ಕುಕನೂರು,ಮಾ.28: 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಹನೀಯರ ಮೂರ್ತಿ ಸ್ಥಾಪನೆ ಕಾಮಗಾರಿಗಳಿಗೆ ಒಟ್ಟು 1.60 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಕಾಮಗಾರಿಗಳ ಅನುಷ್ಠಾನಕ್ಕೆ ಹಸಿರು ನಿಶಾನೆ ದೊರೆತಿದೆ. ಯಲಬುರ್ಗಾ ಕ್ಷೇತ್ರದ ಶಾಸಕರ ಶಿಫಾರಸ್ಸಿನ ಮೇರೆಗೆ, ಕೆ.ಆರ್.ಐ.ಡಿ.ಎಲ್ ಕೊಪ್ಪಳದ ಕಾರ್ಯಪಾಲಕ ಅಭಿಯಂತರರು ಸಲ್ಲಿಸಿದ ಪ್ರಸ್ತಾವನೆಗಳಿಗೆ ಸರಕಾರ ಅನುಮೋದನೆ ನೀಡಿದೆ. ಇದರೊಂದಿಗೆ, ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗಾಗಿ ಶನಿವಾರ ವಿವಿಧ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಲಾಯಿತು. ಶಾಸಕ ಬಸವರಾಜ ರಾಯರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಪರಿಶೀಲನೆ ವೇಳೆ ಪಟ್ಟಣದ ವಿವಿಧ ವೃತ್ತಗಳು ಮತ್ತು ಪ್ರಮುಖ ಸ್ಥಳಗಳನ್ನು ಗುರುತಿಸಿ ಸೂಕ್ತ ಜಾಗಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಇದೇ ವೇಳೆ, ಪಟ್ಟಣದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿ, ವ್ಯವಸ್ಥೆಯನ್ನು ವೀಕ್ಷಣೆ ಮಾಡಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು. ಮೂರ್ತಿಗಳ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಆಯ್ಕೆ ಮಾಡಬೇಕೆಂದು ಶಾಸಕರು ಸೂಚಿಸಿದರು. ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಕನೂರು ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಸ್ಥಾಪನೆಗೆ ತಲಾ 40 ಲಕ್ಷ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಸ್ಥಾಪನೆಗೆ 40 ಲಕ್ಷ ಮಂಜೂರಾಗಿದ್ದು, ಒಟ್ಟು 1.60 ಕೋಟಿ ಅನುದಾನವನ್ನು ಸರಕಾರ ಒದಗಿಸಿದೆ. ಈ ವೇಳೆ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಕುಕನೂರು ಹಾಗೂ ಯಲಬುರ್ಗಾ ಪಟ್ಟಣಗಳಲ್ಲಿ ಮಹನೀಯರ ಮೂರ್ತಿಗಳನ್ನು ಸ್ಥಾಪಿಸುವುದು ಜನರ ಬಹುಕಾಲದ ಬೇಡಿಕೆಯಾಗಿತ್ತು. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮೂರ್ತಿ ಸ್ಥಾಪನೆಗೆ ಗ್ರೀನ್ ಸಿಗ್ನಲ್ ದೊರೆತಿದೆ. ರಾಜ್ಯ ಸರಕಾರದಿಂದ 1.60 ಕೋಟಿ ಅನುದಾನ ಮಂಜೂರಾಗಿರುವುದು ಸಂತೋಷದ ವಿಷಯ. ಪಟ್ಟಣದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಕಾಮಗಾರಿಗಳನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವುದರ ಜೊತೆಗೆ ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ, ಕಾಂಗ್ರೆಸ್ ಮುಖಂಡರಾದ ಸತ್ಯನಾರಾಯಣಪ್ಪ ಹರಪ್ಪನಹಳ್ಳಿ, ಯಂಕಣ್ಣ ಯರಾಶಿ, ಹಣಮಂತಪ್ಪ ಚಂಡೂರ್, ಸಿದ್ದಯ್ಯ ಕಳ್ಳಿಮಠ, ರಹಿಮಾನಸಾಬ ಮುಕಪ್ಪನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ತಾಲೂಕು ಪಂಚಾಯತಿ ಇಒ ಸಂತೋಷ್ ಪಾಟೀಲ್ ಬಿರಾದರ್, ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಾದ ಅನಿಲ್ ಪಾಟೀಲ್ ಮಳಿಮಠ, ಅನಿಲ್ ಜೋಶಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿದ್ದರಾಮಯ್ಯ
ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆ ಕಡ್ಡಾಯಗೊಳಿಸಬಾರದು ಎಂದು ಹಿಂದಿ ಭಾಷೆ ಅಂಕ ತೆಗೆಯಲಾಗಿದೆ. ಇದನ್ನು ಸ್ವಾಗತ ಮಾಡುವವರು ಇರುತ್ತಾರೆ. ಸ್ವಾಗತ ಮಾಡದೆ ಇರುವವರು ಇರುತ್ತಾರೆ. ಇದು ಸರ್ಕಾರದ ತೀರ್ಮಾನ, ಈ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು. ನಾವು ತೀರ್ಮಾನ ಕೈಗೊಂಡ ಎಲ್ಲವೂ ನೂರರಷ್ಟು ಒಪ್ಪಿಗೆಯಾಗುವುದಿಲ್ಲ, ಹಿಂದಿ ಹೇರಿಕೆ ಎಂದು ಬದಲಾಯಿಸಿಲ್ಲ, ಹಿಂದಿ ಕಲಿಯಬಾರದು ಎಂದು ಈ ತೀರ್ಮಾನ ಕೈಗೊಂಡಿಲ್ಲ, ಆದರೆ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಈ ಆದೇಶ ಜಾರಿ ಮಾಡಲಾಗಿದೆ ಎಂದರು. ನಾವು ಓದಬೇಕಾದರೆ ಹಿಂದಿ ಇತ್ತು, ಆದರೆ ಕಡ್ಡಾಯ ಇರಲಿಲ್ಲ. ಹಾಗಾಗಿ ನಾನು ಹಿಂದಿ ಕಲಿಯಲೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.
ಕಲಬುರಗಿ| ಶರಣಬಸವ ವಿವಿಗೆ ಪಿ.ಪಿ.ಮಲ್ಹೋತ್ರ ಸ್ಮಾರಕ ಪ್ರಶಸ್ತಿ ಪ್ರದಾನ
ಕಲಬುರಗಿ: ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಇಂಜಿನಿಯರಿoಗ್ ಸಂಸ್ಥೆಯ (ಐಇಟಿಇ) ವತಿಯಿಂದ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ನೀಡಲಾಗುವ ಪ್ರತಿಷ್ಠಿತ ಪಿ. ಪಿ. ಮಲ್ಹೋತ್ರ ಸ್ಮಾರಕ ಪ್ರಶಸ್ತಿಯನ್ನು ಶರಣಬಸವ ವಿಶ್ವವಿದ್ಯಾಲಯಕ್ಕೆ ಪ್ರದಾನ ಮಾಡಲಾಯಿತು. ಶನಿವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ನಡೆದ ಐಇಟಿಇ ದಕ್ಷಿಣ ವಲಯ ವಿಚಾರ ಸಂಕಿರಣ ಮತ್ತು ಐಎಸ್ಎಫ್ ಕಾಂಗ್ರೆಸ್-2026 ಉದ್ಘಾಟನಾ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾಜಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಮತ್ತು ರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ಸ್ವೀಕರಿಸಿದ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾಜಿ, ಈ ಪ್ರಶಸ್ತಿಯನ್ನು ಕೆಲವು ತಿಂಗಳ ಹಿಂದೆ ಐಇಟಿಇಯ ವಾರ್ಷಿಕ ಸಮಾವೇಶದಲ್ಲಿ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರಿಗೆ ಔಪಚಾರಿಕವಾಗಿ ಪ್ರದಾನ ಮಾಡಲಾಗಿತ್ತು ಎಂದು ಹೇಳಿದರು. ನವದೆಹಲಿಯಿಂದ ಬಂದು ಪ್ರಶಸ್ತಿಯನ್ನು ತಮಗೆ ಪ್ರದಾನ ಮಾಡಿದ್ದಕ್ಕಾಗಿ ಐಇಟಿಇಯ ಪದಾಧಿಕಾರಿಗಳಿಗೆ, ವಿಶೇಷವಾಗಿ ಅಧ್ಯಕ್ಷರಾದ ಪ್ರೊ. ಸುನೀಲ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಪ್ರಶಸ್ತಿಯನ್ನು ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ಅರ್ಪಿಸುವುದಾಗಿ ಹೇಳಿದ ಅವರು, ವಿಶ್ವವಿದ್ಯಾಲಯಕ್ಕೆ ದೊರೆತ ಈ ರಾಷ್ಟ್ರೀಯ ಮನ್ನಣೆಯು ಸಂಘದ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಮತ್ತು ಅಂತಿಮವಾಗಿ ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಡಾ. ಅಪ್ಪಾಜಿ ಅವರ ಜೀವಮಾನದ ಹೋರಾಟದ ಫಲಿತಾಂಶವಾಗಿದೆ ಎಂದರು. ಪ್ರತಿಷ್ಠಿತ ಸಂಸ್ಥೆಗಳಿoದ ಇಂತಹ ಪ್ರಶಸ್ತಿಗಳನ್ನು ಪಡೆಯುವುದರಿಂದ ಸಂಘ ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಮತ್ತು ವಿಶ್ವವಿದ್ಯಾಲಯವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಶರಣಬಸವ ವಿಶ್ವವಿದ್ಯಾಲಯವನ್ನು ವಿಶ್ವದ ಅತ್ಯುತ್ತಮ 100 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುವ ಡಾ. ಅಪ್ಪಾಜಿ ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯವು ಹಾಜರಿದ್ದ ಎಲ್ಲಾ ಐಇಟಿಇ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕಾಲೇಜುಗಳು ಮತ್ತು ಇಂಜಿನಿಯರಿoಗ್ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯಗಳು ಮತ್ತು ಪೋಸ್ಟರ್ ಪ್ರಸ್ತುತಿ, ಸಂಶೋಧನಾ ಪ್ರಬಂಧ ಪ್ರಸ್ತುತಿ ಮತ್ತು ಇತರ ಚಟುವಟಿಕೆಗಳಿಗಾಗಿ ವಿಭಿನ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಹಾಗೂ ಐಇಟಿಇ ಕಲಬುರಗಿ ಕೇಂದ್ರದ ಅಧ್ಯಕ್ಷರೂ ಆದ ಡಾ.ಲಕ್ಷ್ಮಿ ಪಾಟೀಲ ಮಾಕಾ ಸ್ವಾಗತಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಧ ಬಸವರಾಜ ದೇಶಮುಖ, ವಿವಿಯ ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ, ಡೀನ್ ಡಾ. ಶಿವಕುಮಾರ್ ಜವಳಿಗಿ, ಡೀನ್ (ಸಂಶೋಧನೆ) ಡಾ. ಸುಜಾತಾ ಮಲ್ಲಾಪುರ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ʼಇಂಟರ್ನೆಟ್ ಅಗತ್ಯವಿಲ್ಲದೆ ಡೈರೆಕ್ಟ್ ಟು ಮೊಬೈಲ್ ಪ್ರಸಾರʼ ಸುಲಭ: ಪ್ರೊ. ಸುನೀಲ್ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಡಿರುವ ಡೈರೆಕ್ಟ್-ಟು-ಮೊಬೈಲ್ ಪ್ರಸಾರ ತಂತ್ರಜ್ಞಾನದ ಬೆಳವಣಿಗೆಯು ಮೊಬೈಲ್ಗಳಿಂದ ಡೇಟಾವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೆ ಲೈವ್ ಟೆಲಿವಿಷನ್ ಮತ್ತು ತುರ್ತು ಪರಿಸ್ಥಿತಿಯ ಎಚ್ಚರಿಕೆಗಳಂತಹ ವಿಷಯಗಳನ್ನು ನೇರವಾಗಿ ಮೊಬೈಲ್ ಸಾಧನಗಳಿಗೆ ರವಾನಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಇಂಜಿನಿಯರಿoಗ್ ಸಂಸ್ಥೆಯ (ಐಇಟಿಇ) ಅಧ್ಯಕ್ಷ ಪ್ರೊ. ಸುನೀಲ್ ಹೇಳಿದರು. ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರ ಐಇಟಿಇ ದಕ್ಷಿಣ ವಲಯ ಸೆಮಿನಾರ್ ಮತ್ತು ಐಇಟಿಇ ವಿದ್ಯಾರ್ಥಿ ವೇದಿಕೆ (ಐಎಸ್ಎಫ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳ ಆಗಮನವು ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳ ಅಡೆತಡೆಗಳನ್ನು ನಿವಾರಿಸುತ್ತಿದೆ ಮತ್ತು ಅಂತರ್ವಿಭಾಗ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆಯುತ್ತಿವೆ ಎಂದು ತಿಳಿಸಿದರು. ದೇಶವಾಸಿಗಳಿಗೆ ಕೈಗೆಟುಕುವಂತೆ ಮಾಡಲು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರೊ. ಸುನೀಲ್, ಮೇಕ್ ಇನ್ ಇಂಡಿಯಾ ಕೇವಲ ಉತ್ಪಾದನಾ ವಲಯಕ್ಕೆ ಸೀಮಿತವಾಗಬಾರದು, ಬದಲಾಗಿ ಇತರ ದೇಶಗಳ ನಾವೀನ್ಯತೆಗಳನ್ನು ಅವಲಂಬಿಸದೆ ಉದಯೋನ್ಮುಖ ಪ್ರದೇಶಗಳಲ್ಲಿ, ದೇಶವು ಸ್ವಾವಲಂಬಿಯಾಗಲು ಅನುವು ಮಾಡಿಕೊಡಲು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು. ಡೈರೆಕ್ಟೋ-ಟು-ಮೊಬೈಲ್ ಬ್ರಾಡ್ಕಾಸ್ಟಿಂಗ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ಐಐಟಿ ಕಾನ್ಪುರ್, ಅಭಿವೃದ್ಧಿಯ ಪ್ರಮುಖ ಕ್ಷೇತ್ರಗಳಲ್ಲಿ ಮೀಸಲಾದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯವು ತಂತ್ರಜ್ಞಾನಕ್ಕಾಗಿ ಇತರರನ್ನು ಅವಲಂಬಿಸದೇ, ದೇಶವು ಹೆಚ್ಚು ಸ್ವಾವಲಂಬಿಯಾಗಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು. ಡೈರೆಕ್ಟ್-ಟು-ಮೊಬೈಲ್ ತಂತ್ರಜ್ಞಾನದ ಕಾರ್ಯನಿರ್ವಹಣೆಯ ಬಗ್ಗೆ ಮಾತನಾಡಿದ ಪ್ರೊ.ಸುನೀಲ್, ತಂತ್ರಜ್ಞಾನವು ಐಪಿ-ಆಧಾರಿತ ಮಲ್ಟಿಮೀಡಿಯಾ ವಿಷಯವನ್ನು ರವಾನಿಸಲು ಭೂಮಂಡಲದ ಟಿವಿ ಪ್ರಸಾರ ಗಾಳಿಯ ಅಲೆಗಳನ್ನು ಬಳಸುತ್ತದೆ. ಸೆಲ್ಯುಲಾರ್ ನೆಟ್ವರ್ಕ್ ಅವಲಂಬಿಸುವ ಬದಲು, ವಿಶೇಷ ರಿಸೀವರ್ ಚಿಪ್ ಹೊಂದಿರುವ ಮೊಬೈಲ್ ಫೋನ್ನಿಂದ ಈ ಸಂಕೇತಗಳನ್ನು ತೆಗೆದುಕೊಳ್ಳಬಹುದು ಎಂದರು.
5 IPS ಅಧಿಕಾರಿಗಳು ಸೇರಿ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ; ಪಟ್ಟಿ ಬಿಡುಗಡೆ ಮಾಡಿದ IGP
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 153 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2025ನೇ ಸಾಲಿನ 'ಮುಖ್ಯಮಂತ್ರಿ ಪದಕ' ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೆಬಲ್ಗಳವರೆಗೆ ವಿವಿಧ ಶ್ರೇಣಿಯ ಸಿಬ್ಬಂದಿಗಳು ಸೇರಿದ್ದಾರೆ. ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುವುದು. ಆಯ್ಕೆಯಾದವರು ಮಾರ್ಚ್ 29 ರಿಂದ ಪೂರ್ವಭಾವಿ ತಾಲೀಮು ನಡೆಸಲಿದ್ದಾರೆ.
ಬೆಳ್ತಂಗಡಿ : ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಬೆಳ್ತಂಗಡಿ : ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಈಜಲು ಹೋದ ನಾಲ್ಕು ಮಂದಿ ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.28 ರಂದು ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಎಂಬವರ ಪುತ್ರ ಮಹಮ್ಮದ್ ಹಫೀಝ್(14) ಮೃತ ಬಾಲಕ ಎಂದು ತಿಳಿದುಬಂದಿದೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿದ್ದರಾಮಯ್ಯ
ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾಕ್ಸ್೯ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆ ಕಡ್ಡಾಯಗೊಳಿಸಬಾರದು ಎಂದು ಹಿಂದಿ ಭಾಷೆ ಅಂಕ ತೆಗೆಯಲಾಗಿದೆ. ಇದನ್ನು ಸ್ವಾಗತ ಮಾಡುವವರು ಇರುತ್ತಾರೆ. ಸ್ವಾಗತ ಮಾಡದೆ ಇರುವವರು ಇರುತ್ತಾರೆ. ಇದು ಸರ್ಕಾರದ ತೀರ್ಮಾನ, ಈ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು. ನಾವು ತೀರ್ಮಾನ ಕೈಗೊಂಡ ಎಲ್ಲವೂ ನೂರರಷ್ಟು ಒಪ್ಪಿಗೆಯಾಗುವುದಿಲ್ಲ, ಹಿಂದಿ ಹೇರಿಕೆ ಎಂದು ಬದಲಾಯಿಸಿಲ್ಲ, ಹಿಂದಿ ಕಲಿಯಬಾರದು ಎಂದು ಈ ತೀರ್ಮಾನ ಕೈಗೊಂಡಿಲ್ಲ, ಆದರೆ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಈ ಆದೇಶ ಜಾರಿ ಮಾಡಲಾಗಿದೆ ಎಂದರು. ನಾವು ಓದಬೇಕಾದರೆ ಹಿಂದಿ ಇತ್ತು, ಆದರೆ ಕಡ್ಡಾಯ ಇರಲಿಲ್ಲ. ಹಾಗಾಗಿ ನಾನು ಹಿಂದಿ ಕಲಿಯಲೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂಉತ್ತರಿಸಿದರು.
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು
ದಾಳಿಂಬೆ ಇದು ಕೇವಲ ರುಚಿಕರವಾದ ಹಣ್ಣು ಮಾತ್ರ ಅಲ್ಲಾ. ಅದು ನಮ್ಮ ಆರೋಗ್ಯಕ್ಕೆ ಶಕ್ತಿ ತುಂಬುವ ಪೋಷಕಾಂಶಗಳಿರುವ ಭಂಡಾರವೆ ಆಗಿದೆ. ಸಾಮಾನ್ಯವಾಗಿ ನಾವು ಇದನ್ನು ದಿನ ನಿತ್ಯ ಸೇವಿಸುವುದಿಲ್ಲಾ ಕೆಲವೊಮ್ಮೆ ಮಾತ್ರ ಸೇವಿಸುತ್ತೇವೆ. ಆದರೆ ನಾವು ಇದನ್ನು ದಿನ ನಿತ್ಯ ಸೇವಿಸುವುದರಿಂದ ಕೇವಲ ಒಂದು ವಾರದಲ್ಲಿ ದೇಹದಲ್ಲಿ ಆಗುವ ಗಮನಾರ್ಹ ಬದಲಾವಣೆಳನ್ನು ನಾವು ಕಾಣಬಹುದು ಎಂದು ತಜ್ಞರು
RCB ತಂಡವನ್ನು ಹುರಿದುಂಬಿಸಿದ ಅನನ್ಯಾ ಬಿರ್ಲಾ; ಉದ್ಘಾಟನಾ ಪಂದ್ಯಕ್ಕೂ ಮುನ್ನ ಮಾಡಿರುವ ಪೋಸ್ಟ್ ವೈರಲ್
Ananya Birla Instagram Post- ಆದಿತ್ಯ ಬಿರ್ಲಾ ಸಮೂಹವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಉದ್ಘಾಟನಾ ಪಂದ್ಯಕ್ಕೂ ಮುನ್ನ ಅವರು 'ಈ ಸಲ ಕಪ್ ನಮ್ದು' ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವುದು ವೈರಲ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನನ್ಯಾ ಬಿರ್ಲಾ ಅವರು ಆದಿತ್ಯ ಬಿರ್ಲಾ ಗ್ರೂಪ್ ನ ಮಾಲೀಕ ಕುಮಾರಮಂಗಲಂ ಬಿರ್ಲಾ ಅವರ ಪುತ್ರಿಯಾಗಿದ್ದಾರೆ.
ಬೆಂಗಳೂರು: ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್’ ಎಂದು ಕರೆದ ಆರೋಪದಲ್ಲಿ ಪಿಇಎಸ್ ವಿವಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ವಿರುದ್ಧ ಶನಿವಾರ ಮಧ್ಯಾಹ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ. ತರಗತಿಯಲ್ಲಿ ನಡೆದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS), 2023ರ ಸೆಕ್ಷನ್ 299 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಮಾಹಿತಿ ಸಂಗ್ರಹಿಸುವ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ “ದಿ ಮುಸ್ಲಿಂ” ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಪೋಸ್ಟ್ ಗಮನಕ್ಕೆ ಬಂದಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಪೋಸ್ಟ್ ಪ್ರಕಾರ, PES ವಿಶ್ವವಿದ್ಯಾಲಯದಲ್ಲಿ ಡಾ. ಮುರಳೀಧರ್ ದೇಶಪಾಂಡೆ ಅವರು ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿ ಅಫಾನ್ ಅವರನ್ನು ಕನಿಷ್ಠ 13 ಬಾರಿ ‘ಟೆರರಿಸ್ಟ್’ ಎಂದು ಉಲ್ಲೇಖಿಸಿದ್ದು, ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಪ್ರಾಧ್ಯಾಪಕರ ಹೇಳಿಕೆಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸುವ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಈ ಆರೋಪಗಳನ್ನೂ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ದೂರಿನಲ್ಲಿ ಆರೋಪಿಯನ್ನು ಪ್ರೊಫೆಸರ್ ಮುರಳೀಧರ್ ದೇಶಪಾಂಡೆ ಎಂದು ಹೆಸರಿಸಲಾಗಿದ್ದು, ವಿದ್ಯಾರ್ಥಿಯನ್ನು ಅಫಾನ್ ಎಂದು ಗುರುತಿಸಲಾಗಿದೆ. ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಜೊತೆಗೆ ಕೋಮು ಸಾಮರಸ್ಯವನ್ನು ಭಂಗಗೊಳಿಸುವ ಸಾಧ್ಯತೆ ಹೊಂದಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವುದಾಗಿ ಎಫ್ಐಆರ್ ನಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿಯಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಪ್ರಧಾನಿ ಕರೆದ ಸಭೆಗೆ ಹಾಜರಾಗದೇ ಸಿದ್ದರಾಮಯ್ಯ ಭಂಡತನ ಪ್ರದರ್ಶನ: ಬಸವರಾಜ ಬೊಮ್ಮಾಯಿ
ಬಾಗಲಕೋಟೆ: ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಚಾರದಲ್ಲಿ ವಾರ್ಷಿಕ 18 ಸಾವಿರ ಕೋಟಿ ನೀಡುವುದಾಗಿ ಹೇಳಿ ಬಜೆಟ್ನಲ್ಲಿ ಕೇವಲ 3 ಸಾವಿರ ಕೋಟಿ ಮೀಸಲಿಟ್ಟು, ಈ ಭಾಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ
2025 ಸೆಪ್ಟೆಂಬರ್ನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ನೇಪಾಳದ ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಓಲಿ ಅವರನ್ನು ಶನಿವಾರ (ಮಾರ್ಚ್ 28) ಬಂಧಿಸಲಾಗಿದೆ. ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಜನರ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದ ಸರ್ಕಾರ ನೇಮಿಸಿದ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಓಲಿ ಬಂಧನ ನಡೆದಿದೆ. ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕಳೆದ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆದೇಶ ಹೊರಡಿಸಿದ್ದರು. ಹಿಂಸಾಚಾರ ತಡೆಯಲು ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಓಲಿ ಅವರನ್ನು ತನಿಖಾ ಆಯೋಗವು ಹೊಣೆಗಾರರನ್ನಾಗಿ ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಸಹ ಬಂಧಿಸಿದ್ದಾರೆ. ದಿ ಗಾರ್ಡಿಯನ್ ಪ್ರಕಾರ, ಪೊಲೀಸರು ಕೆ. ಪಿ. ಶರ್ಮಾ ಓಲಿ ಅವರನ್ನು ಕಠ್ಮಂಡುವಿನ ಹೊರವಲಯದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ನಂತರ ಓಲಿ ಮತ್ತು ಲೇಖಕ್ ಇಬ್ಬರನ್ನೂ ಕಠ್ಮಂಡು ಜಿಲ್ಲಾ ಪೊಲೀಸ್ ಕಚೇರಿಗೆ ಕರೆದೊಯ್ಯಲಾಯಿತು. “ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಓಲಿ ಮತ್ತು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ಇದು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಕ್ರಮವಲ್ಲ, ನ್ಯಾಯದ ಆರಂಭ ಮಾತ್ರ. ಪ್ರತಿಭಟನೆಯ ಸಮಯದಲ್ಲಿ ಸಾವಿಗೀಡಾದ ಮತ್ತು ಗಾಯಗೊಂಡವರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕಾನೂನು ಪ್ರಕ್ರಿಯೆಯ ಆರಂಭವಾಗಿದೆ,” ಎಂದು ಗೃಹ ಸಚಿವ ಸುಡಾನ್ ಗುರುಂಗ್ ಹೇಳಿದ್ದಾರೆ. Scroll.in ವರದಿ ಪ್ರಕಾರ, 2025 ಸೆಪ್ಟೆಂಬರ್ 4ರಂದು ಸರ್ಕಾರ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಹೇರಿದ ನಿಷೇಧದಿಂದ ಪ್ರತಿಭಟನೆಗಳು ಪ್ರಚೋದಿಸಲ್ಪಟ್ಟವು. ನಾಲ್ಕು ದಿನಗಳ ನಂತರ ನಿಷೇಧವನ್ನು ತೆಗೆದುಹಾಕಲಾಗಿದ್ದರೂ, ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ವಿರುದ್ಧದ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಚಳುವಳಿಯಾಗಿ ಮಾರ್ಪಟ್ಟವು. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಗೌರಿ ಬಹದ್ದೂರ್ ಕರ್ಕಿ ನೇತೃತ್ವದ ಆಯೋಗವು ಓಲಿ, ಲೇಖಕ್ ಮತ್ತು ಆಗಿನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿರುದ್ಧ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪಗಳನ್ನು ಶಿಫಾರಸು ಮಾಡಿದೆ. ಜೆನ್ ಝೀ ಪ್ರತಿಭಟನೆ ವೇಳೆ 76 ಮಂದಿ ಸಾವಿಗೀಡಾಗಿದ್ದರು. ಮೊದಲ ದಿನ ಕನಿಷ್ಠ 19 ಪ್ರತಿಭಟನಾಕಾರರ ಸಾವಿಗೆ ಕಾರಣವಾದ ಗಂಟೆಗಳ ಗುಂಡಿನ ದಾಳಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಓಲಿ ಅವರನ್ನು ಆಯೋಗ ಹೊಣೆಗಾರರನ್ನಾಗಿ ಮಾಡಿದೆ. ಓಲಿ ಮತ್ತು ಲೇಖಕ್ ಇಬ್ಬರನ್ನೂ ರವಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆಯೋಗದ ಶಿಫಾರಸುಗಳ ಪ್ರಕಾರ ಕಾನೂನು ಕ್ರಮಗಳು ಅನುಸರಿಸಲ್ಪಡುತ್ತವೆ ಎಂದು ಪೊಲೀಸ್ ವಕ್ತಾರ ಓಂ ಅಧಿಕಾರಿ ಹೇಳಿದ್ದಾರೆ. ತನಿಖಾ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದ ಹೊಸ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯ ನಂತರ ಓಲಿ ಅವರ ಬಂಧನ ನಡೆದಿದೆ. ಬಂಧಿತರಿಬ್ಬರನ್ನು ಭದ್ರಕಾಳಿಯಲ್ಲಿರುವ ಕಠ್ಮಂಡು ಜಿಲ್ಲಾ ಪೊಲೀಸ್ ವೃತ್ತಕ್ಕೆ ಕರೆದೊಯ್ಯಲಾಯಿತು. ಕೆ. ಪಿ. ಶರ್ಮಾ ಓಲಿ ಅವರನ್ನು ಬಂಧನದ ನಂತರ ತ್ರಿಭುವನ್ ಯುನಿವರ್ಸಿಟಿ ಟೀಚಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು. ಹೊಣೆಗಾರರಾಗಿರುವವರಿಗೆ ಮೂರರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಆಯೋಗ ಶಿಫಾರಸು ಮಾಡಿದೆ ಎಂದು siasat.com ವರದಿ ಮಾಡಿದೆ. ನೇಪಾಳದಲ್ಲಿ ಜೆನ್ ಝೀ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳು 2025 ಸೆಪ್ಟೆಂಬರ್ 9ರಂದು ಓಲಿ ಅವರ ರಾಜೀನಾಮೆಗೆ ಒತ್ತಾಯಿಸಿದವು. ಈ ಅಶಾಂತಿ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು. ಓಲಿ ಅವರ ದಿಢೀರ್ ರಾಜೀನಾಮೆಯ ನಂತರ ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ನೂತನ ಪ್ರಧಾನಿಯಾಗಿ ನೇಮಕವಾದರು. ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಿ 2026ರ ಮಾರ್ಚ್ 5ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪ್ರಕಟಣೆ ಹೊರಡಿಸಲಾಯಿತು. ಈ ಚುನಾವಣೆಯಲ್ಲಿ ನಾಲ್ಕು ಬಾರಿ ದೇಶದ ಪ್ರಧಾನಿಯಾಗಿದ್ದ ಕೆ. ಪಿ. ಶರ್ಮಾ ಓಲಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಬಾಲೇಂದ್ರ ಶಾ ಈಗ ನೇಪಾಳದ ಪ್ರಧಾನಿ ಗದ್ದುಗೆಯೇರಿದ್ದಾರೆ. ►ಕೆ. ಪಿ. ಶರ್ಮಾ ಓಲಿ ಯಾರು? ಖಡ್ಗ ಪ್ರಸಾದ್ ಶರ್ಮಾ ಓಲಿ ಎಂಬ ಕೆ. ಪಿ. ಶರ್ಮಾ ಓಲಿಗೆ ಈಗ ವಯಸ್ಸು 74. ನೇಪಾಳದ ಕಮ್ಯುನಿಸ್ಟ್ ರಾಜಕಾರಣಿ ಓಲಿ ಅವರ ರಾಜಕೀಯ ಜೀವನವು ನೆರೆಯ ಭಾರತದ ಬಗ್ಗೆ ವ್ಯತಿರಿಕ್ತ ನಿಲುವುಗಳಿಂದ ಗುರುತಿಸಲ್ಪಟ್ಟಿದೆ. 1952ರಲ್ಲಿ ಜನಿಸಿದ ಓಲಿ 9ನೇ ತರಗತಿಯಲ್ಲಿ ಶಾಲೆ ತೊರೆದು ರಾಜಕೀಯಕ್ಕೆ ಧುಮುಕಿದ್ದರು. ಹಲವಾರು ಬಾರಿ ಜೈಲು ಸೇರಿದ್ದ ಅವರು ಜೈಲಿನಲ್ಲಿಯೇ ಓದು ಮುಂದುವರಿಸಿದ್ದರು. ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ಅವರಿಂದ ಪ್ರೇರಿತರಾಗಿದ್ದ ಓಲಿ ಅವರ ಪತ್ನಿ ರಚನಾ ಶಕ್ಯಾ ಕೂಡ ಕಮ್ಯುನಿಸ್ಟ್ ಕಾರ್ಯಕರ್ತೆ. 1966ರಲ್ಲಿ ರಾಜನ ನೇರ ಆಳ್ವಿಕೆಯಲ್ಲಿ ಸರ್ವಾಧಿಕಾರಿ ಪಂಚಾಯತ್ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಸೇರುವ ಮೂಲಕ ಓಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1970ರಲ್ಲಿ ಅವರು ನೇಪಾಳದ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ಪಕ್ಷದ ಸದಸ್ಯತ್ವ ಪಡೆದ ಕೂಡಲೇ ಅವರು ತಲೆಮರೆಸಿಕೊಂಡರು. ಅದೇ ವರ್ಷ ಅವರನ್ನು ಪಂಚಾಯತ್ ಸರ್ಕಾರವು ಮೊದಲ ಬಾರಿಗೆ ಬಂಧಿಸಿತು. 1971ರಲ್ಲಿ ಅವರು ಜಿಲ್ಲೆಯಲ್ಲಿ ಭೂಮಾಲೀಕರ ಶಿರಚ್ಛೇದನ ಮಾಡುವ ಮೂಲಕ ಪ್ರಾರಂಭಿಸಲಾದ ಝಪಾ ದಂಗೆಯ ನಾಯಕತ್ವವನ್ನು ವಹಿಸಿಕೊಂಡರು. ಓಲಿ ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನೇಪಾಳದ ಕೆಲವೇ ರಾಜಕೀಯ ನಾಯಕರಲ್ಲಿ ಒಬ್ಬರು. ಅವರು 1973ರಿಂದ 1987ರವರೆಗೆ ಸತತ 14 ವರ್ಷಗಳ ಕಾಲ ಜೈಲಿನಲ್ಲಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವರು 1990ರವರೆಗೆ ಯುಎಂಎಲ್ನ ಕೇಂದ್ರ ಸಮಿತಿ ಸದಸ್ಯರಾಗಿ ಲುಂಬಿನಿ ವಲಯದ ಉಸ್ತುವಾರಿ ವಹಿಸಿಕೊಂಡರು. 1990ರಲ್ಲಿ ಪಂಚಾಯತ್ ಆಡಳಿತವನ್ನು ಉರುಳಿಸಿದ ಪ್ರಜಾಪ್ರಭುತ್ವ ಚಳುವಳಿಯ ನಂತರ ಓಲಿ ದೇಶದಲ್ಲಿ ಜನಪ್ರಿಯ ನಾಯಕರಾದರು. 1991ರಲ್ಲಿ ಅವರು ಪ್ರಜಾತಾಂತ್ರಿಕ ರಾಷ್ಟ್ರೀಯ ಯುವ ಸಂಘದ ಸ್ಥಾಪಕ ಅಧ್ಯಕ್ಷರಾದರು. ಒಂದು ವರ್ಷದ ನಂತರ ಅವರು ಪಕ್ಷದ ಪ್ರಚಾರ ವಿಭಾಗದ ಮುಖ್ಯಸ್ಥರಾಗಿ ನೇಪಾಳಿ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು. 1991ರಲ್ಲಿ ಅವರು ಝಾಪಾ ಜಿಲ್ಲೆಯಿಂದ ಮೊದಲ ಬಾರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರಾಗಿ ಆಯ್ಕೆಯಾದರು. 1994–1995ರಲ್ಲಿ ಓಲಿ ಗೃಹ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1999ರಲ್ಲಿ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಮರು ಆಯ್ಕೆಯಾದರು. ಎರಡನೇ ಪೀಪಲ್ಸ್ ಮೂವ್ಮೆಂಟ್ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ 2006ರಲ್ಲಿ ಗಿರಿಜಾ ಪ್ರಸಾದ್ ಕೊಯಿರಾಲಾ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅವರು ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಫೆಬ್ರವರಿ 4, 2014ರಂದು ಎರಡನೇ ಸಂವಿಧಾನ ಸಭೆಯಲ್ಲಿ ಸಿಪಿಎನ್-ಯುಎಂಎಲ್ ಸಂಸದೀಯ ಪಕ್ಷದ ನಾಯಕರಾಗಿ ಓಲಿ ಆಯ್ಕೆಯಾದರು. ►ನಾಲ್ಕು ಬಾರಿ ಪ್ರಧಾನಿ 2015–2016: 2015ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರೂ 2016ರಲ್ಲಿ ಅವರ ಒಕ್ಕೂಟ ಮುರಿದುಬಿತ್ತು. ಅವಿಶ್ವಾಸ ನಿರ್ಣಯಕ್ಕೂ ಮುನ್ನ ಅವರು ರಾಜೀನಾಮೆ ನೀಡಿದರು. 2018: ಓಲಿಯವರ ಯುಎಂಎಲ್ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ CPN (Maoist Centre) ಜತೆ ಸೇರಿ ಎಡ ಮೈತ್ರಿಕೂಟವನ್ನು ರಚಿಸಿತು. ಈ ಮೈತ್ರಿಕೂಟವು 2017ರ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಗಳಿಸಿತು. ಫೆಬ್ರವರಿ 2018ರಲ್ಲಿ ಓಲಿ ಪ್ರಚಂಡ ಅವರ ಬೆಂಬಲದೊಂದಿಗೆ ಪ್ರಧಾನಿಯಾದರು. ಮೇ 2018ರಲ್ಲಿ ಸಿಪಿಎನ್-ಯುಎಂಎಲ್ ಮತ್ತು ಮಾವೋಯಿಸ್ಟ್ ಸೆಂಟರ್ ಔಪಚಾರಿಕವಾಗಿ ನೇಪಾಳ ಕಮ್ಯುನಿಸ್ಟ್ ಪಕ್ಷ (NCP) ಯಲ್ಲಿ ವಿಲೀನಗೊಂಡವು. ಅಧಿಕಾರ ಹಂಚಿಕೆ ವಿಚಾರದಲ್ಲಿ ಪ್ರಚಂಡ ಮತ್ತು ಓಲಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಓಲಿ ರಾಜೀನಾಮೆ ನೀಡಲು ನಿರಾಕರಿಸಿದರು. ಡಿಸೆಂಬರ್ 2020ರಲ್ಲಿ ಅವರು ಸಂಸತ್ತನ್ನು ವಿಸರ್ಜಿಸಿದರು. ನೇಪಾಳ ಸುಪ್ರೀಂ ಕೋರ್ಟ್ ಫೆಬ್ರವರಿ 2021ರಲ್ಲಿ ಈ ಕ್ರಮವನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿತು. 2021 ಮಾರ್ಚ್ನಲ್ಲಿ ಪಕ್ಷ ವಿಲೀನವನ್ನೂ ಅಮಾನ್ಯಗೊಳಿಸಲಾಯಿತು. ಇದರಿಂದ ಯುಎಂಎಲ್ ಮತ್ತು ಮಾವೋಯಿಸ್ಟ್ ಸೆಂಟರ್ ವಿಭಜನೆಯಾಯಿತು. ಬಳಿಕ ಓಲಿ ಬಹುಮತ ಕಳೆದುಕೊಂಡರು ಮತ್ತು ವಿಶ್ವಾಸ ಮತದಲ್ಲಿ ಸೋತು ಎರಡನೇ ಅವಧಿ ಅಂತ್ಯಗೊಂಡಿತು. 2021: ಸಂವಿಧಾನದ 76(3)ನೇ ವಿಧಿ ಪ್ರಕಾರ ರಾಷ್ಟ್ರಾಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಓಲಿಯನ್ನು ಮತ್ತೆ ಪ್ರಧಾನಿಯಾಗಿ ನೇಮಿಸಿದರು. ಮೇ 2021ರಲ್ಲಿ ಮತ್ತೆ ಸಂಸತ್ತನ್ನು ವಿಸರ್ಜಿಸಲು ಯತ್ನಿಸಿದರೂ ಸುಪ್ರೀಂ ಕೋರ್ಟ್ ಅದನ್ನು ಅಸಾಂವಿಧಾನಿಕವೆಂದು ಘೋಷಿಸಿತು. 76(5)ನೇ ವಿಧಿಯಡಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸಲು ನ್ಯಾಯಾಲಯ ಆದೇಶಿಸಿತು. ಜುಲೈ 2021ರಲ್ಲಿ ಓಲಿ ರಾಜೀನಾಮೆ ನೀಡಬೇಕಾಯಿತು. 2024: 2022ರ ಚುನಾವಣೆಯಲ್ಲಿ ಅವರ ಪಕ್ಷ ಎರಡನೇ ಅತಿದೊಡ್ಡ ಪಕ್ಷವಾಯಿತು. ಬಳಿಕ ರಾಜಕೀಯ ಸಮೀಕರಣಗಳ ನಡುವೆ 2024ರಲ್ಲಿ ನೇಪಾಳಿ ಕಾಂಗ್ರೆಸ್ ಜೊತೆ ಒಕ್ಕೂಟ ರಚಿಸಿ ನಾಲ್ಕನೇ ಬಾರಿ ಪ್ರಧಾನಿಯಾದರು. ►ಪತನಕ್ಕೆ ಕಾರಣವಾದ ಜೆನ್ ಝೀ ಪ್ರತಿಭಟನೆ 2025 ಸೆಪ್ಟೆಂಬರ್ನಲ್ಲಿ ನೇಪಾಳದಲ್ಲಿ ಜೆನ್ ಝೀ ಪ್ರತಿಭಟನೆಗಳು ಆರಂಭವಾದವು. ವ್ಯಾಪಕ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಯುವಕರ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಸೆಪ್ಟೆಂಬರ್ 8ರಂದು ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ 19 ಮಂದಿ ಸಾವಿಗೀಡಾದರು. ನೂರಾರು ಮಂದಿ ಗಾಯಗೊಂಡರು. ಪ್ರತಿಭಟನಾಕಾರರು ಪ್ರಧಾನಿಯ ನಿವಾಸ ಸೇರಿ ಹಲವು ಸ್ಥಳಗಳಿಗೆ ಬೆಂಕಿ ಹಚ್ಚಿದರು. ಕರ್ಫ್ಯೂ ನಡುವೆಯೂ ಅಶಾಂತಿ ಮುಂದುವರಿಯಿತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ 2025 ಸೆಪ್ಟೆಂಬರ್ 9ರಂದು ಓಲಿ ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆ ಪತ್ರದಲ್ಲಿ ರಾಜಕೀಯ ಪರಿಹಾರಕ್ಕಾಗಿ ಇದು ಅಗತ್ಯ ಎಂದು ಅವರು ತಿಳಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ ಆರೋಪವನ್ನು ಅವರು ನಿರಾಕರಿಸಿದ್ದಾರೆ. “ನಾನು ಗುಂಡು ಹಾರಿಸಲು ಯಾವುದೇ ಆದೇಶ ನೀಡಿಲ್ಲ,” ಎಂದು ಅವರು ಜನವರಿಯಲ್ಲಿ ಸಾಮಾಜಿಕ ಮಾಧ್ಯಮದ ಆಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಂಸಾಚಾರಕ್ಕೆ “ಒಳನುಸುಳುವವರು” ಕಾರಣ ಎಂದು ಆರೋಪಿಸಿದ ಅವರು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದಿದ್ದರು. ಆದಾಗ್ಯೂ, ಗುಂಡು ಹಾರಿಸಲು ಸ್ಪಷ್ಟ ಆದೇಶ ನೀಡಲಾಗಿದೆ ಎಂಬುದು ದೃಢಪಟ್ಟಿಲ್ಲ ಎಂದು ಆಯೋಗದ ವರದಿ ಹೇಳಿದ್ದು, ಗುಂಡಿನ ದಾಳಿಯನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಓಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಉಲ್ಲೇಖಿಸಿದೆ.
