SENSEX
NIFTY
GOLD
USD/INR

Weather

20    C
... ...View News by News Source

ನ.28 ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ : ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು : ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ನಡೆಯುಲಿರುವ ಕಾರ್ಯಕ್ರಮದಲ್ಲಿ ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಮಹತ್ತರ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮೀ ಬ್ಯಾಂಕ್ ಉದ್ಘಾಟನೆ ಕುರಿತ ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಗರ್ಭಿಣಿಯರಿಗೆ ಬಾಗಿನ ಅರ್ಪಿಸಿ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ಅಂಧ ವಿಕಲ ಚೇತನರಿಗೆ ಬ್ರೈಲ್ ಲಿಪಿ ಹಾಗೂ ಕೇಳುವ ಲಿಪಿ ಸಾಧನದ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಎಸ್., ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಲಿಷ್ಠ ಭಾರತ ನಿರ್ಮಾಣದ ಕನಸು ಹೊತ್ತು 1975ರಲ್ಲಿ ಆರಂಭಿಸಿದ ಸಮಗ್ರ ಶಿಶು ಅಭಿವದ್ಧಿ ಸೇವೆಗಳ ಯೋಜನೆ ಐಸಿಡಿಎಸ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಪ್ರಮುಖ ಮೂರು ಯೋಜನೆಗೆ ರಾಜ್ಯ ಸರಕಾರ ಮುಂದಾಗಿದ್ದು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ

ವಾರ್ತಾ ಭಾರತಿ 19 Nov 2025 12:48 am

ವಿಚ್ಚೇದಿತ ಪತ್ನಿಗೆ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟ ಬೆದರಿಕೆ; ಆರೋಪಿ ಬಂಧನ

ಬೆಂಗಳೂರು : ‘ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ' ಎಂದು ಬಿಎಂಆರ್‍ಸಿಎಲ್ ಅಧಿಕೃತ ಖಾತೆಗೆ ವ್ಯಕ್ತಿಯೊಬ್ಬ ಬೆದರಿಕೆ ಇಮೇಲ್ ಕಳುಹಿಸಿರುವ ಪ್ರಸಂಗವೊಂದು ವರದಿಯಾಗಿದೆ. ಇಮೇಲ್‌ ಖಾತೆಯಿಂದ ನವೆಂಬರ್ 13 ರಂದು ರಾತ್ರಿ 11:25ಕ್ಕೆ ಮೇಲ್ ರವಾನಿಸಿರುವ ಆರೋಪಿಯು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಬಿಎಂಆರ್‍ಸಿಎಲ್ ಸಹಾಯಕ ನಿರ್ವಾಹಕ ಇಂಜಿನಿಯರ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇಮೇಲ್ ಸಂದೇಶದಲ್ಲೇನಿದೆ?: ‘ಕೆಲಸದ ಅವಧಿ ಮುಗಿದ ನಂತರವೂ ನನ್ನ ವಿಚ್ಚೇದಿತ ಪತ್ನಿಗೆ ಮೆಟ್ರೋದ ಯಾವುದೇ ಉದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದರೆ, ಎಚ್ಚರವಿರಲಿ. ನಿಮ್ಮ ನಿಲ್ದಾಣವೊಂದನ್ನು ಸ್ಪೋಟಿಸಲಾಗುತ್ತದೆ’ ಎಂದು ಆರೋಪಿ ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ. ಆರೋಪಿ ಬಂಧನ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ..! ಈ ಬೆದರಿಕೆಯ ಇಮೇಲ್ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು, ಆರೋಪಿ ರಾಜೀವ್(62) ಎಂಬಾತನನ್ನು ಬಂಧಿಸಿದ್ದಾರೆ. ಆತ ಮಾನಸಿಕವಾಗಿ ಅಸ್ವಸ್ಥನಿರುವ ಶಂಕೆಯಿದ್ದು, ಆರೋಪಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಯಾವ ಕಾರಣದಿಂದ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Nov 2025 12:39 am

ಮೇಕೆದಾಟು ಯೋಜನೆ ಬಗ್ಗೆ ಹೊಸದಾಗಿ ಡಿಪಿಆರ್ - ಡಿಸಿಎಂ ಡಿಕೆಶಿ ಪ್ರಕಟಣೆ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸದಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ, ಯೋಜನೆಯ ಸಂಪೂರ್ಣ ವಿವರಗಳೊಂದಿಗೆ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು. ಅರಣ್ಯ ಪ್ರದೇಶದ ಮುಳುಗಡೆಯ ಮಾಹಿತಿಯನ್ನೂ ಇದರಲ್ಲಿ ಸೇರಿಸಲಾಗುತ್ತದೆ.

ವಿಜಯ ಕರ್ನಾಟಕ 19 Nov 2025 12:29 am

ಬಿಜೆಪಿ ಟಿಕೆಟ್‌ ಕೊಡಿಸಲು ಹಣ ಪಡೆದ ಪ್ರಕರಣ: ಸಂಧಾನಕ್ಕೆ 10 ದಿನ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು : ಉಡುಪಿಯ ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರೂ. ಪಡೆದ ಆರೋಪ ಪ್ರಕರಣದಲ್ಲಿ ಉಭಯ ಪಕ್ಷಕಾರರು ಸಂಧಾನ ಮಾಡಿಕೊಳ್ಳಲು ಹೈಕೋರ್ಟ್‌ 10 ದಿನ ಕಾಲಾವಕಾಶ ನೀಡಿದೆ. ಪ್ರಕರಣದ ತನಿಖೆಯ ವೇಳೆ ಜಪ್ತಿ ಮಾಡಲಾಗಿರುವ ಹಣವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ದೂರುದಾರ ಪೂಜಾರಿ ಹಾಗೂ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಮುಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು. ಗೋವಿಂದ ಪೂಜಾರಿ ಪರ ಹಿರಿಯ ವಕೀಲ ಎಚ್.ಎಸ್‌. ಚಂದ್ರಮೌಳಿ ವಾದ ಮಂಡಿಸಿ, ಪೂಜಾರಿ ಅವರಿಗೆ ತನಿಖೆಯ ವೇಳೆ ಜಪ್ತಿ ಮಾಡಿರುವ ಹಣವನ್ನು ಮಧ್ಯಂತರ ಕಸ್ಟಡಿಯ ರೂಪದಲ್ಲಿ ನೀಡಬೇಕು ಎಂದು ಕೋರಿದ್ದೇವೆ. ಗೋವಿಂದ ಪೂಜಾರಿ ದೂರು ನೀಡಿದ್ದು, ಚೈತ್ರಾ ಮತ್ತಿತರರು ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ತನಿಖೆ ನಡೆಸಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ವಿವಿಧ ವ್ಯಕ್ತಿಗಳಿಂದ ಹಣ ಜಪ್ತಿ ಮಾಡಲಾಗಿದ್ದು, ಆ ಹಣದ ಮಧ್ಯಂತರ ಕಸ್ಟಡಿಯನ್ನು ನಮಗೆ ನೀಡುವಂತೆ ಕೋರಿದ್ದೇವೆ ಎಂದರು. ಆಗ ನ್ಯಾಯಪೀಠ, ಹಣವನ್ನು ಆರೋಪಿಗಳಿಗೆ ನೀಡಿರುವುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಆರೋಪಿಗಳಿಗೆ ಹಣ ನೀಡಿರುವುದಕ್ಕೆ ಏನು ದಾಖಲೆ ಇದೆ? ಅವರ ಬಳಿ ಬೇರೆ ಹಣ ಇರಬಹುದು. ಆರೋಪ ಪಟ್ಟಿ ಸಲ್ಲಿಸಿರಬಹುದು, ಅವರು ದೋಷಿ ಎಂದು ಸಾಬೀತಾಗಿಲ್ಲ. ದೂರುದಾರರು ಆರೋಪಿಗಳಿಗೆ ನೀಡಿರುವ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ ಎಂದಿತು. ಬಳಿಕ ನ್ಯಾಯಪೀಠ, ಪೂಜಾರಿ ಹಾಗೂ ಸ್ವಾಮೀಜಿ ಅವರಿಗೆ ತಲಾ 50 ಲಕ್ಷ ರೂ. ಗಳನ್ನು ನೀಡೋಣ, ಇಬ್ಬರೂ ಬ್ಯಾಂಕ್‌ ಗ್ಯಾರಂಟಿ ನೀಡಬೇಕು ಎಂದು ಹೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ಚಂದ್ರಮೌಳಿ ಅವರು, ನಾವು ಆದಾಯ ತೆರಿಗೆ ತೋರಿಸಿದ್ದೇನೆ. ಏನೆಲ್ಲ ದಾಖಲೆ ನೀಡಬೇಕು ಅದೆಲ್ಲವನ್ನೂ ನೀಡಿದ್ದೇವೆ. ಪೂಜಾರಿ ಅವರು ಬ್ಯಾಂಕ್‌ ಭದ್ರತೆ ನೀಡಲು ಸಿದ್ಧರಿದ್ದಾರೆ. ಎಷ್ಟು ವರ್ಷಗಳ ಕಾಲ ನಾವು ಕಾಯಬೇಕು? ಪೂಜಾರಿ ಅವರು ಶೇ. 24 ಬಡ್ಡಿ ಪಾವತಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ನಿಶ್ಚಿತ ಠೇವಣಿ ಇಡಲಾಗಿದ್ದು, ಶೇ. 6 ಬಡ್ಡಿ ಬರುತ್ತಿದೆ. ಉಳಿದ ಹಣ ಎಲ್ಲಿಂದ ಬರಿಸಬೇಕು? ಮಠದ ಸ್ವಾಮೀಜಿ ಹಣ ಬಿಡುಗಡೆ ಕೋರುತ್ತಿದ್ದಾರೆ. ಅವರು ಹೇಗೆ ಹಣ ಬಿಡುಗಡೆ ಕೇಳುತ್ತಾರೆ? ಸ್ವಾಮೀಜಿ ಹೊರತುಪಡಿಸಿ ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ನಾವು ಹಣ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು. ಸ್ವಾಮೀಜಿ ಪರ ವಕೀಲ ಸುಯೋಗ್‌ ಹೇರಳೆ ಅವರು, ಸಂಧಾನ ಮಾತುಕತೆ ನಡೆದಿದೆ. 10 ಲಕ್ಷ ರೂ. ವ್ಯತ್ಯಾಸಕ್ಕೆ ಪೂಜಾರಿ ಅವರು ಒಪ್ಪುತ್ತಿಲ್ಲ. ಹಣ ಬಿಡುಗಡೆ ಮಾಡುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ನಮ್ಮ ವಿರುದ್ಧದ ಪ್ರಕರಣ ರದ್ದತಿಗೆ ಅವರು ಒಪ್ಪುತ್ತಿಲ್ಲ. ಹೆಚ್ಚುವರಿಯಾಗಿ ಬಡ್ಡಿಯ ರೂಪದಲ್ಲಿ 10 ಲಕ್ಷ ಸೇರಿಸಿಕೊಡಬೇಕು ಎನ್ನುತ್ತಿದ್ದಾರೆ ಎಂದರು. ಇದನ್ನು ಆಲಿಸಿದ ನ್ಯಾಯಪೀಠ, ಗೋವಿಂದ ಪೂಜಾರಿ ಅವರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗದು. ಪ್ರಕರಣ ವಜಾ ಅಥವಾ ಸಂಧಾನ ಯಾವುದು ಬೇಕು ನೋಡಿ. ನಿಮ್ಮ ಹಣ ನಿಮಗೆ ಬರಬೇಕು ಅಷ್ಟೆ. ಸಂಧಾನ ಮಾಡಿಕೊಂಡು ಬನ್ನಿ ಎಂದು ಮೌಖಿಕವಾಗಿ ತಿಳಿಸಿ, ವಿಚಾರಣೆಯನ್ನು ಡಿಸೆಂಬರ್‌ 2ಕ್ಕೆ ಮುಂದೂಡಿತು.

ವಾರ್ತಾ ಭಾರತಿ 19 Nov 2025 12:28 am

ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು : ಪುರುಷೋತ್ತಮ ಬಿಳಿಮಲೆ

ಮೈಸೂರು : ಜಾನಪದ ಕಲೆಗಳ ಕೇಂದ್ರಿಕೃತವಾದ ದಾಖಲೆ ರೂಪಿಸುವುದು ಇಂದಿನ ಅಗತ್ಯವಾಗಿದೆ. ಈ ದಾಖಲೆಯಲ್ಲಿ ಕಲಾವಿದರ ಕಲೆ, ಬದುಕು, ಜೀವನವನ್ನು ತಿಳಿಸಬೇಕು. ಜೊತೆಗೆ ಮಂಟೇಸ್ವಾಮಿ ಪರಂಪರೆ ಹಾಡು ಜಾಗತಿಕವಾಗಿ ಮನ್ನಣೆ ಪಡೆಯುತ್ತಿದ್ದು, ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ನಗರದ ಮಾನಸ ಗಂಗೋತ್ರಿಯ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಮತ್ತು ‘ನಾವು ಕೂಗುವಾ ಕೂಗು’ ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇಂದಿನ ಪೀಳಿಗೆ ಅಂತರ್ಜಲದ ಬಳಕೆ ಹೆಚ್ಚು ಮಾಡಲಿದೆ. ಈ ನಿಟ್ಟಿನಲ್ಲಿ ನಾವು ಡಿಜಟಿಲೀಕರಣ ಮಾಡಿದರೆ ಪೀಳಿಗೆಯಿಂದ ಪೀಳಿಗೆ ತಲುಪಿಸಬಹುದು. ಪುಸ್ತಕಗಳ ದಾಖಲು ಮಾಡುವ ಜೊತೆಗೆ ಡಿಜಿಟಿಲೀಕರಣ ಕೂಡ ಮಾಡಬೇಕು. ಜಾನಪದ ವಿಶ್ವವಿದ್ಯಾನಿಲಯ, ಪ್ರಸಾರಾಂಗದಿಂದ ಈ ಕೆಲಸವಾಗಬೇಕು. ದಾಖಲೆ ನಿರ್ಮಿಸುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಯಕ್ಷಗಾನ ಮತ್ತು ಭೂತರಾಧನೆ ಬಹಳ ದೊಡ್ಡ ಕಲೆಗಳು. ಪ್ರಸ್ತುತ ಸಂದರ್ಭದಲ್ಲಿ ಮುಂದಿನ 28 ವರ್ಷಗಳಿಗೆ ಆಟವೂ ಬುಕ್ ಆಗಿದ್ದು, ಅಷ್ಟೊಂದು ಜನಪ್ರಿಯತೆ ಪಡೆದುಕೊಂಡಿದೆ. ಒಟ್ಟಾರೆ 750 ಭೂತಗಳಿದ್ದು, ಈ ಭೂತ ಕಥನಗಳ ಕಾವ್ಯವೂ ಇದೆ. ಆದರೆ, ಪ್ರತಿಯೊಂದು ಭೂತಕ್ಕೂ ಒಬ್ಬೊಬ್ಬರು ಕಲಾವಿದರಿದ್ದಾರೆ. ಭೂತಾರಾಧನೆಯು ಕಲಾವಿದನ ಆತ್ಮಚರಿತ್ರೆಯ ಕಾದಂಬರಿಯಾಗಿ ಅಥವಾ ಕೃತಿಯಾಗಿ ಪ್ರಕಟವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಮೈಸೂರು ವಿವಿಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ನೀಲಗಾರರ ಆತ್ಮಕಥನ ಪ್ರಕಟಿಸುವುದು ಮತ್ತು ಮಂಟೇಸ್ವಾಮಿ ಕಾವ್ಯವನ್ನು ಮುಂದಿನ ಪೀಳಿಗೆಗೆ ಪೂರ್ತಿ ಉಳಿಸಬೇಕು ಎನ್ನುವ ಯೋಜನೆಗಳನ್ನು ಕೈಗೊಂಡು ಕಲಾವಿದರು ಮತ್ತು ಲೇಖಕರನ್ನು ಒಟ್ಟಿಗೆ ಸೇರಿಸಲು ನಿರ್ಧರಿಸಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಬಳಿ ಹೋಗಿ ಅತಿಥಿ ಗೃಹ ನೀಡುವಂತೆ ಮನವಿ ಮಾಡಿದೆ. ನನ್ನ ಮನವಿಗೆ ಸಮ್ಮತಿಸಿದ ಅವರು ಅತಿಥಿ ಗೃಹದ ಜೊತೆಗೆ ಸಕಲ ಸೌಲಭ್ಯ ನೀಡಿದರು. ಹೀಗಾಗಿ ಅವರಿಗೆ ಸುತ್ತೂರು ಶ್ರೀಗಳಿಗೆ ಕೃತಜ್ಞತೆ ತಿಳಿಸುತ್ತೇನೆ. ಈ ಎರಡು ಪುಸ್ತಕಗಳು ಆಗಲು ಮೂಲ ಕಾರಣ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ. -ಕೃಷ್ಣಮೂರ್ತಿ ಹನೂರು, ಕೃತಿಗಳ ಸಂಪಾದಕರು

ವಾರ್ತಾ ಭಾರತಿ 19 Nov 2025 12:23 am

ಬಂಟ್ವಾಳ | ಹರಿಕೃಷ್ಣ ಪುನರೂರು, ಬಿ.ರಮಾನಾಥ ರೈಗೆ ಸನ್ಮಾನ

ಬಂಟ್ವಾಳ : ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈಯವರು ಜಿಲ್ಲೆಯ ಮೇರು ವ್ಯಕ್ತಿತ್ವದ ಸಾಧಕರಿಬ್ಬರ ವ್ಯವಹಾರಿಕ ಕ್ಷೇತ್ರ ವಿಭಿನ್ನವಾದರೂ ಜನಸೇವೆಯ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳವರು ನುಡಿದರು. ಬಿ.ಸಿ.ರೋಡ್ ನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ಧರ್ಮದರ್ಶಿ, ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅರ್ಶೀವಚನಗೈದ ಅವರು, ಗುರುಗಳ ಕಾಲದಿಂದಲು ಮಠದ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಇವರಿಬ್ಬರು ಯಕ್ಷಗಾನ ಸಹಿತ ಸಾಂಸ್ಕೃತಿಕವಾಗಿಯೂ ಅಭಿಮಾನವುಳ್ಳವರಾಗಿದ್ದಾರೆ. ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನೀಡುವ ಇವರ ಜನಸೇವೆ ಸಮಾಜವನ್ನು ಒಂದುಗೂಡಿಸುವಂತಾಗಿದೆ ಎಂದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕುರಿತು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕುರಿತು ಅಭಿನಂದನಾ ಭಾಷಣಗೈದರು. ಸನ್ಮಾನ ಸ್ವೀಕರಿಸಿದ ಹರಿಕೃಷ್ಣ ಪುನರೂರು ಮಾತನಾಡಿ, ತಾನು ಸಂಪಾದನೆಯ ಒಂದು ಭಾಗವನ್ನು ಬಡವರ ಸೇವೆಗಾಗಿ ಸಮರ್ಪಿಸಿದ್ದೆನೆ. ಭಾಷಣ ಮಾಡುವ ಬದಲು ಕೆಲಸ ಮಾಡುವುದು ಮುಖ್ಯ. ಪ್ರತಿಯೋರ್ವರು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಜನಸೇವೆಗಾಗಿ ಸಿಕ್ಕಿರುವ ಅವಕಾಶವನ್ನು ಕರ್ತವ್ಯದ ಭಾಗವಾಗಿ ಮಾಡಿದ್ದೇನೆ. ಎಲ್ಲಾ ಧರ್ಮಿಯರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಕೆಲಸ ಮಾಡಿರುವ ತೃಪ್ತಿ ಹೊಂದಿದ್ದೆನೆ. ಶ್ರೀ ರಾಮನ ಆದರ್ಶಕ್ಕನುಗುಣವಾಗಿ ಇದುವರೆಗೂ ತನ್ನ ಬದುಕನ್ನು ಸಾಗಿಸಿದ್ದೆನೆ ಎಂದರು. ಅಭಿನಂದನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅವರು ಸಭಾಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಯಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ.ಜಿಲ್ಲೆ-1 ರ ನಿರ್ದೇಶಕ ದಿನೇಶ್, ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಉದ್ಯಮಿ ರಘುನಾಥ ಸೋಮಯಾಜಿ, ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ ಅವರು ಮಾತನಾಡಿ ಶುಭಹಾರೈಸಿದರು. ಇದೇ ವೇಳೆ ಇದೇ ವೇಳೆ ಪ್ರಶಂಸಾ ಅಭಿನಂದನಾ ಗ್ರಂಥ ವನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಕೋಶಾಧಿಕಾರಿ ರಾಮ್ ಗಣೇಶ್ ಕೈಕುಂಜೆ, ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಪ್ರೋ.ರಾಜಮಣಿ ರಾಮಕುಂಜ ಅವರು ವೇದಿಕೆಯಲ್ಲಿದ್ದರು. ಅಭಿನಂದನಾ ಸಮಿತಿಯ ಮಹಾಲಿಂಗ ಭಟ್ ಹಾಗೂ ಜಯರಾಮ ಪೂಜಾರಿ ಅವರು ಅಭಿನಂದನಾ ಪತ್ರ ವಾಚಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ವಂದಿಸಿದರು. ರಂಗ ಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸನ್ಮಾನಿತರಿಬ್ಬರಿಗೂ ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು. ಸಮಾರಂಭಕ್ಕೂ ಮುನ್ನ ಮಹಾಗಣಪತಿ ಹೋಮ, ಮಧ್ಯಾಹ್ನ ಭೋಜನದ ಬಳಿಕ ಜಯಪ್ರಕಾಶ್ ಪೆರ್ಮುದೆ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ವಾರ್ತಾ ಭಾರತಿ 19 Nov 2025 12:20 am

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪ್ರಕರಣ ಪತ್ತೆ: ಶಬರಿಮಲೆ ಯಾತ್ರಿಕರಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಕೇರಳ ರಾಜ್ಯದಲ್ಲಿ ‘ನೇಗ್ಲೇರಿಯಾ ಫೌಲೇರಿ’ (ಮಿದುಳು ತಿನ್ನುವ ಅಮೀಬಾ) ಜೀವಿಯಿಂದ ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್’ ಪ್ರಕರಣಗಳು ಕಂಡುಬಂದಿದ್ದು, ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನೇಗ್ಲೇರಿಯಾ ಫೌಲೆರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ, ಅದು ಮೆದುಳನ್ನು ತಲುಪುತ್ತದೆ. ಇದರಿಂದ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಎನ್ನುವ ಅಪರೂಪದ ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‍ಗಳನ್ನು ಬಳಸಿ ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ ತೀವು ತಲೆನೋವು, ವಾಕರಿಕೆ/ ವಾಂತಿ, ಕುತ್ತಿಗೆ ಬಿಗಿತ, ಗೊಂದಲ/ ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆಯು ಹೇಳಿದೆ. ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ನಿಂತ ನೀರು, ಕೊಳ, ಈಜುಕೊಳ, ಕೆರೆ ಸೇರಿದಂತೆ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಈ ಸೂಕ್ಷ್ಮಜೀವಿಯಿಂದ ಬರುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ ಎಂದು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 19 Nov 2025 12:14 am

ಕಾರವಾರ | ಟ್ಯಾಂಕರ್ ಉರುಳಿ ಮಿಥೇನ್ ಗ್ಯಾಸ್ ಸೋರಿಕೆ: ಸಾರ್ವಜನಿಕರು, ವಾಹನ ಓಡಾಟಕ್ಕೆ ನಿರ್ಬಂಧ

ಕಾರವಾರ, ನ.18: ರಾಷ್ಟ್ರೀಯ ಹೆದ್ದಾರಿ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಸಮೀಪ ಮಿಥೇನ್ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಘಟನೆ ಮಂಗಳವಾರ ನಡೆದಿದೆ. ಘಟನೆಯಿಂದಾಗಿ ಟ್ಯಾಂಕರ್ನಲ್ಲಿರುವ ಗ್ಯಾಸ್ ಸೋರಿಕೆಯಾಗುತ್ತಿದ್ದು, ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಟ್ಯಾಂಕರ್ ತೆರವುಗೊಳಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಸ್ಥಳದ 1 ಕಿ.ಮೀ. ವ್ಯಾಪ್ತಿಯೊಳಗೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಓಡಾಟ, ವಾಹನಗಳ ಓಡಾಟ, ನಿಲುಗಡೆ ನಿರ್ಬಂಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಾರ್ತಾ ಭಾರತಿ 18 Nov 2025 11:55 pm

ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ತನ್ವೀರ್ ಅಹ್ಮದುಲ್ಲಾಗೆ ಸ್ವಾಗತ

ಬೆಳ್ತಂಗಡಿ, ನ.18: ಧರ್ಮಸ್ಥಳ ಸರ್ವಧರ್ಮ ಸಮ್ಮೇಳನದ ಉಪನ್ಯಾಸಕ ತನ್ವೀರ್ ಅಹ್ಮದುಲ್ಲಾ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಹೆಗ್ಗಡೆಯವರೊಂದಿಗೆ ತನ್ನ ಅನುಭವ ಹಂಚಿಕೊಂಡ ತನ್ವೀರ್, ದಾರಿಯುದ್ಧಕ್ಕೂ ಹೆಗ್ಗಡೆ ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು ಎಂದು ಹೇಳಿದರು.

