SENSEX
NIFTY
GOLD
USD/INR

Weather

20    C
... ...View News by News Source

ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆ ಅನ್ವಯ ನೇಮಕಾತಿ ಮುಂದುವರಿಸಲು ಸರಕಾರಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022'ರ ಅನ್ವಯ ಈಗಾಗಲೇ ಆರಂಭಿಸಿರುವ ಸರಕಾರಿ ಹುದ್ದೆಗಳ ನೇಮಕಾತಿ‌ ಮತ್ತು ಬಡ್ತಿ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಸಾವಿರಾರು ಹುದ್ದೆಗಳ ಪೈಕಿ 3,644 ಹುದ್ದೆಗಳ ನೇಮಕಾತಿ‌ಗಿದ್ದ ಅಡ್ಡಿ ಸದ್ಯಕ್ಕೆ ನಿವಾರಣೆಯಾದಂತಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ, ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ. 50ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಆಕ್ಷೇಪಿಸಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಯಾವುದೇ ನೇಮಕಾತಿ ಅಥವಾ ಬಡ್ತಿ ನೀಡುವಂತಿಲ್ಲ. ಕಾಯ್ದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿ ಅಥವಾ ಸೀಟುಗಳ ಹಂಚಿಕೆಯು ಹಾಲಿ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಇದನ್ನು ನೇಮಕಾತಿ ಅಥವಾ ಬಡ್ತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ದೊರೆಯುವುದಿಲ್ಲ. ಈ ಮಾರ್ಪಾಡು 2025ರ ನವೆಂಬರ್ 19ರ ಮಧ್ಯಂತರ ಆದೇಶಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶಿಸಿತು. ಸರಕಾರದ ವಾದವೇನು? ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಕಾಯ್ದೆ ಅನ್ವಯ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನೇಮಕಾತಿ ಆರಂಭಿಸಿದ್ದು, ಅಂತಿಮ ಹಂತದಲ್ಲಿದೆ. ಒಟ್ಟು 3,644 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸುವುದಿಲ್ಲ. ಹೊಸ ಕಾಯ್ದೆ ಅಡಿ ಈಗಾಗಲೇ ನೇಮಕಾತಿ ಮಾಡಿರುವುದಕ್ಕೆ ಮಧ್ಯಂತರ ಆದೇಶ ಅನ್ವಯಿಸದೆಂದು ಆದೇಶಿಸಬೇಕು. ಅರ್ಜಿದಾರರು ಸರಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿಲ್ಲ. ಆದ್ದರಿಂದ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಮತ್ತು ಬಡ್ತಿ ನೀಡಲು ಸರಕಾರಕ್ಕೆ ಅನುಮತಿಸಬೇಕು ಎಂದು ಕೋರಿದರು. ಅಭ್ಯರ್ಥಿ ಮಧು ಎಂಬುವರ ಪರ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್‌ ವಾದ ಮಂಡಿಸಿ, ನೇಮಕಾತಿ ಪ್ರಕ್ರಿಯೆ ನಡೆಯಲಿ. ಆದರೆ, ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸಬಾರದು. ಬಿಬಿಎಂಪಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿದ್ದೇವೆ. ಆಯ್ಕೆಯಾದ ಮೇಲೆ ನೇಮಕಾತಿ ಆದೇಶ ನೀಡಲು ಮೂರು ತಿಂಗಳಾಗುತ್ತದೆ. ಜಾತಿ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಿವೃತ್ತ ನ್ಯಾ. ಎಚ್‌ ಎನ್‌ ನಾಗಮೋಹನ್‌ ದಾಸ್‌ ಸಮಿತಿಯ ವರದಿ ಅನುಸಾರ ಮೀಸಲಾತಿ ಹೆಚ್ಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ನ್ಯಾ. ನಾಗಮೋಹನ್‌ ದಾಸ್‌ ಸಮಿತಿಯು ಅಗತ್ಯ ಪ್ರಾತಿನಿಧ್ಯ ಪರೀಕ್ಷೆ ಅನ್ವಯಿಸುವಲ್ಲಿ ಮೂಲಭೂತವಾಗಿ ಎಡವಿದೆ. ಅದು ಅನುಪಾತನ ಪ್ರಾತಿನಿಧ್ಯ ಕಲ್ಪಿಸಿದೆ ಎಂದು ಆಕ್ಷೇಪಿಸಿದರು. ಅರ್ಜಿದಾರರ ಪರ ವಕೀಲರಾದ ನಚಿಕೇತ್‌ ಮತ್ತು ರಂಗನಾಥ್‌ ಜೋಯಿಷ್‌ ವಾದ ಮಂಡಿಸಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬಾರದು. ಅರ್ಜಿಗಳನ್ನು ಅಂತಿಮವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಾದಿಸಲು ಸಿದ್ಧರಾಗಿದ್ದು, ಅದಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಅಂತಿಮವಾಗಿ ನ್ಯಾಯಪೀಠ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲಿ ಷರತ್ತುಬದ್ಧ ಅನುಮತಿ ನೀಡಿತಲ್ಲದೆ, ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು 2026ರ ಜನವರಿ 28ಕ್ಕೆ ಮುಂದೂಡಿತು.

ವಾರ್ತಾ ಭಾರತಿ 27 Nov 2025 7:10 pm

ಅಲಂಕಾರಿಕ ಮೀನು ಸಾಕಣೆ ಉದ್ಯಮ ಲಾಭದಾಯಕ: ಕೆ.ಸಿ. ವೀರಣ್ಣ

ಮಂಗಳೂರು: ಯುವಕರು ಮೀನುಗಾರಿಕೆ ಮತ್ತು ಆಲಂಕಾರಿಕ ಮೀನು ಸಾಕಣೆ ವಲಯಗಳಲ್ಲಿನ ವ್ಯಾಪಾರ ಅವಕಾಶಗಳನ್ನು ಬಳಸಿಕೊಳ್ಳಬೇಕ ಎಂದು ಬೀದರ್‌ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ವೀರಣ್ಣ ಕರೆ ನೀಡಿದ್ದಾರೆ. ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋದಲ್ಲಿ ಗುರುವಾರ ಹೊಯ್ಗೆಬಜಾರ್‌ನ ಮೀನುಗಾರಿಕಾ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೀನು ಉತ್ತಮ ಗುಣಮಟ್ಟದ ಪ್ರೋಟೀನ್ ಹೊಂದಿರುವ ಆಹಾರ. ನಾವು ಪ್ರಸ್ತುತ ಸಮತೋಲಿತ ಆಹಾರವನ್ನು ಆರಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ಮೀನಿನ ಸೇವನೆ ಮುಖ್ಯವಾಗಿದೆ. ಮೀನುಗಳು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಬದಲಾದ ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ, ಜನರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಾವು ಪೌಷ್ಟಿಕ ಆಹಾರವನ್ನು ಸೇವಿಸಬೇಕಾಗಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ವ್ಯಾಪಾರ ಅವಕಾಶಗಳಿವೆ. ಕೇಂದ್ರ ಸರ್ಕಾರವು ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ ಮತ್ತು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳನ್ನು ಯುವಕರು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಸಕ್ತ ಅಲಂಕಾರಿಕ ಮೀನು ಉತ್ಪಾದನೆ ಹಾಗೂ ವ್ಯವಹಾರ ಜನಪ್ರಿಯಗೊಳ್ಳುತ್ತಿದೆ. ಅಕ್ವೇರಿಯಂ ಮೀನು ಸಾಕಣೆ ಆಸಕ್ತಿ ಹೆಚ್ಚಿದೆ. ಈ ಅಲಂಕಾರಿಕ ಮೀನು ವ್ಯವಹಾರದ ಬಗ್ಗೆ ತರಬೇತಿ ಪಡೆಯುವ ಮೂಲಕ, ್ಮ ಸ್ವಂತ ಉದ್ದಿಮೆ ಮಾಡಬಹುದು. ಮೀನುಗಾರಿಕಾ ವಿಶ್ವವಿದ್ಯಾಲಯವು ಅಲಂಕಾರಿಕ ಮೀನುಗಳನ್ನು ಸಹ ಉತ್ಪಾದಿಸುತ್ತಿದೆ ಮತ್ತು ಅಲಂಕಾರಿಕ ಮೀನುಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ಇದು ಲಾಭದಾಯಕ ಎಂದು ಅವರು ಹೇಳಿದರು. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕರಾದ ಅರುಣ್ ಪ್ರಭಾ ಮಾತನಾಡಿ, ಸ್ಥಳೀಯ ಯುವಕರನ್ನು ಬೆಂಬಲಿಸಲು ಸ್ಮಾರ್ಚ್ ಸಿಟಿ ನಿಧಿಯನ್ನು ಬಳಸಿಕೊಂಡು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲಾಗಿದೆ ಮತ್ತು ಸುಮಾರು ೧೨ ಸಂದರ್ಭಾಧಾರಿತ ಮತ್ತು ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದ್ದು, ಯುವಕರು ಇದರ ಪ್ರಯೋಜನ ಪಡೆಯಬೇಕು ಎಂದರು. ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕ ಡಾ. ಎ.ಟಿ. ರಾಮಚಂದ್ರ ನಾಯಕ್ ಮಾತನಾಡಿ, ಮೂರು ವರ್ಷಗಳ ಹಿಂದೆ ಉದ್ಘಾಟಿಸಲಾದ ಈ ಕೇಂದ್ರವು ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು, ರೈತರು ಮತ್ತು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅಕ್ವಾಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್, ಮೀನಿನ ಮೌಲ್ಯವರ್ಧಿತ ಉತ್ಪನ್ನಗಳು, ಮೀನಿನ ತ್ಯಾಜ್ಯವನ್ನು ಬಳಸುವ ಗೊಬ್ಬರ, ದೋಣಿಗಳ ಯಾಂತ್ರೀಕರಣ ಇತ್ಯಾದಿಗಳ ಬಗ್ಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ ಎಂದರು. ಅಕ್ವೇರಿಯಂ ತಯಾರಿಕೆ, ನಿರ್ವಹಣೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಸಾಕಣೆ ವಿಷಯದಲ್ಲಿ ಕಾರ್ಯಕ್ರಮ ನಡೆಯಿತು.

ವಾರ್ತಾ ಭಾರತಿ 27 Nov 2025 7:10 pm

ಕಲಬುರಗಿ | ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಮನಿ ಅವರಿಗೆ 2025ರ ಕರ್ನಾಟಕ ಆರೋಗ್ಯ ಜ್ಯೋತಿ ಪ್ರಶಸ್ತಿ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕಿಟಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜ ದೊಡ್ಮನಿಯವರಿಗೆ ಅವರ ಅತ್ಯುನ್ನತ ಸೇವೆಯನ್ನು ಗುರುತಿಸಿ ಬೆಂಗಳೂರಿನ ರಾಘವಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಡಾ.ಅಂಬೇಡ್ಕರ್‌ ಭವನದಲ್ಲಿ 'ಆರೋಗ್ಯ ಜ್ಯೋತಿ ಅವಾರ್ಡ್‌ ಕರ್ನಾಟಕ-2025' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಚಾಮರಾಜ್ ದೊಡ್ಮನಿ ಅವರು ಕಳೆದ 20 ವರ್ಷಗಳಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಪರೂಪದ ಸೇವೆ, ಸಮರ್ಪಣೆ ಮತ್ತು ನವೀನ ಕಾರ್ಯಪದ್ದತಿಗಳ ಮೂಲಕ ರಾಜ್ಯದ ಆರೋಗ್ಯ ವ್ಯವಸ್ಥೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ  ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.   ಇವರು ಕಳೆದ ಎರಡು ದಶಕಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಫೈಲೇರಿಯಾ ಹಾಗೂ ಮಿದುಳು ಜ್ವರದಂತಹ ಅನೇಕ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮಟ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಇವರ  ತಜ್ಞತೆ, ಜಾಗೃತಿ ಮೂಡಿಸುವ ಕೌಶಲ್ಯಗಳ ಮೂಲಕ ಇವರು ಇಲಾಖೆಗೆ ದೊಡ್ಡಶಕ್ತಿಯಾಗಿದ್ದಾರೆ. ಹಾಗಾಗಿ ಅವರ ಅನುಪಮ ಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ರಾಘವಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.  

ವಾರ್ತಾ ಭಾರತಿ 27 Nov 2025 7:07 pm

ಪಾಕಿಸ್ತಾನ | ಇಮ್ರಾನ್ ಖಾನ್ ಎಲ್ಲಿದ್ದಾರೆ?: ಸಾವಿನ ವದಂತಿಗಳ ಕುರಿತು ಆಡಿಯಾಲ ಜೈಲಿನ ಅಧಿಕಾರಿಗಳು ಹೇಳಿದ್ದೇನು?

ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಹಬ್ಬಿರುವ ವದಂತಿಗಳನ್ನು ಬುಧವಾರ ಅಲ್ಲಗಳೆದಿರುವ ಆಡಿಯಾಲ ಜೈಲಿನ ಅಧಿಕಾರಿಗಳು ಇಮ್ರಾನ್ ಖಾನ್ ರನ್ನು ಆಡಿಯಾಲ ಜೈಲಿನಿಂದ ಸ್ಥಳಾಂತರಿಸಲಾಗಿದೆ ಹಾಗೂ ಆವರು ಆರೋಗ್ಯಕರವಾಗಿದ್ದು, ಅವರ ಸಾವಿನ ಕುರಿತು ಹರಡಿರುವ ವದಂತಿಗಳು ನಿರಾಧಾರ ಎಂದು ಸ್ಪಷ್ಟನೆ ನೀಡಿದೆ. “ಅವರು ಸಂಪೂರ್ಣ ಆರೋಗ್ಯವಾಗಿದ್ದು, ಅವರು ಪೂರ್ಣಪ್ರಮಾಣದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ” ಎಂದು ಆಡಿಯಾಲ ಜೈಲು ಸಿಬ್ಬಂದಿಗಳು ತಿಳಿಸಿದ್ದಾರೆ. ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಹಬ್ಬಿರುವ ವದಂತಿಗಳ ಕುರಿತು ಸರಕಾರ ಅಧಿಕೃತ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಫ್ ಪಕ್ಷ, ಇಮ್ರಾನ್ ಖಾನ್ ಹಾಗೂ ಅವರ ಕುಟುಂಬದ ಸದಸ್ಯರ ನಡುವೆ ತಕ್ಷಣವೇ ಸಭೆಯೊಂದನ್ನು ಏರ್ಪಡಿಸಬೇಕು ಎಂದೂ ಒತ್ತಾಯಿಸಿದೆ ಎಂದು Dawn ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ವಾರ ಆಡಿಯಾಲ ಜೈಲಿನ ಹೊರಗೆ ತಮ್ಮ ಮೇಲೆ ಹಾಗೂ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಇಮ್ರಾನ್ ಖಾನ್ ಸಹೋದರಿಯರು ಆಗ್ರಹಿಸಿದಾಗಿನಿಂದ, ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಊಹಾಪೋಹಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಆಡಿಯಾಲ ಜೈಲು ಆಡಳಿತದಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.

ವಾರ್ತಾ ಭಾರತಿ 27 Nov 2025 7:06 pm

Mangaluru | ಪ್ರಧಾನಿ ಆಗಮನ ಹಿನ್ನೆಲೆ: ಡ್ರೋನ್ ಹಾರಾಟ, ಬಳಕೆ ನಿಷೇಧ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಭದ್ರತೆಯ ಹಿತ ದೃಷ್ಟಿ, ಸಾರ್ವಜನಿಕ ಸುರಕ್ಷತೆಯ ನಿಟ್ಟಿನಲ್ಲಿ ನ.28ರ ಬೆಳಗ್ಗೆ 6ರಿಂದ ಸಂಜೆ 6ರ ತನಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ, ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 27 Nov 2025 7:04 pm

‘ಶಾಲೆಯ ಅಂಗಳದಲ್ಲಿ ತಾರಾಲಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

‘ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನ ಕೌತುಕ ಬಿತ್ತುವುದು ನಮ್ಮ ಗುರಿ’

ವಾರ್ತಾ ಭಾರತಿ 27 Nov 2025 7:03 pm

Vande Bharat Sleeper: 2026ಕ್ಕೆ ಬರಲಿರುವ ವಂದೇ ಭಾರತ್ ಸ್ಲೀಪರ್, ಅಮೃತ್ ಭಾರತ್ ರೈಲುಗಳ ಅಪ್ಡೇಟ್ಸ್ ಇಲ್ಲಿದೆ

Vande Bharat Sleeper Train: ಭಾರತದಲ್ಲಿ 2026ರಿಂದ ರೈಲು ಪ್ರಯಾಣ ಮತ್ತಷ್ಟು ಅಹ್ಲಾದಕರ ಮತ್ತು ಸಾಹಸಮಯ ಅನುಭವ ನೀಡಲಿದೆ. ದೇಶದಲ್ಲಿ ನಿತ್ಯ ಲಕ್ಷಾಂತರ ಜನರು ರೈಲು ಸಾರಿಗೆ ಅವಲಂಬಿಸಿದ್ದಾರೆ. ಪ್ರಯಾಣಿಕರಿಗಾಗಿ ಹೊಸ ಹೊಸ ಯೋಜನೆ, ಉಪಕ್ರಮ ತರುವ ಭಾರತೀಯ ರೈಲ್ವೆ (Indian Railways) ಇದೀಗ ವಿಶೇಷ ಹಾಗೂ ಐಶಾರಾಮಿ ಅನುಭವ ನೀಡುವ ಹಲವು ರೈಲುಗಳನ್ನು ಪರಿಚಯಿಸಲಿದೆ. ಯಾವೆಲ್ಲ

ಒನ್ ಇ೦ಡಿಯ 27 Nov 2025 6:54 pm

WPL 2026- ದೀಪ್ತಿ ಶರ್ಮಾ ಮರು ಖರೀದಿಗಾಗಿ ಯುಪಿ ವಾರಿಯರ್ಸ್ ದುಂಬಾಲು! ಯಾರೆಲ್ಲಾ ಆರ್ ಸಿಬಿ ಪಾಲು?

WPL 2026 Auction- ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜು ಗುರುವಾರ ದಿಲ್ಲಿಯಲ್ಲಿ ಪ್ರಾರಂಭ ಆಯಿತು. ಆಟಗಾರ್ತಿಯರನ್ನು ತಮ್ಮ ತಂಡಕ್ಕೆ ಸೆಳೆಯಲು ಎಲ್ಲಾ ಫ್ರಾಂಚೈಸಿಗಳು ಭಾರ ಪೈಪೋಟಿ ನಡೆಸಿದವು. ಮಹಿಳಾ ವಿಶ್ವಕಪ್ ನ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಭಾರತ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಉತ್ತರ ಪ್ರದೇಶ ವಾರಿಯರ್ಸ್ ಫ್ರಾಂಚೈಸಿಯು 3.2 ಕೋಟಿ ರೂ.ಗೆ RTM ಬಳಸಿ ಉಳಿಸಿಕೊಂಡಿತು. ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ರಾಧಾ ಯಾದವ್, ಜಾರ್ಜಿಯಾ ವೊಲ್, ನಾಡಿನ್ ಡಿ ಕ್ಲಾರ್ಕ್, ಲಿನ್ಸಿ ಸ್ಮಿತ್ ಅವರನ್ನು ಖರೀದಿಸಿದೆ.

ವಿಜಯ ಕರ್ನಾಟಕ 27 Nov 2025 6:45 pm

ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ವಿಜಯನಗರ(ಹೊಸಪೇಟೆ) : ಕಮಲಾಪುರದ ಹೆಚ್‌ಪಿಸಿ ಬಳಿ ಇರುವ ಪೋರ್‌ವೇ ಕಾಲುವೆ ನೀರಿನಲ್ಲಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದೃಡವಾದ ಮೈಕಟ್ಟು ಹೊಂದಿದ್ದಾರೆ. ಕಾಫಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ.   ಈ ಬಗ್ಗೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್‌ ಸಂಖ್ಯೆ 9480805700, ಜಿಲ್ಲಾ ಎಸ್.ಪಿ ಮೊಬೈಲ್‌ ಸಂಖ್ಯೆ 948805701, ಕಮಲಾಪುರ ಠಾಣೆ ಪಿಎಸ್‌ಐ ಮೊಬೈಲ್‌ ಸಂಖ್ಯೆ 9480805762 ಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.  

ವಾರ್ತಾ ಭಾರತಿ 27 Nov 2025 6:42 pm

WPL Auction: ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ, ಜನವರಿ ತಿಂಗಳಲ್ಲೇ ಕ್ರಿಕೆಟ್ ಹಬ್ಬ ಶುರು!

ಭಾರತ ಕ್ರಿಕೆಟ್ ಪಾಲಿಗೆ ಸ್ವರ್ಗವಾಗಿದ್ದು, ಭಾರತೀಯರು ಕ್ರಿಕೆಟ್ ಆಟವಾಗಿ ಮಾತ್ರವಲ್ಲ ಒಂದು ಧರ್ಮವಾಗಿ ಕೂಡ ಸ್ವೀಕಾರ ಮಾಡಿದ್ದಾರೆ. ಕ್ರಿಕೆಟ್ ಆಟಕ್ಕೆ ಪ್ರಾಣ ಬೇಕಾದರೂ ಕೊಡಲು ಸಿದ್ಧ ಇರುವ ಅಭಿಮಾನಿಗಳು ಸಿಗುವುದು ಭಾರತದಲ್ಲಿ ಮಾತ್ರ. ಹೀಗೆ ಕ್ರಿಕೆಟ್ ಆಟ ಭಾರತವನ್ನ ಭಾರಿ ಗಟ್ಟಿಯಾಗಿ ಆಕ್ರಮಿಸಿಕೊಂಡ ಕಾರಣಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಆದಾಯ ಕೂಡು ಬಿಸಿಸಿಐ ಪಾಲಿಗೆ ಹರಿದು ಬರುತ್ತಿದೆ.

ಒನ್ ಇ೦ಡಿಯ 27 Nov 2025 6:41 pm

ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ಮೂವರು ವಶಕ್ಕೆ; ಮಂಗಳೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಮೂವರನ್ನು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಬಿ.ಕೆ. ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ತನ್ನ ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು ಮತ್ತು ತನ್ನನ್ನು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಿಕೊಡಲು ಕೃಷ್ಣಮೂರ್ತಿ 50,000 ರೂ, ಬಿ.ಕೆ.ರಾಜು 10,000 ರೂ., ಎಸ್.ಧನಶೇಖರ 10,000 ರೂ. ಎಂಬವರು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯುಪಿಒಆರ್‌ನಲ್ಲಿ ಹೊರಗುತ್ತಿಗೆ ನೌಕರರಾಗಿರುವ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಕೃಷ್ಣಮೂರ್ತಿ 20,000 ರೂ., ಧನಶೇಖರ ಮತ್ತು ಬಿ.ಕೆ. ರಾಜು ತಲಾ 5,000 ರೂ. ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಂತೆ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್., ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 27 Nov 2025 6:41 pm

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ | ಕರಡು ಮತದಾರರ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಅವಕಾಶ

ವಿಜಯನಗರ(ಹೊಸಪೇಟೆ) : ಭಾರತೀಯ ಚುನಾವಣಾ ಆಯೋಗ ಸೆಪ್ಟಂಬರ್ 12ರ ವೇಳಾಪಟ್ಟಿಗೆ ಅನುಗುಣವಾಗಿ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ ಎಂದು  ಜಿಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಮತದಾರ ನೋಂದಾಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ಕರಡು ಮತದಾರರ ಪಟ್ಟಿಯ ಭೌತಿಕ ಪ್ರತಿಯು ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಹಾಗೂ ತಹಶೀಲ್ದಾರರ ಕಚೇರಿಯಲ್ಲಿ ಲಭ್ಯವಿದ್ದು ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ. ಸರಕಾರದ  ಅಧಿಕೃತ ಅಂರ್ತಜಾಲದಲ್ಲಿಯೂ ಕೂಡ ಮಾಹಿತಿ ಲಭ್ಯವಿದೆ.  ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಮತದಾರರು ಲಿಖಿತವಾಗಿ ಆಯಾ ತಾಲೂಕು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ.   ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಅರ್ಹ ಮತದಾರರು ಅವಶ್ಯಕ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಕವಿತಾ ಎಸ್.ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 27 Nov 2025 6:32 pm

ಮಣಿಪಾಲ | ಗ್ಯಾಸ್ ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಹೊಟೇಲ್!

ಮಣಿಪಾಲ: ಮಣಿಪಾಲ ಆರ್‌ಎಸ್‌ಬಿ ಸಭಾಭವನದ ಸಮೀಪದ ಕಟ್ಟಡದಲ್ಲಿರುವ ಹೊಟೇಲೊಂದರಲ್ಲಿ ಇಂದು ಸಂಜೆ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಇಡೀ ಹೊಟೇಲ್ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ. ಡೆಲ್ಲಿ ಡಾಬಾ ಎಂಬ ಹೊಟೇಲಿನ ಒಂದು ಗ್ಯಾಸ್ ಸಿಲಿಂಡರ್ ಅಕಸ್ಮಿಕವಾಗಿ ಸ್ಪೋಟಗೊಂಡಿತ್ತೆನ್ನಲಾಗಿದೆ. ಇದರಿಂದ ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಕ್ಷಣ ಮಾತ್ರದಲ್ಲೇ ಬೆಂಕಿ ಕೆನ್ನಾಲಿಗೆ ಇಡೀ ಹೊಟೇಲ್ ವಿಸ್ತರಿಸಿತು. ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಇನ್ನೆರೆಡು ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಳ್ಳದಂತೆ ತಡೆದರು ಎಂದು ತಿಳಿದುಬಂದಿದೆ. ಇದರಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.          

ವಾರ್ತಾ ಭಾರತಿ 27 Nov 2025 6:26 pm

ರಾಜಕೀಯ ಅಖಾಡಕ್ಕಿಳಿದ ಧಾರ್ಮಿಕ ನಾಯಕರು: ಕರ್ನಾಟಕದ ಇತಿಹಾಸದಲ್ಲಿ ಹಾಸುಹೊಕ್ಕಾದ ಪರಂಪರೆ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಲೇಖಕ ಗಿರೀಶ್ ಲಿಂಗಣ್ಣ ವಿಶ್ಲೇಷಣೆ ನಡೆಸಿದ್ದು, ಕರ್ನಾಟಕದಲ್ಲಿ ರಾಜಕಾರಣ ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿನ ನಂಟು ಹೊಸದೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ನಡೆಯುತ್ತಿರುವಾಗ, ಒಕ್ಕಲಿಗರ ಪ್ರಭಾವಿ ಮಠದ ಶ್ರೀಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದು ರಾಜಕೀಯ ಪಕ್ಷಗಳು ಸಮುದಾಯದ ಬೆಂಬಲಕ್ಕಾಗಿ ಮಠಗಳನ್ನು ಆಶ್ರಯಿಸುವ ರಾಜ್ಯದ ರಾಜಕೀಯ ಸಂಸ್ಕೃತಿಯ ಮುಂದುವರಿದ ಭಾಗವಾಗಿದೆ . ಬಿಎಸ್‌ವೈ ಅವರಿಗೂ ಹಲವರು ಧಾರ್ಮಿಕ ಮುಖಂಡರು ಬೆಂಬಲಿಸಿದ್ದರು ಎಂದು ಲೇಖನದಲ್ಲಿ ವಿವರಿಸಲಾಗಿದೆ.