ಜಮೀರ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ಸ್ನೇಹಿತರು, ಪ್ರಚಾರಕ್ಕೆ ಬಂದೇ ಬರ್ತಾರೆ: ಎಂಬಿ ಪಾಟೀಲ್ ವಿಶ್ವಾಸ
ಜಮೀರ್ ಅಹ್ಮದ್ ಖಾನ್ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತಮ ಸ್ನೇಹಿತರು. ಹಾಗಾಗಿ ಜಮೀರ್ ಅವರ ಸಮರ್ಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದೇ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರು ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿಲ್ಲ. ಜಮೀರ್ ಅಹ್ಮದ್ ಖಾನ್ ಸದ್ಯ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅವರು ದಾವಣಗೆರೆಗೆ ಪ್ರಚಾರಕ್ಕೆ ಬರುತ್ತಾರೆ ಎಂದರು. ಮತ್ತಷ್ಟು ವಿವರ ಇಲ್ಲಿದೆ.
ಆ 11 ಜನರ ಆಕ್ರಂದನ ಇನ್ನೂ ಕಿವಿಯಲ್ಲಿದೆ - ನನಗೆ IPL ಉಚಿತ ಟಿಕೆಟ್ ಬೇಡ: BJP ಶಾಸಕ ಎಸ್ ಸುರೇಶ್ ಕುಮಾರ್ ಪತ್ರ
ಶಾಸಕರು ಹಾಗೂ ಸಂಸದರಿಗೆ ನೀಡಲಾಗುವ ಐಪಿಎಲ್ ಟಿಕೆಟ್ ಅಥವಾ ಪಾಸ್ ಸೌಲಭ್ಯ ನನಗೆ ಬೇಡ ಎಂದು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಶಾಸಕರು ಪತ್ರ ಬರೆದಿದ್ದಾರೆ. ಇನ್ನೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರವೇ ನನಗೆ ಮುಖ್ಯ. ವಿಐಪಿ ಸಂಸ್ಕೃತಿ ನಮಗೆ ಬೇಡ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
US - ಇರಾನ್ ಸಂಘರ್ಷದ ಮಧ್ಯೆ ’ಹೊರ್ಮುಜ್ ಡಬಲ್ ಗೇಂ’ : ಬಟಾ ಬಯಲಾದ ಪಾಕಿಸ್ತಾನದ ಕಳ್ಳಾಟ
Pak US help exposed : ಹೊರ್ಮುಜ್ ಜಲಸಂಧಿಯಲ್ಲಿ ಪಾಕಿಸ್ತಾನವು ಪರೋಕ್ಷವಾಗಿ ಅಮೆರಿಕಕ್ಕೆ ಸಹಾಯ ಮಾಡಿ, ವಿಶ್ವಾಸಘಾತಕ ಕೆಲಸವನ್ನು ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತನ್ನ ಐದು ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದು ಇರಾನ್ ಹೇಳಿತ್ತು.ಇದರ ಲಾಭವನ್ನು ಪಡೆದು, ಇರಾನ್’ಗೆ ದ್ರೋಹ ಬಗೆಯಿತು ಎಂದು ವರದಿಯಾಗಿದೆ.
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್
RCB Vijay Mallya: ಐಪಿಎಲ್ 19ನೇ ಸೀಸನ್ ಇಂದಿನಿಂದ (ಮಾರ್ಚ್ 28) ಆರಂಭವಾಗಲಿದೆ. ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ವಿಜಯ್ ಮಲ್ಯ ಅವರು ತಮ್ಮ ಟ್ವಿಟ್ನಲ್ಲಿ ಆರ್ಸಿಬಿಗೆ ವಿಶೇಷ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ. ಇದು ಇದೀಗ
ಮಂಗಳೂರು ವಿವಿ ಘಟಿಕೋತ್ಸವ: ಸಂಧ್ಯಾರಿಗೆ ಚಿನ್ನದ ಪದಕದ ಜೊತೆ ಏಳು ನಗದು ಪುರಸ್ಕಾರ
ಬಡತನವನ್ನೂ ಮೀರಿ ಸಾಧನೆಗೈದ ಮಣಿನಾಲ್ಕೂರಿನ ಯುವತಿ
IPL 2026- ಧೋನಿಗೆ ಸ್ನಾಯು ಸೆಳೆತ, ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಹೊಡೆತ; ಕ್ಯಾಪ್ಟನ್ ಕೂಲ್ ಗೆ ಆಗಿದ್ದೇನು?
Mahendra Singh Dhoni Injury- ಸ್ನಾಯು ಸೆಳೆತದ (Calf Injury) ಕಾರಣದಿಂದಾಗಿ ಸಿಎಸ್ಕೆ ದಿಗ್ಗಜ ಎಂ.ಎಸ್. ಧೋನಿ ಅವರು ಐಪಿಎಲ್ 2026ರ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರಿಗೆ ಇನ್ನು ಎರಡು ವಾರಗಳ ಕಾಲ ವಿಶ್ರಾಂತಿ ಮತ್ತು ಪುನರ್ವಸತಿ ಅಗತ್ಯವಿದೆಯೆಂದು ಫ್ರಾಂಚೈಸಿಯೇ ತನ್ನ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದೆ. 44 ವರ್ಷದ ಧೋನಿ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡಕ್ಕೆ ಹಿನ್ನಡೆಯಾಗಿದ್ದು, ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರುವ ಸಾಧ್ಯತೆಯಿದೆ.
Shivamogga | ಆಕಸ್ಮಿಕವಾಗಿ ಕೆರೆಗೆ ಬಿದ್ದು ಎಸೆಸೆಲ್ಸಿ ವಿದ್ಯಾರ್ಥಿ ಮೃತ್ಯು
ಶಿವಮೊಗ್ಗ: ಟ್ಯೂಷನ್ ಮುಗಿಸಿ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಎಸೆಸೆಲ್ಸಿ ವಿದ್ಯಾರ್ಥಿ ಮೃತಪಟ್ಟ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬರುವೆ ಗ್ರಾಮದಲ್ಲಿ ನಡೆದಿದೆ. ರಿಪ್ಪನ್ ಪೇಟೆ ಪಟ್ಟಣದ ಮದೀನ ಕಾಲನಿ ನಿವಾಸಿ ಮುಹಮ್ಮದ್ ತಮೀಮ್(16) ಮೃತಪಟ್ಟ ಬಾಲಕ. ಶುಕ್ರವಾರ ಪಟ್ಟಣದ ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್ಗೆ ತೆರಳಿದ್ದ ತಮೀಮ್ ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮೀಮ್ ಪಟ್ಟಣದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಮೂರು ವಿಷಯಗಳಲ್ಲಿ ಪಬ್ಲಿಕ್ ಪರೀಕ್ಷೆಗಳನ್ನೂ ಬರೆದಿದ್ದನು. ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಮಾನ್ ಕರಾವಳಿಯಲ್ಲಿ ಅಮೆರಿಕದ ಹಡಗಿನ ಮೇಲೆ ದಾಳಿ: IRGC ಹೇಳಿಕೆ
ತೆಹ್ರಾನ್: ಒಮಾನ್ ಕರಾವಳಿಯ ಸಮೀಪ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. IRGCಯ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರರು ಶನಿವಾರ ನೀಡಿದ ಹೇಳಿಕೆಯಲ್ಲಿ, “ಒಮಾನ್ ನ ಸಲಾಲಾ ಬಂದರಿನಿಂದ ಸಾಕಷ್ಟು ದೂರದಲ್ಲಿರುವ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಇರಾನ್ ಪಡೆಗಳು ಗುರಿಯಾಗಿಸಿಕೊಂಡಿವೆ” ಎಂದು ತಿಳಿಸಿದ್ದಾರೆ. ಇರಾನಿನ ತಸ್ನಿಮ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಈ ಕ್ರಮದ ನಡುವೆಯೂ ಒಮಾನ್ ನ ಸಾರ್ವಭೌಮತ್ವಕ್ಕೆ ಇರಾನ್ ಗೌರವ ಸೂಚಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ. “ನಾವು ಈಗಾಗಲೇ ಘೋಷಿಸಿದಂತೆ, ಸಹೋದರ ಮತ್ತು ಸ್ನೇಹಪರ ರಾಷ್ಟ್ರವಾದ ಒಮಾನ್ ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಇರಾನ್ ಇಸ್ಲಾಮಿಕ್ ಗಣರಾಜ್ಯ ಗೌರವಿಸುತ್ತದೆ,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇರಾನ್ ನಿಂದ ದಾಳಿ | ಇದುವರೆಗೂ 550ಕ್ಕೂ ಹೆಚ್ಚು ಕ್ಷಿಪಣಿ–ಡ್ರೋನ್ ಗಳನ್ನು ತಡೆದ ಬಹ್ರೇನ್: ವರದಿ
ಮನಾಮಾ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು ನಡೆದ 550ಕ್ಕೂ ಹೆಚ್ಚು ಇರಾನಿನ ದಾಳಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಬಹ್ರೇನ್ ಸೇನೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಒಂದು ತಿಂಗಳ ಅವಧಿಯಲ್ಲಿ 174 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 385 ಡ್ರೋನ್ ಗಳನ್ನು ತಡೆಹಿಡಿಯಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ. ದೇಶದ ನಾಗರಿಕ ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಗಳನ್ನು ಸೇನೆ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಡ್ರೋನ್ ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬಳಕೆ ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಯುಎನ್ ಚಾರ್ಟರ್ ನ ಸ್ಪಷ್ಟ ಉಲ್ಲಂಘನೆ ಆಗಿದ್ದು, ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆ ಎಂದು ಹೇಳಲಾಗಿದೆ. ಶನಿವಾರ ಮುಂಜಾನೆ ಸಂಭವನೀಯ ದಾಳಿಗಳ ಬಗ್ಗೆ ಎಚ್ಚರಿಸಲು ಬಹ್ರೇನ್ ನಲ್ಲಿ ಎರಡು ಬಾರಿ ಎಚ್ಚರಿಕಾ ಸೈರನ್ ಗಳನ್ನು ಮೊಳಗಿಸಲಾಯಿತು. ಸಾರ್ವಜನಿಕರು ತಕ್ಷಣವೇ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಆಂತರಿಕ ಸಚಿವಾಲಯ ಮನವಿ ಮಾಡಿದೆ. ಇದೇ ವೇಳೆ, ಇರಾನ್ ನಡೆಸಿದ ಹಿಂದಿನ ದಾಳಿಯ ಪರಿಣಾಮವಾಗಿ ಉಂಟಾದ ಅಗ್ನಿ ಅವಘಡವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕುಂದಾಪುರ | ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ವೀಲಿಂಗ್: ಸ್ಕೂಟರ್ ಸವಾರನ ಬಂಧನ
ಕುಂದಾಪುರ, ಮಾ.28: ಹೆಮ್ಮಾಡಿ ಕಡೆಯಿಂದ ಕುಂದಾಪುರದ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಸಿ ವ್ಹೀಲಿಂಗ್ ಮಾಡುತ್ತಿದ್ದ ಸ್ಕೂಟರ್ ಸವಾರನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಫೌಝಾನ್ ಅಹ್ಮದ್(25) ಬಂಧಿತ ಆರೋಪಿ. ಈತ ಮಾ.20ರಂದು ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸದೆ ಸಂಚಾರ ನಿಯಮಗಳನ್ನು ಉಲ್ಲಂಸಿ, ಅಪಾಯಕಾರಿ ರೀತಿಯಲ್ಲಿ ವಾಹನವನ್ನು ಚಲಾಯಿಸಿ ನಾನಾ ರೀತಿಯ ಭಂಗಿಗಳಲ್ಲಿ ವೀಲಿಂಗ್ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು .
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಇಂದು (ಮಾರ್ಚ್ 28, 2026) ರಾಜ್ಯಾದ್ಯಂತ ಕರ್ನಾಟಕ ಎಸ್ಎಸ್ಎಲ್ಸಿ ಗಣಿತ ವಾರ್ಷಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:15 ರವರೆಗೆ ನಡೆದ ಈ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ವಿಷಯ ತಜ್ಞರು ಮತ್ತು ಶಿಕ್ಷಕರು ಪ್ರಶ್ನೆಪತ್ರಿಕೆಯ
ವೆಸ್ಟ್ ಬ್ಯಾಂಕ್ ಆಕ್ರಮಣ ವಿರೋಧಿಸಲು ಪ್ರಧಾನಿ ಮೋದಿಗೆ ಧೈರ್ಯವಿಲ್ಲ: ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯ ಯುದ್ಧದ ಮುಸುಕಿನಡಿ ಇಸ್ರೇಲ್ ತನ್ನ ‘ಗ್ರೇಟರ್ ಇಸ್ರೇಲ್’ ಯೋಜನೆಯತ್ತ ಮುನ್ನಡೆಯುತ್ತಿದ್ದು, ಫೆಲೆಸ್ತೀನ್ ದೇಶದ ಭವಿಷ್ಯವೇ ಅನುಮಾನಾಸ್ಪದವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಧ್ವನಿ ಎತ್ತುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ವೈಮಾನಿಕ ದಾಳಿ ಆರಂಭವಾಗಿ, ಇರಾನ್ ಪ್ರತಿದಾಳಿ ಪ್ರಾರಂಭಗೊಂಡು ಇಂದಿಗೆ 28 ದಿನಗಳು ಕಳೆದಿವೆ. ಕಳೆದ ನಾಲ್ಕು ವಾರಗಳಲ್ಲಿ ಜಾಗತಿಕ ಗಮನವು ಹಾರ್ಮುಝ್ ಜಲಸಂಧಿ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ಕೇಂದ್ರೀಕೃತವಾಗಿದ್ದರೆ, ಇಸ್ರೇಲ್ ಗಾಝಾ ಜನರ ಮೇಲಿನ ತನ್ನ ಕ್ರೌರ್ಯವನ್ನು ನಿರಂತರವಾಗಿ ಮುಂದುವರಿಸಿದೆ. ದಕ್ಷಿಣ ಲೆಬನಾನ್ ನಲ್ಲಿ ತನ್ನ ಭದ್ರತೆಗಾಗಿ ಬೃಹತ್ ಬಫರ್ ವಲಯವನ್ನು ನಿರ್ಮಿಸಲು ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಜೊತೆಗೆ ವೆಸ್ಟ್ ಬ್ಯಾಂಕ್ ವಿಸ್ತರಣೆಯನ್ನು ಶಾಶ್ವತ ವಾಸ್ತವ್ಯವನ್ನಾಗಿ ಪರಿವರ್ತಿಸಲು ನಿರ್ಣಾಯಕ ಹೆಜ್ಜೆ ಇಟ್ಟಿದೆ” ಎಂದು ಆರೋಪಿಸಿದ್ದಾರೆ. “ಹಾಲಿ ಪಶ್ಚಿಮ ಏಶ್ಯ ಯುದ್ಧವು ಇಸ್ರೇಲ್ ಗೆ ಮುಸುಕಿನಂತೆ ಕಾರ್ಯನಿರ್ವಹಿಸುತ್ತಿದ್ದು, ತನ್ನ ‘ಗ್ರೇಟರ್ ಇಸ್ರೇಲ್’ ಯೋಜನೆಯನ್ನು ಮುಂದುವರಿಸಲು ಹಾಗೂ ಫೆಲೆಸ್ತೀನ್ ದೇಶದ ಭರವಸೆಯನ್ನು ಅಂತ್ಯಗೊಳಿಸಲು ಅವಕಾಶ ಒದಗಿಸಿದೆ” ಎಂದು ಅವರು ಆರೋಪಿಸಿದ್ದಾರೆ. “ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ಎರಡು ದಿನಗಳ ಬಳಿಕವೇ ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ದಾಳಿ ಆರಂಭವಾಯಿತು. ಅವರು ಇಸ್ರೇಲ್ ಗೆ ಭೇಟಿ ನೀಡುವುದಕ್ಕೂ ಕೆಲವೇ ದಿನಗಳ ಮುನ್ನ, 1967ರ ನಂತರ ಪ್ರಥಮ ಬಾರಿಗೆ ವೆಸ್ಟ್ ಬ್ಯಾಂಕ್ ನ ಸುಮಾರು ಅರ್ಧದಷ್ಟು ಭೂಭಾಗವನ್ನು ನೋಂದಾಯಿಸಲು ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದ್ದುದನ್ನು ಅವರು ಗಮನಿಸಿಲ್ಲ” ಎಂದು ಟೀಕಿಸಿದ್ದಾರೆ. “ಈ ಕ್ರಮಗಳು ಲಕ್ಷಾಂತರ ಫೆಲೆಸ್ತೀನಿಯನ್ನರನ್ನು ನಿರ್ವಸತಿಗರನ್ನಾಗಿಸುವ ಅಪಾಯವನ್ನು ಉಂಟುಮಾಡಲಿವೆ. ಆದರೂ, ಪ್ರಧಾನಿ ಮೋದಿಗೆ ಇದರ ವಿರುದ್ಧ ಧ್ವನಿ ಎತ್ತುವ ಧೈರ್ಯವಿಲ್ಲ. ತಮ್ಮ ಆಪ್ತ ಸ್ನೇಹಿತ ಬೆಂಜಮಿನ್ ನೆತನ್ಯಾಹು ಅವರಿಗೆ ಸತ್ಯ ಹೇಳುವ ಮನಸ್ಸೂ ಇಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಗಾಝಾ ನಾಗರಿಕರ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಇಸ್ರೇಲ್ ಗೆ ಭೇಟಿ ನೀಡಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
''ಆ ಮಹಾನುಭಾವರ ಕೈಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿ ಕೊಡಿ''
CM ಸಿದ್ದರಾಮಯ್ಯರನ್ನು ಭೇಟಿಯಾದ ವೆಂಕಟೇಶ್ ಪ್ರಸಾದ್ ಫೋಟೋವನ್ನು ಟೀಕಿಸಿದ ಸಂಸದ ತೇಜಸ್ವಿ ಸೂರ್ಯಗೆ ಅಮಿನ್ ಮಟ್ಟು ತಿರುಗೇಟು
ಬಿಜೆಪಿ ಕಾರ್ಯಕರ್ತರು ಹಾಕಿದ ಸವಾಲನ್ನು ಸ್ವೀಕರಿಸಿದ್ದ ಕಾಂಗ್ರೆಸ್ ಶಾಸಕ ಪ್ರದೀಶ್ ಈಶ್ವರ್ ದಾವಣಗೆರೆಗೆ ಭೇಟಿ ನೀಡಿದ್ದರು. ಮಾತ್ರವಲ್ಲದೇ, ಬಿಜೆಪಿ ಕಚೇರಿ ಮುಂದೆ ಬಂದು ನಿಂತು ತೊಡೆತಟ್ಟಿದ್ದಾರೆ. ಈ ವೇಳೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಹೈಡ್ರಾಮಾ ಸೃಷ್ಟಿಯಾಗಿತ್ತು. ಇನ್ನು ಕಾರ್ಯಕರ್ತರು ಚಪ್ಪಲಿ ಪೊರಕೆ ತೋರಿಸಿದರೆ, ಶಾಸಕರು ನನ್ನ ಒಂದು ಕೂದಲು ಕಿತ್ತುಕೊಳ್ಳಲು ಆಗಲಿಲ್ಲ ಎಂದು ಸನ್ನೆ ಮಾಡಿದರು.
ಬೆಂಗಳೂರು: ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ 13 ಬಾರಿ “ಟೆರರಿಸ್ಟ್” ಎಂದು ಕರೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವೈರಲ್ ವೀಡಿಯೊ ವಿಚಾರವಾಗಿ PES ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದ್ದು, ಅಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ʼವಾರ್ತಾ ಭಾರತಿʼ ಕಳುಹಿಸಿದ ವಿವರವಾದ ಇಮೇಲ್ ಗೆ ನೀಡಿದ ಉತ್ತರದಲ್ಲಿ, “ವಿಚಾರಣೆ ಮುಗಿಯುವವರೆಗೆ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ವಿದ್ಯಾರ್ಥಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ,” ಎಂದು ಕುಲಪತಿ ಜವಾಹರ್ ದೊರೆಸ್ವಾಮಿ ತಿಳಿಸಿದ್ದಾರೆ. ಆದರೆ, ಘಟನೆ ನಡೆದ ತರಗತಿ, ಸಂದರ್ಭ ಸೇರಿದಂತೆ ಹಲವಾರು ಪ್ರಮುಖ ಪ್ರಶ್ನೆಗಳಿಗೆ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ವೀಡಿಯೊದಲ್ಲಿ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ, ಮುಸ್ಲಿಂ ವಿದ್ಯಾರ್ಥಿಯನ್ನು ಹಲವಾರು ಬಾರಿ “ಟೆರರಿಸ್ಟ್” ಎಂದು ಕರೆಯುತ್ತಿರುವುದು ಕೇಳಿಬಂದಿದೆ. ತರಗತಿಯ ಅವಧಿಯಲ್ಲಿ ಈ ಪದವನ್ನು 13 ಬಾರಿ ಪುನರಾವರ್ತಿಸಲಾಗಿದೆ ಎಂಬ ಆರೋಪವೂ ಆನ್ಲೈನ್ನಲ್ಲಿ ವ್ಯಕ್ತವಾಗಿದೆ. ಈ ಮೊದಲು, “ವಿದ್ಯಾರ್ಥಿಯ ದೂರನ್ನು ಸ್ವೀಕರಿಸಲಾಗಿದೆ. ವಿಚಾರಣೆ ನಡೆಯುವವರೆಗೆ ಸಂಬಂಧಪಟ್ಟ ಅಧ್ಯಾಪಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ವಿಶ್ವವಿದ್ಯಾಲಯ ಹೊರಡಿಸಿದ್ದ ಆದೇಶವನ್ನು ʼವಾರ್ತಾ ಭಾರತಿʼ ಪಡೆದುಕೊಂಡಿತ್ತು. ಉಪಕುಲಪತಿಗಳ ಸಹಿಯಿರುವ ಈ ಆದೇಶದಲ್ಲಿ ದೂರಿನ ಸ್ವರೂಪವನ್ನು ವಿವರಿಸಲಾಗಿಲ್ಲ. ಪ್ರಕರಣದ ಕುರಿತು ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂಬುದು ತಿಳಿದುಬಂದಿದೆ.
ಮಾರ್ನಿಂಗ್ ವಾಕ್ vs ಈವಿನಿಂಗ್ ವಾಕ್: ಯಾವುದು ಉತ್ತಮ?
ನಾವು ಆರೋಗ್ಯವಾಗಿರಲು ದೈಹಿಕ ಚಟುವಟಿಕೆಗಳನ್ನು ಮಾಡುವುದು ಅಗತ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಹಲವರು ತಮ್ಮ ದಿನನಿತ್ಯದ ವ್ಯಾಯಾಮಗಳಲ್ಲಿ ವಾಕಿಂಗ್ ಕೂಡ ಒಂದಾಗಿದೆ. ಕೆಲವರು ವಾಕಿಂಗ್ ಸಮಯವನ್ನು ಬೆಳಿಗ್ಗೆ ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳತ್ತಾರೆ. ಆದರೆ ವಾಕಿಂಗ್ ಮಾಡಲು ಯಾವ ಸಮಯ ಸೂಕ್ತ ಎಂಬ ಪ್ರಶ್ನೆ ಎದುರಾಗುತ್ತದೆ. ತಜ್ಞರ ಪ್ರಕಾರ ಬೆಳಿಗ್ಗೆ ಅಥವಾ ಸಂಜೆ
ರವಿಚಂದ್ರನ್ ಹಂಸಲೇಖ ದೂರಾಗಿದ್ದೇಕೆ..?
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಗೆ ನಾಲ್ಕು ದಶಕ ದಾಟಿದೆ. ಇದೇ ಸಂಭ್ರಮದ ಹೆಸರಿನಲ್ಲಿ ಈ ಬಾರಿ ರವಿಚಂದ್ರನ್ ಜನ್ಮದಿನದಂದು ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಈ ಜೋಡಿಯ ಕುರಿತಾದ ಒಂದು ಪುಟ್ಟ ಅವಲೋಕನ ಇಲ್ಲಿದೆ. ರವಿಚಂದ್ರನ್ ಮತ್ತು ಹಂಸಲೇಖ ನಾಲ್ಕು ದಶಕದ ಸಂಭ್ರಮ ಎಂದು ಹೇಳಿದರೂ, ಈ ಜೋಡಿಯ ಮಧ್ಯೆ ಹತ್ತೇ ವರ್ಷದಲ್ಲಿ ಬಿರುಕು ಮೂಡಿತ್ತು. ಹೀಗಾಗಿಯೇ ಒಟ್ಟು ಎರಡು ದಶಕ ಕೂಡ ಜತೆಯಾಗಿ ಕೆಲಸ ಮಾಡಿಲ್ಲ ಎಂದೇ ಹೇಳಬಹುದು. 2003ರಲ್ಲಿ ತೆರೆಕಂಡ ‘ಒಂದಾಗೋಣ ಬಾ’ ಇವರ ಕೊನೆಯ ಚಿತ್ರ. ಆದರೆ ಅವರಿಬ್ಬರನ್ನು ಒಂದಾಗಿಸುವ ಪ್ರಯತ್ನ ಅಲ್ಲಿಗೆ ಕೊನೆಯಾಯಿತು. ಹಾಗೆ ನೋಡಿದರೆ ಅದಕ್ಕೂ ಐದಾರು ವರ್ಷ ಮೊದಲೇ ‘ಯಾರೇ ನೀನು ಚೆಲುವೆ’ ಸಿನೆಮಾ ತೆರೆಗೆ ಬರುವುದರೊಂದಿಗೆ ಈ ಜೋಡಿ ದೂರಾಗಿತ್ತು. ಆದರೆ ಅದುವರೆಗೆ ಬಂದಂಥ ರವಿಯ 29 ಚಿತ್ರಗಳಲ್ಲಿ ಕೂಡ ಹಂಸಲೇಖ ಸಂಗೀತವೇ ಇತ್ತು. 1987ರ ಪ್ರೇಮಲೋಕದ ಬಳಿಕ ರವಿಚಂದ್ರನ್ ನಟನೆಯಲ್ಲಿ ವರ್ಷಕ್ಕೆ ಮೂರು ನಾಲ್ಕು ಸಿನೆಮಾಗಳು ತೆರೆಕಾಣುತ್ತಿತ್ತು. ಅವುಗಳಲ್ಲಿ ಏನಿಲ್ಲವೆಂದರೂ ಒಂದು ಚಿತ್ರವಾದರೂ ಬ್ಲಾಕ್ ಬಸ್ಟರ್ ಹಿಟ್ ಆಗಿರುತ್ತಿತ್ತು. 1995ರಲ್ಲಿ ‘ಪುಟ್ನಂಜ’, 1996ರಲ್ಲಿ ತೆರೆಕಂಡ ‘ಸಿಪಾಯಿ’ ಎರಡು ಕೂಡ ಇಂಡಸ್ಟ್ರಿ ಹಿಟ್ ಸಿನೆಮಾಗಳಾಗಿದ್ದವು. ಆದರೆ 1997 ಮಾತ್ರ ರವಿಚಂದ್ರನ್ ಪಾಲಿಗೆ ದೊಡ್ಡ ಮಟ್ಟದ ಸೋಲು ತಂದುಕೊಟ್ಟಿತು. ‘ಕಲಾವಿದ’, ‘ಮೊಮ್ಮಗ’, ‘ಚೆಲುವ’ ಹೀಗೆ ಮೂರು ಚಿತ್ರಗಳು ಕೂಡ ಸರಣಿ ಸೋಲಿನ ರುಚಿ ನೀಡಿತ್ತು. ಇದೇ ಸಂದರ್ಭದಲ್ಲಿ ರವಿಚಂದ್ರನ್ಗೆ ಮರುಜೀವ ಕೊಟ್ಟ ಚಿತ್ರವೇ ‘ಯಾರೇ ನೀನು ಚೆಲುವೆ’. ಚಿತ್ರವೇನೋ ಸೂಪರ್ ಹಿಟ್ ಆಯಿತು. ಆದರೆ ಈ ಚಿತ್ರದೊಂದಿಗೆ ರವಿಚಂದ್ರನ್ ಹಂಸಲೇಖ ಜೋಡಿ ಬೇರೆ ಬೇರೆಯಾಯಿತು. ಹಂಸಲೇಖರಿಂದ ದೂರಾದ ರವಿಚಂದ್ರನ್ ಅವರಿಗೆ ‘ಮಾಂಗಲ್ಯಂ ತಂತು ನಾನೇನ’ ಮೂಲಕ ಮೊದಲ ಬಾರಿ ಸಂಗೀತ ಕೊಟ್ಟ ಅನ್ಯ ಸಂಗೀತ ನಿರ್ದೇಶಕ ಅಂದರೆ ಅದು ವಿ. ಮನೋಹರ್. ಅವರು ಹಂಸಲೇಖ ಶಿಷ್ಯನೇ ಆಗಿರುವ ಕಾರಣ ಅಭಿಮಾನಿಗಳ ಪಾಲಿಗೆ ಸಣ್ಣದೊಂದು ಹಂಸಲೇಖ ಝಲಕ್ ಇರುವಂತೆ ಭಾಸವಾಗಿತ್ತು. ಕೆ. ಕಲ್ಯಾಣ್ ಸಾಹಿತ್ಯವೂ ಸಾಥ್ ನೀಡಿತ್ತು. ಜತೆಗೆ ಮಹಿಳಾ ಪ್ರಾಧಾನ್ಯತೆ ಇರುವ ಚಿತ್ರಕಥೆ, ರವಿಚಂದ್ರನ್ ತಂದೆಯಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಟನೆ ಎಲ್ಲವೂ ಸೇರಿ ಸಿನೆಮಾ ಸೂಪರ್ ಹಿಟ್ ಆಗಿತ್ತು. ಆದರೆ ದೂರಾಗಿದ್ದ ಜೋಡಿಯನ್ನು ಮತ್ತೆ ಒಂದಾಗಿಸಿ ‘ಪ್ರೀತ್ಸೋದ್ ತಪ್ಪಾ’ ಎನ್ನುವ ಚಿತ್ರ ನಿರ್ಮಿಸಿದ ಕೀರ್ತಿ ರಾಕ್ಲೈನ್ ವೆಂಕಟೇಶ್ ಅವರಿಗೆ ಸಲ್ಲುತ್ತದೆ. ಇದರ ಹಾಡುಗಳು ಮತ್ತೆ ಶ್ರೋತೃಗಳ ಮನಗೆದ್ದವು. ಆದರೆ ಮತ್ತೆ ಐದು ವರ್ಷ ಗ್ಯಾಪ್. ಇನ್ನೇನು ಇಬ್ಬರು ಒಂದಾಗುವುದೇ ಇಲ್ಲ ಎನ್ನುವಂಥ ಪರಿಸ್ಥಿತಿ. ಆ ಸಂದರ್ಭದಲ್ಲಿ ಜೋಡಿಯನ್ನು ಸೇರಿಸಿದ್ದು ಮತ್ತೆ ರಾಕ್ಲೈನ್ ವೆಂಕಟೇಶ್ ಅವರೇನೇ. ‘ಒಂದಾಗೋಣ ಬಾ’ ಎನ್ನುವುದು ಚಿತ್ರದ ಹೆಸರು. ಆದರೆ ಈ ಚಿತ್ರದ ಹಾಡುಗಳು ಹಿಂದಿನ ಹಾಗೆ ಮೋಡಿ ಮಾಡಲಿಲ್ಲ. ಶಿಲ್ಪಾ ಶೆಟ್ಟಿ ಇದ್ದರೂ ಚಿತ್ರ ಮತ್ತೊಂದು ‘ಪ್ರೀತ್ಸೋದ್ ತಪ್ಪಾ’ ಆಗಲಿಲ್ಲ. ಆದರೆ ಮರುವರ್ಷ ಖುದ್ದು ರವಿಚಂದ್ರನ್ ಸಂಗೀತದಲ್ಲಿ ತೆರೆಕಂಡ ‘ಮಲ್ಲ’ ಸಿನೆಮಾ, ಹಾಡುಗಳಿಂದ ಮಾತ್ರವಲ್ಲ ಚಿತ್ರವಾಗಿಯೂ ಯಶಸ್ಸು ಗಳಿಸಿತ್ತು. ಬಹುಶಃ ಇದೇ ಕಾರಣವೇ ಇರಬಹುದು. ರವಿಚಂದ್ರನ್ ತಾನೇ ಸಂಗೀತ ನೀಡಿ ಗೆಲ್ಲಬಲ್ಲೆ ಎನ್ನುವ ಧೈರ್ಯ ಮೂಡಿಸಿಕೊಂಡರು. ಆದರೆ ವಿಪರ್ಯಾಸ ಏನೆಂದರೆ 2004ರ ‘ಮಲ್ಲ’ ದ ಬಳಿಕ ಈ ಎರಡು ದಶಕಗಳಲ್ಲಿ ಅಂಥದೊಂದು ಹಿಟ್ ಆಲ್ಬಂ ಆಗಲೀ, ಸುಪರ್ ಹಿಟ್ ಚಿತ್ರವಾಗಲೀ ರವಿಚಂದ್ರನ್ ಕಡೆಯಿಂದ ಬಂದಿಲ್ಲ. ದಶಕದ ಬಳಿಕ 2014ರಲ್ಲಿ ‘ದೃಶ್ಯ’ ಚಿತ್ರಕ್ಕೆ ಇಳಯರಾಜ ನೀಡಿದ ಸಂಗೀತ ಸಣ್ಣಮಟ್ಟಿನ ಯಶಸ್ಸು ದಾಖಲಿಸಿತ್ತು. ಚಿತ್ರವನ್ನು ಕೂಡ ಯಶಸ್ವಿಯೆಂದು ಪರಿಗಣಿಸಲಾಗಿತ್ತು. ಆದರೆ ಹಂಸಲೇಖ ಮತ್ತು ರವಿಚಂದ್ರನ್ ಜೋಡಿಯಾಗಿ ನೀಡಿದ್ದ ದಾಖಲೆಯ ಯಶಸ್ಸು ಮತ್ತೆ ಮರಳಿಯೇ ಇಲ್ಲ ಎನ್ನುವುದು ಸತ್ಯ. ರವಿಚಂದ್ರನ್ ಮತ್ತು ಹಂಸಲೇಖ ದೂರಾಗಿದ್ದೇಕೆ ಎನ್ನುವುದಕ್ಕೆ ಇಬ್ಬರು ಕೂಡ ಇಂದಿಗೂ ಕೂಡ ಇದೇ ಕಾರಣ ಎಂದು ಹೇಳಿಕೊಂಡಿಲ್ಲ. ಆ ದಿನಗಳಲ್ಲಿ ಹಂಸಲೇಖ ತಮ್ಮ ಮಗನ ಚಿತ್ರಕ್ಕೆ ಸಂಗೀತ ನೀಡುವಲ್ಲಿ ಹೆಚ್ಚು ಕಾಲ ತೊಡಗಿಸಿಕೊಂಡಿದ್ದರು. ಹೀಗಾಗಿ ತಮಗೆ ನೀಡಲು ಅವರಲ್ಲಿ ಹೆಚ್ಚಿನ ಕಾಲಾವಕಾಶ ಇರಲಿಲ್ಲ ಎನ್ನುವ ಮಾತನ್ನು ರವಿಚಂದ್ರನ್ ಈ ಹಿಂದೆಯೂ ಹೇಳಿದ್ದರು. ಹಂಸಲೇಖ ಅವರ ಮಗನ ಚಿತ್ರ ಹೊರಬರಲಿಲ್ಲವಾದರೂ, ದೇಸಿ ಸಂಗೀತದಲ್ಲಿ ಸಾಧನೆ ಮಾಡುವತ್ತ ಹಂಸ ಚಿತ್ತವಿತ್ತು. ಅದೇನೇ ಇರಲಿ, ಈ ಕಾಂಬಿನೇಶನ್ ಮೆಚ್ಚಿಕೊಂಡಿದ್ದ ಶ್ರೋತೃಗಳಿಗೆ ಮಾತ್ರ ದೊಡ್ಡ ಮಟ್ಟದ ನಿರಾಶೆಯಾಗಿದ್ದು ಸತ್ಯ. ಒಬ್ಬ ನಟನ ಚಿತ್ರಗಳಿಗೆ ದಶಕದ ಕಾಲ ಒಬ್ಬನೇ ಸಂಗೀತ ನಿರ್ದೇಶಕ ಸಂಗೀತ ನೀಡಿರುವ ಉದಾಹರಣೆ, ಭಾರತೀಯ ಚಿತ್ರರಂಗದಲ್ಲೇ ಇದೊಂದೇ. ಇದೀಗ ಸಂಗೀತದ ವೇದಿಕೆ ಮೇಲೆ ಮತ್ತೆ ಒಂದಾಗಿ ಕಾಣಿಸಲಿದ್ದಾರೆ. ಆದರೆ ಸಿನೆಮಾಗಳಲ್ಲಿ ಜೋಡಿಯಾಗುತ್ತಾರೆಯೇ ಎನ್ನುವ ಪ್ರಶ್ನೆಗೆ, ಇಬ್ಬರನ್ನೂ ಒಂದಾಗಿಸುವ ಚಿತ್ರತಂಡ ಬಂದರೆ ನಮ್ಮಿಂದ ಯಾವ ಆಕ್ಷೇಪವೂ ಇಲ್ಲ ಎಂದಷ್ಟೇ ಉತ್ತರ ನೀಡಿದ್ದಾರೆ. ಮತ್ತೆ ಹಳೆಯ ಚಾರ್ಮ್ ಮರಳಲು ಸಾಧ್ಯವೇ? ಕಾಲವೇ ಉತ್ತರ ಹೇಳಬೇಕು.
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು
ನವದೆಹಲಿ: ಪ್ರಸ್ತುತ ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ದಿಷ್ಟ ವಯೋಮಿತಿ ನಿಗದಿಪಡಿಸುವ ಸಾಧ್ಯತೆಗಳನ್ನು ಗಂಭೀರವಾಗಿ ಪರಿಶೀಲಿಸುವಂತೆ ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಜ್ಜಾಗಿದೆ. ಜಗತ್ತಿನಾದ್ಯಂತ ಹಲವು
ಗ್ಯಾರಂಟಿ ಪರಿಣಾಮ: ಬಸ್ ಸೀಟಿಗಾಗಿ ಪ್ರಯಾಣಿಕರ ಹರಸಾಹಸ
ಕೊಲ್ಹಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿದೆ. ಆದರೆ, ಇದರಿಂದಾಗಿ ಉಂಟಾಗಿರುವ ಬೇಡಿಕೆಯನ್ನು ಪೂರೈಸುವಷ್ಟು ಬಸ್ಸುಗಳನ್ನು ರಸ್ತೆಗೆ ಇಳಿಸದಿರುವುದರಿಂದ ಕೆಲವು ಹಳ್ಳಿ, ಹಿಂದುಳಿದ ಪಟ್ಟಣಗಳಲ್ಲಿ ಪ್ರಯಾಣವು ಹೈರಾಣವಾಗುತ್ತಿದೆ. ಕೊಲ್ಹಾರ ಪಟ್ಟಣವೂ ಇದಕ್ಕೆ ಹೊರತಾಗಿಲ್ಲ. ಪಟ್ಟಣದಿಂದ ಬಸವನ ಬಾಗೇವಾಡಿ ಮಾರ್ಗಕ್ಕೆ ಸಂಜೆ ಹೊತ್ತಿಗೆ ಸಂಚರಿಸಲು ಅಗತ್ಯಕ್ಕೆ ತಕ್ಕಷ್ಟು ಬಸ್ಸು ಬಾರದ ಕಾರಣ ಸಂಜೆ ಹೊತ್ತಿನ ಪ್ರಯಾಣ ನಿತ್ಯ ಬವಣೆಯಾಗಿದೆ. ಗ್ಯಾರಂಟಿ ಯೋಜನೆಯ ಬಳಿಕ ಬಸ್ಸುಗಳಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಯಾತ್ರಿಕರನ್ನು ಹೊತ್ತೊಯ್ಯಲು ಬಸ್ಸುಗಳ ಕೊರತೆಯಿಂದಾಗಿ, ಲಭ್ಯವಿರುವ ಬಸ್ಸುಗಳಲ್ಲಿ ಜನರು ನೂಕು ನುಗ್ಗಲಿನಿಂದ ಪ್ರಯಾಣಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ವಿಶೇಷವಾಗಿ ಗರ್ಭಿಣಿ, ಬಾಣಂತಿಯರಿಗೆ ಪ್ರಯಾಣ ಮಾಡುವುದೇ ದುಸ್ತರವಾಗಿದೆ. ಪಟ್ಟಣದ ಯುಕೆಪಿ ಮಾರ್ಗದಲ್ಲಿ ಬಸವನ ಬಾಗೇವಾಡಿ ಸಂಚರಿಸುವ ಸಾರಿಗೆ ಬಸ್ಸುಗಳು ಕಡಿಮೆ ಇರುವುದರಿಂದ ಕೆಲವು ಕಾಲ ಕಾದು ಪ್ರಯಾಣಿಕರು, ಬಸ್ಸುಬಂದ ಮೇಲೆ ನಂತರ ಬಾಗಿಲಿಗೆ ನಾ ಮುಂದು, ತಾ ಮುಂದು ಎಂಬಂತೆ ಮುಗಿಬಿದ್ದು ಓಡೋಡಿ ಬಂದು ಸಿಟು ಹಿಡಿಯುತ್ತಿದ್ದಾರೆ. ಬಸ್ಸಿನೊಳಗೆ ಕೂರಲು ಬಿಡಿ, ನಿಲ್ಲಲೂ ಸ್ಥಳಾವಕಾಶ ಇಲ್ಲದೆ, ಬಾಗಿಲು, ಕಿಟಕಿಗಳಲ್ಲಿ ನೇತಾಡಿಕೊಂಡು ವಿದ್ಯಾರ್ಥಿಗಳು ಪ್ರಯಾಣಿಸುವ ಪರಿಸ್ಥಿತಿಯೂ ಇದೆ. ಇದು ನಿರ್ವಾಹಕರು ಹಾಗೂ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಏನಾದರೂ ಅವಾಂತರ ಸಂಭವಿಸಿದರೆ ಯಾರು ಹೊಣೆ ಎಂಬ ಆತಂಕದಲ್ಲೇ ಸಾರಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಜೀವ ರಕ್ಷಣೆಗೆ, ನೌಕರರ ಸೇವೆ ರಕ್ಷಣೆಗೆ ಹಾಗೂ ಗ್ಯಾರಂಟಿ ಯೋಜನೆಯ ಆರೋಗ್ಯಕರ ಯಶಸ್ಸಿಗೆ ಬಸವನ ಬಾಗೇವಾಡಿ ಮಾರ್ಗಕ್ಕೆ ಸಂಚರಿಸಲು ಹೆಚ್ಚುವರಿ ಬಸ್ಸುಗಳು ಅನಿವಾರ್ಯವಾಗಿದೆ. ಇದು ಇಲ್ಲಿನ ಸ್ಥಳೀಯರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಒತ್ತಾಯವೂ ಹೌದು. ಹೊಸದಾಗಿ ತಾಲೂಕು ಕೇಂದ್ರವಾಗಿರುವುದರಿಂದ ಬಸವನ ಬಾಗೇವಾಡಿ ಮತ್ತು ಇತರೆ ಕಡೆ ಸಾಯಂಕಾಲದಲ್ಲಿ ಹೆಚ್ಚುವರಿ ಬಸ್ಸಿನ ಸೌಲಭ್ಯ, ಯುಕೆಪಿ ಭಾಗದಲ್ಲಿ ಬಸ್ ನಿಲ್ದಾಣ ಕಲ್ಪಿಸಬೇಕು. ಸಾರಿಗೆ ವ್ಯವಸ್ಥಾಪಕರು ಶೀಘ್ರದಲ್ಲಿ ಗಮನಹರಿಸಬೇಕು. -ರವಿ ಗೊಳಸಂಗಿ ಕರವೇ ತಾಲೂಕು ಅಧ್ಯಕ್ಷ ಕರವೇ ತಾಲೂಕು ಅಧ್ಯಕ್ಷ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿರುವುದರಿಂದ ದೂರದ ಊರಿಗೆ ಪ್ರಯಾಣಿಸಲು ಕಷ್ಟವಾಗಿದೆ. ಸರಕಾರವು ಮಹಿಳೆಯರ ಸಮಸ್ಯೆ ಆಲಿಸಿ ಚಿತ ಬಸ್ ರದ್ದುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ಅಥವಾ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. -ರೇಣುಕಾ ಬಾಟಿ, ಪ್ರಯಾಣಿಕರು ಸಾಯಂಕಾಲದಲ್ಲಿ ಹೆಚ್ಚುವರಿ ಬಸ್ ಇಲ್ಲದ ಕಾರಣ, ಮತ್ತು ಉಚಿತ ಬಸ್ ಪ್ರಯಾಣಇರುವುದರಿಂದ ನಮ್ಮ ಊರಿಗೆ ಹೋಗುವ ಬಸ್ ದಟ್ಟಣೆಯಿಂದ ಕೂಡಿರುತ್ತದೆ. ಸೀಟು ಹಿಡಿಯಲು ದಿನನಿತ್ಯ ಪರದಾಡುತ್ತೇವೆ. ಓಡೋಡಿ ಬಂದು ಬಸ್ಸಿನಲ್ಲಿ ಸ್ಥಳ ಹಿಡಿಯಬೇಕು. ನಮ್ಮ ಗೋಳು ಕೇಳುವವರು ಯಾರು ಇಲ್ಲ. -ದೀಪಕ್, ಶಾಲಾ ವಿದ್ಯಾರ್ಥಿ
ತುಕ್ಕು ಹಿಡಿದು ಹದಗೆಟ್ಟ ಬ್ಯಾರೇಜ್ ಗೇಟ್ ಅಪಾರ ಪ್ರಮಾಣದ ನೀರು ಪೋಲು
ಹಿರೇನೂರ-ಕಂದಳ್ಳಿ ಬ್ಯಾರೇಜ್ಗೆ ಹೈಡ್ರಾಲಿಕ್ ಗೇಟ್ ಅಳವಡಿಸಲು ಬೇಡಿಕೆ
Goa ನೈಟ್ ಕ್ಲಬ್ ಅಗ್ನಿ ಅವಘಡ | ಫೋರ್ಜರಿ ಆರೋಪ: ಲೂತ್ರಾ ಸಹೋದರರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ
ಪಣಜಿ, ಮಾ. 28: ಅಬಕಾರಿ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅಗ್ನಿ ಅವಘಡಕ್ಕೊಳಗಾದ ‘ಬಿರ್ಚ್ ಬೈ ರೋಮಿಯೊ ಲೇನ್’ ನೈಟ್ ಕ್ಲಬ್ನ ಮಾಲಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಸಹೋದರರಿಗೆ ಗೋವಾದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಮಪುಸಾದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಲೂತ್ರಾ ಸಹೋದರರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ ಎಂದು ಅವರ ಪರ ವಕೀಲ ಪರಾಗ್ ರಾವ್ ತಿಳಿಸಿದ್ದಾರೆ. ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಲೂತ್ರಾ ಸಹೋದರರ ಮಾಲಕತ್ವದ ಈ ನೈಟ್ ಕ್ಲಬ್ನಲ್ಲಿ 2025 ಡಿಸೆಂಬರ್ 6ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಸಾವನ್ನಪ್ಪಿದ್ದು, ಇನ್ನು ಸುಮಾರು 50 ಮಂದಿ ಗಾಯಗೊಂಡಿದ್ದರು. ಅಗ್ನಿ ಅವಘಡದ ಬಳಿಕ ಥಾಯ್ಲೆಂಡ್ ಗೆ ಪರಾರಿಯಾಗಿದ್ದ ಸಹೋದರರನ್ನು ಡಿಸೆಂಬರ್ 17ರಂದು ಅಲ್ಲಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಸದ್ಯ ಅವರು ಉತ್ತರ ಗೋವಾದ ಕೋಲ್ವಾಲೆ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಂಜುನಾ ಪೊಲೀಸ್ ಠಾಣೆಯವರು ತನಿಖೆ ನಡೆಸುತ್ತಿದ್ದು, ನೈಟ್ ಕ್ಲಬ್ಗೆ ಅಬಕಾರಿ ಪರವಾನಗಿ ಪಡೆಯಲು ಕೃತಕ ದಾಖಲೆಗಳನ್ನು ಸಲ್ಲಿಸಿದ್ದರೆಂಬ ಆರೋಪದಡಿ ಮಪುಸಾ ಪೊಲೀಸರು ಪ್ರತ್ಯೇಕವಾಗಿ ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಮರಾಜಪೇಟೆ ಮೇಲ್ಸೇತುವೆಯಿಂದ ಕೆಂಗೇರಿಯವರೆಗೆ ಸಂಚಾರ ದಟ್ಟಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚಾಮರಾಜಪೇಟೆ ಮೇಲ್ಸೇತುವೆಯನ್ನು ಬಿಎಚ್ ಇಎಲ್ ಕಿಮಕೋ ಜಂಕ್ಷನ್ ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ದಿ ಇಲಾಖೆ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಶಿವಕುಮಾರ್ ಕೆ ಅವರು ಈ ಕುರಿತಾಗಿ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಉತ್ತರ ನೀಡಿದ್ದಾರೆ.
ತಾಂತ್ರಿಕ ದೋಷ| ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಹೊಸದಿಲ್ಲಿ: ವಿಶಾಖಪಟ್ಟಣಂನಿಂದ ಶನಿವಾರ ದಿಲ್ಲಿಗೆ ಬರುತ್ತಿದ್ದ ಇಂಡಿಗೋ ವಿಮಾನ ಇಂಜಿನ್ ವೈಫಲ್ಯದ ಹಿನ್ನೆಲೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಇಂಜಿನ್ ವೈಫಲ್ಯ ಕುರಿತ ಮಾಹಿತಿ ಲಭ್ಯವಾದ ಬೆನ್ನಲ್ಲೆ ಶನಿವಾರ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆ ಬಳಿಕ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. 160 ಪ್ರಯಾಣಿಕರಿದ್ದ ವಿಮಾನ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10.39ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ. ಬೋಯಿಂಗ್ 737 ವಿಮಾನದ ಇಂಜಿನ್ ವೈಫಲ್ಯದ ಬಗ್ಗೆ ಬೆಳಿಗ್ಗೆ 10:53ಕ್ಕೆ ಮಾಹಿತಿ ರವಾನೆಯಾಗಿತ್ತು. ಬೆಳಿಗ್ಗೆ 10.59ಕ್ಕೆ ವಿಮಾನ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿನ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾವಣಗೆರೆ: ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ; ಚಪ್ಪಲಿ-ಪೂರಕೆ ಪ್ರದರ್ಶನ
ದಾವಣಗೆರೆ: ಬಿಜೆಪಿ ಕಾರ್ಯಕರ್ತರಿಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ ಅವರಿಗೆ ಚಪ್ಪಲಿ ಮತ್ತು ಪೂರಕೆ ತೋರಿಸಿ “ಹುಚ್ಚ… ಹುಚ್ಚ…” ಎಂದು ಧಿಕ್ಕಾರ ಕೂಗಿದ ಘಟನೆ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಪಕ್ಷದ ಮುಖಂಡರನ್ನು ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ದಾವಣಗೆರೆಗೆ ಬಂದರೆ ತಕ್ಕಪಾಠ ಕಲಿಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಇದಕ್ಕೆ ತಿರುಗೇಟು ನೀಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಬಿಜೆಪಿ ಕಚೇರಿ ಬಳಿಯಿಂದಲೇ ಪ್ರಚಾರ ನಡೆಸುವುದಾಗಿ ಸವಾಲು ಹಾಕಿದ್ದರು. ಅದರಂತೆ ಶನಿವಾರ ಆಗಮಿಸಿದ ಶಾಸಕ ಪ್ರದೀಪ ಈಶ್ವರ್, ಪಿ.ಬಿ. ರಸ್ತೆಯಿಂದ ಬಿಜೆಪಿ ಕಚೇರಿವರೆಗೆ ಕಾಂಗ್ರೆಸ್ ಬಾವುಟ ಹಿಡಿದು ಘೋಷಣೆಗಳನ್ನು ಕೂಗುತ್ತಾ ಆಗಮಿಸಿದರು. ಈ ವೇಳೆ ಬಿಜೆಪಿ ಮುಖಂಡ ಅಜಯಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಚಪ್ಪಲಿ ಮತ್ತು ಪೂರಕೆ ಪ್ರದರ್ಶಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ತಿಳಿದು ಬಂದಿದೆ. ಈ ಸಂದರ್ಭ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸ್ ಪಡೆ ಹಾಗೂ ಮೀಸಲು ಪೊಲೀಸ್ ಪಡೆ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮೆರವಣಿಗೆ ಹಾಗೂ ಬಿಜೆಪಿ ಕಚೇರಿ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ. ನೇತೃತ್ವ ವಹಿಸಿದ್ದರು.
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ
ಸಕಲೇಶಪುರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇಗುಲದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ನಲ್ಲಿ ತೊಡಗಿದ್ದ ಫೋಟೋಗ್ರಾಫರ್ಗಳ ತಂಡದ ಮೇಲೆ ಸ್ಥಳೀಯ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಧ್ವಂಸಗೊಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಸನ ಮೂಲದ ಫೋಟೋಗ್ರಾಫರ್ ನವೀನಂದನ್ ತಮ್ಮ ಸಹೋದ್ಯೋಗಿ
ಹೆಚ್ಚುತ್ತಿದೆ ಬಿಸಿಲಿನ ಪ್ರಖರತೆ: ನೀರಿಗೆ ಹಾಹಾಕಾರ ಸಾಧ್ಯತೆ
ಲಿಂಗಸುಗೂರು: ಅರ್ಧ ಭಾಗದಷ್ಟು ನೀರಾವರಿಗೆ ಒಳಪಟ್ಟಿರುವ ಲಿಂಗಸುಗೂರು ತಾಲೂಕಿನ ಗ್ರಾಮೀಣ ಪ್ರದೇಶ, ತಾಂಡ, ದೊಡ್ಡಿಗಳಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾದಂತೆ ನೀರಿನ ಬವಣೆಯೂ ಉಲ್ಬಣಿಸುತ್ತದೆ. ಗುರುಗುಂಟಾ ಭಾಗದ ದೊಡ್ಡಿಗಳು, ಹಟ್ಟಿ ಚಿನ್ನದ ಗಣಿ ಭಾಗದ ಪ್ರದೇಶಗಳ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಪರಿಣಾಮ ಕೆರೆ, ಹಳ್ಳಕೊಳ್ಳಗಳು ತುಂಬಿವೆ, ಮಾರ್ಚ್ ಅಂತ್ಯದವರೆಗೂ ನೀರಿನ ಸಮಸ್ಯೆ ಬಾರದು. ಆದ್ರೆ, ಎಪ್ರಿಲ್ ತಿಂಗಳಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳಿದ್ದು, ಎಚ್ಚೆತ್ತುಕೊಳ್ಳದಿದ್ದರೆ ನೀರಿನ ಹಾಹಾಕಾರ ಉಂಟಾಗಲಿದೆ. ಕೊಳೆವಬಾವಿ ಬಾಡಿಗೆ ಪಡೆದ ಗ್ರಾಮಗಳು: ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸದಂತೆ ತಾಲೂಕು ಪಂಚಾಯತ್ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ತೆಗೆದುಕೊಂಡಿತ್ತು. ಗೆಜ್ಜಲಗಟ್ಟಾ, ಆಮದಿಹಾಳ, ಖೈರವಾಡಗಿ, ಮಾವಿನಭಾವಿ, ಕಾಚಾಪೂರ, ಆನ್ವರಿ, ಹೂನೂರು, ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 21 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದ ಪರಿಣಾಮ ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ಪಡೆದು ಜನರಿಗೆ ನೀರು ಸರಬರಾಜು ಮಾಡಲಾಗಿತು. ಈ ಬಾರಿಯೂ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ಇರುವೆಡೆ ನೀರಿನ ಸೌಕರ್ಯ ಕಲ್ಪಿಸಲು ಆಡಳಿತ ಮುಂದಾಗಿದೆ. ಪಿಡಿಓಗಳೇ ಹೊಣೆ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಪಣಿಸದಂತೆ ಆಯಾ ಗ್ರಾಮ ಪಂಚಾಯತ್ ಆಡಳಿತ ಸೂಕ್ತ ನಿರ್ವಹಣೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಕೇಳಿ ಬಂದರೆ ಅದಕ್ಕೆ ನೇರವಾಗಿ ಪಿಡಿಓಗಳೇ ಹೊಣೆಯಾಗುತ್ತಾರೆ. ಯಾವುದೇ ಕಾರಣಕ್ಕೂ ಜನರಿಗೆ ನೀರಿನ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವ ಹಿಸಬೇಕು. ಸಾರ್ವಜನಿಕರಿಂದ ದೂರುಗಳು ಕೇಳಿ ಬಂದರೆ ಸಂಬಂಧಿಸಿದ ಪಿಡಿಓಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಇತ್ತೀಚೆಗೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದು ತಾಕೀತು ಮಾಡಿದ್ದರು. ಎಂಪಿ ಗದರಿದರೂ, ತೆವಳುತ್ತಿದೆ ಜೆಜೆಎಂ ಕಾಮಗಾರಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಲಜೀವನ ಮಿಷನ್ ಕಾಮಗಾರಿ ತಾಲೂಕು ಸೇರಿ ಮಾನ್ವಿ, ಮಸ್ಕಿ, ಕವಿತಾಳ, ತುರವಿಹಾಳ, ಸಿರವಾರ, ಹಟ್ಟಿ ಸೇರಿ ಜಿಲ್ಲೆಯ 860 ಗ್ರಾಮಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಯೋಜನೆಯಡಿ ನಬಾರ್ಡ್ ಹಾಗೂ ಯುಡಿಡಿ ಅನುದಾನದ ಒಟ್ಟು 2200 ಕೋಟಿ ರೂಪಾಯಿ ಮೊತ್ತದ ಕಾಮಗಾರಿ 2024ರಲ್ಲಿಯೇ ಪೂರ್ತಿಯಾಗಬೇಕಿತ್ತು. ಆದರೆ, ಇದುವರೆಗೂ ಕೆಲಸ ಮುಗಿಯದ ಪರಿಣಾಮ ಇತ್ತೀಚೆಗೆ ಸಂಸದ ಜಿ.ಕುಮಾರ ನಾಯಕ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದಾಗ್ಯೂ, ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಮಂದಗತಿಯಲ್ಲಿ ಕೆಲಸ ಸಾಗಿರುವುದು ವಿಷಾದನೀಯ. ಎನ್ಆರ್ಬಿಸಿ ನೀರು ಆಸರೆ: ಲಿಂಗಸುಗೂರು ಪುರಸಭೆೆ ವ್ಯಾಪ್ತಿಯ 23 ವಾರ್ಡ್ಗಳಿಗೆ ನೀರು ಸರಬರಾಜು ಮಾಡಲು ಕಾಳಾಪೂರ ಗ್ರಾಮದ ಬಳಿ ಇರುವ ಸಂಗ್ರಹ ಕೆರೆಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್ಬಿಸಿ) ನೀರನ್ನು ತುಂಬಿಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಎರಡು-ಮೂರು ದಿನಗಳಿಗೊಮ್ಮೆ ಪಟ್ಟಣ ವ್ಯಾಪ್ತಿಯಲ್ಲಿ ನೀರು ಬಿಡಲಾಗುತ್ತಿದೆ. ಬರುವ ದಿನಗಳಲ್ಲಿ ಕಾಲುವೆಗೆ ನೀರು ಸ್ಥಗಿತವಾದ ಬಳಿಕ ಪಟ್ಟಣದ ಜನರಿಗೆ ನೀರಿನ ಅಭಾವ ಸೃಷ್ಠಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳುವ ಅಗತ್ಯತೆ ಇದೆ. ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ಗ್ರಾಮ ಪಂಚಾಯತ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಧ್ಯಕ್ಕೆ ಮಾರ್ಚ್ ತಿಂಗಳಲ್ಲಿ ಕೊರತೆ ಇರುವುದಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಎಪ್ರಿಲ್ 15ರ ನಂತರ ತೊಂದರೆ ಕಂಡುಬಂದ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. -ಉಮೇಶ ಇಒ, ತಾಪಂ. ಲಿಂಗಸುಗೂರು ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿವ ನೀರಿನ ಕೊರತೆ ಆಗದಂತೆ ಈಗಾಗಲೇ ಕೆರೆಗೆ ನೀರನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲಾಗುವುದು. ಅಗತ್ಯ ಬಿದ್ದರೆ ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. -ನಟರಾಜ್, ಪುರಸಭೆ ಮುಖ್ಯಾಧಿಕಾರಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಆಡಳಿತ ಮುತುವರ್ಜಿ ವಹಿಸಬೇಕು. ಸಾರ್ವಜನಿಕರ ದಾಹ ತಣಿಸಲು ಅಲ್ಲಲ್ಲಿ ನೀರಿನ ಅರವಟ್ಟಿಗೆಗಳನ್ನು ಆರಂಭಿಸಬೇಕು. ಜನರಿಗೆ ತೊಂದರೆಯಾಗದಂತೆಕ್ರಮ ಕೈಗೊಳ್ಳಬೇಕು. -ಆಂಜನೇಯ ಭಂಡಾರಿ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ
ಹಂಪಿಯಲ್ಲಿ ಅತ್ಯಾಧುನಿಕ ಶೌಚಾಲಯ: ಶ್ರೀಮಂತ ಪ್ರವಾಸಿಗರಿಗಷ್ಟೇ ಇಲ್ಲಿ ಶೌಚ ಸಾಧ್ಯ!