ವಾರ್ತಾ ಭಾರತಿ 18 Nov 2025 11:49 pm

Ukraine War: ಫ್ರಾನ್ಸ್ ಜೊತೆ ಉಕ್ರೇನ್ ದೊಡ್ಡ ಡೀಲ್, ರಷ್ಯಾ ಜೊತೆಗೆ ಮತ್ತಷ್ಟು ಘೋರ ಯುದ್ಧ ಶುರು?

ರಷ್ಯಾ ಬಾರಿಸುವ ಏಟಿಗೆ ಉಕ್ರೇನ್ ನಲುಗಿ ಹೋಗಿದ್ದು, ಜೀವ ಉಳಿಸಿಕೊಂಡರೆ ಸಾಕಪ್ಪಾ ದೇವರೇ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಕೂಡ ರೊಚ್ಚಿಗೆದ್ದು ತನ್ನ ಶತ್ರು &ಆಜನ್ಮ ವೈರಿ ಉಕ್ರೇನ್ ವಿರುದ್ಧ ಪದೇ ಪದೇ ದಾಳಿ ಮಾಡುತ್ತಲೇ ಇದೆ. ಹೀಗೆ ಎಲ್ಲಾ ರೀತಿಯ ದಾಳಿ ಮತ್ತು ಪ್ರತಿದಾಳಿ ನಡುವೆ ನಲುಗಿ ಹೋಗಿರುವ ಉಕ್ರೇನ್

ಒನ್ ಇ೦ಡಿಯ 18 Nov 2025 11:48 pm

ಕಾನ | ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಧರಣಿ

ಸುರತ್ಕಲ್, ನ.18: ಇಲ್ಲಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಾನ-ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ದುರಸ್ತಿಗೆ ಆಗ್ರಹಿಸಿ, ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕಾನ ಜಂಕ್ಷನ್ ಬಳಿ ಧರಣಿ ನಡೆಯಿತು. ರಸ್ತೆಯನ್ನು ಪೂರ್ಣಗೊಳಿಸದೆ ನಿತ್ಯ ಅಪಘಾತಕ್ಕೆ ಕಾರಣರಾಗುತ್ತಿರುವ ಪಿಡಬ್ಲ್ಯುಡಿ ಮತ್ತು ನಗರಪಾಲಿಕೆಯ ನಿರ್ಲಕ್ಷ್ಯತನವನ್ನು ಧರಣಿ ನರತರು ಖಂಡಿಸಿದರು. ಈ ಸಂದರ್ಭ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಇಮ್ತಿಯಾಝ್, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಪವಿತ್ರ ಗುತ್ತಿಗೆ ಸಂಬಂಧದಿಂದ ಕಳಪೆ ಮತ್ತು ಅವೈಜ್ಞಾನಿಕವಾಗಿ ಸುರತ್ಕಲ್ ಎಂಆರ್‌ಪಿಎಲ್ ರಸ್ತೆಯ ನಿರ್ಮಾಣ ಮಾಡಲಾಗಿದೆ. ಹಲವೆಡೆ ಕಾಮಗಾರಿ ಅಪೂರ್ಣ ವಾಗಿದೆ. ಕಾನ -ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದ್ದರೂ ಜನಪ್ರತಿನಿದಿನಗಳು ಮೌನವಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಕಾರ್ಪೊರೇಟರ್ ಆಯಾಝ್ ಕೃಷ್ಣಾಪುರ, ಶ್ರೀನಾಥ್ ಕುಲಾಲ್ ಮಾತನಾಡಿದರು. ಈ ಸಂದರ್ಭ ಡಿವೈಎಫ್‌ಐ ಮುಖಂಡರಾದ ಬಿ.ಕೆ.ಮಕ್ಸೂದ್, ಅಜ್ಮಲ್ ಅಹ್ಮದ್, ನವಾಝ್ ಕುಳಾಯಿ, ಮುಸ್ತಫ ಬಾಳ, ಜೋಯ್ ರೋಷನ್ ಡಿಸೋಜ, ಮುನೀಬ್, ಆಟೊ ರಿಕ್ಷಾ ಚಾಲಕರ ಸಂಘದ ಮುಖಂಡ ಲಕ್ಷ್ಮೀಶ ಅಂಚನ್, ಬಶೀರ್ ಕಾನ, ಹಂಝ ಮೈಂದಗುರಿ, ರಹೀಮ್, ನಾಗರಿಕ ಹೋರಾಟ ಸಮಿತಿಯ ಮೆಹಬೂಬ್ ಖಾನ್, ಜಗದೀಶ್ ಕಾನ, ರಾಜೇಶ್ ಕಾನ, ಅಬೂಬಕರ್ ಅಂಗಡಿ, ಇಕ್ಬಾಲ್ ಜೋಕಟ್ಟೆ, ಸಿರಾಜ್ ಮೈಂದಗುರಿ, ಫ್ರಾನ್ಸಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 11:46 pm

ಬಾರೆಬೆಟ್ಟು | ಸಿಡಿಲು ಬಡಿದು ಮನೆಗೆ ಹಾನಿ

ವಿಟ್ಲ, ನ.18: ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಅಬ್ದುಲ್ ಲತೀಫ್ ಎಂಬವರ ಮನೆಗೆ ನ.18ರಂದು ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲು ಬಡಿದ ಸಂದರ್ಭದಲ್ಲಿ ಮನೆಯೊಳಗೆ ಪುಟಾಣಿ ಮಗು ಹಾಗೂ ಇಬ್ಬರು ಮಹಿಳೆಯರಿದ್ದರು. ಮಗುವಿನ ಕಿವಿಗೆ ಗಾಯವಾಗಿದೆ.

ವಾರ್ತಾ ಭಾರತಿ 18 Nov 2025 11:41 pm

ದೆಹಲಿ ಸ್ಫೋಟ 2025 - ತಲೆಮರೆಸಿಕೊಂಡಿದ್ದ ಅಲ್ ಫಲಾಹ್ ವಿವಿ ಮುಖ್ಯಸ್ಥನ ಬಂಧನ

ಅಲ್ ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಸಿದ್ದಿಕಿ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಬಂಧನವು ವಿಶ್ವವಿದ್ಯಾಲಯದ ನಕಲಿ ಮಾನ್ಯತೆ ಹಕ್ಕುಗಳ ತನಿಖೆಯ ಹಿನ್ನೆಲೆಯಲ್ಲಿ ನಡೆದಿದೆ. ಇದಕ್ಕೂ ಮೊದಲು, ಅವರ ಸಹೋದರ ಹಮೂದ್ ಅಹ್ಮದ್ ಸಿದ್ದಿಕಿ ಅವರನ್ನು 25 ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಘಟನೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ವಿಜಯ ಕರ್ನಾಟಕ 18 Nov 2025 11:41 pm

\ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ ಖರ್ಚು!\

ಕರ್ನಾಟಕ ಸರ್ಕಾರವು ಪ್ರಚಾರದ ಹೆಸರಿನಲ್ಲಿ ಭಾರೀ ಮೊತ್ತ ಖರ್ಚು ಮಾಡಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗೆ ಭಾರೀ ಮೊತ್ತವನ್ನು ಖರ್ಚು ಮಾಡುತ್ತಿದೆ. ಅಲ್ಲದೇ ಇದಕ್ಕಾಗಿಯೇ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದು ವಿಪಕ್ಷಗಳು ದೂರುತ್ತಿರುವುದು ಸಹ ಇದೆ. ಈ ರೀತಿ ಇರುವಾಗಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ

ಒನ್ ಇ೦ಡಿಯ 18 Nov 2025 11:40 pm

ಡಿ.1ರಿಂದ 5 : ಐ.ಡಿ.ಪೀಠಕ್ಕೆ ಯಾತ್ರಾರ್ಥಿ-ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು : ತಾಲೂಕಿನ ಐ.ಡಿ.ಪೀಠ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಡಿಸೆಂಬರ್ 2 ರಿಂದ 4ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಡಿ.1ರ ಬೆಳಗ್ಗೆ 6ರಿಂದ ಡಿ.5ರ ಬೆಳಗ್ಗೆ 10 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದತ್ತ ಜಯಂತಿಗೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ವಾಹನಗಳ ಮುಖಾಂತರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸಲಿದ್ದು, ದತ್ತಮಾಲಾಧಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು, ಕಾರ್ಯಕರ್ತರು, ಸುತ್ತಮುತ್ತಲಿನ ವ್ಯಾಪ್ತಿಯ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವವರು ಮತ್ತು ಮೇಲ್ಕಂಡ ಸ್ಥಳಗಳಲ್ಲಿ ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್‌ಗಳನ್ನು ಬುಕಿಂಗ್ ಮಾಡಿಕೊಂಡವರನ್ನು ಈ ನಿರ್ಬಂಧದಿಂದ ಹೊರತುಪಡಿಸಲಾಗಿದೆ. ಸಂಸ್ಥೆಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿದೆ. ಇದರಿಂದಾಗಿ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನಸಂದಣಿಯಾಗಿ ಅನನುಕೂಲವಾಗುವ ಸಂಭವವಿರುವುದರಿಂದ ಹಾಗೂ ಜಿಲ್ಲಾ ಲೋಕೋಪಯೋಗಿ ಇಲಾಖೆಯ ವರದಿ ಮೇರೆಗೆ ಕೈಮರದಿಂದ ಕವಿಕಲ್‌ಗುಂಡಿ ಮೂಲಕ ಹೋಗುವ ಅತ್ತಿಗುಂಡಿ ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ರಸ್ತೆಯು ಕುಸಿದಿದೆ ಮಾತ್ರವಲ್ಲ, ರಸ್ತೆಯ ಭಾಗವು ಅತೀ ಕಿರಿದಾಗಿದ್ದು ಹಾಗೂ ಏರಿಳಿತಗಳಿಂದ ಕೂಡಿರುವುದರಿಂದ ಉದ್ದ ಚಾಸ್ಸಿ ಇರುವ ವಾಹನಗಳ ಸಂಚಾರವು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೈಮರ ಚೆಕ್‌ಪೋಸ್ಟ್‌ನಿಂದ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಉದ್ದಚಾಸ್ಸಿ ವಾಹನಗಳ ಸಂಚಾರವನ್ನು (ಎರಡು ಆಕ್ಸೆಲ್‌ಗಿಂತ ಹೆಚ್ಚಿನ ಆಕ್ಸೆಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳು) ಡಿ.1ರಿಂದ 5 ರವರೆಗೆ ನಿರ್ಬಂಧಿಸಲಾಗಿದೆ. (ಈ ಆದೇಶವು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಉಪಯೋಗಿಸುವ ಕೆಎಸ್ಸಾರ್ಟಿಸಿ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಮತ್ತು ಇತರ ಅಗತ್ಯ ತುರ್ತು ಸೇವೆಗಳ ವಾಹನಗಳಿಗೆ ಅನ್ವಯಿಸುವುದಿಲ್ಲ). ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಕೋರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 11:28 pm

ಗಾಜಾ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ಲಾನ್, ಜೈ ಎಂದ ವಿಶ್ವಸಂಸ್ಥೆ!

ಗಾಜಾ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಇಡೀ ಪ್ರಪಂಚ ಸೋತು ಸೋತು ಹೋಗಿದೆ. ಹೀಗೆ ಇಬ್ಬರ ನಡುವಿನ ಈ ಬಡಿದಾಟ ಇನ್ನೆಷ್ಟು ದಿನ? ಎಂಬ ಪ್ರಶ್ನೆ ಕೂಡ ಇದೀಗ ಉದ್ಭವಿಸಿದೆ. ಈ ಎಲ್ಲಾ ತಿಕ್ಕಾಟದ ನಡುವೆ ಕೂಡ ಮತ್ತೊಂದು ಮಹತ್ವದ ಬೆಳವಣಿಗೆ ಅಮೆರಿಕ ನೆಲದಲ್ಲೇ ಆಗುತ್ತಿದ್ದು, ಯುದ್ಧ ನಿಲ್ಲಿಸಲು ಬೇಕಾಗಿರುವ ಎಲ್ಲಾ ರೀತಿಯ ಪ್ರಯತ್ನಗಳು

ಒನ್ ಇ೦ಡಿಯ 18 Nov 2025 11:26 pm

ಬಾಬಾ ಬುಡಾನ್ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ

ಚಿಕ್ಕಮಗಳೂರು : ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ಆಡಳಿತಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರಡ್ಡಿ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ. ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರ ಕಚೇರಿ ಈ ಆದೇಶವನ್ನು ಹೊರಡಿಸಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯನ್ನು ಏಕಪಕ್ಷೀಯವಾಗಿ ರಚನೆ ಮಾಡಲಾಗಿದೆ ಎಂಬ ಟೀಕೆಗಳು ಆಗ ವ್ಯಕ್ತವಾಗಿದ್ದು, ಸಮಿತಿ ಬದಲಾವಣೆಗೂ ಕೆಲ ಸಂಘಟನೆಗಳು ಒತ್ತಾಯಿಸಿದ್ದವು. ಸದ್ಯ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‌ ಸ್ವಾಮಿ ದರ್ಗಾಕ್ಕೆ ನೂತನ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರ ಆದೇಶಿಸಿದೆ. ಸ್ವಾಗತಾರ್ಹ : ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾಕ್ಕೆ ಆಡಳಿತಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿಯನ್ನು ಸರಕಾರ ನೇಮಿಸಿರುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಸೈಯದ್ ಬಾಬಾ ಬುಡಾನ್ ಶಾ ಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದಿದ್ದರೂ ಅನೇಕ ಅಕ್ರಮಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ದರ್ಗಾದ ಪಾವಿತ್ರ್ಯಮತ್ತು ಕಾನೂನುಬದ್ಧ ಆಡಳಿತ ಕಾಪಾಡಲು ಇದು ಅತ್ಯಂತ ಸೂಕ್ತ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 18 Nov 2025 11:18 pm

ತೆರಿಗೆ ವಂಚಿಸಿ ಕಾರು ನೋಂದಣಿ: ಲೋಕಾಯುಕ್ತ ಪೊಲೀಸರಿಂದ ಆರ್‌ಟಿಒ ಕಚೇರಿ ತಪಾಸಣೆ

ಮಂಗಳೂರು, ನ‌18: ತೆರಿಗೆ ವಂಚಿಸಿ ಐಷಾರಾಮಿ ಕಾರನ್ನು ನೋಂದಣಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯ ಆರ್ ಟಿಒ ಕಚೇರಿಯಲ್ಲಿ ಮಂಗಳವಾರ ಕಡತ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಆರ್ ಟಿಒ ಕಚೇರಿಯಲ್ಲಿ ತೆರಿಗೆ ಕಡಿಮೆ ಮಾಡಿ ಬಿಎಂಡಬ್ಲ್ಯು ಕಾರೊಂದನ್ನು ನೋಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ ಸಂದಾಯ ಆಗಬೇಕಾಗಿದ್ದ ಸುಮಾರು 85 ಲಕ್ಷ ರೂ. ತೆರಿಗೆ ವಂಚನೆಯಾಗಿತ್ತು. ನೋಂದಣಿಗೆ ಸಂಬಂಧಿಸಿದಂತೆ ಮಂಗಳೂರು ಆರ್‌ಟಿಒ ಕಚೇರಿಯಲ್ಲೂ ಕೆಲವೊಂದು ಪ್ರಕ್ರಿಯೆಗಳು ನಡೆದಿದೆ ಎನ್ನಲಾಗಿದೆ. ಹಾಗಾಗಿ ಎರಡೂ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಡತ ಪರಿಶೀಲನೆಯ ವೇಳೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು. ಅಲ್ಲಿನ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಲೋಕಾಯುಕ್ತ ಎಸ್ ಪಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 11:12 pm

ಕಲಬುರಗಿ | ಲೈನ್ ಮ್ಯಾನ್ ಆತ್ಮಹತ್ಯೆ : ಅಧಿಕಾರಿಗಳಿಂದ ಕಿರುಕುಳ ಆರೋಪ

ಕಲಬುರಗಿ: ಲೈನ್ ಮ್ಯಾನ್‌ವೊಬ್ಬರು ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ. ಪರಮೇಶ್ವರ್‌ ಆತ್ಮಹತ್ಯೆ ಮಾಡಿಕೊಂಡವರು. ಬಸವಪಟ್ಟಣ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಪರಮೇಶ್ವರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಫರಹತಾಬಾದ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ ಕಾರಣ ಎಂದು ಪರಮೇಶ್ವರ್‌ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.  

ವಾರ್ತಾ ಭಾರತಿ 18 Nov 2025 11:10 pm

ಬೆಂಗಳೂರಿನ ಪಂಚ ಪಾಲಿಕೆ ವಾರ್ಡ್ ವಿಂಗಡಣೆ ಅಂತಿಮ ಅಧಿಸೂಚನೆ: 368 ವಾರ್ಡ್‌ಗಳ ವಿವರ

ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ವಾರ್ಡ್‌ಗಳ ಅಂತಿಮ ವಿಂಗಡಣೆ ಅಧಿಸೂಚನೆ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಇದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಶೀಲಿಸಿ, ತಪ್ಪುಗಳನ್ನು ಸರಿಪಡಿಸಲಾಗಿದೆ. ಒಟ್ಟು 368 ವಾರ್ಡ್‌ಗಳನ್ನು ರಚಿಸಲಾಗಿದೆ. ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮುಗಿದಿದ್ದು, ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ಜಾತಿ ಸಮೀಕ್ಷೆಯಿಂದ ಪ್ರಕ್ರಿಯೆ ವಿಳಂಬವಾಗಿತ್ತು.

ವಿಜಯ ಕರ್ನಾಟಕ 18 Nov 2025 11:04 pm

ವಿಜಯನಗರ | ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ಡಾ. ಶ್ರೀನಿವಾಸ್ ಎನ್‌ ಟಿ

ವಿಜಯನಗರ : ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ಅವರು ಚಿಕ್ಕ ಜೋಗಿಹಳ್ಳಿ ಹಾಗೂ ಗುಡೇಕೋಟೆ ಗ್ರಾಮಗಳಿಗೆ ಭೇಟಿ ನೀಡಿ ಆ ಭಾಗದ ಜನರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಗೊಳಿಸಿದರು. ಇನ್ನು ಹಲವಾರು ಸಮಸ್ಯೆಗಳು ಸರಕಾರದ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ. ಆದಷ್ಟು ಬೇಗನೆ ಸರಿಪಡಿಸುತ್ತೇನೆ ಎಂದು ಆ ಭಾಗದ ಜನರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 11:01 pm

ಮಂಗಳೂರು | ನ.19ರಂದು ರಾಜ್ಯ ಝುಹ್‌ರಿ ಸಂಗಮ

ಮಂಗಳೂರು: ಮಧ್ಯ ಕೇರಳದ ಅತೀ ದೊಡ್ಡ ಧಾರ್ಮಿಕ - ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಮಾಡವಣ ಜಾಮಿಅಃ ಅಝೀಝಿಯ್ಯಃ ಇಲ್ಲಿನ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜನೆ ಗೈದು ಶೈಖುನಾ ಮಾಡವನ ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ ರವರ ದಿವ್ಯ ಹಸ್ತದಿಂದ ಝುಹ್‌ರಿ ಬಿರುದು ಪಡೆದ ಕರ್ನಾಟಕದ ವಿದ್ವಾಂಸರ ಸಂಗಮವು ರಾಜ್ಯ ಝುಹ್‌ರಿ ಸಂಗಮ ಇದೇ ನ.19ರಂದು ಮಂಗಳೂರು ಹೃದಯ ಭಾಗವಾದ ಭಾವುಟಗುಡ್ಡೆಯಲ್ಲಿರುವ ರಾಜ್ಯ ಎಸ್‌.ವೈ.ಎಸ್‌ ಕಚೇರಿಯಲ್ಲಿ ನಡೆಯಲಿದೆ. ಕರ್ನಾಟಕ ಝುಹ್‌ರೀಸ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಇಸ್ಹಾಖ್ ಝುಹ್‌ರಿ ಸೂರಿಂಜೆರವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಸದ್ರಿ ಸಂಗಮಕ್ಕೆ ಶೈಖುನಾ ಮಾಡವನ ಉಸ್ತಾದರು ದುಅಃ ಆಶೀರ್ವಚನ ನೀಡಲಿದ್ದಾರೆ. ಝುಹ್‌ರೀಸ್ ರಾಜ್ಯಾಧ್ಯಕ್ಷರಾದ ಪಂಜ ನೂರುದ್ದೀನ್ ಝುಹ್‌ರಿ ರವರು ಉದ್ಘಾಟಿಸಲಿದ್ದು, ರಾಜ್ಯ ಕೋಶಾಧಿಕಾರಿ ಕೊಂಬಾಳಿ ಕೆ.ಎಂ.ಎಚ್ ಝುಹ್‌ರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಝುಹ್‌ರೀಸ್ ನ್ಯಾಶನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಸಿ. ಝುಹ್‌ರಿ ಮಲೇಷ್ಯಾ ವಿಷಯ ಮಂಡನೆ ನಡೆಸಲಿದ್ದಾರೆ. ಈ ಮಹಾ ಸಂಗಮದಲ್ಲಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಝುಹ್‌ರಿ ವಿದ್ವಾಂಸರು ಕಡ್ಡಾಯವಾಗಿ ಭಾಗವಹಿಸುವಂತೆ ರಾಜ್ಯ ಝುಹ್‌ರೀಸ್ ಪ್ರಧಾನ ಕಾರ್ಯದರ್ಶಿ ಎ.ಎಂ. ಫೈಝಲ್ ಝುಹ್‌ರಿ ಕಲ್ಲುಗುಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 10:56 pm

