗಳನ್ನು ಸ್ಥಾಪಿಸಿದೆ.
ಹೆಬ್ರಿ | ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ
ಹೆಬ್ರಿ, ಡಿ.7: ಬೆಳ್ವೆ, ಇದರ ವತಿಯಿಂದ ಬೆಳ್ವೆ ಆರ್ಡಿ ಗೋಳಿಯಂಗಡಿ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಬೆಳ್ವೆ ಶ್ರೀಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬೆಳ್ವೆ ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ್ ಶೆಟ್ಟಿ, ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರ್ಷ ಪೂಜಾರಿ, ನಮ್ಮ ನಾಡ ಒಕ್ಕೂಟ ಹೆಬ್ರಿ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಉಪಾಧ್ಯಕ್ಷ ಶರೀಫ್ ಸಾಹೇಬ್ ಬೆಳ್ವೆ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜೀವ ಆರ್ಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಏಳು ಮಂದಿ ರೋಗಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಒಬ್ಬರಿಗೆ ಕೃತಕ ಕಾಲು ಜೋಡಣೆಗೆ ಸಹಾಯ ಧನ ನೀಡಲಾಯಿತು. ಇದೆ ಸಂದರ್ಭದಲ್ಲಿ ಕುಂದಾಪುರ ಮಾವಿನಕಟ್ಟೆಯ ಬಡ ಯುವತಿಯ ವಿವಾಹಕ್ಕೆ ಸಹಾಯಧನ ನೀಡಲಾಯಿತು. ಮುಸ್ತಾಕ್ ಅಹಮದ್ ಬೆಳ್ವೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಬ್ದುಲ್ ಶುಕೂರ್ ಬೆಳ್ವೆ ಸಹಕರಿಸಿದರು. ಹುಝೈಫ್ ಕುರಾನ್ ಪಠಿಸಿದರು. ಮುಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿದರು. ಜಾಸಿಂ ಬೆಳ್ವೆ ವಂದಿಸಿದರು.
ಉಡುಪಿ | ವಿಕಸಿತ ಭಾರತ ನಿರ್ಮಾಣದಿಂದ ಅಂಬೇಡ್ಕರ್ಗೆ ನೈಜ ಗೌರವ: ಕಾರ್ಣಿಕ್
ಉಡುಪಿ, ಡಿ.7: ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ನೈಜ ಗೌರವ ಸಲ್ಲಿಸುವ ಅಗತ್ಯವಿದೆ ಎಂದು ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾ, ಜಿಲ್ಲಾ ಎಸ್.ಟಿ. ಮೋರ್ಚಾ ಮತ್ತು ಜಿಲ್ಲಾ ಒಬಿಸಿ ಮೋರ್ಚಾ ನೇತತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 42 ಸಾವಿರ ಕೋಟಿ ರೂ. ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಬಗ್ಗೆ ಮೋರ್ಚಾಗಳು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಜನರಿಗೆ ನೈಜ ವಿಚಾರಗಳನ್ನು ತಿಳಿಸಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾಧ್ಯಕ್ಷ ಕುಮಾರ್ದಾಸ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಉಪಸ್ಥಿತರಿದ್ದರು.
ಉತ್ತರ ಪ್ರದೇಶ: ಮದುವೆ ಸಂಭ್ರಮಾಚರಣೆಯ ಗುಂಡು ಹಾರಾಟಕ್ಕೆ ಇಬ್ಬರು ಬಾಲಕರು ಬಲಿ
ಎಟಾ: ಉತ್ತರ ಪ್ರದೇಶದ ಎಟಾ ಜಿಲ್ಲೆಯ ಉಮೈ ಅಸದ್ನಗರ ಗ್ರಾಮದಲ್ಲಿ ಶನಿವಾರ ರಾತ್ರಿ ವಿವಾಹ ಪೂರ್ವ ಸಂಭ್ರಮಾಚರಣೆಯ ಸಂದರ್ಭ ಬಂದೂಕಿನಿಂದ ಹಾರಿದ ಗುಂಡುಗಳು ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರನ್ನು ಬಲಿ ತೆಗೆದುಕೊಂಡಿವೆ. ಪೋಲಿಸರ ಪ್ರಕಾರ ಸಂಗೀತ ಮತ್ತು ನೃತ್ಯದೊಂದಿಗೆ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಗುಂಡಿನ ಶಬ್ದಗಳು ಕೇಳಿ ಬಂದಿದ್ದವು. ಅಸದುದ್ದೀನ್ ಎನ್ನುವವರ ಪುತ್ರ ಸುಹೈಲ್(12) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಮುನ್ನಾ ಖಾನ್ ಎಂಬವರ ಪುತ್ರ ಶಾಖಾದ್ (17) ತೀವ್ರವಾಗಿ ಗಾಯಗೊಂಡಿದ್ದ. ಇಬ್ಬರನ್ನೂ ತಕ್ಷಣ ಅಲಿಗಂಜ್ ನಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಸುಹೈಲ್ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ವೈದ್ಯರ ಸಲಹೆಯ ಮೇರೆಗೆ ಶಾಖಾದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೆಚ್ಚುವರಿ ಎಸ್ಪಿ ಶ್ವೇತಾಂಭ ಪಾಂಡೆ ಅವರು,ಘಟನೆಯು ಸಂಭ್ರಮಾಚರಣೆಯ ಗುಂಡು ಹಾರಾಟಕ್ಕೆ ಸಂಬಂಧಿಸಿರಬಹುದು ಎನ್ನುವುದನ್ನು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ,ಆದರೆ ತನಿಖೆಯ ಬಳಿಕವೇ ನಿಖರವಾದ ಕಾರಣ ಮತ್ತು ಗುಂಡು ಹಾರಿಸಿದವರು ಯಾರು ಎನ್ನುವುದು ದೃಢಪಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.
ಧರ್ಮ -ಸಂವಿಧಾನ ಒಂದಕ್ಕೊಂದು ಪೂರಕ : ನಟ ಪವನ್ ಕಲ್ಯಾಣ್
ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವ ಸಮಾರೋಪ
ರಾಯಚೂರು| ಗಾಣಧಾಳ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಗಲಾಟೆ, ಪಾದುಕೆ ಕಟ್ಟೆಗೆ ಬೀಗ: 32 ಜನರ ವಿರುದ್ಧ ಪ್ರಕರಣ ದಾಖಲು
ರಾಯಚೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಧಾಳ ಗ್ರಾಮದ ಪಂಚಮುಖಿ ಆಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಗಲಾಟೆ, ಪಾದುಕೆ ಕಟ್ಟೆಗೆ ಬೀಗ ಹಾಕಿದ ಕಾರಣಕ್ಕೆ 32 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದೇವಸ್ಥಾನವಾದ ಪಂಚಮುಖಿ ಗಾಣಧಾಳ ದೇವಸ್ಥಾನದಲ್ಲಿರುವ ಆಂಜನೇಯ್ಯ ಸ್ವಾಮಿ ಪಾದುಕೆ ಕಟ್ಟೆ ಹಾಗೂ ದೇವಸ್ಥಾನಕ್ಕೆ ಹೋಗುವ ಗೇಟ್ಗೆ ಡಿ.2ರ ಬೆಳಿಗ್ಗೆ 7.40ರ ಸುಮಾರಿಗೆ ಗಾಣಧಾಳ ಗ್ರಾಮದ ನಾಗರಾಜ ನಾಯಕ, ಶಾಮಾಚಾರ, ಗುರು ಭೀಮಾಚಾರ, ಅನಂತಾಚಾರ, ಭರತೀಶ ಆಚಾರ ಸೇರಿ 32 ಜನರು ಸೇರಿಕೊಂಡು ಬೀಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಣಧಾಳ ಗ್ರಾಮದ ಲಕ್ಷಣ ಎಂಬವರು ನೀಡಿದ ದೂರಿನ ಅನ್ವಯ ಇಡಪನೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಂಜನೇಯ್ಯ ಸ್ವಾಮಿ ಪಾದುಕೆ ಕಟ್ಟೆ ಹಾಗೂ ದೇವಸ್ಥಾನಕ್ಕೆ ಹೋಗುವ ಗೇಟ್ಗೆ ಬೀಗ ಹಾಕಿರುವ ಬಗ್ಗೆ ಕೇಳಲು ಹೋದ ನನ್ನ ಸಹೋದರ ದುಳ್ಳಯ್ಯನ ಮೇಲೆ ನಾಗರಾಜ ನಾಯಕ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಲಕ್ಷಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ʼಆರೆಸ್ಸೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ : ಎಚ್ಡಿಕೆ ವಿರುದ್ಧ ಎಚ್.ಸಿ.ಮಹದೇವಪ್ಪ ಟೀಕೆ
ಬೆಂಗಳೂರು : ʼಎಚ್.ಡಿ.ಕುಮಾರಸ್ವಾಮಿ ಅವರೇ, ಹಿಂದೆ ತಾವೇ ಭಗವದ್ಗೀತೆಯ ಅಪ್ರಸ್ತುತತೆಯ ಬಗ್ಗೆ ಮತ್ತು ಸರಕಾರವು ಹೊಂದಿರಬೇಕಾದ್ದ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದೀರಿ. ಈಗ ಕೋಮುವಾದಿ ಆರೆಸ್ಸೆಸ್ ಅನ್ನು ಬೆಂಬಲಿಸಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿʼ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ‘ಪಠ್ಯದಲ್ಲಿ ಭಗವದ್ಗೀತೆ ಬೋಧನೆ’ ಸಂಬಂಧ ಕೇಂದ್ರ ಶಿಕ್ಷಣ ಸಚಿವರಿಗೆ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿರುವ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ʼಮಕ್ಕಳ ತಲೆಗೆ ಕೇವಲ ಧಾರ್ಮಿಕತೆ ತುಂಬುವುದನ್ನು ಬಿಟ್ಟು ಒಂದಷ್ಟು ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸಮಾನತೆಯ ಜ್ಞಾನವನ್ನು ತುಂಬುವ ಕೆಲಸ ಮಾಡಿ. ಕಾರಣ ಈ ದೇಶಕ್ಕೆ ಬೇಕಿರುವುದು, ಸಂವಿಧಾನಾತ್ಮಕ ತಿಳುವಳಿಕೆಯೇ ವಿನಃ, ಧಾರ್ಮಿಕತೆಯ ಹಾದಿಯಲ್ಲ. ಈ ವಿಷಯ ನಿಮಗೂ ಮತ್ತು ಮತ್ತು ಜೆಡಿಎಸ್ ಪಕ್ಷಕ್ಕೂ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದುʼ ಎಂದು ಅವರು ತಿಳಿಸಿದ್ದಾರೆ.
ʻಕನ್ನಡ ಕಲಿಯದೆ ಬೆಂಗಳೂರಿಗೆ ಬರ್ಲೇಬೇಡಿ, ಇವ್ರೆಲ್ಲ ಎಂತವ್ರು ಗೊತ್ತಾ?ʼ; ದೆಹಲಿ ಯುವತಿಯ ವಿಡಿಯೋ ವೈರಲ್
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಆಗಾಗ್ಗೆ ಕನ್ನಡಿಗರು ಮತ್ತು ಹಿಂದಿ ಭಾಷಿಕರ ನಡುವೆ ವಿವಾದಗಳು ನಡೆಯುತ್ತಲೇ ಇರುತ್ತದೆ. ಬ್ಯಾಂಕ್ ಆಟೋ ಚಾಲಕರು ಹೀಗೆ ನಾನಾ ಕಡೆ. ಆಯಾ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಎಂಬುದು ಎಲ್ಲರ ಅಭಿಪ್ರಾಯ ಆದರೆ, ಕೆಲವು ಮಾತ್ರ ಜಡ ಹಿಡಿದಂತೆ ವರ್ತಿಸುತ್ತಾರೆ. ಇದೇ ಮನಸ್ಥಿತಿಯಲ್ಲಿದ್ದ ದೆಹಲಿ ಯುವತಿಯೊಬ್ಬರು ಈಗ ತಮ್ಮ ನಿಲುವು ಬದಲಿಸಿ ನಾನು ಕನ್ನಡ ಕಲಿಯಲೇ ಬೇಕು ಎಂದು ಕುಳಿತಿದ್ದಾರೆ. ಅವ್ರ ಈ ಹಠಕ್ಕೆ ಕಾರಣ ಏನು. ಬೆಂಗಳೂರಿನಲ್ಲಿ ಅಂತದ್ದೇನಾಯ್ತು ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ.
ನೈಟ್ ಕ್ಲಬ್ನಲ್ಲಿ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಅವಘಡ: ಗೋವಾ ಸಿಎಂ ಪ್ರಮೋದ್ ಸಾವಂತ್
ಸೀಮಿತ ನಿರ್ಗಮನ ದ್ವಾರಗಳಿಂದಾಗಿ ಸಾವು-ನೋವುಗಳ ಸಂಖ್ಯೆಯಲ್ಲಿ ಏರಿಕೆ
ಒಂದು ವರ್ಷದಲ್ಲಿ ₹300 ಕೋಟಿ ಮೌಲ್ಯದ ಡ್ರಗ್ಸ್ ವಶ: ಜಿ.ಪರಮೇಶ್ವರ್
ಕಳೆದ ಒಂದು ವರ್ಷದ ಅವಧಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ನಿರಂತರವಾಗಿ ಕಠಿಣ
Mangaluru | ಉರ್ವ ಪೊಂಪೈ ಮಾತೆಯ ವಾರ್ಷಿಕ ಮಹೋತ್ಸವ
ಮಂಗಳೂರು, ಡಿ.7: ನಗರದ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ರವಿವಾರ ನಡೆಯಿತು. ವಾರ್ಷಿಕ ಮಹೋತ್ಸವದ ಕೃತಜ್ಞತಾ ಪೂಜೆಯ ನೇತೃತ್ವ ವಹಿಸಿ ಆಶೀವರ್ಚನ ನೀಡಿದ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲಾ ಸಲ್ಡಾನಾ ಮಾತನಾಡಿ, ದೇವರ ಮೇಲಿನ ವಿಶ್ವಾಸವು ಯಾರನ್ನು ನಿರಾಶೆ ಮಾಡುವುದಿಲ್ಲ ಎನ್ನುವುದಕ್ಕೆ ಮೇರಿ ಮಾತೆ ಸಾಕ್ಷಿಯಾಗಿದ್ದಾರೆ. ಮೇರಿ ಮಾತೆಯ ಬದುಕು ಯೇಸುವಿನ ಹಾದಿಯಲ್ಲಿ ಸಾಗಿಕೊಂಡು ಬಂತು. ಅವರು ದೇವರ ಕೃಪೆಗೆ ಪಾತ್ರವಾದರು ಎಂದರು. ಈ ಸಂದರ್ಭ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ.ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ.ಲ್ಯಾನ್ಸನ್ ಪಿಂಟೋ, ಫಾ.ಮೈಕಲ್ ಲೋಬೋ ಸಹಿತ ಮಂಗಳೂರು ಧರ್ಮಪ್ರಾಂತದ 40ಕ್ಕೂ ಅಧಿಕ ಧರ್ಮಗುರುಗಳು ಪೂಜೆಯಲ್ಲಿ ಭಾಗವಹಿಸಿದರು. ಕೃತಜ್ಞತಾ ಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆ ನಡೆಯಿತು.
ಮೂಡುಬಿದಿರೆಯಲ್ಲಿ 'ಸಮಸ್ತ ಆದರ್ಶ ಮಹಾ ಸಮ್ಮೇಳನ ಪ್ರಯುಕ್ತ ಆಕರ್ಷಕ ಕಾಲ್ನಡಿಗೆ ಜಾಥಾ
ಮೂಡುಬಿದಿರೆ : ಸಮಸ್ತದ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಮಹಾ ಸಮ್ಮೇಳನದ ಅಂಗವಾಗಿ ರವಿವಾರ ಮಧ್ಯಾಹ್ನ ಮೂಡುಬಿದಿರೆ ಟೌನ್ ಮಸೀದಿಯಿಂದ ಲಾಡಿವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಏರ್ ಇಂಡಿಯಾ ಅವರು ರಫೀಕ್ ಧಾರಾಮಿ ಅವರಿಗೆ ಸಮಸ್ತದ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ಧಾರಿಮಿ, ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷರಾದ ಅಝೀಝ್ ಮಾಲಿಕ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ, ಎಂ.ಜಿ.ಮಹಮ್ಮದ್, ಅಬ್ದುಲ್ ಸಲಾಂ ಬೂಟ್ ಬಜಾರ್, ಅಬ್ದುಲ್ ರಝಾಕ್, ಮತ್ತಿತರರು ಈ ಸಂದರ್ಭದಲ್ಲಿದ್ದರು. ಜಾಥಾದಲ್ಲಿ ಮಕ್ಕಳಿಂದ ದಫ್, ಸ್ಕೌಟ್ಸ್ ಹಾಗೂ ಫ್ಲವರ್ ಶೋ ನಡೆಯಿತು.
ಮೂಡುಬಿದಿರೆ| ʼನಮ್ಮ ಮತ ನಮ್ಮ ಹಕ್ಕುʼ ಮತದಾನ ಗುರುತಿನ ಚೀಟಿ ಅಭಿಯಾನ
ಮೂಡುಬಿದಿರೆ: ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಮಂಗಳೂರು) ಮತ್ತು ಛಾಯಾ ಗ್ರಾಮ ವನ್ ಸೇವಾ ಕೇಂದ್ರ ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ 'ನಮ್ಮ ಮತ ನಮ್ಮ ಹಕ್ಕು' ಮತದಾನ ಗುರುತಿನ ಚೀಟಿ ಅಭಿಯಾನವು ಮೂಡುಬಿದಿರೆ ಗ್ಯಾರಂಟಿ ಅಧ್ಯಕ್ಷರ ಕಚೇರಿಯಲ್ಲಿ ಭಾನುವಾರ ನಡೆಯಿತು. ಪುರಸಭಾ ಹಿರಿಯ ಸದಸ್ಯರಾದ ಕೊರಗಪ್ಪ ಅವರು ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಭರತ್ ಮುಂಡೊಡಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಅಭಿನಂದನ್ ಬಳ್ಳಾಳ್, ಪುರಸಭಾ ಸದಸ್ಯರಾದ ಅಬ್ದುಲ್ ಕರೀಂ, ಜೆಸ್ಸಿ ಮೆನೇಜಸ್, ಸಂತೋಷ್ ಶೆಟ್ಟಿ, ಸುರೇಶ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾತ್ಯಾಯಿನಿ, ಗ್ಯಾರಂಟಿ ಅನುಷ್ಠಾನದ ತಾಲುಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಶಕುಂತಲಾ, ರಜನಿ, ಹರೀಶ್ ಆಚಾರ್ಯ, ಶೌಕತ್ ಆಲಿ, ರೆಕ್ಸಾನ್, ಪುರುಷೋತ್ತಮ್ ನಾಯಕ್, ಪ್ರಭಾಕರ್ ದರಗುಡ್ಡೆ, ಅಸ್ಲಾಂ ಪಡುಮಾರ್ನಾಡು, ಉಪಸ್ಥಿತರಿದ್ದರು. ಅಭಿಯಾನದಲ್ಲಿ ಸುಮಾರು 250 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಾರ್ವಜನಿಕರು ಹೊಸ ಮತದಾರರ ಗುರುತಿನ ಚೀಟಿ ನೋಂದಣಿ, ತಿದ್ದುಪಡಿ, ಸೇರ್ಪಡೆ ಮುಂತಾದ ಪ್ರಯೋಜನಗಳನ್ನು ಪಡೆದುಕೊಂಡರು. ರಮೇಶ್ ಶೆಟ್ಟಿ ಮಾರ್ನಾಡು ಸ್ವಾಗತಿಸಿದರು. ಛಾಯಾ ಸೇವಾ ಕೇಂದ್ರದ ಪ್ರಿಯಾ ಶೆಟ್ಟಿ, ರಕ್ಷಿತಾ, ಬುಶ್ರ, ಅನುಷಾ ಅಭಿಯಾನದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದರು.
ಮಾನವೀಯತೆಯ ಸಂದೇಶ ಸಾರಿದ ಸಾಂತ್ವನದ ಸಂಚಾರ : ವಿಶೇಷ ಚೇತನ ಮಕ್ಕಳೊಂದಿಗೆ 3ನೇ ವರ್ಷದ ಕಾರ್ಯಕ್ರಮ
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಆಯೋಜನೆ
ಮಂಡ್ಯ ಹೆದ್ದಾರಿಯಲ್ಲಿ 2 ಭೀಕರ ಅಪಘಾತ: ಕಾರು ಡಿಕ್ಕಿ ದಂಪತಿ ಸಾವು; ಬಸ್ ಪಲ್ಟಿ 30 ಮಂದಿಗೆ ಗಾಯ!
ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ನಾಗಮಂಗಲದಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಚಿಕ್ಕಮಗಳೂರಿನ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ದೂರು ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Nagamangala | ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಮೃತ್ಯು
ನಾಗಮಂಗಲ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಸೇತುವೆಗೆ ಗುದ್ದಿ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನಾಗತಿಹಳ್ಳಿ ಬಳಿ ನಡೆದಿರುವುದು ವರದಿಯಾಗಿದೆ. ಚಿಕ್ಕಮಂಗಳೂರು ಪಟ್ಟಣ ವಾಸಿ ಚಂದ್ರೇಗೌಡ (63) ಪತ್ನಿ ಸರೋಜಮ್ಮ(57) ಚಂದ್ರೇಗೌಡರ ಚಿಕ್ಕಮ್ಮನಾದ ಜಯಮ್ಮ (70 ) ಮೃತರು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಬಿಂಡಿಗನವಿಲೆ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುಂದಾಪುರ | ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿ
ಕುಂದಾಪುರ, ಡಿ.7: ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಆಂಗ್ಲ ಭಾಷೆಯ ಸಹಾಯವಿಲ್ಲದೆ ಕನ್ನಡದಲ್ಲೇ ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯುವುದು ಸಾಧ್ಯವಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದೆ ಎಂದು ಕರಾವಳಿ ವಿಕಿಪಿಡಿಯನ್ ಸ್ಥಾಪಕ ಕಾರ್ಯದರ್ಶಿ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕರು, ವಿಜ್ಞಾನಿ ಡಾ.ಯು.ಬಿ.ಪವನಜ ಹೇಳಿದ್ದಾರೆ. ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವ ಕನ್ನಡ ಫೌಂಡೇಶನ್ ನ ನಿರ್ದೇಶಕ, ವಿಜ್ಞಾನಿ ಆನಂದ ಸಾವಂತ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶಾಲೆಯ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶಾಲೆಯ ಕಂಪ್ಯೂಟರ್ ಲ್ಯಾಬ್ ನಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಪಡೆದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಡಯೆಟ್ ಉಡುಪಿಯ ಪ್ರಾಂಶುಪಾಲ ಅಶೋಕ ಕಾಮತ್, ಉಪನ್ಯಾಸಕ ರಾದ ನಾಗರಾಜ್, ಸುರೇಶ ಭಟ್, ಶಾಲಾ ಶಿಕ್ಷಕರಾದ ಸಂಜೀವ ಎಂ., ವಿಜಯಾ ಆರ್., ವಿಜಯ ಶೆಟ್ಟಿ, ಸ್ವಾತಿ ಬಿ. ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್. ವಂದಿಸಿದರು. ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ : ಮಹೇಶ್ ತೇಗಂಪುರೆ
ಬೀದರ್ : ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಆಗ ಮಾತ್ರ ಸಮಾನತೆ ಬರಲು ಸಾಧ್ಯವಿದೆ ಎಂದು ಮಹೇಶ್ ತೇಗಂಪುರೆ ತಿಳಿಸಿದರು. ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ತೇಗಂಪುರೆ, 1956ರ ಡಿ. 6 ರಂದು ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರಬಹುದು. ಆದರೆ ಅವರ ವಿಚಾರಗಳು, ತತ್ವ ಸಿದ್ಧಾಂತ ಇನ್ನು ಕೂಡ ಜಿವಂತವಾಗಿವೆ. ನಾವೆಲ್ಲರೂ ಅವರ ತತ್ವ ಸಿದ್ಧಾಂತದಡಿಯಲ್ಲಿ ಸಾಗಿದರೆ ಅವರು ಕಂಡಂತಹ ಸಮಾನತೆಯ ಕನಸು ನನಸು ಮಾಡಬಹುದು ಎಂದರು. ಇಂದಿನ ಯುವ ಪೀಳಿಗೆ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಒಳಗಾಗಿ ಪುಸ್ತಕದಿಂದ ದೂರ ಉಳಿಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಅಂಬೇಡ್ಕರ್ ಅವರ ತತ್ವದಡಿ ಸಾಗಲು ಸಾಧ್ಯವಿಲ್ಲ. ಹಾಗಾಯೇ ಅಂಬೇಡ್ಕರ್ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಯುವ ಜನತೆ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಮಖಂಡರಾದ ರವಿಕುಮಾರ್ ಶೇರಿಕಾರ್, ಜಗನ್ನಾಥ್ ಶೇರಿಕಾರ್, ಜೈರಾಜ್ ಕಾಂಬಳೆ, ರಘುನಾಥ್ ಸಿರ್ಸಿಕರ್,ಕಾಶಿನಾಥ್ ಕಾಂಬಳೆ, ಯುವ ಮುಖಂಡರಾದ ಲೊಕೇಶ್ ಸುಣಗಾರ್, ವಿಲಾಸ್ ತೇಗಂಪೂರೆ, ಆನಂದ್ ಸುಣಗಾರ್, ಶಿವುಕುಮಾರ್ ಕಾಂಬಳೆ, ಮಲ್ಲಿಕಾರ್ಜುನ್ ಮಚುಕುರೆ, ಯುವರಾಜ್ ಕಾಂಬಳೆ, ಅಂತೀಶ್ ಮೇಡಪಳ್ಯ, ಕಲ್ಲಪ್ಪ ಮೇತ್ರೆ, ಸಂತೋಷ್ ಕಾಂಬಳೆ, ತುಳಜಪ್ಪಾ ತೇಗಂಪೂರೆ ಹಾಗೂ ರಾಹುಲ್ ಮೇತ್ರೆ ಉಪಸ್ಥಿತರಿದ್ದರು.
ಕುಂದಾಪುರ | ಧನಾತ್ಮಕ ಚಿಂತನೆಯಿಂದ ಉತ್ತಮ ಆರೋಗ್ಯ: ಮೋಹನ್ ದಾಸ್ ಪೈ
ಕುಂದಾಪುರ, ಡಿ.7: ಯಾವುದೇ ಸಂದರ್ಭದಲ್ಲಿ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಅದರಿಂದ ನಮ್ಮ ಬೆಳವಣಿಗೆಯೂ ಸಾಧ್ಯ. ಉತ್ತಮ ಆರೋಗ್ಯಕ್ಕೂ ಇದು ಪೂರಕ. ಜೀವನದಲ್ಲಿ 60 ಅಂಚಿಗೆ ತಲುಪುವಾಗ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿದ್ದು, ಅದನ್ನೆಲ್ಲ ತೊಡೆದು ಹಾಕಲು ಧನಾತ್ಮಕ ಚಿಂತನೆಯೇ ಉತ್ತಮ ಮಾರ್ಗ ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಮುಖ್ಯಸ್ಥ ಮೋಹನ್ ದಾಸ್ ಪೈ ಹೇಳಿದ್ದಾರೆ. ಕುಂದಾಪುರ ಶೆರೋನ್ ಹೋಟೆಲಿನ ಸಭಾಂಗಣದಲ್ಲಿ ಶನಿವಾರ ನಡೆದ ಭಂಡಾರ್ಕಾರ್ಸ್ ಕಾಲೇಜಿನ 1984-85ರ ಬಿ.ಕಾಂ. ವಿದ್ಯಾರ್ಥಿಗಳು 40 ವರ್ಷಗಳ ಬಳಿಕ ಒಟ್ಟು ಸೇರಿದ ಸ್ನೇಹ ಪುನರ್ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ನಿವೃತ್ತ ಉಪನ್ಯಾಸಕ ಶಾಂತರಾಮ ಶುಭಹಾರೈಸಿದರು. ಕಾರ್ಯಕ್ರಮ ಸಂಘಟಕರಾದ ಮಂಜುನಾಥ ಸೇಲಂ, ಓಸ್ಲಿನ್ ರೆಬೆಲ್ಲೋ, ಗಂಗಾಧರ ಆಚಾರ್ಯ, ನಾಗರಾಜ ಶೇರಿಗಾರ್, ಜಗನ್ನಾಥ ಪುತ್ರನ್, ಪ್ರಕಾಶ ಬಾಳಿಗ, ಭಾಸ್ಕರ್ ಶೆಟ್ಟಿ, ಎಸ್.ವಿ.ಅರುಣ್, ಲೋಲಿಟಾ ಕಾಡ್ರಸ್, ರಘುರಾಮ ಶೆಟ್ಟಿ, ಪೂರ್ಣಿಮಾ, ಸೂರ್ಯ ಪ್ರಕಾಶ್, ಅಶೋಕ್ ಬಿ., ರಮೇಶ್ ಮಂಜು, ವಸಂತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಈಗ ವಿವಿಧೆಡೆಗಳಲ್ಲಿ ಬದುಕು ಕಟ್ಟಿಕೊಂಡಿರುವ 1984 -85ರ ಸಾಲಿನ ಬಿ.ಕಾಂ. ಪದವಿ ತರಗತಿಯ ಎ ಮತ್ತು ಬಿ ವಿಭಾಗದ ನೂರಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಈ ಸ್ನೇಹ ಪುನರ್ ಸಮ್ಮಿಲನದಲ್ಲಿ ಪಾಲ್ಗೊಂಡು, ಬಳಿಕ ಕಾಲೇಜಿನ ಆಗಿನ ತರಗತಿ ಕೋಣೆಗೂ ತೆರಳಿ, ಅಲ್ಲಿ ಮಕ್ಕಳಾಗುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕುವ ಮೂಲಕ ಸಂಭ್ರಮಿಸಿದರು. ಸ್ನೆಹಿತರು ಹಾಗೂ ಅವರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. 1984-85ರ ಬ್ಯಾಚಿನ ಬಿಕಾಂ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕ ಕೃಷ್ಣಾನಂದ ಚಾತ್ರ ಸ್ವಾಗತಿಸಿದರು. ರಾಜೀವ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ್ ಪಾಯಸ್ ವಂದಿಸಿದರು. ಪ್ರಭಾಕರ ಕುಂಭಾಶಿ ಕಾರ್ಯಕ್ರಮ ನಿರೂಪಿಸಿದರು.