‘ದುಡ್ಡು ಇರುವವರು ಬಳಸಲಿ, ಅವರಿಗಾಗಿಯೇ ಈ ವ್ಯವಸ್ಥೆ’ ಎಂದ ಡಿಸಿ
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ದೇಶದ ಕೋಟ್ಯಾಂತರ ಅಭಿಮಾನಿಗಳು ಟಿ 20 IPL 2026 ಪಂದ್ಯಾವಳಿ ಶುರುವಾಗುವುದನ್ನು ಕಾಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ಲಕ್ಷಾಂತರ ಫ್ಯಾನ್ಸ್ ಆರ್ಸಿಬಿ ಮ್ಯಾಚ್ ನೋಡಲು ಕಾತರರಾಗಿದ್ದಾರೆ. ಇಂದಿನಿಂದ (ಮಾ.28) ಐಪಿಎಲ್ಗೆ ಚಾಲನೆ ಸಿಗಲಿದೆ. ಈ ಂಮಧ್ಯೆ ನವಿ ಯುಪಿಐ (Navi UPI) 2026ರ ಟಿ20 ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ಭಟ್ಕಳ: ಪಿಎಸ್ಐ ನವೀನ್ ನಾಯ್ಕ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ
ಭಟ್ಕಳ: ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನವೀನ್ ಎಸ್. ನಾಯ್ಕ ಅವರು 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಚಿನ್ನದ ಪದಕ’ ಕ್ಕೆ ಆಯ್ಕೆಯಾಗಿದ್ದಾರೆ. ಮಾದಕದ್ರವ್ಯ ಜಾಲ ಭೇದನೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಅವರ ಸೇವಾ ದಕ್ಷತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ಪ್ರದಾನ ಮಾಡುತ್ತಿದೆ. ಅವರ ಕರ್ತವ್ಯನಿಷ್ಠೆ ಹಾಗೂ ವೃತ್ತಿಪರ ನೈಪುಣ್ಯಕ್ಕೆ ಸರ್ಕಾರದ ಅಧಿಕೃತ ಮಾನ್ಯತೆ ದೊರೆತಿದೆ. ಪ್ರಸ್ತುತ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ ಎಸ್. ನಾಯ್ಕ ಅವರು ಈ ಹಿಂದೆ ಜಿಲ್ಲೆಯ ಕುಮಟಾ ಮತ್ತು ಗೋಕರ್ಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ಮುತುವರ್ಜಿ ಹಾಗೂ ಅಪರಾಧ ಪತ್ತೆ ಕಾರ್ಯದಲ್ಲಿ ಕೈಗೊಂಡ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ವಿಶೇಷವಾಗಿ ಗುರುತಿಸಿದೆ. ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಅವರ ಚುರುಕಿನ ಕಾರ್ಯವೈಖರಿ ಪೊಲೀಸ್ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕನಕಗಿರಿ: ಪಪಂ ಅಧ್ಯಕ್ಷೆ ಸರಕಾರಿ ಆಸ್ಪತ್ರೆಗೆ ಹಠಾತ್ ಭೇಟಿ; ಪರಿಶೀಲನೆ
ಕೊಪ್ಪಳ: ಕನಕಗಿರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಹಠಾತ್ ಭೇಟಿ ನೀಡಿ ರೋಗಿಗಳ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೈದ್ಯರು ಕರ್ತವ್ಯದ ಮೇಲೆ ಇರಲಿಲ್ಲ; ರೋಗಿಗಳು ತಪಾಸಣೆಗಾಗಿ ಕಾದು ಕುರ್ಚಿಗಳಲ್ಲೇ ಮಲಗಿದ್ದರು ಎಂದು ತನುಶ್ರೀ ಅವರು ಪತ್ರಕರ್ತರಿಗೆ ತಿಳಿಸಿದರು. ಸ್ತ್ರೀರೋಗ ತಜ್ಞೆ ಡಾ. ಈಶ್ವರ ಸವಡಿ ಅವರು ಮಾ.16ರಂದು ಈ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದರೂ, ಇಂದಿನ ತನಕ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ದೂರಿದರು. ಈ ಕುರಿತು ಡಾ. ಸವಡಿ ಅವರಿಗೆ ದೂರವಾಣಿ ಕರೆ ಮಾಡಿದ ತನುಶ್ರೀ ಅವರು, ವರ್ಗಾವಣೆಗೊಂಡು ಹತ್ತು ದಿನಗಳಾದರೂ ಒಂದೇ ದಿನವೂ ಕೆಲಸಕ್ಕೆ ಹಾಜರಾಗಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾ. ಈಶ್ವರ ಸವಡಿ ಅವರು, “ಮೇಲಾಧಿಕಾರಿಗಳ ಸೂಚನೆ ಮೇರೆಗೆ ವಿವಿಧೆಡೆ ನಡೆಯುವ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದೇನೆ. ಅಧಿಕಾರಿಗಳು ಆಸ್ಪತ್ರೆಯಲ್ಲೇ ಉಳಿದು ಕೆಲಸ ಮಾಡಲು ಸೂಚನೆ ನೀಡಿದರೆ ಇಲ್ಲಿಯೇ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ತನುಶ್ರೀ ಅವರು, ಮಹಿಳೆಯರು ಹಾಗೂ ಇತರೆ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಡಾ. ಸವಡಿ ಅವರನ್ನು ಶಿಬಿರಗಳ ಬದಲಾಗಿ ಇಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಸೇವೆ ಮಾಡುವಂತೆ ಆದೇಶ ನೀಡುವಂತೆ ಕೋರಿದರು. ಚುಚ್ಚುಮದ್ದು ತಜ್ಞೆ ಡಾ. ಸುಜಾತ ಅವರು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ; ಆಸ್ಪತ್ರೆಗೆ ಬರುವುದು ಅಪರೂಪವಾಗಿದೆ. ಹೀಗಾದರೆ ಬಡವರ ಆರೋಗ್ಯದ ಗತಿ ಏನು ಎಂದು ತನುಶ್ರೀ ಖಾರವಾಗಿ ಪ್ರಶ್ನಿಸಿದರು. ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕು; ಇಲ್ಲವಾದರೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ಎಚ್ಚರಿಸಿದರು. ಆಸ್ಪತ್ರೆಯಲ್ಲಿ ಸೊಳ್ಳೆಗಳ ಕಾಟವಿದ್ದು, ಸಿಬ್ಬಂದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೆಂಕೋಬ ಭೋವಿ, ರಾಜು ಬೆಲ್ಲಂಕೊಂಡಿಮಠ, ಸಾದಿಕ್ ಪಾಷ ಬೀಡಿ, ಹನುಮೇಶ ವಾಲೇಕಾರ ಇತರರು ಉಪಸ್ಥಿತರಿದ್ದರು. ಶುಕ್ರವಾರ ಆಸ್ಪತ್ರೆಯಲ್ಲಿ ಡಾ. ಶರಣೆಗೌಡ ಹೇರೂರು ಹಾಗೂ ಇತರೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಊಟದ ಸಮಯದಲ್ಲಿ ಭೇಟಿ ನೀಡಿದ ಕಾರಣ ಇತರೆ ಕೆಲಸಗಾರರು ಇರಲಿಲ್ಲ; ಹೀಗಾಗಿ ರೋಗಿಗಳು ವಿಶ್ರಾಂತಿಗಾಗಿ ಕುರ್ಚಿಗಳಲ್ಲೇ ಮಲಗಿದ್ದರು ಎಂದು ಹೆಸರು ಬಯಸದ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರು ‘ವಾರ್ತಾ ಭಾರತಿ’ಗೆ ತಿಳಿಸಿದರು.
ಯಮಸ್ವರೂಪಿಯಾದ ರಾಜ್ಯದ ರಸ್ತೆಗಳು: 6 ವರ್ಷಗಳಲ್ಲಿ 2.39 ಲಕ್ಷ ಅಪಘಾತ, 66,791 ಮಂದಿ ಬಲಿ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಬರುವ ಶಾಲಾ ಕಾಲೇಜುಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಸಮನ್ವಯ ಸಾಧಿಸಿ, ಶಾಲಾ ಪಾಲಿಸಬೇಕಾದ ವಾಹನಗಳು ಮಾರ್ಗಸೂಚಿಗಳನ್ನು ತಪ್ಪದೇ ನಿಯಮಗಳು ಮತ್ತು ಅನುಸರಿಸಲು ಸೂಚಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಹಲವು ಶಾಲೆಗಳಲ್ಲಿ ಬಿ.ಎಂ.ಟಿ.ಸಿ. ವಾಹನಗಳನ್ನು ಶಾಲಾ ಮಕ್ಕಳು ಕರೆದೊಯ್ಯಲು ಶಾಲಾ ಸಂಚಾರ ವಾಹನಗಳನ್ನಾಗಿ ಉಪಯೋಗಿಸುತ್ತಿರುವುದರಿಂದ, ನಿರ್ವಹಣಾ ಕೇಂದ್ರದಲ್ಲಿ ಬಿ.ಎಂ.ಟಿ.ಸಿ. ವಾಹನ ಚಾಲಕರಿಗೆ ತರಬೇತಿಯನ್ನು ಆಯೋಜಿಸಲಾಗಿರುತ್ತದೆ. ಶಾಲಾ ಮಕ್ಕಳನ್ನುಕರೆದೊಯ್ಯುವ ಶಾಲಾ ವಾಹನಗಳ ಚಾಲಕರುಗಳನ್ನು ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ?
Indian Railways: ಭಾರತಿಯ ರೈಲ್ವೆಯಲ್ಲಿ ಪ್ರಯಾಣ ಮಾಡುವವರು ಯಾವುದೆ ರೈಲು ನಿಲ್ದಾಣಕ್ಕೆ ಹೋದರು ಮೊದಲು ಗಮನ ಸೇಳೆಯವ ಸಂಗತಿಯಂದರೆ ವಿವಿಧ ಬಣ್ಣದ ರೈಲುಗಳು. ಭಾರತಿಯ ರೈಲುಗಳು ಕೆಲವು ನೀಲಿ ಬಣ್ಣದಲ್ಲಿ ಇರುತ್ತವೆ, ಕೆಲವು ಬಿಳಿ ಬಣ್ಣಗಳಲ್ಲಿ ಇರುತ್ತವೆ ಕೆಲವು ಕೆಂಪು ಹಾಗೂ ಮರೂನ್ ಬಣ್ಣಗಳಲ್ಲಿ ಇರುತ್ತವೆ. ಈ ರೈಲುಗಳ ಬಣ್ಣಗಳು ನೋಡುವುದಕ್ಕೆ ಬಣ್ಣದಲ್ಲಿ ವ್ಯತ್ಯಾಸಗಳು ಕಾಣಬಹುದು. ಆದರೆ
ಈ ಕಾಲದ ಧುರಂಧರ್ ಮತ್ತು ಹಿಟ್ಲರ್ ಕಾಲದ ಜ್ಯೂ(ಡ್) ಸೂಸ್
ಒಮ್ಮೆ ಹಿಟ್ಲರ್ಗೆ ತನ್ನ ಪರಮಾಪ್ತ ಸಚಿವ ಜೋಸೆಫ್ ಗೋಬೆಲ್ಸ್ ಮೇಲೆ ವಿಪರೀತ ಸಿಟ್ಟು ಬರುತ್ತದೆ. ಈ ಗೋಬೆಲ್ಸ್, ಹಿಟ್ಲರ್ನ ನೆರಳಿನಂಥ ವ್ಯಕ್ತಿ. ‘ಹಿಟ್ಲರ್ ಒಬ್ಬ ಪರಮೋಚ್ಚ ಶಕ್ತಿಶಾಲಿ ನಾಯಕ; ಅವನನ್ನು ಕಂಡರೆ ಇಡೀ ವಿಶ್ವವೇ ನಡುಗುತ್ತದೆ; ಜರ್ಮನ್ನರ ಉದ್ಧಾರ ಮಾಡಿ, ಗತವೈಭವ ಮರಳಿ ತರಲೆಂದೇ ಅವತರಿಸಿದ ಮಹಾಪುರುಷ; ಹಿಟ್ಲರನ ಬೆಂಬಲಕ್ಕೆ ನಿಲ್ಲದಿದ್ದರೆ ಜರ್ಮನ್ ಸರ್ವನಾಶವಾಗುವುದು ಗ್ಯಾರಂಟಿ’ ಎಂಬ ನೆರೇಟಿವಿಟಿಗಳ ಮೂಲಕ ಹಿಟ್ಲರ್ಗೆ larger than life ಇಮೇಜು ಸೃಷ್ಟಿಸಿಕೊಟ್ಟ ಪ್ರಪೋಗಂಡ ಮಿನಿಸ್ಟರ್ ಈ ಗೋಬೆಲ್ಸ್. ಇನ್ನೂ ನಿಖರವಾಗಿ ಹೇಳಬೇಕೆಂದರೆ ಸಿನೆಮಾ ಮೊದಲಾದ ಕಲೆಗಳನ್ನು, ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದ ಸಚಿವ. ಹಿಟ್ಲರ್ ಅರ್ಧ ಹಾಳಾದದ್ದು, ಜರ್ಮನಿ ಸಂಪೂರ್ಣ ನೆಲಕಚ್ಚಿದ್ದು ಈತನಿಂದಲೇ. ಆದರೆ ಹಿಟ್ಲರ್ಗೆ ಈ ಗೋಬೆಲ್ಸ್ ಮೇಲೆ ಎಲ್ಲಿಲ್ಲದ ವಿಶ್ವಾಸ, ಪರಿಪೂರ್ಣ ನಂಬಿಕೆ. ಅಂತಹ ಗೋಬೆಲ್ಸ್ ಮೇಲೆ ಹಿಟ್ಲರ್ಗೆ ಒಮ್ಮೆ ಸಿಟ್ಟು ಬರಲು ಕಾರಣವಿತ್ತು. ಹಿಟ್ಲರ್ನ ಸಂಪೂರ್ಣ ರಾಜಕಾರಣ ನೆಲೆನಿಂತಿದ್ದು ಜನಾಂಗೀಯ ದ್ವೇಷದ ಮೇಲೆ. ಜರ್ಮನ್ ರಾಷ್ಟ್ರೀಯತೆಯ ಹೆಸರಿನಲ್ಲಿ ಯಹೂದಿಗಳನ್ನು (ಜ್ಯೂ) ನಿರ್ನಾಮ ಮಾಡಬೇಕೆನ್ನುವ ಉನ್ಮತ್ತ ರಾಜಕಾರಣ ಅವನದು. ಗೋಬೆಲ್ಸ್ ಕೂಡಾ ಇದೇ ಮನಸ್ಥಿತಿಯವ. ೧೯೩೮ರಲ್ಲಿ ನಡೆದ ಘಟನೆಯೊಂದು ಗೋಬೆಲ್ಸ್ಗೆ ಚಿನ್ನದಂತಹ ಅವಕಾಶವಾಗಿ ಗೋಚರಿಸುತ್ತದೆ. ಪ್ಯಾರಿಸ್ನಲ್ಲಿ ಹದಿನೇಳು ವರ್ಷದ ಪೊಲೆಂಡ್ ಮೂಲದ ಜ್ಯೂ ಹುಡುಗನೊಬ್ಬ ಜರ್ಮನಿಯ ರಾಜತಾಂತ್ರಿಕ ವ್ಯಕ್ತಿ ಅರ್ನೆಸ್ಟ್ ವೋಮ್ ರೋತ್ ಎಂಬಾತನನ್ನು ಕೊಂದುಹಾಕುತ್ತಾನೆ. ಇದನ್ನು ಬಳಸಿಕೊಂಡು ಜ್ಯೂಗಳ ವಿರುದ್ಧ ಪ್ರಚೋಧನಾಕಾರಿಯಾಗಿ ಭಾಷಣ ಮಾಡುವ ಗೋಬೆಲ್ಸ್, ತನ್ನ ನಾಝಿ ಪಡೆಯ ಸ್ಟರ್ಮಬ್ಟ್ಯೀಲುಂಗ್ (ಎಸ್ಎ) ಮತ್ತು ಸ್ಚೂಟ್ಝ್ಸ್ಟಾಫೇಲ್ (ಎಸ್ಎಸ್) ಅರೆಸೇನೆ ಶಾಖಾ ಕಾರ್ಯರ್ತರನ್ನು ರೊಚ್ಚಿಗೆಬ್ಬಿಸುತ್ತಾನೆ. ಪರಿಣಾಮವಾಗಿ ನವೆಂಬರ್ ೯ ಮತ್ತು ೧೦ರಂದು ಇಡೀ ಜರ್ಮನಿಯಾದ್ಯಂತ ಜ್ಯೂಗಳ ಮೇಲೆ ಭೀಕರ ದಾಳಿ ನಡೆಯುತ್ತದೆ. ಇದನ್ನು ನವೆಂಬರ್ ದಾಳಿ ಅಥವಾ ಕ್ರಿಸ್ಟಲ್ ನೈಟ್ ಎಂದು ಕರೆಯಲಾಗುತ್ತದೆ. ‘ಟೈಮ್ಸ್ ಆಫ್ ಲಂಡನ್’ ತರಹದ ಅಂತರ್ರಾಷ್ಟ್ರೀಯ ಪತ್ರಿಕೆಗಳು ಅದನ್ನು ಖಂಡಿಸಿ ವರದಿ ಮಾಡುತ್ತವೆ. ಜಗತ್ತಿನ ಸಾರ್ವಭೌಮನಾಗುವ ಕನಸುಹೊತ್ತು ಕಾರ್ಯೋನ್ಮುಖವಾಗಿದ್ದ, ಅದಕ್ಕಾಗಿ ಜರ್ಮನಿಯಲ್ಲಿ ಇನ್ನೂ ಭೂಮಿಕೆಯನ್ನು ಸಿದ್ಧಪಡಿಸಿಕೊಳ್ಳುವ ಹಂತದಲ್ಲಿದ್ದ ಹಿಟ್ಲರ್ ಮೇಲೆ ಜಾಗತಿಕ ಒತ್ತಡ ಸೃಷ್ಟಿಯಾಗುತ್ತದೆ. ಜೊತೆಗೆ, ಇನ್ನೂ ಸಂಪೂರ್ಣ ಬ್ರೈನ್ವಾಶ್ಗೆ ತುತ್ತಾಗದಿದ್ದ ಬಹುಪಾಲು ಜರ್ಮನ್ನರಿಂದಲೂ ಆ ಮಾರಣಹೋಮಕ್ಕೆ ವಿರೋಧವ್ಯಕ್ತವಾಗುತ್ತದೆ. ಆ ಹಂತದಲ್ಲಿ ಹಿಟ್ಲರ್ಗೆ ಅದು ಬೇಕಾಗಿರಲಿಲ್ಲ. ಸಹಜವಾಗಿಯೇ ಗೋಬೆಲ್ಸ್ ಮೇಲೆ ಸಿಟ್ಟಿಗೇಳುತ್ತಾನೆ. ಗೋಬೆಲ್ಸ್ನನ್ನು ಕರೆಸಿಕೊಂಡು ಹಿಟ್ಲರ್ ಒಂದು ಮಾತು ಹೇಳುತ್ತಾನೆ, ‘‘ಹೀಗೆ ನೇರಾನೇರ ಹಿಂಸಾಚಾರಕ್ಕೆ ಕರೆ ನೀಡುವುದು ನಮಗೆ ಹಿನ್ನಡೆಯಾಗುತ್ತದೆ. ಅದರ ಬದಲು, ಜರ್ಮನಿಯ ವಿರುದ್ಧದ ವಿದೇಶಾಂಗ ಷಡ್ಯಂತ್ರಗಳ ಬಗ್ಗೆ, ಜ್ಯೂಗಳಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜರ್ಮನಿಗರಲ್ಲಿ ಆಕ್ರೋಶ ಹುಟ್ಟಿಸುವಂತಹ ಪರೋಕ್ಷ ಕಂಟೆಂಟ್ಗಳಿಗೆ ಒತ್ತುಕೊಡಿ. ಅದರಿಂದ ಜನರು ತಾವಾಗಿಯೇ ಯಹೂದಿಗಳ ವಿರುದ್ಧ ದ್ವೇಷ ಹುಟ್ಟಿಸಿಕೊಳ್ಳುತ್ತಾರೆ. ಆ ದ್ವೇಷವೇ ನಮಗೆ ಅಡಿಪಾಯವಾಗುತ್ತೆ!.’’ ಅಲ್ಲಿಂದಾಚೆಗೆ ಗೋಬೆಲ್ಸ್ನ ಕಾರ್ಯವೈಖರಿಯೇ ಬದಲಾಯಿತು. ಅಷ್ಟು ದಿನ ಪತ್ರಿಕೆಗಳಲ್ಲಿ ಹಿಟ್ಲರ್ ಪರವಾಗಿ, ಜರ್ಮನ್ ರಾಷ್ಟ್ರೀಯತೆ ಉದ್ದೀಪಿಸುವಂತಹ ನಿಯಂತ್ರಣಕ್ಕೆ ಒತ್ತು ಕೊಡುತ್ತಿದ್ದ ಆತ ಸಿನೆಮಾಗಳ ಮೇಲೆ ದೃಷ್ಟಿ ಹೊರಳಿಸುತ್ತಾನೆ. ಸಿನೆಮಾ ರಂಗದಲ್ಲಿದ್ದ ಜ್ಯೂ ನಟರು, ನಿರ್ಮಾಪಕರು, ನಿರ್ದೇಶಕರುಗಳನ್ನು ಮೂಲೆಗುಂಪು ಮಾಡಿ, ತಮ್ಮ ಅಜೆಂಡಾಕ್ಕೆ ಪೂರಕವಾದ ರಂಗಕರ್ಮಿಗಳಿಗೆ ಪ್ರೋತ್ಸಾಹ ಕೊಡುತ್ತಾನೆ. ತಯಾರಾಗುವ ಪ್ರತಿಯೊಂದು ಸಿನೆಮಾದ ಕಥಾಹಂದರದಲ್ಲಿ ಅಥವಾ ದೃಶ್ಯೀಕರಣದಲ್ಲಿ ಯಹೂದಿ ದ್ವೇಷ ಮಡುಗಟ್ಟುವಂತೆ ತಾನೇ ಖುದ್ದಾಗಿ ಕೂತು ಅವುಗಳನ್ನು ಮಾನಿಟರ್ ಮಾಡುತ್ತಾನೆ. ಥಿಯೇಟರಿನಲ್ಲಿ ಯಾವುದೇ ಸಿನೆಮಾ ಶುರುವಾಗುವುದಕ್ಕೂ ಮೊದಲು ಜರ್ಮನಿ ಸೇನೆಯ ವಿಜಯಗಳನ್ನು ಬಿತ್ತರಿಸುವ, ನಾಝಿ ದಳಗಳ ಶಿಸ್ತು-ಅಗಾಧತೆಯನ್ನು ಸಾರುವ, ಹಿಟ್ಲರ್ನ ನಾಯಕತ್ವ ಕೊಂಡಾಡುವ ಚಿಕ್ಕ ನ್ಯೂಸ್ರೀಲ್ಗಳ ಪ್ರದರ್ಶನ ಕಡ್ಡಾಯಗೊಳಿಸುತ್ತಾನೆ. ಈ ಚಿತ್ರಸರಣಿಗಳಿಗೆ ‘ಡೀ ಡ್ಯೂಟ್ಸ್ಕೆ ವೋಶೆನ್ಶಾವ್’ (Die Deutsche Wochenschau) ಎಂದು ಕರೆಯಲಾಗುತ್ತಿತ್ತು. ನಾಝಿ ಅವಧಿಯಲ್ಲಿ ಜರ್ಮನಿಯಿಂದ ಒಟ್ಟು 1,100 ಸಿನೆಮಾಗಳು (ಡಾಕ್ಯುಮೆಂಟರಿಯೂ ಒಳಗೊಂಡಂತೆ) ತಯಾರಾದವು. ಗೋಬೆಲ್ಸ್ ಈ ಪ್ರತಿಯೊಂದು ಸಿನೆಮಾವನ್ನು ಖುದ್ದು ಕೂತು, ವೀಕ್ಷಿಸಿ, ತಮಗೆ ಬೇಕಾದಂತೆ ಬದಲಾವಣೆಗಳನ್ನು ಸೂಚಿಸುತ್ತಿದ್ದ ಎನ್ನುತ್ತಾರೆ ಇತಿಹಾಸಕಾರ ರಿಚರ್ಡ್ ಲೇವಿಸ್. ಆದರೆ ಈ ಎಲ್ಲಾ ಸಿನೆಮಾಗಳಲ್ಲೂ ನೇರವಾಗಿ ಯಹೂದಿ ದ್ವೇಷ ಇರುತ್ತಿರಲಿಲ್ಲ. ಕೆಲವೊಂದು ಸಿನೆಮಾಗಳು ಜನರಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸಿದರೆ, ಕೆಲವು ಸಿನೆಮಾಗಳು ಜರ್ಮನ್ ಸಂತತಿಯ ಶ್ರೇಷ್ಠತೆಯನ್ನು ಸಾರುತ್ತಿದ್ದವು. ಮತ್ತೆ ಕೆಲವು, ವಿದೇಶಿಗರ ದಾಳಿಯ ಕುರಿತು ಜನರನ್ನು ಪ್ರಚೋದಿಸುತ್ತಿದ್ದವು. ಅವುಗಳಲ್ಲೆಲ್ಲ ೧೯೪೦ರಲ್ಲಿ ಬಿಡುಗಡೆಯಾದ ಎರಡು ಸಿನೆಮಾಗಳು ಇತಿಹಾಸದ ತಿರುಚುವಿಕೆಯ ಮೂಲಕ ಹಸಿಹಸಿ ಹಿಂಸೆ, ಯಹೂದಿ ದ್ವೇಷವನ್ನು ಬಿತ್ತುವಲ್ಲಿ ಪ್ರಧಾನ ಪಾತ್ರ ವಹಿಸಿದವು. ಒಂದು ‘ಎಟರ್ನಲ್ ಜ್ಯೂ’; ಮತ್ತೊಂದು, ‘ಜ್ಯೂಡ್ ಸೂಸ್’! ಇವತ್ತು ಭಾರತದಲ್ಲಿ ಏನು ನಡೆಯುತ್ತಿದೆಯೋ, ಅದ್ಯಾವುದೂ ಹೊಸದಲ್ಲ. ಹಿಟ್ಲರ್ ಕಾಲದ ಪುನರಾವರ್ತನೆಗಳಷ್ಟೆ. ಅದೇ ಸುಳ್ಳುಗಳು, ಅದೇ ಜನಾಂಗೀಯ ದ್ವೇಷ, ಅದೇ ಹುಸಿ ರಾಷ್ಟ್ರ ವಾದ, ಅದೇ ಒಣ ವಿಜೃಂಭಿಸುವಿಕೆ, ಅದೇ ವೈಫಲ್ಯಗಳು, ಅದೇ ಉನ್ಮಾದ, ಅದೇ ಶ್ರೇಷ್ಠವಂತಿಕೆಯ ಅಹಮ್ಮು ಕೊನೆಗೆ ಕಾದಿರುವುದು ಕೂಡಾ ಅದೇ ಅದಃಪತನ! ಇಲ್ಲಿ ‘ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’, ‘ಧುರಂಧರ್’ ಮೊದಲಾದ ಸಿನೆಮಾಗಳ ಮೂಲಕ ಏನೆಲ್ಲಾ ಕಸರತ್ತುಗಳನ್ನು ಮಾಡಲಾಗುತ್ತಿದೆಯೋ ಅದನ್ನು ಹಿಟ್ಲರ್-ಗೋಬೆಲ್ಸ್ ಎಂಭತ್ತು ವರ್ಷಗಳ ಹಿಂದೆ ಮಾಡಲೆತ್ನಿಸಿ ವಿಫಲರಾದಂತಹವರು. ಗೋಬೆಲ್ಸ್ ನ ಕಣ್ಗಾವಲಿನಲ್ಲಿ ತಯಾರಾದ ಸಿನೆಮಾಗಳು ಹಿಟ್ಲರ್ನನ್ನು ಜಗತ್ ಪರಾಕ್ರಮಿ, ವಿಶ್ವವಿಜಯಿ ಎಂಬಂತೆ ಬಿಂಬಿಸಿದರೂ ಕೊನೆಗೆ ಹಿಟ್ಲರ್ ಅಂಜುಬುರುಕನಂತೆ ಆತ್ಮಹತ್ಯೆ ಮಾಡಿಕೊಂಡು ತಾನೊಬ್ಬ ರಣಹೇಡಿ ಎಂಬುದನ್ನು ಸಾಬೀತು ಮಾಡಿದ್ದ. ಸತ್ಯವನ್ನು ಕಳೆದುಕೊಂಡ ಸಿನೆಮಾಗಳು ನಿಮಗೆ ಇಮೇಜನ್ನು ಸೃಷ್ಟಿಸಿಕೊಡಬಲ್ಲವು; ಆದರೆ ನಿಮಗೆ ಕಾದಿರುವ ಅಂತ್ಯವನ್ನು ಬದಲಿಸಲಾರವು. ಯಾಕೆಂದರೆ ಆ ಅಂತ್ಯ ನಿಮ್ಮ ಕೃತ್ಯಗಳ ಒಟ್ಟು ಫಲಿತಾಂಶವಾಗಿರುತ್ತದೆಯೇ ಹೊರತು, ರೀಲಿನಲ್ಲಿ ಸುತ್ತಿದ ಸಿನೆಮಾಗಳಿಗೂ ಅದಕ್ಕೂ ಯಾವ ಸಂಬಂಧವೂ ಇರದು. ಹಿಟ್ಲರ್ ಮತ್ತು ಗೋಬೆಲ್ಸ್ ಸಿನೆಮಾವನ್ನು ಎಷ್ಟರಮಟ್ಟಿಗೆ ಅವಲಂಬಿಸಿದ್ದರು ಮತ್ತು ಎಷ್ಟೆಲ್ಲ ಕಠಿಣವಾಗಿ ನಿಯಂತ್ರಿಸುತ್ತಿದ್ದರು ಎಂಬುದಕ್ಕೆ ‘ಜ್ಯೂ(ಡ್) ಸೂಸ್’ ಸಿನೆಮಾ ಒಂದು classical example. ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಜೋಸೆಫ್ ಸೂಸ್ ಓಪೆನ್ಹೇಮರ್ ಎಂಬ ಜ್ಯೂ ಪ್ರಭಾವಿ ವ್ಯಕ್ತಿಯ ಬದುಕನ್ನು ಆಧರಿಸಿದ ಕಥೆ. ಡ್ಯೂಕ್ ಕಾರ್ಲ್ ಅಲೆಕ್ಸಾಂಡರ್ ಆಳ್ವಿಕೆಯಲ್ಲಿ ಜರ್ಮನಿಗೆ ಬರುವ ಈತ, ತನ್ನ ಶ್ರೀಮಂತಿಕೆ ಮತ್ತು ಬುದ್ಧಿವಂತಿಕೆಯಿಂದ ಡ್ಯೂಕ್ನನ್ನು ತನ್ನ ಕೈವಶ ಮಾಡಿಕೊಂಡು, ರಾಜನ ಆಸ್ಥಾನದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಾನೆ. ವಿಪರೀತ ತೆರಿಗೆಗಳನ್ನು ಹಾಕಿ, ತನ್ನ ವಿರುದ್ಧ ಪ್ರತಿಭಟಿಸಿದ ಸ್ಥಳೀಯರನ್ನು ಗಲ್ಲಿಗೇರಿಸಿ ದಬ್ಬಾಳಿಕೆ ನಡೆಸುತ್ತಾನೆ. ಡ್ಯೂಕ್ ಸತ್ತ ನಂತರ ಜೋಸೆಫ್ ಸೂಸ್ನನ್ನು ಬಂಧಿಸಿ, ವಿಚಾರಣೆ ನಡೆಸಿ, 1738ರಲ್ಲಿ ಗೆಲ್ಲಿಗೇರಿಸಲಾಗುತ್ತದೆ. ಈ ಬಗ್ಗೆ ಜರ್ಮನಿಯಲ್ಲಿ ಸಾಕಷ್ಟು ಚರಿತ್ರೆಯ ಆಕರಗಳಿವೆ. ಕೆಲವು ಇವನನ್ನು ಖಳನಾಗಿ ಚಿತ್ರಿಸಿದರೆ, ಮತ್ತೆ ಕೆಲವು ಕೃತಿಗಳಲ್ಲಿ ಪಕ್ಷಪಾತೀಯ ವಿಚಾರಣೆಯ ಮೂಲಕ ಗಲ್ಲಿಗೇರಿಸಲ್ಪಟ್ಟವನೆಂಬ ಸಿಂಪಥಿಯ ಅಂತ್ಯವನ್ನು ನೀಡಲಾಗಿದೆ. 1925ರಲ್ಲಿ ಫ್ಯೂಟ್ ವ್ಯಾಂಗರ್ ಎನ್ನುವ ಜ್ಯೂ ಲೇಖಕನೊಬ್ಬ ಈತನ ಜೀವನ ಚರಿತ್ರೆಯನ್ನು ‘ಜ್ಯೂಡ್ ಸೂಸ್’ ಎಂಬ ಕಾದಂಬರಿ ಬರೆದ. ಆತನೂ ಜ್ಯೂ ಆಗಿದ್ದರಿಂದ, ಜೋಸೆಫ್ ಸೂಸ್ನ ಕೆಟ್ಟತನಗಳನ್ನು ಉಲ್ಲೇಖಿಸುತ್ತಲೇ ನ್ಯಾಯ ವಿಚಾರಣೆ ಯಲ್ಲಿ ಯಾವುದೇ ಆಮಿಷಗಳಿಗೆ ರಾಜಿಯಾಗದೆ ಗಲ್ಲಿಗೇರಿದ ದಿಟ್ಟತೆಯನ್ನೂ ಕೊಂಡಾಡಿದ್ದ. 1934ರಲ್ಲಿ ಜರ್ಮನ್ ಮೂಲದ ಅಮೆರಿಕನ್ ನಿರ್ದೇಶಕ ಲೋಥಾರ್ ಮೆಂಡೀಸ್, ಆ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನೆಮಾ ಮಾಡುತ್ತಾನೆ. ಸಹಜವಾಗಿ ಜ್ಯೂ ಜೋಸೆಫ್ ಬಗ್ಗೆ ಸಿಂಪಥಿ ಬರುವಂತೆ ಸಿನೆಮಾ ಮೂಡಿಬಂದಿರುತ್ತದೆ. ಆದರೆ ಆ ವೇಳೆಗಾಗಲೇ ಜ್ಯೂಗಳ ವಿರುದ್ಧ ಜನಾಂಗೀಯ ದ್ವೇಷವನ್ನು ಉತ್ಪಾದಿಸುತ್ತಿದ್ದ ಹಿಟ್ಲರ್ಗೆ ಜ್ಯೂಗಳೆಡೆಗಿನ ಈ ಸಿಂಪಥಿ ದೊಡ್ಡ ಹಿನ್ನಡೆಯಾಯಿತು. ಅದೇ ವೇಳೆಗೆ, ಲುಡ್ವಿಕ್ ಮೆಡ್ಝ್ಗೇರ್ ಎಂಬ ನಾಝಿ ಚಿತ್ರಕಥೆಗಾರ ಜೋಸೆಫ್ ಸೂಸ್ ಅನ್ನು ಸಂಪೂರ್ಣ ವಿಲನ್ ಆಗಿ ತೋರಿಸುವ, ಜರ್ಮನ್ನರ ಮೇಲೆ ದಬ್ಬಾಳಿಕೆ ಮಾಡಿದ ವ್ಯಕ್ತಿಯನ್ನಾಗಿ ಬಿಂಬಿಸುವ ರೀತಿಯಲ್ಲಿ ಕಥೆ ಬರೆದುಕೊಂಡು ನಿರ್ಮಾಪಕರ ಬಳಿ ಅಲೆದಾಡುತ್ತಿದ್ದ. ಸಿನೆಮಾ ಮಾಡಲು ಯಾರೂ ಮುಂದೆ ಬಂದಿರಲಿಲ್ಲ. ಯಾವಾಗ ಹಿಟ್ಲರ್, ಸುಪ್ತ ಪ್ರಾಕಾರಗಳ ಮೂಲಕ ಜ್ಯೂವಿರೋಧಿ ಮನಸ್ಥಿತಿ ಹುಟ್ಟುಹಾಕುವಂತೆ ಗೋಬೆಲ್ಸ್ಗೆ ಸಲಹೆ ನೀಡಿದ್ದು ಲುಡ್ವಿಕ್ಗೆ ತಿಳಿಯುತ್ತೋ, ನೇರವಾಗಿ ಹೋಗಿ ಗೋಬೆಲ್ಸ್ ಭೇಟಿಯಾಗಿ ತನ್ನ ಕಥೆ ವಿವರಿಸುತ್ತಾನೆ. ಆ ಕಥೆಯಲ್ಲಿರುವ ಜ್ಯೂದ್ವೇಷಕ್ಕೆ ಗೋಬೆಲ್ಸ್ ಮಾರುಹೋಗಿ, ಗ್ರೀನ್ ಸಿಗ್ನಲ್ ನೀಡುತ್ತಾನೆ. ವೀಟ್ ಹರ್ಲಾನ್ ಎಂಬ ಬಾಲಬಡುಕ ಕಸುಬುದಾರ ನಿರ್ದೇಶಕನ ಕೈಗೆ ನಿರ್ಮಾಣದ ಹೊಣೆ ಒಪ್ಪಿಸುವ ಗೋಬೆಲ್ಸ್, ಯಾವ್ಯಾವ ಪಾತ್ರಕ್ಕೆ ಯಾವ ನಟನಟಿಯರನ್ನು ಆಯ್ಕೆ ಮಾಡಬೇಕು, ಜ್ಯೂ ಪಾತ್ರಧಾರಿಗಳ ವೇಷಭೂಷಣ ಎಷ್ಟು ಖಳವಾಗಿರಬೇಕು, ಜರ್ಮನ್ನರ ವೇಷಭೂಷಣ ಎಷ್ಟು ಸಕಾರಾತ್ಮಕವಾಗಿರಬೇಕು, ಕಥೆಯಲ್ಲಿ ಏನೇನು ಬದಲಾಗಬೇಕು, ಯಾವ ದೃಶ್ಯ-ಯಾವ ಕ್ಯಾಮರಾ ಆಂಗಲ್ನಿಂದ ಹೇಗೆ ಮೂಡಿಬರಬೇಕು, ಕ್ರೌರ್ಯ ಹೇಗೆ ವಿಜೃಂಭಿಸಬೇಕು ಎಂಬುದನ್ನೆಲ್ಲ ಡಿಕ್ಟೇಟ್ ಮಾಡುತ್ತಾನೆ. ಗೋಬೆಲ್ಸ್ ಈ ಸಿನೆಮಾವನ್ನು ಎಷ್ಟು ನಿಕಟವಾಗಿ ನಿಯಂತ್ರಿಸುತ್ತಾನೆಂದರೆ, ಲುಡ್ವಿಕ್ ಮತ್ತು ಹರ್ಲಾನ್ ಚಿತ್ರಕಥೆ ತಯಾರಿಸಿಕೊಂಡು ಗೋಬೆಲ್ಸ್ ಬಳಿ ಹೋದಾಗ, ಆತ ಸಾಕಷ್ಟು ಕಡೆ ಕತೆಯನ್ನೇ ತಿದ್ದುತ್ತಾನೆ. ಜ್ಯೂಗಳ ಕ್ರೌರ್ಯತುಂಬಿದ ಆಚರಣೆಗಳನ್ನು ಸಿನೆಮಾದಲ್ಲಿ ತುರುಕುವಂತೆ ಆದೇಶಿಸುತ್ತಾನೆ. ಅಷ್ಟೂ ಬದಲಾವಣೆಗಳ ನಂತರ ಸಿನೆಮಾ ಚಿತ್ರೀಕರಣ ಮುಗಿಸಿ, ಗೋಬೆಲ್ಸ್ಗೆ ಪ್ರೀಮಿಯರ್ ಶೋ ತೋರಿಸುತ್ತಾರೆ. ಅದನ್ನು ನೋಡಿ, ಗೋಬೆಲ್ಸ್ ಡೈರೆಕ್ಟರ್ ಹರ್ಲಾನ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾನೆ. ‘‘ನಮಗೆ ಶಾಂತಿಕಾಲದ ಸಿನೆಮಾ ಬೇಕಾಗಿಲ್ಲ, ರಾಜಕೀಯ ಬೆರೆತ ಸಿನೆಮಾ ಬೇಕು’’ ಎಂದು ಸ್ಪಷ್ಟವಾಗಿ ಹೇಳುವ ಗೋಬೆಲ್ಸ್, ಜನರನ್ನು ರೊಚ್ಚಿಗೆಬ್ಬಿಸುವಂತೆ ದೃಶ್ಯಗಳನ್ನು ಮತ್ತೆ ಚಿತ್ರೀಕರಿಸಲು ಕಳಿಸುತ್ತಾನೆ! ಅಷ್ಟೆಲ್ಲ ಮುತುವರ್ಜಿಯಿಂದ, ದುರುದ್ದೇಶದಿಂದ ನಿರ್ಮಿಸಿದ ಸಿನೆಮಾ ನೆಲಕಚ್ಚಲು ಬಿಡುತ್ತಾರೆಯೇ? ಖಂಡಿತ ಇಲ್ಲ. 1940ರ ಸೆಪ್ಟಂಬರ್ 8ರಂದು ಸಿನೆಮಾ ಬಿಡುಗಡೆಯಾಗುತ್ತದೆ. ಅಷ್ಟರಲ್ಲಾಗಲೇ ಅದಕ್ಕೆ ಸಿಕ್ಕಾಪಟ್ಟೆ ಪ್ರಚಾರ ನೀಡಲಾಗಿತ್ತು. ಪ್ರತಿಯೊಬ್ಬ ಪೊಲೀಸರು, ಸರಕಾರಿ ಸಿಬ್ಬಂದಿ ಕಡ್ಡಾಯವಾಗಿ ಆ ಸಿನೆಮಾ ನೋಡಬೇಕು ಎಂಬ ಆದೇಶ ಹೊರಡಿಸಿದ್ದರು. ಅಲ್ಲದೇ ತಮ್ಮ ಎಸ್.ಎ., ಎಸ್.ಎಸ್. ಶಾಖಾ ಕಾರ್ಯಕರ್ತರು ಸಿನೆಮಾ ನೋಡುವಂತೆ ಪ್ರಚಾರ ಮಾಡಿದರು. ಜರ್ಮನ್ ಶ್ರೇಷ್ಠ ಸಂಸ್ಕೃತಿಯನ್ನು ಜ್ಯೂಗಳು ಹೇಗೆ ಆಕ್ರಮಣ ಮಾಡಿ ನಾಶ ಮಾಡಿದರು, ಸ್ಥಳೀಯರ ಮೇಲೆ ಹೇಗೆಲ್ಲಾ ದಬ್ಬಾಳಿಕೆ ಮಾಡಿದರು ಅನ್ನುವುದನ್ನು ಸಿನೆಮಾ ಅನಾವರಣ ಮಾಡುತ್ತದೆ ಎಂದು ಹುಯಿಲೆಬ್ಬಿಸಿದರು. ನಿರೀಕ್ಷಿಸಿದಂತೆಯೇ ಆಯಿತು. ನಾಝಿ ಅವಧಿಯ ಜರ್ಮನ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಬಾಕ್ಸ್ ಆಫೀಸ್ನಲ್ಲಿ ಅಪಾರ ಗಳಿಕೆ ಮಾಡಿದ ಸಿನೆಮಾ ಎಂಬ ಹೆಗ್ಗಳಿಕೆಗೆ ಜ್ಯೂಡ್ ಸೂಸ್ ಪಾತ್ರವಾಯಿತು. ಜೊತೆಗೆ, ಜರ್ಮನ್ನರಲ್ಲಿ ಜ್ಯೂಗಳ ಮೇಲಿನ ದ್ವೇಷವನ್ನು ಹೆಚ್ಚಿಸಿತು, ಹಿಟ್ಲರ್ನನ್ನು ಅದ್ವಿತೀಯ ನಾಯಕನೆಂದು ಜನ ನಂಬುವಂತೆ ಮಾಡಿತು! ಆಸ್ಕವಿಡ್ಜ್ ಎಂಬಲ್ಲಿನ ಕಾನ್ಸಂಟ್ರೇಷನ್ ಕ್ಯಾಂಪ್ನಲ್ಲಿ ನಾಝಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸ್ಟೀಫನ್ ಬೆರೇಡ್ಜ್ಕಿ ಹೇಳು ವಂತೆ, ಆ ಸಿನೆಮಾ ನೋಡಿ ಬಂದ ಮಾರನೇ ದಿನ ಅವರೆಲ್ಲ ಕ್ಯಾಂಪಿನಲ್ಲಿ ಬಂಧಿಯಾಗಿದ್ದ ಜ್ಯೂಗಳ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದರಂತೆ. ಬಹಳಷ್ಟು ಕಡೆ, ಸಿನೆಮಾ ಥಿಯೇಟರಿನಿಂದ ಹೊರಬಂದ ಯುವಕರು ಜ್ಯೂಗಳ ನೆಲೆ, ವ್ಯಾಪಾರ ಸ್ಥಳಗಳ ಮೇಲೆ ಹಲ್ಲೆ ನಡೆಸಿದ ವರದಿಗಳಾಗಿದ್ದವು. ಇದು ಜರ್ಮನಿಯಲ್ಲಿ ಸಾಮಾಜಿಕ ಉನ್ಮಾದ ಹೆಚ್ಚಿಸಿತು. ಜ್ಯೂಗಳ ಮಾರಣಹೋಮಕ್ಕೆ ಜರ್ಮನ್ನರ ಸಮ್ಮತಿಯನ್ನು ಉತ್ಪಾದಿಸಿತು. ಹಿಟ್ಲರ್ ಮತ್ತಷ್ಟು ಉನ್ಮತ್ತನಾದ. ಜಗತ್ತಿನ ಮೇಲೆ ಎರಡನೇ ಮಹಾಯುದ್ಧದ ಕಾರ್ಮೋಡ ಕವಿಯುವಂತೆ ಮಾಡುವಲ್ಲಿ ಈ ಸಿನೆಮಾ ಕೂಡಾ ಪರೋಕ್ಷ ಕಾಣಿಕೆ ನೀಡಿತು. ಎರಡನೇ ಮಹಾಯುದ್ಧ ಮುಗಿದು, ಹಿಟ್ಲರ್ ಅಂತ್ಯದ ನಂತರ ವಿಚಾರಣೆಗಳು ಶುರುವಾದವು. ನಾಝಿಗಳ ಪರವಾಗಿ ಇಂತಹ ಜನಾಂಗೀಯ ದ್ವೇಷದ ಸಿನೆಮಾ ಮಾಡಿದ್ದ ನಟರು, ನಿರ್ಮಾಪಕರು, ನಿರ್ದೇಶಕರೂ ಕಟಕಟಕೆಯಲ್ಲಿ ವಿಚಾರಣೆ ಎದುರಿಸಬೇಕಾಯಿತು. ಜ್ಯೂಡ್ ಸೂಸ್ ನಿರ್ದೇಶಕ ಹರ್ಲಾನ್ ಕೂಡಾ ಅವರಲ್ಲಿ ಒಬ್ಬ. ಆದರೆ, ವಿಚಾರಣೆಯ ಸಂದರ್ಭದಲ್ಲಿ, ‘‘ನನ್ನ ಮೂಲ ಕಥೆಯಲ್ಲಿ ಇಷ್ಟೆಲ್ಲ ಅನಗತ್ಯ ಯಹೂದಿ ದ್ವೇಷ ಇರಲಿಲ್ಲ. ಆದರೆ ಗೋಬೆಲ್ಸ್ ನಮ್ಮನ್ನೆಲ್ಲ ಬೆದರಿಸಿ, ಒತ್ತಡ ತಂದು ಇಡೀ ಕಥೆಯನ್ನು ತನಗಿಷ್ಟ ಬಂದಂತೆ ಬದಲಾಯಿಸಿದ. ವಿರೋಧಿಸುವ ಸ್ವಾತಂತ್ರ್ಯವಿಲ್ಲದೆ ನಾವೆಲ್ಲ ಸಿನೆಮಾ ಮಾಡಬೇಕಾಯಿತು’’ ಅಂತ ಹೇಳಿ ನುಣುಚಿಕೊಂಡ. ಇಂತಹ ಬಹುತೇಕ ಸಿನೆಮಾರಂಗದವರು ಗೋಬೆಲ್ಸ್ ಮೇಲೆ ತಪ್ಪು ಹೊರಿಸಿ ಬಚಾವಾದರು. ಹಿಟ್ಲರ್, ಗೋಬೆಲ್ಸ್ನಂತವರ ರಕ್ತದಾಹದ ಅರಿವಿದ್ದೂ ಅವರ ಪಾದದಡಿಗೆ ತಮ್ಮ ವೃತ್ತಿಯನ್ನು ಅಡವಿಟ್ಟ ಅವರೆಲ್ಲರೂ ವೃತ್ತಿದ್ರೋಹಿಗಳು, ಜನದ್ರೋಹಿಗಳು, ಸತ್ಯದ್ರೋಹಿಗಳು ಎಂಬುದು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುವ ಸತ್ಯ! ಜರ್ಮನಿಯ ಆ ನಾಝಿ ಕಾರ್ಯತಂತ್ರಗಳೇ ಇವತ್ತು ಇಲ್ಲಿ ನಕಲು ಗೊಳ್ಳುತ್ತಿವೆ. ಇವ್ಯಾವುವೂ ಹೊಸದಲ್ಲ. ಜೊತೆಗೆ, ಇವು ಯಶಸ್ವಿ ತಂತ್ರಗಳೂ ಅಲ್ಲ. ಹಿಟ್ಲರ್ ಕಾಲದಲ್ಲೇ ಅವುಗಳ ವೈಫಲ್ಯ ದೃಢಪಟ್ಟಿದೆ. ಧುರಂಧರ್ ಕೂಡಾ, ಈಗ ವಿಜೃಂಭಿಸಿ ಮುಂದೊಂದು ದಿನ ಕಟಕಟೆ ಏರಿ, ಅಪರಾಧಿ ಸ್ಥಾನದಲ್ಲಿ ನಿಲ್ಲಬೇ ಕಾಗಿ ಬಂದರೂ ಅಚ್ಚರಿಯಿಲ್ಲ, ಜ್ಯೂಡ್ ಸೂಸ್ ಸಿನೆಮಾದಂತೆ!! ಅಂದಹಾಗೆ, ಕೇರಳ ಸ್ಟೋರಿ-2 ಸಿನೆಮಾ ಹೀನಾಯವಾಗಿ ಸೋತು, ನಗೆಪಾಟಲಿಗೆ ಈಡಾಗದೆ ಇದ್ದಿದ್ದರೆ ಅವರು ಧುರಂಧರ್-2 ಸಿನೆಮಾಕ್ಕೆ ಇಷ್ಟು ಅಬ್ಬರದ ಪ್ರಚಾರ ಕೊಟ್ಟು, ಸೆಲೆಬ್ರಿಟಿಗಳಿಂದ ಕ್ಯಾನ್ವಾಸ್ ಮಾಡಿಸಿ, ಮೀಡಿಯಾಗಳಲ್ಲಿ ಮಿಂಚುವಂತೆ ಮಾಡುತ್ತಿರಲಿಲ್ಲ. ಯಾವಾಗ ಕೇರಳ ಸ್ಟೋರಿ-2 ಎಂಬ ತಮ್ಮ ಪ್ರಪೋಗಂಡ ಮೂವಿಯನ್ನು ಜನ ಕ್ಯಾಕರಿಸಿ ಧಿಕ್ಕರಿಸಿ ದರೋ, ಆಗ ಧುರಂಧರ್-2 ಸಿನೆಮಾಕ್ಕೂ ಅದೇ ದುರ್ಗತಿ ಎದುರಾದರೆ ಏನು ಗತಿ ಎಂಬ ಭಯ ಅವರನ್ನು ಆವರಿಸಿತು. ಯಾಕೆಂದರೆ, ಹಾಗೇನಾದರೂ ಆದಲ್ಲಿ ಜನ ಇಂತಹ ಸಿನೆಮಾಗಳ ಮೇಲೆ ತಿರಸ್ಕಾರ ಬೆಳೆಸಿಕೊಳ್ಳಲಿದ್ದಾರೆ ಮತ್ತು ಸಿನೆಮಾಗಳನ್ನು ತಮ್ಮ ದಾಳವಾಗಿ ಬಳಸಿಕೊಳ್ಳುವ ಅಸ್ತ್ರವೇ ಕೈತಪ್ಪಿ ಹೋಗಲಿದೆ ಎಂಬುದು ಮನವರಿಕೆಯಾಗಿತ್ತು. ಹಾಗಾಗಿ ಶತಾಯಗತಾಯ ಅದನ್ನು ಗೆಲ್ಲಿಸಲೇಬೇಕೆಂದು ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾರೆ. ಗೋಬೆಲ್ಸ್ನ ಪರಿಶ್ರಮ, ಪ್ರಚಾರದಿಂದಾಗಿ ಹಿಟ್ಲರನ ಜ್ಯೂಡ್ ಸೂಸ್ ಸಿನೆಮಾ ಕೂಡಾ ಗೆದ್ದಿತ್ತು, ಆದರೆ ಕೊನೆಗೆ ಏನಾಯಿತು?
ಬಿಜೆಪಿ ಭದ್ರಕೋಟೆ ಬಾಗಲಕೋಟೆ ಅಲುಗಾಡಿಸಿದ್ದೇ ಮೇಟಿ ; 41 ವರ್ಷಗಳ ಬಳಿಕ ಕಾಂಗ್ರೆಸ್ ಬಾವುಟ ಹಾರಿದ ರೋಚಕ ಫೈಟ್!
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 2013ರ ಚುನಾವಣೆ ಒಂದು ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಸುಮಾರು ಒಂದೂವರೆ ದಶಕಗಳ ಕಾಲ ಭಾರತೀಯ ಜನತಾ ಪಕ್ಷದ ಅಜೇಯ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದಿ. ಎಚ್.ವೈ. ಮೇಟಿ ಅವರು ಐತಿಹಾಸಿಕ ವಿಜಯ ಸಾಧಿಸುವ ಮೂಲಕ ಹೊಸ ಭಾಷ್ಯ ಬರೆದಿದ್ದರು.
ತರಗತಿಯಲ್ಲಿನ ದ್ವೇಷವು ‘ಸರ್ವ ಜನನಾಂಗದ ಶಾಂತಿಯ ತೋಟ’ದ ಮೇಲಿನ ನೇರ ದಾಳಿ: SIO ಖಂಡನೆ, ಕ್ರಮಕ್ಕೆ ಆಗ್ರಹ
ಬೆಂಗಳೂರು, ಮಾ. 28: ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕ ಡಾ.ಮುರಳೀಧರ್ ದೇಶಪಾಂಡೆ ಅವರು ವಿದ್ಯಾರ್ಥಿಯ ವಿರುದ್ಧ ಆಕ್ರಮಣಕಾರಿ ಹಾಗೂ ಕೋಮುವಾದಿ ಹೇಳಿಕೆಗಳನ್ನು ನೀಡಿರುವ ಆರೋಪ ಕೇಳಿಬಂದಿದ್ದು, ಘಟನೆಗೆ SIO ಆಕ್ರೋಶ ವ್ಯಕ್ತಪಡಿಸಿದೆ. ತರಗತಿಯಲ್ಲಿನ ದ್ವೇಷವು ‘ಸರ್ವ ಜನನಾಂಗದ ಶಾಂತಿಯ ತೋಟ’ದ ಮೇಲಿನ ನೇರ ದಾಳಿ ಎಂದು ಅದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ (SIO) ಕರ್ನಾಟಕ, ತರಗತಿ ಕೊಠಡಿಗಳು ಗೌರವ, ವಿಮರ್ಶಾತ್ಮಕ ಚಿಂತನೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಬೆಳೆಸುವ ಸ್ಥಳಗಳಾಗಿರಬೇಕು ಎಂದು ತಿಳಿಸಿದೆ. ಅಧಿಕಾರದ ಸ್ಥಾನದಲ್ಲಿರುವವರು ಇಂತಹ ನಡವಳಿಕೆಯಲ್ಲಿ ತೊಡಗುವುದು ವೃತ್ತಿಪರ ನೀತಿ ಮತ್ತು ಉನ್ನತ ಸ್ಥಾನದಲ್ಲಿರುವವರ ಜವಾಬ್ದಾರಿಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ಇಂತಹ ಹೇಳಿಕೆಗಳು ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ ದುಷ್ಪರಿಣಾಮ ಬೀರುವುದಲ್ಲದೆ, ಕ್ಯಾಂಪಸ್ ಗಳಲ್ಲಿ ಭಯ ಹಾಗೂ ವಿಭಜನೆಯ ವಾತಾವರಣವನ್ನು ಉಂಟುಮಾಡುತ್ತವೆ ಎಂದು ಸಂಘಟನೆ ಹೇಳಿದೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ SIO, ಸಂಬಂಧಪಟ್ಟ ಪ್ರಾಧ್ಯಾಪಕರ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ವಜಾಗೊಳಿಸುವುದು ಸೇರಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದೆ. ರಾಜ್ಯ ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ವಿರೋಧಿ ಬಲವಾದ ಕ್ರಮಗಳನ್ನು ಜಾರಿಗೆ ತರಬೇಕು. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆಗಳು ಮರುಕಳಿಸದಂತೆ ಸ್ಪಷ್ಟ ನೀತಿಗಳು ಹಾಗೂ ಹೊಣೆಗಾರಿಕೆ ವ್ಯವಸ್ಥೆಗಳು ಅಗತ್ಯವಿವೆ ಎಂದು ತಿಳಿಸಿದೆ. ಸಮಾಜದಲ್ಲಿ ಏಕತೆ, ಪರಸ್ಪರ ಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ಕಾಪಾಡುವುದು ಅಗತ್ಯವಾಗಿದೆ. ಇಸ್ಲಾಮೋಫೋಬಿಯಾ ವಿರುದ್ಧ ಶಿಕ್ಷಣ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು SIO ಕರೆ ನೀಡಿದೆ ಎಂದು SIO ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಹಯ್ಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದಾ ಸಮುದಾಯಗಳ ಜೊತೆಗೆ ಗುತ್ತಿಗೆ ಆಧಾರದ ರಾಜಕಾರಣವನ್ನು ಮಾಡುತ್ತ ಬಂದಿದ್ದಾರೆ. ಇಡೀ ಸರ್ಕಾರದ ಸಚಿವರುಗಳು ಹಣದ ಚೀಲ ಇಟ್ಟುಕೊಂಡು ಬರುತ್ತಾರೆ. ಜನರ ಮೇಲೆ ಹಣ್ಣ ಎಸೆದು ಜನರನ್ನು ಕೊಂಡುಕೊಳ್ಳುತ್ತೇವೆ ಎನ್ನುವ ದುರಹಂಕಾರ ಈ ಸರ್ಕಾರದವರಿಗೆ ಬಂದಿದೆ. ದಾವಣಗೆರೆ ಜನರು ಸ್ವಾಭಿಮಾನ ಉಳಿಸಿಕೊಂಡು ಈ ಸರ್ಕಾರ ಕಿತ್ತೊಗೆಯುವ ತೀರ್ಮಾನ ಮಾಡಬೇಕು ಎಂದು ಮಾಜಿ
ಅಬುಧಾಬಿ| ಭದ್ರತಾಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯರಿಗೆ ಗಾಯ
ಅಬುಧಾಬಿ: ಭದ್ರತಾಪಡೆಗಳು ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಸರಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ. ಈ ಗಾಯಗಳು ಸ್ವರೂಪವು ಸಾಧಾರಣದಿಂದ ಸಣ್ಣಪುಟ್ಟ ಪ್ರಮಾಣದ್ದಾಗಿವೆ ಎಂದು ಮಾಧ್ಯಮ ಕಚೇರಿ ಹೇಳಿದೆ. ನಗರದ ಖಲೀಫಾ ಆರ್ಥಿಕ ವಲಯದಲ್ಲಿ ಬಿದ್ದಿರುವ ಕ್ಷಿಪಣಿ ಅವಶೇಷಗಳಿಂದ ಉಂಟಾಗಿರುವ ಅಗ್ನಿಯನ್ನು ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು
ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಒಂದು ಸಿನಿಮಾ ಬಿಡುಗಡೆಯಾದರೆ, ಅದರ ಬಗ್ಗೆ ಚಿತ್ರಮಂದಿರಗಳಲ್ಲಿ, ಅಭಿಮಾನಿಗಳ ಪೇಜ್ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಸಹಜ. ಆದರೆ, ಇದೀಗ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 'ಧುರಂಧರ್: ದಿ ರಿವೆಂಜ್' ಸಿನಿಮಾ ಮಾತ್ರ ಈ ಎಲ್ಲದರ ಗಡಿ ದಾಟಿ, ನೇರವಾಗಿ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಗೆ ಎಂಟ್ರಿಕೊಟ್ಟಿದೆ. ಹೌದು, ಕಾಮರ್ಸ್ ವಿದ್ಯಾರ್ಥಿಗಳ 'ಅಕೌಂಟ್ಸ್'
ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!
ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ. ಸೂಟು ಬೂಟಿನ ರೈತರ ರೀತಿಯಲ್ಲೇ ಸೂಟುಬೂಟಿನ ಮೀನುಗಾರರನ್ನು ಸಿದ್ಧಪಡಿಸಲು ಭಾರತ ಸರಕಾರ ಸನ್ನದ್ಧವಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ನ್ಯಾಷನಲ್ ಫ್ರೇಮ್ವರ್ಕ್ ಆನ್ ಟ್ರೇಸೆಬಿಲಿಟಿ ಇನ್ ಫಿಶರೀಸ್ ಆಂಡ್ ಅಕ್ವಾಕಲ್ಚರ್-2025 ಎಂಬ ಭಾರತ ಸರಕಾರದ ನೀತ್ಯಾತ್ಮಕ ಚೌಕಟ್ಟು, ತಾನು ಯೋಜಿಸಿಕೊಂಡಿರುವ ಸಮಯಾವಧಿಯ ಒಳಗೆ ಅನುಷ್ಠಾನಗೊಳ್ಳುವುದು ಸಾಧ್ಯವಾದರೆ, 2026ರ ಅಂತ್ಯದ ಒಳಗೆ ನಾವೆಲ್ಲ ಸರ್ಟಿಫೈಡ್, ಲೇಬಲ್ಡ್ ಮೀನುಗಳನ್ನೇ ತಿನ್ನಲಿದ್ದೇವೆ! ಸಾಂಪ್ರದಾಯಿಕ ಬಡ ಮೀನುಗಾರರನ್ನು ಸಮುದ್ರದಿಂದ ದೂರ ಕಳುಹಿಸುವ ಮಹಾಯೋಜನೆಯ ಭಾಗವಾಗಿಯೇ ಈ ‘ಟ್ರೇಸೆಬಿಲಿಟಿ’ ತತ್ವ ಮುನ್ನೆಲೆಗೆ ಬರುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ತಾವು ತಿನ್ನುತ್ತಿರುವ ಮೀನನ್ನು ಜವಾಬ್ದಾರಿಯುತವಾದ, ಪರಿಸರ ಸಹ್ಯವಾದ ವಿಧಾನದಲ್ಲಿ ಹಿಡಿಯಲಾಗಿದೆ ಮತ್ತು ಆ ಮೀನನ್ನು ಹಿಡಿದ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಸರಕ್ಕೆ ಹಾನಿ ಆಗದಂತೆ ಬಳಕೆ ಮಾಡಿದೆ ಎಂಬುದನ್ನು ಆ ಮೀನು ತಿನ್ನುವ ಗ್ರಾಹಕರಿಗೆ ತಿಳಿಸುವ ಮಾರುಕಟ್ಟೆ ಪರಿಕರವೇ ಎಕೊ ಲೇಬಲಿಂಗ್. ಇಂತಹ ಪ್ರಮಾಣೀಕರಣಗಳನ್ನು ಒದಗಿಸುವ ವ್ಯವಸ್ಥೆಯೇ ಕ್ಯಾಚ್ ಸರ್ಟಿಫಿಕೇಷನ್. ವಿಶ್ವಸಂಸ್ಥೆಯ ಸಾಗರ ಕಾನೂನುಗಳ ಸಮಾವೇಶ (UNCLOS) 1982ರಲ್ಲಿ ಸ್ವೀಕರಿಸಿರುವ ನಿರ್ಣಯದ ಅಡಿಯಲ್ಲಿ ಮೀನು ಮತ್ತಿತರ ಜಲ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಹೇಳಲಾಗಿದೆ. 1995ರಲ್ಲಿ ವಿಶ್ವ ಕೃಷಿ ಮತ್ತು ಆಹಾರ ಸಂಸ್ಥೆಯು (FAO) ತನ್ನ ೨೮ನೇ ವಾರ್ಷಿಕ ಸಭೆಯಲ್ಲಿ ಜವಾಬ್ದಾರಿಯುತ ಮೀನುಗಾರಿಕೆಯ ಸಂಹಿತೆಯನ್ನು ಅಳವಡಿಸಿಕೊಂಡಿದ್ದು, ಅಲ್ಲಿಂದೀಚೆಗೆ ಹಲವಾರು ನಿಯಮಗಳು ಈ ನಿಟ್ಟಿನಲ್ಲಿ ರೂಪುಗೊಳ್ಳುತ್ತಾ ಬಂದಿವೆ. ಈ ಅಂತರ್ರಾಷ್ಟ್ರೀಯ ಮಾರ್ಗದರ್ಶಿಗಳಿಗೆ ಅನುಗುಣವಾಗಿ ಭಾರತ ಸರಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ (PMMSY) ಅಡಿಯಲ್ಲಿ ಸುಸ್ಥಿರ ಮೀನುಗಾರಿಕೆಗಾಗಿ National Framework on Traceability in Fisheries and Aquaculture 2025 ಅನ್ನು ಬಿಡುಗಡೆಗೊಳಿಸಿದ್ದು, 2026ರ ಕೊನೆಯ ಒಳಗೆ ಈ ನೀತ್ಯಾತ್ಮಕ ಚೌಕಟ್ಟನ್ನು ಆರು ಹಂತಗಳ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಇದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿ ಬರುವ ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (MPEDA)ವನ್ನು ನೋಡಲ್ ಏಜೆನ್ಸಿ ಆಗಿ ಗುರುತಿಸಿದ್ದು, ಅದು ಬ್ರ್ಯಾಂಡ್ ಪ್ರಮೋಷನ್, ಆಮದು-ರಫ್ತುದಾರರ ನೋಂದಣಿ, ರಫ್ತಿಗೆ ಅಗತ್ಯವಿರುವ ವಿವಿಧ ರೀತಿಯ ಕ್ಯಾಚ್ ಸರ್ಟಿಫಿಕೇಟ್ಗಳನ್ನು ಒದಗಿಸಲಿದೆ ಎಂದು ಲೋಕಸಭೆಯಲ್ಲಿ ವಿ. ವೈದ್ಯಲಿಂಗಂ (ಕಾಂಗ್ರೆಸ್) ಅವರಿಗೆ, ಭಾರತದ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಉತ್ತರಿಸಿದ್ದಾರೆ (ಚುಕ್ಕೆ ರಹಿತ ಪ್ರಶ್ನೆ 4055; ದಿನಾಂಕ 17-03-2026). ಸಾಗರ ಮತ್ತು ಒಳನಾಡು ಮೀನುಗಾರಿಕೆಗಳೆರಡಕ್ಕೂ ಸಂಬಂಧಿಸಿದಂತೆ ಮೀನುಗಾರಿಕಾ ದೋಣಿಗಳ ನೋಂದಣಿ, ನಿಗಾ, ತಪಾಸಣೆ, ಪ್ರಮಾಣೀಕರಣ, ಸಂಸ್ಕರಣೆ, ದಾಸ್ತಾನು, ರಫ್ತು, ಆಂತರಿಕ ಮಾರುಕಟ್ಟೆ... ಹೀಗೆ ಪ್ರತಿಯೊಂದು ಹಂತದಲ್ಲೂ ಸಾಗರೋತ್ಪನ್ನಗಳ ಶುಚಿತ್ವ, ಆಹಾರದ ಗುಣಮಟ್ಟಗಳ ನಿಯಂತ್ರಣಕ್ಕೆ ಡಿಜಿಟಲ್ ವ್ಯವಸ್ಥೆಯೊಂದರ ಮೂಲಕ ಮ್ಯಾಪಿಂಗ್ ವ್ಯವಸ್ಥೆ ಮಾಡುವುದು; ಮೀನು ಹಿಡಿದ ಜಾಗ, ವಿಧಾನಗಳಿಂದ ಆರಂಭಿಸಿ, ಕೊನೆಯ ಗ್ರಾಹಕರ ತಟ್ಟೆಗೆ ತಲುಪುವ ತನಕವೂ ಪ್ರತೀ ಹಂತದಲ್ಲಿ ‘ಟ್ರೇಸೆಬಿಲಿಟಿ’ ಸಾಧ್ಯಗೊಳಿಸುವ ಮೂಲಕ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂಬಿಗಸ್ಥಿಕೆ ಗಳಿಸಿಕೊಳ್ಳುವುದು, ಈ ಮಹಾ ಯೋಜನೆಯ ಸ್ಥೂಲ ಉದ್ದೇಶ. ಹೊರನೋಟಕ್ಕೆ ಇದೆಲ್ಲ ಬಹಳ ಸುಂದರ, ಸುಸಜ್ಜಿತ ವ್ಯವಸ್ಥೆ ಎಂದು ಕಾಣಿಸುತ್ತದೆಯಾದರೂ, ಈ ವ್ಯವಸ್ಥೆಯ ಮೊದಲ ಬಲಿಪಶುಗಳು - ಸಾಂಪ್ರದಾಯಿಕ ಮೀನುಗಾರರು. ಭಾರತದ ಮೀನುಗಾರಿಕಾ ವಲಯ ಎಂದರೆ ಅದು ಸಣ್ಣ, ಅತಿಸಣ್ಣ ಮತ್ತು ಸಾಂಪ್ರದಾಯಿಕ ಮೀನುಗಾರರು. ಕಾರ್ಪೊರೇಟ್ ಮೀನುಗಾರಿಕೆ ನಮಗೆ ತೀರಾ ಹೊಸದು. ಈಗಾಗಲೇ ಸಮುದ್ರ ತೀರದಿಂದ ಸುಯೋಜಿತವಾಗಿ ಮತ್ತು ಹಂತ-ಹಂತವಾಗಿ ಎತ್ತಂಗಡಿ ಆಗುತ್ತಿರುವ ಈ ಸಾಂಪ್ರದಾಯಿಕ ಮೀನುಗಾರರು ಇಂತಹ ಆಧುನಿಕ ಮಾರುಕಟ್ಟೆ ನಿಯಮಗಳಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ತಾವು ಹಿಡಿದ ಮೀನುಗಳಿಗೆ ಮೊಬೈಲ್ ಅಪ್ಲಿಕೇಷನ್ಗಳನ್ನು ಬಳಸಿ ಅಥವಾ ಬೇರೆ ಡಿಜಿಟಲ್ ಪರಿಕರಗಳ ಮೂಲಕ ಆನ್ಲೈನ್ ಫಾರ್ಮ್ಗಳನ್ನು ಭರ್ತಿ ಮಾಡಿ, ಡಿಜಿಟಲ್ ದಾಖಲೆಗಳನ್ನು ಶೇಖರಿಸಿಟ್ಟುಕೊಳ್ಳಿ, ಹಿಡಿದ ಮೀನುಗಳ ಬಗ್ಗೆ ಪ್ರಮಾಣೀಕರಣ (ಕ್ಯಾಚ್ ಸರ್ಟಿಫಿಕೇಟ್) ಪಡೆಯಲು 1,700-4,000 ರೂ.ಗಳಷ್ಟು ವೆಚ್ಚ ಮಾಡಿ, ತಪಾಸಣಾ ವ್ಯವಸ್ಥೆಗೆ ಹಣಕೊಡಿ, ಜಿಪಿಎಸ್ ಇತ್ಯಾದಿ ವವಸ್ಥೆ ಏರ್ಪಡಿಸಿಕೊಳ್ಳಿ ಎಂದೆಲ್ಲ ಪೀಡಿಸುವ ಸ್ಥಿತಿ ಬಂದರೆ ಅವರು ಸಹಜವಾಗಿಯೇ ಈ ರಗಳೆಗಳು ಬೇಡವೆಂದು ಕೈಚೆಲ್ಲಲಿದ್ದಾರೆ ಎಂಬುದೇ ಈ ಯೋಜನೆಗಳ ಹಿಂದಿರುವ ಚಿಂತನೆ ಎಂದು ಅನ್ನಿಸುತ್ತದೆ. ಸರಕಾರ ತನ್ನ ನೀತ್ಯಾತ್ಮಕ ಚೌಕಟ್ಟಿನ ದಾಖಲೆಯಲ್ಲಿ ಇಂತಹ ಬಡಪಾಯಿಗಳನ್ನೆಲ್ಲ ಒಳಗೊಳ್ಳುವ ಮಾತುಗಳನ್ನು ಹೇಳಿದೆಯಾದರೂ, ಇದು ಬಾಯುಪಚಾರಕ್ಕಿಂತ ಮೇಲಿನದಲ್ಲ ಎಂದು ಅನ್ನಿಸುತ್ತದೆ. MPEDAದ ವಾರ್ಷಿಕ ವರದಿಯ ಪ್ರಕಾರ, ಅದು 2024-25ನೇ ಸಾಲಿನಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ರಫ್ತಿಗಾಗಿ 9,728 ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಯುರೋಪಿಯನೇತರ ದೇಶಗಳಿಗೆ ರಫ್ತಿಗಾಗಿ 931 ಕ್ಯಾಚ್ ಸರ್ಟಿಫಿಕೇಟ್ಗಳನ್ನೂ ವಿತರಿಸಿದೆ. ಜಪಾನಿಗೆ ರಫ್ತಿಗಾಗಿ 175 ಜಪಾನ್ ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಅಮೆರಿಕಕ್ಕೆ ರಫ್ತಿಗಾಗಿ 20,531ರಷ್ಟು DS2031 ಸರ್ಟಿಫಿಕೇಟುಗಳನ್ನು ಮತ್ತಿತರ ಹಲವು ಸರ್ಟಿಫಿಕೇಟ್ಗಳನ್ನು ವಿತರಿಸಿರುವುದಾಗಿ ವರದಿ ಹೇಳುತ್ತಿದೆ. ಇದರಲ್ಲಿ ಪಾಲ್ಗೊಂಡ ಸಣ್ಣ-ಸಾಂಪ್ರದಾಯಿಕ ಮೀನುಗಾರರ ಪ್ರಮಾಣ ಎಷ್ಟೆಂಬುದು ಸ್ಪಷ್ಟವಿಲ್ಲ. ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ. ಈಗಾಗಲೇ ಕ್ಯಾಚ್ ಸರ್ಟಿಫಿಕೇಟ್ ಪಡೆದು ರಫ್ತಾಗುತ್ತಿರುವ ಸಾಗರೋತ್ಪನ್ನಗಳು ಕೂಡ, ಅಕ್ರಮ ಆಳ ಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ಗಳಂತಹ ಕಳ್ಳಾಟಿಕೆಗಳ ಭಾಗವಾಗಿದ್ದು, ಸುಭಗರ ವೇಷದಲ್ಲಿ ರಫ್ತಾಗಿ ತಮ್ಮ ಗಮ್ಯಗಳನ್ನು ಮುಟ್ಟುತ್ತಿವೆ ಎಂದಾದರೆ, ಈ ಸರ್ಟಿಫಿಕೇಷನ್ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಕೂಡ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ಸಾಂಪ್ರದಾಯಿಕ ಮೀನುಗಾರರು ಮಾತ್ರವಲ್ಲದೆ ಕಾರ್ಪೊರೇಟ್ ವಲಯ ದಲ್ಲೂ ಈ ಟ್ರೇಸೆಬಿಲಿಟಿ, ಸರ್ಟಿಫಿಕೇಷನ್ ವ್ಯವಸ್ಥೆಯ ಬಗ್ಗೆ ಪೂರ್ಣ ನಂಬಿಕೆ ಇದ್ದಂತಿಲ್ಲ. ಪಾರದರ್ಶಕತೆ, ಆಂತರಿಕ ಮಾರುಕಟ್ಟೆ ಯನ್ನು ರಕ್ಷಿಸಿಕೊಳ್ಳುವ ಹುನ್ನಾರ, ದೊಡ್ಡ-ಸಣ್ಣ ಸರಬರಾಜುದಾರರ ನಡುವೆ ತಾರತಮ್ಯದ ಸಮರ, ತಂತ್ರಜ್ಞಾನ ಲಭ್ಯತೆ ಮೂಲದ ಮಾರುಕಟ್ಟೆ ತಾರತಮ್ಯ, ಅಂತರ್ರಾಷ್ಟ್ರೀಯ ಮಾನದಂಡಗಳ ಸುಧಾರಣೆ-ಏಕರೂಪತೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗದಿರುವುದೇ ಮೊದಲಾದ ಸವಾಲುಗಳ ಚರ್ಚೆ ನಡೆದೇ ಇದೆ. ಇವೆಲ್ಲವಕ್ಕಿಂತ ವೈರುಧ್ಯದ ಇನ್ನೊಂದು ಸಂಗತಿಯೂ ಇದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಕರಾವಳಿಯಲ್ಲಿ ಕಳೆದೊಂದು ದಶಕದಿಂದೀಚೆಗೆ ಅಕ್ರಮವಾಗಿ ನಡೆಯುವ ಆಳಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ ಇತ್ಯಾದಿ ಪರಿಸರ ಹಾನಿಕಾರಕ ಚಟುವಟಿಕೆಗಳ ಕಾರಣದಿಂದಾಗಿ ಮೀನಿಗೆ ಕ್ಷಾಮ ತಲೆದೋರಿದೆ. ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರರು ರಜೆಯಲ್ಲಿದ್ದರೆ, ಈ ಆಳಸಮುದ್ರ ಮೀನುಗಾರಿಕೆ ಅವ್ಯಾಹತವಾಗಿ ನಡೆದು ಎಳೆಯ ಮೀನುಗಳನ್ನು ಕೂಡ ಬಿಡದೆ ಹಿಡಿಯಲಾಗುತ್ತಿದೆ ಹಾಗೂ ಅವನ್ನೆಲ್ಲ ಫಿಷ್ ಮೀಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂಬ ಆಪಾದನೆಗಳಿವೆ. ಕಳೆದ ಐದಾರು ವರ್ಷಗಳಲ್ಲಿ ಭಾರತದ ಸಾಗರೋತ್ಪನ್ನ ರಫ್ತು ಗಮನಾರ್ಹವಾಗಿ ಹೆಚ್ಚಿದೆ. 2020-21ರಲ್ಲಿ 11.49 ಲಕ್ಷ ಮೆಟ್ರಿಕ್ ಟನ್ (43,720.98 ಕೋಟಿ ರೂ.) ಇದ್ದ ಈ ರಫ್ತು 2024-25ರಲ್ಲಿ 16.98 ಲಕ್ಷ ಮೆಟ್ರಿಕ್ ಟನ್ (62,408.45 ಕೋಟಿ ರೂ.)ಗಳಿಗೆ ಏರಿದೆ. ಮೀನಿನ ಕ್ಷಾಮ ಇದೆ ಎಂದು ಹೇಳುತ್ತಲೇ, ಮೀನುಗಾರಿಕೆಯು ಆಂತರಿಕ ಬಳಕೆಯನ್ನು ಕಡೆಗಣಿಸುತ್ತಿರುವುದು ಮತ್ತು ಅದೇ ವೇಳೆಗೆ ರಫ್ತು ಪ್ರಮಾಣ ಹೆಚ್ಚುತ್ತಿರುವುದು ಮೀನುಗಾರಿಕೆಯು ಕಾರ್ಪೊರೇಟೀಕರಣಗೊಳ್ಳುತ್ತಿರುವುದರ ಮತ್ತು ರಫ್ತನ್ನು ಹೆಚ್ಚುಹೆಚ್ಚು ಅವಲಂಬಿಸುತ್ತಿರುವುದರ ಸೂಚನೆ. ಕರಾವಳಿಯ ಉಣ್ಣುವ ಬಟ್ಟಲಿನ ಭಾಗವಾಗಿದ್ದ ಮೀನುಗಾರಿಕೆಯು ಕಾರ್ಪೊರೇಟ್ ವ್ಯವಹಾರವಾಗಿ ಬದಲಾಗುತ್ತಿದ್ದು, ಸಹಜವಾಗಿಯೇ ಬ್ರ್ಯಾಂಡಿಂಗ್, ಸರ್ಟಿಫಿಕೇಷನ್, ಟ್ರೇಸೆಬಿಲಿಟಿ...ಇವೆಲ್ಲವೂ ತಲೆ ಎತ್ತತೊಡಗಿವೆ ಹಾಗೂ ಸಾಂಪ್ರದಾಯಿಕ ಮೀನುಗಾರರು ಇಲ್ಲಿ ಕೊನೆಗೆ ಕಣ್ತುಂಬಿಕೊಳ್ಳುವ ಪ್ರೇಕ್ಷಕ ಮಾತ್ರ ಆಗಿ ಉಳಿಯುತ್ತಾರೆ. ತಂತ್ರಜ್ಞಾನ ಆಧರಿತ ಮೀನುಗಾರಿಕೆಯ ಯಾಂತ್ರಿಕ/ತಾಂತ್ರಿಕ ಕೌಶಲಗಳನ್ನು ಸಾಂಪ್ರದಾಯಿಕ ಮೀನುಗಾರರಿಗೆ ವರ್ಗಾಯಿಸುವಲ್ಲಿ ಗಂಭೀರ ಪ್ರಯತ್ನಗಳು ಆಗಿರದಿರುವುದರಿಂದ, ಇಲ್ಲಿ ಕರಾವಳಿಯಲ್ಲೀಗ ಸಹಜವಾಗಿಯೇ ಸ್ಥಳೀಯರ ಬದಲು ವಲಸೆ ಕಾರ್ಮಿಕರು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಕೇವಲ 30-40 ವರ್ಷಗಳ ಹಿಂದೆ ಅತ್ಯಂತ ಸುಸ್ಥಿರವಾದ, ಪರಿಸರ ಸಹ್ಯವಾದ ಮೀನುಗಾರಿಕೆಯಲ್ಲಿ ತೊಡಗಿದ್ದ ಸ್ಥಳೀಯ ಮೀನುಗಾರ ಸಮುದಾಯವು ಈಗ ಸಮುದ್ರ ತೀರದಿಂದ ದೂರ ಸರಿಯುತ್ತಿದೆ ಮತ್ತು ಪ್ರವಾಸೋದ್ಯಮ, ಹೋಮ್ ಸ್ಟೇಗಳಂತಹ ಮತ್ತೊಂದು ವಾಣಿಜ್ಯ ಕೆಸರುಗುಂಡಿಗೆ ಬಲವಂತವಾಗಿ ತಳ್ಳಲ್ಪಡುತ್ತಿದೆ.
ರಾಜ್ಯದಲ್ಲಿ ವರದಿಯಾಗಿಲ್ಲ ಲವ್ ಜಿಹಾದ್ ಕೇಸ್, ಬಲವಂತದ ಮತಾಂತರ ವಿರುದ್ಧ 4 ವರ್ಷಗಳಲ್ಲಿ 17 ಪ್ರಕರಣ ದಾಖಲು!
ಬಲವಂತದ ಮತಾಂತರ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸೋಷಿಯಲ್ ಮೀಡಿಯಾ ಸೆಲ್ ಅನ್ನು ತೆರೆದಿದ್ದು, ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳನ್ನು ಪತ್ತೆ ಹಚ್ಚುವ ಕರ್ತವ್ಯ ಪ್ರಗತಿಯಲ್ಲಿರುತ್ತದೆ. ಈ ಸಂಬಂಧ ನಿರಂತರವಾಗಿ ಇಂತಹ ಖಾತೆಗಳ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ. ಒಂದು ವೇಳೆ ಅಂತಹ ಜಾಲಗಳು ಕಂಡು ಬಂದಲ್ಲಿ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಜಾಲಗಳನ್ನು ಪತ್ತೆಹಚ್ಚಲು ವಿಶೇಷ ದಳ ರಚಿಸುವ ಕುರಿತಂತೆ ಯಾವುದೇ ಪ್ರಸ್ತಾವನೆ ಇರುವುದಿಲ್ಲ ಎಂದು ಗೃಹ ಇಲಾಖೆ ತಿಳಿಸಿದೆ.
ವಿವಾಹಿತ ಪುರುಷನ ಒಪ್ಪಿತ ಲಿವ್ ಇನ್ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್
ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿ ಇರುವುದು ಯಾವುದೇ ಕಾನೂನುಬದ್ಧ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ತರುಣ್ ಸಕ್ಸೇನಾ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಕೆಪಿಎಸ್ಸಿ: ಭ್ರಷ್ಟಾಚಾರದ ಉಗಮ ಸ್ಥಾನ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೂರು ಹಂತದ ಪರೀಕ್ಷೆಗಳು ನಡೆಯುತ್ತವೆ. ಮೂರೂ ಹಂತದಲ್ಲಿ ಲಂಚ ನೀಡಿದರೆ ಮಾತ್ರ ಅಂತಿಮವಾಗಿ ಹುದ್ದೆ ಸಿಗುತ್ತದೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಎಂಆರ್ ಶೀಟ್ ಇರುತ್ತದೆ. ಇಲ್ಲೂ ಕೈಚಳಕ ತೋರಿಸುವ ದಲ್ಲಾಳಿಗಳು ಇದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಭಾರೀ ಚರ್ಚೆಯಾಯಿತು. ಇನ್ನು ಸಂದರ್ಶನದ ಹಂತದಲ್ಲಿ ಬಾಚಿಕೊಳ್ಳಲು ಆಯೋಗದ ಸದಸ್ಯರು ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲ ಭ್ರಷ್ಟ ಬಾಗಿಲುಗಳು ತೆರೆದಿಟ್ಟಿರುವುದರಿಂದ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತದೆ. ಕೆಪಿಎಸ್ಸಿ ಎಂದೇ ಹೆಚ್ಚು ಜನಪ್ರಿಯವಾಗಿರುವ ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಾಚಾರದ ಉಗಮ ಸ್ಥಾನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಜಕಾರಣಿಗಳು ಅರ್ಥಾತ್ ಜನಪ್ರತಿನಿಧಿಗಳು ಭ್ರಷ್ಟರಾಗುವುದಕ್ಕೆ ದುಬಾರಿ ಚುನಾವಣೆಗಳು ಕಾರಣ. ಹಾಗೆಯೇ ಇಡೀ ಆಡಳಿತ ವ್ಯವಸ್ಥೆಯೇ ಭ್ರಷ್ಟಗೊಳ್ಳುವುದಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಸಂರಚನೆ ಮತ್ತು ಸ್ವರೂಪ ಪ್ರಮುಖ ಕಾರಣ. ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರದ ಹೊರತು ಅಲ್ಲಿ ಪಾರದರ್ಶಕ ನೇಮಕಾತಿ ನಿರೀಕ್ಷಿಸುವುದು ಮೂರ್ಖತನ ಎನಿಸಿಕೊಳ್ಳುತ್ತದೆ. ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗವು ೩೮೪ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿ ಅಂತಿಮ ಹಂತದ ಸಂದರ್ಶನದ ವೇಳಾಪಟ್ಟಿ ಪ್ರಕಟಿಸಿತ್ತು. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹಲವು ಉದ್ಯೋಗಾಂಕ್ಷಿಗಳು ಮಾಧ್ಯಮಗಳಿಗೆ ಮಾಹಿತಿ ನೀಡತೊಡಗಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಮಾಜಿ ಮಂತ್ರಿಗಳಾದ ಸುರೇಶ್ ಕುಮಾರ್, ಸುನೀಲ್ ಕುಮಾರ್ ಅವರನ್ನು ಸಂಪರ್ಕಿಸಿ ಅಕ್ರಮ ನಡೆದಿರುವ ವಿವರ ನೀಡಿದ್ದರು. ಅಕ್ರಮದ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತು. ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಜನ ಆಡಳಿತ ಪಕ್ಷದ ಸದಸ್ಯರು ದನಿಗೂಡಿಸಿ ‘ಸತ್ಯ ಹರಿಶ್ಚಂದ್ರರ’ ಭಾವ ತೀವ್ರತೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು. ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯನ್ನು ಅಧಿಕಾರದಲ್ಲಿ ಇರುವ ಸರಕಾರದ ಮುಖ್ಯಸ್ಥರು ಮಾಡಿರುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಮರೆತಿದ್ದರು. ಒಂದೇ ಒಂದು ಪೈಸೆ ಲಂಚ ಸ್ವೀಕರಿಸದೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡಿದ್ದರೆ ಅವರೇಕೆ ಎಂಜಲು ಕಾಸಿಗೆ ಕೈ ಚಾಚುತ್ತಾರೆ. ಹಾಲಿ ಇರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲವರು ಬಿಜೆಪಿ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದರೆ ಇನ್ನೂ ಕೆಲವರನ್ನು ಕಾಂಗ್ರೆಸ್ ಸರಕಾರ ನಾಮನಿರ್ದೇಶನ ಮಾಡಿದೆ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ಸದಸ್ಯರಾಗಲು ಕೋಟಿ ಕೋಟಿ ಹಣ ನೀಡುವ ವ್ಯಕ್ತಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ನಿರೀಕ್ಷಿಸಬಹುದೇ? ಆಯಿತು, ಐದಾರು ಜನ ಸದಸ್ಯರು ಒಂದೇ ಒಂದು ಪೈಸೆ ಹಣ ನೀಡದೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಾಮನಿರ್ದೇಶನಗೊಂಡಿದ್ದಾರೆ ಎಂದೇ ಭಾವಿಸೋಣ. ಹಣ ನೀಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಲ್ಲ ಎಂದು ನಾವು ನಿರೀಕ್ಷೆ ಇಟ್ಟುಕೊಳ್ಳಬಹುದು. ಭ್ರಷ್ಟಾಚಾರ ಮಾಡಲು ಯಥೇಚ್ಛ ಅವಕಾಶ ಇರುವ ಒಂದು ಸಂಸ್ಥೆಯಲ್ಲಿ ಒಡಲುಗೊಂಡ ಮನುಷ್ಯರು ಪ್ರಾಮಾಣಿಕರಾಗಿರಬೇಕು ಎಂದು ನಿರೀಕ್ಷಿಸುವುದು ಬಹುದೊಡ್ಡ ಆದರ್ಶದ ಮಾತಾಗುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ಇರುವುದೇ ಭ್ರಷ್ಟಾಚಾರ ಮಾಡಲು ಎಂಬ ಪ್ರತೀತಿ ಇರುವಾಗ ಯಾರು ತಾನೆ ಪ್ರಾಮಾಣಿಕರಾಗಿರಲು ಬಯಸುತ್ತಾರೆ. ಅವರ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದಾದರೂ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾರೆ. ನನಗೇ ಪರಿಚಯವಿದ್ದ ಆರೇಳು ಜನರು ಒಂದೇ ಒಂದು ಪೈಸೆ ಲಂಚ ಕೊಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯದ ಲೆಕ್ಕಾಚಾರದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಡ್ಡಿಲ್ಲದೆ ನಾಮನಿರ್ದೇಶನ ಮಾಡಿದ್ದರು. ಪುಗಸಟ್ಟೆಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರು ಹಣ ಕೊಟ್ಟು ಸದಸ್ಯರಾದವರಿಗಿಂತ ಹೆಚ್ಚು ಲಂಚ ಸ್ವೀಕರಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಹಣ ಕೊಟ್ಟು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರಲ್ಲಿ ಕೆಲವರು ಹಾಕಿದ ಬಂಡವಾಳ ವಾಪಸ್ ಬಂದರೆ ಸಾಕು ಎಂದು ಭಾವಿಸಿ ತಮ್ಮ ಸಮುದಾಯದ ಬಡವರಿಗೆ ಫ್ರೀಯಾಗಿ ನೌಕರಿ ನೀಡಿದ ನಿದರ್ಶನ ಸಿಗುತ್ತವೆ. ಹಣ ಕೊಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಕೆಲವರು ತನ್ನವರು ಇತರರು ಎಂಬುದನ್ನು ಲೆಕ್ಕಿಸದೆ ಲೂಟಿ ಮಾಡಿದ್ದನ್ನು ನೋಡಿದ್ದೇನೆ. ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರ ನಡೆಸಲು ಅವಕಾಶಗಳಿರುವಾಗ ಯಾರು ತಾನೆ ಪ್ರಾಮಾಣಿಕರಾಗಿರಲು ಅಪೇಕ್ಷಿಸುತ್ತಾರೆ? ಯಾವ ನೇಮಕಾತಿ ಪ್ರಾಧಿಕಾರದಲ್ಲಿ ಮನುಷ್ಯರ ಹಸ್ತಕ್ಷೇಪ ಇರುತ್ತದೆಯೋ ಅಲ್ಲೆಲ್ಲ ಭ್ರಷ್ಟಾಚಾರ ಇದ್ದೇ ಇರುತ್ತದೆ. ನೇಮಕಾತಿ ಪ್ರಾಧಿಕಾರದ ಒಟ್ಟು ಸ್ವರೂಪದಲ್ಲೇ ಬಿಗಿಯಾದ ನಿಯಮಗಳನ್ನು ರೂಪಿಸಿದ್ದರೆ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ದೇವರಾಜ ಅರಸು ಅವರ ಕಾಲದಲ್ಲಿ ಶಾಲಾ ಶಿಕ್ಷಕರ ಆಯ್ಕೆಗಾಗಿ ಜಿಲ್ಲಾ ನೇಮಕಾತಿ ಪ್ರಾಧಿಕಾರಗಳನ್ನು ರಚಿಸಲಾಗಿತ್ತು. ಆ ನೇಮಕಾತಿ ಪ್ರಾಧಿಕಾರಗಳಿಗೆ ಪಕ್ಷದ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಪರಿಪಾಠ ಇತ್ತು. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಕರ ನೇಮಕಾತಿಗೆ ಹೊಸ ನಿಯಮಗಳನ್ನು ರೂಪಿಸಿದರು. ಕೇವಲ ಅಂಕಗಳು ಮತ್ತು ಮೀಸಲಾತಿ ಆಧಾರದಲ್ಲಿ ಶಿಕ್ಷಕರ ಆಯ್ಕೆ ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದರು. ಸಂದರ್ಶನ ವ್ಯವಸ್ಥೆಯನ್ನು ರದ್ದು ಪಡಿಸಿದ್ದರು. ಕಂಪ್ಯೂಟರ್ನಲ್ಲಿ ಅಭ್ಯರ್ಥಿಗಳ ಒಟ್ಟು ಅಂಕಗಳು ಮತ್ತು ಜಾತಿ ಪ್ರವರ್ಗದ ಮಾಹಿತಿ ಫೀಡ್ ಮಾಡಿದರೆ ಅದು ಆಯ್ಕೆ ಪಟ್ಟಿ ಸಿದ್ಧಪಡಿಸಿ ಕೊಡುತ್ತಿತ್ತು. ಆಕ್ಷೇಪಗಳಿಗೆ ಕಾಲಾವಕಾಶ ನೀಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿದ್ದರು. ಆಗ ಲಕ್ಷ ಲಕ್ಷ ಜನರಿಗೆ ಒಂದೇ ಒಂದು ಪೈಸೆ ಲಂಚವಿಲ್ಲದೆ ಮನೆ ಬಾಗಿಲಿಗೆ ನೇಮಕಾತಿ ಆದೇಶ ಬಂದಿದ್ದವು. ಅದೇ ಲಂಚರಹಿತ ನೇಮಕಾತಿ ವ್ಯವಸ್ಥೆಯನ್ನು ಎಚ್.ಜಿ. ಗೋವಿಂದೇಗೌಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಮುಂದುವರಿಸಿದ್ದರು. ಶಿಕ್ಷಕ ಹುದ್ದೆಗೆ ಬೇಕಾದ ಅರ್ಹತೆ ಪಡೆದಿರುವಾಗ ಮತ್ತೆ ಪ್ರವೇಶ ಪರೀಕ್ಷೆ ನಡೆಸುವ, ಸಂದರ್ಶನ ನಡೆಸುವ ಅಗತ್ಯವೇ ಇರುವುದಿಲ್ಲ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ವ್ಯವಸ್ಥೆ ಹಣ ಮಾಡಲು ಕಂಡುಕೊಂಡ ಸಾಧನಗಳು. ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಲ್ಲಿ ಕೆಲವರಲ್ಲಿ ಬೋಧನಾ ಕೌಶಲ್ಯದ ಕೊರತೆಯಿದ್ದರೆ ಅತ್ಯುತ್ತಮ ತರಬೇತಿ ನೀಡಿ ಆ ಸಾಮರ್ಥ್ಯ ಹೆಚ್ಚಿಸಬಹುದು. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ನೆಪದಲ್ಲಿ ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅವರನ್ನು ಯಾವ ಹಂತದಲ್ಲೂ ರಿಪೇರಿ ಮಾಡಲು ಸಾಧ್ಯವಿಲ್ಲ. ಕಡಿಮೆ ಅಂಕ ಹೊಂದಿದ ಅಭ್ಯರ್ಥಿಗಳು ಲಂಚ ನೀಡಿ ನೌಕರಿ ಪಡೆದರೆ ಜೀವನದುದ್ದಕ್ಕೂ ಸರಕಾರಕ್ಕೆ ಹೊರೆಯಾಗುತ್ತಾರೆ. ಶಿಕ್ಷಕರ ಆಯ್ಕೆಯಲ್ಲಿ ಲಂಚದ ವಹಿವಾಟು ನಡೆದರೆ ಸರಕಾರಿ ಶಾಲೆಗಳು ಬಡ್ಡಿ ವ್ಯವಹಾರ ನಡೆಸುವ ಕೇಂದ್ರಗಳಾಗುತ್ತವೆ. ಲಂಚ ರಹಿತ ನೇಮಕಾತಿ ನಡೆಸಿ ಸೈ ಎನಿಸಿಕೊಂಡ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ಅಂದಿನ ಶಿಕ್ಷಣ ಮಂತ್ರಿ ಎಚ್.ಜಿ. ಗೋವಿಂದೇಗೌಡರನ್ನು ಫಲಾನುಭವಿ ಶಿಕ್ಷಕರ ಸಮುದಾಯ ಇಂದಿಗೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಕರ್ನಾಟಕ ಲೋಕಸೇವಾ ಆಯೋಗವನ್ನು ಭ್ರಷ್ಟಾಚಾರದ ಕಾರಣಕ್ಕೆ ಮುಚ್ಚಲೇಬೇಕೆಂದು ಹೇಳುತ್ತಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಹಾಡಿ ಹೊಗಳಿದ್ದಾರೆ. ಒಎಂಆರ್ ಶೀಟ್ಗಳ ಪ್ರವೇಶ ಪರೀಕ್ಷೆ ನಡೆಸಿ ಬೇಕಾಬಿಟ್ಟಿ ಟ್ಯಾಂಪರ್ ಮಾಡಬಹುದು ಎಂದು ಕರ್ನಾಟಕದ ಇನ್ನಿತರ ನೇಮಕಾತಿ ಪ್ರಾಧಿಕಾರಗಳಿಗೆ ಕಲಿಸಿಕೊಟ್ಟ ಕೀರ್ತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲತಃ ಹುಟ್ಟು ಪಡೆದಿದ್ದು ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಸಿ ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳ ಹಂಚಿಕೆ ಮಾಡಲು. ವೀರಪ್ಪ ಮೊಯ್ಲಿಯವರ ಕಾಲಕ್ಕೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸಿಇಟಿ ಪರಿಕಲ್ಪನೆ ಆ ಕಾಲಕ್ಕೆ ಕ್ರಾಂತಿಕಾರಕ ಎನಿಸಿತ್ತು. ಯಾವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಕೋಟಿ ಕೋಟಿ ಹಣದ ವಹಿವಾಟು ನಡೆಸಲು ಶುರು ಮಾಡಿತೋ ಅಂದಿನಿಂದ ಅದು ವಿಶ್ವಾಸಾರ್ಹತೆ ಕಳೆದುಕೊಳ್ಳತೊಡಗಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಶ್ವಾಸಾರ್ಹ ಸಂಸ್ಥೆಯಲ್ಲ ಎಂಬುದು ಗೊತ್ತಿದ್ದೂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಜವಾಬ್ದಾರಿ ಕೊಡಲಾಯಿತು. ಅದಕ್ಕೂ ಮೊದಲು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗವೇ ನಡೆಸುತ್ತಿತ್ತು. ಆಗ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಒಂದು ಐದರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತಿತ್ತು. ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರಲ್ಲಿ ಲಂಚ ನೀಡುವ ಒಬ್ಬರನ್ನು ಆಯ್ಕೆ ಮಾಡಲಾಗುತ್ತಿತ್ತು. ಆಗ ಸ್ಪರ್ಧೆ ಕೇವಲ ಐದು ಜನ ಅಭ್ಯರ್ಥಿಗಳ ನಡುವೆ ಇರುತ್ತಿತ್ತು. ಲಂಚದ ಪ್ರಮಾಣವೂ ಕಡಿಮೆ ಇತ್ತು. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡುತ್ತಲೇ ಲಂಚದ ಪ್ರಮಾಣ ಜಾಸ್ತಿಯಾಯಿತು. ಅಷ್ಟು ಮಾತ್ರವಲ್ಲ ಸ್ಪರ್ಧೆ ಹೆಚ್ಚಾಯಿತು. ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸದಾಗಿ ಪರಿಚಯಿಸಿದ ಪ್ರವೇಶ ಪರೀಕ್ಷೆ ಮತ್ತು ಒಎಂಆರ್ ಶೀಟ್. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಹೊಂದಿದ ಎಲ್ಲರೂ ಸ್ಪರ್ಧಾ ಕಣದಲ್ಲಿದ್ದು ಪೈಪೋಟಿ ನಡೆಸತೊಡಗಿದರು. ಪೈಪೋಟಿ ಹೆಚ್ಚಾದಂತೆ ಹಣದ ಬೇಡಿಕೆ ಜಾಸ್ತಿಯಾಗುತ್ತದೆ. ಒಂದು ಉದಾಹರಣೆ ಮೂಲಕ ಇದನ್ನು ಹೆಚ್ಚು ಸ್ಪಷ್ಟ ಪಡಿಸಬಹುದು. ಪ್ರತಿಶತ ೫೫ರಷ್ಟು ಕನಿಷ್ಠ ಅಂಕ ಪಡೆದವರು ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು. ಕನಿಷ್ಠ ಅರ್ಹತೆ ಪಡೆದ ಲಕ್ಷ ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಎಲ್ಲರೂ ಒಎಂಆರ್ ಶೀಟ್ಗಳ ಮೂಲಕ ನಡೆಸುವ ಬಹು ಆಯ್ಕೆಯ ಪ್ರವೇಶ ಪರೀಕ್ಷೆಗೆ ಹಾಜರಾಗುತ್ತಾರೆ. ಅತ್ಯಂತ ಕಠಿಣವಾದ ಪ್ರಶ್ನೆ ಪತ್ರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಸಿದ್ಧಪಡಿಸುತ್ತಾರೆ. ಪ್ರವೇಶ ಪರೀಕ್ಷೆಯ ಹಂತದಲ್ಲೇ ಹಣ ಕೊಟ್ಟು ಡೀಲ್ ಮಾಡಿಕೊಂಡವರು ಹೆಚ್ಚು ಅಂಕ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗುತ್ತಾರೆ. ಇಲ್ಲಿ ಮೌಖಿಕ ಸಂದರ್ಶನ ಇರುವುದಿಲ್ಲ. ಮೇಲ್ನೋಟಕ್ಕೆ ಇದೊಂದು ಅತ್ಯಂತ ಪಾರದರ್ಶಕ ಆಯ್ಕೆ ಪ್ರಕ್ರಿಯೆ. ಆದರೆ ತುಸು ಆಳಕ್ಕಿಳಿದು ಇಣುಕಿ ನೋಡಿದರೆ ಅಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಿಗೆ ರಾಚುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರು ಆತ್ಮ ವಿಶ್ವಾಸದಲ್ಲೇ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆದರೆ ಫಲಿತಾಂಶ ಅಚ್ಚರಿ ಮೂಡಿಸುತ್ತದೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ ೮೦ರಷ್ಟು ಅಂಕ ಗಳಿಸಿದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿರುತ್ತಾರೆ. ಅಂದರೆ ಹೆಚ್ಚು ಅಂಕ ಗಳಿಸಿ ಮೆರಿಟ್ ಪಟ್ಟಿಯಲ್ಲಿ ಮೇಲೆ ಬರುವುದಿಲ್ಲ. ಆದರೆ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ ೫೫, ೬೦ ಅಂಕ ಪಡೆದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ನೌಕರಿ ಗಿಟ್ಟಿಸುತ್ತಾರೆ. ಈ ಬಗೆಯ ಪವಾಡ ನಡೆಯಲು ಒಎಂಆರ್ ಶೀಟ್ ಟ್ಯಾಂಪರಿಂಗ್ ಸಹಕರಿಸುತ್ತದೆ. ಅದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿರುವ ದಲ್ಲಾಳಿಗಳಿಗೆ ಐವತ್ತರಿಂದ ಅರುವತ್ತು ಲಕ್ಷ ಲಂಚ ನೀಡಬೇಕಾಗುತ್ತದೆ. ಒಎಂಆರ್ ಶೀಟ್ ವಶಪಡಿಸಿಕೊಂಡು ನೌಕರಿ ಪಡೆದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಹಾಡಿ ಹೋಗಳುತ್ತಾರೆ. ಆದರೆ ಲಂಚ ಕೊಡುವ ಸಾಮರ್ಥ್ಯ ಇಲ್ಲದವರು ಬೀದಿಗೆ ಬಂದು ಹೋರಾಟ ಮಾಡುತ್ತಾರೆ. ಅವರ ರೋದನವನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿದೆ. ಅಂದರೆ ಕರ್ನಾಟಕ ಸ್ಟೇಟ್ ಲೆವೆಲ್ ಪ್ರವೇಶ ಪರೀಕ್ಷೆ. ಈ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆಯುತ್ತಾರೆ. ಇದು ಕೇಂದ್ರ ಸರಕಾರ ನಡೆಸುವ ನೆಟ್ ಪರೀಕ್ಷೆಗೆ ತತ್ಸಮಾನ. ಆದರೆ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಇದಕ್ಕೆ ಬೆಲೆ ಇರುತ್ತದೆ. ಕೆ-ಸೆಟ್ ಪರೀಕ್ಷೆಯನ್ನು ಈ ಮೊದಲು ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿತ್ತು. ಅಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರಿಂದ ಅಂದಿನ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒಪ್ಪಿಸಿದರು. ಈ ಕೆ-ಸೆಟ್ ಪರೀಕ್ಷೆ ಯುಜಿಸಿ ಮಾನ್ಯತೆ ಪಡೆದಿದೆ. ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ನೆಟ್, ಕೆ-ಸೆಟ್ ಅಥವಾ ಪಿಎಚ್ಡಿ ಪದವಿ ಪಡೆದವರನ್ನು ಮತ್ತೆ ಯಾವುದೇ ಪ್ರವೇಶ ಪರೀಕ್ಷೆ ನಡೆಸದೆ ಪರಿಗಣಿಸಬೇಕು. ಪ್ರತಿಭಾವಂತರಿಗೆ ಅವಕಾಶ ನೀಡಿದಂತಾಗುತ್ತದೆ. ಆಗ ಪರೀಕ್ಷಾ ಪ್ರಾಧಿಕಾರ ಮತ್ತು ಒಎಂಆರ್ ಶೀಟಿನ ಅಗತ್ಯವೇ ಬೀಳುವುದಿಲ್ಲ. ದುರಂತ ನೋಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವುದಿಲ್ಲ. ಯಾಕೆಂದರೆ ಲಂಚ ನೀಡಿರುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೂರು ಹಂತದ ಪರೀಕ್ಷೆಗಳು ನಡೆಯುತ್ತವೆ. ಮೂರೂ ಹಂತದಲ್ಲಿ ಲಂಚ ನೀಡಿದರೆ ಮಾತ್ರ ಅಂತಿಮವಾಗಿ ಹುದ್ದೆ ಸಿಗುತ್ತದೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಎಂಆರ್ ಶೀಟ್ ಇರುತ್ತದೆ. ಇಲ್ಲೂ ಕೈಚಳಕ ತೋರಿಸುವ ದಲ್ಲಾಳಿಗಳು ಇದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಭಾರೀ ಚರ್ಚೆಯಾಯಿತು. ಇನ್ನು ಸಂದರ್ಶನದ ಹಂತದಲ್ಲಿ ಬಾಚಿಕೊಳ್ಳಲು ಆಯೋಗದ ಸದಸ್ಯರು ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲ ಭ್ರಷ್ಟ ಬಾಗಿಲುಗಳು ತೆರೆದಿಟ್ಟಿರುವುದರಿಂದ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತದೆ. ಹಿರಿಯ ಶ್ರೇಣಿಯ ಅಧಿಕಾರಿಗಳ ಹುದ್ದೆಗೆ ಮೂರು ಹಂತದ ಪರೀಕ್ಷೆಗಳನ್ನು ನಡೆಸಿಯೂ ಪಾರದರ್ಶಕ ಆಯ್ಕೆ ಮಾಡಬಹುದು ಎನ್ನುವುದನ್ನು ಕೇಂದ್ರ ಲೋಕಸೇವಾ ಆಯೋಗ ರುಜುವಾತು ಪಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅತ್ಯಂತ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವ ಇರಾದೆ ನಮ್ಮ ಜನಪ್ರತಿನಿಧಿಗಳಿಗೆ ಇದ್ದಿದ್ದರೆ ವ್ಯವಸ್ಥೆಯನ್ನು ಪುನರ್ ಸಂಘಟಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಅತ್ಯುತ್ತಮ ಮಾದರಿ ಎನ್ನುವುದು ಎಲ್ಲರ ಅರಿವಿನಲ್ಲಿದೆ. ಅಧ್ಯಕ್ಷರು, ಸದಸ್ಯರ ನೇಮಕಾತಿಯಿಂದ ಹಿಡಿದು ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ನಡೆಸುವ ವ್ಯವಸ್ಥೆ ರೂಪಿಸಬೇಕು. ಹಾಗೆ ಮಾಡಲು ನಮ್ಮ ಜನಪ್ರತಿನಿಧಿಗಳಿಗೆ ಇಷ್ಟವಿಲ್ಲ. ಯಾಕೆಂದರೆ ಪ್ರಭಾವ ಬೀರಿ ತಮ್ಮ ಸಂಬಂಧಿಕರಿಗೆ ಹುದ್ದೆ ಕೊಡಿಸುವ ಬಯಕೆ ಇರುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇನ್ನಿತರ ಪಕ್ಷಗಳು ಒಟ್ಟಿಗೆ ಸೇರಿ ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಕರ್ನಾಟಕ ಲೋಕಸೇವಾ ಆಯೋಗವನ್ನು ಪುನರ್ ಸಂಘಟಿಸಿದರೆ ಭ್ರಷ್ಟಾಚಾರವನ್ನು ನಿಲ್ಲಿಸಬಹುದು. ಎಲ್ಲ ಹಂತದ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ರೂಪಿಸಿದರೆ ಲಂಚ ರಹಿತ ನೌಕರಿ ಸಾಧ್ಯವಾಗುತ್ತದೆ. ಒಮ್ಮೆ ಲಂಚ ರಹಿತ ನೌಕರಿ ಮತ್ತು ಲಂಚ ರಹಿತ ವರ್ಗಾವಣೆ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ. ಸದನದಲ್ಲಿ ಮಾತನಾಡಿದ ಎಲ್ಲ ಜನಪ್ರತಿನಿಧಿಗಳು ರೋಗದ ಮೂಲ ಗೊತ್ತಿದ್ದರೂ ಕೇವಲ ಕಾಯಿಲೆ ಬಗ್ಗೆ ಹೆಚ್ಚು ಟೀಕಿಸಿದರು. ಎ ಮತ್ತು ಬಿ ಶ್ರೇಣಿಯ ಹುದ್ದೆಗಳನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಿ. ಸಿ ಮತ್ತು ಕೆಳಗಿನ ಹುದ್ದೆಗಳನ್ನು ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಂಡರೆ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾನಿಲಯಗಳ ಮಟ್ಟದವರೆಗಿನ ಶಿಕ್ಷಕರ ಹುದ್ದೆಗಳನ್ನು ಕೇವಲ ಪದವಿ, ಸ್ನಾತಕೋತ್ತರ ಪದವಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಿದರೆ ಪಾರದರ್ಶಕ ನೇಮಕಾತಿ ಸಾಧ್ಯವಾಗುತ್ತದೆ. ವಿಶ್ವವಿದ್ಯಾನಿಲಯಗಳು ನಡೆಸುವ ಪರೀಕ್ಷೆಗಳ ಮೇಲೆ ನಂಬಿಕೆ ಕಳೆದುಕೊಂಡವರಂತೆ ಪ್ರತೀ ಹುದ್ದೆ ನೇಮಕಾತಿಯಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು? ಅದರಲ್ಲೂ ಒಎಂಆರ್ ಶೀಟ್ ಮೂಲಕ ಪರೀಕ್ಷೆ ನಡೆಸಿ ಆಯ್ಕೆ ಮಾಡುವುದು ಕೇವಲ ಹಣ ಮಾಡುವುದಕ್ಕಾಗಿ. ಬೇರೆ ಘನವಾದ ಉದ್ದೇಶ ಇಲ್ಲ ಎಂಬುದು ಸ್ವಯಂ ಸ್ಪಷ್ಟ. ಕರ್ನಾಟಕ ಲೋಕಸೇವಾ ಆಯೋಗ ಮಾತ್ರವಲ್ಲ ಯಾವ ನೇಮಕಾತಿ ಪ್ರಾಧಿಕಾರವೂ ಒಳ್ಳೆಯದು ಕೆಟ್ಟದ್ದು ಆಗಿರುವುದಿಲ್ಲ. ಅದನ್ನು ನಿಯಂತ್ರಿಸುವವರು ಅದನ್ನು ಭ್ರಷ್ಟ ವ್ಯವಸ್ಥೆಯಾಗಿ ರೂಪಿಸುತ್ತಾರೆ. ವ್ಯವಸ್ಥೆಯ ಲೋಪ ಸರಿಪಡಿಸಿದರೆ ಭ್ರಷ್ಟರ ಆಟವೂ ನಡೆಯುವುದಿಲ್ಲ.