ಕುಂದಾಪುರ | ಜಲ ಜೀವನ್ ಮಿಷನ್ ಯೋಜನೆಯನ್ನು ಗ್ರಾಪಂಗಳು ಗಂಭೀರವಾಗಿ ಪರಿಗಣಿಸಿ : ಗಂಟಿಹೊಳೆ

ಕುಂದಾಪುರ, ನ.18: ಸಾವಿರಾರು ಕೋಟಿ ಜೆ.ಜೆ.ಎಂ ಯೋಜನೆಯನ್ನು ಗ್ರಾಮ ಪಂಚಾಯತ್ ಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಯೋಜನೆ ಹಳ್ಳ ಹಿಡಿಯಬಹುದು. ಗ್ರಾಮ ಪಂಚಾಯತ್ ಗಳು ಸಂಪೂರ್ಣ ಕೆಲಸ ಆಗದೆ, ನೀರು ಪ್ರತಿ ಮನೆಗಳಿಗೆ, ಯೋಜನೆಯ ಪೂರ್ವದಲ್ಲಿ ತಿಳಿಸಿದ ಪ್ರಮಾಣದಲ್ಲಿ ಹೋಗದ ತನಕ ನಿರಾಪೇಕ್ಷಣ ಪತ್ರ ಕೊಡಬಾರದು. ಕೆಲಸ ಅಪೂರ್ಣ ಆಗಿರುವಾಗ ಎನ್.ಓ.ಸಿ ಕೊಟ್ಟರೆ ಆ ಪಂಚಾಯತ್ಗಳೇ ಹೊಣೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಬ್ಯೆಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ಪಿಡಿಒಗಳ ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕಾಮಗಾರಿಯನ್ನು ಬೇರೆಬೇರೆ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಪೈಪ್ ಲೈನ್, ನಳ್ಳಿ ಕಟ್ಟೆ, ಟ್ಯಾಂಕ್ ನಿರ್ಮಾಣ ಬೇರೆಯವರು ಮಾಡಿದ್ದಾರೆ. ಇವರೆಲ್ಲ ಅವರವರ ಕೆಲಸ ಮುಗಿಸಿ ಹೋಗುತ್ತಾರೆ. ನೀರು ಸರಬರಾಜು ಜವಬ್ದಾರಿ ಯಾರದ್ದು? ಅಲ್ಲಿ ಆಗ ಯಾರೂ ಇರುವುದಿಲ್ಲ. ಗುತ್ತಿಗೆಯ ಅವಧಿ, ನಿಯಮಾವಳಿ ಮೊದಲಾದ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆಗ ಜನರಿಂದ ದಿನ ಪಂಚಾಯತ್ ಬೈಗುಳ ಕೇಳಬೇಕಾಗುತ್ತದೆ. ಈಗಾಗಲೇ ವಿಳಂಬವಾಗಿದೆ. ಇನ್ನಾದರೂ ಗ್ರಾಮ ಪಂಚಾಯತ್ ಗಳು ಎಚ್ಚೆತ್ತು ಕೊಳ್ಳಬೇಕು ಎಂದು ಅವರು ತಿಳಿಸಿದರು. ಈಗಾಗಲೇ ಕೆಲವು ಪಂಚಾಯತ್ ಗಳು ಜೆಜೆಎಂ ಪೈಪ್ ಲೈನ್ ಬಳಿಸಿ ತಾವೇ ನೀರು ಬಿಡುವ ಪ್ರಯತ್ನ ಮಾಡಿವೆ. ಇದರಿಂದ ಕೆಲವು ಪಂಚಾಯತ್ ಗಳು ಯಶಸ್ಸು ಕಂಡರೂ ಕೂಡಾ ಪೈಪ್ ಲೈನ್ ಸರಿಯಾಗದ ಕಾರಣ ನೀರು ಸರಿಯಾಗಿ ಹರಿಯುತ್ತಿಲ್ಲ. ಸಮಸ್ಯೆಗಳನ್ನು ಗುರುತಿಸಿ ಅವರಿಂದ ಸರಿಪಡಿಸಿಕೊಳ್ಳಬೇಕು ಎಂದರು. 16 ಗ್ರಾಮ ಪಂಚಾಯತ್ಗಳಲ್ಲಿ ಭಾಗಶ: ಜೆಜೆಎಂ ಪೈಪ್ಲೈನ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಜೆಜೆಎಂ ಅಧಿಕಾರಿಗಳು ಮಾಹಿತಿ ನೀಡಿದರು. ಆಲೂರು, ವಂಡ್ಸೆ ಗ್ರಾಮ ಪಂಚಾಯತ್ ನಲ್ಲಿ ಅನುಷ್ಟಾನದ ಬಗೆ ಅಭಿಪ್ರಾಯ ಹಂಚಿಕೊಂಡರು. ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಮಾತನಾಡಿ, ನಳ್ಳಿಗಳಲ್ಲಿ ನಿಮಿಷಕ್ಕೆ 10 ಲೀಟರ್‌ ಬರುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಖಂಡಿತಾ ಅದು ಬರುತ್ತಿಲ್ಲ. ಮೇಲ್ಬಾಗದ ಮನೆಗಳಿಗೆ ನೀರು ಹೋಗುತ್ತಿಲ್ಲ, ಪೈಪ್ ಲೈನ್ ಮಾಡುವ ಸಂಪೂರ್ಣ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಎರಡು ಇಂಚಿನ ಪೈಪ್ ಮಾತ್ರ ಬಳಕೆ ಮಾಡಿದ್ದಾರೆ. ಹಾಗಾಗಿ ನೀರು ತುಂಬಾ ನಿಧಾನವಾಗಿ ಬರುತ್ತಿದೆ ಎಂದು ದೂರಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಕತ್ತರಿಸಿ ಪೈಪ್ ಲೈನ್ ಮಾಡಿದ್ದಾರೆ. ಸರಿಯಾಗಿ ಅದರ ಪುರ್ನ ನಿರ್ಮಾಣ ಮಾಡಿಲ್ಲ. ಬೇಕಾಬಿಟ್ಟಿಯಾಗಿ ತೇಪೆ ಹಾಕಿದ್ದಾರೆ. ಹಾಲಿ ಇರುವ ನೀರಿನ ಪೈಪ್ ಲೈನ್ ಗೂ ಹಾನಿ ಮಾಡಿದ್ದಾರೆ. ರಸ್ತೆಗಳೂ ಹಾಳಾಗಿದೆ ಎಂಬ ಆರೋಪಗಳು ಉಪ್ಪುಂದ, ಕೊಲ್ಲೂರು, ಇಡೂರು, ಕೆರಾಡಿ, ಅಂಪಾರು, ಜಡ್ಕಲ್ ಮೊದಲಾದ ಗ್ರಾಮ ಪಂಚಾಯತ್ ಗಳಿಂದ ಕೇಳಿ ಬಂದವು. 20 ದಿನಗಳ ಒಳಗೆ ರಸ್ತೆಗೆ ಆಗಿರುವ ಹಾನಿಯನ್ನು ವ್ಯವಸ್ಥಿತವಾಗಿ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲೂ ಜೆಜೆಎಂ ಸಮಸ್ಯೆಯಿದೆ. ಎಷ್ಟು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಒಂದು ಹಂತಕ್ಕೂ ಬಂದಿಲ್ಲ. ಅವರು ಮಾಡಿರುವ ಪೈಪ್ ಲೈನ್ ಬಳಸಿಕೊಂಡು ಪಂಚಾಯತ್ಗಳು ನೀರು ಬಿಡಲು ಸಾಧ್ಯವಿಲ್ಲ. ಎಲ್ಲ ಕಡೆ ಒಂದೇ ಅಳತೆಯ ಪೈಪ್ ಅಳವಡಿಸಿದ್ದಾರೆ. ನೀರು ಸರಬರಾಜು ಪೈಪ್ ಯಾವ ರೀತಿಯಲ್ಲಿ ಅಳವಡಿಸಬೇಕು ಎನ್ನುವುದು ಸಾಮಾನ್ಯ ವ್ಯಕ್ತಿಗಾದರೂ ಗೊತ್ತಿರುತ್ತದೆ. ಇಲ್ಲಿ ಇಂಜಿನಿಯರ್ಗಳು ಎಲ್ಲ ಒಂದೇ ಅಳತೆಯ ಪೈಪ್ ಅಳವಡಿಸಿರುವುದರಿಂದ ನೀರು ವೇಗವಾಗಿ ಹೋಗಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಅಸಮಾಧಾನ ವ್ಯಕ್ತ ಪಡಿಸಿದರು. ಬೈಂದೂರು ಕ್ಷೇತ್ರದಲ್ಲಿ ಸತತ ಸಭೆಯ ಬಳಿಕ 94ಸಿ ಹಕ್ಕುಪತ್ರ ಆರ್ಹರಿಗೆ ಸಿಕ್ಕಿದೆ. ಕ್ಷೇತ್ರ ಯಾವುದಾದರೂ ಆರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗದಿದ್ದರೆ ಮಾಹಿತಿ ನೀಡಿ ಎಂದು ಶಾಸಕ ಗಂಟಿಹೊಳೆ ಹೇಳಿದರು. ಕುಮ್ಕಿ ಹಕ್ಕು ರೈತರದ್ದೆ. ಗದ್ದೆಯ ತಲೆಯ ಭಾಗವನ್ನು ರೈತರದ್ದೇ ಆಗಿರುತ್ತದೆ. ಈ ಬಗ್ಗೆ ಶೀಘ್ರ ಕುಮ್ಕಿ ಹಕ್ಕಿನ ಬಗ್ಗೆ ಹೋರಾಟ ಮಾಡಿರುವ ತಜ್ಞರನ್ನು ಕರೆಯಿಸಿ ಸಭೆ ನಡೆಸಲಾಗುವುದು ಎಂದರು. ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ 2700 ವಸತಿ, 7904 ನಿವೇಶನ ಬೇಡಿಕೆ ಇದೆ. ವಸತಿ ಸಮಸ್ಯೆ ಹಾಗೂ ನಿವೇಶನ ಸಮಸ್ಯೆಯನ್ನು ಬಗೆಹರಿಸಲು ಪರಿಣಾಮಕಾರಿ ಕ್ರಮಗಳನ್ನು ಹಾಕಿಕೊಳ್ಳಬೇಕು. ಅಕ್ರಮ ಸಕ್ರಮದಲ್ಲಿ ಮಿತಿಗಿಂತ ಜಾಸ್ತಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯನ್ನು ಸರಕಾರದ ಮಾನದಂಡದಷ್ಟೆ ನೀಡಿ ಉಳಿಕೆಯನ್ನು ನಿವೇಶನ ರಹಿತರಿಗೆ ನೀಡುವ ಬಗ್ಗೆಯೋ ಚಿಂತನೆ ಮಾಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ನಿವೇಶನ ರಹಿತರ ಪಟ್ಟಿ ಇದೆ. 500 ಕ್ಕೂ ಹೆಚ್ಚು ಅರ್ಜಿ ಇರುವ ಪಂಚಾಯತ್ಗಳಿವೆ. ಸರಕಾರಿ ಸ್ಥಳಗಳನ್ನು ಗುರುತಿಸಿ ಪಂಚಾಯತ್ಗಳ ಸ್ವಾಧಿನಕ್ಕೆ ತಗೆದುಕೊಳ್ಳುವ ಕೆಲಸ ಪಂಚಾಯತ್ಗಳು ಮಾಡಬೇಕು ಎಂದರು. ಸಭೆಯಲ್ಲಿ ಅಕ್ರಮ-ಸಕ್ರಮ, ಜಾತಿ ಪ್ರಮಾಣ ಪತ್ರ, ಬೀಡಾಡಿ ಗೋವುಗಳಿಂದ ಕೃಷಿಕರಿಗೆ ಆಗುತ್ತಿರುವ ತೊಂದರೆ, ಬೀದಿ ನಾಯಿಗಳ ಸಮಸ್ಯೆ, ಕೆಎಸ್ಆರ್ಟಿಸಿ, 9/11 ಸಮಸ್ಯೆ, ಪಡಿತರ ಚೀಟಿ ಗೊಂದಲ, ಟ್ಯಾಂಕರ್‌ ನೀರು ಸರಬರಾಜು, ಪ್ರವಾಸೋದ್ಯಮ, 15ನೇ ಹಣಕಾಸು ಬಿಡುಗಡೆ ಆಗದೆ ಇರುವುದು, ಬಿಎಸ್ಸೆನ್ನೆಲ್ ನೆಟ್ವರ್ಕ್ ಸಮಸ್ಯೆ, ಇ-ಸ್ವತ್ತು ಆಸ್ತಿ ನೊಂದಣಿಯಲ್ಲಿ ಹೆಸರು ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ಬೈಂದೂರು ತಹಶೀಲ್ದಾರ್ ಎಚ್.ರಾಮಚಂದ್ರಪ್ಪ, ಜಿಲ್ಲಾ ಉಪ ಕಾರ್ಯದರ್ಶಿ ಎಸ್.ಎಸ್.ಖಾದ್ರಳ್ಳಿ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ಜಿಪಂ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಉದಯ ಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 10:44 pm

ಪಶ್ಚಿಮದಂಡೆ: ಚೂರಿ ಇರಿತಕ್ಕೆ ಒಬ್ಬ ಬಲಿ; ಮೂವರಿಗೆ ಗಾಯ

ಗಾಝಾ, ನ.18: ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಂಗಳವಾರ ನಡೆದ ಇರಿತದ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಇಸ್ರೇಲ್‍ನ ತುರ್ತು ಸೇವಾ ಏಜೆನ್ಸಿ ಹೇಳಿದೆ. ಪಶ್ಚಿಮ ದಂಡೆಯ ದಕ್ಷಿಣದಲ್ಲಿರುವ ಗುಷ್ ಎಟ್ಜಿಯಾನ್ ಜಂಕ್ಷನ್‍ ನಲ್ಲಿ ಘಟನೆ ನಡೆದಿದ್ದು 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ವಾರ್ತಾ ಭಾರತಿ 18 Nov 2025 10:40 pm

`ದೇಶಭ್ರಷ್ಟ' ಹಸೀನಾರ ಹೇಳಿಕೆ ಪ್ರಕಟಿಸದಂತೆ ಮಾಧ್ಯಮಗಳಿಗೆ ಬಾಂಗ್ಲಾ ಸರಕಾರ ಎಚ್ಚರಿಕೆ

ಢಾಕ, ನ.18: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ನೀಡಿರುವ ಹೇಳಿಕೆಗಳನ್ನು ಪ್ರಕಟಿಸದಂತೆ ಬಾಂಗ್ಲಾದೇಶದ ಮಧ್ಯಂತರ ಸರಕಾರ ಎಲ್ಲಾ ಮುದ್ರಣ, ಇಲೆಕ್ಟ್ರಾನಿಕ್ ಮತ್ತು ಆನ್‍ಲೈನ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಹಸೀನಾ ನೀಡುವ ಹೇಳಿಕೆಗಳು `ಹಿಂಸಾಚಾರ, ಅವ್ಯವಸ್ಥೆ ಮತ್ತು ಅಪರಾಧ ಚಟುವಟಿಕೆಗಳನ್ನು ಪ್ರಚೋದಿಸುವ ನಿರ್ದೇಶನಗಳು ಅಥವಾ ಕರೆಗಳನ್ನು ಹೊಂದಿರಬಹುದು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರಬಹುದು ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಏಜೆನ್ಸಿ(ಎನ್‍ಸಿಎಸ್‍ಎ)ಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. `ಅಪರಾಧಿ ಮತ್ತು ದೇಶಭ್ರಷ್ಟ' ಹಸೀನಾ ನೀಡುವ ಹೇಳಿಕೆಗಳನ್ನು ಪ್ರಕಟಿಸುವ ಮತ್ತು ಪ್ರಸಾರ ಮಾಡುವ ಮಾಧ್ಯಮ ಸಂಸ್ಥೆಗಳ ಬಗ್ಗೆ ಎನ್‍ಸಿಎಸ್‍ಎ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅಪರಾಧಿಗಳು ಮತ್ತು ದೇಶಭ್ರಷ್ಟರ ಹೇಳಿಕೆಗಳನ್ನು ಪ್ರಕಟಿಸುವುದು ಸೈಬರ್ ಭದ್ರತೆ ಶಾಸನದ ಅಂಶಗಳನ್ನು ಉಲ್ಲಂಘಿಸುತ್ತದೆ. ರಾಷ್ಟ್ರೀಯ ಸಮಗ್ರತೆ, ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ, ಜನಾಂಗೀಯ ಅಥವಾ ಧಾರ್ಮಿಕ ದ್ವೇಷಗಳನ್ನು ಉತ್ತೇಜಿಸುವ, ಅಥವಾ ನೇರವಾಗಿ ಹಿಂಸೆಯನ್ನು ಉತ್ತೇಜಿಸುವ ಯಾವುದೇ ವಿಷಯಗಳನ್ನು ತೆಗೆದು ಹಾಕಲು ಅಥವಾ ನಿರ್ಬಂಧಿಸಲು ಅಧಿಕಾರಿಗಳಿಗೆ ಅಧಿಕಾರವಿದೆ' ಎಂದು ಎನ್‍ಸಿಎಸ್‍ಎ ಹೇಳಿದೆ.

ವಾರ್ತಾ ಭಾರತಿ 18 Nov 2025 10:36 pm

ಬೀದರ್ | ಬೈಕ್‌ಗೆ ಟಿಟಿ ವಾಹನ ಢಿಕ್ಕಿ : ಬಾಲಕಿ ಮೃತ್ಯು

ಬೀದರ್ : ಬೈಕ್‌ಗೆ ಟಿಟಿ ವಾಹನ ಢಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಭಾಲ್ಕಿ ನಗರದ ಬಿಕೆಐಟಿ ಕಾಲೇಜಿನ ಬಳಿ ನಡೆದಿದೆ.   ಹುಮನಾಬಾದ್‌ ತಾಲೂಕಿನ ಮುಗನೂರ ಗ್ರಾಮದ ನಿವಾಸಿ ಸಂಧ್ಯಾರಾಣಿ ಹಲಗೆ(3) ಅಪಘಾತದಲ್ಲಿ ಮೃತಪಟ್ಟ ಬಾಲಕಿ. ಮಂಗಳವಾರ ಮಧ್ಯಾಹ್ನ ಬಾಲಕಿ ಸಂಧ್ಯಾರಾಣಿ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಟಿಟಿ ವಾಹನ ಬೈಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾರ್ತಾ ಭಾರತಿ 18 Nov 2025 10:34 pm

ನೈಜೀರಿಯಾ: 25 ಶಾಲಾ ಬಾಲಕಿಯರ ಅಪಹರಣ

ಅಬುಜಾ, ನ.18: ವಾಯವ್ಯ ನೈಜೀರಿಯಾದ ಕೆಬ್ಬಿ ರಾಜ್ಯದ ಪ್ರೌಢಶಾಲೆಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ ದುಷ್ಕರ್ಮಿಗಳ ತಂಡವು ಶಾಲೆಯ ಉಪಪ್ರಾಂಶುಪಾಲರನ್ನು ಹತ್ಯೆ ಮಾಡಿ 25 ವಿದ್ಯಾರ್ಥಿನಿಯರನ್ನು ಅಪಹರಿಸಿರುವುದಾಗಿ ವರದಿಯಾಗಿದೆ. ಮಾಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಘಟನೆ ಸಂಭವಿಸಿದ್ದು ಶಾಲೆಯ ಆವರಣಕ್ಕೆ ಕ್ರಿಮಿನಲ್‍ಗಳು ನುಗ್ಗಿರುವ ಮಾಹಿತಿ ದೊರೆತೊಡನೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ದುಷ್ಕರ್ಮಿಗಳು 25 ವಿದ್ಯಾರ್ಥಿನಿಯರನ್ನು ಅಪಹರಿಸಿ ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಸೇನೆಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 4 ವರ್ಷಗಳ ಹಿಂದೆ ಕೆಬ್ಬಿ ನಗರದ ಸರಕಾರಿ ಕಾಲೇಜೊಂದರ 100ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ದುಷ್ಕರ್ಮಿಗಳ ಗ್ಯಾಂಗ್ ಅಪಹರಿಸಿತ್ತು. ಪೋಷಕರು ಹಣ ಪಾವತಿಸಿದ ಬಳಿಕ ಎರಡು ವರ್ಷಗಳಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಲಾಗಿತ್ತು. ಇವರಲ್ಲಿ ಕೆಲವು ವಿದ್ಯಾರ್ಥಿನಿಯರನ್ನು ಬಲವಂತವಾಗಿ ಮದುವೆ ಮಾಡಿಸಲಾಗಿದ್ದು ಮಗುವಿನ ಜೊತೆ ವಾಪಸಾಗಿದ್ದರು ಎಂದು ವರದಿಯಾಗಿದೆ.

ವಾರ್ತಾ ಭಾರತಿ 18 Nov 2025 10:33 pm

ಭಟ್ಕಳ | ನ.20ರಂದು ವಿಜ್ಞಾನ ಮೇಳ : ಲಿಯಾಖತ್ ಅಲಿ

ಭಟ್ಕಳ, ನ.18: ಭಟ್ಕಳದ ತರ್ಬಿಯತ್ ಎಜುಕೇಶನ್ ಸೊಸೈಟಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಮ್ಸ್ ಪದವಿ ಪೂರ್ವ ಕಾಲೇಜ್ ನ.20ರಂದು ಎರಡನೇ ವಿಜ್ಞಾನ ಮೇಳವನ್ನು ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಲಿಯಾಖತ್ ಅಲಿ ಹೇಳಿದ್ದಾರೆ. ಡಾ.ಎಂ.ಟಿ.ಹಸನ್ ಬಾಪಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಟ್ಕಳ ಸೈನ್ಸ್ ಫೇರ್ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ವಿಜ್ಞಾನ ಮೇಳದ ಮುಖ್ಯ ಉದ್ದೇಶ ಕೇವಲ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವುದಲ್ಲ. ಬದಲಿಗೆ, ವಿದ್ಯಾರ್ಥಿಗಳು ಸಮಾಜವು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಬೇಕು, ಅವುಗಳ ಕುರಿತು ಸಂಶೋಧನಾ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸಿ ಪರಿಹಾರಗಳನ್ನು ಹೊರತರುವಂತೆ ಮಾಡುವುದು ಇದರ ಗುರಿಯಾಗಿದೆ ಎಂದು ಹೇಳಿದರು. ಕಾಲೇಜ್‌ನ ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾತನಾಡಿ, ಶಮ್ಸ್ ಪದವಿ ಪೂರ್ವ ಕಾಲೇಜು ರಾಯಚೂರಿನ ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್‌ನ ಸಹಯೋಗದೊಂದಿಗೆ ವಿಜ್ಞಾನ ಮೇಳವನ್ನು ಆಯೋಜಿಸಿದೆ. ಈ ಮೇಳಕ್ಕಾಗಿ ಭಟ್ಕಳ ತಾಲೂಕಿನ ಶಾಲೆ-ಕಾಲೇಜುಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 155 ತಂಡಗಳು ನೋಂದಾಯಿಸಿದ್ದು, ಅದರಲ್ಲಿ 46 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಸಂಶೋಧನೆ ನಡೆಸಿರುವ ಫಲಿತಾಂಶಗಳು ನ.20ರಂದು ಹೊರಬರಲಿವೆ ಎಂದರು. ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ಬೆಳಗ್ಗೆ 9:30ಕ್ಕೆ ನಡೆಯಲಿದ್ದು ಅಂಜುಮನ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಮುಹಮ್ಮದ್ ಝುಬೇರ್ ಕೋಲಾ ಮುಖ್ಯ ಅತಿಥಿಯಾಗಿ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.ವಿದ್ಯಾರ್ಥಿಗಳನ್ನು ಉತ್ತೇಜಿಸಲು ‘ವಿಜ್ಞಾನಿ ಪ್ರಶಸ್ತಿ’ , ‘ಬಡ್ಡಿಂಗ್ ಸೈಂಟಿಸ್ಟ್’ ಮತ್ತು ‘ಎಮರ್ಜಿಂಗ್ ಸೈಂಟಿಸ್ಟ್’ ನಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.

ವಾರ್ತಾ ಭಾರತಿ 18 Nov 2025 10:31 pm

ಉಡುಪಿ | ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ಉಡುಪಿ, ನ.18: ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಝಕಾತ್ ನಿಧಿಯಿಂದ 10 ಬಡ ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಮಂಗಳವಾರ ಉಡುಪಿ ಜಾಮಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಮುನೀರ್ ಮುಹಮ್ಮದ್ ವಹಿಸಿದ್ದರು. ಅಥಿತಿಗಳಾಗಿ ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್‌ ಅಹ್ಮದ್, ಮಾಜಿ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು. ಮಸೀದಿಯ ಮೌಲಾನ ಅಬ್ದುಲ್ ರಶೀದ್ ನದ್ವಿ ಝಕಾತ್ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಫಲಾನುಭನಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿದರು. ರಿಯಾಝ್‌ ಕುಕ್ಕಿಕಟ್ಟೆ ವಂದಿಸಿದರು. ಎಂ.ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೋಪಿಸಿದರು.

ವಾರ್ತಾ ಭಾರತಿ 18 Nov 2025 10:21 pm

ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ಪ್ರಜಾಪ್ರಭುತ್ವ, ಪ್ರತಿಪಕ್ಷಗಳ ನಾಶಕ್ಕೆ ಕುತಂತ್ರ ರೂಪಿಸುತ್ತಿದೆ: ಕಾಂಗ್ರೆಸ್

ಹೊಸದಿಲ್ಲಿ,ನ.18: ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳನ್ನು ನಾಶಗೊಳಿಸಲು ಕುತಂತ್ರ ರೂಪಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ ಕಾಂಗ್ರೆಸ್,ಡಿಸೆಂಬರ್ ಮೊದಲ ವಾರದಲ್ಲಿ ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುವ ಮೂಲಕ ಬೀದಿಗಿಳಿದು ಹೋರಾಟ ನಡೆಸುವ ಪಣವನ್ನು ತೊಟ್ಟಿದೆ. ತನ್ನ ‘ವೋಟ್ ಚೋರಿ’ ಆರೋಪವನ್ನು ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್,ಎಸ್‌ಐಆರ್ ನಿರ್ದಿಷ್ಟ ಮತಗಳನ್ನು ಅಳಿಸುವ ಉದ್ದೇಶ ಹೊಂದಿದ್ದರಿಂದ ಆ ಪ್ರಕ್ರಿಯೆ ಸಂದರ್ಭದಲ್ಲಿ ಚುನಾವಣಾ ಆಯೋಗದ ವರ್ತನೆ ತೀವ್ರ ನಿರಾಶಾದಾಯಕವಾಗಿತ್ತು ಎಂದು ಹೇಳಿದೆ. ಚುನಾವಣಾ ಆಯೋಗವು ತಾನು ಬಿಜೆಪಿಯ ನೆರಳಿನಲ್ಲಿ ಕಾರ್ಯಾಚರಿಸುತ್ತಿಲ್ಲ ಎನ್ನುವುದನ್ನು ತಕ್ಷಣವೇ ಸಾಬೀತು ಮಾಡಬೇಕು ಎಂದು ಆಗ್ರಹಿಸಿದೆ. ಪ್ರಸ್ತುತ ಎಸ್‌ಐಆರ್ ನಡೆಯುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು, ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಚುನಾವಣಾ ಆಯೋಗವನ್ನು ಬಯಲಿಗೆಳೆಯಲಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಎಸ್‌ಐಆರ್ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಗಳ ಋಜುತ್ವವನ್ನು ರಕ್ಷಿಸಲು ಕಾಂಗ್ರೆಸ್ ನಿಸ್ಸಂದಿಗ್ಧವಾಗಿ ಬದ್ಧವಾಗಿದೆ ಎಂದು ಖರ್ಗೆ ಸಭೆಯ ಬಳಿಕ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 18 Nov 2025 10:20 pm

ಪಿಎಂ ಕಿಸಾನ್ ಯೋಜನೆ | ನ.19ರಂದು 2,000 ರೂ.ಗಳ 21ನೇ ಕಂತು ಬಿಡುಗಡೆ

ಹೊಸದಿಲ್ಲಿ,ನ.18: ಪ್ರಧಾನಿ ನರೇಂದ್ರ ಮೋದಿಯವರು ನ.19ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತನ್ನು ಬಿಡುಗಡೆಗೊಳಿಸಲಿದ್ದಾರೆ. ಅರ್ಹ ರೈತರು ನೇರ ಲಾಭ ವರ್ಗಾವಣೆಯ(ಡಿಬಿಟಿ) ಮೂಲಕ ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ 2,000 ರೂ.ಗಳನ್ನು ಸ್ವೀಕರಿಸಲಿದ್ದಾರೆ. ಕಂತು ಬಿಡುಗಡೆಗೆ ಮುನ್ನ ಸರಕಾರವು ಎಲ್ಲ ಪಿಎಂ ಕಿಸಾನ್-ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯ ಎಂದು ಮತ್ತೊಮ್ಮೆ ಒತ್ತಿ ಹೇಳಿದೆ. ರೈತರು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು ಮತ್ತು ಬಯೊಮೆಟ್ರಿಕ್ ಇ-ಕೆವೈಸಿಯನ್ನು ಸಮೀಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಮಾಡಿಸಬಹುದು.

ವಾರ್ತಾ ಭಾರತಿ 18 Nov 2025 10:17 pm

ಬೀದರ್ | ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಜನಾರ್ದನ ಪುಟ್ಟರಾಜ ದೀನೆ ನೇಮಕ

ಬೀದರ್ : ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಜನಾರ್ದನ ಪುಟ್ಟರಾಜ ದೀನೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಚಿವರಾದ ಈಶ್ವರ್ ಖಂಡ್ರೆ ಮತ್ತು ರಹೀಮ್ ಖಾನ್ ಅವರ ಅನುಮೋದನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಂಜುಕುಮಾರ್ ಡಿ.ಕುರನಳ್ಳಿಕರ್ ಅವರು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಜನಾರ್ದನ ಪುಟ್ಟರಾಜ ದೀನೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜನಾರ್ದನ ಪುಟ್ಟರಾಜ ದೀನೆ ಅವರು ನಗರದ ನಾವದಗೇರಿ ಬಡಾವಣೆಯವರಾಗಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷ ಸಂಘಟನೆಯ ಬಲವರ್ಧನೆಗಾಗಿ ನೇಮಕ ಮಾಡಿದೆ. ಪಕ್ಷದ ತತ್ವ, ಸಿದ್ಧಾಂತ ಮತ್ತು ಶಿಸ್ತಿಗೆ ಒಳಪಟ್ಟು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 18 Nov 2025 10:06 pm

ಇನಾಯತ್ ಅಲಿ ಶಿಫಾರಸ್ಸಿನ ಮೇರೆಗೆ 12ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆ

ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಒಟ್ಟು 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆಗೊಂಡಿದೆ. ಮಾರಕ ಬೋನ್ ಮ್ಯಾರೊ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಕೃಷ್ಣಾಪುರ ನಿವಾಸಿ 24 ವರ್ಷದ ಅಬೂಬಕರ್ ಫರ್ವೀಝ್ ಅವರಿಗೆ 4,00,000 ರೂ. ಹಾಗೂ ಇತರ 11 ಮಂದಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್ ಅಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 10:05 pm

ಉಡುಪಿ | ನ.25ರಿಂದ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಜಿಲ್ಲೆಯ 94 ಶಾಲೆಗಳು ಭಾಗವಹಿಸಲಿವೆ : ಮುರಲಿ ಕಡೆಕಾರ್

ಉಡುಪಿ, ನ.18: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಕಳೆದ 17 ನಡೆಸಿಕೊಂಡು ಬರುತ್ತಿರುವ ಪ್ರೌಢ ಶಾಲಾ ಮಕ್ಕಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ’ ಈ ಬಾರಿ ನ.25ರಿಂದ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 94 ಶಾಲಾ ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದು ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಸೀಮಿತವಾಗಿ ಪ್ರಾರಂಭಗೊಂಡ ಕಿಶೋರ ಯಕ್ಷಗಾನ ಸಂಭ್ರಮ, ಶೀಘ್ರದಲ್ಲೇ ಜನಪ್ರಿಯತೆಯನ್ನು ಪಡೆದು ಇದೀಗ ಕಾಪು, ಕುಂದಾಪುರ ಹಾಗೂ ಬೈಂದೂರು ಶಾಸಕರ ಕೋರಿಕೆಯಂತೆ ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಈ ಬಾರಿ ಪ್ರದರ್ಶನಗಳು ನಡೆಯಲಿವೆ. ಈ ಬಾರಿ 3,000ಕ್ಕೂ ಅಧಿಕ ಹೈಸ್ಕೂಲ್ ವಿದ್ಯಾರ್ಥಿಗಳು ಇದರಲ್ಲಿ ಬಣ್ಣ ಧರಿಸಿ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ ಎಂದರು. 2025ನೇ ಸಾಲಿನಲ್ಲಿ ಒಟ್ಟು 41 ಮಂದಿ ಗುರುಗಳು 94 ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದ್ದಾರೆ. ಮೊದಲು ಬಾಲಕರಿಗೆ ಸೀಮಿತವಾಗಿದ್ದ ಕಿಶೋರ ಸಂಭ್ರಮ ನಂತರ ಬಾಲಕಿಯರಿಗೂ ವಿಸ್ತರಣೆಗೊಂಡಿದ್ದು, ಇದೀಗ ಹೊರ ಜಿಲ್ಲೆಗಳ, ಎಲ್ಲಾ ಧರ್ಮಗಳ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಳ್ಳುವ ವಾರ್ಷಿಕ ಹಬ್ಬದಂತಾಗಿದೆ ಎಂದು ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಯೂ ಆಗಿರುವ ಮುರಲಿ ಕಡೆಕಾರ್ ತಿಳಿಸಿದರು. ‘ಕಿಶೋರ ಯಕ್ಷಗಾನ ಸಂಭ್ರಮ- 2025’ ಒಟ್ಟು 12 ಆಯ್ದ ಸ್ತಳಗಳಲ್ಲಿ ನ.25ರಿಂದ ಡಿಸೆಂಬರ್ 31ರಿಂದ ನಡೆಯಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರದಲ್ಲಿ ನ.25ರಿಂದ ಇದು ಪ್ರಾರಂಭಗೊಳ್ಳಲಿದೆ. ಡಿ.1ರವರೆಗೆ ಬ್ರಹ್ಮಾವರ ಬಂಟರ ಭವನದ ಬಳಿ ಯಕ್ಷ ಸಂಭ್ರಮ ನಡೆಯಲಿದೆ. ಒಟ್ಟು 13 ಪ್ರೌಢ ಶಾಲಾ ತಂಡಗಳು ಇಲ್ಲಿ ಯಕ್ಷಗಾನ ಪ್ರದರ್ಶಿಸಲಿದೆ. ಈ ಬಾರಿ ಉಡುಪಿ ರಾಜಾಂಗಣದಲ್ಲಿ ಡಿ.2ರಿಂದ 18ರವರೆಗೆ ಒಟ್ಟು 25 ತಂಡಗಳು ತಮ್ಮ ಪ್ರದರ್ಶನವನ್ನು ನೀಡಲಿವೆ. ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡಕ ಶ್ರೀವೀರಭದ್ರ ದೇವಸ್ಥಾನದ ವಠಾದಲ್ಲಿ ಡಿ.3 ಮತ್ತು 4ರಂದು ನಾಲ್ಕು ತಂಡಗಳು ಪ್ರದರ್ಶನ ನೀಡಲಿವೆ. ಬಳಿಕ ಡಿ.5ರಿಂದ 7ರವರೆಗೆ ಮೂರು ದಿನಗಳ ಕಾಲ ಶಿರ್ವದ ಮಹಿಳಾ ಸೌಧದಲ್ಲಿ ಆರು ಶಾಲೆಗಳು ಪ್ರದರ್ಶನ ನೀಡಲಿವೆ. ಅದೇ ಕ್ಷೇತ್ರದ ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡಿ.8ರಿಂದ 11ರವರೆಗೆ ಒಟ್ಟು ಎಂಟು ಶಾಲಾ ತಂಡಗಳ ಪ್ರದರ್ಶನ ನಡೆಯಲಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ ವಠಾರದಲ್ಲಿ ಡಿ.12ರಿಂದ 15ರವರೆಗೆ ಎಂಟು ತಂಡಗಳು ಪ್ರತಿದಿನ ಸಂಜೆ ತಲಾ ಎರಡರಂತೆ ಪ್ರದರ್ಶನ ನೀಡಲಿವೆ. ಡಿ.6ರಿಂದ 19ರವರೆಗೆ ಬಿದ್ಕಲ್ಕಟ್ಟೆಯ ಹಾರ್ದಳ್ಳಿ-ಮಂಡಳ್ಳಿ ಗ್ರಾಮಪಂಚಾಯತ್ ವಠಾರದಲ್ಲಿ ಏಳು ಶಾಲಾ ತಂಡಗಳು ತಮ್ಮ ಪ್ರದರ್ಶನ ನೀಡಲಿವೆ. ಡಿ.20ರಿಂದ 22ರವರೆಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುಂದಾಪುರ, ತೆಕ್ಕಟ್ಟೆ, ಬಸ್ರೂರು, ಕಾಳಾವರ, ಕೋಟೇಶ್ವರ ಶಾಲಾ ತಂಡಗಳು ಪ್ರದರ್ಶನ ನೀಡಲಿವೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢ ಶಾಲೆಯಲ್ಲಿ ಡಿ.23ರಿಂದ 25ರವರೆಗೆ ಮೂರು ದಿನಗಳ ಕಾಲ ಐದು ತಂಡಗಳು ಪ್ರದರ್ಶನ ನೀಡಲಿದ್ದು, ಡಿ.26 ಮತ್ತು 27ರಂದು ಸಿದ್ಧಾಪುರದ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಾಲ್ಕು ಶಾಲಾ ತಂಡಗಳು ಪ್ರದರ್ಶನ ನೀಡಲು ಸಿದ್ಧವಾಗಿವೆ. 28 ಮತ್ತು 29ರಂದು ಬೈಂದೂರಿನಲ್ಲಿ ನಾಲ್ಕು ಶಾಲೆಗಳ ಪ್ರದರ್ಶನ ನಡೆದರೆ, ಡಿ.30 ಮತ್ತು 31ರಂದು ಚಿತ್ತೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಶಾಲಾ ತಂಡಗಳ ಪ್ರದರ್ಶನವಿರುತ್ತದೆ ಎಂದು ಮುರಲಿ ಕಡೆಕಾರ್ ತಿಳಿಸಿದ್ದಾರೆ.    

ವಾರ್ತಾ ಭಾರತಿ 18 Nov 2025 10:01 pm

ಮಂಗಳೂರು | ಕುಡಿಯುವ ನೀರಿನ ಪೈಪ್ ಲೈನ್‌ಗೆ ಹಾನಿ; ನೀರಿಗಾಗಿ ಪರದಾಟ

ಮಂಗಳೂರು, ನ.18: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಹಾನಿಗೊಳಗಾದ ಪರಿಣಾಮ ಸೋಮವಾರ ಮತ್ತು ಮಂಗಳವಾರ ನೀರು ಪೂರೈಕೆ ಸ್ಥಗಿತವಾಗಿತ್ತು. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುವಂತಾಗಿದೆ. ನಗರದ ವಸತಿ ಸಮುಚ್ಛಯಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು. ಏಕಾಏಕಿ ನೀರು ಸ್ಥಗಿತಗೊಂಡ ಪರಿಣಾಮ ಹೊಟೇಲ್, ಆಸ್ಪತ್ರೆ ಮೊದಲಾದ ಸಂಸ್ಥೆಗಳಲ್ಲಿ ನೀರಿನ ಅಭಾವ ಉಂಟಾಯಿತು. ಟ್ಯಾಂಕರ್‌ ಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರು ಈಗಾಗಲೇ ಖಾಲಿಯಾಗಿದೆ. ಬುಧವಾರ ಬೆಳಗ್ಗೆ ದುರಸ್ತಿ ಕಾರ್ಯ ಮುಗಿಯಲಿದೆ ಎನ್ನಲಾಗಿದೆ. ಆದರೆ ದುರಸ್ತಿ ಬಳಿಕ ನಗರದ ವಿವಿಧ ಕಡೆಗಳಿಗೆ ನೀರು ತಲುಪಲು ಕನಿಷ್ಟ 12 ಗಂಟೆ ಬೇಕಾಗಬಹುದು. ಹಾಗಾಗಿ ಬುಧವಾರವೂ ಎಲ್ಲಾ ಕಡೆಗಳಿಗೆ ನೀರು ಸರಬರಾಜು ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್ ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ 18 ಅಡಿ ಕೆಳಭಾಗದಲ್ಲಿದೆ. ಬೆಂದೂರು ಪಂಪ್ಹೌಸ್ಗೆ ಸರಬರಾಜಾಗುವ ಮುಖ್ಯ ಕೊಳವೆಯ ಕೆಳಭಾಗದಲ್ಲಿ ಪಡೀಲ್ಗೆ ಹೋಗುವ ಪೈಪ್ ಲೈನ್ ಕೂಡ ಇದೆ. ಹೀಗಾಗಿ ಹಾನಿಯಾದ ಜಾಗವನ್ನು ಪತ್ತೆ ಹಚ್ಚುವುದು ಸಮಸ್ಯೆಯಾಗಿತ್ತು. ಹಾಗಾಗಿ ಪಡೀಲ್ ಪಂಪ್ಹೌಸ್ನಿಂದ ನಗರದ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಪಳ್ನೀರ್, ಮುಳಿಹಿತ್ಲು, ಬೋಳಾರ, ಕಾರ್ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಸ್ಟೋರ್, ಆಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕಡ ಮುಂತಾದ ಪ್ರದೇಶಗಳಿಗೆ ನೀರು ಸರಬರಾಜು ಮಂಗಳವಾರವೂ ಸ್ಥಗಿತವಾಗಿತ್ತು. ಪೈಪ್ ಲೈನ್ ನ ಮೇಲಿದ್ದ ಮಣ್ಣನ್ನು ಮಂಗಳವಾರ ದಿನವಿಡೀ ಜೆಸಿಬಿ, ಟಿಪ್ಪರ್ ಬಳಸಿ ತೆರವುಗೊಳಿಸಲಾಗಿದೆ. ಇದೀಗ ಮಣ್ಣಿನಡಿ ಹಾನಿಗೊಳಗಾದ ಪೈಪ್ ನ ಸ್ಥಳ ಗೊತ್ತಾಗಿದೆ. ಆದರೆ ಹೊಂಡ ತೋಡಿದ ಸ್ಥಳದಲ್ಲಿ ಸಂಗ್ರಹವಾಗಿರುವ ನೀರು ಸಂಪೂರ್ಣ ಖಾಲಿ ಮಾಡುವ ಕೆಲಸ ಮುಂದುವರಿದಿದೆ. ಆ ಪೈಪ್ ತುಂಡು ಮಾಡಿ, ವೆಲ್ಡ್ ಮಾಡಬೇಕು. ಈ ಎಲ್ಲಾ ಕೆಲಸ ನಡೆಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ಮಂಗಳೂರು ಮನಪಾ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಡ್ಯಾರು-ಕಣ್ಣೂರು ಬಳಿ ಮುಖ್ಯ ಕೊಳವೆಯಲ್ಲಿ ಸೋರಿಕೆ ತಡೆಯುವ ಕಾಮಗಾರಿ ನಡೆಯುತ್ತಿದೆ. ಬುಧವಾರ ಮಧ್ಯಾಹ್ನ ನೀರು ಸರಬರಾಜು ಮಾಡಲಾಗುವುದು ಎಂದು ಮನಪಾ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 9:56 pm

ಹತ್ತು ಮಂದಿಗಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ನ. 30ರೊಳಗೆ ಐಸಿಸಿ ರಚನೆ ಕಡ್ಡಾಯ : ವಿಲ್ಮಾ ಎಲಿಝಬೆತ್ ತಾವ್ರೋ

ಮಂಗಳೂರು, ನ.18: ಮಹಿಳೆಯರಿಗೆ ಕೆಲಸದ ವೇಳೆ ಲೈಂಗಿಕ ದೌರ್ಜನ್ಯ ತಡೆಯುವ ಪೋಷ್‌ಕಾಯ್ದೆ 2013 ಜಾರಿಯಾಗಿರುವ ಹಿನ್ನೆಲೆಯಲ್ಲಿ 10ಕ್ಕಿಂತ ಅಧಿಕ ಉದ್ಯೋಗಿಗಳಿರುವ ಪ್ರತೀ ಸಂಸ್ಥೆಗಳಲ್ಲಿ ಅಂತರಿಕ ದೂರು ಸಮಿತಿ(ಐಸಿಸಿ) ರಚಿಸುವುದು ಕಡ್ಡಾಯವಾಗಿದೆ ಎಂದು ಮಂಗಳೂರು ಉಪ ವಿಭಾಗ 2ರ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಝಬೆತ್ ತಾವ್ರೋ ಹೇಳಿದ್ದಾರೆ. ನಗರದ ಬಂದರಿನಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ (ಕೆಸಿಸಿಐ) ಆಶ್ರಯದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ಪೋಷ್) ಕಾಯ್ದೆ 2013ರ ಅನುಸಾರವಾಗಿ ಆಂತರಿಕ ದೂರುಗಳ ಸಮಿತಿ (ಐಸಿಸಿ) ರಚನೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಹತ್ತು ಮಂದಿಗಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ನವೆಂಬರ್ 30ರೊಳಗೆ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಒಂದೇ ಸಂಸ್ಥೆಯು ವಿವಿಧ ಶಾಖೆಗಳನ್ನು ಹೊಂದಿದ್ದರೆ ಪ್ರತೀ ಶಾಖೆಯಲ್ಲೂ ಸಮಿತಿ ರಚಿಸಿ ‘ಶೀ ಬಾಕ್ಸ್ ‘( https://shebox.wcd.gov.in ). ಪೋರ್ಟಲ್ ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಹತ್ತಕ್ಕಿಂತ ಕಡಿಮೆ ಸಿಬ್ಬಂದಿ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಅಥವಾ ತಹಶೀಲ್ದಾರ್ ಅವರ ನೇತೃತ್ವದ ಸ್ಥಳೀಯ ಕಮಿಟಿಗಳ ವ್ಯಾಪ್ತಿಗೆ ಒಳಪಡುತ್ತಾರೆ. ಅವರ ಮೂಲಕ ಮಹಿಳಾ ದೌರ್ಜನ್ಯದ ದೂರುಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ವಿವರಿಸಿದರು. ಪ್ರತೀ ಮೂರು ತಿಂಗಳಿಗೊಮ್ಮೆ ಸಮಿತಿ : ಮಂಗಳೂರು ಉಪ ವಿಭಾಗ 1ರ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಅವರು ಮಾತನಾಡಿ, ‘ ಮಹಿಳೆಯರ ಮೇಲೆ ದೌರ್ಜನ್ಯದ ವಿರುದ್ಧ ಇರುವ ಸಮಿತಿಗೆ ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿಯೇ ಸಮಿತಿಯ ಅಧ್ಯಕ್ಷರಾಗಿರಬೇಕು. ಸಮಿತಿಯಲ್ಲಿ ಕನಿಷ್ಠನಾಲ್ಕು ಇರಬೇಕು. ಓರ್ವ ಸದಸ್ಯ ಹೊರಗಿನವರಾಗಿರಬೇಕು. ಒಮ್ಮೆ ರಚಿಸಿದ ಸಮಿತಿ 3 ವರ್ಷದ ಅವಧಿ ಹೊಂದಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕು. ದೂರುಗಳಿದ್ದರೆ ಅವುಗಳನ್ನು ‘ಶೀ’ ಬಾಕ್ಸ್ ಮೂಲಕ ಸಲ್ಲಿಸಬೇಕು. ಏನಾದರೂ ದೌರ್ಜನ್ಯಗಳು ನಡೆದಲ್ಲಿ ಮೂರು ತಿಂಗಳ ಒಳಗಾಗಿ ಮಹಿಳೆ ಸಮಿತಿಗೆ ದೂರು ಸಲ್ಲಿಸಬೇಕು. ಸಮಿತಿಯು ಪರಾಮರ್ಶೆ ನಡೆಸಿ 7 ದಿನಗಳೊಳಗೆ ಸಂಬಂಧಿಸಿದ ಠಾಣೆಗೆ ದೂರು ನೀಡಬೇಕು. ಸಮಿತಿಯವರು ಮಾಹಿತಿಯನ್ನು ಹೊರಗಡೆ ನೀಡುವಂತಿಲ್ಲ. ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಕಾನೂನು ಇದೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಲ್ಲಿ ಮಹಿಳೆಯ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ದ.ಕ. ಜಿಲ್ಲೆಯಲ್ಲಿ ಶೇ.10ರಷ್ಟು ಸಮಿತಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಶೇ.10ರಷ್ಟು ಮಾತ್ರವೇ ಸಮಿತಿಗಳು ರಚನೆಯಾಗಿವೆ. ಶೇ. 90ರಷ್ಟು ಕೆಲಸ ಬಾಕಿ ಇದೆ. ಸಮಿತಿ ರಚಿಸಲು ಹಿಂದೇಟು ಹಾಕಿದ್ದಲ್ಲಿ ಇಲಾಖೆ ಪರೀಕ್ಷಿಸುವ ವೇಳೆ ಸಂಸ್ಥೆಗಳಿಗೆ ದಂಡ ವಿಧಿಸಲಿದೆ. ಅದಕ್ಕೆ ಅವಕಾಶ ನೀಡದೆ ಎಲ್ಲಾ ಸಂಸ್ಥೆಯವರು ಶೀಘ್ರದಲ್ಲೇ ಸಮಿತಿಗಳನ್ನು ಸ್ಥಾಪಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಿಂಗ ತಜ್ಞೆ ವಿಶಾಲಾಕ್ಷಿ ಮತ್ತು ಕೆಸಿಸಿಐ ಲೇಬರ್ ಉಪ ಸಮಿತಿಯ ಚೇರ್ ಮೆನ್ ಶಾಮ್ಲಾಲ್ ಎರ್ಮಾಳ್ ಮಾಹಿತಿ ನೀಡಿದರು. ಕೆಸಿಸಿಐ ಅಧ್ಯಕ್ಷ ಬಿ.ಅಹ್ಮದ್ ಮುದಸ್ಸರ್ ಸ್ವಾಗತಿಸಿ, ಉಪಾಧ್ಯಕ್ಷ ದಿವಾಕರ್ ಪೈ ಕೊಚೀಕರ್ ವಂದಿಸಿದರು. ಮುಖ್ಯ ಕಾರ್ಯ ನಿರ್ಹಣಾಧಿಕಾರಿ ಮೈಥ್ರೇಯ ಕಾರ್ಯಕ್ರಮ ನಿರೂಪಿಸಿದರು.  

ವಾರ್ತಾ ಭಾರತಿ 18 Nov 2025 9:48 pm

ಬೆಂಗಳೂರು AI ಸಿಟಿ, 2 ನೇ ಏರ್‌ಪೋರ್ಟ್‌ ನಿರ್ಮಾಣ ಸ್ಥಳದ ಬಗ್ಗೆ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ

ಬೆಂಗಳೂರಿನಲ್ಲಿ 1.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಬಿಡದಿಯಲ್ಲಿ 9000 ಎಕರೆಯಲ್ಲಿ ಎಐ ಸಿಟಿ ನಿರ್ಮಾಣ, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಡಬಲ್‌ ಡೆಕ್ಕರ್‌ ಮೇಲ್ಸೇತುವೆ, ಸುರಂಗ ರಸ್ತೆ, ಎಲಿವೇಟೆಡ್‌ ಕಾರಿಡಾರ್‌ಗಳು ಇದರ ಭಾಗವಾಗಿವೆ. ಬೆಂಗಳೂರು 25 ಲಕ್ಷ ಐಟಿ ವೃತ್ತಿಪರರೊಂದಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಿದ್ಧವಾಗಿದೆ.