ಝಾನ್ಸಿ (ಉತ್ತರ ಪ್ರದೇಶ): ಮುಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ನಿರ್ಮಾಣವಾಗುವ ಮಸೀದಿಗಳು ತೀವ್ರ ವಿರೋಧ ಎದುರಿಸಲಿವೆ ಎಂದು ರವಿವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ವಿನ್ಯಾಸ ಹೋಲುವ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಿಗೇ ಕೇಶವ್ ಪ್ರಸಾದ್ ಮೌರ್ಯರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಶಂಕುಸ್ಥಾಪನೆಯ ಬೆನ್ನಿಗೇ ಚುನಾವಣಾ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಕಾವೇರಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, ಮಸೀದಿ ನಿರ್ಮಾಣದ ಬಗ್ಗೆ ನಮಗ್ಯಾವ ತಕರಾರೂ ಇಲ್ಲ. ಆದರೆ, ಬಾಬರ್ ಹೆಸರಲ್ಲಿ ಯಾರಾದರೂ ಮಸೀದಿ ನಿರ್ಮಾಣ ಮಾಡಿದರೆ ನಾವು ಅದನ್ನು ವಿರೋಧ ಮಾತ್ರ ಮಾಡುವುದಿಲ್ಲ, ಬದಲಿಗೆ ಅದು ತಕ್ಷಣವೇ ನೆಲಸಮಗೊಳ್ಳುವುದನ್ನು ಖಾತರಿ ಪಡಿಸಲಿದ್ದೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
ಉಡುಪಿ | ಹಿರಿಯರಡೆಗೆ ನಮ್ಮ ನಡಿಗೆ ಕಾರ್ಯಕ್ರಮದಡಿಯಲ್ಲಿ ಪ್ರೊ.ಅ.ಸುಂದರಗೆ ಸನ್ಮಾನ
ಉಡುಪಿ, ಡಿ.7: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯರಡೆಗೆ ನಮ್ಮ ನಡಿಗೆ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಪುರಾತತ್ವ ರತ್ನ ಪ್ರೊ.ಅ.ಸುಂದರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಮೊಗೇರಿ, ನೀಲಾವರ ಶ್ರೀಮಹಿಷ ಮರ್ದಿನಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅನುಷಾ, ಕಸಾಪ ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿ ಮಣಿಪಾಲ, ಕೊ.ಚಂದ್ರಶೇಖರ ನಾವಡ, ಸುಂದರ ಅವರ ಪುತ್ರ ಅನಂತ ಅಡಿಗ, ಆದಿತ್ಯ, ನಿವೃತ್ತ ಶಿಕ್ಷಕಿ ಸೀತಾಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಶಾಂತಿ, ಸಮೃದ್ಧಿ ಕುರ್ಆನಿನ ಬೆಳಕಿನಲ್ಲಿ ಕುರಿತು ಪ್ರವಚನ
ಬೀದರ್: ಕುರ್ಆನ್ ಸೃಷ್ಟಿಕರ್ತ ಹಾಗೂ ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು. ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಏರ್ಪಡಿಸಿದ್ದ 'ಶಾಂತಿ ಮತ್ತು ಸಮೃದ್ಧಿ ಕುರ್ಆನಿನ ಬೆಳಕಿನಲ್ಲಿ' ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ಕುರ್ಆನ್ ಅಧ್ಯಾಯ 17ರ ಸೂಕ್ತ 23 ರಿಂದ 30ರವರೆಗೆ ಪಠಿಸಿ, ಅವುಗಳ ವಿವರಣೆ ನೀಡಿದರು. ಸೃಷ್ಟಿಕರ್ತ-ಮಾನವ ಮತ್ತು ಮಾನವ-ಮಾನವರ ಮಧ್ಯದ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ. 'ಅಸ್ಸಲಾಮ್ ಅಲೈಕುಮ್ ರಹಮತುಲ್ಲಾಹೀ ಬರಕಾತುಹು' ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು ಎಂದು ತಿಳಿಸಿದರು. ನಮ್ಮೆಲ್ಲರ ಪ್ರಭು ಏಕದೇವನು, ಇಡೀ ಪ್ರಪಂಚದ ನಿಯಂತ್ರಕನೂ ಆಗಿದ್ದಾನೆ. ಅವನ ಹೊರತು ಬೇರೆ ಯಾರೂ ಆರಾಧ್ಯರಿಲ್ಲ. ಅವನಿಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಬಾಧಿಸುವುದಿಲ್ಲ. ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಎಂದು ಅವನ ಗುಣ ವಿಶೇಷತೆಗಳನ್ನು ಅವರು ವಿವರಿಸಿದರು. ದಿವ್ಯ ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಸದ್ಗುರು ಮಾತೆ ಸತ್ಯದೇವಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ. ದೇವನ ಆರಾಧನೆ, ಕರುಣೆ, ದಯೆ, ನ್ಯಾಯ, ಸಮಾನತೆಯಿಂದ ಶಾಂತಿ ಲಭಿಸುತ್ತದೆ. ಮುಹಮ್ಮದ್(ಸ) ಹಾಗೂ ಬಸವಣ್ಣ ಶಾಂತಿ, ಸೌಹಾರ್ದತೆಯ ಪ್ರತೀಕ ಎಂದು ಬಣ್ಣಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್ಜಿ ಅವರು ಮಾತನಾಡಿ, ದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ. ಆರಾಮ ವಲಯ ಹಾಗೂ ವಿಜ್ಞಾನ ಪ್ರಗತಿಯಿಂದ ಶಾಂತಿ ಸಿಗುವುದಿಲ್ಲ. ಮನುಷ್ಯ ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಸ್ವರೂಪನಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ. ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ, ಅನ್ಯಾಯವೇ ಅಶಾಂತಿಗೆ ಕಾರಣವಾಗಿದೆ. ಮನಸ್ಸಿನ ಶಾಂತಿ ಪ್ರಭುವಿನ ಸ್ಮರಣೆಯಲ್ಲಿದೆ. ನಾವು ಯಾವಾಗಲೂ ಸೃಷ್ಟಿಕರ್ತನನ್ನು ಸ್ಮರಿಸುತ್ತ, ಅವನನ್ನೇ ಪ್ರಶಂಸಿಸಬೇಕು. ನಮ್ಮ ತಂದೆ ತಾಯಿ ಒಂದೇ. ನಾವೆಲ್ಲ ಸಹೋದರರು ಎಂಬ ಭಾವನೆಯಿಂದ ಸಮಾನತೆ, ಶಾಂತಿ ಸ್ಥಾಪನೆಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್ ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಶೇಖ್ ಸುಮಯ್ಯಾ ಕುಲ್ಸುಮ್, ಡಾ. ವಿಜಯಶ್ರೀ ಎಸ್.ಶೆಟ್ಟಿ, ಡಾ. ಸುಮಯ್ಯ ಫಾತಿಮಾ, ಸಾಹಿತಿ ಡಾ. ಸುನಿತಾ ಕೂಡ್ಲಿಕರ್, ಡಾ.ಅಮಲ್ ಷರೀಫ್, ಡಾ. ದೀಪಾ ನಂದಿ, ಬಿಲ್ಕೀಸ್ ಫಾತಿಮಾ, ಬುಶ್ರಾ ಜಮಾಲ್, ಬುತುಲ್ ಸಯೀದ್ ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ ಐಮನ್, ರುಖಿಯ್ಯಾ ಫಾತಿಮಾ, ಡಾ. ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಅವರು ಉಪಸ್ಥಿತರಿದ್ದರು.
ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಡಿಸಿಎಂ ಸೂಚನೆ
ಬೆಂಗಳೂರು : ದೇಶದ ಉದ್ಯಾನ ನಗರಿ ಹಾಗೂ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾಡಿದ ಮನವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣವೇ ಸ್ಪಂದಿಸಿದ್ದು, ಈ ವಿಷಯದ ಕುರಿತು ತುರ್ತು ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ದಿಲ್ಲಿಯಲ್ಲಿರುವಂತೆ ಬೆಂಗಳೂರು ಸಹ ಭವಿಷ್ಯದಲ್ಲಿ ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದಿನೇಶ್ ಗೂಳಿಗೌಡ ಅವರು ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಬೆಂಗಳೂರಿನ ವಾಯು ಮಾಲಿನ್ಯದ ಅಪಾಯವನ್ನು ತಡೆಗಟ್ಟಲು ತುರ್ತು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ರಚಿಸುವಂತೆ ಆದೇಶಿಸಿದ್ದಾರೆ. ಮನವಿ ಪತ್ರದಲ್ಲಿನ ಮುಖ್ಯಾಂಶಗಳು: ಬೆಂಗಳೂರಿನಲ್ಲಿ 1,23,24,919 ನೋಂದಾಯಿತ ಮೋಟರ್ ವಾಹನಗಳಿವೆ. ಜನಸಂಖ್ಯೆ (ಸುಮಾರು 1.47 ಕೋಟಿ) ಮತ್ತು ವಾಹನಗಳ ಅನುಪಾತವು ಸರಿಸುಮಾರು ಪ್ರತಿ ನಾಗರಿಕರಿಗೆ ಒಂದು ವಾಹನ ಎಂಬಂತಾಗಿದೆ. ನಿರಂತರ ನೋಂದಣಿ ಹೆಚ್ಚಳ: ಪ್ರತಿದಿನ ಸರಾಸರಿ 2,563 ಹೊಸ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಇವುಗಳಲ್ಲಿ 84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಾಗಿವೆ ಎಂದು ಅವರು ಗಮನ ಸೆಳೆದಿದ್ದಾರೆ. ವಾಯು ಗುಣಮಟ್ಟದ ಸೂಚ್ಯಂಕ : ಬೆಂಗಳೂರಿನ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 50ನ್ನು ಮೀರಿ 70 ‘ಮಧ್ಯಮ’ ವರ್ಗದಲ್ಲಿದೆ. ಆದರೆ ಮುಂದಿನ 5-10 ವರ್ಷಗಳಲ್ಲಿ ನಗರವು 'ತೀವ್ರ' ಮಾಲಿನ್ಯದ ಮಟ್ಟ ತಲುಪಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ : ಮಾಲಿನ್ಯದಿಂದಾಗಿ ಮಕ್ಕಳು, ಹಿರಿಯರು ಉಸಿರಾಟದ ತೊಂದರೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತುರ್ತು ಸಮಿತಿ ರಚನೆಗೆ ಬೇಡಿಕೆ: ಪರಿಸರ ವಿಜ್ಞಾನಿಗಳು, ಸಂಚಾರ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕು ಎಂದು ಅವರು ಕೋರಿದ್ದಾರೆ. ತಜ್ಞರ ಸಮಿತಿಯ ಕರ್ತವ್ಯಗಳು ಮತ್ತು ಧ್ಯೇಯೋದ್ದೇಶಗಳು: ಮುಂದಿನ ದಶಕದಲ್ಲಿ ಬೆಂಗಳೂರಿನ ಮಾಲಿನ್ಯದ ಪಥವನ್ನು ನಿರ್ಣಯಿಸುವುದು. ತುರ್ತು ಮತ್ತು ದೀರ್ಘಕಾಲೀನ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಶಿಫಾರಸು ಮಾಡುವುದು. ವಾಹನ ಹೊರಸೂಸುವಿಕೆಯ ನಿಯಮಗಳು ಮತ್ತು ಅವುಗಳ ಜಾರಿಯನ್ನು ಬಲಪಡಿಸುವುದು. ಹೊಸ ವಾಹನ ನೋಂದಣಿ ಮತ್ತು ಸಂಚಾರ ದಟ್ಟಣೆಯನ್ನು ನಿರ್ವಹಿಸುವ ತಂತ್ರಗಳನ್ನು ರೂಪಿಸುವುದು. ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕೆಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.
ಉಡುಪಿ | ಎರಡು ದಿನಗಳ ಕರಾವಳಿ ಭಜನಾ ಸಮಾವೇಶ ಸಮಾರೋಪ
ಉಡುಪಿ, ಡಿ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವುಗಳ ಸಹಯೋಗದೊಂದಿಗೆ ಎರಡು ದಿನಗಳ ಕರಾವಳಿ ಭಜನಾ ಸಮಾವೇಶದ ಸಮಾರೋಪ ಸಮಾರಂಭ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಟಿ.ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ರವಿವಾರ ನಡೆಯಿತು. ಸಮಾರೋಪ ನುಡಿಗಳನ್ನಾಡಿದ ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್.ಸಾಮಗ, ಭಜನೆ ಎಂಬುದು ಬಹಳ ಮುಖ್ಯ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮಗಳು ಇದನ್ನು ಪಾಲಿಸಬೇಕು. ಭಜನೆಯಿಂದ ಮನಸ್ಸು ನೆಮ್ಮದಿ, ಶಾಂತಿ ಹಾಗೂ ಏಕಾಗ್ರತೆ ಸಿಗಲು ಸಾಧ್ಯವಾಗುತ್ತದೆ. ಆದುದರಿಂದ ಪ್ರತಿದಿನ ಮನೆಗಳಲ್ಲಿ ಭಜನೆ ಹಾಡುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಮಾತನಾಡಿದರು. ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಉಡುಪಿ, ಡಿ.7: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖಂಡರನ್ನು ಒಳಗೊಂಡ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸುವಿಚಾರ ಚಿಂತನ-ಮಂಥನ ತಂಡದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಧರ್ಮ ಪ್ರಾಂತ್ಯದ ಮಾಧ್ಯಮ ಸಂಯೋಜಕ, ಪತ್ರಕರ್ತ ಮೈಕಲ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. ಕಕ್ಕುಂಜೆಯ ಅನುಗ್ರಹ ಪಾಲನ ಕೇಂದ್ರದಲ್ಲಿ ರವಿವಾರ ನಡೆದ ಸುವಿಚಾರ ಚಿಂತನ-ಮಂಥನ ತಂಡದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಮಾಜಿ ಅಧ್ಯಕ್ಷೆ ಮೇರಿ ಡಿಸೋಜ ಉದ್ಯಾವರ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರಗಳಾದ ಮಾಧ್ಯಮ, ವೈದ್ಯಕೀಯ, ಕಾನೂನು, ಸಾಮಾಜಿಕ ಕಾರ್ಯಕರ್ತರು ನರ್ಸಿಂಗ್, ಕೃಷಿ, ಉದ್ಯಮಿಗಳು, ರಾಜಕೀಯ ಮುಖಂಡರು, ಕಲೆ ಮತ್ತು ನಾಟಕ ಕ್ಷೇತ್ರದ ಪ್ರತಿನಿಧಿಗಳನ್ನೊಳಗೊಂಡಿರುವ ತಂಡವು ಕರ್ನಾಟಕ ಪ್ರಾಂತೀಯ ಮಟ್ಟದ ಧರ್ಮಾಧ್ಯಕ್ಷರುಗಳ ಸಭೆಯ ಅಧೀನದಲ್ಲಿ ಕರ್ನಾಟಕದ ಎಲ್ಲಾ ಧರ್ಮಪ್ರಾಂತ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆಯ್ಕೆ ಪ್ರಕ್ರಿಯೆಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಕರ್ನಾಟಕ ಪ್ರಾಂತ್ಯದ ಚಿಂತನ-ಮಂಥನ ತಂಡದ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂರ್ಜ್ಞೊ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಉಪಸ್ಥಿತರಿದ್ದರು
Udupi | ಪ್ರತಿಭೆಗಳ ಸಮರ್ಪಕ ಬಳಕೆಯಿಂದ ನಾಯಕತ್ವ ಪ್ರದರ್ಶನ: ಬಿಷಪ್ ಪೀಟರ್ ಮಚಾದೊ
ಉಡುಪಿ ಸುವಿಚಾರ ಚಿಂತನ-ಮಂಥನ ತಂಡ ಉದ್ಘಾಟನೆ
ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಾಧ್ಯಮದ ಕೊಡುಗೆ ಅಪಾರ : ಸಚಿವ ಈಶ್ವರ್ ಖಂಡ್ರೆ
ಬೀದರ್: ವರದಿಗಾರಿಕೆ ಎನ್ನುವುದು ಅಧಿಕಾರ ಅಲ್ಲ, ಅದೊಂದು ಮಹತ್ವದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಅಭಿನಂದನಾ ಸಮಾರಂಭ ಹಾಗೂ ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯ ಚೆಕ್ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಹಿಂದಿಗಿಂತ ಪ್ರಸ್ತುತ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ. ಸೌಹಾರ್ದ ಭಾರತ ಕಟ್ಟಬೇಕಾದರೆ ನೈಜ ವರದಿಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದರು. ಮಾಧ್ಯಮಗಳು ತಮ್ಮ ವರದಿಯಲ್ಲಿ ನೈಜತೆ ಮತ್ತು ಪಾರದರ್ಶಕತೆ ಕಾಪಾಡಿಕೊಂಡಾಗ ಮಾಧ್ಯಮರಂಗಕ್ಕೆ ಗೌರವ ಹೆಚ್ಚಲು ಸಾಧ್ಯವಾಗುತ್ತದೆ. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ಸೇರಿದಂತೆ ಹಲವರು ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪತ್ರಕರ್ತರಿಗೆ ಸೂಕ್ತ ಭದ್ರತೆ, ರಕ್ಷಣೆ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಅನ್ಯಾಯದ ವಿರುದ್ಧ ಪತ್ರಕರ್ತರಾಗಿ ಡಾ.ಅಂಬೇಡ್ಕರ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಅವರ ಪರಿನಿಬ್ಬಾಣ ದಿನದಂದೇ ಅಭಿನಂದನಾ ಸಮಾರಂಭ ಹಾಗೂ ದತ್ತಿ ನಿಧಿ ಚೆಕ್ ಹಸ್ತಾಂತರ ಕಾರ್ಯಕ್ರಮ ಆಯೋಜಿಸಿದ್ದು ಉತ್ತಮವಾಗಿದೆ ಎಂದು ಹೇಳಿದ್ದಾರೆ. ಸಂಘದ ನೂತನ ರಾಜ್ಯಧ್ಯಕ್ಷ ಶಿವಾನಂದ್ ತಗಡೂರು ಅವರು ಸರಳ, ಸಜ್ಜನಿಕೆ ವ್ಯಕ್ತಿ. ಕೋವಿಡ್ ವೇಳೆ ಜೀವದ ಹಂಗು ತೊರೆದು ಪತ್ರಕರ್ತರ ಕೆಲಸ ಮಾಡಿದ್ದಾರೆ. ಕೋವಿಡ್ ವೇಳೆ ಮಡಿದ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಿದ್ದರು. ಯಾವುದೇ ಚುನಾವಣೆ ಇಲ್ಲದೆ ಸಂಘದ ಬೀದರ್ ಜಿಲ್ಲಾ ಘಟಕಕ್ಕೆ ಆನಂದ್ ದೇವಪ್ಪ ಅವರನ್ನು ನೇಮಕ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕ ರಚನೆ ಸಂಬಂಧ ಅಡಾಕ್ ಸಮಿತಿ ರಚಿಸಿಸಿದ್ದು, ಈ ಸಮಿತಿಗೆ ಆನಂದ್ ದೇವಪ್ಪ ಅವರನ್ನು ಮುಖ್ಯಸ್ಥರನ್ನಾಗಿ ಹಾಗೂ ಅಪ್ಪಾರಾವ್ ಸೌದಿ ಮತ್ತು ಶಿವಕುಮಾರ್ ಸ್ವಾಮಿ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಬೀದರ್ ಜಿಲ್ಲೆಯ ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಹೇಳಿದರು. ಮೂರು ದಶಕಗಳ ಬಸ್ ಪಾಸ್ ಹೋರಾಟವನ್ನು ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿದೆ. ಎಲ್ಲಾ ಪತ್ರಕರ್ತರು ಉಚಿತವಾಗಿ ಪ್ರಯಾಣ ಮಾಡಬಹುದು. ಪತ್ರಕರ್ತರಿಗೆ ಆರೋಗ್ಯ ಭಾಗ್ಯ ನೀಡುವ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಮಾಧ್ಯಮ ಪಟ್ಟಿಯಲ್ಲಿ ಇರುವವರೆಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಎಲ್ಲಾ ಪತ್ರಕರ್ತರಿಗೆ ಈ ಯೋಜನೆಯಡಿ ತರುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ್ ಕಮಿಟಿ ಮುಖ್ಯಸ್ಥ ಆನಂದ್ ದೇವಪ್ಪ, ಪ್ರಮುಖರಾದ ದೀಪಕ್ ವಾಲಿ, ಅಲಿಬಾಬಾ, ಸಿದ್ರಾಮಯ್ಯ ಸ್ವಾಮಿ, ಬಸವರಾಜ್ ಕಾಮಶೆಟ್ಟಿ, ಅಪ್ಪಾರಾವ್ ಸೌದಿ, ಮಲ್ಲಿಕಾರ್ಜುನ್ ಮರಖಲೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಬಾಬು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ್ ಬಿರಾದಾರ್ ಸ್ವಾಗತಿಸಿದರು. ಮಾಳಪ್ಪ ಅಡಸಾರೆ, ಶಿವಕುಮಾರ್ ಸ್ವಾಮಿ ನಿರೂಪಿಸಿದರು.
Malpe | ಸಮವಸ್ತ್ರದ ಪಥ ಸಂಚಲನದಿಂದ ಸಮಾನತೆ ಅಸಾಧ್ಯ : ಜಯನ್ ಮಲ್ಪೆ
ಮಲ್ಪೆ, ಡಿ.7: ಮನಸ್ಸೆಲ್ಲ ವಿಕಾರ, ದೇಹದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸಿ ಬೀದಿಬೀದಿಗಳಲ್ಲಿ ಪಥ ಸಂಚಲನ ನಡೆಸಿದರೆ ದೇಶದಲ್ಲಿ ಸಮಾನತೆ ಮೂಡಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ. ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ಶನಿವಾರ ಮಲ್ಪೆಯಲ್ಲಿ ಆಯೋಜಿಸಲಾದ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಎಂಬ ಕ್ಯಾಂಡಲ್ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ದೇಶದಲ್ಲಿ ಸಮಾನತೆಯನ್ನು ಒಪ್ಪದ ಆರೆಸ್ಸೆಸ್ ಶಿಸ್ತಿನ ಹೆಸರಿನಲ್ಲಿ ಜೀವ ವಿರೋಧಿ ಕೆಲಸ ಮಾಡುತ್ತಾ ದಲಿತರನ್ನು ಮತ್ತು ಹಿಂದುಳಿದವರನ್ನು ಬ್ರೈನ್ವಾಶ್ ಮಾಡಲು ಬೈಠಕ್ ಗಳನ್ನು ನಡೆಸುತ್ತಿದೆ. ಶಿಸ್ತಿನ ಹೆಸರಿನಲ್ಲಿ ಯಾರೋ ಹಾಕಿದ ಗೆರೆಯನ್ನು ದಾಟದೆ ಹೋಗುವ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಜೈಲಿಗೆ ತಳುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕಣವನ್ನು ಇಂದು ವ್ಯಾಪಾರಿಕಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ. ಅಂಬೇಡ್ಕರ್ ಅವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು. ದಲಿತ ಹಕ್ಕುಗಳ ಹೋರಾಟ ಸುತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ದಲಿತ ಚಳುವಳಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು. ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಮಹಾಬಲ ಕುಂದರ್, ಸತೀಶ್ ನಾಯ್ಕ, ರಮೇಶ್ ತಿಂಗಳಾಯ, ವೆಂಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ, ಮಾಧವ ಬನ್ನಂಜೆ, ಸತೀಶ್ ಕೊಡವೂರು, ಸುದರ್ಶನ್ ಪಡುಕರೆ, ಯಾದವ ಅಮೀನ್ ಕೊಳ, ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಮೀನಗರ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಕೃಷ್ಣ ಶ್ರೀಯಾನ್, ಸುಮಿತ್ ನೆರ್ಗಿ, ಗುಣವಂತ ತೋಟ್ಟಂ, ಭಗವಾನ್, ವಿನಯ ಬಲರಾಮನಗರ, ಸತೀಶ್ ಕಪ್ಪೆಟ್ಟು, ದೀಪಕ್, ಸಂದ್ಯಾ ಕೃಷ್ಣ, ಪೂರ್ಣಿಮ, ಸಂದ್ಯಾ ತಿಲಕ್, ಪ್ರಮೀಳಾ, ಶಶಿಕಲಾ ತೊಟ್ಟಂ, ವಿನಯ ಕೊಡಂಕೂರು, ವಿನೋದ ಮುಂತಾದವರು ಉಪಸ್ಥಿತರಿದ್ದರು.
‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್’: 3,000ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
ಉಡುಪಿ, ಡಿ.7: ದೈಹಿಕ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರನ್ನರ್ಸ್ ಕ್ಲಬ್ ವತಿಯಿಂದ ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025ನ್ನು ಉಡುಪಿಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಅದಾನಿ ಗ್ರೂಪ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಮಿಷನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಓಟ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಅದೇ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ವಿವಿಧ ವಯೋಮಾನದ ಪುರುಷ, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ 21 ಕಿ.ಮಿ., 10ಕಿ.ಮಿ., 5 ಕಿ.ಮಿ., 3ಕಿ.ಮಿ. ಸಾರಿ ರನ್ ಹಾಗೂ ಫನ್ ರನ್ ಗಳಲ್ಲಿ 3,000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಇಂದಿನ ಜೀವನ ಶೈಲಿಯಿಂದಾಗಿ ಯಾರಿಗೂ ವ್ಯಾಯಾಮ ಇಲ್ಲದಂತೆ ಆಗಿದೆ. ಆ ನಿಟ್ಟಿನಲ್ಲಿ ಇಂತಹ ಮ್ಯಾರಾಥಾನ್ ಆಯೋಜಿಸುವುದು ಅತೀ ಅಗತ್ಯವಾಗಿದೆ. ಫಿಟ್ನೆಸ್ ಎಂಬುದು ನಮ್ಮ ಬದುಕಿನ ಭಾಗ. ಆಗ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ ಎಂದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಜೀವನ ಶೈಲಿಯ ಬದಲಾವಣೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇದನ್ನು ಬದಲಾಯಿಸಿಕೊಳ್ಳುವುದು ಅತೀ ಅಗತ್ಯ. ಮಂದಿರ ಮಸೀದಿಗಳಿಗೆ ಹೋದರೆ ಮನಸ್ಸು ಶಾಂತಿಯಾದರೆ, ಕ್ರೀಡಾಂಗಣಕ್ಕೆ ಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇ ದೇಹಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್, ರನ್ನರ್ ಕ್ಲಬ್ ಅಧ್ಯಕ್ಷ ಡಾ.ತಿಲಕ್ ಚಂದ್ರಪಾಲ್, ಕಾರ್ಯದರ್ಶಿ ದಿವಾಕರ್, ಕ್ಲಬ್ನ ಜೊತೆ ಕಾರ್ಯದರ್ಶಿ ದಿವ್ಯೇಶ್ ಶೆಟ್ಟಿ ಉಪಸ್ಥಿತರಿದ್ದರು. 21 ಕಿ.ಮೀ. ಮ್ಯಾರಥಾನ್ ವಿಜೇತರು 21ಕೆ 18-35ವಯೋಮಿತಿ ಪುರುಷ ವಿಭಾಗ: ಪ್ರ-ಕಿರಣ್ ಕೆ., ದ್ವಿ- ಸುಜಿತ್ ಟಿ.ಆರ್., ತೃ- ವಿಶಾಲ್ ಕೆ. ಮಹಿಳಾ ವಿಭಾಗ: ಪ್ರ- ನಂದಿನಿ ಜಿ., ದ್ವಿ-ಸಾಕ್ಷಿ ಕುಲಾಲ್, ತೃ- ಪ್ರತೀಕ್ಷಾ. 36-45ವಯೋಮಿತಿ ಪುರುಷ ವಿಭಾಗ: ಪ್ರ-ಸಿಮೋನ್ ಕೆ.ಟಿ., ದ್ವಿ- ನಂದೇಶ್ ಗಾಂವ್ಕರ್, ತೃ- ಪ್ರಶಾಂತ್ ಎಚ್.ಎಸ್. ಮಹಿಳಾ ವಿಭಾಗಢ ಪ್ರ- ಆಶಾ ಪಿ., ದ್ವಿ- ಮೆಹ್ವಿಶ್ ಹುಸೇನ್, ತೃ-ಜುಲೀ. 46-45ವಯೋಮಿತಿ ಪುರುಷ ವಿಭಾಗ: ಪ್ರ- ಜೋಸೆಫ್ ಇಲಿಕಲ್, ದ್ವಿ- ಸುನೀಲ್ ಮೆನನ್, ತೃ- ಶಿವಾನಂದ ಶೆಟ್ಟಿ. ಮಹಿಳಾ ವಿಭಾಗ: ಪ್ರ- ಜಸೀನಾ, ದ್ವಿ- ಡಾ.ಪ್ರಮೀಳಾ ಎಂ.ಡಿ. 56ವರ್ಷ ಮೇಲ್ಪಟ್ಟ ಪುರುಷ ವಿಭಾಗ: ಪ್ರ- ಬಾಲಕೃಷ್ಣ ಟಿ., ದ್ವಿ- ವಿನಯ್ ಪ್ರಭು, ತೃ-ಅಂಬಿಗಬತಿ. ಮಹಿಳಾ ವಿಭಾಗ- ಪ್ರ- ಪೂರ್ಣಿಮಾ ಕೆ., ದ್ವಿ- ಡಾ.ಸಂಧ್ಯಾ, ತೃ- ವಿದ್ಯಾ ಪ್ರತಾಪ್. ವಿದ್ಯಾರ್ಥಿಗಳ 5 ಕಿ.ಮೀ. ಹಾಗೂ 3ಕಿ.ಮೀ. ಓಟದಲ್ಲಿ ಸಮಗ್ರ ಪ್ರಶಸ್ತಿಯನ್ನು ನಿಟ್ಟೆ ಸ್ಕೂಲ್ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಪಾಜಕ ಆನಂದ ತೀರ್ಥ ಶಾಲೆ ತನ್ನದಾಗಿಸಿಕೊಂಡಿತು.