ಮದ್ಯಪಾನ ಮಾಡಿ ಕಾರು ಚಲಾಯಿಸಿದ ಶಂಕೆ: ಗಾಲ್ಫ್ ದಂತಕತೆ ಟೈಗರ್ ವುಡ್ ಬಂಧನ
ಫ್ಲೋರಿಡಾ (ಅಮೆರಿಕ): ಪಿಜಿಎ ವೃತ್ತಿಪರ ಗಾಲ್ಫ್ ಗೆ ಮರಳಿದ ಕೆಲವೇ ದಿನಗಳ ಅಂತರದಲ್ಲಿ ಗಾಲ್ಫ್ ದಂತಕತೆ ಟೈಗರ್ ವುಡ್ ಪಾನಮತ್ತರಾಗಿ ಕಾರು ಚಲಾಯಿಸಿದ ಶಂಕೆಯ ಮೇಲೆ ಬಂಧನಕ್ಕೀಡಾಗಿದ್ದಾರೆ. ಫ್ಲೋರಿಡಾದ ತಮ್ಮ ಮನೆಯ ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಅವರು ಪಾರಾಗಿದ್ದರು. ಪೊಲೀಸರ ಪ್ರಕಾರ, ಟೈಗರ್ ವುಡ್ ತಮ್ಮ ಬಂಧನದ ಬಳಿಕ ಅಸ್ವಸ್ಥತೆಗೊಂಡಿದ್ದಾರೆ. ಅವರನ್ನು ಫ್ಲೋರಿಡಾದಲ್ಲಿರುವ ಮಾರ್ಟಿನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿದೆ. ಮದ್ಯಪಾನದ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಆದರೆ, ಟೈಗರ್ ವುಡ್ ಮೂತ್ರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಟೈಗರ್ ವುಡ್ ವಿರುದ್ಧ ಪಾನಮತ್ತರಾಗಿ ವಾಹನ ಚಲಾಯಿಸಿದ ಆರೋಪ, ಸ್ವತ್ತಿಗೆ ಹಾನಿ ಮಾಡಿದ ಆರೋಪ ಹಾಗೂ ಕಾನೂನುಬದ್ಧ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ ಆರೋಪವನ್ನು ಹೊರಿಸಲಾಗಿದೆ. ಟೈಗರ್ ವುಡ್ ಅವರು ಮತ್ತೊಂದು ಕಾರಿಗೆ ಢಿಕ್ಕಿ ಹೊಡೆಯುವುದಕ್ಕೂ ಮುನ್ನ ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಇದರಿಂದ ಕಾರು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಕೂಡಾ ಗಾಯಗಳಾಗಿಲ್ಲ ಎಂದು ಮಾರ್ಟಿನ್ ಕೌಂಟಿ ಶೆರಿಫ್ ಜಾನ್ ಬುಡೆನ್ಸಿಯೆಕ್ ಹೇಳಿದ್ದಾರೆ.
ಗದಗ-ಹೊಟಗಿ ಜೋಡಿ ಮಾರ್ಗ ಪೂರ್ಣ; ವಿಜಯಪುರ-ಬೆಂಗಳೂರು ರೈಲು ಪ್ರಯಾಣ ಸಲೀಸು
ಗದಗ-ಹೊಟಗಿ ನಡುವಿನ ಬಹುನಿರೀಕ್ಷಿತ ಜೋಡಿ ರೈಲು ಮಾರ್ಗದ ಕಾಮಗಾರಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗವು ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಮಾತ್ರವಲ್ಲದೆ, ಉತ್ತರ ಭಾರತಕ್ಕೂ ಸಂಪರ್ಕ ಕಲ್ಪಿಸಲಿದ್ದು, ಇನ್ಮುಂದೆ ವಿಜಯಪುರದಿಂದ ಬೆಂಗಳೂರು ಮತ್ತು ಮೈಸೂರಿಗೆ ಪ್ರಯಾಣಿಸುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ವಿಜಯನಗರ | ಹಳಿ ಮೇಲೆ ಬಿದ್ದ ವ್ಯಕ್ತಿ ರೈಲಿನಡಿಗೆ ಸಿಲುಕಿ ಮೃತ್ಯು
ವಿಜಯನಗರ, ಮಾ.28: ರೈಲು ಹಳಿ ಬಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಮೇಲೆ ರೈಲು ಹರಿದ ಪರಿಣಾವ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿ ರೈಲ್ವೇ ಹಳಿ ಮೇಲೆ ಬಿದ್ದಿದ್ದ ಸಂದರ್ಭ ಆತನ ಮೇಲೆ ರೈಲು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಹೊಸಪೇಟೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತರ ಗುರುತು ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಪುದುಚೇರಿ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆ ಪುದುಚೇರಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಎ.ವಿ.ಸುಬ್ರಮಣಿಯನ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಈ ಸಂಬಂಧ ಪುದುಚೇರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ವೈದಿಲಿಂಗಂ ಅವರಿಗೆ ಪತ್ರ ಬರೆದಿರುವ ಎ.ವಿ.ಸುಬ್ರಮಣಿಯನ್, ವೈಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎ.ವಿ.ಸುಬ್ರಮಣಿಯನ್ ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. 2021ರಲ್ಲಿ ಅವರನ್ನು ಕಾಂಗ್ರೆಸ್ ಪಕ್ಷವು ಉತ್ತರ ಕರೈಕಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರು ಪರಾಭವಗೊಂಡಿದ್ದರು. ಕರೈಕಲ್ ವಿಧಾನಸಭಾ ಕ್ಷೇತ್ರದವರಾದ ಸುಬ್ರಮಣಿಯನ್, ಪುದುಚೇರಿ ವಿಧಾನಸಭೆಯ ಸ್ಪೀಕರ್ ಹಾಗೂ ಉಪ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೆ, ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. 2001ರ ವಿಧಾನಸಭಾ ಚುನಾವಣೆಯಲ್ಲಿ ಕರೈಕಲ್ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶಿಸಿದ್ದರು.
ಯುದ್ದದ ಸಂಘರ್ಷ : ಪ್ರಧಾನಿ ಕರೆದಿದ್ದ ಸಿಎಂ ಸಭೆಗೆ ಸಿದ್ದರಾಮಯ್ಯ ಗೈರು - ಬಿಜೆಪಿ ಪ್ರತಿಕ್ರಿಯೆ
Siddaramaiah skips All CM Meeting : ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಅಭಾವಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ರಾಜ್ಯದ ಪರವಾಗಿ ಕೆಎಚ್ ಮುನಿಯಪ್ಪ ಭಾಗವಹಿಸಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆಯನ್ನು ನೀಡಿದೆ.
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ
ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯ ಹೊರೆ ತಗ್ಗಿಸಿ 'ಗ್ರೇಡಿಂಗ್' ಪದ್ಧತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಅವರ ಹೇಳಿಕೆಯು ಆತ್ಮಘಾತಕ ಹಾಗೂ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವಂತಿದೆ ಎಂದು ಅವರು
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಬಿರುಸಿನಿಂದ ನಡೆಯುತ್ತಿವೆ. ಆದರೆ, ಪರೀಕ್ಷೆಯ ಮಧ್ಯದಲ್ಲಿಯೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರವೊಂದು ಇದೀಗ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ತೃತೀಯ ಭಾಷೆಯಾದ ಹಿಂದಿ ವಿಷಯದ ಅಂಕಗಳನ್ನು ಮೌಲ್ಯಾಂಕನಕ್ಕೆ (ಒಟ್ಟು ಮೊತ್ತಕ್ಕೆ) ಪರಿಗಣಿಸದೆ, ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ
ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಮ್ ವಿದ್ಯಾರ್ಥಿಯನ್ನು ತರಗತಿಯ ವೇಳೆ 13 ಬಾರಿ ‘ಟೆರರಿಸ್ಟ್’ ಎಂದು ಕರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಡಾ. ಮುರಳೀಧರ್ ದೇಶಪಾಂಡೆ ಎಂದು ಗುರುತಿಸಲಾದ ಪ್ರಾಧ್ಯಾಪಕರು ಮಾರ್ಚ್ 27ರಂದು ತರಗತಿಯ ವೇಳೆ ವಿದ್ಯಾರ್ಥಿಯನ್ನು 13 ಬಾರಿ ‘ಭಯೋತ್ಪಾದಕ’ ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಪ್ರಕಾರ, ಅಫಾನ್ ಎಂಬ ವಿದ್ಯಾರ್ಥಿಯನ್ನು ತರಗತಿಯಲ್ಲಿ ಪ್ರಾಧ್ಯಾಪಕರು ನಿಂದಿಸಿದ್ದಾರೆ ಎನ್ನಲಾಗಿದೆ. “ಇರಾನ್ ಯುದ್ಧವು ನಿಮ್ಮಂತಹವರಿಂದಾಗಿದೆ”, “ಟ್ರಂಪ್ ನಿಮ್ಮನ್ನು ಕರೆದೊಯ್ಯುತ್ತಾರೆ”, “ನೀವು ಮೂರ್ಖರು, ನೀವು ನರಕಕ್ಕೆ ಹೋಗುತ್ತೀರಿ” ಎಂಬ ಹೇಳಿಕೆಗಳನ್ನು ಸುಮಾರು 60 ವಿದ್ಯಾರ್ಥಿಗಳ ಎದುರು ನೀಡಿದ್ದಾರೆ ಎಂದು ವರದಿ ಹೇಳಿದೆ. ಇದರಿಂದಾಗಿ ತರಗತಿಯಲ್ಲಿ ಅವಮಾನಕಾರಿ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಫಾನ್ ಅವರಿಗೆ ಬೆಂಬಲ ನೀಡಿದ ಕೆಲವು ವಿದ್ಯಾರ್ಥಿಗಳನ್ನು “ತರಗತಿಯ ವೇಳೆ ಮಾತನಾಡಿದ ಕಾರಣ” ಅಮಾನತುಗೊಳಿಸಲಾಗಿದೆ ಎಂಬ ವರದಿಯೂ ಹೊರಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಘಟನೆಯ ಬಳಿಕ ಪ್ರಾಧ್ಯಾಪಕರು ಕಾಲೇಜಿಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದ್ದು, ಅವರು ಅಫಾನ್ ಅವರಿಗೆ ನೇರವಾಗಿ ಕ್ಷಮೆಯಾಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋ ಬಹಿರಂಗವಾದ ಬಳಿಕ ಪಿಇಎಸ್ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ಕೈಗೊಂಡಿದ್ದು, ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ. ಮಾರ್ಚ್ 27ರ ಅಧಿಕೃತ ಆದೇಶದಲ್ಲಿ, “ವಿದ್ಯಾರ್ಥಿಯಿಂದ ಬಂದ ದೂರನ್ನು ಸ್ವೀಕರಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಯುವವರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಿ ಆದೇಶ ನೀಡಲಾಗಿದೆ. ಈ ಆದೇಶಕ್ಕೆ ಕುಲಪತಿಗಳು ಸಹಿ ಹಾಕಿದ್ದಾರೆ. ಆದರೆ, ಘಟನೆಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರ ಅಮಾನತು ಆದೇಶದಲ್ಲಿ ನೀಡಲಾಗಿಲ್ಲ. ಈ ಕುರಿತು SIO ನ PR ಕಾರ್ಯದರ್ಶಿ ಮುಹಮ್ಮದ್ ಹೈಯಾನ್ ಅವರು 'ವಾರ್ತಾ ಭಾರತಿ' ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ನಡೆದಿದ್ದು, ಸಂಬಂಧಿತ ಪ್ರಾಧ್ಯಾಪಕರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಎನ್ಎಸ್ಯುಐ ಸಂಘಟನೆಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ. ಈ ಕುರಿತು ಸ್ಪಷ್ಟೀಕರಣಕ್ಕಾಗಿ ವಾರ್ತಾ ಭಾರತಿ ವಿಶ್ವವಿದ್ಯಾಲಯಕ್ಕೆ ಇಮೇಲ್ ಕಳುಹಿಸಿದ್ದು, ಡಾ. ಮುರಳೀಧರ್ ದೇಶಪಾಂಡೆ ಅವರಿಂದಲೂ ಪ್ರತಿಕ್ರಿಯೆ ಕೋರಲಾಗಿದೆ. ಅಧಿಕೃತ ಪ್ರತಿಕ್ರಿಯೆ ಲಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುತ್ತದೆ. Professor accused of calling Muslim student “terrorist” at PES University, Bengaluru A serious controversy has emerged at PES University, Bengaluru, where professor Dr. Muralidhar Deshpande allegedly made derogatory remarks against a Muslim student, Affan, during a class on… pic.twitter.com/hckZVoTkQo — Genzdigest (@genzdigest) March 27, 2026
ಸೌದಿ ವಾಯುನೆಲೆಯ ಮೇಲೆ ಇರಾನ್ ದಾಳಿ; ಅಮೆರಿಕದ 12 ಸೈನಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ರಿಯಾದ್: ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ 12 ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ವಿರುದ್ಧ ನಾಲ್ಕು ವಾರಗಳ ಹಿಂದೆ ಆರಂಭವಾದ ಯುದ್ಧದ ನಂತರ ಇದುವರೆಗೂ 300ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ. ಶುಕ್ರವಾರ ಅಮೆರಿಕದ ಸೈನ್ಯ ನೀಡಿದ ಮಾಹಿತಿಯ ಪ್ರಕಾರ, ಗಾಯಗೊಂಡ 300 ಸೈನಿಕರಲ್ಲಿ 273 ಮಂದಿ ಮತ್ತೆ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಉಳಿದವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಲಾಗಿದೆ. ಇದುವರೆಗೆ ನಡೆದಿರುವ ಈ ಸಂಘರ್ಷದಲ್ಲಿ ಅಮೆರಿಕದ ಒಟ್ಟು 13 ಸೈನಿಕರು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿಯು ಉಲ್ಲೇಖಿಸಿದೆ.
ಮಂಗಳೂರು: 'ಮಲಬಾರ್ ಗೋಲ್ಡ್'ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಂಗಳೂರು : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಂಗಳೂರು ಮತ್ತು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್, ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಹಾಗೂ ಎಕ್ಸ್ ಪರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಲ್ಕೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ವೇಳೆ ರಂಗ ಸಾಧಕರಾದ ಭರತನಾಟ್ಯ ಗುರು ವಿದುಷಿ ಸುಮಂಗಲಾ ರತ್ನಾಕರ್, ಕಲಾ ಪೋಷಕ ರೊ. ಸತೀಶ್ ಬೋಳಾರ್ ಹಾಗೂ ಕಲಾ ಸಂಘಟಕ ಕರುಣಾಕರ ಶೆಟ್ಟಿ ಅವರಿಗೆ 'ಮಲಬಾರ್ ವಿಶ್ವ ರಂಗ ಭೂಮಿ ಪ್ರಶಸ್ತಿ' ಪ್ರದಾನ ಮಾಡಿ ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಝ್ ರಹ್ಮಾನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ನಝರ್ ಅಹ್ಮದ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮ್ಯಾನೇಜರ್ ಗಿರೀಶ್ ಶೆಟ್ಟಿ, ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಸಮೀರ್ ಮತ್ತಿತರರು ಉಪಸ್ಥಿತರಿದ್ದರು. ರಂಗ ಸಂಗಾತಿ ಮಂಗಳೂರು ಇದರ ಸಂಚಾಲಕ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.
ರಾಯಚೂರು : ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆವರ್ಷದಿಂದ ಇಲ್ಲ ಸಂಬಳ!
ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಒಂದು ವರ್ಷದಿಂದ ನಿಯಮಿತವಾಗಿ ವೇತನ ಪಾವತಿಯಾಗದಿರುವುದು ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ವೇತನವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಅಸಾಧ್ಯವಾಗಿರುವ ಈ ಸಂದರ್ಭದಲ್ಲಿ, ನೇಮಕಾತಿ ಏಜೆನ್ಸಿಗಳು ಬದಲಾಗುತ್ತಿದ್ದರೂ ನೌಕರರ ಬಾಕಿ ವೇತನದ ಸಮಸ್ಯೆ ಮಾತ್ರ ಬಗೆಹರಿಯದೆ ಉಳಿದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ದಿಢೀರ್ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ (ಸೆಪ್ಟೆಂಬರ್) ನಡೆದ ಭ್ರಷ್ಟಾಚಾರ ವಿರೋಧಿ 'ಜೆನ್ ಝೀ' (Gen Z) ಯುವಜನತೆಯ ಪ್ರತಿಭಟನೆ ವೇಳೆ ನಡೆದ ಮಾರಣಾಂತಿಕ
ಮೋದಿ - ಟ್ರಂಪ್ ಹೈಲೆವೆಲ್ ಕಾಲ್ನಲ್ಲಿ ಎಲಾನ್ ಮಸ್ಕ್’ಗೆ ಏನು ಕೆಲಸ : ಶಿಷ್ಟಾಚಾರದ ಉಲ್ಲಂಘನೆ?
Elon Musk and Donal Trump : ಎರಡು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯನ್ನು ನಡೆಸಿದ್ದರು. ಈ ದೂರವಾಣಿ ಸಂಭಾಷಣೆಯ ವೇಳೆ, ಉದ್ಯಮಿ ಎಲಾನ್ ಮಸ್ಕ್ ಕೂಡಾ ಭಾಗವಹಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯೇ ಎನ್ನುವುದು ಪ್ರಶ್ನೆಯಾಗಿದೆ.
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.
Jowar Price Today in Karnataka: ಕರ್ನಾಟಕದಲ್ಲಿ ಈ ಬಾರಿ ಉತ್ತಮ ಜೋಳದ ಇಳುವರಿ ಬಂದಿದೆ. ಆದರೆ ಪ್ರತಿ ವರ್ಷದಷ್ಟು ಹೇರಳ ಪ್ರಯಾಣದಲ್ಲಿ ಉತ್ಪಾದನೆ ಆಗಲಿಲ್ಲ. ಕಡಿಮೆ ಪ್ರಮಾಣದಲ್ಲಿ ಜೋಳ ಬೆಳೆಯಲಾಗಿದೆ. ಹೀಗಿದ್ದರೂ ಕ್ವಿಂಟಾಲ್ ಜೋಳದ ಬೆಲೆ 1619 ರೂಪಾಯಿಯಿಂದ 4211ರೂಪಾಯಿಯಷ್ಟಿದೆ. ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (APMC) ದರ ಕಡಿಮೆ ಇದ್ದು, ರೈತರಿಗೆ ಲಾಭದಾಯಕ
ಸಕಲೇಶಪುರ : ಪ್ರೀ ವೆಡ್ಡಿಂಗ್ ಫೋಟೊಶೂಟ್ ತಂಡದ ಮೇಲೆ ಹಲ್ಲೆ ; 7 ಜನರ ಬಂಧನ
ಸಕಲೇಶಪುರ ತಾಲೂಕು ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಸ್ಥಳೀಯರ ಹೆಸರಲ್ಲಿ ಗುಂಡಾಗಿರಿ ಮಾಡಲಾಗಿದೆ. ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಕೆಲವರು ಗುಂಡಾಗಿರಿ ಮಾಡಿದ್ದಾರೆ. 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಪೃಶ್ಯತೆ, ಜಾತೀಯತೆ ದಲಿತರಿಗೆ ಸಂವಿಧಾನ ಕೊಟ್ಟ ‘ಸ್ಥಾನಮಾನವೆ’?
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತು ಪಡಿಸಿ ಇತರ ಧರ್ಮವನ್ನು ಆಚರಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಇತರ ಯಾವುದೇ ಧರ್ಮಕ್ಕೆ ಮತಾಂತರವು ಪರಿಶಿಷ್ಟ ಜಾತಿ ‘ಸ್ಥಾನಮಾನ’ದ ತಕ್ಷಣದ ಮತ್ತು ಸಂಪೂರ್ಣ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ತನ್ನ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಈ ತೀರ್ಪು ನಿರ್ದಿಷ್ಟ ಹಲ್ಲೆ ಪ್ರಕರಣಕ್ಕಷ್ಟೇ ಸೀಮಿತವಾಗಿ ಉಳಿಯದೆ ದಲಿತರ ಒಟ್ಟಾರೆ ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ತನ್ನೊಳಗೆ ಹಲವು ವಿರೋಧಾಭಾಸಗಳನ್ನು ಬಚ್ಚಿಟ್ಟುಕೊಂಡಿರುವ ಈ ತೀರ್ಪನ್ನು ಈಗಾಗಲೇ ಹಲವು ಚಿಂತಕರು ಪ್ರಶ್ನಿಸಿದ್ದಾರೆ. ಒಬ್ಬ ಎಸ್ಸಿ ಅಥವಾ ಪರಿಶಿಷ್ಟ ಜಾತಿಯ ವ್ಯಕ್ತಿ ಮತಾಂತರವಾಗುವುದಕ್ಕೆ ಸುಪ್ರೀಂಕೋರ್ಟ್ಗೆ ಯಾವ ಅಭ್ಯಂತರವೂ ಇಲ್ಲ. ಆದರೆ, ಆತ ಕ್ರೈಸ್ತ ಅಥವಾ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುವುದರ ಬಗ್ಗೆ ಮಾತ್ರ ತೀರ್ಪಿನಲ್ಲಿ ಆಕ್ಷೇಪವಿದ್ದಂತಿದೆ. ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಯನ್ನು ಒಂದು ‘ಸ್ಥಾನಮಾನ’ವಾಗಿ ಪರಿಗಣಿಸಿದೆ. ಆದರೆ ಈ ‘ಸ್ಥಾನಮಾನ’ವನ್ನು ಪಡೆದ ಜನರು ತಲೆ ತಲಾಂತರಗಳಿಂದ ಪಡೆದ ಸವಲತ್ತುಗಳು ಯಾವುವು ಎನ್ನುವುದು ಸುಪ್ರೀಂಕೋರ್ಟ್ಗೆ ಗೊತ್ತಿಲ್ಲದಿರುವುದೇನೂ ಅಲ್ಲ. ಅದೊಂದು ಸ್ಥಾನವೂ ಅಲ್ಲ, ಮಾನವೂ ಅಲ್ಲ. ಬದಲಿಗೆ ಜಾತಿಯ ಹೆಸರಿನಲ್ಲಿ ಶತಶತಮಾನಗಳಿಂದ ಪಡೆದುಕೊಂಡು ಬಂದ ಅವಮಾನವನ್ನೇ ಸುಪ್ರೀಂಕೋರ್ಟ್ ‘ಸ್ಥಾನಮಾನ’ ಎಂದು ಹೇಳುತ್ತಿದೆ. ಈ ಸ್ಥಾನಮಾನ ರದ್ದಾಗುವುದು ಎಂದರೆ, ಜಾತೀಯತೆ, ಅಸ್ಪಶ್ಯತೆ, ಶೋಷಣೆ ಇತ್ಯಾದಿಗಳಿಂದ ಮುಕ್ತವಾಗುವುದು ಎಂದರ್ಥ. ಎಲ್ಲಿಯವರೆಗೆ ಇವೆಲ್ಲವುಗಳಿಂದ ಪರಿಶಿಷ್ಟ ಜಾತಿಯ ಜನರು ಮುಕ್ತರಾಗುವುದಿಲ್ಲವೋ ಅಲ್ಲಿಯವರೆಗೆ ಈ ‘ಸ್ಥಾನಮಾನ’ ಅವರ ಪಾಲಿಗೆ ಯಾವ ಸುಪ್ರೀಂಕೋರ್ಟ್ ಹೇಳಿದರೂ, ಯಾವ ಧರ್ಮಕ್ಕೆ ಮತಾಂತರವಾದರೂ ರದ್ದಾಗುವುದಿಲ್ಲ. ಇದು ವಾಸ್ತವವಾಗಿದೆ. ‘ಸ್ಥಾನಮಾನ’ವೆಂದು ಸುಪ್ರೀಂಕೋರ್ಟ್ ಯಾವುದನ್ನು ಉಲ್ಲೇಖಿಸಿ ತೀರ್ಪು ನೀಡಿದೆ ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಕೋರ್ಟ್ ಕಣ್ಣಿಟ್ಟಿರುವುದು ಪರಿಶಿಷ್ಟ ಜಾತಿಯ ಜನರಿಗೆ ನೀಡಿರುವ ಮೀಸಲಾತಿಯ ಮೇಲೆ. ಹಾಗೆಯೇ ಶೋಷಣೆ, ದೌರ್ಜನ್ಯಗಳಿಂದ ಅವರನ್ನು ರಕ್ಷಿಸುವುದಕ್ಕಾಗಿ ರೂಪಿಸಿರುವ ಕಾನೂನು ಕಾಯ್ದೆಗಳ ಮೇಲೆ. ಇದನ್ನು ಪರೋಕ್ಷವಾಗಿ ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಗಳಿಗೆ ನೀಡಿರುವ ‘ಸವಲತ್ತು’ಗಳು ಎಂದು ಭಾವಿಸಿ ತೀರ್ಪು ನೀಡಿದಂತಿದೆ. ನೀವು ಹಿಂದೂ, ಬೌದ್ಧ, ಸಿಖ್ ಧರ್ಮ ಇವುಗಳನ್ನು ಹೊರತು ಪಡಿಸಿ ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಈ ಸವಲತ್ತುಗಳಿಂದ ವಂಚಿತರಾಗುತ್ತೀರಿ ಎನ್ನುವ ನೇರ ಬೆದರಿಕೆಯನ್ನು ಪರಿಶಿಷ್ಟ ಜಾತಿಯ ಜನರಿಗೆ ನೀಡಲಾಗಿದೆ. ಬೌದ್ಧ, ಸಿಖ್ ಧರ್ಮ ಸ್ವತಂತ್ರ ಧರ್ಮವಾಗಿ ಈಗಾಗಲೇ ಗುರುತಿಸಿಕೊಂಡಿವೆ. ಅಷ್ಟೇ ಅಲ್ಲ, ಅಲ್ಪಸಂಖ್ಯಾತ ಸ್ಥಾನಮಾನವನ್ನೂ ಅವುಗಳು ಪಡೆದುಕೊಂಡಿವೆ. ಹೀಗಿರುವಾಗ ಕ್ರೈಸ್ತ ಧರ್ಮ ಮತ್ತು ಇಸಾಮ್ ಧರ್ಮಕ್ಕೆ ಮತಾಂತರವಾದರೆ ಮಾತ್ರ ಸ್ಥಾನಮಾನ ರದ್ದಾಗುವುದು ಹೇಗೆ? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಈ ತೀರ್ಪಿನ ಮೂಲಕ ಸುಪ್ರೀಂಕೋರ್ಟ್ ಪರೋಕ್ಷವಾಗಿ ಬೌದ್ಧಧರ್ಮ ಮತ್ತು ಸಿಖ್ ಧರ್ಮದಲ್ಲಿ ಜಾತೀಯತೆ, ಅಸ್ಪಶ್ಯತೆಗಳು ತಾಂಡವವಾಡುತ್ತಿವೆ. ಆದುದರಿಂದ ಆ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಹೇಳಿದಂತಾಯಿತು. ಇದೇ ಸಂದರ್ಭದಲ್ಲಿ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳಲ್ಲಿ ಜಾತೀಯತೆ, ಅಸ್ಪಶ್ಯತೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಕ್ಲೀನ್ಚಿಟ್ ನೀಡಿದಂತಾಗಿದೆ. ಈ ಎರಡು ಧರ್ಮಗಳಿಗೆ ಪರಿಶಿಷ್ಟ ಜಾತಿಯ ಜನರು ಮತಾಂತರವಾದರೆ ಅವರಿಗೆ ಬೇರೆ ಕಾನೂನಿನ ರಕ್ಷಣೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಭಾವಿಸಿದೆ. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿಯ ಜನರಿಗೆ ಅವರ ಹಿಂದಿನ ‘ಸ್ಥಾನಮಾನ’ ರದ್ದಾಗಿ ಸಂವಿಧಾನದಲ್ಲಿರುವ ಹೊಸ ‘ಸ್ಥಾನಮಾನ’ಗಳು ಸಿಕ್ಕಂತಾಗುತ್ತದೆ ಎಂಬರ್ಥದಲ್ಲಿ ತೀರ್ಪು ಹೊರಬಿದ್ದಿದೆ. ಆದರೆ, ವಾಸ್ತವ ಬೇರೆಯೇ ಇದೆ. ಈ ದೇಶದಲ್ಲಿ ಬೇರೆ ಬೇರೆ ಜಾತಿಗಳಿಂದ ಮತಾಂತರವಾದವರೇ ಅಧಿಕ. ಇಲ್ಲಿ ವೃತ್ತಿ ಮತ್ತು ಜಾತಿ ಒಂದನ್ನೊಂದು ಬೆಸೆದುಕೊಂಡಿವೆೆ. ವೃತ್ತಿಯ ಕಾರಣಕ್ಕಾಗಿಯೇ ಜಾತಿಯನ್ನೂ ನಿಕೃಷ್ಟವಾಗಿ ನೋಡಲಾಗುತ್ತಿದೆ. ಇತರ ಧರ್ಮಗಳಿಗೆ ಮತಾಂತರವಾದರೂ ಒಂದು ತಲೆಮಾರು ಜಾತಿಯನ್ನು ಪೂರ್ಣವಾಗಿ ಕಳಚಿಕೊಂಡು ಸಮಾಜದಲ್ಲಿ ಬದುಕುವುದು ಇಲ್ಲಿ ಸುಲಭವಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಹೊಸ ಧರ್ಮದಲ್ಲಿ ‘ದಲಿತ ಕ್ರಿಶ್ಚಿಯನ್ನ’ರಾಗಿ ಬದುಕಬೇಕಾದ ಸ್ಥಿತಿಯಿದೆ. ಹಿಂದೂ ಧರ್ಮದ ಜಾತೀಯತೆ, ಅಸ್ಪಶ್ಯತೆಯಿಂದ ಬಿಡುಗಡೆ ಪಡೆಯುವ ಉದ್ದೇಶದಿಂದ ಮತಾಂತರಗೊಂಡವರು, ಹೊಸ ಧರ್ಮದಲ್ಲೂ ತಮ್ಮ ಜಾತಿಯ ಕಾರಣಕ್ಕಾಗಿ ಶೋಷಣೆಯನ್ನು ಅನುಭವಿಸುವುದು ವಿಪರ್ಯಾಸವೇ ಸರಿ. ಕ್ರೈಸ್ತ, ಇಸ್ಲಾಂ ಧರ್ಮಗಳಿಗೆ ಮೇಲ್ ಜಾತಿಯಿಂದ ಮತಾಂತರಗೊಂಡ ಜನರು ದಲಿತ ಸಮುದಾಯದಿಂದ ಮತಾಂತರಗೊಂಡ ಜನರನ್ನು ಸರಿಸಮನಾಗಿ ಕಾಣುವುದಿಲ್ಲ. ಕ್ರೈಸ್ತ ಧರ್ಮದಲ್ಲಿ ದಲಿತ ಪಾದ್ರಿಗಳೂ ಈ ಜಾತೀಯತೆಯ ನೋವನ್ನನುಭವಿಸುತ್ತಾ ಬದುಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದಲಿತ ಕ್ರಿಶ್ಚಿಯನ್ನರು ತಮ್ಮ ಹಕ್ಕುಗಳಿಗಾಗಿ ಪ್ರತ್ಯೇಕವಾಗಿ ಸಂಘಟಿತರಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಗೆಯೇ ಬೇರೆ ಬೇರೆ ಜಾತಿಗಳಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರವಾದ ನೂರಾರು ಜಾತಿಗಳು ತಮ್ಮ ಪೂರ್ವಾಶ್ರಮದ ಹೆಸರುಗಳ ಜೊತೆಗೇ ಬದುಕುತ್ತಿವೆ. ಮುಸ್ಲಿಮರ ನಡುವೆ ಇರುವ ಈ ಜಾತಿಗಳ ಬಗ್ಗೆಯೇ ಹಲವು ಅಧ್ಯಯನಗಳು ನಡೆದಿವೆ. ಇವುಗಳ ಬಗ್ಗೆ ಸುಪ್ರೀಂಕೋರ್ಟ್ಗೆ ಅರಿವಿಲ್ಲದೇ ಇರುವುದು ಖೇದಕರವಾಗಿದೆ. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲದೇ ಇರಬಹುದು. ಆದರೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ಮತಾಂತರವಾದಾಕ್ಷಣ ತಮ್ಮ ಜಾತಿಯ ಕಳಂಕದಿಂದ ಸಂಪೂರ್ಣ ಹೊರಗೆ ಬರಲು ಸಾಧ್ಯವಿಲ್ಲ. ಮತಾಂತರದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಒಮ್ಮೆಲೆ ಬಲಾಢ್ಯನಾಗಲು ಸಾಧ್ಯವಿಲ್ಲ. ಅದೊಂದು ಪ್ರತಿರೋಧ ಮಾತ್ರವಾಗಿದೆ. ಇಲ್ಲಿ ಮುಸ್ಲಿಮರೇ ತಾವು ಅನುಸರಿಸುತ್ತಿರುವ ಧರ್ಮದ ಕಾರಣಕ್ಕಾಗಿ ಇತರರಿಂದ ದೌರ್ಜನ್ಯಕ್ಕೊಳಗಾಗುತ್ತಿರುವ ದಿನಗಳು ಇವು. ಸಾಚಾರ್ ವರದಿ ಈ ದೇಶದಲ್ಲಿರುವ ಮುಸ್ಲಿಮರನ್ನೇ ‘ನವ ದಲಿತರು’ ಎಂದು ಕರೆದಿರುವಾಗ, ದಲಿತರು ಕ್ರೈಸ್ತರು ಅಥವಾ ಮುಸ್ಲಿಮರಾಗಿ ಬದಲಾದಾಕ್ಷಣ ಸಂವಿಧಾನಕೊಟ್ಟ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಅಮಾನವೀಯ ಮಾತ್ರವಲ್ಲ, ಹಿಂದೂ ಧರ್ಮದೊಳಗಿರುವ ಜಾತೀಯತೆ, ಅಸ್ಪಶ್ಯತೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸದಂತೆ ಅವರ ಬಾಯಿಯನ್ನು ಕಟ್ಟಿ ಹಾಕುವ ಹೊಸ ತಂತ್ರವೂ ಆಗಿದೆ.
ಬೆಂಗಳೂರು: ಚುನಾವಣೆ ಮುಗಿದ ತಕ್ಷಣ ಈ ಹಿಂದೆ ಮಾಡಿದಂತೆ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಇದೆಲ್ಲವೂ ಚುನಾವಣೆ ಗಿಮಿಕ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಮೊದಲು ನಿಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ಲೂಟಿ ಹೊಡೆಯುವುದನ್ನು ನಿಲ್ಲಿಸಿ ನಂತರ ಬೇರೆಯವರಿಗೆ ಬುದ್ಧಿ ಹೇಳಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗರಂ
ರಾಷ್ಟ್ರವ್ಯಾಪಿ ಲಾಕ್’ಡೌನ್ ಹೇರಿಕೆಯ ಸುದ್ದಿ - LPG ಹಂಚಿಕೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೊಟ್ಟ ಸ್ಪಷ್ಟನೆ ಏನು?
Lockdown Rumors - Union Minister Clarification : ಪಶ್ಚಿಮ ಏಷ್ಯಾದಲ್ಲಿನ ಯುದ್ದದ ಉನ್ಮಾದತೆಯ ಎಫೆಕ್ಟ್ ವಿಶ್ವದೆಲ್ಲಡೆ ಪಸರಿಸಲಾರಂಭಿಸಿದೆ. ಮೂರು ದೇಶಗಳ ನಡುವೆ ನಡೆಯುತ್ತಿರುವ, ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ. ಯುದ್ದದಿಂದಾಗಿ, ತೈಲ ಸರಬಾರಜಿನಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್ ಸಪ್ಲೈ ಕಮ್ಮಿಯಾಗಿದೆ. ಈ ಹಿನ್ನಲೆಯಲ್ಲಿ ಮತ್ತೆ ಲಾಕ್’ಡೌನ್ ವಿಧಿಸಲಾಗುತ್ತದೆ ಎನ್ನುವ ಸುದ್ದಿಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ.
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ
ಹಾಸನ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾದ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಾಗಿ ಬಂದಿದ್ದ ತಂಡದ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಸುಂದರ ಪರಿಸರ ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಈ ದೇವಸ್ಥಾನಕ್ಕೆ ಫೋಟೋಶೂಟ್ಗಾಗಿ ತೆರಳಿದ್ದ ತಂಡಕ್ಕೆ ಈ ಕಹಿ ಅನುಭವ ಉಂಟಾಗಿದೆ. ವರದಿಗಳ
ಮೈಸೂರು : ಇಂದಿರಾ ಕ್ಯಾಂಟೀನ್ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ
ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ, ಮೈಸೂರಿನಲ್ಲಿ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಭಾರಿ ಹಿಮಪಾತ: ಲಡಾಖ್ ನಲ್ಲಿ ಐದು ಮೃತದೇಹಗಳು ಪತ್ತೆ
ಲಡಾಕ್: ಶ್ರೀನಗರ- ಲೆಹ್ ಹೆದ್ದಾರಿಯ ಲಡಾಖ್ ಸಮೀಪದ ಝೋಜಿ ಲಾ ಎಂಬಲ್ಲಿ ಸಂಭವಿಸಿದ ಭೀಕರ ಹಿಮಪ್ರವಾಹದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳು ಹಿಮದಲ್ಲಿ ಹೂತುಹೋಗಿದ್ದು, ಈ ಆಯಕಟ್ಟಿನ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಗಿದೆ. ಪೊಲೀಸರು, ಸೇನಾ ಸಿಬ್ಬಂದಿ, ಗಡಿ ರಸ್ತೆ ಸಂಸ್ಥೆ, ಎಸ್ಡಿಆರ್ಎಫ್ ಮತ್ತು ಸೋನ್ಮಾರ್ಗ್ ಜಿಲ್ಲಾಡಳಿತ ಸಿಬ್ಬಂದಿ ಸೇರಿ ಸಮರೋಪಾದಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕನಿಷ್ಠ 15 ವಾಹನಗಳು ಹಿಮದಲ್ಲಿ ಹೂತುಕೊಂಡಿವೆ ಎಂದು ಹೇಳಲಾಗಿದೆ. ಹಿಮಪಾತದಲ್ಲಿ ಸಿಲುಕಿರುವವರ ರಕ್ಷಣೆಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಭೀಕರ ಹಿಮಪಾತದಿಂದಾಗಿ ಶುಕ್ರವಾರ ಸಂಜೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ದ್ರಾಸ್ ಉಪವಿಭಾಗಾಧಿಕಾರಿ ವಿಷಾಲ್ ಅತ್ರಿಯವರು ದೃಢಪಡಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರು ಪುರುಷರು, ಮಹಿಳೆ ಹಾಗೂ ಮಗು ಸೇರಿದ್ದಾರೆ. ಆದಾಗ್ಯೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್ ಪೋಸ್ಟ್ ನಲ್ಲಿ, ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾಗಿ ವಿವರಿಸಿದ್ದಾರೆ. Avalanche struck the Srinagar–Leh Highway (NH-1) at Zoji La Pass in Ladakh on Friday afternoon, March 27, 2026. The snow slide buried around 12–15 passenger vehicles under thick debris, killing at least 7 people (including a 10-year-old child) and injuring 5 others. pic.twitter.com/mHyZlN6Y9q — World In Last 24hrs (@world24x7hr) March 27, 2026
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ಇಂದಿನ ಮಾರುಕಟ್ಟೆ ಸ್ಥಿತಿಗತಿ ತಿಳಿಯುವುದು ಅತ್ಯಗತ್ಯ. ಇವತ್ತು (ಮಾರ್ಚ್ 28, 2026) ಚಿನ್ನದ ದರದಲ್ಲಿ ಮತ್ತೆ ತುಸು ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು, ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಎಂಸಿಎಕ್ಸ್ ಫ್ಯೂಚರ್ಸ್ ವಹಿವಾಟಿನ ಪ್ರಭಾವದಿಂದ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಲೇ
ಮಧ್ಯಪ್ರಾಚ್ಯ ಬಿಕ್ಕಟ್ಟು : ಸಿಎಂಗಳ ಜತೆ ಪ್ರಧಾನಿ ಸಭೆ, ‘ಟೀಮ್ ಇಂಡಿಯಾ’ ಸ್ಫೂರ್ತಿಗೆ ಕರೆ
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಉಂಟಾಗಿರುವ ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಬಿಕ್ಕಟ್ಟು ಎದುರಿಸಲು ರಾಜ್ಯಗಳು ಕೈಗೊಂಡ ಸನ್ನದ್ಧತೆಯ ಬಗ್ಗೆ ಮಾಹಿತಿ ಪಡೆದ ಪ್ರಧಾನಿಯವರು, ಎಲ್ಲಾರಾಜ್ಯಗಳು ‘ಟೀಮ್ ಇಂಡಿಯಾ’ ಸ್ಫೂರ್ತಿಯೊಂದಿಗೆ ಸಮನ್ವಯದಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ: ಸಾರ್ವಜನಿಕರಿಗೆ ಎಚ್ಚರಿಕೆ
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಯಾರೋ ಅಪರಿಚಿತ ವ್ಯಕ್ತಿ ಎಸ್ಪಿ ಅವರ ಹೆಸರನ್ನು ಬಳಸಿಕೊಂಡು ಈ ನಕಲಿ ಖಾತೆ ತೆರೆದಿದ್ದು, ಅದರಲ್ಲಿ ಚಿಕ್ಕಮಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿತೇಂದ್ರ ಕುಮಾರ್ ದಯಾಮ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಖಾತೆಯನ್ನು ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ನಕಲಿ ಖಾತೆಗಳ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವ ಅಥವಾ ವಂಚಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಜಿತೇಂದ್ರ ಕುಮಾರ್ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ, ಸೈಬರ್ ಪೊಲೀಸರು ಈ ನಕಲಿ ಖಾತೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಬಂಧನ
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತು ಮಾಜಿ ಗೃಹಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನೇಪಾಳದಲ್ಲಿ ನಡೆದ GenZ ಪೀಳಿಗೆಯ ವ್ಯಾಪಕ ಪ್ರತಿಭಟನೆ ಸಂಬಂಧ ಉಭಯ ಮುಖಂಡರನ್ನು ಬಂಧಿಸಲಾಗಿದೆ. ನೇಪಾಳದ ನೂತನ ಪ್ರಧಾನಿಯಾಗಿ ಬಾಲೇನ್ ಶಾ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಇಬ್ಬರನ್ನು ಬಂಧಿಸಲಾಗಿದೆ.
RCB Playing 11 Prediction: ಎಸ್ಆರ್ಎಚ್ ವಿರುದ್ಧ ಆರ್ಸಿಬಿ ಪ್ಲೇಯಿಂಗ್ 11
RCB Playing 11 Prediction: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಐಪಿಎಲ್ 19ನೇ ಸೀಸನ್ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿಯು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ
RCB Vs SRH Match: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026 ಹಬ್ಬ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪಂದ್ಯದ ಸಮಯ, ನೇರಪ್ರಸಾರ, ಸ್ಥಳ, ಆಟಗಾರರ ಬಲಾಬಲವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. 2025ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿರುವ
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?
IPL 2026 RCB Vs SRH: ಐಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಕಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ, ಮಾರ್ಚ್ 28ರಂದು ಬೆಂಗಳೂರಿನಲ್ಲಿ ವಾತಾವರಣ ಹೇಗಿರಲಿದೆ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೊಡಗಿಗೆ ಮೇಲೆ ಎಲ್-ನಿನೋ ಎಫೆಕ್ಟ್ ; ವಾಡಿಕೆಯ ಮುಂಗಾರು ಅನುಮಾನ
ಕರಾವಳಿಯಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಮಾ.28ರ ಸಂಜೆಯಿಂದ ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೆಲವು ಭಾಗಗಳಲ್ಲಿಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮಳೆ ಏ.5ರವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಬಳಿಕ ಮತ್ತೆ ಬಿಸಿಲಿನ ವಾತಾವರಣ ಕಂಡುಬರಲಿದೆ.
ಜನರ ಮೇಲೆ ಮುದ್ರಾಂಕ ಶುಲ್ಕದ ಭಾರ ಹೊರಿಸಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ 63 ವಾರ್ಡ್ಗಳಲ್ಲಿಮೂಲಸೌಕರ್ಯ ವೃದ್ಧಿಗೆ ಹಣ ಹೊಂದಿಸಲು ಪಾಲಿಕೆಯು ಮುನಿಸಿಪಲ್ ಬಾಂಡ್ಗಳ ಮೊರೆ ಹೋಗಿದೆ. ಅಷ್ಟೇ ಅಲ್ಲ; ಆಸ್ತಿಗಳಿಗೆ ಹೊಸದಾಗಿ ಖಾತಾ ನೀಡಲು ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿದೆ. ಈ ಮೂಲಕ ಜನರ ಮೇಲೆ ತೆರಿಗೆ ಭಾರ ಹಾಕಿದೆ.
ಸೇವಾ ಕ್ಷೆೇತ್ರ ಉದ್ಯಮ ಕ್ಷೇತ್ರಗಳಾಗಿರುವ ಕಾಲವಿದು : ಪ್ರೊ.ಬರಗೂರು ರಾಮಚಂದ್ರಪ್ಪ
‘ಉನ್ನತ ಶಿಕ್ಷಣ: ಒಳಗೂ ಹೊರಗೂ’ ಕೃತಿ ಲೋಕಾರ್ಪಣೆ
US Israel Iran War: ಯುದ್ಧ ಆರಂಭವಾಗಿ 1 ತಿಂಗಳು! ಇರಾನ್ನ ಪ್ರಜೆಗಳ ಸಾವಿನ ಸಂಖ್ಯೆ ಬಹಿರಂಗ
ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಸದ್ಯ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದು, ಇರಾನ್ನಲ್ಲಿ ಬರೋಬ್ಬರಿ 1900 ಜನ ಜೀವತೆತ್ತಿದ್ದಾರೆ. 20 ಸಾವಿರ ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ರೆಡ್ ಕ್ರಾಸ್ ಸೊಸೈಟಿ ಮಾಹಿತಿ ಬಹಿರಂಗಪಡಿಸಿದೆ. ಇನ್ನು ದಾಳಿ ಪ್ರತಿದಾಳಿ ಮುಂದುವರಿಸಿದ ಇಸ್ರೇಲ್, ಇರಾನ್ ನಡೆಯು ಹೆಚ್ಚಿದ ಜಾಗತಿಕ ಬಿಕ್ಕಟ್ಟು ಸೃಷ್ಟಿಸಲಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದ ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಕೇರಳ ಚುನಾವಣೆ ಪ್ರಚಾರದಲ್ಲಿರುವ ಸಚಿವ ಝಮೀರ್ ಅಹ್ಮದ್ ಖಾನ್ ಶುಕ್ರವಾರ ಕ್ಯಾಲಿಕಟ್ನಲ್ಲಿ ಮರ್ಕಝ್ ನಾಲೇಜ್ಡ್ ಸಿಟಿಗೆ ಭೇಟಿ ನೀಡಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಜೊತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷರನ್ನು ಭಾಷೆಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ: ಡಾ.ಪೀಟರ್ ಮಚಾದೋ
ಬೆಂಗಳೂರು : ಕೆಥೊಲಿಕ್ ಧರ್ಮಸಭೆಯು ಧರ್ಮಾಧ್ಯಕ್ಷರನ್ನು ಭಾಷೆ, ಜಾತಿ ಅಥವಾ ಜನಾಂಗೀಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ ಎಂದು ಬೆಂಗಳೂರಿನ ಆರ್ಚ್ ಬಿಷಪ್ (ಮಹಾಧರ್ಮಗುರು) ಡಾ.ಪೀಟರ್ ಮಚಾದೋ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಪ್ರಕಟಣೆ ಹೋರಾಡಿಸಿರುವ ಅವರು, ಯಾವುದೇ ಒಂದು ಪ್ರಾಂತ್ಯದ ಧರ್ಮಾಧ್ಯಕ್ಷರು ಸೂಕ್ತವಾದ ಅಭ್ಯರ್ಥಿಯನ್ನು ಶಿಫಾರಸು ಮಾಡಬಹುದು. ಆದರೆ, ಅಂತಿಮ ನಿರ್ಧಾರ ಎಂಬುದು ಪೋಪ್ ಅವರ ಕೈಯಲ್ಲಿರುತ್ತದೆ. ಕರ್ನಾಟಕದ ಧರ್ಮಕ್ಷೇತ್ರಗಳ ಪಾಲನಾ ನಾಯಕತ್ವವನ್ನು ವಹಿಸಿಕೊಳ್ಳಲು ಹೆಚ್ಚೆಚ್ಚು ಕನ್ನಡಿಗ ಅಭ್ಯರ್ಥಿಗಳನ್ನು ಶಿಫಾರಸು ಮಾಡಬೇಕು ಎಂದು ವ್ಯಕ್ತಪಡಿಸಿರುವ ಅಭಿಲಾಷೆಯನ್ನು ಗೌರವಿಸುತ್ತೇವೆ. ಆದರೆ, ವ್ಯಾಟಿಕನ್ನ ಪವಿತ್ರ ಪೀಠಕ್ಕೆ ಸಂಭಾವ್ಯ ಧರ್ಮಾಧ್ಯಕ್ಷರ ಎಲ್ಲ ಮಾಹಿತಿಯು ಇರುತ್ತದೆ. ಆದುದರಿಂದ, ಪೋಪ್ ಅವರಿಗೆ ಅತ್ಯಂತ ಸೂಕ್ತ ಎನಿಸುವ ಅಭ್ಯರ್ಥಿಯನ್ನು ಧರ್ಮಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತದೆ ಎಂದಿದ್ದಾರೆ. ‘ಸ್ಥಳೀಯ ಭಾಷೆ’ ಎಂಬುದನ್ನು ಬಹುಸಂಖ್ಯಾತ ಭಕ್ತರ ಭಾಷೆ ಎಂದು ಅರ್ಥಮಾಡಿಕೊಳ್ಳಬೇಕೇ ಹೊರತು ರಾಜ್ಯದ ಅಧಿಕೃತ ಭಾಷೆಯೆಂದಲ್ಲ. ರಾಜ್ಯದ ಅಧಿಕೃತ ಭಾಷೆಯನ್ನು ಗೌರವಿಸಬೇಕು, ಕಲಿಯಬೇಕು, ಉತ್ತೇಜಿಸಬೇಕು ಹಾಗೂ ಬಳಸಬೇಕು. ಆದರೆ, ರಾಜ್ಯದ ಅಧಿಕೃತ ಭಾಷೆ ಎಂಬುದು ಯಾವುದೇ ಧರ್ಮಕ್ಷೇತ್ರ ಅಥವಾ ಧರ್ಮಕೇಂದ್ರದ ಬಹುಸಂಖ್ಯಾತ ಕೆಥೊಲಿಕರ ತಾಯ್ನುಡಿಯಾಗಿರಬೇಕಿಲ್ಲ. ಅದಾಗ್ಯೂ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೊ, ಅಲ್ಲೆಲ್ಲಾ, ಯಾವುದೇ ತೊಂದರೆಗಳಿಲ್ಲದೆ, ಕನ್ನಡವನ್ನು ಪೂಜಾವಿಧಿ ಭಾಷೆಯನ್ನಾಗಿ ಬಳಸಿಕೊಳ್ಳಲಾಗುವುದು. ಪೂಜಾವಿಧಿಯಲ್ಲಿ ಭಾಗವಹಿಸುವ ಬಹುಸಂಖ್ಯಾತರು ಕನ್ನಡಿಗರಾಗಿದ್ದಾಗ, ವ್ಯಾಟಿಕನ್ ನ ‘ಸ್ಥಳೀಯ ಭಾಷಾ’ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Sakleshpura | ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಗಲಾಟೆ; ಫೋಟೊಗ್ರಾಫರ್ ತಂಡದ ಮೇಲೆ ಹಲ್ಲೆ, ಕೊಲೆ ಯತ್ನ ಆರೋಪ
ಸಕಲೇಶಪುರ : ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ, ಫೋಟೊಗ್ರಾಫರ್ ತಂಡದವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಸನದ ಕುವೆಂಪು ನಗರದ ನಿವಾಸಿ ನವಿನಂದನ್( 21) ದೂರು ನೀಡಿದ್ದು, ಹಾಸನದ ಸ್ಟುಡಿಯೋ ಒಂದರದಲ್ಲಿ ಫೋಟೊಗ್ರಾಫರ್ ಆಗಿರುವ ಅವರು ತಮ್ಮ ಸಂಬಂಧಿ ಚೇತನ್ ಜೊತೆ ಮಾ.27 ರಂದು ದರ್ಶನ ಮತ್ತು ಸ್ನೇಹ ಎಂಬ ಮದುವೆ ಜೋಡಿಗಳ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಲು ಬೆಳಗ್ಗೆ 7.30 ಗಂಟೆಗೆ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಸಮೀಪ ಶೂಟಿಂಗ್ ಪ್ರಾರಂಭಿಸಿದ್ದರು. ಈ ವೇಳೆ ಬೆಂಗಳೂರಿನಿಂದ ಬಂದಿದ್ದ ಮತ್ತೊಂದು ಜೋಡಿ ಅಭಿಲಾಷ್ ಮತ್ತು ವಿಜಯಲಕ್ಷ್ಮೀ ಅವರೊಂದಿಗೆ ಫೋಟೊಗ್ರಾಫರ್ಗಳಾದ ಅಭಿಷೇಕ್, ಯಶವಂತ, ಸೋಮಶೇಖರ್ ಹಾಗೂ ಮೇಕಪ್ ಆರ್ಟಿಸ್ಟ್ ಶ್ವೇತ ಕೂಡ ಸ್ಥಳದಲ್ಲೇ ಶೂಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಮೂಡಿಗೆರೆ ತಾಲೂಕಿನ ಮರಬೈಲು ಗ್ರಾಮದ ಅಭಿ ಎಂಬ ವ್ಯಕ್ತಿ ಸ್ಥಳಕ್ಕೆ ಬಂದು, ದೇವಸ್ಥಾನದ ಗೋಡೆಗೆ ಕಾಲು ಒರಗಿಸಿ ಶೂಟಿಂಗ್ ಮಾಡುತ್ತಿರುವುದನ್ನು ಪ್ರಶ್ನಿಸಿ ಏಕಾಏಕಿ ಫೋಟೋಗ್ರಾಫರ್ ಯಶವಂತನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆತ ಅಲ್ಲಿಂದ ತೆರಳಿ ಸುಮಾರು 7-8 ಜನರೊಂದಿಗೆ ಕಾರುಗಳಲ್ಲಿ ಮತ್ತೆ ಸ್ಥಳಕ್ಕೆ ಬಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಪ್ರಶಾಂತ, ರಕ್ಷಯ್, ಅರವಿಂದ್, ಉಚಿತ್, ಪ್ರಜ್ವಲ್ ಸೇರಿದಂತೆ ಇತರರು ಸೇರಿ ಸ್ಥಳೀಯರು ಎಂಬ ಹೆಸರಿನಲ್ಲಿ ಫೋಟೊ ಶೂಟಿಂಗ್ ಮಾಡಲು ಹಣ (ಹಫ್ತಾ) ಕೊಡಬೇಕೆಂದು ಒತ್ತಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಫೋಟೋಗ್ರಾಫರ್ ಅಭಿಷೇಕ್ ಮೇಲೆ ದಾಳಿ ನಡೆಸಿದರೆ, ಮಧ್ಯಪ್ರವೇಶಿಸಲು ಬಂದ ಮೇಕಪ್ ಆರ್ಟಿಸ್ಟ್ ಶ್ವೇತಾ ಅವರ ಮೇಲೂ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಲಾಟೆ ತಡೆಯಲು ಹೋದ ಚೇತನ್ ಮೇಲೆ ಕೂಡ ಗುಂಪು ದಾಳಿ ನಡೆಸಿ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಹೊಡೆದು, ಕಾಲಿನಿಂದ ತುಳಿದು ಗಂಭೀರವಾಗಿ ಗಾಯಪಡಿಸಿದ್ದಾರೆ. ಪಿರ್ಯಾದಿದಾರರ ಮೇಲೂ ಹಲ್ಲೆ ನಡೆಸಿ, ಪ್ರಶಾಂತ ಎಂಬಾತ ಕುತ್ತಿಗೆಯನ್ನು ಹಿಸುಕಿ ಕೊಲೆ ಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಇತರರ ಮೇಲೂ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡವರು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹರಪನಹಳ್ಳಿ | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಲಾರಿಗಳ ಸಂಖ್ಯೆ ಹೆಚ್ಚಿಸಲು ರೈತರ ದಿಢೀರ್ ಪ್ರತಿಭಟನೆ
ಹರಪನಹಳ್ಳಿ : ನಗರದ ಕೃಷಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು. ಸರ್ಕಾರವು ರೈತರ ರಾಗಿ ಖರೀದಿಗಾಗಿ ಉತ್ತಮ ಬೆಲೆ ನಿಗದಿಪಡಿಸಿ ವ್ಯವಸ್ಥೆ ಕಲ್ಪಿಸಿದ್ದರೂ, ಇಡೀ ತಾಲೂಕಿಗೆ ಕೇವಲ ಒಂದು ಖರೀದಿ ಕೇಂದ್ರವಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ರೈತರು ಆರೋಪಿಸಿದರು. ಕಳೆದ ಎರಡು-ಮೂರು ದಿನಗಳಿಂದ ನೂರಾರು ರೈತರು ತಮ್ಮ ಟ್ರಾಕ್ಟರ್ಗಳನ್ನು ಕೃಷಿ ಮಾರುಕಟ್ಟೆಯಲ್ಲಿ ನಿಲ್ಲಿಸಿ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ತೆಲಿಗಿ ಅಥವಾ ಅರಸೀಕೆರೆ ಹೋಬಳಿ ಭಾಗದಲ್ಲಿ ಹೆಚ್ಚುವರಿ ರಾಗಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಮಾತನಾಡಿ, ರೈತರು ನೀಡಿರುವ ಟೋಕನ್ ಪ್ರಕಾರ ಬಾರದಿರುವುದರಿಂದ ಅನಾವಶ್ಯಕ ಗೊಂದಲ ಉಂಟಾಗುತ್ತಿದೆ. ಈಗಾಗಲೇ ದಿನಕ್ಕೆ 6 ಲಾರಿಗಳನ್ನು ರಾಗಿ ಸಾಗಣೆಗೆ ಮೀಸಲಿರಿಸಲಾಗಿದ್ದು, ರೈತರು ಟೋಕನ್ ಪ್ರಕಾರ ಬಂದರೆ ಹೆಚ್ಚು ದಿನ ಕಾಯಬೇಕಾಗುವುದಿಲ್ಲ ಎಂದು ತಿಳಿಸಿದರು. ಇದಲ್ಲದೆ, ಹೆಚ್ಚುವರಿಯಾಗಿ ಮತ್ತೊಂದು ಲಾರಿಯನ್ನು ನಿಯೋಜಿಸುವುದಾಗಿ ಭರವಸೆ ನೀಡಿದರು. ಅಗತ್ಯವಿರುವ ಹೋಬಳಿ ಪ್ರದೇಶದಲ್ಲಿ ಮತ್ತೊಂದು ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಇನ್ಸ್ಪೆಕ್ಟರ್ ಮಹಾಂತೇಶ್ ಸಜ್ಜನ್, ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ಎಸ್. ಹಿರೇಮಠ ಸೇರಿದಂತೆ ರೈತರು ಉಪಸ್ಥಿತರಿದ್ದರು.
‘ಉಪಚುನಾವಣೆ’ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಒಳಮೀಸಲಾತಿ ಹೋರಾಟಗಾರರ ಕರೆ
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿಯು ಕರೆ ನೀಡಿದೆ. ಶುಕ್ರವಾರ ನಗರದಲ್ಲಿ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ನರಸಪ್ಪ ದಂಡೋರ, ಕರಿಯಪ್ಪ ಗುಡಿಮನಿ, ಎಂ.ಗುರುಮೂರ್ತಿ, ಬಿ.ಪಿ.ಪ್ರಕಾಶ್ ಮೂರ್ತಿ, ಆರ್.ಮುನಿಯಪ್ಪ, ಪಿ.ಮೂರ್ತಿ, ಬಿ.ಆರ್.ಭಾಸ್ಕರ್ ಪ್ರಸಾದ್, ವೈ.ಸಿ.ಕಾಂಬ್ಳೆ, ಚಾವಡಿ ಲೋಕೇಶ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, 35 ವರ್ಷಗಳಿಂದ ಸಾಮಾಜಿಕ ನ್ಯಾಯದ ಬೇಡಿಕೆಯನ್ನು ಬೆಂಬಲಿಸಿದ್ದ ಕರ್ನಾಟಕದ ಎಲ್ಲ ಪ್ರಜ್ಞಾವಂತರು ನಮ್ಮ ಈ ನಿಲುವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಒಳಮೀಸಲಾತಿ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಹೋರಾಟಗಾರರು ಹೊಂದಿದ್ದರು. ಆದರೆ ಸರಕಾರ ಈ ವಿಚಾರದಲ್ಲಿ ಎರಡು ವರ್ಷಗಳಿಂದಲೂ ಉದಾಸೀನ ತೋರುತ್ತಿದೆ. ನೆರೆಯ ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಜಾರಿ ಮಾಡುವ ಧೃಡ ತೀರ್ಮಾನವನ್ನು ಕೈಗೊಂಡಿದ್ದರು. ಕರ್ನಾಟಕ ಸರಕಾರ ಮಾತ್ರ ಸಾಮಾಜಿಕ ನ್ಯಾಯದ ನಿರಾಕರಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳಮೀಸಲಾತಿ ಇಲ್ಲದೆ ತುಂಬಲು ಹೊರಟಿದ್ದ 56,432 ಹುದ್ದೆಗಳನ್ನು ಮುಂದಿನ ಸಂಪುಟ ಸಭೆ ನಡೆಯುವವರೆಗೂ ನೇಮಕಾತಿ ಮಾಡಬಾರದು. ಸಾಮಾಜಿಕ ನ್ಯಾಯವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಜಗಜೀವನ್ ರಾಮ್, ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ನೈತಿಕತೆ ಇಲ್ಲ. ವಿಧಾನಸೌಧ ಮುಂಭಾಗದ ಆಚರಣೆ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಈ ಮಹನೀಯರ ಜಯಂತಿಯನ್ನು ಆಚರಿಸಲು ಸರಕಾರ ಮುಂದಾದರೆ ಮುತ್ತಿಗೆ ಹಾಕುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

31 C