ವಿಜಯ ಕರ್ನಾಟಕ 18 Nov 2025 9:42 pm

ಉಡುಪಿ | ಮೀನು ಮಾರಾಟ ಫೆಡರೇಶನ್ ಗೆ ನೀಡಿದ ಜಾಗ ರದ್ಧತಿಗೆ ಆಗ್ರಹ

ಹನುಮಾನ್ ವಿಠೋಬಾ ಭಜನಾ ಮಂದಿರದಿಂದ ಹೋರಾಟದ ಎಚ್ಚರಿಕೆ

ವಾರ್ತಾ ಭಾರತಿ 18 Nov 2025 9:40 pm

ಮಂಗಳೂರು | ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ

ಮಂಗಳೂರು, ನ.18: ನಾನೇ ನೀನು... ನೀನೇ ನಾನು... ಎಂಬ ತತ್ವದಡಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಸಮಾಜ ಸೇವೆಯೇ ಟ್ರಸ್ಟ್ ನ ಮೂಲ ಉದ್ದೇಶವಾಗಿದ್ದು, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರನ್ನು ಗುರುತಿಸಿ ಗೌರವಿಸುವ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ನ ಕಾರ್ಯಪ್ರಸಂಶನೀಯ ಎಂದು ಆರ್‌ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ ಶೆಣೈ ಹೇಳಿದರು. ಮಂಗಳೂರಿನ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆದ ಬೆಂಗಳೂರಿನ ನೆಲೆ ಫೌಂಡೇಶನ್‌ಗೆ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಧನೆ ಎಲ್ಲರೂ ಮಾಡಬಹುದು. ಆದರೆ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಿಮುಖಿಯಾಗಿದೆ. ಸಾಧನೆ ಗೌರವ ಎಲ್ಲವೂ ಮನುಷ್ಯನ ದೃಷ್ಟಿಕೋನದಲ್ಲಿ ಅಡಗಿದೆ. ದೃಷ್ಟಿಕೋನ ಸರಿಯಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ. ಸಮಸ್ಯೆ ಎದುರಾದಾಗ ಅದನ್ನು ಗೆಲ್ಲುವ ಛಲ ನಮ್ಮದಾಗಬೇಕು. ಧೈರ್ಯದಿಂದ ಇದ್ದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಈ ಮೂಲಕ ಮೂಲತ್ವ ವಿಶ್ವ ಪ್ರಶಸ್ತಿಯು ಸಮಾಜದಲ್ಲಿ ಸಾಧನೆ ಮಾಡುವರಿಗೆ ಶಕ್ತಿ ನೀಡುವಂತಾಗಲಿ ಎಂದರು. ಬೆಂಗಳೂರಿನ ನೆಲೆ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಬೆಂಗಳೂರಿನ ನೆಲೆ ಫೌಂಡೇಶನ್ ಟ್ರಸ್ಟಿ ಸುರೇಶ್, ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ, ಅಕ್ಷತಾ ಕದ್ರಿ, ಲಕ್ಷ್ಮೀಶ ಪಿ. ಕೋಟ್ಯಾನ್ ಉಪಸ್ಥಿತರಿದ್ದರು. ಮೂಲತ್ವ ವಿಶ್ವ ಪ್ರಶಸ್ತಿ ಸಂಚಾಲಕ ಡಿ.ಎಂ. ಜಯಕುಮಾರ್ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 18 Nov 2025 9:33 pm

2ನೇ ಟೆಸ್ಟ್‌ ಗೆ ಮುನ್ನ ಈಡನ್ ಗಾರ್ಡನ್ಸ್‌ ನಲ್ಲಿ ಭಾರತ ತಂಡದ ಅಭ್ಯಾಸ

ಕೋಲ್ಕತಾ, ನ. 18: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಟೆಸ್ಟ್‌ಗೆ ಮುನ್ನ ಭಾರತೀಯ ಕ್ರಿಕೆಟ್ ತಂಡವು ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಬಿರುಸಿನ ಅಭ್ಯಾಸ ನಡೆಸಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕವು ಆತಿಥೇಯ ತಂಡವನ್ನು 30 ರನ್‌ ಗಳಿಂದ ಸೋಲಿಸಿದ ಬಳಿಕ ಈ ಅಭ್ಯಾಸವು ಮಹತ್ವ ಪಡೆದುಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ತಂಡದ ಸ್ಪಿನ್ ಬೌಲಿಂಗ್‌ ನಲ್ಲಿ ಮುಗ್ಗರಿಸಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಅಭ್ಯಾಸದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಭ್ಯಾಸದಲ್ಲಿ ನಾಲ್ಕು ನೆಟ್‌ ಗಳನ್ನು ಹಾಕಲಾಗಿದೆ. ಆದರೆ, ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಸ್ಪಿನ್ನರ್‌ ಗಳಿಗೆ ಮೀಸಲಾಗಿರುವ ನೆಟ್‌ ನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಗಳಾದ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್‌ರ ಬೌಲಿಂಗ್‌ ನಲ್ಲಿ ಭಾರತೀಯ ಬ್ಯಾಟರ್‌ ಗಳು ತತ್ತರಿಸಿದ್ದು ಅವರ ಮನದಲ್ಲಿದೆ. ಸ್ಪಿನ್ ನೆಟ್‌ ನಲ್ಲಿ ರವೀಂದ್ರ ಜಡೇಜ, ಧ್ರುವ ಜೂರೆಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್ ಮತ್ತು ವಾಶಿಂಗ್ಟನ್ ಸುಂದರ್ ನಡೆಸಿದ ಬ್ಯಾಟಿಂಗ್ ಮೇಲೆ ಗಂಭೀರ್ ನಿಗಾ ಇಟ್ಟರು. ಗಂಭೀರ್‌ ರ ಉಸ್ತುವಾರಿಯಲ್ಲಿ, ಬ್ಯಾಟರ್‌ ಗಳು ಸ್ಪಿನ್ ಬೌಲಿಂಗ್‌ ನಲ್ಲಿ ತಮ್ಮ ಸ್ವೀಪ್‌ ಗಳು ಮತ್ತು ರಿವರ್ಸ್ ಸ್ವೀಪ್‌ ಗಳನ್ನು ಪರೀಕ್ಷಿಸಿದರು. ಆಫ್ ಸ್ಪಿನ್ನರ್ ಸುಂದರ್‌ ರ ಎಸೆತಗಳನ್ನು ಜೂರೆಲ್ ಮತ್ತು ಜಡೇಜ ಎದುರಿಸಿದರು. ಹಾರ್ಮರ್‌ ರ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಾ ಅದನ್ನು ಎದುರಿಸುವ ಪ್ರಯತ್ನಗಳನ್ನು ಬ್ಯಾಟರ್‌ ಗಳು ಮಾಡಿದರು.

ವಾರ್ತಾ ಭಾರತಿ 18 Nov 2025 9:30 pm

ಕೊಪ್ಪಳ | ಜನರ ಕಷ್ಟ ಕೇಳುವವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು: ನಟ ಚೇತನ್‌ ಅಹಿಂಸಾ

ಮುಂದುವರಿದ ಬಲ್ಡೋಟಾ ಸೇರಿದಂತೆ ಕಾರ್ಖಾನೆ ವಿರುದ್ಧದ ಅನಿರ್ದಿಷ್ಠಾವಧಿ ಧರಣಿ

ವಾರ್ತಾ ಭಾರತಿ 18 Nov 2025 9:25 pm

ಪರ್ಕಳ | ಮಕ್ಕಳ ನಕಾರಾತ್ಮಕತೆಯನ್ನು ಸಕಾರಾತ್ಮಕತೆಗೆ ಪರಿವರ್ತಿಸಿ : ಹೆತ್ತವರಿಗೆ ಡಾ.ಪಿ.ವಿ.ಭಂಡಾರಿ ಕಿವಿಮಾತು

ಪರ್ಕಳ, ನ.18: ಇಂದು ಮಕ್ಕಳ ಮನಸ್ಸು ನಿಯಂತ್ರಣವಿಲ್ಲದ ಕುದುರೆಯಂತೆ ಅಲೆದಾಡುತ್ತಿದೆ. ಮೊಬೈಲ್ ಎಂಬ ಮಂತ್ರಶಕ್ತಿ ಅವರನ್ನು ಯಾವ ದಿಕ್ಕಿಗೆ ಎತ್ತಿಕೊಂಡು ಹೋಗುತ್ತಿದೆಯೋ ತಿಳಿಯುವುದೇ ಕಷ್ಟ. ಅದರ ಪರಿಣಾಮ ಅವರಲ್ಲಿ ನಕಾರಾತ್ಮಕ ಮನೋಭಾವ ಬೇರುಬಿಟ್ಟಿದೆ. ಅದನ್ನು ಸಕಾರಾತ್ಮಕತೆಯತ್ತ ಪರಿವರ್ತಿಸುವ ಕೆಲಸವನ್ನು ಹೆತ್ತವರು, ಪೋಷಕರು ಮಾಡಬೇಕಾಗಿದೆ ಎಂದು ಖ್ಯಾತ ಮನೋರೋಗ ತಜ್ಞ ಹಾಗೂ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ. ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ತನ್ನ ಸುವರ್ಣ ವರ್ಷಾಚರಣೆಯ ಅಂಗವಾಗಿ, ಜನಮೆಚ್ಚಿದ ಶಿಕ್ಷಕರಾದ ದಿ.ಶಂಕರ ಕುಲಾಲ್ರ ಸ್ಮರಣಾರ್ಥ ಆಯೋಜಿಸಿದ್ದ -ಸುವರ್ಣ ಹರುಷ- ಚಿಣ್ಣರ ಚಿತ್ರ ರಚನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮೊಬೈಲ್, ಮಕ್ಕಳನ್ನು ಪ್ರಗತಿ ಪಥದಿಂದ ತಪ್ಪು ದಾರಿಯತ್ತ ಸರಿಸುವ ಅಪಾಯ ಹೆಚ್ಚಾಗಿದೆ. ಹದಿಹರೆಯ ಪ್ರವೇಶಿಸುವಷ್ಟರಲ್ಲಿ ಹಲವು ದುಶ್ಚಟಗಳು ಅವರ ಬದುಕಿನ ನೆರಳಾಗುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ದಿಕ್ಕು ತಪ್ಪಿದ ಪರಿಸ್ಥಿತಿಯಿಂದ ಮಕ್ಕಳನ್ನು ಹೊರತರುವ ಶಕ್ತಿಯನ್ನು ಚಿತ್ರಕಲೆ, ಸಂಗೀತ, ಕ್ರೀಡೆ ಹಾಗೂ ಇತರೆ ಸೃಜನಾತ್ಮಕ ಹವ್ಯಾಸಗಳು ಹೊಂದಿವೆ. ಇವು ನಕಾರಾತ್ಮಕತೆಯನ್ನು ಸಕಾರಾತ್ಮಕ ಶಕ್ತಿಯಾಗಿ ರೂಪಾಂತರಿಸುವ ಸಾಮರ್ಥ್ಯವನ್ನು ನೀಡುತ್ತವೆ. ಆದ್ದರಿಂದ ಪೋಷಕರು ಈ ನಿಟ್ಟಿನಲ್ಲಿ ತಮ್ಮ ಗಮನ ಹರಿಸಬೇಕಾಗಿದೆ ಎಂದವರು ಹೆತ್ತವರಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಆರ್ಟಿಸ್ಟ್ ಫೋರಂನ ಅಧ್ಯಕ್ಷ, ಹಿರಿಯ ಚಿತ್ರಕಲಾವಿದ ರಮೇಶ್ ರಾವ್ ಮಾತನಾಡಿ, ಚಿತ್ರಕಲೆ ನಮ್ಮನ್ನು ಕಲ್ಪನಾತೀತ ಲೋಕಕ್ಕೆ ಕರೆದೊಯ್ಯುವ ಅಲೌಕಿಕ ಶಕ್ತಿ ಹೊಂದಿದೆ. ಮನದಂಗಳದಲ್ಲಿ ಸಂತಸದ ಹೂಗಳನ್ನು ಅರಳಿಸಿ, ನೋವು-ದುಗುಡಗಳನ್ನು ದೂರ ಮಾಡುತ್ತದೆ. ಆದ್ದರಿಂದ ಎಲ್ಲರೂ ಚಿತ್ರಕಲೆಯನ್ನು ಹವ್ಯಾಸವನ್ನಾಗಿ ಸ್ವೀಕರಿಸಬೇಕು ಎಂದರು. ರಾಮಮೂರ್ತಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಮಣಿಪಾಲ, ಪರ್ಕಳ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಬೆಂಗಳೂರಿನ ಉದ್ಯಮಿ ತಾರಾ ಶಶಾಂಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನೇತಾಜಿ ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರೆ, ಮಹೇಶ್ ಪ್ರಭು ವಂದಿಸಿದರು. ಖಜಾಂಚಿ ರವೀಂದ್ರ ಆಚಾರ್ಯ ಕಾಯಕ್ರಮ ನಿರ್ವಹಿಸಿದರು. ಸ್ಪರ್ಧೆಯಲ್ಲಿ 350 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ವಿವಿಧ ವಿಭಾಗಗಳ ವಿಜೇತರ ವಿವರ ಹೀಗಿದೆ : ಕಿಂಡರ್ಗಾರ್ಡನ್ ವಿಭಾಗ :  1.ಭಕ್ತಿಶ್ರೀ ಬಾಯರಿ ವಿದ್ಯೋದಯ ಉಡುಪಿ, 2.ವೆಂಕಟೇಶ ವಂಶಿ ಕೃಷ್ಣ, ವಿದ್ಯೋದಯ ಉಡುಪಿ 3.ಅನಯ್ ಶೆಟ್ಟಿಗಾರ್, ಸೈಂಟ್ ಮೇರೀಸ್ ಉಡುಪಿ. ಪ್ರಾಥಮಿಕ ಶಾಲಾ ವಿಭಾಗ : 1. ಆರ್ಯ ಪೈ, ಪೋದಾರ್ ಇಂಟರ್ನೇಷನಲ್ ಸ್ಕೂಲ್ ಉಡುಪಿ, 2. ಭವಾನಿ, ವಿದ್ಯೋದಯ ಉಡುಪಿ 3.ನಮ್ಯಶ್ರೀ, ಜಿ.ಎಂ.ವಿದ್ಯಾನಿಕೇತನ ಹಾರಾಡಿ ಬ್ರಹ್ಮಾವರ. ಹಿರಿಯ ಪ್ರಾಥಮಿಕ ಶಾಲಾ ವಿಭಾಗ:  1.ಪ್ರಭಾತ್ ಉಡುಪ, ಅಮೃತ ಭಾರತಿ ಹೆಬ್ರಿ 2. ಪ್ರಣೀತ್, ಅಮೃತ ಭಾರತಿ ಹೆಬ್ರಿ, 3.ಹಿರಣ್ಮಯಿ ಭಟ್, ಮಾಧವ ಕೃಪ ಮಣಿಪಾಲ. ಪ್ರೌಢ ಶಾಲಾ ವಿಭಾಗ:  1.ವಿನೀಶ್ ಆಚಾರ್ಯ, ಎಸ್ಆರ್ ಪಬ್ಲಿಕ್ ಸ್ಕೂಲ್ ಹೆಬ್ರಿ,2.ಕೃಷ್ಣ ಪ್ರಸಾದ್, ಅಮೃತ ಭಾರತಿ ಹೆಬ್ರಿ, 3. ಪ್ರಥ್ವಿರಾಜ್, ವಿದ್ಯೋದಯ ಉಡುಪಿ.    

ವಾರ್ತಾ ಭಾರತಿ 18 Nov 2025 9:24 pm

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆ ಮಾಡಲಾಗಿದೆ. ಇದಕ್ಕೆ ಮೊದಲು, ಮೇಕೆದಾಟು ಯೋಜನೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಂತರ ಈ ಯೋಜನೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು. ಡಿಪಿಆರ್ ಮರುಸಲ್ಲಿಕೆ ಮಾಡಬೇಕಿದೆ. ಇದರಲ್ಲಿ ಯೋಜನೆ ಸಂಪೂರ್ಣ ವಿವರ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಮಂಡ್ಯಕ್ಕೆ ಹತ್ತಿರವಾಗುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಸಿಇ, ಸಿಸಿಎಫ್ ಅವರನ್ನೊಳಗೊಂಡ ಪ್ರತ್ಯೇಕ ಕಚೇರಿ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲು ಸಿದ್ಧತೆ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು. ಮತ್ತೆ ಹೊಸದಾಗಿ ಡಿಪಿಆರ್ ಮಾಡಬೇಕೇ, ಇದನ್ನು ಜಲ ಆಯೋಗದ ಮುಂದೆ ಮಂಡಿಸುವಿರಾ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಂಡಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ತಿರಸ್ಕರಿಸಿದ್ದರು. ಹೀಗಾಗಿ ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ಡಿಪಿಆರ್ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾರ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆ ಎಂದರು. ತುಮಕೂರಿಗೆ ಮೆಟ್ರೋ ಸಾಧ್ಯತೆಗಳ ಬಗ್ಗೆ ಅಧ್ಯಯನ: ತುಮಕೂರು ಮೆಟ್ರೋ ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಬಂದು ಮನವಿ ಮಾಡಿದಾಗ ನಾನು ಅದರ ಸಾಧ್ಯತೆಗಳ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದರಲ್ಲಿ ಟೀಕೆ ಮಾಡುವಂತಹದ್ದು ಏನಿದೆ? ನಮ್ಮ ಗೃಹ ಸಚಿವರು ಸೇರಿದಂತೆ ಕೆಲವರು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರಾದರೂ ಬಂಡವಾಳ ಹಾಕಲು ಮುಂದೆ ಬರುತ್ತಾರಾ? ಬಂದರೆ ಯಾವೆಲ್ಲಾ ಮಾರ್ಗ ಇವೆ ಎಂದು ಅಧ್ಯಯನ ಮಾಡಬೇಕಿದೆ. ಯಾರಾದರೂ ಚಂದ್ರಲೋಕಕ್ಕೆ ಹೋಗಬೇಕು ಎಂದರೆ ಅದು ಸಾಧ್ಯವೇ, ಇಲ್ಲವೇ ಎಂದು ಪರಿಶೀಲಿಸಬೇಕಲ್ಲವೇ ಎಂದು ತಿಳಿಸಿದರು.

ವಾರ್ತಾ ಭಾರತಿ 18 Nov 2025 9:22 pm

ಎಲ್ಲ ಧರ್ಮಗಳು ಮನುಕುಲದ ಒಳಿತನ್ನು ಬಯಸುತ್ತದೆ : ಸಚಿವ ಎಂ.ಬಿ.ಪಾಟೀಲ್

ಬೆಳ್ತಂಗಡಿ: ಎಲ್ಲ ಧರ್ಮಗಳು ಮನುಕುಲದ ಒಳಿತನ್ನು ಬಯಸುತ್ತದೆ ಅದನ್ನು ತಿಳಿದುಕೊಂಡು ನಾವು ಬದುಕನ್ನು ನಡೆಸಿದಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ.ಎಂ.ಬಿ.ಪಾಟೀಲ್ ಅವರು ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 93ನೆಯ ಅಧಿವೇಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಗೆ ಇಂತಹ ಸರ್ವ ಧರ್ಮಸಮ್ಮೇಳನಗಳು ಅವಕಾಶ ನೀಡುತ್ತದೆ. ಎಲ್ಲ ಧರ್ಮಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಲು ಇದು ಸಹಕಾರಿಯಾಗಿದೆ. ವಿಶ್ವಕ್ಕೆ ಭಾರತ ನೀಡುವ ಸಂದೇಶ ವಸುದೈವ ಕುಟುಂಬಕಂ ಎಂಬುದಾಗಿದೆ. ನಮ್ಮಲ್ಲಿ ಎಲ್ಲ ಪರಂಪರೆಗಳು ಇವೆ. ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಶಕ್ತಿಯಾಗಿದೆ. ಮಾನವೀಯತೆ, ಪ್ರೀತಿ, ಸೌಹಾರ್ದತೆಯನ್ನು ಬೆಳೆಸಿಕೊಳ್ಳೋಣ ಎಂದು ಹೇಳಿದರು.  ಶ್ರೀಕ್ಷೇತ್ರ ಧರ್ಮಸ್ಥಳದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ವಹಿಸಿ ಮಾತನಾಡಿ, ವೈವಿಧ್ಯತೆಯನ್ನು ಹೃದಯದಿಂದ ಒಪ್ಪಿಕೊಳ್ಳುವಂತಹ ಸಮನ್ವಯ ದೃಷ್ಟಿ ಇದ್ದಾಗ ಮಾತ್ರ ಎಲ್ಲ ಮಾನವರೂ ಶಾಂತಿ ಸೌಹಾರ್ದತೆ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೆ, ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯತೆಯೆನ್ನುವುದು ಒಂದು ಸಹಜವಾದ ಪ್ರಕ್ರಿಯೆಯಾಗಿದೆ. ವಿಚಾರಕ್ಕೆ ಮುಕ್ತವಾದ ಅವಕಾಶವಿದ್ದಾಗ ವೈವಿಧ್ಯಯಿರಲು ಸಾಧ್ಯ, ಧರ್ಮ ಎಂದಿಗೂ ಅಶಾಂತಿಗೆ ಕಾರಣವಾಗುವುದಿಲ್ಲ, ನಾವು ನಮ್ಮ ಸ್ವಾರ್ಥಕ್ಕಾಗಿ ಅದನ್ನು ತಪ್ಪಾಗಿ ಉಪಯೋಗಿಸಿದಾಗ ಅಶಾಂತಿಗೆ ಕಾರಣವಾಗುತ್ತದೆ. ನಮ್ಮ ಧರ್ಮ ಸಂಪ್ರದಾಯಗಳನ್ನು ತಿಳಿದು ಪಾಲಿಸುವುದರೊಂದಿಗೆ ಇತರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದರು. ಮನುಷ್ಯನ ಅಂತರಂಗದಲ್ಲಿರುವ ಮಾನವತ್ವವೇ ಜಗತ್ತನ್ನು ಉಳಿಸಿ ಬೆಳೆಸುತ್ತದೆ, ಮಾನವನಿಗೆ ಶೋಷಣೆ ಮಾಡದಿರುವುದೇ ಮಾನವತ್ವವಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ವಿದ್ವಾಂಸರಾದ ಎಸ್.ಸೂರ್ಯಪ್ರಕಾಶ್ ಪಂಡಿತ್, ತನ್ವೀರ್ ಅಹಮ್ಮದ್ ಉಲ್ಲಾ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ ಸುರೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನಕ್ಕೆ ಅತಿಥಿ ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.

ವಾರ್ತಾ ಭಾರತಿ 18 Nov 2025 9:16 pm

ವಿಮಲ್ ನೇಗಿ ಮೃತ್ಯು ಪ್ರಕರಣ | ‘ಸಂಪೂರ್ಣ ಬೋಗಸ್ ಅಧಿಕಾರಿಗಳು’: ಸಿಬಿಐ ತನಿಖೆಯ ಸಾಮರ್ಥ್ಯವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಹಿಮಾಚಲ ಪ್ರದೇಶ ವಿದ್ಯುತ್ ನಿಗಮ ಲಿಮಿಟೆಡ್ (HPPCL) ಅಧಿಕಾರಿ ವಿಮಲ್ ನೇಗಿ ಅವರ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಸಾಮರ್ಥ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ. ತನಿಖೆ ನಡೆಸುತ್ತಿರುವ ಕೆಲ ಅಧಿಕಾರಿಗಳು ಸೇವೆಗೆ ಅಯೋಗ್ಯರು ಎಂದು ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು “ಸಂಪೂರ್ಣ ಬೋಗಸ್ ಅಧಿಕಾರಿಗಳು” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ದೇಶ್ ರಾಜ್ ಎಂಬ HPPCL ಹಿರಿಯ ಅಧಿಕಾರಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡುತ್ತಿದ್ದ ಸಂದರ್ಭ ಈ ಮಾತುಗಳನ್ನು ಹೇಳಿದೆ. “ತನಿಖಾಧಿಕಾರಿಗಳು ಕೇಳಿರುವ ಪ್ರಶ್ನೆಗಳು ಬಾಲಿಶ ಮಟ್ಟದಲ್ಲಿವೆ. ಇಂತಹ ಪ್ರಶ್ನೆಗಳು ಕೇಳುವವರು ಸಿಬಿಐಯಲ್ಲಿ ಹಿರಿಯ ಅಧಿಕಾರಿಯಾಗಿದ್ದರೆ, ಅದು ಸಂಸ್ಥೆಯ ಸ್ಥಿತಿಯ ಮೇಲೆ ಕನಿಕರ ಬರುವಂತಿದೆ. ‘ಇದಕ್ಕಾಗಿ ನಿಮಗೆ ವರ್ಗಾವಣೆ ಮಾಡಲಾಯಿತೇ?’ ಎಂಬ ರೀತಿಯ ಪ್ರಶ್ನೆಗಳು ಆರೋಪಿಗೆ ಕೇಳುವುದೇ? ಅವರು ಏನು ಉತ್ತರ ನೀಡುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಿ? ಸಹಜವಾಗಿಯೇ ಅವರು ನಿರಾಕರಿಸುವರು. ಅದನ್ನು ನೀವು ‘ಅಸಹಕಾರ’ ಎಂದು ಹೇಗೆ ಪರಿಗಣಿಸುತ್ತೀರಿ?” ಎಂದು ಪೀಠ ಖಾರವಾಗಿ ಪ್ರಶ್ನಿಸಿತು. “ಸಿಬಿಐನಲ್ಲಿ ಯಾವ ತರದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ? ಪೂರ್ತಿ ಬೋಗಸ್ ಅಧಿಕಾರಿಗಳು. ಇವರೆಲ್ಲ ಸೇವೆಯಲ್ಲಿ ಇರಲು ಯೋಗ್ಯರಲ್ಲ. ಪ್ರಕರಣದಲ್ಲಿ ಯಾವುದೇ ಭೌತಿಕ ಪುರಾವೆಗಳಿಲ್ಲ, ಕೇವಲ ಊಹಾಪೋಹಗಳನ್ನೇ ದಾಖಲೆ ಮಾಡಲಾಗಿದೆ,” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು. ವಿಮಲ್ ನೇಗಿ ಅವರನ್ನು HPPCLನ ಹಿರಿಯ ಅಧಿಕಾರಿಗಳಾದ ವ್ಯವಸ್ಥಾಪಕ ನಿರ್ದೇಶಕ ಹರಿಕೇಶ್ ಮೀನಾ, ನಿರ್ದೇಶಕ (ವಿದ್ಯುತ್) ದೇಶ್ ರಾಜ್ ಹಾಗೂ ಮತ್ತೊಬ್ಬರು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ನೇಗಿಯ ಕುಟುಂಬ ಸದಸ್ಯರು, ತಪ್ಪು ಮಾಡಲು ಒತ್ತಡ ಹೇರಲಾಗಿದ್ದು, ಅದರ ಪರಿಣಾಮವಾಗಿ ತೀವ್ರ ಮಾನಸಿಕವಾಗಿ ಹಿಂಸೆಗೊಳಗಾದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶ್ ರಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಿಬಿಐ “ತನಿಖೆಗೆ ಸಹಕರಿಸಲಿಲ್ಲ” ಎಂದು ಮಾಡಿದ ಆರೋಪವನ್ನು ಪೀಠ ಗಂಭೀರವಾಗಿ ಪ್ರಶ್ನಿಸಿದ್ದು, ದೇಶ್ ರಾಜ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ವಾರ್ತಾ ಭಾರತಿ 18 Nov 2025 9:16 pm

ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ‘ಕಿಯೋ ಪರ್ಸನಲ್ ಕಂಪ್ಯೂಟರ್’ ಆಕರ್ಷಣೆ!

ಕೇವಲ 18,999 ರೂ. ಬೆಲೆಗೆ ಎಐ ಕಂಪ್ಯೂಟರ್ : ಪ್ರಿಯಾಂಕ್ ಖರ್ಗೆ

ವಾರ್ತಾ ಭಾರತಿ 18 Nov 2025 9:15 pm

ಉತ್ತರಾಖಂಡ | ದನದ ಕರುವಿನ ರುಂಡ ಪತ್ತೆ ವದಂತಿ; ಗುಂಪಿನಿಂದ ಅಂಗಡಿಗಳ ಧ್ವಂಸ

ಡೆಹ್ರಾಡೂನ್,ನ.19: ದೇವಾಲಯವೊಂದರ ಪಕ್ಕದಲ್ಲೇ ಇರುವ ಶಾಲೆಯ ಬಳಿ ಸತ್ತ ದನದಕರುವಿನ ರುಂಡ ಪತ್ತೆಯಾಗಿದೆ ಎಂಬ ವದಂತಿಗಳು ಹರಿದಾಡಿದ ಬೆನ್ನಲ್ಲೇ ಗುಂಪೊಂದು ಅಂಗಡಿಮುಂಗಟ್ಟುಗಳನ್ನು ಧ್ವಂಸಗೊಳಿಸಿದ ಘಟನೆ ಉತ್ತರಾಖಂಡದ ಹಲ್ದಾವಾನಿಯಲ್ಲಿ ರವಿವಾರ ರಾತ್ರಿ ನಡೆದಿದೆ. ಕರುವಿನ ರುಂಡ ಪತ್ತೆಯಾಗಿದೆಯೆಂದು ಕುರಿತಾದ ವೀಡಿಯೊ ಹಾಗೂ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಬಳಿಕ ಬಾನ್ಬುಲ್‌ ಪುರ ಪ್ರದೇಶದಲ್ಲಿ ಜಮಾವಣೆಗೊಂಡ ಗುಂಪೊಂದು ಹಲವಾರು ಅಂಗಡಿಗಳು ಹಾಗೂ ವಾಹನಗಳನ್ನು ಧ್ವಂಸಗೊಳಿಸಿತು. ದಾಂಧಲೆಯಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಪ್ರಯೋಗಿಸಿದರು ಹಾಗೂ ಹಿಂಸಾಚಾರ ಉಲ್ಬಣಿಸುವುದನ್ನು ತಡೆಯಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಕರುವಿನ ರುಂಡ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ನಿವಾಸಿ ರವೀಂದ್ರ ಗುಪ್ತಾ ಅವರು ದೂರು ನೀಡಿದ್ದಾರೆ ಹಾಗೂ ಕರುವಿನ ರುಂಡದ ಅವಶೇಷಗಳನ್ನು ಅಪರಾಧ ವಿಧಿವಿಧಾನ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಪೊಲೀಸ್ ಅಧೀಕ್ಷಕ (ಅಪರಾಧವಿಭಾಗ) ಜಗದೀಶ್ ಚಂದ್ರ ಅವರು ಹೇಳಿಕೆಯೊಂದನ್ನು ನೀಡಿ ನಾಯಿಯೊಂದು, ಕರುವಿನ ರುಂಡವನ್ನು ಆ ಸ್ಥಳಕ್ಕೆ ಎಳೆದುತಂದಿದೆಯೆಂಬುದು ಸಿಸಿಟಿವಿ ವೀಡಿಯೊ ಪರಿಶೀಲನೆಯಿಂದ ತಿಳಿದುಬಂದಿದೆ. ದೊಂಬಿ, ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ 40ರಿಂದ 50 ಗುರುತರಿಯದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಳು ಮಾಹಿತಿಗೆ ಬಲಿಯಾಗದಂತೆ ಹಾಗೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಅದನ್ನು ದೃಢಪಡಿಸಿಕೊಳ್ಳುವಂತೆ ನೈನಿತಾಲ್ ಪೊಲೀಸರು ಸ್ಥಳೀಯ ನಿವಾಸಿಗಳನ್ನು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 18 Nov 2025 9:06 pm

ಪಕ್ಷ ವಿರೋಧಿ ಚಟುವಟಿಕೆ ಆರೋಪ | 43 ನಾಯಕರಿಗೆ ಕಾಂಗ್ರೆಸ್ ಶೋ-ಕಾಸ್ ನೋಟಿಸ್

ಪಾಟ್ನಾ, ನ. 18: ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವರು ಸೇರಿದಂತೆ 43 ನಾಯಕರಿಗೆ ಕಾಂಗ್ರೆಸ್ ಮಂಗಳವಾರ ಶೋ-ಕಾಸ್ ನೋಟಿಸ್ ನೀಡಿದೆ. ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಶಿಸ್ತು ಸಮಿತಿ ನಾಯಕರಿಗೆ ಶೋ-ಕಾಸ್ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಹೇಳಿದೆ. 43 ಮಂದಿ ನಾಯಕರಲ್ಲಿ ಮಾಜಿ ಸಚಿವೆ ವೀನಾ ಶಾಹಿ, ಎಐಸಿಸಿ ಸದಸ್ಯ ಮಧುರೇಂದ್ರ ಕುಮಾರ್ ಸಿಂಗ್, ರಾಜ್ಯ ಕಾಂಗ್ರೆಸ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಕೈಸರ್ ಖಾನ್, ಮಾಜಿ ಶಾಸಕ ಸುಧೀರ್ ಕುಮಾರ್ ಹಾಗೂ ಮಾಜಿ ಎಂಎಲ್‌ಸಿ ಅಜಯ್ ಕುಮಾರ್ ಸಿಂಗ್ ಸೇರಿದ್ದಾರೆ. ನವೆಂಬರ್ 21ರಂದು ಮಧ್ಯಾಹ್ನದ ಒಳಗಡೆ ಶಿಸ್ತು ಸಮಿತಿ ಮುಂದೆ ಲಿಖಿತ ಸ್ಪಷ್ಟನೆ ಸಲ್ಲಿಸುವಂತೆ ಎಲ್ಲಾ ನಾಯಕರಿಗೆ ನಿರ್ದೇಶಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ನ ಶಿಸ್ತು ಸಮಿತಿ ಅಧ್ಯಕ್ಷ ಕಪಿಲ್ ದೇವ್ ಪ್ರಸಾದ್ ಯಾದವ್ ತಿಳಿಸಿದ್ದಾರೆ. ಸಕಾಲದಲ್ಲಿ ಉತ್ತರಿಸದೇ ಇದ್ದರೆ, ಸಮಿತಿ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಶಿಸ್ತು ಹಾಗೂ ಏಕತೆ ಪಕ್ಷದ ಆದ್ಯತೆಗಳಾಗಿದ್ದು, ಇವುಗಳಿಗೆ ಹಾನಿ ಉಂಟು ಮಾಡುವ ಯಾವುದೇ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ವಾರ್ತಾ ಭಾರತಿ 18 Nov 2025 9:02 pm

ದಿಲ್ಲಿ ಕಾರು ಸ್ಫೋಟ ಪ್ರಕರಣ | ಆರೋಪಿ ಜಾಸಿರ್ ಬಿಲಾಲ್ ವಾನಿಗೆ 10 ದಿನ ಎನ್‌ಐಎ ಕಸ್ಟಡಿ

ಹೊಸದಿಲ್ಲಿ, ನ. 18: ದಿಲ್ಲಿ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ಆರೋಪಿಯಾಗಿರುವ ಜಾಸಿರ್ ಬಿಲಾಲ್ ವಾನಿಯನ್ನು ನ್ಯಾಯಾಲಯ 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದೆ. ಆರೋಪಿಯ ಕಸ್ಟಡಿ ವಿಚಾರಣೆಗೆ ಕೋರಿ ಎನ್‌ಐಎ ಸಲ್ಲಿಸಿದ ಅರ್ಜಿಯನ್ನು ಪ್ರಾಥಮಿಕ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಮೂರ್ತಿ ಅಂಜು ಬಜಾಜ್ ಚಂದನ ಅವರು ಪುರಸ್ಕರಿಸಿದರು. ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿತ್ತು. ಕಾಶ್ಮೀರದ ನಿವಾಸಿಯಾಗಿರುವ ವಾನಿಯನ್ನು ಶ್ರೀನಗರದಿಂದ ಸೋಮವಾರ ಬಂಧಿಸಲಾಗಿತ್ತು. ದಿಲ್ಲಿ ಕಾರು ಸ್ಪೋಟದಲ್ಲಿ ವಾನಿ ತಾಂತ್ರಿಕ ನೆರವು ನೀಡಿದ್ದಾನೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಕಾರು ಸ್ಫೋಟಕ್ಕೆ ಮುನ್ನ ಆತ ಡ್ರೋನ್‌ಗಳನ್ನು ಮಾರ್ಪಡಿಸಿದ್ದಾನೆ ಹಾಗೂ ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ‘‘ಜಮ್ಮು ಹಾಗೂ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಖಾಝಿಗುಂಡದ ನಿವಾಸಿಯಾಗಿರುವ ಆರೋಪಿ ದಾಳಿಯ ಹಿಂದಿನ ಸಕ್ರಿಯ ಸಹ ಪಿತೂರಿಗಾರನಾಗಿದ್ದ. ಈ ದಾಳಿಯನ್ನು ಯೋಜಿಸಲು ಆತ ಆರೋಪಿ ಉಮರ್ ಉನ್ ನಬಿಯೊಂದಿಗೆ ಸೇರಿ ಕೆಲಸ ಮಾಡಿದ್ದ’’ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 18 Nov 2025 8:59 pm

ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ನಿರ್ಣಯ ಎತ್ತಿ ಹಿಡಿದ ಹೈಕೋರ್ಟ್‌; ಚುನಾವಣೆಗಿದ್ದ ಅಡ್ಡಿ ನಿವಾರಣೆ

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿ ಅಥವಾ ವ್ಯವಸ್ಥಾಪನಾ ಸಮಿತಿ (ಮ್ಯಾನೇಜಿಂಗ್‌ ಕಮಿಟಿ) ಸದಸ್ಯತ್ವ ಗರಿಷ್ಠ 9 ವರ್ಷ ಅವಧಿ ಮಾತ್ರ ಇರಲಿದೆ. ಈ ಅವಧಿ ಪೂರೈಸಿದವರು ಸಂಸ್ಥೆಯ ಯಾವುದೇ ಹುದ್ದೆ ಅಥವಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕೆಎಸ್‌ಸಿಎ ನಿರ್ಣಯವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಇದರಿಂದ, ನವೆಂಬರ್‌ 30ರಂದು ನಿಗದಿಯಾಗಿರುವ ಕೆಎಸ್‌ಸಿಎ ಚುನಾವಣೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಿದೆ. ವ್ಯವಸ್ಥಾಪನಾ ಸಮಿತಿಯು ಅಕ್ಟೋಬರ್‌ 14ರಂದು ಕೈಗೊಂಡಿರುವ ನಿರ್ಣಯ ಮತ್ತು ಸದಸ್ಯರಿಗೆ ವ್ಯವಸ್ಥಾಪನಾ ಸಮಿತಿ ರವಾನಿಸಿದ್ದ ಸಂವಹನಕ್ಕೆ ತಡೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್‌ಸಿಎ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರತಿವಾದಿಗೆ ನೋಟಿಸ್‌ ಜಾರಿ ಮಾಡದೇ ಇರುವುದಕ್ಕೆ ಸೂಕ್ತ ಕಾರಣ ನೀಡದ ಆಧಾರದಲ್ಲಿ ವಿಚಾರಣಾ ನ್ಯಾಯಾಲಯದ ಏಕಪಕ್ಷೀಯ ಆದೇಶವನ್ನು ರದ್ದುಪಡಿಸಲಾಗಿದೆ. ಅರ್ಜಿ ಕುರಿತು ಮೆರಿಟ್‌ ಮೇಲೆ ಯಾವುದೇ ಆದೇಶ ಮಾಡಲಾಗಿಲ್ಲ. ಈ ಆದೇಶವನ್ನು ಗಮನದಲ್ಲಿಟ್ಟುಕೊಳ್ಳದೇ ವಿಚಾರಣಾ ನ್ಯಾಯಾಲಯವು ಅರ್ಜಿದಾರರು ಮತ್ತು ಪ್ರತಿವಾದಿಗಳನ್ನು ಆಲಿಸಿ, ಪ್ರಕರಣ ಸಂಬಂಧ ಸೂಕ್ತ ಆದೇಶ ಹೊರಡಿಸಬಹುದು ಎಂದು ಹೈಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಪ್ರಕರಣವೇನು? ಕೆಎಸ್‌ಸಿಎ ನೇಮಿಸಿದ್ದ ಹಿರಿಯ ವಕೀಲರನ್ನು ಒಳಗೊಂಡಿದ್ದ ಕಾನೂನು ಸಲಹಾ ಉಪಸಮಿತಿಯು ವ್ಯವಸ್ಥಾಪನಾ ಸಮಿತಿ ಸದಸ್ಯ ಅಥವಾ ಪದಾಧಿಕಾರಿಯಾಗಿದ್ದರೂ 9 ವರ್ಷಗಳಿಗೆ ಮಾತ್ರ ಅಧಿಕಾರ ಅಥವಾ ಚುನಾವಣೆ ಎದುರಿಸಬಹುದು ಎಂದು ಅಭಿಪ್ರಾಯ ನೀಡಿತ್ತು. ಇದನ್ನು ಬಹುಮತದ ಆಧಾರದಲ್ಲಿ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿಯು ಅಕ್ಟೋಬರ್‌ 14ರ ಸಭೆಯಲ್ಲಿ ಒಪ್ಪಿಕೊಂಡು, ಈ ಸಂಬಂಧ ಸಂವಹನವನ್ನು ಎಲ್ಲ ಸದಸ್ಯರಿಗೆ ಕಳುಹಿಸಿಕೊಟ್ಟಿತ್ತು. ಈ ನಡುವೆ, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ವಿ. ಶಶಿಧರ್‌ ಅವರು ಕೆಎಸ್‌ಸಿಎ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಿ, ವಿಚಾರಣಾಧೀನ ನ್ಯಾಯಾಲಯದಲ್ಲಿ ತಡೆ ಪಡೆದಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಲೋಧಾ ಸಮಿತಿ ತೀರ್ಪಿನ ಪ್ರಕಾರ ಯಾವುದೇ ಕ್ರಿಕೆಟ್‌ ಸಂಸ್ಥೆಯಲ್ಲಿ ಯಾರೂ ಸಹ 9 ವರ್ಷಗಳಿಗೆ ಮೀರಿ ಅಧಿಕಾರದಲ್ಲಿರುವಂತಿಲ್ಲ. ಆದರೆ, ಕೆಎಸ್‌ಸಿಎಯಲ್ಲಿ 18 ವರ್ಷದವರೆಗೆ ಅಧಿಕಾರದಲ್ಲಿರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿತ್ತು. ಚುನಾವಣೆಯಲ್ಲಿ ನಿಯಮ ಪಾಲಿಸಲು ವಿಭಾಗೀಯ ಪೀಠ ನಿರ್ದೇಶನ: ಮತ್ತೊಂದೆಡೆ, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿಗೆ ನಡೆಯಲಿರುವ ಚುನಾವಣೆಯಲ್ಲಿ ನಿಯಮ, ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್‌ಸಿಎ‌ಗೆ ಹೈಕೋರ್ಟ್ ನಿರ್ದೇಶಿಸಿದೆ. ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ, ಕಾರ್ಯದರ್ಶಿ ಸಂತೋಷ್‌ ಮೆನನ್‌, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಿ.ಎಸ್‌. ಅರುಣ್‌, ಕೋಟಾ ಕೋದಂಡ ಮತ್ತು ತಿಲಕ್‌ ನಾಯ್ಡು ಅವರ ಆಯ್ಕೆ ಪ್ರಶ್ನಿಸಿ ಬಿ.ಎನ್‌.ಮಧುಕರ್‌ ಎಂಬುವರು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಪ್ರತಿವಾದಿಗಳಾದ ವಿನಯ್‌ ಮೃತ್ಯುಂಜಯ, ಸಂತೋಷ್‌ ಮೆನನ್‌, ಡಿ.ಎಸ್‌.ಅರುಣ್‌, ಕೋಟಾ ಕೋದಂಡ ಮತ್ತು ತಿಲಕ್‌ ನಾಯ್ಡು 2019ರಲ್ಲಿ ಆಯ್ಕೆಯಾಗಿದ್ದು, ಅವರ ಅವಧಿಯು 2022ರಲ್ಲೇ ಮುಕ್ತಾಯವಾಗಿದೆ. ಸದ್ಯ ವ್ಯವಸ್ಥಾಪನಾ ಸಮಿತಿಗೆ ಹೊಸದಾಗಿ ಚುನಾವಣೆ ಘೋಷಿಸಲಾಗಿದ್ದು, ನವೆಂಬರ್ 30ರಂದು ಚುನಾವಣಾ ದಿನಾಂಕ‌ ನಿಗದಿಯಾಗಿದೆ. ಆದ್ದರಿಂದ,‌ ಅರ್ಜಿ ಸಂಬಂಧ ಯಾವುದೇ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜತೆಗೆ, ಹಾಲಿ ನಿಯಮ, ನಿಬಂಧನೆ ಮತ್ತು ಬೈಲಾಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಚುನಾವಣೆ ನಡೆಸಬೇಕು ಎಂದು ಕೆಎಸ್‌ಸಿಎ‌ಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ವಾರ್ತಾ ಭಾರತಿ 18 Nov 2025 8:57 pm

ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್‌ ಗೆ ಕೇರಳ ಸರಕಾರ ಅರ್ಜಿ

ಹೊಸದಿಲ್ಲಿ, ನ. 18: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಳ್ಳುವ ವರೆಗೆ ರಾಜ್ಯದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮುಂದೂಡುವಂತೆ ಕೋರಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದೆ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 9 ಹಾಗೂ ಡಿಸೆಂಬರ್ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 13ರಂದು ಮತ ಎಣಿಕೆ ನಡೆಯಲಿದೆ. ಡಿಸೆಂಬರ್ 18ರಂದು ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ. ಚುನಾವಣಾ ಆಯೋಗ ನವೆಂಬರ್ 4ರಂದು ಕೇರಳ ಸೇರಿದಂತೆ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭಿಸಿದೆ. ಕೇರಳ ಉಚ್ಚ ನ್ಯಾಯಾಲಯ ನವೆಂಬರ್ 14ರಂದು ಈ ಪ್ರಕ್ರಿಯಯನ್ನು ಮುಂದೂಡಲು ನಿರಾಕರಿಸಿತ್ತು. ಅಲ್ಲದೆ, ಎಲ್‌ಡಿಎಫ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವುದು ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಹಾಗೂ ಚುನಾವಣೆಗಳಿಗೆ ಅಡ್ಡಿ ಉಂಟಾಗುತ್ತದೆ ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ. ರಾಜ್ಯ ಸರಕಾರದ ಅರ್ಜಿಯ ಪ್ರಕಾರ, ಚುನಾವಣೆಗಳಿಗೆ 68,000 ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಅಲ್ಲದೆ, 1.7 ಲಕ್ಷ ಸರಕಾರಿ ಸಿಬ್ಬಂದಿಯ ಅಗತ್ಯವಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚುವರಿಯಾಗಿ 25,668 ಸಿಬ್ಬಂದಿ ಬೇಕಾಗುತ್ತದೆ. ಇದು ರಾಜ್ಯದ ಆಡಳಿತದ ಮೇಲೆ ಭಾರೀ ಒತ್ತಡ ಉಂಟು ಮಾಡುತ್ತದೆ ಹಾಗೂ ದಿನನಿತ್ಯದ ಆಡಳಿತದ ಕೆಲಸಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಸರಕಾರ ಪ್ರತಿಪಾದಿಸಿದೆ.

ವಾರ್ತಾ ಭಾರತಿ 18 Nov 2025 8:54 pm

ಪಂಜಾಬ್ | ಆರೆಸ್ಸೆಸ್ ನಾಯಕನ ಪುತ್ರನ ಹತ್ಯೆಯ ಹೊಣೆ ಹೊತ್ತುಕೊಂಡ ಖಾಲಿಸ್ತಾನ ಪರ ಗುಂಪು

ಚಂಡಿಗಡ,ನ.18: ಹೊಸದಾಗಿ ರಚನೆಯಾಗಿರುವ ಖಾಲಿಸ್ತಾನ ಪರ ಗುಂಪು ಶೇರ್-ಎ-ಪಂಜಾಬ್ ಬ್ರಿಗೇಡ್ ಪಂಜಾಬಿನ ಫಿರೋಝ್‌ಪುರ ನಗರದಲ್ಲಿ ಆರೆಸ್ಸೆಸ್ ನಾಯಕನ ಪುತ್ರನ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿದೆ. ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಆರೆಸ್ಸೆಸ್ ನಾಯಕ ಬಲದೇವ ರಾಜ್ ಅರೋರಾರ ಪುತ್ರ ನವೀನ ಅರೋರಾ ತನ್ನ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಬಾ ನೂರ್ ಶಾ ವಲಿ ದರ್ಗಾದ ಬಳಿ ಬೈಕ್‌ ನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಸಮೀಪದಿಂದ ಗುಂಡಿಟ್ಟು ಹತ್ಯೆ ಮಾಡಿದ್ದರು. ಆರೆಸ್ಸೆಸ್ ಪಂಜಾಬಿನಲ್ಲಿ ಸಿಕ್ಖರನ್ನು ಹಿಂದು ಧರ್ಮದಲ್ಲಿ ಸಮೀಕರಿಸುತ್ತಿದೆ ಎಂದು ಶೇರ್-ಎ-ಪಂಜಾಬ್ ಬ್ರಿಗೇಡ್ ಸೋಮವಾರ ಆರೋಪಿಸಿದೆ. ಪರಮಜಿತ್ ಸಿಂಗ್ ಹೆಸರಿನಲ್ಲಿ ಸಹಿ ಇರುವ ಮತ್ತು ಗುಂಪಿನ ವಕ್ತಾರ ಬಹಾದುರ್ ಸಿಂಗ್ ಸಂಧು ಹೊರಡಿಸಿರುವ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ಖಾಲಿಸ್ತಾನದ ಸ್ವಾತಂತ್ರ್ಯಕ್ಕಾಗಿ ಈ ಗುಂಪು ರಚನೆಯಾಗಿದೆ ಎಂದು ಹೇಳಿಕೊಂಡಿದೆ. ಭವಿಷ್ಯದಲ್ಲಿ ಆರೆಸ್ಸೆಸ್, ಶಿವಸೇನೆ, ಪೋಲಿಸ್ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ವಾರ್ತಾ ಭಾರತಿ 18 Nov 2025 8:51 pm

ರಣಜಿ |ಚಂಡಿಗಡ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಜಯ

10 ವಿಕೆಟ್‌ ಗಳನ್ನು ಉರುಳಿಸಿದ ಶ್ರೇಯಸ್ ಗೋಪಾಲ್

ವಾರ್ತಾ ಭಾರತಿ 18 Nov 2025 8:49 pm

ಬಿʼಹಾರʼ | ನ.20ಕ್ಕೆ ನಿತೀಶ್ ಪ್ರಮಾಣ ?

ದಾಖಲೆಯ 10 ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆ

ವಾರ್ತಾ ಭಾರತಿ 18 Nov 2025 8:44 pm

‘ನನ್ನ ಹೆತ್ತವರಿಗೆ ಮಾನಸಿಕ ಕಿರುಕುಳ’ | ತನಿಖೆಗೆ ಕೇಂದ್ರ ಸರಕಾರವನ್ನು ಕೋರಿದ ತೇಜ್‌ಪ್ರತಾಪ್ ಯಾದವ್

ಹೊಸದಿಲ್ಲಿ, ನ.18: ಲಾಲುಪ್ರಸಾದ್ ಕುಟುಂಬದಲ್ಲಿನ ಅಂತಃಕಲಹ ಉಲ್ಬಣಗೊಂಡಿದ್ದು, ತನ್ನ ಹೆತ್ತವರು ಯಾವುದೇ ರೀತಿಯ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ. ಅಲ್ಲದೆ ಆರ್‌ಜೆಡಿ ನಾಯಕ ಹಾಗೂ ತನ್ನ ಕಿರಿಯ ಸಹೋದರ ತೇಜಸ್ವಿ ಯಾದವ್‌ ರಿಂದ ಅಪಮಾನಿತಳಾಗಿದ್ದೇನೆಂದು ಸಾರ್ವಜನಿಕವಾಗಿ ಆರೋಪಿಸಿರುವ ಸಹೋದರಿ ರೋಹಿಣಿ ಆಚಾರ್ಯ ಅವರಿಗೂ ತೇಜ್ ಪ್ರತಾಪ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ಲಾಲು ಪ್ರಸಾದ್ ಕುಟುಂಬದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ‘ಜೈಚಂದ್’ಗಳೇ ಕಾರಣ ಎಂದು ದೂರಿದ್ದಾರೆ. ವಿಶ್ವಾಸದ್ರೋಹಿಗಳಿಗೆ ಅನ್ವರ್ಥನಾಮಪದವಾಗಿ ರಜಪೂತ ದೊರೆ ‘ಜೈಚಂದ್’ನ ಹೆಸರನ್ನು ಬಳಸಲಾಗುತ್ತದೆ. ತನ್ನ ಹೆತ್ತವರಾದ ಲಾಲುಪ್ರಸಾದ್ ದಂಪತಿಯು, ಯಾವುದೇ ವಿಧದ ಮಾನಸಿಕ ಕಿರುಕುಳಕ್ಕೊಳಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ತೇಜ್ ಪ್ರತಾಪ್ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಹಾರ ಸರಕಾರವನ್ನು ಕೋರಿದ್ದಾರೆ. ‘‘ ಕೆಲವು ವ್ಯಕ್ತಿಗಳು, ‘ ಜೈಚಂದ್’ಗಳು ನನ್ನ ಪಾಲಕರಾದ ಲಾಲು ಪ್ರಸಾದ್ ಜೀ ಹಾಗೂ ನನ್ನ ತಾಯಿಯನ್ನು ಮಾನಸಿಕ ಹಾಗೂ ದೈಹಿಕ ಒತ್ತಡದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಸತ್ಯಾಂಶವಿದ್ದಲ್ಲಿ, ಇದು ನನ್ನ ಕುಟುಂಬದ ಮೇಲಿನ ದಾಳಿ ಮಾತ್ರವಲ್ಲ, ಆರ್‌ಜೆಡಿಯ ಆತ್ಮಕ್ಕೆ ನೇರ ಹೊಡೆತವಾಗಿದೆ. ಈ ವಿಷಯದ ಬಗ್ಗೆ ಬಿಹಾರ ಸರಕಾರವು ನಿಷ್ಪಕ್ಷಪಾತವಾಗಿ, ಕಟ್ಟುನಿಟ್ಟಾಗಿ ಹಾಗೂ ಶೀಘ್ರವಾಗಿ ತನಿಖೆಯನ್ನು ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಹಾರ ಸರಕಾರವನ್ನು ಕೋರುತ್ತೇನೆ ಎಂದವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಬಿಹಾರದ ಮಾಜಿ ಸಚಿವರಾದ ತೇಜ್‌ಪ್ರತಾಪ್ ಯಾದವ್ ಆರ್‌ಜೆಡಿಯಿಂದ ಹೊರಬಂದ ಬಳಿಕ ತನ್ನದೇ ಸ್ವಂತ ಪಕ್ಷ ಜನಶಕ್ತಿ ಜನತಾದಳವನ್ನು ಸ್ಥಾಪಿಸಿದ್ದರು.

ವಾರ್ತಾ ಭಾರತಿ 18 Nov 2025 8:44 pm

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ವೇಳೆ ನಕಲಿ, ಮೃತ ಮತದಾರರ ಪತ್ತೆಗೆ AI ಸಾಧನಗಳ ಬಳಕೆ

ಕೋಲ್ಕತಾ,ನ.18: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ನಕಲಿ ಅಥವಾ ಮೃತ ಮತದಾರರ ಹೆಸರುಗಳನ್ನು ಸೇರಿಸುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಪರಿಚಯಿಸಲು ಚುನಾವಣಾ ಆಯೋಗವು ಸಜ್ಜಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ಮಂಗಳವಾರ ತಿಳಿಸಿದರು. ಮತದಾರರ ಡೇಟಾ ಬೇಸ್‌ನಲ್ಲಿರುವ ಛಾಯಾಚಿತ್ರಗಳಾದ್ಯಂತ ಮುಖ ಹೋಲಿಕೆಗಳನ್ನು ವಿಶ್ಲೇಷಿಸುವ ಮೂಲಕ AI ವ್ಯವಸ್ಥೆಯು ಬೇರೆ ಬೇರೆ ಕಡೆಗಳಲ್ಲಿ ಮತದಾರರ ಪಟ್ಟಿಗಳಲ್ಲಿ ನೋಂದಣಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ನೆರವಾಗಲಿದೆ. ‘ಮತದಾರರ,ವಿಶೇಷವಾಗಿ ವಲಸೆ ಕಾರ್ಮಿಕರ ಛಾಯಾಚಿತ್ರಗಳ ದುರುಪಯೋಗ ಕುರಿತು ದೂರುಗಳು ಹೆಚ್ಚುತ್ತಿರುವುದರಿಂದ ನಾವು AI ನೆರವನ್ನು ಪಡೆದುಕೊಳ್ಳುತ್ತಿದ್ದೇವೆ ’ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು. ಆದರೂ ಪರಿಶೀಲನೆ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒಗಳು) ಕೇಂದ್ರ ಪಾತ್ರವು ಮುಂದುವರಿಯುತ್ತದೆ ಎಂದರು. AI ಪರಿಶೀಲನೆಗೆ ನೆರವಾಗಲಿದೆ. ಆದರೆ ತಂತ್ರಜ್ಞಾನದ ಬಳಕೆಯ ಹೊರತಾಗಿಯೂ ಬಿಎಲ್‌ಒಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಅವರು ಮನೆಮನೆಗೆ ಭೇಟಿ ನೀಡಿ ಮತದಾರರ ಛಾಯಾಚಿತ್ರಗಳನ್ನು ನೇರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಬೂತ್ ಮಟ್ಟದ ಏಜೆಂಟರು ಪೂರ್ಣಗೊಳಿಸಿದ ಫಾರ್ಮ್‌ ಗಳನ್ನು ಸಲ್ಲಿಸಿದ್ದರೂ ಸಹಿ ಪರಿಶೀಲನೆಗಾಗಿ ಬಿಎಲ್‌ಒಗಳು ಖುದ್ದಾಗಿ ಭೇಟಿ ನೀಡುವುದು ಅಗತ್ಯವಾಗಿದೆ. ತಮ್ಮ ಉಪಸ್ಥಿತಿಯಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಲಾಗಿದೆ ಎಂದು ದೃಢೀಕರಿಸುವ ಲಿಖಿತ ಹೇಳಿಕೆಗಳನ್ನೂ ಮತದಾರರಿಂದ ಬಿಎಲ್‌ಒಗಳು ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ವಿವರಿಸಿದರು. ಎಣಿಕೆ ಮತ್ತು ಫಾರ್ಮಗಳ ಸಲ್ಲಿಕೆಯ ಬಳಿಕ ಯಾವುದೇ ನಕಲಿ ಅಥವಾ ಮೃತ ಮತದಾರರು ಪತ್ತೆಯಾದರೆ ಅದಕ್ಕೆ ಸಂಬಂಧಿಸಿದ ಮತಗಟ್ಟೆಯ ಬಿಎಲ್‌ಒ ಹೊಣೆಗಾರರಾಗುತ್ತಾರೆ ಎಂದೂ ಅವರು ಹೇಳಿದರು.

ವಾರ್ತಾ ಭಾರತಿ 18 Nov 2025 8:43 pm

ಬೃಹತ್ ಬ್ಯಾಂಕಿಂಗ್,ಕಾರ್ಪೊರೇಟ್ ವಂಚನೆ ಆರೋಪ; ಕೇಂದ್ರ, ಸಿಬಿಐ, ಈಡಿ, ಅನಿಲ್ ಅಂಬಾನಿಗೆ ಸುಪ್ರೀಂ ನೋಟಿಸ್

ಹೊಸದಿಲ್ಲಿ,ನ.18: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್),ಅದರ ಅಂಗಸಂಸ್ಥೆಗಳು ಮತ್ತು ಅವುಗಳ ಪ್ರವರ್ತಕರು ಭಾಗಿಯಾಗಿರುವ ಬೃಹತ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಂಚನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(ಪಿಐಎಲ್) ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ,ಸಿಬಿಐ, ಈಡಿ, ಅನಿಲ್ ಅಂಬಾನಿ ಮತ್ತು ಇತರರಿಗೆ ನೋಟಿಸ್‌ ಗಳನ್ನು ಹೊರಡಿಸಿದೆ. ಮೂರು ವಾರಗಳಲ್ಲಿ ಉತ್ತರಗಳನ್ನು ಸಲ್ಲಿಸುವಂತೆ ಅದು ಸೂಚಿಸಿದೆ. ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ ಇ.ಎ.ಎಸ್.ಶರ್ಮಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಕೆ.ವಿನೋದ್ ಚಂದ್ರನ್ ಅವರ ಪೀಠವು ಮುಂದಿನ ವಿಚಾರಣೆಯನ್ನು ಮೂರು ವಾರಗಳ ಬಳಿಕ ನಿಗದಿಗೊಳಿಸಿತು. ಬೃಹತ್ ಬ್ಯಾಂಕಿಂಗ್ ವಂಚನೆಯಲ್ಲಿ ಬ್ಯಾಂಕುಗಳು ಮತ್ತು ಅವುಗಳ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ ಅವರು, ಪ್ರಕರಣದಲ್ಲಿ ಬ್ಯಾಂಕುಗಳು ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿಗಳನ್ನು ಸಲ್ಲಿಸುವಂತೆ ಸಿಬಿಐ ಮತ್ತು ಈಡಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಅನಿಲ ಅಂಬಾನಿ ನೇತೃತ್ವದ ಎಡಿಎ ಗ್ರೂಪ್‌ನ ಹಲವಾರು ಕಂಪೆನಿಗಳಲ್ಲಿ ಸಾರ್ವಜನಿಕ ಹಣದ ವ್ಯವಸ್ಥಿತ ದುರ್ಬಳಕೆ, ನಕಲಿ ಲೆಕ್ಕಪತ್ರಗಳ ಸೃಷ್ಟಿ ಮತ್ತು ಸಾಂಸ್ಥಿಕ ಶಾಮೀಲಾತಿಯನ್ನು ಪಿಐಎಲ್ ಆರೋಪಿಸಿದೆ. ಸಂಬಂಧಿತ ಈಡಿವಿಚಾರಣೆಯೊಂದಿಗೆ ಸಿಬಿಐ ಆ.21ರಂದು ದಾಖಲಿಸಿರುವ ಎಫ್‌ಐಆರ್ ಆರೋಪಿತ ವಂಚನೆಯ ಸಣ್ಣ ಭಾಗವೊಂದನ್ನು ಮಾತ್ರ ಉಲ್ಲೇಖಿಸಿದೆ ಎಂದು ಪಿಐಎಲ್ ಹೇಳಿದೆ. ವಿವರವಾದ ವಿಧಿವಿಜ್ಞಾನ ಲೆಕ್ಕ ಪರಿಶೋಧನೆಗಳು ಗಂಭೀರ ಅಕ್ರಮಗಳನ್ನು ಬೆಟ್ಟು ಮಾಡಿದ್ದರೂ ಈಡಿ ಅಥವಾ ಸಿಬಿಐ ಬ್ಯಾಂಕ್ ಅಧಿಕಾರಿಗಳು,ಲೆಕ್ಕ ಪರಿಶೋಧಕರು ಅಥವಾ ನಿಯಂತ್ರಕರ ಪಾತ್ರದ ಕುರಿತು ತನಿಖೆ ನಡೆಸುತ್ತಿಲ್ಲ ಎಂದು ಹೇಳಿರುವ ಅರ್ಜಿಯು,ಇದನ್ನು ನಿರ್ಣಾಯಕ ವೈಫಲ್ಯ ಎಂದು ಕರೆದಿದೆ. ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವ್ಯವಸ್ಥಿತ ವಂಚನೆ ಮತ್ತು ಹಣದ ದುರ್ಬಳಕೆಯನ್ನು ಗುರುತಿಸಲಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ವಾರ್ತಾ ಭಾರತಿ 18 Nov 2025 8:37 pm

ದಿಲ್ಲಿಯ ವಿವಿಧ ನ್ಯಾಯಾಲಯಗಳಿಗೆ, ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ

ಹೊಸದಿಲ್ಲಿ,ನ.18: ದಿಲ್ಲಿಯ ನಾಲ್ಕು ನ್ಯಾಯಾಲಯ ಸಂಕೀರ್ಣಗಳು ಮತ್ತು ಎರಡು ಶಾಲೆಗಳಿಗೆ ಮಂಗಳವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಪೋಲಿಸರು ಅಲ್ಲಿಗೆ ಧಾವಿಸಿ ಸಮಗ್ರವಾಗಿ ಶೋಧಿಸಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇವು ಹುಸಿ ಬೆದರಿಕೆಗಳಾಗಿವೆ ಎಂದು ಪೋಲಿಸರು ಹೇಳಿದ್ದಾರೆ. ಬಾಂಬ್ ಬೆದರಿಕೆ ಇಮೇಲ್‌ಗಳು ಬಂದ ಬಳಿಕ ಪಟಿಯಾಳಾ ಹೌಸ್,ಸಾಕೇತ್,ರೋಹಿಣಿ ಮತ್ತು ತೀಸ್ ಹಝಾರಿ ನ್ಯಾಯಾಲಯ ಸಂಕೀರ್ಣಗಳು ಹಾಗೂ ದ್ವಾರಕಾ ಮತ್ತು ಪ್ರಶಾಂತ ವಿಹಾರಗಳಲ್ಲಿಯ ಎರಡು ಸಿಆರ್‌ಪಿಎಫ್ ಶಾಲೆಗಳನ್ನು ತೆರವುಗೊಳಿಸಿದ ಪೋಲಿಸರು ಬಾಂಬ್ ಪತ್ತೆ ಮತ್ತು ನಿಷ್ಕಿಯ ದಳದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಬಂದಿದ್ದ ಇಮೇಲ್‌ನಲ್ಲಿ ‘ಭಾರತಕ್ಕೆ ಶುಭೋದಯ,ಅಲ್ಲಾಹ್‌ನ ಜನರಿಗೆ ನಿರಂತರ ಅನ್ಯಾಯವಾಗುತ್ತಿರುವುದರಿಂದ ಅಲ್ಲಾಹ್‌ನ ಈ ನ್ಯಾಯಾಲಯವು ದಿಲ್ಲಿಯ ಪಟಿಯಾಳಾ,ಸಾಕೇತ್,ರೋಹಿಣಿ ಮತ್ತು ತೀಸ್ ಹಝಾರಿ ನ್ಯಾಯಾಲಯ ಸಂಕೀರ್ಣಗಳನ್ನು ಬಾಂಬ್ ಸ್ಫೋಟದ ಮೂಲಕ ಧ್ವಂಸಗೊಳಿಸಲು ಆದೇಶಿಸಿದೆ. ಆದೇಶವು ಇಂದಿನಿಂದಲೇ ಜಾರಿಗೊಳ್ಳಲಿದೆ’ ಎಂದು ಬರೆಯಲಾಗಿತ್ತು. ಇಮೇಲ್ ರವಾನಿಸಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸಾಕೇತ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ ಬಸೋಯಾ ತಿಳಿಸಿದರು.

ವಾರ್ತಾ ಭಾರತಿ 18 Nov 2025 8:36 pm

ಪೋಕ್ಸೋ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಕೋರ್ಟ್ ಸಮನ್ಸ್ - ಕೋರ್ಟ್ ಹೇಳಿದ್ದೇನು?

ಬೆಂಗಳೂರಿನಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಯಡಿಯೂರಪ್ಪ ಅವರ ಜೊತೆಗೆ ಅರುಣ್, ಮರಿಸ್ವಾಮಿ ಮತ್ತು ರುದ್ರೇಶ್‌ಗೂ ಸಮನ್ಸ್ ನೀಡಲಾಗಿದೆ. ಹೈಕೋರ್ಟ್ ಕೂಡ ಯಡಿಯೂರಪ್ಪ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಸಿಐಡಿ ತನಿಖೆ ಮುಂದುವರೆಯಲಿದೆ.

ವಿಜಯ ಕರ್ನಾಟಕ 18 Nov 2025 8:36 pm

ಸ್ಥಳೀಯ ಸಂಸ್ಥೆಗಳ ಚುನಾವಣೆ: ಸರ್ಕಾರ ಕ್ರಮದ ಬಗ್ಗೆ ಪ್ರತಿ ವಾರ ಕರ್ನಾಟಕ ಹೈಕೋರ್ಟ್‌ ಮೇಲ್ವಿಚಾರಣೆ!

ಚುನಾವಣೆ ನಡೆಸಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಹಾಗೂ ಚುನಾವಣೆ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಪ್ರತಿ ವಾರದ ಆಧಾರದಲ್ಲಿ ಮೇಲ್ವಿಚಾರಣೆ ನಡೆಸಲಿದೆ. ಚುನಾವಣೆ ನಡೆಸುವಲ್ಲಿನ ವಿಳಂಬ ಮತ್ತು ಆಡಳಿತಾಧಿಕಾರಿಗಳ ನೇಮಕ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಸರಕಾರದ ಕ್ರಮಗಳನ್ನು ಗಮನಿಸಲಿದೆ.

ವಿಜಯ ಕರ್ನಾಟಕ 18 Nov 2025 8:33 pm

Bihar Election : 200ಕ್ಕೂ ಕಡಿಮೆ ಅಂತರದಿಂದ ಸೋತ ನತದೃಷ್ಟ ಅಭ್ಯರ್ಥಿಗಳು - ಹಣೆಬರಹಕ್ಕೆ ಹೊಣೆಯಾರು ಅಲ್ಲವೇ?

Bihar Assembly Election 2025 : ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಮತ್ತೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ. ನವೆಂಬರ್ ಇಪ್ಪತ್ತರಂದು, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಬಹುದು. ಕೆಲವೊಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳು 200ಕ್ಕೂ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದಾರೆ.

ವಿಜಯ ಕರ್ನಾಟಕ 18 Nov 2025 8:33 pm

KEA: ಬೆಂಗಳೂರು ಜಲಮಂಡಳಿಯ 224 ಹುದ್ದೆಗಳ ನೇರ ನೇಮಕಾತಿ; ಯಾವೆಲ್ಲಾ? ವೇತನ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನವೇನು?

ಬೆಂಗಳೂರು ಜಲಮಂಡಳಿಯು ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ನವೆಂಬರ್ 17 ರಿಂದ 25 ರವರೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 120+45 (ಹಿಂ) ಮತ್ತು 50+09 (ಹಿಂ) ಕಲ್ಯಾಣ ಕರ್ನಾಟಕ ಮೀಸಲು ಹುದ್ದೆಗಳು ಭರ್ತಿಯಾಗಲಿವೆ.

ವಿಜಯ ಕರ್ನಾಟಕ 18 Nov 2025 8:14 pm

Saudi Arabia | ಮದೀನಾ ಬಳಿ ಬಸ್ ದುರಂತದಲ್ಲಿ 46 ಪ್ರಯಾಣಿಕರ ಪೈಕಿ ಒಬ್ಬ ಮಾತ್ರ ಪಾರು!

ಅಬ್ದುಲ್ ಶೋಯಿಬ್ ಸಾವಿನ ದವಡೆಯಿಂದ ಪಾರಾಗಿದ್ದು ಹೇಗೆ?

ವಾರ್ತಾ ಭಾರತಿ 18 Nov 2025 8:11 pm

ಉಪ್ಪಿನಂಗಡಿ | ರಾಷ್ಟ್ರಮಟ್ಟದ ಅರಣ್ಯ ಕ್ರೀಡಾಕೂಟ : ಎಸಿಎಫ್ ಪ್ರವೀಣ್ ಕುಮಾರ್‌ಗೆ ಚಿನ್ನದ ಪದಕ

ಉಪ್ಪಿನಂಗಡಿ: 28ನೇ ಅಖಿಲ ಭಾರತ ಅರಣ್ಯ ಕ್ರೀಡಾಕೂಟದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎ.ಸಿ.ಎಫ್.) ಪ್ರವೀಣ್ ಕುಮಾರ್ ಶೆಟ್ಟಿ ಅವರು 2 ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ನ.12ರಿಂದ 15ರ ತನಕ ಉತ್ತರಕಾಂಡ್ ರಾಜ್ಯದ ಡೆಹರಾ ಡೂಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಪ್ರವೀಣ್ ಕುಮಾರ್ ಶೆಟ್ಟಿ ಗುಂಡೆಸೆತ ಮತ್ತು ಹ್ಯಾಮರ್ ತ್ರೋದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಪುತ್ತೂರು ಸಾಮೆತ್ತಡ್ಕ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಸುಳ್ಯ, ಮಂಗಳೂರು ಮೊದಲಾದೆಡೆ ಎ.ಸಿ.ಎಫ್. ಆಗಿ ಮತ್ತು ಜಿಲ್ಲಾ ಅರಣ್ಯ ವಿಶೇಷ ದಳದಲ್ಲಿ ಸೇವೆ ಸಲ್ಲಿಸಿದ್ದು, ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 18 Nov 2025 8:09 pm

ಯಾದಗಿರಿ | ಉತ್ತಮ ಬೇಸಾಯ ಕ್ರಮಗಳ ವಾರ್ಷಿಕ ಸಮ್ಮೇಳನ

ಯಾದಗಿರಿ: ಕಲಿಕೆ–ಟಾಟಾ ಟ್ರಸ್ಟ್–ಟೆಸ್ಕೋ ಕೃಷಿ ಜೀವನೋಪಾಯ ಕಾರ್ಯಕ್ರಮದ ಆಶ್ರಯದಲ್ಲಿ ಉತ್ತಮ ಬೇಸಾಯ ಕ್ರಮಗಳ ವಾರ್ಷಿಕ ಸಮ್ಮೇಳನ ಹಾಗೂ ಗಿರಿನಾಡು ರೈತ ಉತ್ಪಾದಕ ಕಂಪೆನಿ ಲಿಮಿಟೆಡ್‌ನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಮಂಗಳವಾರ ನಗರದಲ್ಲಿನ ಎಸ್‌.ಡಿ.ಎನ್ ಸಭಾಂಗಣದಲ್ಲಿ ನಡೆಯಿತು.  ಸಭೆಯಲ್ಲಿ ಈಗಿನ ಆಹಾರ ಪದ್ಧತಿ ಮತ್ತು ಹಳೆಯ ಆಹಾರ ಪದ್ಧತಿಗಳಲ್ಲಿ ದೊಡ್ಡ ವ್ಯತ್ಯಾಸ ಬಂದಿದೆ. ರಾಸಾಯನಿಕ ಬಳಕೆ ಹೆಚ್ಚಾದಂತೆ ಮನುಷ್ಯರ ಆಯುಸ್ಸು ಕೂಡ ಕುಸಿಯುತ್ತಿದೆ. ನಮ್ಮ ಭಾಗದ ಮಣ್ಣಿನಲ್ಲಿ ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದ್ದು, ತೊಗರಿ ಹಾಗೂ ಇತರ ಆಹಾರ ಧಾನ್ಯಗಳಲ್ಲಿ ಉತ್ತಮ ಗುಣಮಟ್ಟ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಯಾದಗಿರಿ ಜಂಟಿ ಕೃಷಿ ನಿರ್ದೇಶಕ ಡಾ.ರಾಚೇಂದ್ರ ಸೂಗೂರು, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ರವಿ ಪೊಲೀಸ್ ಪಾಟೀಲ್, ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಮುಖ್ಯಸ್ಥ ಡಾ. ಜಯಪ್ರಕಾಶ್‌ ನಾರಾಯಣ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥೆ ಡಾ. ಶಶಿಕಲಾ ಸೇರಿದಂತೆ ಗಣ್ಯರು ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು. ಅದೇ ವೇಳೆ ಕಲಿಕೆ ಕಾರ್ಯಕ್ರಮಾಧಿಕಾರಿ ಸಾಯಿ ಶ್ರೀಕಾಂತ್ ರೆಡ್ಡಿ, ಗಿರಿನಾಡು ಎಫ್‌ಪಿಒ ನಿರ್ದೇಶಕ ಶರಣಗೌಡ, ಕೃಷಿ ಅಧಿಕಾರಿ ಗಣಪತಿ ಮಾತನಾಡಿ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು. ಈ ವೇಳೆ ಕಲಿಕೆ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕರಾದ ಶಾಂತುಗೌಡ ಬಿರಾದಾರ, ಕಿರಣ್ ಕುಮಾರ್, ಮಂಜುನಾಥ್ ಹಾಗೂ ಸಂಯೋಜಕರಾದ ಸುಧಾರಾಣಿ, ಅನುರಾಧ, ಸಂಪತ್ ಕುಮಾರ್, ಅರುಣ್, ಹಸನ್ ರಝಾಕ್, ಕ್ಷೇತ್ರ ಸಹಾಯಕರಾದ ಕುಮಾರ್ ಎಸ್. ತೆಳಿಗೇರಿ, ರಫೀಕ್  ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ 350ಕ್ಕೂ ಹೆಚ್ಚು ರೈತರು ಹಾಜರಿದ್ದರು.

ವಾರ್ತಾ ಭಾರತಿ 18 Nov 2025 8:09 pm

ಯಕ್ಷಗಾನ ಕಲಾವಿದರಲ್ಲಿ ಹಲವರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ!

ಕರ್ನಾಟಕದಲ್ಲಿ ಯಕ್ಷಗಾಲಕ್ಕೆ ವಿಶೇಷವಾದ ಸ್ಥಾನವಿದೆ. ಅಲ್ಲದೇ ಯಕ್ಷಗಾನ ಕಲಾವಿದರನ್ನು ಅತ್ಯಂತ ಗೌರವದಿಂದಲೂ ಕಾಣಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಕೆಲವು ಕಲಾವಿದರು ರಾಜಕೀಯ ಪಕ್ಷಗಳು, ನಾಯಕರ ಪರವಾಗಿ ಪ್ರಚಾರ ಮಾಡುವುದು ಇದೆ. ಆದರೆ ಇದೀಗ ಕರ್ನಾಟಕದ ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ

ಒನ್ ಇ೦ಡಿಯ 18 Nov 2025 8:07 pm

ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಅಮೆರಿಕದಿಂದ ಗಡೀಪಾರು - ಶೀಘ್ರವೇ ಭಾರತಕ್ಕೆ ಹಸ್ತಾಂತರ?

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಅಮೆರಿಕಾದಿಂದ ಭಾರತಕ್ಕೆ ಗಡಿಪಾರು ಆಗುವ ಸಾಧ್ಯತೆ ಇದೆ. ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಂಚುಕೋರನಾಗಿದ್ದ ಅನ್ಮೋಲ್, ಅಮೆರಿಕಾದಿಂದ ಗಡಿಪಾರು ಆಗುವ ಬಗ್ಗೆ ಮಾಹಿತಿ ಲಭಿಸಿದೆ. ರಾಷ್ಟ್ರೀಯ ತನಿಖಾ ದಳ (NIA) ಅನ್ಮೋಲ್ ವಶಕ್ಕೆ ಪಡೆಯಲು ಮುಂದಾಗಿದೆ. ಈ ಬೆಳವಣಿಗೆ ಹಲವು ಪ್ರಕರಣಗಳಲ್ಲಿ ಅನ್ಮೋಲ್ ಪಾತ್ರವನ್ನು ಎತ್ತಿ ತೋರಿಸುತ್ತದೆ.

ವಿಜಯ ಕರ್ನಾಟಕ 18 Nov 2025 8:07 pm

ಉಡುಪಿ | ವ್ಯಕ್ತಿ ನಾಪತ್ತೆ

ಉಡುಪಿ, ನ.18: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕುಜೆ ಗಾಮದ ಈಸರ್ಮಾರ್ ನಿವಾಸಿ ಸೂರ್ಯ (52) ಎಂಬವರು ನ.10ರಂದು ಪೆರ್ಡೂರಿನಲ್ಲಿರುವ ತನ್ನ ತಂಗಿ ಮನೆಗೆ ತೆರಳಿದ್ದು, ಬಳಿಕ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 2 ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಉಪ ನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 18 Nov 2025 8:06 pm

ಉಡುಪಿ | ಇಂದಿನಿಂದ ಜಿಲ್ಲಾ ಪೊಲೀಸ್ ಕ್ರೀಡಾಕೂಟ

ಉಡುಪಿ, ನ.18: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ನ.19ರಂದು ಬೆಳಿಗ್ಗೆ 8:00 ಗಂಟೆಗೆ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಮೂರು ದಿನಗಳ ಈ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಉದ್ಘಾಟಿಸಲಿದ್ದಾರೆ. ನ.21ರಂದು ಸಂಜೆ 4:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಾರ್ತಾ ಭಾರತಿ 18 Nov 2025 8:04 pm

ವರ್ತುಲ ಅರ್ಥವ್ಯವಸ್ಥೆ ಆರ್ಥಿಕತೆಗೆ ಪರ್ಯಾಯ ಆಗಬಲ್ಲದು : ಪಿ.ಎಂ.ನರೇಂದ್ರಸ್ವಾಮಿ

ಬೆಂಗಳೂರು : ತ್ಯಾಜ್ಯವನ್ನೂ ಬೆಲೆಬಾಳುವ ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದು. ಆದುದರಿಂದ ವರ್ತುಲ ಅರ್ಥವ್ಯವಸ್ಥೆ ಭವಿಷ್ಯದಲ್ಲಿ ನಮ್ಮ ಆರ್ಥಿಕತೆಗೆ ಪರ್ಯಾಯ ಆಗಬಲ್ಲದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ‘ವರ್ತುಲ ಅರ್ಥವ್ಯವಸ್ಥೆ ಮತ್ತು ಸ್ಥಿರತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವರ್ತುಲ ಅರ್ಥವ್ಯವಸ್ಥೆ ಮತ್ತು ಸ್ಥಿರತೆ ಎನ್ನುವುದು ಕೇವಲ ಅವಶ್ಯಕತೆಯಲ್ಲ. ಹವಾಮಾನ ಬದಲಾವಣೆ, ಜೀವ ವೈವಿಧ್ಯತೆಯ ನಾಶ ಹಾಗೂ ತ್ಯಾಜ್ಯ ನಿರ್ವಹಣೆ ಮುಂತಾದ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಗೇಮ್ ಚೇಂಜರ್ ಎಂದರು. ವರ್ತುಲ ಅರ್ಥವ್ಯವಸ್ಥೆ ಇಂದಿನ ‘ಕೊಳ್ಳಿ–ಬಳಸಿ–ಬಿಸಾಡಿ’ ಎಂಬ ಧೋರಣೆಯ ಆರ್ಥಿಕತೆಗೆ ಪರ್ಯಾಯವಾದ ಮತ್ತು ಅವಶ್ಯಕವಾದ ಆರ್ಥಿಕ ಮಾದರಿಯಾಗಿದೆ. ವರ್ತುಲ ಅರ್ಥವ್ಯವಸ್ಥೆ ಕಲ್ಪನೆಯಲ್ಲಿ ಉತ್ಪನ್ನಗಳನ್ನು ದೀರ್ಘಾವಧಿಗೆ ಬಳಸುವಂತೆ, ಮರುಬಳಕೆ ಹಾಗೂ ಮರುಸಂಸ್ಕರಣೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ಕಡಿಮೆ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕೈಗಾರಿಕಾ ವಲಯಗಳು ಈ ಮಾದರಿಯನ್ನು ಅಳವಡಿಸಿಕೊಂಡರೆ, ಸಂಪನ್ಮೂಲ ಸಂರಕ್ಷಣೆಗೆ ಮಹತ್ವದ ಕೊಡುಗೆ ಕೊಟ್ಟಂತಾಗುತ್ತದೆ ಎಂದು ನರೇಂದ್ರಸ್ವಾಮಿ ವಿವರಿಸಿದರು. ರಾಜ್ಯ ಭದ್ರವಾದ ಕೈಗಾರಿಕಾ ನೆಲೆಗಟ್ಟನ್ನು ಹೊಂದಿದೆ. ನವೀನ ಪರಿಕಲ್ಪನೆಯ ಸ್ಟಾರ್ಟ್‌ ಅಪ್‍ಗಳ ತಾಣವಾಗಿ ಮಾರ್ಪಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸದೊಂದಿಗೆ ಮುಂಚೂಣಿಯಲ್ಲಿದೆ. ನವೀಕರಿಸಬಹುದಾದ ಇಂಧನದಿಂದ ಹಿಡಿದು ಇ-ತ್ಯಾಜ್ಯ ಮರುಸಂಸ್ಕರಣೆ, ಸುಸ್ಥಿರ ನಗರ ಅಭಿವೃದ್ಧಿ ಯೋಜನೆ ಮತ್ತಿತರ ಕ್ಷೇತ್ರಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಕೆಎಸ್‍ಪಿಸಿಬಿಯ ಪಾತ್ರ ಈಗ ಮಾಲಿನ್ಯದ ನಿಯಂತ್ರಣದ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾವಣೆಯಲ್ಲಿ ಪಾಲುದಾರರಾಗಲು ಸಿದ್ಧರಾಗಿದ್ದು, ವರ್ತುಲ ಅರ್ಥವ್ಯವಸ್ಥೆಯನ್ನು ಆಧರಿಸಿದ ವ್ಯವಹಾರ ಮಾದರಿಗಳಿಗೆ ಬೆಂಬಲ ನೀಡುವುದು, ಸರಕಾರ–ಕೈಗಾರಿಕೆ–ಅಕಾಡೆಮಿಗಳ ನಡುವಿನ ಸಹಕಾರ ಹೆಚ್ಚಿಸುವುದು ಮತ್ತು ಪರಿಸರ ಸಂರಕ್ಷಣೆಯನ್ನು ಆರ್ಥಿಕ ಬೆಳವಣಿಗೆಯೊಂದಿಗೆ ಜೋಡಿಸುವ ಕಾರ್ಯದಲ್ಲಿ ಮುನ್ನೆಡೆಯಲು ಸಿದ್ಧವಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು. ಸುಸ್ಥಿರತೆಯನ್ನು ಉತ್ತಮ ನೀತಿಗಳಿಂದ ಮಾತ್ರ ಜಾರಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಮನಸ್ಥಿತಿ ಬದಲಾಗಬೇಕಾದುದು ಅತ್ಯಗತ್ಯ. ಬಳಕೆಯ ನಂತರ ಉಳಿಸಲು, ಬಿಸಾಡುವುದರ ಬದಲು ಮರುಬಳಕೆ ಮಾಡಲು ಬದ್ಧರಾಗಬೇಕಾಗಿದೆ. ಈ ಪರಿವರ್ತನೆಯಲ್ಲಿ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಉದ್ಯಮಿ, ಪ್ರತಿಯೊಬ್ಬ ಆಡಳಿತಗಾರ, ನೀತಿ ನಿರೂಪಕ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ ಎಂದು ನರೇಂದ್ರಸ್ವಾಮಿ ಕರೆ ನೀಡಿದರು. ಈ ವೇಳೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡಳಿಯ ಸದಸ್ಯ ಕಾರ್ಯದರ್ಶಿ ಆರ್.ಗೋಕುಲ್, ಸೇರಿದಂತೆ ವಿವಿಧ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಮತ್ತು ವಿವಿಧ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 18 Nov 2025 7:59 pm

ಉಡುಪಿ | ನಶಾಮುಕ್ತ ಭಾರತ: ಪ್ರತಿಜ್ಞಾವಿಧಿ ಬೋಧನೆ

ಉಡುಪಿ, ನ.18: ನಶಾ ಮುಕ್ತ ಭಾರತ ಅಂಗವಾಗಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವೀಡಿಯೋ ಕಾನ್ಫರೆನ್ಸ್ ಕೊಠಡಿಯಲ್ಲಿ ಇಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಸೆಟ್ಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಲತಾ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 7:58 pm

ವಿಜಯನಗರ | ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನಾಚರಣೆ

ವಿಜಯನಗರ : ಕೊಟ್ಟೂರು ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಸಮಿತಿ ವತಿಯಿಂದ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಆಚರಿಸಲಾಯಿತು.  ನವೆಂಬರ್‌ 18ರಂದು  ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿವರ್ಷ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಆಚರಿಸಲಾಗುತ್ತಿದೆ.   ಈ ವೇಳೆ ಸಿಪಿಐ ಪಕ್ಷದ ರಾಜ್ಯ ಮಂಡಳಿ ತಾಲೂಕು ಕಾರ್ಯದರ್ಶಿ ಕೆ. ರೇಣುಕಮ್ಮ ಮಾತನಾಡಿ,  ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ. ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು 75 ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ. ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿಗಳಾದ ಉಮೇಶ.ಎಚ್, ಬಿ.ರೇಣುಕಮ್ಮ, ತಾಲೂಕು ಮಂಡಳಿ ಸದಸ್ಯರಾದ ರಸೂಲ್, ಜಲೀಲ್, ಮುಖಂಡರಾದ ಷಂಶದ್, ಶಾಹಿನಾ, ಗೌರಮ್ಮ, ಜ್ಯೋತಿ, ಕಾಳಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 18 Nov 2025 7:56 pm

ಮೀಫ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಅವರಿಗೆ ಸನ್ಮಾನ

ಮಂಗಳೂರು : ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ. ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 262 ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪರವಾಗಿ ಇತ್ತೀಚಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ವಿಜೇತ ಅನಿವಾಸಿ ಕೈಗಾರಿಕೋದ್ಯಮಿ, ಉದಾರ ದಾನಿ, ದೇಶ ವಿದೇಶಗಳಲ್ಲಿ ಹಲವಾರು ಸಾಮಾಜಿಕ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಿ ಸೇವೆಗೈಯುತ್ತಿರುವ ಝಕರಿಯಾ ಜೋಕಟ್ಟೆ ಅವರನ್ನು ಮಂಗಳೂರಿನ ಬರಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆಯವರು ವಹಿಸಿದ್ದರು. ಈ ವೇಳೆ ಮಾತನಾಡಿದ ಝಕರಿಯಾ ಜೋಕಟ್ಟೆ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಮೀಫ್ ಕೈಗೊಂಡ ವಿವಿಧ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಮೀಫ್ ಬಡ ವಿದ್ಯಾರ್ಥಿಗಳ ಉನ್ನತಿಗಾಗಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮ ಅಳವಡಿಸಬೇಕು. ತಾನೂ ನಿಮ್ಮ ಜೊತೆ ಕೈಜೋಡಿಸುವುದಾಗಿ ತಮ್ಮ ಭಾಷಣದಲ್ಲಿ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸುಲ್ತಾನ್ ಗೋಲ್ಡ್ ಆಡಳಿತ ನಿರ್ದೇಶಕರಾದ ರವೂಫ್ ಮತ್ತು ಬರಕ ಸಂಸ್ಥೆಯ ಆಡಳಿತ ನಿರ್ದೇಶಕಿ ನರ್ಗಿಸ್ ಆಶ್ರಫ್ ರವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮೀಫ್ ಉಪಾಧ್ಯಕ್ಷರಾದ ಪರ್ವೀಝ್‌ ಅಲಿ, ಉಡುಪಿ ಘಟಕದ ಗೌರವಾಧ್ಯಕ್ಷರಾದ ಶಬೀ ಅಹಮದ್ ಖಾಝಿ, ಕಾರ್ಯದರ್ಶಿಗಳಾದ ಅನ್ವರ್ ಗೂಡಿನ ಬಳಿ, ಕೋಶಾಧಿಕಾರಿ ನಿಸಾರ್ ಎಂ.ಫಕೀರ್, ಸದಸ್ಯರಾದ ಪಿ.ಎ.ಇಲ್ಯಾಸ್ ಕಾಟಿಪಳ್ಳ, ಅಬ್ದುಲ್ ರಝಾಕ್ ಗೋಳ್ತಮಜಲು, ಹನೀಫ್ ಚೈತನ್ಯ, ಅಬ್ದುಲ್ ಅಝೀಝ ಅಂಬರ್ ವ್ಯಾಲಿ, ಆದಿಲ್ ಕುನಿಲ್, ಫಾರೂಕ್ ಏರ್ ಲೈನ್ಸ್, ಬಷೀರ್ ಕುಂಬ್ರ, ಬರಕ ವಿದ್ಯಾ ಸಂಸ್ಥೆಯ ಅಯಾನ್ ಆಶ್ರಫ್, ಸೌಶ್ರೀನ್ ಮತ್ತು ಸಮೀರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ಸ್ವಾಗತಿಸಿದರು, ಕಾರ್ಯದರ್ಶಿ ಶಹಮ್ ಅಲ್ ಫುರ್ಖಾನ್ ವಂದನಾರ್ಪಣೆ ಗೈದರು. ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 18 Nov 2025 7:54 pm

Haveri | ಗರ್ಭಿಣಿಗೆ ಬೆಡ್‌ ನೀಡದ ಆರೋಪ; ಶೌಚಾಲಯಕ್ಕೆ ತೆರಳುವ ಮಾರ್ಗದಲ್ಲೇ ಹೆರಿಗೆ, ಮಗು ಮೃತ್ಯು

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ

ವಾರ್ತಾ ಭಾರತಿ 18 Nov 2025 7:53 pm

ಉಡುಪಿ | ಡಿ.3ರಂದು ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆ : ಅಭೀದ್ ಗದ್ಯಾಳ್

ಉಡುಪಿ, ನ.18:ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾಮಟ್ಟದಲ್ಲಿ ಮುಂದಿನ ಡಿಸೆಂಬರ್ 3ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ, ವ್ಯವಸ್ಥಿತ ರೀತಿಯಲ್ಲಿ ಆಚರಿಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವೀಡಿಯೋ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಮಟ್ಟದಲ್ಲಿ ಡಿ.3ರಂದು ಬೆಳಗ್ಗೆ 10:30ಕ್ಕೆ ನಗರದ ಪುರಭವನದಲ್ಲಿ ಪ್ರಸಕ್ತ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಗುವುದು. ಇದರೊಂದಿಗೆ ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದ ಅವರು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಮಕ್ಕಳನ್ನು ಹಾಗೂ ವಿಕಲಚೇತನರನ್ನು ಕರೆತರುವಲ್ಲಿ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಕ್ರಮಕೈಗೊಳ್ಳಬೇಕು ಎಂದರು. ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ಇತರೆ ವಿಕಲಚೇತನರಿಗೆ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವುದರೊಂದಿಗೆ ವಿಜೇತರಿಗೆ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ವಿತರಿಸಬೇಕು. ಪ್ರತೀ ತಾಲೂಕಿನಿಂದ ಒಂದು ತಂಡ ಸಾಂಸ್ಕೃತಿಕ ಪ್ರದರ್ಶನ ನೀಡುವಂತೆ ನೋಡಿಕೊಳ್ಳಬೇಕು ಎಂದರು. ಅಂದು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು ಎಂದ ಗದ್ಯಾಳ್ ಅವರು, ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳನ್ನು ಹಾಗೂ ವ್ಯಕ್ತಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು. ನ.25ರಿಂದ ಡಿ.1ರವರೆಗೆ 21 ಬಗೆಯ ಅಂಗವಿಕಲತೆಯ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಡಿಡಿಆರ್ಸಿ ಕೇಂದ್ರ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆ ಹಾಗೂ ಎಂ.ಆರ್. ಡಬ್ಲ್ಯೂ ಸಹಯೋಗದೊಂದಿಗೆ ವಿಕಲಚೇತನರ ಸಪ್ತಾಹವನ್ನು ಆಚರಿಸಲಾಗುವುದು. ಈ ವೇಳೆ ವಿಶೇಷಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಸೆಟ್ಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಲತಾ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿಕಲಚೇತನರ ಸ್ವಯಂಸೇವಾ ಸಂಸ್ಥೆಗಳ ಹಾಗೂ ಪುನರ್ವಸತಿ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 7:45 pm

ವಿಜಯಪುರ ವಿಮಾನ ನಿಲ್ದಾಣಕ್ಕೆ ಅಡ್ಡಿ ನಿವಾರಣೆ: ಸುಪ್ರೀಂಕೋರ್ಟ್ ನಿಲುವಿಗೆ ಎಂ.ಬಿ.ಪಾಟೀಲ್ ಸ್ವಾಗತ

ಬೆಂಗಳೂರು : ಸಾರ್ವಜನಿಕ ಮಹತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಈ ಸಂಬಂಧ ಪತ್ರಿಕ್ರಿಯೆ ನೀಡಿದ ಅವರು, ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿದ್ದ ಪರಿಸರ ಸಂಬಂಧಿ ಪ್ರಕರಣದಿಂದಾಗಿ ಏನೂ ಮಾಡುವಂತಿರಲಿಲ್ಲ. ಸುಪ್ರೀಂಕೋರ್ಟಿನ ನಿರ್ಧಾರದಿಂದ ಈಗ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಈ ವಿಚಾರ ಈಗಲೂ ನ್ಯಾಯಾಂಗದ ವಿಚಾರಣೆಯಲ್ಲಿದೆ ಎನ್ನುವ ಅರಿವಿದೆ. ಆದರೂ ಇವತ್ತಿನ ನಿಲುವು ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ ಎಂದು ಎಂ.ಬಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದರು. ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, `ಈ ಹಿಂದಿನ ತೀರ್ಪಿನಿಂದ ವಿಮಾನ ನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ.ಬಿ.ಪಾಟೀಲ್ ತ್ವರಿತವಾಗಿ ಕ್ರಿಯಾಶೀಲರಾಗಿ, ಕಪಿಲ್ ಸಿಬಲ್ ಅವರಂತಹ ಹಿರಿಯ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಮೂಲಕ ವಿಮಾನ ನಿಲ್ದಾಣಕ್ಕೆ ಪುನರ್ಜನ್ಮ ನೀಡಿದ್ದಾರೆ ಎಂದು ಹೇಳಿದರು.

ವಾರ್ತಾ ಭಾರತಿ 18 Nov 2025 7:36 pm

ಡಿಜಿಟಲ್ ಅರೆಸ್ಟ್ ಮಾಡುವರನ್ನು ಬಂಧಿಸದೇ ಬಿಡುವುದಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು : ತಾಂತ್ರಿಕವಾಗಿ ಮುಂದುವರೆದಿರುವ ಅಮೆರಿಕದ ಪ್ರಜೆಗಳನ್ನೆ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ಕುಳಿತವರು ಡಿಜಿಟಲ್ ಅರೆಸ್ಟ್ ಮಾಡುವಷ್ಟು ಮುಂದುವರೆದಿದ್ದಾರೆ. ಇಂತಹ ಆರೋಪಿಗಳನ್ನು ಬಂಧಿಸದೇ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಒಬ್ಬರಿಗೆ 32 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು. ಮಹಿಳಾ ಟೆಕ್ಕಿ ಅವರನ್ನು ಕಳೆದ ಒಂದು ವರ್ಷದಕ್ಕಿಂತಲೂ ಡಿಜಿಟಲ್ ಅರೆಸ್ಟ್ ದಿಗ್ಭಂದಿಸಲಾಗಿದೆ. ಸುಮಾರು 187ಕ್ಕಿಂತಲೂ ಹೆಚ್ಚು ಬಾರಿ ಹಣದ ವಹಿವಾಟು ನಡೆದಿದೆ. ಆರಂಭದಲ್ಲೇ ಅವರು ಮಾಹಿತಿ ನೀಡಿದ್ದರೆ ