SENSEX
NIFTY
GOLD
USD/INR

Weather

23    C
... ...View News by News Source

ಸೋಮನಾಥ ಸ್ವಾಭಿಮಾನ ಪರ್ವ: ಆಕ್ರಮಣಕಾರರು ಇತಿಹಾಸದ ಪುಟ ಸೇರಿದರು, ಸೋಮನಾಥ ಇಂದಿಗೂ ಅಚಲ; ಪ್ರಧಾನಿ ಮೋದಿ ಬಣ್ಣನೆ

ಸೋಮನಾಥದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು. ದೇವಾಲಯದ ಧ್ವಜವು ಭಾರತದ ಶೌರ್ಯದ ಸಂಕೇತ ಎಂದು ಬಣ್ಣಿಸಿದರು. ಘಜ್ನಿ ಮತ್ತು ಔರಂಗಜೇಬರ ದಾಳಿಗಳು ನಮ್ಮ ನಂಬಿಕೆಗಳನ್ನು ಅಲುಗಾಡಿಸುವ ಪ್ರಯತ್ನಗಳಾಗಿದ್ದವು ಎಂದು ವಿವರಿಸಿದರು. ಹಿಂದಿನ ಆಡಳಿತಗಳು ಇತಿಹಾಸವನ್ನು ಮರೆಮಾಚಿದ್ದವು ಎಂದು ಆರೋಪಿಸಿದರು. ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು, ಹಮೀರ್‌ಜಿ ಗೋಹಿಲ್ ಮತ್ತು ಸರ್ದಾರ್ ಪಟೇಲ್ ಅವರಿಗೆ ನಮನ ಸಲ್ಲಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ವಿಜಯ ಕರ್ನಾಟಕ 11 Jan 2026 3:36 pm

ಮಂಗಳೂರು ವಿಶ್ವವಿದ್ಯಾನಿಲಯ–ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡುವೆ ಶೈಕ್ಷಣಿಕ ಒಪ್ಪಂದ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ನಡುವಿನ ಶೈಕ್ಷಣಿಕ, ಸಂಶೋಧನಾ ಹಾಗೂ ಸಾಂಸ್ಕೃತಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಶೈಕ್ಷಣಿಕ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಡಿಯಲ್ಲಿ ಸ್ಥಾಪಿತವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರಿನ ಇನೋಳಿ ಪ್ರದೇಶದಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ ನಲ್ಲಿ, ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಈ ಒಪ್ಪಂದದಡಿ ಹಲವು ಶೈಕ್ಷಣಿಕ ಹಾಗೂ ವೃತ್ತಿಪರ ಉಪಕ್ರಮಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸಲಿವೆ. ಈ ಒಪ್ಪಂದವು ಜಾಗತಿಕ ಶೈಕ್ಷಣಿಕ ಉಪಕ್ರಮಗಳಿಗೆ ಹೊಂದಿಕೆಯಾಗಿದ್ದು, ಕರ್ನಾಟಕ–ವೇಲ್ಸ್ ವಿಶ್ವವಿದ್ಯಾಲಯಗಳ ಪಾಲುದಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ಲೋಬಲ್ ವೇಲ್ಸ್ ಪ್ರೋಗ್ರಾಂ ಸೇರಿದಂತೆ, ಕರ್ನಾಟಕ ಮತ್ತು ವೇಲ್ಸ್ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ನಡುವಿನ ಅಂತರ್‌ ರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಒಪ್ಪಂದದಡಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು, ವೃತ್ತಿಪರ ಮತ್ತು ವಿದ್ಯಾರ್ಥಿ ವಿನಿಮಯ ಉಪಕ್ರಮಗಳು, ಜಂಟಿ ಸಂಶೋಧನಾ ಚಟುವಟಿಕೆಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ಸಹಯೋಗದ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಸಹಯೋಗದ ಪ್ರಮುಖ ಅಂಶವಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI) ಕುರಿತ ಸಂಶೋಧನಾ ಕ್ಲಸ್ಟರ್ ಸ್ಥಾಪನೆಗೂ ಒಪ್ಪಂದದಲ್ಲಿ ಒತ್ತು ನೀಡಲಾಗಿದೆ. ಬೌದ್ಧಿಕ ಆಸ್ತಿ ಕಾನೂನು(intellectual property laws) ಅನ್ವಯವಾಗುವಂತೆ ಶೈಕ್ಷಣಿಕ ಸಾಮಗ್ರಿಗಳು, ಸಂಶೋಧನಾ ಪ್ರಕಟಣೆಗಳು ಹಾಗೂ ಶೈಕ್ಷಣಿಕ ಸಂಪನ್ಮೂಲಗಳ ವಿನಿಮಯಕ್ಕೂ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳಿಗಾಗಿ ಅಲ್ಪಾವಧಿಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಒಪ್ಪಂದದ ಭಾಗವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಧರ್ಮ ಅವರು, ಈ ಒಪ್ಪಂದದಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ದೀರ್ಘಕಾಲೀನ ಪ್ರಯೋಜನ ಸಿಗಲಿದೆ ಎಂದು ಹೇಳಿದರು. ಅಂತರ್‌ ರಾಷ್ಟ್ರೀಯ ಮಾನ್ಯತೆ, ಜಂಟಿ ಸಂಶೋಧನೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಯತ್ತ ಹೊಸ ಅವಕಾಶಗಳು ಈ ಒಪ್ಪಂದದಿಂದ ಸೃಷ್ಟಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು. ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ನಿರ್ದೇಶಕ ಡಾ.ಎಸ್.ಐ.ಮಂಜುರ್ ಬಾಷಾ, ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕಾ-ಆಧಾರಿತ ಕಲಿಕೆಯನ್ನು ಉತ್ತೇಜಿಸುವಲ್ಲಿ ಬ್ಯಾರೀಸ್ ಸಂಸ್ಥೆಗಳ ಸಮೂಹ ನೀಡುತ್ತಿರುವ ಕೊಡುಗೆಗಳನ್ನು ವಿವರಿಸಿದರು. ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಕಮಲಕಣ್ಣನ್ ಸಿ, ಒಪ್ಪಂದ(MoU) ದ ಸಂಶೋಧನಾ ಅಂಶಗಳನ್ನು ವಿವರಿಸಿ, ಅಂತರಶಿಸ್ತೀಯ ಸಂಶೋಧನೆ, ನಾವೀನ್ಯತೆ ಹಾಗೂ ಸುಸ್ಥಿರ ತಾಂತ್ರಿಕ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದರು. ಬಿಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ, ಸಭೆಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ನಾವೀನ್ಯತೆ, ಸಂಶೋಧನಾ ಸಂಸ್ಕೃತಿ ಹಾಗೂ ಜಾಗತಿಕ ಸಾಮರ್ಥ್ಯವನ್ನು ಬೆಳೆಸುವಲ್ಲಿ ಫಲಿತಾಂಶ–ಆಧಾರಿತ ಶಿಕ್ಷಣ ಮತ್ತು MoUನ ಪಾತ್ರವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಡೀನ್, ಎಂಬಿಎ ವಿಭಾಗದ ಡೀನ್ ಸೇರಿದಂತೆ ಎರಡೂ ಸಂಸ್ಥೆಗಳ ಹಿರಿಯ ಅಧ್ಯಾಪಕರು ಉಪಸ್ಥಿತರಿದ್ದರು.          

ವಾರ್ತಾ ಭಾರತಿ 11 Jan 2026 3:34 pm

WPL ನಲ್ಲಿ ಜೆಮಿಮಾ ರೋಡ್ರಿಗಸ್ ಹೊಸ ಇತಿಹಾಸ! ಸ್ಮೃತಿ ಮಂದಾನ ಹೆಸರಲ್ಲಿದ್ದ ಅಪರೂಪದ ದಾಖಲೆಗೆ ಈಗ ಈಕೆಯೇ ಒಡತಿ!

Smriti Mandhana Vs Jemimah Rodrigues- ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಿದ ಜೆಮಿಮಾ ರೋಡ್ರಿಗಸ್ ಅವರು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ನಾಯಕಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಈ ಗೌರವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಮೃತಿ ಮಂದಾನ ಅವರು ಡಬ್ಲ್ಯೂಪಿಎಲ್ ನ ಅತಿ ಕಿರಿಯ ನಾಯಕಿಯಾಗಿ ದಾಖಲೆ ಬರೆದಿದ್ದರು.

ವಿಜಯ ಕರ್ನಾಟಕ 11 Jan 2026 3:23 pm

IMD Weather Forecast: ಮೈಕೊರೆಯುವ ಚಳಿ ನಡುವೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ

IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ದಟ್ಟ ಮಂಜಿನ ಜೊತೆಗೆ ಶೀತಗಾಳಿ ಬೀಸುತ್ತಿದೆ. ಅದರಲ್ಲೂ ಉತ್ತರ ಭಾಗದಲ್ಲಿ ಭಾರೀ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು

ಒನ್ ಇ೦ಡಿಯ 11 Jan 2026 3:11 pm

Davanagere | ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

ತಂದೆಯ ಸಾವಿನ ಸುದ್ದಿ ತಿಳಿದು ಮಗ-ಮಗಳು ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು

ವಾರ್ತಾ ಭಾರತಿ 11 Jan 2026 3:01 pm

ದಾವಣಗೆರೆಯಲ್ಲಿ ಕಾರಿನ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ! ಪೊಲೀಸರಿಂದ ತನಿಖೆ ಆರಂಭ

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದಿದೆ. ಇದರಿಂದ ಮನನೊಂದ ಚಂದ್ರಶೇಖರ ಸಂಕೋಳ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪುತ್ರ ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪುತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 11 Jan 2026 2:51 pm

ಕನಕಗಿರಿ ತಾಲೂಕಾಗಿ ವರ್ಷಗಳೇ ಕಳೆದರೂ ಇನ್ನೂ ಸಿಕ್ಕಿಲ್ಲ ಕ್ರೀಡಾಂಗಣ ಭಾಗ್ಯ

► ಆಟಕ್ಕೆ ಕಾಲೇಜು, ಹೊಲಗಳೇ ಗತಿ! ► ವಾಕಿಂಗ್ ಮಾಡಲು ಗಂಗಾವತಿ-ಲಿಂಗಸಗೂರು ರಸ್ತೆ!

ವಾರ್ತಾ ಭಾರತಿ 11 Jan 2026 2:44 pm

ಗದಗದ ಲಕ್ಕುಂಡಿಯಲ್ಲಿ ಸಿಕ್ಕ 470 ಗ್ರಾಂ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಕೊಟ್ಟು ಬೀದಿಗೆ ಬಿದ್ದ ಕುಟುಂಬ! ಕಾರಣವೇನು?

ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಿದರೂ, ನಿಧಿ ಸಿಕ್ಕ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದರಿಂದ ಬಡ ಕುಟುಂಬ ಬೀದಿಗೆ ಬಿದ್ದಿದೆ. ತಾಯಿ ಮತ್ತು ಚಿಕ್ಕ ಮಗನಿದ್ದ ಈ ಕುಟುಂಬಕ್ಕೆ ಆಶ್ರಯವಿಲ್ಲದಂತಾಗಿದ್ದು, ಸರ್ಕಾರದಿಂದ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 11 Jan 2026 2:38 pm

ತತ್ವಪದಗಳಲ್ಲಿವೆ ಬಹುತ್ವದ ಪರಿಕಲ್ಪನೆ

ತತ್ವಪದಗಳಲ್ಲಿ ಕಾಣುವ ಬಹುತ್ವವನ್ನು ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಯಲ್ಲಿ 17-18ನೇ ಶತಮಾನದ ಕಾಲಘಟ್ಟಕ್ಕೆ ‘ಕತ್ತಲೆ ಯುಗ’ ಎಂದು ಚರಿತ್ರೆಕಾರರು ಗುರುತಿಸಿದ್ದಾರೆ. ಇತ್ತೀಚಿನ ವಿದ್ವಾಂಸರು ವಿಷಾದ ವ್ಯಕ್ತಪಡಿಸಿ ಆ ಕಾಲಘಟ್ಟವನ್ನು ಹಿಂದಿರುಗಿ ವಿಶ್ಲೇಷಿಸುವ, ವಿಮರ್ಶಿಸುವ ಮತ್ತು ಸಂಶೋಧಿಸುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕಿ.ರಂ.ನಾಗರಾಜ್, ಒ.ಎಲ್. ನಾಗಭೂಷಣಸ್ವಾಮಿ, ನಟರಾಜ ಬೂದಾಳು, ರಹಮತ್ ತರೀಕೆರೆ, ಎಚ್.ಎಸ್.ಶಿವಪ್ರಕಾಶ್, ಮೀನಾಕ್ಷಿ ಬಾಳಿ, ಜಿ.ವಿ.ಆನಂದ ಮೂರ್ತಿ ಪ್ರಮುಖವಾಗಿದ್ದಾರೆ. ಬಹುತ್ವ ಎಂದರೇನು?: ಬಹುತ್ವವೆಂದರೆ ಕೂಡಿಬಾಳುವುದು. ಸಹಬಾಳ್ವೆಯಿಂದ ಬದುಕುವುದು. ನಮ್ಮ ಸಂವಿಧಾನದ ಪೀಠಿಕೆಯ ಆಶಯವೂ ಇದನ್ನೇ ಒತ್ತಿ ಹೇಳುತ್ತದೆ. ಅದರ ಪ್ರಕಾರ ಎಲ್ಲ್ಲ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಕಲ್ಪಿಸುವ ಜತೆಗೆ ಎಲ್ಲರಲ್ಲೂ ಭ್ರಾತ್ರತ್ವ ಭಾವನೆ ಮೂಡಿಸುವುದೇ ಬಹುತ್ವ. ಇಂಥ ಪರಿಕಲ್ಪನೆಯುಳ್ಳಂಥ ‘ಬಹುತ್ವ’ ಎನ್ನುವ ಪದ 17-18ನೇ ಶತಮಾನದ ತತ್ವಪದಕಾರರು ಆಗಲೇ ಬಳಸಿದ್ದಾರೆ. ಸಂವಿಧಾನದ ಆಶಯಗಳು ತತ್ವಪದಗಳಲ್ಲಿ ಇದ್ದಾವೆಯೇಎಂದು ಸಹ ಕೇಳಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿತತ್ವಪದಕಾರರ ಕುರಿತು ಮೊದಲಿಗೆ ಚರ್ಚಿಸಿ ದವರು ಡಿ.ಆರ್.ನಾಗರಾಜ್ ಮತ್ತು ಕಿ.ರಂ.ನಾಗರಾಜ್. ಅನಂತರ ಎಚ್.ಎಸ್.ಶಿವಪ್ರಕಾಶ್ ಅವರ ಬಹುತ್ವ’ದ ಆಶಯ ಹೊತ್ತ ‘ಎಲ್ಲಾ ಜಾತಿಯ ಮರಗಳ ಕಾಡು: ತತ್ವಪದಕಾರರು’ ಲೇಖನ ಬರೆದು ಚರ್ಚಿಸಿದರು. ಈ ಲೇಖನವನ್ನು ಶಿವಪ್ರಕಾಶ್ ಮುಖ್ಯವಾಗಿ ಆರು ಭಾಗಗಳಾಗಿ ವಿಂಗಡಿಸಿದ್ದಾರೆ. 1.ಮಠದೇಗುಲಗಳಾಚೆಗಿನ ಧರ್ಮ, 2.ತತ್ವಪದಗಳು: ಒಂದು ಸಂಸ್ಕೃತಿ, 3.ತತ್ವಪದಗಳ ಭಿತ್ತಿ, 4.ವಾಗ್ರೂಪದ ಕಾರಣಿಕಗಳು, 5.ಸಾಂಸ್ಕೃತಿಕ ನಾನಾತ್ವಗಳಲ್ಲಿ ತತ್ವಪದಗಳು, 6.ಸಾಹಿತ್ಯ ಚರಿತ್ರೆ ಮೀಮಾಂಸೆ ಮತ್ತು ತತ್ವಪದಗಳು. ಮುಖ್ಯವಾಗಿ ತತ್ವಪದಗಳು ಸಂವಿಧಾನದಲ್ಲಿ ಬಳಸಲಾದ ಪರಿಭಾಷೆಗಳ ಮೂಲಕ ಬಹುತ್ವ ಅಭಿವ್ಯಕ್ತಿಸುವುದಿಲ್ಲವಾದರೂ ಕೂಡು ಸಂಸ್ಕತಿ ಅಥವಾ ಸಂಕರ ಸಂಸ್ಕೃತಿ ಎನ್ನುತ್ತವೆ. ಯಾವುದೇ ಕಾಲದ ಸಾಹಿತ್ಯವಾದರೂ ಹಿಂದಿನ ಪರಂಪರೆ ಪರಾಮರ್ಶಿಸಿ ವರ್ತಮಾನಕ್ಕೆ ತಕ್ಕಂತೆ ಬದಲಾಗಿದೆ. ಉದಾಹರಣೆಗೆ ವೇದವ್ಯಾಸರು ಬರೆದ ‘ಮಹಾಭಾರತ’ವನ್ನು ಪಂಪ ಮತ್ತು ರನ್ನರಂಥವರು ತಮ್ಮ ಕಾಲಕ್ಕೆ ಬೇಕಾದಂತೆ ಮುರಿದು ಕಟ್ಟಿದರು. ಇಂತಹ ಪರಂಪರೆಯನ್ನೇ ಮಹರ್ಷಿ ವಾಲ್ಮೀಕಿ ಬರೆದ ‘ರಾಮಾಯಣ’ವನ್ನು ನಾಗಚಂದ್ರ, ಲಕ್ಷ್ಮೀಶ, ಕುವೆಂಪು ತರಹದವರು ಮುಂದುವರಿಸಿದರು. ಅದೇ ರೀತಿ ತತ್ವಪದಕಾರರೂ ಹಿಂದಿನ ಪರಂಪರೆ ನಿರಾಕರಿಸದೆ, ನಿವಾರಿಸಿಕೊಂಡಿದ್ದಾರೆ. ಹಾಗಾಗಿಯೇ ಎಚ್.ಎಸ್.ಶಿವಪ್ರಕಾಶ್ ಅವರು ‘‘ಹನ್ನೆರಡನೇ ಶತಮಾನದ ಶರಣರು ಶೈವಧರ್ಮದ ಕೆಲವು ಪರಿಕರ ಉಳಿಸಿಕೊಂಡು ಇನ್ನೂ ಕೆಲವನ್ನು ನವೀಕರಿಸಿಕೊಂಡು ಉಳಿದೆಲ್ಲ ಸಂಸ್ಕೃತಿಗಳ ನಂಬಿಕೆ ಆಚರಣೆ ನಿವಾರಿಸಿ ಯಾಗ, ದಾನ, ಬಲಿ, ದೇವಾಲಯ, ಗ್ರಾಮದೇವತೆ ಮುಂತಾದ ಸಂಸ್ಕೃತಿಗಳ ಬಹುದೇವೋಪಾಸನೆ ಪ್ರವೃತ್ತಿಗಳ ಮೇಲೆ ವಚನಕಾರರು ಉರಿವ ನಾಲಿಗೆ ಹರಿಬಿಟ್ಟಿದ್ದಾರೆ. ಅನಂತರದ ದಾಸ ಪಂಥದವರು ಹರಿಭಕ್ತರಾದರೂ ದೇವಾಲಯ, ದಾನ, ಧರ್ಮ, ಯಜ್ಞ-ಯಾಗ ಒಪ್ಪಿಕೊಂಡರು. ಇವರ ನಿರಾಕರಣೆ ಇದ್ದದ್ದು ‘ಬಣಗು ದೈವಗಳ’ ಬಗ್ಗೆ ದಾಸ ಪಂಥ ಬಹುಮಟ್ಟಿಗೆ ಕೆಳಸಂಸ್ಕೃತಿ ನಿರಾಕರಿಸಿತು. ಶರಣ ಚಳವಳಿ ಮತ್ತು ದಾಸಪಂಥಗಳೆರಡು ಮೂಲಭೂತವಾಗಿ ಏಕದೇವೋಪಾಸನೆಯ ಮಾದರಿಗಳು. ಆದರೆ ತತ್ವಪದಕಾರರು ಮೇಲು, ಕೆಳ ಸಂಸ್ಕೃತಿಗಳ ಸಂಕೇತಗಳ ವಿಚಾರದಲ್ಲಿ ಸ್ವೀಕಾರ ಭಾವ ತಾಳಿದರು. ಬಾಹ್ಯ ಆಚರಣೆಗಳ ವೈವಿಧ್ಯದಲ್ಲಿ ಅಂತರಂಗದ ಅನುಭವದ ಏಕತೆ ಹುಡುಕಿದರು. ಶಿಶುನಾಳ ಶರೀಫರು ಯಲ್ಲಮ್ಮನ ಜಾತ್ರೆ, ಪಂಚಮಿ ಹಬ್ಬದ ಬಗ್ಗೆ ಮನದುಂಬಿ ಹಾಡಿದ ಹಾಗೆ ಬಸವಾದಿ ಶರಣರು ಹಾಡುವುದನ್ನು ಊಹಿಸುವುದೂ ಕಷ್ಟ ಎನ್ನುವ ಮಾತು ತತ್ವಪದಗಳಲ್ಲಿ ‘ಬಹುತ್ವ’ ವಿಷಯದ ಪ್ರಾರಂಭದ ಹಾದಿಯಾಗುತ್ತದೆ. ಸಾಕುಬೇಕು ಏಕಮಾಡಿದ ತತ್ವಪದಕಾರರು: ತತ್ವಪದಕಾರರು ಏನನ್ನೂ ನಿರಾಕರಿಸದೆ ಎಲ್ಲವನ್ನೂ ಒಳಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ಮುನ್ನಡೆದು ಹೊಸ ಅರ್ಥ ಸಾಧ್ಯತೆಗಳಿಗೆ ಮುನ್ನುಡಿ ಬರೆದರು. ಸಾಕು ಮತ್ತು ಬೇಕೆಂಬ ಸ್ಥಿತಿಗಳನ್ನು ಒಂದುಗೂಡಿಸಿಕೊಂಡು ಸಮಾಜಕ್ಕೆ ಬೇಕಾದ ವಿಚಾರಗಳನ್ನು ನೀಡಿದರು. ಹಾಗಾಗಿಯೇ ಮಡಿವಾಳಪ್ಪನ ಶಿಷ್ಯನಾದ ಚೆನ್ನೂರು ಜಲಾಲ್ ಸಾಬ ತನ್ನ ತತ್ವಪದದಲ್ಲಿ, ‘‘ಹಮ್ ಬೀ ಕಹತೆ ತುಮ್ ಬೀ ಕಹತೆ ಮಾಡಬ್ಯಾಡರಿ ಮ್ಯಾಲಿನ ಶೀಲ ಗುರು ಮಡಿವಾಳಪ್ಪ ಹೋಕರ್ ಬೋಲೆ ತೊಳಿಯಬೇಕರಿ ಒಳಗಿನ ಮೈಲಾ’’ ಎಂದು ಬರೆಯುತ್ತಾನೆ. ಮನಸ್ಸಿನ ಮೈಲಿಗೆ ತೊಳೆದುಕೊಳ್ಳುವುದೆಂದರೆ, ಎಲ್ಲ ಸಮುದಾಯ, ಸಂಸ್ಕೃತಿ ಒಳಗೊಳ್ಳುವುದೇ ಆಗಿದೆ. ಇದು ಭಾಷೆಯ ದೃಷ್ಟಿಯಿಂದಲೂ ಸತ್ಯವಾದ ಮಾತು. ವಿದ್ವಾಂಸರು ಇಪ್ಪತ್ತೆರಡು ಭಾರತೀಯ ಪಂಥಗಳನ್ನು ಗುರುತಿಸಿದ್ದಾರೆ. ಓ.ಎಲ್.ಎನ್ ಅವರು ‘ನವೋದಯ ಪೂರ್ವದ ಸಾಹಿತ್ಯ’ ಲೇಖನದಲ್ಲಿ ಇದನ್ನು ಗುರುತಿಸುತ್ತಾರೆ. ಆಯಾ ಪ್ರದೇಶದ ಸಾಧಕರು ತಮ್ಮ ನೆಲದಲ್ಲಿದ್ದ ಪಂಥಗಳ ಜೊತೆಗೆ ವಿಚಿತ್ರವಾದಂಥ ಒಡನಾಟ ಹೊಂದಿದ್ದಾರೆ. ಉದಾಹರಣೆಗೆ ಮಹಾರಾಷ್ಟ್ರದ ವಾರಕರಿ ಪಂಥ. ಬಂಗಾಳದ ಚೈತನ್ಯ ಪಂಥ ಇತ್ಯಾದಿ. ತತ್ವಪದಕಾರರು ನಾಥ, ಶಾಕ್ತ, ಅಮನಸ್ಕ, ಶರಣ, ಸೂಫಿ ಮುಂತಾದ ಪಂಥಗಳ ಮೂಲಕ ಬಹುತ್ವದ ಪರಿಕಲ್ಪನೆ ಬಿತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ. ನಾಥಪಂಥದ ಆಚರಣೆ ಕುರಿತ ರಹಮತ್ ತರೀಕೆರೆ ಅವರ ‘ಕರ್ನಾಟಕದ ನಾಥಪಂಥ’ ಕೃತಿಯಲ್ಲಿ ‘‘ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ ‘ಕುರುಬದಾರ’ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಈಗಲೂ ಕಾಶಿಯಲ್ಲಿ ಕಪಾಲ ಮೋಚನ ಮೈದೊಳೆದು ಕಪ್ಪನೆಯ ಕಾಶಿದಾರ ತರುವ ಸಂಪ್ರದಾಯವಿದೆ. ಇದು ನಾಥರ ಶೈಲಿಯ ಅವಶೇಷ ರೂಪ’’ . ಎಂದು ಬರೆದುಕೊಳ್ಳುತ್ತಾರೆ. ಈ ಪರಂಪರೆಯಿಂದಲೇ ಬಂದಂಥ ಅಲ್ಲಮಪ್ರಭು, ಸಿದ್ಧರಾಮ, ರೇವಣಸಿದ್ಧರಂಥವರಿಗೆ ನಾಥಪರಂಪರೆಯ ಪ್ರಭಾವವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ತರೀಕೆರೆ ಮಾತಿಗೆ ಸಾಮೀಪ್ಯವಿರುವ ದ್ಯಾಗಾಯಿ ಗುಂಡಪ್ಪನವರ ತತ್ವಪದ ಹೀಗಿದೆ. ‘‘ಇಲ್ಲೇ ಇಟ್ಟಿದ ಕಳೆದು ಹೋಯಿತು ಧಾರಾ ಎಲ್ಲಿ ಹೋಯಿತು ಧಾರಾ ಸೋಲಾಪುರದ ಮೂಲದ ಧಾರಾ ಅಲ್ಲಮ ಪ್ರಭುವಿನ ಬಲ್ಲಿದ್ದ ಧಾರಾ’’ ದ್ಯಾಗಾಯಿ ಗುಂಡಪ್ಪನ ಊರು ಕಲಬುರಗಿ ಜಿಲ್ಲೆಯ ಈಗಿನ ದೇಗಾಂವ್ ಆಗಿರುವುದರಿಂದ ಮತ್ತು ಈ ತತ್ವಪದದಲ್ಲಿರುವ ನುಡಿಗಟ್ಟು ತರೀಕೆರೆ ಮಾತಿಗೆ ಸಾಮೀಪ್ಯವಿರುವುದರಿಂದ ಹಾಗೂ ಅಲ್ಲಮಪ್ರಭು, ಸಿದ್ಧರಾಮನಂಥ ಶರಣರು ದೇಗಾಂವ್ ಊರಿಗೆ ಹಾಯ್ದು ಕಲ್ಯಾಣಕ್ಕೆ ಹೋಗಿರಬೇಕು. ಜೊತೆಗೆ ಅಲ್ಲಮನ ಗುರು ‘ಅನಿಮಿಶಿಯಾ’ (ಕಣ್ಣ ರೆಪ್ಪೆಯಿಲ್ಲದ್ದ-ಮೀನು) ಆಗಿರುವುದರಿಂದ. ಗುಂಡಪ್ಪನಿಗೆ ಇವೆಲ್ಲವೂ ಗೊತ್ತಿರುವಂತೆ ತೋರುತ್ತದೆ. ಯುಗಾದಿ ಹಬ್ಬದ ಹದಿನೈದು ದಿನ ಮುಂಚೆಯೇ ಜನರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಬರುವಾಗ ಕಪ್ಪು ದಾರ, ವಿಭೂತಿ, ರುದ್ರಾಕ್ಷಿ ಮುಂತಾದವುಗಳನ್ನು ತರುತ್ತಾರೆ. ಬೋರಮ್ಮನನ್ನು ಕಳುಹಿಸುವ ಕಾರ್ಯಕ್ರಮದಲ್ಲಿ ಈ ಎಲ್ಲ ವಸ್ತುಗಳನ್ನಿಟ್ಟು ಪೂಜಿಸಿ ನಂತರ ಕೈಯಲ್ಲಿ, ಕೊರಳಲ್ಲಿ ಕಟ್ಟಿಕೊಳ್ಳುವ ಪದ್ಧತಿಯಿದೆ. ಇದು ನಾಥಪಂಥದ ದೀಕ್ಷೆಯಾಗಿ ತೋರುತ್ತದೆ. ಹೀಗೆ ನಾಥಪಂಥದ ಸಂಕೇತಗಳು ಹೊಳಲಗುಂದಿ ಸಾಯಿಬಣ್ಣ ತಾತ, ಕಡಕೋಳ ಮಡಿವಾಳಪ್ಪ, ರಾಚಪ್ಪಯ್ಯ, ಮೂಡಬೂಳ ರಂಗಲಿಂಗೇಶ್ವ, ಸಿದ್ಧಪ್ರಭು ಮುಂತಾದವರ ತತ್ವಪದಗಳಲ್ಲಿ ಸಿಗುತ್ತವೆ. ನಾಥಪಂಥದಷ್ಟೇ, ಶಾಕ್ತಪಂಥವನ್ನೂ ತತ್ವಪದಕಾರರು ತತ್ವಪದಗಳ ಮೂಲಕ ಒಳಗೊಳ್ಳುತ್ತಾರೆ. ಈ ಧಾರೆಯ ಜೊತೆಗೆ ತತ್ವಪದಕಾರರು ವಿಶಿಷ್ಟವಾದ ಸಂಬಂಧವನ್ನು ಹೊಂದಿದ್ದಾರೆ. ಚಿದಾನಂದಾವಧೂತರಂಥವರು ‘ಶ್ರೀದೇವಿ ಮಹಾತ್ಮೆ’ ಎನ್ನುವಂಥ ಕೃತಿ ಬರೆದಿದ್ದಾರೆ. ಜೊತೆಗೆ ‘ಬಂಗಳಾಂಬ’ ಎನ್ನುವ ಹೆಣ್ಣು ದೈವವನ್ನು ತತ್ವಪದಗಳಲ್ಲಿ ಯಥೇಚ್ಛವಾಗಿ ತರುತ್ತಾರೆ. ಶಿಶುನಾಳ ಶರೀಫನು ‘ಯಲ್ಲಮ್ಮ’ನನ್ನು, ನವಲಗುಂದ ನಾಗಲಿಂಗ ಸ್ವಾಮಿಗಳು ‘ಸಮಗಾರ ಭೀಮವ್ವ’ನನ್ನು, ಕಡಕೋಳದ ಮಡಿವಾಳಪ್ಪನು ‘ಶಕ್ತಿಯ ರೇಖೆ’ಯ ಮೂಲಕ ಪಾರ್ವತಿಯನ್ನು, ಕೂಡಲೂರು ಬಸವಲಿಂಗ ಶರಣರು ‘ಮಾತಂಗಿ’ಯನ್ನು ತಮ್ಮ ತತ್ವಪದಗಳಲ್ಲಿ ಪ್ರೇಮ, ಭಕ್ತಿ, ದೈವಗಳಾಗಿ ಕಾಣುತ್ತಾರೆ. ಚಿದಾನಂದಾವಧೂತರು ಶಾಕ್ತರಾಗಿರುವುದರಿಂದ ಗುರುಮುಟ್ಟಿ ಗುರುವಿನಂತಾಗಲು ಚಡಪಡಿಸುತ್ತಾರೆ. ಇಂಥ ಚಡಪಡಿಕೆಯ ತೀವ್ರತೆ ಇರುವ ತತ್ವಪದವೊಂದು ಹೀಗಿದೆ. ‘‘ಓಡಿ ಬಂದು ಅಪ್ಪಬೇಕು ಅಂಬನ ಕುದುರೆ ಮಾಡಿ ಹಡಗಲನೇರಬೇಕು ಅಂಬನ ಓಡಬೇಕು ಒಡನೆ ಮುಟ್ಟಿ ಅಂಬನ’ ಸಾಕ್ಷಿ ಚಿದಾನಂದ ಬಂಗಳಾಂಬನ’’ ಹೀಗೆ ಪ್ರೇಮಕ್ಕೆ ಸಂಬಂಧಿಸಿದ ಲೌಕಿಕ ಪರಿಭಾಷೆಗಳನ್ನು ಬಳಸಿಕೊಂಡು ಅಲೌಕಿಕವಾದ ಸಂಗತಿಗಳನ್ನು ಹೇಳುತ್ತಾರೆ. ಇಂಥ ತತ್ವಪದಗಳು ಚಿದಾನಂದಾವಧೂತರ ರಚನೆಯಲ್ಲಿ ಸಾಕಷ್ಟು ಸಿಗುತ್ತವೆ. ಉದಾಹರಣೆಗೆ ‘ದೂತ ಸಂವಾ ದೇವಿಯೊಡನಾದುದು, ನಾದದಿ ಬೆರೆತಿರು ಮುಕ್ತಾ ವಿರಕ್ತಾ, ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ, ನಾದನಾದ ಸುನಾದವ ತಿಳಿದವ, ಇತ್ಯಾದಿ. ಇವರ ಇನ್ನೊಂದು ತತ್ವಪದದಲ್ಲಿ ಅದ್ವೈತದ ತತ್ವ ಹೀಗೆ ಹೇಳುತ್ತಾರೆ. ‘‘ನೀನು ನಾನಾಗಿಹೆ ದೇವರೆ ನೀನು ನಾನೇ ಎಂದು ಪೂಜಿಸುವೆ ದೇವರೇ’’ ಶಿಶುನಾಳ ಶರೀಫನು ತನ್ನದೊಂದು ತತ್ವಪದದಲ್ಲಿ ಯಲ್ಲಮ್ಮನ ಕುರಿತು ಹೀಗೆ ಬರೆಯುತ್ತಾನೆ. ‘‘ಎಕ್ಕಲಿಗೆ ಜೋಗು ಒಕ್ಕಲಿರಿಸಿ ಪೋಗುವೆ ಚಿಕ್ಕ ತೊಡರು ಎಲ್ಲ ಕಳೆದು ಸಾಧರ ಪಾದಕೆ ಬಾಗುವೆ ಕಡಬು ಗುಗ್ಗರಿ ಮನೆಯಲಿ ಮಾಡಿ ಹಡಗಲಿ ತುಂಬಿಟ್ಟು ನನು ಬೇವಿನ ತಪ್ಪಲಿ ಉಡುಗಿ ಉಟ್ಟು ಗಂಡು ದೀಪವ ಎತ್ತುವೆ’’ ಹನ್ನರೆಡನೇ ಶತಮಾನದ ಶರಣರು ವ್ಯಂಗ್ಯ-ವಿಡಂಬನೆ ಮಾಡಿ ತಿರಸ್ಕರಿಸಿದ ಜಾನಪದ ದೈವಗಳನ್ನು ತತ್ವಪದಕಾರರು ಸ್ವೀಕರಿಸುತ್ತ ಬರುವುದರಲ್ಲಿಯೇ ಬಹುತ್ವ ಉಳಿಸಿಕೊಳ್ಳುವ ತಾತ್ವಿಕತೆ ಇದೆ. ಶರೀಫನ ತತ್ವಪದಗಳಲ್ಲಿ ಶಾಕ್ತ ಪರಂಪರೆಯ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ‘‘ಹೌದೇ ನಮ್ಮವ್ವ ನೀನು ಹೌದೆ, ದೇವಿ ನಿನ್ನ ಸೇವಕನೆಂದು, ನಾ ಕಂಡೇನೀಗ ಶಾಕಾಂಬರಿ’’ ಮುಂತಾದ ತತ್ವಪದಗಳಲ್ಲಿ ಶರೀಫ ಇದನ್ನು ಸಶಕ್ತವಾಗಿ ಹಿಡಿದಿದ್ದಾನೆ. ತತ್ವಪದಗಳು ನಾಥ, ಶಾಕ್ತದಷ್ಟೇ ಸೂಫಿ ಪರಂಪರೆಯನ್ನು ಆಗು ಮಾಡಿಕೊಳ್ಳುತ್ತವೆ. ಮಡಿವಾಳಪ್ಪನು ತನ್ನ ಶಿಷ್ಯನಾದ ಚನ್ನೂರು ಜಲಾಲ್ ಸಾಬನ ಕುರಿತು. ‘‘ಫಕೀರನಾಗಬೇಕೆಂದರೆ ಈ ಮನ ವಿಕಾರವನೆಲ್ಲ ತೊಳಿದಿರಬೇಕೋ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ತಿಳಿದಿರಬೇಕೋ’’ ಹೀಗೆ ಮುಂದುವರಿಯುವ ತತ್ವಪದವು ‘ನಾಮ ಸೀಮೆ ಬಿಟ್ಟೇನೆಂಬ ದೃಢ ಪ್ರೇಮದ ಲುಂಗಿ ತೊಟ್ಟಿರಬೇಕೋ’ ಎನ್ನುವ ಲಯದಲ್ಲಿಯೇ ಎಲ್ಲ ಎಲ್ಲೆಗಳನ್ನು ಮೀರಿ ಬಹುತ್ವ ಒಳಗೊಳ್ಳುವ ಸ್ಥಿತಿಯಾಗಿ ಕಂಡುಬರುತ್ತದೆ. ಈತನಂತೆ ಜಂಬಗಿ ಶರಣರ ಒಂದು ತತ್ವಪದ ಹೀಗಿದೆ. ‘‘ಜಲ್ಲೆ ಬರುತಾವಂತ ಜಲ್ದಿಲೇ ನಾ ಬಂದೆ ಜಲ್ಯ್‌ಕ ಜಲ್ದಿ ಬರಲಿಲ್ಲ॥ ಬಂದೇನವಾಜ್ ನಿಂತಲ್ಲೇ ಕೈಯ್ಯ ಮುಗಿದೇನೋ॥ ಜಂಬಗಿ ಶರಣ ಕಲಬುರಗಿ ಶರಣಬಸಪ್ಪನವರು ಮತ್ತು ಅವರ ಸ್ನೇಹಿತನಾದ ಖಾಜಾ ಬಂದೇನವಾಜರನ್ನು ತನ್ನ ತತ್ವಪದಗಳಲ್ಲಿ ಸಾಕಷ್ಟು ಗುಣಗಾನ ಮಾಡಿದ್ದಾನೆ. ಲಿಂಗಾಯತನಾಗಿದ್ದ ಶರಣಬಸವ, ಸೂಫಿಯಾಗಿದ್ದ ಬಂದೇನವಾಜ್, ದಲಿತನಾಗಿದ್ದ ಜಂಬಗಿ ಶರಣ ಈ ಮೂರು ಜನರ ಕೂಡುವಿಕೆಯಲ್ಲಿಯೇ ಬಹುತ್ವದ ಭಾರತ ಎದ್ದು ಕಾಣುತ್ತದೆ. ಬಸವಕಲ್ಯಾಣದ ಫೈಮುದಾ ಫಾತಿಮಾ ತನ್ನ ತತ್ವಪದದಲ್ಲಿ, ‘‘ನಮಾಜು ಮಾಡೋ ನಿಮ್ಮ ಒಳಗ ನಾದ ಬರುತಾವ ಅದರಿಂದೊಳಗ ನಾದದೊಳಗ ಕಾಣೋ ನೀ ಅಲ್ಲಾಗ ಕಂಡು ನೀ ಆಗು ಎಲ್ಲಾ’’ ಎನ್ನುವ ತತ್ವಪದಕ್ಕೂ ಮತ್ತು ಇರಾಕ್ ದೇಶದ ರಾಬಿಯಾ ಅಲ್ ಬಸ್ರಾಳ ಪದ್ಯಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವಳದೊಂದು ಪದ್ಯ, ‘‘ನನ್ನಾತ್ಮದಲ್ಲೊಂದು ಮಂದಿರವಿದೆ. ಪವಿತ್ರ ಸಮಾಧಿಯಿದೆ. ಮಸೀದಿಯೊಂದಿದೆ ಮತ್ತು ಚರ್ಚೊಂದು ಎಲ್ಲ ತೊರೆದಿದೆ. ಎಲ್ಲಾ ಮುರಿದಿದೆ. ಎಲ್ಲಾ ಇಲ್ಲವಾಗಿದೆ ಅಲ್ಲಿ’’ ಎನ್ನುವ ಇಲ್ಲಿಯ ಪದ್ಯ ಮತ್ತು ಫೈಮುದಾ ಫಾತಿಮಾ ತತ್ವಪದಕ್ಕೂ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ಏಕೆಂದರೆ ಫಾತಿಮಾಳ ಮಾತಿನಲ್ಲಿ ‘ಎಲ್ಲಾ ಆಗುವುದು’ ಮತ್ತು ರಬಿಯಾ ಅಲ್ ಬಸ್ರಾಳ ಮಾತಿನಲ್ಲಿ ‘ಎಲ್ಲಾ ಇಲ್ಲವಾಗುವುದು’ ಇವೆರಡೂ ಬಹುತ್ವವನ್ನೇ ಹೇಳುತ್ತವೆ. ಕೊನೆಮಾತು: ಕೊನೆಯದಾಗಿ ಬಹುತ್ವವೆಂದರೆ, ತೀರಾ ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಅತೀ ಸಣ್ಣ ರೈತರಿಗೆ ಜಮೀನು ಸ್ವಲ್ಪವೇ ಇರುತ್ತದೆ. ಎಲ್ಲಾ ಬೆಳೆಗಳನ್ನು ತಮಗಿರುವಷ್ಟು ಜಮೀನಿನಲ್ಲಿಯೇ ಬೆಳೆಯುತ್ತಾರೆ. ಉದಾಹರಣೆಗೆ ವರ್ಷದ ಬೆಳೆಯಾದ ತೊಗರಿಯ ನಡುಸಾಲುಗಳಲ್ಲಿ ಆರು ತಿಂಗಳ ಬೆಳೆಗಳಾದ ಸಜ್ಜೆ, ಸೂರ‌್ಯಪಾನ, ಶೇಂಗಾ ಇತ್ಯಾದಿ ಬೆಳೆಗಳನ್ನು ಹಾಕುತ್ತಾರೆ. ಉಳಿದಂತೆ ತಲೆ ಸಾಲಿಗೆ ಅಗಸಿ, ಕಾರೆಳ್ಳು, ಎಳ್ಳು ಇತ್ಯಾದಿ ಬಾಯಿ ಚಟದ ಬೆಳೆಗಳನ್ನು ಒಳಗೊಂಡು ಉತ್ತಿ ಬಿತ್ತಿದ ಎತ್ತುಗಳಿಗೆಂದು ಬಾಟಿ ಹಾಕುತ್ತಾರೆ. ಏಕಕಾಲಕ್ಕೆ ಬಹು ಬೆಳೆಗಳಿಂದ ಮಣ್ಣು ಹದಕ್ಕೆ ಬರುತ್ತದೆನ್ನುವ ವೈಜ್ಞಾನಿಕ ಸ್ಕಾಲರ್ಶಿಪ್ ನಮಗಿಲ್ಲವಾದರೂ ಈ ತರಹದ ಬಹು ಬೆಳೆಯ ಸಂಸ್ಕೃತಿ ಬದುಕಿಗೆ ಮುಖ್ಯವಾಗಿದೆಯೆಂದು ಹೇಳಬೇಕಾಗುತ್ತದೆ. ಏಕ ಬೆಳೆಯ ಗೋಜಿಗೆ ಅತೀ ಸಣ್ಣ ರೈತರು ಹೋಗುವುದಿಲ್ಲ. ಇದು ಸಾಹಿತ್ಯಕ್ಕೂ ಅನ್ವಯಿಸಬಹುದು. ಇಂಥ ಅರಿವಿರುವ ತತ್ವಪದಕಾರರು ಶರಣರಿಗಿಂತ ವಿಭಿನ್ನವಾಗಿ ಚಿಂತಿಸುತ್ತಾರೆ. ಎಲ್ಲ ಅನ್ಯ ದೈವಗಳನ್ನೂ ಕಾವ್ಯದಲ್ಲಿ ರೂಪಕ ಪ್ರತಿಮೆಗಳಾಗಿ ತರುತ್ತಾರೆ. ಈಗಾಗಲೇ ಹೇಳಿದಂತೆ ನಾಥ, ಶಾಕ್ತ, ಸೂಫಿ, ಶರಣ ಮುಂತಾದ ಪಾಂಥಗಳನ್ನು ಮತ್ತು ಜಾನಪದ ಮೌಖಿಕ ಪರಂಪರೆಗಳಲ್ಲಿರುವ ಆಚರಣೆಗಳನ್ನು ಒಳಗೊಳ್ಳುವುದರಿಂದ ತತ್ವಪದಗಳಿಗೆ ಅತಿ ಹೆಚ್ಚು ಒತ್ತು ಕೊಡಬೇಕಾದದ್ದು ಅನಿವಾರ್ಯವಾಗುತ್ತದೆ.