ವಿಜಯ ಕರ್ನಾಟಕ 27 Nov 2025 6:11 pm

ಕ್ಯಾಲಿಕಟ್ ವಿವಿಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯೇ ಪುನರಾವರ್ತನೆ!

ಕೋಝಿಕ್ಕೋಡ್ (ಕೇರಳ): ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಮಲ್ಟಿ ಡಿಸಿಪ್ಲಿನರಿ ಕೋರ್ಸ್ (ಎಂಡಿಸಿ) ಪದವಿಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯೇ ಪುನರಾವರ್ತನೆಯಾದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತು ವಿದ್ಯಾರ್ಥಿ–ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೊಳಗಾಗಿದೆ. ನ.25ರಂದು ನಡೆದ ಎಂಡಿಸಿ ಸೈಕಾಲಜಿಯ ಮೊದಲ ಸೆಮಿಸ್ಟರ್ ನ ‘ಆರ್ಟ್ ಆಫ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್’ ಪರೀಕ್ಷೆಯಲ್ಲಿ ಬಳಸಲಾದ ಪ್ರಶ್ನೆ ಪತ್ರಿಕೆ, ಕಳೆದ ವರ್ಷದ ಪ್ರಶ್ನೆಗಳನ್ನೇ ಮತ್ತೆ ನೀಡಿದ್ದಾಗಿ ಪರೀಕ್ಷಾ ನಿಯಂತ್ರಣ ಕಚೇರಿ ಗುರುವಾರ ದೃಢಪಡಿಸಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುನರಾವರ್ತನೆಯನ್ನು ಗಮನಕ್ಕೆ ತಂದ ನಂತರ ಈ ವಿಚಾರ ಅಧಿಕೃತವಾಗಿ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ. ಹೊಸ ಪರೀಕ್ಷೆ ನಡೆಸಬೇಕೇ ಅಥವಾ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಧ್ಯಯನ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಹೇಳಿಕೆಯ ಪ್ರಕಾರ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವೇಳೆ ಶಿಕ್ಷಕರು ಸಾಮಾನ್ಯವಾಗಿ ಮೂರು ಸೆಟ್‌ಗಳನ್ನು ಸಲ್ಲಿಸುತ್ತಾರೆ. ಆದರೆ ಈ ಬಾರಿ ಸಲ್ಲಿಸಲಾದ ಸೆಟ್‌ಗಳಲ್ಲಿ ಒಂದು ಕಳೆದ ವರ್ಷದ ನಕಲು ಆಗಿದ್ದು, ಕ್ರಾಸ್-ಚೆಕಿಂಗ್ ಪ್ರಕ್ರಿಯೆಯಲ್ಲಿ ಇದು ಪತ್ತೆಯಾಗದೇ ಉಳಿದಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ಇಂದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 27 Nov 2025 5:49 pm

ಮಹಿಳಾ ಸಮೃದ್ಧಿ ಯೋಜನೆ: ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 1.40 ಲಕ್ಷ ರೂ.ವರೆಗೆ ಕಡಿಮೆ ಬಡ್ಡಿ ಸಾಲ; ಅರ್ಜಿ ಸಲ್ಲಿಕೆ ಹೇಗೆ?

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳಾ ಸಮೃದ್ಧಿ ಯೋಜನೆಯು ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಸಮಾಜದ ಮುಖ್ಯವಾಹಿನಿಗೆ ಬರಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಯೋಜನೆಯು ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಒದಗಿಸಿ, ಸ್ವಯಂ ಉದ್ಯೋಗ ಮತ್ತು ಆದಾಯ-ಉತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುತ್ತದೆ. ಈ ಹಿನ್ನೆಲೆಯಲ್ಲಿ ಏನಿದು ಮಹಿಳಾ ಸಮೃದ್ಧಿ ಯೋಜನೆ? ಈ ಯೋಜನೆಯಡಿ ದೊರೆಯುವ ಸಹಾಯಧನ ಎಷ್ಟು? ಪ್ರಯೋಜನಗಳು ಏನೇನು ಎಂಬುದನ್ನು ತಿಳಿಯೋಣ.

ವಿಜಯ ಕರ್ನಾಟಕ 27 Nov 2025 5:39 pm

ಮಂಗಳೂರು | ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಪುನರಾಯ್ಕೆ

ಮಂಗಳೂರು, ನ.27: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ)ದ 29ನೇ ವಾರ್ಷಿಕ ಮಹಾಸಭೆಯು ಮಂಗಳವಾರ ನಗರದ ಬಂಟ್ಸ್ ಹಾಸ್ಟೆಲ್ ಬಳಿಯಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಶ್ರೀ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆಯಿತು. ಚುನಾವಣಾಧಿಕಾರಿ ಪೃಥ್ವಿರಾಜ್ ರೈ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿಯಾಗಿ ಉಳ್ಳೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ್ ಡಿ.ಶೆಟ್ಟಿ ರಂಗೋಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕರಾಗಿ ಕೊಲ್ಲಾಡಿ ಬಾಲಕೃಷ್ಣ ರೈ ಆಯ್ಕೆಗೊಂಡರು. ಐಕಳ ಹರೀಶ್ ಶೆಟ್ಟಿ ಅವರನ್ನು ಗುರುದೇವಾನಂದ ಸ್ವಾಮೀಜಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್, ದುಬೈ ಯುಎಇ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಬಂಟರ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಅಶೋಕ್ ಶೆಟ್ಟಿ ಬಿಲ್ಲಾಡಿ, ಶಶಿಧರ್ ಶೆಟ್ಟಿ ಇನ್ನಂಜೆ, ಅಜಿತ್ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪೃಥ್ವಿರಾಜ್ ರೈ, ಎ.ಸಿ. ಭಂಡಾರಿ, ಸುಧಾಕರ್ ಎಸ್. ಪೂಂಜ, ಮಂಜು ಕೊಡ್ಲಾಡಿ, ಆನಂದ್ ಶೆಟ್ಟಿ, ನಾಗೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರಾಜೀವ್ ಭಂಡಾರಿ, ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ, ರಾಜೇಶ್ವರಿ ಡಿ.ಶೆಟ್ಟಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 27 Nov 2025 5:35 pm

ಬೆಂಗಳೂರಿನಲ್ಲಿ ನೀರಿನ ಬಿಲ್ ಬಾಕಿ ಇಟ್ಟ ಗ್ರಾಹಕರಿಗೆ ಒನ್ ಟೈಂ ಪಾವತಿಗೆ ಅವಕಾಶ: ದಂಡ, ಇತರೆ ಶುಲ್ಕ 100% ಮನ್ನಾ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಇನ್ನು ಮುಂದೆ ನೀರಿನ ಬಾಕಿ ಅಸಲು ಮೊತ್ತವನ್ನು ಒಂದೇ ಬಾರಿ ಪಾವತಿಸಿದರೆ ಬಡ್ಡಿ ಮತ್ತು ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡುವ 'ಏಕಕಾಲಿಕ ತೀರುವಳಿ ಯೋಜನೆ'ಗೆ ಸಂಪುಟ ಒಪ್ಪಿಗೆ ಸೂಚಿಸಿದೆ.ಬೆಂಗಳೂರು ಘನತ್ಯಾಜ್ಯ ನಿರ್ವಹಣೆ, ಉತ್ತರ ಕನ್ನಡದಲ್ಲಿ ಶರಾವತಿ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ಇನ್ಯಾವ ವಿಚಾರದ ಬಗ್ಗೆ ಚರ್ಚೆ ಮಾಡಿದರು ಎಂಬುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ

ವಿಜಯ ಕರ್ನಾಟಕ 27 Nov 2025 5:34 pm

WPL 2026- ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ; ಎಲ್ಲೆಲ್ಲಿ ಪಂದ್ಯ? ಯಾವಾಗಿಂದ?

Womens Premier League 2026- ಮಹಿಳಾ ಪ್ರೀಮಿಯರ್ ಲೀಗ್ (WPL)ನ ಹರಾಜು ಪ್ರಕ್ರಿಯೆ ಭಾರೀ ಪೈಪೋಟಿಯಲ್ಲಿ ನಡೆಯುತ್ತಿರುವ ವೇಳೆಯಲ್ಲೇ 4ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. 2026ರ ಜನವರಿ 9 ರಿಂದ ಫೆಬ್ರವರಿ 5ರವರೆಗೆ ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣ ಮತ್ತು ವಡೋದರಾಗಳಲ್ಲಿ ಅಷ್ಟೂ ಪಂದ್ಯಗಳು ನಡೆಯಲಿದೆ. ಈ ಬಾರಿ ಸಹ 'ಕ್ಯಾರವನ್ ಮಾದರಿ'ಯಲ್ಲಿ ಪಂದ್ಯಗಳು ನಡೆಯಲಿದ್ದು, ನವಿ ಮುಂಬೈನಲ್ಲಿ ಫೈನಲ್ ಪಂದ್ಯ ಆಯೋಜನೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯ ಕರ್ನಾಟಕ 27 Nov 2025 5:29 pm

ಮುಂಬೈನ ಶೇ.10.64ರಷ್ಟು ಮತದಾರರು ಒಂದಕ್ಕಿಂತ ಹೆಚ್ಚು ನೋಂದಣಿಗಳನ್ನು ಹೊಂದಿದ್ದಾರೆ : ಎಸ್‌ಇಸಿ ದತ್ತಾಂಶ

ಮುಂಬೈ,ನ.27: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಹಂಚಿಕೊಂಡಿರುವ ದತ್ತಾಂಶಗಳ ಪ್ರಕಾರ ಮುಂಬೈನ 1.03 ಕೋಟಿ ಮತದಾರರ ಪೈಕಿ ಸುಮಾರು ಶೇ.10.64ರಷ್ಟು ಅಥವಾ 11 ಲಕ್ಷಕ್ಕೂ ಅಧಿಕ ಜನರು ಮತದಾರರ ಪಟ್ಟಿಗಳಲ್ಲಿ ಬಹು ನೋಂದಣಿಗಳನ್ನು ಹೊಂದಿದ್ದಾರೆ. ಇಂತಹ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಹೆಚ್ಚಿನ ವಾರ್ಡ್‌ಗಳನ್ನು ಈ ಹಿಂದೆ ವಿರೋಧ ಪಕ್ಷಗಳ ಕಾರ್ಪೊರೇಟರ್‌ ಗಳು ಪ್ರತಿನಿಧಿಸಿದ್ದರು ಎಂದು ದತ್ತಾಂಶಗಳು ತೋರಿಸಿವೆ. ಎಸ್‌ಇಸಿ ಬುಧವಾರ ಆಕ್ಷೇಪಣೆಗಳನ್ನು ಸಲ್ಲಿಸಲು ಗಡುವನ್ನು ನ.27ರಿಂದ ಡಿ.3ರವರೆಗೆ ವಿಸ್ತರಿಸಿದೆ. ಅಂತಿಮ ಮತದಾರರ ಪಟ್ಟಿಗಳನ್ನು ಡಿ.10ರಂದು ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ. ಕಳೆದ ವಾರ ಪ್ರಕಟಗೊಂಡ ಕರಡು ಮತದಾರರ ಪಟ್ಟಿಗಳಲ್ಲಿ 4.33 ಲಕ್ಷ ಮತದಾರರು ಒಂದಕ್ಕಿಂತ ಹೆಚ್ಚು ಸಲ ಕಾಣಿಸಿಕೊಂಡಿದ್ದಾರೆ. ಈ ಮತದಾರರು ಎರಡರಿಂದ 103 ಸಲದವರೆಗೆ ನೋಂದಣಿಗಳನ್ನು ಹೊಂದಿರುವುದು ಕಂಡು ಬಂದಿದೆ. ಇಂತಹ ಬಹು ನೋಂದಣಿಗಳ ಸಂಖ್ಯೆ 11,01,505ರಷ್ಟಿದೆ. ಮುದ್ರಣ ದೋಷಗಳು, ಮತದಾರರ ಸ್ಥಳಾಂತರ ಮತ್ತು ಮೃತ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕುವಲ್ಲಿ ವೈಫಲ್ಯದಂತಹ ಅಂಶಗಳು ಮತದಾರರ ಹೆಸರುಗಳ ಪುನರಾವರ್ತನೆಗೆ ಕಾರಣವಾಗಿವೆ ಎಂದು ಎಸ್‌ಇಸಿ ಹೇಳಿದೆ. ಬೂತ್ ಮಟ್ಟದ ಕಾರ್ಯಕರ್ತರು ಈಗ ಕ್ಷೇತ್ರಗಳಿಗೆ ಭೇಟಿ ನೀಡಿ ಫಾರಂಗಳನ್ನು ಭರ್ತಿ ಮಾಡುತ್ತಿದ್ದಾರೆ ಹಾಗೂ ಪ್ರತಿ ಮತದಾರರು ಒಂದೇ ಬಾರಿ ನೋಂದಣಿ ಮಾಡಲ್ಪಟ್ಟಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಪರಿಶೀಲನೆಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಜ.31, 2026ರೊಳಗೆ ಮುಗಿಯಬೇಕಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ಕೊಂಚ ವಿಳಂಬಗೊಳ್ಳಬಹುದು ಎಂದು ಎಸ್‌ಇಸಿ ಅಧಿಕಾರಿಯೋರ್ವರು ಸುಳಿವು ನೀಡಿದರು. ಹೆಚ್ಚಿನ ಸಂಖ್ಯೆಯ ಬಹುನೋಂದಣಿ ಮತದಾರರನ್ನು ಹೊಂದಿರುವ ಐದು ವಾರ್ಡ್‌ಗಳ ಪೈಕಿ ನಾಲ್ಕನ್ನು ಈ ಹಿಂದೆ ಶಿವಸೇನೆ(ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ)ಯಂತಹ ಪ್ರತಿಪಕ್ಷಗಳ ಕಾರ್ಪೊರೇಟರ್‌ಗಳು ಪ್ರತಿನಿಧಿಸಿದ್ದರು. ಈ ಪೈಕಿ ಎರಡು ವಾರ್ಡ್‌ಗಳು ಶಿವಸೇನೆ(ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಪ್ರತಿನಿಧಿಸುತ್ತಿರುವ ವರ್ಲಿ ವಿಧಾನಸಭಾ ವ್ಯಾಪ್ತಿಯಲ್ಲಿವೆ ಎನ್ನುವುದನ್ನು ಎಸ್‌ಇಸಿ ದತ್ತಾಂಶಗಳು ತೋರಿಸಿವೆ. ಈ ನಡುವೆ, ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 27 Nov 2025 5:14 pm

Explained: ಸೂರ್ಯಾಸ್ತದ ನಂತರ ನಿಗೂಢ ವಿಕಿರಣ ಹೊರಸೂಸುತ್ತಿದೆ ಭೂಮಿ; ಬ್ರಹ್ಮಾಂಡದ ಮೌನ ಸಂದೇಶದ ರೋಚಕ ಸತ್ಯ

ನಮ್ಮ ವಿಶಾಲ ಬ್ರಹ್ಮಾಂಡದೊಂದಿಗೆ ಭೂಮಿಯು ನಿರಂತರವಾಗಿ ಸಂವಹನ ನಡೆಸುತ್ತಿರುತ್ತದೆ. ಈ ಮೌನ ಸ್ವರೂಪದ ಸಂವಹನ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು, ಈ ರಹಸ್ಯಗಳನ್ನು ಬಿಡಿಸಲು ನಮ್ಮ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಪಡುತ್ತಲೇ ಇದ್ದಾರೆ. ಇಂತದ್ದೇ ಒಂದು ರೋಚಕಜ ರಹಸ್ಯವನ್ನು ಇದೀಗ ವಿಜ್ಞಾನಿಗಳು ಭೇದಿಸಿದ್ದು, ಸೂರ್ಯಾಸ್ತದ ಬಳಿಕ ನಮ್ಮ ಭೂ ಮೇಲ್ಮೈ ವಾತಾವರಣದಲ್ಲಿ ಗೋಚರವಾಗುವ ಹೊಸ ರೀತಿಯ ವಿಕಿರಣವನ್ನು ಪತ್ತೆಹಚ್ಚಿದ್ದಾರೆ. ಈ ಆವಿಷ್ಕಾರವು ಭೂಮಿಯ ಬಗೆಗಿನ ಮಾನವ ಜ್ಞಾನವನ್ನು ವೃದ್ಧಿಸಿದ್ದು, ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 27 Nov 2025 5:02 pm

ʻಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲʼ: ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕ ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯೇ ಮಾಡಿಲ್ಲ. ಅಧಿಕಾರ ಹಂಚಿಕೆ ಸೂತ್ರವೇ ರಚಿಸಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಬದಲಾವಣೆ ವಿಚಾರಕ್ಕೆ ರಾಜ್ಯದಲ್ಲಾಗುತ್ತಿರುವ ಚರ್ಚೆಗೆ ವಿರಾಮ ಕೊಡುವ ಯತ್ನವನ್ನು ಮಾಡಿದ್ದಾರೆ. ಸಿಎಂ ಆಯ್ಕೆ ವಿಚಾರ ಪಕ್ಷದ ಆಂತರಿಕ ಸಂಗತಿಯಾಗಿದ್ದು, ಈ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ ಆದಿಚುಂಚನಗಿರಿ ಶ್ರೀಗಳ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ವಿಜಯ ಕರ್ನಾಟಕ 27 Nov 2025 4:59 pm

ದೇರಳಕಟ್ಟೆ | ಸರಕಾರಿ ಉದ್ಯೋಗದಿಂದ ಸಮುದಾಯ ನಿರಾಸಕ್ತಿ: ನಾಸೀರ್

ದೇರಳಕಟ್ಟೆ,ನ.27:ಮುಸ್ಲಿಂ ಸಮುದಾಯದ ಯುವಕರು ಸರಕಾರಿ ಕೆಲಸದ ಬಗ್ಗೆ ನಿರಾಸಕ್ತಿ ಹೊಂದಿದ ಕಾರಣ ಸರಕಾರಿ ಉದ್ಯೋಗಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಜೀವನದಲ್ಲೇ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಜಮೀಯತುಲ್ ಫಲಾಹ್ ದ.ಕ.ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ. ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಅಲ್ ಸಲಾಮ ವತಿಯಿಂದ ನಡೆದ ಸರಕಾರಿ ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಮೀಯತುಲ್ ಫಲಾಹ್ ಉಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಮೇಲ್ತೆನೆ ಅಧ್ಯಕ್ಷ ವಿ.ಇಬ್ರಾಹಿಂ ನಡುಪದವು ಮಾತನಾಡಿದರು. ಈ ಸಂದರ್ಭ ಶೈಕ್ಷಣಿಕ ಸಾಧನೆಗಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿನಿ ಆಶುರಾ ಅಳಿಕೆ ಅವರನ್ನು ಅಭಿನಂದಿಸಲಾಯಿತು. ಅಭಿ ಗೌಡ ಬೆಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಸಂಸ್ಥೆಯ ಸಂಸ್ಥಾಪಕ ಇಕ್ಬಾಲ್ ಬಾಳಿಲ, ಕರ್ನಾಟಕ ಮುಸ್ಲಿಂ ಭಾಂದವ್ಯ ವೇದಿಕೆ ಅಧ್ಯಕ್ಷ ಝಾಕಿರ್ ಹುಸೈನ್, ಪತ್ರಕರ್ತ ಅನ್ಸಾರ್ ಇನೋಳಿ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ನಝೀರ್ ಬೆಳುವಾಯಿ, ನಿಸಾರ್ ಬೆಂಗಳೂರು ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಶೇಖ್‌ ಮುಹಮ್ಮದ್ ಇರ್ಫಾನಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 27 Nov 2025 4:47 pm

ಎಂ.ಎ ಖಾದರ್ ಹಿತ್ತಿಲು

ಮಂಗಳೂರು,ನ.27: ನಗರ ಹೊರವಲಯದ ಮಲ್ಲೂರು ನಿವಾಸಿಯಾಗಿದ್ದ ಸಮಾಜ ಸೇವಕ, ಎಂ.ಎ ಖಾದರ್ ಹಿತ್ತಿಲು (75) ಅಲ್ಪಕಾಲದ ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ. ಪ್ರಸಕ್ತ ಅತ್ತಾವರದಲ್ಲಿ ವಾಸವಾಗಿದ್ದ ಖಾದರ್ ಮಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಖಾದರ್ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಸಜ್ಜನ, ಸಹೃದಯಿ, ಉತ್ತಮ ವ್ಯಕ್ತಿತ್ವದ ಮೃದು ಸ್ವಭಾವಿಯಾಗಿದ್ದರು. ಮಲ್ಲೂರು ದೆಮ್ಮೆಲೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿದ್ದರಲ್ಲದೆ ಹಲವಾರು ಸಂಘ ಸಂಸ್ಥೆಗಳ ಮುಂಚೂಣಿ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಖಾದರ್ ಹಿತ್ತಿಲು ಅವರ ನಿಧನಕ್ಕೆ ಮಂಗಳೂರು ತಾಪಂ ಮಾಜಿ ಸದಸ್ಯ ಎನ್.ಇ. ಮುಹಮ್ಮದ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಂ.ಡಿ.ಅಬ್ದುಲ್ ರಹಿಮಾನ್, ಎನ್.ಎ. ಸತ್ತಾರ್ ಮಲ್ಲೂರು, ಡಿಸಿಸಿ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.

ವಾರ್ತಾ ಭಾರತಿ 27 Nov 2025 4:45 pm

Hong Kong: ಅಪಾರ್ಟ್‌ಮೆಂಟ್ ಬೆಂಕಿಗೆ ದಿಢೀರ್ 300 ಜನ ಬಲಿ?

ಮನುಷ್ಯರು ಎಷ್ಟು ಅಭಿವೃದ್ಧಿ ಹೊಂದಿದರೆ ಏನು, ಕೆಲವು ಸಂದರ್ಭದಲ್ಲಿ ಜೀವವನ್ನ ಉಳಿಸಿಕೊಳ್ಳುವುದು ಇನ್ನೂ ಕಲಿಯಲು ಆಗಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನವು ಅಭಿವೃದ್ಧಿ ಆಗಿದ್ದರೂ, ಆಧುನಿಕತೆ ಇದ್ದರೂ ಪದೇ ಪದೇ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಇದೇ ರೀತಿ ಇಲ್ಲೊಂದು ದೇಶ ಭೀಕರ ಅಗ್ನಿ ದುರಂತಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಜೀವ ಬಲಿ ನೀಡಬೇಕಾದ ಪರಿಸ್ಥಿತಿ ಬಂದಿದೆ. ಹತ್ತಾರು ಮಹಡಿ ಇರುವ

ಒನ್ ಇ೦ಡಿಯ 27 Nov 2025 4:40 pm

ಕೆಆರ್‌ಐಡಿಎಲ್ ಇಂಜಿನಿಯರ್‌ಗೆ ನಿಂದನೆ ಆರೋಪ : ಸಚಿವ ಎನ್ ಎಸ್ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು

ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಇತ್ತೀಚೆಗೆ ರಸ್ತೆ ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಕೆಆರ್‌ಐಡಿಎಲ್ ಇಂಜಿನಿಯರ್ ಗೆ ಸಚಿವ ಎನ್ ಎಸ್ ಬೋಸರಾಜು ಸಾರ್ವಜನಿಕವಾಗಿ ನಿಂದಿಸಿ ತರಾಟೆಗೆ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎನ್.ಎಸ್.ಬೋಸರಾಜ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಎಂಬವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಒಂದು ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಕುರಿತಂತೆ ಸಿರವಾರದಲ್ಲಿ ಕೆಆರ್‌ಐಡಿಎಲ್ ಇಂಜಿನಿಯರ್ ಹನುಮಂತ ರಾಯ್‌ ಎಂಬವರಿಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಒದೆಯುವುದಾಗಿ ಬೆದರಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲಸ ವಿಳಂಬವಾಗಿರುವ ಮಾಹಿತಿ ಪಡೆಯುವುದು, ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಸಚಿವರ ಜವಬ್ದಾರಿಯಾಗಿದೆ. ಅದರೆ ಸಾರ್ವಜನಿಕರ ಸಮ್ಮುಖದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಅವಾಚ್ಯವಾಗಿ ನಿಂದಿಸಿರುವುದು ಅಧಿಕಾರದ ದುರುಪಯೋಗ. ಸಂವಿಧಾನದ 14, 21, 311 ಹಾಗೂ ಬಿಎನ್‌ಎಸ್ ಸೆಕ್ಷನ್ 351-352 ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.   ಈ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಚಿವ ಸ್ಥಾನದಲ್ಲಿರುವವರು ಜನರ ಮಧ್ಯೆ ಅಧಿಕಾರಿಗಳಿಗೆ ಬೆದರಿಸಿ ಭಯ ಉಂಟು ಮಾಡುವುದು ಅಪರಾಧವಾಗಿದ್ದು ಕೂಡಲೇ ಕ್ರಮಕ್ಕೆ ಸೂಚಿಸಬೇಕೆಂದು ದೂರಿನಲ್ಲಿ ದಿನೇಶ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 27 Nov 2025 4:39 pm

ಸ್ಮೃತಿ ಮಂದಾನಗಾಗಿ WBBL ತ್ಯಾಗ ಮಾಡಿದ ಗೆಳತಿ ಜೆಮಿಮಾ ರೋಡ್ರಿಗಸ್; ಸಣ್ಣ ತಕರಾರೂ ತೆಗೆಯದ ಬ್ರಿಸ್ಬೇನ್ ಹೀಟ್ಸ್!

Jemimah Rodrigues Big Decision- ಆರ್ ಸಿಬಿ ನಾಯಕಿಯೂ ಆಗಿರುವ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರ ತಂದೆಯ ಅನಾರೋಗ್ಯದಿಂದಾಗಿ ಅವರ ವಿವಾಹ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರ್ತಿಯರು ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಅವರ ಆತ್ಮೀಯ ಗೆಳತಿ ಹಾಗೂ ಸಹ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರಂತೂ ಮಹತ್ವದ ಮಹಿಳಾ ಬಿಗ್ ಬ್ಯಾಶ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸ್ಮೃತಿ ಅವರಿಗೆ ಮಾನಸಿಕ ಬೆಂಬಲ ನೀಡುವ ಸಲುವಾಗಿ ಜೆಮಿಮಾ ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ವಿಜಯ ಕರ್ನಾಟಕ 27 Nov 2025 4:37 pm

19 ಲಕ್ಷಕ್ಕೆ 5 ಸೀಟರ್ ಕಾರ್ ಬದಲಿಗೆ ಈ 7 ಸೀಟರ್ SUV ಸಿಗುತ್ತೆ! ದೊಡ್ಡ ಫ್ಯಾಮಿಲಿ ಕಾರ್ ಸೆಗ್ಮೆಂಟ್ ನಲ್ಲಿ ಮಹಿಂದ್ರಾ ಹೊಸ ಸಂಚಲನ

ಮಹೀಂದ್ರದ ಬಹುನಿರೀಕ್ಷಿತ XEV 9S ಮೂರು ಸಾಲಿನ ಎಲೆಕ್ಟ್ರಿಕ್ SUV ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 19.95 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಡಿಸೆಂಬರ್ 5, 2025 ರಿಂದ ಟೆಸ್ಟ್ ಡ್ರೈವ್ ಲಭ್ಯವಿದ್ದು, ಜನವರಿ 14, 2026 ರಿಂದ ಬುಕಿಂಗ್ ಆರಂಭವಾಗಲಿದೆ. ಜನವರಿ 23, 2026 ರಿಂದ ಡೆಲಿವರಿ ಪ್ರಾರಂಭವಾಗಲಿದೆ. ಇದು 500 ಕಿಲೋಮೀಟರ್ ವರೆಗಿನ ರೇಂಜ್ ನೀಡುತ್ತದೆ.

ವಿಜಯ ಕರ್ನಾಟಕ 27 Nov 2025 4:20 pm

ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಯ ವೇಳಾಪಟ್ಟಿಯಲ್ಲಿ ವ್ಯತ್ಯಯ; ಏನೆಲ್ಲಾ ಬದಲಾವಣೆ?

ಪ್ರಧಾನಿ ಮೋದಿಯವರು ಶುಕ್ರವಾರ ಉಡುಪಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. 40 ನಿಮಿಷ ಮುಂಚೆ ಉಡುಪಿಗೆ ಭೇಟಿ ನೀಡಲಿದ್ದಾರೆ. ಮಠಕ್ಕೆ ತೆರಳುವ ಮುನ್ನ ಅವರು ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಲ್ಲಿ ರೋಡ್‌ ಶೋ ಇರಲಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿಜಯ ಕರ್ನಾಟಕ 27 Nov 2025 4:18 pm

ರಷ್ಯಾ-ಅಮೆರಿಕ ಅಧಿಕಾರಿಗಳ ಶಾಂತಿ ಮಾತುಕತೆ ಆಡಿಯೋ ಲೀಕ್‌; ಡೊನಾಲ್ಡ್‌ ಟ್ರಂಪ್‌ ತಲೆಕೆಡಿಸಿದ ಹೊಸ ಕಿರಿಕ್!‌

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, 28 ಅಂಶಗಳ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿದೆ. ಈ ನಡುವೆ, ಅಮೆರಿಕಾ ರಾಯಭಾರಿ ಸ್ಟೀವ್ ವಿಟ್ಕಾಫ್ ರಷ್ಯಾದ ನೀತಿ ಸಲಹೆಗಾರರಿಗೆ ಟ್ರಂಪ್‌ಗೆ ಒಪ್ಪಂದ ಮಂಡಿಸುವ ಬಗ್ಗೆ ನೀಡಿದ ತರಬೇತಿಯ ಆಡಿಯೋ ಲೀಕ್ ಆಗಿದ್ದು, ಇದು ವಿವಾದ ಸೃಷ್ಟಿಸಿದೆ. ಈ ಆಡಿಯೋ ಲೀಕ್‌ ಕುರಿತು ಉಭಯ ದೇಶಗಳು ಖಂಡನೆ ವ್ಯಕ್ತಪಡಿಸಿದ್ದು, ರಷ್ಯಾ ಈ ಕೃತ್ಯವನ್ನು ಹೈಬ್ರಿಡ್ ಯುದ್ಧ ಎಂದು ಕರೆದಿದೆ. ಇನ್ನು, ಈ ಮಧ್ಯೆ ಯಾರು ಈ ಆಡಿಯೋ ಸೋರಿಕೆ ಮಾಡಿರಬಹುದು ಎಂದು ಹಲವರ ಅನುಮಾನಗಳು ಮೂಡಿವೆ.

ವಿಜಯ ಕರ್ನಾಟಕ 27 Nov 2025 4:17 pm

ಉಡುಪಿ | ಪ್ರಧಾನಿ ಭೇಟಿ ಸಮಯದಲ್ಲಿ ಬದಲಾವಣೆ : 40 ನಿಮಿಷ ಮುಂಚಿತವಾಗಿ ಆಗಮಿಸಲಿರುವ ಮೋದಿ

ಉಡುಪಿ, ನ.27: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11.35ಕ್ಕೆ ಬಂದು ಇಳಿದು, 12ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಗ್ಗೆ 11ಗಂಟೆಗೆ ಆದಿಉಡುಪಿಗೆ ಆಗಮಿಸಿ 11ಗಂಟೆಯಿಂದ 11.30ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಠದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1ಗಂಟೆಗೆ ಹೊರಡಲಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಪೊಲೀಸರಿಂದ ರಿಹರ್ಸಲ್ : ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸರು ಇಂದು ಬೆಳಗ್ಗೆ ಉಡುಪಿ ನಗರದಲ್ಲಿ ರಿಹರ್ಸಲ್ ನಡೆಸಿದರು. ಆದಿಉಡುಪಿ ಹೆಲಿಪ್ಯಾಡ್, ರೋಡ್ ಶೋ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ನಡೆಸಲಾಯಿತು. ಸುಮಾರು 20-30 ವಾಹನಗಳಲ್ಲಿ ಈ ಪೂರ್ವಾಭ್ಯಾಸ ಮಾಡಲಾಯಿತು. ಈ ಸಂದರ್ಭದಲ್ಲಿ ಆದಿಉಡುಪಿಯಿಂದ ಬನ್ನಂಜೆ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗದಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಮೋದಿ ಸಾಗುವ ಮಾರ್ಗದಲ್ಲಿ ಮತ್ತು ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಯನ್ನು ಕೂಡ ಮಾಡಲಾಗಿದೆ. ನಗರದ ಎಲ್ಲೆಡೆ ಪೊಲೀಸ್ ಸರ್ಪಗಾವಲು ಇರಿಸಿದ್ದು, ವ್ಯಾಪಾಕ ತಪಾಸಣೆ ನಡೆಸಲಾಗುತ್ತಿದೆ.

ವಾರ್ತಾ ಭಾರತಿ 27 Nov 2025 4:11 pm

Ramya: ಸಿಎಂ ಕುರ್ಚಿ ಕಿತ್ತಾಟ: ಯಾರಾಗ್ಬೇಕು ಸಿಎಂ? ನಟಿ ರಮ್ಯಾ ಏನಂದ್ರು ಗೊತ್ತಾ?

ಬೆಂಗಳೂರು, ನವೆಂಬರ್‌ 27: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಖುರ್ಚಿ ಕಿತ್ತಾಟ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವು ಪಕ್ಷದ ರಾಜಕೀಯ ನಾಯಕರು ಹಾಗೂ ಮಠಾಧೀಶರು ಸಿಎಂ ವಿಚಾರವಾಗಿ ಹೇಳಿಕೆ ನೀಡುತ್ತಿರುವುದು ಸದ್ಯ ಹೈಕಮಾಂಡ್‌ಗೆ ತೀವ್ರ ಮುಜುಗರವನ್ನ ತಂದಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಪರೋಕ್ಷವಾಗಿ ಡಿ ಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದು, ಇತ್ತ ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ನಟಿ ಹಾಗೂ

ಒನ್ ಇ೦ಡಿಯ 27 Nov 2025 4:11 pm

ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತದ ಎಚ್ಚರಿಕೆ: ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತ 'ಡಿಟ್ವಾ' ರೂಪುಗೊಳ್ಳುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತವು ವಾರದ ಅಂತ್ಯದಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಅಲೆಗಳ ಅಬ್ಬರವನ್ನು ತರಲಿದೆ. ಇದೇ ವೇಳೆ, ಸೈಕ್ಲೋನ್ ಸೆನ್ಯಾರ್ ದುರ್ಬಲಗೊಳ್ಳುತ್ತಿದೆ.

ವಿಜಯ ಕರ್ನಾಟಕ 27 Nov 2025 4:08 pm

ನುಸುಳುಕೋರರು ಆಧಾರ್ ಹೊಂದಿದ್ದರೆ ಮತದಾನಕ್ಕೆ ಅವಕಾಶ ನೀಡಬಹುದೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ,ನ.27: ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ರಾಜಕೀಯ ಚರ್ಚೆಗಳ ನಡುವೆಯೇ ಸರ್ವೋಚ್ಚ ನ್ಯಾಯಾಲಯವು ಮಹತ್ವದ ಪ್ರಶ್ನೆಯೊಂದನ್ನೆತ್ತಿದೆ. ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಹೊಂದಿರಬಹುದಾದ ಅಕ್ರಮ ವಲಸಿಗರಿಗೂ ಮತದಾನ ಮಾಡಲು ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದೆ. ಬುಧವಾರ ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ನಡೆಸುತ್ತಿತ್ತು. ಆಧಾರ್ ಕಾರ್ಡ್ ಅದರ ಆಧಾರದ ಮೇಲೆ ಪ್ರಯೋಜನಗಳು ಮತ್ತು ಸವಲತ್ತುಗಳನ್ನು ಒಪ್ಪಿಕೊಳ್ಳುವ ಮಟ್ಟಿಗೆ ಕಾಯ್ದೆಯ ಸೃಷ್ಟಿಯಾಗಿದೆ(ಮತ್ತು ಸಿಂಧುವಾಗಿದೆ). ಅದನ್ನು ಯಾರೂ ವಿವಾದಿಸಲು ಸಾಧ್ಯವಿಲ್ಲ. ಅಂತಿಮವಾಗಿ, ಆಧಾರ್ ಕಾರ್ಡ್‌ನ್ನು ಒಂದು ನಿರ್ದಿಷ್ಟ ಉದ್ದೇಶ ಮತ್ತು ನಿರ್ದಿಷ್ಟ ಶಾಸನಕ್ಕಾಗಿ ರೂಪಿಸಲಾಗಿದೆ. ಆ ಕುರಿತು ಯಾವುದೇ ವಿವಾದವಿರಲು ಸಾಧ್ಯವಿಲ್ಲ ಎಂದು ಹೇಳಿದರು. ‘ಬೇರೆ ದೇಶದಿಂದ, ನೆರೆಯ ದೇಶಗಳಿಂದ ಭಾರತದೊಳಗೆ ನುಸುಳುವ ವ್ಯಕ್ತಿಗಳಿದ್ದಾರೆ ಮತ್ತು ಅವರು ಇಲ್ಲಿ ವಾಸವಿದ್ದುಕೊಂಡು ಬಡ ರಿಕ್ಷಾ ಎಳೆಯುವವರಾಗಿ, ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಅವರು ಪಡಿತರ ಅಥವಾ ಇತರ ಯಾವುದೇ ಸೌಲಭ್ಯವನ್ನು ಪಡೆಯಲು ನೀವು ಅವರಿಗೆ ಆಧಾರ್ ಕಾರ್ಡ್ ವಿತರಿಸಿದರೆ ಅದನ್ನು ನಮ್ಮ ಸಾಂವಿಧಾನಿಕ ನೀತಿಯ ಒಂದು ಭಾಗ, ನಮ್ಮ ಸಾಂವಿಧಾನಿಕ ನೈತಿಕತೆಯಾಗಿದೆ ಎನ್ನಬಹುದು. ಆದರೆ ಅವರಿಗೆ ಈ ಸೌಲಭ್ಯ ನೀಡಲಾಗಿದೆ ಎಂಬ ಕಾರಣಕ್ಕೆ ಅವರನ್ನು ಮತದಾರರನ್ನಾಗಿಯೂ ಮಾಡಬೇಕೇ?’ ಎಂದು ನ್ಯಾ.ಸೂರ್ಯಕಾಂತ ಪ್ರಶ್ನಿಸಿದರು. ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ ಸಿಬಲ್ ಅವರು ಆಧಾರ್ ಕಾರ್ಡ್ ಹೊಂದಿದ್ದರೂ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ವಿಷಯವನ್ನು ಪ್ರಸ್ತಾವಿಸಿದಾಗ ನ್ಯಾ.ಸೂರ್ಯಕಾಂತ ಈ ಪ್ರಶ್ನೆಗಳನ್ನೆತ್ತಿದರು. ತನ್ಮೂಲಕ ಆಧಾರ್ ಕಾರ್ಡ್ ಇರುವುದು ಸೌಲಭ್ಯಗಳಿಗಾಗಿ ಮಾತ್ರವೇ ಹೊರತು ಮತದಾನದ ಹಕ್ಕು ನೀಡಲು ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ವೋಚ್ಚ ನ್ಯಾಯಾಲಯವು ನೀಡಿತು. ಬಿಹಾರದ ಎಸ್‌ಐಆರ್ ನಿದರ್ಶನವನ್ನು ನೀಡಿದ ನ್ಯಾ.ಸೂರ್ಯಕಾಂತ, ‘ಅಲ್ಲಿ ಕೆಲವೇ ಆಕ್ಷೇಪಣೆಗಳಿದ್ದವು. ಒಬ್ಬ ವ್ಯಕ್ತಿಯು ನಿಜವಾಗಿಯೂ ಭಾರತೀಯ ಪ್ರಜೆಯಾಗಿದ್ದರೆ ಮತ್ತು ಆತನನ್ನು ಮತದಾರರ ಪಟ್ಟಿಯಿಂದ ಹೊರಗಿರಿಸಿದ್ದರೆ ನಾವು ಕಾರ್ಯವಿಧಾನದ ದೋಷಗಳನ್ನು ಸರಿಪಡಿಸಲು ಅಂತಹ ನಿದರ್ಶನಗಳಿಗಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು. ಮತದಾನದ ದಿನದಂದು ಮತಗಟ್ಟೆಗೆ ಹೋದ ಮತದಾರನಿಗೆ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಗೊತ್ತಾದಾಗ ಆತ ಏನು ಮಾಡಬೇಕು ಎಂದು ಸಿಬಲ್ ಪ್ರಶ್ನಿಸಿದರು. ‘ಬಿಹಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರತಿ ದಿನ ವರದಿ ಮಾಡುತ್ತಿದ್ದವು ಮತ್ತು ದೂರದಲ್ಲಿರುವ ಜನರಿಗೂ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿತ್ತು. ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ, ಹೊಸ ಮತದಾರರ ಪಟ್ಟಿ ಹೊರಬರಲಿದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಿರುವಾಗ ಏನು ನಡೆಯುತ್ತಿದೆ ಎನ್ನುವುದು ತನಗೆ ತಿಳಿದಿರಲಿಲ್ಲ ಎಂದು ಯಾರಾದರೂ ಹೇಳಬಹುದೇ? ಎಂದು ನ್ಯಾ.ಸೂರ್ಯಕಾಂತ ಮರು ಪಶ್ನಿಸಿದರು. ಬೂತ್ ಮಟ್ಟದ ಅಧಿಕಾರಿಗಳಿಂದ ಸಮೀಕ್ಷೆಯಲ್ಲಿ ದೋಷಗಳ ಕುರಿತು ನ್ಯಾ.ಬಾಗ್ಚಿ, ಸಮೀಕ್ಷೆಯು ಯಾವಾಗಲೂ ಶೇ.100ರಷ್ಟು ಸರಿಯಾಗಿರುವುದಿಲ್ಲ. ಅದಕ್ಕಾಗಿಯೇ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ. ಅವುಗಳಲ್ಲಿ ದೋಷ ಕಂಡುಬಂದಾಗ, ಯಾರನ್ನಾದರೂ ಸತ್ತಿದ್ದಾರೆ ಎಂದು ತಪ್ಪಾಗಿ ತೋರಿಸಲ್ಪಟ್ಟಿದ್ದರೆ. ಇದೇ ಕಾರಣದಿಂದ ಮೃತರ ಮತ್ತು ಸ್ಥಳಾಂತರಗೊಂಡವರ ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾತ್ರವಲ್ಲ, ಪಂಚಾಯತ್‌ಗಳು ಮತ್ತು ಇತರ ಕಡೆಗಳಲ್ಲಿಯೂ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

ವಾರ್ತಾ ಭಾರತಿ 27 Nov 2025 4:00 pm

`ಟೀಂ ಇಂಡಿಯಾ ಸೋಲಿಗೆ ಗೌತಮ್ ಗಂಭೀರ್ ಮಾತ್ರ ಹೊಣೆಯೇನು?': ಗುವಾಹಟಿ ಸೋಲಿನ ಬಳಿಕ ಅಶ್ವಿನ್ ಹೇಳಿದ್ದೇನು?

R Ashwin On Gautam Gambhir-ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಟೆಸ್ಟ್ ಸರಣಿ ಸೋತಿದೆ. ಈ ಸೋಲಿಗೆ ಕ್ರಿಕೆಟ್ ಪ್ರೇಮಿಗಳು, ಮಾಜಿ ಕ್ರಿಕೆಟಿಗರು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಪ್ರಯೋಗಗಳ ಕುರಿತು ಅಸಮಾಧಾನಗೊಂಡಿದ್ದು ಟೀಕೆಗಳ ಮೇಲೆ ಟೀಕೆಗಳು ಈ ಹಿನ್ನೆಲೆಯಲ್ಲಿ ತಂಡದ ಪ್ರಧಾನ ಕೇಚ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಆದರೆ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಮಾತ್ರ ಗೌತಮ್ ಗಂಭೀರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ವಿಜಯ ಕರ್ನಾಟಕ 27 Nov 2025 3:37 pm

ಕೊಣಾಜೆ | ಪಿ.ಎ.ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್ ಉದ್ಘಾಟನೆ

ಜಗತ್ತಿನಲ್ಲಿ ತಂತ್ರಜ್ಞಾನಗಳ ಪ್ರಭಾವ ಹೆಚ್ಚುತ್ತಿವೆ : ಅಬ್ದುಲ್ ರಾಝಿಕ್ ಆಲಿ

ವಾರ್ತಾ ಭಾರತಿ 27 Nov 2025 3:34 pm

ಬ್ರಾಹ್ಮಣ, ಮೀಸಲಾತಿ ಕುರಿತು ಹೇಳಿಕೆ : ಐಎಎಸ್ ಅಧಿಕಾರಿಗೆ ನೋಟಿಸ್‌ ನೀಡಿದ ಮಧ್ಯಪ್ರದೇಶ ಸರಕಾರ

ಭೋಪಾಲ್ : “ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಮೀಸಲಾತಿ ಮುಂದುವರಿಯಬೇಕು” ಎಂದು ಹೇಳಿದ್ದ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೌಕರರ ಸಂಘ AJAKS ಪ್ರಾಂತೀಯಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರಿಗೆ ಮಧ್ಯಪ್ರದೇಶ ಸರಕಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಬುಧವಾರ ರಾತ್ರಿ ಮಧ್ಯಪ್ರದೇಶದ ಸಾಮಾನ್ಯ ಆಡಳಿತ ಇಲಾಖೆ ಸಂತೋಷ್ ವರ್ಮಾ ಅವರಿಗೆ ನೋಟಿಸ್ ಅನ್ನು ಜಾರಿಗೊಳಿಸಿದೆ. ನವೆಂಬರ್ 23ರಂದು ಎಜೆಎಕೆಎಸ್ ರಾಜ್ಯ ಸಮ್ಮೇಳನದಲ್ಲಿ ಸಂತೋಷ್ ವರ್ಮಾ ನೀಡಿರುವ ಹೇಳಿಕೆಯು, ಐಎಎಸ್‌ ಅಧಿಕಾರಿಯ ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಶೋಕಾಸ್ ನೋಟಿಸ್ ಪ್ರಕಾರ, ಅಖಿಲ ಭಾರತೀಯ ಸೇವೆಗಳು (ನಡತೆ) ನಿಯಮಗಳು-1967ರ ಅನ್ವಯ ಸಂತೋಷ್ ವರ್ಮಾ ತಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದು, ಅಖಿಲ ಭಾರತೀಯ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1969ರ ಅನ್ವಯ ಶಿಸ್ತು ಕ್ರಮಕ್ಕೆ ಬಾಧ್ಯಸ್ಥರಾಗಿರಲಿದ್ದಾರೆ ಎಂದು ಹೇಳಲಾಗಿದೆ. ತನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು 7 ದಿನಗಳೊಳಗಾಗಿ ವಿವರಣೆ ನೀಡಬೇಕು. ಒಂದು ವೇಳೆ ವಿವರಣೆ ನೀಡಲು ವಿಫಲರಾದರೆ, ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರಕಾರ ಅವರಿಗೆ ಎಚ್ಚರಿಕೆ ನೀಡಿದೆ.

ವಾರ್ತಾ ಭಾರತಿ 27 Nov 2025 3:33 pm

ಮಳೆ ಹಾನಿ : ಪರಿಹಾರಕ್ಕೆ 1,033 ಕೋಟಿ ರೂ.ಹೆಚ್ಚುವರಿ ಹಣ ಬಿಡುಗಡೆ

ಬೆಂಗಳೂರು : ಪ್ರಸ್ತುತ ವರ್ಷದ ಮಾನ್ಸೂನ್‌ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಮುಖ್ಯಮಂತ್ರಿ ಅವರು 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ ಈ ಹಣವನ್ನು ನೇರವಾಗಿ ಜಮಾ ಮಾಡುವ ಕಾರ್ಯಕ್ಕೆ ಬಟನ್ ಒತ್ತಿ ಅಧಿಕೃತವಾಗಿ ಚಾಲನೆ ನೀಡಿದರು. ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದವರಿಗೆ ಹೆಚ್ಚಿನ ನೆರವು ಒದಗಿಸಲು ಇನ್ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದ್ದು, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ 8,500 ರೂ. ರಿಂದ 17,000ರೂ., ನೀರಾವರಿ ಬೆಳೆಗಳಿಗೆ  17,500 ರೂ. ರಿಂದ 25,500 ರೂ. ಮತ್ತು ಬಹುವಾರ್ಷಿಕ ಬೆಳೆಗಳಿಗೆ 22,500 ರೂ. ರಿಂದ 31,000 ರೂ. ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ಎಸ್ಡಿಆರ್ಎಫ್ ಮಾನದಂಡಗಳ ಪ್ರಕಾರ ಈಗಾಗಲೇ 14.24 ಲಕ್ಷ ರೈತರಿಗೆ 1,218.03 ರೂ. ಕೋಟಿ ವಿತರಿಸಲಾಗಿದ್ದು, ರಾಜ್ಯ ನಿಧಿಯಿಂದ 1,033.60 ಕೋಟಿ ರೂ.ವನ್ನು ಟಾಪ್ ಅಪ್ ರೂಪದಲ್ಲಿ ನೀಡಲಾಗುತ್ತಿದೆ. ಒಟ್ಟಾರೆಯಾಗಿ 2,251.63 ಕೋಟಿ ರೂ. ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದರು. ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು 10,748 ಕೋಟಿ ರೂ. ಬೆಳೆ ಹಾನಿ ಅಂದಾಜಿಸಲಾಗಿದೆ. ಮುಖ್ಯವಾಗಿ ತೊಗರಿ ಬೇಳೆ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿ 2.68 ಲಕ್ಷ ಹೆಕ್ಟೇರ್ ಮತ್ತು ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್ ಹಾನಿ ಉಂಟಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದ್ದು, ಮುಖ್ಯವಾಗಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಿದರು. ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದ್ದು, ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ. ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ ಎಂದರು. ಹಾನಿಗೊಳಗಾದ ಗ್ರಾಮಗಳ ಪಟ್ಟಿಗಳನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಆನ್ಲೈನ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ನಂತರ ಅಂತಿಮ ಪಟ್ಟಿಯ ಆಧಾರದಲ್ಲಿ ಸಬ್ಸಿಡಿ ಪಾವತಿಗಳನ್ನು ನೇರವಾಗಿ ರೈತರಿಗೆ ವರ್ಗಾಯಿಸಲಾಗುತ್ತಿದೆ. ಪ್ರಧಾನಿ ಮಂತ್ರಿಯವರನ್ನು ನ.17 ರಂದು ಭೇಟಿ ಮಾಡಿ ಇನ್ಪುಟ್ ಸಬ್ಸಿಡಿಗೆ 614.90 ಕೋಟಿ ರೂ. ಮತ್ತು ಮೂಲಸೌಕರ್ಯ ನಷ್ಟ ಪರಿಹಾರಕ್ಕೆ PDNA ಅಡಿಯಲ್ಲಿ 1,521.67 ಕೋಟಿ ರೂ. ನೀಡಲು ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವು ಸಹ ಅಂತರ ಸಚಿವಾಲಯದ ತಂಡವನ್ನು ರಚಿಸಿ ಶೀಘ್ರದಲ್ಲೇ ಕರ್ನಾಟಕಕ್ಕೆ ಹಾನಿ ಪರಿಶೀಲನೆಗಾಗಿ ಭೇಟಿ ನೀಡಲಿದೆ ಎಂದು ಹೇಳಿದರು.

ವಾರ್ತಾ ಭಾರತಿ 27 Nov 2025 3:28 pm

ಗದಗ; ನಡುರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಗದಗ ನಗರದ ಮುಳಗುಂದ ನಾಕಾ ಬಳಿ ದುರ್ಗಾ ಬಾರ್ ಸಮೀಪ ಸಿನಿಮೀಯ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದಿಂದಾಗಿ ಅಭಿಷೇಕ್ ಹರ್ಲಾಪುರ, ಸಾಯಿಲ್ ಹಾಗೂ ಮುಷ್ತಾಕ್ ಮೂಲಿಮನಿ ಎಂಬುವರು ಅರುಣಕುಮಾರ ಕೋಟೆಗಲ್ ಮೇಲೆ ತಲ್ವಾರ್, ಚಾಕು ಹಾಗೂ ಬೀಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಯುವಕ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯ ಕರ್ನಾಟಕ 27 Nov 2025 3:24 pm

31 ವರ್ಷಗಳಲ್ಲಿ 2ನೇ ಬಾರಿ : ರಾಜ್ಯ ರಾಜಕೀಯದಲ್ಲಿ ಆದಿಚುಂಚನಗಿರಿ ಮಠದ ’ಬಹಿರಂಗ ಬೆಂಬಲ’- ಹಿಂದೆ ಯಾರಿಗೆ?

