ಕಲಬುರಗಿ | ಜಿಲ್ಲೆಯ ಐದು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,950 ರೂ. ನೀಡಲು ಒಪ್ಪಿಗೆ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯ ಎಲ್ಲಾ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ರೂ 2,950/- ಗಳಂತೆ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ಪೂರ್ತಿ ಹಣ ಸಂದಾಯಕ್ಕೆ ಒಪ್ಪಿಗೆ ನೀಡಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಿರಂತರವಾಗಿ ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೆ ಕೂಡಾ ಈ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಹಲವಾರು ರೈತರು ಒಪ್ಪಿಗೆ ನೀಡಿದ್ದಾರೆ ಎಂದರು. ಬೆಳೆ ಹಾನಿ ; ಮೂರ್ನಾಲ್ಕು ದಿನಗಳಲ್ಲಿ ಖಾತೆಗೆ ಜಮೆ: ಆಗಸ್ಟ್ ತಿಂಗಳಿನಲ್ಲಿ ಶೇ.69 ಹೆಚ್ಚುವರಿ ಹಾಗೂ ಸೆಪ್ಟೆಂಬರ್ ಶೇ.63 ಹೆಚ್ಚುವರಿಯಾಗಿ ಸತತ ಸುರಿದ ಮಳೆಯಿಂದಾಗಿ ಎನ್ ಡಿ ಆರ್ ಎಫ್ ಮಾರ್ಗಸೂಚಿಯನ್ವಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆಯ ವರದಿಯ ಅನುಸಾರ 3,24,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ. ಬೆಳೆ ಹಾನಿಯಾದ ರೈತರ ವಿವರವನ್ನು ಈಗಾಗಲೇ PARIHARA (ಪರಿಹಾರ) ತಂತ್ರಾಂಶದಲ್ಲಿ ದಾಖಲಿಸಿದ್ದು, ಒಟ್ಟು 3,26,183 ರೈತರಿಗೆ 250.97 ರೂ. ಕೋಟಿ ಬೆಳೆ ಹಾನಿ ಪರಿಹಾರ ಮುಂದಿನ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಖರ್ಗೆ ತಿಳಿಸಿದರು. ವಿಮೆ ಯೋಜನೆಯಡಿ ಮಧ್ಯಂತರ ಪರಿಹಾರಕ್ಕಾಗಿ 243.41 ಕೋಟಿ ಬಿಡುಗಡೆ : ಬೆಳೆ ಹಾನಿಯಾದ ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಅರಿಶಿಣ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಒಟ್ಟು 2,67,560 ರೈತರ 3,35,046.2 ಹೇ ಪ್ರದೇಶಕ್ಕೆ ಬೆಳೆ ವಿಮೆ ಮಧ್ಯಂತರ ಪರಿಹಾರ (Mid-Season Adversity) ನೀಡಲು ಸರ್ಕಾರ ಆದೇಶಿಸಿದೆ. ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ►ಹತ್ತಿ : ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ10,025. ಪ್ರದೇಶ-11,727.5 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 9.95 ಕೋಟಿ. ►ತೊಗರಿ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ 2,56,845. ಪ್ರದೇಶ- 3,22,734 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 232.81ಕೋಟಿ. ►ಸೂರ್ಯಕಾಂತಿ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 382. ಪ್ರದೇಶ- 392.088 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.24 ಕೋಟಿ. ►ಅರಿಶಿಣ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 308. ಪ್ರದೇಶ- 192.615 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.41ಕೋಟಿ. ಒಟ್ಟು ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ -2,67,560. ಪ್ರದೇಶ- 3,35,046.2 ಹೆಕ್ಟೇರ್ ಹಾಗೂ ಒಟ್ಟು ಪರಿಹಾರ ರೂ 243.41ಕೋಟಿ. ಉದ್ದು, ಹೆಸರು, ಸೋಯಾ ಅವರೆ ಹಾಗೂ ಇನ್ನಿತರ ಬೆಳಗಳಿಗೆ ಬೆಳೆ ಹಾನಿ ಕುರಿತು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ (Localized calamity) ದೂರು ನೀಡಿದ ಒಟ್ಟು 22,385 ರೈತರಿಗೆ ರೂ. 8.79 ಕೊಟಿ ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವರು ವಿವರಿಸಿದರು. FRP ಮತ್ತು MSP ನಿಗದಿ ಕೇಂದ್ರದ ಜವಾಬ್ದಾರಿ : ಎಫ್ ಆರ್ ಪಿ ಹಾಗೂ ಎಂ ಎಸ್ ಪಿ (FRP MSP) ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜಬಾಬ್ದಾರಿಯಾಗಿದೆ. ಸೌಥ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (SISA) ಅವರು ಕೇಂದ್ರಕ್ಕೆ ಪತ್ರ ಬರೆದು FRP, MSP ವಿಚಾರದಲ್ಲಿ ಪತ್ರ ಬರೆದಿದ್ದಾರೆ. ಈ ಸಂಘದಲ್ಲಿ ಬಿಜೆಪಿಯವರೇ ಇದ್ದಾರೆ. ಕಬ್ಬಿನ ಬೆಲೆ ನೀಡುವಂತೆ ರೈತರು ಒತ್ತಾಯಿಸಿದಾಗ, ಸ್ವತಃ ಮುರುಗೇಶ್ ನಿರಾಣಿ ಅವರು ತಮಗೆ ಸಕ್ಕರೆ ಕಾರ್ಖಾನೆ ನಡೆಸಲು ಆಗದು, ಸರ್ಕಾರಕ್ಕೆ ಬರೆದು ಕೊಡುತ್ತೇವೆ ಎಂದು ಹೇಳುತ್ತಾರೆ. ಬಿಜೆಪಿಯವರು ಹೇಳಿದರೆ ಅದು ಸರಿ, ಅದೇ ನಾವು ಬೇಡಿಕೆ ಇಟ್ಟರೆ ತಪ್ಪು ಎಂದು ಬಿಂಬಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮದ ನಿಯಮಿತದ ಅಧ್ಯಕ್ಷೆ, ಶಾಸಕಿ ಕನೀಜ್ ಫಾತೀಮ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಸ್ತೆ ಸಾರಿಗೆ ನಿಯಮದ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ.ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ.ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮತ್ತಿತರರು ಇದ್ದರು.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ
ದೇರಳಕಟ್ಟೆ: ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ ಹಾಗೂ ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಕುನಿಲ್ ಸ್ಕೂಲ್ ಕ್ಯಾಂಪಸ್ ನಲ್ಲಿ ನಡೆಯಿತು. ಕೊಣಾಜೆ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ನಾಗರಾಜ್ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು. ರಕ್ಷಣಾ ವೇದಿಕೆಯ ಗೌರವಾದ್ಯಕ್ಷ ಪಿ,ಎಸ್.ಮೊಯ್ದಿನ್ ಕುಂಞಿ ಮಾತನಾಡಿದರು ನಾಟೆಕಲ್ ನಾಗರಿಕ ರಕ್ಷಣ ವೇದಿಕೆಯ ಅಧ್ಯಕ್ಷ ಹಾಶಿಮ್ ಬಂಡಾಸಾಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಮೌಶಿರ್ ಅಹ್ಮದ್ ಸಾಮಾನಿಗೆ, ಉಪಾಧ್ಯಕ್ಷರಾಗಿ ಕುಂಞಿ ಮೋನು ನಾಟೆಕಲ್, ಇಕ್ಬಾಲ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಪಿ.ಎಸ್., ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಮೌಲವಿ, ಕೋಶಾಧಿಕಾರಿಯಾಗಿ ಗೌರವ ಸಲಹೆಗಾರರಾಗಿ ಹನೀಫ್ ಶೈನ್ , ಅಬೂಬಕರ್ ದೋಹಾ ಬಾಗ್ ಆಯ್ಕೆಯಾದರು.
BANTWAL | ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ದಾಳಿ: ಆರೋಪಿಯ ಬಂಧನ
ಬಂಟ್ವಾಳ: ಅಕ್ರಮ ಜಾನುವಾರು ವಧಾ ಕೇಂದ್ರ ನಡೆಸುತ್ತಿದ್ದ ಆರೋಪದಲ್ಲಿ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ಅರಳ ಗ್ರಾಮದಲ್ಲಿ ರವಿವಾರ ನಡೆದಿದೆ. ಮಯ್ಯದ್ದಿ(57) ಬಂಧಿತ ಆರೋಪಿ. ಈತ ತನ್ನ ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ಕಟ್ಟಿಕೊಂಡು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ದಾಳಿ ವೇಳೆ ಮನೆಯ ಬಳಿಯ ಶೆಡ್ಡಿನಲ್ಲಿ ಮೂವರು ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದರು. ಪೊಲೀಸರನ್ನು ಗಮನಿಸಿ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ಮಯ್ಯದ್ದಿಯನ್ನು ವಶಕ್ಕೆ ಪಡೆಯಲಾಗಿದ್ದು, ಶೆಡ್ಡಿನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದೆ. ಸುಮಾರು 150 ಕೆಜಿ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮನೆ ಜಪ್ತಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಆವರಣದ ಶೆಡ್ಡಿನಲ್ಲಿ ಕಸಾಯಿಖಾನೆ ನಿರ್ಮಿಸಿ ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಜಾನುವಾರುಗಳ ವಧೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮನೆ ಹಾಗೂ ಶೆಡ್ಡಿನ ಆವರಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಮುಟ್ಟುಗೋಲು ಮಾಡುವ ಬಗ್ಗೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹನುಮಸಾಗರ | ಅಗಲಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ನುಡಿನಮನ
ಹನುಮಸಾಗರ (ಕೊಪ್ಪಳ ಜಿಲ್ಲೆ) : ಇಲ್ಲಿಯ ಕನ್ನಡ ಸಾಹಿತ್ಯ ಭವನದಲ್ಲಿ ವೃಕ್ಷ ಮಾತೆ, ಶತಾಯುಷಿ, ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಶ್ರದ್ದಾಂಜಲಿ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಸಂತಾಪ ಸೂಚಿಸಿ, ನುಡಿನಮನ ಸಲ್ಲಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲೀಕಾರ, ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ್ ಮಾತನಾಡಿ, ಮಕ್ಕಳೇ ಇಲ್ಲದ ತಿಮ್ಮಕ್ಕ ಗಿಡಮರಗಳನ್ನು ಬೆಳೆಸಿ, ಪೋಷಿಸಿ ಅವುಗಳನ್ನೇ ತನ್ನ ಮಕ್ಕಳೆಂಬ ಭಾವನೆಯಿಂದ ಸಂತೃಪ್ತಿ ಹೊಂದಿದ್ದರು ಎಂದು ಹೇಳಿದರು. ಇಂದಿನ ದಿನಗಳಲ್ಲಿ ಆಮ್ಲಜನಕ ಕೊರತೆಯಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ. ಮುಂದಿನ ನಮ್ಮ ಪೀಳಿಗೆಗೆ ಆಮ್ಲಜನಕ ಕೊರತೆ ಬರಬಾರದು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂದರೆ ಸಾಲುಮರದ ತಿಮ್ಮಕ್ಕ ಅವರ ಮಾರ್ಗದಲ್ಲಿ ನಡೆದು ಸಾವಿರಾರು ಗಿಡಗಳನ್ನು ನೆಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು. ಅವರು ಅಷ್ಟು ಗಿಡಮರಗಳನ್ನು ನೆಟ್ಟು ಪಾಲನೆ-ಪೋಷಣೆ ಮಾಡಿದ ಪುಣ್ಯವೇ ಅವರನ್ನು 114 ವರ್ಷ ಬಾಳುವಂತೆ ಮಾಡಿದೆ ಎಂದು ತಿಳಿಸಿದರು. ಕಸಾಪ ಹಿರಿಯರಾದ ಅಬ್ದುಲ್ ಕರೀಮ ಒಂಟೆಳಿ, ಅಬ್ದುಲ್ ರಝಾಕ್ ಟೇಲರ, ಕಸಾಪ ತಾಲೂಕು ಕಸಾಪ ಹೋಬಳಿ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಕಾರ್ಯದರ್ಶಿ ಬಸವರಾಜ ದಟ್ಟಿ, ಶೇಖರಪ್ಪ ಕುರಿ, ಎಂ.ಡಿ. ನಂದವಾಡಗಿ, ಗ್ಯಾನಪ್ಪ ತಳವಾರ ಮತ್ತಿತರರು ಇದ್ದರು.
ಯಾದಗಿರಿಯಲ್ಲಿ ಅಕ್ರಮ ಮರಳು, ಮರಮ್ ದಂಧೆ
ಜಿಲ್ಲಾಧಿಕಾರಿ, ಎಸ್ಪಿ ಕಚೇರಿ ಎದುರುಗಡೆಯೇ ಮರಳು ಸಾಗಾಟ
ಪ್ರಜಾಪ್ರಭುತ್ವದ ಅಳಿವು-ಉಳಿವು ಸದ್ಯದ ಸವಾಲು
ಒಂದೆಡೆ ಮಹಾತ್ಮ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರ ಬಗ್ಗೆ ಇಂಥ ಸುಳ್ಳುಗಳನ್ನು ಸೃಷ್ಟಿಸುತ್ತಲೇ ಇನ್ನೊಂದೆಡೆ ಗಾಂಧೀಜಿ, ಅಂಬೇಡ್ಕರ್ ಶಾಖೆಗೆ ಭೇಟಿ ನೀಡಿದ್ದರು ಎಂದು ಪುರಾವೆಗಳಿಲ್ಲದೇ ಕಟ್ಟುಕಥೆಗಳನ್ನು ಹರಿಬಿಡಲಾಗುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ ಒಳಗಿಂದೊಳಗೆ ಮೀಸಲಾತಿಯ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ನಾನಾ ವಿಧದ, ದೃಷ್ಟಿ ಕೋನಗಳ ವಿಶ್ಲೇಷಣೆಗಳು ಬರುತ್ತಿವೆ. ಚುನಾವಣೆಯಲ್ಲಿ ಯಾರು ಗೆಲ್ಲಲಿ, ಸೋಲಲಿ ಅದು ಮುಖ್ಯವಲ್ಲ. ಅದು ಚರ್ಚೆಯಾಗಬೇಕಾದ ಸಂದರ್ಭ ಈಗಿನದಲ್ಲ. ಅದರ ಬದಲಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೆಷ್ಟು ದಿನ ಉಳಿಯುತ್ತದೆ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಸನ್ನಿವೇಶವಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಬೇಕಾದ ಆಯೋಗವೇ ಸಂಘ ಪರಿವಾರದ ಒಂದು ಅಂಗವಾಗಿ ಆ ಪ್ರಕ್ರಿಯೆಯನ್ನೇ ಹಾಳು ಮಾಡಲು ಹೊರಟಿರುವುದು ಆತಂಕವನ್ನುಂಟು ಮಾಡಿದೆ. ಚುನಾವಣಾ ಆಯೋಗ ಮತ್ತು ಆರೆಸ್ಸೆಸ್ ಜಂಟಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿವೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ತಳ್ಳಿ ಹಾಕಲು ಆಗುವುದಿಲ್ಲ. ‘ಪ್ರಜಾಪ್ರಭುತ್ವ’ ಮತ್ತು ಸಮಾಜವಾದ ಎಂಬ ಪದಗಳು ಭಾರತಕ್ಕೆ ಹೊರಗಿನಿಂದ ಬಂದ ಪದಗಳು ಎಂದು ಗೋಳ್ವಾಲ್ಕರ್ ಏಳು ದಶಕಗಳ ಹಿಂದೆಯೇ ಹೇಳಿದ್ದರು. ಆದರೆ ಮೋಹನ್ ಭಾಗವತ್ರನ್ನು ಕೇಳಿದರೆ ಇದೆಲ್ಲ ಸುಳ್ಳು, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿ ಜಾರಿ ಕೊಳ್ಳುತ್ತಾರೆ. ಈಗ ಶತಮಾನೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರೆಸ್ಸೆಸ್) ತನ್ನ ಪರಿಕಲ್ಪನೆಯ ಹಿಂದೂ ರಾಷ್ಟ್ರದ ಗುರಿ ಸಮೀಪಿಸುತ್ತಿದೆ ಎಂದು ಸಂತಸದಲ್ಲಿದೆ. ಯಾವುದೇ ಸಂಘಟನೆಗಾದರೂ ಇದು ಹೆಮ್ಮೆ ಪಡುವ ವಿದ್ಯಮಾನ. ಅದಕ್ಕಾಗಿ ದೇಶವ್ಯಾಪಿ ಸಭೆ, ಪಥ ಸಂಚಲನಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಅದು ತನ್ನ ಇತಿಹಾಸದ, ಸಾಧನೆಗಳ ಪಟ್ಟಿ ಮಾಡಿ ಹೇಳಿದರೆ ಹೇಳಲಿ. ಆದರೆ ಮಾಡಿಲ್ಲದ ಕೆಲಸವನ್ನು ಮಾಡಿದ್ದೇನೆಂದು ಹೇಳುವುದು ಎಷ್ಟು ಸರಿ? ಅದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ ಎಂಬುದು ಹೊಸ ಆರೋಪವಲ್ಲ.ಗಾಂಧಿ ಹತ್ಯೆಯ ಪ್ರಕರಣದ ಆರೋಪವೂ ಹಳೆಯದು. ಆದರೆ ಗಾಂಧೀಜಿ ಮತ್ತು ಅಂಬೇಡ್ಕರ್ ಶಾಖೆಗೆ ಬಂದಿದ್ದರೆಂದು ಯಾವುದೇ ಪುರಾವೆಗಳಿಲ್ಲದೇ ಹೇಳುವುದು ಸಹಜವಾಗಿ ಇತರರ ಆಕ್ಷೇಪಕ್ಕೆ ಕಾರಣವಾಗುತ್ತದೆ. ಅದೇ ರೀತಿ ನೋಂದಣಿಯಾಗದ ಸಂಘದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರು ಮಾಡಿರುವ ಆರೋಪಗಳು ಅಸಹಜವೇನಲ್ಲ. ಈ ಕುರಿತಂತೆ ಸ್ಪಷ್ಟೀಕರಣ ನೀಡಲು ಮೋಹನ್ ಭಾಗವತ್ರು ಬೆಂಗಳೂರಿಗೆ ಬರಬೇಕಾಯಿತು. ಕಳೆದ ಮೂವತ್ತೆರಡು ವರ್ಷಗಳ ಕಾಲಾವಧಿಯಲ್ಲಿ ಅದರಲ್ಲೂ ಅಯೋಧ್ಯೆಯ ಬಾಬರಿ ಮಸೀದಿಯನ್ನು ಬೀಳಿಸಿದ ನಂತರ ಆರೆಸ್ಸೆಸ್ ದೇಶದ ದಿಕ್ಕನ್ನೇ ಬದಲಿಸಿತು. ಅದು ಒಂದೊಂದಾಗಿ ತನ್ನ ಕಾರ್ಯಸೂಚಿಯ ಭಾಗವಾದ ವಿಷಯಗಳನ್ನು ಪ್ರಕಟಿಸುತ್ತ ಹೋದಂತೆ, ನಾವು ಅದರ ಸುತ್ತ ಚರ್ಚೆ ಮಾಡುತ್ತ ಹೋದೆವು.ಆದರೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದಕ್ಕೆ ತಿರುಗುಬಾಣವಾಗಿದೆ. ಸಂಘ ಪರಿವಾರವನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ನೋಂದಣಿಯಾಗದ ಸಂಸ್ಥೆ ಎಂದು ಆರೋಪಿಸಿದರು. ಇದಷ್ಟೇ ಅಲ್ಲದೆ ಅದು ಸಂಗ್ರಹಿಸುವ ಹಣದ ಲೆಕ್ಕಾಚಾರದ ಪ್ರಶ್ನೆಯನ್ನು ಎತ್ತಿದರು. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್ಪಥಸಂಚಲನ ವಿವಾದಕ್ಕೆ ಕಾರಣವಾಯಿತು. ಇದಕ್ಕೆಲ್ಲ ಉತ್ತರಿಸಲು ಬೆಂಗಳೂರಿಗೆ ಬಂದ ಆರೆಸ್ಸೆಸ್ ಸಂಘಚಾಲಕ ಮೋಹನ್ ಭಾಗವತ್ ಅವರು ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂದು ಜಾರಿಕೆಯ ಉತ್ತರ ನೀಡಿದರು. ಇದೇ ಸಂದರ್ಭದಲ್ಲಿ ನಾಡಿನ ಸಾಕ್ಷಿ ಪ್ರಜ್ಞೆ ಎಂದು ಹೆಸರಾದ ಹಿರಿಯ ಲೇಖಕ ದೇವನೂರು ಮಹಾದೇವ ಅವರು ಆರೆಸ್ಸೆಸ್ ಸೃಷ್ಟಿಸುತ್ತಿರುವ ಸುಳ್ಳುಗಳ ಬಗ್ಗೆ ಪ್ರಶ್ನೆಯನ್ನೆತ್ತಿದರು. ಅದಕ್ಕೆ ಉತ್ತರ ನೀಡಲು ಹೋದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು ಇನ್ನಷ್ಟು ಸುಳ್ಳುಗಳನ್ನು ಹೇಳಿದರು. ಆರೆಸ್ಸೆಸ್ ಮಾಡುತ್ತ ಬಂದ ಕಸರತ್ತುಗಳು ಯಾರಿಗೂ ಸುಲಭಕ್ಕೆ ಅರ್ಥವಾಗುವುದಿಲ್ಲ. ಒಂದೆಡೆ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಭಕ್ತಪಡೆಗಳ ಮೂಲಕ ಮಹಾತ್ಮಾ ಗಾಂಧೀಜಿ ಮತ್ತು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತೇಜೋವಧೆಯನ್ನು ಮಾಡಿಸುತ್ತದೆ. ಇನ್ನೊಂದೆಡೆ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂಘದ ಶಾಖೆಗೆ ಭೇಟಿ ನೀಡಿದ್ದರೆಂದು ಹೇಳುತ್ತದೆ. ಇದು ಮಾತ್ರವಲ್ಲ 1963 ರಲ್ಲಿ ಭಾರತ, ಚೀನಾ ಯುದ್ಧದ ಸಮಯದಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆರೆಸ್ಸೆಸ್ ಸ್ವಯಂ ಸೇವಕರಿಗೆ ಆಹ್ವಾನಿಸಿದ್ದರೆಂದು ಇನ್ನೊಂದು ಸುಳ್ಳನ್ನು ಹೇಳಲಾಗುತ್ತದೆ. ಇದರ ಸತ್ಯಾ ಸತ್ಯತೆ ಬಗ್ಗೆ ದೇವನೂರ ಮಹಾದೇವರು ಪ್ರಶ್ನಿಸಿದರೆ ಅದಕ್ಕೂ ಸರಿಯಾದ ಉತ್ತರ ಬರಲಿಲ್ಲ. ಮೊದಲನೆಯದಾಗಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಮಹಾತ್ಮಾ ಗಾಂಧಿಯವರು ನಿಜವಾಗಿಯೂ ಸಂಘದ ಶಾಖೆಗೆ ಬಂದಿದ್ದರೇ? ಬಂದಿದ್ದರೆ ಆವಾಗಿನ ವರ್ತಮಾನ ಪತ್ರಿಕೆಗಳಲ್ಲಿ ಅದು ಪ್ರಕಟವಾಗಿರಬೇಕಾಗಿತ್ತಲ್ಲವೇ? ಸಾಮಾನ್ಯವಾಗಿ ತಮ್ಮ ಡೈರಿಯಲ್ಲಿ ಹಾಗೂ ತಮ್ಮದೇ ಆದ ಪತ್ರಿಕೆಗಳಲ್ಲಿ ಎಲ್ಲವನ್ನೂ ದಾಖಲಿಸುತ್ತಿದ್ದ ಗಾಂಧೀಜಿ ಇದನ್ನೇಕೆ ಬರೆಯಲಿಲ್ಲ? ಇದೇ ರೀತಿ ಅಂಬೇಡ್ಕರ್ ಕೂಡ ಪುಣೆಯ ಸಂಘದ ಶಾಖೆಗೆ ಬಂದಿದ್ದರೆಂದು ಇವರು ಹೇಳುತ್ತಾರೆ. ಅದಕ್ಕೂ ಖಚಿತ ದಾಖಲೆಗಳಿಲ್ಲ. 1939ರ ವೇಳೆಗೆ ಬಹುದೊಡ್ಡ ಜನನಾಯಕರಾಗಿ ಬೆಳೆದಿದ್ದ ಅಂಬೇಡ್ಕರ್ ಸಂಘದ ಶಾಖೆಗೆ ಭೇಟಿ ನೀಡಿದ ಬಗ್ಗೆ ಸಣ್ಣ ಸುದ್ದಿಯಾದರೂ ಬರಬಹುದಿತ್ತಲ್ಲ. ಯಾಕೆ ಬಂದಿಲ್ಲ? ಅಂಬೇಡ್ಕರ್ ಕೂಡ ಡೈರಿಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಸಾವಿರಾರು ಪುಟಗಳ ಅವರ ಸಾಹಿತ್ಯದಲ್ಲಿ ಇದು ಯಾಕೆ ದಾಖಲೆಯಾಗಿಲ್ಲ? ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಆಪ್ತನಾಗಿ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ. ಆತ ಒಂದು ಸುಳ್ಳನ್ನು ನೂರು ಬಾರಿ ಮಾತ್ರವಲ್ಲ ಸಾವಿರ ಬಾರಿ ಹೇಳಿದರೆ ಜನರು ಅದನ್ನೇ ಸತ್ಯವೆಂದು ನಂಬುತ್ತಾರೆ ಎಂದು ಹೇಳುತ್ತಿದ್ದ. ಭಾರತದ ಕತೆಯೂ ಅದೇ ಆಗಿದೆ. ದೇಶದ ಸ್ವಾತಂತ್ರ್ಯ ಹೋರಾಟದ ನೇತಾರ ಮಹಾತ್ಮ್ಮಾ ಗಾಂಧಿಯವರ ಬಗ್ಗೆ ಜಾಲತಾಣದಲ್ಲಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನಿತ್ಯ ತೇಜೋವಧೆಯ ಪ್ರಚಾರ ಮಾಡಿ ಯುವಕರು ಮಾತ್ರವಲ್ಲ, ನಮ್ಮ ಮಕ್ಕಳು ಗಾಂಧಿಯನ್ನು ವಿಲನ್ ಎಂದೂ ಹಾಗೂ ಗೋಡ್ಸೆಯನ್ನು ಹೀರೋ ಎಂದು ಕರೆಯುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ವಿಲಾಸಿ ಎಂದು ಬಿಂಬಿಸಲು ಪೋಟೊ ಶಾಪಿಂಗ್ ಮಾಡಿ ಸುಳ್ಳು ಪ್ರಚಾರ ಮಾಡಿ ಸಾಕಷ್ಟು ತೇಜೋವಧೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಪೀಳಿಗೆಯ ಹಿರಿಯರು ಬಹುತೇಕ ಈಗ ಬದುಕಿಲ್ಲ. ಕೆಲವರು ಉಳಿದರೂ ಅಷ್ಟೊಂದು ಕ್ರಿಯಾಶೀಲರಾಗಿಲ್ಲ. ಗಾಂಧಿ, ನೆಹರೂ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ ಬಗ್ಗೆ ಅವರಿಗೆ ಗೊತ್ತಿತ್ತು.ಅವರು ಇಂಥ ಸುಳ್ಳುಗಳನ್ನು ನಂಬುತ್ತಿರಲಿಲ್ಲ. ಅವರ ನಂತರದ ಪೀಳಿಗೆಗೂ ಚೂರು ಪಾರು ಗೊತ್ತಿತ್ತು. ಅವರೂ ನಂಬುತ್ತಿರಲಿಲ್ಲ.ಅವರ ನಂತರ ಬಂದ ಹೊಸ ಪೀಳಿಗೆ ಅಂದರೆ ತೊಂಭತ್ತರ ನಂತರ ಜನಿಸಿದವರು ಇದ್ದಾರಲ್ಲ, ಅವರು ವಾಟ್ಸ್ಆ್ಯಪ್ ಯುನಿವರ್ಸಿಟಿ ಯಲ್ಲಿ ಬಿತ್ತರಿಸಲ್ಪಡುವ ಸುಳ್ಳುಗಳನ್ನು ನಂಬಿ ರಾಷ್ಟ್ರ ನಾಯಕರ ತೇಜೋವಧೆ ಮಾಡುತ್ತಿದ್ದಾರೆ. ಇಂಥ ಸುಳ್ಳುಗಳನ್ನು ಒಂದಲ್ಲ ಎರಡಲ್ಲ ನೂರಾರು ಬಾರಿ ಹೇಳಿ ಹೇಳಿ ಅದೇ ಸತ್ಯವೆಂಬಂತೆ ನಂಬಿಸಲಾಗಿದೆ. ಒಂದೆಡೆ ಮಹಾತ್ಮ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರ ಬಗ್ಗೆ ಇಂಥ ಸುಳ್ಳುಗಳನ್ನು ಸೃಷ್ಟಿಸುತ್ತಲೇ ಇನ್ನೊಂದೆಡೆ ಗಾಂಧೀಜಿ, ಅಂಬೇಡ್ಕರ್ ಶಾಖೆಗೆ ಭೇಟಿ ನೀಡಿದ್ದರು ಎಂದು ಪುರಾವೆಗಳಿಲ್ಲದೇ ಕಟ್ಟುಕಥೆಗಳನ್ನು ಹರಿಬಿಡಲಾಗುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ ಒಳಗಿಂದೊಳಗೆ ಮೀಸಲಾತಿಯ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ . ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದು ಇವರಿಗೆ ಹೊಸದಲ್ಲ.ಇವರ ಚಟುವಟಿಕೆಗಳನ್ನು ಬಲ್ಲ ಶಿರಸಿಯ ಕಾಶ್ಯಪ ಪರ್ಣಕುಟಿ ಅವರು ಈ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅವರ ಅಭಿಪ್ರಾಯದಂತೆ ‘ಬಹುತೇಕ ಆರೆಸ್ಸೆಸ್ ಪ್ರಮುಖ ನಾಯಕರು ಸುಳ್ಳನ್ನು ಸುಂದರವಾಗಿ ಹೇಳಿ ಜನರನ್ನು ನಂಬಿಸಬಲ್ಲ ಸಾಮರ್ಥ್ಯವುಳ್ಳವರು’ ಎಂದು ಅವರು ತಮ್ಮ ಅನುಭವವನ್ನು ಬರೆದಿದ್ದಾರೆ. ಇಂಥ ಸುಳ್ಳು ಕಥನಗಳ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಅವಿರತವಾಗಿ ನಡೆದಿದೆ. ಮುಂದೇನು ಕಾಲವೇ ಉತ್ತರಿಸಬೇಕಾಗಿದೆ.
ಸಾವಯವ ಕೃಷಿಗೆ ಒತ್ತು, ರಾಸಾಯನಿಕ ಕೃಷಿಯಿಂದ ಮುಕ್ತಿ!
► ಉಡುಪಿಯ ಆಯ್ದ ಗುಚ್ಛ ಗ್ರಾಮಗಳ ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿ ► ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಯೋಜನೆ
ಬಿಹಾರದಲ್ಲಿ ಎನ್ಡಿಎ ಸರ್ಕಾರ ರಚನೆ ಕಸರತ್ತು; ಇಂದು ನಿತೀಶ್ ಕುಮಾರ್ ರಾಜೀನಾಮೆ!
ಪಾಟ್ನಾ, ನವೆಂಬರ್ 17: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 202 ಸ್ಥಾನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಬಿಹಾರದಲ್ಲಿ ಎನ್ಡಿಎ ಸರ್ಕಾರ ರಚನೆಯ ಕಸರತ್ತು ಜೋರಾಗಿದ್ದು, ಬಿಜೆಪಿ, ಜೆಡಿಯು ಹಾಗೂ ಎಲ್ಜೆಪಿ ಪಕ್ಷದ ಐತಿಹಾಸಿಕ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ 202 ಸ್ಥಾನ ಗೆದ್ದಿರುವ ಎನ್ಡಿಎ ಸರ್ಕಾರ ರಚನೆ ಸಿದ್ದತೆ ನಡೆಸುತ್ತಿದ್ದು,
Umrah Pilgrims: ಉಮ್ರಾ ಯಾತ್ರಿಕರು ತೆರಳುತ್ತಿದ್ದ ಬಸ್ ಅಪಘಾತ, 42 ಜನರು ಬಲಿ?
ಹೈದರಾಬಾದ್: ಉಮ್ರಾ ಯಾತ್ರಿಕರ ಬಸ್ ಅಪಘಾತವಾಗಿ ಭೀಕರ ದುರಂತವೊಂದು ಸಂಭವಿಸಿದೆ. ಇಸ್ಲಾಂ ಧರ್ಮಿಯರ ಪವಿತ್ರ ಕ್ಷೇತ್ರವಾದ ಮಕ್ಕಾದಿಂದ ಮದೀನಾಗೆ ಉಮ್ರಾ ಯಾತ್ರಿಕರು ತೆರಳುವ ಸಮಯದಲ್ಲಿ, ಡೀಸೆಲ್ ಟ್ಯಾಂಕರ್ಗೆ ಉಮ್ರಾ ಯಾತ್ರಿಕರ ಬಸ್ ಡಿಕ್ಕಿಯಾಗಿದೆ. ಹೀಗೆ ಸಂಭವಿಸಿದ ಭೀಕರ ದುರಂತದಲ್ಲಿ 42 ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಉಮ್ರಾ ಯಾತ್ರೆಗೆ ಜಗತ್ತಿನ ಮೂಲೆ ಮೂಲೆಯಿಂದ ಜನರು ಬರುತ್ತಾರೆ,
ಹಿಂದುಳಿದ ಗ್ರಾಮ ಪಂಚಾಯತಿಗಳ ಸುಧಾರಣೆಗೆ ಕಾಯಕ ಗ್ರಾಮ ಯೋಜನೆ: ಗ್ರಾಮೀಣ ಅಭಿವೃದ್ಧಿಯ ಹೊಸ ಹೆಜ್ಜೆ; ಏನಿದರ ವಿಶೇಷತೆ?
ಗ್ರಾಮ ಪಂಚಾಯಿತಿ (ಗ್ರಾಪಂ) ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಗ್ರಾಮಗಳ ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು ಕಾಯಕ ಗ್ರಾಮ ಯೋಜನೆಯನ್ನು ಜಾರಿಗೊಳಿಸಿದೆ. ಹಿಂದುಳಿದ ಗ್ರಾಮಪಂಚಾಯತ್ಗಳಿಗೆ ಚುರುಕು ಮುಟ್ಟಿಸಲು ಮತ್ತು ಅವುಗಳ ಅಭಿವೃದ್ಧಿಗೆ ವೇಗ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಯೋಜನೆಯನ್ನು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಕಾಯಕ ಗ್ರಾಮ ಯೋಜನೆ ಎಂದರೇನು? ಈ ಯೋಜನೆಯ ಹಿಂದಿನ ಉದ್ದೇಶಗಳೇನು? ಇದರಿಂದ ಗ್ರಾಮದ ನಾಗರಿಕರಿಗೆ ಎನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಮೂಡುಬಿದಿರೆ | ದನಗಳ ಅಕ್ರಮ ಸಾಗಾಟ ಆರೋಪ: ಮೂವರ ಬಂಧನ
ಮೂಡುಬಿದಿರೆ: ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್ ಅದ್ಯಪಾಡಿ ಯಾನೆ ಮುಹಮ್ಮದ್ ಮನ್ಸೂರ್, ಮುಹಮ್ಮದ್ ಅಶ್ವಾದ್, ಅಬ್ದುಲ್ ಮುಹಮ್ಮದ್ ನಿಶಾಮ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಅ.15ರ ಸಂಜೆ ಮೂಡುಬಿದಿರೆ ತಾಲೂಕಿನ ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ದನಗಳು, ವಾಹನ ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಮನ್ಸೂರ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳಿದ್ದು, ಇದು 30ನೇ ಪ್ರಕರಣವಾಗಿದೆ. ಮತ್ತೋರ್ವ ಆರೋಪಿ ಮುಹಮ್ಮದ್ ಅಶ್ವಾದ್ ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿರುತ್ತದೆ. ಹಾಗೂ 3ನೇ ಆರೋಪಿ ಅಬ್ದುಲ್ ಮುಹಮ್ಮದ್ ನಿಶಾಮ್ ನ ವಿರುದ್ದ ಇದು ಮೊದಲನೇ ಪ್ರಕರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು
ಹೊಸಕೋಟೆ, ನ.16: ಗ್ರಾಮೀಣ ಜನರಿಗೆ ಶುದ್ಧವಾದ ನೀರು ಕೊಡುವ ಉದ್ದೇಶದಿಂದ ಸರಕಾರ ನಿರ್ಮಿಸಿರುವ ಗ್ರಾಮೀಣ ಶುದ್ಧ ನೀರಿನ ಘಟಕಗಳು ತಾಲೂಕಿನಾದ್ಯಂತ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಗೊಳ್ಳದೆ ನಿಷ್ಪ್ರಯೋಜಕವಾಗಿ ಧೂಳು ತಿನ್ನುತ್ತಿವೆ. ಮತ್ತೊಂದೆಡೆ ಶುದ್ಧ ಕುಡಿಯುವ ನೀರಿಗಾಗಿ ಜನರು ಹಪಹಪಿಸುತ್ತಿದ್ದಾರೆ. ಶುದ್ಧ ನೀರು ಸಿಗದೆ ಫ್ಲೋರೈಡ್ಯುಕ್ತ ಬೋರ್ವೆಲ್ ನೀರನ್ನೇ ಆಶ್ರಯಿಸಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಒಂದು ವರ್ಷವೂ ಚಾಲ್ತಿಯಲ್ಲಿ ಇಲ್ಲದೇ ಕೆಟ್ಟುನಿಂತಿವೆ. ಇದು ಕೇವಲ ಒಂದೆರಡು ಹಳ್ಳಿಗಳ ಪರಿಸ್ಥಿತಿ ಅಲ್ಲ. ಬಹುತೇಕ ಗ್ರಾಮಗಳಲ್ಲಿ ಈ ಸಮಸ್ಯೆ ತಲೆದೋರಿದೆ ನಂದಗುಡಿ ಹೋಬಳಿಯ ನಂದಗುಡಿ ಗ್ರಾಮ ಪಂಚಾಯತ್ ಕೇಂದ್ರವಾಗಿದ್ದು ಗ್ರಾಮದಲ್ಲಿ ಸುಮಾರು 1,500 ಮನೆಗಳಿವೆ. ಹೋಬಳಿ ಕೇಂದ್ರವಾಗಿರುವುದರಿಂದ ಸರಕಾರಿ ನೌಕರರೇ ಹೆಚ್ಚಾಗಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ವಾಸ ಮಾಡುತ್ತಿರುವ ಗ್ರಾಮವಾಗಿದೆ. ನಂದಗುಡಿ ಗ್ರಾಮಕ್ಕೆ ಎರಡು ಶುದ್ಧ ನೀರಿನ ಘಟಕಗಳಲ್ಲಿ ಕುಡಿಯುವುದಕ್ಕೆ ನೀರು ಬಳಸುತ್ತಿದ್ದರು. ಆದರೆ ಗ್ರಾಮದ ಬಸ್ ಸ್ಟ್ಯಾಂಡ್ನಲ್ಲಿ ಇದ್ದ ಶುದ್ಧ ನೀರಿನ ಘಟಕ ಕೆಟ್ಟು ಮೂರು ತಿಂಗಳುಗಳಾಗಿವೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಪಟ್ಟಣ ಪ್ರದೇಶದ ನಾಗರಿಕರಂತೆ ಗ್ರಾಮೀಣ ಭಾಗದ ಜನರೂ ಕೂಡಾ ಆರೋಗ್ಯದ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಕುಡಿಯಲೆಂದು ಸರಕಾರ ನೂರಾರು ಕೋಟಿ ವೆಚ್ಚ ಮಾಡಿ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೊಂಡಿದ್ದು, ಅವುಗಳನ್ನು ಸರಿಪಡಿಸುವಂತಹ ಕೆಲಸ ಅವುಗಳ ನಿರ್ವಾಹಣೆ ಜವಾಬ್ದಾರಿ ಹೊತ್ತ ಇಲಾಖೆಯಾಗಲಿ ಅಥವಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಾಗಲಿ, ಸ್ಥಳೀಯ ಮಟ್ಟದ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನ ಕೊಡದೇ ಇರುವುದು ಹಳ್ಳಿ ಜನರ ದೌರ್ಭಾಗ್ಯವೇ ಸರಿ. ದುರಸ್ತಿ ಮಾಡುವವರು ಯಾರು? : ನಿರ್ವಹಣೆ ಕೊರೆತೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು. ಗ್ರಾಮದಲ್ಲಿ ಎರಡು ಕುಡಿಯುವ ನೀರು ಘಟಕಗಳಿದ್ದರೂ ಅವುಗಳು ಕೆಟ್ಟು ತಿಂಗಳುಗಳು ಕಳೆದರೂ ರಿಪೇರಿ ಮಾಡಿಸುವವರೇ ಇಲ್ಲ. ಪಕ್ಕದ ಎರಡು ಮೂರು ಕಿಲೋಮೀಟರ್ ದೂರ ಹೋಗಿ ನೀರು ತರುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯಾರೂ ಗಮನ ಹರಿಸುತ್ತಿಲ್ಲ . -ನಾರಾಯಣಮ್ಮ , ನಂದಗುಡಿ ಗ್ರಾಮಸ್ಥೆ ನಂದಗುಡಿ ಬಸ್ ಸ್ಟಾಪ್ನಲ್ಲಿ ಇರುವ ಶುದ್ಧ ನೀರಿನ ಘಟಕ ನಮ್ಮ ಇಲಾಖೆಯಿಂದ ಖಾಸಗಿ ಅವರಿಗೆ ಒಂದು ವರ್ಷಕ್ಕೆ ಉಸ್ತ್ತುವಾರಿ ನೀಡಲಾಗಿತ್ತು. ಅವರ ಅವಧಿ ಮುಗಿದಿದೆ. ದುರಸ್ತಿ ಆಗದಿರುವುದನ್ನು ಮೇಲಿನ ಅಧಿಕಾರಿಗಳಿಗೆ ಗಮನಕ್ಕೆ ತಂದು ತುರ್ತಾಗಿ ದುರಸ್ತಿ ಮಾಡಿಸಲಾಗುವುದು. ಮತ್ತೊಂದು ಘಟಕ ಪಂಚಾಯತ್ ಅಧೀನದಲ್ಲಿದ್ದು , ಅವರೇ ದುರಸ್ತಿ ಮಾಡಿಸಬೇಕು. -ಬಾಲು ಚಂದ್ರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹೊಸಕೋಟೆ ನಂದುಗುಡಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳು ರಿಪೇರಿ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ದುರಸ್ತಿ ಮಾಡಿಸಲು ಕಂಪೆನಿಗಳಿಗೆ ಯಂತ್ರಗಳನ್ನು ತರಲು ತಿಳಿಸಿದ್ದೇವೆ. ಇನ್ನೆರಡು ಮೂರು ದಿನಗಳೊಳಗೆ ಸರಿಪಡಿಸಲಾಗುವುದು. -ಎಂ ಕೆಂಪಣ್ಣ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನಂದಗುಡಿ
ಕೊಪ್ಪಳ | ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರ ಬಂಧನ
ಕೊಪ್ಪಳ: ಮಾದ್ಲೂರು ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಬಲವಂತವಾಗಿ ಮತ್ತು ಬರಿಸುವ ಪಾನೀಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಯಲಬುರ್ಗಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ಕೆಂಚಪ್ಪ ಕರಗುಳಿ ರೋನ್, ಬಸವರಾಜ ಸಕ್ರೆಪ್, ಭೀಮಪ್ಪ ಮಹದೇವಪ್ಪ ಮಸ್ಕಿ ಹನುಮಾಪುರ ಮತ್ತು ಶಾಹಿಕುಮಾರ ಮಹದೇವಪ್ಪ ಮಸ್ಕಿ ಹನುಮಾಪುರ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ 36 ವರ್ಷದ ಮಹಿಳೆ ಸಂತ್ರಸ್ತೆಯಾಗಿದ್ದಾರೆ. ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಗೆ ಪರಿಚಯಸ್ಥನಾಗಿದ್ದ ಆರೋಪಿಗಳಲ್ಲಿ ಓರ್ವನಾದ ಲಕ್ಷ್ಮಣ ಹಣ ಕೊಡಲು ಬಾಕಿಯಿತ್ತೆನ್ನಲಾಗಿದ. ಬಾಕಿ ಹಣ ಕೊಡುತ್ತೇನೆ ಎಂದು ಆರೋಪಿ ಲಕ್ಷ್ಮಣ ರವಿವಾರ ಸಂಜೆ ಮಹಿಳೆಯನ್ನು ಕುಷ್ಟಗಿಗೆ ಕರೆಸಿಕೊಂಡಿದ್ದ. ಅಲ್ಲಿಂದ ಮಹಿಳೆಯನ್ನು ಇತರ ಮೂವರು ಆರೋಪಿಗಳೊಂದಿಗೆ ಸೇರಿಕೊಂಡು ಬೈಕಿನಲ್ಲಿ ಮಾದ್ಲೂರು ಗ್ರಾಮಕ್ಕೆ ಕರೆದೊಯ್ದು ಜ್ಯೂಸ್ ಎಂದು ಮತ್ತು ಬರುವ ಪಾನೀಯ ಕುಡಿಸಿದ್ದಾನೆ. ಬಳಿಕ ಪಾಳುಬಿದ್ದ ಮನೆಯೊಂದಕ್ಕೆ ಕರೆದೊಯ್ದ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Sports Street- ಮಾಡಿದ್ದುಣ್ಣೋ ಮಾರಾಯ; ಈಡನ್ ಗಾರ್ಡನ್ ನಲ್ಲಿ ಟೀಂ ಇಂಡಿಯಾ ಮಾಡಿದ `ಗಂಭೀರ’ ತಪ್ಪುಗಳೇನು?
India Vs South Africa 1st Test- ಹೀಗೆ ಸೋಲುವುದು ಭಾರತಕ್ಕೆ ಕಳೆದೊಂದು ವರ್ಷದಿಂದ ಅಭ್ಯಾಸವಾಗಿಬಿಟ್ಟಿದೆ. ನ್ಯೂಜಿಲೆಂಡ್ ತಂಡ ಭಾರತವನ್ನು ಭಾರತದಲ್ಲಿ ಸೋಲಿಸಿದಾಗಲೇ ಸುಧಾರಿಸಿಕೊಳ್ಳಿ ಎಂದು ಎಲ್ಲಾ ಕಡೆಯಿಂದಲೂ ಕಿವಿಮಾತುಗಳು ಕೇಳಿ ಬಂದಿದ್ದವು. ಆದರೆ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಮಾತ್ರ ಯಾವುದನ್ನೂ ಕಿವಿಗೆ ಹಾಕಿಕೊಂಡಿಲ್ಲ. ಬದಲಾಗಿ ತಾನು ಮಾಡಿದ್ದೇ ಸರಿ ಎಂದು ವಾದಿಸಿದ್ದಲ್ಲದೆ, ಆಟಗಾರರ ತಲೆಗೆ ಕಟ್ಟಿ ಸುಮ್ಮನಾಗಿಬಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡದ ಪ್ರದರ್ಶನ ಪಾತಾಳಕ್ಕೆ ಕುಸಿದಿದ್ದು ಯಾಕೆ?
’ಕಣ್ಣು ಮಿಟುಕಿಸುವಷ್ಟರಲ್ಲಿ ಬಿಜೆಪಿ ನಮ್ಮನ್ನು ಓವರ್ಟೇಕ್ ಮಾಡಿರುತ್ತೆ’ : ಬದಲಾಗುತ್ತಿದೆಯಾ ಓವೈಸಿ ಟೋನ್?
Asaduddin Owaisi on BJP : ಬಿಹಾರದ ಚುನಾವಣೆಯಲ್ಲಿ ಉತ್ತಮ ಎನ್ನಬಹುದಾದ ಸಾಧನೆ ಮಾಡಿದ ಎಐಎಂಐಎಂ, ಬಿಜೆಪಿ ಪಾರ್ಟಿಯ ಸಂಘಟನೆಯ ಬಗ್ಗೆ ಮಾತನಾಡಿದ್ದಾರೆ. ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ಪಾರ್ಟಿಯ ವಿರುದ್ದ ಕಿಡಿಕಾರಿದ್ದರು. ಬಿಜೆಪಿಯನ್ನು ಎದುರಿಸಬೇಕಾದರೆ 24 ಗಂಟೆ ಕೆಲಸ ಮಾಡಬೇಕು ಎಂದು ಓವೈಸಿ ಅಭಿಪ್ರಾಯ ಪಟ್ಟಿದ್ದಾರೆ.
ನವೆಂಬರ್ 17ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 17) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ನ. 20 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಹೊಸ ಎನ್ಡಿಎ ಸರ್ಕಾರ ಪ್ರಮಾಣವಚನ ಸ್ವೀಕಾರ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಭರ್ಜರಿ ಗೆಲುವು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಯು ಕೂಡ ಉತ್ತಮ ಪ್ರದರ್ಶನ ನೀಡಿದೆ. ಮೈತ್ರಿ ಪಕ್ಷಗಳಾದ ಎಲ್ಜೆಪಿ(ಆರ್ವಿ), ಎಚ್ಎಎಂ ಮತ್ತು ಆರ್ಎಲ್ಎಂ ಕೂಡ ತಮ್ಮದೇ ಆದ ಸ್ಥಾನಗಳನ್ನು ಪಡೆದುಕೊಂಡಿವೆ. ಈ ಎಲ್ಲಾ ಪಕ್ಷಗಳು ಒಟ್ಟಾಗಿ ಸೇರಿ ಬಿಹಾರದ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ನಿರೀಕ್ಷಿಸಲಾಗಿದೆ.
46 ಸ್ವೀಪಿಂಗ್ ಯಂತ್ರಗಳಿಗೆ ₹613 ಕೋಟಿ ಬಾಡಿಗೆ! ₹500 ಕೋಟಿ ಯಾರ ಜೇಬಿಗೆ? - ಶೋಭಾ ಕರಂದ್ಲಾಜೆ ಪ್ರಶ್ನೆ
ಬೆಂಗಳೂರಿನ ರಸ್ತೆ ಸ್ವಚ್ಛತೆಗಾಗಿ 7 ವರ್ಷಗಳ ಅವಧಿಗೆ 46 ಸ್ವೀಪಿಂಗ್ ಯಂತ್ರಗಳನ್ನು 613.25 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಡಿಗೆಗೆ ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ, ಈ ಯೋಜನೆಯ ನೈಜ ವೆಚ್ಚ 100 ಕೋಟಿ ರೂಪಾಯಿ ಮೀರುವುದಿಲ್ಲ ಮತ್ತು ಇದರಲ್ಲಿ 500 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ತಾಂತ್ರಿಕ ಸಮಿತಿಯು ಯಂತ್ರಗಳನ್ನು ಖರೀದಿಸುವಂತೆ ಶಿಫಾರಸು ಮಾಡಿದ್ದರೂ, 'ದೊಡ್ಡ ಆರಂಭಿಕ ವೆಚ್ಚ' ತಪ್ಪಿಸುವ ಕಾರಣ ನೀಡಿ ಸರ್ಕಾರ ಬಾಡಿಗೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ.
ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಈ ದುರ್ಘಟನೆಯಲ್ಲಿ ಹೈದರಾಬಾದ್ನಿಂದ ಹೊರಟಿದ್ದ 42 ಮಂದಿ ಭಾರತೀಯ ಯಾತ್ರಾರ್ಥಿಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದು, ಬಸ್ ಸಂಪೂರ್ಣ ಸುಟ್ಟುಹೋಗಿರುವುದರಿಂದ ಮೃತದೇಹಗಳನ್ನು ಗುರುತಿಸುವುದು ಕಷ್ಟಕರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Gold Rate : ಈ ಗರಿಷ್ಠ ದಾಖಲೆ ಸೃಷ್ಟಿಸಿದ್ದ ಚಿನ್ನದ ಬೆಲೆಯಲ್ಲಿ 5620 ರೂ ಇಳಿಕೆ: ಇಂದಿನ ಬೆಲೆ ಎಷ್ಟಾಗಿದೆ ಗೊತ್ತಾ?
ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಭಾರೀ ಏರಿಕೆಯಾಗಿ ದಾಖಲೆಯ ಗರಿಷ್ಠ ದರ ದಾಖಲಿಸಿದ್ದ ಚಿನ್ನದ ಬೆಲೆಯಲ್ಲಿ 5620 ರೂ ಇಳಿದು, 12300 ಕ್ಕೆ ಶುದ್ಧ ಚಿನ್ನದ ದರ ಬಂದು ನಿಂತಿದೆ. ಇಂದು ಇಳಿಕೆಯಾಗಿದ್ದು, ಮತ್ತೆ ಹೆಚ್ಚಾಗುವ ಸಂಭವವೇ ಹೆಚ್ಚು ಕಾಣಿಸುತ್ತಿದೆ.
Saudi Arabia | ಮದೀನಾ ಸಮೀಪ ಬಸ್–ಟ್ಯಾಂಕರ್ ಢಿಕ್ಕಿ: 42 ಭಾರತೀಯ ಉಮ್ರಾ ಯಾತ್ರಿಕರು ಬಲಿಯಾಗಿರುವ ಶಂಕೆ : ವರದಿ
ಹೈದರಾಬಾದ್, ನ.17: ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಭೀಕರ ದುರಂತದಲ್ಲಿ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮುಫ್ರಿಹತ್ ಪ್ರದೇಶದ ಬಳಿ ಭಾರತೀಯ ಕಾಲಮಾನ ಬೆಳಗಿನ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ ಎಂದು english.mathrubhumi.com ವರದಿ ಮಾಡಿದೆ. ದುರಂತಕ್ಕೆ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಮೃತಪಟ್ಟವರೆಲ್ಲರೂ ಹೈದರಾಬಾದ್ನವರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದುರಂತದ ವೇಳೆಗೆ ಬಸ್ನಲ್ಲಿ ಸುಮಾರು 20 ಮಹಿಳೆಯರು, 11 ಮಕ್ಕಳು ಇದ್ದರು ಎಂದು ಮೂಲಗಳು ತಿಳಿಸಿವೆ. ಮಕ್ಕಾದಲ್ಲಿ ಉಮ್ರಾ ವಿಧಿಗಳನ್ನು ನೆರವೇರಿಸಿ ಮದೀನಾಕ್ಕೆ ತೆರಳುತ್ತಿದ್ದ ಯಾತ್ರಿಕರಲ್ಲಿ ಅನೇಕರು ಡಿಕ್ಕಿ ಸಂಭವಿಸಿದ ಸಂದರ್ಭ ನಿದ್ರಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ಸೂಚಿಸಿವೆ. ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗದಿದ್ದರೂ, ಸ್ಥಳೀಯ ಮೂಲಗಳು 42ಮಂದಿ ಮೃತಪಟ್ಟಿದ್ದಾರೆ ವರದಿ ಮಾಡಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಪಘಾತದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಗೊಂಡಿದ್ದು, ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.
GANG RAPE | ಕೊಪ್ಪಳ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಕೊಪ್ಪಳ: ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಯಲಬುರ್ಗಾ ಪೊಲೀಸ್ ಠಾಣ ವ್ಯಾಪ್ತಿಯ ಮಾದ್ಲೂರು ಗ್ರಾಮದಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ 39 ವರ್ಷದ ಮಹಿಳೆ ಹೊಸಪೇಟೆ ಮೂಲದವರು ಎಂದು ತಿಳಿದು ಬಂದಿದೆ. ಇವರನ್ನು ದುಷ್ಕರ್ಮಿಗಳು ಬೈಕಿನಲ್ಲಿ ಬಲವಂತವಾಗಿ ಕರೆದೊಯ್ದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಸಂತ್ರಸ್ತ ಮಹಿಳೆ ತಮ್ಮ ಪರಿಚಯದವರಿಂದ ಹಣ ಪಡೆಯುವುದಕ್ಕಾಗಿ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದರೆನ್ನಲಾಗಿದೆ. ಈ ವೇಳೆ ಮಹಿಳೆಯನ್ನು ಬೈಕಿನಲ್ಲಿ ಬಲವಂತವಾಗಿ ಕರೆದೊಯ್ದು, ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಸದ್ಯ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮ, ದೇಶವು ಮಹಿಳಾ ಅಧ್ಯಕ್ಷರನ್ನು ಸ್ವೀಕರಿಸಲು ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಹಿಲರಿ ಕ್ಲಿಂಟನ್ ಅವರ ಸೋಲುಗಳನ್ನು ಉಲ್ಲೇಖಿಸಿ, ಪುರುಷ ಪ್ರಧಾನ ಸಮಾಜದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2028ರ ಅಧ್ಯಕ್ಷೀಯ ಚುನಾವಣೆಯ ಊಹಾಪೋಹಗಳನ್ನು ತಳ್ಳಿಹಾಕಿದ ಅವರು ನಾನು ಚುನಾವಣೆಗೆ ಸ್ಪರ್ಧಿಸಿ ನನ್ನ ಸಮಯ ವ್ಯರ್ಥಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸದ್ದಾರೆ . ಇದು ಅಮೆರಿಕಾದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದೆ.
DK Shivakumar: ನಾಯಕತ್ವ ಬದಲಾವಣೆ; ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಿದ್ರಾ ಡಿ ಕೆ ಶಿವಕುಮಾರ್?
ಬೆಂಗಳೂರು, ನವೆಂಬರ್ 16: ನಾಯಕತ್ವದ ಬದಲಾವಣೆ ಬಗ್ಗೆ ರಾಜ್ಯ ಕಾಂಗ್ರೆಸ್ನಲ್ಲಿ ಚರ್ಚೆಯಾಗುತ್ತಿದ್ದು, ಈ ನಡುವೆ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
RSS ಶಿಸ್ತಿನ ಪಥಸಂಚಲನ - ಚಿತ್ತಾಪುರದಲ್ಲಿ ಸಂಚಲನ : ಪ್ರತಿಷ್ಠೆಯ ಮೇಲಾಟದಲ್ಲಿ ಗೆದ್ದದ್ದು ಕಾನೂನು!
Chittapur RSS Patha Sanchalana : ಕರ್ನಾಟಕ ಹೈಕೋರ್ಟ್ ಆದೇಶದಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿತ್ತಾಪುರ ಪಥಸಂಚಲನ ಅಲ್ಲಲ್ಲಿ ಕೆಲವು ಅಹಿತಕರ ವಿದ್ಯಮಾನದ ಮಧ್ಯೆ, ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಸಂಘದ, ಪಥಸಂಚಲನಕ್ಕೆ ಸಾರ್ವಜನಿಕರಿಂದ ಗ್ರ್ಯಾಂಡ್ ವೆಲ್ಕಂ ಸಿಕ್ಕಿದೆ. ನಮ್ಮ ಸೂಚನೆಯ ಪ್ರಕಾರವೇ, ಪಥಸಂಚಲನ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್: ತಡರಾತ್ರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರು ಬಳಿ ಭಾನುವಾರ ರಾತ್ರಿ ನಡೆದ ಮಹಿಳೆಯ ಮೇಲೆ ನಾಲ್ವರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಹೋಂ ಗಾರ್ಡ್ಸ್ ಆಗಿದ್ದ ಮಹಿಳೆಗೆ ಮದ್ಯ ಕುಡಿಸಿ ಕಿರುಕುಳ ಕೊಡಲಾಗಿದ್ದು, ಕಡೆಗೂ ಕಾಮುಕರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ಎಂಎನ್ಸಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು 'ಡಿಜಿಟಲ್ ಅರೆಸ್ಟ್' ಎಂಬ ಮೋಸ ಮಾಡಿ, 31.8 ಕೋಟಿ ರೂ ವಂಚಿಸಲಾಗಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು, ತಿಂಗಳುಗಟ್ಟಲೆ ವಿಡಿಯೋ ಕಾಲ್ ಮೂಲಕ ಬೆದರಿಸಿ, ಹಣ ವರ್ಗಾಯಿಸಿಕೊಂಡಿದ್ದಾರೆ.
ಸ್ಟಾರ್ಬಕ್ಸ್ ಕಾಫಿ ಬಹಿಷ್ಕರಿಸಲು ಕರೆ ನೀಡಿದ ನ್ಯೂಯಾರ್ಕ್ ನೂತನ ಮೇಯರ್ ಜೊಹ್ರಾನ್ ಮಾಮ್ದಾನಿ, ಕಾರಣ ಏನು?
ಅಮೆರಿಕದಾದ್ಯಂತ ಸ್ಟಾರ್ಬಕ್ಸ್ ಕಾಫಿ ತಯಾರಕರು ಉತ್ತಮ ವೇತನ ಮತ್ತು ನ್ಯಾಯಯುತ ಒಪ್ಪಂದಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. 'ರೆಡ್ ಕಪ್ ಡೇ' ಪ್ರಚಾರದ ದಿನದಂದು ಶುರುವಾದ ಈ ಮುಷ್ಕರಕ್ಕೆ ನ್ಯೂಯಾರ್ಕ್ನ ನೂತನ ಮೇಯರ್ ಜೊಹ್ರಾನ್ ಮಾಮ್ದಾನಿ ಬೆಂಬಲ ಸೂಚಿಸಿದ್ದು, 'ಒಪ್ಪಂದವಿಲ್ಲದೆ ಕಾಫಿ ಇಲ್ಲ' ಎಂದು ಹೇಳಿ ಸಾರ್ವಜನಿಕರು ಸ್ಟಾರ್ಬಕ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಆದರೆ, ಈ ಮುಷ್ಕರದಿಂದ ವ್ಯವಹಾರದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರಿಲ್ಲ ಎಂದು ಸ್ಟಾರ್ಬಕ್ಸ್ ಕಂಪನಿ ಹೇಳಿಕೊಂಡಿದೆ.
ಬಿಹಾರ ಚುನಾವಣಾ ಫಲಿತಾಂಶದಲ್ಲಿ ಎನ್ಡಿಎ ಗೆಲುವಿನ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಶ್ನಿಸಿದ್ದಾರೆ. ಎನ್ಡಿಎ ಮೈತ್ರಿಕೂಟದ ಗೆಲುವಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿ ಸೋಲುವ ಬೂತ್ಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮತದಾರರ ಹಕ್ಕುಗಳನ್ನು ರಕ್ಷಿಸುವುದು ಆಯೋಗದ ಜವಾಬ್ದಾರಿ ಎಂದು ಹೇಳಿದ್ದಾರೆ. ಬಿಜೆಪಿ ತಂತ್ರಗಳನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಅಡಿಕೆಯಿಂದ ವೈನ್ ತಯಾರಿಸುತ್ತಿರುವ ಶಿವಮೊಗ್ಗ ಮೂಲದ ಮಹಿಳೆ
ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬಳಸಿ ವೈನ್ ತಯಾರು ಮಾಡಲಾಗುತ್ತಿದೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಿಕ್ಕೇರಿ ಗ್ರಾಮದ ಸುಷ್ಮಾ ಎಂಬವರು 2005ರಿಂದಲೇ ಹೋಂ ಮೇಡ್ ವೈನ್ ಮಾಡುವ ಹವ್ಯಾಸ ಇಟ್ಟುಕೊಂಡಿದ್ದರು. ಸ್ನೇಹಿತರು ಹಾಗೂ ಸಣ್ಣಪುಟ್ಟ ಪಾರ್ಟಿಗಳಲ್ಲಿ ಅದನ್ನು ಜನರಿಗೆ ಟೇಸ್ಟ್ ಮಾಡಿಸಿದ್ದರು. ಹೋಂ ಮೇಡ್ ವೈನ್ಗೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಇದನ್ನು ಉದ್ಯಮಕ್ಕೆ ತರಬೇಕೆಂಬ ಚಿಂತನೆ ನಡೆಸಿದ್ದರು. ಪುತ್ರ ಆಕರ್ಷನನ್ನು ನೋಡಲು ಅಮೆರಿಕಕ್ಕೆ ಹೋದಾಗ ಅಲ್ಲಿನ ಹಳ್ಳಿಗಳಲ್ಲಿ ಹೇಗೆ ಸ್ವಂತ ಬ್ರ್ಯಾಂಡ್ಗಳನ್ನು ಸೃಷ್ಟಿ ಮಾಡಿ ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ತಿಳಿದುಕೊಂಡರು. ಅಮ್ಮನ ಈ ಹವ್ಯಾಸಕ್ಕೆ ಮಗ ಸಾಥ್ ನೀಡಿದ್ದರಿಂದ ಉದ್ಯಮ ರೂಪದಲ್ಲೇ ವೈನ್ ತಯಾರಿಕೆಯನ್ನು ಶುರು ಮಾಡಿದರು. 2021ರಲ್ಲಿ ಪರವಾನಿಗೆ : ಹೋಂ ಮೇಡ್ ವೈನ್ ತಯಾರಿಸುವುದಕ್ಕಾಗಿ 2019ರಲ್ಲಿ ಲೈಸೆನ್ಸ್ ಪಡೆಯಲು ಮುಂದಾದರು. ಈ ವೇಳೆ ಕೋವಿಡ್ ಇದ್ದ ಕಾರಣಕ್ಕೆ 2021ರಲ್ಲಿ ಪರವಾನಿಗೆ ದೊರೆಯಿತು. ವೈನ್ ಟೆಕ್ನಾಲಜಿ ಓದಿರುವ ಪ್ರೊಫೆಶನಲ್ಸ್ ನೆರವು ಪಡೆದು ಪ್ರೀಮಿಯಂ ಬ್ರ್ಯಾಂಡ್ ವೈನ್ಗಳನ್ನು ಉತ್ಪಾದನೆ ಮಾಡಿದರು. ಕರ್ನಾಟಕದಲ್ಲಿ ಮೊದಲು ದ್ರಾಕ್ಷಿ ಹಣ್ಣಿನ ವೈನ್ ಉತ್ಪಾದನೆ ಮಾತ್ರ ಇತ್ತು. ಬೇರೆ ಹಣ್ಣುಗಳಲ್ಲಿ ವೈನ್ ತಯಾರಿಕೆಗೆ ಲೈಸೆನ್ಸ್ ಪಡೆದ ಮೊದಲಿಗರಲ್ಲಿ ಸುಷ್ಮಾ ಸೇರಿದ್ದಾರೆ. ಆರಂಭದಲ್ಲಿ ನೇರಳೆ, ಪೈನಾಪಲ್, ದ್ರಾಕ್ಷಿ, ಜೇನುತುಪ್ಪಮತ್ತು ಕಿತ್ತಳೆ ಸಿಪ್ಪೆ ಮಿಶ್ರಣದ ವೈನ್, ಜೇನು ತುಪ್ಪ ಮತ್ತು ಶುಂಠಿ ಕಾಂಬಿನೇಶನ್ನ ವೈನ್ಗಳನ್ನು ತಯಾರು ಮಾಡಿದ್ದೆ. ಅದನ್ನು ಪ್ಯಾಲೆಸ್ ಗ್ರೌಂಡ್, ಸ್ಟಾರ್ ಹೋಟೆಲ್ಗಳಲ್ಲಿ ಸಹ ಮಾರಾಟ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುತ್ತಾರೆ ಸುಷ್ಮಾ. ತಲಿಸ್ವಾ ಬ್ರ್ಯಾಂಡ್ ಮೂಲತಃ ಕೃಷಿ ಕುಟುಂಬದಿಂದ ಬಂದು ಹೋಂ ಮೇಡ್ ವೈನ್ ಉದ್ದಿಮೆ ಸ್ಥಾಪಿಸಿರುವ ಸುಷ್ಮಾ ಅವರು ಕಿಕ್ಕೇರಿ ಫಾರ್ಮ್ ಫುಡ್ ಆಂಡ್ ಬಿವರೇಜಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ‘ತಲಿಸ್ವಾ’ ಎಂಬ ಬ್ರ್ಯಾಂಡ್ ಸೃಷ್ಟಿಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ‘ಫಾರೆಸ್ಟ್ ಪೈಪರ್’ ಹಸಿ ಅಡಿಕೆ ಜತೆ ವೀಳ್ಯದೆಲೆ ಮಿಶ್ರಣದ ಉಂಡೆಗಳನ್ನು ಮಾಡಿ ಬೀಡಾ ರೀತಿ ಬಳಸುತ್ತಿದ್ದ ಸುಷ್ಮಾ ಅವರಿಗೆ ಅದನ್ನು ವೈನ್ ಮಾಡಬಹುದು ಎಂಬ ಯೋಚನೆ ತಲೆಗೆ ಬಂದಿದೆ. ತಮ್ಮ ಸ್ವಂತ ರೆಸಿಪಿಯನ್ನೇ ಈಗ ವೈನ್ ಆಗಿ ಪರಿವರ್ತಿಸಿದ್ದಾರೆ. ಅದಕ್ಕೆ ‘ಫಾರೆಸ್ಟ್ ಪೈಪರ್’ಎಂದು ಹೆಸರು ಇಟ್ಟಿದ್ದಾರೆ. ಹಸಿ ಅಡಿಕೆ ಜತೆ ವೀಳ್ಯದೆಲೆ, ಜೇನು ತುಪ್ಪ ಬೆರೆಸಿ ವೈನ್ ತಯಾರಿಸಿದ್ದಾರೆ. 2024ರಲ್ಲಿ ಜನರಿಗೆ ಪರಿಚಯಿಸಿದ ಅವರು, ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣಕ್ಕೆ ಬಾಟಲ್ ರೂಪದಲ್ಲಿ ಮಾರುಕಟ್ಟೆಗೆ ತಂದರು. ಮೊದಲ ಹಂತದಲ್ಲಿ 3,500 ಬಾಟಲ್ ಉತ್ಪಾದನೆ ಮಾಡಿದ್ದು, ಎಲ್ಲವೂ ಖಾಲಿಯಾಗಿದೆ. 1 ವರ್ಷದಿಂದ ವಿವಿಧ ವೇದಿಕೆಗಳಲ್ಲಿ ಪರಿಚಯಿಸಲಾಗಿದೆ. ಮೊದಲಿನಿಂದಲೂ ಹೋಂ ಮೇಡ್ ವೈನ್ ತಯಾರಿಸುವ ಹವ್ಯಾಸ ಇತ್ತು. ಮಗ, ಪತಿ ಸಹಕಾರದಿಂದ ಉದ್ದಿಮೆಯಾಗಿದೆ. 6 ಮಾದರಿಯ ವೈನ್ಗಳನ್ನು ಪರಿಚಯಿಸಲಾಗಿದೆ. ಅಡಿಕೆ, ವೀಳ್ಯದೆಲೆ ಮಿಶ್ರಣದ ವೈನ್ ಜನ ಇಷ್ಟಪಟ್ಟಿದ್ದಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಯೋಜನೆ ಇದೆ. -ಸುಷ್ಮಾ ಸಂಜಯ್, ಎಂಡಿ, ಕಿಕ್ಕೇರಿ ಫಾರ್ಮ್ ಫುಡ್ ಆಂಡ್ ಬಿವರೇಜಸ್ ಕಂಪೆನಿ
ಅಂಧ ವನಿತೆಯರ ಟಿ20 ವಿಶ್ವಕಪ್ : ಪಾಕ್ ಆಟಗಾರ್ತಿಯರ ಕೈಕುಲುಕಿ ಕ್ರೀಡಾಸ್ಫೂರ್ತಿ ಮೆರೆದ ಭಾರತ
ಕೊಲಂಬೊ: ಅಂಧ ವನಿತೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಎದುರಾಳಿಗಳು ನೀಡಿದ 136 ರನ್ಗಳ ಸವಾಲನ್ನು ಕೇವಲ 10 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪುವ ಮೂಲಕ ಟೂರ್ನಿಯಲ್ಲಿ ಸತತ ಐದನೇ ಜಯ ದಾಖಲಿಸಿತು. ಅಗ್ರ ಕ್ರಮಾಂಕದ ಆಟಗಾರರ ಕಳಪೆ ಪ್ರದರ್ಶನದಿಂದ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ 23 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆದರೆ ಮೆಹ್ರೀನ್ ಅಲಿ (66) ಮತ್ತು ಬುಶ್ರಾ ಅಶ್ರಫ್ (44) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಭಾರತ ಈ ಪಂದ್ಯದಲ್ಲಿ ಏಳು ರನೌಟ್ ಮಾಡುವ ಮೂಲಕ ಗಮನ ಸೆಳೆಯಿತು. ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಭಾರತದ ಪರ ನಾಯಕಿ ದೀಪಿಕಾ ಟಿಸಿ (45) ಮತ್ತು ಅನೇಖಾ ದೇವಿ (ಅಜೇಯ 64) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅನೇಖಾ ಅವರ ಭರ್ಜರಿ ಪ್ರದರ್ಶನದಿಂದ ಭಾರತ ಸೆಮೀಸ್ ಅರ್ಹತೆ ಸಂಪಾದಿಸಿತು. ಉಭಯ ದೇಶಗಳ ನಡುವಿನ ಹಳಸಿದ ಸಂಬಂಧದ ನಡುವೆ ಗಮನ ಸೆಳೆದ ಅಂಶವೆಂದರೆ, ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಹಸ್ತಲಾಘವ ನೀಡಿ ಕ್ರೀಡಾಸ್ಫೂರ್ತಿ ಮೆರೆದದ್ದು. ಟಾಸ್ ಸಂದರ್ಭದಲ್ಲಿ ಹ್ಯಾಂಡ್ಶೇಕ್ ಇಲ್ಲದಿದ್ದರೂ, ಪಂದ್ಯದ ಬಳಿಕ ಭಾರತ ತಂಡದ ಆಟಗಾರ್ತಿಯರು ಹಸ್ತಲಾಘವ ನೀಡಿದರು. ಇತ್ತೀಚೆಗೆ ನಡೆದ ಏಷ್ಯಾ ಕಪ್, ವನಿತಾ ವಿಶ್ವಕಪ್ ಹಾಗೂ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಪಂದ್ಯಗಳಲ್ಲಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ನೀಡಿರಲಿಲ್ಲ ಎನ್ನುವುದು ಗಮನಾರ್ಹ.
Karnataka Weather: ಶೀತಗಾಳಿ ನಡುವೆಯೂ ರಾಜ್ಯದ ಹಲವು ಜಿಲ್ಲೆಗಳಲ್ಲಿ 5 ದಿನ ಭಾರೀ ಮಳೆ ಮುನ್ಸೂಚನೆ
Karnataka Weather: ಶೀತಗಾಳಿ ನಡುವೆಯೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಐದು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿಲ್ಲಿ ಇಂದು (ನವೆಂಬರ್ 17)
ಅಡಕೆಗೆ ಹಳದಿ ರೋಗ, ಸಮಗ್ರ ಅಧ್ಯಯನಕ್ಕಾಗಿ ಇಸ್ರೋ, ಸಿಪಿಸಿಆರ್ಐಯಿಂದ ಸಮೀಕ್ಷೆ ಆರಂಭ
ಸುಳ್ಯ ತಾಲೂಕಿನಲ್ಲಿ ಅಡಕೆಗೆ ಹಳದಿ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರ ಅಧ್ಯಯನಕ್ಕೆ ಇಸ್ರೋ ಮತ್ತು ಸಿಪಿಸಿಆರ್ಐ ಡೋನ್ ಆಧರಿತ ವೈಮಾನಿಕ ಸಮೀಕ್ಷೆ ಆರಂಭಿಸಿವೆ. ಬೆಳೆಗಾರರ ಬೇಡಿಕೆಗಳಿಗೆ ಮಣಿದು ಕೇಂದ್ರ ಸರಕಾರದ ಈ ಕ್ರಮ ಕೈಗೊಂಡಿದೆ. ಇದೇ ವೇಳೆ ಮಲೆನಾಡಿನಲ್ಲಿ ಎಲೆಚುಕ್ಕಿ ರೋಗದ ಬಗ್ಗೆಯೂ ರೈತರು ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಔಷಧ ಕಂಡುಹಿಡಿಯುವಂತೆ ಒತ್ತಾಯಿಸಿದ್ದಾರೆ.
KEA ಗುಡ್ ನ್ಯೂಸ್: BWSSB ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ನವೆಂಬರ್ 17: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹಿಂದಿನ ನೇಮಕಾತಿ ಅಧಿಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಜೊತೆಗೆ KSET 2025 ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉಡುಪಿ ಜಿಲ್ಲೆಯಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ
ಮಟ್ಟು- ಪಡುಕೆರೆ ನಡುವೆ ನಿರ್ಮಾಣಗೊಳ್ಳಲಿದೆ 11 ಕಿ.ಮೀ. ಉದ್ದದ ‘ಸೈಕಲ್ ಟ್ರ್ಯಾಕ್’
ಸೂರ್ಯವಂಶಿ ಏಕಾಂಗಿ ಹೋರಾಟ ವ್ಯರ್ಥ : ಪಾಕಿಸ್ತಾನಕ್ಕೆ ಜಯ
ಹೊಸದಿಲ್ಲಿ: ಭಾರತ ಕ್ರಿಕೆಟ್ನ ಉದಯೋನ್ಮುಖ ತಾರೆ ವೈಭವ ಸೂರ್ಯವಂಶಿ ಹಿಂದಿನ ಪಂದ್ಯದಲ್ಲಿ ದಾಖಲೆ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರೆ, ಭಾನುವಾರ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಪಂದ್ಯದಲ್ಲಿ 28 ಎಸೆತಗಳಲ್ಲಿ 45 ರನ್ ಸಿಡಿಸಿದರು. ಆದರೆ ಅವರ ಏಕಾಂಗಿ ಹೋರಾಟ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ. ಪಾಕಿಸ್ತಾನ್ ಶಹೀನ್ಸ್ ತಂಡ ಭಾರತ ʼಎʼ ವಿರುದ್ಧದ ಪಂದ್ಯವನ್ನು ಇನ್ನೂ 40 ಎಸೆತಗಳಿರುವಂತೆ ಗೆದ್ದುಕೊಂಡಿತು. ಭಾರತ ನೀಡಿದ 137 ರನ್ಗಳ ಗುರಿಯನ್ನು ಕೇವಲ 13.2 ಓವರ್ ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಭಾರತ ʼಎʼ ತಂಡ ಸ್ಪರ್ಧಾತ್ಮಕ ಮೊತ್ತವನ್ನೇನೋ ತಲುಪಿತು. 20 ಎಸೆತಗಳಲ್ಲಿ 35 ರನ್ ಸಿಡಿಸಿದ ನಮನ್ ಧೀರ್ ಉತ್ತಮ ಸಾಥ್ ನೀಡಿದರು. ಆದರೆ 3 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದ್ದ ಭಾರತ ದಿಢೀರ್ ಕುಸಿತ ಕಂಡು 45 ರನ್ ಅಂತರದಲ್ಲಿ ಉಳಿದ ಏಳು ವಿಕೆಟ್ ಕಳೆದುಕೊಂಡಿತು. ಶಹೀದ್ ಅಝೀಝ್ 3 ವಿಕೆಟ್ ಕಬಳಿಸಿದರೆ, ಸಾದ್ ಮಸೂದ್ ಮತ್ತು ಮಾಝ್ ಸದಕತ್ ತಲಾ ಎರಡು ವಿಕೆಟ್ ಕಿತ್ತರು. ಸೂರ್ಯವಂಶಿ ತಮ್ಮ ಎಂದಿನ ಶೈಲಿಯಲ್ಲಿ 160ಕ್ಕೂ ಹೆಚ್ಚು ಸ್ಟ್ರೈಕ್ರೇಟ್ನೊಂದಿಗೆ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿ ಗಮನ ಸೆಳೆದರು. ಆದರೆ ಸೂಫಿಯನ್ ಅವರ ಎಸೆತವನ್ನು ಸೂರ್ಯವಂಶಿ ಲಾಂಗ್ಆನ್ಗೆ ಬಾರಿಸಿದಾಗ ಮೊಹ್ಮದ್ ಫೈಕ್ ಅದ್ಭುತವಾಗಿ ಹಿಡಿಯುವ ಮೂಲಕ ಪಾಕಿಸ್ತಾನದ ಮೇಲುಗೈಗೆ ಕಾರಣರಾದರು. ಪಾಕ್ ಪರ ಆರಂಭಿಕ ಆಟಗಾರರಾದ ಮಾಝ್ ಅದಾಕತ್ 47 ಎಸೆತಗಳಲ್ಲಿ 79 ರನ್ ಸಿಡಿಸಿದರು. ಎಡಗೈ ಸ್ಪಿನ್ ಬೌಲಿಂಗ್ನಲ್ಲಿ ಎರಡು ವಿಕೆಟ್ ಕಿತ್ತಿದ್ದ ಅವರಿಗೆ ಸಹಜವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಬಿಹಾರದಲ್ಲಿ ನೂತನ ಸರ್ಕಾರ ರಚನೆಯ ಸರ್ಕಸ್: ಬಿಜೆಪಿ- ಜೆಡಿಯು ಸಮಬಲ, ಎಲ್ಜೆಪಿಗೆ 2 ಸ್ಥಾನಗಳು ಸಾಧ್ಯತೆ
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಚಿವ ಸ್ಥಾನ ಹಂಚಿಕೆ ಸೂತ್ರದ ಮೇಲೆ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿವೆ. ಎಲ್ಜೆಪಿ (ಆರ್ವಿ)ಗೆ ಎರಡು, ಆರ್ಎಲ್ಎಂ ಮತ್ತು ಎಚ್ಎಎಂ(ಎಸ್)ಗೆ ತಲಾ ಒಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ 28 ಹೊಸ ಪ್ರವಾಸಿ ತಾಣಗಳು
ಐತಿಹಾಸಿಕ ಸ್ಮಾರಕ, ಕಟ್ಟಡಗಳ ಅಭಿವೃದ್ಧಿಗೆ ಯೋಜನೆ
2025-26ನೇ ಸಾಲಿನ ಕಂಬಳ ವೇಳಾಪಟ್ಟಿ ಬಿಡುಗಡೆ, ಈ ಬಾರಿ ಸಬ್ ಜೂನಿಯರ್ ಸ್ಪರ್ಧೆ ಇಲ್ಲ, ಕಾರಣ ಏನು?
2025-26ನೇ ಸಾಲಿನ ಕಂಬಳ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಜೂನಿಯರ್ ವಿಭಾಗದ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಸಬ್ ಜೂನಿಯರ್ ಕೋಣಗಳನ್ನು ಓಡಿಸುವುದು ಕಾನೂನುಬಾಹಿರ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಇದೇ ವೇಳೆ ಕಂಬಳಕ್ಕೆ 2 ಕೋಟಿ ರೂಪಾಯಿ ಪ್ರೋತ್ಸಾಹಧನ ನೀಡುವಂತೆ ಜಿಲ್ಲಾಡಳಿತಕ್ಕೆ ಕಂಬಳ ಸಮಿತಿ ಒತ್ತಾಯಿಸಿದೆ. ಹಾಗೂ ಧ್ವನಿವರ್ಧಕ ಬಳಕೆಗೂ ಅವಕಾಶ ನೀಡುವಂತೆ ಮನವಿ ಮಾಡಿದೆ.
ತಿಮ್ಮಕ್ಕನ ನೆರಳಲ್ಲಿ ಭವಿಷ್ಯದ ಮಕ್ಕಳು!
ಪರಿಸರ ಎನ್ನುವುದು ಅಂತರ್ರಾಷ್ಟ್ರೀಯ ಮಟ್ಟದ ರಾಜಕೀಯ ವಿಷಯವಾಗಿ ಬದಲಾಗಿದೆ. ಇಂದು ಪರಿಸರ ಸಮತೋಲನಕ್ಕಾಗಿಯೇ ಅಂತರ್ರಾಷ್ಟ್ರೀಯ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ದುಡಿಯುತ್ತಿವೆ. ಹಾಗೆಯೇ ಪರಿಸರದ ವಿಷಯವೆನ್ನುವುದು ಬೌದ್ಧಿಕ ಮೇಲಾಟಗಳಾಗಿ ಬದಲಾಗಿವೆ. ತಾಪಮಾನ ಏರಿಕೆಯ ಬಗ್ಗೆ ವಿದ್ಯಾವಂತರು ಮಾತನಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು, ಪ್ರೊಫೆಸರ್ಗಳು ಗಂಟೆಗಟ್ಟಳೆ ಇದರ ಬಗ್ಗೆ ಭಾಷಣ ಮಾಡಬಲ್ಲವರಾಗಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಶ್ರೀಮಂತ ದೇಶಗಳು ಪರಿಸರದ ಕುರಿತಂತೆ ಬುದ್ಧಿವಾದಗಳನ್ನು ಹೇಳುತ್ತಿವೆ. ಈ ಎಲ್ಲ ರಾಜಕೀಯ ಗದ್ದಲಗಳ ನಡುವೆ, ಮನುಷ್ಯರಾಗಿ ಪರಿಸರದ ಕುರಿತಂತೆ ನಾವು ಹೊಂದಿರಬೇಕಾದ ಹೊಣೆಗಾರಿಕೆಗಳನ್ನು ತಿಳಿಸಿಕೊಟ್ಟು ಸಾಲುಮರದ ತಿಮ್ಮಕ್ಕ ನಮ್ಮ ನಡುವಿನಿಂದ ಅಗಲಿದ್ದಾರೆ. ಗ್ರಾಮೀಣ ಜನರಿಗೆ ಪರಿಸರದ ಬಗ್ಗೆ ಯಾವುದೇ ವಿಶ್ವವಿದ್ಯಾನಿಲಯಗಳ ಪಾಠದ ಅಗತ್ಯವಿಲ್ಲ. ಅವರ ಪಾಲಿಗೆ ಮರ ಗಿಡಗಳು ಲಾಭ ನಷ್ಟಗಳ ಲೆಕ್ಕಾಚಾರವಲ್ಲ. ಮರವೆಂದರೆ ಅವರ ಪಾಲಿಗೆ ತಮ್ಮ ಕುಟುಂಬದ ಭಾಗವೇ ಆಗಿದೆ. ಸಾಲುಮರದ ತಿಮ್ಮಕ್ಕ ಪರಿಸರ ಹೋರಾಟಗಾರರಾಗಿ ಮರಗಳನ್ನು ನೆಟ್ಟಿರಲಿಲ್ಲ. ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಅವರಿಗೆ ಅರಿವೂ ಇರಲಿಲ್ಲ. ಇಷ್ಟಾದರೂ ಅವರು ಸುಮಾರು ಎಂಟು ಸಾವಿರ ಗಿಡಮರಗಳನ್ನು ಬೆಳೆಸಿದರು. ಆ ಗಿಡಗಳನ್ನು ಅವರು ಮಕ್ಕಳಂತೆ ನೀರುಣಿಸಿ ಸಾಕಿದ್ದರು. ಎಲ್ಲ ಅಕ್ಷರಸ್ಥರಿಗೆ ಪರಿಸರದ ವಿಷಯದಲ್ಲಿ ತಾಯಿಯಾಗಿ ಬದುಕಿ ಬಾಳಿದರು. ಪರಿಸರದ ಬಗ್ಗೆ ಗಂಟೆಗಟ್ಟಳೆ ಭಾಷಣ ಮಾಡುತ್ತಲೇ ಪರಿಸರ ನಾಶಕ್ಕೆ ಪರೋಕ್ಷ ಕೊಡುಗೆಗಳನ್ನು ನೀಡುವ ವಿದ್ಯಾವಂತರ ನಡುವೆ ಈ ಅನಕ್ಷರಸ್ಥ ತಾಯಿ ನಿಜವಾದ ಪರಿಸರ ರಕ್ಷಣೆ ಎಂದರೆ ಏನು ಎನ್ನುವುದನ್ನು ಜಗತ್ತಿಗೆ ಕಲಿಸಿ ಹೋದರು. ನಮ್ಮ ನಡುವೆ ಮಕ್ಕಳಿಲ್ಲದ ತಾಯಂದಿರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವುದಿದೆ. ಸಂಬಂಧಿಕರ ಮಕ್ಕಳನ್ನೂ ಸಾಕಿ ಬೆಳೆಸುವುದನ್ನು ನೋಡಬಹುದು. ಕೆಲವರು ಮಕ್ಕಳಿಲ್ಲ ಎಂದು ಪ್ರಾಣಿ ಪಕ್ಷಿಗಳನ್ನು ಸಾಕುತ್ತಾ ಆ ಕೊರತೆಯನ್ನು ಮರೆಯಲು ಯತ್ನಿಸುತ್ತಾರೆ. ಆದರೆ ಸಾಲು ಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕೊರತೆಯನ್ನು ಮರಗಳನ್ನು ನೆಡುವ ಮೂಲಕ ತುಂಬಿಕೊಂಡರು. ಸಾಧಾರಣವಾಗಿ ಮರಗಳನ್ನು ನೆಟ್ಟು ಅವುಗಳನ್ನು ಸಾಕುವುದು ಮಕ್ಕಳನ್ನು ಸಾಕಿ ಬೆಳೆಸುವುದಕ್ಕಿಂತಲೂ ದುಬಾರಿ. ಮರಗಳನ್ನು ನೆಟ್ಟು ಬೆಳೆಸುವುದಕ್ಕೆ ಸಾಕಷ್ಟು ಜಮೀನುಗಳನ್ನು ಹೊಂದಿರಬೇಕು. ಆ ಮರಗಳಿಂದ ಭವಿಷ್ಯದಲ್ಲಿ ಬೇರೆ ಬೇರೆ ರೀತಿಯ ಲಾಭಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರದಲ್ಲೇ ಜನರು ನೆಡುತ್ತಾರೆ. ಆದರೆ ತೀರ ಬಡ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದ್ದ ತಿಮ್ಮಕ್ಕ ಸ್ವಂತ ಜಮೀನನ್ನು ಹೊಂದಿರಲಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆಯ ಇಕ್ಕೆಲಗಳಲ್ಲಿ ಅವರು ಮರಗಳನ್ನು ನೆಟ್ಟರು. ಕಿಲೋಮೀಟರ್ ಉದ್ದಕ್ಕೂ ಓಡಾಡಿ ಅವುಗಳಿಗೆ ನೀರುಣಿಸಿದರು. ಬೆಳೆದ ಮರಗಳಿಂದ ಬರುವ ಹಣ್ಣುಗಳು ತನಗೆ ಸಿಕ್ಕುವುದಿಲ್ಲ ಎನ್ನುವುದು ಗೊತ್ತಿದ್ದೂ ಅವರು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದರು. 350ಕ್ಕೂ ಅಧಿಕ ಆಲದ ಮರಗಳನ್ನು ಅವರು ಬೆಳೆಸಿದರು. ಆ ಮರಗಳನ್ನು ಆಶ್ರಯಿಸಿದ ಇತರ ಜೀವವೈವಿಧ್ಯಗಳ ಬಗ್ಗೆ ಬೃಹತ್ ಗ್ರಂಥವನ್ನೇ ಬರೆಯಬಹುದು. ಸುಮಾರು 8,000 ವೈವಿಧ್ಯಮಯ ಮರಗಿಡಗಳನ್ನು ಅವರು ಬೆಳೆಸಿದ್ದಷ್ಟೇ ಅಲ್ಲ, ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಆ ಮರಗಳನ್ನು ಕಡಿಯಲು ಸಂಚುಗಳು ನಡೆದಾಗ ಅವುಗಳ ವಿರುದ್ಧವೂ ಅವರು ಹೋರಾಟ ಮಾಡುತ್ತಾ ಬಂದರು. ಯಾವುದೇ ಘೋಷಣೆಗಳಿಲ್ಲದೆ, ಸಂಘಟನೆಗಳ ಹೆಸರುಗಳಿಲ್ಲದೆ ಅವರು ಸುದೀರ್ಘವಾಗಿ ನಡೆಸಿಕೊಂಡು ಬಂದ ಪರಿಸರ ರಕ್ಷಣೆ ವಿಸ್ಮಯ ಹುಟ್ಟಿಸುವಂತಹದು. ಮರಗಳ ವಿಷಯದಲ್ಲಿ ಅವರು ಪ್ರದರ್ಶಿಸಿದ ನಿಸ್ವಾರ್ಥ ಮನೋಭಾವವನ್ನು ಅವರು ಪ್ರಕೃತಿಯಿಂದಲೇ ದಕ್ಕಿಸಿಕೊಂಡಿದ್ದಾರೆ. ಮಕ್ಕಳಿಲ್ಲ ಎಂದು ಮರಗಳನ್ನು ನೆಟ್ಟ ತಿಮ್ಮಕ್ಕಳನ್ನು ಮರಗಳು ಕೈ ಬಿಡಲಿಲ್ಲ ಎನ್ನುವುದು ಇನ್ನೊಂದು ವಿಶೇಷ. ಮಕ್ಕಳನ್ನು ಸಾಕಿ ಬೆಳೆಸಿದರೆ ಅವರು ಕೈ ಹಿಡಿಯುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಖಚಿತತೆಯಿಲ್ಲ. ಸಾಕಿದ ಮಕ್ಕಳು ತಾಯಿಯನ್ನು ವೃದ್ಧಾಶ್ರಮದಲ್ಲೋ, ನಡುಬೀದಿಯಲ್ಲೋ ಬಿಡುವುದನ್ನು ನಾವು ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಆದರೆ ಮರಗಳು ತಿಮ್ಮಕ್ಕಳಿಗೆ ನಾಡಿನ ತುಂಬ ಮಕ್ಕಳನ್ನು ಕೊಟ್ಟಿತು. ಮರಗಳ ದೆಸೆಯಿಂದಾಗಿ ತಿಮ್ಮಕ್ಕಳನ್ನು ದೇಶ ವಿದೇಶಗಳ ಜನರು ಪ್ರೀತಿಸತೊಡಗಿದರು. ಈ ಮರಗಳು ಅವರ ಖ್ಯಾತಿಯನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿತು. ಅದು ಅವರ ಸಾಮಾಜಿಕ, ಆರ್ಥಿಕ ಮಟ್ಟವನ್ನೂ ಮೇಲಕ್ಕೆತ್ತಿತ್ತು. ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿತು. ಅಂತರ್ರಾಷ್ಟ್ರೀಯ ಪ್ರಶಸ್ತಿಗಳೂ ಅರಸಿಕೊಂಡು ಬಂದವು. ನಮ್ಮ ನಡುವಿನಿಂದ ತಿಮ್ಮಕ್ಕ ಇಲ್ಲವಾಗಿದ್ದರೂ ಅವರು ನೆಟ್ಟ ಸಾವಿರಾರು ಮರಗಳು ತಿಮ್ಮಕ್ಕಳನ್ನು ದೇಶ ವಿದೇಶಗಳಿಗೆ ನೆನಪಿಸುತ್ತವೇ ಇರುತ್ತವೆ. ಆ ಮರಗಳಲ್ಲಿ ಆಶ್ರಯ ಪಡೆದ ಹಕ್ಕಿಗಳು ತಿಮ್ಮಕ್ಕಳ ಹೆಸರಿನಲ್ಲಿ ಹಾಡುಗಳನ್ನು ಹಾಡುತ್ತಲೇ ಇರುತ್ತವೆ. ಮಕ್ಕಳನ್ನು ನಂಬಿದವರು ಕೆಟ್ಟರು, ಆದರೆ ಮರಗಳನ್ನು ನಂಬಿದ ತಿಮ್ಮಕ್ಕ ಉಳಿದರು ಎನ್ನುವ ಗಾದೆಯೊಂದು ಈ ಮೂಲಕ ಸೃಷ್ಟಿಯಾದಂತಾಗಿದೆ. ತಿಮ್ಮಕ್ಕ ಮರಗಳನ್ನು ಎಷ್ಟು ಆಸ್ಥೆಯಿಂದ ಬೆಳೆಸಿದರೋ ಅಷ್ಟೇ ಆಸ್ಥೆಯಿಂದ ಅದೇ ಮರಗಳು ತಿಮ್ಮಕ್ಕಳ ಹೆಸರನ್ನು ಬೆಳೆಸುತಿವೆೆ. ಪರಿಸರ ರಕ್ಷಣೆ, ಸಮಾಜ ಸೇವೆಗಳನ್ನು ಮಾಡಲು ನಾವು ವಿದ್ಯಾವಂತರೋ ಹಣವಂತರೋ ಆಗಿರಬೇಕಾಗಿಲ್ಲ ಎನ್ನುವುದನ್ನು ತಿಳಿಸಿ ಹೋಗಿದ್ದಾರೆ ತಿಮ್ಮಕ್ಕ. ಮಂಗಳೂರು ನಗರದಲ್ಲಿ ಬುಟ್ಟಿಯಲ್ಲಿ ಕಿತ್ತಳೆ ಮಾರುತ್ತಾ ಶಾಲೆ ಕಟ್ಟಿದ ಹರೇಕಳ ಹಾಜಬ್ಬರನ್ನು ನಾವು ಈ ನಿಟ್ಟಿನಲ್ಲಿ ಸ್ಮರಿಸಬಹುದಾಗಿದೆ. ಬೃಹತ್ ಕಾಲೇಜುಗಳನ್ನು ತೆರೆದು ಶಿಕ್ಷಣೋದ್ಯಮಿಗಳಾಗಿ ಮಿಂಚುತ್ತಿರುವವರನ್ನು ಅಣಕಿಸುವಂತೆ ನಮ್ಮ ನಡುವೆ ಹರೇಕಳ ಹಾಜಬ್ಬ ಓಡಾಡುತ್ತಿದ್ದಾರೆ. ತಿಮ್ಮಕ್ಕ ಮತ್ತು ಹಾಜಬ್ಬ ಇಬ್ಬರೂ ಗ್ರಾಮೀಣ ಪ್ರದೇಶದಿಂದ ಬಂದವರು. ಹಾಗೆಯೇ ಬಡವರ್ಗದಿಂದ ಬಂದ ಅನಕ್ಷರಸ್ಥರು. ಆದರೂ ನಗರದ ಜನರಿಗೆ, ಶ್ರೀಮಂತ ವರ್ಗಕ್ಕೆ, ವಿದ್ಯಾವಂತರಿಗೆ ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿ ಮಾದರಿಗಳಾಗಿದ್ದಾರೆ. ನಿಸ್ವಾರ್ಥವಾಗಿ ನಾವು ಸಮಾಜವನ್ನು, ಪರಿಸರವನ್ನು ಪ್ರೀತಿಸಿದಾಗ ಮಾತ್ರ ನಾವು ಇವರಂತಾಗಲು ಸಾಧ್ಯ. ನಮ್ಮ ಮಕ್ಕಳನ್ನು, ನಮ್ಮ ಕುಟುಂಬವನ್ನು ಪ್ರೀತಿಸಿದಂತೆ ಪ್ರಾಮಾಣಿಕವಾಗಿ ನಮ್ಮ ಪರಿಸರವನ್ನು, ನಮ್ಮ ಸಮಾಜವನ್ನು, ಸುತ್ತಲಿನ ಮರಗಿಡಗಳನ್ನು ಪ್ರೀತಿಸಲು ಸಾಧ್ಯವಾದಾಗ ಮಾತ್ರ ನಾವು ಇನ್ನೊಬ್ಬ ತಿಮ್ಮಕ್ಕ, ಇನ್ನೊಬ್ಬ ಹಾಜಬ್ಬ ಆಗಲು ಸಾಧ್ಯ. ಜಗತ್ತಿನ ಎಲ್ಲ ಪರಿಸರ ಹೋರಾಟಗಾರರಿಗೂ ತಿಮ್ಮಕ್ಕ ಬದುಕು ಮಾದರಿಯಾಗಬೇಕಾಗಿದೆ. ತಿಮ್ಮಕ್ಕ ಎನ್ನುವ ವೃಕ್ಷ ತಾಯಿಯ ನೆರಳು ಈ ಜಗತ್ತನ್ನು ಮುಂದೆಯೂ ಪೊರೆಯಲಿದೆ. ಆ ವೃಕ್ಷ ತಾಯಿಯ ನೆರಳಲ್ಲಿ ನಮ್ಮ ಮಕ್ಕಳು ಬೆಳೆದು ಭವಿಷ್ಯದ ಭರವಸೆಗಳಾಗಲಿದ್ದಾರೆ.
ಚಾಮುಂಡಿ ಬೆಟ್ಟದ ನಂದಿ ರಸ್ತೆ ಕಾಮಗಾರಿ ನನೆಗುದಿಗೆ : ತಡೆಗೋಡೆ ನಿರ್ಮಾಣ ಪೂರ್ಣ ಯಾವಾಗ?
ಚಾಮುಂಡಿಬೆಟ್ಟದ ತಡೆಗೋಡೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಮತ್ತೆ ಸ್ಥಗಿತಗೊಂಡಿದೆ. ಗುತ್ತಿಗೆದಾರ ಬಿಡುಗಡೆಯಾದ ಹಣವನ್ನು ಬೇರೆ ಕಾಮಗಾರಿಗೆ ಬಳಸಿಕೊಂಡಿದ್ದಾನೆ. ಶೇ. 80ರಷ್ಟು ಕೆಲಸ ಪೂರ್ಣಗೊಂಡಿದೆ. ಗುತ್ತಿಗೆ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಲು ಇಲಾಖೆ ಚಿಂತನೆ ನಡೆಸಿದೆ. ಹೊಸ ಟೆಂಡರ್ ಕರೆಯುವ ಬಗ್ಗೆಯೂ ಆಲೋಚನೆ ಇದೆ. ಗುತ್ತಿಗೆದಾರನೊಂದಿಗೆ ಮಾತುಕತೆ ನಡೆಸಲು ಇಲಾಖೆ ನಿರ್ಧರಿಸಿದೆ.
ಕೊಬ್ಬರಿಗೆ ಬಂಪರ್ ಬೆಲೆ, ತೆಂಗಿನಕಾಯಿಯೂ ದುಬಾರಿ: ಸಂಕ್ರಾಂತಿಗೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಅರಸೀಕೆರೆ ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಮತ್ತೆ ಗಗನಕ್ಕೇರಿದೆ. ಕಳೆದ ಏಳು ತಿಂಗಳಲ್ಲಿ 254 ಕೋಟಿ ರೂ. ಭರ್ಜರಿ ವಹಿವಾಟು ನಡೆದಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಬೆಳೆಗಾರರಲ್ಲಿ ಇದೆ, ಬೆಲೆ ಏರಿಕೆ ಎಷ್ಟಾಗಿದೆ, ಕಾರಣ ಗಳೇನು ಎಂಬ ವಿವರ ಇಲ್ಲಿದೆ ನೋಡಿ
Gold Price on November 17: ಬಂಗಾರ ದರ ಭರ್ಜರಿ ಇಳಿಕೆ: ಇಲ್ಲಿದೆ ನವೆಂಬರ್ 17ರ ಚಿನ್ನದ ದರಪಟ್ಟಿ
Gold Price on November 17: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 17) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್
ಗಗನಕ್ಕೇರಿದ ತರಕಾರಿ, ಸೊಪ್ಪುಗಳ ದರ, ಖರೀದಿಗೆ ಜನರ ಹಿಂದೇಟು; ಎಷ್ಟಿದೆ ಬೀನ್ಸ್, ಬದನೆಕಾಯಿ ಬೆಲೆ?
ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದಲ್ಲಿ ತರಕಾರಿ, ಸೊಪ್ಪುಗಳ ಬೆಲೆ ಗಗನಕ್ಕೇರಿದೆ. ಹವಾಮಾನ ವೈಪರೀತ್ಯ, ಮಳೆ, ರೋಗಬಾಧೆ, ಕಾರ್ತಿಕ ಮಾಸದ ಬೇಡಿಕೆ ಹೆಚ್ಚಳದಿಂದಾಗಿ ಬೀನ್ಸ್, ಬದನೆಕಾಯಿ, ದಂಟಿನ ಸೊಪ್ಪು ಸೇರಿದಂತೆ ಬಹುತೇಕ ತರಕಾರಿಗಳ ದರ ದುಪ್ಪಟ್ಟಾಗಿದೆ. ಇದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೋಟೆಲ್ ಉದ್ಯಮಕ್ಕೂ ಇದು ಬಿಸಿ ಮುಟ್ಟಿಸಿದೆ. ಮುಂದಿನ 15 ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಿತಿ ಮೀರಿದ ಸುಲಿಗೆಕೋರರ ಉಪಟಳ, ದಾರಿಹೋಕರನ್ನು ಬೆದರಿಸಿ ಸುಲಿಗೆಗೆ ಯತ್ನ
ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಉಪಟಳ ಹೆಚ್ಚಾಗಿದ್ದು, ಶಾಂತಿನಗರ ಮತ್ತು ಯಶವಂತಪುರದಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಲಾಗಿದೆ. ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್, ಹಣ ಕಿತ್ತುಕೊಳ್ಳಲು ಯತ್ನಿಸಿದ ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ತನಿಖೆ ನಡೆಸುತ್ತಿದ್ದಾರೆ.
