ಭಾರತದ ಗಡಿ ಪ್ರದೇಶವನ್ನು ಒಳಗೊಂಡ ನಕ್ಷೆಯೊಂದಿಗೆ ಹೊಸ ಕರೆನ್ಸಿ ಬಿಡುಗಡೆ ಮಾಡಿದ ನೇಪಾಳ!
ಕಠ್ಮಂಡು : ನೇಪಾಳದ ಕೇಂದ್ರ ಬ್ಯಾಂಕ್ ಗುರುವಾರ ಹೊಸ 100 ರೂಪಾಯಿ ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿದೆ. ಈ ನೋಟಿನಲ್ಲಿ ನೇಪಾಳದ ಹೊಸ ನಕ್ಷೆ ಇದೆ. ಈ ನಕ್ಷೆಯಲ್ಲಿ ಭಾರತದ ಗಡಿ ಭೂಪ್ರದೇಶವಾದ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ನೇಪಾಳದ ಭಾಗವೆಂದು ತೋರಿಸಲಾಗಿದೆ. ಹೊಸ ನೋಟಿನ ಮೇಲೆ ನೇಪಾಳ ರಾಷ್ಟ್ರ ಬ್ಯಾಂಕಿನ ಮಾಜಿ ಗವರ್ನರ್ ಮಹಾ ಪ್ರಸಾದ್ ಅಧಿಕಾರಿ ಅವರ ಸಹಿ ಇದೆ. ಅವರ ಅಧಿಕಾರವಧಿ ಎಪ್ರಿಲ್ನಲ್ಲಿ ಕೊನೆಗೊಂಡಿತ್ತು. ನೋಟಿನ ಮೇಲಿ ದಿನಾಂಕ ನೇಪಾಳಿ ಕ್ಯಾಲೆಂಡರ್ 2081 ಎಂದು ಮುದ್ರಿತವಾಗಿದೆ. ಅಂದರೆ 2024ಕ್ಕೆ ಸರಿಸಮಾನವಾಗಿದೆ. ನೇಪಾಳ ಸರಕಾರದ ನಿರ್ಧಾರದಂತೆ ನಕ್ಷೆಯನ್ನು ಬದಲಾಯಿಸಲಾಗಿದೆ ಎಂದು ನೇಪಾಳ ಕೇಂದ್ರ ಬ್ಯಾಂಕ್ ವಕ್ತಾರರು ಹೇಳಿದ್ದಾರೆ. ಆದರೆ 10, 500 ಮತ್ತು 1000 ರೂಪಾಯಿ ನೋಟುಗಳಲ್ಲಿ ಈಗಲೂ ನೇಪಾಳದ ನಕ್ಷೆ ಇಲ್ಲ. ನೇಪಾಳ-ಭಾರತ ಗಡಿ ವಿವಾದ 2019ರಲ್ಲಿ ಆರಂಭಗೊಂಡಿತ್ತು. ಹೊಸ ನಕ್ಷೆಯಲ್ಲಿ ಕಾಲಾಪಾನಿ ಮತ್ತು ಲಿಪುಲೇಖ್ ಅನ್ನು ಭಾರತದ ಭಾಗವೆಂದು ತೋರಿಸಲಾಗಿತ್ತು. ಇದಕ್ಕೆ ನೇಪಾಳ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನಾವು ನೇಪಾಳದೊಂದಿಗಿನ ಗಡಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ನಕ್ಷೆ ನಮ್ಮ ಭೂಭಾಗವನ್ನು ಸರಿಯಾಗಿ ತೋರಿಸುತ್ತದೆ ಎಂದು ಭಾರತ ಹೇಳಿಕೊಂಡಿತ್ತು. 2020ರ ಮೇ ತಿಂಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಪುಲೇಖ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊಸ ರಸ್ತೆ ಉದ್ಘಾಟಿಸಿದರು. ಇದರಿಂದ ವಿವಾದ ಇನ್ನಷ್ಟು ಉಲ್ಬಣಗೊಂಡಿತ್ತು. ಈ ರಸ್ತೆಯು ಎರಡು ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದೆ. 1816ರಲ್ಲಿ ಬ್ರಿಟಿಷರೊಂದಿಗೆ ಮಾಡಿಕೊಂಡ ಸುಗೌಲಿ ಒಪ್ಪಂದದ ಆಧಾರದ ಮೇಲೆ ಲಿಪುಲೇಖ್ ತನ್ನದು ಎಂದು ನೇಪಾಳ ಹೇಳಿಕೊಂಡಿತ್ತು.
PM Modi In Udupi : ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ 5 ಅಂಶಗಳ ಮನವಿ ಪತ್ರ ಸಲ್ಲಿಸಿದ ದಿನೇಶ್ ಗುಂಡೂರಾವ್
Modi In Udupi : ಶ್ರೀಕೃಷ್ಣಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ ಮೋದಿ, ಅಲ್ಲಿಂದ, ಆದಿ ಉಡುಪಿ ಹೆಲಿಪ್ಯಾಡಿಗೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದಾರೆ. ಮಂಗಳೂರಿನಲ್ಲಿ, ಮೋದಿಯನ್ನು ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಸರ್ಕಾರ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಮಂಗಳೂರು | ಸಿಎಂ ಸಿದ್ದರಾಮಯ್ಯರ ಪತ್ರ ಪ್ರಧಾನಿಗೆ ನೀಡಿದ ಸಚಿವ ದಿನೇಶ್ ಗುಂಡೂರಾವ್
ರೈತರ ಸಂಕಷ್ಟಗಳ ಮನವರಿಕೆ; ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ವ್ಯವಸ್ಥೆ ಕಲ್ಪಿಸಲು ಮನವಿ
ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ; ರೋಡ್ ಶೋ ಮುಕ್ತಾಯ
ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಿದ್ದಾರೆ. ಪುತ್ತಿಗೆ ಮಠದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ. ಉಡುಪಿಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ, ಅಭಿಮಾನಿಗಳಿಗೆ ಕೈ ಬೀಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಜನರು ಅವರನ್ನು ಸ್ವಾಗತಿಸಿದ್ದಾರೆ. ದ್ವೈತ ಪೀಠಗಳಿಗೂ ಭೇಟಿ ನೀಡಿರುವುದು ವಿಶೇಷವಾಗಿದೆ.
ಸಂಪಾದಕೀಯ | ಹೆಚ್ಚುತ್ತಿರುವ ರಸ್ತೆ ಅಪಘಾತಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಾಯಕತ್ವ ಗೊಂದಲದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಸತ್ಯ ಒಪ್ಪಿಕೊಂಡ ಕೆ.ಎಚ್ ಮುನಿಯಪ್ಪ
ನಾಯಕತ್ವದ ಗೊಂದಲದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಈ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸಲು ಹೈಕಮಾಂಡ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕರೆಸಿ ಮಾತನಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿಲ್ಲ, ಬದಲಿಗೆ ಗೊಂದಲಗಳೇ ಜನರ ಗಮನ ಸೆಳೆಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಇದೇ ವೇಳೆ ಮುನಿಯಪ್ಪ ಅವರನ್ನು ಭೇಟಿಯಾಗಿ ನಂತರ ಮಾತನಾಡಿದ ಬಿ.ಕೆ ಹರಿಪ್ರಸಾದ್ ಸರ್ಕಾರದಲ್ಲಿನ ಗೊಂದಲವನ್ನು ಹೈಕಮಾಂಡ್ ಶೀಘ್ರವೇ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಉಡುಪಿಗೆ ಪ್ರಧಾನಿ ಮೋದಿ ಆಗಮನ, ನಮೋ ನೋಡಲು ಬಂದ ಪಂಡರಾಪುರ ವೀರ ವಿಠಲ, ಸಂತ ತುಕುರಾಮ!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಮೋದಿ ಅವರನ್ನು ನೋಡಲು ದೂರದ ಊರುಗಳಿಂದಲೂ ಜನರು ಆಗಮಿಸಿದ್ದು, ವಿಶೇಷ ಆಕರ್ಷಣೆಯಾಗಿತ್ತು.
WPL 2026- ಕುತೂಹಲ ಕೆರಳಿಸಿದ್ದ ಹರಾಜು ಪ್ರಕ್ರಿಯೆ ಕಂಪ್ಲೀಟ್; ಇಲ್ಲಿದೆ RCB ಸೇರಿ ಐದೂ ತಂಡಗಳ ಆಟಗಾರ್ತಿಯರ ಲಿಸ್ಟ್
Womens Premier League 2026 Auction Final List- ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದ ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜು ಪ್ರಕ್ರಿಯೆ ಇದೀಗ ಮುಕ್ತಾಯಗೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಆಟಗಾರ್ತಿಯನ್ನು ತಮ್ಮ ತಂಡಕ್ಕೆ ಸೆಳೆಯಲು ಪೈಪೋಟಿ ನಡೆಸಿದ್ದ ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ರಚಿಸಿಕೊಂಡಿವೆ. ಭಾರತದ ಆಲ್-ರೌಂಡರ್ ದೀಪ್ತಿ ಶರ್ಮಾ 3.2 ಕೋಟಿಗೆ ಯುಪಿ ವಾರಿಯರ್ಸ್ ತಂಡ ಸೇರಿಕೊಳ್ಳುವ ಮೂಲಕ ಅತಿ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಇಲ್ಲಿದೆ ಎಲ್ಲಾ ತಂಡದ ಸಂಪೂರ್ಣ ಪಟ್ಟಿ.
ಷೇರು ಮಾರುಕಟ್ಟೆ ಟ್ರೇಡಿಂಗ್ ವಂಚನೆ | 72 ವರ್ಷದ ಮುಂಬೈ ಉದ್ಯಮಿಗೆ 35 ಕೋಟಿ ರೂಪಾಯಿ ನಷ್ಟ
ಮುಂಬೈ: ನಾಲ್ಕು ವರ್ಷಗಳ ಕಾಲ ತಿಳಿಯದೆಯೇ ಡಿಮ್ಯಾಟ್ ಖಾತೆಯನ್ನು ದುರುಪಯೋಗಪಡಿಸಿಕೊಂಡ ಪರಿಣಾಮ, ನಗರದ 72 ವರ್ಷದ ಹಿರಿಯ ಉದ್ಯಮಿ ಭರತ್ ಹರಕ್ಚಂದ್ ಶಾ ಅವರಿಗೆ 35 ಕೋಟಿ ರೂಪಾಯಿ ನಷ್ಟವಾಗಿರುವ ಗಂಭೀರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಕಂಪೆನಿಯ ಕೆಲ ಪ್ರತಿನಿಧಿಗಳು ಸಂಘಟಿತವಾಗಿ ಈ ಹಣಕಾಸು ವಂಚನೆ ನಡೆಸಿದ್ದಾರೆ ಎಂದು ಶಾ ಆರೋಪಿಸಿದ್ದಾರೆ. ಪರೇಲ್ ಪ್ರದೇಶದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬಾಡಿಗೆಯ ಅತಿಥಿಗೃಹ ನಡೆಸುತ್ತಿರುವ ಶಾ ದಂಪತಿಗೆ 1984ರಲ್ಲಿ ತಂದೆಯಿಂದ ಆನುವಂಶಿಕವಾಗಿ ಷೇರು ಬಂಡವಾಳ ಲಭಿಸಿತ್ತು. ಷೇರು ಮಾರುಕಟ್ಟೆಯ ಜ್ಞಾನವಿಲ್ಲದ ಕಾರಣ ಅವರು ಯಾವುದೇ ವ್ಯಾಪಾರದಲ್ಲೂ ತೊಡಗಿಸಿಕೊಳ್ಳಿರಲಿಲ್ಲ. 2020ರಲ್ಲಿ ಮಿತ್ರರ ಸಲಹೆಯ ಮೇರೆಗೆ ಗ್ಲೋಬ್ ಕ್ಯಾಪಿಟಲ್ನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆಯುವ ಮೂಲಕ ತಮ್ಮ ಷೇರುಗಳನ್ನು ಕಂಪೆನಿಗೆ ವರ್ಗಾಯಿಸಿದ್ದರು. ಖಾತೆ ತೆರೆಯುತ್ತಿದ್ದಂತೆಯೇ, ಕಂಪೆನಿಯ ಪ್ರತಿನಿಧಿಗಳು ಯಾವುದೇ ಹೆಚ್ಚುವರಿ ಹೂಡಿಕೆ ಇಲ್ಲದೆ ಲಾಭ ನೀಡುವ ಭರವಸೆ ನೀಡಿ, “ವೈಯಕ್ತಿಕ ಮಾರ್ಗದರ್ಶಿಗಳು” ಎಂದು ಅಕ್ಷಯ್ ಬರಿಯಾ ಮತ್ತು ಕರಣ್ ಸಿರೋಯಾ ಎಂಬ ಇಬ್ಬರನ್ನು ನಿಯೋಜಿಸಿದ್ದರು. ಬಳಿಕ, ಇವರು ಶಾ ದಂಪತಿಯ ಖಾತೆಗಳ ಸಂಪೂರ್ಣ ನಿಯಂತ್ರಣವನ್ನು ಪಡೆದು ಮನಗೆ ಭೇಟಿ ನೀಡಿ, ಒಟಿಪಿ, ಇಮೇಲ್ ಮತ್ತು ಮೊಬೈಲ್ ಸಂದೇಶಗಳ ಆಧಾರದ ಮೇಲೆ ಎಲ್ಲಾ ವಹಿವಾಟುಗಳನ್ನು ಅವರೇ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರತಿ ವರ್ಷ ಕಳುಹಿಸಿದ ಹೇಳಿಕೆಗಳಲ್ಲಿ ಲಾಭ ತೋರಿಸಿದ ಕಾರಣದಿಂದ ಶಾ ದಂಪತಿಗೆ ಯಾವುದೇ ಅನುಮಾನ ಉಂಟಾಗಲಿಲ್ಲ. ನಿಜವಾದ ವ್ಯಾಪಾರ ಚಟುವಟಿಕೆಗಳನ್ನು ಮರೆಮಾಡಿದ ಕಂಪೆನಿ, ಸುಳ್ಳು ವಿವರಗಳನ್ನು ನೀಡುತ್ತಿದ್ದರೆಂಬುದು ನಂತರ ಬಹಿರಂಗವಾಗಿದೆ. ಈ ವರ್ಷದ ಜುಲೈನಲ್ಲಿ ಗ್ಲೋಬ್ ಕ್ಯಾಪಿಟಲ್ನ ನಿರ್ವಹಣಾ ವಿಭಾಗದಿಂದ “ನಿಮ್ಮ ಖಾತೆಗೆ 35 ಕೋಟಿ ರೂಪಾಯಿ ಡೆಬಿಟ್ ಬ್ಯಾಲೆನ್ಸ್ ಬಂದಿದೆ; ತಕ್ಷಣ ಪಾವತಿಸದಿದ್ದರೆ ಷೇರುಗಳನ್ನು ಮಾರಲಾಗುತ್ತದೆ” ಎಂಬ ಕರೆ ಬಂದ ಬಳಿಕ ಮಾತ್ರ ವಂಚನೆಯ ಪ್ರಮಾಣ ಶಾ ಅವರಿಗೆ ತಿಳಿಯಿತು. ಕಂಪೆನಿಗೆ ಭೇಟಿ ನೀಡಿದಾಗ ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದು, ಅನಧಿಕೃತ ವಹಿವಾಟುಗಳು ನಡೆದಿದೆ ಮತ್ತು ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ ಎಂಬುದು ಪತ್ತೆಯಾಯಿತು. ಆಸ್ತಿಗಳನ್ನು ಕಳೆದುಕೊಳ್ಳುವ ಭಯದಿಂದ ಶಾ ಅವರು ಉಳಿದ ಷೇರುಗಳನ್ನು ಮಾರಾಟ ಮಾಡಿ 35 ಕೋಟಿ ರೂಪಾಯಿಯನ್ನು ಪಾವತಿಸಿದರೂ, ನಂತರ ವೆಬ್ಸೈಟ್ ನಿಂದ ಸ್ಟೇಟ್ ಮೆಂಟ್ ಡೌನ್ಲೋಡ್ ಮಾಡಿದಾಗ ಕಂಪೆನಿ ಕಳುಹಿಸಿದ “ಲಾಭದ” ರಿಪೋರ್ಟ್ ಸುಳ್ಳು ಎಂದು ಕಂಡುಬಂದಿದೆ. NSE ಕಳುಹಿಸಿದ ಅನೇಕ ಸೂಚನೆಗಳಿಗೆ ಕಂಪೆನಿ ಶಾ ಅವರ ಹೆಸರಿನಲ್ಲಿ ಉತ್ತರಿಸಿದ್ದು, ಅದರ ಕುರಿತು ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ದೂರಿದ್ದಾರೆ. ಈ ಸಂಬಂಧ ವನ್ರೈ ಪೊಲೀಸ್ ಠಾಣೆಯಲ್ಲಿ ಶಾ ಅವರ ದೂರು ಆಧರಿಸಿ IPC 409 (ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್) ಮತ್ತು 420 (ವಂಚನೆ) ಸೇರಿದಂತೆ ಹಲವು ಸೆಕ್ಷನ್ಗಳಡಿ FIR ದಾಖಲಾಗಿದೆ. ಪ್ರಕರಣವನ್ನು ಮುಂದಿನ ತನಿಖೆಗೆ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಗೆ ಹಸ್ತಾಂತರಿಸಲಾಗಿದೆ.
ಡಿಕೆಶಿಗೆ ಕೊಡಲಾಗಿತ್ತಾ 'ಅರ್ಧ ಅವಧಿ ಸಿಎಂ' ಮಾತು! ಯಾರೆಲ್ಲಾ ಸಾಕ್ಷಿ? ಅಧಿಕಾರ ಹಂಚಿಕೆ ಗುಟ್ಟು ಸ್ಫೋಟಗೊಳ್ಳುತ್ತಾ?
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಜೋರಾಗಿದೆ. ಎರಡುವರೆ ವರ್ಷದ ಬಳಿಕ ಸಿಎಂ ಸ್ಥಾನ ಹಸ್ತಾಂತರದ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಡಿಕೆಶಿ ಕೊಟ್ಟ ಮಾತಿನ ಪಾಠ ಮಾಡುತ್ತಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಸಹ ಗ್ಯಾರಂಟಿ ಯಶಸ್ಸಿನ ಪೋಸ್ಟ್ ಹಂಚಿಕೊಂಡು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ತಿರುಗೇಟು ನೀಡುತ್ತಿದ್ದಾರೆ. ಇನ್ನು, ಈವೆಲ್ಲದರ ನಡುವೆ ಎರಡು ಬಣಗಳ ನಡುವೆ 50-50 ಸೂತ್ರದ ಚರ್ಚೆ ಜೋರಗೇ ನಡೆಯುತ್ತಿದ್ದು, ಇದಕ್ಕೆ ಉತ್ತರ ಕೊಡಬೇಕಾದ ಹೈಕಮಾಂಡ್ ನಾಯಕರುಸೈಲಂಟಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕಿದೆ.
ಮಂಗಳೂರು | BITಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ ಉದ್ಘಾಟನೆ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು BIT IEEE ವಿದ್ಯಾರ್ಥಿ ಶಾಖೆಯ ಸಹಯೋಗದೊಂದಿಗೆ ನ. 26 ರಂದು ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ – CEABIT ಅನ್ನು ಉದ್ಘಾಟಿಸಲಾಯಿತು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯವನ್ನು ವಿಸ್ತರಿಸುವತ್ತ ಹಾಗೂ ನೂತನ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಪ್ರೊ. ಮುಹಮ್ಮದ್ ಸಿನಾನ್ ಮತ್ತು CSE ವಿಭಾಗದ ಮುಖ್ಯಸ್ಥ ಡಾ. ಅಝೀಝ್ ಮುಸ್ತಫಾ ಅವರು CEABITಯ ಲೋಗೋವನ್ನು ಅನಾವರಣಗೊಳಿಸಿದರು. ಡಾ. ಅಝೀಝ್ ಮುಸ್ತಫಾ ಅವರು ಮಾತನಾಡಿ CEABITಯ ಉದ್ದೇಶ, ದೃಷ್ಟಿಕೋನ ಮತ್ತು ವಿಭಾಗದೊಳಗಿನ ಸಂಶೋಧನೆ–ಸಹಕಾರದ ಸಂಸ್ಕೃತಿಯ ಅಗತ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಮತ್ತೊಂದು ಮುಖ್ಯ ಆಕರ್ಷಣೆಯಾದ BIT ಮತ್ತು E26 ಮೀಡಿಯಾ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡುವಿನ ಅಧಿಕೃತ MoU ಗೆ ಡಾ. ಅಝೀಝ್ ಮುಸ್ತಫಾ ಮತ್ತು ಕಂಪೆನಿಯ ಸಿಇಒ ಮುಹಮ್ಮದ್ ಹಝೀಮ್ ಶೈಮ್ ಸಹಿ ಹಾಕಿದರು. ತಾಂತ್ರಿಕ ಕಾರ್ಯಾಗಾರದಲ್ಲಿ ಮುಹಮ್ಮದ್ ಹಝೀಮ್ ಶೈಮ್ ಮತ್ತು ಇಬ್ರಾಹಿಂ ಖಲೀಲ್ ಅವರು ಕೃತಕ ಬುದ್ಧಿಮತ್ತೆ(AI), ಪ್ರಾಂಪ್ಟ್ ಇಂಜಿನಿಯರಿಂಗ್ ಮತ್ತು ಯಾಂತ್ರೀಕರಣದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಒದಗಿಸಿದರು. ಕ್ವಿಝ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು CSE ವಿದ್ಯಾರ್ಥಿಗಳಾದ ಫಾತಿಮತ್ ರಂಝೀನಾ ನಿರೂಪಿಸಿದರು. ಮುಹಮ್ಮದ್ ಇಫಾಝ್ ಸ್ವಾಗತ ಭಾಷಣ ಮಾಡಿದರು. ಹಲೀಮಾ ಶಮ್ನಾಝ್ ವಂದಿಸಿ, ಭಾಗವಹಿಸಿದ ಎಲ್ಲ ಗಣ್ಯರು, ಉಪನ್ಯಾಸಕರು, ಸಂಘಟಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
KSRTC: ಬೆಂಗಳೂರು-ತಿರುಪತಿ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ದರ್ಬಾರ್: KSRTC ಬಸ್ಗಳಿಗೆ ಹೆಚ್ಚಿದ ಬೇಡಿಕೆ
Bengaluru-Tirupati Bus Routes: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಿಂದ ಈಗಾಗಲೇ ಬೆಂಗಳೂರಿನಿಂದ ತಿರುಪತಿಗೆ ಸಾರಿಗೆ ಬಸ್ಗಳು ಇವೆ. ಆದರೆ ಇವು ಸಾಕಾಗುತ್ತಿಲ್ಲ. ಹಬ್ಬಗಳು, ವಾರಾಂತ್ಯ ಹಾಗೂ ಉತ್ಸವದಂತಹ ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರು ಹಾಗೂ ವಿವಿಧ ಭಾಗದ ಪ್ರಯಾಣಿಕರು ಖಾಸಗಿ ಬಸ್ ಅವಲಂಬಿಸುವಂತಾಗಿದೆ. ಸುರಕ್ಷತೆ ದೃಷ್ಟಿಯಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ
PM Modi | ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ: ರೋಡ್ ಶೋ ಆರಂಭ
ಉಡುಪಿ: ಪರ್ಯಾಯ ಪುತ್ತಿಗೆ ಮಠದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ್ದಾರೆ. ಭಾರತೀಯ ವಾಯುಪಡೆ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ, ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಆದಿಉಡುಪಿಯಲ್ಲಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಬಳಿಕ ಬನ್ನಂಜೆಯಿಂದ ಕಲ್ಸಂಕದವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಅವರು ಕೈಬೀಸಿದರು.
‘‘ಅಜ್ಜಾವರ ಕಂಪನಿಯಲ್ಲಿ ಅದೇ ಮೊದಲ ಪಾತ್ರ. ನಂತರ ಉಕ್ಕಡಗಾತ್ರದಲ್ಲಿ ಕರಿಬಸವೇಶ್ವರ ಜಾತ್ರೆಯಲ್ಲಿ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚಿದೆ. ಅಲ್ಲಿಂದ 22 ವರ್ಷಗಳಿಂದ ಅಕ್ಕಮಹಾದೇವಿ ಪಾತ್ರ ಮಾಡುತ್ತಿರುವೆ’’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಹಾದೇವ. ನೀವು ಅಜ್ಜಾವರ ಕಂಪನಿ ಅಂದರೆ ಗದಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ನಾಟಕಗಳನ್ನು ನೋಡಿದ್ದರೆ ಈ ಮಹಾದೇವ ಹೊಸೂರು ಅವರ ಪಾತ್ರಗಳನ್ನು ನೋಡಿರುತ್ತೀರಿ. ಆದರೆ ಅವರು ಬಣ್ಣ ಅಳಿಸಿದಾಗ ಇವರೇನಾ ಎಂದು ಅಚ್ಚರಿಪಡುತ್ತೀರಿ ಮತ್ತು ಹಾಗೆ ಅಚ್ಚರಿಪಟ್ಟವರಿದ್ದಾರೆ. ಅವರ ಹಾಗೆ ಕಂಪನಿಯಲ್ಲಿ ಉಳಿದ ಕಲಾವಿದರು ಪುರುಷರು. ಸ್ತ್ರೀಯರಿಲ್ಲ. ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಈ ಕಂಪನಿಯ ವಿಶೇಷ. ಇಂಥ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವವರು ಮಹಾದೇವ ಹೊಸೂರು. ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹೊಸೂರು ಗ್ರಾಮದವರು. ಅಲ್ಲಿ ಐದನೇ ತರಗತಿಯಲ್ಲಿ ಅವರು ಓದುತ್ತಿದ್ದಾಗ ಗ್ಯಾದರಿಂಗ್ ಅಂದರೆ ಶಾಲಾ ವಾರ್ಷಿಕೋತ್ಸವಕ್ಕೆಂದು ‘ದೇವಿ ಮಹಾತ್ಮೆ’ ನಾಟಕದಲ್ಲಿ ದೇವಿ ಪಾತ್ರಕ್ಕೆ ಮಹಾದೇವ ಅವರಿಗೆ ಶಿಕ್ಷಕರು ಬಣ್ಣ ಹಚ್ಚಿದರು. ‘‘ಭಾರೀ ಪಾತ್ರ ಮಾಡಿದ’’ ಎಂದು ಪ್ರಚಾರ ಸಿಕ್ಕಿತು. ಆಗ ಎಪ್ಪತ್ತು ರೂಪಾಯಿ ಆಯೇರಿ (ಕಾಣಿಕೆ)ಯೂ ಆಯಿತು. ಬಳಿಕ ಅವರ ಊರಿನ ಶಿರಾಜ್ ಸಾಹೇಬ್ ಮುರಾಜ್ ಸಾಹೇಬ್ ಪ್ರಸಿದ್ಧ ದರ್ಗಾದ ಜಾತ್ರೆಗೆ ರೇಣುಕಾದೇವಿ ನಾಟ್ಯ ಸಂಘದ ಎಚ್.ಆರ್.ಭಸ್ಮೆ ಅವರ ‘ಬಡವ ಬದುಕಲೇಬೇಕು’ ಸಾಮಾಜಿಕ ನಾಟಕದಲ್ಲಿ ಸುಜಾತಾ ಎಂಬ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದರು. ಹೇಗೆಂದರೆ; ನಾಯಕಿ ಪಾತ್ರ ಮಾಡುವ ಮಹಿಳೆ ಕೈಕೊಟ್ಟಿದ್ದರು. ಆಗ ಕಂಪನಿಯವರು ಮಹಾದೇವರ ಮನೆಯವರೆಗೆ ತೆರಳಿ ಕೇಳಿದಾಗ ಅವರಪ್ಪ ಮಲ್ಲಪ್ಪ ಗೂಟ್ಲಿ ಅವರು ಕರೆಯಲು ಬಂದವರನ್ನು ಬೈದು ಕಳಿಸಿದ್ದರು. ನಂತರ ತನ್ನ ತಂದೆಗೆ ಗೊತ್ತಾಗದಂತೆ ನಾಟಕದ ತಾಲೀಮಿಗೆ ಹೋದರು. ನಾಟಕದ ನಂತರ ‘‘ಈ ಹುಡುಗ ಚೆಂದ ಪಾತ್ರ ಮಾಡ್ತಾನ’’ ಅಂತ ಊರವರು ಮೆಚ್ಚಿದರು. ಹೀಗೆ ತಮ್ಮ ಊರಿನ ಸುತ್ತಮುತ್ತಲಿನ ಊರುಗಳಿಗೆ ಪಾತ್ರ ಮಾಡಲು ಹೋದರು. ರೈತಾಪಿ ಕುಟುಂಬ ಅವರದು. ಆದರೆ ಅವರಪ್ಪ ಹೆಚ್ಚು ದುಡಿಯುತ್ತಿರಲಿಲ್ಲ. ವಾರದವರೆಗೆ ದುಡಿದರೂ ನೂರು ರೂಪಾಯಿ ಕೂಲಿ ಸಿಗುತ್ತಿರಲಿಲ್ಲ. ಆದರೆ ನಾಟಕದ ದಿನ ಮಹಾದೇವರ ಪಾತ್ರಕ್ಕೆ 200-300 ಸಂಭಾವನೆ ಸಿಗುತ್ತಿತ್ತು. ಇದರೊಂದಿಗೆ ಆಯೇರಿಯೂ ಸಿಗುತ್ತಿತ್ತು. ಆಗ ಮನೆಯವರೆಲ್ಲ ದುಡಿಯುತ್ತಾನೆಂದು ಸುಮ್ಮನಾದರು. ಹೀಗಿರುವಾಗ ಮಹಾದೇವ ಅವರಿಗೆ ಶಾಲೆಗೆ ಹೋಗುವ ಆಸಕ್ತಿಯೇ ಕಡಿಮೆಯಾಯಿತು. ನಾಟಕದಿಂದ ಮೆಚ್ಚುಗೆ ಸಿಕ್ಕಿತು. ಒಂಭತ್ತನೇ ಪಾಸಾದ ಮೇಲೆ ಎಸೆಸೆಲ್ಸಿಗೆ ಹೋಗಲೇ ಇಲ್ಲ ಅವರು. ಹೀಗಿರುವಾಗ ಗದಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದಲ್ಲಿ ನೃತ್ಯ, ಪಾತ್ರ ನಿರ್ವಹಿಸುವ, ಗಾಯಕ ಕೂಡಾ ಆಗಿದ್ದ ಬಾಬಣ್ಣ ಸಾಲಹಳ್ಳಿ ಅವರು ಬಾಗಲಕೋಟೆಗೆ ಬಂದಾಗ ಮಹಾದೇವ ಅವರನ್ನು ಭೇಟಿಯಾದರು. ‘‘ನಮ್ಮ ಅಜ್ಜಾವರ ಕಂಪನಿಗೆ ನೀ ಬರಬೇಕು. ಈ ಕಂಪನಿಯೊಳಗ ಗಂಡಸರೇ ಮಹಿಳೆಯರ ಪಾತ್ರ ಮಾಡೋದು. ನೀನು ಬಾ’’ ಅಂತ ಕರೆದುಕೊಂಡು ಹೋದರು. ಆಗ ಅಜ್ಜವರ ಕಂಪನಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿತ್ತು. ಈ ಅಜ್ಜಾವರ ಕಂಪನಿಯು ಯಾವುದೇ ಊರಲ್ಲಿ ಮೊಕ್ಕಾಂ ಮಾಡಿದಾಗ ಪುಟ್ಟರಾಜ ಗವಾಯಿಗಳವರ ರಚನೆಯ ‘ಅಕ್ಕಮಹಾದೇವಿ’ ನಾಟಕವಾಡುತ್ತಿತ್ತು. ಆಗ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ವಿರೂಪಾಕ್ಷಯ್ಯಸ್ವಾಮಿ ದೇನಾಳ ಅವರಿಗೆ ವಯಸ್ಸಾಗಿತ್ತು. ಪುಟ್ಟರಾಜ ಗವಾಯಿಗಳ ಎದುರು ‘‘ಅಕ್ಕಮಹಾದೇವಿ ಪಾತ್ರ ಮಾಡಲು ಕಷ್ಟವಾಗ್ತದ. ಮುಂದ ಅಕ್ಕಮಹಾದೇವಿ ನಾಟಕವಾಡಲ್ಲ. ನನಗ ವಯಸ್ಸಾಗಿದೆ. ಸೂಕ್ತವಾಗಲ್ಲ’’ ಎಂದಿದ್ದರಂತೆ. ‘‘ಕುಷ್ಟಗಿ ಕ್ಯಾಂಪಿಗೆ ಪಾತ್ರ ಮಾಡು. ಮುಂದಿನ ಕ್ಯಾಂಪಿಗೆ ಕುಮಾರೇಶ (ಹಾನಗಲ್ ಕುಮಾರಸ್ವಾಮಿಗಳು) ಕಳಸ್ತಾನ’’ ಅಂದಿದ್ದರಂತೆ ಪುಟ್ಟರಾಜ ಗವಾಯಿಗಳು. ಅಷ್ಟೊತ್ತಿಗೆ ಕಂಪನಿಯಲ್ಲಿ ಚಿದಾನಂದಪ್ಪ ಅಬ್ಬಿಗೇರಿ, ಸಂಜೀವಪ್ಪ ಕಬ್ಬೂರು, ವಿಜಯಾನಂದ ಮಾನ್ವಿ, ಸೋಮು ಜಮಖಂಡಿ ಜೊತೆಗೆ ಬಾಬಣ್ಣ ಸಾಲಹಳ್ಳಿ ಅವರೆಲ್ಲ ಸ್ತ್ರೀಪಾತ್ರಗಳಿಗೆ ಪ್ರಸಿದ್ಧರಾಗಿದ್ದರು. ಪಿ.ಬಿ.ಧುತ್ತರಗಿ ಅವರ ‘ಮಲಮಗಳು’ ನಾಟಕವಾಡುತ್ತಿದ್ದರು. ಅವರ ಪಾತ್ರಗಳನ್ನು ನೋಡಿದ ಮಹಾದೇವ ಅವರಿಗೆ ಅಳುಕಿತ್ತು. ‘ಯಾವ ಸಿನೆಮಾ ನಾಯಕಿಯರಿಗಿಂತ ಕಡಿಮೆಯಿಲ್ಲ’ ಎಂದು ಗೊತ್ತಾಯಿತು. ‘‘ಆಗ ವಿರೂಪಾಕ್ಷಯ್ಯ ಅವರು ಅಕ್ಕಮಹಾದೇವಿ ಪಾತ್ರ ಮಾಡೆಂದರು. ಹಿಂಜರಿದೆ. ವಿರೂಪಾಕ್ಷಯ್ಯ ಅವರು ಧೈರ್ಯ ತುಂಬಿದರು. ಆಗ ಕಂಪನಿಯ ವ್ಯವಸ್ಥಾಪಕ ಕರೀಂಸಾಬ್ ದೇವಗಿರಿ ಅವರು ‘ಕಂಪನಿ ಕಲಾವಿದನಾದ್ರ ತಿಂಗಳಿಗೆ ಎರಡು ಸಾವಿರ ರೂಪಾಯಿ ಪಗಾರ ಕೊಡ್ತೀವಿ’ ಅಂದ್ರು. ಮನೆಗೆ ಫೋನ್ ಮಾಡಿ ತಿಳಿಸಿದಾಗ ಸಂತೋಷಪಟ್ಟರು.’’ ಎನ್ನುತ್ತಾರೆ ಮಹಾದೇವ. ಕುಷ್ಟಗಿಯಿಂದ ಹಾವೇರಿ ಜಿಲ್ಲೆಯ ಮೈಲಾರ ಜಾತ್ರೆಯ ಮೊಕ್ಕಾಂನಲ್ಲಿ ‘ಮಲಮಗಳು’ ನಾಟಕ ಪ್ರದರ್ಶನಗೊಂಡು ಯಶಸ್ವಿಯಾಯಿತು. ಆಗ ಕಂಪನಿಯಲ್ಲಿ ಎಚ್.ಎನ್. ಹೂಗಾರ ಅವರ ಕೊರವಂಜಿ ನಾಟಕವನ್ನು ಕಾಯಂ ಪ್ರದರ್ಶಿಸುತ್ತಿದ್ದರು. ಈ ನಾಟಕದ ಎರಡನೇ ನಾಯಕಿ ಶಾಂತಾ ಪಾತ್ರಕ್ಕೆ ಮಹಾದೇವ ಬಣ್ಣ ಹಚ್ಚಿದರು. ‘‘ಅಜ್ಜಾವರ ಕಂಪನಿಯಲ್ಲಿ ಅದೇ ಮೊದಲ ಪಾತ್ರ. ನಂತರ ಉಕ್ಕಡಗಾತ್ರದಲ್ಲಿ ಕರಿಬಸವೇಶ್ವರ ಜಾತ್ರೆಯಲ್ಲಿ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚಿದೆ. ಅಲ್ಲಿಂದ 22 ವರ್ಷಗಳಿಂದ ಅಕ್ಕಮಹಾದೇವಿ ಪಾತ್ರ ಮಾಡುತ್ತಿರುವೆ’’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಇದರೊಂದಿಗೆ ನಲವಡಿ ಶ್ರೀಕಂಠ ಶಾಸ್ತ್ರಿಗಳ ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮ, ಕಂದಗಲ್ಲ ಹನುಮಂತರಾಯರ ‘ರಕ್ತರಾತ್ರಿ’ ನಾಟಕದಲ್ಲಿ ದ್ರೌಪದಿ, ಎನ್.ಎಸ್.ಜೋಶಿ ಅವರ ‘ಬಂಜೆತೊಟ್ಟಿಲು’ ನಾಟಕದಲ್ಲಿ ಸಾವಿತ್ರಿ, ಎಚ್.ಎನ್.ಸಾಳುಂಕೆ ಅವರ ‘ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ನಾಯಕಿ ಶೈಲಾ ಪಾತ್ರ, ಸಾಳುಂಕೆ ಅವರ ‘ಕಿವುಡ ಮಾಡಿದ ಕಿತಾಪತಿ’ ನಾಟಕದಲ್ಲಿ ನಾಯಕಿ ಗೀತಾ ಪಾತ್ರದ ಜೊತೆಗೆ ಈಚೆಗೆ ಹಾಸ್ಯಪಾತ್ರ ನಿರ್ವಹಿಸುತ್ತಾರೆ. ಈಚಿನ ವರ್ಷಗಳಲ್ಲಿ ಬಿ.ಆರ್.ಅರಿಶಿನಗೋಡಿ ಅವರ ‘ಬಸ್ ಕಂಡಕ್ಟರ್’ ಅರ್ಥಾತ್ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಚೆನ್ನಿ ಪಾತ್ರವನ್ನು ರಾಜು ತಾಳಿಕೋಟಿ ಅವರೊಂದಿಗೆ ನಟಿಸಿದರು. ಚೆನ್ನಿ ಪಾತ್ರವನ್ನು ರಾಜು ತಾಳಿಕೋಟಿ ಕಲಿಸಿದರೆಂಬ ಹೆಮ್ಮೆ ಅವರಿಗೆ. ಹೀಗೆ ಸಾಗಿದ ಅವರ ಬಣ್ಣದ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿತು. 2016ರಿಂದ ಕಂಪನಿಯ ಜವಾಬ್ದಾರಿಯನ್ನು ಕಲ್ಲಯ್ಯ ಅಜ್ಜಾವರು ಮಹಾದೇವ ಅವರಿಗೆ ಕೊಟ್ಟರು. ಅಲ್ಲಿಂದ ಪಾತ್ರಗಳ ಜೊತೆಗೆ ಕಂಪನಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ‘ಮತ್ತೊಮ್ಮೆ ಬಾ ಮುತ್ತೈದೆಯಾಗಿ’ ನಾಟಕ ರಚಿಸಿದ್ದು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಅವರ ಕಂಪನಿಯು ಮೊಕ್ಕಾಂ ಹೂಡಿದಾಗ 150 ಪ್ರಯೋಗಗಳನ್ನು ಕಂಡಿತು. ಈ ನಾಟಕದ ಆದಾಯ 11 ಲಕ್ಷ ರೂಪಾಯಿ; ಖರ್ಚುವೆಚ್ಚ ಬಿಟ್ಟು. ಹೀಗೆ ಬಂದ ಆದಾಯವನ್ನು ಗದಗ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಹೊಸ ತೇರು (ರಥ) ನಿರ್ಮಾಣಕ್ಕೆ ಕಾಣಿಕೆಯಾಗಿ ನೀಡಿದರು. ಇದೇ ನಾಟಕವನ್ನು ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ಹೆಸರು ಬದಲಾಯಿಸಿ ಜೇವರ್ಗಿ ರಾಜಣ್ಣ ಅವರು ತಮ್ಮ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದಿಂದ ಪ್ರದರ್ಶಿಸಿದರು. ಅವರ ಎರಡನೆಯ ನಾಟಕ ‘ಅಕ್ಕ ಅಂಗಾರ ತಂಗಿ ಬಂಗಾರ’ ರಚಿಸಿದ್ದು, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಒಳ್ಳೆಯ ಕಲೆಕ್ಷನ್ ಕೊಟ್ಟಿದೆ. ಬನಶಂಕರಿ ಜಾತ್ರೆಯಲ್ಲಿ ಈ ನಾಟಕವನ್ನು ಜೇವರ್ಗಿ ರಾಜಣ್ಣ ತಮ್ಮ ಕಂಪನಿಯಿಂದ ಆಡಿ ಲಾಭ ಕಂಡರು. ಹೀಗೆಯೇ ಧಾರವಾಡ ಆಕಾಶವಾಣಿಗೆ ಹೇಮರಡ್ಡಿ ಮಲ್ಲಮ್ಮ, ಪುಟ್ಟರಾಜ ಗವಾಯಿಗಳು ರಚಿಸಿದ ‘ಶ್ರೀ ಹಾನಗಲ್ ಕುಮಾರೇಶ್ವರ ಮಹಾತ್ಮೆ’ ನಾಟಕವನ್ನು ಸಿದ್ಧಪಡಿಸಿ, ನಿರ್ದೇಶಿಸಿದ್ದಾರೆ. ಗದಗ ಜಿಲ್ಲೆಯ ಮುಳಗುಂದದಲ್ಲಿ ಅವರ ಕಂಪನಿಯು ಕ್ಯಾಂಪು ಇದ್ದಾಗ ಡಾ.ಬಸೆಟ್ಟಿ ರಚನೆಯ ‘ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಹಾತ್ಮೆ’ ನಾಟಕವನ್ನು ಮಹಾದೇವ ಹೊಸೂರು ನಿರ್ದೇಶಿಸಿ, ಮಹಾಂತ ಶಿವಯೋಗಿಗಳ ಪಾತ್ರಕ್ಕೆ ಬಣ್ಣ ಹಚ್ಚಿದರು. ಇದು ಅವರ ಮೊದಲ ಪುರುಷ ಪಾತ್ರ. ಈ ನಾಟಕವೂ ಯಶಸ್ವಿಯಾಯಿತು. ಹೀಗೆ ಬಣ್ಣದ ಬದುಕನ್ನೇ ಸಾಗಿಸುತ್ತಿರುವ ಮಹಾದೇವ ಅವರಿಗೆ ಈಗ 43 ವರ್ಷ ವಯಸ್ಸಷ್ಟೇ. ಕರ್ನಾಟಕ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಸದ್ಯ ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಅವರ ಕಂಪನಿಯ ಕ್ಯಾಂಪಿದೆ. ಅವರ ಹೊಸ ನಾಟಕವನ್ನು ರಚಿಸಿದ್ದು, ಹಿರೇಸಿಂದೋಗಿಯಿಂದಲೇ ಜನವರಿ ಮೊದಲ ವಾರದಲ್ಲಿರುವ ಕೊಪ್ಪಳದ ಜಾತ್ರೆಯಲ್ಲಿ ಪ್ರದರ್ಶಿಸಲಿದ್ದಾರೆ. ಅವರ ಪತ್ನಿ ಭಾರತಿ ಅವರು ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಕುಮಾರೇಶ ಅವರೊಂದಿಗೆ ಹೊಸೂರು ಗ್ರಾಮದಲ್ಲಿದ್ದಾರೆ.
ಸಂಶೋಧನಾ ಕ್ಷೇತ್ರದ ದಿಗ್ಗಜ ಡಾ. ಎಂ.ಎಂ. ಕಲಬುರ್ಗಿ
ಇಂದು ಡಾ. ಎಂ.ಎಂ. ಕಲಬುರ್ಗಿ ಜನ್ಮ ದಿನ
IMD Orange Alert: ದಿತ್ವಾ ಸೈಕ್ಲೋನ್ ಎಫೆಕ್ಟ್: ಈ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
Cyclone Ditwah: ದಿತ್ವಾ ಚಂಡಮಾರುತದ ಚಲನೆ ತೀವ್ರವಾಗಿದ್ದು, ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಕಳೆದ 6 ಗಂಟೆಗಳಲ್ಲಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸಿ ಕೇಂದ್ರೀಕೃತವಾಗಿದೆ. ದಕ್ಷಿಣ-ಆಗ್ನೇಯ ದಿಕ್ಕಿನಲ್ಲಿ ಮತ್ತು ಚೆನ್ನೈದಿಂದ 540 ಕಿ.ಮೀ. ದಕ್ಷಿಣಕ್ಕೆ ಇದೆ. ಇದು ಶ್ರೀಲಂಕಾ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳಕೊಲ್ಲಿಯ ಮೂಲಕ
'ಡಿಟ್ವಾ' ಸೈಕ್ಲೋನ್ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ
ಚಂಡಮಾರುತ 'ಡಿಟ್ವಾ' ತೀವ್ರಗೊಳ್ಳುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಜನರು ಸಹ ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯ.
Explainer : ಜಾತಿ ಸಂಘರ್ಷಕ್ಕೆ ಕಾರಣವಾದ 'ಕುರ್ಚಿ ಫೈಟ್' - ಪೀಠಾಧಿಪತಿಗಳ ಎಂಟ್ರಿಯಿಂದ ಏನೆಲ್ಲಾ ತಿರುವು?
Power Sharing tussle in Karnataka : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಡಿಕೆ ಶಿವಕುಮಾರ್ ಮಾಡಿದ್ದ ಒಂದು ಲೈನಿನ ಟ್ವೀಟಿಗೆ, ಅದೇ ದಾಟಿಯಲ್ಲಿ ಸಿಎಂ ಕೂಡಾ ಅಭಿವೃದ್ದಿ ಕೆಲಸದ ಮೂಲಕ ತಿರುಗೇಟು ನೀಡಿದ್ದಾರೆ. ಈ ನಡುವೆ, ಅನಾವಶ್ಯಕವಾಗಿ ನಾಡಿನ ಪೀಠಾಧಿಪತಿಗಳು ಈ ವಿಚಾರದಲ್ಲಿ ಎಂಟ್ರಿಯಾಗಿದ್ದರಿಂದ, ಇದು ಜಾತಿ ಸಂಘರ್ಷಕ್ಕೂ ಕಾರಣವಾಗಿದೆ.
PM Modi | ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ
ಮಂಗಳೂರು, ನ.28: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದಾರೆ. ಬೆಳಗ್ಗೆ 10:25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನ ಮಂತ್ರಿಯವರನ್ನು, ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಯವರನ್ನು ಸ್ವಾಗತಿಸಿದರು. ಬಳಿಕ ಪ್ರಧಾನ ಮಂತ್ರಿ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಉಡುಪಿಗೆ ತೆರಳಿದರು.
ಬೆಂಗಳೂರಿನಲ್ಲಿ ಫೆ.8ಕ್ಕೆ ಸೈಕ್ಲೊಥಾನ್: ನೋಂದಣಿ ಆರಂಭ
ಬೆಂಗಳೂರು, ನ.27: ಎಚ್ಸಿಎಲ್ ಗ್ರೂಪ್ ಹಾಗೂ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಿಂದ ಬೆಂಗಳೂರಿನ ನೈಸ್ ರಸ್ತೆಯಲ್ಲಿ 2026ರ ಫೆ.8ರಂದು ಎಚ್ಸಿಎಲ್ ಸೈಕ್ಲೊಥಾನ್ನ ಮೊದಲ ಆವೃತ್ತಿ ನಡೆಯಲಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಚ್ಸಿಎಲ್ ಗ್ರೂಪ್ನ ಸಹ ಉಪಾಧ್ಯಕ್ಷ ರಜತ್ ಚಾಂದೋಲಿಯಾ, ಇದು ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ರಸ್ತೆ ಸೈಕ್ಲಿಂಗ್ ಪಂದ್ಯಾವಳಿಗಳಲ್ಲಿ ಒಂದಾಗಿದೆ. ನೋಯ್ಡಾ, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಎಚ್ಸಿಎಲ್ ಸೈಕ್ಲೊಥಾನ್ ಈಗ ಭಾರತದ ಸೈಕ್ಲಿಂಗ್ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಫೆ.8 ರಂದು ಜರುಗುತ್ತಿದೆ. ಈ ಸ್ಪರ್ಧೆಯು ಒಟ್ಟು 30 ಲಕ್ಷ ಮೊತ್ತದ ಬಹುಮಾನಗಳನ್ನು ಒಳಗೊಂಡಿದೆ ಎಂದರು. ವೃತ್ತಿಪರ, ಹವ್ಯಾಸಿ ಮತ್ತು ಜನಪ್ರಿಯ ಗ್ರೀನ್ ರೈಡ್ ಎಂಬ ಮೂರು ವರ್ಗಗಳ ರೈಡರ್ಗಳಿಗೆ ಈ ಎಚ್ಸಿಎಲ್ ಸೈಕ್ಲೊಥಾನ್ ಆತಿಥ್ಯ ನೀಡಲಿದೆ, ಇದೇ ಮೊದಲ ಬಾರಿಗೆ ವೃತ್ತಿಪರರು ಮತ್ತು ಹವ್ಯಾಸಿ ಸೈಕ್ಲಿಸ್ಟ್ ಗಳು ಏಕ ರೀತಿಯಲ್ಲಿ ಪಾಲ್ಗೊಳ್ಳವಂತೆ ಮಾಡುತ್ತಿದೆ. ನೋಂದಣಿಯು ಈಗ www.hclcyclothon.com ದಲ್ಲಿ ತೆರೆದಿದೆ ಹಾಗೂ ಜ.26, 2026ರವರೆಗೂ ನೋಂದಣಿಗೆ ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು. ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮಣಿಂದರ್ ಸಿಂಗ್ ಮಾತನಾಡಿ, ಬೆಂಗಳೂರಿನಲ್ಲಿ ಎಚ್ಸಿಎಲ್ ಸೈಕ್ಲೊಥಾನ್ ಅನ್ನು ಪರಿಚಯಿಸುತ್ತಿರುವುದು, ಭಾರತದಲ್ಲಿ ಸೈಕ್ಲಿಂಗ್ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ರಮಗಳು ಅವಕಾಶಗಳನ್ನು ಸೃಷ್ಟಿಸುತ್ತವೆ, ಪ್ರತಿಭೆಗಳನ್ನು ಬೆಳೆಸುತ್ತವೆ, ಜಾಗತಿಕ ಸೈಕ್ಲಿಂಗ್ನಲ್ಲಿ ಭಾರತವು ತನ್ನ ಛಾಪನ್ನು ಬಲವಾಗಿ ಮೂಡಿಸಲು ಅವಕಾಶ ಕಲ್ಪಿಸುತ್ತದೆ ಎಂದರು.
ಪಣಂಬೂರು | ಬೀಚ್ ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಕಳವು: ಅಪ್ರಾಪ್ತ ವಯಸ್ಸಿನ ಆರೋಪಿಯ ಸೆರೆ
ಪಣಂಬೂರು: ಇಲ್ಲಿನ ಬೀಚ್ ನಲ್ಲಿ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಗಳಿದ್ದ ಬ್ಯಾಗ್ ಕಳವುಗೈದ ಅಪ್ರಾಪ್ತ ವಯಸ್ಸಿನ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಗೈಯ್ಯಲಾಗಿದ್ದ 12 ಗ್ರಾಂ ತೂಕದ ಚಿನ್ನದ ಸರ, 2 ಗ್ರಾಂ ತೂಕದ ಲಾಕೆಟ್, ತಲಾ 2 ಗ್ರಾಂ ತೂಕದ ಎರಡು ಉಂಗುರ ಮತ್ತು 4 ಗ್ರಾಂ ತೂಕದ ಕಿವಿ ಓಲೆ ಹಾಗೂ 2 ಮೊಬೈಲ್ ಪೋನ್ ಸೇರಿ ಒಟ್ಟು 3.33 ಲಕ್ಷ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ವಾತಿ ನಂದಿಪಳ್ಳಿ ಎಂಬವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಎಂಬವರೊಂದಿಗೆ ನ.24ರಂದು ಬೆಳಗ್ಗೆ ಪಣಂಬೂರು ಬೀಚಿಗೆ ಬಂದವರು ಮೊಬೈಲ್ ಫೋನ್ಗಳು, ಚಿನ್ನಾಭರಣಗಳನ್ನು ತನ್ನ ಕಪ್ಪು ಬಣ್ಣದ ಬ್ಯಾಗ್ ವೊಂದರಲ್ಲಿ ಹಾಕಿ ಸಮುದ್ರ ತೀರದಲ್ಲಿಟ್ಟು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಯಾರೋ ಬ್ಯಾಗ್ ಸಮೇತ ಚಿನ್ನಾಭರಣ ಮೊಬೈಲ್ ಕಳವುಗೈದಿದ್ದಾಗಿ ಸ್ವಾತಿ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು 48 ಗಂಟೆಯ ಒಳಗಾಗಿ ಕಳವು ಆರೋಪಿಯನ್ನು ಬಂಧಿಸಿ, ಕಳವಾಗಿದ್ದ ಸಂಪೂರ್ಣ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ರವಿಶಂಕರ್, ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಪಣಂಬೂರು ಪೊಲೀಸ್ ಉಪ ನಿರೀಕ್ಷಕರಾದ ಜ್ಞಾನಶೇಖರ, ಶ್ರೀಕಲಾ ಹಾಗೂ ಸಿಬ್ಬಂದಿ ಸಿ.ಎಚ್.ಸಿ. ಸಯ್ಯದ್ ಇಮ್ತಿಯಾಝ್, ಪಿ.ಸಿ.ಗಳಾದ ರಾಕೇಶ್ ಮತ್ತು ಶರಣಬಸವ ಭಾಗವಹಿಸಿದ್ದರು.
ಎರಡನೇ ಬೆಳೆಗೆ ನೀರಿಲ್ಲ: ಮುಂದಿನ ಮುಂಗಾರುವರೆಗೂ ಭತ್ತದ ಮೇವಿಲ್ಲ
ಕೊಪ್ಪಳ : ಪ್ರತಿವರ್ಷ ಎರಡು ಬೆಳೆಯಾಗಿ ಭತ್ತ ಬೆಳೆದಾಗ ಹೊರ ಜಿಲ್ಲೆಗಳ ಜಾನುವಾರುಗಳಿಗೆ ಉಚಿತವಾಗಿ ಮೇವು ಸಾಗಿಸಲು ಅವಕಾಶ ನೀಡುತ್ತಿದ್ದ ರೈತರು, ಈ ಬಾರಿ ಸ್ವಂತ ಜಾನುವಾರುಗಳ ರಕ್ಷಣೆಗಾಗಿ ಆರಂಭಿಕ ಹಂತದಲ್ಲಿಯೇ ಮೇವು ದಾಸ್ತಾನಿಗೆ ಮುಂದಾಗಿದ್ದಾರೆ. ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ಗಳ ದುರಸ್ತಿ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸದಿರಲು ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನೆ ಲೆಯಲ್ಲಿ 2ನೇ ಬೆಳೆಗೆ ನೀರಿಲ್ಲವೆಂದು ತಿಳಿದ ರೈತರು, ಹೊಲದಲ್ಲಿರುವ ಭತ್ತದ ಕೊಯ್ದು ಚುರುಕುಗೊಳಿಸುವ ಜತೆಗೆ, ಮೇವು ಜೋಪಾನವಾಗಿ ರಕ್ಷಿಸುವ ಕಾರ್ಯಕ್ಕೂ ಒತ್ತು ನೀಡುತ್ತಿದ್ದಾರೆ. ತುಂಗಭದ್ರಾ ನದಿ ಪಾತ್ರದಲ್ಲಿ ಬಹುತೇಕ ಭತ್ತ ಕೊಯ್ದಾಗಿದ್ದು, ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಕೊಯ್ದು ಕಾರ್ಯ ಇನ್ನೂ ಬಾಕಿ ಇದೆ. ಈ ನಡುವೆ ಮನೆಯಲ್ಲಿ ಸಾಕಣೆ ಮಾಡುವ ಆಕಳು, ಎಮ್ಮೆಗಳಿಗೆ ಮೇವಿನ ಅವಶ್ಯ ಇರುವುದರಿಂದ ಭತ್ತದ ಮೇವನ್ನು ಟ್ರ್ಯಾಕ್ಟರ್, ಜೀಪ್, ಆಟೊಗಳಲ್ಲಿ ಸಾಗಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಮೇವಿಗೆ ಹೆಚ್ಚಿದ ಬೇಡಿಕೆ: ಕನಕಗಿರಿ, ಕುಷ್ಟಗಿ, ತಾವರಗೇರಾ ಸಹಿತ ಖುಷಿ ಭೂಮಿ ಇರುವ ಕಡೆಗಳಲ್ಲಿ ಭತ್ತದ ಮೇವಿಗೆ ಬೇಡಿಕೆ ಇದೆ. ಹೀಗಾಗಿ ಭತ್ತ ಕೊಯ್ದು ಮಾಡುತ್ತಿದ್ದಂತೆಯೇ ವಾಹನ ತಂದು ಮೇವು ಕೊಂಡೊಯ್ಯಲಾಗುತ್ತಿದೆ. ಭತ್ತ ಕೊಯ್ಯುವ ಹಂತದಲ್ಲಿಯೇ ಮೇವನ್ನು ಶೇಖರಿಸಿ ಇಟ್ಟರೆ, ಮುಂದೆ ಸಮಸ್ಯೆಯಾಗದು ಎಂಬುದು ರೈತರ ಅಭಿಪ್ರಾಯವಾಗಿದೆ. ಮೇವು ಖರೀದಿ: ತಾಲೂಕಿನ ಬಸರಿಹಾಳ, ಜಿರಾಳ, ಕನಕಪುರ, ನವಲಿ, ಹನುಮಾನಾಳ, ಗೌರಿಪುರ,ಮಲ್ಲಾಪುರ, ಲಾಯದುಣಸಿ, ವರನಖೇಡಾ, ಗೋಡಿನಾಳ ಹಾಕೊಳಕುಂಪಿ, ಹೊಸಗುಡ್ಡ ಕಟ್ಟಾಪುರ ನೀರಲು ನೀರಲೂಟಿ, ರಾಂಪುರ,ನಾಗಲಾಪುರ, ಮುಸಲಾಪುರ, ಇಂಗಳದಾಳ, ಕನ್ಯರಮಡುಗು ಗ್ರಾಮದ ರೈತರು ಮೇವು ಖರೀದಿಗೆ ದಿನ ನಿತ್ಯ ಬೆಳಗಿನ ಜಾವ ಹೋಗಿ ಟ್ರ್ಯಾಕ್ಟರ್ ಮೂಲಕ ಸಾವಿರಾರು ರೂಪಾಯಿಯನ್ನು ನೀಡಿ ಮೇವನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಜಾನುವಾರು ಸಾಕಣೆದಾರರು ಭತ್ತ ಕೊಯ್ದು ಮಾಡುತ್ತಿದ್ದಂತೆಯೇ ವಾಹನ ತಂದು ಮೇವನ್ನು ಕೊಂಡೊಯ್ಯುತ್ತಿದ್ದಾರೆ. ಮುಂದಿನ ಮುಂಗಾರು ಬೆಳೆವರೆಗೂ ಮೇವನ್ನು ಜೋಪಾನವಾಗಿ ಶೇಖರಿಸಿ ಇಡಬೇಕು. ಇಲ್ಲವಾದರೆ ಜಾನುವಾರುಗಳಿಗೆ ಆಹಾರದ ಸಮಸ್ಯೆಯಾಗಲಿದೆ. - ನಾಗರಾಜ ಇದ್ಲಾಪುರ, ರೈತ ಮಲ್ಲಾಪುರ
ಪಣಂಬೂರು: ಚಿನ್ನಾಭರಣಗಳಿದ್ದ ಬ್ಯಾಗ್ ಕಳವು; ಆರೋಪಿಯ ಬಂಧನ
ಪಣಂಬೂರು: ಇಲ್ಲಿನ ಬೀಚ್ನಲ್ಲಿ ಚಿನ್ನಾಭರಣಗಳಿದ್ದ ಬ್ಯಾಗ್ ಕಳವುಗೈದ ಅಪ್ರಾಪ್ತವಯಸ್ಕ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಗೈಯ್ಯಲಾಗಿದ್ದ 12 ಗ್ರಾಂ ತೂಕದ ಚೈನ್, 2 ಗ್ರಾಂ ತೂಕದ ಲಾಕೆಟ್, ತಲಾ 2 ಗ್ರಾಂ ತೂಕದ ಎರಡು ಉಂಗುರ ಮತ್ತು 4 ಗ್ರಾಂ ತೂಕದ ಕಿವಿಯೋಲೆ ಹಾಗೂ ರಿಯಲ್ಮಿ ಕಂಪೆನಿಯ ಮೊಬೈಲ್ ಪೋನ್-1, ಸ್ಯಾಂಸಂಗ್ S24 ಅಲ್ಟ್ರಾ ಮೊಬೈಲ್ ಪೋನ್-1 ಸೇರಿ ಒಟ್ಟು 3.33 ಲಕ್ಷ ರೂ.ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ವಾತಿ ನಂದಿಪಳ್ಳಿ ಎಂಬವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ರವರೊಂದಿಗೆ ಬೆಳಿಗ್ಗೆ ಪಣಂಬೂರು ಬೀಚಿಗೆ ಬಂದವರು ಕಪ್ಪು ಬಣ್ಣದ ಬ್ಯಾಗ್ ವೊಂದರಲ್ಲಿ ಮೊಬೈಲ್ ಫೋನ್ಗಳು, ಚಿನ್ನಾಭರಣಗಳನ್ನು ಹಾಕಿ ಸಮುದ್ರ ತೀರದಲ್ಲಿಟ್ಟು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಯಾರೋ ಕಳ್ಳ ಬ್ಯಾಗ್ ಸಮೇತ ಚಿನ್ನಾಭರಣ ಮೊಬೈಲ್ ಕಳವುಗೈದಿದ್ದಾಗಿ ಸ್ವಾತಿ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ನ.24ರಂದು ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು 48ಗಂಟೆಯ ಒಳಗಾಗಿ ಕಳ್ಳನನ್ನು ಬಂಧಿಸಿ, ಕಳವಾಗಿದ್ದ ಸಂಪೂರ್ಣ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕೆ.ರವಿಶಂಕರ್, ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಪಣಂಬೂರು ಪೊಲೀಸ್ ಉಪ ನಿರೀಕ್ಷರಾದ ಜ್ಞಾನಶೇಖರ, ಶ್ರೀಕಲಾ ಹಾಗೂ ಸಿಬ್ಬಂದಿಗಳಾದ ಸಿ.ಎಚ್.ಸಿ. ಸಯ್ಯದ್ ಇಮ್ತಿಯಾಝ್, ಪಿ.ಸಿ.ಗಳಾದ ರಾಕೇಶ್ ಮತ್ತು ಶರಣಬಸವ ಅವರು ಭಾಗವಹಿಸಿದ್ದರು.
ಕೇರಳ| ಅತ್ಯಾಚಾರ ಆರೋಪ: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ : ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ ಬೆನ್ನಲ್ಲೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಿಳೆ ಮತ್ತು ರಾಹುಲ್ ಮಾಂಕೂಟತ್ತಿಲ್ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆ ಬಳಿಕ ಮಹಿಳೆ ಸಿಎಂಗೆ ದೂರು ನೀಡಿದ್ದರು. ಈ ಕುರಿತ ದೂರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಅಗತ್ಯ ಕ್ರಮಕ್ಕಾಗಿ ರವಾನಿಸಿದ್ದರು. ಇದೀಗ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಅತ್ಯಾಚಾರ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಹೊಸ ಆಡಿಯೋ ಕ್ಲಿಪ್ ಮತ್ತು ಸ್ಕ್ರೀನ್ಶಾಟ್ಗಳು ವೈರಲ್ ಬಳಿಕ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದ್ದವು. ದೂರು ದಾಖಲು ಬಳಿಕ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಮಾಂಕೂಟತ್ತಿಲ್, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕಾನೂನುಬದ್ಧವಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ. ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಎಲ್ಲವನ್ನೂ ಸಾಬೀತುಪಡಿಸುತ್ತೇನೆ. ಸತ್ಯ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪಗಳ ನಂತರ ಆಗಸ್ಟ್ 25 ರಂದು ರಾಹುಲ್ ಮಾಂಕೂಟತ್ತಿಲ್ ಅವರನ್ನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಆ ಬಳಿಕ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸುಪ್ರೀಂ ತೀರ್ಪು ಮತ್ತು ಮಸುಕಾಗುತ್ತಿರುವ ಸಂವಿಧಾನದ ಬೆಳಕು
ದೇಶ ಮತ್ತು ನಾಗರಿಕರು, ಬಹುಸಂಖ್ಯಾತರು-ಅಲ್ಪಸಂಖ್ಯಾತರು, ಸ್ತ್ರೀ-ಪುರುಷ, ಬಡವರು-ಹಣವಂತರ ನಡುವೆ ನ್ಯಾಯಸಮ್ಮತ ಸಮತೋಲನ, ಒಕ್ಕೂಟ ಮತ್ತು ರಾಜ್ಯಗಳ ನಡುವೆ ನಂಬಿಕಸ್ಥ ಪಾಲುದಾರಿಕೆ ಇದ್ದಾಗ ದೇಶ ಚೈತನ್ಯಶಾಲಿ ಆಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಸದೃಢ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ. ಕಳೆದ ಏಳು ದಶಕಗಳಿಂದ ಈ ಸರಳ ಪಾಠವನ್ನು ಕಲಿಯಲು ನಾವು ವಿಫಲವಾಗಿದ್ದೇವೆ; ಸಾಂಸ್ಥಿಕ ಲೋಪದೋಷಗಳಿಂದ ಕೆಟ್ಟ ಆಯ್ಕೆಗಳಲ್ಲದೆ, ದುಬಾರಿ ದಂಡ ತೆರಬೇಕಾಗುತ್ತದೆ. ವಿವೇಕಶಾಲಿ ನಾಯಕತ್ವದ ಅನುಪಸ್ಥಿತಿಯಲ್ಲಿ ಸಮತೋಲನವನ್ನು ಕಾಯುವ ಹೊರೆ ನ್ಯಾಯಾಂಗದ ಮೇಲೆ ಬೀಳುತ್ತದೆ. ನವೆಂಬರ್ 20ರಂದು ಎರಡು ಚರಿತ್ರಾರ್ಹ ಘಟನೆಗಳು ನಡೆದವು- ಪಾಟ್ನಾದಲ್ಲಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಅವಧಿಗೆ ಅಧಿಕಾರ ಸ್ವೀಕರಿಸಿದರು ಮತ್ತು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸಂವಿಧಾನ ಪೀಠವು ರಾಜ್ಯಪಾಲರು-ರಾಷ್ಟ್ರಪತಿ ಅವರಿಗೆ ಕಡತವೊಂದಕ್ಕೆ ಸಹಿ ಹಾಕಲು ಕಾಲಾವಧಿ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ನಿತೀಶ್ ಕುಮಾರ್ ಮತ್ತು ಮೈತ್ರಿ ಪಕ್ಷ ಬಿಜೆಪಿ ಚುನಾವಣೆಯನ್ನು ತಂತ್ರಗಾರಿಕೆ ಮತ್ತು ಕುಶಲತೆಯಿಂದ ಜಯ ಸಾಧಿಸಿತು; ಪ್ರತಿಪಕ್ಷಗಳು ತಂತ್ರಕ್ಕೆ ಶರಣಾದವು. ಆದರೆ, ಸುಪ್ರೀಂ ಕೋರ್ಟ್ ತೀರ್ಪು ಗಣತಂತ್ರಕ್ಕೆ ಅಪಾಯಕಾರಿ ಆಗಲಿದೆ. ಅಕ್ಟೋಬರ್ 5ರಂದು ನಡೆದ ಆರೆಸ್ಸೆಸ್ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದ ಮು.ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ ಅವರ ತಾಯಿ ಕಮಲಾ ಗವಾಯಿ ಅವರ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ನವೆಂಬರ್ 23ಕ್ಕೆ ಗವಾಯಿ ಅವರ ಅಧಿಕಾರಾವಧಿ ಅಂತ್ಯಗೊಂಡಿತು. ಅವರ ನೇತೃತ್ವದ ಸಂವಿಧಾನ ಪೀಠವು ತಮಿಳುನಾಡು ರಾಜ್ಯ ವರ್ಸಸ್ ತಮಿಳುನಾಡು ರಾಜ್ಯಪಾಲರು ಪ್ರಕರಣದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿ ವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಹೈಕೋರ್ಟಿನ ದ್ವಿಸದಸ್ಯ ಪೀಠ ಎಪ್ರಿಲ್ 8ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಸುಪ್ರೀಂ ಆದೇಶವು ಕಾನೂನಿನ ಪ್ರಕಾರ ಸರಿ; ಆದರೆ, ಹಾಲಿ ರಾಜಕೀಯ ಸನ್ನಿವೇಶದಲ್ಲಿ ಅದು ಅಪ್ರಾಯೋಗಿಕ ಮತ್ತು ಅಸಂಗತ. ಆದರ್ಶ ರಾಜ್ಯ-ರಾಜಕಾರಣಿಗಳು ಇದ್ದಾಗ ಮಾತ್ರ ಇಂಥ ಆದೇಶಕ್ಕೆ ಮನ್ನಣೆ ಇರುತ್ತದೆ. ಕೋರ್ಟ್ ಆದೇಶ ಏನಿತ್ತು? ‘‘ಶಾಸಕಾಂಗ/ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು/ರಾಷ್ಟ್ರಪತಿ ಅನಿರ್ದಿಷ್ಟ ಕಾಲ ಇರಿಸಿಕೊಳ್ಳುವಂತಿಲ್ಲ. 3 ತಿಂಗಳೊಳಗೆ ಮಸೂದೆಯನ್ನು ಮುಕ್ತಗೊಳಿಸಬೇಕು; ಇಲ್ಲವಾದರೆ ಸಮ್ಮತಿ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ’’ ಎಂದು ನ್ಯಾ. ಪರ್ದಿವಾಲಾ-ಮಹಾದೇವನ್ ಪೀಠ ಹೇಳಿತ್ತು. ಈ ಆದೇಶ ‘ಪಾಕೆಟ್ ವೀಟೊ’ಗೆ ಅಂತ್ಯ ಹಾಡಿತ್ತು. ರಾಜ್ಯಗಳ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಮತ್ತು ಯಜಮಾನತ್ವವನ್ನು ಸಡಿಲಗೊಳಿಸಿತು. 2014ರ ಬಳಿಕ ಕೇಂದ್ರ ಸರಕಾರವು ರಾಜ್ಯಗಳನ್ನು, ವಿಶೇಷವಾಗಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳನ್ನು ಅಟಕಾಯಿಸುತ್ತಿದೆ. ಎನ್ಡಿಎ 21 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಬಿಜೆಪಿಯೇತರ ಸರಕಾರ ಇರುವ ರಾಜ್ಯ(ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ, ಜಾರ್ಖಂಡ್, ಪಂಜಾಬ್ ಮತ್ತು ಮಿಜೋರಾಂ)ಗಳಲ್ಲಿ ರಾಜ್ಯಪಾಲರನ್ನು ಇನ್ನೊಂದು ಶಕ್ತಿ ಕೇಂದ್ರವಾಗಿಸಿದ್ದು, ಇವರು ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡದೆ ಇಲ್ಲವೇ ರಾಷ್ಟ್ರಪತಿಗೆ ಕಳಿಸದೆ ವಿಳಂಬ ಮಾಡುತ್ತಿದ್ದಾರೆ. ಒಂದು ವೇಳೆ ರಾಷ್ಟ್ರಪತಿಗೆ ಕಳಿಸಿದರೂ, ಅಲ್ಲಿಯೂ ವಿನಾಕಾರಣ ವಿಳಂಬ ಆಗುತ್ತಿದೆ. ತಮಿಳುನಾಡು ರಾಜ್ಯಪಾಲರ ಅಡ್ಡಿ ಪಡಿಸುವ ವರ್ತನೆ ‘ಗಂಭೀರ ಕಳವಳಕಾರಿ ವಿಷಯ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ‘ವಿಧಾನಸಭೆ ಅಂಗೀಕರಿಸಿದ 12 ಮಸೂದೆಗಳ ಮೇಲೆ ರಾಜ್ಯಪಾಲರು ಕುಳಿತಿದ್ದಾರೆ’ ಎಂದು ತಮಿಳುನಾಡು ಸರಕಾರ ದೂರು ನೀಡಿತ್ತು. ಇದರಲ್ಲಿ ಕೆಲವು 2020ರಷ್ಟು ಹಿಂದಿನವು. ಜೊತೆಗೆ, ತಮಿಳು ಸಂಪುಟವು ಅನುಮೋದಿಸಿದ ಕ್ರಮಗಳನ್ನು ಅನುಮೋದಿಸಲು ರಾಜ್ಯಪಾಲರು ನಿರಾಕರಿಸಿದ್ದರು. ತಮಿಳುನಾಡು ಮಾತ್ರವಲ್ಲ; ರಾಜ್ಯಪಾಲರು ಶಾಸಕಾಂಗ ಮತ್ತು ಕಾರ್ಯಾಂಗದ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತೆಲಂಗಾಣ, ಪಂಜಾಬ್ ಮತ್ತು ಕೇರಳ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಪಶ್ಚಿಮ ಬಂಗಾಳದ ರಾಜ್ಯಪಾಲರು ವಿಶ್ವವಿದ್ಯಾನಿಲಯ ಗಳಿಗೆ ಉಪಕುಲಪತಿಗಳನ್ನು ನೇಮಿಸಬಾರದೆಂದು ಅಕ್ಟೋಬರ್ 2024ರಲ್ಲಿ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಇದು ಇತ್ತೀಚಿನ ಪ್ರವೃತ್ತಿಯಲ್ಲ. ರಾಜ್ಯಪಾಲರ ಅಧಿಕಾರದ ಮೂಲ- ವಸಾಹತುಶಾಹಿ ಕಾಲದ 1935ರ ಇಂಡಿಯಾ ಆಕ್ಟ್. 1937ರಿಂದ ರಾಜ್ಯಗಳು (ಅಥವಾ ಪ್ರಾಂತಗಳು) ಸರಕಾರಗಳನ್ನು ಹೊಂದಿದ್ದವು ಮತ್ತು ರಾಜ್ಯಪಾಲರು ಬ್ರಿಟಿಷರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗಲೂ ರಾಜ್ಯಪಾಲರು ಚುನಾಯಿತ ಸರಕಾರಗಳಿಗೆ ಕಿರುಕುಳ ನೀಡುತ್ತಿದ್ದರು; ಸಚಿವ ಸಂಪುಟಗಳನ್ನು ಕೆಳಗಿಳಿಸಿದ್ದೂ ಇದೆ. ಸ್ವಾತಂತ್ರ್ಯಾನಂತರ ಈ ಪ್ರವೃತ್ತಿ ಮುಂದುವರಿಯಿತು. 1970ರ ದಶಕದಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ರಾಜಭವನಗಳಲ್ಲಿ ಸ್ನಾಯುಬಲ ಪ್ರದರ್ಶಿಸಿತು. ಕಾಲಕ್ರಮೇಣ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತು. ಈ ಪ್ರವೃತ್ತಿಯನ್ನು ಬಿಜೆಪಿ ಮುಂದುವರಿಸಿದೆ. 2022ರಲ್ಲಿ ಠಾಕ್ರೆ ಸರಕಾರವನ್ನು ರಾಜ್ಯಪಾಲರ ನೆರವಿನಿಂದ ಉರುಳಿಸಿತು. 2019ರಲ್ಲಿ ಪಶ್ಚಿಮ ಬಂಗಾಳಕ್ಕೆ ರಾಜ್ಯಪಾಲರಾಗಿ ನೇಮಕಗೊಂಡ ಜಗದೀಪ್ ಧನ್ಕರ್ ಅತ್ಯಂತ ಕೆಟ್ಟ ಉದಾಹರಣೆ. ಬಿಜೆಪಿ ಪ್ರಾಬಲ್ಯ ಇಲ್ಲದಿದ್ದ ಆ ರಾಜ್ಯದಲ್ಲಿ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಿ, ತೃಣಮೂಲ ಕಾಂಗ್ರೆಸ್ ಸರಕಾರವನ್ನು ಎಡೆಬಿಡದೆ ಕಾಡಿದರು. 2021ರಲ್ಲಿ ತೃಣಮೂಲ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿತು. ಆನಂತರದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸಾಧನೆ ತೃಪ್ತಿಕರವಾಗಿರಲಿಲ್ಲ(42ರಲ್ಲಿ 12 ಸ್ಥಾನದಲ್ಲಿ ಜಯ. 6 ಸ್ಥಾನ ಕಳೆದುಕೊಂಡಿತು). ರಾಜ್ಯಪಾಲರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸದ್ಯಕ್ಕೆ ಅಧಿಕಾರಕ್ಕೆ ಬರುವ ಸಾಧ್ಯತೆಯಿಲ್ಲ. ಆದ್ದರಿಂದ ರಾಜ್ಯಪಾಲರನ್ನು ಬಳಸಿಕೊಂಡು ಪಕ್ಷವನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಸುತ್ತಿದೆ. ಈ ಪ್ರವೃತ್ತಿ ಒಕ್ಕೂಟ ವ್ಯವಸ್ಥೆಯಲ್ಲಿನ ಲೋಪವನ್ನು ತೋರಿಸುತ್ತದೆ. ಇದರಿಂದ, ಬಿಜೆಪಿಯನ್ನು ವಿರೋಧಿಸುವ ರಾಜ್ಯ ಆಧರಿತ ಉಪರಾಷ್ಟ್ರೀಯತೆಗಳು ಹೊರಹೊಮ್ಮಿವೆ ಮತ್ತು ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಹೆಚ್ಚು ಪಾಲು ಉತ್ತರದ ರಾಜ್ಯಗಳಿಗೆ ವರ್ಗಾವಣೆ ಆಗುತ್ತಿರುವ ಬಗ್ಗೆ ಅಸಮಾಧಾನ ಹೆಚ್ಚಿದೆ. ರಾಜ್ಯಪಾಲರನ್ನು ಬಳಸಿಕೊಳ್ಳುವಿಕೆಯು ತಾತ್ಕಾಲಿಕ ಮಾರ್ಗವಾಗಿದ್ದು, ಬಿಜೆಪಿಯ ದೌರ್ಬಲ್ಯವನ್ನು ಹೋಗಲಾಡಿಸುವುದಿಲ್ಲ ಮತ್ತು ಕಾಲಕ್ರಮೇಣ ಕಾಂಗ್ರೆಸ್ನಂತೆ ಬಿಜೆಪಿ ಕೂಡ ದುರ್ಬಲಗೊಳ್ಳುತ್ತದೆ. ಏಕೆಂದರೆ, ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷವು ಪ್ರಜಾಸತ್ತಾತ್ಮಕ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾಗದೆ, ರಾಜ ಭವನಗಳನ್ನು ಅವಲಂಬಿಸುತ್ತಿದೆ ಎಂದು ಜನ ಅರ್ಥ ಮಾಡಿಕೊಳ್ಳುತ್ತಾರೆ. ಸುಪ್ರೀಂ ತೀರ್ಪು ವಿಧಿ 200ರ ಅಡಿಯಲ್ಲಿ ರಾಜ್ಯಪಾಲರ ಅಧಿಕಾರದ ವ್ಯಾಪ್ತಿ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಅಸ್ಪಷ್ಟವಾಗಿದೆ. ರಾಜ್ಯಪಾಲರು ಮಸೂದೆಗೆ ಸಹಿ ಹಾಕಲು ನಿರಾಕರಿಸಲು, ತಡೆಹಿಡಿಯಲು ಅಥವಾ ರಾಷ್ಟ್ರಪತಿ ಅವರಿಗೆ ರವಾನಿಸದೇ ಇರಲು ಅವಕಾಶ ನೀಡುವ ಮೂಲಕ ಸಾಂವಿಧಾನಿಕ ವೀಟೊಗೆ ದಾರಿ ಮಾಡಿಕೊಡುತ್ತದೆ. ನ್ಯಾಯಾಲಯವು ತಾನು ಶಾಸಕಾಂಗ-ಕಾರ್ಯಾಂಗದ ರಾಜಕೀಯ ಜಗಳವನ್ನು ಬಗೆಹರಿಸಲು ಸಿದ್ಧವಿಲ್ಲ ಎಂಬ ಸಂದೇಶ ನೀಡಿರುವುದಲ್ಲದೆ, ತನ್ನ ಸಾಂಸ್ಥಿಕ ಜವಾಬ್ದಾರಿಯನ್ನು ತೊರೆದಂತೆ ಕಾಣುತ್ತದೆ. ಸುಪ್ರೀಂ ಆದೇಶವು ಎಡಿಎಂ ಜಬಲ್ಪುರ್ ಪ್ರಕರಣ(1976ರ ಸುಪ್ರೀಂ ಕೋರ್ಟ್ ತೀರ್ಪು, ತುರ್ತು ಪರಿಸ್ಥಿತಿ ಸಮಯದಲ್ಲಿ ಮೂಲಭೂತ ಹಕ್ಕುಗಳ ಜಾರಿಗೆ ನ್ಯಾಯಾಲಯದ ಕದ ತಟ್ಟುವ ಹಕ್ಕನ್ನು ಅಮಾನತುಗೊಳಿಸಿತು. ಸಂವಿಧಾನದ 226ನೇ ವಿಧಿಯಡಿ ಕೂಡ ವ್ಯಕ್ತಿಯೊಬ್ಬ ತನ್ನ ಬಂಧನವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಈ ವಿವಾದಾಸ್ಪದ ತೀರ್ಪು ಹೇಳುತ್ತದೆ; 1978ರ 44ನೇ ತಿದ್ದುಪಡಿ ಕಾಯ್ದೆಯಿಂದ ರದ್ದುಗೊಳಿಸಲಾಯಿತು)ದ ಆದೇಶವನ್ನು ನೆನಪಿಗೆ ತರುತ್ತದೆ. ಜಬಲ್ಪುರ್ ಆದೇಶಕ್ಕೆ 50 ವರ್ಷ ಆಗಿದೆ; ದೇಶದ ರಾಜಕೀಯ ವಿಕಾಸಗೊಂಡಿದೆ ಮತ್ತು ನ್ಯಾಯಾಂಗ ತುರ್ತುಪರಿಸ್ಥಿತಿ ಯುಗವನ್ನು ಮೀರಿ ಸಾಗಿದೆ. ಸುಪ್ರೀಂ ಆದೇಶದಿಂದ ಬಿಜೆಪಿಯೇತರ ಸರಕಾರವಿರುವ ರಾಜ್ಯಗಳಲ್ಲಿ ರಾಜಭವನಗಳು ಪರ್ಯಾಯ ಶಕ್ತಿ ಕೇಂದ್ರವಾಗಲಿವೆ; ರಾಜ್ಯಪಾಲರು ನ್ಯಾಯಮೂರ್ತಿಯಂತೆ ವರ್ತಿಸುವಂತಿಲ್ಲ ಮತ್ತು ರಾಜ್ಯದಲ್ಲಿ ಇಬ್ಬರು ಕಾರ್ಯನಿರ್ವಾಹಕರು ಇರುವಂತಿಲ್ಲ ಎಂದು ದ್ವಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿತ್ತು. ರಾಜ್ಯಪಾಲರು ಒಪ್ಪಿಗೆಯನ್ನು ‘ಅನಿರ್ದಿಷ್ಟ’ ಕಾಲ ತಡೆಹಿಡಿಯಬಹುದಾದರೆ, ಯಾವಾಗ ರಾಜ್ಯಪಾಲರ ಕ್ರಮವು ‘ವಿವರಿಸಲಾಗದ ವಿಳಂಬ’ ಆಗುತ್ತದೆ? ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಂವಿಧಾನಿಕ ಸಂಸ್ಥೆಗಳು ಕೂಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗದ ಮೌನ ಸಮ್ಮತಿ ಅಥವಾ ಅಸಮ್ಮತಿ ನಡುವೆಯೇ ರಾಷ್ಟ್ರಾಧ್ಯಕ್ಷ ತನ್ನ ಅಧಿಕಾರವನ್ನು ಬೇಕಾಬಿಟ್ಟಿ ಚಲಾಯಿಸಬಹುದು ಎಂಬುದಕ್ಕೆ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಒಂದು ನಿದರ್ಶನ. ಭಾರತದ ಸಂವಿಧಾನವು ಹಲವಾರು ಬದ್ಧತೆ, ವಿನಾಯಿತಿ ಮತ್ತು ರಾಜಿ ಸಂಧಾನದ ಮೂಲಕ ಮಾಡಿ ಕೊಂಡ ರಾಜಕೀಯ ಒಪ್ಪಂದ; ನಿಯಮಗಳ ಪ್ರಕಾರವೇ ಆಟ ಆಡಬೇಕೆಂದು ಸಂವಿಧಾನ ಎಲ್ಲ ಭಾಗೀದಾರರ ಮೇಲೆ ನಿರ್ಬಂಧ ಹೇರುತ್ತದೆ. ರಾಜ್ಯಪಾಲ-ರಾಷ್ಟ್ರಪತಿ ಮೇಲೆ ಕಾಲಮಿತಿಯ ಒತ್ತಡ ಹೇರಲಾಗದು. ಅವರು ‘ತಾರ್ಕಿಕ ಕಾಲಾವಧಿ’ಯೊಳಗೆ ಪ್ರತಿಕ್ರಿಯಿಸಬೇಕು ಎಂದು ಆದೇಶ ಹೇಳುತ್ತದೆ. ಆದರೆ, ‘ತಾರ್ಕಿಕ ಕಾಲಾವಧಿ’ಯನ್ನು ನಿಗದಿಪಡಿಸಿಲ್ಲ. ಆದರೆ, ದ್ವಿಸದಸ್ಯ ಪೀಠವು ‘ರಾಜ್ಯಪಾಲರು ಮಸೂದೆಯೊಂದನ್ನು ಅನಿರ್ದಿಷ್ಟ ಕಾಲ ಇರಿಸಿಕೊಳ್ಳುವಂತಿಲ್ಲ. ಸಾಮಾನ್ಯ ಮಸೂದೆಯಾದರೆ ಒಂದು ತಿಂಗಳು, ಆಂತರಿಕ-ಬಾಹ್ಯ ತುರ್ತುಪರಿಸ್ಥಿಗೆ ಸಂಬಂಧಿಸಿದವು 3-4 ತಿಂಗಳು ತೆಗೆದು ಕೊಳ್ಳಬಹುದು’ ಎಂದು ಹೇಳಿತ್ತು. ನ್ಯಾಯಾಲಯ ಉತ್ತರಿಸದ ಪ್ರಶ್ನೆಯೆಂದರೆ, ಈ ತೀರ್ಪು ಯಾವ ಸಾಂವಿಧಾನಿಕ ಉದ್ದೇಶವನ್ನು ಈಡೇರಿಸುತ್ತದೆ? ರಾಜ್ಯಪಾಲರು ಸಂವಿಧಾನದ ರಕ್ಷಣೆಗೆ ಬದಲು ಒಕ್ಕೂಟ ಸರಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದು, ಮಸೂದೆಗಳನ್ನು ಅನಿರ್ದಿಷ್ಟಾವಧಿ ತಡೆಹಿಡಿಯುವ ಮೂಲಕ ಅಧಿಕಾರ ದುರುಪಯೋಗ ಮತ್ತು ರಾಜ್ಯ ಸರಕಾರಗಳನ್ನು ಹೈರಾಣು ಮಾಡಿರುವುದು ಪ್ರಸ್ತುತ ಬಿಕ್ಕಟ್ಟಿಗೆ ಕಾರಣ. ದ್ವಿಸದಸ್ಯ ಪೀಠ ಈ ರೋಗಕ್ಕೆ ಔಷಧ ನೀಡಲು ಪ್ರಯತ್ನಿಸಿತ್ತು. ಮೊದಲಿಗೆ, ‘ವಿವೇಚನೆ’ ಎಂದರೆ ಏನು? ಆರು ತಿಂಗಳ ಕಾಲಾವಧಿಯಲ್ಲಿ ರಾಜ್ಯಪಾಲರ ವಿವೇಚನೆ ಹೇಗೆ ಬದಲಾಗುತ್ತದೆ? ರಾಜ್ಯಪಾಲರು ‘‘ನನಗೆ ವಿವೇಚನೆಯಿದೆ ಮತ್ತು ನಿಮ್ಮೊಂದಿಗೆ ಮಾತಾಡಲಿದ್ದೇನೆ. ಯಾವಾಗ ಮಾತ ನಾಡುತ್ತೇನೆ ಎಂದು ನಿಮಗೆ ಹೇಳುವುದಿಲ್ಲ. ನನ್ನ ಮೌನ ಅನಿರ್ದಿಷ್ಟ ಕಾಲಾವಧಿ ಆಗಿರಬಹುದು’’ ಎನ್ನಬಹುದು. ಇದು ಸಂವಾದವಲ್ಲ; ಬದಲಾಗಿ, ಅಪರಿಮಿತ ಅಧಿಕಾರದ ಲಕ್ಷಣ. ಎರಡನೆಯದಾಗಿ, ನ್ಯಾಯಾಲಯ ತಾನು ಯಾವಾಗ ಮಧ್ಯಪ್ರವೇಶಿಸುತ್ತೇನೆ ಎಂದು ಹೇಳುವುದಿಲ್ಲ. ಆರು ತಿಂಗಳ ನಂತರ? ಒಂದು ವರ್ಷ? ಮೂರು ವರ್ಷ? ಮೂರನೆಯದಾಗಿ, ತೀರ್ಪಿನಿಂದ ದಾವೆಗಳು ಹೆಚ್ಚುತ್ತವೆ ಮತ್ತು ನ್ಯಾಯಾಂಗದ ಮೇಲೆ ಹೊರೆ ಹೆಚ್ಚುತ್ತದೆ. ದ್ವಿಸದಸ್ಯ ಪೀಠದ ಆದೇಶವು ರಾಜ್ಯ ಸರಕಾರ ಯಾವಾಗ ನ್ಯಾಯಾಲಯದ ಕಟಕಟೆ ಹತ್ತಬೇಕು? ರಾಜ್ಯಪಾಲರ ನಿಷ್ಕ್ರಿಯತೆಯು ಸಾಂವಿಧಾನಿಕ ಮಿತಿಯನ್ನು ಮೀರಿದೆ ಎಂದು ಯಾವಾಗ ಹೇಳಬಹುದು ಎಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ, ಸುಪ್ರೀಂ ತೀರ್ಪು ನಿರ್ವಾತವನ್ನು ಸೃಷ್ಟಿಸುತ್ತದೆ. ರಾಜ್ಯಗಳು ನ್ಯಾಯಾಂಗದ ಮೊರೆಹೋಗುವವರೆಗೆ ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ರಾಜ್ಯಪಾಲರಿಗೆ ಹೇಳುತ್ತದೆ. ರಾಜ್ಯ ಸರಕಾರಗಳು ‘ಸೀಮಿತ ನಿರ್ದೇಶನ’ ಕ್ಕಾಗಿ ನ್ಯಾಯಾಲಯದ ಕದ ತಟ್ಟಿದಾಗ, ಅದು ಯಾವ ಮಾನದಂಡವನ್ನು ಆಧರಿಸಿ ನಿರ್ಧಾರಕ್ಕೆ ಬರುತ್ತದೆ? ಸ್ಪಷ್ಟ ಮಾನದಂಡಗಳಿಲ್ಲದೆ ಇರುವಾಗ ನ್ಯಾಯಾಲಯದ ನಿರ್ಧಾರಗಳು ವಿವೇಚನೆರಹಿತ ಮತ್ತು ರಾಜಕೀಯಪ್ರೇರಿತ ಆಗಿರಬಹುದು. ಸಂವಿಧಾನ ತಪ್ಪಿಸಲು ಪ್ರಯತ್ನಿಸಿದ್ದು ಇಂಥ ಸಂಘರ್ಷವನ್ನೇ. ಸುಪ್ರೀಂ ತೀರ್ಪು ಎಲ್ಲ ಗೊಂಬೆಗಳ ಸೂತ್ರಗಳನ್ನು ಕೇಂದ್ರ ಸರಕಾರದ ಕೈಗೆ ಕೊಟ್ಟಿದೆ. ದೇಶ ಮತ್ತು ನಾಗರಿಕರು, ಬಹುಸಂಖ್ಯಾತರು-ಅಲ್ಪಸಂಖ್ಯಾತರು, ಸ್ತ್ರೀ-ಪುರುಷ, ಬಡವರು-ಹಣವಂತರ ನಡುವೆ ನ್ಯಾಯಸಮ್ಮತ ಸಮತೋಲನ, ಒಕ್ಕೂಟ ಮತ್ತು ರಾಜ್ಯಗಳ ನಡುವೆ ನಂಬಿಕಸ್ಥ ಪಾಲುದಾರಿಕೆ ಇದ್ದಾಗ ದೇಶ ಚೈತನ್ಯಶಾಲಿ ಆಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಸದೃಢ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ. ಕಳೆದ ಏಳು ದಶಕಗಳಿಂದ ಈ ಸರಳ ಪಾಠವನ್ನು ಕಲಿಯಲು ನಾವು ವಿಫಲವಾಗಿದ್ದೇವೆ; ಸಾಂಸ್ಥಿಕ ಲೋಪದೋಷಗಳಿಂದ ಕೆಟ್ಟ ಆಯ್ಕೆಗಳಲ್ಲದೆ, ದುಬಾರಿ ದಂಡ ತೆರಬೇಕಾಗುತ್ತದೆ. ವಿವೇಕಶಾಲಿ ನಾಯಕತ್ವದ ಅನುಪಸ್ಥಿತಿಯಲ್ಲಿ ಸಮತೋಲನವನ್ನು ಕಾಯುವ ಹೊರೆ ನ್ಯಾಯಾಂಗದ ಮೇಲೆ ಬೀಳುತ್ತದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ‘‘ಕಾಯ್ದೆಗಳಿಗೆ ಸಮ್ಮತಿ ನೀಡಲು ಸಂವಿಧಾನ ಕಾಲಮಿತಿ ವಿಧಿಸಿಲ್ಲ; ಅಲ್ಲಿ ಇಲ್ಲದೆ ಇರುವುದನ್ನು ನಾವು ಹುಡುಕಲು ಸಾಧ್ಯವಿಲ್ಲ. ಅದನ್ನು ಸಂಸತ್ತು ಮಾಡಬೇಕು’’ ಎಂದು ನ್ಯಾ. ಗವಾಯಿ ಅವರು ನಿವೃತ್ತಿಗೆ ಮುನ್ನ ಹೇಳಿದ್ದಾರೆ. ನಿವೃತ್ತಿ ಬಳಿಕ ಯಾವುದೇ ಸರಕಾರಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ; 15 ಮಹಿಳೆಯರು, ಒಬಿಸಿ/ಬಿಸಿ ಸಮುದಾಯದ 11, ಪರಿಶಿಷ್ಟ ಜಾತಿಯ 10 ಮತ್ತು ಅಲ್ಪಸಂಖ್ಯಾತ ಸಮುದಾಯದ 13 ಸೇರಿದಂತೆ 93 ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಅನುಮತಿ ನೀಡಿದೆ ಎಂದಿದ್ದಾರೆ. ಇದು ಸ್ವಾಗತಾರ್ಹ. ಆದರೆ, ರಬ್ಬರ್ಸ್ಟ್ಯಾಂಪ್ ರಾಷ್ಟ್ರಪತಿ ಹಾಗೂ ವಸಾಹತುಶಾಹಿಯ ಪಳೆಯುಳಿಕೆಗಳಾದ ರಾಜ್ಯಪಾಲರ ಹುದ್ದೆಯನ್ನೇ ವಿಸರ್ಜಿಸಬೇಕಿರುವ ಸಂದರ್ಭದಲ್ಲಿ ಅವರಿಗೆ ವಿವೇಚನಾಧಿಕಾರ ಕೊಡುವ ತೀರ್ಪಿನಿಂದ ಸಂವಿಧಾನದ ಮೂಲ ಶಿಲ್ಪಕ್ಕೆ ಧಕ್ಕೆಯುಂಟಾಗಿದೆ. ಧೀಮಂತರು ಆ ಸ್ಥಾನದಲ್ಲಿದ್ದರೆ, ವಿವೇಚನೆ-ಘನತೆಯನ್ನು ನಿರೀಕ್ಷಿಸಬಹುದಿತ್ತು. 1997ರಲ್ಲಿ ಉತ್ತರಪ್ರದೇಶದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ (ಅಧಿಕಾರಾವಧಿ 1997-2002) ಅವರಿಗೆ ಪ್ರಧಾನಿ ಐ.ಕೆ. ಗುಜ್ರಾಲ್ ಶಿಫಾರಸು ಮಾಡಿದರು. ಕೆ.ಅರ್.ಎನ್. ಅವರು ಮರುಪರಿಶೀಲನೆಗೆ ವಾಪಸ್ ಕಳಿಸಿದ ಕಡತ ಮತ್ತೊಮ್ಮೆ ಅವರ ಬಳಿ ಬರಲಿಲ್ಲ. 1998ರಲ್ಲಿ ಎ.ಬಿ. ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಬಿಹಾರದ ರಾಬ್ಡಿದೇವಿ ಸರಕಾರವನ್ನು ವಜಾಗೊಳಿಸಿ, ವಿಧಿ 356ರಡಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ರಾಜ್ಯಪಾಲರು ಶಿಫಾರಸು ಮಾಡಿದರು. ಆದರೆ, ಕೆ.ಆರ್. ನಾರಾಯಣನ್ ಅವರು ಸಮ್ಮತಿಸಲಿಲ್ಲ. ಸಚಿವ ಸಂಪುಟ ಕಡತವನ್ನು ಮತ್ತೊಮ್ಮೆ ಕಳಿಸುವ ಸಾಹಸ ಮಾಡಲಿಲ್ಲ. ಆರ್. ವೆಂಕಟರಾಮನ್ ಅವರು ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್ ಹಾಗೂ ಆನಂತರ ಪಿ.ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ರಾಷ್ಟ್ರಪತಿ ಆಗಿದ್ದರು(1987-92). ಯಾವುದೇ ಸಂಘರ್ಷ ನಡೆಯಲಿಲ್ಲ. ರಾಜಕೀಯದಲ್ಲಿದ್ದೂ ಅಂಟಿಕೊಳ್ಳದ ಮುತ್ಸದ್ದಿಗಳಿಂದ ಮಾತ್ರ ಇಂಥದ್ದು ಸಾಧ್ಯ. ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ಅವರ ದೇಹಭಾಷೆ/ಮಾತು ಮತ್ತು ಸಂಸತ್ತಿನಲ್ಲಿ ಅವರ ವರ್ತನೆ ಗಮನಿಸಿದ್ದವರಿಗೆ, ನಾವು ಎಂಥ ಕಾಲದಲ್ಲಿ ಇದ್ದೇವೆ ಎನ್ನುವುದು ಗೊತ್ತಾಗುತ್ತದೆ. ಸುಪ್ರೀಂ ಕೋರ್ಟಿನ ಕಪಾಳಮೋಕ್ಷದ ನಂತರವೂ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ವರ್ತನೆಯಲ್ಲಿ ಹೆಚ್ಚೇನೂ ಬದಲಾವಣೆ ಆದಂತಿಲ್ಲ. ಇವರೆಲ್ಲರೂ ದಿಲ್ಲಿಯ ರಿಂಗ್ ಮಾಸ್ಟರ್ ಹೇಳಿದಂತೆ ನರ್ತಿಸುತ್ತ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ. ಪಕ್ಕದ ರಾಷ್ಟ್ರ ಪಾಕಿಸ್ತಾನದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ಸೈಯದ್ ಮನ್ಸೂರ್ ಅಲಿ ಶಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ‘ತನ್ನ ಆಡಳಿತದ ಹೃದಯದಲ್ಲಿ ಕಾನೂನಿನ ಆಳ್ವಿಕೆಯನ್ನು ಇರಿಸಿರುವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಪವಿತ್ರ ಎಂದು ಪರಿಗಣಿಸುವ ದೇಶಗಳು ಅಭಿವೃದ್ಧಿಗೊಳ್ಳುತ್ತವೆ. ನ್ಯಾಯಾಂಗವನ್ನು ಶೃಂಖಲೆಯಲ್ಲಿ ಇರಿಸಿದಾಗ, ದೇಶಗಳು ಎಡವುತ್ತವೆ ಮಾತ್ರವಲ್ಲ; ತಮ್ಮ ನೈತಿಕ ದಿಕ್ಸೂಚಿಯನ್ನು ಕಳೆದುಕೊಳ್ಳು ತ್ತವೆ. ಚರಿತ್ರೆಯಲ್ಲಿ ಇಂಥ ಉದಾಹರಣೆಗಳಿವೆ; ನ್ಯಾಯಾಲಯಗಳು ಮೌನ ವಹಿಸಿದಾಗ, ಸಮಾಜಗಳು ಕತ್ತಲೆಗೆ ಬೀಳುತ್ತವೆ’ ಎಂದು ಬರೆದಿದ್ದರು. ಫೀಲ್ಡ್ ಮಾರ್ಷಲ್ ಮುನೀರ್ ಖಾನ್ ನಿರ್ದೇಶಿತ ಸಂವಿಧಾನ ತಿದ್ದುಪಡಿಗಳಿಗೆ ಬಹುಪಾಲು ನ್ಯಾಯಾಧೀಶರು ಸಮ್ಮತಿಸಿದ್ದರು; ನ್ಯಾ. ಶಾ ರಾಜೀನಾಮೆ ನೀಡಿದರು. ‘ಸುಪ್ರೀಂ ತೀರ್ಪಿನಿಂದ ಕಾನೂನಿನ ಚೈತನ್ಯಕ್ಕೆ ಸೋಲುಂಟಾಗಿಲ್ಲ’ ಎಂದು ಗೋಪಾಲಕೃಷ್ಣ ಗಾಂಧಿ ಹೇಳುತ್ತಾರೆ. ಅವರ ಗ್ರಹಿಕೆಯಲ್ಲಿ ಸಮಸ್ಯೆಯಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನ್ಯಾಯಾಂಗವು ಸಾಂವಿಧಾನಿಕ ಹಕ್ಕುಗಳ ನಿರ್ಣಾಯಕ ರಕ್ಷಕ; ಅದು ಸ್ವತಂತ್ರವಾಗಿ ಉಳಿಯಬೇಕು ಮತ್ತು ಉನ್ನತ ಗುಣಮಟ್ಟದ ನಡವಳಿಕೆ ಹೊಂದಿರಬೇಕು. ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಮತ್ತು ನ್ಯಾಯಾಧೀಶರ ಕ್ರಮಗಳು ನ್ಯಾಯವ್ಯವಸ್ಥೆಯ ನಿಷ್ಪಕ್ಷಪಾತತನದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಬೇಕು ಎಂದು ಹೇಳಿದ್ದರು. ಇದೆಲ್ಲವೂ ಈಗ ಮರೀಚಿಕೆಯಾಗಿದೆ. 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಬಂದುಹೋಗಿದೆ; ಸಂವಿಧಾನದ ಬುನಾದಿ ಅಳ್ಳಕವಾಗುತ್ತಿದೆ ಮತ್ತು ಬೆಳಕು ಮಸುಕಾಗುತ್ತಿದೆ.
DK Shivakumar: ಆಂಧ್ರಪ್ರದೇಶದ ವೈಎಸ್ಆರ್ ನಡೆ ಅನುಸರಿಸಲಿದ್ದಾರೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ?
DK Shivakumar: ರಾಜ್ಯದಲ್ಲಿ ಘಟಾನುಘಟಿ ರಾಜಕೀಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಕೇಳಿ ಬರುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣ ಗಾಗಿರುವ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯವಾದ ಕರ್ನಾಟಕದಲ್ಲೂ ಪ್ರಮುಖ ನಾಯಕರ
ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ: ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್
ಪೊಲೀಸರು-ಬಿಜೆಪಿ ಕಾರ್ಯಕರ್ತ ಮಧ್ಯೆ ಮಾತಿನ ಚಿಕಮಕಿ
LPG Price: ಡಿಸೆಂಬರ್ 1ರಿಂದಲೇ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಸಾಧ್ಯತೆ
ನವೆಂಬರ್ ತಿಂಗಳು ಇನ್ನೇನು ಎರಡು ದಿನಗಳಲ್ಲಿ ಮುಗಿದು ಡಿಸೆಂಬರ್ಗೆ ಕಾಲಿಡುತ್ತಿದ್ದೇವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಎಲ್ಪಿಜಿ ಸಿಲಿಂಡರ್ ದರಗಳು ಬದಲಾಗುತ್ತವೆ. ಸದ್ಯ ಬೆಳೆ ಇಳಿಕೆಯಿಂದ ನೆಮ್ಮದಿಯಾಗಿದ್ದ ಎಲ್ಪಿಜಿ ಬಳಕೆದಾರರಿಗೆ ಡಿಸೆಂಬರ್ ಆರಂಭದಿಂದಲೇ ದೊಡ್ಡ ಶಾಕ್ ಕಾದಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ತೆಗೆದುಕೊಂಡಿರುವ ಇತ್ತೀಚಿನ ಮಹತ್ವದ ನಿರ್ಣಯಗಳಿಂದಾಗಿ ಡಿಸೆಂಬರ್ 1ರಿಂದಲೇ ಎಲ್ಪಿಜಿ ದರ ಭಾರೀ
ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?: ಮನುವಾದಿಗಳ ವಿಕೃತ ವಾದಗಳು-ಚಾರಿತ್ರಿಕ ಸತ್ಯಗಳು
ಭಾಗ - 3 ಸಂವಿಧಾನ ರಚನಾ ಸಭೆ-ಎಷ್ಟು ಪ್ರಾತಿನಿಧಿಕ? ಪೂನಾ ಒಪ್ಪಂದದ ನಂತರದಲ್ಲಿ ಮೇಲ್ಜಾತಿ ಹಿಂದೂಗಳ ಆಧಿಪತ್ಯದಲ್ಲಿ ಭಾರತವು ಸ್ವಾತಂತ್ರ್ಯ ಪಡೆದುಕೊಂಡರೆ ಅಂಥಾ ಭಾರತದಲ್ಲಿ ದಲಿತ-ದಮನಿತರ ಹಕ್ಕುಗಳನ್ನು ಪರಿರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅಂಬೇಡ್ಕರ್ ತೀರಾ ಕಳವಳವನ್ನು ಹೊಂದಿದ್ದರು. ಆದ್ದರಿಂದಲೇ ಪ್ರಾರಂಭದಲ್ಲಿ ಸವರ್ಣೀಯ ಮತ್ತು ಊಳಿಗಮಾನ್ಯ ಹಿಂದೂಗಳ ಹೆಚ್ಚಾಗಿರಬಹುದಾದ ಸಂವಿಧಾನ ರಚನಾ ಸಭೆಯೊಂದರ ಅಗತ್ಯವೇನು ಎಂಬ ಪ್ರಶ್ನೆಯೂ ಅವರನ್ನು ಕಾಡಿತ್ತು. ಹಾಗಾಗಿಯೇ ಅವರು ಸಂವಿಧಾನ ರಚನಾ ಸಭೆಯೊಂದು ಆಗುವುದಾದರೆ ಅದರಲ್ಲಿ ಎಲ್ಲಾ ಹಿಂದೂ ಬಹುಸಂಖ್ಯಾತರ ಪ್ರಮಾಣ ಶೇ.40ನ್ನು ಮೀರದಂತಿರಬೇಕೆಂದೂ ಸಲಹೆ ಮಾಡಿದ್ದರು. ಅಂಬೇಡ್ಕರ್ ಅವರು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಅನ್ನು ಉದ್ದೇಶಿಸಿ ಮಾಡಿದ ‘‘Communal Deadlock - And a Way to Solve It’’ ಎಂಬ ಭಾಷಣದಲ್ಲಿ ತಮ್ಮ ಕಲ್ಪನೆಯ ಸಂವಿಧಾನ ರಚನಾ ಸಭೆಯ ಸಂಯೋಜನೆಯನ್ನು ಅಂಬೇಡ್ಕರ್ ಮುಂದಿಟ್ಟಿದ್ದರು. ಅದೇನೇ ಇರಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯ ಪಾತ್ರಧಾರಿ ಮತ್ತು ಪ್ರಧಾನ ಫಲಾನುಭವಿ ವರ್ಗಗಳು ಮತ್ತು ಸಮುದಾಯಗಳು ಮಾಡಿಕೊಂಡ ಒಪ್ಪಂದದಂತೆ ಹಾಗೂ ಬ್ರಿಟಿಷರ ಸಮ್ಮತಿಯೊಂದಿಗೆ 1946ರಲ್ಲಿ ಭಾರತದ ಸಂವಿಧಾನ ರಚನಾ ಸಭೆ ರೂಪುಗೊಂಡಿತು. 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಜಾರಿಗೆ ಬಂದು 1937ರಲ್ಲಿ ನಡೆದ ಪ್ರಾಂತೀಯ ಶಾಸನ ಸಭಾ ಚುನಾವಣೆಗಳ ಕಾಲದಿಂದಲೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದವರನ್ನು ಮತ್ತು ಪದವೀಧರರನ್ನು ಮಾತ್ರ ಜವಾಬ್ದಾರಿಯುತ ಪ್ರಜೆಗಳೆಂದು ಭಾವಿಸಲಾಗುತ್ತಿತ್ತು. ಅಂದರೆ ಭಾರತದ ಶೇ.17ಕ್ಕಿಂತ ಕಡಿಮೆ ಮತದಾರರು ಮಾತ್ರ ಪ್ರಾಂತೀಯ ಸಭೆಯನ್ನು ಆಯ್ಕೆ ಮಾಡುತ್ತಿದ್ದರು. ಅವರಲ್ಲಿ ಶೇ.95 ಭಾಗ ಮೇಲ್ವರ್ಗ ಮತ್ತು ಸವರ್ಣೀಯ ಮೇಲ್ಜಾತಿಗಳೇ ಆಗಿರುತ್ತಿದ್ದರು ಎಂಬುದು ಅದರ ವರ್ಗ ಹಾಗೂ ಜಾತಿ ಆಯಾಮ. ಅದೇ ಆಧಾರದಲ್ಲಿ 1946ರಲ್ಲಿ ಪ್ರಾಂತೀಯ ಹಾಗೂ ಕೇಂದ್ರೀಯ ಶಾಸನ ಸಭೆಗಳಿಗೆ ಚುನಾವಣೆ ನಡೆಯಿತು. ಆ ಸದಸ್ಯರೇ ಭಾವೀ ಭಾರತದ ಸಂವಿಧಾನವನ್ನು ರಚಿಸುವ 292 ಸದಸ್ಯರನ್ನು ಆಯ್ಕೆ ಮಾಡಿದರು. ಇದರ ಜೊತೆಗೆ 93 ಸದಸ್ಯರನ್ನು ರಾಜ ಸಂಸ್ಥಾನಗಳು ನೇಮಕ ಮಾಡಿದವು. ಆದರೆ ದೇಶ ವಿಭಜನೆಯಾದ ಮೇಲೆ ಮುಸ್ಲಿಮ್ ಲೀಗ್ನ ಸದಸ್ಯರು ಇಲ್ಲವಾಗಿ 299 ಸದಸ್ಯರ ಭಾರತ ಸಂವಿಧಾನ ಸಭೆ ರೂಪುಗೊಂಡಿತು. ಇದರಲ್ಲಿ 229 ಸೀಮಿತ ಮತದಾನದ ಮೂಲಕ ಆಯ್ಕೆಯಾದ ಸದಸ್ಯರು, ಉಳಿದ 70 ಜನ ರಾಜಸಂಸ್ಥಾನಗಳು ನೇಮಕ ಮಾಡಿದ ಪ್ರತಿನಿಧಿಗಳು! ಬಲಾಢ್ಯರ ಬಹುಮತದಲ್ಲಿ ನಲುಗಿದ ದಮನಿತರ ಪ್ರಾತಿನಿಧ್ಯ ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸಂವಿಧಾನವು ಒಪ್ಪಿಕೊಂಡ ಪ್ರಾತಿನಿಧಿಕ ಪ್ರಜಾಪ್ರಭುತ್ವವು ದಲಿತ ದಮನಿತರನ್ನು ಕೇವಲ ಸಂಖ್ಯಾತ್ಮಕವಾಗಿ ಪ್ರತಿನಿಧಿಸದೆ ಅವರ ನೈಜ ಆಸಕ್ತಿಗಳನ್ನು ಪ್ರತಿನಿಧಿಸುವಂತಾಗಬೇಕೆಂಬುದು ಅಂಬೇಡ್ಕರ್ ಅವರ ನಿರಂತರ ಹೋರಾಟವಾಗಿತ್ತು. ಸವರ್ಣೀಯರ ಹಾಗೂ ಬಲಾಢ್ಯ ಜಾತಿಗಳ ಹಂಗಿಲ್ಲದಂತೆ ಆಯ್ಕೆಯಾಗುವಂತಾದಾಗ ಮಾತ್ರ ದಲಿತ ಪ್ರತಿನಿಧಿಗಳು ನಿಜವಾಗಿ ದಲಿತರನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆಂದು ಅರ್ಥಮಾಡಿಕೊಂಡಿದ್ದ ಅಂಬೇಡ್ಕರ್ ಅವರು 1929-32ರ ದುಂಡು ಮೇಜಿನ ಪರಿಷತ್ತಿನಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಆಗ್ರಹಿಸಿದ್ದರು. ಬ್ರಿಟಿಷರು ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದರು. ಆದರೆ ಗಾಂಧಿಯವರು ಸತ್ಯಾಗ್ರಹ ಮಾಡಿ ಹೇರಿದ ಪೂನಾ ಒಪ್ಪಂದವಾಗಿ ದಲಿತರು ಸಹ ಹಿಂದೂ ವಿಭಾಗದೊಳಗೆ ಮೀಸಲಾತಿ ಪಡೆಯುವಂತಾಯಿತು. ಈ ಆಧಾರದಲ್ಲಿ 1937ರಲ್ಲಿ ಮತ್ತು 1946ರಲ್ಲಿ ನಡೆದ ಪ್ರಾಂತಿಯ ಮತ್ತು ಕೇಂದ್ರೀಯ ಶಾಸನಾ ಸಭಾ ಚುನಾವಣೆಗಳಲ್ಲಿ ಮೊದಲ ಸುತ್ತಿನಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ದಲಿತ ಮತದಾರರು ಮಾತ್ರ ತಮ್ಮ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಎರಡನೇ ಸುತ್ತಿನಲ್ಲಿ ಆ ಕ್ಷೇತ್ರದ ಎಲ್ಲಾ ಮತದಾರರೂ ಒಟ್ಟು ಸೇರಿ ಆ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಪದ್ಧತಿ ಜಾರಿಯಾಯಿತು. ಆದರೆ ಅದರ ಫಲಿತಾಂಶಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಪ್ರತೀ ಮೀಸಲಾತಿ ಕ್ಷೇತ್ರದಲ್ಲಿ ಹೇಗೆ ಮೊದಲ ಸುತ್ತಿನಲ್ಲಿ ದಲಿತರು ಮಾತ್ರ ಮತ ಚಲಾಯಿಸಿದಾಗ ಮೊದಲ ಸ್ಥಾನ ಪಡೆದುಕೊಂಡ ದಲಿತ ಅಭ್ಯರ್ಥಿಯು, ಎರಡನೇ ಸುತ್ತಿನಲ್ಲಿ ಇಡೀ ಕ್ಷೇತ್ರದ ದಲಿತೇತರ ಮತದಾರರೂ ಒಟ್ಟು ಸೇರಿ ಮತ ಚಲಾಯಿಸಿದಾಗ ಕೊನೆಯ ಸ್ಥಾನಕ್ಕಿಳಿದು ಸೋತಿರುವುದನ್ನು ಬಯಲಿಗೆಳೆದರು. ಹೀಗಾಗಿ ಪ್ರಜಾ ಪ್ರತಿನಿಧಿಗಳ ಚುನಾವಣೆಯಲ್ಲಿನ ಈ ಗಂಭೀರ ಲೋಪವನ್ನು ಬಗೆಹರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರು ಬಹಳವಾಗಿ ಪ್ರಯತ್ನಿಸಿದರು. ಸಂವಿಧಾನ ರಚನಾ ಸಭೆಯಲ್ಲಿ ಏಳು ಉಪಸಮಿತಿಗಳಿದ್ದು ಅದರಲ್ಲಿ ಒಂದು ಮೈನಾರಿಟಿ ಹಕ್ಕುಗಳ ಸಮಿತಿ ಈ ವಿಷಯಕ್ಕೆ ಸಂಬಂಧಪಟ್ಟ ಸಮಿತಿಯಾಗಿತ್ತು. ಅದರಲ್ಲಿ 31 ಜನ ಸದಸ್ಯರಿದ್ದು ವಲ್ಲಭಭಾಯಿ ಪಟೇಲರು ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಅಂಬೇಡ್ಕರ್ ಅವರು ಒಂದು ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ದಲಿತ ಅಭ್ಯರ್ಥಿಯು ಶೇ.50ರಷ್ಟು ದಲಿತರ ಮತಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಪ್ರಸ್ತಾವವನ್ನು ಮುಂದಿಟ್ಟರು. ಆಗ ದಲಿತ ಪ್ರತಿನಿಧಿ ಬಹುಸಂಖ್ಯಾತ ಸವರ್ಣೀಯರ ಕೈಗೊಂಬೆಯಾಗದೆ ಕಡ್ಡಾಯವಾಗಿ ದಲಿತ ಮತದಾರರನ್ನು ಸಹ ಅನುಸರಿಸಲೇ ಬೇಕಾಗುತ್ತದೆಂಬುದು ಈ ಪ್ರಸ್ತಾವದ ಹಿಂದಿನ ಆಶಯವಾಗಿತ್ತು. ಆದರೆ ಈ ಪ್ರಸ್ತಾವವನ್ನು 31 ಸದಸ್ಯರಲ್ಲಿ 28 ಸದಸ್ಯರು ವಿರೋಧಿಸಿದ್ದರಿಂದ ಬಿದ್ದುಹೋಯಿತು. ಆಗ ಅದಕ್ಕೆ ಬದಲಾಗಿ ಸಾರ್ವತ್ರಿಕ ಕ್ಷೇತ್ರದಲ್ಲಿ ಗೆಲ್ಲುವ ದಲಿತೇತರ ಅಭ್ಯರ್ಥಿ ಕನಿಷ್ಠ ಪಕ್ಷ ಶೇ.35ರಷ್ಟು ದಲಿತ ವೋಟುಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಮಾಡಬೇಕೆಂಬ ಆಂಬೇಡ್ಕರ್ ಅವರ ಪ್ರಸ್ತಾವವನ್ನು ಅವರ ಅನುಪಸ್ಥಿತಿಯಲ್ಲಿ ನಾಗಪ್ಪ ಎಂಬ ಸದಸ್ಯರು ಮುಂದಿಟ್ಟರು. ಆದರೆ ಈ ಪ್ರಸ್ತಾವದಿಂದ ವಲ್ಲಭ ಭಾಯಿ ಪಟೇಲರು ಕೆಂಡಾಮಂಡಲವಾದರು. ಈ ಪ್ರಸ್ತಾವವು ಗಾಂಧಿಯವರು ದಲಿತರಿಗೆ ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳದೆ ದಲಿತರು ಗಾಂಧಿಗೆ ಮಾಡುತ್ತಿರುವ ದ್ರೋಹವೆಂದು ಹೀಗೆಳೆದು ಪ್ರಸ್ತಾವವನ್ನು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಸೋಲಿಸಿದರು. (ಹೆಚ್ಚಿನ ವಿವರಗಳಿಗೆ ಆಸಕ್ತರು ರಾಜಕೀಯ ಶಾಸ್ತ್ರಜ್ಞರಾದ ವಿದ್ವಾಂಸ ಕ್ರಿಸ್ಟೋಫೆ ಜಾಫರ್ಲೆ ಅವರು ಬರೆದಿರುವ: ‘Conatining The Lower Castes: The Constituent Assembly and The Reservation Policy- Christophe Jaffrelot’ ಎಂಬ ಪ್ರಬಂಧವನ್ನು ಪರಿಶೀಲಿಸಬಹುದು) ಇಂದು ದಲಿತ ಪ್ರಾತಿನಿಧ್ಯದ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಲೇ ಇದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರವನ್ನು ತರಲು ಕೀಲಕವಾದ ರಾಜಕೀಯ ಪ್ರಜಾತಂತ್ರವೇ ಹೀಗೆ ನಿಸ್ಸಾರ ಅಥವಾ ತಿರುಚಲ್ಪಟ್ಟ ಪ್ರಜಾತಂತ್ರವಾಗಿಬಿಟ್ಟಿರುವುದೂ ಸಹ ನಮ್ಮ ಇಂದಿನ ದುರವಸ್ಥೆಗೆ ಕಾರಣವಾಗಿದೆ. ಸಮಾನತೆಯಿಲ್ಲದ ಸ್ವಾತಂತ್ರ್ಯದ ಸಮಸ್ಯೆ ಅಂಬೇಡ್ಕರ್ ಅವರು 1947ರಲ್ಲಿ ಸಂವಿಧಾನ ರಚನೆ ಸಭೆಗೆ ಅರ್ಪಿಸಲು ಬರೆದ ಮನವಿ ಪತ್ರದ ರೂಪದ ಪರ್ಯಾಯ ಸಂವಿಧಾನವೇ ಆದ ‘ಸ್ಟೇಟ್ ಆಂಡ್ ಮೈನಾರಿಟೀಸ್’ ಎಂಬ ಪುಸ್ತಕದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಒಂದನ್ನು ಬಿಟ್ಟು ಮತ್ತೊಂದಿರದ ತ್ರಿವಳಿಗಳಾಗಿವೆ ಎಂಬುದನ್ನು ವಿವರಿಸುತ್ತಾರೆ. ನಮ್ಮ ಸಂವಿಧಾನವು ಸಹ ಆ ಮೂರನ್ನೂ ಏಕಕಾಲದಲ್ಲಿ ಸಾಧಿಸಬೇಕೆಂದು ಅಂಬೇಡ್ಕರ್ ಆಶಿಸಿದ್ದರು. ಸಮಾನತೆಯಿಲ್ಲದ ಸ್ವಾತಂತ್ರ್ಯ ಕೇವಲ ಉಳ್ಳವರಿಗೆ ದಕ್ಕುವ ಸ್ವಾತಂತ್ರ್ಯವಾಗಿರುತ್ತವೆ. ಮಾತ್ರವಲ್ಲ ಈವರೆಗಿನ ಎಲ್ಲಾ ಪ್ರಜಾತಂತ್ರಗಳು ಸ್ವಾತಂತ್ರ್ಯವನ್ನು ಮಾತ್ರ ನೀಡಿವೆಯೇ ಹೊರತು ಸಮಾನತೆಯನ್ನಲ್ಲ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು. ಆದ್ದರಿಂದ ನಮ್ಮ ದೇಶದ ಸಂವಿಧಾನ ಹಾಗೆ ಮಾಡದೆ ಸಮಾನತೆಯನ್ನು ಮೂಲಭೂತ ಹಕ್ಕನ್ನಾಗಿಸಬೇಕೆಂದು ಬಯಸಿದ್ದರು. ಆ ಕಾರಣಕ್ಕೆ ದೇಶದ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕಿರುವುದು ಅಗತ್ಯ ಎಂದೂ ಪ್ರತಿಪಾದಿಸಿದ್ದರು. ಭೂಮಿಯನ್ನು ರಾಷ್ಟ್ರೀಕರಣ ಮಾಡಿ ಸಹಕಾರಿ ಕೃಷಿಯನ್ನು ಕಡ್ಡಾಯ ಮಾಡಿದರೆ ಬಡ ಜನರ ಬೆವರು ಬೆಸೆದು ಜಾತಿ ಮತ್ತು ವರ್ಗದ ಗೋಡೆಗಳು ಕುಸಿಯಬಹುದೆಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ನೀಡಿದ್ದರು ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಬಹುಸಂಖ್ಯಾತರಿಗೆ ಶೇ. 40ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಸರಕಾರದಲ್ಲಾಗಲೀ, ಶಾಸನ ಸಭೆಗಳಲ್ಲಾಗಲೀ ಇರಕೂಡದೆಂಬ ಕ್ರಾಂತಿಕಾರಿ ಪರಿಹಾರವನ್ನು ನೀಡಿದ್ದರು. ಆದರೆ 1950ರಲ್ಲಿ ಜಾರಿಯಾದ ಸಂವಿಧಾನದಲ್ಲಿ ಸಮಾನತೆ ಮೂಲಭೂತ ಹಕ್ಕೂ ಆಗಲಿಲ್ಲ. ಸಂಪತ್ತುಗಳ ರಾಷ್ಟ್ರೀಕರಣವೂ ಆಗಲಿಲ್ಲ. ಬದಲಿಗೆ ಭಾರತದ ಪ್ರಭುತ್ವವು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತಹ ನೀತಿಯನ್ನು ಜಾರಿಗೆ ತರಬೇಕೆಂಬ ಹಾಗೂ ಎಲ್ಲರಿಗೂ ಘನತೆಯಿಂದ ಬದುಕಲು ಬೇಕಾದಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೆಂಬ ವಿಧಿಗಳು ಪ್ರಭುತ್ವ ನಿರ್ದೇಶನಾ ತತ್ವಗಳಾಗಿ ಇಂದಿನ ಸಂವಿಧಾನದಲ್ಲಿ ಸೇರಿಕೊಂಡಿವೆ. ಆದರೆ ಸಂವಿಧಾನದ ಆರ್ಟಿಕಲ್ 37 ಸ್ಪಷ್ಟಪಡಿಸುವಂತೆ ಪ್ರಭುತ್ವ ನಿರ್ದೇಶನಾ ತತ್ವಗಳು ಸಂವಿಧಾನದ ಆಶಯಗಳೇ ವಿನಾ ಮೂಲಭೂತ ಹಕ್ಕುಗಳಲ್ಲ. ಅದನ್ನು ಸರಕಾರಗಳು ಜಾರಿ ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಹೀಗಾಗಿ ಭಾರತದ ಸಂವಿಧಾನ ಸಭೆ ಅಂಬೇಡ್ಕರ್ ಅವರ ಮೂಲ ಆಶಯಕ್ಕೆ ಭಂಗ ತಂದು ಅದನ್ನು ಭಾರತದ ಸಂವಿಧಾನದಲ್ಲಿ ಕೇವಲ ಆಲಂಕಾರಿಕವಾಗಿ ಸೇರಿಸಿಕೊಂಡಿದೆ. ಡಾ. ಅಂಬೇಡ್ಕರ್ ಅವರ ಕ್ರಾಂತಿಕಾರಿ ಸರ್ಜರಿಯಿಲ್ಲದೆ ಈ ದೇಶ ಉಳಿಯದು ಅದೇನೇ ಇರಲಿ. 1950ರ ಜನವರಿ 26ರಂದು ಭಾರತವು ಒಂದು ಗಣರಾಜ್ಯವಾಗಿದೆ. ಅಷ್ಟರಮಟ್ಟಿಗೆ ಅದು ಭಾರತದ ನಾಗರಿಕತೆಯ ಇತಿಹಾಸದಲ್ಲಿ ಒಂದು ದೊಡ್ಡ ದಾಪುಗಾಲು. ಅಷ್ಟರ ಮಟ್ಟಿಗಾದರೂ ಸಾಧ್ಯವಾಗಿದ್ದು ಅಂಬೇಡ್ಕರ್ ಎಂಬ ಬೆಳಕಿನಿಂದ ಹಾಗೂ ಭಾರತದಲ್ಲಿ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದಮನಿತ ಜನತೆ ಹೋರಾಟಗಳಿಂದ ಪಡೆದುಕೊಂಡ ಜಾಗೃತಿಯಿಂದ. ಇಂದು ಅದನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಅದಕ್ಕೆ ಕಾರಣ ರಾಜಕೀಯವಾಗಿ ಸಮಾನತೆ ಪಡೆದಿದ್ದರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆಗಳು ಹೆಚ್ಚುತ್ತಲೇ ಇದೆ. ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವ ಬ್ರಾಹ್ಮಣೀಯ ಜಾತಿ ವ್ಯವಸ್ಥೆ, ಆರ್ಥಿಕವಾಗಿ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಕಳೆದ 75 ವರ್ಷಗಳಲ್ಲಿ, ಅದರಲ್ಲೂ ಮೋದಿ ಸರ್ವಾಧಿಕಾರದ ಕಳೆದ ಎಂಟು ವರ್ಷಗಳಲ್ಲಿ ಇನ್ನಷ್ಟು ಬಲಗೊಂಡಿದೆ. ಈ ರಾಜಕೀಯ ಸಮಾನತೆ ಮತ್ತು ರಾಜಕೀಯ ವ್ಯವಸ್ಥೆಯು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆಯನ್ನು ಮತ್ತು ಷರತ್ತನ್ನು ನಮ್ಮ ಸಂವಿಧಾನ ವಿಧಿಸಿರಲಿಲ್ಲ. ಅಂಬೇಡ್ಕರ್ ಅವರ ಈ ಆಶಯಗಳನ್ನು ಆಗಿನ ಸಂವಿಧಾನ ಸಭೆ ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಅದೇ ರಾಜಕೀಯ ವ್ಯವಸ್ಥೆಯನ್ನು ಬಳಸಿಕೊಂಡು ಬ್ರಾಹ್ಮಣ್ಯ ಹಾಗೂ ಬಂಡವಾಳಿಗರು ಗಟ್ಟಿಗೊಂಡು ಇಂದು ಫ್ಯಾಶಿಸ್ಟ್ ಸ್ವರೂಪವನ್ನು ಪಡೆದುಕೊಂಡಿದೆ. ರೂಪಕಾರ್ಥದಲ್ಲಿ ಹೇಳುವುದಾದರೆ ಇಂದು ಸಂವಿಧಾನದ ಒಳಗಿರುವ ಅಂಬೇಡ್ಕರ್ ಮೇಲೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಂಡವಾಳಶಾಹಿಗಳು ಮತ್ತು ಹಿಂದುತ್ವವಾದಿ ಬ್ರಾಹ್ಮಣಶಾಹಿಗಳು ಮಾರಣಾಂತಿಕ ದಾಳಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ ತಾವೇ ನಿಜವಾದ ಸಂವಿಧಾನ ಮತ್ತು ಅಂಬೇಡ್ಕರ್ ಅನುಯಾಯಿಗಳೆಂದು ಧೃತರಾಷ್ಟ್ರ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ. ಎರಡರ ಉದ್ದೇಶವೂ ಅಂಬೇಡ್ಕರ್ ಆಶಯಗಳನ್ನು ಕೊಂದುಹಾಕುವುದೇ ಆಗಿದೆ. ಅದಕ್ಕಾಗಿ ಸಂವಿಧಾನದ ಮೇಲೆ ಒಳಗಿಂದಲೂ ಹೊರಗಿಂದಲೂ ಇಬ್ಬಗೆಯ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಇವತ್ತಿನ ಸಂದರ್ಭದಲ್ಲಿ ಸಂವಿಧಾನವು ಹೊರಗಿಟ್ಟ ಅಂಬೇಡ್ಕರ್ ಅನ್ನು ಸಂವಿಧಾನದೊಳಗೆ ತಂದುಕೊಳ್ಳದೆ ಸಂವಿಧಾನದೊಳಗಿರುವ ಅಂಬೇಡ್ಕರ್ ಅನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದು.
ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿದ್ದರೆ, ಅದನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬಹುದು : ಸುಪ್ರೀಂಕೋರ್ಟ್
ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಪಾರದರ್ಶಕವಾಗಿದ್ದರೆ, ಅದನ್ನು ಆಯೋಗ ಅಳವಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಪಕ್ಷಗಳ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು 28 ಅಂಶಗಳ ಶಾಂತಿ ಒಪ್ಪಂದ ಸಿದ್ಧವಾಗಿದೆ. ಈ ಯೋಜನೆ ಕುರಿತು ಮಾತನಾಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಈ ಯೋಜನೆ ಸಫಲವಾಗಬೇಕಾದರೆ ಉಕ್ರೇನ್ನಿಂದ ಕೆಲವು ಪ್ರದೇಶಗಳನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಅಲ್ಲದೆ, ಝೆಲೆನ್ಸ್ಕಿ ಅವರ ನಾಯಕತ್ವವನ್ನು ಪುಟಿನ್ ಮತ್ತೆ ಅಕ್ರಮ ಎಂದು ಕರೆದಿದ್ದಾರೆ. ಇದೇ ವೇಳೆ, ಅಮೆರಿಕಾದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮಾಸ್ಕೋ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಇದು ಅಸಂಬದ್ದ ಎಂದು ಹೇಳಿದ್ದಾರೆ.
ಬ್ರಾಹ್ಮಣ ವಧು-ದಲಿತ ವರ: ಜಾತಿಯ ಶಾಪಕ್ಕೆ ಪರಿಹಾರವೆ?
ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಮಾತನಾಡುತ್ತಾ ‘‘ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ನೀಡುವವರೆಗೆ ಮೀಸಲಾತಿ ಮುಂದುವರಿಯಬೇಕು’’ ಎಂದು ಕರೆ ನೀಡಿದ್ದರು. ಈ ಐಎಎಸ್ ಅಧಿಕಾರಿ, ಮಧ್ಯ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ದಲಿತ ಯುವಕರು ವಧುವಿನ ಕೊರತೆ ಎದುರಿಸುತ್ತಿರುವ ಕಾರಣಕ್ಕಾಗಿಯೇನು ಅವರು ಈ ಮಾತುಗಳನ್ನು ಆಡಿರಲಿಲ್ಲ ಅಥವಾ ಅವರ ಮಾತಿನ ಉದ್ದೇಶ ಬ್ರಾಹ್ಮಣರ ಜೊತೆಗೆ ಮದುವೆ ಸಂಬಂಧ ಕುದುರಿಸುವುದೂ ಆಗಿರಲಿಲ್ಲ. ಈ ದೇಶದಲ್ಲಿ ಜಾತಿ ತಾರತಮ್ಯ ಎಷ್ಟು ವ್ಯಾಪಕವಾಗಿ ಹರಡಿದೆ ಎನ್ನುವುದನ್ನು ವಿವರಿಸಲು ಇದನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದರು. ಇಷ್ಟಕ್ಕೂ ಈ ದೇಶದಲ್ಲಿ ಅಂತರ್ಜಾತಿಯ ಮದುವೆಗಳಿಗೆ ಕರೆ ನೀಡುವುದು ಇದೇ ಮೊದಲೇನೂ ಅಲ್ಲ. ಹಲವು ದಾರ್ಶನಿಕರು, ಚಿಂತಕರು, ಹೋರಾಟಗಾರರು ಸಮಾನತೆ ಸಾಧಿಸಲು ಅಂತರ್ಜಾತಿ ವಿವಾಹಗಳು ಹೆಚ್ಚಬೇಕು ಎಂದು ಕರೆ ನೀಡುತ್ತಾ ಬಂದಿದ್ದಾರೆ. ಸ್ವತಃ ಬ್ರಾಹ್ಮಣ ಸಮುದಾಯದೊಳಗೇ, ‘ವಧುವಿನ ಕೊರತೆ’ ಇರುವ ಕಾರಣಕ್ಕಾಗಿ ಬೇರೆ ಜಾತಿಗಳಿಂದ ಹೆಣ್ಣನ್ನು ಶುದ್ಧೀಕರಣಗೊಳಿಸಿ ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಿಕೊಡುವ ವ್ಯವಸ್ಥೆಯಿದೆ. ಕೆಲವು ರಾಜ್ಯ ಸರಕಾರಗಳು ಅಂತರ್ಜಾತಿಯ ಮದುವೆಯಾದವರಿಗೆ ಸಹಾಯಧನಗಳನ್ನು ನೀಡುತ್ತಾ ಬಂದಿವೆ. ಆದರೆ, ಈ ಐಎಎಸ್ ಅಧಿಕಾರಿ ವರ್ಮಾ ಅವರು ‘ಬ್ರಾಹ್ಮಣನೊಬ್ಬ ತನ್ನ ಮಗಳನ್ನು ದಲಿತನೊಬ್ಬನ ಮಗನಿಗೆ ಅಥವಾ ನನ್ನ ಮಗನಿಗೆ ನೀಡುವ ವಾತಾವರಣ ನಿರ್ಮಾಣ ಆಗಬೇಕು’ ಎಂದು ಕರೆ ನೀಡಿದಾಕ್ಷಣ ಅದು ತೀವ್ರ ವಿವಾದಕ್ಕೊಳಗಾಯಿತು. ಹೇಳಿಕೆ ನೀಡಿದ ಬೆನ್ನಿಗೇ ಬ್ರಾಹ್ಮಣ ಸಂಘಟನೆಗಳು ವರ್ಮಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದವು. ‘ಈ ಹೇಳಿಕೆ ಅಸಭ್ಯ, ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಜಾತಿವಾದಿ ಹೇಳಿಕೆಯಿದು’ ಎಂದು ಆಕ್ರೋಶ ವ್ಯಕ್ತಪಡಿಸಿದವು. ಅಖಿಲ ಭಾರತ ಬ್ರಾಹ್ಮಣ ಸಮಾಜವು ಹೇಳಿಕೆಯ ವಿರುದ್ಧ ಪತ್ರಿಕಾಗೋಷ್ಠಿ ಕರೆದು ‘‘ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಇಲ್ಲವಾದಲ್ಲಿ ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ’’ ಎಂದು ಎಚ್ಚರಿಸಿತು. ಇಷ್ಟಕ್ಕೂ ಐಎಎಸ್ ಅಧಿಕಾರಿ ಬ್ರಾಹ್ಮಣ ವಧುವನ್ನು ಬಲವಂತವಾಗಿ ದಲಿತ ಯುವಕರು ಮದುವೆಯಾಗಲು ಕರೆ ನೀಡಿರಲಿಲ್ಲ. ಬ್ರಾಹ್ಮಣ ಸಮುದಾಯ ದಲಿತ ಸಮುದಾಯದ ಜೊತೆಗೆ ಮದುವೆ ಸಂಬಂಧ ಕುದುರಿಸುವ ವಾತಾವರಣ ನಿರ್ಮಾಣವಾಗಿ ಹಿಂದೂ ಸಮಾಜದೊಳಗೆ ಸಮಾನತೆ ಸ್ಥಾಪನೆಯಾಗಬೇಕು ಎಂದು ತಮ್ಮ ಮಾತಿನಲ್ಲಿ ಬಯಸಿದ್ದರು. ಇದು ಮಹಾಪರಾಧವಾಗಿ ಮಧ್ಯ ಪ್ರದೇಶ ಸರಕಾರವೇ ಐಎಸ್ಎಸ್ ಅಧಿಕಾರಿಗೆ ನೋಟಿಸ್ ನೀಡಿದೆ. ಏಳು ದಿನಗಳ ಒಳಗೆ ಉತ್ತರ ನೀಡದೇ ಇದ್ದರೆ ಏಕಪಕ್ಷೀಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ತಿಂಗಳ ಹಿಂದೆ ಉತ್ತರ ಪ್ರದೇಶದ ಲಕ್ನೊದಲ್ಲಿ ಬಿಜೆಪಿಯ ಮಾಜಿ ಶಾಸಕ ರಾಘವೇಂದ್ರ ಪ್ರತಾಪ ಸಿಂಗ್ ಎಂಬಾತ ‘‘ಮುಸ್ಲಿಮ್ ಹುಡುಗಿಯರನ್ನು ಬಲವಂತವಾಗಿ ಮದುವೆಯಾಗಲು’ ಹಿಂದೂ ಯುವಕರಿಗೆ ಕರೆ ನೀಡಿದ್ದರು. ‘‘ಮುಸ್ಲಿಮ್ ಹುಡುಗಿಯೊಂದಿಗೆ ಓಡಿ ಹೋಗಿ ವಿವಾಹವಾಗುವ ಯಾವುದೇ ಹಿಂದೂ ಯುವಕನ ಮದುವೆಯನ್ನು ನಾನೇ ನಿಂತು ಮಾಡಿಸುವೆ ಮಾತ್ರವಲ್ಲ, ಅವರಿಗೆ ಉದ್ಯೋಗದ ವ್ಯವಸ್ಥೆಯನ್ನೂ ಮಾಡುತ್ತೇನೆ’’ ಎಂದು ಭರವಸೆ ನೀಡಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಕೊಪ್ಪಳದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಅವರು ‘‘ಮುಸ್ಲಿಮ್ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಐದು ಲಕ್ಷ ರೂಪಾಯಿ ನೀಡುವೆ’’ ಎಂದು ಹೇಳಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ ಇದರ ವಿರುದ್ಧ ಯಾವುದೇ ಸಂಘಟನೆಗಳು ಧ್ವನಿಯೆತ್ತಿರಲಿಲ್ಲ. ಇದೀಗ ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ದಲಿತ ಯುವಕರು ಬ್ರಾಹ್ಮಣ ಯುವತಿಯರನ್ನು ಬಲವಂತವಾಗಿ ಮದುವೆಯಾಗಬೇಕು ಎಂಬ ಕರೆಯನ್ನೇನೂ ನೀಡಿರಲಿಲ್ಲ. ಹಿಂದೂ ಸಮಾಜದಲ್ಲಿ ಬ್ರಾಹ್ಮಣರು ದಲಿತರ ಜೊತೆಗೆ ವಿವಾಹ ಸಂಬಂಧವನ್ನು ಏರ್ಪಡಿಸಲು ಮುಂದಾದಾಗ ಜಾತೀಯತೆ ಅಳಿದು ಸಮಾನತೆ ನಿರ್ಮಾಣವಾಗುತ್ತದೆ. ಆಗ ಮೀಸಲಾತಿಯನ್ನು ರದ್ದುಗೊಳಿಸಬಹುದು ಎಂಬರ್ಥದಲ್ಲಿ ಅವರು ಕರೆ ನೀಡಿದ್ದರು. ಒಬ್ಬ ವಿದ್ಯಾವಂತ, ದಲಿತ ಐಎಎಸ್ ಅಧಿಕಾರಿಯ ಪುತ್ರನಿಗೆ ತಮ್ಮ ಮಗಳನ್ನು ಕೊಡುವುದು ಅವಮಾನಕಾರಿ ಸಂಗತಿ ಎಂದು ಬ್ರಾಹ್ಮಣ ಸಮುದಾಯದ ಮುಖಂಡರಿಗೆ ಯಾಕೆ ಅನ್ನಿಸಬೇಕು? ಹಾಗಾದರೆ ಬ್ರಾಹ್ಮಣರು ಹೆಣ್ಣಿನ ಕೊರತೆಯನ್ನು ಮುಂದಿಟ್ಟು ಇತರ ಜಾತಿಯ ಹೆಣ್ಣು ಮಕ್ಕಳನ್ನು ಶುದ್ಧೀಕರಿಸಿ ಮದುವೆಯಾಗುವುದು ಸರಿಯೆ? ಎನ್ನುವ ಪ್ರಶ್ನೆಯನ್ನು ಇದೀಗ ಇತರ ಜಾತಿಗಳ ಮುಖಂಡರು ಕೇಳುವಂತಾಗಿದೆ. ಐಎಎಸ್ ಅಧಿಕಾರಿಯ ಮಾತಿನಲ್ಲಿ ಇನ್ನೊಂದು ಅಂಶವೂ ಅಡಗಿದೆ. ಮೀಸಲಾತಿಯಿಂದ ಆರ್ಥಿಕವಾಗಿ ಸಬಲರಾದರೂ ದಲಿತರು ಸಾಮಾಜಿಕವಾಗಿ ಅಸ್ಪಶ್ಯರಾಗಿಯೇ ಉಳಿಯಬೇಕಾಗುತ್ತದೆ ಎನ್ನುವ ವಾಸ್ತವವನ್ನು ಅವರು ಈ ಹೇಳಿಕೆಯ ಮೂಲಕ ತೆರೆದಿಟ್ಟಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯ ಮಗನಾದರೂ ಆತ ಹಿಂದೂ ಸಮಾಜದಲ್ಲಿ ಜಾತಿಯ ಕಳಂಕವನ್ನು ಹೊತ್ತುಕೊಂಡೇ ಬದುಕಬೇಕಾಗುತ್ತದೆ. ಆತ ಎಷ್ಟು ಉನ್ನತ ಸ್ಥಾನದಲ್ಲಿದ್ದರೂ ಮೇಲ್ಜಾತಿಯ ಜೊತೆಗೆ ವಿವಾಹ ಸಂಬಂಧವನ್ನು ಬೆಸೆಯಲು ಯೋಗ್ಯನಾಗುವುದಿಲ್ಲ ಎನ್ನುವುದನ್ನು ಬ್ರಾಹ್ಮಣ ಸಮಾಜವೇ ತಮ್ಮ ಖಂಡನಾ ಹೇಳಿಕೆಯ ಮೂಲಕ ಪುಷ್ಟೀಕರಿಸಿದೆ. ಮೀಸಲಾತಿಯ ಮೂಲಕ ಉನ್ನತ ಸ್ಥಾನವನ್ನು ಪಡೆದ ದಲಿತರಿಗೆ ಕೆನೆಪದರ ನೀತಿ ಅನ್ವಯವಾಗಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ, ಉನ್ನತ ಸ್ಥಾನವೂ ಕೆಲವೊಮ್ಮೆ ಅಸ್ಪಶ್ಯತೆಯನ್ನು ನಿವಾರಿಸಲಾರವು ಎನ್ನುವುದನ್ನು ಉದಾಹರಣೆಯ ಮೂಲಕ ಮುಂದಿಟ್ಟಿದ್ದಾರೆ. ಒಂದೆಡೆ, ಮೇಲ್ಜಾತಿಯ ಮಾಸಿಕ 60,000 ರೂ.ಗೂ ಅಧಿಕ ವರಮಾನವಿರುವ ಜನರನ್ನು ಬಡವರೆಂದು ಘೋಷಿಸಿ ಮೀಸಲಾತಿಯನ್ನು ಘೋಷಿಸಿರುವ ಸರಕಾರ, ಇನ್ನೊಂದೆಡೆ ಕೆನೆಪದರವನ್ನು ಮುಂದಿಟ್ಟು ಅವರಿಂದ ಮೀಸಲಾತಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ಜಾತೀಯತೆ ದಲಿತ ಸಮುದಾಯವನ್ನು ಎಷ್ಟೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಬೇತಾಳನಂತೆ ಬೆಂಬತ್ತುತ್ತಿವೆ ಎನ್ನುವುದಕ್ಕೆ ಉದಾಹರಣೆಯಾಗಿದೆ, ಜಾತೀಯತೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ದಲಿತ ಐಪಿಎಸ್ ಅಧಿಕಾರಿ ಪೂರನ್ ಕುಮಾರ್ ಪ್ರಕರಣ. ಈ ಕಾರಣಕ್ಕಾಗಿಯೇ ಐಎಎಸ್ ಅಧಿಕಾರಿ ವರ್ಮಾ ಅವರು ದಲಿತರು ಮತ್ತು ಮೇಲ್ಜಾತಿಯ ನಡುವೆ ಸಾಮಾಜಿಕವಾಗಿ ಸಂಬಂಧಗಳು ಏರ್ಪಡದೆ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದಿರುವುದು. ಆದರೆ ಅವರಿಗೆ ಸ್ವತಃ ಮಧ್ಯಪ್ರದೇಶ ಸರಕಾರವೇ ಶಿಸ್ತು ಕ್ರಮದ ನೋಟಿಸ್ ಜಾರಿ ಮಾಡುವ ಮೂಲಕ ‘ದಲಿತರು ಮತ್ತು ಬ್ರಾಹ್ಮಣರು’ ಎಂದಿಗೂ ಸಮಾನರಾಗಲು ಸಾಧ್ಯವಿಲ್ಲ ಎಂದು ಘೋಷಿಸಿದಂತಾಗಿದೆ.
ರೀಲ್ಸ್ , ರೀಲ್ಸ್ ... ಸ್ಕ್ರೋಲ್ ನಿಲ್ಲಿಸಿ, ಜೀವನ ಶುರು ಮಾಡಿ !
ಕೋವಿಡ್ ನಂತರ ಮೊಬೈಲ್, ರೀಲ್ಸ್ ಜನರ ಜೀವನದ ಒಂದು ಭಾಗವಾಗಿಯೇ ಹೋಯ್ತು. ರಸ್ತೆ, ಮೆಟ್ರೋ, ಟ್ರೈನ್ ಎಲ್ಲೆ ನೋಡಿದ್ರು ವಿಡಿಯೋ ಕ್ರಿಯೇಟ್ ಮಾಡಿ ಪೋಸ್ಟ್ ಮಾಡೋದು ಕೆಲವೊಬ್ಬರಿಗೆ ಇದು ಚಿತ್ರರಂಗಕ್ಕೆ ತೆರಳಲು ಅವಕಾಶ ಕೊಟ್ಟಿದೆ ಹೌದು, ಆದರೆ ಬೆಳಗೆದ್ದರೆ ಅದೊಂದು ಚಟವಾಗಿ ಹೇಗೆ ಬದಲಾಗಿದೆ ಎಂಬುದಕ್ಕೆ ಸಾಕ್ಷಿಯೊಂದನ್ನು ಹೇಳುತ್ತಾ...ಲೇಖಕಕರು ಇದರಿಂದಾಗುವ ಪರಿಣಾಮದ ಬಗ್ಗೆ ವಿವರಿಸಿದ್ದಾರೆ.
ರೇರಾ ಕಾಯ್ದೆ ಉಲಂಘನೆ: ಬಿಲ್ಡರ್ಗಳಿಂದ 870.87 ಕೋಟಿ ರೂ. ವಸೂಲಾತಿ ಬಾಕ್
CM Change : ದೆಹಲಿಯಲ್ಲಿ ಸಾಲು ಕಟ್ಟಿ ನಿಂತಿರುವ ಶಾಸಕರು, ವೈಫಲ್ಯದ ಪ್ರಮಾಣಪತ್ರ - ಜೆಡಿಎಸ್ ಟ್ವೀಟ್ ಮರ್ಮವೇನು?
Karnataka Power Sharing : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಕುರ್ಚಿ ಕದನ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮೂಲಗಳ ಪ್ರಕಾರ, ಮುಂದಿನ 4-5 ದಿನಗಳು ಸಿಎಂ ಮತ್ತು ಡಿಸಿಎಂಗೆ ನಿರ್ಣಾಯಕವಾಗಲಿದೆ. ಈ ನಡುವೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಟ್ವೀಟ್ ಮಾಡಿ, ಸಿದ್ದರಾಮಯ್ಯನವರನ್ನು ಅವರ ಪಾರ್ಟಿಯವರೇ ನಂಬುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಹಾಂಕಾಂಗ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆ, ಇನ್ನೂ 279 ಮಂದಿ ನಾಪತ್ತೆ
ಹಾಂಕಾಂಗ್ನ ತೈ ಪೊ ಜಿಲ್ಲೆಯ ವಾಗ್ ಫುಕ್ ಕೋರ್ಟ್ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದ ಭೀಕರ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಕಟ್ಟಡದ ನವೀಕರಣ ಕಾಮಗಾರಿಗಾಗಿ ಅಳವಡಿಸಲಾಗಿದ್ದ ಬಿದಿರು ಅಟ್ಟಣಿಗೆಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಕ್ಷಣಾರ್ಧದಲ್ಲಿ 8 ಟವರ್ಗಳ ಪೈಕಿ 7 ಕಟ್ಟಡಗಳಿಗೆ ಬೆಂಕಿ ಆವರಿಸಿದೆ. ಈ ಘಟನೆಯು ಕಳೆದ ದಶಕಗಳಲ್ಲೇ ಹಾಂಕಾಂಗ್ ಕಂಡ ಅತ್ಯಂತ ಕರಾಳ ದುರಂತವಾಗಿದ್ದು, ನಿರ್ಮಾಣ ಸಂಸ್ಥೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕ: ಶ್ವೇತಭವನ ಬಳಿ ದಾಳಿಗೊಳಗಾದ ಒಬ್ಬ ಯೋಧೆ ಮೃತ್ಯು
ವಾಷಿಂಗ್ಟನ್: ಶ್ವೇತಭವನದ ಬಳಿ ಬುಧವಾರ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಪಶ್ಚಿಮ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಗೆ ಸೇರಿದ್ದ ಇಬ್ಬರು ಸೈನಿಕರ ಪೈಕಿ ಸಾರಾ ಬೆಕ್ಸ್ಟ್ರೋಮ್ ಕೊನೆಯುಸಿರೆಳೆದಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. ಗೌರವಾನ್ವಿತ, ಯುವ, ಅದ್ಭುತ ಮಹಿಳೆ ಎನಿಸಿದ ವೆಸ್ಟ್ ವರ್ಜೀನಿಯಾದ ಗಾಡ್ರ್ಸ್ಮನ್ ಸರಹ್ ಬೆಕ್ಸ್ಟ್ರೋಮ್ ಅಸು ನೀಗಿದ್ದಾರೆ. ಆಕೆ ಇನ್ನು ನಮ್ಮೊಂದಿಗೆ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಮತ್ತೊಬ್ಬ ಗಾಯಾಳುವಿನ ಸ್ಥಿತಿ ಕೂಡಾ ಚಿಂತಾಜನಕವಾಗಿದ್ದು, ಜೀವನ್ಮರಣ ಹೋರಾಟ ಮುಂದುವರಿಸಿದ್ದಾರೆ ಎಂದು ಟ್ರಂಪ್ ವಿವರಿಸಿದ್ದಾರೆ. ಆತನಿಗೆ ಸಂಬಂಧಿಸಿದಂತೆ ನಾವು ಒಳ್ಳೆಯ ಸುದ್ದಿಯನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಸಾರಾ ಅವರ ಸಾವನನ್ನು ವೆಸ್ಟ್ ವರ್ಜೀನಿಯಾ ಗವರ್ನರ್ ಪ್ಯಾಟ್ರಿಕ್ ಮೊರಿಸಿ ಕೂಡಾ ಎಕ್ಸ್ ಪೋಸ್ಟ್ನಲ್ಲಿ ದೃಢಪಡಿಸಿದ್ದಾರೆ. ಕೆಲ ಕ್ಷಣಗಳ ಮೊದಲು, ನಿನ್ನೆಯ ಭಯಾನಕ ದಾಳಿಯಲ್ಲಿ ಗಾಯಗೊಂಡಿದ್ದ ತಜ್ಞೆ ಸಾರಾ ಬೆಕ್ಸ್ಟ್ರೋಮ್ ಮೃತಪಟ್ಟಿದ್ದಾರೆ. ನಮ್ಮ ನಿರೀಕ್ಷೆಯಂತೆ ಚಿಕಿತ್ಸೆಯ ಫಲಿತಾಂಶ ಬಂದಿಲ್ಲ. ಬದಲಾಗಿ ನಾವು ಭೀತಿಪಡುತ್ತಿದ್ದ ಫಲಿತಾಂಶ ಬಂದಿದೆ ಎಂದಿದ್ದಾರೆ.
ಸಂಪಿಗೆ - 30 ನೇ ವಾರ್ಷಿಕ ಕನ್ನಡ ಸಮ್ಮೇಳನದ ಒಂದು ವರದಿ ...!
ಅಮೆರಿಕಾದಲ್ಲಿ ನಡೆದ 30ನೇ ಸಂಪಿಗೆ ಕನ್ನಡ ಕೂಟದ ವಾರ್ಷಿಕ ಸಮ್ಮೇಳನವು ವರ್ಣರಂಜಿತ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ಕರಾವಳಿ ಹುಲಿವೇಷ, ಮೈಸೂರು ಮಹಾರಾಜರ ವೇಷ, ಕನ್ನಡ ಸಾಹಿತಿಗಳ ಭಾವಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು. ಉಳಿದಂತೆ ಏನೆಲ್ಲಾ ವಿಶೇಷತೆ ಇತ್ತು , ಇಲ್ಲಿದೆ ನೋಡಿ ಮಾಹಿತಿ
\ಮಹಾಂತೇಶ್ ಬೀಳಗಿ ಕುಟುಂಬಸ್ಥರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡಿ\
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಕ್ಷ ಹಾಗೂ ಪ್ರಾಮಾಣಿಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ಭೀಕರ ಕಾರು ಅಪಘಾತದಲ್ಲಿ ನಿಧನರಾದರು. ಅವರ ನಿಧನಕ್ಕೆ ಇಡೀ ಕರ್ನಾಟಕ ಕಂಬನಿ ಮಿಡಿದಿದೆ. ಇದೀಗ ಮಹಾಂತೇಶ್ ಬೀಳಗಿಯವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಸರ್ಕಾರಿ ಅಧಿಕಾರಿ ಹುದ್ದೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಹಾಂಕಾಂಗ್ ಅಗ್ನಿ ದುರಂತ: ಮಡಿದವರ ಸಂಖ್ಯೆ 94ಕ್ಕೆ ಏರಿಕೆ
ಹಾಂಕಾಂಗ್: ನಗರದ ವಾಂಗ್ ಫುಕ್ಕೋರ್ಟ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನ ಹಲವು ಬಹುಮಹಡಿ ಕಟ್ಟಡಗಳನ್ನು ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆಯನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಅಗ್ನಿಶಾಮಕ ದಳ ಸತತ ಎರಡನೇ ದಿನವೂ ಪ್ರಯತ್ನ ಮುಂದುವರಿಸಿರುವ ನಡುವೆಯೇ ದುರಂತದಲ್ಲಿ ಮಡಿದವರ ಸಂಖ್ಯೆ 94ಕ್ಕೇರಿದೆ. ಇದು ಇತ್ತೀಚಿನ ದಶಕದಲ್ಲೇ ನಗರದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಥೈ ಪೋ ಜಿಲ್ಲೆಯ ಫ್ಲಾಟ್ ಗಳಲ್ಲಿ ಸುಟ್ಟು ಕರಕಲಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಗುರುವಾರ ಕೂಡಾ ಮೇಲ್ಮಹಡಿಗಳಿಂದ ದಟ್ಟವಾದ ಹೊಗೆ ಹೊಮ್ಮುತ್ತಿದೆ. ಪರಿಹಾರ ಕಾರ್ಯಾಚರಣೆ ತಂಡದವರು ಪ್ರತಿ ಫ್ಲಾಟ್ ಗಳಲ್ಲಿ ಮತ್ತು ಅವಶೇಷಗಳಡಿ ಶೋಧಕಾರ್ಯ ಮುಂದುವರಿಸಿದ್ದಾರೆ. ಬುಧವಾರ ಮಧ್ಯಾಹ್ನ 32 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಸಂಕೀರ್ಣಕ್ಕೆ ವ್ಯಾಪಿಸಿತ್ತು. ನಮ್ಮ ಅಗ್ನಿಶಾಮಕ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಅಗ್ನಿಶಾಮಕ ಸೇವಾ ಕಾರ್ಯಾಚರಣೆಗಳ ಉಪನಿರ್ದೇಶಕ ಡೆರಿಕ್ ಆರ್ಮ್ಸ್ಟ್ರಾಂಗ್ ಚಾನ್ ಹೇಳಿದ್ದಾರೆ. ಅವಶೇಷಗಳಿಂದ ಮತ್ತೆ ಬೆಂಕಿ ಹರಡುವುದನ್ನು ತಡೆಯಲು ನಮ್ಮ ಸಿಬ್ಬಂದಿ ಶ್ರಮಿಸುತ್ತಿದ್ದು, ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ವಿವರಿಸಿದ್ದಾರೆ. ಬೆಂಕಿ ಹರಡುವ ವೇಗ, ಕಾರ್ಯಾಚರಣೆಗೆ ಪ್ರಮುಖ ತಡೆಯಾಗಿ ಪರಿಣಮಿಸಿದ್ದು, ನೆರವಿಗಾಗಿ ನಿರಂತರ ಕರೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಹಲವು ಮಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಬೇಕಾಯಿತು ಎಂದರು. ಮೇಲಿನ ಮಹಡಿಗಳಿಂದ ಅವಶೇಷಗಳು ಹಾಗೂ ಸ್ಕ್ಯಾಫೋಲ್ಡಿಂಗ್ ಗಳು ಬೀಳುತ್ತಿದ್ದು, ತುರ್ತು ವಾಹನಗಳು ಘಟನಾ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಬಿದ್ದಿರುವ ಸ್ಕ್ಯಾಫೋಲ್ಡಿಂಗ್ ಹಾಗೂ ನಿರ್ಮಾಣ ವಸ್ತುಗಳಿಂದಾಗಿ ತಡೆ ಉಂಟಾಗಿದೆ ಎಂದು ಹೇಳಿದ್ದಾರೆ. ಭಾರೀ ಬಿಸಿ ಹಾಗೂ ಕಗ್ಗತ್ತಲು ಕಾರ್ಯಾಚರಣೆ ಪ್ರಗತಿಗೆ ತಡೆಯಾಗಿವೆ. ಸಿಕ್ಕಿಹಾಕಿಕೊಂಡಿರುವವರ ರಕ್ಷಣೆಗೆ ಸೀಮಿತ ಗೋಚರತೆಯಲ್ಲಿ ಹರಸಾಹಸ ಮಾಡಬೇಕಿದೆ. ದಟ್ಟವಾದ ಹೊಗೆ ತುಂಬಿದ ಕೊಠಡಿಗಳಿಂದ ಜನರನ್ನು ಕರೆ ತರುವ ಪ್ರಯತ್ನವನ್ನು ಪರಿಹಾರ ಸಿಬ್ಬಂದಿ ಮಾಡುತ್ತಿರುವ ವಿಡಿಯೊಗಳು ವೈರಲ್ ಆಗಿವೆ. 11 ಮಂದಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 76 ಮಂದಿ ಗಾಯಗೊಂಡಿದ್ದಾರೆ. 12 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇತರ 28 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. VIDEO | At least 94 dead as Hong Kong firefighters battle burning towers for a second day. #HongKongFire (Source: AFP/PTI) (Full video available on PTI Videos - https://t.co/n147TvqRQz ) pic.twitter.com/c6CrkWfBP5 — Press Trust of India (@PTI_News) November 28, 2025
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮಹಾರಾಷ್ಟ್ರ ಎನ್ಡಿಎಯಲ್ಲಿ ಬಿಕ್ಕಟ್ಟು
ಮುಂಬೈ: ಶಿಂಧೆ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಶಿವಸೇನೆ ಮುಖಂಡರು ಬಹಿರಂಗ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಘಟಕ ಪಕ್ಷಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಶಿಂಧೆ, ತಮ್ಮನ್ನು ಮತ್ತೆ ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. 2022ರಿಂದ 2024ರವರೆಗೆ ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಗೆ ಸಿಎಂ ಹುದ್ದೆ ಬಿಟ್ಟುಕೊಡಬೇಕಾಯಿತು. ಶಿಂಧೆ ಮತ್ತೆ ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಶಿಕ್ಷಣ ಸಚಿವ ದಾದಾ ಭೂಸೆ ವಿವಾದದ ಕಿಡಿ ಹೊತ್ತಿಸಿದ್ದರು. ಮಹಾರಾಷ್ಟ್ರ ಇಂಥ ಮುಖ್ಯಮಂತ್ರಿಯನ್ನು ಕಂಡಿಲ್ಲ; ಭವಿಷ್ಯದಲ್ಲಿ ಕಾಣುವುದೂ ಇಲ್ಲ ಎಂದು ಈ ಮೊದಲು ನೀವು ಹೇಳಿಕೆ ನೀಡಿದ್ದೀರಿ. ಆದರೆ ಇಂದು ಕೂಡ ನಿಮ್ಮ ಹೃದಯಲ್ಲಿರುವ ಸಿಎಂ ಯಾರು ಎಂದು ಜನರನ್ನು ಕೇಳಿದರೆ ಶಿಂಧೆ ಸಾಹೇಬರು ಎಂಬ ಉತ್ತರ ಬರುತ್ತದೆ ಎಂದು ಭೂಸೆ ಹೇಳಿದ್ದರು. ಏತನ್ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರ ಬಿರುಸುಗೊಳ್ಳುತ್ತಿದ್ದು, ಶಿಂಧೆ ಬಣದ ಶಾಸಕ ನೀಲೇಶ್ ರಾಣೆ ಬುಧವಾರ ರಾತ್ರಿ ಹೇಳಿಕೆ ನೀಡಿ, ಬಿಜೆಪಿ ಕಾರ್ಯಕರ್ತ ವಿಜಯ್ ಕೇನವಾಡೇಕರ್ ನಿವಾಸದಿಂದ 25 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದರು. ಮತದಾರರಿಗೆ ಹಂಚುವ ಸಲುವಾಗಿ ದೊಡ್ಡ ಮೊತ್ತವನ್ನು ಬಿಜೆಪಿ ಕೂಡಿಟ್ಟಿದ್ದು, ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಆರೋಪಿಸಿದ್ದರು. ಇದು ರಾಜಕೀಯ ದುರುದ್ದೇಶದ ಆರೋಪ ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆದಿದ್ದಾರೆ. ವಶಪಡಿಸಿಕೊಂಡ ಹಣ ಖಾಸಗಿ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಅಪರಾಧವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಪಾರ್ಟ್ಮೆಂಟ್ಗಳಿಗೆ ನೀರಿನ ಗುಣಮಟ್ಟದ ಎಚ್ಚರಿಕೆ ಕೊಟ್ಟ ಅಂತರ್ಜಲ ನಿರ್ದೇಶನಾಲಯ: ನಿಯಮ ಪಾಲನೆಗೆ ನೋಟಿಸ್
ಕಲುಷಿತ ನೀರಿನಿಂದ ಅಪಾರ್ಟ್ಮೆಂಟ್ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ, ಅಂತರ್ಜಲ ನಿರ್ದೇಶನಾಲಯವು ಬೃಹತ್ ವಸತಿ ಸಂಕೀರ್ಣಗಳಿಗೆ ಕೊಳವೆಬಾವಿ ನೀರಿನ ಗುಣಮಟ್ಟ ಪರಿಶೀಲನೆಗೆ ನೋಟಿಸ್ ಜಾರಿಗೊಳಿಸಿದೆ. ಎನ್ಒಸಿ ಷರತ್ತುಗಳ ಪಾಲನೆ, ಅಂತರ್ಜಲ ಬಳಕೆಯ ಶುಲ್ಕ ಪಾವತಿ, ಮಳೆ ನೀರು ಕೊಯ್ಲು ಮತ್ತು ನೀರಿನ ಗುಣಮಟ್ಟದ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಮೈಸೂರಲ್ಲಿ ತಲೆಎತ್ತಲಿದೆ ದೇಶದ ಮೊದಲ ರೇಷ್ಮೆ ಮ್ಯೂಸಿಯಂ
ಮೈಸೂರಿನಲ್ಲಿ ದೇಶದ ಮೊದಲ ರೇಷ್ಮೆ ವಸ್ತು ಸಂಗ್ರಹಾಲಯ ಇನ್ನೆರಡು ವರ್ಷದಲ್ಲಿ ತಲೆ ಎತ್ತಲಿದೆ. ಇದು ಭಾರತದ ರೇಷ್ಮೆ ಉದ್ಯಮದ ಇತಿಹಾಸ, ಉತ್ಪಾದನಾ ವಿಧಾನಗಳನ್ನು ಒಳಗೊಂಡಿರುತ್ತದೆ. ಒಡಿಶಾದಲ್ಲಿ ಸಣ್ಣ ಘಟಕವಿದ್ದರೂ, ದೇಶದ ಪೂರ್ಣ ಪ್ರಮಾಣದ ದೊಡ್ಡ ಮ್ಯೂಸಿಯಂ ಮೈಸೂರಿನಲ್ಲಿ ಆಗಲಿದೆ, ಏನಿದರ ವಿಶೇಷ ಇಲ್ಲಿದೆ ನೋಡಿ ಮಾಹಿತಿ
Ditwah Cyclone: ದಿತ್ವಾ ಚಂಡಮಾರುತದಿಂದ ಕರ್ನಾಟಕಕ್ಕೂ ಕಾದಿದೆ ಕಂಟಕ, ಎಲ್ಲೆಲ್ಲಿ ಮಳೆ?
ಶ್ರೀಲಂಕಾದ ಕರಾವಳಿ ಮತ್ತು ಪಕ್ಕದ ನೈರುತ್ಯ ಬಂಗಾಳ ಕೊಲ್ಲಿಯ ಮೇಲೆ ಬೀಸುತ್ತಿರುವ ಚಂಡಮಾರುತ ದಿತ್ವಾ ಚಂಡಮಾರುತವು ಪಕ್ಕದ ಆಂಧ್ರ ಹಾಗೂ ತಮಿಳುನಾಡು ಕರಾವಳಿಗಳಿಗೆ ಅಪ್ಪಳಿಸಲಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 30ರವರೆಗೆ ಕರ್ನಾಟಕ ಸೇರಿ ನೆರೆಯ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಹವಾಮಾನ
ಅಹಿಂದ Vs ಒಕ್ಕಲಿಗ: ಸಿಎಂಗಿರಿಗಾಗಿ ಸಮುದಾಯಗಳಿಂದ ಲಾಬಿ, ಸೋನಿಯಾ ಸಮ್ಮುಖದಲ್ಲಿ ನ.29ರಂದು ಮಹತ್ವದ ಸಭೆ
ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ವಿಚಾರಕ್ಕೆ ಸಂಘರ್ಷ ತಾರಕಕ್ಕೇರಿದೆ. ಅಹಿಂದ ಮತ್ತು ಒಕ್ಕಲಿಗ ಸಮುದಾಯಗಳ ಲಾಬಿ ತೀವ್ರಗೊಂಡಿದ್ದು, ಮಠಾಧೀಶರ ಹೇಳಿಕೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಇದರ ನಡುವೆ ಇದೇ ನ.29ರಂದು ಸೋನಿಯಾ ಗಾಂಧಿ ಸಮ್ಮುಖದಲ್ಲಿ ನಡೆಯುವ ಮಹತ್ವದ ಸಭೆಯ ಬಳಿಕ ನಾಯಕತ್ವ ಬದಲಾವಣೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.
ಕಲ್ಯಾಣ ಕರ್ನಾಟಕಕ್ಕೆ ಬಂಪರ್, ಉತ್ತರ ಕರ್ನಾಟಕದಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಪುಟ ಅನುಮೋದನೆ
ರಾಜ್ಯ ಸಚಿವ ಸಂಪುಟವು ಕಲ್ಯಾಣ ಕರ್ನಾಟಕದ ಕೆರೆಗಳ ಅಭಿವೃದ್ಧಿ ಮತ್ತು ಸರಣಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದೆ. ಉತ್ತರ ಕನ್ನಡದಲ್ಲಿ ಶರಾವತಿ ನದಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ. ಅಲ್ಲದೆ, ಕಿರು ಬಂದರುಗಳಲ್ಲಿ ಅದಿರು ರಫ್ತಿಗೆ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025 ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
PM Modi: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಹತ್ವದ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಮಹತ್ವದ ಭೇಟಿ ಕೊಡುತ್ತಿದ್ದಾರೆ. ಹೀಗಾಗಿ ಈ ಭೇಟಿ ಇಡೀ ದೇಶದ ಗಮನ ಸೆಳೆದಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹಲವು ಕಡೆ ರಸ್ತೆಗಳನ್ನ ಬಂದ್ ಮಾಡುವ ಆದೇಶ
ಬೆಂಗಳೂರು ನೀರಿನ ಬಿಲ್ ಬಾಕಿ ಪಾವತಿಗೆ 100% ರಿಯಾಯಿತಿ - ನಿಮ್ಮ ಬಾಕಿ ಮೊತ್ತವನ್ನು ಈಗಲೇ ಪಾವತಿಸಿ!
ಬೆಂಗಳೂರು ಜಲಮಂಡಳಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ, ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಗೃಹ, ವಾಣಿಜ್ಯ, ಕೈಗಾರಿಕಾ ಗ್ರಾಹಕರು ಹಾಗೂ ಸರ್ಕಾರಿ ಇಲಾಖೆಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಒಟ್ಟು 701 ಕೋಟಿ ರೂ. ಬಾಕಿ ವಸೂಲಿ ಸರ್ಕಾರದ ಉದ್ದೇಶವಾಗಿದೆ.
ಸುರತ್ಕಲ್: ನವೀಕರಿಸಲಾದ ಸಿ.ಎನ್. ಶೆಟ್ಟಿ ಕನ್ವೆನ್ಷನ್ ಸಭಾಂಗಣದ ಉದ್ಘಾಟನೆ
ಸುರತ್ಕಲ್: ಬೈಕಂಪಾಡಿಯ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ನ ನವೀಕರಿಸಲಾದ ಸಿ.ಎನ್. ಶೆಟ್ಟಿ ಕನ್ವೆನ್ಷನ್ ಸಭಾಂಗಣದ ಉದ್ಘಾಟನೆ ಬುಧವಾರ ನೆರವೇರಿತು. ಸಭಾಂಗಣವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲ ಉದ್ಯಮಿಗಳು ಸೇರಿಕೊಂಡು ಸಹಕರಿಸಿದರೆ ಊರು ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರಿಗಳು, ಉದ್ದಿಮೆಗಳು ಒಬ್ಬರನ್ನೊಬ್ಬರು ದೂರಿಕೊಂಡು ಇದ್ದರೆ ಯಾವ ಕೆಲಸವೂ ಆಗುವುದಿಲ್ಲ. ಹಾಗಾಗಿ ಎಲ್ಲರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿಯವರ ನೇತೃತ್ಬದಲ್ಲಿ ಸಭೆ ನಡೆಸಿ ಶೀಘ್ರ ಕೈಗಾರಿಕಾ ವಲಯದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಇದೇ ವೇಳೆ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಪದಾಧಿಕಾರಿಗಳು ಬೈಕಂಪಾಡಿ ಕೈಗಾರಿಕಾ ವಲಯದಲ್ಲಿನ ಸಮಸ್ಯೆಗಳನ್ನು ವಿವರಿಸಿದರು. ಬಳಿಕ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು. ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಅಧ್ಯಕ್ಷ ಎನ್. ಅರುಣ್ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷರಾದ ಎಂ.ಡಿ. ಪೂಜಾರಿ, ಕಾರ್ಯದರ್ಶಿ ಬಿ.ಎ. ಇಕ್ಬಾಲ್, ಜೊತೆ ಕಾರ್ಯದರ್ಶಿ ರೋಶನ್ ಬಾಳಿಗಾ ಬಿ., ಖಜಾಂಚಿ ರಾಮಚಂದ್ರ, ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಉಪಾಧ್ಯಕ್ಷರಾದ ಎಂ.ಡಿ. ಪೂಜಾರಿ ಅವರು ಸಂವಿಧಾನದ ಪೀಠಿಕೆ ಓದಿದರು. ಅಧ್ಯಕ್ಷ ಎನ್. ಅರುಣ್ ಪಡಿಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎ. ಇಕ್ಬಾಲ್ ಧನ್ಯವಾದ ಸಮರ್ಪಿಸಿದರು. ಸಮಾರಂಭಕ್ಕೂ ಮುನ್ನ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ವತಿಯಿಂದ ಸುಮಾರು 40 ಬ್ಯಾರಿಕೆಡ್ ಗಳನ್ನು ಮಂಗಳೂರು ಸಂಚಾರ ವಿಭಾಗದ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಅವರ ಮೂಲಕ ಮಂಗಳೂರು ಉತ್ತರ ಸಂಚಾರ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಯುವಕರನ್ನು ಆಕರ್ಷಿಸುತ್ತಿರುವ 'ಮೈಸೂರು ಮಾವು', 'ಮೈಸೂರು ಕುಶ್'! ಏನಿವೆಲ್ಲಾ? ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ!
ಮೈಸೂರಿನಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದೆ. ಯುವಕರು, ವಿದ್ಯಾರ್ಥಿಗಳು ಇದರ ದಾಸರಾಗುತ್ತಿದ್ದಾರೆ. 'ಮೈಸೂರು ಮಾವಿನ ಹಣ್ಣು', 'ಮೈಸೂರು ಕುಶ್' ಎಂಬ ಹೆಸರಿನ ಗಾಂಜಾ ಪ್ರಮುಖವಾಗಿದೆ. ಹೊರ ಜಿಲ್ಲೆಗಳಿಂದಲೂ ಯುವಕರು ಇಲ್ಲಿಗೆ ಬಂದು ಮಾದಕ ದ್ರವ್ಯ ಖರೀದಿಸುತ್ತಿದ್ದಾರೆ. ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ, ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಆನ್ಲೈನ್ ಮೂಲಕವೂ ಮಾರಾಟ ನಡೆಯುತ್ತಿದೆ.
ಪ್ರಧಾನಿಯಾಗಿ ಮೊದಲ ಬಾರಿ ಕೃಷ್ಣ ಮಠಕ್ಕೆ ಆಗಮಿಸುತ್ತಿರುವ ಮೋದಿ
ಎಸ್ಪಿಜಿ, ಪೊಲೀಸರ ಸರ್ಪಗಾವಲಿನಲ್ಲಿ ಉಡುಪಿ
ಉಡುಪಿ: ಯುಪಿಎಂಸಿ ಸಾಹಿತ್ಯ ಸಂಘ ಉದ್ಘಾಟನೆ
ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಪರಿಣಾಮಕಾರಿ ಸಂವಹನ ಕಲೆಯ ಕುರಿತ ವಿಶೇಷ ತರಬೇತಿ ಕಾರ್ಯಕ್ರಮ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿಯಾಗಿ ವ್ಯಕ್ತಿತ್ವ ವಿಕಸನ ತರಬೇತಿದಾರ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, 2025- 26ನೇ ಸಾಲಿನ ಸಾಹಿತ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ, ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ನಿಖರತೆ, ಸ್ಪಷ್ಟತೆ, ವಸ್ತುನಿಷ್ಠತೆ ಇರಬೇಕು. ಇದು ಸಂವಹನ ಕೌಶಲ ಉತ್ತಮ ಪಡಿಸಿಕೊಳ್ಳಲು ಸಹಕಾರಿ, ಲವಲವಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿದರೆ ವ್ಯಕ್ತಿ ಸಾಧಕನಾಗಬಲ್ಲ, ತಾಳ್ಮೆಯಿಂದ ಉತ್ತಮ ಕೇಳುಗನಾದರೆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪ್ರತಿಭೆ ಅರಳುವುದರ ಜೊತೆಗೆ ಸೃಜನಶೀಲತೆ ಜಾಗೃತಗೊಳ್ಳಲು ಸಹಕಾರಿಯಾಗಲಿದೆ. ಹಾಗೆಯೇ ಲೇಖನ, ಕವನ ಬರೆಯಲು ಸಮಕಾಲೀನ ಪರಿಸ್ಥಿತಿಗಳನ್ನು ವಸ್ತುವಾಗಿಸಿ ಬರೆಯಲು ಸಾಧ್ಯವಿದೆ, ಎಲ್ಲವುದಕ್ಕೂ ಆಸಕ್ತಿ ಮುಖ್ಯ ಎಂದು ಅವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಹ ಸಂಚಾಲಕ ಹಾಗೂ ಕನ್ನಡ ಉಪನ್ಯಾಸಕ ಶಶಿಕಾಂತ್ ಎಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಉಪನ್ಯಾಸಕಿ ಸುನಿತಾ ಕಾಮತ್ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಸಂಚಾಲಕ ಹಾಗೂ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ಅದೀಶ ಸ್ವಾಗತಿಸಿದರು, ಕೃತಿಕಾ ವಂದಿಸಿದರು, ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: 140 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ಉಡುಪಿ: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಬೇಕಾದ ಅನಿವಾರ್ಯತೆ ಇದೆ ಎಂದು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಆವರಣದಲ್ಲಿ ಗುರುವಾರ ಕಾಲೇಜಿನ 140 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡುತಿದ್ದರು. ವಿದ್ಯಾರ್ಥಿಗಳಿಗೆ ಇಂದು ಕಲಿಯಲು ಸಾಕಷ್ಟು ಅವಕಾಶಗಳಿದ್ದು ಲಭ್ಯವಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಬೇಕು. ಇದರೊಂದಿಗೆ ಹೊಸ ಕಲಿಕಾ ತಂತ್ರಜ್ಞಾನಕ್ಕೆ ಪೂರಕವಾಗುವ ಸಾಧನಗಳನ್ನು ಬಳಸಿಕೊಳ್ಳುವುದರ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾಲೇಜು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ವಿತರಿಸುವುದರ ಮೂಲಕ ಅವರ ಕಲಿಕಾ ಆಸಕ್ತಿಗೆ ಬೆಂಬಲವಾಗಿ ನಿಂತಿದೆ ಎಂದರು. ಸೈಲಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಜಾರ್ಜ್ ಕೆ., ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ, ಸಹ ಪ್ರಾಂಶುಪಾಲ ಸೋಫಿಯಾ ಡಾಯಸ್, ಪಿಯು ಕಾಲೇಜಿನ ಪ್ರಾಂಶುಪಾಲ ರಿಚ್ಚಾರ್ಡ್ ಜೀವನ್ ಮೋರಾಸ್, ಸಿಬಂದಿ ಸಂಯೋಜಕಿ ಸುಷ್ಮಾ ಶೆಟ್ಟಿ, ಐಕ್ಯೂಎಸಿ ಸಂಯೋಜಕ ರಾದ ಶಾಲೆಟ್ ಮಥಾಯಸ್, ರಾಧಿಕಾ ಪಾಟ್ಕರ್ ಉಪಸ್ಥಿತರಿದ್ದರು. ಶಾಲೆಟ್ ಮಥಾಯಸ್ ಸ್ವಾಗತಿಸಿದರು. ಸುಷ್ಮಾ ಶೆಟ್ಟಿ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು
ಎಲ್ಎಲ್ಬಿ ಕೋರ್ಸ್ ಕನಿಷ್ಠ ಅರ್ಹತಾ ಅಂಕ ನಿಗದಿ; ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) 3 ವರ್ಷಗಳ ಎಲ್ಎಲ್ಬಿ ಕೋರ್ಸ್ಗೆ ಪ್ರವೇಶಕ್ಕಾಗಿ ಒಬಿಸಿ ಅಭ್ಯರ್ಥಿಗಳಿಗೆ ಗೆಜೆಟ್ ಅಧಿಸೂಚನೆಯಿಲ್ಲದೆ ಶೇ.42 ಕನಿಷ್ಠ ಅರ್ಹತಾ ಅಂಕ ನಿಗದಿಪಡಿಸುವುದನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಯಂಕಪ್ಪ ಆರ್. ಸಕ್ರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿ ಪುರಸ್ಕರಿಸಲು ನಿರಾಕರಿಸಿತಲ್ಲದೆ, ಕೆಎಸ್ಎಲ್ಯು ಅಧಿಸೂಚನೆಯಲ್ಲಿ ದೋಷ ಹುಡುಕಲಾಗದು. ಆದ್ದರಿಂದ, ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಆದೇಶಿಸಿದೆ. ಹೈಕೋರ್ಟ್ ಹೇಳಿದ್ದೇನು? 2008ರ ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು) ಕಾನೂನು ಶಿಕ್ಷಣ ನಿಯಮಗಳ ನಿಯಮ 7 ಅನ್ನು ಉಲ್ಲೇಖಿಸಿರುವ ನ್ಯಾಯಾಲಯ, ಅದು ಎಲ್ಎಲ್ಬಿ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಹತಾ ಪರೀಕ್ಷೆಗೆ ಕನಿಷ್ಠ ಶೇಕಡಾವಾರು ಅಂಕಗಳನ್ನು ನಿರ್ದಿಷ್ಟಪಡಿಸುತ್ತದೆ. ನಂತರ ಬಿಸಿಐ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾವಾರು ಅಂಕಗಳನ್ನು ನಿಗದಿಪಡಿಸಬಹುದು. ಆದರೆ, ಅದರ ನಿಯಮಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ. 42ಕ್ಕಿಂತ ಕಡಿಮೆ ಮತ್ತು ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 40ಕ್ಕಿಂತ ಕಡಿಮೆ ಇರಬಾರದೆಂದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಶೈಕ್ಷಣಿಕ ಮಾನದಂಡಗಳು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಕನಿಷ್ಠ ಅಂಕಗಳಿಗೆ ಸಮನಾಗಿರಬೇಕು. ಅದರಂತೆ ಎನ್ಎಲ್ಎಸ್ಐಯು ಎಸ್ಸಿ/ಎಸ್ಟಿ ಮತ್ತು ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 40 ಕನಿಷ್ಠ ಅಂಕಗಳನ್ನು ನಿಗದಿಪಡಿಸಿದೆ. ಆದರೆ, ಕಾನೂನು ವಿವಿ ಆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಿದರು. ಪ್ರಕರಣವೇನು? ಕೆಎಸ್ಎಲ್ಯುಗೆ ಸಂಯೋಜಿತವಾಗಿರುವ ಕಾನೂನು ಕಾಲೇಜುಗಳ ಪ್ರವೇಶಕ್ಕಾಗಿ ಶಿಕ್ಷಣ ಮಾನದಂಡಗಳಿಗೆ ಸಂಬಂಧಿಸಿದ ಅರ್ಹತಾ ಷರತ್ತುಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು. 2025-26 ಶೈಕ್ಷಣಿಕ ವರ್ಷಕ್ಕೆ 3 ವರ್ಷಗಳ ಎಲ್ಎಲ್ಬಿ ಕೋರ್ಸ್ಗೆ ಪ್ರವೇಶಕ್ಕಾಗಿ ವಿಶ್ವವಿದ್ಯಾಲಯವು 2025ರ ಜುಲೈ 19ರಂದು ಪ್ರವೇಶ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಅರ್ಹತಾ ಮಾನದಂಡಗಳ ಪ್ರಕಾರ, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ.42 ಅಂಕಗಳನ್ನು ಪಡೆದಿರಬೇಕು. ಈ ಮಾನದಂಡಗಳನ್ನು ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಒಟ್ಟು ಶೇ.40 ಅಂಕಗಳಿಗೆ ಸಡಿಲಿಸಲಾಗಿತ್ತು. ಇದನ್ನು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು
ಬೇಲೂರು | ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ; ಇಬ್ಬರ ಮೃತ್ಯು
ಬೇಲೂರು : ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮತ್ತುಗನ್ನೆ ಗ್ರಾಮದ ಸಮೀಪ ಸಂಭವಿಸಿರುವುದು ವರದಿಯಾಗಿದೆ. ತಾಲೂಕಿನ ಹೊಸಮನಹಳ್ಳಿ ಗ್ರಾಮದ ಲೋಕೇಶ್ (25) ಹಾಗೂ ಅವರ ಸಹೋದರ ಸಂಬಂಧಿ ಚಿಕ್ಕಮಗಳೂರಿನ ರಾಮೇನಹಳ್ಳಿಯ ಕಿರಣ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ. ಲೊಕೇಶ್ ಮತ್ತು ಕಿರಣ್ ತನ್ನ ತಂಗಿಯ ಆರತಕ್ಷತೆ ಇದ್ದ ಹಿನ್ನೆಲೆಯಲ್ಲಿ ನಡುರಾತ್ರಿ ಬೈಕ್ನಲ್ಲಿ ಮದುವೆಗೆ ಮೊಸರು ತರಲು ಬೇಲೂರಿಗೆ ಆಗಮಿಸುತ್ತಿದ್ದರು. ಮತ್ತುಗನ್ನೆ ಗ್ರಾಮದ ಸಮೀಪ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ರಸ್ತೆಯ ಭಾಗದಲ್ಲಿ ಬೈಕ್ ಅನಾಥವಾಗಿ ಬಿದ್ದಿದ್ದನ್ನು ಸ್ಥಳೀಯರು ಗಮನಿಸಿದಾಗ ಸುಮಾರು 10 ಅಡಿ ದೂರದಲ್ಲಿ ಲೊಕೇಶ್ ಹಾಗೂ ಕಿರಣ್ ಅವರ ಮೃತದೇಹ ಬಿದ್ದಿದ್ದವು. ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಐ ರೇವಣ್ಣ ಹಾಗೂ ಪಿಎಸ್ಐ ಎಸ್.ಜಿ ಪಾಟೀಲ್ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಜಾ ಮಕ್ಕಳಿಗೆ ಶಾಲೆಗಳು ಮತ್ತೆ ಆರಂಭ, ಅಗತ್ಯ ಪರಿಕರ ಪೂರೈಕೆಗೆ ಒತ್ತಾಯ
ಗಾಜಾ ಪಟ್ಟಿಯಲ್ಲಿ ಈಗ ನೂರಾರು ಸವಾಲು ಎದುರಾಗಿರುವ ಸಮಯದಲ್ಲೇ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯುದ್ಧ ಶುರುವಾಗಿ ಸುಮಾರು 2 ವರ್ಷಗಳೇ ಉರುಳಿದ್ದು, ಜೀವ ಉಳಿಸಿಕೊಂಡು ಜೀವನ ನಡೆಸಲು ಸಾಮಾನ್ಯರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೂಡ ಕೈತಪ್ಪಿ ಹೋಗಿತ್ತು. ಆದರೆ ಇದೀಗ ಶಾಲೆಗಳನ್ನ ರೀ ಓಪನ್ ಮಾಡುವ ಬಗ್ಗೆ ಭಾರಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಧ್ಯಪ್ರಾಚ್ಯದ
ಪ್ರೊ.ವನಮಾಲ ವಿಶ್ವನಾಥ್, ಜೆ.ವಿ.ಕಾರ್ಲೊ ಸೇರಿ ಐದು ಮಂದಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ
ಬೆಂಗಳೂರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2025ನೇ ಸಾಲಿನ ‘ಗೌರವ ಪ್ರಶಸ್ತಿ'ಗೆ ಹಾಸನದ ಜೆ.ವಿ.ಕಾರ್ಲೊ, ಬೆಂಗಳೂರಿನ ವನಮಾಲ ವಿಶ್ವನಾಥ್, ಚಿತ್ರದುರ್ಗದ ಡಾ.ಸಂಧ್ಯಾ ರೆಡ್ಡಿ ಕೆ.ಆರ್, ಹೊಸಪೇಟೆಯ ವಿಠಲರಾವ್ ಟಿ. ಗಾಯಕ್ವಾಡ್, ಅಥಣಿಯ ಡಾ.ಜೆ.ಪಿ.ದೊಡಮನಿ ಅವರು ಆಯ್ಕೆಯಾಗಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ. ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಅನುವಾದಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. 2024ನೇ ಸಾಲಿನ ಪುಸ್ತಕ ಬಹುಮಾನವೂ ಪ್ರಕಟಗೊಂಡಿದ್ದು, 5 ಅನುವಾದಿತ ಕೃತಿಗಳು ಆಯ್ಕೆಯಾಗಿವೆ. ಪುಸ್ತಕ ಬಹುಮಾನವು ತಲಾ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ. 2024ನೇ ಸಾಲಿನ ಪುಸ್ತಕ ಬಹುಮಾನ : ಆರ್.ಸದಾನಂದ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿರುವ ಏಕತಾರಿ, ನಟರಾಜ ಹೊನ್ನವಳ್ಳಿ ಅವರು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿರುವ ಆಲಯ ಈ ಲಯ, ಮಲ್ಲೇಶಪ್ಪ ಸಿದಾಂಪುರ ಅವರು ಅನುವಾದಿಸಿರುವ ಬೌಮನಿಜಂ-ಆಧುನಿಕತೆಯಿಂದ ದ್ರವಾಧುನಿಕತೆಯವರೆಗೆ, ಕಾರ್ತಿಕ್.ಆರ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಸತ್ತವರ ಸೊಲ್ಲು, ಡಾ.ಎನ್.ದೇವರಾಜ್ ಅವರು ಅನುವಾದಿಸಿರುವ ಹಾಥಿಪಾಲ್ನೆ ಜೋ ಚಲಿ ಕೃತಿಗಳು 2024ನೇ ಸಾಲಿನ ಪುಸ್ತಕ ಬಹುಮಾನಗಳಿಗೆ ಆಯ್ಕೆಯಾಗಿವೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.
ಕಾರ್ಮಿಕರ ಹಕ್ಕು ಕಸಿಯುವ ಕೇಂದ್ರದ 4 ಸಂಹಿತೆಗಳನ್ನು ಹಿಂಪಡೆಯಿರಿ : ಕ್ಲಿಫ್ಟನ್.ಡಿ ರೊಝಾರಿಯೋ
ಬೆಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗಗಳ ಶ್ರಮವನ್ನು ದೋಚಿ, ಅವರ ಹಕ್ಕುಗಳನ್ನು ಕಸಿದು, ಬಂಡವಾಳಶಾಹಿಗಳ ಸಂಪತ್ತನ್ನು ಹೆಚ್ಚಿಸುವ ನೀತಿಗಳಾಗಿವೆ. ಆದ್ದರಿಂದ 4 ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯಬೇಕು ಎಂದು ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್.ಡಿ ರೋಝಾರಿಯೋ ಆಗ್ರಹಿಸಿದ್ದಾರೆ. ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಎಐಸಿಸಿಟಿಯು ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಧರಣಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನ.21ರಂದು ಯಾವುದೇ ಪೂರ್ವ ಸೂಚನೆ, ಸಾರ್ವಜನಿಕ ಚರ್ಚೆ ಅಥವಾ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೇ, 4 ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ-2019, ಸಾಮಾಜಿಕ ಭದ್ರತಾ ಸಂಹಿತೆ-2020, ಕೈಗಾರಿಕಾ ಸಂಬಂಧಗಳ ಸಂಹಿತೆ-2020, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020 ಅನ್ನು ಏಕಾಏಕಿ ಜಾರಿಗೊಳಿಸುವ ಮೂಲಕ ಕಾರ್ಮಿಕರ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಹಕ್ಕುಗಳ ನಿರ್ಮೂಲನೆಗೆ, ವೇತನ ಇಳಿಕೆಗೆ, ಸಾಮಾಜಿಕ ಭದ್ರತೆಯ ನಷ್ಟಕ್ಕೆ, ಸಂಘಟನೆ ಸ್ವಾತಂತ್ರ್ಯ ನಾಶಕ್ಕೆ ಹಾಗೂ ಉದ್ಯೋಗ ಅಸ್ಥಿರತೆಗೆ ಕಾರಣವಾಗುತ್ತವೆ ಎಂದು ಖಂಡಿಸಿದರು. ಎಐಸಿಸಿಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಕೇಂದ್ರ ಸರಕಾರ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಈ ಕಾಯ್ದೆಗಳು ಅನುಷ್ಠಾನಗೊಂಡಲ್ಲಿ ಕಾರ್ಮಿಕರ ಬದುಕು ಇನ್ನಷ್ಟು ಪ್ರಪಾತಕ್ಕೆ ಬೀಳಲಿದೆ. ಈಗಾಗಲೇ ಕನಿಷ್ಠ ಕೂಲಿ, ಉದ್ಯೋಗ ಭದ್ರತೆ, ಸಂವಿಧಾನಬದ್ಧ ಹಕ್ಕುಗಳನ್ನು ಕಳೆದುಕೊಂಡಿರುವ ಕಾರ್ಮಿಕರು ನಿರುದ್ಯೋಗ, ಹಸಿವು, ಬಡತನ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಕಾರ್ಮಿಕರಿಗೆ ಇನ್ನಷ್ಟು ಬಲ ಒದಗಿಸಲಾಗಿದೆ ಎಂಬ ಸರಕಾರದ ಹೇಳಿಕೆ ವಾಸ್ತವಕ್ಕೆ ತದ್ವಿರುದ್ಧವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ 14 ದಿನಗಳ ಮುಂಚಿತ ಮುಷ್ಕರ ನೋಟಿಸ್ ಕಡ್ಡಾಯ ಮಾಡುವ ಮೂಲಕ ಹೋರಾಟದ ಹಕ್ಕಿನ ಮೇಲೆ ನೇರ ದಾಳಿ ಮಾಡಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ, ಹೋರಾಟಗಾರರಾದ ನಿರ್ಮಲಾ, ನಾಗರಾಜ ಪೂಜಾರ್, ಪುಟ್ಟಿಗೌಡ, ಪ್ರತಿಭಾ, ವಿಜಯಕುಮಾರ್, ಸಂತೋಷ ಗುಳೆದಟ್ಟಿ, ಪರುಶುರಾಮ ಸಂದೇರ್, ವಿನಯ್, ಮಾಯಮ್ಮ, ಕೆ. ನಾಗಲಿಸ್ವಾಮಿ, ವಿಜಯ್ ದೊರೆರಾಜು ಮತ್ತಿತರರು ಹಾಜರಿದ್ದರು.
ಮಂಗಳೂರು | ಮರಳು ಅಕ್ರಮ ಸಾಗಾಟ: ಪ್ರಕರಣ ದಾಖಲು
ಮಂಗಳೂರು: ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಅಡ್ಯಾರ್ ಬಳಿ ವಶಕ್ಕೆ ಪಡೆದ ಕಂಕನಾಡಿ ನಗರದ ಠಾಣೆಯ ಪೊಲೀಸರು ಚಾಲಕ ಪುದು ಗ್ರಾಮದ ಅಮ್ಮೆಮ್ಮಾರ್ ಹೌಸ್ ನಿವಾಸಿ ಮುಹಮ್ಮದ್ ಇಕ್ಬಾಲ್ (48) ಮತ್ತಾತನಿಗೆ ಮರಳು ತರಲು ಸೂಚಿಸಿದ್ದ ಜಯಣ್ಣ ಯಾನೆ ಶೇಖರ್ ಅಡ್ಯಾರ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ 10ಕ್ಕೆ ಅಡ್ಯಾರ್ ಕಟ್ಟೆ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರು. ಅದರಂತೆ ಚಾಲಕ ವಾಹನ ನಿಲ್ಲಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಸುತ್ತುವರಿದ ಪೊಲೀಸರು ಆತನನ್ನು ಹಿಡಿದು ವಾಹನ ಪರಿಶೀಲಿಸಿದಾಗ ಮರಳು ಕಂಡು ಬಂದಿದೆ. ಪಿಕಪ್ ವಾಹನದ ಮೌಲ್ಯ 6,00,000 ರೂ. ಹಾಗೂ ಮರಳಿನ ಮೌಲ್ಯ 6,500 ರೂ. ಎಂದು ಅಂದಾಜಿಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಪಿಕಪ್ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Davanagere| ಚಿನ್ನಾಭರಣ ಸುಲಿಗೆ ಪ್ರಕರಣ : ಪ್ರೊಬೆಷನರಿ ಪಿಎಸ್ಸೈ ವಜಾ, ಇನ್ನೋರ್ವ ಅಮಾನತು
ದಾವಣಗೆರೆ : ಚಿನ್ನದ ವ್ಯಾಪಾರಿಯನ್ನು ಬೆದರಿಸಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಪ್ರಕರಣದ ಮೊದಲ ಆರೋಪಿ ಪ್ರೊಬೆಷನರಿ ಸಬ್ ಇನ್ಸ್ಪೆಕ್ಟರ್ನನ್ನು ಸೇವೆಯಿಂದ ವಜಾಗೊಳಿಸಿ ಮತ್ತೊಬ್ಬ ಆರೋಪಿಯನ್ನು ಅಮಾನತುಗೊಳಿಸಿ ಪೂರ್ವ ವಲಯ ಪೊಲೀಸ್ ನಿರೀಕ್ಷಕ ಡಾ.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿದ್ದ ಪ್ರಕರಣದ ಮೊದಲ ಆರೋಪಿ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿಯನ್ನು ಪೊಲೀಸ್ ಸೇವೆಯಿಂದಲೇ ವಜಾಗೊಳಿಸಲಾಗಿದ್ದು, ಎರಡನೇ ಆರೋಪಿ ಪ್ರವೀಣ್ ಕುಮಾರ್ರನ್ನು ನ.24ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಮಾಳಪ್ಪ ಚಿಪ್ಪಲಕಟ್ಟಿ ಹಾವೇರಿ ಜಿಲ್ಲೆಯ ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಪಿಎಸ್ಸೈ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೀಣ್ಕುಮಾರ್ ರಾಣೆಬೆನ್ನೂರು ಸಂಚಾರ ಠಾಣೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಗೆ ವರ್ಗಾವಣೆಗೊಂಡಿದ್ದರು. ಸಾರ್ವಜನಿಕರಿಗೆ ರಕ್ಷಣೆ ನೀಡುವ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವಂತಹ ಬಹುಮುಖ್ಯ, ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ದರೋಡೆ ಕೃತ್ಯ ಎಸಗಿದ್ದು ಘೋರ ಅಪರಾಧ. ಈ ಹಿನ್ನೆಲೆಯಲ್ಲಿ ಮಾಳಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದರೆ ಪ್ರವೀಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಐಜಿಪಿ ಆದೇಶದಲ್ಲಿ ತಿಳಿಸಿದ್ದಾರೆ. ನ.24ರಂದು ನಸುಕಿನಲ್ಲಿ ಕಾರವಾರದ ಆಭರಣ ತಯಾರಕ ವಿಶ್ವನಾಥ್ ಅರ್ಕಸಾಲಿ ಅವರಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಎಸ್ಸೈ ಸೇರಿ 7 ಆರೋಪಿಗಳನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ನ.25ರಂದು ಬಂಧಿಸಿದ್ದರು.
ಮಂಗಳೂರು: ನ.28ರಂದು ಯುನಿವೆಫ್ನಿಂದ ಕೃಷ್ಣಾಪುರದಲ್ಲಿ ಸೀರತ್ ಸಮಾವೇಶ
ಮಂಗಳೂರು: ಯುನಿವೆಫ್ ಕರ್ನಾಟಕವು ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಸೀರತ್ ಸಮಾವೇಶವು ನ.28ರ ಸಂಜೆ 6:45ಕ್ಕೆ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ಬಳಿಯಿರುವ ಅಲಿಯಾ ಮಾಲ್ ಎದುರುಗಡೆ ನಡೆಯಲಿದೆ. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಶೋಷಣೆಯ ವಿರುದ್ಧ ಪ್ರವಾದಿ (ಸ)ಯ ನಡೆ ಎಂಬ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರ ಶಫೀಕ್, ಮುಡಾ ಸದಸ್ಯ ಅಬ್ದುಲ್ ಜಲೀಲ್, ಅನಿವಾಸಿ ಉದ್ಯಮಿ ಉಮರ್ ಫಾರೂಕ್ ದುಬೈ ಮತ್ತು ಸುರತ್ಕಲ್ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕಾನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರಿನಲ್ಲಿ ಜಿಐಎಸ್ ಆಧಾರಿತ ಒಳಚರಂಡಿ ಮ್ಯಾಪಿಂಗ್ ಯೋಜನೆ
ಮಂಗಳೂರು: ಮಂಗಳೂರಿನಲ್ಲಿ ಜಿಐಎಸ್ ಆಧಾರಿತ ಒಳಚರಂಡಿ ಮ್ಯಾಪಿಂಗ್ ಯೋಜನೆ ನಡೆಯುತ್ತಿದ್ದು, ವಾರ್ಡ್ 37, 38 ಮತ್ತು 40ರಲ್ಲಿ 933ಕ್ಕೂ ಹೆಚ್ಚು ಮ್ಯಾನ್ ಹೋಲ್ಗಳನ್ನು ಮ್ಯಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದ ಶ್ರೇಷ್ಠಿ, ಅವ್ಯಯ ಶರ್ಮಾ ಪಿ, ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಾಸವಿ ನಾಗರಾಜ್ ಜೋಶಿ ಹಾಗೂ ಮಂಗಳೂರಿನ ಕೆಲವು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ಯೋಜನೆಗೆ ಸಾಥ್ ನೀಡಿದ್ದಾರೆ. ಮಂಗಳೂರಿನ ಅಂಡರ್ಗ್ರೌಂಡ್ ಒಳಚರಂಡಿ ಜಾಲದ ನಿರ್ವಹಣೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಜಿಐಎಸ್ ಆಧಾರಿತ ಮ್ಯಾಪಿಂಗ್ ಉಪಕ್ರಮಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಇಇ ಎಂ.ಎನ್.ಶಿವಲಿಂಗಪ್ಪ ಮತ್ತು ಯೋಜನಾ ವ್ಯವಸ್ಥಾಪಕಿ ಅನನ್ಯಾ ಎ.ಬಂಗೇರ ಅವರ ಮಾರ್ಗದರ್ಶನದಲ್ಲಿ ಡಿಜಿಟಲ್ ಕಾರ್ಟೊಗ್ರಫಿ (ಡಿಸಿ) ಯೋಜನೆ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಲಬುರಗಿ | ಸರಣಿ ಕಳ್ಳತನ ಪ್ರಕರಣ: ಆರೋಪಿಯ ಬಂಧನ, 8.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಕಲಬುರಗಿ: ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ 8.50 ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ನಗರದ ಹೀರಾಪುರ ಪ್ರದೇಶದ ನಿವಾಸಿ ಚಾಂದಪಾಷಾ (25) ಬಂಧಿತ ಆರೋಪಿಯಾಗಿದ್ದಾನೆ. ಈತ ಜೂಜಾಟ ಹಾಗೂ ಕುಡಿತದ ಚಟಕ್ಕಾಗಿ ಹಗಲಲ್ಲೇ ಮನೆ ಕಳ್ಳತನಗಳನ್ನು ಮಾಡುತ್ತಿದ್ದ ಎಂದು ಹೇಳಿದರು. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅಶೋಕನಗರ ಠಾಣಾ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 15 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದವು. ಆ ಪೈಕಿ ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ, 50 ಸಾವಿರ ಮೌಲ್ಯದ 30 ಗ್ರಾಂ ಬೆಳ್ಳಿ ಆಭರಣ ಹಾಗೂ 10 ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು. ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣ್ ಕುಮಾರ್, ಎಎಸ್ಐ ಶೈಲಜಾ, ವೈಜಿನಾಥ, ಮಲ್ಲಿಕಾರ್ಜುನ, ಶಿವಪ್ರಕಾಶ, ನೀಲಕಂಠರಾಯ, ಚಂದ್ರಶೇಖರ, ಮುಜಾಹೀದ್ ಅವರಿದ್ದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಪಿಐ ಅರುಣಕುಮಾರ್ ಉಪಸ್ಥಿತರಿದ್ದರು.
ಸೇಡಂ| ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು
ಕಲಬುರಗಿ: ಕಮಲಾವತಿ ನದಿಯಿಂದ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೇಡಂ ಪೊಲೀಸರು, ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೇಡಂ ತಾಲೂಕಿನ ಬಟಗೀರ (ಬಿ) ಗ್ರಾಮದ ಸಮೀಪವಿರುವ ಕಮಲಾವತಿ ನದಿಯಿಂದ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆ ಸಿಪಿಐ ಮಹಾದೇವ ದಿಡಿಮನಿ, ಸಿಬ್ಬಂದಿ ಮಾರುತಿ, ಬಾಲಕೃಷ್ಣ ರೆಡ್ಡಿ ಸೇರಿದಂತೆ ಇತರೆ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಚಾಲಕ ಹಾಗೂ ವಾಹನ ಮಾಲಕನ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್' ರಚನೆಗೆ ರಾಜ್ಯ ಸರ್ಕಾರ ಅಸ್ತು
ರಾಜ್ಯ ಸಂಪುಟವು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್ ಆಗಿ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಬಾಕಿ ಮನ್ನಾ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ನ್ಯಾಯಾಂಗ ನೇಮಕಾತಿ, ಆರೋಗ್ಯ ಕೇಂದ್ರಗಳ ನಿರ್ಮಾಣ, ಚಾಲಕರ ನೇಮಕಾತಿ, ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಒಪ್ಪಿಗೆ ನೀಡಲಾಗಿದೆ. ಮೆಕ್ಕೆಜೋಳ ಬೆಂಬಲ ಬೆಲೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್; ಪ್ರತೀ ಸೋಮವಾರ 5ಗಂಟೆಗೆ ರೈಲು ಸೇವೆ
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಮೆಟ್ರೋ ತಡೆದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಒತ್ತಾಯಕ್ಕೆ ಮಣಿದಿರುವ ಬಿಎಂಆರ್ಸಿಎಲ್ ಇನ್ಮುಂದೆ ಸೋಮವಾರದಂದು ಬೆಳಿಗ್ಗೆ 6 ಗಂಟೆಯ ಬದಲಿಗೆ 5.05 ಕ್ಕೆ ರೈಲು ಸೇವೆ ಆರಂಭಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಇದು ಪ್ರತಿಭಟನೆ ನಡೆದುದ್ದರ ಫಲವಾಗಿ ಕೈಗೊಂಡ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ Gen Z ಭರವಸೆ; ಅವಕಾಶ ಬಳಸಿಕೊಳ್ಳುವ ಚುರುಕುತನವಿದೆ ಎಂದು ಮೋದಿ ಗುಣಗಾನ
ಹೈದರಾಬಾದ್ನಲ್ಲಿ ಸ್ಕೈರೂಟ್ ಸಂಸ್ಥೆಯ 'ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ ನಂತರ ಭಾರತ ಯುವ ಪೀಳಿಗೆ ಅದರ ಸದುಪಯೋಗ ಪಡಿಸಿಕೊಳ್ಳುತ್ತಿದೆ.ಇಂದು ದೇಶದಲ್ಲಿ 300ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟಪ್ಗಳು ಕಾರ್ಯನಿರ್ವಹಿಸುತ್ತಿದೆ. ಇದು ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಹೊಸ ಭರವಸೆ. ಇದೇ ವೇಳೆ ಸ್ಕೈರೂಟ್ ಸಂಸ್ಥೆ ತನ್ನ 'ವಿಕ್ರಮ್-I' ರಾಕೆಟ್ ಅನ್ನು ಅನಾವರಣಗೊಳಿಸಿತು.
2026ರ ಅಂತರ್ರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದುಬೈ ಸಂಸ್ಥೆಗಳು ಆಸಕ್ತಿ : ಶರಣಪ್ರಕಾಶ್ ಪಾಟೀಲ್
ದುಬೈ : ಕರ್ನಾಟಕದಲ್ಲಿ ನಡೆಯಲಿರುವ ಬೆಂಗಳೂರು ಅಂತರ್ ರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದುಬೈ ಸೇರಿದಂತೆ ಯುಎಇಯ ಹಲವಾರು ಕಂಪನಿಗಳು ಆಸಕ್ತಿ ತೋರಿವೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. 2026ನೆ ಸಾಲಿನ ಜನವರಿ-ಫೆಬ್ರವರಿಯಲ್ಲಿ ಬೆಂಗಳೂರು ಅಂತರ್ ರಾಷ್ಟ್ರೀಯ ಉದ್ಯೋಗ ಮೇಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಗುರುವಾರ ದುಬೈನಲ್ಲಿ ರೋಡ್ ಶೋ ನಡೆಯಿತು. ಸಾರಿಗೆ, ಮಾನವ ಸಂಪನ್ಮೂಲ ತಂತ್ರಜ್ಞಾನ, ಸಾಫ್ಟ್ ಸೇವೆಗಳು, ಮಾಧ್ಯಮ ತಂತ್ರಜ್ಞಾನ, ಗೇಮಿಂಗ್, ರಿಯಲ್ ಎಸ್ಟೇಟ್, ಇಂಧನ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳಂತಹ ಕ್ಷೇತ್ರಗಳ ಕಂಪನಿಗಳು ಆಸಕ್ತಿಯನ್ನು ತೋರಿಸಿದವು ಎಂದು ಮಾಹಿತಿ ನೀಡಿದ ಸಚಿವರು, ಶಿಕ್ಷಣ ಮತ್ತು ಕೌಶಲ್ಯತೆ ವಿಷಯದಲ್ಲಿ ಕರ್ನಾಟಕ ವಿಶೇಷ ಸಾಮರ್ಥ್ಯ ಹೊಂದಿದೆ. ರಾಜ್ಯದ ಯುವಕರನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು. ನಮ್ಮ ರಾಜ್ಯದ ಕೌಶಲ್ಯ ಭರಿತ ಪದವೀಧರರು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ನಮ್ಮ ರಾಜ್ಯ ಸರಕಾರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಪೂರ್ಣ ತರಬೇತಿ ಪಡೆದು ಸಜ್ಜಾಗಿದ್ದಾರೆ. ದುಬೈ ಮೂಲದ ಉದ್ಯೋಗದಾತರು ಕರ್ನಾಟಕದ ಈ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಒದಗಿಸಬೇಕು ಎಂದು ಶರಣ ಪ್ರಕಾಶ್ ಪಾಟೀಲ್ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್, ತಾಂತ್ರಿಕ ಶಿಕ್ಷಣ ಮತ್ತು ಆಧುನಿಕ ಕೌಶಲ್ಯ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಪ್ರಗತಿಯತ್ತ ಸಾಗಿದೆ. ತಾಂತ್ರಿಕ ತರಬೇತಿಗೆ ಕರ್ನಾಟಕದ ವಿಧಾನವು ಭಾರತದಲ್ಲಿ ಅತ್ಯುತ್ತಮವಾಗಿದೆ. ನಮ್ಮ ರಾಜ್ಯದ ಪ್ರತಿಭಾವಂತರು ಜಾಗತಿಕ ಮಾನದಂಡ ಪೂರೈಸುವ ಐಟಿ ಮತ್ತು ಕೃತಕ ಬುದ್ಧಿಮತ್ತೆ ಕೌಶಲ್ಯ ಕ್ಷೇತ್ರದಲ್ಲಿ ತರಬೇತಿ ಪಡೆದು ಸಜ್ಜಾಗಿದ್ದಾರೆ ಎಂದು ಹೇಳಿದರು. ದುಬೈನಲ್ಲಿ ನಡೆದ ಕಾರ್ಯಕ್ರಮದ ವೇಳೆ ಹವಾಮಾನ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆ ಹಾಗೂ ಡಿಜಿಟಲೀಕರಣ ಮತ್ತು ಜಾಗತಿಕ ಕೌಶಲ್ಯ ವಿನಿಮಯದ ಕುರಿತು ಉಭಯ ಸಚಿವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ಡಿಸಿ) ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೆಎಸ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ.ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಿರುವನಂತಪುರ: ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಜೀವ ರಕ್ಷಿಸುವ ಚಿಕಿತ್ಸೆಯನ್ನು ನೀಡುವುದು ಪ್ರತಿಯೊಂದು ವೈದ್ಯಕೀಯ ಸಂಸ್ಥೆಯ ಮೊದಲ ಕರ್ತವ್ಯ. ಮುಂಗಡ ಪಾವತಿ ಮಾಡಿಲ್ಲ, ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣವನ್ನು ನೆಪವಾಗಿಸಿಕೊಂಡು ಯಾವುದೇ ಆಸ್ಪತ್ರೆಯೂ ತುರ್ತು ರೋಗಿಗೆ ಚಿಕಿತ್ಸೆ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಸ್ಯಾಮ್ ಕುಮಾರ್ ವಿ.ಎಂ ಅವರಿದ್ದ ವಿಭಾಗೀಯ ಪೀಠವು ಬುಧವಾರ ನೀಡಿದ ತೀರ್ಪಿನಲ್ಲಿ, ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಯನ್ನು ತಕ್ಷಣ ಪರೀಕ್ಷಿಸಿ, ಸೂಕ್ತ ಆರೈಕೆ ನೀಡಬೇಕು. ಅಗತ್ಯವಿದ್ದರೆ ‘ಉನ್ನತ ಕೇಂದ್ರಕ್ಕೆ’ ಸುರಕ್ಷಿತವಾಗಿ ಸ್ಥಳಾಂತರಿಸುವ ಜವಾಬ್ದಾರಿಯನ್ನು ಆಸ್ಪತ್ರೆಗಳು ನಿರ್ವಹಿಸಬೇಕು ಎಂದು ಸೂಚಿಸಿದೆ. ರೋಗಿಯನ್ನು ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಡಿಸ್ಚಾರ್ಜ್ ಸಾರಾಂಶದೊಂದಿಗೆ ಇಸಿಜಿ, ಎಕ್ಸ್–ರೇ, ಸಿಟಿ ಸ್ಕ್ಯಾನ್ ಮತ್ತು ಇತರೆ ಎಲ್ಲಾ ವರದಿಗಳನ್ನು ನೀಡುವುದನ್ನು ಖಾತರಿಪಡಿಸಬೇಕು ಎಂದು ಪೀಠ ಹೇಳಿದೆ. ಇದನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ. ಕೇರಳ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ಸ್ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ, 2018 ಮತ್ತು ಅದರ ನಿಯಮಗಳು ಅಸ್ಪಷ್ಟ ಅಥವಾ ಅಸಮಾನವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಈ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘ (IMA) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಕಾಯ್ದೆ ಜಾಗತಿಕ ಮಾನದಂಡಗಳಿಗೆ ಸರಿಹೊಂದುತ್ತದೆ ಎಂಬುದನ್ನು ನ್ಯಾಯಾಲಯವು ಉಲ್ಲೇಖಿಸಿದೆ. ಪಾರದರ್ಶಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಪ್ರತಿಯೊಂದು ಆಸ್ಪತ್ರೆಯೂ ನೀಡುವ ಸೇವೆಗಳ ಪಟ್ಟಿ, ಸಾಮಾನ್ಯವಾಗಿ ನಡೆಸುವ ಚಿಕಿತ್ಸೆಗಳ ಮೂಲ ಮತ್ತು ಪ್ಯಾಕೇಜ್ ದರಗಳು, ಅನಿರೀಕ್ಷಿತ ತೊಡಕುಗಳು ಹಾಗೂ ಹೆಚ್ಚುವರಿ ಕಾರ್ಯವಿಧಾನಗಳ ವಿವರಗಳನ್ನು ಮಲಯಾಳಂ ಮತ್ತು ಇಂಗ್ಲಿಷ್ನಲ್ಲಿ ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸ್ವಾಗತ ಕೌಂಟರ್ ಮತ್ತು ಅಧಿಕೃತ ವೆಬ್ಸೈಟ್ನಲ್ಲಿ ಈ ಮಾಹಿತಿಗಳು ಸುಲಭವಾಗಿ ಕಾಣುವಂತೆ ಇರಬೇಕು ಎಂದು ಸೂಚಿಸಲಾಗಿದೆ. ಕುಂದುಕೊರತೆ ಅಧಿಕಾರಿಯ ಹೆಸರು, ಫೋನ್ ಸಂಖ್ಯೆ, ಇಮೇಲ್, ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಾಯವಾಣಿ ಮುಂತಾದ ವಿವರಗಳನ್ನೂ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಪ್ರದರ್ಶಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಆಸ್ಪತ್ರೆಗೆ ಪ್ರವೇಶಿಸುವ ಕ್ಷಣದಲ್ಲೇ ಪ್ಯಾಕೇಜ್ ದರಗಳು, ಅಡ್ಮಿಶನ್ ಶುಲ್ಕ, ಬಿಲ್ಲಿಂಗ್ ನಿಯಮ, ಡಿಸ್ಚಾರ್ಜ್ ಪ್ರಕ್ರಿಯೆ, ಆಂಬ್ಯುಲೆನ್ಸ್ ಶುಲ್ಕ, 24×7 ತುರ್ತು ಸೇವಾ ಮಾರ್ಗಸೂಚಿಗಳು ಹಾಗೂ ಕುಂದುಕೊರತೆ ಪರಿಹಾರ ವಿಧಾನಗಳ ಬಗ್ಗೆ ರೋಗಿ ಅಥವಾ ಸಂಬಂಧಿಕರಿಗೆ ಮಲಯಾಳಂ ಮತ್ತು ಇಂಗ್ಲಿಷ್ನಲ್ಲಿ ಸಂಪೂರ್ಣ ಮಾಹಿತಿ ನೀಡುವ ಜವಾಬ್ದಾರಿ ಆಸ್ಪತ್ರೆಗಳದ್ದಾಗಿದೆ. ದೂರುಗಳನ್ನು 7 ಕೆಲಸದ ದಿನಗಳಲ್ಲಿ ಬಗೆಹರಿಸುವ ಪ್ರಯತ್ನ ನಡೆಯಬೇಕು. ಬಗೆಹರಿಯದ ಅಥವಾ ಗಂಭೀರ ದೂರುಗಳನ್ನು ಜಿಲ್ಲಾ ನೋಂದಣಿ ಪ್ರಾಧಿಕಾರಕ್ಕೆ ತಕ್ಷಣ ತಿಳಿಸಬೇಕು ಎಂದು ಪೀಠ ಸೂಚಿಸಿದೆ. ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿ ದೂರು ರಿಜಿಸ್ಟರ್ ಇರಿಸುವುದು ಕಡ್ಡಾಯ ಎಂದು ನ್ಯಾಯಾಲಯ ತಿಳಿಸಿದೆ. ರೋಗಿಗಳು ಸೇವಾ ಕೊರತೆಯ ವಿರುದ್ಧ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ದೂರು ನೀಡುವ ಹಕ್ಕು, ಆಪಾದಿತ ವಂಚನೆ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸುವ ಹಕ್ಕು, ಗಂಭೀರ ಕುಂದುಕೊರತೆಗಳನ್ನು ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸುವ ಅವಕಾಶ, ಹಾಗೂ ಕಾನೂನು ಸೇವಾ ಪ್ರಾಧಿಕಾರಗಳಿಂದ ಸಹಾಯ ಪಡೆಯುವ ಅವಕಾಶಗಳನ್ನೂ ಹೈಕೋರ್ಟ್ ಪುನರುಚ್ಚರಿಸಿದೆ. ಎಲ್ಲಾ ಪಾವತಿಗಳಿಗೂ ಆಸ್ಪತ್ರೆಗಳು ರಶೀದಿ ನೀಡುವುದು ಕಡ್ಡಾಯ ಎಂದು ನ್ಯಾಯಾಲಯವು ಹೇಳಿದೆ. ಈ ತೀರ್ಪಿನಲ್ಲಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ರಾಜ್ಯ ಸರ್ಕಾರವು ಮಲಯಾಳಂ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಒಂದು ತಿಂಗಳ ಕಾಲ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಸಾಮಾನ್ಯ ಜನರು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ತಮ್ಮ ಹಕ್ಕುಗಳನ್ನು ಅರಿತುಕೊಳ್ಳಲು ಇದು ಅಗತ್ಯ ಕ್ರಮವೆಂದು ಪೀಠ ಅಭಿಪ್ರಾಯಪಟ್ಟಿದೆ. ಸೌಜನ್ಯ: thehindu.com
ರಾಜ್ಯದ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ, ತಲಾ 5 ಲಕ್ಷ ರೂ ಬಹುಮಾನ ಘೋಷಿಸಿದ ಸಿಎಂ
ಬೆಂಗಳೂರು : ವಿಶ್ವಕಪ್ ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಗೆದ್ದಿರುವ ರಾಜ್ಯದ ಇಬ್ಬರು ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ., ಬಹುಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ರಾಜ್ಯದ ಆಟಗಾರ್ತಿ ಧನಲಕ್ಷ್ಮೀ ಹಾಗೂ ಚೈನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಲಕ್ಷ್ಯ ರಾಜೇಶ್ ಅವರಿಗೆ ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿ ತಲಾ 5 ಲಕ್ಷ ರೂ., ಬಹುಮಾನವನ್ನು ಮುಖ್ಯಮಂತ್ರಿ ಪ್ರಕಟಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿ ಇಬ್ಬರೂ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ,. ಚೆಕ್ ವಿತರಿಸುವಂತೆ ಸರಕಾರದ ಅಪರ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋಂವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಕುಮಾರ್, ಸಂಚಾಲಕರಾದ ರವೀಂದ್ರ, ಕಾರ್ಯದರ್ಶಿ ರಾಜೇಶ್, ತರಬೇತುದಾರ ಬಿ.ಎನ್.ಸುಧಾಕರ್ ಸೇರಿದಂತೆ ಪ್ರಮುಖರಿದ್ದರು.
ನಿರಾಶ್ರಿತನಾಗಿ ಬಂದು ರಕ್ತದ ಕೋಡಿ ಹರಿಸಿದ! ವೈಟ್ ಹೌಸ್ ಸೆಕ್ಯುರಿಟಿಯನ್ನು ಹತ್ಯೆಗೈದ ರಹಮತುಲ್ಲಾ ಲಕನ್ವಾಲ್ ಯಾರು?
ವಾಷಿಂಗ್ಟನ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ರಹಮತುಲ್ಲಾ ಲಕನ್ವಾಲ್ ಎಂಬುವರ ಕಥೆ ಇದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಕೆಲಸ ಮಾಡಿದ್ದ ಇವರು, ಅಮೆರಿಕಾಗೆ ಬಂದ ನಂತರ ಅನ್ಯಾಯದ ಭಾವನೆ ಬೆಳೆಸಿಕೊಂಡಿದ್ದರು. ಇವರ ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಇದೀಗ ಅಮೆರಿಕಾ ಅಫ್ಘಾನರ ಆಶ್ರಯ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.
►ತೆಂಕನಿಡಿಯೂರು ಕಾಲೇಜಿನ ಧನುಷ್ ಶ್ರೇಷ್ಠ ಪುರುಷ ಅತ್ಲೀಟ್►ಆಳ್ವಾಸ್ ಕಾಲೇಜಿನ ದೀಕ್ಷಿತಾ ಶ್ರೇಷ್ಠ ಮಹಿಳಾ ಅತ್ಲೀಟ್
ಕಲಬುರಗಿ | ಅತಿವೃಷ್ಟಿಯಿಂದ ಬೆಳೆ ಹಾನಿ: ಹೆಚ್ಚುವರಿ ಪರಿಹಾರಕ್ಕೆ ಬಿಜೆಪಿ ಮುಖಂಡರಿಂದ ಆಗ್ರಹ
ಕಲಬುರಗಿ: 2025-26ನೇ ಸಾಲಿನಲ್ಲಿ ಮುಂಗಾರು ಅತೀ ವೃಷ್ಟಿ ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್ಡಿಆರ್ಆಫ್ ಅಥವಾ ಎನ್ಡಿಆರ್ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು. ಗುರುವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಆಳಂದ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಈಗ ಬಿಡುಗಡೆ ಮಾಡಿರುವ ಪರಿಹಾರವೂ ಯಾವುದಕ್ಕೂ ಸಾಲುವುದಿಲ್ಲ. ಇದು ಕೇವಲ ರೈತರ ಕಣ್ಣೊರೆಸುವ ತಂತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯತ್ಗೆ ಒಂದರಂತೆ ಅಥವಾ ಪ್ರತಿ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಒತ್ತಾಯಿಸಿದರು. ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, 2025-26ನೇ ಸಾಲಿನ ಬೆಂಬಲ ಬೆಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ರಾಜ್ಯ ಸರಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿಸಲು ಆಗ್ರಹಿಸಿದರು. ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ಕಲ್ಯಾಣ ಕರ್ನಾಟಕ ಜೀವನಾಡಿಯಾದ ತುಂಗಭದ್ರಾ ಆಣೆಕಟ್ಟಿನಲ್ಲಿ 2ನೇ ಬೆಳೆಗೆ ನೀರು ಬಿಡುವಷ್ಟು ನೀರಿನ ಸಂಗ್ರಹವಿದ್ದು, ಹೆಚ್ಚು ಮಳೆಯಿಂದಾಗಿ ಒಳಹರಿವು ಕೂಡ ನಿರಂತರವಾಗಿ ಹರಿಯುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ 2ನೇ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲವೆಂದು ತೀರ್ಮಾನಿಸಿರುತ್ತದೆ. ಕ್ರಸ್ಟ್ ಗೇಟ್ಗಳ ರಿಪೇರಿಗಾಗಿ ಎರಡನೇ ಬೆಳೆಗೆ ನೀರು ನಿಲ್ಲಿಸಿರುವ ಕಾಂಗ್ರೆಸ್ ಸರಕಾರ ನಷ್ಟಕ್ಕೊಳಗಾಗುವ ರೈತರಿಗೆ ಪ್ರತಿ ಎಕರೆ ಭೂಮಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಅಪ್ಪಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುತ್ತು ಕಾಲುವೆ, ಟನಲ್ಗಳು ಹಾಗೂ ಅಶ್ವೇಡೆಟ್ಗಳ ರಿಪೇರಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗ್ರಹಿಸಿದರು. ಪ್ರತಿಭಟನೆ ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವೀರಣ್ಣಾ ಮಂಗಾಣೆ, ಅಣ್ಣಾರಾವ ಪಾಟೀಲ ಕವಲಗಾ, ಸಂತೋಷ ಹಾದಿಮನಿ, ಲಿಂಗರಾಜ ಬಿರಾದಾರ, ಬಸವರಾಜ ಬಿರಾದಾರ, ಚಂದ್ರಕಾoತ ಭೂಸನೂರ, ಮಲ್ಲಿಕಾರ್ಜುನ ತಡಕಲ, ಪಂಡಿತರಾವ್ ಪಾಟೀಲ, ಆದಿನಾಥ ಹೀರಾ, ನಾಗರಾಜ ಶೇಗಜಿ, ಫಯ್ಯಾಜ್ ಪಟೇಲ, ಶರಣು ಸರಸಂಬಿ, ಸಂದೀಪ ನಾಯಕ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಜನಪರ ಸುದ್ದಿ ಪ್ರಚಾರದಲ್ಲಿ ವಾರ್ತಾ ಭಾರತಿ ಮುಂಚೂಣಿಯಲ್ಲಿದೆ : ವಿಶ್ವರಾಧ್ಯ ಸತ್ಯಂಪೇಟೆ
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಶಹಾಪುರ ಪಟ್ಟಣದಲ್ಲಿ ಓದುಗರು, ಹಿತೈಷಿಗಳ ಸಭೆ
Tamil Nadu | ಸೆಂಗೊಟ್ಟೈಯನ್ TVK ಸೇರ್ಪಡೆಯಾಗಿದ್ದರಿಂದ ವಿಜಯ್ ಪಕ್ಷಕ್ಕೇನು ಲಾಭ?
ಚೆನ್ನೈ: ಪಕ್ಷವಿರೋಧ ಚಟುವಟಿಕೆಗಳ ಆರೋಪದ ಮೇಲೆ AIADMK ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಚಿವ ಸೆಂಗೊಟ್ಟೈಯನ್ ಗುರುವಾರ ನಟ ವಿಜಯ್ ನಾಯಕತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯಿಂದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಚುನಾವಣೆಗೂ ಮುನ್ನ ಭಾರಿ ಲಾಭವಾಗಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. 1972ರಲ್ಲಿ AIADMK ಸ್ಥಾಪನೆಗೊಂಡಾಗಿನಿಂದಲೂ ಅದರೊಂದಿಗೆ ಗುರುತಿಸಿಕೊಂಡು ಬಂದಿದ್ದ ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್, ಫೆಬ್ರವರಿ ತಿಂಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧ ಬಂಡೆದ್ದಿದ್ದರು. ಇದು ಎಲ್ಲರನ್ನೂ ಚಕಿತಗೊಳಿಸಿತ್ತು. ಅದಕ್ಕೆ ಕಾರಣವೂ ಇತ್ತು. ಮೃದು ಭಾಷಿಯಾದ 77 ವರ್ಷದ ಹಿರಿಯ ನಾಯಕ ಸೆಂಗೊಟ್ಟೈಯನ್ ಮೂಲತಃ AIADMK ಹಾಗೂ ಅದರ ನಾಯಕತ್ವಕ್ಕೆ ತಮ್ಮ ಅಚಲ ನಿಷ್ಠೆ ಪ್ರದರ್ಶಿಸುವ ಮೂಲಕವೇ ಮನೆಮಾತಾದವರು. ಆದರೆ, AIADMK ಮತ್ತೆ NDA ತೆಕ್ಕೆಗೆ ಮರಳಲು ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ವಿ.ಕೆ.ಶಶಿಕಲಾ, ಟಿ.ಟಿ.ವಿ.ದನಿಕರನ್ ಹಾಗೂ ಒ ಪನೀರ್ ಸೆಲ್ವಂ ಮತ್ತೆ AIADMKಗೆ ಸೇರ್ಪಡೆಯಾಗುವಂತೆ ಪಳನಿಸ್ವಾಮಿ ಮೇಲೆ ಒತ್ತಡ ಹೇರಲು ಸೆಂಗೊಟ್ಟೈಯನ್ ಅವರನ್ನು ಬಿಜೆಪಿ ಬಳಸಿಕೊಂಡಿತ್ತು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಹೀಗಿದ್ದೂ, ಒಂದು ಹಂತದಲ್ಲಿ AIADMK ನಾಯಕತ್ವದ ವಿರುದ್ಧವೇ ಬಂಡೆದ್ದ ಸೆಂಗೊಟ್ಟೈಯನ್ ರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದ ಬಿಜೆಪಿ ಕೂಡಾ, ಅವರನ್ನು ನಡುನೀರಿನಲ್ಲಿ ಕೈಬಿಟ್ಟಿತ್ತು. ಹೀಗಾಗಿ, ಅಂತಿಮವಾಗಿ ಅವರಿಂದು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸೇರ್ಪಡೆಯಾಗಿದ್ದಾರೆ. AIADMKಯ ಪ್ರಶ್ನಾತೀತ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ, ಜಯಲಲಿತಾರಿಗೂ ಆಪ್ತರಾಗಿದ್ದ ಸೆಂಗೊಟ್ಟೈಯನ್, ತಮ್ಮ ಸಂಘಟನಾತ್ಮಕ ಕೌಶಲಗಳಿಗೆ ಹೆಸರಾಗಿದ್ದಾರೆ. ವಿಶೇಷವಾಗಿ ಜಯಲಲಿತಾರ ಚುನಾವಣಾ ಪ್ರಚಾರ ಯೋಜನೆಯ ರೂಪುರೇಷೆ ತಯಾರಿಸುವುದರಲ್ಲಿ ಅವರು ನಿಪುಣರಾಗಿದ್ದರು. ಮೇಲಾಗಿ, ಅವರು ಪಳನಿಸ್ವಾಮಿ ಅವರ ಪ್ರಭಾವಿ ಗೌಂಡರ್ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಇದೀಗ ಗೌಂಡರ್ ಸಮುದಾಯದ ಸೆಂಗೊಟ್ಟೈಯನ್ ತಮಿಳಗ ವೆಟ್ರಿ ಕಳಗಂ ಸೇರ್ಪಡೆಯಾಗಿರುವುದರಿಂದ, ಚುನಾವಣೆಗೂ ಮುನ್ನ ಅದರ ಬಲ ಗಮನಾರ್ಹವಾಗಿ ಹೆಚ್ಚಳವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ವಾಸ್ತವವಾಗಿ, ಭ್ರಷ್ಟಾಚಾರದ ಪ್ರಕರಣದಲ್ಲಿ ತಾನು ದೋಷಿ ಎಂದು ತೀರ್ಪು ಬಂದಾಗ, ಶಶಿಕಲಾ ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿದಿದ್ದರು. ಈ ವೇಳೆ ಪಕ್ಷದ ಹಿರಿಯ ನಾಯಕ ಕೆ.ಪಳನಿಸ್ವಾಮಿಯೊಂದಿಗೆ ಸೆಂಗೊಟ್ಟೈಯನ್ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿ ಅಭ್ಯರ್ಥಿಯಾಗಿದ್ದರು. ಇಂತಹ ಸೆಂಗೊಟ್ಟೈಯನ್ ತಮಿಳಗ ವೆಟ್ರಿ ಕಳಗಂ ಪಕ್ಷ ಸೇರ್ಪಡೆಯಾಗಿರುವುದರಿಂದ, ಅದರ ಶಕ್ತಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಆಧಾರ ರಹಿತ ಆರೋಪ : ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಕೋಟ್ಯಾಂತರ ರೂ. ಹಣದ ವ್ಯವಹಾರ ನಡೆಯುತ್ತಿದೆ ಹಾಗೂ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದು, ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್ ದೂರು ನೀಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರಕಾರದ ಬಗ್ಗೆ ಪಕ್ಷದ ಶಾಸಕರ ಹೆಸರನ್ನು ಪ್ರಸ್ತಾಪಿಸಿ ಹಾಗೂ ವರಿಷ್ಠರ ಮೇಲೆ ಆಧಾರ ರಹಿತವಾದ ಸುಳ್ಳು ಹೇಳಿಕೆಯನ್ನು ನೀಡಿ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಸುಳ್ಳು ಆರೋಪವನ್ನು ಮಾಡಿದ್ದಾರೆ. ಹಾಗೂ ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರೇ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಅವರ ಬಳಿ ಇರುವ ಮಾಹಿತಿ ಹಾಗೂ ಸಂದೇಶಗಳನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅವರು ನೀಡಿರುವ ಅಂಕಿ ಅಂಶವನ್ನು ಅವರಿಂದ ಮಾಹಿತಿ ಪಡೆಯಲು ಕೂಡಲೇ ಅವರನ್ನು ಬಂಧಿಸಬೇಕು. ಅವರೇ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ದಾಖಲೆಯನ್ನು ಮರೆಮಾಚುವುದು ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲಿಸಿದಂತೆ ಅದರಲ್ಲೂ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿ ಇರುವುದರಿಂದ ಇವರು ಅಧಾರ ರಹಿತವಾದಂತ ಆರೋಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರಿಗೆ ಯಾರು ಮಾಹಿತಿ ನೀಡಿದ್ದಾರೆ. ಯಾವ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ತಕ್ಷಣ ಇವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿ ಆರಂಭಿಸಿದ್ದು ಯಾರು: ಹಸ್ತಿದಂತ ಸಿಂಹಾಸನ ನಿರ್ಮಾಣಗೊಂಡದ್ದು ಹೇಗೆ?
Kollur Temple In Udupi District : ಪುರಾಣ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾ ಪದ್ದತಿಯನ್ನು ಆರಂಭಿಸಿದ ಪುಣ್ಯಭಾಗ್ಯ ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳಿಂದ ಎಂದು ಮಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಅಂತರಾಷ್ಟ್ರೀಯ `ಸ್ಟಡಿ ಪರ್ಮಿಟ್' ಕಡಿತಗೊಳಿಸಿದ ಕೆನಡಾ: ವರದಿ
ಒಟ್ಟಾವ, ನ.27: ಕೆನಡಾ ಸರಕಾರವು ಅಂತರಾಷ್ಟ್ರೀಯ ಅಧ್ಯಯನ ಪರ್ಮಿಟ್ ಗಳನ್ನು ಕಡಿತಗೊಳಿಸಿದ್ದು ಇದು ಭಾರತೀಯ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಮುಂದಿನ ವರ್ಷ ಅಂತಾರಾಷ್ಟ್ರೀಯ `ಸ್ಟಡಿ ಪರ್ಮಿಟ್'ಗಳಲ್ಲಿ 7% ಕುಸಿತಗಳನ್ನು ಕೆನಡಾ ಸರಕಾರ ನಿರೀಕ್ಷಿಸುತ್ತಿದ್ದು 2026ರ ಪರ್ಮಿಟ್ ವಿತರಣೆಯನ್ನು 4,08,000ಕ್ಕೆ ಮಿತಿಗೊಳಿಸಲಿದೆ. ಇದರಲ್ಲಿ ಹೊಸ ಆಗಮನಕ್ಕಾಗಿ 1,55,000 ವೀಸಾಗಳು ಮತ್ತು ಪ್ರಸ್ತುತ ವಿದ್ಯಾರ್ಥಿಗಳಿಗಾಗಿ 2,53,000 ವೀಸಾ ವಿಸ್ತರಣೆಗಳು ಒಳಗೊಂಡಿದೆ. ಈ ಗುರಿಯು 2025ರ ವಿತರಣಾ ಗುರಿಗಿಂತ 7% ಕಡಿಮೆ ಮತ್ತು 2024ರ ವಿತರಣಾ ಗುರಿಗಿಂತ 16% ಕಡಿಮೆಯಾಗಿದೆ ಎಂದು ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ(IRCC) ಇಲಾಖೆ ಹೇಳಿದೆ. ಟೆಂಪರರಿ ಫಾರಿನ್ ವರ್ಕರ್ ಪ್ರೋಗ್ರಾಂ(ಟಿಎಫ್ಡಬ್ಲ್ಯೂಪಿ) ಮತ್ತು ಇಂಟರ್ ನ್ಯಾಷನಲ್ ಮೊಬಿಲಿಟಿ ಪ್ರೋಗ್ರಾಂ(ಐಎಂಪಿ)ಗಳ ಅಡಿಯಲ್ಲಿ ಹೊಸ ಉದ್ಯೋಗ ಪರ್ಮಿಟ್ ಗಳು 2026ರಲ್ಲಿ 2,30,000ಕ್ಕೆ ತಲುಪಿ ಬಳಿಕ 2027 ಮತ್ತು 2028ರಲ್ಲಿ ಕಡಿಮೆಯಾಗಲಿದೆ. ಈ ಕ್ರಮವು ಭಾರತೀಯ ಪ್ರಜೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2022ರ SC, ST ಮೀಸಲಾತಿ ಮುಂದುವರಿಕೆಗೆ ಹೈಕೋರ್ಟ್ ಆದೇಶ - 3,644 ಹುದ್ದೆಗಳ ನೇಮಕಾತಿಗೆ ಇದ್ದ ಅಡ್ಡಿ ದೂರ
2022ರ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆಯಡಿ ಎಸ್ಸಿ ಎಸ್ಟಿ ಮೀಸಲಾತಿಯನ್ನು ಶೇ. 50ರಿಂದ 56ಕ್ಕೆ ಹೆಚ್ಚಿಸಿ, ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ 3,644 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೀಸಲಾತಿ ಹೆಚ್ಚಳ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್, ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ನೇಮಕಾತಿ ಅಥವಾ ಬಡ್ತಿ ಪ್ರಕ್ರಿಯೆಗಳನ್ನು ಮಾತ್ರ ಮುಂದುವರಿಸಬೇಕು, ಮತ್ಯಾವುದೇ ಹೊಸ ನೇಮಕಾತಿ, ಬಡ್ತಿ ಮಾಡಕೂಡದು ಎಂದಿದೆ. ಅದರಿಂದಾಗಿ, 3,644 ಹುದ್ದೆಗಳ ನೇಮಕಾತಿಗೆ ಇದ್ದ ತಡೆ ನಿವಾರಣೆಯಾಗಿದೆ.