ಪೋಷಕರ ವಾರ್ಷಿಕ ಆದಾಯ ಮಿತಿ ಮೀರಿದ್ದರೆ ಮೀಸಲಾತಿ ಪಡೆಯಲು ಅನರ್ಹ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳ ಪೋಷಕರ ಆದಾಯ ನಿಗದಿತ ಮಿತಿ ಮೀರಿದರೆ, ಅವರು ಕೆನೆ ಪದರಕ್ಕೆ ಸೇರುತ್ತಾರೆ. ಇದರಿಂದ ಮೀಸಲಾತಿ ಸೌಲಭ್ಯ ಪಡೆಯಲು ಅನರ್ಹರಾಗುತ್ತಾರೆ. ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿದೆ.
Dk Shivakumar: ಬಿಜೆಪಿ ಮಾಡಿರುವ ಕೊಳಕು ನಾವು ಸ್ವಚ್ಛಗೊಳಿಸುತ್ತಿದ್ದೇವೆ: ಡಿ.ಕೆ ಶಿವಕುಮಾರ್!
Dk Shivakumar: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ನಮ್ಮ ತಲೆಗೆ ಕಟ್ಟುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈಚೆಗೆ ಮಾಡಿರುವ ಟ್ವೀಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ತನ್ನ ಭ್ರಷ್ಟಾಚಾರವನ್ನು ಅರಿವಿಲ್ಲದೆಯೇ ಬಹಿರಂಗಪಡಿಸಿದೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ
ʻಸರ್ಕಾರ ರೈತರ ಜೊತೆ ಚೆಲ್ಲಾಟ ನಿಲ್ಲಿಸಿ, 100 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲಿ': ಬಸವರಾಜ ಬೊಮ್ಮಾಯಿ
ಕರ್ನಾಟಕ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ದಾಖಲೆ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳವನ್ನು ಕೇವಲ ಇಪ್ಪತ್ತು ಕ್ವಿಂಟಾಲ್ ಖರೀದಿಸುವುದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಹಾವೇರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೂ, ಖರೀದಿ ಕೇಂದ್ರಗಳು ಸರಿಯಾಗಿ ಆರಂಭವಾಗಿಲ್ಲ. ರೈತರ ಬೇಡಿಕೆಯಂತೆ ಕನಿಷ್ಠ ನೂರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಿ, ಎಂಎಸ್ ಪಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಹಣ ನೀಡಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದು ಬೊಮ್ಮಾಯಿ ಅವರು ಹೇಳಿದರು.
RCB Good News: ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಕೊಟ್ಟ ಡಿ.ಕೆ.ಶಿವಕುಮಾರ್
ಆರ್ಸಿಬಿ ಚೊಚ್ಚಲ ಐಪಿಎಲ್ ಕಪ್ ಗೆದ್ದು ಬಂದು ಇತಿಹಾಸ ನಿರ್ಮಿಸಿದೆ. ಆದರೆ ಅಭಿಮಾನಿಗಳ ಸಂಭ್ರಮಾಚರಣೆಯು ಶೋಕಾಚರಣೆಯಾಗಿ ಮಾರ್ಪಟ್ಟಿದ್ದ ದುರಂತ ಇನ್ನೂ ಮಾಸಿಲ್ಲ. ಆರ್ಸಿಬಿ ಆಟಗಾರರನ್ನು ಅಭಿನಂದಿಸಲು ಬಂದಿದ್ದ ಕೆಲ ಅಭಿಮಾನಿಗಳು ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದರು. ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಮುಂದಿನ ಐಪಿಎಲ್ ಟೂರ್ನಿಯ ಆರ್ಸಿಬಿ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಇದರಿಂದ ಆತಂಕಗೊಂಡಿದ್ದ ಆರ್ಸಿಬಿ ಅಭಿಮಾನಿಗಳಿಗೆ
ಗೋವಾದ ಅರಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್ಕ್ಲಬ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 25 ಮಂದಿ ಸಾವನ್ನಪ್ಪಿದ್ದಾರೆ. 'ಬಾಲಿವುಡ್ ಬ್ಯಾಂಗರ್ ನೈಟ್' ಕಾರ್ಯಕ್ರಮದ ವೇಳೆ ವೇದಿಕೆಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆರಂಭದಲ್ಲಿ ಜನರಿಗೆ ಅರಿವಾಗಲಿಲ್ಲ. ಕ್ಲಬ್ನಲ್ಲಿ ಸೇರಿದ್ದ ಪ್ರವಾಸಿಗರು ಶೋಲೆ ಚಿತ್ರದ ಮೆಹಬೂಬಾ ಓ ಮೆಹಬೂಬಾ' ಹಾಡಿಗೆ ಡ್ಯಾನ್ಸ್ ಮಾಡುತ್ತಾ, ಡಿಜೆ ಶಬ್ದಕ್ಕೆ ಮೈ ಮರೆತಿದ್ದ ವೇಳೆಯೇ ಈ ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಗಳು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದವು.
ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರು ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗಿನ ತಮ್ಮ ವಿವಾಹದ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮುಖೇನ ಮೌನ ಮುರಿದಿದ್ದಾರೆ. ಮದುವೆಯನ್ನು ರದ್ದುಗೊಳಿಸಲಾಗಿದೆ. ಗಾಸಿಪ್ ಬಗ್ಗೆ ಜನರ ಹೇಳಿಕೆ ನೋವುಂಡು ಮಾಡಿದೆ ಎಂದು ಪಲಾಶ್ ಅವರು ಹೇಳಿದರು.ಇದೇ ವಿಷಯವನ್ನು ಸ್ಮೃತಿ ಮಂಧಾನ ಅವರು ಸಹ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಮಾರ್ನಬೈಲ್ | ಎಸ್ಎಂಆರ್ ಪಬ್ಲಿಕ್ ಸ್ಕೂಲ್ನ ವಾರ್ಷಿಕ ಕ್ರೀಡಾಕೂಟ
ಬಂಟ್ವಾಳ : ಮಾರ್ನಬೈಲ್ ಇಲ್ಲಿನ ಎಸ್.ಎಂ.ಆರ್ ಪಬ್ಲಿಕ್ ಸ್ಕೂಲ್ ನ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಬಂಟ್ವಾಳ ನಗರ ಠಾಣೆಯ ಉಪ ನಿರೀಕ್ಷಕ ಸಂದೀಪ್ ಶೆಟ್ಟಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಎಸ್ ಎಂ ಆರ್ ಸಂಸ್ಥೆಯ ವ್ಯವಸ್ಥಾಪಕ ರಿಫಾತ್ ಅಹಮದ್, ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಂದೀಪ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಫಾತಿಮತುಲ್ ಝಹೀರ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಕವಾಯತುಗಳು ನಡೆದವು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಫಾರಿಷ ಶಮೀಹ ಸ್ವಾಗತಿಸಿ, ತಾಝಿಂ ವಂದಿಸಿದರು. ಮನ್ಹ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು | ಟ್ರಕ್ ಚಾಲಕರಿಗೆ ಸಿಗದ ಟರ್ಮಿನಲ್ ಭಾಗ್ಯ!
ಮಂಗಳೂರು,ಡಿ.7: ನಗರ ಹೊರವಲಯದ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಟ್ರಕ್ ಟರ್ಮಿನಲ್ ಕೂ 22 ವರ್ಷವಾದರೂ ನಿರ್ಮಾಣಗೊಂಡಿಲ್ಲ. ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಸುಮಾರು 1,500ಕ್ಕೂ ಅಧಿಕ ಟ್ರಕ್/ಲಾರಿಗಳಿಗೆ ನಿಲ್ಲಲು ವ್ಯವಸ್ಥೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ 22 ವರ್ಷವಾದರೂ ಅದಿನ್ನೂ ಕಾರ್ಯಗತಗೊಂಡಿಲ್ಲ. ಆ ಮೂಲಕ ಟ್ರಕ್/ಲಾರಿ ಚಾಲಕರು ಟರ್ಮಿನಲ್ ಭಾಗ್ಯದಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದಾಗಿದೆ. ಮಂಗಳೂರು ನಗರವು ಕೈಗಾರಿಕೆ, ವಾಣಿಜ್ಯ ಹಬ್ ಆಗಿ ಬೆಳೆಯುತ್ತಿದೆ. ನವಮಂಗಳೂರು ಬಂದರು, ಒಎನ್ಜಿಸಿ-ಎಂಆರ್ಪಿಎಲ್, ಎಸ್ಇಝಡ್, ಬೈಕಂಪಾಡಿ, ಯೆಯ್ಯಾಡಿ ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ. ಪೆಟ್ರೋಲಿಯಂ ಉತ್ಪನ್ನಗಳು, ಅನಿಲಗಳು ರಾಜ್ಯದ ನಾನಾ ಕಡೆಗಳಿಗೆ ಸರಬರಾಜು ಆಗುತ್ತಿವೆ. ಮಂಗಳೂರಿಗೆ ರಾಜ್ಯ ಮತ್ತು ದೇಶದ ನಾನಾ ಊರುಗಳಿಂದ ಸರಕು ಸಾಗಣೆಯ ವಾಹನಗಳು ಬರುತ್ತಿವೆ. ಮಂಗಳೂರಿಗೆ ಬರುವ ಲಾರಿ/ಟ್ರಕ್ಗಳು ಸರಕುಗಳನ್ನು ಖಾಲಿ ಮಾಡಿದ ಬಳಿಕ ಮುಂದಿನ ಲೋಡ್ಗಾಗಿ ಕಾಯಬೇಕಾಗುತ್ತದೆ. ಲಾರಿ/ಟ್ಯಾಂಕರ್ಗಳಿಗೆ ಗ್ಯಾಸ್, ಪೆಟ್ರೋಲ್, ಡೀಸೆಲ್ ತುಂಬಿಸಲು ಸಮಯವೂ ಬೇಕಾಗುತ್ತದೆ. ಈ ವೇಳೆ ಲಾರಿ/ಟ್ರಕ್ಗಳನ್ನು ಒಂದೆಡೆ ನಿಲ್ಲಿಸುವುದು ಅನಿವಾರ್ಯವಾಗಿದೆ. ಕೆಲವೊಮ್ಮೆ 4-5ದಿನಗಳ ಕಾಲ ಲೋಡ್ಗಾಗಿ ಲಾರಿ/ಟ್ರಕ್ಗಳು ಕಾಯಬೇಕಾಗುತ್ತದೆ. ಆದರೆ ಮಂಗಳೂರು ನಗರ ಅಥವಾ ಹೊರವಲಯದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಗಳಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ. ಹೆದ್ದಾರಿ ಬದಿಗಳಲ್ಲಿ ಟ್ರಕ್/ಲಾರಿಗಳು ಸಾಲು ಸಾಲಾಗಿ ನಿಲ್ಲಿಸುವುದರಿಂದ ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತದೆ. ಸುಗಮ ಸಂಚಾರಕ್ಕೂ ಅಡ್ಡಿಯಾಗುತ್ತಿವೆ. ಹಾಗಾಗಿ ಲಾರಿ/ಟ್ರಕ್ಗಳ ನಿಲುಗಡೆಗೆ ವಿಶಾಲ ಮತ್ತು ಸುಸಜ್ಜಿತವಾದ ಟ್ರಕ್ ಟರ್ಮಿನಲ್ ಇಲ್ಲ. ಎಚ್ಪಿಸಿಎಲ್ ಹಾಗೂ ನವಮಂಗಳೂರು ಬಂದರು ಯಾರ್ಡ್ನಲ್ಲಿ ಎರಡು ಟ್ರಕ್ ಟರ್ಮಿನಲ್ಗಳಿವೆ. ಆದರೆ ಅದು ಆ ಕಂಪನಿಗೆ ಸೀಮಿತವಾಗಿದೆ. ಈ ನಿಟ್ಟಿನಲ್ಲಿ 2003ರಲ್ಲಿ ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಬಗ್ಗೆ ರೂಪುರೇಷ ಮಾಡಲಾಗಿತ್ತು. ಅಂದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಕುಳಾಯಿಯ 35 ಎಕರೆ ಜಾಗದಲ್ಲಿ ಸುಮಾರು 14 ಕೋ.ರೂ. ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆ ಬಳಿಕ ಅದು ಕಾರ್ಯಗತಗೊಳ್ಳಲೇ ಇಲ್ಲ. ಹೆದ್ದಾರಿ ಬಳಿ ವಾಹನ ನಿಲ್ಲಿಸಿದರೂ ಹಗಲು ವೇಳೆ ಸಂಭಾವ್ಯ ಅಪಾಯ ತಪ್ಪಿಸಬಹುದು. ಆದರೆ ರಾತ್ರಿ ವೇಳೆ ಸ್ವಲ್ಪ ನಿಯಂತ್ರಣ ಕಳಕೊಂಡರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಮುಂದಾಗಬೇಕು ಎಂದು ಲಾರಿ/ಟ್ರಕ್ ಚಾಲಕರು ಆಗ್ರಹಿಸಿದ್ದಾರೆ. ಲಾರಿ/ಟ್ರಕ್ಗಳಿಗೆ ಮೂಲ ಸೌಕರ್ಯ ಕಲ್ಪಿಸವ ಸಲುವಾಗಿ ಸ್ಥಾಪನೆಯಾಗಿರುವ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಸಂಸ್ಥೆಯು ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಅಧಿಕಾರಿಗಳ ಸಮ್ಮುಖ ದ.ಕ. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸುಮಾರು 15 ಎಕರೆ ಜಮೀನು ಗುರುತಿಸುವಂತೆ ತಿಳಿಸಿತ್ತು. ಬಳಿಕ ಎನ್ಎಂಪಿಎ, ಬೈಕಂಪಾಡಿ ಸಮೀಪ ಗುರುತಿಸಿದ್ದ 9 ಎಕರೆ ಜಮೀನನ್ನು ಟ್ರಕ್ ಟರ್ಮಿನಲ್ ಕಂಪನಿಗೆ ಹಸ್ತಾಂತರಿಸಿಕೊಳ್ಳಲು ನಿರ್ದೇಶನ ನೀಡುವಂತೆ ಜಿಲ್ಲಾಡಳಿತಕ್ಕೆ 2022ರ ಆಗಸ್ಟ್ನಲ್ಲಿ ಪತ್ರ ಬರೆದಿತ್ತು. ಅಲ್ಲದೆ 2022ರ ಡಿಸೆಂಬರ್ನಲ್ಲಿ ಜಿಲ್ಲಾಡಳಿತಕ್ಕೆ ಮತ್ತೊಮ್ಮೆ ಪತ್ರ ಬರೆದಿತ್ತು. ಅಲ್ಲದೆ ಟರ್ಮಿನಲ್ ನಿರ್ಮಾಣಕ್ಕೆ ಹೆದ್ದಾರಿ ಪಕ್ಕದಲ್ಲೇ ಸರಕಾರಿ ಜಮೀನು ನೀಡುವಂತೆ ವಿನಂತಿಸಿತ್ತು. ಆದರೆ ಅದಿನ್ನೂ ಕಾರ್ಯಗತಗೊಂಡಿಲ್ಲ.
Mangaluru | ಗುರುಪುರ ಬಿಲ್ಲವ ಸಂಘದಿಂದ ಉಚಿತ ವೈದ್ಯಕೀಯ ಶಿಬಿರ
ಗುರುಪುರ, ಡಿ.7: ಬಿಲ್ಲವ ಸಮಾಜ ಸೇವಾ ಸಂಘ (ರಿ), ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ, ಸನ್ಮತಿ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಮತ್ತು ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಗುರುಪುರದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಉಚಿತ ವೈದ್ಯಕೀಯ ಮಹಿಳಾ ಯೋಗಕ್ಷೇಮ, ದಂತ ಮತ್ತು ನೇತ್ರ ತಪಾಸಣಾ ಶಿಬಿರ ರವಿವಾರ ನಡೆಯಿತು. ಡಾ. ಯೋಗೀಶ್ ತಂತ್ರಿ ಶಿಬಿರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಆಯೋಜಕ ಶಮೀರ್ ಮಾಹಿತಿ ನೀಡಿದರು. ಸನ್ಮತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಕುಶಲಾ ಐ., ಸ್ಫೂರ್ತಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ.ಅಂಚನ್, ಯೇನಪೋಯ ಆಸ್ಪತ್ರೆಯ ಡಾ.ಆರ್ಯನ್, ಡಾ.ಆಲ್ಫಿಯಾ, ಡಾ.ಸಿರಸ್ ಉಪಸ್ಥಿತರಿದ್ದರು. ಸಂಘದ ಸದಸ್ಯ ಯಶವಂತ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
Indian Railway: ರೈಲು ಟಿಕೆಟ್ ಬುಕ್ಕಿಂಗ್ ಭರ್ಜರಿ ಗುಡ್ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
Indian Railway: ಭಾರತೀಯ ರೈಲ್ವೆಯು ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ನ್ಯೂಸ್ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಕೆಲವೊಂದು ಮಹತ್ವದ ಗುಡ್ನ್ಯೂಸ್ ಅನ್ನು ಕೇಂದ್ರ ರೈಲ್ವೆ ಇದೀಗ ನೀಡಿದೆ. ಅದರ ವಿವರ ಇಲ್ಲಿದೆ. ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದೆ. ಅದರಲ್ಲೂ ಮುಖ್ಯವಾಗಿ ಕಾಯ್ದಿರಿಸಿದ ರೈಲು ಟಿಕೆಟ್ನ ಸೀಟ್ಗಳಿಗೆ ಸಂಬಂಧಿಸಿದಂತೆ ವಿಶೇಷ ಬದಲಾವಣೆಯನ್ನು
ರಾಮಕೃಷ್ಣ ಮಿಷನ್ನಿಂದ ಸ್ವಚ್ಛ ಮಂಗಳೂರು ಅಭಿಯಾನ
ಮಂಗಳೂರು,ಡಿ.7 : ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದಡಿ ಸ್ವಚ್ಛತಾ ಶ್ರಮದಾನವು ನಗರದ ಹಂಪನಕಟ್ಟೆ ಮಿನಿ ವಿಧಾನಸೌಧದ ಆವರಣದಲ್ಲಿ ನೆರವೇರಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮತ್ತು ನಿಟ್ಟೆ (ಪರಿಗಣಿತ) ವಿವಿ ಉಪಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಡಾ.ಧನೇಶ್ ಕುಮಾರ್, ಬಿ.ಗೋಪಿನಾಥ್ರಾವ್, ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರೊ.ಪುರುಷೋತ್ತಮ ಚಿಪ್ಪಳ, ಡಾ.ರಾಕೇಶ್, ಡಾ.ಜಯೇಶ್, ಡಾ.ನಿತ್ಯಲ್, ಡಾ. ರುಚಿತಾ, ದಿಲ್ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
Mangaluru | ಇಂಟಾಕ್ ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಸಾಂಪ್ರದಾಯಿಕ ಬುಟ್ಟಿ, ಕಡೆಗೋಲು ತಯಾರಿಕಾ ಕಾರ್ಯಾಗಾರ
ಮಂಗಳೂರು, ಡಿ.7: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ (ಇಂಟಾಕ್)ಯ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಸಾಂಪ್ರದಾಯಿಕ ಬುಟ್ಟಿ ತಯಾರಿಕೆ ಮತ್ತು ಕಡೆಗೋಲು ತಯಾರಿಕೆಯ ಬಗ್ಗೆ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಇತ್ತೀಚೆಗೆ ಕಾರ್ಯಾಗಾರ ನಡೆಯಿತು. ಕುಶಲರ್ಕುಗಳಾದ ಬಾಬು ಕೊರಗ ಕಡ್ತಲ ಮತ್ತು ಅಮ್ಮಿ ಕೊರಗ ಕಡ್ತಲ ಬುಟ್ಟಿ ತಯಾರಿಕೆಯನ್ನು ಪ್ರದರ್ಶಿಸಿದರು. ಸದಾನಂದ ಗುಡಿಗ ಕೆರುವಾಶೆ ಮತ್ತು ಪ್ರಶಾಂತ್ ಗುಡಿಗ ಕೆರುವಾಶೆ ಕಡೆಗೋಲು ತಯಾರಿಕಾ ಪ್ರದರ್ಶನಕ್ಕೆ ನೇತೃತ್ವ ವಹಿಸಿದರು. ನೈಸರ್ಗಿಕ ವಸ್ತುಗಳು, ಕೈ ಉಪಕರಣಗಳು ಮತ್ತು ಎರಡೂ ಕರಕುಶಲಗಳ ಪಾರಂಪರಿಕ ತಂತ್ರಗಳನ್ನು ಪರಿಚಯಿಸಲಾಯಿತು. ಪ್ರದರ್ಶನದಲ್ಲಿ ಮರದ ಆಯ್ಕೆ, ಕಚ್ಚಾ ವಸ್ತುಗಳ ಸಿದ್ಧತೆ ಮತ್ತು ಹಂತ ಹಂತವಾಗಿ ತಯಾರಿಕಾ ಪ್ರಕ್ರಿಯೆಯನ್ನು ವಿವರಿಸಲಾಯಿತು. ಕೈಯಾರೆ ತಯಾರಿಸಿದ ಅಡುಗೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶಿಸಿ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಸದಾನಂದ ಗುಡಿಗ, ಕೈಯಿಂದ ತಯಾರಿಸಲಾಗುತ್ತಿದ್ದ ಮರದ ಕಡೆಗೋಲುಗಳನ್ನು ಈಗ ಯಾಂತ್ರಿಕವಾಗಿ ತಯಾರಿಸಿ ರಾಸಾಯನಿಕ ಹೊಳಪು ಕೊಟ್ಟ ವಸ್ತುಗಳಾಗಿ ಮಾರಲಾಗುತ್ತಿವೆ. ಆದರೆ ಅವು ಗುಣಮಟ್ಟಕ್ಕೂ ಬಾಳಿಕೆಗೂ ಖಾತರಿ ನೀಡುವುದಿಲ್ಲ. ನಮ್ಮ ತಂತ್ರಗಳು ಪಾರದರ್ಶಕವಾಗಿದ್ದು, ತಲೆಮಾರುಗಳಿಂದ ಬಂದ ಪರಂಪರೆಯಾಗಿದೆ. ಈ ಪರಂಪರೆ ಉಳಿಯಲು ಹೆಚ್ಚಿನ ಉತ್ತೇಜನ ಮತ್ತು ಬೇಡಿಕೆ ಅಗತ್ಯ ಎಂದು ಹೇಳಿದರು. ಬಾಬು ಕೊರಗ ಮಾತನಾಡಿ, ಕೋವಿಡ್-19ರ ವೇಳೆ ನಮ್ಮ ಮಾರಾಟ ತೀವ್ರವಾಗಿ ಕುಸಿಯಿತು. ಕೆಲವರ ನೆರವಿನಿಂದ ನಾವು ನಮ್ಮ ಉತ್ಪನ್ನಗಳನ್ನು ಆನ್ಲೈನ್ ಮತ್ತು ರೈತ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಯಿತು. ಆದರೆ ಈ ವಸ್ತುಗಳನ್ನು ದೂರದ ಮೇಳಗಳಿಗೆ ಮತ್ತು ಪ್ರದರ್ಶನಗಳಿಗೆ ಸಾಗಿಸುವುದು ಕಷ್ಟವಾಗಿದೆ ಎಂದರು. ಇಂಟಾಕ್ ಸದಸ್ಯೆ ರೇಷ್ಮಾ ಶೆಟ್ಟಿ ಕಲಾವಿದರನ್ನು ಪರಿಚಯಿಸಿದರು.
ಮಂಗಳೂರು | ನಕ್ಕುಬಿಡು ಬಾನಕ್ಕಿ ಗಜಲ್ ಸಂಕಲನ ಬಿಡುಗಡೆ
ಮಂಗಳೂರು, ಡಿ.7: ಎಸ್ಡಿಎಂ ಶಿಕ್ಷಣ ಮಹಾವಿದ್ಯಾಲಯ, ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್.ಡಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವನಜಾ ಜೋಶಿ ಅವರ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರ ಆಕರ್ಷಕವಾಗಿ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಉದ್ಘಾಟನೆ ನೆರವೇರಿಸಿದರು. ಎನ್.ವಿ. ಡಿಗ್ರಿ ಕಾಲೇಜು, ಕಲಬುರಗಿಯ ಗಜಲ್ ಕವಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರು ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು. ಸಾಹಿತಿ ಸುಮನಾ ಆರ್. ಹೇರ್ಳೆ ಪುಸ್ತಕ ಪರಿಚಯ ನೀಡಿದರು. ಕೃತಿಕಾರರಾದ ವಜಾ ಜೋಶಿ ತಮ್ಮ ಬರವಣಿಗೆಯ ಅನುಭವ ಹಂಚಿಕೊಂಡರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿದರು. ಅರುನಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಎನ್ಎಸ್ಎಸ್ ಘಟಕದ ವತಿಯಿಂದ ಉಳ್ಳಾಲ ಬೀಚ್ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು , ಡಿ.7: ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ದಿ ಮಂಡಳಿ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ ಎಸ್) ಘಟಕದ ವತಿಯಿಂದ ಉಳ್ಳಾಲ ಬೀಚ್ ಸ್ವಚ್ಛತಾ ಕಾರ್ಯಕ್ರಮವು ಶನಿವಾರ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ.ಗಫೂರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ಫಾ.ಫೌಸ್ಟಿನ್ ಲೂಕಾಸ್ ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಪ್ರದೀಪ್ ಡಿ ಸೋಜ ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತ ತೇಜಮೂರ್ತಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಔಷಧೀಯ ವಿಭಾಗದ ಆಡಳಿತಾಧಿಕಾರಿ ವಂ.ಫಾ.ನೆಲ್ಸನ್ ಧೀರಜ್ ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ.ಫಾ.ಅಶ್ವಿನ್ ಲಾರೆನ್ಸ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ.ಪ್ರಭುಕಿರಣ್, ಉಪಪ್ರಾಂಶುಪಾಲ ಡಾ.ವಿಲ್ಮಾ ಮೀರಾ ಡಿ’ಸೋಜ, ಫಾರ್ಮಸ್ಯೂಟಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಎಸ್, ವೈದ್ಯಕೀಯ ಉಪ ಅಧೀಕ್ಷಕ ಡಾ.ದೀಪಾ ಪಾಯಸ್, ಯು.ಜಿ.ಉಸ್ತುವಾರಿ ಡಾ.ಅಮಿತಾ, ಪಿ.ಜಿ.ಉಸ್ತುವಾರಿ ಡಾ.ರಾಜಚಂದ್ರ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಕ್ಯಾ.ವಿಜಯ್ ಕುಮಾರ್, ಉಳ್ಳಾಲ ನಗರಸಭೆಯ ಪರಿಸರ ವಿಭಾಗದ ಇಂಜೀನಿಯರ್ ಪುನೀತ್ ಎಂ.ಎಸ್., ಹಿರಿಯ ಆರೋಗ್ಯಾಧಿಕಾರಿಗಳಾದ ರವಿ ಕೃಷ್ಣ ಹಾಗೂ ಲಿಲ್ಲಿ ನಾಯರ್ ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಧೀರಜ್ ಫೆರ್ನಾಂಡೀಸ್ ಅವರು ಸ್ವಾಗತಿಸಿ, ಎನ್ಎಸ್ಎಸ್ ಘಟಕದ ನಾಯಕ ಪ್ರಣವ್ ವಂದಿಸಿದರು. ಸ್ವಯಂ ಸೇವಕರಾದ ಶ್ರೀ ರಾಮ್ ಮತ್ತು ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಶೌವಾದ್ ಕಾರ್ಯಕ್ರಮ ನಿರೂಪಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ಹಾಗೂ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳ್ಳಾಲ ಬೀಚ್ ಕ್ಲೀನಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸ್ವಚ್ಚ ಪರಿಸರದ ಮಹತ್ವವನ್ನು ಸಾರಿದರು.
ಮಂಗಳೂರು | ಭಾರತೀಯ ವೈದ್ಯಕೀಯ ಸಂಘದ ಮಾಸಿಕ ಕಾರ್ಯಗಾರ
ಮಂಗಳೂರು ,ಡಿ. 7: ಭಾರತೀಯ ವೈದ್ಯಕೀಯ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ಸದಸ್ಯರಿಗೆ ಮಾಸಿಕ ಕಾರ್ಯಾಗಾರ ಕಿಯೋಸೈನ್ಸ್ ಹೆಲ್ತ್ ಕೇರ್ ಸಂಸ್ಥೆ ಹಾಗೂ ಲೂಪಿನ್ ಫಾರ್ಮಸಿಟಿಕಲ್ಸ್ ಆಶ್ರಯದಲ್ಲಿ ಶುಕ್ರವಾರ ನಗರದ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು. ಐಎಂಎ ದ.ಕ. ಜಿಲ್ಲಾ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಎಸ್ಟರ್ ಆಸ್ಪತ್ರೆಯ ಅರ್ಭುದ ರೋಗ ಶಾಸ್ತ್ರ ವಿಭಾಗಿಯ ಮುಖ್ಯಸ್ಥ ಡಾ.ಸಿ.ಎನ್.ಪಾಟೀಲ್ ಅವರು ‘ಮಂಕುತಿಮ್ಮ ಹೇಳಿದ ಜೀವನಗಳ ಸತ್ಯಗಳು’ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಸಿ. ಎನ್. ಪಾಟೀಲ್ ವರನ್ನು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಅಣ್ಣಯ್ಯ ಕುಲಾಲ್ ಅವರನ್ನು ಗೌರವಿಸಲಾಯಿತು. ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಹಾಗೂ ಆಧೀಕ್ಷಕ ಡಾ.ಶಿವಪ್ರಕಾಶ್, ಎಜೆ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ವಿನಯ ಆಸ್ಪತ್ರೆಯ ನಿರ್ದೇಶಕ ಡಾ. ಹಂಸರಾಜ್ ಆಳ್ವ ಮತ್ತು ಸಂಘದ ಕೋಶಾಧಿಕಾರಿ ಡಾ. ಜೂಲಿಯನ್ ಸಲ್ಡಾನ್ಹ ಉಪಸ್ಥಿತರಿದ್ದರು. ಡಾ.ಮಧುರಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ಹರೀಶ್ಚಂದ್ರ ವಂದಿಸಿದರು.