Karnataka CM Tussle : ಒಕ್ಕಲಿಗೆ ಸಮುದಾಯದ ನಾಯಕರೊಬ್ಬರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀಗಳು ನೀಡಿದ ಹೇಳಿಕೆ, ಧಾರ್ಮಿಕ ಪೀಠಗಳಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಕೂಡಾ ಮಹಾಸಂಸ್ಥಾನದ ಪೀಠಾಧಿಪತಿಗಳು ಸಮುದಾಯದ ಪರ ನಿಂತಿದ್ದರು. ಆ ವಿದ್ಯಮಾನ ಯಾವುದು, ಇಲ್ಲಿದೆ ವಿವರ

ವಿಜಯ ಕರ್ನಾಟಕ 27 Nov 2025 3:21 pm

ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕೆಂಬ ನಿಬಂಧನೆ ಇಲ್ಲ : ರೈಲ್ವೆ ಮಂಡಳಿ ಸ್ಪಷ್ಟನೆ

ಹೊಸದಿಲ್ಲಿ: ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ಪೂರೈಕೆಯ ಕುರಿತು ಭುಗಿಲೆದ್ದ ವಿವಾದಕ್ಕೆ ತೆರೆ ಎಳೆದಿರುವ ಭಾರತೀಯ ರೈಲ್ವೆ ಮಂಡಳಿಯು, ರೈಲುಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕು ಎನ್ನುವ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಿದೆ. ಹಲಾಲ್ ಮಾಂಸ ನೀಡುತ್ತಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂಬ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೀಡಿದ ನೋಟಿಸ್‌ಗೆ ಬುಧವಾರ ಮಂಡಳಿ ಈ ಉತ್ತರ ನೀಡಿದೆ. ಮಾಂಸಾಹಾರ ಊಟಗಳಲ್ಲಿ ಕೇವಲ ಹಲಾಲ್ ಸಂಸ್ಕರಿಸಿದ ಮಾಂಸವನ್ನೇ ಪೂರೈಸಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ, ರೈಲ್ವೆಯಿಂದ ಮಾನವ ಹಕ್ಕು ಉಲ್ಲಂಘನೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು, “ಐಆರ್‌ಸಿಟಿಸಿ ಮತ್ತು ರೈಲ್ವೆ FSSAI ಮಾರ್ಗಸೂಚಿಗಳನ್ನು ಮಾತ್ರ ಅನುಸರಿಸುತ್ತವೆ. ಹಲಾಲ್ ಪ್ರಮಾಣೀಕೃತ ಆಹಾರ ಪೂರೈಸುವಂತೆ ಯಾವುದೇ ಅಧಿಕೃತ ನಿರ್ದೇಶನ ಇಲ್ಲ” ಎಂದರು. ಈ ಕುರಿತ ಪ್ರಶ್ನೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಅರ್ಜಿಯ ವಿಚಾರಣೆಯಲ್ಲೂ ಎದುರಾಗಿತ್ತು. ಮುಖ್ಯ ಮಾಹಿತಿ ಆಯೋಗದ ಮುಂದೆ ರೈಲ್ವೆ ಮಂಡಳಿಯು ಇದೇ ನಿಲುವನ್ನು ತಿಳಿಸಿದರೂ, ಹಲಾಲ್ ಪ್ರಮಾಣೀಕೃತ ಆಹಾರಕ್ಕೆ ಸಂಬಂಧಿಸಿದ ನೀತಿ, ಅನುಮೋದನೆ ಪ್ರಕ್ರಿಯೆ ಅಥವಾ ಪ್ರಯಾಣಿಕರ ಒಪ್ಪಿಗೆ ದಾಖಲಾತಿಗಳು ಐಆರ್‌ಸಿಟಿಸಿ ಬಳಿ ಇಲ್ಲವೆಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿತ್ತು. “ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರ FSSAI ಮಾನದಂಡಗಳಿಗೆ ಅನುಗುಣವಾಗಿರುತ್ತದೆ. ಅವುಗಳ ಹೊರತಾಗಿ ಯಾವುದೇ ವಿಶೇಷ ಪ್ರಮಾಣೀಕರಣ ಆಧರಿಸುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 

ವಾರ್ತಾ ಭಾರತಿ 27 Nov 2025 3:08 pm

Karnataka Rains: ವಾಯುಭಾರ ಕುಸಿತ ರಾಜ್ಯದಲ್ಲಿ 2 ದಿನ ಮಳೆ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ! ಎಲ್ಲೆಲ್ಲಿ?

Karnataka Weather: ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ನವೆಂಬರ್ 29 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮುಂದಿನ 5 ದಿನ ಹಗಲಿನ ಉಷ್ಣಾಂಶ ಕಡಿಮೆಯಾಗಿ ಚಳಿ ಹೆಚ್ಚಾಗಲಿದೆ.

ವಿಜಯ ಕರ್ನಾಟಕ 27 Nov 2025 3:06 pm

ಫರ್ಡಿನೆಂಡ್ ಕಿಟ್ಟೆಲ್ ಸಾಕ್ಷ್ಯ ಚಿತ್ರ ಪ್ರದರ್ಶನ

ಮಂಗಳೂರು, ನ.26: ವಿಶ್ವ ಪರಂಪರೆಯ ಸಪ್ತಾಹದ ಸಮಾರೋಪ ಕಾರ್ಯಕ್ರಮವಾಗಿ ಕನ್ನಡದ ಮೊಟ್ಟ ಮೊದಲನೆಯ ನಿಘಂಟುಕಾರ ಫರ್ಡಿನಾಂಡ್ ಕಿಟ್ಟೆಲ್ ಅವರ ಜೀವನ ಚರಿತ್ರೆ ಕುರಿತಾದ ಸಾಕ್ಷ್ಯ ಚಿತ್ರ ‘ದಿ ವರ್ಡ್ ಅಂಡ್ ದಿ ಟೀಚರ್ ’ ಪ್ರದರ್ಶನವನ್ನು ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟಾಕ್ ಮಂಗಳೂರು ವಿಭಾಗ ಮತ್ತು ಆರ್ಟ್ ಕೆನರಾ ಟ್ರಸ್ಟ್ ಆಶ್ರಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಕರ್ನಾಟಕ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಮಾಜಿ ಆರ್ಕೈವಿಸ್ಟ್ ಮತ್ತು ಚಿತ್ರಕ್ಕೆ ಸಹಕಾರ ನೀಡಿರುವ ಬೆನೆಟ್ ಅಮ್ಮಣ್ಣ ,ಸಾಕ್ಷ್ಯ ಚಿತ್ರದ ನಿರ್ದೇಶಕ ಪ್ರಶಾಂತ್ ಪಂಡಿತ್ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕಿ ಸ್ವಾತಿ ಆಚಾರ್ಯ ಭಾಗವಹಿಸಿದ್ದರು. ಇಂಟಾಕ್ ನ ಸದಸ್ಯ ದೀಕ್ಷಿತ್ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ‘ನಮ್ಮ ಊರು ನಮ್ಮ ನೆಲ’ ಕಲಾ ಪ್ರದರ್ಶನವು ನವೆಂಬರ್ 29 ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರ ತನಕ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಮುಂದುವರಿಯಲಿದೆ.  

ವಾರ್ತಾ ಭಾರತಿ 27 Nov 2025 3:05 pm

ಹೈಕಮಾಂಡ್ ಕರೆದರೆ ನಾವು ದಿಲ್ಲಿಗೆ ಹೋಗುತ್ತೇವೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : “ಹೈಕಮಾಂಡ್ ನಾಯಕರು ದಿಲ್ಲಿಗೆ ಕರೆದರೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಅವರು ವಿಧಾನಸೌಧದ ಬಳಿ ಗುರುವಾರ ಮಾತನಾಡಿದರು. ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದಿಲ್ಲಿಗೆ ಕರೆದು ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ ನಾವು ಮಾತನಾಡಿಕೊಂಡು ದಿಲ್ಲಿಗೆ ಹೋಗುತ್ತೇವೆ” ಎಂದರು.

ವಾರ್ತಾ ಭಾರತಿ 27 Nov 2025 3:02 pm

ಯುವಕರು ಸಂವಿಧಾನದ ಮೌಲ್ಯಗಳನ್ನು ಅರಿತುಕೊಳ್ಳಬೇಕಾಗಿದೆ : ಶಾಸಕ ಡಿ. ವೇದವ್ಯಾಸ ಕಾಮತ್

ಮಂಗಳೂರು, ನ.27:ಮಂಗಳೂರಿನ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಯುವನಿಕಾ ಫೌಂಡೇಶನ್ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ‘‘ಯುವ ಪೀಳಿಗೆ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ರಾಷ್ಟ್ರ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ’’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ತೊಳ್ಪಾಡಿ ಅವರು, ಸಂವಿಧಾನದ ಸಮಾಜಮುಖಿ ತತ್ವಗಳು ಮತ್ತು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಾಗರಿಕರ ಪಾತ್ರದ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಫಾ. ಜಾನ್ ಡಿ ಸೋಜ ಎಸ್ ಜೆ ವಹಿಸಿದ್ದರು. ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರೋಷನ್ ಡಿ ಸೋಜ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಘುವೀರ್ ಸೂಟರ್ ಪೇಟೆ ಅವರು ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ಸಂಸ್ಥೆಯ ನೋಯೆಲ್ ಲೋಬೊ, ವಿಲ್ಸನ್ ಮತ್ತು ಪದ್ಮಾವತಿ ಅವರು ಕಾರ್ಯಕ್ರಮದ ಸುಗಮ ನಿರ್ವಹಣೆಯಲ್ಲಿ ಸಹಕರಿಸಿದರು. ಶ್ರೇಯಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಯುವನಿಕಾ ಫೌಂಡೇಶನ್ನ ಕೆ . ಕಸ್ತೂರಿ, ಸಂತೋಷ್ ಯಾದವ್ , ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹಿತೇಶ್ ಬಂಗೇರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 27 Nov 2025 3:02 pm

ಕೊಂಕಣಿ ಅಕಾಡೆಮಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ

ಮಂಗಳೂರು, ನ.27: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಶ್ರೀ ಸಾಮಾನ್ಯರ ಆಯೋಗದ ಸಹಯೋಗದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಬುಧವಾರ ಜೆಪ್ಪು ಸಂತ ಅಂತೋಣಿ ಸೇವಾ ಸಂಸ್ಥೆ ‘ಸಂಭ್ರಮ ಸಭಾಂಗಣದಲ್ಲಿ ಆಚರಿಸಲಾಯಿತು. ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಐವನ್ ಪ್ರಾನ್ಸಿಸ್ ಲೋಬೊ ಸಂವಿಧಾನ ದಿನಾಚರಣೆಯ ಮಹತ್ವವನ್ನು ವಿವರಿಸಿ, ಸಂವಿಧಾನವು ಬದಲಾಗಿಲ್ಲ ಆದರೆ ಸಂವಿಧಾನದ ತತ್ವ ಗೊತ್ತಿಲ್ಲದೇ, ಸಂವಿಧಾನದ ಅರ್ಥವನ್ನು ಬದಲಾಯಿಸಲಾಗುತ್ತಿದೆ ಎಂದರು. ಮುಖ್ಯ ಅತಿಥಿ ಮಂಗಳೂರಿನ ಖ್ಯಾತ ನ್ಯಾಯವಾದಿ ಕೆ.ಪಿ. ವಾಸುದೇವ ರಾವ್ ಅವರು ವಂ.ಸ್ವಾ. ಬೇಸಿಲ್ ವಾಸ್ರ ಕೊಂಕಣಿಯಲ್ಲಿ ರಚಿಸಿದ ‘ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಬದುಕುವ ಹಕ್ಕು ನಮಗೆ ದೇವರಿಂದ ಬಂದಿದೆ ಹಾಗೂ ಮೂಲಭೂತ ಹಕ್ಕುಗಳು ಸಂವಿಧಾನದಿಂದ ಬಂದಿದೆ ಎಂದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಪೀಠಿಕಾ ಗೀತೆಯನ್ನು ಹಾಡಿ, ಸಂವಿಧಾನಕ್ಕೆ ಗೌರವ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಯಲಹಂಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ರ ಕೊಂಕಣಿಯಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಸಮಾಜಸೇವಾ ಕ್ಷೇತ್ರದಲ್ಲಿ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೊರಿನ್ ರಸ್ಕಿನ್ಹಾ ಸನ್ಮಾನಿಸಲಾಯಿತು. ಗೌರವ ಅತಿಥಿಗಳಾಗಿದ್ದ ಸಂತ ಅಂತೋಣಿ ಸೇವಾ ಸಂಸ್ಥೆಯ ಅಡಳಿತಾಧಿಕಾರಿ ವಂ. ಸ್ವಾ. ಪ್ರವೀಣ್ ಅಮೃತ್ ಮಾರ್ಟಿಸ್ ಅವರು ಎಡ್ವಿನ್ ಜೆ. ಎಫ್. ಡಿಸೋಜ ಬರೆದ ‘ಉಣ್ಯಾ ಭಾವಾಡ್ತಾಚೆ’ ಪುಸ್ತಕವನ್ನು ಇ- ಬುಕ್ ರೂಪದಲ್ಲಿ ಲೋಕಾರ್ಪಣೆಗೊಳಿಸಿದರು. ಅಕಾಡೆಮಿಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮೇರಿ ಡಿ ಸಿಲ್ವರನ್ನು ಗೌರವಿಸಲಾಯಿತು. ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ಅಕಾಡೆಮಿ ಸದಸ್ಯ ನವೀನ್ ಲೋಬೊ, ಸಮರ್ಥ್ ಭಟ್, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು. ರೊಮನ್ಸ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 27 Nov 2025 3:00 pm

ಬೆಂಗಳೂರಿಗರ ಗಮನಕ್ಕೆ: ಕಬ್ಬನ್‌ ಪಾರ್ಕ್‌ನಲ್ಲಿ ನಡೀತಿದೆ ಪುಷ್ಪ ಪ್ರದರ್ಶನ; ಎಷ್ಟು ದಿನ ಇರಲಿದೆ, ಶುಲ್ಕವೆಷ್ಟು?

ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಮುಖ ಪ್ರವಾಸಿತಾಣ, ಉದ್ಯಾನ ಆದಂತಹ ಕಬ್ಬನ್‌ ಪಾರ್ಕ್‌ನಲ್ಲಿ ಹತ್ತು ವರ್ಷದ ನಂತರ ಪುಷ್ಪ ಪ್ರರ್ದಶನ ಮೇಳ ಆಯೋಜಿಸಲಾಗಿದೆ. ಮುಂಜಾನೆ ಏಳರಿಂದ ಸಂಜೆ ಆರು ಗಂಟೆಯವರೆಗೂ ಪ್ರದರ್ಶನ ವೀಕ್ಷಿಸಿಬಹುದಾಗಿದೆ. ಪುಷ್ಪ ಪ್ರದರ್ಶನ ವೀಕ್ಷಿಸಲು ಬಯಸುವ ಕಿರಿಯರಿಗೆ ಹತ್ತು ರೂ. ಮತ್ತು ವಯಸ್ಕರಿಗೆ ಮೂವತ್ತು ರೂಪಾಯಿ ನಿಗದಿ ಪಡಿಸಲಾಗಿದೆ. ಫ್ಲವರ್‌ ಶೋ ಮಾತ್ರವಲ್ಲದೆ ನಿತ್ಯ ಬಳಸುವ ಅಗತ್ಯ ವಸ್ತುಗಳ ಮಾರಾಟವು ಇರಲಿದೆ.

ವಿಜಯ ಕರ್ನಾಟಕ 27 Nov 2025 2:53 pm

ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯರ ಸ್ಥಳಾಂತರ?

ದೇವನಹಳ್ಳಿ : ತಾಲೂಕಿನ ವಿಜಯಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು, ಮತ್ತು ಮಕ್ಕಳ ತಜ್ಞರನ್ನು ತಾಯಿ ಮತ್ತು ಮಕ್ಕಳ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ತಾಲೂಕು ಕೇಂದ್ರ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಆರೋಗ್ಯ ಇಲಾಖೆ ನಡಾವಳಿಯಲ್ಲಿ ಪ್ರಸ್ತಾಪಿಸಿದ್ದು, ಇಲ್ಲಿ ಕೇವಲ ಎಂಬಿಬಿಎಸ್ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಪಟ್ಟಣ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿನಿತ್ಯ 350 ಕ್ಕೂ ಹೆಚ್ಚು ಮಂದಿ ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರ 100 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆರಿಗೆ ಮಾಡಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪಟ್ಟಿ ಮಾಡಿದ್ದು, ಈ ಪಟ್ಟಿಯಲ್ಲಿ ವಿಜಯಪುರವೂ ಸೇರಿದೆ. ಆಸ್ಪತ್ರೆಗೆ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸ್ತ್ರೀ ರೋಗ ತಜ್ಞರ ಬಳಿಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಹೆರಿಗೆ ಮಾಡಿಸಿಕೊಳ್ಳಲು ಬಂದಾಗ, ವೈದ್ಯರು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಕಾರಣ, ತಾಲೂಕು ಆಸ್ಪತ್ರೆಗೆ ಹೆರಿಗೆ ಮಾಡಿಸಿಕೊಳ್ಳುವುದರಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ತ್ರಿವಳಿ ವೈದ್ಯರ ತಂಡ ಸಮರ್ಪಕವಾಗಿ ಒಂದೇ ಬಾರಿಗೆ ಕರ್ತವ್ಯ ನಿರ್ವಹಿಸಿದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗುವ ಪ್ರಮಾಣವೂ ಏರಿಕೆಯಾಗಲಿದೆ. ಇಲ್ಲಿನ ತಜ್ಞ ವೈದ್ಯರು, ಒಬ್ಬೊಬ್ಬರೂ ಪಾಳಿ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ, ಹೆರಿಗೆಗಾಗಿ ಬರುವ ಗರ್ಭಿಣಿಯರು, ತಜ್ಞ ವೈದ್ಯರಿಲ್ಲದ ಕಾರಣ, ತಾಲೂಕು ಆಸ್ಪತ್ರೆಯನ್ನೂ ಬಿಟ್ಟು, ಬೇರೆ ಆಸ್ಪತ್ರೆಗಳಿಗೆ ಹೋಗಿ, ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಕೇವಲ ಹೆರಿಗೆ ಮಾತ್ರವಲ್ಲದೆ, ಫಿಸಿಷಿಯನ್‌ಗಳಾಗಿಯೂ ಕೆಲಸ ಮಾಡುತ್ತಿದ್ದು, ವೈದ್ಯರನ್ನು ಇಲ್ಲಿಂದ ಸ್ಥಳಾಂತರ ಮಾಡಿದರೆ, ಇಲ್ಲಿಗೆ ಬರುವ ಹೊರರೋಗಿಗಳಿಗೆ ತುಂಬಾ ತೊಂದರೆಯಾಗಲಿದೆ. ಮೇಲ್ದರ್ಜೆಗೇರಿಸಲು ಒತ್ತಾಯ: ಪಟ್ಟಣದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇಲ್ಲಿಗೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಔಷಧಿಗಳ ಕೊರತೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 2 ತಿಂಗಳಿನಿಂದ ಔಷಧಿಗಳ ಕೊರತೆ ಕಾಡುತ್ತಿದೆ. ಕೆಮ್ಮಿನ ಸಿರಪ್, ಡೈಕ್ಲೋ ಚುಚ್ಚು ಮದ್ದು, ಬಾಟಲಿಗಳು, ಡ್ರಿಪ್‌ಸೆಟ್‌ಗಳ ಕೊರತೆ ಕಾಡುತ್ತಿದೆ ಎಂದು ಇಲ್ಲಿಗೆ ಬರುತ್ತಿರುವ ರೋಗಿಗಳು ಅಲವತ್ತುಕೊಂಡಿದ್ದು ತ್ವರಿತವಾಗಿ ಔಷಧಿಗಳನ್ನು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಬಾಟಲಿಗಳನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಪರೀಕ್ಷೆಗೆ ಕಳುಹಿಸಿದ್ದರು. ಈಗ ಬಿಡುಗಡೆ ಮಾಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆಯಾಗಲಿದೆ. ಉಳಿದ ಔಷಧಿಗಳನ್ನೂ ಪೂರೈಕೆ ಮಾಡಲಾಗುತ್ತದೆ. ವೈದ್ಯರನ್ನು ಸ್ಥಳಾಂತರಿಸುವುದು ಸರಕಾರದ ನಿರ್ಧಾರ. -ಡಾ.ಲಕ್ಕಾಕೃಷ್ಣಾರೆಡ್ಡಿ, ಡಿಎಚ್‌ಒ ಬೆಂ.ಗ್ರಾ, ಜಿಲ್ಲೆ

ವಾರ್ತಾ ಭಾರತಿ 27 Nov 2025 2:46 pm

ಹಾಂಗ್‌ಕಾಂಗ್ ಅಗ್ನಿ ದುರಂತದ ಬೆನ್ನಲ್ಲೇ ಚೀನಾಗೆ ಮತ್ತೊಂದು ಆಘಾತ ; ರೈಲು ಹರಿದು 11 ರೈಲ್ವೇ ಕಾರ್ಮಿಕರ ಸಾವು

ಚೀನಾದಲ್ಲಿ ರೈಲು ದುರಂತ ಸಂಭವಿಸಿದೆ. ಯುನ್ನಾನ್ ಪ್ರಾಂತ್ಯದಲ್ಲಿ ರೈಲು ಹಳಿ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದು 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಹಾಂಗ್‌ಕಾಂಗ್‌ನಲ್ಲಿ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು 44 ಜನರು ಮೃತಪಟ್ಟಿದ್ದಾರೆ. ಈ ಘಟನೆಗಳು ದೇಶದಲ್ಲಿ ಕೈಗಾರಿಕಾ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 27 Nov 2025 2:36 pm

ರಾಜಕೀಯವು ಸಂವಿಧಾನ ಬದ್ಧವೇ ಹೊರತು, ಧರ್ಮ ಅಥವಾ ಜಾತಿ ಬದ್ಧವಲ್ಲ

ದೇಶಾದ್ಯಂತ ಸಂವಿಧಾನ ದಿನಾಚರಣೆ ಕಾರ್ಯಕ್ರಮವು ನಿರೀಕ್ಷಿತ ಮಟ್ಟದಲ್ಲಿ ಜರುಗಿದೆ. ಕರ್ನಾಟಕ ಸರಕಾರವೂ ಸಹ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ಸಂವಿಧಾನದ ಜಾಗೃತಿಯ ಸಂದೇಶವನ್ನು ನಾಡಿಗೆ ಸಾರಿದೆ. ಪ್ರತಿ ಜಿಲ್ಲೆಯಲ್ಲಿಯೂ ಕೂಡಾ ವಿಭಿನ್ನವಾಗಿ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಪ್ರತಿ ಬೀದಿಗಳಲ್ಲಿ ಯುವಕರು ಸಂವಿಧಾನ ಪ್ರಸ್ತಾವನೆ ಮತ್ತು ರಾಷ್ಟ್ರ ಧ್ವಜವನ್ನು ಹಿಡಿದು ನಡೆದಿರುವುದು ಅತ್ಯಂತ ವಿಶಿಷ್ಟ ಎನಿಸಿದೆ. ಕರ್ನಾಟಕ ರಾಜ್ಯದಲ್ಲಿ 2023ರ ಇಸವಿಯ ಈಚೆಗೆ ಸಂವಿಧಾನ ಕುರಿತಂತೆ ಅಧಿಕೃತವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸಂವಿಧಾನದ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನೀಡುತ್ತಲೇ ಬರುತ್ತಿರುವ ಸರಕಾರ ಸಂವಿಧಾನವನ್ನು ಜನಜನಿತಗೊಳಿಸುವ ಪ್ರಯತ್ನ ಮಾಡುತ್ತಿದೆ. ಸಂವಿಧಾನ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹೇಳಬೇಕೆಂಬ ನಿಯಮವನ್ನು ಜಾರಿಗೊಳಿಸಿದ ನಮ್ಮ ಸರಕಾರ, ಸಂವಿಧಾನ ಜಾಗೃತಿ ಜಾಥಾದ ಮೂಲಕ ಊರೂರಿಗೆ ಸಂವಿಧಾನದ ಬಂಡಿಯನ್ನು ಕೊಂಡೊಯ್ಯುವ ಕೆಲಸವನ್ನು ಮಾಡಿತು. ಸಂವಿಧಾನ ಪೀಠಿಕೆಯನ್ನು ವಿಶ್ವದಾದ್ಯಂತ ಏಕ ಕಾಲಕ್ಕೆ 2.3 ಕೋಟಿ ಜನರು ಓದಿದ್ದು, ಇದು ಈಗಲೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿರುವುದು ನಮ್ಮ ಸರಕಾರದ ಹೆಗ್ಗಳಿಕೆ ಆಗಿದೆ. ಇದಾದ ಬಳಿಕ ನಾವು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ವಿಶಿಷ್ಟವಾದ ಸಂದೇಶವನ್ನು ಸಾರಿದ್ದು, ಸಂವಿಧಾನದ ಕುರಿತು ಹಲವರು ಹಲವು ಬಗೆಯ ತೊಡಕು ಮಾತುಗಳನ್ನು ಆಡುವಾಗ, ಕರ್ನಾಟಕ ಸರಕಾರದ ವತಿಯಿಂದ ಸಂವಿಧಾನದ ಕುರಿತಂತೆ ಅರಿವು ಮೂಡಿಸುವ ಮಹತ್ವದ ಕೆಲಸವನ್ನು, ಮಾಡಿದ್ದು ಕಾಲದ ಅಗತ್ಯಗಳಲ್ಲಿ ಒಂದು. ಸಂವಿಧಾನದ ಅರಿವಿನ ಕುರಿತ ಸರಕಾರದ ಪ್ರಯತ್ನಗಳ ಬಗ್ಗೆ ಚಿಂತಕರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ಅದು ಇಂತಿದೆ. ಸರಕಾರದ ವತಿಯಿಂದಲೇ ಸಂವಿಧಾನದ ಕುರಿತಂತೆ ನಿರಂತರವಾಗಿ ಮಾಡುವ ಜಾಗೃತಿಯು, ಸರಕಾರವು ಸಂವಿಧಾನಾತ್ಮಕವಾಗಿ ನಡೆಯಬೇಕೆಂಬ ಜವಾಬ್ದಾರಿ ಪ್ರಜ್ಞೆ ಹೊಂದಿರುವುದನ್ನು ಸೂಚಿಸುತ್ತದೆ. ಈ ರೀತಿಯ ಪ್ರಜ್ಞೆಯು ಒಂದು ದೇಶಕ್ಕೆ ಅಗತ್ಯ ಇರುವಂತಹ ಪ್ರಜ್ಞೆಯಾಗಿದೆ. -ಡಾ.ಮೇಟಿ ಮಲ್ಲಿಕಾರ್ಜುನ್, ಚಿಂತಕರು. ಸರಕಾರಗಳು ಸಂವಿಧಾನದ ಬಗ್ಗೆ ಸೀರಿಯಸ್ ಆಗಿವೆ ಎಂದರೆ, ಆ ರಾಜ್ಯದಲ್ಲಿ ಪ್ರಜಾಪ್ರಭುತ್ವವುಜೀವಂತವಾಗಿದೆ ಎಂದರ್ಥ -ಆರಿಫ್ ರಾಜಾ, ಕವಿ ಈ ಹಿನ್ನೆಲೆಯಲ್ಲಿ ಸಂವಿಧಾನದ ಜಾಗೃತಿಯ ವಿಷಯದಲ್ಲಿ ಇಡೀ ದೇಶಕ್ಕೆ ಮತ್ತು ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಕರ್ನಾಟಕವನ್ನೇ ಒಂದು ಮಾದರಿ ಆಗಿಸುವ ಪ್ರಯತ್ನವನ್ನು ಸರಕಾರ ಮಾಡಿದ್ದು ಇದಕ್ಕಾಗಿ ನಾನು ನಮ್ಮ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರದ ಈ ಕ್ರಮವನ್ನು ಸ್ವಾಗತಿಸಿದ ಜನರನ್ನು ಸ್ಮರಿಸುವೆ.