ನಾಳೆ ಎಥೆನಾಲ್ ಉತ್ಪಾದಕರೊಂದಿಗೆ ಮುಖ್ಯಮಂತ್ರಿ ಸಭೆ : ಎಚ್.ಕೆ.ಪಾಟೀಲ್
ಬೆಂಗಳೂರು : ಮೆಕ್ಕೆ ಜೋಳದ ಬೆಲೆ ತೀವ್ರವಾಗಿ ಕುಸಿದಿರುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗಿದ್ದು, ಮೆಕ್ಕೆ ಜೋಳದಿಂದ ಎಥೆನಾಲ್ ಉತ್ಪಾದಿಸುವವರೊಂದಿಗೆ ಶುಕ್ರವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಅನ್ನು ಮೊಲಸಿಸ್, ಅಕ್ಕಿ ಹಾಗೂ ಮೆಕ್ಕೆಜೋಳದಿಂದ ತಯಾರಿಸಲಾಗುತ್ತದೆ. ಕೇಂದ್ರ ಸರಕಾರವು ರಾಜ್ಯದ ಡಿಸ್ಟಲರಿಗಳಿಗೆ ಎಥೆನಾಲ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿದ್ದರೂ, ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ, ಜೋಳ ಖರೀದಿ ಪ್ರಮಾಣವನ್ನು ಶೇ.30ರಷ್ಟು ಕಡಿತ ಮಾಡಿದ್ದಾರೆ. ಈ ಎಲ್ಲ ಸಮಸ್ಯೆಗಳ ಕುರಿತು ಈಗಾಗಲೆ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ ಎಂದು ಹೇಳಿದರು. ಕೇಂದ್ರ ಸರಕಾರದ ನೀತಿಗಳಿಂದಾಗಿ ರೈತರಿಗೆ ಹೊಡೆತ ಬೀಳುತ್ತಿದೆ. ಕೇಂದ್ರ ಸರಕಾರವು ಕೂಡಲೆ ಗೋವಿನ ಜೋಳ ಖರೀದಿ ಮಾಡಲು ಮುಂದೆ ಬರಬೇಕು. ಅದೇ ರೀತಿ ಹೆಸರು ಕಾಳು ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ ತೀವ್ರ ಕುಸಿದಿರುವುದು ರೈತರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಆದುದರಿಂದ, ಕೇಂದ್ರ ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಎಚ್.ಕೆ.ಪಾಟೀಲ್ ಕೋರಿದರು. ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಸರಕಾರದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ನಮ್ಮ ಸರಕಾರದಲ್ಲಿ ಯಾವುದೆ ಗೊಂದಲಗಳಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ, ಸರಕಾರದ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ಅಷ್ಟೇ ಎಂದರು.
ಅಸ್ಸಾಂ | 1,400 ಗ್ರಾಮೀಣ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕೊರತೆ
ಗುವಾಹಟಿ,ನ.27: ಅಸ್ಸಾಮಿನ ಸುಮಾರು 1,400 ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ರಾಜ್ಯ ಸರಕಾರವು ಗುರುವಾರ ವಿಧಾನಸಭೆಯಲ್ಲಿ ತಿಳಿಸಿದೆ. ಈ ಪ್ರದೇಶಗಳಲ್ಲಿಯ ಸರಕಾರಿ ಶಾಲೆಗಳಲ್ಲಿ ಸುಮಾರು 28,000 ಶಿಕ್ಷಕ ಹುದ್ದೆಗಳು ಖಾಲಿಯಿವೆ ಎಂದೂ ಅದು ಹೇಳಿದೆ. ಕಾಂಗ್ರೆಸ್ ಶಾಸಕ ವಾಜಿದ್ ಅಲಿ ಚೌಧುರಿ ಅವರ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಅವರು ಈ ವಿಷಯವನ್ನು ತಿಳಿಸಿದರು. 347 ಶಾಲೆಗಳಲ್ಲಿ ಕುಡಿಯುವ ನೀರಿನ ಮತ್ತು 809 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳ ಸಂಪೂರ್ಣ ಕೊರತೆಯಿದೆ ಎಂದು ತಿಳಿಸಿದ ಅವರು, 134 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು 101 ಶಾಲೆಗಳಲ್ಲಿ ಶೌಚಾಲಯಗಳು ಪ್ರಸ್ತುತ ಕಾರ್ಯಾಚರಿಸುತ್ತಿಲ್ಲ ಎಂದರು. ಈ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳು ಶ್ರಮಿಸುತ್ತಿವೆ ಎಂದು ತಿಳಿಸಿದ ಪೆಗೊ, ಈ ಪ್ರದೇಶಗಳಲ್ಲಿಯ ಶಾಲೆಗಳಲ್ಲಿ ಒಟ್ಟು 27,936 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 4,500 ಪ್ರಾಥಮಿಕ ಶಾಲಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರೌಢ ಶಿಕ್ಷಣ ನಿರ್ದೇಶನಾಲಯವೂ 9,717 ಶಿಕ್ಷಕರ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
WPL Auction: ಆಲ್ರೌಂಡರ್ ದೀಪ್ತಿ ಶರ್ಮಾ ಹೊಸ ಇತಿಹಾಸ, 3,00,00,000 ರೂಪಾಯಿ ಭರ್ಜರಿ ಆಫರ್...
ಮಹಿಳಾ ಕ್ರಿಕೆಟ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಕೋಟಿ ಕೋಟಿ ರೂಪಾಯಿ ಈಗ ನೀರಿನಂತೆ ಹರಿದು ಹೋಗುತ್ತಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡ 2025 ಏಕದಿನ ವಿಶ್ವಕಪ್ ಗೆದ್ದ ನಂತರ, ಮಹಿಳಾ ಕ್ರಿಕೆಟ್ ತಂಡಕ್ಕೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ ಎಂಬುದು ಇಡೀ ಜಗತ್ತಿಗೆ ಮನವರಿಕೆ ಆಗಿದೆ. ಇದೇ ಸಂಭ್ರಮದಲ್ಲಿ ಮಹಿಳಾ ಪ್ರಿಮಿಯರ್ ಲೀಗ್
ಬಿಡದಿ GBIT ಯೋಜನೆಗೆ ರಾಜ್ಯದಲ್ಲೇ ಗರಿಷ್ಠ ಭೂ ಪರಿಹಾರ ದರ ನಿಗದಿ! 9 ಗ್ರಾಮಗಳಲ್ಲಿ ಭೂಸ್ವಾಧೀನ; ಎಕರೆಗೆ ಎಷ್ಟು ದರ?
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ 9 ಗ್ರಾಮಗಳ 7,481 ಎಕರೆ ಭೂಮಿಯನ್ನು ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಗರಿಷ್ಠ ಭೂ ಪರಿಹಾರ ದರವನ್ನು ನಿಗದಿ ಮಾಡಿದ್ದಾರೆ. ಇದು ರಾಜ್ಯದಲ್ಲಿ ನಿಗದಿಯಾದ ಗರಿಷ್ಠ ಭೂ ಪರಿಹಾರ ದರಗಳಲ್ಲಿ ಒಂದಾಗಿದೆ. ಭೂ ಮಾಲೀಕರ ಹಿತದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಗರಿಷ್ಠ ದರ ನಿಗದಿ ಮಾಡಲಾಗಿದೆ.
ಕಲ್ಲುಗಣಿಗಾರಿಕೆ ಘಟಕ | ಉತ್ತರಾಖಂಡ ಸರಕಾರಕ್ಕೆ 50,000 ರೂ.ದಂಡ ವಿಧಿಸಿದ ಎನ್ಜಿಟಿ
ಡೆಹ್ರಾಡೂನ್,ನ.27: ಪರಿಸರ ಸೂಕ್ಷ್ಮ ಶಿವಾಲಿಕ್ ಆನೆ ಅಭಯಾರಣ್ಯ ಮತ್ತು ಸಾಂಗ್ ನದಿಯ ಪ್ರವಾಹ ಪ್ರದೇಶದಲ್ಲಿ ಕಾನೂನುಬಾಹಿರ ಜಲ್ಲಿ ತಯಾರಿಕೆ ಘಟಕ ಕಾರ್ಯ ನಿರ್ವಹಿಸುತ್ತಿರುವುದನ್ನು ದೃಢಪಡಿಸಿಕೊಂಡ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್ಜಿಟಿ) ಉತ್ತರಾಖಂಡ ಸರಕಾರಕ್ಕೆ 50,000 ರೂ.ಗಳ ದಂಡವನ್ನು ವಿಧಿಸಿದೆ. ಸಂರಕ್ಷಿತ ವಲಯದಲ್ಲಿ ಜಲ್ಲಿ ತಯಾರಿಕೆ ಘಟಕ ಕಾರ್ಯಾಚರಿಸುತ್ತಿರುವುದು ತೀವ್ರ ಪರಿಸರ ಉಲ್ಲಂಘನೆಯಾಗಿದೆ ಮತ್ತು ಸ್ಥಳೀಯ ವನ್ಯಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ದೂರಿ ಡೆಹ್ರಾಡೂನ್ ನಿವಾಸಿಗಳ ಪರ ವಕೀಲ ಗೌರವ್ ಕುಮಾರ್ಬನ್ಸಾಲ್ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಎನ್ಜಿಟಿ ಈ ಆದೇಶವನ್ನು ಹೊರಡಿಸಿದೆ. ಎನ್ಜಿಟಿಯ ನಿರ್ಧಾರವು ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿವರವಾದ ವರದಿಯನ್ನು ಆಧರಿಸಿದೆ. ಜಲ್ಲಿ ತಯಾರಿಕೆ ಘಟಕವು ಅಧಿಸೂಚಿತ ಆನೆ ಮೀಸಲು ಪ್ರದೇಶದೊಳಗೆ ಮತ್ತು ಗಂಗಾ ನದಿಯ ಪ್ರಮುಖ ಉಪನದಿಯಾಗಿರುವ ಸಾಂಗ್ ನ ಸಕ್ರಿಯ ಪ್ರವಾಹ ಪ್ರದೇಶದಲ್ಲಿದೆ ಎಂದು ವರದಿಯು ದೃಢಪಡಿಸಿದೆ. ಈ ಸ್ಥಳದಲ್ಲಿ ಕೈಗಾರಿಕಾ ಚಟುವಟಿಕೆಯು ವನ್ಯಜೀವಿಗಳ ಪ್ರಮುಖ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಎಚ್ಚರಿಕೆ ನೀಡಿರುವ ಡಬ್ಲ್ಯುಐಐ ವರದಿಯು, ನದಿ ಮತ್ತು ಸುತ್ತುಮುತ್ತಲಿನ ಪೊದೆಗಳ ಪ್ರದೇಶವು ಆನೆ, ಹುಲಿ, ಚಿರತೆ ಮತ್ತು ಇತರ ದೊಡ್ಡ ಸಸ್ತನಿಗಳ ಪ್ರಮುಖ ಸಂಚಲನ ಮಾರ್ಗವಾಗಿದೆ. ಕೈಗಾರಿಕಾ ಘಟಕದ ಉಪಸ್ಥಿತಿಯು ಈ ಪರಿಸರ ಮಾರ್ಗವನ್ನು ಕಿರಿದಾಗಿಸಿದೆ ಮತ್ತು ವನ್ಯಜೀವಿಗಳ ಚಲನವಲನಗಳಿಗೆ ತೀವ್ರ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿದೆ. ಎನ್ಜಿಟಿ ದಂಡ ವಿಧಿಸುವ ಜೊತೆಗೆ ಈ ಸ್ಥಳವು ವನ್ಯಜೀವಿ ಕಾರಿಡಾರ್ ಮತ್ತು ಸಕ್ರಿಯ ಪ್ರವಾಹ ಪ್ರದೇಶವಾಗಿದ್ದರೂ ಜಲ್ಲಿ ತಯಾರಿಕೆ ಘಟಕಕ್ಕೆ ಅನುಮತಿಯನ್ನು ನೀಡಿದ್ದು ಹೇಗೆ ಎನ್ನುವುದನ್ನು ವಿವರಿಸಿ ವೈಯಕ್ತಿಕವಾಗಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ನಿರ್ದೇಶನವನ್ನೂ ನೀಡಿದೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಕೀಲ ಬನ್ಸಾಲ್, ಸರಕಾರದ ಈ ಲೋಪವು ಆನೆಗಳು ಮತ್ತು ಇತರ ವನ್ಯಜೀವಿಗಳ ಉಳಿವಿಗೆ ಬೆದರಿಕೆಯನ್ನೊಡ್ಡಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಇಂತಹ ಕೈಗಾರಿಕಾ ಘಟಕಕ್ಕೆ ಅನುಮತಿ ನೀಡಿರುವುದು ಪರಿಸರ ಸಂರಕ್ಷಣೆಯಲ್ಲಿ ಸರಕಾರದ ಬದ್ಧತೆಯನ್ನು ಕಳಪೆಯಾಗಿ ಬಿಂಬಿಸುತ್ತದೆ ಎಂದು ಹೇಳಿದರು.
ನಾಳೆ (ನ.28) ಬೆಳಗ್ಗೆ 7:00ರಿಂದ ಅಪರಾಹ್ನ 3ರವರೆಗೆ ಉಡುಪಿ ನಗರಕ್ಕೆ ವಾಹನಗಳ ಪ್ರವೇಶ ನಿರ್ಬಂಧ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ನ.28ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂಜಾನೆ 7:00ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದೊಳಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ನಿಯಮ 221(ಎ)(2)(5) ರನ್ವಯ ನವೆಂಬರ್ 28ರಂದು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವ ಕುರಿತು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ವಾಹನಗಳು: ಕುಂದಾಪುರದಿಂದ ಬರುವ ವಾಹನಗಳೆಲ್ಲವನ್ನೂ ನಿಟ್ಟೂರಿನ ಸಿಲಾಸ್ ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಬೇಕು.ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು. ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳನ್ನು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ನಲ್ಲಿ ಪಾರ್ಕ್ ಮಾಡಿ ರೋಡ್ ಶೋಗೆ ತೆರಳಬೇಕು. ಮಂಗಳೂರು ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳನ್ನು ಬೈಲೂರು ಮುದ್ದಣ್ಣ ಎಸ್ಟೇಟ್ನಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳನ್ನು ಶ್ಯಾಮಿಲಿ ಎದುರು ಗ್ರೌಂಡ್ನಲ್ಲಿ ಪಾರ್ಕ್ ಮಾಡಬೇಕು. ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಬೇಕು. ಬಸ್ಸುಗಳು ಮತ್ತು ಕಾರುಗಳು: ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಗಳು ಉಡುಪಿ ಬಸ್ನಿಲ್ದಾಣದ ಕಡೆಗೆ ಬರುವಂತಿಲ್ಲ. ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆಯಾಗಿ ಚಲಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ, ಪಿತ್ರೋಡಿ, ಉದ್ಯಾವರ ಮಾರ್ಗವಾಗಿ ಚಲಿಸಬೇಕು. ಮಲ್ಪೆಯಿಂದ ಕುಂದಾಪುರದತ್ತ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮೂಲಕ ಸಂಚರಿಸಬೇಕು. ಮಂಗಳೂರಿನಿಂದ ಕುಂದಾಪುರ ಕಡೆಗೆ: ಕಟಪಾಡಿಯಿಂದ- ಮಣಿಪುರ- ದೆಂದೂರಕಟ್ಟೆ ರಾಂಪುರ- ಅಲೆವೂರು, ಗುಡ್ಡೆ ಅಂಗಡಿ- ಮಣಿಪಾಲ- ಆರ್ಎಸ್ಬಿ ಸಭಾಭವನ- ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ಎನ್ಎಚ್ 66ರ ಮೂಲಕ ಚಲಿಸಬೇಕು. ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು- ಬಲೈಪಾದೆ- ಗುಡ್ಡೆಅಂಗಡಿ- ಕೊರಂಗ್ರಪಾಡಿ ಕ್ರಾಸ್-ಕೊರಂಗ್ರಪಾಡಿ- ಕುಕ್ಕಿಕಟ್ಟೆ- ಜೋಡುರಸ್ತೆ ಅಲೆವೂರು- ಗುಡ್ಡೆಅಂಗಡಿ- ಮಣಿಪಾಲ-ಆರ್ಎಸ್ಬಿ ಸಭಾ ಭವನ- ಸಿಂಡಿಕೇಟ್ ಸರ್ಕಲ್- ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು ಎನ್ಎಚ್66 ಮೂಲಕ ಸಂಚರಿಸಬೇಕು. ಕುಂದಾಪುರದಿಂದ-ಮಂಗಳೂರು ಕಡೆಗೆ: ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ ಸರ್ಕಲ್- ಸಿಂಡಿಕೇಟ್ ಸರ್ಕಲ್-ಮಣಿಪಾಲ ಆರ್ಎಸ್ಬಿ ಸಭಾ ಭವನ- ಅಲೆವೂರು ಗುಡ್ಡೆಅಂಗಡಿ- ರಾಂಪುರ- ದೆಂದೂರ್ಕಟ್ಟೆ- ಮಣಿಪುರ- ಕಟಪಾಡಿ ಮೂಲಕ ಸಂಚರಿಸಬೇಕು. ಮಂಗಳೂರಿನಿಂದ ಮಲ್ಪೆ ಕಡೆಗೆ: ಎನ್ಎಚ್66ರ ಕಿಯಾ ಶೋ ರೂಂ- ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ- ಕಡೆಕಾರು- ಕಿದಿಯೂರು-ಮಲ್ಪೆ ಮೂಲಕ ಸಂಚರಿಸಬೇಕು. ನ.28ರ ಶುಕ್ರವಾರ ಬೆಳಗ್ಗೆ 07:00 ಗಂಟೆಯಿಂದ ಅಪರಾಹ್ನ 3:00 ಗಂಟೆಯವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಚೆಸ್ ವಿಶ್ವ ಕಪ್ ಜಯಿಸಿದ ಜಾವೊಖಿರ್ ಸಿಂಡರೊವ್; ಅತ್ಯಂತ ಕಿರಿಯ ಆಟಗಾರನಾಗಿ ದಾಖಲೆ
ಪಣಜಿ, ನ. 27: ಚೆಸ್ ವಿಶ್ವ ಕಪ್ ಜಯಿಸಿದ ಅತ್ಯಂತ ಕಿರಿಯ ಆಟಗಾರನಾಗಿ ಉಝ್ಬೆಕಿಸ್ತಾನದ ಹದಿಹರಯದ ಪ್ರತಿಭೆ ಜಾವೊಖಿರ್ ಸಿಂಡರೊವ್ ಇತಿಹಾಸ ಸೇರಿದ್ದಾರೆ. ಅವರು ಗೋವಾದಲ್ಲಿ ಬುಧವಾರ ರೋಮಾಂಚಕ ಟೈಬ್ರೇಕ್ ಫಿನಾಲೆಯಲ್ಲಿ ಚೀನಾದ ವೇ ಯಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಈ ಪಂದ್ಯಾವಳಿಯಲ್ಲಿ 19 ವರ್ಷದ ಸಿಂಡರೊವ್ 16ನೇ ಶ್ರೇಯಾಂಕಿತನಾಗಿ ತನ್ನ ಸ್ಪರ್ಧೆ ಆರಂಭಿಸಿದರು. ಇಲ್ಲಿ ಚೆಸ್ ಜಗತ್ತಿನ ಘಟಾನುಘಟಿಗಳು ಒಬ್ಬರ ನಂತರ ಒಬ್ಬರಂತೆ ಹೊರಬಿದ್ದರು. ತನ್ನದೇ ದೇಶದ ನೊಡಿರ್ಬೆಕ್ ಯಾಕೂಬೊವ್ ವಿರುದ್ಧದ ಜಿದ್ದಾಜಿದ್ದಿನ ಸೆಮಿಫೈನಲ್ನಲ್ಲಿ ಅವರು ಪಂದ್ಯವನ್ನು ಟೈಬ್ರೇಕ್ಗೆ ಒಯ್ದರು ಹಾಗೂ ಟೈಬ್ರೇಕ್ನಲ್ಲಿ ಜಯ ಗಳಿಸಿದರು. ವೇ ಯಿ ಮತ್ತು ಸಿಂಡರೊವ್ ಇಬ್ಬರೂ ಪ್ರಶಸ್ತಿ ಸುತ್ತಿಗೆ ಏರುವ ಮೂಲಕ 2026ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆ ಅರ್ಹತೆ ಪಡೆದಿದ್ದಾರೆ. ಫೈನಲ್ ನಲ್ಲಿ, ಎರಡನೇ 15’10’’ ರ್ಯಾಪಿಡ್ ಟೈಬ್ರೇಕ್ ನಲ್ಲಿ ಎದುರಾಳಿಯನ್ನು ಸೋಲಿಸಿದ ಬಳಿಕ, ಸಿಂಡರೊವ್ ವಿಶ್ವಕಪ್ ನ ಮಾಲೀಕರಾದರು. ಅವರ ವಿಜಯವು ಚೆಸ್ ಜಗತ್ತಿನಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಯೊಂದನ್ನು ಸೂಚಿಸುತ್ತಿದೆ. ಚೆಸ್ನಲ್ಲಿ ಹದಿಹರಯದ ಆಟಗಾರರ ಪ್ರಾಬಲ್ಯಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಮೊದಲು ಡಿ. ಗುಕೇಶ್ ವಿಶ್ವ ಚಾಂಪಿಯನ್ ಶಿಪ್ ಗೆದ್ದರು. ಬಳಿಕ ದಿವ್ಯಾ ದೇಶ್ಮುಖ್ ಮಹಿಳಾ ವಿಶ್ವಕಪ್ ಗೆದ್ದರು. ಈಗ ಪ್ರಮುಖ ಪ್ರಶಸ್ತಿಯನ್ನು ಗೆದ್ದ ಮೂರನೇ ಹದಿಹರಯದ ಆಟಗಾರನಾಗಿ ಸಿಂಡರೊವ್ ಹೊರಹೊಮ್ಮಿದ್ದಾರೆ. ಇದು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಂಭವಿಸಿದೆ.
ದಕ್ಷಿಣ ಆಫ್ರಿಕ ವಿರುದ್ಧ ಸರಣಿ ಸೋಲು: ಅಭಿಮಾನಿಗಳ ಕ್ಷಮೆ ಕೋರಿದ ರಿಷಭ್ ಪಂತ್
ಮುಂಬೈ, ನ. 27: ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಉತ್ತಮ ಕ್ರಿಕೆಟ್ ಆಡಲಿಲ್ಲ ಎನ್ನುವುದನ್ನು ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಶಭ್ ಪಂತ್ ಒಪ್ಪಿಕೊಂಡಿದ್ದಾರೆ ಹಾಗೂ ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ಆಡಲು ವಿಫಲವಾಗಿರುವುದಕ್ಕಾಗಿ ಅವರ ಕ್ಷಮೆ ಯಾಚಿಸಿದ್ದಾರೆ. ಕೋಲ್ಕತ ಮತ್ತು ಗುವಾಹಟಿಯಲ್ಲಿ ನಡೆದ ಎರಡು ಪಂದ್ಯಗಳ ಸರಣಿಯನ್ನು ಭಾರತವು 0-2 ಅಂತರದಿಂದ ಕಳೆದುಕೊಂಡಿದೆ. ಇದು ಭಾರತದಲ್ಲಿ ದಕ್ಷಿಣ ಆಫ್ರಿಕದ ಎರಡನೇ ಟೆಸ್ಟ್ ಸರಣಿ ವಿಜಯವಾಗಿದೆ. ಇದಕ್ಕೂ ಮೊದಲು, 2000 ಫೆಬ್ರವರಿ-ಮಾರ್ಚ್ನಲ್ಲಿ ಹ್ಯಾನ್ಸಿ ಕ್ರೋನಿಯೆ ನೇತೃತ್ವದ ತಂಡವು 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಬುಧವಾರದ ಸೋಲಿನ ಬಳಿಕ, ಪ್ರಧಾನ ಕೋಚ್ ಮತ್ತು ಆಟಗಾರರು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಪಂತ್ ಇನ್ಸ್ಟಾಗ್ರಾಮ್ ನಲ್ಲಿ ಸಂದೇಶವೊಂದನ್ನು ಹಾಕಿ, ತಂಡದ ವಿಜಯದ ಬಗ್ಗೆ ಭರವಸೆಯನ್ನು ಹೊಂದಿದ್ದ ಪ್ರತಿಯೊಬ್ಬರಲ್ಲೂ ಕ್ಷಮೆ ಕೋರಿದ್ದಾರೆ. ಮುಂದೆ, ತಂಡವಾಗಿ ಮತ್ತು ವ್ಯಕ್ತಿಗಳಾಗಿ ಪ್ರಬಲ ಪ್ರತಿಹೋರಾಟವನ್ನು ನೀಡಲು ಕಠಿಣ ಪರಿಶ್ರಮ ಪಡುವುದಾಗಿ ಅವರು ಭರವಸೆ ನೀಡಿದ್ದಾರೆ. ‘‘ಕಳೆದ ಎರಡು ವಾರಗಳ ಅವಧಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಲಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂಡವಾಗಿ ಮತ್ತು ವ್ಯಕ್ತಿಗಳಾಗಿ ನಾವು ಯಾವತ್ತೂ ಅತ್ಯುನ್ನತ ಮಟ್ಟದ ನಿರ್ವಹಣೆ ನೀಡಲು ಮತ್ತು ಕೋಟಿಗಟ್ಟಳೆ ಭಾರತೀಯರ ಮುಖಗಳಿಗೆ ಮಂದಹಾಸವನ್ನು ತರಲು ಬಯಸುತ್ತೇವೆ. ಈ ಬಾರಿ ನಿಮ್ಮ ನಿರೀಕ್ಷೆಗಳ ಮಟ್ಟಕ್ಕೆ ಏರಲು ನಮಗೆ ಸಾಧ್ಯವಾಗಲಿಲ್ಲ, ಕ್ಷಮಿಸಿ. ಆದರೆ ಕಲಿಯಲು, ಹೊಂದಿಕೊಳ್ಳಲು ಮತ್ತು ಬೆಳೆಯಲು ಕ್ರೀಡೆಯು ನಮಗೆ ಕಲಿಸುತ್ತದೆ’’ ಎಂದು ಪಂತ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.
ಗಂಭೀರ್ ರನ್ನು ತಕ್ಷಣಕ್ಕೆ ವಜಾಗೊಳಿಸುವ ಉದ್ದೇಶವಿಲ್ಲ: ಬಿಸಿಸಿಐ
ಮುಂಬೈ, ನ. 27: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಭಾರತ ಸೋತ ಹಿನ್ನೆಲೆಯಲ್ಲಿ, ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ರನ್ನು ಹುದ್ದೆಯಿಂದ ತೆಗೆಯುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳು ತಿಳಿಸಿರುವುದಾಗಿ NDTV ವರದಿ ಮಾಡಿದೆ. ಒಂದು ವರ್ಷದ ಅವಧಿಯಲ್ಲಿ ಭಾರತವು ತವರಿನಲ್ಲಿ ತನ್ನ ಎರಡನೇ ಟೆಸ್ಟ್ ಸರಣಿ ಸೋಲು ಅನುಭವಿಸಿದ ಬಳಿಕ, ಕೋಚ್ ಆಗಿ ಗಂಭೀರ್ ರ ಭವಿಷ್ಯದ ಬಗ್ಗೆ ಭಾರೀ ಊಹಾಪೋಹಗಳು ಎದ್ದಿದ್ದವು. ಭಾರತೀಯ ಟೆಸ್ಟ್ ತಂಡದ ಕೋಚ್ ಆಗಿ ಗಂಭೀರ್ ಸ್ಥಾನವನ್ನು ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಊಹಾಪೋಹಗಳೂ ಇದ್ದವು. ಆದರೆ, ಬಿಸಿಸಿಐ ಗಂಭೀರ್ ಮೇಲೆ ಇಟ್ಟಿರುವ ವಿಶ್ವಾಸ ಮುಂದುವರಿಯಲಿದೆ. ತಂಡವನ್ನು ಪುನರ್ನಿರ್ಮಿಸುವ ಕಾರ್ಯದಲ್ಲಿ ಗಂಭೀರ್ ಗೆ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ದಕ್ಷಿಣ ಆಫ್ರಿಕ ವಿರುದ್ಧದ ಬಿಳಿ ಚೆಂಡಿನ ಸರಣಿಯ ಕೊನೆಯಲ್ಲಿ ತಂಡಾಡಳಿತ ಮತ್ತು ಆಯ್ಕೆಗಾರರ ನಡುವೆ ಒಂದು ಸಭೆ ನಡೆಯಲಿದೆ ಎಂಬುದಾಗಿಯೂ ಮೂಲಗಳು ತಿಳಿಸಿವೆ. ‘‘ಈ ಕ್ಷಣದಲ್ಲಿ ನಾವು ಗೌತಮ್ ಗಂಭೀರ್ ರನ್ನು ಬದಲಾಯಿಸಲು ಹೋಗುವುದಿಲ್ಲ. ಅವರು ತಂಡವನ್ನು ಮರುನಿರ್ಮಿಸುತ್ತಿದ್ದಾರೆ. ಅವರ ಗುತ್ತಿಗೆ 2027ರ ವಿಶ್ವಕಪ್ವರೆಗೆ ಚಾಲ್ತಿಯಲ್ಲಿರುತ್ತದೆ’’ ಎಂದು ಅವು ಹೇಳಿವೆ. ‘‘ದಕ್ಷಿಣ ಆಫ್ರಿಕ ಪ್ರವಾಸ ಕೊನೆಯಲ್ಲಿ ತಂಡಾಡಳಿತ ಮತ್ತು ಆಯ್ಕೆಗಾರರ ನಡುವೆ ಸಭೆ ನಡೆಯುತ್ತದೆ. ಟೆಸ್ಟ್ ತಂಡದ ನಿರ್ವಹಣೆ ಬಗ್ಗೆ ಗಂಭೀರ್ ರಲ್ಲಿ ವಿವರಣೆ ಕೇಳಲಾಗುವುದು’’ ಎಂದು ಮೂಲಗಳು ಹೇಳಿವೆ.
ಗಾಝಾದಲ್ಲಿ ಜನಾಂಗೀಯ ಹತ್ಯೆ ಮುಗಿದಿಲ್ಲ: ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಎಚ್ಚರಿಕೆ
ಲಂಡನ್, ನ.27: ಗಾಝಾದಲ್ಲಿ ಕದನ ವಿರಾಮದ ಹೊರತಾಗಿಯೂ ನಿರ್ಣಾಯಕ ನೆರವಿನ ಪೂರೈಕೆಗೆ ನಿರ್ಬಂಧ, ಹೊಸ ದಾಳಿಗಳನ್ನು ನಡೆಸುವ ಮೂಲಕ ಇಸ್ರೇಲ್ ಅಧಿಕಾರಿಗಳು ಈಗಲೂ ಜನಾಂಗೀಯ ಹತ್ಯೆಯನ್ನು ಮುಂದುವರಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು `ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್' ಗುರುವಾರ ಎಚ್ಚರಿಕೆ ನೀಡಿದೆ. ಅಕ್ಟೋಬರ್ 10ರಂದು ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದಂದಿನಿಂದ ಇಸ್ರೇಲ್ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿದ್ದು (7 ವಾರಗಳಲ್ಲಿ 500ಕ್ಕೂ ಹೆಚ್ಚು ಬಾರಿ) ಕನಿಷ್ಠ 347 ಫೆಲೆಸ್ತೀನೀಯರನ್ನು ಹತ್ಯೆ ಮಾಡಿದ್ದು 889 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಬುಧವಾರ ದಕ್ಷಿಣ ಮತ್ತು ಮಧ್ಯ ಗಾಝಾದಲ್ಲಿ ಇಸ್ರೇಲಿ ಪಡೆಗಳು ಸರಣಿ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. `ತನ್ನ ಅಪರಾಧಗಳ ಮಾರಣಾಂತಿಕ ಪರಿಣಾಮಗಳನ್ನು ಹಿಮ್ಮೆಟ್ಟಿಸಲು ಇದುವರೆಗೆ ಇಸ್ರೇಲ್ ಗಂಭೀರ ಕ್ರಮಗಳನ್ನು ಕೈಗೊಂಡಿರುವ ಸೂಚನೆಗಳಿಲ್ಲ ಮತ್ತು ಅದರ ಉದ್ದೇಶ ಬದಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ ಇಸ್ರೇಲಿ ಅಧಿಕಾರಿಗಳು ತಮ್ಮ ನಿರ್ದಯ ನೀತಿಗಳನ್ನು ಮುಂದುವರಿಸುತ್ತಿದ್ದಾರೆ. ಪ್ರಮುಖ ಮಾನವೀಯ ನೆರವು ಮತ್ತು ಅಗತ್ಯದ ಸೇವೆಗಳಿಗೆ ಪ್ರವೇಶಗಳನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ಗಾಝಾದಲ್ಲಿ ಫೆಲೆಸ್ತೀನೀಯರನ್ನು ಭೌತಿಕವಾಗಿ ನಾಶ ಮಾಡಲು ಉದ್ದೇಶಪೂರ್ವಕವಾಗಿ ಷರತ್ತುಗಳನ್ನು ವಿಧಿಸುತ್ತಿದ್ದಾರೆ' ಎಂದು ಆ್ಯಮ್ನೆಸ್ಟಿಯ ಪ್ರಧಾನ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ. ಜಗತ್ತನ್ನು ಮೋಸಗೊಳಿಸಬಾರದು. ಇಸ್ರೇಲ್ ನ ನರಮೇಧ ಇನ್ನೂ ಮುಗಿದಿಲ್ಲ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಗುರುವಾರ ಬೆಳಿಗ್ಗೆ ಮಧ್ಯ ಗಾಝಾದ ಬುರೈಜ್ ಶಿಬಿರ ಮತ್ತು ಖಾನ್ಯೂನಿಸ್ನ ಪೂರ್ವ ಪ್ರದೇಶಗಳಲ್ಲಿ ಹಲವು ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ Aljazeera.com ವರದಿ ಮಾಡಿದೆ.

21 C