Mangaluru | ಬಗಂಬಿಲ ಅಂಗನವಾಡಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ
ಮಂಗಳೂರು, ಡಿ. 7: ರೋಶನಿ ನಿಲಯ ಸೋಶಿಯಲ್ ವರ್ಕ್ ಕಾಲೇಜಿನ ಬಿಎಸ್ಡಬ್ಲ್ಯು ವಿಭಾಗದ ಸಹಯೋಗ ವೇದಿಕೆ ಹಾಗೂ ಐಕ್ಯೂಎಸಿ ಘಟಕ, ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಬಗಂಬಿಲ ಅಂಗನವಾಡಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ ಶನಿವಾರ ನಡೆಯಿತು. ಕೋಟೆಕಾರ್ ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷ ಪ್ರವೀಣ್ ಐ. ಮುಖ್ಯ ಅತಿಥಿಯಾಗಿದ್ದರು. ರೋಟರಿ ಕ್ಲಬ್ ಮಂಗಳೂರಿನ ಅಧ್ಯಕ್ಷ ಪ್ರೊ.ವಿನೋದ್ ಅರನ್ಹ, ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ನ ಸಮಾಲೋಚಕಿ ರಕ್ಷಿತಾ ಕೆ ಹಿರಿಯ ನಾಗರಿಕರಿಗೆ ಸರಕಾರದಿಂದ ದೊರೆಯುವ ಯೋಜನೆಗಳು, ಸೌಲಭ್ಯಗಳು ಮತ್ತು ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಿಗೆ ಸಹಾಯವಾಗುವಂತೆ 1 ವೀಲ್ಚೇರ್ ಮತ್ತು 10 ವಾಕಿಂಗ್ ಸ್ಟಿಕ್ ಗಳನ್ನು ರೋಟರಿ ಕ್ಲಬ್ ವತಿಯಿಂದ ವಿತರಿಸಲಾಯಿತು. ಒಟ್ಟು 35 ಮಂದಿ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ರೋಶನಿ ನಿಲಯ ಪ್ರಾಂಶುಪಾಲ ಡಾ.ಸೋಫಿಯಾ ಫರ್ನಾಂಡಸ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಬಿಎಸ್ಡಬ್ಲ್ಯು ವಿಭಾಗಾಧ್ಯಕ್ಷೆ ಡಾ.ವೀಣಾ ಬಿ.ಕೆ., ಫೀಲ್ಡ್ ಸೂಪರ್ವೈಸರ್ ರೇಷ್ಮಾ ಲೋಬೋ, ಐಕ್ಯೂಎಸಿ ಸಂಯೋಜಕಿ ಡಾ. ಸರಿತಾ ಡಿ ಸೋಜ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಮೀನಾಕ್ಷಿ ಸ್ವಾಗತಿಸಿದರು. ಭಗಿನಿ ಪ್ರಿಯಾ ವೆರೋನಿಕಾ ಡಿ ಸೋಜ, ಬಿಎಸ್ಡಬ್ಲ್ಯು ತೃತೀಯ ವರ್ಷದ ವಿದ್ಯಾರ್ಥಿಗಳಾದ ಪ್ರಿಯಾ ವೆರೋನಿಕಾ ಡಿ ಸೋಜ , ಶ್ರೇಯ ಪಿ.ಎಸ್ ಹಾಗೂ ರಾಹುಲ್ ಕಾರ್ಯಕ್ರಮ ಸಂಯೋಜಿಸಿದರು.
Mangaluru | ಸಜೀಪ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ
ಮಂಗಳೂರು, ಡಿ.7: ಸಜೀಪ ಮೂಡದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಜೈರಾಬಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಉಪ ಪ್ರಾಂಶುಪಾಲೆ ಜ್ಯೋತಿ, ಉಪನ್ಯಾಸಕರಾದ ಸಂಧ್ಯಾ, ಭಾರತಿ, ಗಾಯತ್ರಿ, ಸುರೇಶ್ ಐತಾಳ್, ಶೋಭಾ, ಬಾಲಕೃಷ್ಣ ನಾಯಕ್, ಸುಂದರಿ, ಬಾಲಕೃಷ್ಣ ಎನ್ವಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ್ ಬೆಲ್ಚಡ, ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ , ಪಂಚಾಯತ್ ಸದಸ್ಯರಾದ ಸೀತಾರಾಮ ಅಗೋಳಿ ಬೆಟ್ಟ, ಜಯಪ್ರಕಾಶ್ ಪೆರ್ವ, ಸುರೇಶ್ ಬಂಗೇರ , ನಿತಿನ್ ಅರಸ, ವಿಶ್ವನಾಥ ಕೊಟ್ಟಾರಿ , ಸುರೇಶ್ ಶೆಟ್ಟಿ, ಕೆ ವೀರೇಂದ್ರ ಕುಮಾರ್, ಉಪಸ್ಥಿತರಿದ್ದರು.
ಕಾರ್ಮಿಕರು ಸರಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಲಿ: ಶಾಸಕ ಬಸನಗೌಡ ದದ್ದಲ್ ಸಲಹೆ
ರಾಯಚೂರು: ಕಾರ್ಮಿಕರು ಸರಕಾರದಿಂದ ಬರುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕೆಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹೇಳಿದರು. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಅರ್ಹ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಳಾದ ಎಲೆಕ್ನಿಶಿಯನ್, ವೆಲ್ಡರ್, ಕಾರ್ಪೆಂಟರ್, ಪೆಂಟರ್ ಮತ್ತು ಪ್ಲಂಬರ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ವಿವಿಧ ಬಗೆಯ ಕಾರ್ಮಿಕರ ಸುರಕ್ಷತಾ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ದೇಶದ ಅಭಿವೃದ್ದಿಯಲ್ಲಿ ಕಾರ್ಮಿಕರ ಪಾತ್ರ ಅಷ್ಟೆ ಮಹತ್ವದ್ದಾಗಿದೆ. ದೇಶವು ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ ಕಾರ್ಮಿಕರ ಶ್ರಮ ಮುಖ್ಯ, ಕಾರ್ಮಿಕರ ಜೀವನ ಅತ್ಯಂತ ಕಷ್ಟಕರವಾಗಿದ್ದು, ಕೆಲಸ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಕುಟುಂಬದ ರಕ್ಷಣೆಗಾಗಿ ಹಾಗೂ ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ನಾನಾ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಕಾರ್ಮಿಕರು ಇಲಾಖೆಯಲ್ಲಿ ಕಡ್ಡಾಯ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಈ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಆರತಿ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳ ಸದುಪಪಯೋಗ ಪಡೆದುಕೊಳ್ಳಲು ಎಲ್ಲಾ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಮಿಕರಿಗೆ ತಿಳವಳಿಕೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಪ್ರಿಯಾಂಕ ಸೇರಿದಂತೆ ಕಾರ್ಮಿಕ ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
Government Jobs: 2.7 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ, ನೌಕರಿ ಗ್ಯಾರಂಟಿ ಬಗ್ಗೆ ಹೊಸ ಸುದ್ದಿ
ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜನರಿಂದ ಮೆಚ್ಚುಗೆ ಪಡೆದಿದೆಯಾದರೂ ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯಿಂದಾಗಿ ಬಹಳಷ್ಟು ಟೀಕೆಗೆ ಗುರಿಯಾಗಿದೆ. ಇನ್ನು ರಾಜ್ಯದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲೂ ಸರ್ಕಾರ ವಿಳಂಬ ತೋರುತ್ತಿದೆ ಎಂದು ಇತ್ತೀಚೆಗೆ ಉದ್ಯೋಗಾಕಾಂಕ್ಷಿಗಳು ಬೀದಿಗಳಿದು ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ
ರಾಯಚೂರು| ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಎಐಡಿಎಸ್ಒ ವತಿಯಿಂದ ಪ್ರತಿಭಟನೆ
ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಯಚೂರು ತಾಲೂಕಿನ ಅನ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಲ್ಯಾಣ್ ಕುಮಾರ್ , ಅನ್ವರ ಗ್ರಾಮದ ರೈತರು ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಶಾಲೆಯನ್ನು ಮುಚ್ಚಿ, ಮೂರು ಕಿ.ಮೀ. ದೂರದಲ್ಲಿರುವ ಮಂಜರ್ಲಾ ಗ್ರಾಮಕ್ಕೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು. ರಾಜ್ಯ ಸರಕಾರ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರೂ, ಶಿಕ್ಷಣ ಸಚಿವರು ಮಾಧ್ಯಮಗಳ ಮುಂದೆ ಶಾಲೆ ಮುಚ್ಚಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ, ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುವುದು ಸರಕಾರ ಬಡವರಿಂದ ಶಿಕ್ಷಣ ಕಸಿಯುವ ಖಾಸಗೀಕರಣದ ಹುನ್ನಾರ ಎಂದು ಕಲ್ಯಾಣ್ ಕುಮಾರ್ ದೂರಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಂದಗೋಪಾಲ್, ಪ್ರೀತಿ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಭೀಮಯ್ಯ ಮತ್ತು ಹಿರಿಯರಾದ ಈರಣ್ಣ, ವಿರೂಪಣ್ಣ, ಭೀಮಣ್ಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಆಧ್ಯಾತ್ಮಿಕ ಒಲವನ್ನು ತೋರಿಸಿದೆ. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ಪಡೆದಿದ್ದರು.
ಡಚ್ ಮೂಲದ ಮಹಿಳೆಯೊಬ್ಬರು ಹತ್ತು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರು ಬೆಂಗಳೂರಿನ ಏರ್ಪೋರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತದಲ್ಲಿ ಹಳೆಯ ಕಾಲದ ಸಂಪ್ರದಾಯಸ್ಥ ಸ್ಥಳಗಳು ಹಾಗೂ ಮುಂದುವರೆದ ಪ್ರದೇಶಗಳನ್ನು ಒಂದೆ ಪ್ರವಾಸದಲ್ಲಿ ಕಾಣಬಹುದು. ಭಾರತ ಒಂದು ಅದ್ಭುತ ರಾಷ್ಟ್ರ ಎಂದು ಹೇಳಿದ್ದಾರೆ. ಜೊತೆಗೆ ಬೆಂಗಳೂರು ಟರ್ಮಿನಲ್ 2 ಏರ್ಪೋರ್ಟ್ ಬಗ್ಗೆ ಕೊಂಡಾಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಮನಸ್ಸು ಪ್ರಕೃತಿಯ ಅದ್ಭುತ ಸೃಷ್ಟಿಗಳಲ್ಲಿ ಒಂದು ಎಂಬುದನ್ನು ನಿರಾಕರಿಸುವಂತಿಲ್ಲ. ಅಪಾರ ಶಕ್ತಿಶಾಲಿ, ಕಲ್ಪನಾಶೀಲ ಹಾಗೂ ಅತಿಹೆಚ್ಚು ಸೂಕ್ಷ್ಮವಾದುದು. ಆದರೆ ಅದರ ಮೇಧಾಶಕ್ತಿಯ ಹಿಂದೆ ನಮ್ಮ ಯೋಚನೆ, ಭಾವನೆ ಮತ್ತು ವರ್ತನೆಯನ್ನು ನಿಶ್ಯಬ್ದವಾಗಿ ನಿಯಂತ್ರಿಸುವ ಕೆಲವು ಆಂತರಿಕ ಗುಣಲಕ್ಷಣಗಳು ಇವೆ. ಅವು ತಮ್ಮಷ್ಟಕ್ಕೆ ತಾವೇ ಕಾರ್ಯನಿರ್ವಹಿಸುತ್ತವೆ; ನಮ್ಮ ನಿರ್ಧಾರಗಳು, ಅಭ್ಯಾಸಗಳು, ಮಾನಸಿಕ ಪ್ರತಿಕ್ರಿಯೆಗಳೆಲ್ಲವೂ ಇವುಗಳ ಮೂಲಕವೇ ರೂಪುಗೊಳ್ಳುತ್ತವೆ. ಯಾವುದೇ ವಿಷಯ, ಪ್ರಸಂಗ, ಚಿಂತನೆ ಅಥವಾ ಮಾತುಕತೆ ಪೂರ್ಣವಾಯಿತೆಂದರೆ ಅದನ್ನು ಬಿಟ್ಟು ಮನಸ್ಸು ನಿರಾಳವಾಗಿಬಿಡುತ್ತದೆ. ಒಂದು ವೇಳೆ ಅವು ಪೂರ್ಣವಾಗಿರದಿದ್ದರೆ ಮನಸ್ಸು ಆ ವಿಷಯದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಇದನ್ನು Zeigಚಿಡಿಟಿiಞ ಇಜಿಜಿeಛಿಣ ಎಂದು ಕರೆಯಲಾಗುತ್ತದೆ. ಕೆಲಸ ಪೂರ್ಣವಾಗದೇ ಇರುವುದರಿಂದ ಅದರ ಬಗ್ಗೆ ತೀವ್ರ ಗಮನವಿಡುವುದರಿಂದ ಮಾನಸಿಕವಾಗಿ ಉದ್ವಿಗ್ನತೆ ಉಂಟಾಗುತ್ತದೆ. ಒಳಗೆ ಒತ್ತಡವನ್ನು ಸೃಷ್ಟಿಸುವುದು ಮನಸ್ಸಿನ ಸ್ವಭಾವವೇ ಆಗಿದೆ. ಒಟ್ಟಾರೆ ಅಪೂರ್ಣವಾದುದು ಅಥವಾ ಪರಿಹಾರ ಇಲ್ಲದ್ದು ಒಳಮನಸ್ಸಿನಲ್ಲಿ ಅಂಟಿಕೊಂಡಿರುತ್ತದೆ. ಯಾವುದು ಪೂರ್ಣವಾಗುವುದೋ ಅದನ್ನು ಮನಸ್ಸು ಬಿಟ್ಟುಬಿಡುತ್ತದೆ. ಮನಸ್ಸಿನ ಈ ಸ್ವಭಾವವನ್ನು ಆಧುನಿಕ ಮನಶಾಸ್ತ್ರದಲ್ಲಿ ಬ್ಲೂಮಾ ಝೈಗಾರ್ನಿಕ್ (ಃಟumಚಿ Zeigಚಿಡಿಟಿiಞ) ಎಂಬ ಮನೋವಿಜ್ಞಾನಿಯ ಹೆಸರಿನಲ್ಲೇ ಕರೆಯಲಾಗಿದೆ. ಅವರು 1920ರ ದಶಕದಲ್ಲಿ ಬರ್ಲಿನ್ನಲ್ಲಿ ಪ್ರಸಿದ್ಧ ಮನೋವಿಜ್ಞಾನಿ ಕುರ್ಟ್ ಲೆವಿನ್ ಅವರ ವಿದ್ಯಾರ್ಥಿಯಾಗಿದ್ದರು. ಒಂದು ದಿನ ಅವರು ಒಂದು ಕೆಫೆಯಲ್ಲಿ ಆಸಕ್ತಿದಾಯಕವಾದ ಸಂಗತಿಯನ್ನು ಗಮನಿಸಿದರು: ಅದೇನೆಂದರೆ, ವೈಟರ್ಗಳು ಪಾವತಿ ಆಗದ ಆರ್ಡರ್ಗಳನ್ನು ಬಹಳ ನಿಖರವಾಗಿ ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಬಿಲ್ ಪಾವತಿಯಾದ ತಕ್ಷಣವೇ ಅದನ್ನು ಸಂಪೂರ್ಣ ಮರೆತುಬಿಡುತ್ತಿದ್ದರು! ಹೀಗೆ ಗಮನಿಸಿದ ಈ ಪ್ರಸಂಗದ ಆಧಾರದಲ್ಲಿ ಅವರು ಪ್ರಯೋಗಗಳನ್ನು ನಡೆಸಿದರು. ಅವರ ಪ್ರಯೋಗಗಳ ತೀರ್ಮಾನವೇನು ಎಂದರೆ: ಅಪೂರ್ಣವಾದ ಕೆಲಸಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಆ ಒತ್ತಡದ ಕಾರಣದಿಂದ ಮನಸ್ಸು ಆ ಕೆಲಸವನ್ನು ನಿರಂತರ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಅದಕ್ಕೆ ಈ ಪರಿಣಾಮಕ್ಕೆ ಅವರ ಹೆಸರನ್ನೇ Zeigಚಿಡಿಟಿiಞ ಇಜಿಜಿeಛಿಣ ಎಂದು ಇಡಲಾಗಿದೆ. ಝೈಗಾರ್ನಿಕ್ ಪರಿಣಾಮದ ಮೂಲ ನಮ್ಮ ಪೂರ್ವಜರಿಂದ ಬಂದ ಮಾನಸಿಕ ಪರಂಪರೆಯಲ್ಲಿದೆ. ನಮ್ಮ ಆದಿಮ ಮಾನವನಿಗೆ ಬದುಕು ಎಂದರೆ ಜಾಗರೂಕತೆ, ಗಮನ ಮತ್ತು ಅಪೂರ್ಣ ಕೆಲಸಗಳನ್ನು ಮರೆಯಲಾಗದ ಸಾಮರ್ಥ್ಯ. ಬೇಟೆ ಮತ್ತು ಆಹಾರ ಸಂಗ್ರಹದಲ್ಲಿರುತ್ತಿದ್ದ ನಮ್ಮ ಆದಿಮ ಕಾಲದ ಪೂರ್ವಜರು ಒಂದು ಪ್ರಾಣಿಯ ಹೆಜ್ಜೆ ಗುರುತು ಕಂಡಾಗ ಹುಡುಕಲೇ ಬೇಕು. ಅವುಗಳ ಜಾಡು ಮತ್ತು ಇರುವುದು ತಿಳಿದು ಮುಗಿಸದೇ ಇದ್ದರೆ ಆ ರಾತ್ರಿ ತಮ್ಮ ಸುರಕ್ಷತೆಗೇ ಅಪಾಯ ತರಬಹುದು. ಕಂಡು ಮುಗಿಸದ ಅಪೂರ್ಣ ಗುರುತು ಮನಸ್ಸಿನಲ್ಲಿ ಜಾಗರೂಕತೆಯನ್ನು ತರುತ್ತದೆ. ಪೂರ್ವಜರು ನಿರ್ಮಿಸುವ ನೆಲೆಯನ್ನು ಅರ್ಧಕ್ಕೆ ಬಿಟ್ಟರೆ ಮಳೆ, ಚಳಿ ಅಥವಾ ಮೃಗಗಳಿಂದ ಅಪಾಯ ಎದುರಾಗುವುದು. ಈ ಅಪೂರ್ಣ ಕೆಲಸದಿಂದ ಮೆದುಳಿನಲ್ಲಿ ಒತ್ತಡ ಉಂಟಾಗಿ ಮುಗಿಸಬೇಕು ಎಂಬ ಸಂದೇಶವನ್ನು ತಮ್ಮ ಮೆದುಳಿಂದ ಪಡೆದುಕೊಳ್ಳುತ್ತಿದ್ದರು. ಅಲೆಮಾರಿಗಳಾಗಿರುವ ಅವರಿಗೆ ಗುಡ್ಡದಲ್ಲಿಯೋ, ಪೊದೆಗಳಲ್ಲಿಯೇ ಏನಾದರೂ ಸದ್ದು ಕೇಳಿದರೆ ಅದು ಅಪಾಯಕರ ಪ್ರಾಣಿಯೋ ಅಥವಾ ನಿರ್ಲಕ್ಷಿಸಬಹುದಾದ ಜೀವಿಯೋ ಎಂದು ತಿಳಿದುಕೊಳ್ಳುವವರೆಗೂ ಮನಸ್ಸಿನಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತಲೇ ಇರುತ್ತಿತ್ತು. ಅಷ್ಟೇ ಅಲ್ಲದೆ ಬುಡಕಟ್ಟುಗಳಲ್ಲಿ ಬದುಕುತ್ತಿದ್ದ ಪೂರ್ವಜರಿಗೆ ಅವರ ವಿವಿಧ ಕುಲ ಅಥವಾ ಗೋತ್ರಗಳ ನಡುವೆ ಉಂಟಾಗುತ್ತಿದ್ದ ಜಗಳ ಅಥವಾ ಭಿನ್ನಾಭಿಪ್ರಾಯ ಇತ್ಯರ್ಥ ಆಗಲೇ ಬೇಕಿತ್ತು. ಇಲ್ಲವಾದರೆ ಗುಂಪು ಗುಂಪುಗಳಲ್ಲಿ ಸಂಘರ್ಷ ಉಂಟಾಗಿ ಜೀವಗಳಿಗೇ ಅಪಾಯಕಾರಿಯಾಗಿರುತ್ತಿತ್ತು. ‘ಗೆಲ್ಲು ಇಲ್ಲವೇ ಸಾಯಿ’ ಎಂಬಂತೆ ಅವರು ತಮ್ಮ ಜಗಳಗಳನ್ನು ಪೂರ್ಣಗೊಳಿಸಿಕೊಳ್ಳಲು ಸಿದ್ಧವಾಗಿರುತ್ತಿದ್ದರು. ಆದ್ದರಿಂದ ಮನಸ್ಸು ಜಗಳವನ್ನು ಮರೆತಿಡದೆ, ಮುಗಿಯುವವರೆಗೆ ಹಿಡಿದುಕೊಳ್ಳುತ್ತಿತ್ತು. ಹಾಗಂತ ಇದೇನು ನಮ್ಮ ವಂಶವಾಹಿನಿ ಗುಣಗಳಿಂದ ಬಂದಿರುವುದೇನಲ್ಲ. ಆದರೆ ಈ ಪರಿಣಾಮವನ್ನು ಸೃಷ್ಟಿಸುವ ಮೆದುಳಿನ ವ್ಯವಸ್ಥೆಗಳು ಪ್ರಧಾನ ಪಾತ್ರ ವಹಿಸುವುದು. ಮೆದುಳಿನಲ್ಲಿರುವ ಗಮನ ಕೇಂದ್ರಗಳು, ಕಾರ್ಯಸ್ಮರಣೆ (ತಿoಡಿಞiಟಿg memoಡಿಥಿ), ಡೊಪಮೈನ್ ಪ್ರೇರಣೆ ವ್ಯವಸ್ಥೆ, ಭಾವನಾತ್ಮಕ ಜಾಗರೂಕತೆ; ಇಂತವೆಲ್ಲ ವಂಶಾನುಗತವಾಗಿ ಬರುತ್ತವೆ. ಅಂದರೆ ಮುಗಿಯದ ವಿಷಯದ ಬಗ್ಗೆ ಗಿರಕಿ ಹೊಡೆಯುವ ಝೈಗಾರ್ನಿಕ್ ಪರಿಣಾಮ ‘ಒಂದು ಜೀನ್’ ಆಗಿ ಬರಲಿಲ್ಲ, ಆದರೆ ‘ಮೆದುಳಿನ ವಿನ್ಯಾಸ’ವಾಗಿ ಪೀಳಿಗೆಯಿಂದ ಪೀಳಿಗೆ ಬಂದಿತು. ನಾವು ಕೆಲಸವನ್ನು ಆರಂಭಿಸಿ ಸಂಪೂರ್ಣವಾಗಿ ಮುಗಿದರೆ ಡೊಪಮೈನ್ ಬಿಡುಗಡೆ ಆಗುತ್ತದೆ. ಅಲ್ಲಿಗೆ ನೆಮ್ಮದಿ. ಒಂದು ವೇಳೆ ಆದರೆ ಕೆಲಸ ಅಪೂರ್ಣವಾಗಿದ್ದರೆ? ಡೊಪಮೈನ್ ಚಕ್ರ ಮುಗಿಯುವುದಿಲ್ಲ. ದಣಿವು, ಜಂಜಾಟ ಮತ್ತು ಅಸಮಾಧಾನ ಉಂಟಾಗುತ್ತದೆ. ಮೆದುಳು ನೆನಪಿಸುತ್ತಿರುತ್ತದೆ: ‘ಮುಗಿಸು, ಮುಗಿಸು’ ಎಂದು. ಹಾಗಾಗಿಯೇ ಅಪೂರ್ಣ ಕೆಲಸ ಮನಸ್ಸಿಗೆ ಭಾರವಾಗುತ್ತದೆ. ಪ್ರಿಫ್ರಾಂಟಲ್ ಕಾರ್ಟೆಕ್ಸ್ ಎಂಬುದು ಮೆದುಳಿನ ಮ್ಯಾನೇಜರ್. ಇದು ಯೋಜನೆ, ನಿರ್ಧಾರ ಮತ್ತು ಸ್ಮರಣೆಗಳ ಜವಾಬ್ದಾರಿ ಹೊತ್ತಿರುವುದು. ಒಂದು ವೇಳೆ ಅಪೂರ್ಣ ಕೆಲಸ ಇದ್ದರೆ, ಅದನ್ನು ಕೆಲಸದ ಪಟ್ಟಿಯಲ್ಲಿ ಸಕ್ರಿಯವಾಗಿಡುತ್ತದೆ. ಮನಸ್ಸಿಗೆ ವಿಶ್ರಾಂತಿ ಕೊಡದೆ ‘ಇದಿನ್ನೂ ಮುಗಿದಿಲ್ಲ’ ಎಂದು ಸೂಚಿಸುತ್ತಲೇ ಇರುತ್ತದೆ. ನಮ್ಮ ತಪ್ಪುಗಳನ್ನು ಅಥವಾ ಪೂರ್ಣಗೊಳಿಸದ ವಿಷಯಗಳನ್ನು ಪತ್ತೆ ಹಚ್ಚುವ ಯಂತ್ರಕ್ಕೆ ಂಅಅ (ಂಟಿಣeಡಿioಡಿ ಅiಟಿguಟಚಿಣe ಅoಡಿಣex) ಎನ್ನುತ್ತೇವೆ. ಇದರ ಕೆಲಸವೇ ಗೊಂದಲ ಮತ್ತು ಅಪೂರ್ಣ ಮಾಹಿತಿಯನ್ನು ಪತ್ತೆಹಚ್ಚುವುದು. ಅಪೂರ್ಣ ಜಗಳ, ಉತ್ತರಿಸದ ಪ್ರಶ್ನೆ, ಬಗೆ ಹರಿಯದ ಅನುಮಾನಗಳೆಲ್ಲವನ್ನೂ ಪರಿಗಣಿಸಿ ನನೆಗುದಿಯಲ್ಲಿಟ್ಟಿರುತ್ತದೆ. ಇನ್ನು ಅಮೈಗ್ಡಲಾ ಒಂದು ‘ಭಾವನಾತ್ಮಕ ಅಲಾರಂ’. ಇದೇ ನಮ್ಮ ಪೂರ್ವಜರಿಗೆ ಅಪೂರ್ಣ ಮಾಹಿತಿಯನ್ನು ಅಪಾಯ ಎಂದು ಎಚ್ಚರಿಸುತ್ತಿದ್ದದ್ದು. ನಮ್ಮಲ್ಲಾಗಿರುವ ಅಪೂರ್ಣ ಜಗಳ, ಉತ್ತರಿಸದ ಸಂದೇಶ, ಸ್ಪಷ್ಟತೆ ಸಿಗದ ಅನುಮಾನ; ಇವೆಲ್ಲವೂ ಅಮೈಗ್ಡಲಾವನ್ನು ಚುರುಕುಗೊಳಿಸುತ್ತವೆ. ಅದರಿಂದ ಅಶಾಂತಿ, ಜೊತೆಗೆ ಭಾವನೆಗಳ ಒತ್ತಡ. ನಮ್ಮಲ್ಲಿ ಮತ್ತೊಂದು ಕ್ರಿಯಾಶೀಲವಾಗಿರುವುದು ‘ವರ್ಕಿಂಗ್ ಮೆಮೊರಿ’. ಅದಂತೂ ನಮ್ಮ ಮೆದುಳಿನ ಹಿಂಬದಿಯಲ್ಲಿ ಓಡುತ್ತಿರುವ ಅಪ್ಲಿಕೇಷನ್. ಅಪೂರ್ಣ ಕೆಲಸಗಳು ಅದರಲ್ಲಿ ಓಡುತ್ತಲೇ ಇರುತ್ತವೆ. ಇದರಿಂದ ಫೋನ್ ಬ್ಯಾಟರಿ ಇಳಿದಂತೆ ಮನಸ್ಸಿನ ಶಕ್ತಿ ಕುಂಠಿತವಾಗುತ್ತದೆ. ಹಾಗಾಗಿಯೇ ವಿವೇಕಿಗಳು ಹೇಳುವರು, ‘‘ಅತ್ತುಬಿಡು, ಜಗಳವಾಡಿಬಿಡು, ಒಳಗಿರುವುದನ್ನೆಲ್ಲಾ ಹೊರಕ್ಕೆ ಕಕ್ಕಿ ಬಿಡು’’ ಎಂದು. ಕೆಲವರಲ್ಲಿ ಬಾಲ್ಯದಿಂದಲೂ ವಯಸ್ಕರ ಜೀವನದವರೆಗೂ ಅನಿಸಿದ್ದನ್ನು ಹೇಳಲಾಗದೆ, ಮಾಡಲಾಗದೆ ಅಪೂರ್ಣ ಭಾವನೆಗಳನ್ನು, ಆಲೋಚನೆಗಳನ್ನು, ಪ್ರತ್ರಿಕ್ರಿಯೆಗಳನ್ನು ಹೊತ್ತುಕೊಂಡೇ ಇಡೀ ಬದುಕನ್ನೇ ಒತ್ತಡದಲ್ಲಿ ಇಟ್ಟುಕೊಂಡಿರುವರು. ರಹಸ್ಯಗಳನ್ನು ಹೊಂದಿರುವವರ ಕತೆಯೂ ಇದೇ ಒತ್ತಡದ ವ್ಯಥೆಗಳೇ!
ಗುಜರಾತ್ | ಅಕಾಲಿಕ ಮಳೆಯಿಂದ ಹತ್ತಿ ಬೆಲೆ ಕುಸಿತ, ರೇವಾನಿಯಲ್ಲಿ ರೈತ ಆತ್ಮಹತ್ಯೆ
17 ವರ್ಷಗಳಿಂದ ಏರಿಲ್ಲ ಹತ್ತಿಯ ಬೆಳೆ; ಹತ್ತಿ ಬೆಳೆದು ಮೂರಾ ಬಟ್ಟೆಯಾದ ರೈತರು
LPG Connection: ಹೊಸ ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ, ದಾಖಲೆ ಸಲ್ಲಿಕೆ ಹೇಗೆ?