ವಾರ್ತಾ ಭಾರತಿ 27 Nov 2025 2:33 pm

ಪ್ರದರ್ಶನದ ಪುಷ್ಪಗಳು, ಮರುಬಳಕೆಯ ವಸ್ತುಗಳಾಗಬೇಕು : ಡಾ.ಶಾಲಿನಿ ರಜನೀಶ್

ಬೆಂಗಳೂರು : ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಇಲಾಖೆಯಿಂದ ನಗರದ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನದಲ್ಲಿ 11 ದಿನಗಳ ಕಾಲ ಏರ್ಪಡಿಸಿರುವ ಹೂಗಳ ಹಬ್ಬ-2025 ಕಲೆ ಸಂಸ್ಕೃತಿಯ ಸಮಾಗಮ ಉದ್ಘಾಟಿಸಿ ಫಲ ಪುಷ್ಪ ಪ್ರದರ್ಶನ ವೀಕ್ಷಿಸಿದರು. ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ನಮ್ಮ ಜೀವನ ಶೈಲಿಯನ್ನು ನೈಸರ್ಗಿಕವಾಗಿ ನಡೆಸಿದರೆ ಅದು ಎಲ್ಲರಿಗೂ ಒಳ್ಳೆಯದು ಎಂಬ ಪಾಠ ಎಲ್ಲರೂ ಈ ಪುಷ್ಪ ಪ್ರದರ್ಶನದಿಂದ ಅರಿತು ಅನುಸರಿಸಬೇಕು. ಕಬ್ಬನ್ ಉದ್ಯಾನವನದ ಸುಂದರ ಪ್ರಕೃತಿಯಲ್ಲಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಆಗಮಿಸಿ ವೀಕ್ಷಿಸುವ ಮೂಲಕ ಉದ್ಯಾನವನದ ಸೌಂದರ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.  

ವಾರ್ತಾ ಭಾರತಿ 27 Nov 2025 2:31 pm

ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಮಾಡಿದ ಟ್ವೀಟ್ ನಿರಾಕರಿಸಿದ ಡಿಕೆಶಿ! ಪೋಸ್ಟ್ ಮಾಡೇ ಇಲ್ಲ ಎಂದ ಡಿಸಿಎಂ

ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಟ್ವೀಟ್ ಕುತೂಹಲ ಮೂಡಿಸಿದ್ದು, ಬಳಿಕ ಅದನ್ನು ನಿರಾಕರಿಸಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, 'ಹೈಕಮಾಂಡ್ ಏನೇ ಹೇಳಿದರೂ ಪಾಲಿಸುತ್ತೇನೆ' ಎಂದಿದ್ದಾರೆ. ಸಚಿವ ಚೆಲುವರಾಯಸ್ವಾಮಿ, ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ತೀರ್ಮಾನ ದೆಹಲಿಯಲ್ಲಿ ನಡೆಯಲಿದೆ ಎಂದರು.

ವಿಜಯ ಕರ್ನಾಟಕ 27 Nov 2025 2:17 pm

ರೈತರಿಗೆ ಗುಡ್ ನ್ಯೂಸ್ : 1,033 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್‌ 27: ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ರೈತರಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದ್ದು, ಪ್ರತಿ ಹೆಕ್ಟೇರ್ 8,000 ಬೆಳೆ ಹಾನಿ ಪರಿಹಾರ ನೀಡಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣಾದಲ್ಲಿ ಬೆಳೆ ಹಾನಿ ಪರಿಹಾರ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಬೆಳೆ

ಒನ್ ಇ೦ಡಿಯ 27 Nov 2025 2:15 pm

ಉಳ್ಳಾಲ: ದರ್ಗಾ ಕ್ಯಾಂಪಸ್ ಗೆ ಅನುದಾನ ಬಿಡುಗಡೆಗೆ ಸ್ಪೀಕರ್ ಯುಟಿ ಖಾದರ್ ಗೆ ಮನವಿ

ಉಳ್ಳಾಲ: ಸಯ್ಯಿದ್ ಮದನಿ ದರ್ಗಾ ಕ್ಯಾಂಪಸ್ ಗೆ ನೂತನವಾಗಿ ನಿರ್ಮಿಸಲಿರುವ ಆವರಣ ಗೋಡೆಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸಭಾಪತಿ ಯು. ಟಿ. ಖಾದರ್ ರವರಿಗೆ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಕೋಶಾಧಿಕಾರಿ ನಾಝಿಂ ಮುಕಚ್ಚೇರಿ ಸಮಿತಿ ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 27 Nov 2025 2:15 pm

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ದಾಖಲಾದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯವು ಗುರುವಾರ ಒಟ್ಟು 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಮಾಹಿತಿ ನೀಡಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎಸ್ ಸುದ್ದಿ ಸಂಸ್ಥೆಯ ಮಾಹಿತಿಯ ಪ್ರಕಾರ, ಪುರ್ಬಚೋಲ್ ಪ್ರದೇಶದ ರಾಜುಕ್ ನ್ಯೂ ಟೌನ್ ಯೋಜನೆಯಲ್ಲಿ ನಿವೇಶನ ಹಂಚಿಕೆ ಸಂಬಂಧ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಈ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹಸೀನಾ ಪ್ರಸ್ತುತ ಪರಾರಿಯಾಗಿರುವುದರಿಂದ ಮತ್ತು ವಿಚಾರಣೆ ವೇಳೆ ಹಾಜರಾಗದ ಕಾರಣ, ನ್ಯಾಯಾಲಯವು ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ಪ್ರತಿ ಪ್ರಕರಣದಲ್ಲೂ ನ್ಯಾಯಾಧೀಶರು ಏಳು ವರ್ಷಗಳ ಜೈಲು ಶಿಕ್ಷೆ ಘೋಷಿಸಿದ್ದು, ಒಟ್ಟಾರೆ ಹಸೀನಾಗೆ 21 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ವಾರ್ತಾ ಭಾರತಿ 27 Nov 2025 2:06 pm

ರೈತರಿಗೆ ಗುಡ್‌ನ್ಯೂಸ್‌: ಬೆಳೆ ಹಾನಿ 1033 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ; ಪ್ರತಿ ಹೆಕ್ಟೇರ್‌ಗೆ ಎಷ್ಟು ಹಣ?

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಮಾನ್ಸೂನ್ ಮಳೆಯಿಂದ ಬೆಳೆ ಹಾನಿಗೊಳಗಾದ 14.24 ಲಕ್ಷ ರೈತರಿಗೆ 1033.60 ಕೋಟಿ ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಪ್ಯಾಕೇಜ್ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಶೇಷ ಯೋಜನೆಯನ್ನು ಗುರುವಾರ ಚಾಲನೆ ನೀಡಿದರು. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ. ಒಟ್ಟಾರೆಯಾಗಿ 2251.63 ಕೋಟಿ ರೂಪಾಯಿ ಪರಿಹಾರ ವಿತರಣೆಯಾಗಲಿದೆ.

ವಿಜಯ ಕರ್ನಾಟಕ 27 Nov 2025 1:59 pm

Fancy Number Plate: ಕಾರಿಗೆ ಬರೋಬ್ಬರಿ 1.17 ಕೋಟಿ ರೂಪಾಯಿಗೆ ಫ್ಯಾನ್ಸಿ ನಂಬರ್ ಖರೀದಿ: ಭಾರೀ ವೈರಲ್‌

Fancy Number Plate: ಹೊಸ ವಾಹನ ಖರೀದಿಸಿದ ವೇಳೆ ಅದಕ್ಕೆ ದುಬಾರಿ ಹಣ ಕೊಟ್ಟು ಫ್ಯಾನ್ಸಿ‌ ನಂಬರ್ ಖರೀದಿಸಿರುವ ಉದಾಹರಣೆಗಳಿಗೆ. ಆದರೆ ಇದೀಗ ದಾಖಲೆಯ 1.17 ಕೋಟಿ ರೂಪಾಯಿ ಬೆಲೆಗೆ ನೋಂದಣಿ ಸಂಖ್ಯೆಯನ್ನು ಮಾರಾಟ ಮಾಡಲಾಗಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಒನ್ ಇ೦ಡಿಯ 27 Nov 2025 1:57 pm

ಇನ್ಫೋಸಿಸ್ ಷೇರು ಬೈಬ್ಯಾಕ್‌ಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ, 8 ಪಟ್ಟಿಗೂ ಹೆಚ್ಚು ಬಿಡ್‌ ಸಲ್ಲಿಕೆ

ಐಟಿ ದೈತ್ಯ ಇನ್ಫೋಸಿಸ್ ನಡೆಸಿದ 18,000 ಕೋಟಿ ರೂ. ಮೌಲ್ಯದ ಷೇರು ಮರುಖರೀದಿ ಯೋಜನೆ (ಬೈಬ್ಯಾಕ್) ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಕಂಪನಿ ಖರೀದಿಸಲು ಮುಂದಾಗಿದ್ದ 10 ಕೋಟಿ ಷೇರುಗಳಿಗೆ ಪ್ರತಿಯಾಗಿ, ಷೇರುದಾರರಿಂದ 82.61 ಕೋಟಿ ಷೇರುಗಳಿಗೆ ಬಿಡ್‌ಗಳು ಸಲ್ಲಿಕೆಯಾಗಿದ್ದು, ಇದು ಸುಮಾರು 8.26 ಪಟ್ಟು ಹೆಚ್ಚಿನ ಬೇಡಿಕೆಯನ್ನು ತೋರಿಸುತ್ತದೆ.

ವಿಜಯ ಕರ್ನಾಟಕ 27 Nov 2025 1:57 pm

ಮನೆ ದಾರಿ ಹಿಡಿದಿದ್ದ ಸಿರಾಜ್ ಗುವಾಹಟಿಯಲ್ಲಿ ಗಂಟೆಗಟ್ಟಲೆ ಬಾಕಿ; ಏರ್ ಇಂಡಿಯಾ ಲೋಪಕ್ಕೆ ಇನ್ನಿಲ್ಲದ ಕೋಪ

Mohammed Siraj X Post- ಏರ್ ಇಂಡಿಯಾ ಸೇವೆ ಬಗ್ಗೆ ದೂರುಗಳು ಕೇಳಿಬರುತ್ತಿರುವುದು ಹೊಸತಲ್ಲ. ಇದೀಗ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಎಕ್ಸ್ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ. ಗುವಾಹಟಿಯಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ತಡವಾಗಿದ್ದಲ್ಲದೆ, ಸರಿಯಾದ ಮಾಹಿತಿ ನೀಡದ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಕ್ರಿಕೆಟಿಗನ ಕ್ಷಮೆ ಯಾಚಿಸಿದೆ. ಏನಿದು ಘಟನೆ?

ವಿಜಯ ಕರ್ನಾಟಕ 27 Nov 2025 1:46 pm

ಮೃತ ಅಧಿಕಾರಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ಕೊಡಿ, ಗಡುವು ವಿಸ್ತರಣೆ ಮಾಡಿ: ಎಸ್‌ಐಆರ್ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ

ಚುನಾವಣಾ ಆಯೋಗಕ್ಕೆ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮೃತಪಟ್ಟ ಅಧಿಕಾರಿಗಳ ಕುಟುಂಬಗಳಿಗೆ 1 ಕೋಟಿ ಪರಿಹಾರ ಹಾಗೂ ಗಡುವು ವಿಸ್ತರಣೆಗೆ ಸಂಘಟನೆ ಒತ್ತಾಯಿಸಿದೆ. ತಾಂತ್ರಿಕ ಸಮಸ್ಯೆಗಳು ಮತ್ತು ಅಧಿಕಾರಿಗಳ ನಿಂದನೆಯಿಂದ ಬಿಎಲ್‌ಒಗಳು ತೀವ್ರ ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ.

ವಿಜಯ ಕರ್ನಾಟಕ 27 Nov 2025 1:43 pm

ಥ್ಯಾಂಕ್ಸ್‌ ಗಿವಿಂಗ್‌ ಹಬ್ಬ: ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌, ಕೆಂಪು-ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ವೈಮಾನಿಕ ದೃಶ್ಯ ವೈರಲ್!!

ಅಮೆರಿಕಾದಲ್ಲಿ ಥ್ಯಾಂಕ್ಸ್‌ ಗಿವಿಂಗ್‌ ಹಬ್ಬದ ರಜೆ ಆರಂಭವಾಗಿದೆ. ಲಾಸ್‌ ಏಂಜಲೀಸ್‌ ನಗರದ ಹೆದ್ದಾರಿಗಳು ವಾಹನಗಳಿಂದ ಕಿಕ್ಕಿರಿದಿವೆ.ಸಂಚಾರ ದಟ್ಟಣೆಯಿಂದಾಗಿ ಲಾಸ್‌ ಏಂಜಲೀಸ್‌ ಹೆದ್ದಾರಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ರಸ್ತೆಗಳು ಕಂಗೊಳಿಸುತ್ತಿರುವ ವೈಮಾನಿಕ ದೃಶ್ಯ ವೈರಲ್‌ ಆಗುತ್ತಿದೆ. ಲಕ್ಷಾಂತರ ಮಂದಿ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಪ್ರತಿ ವರ್ಷದ ಹಬ್ಬದ ಸಮಯದಲ್ಲಿ ಅಮೆರಿಕಾದಲ್ಲಿ ವಾಡಿಕೆಯಾಗಿದೆ. ಈ ಬಾರಿ 81.8 ಮಿಲಿಯನ್ ಜನರು ಪ್ರಯಾಣಿಸುವ ನಿರೀಕ್ಷೆಯಿದೆ ಎಂದು AAA ವರದಿ ನೀಡಿದೆ.

ವಿಜಯ ಕರ್ನಾಟಕ 27 Nov 2025 1:35 pm

ನಾಯಕತ್ವ ಬದಲಾವಣೆ ಚರ್ಚೆ | ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರನ್ನು ದಿಲ್ಲಿಗೆ ಕರೆಸಿ ಮುಂದಿನ ತೀರ್ಮಾನ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಬೆನ್ನಲ್ಲೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಇತರ ಮೂರ್ನಾಲ್ಕು ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಚರ್ಚೆ ನಡೆಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತು ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿ ಮೂರ್ನಾಲ್ಕು ನಾಯಕರನ್ನು ದಿಲ್ಲಿಗೆ ಕರೆಸುತ್ತೇವೆ. ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ. ಅದೊಂದು ತಂಡ. ಹೈಕಮಾಂಡ್ ಒಟ್ಟಿಗೆ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಮುಂದೆ ಏನು ಮಾಡಬೇಕೆಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 27 Nov 2025 1:26 pm

ಬೆಂಗಳೂರು | ಕೆಎಸ್ಸಾರ್ಟಿಸಿ ಬಸ್–ಕ್ಯಾಂಟರ್ ನಡುವೆ ಢಿಕ್ಕಿ: 15ಕ್ಕೂ ಹೆಚ್ಚು ಜನರಿಗೆ ಗಾಯ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ, 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಹೊಸಕೋಟೆ ನಗರದ ಎಂ.ವಿ.ಜೆ. ಆಸ್ಪತ್ರೆಯ ಸಮೀಪ ಈ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನುಜ್ಜುಗುಜ್ಜಾಗಿವೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅತಿ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ತಕ್ಷಣವೇ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸಕೋಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಪರಿಣಾಮ ಕೆಲವು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ವಾಹನ ತೆರವು ಕಾರ್ಯಾಚರಣೆಗೆ ಮುಂದಾಗಿ ಸಂಚಾರ ಸರಾಗವಾಗುವಂತೆ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 27 Nov 2025 12:57 pm

ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಗುಂಡು ಹಾರಿಸಿದ ಪ್ರಕರಣ | ಸಡಿಲ ವಲಸೆ ನೀತಿಗಳು ‘ರಾಷ್ಟ್ರೀಯ ಭದ್ರತೆಗೆ ಅಪಾಯ’ : ಟ್ರಂಪ್ ಆರೋಪ

ವಾಷಿಂಗ್ಟನ್:  ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿ ಅಫ್ಘಾನ್ ಪ್ರಜೆ ಎಂದು ಪತ್ತೆಯಾದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ವಲಸೆ ನೀತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ವೇತಭವನದಿಂದ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಟ್ರಂಪ್, “ಅಮೆರಿಕ ಎದುರಿಸುತ್ತಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಭದ್ರತಾ ಬೆದರಿಕೆಗಳಿಗೆ ಸಡಿಲ ವಲಸೆ ನೀತಿಗಳೇ ಕಾರಣ.  ರಾಷ್ಟ್ರೀಯ ಸುರಕ್ಷತೆಗೆ ಇಂತಹ ಅಪಾಯವನ್ನು ಯಾವುದೇ ಪ್ರಗತಿಶೀಲ ರಾಷ್ಟ್ರ ಸಹಿಸುವುದಿಲ್ಲ” ಎಂದು ಹೇಳಿದರು. ಡಿಸಿಯಲ್ಲಿ ನಡೆದ ಗುಂಡಿನ ದಾಳಿಯನ್ನು ಅವರು ಘೋರ ಭಯೋತ್ಪಾದಕ ಕೃತ್ಯ ಎಂದು ವಿಶ್ಲೇಷಿಸಿದರು. ಘಟನೆ ಬಳಿಕ ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಶನ್ ಸರ್ವಿಸಸ್‌ (USCIS) ಎಲ್ಲಾ ಅಫ್ಘಾನ್ ಪ್ರಜೆಗಳಿಗೆ ವಲಸೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದೇ ವೇಳೆ ಟ್ರಂಪ್ ಆಡಳಿತವು ಅಮೆರಿಕದ ವಲಸೆ ವ್ಯವಸ್ಥೆಯನ್ನು ಪುನರ್‌ರಚಿಸುವ ಪ್ರಯತ್ನದಲ್ಲಿದ್ದು, ವಲಸಿಗರ ಹಿನ್ನೆಲೆ ಪರಿಶೀಲನೆಗೆ ಹೆಚ್ಚುವರಿ ಕಠಿಣ ಮಾನದಂಡಗಳನ್ನು ಅನ್ವಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 27 Nov 2025 12:56 pm

ಸಾಲ ಆಧಾರಿತ ಸಹಾಯಧನ ಯೋಜನೆ: ಮನೆ ನಿರ್ಮಾಣಕ್ಕಾಗಿ ಪಿಎಂ ಆವಾಸ್‌ ಯೋಜನೆಯಡಿ 2.67 ಲಕ್ಷದವರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ನೀವು ಮನೆಕಟ್ಟಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಗೃಹ ಸಾಲಕ್ಕಾಗಿ ಬ್ಯಾಂಕುಗಳನ್ನು ಅಲೆಯ ಬೇಕಿಲ್ಲ. ಅಥವಾ ದುಬಾರಿ ಬಡ್ಡಿದರ ನೀಡಿ ಸಾಲವನ್ನು ಪಡೆಯಬೇಕಿಲ್ಲ. ಸರ್ಕಾರದಿಂದಲೇ ನಿಮಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಹೌದು ಈ ಯೋಜನೆಯ ಹೆಸರು; ಗೃಹ ನಿರ್ಮಾಣಕ್ಕಾಗಿ ಸಾಲ ಆಧಾರಿತ ಸಹಾಯಧನ ಯೋಜನೆ (ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್- CLSS). ಇದು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯ ಒಂದು ಪ್ರಮುಖ ಅಂಶವಾಗಿದ್ದು, ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯಡಿ ದೊರೆಯುವ ಸಾಲದ ಮೊತ್ತ ಎಷ್ಟು? ಯಾರೆಲ್ಲಾ ಇದಕ್ಕೆ ಅರ್ಹರು? ಪ್ರಯೋಜನಗಳು ಏನೇನು ಎಂಬುದನ್ನು ತಿಳಿಯೋಣ.

ವಿಜಯ ಕರ್ನಾಟಕ 27 Nov 2025 12:52 pm

ಕಾವೇರಿಯಲ್ಲಿ ಕಾವೇರಿದ ಸಿದ್ದು ಆಪ್ತರ ಮೀಟಿಂಗ್! ಸಿಎಂ ಬೆನ್ನಿಗೆ ನಿಂತ ಅಹಿಂದ ಬಣ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಬಣ ಅಹಿಂದ ನಾಯಕರ ಬೆಂಬಲ ಪಡೆದಿದ್ದರೆ, ಡಿಕೆ ಶಿವಕುಮಾರ್ ಬಣ ಒಕ್ಕಲಿಗ ಕಾರ್ಡ್ ಪ್ರಯೋಗಿಸುತ್ತಿದೆ. ದೆಹಲಿಯಲ್ಲಿ ಹೈಕಮಾಂಡ್ ಸಭೆ ಇರುವ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಆಪ್ತರು ಮಹತ್ವದ ಸಭೆ ನಡೆಸುತ್ತಿದ್ದಾರೆ. ನಾಯಕತ್ವ ವಿಚಾರವಾಗಿ ಗೊಂದಲ ಬೇಡ ಎಂದು ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದಿರುವ ಶಾಸಕ ಎ.ಎಸ್ ಪೊನ್ನಣ್ಣ ಸಿದ್ದರಾಮಯ್ಯನವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಮಂತ್ರಿಗಳು ಸಿಎಂ ಭೇಟಿಯಾಗೋದು ಸಹಜ ಎಂದಿದ್ದಾರೆ.

ವಿಜಯ ಕರ್ನಾಟಕ 27 Nov 2025 12:28 pm

ಆರು ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ನೀಡುವ ವರದಿಗೆ ಅಸ್ಸಾಂ ಸಂಪುಟ ಅನುಮೋದನೆ

ಗುವಾಹಟಿ : ಅಸ್ಸಾಂ ರಾಜ್ಯದ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಕುರಿತ ವರದಿಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಚೂತಿಯಾ, ಕೊಚ್-ರಾಜ್ಬೊಂಗ್ಷಿ, ಮತಕ್, ಮೊರಾನ್ ಹಾಗೂ ಟಹಿ ಅಹೋಮ್ ಹಾಗೂ ಟೀ ಟ್ರೈಬ್ಸ್‌ (ಆದಿವಾಸಿಗಳು) ಈ ಸ್ಥಾನಮಾನ ಪಡೆದ ಆರು ಸಮುದಾಯಗಳು. ಶಿಕ್ಷಣ ಸಚಿವ ರನೋಜ್ ಪೆಗು, ಮಾಹಿತಿ ತಂತ್ರಜ್ಞಾನ ಸಚಿವ ಕೇಶಬ್ ಮಹಂತಾ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪಿಜೂಷ್ ಹಝಾರಿಕಾ ಅವರನ್ನೊಳಗೊಂಡ ಸಮಿತಿಯ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಅದನ್ನು ಮುಂದಿನ ಕ್ರಮಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಲಾಗುತ್ತದೆ” ಎಂದು ಬುಧವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ಐದು ದಿನಗಳ ಚಳಿಗಾಲದ ಅಧಿವೇಶನ ನವೆಂಬರ್ 29ರಂದು ಮುಕ್ತಾಯಗೊಳ್ಳಲಿದೆ. ಕಳೆದ ಒಂದು ತಿಂಗಳಿನಿಂದ ಪರಿಶಿಷ್ಟ ಬುಡಕಟ್ಟು ಸ್ಥಾನಮಾನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಈ ಆರು ಸಮುದಾಯಗಳ ಸುದೀರ್ಘ ಕಾಲದ ಬೇಡಿಕೆಯನ್ನು ಸಚಿವ ಸಂಪುಟ ಅನುಮೋದಿಸಿರುವುದು ಮಹತ್ವದ ನಡೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ವಾರ್ತಾ ಭಾರತಿ 27 Nov 2025 12:25 pm

ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆ

ಮುಂಬೈ ಮತದಾರರ ಪಟ್ಟಿಯಲ್ಲಿ 11 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳು ಪತ್ತೆಯಾಗಿದ್ದು, ವಿರೋಧ ಪಕ್ಷಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ. ಚುನಾವಣಾ ಆಯೋಗವು ದೋಷಗಳನ್ನು ಸರಿಪಡಿಸಲು ಮನೆ ಮನೆಗೆ ಭೇಟಿ ನೀಡುವ ಕಾರ್ಯವನ್ನು ಪ್ರಾರಂಭಿಸಿದೆ. ಈ ಲೋಪಗಳಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಳಂಬವಾಗುವ ಸಾಧ್ಯತೆಯಿದೆ. ವಿರೋಧ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿವೆ.

ವಿಜಯ ಕರ್ನಾಟಕ 27 Nov 2025 12:19 pm

Mangaluru | ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025: ನವೋದ್ಯಮಿಗಳು, ವಿದ್ಯಾರ್ಥಿಗಳಿಂದ ಹೊಸ ಸ್ಟಾರ್ಟ್‌ಅಪ್‌ಗಳ ಆಹ್ವಾನ

ಮಂಗಳೂರು, ನ.27: ನಗರದ ಕ್ರೆಡೈ, ಸೆಕ್ಷನ್ ಇನ್ಫಿನ್- 8 ಫೌಂಡೇಶನ ಮತ್ತು ಮಿಷನ್ ಉತ್ತಾನ್ ಸಹಯೋಗದಲ್ಲಿ ‘ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ಗಾಗಿ ನವೋದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಂದ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹೊಸ ಸ್ಟಾರ್ಟ್‌ಅಪ್ ಹಾಗೂ ನವೀನ ಆಲೋಚನೆಗಳನ್ನು ಆಹ್ವಾನಿಸಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ರೆಡೈ ಸಿಇಒ ಅರ್ಜುನ್ ಜೆ. ರಾವ್, ಈಗಾಗಲೇ ಸುಮಾರ 30ರಷ್ಟು ನವೋದ್ಯಮಿಗಳು ತಮ್ಮ ಹೊಸ ಸ್ಟಾರ್ಟ್‌ಅಪ್‌ಗಳ ಕುರಿತಂತೆ ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದಾರೆ. ನ. 30ರವರೆಗೆ ಹೊಸ ಆಲೋಚನೆಗಳಿಂದ ಕೂಡಿದ ಹೊಸ ಉದ್ಯಮ, ಸ್ಟಾರ್ಟ್‌ಅಪ್‌ಗಳ ಐಡಿಯಾ ಹೊಂದಿರುವ ವಿದ್ಯಾರ್ಥಿಗಳನ್ನು ಒಳಗೊಂಡು ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು ಎಂದರು. ಮಂಗಳೂರು: ಕ್ರೆಡೈ ಮಂಗಳೂರು ಮತು ಸೆಕ್ಷನ್ ಇನ್ಫಿನ್ 8 ಫೌಂಡೇಶನ್ (ಎಸ್‌ಐ-8) ಸಹಭಾಗಿತ್ವದ ಎಮರ್ಜ್ 2025- ಭಾರತ ಮೊದಲ ಸ್ಟಾರ್ಟ್‌ಅಪ್ ಬೀಚ್ ಉತ್ಸವದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ಇದು ಕರಾವಳಿ ಕರ್ನಾಟಕದ ಸ್ಟಾರ್ಟ್‌ಅಪ್ ಮತ್ತು ಪರಿಸರ ಸಹ್ಯ ಉದ್ಯಮಕ್ಕೆ ಪ್ರೇರಣೆ ನೀಡಿದೆ. ಪ್ರಸಕ್ತ ಸಾಲಿನ ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ಗೆ ಸಲ್ಲಿಕೆಯಾಗುವ ಸ್ಟಾರ್ಟ್‌ಅಪ್‌ಗಳ ಪ್ರೊಟೋಟೈಪ್‌ಗಳು 2026ರ ಜನವರಿ 9ರಿಂದ 11ರವರೆಗೆ ತಣ್ಣೀರುಬಾವಿಯಲ್ಲಿ ನಡೆಯುವ ಎಮರ್ಜ್ 2026ರಲ್ಲಿ ಪ್ರದರ್ಶನಗೊಳ್ಳಲಿವೆ. ಆಯ್ದ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನ, ಕ್ರೆಡೈ ಉದ್ಯಮ ನಾಯಕರಿಂದ ಮಾರ್ಗದರ್ಶನ, ಪೈಲಟ್ ಯೋಜನೆಗಳಿಗೆ ಅಕವಾಶ, ಎಸ್‌ಐ-8 ಮತ್ತು ಮಿಷನ್ ಉತ್ತಾನ್‌ನಿಂದ ಇಂಕ್ಯುಬೇಷನ್ ಬೆಂಬಲ, ಟಾಪ್ 10 ತಂಡಗಳಿಗೆ ಡಿಸೆಂಬರ್ ತಿಂಗಳಲ್ಲಿ ವೃತ್ತಿಪರ ಮಾರ್ಗದರ್ಶನ ದೊರೆಯಲಿದೆ ಎಂದು ಎಸ್‌ಐ-8ನ ಸಂಸ್ಥಾಪಕ ನಿರ್ದೇಶಕ ವಿಶ್ವಾಸ್ ಯು.ಎಸ್.ತಿಳಿಸಿದರು. ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೊಸ ಆಲೋಚನೆಗಳಿಗೆ ಬಲ ತುಂಬುವ ಜತೆಗೆ ವೇದಿಕೆ ಕಲ್ಪಿಸಲಾಗತ್ತದೆ ಹಾಗೂ ಸರಕಾರಗಳಿಂದ ನವೋದ್ಯಮಕ್ಕೆ ದೊರಕುವ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ನಲ್ಲಿ ಭಾಗವಹಿಸುವವರು ನಿರ್ಮಾಣ ತ್ಯಾಜ್ಯ ನಿರ್ವಹಣೆ, ಕ್ರೆಡೈ ಸದಸ್ಯ ಅಪ್ಲಿಕೇಶನ್, ರೇರಾ ಸಿಂಗಲ್ - ವಿಂಡೋ ಅನುಮೋದನಾ ವ್ಯವಸ್ಥೆ, ಏಕೀಕೃತ ನಿರ್ಮಾಣ ಕಾರ್ಮಿಕ ವೇದಿಕೆ, ಮುಕ್ತ ನವೀನತಾ ಸವಾಲ್- ಹಸಿರು ಭವಿಷ್ಯ ನಿರ್ಮಾಣದ ವಿಷಯದಲ್ಲಿ ಹೊಸ ಆಲೋಚನೆಗಳನ್ನು ಪ್ರದರ್ಶಿಸಬಹುದಾಗಿದೆ. ಈ ಮೂಲಕ ರಿಯಲ್ ಎಸ್ಟೇಲ್ ವಲಯವನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಹಾಗೂ ಪರಿಸರ ಸ್ನೇಹಿಯಾಗಿಸಲು ಪರಿಹಾರಗಳನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದು ಕ್ರೆಡೈ ಯೂತ್ ವಿಂಗ್‌ನ ಕಾರ್ಯದರ್ಶಿ ಮಿರಾಜ್ ಯೂಸುಫ್ ತಿಳಿಸಿದರು.

ವಾರ್ತಾ ಭಾರತಿ 27 Nov 2025 12:15 pm

ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ; ನೂರಾರು ಮನೆಗಳು ಧ್ವಂಸ, ಸುನಾಮಿ ಸಾಧ್ಯತೆ ಇಲ್ಲ ಎಂದ ಹವಾಮಾನ ಇಲಾಖೆ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಬೆಂಗ್ಕುಲುದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಗಾಯಾಳುಗಳಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುನಾಮಿ ಅಪಾಯವಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಜಯ ಕರ್ನಾಟಕ 27 Nov 2025 12:02 pm

ಮುಸ್ಲಿಮರು ನಮಗೆ ಮತ ಚಲಾಯಿಸುವುದಿಲ್ಲ : ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕೊರತೆ ಬಗ್ಗೆ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ

ಕೋಝಿಕ್ಕೋಡ್ : ಸಂಸತ್ತಿನಲ್ಲಿ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕೊರತೆ ಕುರಿತು ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಘಟಕದ ಮುಖ್ಯಸ್ಥ ರಾಜೀವ್ ಚಂದ್ರಶೇಖರ್, “ಮುಸ್ಲಿಮರು ನಮಗೆ ಮತ ಚಲಾಯಿಸುವುದಿಲ್ಲ” ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.   ಕೋಝಿಕ್ಕೋಡ್ ಪ್ರೆಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, “ಮುಸ್ಲಿಮರು ಬಿಜೆಪಿಗೆ ಮತ ಚಲಾಯಿಸದೆ ಇರುವುದು ಕೇಂದ್ರ ಸಚಿವ ಸಂಪುಟದಲ್ಲಿ ಅವರ ಪ್ರಾತಿನಿಧ್ಯ ಇಲ್ಲದಿರಲು ಪ್ರಮುಖ ಕಾರಣ” ಎಂದು ಸ್ಪಷ್ಟಪಡಿಸಿದ್ದಾರೆ. “ಅವರು ಬಿಜೆಪಿಗೆ ಮತ ಚಲಾಯಿಸಿದರೆ ಮಾತ್ರ ಮುಸ್ಲಿಂ ಸಂಸದರಿರಲು ಸಾಧ್ಯ. ಮುಸ್ಲಿಂ ಸಂಸದರೇ ಇಲ್ಲವೆಂದ ಮೇಲೆ ಮುಸ್ಲಿಂ ಸಚಿವರು ಹೇಗಿರಲು ಸಾಧ್ಯ? ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಮತ ಚಲಾಯಿಸುವ ಮೂಲಕ, ಮುಸ್ಲಿಂ ಸಮುದಾಯ ಯಾವ ಪ್ರಯೋಜನಗಳನ್ನು ಪಡೆದಿದೆ? ಕಾಂಗ್ರೆಸ್ ಗೆ ಮತ ಚಲಾಯಿಸುವ ಮೂಲಕ ಮುಸ್ಲಿಮರು ಏನು ಸಾಧಿಸಿದ್ದಾರೆ. ಅವರು ಬಿಜೆಪಿಗೆ ಮತ ಚಲಾಯಿಸಲು ಬಯಸದಿದ್ದಾಗ ಅವರೇಗೆ ಪ್ರಾತಿನಿಧ್ಯವನ್ನು ನಿರೀಕ್ಷಿಸಲು ಸಾಧ್ಯ?” ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 27 Nov 2025 11:33 am

ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟು ಕೊಡಲಿ, ಇಲ್ಲದಿದ್ದರೆ ಸರಕಾರವೇ ಉರುಳಬಹುದು: ವೀರೇಶ್ವರ ಸ್ವಾಮೀಜಿ

ಬೆಳಗಾವಿ :“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕು.” ಇಲ್ಲದಿದ್ದರೆ ಸರಕಾರವೇ ಉರುಳಬಹುದು ಎಂದು ಕಿತ್ತೂರು ತಾಲೂಕಿನ ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದ್ದಾರೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿಕೆಶಿ ನೀಡಿದ ಸಹಕಾರವನ್ನು ನೆನಪಿಸಿ, “ಇದೀಗ ಎರಡನೇ ಅವಧಿಯಲ್ಲಿ ಸಿಎಂ ಸ್ಥಾನ ಡಿ.ಕೆ. ಶಿವಕುಮಾರ್ ಅವರಿಗೆ ನೀಡುವುದು ನೈತಿಕ ಜವಾಬ್ದಾರಿ” ಎಂದು ಹೇಳಿದ್ದಾರೆ. ಸ್ಥಾನ ಹಸ್ತಾಂತರದ ವಿಚಾರ ಮುಂದೂಡಿದರೆ ಸರ್ಕಾರವೇ ಅಸ್ಥಿರವಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ. “ಅಧಿಕಾರ ಬಿಟ್ಟು ಕೊಡದಿದ್ದರೆ ಸಿದ್ದರಾಮಯ್ಯ ವಾಗ್ದಾನ ಭ್ರಷ್ಟರಾಗಿ ಜನಮನದಲ್ಲಿ ಉಳಿಯುವ ಅಪಾಯವಿದೆ. ಹಠ–ಮೊಂಡುತನ ಬಿಟ್ಟು ಕೊಟ್ಟ ಗ್ಯಾರಂಟಿ ಪಾಲಿಸಬೇಕು” ಎಂದು ವೀರೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ವಾರ್ತಾ ಭಾರತಿ 27 Nov 2025 11:28 am

'ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ಅತಿ ದೊಡ್ಡ ಶಕ್ತಿ' - ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ರಾ ಡಿಕೆಶಿ?

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (ಮಾತಿನ ಶಕ್ತಿಯೇ ವಿಶ್ವದ ಶಕ್ತಿ) ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯನವರನ್ನು ಉಲ್ಲೇಖಿಸಿ ಡಿಕೆಶಿ ಹೇಳಿದ್ದಾರೆ ಎಂದು ಚರ್ಚಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ಮಾಜಿ ಸಂಸದ ಡಿಕೆ ಸುರೇಶ್ ಕೂಡ, 'ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪಲ್ಲ' ಎಂದು ಹೇಳಿರುವುದು ಗಮನ ಸೆಳೆದಿದೆ.

ವಿಜಯ ಕರ್ನಾಟಕ 27 Nov 2025 11:25 am

ರಾಷ್ಟ್ರೀಯ ಸಂಕಲ್ಪ: ಬಾಲ್ಯವಿವಾಹ ಮುಕ್ತ ಭಾರತಕ್ಕೆ ಚಾಲನೆ ನೀಡುತ್ತಿರುವ ಇಡೀ ಸರಕಾರ ಮತ್ತು ಸಮಾಜ

ಬೇಟಿ ಬಚಾವೋ, ಬೇಟಿ ಪಢಾವೋ ಬಗ್ಗೆ ಪ್ರಧಾನ ಮಂತ್ರಿಯವರ ದೃಢವಾದ ಬದ್ಧತೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮಾರ್ಗದರ್ಶಿಯಾಗಿದೆ, ಇದು 2047ರ ವೇಳೆಗೆ ವಿಕಸಿತ ಭಾರತ ಎಂಬ ನಮ್ಮ ಸಾಮೂಹಿಕ ಧ್ಯೇಯವನ್ನು ಬಲಪಡಿಸಿದೆ. ಈ ಪ್ರಯಾಣದಲ್ಲಿ ಮಹತ್ವದ ಹೆಜ್ಜೆ ಯೆಂದರೆ ಕಳೆದ ವರ್ಷ ನವೆಂಬರ್ 27 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನವನ್ನು ಪ್ರಾರಂಭಿಸಲಾಯಿತು. ನಮ್ಮ ದಿಟ್ಟ ಮತ್ತು ಅಚಲ ದೃಷ್ಟಿಕೋನದೊಂದಿಗೆ, 2030ರ ವೇಳೆಗೆ ಬಾಲ್ಯವಿವಾಹವನ್ನು ಕೊನೆಗೊಳಿಸುವ ನಮ್ಮ ರಾಷ್ಟ್ರೀಯ ಬದ್ಧತೆಯನ್ನು ನಾವು ಪುನರುಚ್ಚರಿಸಿದ್ದೇವೆ, ಇದರಿಂದಾಗಿ ಪ್ರತಿಯೊಬ್ಬ ಬಾಲಕಿ ಮತ್ತು ಬಾಲಕ ಸುರಕ್ಷಿತವಾಗಿ ಬೆಳೆಯಬಹುದು, ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಮತ್ತು ಭವಿಷ್ಯವನ್ನು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಬಹುದು. ಆರಂಭದಿಂದಲೂ, ನಾವು ಇಡೀ ಸರಕಾರ, ಇಡೀ ಸಮಾಜ ಎಂಬ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ, ಈ ಸವಾಲನ್ನು ನೀತಿಯ ಮೂಲಕ ಮಾತ್ರ ಪರಿಹರಿಸಲಾಗುವುದಿಲ್ಲ ಎಂದು ಗುರುತಿಸಿದ್ದೇವೆ. ಇದಕ್ಕೆ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ - ಕುಟುಂಬಗಳು, ಸಮುದಾಯಗಳು, ಮುಂಚೂಣಿ ಕಾರ್ಯಕರ್ತರು, ಸಂಸ್ಥೆಗಳು ಮತ್ತು ಸರಕಾರವು ಶತಮಾನಗಳಷ್ಟು ಹಳೆಯದಾದ ಪದ್ಧತಿಯನ್ನು ಮುರಿಯಲು ಮತ್ತು ಪ್ರತಿ ಮಗುವಿನ ಆಕಾಂಕ್ಷೆಗಳನ್ನು ರಕ್ಷಿಸಲು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು. ನಮ್ಮ ಸಾಮಾನ್ಯ ಸಂಕಲ್ಪದ ಬಲವಾದ ಪ್ರತಿಬಿಂಬವಾಗಿ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿರುವ ಲಕ್ಷಾಂತರ ಜನರು ಬಾಲ್ಯವಿವಾಹವನ್ನು ಕೊನೆಗೊಳಿಸಲು ಪ್ರತಿಜ್ಞೆ ಮಾಡಲು ಮುಂದೆ ಬಂದಿದ್ದಾರೆ. ಬಾಲ್ಯವಿವಾಹ ಮುಕ್ತ ಭಾರತಕ್ಕಾಗಿ ಇಡೀ ಸರಕಾರ ಒಗ್ಗೂಡಿದೆ. ಬಾಲ್ಯ ವಿವಾಹವು ನಮ್ಮ ದೇಶದ ಅತ್ಯಂತ ಆಳವಾದ ಸವಾಲುಗಳಲ್ಲಿ ಒಂದಾಗಿದೆ, ಇದು ತಲೆಮಾರುಗಳಿಂದ ಮುಂದುವರಿದಿದೆ. ಶಿಕ್ಷಣ, ಸಂಪನ್ಮೂಲಗಳು ಮತ್ತು ಜಾಗೃತಿಗೆ ಸೀಮಿತ ಪ್ರವೇಶ ಹೊಂದಿರುವ ಸಮುದಾಯಗಳಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ. ಕೊರತೆ ಮತ್ತು ಅಸಮಾನ ಅವಕಾಶಗಳಿಂದ ಸೃಷ್ಟಿಯಾದ ಈ ಅಂತರಗಳು ಈ ಪದ್ಧತಿ ಮುಂದುವರಿಯಲು ಅನುವು ಮಾಡಿ ಕೊಟ್ಟಿವೆ, ಅಸಂಖ್ಯಾತ ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿವೆ. ಇಂದು, ಆ ವಾಸ್ತವವು ನಿರ್ಣಾಯಕವಾಗಿ ಮತ್ತು ಉತ್ತಮವಾಗಿ ಬದಲಾಗುತ್ತಿದೆ. ಮೋದಿ ಸರಕಾರದ ಅಡಿಯಲ್ಲಿ, ನಾವು ಈ ಪದ್ಧತಿಗೆ ಒಂದು ಕಾಲದಲ್ಲಿ ಉತ್ತೇಜನ ನೀಡಿದ ಬೇರುಗಳನ್ನೇ ಪರಿಹರಿಸುತ್ತಿದ್ದೇವೆ. ಸ್ಪಷ್ಟ ನೀತಿ ನಿರ್ದೇಶನ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಯೋಜನೆಗಳು ಮತ್ತು ಆಡಳಿತದಲ್ಲಿ ಹೊಸ ನಂಬಿಕೆಯೊಂದಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮುಂಚೂಣಿಯಲ್ಲಿದೆ, ಬಾಲ್ಯವಿವಾಹ ಮುಂದುವರಿಯಲು ಅನುವು ಮಾಡಿಕೊಟ್ಟ ಪರಿಸ್ಥಿತಿಗಳನ್ನು ಕಿತ್ತುಹಾಕುತ್ತಿದೆ. ನಾವು ನೋಡುತ್ತಿರುವ ಪ್ರಗತಿಯು ಉದ್ದೇಶಪೂರ್ವಕ ಮತ್ತು ಘನವಾಗಿದ್ದು, ಮಹಿಳೆಯರು ಮತ್ತು ಮಕ್ಕಳನ್ನು ದೇಶದ ಅಭಿವೃದ್ಧಿಯ ಕೇಂದ್ರದಲ್ಲಿ ಇರಿಸುವ ಆಡಳಿತ ಮಾದರಿಯ ಮೇಲೆ ನಿರ್ಮಿಸಲಾಗಿದೆ. ದುರ್ಬಲತೆಯ ಮೂಲ ಕಾರಣಗಳನ್ನು ಪರಿಹರಿಸಲು ನಮ್ಮ ಉಪಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ದೇಶದ ಅತ್ಯಂತ ದೂರದ ಹಳ್ಳಿ ಮತ್ತು ಹಳ್ಳಿಯಲ್ಲಿರುವ ಅತ್ಯಂತ ದುರ್ಬಲ ಮಗುವಿನ ಜೀವನವನ್ನು ಸ್ಪರ್ಶಿಸುವ ಪ್ರತಿಯೊಂದು ಹಕ್ಕು ಕೊನೆಯ ಮೈಲಿಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಹದಿಹರೆಯದ ಹುಡುಗಿಯವರೆಗೆ, ಅವರ ಜೀವನದ ಪ್ರತಿಯೊಂದು ಹಂತವನ್ನು ರಕ್ಷಿಸಲಾಗಿದೆ, ಆದ್ಯತೆ ನೀಡಲಾಗಿದೆ ಮತ್ತು ಸಬಲೀಕರಣಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಮಹಿಳೆಯರು ಮತ್ತು ಮಕ್ಕಳನ್ನು ಅಪಾಯದ ಪ್ರತಿಯೊಂದು ಹಂತದಲ್ಲೂ ಬೆಂಬಲಿಸಲು ಪ್ರತಿಯೊಂದು ಉಪಕ್ರಮವನ್ನು ರೂಪಿಸಲಾಗಿದೆ. ಪೋಷಣ್ ಟ್ರ್ಯಾಕರ್ ಮತ್ತು ಪೋಷಣ್ ಭಿ ಪಢಾಯಿ ಭಿಯಿಂದ ಸಮಗ್ರ ಶಿಕ್ಷಾ ಅಭಿಯಾನದವರೆಗೆ ಮತ್ತು ರಾಷ್ಟ್ರೀಯ ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯವರೆಗೆ, ಪ್ರತಿಯೊಂದು ಉಪಕ್ರಮವು ಪ್ರತಿ ಮಗುವಿಗೆ ಸುರಕ್ಷತಾ ಜಾಲವಾಗಿದೆ ಮತ್ತು ಸುರಕ್ಷಿತ, ಗೌರವಾನ್ವಿತ ಮತ್ತು ಸಮಾನ ಭವಿಷ್ಯದತ್ತ ಒಂದು ಮಾರ್ಗವಾಗಿದೆ. ಎಲ್ಲರನ್ನು ಒಳಗೊಳ್ಳುವುದಕ್ಕೆ ವೇಗವರ್ಧಕವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಸಚಿವಾಲಯದ ಪ್ರಮುಖ ಡಿಜಿಟಲ್ ವೇದಿಕೆಯಾದ ಪೋಷಣ್ ಟ್ರ್ಯಾಕರ್ 1.4 ಮಿಲಿಯನ್ ಅಂಗನವಾಡಿ ಕೇಂದ್ರಗಳನ್ನು ಹಾಲುಣಿಸುವ ತಾಯಂದಿರು, ಆರು ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ ಹೆಣ್ಣುಮಕ್ಕಳೊಂದಿಗೆ ಸುಲಭವಾಗಿ ಸಂಪರ್ಕಿಸುತ್ತದೆ. ಇದು ಈಗಾಗಲೇ ದೇಶಾದ್ಯಂತ 101.4 ಮಿಲಿಯನ್ ಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಬಲವಾದ ಸುರಕ್ಷತಾ ಜಾಲವನ್ನು ಸೃಷ್ಟಿಸಿದೆ. ಈ ಡಿಜಿಟಲ್ ಸಕ್ರಿಯಗೊಳಿಸುವಿಕೆಗೆ ಪೂರಕವಾಗಿ, ಪೋಷಣ್ ಭಿ ಪಢಾಯಿ ಭಿ ಒಂದು ಪರಿವರ್ತಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಉಪಕ್ರಮವಾಗಿದೆ, ಪ್ರತಿ ಪೂರ್ವ-ಪ್ರಾಥಮಿಕ ಮಗುವು ಸಮಗ್ರ, ಉತ್ತಮ-ಗುಣಮಟ್ಟದ ಆರಂಭಿಕ ಉತ್ತೇಜನ ಪಡೆಯುವುದನ್ನು ಖಚಿತಪಡಿಸುತ್ತದೆ, ಇದು ಜೀವಿತಾವಧಿಯ ಕಲಿಕೆಗೆ ಅಡಿಪಾಯ ಹಾಕುತ್ತದೆ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಯುವಜನರಿಗೆ ಉದ್ಯಮ-ಸಂಬಂಧಿತ ಕೌಶಲ್ಯಗಳನ್ನು ಕಲಿಸುವ ಮೂಲಕ ಮತ್ತು ಅವರಿಗೆ ಆರ್ಥಿಕ ಪ್ರೋತ್ಸಾಹ ಮತ್ತು ಮಾನ್ಯತೆ ಪಡೆದ ಸರಕಾರಿ ಪ್ರಮಾಣೀಕರಣವನ್ನು ಒದಗಿಸುವ ಮೂಲಕ ಈ ಸುರಕ್ಷತಾ ಜಾಲವನ್ನು ಮತ್ತಷ್ಟು ಬಲಪಡಿಸುತ್ತದೆ. ಅದೇ ರೀತಿ, ಪಿಎಂ-ದಕ್ಷ್ ಯೋಜನೆಯು ಬಾಲ್ಯವಿವಾಹಕ್ಕೆ ಹೆಚ್ಚು ಗುರಿಯಾಗುವ ಹಿಂದುಳಿದ ಸಮುದಾಯಗಳ, ವಿಶೇಷವಾಗಿ ಪರಿಶಿಷ್ಟ ಜಾತಿ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಯುವಜನರನ್ನು ಸಬಲೀಕರಣಗೊಳಿಸುತ್ತದೆ. ಅವರಿಗೆ ಕೌಶಲ್ಯ ಮತ್ತು ಅವಕಾಶಗಳನ್ನು ನೀಡುವ ಮೂಲಕ, ನಾವು ಶ್ರೀಮಂತ, ಸ್ವತಂತ್ರ ಜೀವನಕ್ಕಾಗಿ ಮಾರ್ಗಗಳನ್ನು ಸೃಷ್ಟಿಸುತ್ತಿದ್ದೇವೆ ಮತ್ತು ಮುಂಬರುವ ಪೀಳಿಗೆಗೆ ಹೊಸ ಪೂರ್ವನಿದರ್ಶನವನ್ನು ಸ್ಥಾಪಿಸುತ್ತಿದ್ದೇವೆ. ಕೆಲವೇ ವರ್ಷಗಳ ಹಿಂದೆ, ಬಾಲ್ಯವಿವಾಹವನ್ನು ಕೊನೆಗೊಳಿಸುವ ಕಲ್ಪನೆಯು ಅಸಂಭವವೆಂದು ತೋರುತ್ತಿತ್ತು, ಅವಾಸ್ತವಿಕವೂ ಆಗಿತ್ತು. ಆದರೆ ಭಾರತವು ಬೇರೆಯದೇ ಆದದ್ದನ್ನು ಸಾಬೀತುಪಡಿಸಿದೆ. ಸ್ಪಷ್ಟ ನೀತಿ, ಸ್ಥಿರವಾದ ಕ್ರಮ, ಕೇಂದ್ರೀಕೃತ ತಳಮಟ್ಟದ ಪ್ರಯತ್ನಗಳು ಮತ್ತು ಗೋಚರ ಪ್ರಗತಿಯ ಮೂಲಕ, ನಾವು ಆ ಗ್ರಹಿಕೆಗೆ ಸವಾಲು ಹಾಕಿದ್ದೇವೆ ಮತ್ತು ಬದಲಾವಣೆ ಸಾಧ್ಯ ಮಾತ್ರವಲ್ಲ, ಈಗಾಗಲೇ ನಡೆಯುತ್ತಿದೆ ಎಂದು ತೋರಿಸಿದ್ದೇವೆ. ಈ ಅಭೂತಪೂರ್ವ ಬದಲಾವಣೆಯು ಸಾವಿರಾರು ಸಣ್ಣ ಮತ್ತು ದೊಡ್ಡ ದೃಢ ಪ್ರಯತ್ನಗಳ ಫಲಿತಾಂಶವಾಗಿದೆ. ನಮ್ಮ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು (ಸಿಎಂಪಿಒ) ಈ ಧ್ಯೇಯದ ಬೆನ್ನೆಲುಬಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷವೊಂದರಲ್ಲೇ, ದೇಶಾದ್ಯಂತ 37,000 ಕ್ಕೂ ಹೆಚ್ಚು ಸಿಎಂಪಿಒಗಳನ್ನು ನೇಮಿಸುವ ಮೂಲಕ ನಾವು ನಮ್ಮ ಮುಂಚೂಣಿಯನ್ನು ಬಲಪಡಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ, ಪಂಚಾಯತ್ ಗಳನ್ನು ಬಲಪಡಿಸುವ ಮೂಲಕ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಜಿಲ್ಲಾಡಳಿತಗಳಿಗೆ ಶಿಕ್ಷಣ ನೀಡುವ ಮೂಲಕ, ಅತ್ಯಂತ ಅಂಚಿನಲ್ಲಿರುವ ಕುಟುಂಬಗಳು ಸಹ ಸರಕಾರಿ ಯೋಜನೆಗಳಿಗೆ ಸಂಪರ್ಕಗೊಂಡಿವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ, ಮಕ್ಕಳನ್ನು ಮತ್ತೆ ಶಾಲೆಗೆ ತರುತ್ತಿದ್ದೇವೆ ಮತ್ತು ಬಾಲ್ಯ ವಿವಾಹದ ಗಂಭೀರ ಉಲ್ಲಂಘನೆಗಳ ಬಗ್ಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಇಲ್ಲಿಯವರೆಗೆ, ನಾವು ಶಾಲೆಯಿಂದ ಹೊರಗುಳಿದ 6,30,000 ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಗುರುತಿಸಿ ತರಗತಿಗಳಿಗೆ ಮತ್ತೆ ಸೇರಿಸಿದ್ದೇವೆ. ಮೌನವಾಗಿರುವುದರಿಂದ ವರದಿ ಮಾಡುವವರೆಗೆ, ಕಳಂಕದಿಂದ ಬೆಂಬಲದವರೆಗೆ - ಭಾರತ ಬದಲಾವಣೆಯನ್ನು ಆರಿಸಿಕೊಳ್ಳುತ್ತಿದೆ. ಇಂದು, ಈ ಸಮಸ್ಯೆಯನ್ನು ಹೆಚ್ಚಿನ ನಿಖರತೆ, ಪಾರದರ್ಶಕತೆ ಮತ್ತು ಪರಿಣಾಮದೊಂದಿಗೆ ಪರಿಹರಿಸಲು ನಾವು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಬಾಲ್ಯ ವಿವಾಹ ಮುಕ್ತ ಭಾರತ ಪೋರ್ಟಲ್ ಈ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಇದು ದೇಶಾದ್ಯಂತ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ, ಪ್ರಕರಣಗಳನ್ನು ವರದಿ ಮಾಡಲು ಪರಿಣಾಮಕಾರಿ ವಿಧಾನವನ್ನು ಒದಗಿಸುವ ಮತ್ತು ಪಾಲುದಾರರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಕೇಂದ್ರೀಕೃತ ವೇದಿಕೆಯಾಗಿದೆ. ಮೊದಲ ಬಾರಿಗೆ, ಬಾಲ್ಯವಿವಾಹ ಮುಕ್ತ ಭಾರತದ ಕನಸನ್ನು ಏಕೀಕೃತ ರಾಷ್ಟ್ರೀಯ ಧ್ಯೇಯವಾಗಿ ಪರಿವರ್ತಿಸಲಾಗಿದೆ. ಭಾರತ ಸರಕಾರದ ಪ್ರತಿಯೊಂದು ವಿಭಾಗ ಮತ್ತು ಸಮಾಜದ ಪ್ರತಿಯೊಂದು ವಿಭಾಗವು ಒಂದೇ ಉದ್ದೇಶ ಮತ್ತು ದೃಢಸಂಕಲ್ಪದೊಂದಿಗೆ ಒಟ್ಟಾಗಿ ಮುಂದುವರಿಯುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ, ಇಂದು ನಾವು ನಮ್ಮ ಮಕ್ಕಳನ್ನು ರಕ್ಷಿಸುವುದಲ್ಲದೆ, ವಿಕಸಿತ ಭಾರತಕ್ಕಾಗಿ ಬಲವಾದ, ಆತ್ಮವಿಶ್ವಾಸದ ಮತ್ತು ಸಶಕ್ತವಾದ ಅಡಿಪಾಯವನ್ನು ಹಾಕುತ್ತಿದ್ದೇವೆ. ಬಾಲ್ಯ ವಿವಾಹದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಭಾರತವು ಒಂದು ಮಹತ್ವದ ತಿರುವು ತಲುಪುತ್ತಿರುವಾಗ, ಸರಕಾರಗಳು ಮತ್ತು ಸಮುದಾಯಗಳು ಪ್ರತಿ ಮಗುವನ್ನು ರಕ್ಷಿಸಲು ಮತ್ತು ಬಾಲ್ಯ ವಿವಾಹದ ಜಾಗತಿಕ ಪಿಡುಗನ್ನು ತ್ವರಿತವಾಗಿ ಮತ್ತು ಶಾಶ್ವತವಾಗಿ ನಿರ್ಮೂಲನೆ ಮಾಡಲು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಹೊಸ ಮಾದರಿಯನ್ನು ನಾವು ಜಗತ್ತಿಗೆ ನೀಡುತ್ತಿದ್ದೇವೆ. ಅಷ್ಟಕ್ಕೂ, ಈ ಮಕ್ಕಳು ನಾವೆಲ್ಲರೂ ನಿರ್ಮಿಸಲು ಬಯಸುವ ವಿಕಸಿತ ಭಾರತದ ದೀಪಧಾರಿಗಳು ಮತ್ತು ನಿಜವಾದ ಸಾರಥಿಗಳು.

ವಾರ್ತಾ ಭಾರತಿ 27 Nov 2025 11:22 am

ದೆಹಲಿಗೆ ಶಿಫ್ಟಾಗಲಿದೆ ನಾಯಕತ್ವ ಬಿಕ್ಕಟ್ಟು: ಗೊಂದಲ ಸೆಟಲ್ ಮಾಡುವ ಸುಳಿವು ನೀಡಿದ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ರಾಜ್ಯದ ಗೊಂದಲಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಹೈಕಮಾಂಡ್ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಸೋನಿಯಾ ಗಾಂಧಿ ಅವರ ಆಗಮನದ ಬಳಿಕ ಅಂತಿಮ ತೀರ್ಮಾನ ಸಾಧ್ಯತೆ ಇದೆ.

ವಿಜಯ ಕರ್ನಾಟಕ 27 Nov 2025 11:13 am

ದೇರಳಕಟ್ಟೆ: ಅಲ್ ಸಲಾಮ ವತಿಯಿಂದ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ

ಉಳ್ಳಾಲ: ಮುಸ್ಲಿಂ ಸಮುದಾಯದ ಯುವಕರು ಸರ್ಕಾರಿ ಕೆಲಸದ ಬಗ್ಗೆ ನಿರಾಸಕ್ತಿ ಹೊಂದಿದ ಕಾರಣ ಸರ್ಕಾರಿ ಉದ್ಯೋಗಿಗಳ ಕೊರತೆಯಿಂದಾಗಿ ಸಮಾಜದಲ್ಲಿ ಅಶಾಂತಿಗೂ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಜೀವನದಲ್ಲೇ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುವುದು ಅಗತ್ಯ ಎಂದು ಜಮೀಯತುಲ್ ಫಲಾಹ್ ದ.ಕ.ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆಕೆ ಅಭಿಪ್ರಾಯಪಟ್ಟರು. ದೇರಳಕಟ್ಟೆ ಅಲ್ ಸಲಾಮ ವತಿಯಿಂದ ನಡೆದ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಮೀಯತುಲ್ ಫಲಾಹ್ ಉಳ್ಳಾಲ‌ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್ ಮಾತನಾಡಿ, ಸಮುದಾಯದಲ್ಲಿ ಶಿಕ್ಷಣ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಶಿಕ್ಷಣಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳನ್ನು ಪ್ರೋತ್ಸಾಹಿಸುವುದು ಜಮೀಯತುಲ್ ಫಲಾಹ್ ನ ಮೂಲ ಉದ್ದೇಶ, ಈ ಎರಡು ಕಾರ್ಯಕ್ರಮ ಎಲ್ಲಿ ನಡೆದರೂ ಸಂಸ್ಥೆ ಸಹಕಾರ ನೀಡಲಿದೆ ಎಂದು ತಿಳಿಸಿದರು. ಮೇಲ್ತೆನೆ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗ ಅರಸಿ ವಿದೇಶಕ್ಕೆ ತೆರಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಎಲ್ಸಿ‌ ಹಂತದಲ್ಲೇ ಮಕ್ಕಳಿಗೆ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದರು. ಈ ಸಂದರ್ಭ ಶೈಕ್ಷಣಿಕ ಸಾಧನೆಗಾಗಿ ಸಂಸ್ಥೆಯ ಹಳೆವಿದ್ಯಾರ್ಥಿನಿ ಆಶುರಾ ಅಳಿಕೆ ಅವರನ್ನು ಅಭಿನಂದಿಸಲಾಯಿತು. ಅಭಿ ಗೌಡ ಬೆಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಸಂಸ್ಥೆಯ ಸಂಸ್ಥಾಪಕ ಇಕ್ಬಾಲ್ ಬಾಳಿಲ, ಕರ್ನಾಟಕ ಮುಸ್ಲಿಂ ಭಾಂದವ್ಯ ವೇದಿಕೆ ಅಧ್ಯಕ್ಷ ಝಾಕಿರ್ ಹುಸೈನ್, ಪತ್ರಕರ್ತರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಅನ್ಸಾರ್ ಇನೊಳಿ,‌ ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ನಝೀರ್ ಬೆಳುವಾಯಿ, ನಿಸಾರ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಶೇಖ್ ಮುಹಮ್ಮದ್ ಇರ್ಫಾನಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 27 Nov 2025 11:12 am

ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣ | ‘ರಾಷ್ಟ್ರವ್ಯಾಪಿ ಭದ್ರತಾ ತುರ್ತುಸ್ಥಿತಿ’ ಘೋಷಿಸಿದ ಅಧ್ಯಕ್ಷ ಟಿನುಬು

ಅಬುಜಾ: ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣಗಳ ಪ್ರಕರಣಗಳು ಕಳೆದ ವಾರದಿಂದ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಬೋಲಾ ಟಿನುಬು ಬುಧವಾರ ರಾಷ್ಟ್ರವ್ಯಾಪಿ ಭದ್ರತಾ ತುರ್ತುಸ್ಥಿತಿ ಘೋಷಿಸಿದ್ದಾರೆ. “ಇದು ರಾಷ್ಟ್ರದ ಗಂಭೀರ ಭದ್ರತಾ ತುರ್ತುಸ್ಥಿತಿ. ವಿಶೇಷವಾಗಿ ಭದ್ರತೆಗೆ ಹೆಚ್ಚು ಸವಾಲಾದ ಪ್ರದೇಶಗಳಲ್ಲಿ ಹೆಚ್ಚಿನ ಸಶಸ್ತ್ರ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಇಳಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿದ್ದೇವೆ,” ಎಂದು ಟಿನುಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಒಂದು ವಾರದೊಳಗಾಗಿ, ಅಪರಿಚಿತ ದಾಳಿಕೋರರು 25 ಶಾಲಾ ಬಾಲಕಿಯರು, 38 ಆರಾಧಕರು, 315 ಶಾಲಾ ಮಕ್ಕಳು ಮತ್ತು ಶಿಕ್ಷಕರು, ಹೊಲದತ್ತ ನಡೆದುಕೊಂಡು ಹೋಗುತ್ತಿದ್ದ 13 ಯುವತಿಯರು ಹಾಗೂ ಇನ್ನೂ 10 ಮಹಿಳೆಯರು ಮತ್ತು ಮಕ್ಕಳನ್ನು ದೇಶದ ವಿವಿಧ ಭಾಗಗಳಲ್ಲಿ ಅಪಹರಿಸಿದ್ದಾರೆ. ಬೇಸತ್ತು ಹೋಗಿರುವ ಭದ್ರತಾ ಪರಿಸ್ಥಿತಿಯ ನಡುವೆಯೂ, ಡಝನ್‌ ಗಟ್ಟಲೆ ಜನರನ್ನು ರಕ್ಷಿಸಲಾಗಿದ್ದು, ಕೆಲವರು ಸ್ವತಃ ತಪ್ಪಿಸಿಕೊಂಡಿದ್ದಾರೆ. ಆದರೆ ನೈಜರ್ ರಾಜ್ಯದ ಬೋರ್ಡಿಂಗ್ ಶಾಲೆಯೊಂದರಿಂದ 265ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಶುಕ್ರವಾರ ಅಪಹರಣಕ್ಕೀಡಾದ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ. ಪರಿಸ್ಥಿತಿ ಗಂಭೀರಗೊಂಡಿರುವುದರಿಂದ ಸಶಸ್ತ್ರ ಪಡೆಯಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ತುರ್ತಾಗಿ ಹೆಚ್ಚಿಸಲು ಅಧ್ಯಕ್ಷರು ಆದೇಶಿಸಿದ್ದಾರೆ. ವಾರಾಂತ್ಯದಲ್ಲಿ ವಿಐಪಿ ಭದ್ರತಾ ಕರ್ತವ್ಯಗಳಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಸಾಮಾನ್ಯ ಪೊಲೀಸ್ ಕಾರ್ಯಗಳಿಗೆ ಮರು ನಿಯೋಜಿಸಿ, 30,000 ಹೊಸ ಪೊಲೀಸ್ ಅಧಿಕಾರಿಗಳ ನೇಮಕಾತಿಗೆ ಅವರು ಅನುಮೋದಿಸಿದ್ದರು. ಈಗ ಮತ್ತೊಂದು 20,000 ನೇಮಕಾತಿಗೆ ಸೂಚನೆ ನೀಡಿದ್ದು, ಒಟ್ಟಾರೆ 50,000 ಹೊಸ ಅಧಿಕಾರಿಗಳನ್ನು ಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ನೈಜೀರಿಯಾದಲ್ಲಿ ಶಾಲಾ ಮಕ್ಕಳು ದಾಳಿಕೋರರಿಗೆ ಗುರಿಯಾಗುವುದು ಹೊಸದೇನಲ್ಲ. 2014ರಲ್ಲಿ ಬೊಕೊ ಹರಾಮ್ ಉಗ್ರ ಸಂಘಟನೆ ಚಿಬೋಕ್‌ನಲ್ಲಿ 276 ವಿದ್ಯಾರ್ಥಿನಿಯರನ್ನು ಅಪಹರಿಸಿದ ಘಟನೆ ಬಳಿಕ ಇಂತಹ ದಾಳಿಗಳು ಹಲವು ಬಾರಿ ಪುನರಾವರ್ತನೆಯಾಗಿವೆ. ಇತ್ತೀಚಿನ ಅಪಹರಣಗಳ ಸರಣಿ ರಾಷ್ಟ್ರದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ. 

ವಾರ್ತಾ ಭಾರತಿ 27 Nov 2025 11:06 am

Karnataka CM Crisis: ಡಿಕೆಶಿ ಬೆನ್ನಿಗೆ ನಿಂತ ಒಕ್ಕಲಿಗ ಶ್ರೀಗಳು... ಆಕ್ಷೇಪಿಸಿದ ಕಾಗಿನೆಲೆ ಸ್ವಾಮೀಜಿಗಳಿಂದ ಕೌಂಟರ್...

Vokkaliga Vs Kuruba: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯಂತಹ ಮಹತ್ವದ ಬೆಳವಣಿಗೆ ನಡೆಯುತ್ತಿರುವ ಮಧ್ಯ ರಾಜಕೀಯ ವಿಚಾರಕ್ಕೆ ಸ್ವಾಮೀಜಿಗಳ ಪ್ರವೇಶವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಬಾಕಿ ಅವಧಿವರೆಗೆ ಮುಖ್ಯಮಂತ್ರಿ ಆಗಬೇಕು. ಹೈಕಮಾಂಡ್ ನಿರ್ಧಾರ ಪ್ರಕಟಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲನಾಥ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಒಕ್ಕಲಿಗರ ಸಂಘವು ಡಿಸಿಎಂ ಬೆನ್ನಿಗೆ

ಒನ್ ಇ೦ಡಿಯ 27 Nov 2025 11:02 am

ಅಮೆರಿಕದಲ್ಲಿ ಜಾತಿ ತಾರತಮ್ಯ : ದಲಿತ ಹೋರಾಟಗಾರ್ತಿ ತೆನ್ಮೋಳಿ ಸೌಂದರ್ ರಾಜನ್‌ರ ಸಮೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಹಿರಂಗ

ವಾಷಿಂಗ್ಟನ್ : 21ನೇ ಶತಮಾನದಲ್ಲೂ ಅಮೆರಿಕದಲ್ಲಿ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ಅಸ್ತಿತ್ವದಲ್ಲಿರುವುದು ದಲಿತ ಹೋರಾಟಗಾರ್ತಿ ನಡೆಸಿರುವ ದೇಶವ್ಯಾಪಿ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಯುವ ಹೋರಾಟಗಾರ್ತಿ ಹಾಗೂ ದಲಿತರ ನಾಗರಿಕ ಹಕ್ಕುಗಳ ಸಂಘಟನೆ ಈಕ್ವಾಲಿಟಿ ಲ್ಯಾಬ್ಸ್ ನ ಸಹ ಸಂಸ್ಥಾಪಕಿ ತೆನ್ಮೋಳಿ ಸೌಂದರ್ ರಾಜನ್ 2015ರಲ್ಲಿ ಅಮೆರಿಕದಲ್ಲಿರುವ ಜಾತಿ ತಾರತಮ್ಯದ ಕುರಿತು ದೇಶವ್ಯಾಪಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯಲ್ಲಿ ಪ್ರತಿ ನಾಲ್ವರು ದಲಿತರ ಪೈಕಿ ಓರ್ವ ದಲಿತ ದೈಹಿಕ ಅಥವಾ ಮೌಖಿಕ ಹಲ್ಲೆಗೆ ಗುರಿಯಾಗುವುದು, ಶಿಕ್ಷಣ ಕ್ಷೇತ್ರದಲ್ಲಿ ಪ್ರತಿ ಮೂವರು ದಲಿತರ ಪೈಕಿ ಓರ್ವ ದಲಿತ ಜಾತಿ ತಾರತಮ್ಯಕ್ಕೆ ಗುರಿಯಾಗುವುದು, ಪ್ರತಿ ಮೂವರು ದಲಿತರ ಪೈಕಿ ಇಬ್ಬರು ಉದ್ಯೋಗ ಸ್ಥಳಗಳಲ್ಲಿ ಜಾತಿ ಪಕ್ಷಪಾತ ಧೋರಣೆಗೆ ಗುರಿಯಾಗುವುದು ಹಾಗೂ ದಲಿತರ ಜನಸಂಖ್ಯೆಯ ಅರ್ಧದಷ್ಟು ಮಂದಿ ತಮ್ಮನ್ನು ಸಮಾಜದಿಂದ ಹೊರಹಾಕಬಹುದು ಎಂಬ ಭಯದಿಂದ ಜೀವಿಸುತ್ತಿರುವುದು ಕಂಡು ಬಂದಿದೆ. ದಕ್ಷಿಣ ಏಶ್ಯದ ಜಾತಿ ಬಾಹುಳ್ಯ ಹೊಂದಿರುವ ಜನರು ಜಾತಿ ಒಂದು ಸಮಸ್ಯೆಯಲ್ಲ ಎಂದು ಒತ್ತಿ ಹೇಳುತ್ತಿದ್ದರೂ, ದಲಿತ ಅಮೆರಿಕನ್ನರು ಜಾತಿ ತಾರತಮ್ಯ ಎದುರಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ. ಈ ಸಮೀಕ್ಷೆಯಲ್ಲಿನ ಅಂಕಿ-ಸಂಖ್ಯೆಗಳು ಜಾತಿ ಕೇವಲ ದಕ್ಷಿಣ ಏಶ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿವೆ. “ಜಾತಿ ತಾರತಮ್ಯ 21ನೇ ಶತಮಾನದ ಅಮೆರಿಕದಲ್ಲಿ ಅಸ್ತಿತ್ವದಲ್ಲಿದೆ” ಎಂದು ಹೇಳುವ ತೆನ್ಮೋಳಿ ಸೌಂದರ್ ರಾಜನ್, ದಲಿತರ ಪರ ನ್ಯಾಯ ಮತ್ತು ದಲಿತರ ನಾಗರಿಕ ಹಕ್ಕುಗಳ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಕಳೆದ ತಿಂಗಳು ಪ್ರತಿಷ್ಠಿತ ವೈಕಂ ಪ್ರಶಸ್ತಿಗೆ ಭಾಜನರಾಗಿದ್ದರು. 2022ರಲ್ಲಿ ಪ್ರಕಟವಾಗಿರುವ ‘The trauma of caste’ ಕೃತಿಯಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿರುವ ತೆನ್ಮೋಳಿ ಸೌಂದರ್ ರಾಜನ್, “ಜಾತಿ ತಾರತಮ್ಯದ ಕುರಿತು ನಾವು ಪ್ರಶ್ನೆಗಳನ್ನು ಕೇಳಬಾರದು ಎಂದು ಬಯಸುವ ಜನರಿಂದಲೇ ದಲಿತರು ಬೈಗುಳಗಳು, ದೈಹಿಕ ಬೆದರಿಕೆ ಹಾಗೂ ಸಾಂಸ್ಥಿಕ ಕಿರುಕುಳಗಳನ್ನೂ ಎದುರಿಸುತ್ತಿದ್ದಾರೆ” ಎಂಬುದರತ್ತಲೂ ಬೊಟ್ಟು ಮಾಡಿದ್ದಾರೆ. ಕೊಯಂಬತ್ತೂರು ನಿವಾಸಿಯಾಗಿರುವ ದಂಪತಿಗಳಿಗೆ ಜನಿಸಿದ ತೆನ್ಮೋಳಿ ಸೌಂದರ್ ರಾಜನ್, ಬಳಿಕ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. “ನಾನು ಜಾತಿ ದಬ್ಬಾಳಿಕೆಗೆ ಗುರಿಯಾಗಿರುವ ಸಮುದಾಯಗಳು ಹಾಗೂ ನನ್ನ ಕುಟುಂಬ ಸಾಕ್ಷಿಯಾದ ಜಾತಿ ಆಧಾರಿತ ಸಮಸ್ಯೆಗಳಿಂದ ಪ್ರೇರಿತಳಾಗಿದ್ದಾನೆ” ಎಂದು ಅವರು ಹೇಳಿದ್ದಾರೆ.   “ಇದು ಕೇವಲ ಒಂದು ಕ್ಷಣವಲ್ಲ. ಇದು ಅಂತರ್ ತಲೆಮಾರಿನ ಮೇಲೆ ಹೇರಲಾಗಿರುವ ಆಘಾತವಾಗಿದ್ದು, ಜಾತಿ ಕಿರುಕುಳಕ್ಕೆ ಅವಕಾಶ ನೀಡಲು ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ ಹಾಗೂ ಉದ್ಯೋಗ ಸ್ಥಳಗಳಲ್ಲಿ ಮರು ಸೃಷ್ಟಿಸಲಾಗಿರುವ ಮೌನವಾಗಿದೆ” ಎನ್ನುತ್ತಾರೆ ಅಮೆರಿಕ ಮೂಲದ ಹೋರಾಟಗಾರ್ತಿ ತೆನ್ಮೋಳಿ ಸೌಂದರ್ ರಾಜನ್. ಅವರು ಜಾಗತಿಕವಾಗಿ ಆಚರಿಸಲಾಗುವ ‘ದಲಿತರ ಇತಿಹಾಸ ಮಾಸ’ದ ಸಹ ಸಂಸ್ಥಾಪಕಿಯೂ ಆಗಿದ್ದಾರೆ. 2000 ಇಸವಿಯ ಆರಂಭದಲ್ಲಿ ಬರ್ಕಲೆಯಲ್ಲಿ ನಡೆದ ಲಾಕಿರೆಡ್ಡಿ ಬಾಲಿ ರೆಡ್ಡಿ ಪ್ರಕರಣ ನನ್ನನ್ನು ನಡುಗಿಸಿತ್ತು. ಭಾರತದಿಂದ ನಕಲಿ ವೀಸಾ ಮೂಲಕ ದಲಿತ ಮಹಿಳೆಯರು ಹಾಗೂ ಬಾಲಕಿಯರನ್ನು ಕರೆ ತಂದಿದ್ದ ಶ್ರೀಮಂತ ಭೂ ಮಾಲಕ ರೆಡ್ಡಿ ಅವರನ್ನು ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನ ಕಟ್ಟಡದಲ್ಲಿ 13 ವರ್ಷದ ಸಂತ್ರಸ್ತ ಬಾಲಕಿ ಮೃತಪಟ್ಟ ಬಳಿಕ, ಆತನ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿದ್ದವು. ನಂತರ, ಆತನ ಮೇಲೆ ದೋಷಾರೋಪ ಹೊರಿಸಿದ್ದ ಫೆಡರಲ್ ಪೊಲೀಸರು, ಆತನಿಗೆ ಜೈಲು ಶಿಕ್ಷೆ ವಿಧಿಸಿದ್ದರು. ಇದು ಕ್ಯಾಲಿಫೋರ್ನಿಯಾದಲ್ಲಿ ಮಾನವ ಕಳ್ಳ ಸಾಗಣೆ ಕಾನೂನುಗಳಲ್ಲಿ ಸುಧಾರಣೆಗೆ ಕಾರಣವಾಗಿತ್ತು. “ಈ ವೇಳೆ ಅಪರಾಧಿ ರೆಡ್ಡಿಯ ಬಗ್ಗೆ ಮೃದು ಧೋರಣೆ ತಳೆಯಬೇಕು ಎಂದು ಪ್ರಬಲ ಜಾತಿ ಬೆಂಬಲಿಗರು ಪತ್ರ ಬರೆದಿದದ್ದು ನನಗೆ ನೆನಪಾಗುತ್ತಿದೆ. ಈ ನಿರ್ಭೀತಿ ಭಯಾನಕವಾಗಿತ್ತು. ನಮಗೆ ಒಟ್ಟಾಗಿ ಸಮಾಧಾನಿಸುವ, ಬದುಕುಳಿದಿರುವವರ ಬೆನ್ನಿಗೆ ನಿಲ್ಲುವ ನಾವು ಪರಂಪರಾಗತವಾಗಿ ಅನುಭವಿಸುತ್ತಿರುವ ಅನ್ಯಾಯವನ್ನು ನಿರಾಕರಿಸುವ ಅನಿವಾಸಿ ಭಾರತೀಯರನ್ನು ಹೊಂದಲು ಅರ್ಹರಾಗಿದ್ದೇವೆ” ಎಂದು ಹೇಳುತ್ತಾರೆ. ನಾವು ತಂತ್ರಜ್ಞಾನದ ಬ್ರಾಹ್ಮಣೀಕರಣವನ್ನು ತೊಡೆದು ಹಾಕಬೇಕು ಹಾಗೂ ಡಿಜಿಟಲ್ ವರ್ಣಭೇದವನ್ನು ತಡೆಯಬೇಕು ಎಂದು ತೆನ್ಮೋಳಿ ಸೌಂದರ್ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿನ ಜಾತಿ ತಾರತಮ್ಯದ ಕುರಿತು ತೆನ್ಮೋಳಿ ಸೌಂದರ್ ರಾಜನ್ ರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ: • ಅಮೆರಿಕದಲ್ಲಿನ ಜಾತಿಯ ಕುರಿತು ನಿಮ್ಮ ಇನ್ನೂ ಕೆಲವು ಸತ್ಯ ಶೋಧನೆಗಳೇನು?  ಶೇ. 60ರಷ್ಟು ಮಂದಿ ಜಾತ್ಯಾಧಾರಿತ ಬೈಗುಳ ಹಾಗೂ ಅವಹೇಳನಕಾರಿ ನಿಂದನೆಗಳನ್ನು ಅನುಭವಿಸಿರುವುದು, ಶೇ. 40ರಷ್ಟು ಮಂದಿ ತಮ್ಮ ಪ್ರಾರ್ಥನಾ ಸ್ಥಳಗಳಲ್ಲಿ ತಿರಸ್ಕಾರದ ಅನುಭವ ಎದುರಿಸಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಶೇ. 20ರಷ್ಟು ಮಂದಿ ವ್ಯಾಪಾರ ಸ್ಥಳಗಳಲ್ಲಿ ತಾರತಮ್ಯವನ್ನು ಅನುಭವಿಸಿದ್ದಾರೆ. ಜಾತಿಯ ಕಾರಣಕ್ಕೆ ನಾವು ಪ್ರೇಮ ಸಂಬಂಧಗಳಿಂದ ತಿರಸ್ಕೃತಗೊಂಡಿದ್ದೇವೆ ಎಂದು ಶೇ. 40ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. 2015ರಲ್ಲಿ ಬಹುತೇಕ ಅಮೆರಿಕ ಶಿಕ್ಷಣ ತಜ್ಞರು ಇದಕ್ಕೆ ಬೆಂಬಲ ಸೂಚಿಸಿರಲಿಲ್ಲ. ನಾವು ಈ ವರದಿಯನ್ನು ಸಿದ್ಧಪಡಿಸುವಾಗ, ನಾವು ಜಾತಿ ನಿಂದನೆಗಳನ್ನು ಅನುಭವಿಸಿದೆವು. ನಮ್ಮ ಸಮೀಕ್ಷಾ ವರದಿಯನ್ನು ಹಂಚಿಕೊಳ್ಳುವುದರಿಂದ, ಸಮದಾಯ ವಿಭಜನೆಯಾಗುತ್ತದೆಯೇ ಎಂಬ ಕುರಿತು ಸಂಘಟನೆಯೊಂದು ಆಡಳಿತ ಮಂಡಳಿ ಸಭೆಯನ್ನು ನಡೆಸಿತ್ತು. ವಾಸ್ತವವೆಂದರೆ, ನಮ್ಮ ಸಮುದಾಯವು ಜಾತಿಯಿಂದ ವಿಭಜನೆಯಾಗಿದೆ. ದೀರ್ಘ ಕಾಲದಿಂದ ಏನನ್ನು ಬಚ್ಚಿಡಲಾಗಿತ್ತು ಅದನ್ನು ನಮ್ಮ ಸಮೀಕ್ಷೆ ಬಯಲು ಮಾಡಿದೆ. • ನಿಮ್ಮ ವಕಾಲತ್ತಿನಿಂದಾಗಿ ಅಮೆರಿಕ ನಗರದಾದ್ಯಂತ ಜಾತಿ ನಿಗ್ರಹ ಕಾಯ್ದೆಗೆ ಕಾರಣವಾಯಿತೇ?  ನಮ್ಮ ಜಾತಿ ವರದಿಯನ್ನು ಮೊದಲಿಗೆ ಬಹುತೇಕ ಶಿಕ್ಷಣ ತಜ್ಞರು, ಪ್ರಮುಖವಾಗಿ ಪ್ರಬಲ ಜಾತಿಗಳ ಶಿಕ್ಷಣ ತಜ್ಞರು ತಿರಸ್ಕರಿಸಿದ್ದರು. ಆದರೆ, ಬಳಿಕ ಈ ವರದಿಯು ಕಾಂಗ್ರೆಸ್ ನಿರೂಪಣೆಗೆ ಬುನಾದಿಯಾಯಿತು. ಇದರಿಂದಾಗಿ, ಸಾಂಸ್ಥಿಕ ಸುಧಾರಣೆಗಳು ಜಾರಿಗೆ ಬಂದವು. ಈ ವರದಿಯು ಕ್ಯಾಲಿಫೋರ್ನಿಯಾದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಎಸ್ಬಿ 403 ಮಸೂದೆಯ ಶಾಸನಾತ್ಮಕ ಹೋರಾಟಕ್ಕೆ ಕಾರಣವಾಯಿತು. 2023ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯ ಕಾಯ್ದೆಗಳಿಗೆ ಜಾತಿಯನ್ನು ಸೇರ್ಪಡೆ ಮಾಡಲು ಕಾರಣವಾದ ಕಾಂಗ್ರೆಸ್ ಸೆನೆಟರ್ ಐಶಾ ವಹಾಬ್ ಮಂಡಿಸಿದ ಎಸ್ಬಿ 403 ಮಸೂದೆಗೆ ಇದು ಪ್ರೇರಣೆಯಾಯಿತು. ಇದರಿಂದಾಗಿ, ಜಾತಿಯ ಕಾರಣಕ್ಕಾಗಿ ವಸತಿ, ಉದ್ಯೋಗ ಅಥವಾ ಶೈಕ್ಷಣಿಕ ಅವಕಾಶಗಳನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ಘೋಷಿತವಾಯಿತು. ಎರಡೂ ಸದನಗಳಿಂದ ಎಸ್ಬಿ 403 ಮಸೂದೆ ಅಂಗೀಕಾರಗೊಂಡರೂ, ಪ್ರಬಲ ಹಿಂದೂ ಜಾತಿಗಳ ಒತ್ತಡಕ್ಕೊಳಗಾಗಿದ್ದ ಗವರ್ನರ್, ತಮ್ಮ ಪರಮಾಧಿಕಾರವನ್ನು ಬಳಸಿ ಆ ಮಸೂದೆಯನ್ನು ತಿರಸ್ಕರಿಸಿದರು. ಆದರೆ, ಈ ಮಸೂದೆಯನ್ನು ತಿರಸ್ಕರಿಸುವಾಗಲೂ ಕೂಡಾ, ಕಾನೂನಿನ್ವಯ ಜಾತಿ ತಾರತಮ್ಯ ಈಗಾಗಲೇ ಕಾನೂನುಬಾಹಿರ ಎಂದು ಅವರು ದೃಢಪಡಿಸಿದ್ದರು. ಆ ಮೂಲಕ, ನಾವು ಆಗಲೂ ಗೆಲುವು ಸಾಧಿಸಿದ್ದೆವು. ಜಾತಿ ಕಾರಣಕ್ಕಾಗಿ ವಸತಿ ನಿರಾಕರಣೆಗೊಳಗಾಗುತ್ತಿದ್ದ, ಉದ್ಯೋಗ ಸ್ಥಳಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದ ಅಥವಾ ದೈಹಿಕ ಅಥವಾ ಮೌಖಿಕ ದೌರ್ಜನ್ಯಕ್ಕೀಡಾಗುತ್ತಿದ್ದ ಕ್ಯಾಲಿಫೋರ್ನಿಯಾ ಪ್ರಜೆಗಳಿಗೆ ಪರಿಹಾರ ಪಡೆಯಲು ಇದರಿಂದ ಸ್ಪಷ್ಟ ರಹದಾರಿ ದೊರೆತಂತಾಯಿತು. ಇದರಿಂದಾಗಿ ನಮ್ಮ ಸಮುದಾಯಗಳು ಒಟ್ಟಾಗಿ ಗೌರವದಿಂದ ಜೀವಿಸಲು ಇದು ಸಾಧನವಾಯಿತು. • ನಿಮ್ಮ ಕೆಲಸವು ತಂತ್ರಜ್ಞಾನ ಉದ್ಯಮಗಳತ್ತ ಗಮನ ಹರಿಸಿದೆಯೇ?  ತಂತ್ರಜ್ಞಾನ ಕಂಪೆನಿಗಳು ತಟಸ್ಥ ಅರ್ಹತಾ ತಾಣಗಳಲ್ಲ. ಅವು ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳಾಗಿದ್ದು, ಅವು ಪ್ರಬಲ ಜಾತಿ ಜಾಲಗಳನ್ನು ಪದೇ ಪದೇ ರಕ್ಷಿಸುತ್ತವೆ. ಅವು ಸಾರ್ವಜನಿಕ ಸಹಾಯ ಧನದಿಂದ ಲಾಭ ಪಡೆಯುತ್ತಿದ್ದರೂ, ಪ್ರಜಾಸತ್ತಾತ್ಮಕ ವಿರೋಧಿ ರಾಜಕೀಯ ಕಾರ್ಯಸೂಚಿಗಳಿಗೆ ನೆರವು ಒದಗಿಸುತ್ತಿವೆ. ನಾವು ತಂತ್ರಜ್ಞಾನವನ್ನು ನಿರ್ಬಂಧಿಸಬೇಕೇ ಹೊರತು, ಅದನ್ನು ಪೂಜಿಸಬಾರದು. ಕಂಪೆನಿಗಳು ತಾರತಮ್ಯ ವಿರೋಧಿ ನೀತಿಗಳು, ವರ್ತಕ ಮತ್ತು ಕಿರುಕುಳ ನೀತಿಗಳಲ್ಲಿ ಜಾತಿಯನ್ನು ವಿಶೇಷವಾಗಿ ಸೇರ್ಪಡೆಗೊಳಿಸಬೇಕು. ಮಾನವ ಸಂಪನ್ಮೂಲಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಾತಿ ಜಾಗೃತಿ ತರಬೇತಿಯನ್ನು ನೀಡಬೇಕು ಹಾಗೂ ಜಾತಿ ಕೇಂದ್ರಿತ ಪಕ್ಷಪಾತವನ್ನು ಪತ್ತೆ ಹಚ್ಚಲು ದತ್ತಾಂಶಗಳು ಹಾಗೂ ಅಲ್ಗರಿದಂಗಳನ್ನು ಪರಿಶೋಧನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶದ ಅವಕಾಶ ಪಡೆಯಲು ಈ ಹಿಂದಿನ ತಲೆಮಾರು ಹೇಗೆ ಬ್ರಾಹ್ಮಣೀಕರಣವನ್ನು ತೊಡೆದು ಹಾಕಲು ಹೋರಾಟ ನಡೆಸಿತೊ, ಅದೇ ರೀತಿ ನಾವು ಡಿಜಿಟಲ್ ವರ್ಣಭೇದವನ್ನು ತಡೆಯಲು ತಂತ್ರಜ್ಞಾವನ್ನು ಬ್ರಾಹ್ಮಣೀಕರಣದಿಂದ ಮುಕ್ತಗೊಳಿಸಲು ಹೋರಾಟ ನಡೆಸಲೇಬೇಕಿದೆ. ಸೌಜನ್ಯ: TOI