ದಿಲ್ಲಿಗೆ ತಲುಪಿದ ಕರ್ನಾಟಕ ಕಾಂಗ್ರೆಸ್ ಕದನ, ಸೋಮವಾರ ನಡೆಯಲಿದೆ ಖರ್ಗೆ-ಸಿದ್ದರಾಮಯ್ಯ ಮಹತ್ವದ ಭೇಟಿ
ರಾಜ್ಯ ಕಾಂಗ್ರೆಸ್ನಲ್ಲಿ ಸಂಪುಟ ಸರ್ಜರಿ ಕುತೂಹಲ ಮೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಈ ಸಭೆ ನಡೆಯಲಿದ್ದು, ಸಂಪುಟ ಪುನಾರಚನೆ ಅಥವಾ ಯಥಾಸ್ಥಿತಿ ಮುಂದುವರಿಕೆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಇದೇ ವೇಳೆ ಖರ್ಗೆ ಭೇಟಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರೂ ತಮ್ಮ ಸ್ಥಾನದ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ.
ಮಂಗಳೂರು | ಜಾನುವಾರು ವಧೆ: ಓರ್ವ ಆರೋಪಿ ಸೆರೆ
ಮಂಗಳೂರು, ನ.16: ಅಕ್ರಮವಾಗಿ ಜಾನುವಾರು ವಧೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ರವಿವಾರ ಬಂಟ್ವಾಳ ತಾಲೂಕು ಅರಳ ಗ್ರಾಮದಲ್ಲಿ ನಡೆದಿದೆ. ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಶೆಡ್ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದೆ. ಸ್ಥಳದಿಂದ ಸುಮಾರು 150 ಕೆ.ಜಿ. ಮಾಂಸ ವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ತಲೆಮರೆಸಿಕೊಂಡ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರವಾನಿಗೆ ಇಲ್ಲದೇ ಮನೆಯ ಶೆಡ್ನಲ್ಲಿ ಜಾನುವಾರುಗಳನ್ನು ವಧೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಈತನ ಮನೆ ಹಾಗೂ ಶೆಡ್ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿ, ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗೆ ಮುಟ್ಟುಗೋಲು ಹಾಕುವಂತೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಳ್ಯ | ಆನೆಗುಂಡಿ ವ್ಯಾಪ್ತಿಯಲ್ಲಿ ಕಸ ಎಸೆತ : ಕನಕಮಜಲು ಗ್ರಾಮ ಪಂಚಾಯತ್ನಿಂದ ದಂಡ
ಸುಳ್ಯ, ನ.16: ಕನಕಮಜಲು ಗ್ರಾಪಂ ವ್ಯಾಪ್ತಿಯ ಆನೆಗುಂಡಿ ಎಂಬಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚಿದ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕಸ ಎಸೆದವರನ್ನು ಕರೆಸಿ ದಂಡ ವಿಧಿಸಿ ಮುಚ್ಚಳಿಕೆ ಬರೆಸಿ ಕಳುಹಿಸಿ ಕೊಟ್ಟ ಘಟನೆ ಶನಿವಾರ ನಡೆದಿದೆ. ಹಲವು ಸಮಯಗಳಿಂದ ಆನೆಗುಂಡಿ ಪ್ರದೇಶದ ರಸ್ತೆ ಬದಿ ಕಸದ ರಾಶಿ ಆಗಾಗ್ಗೆ ಬೀಳುತಿತ್ತು. ಗ್ರಾಮ ಸಭೆಯಲ್ಲಿ, ಸಾಮಾನ್ಯ ಸಭೆಯಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚುವಂತೆ ಆಗ್ರಹ ವ್ಯಕ್ತವಾ ಗಿತ್ತು. ಕಸ ಹಾಕುವರನ್ನು ಪತ್ತೆ ಹಚ್ಚುವ ಸಲುವಾಗಿ ಆನೆಗುಂಡಿ ಪ್ರದೇಶಕ್ಕೆ ತೆರಳಿದ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತ್ ಪ್ರಭಾರ ಪಿಡಿಒ ಬಾಬು ನಾಯ್ಕ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಆರ್ಲಪದವಿನ ವ್ಯಕ್ತಿಯೊಬ್ಬರ ಮನೆಯ ವಿಳಾಸವಿರುವ ಕವರ್, ಪುಸ್ತಕ ಲಭ್ಯವಾದವು. ಆ ಆಧಾರದಲ್ಲಿ ಪಂಚಾಯತ್ನಿಂದ ಅವರನ್ನು ಸಂಪರ್ಕಿಸಿ, ಕರೆಸಲಾಯಿತು. ಬಳಿಕ ವಿಚಾರಿಸಿದಾಗ ಕಸ ತಾನು ತಂದು ಎಸೆದಿಲ್ಲ. ಯಾರೋ ಇಲ್ಲಿ ಎಸೆದಿದ್ದಾರೆಂದು ಹೇಳಿದರೆನ್ನಲಾ ಗಿದೆ. ಕನಕಮಜಲು ಪಂಚಾಯತ್ ವತಿಯಿಂದ 4,500 ರೂ. ದಂಡ ಹಾಕಿ ಅವರಿಂದಲೇ ಕಸವನ್ನು ತೆರವುಗೊಳಿಸಲಾಯಿತು.
ಯುದ್ಧದ ನಡುವೆ ಉಕ್ರೇನ್ ಮಹತ್ವದ ಒಪ್ಪಂದ, ತೈಲ &ಗ್ಯಾಸ್ ಪಡೆಯಲು ಉಕ್ರೇನ್ ಪ್ಲಾನ್ ಏನು?
ಉಕ್ರೇನ್ ಸರಿಯಾಗಿ ಏಟು ತಿಂದು ಮೂಲೆ ಸೇರುವಂತೆ ಆಗಿದೆ, ಇನ್ನೊಂದು ಕಡೆ ತನ್ನ ನೆಲದ ಜನರಿಗೆ ಸೂಕ್ತವಾಗಿ ತೈಲ &ಗ್ಯಾಸ್ ಸರಬರಾಜು ಮಾಡಲು ಕೂಡ ಪರದಾಡುತ್ತಿದೆ ಇದೇ ಉಕ್ರೇನ್ ದೇಶ. ಎಲ್ಲವೂ ಅಲ್ಲೋಲ &ಕಲ್ಲೋಲ ಆಗಿರುವ ಸಮಯದಲ್ಲೇ ಭಾರತದಿಂದ ಖರೀದಿ ಮಾಡ್ತಾ ಇದ್ದ ತೈಲವನ್ನೂ ನಿಲ್ಲಿಸಿತ್ತು ಉಕ್ರೇನ್. ಇದರ ಪರಿಣಾಮ ಒದ್ದಾಟ ಕೂಡ ಉಕ್ರೇನ್ಗೆ
ಮಂಗಳೂರು | ಮಹಿಳೆಗೆ ಲೈಂಗಿಕ ಕಿರುಕುಳಕ್ಕೆ ಯತ್ನ : ಆರೋಪಿ ಸೆರೆ
ಮಂಗಳೂರು, ನ.16: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ. ನ.13ರಂದು ರಾತ್ರಿ ಸಂತ್ರಸ್ತ ಮಹಿಳೆ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆರೋಪಿಯು ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಆಕೆಯ ಪತಿ, ಮಕ್ಕಳು ಬಂದು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ, ಆರೋಪಿಯು ಹಲ್ಲೆ ನಡೆಸಿ, ಮಹಿಳೆಗೆ ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಯುವಪೀಳಿಗೆಯಲ್ಲಿ ಓದುವ ಹವ್ಯಾಸ ಬೆಳೆಸೋಣ: ಫಕೀರ್ ಮುಹಮ್ಮದ್
ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
Bengaluru| ಕೃಷಿ ಮೇಳದಲ್ಲಿ 54.16 ಲಕ್ಷ ಜನರು ಭಾಗಿ, 4.77ಕೋಟಿ ರೂ. ವಹಿವಾಟು
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನ.13ರಿಂದ 16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಸುಮಾರು 54.16 ಲಕ್ಷ ಜನರು ಭಾಗಿಯಾಗಿದ್ದು, 4.77 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸುವ ಮೂಲಕ ಸಮಾರೋಪಗೊಂಡಿದೆ. ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳವು ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗದ ರೈತರು ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತ ಜನರಿಗೆ ಸಹಕಾರಿಯಾಗಿದ್ದು, ಕೃಷಿ ಯಂತ್ರೋಪಕರಣ, ಬೀಜೋತ್ಪನ್ನ, ತಳಿ, ಸಾವಯವ ರಸಗೊಬ್ಬರ, ವಿವಿಧ ಪ್ರಾಣಿ, ಪಕ್ಷಿಗಳ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು. ಬೀಜೋತ್ಪಾದನೆಗೆ ಹೆಸರುವಾಸಿಯಾದ ಸುವರ್ಣ ಟಗರು, ಶ್ರೀಕೃಷ್ಣ ಗೋಶಾಲಾ ಹಾಗೂ ಇನ್ನಿತರೆ ಗೋಶಾಲೆಗಳ ಪ್ರದರ್ಶನದಲ್ಲಿದ್ದ ಹಳ್ಳಿಕಾರ್, ಓಂಗಲ್, ಬದ್ರಿ, ಕೊಂಬು ಇಲ್ಲದ ರಾಠಿ ಸೇರಿದಂತೆ ಅನೇಕ ವಿಶಿಷ್ಟ ತಳಿಗಳನ್ನು ನೋಡಲು ಸಾರ್ವಜನಿಕರು ಮುಗಿ ಬಿದ್ದಿದ್ದರು. ಬಗೆ ಬಗೆಯ ಆಹಾರ ಮಳಿಗೆಗಳು, ಕೃಷಿ ಉತ್ಪನ್ನ ಮಳಿಗೆ, ಸಾವಯವ ಆಹಾರ ಮಳಿಗೆಗಳಲ್ಲಿ ಸಾಲು ಸಾಲು ಜನರು ಭೇಟಿ ನೀಡಿ ತಮಗೆ ಬೇಕಾದ ವಸ್ತುವನ್ನು ಖರೀದಿಸುವುದು ಮತ್ತು ಮಾಹಿತಿ ಪಡೆಯವ ಕೆಲಸ ಜೋರಾಗಿ ನಡೆಯಿತು. ಲಾಲ್ಬಾಗ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಮಾದರಿಯನ್ನಾಗಿಟ್ಟುಕೊಂಡು ಕೃಷಿ ಮೇಳದಲ್ಲಿಯೂ ಫಲಪುಷ್ಪ ಪ್ರದರ್ಶನ ಮಾಡಿದ್ದು, ಹೂವು ಎಲೆಗಳಿಂದ ಮಾಡಿದ್ದ ಟ್ರ್ಯಾಕ್ಟರ್, ಮೀನು, ಕುರಿ, ಅನಾನಸ್, ಬಾಳೆ ಹಣ್ಣು, ವಿವಿಧ ಧಾನ್ಯಗಳಿಂದ ಮಾಡಿದ್ದ ಕರ್ನಾಟಕದ ನಕ್ಷೆ ಆಕರ್ಷಣೀಯವಾಗಿದ್ದು, ಅವುಗಳ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಗಮನ ಸೆಳೆದ ಕೀಟ ಪ್ರಪಂಚ: ಪ್ರಕೃತಿಯಲ್ಲಿನ ಜೇನು, ಚಿಟ್ಟೆಗಳು, ಮಳೆ ಹುಳು, ಕವಲು ತೋಕೆ ಚಿಟ್ಟೆಗಳು, ಸಗಣಿ ಉಂಡೆ, ರಸ ಹೀರುವ ಪತಂಗ, ಸ್ಪಿಂಗಿಡ್ ಪತಂಗ, ಮಲಬಾರ್ ಚಿಟ್ಟೆಗಳು, ಜಲಚರ ಕೀಟಗಳು ಹಾಗೂ ರೇಷ್ಮೆ ಬೆಳೆಯುವ ಹಂತಗಳ ಪ್ರದರ್ಶನ, ಕೀಟಗಳಲ್ಲಿ ಮಾಡಬಹುದಾದ ವಿವಿಧ ಬಗೆ ಬಗೆಯ ಖಾದ್ಯಗಳ ಪರಿಚಯ ನೋಡಿ ಜನರು ದಂಗಾದರು. ಬಾಧಿಸಿದ ನೆಟ್ವರ್ಕ್ ಸಮಸ್ಯೆ: ಕೃಷಿ ಮೇಳದ ಕೊನೆಯ ದಿನದಂದು ಸುಮಾರು 15 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿರುವುದರಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಾಯಿತು. ನೆಟ್ವರ್ಕ್ ಸಮಸ್ಯೆಯ ಕಾರಣದಿಂದ ಮಳಿಗೆಗಳಲ್ಲಿ ಆಗಬೇಕಿದ್ದ ಆನ್ಲೈನ್ ವಹಿವಾಟು ಕಡಿಮೆಯಾಯಿತು. ಅನೇಕ ಮಳಿಗೆಗಳ ಮಾಲಕರು ಆನ್ಲೈನ್ ಪೇಮೆಂಟ್ಗಳಿಗೆ ಅವಕಾಶ ನೀಡದೇ ಬರೀ ನಗದು ಮಾತ್ರ ಅವಕಾಶ ನೀಡಿರುವುದು ಕಂಡು ಬಂದಿತು. 4 ದಿನಗಳ ಒಟ್ಟು ವಹಿವಾಟು: ಮೊದಲ ದಿನ (ನ.13) 8.51 ಲಕ್ಷ ಜನ ಭಾಗವಹಿಸಿದ್ದು 0.62ಕೋಟಿ ರೂ.ವಹಿವಾಟು, 2ನೇ ದಿನ 11.85ಲಕ್ಷ ಜನ ಭಾಗವಹಿಸಿದ್ದು 1.8ಕೋಟಿ ರೂ.ವಹಿವಾಟು, 3ನೇ ದಿನ 15.87ಲಕ್ಷ ಜನರು ಭಾಗವಹಿಸಿದ್ದು 1.62ಕೋಟಿ ರೂ. ವಹಿವಾಟು, 4ನೇ ದಿನ 17.93ಲಕ್ಷ ಜನರು ಭಾಗವಹಿಸಿ 1.45ಕೋಟಿ ರೂ. ವಹಿವಾಟು, ಒಟ್ಟು 54.16ಲಕ್ಷ ಜನರು ಭಾಗವಹಿಸಿದ್ದು, 4.77ಕೋಟಿ ರೂ. ವಹಿವಾಟು ಆಗಿದೆ ಎಂದು ಕೃಷಿ ವಿವಿ ತಿಳಿಸಿದೆ
ಗೇರು ಅಭಿವೃದ್ಧಿಗೆ ಅನುದಾನ ಘೋಷಿಸಲು ಸರಕಾರಕ್ಕೆ ಒತ್ತಾಯ : ಯು.ಟಿ.ಖಾದರ್
‘ಕಾಜು ಶತಮಾನೋತ್ಸವ ಸಮ್ಮೇಳನ’ದ ಸಮಾರೋಪ
ಅರಣ್ಯ ಇಲಾಖೆ ನಿರ್ಲಕ್ಷ್ಯ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು: ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವನ್ನು ವಿರೋಧಿಸಿ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಮೈಸೂರಿನ ಆರ್ ಗೇಟ್ ಬಳಿ ರವಿವಾರ ಪ್ರತಿಭಟನೆ ನಡೆಸಲಾಯಿತು. ಆರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದ ಆನೆಗಳನ್ನು ರಕ್ಷಣೆ ಮಾಡಲು ಆಗುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಹುಲಿ ಹಾಗೂ ಹುಲಿ ಮರಿಗಳು ಸಾವನ್ನಪ್ಪುತ್ತಿವೆ. ಜನರ ಮೇಲೆ ಹುಲಿಗಳು ದಾಳಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ 18ರಿಂದ 20 ಜಿಂಕೆಗಳು ಸಾವಿಗೀಡಾಗಿವೆ. ಇದಕ್ಕೆ ಯಾರು ಕಾರಣ? ಯಾರು ಜವಾಬ್ದಾರಿ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅರಣ್ಯ ರಕ್ಷಣೆ ಮಾಡದಿದ್ದರೆ ನಾವುಗಳು ಉಳಿಯುವುದಿಲ್ಲ. ಅರಣ್ಯವನ್ನು ಲೂಟಿ ಮಾಡಲಾಗುತ್ತಿದೆ. ಕೇರಳ ಭಾಗದಲ್ಲಿ ಮರಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇತ್ತೀಚೆಗೆ ಅರಣ್ಯದಲ್ಲಿ ಕಾರು ಸಂಚರಿಸಿ ಕಾರಿನಲ್ಲಿ ಪಿಸ್ತೂಲ್ ಸಿಕ್ಕಿತ್ತು. ಆ ಪಿಸ್ತೂಲ್ ಯಾರದು ಎಂಬುದರ ಬಗ್ಗೆ ತನಿಖೆಯೇ ಆಗಲಿಲ್ಲ. ಹೀಗಾದರೆ ಅರಣ್ಯ ಉಳಿಯಲುವ ಸಾಧ್ಯವೇ ಎಂದು ಪ್ರಶ್ನಿಸಿದರು. ವನ್ಯ ಪ್ರಾಣಿಗಳು ನಾಡಿಗೆ ಬಂದು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಲಿಲ್ಲ. ಎಷ್ಟೇ ಹಣ ಖರ್ಚಾದರು ಕಾಡಿನ ಸುತ್ತಾ ಬೇಲಿ ಹಾಕಬೇಕು ಎಂದು ಒತ್ತಾಯಿಸಿದರು. ವನ್ಯಜೀವಿ-ಪ್ರಾಣಿ ಸಂಘರ್ಷದಿಂದ ಸಾವೀಗೀಡಾದವರಿಗೆ ರಾಜ್ಯ ಸರ್ಕಾರ ಬರಿ 25 ಲಕ್ಷ ರೂ. ನೀಡಲಾಗುತ್ತಿದೆ. ಇದು ಏನೇನು ಸಾಲದು. ಹಾಗಾಗಿ ಈ ಪರಿಹಾರ ಮೊತ್ತವನ್ನು 50 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಬಿ.ಎ.ಶಿವಶಂಕರ್, ಜಿಯಾ ನಾಸಿರ್, ತೇಜಸ್ ಲೋಕೇಶ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
OYO: ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ಕೊಟ್ಟ ಓಯೋ ಸಂಸ್ಥಾಪಕ
ಈಗಿನ ಯುವಜನರ ಹಾಟ್ ಟಾಪಿಕ್ಗಳಲ್ಲಿ ಓಯೋ (OYO) ಕೂಡ ಒಂದು. ಓಯೋ ಅಂದಾಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಈಗಾಗಲೇ ಈ ರೂಂ ಸೇವೆಯು ಯುವಜೋಡಿಗಳು, ಪ್ರೇಮಿಗಳ ಅಡ್ಡಾ ಎನಿಸಿಕೊಂಡಿದೆ. ಲಕ್ಷಾಂತರ ಮಂದಿ ಓಯೋ ರೂಂ ಸೇವೆಯನ್ನು ಬಳಸಿ ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ವಿದ್ಯಾರ್ಥಿಗಳನ್ನು ಕುರಿತು ಇತ್ತೀಚೆಗೆ ಆಡಿರುವ ಮಾತುಗಳು ಗಮನ ಸೆಳೆದಿದೆ.
ದುಬೈ | ಶಾರ್ಜಾದಲ್ಲಿ ಭಾರತದ ಸಾಮಾಜಿಕ ವಿಕಸನ, ಮುಸ್ಲಿಮರು ಕೃತಿ ಬಿಡುಗಡೆ
ಶಾರ್ಜಾ, ನ.16: ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿದ ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು ಎಂಬ ಕೃತಿಯನ್ನು ಖ್ಯಾತ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಸ್ತಾಕ್ ಅವರು ಶಾರ್ಜಾದಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನೂರ್ ಅಶ್ಫಾಕ್ ಕಾರ್ಕಳ, ಲೇಖಕ ಇರ್ಶಾದ್ ಮೂಡುಬಿದ್ರೆ, ರಿಯಾಝ್ ಪುತ್ತೂರು, ಅಬ್ದುಲ್ ಸಲಾಮ್ ದೇರಳಕಟ್ಟೆ, ರಫೀಕ್ ಅಲಿ ಕೊಡಗು ಮತ್ತು ಹಾದಿಯ ಮಂಡ್ಯ ಉಪಸ್ಥಿತರಿದ್ದರು. ಶಾರ್ಜಾ ಅಂತರ್ರಾಷ್ಟ್ರೀಯ ಪುಸ್ತಕ ಮೇಳದ 44 ನೆಯ ಆವೃತ್ತಿಯಲ್ಲಿ ಸರಕಾರದ ಅಧಿಕೃತ ಅತಿಥಿಯಾಗಿ ಆಗಮಿಸಿದ ಬಾನು ಮುಸ್ತಾಕ್ ವಿಶ್ವ ವಿಖ್ಯಾತ ಶಾರ್ಜಾ ಪುಸ್ತಕ ಮೇಳದಲ್ಲಿ ಭಾಗವಹಿಸಿ ಮಹಿಳೆಯರ ಅಸ್ತಿತ್ವ, ಜೀವನ ಮತ್ತು ಪ್ರತಿರೋಧ ಎಂಬ ವಿಷಯದಲ್ಲಿ ವಿಷಯ ಮಂಡಿಸಿದರು.
ಭಟ್ಕಳ | ತಲಾಂದ ಶಾಲೆಯಲ್ಲಿ ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಭಟ್ಕಳ: ತಲಾಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – 2025-26 ಕಾರ್ಯಕ್ರಮವು ಗುರುವಾರ ಸಡಗರದಿಂದ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ವೈವಿಧ್ಯಮಯ ಪ್ರತಿಭೆಗಳನ್ನು ಮೆರೆದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣವನ್ನು ತಳಿರು ತೋರಣಗಳಿಂದ ಸಿಂಗಾರಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಯಿತು. ವಿದ್ಯಾರ್ಥಿಗಳು ಛದ್ಮವೇಷ, ಕ್ಲೇ ಮಾಡೆಲಿಂಗ್, ಆಶುಭಾಷಣ, ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ, ಬಣ್ಣಹಚ್ಚುವಿಕೆ, ಅಭಿನಯಗೀತೆ, ಭಕ್ತಿಗೀತೆ ಮುಂತಾದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಟ್ಟಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಜಿನಿ ನಾಯ್ಕ ಅವರು, “ಮಕ್ಕಳಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತರುವ ಅತ್ಯುತ್ತಮ ವೇದಿಕೆಯೇ ಪ್ರತಿಭಾ ಕಾರಂಜಿ” ಎಂದು ಹೇಳಿದರು. ಯಲ್ವಡಿಕವೂರ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಗೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಾಗೇಶ ಹೆಬ್ಬಾರ, ಉಪಾಧ್ಯಕ್ಷೆ ಲಕ್ಷ್ಮೀ ಗೊಂಡ, ಸದಸ್ಯರು ದೇವಯ್ಯ ನಾಯ್ಕ, ಗಣಪತಿ ನಾಯ್ಕ, ಜಯಶ್ರೀ ನಾಯ್ಕ, ಶೇಷಗಿರಿ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಪೊಣಿಮಾ ಮೊಗೇರ, ಕಟ್ಟೇವಿರ ಯುವಕ ಸಂಘ ಅಧ್ಯಕ್ಷ ಜಗದೀಶ ನಾಯ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ, ಮೋಹನ ಗೊಂಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಬಿಆರ್ಸಿ ಜಯಶ್ರೀ ಆಚಾರ್ಯ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಬೇಬಿ ದೇವಡಿಗ ವಂದನೆ ಸಲ್ಲಿಸಿದರು. ಶಿಕ್ಷಕ ವಿಜಯ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಭಟ್ಕಳ, ನ.16: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ನಲ್ಲಿ ಶನಿವಾರ ಸ್ಟೆಮ್ ಫೆಸ್ಟ್-2025 ನ್ನು ಆಚರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಆಗಮಿಸಿ, ಸ್ಪರ್ಧಾತ್ಮಕ ಹಾಗೂ ಸಂವಹನಾತ್ಮಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂವಾದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕೆ. ಫಝ್ಲುರ್ ರಹ್ಮಾನ್ ಮಾತನಾಡಿ, ಸಿದ್ಧಾಂತದ ಜ್ಞಾನಕ್ಕೆ ಅನುಭವದ ಸ್ಪರ್ಶ ಸಿಕ್ಕಾಗ ಮಾತ್ರ ವಿಜ್ಞಾನ ಜೀವಂತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಂಊಒ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಶಬಂದ್ರಿ ಮಾತನಾಡಿ, ಸ್ಟೆಮ್ ಮೂಲಕ ವಿದ್ಯಾರ್ಥಿಗಳಲ್ಲಿ ವಿಚಾರಶೀಲತೆ ಮತ್ತು ಆವಿಷ್ಕಾರ ಮನೋಭಾವ ಬೆಳೆಯುತ್ತದೆ ಎಂದರು. ಮಾದರಿ ಪ್ರದರ್ಶನ, ರೋಬೋ ರೇಸ್, ಕ್ವಿಜ್, ಸ್ಟಾರ್ಟ್-ಅಪ್ ಪಿಚ್ ಸೇರಿದಂತೆ ಹಲವಾರು ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಸಂಜೆಯ ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಶಿವಮೊಗ್ಗ| ಖಾಸಗಿ ಬಸ್ ಢಿಕ್ಕಿ ನವವಿವಾಹಿತ ಮೃತ್ಯು; ಮೂವರಿಗೆ ಗಾಯ
ಶಿವಮೊಗ್ಗ: ಖಾಸಗಿ ಬಸ್ ಢಿಕ್ಕಿಯಾಗಿ ನವ ವಿವಾಹಿತ ಮೃತಪಟ್ಟಿರುವ ಘಟನೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ರವಿವಾರ ರಾತ್ರಿ ನಡೆದಿದೆ. ಶಾಂತಿ ನಗರದ ನಿವಾಸಿ ಅಹ್ಮದ್ (31) ಮೃತ ಯುವಕ. ಅಲ್ಲದೆ, ಮೂವರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ರಾಗಿಗುಡ್ಡ ಕಡೆಯಿಂದ ಬಂದ ಖಾಸಗಿ ಬಸ್ ಮಣ್ಣಿನ ದಿಬ್ಬ ಹಾರಿ ಅಡ್ಡಾದಿಡ್ಡಿ ಚಲಿಸಿದ್ದು, ಮೂರು ದ್ವಿಚಕ್ರ ವಾಹನಗಳು, ನಾಲ್ವರು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ಗಳು ಜಖಂಗೊಂಡಿದ್ದರೆ, ಪೊಲೀಸ್ ಬ್ಯಾರಿಕೇಡ್ ತುಂಡಾಗಿದೆ. ಫುಟ್ಪಾತ್ಗೆ ಅಳವಡಿಸಿದ್ದ ರೇಲಿಂಗ್ ಕೂಡ ಹಾನಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಸದ್ಯ ಪರ್ಯಾಯ ಮಾರ್ಗದಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಮೇಲ್ಸೇತುವೆ ಮುಂಭಾಗ ಮಣ್ಣಿನ ಗುಡ್ಡೆ ಹಾಕಲಾಗಿದ್ದು, ದ್ವಿಚಕ್ರ ವಾಹನಗಳು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಹಾಗಿದ್ದೂ ಬಸ್ ಈ ಮಾರ್ಗದಲ್ಲಿ ಬಂದು ಅಪಘಾತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯ ಜನರು ಘಟನಾ ಸ್ಥಳದಲ್ಲಿ ಗುಂಪುಗೂಡಿದ್ದರು. ಕೆಲವು ಬಸ್ಸಿನ ಗಾಜಿಗೆ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ.
ಹೊಸದಿಲ್ಲಿ: 1989ರಲ್ಲಿ ನಡೆದಿದ್ದ ಭಗಲ್ಪುರ್ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ, “ಬಿಹಾರ ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ” ಎಂದು ಅಸ್ಸಾಂ ಸಚಿವ ಅಶೋಕ್ ಸಿಂಘಾಲ್ ಮಾಡಿದ್ದ ವಿವಾದಾತ್ಮಕ ಎಕ್ಸ್ ಪೋಸ್ಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯ ನಂತರ, ಹೂಕೋಸು ಹೊಲದ ಚಿತ್ರವನ್ನು ಹಂಚಿಕೊಂಡಿದ್ದ ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್, “ಬಿಹಾರ ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ” ಎಂದು ಬರೆದುಕೊಂಡಿದ್ದರು. ಅಶೋಕ್ ಸಿಂಘಾಲ್ ರ ಈ ಪೋಸ್ಟ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, “ಈ ಹೇಳಿಕೆಯೇನಾದರೂ, 1989ರಲ್ಲಿ ನಡೆದಿದ್ದ ಭಗಲ್ಪುರ್ ಗಲಭೆಯ ಸಂದರ್ಭದಲ್ಲಿ ನಡೆಸಲಾಗಿದ್ದ ಕುಖ್ಯಾತ ಹೂಕೋಸು ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದೆಯೆ?” ಎಂದು ಖಾರವಾಗಿ ಪ್ರಶ್ನಿಸಿದೆ. ಅಶೋಕ್ ಸಿಂಘಾಲ್ ತಮ್ಮ ಪ್ರಾಸಂಗಿಕ ಪೋಸ್ಟ್ ನಲ್ಲಿ 1989ರ ಬರ್ಬರ ಭಗಲ್ಪುರ್ ಹತ್ಯಾಕಾಂಡವನ್ನು ಪರೋಕ್ಷವಾಗಿ ಉಲ್ಲೇಖಿಸಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರೂ ತಮ್ಮ ಆಘಾತ ಮತ್ತು ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಂವೇದನಾರಹಿತ ಮತ್ತು ಕಳಪೆ ಅಭಿಪ್ರಾಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, “ಬಿಹಾರದ ಮುಸ್ಲಿಮರ ವಿರುದ್ಧ ಅತ್ಯಂತ ಕೆಟ್ಟದಾಗಿ ನಡೆಸಲಾಗಿರುವ ಪಿತೂರಿಯನ್ನು ಶಶಿ ತರೂರ್ ರಂತಹ ಪ್ರಭಾವಶಾಲಿ ಹಿಂದೂ ನಾಯಕರು ಖಂಡಿಸಬೇಕು” ಎಂದು @isaifpatel ಎಂಬ ಬಳಕೆದಾರರು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಅಶೋಕ್ ಸಿಂಘಾಲ್ ರ ಪೋಸ್ಟ್ ಅನ್ನು ಖಂಡಿಸಿದ್ದು, ಜಂಟಿ ಹೇಳಿಕೆಗಳನ್ನು ನೀಡುವುದು ನನ್ನ ಕೆಲಸವಲ್ಲ ಎಂದೂ ಹೇಳಿದ್ದಾರೆ. “ಆದರೆ, ಎಲ್ಲರನ್ನೂ ಒಳಗೊಳ್ಳುವ ಭಾರತದ ಅದಮ್ಯ ವಕ್ತಾರ ಹಾಗೂ ಹೆಮ್ಮೆಯ ಹಿಂದೂ ಆದ ನನಗೆ ಹಾಗೂ ಬಹುತೇಕ ಹಿಂದೂಗಳಿಗೆ ಇಂತಹ ಹತ್ಯಾಕಾಂಡವನ್ನು ಸಮರ್ಥಿಸುವ ಅಥವಾ ಸಂಭ್ರಮಿಸುವುದನ್ನು ನಮ್ಮ ಧರ್ಮವಾಗಲಿ ಅಥವಾ ನಮ್ಮ ರಾಷ್ಟ್ರೀಯತೆಯಾಗಲಿ ಸಮರ್ಥಿಸುವುದಿಲ್ಲ ಹಾಗೂ ಅಂಥವನ್ನು ಶ್ಲಾಘಿಸುವುದಿಲ್ಲ ಎಂಬುದು ತಿಳಿದಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲೊಗೈನ್ ಹತ್ಯಾಕಾಂಡ ಎಂದೇ ಕುಖ್ಯಾತವಾಗಿರುವ 1989ರಲ್ಲಿ ಬಿಹಾರದ ಭಗಲ್ಪುರ್ ನಲ್ಲಿ ನಡೆದಿದ್ದ ಗಲಭೆಯಲ್ಲಿ 100ಕ್ಕೂ ಹೆಚ್ಚು ಮುಸ್ಲಿಮರನ್ನು ಹತ್ಯೆಗೈಯ್ಯಲಾಗಿತ್ತು. ಬಳಿಕ, ಈ ಹತ್ಯೆಯ ಸಾಕ್ಷ್ಯವನ್ನು ಮರೆಮಾಚಲು, ಮೃತರ ದೇಹಗಳ ಸಮಾಧಿಯ ಮೇಲೆ ಹೂಕೋಸುಗಳ ಗಿಡಗಳನ್ನು ಬೆಳೆಸಲಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಭಾರತದಾದ್ಯಂತ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡ ಕೆಲವೇ ವಾರಗಳ ಅಂತರದಲ್ಲಿ ಈ ಹತ್ಯಾಕಾಂಡ ನಡೆದಿದ್ದರಿಂದ, ಇದು ಮಹತ್ವ ಪಡೆದುಕೊಂಡಿತ್ತು.
ಬೆಳ್ತಂಗಡಿ | ಆಟೋ ಪಲ್ಟಿ : ಓರ್ವ ಬಾಲಕ ಮೃತ್ಯು ಹಲವರಿಗೆ ಗಾಯ
ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಓರ್ವ ಬಾಲಕ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ನ.16 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕುತ್ರೋಟ್ಟು - ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಪುತ್ರ ತನ್ವಿತ್(12) ಎಂದು ಗುರುತಿಸಲಾಗಿದೆ. ನಾವೂರಿನ ಶಶಿ ಎಂಬವರ ಆಟೋ ಪಲ್ಟಿಯಾದ ರಭಸಕ್ಕೆ ಗಾಯಗೊಂಡಿದ್ದ ತನ್ವಿತ್ ರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆಟೋದಲ್ಲಿದ್ದ ಐದು ಮಂದಿಗೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇಸ್ರೇಲ್ ದಾಳಿಗೆ ಮತ್ತೆ ನಲುಗಿದ ಗಾಜಾ, 3 ಜನರ ಜೀವ ಬಲಿ?
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ತೀವ್ರ ದಾಳಿಯ ಪರಿಣಾಮ ಈಗಾಗಲೇ ಭಾರಿ ಘೋರ ಘಟನೆಗಳು ನೆಡೆದು ಹೋಗಿದ್ದು, ನೋಡ ನೋಡುತ್ತಲೇ ಹತ್ತಾರು ಸಾವಿರ ಜನರ ಜೀವ ಹೋಗಿದೆ. ಅದರಲ್ಲೂ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಯನ್ನ ಶುರು ಮಾಡಿ 2 ವರ್ಷವೇ ಮುಗಿಯುತ್ತಾ ಬಂದರೂ ಈ ಕಾಳಗ ನಿಲ್ಲಿಸಲು ಸಿದ್ಧವಿಲ್ಲ. ಇಂತಹ ಸಮಯದಲ್ಲೇ ಮತ್ತೆ ಇಂದು
Suratkal | ಕಾಟಿಪಳ್ಳ ಬದ್ರಿಯಾ ಜುಮಾ ಮಸೀದಿಯ ಮುಸ್ಲಿಂ ಜಮಾಅತ್ ಸಮಿತಿಯ ತುರ್ತು ಸಭೆ ರದ್ದು; ಹೈಕೋರ್ಟ್ ಆದೇಶ
ಸತ್ತಾರ್, ಮುಸ್ತಫಾ ಅವರಿದ್ದ ಸಮಿತಿ ಮುಂದುವರಿಯಲು ಅವಕಾಶ
ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪ್ರಮುಖ 3 ಸೂತ್ರಗಳ ರೂಪಿಸಿದ ಸಂಚಾರಿ ಪೊಲೀಸ್! ಏನೆಲ್ಲಾ?
ಬೆಂಗಳೂರಿನ ಐಟಿ ಕಾರಿಡಾರ್ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪೊಲೀಸರು ಮೂರು ಸೂತ್ರಗಳನ್ನು ಕಂಡುಕೊಂಡಿದ್ದಾರೆ. ವೈಟ್ಫೀಲ್ಡ್ ಮತ್ತು ಮಾರತ್ಹಳ್ಳಿ ಭಾಗದಲ್ಲಿ 'ಪೇ ಆ್ಯಂಡ್ ಪಾರ್ಕಿಂಗ್', ಕಾರು ಪೂಲಿಂಗ್ ಹಾಗೂ ಸಮೂಹ ಸಾರಿಗೆಯನ್ನು ಪ್ರೋತ್ಸಾಹಿಸಲು ಚಿಂತನೆ ನಡೆದಿದೆ. ಕಂಪನಿಗಳು ಹಾಗೂ ಉದ್ಯೋಗಿಗಳ ಸಹಕಾರದಿಂದ ಸಂಚಾರ ಸುಗಮಗೊಳಿಸುವ ಗುರಿ ಇದೆ.
Ukraine War: ರಷ್ಯಾ ಜೊತೆ ಕೈದಿಗಳ ವಿನಿಮಯ, ಯುದ್ಧ ನಿಲ್ಲಿಸಿಲು ಉಕ್ರೇನ್ ಪ್ಲಾನ್?
ರಷ್ಯಾ ಹೊಡಿತಾ ಇದೆ, ಉಕ್ರೇನ್ ಏಟು ತಿಂತಾನೇ ಇದೆ... ಹೀಗೆ ರಷ್ಯಾ &ಉಕ್ರೇನ್ ನಡುವಿನ ಭಾರಿ ಘೋರ ಕಾಳಗ ಮುಂದುವರಿದಿದೆ. ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ಈ ಎರಡೂ ದೇಶಗಳು ತಮ್ಮ ಫೈಟಿಂಗ್ ನಿಲ್ಲಿಸುತ್ತಲೇ ಇಲ್ಲ. ಈಗಾಗಲೇ ಲಕ್ಷ ಲಕ್ಷ ಜನರ ಜೀವ ಬಲಿ ಪಡೆದು ಪ್ರಪಂಚದ ನೆಮ್ಮದಿ ಕಸಿದಿರುವ ರಷ್ಯಾ &ಉಕ್ರೇನ್ ಯುದ್ಧ
ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದ್ದು, ಕೆಲವೆಡೆ ಬೇಲಿ ಹಾಕಲಾಗುವುದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
ಬೆಂಗಳೂರು: ನಮ್ಮ ದೇಶದೊಳಗೆ ಉಗ್ರರು ಹೇಗೆ ಬಂದರು, ಇದು ಭದ್ರತಾ ವೈಫಲ್ಯ ಎಂದು ಟೀಕೆ ಮಾಡುತ್ತಾರೆ. ಆದರೆ ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದ್ದು, ಕೆಲವೆಡೆ ಬೇಲಿ ಹಾಕಲಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ರವಿವಾರ ನಗರದ ಎಫ್ಕೆಸಿಸಿಐ ಸಭಾಂಗಣದಲ್ಲಿ ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ʼಬದುಕುಳಿದವರು ಕಂಡಂತೆʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮದೂ ಇಸ್ರೇಲ್ನಂತೆಯೇ ಗೆದ್ದ ಇತಿಹಾಸ ಹೊರತು ಸೋತ ಇತಿಹಾಸವಲ್ಲ. ಆದರೆ ಇತಿಹಾಸ ಪಾಠದಲ್ಲಿ ಇದನ್ನೆಲ್ಲ ಹೇಳಿಕೊಡುತ್ತಿಲ್ಲ. ನಮ್ಮಲ್ಲಿ ಮೊದಲಿನಿಂದ ಮಾನಸಿಕ ಗುಲಾಮಿತನ ಬೆಳೆಸಿದ್ದಾರೆ. ನಮ್ಮ ದೇಶದೊಳಗೆ ಉಗ್ರರು ಹೇಗೆ ಬಂದರು, ಇದು ಭದ್ರತಾ ವೈಫಲ್ಯ ಎಂದು ಟೀಕೆ ಮಾಡುತ್ತಾರೆ. ಆದರೆ ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದೆ. ಕೆಲವೆಡೆ ಭದ್ರವಾದ ಬೇಲಿಯಿದೆ.ಇನ್ನು ಕೆಲವೆಡೆ ಹಾಗೆ ಬೇಲಿ ಹಾಕಲಾಗುವುದಿಲ್ಲ ಎಂದು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ತೇಜಸ್ವಿ ಸೂರ್ಯ, ಇಸ್ರೇಲಿನ ಕಾನ್ಸುಲ್ ಜನರಲ್ ಒರ್ಲಿ ಮೆಯಿಟ್ಜ್ಮನ್, ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿದಂತೆ ಪ್ರಮುಖರಿದ್ದರು.
ರಾಜಾ ರಾಮ್ ಮೋಹನ್ ರಾಯ್ ಅವರನ್ನು ‘ಬ್ರಿಟೀಷರ ಏಜೆಂಟ್’ ಎಂದು ಕರೆದು, ಬಳಿಕ ಕ್ಷಮೆ ಕೋರಿದ ಬಿಜೆಪಿ ಸಂಸದ
ಶಾಜಾಪುರ, ನ. 16: ಮಧ್ಯಪ್ರದೇಶದ ಸಚಿವ ಹಾಗೂ ಬಿಜೆಪಿ ನಾಯಕ ಇಂದರ್ ಸಿಂಗ್ ಪರಮಾರ್ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು ಬ್ರಿಟೀಷರ ಏಜೆಂಟ್ ಎಂದು ಕರೆಯುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. ರಾಜಾ ರಾಮ್ ಮೋಹನ್ ರಾಯ್ ಅವರು ‘‘ಮತಾಂತರದ ವಿಷ ವರ್ತುಲ’’ ಆರಂಭಿಸಿದ್ದರು ಎಂದು ಅವರು ಹೇಳಿದ್ದರು. ಈ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅವರು ರವಿವಾರ ಕ್ಷಮೆ ಯಾಚಿಸಿದ್ದಾರೆ. ತಾನು ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಬುಡಕಟ್ಟು ಜನರ ಮಹಾ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಅಗರ್ ಮಾಲ್ವ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಮಾರ್ ಅವರು ರಾಜ ರಾಮ್ ಮೋಹನ್ ರಾಯ್ ಅವರು ಬ್ರಿಟೀಷ್ ಏಜೆಂಟ್ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘‘ರಾಜಾ ರಾಮ್ ಮೋಹನ್ ರಾಯ್ ಅವರು ದೇಶದಲ್ಲಿ ಬ್ರಿಟೀಷರ ಏಜೆಂಟ್ ಆಗಿ ಕೆಲಸ ಮಾಡಿದರು ಹಾಗೂ ಮತಾಂತರದ ವಿಷ ವರ್ತುಲವನ್ನು ಆರಂಭಿಸಿದರು’’ ಎಂದು ತನ್ನ ಭಾಷಣದಲ್ಲಿ ಹೇಳಿದ್ದರು. ಬ್ರಿಟೀಷರು ಹಲವು ಜನರನ್ನು ನಕಲಿ ಸಾಮಾಜ ಸುಧಾರಕರು ಎಂದು ಬಿಂಬಿಸಿದರು ಹಾಗೂ ಮತಾಂತರ ಪ್ರೋತ್ಸಾಹಿಸಿದವರನ್ನು ಉತ್ತೇಜಿಸಿದರು ಎಂದು ಅವರು ಪ್ರತಿಪಾದಿಸಿದ್ದರು. ‘‘ಇದನ್ನು ನಿಲ್ಲಿಸಿ ಬುಡಕಟ್ಟು ಜನರನ್ನು ರಕ್ಷಿಸುವ ಧೈರ್ಯ ತೋರಿದ್ದು ಬಿರ್ಸಾ ಮುಂಡಾ ಅವರು ಮಾತ್ರ’’ ಎಂದು ಅವರು ಹೇಳಿದ್ದರು. ಬ್ರಿಟೀಷ್ ಆಡಳಿತದ ಸಂದರ್ಭ ಮಿಷನರಿ ಶಾಲೆಗಳು ಮಾತ್ರ ಶಿಕ್ಷಣ ಸಂಸ್ಥೆಗಳಾಗಿದ್ದವು ಹಾಗೂ ಮತಾಂತರವನ್ನು ಮರೆ ಮಾಚಲು ಶಿಕ್ಷಣವನ್ನು ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದರು. ರಾಯ್ ಕುರಿತ ಹೇಳಿಕೆ ತೀವ್ರ ಟೀಕಿಗೆ ಗುರಿಯಾದ ಬಳಿಕ ಪರ್ಮಾರ್ ವೀಡಿಯೊ ಹೇಳಿಕೆಯಲ್ಲಿ, ‘‘ರಾಜಾ ರಾಮ್ ಮೋಹನ್ ರಾಯ್ ಅವರು ಸಮಾಜ ಸುಧಾರಕರು. ಅವರಿಗೆ ಗೌರವ ನೀಡಬೇಕು. ನಾನು ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದೇನೆ. ನನಗೆ ಈ ಬಗ್ಗೆ ವಿಷಾದವಿದೆ. ನಾನು ಇದಕ್ಕೆ ಕ್ಷಮೆ ಯಾಚಿಸುತ್ತೇನೆ ’’ ಎಂದು ಹೇಳಿದ್ದಾರೆ. ಚಾರಿತ್ರಿಕ ನಾಯಕರನ್ನು ಅವಮಾನಿಸುವ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಪರ್ಮಾರ್ ತಿಳಿಸಿದ್ದಾರೆ.
ಕೇರಳ | ಎಸ್ಐಆರ್ ಸಂಬಂಧಿಸಿದ ಕೆಲಸದ ಒತ್ತಡ; ಆತ್ಮಹತ್ಯೆ ಶರಣಾದ ಬಿಎಲ್ಒ
ಕಣ್ಣೂರು, ನ. 16: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ನೌಕರರೊಬ್ಬರ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪಯ್ಯನ್ನೂರಿನಲ್ಲಿರುವ ಅವರ ಮನೆಯಲ್ಲಿ ರವಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೈದ ನೌಕರನನ್ನು ಅನೀಶ್ ಜಾರ್ಜ್ (44) ಎಂದು ಗುರುತಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಗೆ ಸಂಬಂಧಿಸಿದ ಕೆಲಸದ ಒತ್ತಡದಿಂದ ಅನೀಶ್ ಜಾರ್ಜ್ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಅನೀಶ್ ಜಾರ್ಜ್ ಅವರು ಪಯ್ಯನ್ನೂರಿನ ಸರಕಾರಿ ಶಾಲೆಯಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೃತದೇಹ ಪಯ್ಯನ್ನೂರಿನಲ್ಲಿರುವ ಅವರ ಮನೆಯ ಮೊದಲನೇ ಮಹಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ, ಅವರು ಬಿಎಲ್ಒ ಕರ್ತವ್ಯಕ್ಕೆ ಸಂಬಂಧಿಸಿ ಕೆಲವು ಸಮಯದಿಂದ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ. ಎಸ್ಐಆರ್ನ ಕರ್ತವ್ಯಕ್ಕೆ ಸಂಬಂಧಿಸಿ ತನ್ನ ಪುತ್ರ ಕಳೆದ ಕೆಲವು ದಿನಗಳಿಂದ ಒತ್ತಡ ಎದುರಿಸುತ್ತಿದ್ದ ಎಂದು ಜಾರ್ಜ್ ಅವರ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಾಝಾ ಶಾಂತಿ ಯೋಜನೆ ನಿರ್ಣಯ; ಭದ್ರತಾ ಮಂಡಳಿಯಿಂದ ನ.17ಕ್ಕೆ ಮತದಾನ
ನ್ಯೂಯಾರ್ಕ್, ನ.16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಶಾಂತಿ ಯೋಜನೆಯನ್ನು ಬೆಂಬಲಿಸುವ ನಿರ್ಣಯದ ಕುರಿತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಮತದಾನ ಮಾಡಲಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಿನ ಎರಡು ವರ್ಷಗಳ ನಡುವಿನ ಸಂಘರ್ಷದಲ್ಲಿ ಕದನವಿರಾಮವನ್ನು ಜಾರಿಗೊಳಿಸುವ ಕುರಿತ ಕರಡು ನಿರ್ಣಯವನ್ನು, ಕಳೆದ ಗುರುವಾರ 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿತ್ತು. ಈ ಕರಡು ನಿರ್ಣಯವು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಹಂಗಾಮಿ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ (ಐಎಸ್ಎಫ್)ಯನ್ನು ರಚಿಸಲಿದೆ. ಗಾಝಾಪಟ್ಟಿಯ ಗಡಿಪ್ರದೇಶಗಳ ಭದ್ರತೆಗೆ ಹಾಗೂ ಗಾಝಾಪಟ್ಟಿಯನ್ನು ಮಿಲಿಟರಿ ರಹಿತಗೊಳಿಸಲು ಇಸ್ರೇಲ್ ಹಾಗೂ ಈಜಿಪ್ಟ್ ಮತ್ತು ಹೊಸತಾಗಿ ತರಬೇತಿ ಪಡೆದ ಫೆಲೆಸ್ತೀನ್ ಪೊಲೀಸರಿಗೆ ಐಎಸ್ಎಫ್ ನೆರವಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಸಾಧ್ಯತೆಯ ಬಗ್ಗೆಯೂ ಈ ಕರಡಿನಲ್ಲಿ ಪ್ರಸ್ತಾವಿಸಲಾಗಿದೆ. ಅಮೆರಿಕ ಹಾಗೂ ಈಜಿಪ್ಟ್, ಸೌದಿ ಆರೇಬಿಯ, ಟರ್ಕಿ ಸೇರಿದಂತೆ ಹಲವು ಅರಬ್ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಈ ನಿರ್ಣಯವನ್ನು ತ್ವರಿತವಾಗಿ ಆಂಗೀಕರಿಸುವಂತೆ ಆಗ್ರಹಿಸಿದೆ.