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) ಗ್ಯಾಸ್ ಏಜೆನ್ಸಿಗಳಿಂದ ಉಜ್ವಲ-3 ಅಡಿಯಲ್ಲಿ ಹೊಸ ಗ್ಯಾಸ್ ಸಂಪರ್ಕ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟದಲ್ಲಿ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳು ಏಜೆನ್ಸಿಗಳಿಗೆ ನೇರವಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಈ ಸೌಕರ್ಯ
ಇಂಡಿಗೋ ವಿಮಾನಗಳ ರದ್ದತಿಯಿಂದ ಸಮಸ್ಯೆ: ಭಾರತೀಯ ರೈಲ್ವೆಯಿಂದ 3 ದಿನಗಳ ಕಾಲ 89 ವಿಶೇಷ ರೈಲುಗಳ ಸೇವೆ
ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ, ಭಾರತೀಯ ರೈಲ್ವೇಯು ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ಶನಿವಾರದಿಂದ ಮೂರು ದಿನಗಳ ಕಾಲ ಒಟ್ಟು 89 ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ದೇಶದಾದ್ಯಂತ 100 ಕ್ಕೂ ಹೆಚ್ಚು ಪ್ರವಾಸಗಳನ್ನು ಕೈಗೊಳ್ಳಲಿವೆ.
12 ವರ್ಷಕ್ಕೆ ಮೊದಲು ಮಕ್ಕಳ ಕೈಗೆ ಸ್ಮಾರ್ಟ್ಫೋನ್ ನೀಡಿದರೆ ಆರೋಗ್ಯ ಸಮಸ್ಯೆ ಕಾಡಲಿದೆ!
ಮಕ್ಕಳ ಕೈಗೆ ಫೋನ್ ಕೊಡುವ ಸರಿಯಾದ ವಯಸ್ಸು ಯಾವುದು ಎನ್ನುವುದು ಪೋಷಕರಿಗೆ ಇಂದಿಗೂ ಗೊಂದಲದ ವಿಷಯವಾಗಿದೆ. ಮಕ್ಕಳನ್ನು ಇನ್ಫ್ಲೂಯೆನ್ಸರ್ ಆಗಿ ವೀಡಿಯೋ ಬ್ಲಾಗ್ಗಳಲ್ಲಿ ತೋರಿಸುವುದು ಅಥವಾ ಅಂತಹ ಕ್ರಿಯೆಗಳಿಗೆ ಉತ್ತೇಜಿಸುವ ಹೆತ್ತವರು ಅವರ ಆರೋಗ್ಯವನ್ನು ಕಡೆಗಣಿಸಿರುತ್ತಾರೆ! ರಚನಾಗೆ ಇನ್ನೂ ಎರಡು ವರ್ಷ ತುಂಬಿಲ್ಲ. ಆದರೆ ಫೋನ್ ಕಂಡರೆ ಸಾಕು ರಚ್ಚೆ ಹಿಡಿದು ಅಳುತ್ತಾಳೆ. ಫೋನ್ ಕೈಗೆ ಕೊಟ್ಟರೆ ಊಟ ಸೇರುವುದು. ಆದರೆ ಚಿಕ್ಕ ಮಕ್ಕಳಿಗೆ ಹೀಗೆ ಫೋನ್ ಆಮಿಷ ತೋರಿಸಿ ಊಟ ಮಾಡಿಸುವುದು ಅಥವಾ ಇತರ ಕೆಲಸಗಳನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ? ಯಾವ ವಯಸ್ಸಿನಲ್ಲಿ ಮಕ್ಕಳ ಕೈಗೆ ಫೋನ್ ಕೊಡಬಹುದು? ಮಕ್ಕಳ ಕೈಗೆ ಫೋನ್ ಕೊಡುವ ಸರಿಯಾದ ವಯಸ್ಸು ಯಾವುದು ಎನ್ನುವುದು ಪೋಷಕರಿಗೆ ಇಂದಿಗೂ ಗೊಂದಲದ ವಿಷಯವಾಗಿದೆ. ಮಕ್ಕಳನ್ನು ಇನ್ಫ್ಲೂಯೆನ್ಸರ್ ಆಗಿ ವೀಡಿಯೋ ಬ್ಲಾಗ್ಗಳಲ್ಲಿ ತೋರಿಸುವುದು ಅಥವಾ ಅಂತಹ ಕ್ರಿಯೆಗಳಿಗೆ ಉತ್ತೇಜಿಸುವ ಹೆತ್ತವರು ಸಾಕಷ್ಟಿದ್ದಾರೆ. 12ರ ವಯಸ್ಸಿಗೆ ಸ್ಮಾರ್ಟ್ಫೋನ್ ಪಡೆದರೆ ಆರೋಗ್ಯ ಸಮಸ್ಯೆ ಸೋಮವಾರ ಜರ್ನಲ್ ಪೀಡಿಯಾಟ್ರಿಕ್ಸ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಕಾರ 12 ವಯಸ್ಸಿನೊಳಗೆ ಸ್ಮಾರ್ಟ್ಫೋನ್ ಬಳಸದ ಮಕ್ಕಳಿಗೆ ಹೋಲಿಸಿದರೆ ಸ್ಮಾರ್ಟ್ಫೋನ್ ಹೊಂದಿರುವ ಮಕ್ಕಳಲ್ಲಿ ಖಿನ್ನತೆ, ಬೊಜ್ಜು ಮತ್ತು ನಿದ್ರಾರಾಹಿತ್ಯದ ಸಮಸ್ಯೆ ಹೆಚ್ಚಾಗಿರಲಿದೆ. ಸಂಶೋಧಕರು 10,500ಕ್ಕೂ ಹೆಚ್ಚು ಮಕ್ಕಳನ್ನು ಅಧ್ಯಯನ ನಡೆಸಿದ್ದರು. ದೀರ್ಘಕಾಲೀನ ಸಮಯದಲ್ಲಿ ಅಮೆರಿಕದ ಮಕ್ಕಳ ಮೆದುಳಿನ ಮೇಲೆ ಸ್ಮಾರ್ಟ್ಫೋನ್ ಬಳಕೆಯ ಪರಿಣಾಮವನ್ನು ಈ ಅಧ್ಯಯನ ನಡೆಸಿದೆ. 12 ವರ್ಷಗಳ ಒಳಗೆ ಸ್ಮಾರ್ಟ್ಫೋನ್ ಪಡೆದ ಮಕ್ಕಳಲ್ಲಿ ಬೊಜ್ಜು ಮತ್ತು ನಿದ್ರಾರಾಹಿತ್ಯದ ಸಮಸ್ಯೆ ಹೆಚ್ಚಿದ್ದವು. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಫೋನ್ ನಕಾರಾತ್ಮಕ ಪರಿಣಾಮ ಬೀರಿರುವುದು ಕಂಡುಬಂದಿದೆ. ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಜ್ಞರಾಗಿರುವ ಡಾ ರ್ಯಾನ್ ಬಾರ್ಜಿಲೇ ಪ್ರಕಾರ, “ಮಕ್ಕಳ ಕೈಗೆ ಫೋನ್ ಕೊಡುವಾಗ ಅದು ಅವರಿಗೆ ಅಗತ್ಯವೇ ಇಲ್ಲವೇ ಎನ್ನುವುದನ್ನು ಪೋಷಕರು ಗಮನಿಸಬೇಕು. 12 ವರ್ಷದೊಳಗಿನ ವಯಸ್ಸು ಮತ್ತು 16ರ ವಯಸ್ಸಿನಲ್ಲಿ ಬಹಳ ಅಂತರವಿದೆ. 40-42ರ ವಯಸ್ಸಿನಂತೆ ಇರುವುದಿಲ್ಲ” ಹದಿಹರೆಯ ಬಹಳ ಸೂಕ್ಷ್ಮ ಸಮಯವಾಗಿದ್ದು, ನಿದ್ರೆ ಅಥವಾ ಮಾನಸಿಕ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ದೀರ್ಘ ಸಮಯದ ಕಾಲ ಅದರ ಪರಿಣಾಮವನ್ನು ಅವರು ಅನುಭವಿಸಬೇಕಾಗಿ ಬರಬಹುದು. ಸ್ಮಾರ್ಟ್ಫೋನ್ ಹೊಂದಿದ ಹದಿಹರೆಯದ ಮಕ್ಕಳು ಸಾಮಾಜಿಕವಾಗಿ ಹೆಚ್ಚು ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸದೆ ಇರಬಹುದು ಎಂದು ತಜ್ಞರು ಅಧ್ಯಯನದ ನಂತರ ಅಭಿಪ್ರಾಯುಪಟ್ಟಿದ್ದಾರೆ. ಶೇ 50ಕ್ಕೂ ಮೀರಿದ ಪ್ರಮಾಣದಲ್ಲಿ ಸ್ಮಾರ್ಟ್ಫೋನ್ನಲ್ಲಿ ಕಳೆದ ಮಕ್ಕಳು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾಗಿರುವ ಪಿಎಂಸಿ ಅಧ್ಯಯನದ ಪ್ರಕಾರ ಅಧ್ಯಯನದಲ್ಲಿ ಬಳಸಿದ ಒಟ್ಟು ಮಾದರಿಯಲ್ಲಿ ಸ್ಮಾರ್ಟ್ಫೋನ್ ವ್ಯಸನದ ಹರಡುವಿಕೆಯ ಪ್ರಮಾಣ (ಶೇ 53.3%) ತುಲನಾತ್ಮಕವಾಗಿ ಹೆಚ್ಚಿತ್ತು. ಭಾಗವಹಿಸುವವರು ದಿನಕ್ಕೆ 6.85 (4.62) ಗಂಟೆಗಳ ಕಾಲ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಕಳೆದಿದ್ದರು. ಇದು ಕೋವಿಡ್ ಸಾಂಕ್ರಾಮಿಕ ಅವಧಿಗೆ ಹಿಂದಿನ ಸಮಯಕ್ಕೆ ಹೋಲಿಸಿದರೆ ಶೇ 53.86ರಷ್ಟು ಹೆಚ್ಚಾಗಿದೆ. ಪ್ರಾಥಮಿಕ ಸ್ಮಾರ್ಟ್ಫೋನ್ ಬಳಕೆಯು ಸಾಮಾಜಿಕ ಜಾಲತಾಣ (ಶೇ 77.9), ವೆಬ್-ಸರ್ಫಿಂಗ್ (ಶೇ 53.3) ಮತ್ತು ಕ್ಯಾಮೆರಾ ಚಟುವಟಿಕೆಗಳು (ಶೇ 50.9) ಎಂದು ಅಧ್ಯಯನ ಕಂಡುಕೊಂಡಿದೆ. ಕಣ್ಣು, ತಲೆನೋವು, ನಿದ್ರಾರಾಹಿತ್ಯದ ಸಮಸ್ಯೆಗಳು ಸ್ಮಾರ್ಟ್ಫೋನ್ ಬಳಕೆಗೆ ಸಂಬಂಧಿಸಿದ ಅಸ್ವಸ್ಥತೆ ಹೆಚ್ಚಾಗಿ ಕಣ್ಣುಗಳಲ್ಲಿ (ಶೇ 39.7) ಮತ್ತು ಕುತ್ತಿಗೆಯಲ್ಲಿ (ಶೇ 39.1) ಕಂಡುಬರುತ್ತದೆ ಎಂದು ವರದಿಯಾಗಿದೆ. ಸ್ಮಾರ್ಟ್ಫೋನ್ ವ್ಯಸನ ಮತ್ತು ಕಣ್ಣುಗಳು, ಕುತ್ತಿಗೆ, ಮಣಿಕಟ್ಟುಗಳು, ಭುಜಗಳು ಮತ್ತು ಮೇಲಿನ ಬೆನ್ನಿನಲ್ಲಿನ ಅಸ್ವಸ್ಥತೆಯ ನಡುವೆ ಸಕಾರಾತ್ಮಕ ಸಂಬಂಧ ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ. ಇಂಟರ್ನ್ಯಾಷನಲ್ ಜರ್ನಲ್ ಫಾರ್ ಕಮ್ಯುನಿಟಿ ಮೆಡಿಸಿನ್ ಮತ್ತು ಪಬ್ಲಿಕ್ ಹೆಲ್ತ್ ನಡೆಸಿದ ಮತ್ತೊಂದು ಅಧ್ಯಯನದಲ್ಲಿ 5-12ರ ವಯಸ್ಸಿನ ಮಕ್ಕಳಲ್ಲಿ ಶೇ 42.3ರಷ್ಟು ಫೋನ್ ವ್ಯಸನ ಕಂಡುಬಂದಿದೆ. ಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಲ್ಲಿ ಫೋನ್ ವ್ಯಸನದಿಂದಾಗಿ ಕಣ್ಣಿನ ಸಮಸ್ಯೆ, ತಲೆನೋವು, ಗಮನ ಕೇಂದ್ರೀಕರಿಸುವಲ್ಲಿ ವಿಫಲವಾಗುವುದು, ನಿದ್ರಾ ರಾಹಿತ್ಯ ಮೊದಲಾದ ಸಮಸ್ಯೆ ಕಂಡುಬಂದಿದೆ ಎಂದು ಅಧ್ಯಯನ ವರದಿ ಹೇಳಿದೆ
ಇಂಡಿಗೊ ವೈಫಲ್ಯ: ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಪತ್ರ
ಹೊಸದಿಲ್ಲಿ,ಡಿ.7: ಇಂಡಿಗೊ ವೈಫಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಸಿಪಿಎಂ ಸದನ ನಾಯಕ ಜಾನ್ ಬ್ರಿಟ್ಟಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನಿಯಂತ್ರಕ ವೈಫಲ್ಯಗಳು, ವಾಯುಯಾನ ಸಂಸ್ಥೆಯ ಸನ್ನದ್ಧತೆ, ಸುರಕ್ಷತಾ ನಿಯಮಗಳ ದುರ್ಬಲಗೊಳಿಸುವಿಕೆ ಮತ್ತು ವಿಮಾನಯಾನ ದರಗಳ ಏರಿಕೆ ಇತ್ಯಾದಿಗಳ ಕುರಿತು ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ಅಥವಾ ನ್ಯಾಯಾಂಗ ವಿಚಾರಣಾ ಆಯೋಗವನ್ನು(ಸಿಐಒ) ರಚಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಮಾರುಕಟ್ಟೆಯ ಮೇಲೆ ಅತಿಯಾದ ಪ್ರಾಬಲ್ಯವನ್ನು ಸಾಧಿಸಲು ಒಂದು ಅಥವಾ ಎರಡು ವಿಮಾನಯಾನ ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟಿರುವ ಅಸ್ತಿತ್ವದಲ್ಲಿರುವ ನೀತಿ ಚೌಕಟ್ಟನ್ನು ಜೆಪಿಸಿ ಅಥವಾ ಸಿಐಒ ಪರಿಶೀಲಿಸಬೇಕು. ಜೊತೆಗೆ ಸಾಮೂಹಿಕ ವ್ಯತ್ಯಯಗಳ ಸಮಯದಲ್ಲಿ ಪ್ರಯಾಣಿಕರಿಗೆ ಸ್ವಯಂಚಾಲಿತ ಪರಿಹಾರ, ನ್ಯಾಯಯುತವಾಗಿ ನಡೆಸಿಕೊಳ್ಳುವಿಕೆ ಮತ್ತು ಪಾರದರ್ಶಕ ಬೆಲೆ ನಿಗದಿಯನ್ನು ಖಾತರಿಗೊಳಿಸುವ ಶಾಸನಬದ್ಧ ಪ್ರಯಾಣಿಕರ ಹಕ್ಕುಗಳ ಮಸೂದೆಯ ತುರ್ತು ಅಗತ್ಯವನ್ನೂ ಪರಿಶೀಲಿಸಬೇಕು ಎಂದು ಬ್ರಿಟ್ಟಾಸ್ ಹೇಳಿದ್ದಾರೆ. ಇಂಡಿಗೋ ಸೇವೆಗಳ ಸಾಮೂಹಿಕ ರದ್ದತಿಯು ನಿಯಂತ್ರಕ ಸನ್ನದ್ಧತೆ,ಮಾರುಕಟ್ಟೆ ಮೇಲ್ವಿಚಾರಣೆ ಮತ್ತು ಗ್ರಾಹಕ ರಕ್ಷಣೆಯಲ್ಲಿನ ‘ತೀವ್ರ ರಚನಾತ್ಮಕ ವೈಫಲ್ಯಗಳನ್ನು’ ಬಹಿರಂಗಗೊಳಿಸಿದೆ. ಇದರಿಂದಾಗಿ ಸಾಮಾನ್ಯ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲಕುವಂತಾಗಿದೆ. ಒಂದು ವಿಮಾನಯಾನ ಸಂಸ್ಥೆಯು ಮಾರುಕಟ್ಟೆಯಲ್ಲಿ ಅಸಾಧಾರಣ ಪ್ರಾಬಲ್ಯವನ್ನು ಹೊಂದಿರುವಾಗ ಅದರ ವೈಫಲ್ಯವು ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಬ್ರಿಟ್ಟಾಸ್ ಪತ್ರದಲ್ಲಿ ಹೇಳಿದ್ದಾರೆ. ಊಹಿಸಬಹುದಾಗಿದ್ದ ಒತ್ತಡದಡಿ ವ್ಯವಸ್ಥೆಯು ಕುಸಿದು ಬಿದ್ದ ಬಳಿಕ ಮೊದಲು ಜಾರಿಗೊಳಿಸಲಾಗಿದ್ದ ಸುರಕ್ಷತಾ ನಿಯಮಗಳನ್ನು ಅವಸರದಿಂದ ಸಡಿಲಿಸಿದ್ದು ಅಥವಾ ಹಿಂದೆಗೆದುಕೊಂಡಿದ್ದು ವಾಣಿಜ್ಯ ಲಾಭಕ್ಕಾಗಿ ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಲಾಗಿದೆ ಎಂಬ ಕಳವಳಗಳನ್ನು ಹುಟ್ಟು ಹಾಕಿದೆ ಎಂದೂ ಬ್ರಿಟ್ಟಾಸ್ ಪತ್ರದಲ್ಲಿ ಹೇಳಿದ್ದಾರೆ.
ಗಾಂಧಿಯವರನ್ನು ಸಹಜವಾಗಿ ತೀರಿಹೋದವರಾಗಿ ತೋರಿಸುವ ಜಗತ್ತಿನಲ್ಲಿ - ಗಾಂಧಿಯನ್ನು ಕೊಂದರು ಎಂದು ಹೇಳುವುದು ದ್ವೇಷಕ್ಕೆ ಬೆಂಕಿ ಹಚ್ಚುವುದಲ್ಲ; ದ್ವೇಷವನ್ನು ಮತ್ತೆ ಹುಟ್ಟದಂತೆ ಮಾಡುವ ಎಚ್ಚರಿಕೆಯ ಸಾಲು. ಸುಳ್ಳು ಸುಲಭ, ಸತ್ಯ ಕಠಿಣ. ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಕಠಿಣ ಸತ್ಯದ ಮೇಲೆ ನಿಂತಿರಬೇಕು. ಗಾಂಧಿಯವರ ಕೊಲೆ ಎಂಬ ವಾಕ್ಯ ಜಾಡ್ಯವಾದರೆ ಸಹ, ಆ ಜಾಡ್ಯದಲ್ಲಿ ಪಾಠವಿದೆ. ತಲೆಮಾರುಗಳ ಸುರಕ್ಷತೆ ಇದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಶ್ವಾಸವಿದೆ. ಮತ್ತೆ ಮತ್ತೆ ಗಾಂಧಿಯನ್ನು ಹೊಸ ಬಗೆಯಲ್ಲಿ ನಿರ್ವಚಿಸುವ, ದೂರಸರಿಯುವ ಮನಸ್ಥಿತಿಯನ್ನು ಮತ್ತೆ ಗಾಂಧಿಪ್ರಭೆಯ ಒಳಗಡೆ ಕೂರಿಸುವ ಶಕ್ತಿ ಅವರ ಮಾತಿಗಿತ್ತು. ಅವರಷ್ಟೇ ಅಲ್ಲ, ಅವರ ತಂದೆ ಕೂಡ ತಮ್ಮ ಮನೆಯ ದೇವರ ಕೋಣೆಯಲ್ಲಿ ಗಾಂಧಿ, ಪಟೇಲ್ ಮತ್ತು ಶಾಸ್ತ್ರಿಗಳ ಫೋಟೊವನ್ನು ಇಟ್ಟುಕೊಂಡಿದ್ದರಂತೆ. ಭಗವಂತನಿಗೆ ಮಂಗಳಾರತಿ ಎತ್ತಿದ ನಂತರ ಇವರೆಲ್ಲರಿಗೆ ಆರತಿ ಬೆಳಗಿದ ಮೇಲೆಯೇ ಅವರ ಪೂಜಾ ಶಾಸ್ತ್ರ ಮುಗಿಯುತ್ತಿತ್ತಂತೆ. ಇದನ್ನೆಲ್ಲ ನನಗೆ ಮಗನೇ ಹೇಳಿದ ನೆನಪು. ಆರೇಳು ತಿಂಗಳ ಹಿಂದೆ ಮತ್ತೆ ಅವರ ಉಪನ್ಯಾಸ ಕೇಳಿದಾಗ ಪಕ್ಕನೆ ಯಾರ ಗಮನಕ್ಕೂ ಬಾರದಂತಹ ಒಂದು ಪುಟ್ಟ ಬದಲಾವಣೆಯನ್ನು ಕಂಡೆ. ಯಾಕೋ ಈ ಬಾರಿ ಅವರು, ‘‘ಗಾಂಧಿಯನ್ನು ಕೊಲೆ ಮಾಡಿದರು’’ ಅನ್ನುವ ಕಡೆಗಳಲ್ಲಿ ಒಂದೆರಡು ಬಾರಿ ‘‘ಗಾಂಧೀಜಿ ತೀರಿ ಹೋದರು’’, ‘‘ಗಾಂಧಿ ಅಗಲಿದರು’’, ‘‘ಗಾಂಧಿ ಇನ್ನಿಲ್ಲವಾದರು’’ ಎಂಬ ಶಬ್ದಗಳನ್ನೆಲ್ಲ ಬಳಸುತ್ತಿದ್ದರು. ಗಾಂಧಿಯನ್ನು ಕೊಂದರು, ಗಾಂಧಿಯನ್ನು ಕೊಲೆ ಮಾಡಿದರು ಎಂದು ಅವರು ಇಡೀ ಉಪನ್ಯಾಸದಲ್ಲಿ ಹೇಳುವುದನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದಂತಿತ್ತು. ಮೊದಮೊದಲ ಪಿಸ್ತೂಲ್ನಿಂದ ಹಾರುವ ಗುಂಡು, ಅದರ ಶಬ್ದ, ಆನಂತರ ಗಾಂಧಿಯಿಂದ ಬರುವ ಆರ್ತನಾದ ಎಲ್ಲವನ್ನೂ ವೇದಿಕೆ ಮೇಲೆ ಅಭಿನಯಪೂರಕವಾಗಿ ತೋರಿಸುತ್ತಿದ್ದ ಆ ಗಾಂಧಿವಾದಿ ಈಗ ಯಾಕೆ ಇಷ್ಟೊಂದು ಬದಲಾದರು ಎನ್ನುವುದು ಕಾಡುತ್ತಲೇ ಇತ್ತು. ಹಾಗೇ ಅವರ ತಲೆ ಮೇಲಿನ ಗಾಂಧಿ ಟೋಪಿಯೂ ಮಾಯವಾಗಿತ್ತು. ಬರೀ ಗಾಂಧಿ ಒಬ್ಬರೇ ಅಲ್ಲ, ಈ ಪ್ರಪಂಚದ ಯಾರೇ ರಾಷ್ಟ್ರೀಯ ನಾಯಕರು, ಹೋರಾಟಗಾರರು, ಅಧ್ಯಕ್ಷ -ಪ್ರಧಾನಿ, ಮುಂಚೂಣಿ ನಾಯಕರು ಕೊಲೆಯಾಗುವುದಕ್ಕೂ ಸಹಜವಾಗಿ ಸಾಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಂತ್ಯ ಎಲ್ಲವೂ ಒಂದೇ ಆದರೂ ಕಾರಣಗಳು ಬೇರೆ ಬೇರೆ ಇರುತ್ತವೆ. ಇವುಗಳನ್ನು ಬದಲಾಯಿಸಿದಾಗ ಅಲ್ಲಿಂದ ಮುಂದೆ ಸಾಗುವ ಚರಿತ್ರೆ, ಅದನ್ನು ಕೇಳಿಸಿಕೊಳ್ಳುವ ತಲೆಮಾರು ಸಾಧಕರ ಜೀವನ -ಜೀವಾಂತ್ಯವನ್ನು ಬೇರೆಯೇ ಆಗಿ ಪರಿಗಣಿಸುವ ಸಾಧ್ಯತೆಗಳೇ ಹೆಚ್ಚು. ಗಾಂಧಿ ಸಹಜ ಸಾವಿಗೊಳಗಾದರಾ? ಗಾಂಧಿಯನ್ನು ಕೊಲ್ಲಲಾಯಿತಾ? ಈ ಎರಡು ವಾಕ್ಯಗಳ ನಡುವಿನ ವ್ಯತ್ಯಾಸ ಒಂದು ಪದದ ಗಾತ್ರದಷ್ಟೇ ಆಗಿರಬಹುದು, ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಆ ಪದದಲ್ಲೇ ಅಡಗಿದೆ ಮತ್ತು ಆ ಎಚ್ಚರಿಕೆ ನಿರಂತರ ಆಡುವವರಲ್ಲೂ, ಕೇಳುವವರಲ್ಲೂ ಇರಬೇಕು. ಸಾವು ಪ್ರಾಕೃತಿಕ, ಅತ್ಯಂತ ಸರಳ, ಜೀವಲೋಕದ ಪರಮ ಸತ್ಯ. ಆದರೆ ಅದು ಕೊಲೆ ಎಂದಾಗ ಅದಕ್ಕೆ ಕಾರಣವೇನು, ಯಾರಿಂದ ಆಯಿತು, ಏಕೆ ಆಯಿತು - ಎನ್ನುವ ಮೂರು ಪ್ರಶ್ನೆಗಳು ಕಡ್ಡಾಯವಾಗಿ ಹುಟ್ಟುತ್ತವೆ. ಎಷ್ಟೋ ಬಾರಿ ಇದು ಬರಿ ಬಾಯಿ ತಪ್ಪಲ್ಲ, ಉದ್ದೇಶಪೂರ್ವಕ ನಾಜೂಕು-ಕೌಶಲ್ಯ. ಆ ನಿವೃತ್ತ ಮೇಷ್ಟ್ರೇ ಆಗಬೇಕಾಗಿಲ್ಲ, ಅವರೀಗ ಜೀವಂತ ಇಲ್ಲದಿದ್ದರೂ ಆ ಜಾಗದಲ್ಲಿ ನಾನು ನೀವು ಯಾರೇ ಇರಬಹುದು, ಅತಿ ಸೂಕ್ಷ್ಮ, ಶಿಸ್ತುಬದ್ಧ, ಅತಿ ಸಂಚಯಯುತ ಸಾಂದರ್ಭಿಕ ಪ್ರಕ್ರಿಯೆಯಿದು. ಗಾಂಧೀಜಿಯವರನ್ನು ಕೊಲ್ಲಲಾಯಿತು. ಇದನ್ನು ಕೇಳಿಸಿಕೊಳ್ಳುವ ಮಕ್ಕಳ ಮನಸ್ಸಿಗೆ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಅನಿರ್ಬಂಧಿತ ದ್ವೇಷ ಮತ್ತು ಹಿಂಸೆಯ ಪರಿಣಾಮದ ಬಗ್ಗೆ ಕನಿಷ್ಠ ಒಂದು ಎಚ್ಚರಿಕೆ ಸಿಗುತ್ತಿತ್ತು. ತಪ್ಪಾದ ರಾಜಕೀಯವೂ, ದ್ವೇಷ ಚಿಂತನೆಗಳೂ ದೇಶದ ಮಹಾನ್ ನಾಯಕನೊಬ್ಬನನ್ನು ಹೀಗೆ ಕೊಲ್ಲಲು ಬರುತ್ತದೆ ಎಂಬ ಅರಿವು ಎಚ್ಚರವನ್ನು ಕಟ್ಟಿಕೊಳ್ಳುತ್ತಿತ್ತು. ಇದು ಕೇವಲ ಒಂದು ಪಕ್ಷ, ಸಿದ್ಧಾಂತದ ನೆಲೆಯಲ್ಲೇ ಆಗಬೇಕಾಗಿಲ್ಲ. ಕೊಲೆ ಎಂಬ ಅತ್ಯಂತ ಕ್ರೂರ ಕಠಿಣ, ಕಡಿಯುವ, ಕಚ್ಚುವ ಪದದ ಬದಲು ಮೃದು ಹಾಗೂ ನಿಷ್ಕಳಂಕ ವಾಕ್ಯ ಗಾಂಧೀಜಿಯವರು ತೀರಿಹೋದರು ಎಂಬುದಕ್ಕೆ ಸೇರಿಕೊಳ್ಳುತ್ತದೆ. ಇಲ್ಲಿ ಕೊಂದರು ಎಂದ ತಕ್ಷಣ ಮೇಲೆ ಹೇಳಿದಂತೆ ಹುಟ್ಟಿಕೊಳ್ಳುವ ಹೇಗೆ? ಯಾಕೆ? ಎಲ್ಲಿ? ಏನು?.. ಎಂಬಿತ್ಯಾದಿಗಳು ಸಹಜವಾಗಿಯೇ ನಾಪತ್ತೆಯಾಗುತ್ತವೆ. ಇಲ್ಲಿ ಒಂದು ಸತ್ಯಾಂಶವನ್ನು ಬದಲಾಯಿಸುವುದು ನಿಷ್ಕಪಟವಾಗಿ ಕಾಣಬಹುದು. ಆದರೆ ಇದರ ಅಂತರಾಳದಲ್ಲಿ ಸದುದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚಿರುತ್ತದೆ. ಕೊಲೆ ಮಾಡಿದವರು ಇಲ್ಲದಿದ್ದರೆ, ಕೊಲೆಗೂ ಕಾರಣವಿಲ್ಲ, ಕಾರಣವಿಲ್ಲದಿದ್ದರೆ ದ್ವೇಷವಿಲ್ಲ, ದ್ವೇಷವಿಲ್ಲದಿದ್ದರೆ ತಪ್ಪು ಸಿದ್ಧಾಂತವಿಲ್ಲ, ತಪ್ಪು ಸಿದ್ಧಾಂತವಿಲ್ಲದಿದ್ದರೆ ಮುಂದೆ ನಡೆಯುವ ಪಾಠ ಮಾತು ಸಂವಾದ ಚರ್ಚೆ ಏಕೆ? ಯಾರಿಗೆ? ನಿಜಕ್ಕೂ, ನಮ್ಮಲ್ಲಿ ಅತ್ಯಂತ ಅಪಾಯಕಾರಿಯಾದ ಒಂಟಿ ಸುಳ್ಳು ಯಾವುದು ಗೊತ್ತಾ? ಜನರ ಕಣ್ಣು ಮುಂದೆಯೇ ಸುಳ್ಳನ್ನು ಸತ್ಯದ ವೇಷದಲ್ಲಿ ನಿಲ್ಲಿಸುವುದು. ಮನುಷ್ಯ ಯೋಚಿಸುತ್ತಾನೆ ಎನ್ನುವುದು ಜೈವಿಕ ಸತ್ಯ, ಆದರೆ ಹೇಗೆ ಯೋಚಿಸುತ್ತಾನೆ ಎನ್ನುವುದು ಸಾಮಾಜಿಕ ಸಾಂಸ್ಕೃತಿಕ ಸತ್ಯ ಎಂಬುವುದು ಅಂಬೇಡ್ಕರ್ ಅವರ ಮಾತು. ಕೊಲೆಯಾದ ಗಾಂಧಿಯನ್ನು ಸಹಜ ಸಾವಿನಲ್ಲಿ ಅಂತ್ಯಗೊಳಿಸಿದ ಮೇಲಿನ ವ್ಯಕ್ತಿ ಅಥವಾ ಮುಂದಿನ ನಾವು ನೀವು ಒಂದು ಕಾಲದಲ್ಲಿ ಸರಿಯಾದದ್ದನ್ನೇ ಯೋಚಿಸುತ್ತಿದ್ದೆವು. ಮತ್ತು ಅದು ಆ ಕಾಲದ ಸತ್ಯವಾಗಿತ್ತು. ಈಗ ಇಂಥ ಯೋಚನೆ ಬದಲಾಗುವುದಕ್ಕೆ, ಸರಳಗೊಳ್ಳುವುದಕ್ಕೆ ಕಾರಣ ನಮ್ಮ ಹೊರಗಡೆ ಇರುವ ಸತ್ಯಗಳು. ಯಾವುದೋ ಒಂದು ಕೇಂದ್ರದಲ್ಲಿ ಸತ್ಯದ ಪ್ರಮಾಣ ಬದ್ಧತೆಗಳು ಕೇಂದ್ರೀಕೃತಗೊಂಡು, ಅಲ್ಲಿಂದಲೇ ಹಂಚಿಕೆಯಾಗುವ, ನಿಯಂತ್ರಿಸಲ್ಪಡುವ ನಿರ್ದೇಶಿಸಲ್ಪಡುವ ಕಾಲಘಟ್ಟದಲ್ಲಿ ಆ ಪ್ರವಾಹದ ವಿರುದ್ಧ ಈಜುವುದು ಸರಿಯಲ್ಲ ಎಂಬ ಹೊಸ ಸತ್ಯ ಅವರ ಅರಿವಿಗೆ ಬಂದಿರಬಹುದು ಅಥವಾ ಸತ್ಯವನ್ನು ಹೀಗೆ ಬದಲಾಯಿಸಿಕೊಳ್ಳುವ ನಮ್ಮ ನಿಮ್ಮೊಳಗಡೆಯೇ ಅದು ಇರಬಹುದು.