ವಾರ್ತಾ ಭಾರತಿ 27 Nov 2025 10:47 am

14 ತಿಂಗಳ ವನವಾಸ ಅಂತ್ಯ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಿಫ್ಟಿ, ಹೂಡಿಕೆದಾರರಲ್ಲಿ ಮನೆಮಾಡಿದ ಸಂಭ್ರಮ

ಸುಮಾರು 14 ತಿಂಗಳುಗಳು ಮತ್ತು 289 ವಹಿವಾಟು ಅವಧಿಗಳ ಸುದೀರ್ಘ ಕಾಯುವಿಕೆಯ ನಂತರ, ನಿಫ್ಟಿ ಸೂಚ್ಯಂಕವು ತನ್ನ ಹಳೆಯ ದಾಖಲೆಯನ್ನು ಮುರಿದು ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಭಾರತದ ಆರ್‌ಬಿಐ ಬಡ್ಡಿ ದರ ಕಡಿತ ಮಾಡಲಿವೆ ಎಂಬ ನಿರೀಕ್ಷೆಯು ಹೂಡಿಕೆದಾರರಲ್ಲಿ ಉತ್ಸಾಹ ತುಂಬಿದೆ. ಇದೇ ವೇಳೆ ಸೆನ್ಸೆಕ್ಸ್ ಕೂಡ ತನ್ನ ಗರಿಷ್ಠ ಮಟ್ಟದತ್ತ ದಾಪುಗಾಲು ಹಾಕಿದೆ.

ವಿಜಯ ಕರ್ನಾಟಕ 27 Nov 2025 10:45 am

ಅಪ್ಪಳಿಸಲಿದೆ ದಿತ್ವಾ ಚಂಡಮಾರುತ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ತ.ನಾಡು , ಆಂಧ್ರದಲ್ಲಿ ಹೈ ಅಲರ್ಟ್, ಭಾರಿ ಮಳೆ ಸಾಧ್ಯತೆ!

ದಕ್ಷಿಣ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತಗ್ಗಿದ ವಾಯುಭಾರ ಕುಸಿತವು 'ದಿತ್ವಾ' ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ಸಾಗುವ ನಿರೀಕ್ಷೆಯಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ. ಯೆಮನ್ ನೀಡಿದ ದಿತ್ವಾ ಎಂಬುದು ಸೊಕೊತ್ರಾ ದ್ವೀಪದ ಸರೋವರದ ಹೆಸರಾಗಿದೆ.

ವಿಜಯ ಕರ್ನಾಟಕ 27 Nov 2025 10:38 am

ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ : ‘ನಾಯಕತ್ವ ಬದಲಾವಣೆ’ ಚರ್ಚೆ ಮಧ್ಯೆ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್‌ ಪೋಸ್ಟ್‌

ಬೆಂಗಳೂರು : ಕರ್ನಾಟಕದಲ್ಲಿ ‘ನಾಯಕತ್ವ ಬದಲಾವಣೆ’ ಹಾಗೂ ಸಂಪುಟ ಪುನಾರಚನೆ ಚರ್ಚೆ ಮುಂದುವರಿದ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ ಎಂದು ಹೇಳಿಕೊಂಡಿದ್ದು, ಕುತೂಹಲ ಮೂಡಿಸಿದೆ. ಗುರುವಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್‌, ವರ್ಡ್‌ ಪವರ್‌ ಈಸ್‌ ವರ್ಲ್ಡ್‌ ಪವರ್‌̧ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನೂ ಸೇರಿದಂತೆ ಬೇರೆ ಯಾರೇ ಆಗಿರಲಿ ಹೇಳಿದಂತೆ ನಡೆಯಬೇಕು ಎಂದು ಹೇಳಿದ್ದಾರೆ. ನವೆಂಬರ್ 20ರಂದು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಎರಡೂವರೆ ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಏರ್ಪಟ್ಟಿದೆಯೆನ್ನಲಾದ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹುದ್ದೆಗಾಗಿ ಜಟಾಪಟಿ ಆರಂಭವಾಗಿತ್ತು. ಡಿಸೆಂಬರ್ 1ರಂದು ಸಂಸತ್‌ ನ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ರಾಜ್ಯದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವೊಂದನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಲಾಗಿತ್ತು. ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ,ದಯವಿಟ್ಟು ಕಾಯಿರಿ, ನಾನೇ ನಿಮಗೆ ಕರೆ ಮಾಡುವೆ’’ ಎಂದು ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಇದರ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪೋಸ್ಟ್‌ ಮಹತ್ವವನ್ನು ಪಡೆದುಕೊಂಡಿದೆ.

ವಾರ್ತಾ ಭಾರತಿ 27 Nov 2025 10:36 am

ಉಡುಪಿ | ಸಾಲ ಯೋಜನೆಯ ದಿನಾಂಕ ವಿಸ್ತರಣೆ

ಉಡುಪಿ, ನ.26: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ 3,434 ಅರ್ಜಿಗಳು ಸಲ್ಲಿಕೆಯಾಗಿದ್ದು, ದಕ್ಷಿಣ ಕನ್ನಡದಿಂದ 429 ಮತ್ತು ಉಡುಪಿ ಜಿಲ್ಲೆಯಿಂದ 150 ಅರ್ಜಿಗಳು ಬಂದಿವೆ. ಕ್ರಿಶ್ಚಿಯನ್ ಸಮುದಾಯದ ಹೆಚ್ಚಿನ ಅರ್ಹ ಫಲಾನುಭವಿಗಳು ಲಾಭ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆನ್ಲೈನ್ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ನ.30ರಿಂದ ಡಿ.15ರವರೆಗೆ ವಿಸ್ತರಿಸಲಾಗಿದ್ದು, ಸಮುದಾಯದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯ ಪ್ರಯೋಜನವನ್ನು ಪಡೆಯುವಂತೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 27 Nov 2025 10:27 am

ನವೆಂಬರ್ 27, 2023 ರ ವೇಳೆಗೆ ಕರ್ನಾಟಕವು ಪ್ರಮುಖ ಜಲಾಶಯಗಳ ನೀರಿನ ಮಟ್ಟವನ್ನು ವರದಿ ಮಾಡಿದೆ

Karnataka Reservoirs Water Level: ರಾಜ್ಯದಲ್ಲಿ ಇದೀಗ ಸದ್ಯ ಮಳೆ ಆರ್ಭಟ ಕಡಿಮೆಯಾಗಿದೆ. ಈಗಾಗಲೇ ಮುಂಗಾರು ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 27) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್‌) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು

ಒನ್ ಇ೦ಡಿಯ 27 Nov 2025 10:21 am

ರೋಹಿತ್ ಶರ್ಮಾಗೆ ಡಬಲ್ ಖುಷಿ; ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಹಿಟ್ ಮ್ಯಾನ್ ಗೆ ಮತ್ತೆ ನಂಬರ್ 1 ಪಟ್ಟ

ICC Mens ODI Rankings- ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದೀಗ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ ಇತ್ತೀಚೆಗೆ 2026ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಈ ಸುದ್ದಿ ಬಂದಿದೆ. ಡೆರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿ ಅವರು ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಟಾಪ್ 5ರಲ್ಲಿ ಮೂವರು ಭಾರತೀಯರಿದ್ದಾರೆ. ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ ಜಿಂಬಾಬ್ವೆಯ ಸಿಕಂದರ್ ರಝಾ ಆಲ್ರೌಂಡರ್ ಆಗಿ ನಂ.1 ಆಗಿದ್ದಾರೆ.

ವಿಜಯ ಕರ್ನಾಟಕ 27 Nov 2025 10:10 am

Gold Rate Fall: ಚಿನ್ನದ ಬೆಲೆಯಲ್ಲಿ ಕುಸಿತ: ದಾಖಲೆ ಬೆಲೆ ಏರಿಕೆಗೆ ಬ್ರೇಕ್, ಬೆಳ್ಳಿ ಬೆಲೆ ಗಗನಮುಖಿ

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 160 ರೂ. ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 150 ರೂ. ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ 4 ರೂ. ಏರಿಕೆಯಾಗಿದೆ.

ವಿಜಯ ಕರ್ನಾಟಕ 27 Nov 2025 10:10 am

ಅಧಿಕಾರ ಹಂಚಿಕೆ ಜಟಾಪಟಿ: ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಮಹತ್ವ ಸಭೆ: ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ಬೆಂಗಳೂರು, ನವೆಂಬರ್‌ 27: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ನಡೆಯುತ್ತಿದೆ. ಸಿಎಂ ಪಟ್ಟಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ತಂತ್ರ ಒಂದು ಕಡೆಯಾದರೆ ಡಿಸಿಎಂ ಡಿಕೆ ಶಿವಕುಮಾರ್ ಬಣವೂ ಪ್ರತಿತಂತ್ರ ರೂಪಿಸುತ್ತಿದೆ. ಇತ್ತ ಡಿ ಕೆ ಶಿವಕುಮಾರ್‌ ಅವರು ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದು, ಸಿಎಂ

ಒನ್ ಇ೦ಡಿಯ 27 Nov 2025 10:09 am

ರಾಯಚೂರು | ಯದ್ದಲದೊಡ್ಡಿಯಲ್ಲಿ ಭೂ ಕುಸಿತ : ನಾಲ್ಕು ಮನೆಗಳಿಗೆ ಹಾನಿ

ರಾಯಚೂರು: ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಭೂ ಕುಸಿತದಿಂದ ನಾಲ್ಕು ಮನೆಗಳು ದಿಢೀರ್ ಕುಸಿದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮನೆಗಳ ಒಳಗೇ ನೆಲದಿಂದ ನೀರು ಹೊರಬಂದಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಕಳೆದ ಕೆಲವು ವಾರಗಳಿಂದ ಈ ಗ್ರಾಮದಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿದೆ. ಇದೇ ತಿಂಗಳಲ್ಲಿ ನಾಲ್ಕು ಮನೆಗಳಲ್ಲಿ ನೆಲ ಅಡಿಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಭೂ ಕುಸಿತ ಸಂಭವಿಸಿದ ಘಟನೆ ನಡೆದಿದ್ದು, ಒಬ್ಬ ಮಹಿಳೆ ಅದೃಷ್ಟವಶಾತ್ ಪಾರಾಗಿದ್ದರು. ಇದೀಗ ಮತ್ತೊಂದು ಮನೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಯದ್ದಲದೊಡ್ಡಿ ಗ್ರಾಮದ ರಾಜಶೇಖರೆಡ್ಡಿ, ಗುರ್ರಪ್ಪ ಮೂಡಲಗಿರಿ,ಡಾ.ಕರಿಬಸ್ಸಪ್ಪ, ರಮೇಶ, ಚನ್ನಬಸವ ಮನೆಗಳಲ್ಲಿ ಭೂ ಕುಸಿತವಾಗಿ ಎಲ್ಲೆಂದರೆಲ್ಲಿ ಗುಂಡಿ ಬಿದ್ದಿದೆ. ಬೇಸ್ಮೀಟ್( ನೆಲಹಾಸು) ಹಾಗೂ ಮಣ್ಣು ಕುಸಿದಿದ್ದು ಗೋಡೆಗಳು ಹಾನಿಯಾಗಿವೆ. ಯದ್ದಲದೊಡ್ಡಿ ಗ್ರಾಮದ ನಿವಾಸಿಗಳಾದ ರಾಜಶೇಖರೆಡ್ಡಿ, ಗುರ್ರಪ್ಪ ಮೂಡಲಗಿರಿ, ಡಾ.ಕರಿಬಸ್ಸಪ್ಪ, ರಮೇಶ್ ಮತ್ತು ಚನ್ನಬಸವ ಅವರ ಮನೆಗಳಲ್ಲಿ 20 ಅಡಿ ಆಳದವರೆಗೆ ಮಣ್ಣು ಕುಸಿದು ಬೇಸ್ಮೆಂಟ್‌ (ನರಲಹಾಸು) ಹಾಳಾಗಿದ್ದು, ಮನೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಗೋಡೆಗಳಿಗೂ ಹಾನಿಯಾಗಿದ್ದು, ಕುಟುಂಬಗಳು ಭದ್ರತೆ ಬಗ್ಗೆ ಆತಂಕದಲ್ಲಿವೆ. ಯದ್ದಲದೊಡ್ಡಿ ತಗ್ಗು ಪ್ರದೇಶವಾಗಿದ್ದು, ಸುತ್ತಮುತ್ತಲಿನ ನೀರಾವರಿ ಪ್ರದೇಶಗಳು ಮತ್ತು ನಾಲೆಗಳು ನೀರಿನಿಂದ ತುಂಬಿರುವುದರಿಂದ, ನೀರು ನೆಲಕ್ಕೆ ಇಂಗಿ ಮಣ್ಣು ದುರ್ಬಲವಾಗಿ ಈ ರೀತಿ ಕುಸಿತವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.  ಮನೆಗಳಲ್ಲಿ 20 ಅಡಿ ಆಳದವರೆಗೆ ಮಣ್ಣು ಕುಸಿದಿದ್ದು ಮನೆಯ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 27 Nov 2025 10:00 am

CM Change in Karnataka : ಆದಿಚುಂಚನಗಿರಿ Vs ಕಾಗಿನಲೆ ಮಠದ ಸ್ವಾಮೀಜಿಗಳು - ಆಗಿದ್ದೇನು?

Karnataka CM Change : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ, ಬರೀ ಪಾರ್ಟಿಯೊಳಗೆ ಮಾತ್ರವಲ್ಲ, ನಾಡಿನ ಪೀಠಾಧಿಪತಿಗಳಲ್ಲೂ ವಿಭಿನ್ನ ನಿಲುವನ್ನು ತಾಳುವುದಕ್ಕೆ ಕಾರಣವಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿಗಳ ಹೇಳಿಕೆಗೆ, ಕಾಗಿನೆಲೆ ಪೀಠದ ಶ್ರೀಗಳು ಕೌಂಟರ್ ಕೊಟ್ಟಿದ್ದಾರೆ.

ವಿಜಯ ಕರ್ನಾಟಕ 27 Nov 2025 9:46 am

IIDEA 2026ರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿರುವ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

ಹೊಸದಿಲ್ಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಡಿ.3ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ International Institute for Democracy and Electoral Assistance (IIDEA) 2026ರ ಅಧ್ಯಕ್ಷತೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ಚುನಾವಣಾ ಆಯೋಗವು, “ಭಾರತದ ಚುನಾವಣಾ ಆಯೋಗವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ನವೀನ ಚುನಾವಣಾ ನಿರ್ವಹಣಾ ಸಂಸ್ಥೆಗಳ ಪೈಕಿ ಒಂದಾಗಿ ಗುರುತಿಸುವ ಮಹತ್ವದ ಮನ್ನಣೆ” ಎಂದು ತಿಳಿಸಿದೆ. ಪ್ರಜಾಪ್ರಭುತ್ವದ ಬಲವರ್ಧನೆಗಾಗಿ 1995ರಲ್ಲಿ ರಚಿಸಲ್ಪಟ್ಟ IIDEA, ಭಾರತ ಸೇರಿದಂತೆ 35 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವೇದಿಕೆಯಾಗಿದೆ. ಅಮೆರಿಕ ಮತ್ತು ಜಪಾನ್‌ ವೀಕ್ಷಕ ರಾಷ್ಟ್ರಗಳಾಗಿ ಸಂಸ್ಥೆಯಲ್ಲಿ ಪಾಲ್ಗೊಳ್ಳುತ್ತಿವೆ. ಪ್ರಸ್ತುತ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸ್ವಿಟ್ಜರ್ಲೆಂಡ್‌ ಅದನ್ನು ಇದೀಗ ಭಾರತಕ್ಕೆ ಹಸ್ತಾಂತರಿಸಲಿದೆ. ಅಧ್ಯಕ್ಷರಾಗಿ ಜ್ಞಾನೇಶ್ ಕುಮಾರ್ ಅವರು 2026ರವರೆಗೆ ನಡೆಯುವ ಎಲ್ಲಾ ಕೌನ್ಸಿಲ್ ಸಭೆಗಳಿಗೆ ನೇತೃತ್ವ ವಹಿಸಲಿದ್ದಾರೆ. “ವಿಶ್ವದ ಅತಿದೊಡ್ಡ ಚುನಾವಣೆಯನ್ನು ನಿರ್ವಹಿಸಿದ ಭಾರತದ ಅನುಭವವನ್ನು IIDEA ಯ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಬಳಸಿಕೊಳ್ಳಲಾಗುವುದು” ಎಂದು ಆಯೋಗ ತಿಳಿಸಿದೆ.

ವಾರ್ತಾ ಭಾರತಿ 27 Nov 2025 9:44 am