ಎಸ್ಸಿ ಮೀಸಲಾತಿಯಿಂದ ಕೆನೆಪದರವನ್ನು ಹೊರಗಿಡುವುದಕ್ಕೆ ಸಿಜೆಐ ಗವಾಯಿ ಬೆಂಬಲ
ಅಮರಾವತಿ (ಆಂಧ್ರಪ್ರದೇಶ),ನ.16: ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಮೀಸಲಾತಿಯಿಂದ ಕೆನೆ ಪದರವನ್ನು ಹೊರಗಿರಿಸುವುದನ್ನು ತಾನು ಈಗಲೂ ಬೆಂಬಲಿಸುತ್ತೇನೆ ಎಂದು ರವಿವಾರ ಇಲ್ಲಿ ಹೇಳಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಬಿ.ಆರ್.ಗವಾಯಿ ಅವರು,ಮೀಸಲಾತಿ ವಿಷಯದಲ್ಲಿ ಐಎಎಸ್ ಅಧಿಕಾರಿಯ ಮಕ್ಕಳನ್ನು ಬಡ ಕೃಷಿಕಾರ್ಮಿಕರ ಮಕ್ಕಳೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾ.ಗವಾಯಿ,‘ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಕಂಡುಕೊಂಡಂತೆ ಕೆನೆ ಪದರದ ಪರಿಕಲ್ಪನೆಯನ್ನು ನಾನು ಇನ್ನಷ್ಟು ವಿಶ್ಲೇಷಿಸಿ ನನ್ನದೇ ಆದ ಅಭಿಪ್ರಾಯವನ್ನು ಹೊಂದಿದ್ದೇನೆ. ನನ್ನ ತೀರ್ಪನ್ನು ವ್ಯಾಪಕವಾಗಿ ಟೀಕಿಸಲಾಗಿತ್ತಾದರೂ,ಇತರ ಹಿಂದುಳಿದ ವರ್ಗಗಳಿಗೆ ಅನ್ವಯವಾಗುವುದು ಪರಿಶಿಷ್ಟ ಜಾತಿಗಳಿಗೂ ಅನ್ವಯವಾಗಬೇಕು’ ಎಂದು ಹೇಳಿದರು. ಒಂದೆರಡು ದಿನಗಳಲ್ಲಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ನ್ಯಾ.ಗವಾಯಿ ಸಿಜೆಐ ಆದ ಬಳಿಕ ಭಾಗವಹಿಸಿದ್ದ ಮೊದಲ ಕಾರ್ಯಕ್ರಮ ಅವರ ಹುಟ್ಟೂರು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿತ್ತು,ಈಗ ಅವರ ಕೊನೆಯ ಕಾರ್ಯಕ್ರಮವು ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ನ್ಯಾ.ಸೂರ್ಯಕಾಂತ ಅವರು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ. 2024ರಲ್ಲಿ ಪ್ರಕರಣವೊಂದರಲ್ಲಿ ತನ್ನ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠದ ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿ ನ್ಯಾ.ಗವಾಯಿ ಅವರು ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಲ್ಲಿಯೂ ಕೆನೆ ಪದರವನ್ನು ಗುರುತಿಸಲು ರಾಜ್ಯಗಳು ನೀತಿಯೊಂದನ್ನು ರೂಪಿಸಬೇಕು ಮತ್ತು ಅವರಿಗೆ ಮೀಸಲಾತಿಯ ಲಾಭಗಳನ್ನು ನಿರಾಕರಿಸಬೇಕು. ನಿಜವಾದ ಸಮಾನತೆಯನ್ನು ಸಾಧಿಸಲು ಇದೊಂದೇ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ್ದರು. ಮಹತ್ವದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣ ನ್ಯಾಯಸಮ್ಮತವಾಗಿದೆ ಎಂದು ಬಹುಮತದಿಂದ ಎತ್ತಿ ಹಿಡಿದಿತ್ತು. ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಮೀಸಲಾತಿಯನ್ನು ಕಲ್ಪಿಸಲು ಈ ವರ್ಗೀಕರಣವನ್ನು ಮಾಡುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ ಎಂದು ಅದು ಸ್ಪಷ್ಟಪಡಿಸಿತ್ತು.
ಮೆಟ್ರೋದಲ್ಲಿಅದಲು ಬದಲಾದ ಬ್ಯಾಗ್; ಸಿಬ್ಬಂದಿಯಿಂದ ಯಶಸ್ವಿ ಕಾರ್ಯಾಚರಣೆ, ಅಮೂಲ್ಯ ವಸ್ತುಗಳು ವಾಪಸ್
ಬೆಂಗಳೂರು ಮೆಟ್ರೊ ಸಿಬ್ಬಂದಿ ಇಂದಿರಾನಗರ ನಿಲ್ದಾಣದಲ್ಲಿ ಅದಲು ಬದಲಾದ ಬ್ಯಾಗ್ಗಳನ್ನು ಪತ್ತೆ ಹಚ್ಚಿ, ಮಾಲೀಕರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ಪರಿಶೀಲನೆ ಮತ್ತು 24 ಗಂಟೆಗಳ ನಿಗಾ ವಹಿಸಿ ಹುಡುಕಾಟ ನಡೆಸಿದ ನಂತರ, ತಪ್ಪಾಗಿ ಬ್ಯಾಗ್ ತೆಗೆದುಕೊಂಡಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ, ದಾಖಲೆಗಳಿದ್ದ ಬ್ಯಾಗ್ ಅನ್ನು ಅದರ ನಿಜವಾದ ಮಾಲೀಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ಬಾಂಗ್ಲಾದಾದ್ಯಂತ ಬಿಗಿ ಬಂದೋಬಸ್ತ್; ನ.17ಕ್ಕೆ ಹಸೀನಾ ವಿರುದ್ಧ ತೀರ್ಪು
2024ರಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಸಂದರ್ಭ ನಡೆದಿದ್ದ ‘ನರಮೇಧ’
ದಿಲ್ಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ | ಪ್ರಮುಖ ಆರೋಪಿಯ ಶಂಕಿತ ಸಹಚರನನ್ನು ಬಂಧಿಸಿದ NIA
ಹೊಸದಿಲ್ಲಿ: ದಿಲ್ಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ನಡೆಸುವ ಪಿತೂರಿ ನಡೆಸಿದ ಆರೋಪದ ಮೇಲೆ ಕಾಶ್ಮೀರ ನಿವಾಸಿಯೊಬ್ಬನನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ನ. 10ರಂದು ನಡೆದಿದ್ದ ಈ ಸ್ಫೋಟದಲ್ಲಿ 10 ಮಂದಿ ಮೃತಪಟ್ಟು, 32 ಮಂದಿ ಗಾಯಗೊಂಡಿದ್ದರು. “ದಿಲ್ಲಿ ಪೊಲೀಸರಿಂದ ಪ್ರಕರಣದ ಹಸ್ತಾಂತರವಾದ ಬಳಿಕ, ವ್ಯಾಪಕ ಶೋಧ ಕಾರ್ಯ ನಡೆಸಿದ ರಾಷ್ಟ್ರೀಯ ತನಿಖಾ ದಳವು, ಸ್ಫೋಟದಲ್ಲಿ ಭಾಗಿಯಾಗಿದ್ದ ಕಾರು ನೋಂದಣಿಗೊಂಡಿದ್ದ ಅಮೀರ್ ರಶೀದ್ ಅಲಿ ಎಂಬ ವ್ಯಕ್ತಿಯನ್ನು ದಿಲ್ಲಿಯಲ್ಲಿ ಬಂಧಿಸಿದೆ” ಎಂದು ರವಿವಾರ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. “ಭಯೋತ್ಪಾದಕ ದಾಳಿಯನ್ನು ನಡೆಸಲು ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿಯೊಂದಿಗೆ ಪ್ಯಾಂಪೋರ್ ನ ಸಂಬೂರ ನಿವಾಸಿಯಾದ ಆರೋಪಿಯು ಪಿತೂರಿ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ” ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. “ಸ್ಫೋಟಕ್ಕೆ ಕಾರಣವಾಗಿದ್ದ ಸುಧಾರಿತ ಸ್ಫೋಟಕ ಸಾಧನ ಹೊಂದಿದ್ದ ಕಾರಿನ ಖರೀದಿಗೆ ನೆರವು ನೀಡಲು ಅಮೀರ್ ದಿಲ್ಲಿಗೆ ಬಂದಿದ್ದ. ಸುಧಾರಿತ ಸ್ಫೋಟಕ ಸಾಧನ ಹೊಂದಿದ್ದ ಕಾರಿನ ಚಾಲಕನ ಗುರುತನ್ನು ಉಮರ್ ಉನ್ ನಬಿ ಎಂದು ವಿಧಿ ವಿಜ್ಞಾನ ಪರೀಕ್ಷೆಗಳ ಮೂಲಕ ರಾಷ್ಟ್ರೀಯ ತನಿಖಾ ತಂಡ ಪತ್ತೆ ಹಚ್ಚಿದೆ. ಆತ ಹರ್ಯಾಣದ ಫರೀದಾಬಾದ್ ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಾಮಾನ್ಯ ಔಷಧ ವಿಭಾಗದ ಸಹಾಯಕ ಪ್ರಾಧ್ಯಾ ಪಕ ಮತ್ತು ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದಾನೆ” ಎಂದು ಅದು ತಿಳಿಸಿದೆ. ದಿಲ್ಲಿ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ ಹಾಗೂ ಉತ್ತರ ಪ್ರದೇಶ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ತನಿಖಾ ದಳ, ಹಲವು ರಾಜ್ಯಗಳಲ್ಲಿ ತನ್ನ ತನಿಖೆ ಮುಂದುವರಿಸಿದೆ. “ಇದು ಸ್ಫೋಟದ ಹಿಂದೆ ದೊಡ್ಡ ಪಿತೂರಿ ನಡೆದಿರುವುದನ್ನು ಬಯಲು ಮಾಡಲು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ಹಲವು ಸುಳಿವನ್ನು ನೀಡಿದೆ” ಎಂದು ರಾಷ್ಟ್ರೀಯ ತನಿಖಾ ತಂಡ ಹೇಳಿದೆ
ಮಡಿಕೇರಿ: ಪತ್ನಿಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಮಡಿಕೇರಿ: ಕಾಳು ಮೆಣಸು ಕಳ್ಳತನದ ಆರೋಪದಡಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯೊಬ್ಬ ತನ್ನ ಪತ್ನಿಗೆ ಲೈವ್ ವಿಡಿಯೋ ಕರೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೀರ್ತಿ (32) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಡಿಕೇರಿ ತಾಲೂಕಿನ ಬೋಯಿಕೇರಿ ಸಮೀಪದ ತೋಟವೊಂದಕ್ಕೆ ಹೋದ ಕೀರ್ತಿ ಊರಿನಲ್ಲಿದ್ದ ಪತ್ನಿಗೆ ಲೈವ್ ವಿಡಿಯೋ ಮಾಡಿ ಮನೆಗೆ ಬರುವಂತೆ ಕರೆದಿದ್ದಾನೆ. ಆಕೆ ಬರಲು ಒಪ್ಪದೆ ಇದ್ದಾಗ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಯಡವಾರೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದ್ದ ಕಾಳು ಮೆಣಸು ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಕೀರ್ತಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಭಾರತದಲ್ಲಿ ಗರಿಷ್ಠ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಹಾರ್ಮರ್
ಕೋಲ್ಕತಾ, ನ.16: ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಸೈಮರ್ ಹಾರ್ಮರ್ ಅವರು ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈಡನ್ಗಾರ್ಡನ್ಸ್ನಲ್ಲಿ ಮೂರೇ ದಿನದಲ್ಲಿ ಕೊನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಹಾರ್ಮರ್ ಒಟ್ಟು 8 ವಿಕೆಟ್ ಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಬಲಗೈ ಆಫ್ ಸ್ಪಿನ್ನರ್ ಹಾರ್ಮರ್ ಅವರು ಶನಿವಾರ ಧ್ರುವ ಜುರೆಲ್ ವಿಕೆಟನ್ನು ಪಡೆಯುವ ಮೂಲಕ ಪೌಲ್ ಆ್ಯಡಮ್ಸ್ ಹಾಗೂ ಇಮ್ರಾನ್ ತಾಹಿರ್(ತಲಾ 14 ವಿಕೆಟ್ ಗಳು)ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಭಾರತದಲ್ಲಿ 3ನೇ ಟೆಸ್ಟ್ ಪಂದ್ಯವನ್ನಾಡಿದ ಹಾರ್ಮರ್ ಅವರು ರಿಷಭ್ ಪಂತ್, ರವೀಂದ್ರ ಜಡೇಜ ಹಾಗೂ ಕುಲದೀಪ್ರನ್ನು ಔಟ್ ಮಾಡಿ ಇನ್ನೂ ಮೂರು ವಿಕೆಟನ್ನು ಉರುಳಿಸಿದರು. ಇದರೊಂದಿಗೆ ಭಾರತ ನೆಲದಲ್ಲಿ ಒಟ್ಟು 18 ವಿಕೆಟ್ ಗಳನ್ನು ಉರುಳಿಸಿದ್ದಾರೆ. 36ರ ವಯಸ್ಸಿನ ಹಾರ್ಮರ್ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ. 2015ರಲ್ಲಿ ಮೊಹಾಲಿ ಹಾಗೂ ನಾಗ್ಪುರದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಆಗ ಒಟ್ಟು 10 ವಿಕೆಟ್ ಗಳನ್ನು ಪಡೆದಿದ್ದರು.
ಮೊದಲ ಟೆಸ್ಟ್ | ಸೈಮರ್ ಹಾರ್ಮರ್ ಸ್ಪಿನ್ ಮೋಡಿ; ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಐತಿಹಾಸಿಕ ಜಯ
ಕೋಲ್ಕತಾ, ನ.16: ಆಫ್ ಸ್ಪಿನ್ನರ್ ಸೈಮರ್ ಹಾರ್ಮರ್(8/51) ಅವರ ಅಮೋಘ ಬೌಲಿಂಗ್ ಪ್ರದರ್ಶನದ ಬಲದಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 30 ರನ್ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ. 15 ವರ್ಷಗಳ ನಂತರ ಭಾರತ ನೆಲದಲ್ಲಿ ಈ ಅನಿರೀಕ್ಷಿತ ಗೆಲುವು ದಾಖಲಿಸಿರುವ ಹರಿಣ ಪಡೆಯು ಇತಿಹಾಸ ನಿರ್ಮಿಸಿದೆ. ಮೂರನೇ ದಿನವಾದ ರವಿವಾರ ಗೆಲ್ಲಲು ಕೇವಲ 124 ರನ್ ಗುರಿ ಪಡೆದಿದ್ದ ಭಾರತ ತಂಡವು 93 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಭಾರತದ ಮೊದಲ ಇನಿಂಗ್ಸ್ ನಲ್ಲಿ 30 ರನ್ ಗೆ 4 ವಿಕೆಟ್ ಗಳನ್ನು ಪಡೆದಿದ್ದ ಹಾರ್ಮರ್, ಎರಡನೇ ಇನಿಂಗ್ಸ್ ನಲ್ಲೂ ತನ್ನ ಕೈಚಳಕ ತೋರಿದ್ದು, ರಿಷಭ್ ಪಂತ್(2ರನ್) ಸಹಿತ ನಾಲ್ಕು ವಿಕೆಟ್ ಗಳನ್ನು ಉರುಳಿಸಿ ಗೆಲುವಿನ ರೂವಾರಿಯಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಸತತ ಎರಡು ವಿಕೆಟ್ ಗಳನ್ನು ಉರುಳಿಸಿದ ಕೇಶವ ಮಹಾರಾಜ್ ದಕ್ಷಿಣ ಆಫ್ರಿಕಾದ ಗೆಲುವಿನ ಹಾದಿ ಸುಗಮಗೊಳಿಸಿದರು. ಮಹಾರಾಜ್(2-37) ಮುಹಮ್ಮದ್ ಸಿರಾಜ್(0)ವಿಕೆಟನ್ನು ಉರುಳಿಸಿದ ತಕ್ಷಣ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಪಾಳಯಲ್ಲಿ ಸಂಭ್ರಮ ಮುಗಿಲುಮುಟ್ಟಿತು. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 2ನೇ ಟೆಸ್ಟ್ಪಂದ್ಯವು ನ.22ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ. ವಾಶಿಂಗ್ಟನ್ ಸುಂದರ್ ರನ್ ಚೇಸ್ ವೇಳೆ ಭಾರತದ ಇನಿಂಗ್ಸ್ ಆಧರಿಸಲು ಯತ್ನಿಸಿದರು. ಆದರೆ ಮರ್ಕ್ರಮ್ ಆಫ್ ಸ್ಪಿನ್ ಬೌಲಿಂಗ್ಗೆ 31 ರನ್ ಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗುವ ಮೊದಲು ಮಹಾರಾಜ್ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿದರು. ಭೋಜನ ವಿರಾಮಕ್ಕೆ ಮೊದಲೇ ಮಾರ್ಕೊ ಜಾನ್ಸನ್ ಭಾರತದ ಆರಂಭಿಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್(0)ಹಾಗೂ ಕೆ.ಎಲ್.ರಾಹುಲ್(1)ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಆಗ ಭಾರತ 1 ರನ್ ಗೆ 2 ವಿಕೆಟ್ ಗಳನ್ನು ಕಳೆದುಕೊಂಡಿತು. ಧ್ರುವ ಜುರೆಲ್(13 ರನ್), ಪಂತ್(2ರನ್), ರವೀಂದ್ರ ಜಡೇಜ(18 ರನ್), ಕುಲದೀಪ ಯಾದವ್(1 ರನ್) ನಿರೀಕ್ಷಿತ ಪ್ರದರ್ಶನ ನೀಡದೆ ನೆರೆದಿದ್ದ ಪ್ರೇಕ್ಷಕರನ್ನು ಭಾರೀ ನಿರಾಸೆಗೊಳಿಸಿದರು. ದಕ್ಷಿಣ ಆಫ್ರಿಕಾ ಪರ ಹಾರ್ಮರ್ ಯಶಸ್ವಿ ಪ್ರದರ್ಶನ ನೀಡಿದರೆ, ಜಾನ್ಸನ್(2-15)ಹಾಗೂ ಮಹಾರಾಜ್(2-37)ತಲಾ ಎರಡು ವಿಕೆಟ್ ಗಳನ್ನು ಪಡೆದರು. ►ದಕ್ಷಿಣ ಆಫ್ರಿಕಾ 153 ರನ್: ಇದಕ್ಕೂ ಮೊದಲು 7 ವಿಕೆಟ್ ಗಳ ನಷ್ಟಕ್ಕೆ 93 ರನ್ ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು ನಾಯಕ ಟೆಂಬಾ ಬವುಮಾ(ಔಟಾಗದೆ 55 ರನ್, 136 ಎಸೆತ, 4 ಬೌಂಡರಿ)ಏಕಾಂಗಿ ಹೋರಾಟದ ನೆರವಿನಿಂದ ಒಟ್ಟು 153 ರನ್ ಗಳಿಸುವಲ್ಲಿ ಶಕ್ತವಾಯಿತು. 29 ರನ್ ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಬವುಮಾ ಕಡಿಮೆ ಮೊತ್ತದ ಪಂದ್ಯದಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಕಾರ್ಬಿನ್ ಬಾಷ್(25 ರನ್, 37 ಎಸೆತ)ಅವರೊಂದಿಗೆ 8ನೇ ವಿಕೆಟ್ಗೆ 44 ರನ್ ಜೊತೆಯಾಟದಲ್ಲಿ ಭಾಗಿಯಾದ ಬವುಮಾ ಭಾರತೀಯ ಬೌಲರ್ ಗಳಿಗೆ ನಿರಾಶೆಗೊಳಿಸಿದರು. ಬಾಷ್ ವಿಕೆಟನ್ನು ಕಬಳಿಸಿದ ಜಸ್ಪ್ರಿತ್ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಬವುಮಾ 122 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮುಹಮ್ಮದ್ ಸಿರಾಜ್(2-2) ಅವರು ಹಾರ್ಮರ್(7ರನ್)ಹಾಗೂ ಮಹಾರಾಜ್(0)ವಿಕೆಟ್ ಗಳನ್ನು ನಾಲ್ಕು ಎಸೆತಗಳಲ್ಲಿ ಉರುಳಿಸಿ ದಕ್ಷಿಣ ಆಫ್ರಿಕಾ ಇನಿಂಗ್ಸ್ನ್ನು 153 ರನ್ ಗೆ ನಿಯಂತ್ರಿಸಿದರು. ರವೀಂದ್ರ ಜಡೇಜ 50 ರನ್ ಗೆ 4 ವಿಕೆಟ್ ಗಳನ್ನು ಪಡೆದರು. ಶುಕ್ರವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು ತನ್ನ ಮೊದಲ ಇನಿಂಗ್ಸ್ ನಲ್ಲಿ 159 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡವು 2ನೇ ದಿನದಾಟದಲ್ಲಿ ಪುಟಿದೆದ್ದಿತ್ತು. ಶನಿವಾರ ಭಾರತ ತಂಡವನ್ನು 189 ರನ್ ಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ ಕೇವಲ 30 ರನ್ ಹಿನ್ನಡೆ ಕಂಡಿತು. ದಕ್ಷಿಣ ಆಫ್ರಿಕಾ ತಂಡವು ಕಾಗಿಸೊ ರಬಾಡ ಅನುಪಸ್ಥಿತಿಯಲ್ಲೂ ಹಾರ್ಮರ್ ಹಾಗೂ ಜಾನ್ಸನ್(ಒಟ್ಟು 5 ವಿಕೆಟ್)ಶಿಸ್ತುಬದ್ದ ಬೌಲಿಂಗ್ ಸಹಾಯದಿಂದ ಮೂರೇ ದಿನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ.
11 ಪಂದ್ಯಗಳಲ್ಲಿ ಅಜೇಯ: ನಾಯಕತ್ವದಿಂದ ಗಮನ ಸೆಳೆದ ಬವುಮಾ
ಹೊಸದಿಲ್ಲಿ, ನ.16: ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಎಲ್ಲ ನಿರೀಕ್ಷೆಯನ್ನು ಮೀರಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 30 ರನ್ ನಿಂದ ಮಣಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 124 ರನ್ ಚೇಸ್ ವೇಳೆ ಎಡವಿದ ಭಾರತವು 35 ಓವರ್ ಗಳಲ್ಲಿ ಕೇವಲ 93 ರನ್ ಗೆ ಆಲೌಟಾಯಿತು. ಸ್ವದೇಶದ ಪಿಚ್ನಲ್ಲಿ ಉತ್ತಮ ಸ್ಪಿನ್ ಬೌಲಿಂಗ್ ಎದುರು ಪರದಾಟ ನಡೆಸುವುದನ್ನು ಮುಂದುವರಿಸಿದೆ. ಭಾರತ ನೆಲದಲ್ಲಿ 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ತಂಡ ಗೆಲುವು ದಾಖಲಿಸಲು ನಾಯಕತ್ವವಹಿಸಿರುವ ಟೆಂಬಾ ಬವುಮಾ ಎಲ್ಲರ ಗಮನ ಸೆಳೆದಿದ್ದಾರೆ. ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕತ್ವ ಹೊಣೆವಹಿಸಿಕೊಂಡ ನಂತರ ಆಡಿರುವ 11 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಆಸ್ಟ್ರೇಲಿಯ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆಲುವಿನ ದಾಖಲೆ ಕೂಡ ಇದರಲ್ಲಿದೆ. ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಗಳನ್ನು ಪಡೆದಿರುವ ಸೈಮರ್ ಹಾರ್ಮರ್ ಅವರು ಭಾರತದ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ರನ್ನು ಮೀರಿ ನಿಂತರು. ಭಾರತ ತಂಡ ಸ್ವದೇಶದಲ್ಲಿ ಹಿಂದಿನ 6 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೇ ಸೋಲು ಕಂಡಿದೆ. ಕಳೆದ ವರ್ಷ ನ್ಯೂಝಿಲ್ಯಾಂಡ್ ವಿರುದ್ಧ ಆಡಿದ್ದ ಮೂರೂ ಪಂದ್ಯಗಳನ್ನು ಸೋತಿತ್ತು.
ದುಬೈನಲ್ಲಿ 2026ರಲ್ಲಿ ಏರ್ ಟ್ಯಾಕ್ಸಿ ಪ್ರಾರಂಭ
ದುಬೈ,ನ.17: 2026ರಲ್ಲಿ ಜಗತ್ತಿನ ಪ್ರಪ್ರಥಮ ಸಮಗ್ರ ನಗರ ವೈಮಾನಿಕ ಟ್ಯಾಕ್ಸಿ ಜಾಲವನ್ನು ಪ್ರಾರಂಭಿಸುವ ತನ್ನ ಯೋಜನೆಯನ್ನು ದುಬೈ ರವಿವಾರ ದೃಢೀಕರಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ನೇತೃತ್ವವನ್ನು ದುಬೈನ ರಸ್ತೆಗಳು ಆ ಹಾಗೂ ಸಾರಿಗೆ ಪ್ರಾಧಿಕಾರ (ಆರ್ಟಿಎ) ವಹಿಸಿಕೊಂಡಿದೆ. ಅಮೆರಿಕ ಮೂಲದ ಜೊಬಿ ಏವಿಯೇಶನ್ ಕಂಪೆನಿಯ ಪಾಲುದಾರಿಕೆಯೊಂದಿಗೆ ಆರ್ಟಿಎ, ಯಶಸ್ವಿಯಾಗಿ ಯುಎಇನ ಚೊಚ್ಚಲ ಮಾನವಸಹಿತ ಇಲೆಕ್ಟ್ರಿಕ್ ವರ್ಟಿಕಲ್ ಟೇಕ್ಆಫ್ ಆ್ಯಂಡ್ ಲ್ಯಾಂಡಿಂಗ್ (ಇವಿಟೊಓಎಲ್)ನ ಎರಡು ವಿಭಿನ್ನ ಕೇಂದ್ರಗಳ ನಡುವೆ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಾರ್ಗಮ್ನಲ್ಲಿರುವ ದುಬೈನ ಜೆಟ್ಮ್ಯಾನ್ ಹೆಲಿಪ್ಯಾಡ್ನಿಂದ ಟೇಕ್ಆಫ್ ಆದ ಏರ್ ಟಾಕ್ಸಿ, 17 ನಿಮಿಷಗಳ ಆನಂತರ ಅಲ್ ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಎಡಬ್ಲ್ಯುಸಿ)ದಲ್ಲಿ ಇಳಿಯಿತು. 2025ರ ದುಬೈ ಏರ್ ಶೋ ಸಂದರ್ಭದಲ್ಲಿ ಈ ಪ್ರಾಯೋಗಿಕ ಹಾರಾಟವನ್ನು ನಡೆಸಲಾಗಿದೆ. ನಿವಾಸಿಗಳು ಹಾಗೂ ಸಂದರ್ಶಕರು ಏರ್ ಟ್ಯಾಕ್ಸಿಗಳನ್ನು ಹತ್ತುವುದಕ್ಕೆ ನಾಲ್ಕು ಆದ್ಯತೆಯ ಸ್ಥಳಗಳನ್ನು ದುಬೈ ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರವು ಪ್ರಕಟಿಸಿದೆ. ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಡೌನ್ಟೌನ್ ದುಬೈ, ದುಬೈ ಮರೀನಾ ಹಾಗೂ ಪಾಮ್ ಜುಮೈರಾಗಳಲ್ಲಿ ಏರ್ ಟ್ಯಾಕ್ಸಿ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಪ್ರಮುಖ ಸಾರಿಗೆ ಕೇಂದ್ರಗಳನ್ನು, ಪ್ರವಾಸಿ ಸ್ಥಳಗಳನ್ನು ಹಾಗೂ ಜನದಟ್ಟಣೆಯ ವಸತಿ ಪ್ರದೇಶಗಳನ್ನು ಸಂಪರ್ಕಿಸಲು ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ದುಬೈ ಆರ್ ಟಿ ಒ ಮೂಲಗಳು ತಿಳಿಸಿವೆ.
ಬಿʼಹಾರ್ʼ | ರೋಹಿಣಿಯನ್ನು ಅನುಸರಿಸಿದ ಸೋದರಿಯರು
ಪಾಟ್ನಾ: ರೋಹಿಣಿ ಆಚಾರ್ಯ ಅವರ ಬೆನ್ನಿಗೇ ಅವರ ಸೋದರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರೂ ರವಿವಾರ ಬೆಳಿಗ್ಗೆ ತಮ್ಮ ಮಕ್ಕಳೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಪಾಟ್ನಾ ನಿವಾಸವನ್ನು ತೊರೆದು ದಿಲ್ಲಿಗೆ ತೆರಳಿದ್ದಾರೆ. ಇದು ಬಿಹಾರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದಲ್ಲಿ ಕಚ್ಚಾಟ ಇನ್ನಷ್ಟು ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸಿದೆ. ಈಗ ಲಾಲು,ಪತ್ನಿ ರಾಬ್ಡಿದೇವಿ ಮತ್ತು ಇನ್ನೋರ್ವ ಪುತ್ರಿ ಮಿಸಾ ಭಾರ್ತಿ ಅವರು ಮಾತ್ರ ಒಂದು ಕಾಲದಲ್ಲಿ ಆರ್ಜೆಡಿ ನಾಯಕರು ಮತ್ತು ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಕಾಸರಗೋಡು | ರಸ್ತೆ ಅಪಘಾತ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
ಕಾಸರಗೋಡು: ಕಾರು ಮತ್ತು ಥಾರ್ ಜೀಪು ನಡುವೆ ಉಂಟಾದ ಅಪಘಾತದಲ್ಲಿ ಮಹಿಳೆಯೋರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟೀಯ ಹೆದ್ದಾರಿಯ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಮೃತಪಟ್ಟ ಮಹಿಳೆ ವರ್ಕಾಡಿ ಮಚ್ಚಂ ಪಾಡಿ ಕೋಡಿ ನಿವಾಸಿ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಮೃತಪಟ್ಟ ಮಹಿಳೆ ಆಲ್ಟೊ ಕಾರಿನಲ್ಲಿದ್ದವರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮಂಗಳೂರು ನಗರ ಪೊಲೀಸರ ಕಾರ್ಯಚರಣೆ : ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳ ಸೆರೆ
ವಂಚನೆಗೆ 300ಕ್ಕೂ ಅಧಿಕ ಬ್ಯಾಂಕ್ ಖಾತೆ, 250ಕ್ಕೂ ಅಧಿಕ ಸಿಮ್ಗಳ ಬಳಕೆ ಆರೋಪ
ಬಿಹಾರ | ನ. 19 ಅಥವಾ 20ಕ್ಕೆ ನಿತೀಶ್ 10ನೇ ಬಾರಿ ಸಿಎಂ ಪ್ರಮಾಣವಚನ ಸಾಧ್ಯತೆ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಎಲ್ಲ ವದಂತಿಗಳಿಗೂ ತೆರೆ ಬಿದ್ದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್ಡಿಎ ಮೈತ್ರಿಕೂಟದ ಪ್ರಚಂಡ ಗೆಲುವಿನ ನಂತರ, ನಿತೀಶ್ ಕುಮಾರ್ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಲಭ್ಯತೆಯನ್ನು ಆಧರಿಸಿ, ಬುಧವಾರ ಅಥವಾ ಗುರುವಾರದಂದು ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತಾರೂಢ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಎನ್ಡಿಎ ಉನ್ನತ ಮೂಲಗಳು ಮಾಹಿತಿ ನೀಡಿವೆ. “ನಿತೀಶ್ ಕುಮಾರ್ ಹಾಗೂ ಅವರ ಸಂಪುಟದ ಸಚಿವರ ಪ್ರಮಾಣ ವಚನ ಸಮಾರಂಭವು ರಾಜಭವನದಲ್ಲಿ ನಡೆಯುವ ಬದಲು, ಐತಿಹಾಸಿಕ ಗಾಂದಿ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕಾರ ಹಂಚಿಕೆಯ ಕುರಿತು ದಿಲ್ಲಿಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಮಾತುಕತೆ ಪ್ರಗತಿಯಲ್ಲಿದೆ” ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಎನ್ಡಿಎ ಮೈತ್ರಿಕೂಟದ ಎಲ್ಲ ಐದು ಮಿತ್ರ ಪಕ್ಷಗಳಾದ ಜೆಡಿಯು, ಬಿಜೆಪಿ, LJP (R) ಎಚ್ಎಎಂ ಹಾಗೂ RLMನ ಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಉಡುಪಿ | 431 ಮಂದಿಗೆ 25ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ನ.16: ಬನ್ನಂಜೆ ಬಿಲ್ಲವರ ಸೇವಾ ಸಂಘ ಹಾಗೂ ಶ್ರೀನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 431 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೆಚ್ಚದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಶ್ರೀನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ನ ಮೂಲಕ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ವಿತರಿಸುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕೆಲಸ ಹೆಚ್ಚೆಚ್ಚು ನಡೆಯಬೇಕೆಂದರು. ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ, ಅಧ್ಯಾಪಕರ ಮೇಲೆ ನಂಬಿಕೆ ಇಟ್ಟು ಕಾರ್ಯಪ್ರವೃತ್ತರಾಗಬೇಕು. ಮೂಢನಂಬಿಕೆಯನ್ನು ಇಟ್ಟುಕೊಳ್ಳದೆ ಸಮಾಜಮುಖಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಬನ್ನಂಜೆ ಬಿಲ್ಲವರ ಸೇವಾ ಸಂಘ ಉಡುಪಿ ಅಧ್ಯಕ್ಷ ಶಶಿಧರ ಎಂ.ಅಮೀನ್ ವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿ ಶ್ರೇಯಸ್ ಜಿ. ಕೋಟ್ಯಾನ್ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರ್ಷ ಯು.ಪೂಜಾರಿ, ಸಾಯಿ ವೈಷ್ಣವ್ ದಯಾಕರ್ ಹಾಗೂ ಪ್ರಣತಿ ಜತ್ತನ್ನ ಅವರನ್ನು ಸನ್ಮಾನಿಸಲಾಯಿತು. ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ರಾಜ್ಯೋತ್ಸವ ಸನ್ಮಾನ ಪುರಸ್ಕೃತ ವಿಠಲ ಪೂಜಾರಿ, ನಟ, ನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ ಅವರನ್ನು ಗೌರವಿಸಲಾಯಿತು. ಹರ್ಷ ಸಂಸ್ಥೆಯ ಸೂರ್ಯಪ್ರಕಾಶ್, ಉದ್ಯಮಿ ಪ್ರಭಾಕರ್ ಪೂಜಾರಿ, ಪ್ರಮುಖರಾದ ಸದಾನಂದ ಪೂಜಾರಿ ಬನ್ನಂಜೆ, ಜಿತೇಶ್ ಕುಮಾರ್, ಗೌರವ ಕಾರ್ಯದರ್ಶಿ ದಯಾನಂದ ಪೂಜಾರಿ ಬನ್ನಂಜೆ, ಜಿ.ಸದಾನಂದ ಅಮೀನ್, ಅಶೋಕ ಪೂಜಾರಿ, ಸುಧಾಕರ ಪೂಜಾರಿ, ಉದಯ ಪೂಜಾರಿ, ಪ್ರವೀಣ್ ಆರ್. ಸುವರ್ಣ, ವಿಶ್ವನಾಥ ಕಲ್ಮಾಡಿ, ಗಣೇಶ್ ಕೋಟ್ಯಾನ್, ಸತೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಸಂದೀಪ್ ಸನಿಲ್, ಸುಕನ್ಯಾ, ಯು. ದೀಪಕ್ ಕಿರಣ್, ಕೃಷ್ಣಪ್ಪ ಅಂಚನ್, ಎಸ್.ಟಿ. ಕುಂದರ್, ಜಯಕರ್ ಪೂಜಾರಿ ಉಪಸ್ಥಿತರಿದ್ದರು. ಸಂಘದ ಜತೆಕಾರ್ಯದರ್ಶಿ ರಾಘವೇಂದ್ರ ಅಮೀನ್ ವಂದಿಸಿದರು. ತೇಜೇಶ್ ಜೆ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಕೊಳಕು ಕಿಡ್ನಿ ಎಂದು ನಿಂದಿಸಿದರು, ಹೊಡೆಯಲು ಚಪ್ಪಲಿಯೆತ್ತಿದ್ದರು: ಸಂಬಂಧ ಕಡಿದುಕೊಂಡ ರೋಹಿಣಿ ಆಚಾರ್ಯ ಹೊಸ ಆರೋಪ
ಲಾಲು ಪ್ರಸಾದ್ ಕುಟುಂಬದಲ್ಲಿ ಬಿರುಕು; ನೋವು ಹಂಚಿಕೊಂಡ ರೋಹಿಣಿ!
ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ ಸಾಮಾನ್ಯ ಪೊಲೀಸರೂ ಹೀರೋಗಳು: ಎಸ್ಪಿ ಹರಿರಾಂ ಶಂಕರ್
ಖಾಕಿ ಕಾರ್ಟೂನ್ ಹಬ್ಬ
ಬಿಹಾರದ ಶೇ.42ರಷ್ಟು ನೂತನ ಚುನಾಯಿತ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ: ವರದಿ
ಪಾಟ್ನಾ,ನ.16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತ ಎಲ್ಲ 243 ಅಭ್ಯರ್ಥಿಗಳ ಚುನಾವಣಾ ಅಫಿಡವಿಟ್ ಗಳನ್ನು ಪರಿಶೀಲಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಬಿಹಾರ ಎಲೆಕ್ಷನ್ ವಾಚ್ (ಬಿಇಡಬ್ಲ್ಯು) ಶೇ.42ರಷ್ಟು ನೂತನವಾಗಿ ಚುನಾಯಿತರಾಗಿರುವ ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿವೆ. ಆದಾಗ್ಯೂ 2020ರ ಚುನಾವಣೆಗೆ ಹೋಲಿಸಿದರೆ ಇಂತಹವರ ಸಂಖ್ಯೆ ಇಳಿಕೆಯಾಗಿದೆ. ಆಗ ಶೇ.51ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು ಎಂದು ತಿಳಿಸಿವೆ. ‘2025ರ ಚುನಾವಣೆಗಳಲ್ಲಿ ಆಯ್ಕೆಯಾಗಿರುವ ಒಟ್ಟು ಶಾಸಕರ ಪೈಕಿ 102 (ಶೇ.42) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ. ಕೊಲೆ,ಕೊಲೆ ಯತ್ನ,ಅಪಹರಣ,ಮಹಿಳೆಯರ ವಿರುದ್ಧ ದೌರ್ಜನ್ಯಗಳು,ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರ ಕ್ರಿಮಿನಲ್ ಅಪರಾಧಗಳು ಎಂದು ನಾವು ಪರಿಗಣಿಸಿದ್ದೇವೆ ಹಾಗೂ ಪ್ರತಿಭಟನೆ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯಂತಹ ಅಪರಾಧಗಳನ್ನು ಈ ವರ್ಗದಿಂದ ಹೊರಗಿರಿಸಿದ್ದೇವೆ’ ಎಂದು ಎಡಿಆರ್ ಬಿಹಾರ ರಾಜ್ಯ ಸಂಯೋಜಕ ರಾಜೀವ್ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ರಾಜಕೀಯದ ಅಪರಾಧೀಕರಣದ ಗ್ರಾಫ್ ಇಳಿಯುತ್ತಿದ್ದರೂ ಅದರಿಂದ ಸಂತೋಷ ಪಟ್ಟುಕೊಳ್ಳುವಂಥದ್ದೇನೂ ಇಲ್ಲ, ಏಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಈಗಲೂ ಇಂತಹ ಜನರಿಗೆ ಟಿಕೆಟ್ ಗಳನ್ನು ನೀಡುತ್ತಿವೆ ಮತ್ತು ತನ್ಮೂಲಕ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವ ಅವಕಾಶದಿಂದ ಮತದಾರರನ್ನು ವಂಚಿಸುತ್ತಿವೆ ಎಂದು ಹೇಳಿದ ಅವರು, ‘ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ಗಳನ್ನು ನೀಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ಆಗ ಮಾತ್ರ ರಾಜಕೀಯವು ಅಪರಾಧೀಕರಣದಿಂದ ಮುಕ್ತಗೊಳ್ಳುತ್ತದೆ ಮತ್ತು ಅದು ನಮ್ಮ ಗುರಿಗಳಲ್ಲೊಂದಾಗಿದೆ ’ ಎಂದರು. ದತ್ತಾಂಶಗಳ ಪ್ರಕಾರ ಆರು ಶಾಸಕರು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 19 ಶಾಸಕರು ಕೊಲೆ ಯತ್ನ ಮತ್ತು ಒಂಭತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ದೊಡ್ಡ ಪಕ್ಷಗಳ ಪೈಕಿ ಹೊಸದಾಗಿ ಆಯ್ಕೆಯಾಗಿರುವ ಆರ್ಜೆಡಿಯ 25 ಶಾಸಕರ ಪೈಕಿ 14 (ಶೇ.56),ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ರ ಎಲ್ಜೆಪಿ(ಆರ್ವಿ)ಯ 19 ಶಾಸಕರ ಪೈಕಿ 10 (ಶೇ.53),ಕಾಂಗ್ರೆಸ್ನ ಆರು ಶಾಸಕರ ಪೈಕಿ ಮೂವರು(ಶೇ.50),ಬಿಜೆಪಿಯ 89 ಶಾಸಕರ ಪೈಕಿ 43 (ಶೇ.48) ಮತ್ತು ಜೆಡಿಯುದ 85 ಶಾಸಕರ ಪೈಕಿ 23 (ಶೇ.27) ಜನರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ವಿಜೇತ ಅಭ್ಯರ್ಥಿಗಳ ಪೈಕಿ ಶೇ.90ರಷ್ಟು ಜನರು ಕೋಟ್ಯಧಿಪತಿಗಳಾಗಿದ್ದು,ಸರಾಸರಿ 9.02 ಕೋ.ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಕೋಟ್ಯಧಿಪತಿಗಳ ಸಮಸ್ಯೆ ಕುರಿತು ಗಮನ ಹರಿಸಬೇಕು. ಅದು ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಗೆಲ್ಲುವ ಅವಕಾಶಗಳನ್ನು ನಿರಾಕರಿಸುತ್ತದೆ,ಅವರಿಗೂ ಸಮಾನ ಸ್ಪರ್ಧೆಯ ಅವಕಾಶವಿರಬೇಕು ಎಂದು ರಾಜೀವ್ ಕುಮಾರ್ ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯು ಸುಧಾರಣೆಯತ್ತ ಸಾಗುತ್ತಿದೆ. ಸುಮಾರು ಶೇ.60 ರಷ್ಟು ಚುನಾಯಿತ ಅಭ್ಯರ್ಥಿಗಳು ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಸುಮಾರು ಶೇ.35ರಷ್ಟು ಅಭ್ಯರ್ಥಿಗಳು ಐದರಿಂದ 12ನೇ ತರಗತಿವರೆಗೆ ಓದಿದ್ದಾರೆ. ಒಟ್ಟು ಏಳು ಅಭ್ಯರ್ಥಿಗಳು ತಾವು ಕೇವಲ ‘ಅಕ್ಷರಸ್ಥರು’ ಎಂದು ಘೋಷಿಸಿಕೊಂಡಿದ್ದಾರೆ.
ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನಟಿ ಕೀರ್ತಿ ಸುರೇಶ್ ನೇಮಕ
ಹೊಸದಿಲ್ಲಿ, ನ. 16: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾದ ಸೆಲೆಬ್ರೆಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ರವಿವಾರ ತಿಳಿಸಿದೆ. ತಮಿಳು, ತೆಲುಗು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಮೆಚ್ಚುಗೆ ಪಡೆದ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ಕೀರ್ತಿ ಸುರೇಶ್ ಅವರು ಈಗ ದುರ್ಬಲ ಮಕ್ಕಳಿಗಾಗಿ ಯುನಿಸೆಫ್ ಮಾಡುತ್ತಿರುವ ಕೆಲಸವನ್ನು ಬೆಂಬಲಿಸುವ ವ್ಯಕ್ತಿಗಳ ವಿಶೇಷ ಗುಂಪಿನ ಭಾಗವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಅವರು ಈಗ ಮಾನಸಿಕ ಆರೋಗ್ಯ, ಶಿಕ್ಷಣ ಹಾಗೂ ಲಿಂಗ ಸಮಾನತೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೀರ್ತಿ ಸುರೇಶ್, ಮಕ್ಕಳು ನಮ್ಮ ಅತಿ ದೊಡ್ಡ ಜವಾಬ್ದಾರಿ ಹಾಗೂ ಭರವಸೆ. ಪೋಷಣೆ, ಪ್ರೀತಿಯ ಆರೈಕೆಯು ಮಕ್ಕಳು ಸಂತೋಷ, ಆರೋಗ್ಯಕರ ಮತ್ತು ತೃಪ್ತಿಕರ ಜೀವನ ನಡೆಸಲು ಅಗತ್ಯವಾಗಿರುವ ಸಾಮಾಜಿಕ ಹಾಗೂ ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಡಿಪಾಯ ನಿರ್ಮಿಸುತ್ತದೆ. ಇದು ನನಗೆ ಸಿಕ್ಕ ಒಂದು ದೊಡ್ಡ ಗೌರವವಾಗಿದೆ ಎಂದಿದ್ದಾರೆ.
ವೆಲೆನ್ಸಿಯಾ ಸಮುದಾಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಮಕ್ಕಳು, ಓದುಗರಿಗೆ ಸ್ಪರ್ಧೆ
ಮಂಗಳೂರು, ನ.16: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಅಂಗವಾಗಿ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯ, ವೆಲೆನ್ಸಿಯಾದಲ್ಲಿ ಮಕ್ಕಳಿಗಾಗಿ ಹಾಗೂ ಓದುಗರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ನಡೆದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು. ದ.ಕ. ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಗಾಯತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳು ತೋರಿಸಿದ ಉತ್ಸಾಹ ಮತ್ತು ಸೃಜನಶೀಲತೆ ನಮಗೆ ಅಪಾರ ಸಂತೋಷ ತಂದಿದೆ. ಪುಸ್ತಕಗಳು ಕೇವಲ ಮನರಂಜನೆಯಷ್ಟೇ ಅಲ್ಲ, ಜ್ಞಾನಕ್ಕೆ ದಾರಿ ತೆರೆದಿಡುವ ಅಮೂಲ್ಯ ಸಂಗಾತಿಗಳಾಗಿವೆ’ ಎಂದರು. ತೀರ್ಪುಗಾರರಾದ ಶಿಕ್ಷಕ ಉಮೇಶ್ ಕಾರಂತ, ಶೇಷಗಿರಿ ಉಪಸ್ಥಿತರಿದ್ದರು. ಓದುಗರ ಆಶುಭಾಷಣ ಸ್ಪರ್ಧೆಯಲ್ಲಿ ಒಲಿವರ್ ಡಿ ಸೋಜ ಪ್ರಥಮ, ಶೇಷಗಿರಿ ದ್ವಿತೀಯ ಹಾಗೂ ಗೋಪಾಲಕೃಷ್ಣ ಭಟ್ ತೃತೀಯ ಸ್ಥಾನ ಪಡೆದರು. ಬಾಲವಾಡಿ ಮಕ್ಕಳ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಆರ್ಯನ್, ಆರಾಧ್ಯ ಮತ್ತು ಮಲ್ಲಿಕಾರ್ಜುನ ವಿಜೇತರಾದರು. 1 ಮತ್ತು 2ನೇ ತರಗತಿಯ ಮಕ್ಕಳಿಗೆ ನಡೆದ ಬಕೆಟ್ ನಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ಸಂಜನಾ, ನಿಶಾನ್ ಹಾಗೂ ದ್ರಾಕ್ಷಾಯಿಣಿ ಅವರು ಬಹುಮಾನ ಪಡೆದರು. 3 ಮತ್ತು 4ನೇ ತರಗತಿಯ ಕನ್ನಡ ಓದು ಸ್ಪರ್ಧೆಯಲ್ಲಿ ವಿಕ್ರಂ, ಹನುಮಾನ್ ಮತ್ತು ಯಮನಾರಿ ವಿಜೇತರಾದರೆ, 5ನೇ ತರಗತಿಯ ಜ್ಞಾಪಕಶಕ್ತಿ ಸ್ಪರ್ಧೆಯಲ್ಲಿ ಸಮೀರ್, ಗ್ರೀಷ್ಮ ಮತ್ತು ಸಂಜನಾ ಬಹುಮಾನ ಗಳಿಸಿದರು. 6 ಮತ್ತು 7ನೇ ತರಗತಿಯ ಆಶುಭಾಷಣ ಸ್ಪರ್ಧೆಯಲ್ಲಿ ಭೂಮಿಕಾ, ಶುಭನ್ ಮತ್ತು ಲಾಸ್ಯ ಶೆಟ್ಟಿಯವರು ಕ್ರಮವಾಗಿ ಮೊದಲ ಮೂರೂ ಸ್ಥಾನ ಪಡೆದರು. ಮಾಲತಿ ಬಿ. ಶೆಟ್ಟಿ ವಂದಿಸಿದರು. ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯ ರಿನ್ಸಿ ಪಿ. ವಿ. ಕಾರ್ಯಕ್ರಮ ನಿರ್ವಹಿಸಿದರು.
ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಪಶ್ಚಿಮ ಬಂಗಾಳದ ಕಿವುಡ, ಮೂಕ ಮೀನುಗಾರ ಮೃತ್ಯು; ತನಿಖೆಗ ಕುಟುಂಬ ಆಗ್ರಹ
ಕೋಲ್ಕತಾ, ನ. 16: ಪಶ್ಚಿಮಬಂಗಾಳದ ಕಿವುಡ ಹಾಗೂ ಮೂಕ ಮೀನುಗಾರರೊಬ್ಬರು ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಪಶ್ಚಿಮ ಗಂಗಾಧರಪುರ ಗ್ರಾಮದ ನಿವಾಸಿ ಬಬ್ಲು ದಾಸ್ ಎಂದು ಗುರುತಿಸಲಾಗಿದೆ. ಬಬ್ಲು ದಾಸ್ ನಮ್ಮ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ. ಆತ ಕಿವುಡ ಹಾಗೂ ಮೂಕನಾಗಿದ್ದರೂ ಕಷ್ಟಪಟ್ಟು ದುಡಿಯುತ್ತಿದ್ದ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ‘‘ಇದು ಸಹಜ ಸಾವಲ್ಲ. ಕಾರಾಗೃಹದಲ್ಲಿ ಆತನಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈಯಲಾಗಿದೆ ಎಂಬುದು ನಮ್ಮ ಸಂದೇಹ. ಇದು ಯೋಜಿತ ಕೊಲೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಆಗ್ರಹಿಸುತ್ತೇವೆ. ಅವರಿಗೆ ಯಾವುದೇ ರೀತಿಯ ಸಣ್ಣ ಕಾಯಿಲೇ ಇಲ್ಲದೆ ಇದ್ದರೂ ಸಹಜವಾಗಿ ಸಾಯಲು ಹೇಗೆ ಸಾಧ್ಯ?’’ ಎಂದು ಬಬ್ಲು ದಾಸ್ ಅವರ ಕಿರಿಯ ಸಹೋದರ ಬಸುದೇಬ್ ಪ್ರಶ್ನಿಸಿದ್ದಾರೆ. ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕಾಕ್ ದ್ವೀಪ್ ಕರಾವಳಿಯ ಬಬ್ಲು ದಾಸ್ ಹಾಗೂ ಇತರ 33 ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ನಾಲ್ಕು ತಿಂಗಳ ಹಿಂದೆ ಬಂಧಿಸಿತ್ತು. ಈ ಮೀನುಗಾರರು ಶ್ರೀಲಂಕಾದ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ್ದಾರೆ ಎಂದು ಅದು ಆರೋಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೀನುಗಾರರು ‘ಎಫ್ಬಿ ಮಂಗಳಚಂಡಿ’ ದೋಣಿಯಲ್ಲಿ ಜುಲೈಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇವರಲ್ಲಿ ಬಬ್ಲು ಸೇರಿದಂತೆ ಕೆಲವರು ಪ್ರಮಾದವಶಾತ್ ಜಲ ಗಡಿಯನ್ನು ದಾಟಿದ್ದರು ಎಂದು ಅವರು ಹೇಳಿದ್ದಾರೆ. ಈ ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ಬಂಧಿಸಿತ್ತು. ಅನಂತರ ಅವರು ಬಾಂಗ್ಲಾದೇಶದ ಕಾರಾಗೃಹದಲ್ಲಿ ಇರಿಸಿತು ಎಂದು ಬಬ್ಲುವಿನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್: ಮುಹಮ್ಮದ್ಗೆ 2 ಚಿನ್ನ, 1 ಕಂಚು
ಮಂಗಳೂರು, ನ.16: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ ಆಶ್ರಯದಲ್ಲಿ ಇತ್ತೀಚೆಗೆ ನಡೆದ 26ನೇ ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ಪಾಂಡೇಶ್ವರ ನಿವಾಸಿ ಪಿ. ಎ. ಮುಹಮ್ಮದ್ ಕಾಟಿಪಳ್ಳ ಅವರು 2 ಬೆಳ್ಳಿ, 1 ಕಂಚು ಪದಕ ಪಡೆದಿದ್ದಾರೆ. ಮುಹಮ್ಮದ್ ಕಾಟಿಪಳ್ಳ ಅವರು 100 ಮೀ ಫ್ರೀ ಸ್ಟೈಲ್, 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಎರಡು ಬೆಳ್ಳಿಯ ಪದಕವನ್ನು , 50 ಮೀ ಫ್ರೀ ಸ್ಟೈಲ್ ವೇಗದ ಸ್ವಿಮ್ಮಿಂಗ್ನಲ್ಲಿ ಕಂಚಿನ ಪದಕವನ್ನು ಜಯಿಸಿದರು. ಇದರೊಂದಿಗೆ ಅವರು 2025 ನ. 21ರಿಂದ 23ರ ತನಕ ಹೈದರಾಬಾದ್ ನ ಗಚಿಬೌಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.

24 C