ಎಲ್ಲರೊಂದಿಗೆ ಸರಿದೂಗಿಸಿ ಒಟ್ಟಿಗೆ ಚಲಿಸುವಾಗ ರಾಜಿಯಾಗುವುದೇ ಬದುಕಿಗೆ ಹೆಚ್ಚು ಸುಗಮ ಸುರಕ್ಷಿತ ಅನ್ನುವುದು ವರ್ತಮಾನದ ಅಗತ್ಯವಾಗಿದೆ. ಬರೀ ಗಾಂಧಿವಾದಿ ನಿವೃತ್ತ ಮೇಷ್ಟ್ರಲ್ಲ, ವರ್ತಮಾನದ ಬರಹಗಾರರು, ಚಿಂತಕರು, ಕವಿಗಳು, ಪ್ರಗತಿಪರರು, ಸಮಾಜ ಸುಧಾರಕರು, ಮುತ್ಸದ್ಧಿ ರಾಜಕಾರಣಿಗಳು ಕೂಡ ನಿಧಾನವಾಗಿ ಇಂತಹ ಸುಗಮ ಮತ್ತು ಸುಲಭ ಬದುಕಿಗೆ ಜಾರಿಕೊಳ್ಳುತ್ತಿದ್ದಾರೆ. ಕೆಲವರಿಗೆ ನಾನು ಅಂಕಣವನ್ನು ಹೇಗೆ ಬರೆಯುತ್ತಿದ್ದೇನೆ ಅನ್ನುವುದಕ್ಕಿಂತ ಯಾವ ಪತ್ರಿಕೆಯಲ್ಲಿ ಬರೆಯುತ್ತಿದ್ದೇನೆ ಅನ್ನುವುದು ಮುಖ್ಯವಾಗುತ್ತದೆ. ಹೇಗೆ ಪಾಠ ಮಾಡುತ್ತಿದ್ದೆ ಅನ್ನುವುದಕ್ಕಿಂತ ಯಾವ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದೆ ಎನ್ನುವುದು ಮುಖ್ಯವಾಗುತ್ತದೆ. ಒಂದು ಕಾಲದ ಬಲಾಢ್ಯರು ಈಗ ಬಲಹೀನರಾಗಿ ಒಂದು ಕಾಲದ ಬಲಹೀನರು ಬಲಾಢ್ಯರಾಗುತ್ತಿರುವಾಗ ಸತ್ಯಗಳು ಕೂಡ ಇಂತಹ ಪರಿವರ್ತನೆಗೆ ಒಳಗಾಗುವುದು ಕಾಲದ ನಿಯಮವೂ ಇರಬಹುದು. ಗಾಂಧೀಜಿಯವರ ಜೀವ ತೆಗೆದ ಹೊಂಚು ಅದು ಒಂದು ವ್ಯಕ್ತಿಯ ಬೆರಳಿಂದಷ್ಟೇ ಅಲ್ಲ, ಒಂದು ಚಿಂತನೆ, ಒಂದು ರೋಷ, ಒಂದು ವಿಷಕಾರಿ ರಾಜಕೀಯದ ಹೊತ್ತಿನಲ್ಲಿ ಹೊರಟದ್ದು. ಅದು ಬರೀ ಒಂದೇ ಪಕ್ಷ, ಸಿದ್ಧಾಂತವನ್ನು ಪ್ರತಿನಿಧಿಸುವ ರಾಜಕಾರಣಿಗಳೇ ಆಗಬೇಕಾಗಿಲ್ಲ. ಯಾವುದೇ ಪಕ್ಷದ ಯಾವುದೇ ನಾಯಕರಿರಬಹುದು. ಸಾಯಿಸಲಾದ ಆ ಗುಂಡಿನ ಹಿಂದಿರುವ ‘ಯಾಕೆ’ ಅನ್ನೋ ಪ್ರಶ್ನೆಗೆ ಗಂಭೀರವಾದ ರೀತಿಯಲ್ಲಿ ಉತ್ತರ ಹುಡುಕಲು ಸಾಧ್ಯವಾಗಿದ್ದರೆ ಇದು ಬರಿ ಗಾಂಧಿವಾದಿಗಳಿಗಷ್ಟೇ ಅಲ್ಲ ಅವರನ್ನು ವಿರೋಧಿಸುವವರಿಗೂ ಅಷ್ಟೇ ಪ್ರಮಾಣಬದ್ಧ ಉತ್ತರವಾಗುತ್ತಿತ್ತು. ಅದನ್ನು ಹುಡುಕಿದರೆ ಮುಂದಿನ ಪೀಳಿಗೆಯು ತಪ್ಪುಗಳನ್ನು ಪುನರಾವರ್ತಿಸುವುದನ್ನು ತಡೆಯುತ್ತಿತ್ತು. ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜಾತ್ಯತೀತವಾಗಿ, ರಾಜಕೀಯೇತರವಾಗಿ ಆ ಹುಡುಕಾಟದಿಂದ ಸಿಗುವ ಉತ್ತರದಿಂದ ಅಖಂಡ ದೇಶಕ್ಕೆ ಲಾಭವಾಗುತ್ತಿತ್ತು. ಗಾಂಧೀಜಿಯವರನ್ನು ‘ತೀರಿಹೋದರು’ ಎಂದು ಹೇಳಿದಾಗ ಬರುವ ಆರಾಮ, ಅದೆಷ್ಟೋ ಜನರಿಗೆ ಸುಲಭವಾದ ಶಾಂತಿಯ ನಂಬಿಕೆಯನ್ನು ನೀಡಬಹುದು. ಆದರೆ ಸುಳ್ಳಿನ ಶಾಂತಿ ಎಷ್ಟೊಂದು ಅಪಾಯಕಾರಿ ಎಂಬುದನ್ನು ಇತಿಹಾಸ ಅನೇಕ ಬಾರಿ ಕಲಿಸಿದೆ. ಗಾಂಧಿ ಹೋದರಂತೆ - ಅಷ್ಟು ಸರಳವಾದ ವಾಕ್ಯಕ್ಕೆ ಒಳಗಡೆ ಗೋಡೆಗಳಿರುವ ಅಂಧಕಾರವಿದೆ. ಏಕೆಂದರೆ ಹೋದರೆ ಪ್ರಶ್ನೆ ಇಲ್ಲ. ಪ್ರಶ್ನೆ ಇಲ್ಲದಿದ್ದರೆ ಉತ್ತರ ಬೇಡ. ಉತ್ತರ ಬೇಡವಾದರೆ ತಪ್ಪಿಗೆ ನ್ಯಾಯ ಬೇಕಾಗಿಲ್ಲ. ಭಾರತದ ಭವಿಷ್ಯ ಗಾಂಧಿಯ ಸಾವಿನಿಂದ ಅಲ್ಲ, ಅವರ ಕೊಲೆಯಲ್ಲಿ ಅಡಗಿರುವ ಪಾಠವನ್ನು ಅರ್ಥಮಾಡಿಕೊಳ್ಳುವುದರಿಂದ ರೂಪುಗೊಳ್ಳಬೇಕು. ಸತ್ಯ ಯಾವಾಗಲೂ ಕಠಿಣವೇ. ಆದರೆ ಕಠಿಣ ಸತ್ಯವೇ ಯಾವಾಗಲೂ ಸಮಾಜವನ್ನು ತಿದ್ದುತ್ತದೆ. ಸುಳ್ಳಿನ ನಯವಾದ ಸತ್ಯದ ವೇಷವು ಕೆಲವರಿಗೆ ಜೀವನ ಸುಗಮ ಮಾಡಬಹುದು, ಆದರೆ ರಾಷ್ಟ್ರದ ಪಾಲಿಗೆ ಅದು ವಿಷವೇ. ನಿನ್ನೆ ಅವರು, ನಾಳೆ ಇನ್ನೊಬ್ಬರಿಗೂ ಅದೇ ಕಠಿಣ ಪರಿಸ್ಥಿತಿ ಬರಬಹುದು. ನಿಜವನ್ನು ಮರೆಯುವ ರೀತಿ ಸುಮ್ಮನೆ ಭಾಷೆಯ ಬದಲಾವಣೆ ಅಲ್ಲ; ಅದು ನೆನಪು, ನಂಬಿಕೆ ಮತ್ತು ನೈತಿಕತೆಯ ಬದಲಾವಣೆ. ‘‘ಗಾಂಧಿಯನ್ನು ಕೊಲ್ಲಲಾಯಿತೇ?’’ ಎಂಬ ಪ್ರಶ್ನೆಯೊಳಗೇ ಒಂದು ಎಚ್ಚರಿಕೆ ಇದೆ. ‘‘ಗಾಂಧಿ ತೀರಿಹೋದರು’’ ಎನ್ನುವ ವಾಕ್ಯದೊಳಗೇ ಒಂದು ಹೊಂದಾಣಿಕೆ -ಸಮನ್ವಯವಿದೆ.ತಲೆಮಾರುಗಳು ಸುಳ್ಳಿಗೆ ಬೆಲೆ ಕೊಡಲು ಶುರು ಮಾಡಿದರೆ, ಇತಿಹಾಸದ ಜೀವಾಳವೇ ಬತ್ತುತ್ತದೆ. ಗಾಂಧಿಯ ಸಾವನ್ನು ಸಹಜ ಸಾವಾಗಿ ಬಿಂಬಿಸುವುದು ಗಾಂಧಿಗೆ ಗೌರವ ತೋರಿಸುವ ಮಾರ್ಗವಲ್ಲ - ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ, ಸತ್ಯಕ್ಕೆ ಮತ್ತು ತಲೆಮಾರುಗಳ ನೈತಿಕ ಶಿಕ್ಷಣಕ್ಕೆ ಮಾಡುವ ದ್ರೋಹ. ಮಕ್ಕಳಿಗೆ ಗಾಂಧಿ ಹೋದರು ಎಂದರೆ, ಒಬ್ಬ ಮಹಾನ್ ನಾಯಕ ಹೋದರು. ಆದರೆ ಗಾಂಧಿಯನ್ನು ಕೊಂದರು ಎಂದರೆ - ಯಾವ ಚಿಂತನೆ, ಯಾವ ದ್ವೇಷ, ಯಾವ ಹಿಂಸೆ ಒಬ್ಬ ಮಾನವತೆಯ ವ್ಯಕ್ತಿತ್ವವನ್ನು ಕೊಲ್ಲುವ ಮಟ್ಟಿಗೆ ಬಂದುಬಿಟ್ಟಿತ್ತು ಎಂಬ ಪ್ರಶ್ನೆ ಮೂಡುತ್ತದೆ. ಆ ಪ್ರಶ್ನೆ ಮೂಡುವುದೇ ಕೆಲವೊಮ್ಮೆ ಅಪಾಯ. ಏಕೆಂದರೆ ಸತ್ಯಕ್ಕೆ ಮುಖಕೊಡಿಸಿದಾಗ ದ್ವೇಷದ ಮೂಲ ಕಾಣುತ್ತದೆ, ಹಿಂಸೆಯ ಮೂಲ ಕಾಣುತ್ತದೆ, ತಪ್ಪಾದ ರಾಜಕೀಯದ ಮೂಲ ಕಾಣುತ್ತದೆ. ಆ ಮೂಲಗಳನ್ನು ಒಮ್ಮೆ ಕಂಡರೆ, ಸಮಾಜ ಮತ್ತೊಮ್ಮೆ ಅದೇ ತಪ್ಪನ್ನು ಮಾಡಲು ಬಿಡುವುದಿಲ್ಲ. ಅದಕ್ಕಾಗಿ ಸತ್ಯವನ್ನು ಮಸುಕಾಗಿಸಿ ಸುಳ್ಳನ್ನು ಮೃದುಗೊಳಿಸಿ ಕೊಡುವ ಈ ಕಾಲ ತನ್ನದೇ ಆದ ಯೋಜನೆ ಮಾಡಿಕೊಂಡಂತಿದೆ. ಗಾಂಧಿಯನ್ನು ಸಹಜವಾಗಿ ತೀರಿಹೋದವರಾಗಿ ತೋರಿಸುವ ಜಗತ್ತಿನಲ್ಲಿ - ಗಾಂಧಿಯವರನ್ನು ಕೊಂದರು ಎಂದು ಹೇಳುವುದು ದ್ವೇಷಕ್ಕೆ ಬೆಂಕಿ ಹಚ್ಚುವುದಲ್ಲ; ದ್ವೇಷವನ್ನು ಮತ್ತೆ ಹುಟ್ಟದಂತೆ ಮಾಡುವ ಎಚ್ಚರಿಕೆಯ ಸಾಲು. ಸುಳ್ಳು ಸುಲಭ, ಸತ್ಯ ಕಠಿಣ. ಆದರೆ ರಾಷ್ಟ್ರದ ನೈತಿಕ ಕೇಂದ್ರೀಯ ನಂಬಿಕೆ ಕಠಿಣ ಸತ್ಯದ ಮೇಲೆ ನಿಂತಿರಬೇಕು. ಗಾಂಧಿಯವರ ಕೊಲೆ ಎಂಬ ವಾಕ್ಯ ಜಾಡ್ಯವಾದರೆ ಸಹ, ಆ ಜಾಡ್ಯದಲ್ಲಿ ಪಾಠವಿದೆ. ತಲೆಮಾರುಗಳ ಸುರಕ್ಷತೆ ಇದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಶ್ವಾಸವಿದೆ. ದೇಶಕ್ಕಾಗಿ ಗಾಂಧಿ ಜೀವ ತ್ಯಾಗ ಮಾಡಿದರಲ್ಲ - ಆದರೆ ದೇಶಕ್ಕಾಗಿ ನಾವು ಅವರ ಸಾವಿನ ಸತ್ಯವನ್ನು ಕಾಪಾಡಬೇಕಾದ ಹೊಣೆ ಇನ್ನೂ ನಮ್ಮ ಮೇಲಿದೆ. ತಲೆಮಾರನ್ನು ತಿದ್ದುವ ಮೇಷ್ಟ್ರುಗಳಿಗೆ, ಬಹುದೂರ ತಲುಪುವ ಲೇಖಕರಿಗೆ, ಲೋಕ ಸಂಸ್ಕರಿಸುವ ಸಾಹಿತಿಗಳಿಗೆ, ಮಾತಿನಲ್ಲೇ ಮತಗಿಟ್ಟಿಸುವ ರಾಜಕಾರಣಿಗಳಿಗೆ ಆ ಹೊಣೆ ಇನ್ನೂ ದೊಡ್ಡದಿದೆ!
ವಿಮಾನಗಳ ಹಾರಾಟ ರದ್ಧತಿ| ಇಂಡಿಗೋ ಸಿಇಒಗೆ ಶೋಕಾಸ್ ನೋಟಿಸ್ ನೀಡಿದ ಡಿಜಿಸಿಎ
ಹೊಸದಿಲ್ಲಿ,ಡಿ.7: ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಕಳೆದ ವಾರ ನೂರಾರು ಇಂಡಿಗೋ ವಿಮಾನಯಾನಗಳ ರದ್ದತಿಗೆ ಕಾರಣವಾದ ಭಾರೀ ಪ್ರಮಾಣದ ಹಾರಾಟ ವ್ಯತ್ಯಯಗಳಿಗಾಗಿ ನಿಮ್ಮ ವಿರುದ್ಧ ಕ್ರಮವನ್ನು ಏಕೆ ಆರಂಭಿಸಬಾರದು ಎನ್ನುವುದರ ಕುರಿತು 24 ಗಂಟೆಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಿ ಕಂಪೆನಿಯ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಇಂತಹ ದೊಡ್ಡ ಪ್ರಮಾಣದ ಕಾರ್ಯಾಚರಣೆ ವೈಫಲ್ಯಗಳು ಯೋಜನೆ, ಮೇಲ್ವಿಚಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಗಮನಾರ್ಹ ಲೋಪಗಳನ್ನು ಹಾಗೂ ಪೈಲಟ್ಗಳ ವಿಶ್ರಾಂತಿ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳ ಅನುಸರಣೆಯಲ್ಲಿ ಕೊರತೆಯನ್ನು ಸೂಚಿಸುತ್ತವೆ ಎಂದು ಶೋಕಾಸ್ ನೋಟಿಸ್ನಲ್ಲಿ ಹೇಳಲಾಗಿದೆ. ವಿಮಾನ ನಿಯಮಗಳು,1937ರ 42ಎ ನಿಬಂಧನೆ ಮತ್ತು ಪೈಲಟ್ಗಳ ವಿಶ್ರಾಂತಿಗೆ ಸಂಬಂಧಿಸಿದ ನಾಗರಿಕ ವಾಯುಯಾನ ನಿಯಮಗಳನ್ನು ಪಾಲಿಸುವಲ್ಲಿ ಇಂಡಿಗೋ ವಿಫಲಗೊಂಡಿದೆ. ಸಿಇಒ ಆಗಿ ನೀವು ವಿಮಾನಯಾನ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ನಿಮ್ಮ ಹೊಣೆಗಾರಿಕೆಯಾಗಿದೆ. ಆದರೆ ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ನಡೆಸಲು ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಕಾಲಿಕ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವ ನಿಮ್ಮ ಕರ್ತವ್ಯದಲ್ಲಿ ನೀವು ವಿಫಲಗೊಂಡಿದ್ದೀರಿ ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ನಿಮ್ಮ ವಿರುದ್ಧ ಜಾರಿ ಕ್ರಮವನ್ನೇಕೆ ಆರಂಭಿಸಬಾರದು ಎನ್ನುವುದಕ್ಕೆ 24 ಗಂಟೆಗಳಲ್ಲಿ ವಿವರಿಸುವಂತೆ ಶೋಕಾಸ್ ನೋಟಿಸ್ನಲ್ಲಿ ತಿಳಿಸಲಾಗಿದೆ.
ಆರ್ಸಿಬಿ ಐಪಿಎಲ್ ಕಪ್ ಗೆದ್ದ ನಂತರ ಬೆಂಗಳೂರಿನಲ್ಲಿ ವಿಜಯೋತ್ಸವ ಯಾತ್ರೆ ನಡೆಯುವ ವೇಳೆ ಕಾಲ್ತುಳಿತ ಉಂಟಾಗಿ ಹನ್ನೆರಡು ಜನರು ಮೃತಪಟ್ಟಿದ್ದರು. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಾವಳಿಗಳು ನಡೆಯೋದಿಲ್ಲ ಎಂದು ಊಹಾಪೋಹಗಳು ಎದ್ದಿದ್ದವು ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಈ ಗೊಂದಲಗಳಿಗೆ ಬ್ರೇಕ್ ಹಾಕಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡೋ ಮಾತೆ ಇಲ್ಲ ಎಂದು ಹೇಳಿದ್ದಾರೆ.
ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ತುಂಟಾಟ, ವಿಡಿಯೋ ವೈರಲ್... Hardik Pandya
ಹಾರ್ದಿಕ್ ಪಾಂಡ್ಯ ಜೀವನ ಯಾಕೆ ಹಿಂಗಾಯ್ತು... ಇದಕ್ಕಿದ್ದಂತೆ ಫಾರಿನ್ ಹೆಂಡತಿ ಕೈಕೊಟ್ಟು ಹೋಗಿದ್ದು ಯಾಕೆ... ಹೀಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಚರ್ಚೆ ಮಾಡುವಾಗಲೇ, ಈ ಬಗ್ಗೆ ಆಕ್ರೋಶ ಕೂಡ ಮೊಳಗುತ್ತಿತ್ತು. ಹಾರ್ದಿಕ್ ಪಾಂಡ್ಯ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿ ಎಲ್ಲೆಲ್ಲೂ ಇದೇ ವಿಚಾರ ಹಲವು ತಿಂಗಳ ಕಾಲ ವೈರಲ್ ಆಗಿತ್ತು. ಕೊನೆಗೆ ಹಾರ್ದಿಕ್ ಪಾಂಡ್ಯ ಹೆಂಡತಿ ಬೇರೆ
Smriti Mandhana: ಭಾರತ ಕ್ರಿಕೆಟ್ ತಂಡದ ಸ್ಮೃತಿ ಮಂಧಾನ ಮದುವೆ ರದ್ದು.. ಇನ್ಸ್ಟಾಗ್ರಾಂ ಪೋಸ್ಟ್ನಲ್ಲೇನಿದೆ?
Smriti Mandhana's Marriage Cancelled: ಭಾರತ ಕ್ರಿಕೆಟ್ ತಂಡದ ಉಪನಾಯಕಿ, ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಮದುವೆ ರದ್ದಾಗಿದೆ. ಈ ಬಗ್ಗೆ ಸ್ವತಃ ಮಂಧಾನ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾದ್ರೆ ಅವರು ಇದರಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸ್ಮೃತಿ ಮಂಧಾನ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್
ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು. ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರ್ಘಟನೆ ಬಳಿಕ ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳು ಈ ಕ್ರೀಡಾಂಗಣದಿಂದ ಸ್ಥಳಾಂತರವಾಗಿರುವ ಬಗ್ಗೆ ಕೇಳಿದಾಗ, ಇದು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಮಹಿಳಾ ಟಿ 20 ವಿಶ್ವಕಪ್ ಪಂದ್ಯಗಳ ಬಗ್ಗೆ ಕೇಳಿದಾಗ, ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿರುವ ಬಗ್ಗೆ ಕೇಳಿದಾಗ, ನಾನು ಕೆಎಸ್ ಸಿಎ ಸದಸ್ಯ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ, ನಾಗರಾಜ್ ಅವರು ನನಗೆ ಸದಸ್ಯತ್ವ ನೀಡಿದರು. ಅವರ ಮಗ ನನ್ನ ಸಹಪಾಠಿ. ನನಗೆ ಬ್ರಿಜೇಶ್ ಪಟೇಲ್ ಅವರಿಂದ ಅನಿಲ್ ಕುಂಬ್ಳೆ, ಪ್ರಸನ್ನ ಸೇರಿದಂತೆ ಅನೇಕರು ಬಹಳ ಪರಿಚಯ. ನನಗೆ ಬೇಕಾದವರಿಗೆ ನಾನು ಮತ ಹಾಕಿದ್ದೇನೆ ಎಂದರು. ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚಿಗೆ ಆಗಿರುವ ಅನಾಹುತ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು. ಇದರ ಜೊತೆಗೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ರೈಲು ರೆಡಿ! ಡಿಸೆಂಬರ್ 11 ಅನಾವರಣ; ಸಂಚಾರ ಆರಂಭ ಯಾವಾಗ?
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪ್ರೊಟೊಟೈಪ್ ರೈಲು ಡಿಸೆಂಬರ್ 11 ರಂದು ಅನಾವರಣಗೊಳ್ಳಲಿದೆ. ಕೆಲವು ಉಪಕರಣಗಳ ಕೊರತೆ ಮತ್ತು ಟೈಪ್ ಟೆಸ್ಟ್ಗಳಲ್ಲಿನ ವಿಳಂಬದಿಂದಾಗಿ ರೈಲು ತಡವಾಗಿದೆ. ಮೇ 2026 ರಲ್ಲಿ ಗುಲಾಬಿ ಮಾರ್ಗದ ಎತ್ತರಿಸಿದ ಮಾರ್ಗವು ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದುಪಡಿಸಿದ ಸ್ಮೃತಿ ಮಂಧಾನಾ: ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಧಿಕೃತ ಘೋಷಣೆ
ಭಾರತ ಕ್ರಿಕೆಟ್ ತಾರಾ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ತಮ್ಮ ಮದುವೆಯನ್ನು ರದ್ದುಪಡಿಸಿರುವುದನ್ನು ಖಚಿತಪಡಿಸಿದ್ದಾರೆ. ವೈಯಕ್ತಿಕ ಜೀವನದ ಊಹಾಪೋಹಗಳಿಗೆ ತೆರೆ ಎಳೆದ ಅವರು, ತಮ್ಮ ಗಮನ ಈಗ ದೇಶಕ್ಕಾಗಿ ಆಡುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾದಗಿರಿ | ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಮೃತ್ಯು
ಆಸ್ಪತ್ರೆ ಎದುರು ಪೋಷಕರ ಪ್ರತಿಭಟನೆ
ನಾನು ಕೃಷ್ಣತತ್ತ್ವ ನಂಬಿದವ - ಕಂಸ ಹಿಂಸೆಯನ್ನಲ್ಲ: ಸಿ.ಎಂ ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ: ಎಚ್ಡಿಕೆ ಪ್ರಶ್ನೆ!
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್ ಕಂಸನಲ್ಲಿ ನಂಬಿಕೆ ಇಟ್ಟಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ; ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
2026 ರ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ 2026 ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಮೂಲಕ ಭಾರತವು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಎರಡೂ ಕಡೆಯವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದೆ. ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆ ಮಾತ್ರ ಪರಿಹಾರ ಎಂದು ನಿರಂತರವಾಗಿ ಹೇಳುತ್ತಾ ಬಂದಿದೆ.
ಸಂವಿಧಾನ ಜಪಿಸುವ ಮಹಾದೇವಪ್ಪನವರೇ, ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ - ಎಚ್ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಸಂವಿಧಾನ ಜಪಿಸುವ ಸಚಿವ ಮಹದೇವಪ್ಪನವರಿಗೆ ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ ಎಂದು ಸಲಹೆ ನೀಡಿದ್ದಾರೆ. ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ, ಅವರು ಕಂಸ ಮಾರ್ಗದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೃಷ್ಣತತ್ತ್ವದ ಮೇಲೆ ಭಾರತದ ರಾಜನೀತಿ ನಿಂತಿದೆ ಎಂದಿದ್ದಾರೆ.
ಕಲಬುರಗಿ | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಅತಿವೃಷ್ಟಿ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪದಿಂದ ರಾಜ್ಯದ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ಕೂಡಲೇ ರೈತರ ಪರ ನಿಲ್ಲಬೇಕೆಂದು ಆಗ್ರಹಿಸಿ, ಬಿಜೆಪಿಯ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಶುರುವಾದ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಿತು. ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಇರುವ ಪರಿಹಾರ ಹಣ ಕೂಡಲೇ ಬಿಡುಗಡೆಗೊಳಿಸಬೇಕು, ರೈತರ ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹಧನ 620 ಕೋಟಿ ರೂ. ರಿಲೀಸ್ ಮಾಡಬೇಕು, ಹಾಲಿನ ಪ್ರೋತ್ಸಾಹಧನ 5 ರೂ. ನಿಂದ 7 ರೂ. ಗೆ ಏರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಈ ಭಾಗದಲ್ಲಿ ಶೇ.100 ರಷ್ಟು ಬೆಳೆಹಾನಿಯಾಗಿದೆ, ಸರ್ಕಾರ ಪರಿಹಾರ ನೀಡುತ್ತಿಲ್ಲ, ಕಬ್ಬಿಗೆ 3,300 ರೂ. ದರ ನಿಗದಿಯಾದರೂ ಸಚಿವರ ಹಸ್ತಕ್ಷೇಪದ ಮೇರೆಗೆ 2,950 ರೂ. ಕೊಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು. ಪ್ರತಿಭಟನೆಯಲ್ಲಿ ಶಾಸಕ ಅವಿನಾಶ್ ಜಾಧವ್, ಎಂಎಲ್ಸಿ ಶಶೀಲ್ ನಮೋಶಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ದತ್ತಾತ್ರೇಯ ಪಾಟೀಲ್ ರೇವೂರ್, ರೈತ ಮೋರ್ಚಾದ ಗ್ರಾಮಾಂತರ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಲಿಂಗರಾಜ ಪಟ್ಟಣ, ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಚಂದು ಪಾಟೀಲ್, ಶರಣಪ್ಪ ತಳವಾರ, ಅಮರನಾಥ್ ಪಾಟೀಲ್, ಅಂಬಾರಾಯ್ ಅಷ್ಟಗಿ, ಸುಧಾ ಹಾಲಕಾಯಿ, ಸಂತೋಷ್ ಹಾದಿಮನಿ, ಅವ್ವಣ್ಣ ಮ್ಯಾಕೇರಿ, ಶಿವಮೂರ್ತಯ್ಯ ಹಿರೇಮಠ್, ಅಶೋಕ್ ಪಾಟೀಲ್, ಶರಣು ಸಜ್ಜನ್, ಸೂರ್ಯಕಾಂತ್ ಡೆಂಗಿ, ಹುಲಿಕಂಠ ತೆಲ್ಲೂರ್, ಮಲ್ಲಣ್ಣ ಕಲಗುರ್ತಿ ಸೇರಿದಂತೆ ಹಲವರು ಇದ್ದರು.
ರಾಯಚೂರು | ಶವಸಂಸ್ಕಾರಕ್ಕೆ ನೆರವಾಗಲು ಕೈಲಾಸ ರಥಯಾತ್ರೆ ವಾಹನ, ರೆಫ್ರಿಜರ್ ಹಸ್ತಾಂತರ
ರಾಯಚೂರು: ನಗರದ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠಕ್ಕೆ, ನಗರದಲ್ಲಿ ಮೃತದೇಹಗಳನ್ನು ಗೌರವಯುತವಾಗಿ ಸ್ಮಶಾನಕ್ಕೆ ಸಾಗಿಸಲು ಸುಮಾರು 20 ಲಕ್ಷ ರೂ. ವೆಚ್ಚದ ಕೈಲಾಸ ರಥಯಾತ್ರೆ ವಾಹನ ಮತ್ತು ಎರಡು ರೆಫ್ರಿಜರ್ಗಳನ್ನು ವಿಧಾನಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ 2024-25ನೇ ಸಾಲಿನ ಅನುದಾನದಲ್ಲಿ ಒದಗಿಸಿಕೊಟ್ಟರು. ಇಂದು ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಪದಾಧಿಕಾರಿಗಳಿಗೆ ಕೈಲಾಸ ರಥಯಾತ್ರೆ ವಾಹನ ಮತ್ತು ಫ್ರೀಜರ್ ಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಪೀಠದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತ ಕುಮಾರ ಅವರು ನಗರ ಪ್ರದೇಶದಿಂದ ಸ್ಮಶಾನವು ಸುಮಾರು ಎರಡು-ಮೂರು ಕೀ.ಮೀ ದೂರವಿದ್ದು, ಶವ ಸಂಸ್ಕಾರಕ್ಕೆ ಅನಾನುಕೂಲ ಆಗುತ್ತಿರುವುದನ್ನು ಮನಗೊಂಡು ಸ್ಥಳೀಯ ಮುಖಂಡರು ಸದರಿ ವಾಹನ ಮತ್ತು ರೆಫ್ರಿಜರ್ ಅವಶ್ಯಕತೆ ಇದ್ದು, ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಇದು ಅವಶ್ಯಕ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವುದರಿಂದ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 2024-25ನೇ ಸಾಲಿನ ಅನುದಾನದಲ್ಲಿ 20.00 ಲಕ್ಷ ರೂ. ಒದಗಿಸಿಕೊಡಲಾಗಿದೆ ಎಂದು ಹೇಳಿದರು. ಈ ವ್ಯವಸ್ಥೆಯನ್ನು ನಗರದ ಎಲ್ಲಾ ವಾರ್ಡ್ಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುರುಪೀಠದ ಅಧ್ಯಕ್ಷ ಯಮನಪ್ಪ, ಬಸವರಾಜ, ರಾಮಣ್ಣ (CPI ನಿವೃತ್ತ), ಜೆ. ಸತ್ಯನಾಥ್, ಎಚ್. ಗುಂಡಳ್ಳಿ, ವೆಂಕಟೇಶ (KEB), ಬಾಬು ಕಮಲಾಪುರ, ತಿಮ್ಮಪ್ಪ (LIC), ಜೆ.ರಾಮುಲು, ಎ.ರಾಮುಲು ಸೇರಿದಂತೆ ಪದಾಧಿಕಾರಿಗಳು ಹಾಗೂ ಸ್ಥಾನಿಕರು ಉಪಸ್ಥಿತರಿದ್ದರು. ಮುಖಂಡರಾದ ಕೆ.ಅಸ್ಲಂ ಪಾಶಾ, ಡಾ. ರಝಾಕ ಉಸ್ತಾದ್, ಡಿ.ಕೆ. ಮುರಳಿ ಯಾದವ, ಅಂಜಿನಕುಮಾರ, ಪಿ. ಯಲ್ಲಪ್ಪ, ಮೊಹಮ್ಮದ್ ಉಸ್ಮಾನ್ ಮತ್ತಿತರರೂ ಪಾಲ್ಗೊಂಡರು.
ಉಳ್ಳಾಲ | ಡಿ.20ರಂದು ಮದನೀಸ್ ಅಸೋಸಿಯೇಷನ್ ಗ್ರ್ಯಾಂಡ್ ಕಾನ್ಪರೆನ್ಸ್ ಘೋಷಣಾ ಸಮಾವೇಶ
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಕಲಿತು ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಖ.ಸಿ. ರವರ ಶಿಷ್ಯತ್ವ ಪಡೆದ ಮದನಿ ಬಿರುದು ದಾರಿಗಳ ಸಂಘಟನೆಯಾದ ಕೇಂದ್ರ ಮದನೀಸ್ ಅಸೋಸಿಯೇಷನ್ ವತಿಯಿಂದ 2026 ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮದನಿ ಸಂಗಮ ಮತ್ತು ಸಾರ್ವಜನಿಕ ಮಹಾ ಸಮ್ಮೇಳನ ದ ಘೋಷಣಾ ಸಮಾವೇಶವನ್ನು ಅಸ್ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ರವರು , ಉಳ್ಳಾಲ ಮದನಿ ಅಡಿಟೋರಿಯಂ ನಲ್ಲಿ ಡಿ.20 ರಂದು ನಡೆಸಲಿದ್ದಾರೆ. ಮದನೀಸ್ ಸ್ಟೇಟ್, ಜಿಲ್ಲಾ, ತಾಲೂಕುಗಳ ಕಾರ್ಯಕರ್ತರಿಗೆ ಭೋದಕನ ಜೀವನ ಶೈಲಿ ಮತ್ತು ಜವಾಬ್ದಾರಿಗಳು ಎಂಬ ವಿಷಯದಲ್ಲಿ ಮಲ್ಹರ್ ಮುದರ್ರಿಸ್ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ತರಗತಿ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಮದನೀಸ್ ಅಧ್ಯಕ್ಷರಾದ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ತಂಙಳ್ ಮುರ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ.ಜಿ.ಹನೀಫ್ ಹಾಜಿ ಉದ್ಘಾಟನೆ ನಡೆಸಲಿದ್ದಾರೆ. ದರ್ಗಾ ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಂ ಭಾಗವಹಿಸಲಿದ್ದಾರೆ. ಇದರ ನಿರ್ವಹಣಾ ಸಮಿತಿ ನಿರ್ದೇಶಕರಾದ ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಅಲ್ ಮದನಿ ಮುರ, ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರ್, ಚಯರ್ ಮೇನ್ ಅಸ್ಸಯ್ಯಿದ್ ಇಸ್ಮಾಯೀಲ್ ಮದನಿ ಅಲ್ ಹಾದಿ ತಂಙಳ್ ಉಜಿರೆ, ವೈಸ್ ಚಯರ್ ಮೇನ್ ಅಸ್ಸಯ್ಯಿದ್ ಹಸನ್ ಕುಂಞ ಕೋಯ ತಂಙಳ್ ಮದನಿ ಎಡರಿಕ್ಕೋಡ್, ಮೂಸಲ್ ಮದನಿ ಅಲ್ ಬಿಷಾರ, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಯು.ಕೆ.ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಸಿ.ಕೆ.ಕುಂಞಾಲನ್ ಮದನಿ ನೀಲಗಿರಿ, ಅಬ್ದುರ್ರಹ್ಮಾನ್ ಮದನಿ ಕಾಡಾಚಿರ, ಕನ್ವೀನರ್ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಬಿ.ಟಿ.ಎಂ. ಅಬ್ಬಾಸ್ ಮದನಿ ಬಂಡಾಡಿ, ಕೂಳೂರು ಬಶೀರ್ ಮದನಿ, ನೀಲಗಿರಿ ಬಶೀರ್ ಮದನಿ, ಪಿ.ಎಂ. ಮುಹಮ್ಮದ್ ಮದನಿ ಪೂಡಲ್, ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಮತ್ತು ಸದಸ್ಯರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಆರ್.ಕೆ.ಮದನಿ ಅಮ್ಮೆಂಬಳ, ಇಸ್ಮಾಯೀಲ್ ಬುಖಾರಿ ಮದನಿ ನೂಜಿ, ಇಸ್ಮಾಯೀಲ್ ಮದನಿ ಗೂಡಲ್ಲೂರ್,ಹಸೈನಾರ್ ಮದನಿ ಕಾಂಞಗಾಡ್, ಪಿ.ಕೆ. ಮುಹಮ್ಮದ್ ಮದನಿ ಅಳಕೆ, ಯೂಸುಫ್ ಮದನಿ, ಚೆರ್ವತ್ತೂರ್ ಹಸೈನಾರ್ ಮದನಿ ಕುಂಜಿಲ, ಉಮರ್ ಮದನಿ ಮಚ್ಚಂಪಾಡಿ, ಕೆ.ಸಿ.ಎಮ್.ಅಬ್ದುಲ್ ಖಾದರ್ ಮದನಿ ಕನ್ಯಾರ ಕೋಡಿ, ಅಬ್ದುಲ್ಲ ಮದನಿ ಕುಂಜಿಲ, ಇರ್ಶಾದ್ ಮದನಿ ಮಲಪ್ಪುರಂ ಎಂಬವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮದನೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಪ್ರಗತಿ, ಅಭಿವೃದ್ಧಿಗೆ ಕೈಜೋಡಿಸಿ; ಅದಾನಿ ವಿಶ್ವವಿದ್ಯಾಲಯದ ಪದವೀಧರರಿಗೆ ಡಾ. ಪ್ರೀತಿ ಅದಾನಿ ಕರೆ
ಇಲ್ಲಿನ ಶಾಂತಿಗ್ರಾಮದ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಅದಾನಿ ವಿಶ್ವವಿದ್ಯಾಲಯವು ತನ್ನ 2 ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಿತ್ತು. ಇದರಲ್ಲಿ ಮೂವರು ಪ್ರತಿಷ್ಠಿತ ವಿಶ್ವವಿದ್ಯಾಲಯ ಪದಕ ವಿಜೇತರು ಸೇರಿದಂತೆ 87 ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಗೌರವಿಸಲಾಯಿತು. ಈ ಕಾರ್ಯಕ್ರಮವು ಹಲವು ಕುಟುಂಬಗಳು, ಅಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು, ಉದ್ಯಮ ಮುಖಂಡರು ಮತ್ತು ಆಹ್ವಾನಿತ ಅತಿಥಿಗಳನ್ನು ಒಂದೆಡೆ ಸೇರಿಸಿತು.
ಬೆಂಗಳೂರು ಅಂತರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಭಾನುವಾರವೂ 61 ಇಂಡಿಗೋ ವಿಮಾನಗಳು ರದ್ದು
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯ ಮುಂದುವರೆದಿದ್ದು, ತಾಂತ್ರಿಕ ಕಾರಣಗಳಿಂದ 61 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮಗಳಿಂದಾಗಿ ವಿಮಾನ ನಿಲ್ದಾಣವು ಸಹಜ ಸ್ಥಿತಿಗೆ ಮರಳುತ್ತಿದೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ನಮ್ಮ ನಡುವಣ ಸಾಮಾಜಿಕ ಕಹಿಯ ಹೂರಣ ‘ವರ್ಣಪಲ್ಲಟ’
ಕೆ.ವೈ.ಎನ್. ಅವರ ನಾಟಕ ‘ವರ್ಣಪಲ್ಲಟ’ವು ವಿನೋದ ವಿಷಾದ ಪ್ರಹಸನ. ಈ ಕತೆಯ ಈ ಪಾತ್ರಗಳು ಭಾರತದ ಯಾವ ಊರಿನಲ್ಲೂ ಯಾವ ಕಾಲದಲ್ಲೂ ಕಂಡುಬರಬಹುದು. ಭಾರತೀಯ ಸಮಾಜದಲ್ಲಿ ನೆಲೆಗೊಂಡಿರುವ ಎಲ್ಲ ಬಗೆಯ ಅಸಮಾನತೆಗಳ ಬೇರು ಜಾತಿ ಪದ್ಧತಿಯಾಗಿದೆ. ಮನುಷ್ಯ ಸಹಜವಾದ ಪ್ರೀತಿ ಮತ್ತು ನಡವಳಿಕೆಗಳು ಕೂಡ ಅಪರಾಧವಾಗಿಸುವ ವ್ಯವಸ್ಥೆಯ ಕುರಿತು ಯೋಚಿಸುವಂತೆ ಮಾಡುವ ಉದ್ದೇಶದಿಂದ ಈ ನಾಟಕವನ್ನು ರಚಿಸಲಾಗಿದೆ. ಶಿಕ್ಷಣ-ರಾಜಕಾರಣ-ನ್ಯಾಯದಾನ-ಸಾಮಾಜಿಕ ಜೀವನಗಳು ಇಂದು ತಲುಪಿರುವ ಅಸೂಕ್ಷ್ಮತೆಯ ಸ್ವರೂಪವನ್ನು ಅನಾವರಣ ಮಾಡುವ ಪ್ರಯತ್ನವನ್ನು ಈ ರಂಗ ಪ್ರಯೋಗದಲ್ಲಿ ಮಾಡಲಾಗಿದೆ. ಸ್ವಾತಂತ್ರ್ಯ-ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಾರುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತದ ಮೂಲೆಮೂಲೆಗಳಿಂದ ಪ್ರತಿನಿತ್ಯ ವರದಿಯಾಗುತ್ತಿರುವ ಜಾತಿ ಆಧಾರಿತ ಹಿಂಸೆ ಮತ್ತು ಅನ್ಯಾಯಗಳಿಗೆ ಕುರುಡು ಕಿವುಡು ಆಗಿರುವ ಪರಿಸ್ಥಿತಿಯನ್ನು ಅರ್ಥೈಸಲು ಹಾಗೂ ಸಂವಿಧಾನದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಾರ್ವಜನಿಕ ಸಂಸ್ಥೆಗಳೇ ಜಾತಿ ಮತ್ತು ಪ್ರಸರಣ ಕೇಂದ್ರಗಳಾಗಿ ಪರಿವರ್ತನೆಯಾಗಿರುವುದನ್ನು ವಿಡಂಬಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಮೊನಚುಗೊಳಿಸುವ ಆಸೆಯಿಂದ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ. ಜಾತಿ, ಮೌಢ್ಯಗಳಿಂದ ತುಂಬಿರುವ ಸಿಡ್ಲುಪಟ್ಟಣ ಎಂಬ ಸಣ್ಣ ಪಟ್ಟಣ ಪ್ರದೇಶದಲ್ಲಿ ಈ ಘಟನೆಗಳು ನಡೆಯುತ್ತವೆ. ತಳ ಸಮುದಾಯದಿಂದ ಬಂದ ಸಹಜ ಪ್ರತಿಭಾವಂತ ಮಾಧವನಂತಹ ಹುಡುಗರು, ಮೇಲ್ಜಾತಿಗೆ ಸೇರಿದ್ದರೂ ಪ್ರೀತಿಗಾಗಿ ಜಾತಿ ಕಂದಕವನ್ನು ದಾಟಲು ಪ್ರಯತ್ನಿಸುವ ಕಾವ್ಯಪ್ರೇಮಿ ರಾಧಾಳಂತಹ ಹುಡುಗಿಯರು, ಶಿಕ್ಷಣದ ಮೂಲಕ ಮಾನವೀಯ ಸಂವೇದನೆಯನ್ನು ಜಾಗೃತಗೊಳಿಸುವ ಹಂಬಲದ ಮೇಷ್ಟ್ರು ಇಂತಹವರ ಚೈತನ್ಯವನ್ನು ಬಲಿಗೊಳ್ಳುವ, ದುರ್ಬಲಗೊಳಿಸುವ ಸ್ವಾರ್ಥ ಪೂರಿತ ಸಮಾಜೋರಾಜಕೀಯ ವ್ಯವಸ್ಥೆಗಳು ಬೀಸುವ ಬಲೆಗಳನ್ನು ಈ ಪ್ರಹಸನ ತೋರಿಸುವ ಗುರಿಯನ್ನು ಹೊಂದಿದೆ. ನಾಟಕ ರಂಜನೆಯಂತೆ ಕಂಡರೂ ನಮ್ಮ ನಡುವಣ ಸಾಮಾಜಿಕ ಕಹಿಯನ್ನು ಹೂರಣವಾಗಿ ಹೊಂದಿದೆ. ‘‘ಹದಿಹರೆಯದ ಅಮಾಯಕ ರಾಧಾ-ಮಾಧವರ ಕಣ್ಮರೆಯು ಪರಾರಿಯೋ? ಮರ್ಯಾದೆ ಹತ್ಯೆಯೋ? ಎಂಬ ಸಂಗತಿ ಸ್ವತಃ ನಾಟಕಕಾರನಿಗಾಗಲಿ, ರಂಗ ನಿರ್ದೇಶಕರಿಗಾಗಲಿ ಗೊತ್ತಿಲ್ಲದಿರುವುದರಿಂದ ಈ ಸತ್ಯವನ್ನು ಬಯಲಿಗೆಳೆಯುವ ಹೊಣೆಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ. ಪೊಲೀಸರಿಗೆ, ನ್ಯಾಯಾಧೀಶರಿಗೆ ಹೊಳೆಯದ ಸತ್ಯ ತಮಗೆ ಹೊಳೆದರೆ ದಯಮಾಡಿ ಮೇಷ್ಟ್ರನ್ನು ಸೆರೆಯಿಂದ ಬಿಡಿಸಲು ನೆರವಾಗಿ ಎಂದು ತಮ್ಮಲ್ಲಿ ವಿನಂತಿಸುತ್ತೇವೆ. ‘ಅನಾವರಣ’ ರಂಗ ತಂಡ ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದೆ’’ ಎಂಬುದಾಗಿ ರಂಗತಂಡದ ಕರಪತ್ರ ವಿನಂತಿಸುತ್ತಿದೆ. ನಿಜ. ಆದರೆ ಊರಿಗೆಲ್ಲಾ ಗೊತ್ತಿರುವ ವಿಚಾರವನ್ನು ನಿನ್ನ ಕಿವಿಯಲ್ಲಿ ಹೇಳ್ತಿನಿ ಬಾ ಎಂಬಂತಿದೆ ಈ ವಿನಂತಿ. ಯಾಕೆಂದರೆ ‘ವರ್ಣಪಲ್ಲಟ’ ನಾಟಕದ ತೆರೆ ಇಳಿಯುವ ಮುನ್ನವೇ ಇಂಥದೊಂದು ಘಟನೆ ಜರುಗಿರುವ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ: ಮಹಾರಾಷ್ಟ್ರದ ನಾಂದೇಡ್ನಲ್ಲಿ ಪ್ರೇಮ ಕಥೆಯೊಂದು ಅತ್ಯಂತ ದುರಂತ ಅಂತ್ಯವನ್ನು ಕಂಡಿದೆ. ಜಾತಿ ವಿವಾದದಿಂದಾಗಿ ತನ್ನ ತಂದೆ ಮತ್ತು ಸೋದರರಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರಿಯಕರ ಸಕ್ಷಮ್ ತಾಟೆ(25) ಎಂಬಾತನನ್ನು ಅಂತ್ಯ ಸಂಸ್ಕಾರಕ್ಕೆ ಮುನ್ನ ಆತನ ಮೃತದೇಹದೊಂದಿಗೆ ಆಂಚಲ್ ಮಾಮಿದ್ವಾರ್(21) ಎಂಬಾಕೆ ಮದುವೆ ಮಾಡಿಕೊಂಡಿದ್ದಾಳೆ. ‘‘ಸಕ್ಷಮ್ನ ಸಾವಿನಲ್ಲಿಯೂ ನಮ್ಮ ಪ್ರೀತಿ ಗೆದ್ದಿದೆ ಮತ್ತು ನನ್ನ ತಂದೆ ಹಾಗೂ ಸೋದರರು ಸೋತಿದ್ದಾರೆ’’ ಎಂದು ಆಂಚಲ್ ಹೇಳಿದ್ದಾಳೆ. ಆಕೆ ತನ್ನ ಜೀವನವಿಡೀ ಕುಟುಂಬದ ಸೊಸೆಯಾಗಿ ಸಕ್ಷಮ್ನ ಮನೆಯಲ್ಲಿ ವಾಸವಾಗಿರಲು ನಿರ್ಧರಿಸಿದ್ದಾಳೆ. ವಿವಾಹದ ಈ ಪವಿತ್ರ ಸಮಾರಂಭವು ತಮ್ಮ ಪ್ರೇಮವನ್ನು ಅಮರಗೊಳಿಸುತ್ತದೆ ಎಂದು ಆಂಚಲ್ ಘೋಷಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆಯನ್ನು ಸೆರೆ ಹಿಡಿದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಆಂಚಲ್, ಈ ಕ್ರೂರ ಹತ್ಯೆಗಾಗಿ ತನ್ನ ತಂದೆ ಮತ್ತು ಸೋದರರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾಳೆ. ಷೇಕ್ಸ್ಪಿಯರ್ನ ವಿಶ್ವವಿಖ್ಯಾತ ನಾಟಕ ರೋಮಿಯೋ-ಜೂಲಿಯಟ್ ಮೊದಲುಗೊಂಡು (ಅದಕ್ಕೂ ಪೂರ್ವದಿಂದಲೂ ಇರಬಹುದು) ಕೆ.ವೈ.ಎನ್.ರವರ ವರ್ಣಪಲ್ಲಟದವರೆಗೆ, ಇಂಥ ದುರಂತ ಪ್ರೇಮಕತೆಗಳು ಸಂಭವಿಸುತ್ತಲೇ ಇವೆ. ಇವುಗಳಿಗೆ ಮೊದಲಾಗಲೀ ಕೊನೆಯಾಗಲೀ ಇಲ್ಲ. ಈ ದುರಂತಗಳಿಗೆ ಕಾರಣ ಪೋಷಕರು, ಪೊಲೀಸರು, ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ನಾವು-ನೀವು ಒಳಗೊಂಡು ಅಂದಂದಿನ ಸಮಾಜವೇ ಕಾರಣ. ಈ ಎಲ್ಲರ ಹಿಪೋಕ್ರಸಿಗೆ ತುತ್ತಾಗಿ ಹದಿಹರೆಯದ ಅಮಾಯಕ ಹುಡುಗ ಹುಡುಗಿಯರು ನಿತ್ಯ ಹತ್ಯೆಗೆ ಒಳಗಾಗುತ್ತಲೇ ಇದ್ದಾರೆ. ಕಾವ್ಯ, ಕಥೆ, ಕಾದಂಬರಿ ರಚಿಸುವ ಸಾಹಿತಿಗಳಿಗೆ ವಸ್ತುವಾಗುತ್ತಾ! ಇದನ್ನು ತಪ್ಪಿಸಲು ಇನ್ನೆಷ್ಟು ನೂರು ವರ್ಷಗಳು ಬೇಕೋ? 21ನೇ ಶತಮಾದಲ್ಲೂ ರಾಷ್ಟ್ರವ್ಯಾಪಿ, ಅಮೆರಿಕವೂ ಸೇರಿದಂತೆ ವಿಶ್ವವ್ಯಾಪಿ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ಅಸ್ತಿತ್ವದಲ್ಲಿರುವುದು ಸಮೀಕ್ಷೆಗಳಿಂದ ಬೆಳಕಿಗೆ ಬಂದಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ನಮ್ಮ ಸಂವಿಧಾನದ ಪ್ರಕಾರ ಜಾತಿವಿನಾಶ ಆಗಲೇಬೇಕು. ಆಗ ಮಾತ್ರ ಇಂಥ ಪ್ರಕರಣಗಳ ಪ್ರಮಾಣ ಕೊಂಚ ತಗ್ಗಬಹುದು. ಜೊತೆಗೆ ವರ್ಗ ಸಮಾನತೆಯೂ ಸೇರಿದರೆ ಉತ್ತಮ ಸಮಾಜ ಉದಯ ಆದೀತು. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.
ಲೋಕಸಭೆಯಲ್ಲಿ 'ರೈಟ್ ಟು ಡಿಸ್ಕನೆಕ್ಟ್ ಬಿಲ್, 2025' ಮಂಡನೆಯಾಗಿದ್ದು, ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಉದ್ಯೋಗಿಗಳ ಹಕ್ಕನ್ನು ಇದು ಬಲಪಡಿಸುತ್ತದೆ. ಅಧಿಕೃತ ಕೆಲಸದ ಸಮಯದ ಹೊರಗಿನ ಕರೆಗಳು, ಇಮೇಲ್ಗಳಿಗೆ ಉತ್ತರಿಸುವ ಒತ್ತಡ ಇರುವುದಿಲ್ಲ. ನಿಯಮ ಉಲ್ಲಂಘನೆಗೆ ದಂಡ, ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ ಸ್ಥಾಪನೆಗೆ ಪ್ರಸ್ತಾವನೆ ಇದೆ. ಇದು ಕೆಲಸ-ಜೀವನ ಸಮತೋಲನಕ್ಕೆ ಮಹತ್ವ ನೀಡುತ್ತದೆ. ಈ ಕುರಿತಾದ ವಿವರಗಳು ಇಲ್ಲಿವೆ.
ಕರಾಚಿ ಮೂಲದ ನಿಕಿತಾ ನಾಗ್ದೇವ್ ಎನ್ನುವ ಮಹಿಳೆ ತನ್ನ ಪತಿ ವಿಕ್ರಮ್ ನಾಗ್ದೇವ್ ತನ್ನನ್ನು ಕೈ ಬಿಟ್ಟು ದೆಹಲಿಯಲ್ಲಿ ಎರಡನೇ ಮದುವೆಗೆ ಯೋಜನೆ ರೂಪಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. 2020ರಲ್ಲಿ ಕರಾಚಿಯಲ್ಲಿ ವಿವಾಹವಾಗಿದ್ದ ದಂಪತಿ, ವಿಕ್ರಮ್ಗೆ ಭಾರತಕ್ಕೆ ಕರೆತಂದ ಬಳಿಕ ವೀಸಾ ಸಮಸ್ಯೆಯ ನೆಪ ಹೇಳಿ ಗಡಿಯಲ್ಲಿ ಕೈಬಿಡಲಾಗಿದೆ. ನ್ಯಾಯಕ್ಕಾಗಿ ನಿಕಿತಾ ಒತ್ತಾಯಿಸಿದ್ದಾರೆ.
ಹಬ್ಬಗಳ ಹೆಸರಿನಲ್ಲಿ ಪರಿಸರ ಹಾನಿಗೆ ಸಂವಿಧಾನದ ವಿಧಿ 25 ರಕ್ಷಣೆ ನೀಡುವುದಿಲ್ಲ: ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ
ಹೊಸದಿಲ್ಲಿ: ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಗಂಭೀರ ವಿಚಾರವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಂತಹ ಕೃತ್ಯಗಳನ್ನು ಸಮರ್ಥಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ ಅಭಿಮತ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಅಭಯ್ ಓಕಾ, ಹಬ್ಬಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ನದಿಗಳು, ಸರೋವರಗಳು, ಸಮುದ್ರಗಳು ಕಲುಷಿತವಾಗುತ್ತಿರುವುದನ್ನು ಉಲ್ಲೇಖಿಸಿದರು. “ವಿಧಿ 25 ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಹಕ್ಕನ್ನು ಒದಗಿಸಿದರೂ, ಅದು ಪರಿಸರ ಹಾನಿಗೆ ಛತ್ರಿಯಾಗುವುದಿಲ್ಲ. ಭಾಗ III ರ ಇತರ ಹಕ್ಕುಗಳಿಗೆ ಒಳಪಟ್ಟಿರುವುದರಿಂದ, ಪರಿಸರ ನಾಶ ಮಾಡುವ ಕೃತ್ಯಗಳಿಗೆ ಸಂವಿಧಾನ ರಕ್ಷಣೆ ನೀಡುವುದಿಲ್ಲ,” ಎಂದು ಹೇಳಿದರು. ತಂತ್ರಜ್ಞಾನ ಬಳಕೆ ಹೆಚ್ಚಾದರೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಸಮಾಜ ಹಿಂದುಳಿದಿದೆ ಎಂದು ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು. ಹಬ್ಬಗಳ ವೇಳೆ ಧ್ವನಿವರ್ಧಕಗಳ ಅತಿಯಾದ ಬಳಕೆ ಹಾಗೂ ನದಿಗಳಲ್ಲಿ ಅನಿಯಂತ್ರಿತವಾಗಿ ಕಸ ಬಿಸಾಡುವ ಪ್ರವೃತ್ತಿ ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿದೆ ಎಂದು ಉಲ್ಲೇಖಿಸಿದರು. “ಮಾಲಿನ್ಯದಿಂದ ತುಂಬಿರುವ ನದಿಗಳನ್ನು ನಾವು ಪವಿತ್ರವೆಂದು ಹೇಗೆ ಹೇಳಬಹುದು?” ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ಮುಂದುವರಿದಿರುವ ಮೂಢನಂಬಿಕೆಗಳನ್ನು ಉಲ್ಲೇಖಿಸಿದ ಅವರು, ಸುಧಾರಣೆಗಳನ್ನು ಪ್ರಸ್ತಾಪಿಸುವವರು ಧಾರ್ಮಿಕ ಗುಂಪುಗಳ ಟಾರ್ಗೆಟ್ ಆಗುತ್ತಿದ್ದಾರೆ. ಸುಧಾರಣೆಗಳನ್ನು ವಿಧಿ 25ರ ಹಕ್ಕುಗಳ ಆಕ್ಷೇಪಣೆ ಎಂಬಂತೆ ಚಿತ್ರಿಸಲಾಗುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣದಿಂದ ಸುಧಾರಣೆಯತ್ತ ರಾಜಕೀಯ ಕ್ಷೇತ್ರವು ಗಮನ ಹರಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ವಿಧಿ 51A ಅಡಿಯಲ್ಲಿ ರಾಜ್ಯದ ಕರ್ತವ್ಯಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಓಕಾ, 2027ರ ಕುಂಭಮೇಳಕ್ಕಾಗಿ ನಾಸಿಕ್ ನಲ್ಲಿ ನೂರು ವರ್ಷಗಳಷ್ಟು ಹಳೆಯ ಮರಗಳನ್ನು ಕಡಿಯುವ ಪ್ರಸ್ತಾಪವೇ ರಾಜ್ಯ ಸರಕಾರದ ವೈಫಲ್ಯಕ್ಕೆ ಉದಾಹರಣೆ. ನಾಗರಿಕರ ಜೊತೆಗೆ ರಾಜ್ಯವೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಫಲವಾಗಿದೆ,” ಎಂದು ಓಕಾ ಅಭಿಪ್ರಾಯಪಟ್ಟರು. “ವೈಜ್ಞಾನಿಕ ಮನೋಭಾವ ಮತ್ತು ಸುಧಾರಣಾತ್ಮಕ ಚಿಂತನೆಯನ್ನು ನಾವು ನಿಜವಾಗಿಯೂ ಅಳವಡಿಸಿಕೊಂಡಿದ್ದರೆ, ಹಬ್ಬಗಳಲ್ಲಿ ಪ್ರಾಣಿಬಲಿ, ಧ್ವನಿವರ್ಧಕಗಳ ಹಾವಳಿ ಮತ್ತು ಪರಿಸರ ಹಾನಿ ಮಾಡುವ ಆಚರಣೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ” ಎಂದು ನಿವೃತ್ತ ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು.
ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
IMD Weather Forecast: ಈ ಭಾಗಗಳಲ್ಲಿ ಮುಂದಿನ ಮೂರು ದಿನ ರಣಭೀಕರ ಮಳೆ ಮುಂದುವರೆಯುವ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ನಡುವೆಯೇ ಹಲವೆಡೆ ಮಳೆಯೂ ಆಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಉತ್ತರ
ಸಾಹಿತ್ಯ ರಚನೆ ಸಮಾಜದ ಓರೆ-ಕೋರೆಗಳ ತಿದ್ದುವಂತಿರಬೇಕು: ಬಾನು ಮುಷ್ತಾಕ್
ಬೆಂಗಳೂರು ಸಾಹಿತ್ಯ ಉತ್ಸವ-2025ರ ವಿಚಾರ ಗೋಷ್ಠಿ
ಒಳ ಮೀಸಲಾತಿ ಬಿಕ್ಕಟ್ಟುಗಳ ಭಾರಗಳು ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆಯೇ?
ಒಳ ಮೀಸಲಾತಿ ಎಂದಾಕ್ಷಣ ಅನೇಕರಿಗೆ ಎಲ್ಲಿಲ್ಲದ ಕಹಿ; ಅದರೆ ಅದನ್ನು ಬೇಡುವವರಿಗೆ ಒಂದು ಹನಿ ಸವಿ ಜೇನಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರದೆ ರಾಜಕೀಯ ನಿರ್ಧಾರಗಳಡಿ ಅಖೈರುಮಾಡಿದೆ. ಆದರೆ ಅನುಷ್ಠಾನ ಪ್ರಕ್ರಿಯೆಗಳು ಹೂ ಹಿಡಿದು ಬೆಟ್ಟವತ್ತುವ ಯಾತ್ರಿಕನಂತಾಗದೆ; ಹೊತ್ತ ಕಟ್ಟಿಗೆಯ ಭಾರದಲ್ಲಿ ತೆವಳುತ್ತಾ ಸಾಗಿದಂತಾಗಿದೆ. ಸಾಮಾಜಿಕ ತಾರತಮ್ಯಗಳನ್ನು ಲಂಬಾಂತರ (Vertical) ಮತ್ತು ಸಮನಾಂತರ (Horizontal) ಮುಖಾಂತರ ನೋಡಿದಾಗ ಲಂಭಾಂತರ ಶೋಷಣೆಗಳು ವೇಷ್ಠಿ ಗುಣಗಳಾದರೆ; ಸಮನಾಂತರ ಶೋಷಣೆಗಳು ಅಂತರ ವೈರುಧ್ಯಗಳಾಗುತ್ತವೆ. ಈ ವೈರುಧ್ಯಗಳನ್ನು ತಹಬದಿಗೆ ತರಲು ಒಳಮೀಸಲಾತಿ ಸಿದ್ಧೌಷಧವಾಗಿದೆ ಎಂದು ಸರಿಸುಮಾರು 35 ವರ್ಷಗಳಿಂದ ಸಮುದಾಯಗಳು ಹೋರಾಡುತ್ತಿವೆ. ಕೊನೆಗೆ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಸಂಪನ್ನವಾಗಿದೆ. ಬಹುಶಃ ಇದೇ ನ್ಯಾಯಾಲಯ ಸಾಂವಿಧಾನಿಕ ಅನುಚ್ಛೇದಗಳಿಗೆ ತಿದ್ದುಪಡಿ ಮೂಲಕ ಪಡೆಯಲು ಅಜ್ಞಾಪಿಸಿದ್ದರೆ ಹೋರಾಟಗಾರರಿಗೆ ಗಗನ ಕುಸುಮವಾಗುತ್ತಿತ್ತು ಅಥವಾ ನಿಟ್ಟುಸಿರು ಬಿಡುತ್ತಿದ್ದರು. ಆದರೂ ಕರ್ನಾಟಕ ರಾಜ್ಯ ಮೀಸಲಾತಿಯ ಜಾರಿಯಲ್ಲಿ ರಾಷ್ಟ್ರಕ್ಕೆ ಹಿರಿಯ ಮುತ್ತಜ್ಜನಾಗಿದ್ದರೂ ಒಳ ಮೀಸಲಾತಿ ವಿಚಾರದಲ್ಲಿ ಒಂದು ಸಮಷ್ಟಿ ಸ್ವರೂಪದ ಅಭಿಮತಗಳನ್ನು ಬಿತ್ತುವಲ್ಲಿ ಎಡವುತ್ತಾಬಂದಿದೆ. ಏಕೆಂದರೆ ‘ಬೇಡ’ ಅನ್ನುವವರ ಕಪಿಮುಷ್ಟಿ ಹಿಡಿತದಿಂದ ಸರಕಾರಗಳು ಹೊರಬರಲಾಗದೆ ನರಳುತ್ತಾ ಬಂದಿವೆ. ಒಂದಷ್ಟು ಸಮಧಾನಕರವಾದ ಸ್ಥಿತಿ ನಿರ್ಮಾಣವಾಗಬೇಕೆನ್ನುವಾಗ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಎಲ್ಲಾ ನೇಮಕಾತಿಗಳನ್ನು ಹಳೆಯ ನಿಯಮಗಳಡಿ ಮಾಡಲು ಆದೇಶ ನೀಡಿದ್ದೇನೆಂದು ಹೇಳಿದ್ದಾರೆ (ಡಿಸೆಂಬರ್ 2, ವಾ.ಭಾ. ಸುದ್ದಿ). ಈ ಸುದ್ದಿ ಹಿನ್ನೆಲೆಗಳನ್ನು ಸ್ವಲ್ಪ ಅವಲೋಕಿಸೋಣ. ಪ್ರಸಂಗ-1: ಹಿಂದಿನ ಭಾಜಪ ಸರಕಾರ ಪರಿಶಿಷ್ಟ ಜಾತಿ (ಶೇ.17) ಮತ್ತು ಪಂಗಡಗಳಿಗೆ (ಶೇ.7) ಅವರ ಜನಸಂಖ್ಯಾಧಾರಿತ ಮೀಸಲಾತಿಗಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿ ದಿ: 28-12-2022ರಂದು ಆದೇಶಿಸಿತ್ತು. ಆಗ ಮೀಸಲಾತಿ ಪ್ರಮಾಣ ಶೇ. 60ಕ್ಕೇರಿತ್ತು. ಸಹಜವಾಗಿ ಮೀಸಲಾತಿ ರಿಕ್ತಬಿಂದುಗಳು ಅದಲುಬದಲಾದವು. ಈ ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ ಮುಂದೆ (ಅರ್ಜಿ ಸಂ. 2144/2024) ಪ್ರಶ್ನಿಸಲಾಗಿತ್ತು. ತರುವಾಯ ಬಂದ ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳ ವರ್ಗೀಕರಣ ಕೈಬಿಟ್ಟ ಕಾರಣ ಅದು 56ಕ್ಕೆ ಇಳಿಯಿತು. ನ್ಯಾಯಾಧಿಕರಣ ಒಟ್ಟಾರೆ ಸರಕಾರದ ಆದೇಶವನ್ನು ತಳ್ಳಿಹಾಕಿತು. ಸದರಿ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಬಲವಾದ ಅಭಿಮತಗಳನ್ನು ಉಚ್ಚ ನ್ಯಾಯಾಲಯದ ಮುಂದೆ ಮಂಡನೆ ಮಾಡುವ ಮೂಲಕ ಷರತ್ತು ಬದ್ಧ ಮಧ್ಯಂತರ ಆದೇಶ ಪಡೆಯುವಲ್ಲಿ ಯಶಸ್ವಿಯಾಯಿತು. ಪ್ರಸಂಗ-2: ರಾಯಚೂರಿನ ಮಹೇಂದ್ರ ಕುಮಾರ್ ಮಿತ್ರ ಎಂಬವರು ಈ ಹಿಂದೆ ಸ್ಪಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮುಂದೆ ಅಪೀಲು ಮಾಡಿದ್ದವರ ಮುಖಂಡರು. ಇಂದ್ರಾ ಸಹಾನಿ ಎದುರು ಭಾರತ ಸರಕಾರ ಪ್ರಕರಣದಲ್ಲಿ ರಾಜ್ಯಗಳು ಜಾತಿ ಆಧಾರಿತ ಮೀಸಲಾತಿ ನೀಡುವಾಗ 50:50 ಅನುಪಾತ ಮೀರಬಾರದೆಂದು ಸುಪ್ರೀಂ ಕೋರ್ಟ್ ಬಂಧಕ ಸ್ವರೂಪದ ತೀರ್ಪನ್ನು ನೀಡಿತ್ತು. ಒಳ ಮೀಸಲಾತಿಯ ಜಾರಿಗೆ ಸಂಬಂಧಿಸಿದ ನಿರ್ಣಾಯಾತ್ಮಕ ಘಟ್ಟದಲ್ಲಿದ್ದಾಗಲೇ ಅಂದರೆ ಫೆಬ್ರವರಿ 2025ರಂದು ಅದರಡಿ (200448/2025) ಸಂವಿಧಾನದ ಅನುಚ್ಛೇದ 226 ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಅಪೀಲನ್ನು ರಾಜ್ಯದಲ್ಲಿಯೂ ಈ ಆದೇಶದಂತೆ ಮೀಸಲಾತಿ ಮಿತಿ ಮೀರಬಾರದೆಂದು ವಾದಿಸಿದ್ದಾರೆ. ಅದರ ಮೇರೆಗೆ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿ ಮುಂದಿನ ಆದೇಶದ ತನಕ ಯಾವುದೇ ನೇಮಕಾತಿ ಮಾಡಬಾರದೆಂದು ಸರಕಾರಕ್ಕೆ ಸೂಚಿಸಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಹಿಂದಿನ ನಿಯಮಾವಳಿಗಳ ಪ್ರಕಾರ ನೇಮಕಾತಿ ಮಾಡಲಾಗುವುದೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಒಳ ಮೀಸಲಾತಿ ಜಾರಿಗಾಗಿ ಹಿಂದಿನ ಸಚಿವ ಸಂಪುಟದ ತೀರ್ಮಾನದಲ್ಲಿ ಇವರೂ ಸಹ ಭಾಗೀದಾರರಾಗಿದ್ದರು. ‘‘ಸರಕಾರದ ಬದ್ಧತೆಯನ್ನು ಸಾಮೂಹಿಕವಾಗಿ ಸಾದರಪಡಿಸುವುದು ಇಲಾಖೆಗಳ ಸಚಿವರಾದವರ ಆದ್ಯ ಕರ್ತವ್ಯ ಕೂಡ ಆಗಿರುತ್ತದೆ’’. ಹೈಕೋರ್ಟು ತೀರ್ಪು ಬಂದ ಕೂಡಲೇ ಸಚಿವರೇ ‘ಒಳ ಮೀಸಲಾತಿ ಜಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ವಿಚಾರವಾಗಿದೆ; ಅದರ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸುತ್ತದೆ’ ಎಂದು ಹೇಳುವ ಬದಲು ಸರಕಾರದೊಳಗಿಂದಲೇ ನೀಡಿರುವ ಹೇಳಿಕೆ ಬೀದಿಯಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತಿವೆ. ಈ ಹಿಂದೆ, ಸರತಿ ಸಾಲಿನಲ್ಲಿ ಒಳ ಮೀಸಲಾತಿಯ ಪಕ್ವ ಜಾರಿಗಾಗಿ ಹೋರಾಟಗಾರರು ಅವರಿಗೆ ಅರುಹಿದಾಗ ಪ್ರತಿಯೊಂದಕ್ಕೂ ಸಚಿವ ಸಂಪುಟದ ತೀರ್ಮಾನ ಆಗಬೇಕೆಂದು ತಿಳಿಸುತ್ತಿದ್ದರು. ಆದರೆ ಮಹೇಂದ್ರ ಮಿತ್ರ ಪ್ರಕರಣದ ಮೇಲೆ ಯಾವಾಗ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ ಎಂಬ ವಿಚಾರ ಶರವೇಗದಲ್ಲಿ ಹರಿದು ಸಾರ್ವಜನಿಕ ಚರ್ಚೆಗಳಾಗುತ್ತಿವೆ. ಮಹೇಂದ್ರ ಕುಮಾರ್ ಮಿತ್ರ ಸುಪ್ರೀಂ ಕೋರ್ಟಿನ ಒಳ ಮೀಸಲಾತಿ ದಾವೆಯಲ್ಲಿಯೂ ಅಪಸ್ವರ ದಾಖಲಿಸಿದ್ದಾರೆಂದು ಬಲ್ಲವರ ಅಭಿಮತಗಳಾಗಿವೆ. ಜನ್ಮತಃ ಈತ ಮಾದಿಗ ಸಮುದಾಯದವರು. ಅವರ ಸಮುದಾಯ ಒಂದು ಪ್ರವಾಹದಂತೆ ಜಮಾವಣೆ ಆಗುತ್ತಿದ್ದರೆ; ಅಪಸ್ವರವೆತ್ತಿರುವ ವಿಚಾರವನ್ನು ಅವರ ಅಭಿಮತ ಸ್ವಾತಂತ್ರ್ಯ ಅಂಬೋಣ. ಒಟ್ಟಾರೆ ಇವರ ಗುಪ್ತಗಾಮಿನಿಯ ನಡೆ ಒಳ ಮೀಸಲಾತಿ ಬೇಡವೆನ್ನುವವರ ಪಾಲಿಗೆ ಹಾಲು ಜೇನಾಗಿದೆ. ಇಂದ್ರಾ ಸಹಾನಿ ತೀರ್ಪಿನ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ ತುಂಬಿದ್ದರೆ, ಕೇಂದ್ರ ಸರಕಾರ 103ನೇ ತಿದ್ದುಪಡಿ ಮೂಲಕ ಶೇ.10ರಷ್ಟು ಮೀಸಲಾತಿಯನ್ನು ಸದ್ದುಗದ್ದಲವಿಲ್ಲದೆ ಇಡಬ್ಲ್ಯುಎಸ್ ವರ್ಗಗಳಿಗೆ ಶರವೇಗದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದಾಗ ಅದನ್ನೇ ಶ್ರೇಷ್ಠ ನ್ಯಾಯಾಲಯದ ಮುಂದೆ ಈ ಮಿತ್ರ ಏಕೆ ಪ್ರಶ್ನಿಸಲಿಲ್ಲ ಎಂಬ ಪ್ರಶ್ನೆಗಳ ಸುರಿಮಳೆಯಾಗುತ್ತಿವೆ. ಇಡಬ್ಲ್ಯುಎಸ್ ಮೀಸಲಾತಿಯ ಸಾಂವಿಧಾನಿಕ ಅರ್ಹತೆಯನ್ನು ಸದರಿ ನ್ಯಾಯಾಲಯದ ಮುಂದೆ ಅನೇಕರು ಪ್ರಶ್ನೆ ಮಾಡಿದ್ದಾಗ ಇಂದ್ರಾ ಸಹಾನಿ ಬಂಧಕ ತೀರ್ಪಿನ (Binding Verdict) ಬದ್ಧತೆಗಳು ಏಕೆ ಮಂಗಮಾಯವಾದವು? ಈ ಸಂದರ್ಭದಲ್ಲೇ ಸದರಿ ಘನ ನ್ಯಾಯಾಲಯ ಕೇಂದ್ರದ ಶೇ.59.5ರಷ್ಟು ಮೀಸಲಾತಿ ಅನುಪಾತ ( ಪ.ಜಾತಿ -15, ಪ.ವರ್ಗ -7.5, ಒಬಿಸಿ-27 ಮತ್ತು ಇಡಬ್ಲ್ಯುಎಸ್-10) ಮೀರಿದ್ದನ್ನು ಮೌನವಾಗಿ ಸಮ್ಮತ್ತಿಸಿದ್ದು ಇಂದಿಗೂ ಯಕ್ಷಪ್ರಶ್ನೆಯಾಗಿದೆ. ಸದರಿ ತೀರ್ಪಿನಲ್ಲಿ ಉಲ್ಲೇಖಿಸಿರುವ ರಾಜ್ಯ ಪದ ವ್ಯಾಖ್ಯಾನ ಕೇಂದ್ರ ಸರಕಾರದ ವ್ಯಾಪ್ತಿಗೂ ಅನ್ವಯಿಸುತ್ತದೆ. ಶ್ರೇಷ್ಠ ನ್ಯಾಯಾಲಯದಲ್ಲಿಯೇ ಇಂದ್ರಾ ಸಹಾನಿ ತೀರ್ಪಿಗೆ ಮನ್ನಣೆಯಿಲ್ಲದಿರುವಾಗ ರಾಜ್ಯಗಳ ಹೈಕೋರ್ಟ್ಗಳು ಹೇಗೆ ಬಾಧ್ಯವಾಗುತ್ತವೆ ಎಂಬ ಗಂಭೀರ ಪ್ರಶ್ನೆಗೆ ಉತ್ತರ ಸಿಗುವುದೆಲ್ಲಿಂದ? ಅಥವಾ ಸಂಸತ್ ಉತ್ತರದಾಯಿತ್ವ ಸ್ಥಾಪಿಸುತ್ತದೆಯೇ? ಇತ್ತೀಚೆಗೆ ಚಿಂತಕ ಯೋಗೇಂದ್ರ ಯಾದವ್ ಹತ್ತಾರು ಯುವಕರ ಜೊತೆ ಸಂವಾದ ಮಾಡುವಾಗ ಒಂದು ಪ್ರಶ್ನೆಯನ್ನು ಅವರಿಗಿಟ್ಟರು. ‘‘ನಿಮ್ಮೊಳಗೆ ಹಿಂದುಳಿದ-ದಲಿತ-ಆದಿವಾಸಿಗಳೆಷ್ಟಿದ್ದಾರೆ’’ ಎಂದಾಗ ಎಲ್ಲರೂ ನೀರವ ಮೌನಕ್ಕೆ ಜಾರುತ್ತಾರೆ. ‘‘ಇಲ್ಲಿ ಈ ಸಮುದಾಯದವರಾರು ಇಲ್ಲದಿದ್ದಾಗ ನೀವು ಹೇಗೆ ಅವರ ಪ್ರತಿನಿಧಿಗಳಾಗಿ ನೋವು-ನಲಿವುಗಳನ್ನು ಪ್ರತಿಪಾದಿಸಲು ಮುಖವಾಣಿಗಳಾಗುತ್ತೀರಾ?’’ ಎಂದರು. ಈ ದೃಷ್ಟಿಯಲ್ಲಿ ಮೀಸಲಾತಿ ವಿಚಾರಗಳನ್ನು ವಿಶ್ಲೇಷಿಸಿದಾಗ ಯಾದವ್ರ ಅಂತರ್ಗತ ರಾಷ್ಟ್ರೀಯ ಮುಖ್ಯವಾಹಿನಿ ಮನೋಧರ್ಮಗಳು ಅನಾವರಣವಾಗುತ್ತವೆ. ಮೀಸಲಾತಿ ಮತ್ತು ಒಳಮೀಸಲಾತಿ ಇರುವುದು ಜನಾಂಗೀಯ ಪ್ರಾತಿನಿಧ್ಯಗಳ ಕೊರತೆಯನ್ನು ತುಂಬುವ ಕೋಮುವಾರು ಆದೇಶಗಳಾಗಿವೆ. 1960ರ ಆರಂಭಿಕ ದಿನಗಳಿಂದಲೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳೊಳಗೆ ನಾಲ್ಕು ಸಾಮಾಜಿಕ ಮಾನದಂಡಗಳಡಿ ಒಳ ಮೀಸಲಾತಿ ವರ್ಗೀಕರಣ ತಾತ್ವಿಕತೆಯನ್ನು ಅನುಸರಿಸುತ್ತಾ ಬರಲಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಈ ಸೂತ್ರ ತಡವಾಗಿ ಮುಖ್ಯವಾಹಿನಿಯಲ್ಲಿ ತೆರೆದುಕೊಂಡಿದೆ. ಒಳಮೀಸಲಾತಿ ಜಾರಿ ಬೇಡಿಕೆ ಮಂಡನೆಗಳಲ್ಲಿ ಒಂದಷ್ಟು ಬೇಡದ ಉದ್ರೇಕತೆಯ ಭಾಷಣಗಳೂ ತೇಲಿ ಬಂದವು. ಇಂದಿಗೂ ಸರಿಯಾದ ಕ್ರಮದಲ್ಲಿ ಅನುಷ್ಠಾನವಾಗಿಲ್ಲವೆಂಬ ಕೂಗು ಜೀವಂತವಾಗಿದೆ. ಹೋರಾಟಗಾರರ ಪರಿಕ್ರಮಣಗಳಂತೂ ಸಂಪೂರ್ಣವಾಗಿ ನಿಂತಿಲ್ಲ. ಬಹುಶಃ ಈ ನಿಟ್ಟಿನಲ್ಲಿ ಸರಕಾರದ ನಡೆಯು ಅಷ್ಟೇ ಮುಕ್ತವಾಗಿರಬೇಕಿತ್ತು. ದೀರ್ಘಕಾಲದಿಂದ ದಣಿದಿದ್ದವನಿಗೆ ತಂಬಿಗೆ ನೀರು ಕೊಡುವ ಬದಲು ಸರಕಾರ ಬೆರಳ ಹನಿಗಳಂತೆ ನೀಡತೊಡಗಿತ್ತು. ಇದರಿಂದ ಒಳ ಮೀಸಲಾತಿ ಹೋರಾಟಗಾರರ ದಣಿವೂ ಇಂಗಲಿಲ್ಲ; ವಿಧಾನ ಸೌಧ ಸುತ್ತುವ ಧರ್ಮ ನಡಿಗೆಯೂ ನಿಲ್ಲಲಿಲ್ಲ. ತೆಲಂಗಾಣ ಮಾದರಿಯ ಆದೇಶ ಬೇಕೆಂಬ ಅನೇಕರ ಬೇಡಿಕೆ ಇಂದಿಗೂ ಅರ್ಥಪೂರ್ಣವಾಗಿದೆ. ಈ ಹಿಂದೆ, ಸಚಿವ ಬಿ. ಬಸವಲಿಂಗಪ್ಪ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳಾ ಮೀಸಲಾತಿ ಮತ್ತು ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ಒಳ ಮೀಸಲಾತಿ ಅಳವಡಿಸಿದ ಕಾರಣಕ್ಕಾಗಿ ಅಧಿಕಾರ ವಿಭಜನೆ ಮೂಲಕ ಸ್ಥಾಪಿತ ಶಕ್ತಿಗಳನ್ನು ಮೂಲೆ ಗುಂಪುಮಾಡಿತ್ತು. ಈ ದೃಷ್ಟಿಯಲ್ಲಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಒಳ ಮೀಸಲಾತಿ ಅನ್ವಯಿಸಬೇಕೆಂಬ ಬೇಡಿಕೆಯಿದೆ. ಅಸಮಾನತೆಯಲ್ಲಿ ಸಮಾನತೆ ಸ್ಥಾಪಿಸುವುದು ಸಾಂವಿಧಾನಿಕ ಆಶಯವಾಗಿವೆ. ಹಾಗೆಯೇ ಆರ್ಥಿಕ ಯೋಜನೆಗಳಿಗೂ ಅನ್ವಯಿಸಬೇಕೆಂಬ ಒತ್ತಾಯಗಳಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅನೇಕ ಸಂದರ್ಭಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಒಂದು ಸೂಕ್ತವಾದ ಬಿಲ್ ಅನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದಿದ್ದಾರೆ. ಬಹುಶಃ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಯೇ ಸೂಕ್ತ ವ್ಯಾಖ್ಯಾನಗಳೊಂದಿಗೆ ಮಜಭೂತವಾದ ಬಿಲ್ ಮಂಡನೆಯಾದರೆ ಭುಗಿಲೆದ್ದಿರುವ ಸರಣಿ ಕಾನೂನು ಬಿಕ್ಕಟ್ಟುಗಳಿಗೆ ಪರಿಹಾರಗಳು ಖಂಡಿತವಾಗಿಯೂ ಲಭಿಸುತ್ತವೆ. ಈ ಕಾರ್ಯ ಯಶಸ್ವಿಯಾದರೆ, ರಾಜ್ಯ ಸರಕಾರಕ್ಕೆ ತಡವಾಗಿಯಾದರೂ ನೊಂದವರಿಂದ ಚಂಗುಲಾಬಿ ಸಿಗುವುದಂತೂ ನಿಶ್ಚಿತ. ಬಹುತೇಕ ಕಾಂಗ್ರೆಸ್ ಶಾಸಕರು ಒಳ ಮೀಸಲಾತಿ ತಮ್ಮನ್ನು 2028ರ ಚುನಾವಣೆಯಲ್ಲಿ ಆಹುತಿ ಪಡೆಯುತ್ತದೆಯೋ ಎಂಬ ಆಂತರಿಕ ಭೀತಿಯಲ್ಲಿದ್ದಾರೆ. ಅತ್ತ ಭಾಜಪ ಸಹ ಇದರ ಹಬೆಯಲ್ಲಿ ಸಾಧ್ಯವಾದಷ್ಟೂ ಕೈ ಕಾಯಿಸಲು ತಾಲೀಮು ಮಾಡುತ್ತಲೇ ಸಾಗಿದೆ. ಈ ಹಿಂದೆ, ಚಂದ್ರಬಾಬು ನಾಯ್ಡು ಮನೆಯಿಂದ ಮಾದಿಗ ದಂಡೋರ ಪಾದಯಾತ್ರೆ ಹೊರಟಂತೆ ಮುಖ್ಯಮಂತ್ರಿಗಳ ಹುಟ್ಟೂರಾದ ಸಿದ್ದರಾಮಯ್ಯನ ಹುಂಡಿಯಿಂದ ಮತ್ತೊಂದು ಸುತ್ತಿನ ಪಾದಯಾತ್ರೆ ಅಣಿಗೊಳ್ಳುತ್ತಿದೆ. ಬಹುಶಃ ಅನುಭವಿ ಸಚಿವರಾದ ಡಾ. ಮಹದೇವಪ್ಪ ಅವರು ತಮ್ಮ ದೀರ್ಘಕಾಲದ ರಾಜಕೀಯ ಒಡನಾಡಿಗಳಾದ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಇಷ್ಟೊತ್ತಿಗೆ ಒಂದು ಸಕಾಲಿಕ ಮತ್ತು ನ್ಯಾಯೋಜಿತ ಕ್ರಮಗಳ ಅನುಪಾಲನೆಯಲ್ಲಿ ಯಶಸ್ಸು ಕಂಡಿದ್ದರೆ ಯಾರೊಬ್ಬರೂ ಪದೇ ಪದೇ ಬೀದಿಗಿಳಿಯುತ್ತಿರಲಿಲ್ಲ. ಕಡೆಗಣಿಸಿದ ಕಿಡಿಯೊಂದು ಊರನ್ನೇ ಸುಟ್ಟಂತಾಗಬಾರದು ಒಳ ಮೀಸಲಾತಿಯ ಸಾಂವಿಧಾನಿಕ ಆಶಯಗಳು. ರಾಜ್ಯ ಸರಕಾರದ ಜೈ ಸಂವಿಧಾನ್ ಜಯಘೋಷ ‘‘ಸಾಂಘಿಕ ಹಿತಾಸಕ್ತಿಯಲ್ಲಿ ವೈಯಕ್ತಿಕ ಶ್ರೇಯೋಭಿವೃದ್ಧಿ ಕಾಣುವ ಆಶಯದತ್ತ’’ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಾರ್ಯವೈಖರಿ ಆಗಲೆಂದು ರಾಜ್ಯದ ಜನತೆಯ ಅಭಿಲಾಷೆ ಅಂಬೋಣ.

20 C