ವಾರ್ತಾ ಭಾರತಿ 11 Jan 2026 2:33 pm

ಬಳ್ಳಾರಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಮಿಕರಿಂದ ಒತ್ತಾಯ

ಭೂಮಿ ಪೂಜೆಗಷ್ಟೇ ಸೀಮಿತ | 7 ವರ್ಷದಲ್ಲಿ ಕಾಂಪೌಂಡು ಕಟ್ಟಿದ್ದೇ ಸಾಧನೆ | ಇಎಸ್‌ಐ ಆಸ್ಪತ್ರೆ ಇಲ್ಲದೆ ರೋಗಿಗಳು ಪರದಾಟ

ವಾರ್ತಾ ಭಾರತಿ 11 Jan 2026 2:25 pm

ನಿರ್ವಹಣೆಯಿಲ್ಲದೆ ನಶಿಸುತ್ತಿರುವ ಅಶೋಕನ ಶಿಲಾಶಾಸನ

ಮಸ್ಕಿ ಪಟ್ಟಣದ ಹೊರ ವಲಯದಲ್ಲಿರುವ ಅಶೋಕನ ಐತಿಹಾಸಿಕ ಶಿಲಾಶಾಸನ ನಿರ್ವಹಣೆ ಇಲ್ಲದೆ ನಶಿಸಿಹೋಗುವ ಸ್ಥಿತಿಯಲ್ಲಿರುವುದಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮ್ರಾಟ್ ಅಶೋಕನ ಶಿಲಾಶಾಸನದ ವಿಷಯವಾಗಿ ವಾರ್ತಾಭಾರತಿ ಪತ್ರಿಕೆಯೊಂದಿಗೆಮಾತನಾಡಿದ ಸಾಹಿತಿ ಸುರೇಶ್ ಬಳಗಾನೂರು, ಮಸ್ಕಿ ಚಕ್ರವರ್ತಿ ಅಶೋಕ ಮೌರ್ಯ ಸಾಮ್ರಾಜ್ಯದಿಂದ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿ ಈ ಸ್ಥಳ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮಸ್ಕಿ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಮುದಗಲ್ ಕ್ರಾಸ್‌ನ ಬಳಿ ಅಶೋಕ ಸ್ತಂಭ ನಿರ್ಮಿಸಿ ಅಶೋಕ ವೃತ್ತ ಎಂದು ಹೆಸರಿಡಲಾಗಿತ್ತು. ಈ ಸ್ಥಳದಲ್ಲಿ ಸುಮಾರು 30-40 ವರ್ಷಗಳಿಂದ ಅಶೋಕ ಶಿಲಾಶಾಸನದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಫಲಕವನ್ನು ಪ್ರವಾಸೋದ್ಯಮ ಇಲಾಖೆ ಅಳವಡಿಸಿತ್ತು. ಆದರೆ ಕೆಲ ಕಿಡಿಗೇಡಿಗಳು 2022ರ ಜ. 27ರಂದು ರಾತ್ರೋರಾತ್ರಿ ನಾಮಫಲಕ ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆಹಚ್ಚಿ ನಾಮಫಲಕ ವಶಪಡಿಸಿಕೊಳ್ಳಬೇಕು ಎಂದು ಮಸ್ಕಿಯ ವಿದ್ಯಾರ್ಥಿಗಳು, ರೈತರು ಸೇರಿ ಪ್ರಗತಿಪರ ಸಂಘಟನೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಅಲ್ಲದೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಆದರೆ ಇದುವರೆಗೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆಮಾಡಿಲ್ಲ ಎಂದು ಸುರೇಶ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೆ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷಿಸುತ್ತಿದ್ದು, ಶಾಸನ ಸ್ಥಳ ಹಾಳುಕೊಂಪೆಯಾಗಿದೆ. ಇದು ಪ್ರವಾಸಿಗರು, ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು. ಶಾಸನ ಸ್ಥಳದ ಅಭಿವೃದ್ಧಿಗೆ 3 ಎಕರೆ ಜಾಗದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ವಸ್ತು ಸಂಗ್ರಹಾಲಯದ ಕಟ್ಟಡಗಳ ಪೂರ್ಣಗೊಂಡು ಏಳು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ಉದ್ಯಾನವನ ನಿರ್ಮಾಣ ಕೆಲಸ ವಿಳಂಬವಾದ ಕಾರಣ ಶಾಸನದ ಪರಿಸರ ಬಿಕೋ ಎನ್ನುತ್ತಿದೆ. ಪ್ರವಾಸಿಗರ ಬಹುವರ್ಷದ ಪ್ರಮುಖ ಬೇಡಿಕೆಯ ಹಿನ್ನೆಲೆಯಲ್ಲಿ ಶಾಸನ ಸ್ಥಳ ಅಭಿವೃದ್ಧಿಪಡಿಸಲು ಅದರ ಬಳಿಯ ಜಮೀನಿನಲ್ಲಿ ಉದ್ಯಾನವನ ನಿರ್ಮಾಣ ಇನ್ನಿತರ ಕಟ್ಟಡ ಕಟ್ಟಲು 3 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಶಾಸನ ಸ್ಥಳದ ಬಳಿ ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣ ಬಿಟ್ಟರೆ, ಉಳಿದ ಯಾವ ಕೆಲಸಗಳು ಆಗಿಲ್ಲ. ಅಲ್ಲದೆ ಸುಮಾರು 29 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ 6 ವರ್ಷ ಗತಿಸಿದರೂ ಚಾಲನೆ ಸಿಕ್ಕಿಲ್ಲ. ಅಲ್ಲದೆ ಉದ್ಘಾಟನಾ ಭಾಗ್ಯ ಕಾಣದೆ ಇರುವ ವಸ್ತು ಸಂಗ್ರಹಾಲಯದ ಶೌಚಾಲಯ ಕಟ್ಟಡಗಳು, ಕಿಟಕಿಗಳು ಹಾಗೂ ಗಾಜುಗಳು ಹಾಳಾಗಿ ಹೋಗಿವೆ. ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿವೆ. ಕೂಡಲು ಆಸನಗಳಿಲ್ಲ. ಹೀಗಾಗಿ ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿರುವ ಐತಿಹಾಸಿಕ ಪ್ರಸಿದ್ಧಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿಪಡಿಸಲು 10 ಕೋಟಿ ರೂಪಾಯಿ ಅನುದಾನ ಟೆಂಡರ್ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಯಾವ ಕಾಮಗಾರಿಗಳೂ ಆರಂಭವಾಗಿಲ್ಲ. ಈಗಲಾದರೂ ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ಅನಿವಾರ್ಯ. -ಬಸವಂತ ಹಿರೇಕಡುಬೂರು, ಜೈ ಕರುನಾಡು ರಕ್ಷಣೆ ಸೇನೆಯ ಮುಖಂಡ

ವಾರ್ತಾ ಭಾರತಿ 11 Jan 2026 2:19 pm

Grok ಅಶ್ಲೀಲ ಕಂಟೆಂಟ್ ವಿವಾದ; ಪೋಸ್ಟ್‌ಗಳು ಮತ್ತು ಖಾತೆಗಳನ್ನು ರದ್ದು ಮಾಡಿದ ‘ಎಕ್ಸ್’ ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ತನ್ನ ವೆಬ್‌ತಾಣದಲ್ಲಿರುವ ಅಶ್ಲೀಲ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಅಶ್ಲೀಲ ಕಂಟೆಂಟ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ ಬಳಿಕ ಎಕ್ಸ್ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದ್ದು, 600ಕ್ಕೂ ಅಧಿಕ ಖಾತೆಗಳನ್ನು ರದ್ದು ಮಾಡಿದೆ. ಮಾಧ್ಯಮಗಳ ವಿವರಗಳ ಪ್ರಕಾರ ‘ಎಕ್ಸ್’ ತನ್ನ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್‌ಗೆ ಅವಕಾಶ ನೀಡುವುದಿಲ್ಲ ಮತ್ತು ಸರ್ಕಾರದ ನಿಯಂತ್ರಣಗಳನ್ನು ಅನುಸರಿಸುವುದಾಗಿ ಸರ್ಕಾರಕ್ಕೆ ತಿಳಿಸಿದೆ. ►ಕಾನೂನುಬಾಹಿರ ಕಂಟೆಂಟ್ ತೆಗೆಯಲು ಆದೇಶ ‘ಎಕ್ಸ್‌’ ಸಾಮಾಜಿಕ ಜಾಲತಾಣದಿಂದ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತೆಗೆಯುವಂತೆ ಭಾರತದ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶಿಸಿದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ Grok ಮೂಲಕ ಉತ್ಪಾದಿಸಲಾಗುತ್ತಿರುವ ವಿಷಯಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿತ್ತು. ತಪ್ಪಿದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು. “ಎಐ ಆಧಾರಿತ ಸೇವೆಗಳಾದ Grok ಮತ್ತು xAI ನ ಇತರ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಕಂಟೆಂಟ್‌ಗಳನ್ನು ಪೋಸ್ಟ್ ಮಾಡಲು ಅವಕಾಶ ಕೊಡುವುದು, ಉತ್ಪಾದಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ, ಹಂಚಿಕೆ ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ 72 ಗಂಟೆಗಳ ಒಳಗೆ ತಿಳಿಸಬೇಕು” ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು. ►ಎಐ ಸಾಧನಗಳನ್ನು ಬಳಸಿ ಅಶ್ಲೀಲ ಕಂಟೆಂಟ್ ರಚನೆ ಎಐ ಸಾಧನಗಳನ್ನು ಬಳಸಿ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ತಯಾರಿಸಲಾಗುತ್ತಿದೆ ಮತ್ತು ಮುಖ್ಯವಾಗಿ ಮಹಿಳೆಯರನ್ನು ಗುರಿ ಮಾಡಲಾಗುತ್ತಿದೆ ಎನ್ನುವ ಕುರಿತ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ನಿರ್ದೇಶನ ಬಂದಿತ್ತು. ಸಚಿವಾಲಯ ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ವೇದಿಕೆಗೆ ಕೈಗೊಂಡ ಕ್ರಮಗಳ ಕುರಿತು 72 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಅಂತಹ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ಬಳಕೆದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಸರ್ಕಾರ ಸೂಚಿಸಿತ್ತು. “ಪದೇಪದೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲಾಗಿದೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಂಸದೀಯ ಪ್ರತಿನಿಧಿಗಳು ದೂರು ಸಲ್ಲಿಸಿ ಎಕ್ಸ್‌ ಜಾಲತಾಣದಲ್ಲಿರುವ ವಿಷಯಗಳು ಸಭ್ಯತೆ ಮತ್ತು ಅಶ್ಲೀಲತೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಈಗಿರುವ ನಿಯಮಗಳ ಹೊರತಾಗಿಯೂ ನಿರ್ದಿಷ್ಟ ವರ್ಗದ ಕಾನೂನುಬಾಹಿರ ವಿಷಯಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ” ಎಂದು ಆದೇಶದಲ್ಲಿ ಹೇಳಲಾಗಿತ್ತು. ಸರ್ಕಾರದ ಆದೇಶದಂತೆ ಇದೀಗ ಎಕ್ಸ್ ವೇದಿಕೆಯಿಂದ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಲಾಗಿದೆ ಮತ್ತು 600 ಖಾತೆಗಳನ್ನು ರದ್ದು ಮಾಡಲಾಗಿದೆ. ಇನ್ನು ಮುಂದೆ ಅಶ್ಲೀಲ ಇಮೇಜ್‌ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದು ‘ಎಕ್ಸ್‌’ ಸರ್ಕಾರಕ್ಕೆ ತಿಳಿಸಿದೆ. ►Grok ದುರುಪಯೋಗದ ಕುರಿತು ಕಳವಳ Grok ಎಂಬುದು ಎಐ ಚಾಟ್‌ಬೋಟ್ ಅಪ್ಲಿಕೇಶನ್ ಆಗಿದ್ದು, 2023ರಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ‘Grok ಇಮ್ಯಾಜಿನ್’ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿತ್ತು. ಇದನ್ನು ಬಳಸಿ ಅಸಭ್ಯ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದಾಗಿತ್ತು. ಪೇಯ್ಡ್ ಗ್ರಾಹಕರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿದೆ. ಎಕ್ಸ್ ಬಳಕೆದಾರರಿಗೆ ಈ ಚಾಟ್‌ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ನೀಡಲಾಗಿದೆ. ಎಕ್ಸ್ ಪೋಸ್ಟ್‌ಗಳಲ್ಲಿ ಗ್ರೋಕ್‌ಗೆ ಟ್ಯಾಗ್ ಮಾಡಿ ಬೇಕಾದ ವಿಷಯಕ್ಕೆ ಸೂಚನೆ ನೀಡಬಹುದು. ಪೋಸ್ಟ್ ಆಗಿರುವ ವ್ಯಕ್ತಿಯ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ ಎಂಬ ಆರೋಪಗಳೂ ಕೇಳಿಬಂದಿವೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದು ಹೇಳಿದರೆ ಅದನ್ನೂ ಮಾಡುತ್ತದೆ ಎನ್ನಲಾಗಿದೆ. ಆದರೆ ಎಕ್ಸ್‌ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ ಎನ್ನುವ ಕಳವಳ ಭಾರತದಲ್ಲಿ ವ್ಯಕ್ತವಾಗಿತ್ತು. ಇತರ ದೇಶಗಳಲ್ಲಿಯೂ ಈ ವಿಚಾರವಾಗಿ ಎಕ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇಂಡೋನೇಷ್ಯಾ Grok ಅನ್ನು ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು Grok ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ಗಳಿಂದ Grok ಆ್ಯಪ್ ಅನ್ನು ತೆಗೆದುಹಾಕುವಂತೆ ಆ್ಯಪಲ್ ಮತ್ತು ಗೂಗಲ್‌ಗೆ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 11 Jan 2026 2:15 pm

ಠಾಕ್ರೆಗಳು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು: ಸಂಜಯ್ ರಾವತ್

ಠಾಕ್ರೆ ಕುಟುಂಬವನ್ನು ಅಳಿಸಿಹಾಕಲು ಸಾಧ್ಯವಿಲ್ಲ, ನಾವು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಮುಂಬೈಯನ್ನು ಮುಚ್ಚಬಹುದು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಎಚ್ಚರಿಸಿದ್ದಾರೆ. 2026ರ ಬಿಎಂಸಿ ಚುನಾವಣೆ ಸಮೀಪಿಸುತ್ತಿರುವಾಗ, ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಪುನರ್ಮಿಲನ ಮಹತ್ವ ಪಡೆದುಕೊಂಡಿದೆ. ರಾಷ್ಟ್ರಕ್ಕೆ ಆದ್ಯತೆ ನೀಡುವ ಮೂಲಕ ಠಾಕ್ರೆ ಸಹೋದರರು ಒಂದಾಗಿದ್ದಾರೆ ಎಂದು ರಾವತ್ ಹೇಳಿದ್ದಾರೆ.

ವಿಜಯ ಕರ್ನಾಟಕ 11 Jan 2026 2:12 pm

ಅಸೈಗೋಳಿ: ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಆರೋಪ; ಸ್ಥಳೀಯರಿಂದ ಪಂಚಾಯತ್ ಗೆ ಮನವಿ

ಕೊಣಾಜೆ: ಅಸೈಗೋಳಿಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆಯ ಮೂಲ ನಕ್ಷೆಯಲ್ಲಿ ಪರಿವರ್ತನೆ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪದೊಂದಿಗೆ, ರಸ್ತೆ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಸ್ಥಳೀಯರು ಶುಕ್ರವಾರ ಕೊಣಾಜೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರು. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಅಗತ್ಯ ಭೂಮಿ ಒದಗಿಸುವ ಉದ್ದೇಶದಿಂದ ರಸ್ತೆಗೆ ತಾಗಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಂಗಡಿ ಉಳಿಸಲು ಲಾಬಿ ಆರೋಪ ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಅರುಣ್ ಡಿಸೋಜ ಅವರು, ರಸ್ತೆ ನಿರ್ಮಾಣ ಕಾಮಗಾರಿಯ ವೇಳೆ ನೀರು ಹಾಗೂ ವಿದ್ಯುತ್ ಪೈಪ್‌ಗಳು ಇನ್ನೂ ಮೇಲ್ಭಾಗದಲ್ಲಿರುವುದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್ 31ರೊಳಗೆ ತೆರವು ನೋಟಿಸ್ ಪಕ್ಕದಲ್ಲಿರುವ ಅಂಗಡಿಗಳನ್ನು ಖಾಲಿ ಮಾಡುವಂತೆ ಗ್ರಾಮ ಪಂಚಾಯತ್ ನೋಟಿಸ್ ನೀಡಿದ್ದರೂ, ಕೆಲವರು ಅಂಗಡಿ ಉಳಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಹಳೇ ಕಟ್ಟಡ ಉಳಿಸುವ ನೆಪದಲ್ಲಿ ಕೆಲ ವ್ಯಕ್ತಿಗಳು ರಸ್ತೆ ನಿರ್ಮಾಣದ ಮೂಲ ನಕ್ಷೆಯಲ್ಲಿ ತಿದ್ದುಪಡಿ ಮಾಡಲು ಯತ್ನಿಸುತ್ತಿದ್ದು, ಇದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಅವರು ದೂರಿದರು. ಚತುಷ್ಪಥ ರಸ್ತೆಗೆ 18 ಮೀಟರ್ ಅಗಲದ ಭೂವಿಸ್ತೀರ್ಣಕ್ಕೆ ಈಗಾಗಲೇ ಗುರುತು ಹಾಕಲಾಗಿದ್ದು, ಹಳೇ ಕಟ್ಟಡ ತೆರವು ಹಾಗೂ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ. ಆದರೆ, ತೆರೆಮರೆಯಲ್ಲಿ ಕೆಲವರು ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು. ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ಹೊಸ ಅಂಗಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಚರಂಡಿ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ, ಸುಸಜ್ಜಿತ ಬಸ್ ಹಾಗೂ ಆಟೋ ನಿಲ್ದಾಣ ನಿರ್ಮಾಣಕ್ಕೂ ಯೋಜನೆ ರೂಪಿಸುವಂತೆ ಅವರು ಆಗ್ರಹಿಸಿದರು. ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ ಮೂಲ ಯೋಜನಾ ನಕ್ಷೆಯನ್ನು ಯಾವುದೇ ರೀತಿಯ ತಿದ್ದುಪಡಿ ಇಲ್ಲದೆ ಕಾಪಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸಬೇಕು. ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು. ರಸ್ತೆಯ ಒಂದು ಬದಿಯ ಕಟ್ಟಡ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿರುವ ಬಗ್ಗೆ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಂಜೆಯೊಳಗೆ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿರುವುದಾಗಿ ಸ್ಥಳೀಯರಾದ ರೊನಾಲ್ಡ್ ಡಿಸೋಜ ತಿಳಿಸಿದರು. “ಸುಂದರ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣವೇ ನಮ್ಮ ಬೇಡಿಕೆ” ಎಂದು ಹೇಳಿದರು. ಮನವಿ ಸ್ವೀಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ರಜನಿ ಅವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ್ ಬಿ. ಅಸೈಗೋಳಿ, ರೋಯ್‌ದಾಸನ್, ರಾಜೇಶ್ ಗಾಣಿಗ, ಸ್ಟೀವನ್ ರೇಗೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 2:10 pm

ಬೆಂಗಳೂರು ಸಿಟಿ KSR ರೈಲು ನಿಲ್ದಾಣ ಕಾಮಗಾರಿ: 6 ಪ್ರಮುಖ ರೈಲುಗಳ ಆಗಮನ ನಿರ್ಗಮನ ಒಂದೂವರೆ ತಿಂಗಳು ರದ್ದು! ಯಾವೆಲ್ಲಾ?

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 16 ರಿಂದ ಮಾರ್ಚ್ ಆರಂಭದವರೆಗೆ ಹಲವು ಪ್ರಮುಖ ರೈಲುಗಳ ಆಗಮನ-ನಿರ್ಗಮನ ನಿಲ್ದಾಣ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳಲ್ಲಿ ಕೊನೆಗೊಳ್ಳಲಿವೆ ಅಥವಾ ಅಲ್ಲಿಂದ ಹೊರಡಲಿವೆ.

ವಿಜಯ ಕರ್ನಾಟಕ 11 Jan 2026 2:04 pm

ರಷ್ಯಾ ತೈಲ ಖರೀದಿ ರಾಷ್ಟ್ರಗಳ ಮೇಲೆ 500% ಸುಂಕದ 'ಬ್ರಹ್ಮಾಸ್ತ್ರ' ಪ್ರಯೋಗಿಸಲು ಟ್ರಂಪ್ ಸಿದ್ಧ! ಭಾರತದ ರಫ್ತು ವಲಯಕ್ಕೆ ಎದುರಾಗಿದೆಯೇ ಭಾರಿ ಸಂಕಷ್ಟ?

ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಈ ಮಸೂದೆ ಜಾರಿಯಾದರೆ ಭಾರತದ ರಫ್ತು ವಲಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜವಳಿ, ರತ್ನ, ಪಾದರಕ್ಷೆ, ರಾಸಾಯನಿಕ, ಯಂತ್ರೋಪಕರಣಗಳ ಮೇಲೆ ಪರಿಣಾಮ ಬೀರಲಿದೆ. ಫಾರ್ಮಾ, ಐಟಿ ಸೇವೆಗಳಿಗೂ ಭೀತಿ ಎದುರಾಗಿದೆ. ಭಾರತದ ಆರ್ಥಿಕತೆಗೆ ಇದು ತೀವ್ರ ಹೊಡೆತ ನೀಡುವ ಸಾಧ್ಯತೆಯಿದೆ. ಈ ಕುರಿತ ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 11 Jan 2026 2:04 pm

ವಿಮೆನ್ ಇಂಡಿಯಾ ಮೂವ್ಮೆಂಟ್ 10ನೇ ಸಂಸ್ಥಾಪನಾ ದಿನಾಚರಣೆ

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಸಂಸ್ಥೆಯ 10ನೇ ವರ್ಷದ ಸಂಸ್ಥಾಪನಾ ದಿನವನ್ನು “10 ವರ್ಷಗಳ ಭಯದ ರಾಜಕೀಯದ ಪ್ರತಿರೋಧ” ಎಂಬ ಘೋಷವಾಕ್ಯದಡಿ ಜನವರಿ 10ರಂದು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಂಚ್, ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು, ವೃದ್ಧಾಶ್ರಮ ಭೇಟಿ, SIR ಕುರಿತ ಮಾಹಿತಿ ಶಿಬಿರ, ಮತದಾರರಿಗೆ ಗುರುತಿನ ಚೀಟಿ ಮಾಡಿಸಿಕೊಡುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ನಗರ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಮಹಿಳಾ ಸದಸ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದಲ್ಲದೆ, ಅನೇಕ ಮಹಿಳೆಯರು ವಿಮ್ ಸಂಸ್ಥೆಯ ತತ್ವ–ಸಿದ್ಧಾಂತಗಳನ್ನು ಒಪ್ಪಿಕೊಂಡು ಸದಸ್ಯತ್ವವನ್ನು ಪಡೆದುಕೊಂಡರು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕಿಯರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಮ್ ಸಂಸ್ಥಾಪನಾ ದಿನದ ಸಂದೇಶವನ್ನು ನೀಡಿದರು. ಮಹಿಳಾ ರಾಜಕೀಯದ ಅಗತ್ಯತೆ, ಸಮಾನ ನ್ಯಾಯ, ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು.

ವಾರ್ತಾ ಭಾರತಿ 11 Jan 2026 1:53 pm

Karnataka Weather: ಜ.12 ರಂದು ಈ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ: ಜ.17 ರವರೆಗೂ ಎಲ್ಲೆಲ್ಲಿ ಗರಿಷ್ಠ ಚಳಿ? ಇಲ್ಲಿದೆ ವಿವರ

ರಾಜ್ಯದ ಅದರಲ್ಲೂ ರಾಜಧಾನಿ ಬೆಂಗಳೂರಿನ ಹವಾಮಾನ ವಿಪರೀತ ಚಳಿ ಹಾಗೂ ಮೋಡ ಕವಿದ ವಾತಾವರಣದಿಂದ ತುಂಬಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿತುವ ಮುನ್ನೆಚ್ಚರಿಕೆ ನೀಡಲಾಗಿದೆ. ಜನವರಿ 17ರವರೆಗೂ ಯಾವ್ಯಾವ ಜಿಲ್ಲೆಗಳಲ್ಲಿ ಯಾವ ರೀತಿಯ ಹವಾಮಾನ ಇರಲಿದೆ ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 11 Jan 2026 1:51 pm

ದೇರಳಕಟ್ಟೆ: ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ

ದೇರಳಕಟ್ಟೆ: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್ – ಕಲಾವಿದಮಾರೊ ಕೂಟ) ವತಿಯಿಂದ ಹೊರತಂದ ಮೇಲ್ತೆನೆ ಇ-ಮ್ಯಾಗಝಿನ್ ಬಿಡುಗಡೆ ಕಾರ್ಯಕ್ರಮವು ರವಿವಾರ ನಾಟೆಕಲ್ ವಿಜಯನಗರದಲ್ಲಿರುವ ಇಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಅಧ್ಯಕ್ಷ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ. ಇಬ್ರಾಹಿಂ ನಡುಪದವು, ಉಪಾಧ್ಯಕ್ಷ ಇಬ್ರಾಹಿಂ ರಫೀಕ್ ಮುದುಂಗಾರುಕಟ್ಟೆ, ಜೊತ ಕಾರ್ಯದರ್ಶಿ ಸಿ.ಎಂ. ಶರೀಫ್ ಪಟ್ಟೋರಿ ಉಪಸ್ಥಿತರಿದ್ದರು. ಇದಲ್ಲದೆ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಯೂಸುಫ್ ವಕ್ತಾರ್, ಅಬೂಬಕ್ಕರ್ ಹೂಹಾಕುವಕಲ್ಲು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 11 Jan 2026 1:48 pm

Kodimata Sri: ಸಿ.ಎಂ ಬದಲಾವಣೆ ಬಗ್ಗೆ, ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

Kodimata Sri: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹಾಗೂ ಸಂಪುಟ ಪುನರ್ ರಚನೆಯ ಬಗ್ಗೆ ಸೇರಿದಂತೆ ಹಲವು ವಿಷಯಗಳು ಚರ್ಚೆ ಆಗುತ್ತಿವೆ. ಈ ರೀತಿ ಪ್ರಮುಖ ವಿಷಯಗಳು ಚರ್ಚೆ ಆಗುತ್ತಿರುವಾಗಲೇ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯವೊಂದನ್ನು ಹೇಳಿದ್ದಾರೆ. ಕೋಡಿಮಠ ಶ್ರೀಗಳು ಪ್ರಮುಖ ಇಬ್ಬರು ರಾಜಕೀಯ ನಾಯಕರ ಸಾವಿನ ಬಗ್ಗೆ

ಒನ್ ಇ೦ಡಿಯ 11 Jan 2026 1:48 pm

WPL 2026 RCB: ಆರ್‌ಸಿಬಿಯಿಂದ ಸ್ಟಾರ್ ಆಲ್‌ರೌಂಡರ್‌ ಔಟ್‌: ಮಾಹಿತಿ ಇಲ್ಲಿದೆ ತಿಳಿಯಿರಿ

WPL 2026 RCB: ಡಬ್ಲ್ಯೂಪಿಎಲ್‌ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿತು. ಈ ನಡುವೆಯೇ ಇದೀಗ ಸ್ಟಾರ್ ಆಲ್‌ರೌಂಡರ್‌ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಹಾಗಾದ್ರೆ, ಕಾರಣ ಏನು ಹಾಗೂ ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್‌ಸಿಬಿ ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿದು

ಒನ್ ಇ೦ಡಿಯ 11 Jan 2026 1:36 pm

ರಾಯಚೂರು: ರೈಲ್ವೆ ಟಿಕೆಟ್ ದರ ಹೆಚ್ಚಳ ಖಂಡಿಸಿ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

ರಾಯಚೂರು: ಭಾರತೀಯ ರೈಲ್ವೆ ಇಲಾಖೆಯು ಡಿಸೆಂಬರ್ 26ರಿಂದ ಜಾರಿಗೊಳಿಸಿರುವ ರೈಲ್ವೆ ಟಿಕೆಟ್ ದರ ಹೆಚ್ಚಳವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಯಚೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಸಾಮಾನ್ಯ ವರ್ಗದಲ್ಲಿ 215 ಕಿ.ಮೀ. ಮೀರಿದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ ಹಾಗೂ ನಾನ್-ಎಸಿ ಮೇಲ್/ಎಕ್ಸ್‌ಪ್ರೆಸ್ ಮತ್ತು ಎಲ್ಲಾ ಎಸಿ ವರ್ಗಗಳ ಟಿಕೆಟ್ ದರದಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಳ ಮಾಡಿದೆ. ಇದು ಈ ವರ್ಷದ ಎರಡನೇ ಬಾರಿಗೆ ರೈಲ್ವೆ ಟಿಕೆಟ್ ದರ ಏರಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಮೇಲೆ, ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ದೂರಿದರು. ಇನ್ನೊಂದೆಡೆ ದಿನಬಳಕೆ ವಸ್ತುಗಳ ದರ ನಿರಂತರವಾಗಿ ಹೆಚ್ಚುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಮಕ್ಕಳ ಪಾಲನೆ–ಪೋಷಣೆ ಹಾಗೂ ಶಿಕ್ಷಣ ವೆಚ್ಚಗಳು ದುಬಾರಿಯಾಗಿರುವ ಪರಿಸ್ಥಿತಿಯಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು. ಕೂಡಲೇ ಈ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ಮಹಮ್ಮದ್ ಶಹಬಾಜ್, ಮಹಮ್ಮದ್ ಫೈಜಲ್ ಖಾನ್, ರಘು ಮಡಿವಾಳ, ಎಂಡಿ ಜಾವೇದ್, ಉಪಾಧ್ಯಕ್ಷರಾದ ಬಿ. ಮಧುಕುಮಾರ, ರಶೀದ್, ದುಗನೂರು ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.    

ವಾರ್ತಾ ಭಾರತಿ 11 Jan 2026 1:34 pm

ರಾಜಕಾರಣಿಗಳ ಮೇಲಿನ ಭಕ್ತಿ ಸಂವಿಧಾನಕ್ಕೆ ಅಪಾಯ: ಕ್ಲಿಪ್ಟನ್ ಡಿ’ ರೊಜಾರಿಯೋ

ಬಂಟ್ವಾಳ: ರಾಜಕೀಯ ನಾಯಕರನ್ನು ಹೀರೋಗಳಂತೆ ಭಕ್ತಿಯಿಂದ ನೋಡಬಾರದು. ಅಂಥ ಅಂಧಭಕ್ತಿ ಸಂವಿಧಾನಕ್ಕೆ ದೊಡ್ಡ ಸವಾಲಾಗುತ್ತದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕೋರ್ಟ್ ವಕೀಲ ಕ್ಲಿಪ್ಟನ್ ಡಿ’ ರೊಜಾರಿಯೋ ಎಚ್ಚರಿಸಿದರು. ಎಐಎಲ್ಎಜೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಲೀಗಲ್ ಫ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದು ರಾಜಕೀಯ ನಾಯಕರನ್ನು ಹೀರೋಗಳಾಗಿ ಭಾರೀ ಭಕ್ತಿಯಿಂದ ಕಾಣುವ ಪ್ರವೃತ್ತಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನಿಸುವ ಶಕ್ತಿ ಕಳೆದುಕೊಳ್ಳಲಾಗುತ್ತದೆ. ಈ ಅಪಾಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು 1974ರಲ್ಲೇ ಎಚ್ಚರಿಸಿದ್ದರು. ಇದನ್ನು ನಾವು ಭಾರತ ಸಂವಿಧಾನಕ್ಕೆ ಎದುರಾಗಿರುವ ಭಾರೀ ಅಪಾಯವಾಗಿ ನೋಡಬೇಕು ಎಂದು ಹೇಳಿದರು. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ಜಾಗೃತ ನಾಗರಿಕನಾಗಿ ಚಿಂತಿಸುವ ಅವಕಾಶವೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. “ಇಂದು ಯುವಕರು ಧರ್ಮದ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಆ ಗೋಡೆಗಳನ್ನು ಒಡೆಯಬೇಕಾಗಿದೆ. ಆಗ ಮಾತ್ರ ಸಂವಿಧಾನಕ್ಕೆ ಪೂರಕವಾದ ಬದುಕು ಸಾಧ್ಯವಾಗುತ್ತದೆ” ಎಂದು ಹೇಳಿದರು. ಸಂವಿಧಾನವನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದಕ್ಕೆ ತಕ್ಕ ಶಿಕ್ಷಣ ವ್ಯವಸ್ಥೆ ಸಮಾಜದಲ್ಲಿ ರೂಪುಗೊಳ್ಳಬೇಕು. ಬಡವ–ಶ್ರೀಮಂತ ಭೇದ, ಜಾತಿ ಶೋಷಣೆ, ಧರ್ಮ ಹಾಗೂ ಲಿಂಗ ಆಧಾರಿತ ತಾರತಮ್ಯವಿಲ್ಲದ ಸಮಾಜವನ್ನು ನಿರ್ಮಿಸುವುದು ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ನೀಡಬಹುದಾದ ಮಹತ್ವದ ಕೊಡುಗೆ ಎಂದು ಹೇಳಿದರು. ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ದೇಶದ ಪ್ರಜಾಪ್ರಭುತ್ವ ‘ತುರ್ತು ಪರಿಸ್ಥಿತಿ’ ಎಂಬ ಕರಾಳ ದಿನಗಳನ್ನು ಕಂಡಿತ್ತು. ಆ ಸಂದರ್ಭದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಪ್ರಯತ್ನ ನಡೆದರೂ, ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುವ ತಿದ್ದುಪಡಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಇದರಿಂದ ಸಂವಿಧಾನ ಉಳಿದುಕೊಂಡಿತು ಎಂದು ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು. ಹಿರಿಯ ವಕೀಲ ಮನೋರಾಜ್ ರಾಜೀವ್ ಅವರು ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಜನತೆ ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸಿದರು. ಎಐಎಲ್ಎಜೆ ಕೇಂದ್ರ ಸಮಿತಿ ಸದಸ್ಯೆ ಅವನಿ ಚೋಕ್ಷಿ, ಯುವ ವಕೀಲ ಅಬ್ದುಲ್ ಜಲೀಲ್ ಎನ್., ಹೈಕೋರ್ಟ್ ವಕೀಲೆ ಸಂದ್ಯಾ ಪ್ರಭು ಮಾತನಾಡಿದರು. ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶ್ವಿನಿ ಕುಮಾರ್ ರೈ ಹಾಗೂ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಶೋಭಲತಾ ಸುವರ್ಣ, ಹಾತಿಮ್ ಅಹಮದ್, ಶ್ರೀಧರ್ ಪೈ, ಯುವ ವಕೀಲರಾದ ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ, ಎಐಎಲ್ಎಜೆ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ನವೀನ್ ತಾವ್ರೋ, ಲೀಗಲ್ ಫ್ರೆಂಡ್ಸ್ ಜಿಲ್ಲಾ ಘಟಕದ ಮುಖಂಡ ಉಮ್ಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಉಪ್ಪಿನಂಗಡಿ, ಎಸ್.ಜಿ. ಅಫ್ರೀಝ್, ಮಹಮ್ಮದ್ ಲುಕ್ಮಾನ್, ಕಾರ್ತಿಕ್ ಎಂ., ಪ್ರಜ್ವಲ್ ಪುತ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಐಎಲ್ಎಜೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಸ್ಫಾಕ್ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ತುಳಸೀದಾಸ್ ಆರ್. ವಂದಿಸಿದರು. ಯುವ ಮುಖಂಡ ಸತೀಶ್ ಅರಳ ಸಂವಿಧಾನದ ಪೀಠಿಕೆಯನ್ನು ಹಾಡಿದರು. ವಕೀಲರಾದ ಚಂದ್ರಶೇಖರ್ ರಾವ್ ಪುಂಚಮೆ ಹಾಗೂ ಮಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 11 Jan 2026 1:17 pm

ಅಲ್ಪ ಹಸಿವಿನಿಂದ ನಿದ್ರೆಗೆ ಜಾರುವುದರಿಂದ ಪ್ರಯೋಜನಗಳೇನು?

ಸ್ವಲ್ಪ ಮಟ್ಟಿಗೆ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಹಾಗೂ ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸುತ್ತದೆ. ಏಕೆಂದರೆ ಭಾರವಾದ ರಾತ್ರಿ ಭೋಜನವನ್ನು ಕರಗಿಸುವಲ್ಲಿ ದೇಹ ಅತಿಯಾಗಿ ವ್ಯಸ್ತವಾಗಿರುವುದಿಲ್ಲ. ಆನ್‌ಲೈನ್‌ನಲ್ಲಿ ಪೌಷ್ಠಿಕಾಂಶ ತಜ್ಞರು ಹೇಳುವ ಪ್ರಕಾರ, ರಾತ್ರಿ ಮಲಗಲು ಹೋಗುವಾಗ ಹೊಟ್ಟೆಯನ್ನು ಸಂಪೂರ್ಣ ತುಂಬಿಸಿಕೊಳ್ಳಬಾರದು. ಸ್ವಲ್ಪ ಹಸಿವೆ ಉಳಿದಿರಬೇಕು. ದೇಹ ಕ್ಯಾಲರಿ ಕೊರತೆಯನ್ನು ಎದುರಿಸಿದಾಗ ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹ ಕೊಬ್ಬು ಬಳಕೆಗೆ ಹೆಚ್ಚು ಒಲವು ತೋರಿಸುತ್ತದೆ. ►ಅತಿ ಹಸಿವಿನಿಂದ ಮಲಗಬಾರದು ಸ್ವಲ್ಪ ಹಸಿವೆಯಿಂದ ಇರುವುದು ಎಂದರೆ ಹಸಿವಿನಿಂದ ಮಲಗಬೇಕು ಎಂದರ್ಥವಲ್ಲ. ಅತಿ ಹಸಿವಿನಿಂದ ಮಲಗಲು ಹೋದರೆ ಒತ್ತಡದ ಹಾರ್ಮೋನ್‌ಗಳಾದ ಕಾರ್ಟಿಸೋಲ್‌ ನ ಮಟ್ಟ ಏರಿಕೆಯಾಗಬಹುದು. ಇದರಿಂದ ನಿದ್ರೆಗೆ ತೊಂದರೆಯಾಗಬಹುದು. ಪರಿಣಾಮವಾಗಿ ಬೆಳಗ್ಗೆ ಬೇಗನೇ ಎಚ್ಚರವಾಗುವ ಸಾಧ್ಯತೆ ಇದೆ ಮತ್ತು ಮರುದಿನ ಹಸಿವೆ ಇನ್ನಷ್ಟು ಹೆಚ್ಚಾಗಬಹುದು. ನಿದ್ರಾ ರಾಹಿತ್ಯವು ಕೊಬ್ಬು ಕರಗುವಿಕೆಯನ್ನು ನಿಧಾನಗೊಳಿಸಬಹುದು ಮತ್ತು ಒಟ್ಟು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ►ಅಧಿಕ ಆಹಾರ ಸೇವಿಸಿ ಮಲಗಬಾರದು ಮಲಗುವ ಮೊದಲು ಅತಿಯಾದ ಆಹಾರ ಸೇವನೆಯೂ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ತಡರಾತ್ರಿ ಹೆಚ್ಚಿನ ಆಹಾರ ಸೇವನೆಯಿಂದ ಇನ್ಸುಲಿನ್ ಮಟ್ಟ ಏರಿಕೆಯಾಗಬಹುದು. ಇದರಿಂದ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲೂ ಜೀರ್ಣಕ್ರಿಯೆ ಮುಂದುವರಿಯುವುದರಿಂದ ನಿದ್ರಾ ವ್ಯತ್ಯಯ, ಹೊಟ್ಟೆ ಉಬ್ಬರಿಸುವಿಕೆ ಉಂಟಾಗಬಹುದು. ಅಲ್ಲದೆ, ಆಮ್ಲದ ರಿಫ್ಲಕ್ಸ್‌ (ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವ ಸ್ಥಿತಿ) ಉಂಟಾಗಿ ಎದೆಯುರಿ ಹಾಗೂ ಅಸಹನೀಯತೆ ಎದುರಾಗಬಹುದು. ಸರಿಯಾದ ನಿದ್ರೆ ಇಲ್ಲದಿದ್ದರೆ ಹಸಿವೆಯನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮರುದಿನ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ. ಇಂತಹ ಪ್ರವೃತ್ತಿ ಮುಂದುವರಿದರೆ ತೂಕ ಏರಿಕೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ ಮತ್ತು ನಿರಂತರ ಸುಸ್ತಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುವ ಸಾಧ್ಯತೆ ಇದೆ. ►ಕಾರ್ಬೋಹೈಡ್ರೇಟ್‌ ಸೇವಿಸಿ ಮಲಗಬಾರದು ಮಲಗುವ ಮುನ್ನ ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ಅವು ಸರಿಯಾಗಿ ಜೀರ್ಣವಾಗಲು ಕಷ್ಟವಾಗಬಹುದು. ಇದರ ಪರಿಣಾಮವಾಗಿ ತೂಕ ಏರಿಕೆ ಮತ್ತು ಆಮ್ಲದ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ನೋವು, ಅಸಹನೀಯತೆ, ನಿರಂತರ ಎದೆಯುರಿ ಮತ್ತು ಆಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರೋಇಸೋಫೇಜಿಯಲ್ ರಿಫ್ಲಕ್ಸ್ ರೋಗ (GERD) ಗೆ ಕಾರಣವಾಗುವ ಸಾಧ್ಯತೆ ಇದೆ. ►ತಡರಾತ್ರಿ ಊಟ ಮಾಡಬಾರದು ಕೆಲವರು ತಡರಾತ್ರಿ ಊಟ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇಂತಹವರಿಗೆ ಬೊಜ್ಜು, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು. ವಿಶೇಷವಾಗಿ ಸಂಸ್ಕರಿತ ಆಹಾರಗಳನ್ನು ರಾತ್ರಿ ಸಮಯದಲ್ಲಿ ಸೇವಿಸುವುದರಿಂದ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಶೇಖರಣೆ ಹೆಚ್ಚಾಗಿ ಅಪಧಮನಿಗಳು ಕಿರಿದಾಗುವ ಸಾಧ್ಯತೆ ಇದೆ. ►ಸ್ವಲ್ಪ ಹಸಿವಿನಿಂದ ಮಲಗುವುದು ಉತ್ತಮ ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ವಲ್ಪ ಮಟ್ಟಿಗೆ ಹಸಿವೆಯಿಂದ ನಿದ್ರೆಗೆ ಜಾರುವುದರಿಂದ ಕೊಬ್ಬಿನ ನಷ್ಟಕ್ಕೆ ಸಹಕಾರಿಯಾಗಬಹುದು ಮತ್ತು ಉತ್ತಮ ನಿದ್ರೆಯೂ ಲಭಿಸಬಹುದು. ರಾತ್ರಿಯ ಭೋಜನ ಸಮತೋಲಿತವಾಗಿದ್ದು, ಬೇಗನೇ ಸೇವಿಸಿದರೆ ಇದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಪ್ರೋಟೀನ್ ಮತ್ತು ಫೈಬರ್ ಅಂಶಗಳುಳ್ಳ ಆಹಾರವನ್ನು ಆಯ್ಕೆ ಮಾಡುವುದು ಸೂಕ್ತ. ನಿದ್ರೆಗೆ ಜಾರುವ ಕೆಲ ಗಂಟೆಗಳ ಮೊದಲು ಆಹಾರ ಸೇವನೆಯನ್ನು ಕಡಿಮೆಗೊಳಿಸಿದಾಗ ಇನ್ಸುಲಿನ್ ಮಟ್ಟ ನಿಧಾನವಾಗಿ ಇಳಿಯುತ್ತದೆ. ಇನ್ಸುಲಿನ್ ಮಟ್ಟ ಕಡಿಮೆಯಾದಾಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುವ ಬದಲು ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲಿ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನ್‌ಗಳ ಮಟ್ಟ ಏರಿಕೆಯಾಗುತ್ತದೆ. ಇದು ಕೊಬ್ಬು ಕರಗಿಸುವಿಕೆ, ಸ್ನಾಯುಗಳ ಪುನಶ್ಚೇತನ ಮತ್ತು ದೇಹದ ಒಟ್ಟು ಚೇತರಿಕೆಗೆ ನೆರವಾಗುತ್ತದೆ. ಹೀಗಾಗಿ ಸ್ವಲ್ಪ ಮಟ್ಟಿನ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಮತ್ತು ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸಲು ಸಹಾಯಕವಾಗುತ್ತದೆ.

ವಾರ್ತಾ ಭಾರತಿ 11 Jan 2026 1:14 pm

ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ಮಂಗಳೂರು : ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ . ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಪಾದಯಾತ್ರೆ ಏಕೆ ಕೈಗೊಳ್ಳಬೇಕು : ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾವು ಹಿಂದೆ ಪಾದಯಾತ್ರೆ ಮಾಡಿದ್ದು, ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಇವರು ಪಾದಯಾತ್ರೆ ಏಕೆ ಮಾಡಬೇಕು ಎಂದು ಪ್ರಶ್ನಿಸಿದರು. ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ : ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೇ ಘಟನೆಗೆ ಪ್ರಚೋದನೆ ಆಯಿತು ಎಂದರು.

ವಾರ್ತಾ ಭಾರತಿ 11 Jan 2026 1:06 pm

ಸರ್ಕಾರಿ ನೌಕರರಿಗೆ ಬೆಂಗಳೂರಿನ UIDAI ತಂತ್ರಜ್ಞಾನ ಕೇಂದ್ರದಲ್ಲಿ ಉದ್ಯೋಗಾವಕಾಶ

ಕೇಂದ್ರ ಸರ್ಕಾರದ ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಬೆಂಗಳೂರು ತಂತ್ರಜ್ಞಾನ ಕೇಂದ್ರದಲ್ಲಿ ಸಹಾಯಕ ನಿರ್ದೇಶಕ (ತಂತ್ರಜ್ಞಾನ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ. ಆಧಾರ್ (ಸಬ್ಸಿಡಿಗಳು ಮತ್ತು ಇತರೆ ಪ್ರಯೋಜನಗಳು ಹಾಗೂ ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ–2016ರ ಅಡಿಯಲ್ಲಿ ಸ್ಥಾಪಿತವಾಗಿರುವ UIDAI, ಆಧಾರ್ ಸಂಖ್ಯೆಗಳನ್ನು ನೀಡುವುದು ಹಾಗೂ ಅವುಗಳ ದೃಢೀಕರಣಕ್ಕೆ ಸಂಬಂಧಿಸಿದ ನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದೆ. UIDAI ಸಹಾಯಕ ನಿರ್ದೇಶಕ (ತಂತ್ರಜ್ಞಾನ) ವಿಭಾಗದಲ್ಲಿ ಎರಡು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ UIDAI ತಂತ್ರಜ್ಞಾನ ಕೇಂದ್ರ, ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ►ಅರ್ಹತೆ ಮತ್ತು ಅನುಭವ ಪೋಷಕ ಕೇಡರ್ ಅಥವಾ ಇಲಾಖೆಯಲ್ಲಿ ಸದೃಶ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ಪರ್ಯಾಯವಾಗಿ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ–10 (56,100 ರೂ. – 1,77,500 ರೂ.) ಅಥವಾ ವೇತನ ಶ್ರೇಣಿ–9 (53,100 ರೂ. – 1,67,800 ರೂ.) ರಲ್ಲಿ ಮೂರು ವರ್ಷಗಳ ನಿಯಮಿತ ಸೇವೆ ಪೂರ್ಣಗೊಳಿಸಿದವರು ಅರ್ಹರಾಗಿರುತ್ತಾರೆ. ಇದಲ್ಲದೆ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ–8 (47,600 ರೂ. – 1,51,100 ರೂ.) ರಲ್ಲಿ ನಾಲ್ಕು ವರ್ಷಗಳ ನಿಯಮಿತ ಸೇವೆ ಮಾಡಿದವರು ಅಥವಾ ವೇತನ ಶ್ರೇಣಿ–7 (44,900 ರೂ. – 1,42,400 ರೂ.) ರಲ್ಲಿ ಆರು ವರ್ಷಗಳ ನಿಯಮಿತ ಸೇವೆ ಮಾಡಿದ ಅಧಿಕಾರಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ ಐದು ವರ್ಷಗಳ ಸೇವಾ ಅನುಭವ ಹೊಂದಿರಬೇಕು. ►ವಯೋಮಿತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ►ಶೈಕ್ಷಣಿಕ ಅರ್ಹತೆ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ನಾಲ್ಕು ವರ್ಷಗಳ ಪದವಿ, ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಯೋಜನಾ ನಿರ್ವಹಣೆ, ಸಂಗ್ರಹಣೆ, ಆರ್‌ಎಫ್‌ಪಿ ತಯಾರಿಕೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಯೋಜನೆಗಳು, ಇ-ಆಡಳಿತ, ನೆಟ್‌ವರ್ಕಿಂಗ್, ಟೆಲಿಕಾಂ ಅಥವಾ ಮಾಹಿತಿ ಭದ್ರತೆ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ►ಭತ್ಯೆ ಮತ್ತು ಇತರೆ ಸೌಲಭ್ಯಗಳು ಈ ಹುದ್ದೆಗಳಿಗೆ ಐದು ವರ್ಷಗಳ ಅವಧಿಗೆ ನೇಮಕಾತಿ ನಡೆಯಲಿದೆ. ನಿಯಮಾನುಸಾರ ಕನಿಷ್ಠ ಮೂರು ವರ್ಷಗಳಿಗೆ ಅವಧಿಯನ್ನು ಸೀಮಿತಗೊಳಿಸುವ ಅವಕಾಶವೂ ಇದೆ. ನೇಮಕಾತಿ, ಸಂಬಳ, ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಪ್ರಯಾಣ ಭತ್ಯೆಗಳು UIDAI (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ) ನಿಯಮಗಳು–2020 ಹಾಗೂ UIDAI (ವೇತನ, ಭತ್ಯೆಗಳು ಮತ್ತು ಸೇವಾ ನಿಯಮಗಳು)–2020ರ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ►ಅರ್ಜಿ ಸಲ್ಲಿಕೆ ಸೂಕ್ತ ಅರ್ಜಿಗಳನ್ನು, ನಿರ್ದೇಶಕ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಆಧಾರ್ ಕಾಂಪ್ಲೆಕ್ಸ್, ಎನ್‌ಟಿಐ ಲೇಔಟ್, ಟಾಟಾ ನಗರ, ಕೊಡಿಗೆಹಳ್ಳಿ, ತಂತ್ರಜ್ಞಾನ ಕೇಂದ್ರ, ಬೆಂಗಳೂರು – 560 092 ವಿಳಾಸಕ್ಕೆ ಕಳುಹಿಸಬೇಕು. ಈ ಹಿಂದೆ ಅರ್ಜಿ ಸಲ್ಲಿಸಲು 2025ರ ಡಿಸೆಂಬರ್ 9 ಕೊನೆಯ ದಿನವಾತ್ತು, ಅದನ್ನು ಈಗ 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಿರ್ದೇಶಕ (ಲೆಫ್ಟಿನೆಂಟ್ ಕರ್ನಲ್ ನೀರಜ್ ಚೌಧರಿ) ಅವರನ್ನು ದೂರವಾಣಿ ಸಂಖ್ಯೆ 011-23478554 ಅಥವಾ dir.hr-hq@uidai.net.in ಇಮೇಲ್ ಮೂಲಕ ಸಂಪರ್ಕಿಸಬಹುದು.

ವಾರ್ತಾ ಭಾರತಿ 11 Jan 2026 1:04 pm

ಮಾರ್ಚ್ 27,28 ರಂದು ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಬಂಟ್ವಾಳ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮಾರ್ಚ್ 27 ಮತ್ತು 28ರಂದು ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಘೋಷಿಸಿದ್ದಾರೆ. ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮಿತಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಮೆರವಣಿಗೆ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು ನಡೆಯಲಿದ್ದು, ಸ್ಥಳೀಯ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ಸಾಹಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಸಮ್ಮೇಳನದ ಸಂದರ್ಭದಲ್ಲೇ ಪುಸ್ತಕ ಬಿಡುಗಡೆಗೆ ಸಹ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿಶೇಷವಾಗಿ ಗಡಿನಾಡ ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಹಾಗೂ ಎಲ್ಲ ವರ್ಗದ ಜನರಿಗೂ ಆಸಕ್ತಿ ಮೂಡಿಸುವಂತಹ ಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಆಶಯ ವ್ಯಕ್ತವಾಯಿತು. ಸಭೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿಗಳಾದ ವಿ.ಸು. ಭಟ್ ಹಾಗೂ ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಅಬ್ದುಲ್ ರಹಮಾನ್ ಡಿ.ಬಿ., ಜಿಲ್ಲಾ ಕಸಾಪ ಸದಸ್ಯರಾದ ಪೂವಪ್ಪ ನೇರಳಕಟ್ಟೆ ಹಾಗೂ ಸುಭಾಶ್ಚಂದ್ರ ಜೈನ್, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರಮುಖರಾದ ಕೈಯೂರು ನಾರಾಯಣ ಭಟ್, ದೇವಪ್ಪ ಕುಲಾಲ್ ಪಂಜಿಕಲ್ಲು, ಎಚ್.ಕೆ. ನಯನಾಡು, ಸಂಕಪ್ಪ ಶೆಟ್ಟಿ, ಜಯಾನಂದ ಪೆರಾಜೆ, ಪ್ರೊ. ಎಂ.ಡಿ. ಮಂಚಿ, ಜಯರಾಮ ಪಡ್ರೆ, ಸೋನಿತಾ ಕೆ. ನೇರಳಕಟ್ಟೆ, ಉಮ್ಮರ್ ಮಂಚಿ, ಸಾಯಿರಾಮ ನಾಯಕ್, ಗೀತಾ ಕೋಂಕೋಡಿ, ಸನ್ಮತಿ ಜಯಕೀರ್ತಿ, ದಾಮೋದರ ಏರ್ಯ, ಶ್ರೀಕಲಾ ಕಾರಂತ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ್ದು, ಅಬೂಬಕ್ಕರ್ ಅಮ್ಮಂಜೆ ವಂದಿಸಿದರು.

ವಾರ್ತಾ ಭಾರತಿ 11 Jan 2026 1:00 pm

ಮುಂಬೈ ಬಗ್ಗೆ ಅಣ್ಣಾಮಲೈ ಹೇಳಿಕೆ ಬಿರುಗಾಳಿ; ಬಂಧನಕ್ಕೆ ಶಿವಸೇನೆ ಆಗ್ರಹ

ಮಾಜಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂಬೈಯನ್ನು ಅಂತಾರಾಷ್ಟ್ರೀಯ ನಗರ ಎಂದು ಕರೆದ ಹೇಳಿಕೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಾಗ, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಅಣ್ಣಾಮಲೈ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯ ಕರ್ನಾಟಕ 11 Jan 2026 12:54 pm

ಎಲ್ಲರಂತೆ ಆಗುವುದು ಬೇಕಿಲ್ಲ; Gen Z ವೃತ್ತಿಯ ಹೊಸ ಟ್ರೆಂಡ್ ಏನು?

ದಶಕಗಳಿಂದ ಭಾರತೀಯ ಹೆತ್ತವರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್‌ಗಳು, ಐಎಎಸ್‌, ಕೆಎಎಸ್‌, ಅಧ್ಯಾಪಕರು ಮೊದಲಾದ ಉದ್ಯೋಗ ಭದ್ರತೆಯ ವೃತ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಬಯಸುತ್ತಿದ್ದರು. ಆದರೆ ಇತ್ತೀಚೆಗೆ ಕಾಲ ಬದಲಾಗಿದೆ. ಒಂದು ಸ್ಥಿರ ಉದ್ಯೋಗದಲ್ಲೇ ಪ್ರಗತಿ ಹೊಂದಿ ಮೇಲೇರಲು ಪ್ರಯತ್ನಿಸುವ ಬದಲಾಗಿ ಪರ್ಯಾಯ ಆದಾಯ ಅವಕಾಶಗಳನ್ನು ಹುಡುಕುವ ಪ್ರವೃತ್ತಿ ಹೆಚ್ಚಾಗಿದೆ. ಹೆಚ್ಚು ಕೌಶಲ್ಯ ಆಧಾರಿತ ಉದ್ಯೋಗಗಳತ್ತ ಯುವಜನರು ಗಮನಹರಿಸುತ್ತಿದ್ದಾರೆ. ಇತ್ತೀಚಿನ ಅಧ್ಯಯನವೊಂದರಲ್ಲಿ ಜೆನ್ ಝೀ ಅಂದರೆ 20ರಿಂದ 30ರ ವಯಸ್ಸಿನವರನ್ನು ಸಮೀಕ್ಷೆ ಮಾಡಲಾಗಿದೆ. 2025ರಲ್ಲಿ ಡಿಲೋಯಿಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 16ರಷ್ಟು ಜೆನ್ ಝೀ ಮಾತ್ರ ಸಾಂಪ್ರದಾಯಿಕವೆನಿಸಿದ ಒಂದೇ ಪೂರ್ಣಾವಧಿಯ ಉದ್ಯೋಗ ಮಾಡಲು ಬಯಸಿದ್ದಾರೆ. ಶೇ 43ರಷ್ಟು ಜೆನ್ ಝೀ ಪೂರ್ಣಾವಧಿಯ ಉದ್ಯೋಗದ ಪ್ರಗತಿಯತ್ತ ಹೆಚ್ಚು ಗಮನಹರಿಸದೆ ಪರ್ಯಾಯ ಆದಾಯ ಗಳಿಸುವತ್ತ ಗಮನಹರಿಸಿದ್ದಾರೆ. ►ಎಲ್ಲರಂತೆ ಆಗುವುದು ಬೇಕಿಲ್ಲ ಉದಾಹರಣೆಗೆ ತುಮಕೂರಿನ ನಿವಾಸಿ 28 ವರ್ಷದ ಬಿ.ಕೆ. ಸುಶ್ಮಾ ಅವರನ್ನು ತೆಗೆದುಕೊಳ್ಳಿ. ಅವರು ಪತ್ರಿಕೋದ್ಯಮ ಮತ್ತು ಕಲಾ ವಿಷಯದಲ್ಲಿ ಪದವಿ ಮುಗಿಸಿದ್ದರು. ಆದರೆ ಲೇಖಕಿಯಾಗುವುದು ಅವರಿಗೆ ಇಷ್ಟವಾಗಲಿಲ್ಲ. ನಂತರ ನಾಲ್ಕು ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವೃತ್ತಿಪರವಾಗಿ ಕಲೆ ಕಲಿತರು. ಸಿನಿಮಾಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಇದೀಗ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಸು ಫ್ರಂ ಸೊ’ ಮತ್ತು ‘ಆಹಾ ನನ್ನ ಮದ್ವೆ ಅಂತೆ’ ಸಿನಿಮಾಗಳಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸಮಂತಾ ಅಭಿನಯದ ‘ಮಾ ಇಂತಿ ಬಂಗಾರಂ’ ಸಿನಿಮಾದಲ್ಲಿ ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೃತ್ತಿಯಿಂದ ಅವರಿಗೆ ಆಸಕ್ತಿಯ ಜೊತೆಗೆ ಹಣಕಾಸು ಸ್ವಾತಂತ್ರ್ಯವೂ ದೊರೆತಿದೆ. “ನನ್ನದೇ ಆದ ಸೃಷ್ಟಿಯ ಬಗ್ಗೆ ನನಗೆ ಮೊದಲಿನಿಂದಲೇ ಪ್ರೀತಿ. ಕಲೆ ನನ್ನ ಬಹುದೊಡ್ಡ ಸಾಮರ್ಥ್ಯ. ಬಹಳ ಸಣ್ಣ ವಯಸ್ಸಿನಲ್ಲಿಯೇ ಈ ಬಗ್ಗೆ ಅರಿವಾಗಿರುವುದು ಖುಷಿ ನೀಡಿದೆ. ನಾನು ಯಾವಾಗಲೂ ಸುರಕ್ಷಿತ ಅಥವಾ ನಿರೀಕ್ಷಿತ ಎನಿಸಿದ ಹಾದಿಯ ಬದಲಾಗಿ ನನಗೆ ಉತ್ಸಾಹ ನೀಡುವ ದಾರಿಯನ್ನು ಹುಡುಕಲು ಬಯಸಿದ್ದೆ. ಸ್ನೇಹಿತರು ಮತ್ತು ಕುಟುಂಬದವರು ರೆಗ್ಯುಲರ್ ಹಾಗೂ ನಿರೀಕ್ಷಿತ ಉದ್ಯೋಗಗಳನ್ನು ಮಾಡುವುದನ್ನು ನೋಡಿದ್ದೇನೆ. ಹೀಗೆ ಊಹಿಸಬಹುದಾದ ಸಾಮಾನ್ಯ ಜೀವನ ನಡೆಸುವುದು ನನಗೆ ಬೇಕಿರಲಿಲ್ಲ. ಎಲ್ಲರಂತೆ ಆಗುವುದು ನನಗೆ ಬೇಡ. ನನ್ನತನವನ್ನು ಕಂಡುಕೊಂಡು ನನ್ನದೇ ದಾರಿಯಲ್ಲಿ ಸಾಗಲು ಬಯಸಿದ್ದೆ” ಎಂದು ಸುಶ್ಮಾ ಹೇಳುತ್ತಾರೆ. ►ಏನಾದರೂ ಹೊಸದನ್ನು ಮಾಡುವ ತವಕ ವಿಟ್ಲದ ನಿವಾಸಿ 24 ವರ್ಷದ ಆಕಾಶ್ ಪಿ.ಪಿ. ಎಂಬಿಎ ಮುಗಿಸಿದ್ದಾರೆ. ಆದರೆ ಎಂಬಿಎ ಸಂಬಂಧಿತ ವೃತ್ತಿಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ತಂದೆಗೆ ಹೋಟೆಲ್ ಉದ್ಯಮದಲ್ಲಿ ನೆರವಾಗುತ್ತಿದ್ದಾರೆ. ಈ ಉದ್ಯಮವನ್ನು ಮತ್ತೊಂದು ಘಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಈಗ ಐಸ್‌ಕ್ರೀಂ ತಯಾರಿಕೆ ಬಗ್ಗೆ ಕಲಿಕೆಗೆ ತೊಡಗಿದ್ದಾರೆ. ಆನ್‌ಲೈನ್‌ನಲ್ಲಿ ವಿವಿಧ ಕೋರ್ಸ್‌ ಗಳನ್ನು ತೆಗೆದುಕೊಂಡಿದ್ದಾರೆ. “ಸ್ವಲ್ಪ ಸಮಯ ಸ್ವಂತ ಉದ್ಯಮಕ್ಕೆ ಪ್ರಯತ್ನಿಸಿ ನೋಡೋಣ ಎಂದುಕೊಂಡಿದ್ದೇನೆ. ಒಂದೆರಡು ವರ್ಷ ವ್ಯವಹಾರದಲ್ಲಿ ಪ್ರಯತ್ನಿಸುತ್ತೇನೆ. ಆಮೇಲೆ ಕೈಗೂಡದಿದ್ದರೆ ಬೇಕಾದರೆ ರೆಗ್ಯುಲರ್ ಕೆಲಸಕ್ಕೆ ಹೋಗೋಣ ಎಂಬ ನಿರ್ಧಾರವಿದೆ” ಎನ್ನುತ್ತಾರೆ ಆಕಾಶ್. ►ಅನುಕೂಲದ ಟ್ರೆಂಡ್ ಅಲ್ಲ! ಈ ಟ್ರೆಂಡ್ ಕೇವಲ ತಾತ್ಕಾಲಿಕವಲ್ಲ. ಡಿಲೋಯಿಟ್ ಸಮೀಕ್ಷೆಯ ಪ್ರಕಾರ ಶೇ 94ರಷ್ಟು ಯುವ ಭಾರತೀಯರು ತಮ್ಮ ಹುದ್ದೆಯಲ್ಲೇ ಮೇಲೇರುವ ಬದಲಾಗಿ ಪ್ರಸ್ತುತ ಅಗತ್ಯವಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ಬಯಸುತ್ತಾರೆ. ಅದೇ ಸಮೀಕ್ಷೆಯಲ್ಲಿ ಶೇ 11ರಷ್ಟು ಜೆನ್ ಝೀ ಭಾರತೀಯ ಪ್ರತಿಸ್ಪಂದಿಗಳು ತಾವು ಸಾಮಾನ್ಯ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ತೊರೆದಿರುವುದಾಗಿ ತಿಳಿಸಿದ್ದಾರೆ. ಪಾರಂಪರಿಕ ಶಿಕ್ಷಣ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿಲ್ಲ ಎಂಬ ಕಾರಣದಿಂದ ಪದವಿ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರ್ಪಡೆಗೊಂಡು ನಂತರ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ. ►ಪದವಿಯಿಂದ ಅಗತ್ಯ ಕೌಶಲ್ಯವಿಲ್ಲ ಶೇ 78ರಷ್ಟು ಜೆನ್ ಝೀ ಅಭಿಪ್ರಾಯಪಟ್ಟಂತೆ, ಪಡೆದ ಪದವಿಯಿಂದ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ದೊರಕುತ್ತಿಲ್ಲ. ಶೇ 60ರಷ್ಟು ಜೆನ್ ಝೀ ಪ್ರಕಾರ 9ರಿಂದ 5ರವರೆಗೆ ಕೆಲಸ ಮಾಡದೇಯೂ ಹಣಕಾಸು ಸ್ವಾತಂತ್ರ್ಯ ಪಡೆಯಬಹುದು. ಕೊಪ್ಪದ ನಿವಾಸಿ ವಿಘ್ನೇಶ್ ಅವರ ಉದಾಹರಣೆ ಇದಕ್ಕೆ ಸಾಕ್ಷಿ. ಪದವಿ ನಂತರ ವಿವಿಧ ಉದ್ಯೋಗಗಳಿಗೆ ಪ್ರಯತ್ನಿಸಿದವರು, ಡ್ರೈವಿಂಗ್ ಮತ್ತು ವ್ಯವಹಾರಕ್ಕೂ ಕೈ ಹಾಕಿದ್ದಾರೆ. ಕೊನೆಗೆ ಅವರಿಗೆ ವೃತ್ತಿ ಬದುಕು ನೀಡಿದ್ದು ಜ್ಯೋತಿಷ್ಯ. ಹದಿಹರೆಯದಲ್ಲಿಯೇ ಆಧ್ಯಾತ್ಮದತ್ತ ಮನ ಹರಿಸಿದ ಅವರು ಮಠದಲ್ಲಿ ಗುರುಗಳಿಂದ ವಿಧಿವತ್ತಾಗಿ ವಿದ್ಯೆ ಹಾಗೂ ಆಚರಣೆಗಳನ್ನು ಕಲಿತಿದ್ದಾರೆ. ಇದೀಗ ಸ್ವತಂತ್ರವಾಗಿ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ►ಮಕ್ಕಳು ಜೊತೆಗಿದ್ದು ಖುಷಿಯಾಗಿರುವ ಆಶಯ ಹೆತ್ತವರೂ ಕೂಡ ಮಕ್ಕಳನ್ನು ದೂರ ಕಳುಹಿಸಲು ಇಚ್ಛಿಸುವುದಿಲ್ಲ. ಜೊತೆಗಿದ್ದು ಸಂತೋಷವಾಗಿರಬೇಕು ಎನ್ನುವುದು ಅವರ ಆಶಯ. ಅಳಿಕೆಯ ನಿವಾಸಿ ರಾಹುಲ್ ಬಿಕಾಂ ನಂತರ ಸಿಎ ಓದುತ್ತಿದ್ದಾರೆ. ಜೊತೆಗೆ ಎಲ್‌ಎಲ್‌ಬಿಯನ್ನೂ ಮಾಡುತ್ತಿದ್ದಾರೆ. ಸಿಎ ವೃತ್ತಿಗೆ ಕಾನೂನು ಶಿಕ್ಷಣ ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ. ರಾಹುಲ್ ತಂದೆ ವಿಶ್ವನಾಥ ಅಳಿಕೆ ಹೇಳುವಂತೆ, “ನಮಗೆ ಒಬ್ಬನೇ ಮಗ. ಇಂಜಿನಿಯರ್ ಅಥವಾ ವೈದ್ಯನಾಗಿ ಊರು ಬಿಟ್ಟು ಹೋಗುವುದು ನಮಗೆ ಬೇಕಿರಲಿಲ್ಲ. ಮಗನಿಗೂ ಅದೇ ಅಭಿಪ್ರಾಯ. ಯಾವುದೇ ಓದಿನಲ್ಲಿ ಉತ್ತಮ ಅಂಕ ಪಡೆಯುವ ಸಾಮರ್ಥ್ಯ ಮಗನಿಗಿದೆ. ಆದರೆ ವೈದ್ಯರಾದವರು ದಿನವಿಡೀ ದುಡಿದು ರಾತ್ರಿ 12ಕ್ಕೆ ಮನೆಗೆ ಬರುವುದು, ಇಂಜಿನಿಯರ್ ಆದವರು ದೂರದ ಊರುಗಳಲ್ಲಿ ಕೆಲಸ ಮಾಡುವುದು ನೋಡಿದ್ದೇವೆ. ನಮ್ಮ ಮಗ ಚೆನ್ನಾಗಿರಲಿ, ನಮ್ಮ ಜೊತೆಗೇ ಇರಲಿ”, ಎನ್ನುತ್ತಾರೆ ಅವರು.

ವಾರ್ತಾ ಭಾರತಿ 11 Jan 2026 12:52 pm

Kanakagiri | ಟಿಪ್ಪರ್- ಬೈಕ್ ನಡುವೆ ಢಿಕ್ಕಿ; ಬೈಕ್ ಸವಾರ ಮೃತ್ಯು

ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೈರಾಪುರ ಗ್ರಾಮದಲ್ಲಿ ಮರಳಿನ ಟಿಪ್ಪರ್, ಬೈಕ್‌ಗೆ ಢಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. ರುದ್ರಗೌಡ ದಳಪತಿ (63) ಮೃತರು ಎಂದು ತಿಳಿದು ಬಂದಿದೆ. ಚಿರ್ಚನ ಗುಡ್ಡ ಗ್ರಾಮದಿಂದ ಚಿಕಿತ್ಸೆ ಪಡೆಕೊಂಡು ನವಲಿಗೆ ಮರಳಿ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದು  ಬಂದಿದೆ.

ವಾರ್ತಾ ಭಾರತಿ 11 Jan 2026 12:46 pm

Venezuela ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ: US ಖಜಾನೆ ಕಾರ್ಯದರ್ಶಿ ಬೆಸೆಂಟ್

ವಾಷಿಂಗ್ಟನ್: ತೈಲ ಮಾರಾಟಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವೆನಿಝುವೆಲಾ ಮೇಲೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ವೆನಿಝುವೆಲಾದೊಂದಿಗೆ ಮರು ಮಾತುಕತೆ ನಡೆಸಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಮುಖ್ಯಸ್ಥರನ್ನು ಮುಂದಿನ ವಾರ ನಾನು ಭೇಟಿಯಾಗಲಿದ್ದೇನೆ ಎಂದೂ ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವೆನಿಝುವೆಲಾ ಆರ್ಥಿಕತೆಯನ್ನು ಮರುನಿರ್ಮಾಣ ಮಾಡಲು, ಸದ್ಯ ಮುಟ್ಟುಗೋಲು ಹಾಕಲಾಗಿರುವ ವೆನಿಝುವೆಲಾದ ಹಣಕಾಸು ಸ್ವತ್ತುಗಳ ವಿಶೇಷ ಹಿಂಪಡೆಯುವ ಅಧಿಕಾರದ ಅಡಿಯಲ್ಲಿ ಇರುವ 5 ಶತಕೋಟಿ ಡಾಲರ್ ಮೊತ್ತವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಶುಕ್ರವಾರ ತಡರಾತ್ರಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಮಾರಾಟವಾಗಲಿರುವ ತೈಲದ ಮೇಲಿನ ಆರ್ಥಿಕ ದಿಗ್ಬಂಧನವನ್ನು ನಾವು ಹಿಂಪಡೆಯಲಿದ್ದೇವೆ” ಎಂದು ವಿನ್ನೆಬಾಗೊ ಇಂಡಸ್ಟ್ರೀಸ್‌ನ ಇಂಜಿನಿಯರಿಂಗ್ ಸೌಲಭ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಸೆಂಟ್ ಹೇಳಿದ್ದಾರೆ. ಹಡಗುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿರುವ ತೈಲದ ಮಾರಾಟದಿಂದ ಬಂದ ಹಣವನ್ನು ವೆನಿಝುವೆಲಾಗೆ ಮರಳಿ ನೀಡುವ ಬದಲಾವಣೆ ಪ್ರಕ್ರಿಯೆಗಳನ್ನು ಅವರು ಪರಿಶೀಲಿಸುತ್ತಿದ್ದರು. ‘ವೆನಿಝುವೆಲಾ ಮೇಲಿನ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಹಿಂಪಡೆಯಲಾಗುವುದೇ?’ ಎಂಬ ಪ್ರಶ್ನೆಗೆ, “ಮುಂದಿನ ವಾರ ಈ ಕುರಿತು ಪರಿಶೀಲಿಸಲಾಗುವುದು” ಎಂದು ಅವರು ಉತ್ತರಿಸಿದ್ದಾರೆ. ಆದರೆ ಯಾವ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯಲಾಗುವುದು ಎಂಬ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.

ವಾರ್ತಾ ಭಾರತಿ 11 Jan 2026 12:38 pm

ವಿಚ್ಛೇದನ ಪ್ರಕರಣದಲ್ಲಿ ವಕಾಲತ್ತಿನ ವೇಳೆ ವಕೀಲೆಯೊಂದಿಗೇ ʼಸಂಬಂಧʼ!

ಆರೋಪಿಗೆ ʼಸುಪ್ರೀಂʼ ನಿರೀಕ್ಷಣಾ ಜಾಮೀನು; ವಕೀಲೆಯ ನಡವಳಿಕೆ ಕುರಿತು ನ್ಯಾಯಾಲಯ ಕಳವಳ

ವಾರ್ತಾ ಭಾರತಿ 11 Jan 2026 12:29 pm

ಮಣ್ಣಿನ ಮೌನ ಮತ್ತು ಮಾತಾಡುವ ಹಳ್ಳಿ!

ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ. ಮೊನ್ನೆ ಮೊನ್ನೆಯವರೆಗೆ ಭಾರತದ ಹಳ್ಳಿಯನ್ನು ನೋಡಿದಾಗ ಅಲ್ಲೊಂದು ವಿಚಿತ್ರ ಮೌನ ಕಣ್ಣಿಗೆ ಬೀಳುತ್ತಿತ್ತು. ಅದು ಮಾತಿಲ್ಲದ ಮೌನ, ಘೋಷಣೆ ಇಲ್ಲದ ಮೌನ, ಬ್ಯಾನರ್, ಬಾವುಟ, ಮೈಕ್‌ಗಳಿಲ್ಲದ ಮೌನ. ಆ ಮೌನದೊಳಗೆ ಸಾವಿರಾರು ಜನ ಇದ್ದರು. ಅವರೆಲ್ಲ ಯಾವುದೇ ಸಂಘಟನೆಯ ಸಾರಥ್ಯಗಳಿಲ್ಲದೆ, ಯಾವ ರಗಳೆಯೂ ಇಲ್ಲದೆ, ಬೆಳಗ್ಗೆ ತೋಟಕ್ಕೆ ಹೋಗಿ ಸಂಜೆ ಮನೆಗೆ ಮರಳುವವರು ಅಥವಾ ತೋಟದೊಳಗಡೆಯೇ ಮನೆ ಕಟ್ಟಿ ಬದುಕುವವರು. ಭತ್ತ, ಜೋಳ, ರಾಗಿಯಂತಹ ನವಧಾನ್ಯಗಳಿರಬಹುದು, ಹೂವು, ಗೆಡ್ಡೆ, ತರಕಾರಿಗಳಿರಬಹುದು, ಅಡಿಕೆ, ಕಾಫಿ, ರಬ್ಬರ್, ಕಿತ್ತಳೆ, ಕೊಕ್ಕೋ ಏನೋ ಒಂದನ್ನು ನಂಬಿ ಬದುಕಲು ಒಪ್ಪಂದ ಮಾಡಿಕೊಂಡವರಿವರು. ‘‘ನಿನ್ನನ್ನು ನಾನು ಪೋಷಿಸುತ್ತೇನೆ, ನನ್ನನ್ನು ನೀನು ಬದುಕಿಸು’’ ಎಂಬ ಬೆಳೆಯೊಂದಿನ ನಿಶ್ಶಬ್ದ ಒಪ್ಪಂದದಲ್ಲಿ ಇವರೆಲ್ಲ ತಾವು ಬಿತ್ತಿದ ಬೀಜದೆದುರು ಧ್ಯಾನಕ್ಕೆ ಕೂತವರಂತೆ ಬದುಕುತ್ತಿರುವವರು. ಇಂಥವರ ಬದುಕು ಯಾವತ್ತೂ ಅಂಕಿ-ಅಂಶಗಳಲ್ಲಿ ಕಾಣಿಸುವುದಿಲ್ಲ. ಊರ ಸಂಘಗಳ ವರದಿಗಳಲ್ಲಿ ಅವರ ಹೆಸರು ಇಲ್ಲ. ವೇದಿಕೆಗಳ ಮೇಲೆ ಅವರ ಮಾತು ಇಲ್ಲ. ಆದರೆ ಇವರಿಗೆ ಆದಾಯದ ನಾಲ್ಕು ಮುಕ್ಕಾಲು ಭಾಗ ಕೃಷಿಯಿಂದಲೇ ಬರುತ್ತದೆ. ಅದನ್ನೇ ನಂಬಿ ಮನೆ ಕಟ್ಟಿದ್ದಾರೆ, ಮಕ್ಕಳನ್ನು ಓದಿಸಿದ್ದಾರೆ, ಬದುಕನ್ನು ಈವರೆಗೆ ಎಳೆದಿದ್ದಾರೆ. ಇಂಥ ರೈತರು ಇರುವ ಹಳ್ಳಿಗಳಲ್ಲಿ, ಒಂದು ಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳು ಅಷ್ಟಾಗಿ ಲೆಕ್ಕಕ್ಕೆ ಬರುತ್ತಿರಲಿಲ್ಲ. ಭಾಗಶಃ ಅವು ನಗರಗಳ ವಿಷಯವಾಗಿದ್ದವು. ಹಳ್ಳಿಗೆ ಬರುವ ಹೊತ್ತಿಗೆ ಅವು ದಣಿದು ಹೋಗುತ್ತಿದ್ದವು. ಆದರೆ ಈಗ ಹಾಗಿಲ್ಲ. ಹಳ್ಳಿ-ನಗರದ ವ್ಯತ್ಯಾಸವೇ ಇಲ್ಲದಷ್ಟು ಸಂಘಟನೆಗಳು ವಿಸ್ತರಿಸಿಕೊಂಡಿವೆ. ಹಳ್ಳಿಗಳ ಮನೆಮನೆಗೂ ನುಗ್ಗಿವೆ. ಅಂಗಳ ದಾಟಿ ಒಳಗಡೆ ಬಂದಿವೆ. ಗಂಡ-ಹೆಂಡತಿ, ಮಕ್ಕಳು, ಅಕ್ಕ-ತಂಗಿ, ದೊಡ್ಡಪ್ಪ-ಚಿಕ್ಕಪ್ಪ-ಎಲ್ಲರ ಮಧ್ಯೆ ಮಾನಸಿಕ ಗೋಡೆ ಕಟ್ಟುವಲ್ಲಿ ಈ ಸಂಘಟನೆಗಳ ಪಾತ್ರ ದೊಡ್ಡದು. ಒಂದೇ ಮನೆಯೊಳಗೆ ಬೇರೆ ಬೇರೆ ಧ್ವಜಗಳು, ಬೇರೆ ಬೇರೆ ನಂಬಿಕೆಗಳು, ಬೇರೆ ಬೇರೆ ದ್ವೇಷಗಳು. ಇಂಥ ಪರಿಸ್ಥಿತಿಯಲ್ಲಿ, ‘ನನಗೆ ಇದೆಲ್ಲ ಬೇಡವೇ ಬೇಡ’ ಎಂದು ಮೌನವಾಗಿ ಕುಳಿತವನು, ಎಲ್ಲವನ್ನು ಬಿಟ್ಟು ಮಣ್ಣಿಗೆ ಗಟ್ಟಿಯಾಗಿ ಅಂಟಿಕೊಂಡವನು ಅದೇ ಮೌನದ ಕಾರಣಕ್ಕೆ ಅನುಮಾನಕ್ಕೆ ಗುರಿಯಾಗುತ್ತಾನೆ. ಮಹಾನಗರದ ಒಳಗಡೆ ಅದ್ಯಾವುದೋ ದೇವಸ್ಥಾನದ ಬ್ರಹ್ಮಕಲಶಕ್ಕೆ, ಶಾಲೆಯ ವಾರ್ಷಿಕೋತ್ಸವಕ್ಕೆ, ಕಬಡ್ಡಿ ಟೂರ್ನಮೆಂಟ್‌ಗೆ ರಶೀದಿ ಹರಿಯದವ ಗೊತ್ತೇ ಆಗುವುದಿಲ್ಲ.ಆದರೆ ಗ್ರಾಮದ ನಡುವೆ ದೇಣಿಗೆ ಕೊಡದವ ಬೇಗನೆ ಮರ್ಯಾದೆಯ ವರ್ತುಲದೊಳಗಡೆ ಸೇರಿಕೊಳ್ಳುತ್ತಾನೆ. ಯಾವಾಗಲೂ ಹೀಗೆಯೇ. ಪಟ್ಟಣಕ್ಕಿಂತ ಗ್ರಾಮದ ಒಳಗಡೆಯ ಮರ್ಯಾದೆಗೆ ಒಂದು ಗುಲಗಂಜಿ ತೂಕ ಹೆಚ್ಚೇ. ‘‘ಅವನು ಮಾತಾಡುವುದಿಲ್ಲ, ಮನುಷ್ಯರೊಂದಿಗೆ ಹೆಚ್ಚು ಬೆರೆಯುವುದಿಲ್ಲ, ಗ್ರಾಮದ ಯಾವ ಸುಖ ದುಃಖವೂ ಅವನಿಗೆ ಬೇಕಾಗಿಲ್ಲ, ಮೊನ್ನೆವರೆಗೆ ಸರಿಯಿದ್ದ. ಅವನಿಗೀಗ ಏನಾಯಿತು?. ಗುಟ್ಟಾಗಿ ಏನೋ ಮಾಡುತ್ತಿದ್ದಾನೆ’’ ಎಂಬ ಅನುಮಾನಗಳು ಹಳ್ಳಿಗಳಲ್ಲೂ ಹುಟ್ಟುತ್ತವೆ. ಹಳ್ಳಿಯಲ್ಲೂ ಈಗ ಧ್ಯಾನ, ಮೌನ, ಏಕಾಂತ-ಇವುಗಳಿಗೂ ವಿವರಣೆ ಕೊಡಬೇಕಾದ ಕಾಲ ಬಂದಿದೆ! ದೇವಾಲಯಕ್ಕೆ ನಿತ್ಯ ಹೋದಾಗ ಮಾತ್ರ ಆತ ಭಕ್ತ. ರಾಜಕೀಯ ಪಕ್ಷದ ಸಭೆಗಳಿಗೆ ಹಾಜರಾದಾಗ ಮಾತ್ರ ಆತ ಜಾಗೃತ ನಾಗರಿಕ. ಯುವಕ ಸಂಘಟನೆಗಳಿಗೆ ನಿರಂತರ ಓಡಾಡಿದಾಗ ಮಾತ್ರ ಆತ ಸಮಾಜಸೇವಕ. ಓದಿದ ಶಾಲೆಗೆ ಹತ್ತು ಸಲ ಹೋದಾಗ ಮಾತ್ರ ಆತ ಶಿಕ್ಷಣ ಪ್ರೇಮಿ ಇಲ್ಲವಾದರೆ ಅವನು ಅನುಮಾನಾಸ್ಪದ. ಇಂತಹ ಸಂದೇಹಗಳು ಊರ ನಡುವಿನ ನಾನೂ ಸೇರಿ ನನ್ನಂಥ ಮೌನಿಯ ಬೆನ್ನ ಹಿಂದೆಯೇ ಈಗ ಓಡಾಡುತ್ತವೆ. ನನ್ನ ಊರಲ್ಲೇ ಯಾಕೆ? ಇಂಥ ರೈತರು ನಿಮ್ಮ ಊರಲ್ಲೂ ಇರಬಹುದು. ಸಂಘಟನೆ, ಸಭೆ, ಘೋಷಣೆಗಳ ಮಧ್ಯೆ ಹೊಲ ತೋಟಗಳಿಗೆ ಅವರು ಯಾವಾಗ ಹೋಗುತ್ತಾರೆ, ಯಾರಿಂದ ಮಾಡಿಸುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ. ಬೆಳಗೆದ್ದು ಬಿಳಿ ಬಟ್ಟೆ ತೊಟ್ಟು ನಗರದ ಮನಸ್ಸು ಧರಿಸಿ ಹೊರಗಡೆ ಉಳಿಯುವ ಇವರಿಗೆ ಎಲ್ಲವೂ ಕೊಡುವುದು ಅವರ ಕೃಷಿಯೇ ಎಂಬುದನ್ನು ಅವರು ಮರೆತಂತಿದೆ. ಉಣ್ಣುವ ಅನ್ನ ಕೊಡುವ, ತನ್ನ ಮಕ್ಕಳಿಗೆ ಶಿಕ್ಷಣ ಕೊಡುವ, ತನಗೆ ಓಡಾಡಲು ವಾಹನ ಕೊಟ್ಟ, ತನಗೊಂದು ಘನತೆಯ ಬದುಕು ಕೊಡುವ ಕೃಷಿ ಬೆಳೆಯ ಜೊತೆಗೇ ತಾನು ಸದಾ ಇರಬೇಕು, ಅಸಾಧ್ಯವಾದರೆ ಕೃಷಿ ಹಿಂದುಳಿಯುತ್ತದೆ, ಆದಾಯ ಕುಂಠಿತವಾಗುತ್ತದೆ ಎಂದು ಇವರ್ಯಾರು ಕೆಸರು ಮೆಟ್ಟಿದ್ದನ್ನು ನಾನು ನೋಡೇ ಇಲ್ಲ. ಬಹಳಷ್ಟು ಸಂದರ್ಭದಲ್ಲಿ ಮದುವೆ ಮುಂಜಿ ಬೊಜ್ಜದ ಕೂಟದಲ್ಲಿ ಈಗ ಕೃಷಿ ಪ್ರಯೋಜನ ಇಲ್ಲ, ಇದರಿಂದ ಬದುಕು ಆಗಲ್ಲ ಎಂದು ಅಡ್ಡ ಮಾತು ಮಾತನಾಡುವವರು ಕೂಡ ಇವರೇ. ಗ್ರಾಮದೊಳಗಡೆಯೇ ಬದುಕುತ್ತಿರುವ ನಾನು ಕೆಲವೊಂದು ಊರುಗಳು ಹೇಗೆ ಕೋಮುವಾದಿ, ಜಾತಿವಾದಿ, ಮತೀಯ ಸಂಘರ್ಷಗಳಿಗೆ ಬಲಿಯಾಗುತ್ತಿವೆ ಅನ್ನುವುದನ್ನು ಗಮನಿಸುತ್ತಾ ಬಂದಿದ್ದೇನೆ. ಬೆಳೆ-ಬೆಲೆಯ ಬಗ್ಗೆ ಮಾತಾಡಬೇಕಾದ ಜಾಗದಲ್ಲಿ ಧರ್ಮದ ಚರ್ಚೆ, ಕೃಷಿಯ ಮೌಲ್ಯವರ್ಧನೆಯ ಮಾತು ಬರಬೇಕಾದ ಜಾಗದಲ್ಲಿ ರಾಜಕೀಯದ ವಿಷ, ಬೀಜ ನೀರಾವರಿ ಗೊಬ್ಬರದ ಮಾತಿನ ಬದಲು ದ್ವೇಷದ ಘೋಷಣೆ. ಕೃಷಿಯನ್ನು ನಿರ್ಲಕ್ಷಿಸಿದ ಪರಿಣಾಮಕ್ಕೆ ಬಡತನ ಬಂದು; ಬಡತನ ಬಂದ ಮೇಲೆ ಕೃಷಿಯೇ ತಪ್ಪು ಎಂದು ತೀರ್ಮಾನ ಎಷ್ಟೊಂದು ಹಾಸ್ಯಾಸ್ಪದ!. ಹಳ್ಳಿಯ ಸುಸ್ಥಿರ ಬದುಕು ಅನ್ನೋದು ಕೇವಲ ಬೆಳೆ-ಮಳೆ-ಬೆಲೆಗಳ ಗಣಿತವಲ್ಲ. ಅದು ಒಂದು ಮನಸ್ಥಿತಿ. ಒಂದು ನಂಬಿಕೆಯ ಕ್ರಮ. ನಾನು ಇಲ್ಲೇ ಇದ್ದೇನೆ, ಈ ಮಣ್ಣಿನ ಜೊತೆಗೆ ಅನ್ನುವ ದೀರ್ಘ ಶ್ವಾಸ. ಇವತ್ತು ಆ ಶ್ವಾಸವೇ ತುಂಡಾಗುತ್ತಿದೆ. ಅದರ ಹಿಂದೆ ಕಾಣಿಸದ ಅನೇಕ ಕಾರಣಗಳು ಇವೆ. ನಾವು ಮಾತನಾಡುತ್ತಿರುವ ಈ ನಂಬಿಕೆಗಳು, ಈ ಸಂಘಟನೆಗಳ ವಿಸ್ತರಣೆ, ಈ ಮನಸ್ಸಿನ ವಿಘಟನೆ ಎಲ್ಲವೂ ಒಂದಾಗಿ ಹಳ್ಳಿಯ ಬದುಕಿನ ಬೇರುಗಳನ್ನು ಮೌನವಾಗಿ ಕತ್ತರಿಸುತ್ತಿವೆ. ಒಂದು ಕಾಲದಲ್ಲಿ ಹಳ್ಳಿಯ ರೈತನಿಗೆ ಕೃಷಿ ಕೇವಲ ಉದ್ಯೋಗವಾಗಿರಲಿಲ್ಲ. ಅದು ಅವನ ಗುರುತು. ಬೆಳೆಯುವ ಪ್ರತೀ ಬೆಳೆಯ ಮೇಲೆ ಅವನಿಗೆ ವಿಶ್ವಾಸ ಇತ್ತು. ಮಣ್ಣಿನ ಮೇಲೆ ಒಂದು ಅಂತರಂಗದ ಸಂಬಂಧ ಇತ್ತು. ಆದರೆ ಇವತ್ತು ಆ ನಂಬಿಕೆಯನ್ನು ಬದಲಿಸುವ ಹೊಸ ಹೊಸ ನಂಬಿಕೆಗಳು ಬಂದಿವೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ರಾಜಕೀಯದ ಹೆಸರಿನಲ್ಲಿ. ‘‘ಇವುಗಳ ಜೊತೆಗೆ ಸಂಬಂಧ ಇಲ್ಲದಿದ್ದರೆ ನೀನು ಏನೂ ಅಲ್ಲ’’ ಅನ್ನುವ ಭಾವನೆಗಳನ್ನು ಅವನೊಳಗೆ ತುಂಬಲಾಗಿದೆ. ಕೃಷಿ ಅವನ ಬದುಕನ್ನು ಪೋಷಿಸುತ್ತಿದ್ದರೂ, ಗೌರವ ಕೊಡದ ಕೆಲಸದಂತೆ ಕಾಣಿಸುವಂತೆ ಮಾಡಲಾಗಿದೆ. ಇದರಿಂದ ಮೊದಲ ಬಿರುಕು ಬರುವುದು ಅವನ ಸಮಯದಲ್ಲಿ. ಈ ದೇಶದ ರೈತನ ಪಾಲಿಗೆ ದಿನದ 24 ಗಂಟೆಯೂ ಅವನ ಕೈಯಲ್ಲೇ ಇತ್ತು. ಬದುಕಿನ ಆಯ್ಕೆ, ಕೃಷಿಯ ವಿನ್ಯಾಸ ಎಲ್ಲದಕ್ಕೂ ಕಾಲವಿತ್ತು. ರೈತ ತೋಟ, ಹೊಲದಲ್ಲಿ ಇರಬೇಕಾದ ಸಮಯದಲ್ಲೀಗ ಸಭೆಯಲ್ಲಿ, ಜಾತ್ರೆಯಲ್ಲಿ, ರಾಜಕೀಯ, ಮತೀಯ ಸಂಘಟನೆಯ ಕರೆಯ ಮೇಲೆ ಓಡಾಡುತ್ತಾನೆ. ಸಾಲ ಸಬ್ಸಿಡಿ ಬೆಳೆ ವಿಮೆ... ಪರಿಣಾಮ ಅವನ ಕೃಷಿಯ ಶಿಸ್ತು ಕುಂಠಿತವಾಗುತ್ತದೆ. ಜೊತೆಗೆ ನೂರಾರು ನಮೂನೆಯ ಪ್ರಾಕೃತಿಕ ಸಮಸ್ಯೆಗಳು. ನಿಧಾನವಾಗಿ ಬೆಳೆ ಕಡಿಮೆಯಾಗುತ್ತದೆ. ಆದಾಯ ಇಳಿಯುತ್ತದೆ. ಆಗ ಮತ್ತೆ ಅದೇ ಸಂಘಟನೆಗಳು ಬಂದು ಹೇಳುತ್ತವೆ ‘‘ಕೃಷಿಯಿಂದ ಪ್ರಯೋಜನ ಇಲ್ಲ, ಬೇರೆ ದಾರಿ ಹಿಡಿ.’’ ಎಂದು! ಇದು ಒಂದು ವೃತ್ತ. ಅದರಿಂದ ಹೊರಬರಲು ಸುಲಭವಿಲ್ಲ. ಈ ಮನಸ್ಸಿನ ಸ್ಥಿತಿಯೇ ನೇರವಾಗಿ ಆರ್ಥಿಕ ಅಸಮತೋಲನಕ್ಕೂ ಕಾರಣವಾಗುತ್ತದೆ. ಕೃಷಿಯ ಆದಾಯ ಕಡಿಮೆಯಾದಾಗ ರೈತ ಸಾಲಕ್ಕೆ ಮೊರೆ ಹೋಗುತ್ತಾನೆ. ಬ್ಯಾಂಕ್ ಸಾಲ, ಸಹಕಾರಿ ಸಾಲ, ಖಾಸಗಿ ಸಾಲ-ಎಲ್ಲವೂ. ಸಾಲ ತೀರಿಸಲು ಮತ್ತೆ ಕೃಷಿಯ ಮೇಲೆ ಹೆಚ್ಚು ಒತ್ತಡ. ಆದರೆ ಮನಸ್ಸು ಈಗ ಕೃಷಿಯಲ್ಲಿಲ್ಲ. ಅದು ಬೇರೆ ಬೇರೆ ಗುರುತುಗಳ ನಡುವೆ ಹರಿದಿದೆ. ಅದೇ ಗುರುತುಗಳ ದಾರಿಯಲ್ಲಿ ಆತ ಕೃಷಿಯೇತರ ಕಾರಣಗಳಿಗೂ ಕೃಷಿ ಭೂಮಿಯನ್ನೇ ತೋರಿಸಿ ಸಾಲ ಮಾಡುವುದು ಇದೆ. ಹೀಗಾಗಿ ಸಾಲ ಹೆಚ್ಚುತ್ತದೆ. ಋಣ ಯಾವತ್ತೂ ಒಂದು ಸಂಖ್ಯೆಯಲ್ಲ; ಅದು ಒಂದು ಭಯ. ಆ ಭಯ ರೈತನ ನಿರ್ಧಾರಗಳನ್ನು ನಿಯಂತ್ರಿಸುತ್ತದೆ. ಇಲ್ಲೇ ಮತ್ತೊಂದು ಅಪಾಯಕಾರಿ ಅಂಶ ಇದೆ. ಈ ಸಂಘಟನೆಗಳು ಹಳ್ಳಿಯಲ್ಲಿ ಪರಸ್ಪರ ನಂಬಿಕೆಯನ್ನು ಒಡೆಯುತ್ತವೆ. ಒಂದೇ ಊರಿನ ರೈತರೆಲ್ಲ ಒಂದೇ ನೀರು ಕುಡಿದವರು. ಬೇರೆ ಬೇರೆ ಧರ್ಮದವರಾದರೂ ಒಂದೇ ಹೊಲದ ಗಡಿ ಹಂಚಿಕೊಂಡವರು. ಬೇರೆ ಬೇರೆಯವರಾದರೂ ಸರಕಾರಿ ದಾಖಲೆಗೆ ಅವೆಲ್ಲವನ್ನು ಮರೆತು ಒಟ್ಟಾಗಿ ಸಹಿ ಹಾಕಿದವರು. ಆದರೆ ಇಂದು ಅದೇ ಊರು ಸಹಕಾರ, ಸಾಲದ ನೆರವು, ಕೆಲಸದ ವಿನಿಮಯಗಳಲ್ಲಿ ಶಂಕೆಯಿಂದ ನೋಡಲ್ಪಡುತ್ತವೆ. ಹಳ್ಳಿಯ ಆರ್ಥಿಕ ವ್ಯವಸ್ಥೆ ಸಹಕಾರದ ಮೇಲೆ ನಿಂತಿದ್ದದ್ದು; ಈಗ ಅದು ಅನುಮಾನಗಳ ಮೇಲೆ ನಿಂತಿದೆ. ಈ ವಿಘಟನೆ ಹಳ್ಳಿಯನ್ನು ಸುಸ್ಥಿರತೆಯಿಂದ ದೂರ ಒಯ್ಯುತ್ತಿದೆ. ಸುಸ್ಥಿರತೆ ಅನ್ನೋದು ಕೇವಲ ಪರಿಸರದ ಮಾತಲ್ಲ; ಅದು ಸಾಮಾಜಿಕ ಸ್ಥಿರತೆ, ಆರ್ಥಿಕ ಸಮತೋಲನ, ಮಾನಸಿಕ ನೆಮ್ಮದಿ ಎಲ್ಲವೂ ಆಗಿದೆ. ರೈತ ತನ್ನ ಕೆಲಸದ ಮೇಲೆ ನಂಬಿಕೆ ಕಳೆದುಕೊಂಡಾಗ, ಸಹಜವಾಗಿಯೇ ಅವನ ಮಕ್ಕಳು ಹಳ್ಳಿಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಹಳ್ಳಿ ಖಾಲಿಯಾಗುತ್ತದೆ. ಉಳಿದವರು ಇನ್ನಷ್ಟು ಒಂಟಿಯಾಗುತ್ತಾರೆ. ನನಗೆ ಅನಿಸುವುದು ಏನೆಂದರೆ, ಇವತ್ತಿನ ಹಳ್ಳಿಯ ಅತಿ ದೊಡ್ಡ ಸಂಕಷ್ಟ ಮೈಕ್ರೋಫೋನ್‌ಗಳಲ್ಲಿಲ್ಲ, ಮೈಕ್ರೋ ಫೈನಾನ್ಸ್‌ಗಳಲ್ಲೂ ಇಲ್ಲ, ಘೋಷಣೆಗಳಲ್ಲಿಲ್ಲ. ಅದು ಮನಸ್ಸಿನೊಳಗೆ ಇದೆ. ಮೌನವನ್ನು ಅನುಮಾನಿಸುವ ಪ್ರವೃತ್ತಿಯಲ್ಲಿದೆ. ಕೃಷಿಯನ್ನು ಕೇವಲ ಲಾಭ-ನಷ್ಟದ ಪಟ್ಟಿಯಾಗಿ ನೋಡುವ ದೃಷ್ಟಿಯಲ್ಲಿದೆ. ಹಳ್ಳಿಯ ಸುಸ್ಥಿರ ಬದುಕನ್ನು ಮರಳಿ ಕಟ್ಟಬೇಕಾದರೆ, ಮೊದಲಿಗೆ ಆ ಮೌನಕ್ಕೆ ಮರಳಿ ಗೌರವ ಕೊಡಬೇಕು. ಮಣ್ಣಿನ ಜೊತೆಗಿನ ಆ ಹಳೆಯ ನಂಬಿಕೆಯನ್ನು ಮತ್ತೆ ಜೀವಂತ ಮಾಡಬೇಕು. ಇಲ್ಲದಿದ್ದರೆ, ಸಂಘಟನೆಗಳ ಗದ್ದಲದ ನಡುವೆ ಹಳ್ಳಿ ನಿಧಾನವಾಗಿ ಕರಗುತ್ತಲೇ ಹೋಗುತ್ತದೆ. ಹಳ್ಳಿಯ ದಾರಿಯಲ್ಲಿ ನಡೆಯುತ್ತಾ ಬಂದರೆ ಕೆಲವೊಮ್ಮೆ ವಿಚಿತ್ರ ಮೌನ ಎದುರಾಗುತ್ತದೆ. ಅದೇ ಮೌನದೊಳಗೆ ಒಂದು ಪಲ್ಲಟ ಮರುಳುಮಾಡುವಂತೆ ನಿಂತಿರುತ್ತದೆ. ರೈತನೊಬ್ಬ ತನ್ನ ಹೊಲದ ಬೆವರು, ಮಣ್ಣಿನ ಗಂಧ, ಬೆಳೆಗಳ ಲಾಭಾಂಶ-ಇವನ್ನೆಲ್ಲ ಒಟ್ಟಾಗಿ ಸೇರಿಸಿ ಮತ್ತೊಂದು ಲೋಕ ಕಟ್ಟುತ್ತಾನೆ. ತನ್ನ ತೋಟದ ಆದಾಯದಿಂದಲೇ ಶಾಲೆ ಕಟ್ಟುತ್ತಾನೆ; ಅಡಿಕೆ-ಕಾಫಿಯ ಲಾಭದಿಂದ ಆಸ್ಪತ್ರೆ, ದೇವಸ್ಥಾನ, ಅಂಗಡಿ, ಉದ್ಯಮ ಎಲ್ಲವೂ. ಆದರೆ ಅಷ್ಟರಲ್ಲೇ ಒಂದು ಅಸಹಜ ಸಂಕೋಚ ಹುಟ್ಟುತ್ತದೆ. ‘ನಾನು ರೈತ’ ಎನ್ನುವ ಮಾತು ಅವನ ನಾಲಿಗೆಯ ತುದಿಯಿಂದ ನಿಧಾನವಾಗಿ ಜಾರಿಹೋಗುತ್ತದೆ. ಇಲ್ಲಿ ಸಮಸ್ಯೆ ಯಶಸ್ಸಿನಲ್ಲಿಲ್ಲ. ಸಮಸ್ಯೆ ಗುರುತಿನ ಬದಲಾವಣೆಯಲ್ಲಿ. ಕೃಷಿ ಅವನಿಗೆ ಮೂಲ; ಆದರೆ ಆ ಮೂಲವನ್ನೇ ಹೊತ್ತುಕೊಳ್ಳಲು ಅವನು ಹಿಂಜರಿಯುತ್ತಾನೆ. ಶಿಕ್ಷಣ ತಜ್ಞನಾದವನು ತನ್ನ ಕೃಷಿ ಬೇರುಗಳನ್ನು ಮರೆತು ಮಾತಾಡುತ್ತಾನೆ; ಧಾರ್ಮಿಕ ನಾಯಕನಾದವನು ದೇವಾಲಯದ ನೆರಳಲ್ಲಿ ನಿಂತು ಹೊಲವನ್ನು ದೂರ ಇಡುತ್ತಾನೆ; ಉದ್ಯಮಿಪತಿಯಾದವನು ಲಾಭ-ನಷ್ಟದ ಲೆಕ್ಕದಲ್ಲಿ ಮಣ್ಣಿನ ಲೆಕ್ಕವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ಕೃಷಿಯಿಂದ ಹುಟ್ಟಿದ ಗುರುತು ಹೊಸ ಪದವಿಗಳ ಹಿಂದೆ ಕರಗಿಹೋಗುತ್ತದೆ. ಈ ಗುರುತಿಸುವಿಕೆಯ ಪಲ್ಲಟ ಹಳ್ಳಿಗಳಲ್ಲಿ ಜಾಸ್ತಿ. ನಗರಗಳಲ್ಲಿ ಪದವಿ ಬದಲಾವಣೆ ಸಹಜವಾದರೆ, ಹಳ್ಳಿಯಲ್ಲಿ ಅದು ಗೌರವದ ಮಾನದಂಡವಾಗಿಬಿಡುತ್ತದೆ. ರೈತನಾಗಿರುವುದು ‘ಹಿಂದಿನ ಹಂತ’ ಎನ್ನುವ ಅಜ್ಞಾತ ಭಾವನೆ, ಬೆಳೆಸಿದ ಹೊಲಕ್ಕಿಂತ ಬೆಳೆದ ಮಾತಿಗೆ ಹೆಚ್ಚು ಬೆಲೆ ಕೊಡುವ ವಾತಾವರಣ-ಇವೆಲ್ಲ ಸೇರಿ ರೈತನನ್ನು ಮಾತುಗಾರನಾಗಿಸುತ್ತವೆ. ಮೊದಲು ಮಣ್ಣಿನ ಜೊತೆ ಮಾತನಾಡುತ್ತಿದ್ದವನು, ಈಗ ವೇದಿಕೆಯ ಮೇಲೆ ನಿಂತು ರಣ ಭೀಕರ ಭಾಷಣ ಮಾಡುತ್ತಾನೆ. ಮಾತು ಮಾತಾಗಿ, ವಾಕ್ಚಾತುರ್ಯ ವಾಚಾಳಿತನವಾಗುತ್ತಾ ಬೆಳೆಯುತ್ತದೆ. ಇದು ಕೇವಲ ವ್ಯಕ್ತಿಯ ಕಥೆಯಲ್ಲ. ಇದು ಹಳ್ಳಿಯ ಮನಸ್ಥಿತಿಯ ಚಿತ್ರ. ಕೃಷಿ ಎಲ್ಲದರ ಮೂಲವಾದರೂ, ಅದನ್ನು ಗುರುತಾಗಿ ಧರಿಸುವ ಧೈರ್ಯ ಕಡಿಮೆಯಾಗುತ್ತಿದೆ. ಹೊಲದಿಂದ ಹುಟ್ಟಿದ ಶಕ್ತಿ ಬೇರೆ ಬೇರೆ ರೂಪಗಳಲ್ಲಿ ಹರಿಯುತ್ತದೆ; ಆದರೆ ಆ ಶಕ್ತಿಯ ಮೂಲವನ್ನು ಒಪ್ಪಿಕೊಳ್ಳಲು ಹಳ್ಳಿಯೇ ಹಿಂಜರಿಯುತ್ತದೆ. ಗುರುತಿನ ಈ ಪಲ್ಲಟವನ್ನು ಅರಿಯದೇ ಹೋದರೆ, ಮಾತು ಹೆಚ್ಚುತ್ತದೆ-ಮಣ್ಣು ಕಡಿಮೆಯಾಗುತ್ತದೆ ಮತ್ತು ಹಳ್ಳಿಯ ನಿಜವಾದ ಮೌಲ್ಯ, ಅದೇ ಮಣ್ಣಿನೊಳಗೆ ಮೌನವಾಗಿ ಮಲಗಿಹೋಗುತ್ತದೆ.

ವಾರ್ತಾ ಭಾರತಿ 11 Jan 2026 12:27 pm

ಅಯೋಧ್ಯೆ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ; ಹೋಟೆಲ್ ಮತ್ತು ಹೋಂಸ್ಟೇಗಳಿಗೂ ಅನ್ವಯ

ಅಯೋಧ್ಯೆಯ ಪವಿತ್ರ ಪಂಚಕೋಸಿ ಪರಿಕ್ರಮ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಮಾಂಸಾಹಾರ ವಿತರಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ರಾಮಮಂದಿರದ ಸುತ್ತಲಿನ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿದೆ. ಹೋಟೆಲ್ ಮತ್ತು ಹೋಂಸ್ಟೇಗಳಲ್ಲಿ ಮಾಂಸಾಹಾರ ಹಾಗೂ ಮದ್ಯ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಸೀತಾ ರಸೋಯಿಯಲ್ಲಿ ತುಲಾ ದಾನ ಸಂಪ್ರದಾಯ ಮುಂದುವರಿದಿದೆ.

ವಿಜಯ ಕರ್ನಾಟಕ 11 Jan 2026 12:11 pm

Iran ನಲ್ಲಿನ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ: ವರದಿ

ಟೆಹ್ರಾನ್: ಇರಾನ್‌ ನ ಧಾರ್ಮಿಕ ಪ್ರಭುತ್ವದ ವಿರುದ್ಧ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹೋರಾಟದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 116 ಮಂದಿ ಮೃತಪಟ್ಟಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಇರಾನ್‌ ನಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಫೋನ್ ಸಂಪರ್ಕಗಳನ್ನೂ ತುಂಡರಿಸಿರುವುದರಿಂದ, ಅಲ್ಲಿನ ಹೋರಾಟದ ತೀವ್ರತೆಯನ್ನು ಅಳೆಯುವುದು ಕ್ಲಿಷ್ಟಕರವಾಗಿದೆ. ಆದರೆ, ಅಮೆರಿಕಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರ ಸುದ್ದಿ ಸಂಸ್ಥೆಯೊಂದರ ಪ್ರಕಾರ, ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿಕೆಯಾಗಿದ್ದು, 2,600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಇರಾನ್‌ ನಲ್ಲಿ ಹಲವು ಬಾರಿ ಭುಗಿಲೆದ್ದಿದ್ದ ಪ್ರಕ್ಷುಬ್ಧತೆಯ ಸಂದರ್ಭಗಳಲ್ಲೂ ಈ ಸುದ್ದಿ ಸಂಸ್ಥೆ ನಿಖರ ಮಾಹಿತಿಯನ್ನು ನೀಡಿತ್ತು. ಈ ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿಯ ಸಾವು-ನೋವಿನ ಕುರಿತು ವರದಿ ಮಾಡುತ್ತಿರುವ ಇರಾನ್‌ ನ ಸರಕಾರಿ ಸುದ್ದಿ ಸಂಸ್ಥೆ, ಇಡೀ ದೇಶ ನಿಯಂತ್ರಣದಲ್ಲಿದೆ ಎಂದು ಬಿಂಬಿಸುತ್ತಿದೆ. ಆದರೆ, ಪ್ರತಿಭಟನಾಕಾರರ ಸಾವು-ನೋವುಗಳ ಕುರಿತು ಯಾವುದೇ ಚರ್ಚೆ ನಡೆಸುತ್ತಿಲ್ಲ. ಹೀಗಿದ್ದರೂ, ರವಿವಾರ ಬೆಳಗ್ಗೆಯೂ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಈ ಸುದ್ದಿ ಸಂಸ್ಥೆ ಒಪ್ಪಿಕೊಂಡಿದ್ದು, ಟೆಹ್ರಾನ್ ಹಾಗೂ ಇರಾನ್‌ ನ ಈಶಾನ್ಯ ಭಾಗದಲ್ಲಿರುವ ಪವಿತ್ರ ಮಾಶಾದ್ ನಗರದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳಿದೆ. ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ, ಪ್ರತಿಭಟನಾಕಾರರ ಮೇಲೆ ಪ್ರಹಾರ ನಡೆಸುವ ಸುಳಿವನ್ನು ಇರಾನ್‌ ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ನೀಡಿದ್ದಾರೆ. ಶನಿವಾರ ಪ್ರತಿಭಟನಾಕಾರರ ವಿರುದ್ಧ ಬೆದರಿಕೆಯನ್ನು ಇರಾನ್ ಮತ್ತಷ್ಟು ತೀವ್ರಗೊಳಿಸಿದೆ. “ಯಾರಾದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಅಂಥವರನ್ನು ದೇವರ ವೈರಿ ಎಂದು ಪರಿಗಣಿಸಲಾಗುವುದು ಹಾಗೂ ಅಂಥವರೆಲ್ಲರಿಗೂ ಮರಣದಂಡನೆ ವಿಧಿಸಲಾಗುವುದು” ಎಂದು ಇರಾನ್‌ ನ ಅಟಾರ್ನಿ ಜನರಲ್ ಮುಹಮ್ಮದ್ ಮೊವಹೇದಿ ಆಝಾದ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 11 Jan 2026 12:01 pm

ಕರ್ನಾಟಕದ ಸಂಕಷ್ಟಗಳು

ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ. ಇತ್ತೀಚಿನ ವಾರಗಳಲ್ಲಿ, ನನ್ನ ತವರು ರಾಜ್ಯವಾದ ಕರ್ನಾಟಕದ ಪತ್ರಿಕೆಗಳು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರದ ಜಗಳ ಕುರಿತು ಹಲವಾರು ವರದಿಗಳನ್ನು ಪ್ರಕಟಿಸಿವೆ. ಮೇ 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮೊದಲ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಹೇಳಿತ್ತು ಮತ್ತು ನಂತರ ಡಿ.ಕೆ. ಶಿವಕುಮಾರ್ ಅವರು ಹುದ್ದೆ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ಇದನ್ನು ವಿರೋಧಿಸುತ್ತಾರೆ ಮತ್ತು ತಮ್ಮ ನಾಯಕನೇ ಪೂರ್ಣ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುವುದಾಗಿ ಹೇಳುತ್ತಾರೆ. ಆ ಅರ್ಧದಾರಿ ತಲುಪಿದಾಗ ಮತ್ತು ಹೈಕಮಾಂಡ್ ಮೌನವಾಗಿದ್ದಾಗ, ಉಪಾಹಾರ, ಊಟ ಮತ್ತು ಭೋಜನ ಸಭೆಗಳ ಸರಣಿ ನಡೆದವು. ಅಲ್ಲಿ ಪ್ರತಿಯೊಬ್ಬ ನಾಯಕರು ಸ್ಥಳೀಯ ಶಾಸಕರು, ಜಾತಿ ಸಂಸ್ಥೆಗಳ ಮುಖ್ಯಸ್ಥರ ಬಳಿ ತಮ್ಮನ್ನು ಬೆಂಬಲಿಸಲು ಕೇಳಿದರು. ಈ ಅಂಕಣವು ನಾಯಕತ್ವದ ವಿವಾದವನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕಾರ್ಯಕ್ಷಮತೆಯ ಬಗ್ಗೆ ನೋಡುತ್ತದೆ. ಮೊದಲು ಕಳೆದ ವಿಧಾನಸಭಾ ಚುನಾವಣೆಗೆ ಹಿಂದಿನ ತಿಂಗಳುಗಳನ್ನು ನೆನಪಿಸಿಕೊಳ್ಳೋಣ. ಆಗ ಹಿಜಾಬ್, ಹಲಾಲ್, ‘ಲವ್ ಜಿಹಾದ್’ ಮುಂತಾದ ವಿಷಯಗಳು ಹೆಚ್ಚು ಸುದ್ದಿಯಾಗುತ್ತಿದ್ದವು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿತ್ತು ಮತ್ತು ಎಂದಿನಂತೆ ಕೋಮು ಧ್ರುವೀಕರಣವನ್ನು ಪ್ರಚೋದಿಸುವ ಮೂಲಕ ಮರುಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತು. ಅದರ ಆಡಳಿತಾತ್ಮಕ ಕಾರ್ಯಕ್ಷಮತೆ ದುರ್ಬಲವಾಗಿತ್ತು; ಇದನ್ನು ತಿಳಿದೂ, ರಾಜ್ಯದ ಮುಸ್ಲಿಮರನ್ನು ರಾಕ್ಷಸೀಕರಿಸುವ ಮೂಲಕ, ಹಿಂದೂಗಳ ಬಲದಿಂದ ಮರುಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ನೆಲೆಯನ್ನು ಹೇಗಾದರೂ ಮರಳಿ ಪಡೆಯಬಹುದು ಎಂದು ಅದು ಆಶಿಸಿತು. ಕರ್ನಾಟಕದ ಅದೃಷ್ಟದಿಂದಾಗಿ ಅದರ ಈ ತಂತ್ರವು ವಿಫಲವಾಯಿತು. ಕಾಂಗ್ರೆಸ್ ಚುನಾವಣೆಯಲ್ಲಿ ಗಣನೀಯ ಬಹುಮತದಿಂದ ಗೆದ್ದಿತು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸರಕಾರದ ಅಧಿಕಾರಾವಧಿಯ ಒಂದು ನಿರಾಕರಿಸಲಾಗದ ವೈಶಿಷ್ಟ್ಯವೆಂದರೆ, ಕೋಮು ಉದ್ವಿಗ್ನತೆಯಲ್ಲಿನ ಗಮನಾರ್ಹ ಇಳಿಕೆ. ರಾಜ್ಯವು ಮುಸ್ಲಿಮರ ದೊಡ್ಡ ಜನಸಂಖ್ಯೆಯನ್ನು (ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ. 13) ಹೊಂದಿದೆ, ಜೊತೆಗೆ ಅಲ್ಪಸಂಖ್ಯೆಯ ಕ್ರಿಶ್ಚಿಯನ್ನರನ್ನು ಹೊಂದಿದೆ ಮತ್ತು ಈ ಎರಡೂ ಸಮುದಾಯಗಳು, ನಿಸ್ಸಂದೇಹವಾಗಿ, ಮೇ 2023ರಿಂದ ಅವರು ಅದಕ್ಕೂ ಹಿಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಇದ್ದುದಕ್ಕಿಂತ ಹೆಚ್ಚು ಸುರಕ್ಷಿತರೆಂದು ಭಾವಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಇತರ ವಿಷಯಗಳ ಜೊತೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಾನಿಗೆ ನಗದು ವರ್ಗಾವಣೆ, ಹೆಚ್ಚುವರಿ ಆಹಾರ ಧಾನ್ಯಗಳು, ಪ್ರತೀ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ವಿದ್ಯಾವಂತ ಆದರೆ ನಿರುದ್ಯೋಗಿ ಯುವಕರಿಗೆ ಸ್ಟೈಫಂಡ್ ಎಂಬ ಐದು ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಯೋಜನೆಗಳ ಬಗ್ಗೆ ಇನ್ನೂ ಪೂರ್ಣ ಪ್ರಮಾಣದ ವಿದ್ವತ್ಪೂರ್ಣ ಅಧ್ಯಯನಗಳನ್ನು ನಡೆಸಲಾಗಿಲ್ಲವಾದರೂ, ಸ್ವತಂತ್ರ ವೀಕ್ಷಕರ ವರದಿಗಳು ಸಾಮಾಜಿಕ ಸುರಕ್ಷತಾ ಜಾಲವನ್ನು ಸೃಷ್ಟಿಸುವಲ್ಲಿ ಅವರು ಸಾಧಾರಣ ಯಶಸ್ಸನ್ನು ಕಂಡಿರಬಹುದು ಎಂದು ಸೂಚಿಸುತ್ತವೆ. ಕರ್ನಾಟಕದ ಸಿದ್ದರಾಮಯ್ಯ ಸರಕಾರದ ಸಾಧನೆಗಳು ಇವು; ಸಾಪೇಕ್ಷ ಕೋಮು ಶಾಂತಿ ಮತ್ತು ಉದ್ದೇಶಿತ ಕಲ್ಯಾಣ. ನನ್ನ ತವರು ರಾಜ್ಯದಲ್ಲಿ ಮೂವತ್ತೊಂದು ತಿಂಗಳ ಕಾಂಗ್ರೆಸ್ ಆಡಳಿತದ ಯಾವುದೇ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಯೋಚಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟ. ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾತ್ಮಕ ಉದಾಸೀನತೆ ಮತ್ತು ಅಸಮರ್ಥತೆಯ ಚಿಹ್ನೆಗಳು ವಿಶೇಷವಾಗಿ ಗೋಚರಿಸುತ್ತವೆ. ಅಲ್ಲಿ ರಸ್ತೆಗಳ ಹದಗೆಡುತ್ತಿರುವ ಪರಿಸ್ಥಿತಿಗಳು ಮತ್ತು ನಂತರದ ಸಂಚಾರ ದಟ್ಟಣೆಗಳು ನಗರದ ನಿವಾಸಿಗಳಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡಿವೆ. ಭಾರತದ ಐಟಿ ಕ್ರಾಂತಿಯ ಪ್ರದರ್ಶನ ಕೇಂದ್ರವಾಗಿರುವ ನಗರವು ತನ್ನ ಮೂಲಸೌಕರ್ಯಗಳ ಕುಸಿತದಿಂದಾಗಿ ಹೇಗೆ ನಿಶ್ಚಲತೆ ಮತ್ತು ಕೊಳೆಯುವಿಕೆಯನ್ನು ಎದುರಿಸುತ್ತಿದೆ ಎಂಬುದರ ಕುರಿತು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪತ್ರಿಕೆಗಳು ಸರಣಿ ವರದಿಗಳನ್ನು ಪ್ರಕಟಿಸಿವೆ. ಸಾರ್ವಜನಿಕ ಆಕ್ರೋಶವನ್ನು ಎದುರಿಸುತ್ತಿರುವ ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ, ವಿಮಾನ ನಿಲ್ದಾಣ ಇರುವ ನಗರದ ಉತ್ತರ ಭಾಗವನ್ನು ಪ್ರಮುಖ ಸಾಫ್ಟ್‌ವೇರ್ ಮತ್ತು ಬಯೋಟೆಕ್ ಸಂಸ್ಥೆಗಳು ನೆಲೆಗೊಂಡಿರುವ ದಕ್ಷಿಣ ಭಾಗದೊಂದಿಗೆ ಸಂಪರ್ಕಿಸಲು ಭೂಗತ ಸುರಂಗವನ್ನು ನಿರ್ಮಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದು ಇಂಜಿನಿಯರ್‌ಗಳು ಮತ್ತು ವೈಟ್‌ಕಾಲರ್ ಕೆಲಸಗಾರರ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ನಾಗರಿಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೂ, ಯಾವುದೇ ಸರಕಾರಿ ಕಾರ್ಯಕ್ರಮವು ಬಿಳಿ ಆನೆ ಎಂಬ ಹೆಸರನ್ನು ಪಡೆಯಲು ಅರ್ಹವಾಗಿದ್ದರೆ, ಅದು ಇದೇ ಆಗಿದೆ. ದೇಶದ ಪ್ರಮುಖ ಸಾರಿಗೆ ತಜ್ಞರು ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಉಪಮುಖ್ಯಮಂತ್ರಿಯ ಯೋಜನೆ ಅವಿವೇಕತನ ಮತ್ತು ಕಾರ್ಯಸಾಧ್ಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಏಕೆಂದರೆ ಅದು ನಗರದ ಸಂಕೀರ್ಣ ಭೂಸ್ಥಿತಿಯನ್ನು ಲೆಕ್ಕಿಸುವುದಿಲ್ಲ ಮತ್ತು ಖಾಸಗಿ ವಾಹನಗಳ ಮಾಲಕರಿಗೆ ಅನುಚಿತವಾಗಿ ಅನುಕೂಲಕರವಾಗಿದೆ. ನಗರದ ಸಾರಿಗೆ ಅಡಚಣೆಗಳನ್ನು ಪರಿಹರಿಸಲು ಉತ್ತಮ ಆಯ್ಕೆಯೆಂದರೆ, ಅಸ್ತಿತ್ವದಲ್ಲಿರುವ ಮೆಟ್ರೊ ವ್ಯವಸ್ಥೆಯೊಂದಿಗೆ ಸಂಯೋಜಿಸಬಹುದಾದ ಬಸ್‌ಗಳ ದೊಡ್ಡ ಸಮೂಹವನ್ನು ಹೊಂದಿರುವುದು ಎಂದು ಈ ತಜ್ಞರು ವಾದಿಸುತ್ತಾರೆ. ಗಮನಾರ್ಹವಾಗಿ, ಉಪ ಮುಖ್ಯಮಂತ್ರಿ ಈ ತಜ್ಞರನ್ನು ಭೇಟಿ ಮಾಡಲು ಸಹ ನಿರಾಕರಿಸಿದ್ದಾರೆ ಮತ್ತು ಸಾರ್ವಜನಿಕ ಖಜಾನೆಗೆ ಭಾರೀ ವೆಚ್ಚದಲ್ಲಿ ತಮ್ಮ ಕೆಟ್ಟ ಕಲ್ಪನೆಯ ಸುರಂಗ ಯೋಜನೆಯನ್ನು ಮುಂದುವರಿಸಲು ಯೋಜಿಸಿದ್ದಾರೆ. ಶಿವಕುಮಾರ್ ಅವರ ರಾಜಕೀಯವು ಮಹತ್ವಾಕಾಂಕ್ಷೆ ಮತ್ತು ಆತುರದಿಂದ ಕೂಡಿದೆ. ಏತನ್ಮಧ್ಯೆ, ಒಂದು ಕಾಲದಲ್ಲಿ ಆತ್ಮವಿಶ್ವಾಸ ಮತ್ತು ಸಂಯಮದ ರಾಜಕಾರಣಿಯಾಗಿದ್ದ, ನಿಜವಾದ ಜನಸಾಮಾನ್ಯರ ನೆಲೆಯಿಂದ ಬರುವ ಅಧಿಕಾರವನ್ನು ಹೊಂದಿದ್ದ ಸಿದ್ದರಾಮಯ್ಯ ಈಗ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವ ಮತ್ತು ರಾಜ್ಯದ ಇತಿಹಾಸದಲ್ಲಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿಯಾಗುವತ್ತ ಗಮನಹರಿಸಿದ್ದಾರೆ. ಈ ಇಬ್ಬರ ನಡುವಿನ ಈ ಜಗಳವು ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅತ್ಯಂತ ಸಮರ್ಥರಾಗಿರುವ ಹಲವಾರು ಕ್ಯಾಬಿನೆಟ್ ಮಂತ್ರಿಗಳಿದ್ದರೂ, ಅವರು ತಮ್ಮ ಖಾತೆಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರು ಇಬ್ಬರು ಉನ್ನತ ನಾಯಕರ ನಡುವಿನ ಘರ್ಷಣೆಯಲ್ಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ತೀವ್ರ ಅಸಮರ್ಥತೆಯಿಂದಾಗಿ ಕರ್ನಾಟಕ ಕಾಂಗ್ರೆಸ್‌ನ ಸಮಸ್ಯೆಗಳು ಜಟಿಲವಾಗಿವೆ. ಇದು ಅವರು ಬಹು ಅಧಿಕಾರದ ಕೇಂದ್ರಗಳಾಗಿರುವುದರಿಂದ ಉಂಟಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ತಾಂತ್ರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಮತ್ತು ಅವರು ಸ್ವತಃ ಕರ್ನಾಟಕದವರಾಗಿರುವುದರಿಂದ ಮುಖ್ಯಮಂತ್ರಿ ಹುದ್ದೆಯ ಕುರಿತು ಹೈಕಮಾಂಡ್‌ನ ಸ್ಥಾನದಲ್ಲಿ ಅವರಿಗೆ ನಿರ್ಣಾಯಕ ಪಾತ್ರವಿದೆ ಎಂದು ನಿರೀಕ್ಷಿಸಬಹುದು. ಆದರೂ, ಖರ್ಗೆ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಅತ್ಯಂತ ನಿಷ್ಠರಾಗಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯವನ್ನು ಸಹ ಕೇಳಲು ಇಷ್ಟಪಡುತ್ತಾರೆ ಎಂದು ತೋರುತ್ತದೆ. ಹಾಗಾಗಿ ಹೊಸದಿಲ್ಲಿಯಲ್ಲಿ ನಾಲ್ಕು ವಿಭಿನ್ನ ಅಧಿಕಾರ ಮೂಲಗಳಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮತ್ತು ಅವರ ಬೆಂಬಲಿಗರು ಅವರಿಗೆ ಮನವಿ ಮಾಡಬೇಕು. ರಾಜ್ಯ ಕಾಂಗ್ರೆಸ್ ಆ ಸ್ಥಿತಿಯಲ್ಲಿರುವುದರಲ್ಲಿ ಆಶ್ಚರ್ಯವೇನಿಲ್ಲ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಮೊದಲೇ ಮಾತನಾಡಿದ್ದೇನೆ. ಆದರೂ, ನಗರವು ರಾಜ್ಯದ ಐದನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಗುರುತಿಸುವುದು ಮುಖ್ಯ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅದರ ರಾಜಧಾನಿಯ ಸಾರಿಗೆ ಮತ್ತು ನೀರಿನ ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಹೆಚ್ಚಿನ ಅಗತ್ಯವಿದೆ. ಇದರಲ್ಲಿ ಆಧುನಿಕ ಆರ್ಥಿಕ ಚಟುವಟಿಕೆಯ ಇತರ ಕೇಂದ್ರಗಳನ್ನು ರಚಿಸುವುದೂ ಸೇರಿದೆ. ಆದ್ದರಿಂದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರದಂತೆ, ಕರ್ನಾಟಕವು ದೊಡ್ಡ ಪ್ರಮಾಣದ ಕೈಗಾರಿಕಾ/ವಾಣಿಜ್ಯ ಉದ್ಯೋಗ ಮತ್ತು ತೆರಿಗೆ ಆದಾಯವನ್ನು ಉತ್ಪಾದಿಸಲು ಒಂದೇ ನಗರವನ್ನು ಅವಲಂಬಿಸಿಲ್ಲ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಕೃಷಿಯನ್ನು ಅವಲಂಬಿಸಿರುವುದರಿಂದ, ರೈತರಿಗೆ ನೀರಾವರಿ ಮತ್ತು ಸಾಲವನ್ನು ಒದಗಿಸುವುದರ ಬಗ್ಗೆ ಗಮನ ಕೋಡಬೆಕಾಗುತ್ತದೆ ಮತ್ತು ಅವರನ್ನು ಹೆಚ್ಚು ಸುಸ್ಥಿರ ಅಭ್ಯಾಸಗಳತ್ತ ತಿರುಗಿಸುವುದು ಅಗತ್ಯವಾಗುತ್ತದೆ. ಇದಲ್ಲದೆ, ನಗರ ಮತ್ತು ಗ್ರಾಮೀಣ ನಿವಾಸಿಗಳಿಗೆ ಸಮಾನವಾಗಿ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಕರ್ನಾಟಕ ಸರಕಾರವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಕೊನೆಯದಾಗಿ, ರಾಜ್ಯದ ಅಸಾಧಾರಣ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದರೆ, ಕನಿಷ್ಠ ಉದ್ಯೋಗ ಮತ್ತು ಆದಾಯ ಎರಡನ್ನೂ ಸೃಷ್ಟಿಸುವ ಅದರ ಅಗಾಧ ಸಾಮರ್ಥ್ಯದಿಂದಾಗಿ ಪ್ರವಾಸೋದ್ಯಮವು ಸರಕಾರಕ್ಕೆ ಆಸಕ್ತಿಯ ಪ್ರಮುಖ ಕ್ಷೇತ್ರವಾಗಿರಬೇಕು. ಆದರೆ ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ. ಗಮನಾರ್ಹವಾಗಿ, ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಈ ದೊಡ್ಡ ಪ್ರಶ್ನೆಗಳು ವಿರೋಧ ಪಕ್ಷಗಳಲ್ಲೂ ಕಳವಳ ಮೂಡಿಸುವುದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತು ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್‌ರಂತಹ ಪ್ರಭಾವಿ ಮುಖ್ಯಮಂತ್ರಿಗಳು ಇಟ್ಟ ಮಾದರಿಯನ್ನು ಅನುಸರಿಸಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಹೆಚ್ಚು ಹೆಚ್ಚು ಜನಾಂಗೀಯವಾಗಿದೆ. ಇದು ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದ್ವೇಷ ಮತ್ತು ಅನುಮಾನದಿಂದ ಪ್ರೇರಿತವಾಗಿದೆ. ಕರ್ನಾಟಕದ ಮತದಾರರಿಗೆ ನೀಡುವ ಯಾವುದೇ ಸಕಾರಾತ್ಮಕ ದೃಷ್ಟಿಕೋನವನ್ನು ಬಿಜೆಪಿ ಹೊಂದಿಲ್ಲ ಮತ್ತು ಜೆಡಿಎಸ್ ವಿಷಯದಲ್ಲಿ, ಅದು ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದವರ ಸ್ವಾರ್ಥವನ್ನು ಉತ್ತೇಜಿಸಲು ಮಾತ್ರ ಅಸ್ತಿತ್ವದಲ್ಲಿದೆ. 2013 ಮತ್ತು 2018ರ ನಡುವಿನ ತಮ್ಮ ಮೊದಲ ಅವಧಿಯಲ್ಲಿ, ಸಿದ್ದರಾಮಯ್ಯ ಸ್ಥಿರ ಮತ್ತು ಸಮಂಜಸವಾಗಿ ಸಮರ್ಥ ಆಡಳಿತವನ್ನು ಒದಗಿಸಿದರು. ಅವರ ಎರಡನೇ ಅವಧಿ ಅಲೆದಾಡುವಿಕೆ, ಗೊಂದಲ ಮತ್ತು ತೀವ್ರವಾದ ಗುಂಪು ಪೈಪೋಟಿಯಿಂದ ಕೂಡಿದೆ. ಇತರ ಸಂದರ್ಭಗಳಲ್ಲಿ ನಾಗರಿಕರು ವಿರೋಧ ಪಕ್ಷಗಳನ್ನು ಒಟ್ಟಾಗಿ ಕೆಲಸ ಮಾಡಲು ಕೇಳಿಕೊಳ್ಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ, ಮೇ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ, ಅದು ರಚಿಸುವ ಯಾವುದೇ ಸರಕಾರವು ಈಗಿನದಕ್ಕಿಂತ ಅಸಮರ್ಥವಾಗಿರುತ್ತದೆ ಮತ್ತು ಹೆಚ್ಚು ದುರುದ್ದೇಶಪೂರಿತವಾಗಿರುತ್ತದೆ. ಆದರೂ, ಮುಂದಿನ ಚುನಾವಣೆಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯವಿದೆ. ಕರ್ನಾಟಕ ಕಾಂಗ್ರೆಸ್ ಮರುಸಂಘಟಿಸಲು, ಮರುಕೇಂದ್ರೀಕರಿಸಲು ಮತ್ತು ರಾಜ್ಯ ಮತ್ತು ಅದರ ನಾಗರಿಕರಿಗೆ ತಾನು ಬಯಸುವ ಮತ್ತು ಅರ್ಹವಾದ ರೀತಿಯ ಆಡಳಿತವನ್ನು ಒದಗಿಸಲು ಸಾಕಷ್ಟು ಸಮಯವಿದೆ. ಕಾಂಗ್ರೆಸ್ ನಿಜವಾಗಿಯೂ ಇದನ್ನು ಮಾಡಬಹುದೇ ಎಂಬುದು ಬೇರೆ ವಿಷಯ.

ವಾರ್ತಾ ಭಾರತಿ 11 Jan 2026 11:55 am

ದುರಸ್ತಿ ಕಾಮಗಾರಿ: ಭದ್ರಾ ನಾಲೆಗಳಲ್ಲಿ ನೀರು ಹರಿಯುವುದು ಒಂದು ವಾರ ತಡ

ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದಿದ್ದರೂ, ನಾಲೆ ದುರಸ್ತಿ ಕಾಮಗಾರಿಗಳಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಒಂದು ವಾರ ತಡವಾಗಲಿದೆ. ಕೊನೆ ಭಾಗದ ರೈತರು ನೀರಿಗಾಗಿ ಎದುರು ನೋಡುತ್ತಿದ್ದು, ಕಳೆದ ಬಾರಿ ನಾಟಿ ಮಾಡಲಾಗದ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿ ನಾಟಿ ಗುರಿ ತಲುಪುವ ವಿಶ್ವಾಸವಿದೆ.

ವಿಜಯ ಕರ್ನಾಟಕ 11 Jan 2026 11:39 am

Haryana | ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಜೂನಿಯರ್ ಹಾಕಿ ಕೋಚ್ ಬಂಧನ

ರೇವರಿ (ಹರ್ಯಾಣ): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇಲೆ ಜೂನಿಯರ್ ಹಾಕಿ ತರಬೇತುದಾರನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ರೇವರಿ ಜಿಲ್ಲೆಯ ಗ್ರಾಮದೊಂದರ 12ನೇ ತರಗತಿಯ ವಿದ್ಯಾರ್ಥಿನಿಯು ಶುಕ್ರವಾರ ಖೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಾನು ಹಾಕಿ ಆಟವಾಡುತ್ತಿದ್ದೆ. ನಾಲ್ಕು ತಿಂಗಳ ಹಿಂದೆ, ನನಗೆ ಮೂರು ವರ್ಷಗಳಿಂದ ಪರಿಚಯವಿರುವ ಜೂನಿಯರ್ ಹಾಕಿ ತರಬೇತುದಾರನೊಬ್ಬ ನಾನು ಆಟವಾಡುತ್ತಿದ್ದ ಕ್ರೀಡಾಂಗಣದ ಶೌಚಾಲಯದಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಜ. 5ರಂದು ನಾನು ಗರ್ಭಿಣಿಯಾಗಿರುವುದು ಗೊತ್ತಾಯಿತು. ನಂತರ ಗರ್ಭಪಾತಕ್ಕೊಳಗಾದೆ. ನನ್ನ ಆರೋಗ್ಯ ಸ್ಥಿತಿ ವಿಷಮಗೊಂಡ ನಂತರ, ನನ್ನ ಪೋಷಕರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯ ವಿರುದ್ಧ ಶುಕ್ರವಾರ POSCO ಕಾಯ್ದೆ ಸೇರಿದಂತೆ ಇತರ ಸೂಕ್ತ ಕಾಯ್ದೆಗಳ ಸೆಕ್ಷನ್‌ಗಳಡಿ FIR ದಾಖಲಿಸಲಾಗಿದೆ ಎಂದು ರೇವರಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ರೇವರಿ ಪೊಲೀಸ್ ವಕ್ತಾರರು, “ಆರೋಪಿಯಾಗಿರುವ ಜೂನಿಯರ್ ತರಬೇತುದಾರನನ್ನು ಬಂಧಿಸಲಾಗಿದೆ. ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಆತನನ್ನು ಎರಡು ದಿನಗಳ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 11 Jan 2026 11:27 am

Delhi | ಹೂಡಿಕೆದಾರರ ಹಣವನ್ನು 9 ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರು ಖರೀದಿಸಲು ಬಳಸಿದ ಉದ್ಯಮಿಯ ಬಂಧನ

ಹೊಸದಿಲ್ಲಿ: ಉದ್ಯಮಿಯೊಬ್ಬರು ಹೂಡಿಕೆದಾರರ ಹಣವನ್ನು ಸಂಕೀರ್ಣ ವಹಿವಾಟುಗಳ ಮೂಲಕ 9 ಕೋಟಿ ರೂ. ಮೌಲ್ಯದ ಬೆಂಟ್ಲಿ ಬೆಂಟೇಗಾ ಕಾರು ಸೇರಿದಂತೆ ಐಷಾರಾಮಿ ವಾಹನಗಳ ಖರೀದಿಗೆ ಬಳಸಿಕೊಂಡಿದ್ದು, ಆತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕಿಂಗೇತರ ಹಣಕಾಸು ಕಂಪೆನಿಯಾದ ‘ಎಕ್ಸ್‌ಕ್ಲೂಸಿವ್ ಕ್ಯಾಪಿಟಲ್ ಲಿಮಿಟೆಡ್’ ಸಂಸ್ಥೆಯ ಮಾಲಕ ಸತ್ಯ ಪ್ರಕಾಶ್ ಬಾಗ್ಲಾ ಎಂಬಾತನನ್ನು ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ ಶುಕ್ರವಾರ ಬಂಧಿಸಿದೆ. ಶನಿವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ‘ಎಕ್ಸ್‌ಕ್ಲೂಸಿವ್ ಕ್ಯಾಪಿಟಲ್ ಲಿಮಿಟೆಡ್’ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಅದರ ಮಾಲಕ ಬಾಗ್ಲಾ ನಮ್ಮನ್ನು ದಾರಿ ತಪ್ಪಿಸಿದ್ದಾರೆ ಎಂದು ಹಿರಿಯ ವಯಸ್ಸಿನ ದಂಪತಿಗಳು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ, ಬಾಗ್ಲಾ ಹಾಗೂ ಆತನ ಸಹಚರರು ಮಧ್ಯಾವಧಿಯಲ್ಲೇ ತಮ್ಮ ಹಾಗೂ ಇತರ ಹೂಡಿಕೆದಾರರ ಹಣವನ್ನು ಹಿಂಪಡೆದು, ಅದನ್ನು ಐಷಾರಾಮಿ ಕಾರುಗಳ ಖರೀದಿಗೆ ಹಾಗೂ ತಮ್ಮದೇ ಸಂಸ್ಥೆಗಳಿಗೆ ಅಸ್ಥಿರ ಸಾಲ ನೀಡಲು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಸತ್ಯ ಪ್ರಕಾಶ್ ಬಾಗ್ಲಾನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ನ್ಯಾಯಾಲಯ, “ಆರೋಪಿ ಉದ್ದೇಶಪೂರ್ವಕವಾಗಿ ವಾಸ್ತವ ಸಂಗತಿಗಳನ್ನು ಮುಚ್ಚಿಟ್ಟಿದ್ದು, ವಿಚಾರಣೆ ಹಾಗೂ ತನಿಖೆಯ ಸಂದರ್ಭದಲ್ಲಿ ಪೂರ್ಣ ವಿವರಗಳನ್ನು ನೀಡುವುದನ್ನು ತಪ್ಪಿಸಿಕೊಂಡಿದ್ದಾನೆ. ತನಿಖೆಗೆ ಸಹಕರಿಸಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಸತ್ಯ ಪ್ರಕಾಶ್ ಬಾಗ್ಲಾ ನಡೆಸುತ್ತಿರುವ ‘ಲಕ್ಸಸ್ ರಿಟೈಲ್ ಪ್ರೈ. ಲಿ.’ ಸೇರಿದಂತೆ ಇತರ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ತಿಳಿಯಲು ಹಾಗೂ ಬೆಂಟ್ಲಿ ಬೆಂಟೇಗಾ ಕಾರಿನ ಅಂತಿಮ ಬಳಕೆದಾರರು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಆತನನ್ನು ಮುಂಬೈಗೆ ಕರೆದೊಯ್ಯಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಾರ್ತಾ ಭಾರತಿ 11 Jan 2026 11:01 am

ಅಶ್ಲೀಲತೆ ಪ್ರಸಾರ ಒಪ್ಪಿಕೊಂಡ ಎಲಾನ್‌ ಮಸ್ಕ್‌; ಕೇಂದ್ರದ ಎಚ್ಚರಿಕೆ ಬೆನ್ನಲ್ಲೇ 'ಎಕ್ಸ್‌' ಸಂಸ್ಥೆಯಿಂದ 3,500 ಪೋಸ್ಟ್, 600 ಖಾತೆಗಳು ರದ್ದು

ಕೇಂದ್ರ ಸರ್ಕಾರವು 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಅಶ್ಲೀಲ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರ್ಕಾರದ ಸೂಚನೆ ಮೇರೆಗೆ 'ಎಕ್ಸ್' 3,500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದೆ. 600 ಬಳಕೆದಾರರ ಖಾತೆಗಳನ್ನು ಶಾಶ್ವತವಾಗಿ ತೆಗೆದುಹಾಕಿದೆ. 'Grok' ಮತ್ತು 'xAI' ತಂತ್ರಜ್ಞಾನದ ದುರ್ಬಳಕೆ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಕಾನೂನು ಉಲ್ಲಂಘಿಸಿದರೆ 'ಎಕ್ಸ್' ಕಾನೂನಿನ ಅಡಿ ರಕ್ಷಣೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ವಿಜಯ ಕರ್ನಾಟಕ 11 Jan 2026 10:54 am

ಬೆಂಗಳೂರು ಬಿಟ್ಟರೆ ಮಂಗಳೂರು ಹೆಚ್ಚಿನ ಕೊಡುಗೆ ನೀಡುತ್ತಿದೆ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಬಿಟ್ಟರೆ ಮಂಗಳೂರು ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದೂ ಹೇಳಿದ್ದಾರೆ. ಪ್ರವಾಸೋದ್ಯಮ ಸಮಾವೇಶ -2026 ರಲ್ಲಿ ಬಂಡವಾಳ ಹೂಡಿಕೆ ಮಾಡಲು ಲೆಟರ್ ಆಫ್ ಇಂಟೆಂಟ್‌ಗೆ ಅನೇಕರು ಸಹಿ ಹಾಕಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವವರಿಗೆ ಸರ್ಕಾರ ನೆರವಾಗಲಿದೆ. ದಕ್ಷಿಣ

ಒನ್ ಇ೦ಡಿಯ 11 Jan 2026 10:29 am

ಜನವರಿ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 11) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 11 Jan 2026 10:26 am

ಸೋಮನಾಥ ದೇವಾಲಯ ದಾಳಿಯ 1000 ವರ್ಷಗಳ ಸ್ಮರಣೆ; ʻಸ್ವಾಭಿಮಾನ ಪರ್ವʼದಲ್ಲಿ ಪ್ರಧಾನಿ ಮೋದಿ ಭಾಗಿ; ಓಂಕಾರ ಮಂತ್ರ ಪಠಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಪ್ರವಾಸದಲ್ಲಿದ್ದಾರೆ. ಅವರು ಸೋಮನಾಥ ದೇವಾಲಯದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ'ದಲ್ಲಿ ಭಾಗವಹಿಸಿದರು. ಅಲ್ಲಿ 1000 ವರ್ಷಗಳ ಇತಿಹಾಸವನ್ನು ಸ್ಮರಿಸಲಾಯಿತು. ಬಳಿಕ ರಾಜ್‌ಕೋಟ್‌ನಲ್ಲಿ 'ವೈಬ್ರೆಂಟ್ ಗುಜರಾತ್' ಸಮಾವೇಶ ಉದ್ಘಾಟಿಸಿದರು. ಅಹಮದಾಬಾದ್ ಮೆಟ್ರೋ ಫೇಸ್-2 ಅನ್ನು ಸಹ ಲೋಕಾರ್ಪಣೆ ಮಾಡಿದರು. ಇದು ರಾಜ್ಯದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.

ವಿಜಯ ಕರ್ನಾಟಕ 11 Jan 2026 10:02 am

ಮಲ್ಲಿಗೆ ಬೆಳೆಗೆ ಚಳಿ ಕಾಟ, ಉತ್ಪಾದನೆ ಕುಸಿತ, ಚಿನ್ನದ ಬೆಲೆ

ತೀವ್ರ ಚಳಿಯಿಂದಾಗಿ ಮಲ್ಲಿಗೆ ಉತ್ಪಾದನೆ ಕುಸಿದಿದ್ದು, ಮಾರುಕಟ್ಟೆಗೆ ಪೂರೈಕೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದಾಗಿ ಮಲ್ಲಿಗೆ ಹೂವಿನ ದರ ನಾಲ್ಕರಿಂದ ಐದು ಪಟ್ಟು ಹೆಚ್ಚಳವಾಗಿದ್ದು, ವಾರಾಂತ್ಯ ಮತ್ತು ಶುಭ ಕಾರ್ಯಗಳಿಗೆ ಚಿನ್ನದ ಬೆಲೆ ತಲುಪಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ವಿಜಯ ಕರ್ನಾಟಕ 11 Jan 2026 10:00 am

ಕೇರಳ ಸರ್ಕಾರ ಮಾಡುತ್ತಿರುವುದು ಸಿದ್ದರಾಮಯ್ಯ ಮಾಡಬೇಕಾದ ಕೆಲಸ: ಚೇತನ್ ಅಹಿಂಸಾ

ಕೇರಳದ ಕಮ್ಯುನಿಸ್ಟ್ ಸರ್ಕಾರವು ಇದೀಗ ಕರ್ನಾಟಕದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳದ ಎಲ್ಲಾ ಸರ್ಕಾರಿ ಮಾಧ್ಯಮ ಶಾಲೆಗಳಲ್ಲೂ ಪ್ರಥಮ ಭಾಷೆಯನ್ನಾಗಿ ಮಲಯಾಳಂ ಭಾಷೆಯನ್ನು ಕಲಿಸುವ ಮಸೂದೆಯನ್ನು ಮಂಡನೆ ಮಾಡುವ ನಿರ್ಧಾರವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆ ವಿಚಾರದಲ್ಲಿ, ಹಿಂದಿ ಹೇರಿಕೆ ತಪ್ಪಿಸುವ ನಿಟ್ಟಿನಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಲಿ ಎನ್ನುವ

ಒನ್ ಇ೦ಡಿಯ 11 Jan 2026 9:50 am

ಬಿಎಂಸಿಸಿ ಕಾರ್ಯ ಚುರುಕು; ಸಾರ್ವಜನಿಕ ಆಕ್ಷೇಪಣೆಗೆ ತಿಂಗಳ ಅವಕಾಶ

ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮಾಂತರ ವ್ಯಾಪ್ತಿಯ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಈ ಹಿಂದೆ ಹಲವು ಬಾರಿ ಕನಸಾಗಿದ್ದ ಬೃಹತ್ ಪಾಲಿಕೆ ರಚನೆಗೆ ಈಗ ಹಸಿರು ನಿಶಾನೆ ದೊರೆತಿದೆ.

ವಿಜಯ ಕರ್ನಾಟಕ 11 Jan 2026 9:22 am

ಬ್ಯಾಟಿಂಗ್ ಅಭ್ಯಾಸದ ವೇಳೆ ಗಾಯ; ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್

ವಡೋದರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿ ಭಾನುವಾರ ಆರಂಭವಾಗಲಿದ್ದು, ಇದಕ್ಕೂ ಮುನ್ನವೇ ಭಾರತದ ವಿಕೆಟ್‌ಕೀಪರ್–ಬ್ಯಾಟ್ಸ್ಮನ್ ರಿಷಭ್ ಪಂತ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆಡಲಾರರು ಎಂಬುದನ್ನು ಬಿಸಿಸಿಐ ಶನಿವಾರ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಇದು ವೈಯಕ್ತಿಕವಾಗಿ ಪಂತ್ ಅವರಿಗೆ ಮಾತ್ರವಲ್ಲದೆ, ಆತಿಥೇಯ ಭಾರತ ತಂಡಕ್ಕೂ ದೊಡ್ಡ ಹಿನ್ನಡೆಯಾಗಿದೆ. ಶನಿವಾರ ನಡೆದ ದೀರ್ಘ ಬ್ಯಾಟಿಂಗ್ ಅಭ್ಯಾಸದ ವೇಳೆ, ಪಂತ್ ಅವರ ಬಲ ಸೊಂಟದ ಪಕ್ಕದ ಭಾಗಕ್ಕೆ ವೇಗದ ಸ್ಪೆಷಲಿಸ್ಟ್ ಬೌಲರ್ ಎಸೆದ ಚೆಂಡು ಬಡಿದ ಪರಿಣಾಮ ಅವರಿಗೆ ಗಾಯ ಉಂಟಾಗಿದೆ. ತಕ್ಷಣವೇ ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಬೆಂಬಲ ಸಿಬ್ಬಂದಿ ನೆರವು ನೀಡಿದರು. ಆದರೆ ಚಿಕಿತ್ಸೆ ಪಡೆದ ಬಳಿಕವೂ ಅಸಹನೀಯ ನೋವಿನಿಂದಾಗಿ 28 ವರ್ಷದ ಪಂತ್ ಬಿಸಿಸಿಐ ಮೈದಾನವನ್ನು ತೊರೆದರು. “ಬಲ ಬದಿಯಲ್ಲಿ ಬಡಿತದ ಗಾಯದಿಂದ ಅವರು ಬಳಲುತ್ತಿದ್ದು, ದೇಹದ ಒಳಭಾಗದಲ್ಲಿ ಮಾಂಸಖಂಡಕ್ಕೆ ಹಾನಿಯಾಗಿದೆ. ಈ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ,” ಎಂದು ಉನ್ನತ ಮೂಲಗಳು ತಿಳಿಸಿವೆ. ಕೆ.ಎಲ್. ರಾಹುಲ್ ಈಗಾಗಲೇ ಏಕದಿನ ತಂಡದ ಕಾಯಂ ವಿಕೆಟ್‌ಕೀಪರ್ ಆಗಿದ್ದು, ಪಂತ್ ಅವರ ಬದಲಿಗೆ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. 2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ಪಂತ್, 2025ರ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತೀಯ ತಂಡದ ಸದಸ್ಯರಾಗಿದ್ದರು. 2025–26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ ಅವರು, ಸರ್ವೀಸಸ್ ಹಾಗೂ ರೈಲ್ವೇಸ್ ವಿರುದ್ಧ ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಾಲಿನ ಹೆಬ್ಬೆರಳು ಮುರಿತಕ್ಕೆ ಒಳಗಾದ ಬಳಿಕ ಅವರು ಚೇತರಿಸಿಕೊಂಡಿದ್ದರು.

ವಾರ್ತಾ ಭಾರತಿ 11 Jan 2026 8:41 am

ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಗೆ ವರ್ಗಾಯಿಸಲು ಮುಂದಾದ ಮಚಾದೊ; ಇದು ಸಾಧ್ಯವೇ?

ನ್ಯೂಯಾರ್ಕ್: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಮ್ಮೆ ಘೋಷಿಸಿದ ಬಳಿಕ ಅದನ್ನು ವರ್ಗಾಯಿಸಲು, ಹಂಚಿಕೊಳ್ಳಲು ಅಥವಾ ರದ್ದುಪಡಿಸಲು ಯಾವುದೇ ಅವಕಾಶವಿಲ್ಲ ಎಂದು ನೊಬೆಲ್ ಸಮಿತಿ ಸ್ಪಷ್ಟಪಡಿಸಿದೆ. ತಮಗೆ ಲಭಿಸಿರುವ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ವೆನೆಝುವೆಲಾ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಸಮಿತಿ ಈ ಸ್ಪಷ್ಟನೆ ನೀಡಿದೆ. ನೊಬೆಲ್ ಪ್ರತಿಷ್ಠಾನದ ಶಾಸನಗಳ ಪ್ರಕಾರ, ನೊಬೆಲ್ ಪ್ರಶಸ್ತಿ ಮಂಜೂರು ಮಾಡುವ ನಿರ್ಧಾರ ಅಂತಿಮ ಹಾಗೂ ಶಾಶ್ವತವಾಗಿದ್ದು, ಈ ಸಂಬಂಧ ಯಾವುದೇ ಮೇಲ್ಮನವಿ ಅಥವಾ ಮನವಿಗಳಿಗೆ ಅವಕಾಶವಿಲ್ಲ ಎಂದು ಸಮಿತಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಅಲ್ಲದೆ, ಪ್ರಶಸ್ತಿ ಸ್ವೀಕರಿಸಿದವರು ನಂತರ ನೀಡುವ ಹೇಳಿಕೆಗಳು ಅಥವಾ ಅವರ ಅಭಿಪ್ರಾಯಗಳ ಕುರಿತು ಸಮಿತಿ ಪ್ರತಿಕ್ರಿಯಿಸುವುದಿಲ್ಲ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. “ಒಮ್ಮೆ ನೊಬೆಲ್ ಪ್ರಶಸ್ತಿ ಘೋಷಿಸಿದ ಬಳಿಕ ಅದನ್ನು ರದ್ದುಪಡಿಸಲು, ಇತರರೊಂದಿಗೆ ಹಂಚಿಕೊಳ್ಳಲು ಅಥವಾ ವರ್ಗಾಯಿಸಲು ಅವಕಾಶವಿಲ್ಲ. ಈ ನಿರ್ಧಾರ ಅಂತಿಮವಾಗಿದ್ದು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ,” ಎಂದು ನೊಬೆಲ್ ಸಮಿತಿ ಹಾಗೂ ನೊಬೆಲ್ ಸಂಸ್ಥೆ ಸ್ಪಷ್ಟಪಡಿಸಿವೆ. ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ನಿರೂಪಕ ಸಿಯಾನ್ ಹ್ಯಾನಿಟಿ, “ನಿಮಗೆ ದೊರೆತ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡುವ ಪ್ರಸ್ತಾವವಿದೆಯೇ?” ಎಂದು ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಮಚಾದೊ “ಅದು ಇನ್ನೂ ಸಂಭವಿಸಿಲ್ಲ” ಎಂದು ಉತ್ತರಿಸಿದ್ದರು. ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಜತಾಂತ್ರಿಕ ಸಾಧನೆಗಳನ್ನು ಉಲ್ಲೇಖಿಸಿ, ನೊಬೆಲ್ ಶಾಂತಿ ಪ್ರಶಸ್ತಿಗೆ ತಾವು ಅರ್ಹರು ಎಂಬ ಅಭಿಪ್ರಾಯವನ್ನು ಪದೇಪದೇ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.

ವಾರ್ತಾ ಭಾರತಿ 11 Jan 2026 8:30 am

ಭದ್ರೆ ಹರಿದರೆ ಮಾತ್ರ ಕೆರೆಗಳಿಗೆ ನೀರಿನ ಭಾಗ್ಯ!

ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಫೆಬ್ರವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ನಡೆದಿದೆ. ಇದರಿಂದ ಹಿರಿಯೂರು ತಾಲೂಕಿನ 64 ಕೆರೆಗಳಿಗೆ ನೀರು ಹರಿಯುವ ಸಾಧ್ಯತೆ ಇದೆ. ವೇದಾವತಿ ಎಡಭಾಗದ ಕಾಲುವೆ ಕಾಮಗಾರಿ ಟೆಂಡರ್ ಹಂತದಲ್ಲಿದೆ. ತುಮಕೂರು ಶಾಖಾ ಕಾಲುವೆ ಮೂಲಕ 13 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆಯಾಗಿ 77 ಕೆರೆಗಳು, 67,113 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಇದೆ.

ವಿಜಯ ಕರ್ನಾಟಕ 11 Jan 2026 8:17 am

ಭಟ್ಕಳ: ರಸ್ತೆಗೆ ದಿಢೀರ್ ನುಗ್ಗಿದ ಕಾಡುಹಂದಿ; ನಿಯಂತ್ರಣ ತಪ್ಪಿದ ಆಟೋ ಪಲ್ಟಿ, ಚಾಲಕ ಗಂಭೀರವಾಗಿ ಗಾಯ

ಭಟ್ಕಳ: ಕಾಡುಹಂದಿಯೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದ ಪರಿಣಾಮ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ–ಸಾಗರ ರಾಜ್ಯ ಹೆದ್ದಾರಿ–50ರ ಭಟ್ಕಳ ನಗರಸಭೆಯ ತ್ಯಾಜ್ಯ ವಿಲೇವಾರಿ ಮೈದಾನದ ಸಮೀಪ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಗಾಯಗೊಂಡ ಚಾಲಕನನ್ನು ಆಸರ್ಕೇರಿ ನಿವಾಸಿ ಶಶಿಕಾಂತ ರಾಮಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಚಾಲಕನ ತಲೆ, ಕೈಗಳು ಹಾಗೂ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ  ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಟೋದಲ್ಲಿದ್ದ ಮಹಿಳಾ ಪ್ರಯಾಣಿಕರಾದ ಪದ್ಮಾವತಿ (ಭಟ್ಕಳ ತಾಲ್ಲೂಕಿನ ಕೋಟಖಂಡ್ ಮರುಕೇರಿ ನಿವಾಸಿ, ತರಕಾರಿ ವ್ಯಾಪಾರಿ) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪದ್ಮಾವತಿ ನೀಡಿದ ದೂರಿನ ಪ್ರಕಾರ, ಅವರು ಭಟ್ಕಳ ಪಟ್ಟಣದಿಂದ ಮರುಕೇರಿ ಕೋಟಖಂಡ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಹೆದ್ದಾರಿಯ ಕಸ ವಿಲೇವಾರಿ ಮೈದಾನದ ಬಳಿ ಕಾಡುಹಂದಿಯೊಂದು ಅಚಾನಕ್ ಎದುರು ಬಂದಿದೆ. ಹಂದಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತುರ್ತುವಾಗಿ ಬ್ರೇಕ್ ಹಾಕಿದ ಪರಿಣಾಮ ಆಟೋ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Jan 2026 8:10 am

ವಾಯುಭಾರ ಕುಸಿತ ಪರಿಣಾಮ ಶೀತಗಾಳಿ ನಡುವೆ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ದಿನ ಮಳೆ ಸಾಧ್ಯತೆ

Karnataka Weather: ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು, ಭೀಕರ ಚಳಿ ವಾತಾವರಣ ಮುಂದುವರೆದಿದೆ. ಈ ನಡುವೆ ಬಂಗಾಳಕೊಲ್ಲಿಯಲ್ಲಿ ವಾಯುಭಾರತ ಕುಸಿತ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ

ಒನ್ ಇ೦ಡಿಯ 11 Jan 2026 8:10 am

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ಮತ್ತೆ ವಾಯುದಾಳಿ ನಡೆಸಿದ ಅಮೆರಿಕ

ವಾಷಿಂಗ್ಟನ್: ಸಿರಿಯಾದಲ್ಲಿ ಐಸಿಸ್ ಉಗ್ರರ ತಾಣಗಳನ್ನು ಗುರಿ ಮಾಡಿ ಅಮೆರಿಕ ಸೇನೆ ಹಾಗೂ ಮಿತ್ರಪಡೆಗಳು ಶನಿವಾರ ದೊಡ್ಡ ಪ್ರಮಾಣದ ವಾಯುದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಟಿಸಿದೆ. ಐಸಿಸ್ ಉಗ್ರರು ಕಳೆದ ತಿಂಗಳು ದಾಳಿ ನಡೆಸಿ ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಿವರಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ರ ವೇಳೆಗೆ ಈ ದಾಳಿ ನಡೆಸಲಾಗಿದ್ದು, ಅಮೆರಿಕದ ಸೇನೆಯ ಜತೆಗೆ ಪಾಲುದಾರ ದೇಶಗಳ ಸೇನೆ ಕೂಡಾ ದೇಶಾದ್ಯಂತ ಹಲವು ಐಸಿಸ್ ತಾಣಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ. ''ಆಪರೇಷನ್ ಹಾಕ್‌ಐ ಸ್ಟ್ರೈಕ್'' ಹೆಸರಿನಲ್ಲಿ ನಡೆದ ಕಾರ್ಯಾಚರಣೆಯ ಮುಂದವರಿದ ಭಾಗವಾಗಿ ಈ ದಾಳಿ ನಡೆದಿದೆ. 2025ರ ಡಿಸೆಂಬರ್ 19ರಂದು ಡೊನಾಲ್ಡ್ ಟ್ರಂಪ್ ನಿರ್ದೇಶನದಲ್ಲಿ ದಾಳಿ ನಡೆದಿತ್ತು. ಅಮೆರಿಕ ಹಾಗೂ ಸಿರಿಯಾ ಪಡೆಗಳನ್ನು ಗುರಿ ಮಾಡಿ 2025ರ ಡಿಸೆಂಬರ್ 13ರಂದು ಸಿರಿಯಾದ ಪಲ್ಮ್ಯಾರಾದಲ್ಲಿ ಐಸಿಸ್ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಾಳಿಯಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಮತ್ತು ಒಬ್ಬ ಭಾಷಾಂತರಕಾರ ಹತರಾಗಿದ್ದರು. ಲೋವಾ ನ್ಯಾಷನಲ್ ಗಾರ್ಡ್ ನ ಇತರ ಮೂವರು ಗಾಯಗೊಂಡಿದ್ದರು.

ವಾರ್ತಾ ಭಾರತಿ 11 Jan 2026 7:59 am

Agriculture Success Story: ತಾಳಿಕೋಟೆ ಮಹಿಳೆಗೆ 'ಪುಣ್ಯ'ಕೋಟಿ ಆಸರೆ, ಸಗಣಿ, ಮೂತ್ರ ಮಾರಿ ತಿಂಗಳಿಗೆ ಅರ್ಧ ಲಕ್ಷಕ್ಕೂ ಹೆಚ್ಚು ಗಳಿಕೆ!

ವಯಸ್ಸಾದ ಹಸು, ಎತ್ತುಗಳನ್ನು ಕಸಾಯಿಖಾನೆಯಿಂದ ರಕ್ಷಿಸಿ, ಅವುಗಳ ಮೂತ್ರ, ಸಗಣಿಯಿಂದ ತಿಂಗಳಿಗೆ 50-60 ಸಾವಿರ ರೂ. ಆದಾಯ ಗಳಿಸುತ್ತಿರುವ ತಾಳಿಕೋಟೆ ತಾಲೂಕಿನ ತುಂಬಗಿ ಗ್ರಾಮದ ಜಯಶ್ರೀ ರಾಮನಗೌಡ ಚೌಧರಿ ಅವರ ಯಶೋಗಾಥೆ. ಸ್ವಂತ ಹಣದಲ್ಲಿ ಗೋಶಾಲೆ ನಿರ್ಮಿಸಿ, ಆಯುರ್ವೇದ ತರಬೇತಿ ಪಡೆದು, ನಾನಾ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ವಿಜಯ ಕರ್ನಾಟಕ 11 Jan 2026 6:47 am

Gold Price Today: 22, 24 ಕ್ಯಾರೆಟ್ ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಜನವರಿ 11ರ ದರಪಟ್ಟಿ

Gold Price on January 11: ಬಂಗಾರ ದರದಲ್ಲಿ ಗಣನೀಯ ಏರಿಕೆಯಾಗುತ್ತಲೇ ಬಂದಿದೆ. ಹಾಗಾದ್ರೆ, ಇಂದು (ಜನವರಿ 11) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22, 24 ಕ್ಯಾರಟ್ ಬಂಗಾರ ಹಾಗೂ 1 ಕೆ.ಜಿ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ

ಒನ್ ಇ೦ಡಿಯ 11 Jan 2026 6:42 am

ಕೇರಳದಲ್ಲಿ ಕನ್ನಡದ ಕತ್ತು ಹಿಸುಕುವ ಮಸೂದೆ: ವಾಪಸ್‌ ಪಡೆಯಲು ಆಗ್ರಹ

ಕೇರಳದಲ್ಲಿ ಮಲಯಾಳಂ ಭಾಷಾ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮಸೂದೆ ಅಂಗೀಕಾರಗೊಂಡರೆ ಕಾಸರಗೋಡು ಗಡಿನಾಡ ಕನ್ನಡಿಗರ ಹಿತಕ್ಕೆ ಧಕ್ಕೆಯಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳು ಹೇಳಿದ್ದಾರೆ. ಶಿಕ್ಷಣ, ಆಡಳಿತ, ನ್ಯಾಯಾಲಯದ ವ್ಯವಹಾರಗಳಲ್ಲಿ ಮಲಯಾಳಂ ಕಡ್ಡಾಯವಾಗಲಿದೆ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಇದು ಧಕ್ಕೆ ತರಲಿದೆ. ಮಸೂದೆಯನ್ನು ಹಿಂಪಡೆಯುವಂತೆ ಒತ್ತಡ ಹೆಚ್ಚಾಗಿದೆ.

ವಿಜಯ ಕರ್ನಾಟಕ 11 Jan 2026 5:40 am

ದುಬೈನಲ್ಲಿ ಅದ್ದೂರಿಯಾಗಿ ನಡೆದ ಯುಎಇ ‘ಸಾಹೇಬಾನ್’ನ ‘ಕುಟುಂಬ ಸ್ನೇಹಕೂಟ'

ಡಾ.ಸಫ್ವಾನ್, ಮಥೀನ್ ಅಹಮದ್ ಚಿಲ್ಮಿ, ಶಫಿ ಶಾಬಾನ್, ಇಕ್ಬಾಲ್ ಮನ್ನಾರಿಗೆ 'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್' ಪ್ರದಾನ

ವಾರ್ತಾ ಭಾರತಿ 11 Jan 2026 12:48 am

ಜ. 11ರಿಂದ 24 ಗಂಟೆ ಭಾರಿ ಚಳಿ; ಈ ಜಿಲ್ಲೆಗಳಲ್ಲಿ ಉಷ್ಣಾಂಶ 3-4 ಡಿಗ್ರಿಗೆ ಕುಸಿತ ಸಾಧ್ಯತೆ

ರಾಜ್ಯದ ಉತ್ತರ ಒಳನಾಡಿನಲ್ಲಿಮುಂದಿನ 24 ಗಂಟೆಗಳಲ್ಲಿತೀವ್ರ ಚಳಿ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿತುಂಪು ಹವಾಗುಣ ಇರಲಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಚಳಿಯ ವಾತಾವರಣ ಇರಲಿದೆ. ಹಲವೆಡೆ ಮಂಜು ಮುಸುಕಿದ ವಾತಾವರಣ ಕಂಡುಬರಲಿದೆ.

ವಿಜಯ ಕರ್ನಾಟಕ 11 Jan 2026 12:22 am

ಲೇಖಕ ಗಣೇಶ ಅಮೀನಗಡಗೆ ಎಂಆರ್‌ಎಂ ಪ್ರಕಾಶನ ಪ್ರಶಸ್ತಿ

ಮೈಸೂರು : ಪತ್ರಕರ್ತ, ಲೇಖಕ ಹಾಗೂ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರು ಮಂಡ್ಯದ ಎಂಆರ್‌ಎಂ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಎಂಆರ್‌ಎಂ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಮಂಡ್ಯದ ಕವಿ ಕೆ.ಪಿ.ಮೃತ್ಯುಂಜಯ ಭಾಜನರಾಗಿದ್ದಾರೆ. ಈ ಇಬ್ಬರಿಗೂ ತಲಾ 10 ಸಾವಿರ ರೂ. ನಗದು, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಡ್ಯದ ಎಂಆರ್‌ಎಂ ಪ್ರಕಾಶನದ ಮೊದಲ ವಾರ್ಷಿಕೋತ್ಸವ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಪ್ರೌಢಶಾಲೆಯ ವಿಶ್ವಮಾನವ ವೇದಿಕೆಯಲ್ಲಿ ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು. ಇದೇ ಸಮಾರಂಭದಲ್ಲಿ ನಾದಾನಂದನಾಥ ಸ್ವಾಮೀಜಿ ರಚಿಸಿದ 'ಅವಧೂತ ಮಾದಪ್ಪ' ಹಾಗೂ ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರು ಇಂಗ್ಲಿಷ್‌ ನಲ್ಲಿ ರಚಿಸಿದ 'ದಿ ಕಾಪಿ – ಎ ಫಾಟಲ್ ಪ್ಯಾಟನ್9' ಕಾದಂಬರಿ ಬಿಡುಗಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕೃತಿಗಳನ್ನು ಬಿಡುಗಡೆಗೊಳಿಸುವರು. ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕಥೆಗಾರ ಅದೀಬ್ ಅಖ್ತರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುವರು. ನಿಧಿ ಅವರ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡುವರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಹಾಗೂ ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳ, ಕವಯಿತ್ರಿ ಎಚ್. ಆರ್.ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲಕ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರ ಲೋಕೇಶ್ ಭಾಗವಹಿಸುವರು. ಎಂಆರ್ ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶಕ ಹಾಗೂ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಪತ್ರಕರ್ತ ರುದ್ರಗೌಡ ಮುರಾಳ, ಲೇಖಕಿ ನಿಧಿ ಹೆತ್ತವರಾದ ಪ್ರವೀಣಕುಮಾರ್ ಹಾಗೂ ಪೂರ್ಣಿಮಾ ಹಾಜರಿದ್ದರು

ವಾರ್ತಾ ಭಾರತಿ 11 Jan 2026 12:13 am

Chitradurga | ಕಾರು-ಕ್ಯಾಂಟರ್ ಲಾರಿ ನಡುವೆ ಢಿಕ್ಕಿ; ನಾಲ್ವರು ಮೃತ್ಯು

ಚಿತ್ರದುರ್ಗ : ಕಾರು ಹಾಗೂ ಕ್ಯಾಂಟರ್ ಲಾರಿ ಮಧ್ಯೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ನಡೆದಿದೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಢಿಕ್ಕಿಯ‌ ರಭಸಕ್ಕೆ‌‌ ಕಾರು ನಜ್ಜುಗುಜ್ಜಾಗಿ‌ದೆ. ಮೃತರನ್ನು ವಿಶ್ವನಾಥ್(22), ನಂಜುಂಡಿ(23), ರಾಹುಲ್(23), ಯಶ್ವಂತ್ (22) ಎಂದು ಗುರುತಿಸಲಾಗಿದೆ. ಇವರೆಲ್ಲರು ‌ಹುಳಿಯಾರಿನಿಂದ ಹಿರಿಯೂರಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ಪ್ರಕರಣ ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಾರ್ತಾ ಭಾರತಿ 10 Jan 2026 11:53 pm

ಡಾಲರ್‌ನ ಮೌಲ್ಯ 90 ರೂ.ಗೆ ತಲುಪಿರುವುದಕ್ಕಿಂತ ಅವಮಾನಬೇಕೇ? : ರಮೇಶ್ ಕುಮಾರ್

‘ಸೌಹಾರ್ದ ಭಾರತ-ಸಮಾನತೆಯ ಸ್ನೇಹಿತ’ ಕೃತಿಯ ಜನಾರ್ಪಣೆ ಸಮಾರಂಭ

ವಾರ್ತಾ ಭಾರತಿ 10 Jan 2026 11:40 pm

Gadag | ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ!

ಗದಗ : ಮನೆಯ ಹೊಸ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಮಣ್ಣಿನ ಚೆಂಬೊಂದರಲ್ಲಿ ಅಂದಾಜು 1 ಕೆಜಿಯಷ್ಟು ತೂಕದ ಪುರಾತನ ಚಿನ್ನಾಭರಣಗಳು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ತಾಮ್ರದ ಚೆಂಬು ಸಿಕ್ಕಿದೆ. ಚೆಂಬಿನೊಳಗೆ ಚಿನ್ನದ ಬಳೆಗಳು, ಚೈನ್‌ಗಳು, ಉಂಗುರಗಳು ಮತ್ತು ಇತರ ಆಭರಣಗಳು ಪತ್ತೆಯಾಗಿವೆ ತಿಳಿದುಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಸೇರಿದ್ದಾರೆ. ಆ ಬಳಿಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ  ನಿಧಿಯನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷಿತವಾಗಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 10 Jan 2026 11:31 pm

ಕರಾವಳಿ ನಿಯಂತ್ರಣ ವಲಯ ಕಾನೂನು ಸರಳೀಕರಣ, ಕೇಂದ್ರ ಸಚಿವರ ಭೇಟಿಗೆ ನಿಯೋಗ: ಡಿ.ಕೆ.ಶಿವಕುಮಾರ್

ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಕಾನೂನು ಸರಳೀಕರಣ ಮಾಡಲಾಗುವುದು. ಇದರ ಬಗ್ಗೆ ಕೇಂದ್ರ ಪ್ರವಾಸೋದ್ಯಮ, ಪರಿಸರ ಸಚಿವರ ಬಳಿ ನಿಯೋಗ ತೆರಳಿ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026ರಲ್ಲಿ ಮಾತನಾಡಿ, ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಇತರೇ ಸಂಬಂಧಪಟ್ಟವರ

ಒನ್ ಇ೦ಡಿಯ 10 Jan 2026 11:22 pm

ಕಲಬುರಗಿ| ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ

ಕಲಬುರಗಿ: ಸಿಪಿಐ, ಸಿಪಿಐಎಂ ಹಾಗೂ ಎಸ್.ಯು.ಸಿ.ಐ ಎಡ ಪಕ್ಷಗಳ ನೇತೃತ್ವದಲ್ಲಿ ವೆನೆಜುವೆಲಾ ದೇಶದ ಮೇಲೆ ಅಮೆರಿಕ ದಾಳಿ ಖಂಡಿಸಿ, ಇಲ್ಲಿಯ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಲ್ಲಿ ಅಮೇರಿಕಾ ಸಾಮ್ರಾಜ್ಯಶಾಹಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವೆನೆಜುವೆಲಾ ವಿರುದ್ಧ ಯು.ಎಸ್. ಆಕ್ರಮಣ ಹಾಗೂ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ವಿಶ್ವಸಂಸ್ಥೆಯ ಚಾರ್ಟರನ್ನು ಮತ್ತು ಹಲವು ಅಂತರರಾಷ್ಟೀಯ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಮಾದಕದ್ರವ್ಯ-ಭಯೋತ್ಪಾದಕ ಗ್ಯಾಂಗ್‌ಗಳ ವಿರುದ್ಧ ಯುದ್ಧದ ನೆಪದಲ್ಲಿ ವೆನೆಜುವೆಲಾದ ಸುತ್ತಲೂ ಕಳೆದ ಹಲವು ದಶಕಗಳಲ್ಲಿ ಕಂಡಿರದ ಭಾರೀ ನೌಕಾ-ವಾಯುಸೇನಾ ಜಮಾವಣೆಯಾಗಿತ್ತು. ಯಾವುದೇ ಪುರಾವೆ ಇಲ್ಲದೆ ನರ್ಕೊ-ಟೆರರಿಸ್ಟ್‌ ಗ್ಯಾಂಗ್‌ಗಳದ್ದು ಎಂದು ಆಪಾದಿಸಿ 35 ನಾಗರಿಕ ದೋಣಿಗಳ ಮೇಲೆ ಬಾಂಬ್ ದಾಳಿ ನಡೆಸಿ 115 ಅಮಾಯಕ ಜನರ ಕಗ್ಗೊಲೆ ಮಾಡಲಾಗಿದೆ. “ದಿಗ್ಬಂಧಿತ ತೈಲ” ಸಾಗಾಣಿಕೆಯೆಂದು ಆಪಾದಿಸಿ ಎರಡು ತೈಲ ಹಡಗಗಳನ್ನು ಕಡಲುಗಳ್ಳತನದಂತಹ ಕಾರ್ಯಾಚರಣೆಯಲ್ಲಿ ತಡೆದು ನಿಲ್ಲಿಸಲಾಗಿದೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ನಾವು ಹಾಕಿದ್ದಷ್ಟು ಸುಂಕ ತೆಗೆದುಕೊಳ್ಳಬೇಕು, ತಾನು ಹೇಳಿದ ಕಡೆ ವ್ಯಾಪಾರ ಮಾಡಬೇಕು, ರಷ್ಯಾ ಕಡೆಯಿಂದ ತೈಲ ಆಮದು ಮಾಡಿಕೊಳ್ಳಬಾರದು, ಇಲ್ಲದಿದ್ದರೆ ದೊಡ್ಡ ನಷ್ಟ ಅನುಭವಿಸುತ್ತೀರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ದೇಶಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಇಂತಹ ಸಾಮ್ರಾಜ್ಯಶಾಹಿಗಳ ಧೋರಣೆಯನ್ನು ಎಡಪಕ್ಷಗಳು ಇಡೀ ದೇಶದಾದ್ಯಂತ ಖಂಡಿಸುತ್ತೇವೆ ಎಂದು ಹೇಳಿದರು. ಸಿಪಿಐ ಮುಖಂಡ ಭೀಮಾಶಂಕರ ಮಾಡ್ಯಾಳ ಮಾತನಾಡಿ, ಸಾಮ್ರಾಜ್ಯಶಾಹಿ ಅಮೆರಿಕ ಸಣ್ಣಪುಟ್ಟ ದೇಶಗಳ ಮೇಲೆ ಬೆದರಿಯೊಡ್ಡಿ ದಾಳಿ ನಡೆಸುತ್ತಿದೆ, ಇಂತಹ ದಾಳಿಗಳು ಮುಂದುವರೆಸಿದರೆ ಅಮೆರಿಕ ಹೊತ್ತಿ ಉರಿಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಇದೇ ವೇಳೆಯಲ್ಲಿ SUCI (C) ನ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್. ಎಂ. ಶರ್ಮಾ, ಮೌಲಾ ಮುಲ್ಲಾ ಅವರು ಮಾತನಾಡಿದರು. ಈ ಸಂಧರ್ಭದಲ್ಲಿ ವಿ.ಜಿ. ದೇಸಾಯಿ, ಮಹೇಶ್ ಎಸ್.ಬಿ., ಮಹೇಶ್ ನಾಡಗೌಡ, ಸೀಮಾ ದೇಶಪಾಂಡೆ, ಜಗನ್ನಾಥ್ ಎಸ್. ಎಚ್., ಹಣಮಂತ ಎಸ್. ಎಚ್., ಸಂತೋಷ್ ಕುಮಾರ್ ಹಿರವೆ, ಮೀನಾಕ್ಷಿ ಬಾಳಿ, ಪರಶುರಾಮ್, ಸುಧಾಮ್ ಧನ್ನಿ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ್, ಶಾಂತಾ ಘಂಟಿ, ಶ್ರೀಮಂತ ಬಿರಾದರ್, ಲವಿತ್ರಾ ವಸ್ತ್ರದ್, ಸಾಜೀದ್ ಅಹ್ಮದ್, ಭೀಮಶೆಟ್ಟಿ ಯಂಪಳ್ಳಿ, ವಿರೂಪಾಕ್ಷಿ ತಡಕಲ್, ಸರ್ವೇಶ್, ಸಿದ್ದಪ್ಪ ಫಾಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 10 Jan 2026 11:15 pm

ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಪೊಕ್ಸೊ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಕೊಪ್ಪಳ: ಮೌಲಾನಾ ಆಜಾದ್ ಮಾದರಿ ಶಾಲೆ, ದಿಡ್ಡಿಕೇರಾದಲ್ಲಿ ಶನಿವಾರ ಪೊಕ್ಸೊ(ಮಕ್ಕಳ ಲೈಂಗಿಕ ಅಪರಾಧಗಳ ತಡೆ) ಕಾನೂನು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೊಪ್ಪಳದ ಯುವ ವಕೀಲೆಯಾದ ಶಗುಫ್ತಾ ತಬ್ಸುಮ್ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಪರಿಸ್ಥಿತಿಗಳನ್ನು ಹೇಗೆ ಗುರುತಿಸಬೇಕು, ಅಂತರ್ಜಾಲದ ಮೂಲಕ ಉಂಟಾಗುವ ಅಪಾಯಗಳಿಂದ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಲಾಯಿತು. ತಪ್ಪು ಮಾಡಿದವರು ಆರೋಪಿಗಳೇ ಹೊರತು ಶೋಷಣೆಗೆ ಒಳಗಾದ ಮಕ್ಕಳು ಯಾವುದೇ ಕಾರಣಕ್ಕೂ ತಪ್ಪಿತಸ್ಥರಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಅಸುರಕ್ಷಿತ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದನ್ನು ಹೇಗೆ ಎದುರಿಸಬೇಕು? ಪಾಲಕರು, ಶಿಕ್ಷಕರು  ಕಾನೂನು ನೆರವನ್ನು ಹೇಗೆ ಪಡೆಯಬೇಕು ಎಂಬುದನ್ನು ಆಟಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಪ್ರಕಾಶ್, ಶಿಕ್ಷಕಿ ತರ್ನುಮ್, ಕೊಪ್ಪಳ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕರಾದ ಮೌಲಾಸಾಬ ಭಾಗವಹಿಸಿದ್ದರು.

ವಾರ್ತಾ ಭಾರತಿ 10 Jan 2026 11:05 pm

‘ನಿನಗೆ ಇಬ್ಬರು ಹೆಂಡ್ರು…. ನನಗೆ ಒಬ್ಬಳೂ ಇಲ್ಲ’ - ಮದುವೆ ಮಾಡದ ತಂದೆಯನ್ನು ಥಳಿಸಿ ಕೊಂದ ಮಗ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ತಂದೆಯನ್ನು ಮಗನೇ ಹತ್ಯೆಗೈದ ಘಟನೆ ನಡೆದಿದೆ. ಮದುವೆ ಮಾಡದ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಸಣ್ಣ ನಿಂಗಪ್ಪನವರನ್ನು ಮಗ ಎಸ್. ನಿಂಗರಾಜ ರಾಡ್ ನಿಂದ ಹೊಡೆದು ಕೊಂದಿದ್ದಾನೆ. ಈ ಸಂಬಂಧ ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಜಯ ಕರ್ನಾಟಕ 10 Jan 2026 11:02 pm

ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ಡಿವೈಎಸ್‌ಪಿ ಸಂತೋಷ್ ಚೌಹಾಣ್

ಹರಪನಹಳ್ಳಿ : ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನು ಪಾಲನೆ ಮಾಡಬೇಕೆಂದು ಹರಪನಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಸಂತೋಷ್ ಚೌಹಾಣ್ ಹೇಳಿದರು. ನಗರದ ಹರಪನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆ ವತಿಯಿಂದ 37ನೇ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿವೈಎಸ್‌ಪಿ ಸಂತೋಷ್ ಚೌಹಾಣ್, ದ್ವಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಚಾಲನಾ ಪರವಾನಗಿ, ಇನ್ಶೂರೆನ್ಸ್ ಸೇರಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಸಾರ್ವಜನಿಕರ ಸಾಕಷ್ಟು ಸಾವು ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.   ಹರಿಹರ ವೃತ್ತದಿಂದ್ದ ಸರಕಾರಿ ಆಸ್ಪತ್ರೆಯ ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾನೂನಿನ ಬಗ್ಗೆ ವಿವಿಧ ಘೋಷ ವಾಕ್ಯಗಳೊಂದಿಗೆ ಪೊಲೀಸರು ಜಾಥಾ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಹರಪನಹಳ್ಳಿ ಸಿಪಿಐ ಮಹಾಂತೇಶ್ ಸಜ್ಜನ್, ವಿವಿಧ ಠಾಣೆ ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ವಿಜಯ ಕೃಷ್ಣ, ಕಿರಣ್ ಕುಮಾರ್, ನಾಗರತ್ನ, ಕ್ರೈಮ್ ವಿಭಾಗದ ಮೀನಾಕ್ಷೀ  ಹಾಗೂ ಎಎಸ್ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 10 Jan 2026 10:57 pm

ಕುಂದಾಪುರ: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಕುಂದಾಪುರ, ಜ.10: ಅಲ್ತಾರು ಬಿ.ಆರ್.ಸೇವಾಟ್ರಸ್ಟ್ ವತಿಯಿಂದ 3ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹೇಬರಕಟ್ಟೆ ಸ್ವಾಗತ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ವನದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಹೆಗ್ಡೆ ಅಲ್ತಾರ್ ಉದ್ಘಾಟಿಸಿದರು. ಬಸ್ರೂರಿನ ನಿವೃತ್ತ ಮುಖ್ಯೋಪಾಧ್ಯಾಯ ದಿನಕರ್ ಶೆಟ್ಟಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಅಲ್ತಾರ್ ವಹಿಸಿದ್ದರು. ದಸಂಸ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮುಖ್ಯ ಅತಿಥಿಗಳಾಗಿ ಪ್ರದೀಪ್ ಬಲ್ಲಾಳ್, ಸ್ವರ್ಣ ಕಾಮತ್ ಉಡುಪಿ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ, ರಘುರಾಮ್ ಶೆಟ್ಟಿ ಅಲ್ತಾರು, ಅಮೃತ್ ಪೂಜಾರಿ ಯಡ್ತಾಡಿ, ಶಶಿ ಬಳ್ಕೂರು, ರಾಘು ಶಿರೂರು ಬೇಬಿ ಅಂಡಾರು ಮೊದಲಾದವರು ಉಪಸ್ಥಿತರಿದ್ದರು. ಪೂರ್ವಿಕ ಅಲ್ತಾರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಅಂಡಾರು ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 10 Jan 2026 10:52 pm

Syria | ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ

ಡಮಾಸ್ಕಸ್: ರಾಜ್ಯಪಾಲರು ಸುದ್ದಿಗೋಷ್ಠಿ ನಡೆಸುತ್ತಿದ್ದ ಅಲೆಪ್ಪೊದಲ್ಲಿನ ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ. ಸಿರಿಯಾ ಸೇನೆಯು ಅಲೆಪ್ಪೊದ ಶೇಖ್ ಮಕ್ಸೂದ್ ಜಿಲ್ಲೆಯಲ್ಲಿ ನಡೆಸುತ್ತಿರುವ ಎಲ್ಲ ಸೇನಾ ಚಟುವಟಿಕೆಗಳನ್ನು ಅಮಾನತುಗೊಳಿಸಿ, ಕುರ್ದಿಶ್ ನೇತೃತ್ವದ ಎಸ್‌ಡಿಎಫ್ ಬಂಡುಕೋರರನ್ನು ತಬ್ಕಾಗೆ ಉಚ್ಚಾಟಿಸಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲೆಪ್ಪೊ ನಗರದ ಅಶ್ರಫಿಯೆ ಮತ್ತು ಶೇಖ್ ಮಕ್ಸೂದ್ ನೆರೆಹೊರೆಯಲ್ಲಿ ನಡೆಯುತ್ತಿರುವ ಕಾಳಗದಿಂದಾಗಿ ಕನಿಷ್ಠ ಪಕ್ಷ 1,80,000 ಮಂದಿ ನಗರದಿಂದ ಪರಾರಿಯಾಗಿದ್ದಾರೆ. ಎಸ್‌ಡಿಎಫ್ ಬಂಡುಕೋರರು ಕನಿಷ್ಠ ಮೂವರು ಯೋಧರನ್ನು ಹತ್ಯೆಗೈದಿದ್ದಾರೆ ಎಂದು ಸಿರಿಯಾ ಸೇನೆ ಹೇಳಿದೆ. ಸಿರಿಯಾ ಸರಕಾರದೊಂದಿಗೆ ಸೇರಿಕೊಂಡಿರುವ ಬಣಗಳು ಫಿರಂಗಿ ದಾಳಿ ನಡೆಸುತ್ತಿದ್ದು, ಈ ದಾಳಿಯಲ್ಲಿ ಪೂರ್ವ ಅಲೆಪ್ಪೊದ ಡೈರ್ ಹಾಫರ್‌ನಲ್ಲಿ ಒಬ್ಬ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಸ್‌ಡಿಎಫ್ ಆರೋಪಿಸಿದೆ. ಮಂಗಳವಾರದಿಂದ ಹಿಂಸಾಚಾರ ಸ್ಫೋಟಗೊಂಡಾಗಿನಿಂದ ನಾಗರಿಕರು ಸೇರಿ ಕನಿಷ್ಠ ಪಕ್ಷ 22 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 10 Jan 2026 10:42 pm

ಕಾರುಗಳು ಮಾತಾಡುತಾವ!

ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಬರುತ್ತಿದೆ V2V ಸಂವಹನ ತಂತ್ರಜ್ಞಾನ

ವಾರ್ತಾ ಭಾರತಿ 10 Jan 2026 10:39 pm

ಪ್ರಯಾಣಿಕರೇ ಗಮನಿಸಿ: ಈ ಪ್ರಮುಖ ರೈಲುಗಳು ಬೆಂಗಳೂರು ಸಿಟಿ ನಿಲ್ದಾಣಕ್ಕೆ ಬರುವುದಿಲ್ಲ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಕೆಎಸ್ಆರ್) ನಡೆಯುತ್ತಿರುವ ಪಿಟ್ ಲೈನ್ ಪುನರ್‌ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಟರ್ಮಿನಲ್ ನಿಲ್ದಾಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಹೊರಡುವ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇಲ್ಲಿ ನಡೆಯುತ್ತಿರುವ ಕೆಲಸದ ಕಾರಣದಿಂದಾಗಿ ಜನವರಿ 16ರಿಂದ

ಒನ್ ಇ೦ಡಿಯ 10 Jan 2026 10:31 pm

ಅಂಕಿತಾ ಭಂಡಾರಿ ಕೊಲೆ ಪ್ರಕರಣ | ಸಿಬಿಐ ತನಿಖೆಗೆ ಉತ್ತರಾಖಂಡ ಸಿಎಂ ಶಿಫಾರಸು

ಡೆಹ್ರಾಡೂನ್, ಜ.10: ರಾಜ್ಯ ಸರಕಾರವು 2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಪ್ರಕಟಿಸಿದ್ದಾರೆ. ಉತ್ತರಾಖಂಡದ ಋಷಿಕೇಶದಲ್ಲಿ ಮಾಜಿ ಬಿಜೆಪಿ ನಾಯಕ ವಿನೋದ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಸೆ.18, 2022ರಂದು ನಾಪತ್ತೆಯಾಗಿದ್ದರು. ಮರುದಿನ ಪುಲ್ಕಿತ್, ರೆಸಾರ್ಟ್ ಮ್ಯಾನೇಜರ್ ಸೌರಭ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ ಗುಪ್ತಾ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ನಂತರ ಅವರು ಜಗಳದ ಬಳಿಕ ಅಂಕಿತಾರನ್ನು ಕಾಲುವೆಗೆ ತಳ್ಳಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. ನಾಪತ್ತೆಯಾದ ಆರು ದಿನಗಳ ಬಳಿಕ ಅಂಕಿತಾ ಅವರ ಮೃತದೇಹ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಪತ್ತೆಯಾಗಿತ್ತು. ವಿಷಯ ಬೆಳಕಿಗೆ ಬಂದ ಬಳಿಕ ಬಿಜೆಪಿ ವಿನೋದ ಆರ್ಯ ಮತ್ತು ಅವರ ಇನ್ನೋರ್ವ ಪುತ್ರ ಅಂಕಿತ ಆರ್ಯರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆರೋಪಿಗಳು ಅಂಕಿತಾರನ್ನು ವೇಶ್ಯಾವೃತ್ತಿಗೆ ತಳ್ಳಲು ಪ್ರಯತ್ನಿಸಿದ್ದರೆಂದು ಸಾಬೀತುಗೊಳಿಸುವ ಸಾಕ್ಷ್ಯಾಧಾರಗಳು ನಂತರ ಲಭ್ಯವಾಗಿದ್ದವು. ‘ವಿಐಪಿ’ಯೋರ್ವರಿಗೆ ‘ವಿಶೇಷ ಸೇವೆ’ ಒದಗಿಸಲು ನಿರಾಕರಿಸಿದ್ದಕ್ಕೆ ಅಂಕಿತಾರನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿತ್ತು. ಮೇ 2025ರಲ್ಲಿ ಪುಲ್ಕಿತ್, ಭಾಸ್ಕರ್ ಮತ್ತು ಗುಪ್ತಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಧಾಮಿ ಅಂಕಿತಾಳ ಹೆತ್ತವರೊಂದಿಗೆ ಮಾತುಕತೆ ನಡೆಸಿದ ಎರಡು ದಿನಗಳ ಬಳಿಕ ಸಿಬಿಐ ತನಿಖೆಗೆ ಒಪ್ಪಿಸುವ ಕುರಿತು ಪ್ರಕಟಣೆ ಹೊರಬಿದ್ದಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಅಂಕಿತಾರ ಹೆತ್ತವರು ಆಗ್ರಹಿಸಿದ್ದರು. ಈಗಲೂ ಗುರುತು ಪತ್ತೆಯಾಗದೆ ಉಳಿದಿರುವ ‘ವಿಐಪಿ’ಯ ಕಾರಣದಿಂದಲೇ ತಮ್ಮ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಹಲವಾರು ನಾಗರಿಕ ಗುಂಪುಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು.

ವಾರ್ತಾ ಭಾರತಿ 10 Jan 2026 10:20 pm

ರಸ್ತೆ ಅಪಘಾತ: ಗಾಯಗೊಂಡಿದ್ದ ಬೈಕ್ ಸವಾರ ಮೃತ್ಯು

ಉಳ್ಳಾಲ: ಕಾರಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಮುಹಮ್ಮದ್ ಮಹಾಝ್ ಬಟ್ಟಪ್ಪಾಡಿ (24) ಎಂದು ಗುರುತಿಸಲಾಗಿದೆ. ಘಟನೆ ವಿವರ:  ಜ.5 ರಂದು ರಾತ್ರಿ ಮಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ಊರಿಗೆ ಮರಳುತ್ತಿದ್ದು, ಈ ವೇಳೆ ಬೀರಿ ಬಳಿ ಸ್ಕೂಟರ್ ತಲಪಾಡಿ ಕಡೆ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಆಗಿದೆ. ಇದರಿಂದ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Jan 2026 10:17 pm

ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ: ಗ್ರೀನ್‍ಲ್ಯಾಂಡ್‍ನ 5 ರಾಜಕೀಯ ಪಕ್ಷಗಳ ಹೇಳಿಕೆ

ನುಕ್, ಜ.10: ಗ್ರೀನ್‍ಲ್ಯಾಂಡನ್ನು ವಶಪಡಿಸಿಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬೆದರಿಕೆಗೆ ಪ್ರತ್ಯುತ್ತರವಾಗಿ ಗ್ರೀನ್‍ಲ್ಯಾಂಡ್‍ನ ಐದು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ತಾವು ಅಮೆರಿಕನ್ನರಾಗಲು ಬಯಸುವುದಿಲ್ಲ ಮತ್ತು ಗ್ರೀನ್‍ಲ್ಯಾಂಡ್‍ನ ಭವಿಷ್ಯವನ್ನು ಅದರ ಪ್ರಜೆಗಳು ಮಾತ್ರ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ನಾವು ಅಮೆರಿಕಾ ಅಥವಾ ಡೆನ್ಮಾರ್ಕ್‍ನ ನಿಯಂತ್ರಣದಲ್ಲಿರಲು ಬಯಸುವುದಿಲ್ಲ. ನಾವು ಗ್ರೀನ್‍ಲ್ಯಾಂಡರ್‌ಗಳಾಗಿ ಇರಲು ಮಾತ್ರ ಬಯಸುತ್ತೇವೆ. ನಮ್ಮ ಭೂಪ್ರದೇಶದ ಮೇಲೆ ನಮ್ಮ ಜನರಿಗೆ ಇರುವ ಅಧಿಕಾರವನ್ನು ತಿರಸ್ಕರಿಸುವ ಅಮೆರಿಕಾದ ಧೋರಣೆಯನ್ನು ಒಪ್ಪುವುದಿಲ್ಲ ಎಂದು ಗ್ರೀನ್‍ಲ್ಯಾಂಡ್ ಸಂಸತ್ತಿನಲ್ಲಿ ಮಂಡಿಸಲಾದ ಹೇಳಿಕೆಯಲ್ಲಿ ಐದು ಪಕ್ಷಗಳ ನಾಯಕರು ಒತ್ತಿಹೇಳಿದ್ದಾರೆ.

ವಾರ್ತಾ ಭಾರತಿ 10 Jan 2026 10:17 pm

ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ : ಮಾಜಿ ಸಚಿವ ಕುಮಾರ ಬಂಗಾರಪ್ಪ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಕ್ಷದ ವರಿಷ್ಟರ ಮುಂದೆ ಅಭಿಪ್ರಾಯ ತಿಳಿಸಲಾಗಿದೆ. ಶೀಘ್ರವೇ ವರಿಷ್ಠರು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್‌ ಬಿಜೆಪಿಗೆ ಮರಳಲಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು. ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕುಮಾರ ಬಂಗಾರಪ್ಪ, ರಾಜ್ಯಾಧ್ಯಕ್ಷರ ಬದಲಾವಣೆ ವಿಷಯದಲ್ಲಿ ನಾವು ಸೋತಿಲ್ಲ. ಎಲ್ಲರೂ ಒಟ್ಟಾಗಿ ಬದಲಾವಣೆ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ಸ್ಪಂದನೆ ದೊರೆಯದೇ ಹೋದಲ್ಲಿ ಅವರ ದಾರಿ ಅವರಿಗೆ ನಮ್ಮದಾರಿ ನಮಗೆ. ಆದರೆ ಪಕ್ಷ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದಕೊಳ್ಳುವ ಭರವಸೆಯಿದೆ. ಮಾಜಿ ಸಚಿವ ಬಸನಗೌಡ ಯತ್ನಾಳ ಶೀಘ್ರದಲ್ಲಿ ಮರಳಿ ಪಕ್ಷಕ್ಕೆ ಬರುವ ವಿಶ್ವಾಸವಿದೆ. ಅವರೊಂದಿಗೆ ನಾವಿದ್ದೇವೆ. ನಾವೆಂದು ಬದಲಾಗಿಲ್ಲ ಎಂದರು. ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಸತ್ತಿನಿಂದ ಕಾಯ್ದೆಯಾಗಿ ಪಾಸಾಗಿದ್ದು, ದೇಶದ ಸಂಸತ್ತಿಗೆ ಗೌರವಿಸಬೇಕು. ಜೀವನೋಪಾಯ ಯೋಜನೆ ಸೇರಿ ವಿಕಸಿತ ಭಾರತ ಒಗ್ಗೂಡಿಸಿ ಕಾಯ್ದೆ ರೂಪಿಸಲಾಗಿದೆ. ಮಹಾತ್ಮ ಗಾಂಧಿ ಎಂದಿಗೂ ಮಹಾತ್ಮರೇ. ಹೆಸರು ಬದಲಾವಣೆ ಮಾಡಿದರೆ ಗೌರವ ಕಡಿಮೆ ಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು. ಭದ್ರ ಯೋಜನೆಗೆ ಅನುದಾನ ಕೇಂದ್ರ ಘೋಷಣೆ ಮಾಡಿತ್ತು. ಆದರೆ ರಾಜ್ಯ ಸರಕಾರ ಸೂಕ್ತ ದಾಖಲೆಗಳನ್ನು ನೀಡದೇ ಇರುವುದು ಅನುದಾನ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕೆ.ಎಂ.ಪಾಟೀಲ್, ಡಾ.ನಾಗರಾಜ ಬಾಲ್ಕಿ, ಕಿರಣ ಬೆಲ್ಲಂ, ನಾಗನಗೌಡ ಹರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 10 Jan 2026 10:14 pm

ಹಿಜಾಬ್‌ ಧಾರಿ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ಬರಲಿದೆ: ಉವೈಸಿ

ಹೊಸದಿಲ್ಲಿ, ಜ.10: ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದ್ದು, ಭವಿಷ್ಯದಲ್ಲಿ ಹಿಜಾಬ್ ಧರಿಸುವ ಮಹಿಳೆಯೊಬ್ಬಳು ಭಾರತದ ಪ್ರಧಾನಿಯಾಗುವ ದಿನ ಬರಲಿದೆ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ. ಜನವರಿ 15ರಂದು ಪೌರಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಿದೆ. ಆದರೆ ಭಾರತದಲ್ಲಿ ಹಾಗಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಭಾರತದ ಯಾವುದೇ ಪ್ರಜೆಯು ಪ್ರಧಾನಿ, ಮುಖ್ಯಮಂತ್ರಿ ಅಥವಾ ಮೇಯರ್ ಆಗಬಹುದೆಂದು ಹೇಳುತ್ತದೆ ಎಂದು ಅವರು ಪ್ರತಿಪಾದಿಸಿದರು. ಒಂದು ದಿನ ಹಿಜಾಬ್ ಧರಿಸಿದ ಮಗಳೊಬ್ಬಳು ಈ ದೇಶದ ಪ್ರಧಾನಿಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ಅವರು ಹೇಳಿದರು. ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ರಾಜಕಾರಣದ ಕುರಿತು ವಾಗ್ದಾಳಿ ನಡೆಸಿದ ಅವರು, ಅದು ಹೆಚ್ಚು ಕಾಲ ಇರಲಾರದು. ದ್ವೇಷ ಹರಡುವಿಕೆಯು ಅಂತ್ಯಗೊಳ್ಳಲಿದೆ ಎಂದು ಹೇಳಿದರು. ಉವೈಸಿ ಅವರ ಹೇಳಿಕೆಗೆ ಬಿಜೆಪಿಯು ಕಟುವಾದ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್‌ ನ ಈ ಸಂಸದರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಅರ್ಧಸತ್ಯವನ್ನಷ್ಟೇ ಮುಂದಿಡುತ್ತಿದ್ದಾರೆ ಎಂದು ಟೀಕಿಸಿದೆ. ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಬೇಕೆಂದು ಉವೈಸಿ ಹೇಳುತ್ತಾರೆ. ಸಂವಿಧಾನವು ಯಾರನ್ನೂ ತಡೆಯುವುದಿಲ್ಲ. ಆದರೆ ಮೊದಲಿಗೆ ಉವೈಸಿಯವರು ಹಿಂದುಳಿದ ಪಾಸ್ಮಾಂಡ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಿಜಾಬ್‌ ಧಾರಿ ಮಹಿಳೆಯನ್ನು ಎಐಎಂಐಎಂನ ಅಧ್ಯಕ್ಷರಾಗಿ ನೇಮಿಸಲಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಸವಾಲು ಹಾಕಿದ್ದಾರೆ.

ವಾರ್ತಾ ಭಾರತಿ 10 Jan 2026 10:12 pm

ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ನೇಮಕ

ಹೊಸದಿಲ್ಲಿ, ಜ.10: ಇಲ್ಲಿರುವ ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ಅವರನ್ನು ನೇಮಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ತಾಲಿಬಾನ್‌ ನ ಹಿರಿಯ ಸದಸ್ಯರಾದ ಮುಫ್ತಿ ನೂರ್ ಅಹ್ಮದ್ ನೂರ್ ಶನಿವಾರ ಹೊಸದಿಲ್ಲಿಗೆ ಆಗಮಿಸಿದ್ದು, ಅಫ್ಘಾನಿಸ್ತಾನದ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ಪದಗ್ರಹಣ ಮಾಡಿದ್ದಾರೆಂದು ಅವು ತಿಳಿಸಿವೆ. ನೂರ್ ಅಹ್ಮದ್ ಅವರು ಈ ಹಿಂದೆ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಆದ್ಯ ರಾಜಕೀಯ ವಿಭಾಗದ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಾಕಿ ಅವರು ಅಕ್ಟೋಬರ್‌ನಲ್ಲಿ ಭಾರತಕ್ಕೆ ಏಳು ದಿನಗಳ ಭೇಟಿ ನೀಡಿದ ನಂತರ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಸ್ಥಿರವಾದ ಪ್ರಗತಿ ಉಂಟಾಗಿದೆ. ಮುತ್ತಾಕಿ ಅವರ ಭಾರತ ಭೇಟಿ ಸಂದರ್ಭದಲ್ಲಿ ಅವರ ಜೊತೆಗೆ ಬಂದಿದ್ದ ಅಫ್ಘಾನ್ ನಿಯೋಗದಲ್ಲಿ ಮುಫ್ತಿ ನೂರ್ ಅಹ್ಮದ್ ನೂರ್ ಕೂಡ ಇದ್ದರು. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಭಾರತವು ಈತನಕ ಅಧಿಕೃತ ಮಾನ್ಯತೆಯನ್ನು ನೀಡಿಲ್ಲವಾದರೂ, ಆ ದೇಶಕ್ಕೆ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಕೆ ಮಾಡುವ ಪ್ರಮುಖ ದಾನಿ ದೇಶಗಳಲ್ಲೊಂದಾಗಿದೆ. ಹೈದರಾಬಾದ್ ಹಾಗೂ ಮುಂಬೈನಲ್ಲಿರುವ ಅಫ್ಘಾನ್ ದೂತಾವಾಸ ಕಚೇರಿಗಳನ್ನು ಕೂಡ ತಾಲಿಬಾನ್ ನೇಮಕಗೊಳಿಸಿದ ರಾಜತಾಂತ್ರಿಕರೇ ನಿರ್ವಹಿಸುತ್ತಿದ್ದಾರೆ.

ವಾರ್ತಾ ಭಾರತಿ 10 Jan 2026 10:10 pm

Uttar Pradesh | ಬಾಲಕನನ್ನು ನರಬಲಿಕೊಟ್ಟ ಸೋದರ ಸಂಬಂಧಿಗೆ ಮರಣದಂಡನೆ

ಲಕ್ನೋ, ಜ.10: 10 ವರ್ಷದ ಬಾಲಕನನ್ನು ನರಬಲಿಕೊಟ್ಟ ಪ್ರಕರಣದ ದೋಷಿಗೆ ಬಹರಾಯಿಚ್‌ನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಆತನಿಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ತಾಂತ್ರಿಕ ಸೇರಿದಂತೆ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಪುರಾವೆಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ಸುನೀಲ್ ಪ್ರಸಾದ್ ಅವರು ಆರೋಪಿ ಅನೂಪ್ ಕುಮಾರ್ ವರ್ಮಾಗೆ ಗಲ್ಲು ಶಿಕ್ಷೆಯನ್ನು ಘೋಷಿಸಿದರು. ನರಬಲಿ ನೀಡಿದಲ್ಲಿ ರೋಗಪೀಡಿತ ಪುತ್ರನು ಗುಣಮುಖನಾಗುವನೆಂದು ನಂಬಿದ ಅನೂಪ್ ಕುಮಾರ್, 10 ವರ್ಷದ ತನ್ನ ಸೋದರ ಸಂಬಂಧಿಯನ್ನು ಮೂಢನಂಬಿಕೆಯ ಆಚರಣೆಯೊಂದರಲ್ಲಿ ನರಬಲಿಕೊಟ್ಟಿದ್ದನು. ಬಂಧನದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದನು. ಬಹರಾಯಿಚ್ ಜಿಲ್ಲೆಯ ನಾನಪಾರಾ ಕೋಟ್ವಾಲಿ ಪ್ರದೇಶದಲ್ಲಿ ಈ ಕೃತ್ಯ ನಡೆದಿತ್ತು. ಅಪರಾಧದ ಬರ್ಬರತೆ ಹಾಗೂ ಗಂಭೀರತೆಯನ್ನು ಪರಿಗಣನೆಗೆ ತೆಗೆದುಕೊಂಡು ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಶನ್ ಪರ ವಕೀಲ ಸುನೀಲ್ ಕುಮಾರ್ ಜೈಸ್ವಾಲ್ ನ್ಯಾಯಾಲಯವನ್ನು ಆಗ್ರಹಿಸಿದ್ದರು. 2023ರ ಮಾರ್ಚ್ 23ರಂದು ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯ ಆಗೈಯಾ ಗ್ರಾಮದಲ್ಲಿ ರಾಮ್ ಕಿಶನ್ ಅವರ 10 ವರ್ಷದ ಪುತ್ರ ವಿವೇಕ್ ವರ್ಮಾನ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು. ಘಟನೆ ನಡೆದ ಸಮಯದಲ್ಲಿ ವಿವೇಕ್‌ನ ತಂದೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ತನ್ನ ಪುತ್ರನ ಹತ್ಯೆಯ ಮಾಹಿತಿ ದೊರೆತ ಬಳಿಕ ಅವರು ಗ್ರಾಮಕ್ಕೆ ವಾಪಸಾಗಿದ್ದರು. ರಾಮ್ ಕಿಶನ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಕೊಲೆ ಹಾಗೂ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿವೇಕ್‌ನ ಸೋದರ ಸಂಬಂಧಿ ಅನೂಪ್ ಕುಮಾರ್ ಹಾಗೂ ತಾಂತ್ರಿಕ ಜಾಂಗ್ಲಿಯನ್ನು ಬಂಧಿಸಿದ್ದರು. ತನ್ನ ಪುತ್ರ ಸತ್ಯಂ ಆಗಾಗ ಅಸ್ವಸ್ಥನಾಗುತ್ತಿದ್ದನು. ತನ್ನದೇ ಕುಟುಂಬದ ಮಗುವೊಂದನ್ನು ನರಬಲಿಕೊಟ್ಟಲ್ಲಿ ಪುತ್ರ ಗುಣಮುಖನಾಗುವನೆಂದು ತಾಂತ್ರಿಕನೊಬ್ಬ ಸಲಹೆ ನೀಡಿದ್ದನು. ಅದನ್ನು ನಂಬಿ ಈ ಕೃತ್ಯ ಎಸಗಿದ್ದಾಗಿ ಅನೂಪ್ ವಿಚಾರಣೆಯ ವೇಳೆ ತಿಳಿಸಿದ್ದನು.

ವಾರ್ತಾ ಭಾರತಿ 10 Jan 2026 10:10 pm

ಜ.12ರಂದು ಕಲಬುರಗಿ ಜಿಲ್ಲೆಗೆ ಸಿಎಂ ಭೇಟಿ: ಅಧಿಕಾರಿಗಳ ಜೊತೆ ಸಚಿವ ಪ್ರಿಯಾಂಕ್ ಖರ್ಗೆ ಪೂರ್ವಭಾವಿ ಸಭೆ

ಕಲಬುರಗಿ: ಜ.12 ರಂದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಸೇರಿದಂತೆ ಯಡ್ರಾಮಿ ಮತ್ತು ಸೇಡಂ ಪ್ರತ್ಯೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಡಿ.ಸಿ.ಎಂ ಡಿ.ಕೆ.ಶಿವಕುಮಾರ ಅವರುಗಳು ಆಗಮಿಸುತ್ತಿದ್ದು, ಕಾರ್ಯಕ್ರಮ ಯಶಸ್ಸಿಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಪರಸ್ಪರ‌ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು. ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಸೋಮವಾರ ಮೊದಲು ಯಡ್ರಾಮಿ ನಂತರ‌ ಸೇಡಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಸುಮಾರು 1,595 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ,‌ ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಸೇರಿದಂತೆ ಪ್ರದೇಶದ ಸಚಿವರು,‌ ಚುನಾಯಿತ ಜನಪ್ರತಿನಿಧಿಗಳು ಸಹ ಆಗಮಿಸಲಿರುವ ಹಿನ್ನೆಲೆಯಲ್ಲಿ ಗಣ್ಯರ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳಿಗೆ ನೀಡಲಾದ ಜವಾಬ್ದಾರಿಯನ್ನು ಅರಿತು ಅಚ್ಚುಕಟ್ಟಾಗಿ ಕಾ‌ರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಎರಡು ಕಾರ್ಯಕ್ರಮಕ್ಕೆ ಆಯಾ ತಾಲೂಕಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಅಗಮಿಸುವ ನಿರೀಕ್ಷೆ ಇರುವುದರಿಂದ ಬಸ್ ವ್ಯವಸ್ಥೆ ಮಾಡಬೇಕು ಎಂದು ಕೆ.ಕೆ.ಅರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ಅವರಿಗೆ ನಿರ್ದೇಶನ ನೀಡಿದ ಸಚಿವರು, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಜನಸಂದಣಿಯಾಗದಂತೆ ಸುಗಮ‌ ಸಂಚಾರದ‌ ನಿರ್ವಹಣೆ‌ ಮಾಡಬೇಕು. ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ತೈನಾತಿಸಬೇಕು. ಎಲ್ಲೆಡೆ ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಬೇಕು. ಅಗತ್ಯವುದಲ್ಲಿ ಬೇರೆ ಜಿಲ್ಲೆಯಿಂದ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಮಹಿಳೆಯರು ಆಗಮಿಸುವುದರಿಂದ ಯಡ್ರಾಮಿ ಮತ್ತು ಸೇಡಂ ಎರಡು ಕಡೆ ಊಟದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಜನಸ್ತೋಮಕ್ಕನುಗುಣವಾಗಿ ಊಟದ ಕೌಂಟರ್ ಹೆಚ್ಚಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ‌ ನೀಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಸಭೆಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಎಂ.ಎಲ್.ಸಿ ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಐ.ಜಿ.ಪಿ ಶಾಂತನು ಸಿನ್ಹಾ, ಕೆ.ಕೆ.ಆರ್.ಟಿ.ಸಿ. ಎಂ.ಡಿ ಡಾ.ಬಿ‌.ಸುಶೀಲಾ, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಅಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ ಸೇರಿದಂತೆ‌ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Jan 2026 10:07 pm

I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ Vs ED; ಇಲ್ಲಿವರೆಗೆ ಏನೇನಾಯ್ತು?

ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕೀಯ ತಂತ್ರಗಾರಿಕೆ ಸಂಸ್ಥೆ I-PAC ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆದ ED ದಾಳಿ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. I-PAC ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ED, ಘಟನೆಗಳ ಸಂಪೂರ್ಣ ಅನುಕ್ರಮವನ್ನು ವಿವರಿಸಿದ್ದು, ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದಾಗಿ ನ್ಯಾಯಯುತ ತನಿಖೆ ನಡೆಸುವ ತನ್ನ ಹಕ್ಕಿಗೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದೆ. ಈಡಿ ಈ ವಿಷಯದ ಕುರಿತು ಕೇಂದ್ರ ತನಿಖಾ ದಳ (CBI) ತನಿಖೆಯನ್ನು ಕೋರಿದೆ. ಇದೇ ವೇಳೆ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಾದವನ್ನು ಆಲಿಸದೇ ಯಾವುದೇ ಪ್ರತಿಕೂಲ ಆದೇಶ ಅಥವಾ ನಿರ್ದೇಶನ ನೀಡಬಾರದು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ. ನ್ಯಾಯಾಲಯಗಳಲ್ಲಿ ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯ ತೀರ್ಪುಗಳನ್ನು ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ. ರಾಜಕೀಯ ಸಲಹಾ ಸಂಸ್ಥೆ I-PAC ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ED ದಾಳಿ ವೇಳೆ ಅಲ್ಲಿಗೆ ಧಾವಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಮುಖ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ವೇಳೆ, I-PAC ಕಚೇರಿಯ ಮುಂದೆ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪಕ್ಷದ ಹಾರ್ಡ್ ಡಿಸ್ಕ್‌ಗಳು, ಅಭ್ಯರ್ಥಿಗಳ ಪಟ್ಟಿಗಳನ್ನು ಸಂಗ್ರಹಿಸುವುದು ED ಮತ್ತು ಅಮಿತ್ ಶಾ ಅವರ ಕರ್ತವ್ಯವೇ? ದೇಶವನ್ನು ರಕ್ಷಿಸಲು ಸಾಧ್ಯವಾಗದ ಮತ್ತು ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಿತ್ತುಕೊಳ್ಳುತ್ತಿರುವ The nasty, naughty ಗೃಹ ಸಚಿವರು. ನಾನು ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿದರೆ ಫಲಿತಾಂಶ ಏನಾಗುತ್ತದೆ?” ಎಂದು ಪ್ರಶ್ನಿಸಿದರು. “ಒಂದೆಡೆ, ಅವರು ಪಶ್ಚಿಮ ಬಂಗಾಳದಲ್ಲಿ SIR ನಡೆಸುವ ಮೂಲಕ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಚುನಾವಣೆಗಳ ನೆಪದಲ್ಲಿ ನನ್ನ ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ” ಎಂದು ಅವರು ಗುಡುಗಿದರು. ಆಡಳಿತ ಪಕ್ಷದ ಆಂತರಿಕ ಕಾರ್ಯತಂತ್ರ, ಅಭ್ಯರ್ಥಿಗಳ ಪಟ್ಟಿಗಳು ಮತ್ತು ಗೌಪ್ಯ ಡಿಜಿಟಲ್ ಸಾಮಗ್ರಿಗಳನ್ನು ಪ್ರವೇಶಿಸಲು ED ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, ಅಂತಹ ಮಾಹಿತಿಗೆ ಹಣಕಾಸು ತನಿಖೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಬೀದಿಗಿಳಿದು ಪ್ರತಿಭಟನೆ I-PAC ಕಚೇರಿ ಹಾಗೂ ಅದರ ಮುಖ್ಯಸ್ಥರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಖಂಡಿಸಿ ಶುಕ್ರವಾರ ಬೀದಿಗಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಪಕ್ಷದ ಆಂತರಿಕ ಕಾರ್ಯತಂತ್ರವನ್ನು ಕದಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ, ದಾಳಿಯ ಸಮಯದಲ್ಲಿ ತಾವು ಹಸ್ತಕ್ಷೇಪ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರತಿಭಟನಾ ಮೆರವಣಿಗೆಯ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ನಿನ್ನೆ (ಗುರುವಾರ) ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ನೀವು ನನ್ನನ್ನು ಕೊಲ್ಲಲು ಬಂದಿದ್ದೀರಿ. ನನಗೆ ನನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ನನ್ನ ಪಕ್ಷವೇ ಅಸ್ತಿತ್ವದಲ್ಲಿಲ್ಲದಿದ್ದರೆ, ನಾನು ಜನರಿಗಾಗಿ ಹೇಗೆ ಹೋರಾಡಲಿ?” ಎಂದು ಪ್ರಶ್ನಿಸಿದರು. “ಅವರು ಕಲ್ಲಿದ್ದಲು ಹಗರಣದ ಹಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕಲ್ಲಿದ್ದಲು ಹಣವನ್ನು ಯಾರು ತಿನ್ನುತ್ತಾರೆ? ಅದನ್ನು ಹೇಗೆ ತಿನ್ನಲಾಗುತ್ತದೆ? ಇದು ದೇಶದ್ರೋಹಿಗಳ ಮೂಲಕ ನಡೆಯುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಲ್ಲಿದ್ದಲು ಹಗರಣದ ಹಣ ಸುವೇಂದು ಅಧಿಕಾರಿ ಮೂಲಕ ಅಮಿತ್ ಶಾ ಅವರಿಗೆ ಹೋಗಿದೆ” ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಚುನಾವಣಾ ಆಯೋಗದಲ್ಲಿ ಯಾರು ಕುಳಿತಿದ್ದಾರೆಂದು ನಿಮಗೆ ಗೊತ್ತಿದೆ. ಅವರು ಅಮಿತ್ ಶಾ ಅವರ ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಜ್ಞಾನೇಶ್ ಕುಮಾರ್ ಮತಗಳನ್ನು ಕಣ್ಮರೆಯಾಗಿಸುತ್ತಿದ್ದರೆ, ನಾನು ಏಕೆ ಸುಮ್ಮನಿರಬೇಕು? ಮತದಾರರ ಹಕ್ಕುಗಳನ್ನು ಕಸಿದುಕೊಂಡರೆ, ನಾನು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತೇನೆ” ಎಂದು ಎಚ್ಚರಿಸಿದರು. “ಹರಿಯಾಣ ಮತ್ತು ಬಿಹಾರದಲ್ಲಿ ಅವರು ಬಲವಂತವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಬಂಗಾಳದಲ್ಲೂ ಅದೇ ಪ್ರಯತ್ನ ನಡೆಯುತ್ತಿದೆ. ಕಲ್ಲಿದ್ದಲು ಹಗರಣದ ಹಣವನ್ನು ಯಾರು ಪಡೆಯುತ್ತಾರೆ? ಅಮಿತ್ ಶಾ. ಹಣ ಜಗನ್ನಾಥ್ ಚಟ್ಟೋಪಾಧ್ಯಾಯ ಮೂಲಕ ಸುವೇಂದು ಅಧಿಕಾರಿಗೆ ಹೋಗುತ್ತದೆ. ಸುವೇಂದು ಅಧಿಕಾರಿ ಅದನ್ನು ಅಮಿತ್ ಶಾಗೆ ಕಳುಹಿಸುತ್ತಾರೆ” ಎಂದು ಹೇಳಿದರು. “ನನ್ನ ಬಳಿ ಪೆನ್ ಡ್ರೈವ್‌ಗಳಿವೆ. ನನ್ನ ಸ್ಥಾನದ ಗೌರವದಿಂದಾಗಿ ನಾನು ಸುಮ್ಮನಿದ್ದೇನೆ. ಒಂದು ಹಂತದವರೆಗೆ ಮಾತ್ರ ನಾನು ಸಹಿಸುತ್ತೇನೆ. ನೆನಪಿಡಿ, ಲಕ್ಷ್ಮಣ ರೇಖೆ ಇದೆ. ನನ್ನ ಮೇಲೆ ಹೆಚ್ಚು ಒತ್ತಡ ಹೇರಬೇಡಿ. ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಇಡೀ ದೇಶವೇ ಆಘಾತಕ್ಕೊಳಗಾಗುತ್ತದೆ” ಎಂದು ಮಮತಾ ಎಚ್ಚರಿಕೆ ನೀಡಿದರು. BSF ಮತ್ತು CISF ಪಡೆಗಳ ಪಾತ್ರದ ಕುರಿತಾಗಿಯೂ ಗೃಹ ಸಚಿವರನ್ನು ಪ್ರಶ್ನಿಸಿದ ಮಮತಾ, ಅಕ್ರಮ ಕಲ್ಲಿದ್ದಲು ಕಳ್ಳಸಾಗಣೆ ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್ ಮೆಟ್ಟಿಲೇರಿದ ED ತಮ್ಮ ಶೋಧ ಕಾರ್ಯಾಚರಣೆಗೆ “ತಡೆ” ಒಡ್ಡಲಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ED ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಇದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಮತ್ತು I-PAC ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರತಿ-ಅರ್ಜಿಗಳನ್ನು ಸಲ್ಲಿಸಿವೆ. ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಚುನಾವಣಾ ಯೋಜನೆ ಮತ್ತು ಪ್ರಚಾರ ತಂತ್ರಕ್ಕೆ ಮಾತ್ರ ಸಂಬಂಧಿಸಿದ್ದಾಗಿವೆ. ಇವು ಹಣ ವರ್ಗಾವಣೆ ತಡೆ ಕಾಯ್ದೆ, 2002ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಟಿಎಂಸಿ ವಾದಿಸಿದೆ. ವಶಪಡಿಸಿಕೊಂಡ ವಸ್ತುಗಳು “ಮುಂಬರುವ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ” ಸಂಬಂಧಿಸಿದ್ದಾಗಿವೆ ಎಂದು ಪಕ್ಷ ತಿಳಿಸಿದೆ. ಶೋಧದ ವೇಳೆ ಪ್ರಮುಖ ದಾಖಲೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕುಟುಂಬವು ಹೆಚ್ಚುವರಿ ದೂರುಗಳನ್ನು ಸಲ್ಲಿಸಿದೆ. ಈ ಆರೋಪಗಳನ್ನು ED ತಿರಸ್ಕರಿಸಿದ್ದು, ತಮ್ಮ ಕ್ರಮಗಳು ಕಾನೂನುಬದ್ಧವಾಗಿದ್ದು ಸರಿಯಾದ ಪ್ರಕ್ರಿಯೆಯಂತೆ ನಡೆದಿವೆ ಎಂದು ಸ್ಪಷ್ಟಪಡಿಸಿದೆ. ಆದರೆ ನ್ಯಾಯಾಲಯದಲ್ಲಿ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದರು. ಇದರಿಂದ ED ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಮಮತಾಗೆ ಕಾನೂನು ನೋಟಿಸ್ ಕಳುಹಿಸಿದ ಸುವೇಂದು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. 72 ಗಂಟೆಗಳೊಳಗೆ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದು, ವಿಫಲವಾದಲ್ಲಿ ಮಾನನಷ್ಟಕ್ಕೆ ಸಂಬಂಧಿಸಿದ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. “ED ತನಿಖೆಯಿಂದ ಗಮನ ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನವಾಗಿ ಸಿಎಂ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಯಾವುದೇ ಸಾಕ್ಷ್ಯವಿಲ್ಲದೆ ನನ್ನನ್ನು ಹಾಗೂ ಗೌರವಾನ್ವಿತ ಗೃಹ ಸಚಿವರನ್ನು ಕಲ್ಲಿದ್ದಲು ಹಗರಣಕ್ಕೆ ಲಿಂಕ್ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕ ಚರ್ಚೆಯ ಘನತೆಯನ್ನು ಹಾಳುಮಾಡುತ್ತವೆ” ಎಂದು ಸುವೇಂದು ಅಧಿಕಾರಿ Xನಲ್ಲಿ ಬರೆದುಕೊಂಡಿದ್ದಾರೆ. ED ಅಧಿಕಾರಿಗಳ ವಿರುದ್ಧ ಪೊಲೀಸ್ ತನಿಖೆ ಅರ್ಜಿ ಮತ್ತು ಪ್ರತಿ-ಅರ್ಜಿಗಳ ನಡುವೆಯೇ, ಚುನಾವಣೆಗೆ ಸಂಬಂಧಿಸಿದ ಡೇಟಾ ಕಳ್ಳತನವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದು, ದಾಳಿ ವೇಳೆ ದಾಖಲೆಗಳನ್ನು ಕದ್ದಿದ್ದಾರೆ ಎಂಬ ಆರೋಪದ ಮೇಲೆ ED ಅಧಿಕಾರಿಗಳನ್ನು ಕೋಲ್ಕತ್ತಾ ಪೊಲೀಸರು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. CCTV ದೃಶ್ಯಾವಳಿಗಳು, DVR ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗಿದೆ. ಗುರುತಿಸುವಿಕೆ ಪೂರ್ಣಗೊಂಡ ಬಳಿಕ ನೋಟಿಸ್‌ಗಳನ್ನು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ED ಮತ್ತು CRPF ಸಿಬ್ಬಂದಿ ಸರಿಯಾದ ಮಾಹಿತಿ ಇಲ್ಲದೆ ಶೋಧ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಅಡ್ಡಿಪಡಿಸಿದ್ದು, ವಾರಂಟ್‌ಗಳನ್ನು ತೋರಿಸಲು ವಿಫಲರಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕ್ರಿಮಿನಲ್, ಅತಿಕ್ರಮಣ ಮತ್ತು ಐಟಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ED ಮತ್ತು ಮಮತಾ ಬ್ಯಾನರ್ಜಿ ನಡುವಿನ ಕಾನೂನು ಸಂಘರ್ಷ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. ED vs ಮಮತಾ ಬ್ಯಾನರ್ಜಿ ಕಾನೂನು ಸಮರ I-PAC ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಈಡಿ) ಸುಪ್ರೀಂಕೋರ್ಟ್ ನಲ್ಲಿ ಆರ್ಟಿಕಲ್ 32 ಅರ್ಜಿ ಸಲ್ಲಿಸಿದೆ. ಘಟನೆಯ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ಕೋರಿದ ಈಡಿ, ನ್ಯಾಯಯುತ ಮತ್ತು ಸ್ವತಂತ್ರ ತನಿಖೆ ನಡೆಸುವ ಹಕ್ಕಿಗೆ ರಾಜ್ಯ ಸರ್ಕಾರ ತಡೆಯೊಡ್ಡಿದೆ ಎಂದು ಹೇಳಿಕೊಂಡಿದೆ. ಈಡಿ ಪ್ರಕಾರ, ಕಲ್ಲಿದ್ದಲು ಕಳ್ಳಸಾಗಣೆ ತನಿಖೆಗೆ ಸಂಬಂಧಿಸಿದ ವಸ್ತುಗಳನ್ನು ಕಾನೂನುಬದ್ಧವಾಗಿ ಶೋಧ ನಡೆಸದಂತೆ ಮತ್ತು ವಶಪಡಿಸಿಕೊಳ್ಳದಂತೆ ಅಧಿಕಾರಿಗಳನ್ನು ತಡೆಯಲಾಗಿದೆ. ಶೋಧ ವೇಳೆ ಹಿರಿಯ ರಾಜ್ಯ ಅಧಿಕಾರಿಗಳ ಸಮ್ಮುಖದಲ್ಲಿ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಆವರಣದಿಂದ ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ರಾಜ್ಯ ಅಧಿಕಾರಿಗಳ ಹಸ್ತಕ್ಷೇಪವು ನ್ಯಾಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅದರ ತನಿಖೆಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಈಡಿ ವಾದಿಸಿದೆ. ಅದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ.

ವಾರ್ತಾ ಭಾರತಿ 10 Jan 2026 10:03 pm

ಕಲಬುರಗಿ| ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಕಲಬುರಗಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್‌ ಆರ್ಗನೈಜೇಷನ್ (AIDYO) ವತಿಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ನಗರದ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೂಪರ್ ಮಾರ್ಕೆಟ್ ಸಮೀಪ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಭಯಾನಕ ಸ್ವರೂಪ ಪಡೆದುಕೊಂಡಿದೆ. 78 ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದೆ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದಲ್ಲದೆ, ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ,  ಸರಕಾರಿ ಇಲಾಖೆಗಳ ಖಾಸಗೀಕರಣವು ಪರಿಸ್ಥಿತಿಯನ್ನು  ಹದಗೆಡಿಸಿವೆ. 2014ರಲ್ಲಿ ಪ್ರತಿ ವರ್ಷ ಯುವಕರಿಗೆ 20 ಮಿಲಿಯನ್ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಭರವಸೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಪರೀಕ್ಷೆಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಗರಿಷ್ಟ ವಯಸ್ಸಿನ ಮಿತಿಯನ್ನು 5 ವರ್ಷ ಹೆಚ್ಚಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಶುಲ್ಕ ವಿಧಿಸಬಾರದು ಮತ್ತು ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಹುದ್ದೆಗಳನ್ನು ಖಾಯಂ ಮಾಡಬೇಕು, ದೇಶದಾದ್ಯಂತ ಗಿಗ್ ಕಾರ್ಮಿಕರಿಗೆ ಉದ್ಯೋಗ, ಸ್ಥಾನಮಾನ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್, ಹೆಚ್., ಜಿಲ್ಲಾ ಕಾರ್ಯದರ್ಶಿ ಈಶ್ವರ , ರಮೇಶ ದೇವಕರ್, ಪ್ರಶಾಂತ ಹಾದಿಮನಿ, ತೇಜಶ್ವಿನಿ ಆರ್. ಇಬ್ರಾಹಿಂಪುರ್, ಸಚಿನ್ ಪವಾರ್, ಪ್ರಭಾಕರ ಚಿಂಚೋಳ್ಳಿ, ಗಣೇಶ ಜಾಧವ್, ಸಚಿನ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 10 Jan 2026 10:02 pm

ಫೆಲೆಸ್ತೀನೀಯರು ಸ್ವಂತ ನೆಲದಲ್ಲಿ ಶಾಂತಿಯಿಂದ ಬದುಕುವ ಹಕ್ಕು ಹೊಂದಿದ್ದಾರೆ: ಪೋಪ್

ವ್ಯಾಟಿಕನ್ ಸಿಟಿ, ಜ.10: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಗಾಝಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಪೋಪ್ ಲಿಯೋ ದುಃಖ ವ್ಯಕ್ತಪಡಿಸಿದ್ದು, ಫೆಲೆಸ್ತೀನೀಯರು ತಮ್ಮ ಸ್ವಂತ ನೆಲದಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುವ ಹಕ್ಕು ಹೊಂದಿರುವ ಫೆಲೆಸ್ತೀನೀಯ ನಾಗರಿಕರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಗಾಝಾದಲ್ಲಿನ ನಾಗರಿಕರಿಗೆ ತಮ್ಮದೇ ಭೂಮಿಯಲ್ಲಿ ಶಾಶ್ವತ ಶಾಂತಿ ಮತ್ತು ನ್ಯಾಯಯುತ ಭವಿಷ್ಯದ ಭರವಸೆಯನ್ನು ನೀಡಬೇಕು. ಅಕ್ಟೋಬರ್‌ನಲ್ಲಿ ಘೋಷಿಸಲಾದ ಕದನ ವಿರಾಮದ ಹೊರತಾಗಿಯೂ ನಾಗರಿಕರ ಮಾನವೀಯ ನೋವು ಮುಂದುವರಿದಿದೆ. ಗಾಝಾದಲ್ಲಿರುವ ಫೆಲೆಸ್ತೀನೀಯರು ಸೇರಿದಂತೆ ಎಲ್ಲಾ ಫೆಲೆಸ್ತೀನೀಯರಿಗೆ ಹಾಗೂ ಎಲ್ಲಾ ಇಸ್ರೇಲ್ ನಾಗರಿಕರಿಗೆ ಶಾಶ್ವತ ಶಾಂತಿ ಮತ್ತು ನ್ಯಾಯದ ಭವಿಷ್ಯವನ್ನು ಖಾತ್ರಿ ಪಡಿಸುವ ಗುರಿಯನ್ನು ಹೊಂದಿರುವ ಪ್ರತಿಯೊಂದು ರಾಜತಾಂತ್ರಿಕ ಉಪಕ್ರಮವನ್ನೂ ವ್ಯಾಟಿಕನ್ ನಿಖರವಾಗಿ ಅನುಸರಿಸುತ್ತದೆ ಎಂದು ಲಿಯೋ ಹೇಳಿದ್ದಾರೆ.

ವಾರ್ತಾ ಭಾರತಿ 10 Jan 2026 9:55 pm

ಕಾರ್ಕಳ| ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತಾಮ್ರದ ಹೊದಿಕೆ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಕಳವಾರು ಚಚ್೯ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಜ.3ರಂದು ಪಾಕ್೯ನ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಹಾಗೂ 1200ರೂ. ಮೌಲ್ಯದ 2 ಸಿಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ. ಮೌಲ್ಯದ ಗೂಡ್ಸ್ ಅಟೋರಿಕ್ಷಾ, 70,000ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೀಫ್ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ ಪೊಲೀಸ್ ಠಾಣೆ, ಕಾರ್ಕಳ ಗ್ರಾಮಾಂತರ ಹಾಗೂ ಮುಲ್ಕಿ, ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ 9 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಮೀದ್ ವಿರುದ್ಧ ಬಜ್ಪೆ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಾರ್ಕಳ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ನೇತೃತ್ವದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈಗಳಾದ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್., ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈಗಳಾದ ಪ್ರಸನ್ನ ಕುಮಾರ್ ಎಮ್.ಎಸ್., ಸುಂದರ ಹಾಗೂ ಸಿಬ್ಬಂದಿ ರಂಜೀತ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಗೋಪಾಲಕೃಷ್ಣ, ಚಂದ್ರ ಶೇಖರ, ಸತೀಶ ಪ್ರದೀಪ, ಶಿವಾನಂದ ಲೊಕೇಶ, ಮಹಾತೇಶ, ಸಂತೋಷ ಗೋಣಿಯಪ್ಪನವರ್, ಶ್ರೀನಿವಾಸ, ಆನಂದ, ಸಂತೋಷ, ಅರ್ಚನಾ ಹಾಗೂ ಚಾಲಕರಾದ ಅಶೋಕ ಕುಮಾರ್ ಹಾಗೂ ಪ್ರಸಾದ ಹಾಗೂ ಜಿಲ್ಲಾ ಆರ್‌ಡಿಸೆಲ್ ವಿಭಾಗದ ದಿನೇಶ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 10 Jan 2026 9:55 pm

ಕಲಬುರಗಿ| ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ: ಕಾಂಗ್ರೆಸ್ ಸರಕಾರ ಅಭಿವೃದ್ಧಿಯತ್ತ ಗಮನ ಸಹರಿಸದೇ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರ ನೇತೃತ್ವದಲ್ಲಿ ಕುದರೆ ಹಾಗೂ ಕತ್ತೆಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಲಾಯಿತು. ಎಸ್‌ವಿಪಿ ವೃತ್ತದಿಂದ ಶುರುವಾರ ಕುದುರೆ ಹಾಗೂ ಕತ್ತೆಗಳೊಂದಿಗೆ ನಡೆದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಕ್ತಾಯವಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗೃಹ ಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ರೂ. 2,000 ನೀಡಲಾಗುತ್ತಿದೆ. ಆದರೆ ಅದರಿಂದ ಮಹಿಳೆಯರಿಗೆ ಏನು ಲಾಭ? ಅದರ ಬದಲಾಗಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡುವಂತ ಯೋಜನೆಗಳನ್ನು ರೂಪಸಬೇಕಾಗಿತ್ತು. ಅಲ್ಲದೇ ಅನ್ನಭಾಗ ಯೋಜನೆಯಲ್ಲಿಯೂ ಪಡಿತರ ಅಕ್ಕಿ ಬದಲು ತಲಾ 38 ರೂ ಹಣವನ್ನು ಖಾತೆಗೆ ಹಾಕಲಾಗುತ್ತಿದೆ. ಹಣದ ಬದಲು ಅಕ್ಕಿ ಖರೀದಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಎಂದು ಮಾತ್ರ ಹೇಳಲಾಗುತ್ತಿದೆ. ಅದರ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಬೆಲೆ ಏರಿಕೆಯಿಂದ ಹಾಕುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಹೆಸರಿನಲ್ಲಿ ಸರಕಾರ ಅಭಿವೃದ್ಧಿಯನ್ನು ಮರೆತಿದೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ನಿಂತು ಹೋಗಿವೆ. ಕಲಬುರಗಿ ನಗರದಲ್ಲಿನ ಎಲ್ಲಾ ಮುಖ್ಯ ರಸ್ತೆಗಳ ಟಾರ್ ಕಿತ್ತು ಹೋಗುತ್ತಿದೆ. ಅದಕ್ಕೆ ದುರಸ್ಥಿ ಮಾಡಲು ಇಲಾಖೆಗಳಲ್ಲಿ ಹಣದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದ ರಸ್ತೆಗಳ ಗತಿಯೇನು? ಎಂದು ದೇವೇಂದ್ರ ದೇಸಾಯಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಶಶಿ ಮದ್ದೂರು, ರಾಮೋಜಿ ಜ್ಯೋತಿಬಾ, ಸಂಗಮೇಶ, ಲೋಕೇಶ್, ರಾಕೇಶ್ ಮಾಡ್ಯಾಳ, ಶಿವಾನಂದ ಕಲ್ಲೂರ್, ಕಮಲಾಕರ್ ಅಣಕಲ್, ಸಿದ್ದು ಬುಸನೂರ್, ನಾಗು ಹತಗುಂದಿ, ಶಿವರಾಜ್, ಮಲ್ಲು ಪೊದ್ದಾರ್ ಸೇರಿದಂತೆ ಹಲವರು ಇದ್ದರು.

ವಾರ್ತಾ ಭಾರತಿ 10 Jan 2026 9:55 pm

ಪತಿಯ ಎಡವಟ್ಟಿನಿಂದ ಕೋಟ್ಯಂತರ ರೂಪಾಯಿ, ಜಮೀನು ಕಳೆದುಕೊಂಡೆ - ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ಮೇರಿ ಕೋಂ ಅಳಲು

ಖ್ಯಾತ ಬಾಕ್ಸರ್ ಮೇರಿ ಕೋಂ, ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಪತಿ ಹಣಕಾಸಿನ ದುರುಪಯೋಗ ಮತ್ತು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡಿದ್ದಾಗ ಕುಟುಂಬದ ಹಣಕಾಸಿನ ಸ್ಥಿತಿ ಅರಿತು, ನಂಬಿದ್ದ ವ್ಯಕ್ತಿ ಸರಿಯಾಗಿರಲಿಲ್ಲ ಎಂದು ತಿಳಿಯಿತು. ಪತಿ ಆಸ್ತಿ ಅಡವಿಟ್ಟು ಸಾಲ ಪಡೆದು, ಭೂಗತರಿಂದ ಭೂಮಿ ಕಳೆದುಕೊಂಡಿದ್ದರಿಂದ ಬೇಸತ್ತು ವಿಚ್ಛೇದನ ಪಡೆದಿದ್ದಾಗಿ ಹೇಳಿದ್ದಾರೆ.

ವಿಜಯ ಕರ್ನಾಟಕ 10 Jan 2026 9:54 pm

ಹಿಂಸಾತ್ಮಕ ಪ್ರತಿಭಟನೆಗಳಿಗೆ ಅಮೆರಿಕ ಹೊಣೆ: ವಿಶ್ವಸಂಸ್ಥೆಗೆ Iran ರಾಯಭಾರಿ ಪತ್ರ

ಟೆಹ್ರಾನ್, ಜ.10: ಇರಾನ್‌ ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳು ಹಿಂಸಾತ್ಮಕ, ದೇಶದ್ರೋಹಿ ಚಟುವಟಿಕೆಗಳು ಹಾಗೂ ವಿಧ್ವಂಸಕ ಕೃತ್ಯಗಳಾಗಿ ರೂಪಾಂತರಗೊಳ್ಳಲು ಅಮೆರಿಕವೇ ಹೊಣೆ ಎಂದು ವಿಶ್ವಸಂಸ್ಥೆಯಲ್ಲಿ ಇರಾನಿನ ರಾಯಭಾರಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. ಇಸ್ರೇಲಿ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಮೆರಿಕಾ ನಡೆಸುತ್ತಿರುವ ಕಾನೂನುಬಾಹಿರ ಹಾಗೂ ಬೇಜವಾಬ್ದಾರಿ ನಡವಳಿಕೆಯನ್ನು, ಅಸ್ಥಿರತೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿರುವ ಕ್ರಮಗಳನ್ನು ಇರಾನ್ ಖಂಡಿಸುತ್ತದೆ ಎಂದು ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. ವಿಶ್ವಸಂಸ್ಥೆಯ ಚಾರ್ಟರ್‌ ಅನ್ನು (ಸನದು) ದುರ್ಬಲಗೊಳಿಸುವ, ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯ ಅಡಿಪಾಯಗಳಿಗೆ ಬೆದರಿಕೆಯೊಡ್ಡುವ ‘ಅಸ್ಥಿರಗೊಳಿಸುವ ಕ್ರಮಗಳನ್ನು’ ಅಮೆರಿಕಾ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇರಾನ್‌ ನಲ್ಲಿ ವ್ಯಾಪಕಗೊಂಡಿರುವ ಪ್ರತಿಭಟನೆ 14ನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು, ಕಾರ್ಯತಂತ್ರದ ಮೂಲಸೌಕರ್ಯಗಳು ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ದೃಢಸಂಕಲ್ಪ ಹೊಂದಿರುವುದಾಗಿ ಇರಾನ್ ಸೇನೆ ಹೇಳಿದೆ. ಈ ನಡುವೆ ರಾಜಧಾನಿ ಟೆಹ್ರಾನ್, ಮಶ್ಹಾದ್ ಸೇರಿದಂತೆ ಪ್ರಮುಖ ನಗರಗಳ ಬೀದಿಗಳಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಟೆಹ್ರಾನ್‌ನ ಪಶ್ಚಿಮದ ಕರಾಜ್ ನಗರದಲ್ಲಿ ಪುರಸಭೆ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಗುರುವಾರ ರಾತ್ರಿ 50ಕ್ಕೂ ಹೆಚ್ಚು ಬ್ಯಾಂಕ್‌ಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಟೆಹ್ರಾನ್ ಮೇಯರ್‌ ರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ವಾರ್ತಾ ಭಾರತಿ 10 Jan 2026 9:51 pm

ಕಲಬುರಗಿ| ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ: ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.   ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ, ತಪ್ಪಿತಸ್ಥರ ವಿರುದ್ಧ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಜೀವಂತ ಪ್ರತಿನಿಧಿಗೆ ಶ್ರದ್ಧಾಂಜಲಿ ಪೋಸ್ಟ್ ಹಾಕಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಾಸಕ ಅವಿನಾಶ್ ಜಾಧವ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಹರ್ಷನಂದಾ ಗುತ್ತೇದಾರ್, ನಿತೀನ್ ಗುತ್ತೇದಾರ್, ಮಹಾದೇವ ಬೆಳಮಗಿ, ಉಮೇಶ್ ಪಾಟೀಲ್, ಶಿವಯೋಗಿ ನಾಗನಹಳ್ಳಿ, ಸಂತೋಷಿರಾಣಿ ಪಾಟೀಲ್ ತೆಲ್ಕೂರ, ಸಂತೋಷ್ ಹಾದಿಮನಿ, ಜಯಶ್ರೀ ಮತ್ತಿಮೂಡ, ಚಂದಮ್ಮ ಪಾಟೀಲ್, ಸುಧಾ ಹಾಲಕಾಯಿ, ಸವಿತಾ ಪಾಟೀಲ್, ಭಾಗ್ಯ ಭಾಗೋಡಿ, ಸಾವಿತ್ರಿಬಾಯಿ ಕುಳಗೇರಿ, ಅಂಬಾರಾಯ್ ಅಷ್ಟಗಿ, ಬಾಬುರಾವ್ ಹಾಗರಗುಂಡಗಿ, ವಿಶಾಲ ದರ್ಗಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಿವ ಅಷ್ಟಗಿ, ಗೌರಿ ಚಿಚಕೋಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Jan 2026 9:48 pm

ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಶುರು, ವಾಣಿಜ್ಯ ಸಂಚಾರ ಯಾವಾಗ?

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಶುರು ಮಾಡಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಏಪ್ರಿಲ್‌ವರೆಗೆ ನಡೆಯುವ ಪರೀಕ್ಷೆಗಳ ಬಳಿಕ ಸುರಕ್ಷತಾ ಪ್ರಮಾಣಪತ್ರ ಲಭಿಸಿದ ಕೂಡಲೇ ಸಂಚಾರ ಆರಂಭವಾಗಲಿದೆ.

ವಿಜಯ ಕರ್ನಾಟಕ 10 Jan 2026 9:37 pm

ಕೋಚ್ ಜಾನ್ ಝೆಲೆಝ್ನಿ ನಂಟು ಕಡಿದುಕೊಂಡ ನೀರಜ್ ಚೋಪ್ರಾ

ಹೊಸದಿಲ್ಲಿ, ಜ.10: ‘‘ಝೆಕ್‌ನ ಜಾವೆಲಿನ್ ದಂತಕತೆ ಜಾನ್ ಝೆಲೆಝ್ನಿ ಅವರಿಂದ ಬೇರ್ಪಡುತ್ತಿದ್ದೇನೆ’’ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಶನಿವಾರ ಘೋಷಿಸಿದ್ದಾರೆ. ಚೋಪ್ರಾ ಅವರು 2024ರ ಕೊನೆಯಲ್ಲಿ ಝೆಲೆಝ್ನಿ ಅವರಿಂದ ತರಬೇತಿಯನ್ನು ಪಡೆಯಲು ಆರಂಭಿಸಿದ್ದು, ಇದೀಗ ಇಬ್ಬರೂ ಬೇರ್ಪಡಲು ಒಪ್ಪಿಕೊಂಡಿದ್ದಾರೆ. ಝೆಲೆಝ್ನಿ ಅವರಿಂದ ಬೇರ್ಪಡಲು ಕಾರಣವೇನೆಂದು ಚೋಪ್ರಾ ವಿವರ ನೀಡಿಲ್ಲ. ಕಳೆದ ವರ್ಷ ಝೆಲೆಝ್ನಿ ಅವರ ಮಾರ್ಗದರ್ಶನದಲ್ಲಿ ಚೋಪ್ರಾ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್‌ಗೂ ಅಧಿಕ ದೂರ ಜಾವೆಲಿನ್ ಎಸೆದಿದ್ದರು. 2025ರ ದೋಹಾ ಡೈಮಂಡ್ ಲೀಗ್‌ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದರು. ಆಗ ಚೋಪ್ರಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು. ‘‘ಜಾನ್ ಜೊತೆ ಕೆಲಸ ಮಾಡುವುದರಿಂದ ನನ್ನ ಕಣ್ಣುಗಳು ಹಲವು ಹೊಸ ವಿಚಾರಗಳಿಗೆ ತೆರೆಯಿತು. ತಂತ್ರ, ಲಯ ಹಾಗೂ ಚಲನೆಯ ಬಗ್ಗೆ ಅವರು ಯೋಚಿಸುವ ರೀತಿ ಅದ್ಭುತವಾಗಿದೆ. ನಾವು ಒಟ್ಟಿಗೆ ಇದ್ದ ಪ್ರತಿಯೊಂದು ಅವಧಿಯಲ್ಲೂ ನಾನು ಬಹಳಷ್ಟು ಕಲಿತಿದ್ದೇನೆ’’ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಝೆಲೆಝ್ನಿ ಅವರು ಮೂರು ಒಲಿಂಪಿಕ್ಸ್ ಚಿನ್ನದ ಪದಕಗಳು (1992, 1996, 2000) ಹಾಗೂ ಮೂರು ಬಾರಿ ವಿಶ್ವ ಚಾಂಪಿಯನ್‌ ಶಿಪ್‌ ಗಳು (1993, 1995, 2001) ಜಯಿಸಿದ್ದರು. 1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 98.48 ಮೀಟರ್ ವಿಶ್ವ ದಾಖಲೆ ಸೇರಿದಂತೆ ಸಾರ್ವಕಾಲಿಕ ಒಂಬತ್ತು ಅತ್ಯುತ್ತಮ ಜಾವೆಲಿನ್ ಎಸೆತಗಳಲ್ಲಿ ಐದು ದಾಖಲೆಗಳನ್ನು ತಮ್ಮ ಹೆಸರಲ್ಲಿ ಹೊಂದಿದ್ದಾರೆ. ನೀರಜ್ ಜೊತೆ ಕೈಜೋಡಿಸುವ ಮೊದಲು ಝೆಕ್‌ನ ಜಾವೆಲಿನ್ ಥ್ರೋವರ್ ಜಾಕಬ್ ವಾಡ್ಲೆಚ್ ಅವರೊಂದಿಗೆ ಕೆಲಸ ಮಾಡಿದ್ದರು. ‘‘ನೀರಜ್‌ ರಂತಹ ಕ್ರೀಡಾಪಟುವಿನೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅನುಭವವಾಗಿತ್ತು. ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾದಾಗ ನನಗೆ ತುಂಬಾ ಖುಷಿಯಾಯಿತು. ಅವರು ಮೊದಲ ಬಾರಿಗೆ 90 ಮೀಟರ್ ತಡೆಗೋಡೆ ಮುರಿಯಲು ಸಾಧ್ಯವಾಯಿತು. ವಿಶ್ವ ಚಾಂಪಿಯನ್‌ಶಿಪ್ ಹೊರತುಪಡಿಸಿ ಉಳಿದ ಟೂರ್ನಿಗಳಲ್ಲಿ ಎರಡನೇ ಸ್ಥಾನ ಪಡೆದರು. ಇದು ಕಳಪೆ ದಾಖಲೆಯಲ್ಲ. ದುರದೃಷ್ಟವಶಾತ್ ಟೋಕಿಯೊಗೆ ತೆರಳಲು 12 ದಿನಗಳ ಮೊದಲು ಬೆನ್ನುನೋವಿಗೆ ಒಳಗಾದದ್ದು ಅವರ ಅವಕಾಶಗಳ ಮೇಲೆ ಪರಿಣಾಮ ಬೀರಿತು’’ ಎಂದು ಝೆಲೆಝ್ನಿ ಹೇಳಿದ್ದಾರೆ. ‘‘2026ರಲ್ಲಿ ಉತ್ತಮ ಸಾಧನೆ ಮಾಡಲು ಎದುರು ನೋಡುತ್ತಿದ್ದೇನೆ. ನವೆಂಬರ್ ಆರಂಭದಲ್ಲಿ ನಾನು ತಯಾರಿಯನ್ನು ಆರಂಭಿಸಿದ್ದೇನೆ. ಆರೋಗ್ಯವಾಗಿರುವುದು ಎಂದಿನಂತೆ ನನ್ನ ಮುಖ್ಯ ಉದ್ದೇಶ. ಶೀಘ್ರದಲ್ಲೇ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ವಿಶೇಷವಾಗಿ 2027ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2028ರ ಒಲಿಂಪಿಕ್ಸ್ ಕ್ರೀಡಾಕೂಟಗಳತ್ತ ಗಮನ ಹರಿಸುತ್ತಿದ್ದೇನೆ’’ ಎಂದು ನೀರಜ್ ಹೇಳಿದ್ದಾರೆ. ನೀರಜ್ ಚೋಪ್ರಾ ಅವರು ಕಳೆದ ವರ್ಷ ದೋಹಾ ಡೈಮಂಡ್ ಲೀಗ್‌ನಲ್ಲಿ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು.

ವಾರ್ತಾ ಭಾರತಿ 10 Jan 2026 9:23 pm

Brisbane International ಟೆನಿಸ್ ಟೂರ್ನಿ | ಸತತ ಮೂರನೇ ಬಾರಿ ಸಬಲೆಂಕಾ ಫೈನಲ್‌ ಗೆ

ಬ್ರಿಸ್ಬೇನ್, ಜ.10: ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಝೆಕ್ ಆಟಗಾರ್ತಿ ಕರೊಲಿನಾ ಮುಚೋವಾರನ್ನು ನೇರ ಸೆಟ್‌ ಗಳ ಅಂತರದಿಂದ ಮಣಿಸುವ ಮೂಲಕ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಫೈನಲ್‌ ಗೆ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿ ಆರಂಭವಾಗಲು ಇನ್ನೊಂದು ವಾರ ಬಾಕಿ ಇರುವಾಗ ಸಬಲೆಂಕಾ ಈ ಸಾಧನೆ ಮಾಡಿದ್ದಾರೆ. ಶನಿವಾರ 89 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್‌ ನಲ್ಲಿ ಸಬಲೆಂಕಾ ಅವರು ಮುಚೋವಾರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಸದೆಬಡಿದರು. ಸಬಲೆಂಕಾ ಅವರು ಹಿಂದಿನ ಮೂರು ಮುಖಾಮುಖಿಗಳಲ್ಲಿ ಮುಚೋವಾ ವಿರುದ್ಧ ಸೋತಿದ್ದರು. ಇಂದಿನ ಪಂದ್ಯದಲ್ಲಿ ಅವರು ಉತ್ತಮ ಟಚ್‌ನಲ್ಲಿದ್ದಂತೆ ಕಾಣಿಸಿಕೊಂಡರು. ‘‘ನಾನು ಈ ಹಿಂದೆ ಹಲವು ಬಾರಿ ಮುಚೋವಾ ವಿರುದ್ಧದ ಪಂದ್ಯಗಳಲ್ಲಿ ಪರದಾಟ ನಡೆಸಿದ್ದೆ. ಇಂದು ಆರಂಭದಲ್ಲೇ ಪಂದ್ಯದತ್ತ ಗಮನ ಹರಿಸಿದೆ. ಉತ್ತಮ ಟೆನಿಸ್ ಆಡಲು ಶಕ್ತಳಾಗಿ ಹೆಚ್ಚಿನ ಒತ್ತಡ ಹೇರಿದೆ. ನೇರ ಸೆಟ್‌ಗಳಿಂದ ಜಯಶಾಲಿಯಾದೆ’’ ಎಂದು ಸಬಲೆಂಕಾ ಹೇಳಿದರು. ‘‘ವಿಶ್ವದ ಅಗ್ರ-10ರಲ್ಲಿ ಸ್ಥಾನ ಪಡೆದ ಏಳು ಆಟಗಾರ್ತಿಯರು ಈ ಪಂದ್ಯಾವಳಿಯಲ್ಲಿ ಆಡಿದ್ದು, ಇದು ಜನವರಿ 18ರಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗೆ ತಯಾರಿ ನಡೆಸಲು ಸೂಕ್ತವಾಗಿದೆ. ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಶಾಲಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’’ ಎಂದು 27ರ ಹರೆಯದ ಸಬಲೆಂಕಾ ಹೇಳಿದರು. ಹಾಲಿ ಚಾಂಪಿಯನ್ ಆಗಿರುವ ಸಬಲೆಂಕಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅಥವಾ ಉಕ್ರೇನ್‌ ನ ಮಾರ್ಟಾ ಕೊಸ್ಟ್ಯುಕ್ ಅವರನ್ನು ಎದುರಿಸಲಿದ್ದಾರೆ.

ವಾರ್ತಾ ಭಾರತಿ 10 Jan 2026 9:16 pm

Malaysia Open | ಬ್ಯಾಡ್ಮಿಂಟನ್ ಪಂದ್ಯಾವಳಿ ಸೆಮಿ ಫೈನಲ್‌ ನಲ್ಲಿ ಸೋಲುಂಡ ಸಿಂಧು

ಕೌಲಾಲಂಪುರ, ಜ.10: ಭಾರತೀಯ ಶಟ್ಲರ್ ಪಿ.ವಿ. ಸಿಂಧು ವರ್ಷದ ಮೊದಲ ಮಲೇಶ್ಯ ಓಪನ್ ಸೂಪರ್–1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಹಂತದಲ್ಲೇ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಚೀನಾದ ವಾಂಗ್ ಝಿಹಿ ವಿರುದ್ಧ 16-21, 15-21 ನೇರ ಗೇಮ್‌ ಗಳ ಅಂತರದಿಂದ ಸೋಲುಂಡರು. ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಕಾಣಿಸಿಕೊಂಡ ಕಾಲಿನ ನೋವಿನಿಂದ ಚೇತರಿಸಿಕೊಂಡ ಬಳಿಕ ಆಡಿದ ತಮ್ಮ ಮೊದಲ ಪಂದ್ಯಾವಳಿಯಲ್ಲಿ ಸಿಂಧು ಅವರು ಸೆಮಿ ಫೈನಲ್‌ನುದ್ದಕ್ಕೂ ಅನಗತ್ಯ ತಪ್ಪುಗಳನ್ನು ಎಸಗಿದರು. ಸಿಂಧು ಸೋಲಿನೊಂದಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತ ತಂಡದ ಅಭಿಯಾನ ಅಂತ್ಯಗೊಂಡಿತು. ಸಿಂಧು ಅವರು ಆಕ್ರಮಣಕಾರಿ ಆರಂಭ ಪಡೆದು ಗರಿಷ್ಠ ರ್ಯಾಂಕಿನ ಎದುರಾಳಿಯ ವಿರುದ್ಧ ಕಠಿಣ ಹೋರಾಟ ನೀಡುತ್ತಾ 5-2 ಮುನ್ನಡೆ ಪಡೆದರು. ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾದ ವಾಂಗ್ ಸ್ಕೋರನ್ನು ಸಮಬಲಗೊಳಿಸಿದರು. ಚೀನಾ ಶಟ್ಲರ್ ಎಸಗಿದ ಕೆಲವು ತಪ್ಪುಗಳು ಸಿಂಧು ಅವರಿಗೆ 9-7ರಿಂದ ಮುನ್ನಡೆ ಪಡೆಯಲು ಸಹಾಯಮಾಡಿದವು. 13-13ರಿಂದ ಸಮಬಲಗೊಂಡಾಗ ಉಭಯ ಆಟಗಾರ್ತಿಯರು ಲೆಂಗ್ತ್ ಕಾಯ್ದುಕೊಳ್ಳಲು ಪರದಾಟ ನಡೆಸಿದರು. 18-14ರಿಂದ ಮುನ್ನಡೆ ಸಾಧಿಸಿದ ವಾಂಗ್ ಅವರು ಇನ್ನೂ ನಾಲ್ಕು ಅಂಕ ಗಳಿಸಿ ಮೊದಲ ಗೇಮ್ ಅನ್ನು ವಶಪಡಿಸಿಕೊಂಡರು. ಎರಡನೇ ಗೇಮ್‌ನ ಆರಂಭದಲ್ಲೇ ಅನಗತ್ಯ ತಪ್ಪುಗಳನ್ನು ಎಸಗಿದ ಸಿಂಧು 1-3 ಅಂತರದಿಂದ ಹಿನ್ನಡೆ ಅನುಭವಿಸಿದರು. ಆದರೆ ತಕ್ಷಣವೇ ತಮ್ಮ ತಪ್ಪುಗಳನ್ನು ತಿದ್ದಿಕೊಂಡು 6-3ರಿಂದ ಮುನ್ನಡೆ ಸಾಧಿಸಿದರು. ಮಧ್ಯಂತರದಲ್ಲಿ ಸಿಂಧು 11-6 ಮುನ್ನಡೆಯಲ್ಲಿದ್ದರು. ವಿರಾಮದ ಬಳಿಕ ವಾಂಗ್ ಭಾರೀ ಹುಮ್ಮಸ್ಸಿನಲ್ಲಿ ಆಡಿದರೂ ಸಿಂಧು 13-9ರಿಂದ ಮುನ್ನಡೆಯಲ್ಲಿದ್ದರು. ಆದರೆ ವಾಂಗ್ ಮತ್ತೊಮ್ಮೆ ಪುಟಿದು ನಿಂತು ಸ್ಕೋರನ್ನು 13-13ರಿಂದ ಸಮಬಲಗೊಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಐದು ಮ್ಯಾಚ್ ಪಾಯಿಂಟ್‌ಗಳನ್ನು ಪಡೆದ ವಾಂಗ್ ಅವರು 21-15 ಅಂತರದಿಂದ ಎರಡನೇ ಗೇಮ್ ಗೆದ್ದುಕೊಂಡು ಫೈನಲ್‌ ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ವಾರ್ತಾ ಭಾರತಿ 10 Jan 2026 9:13 pm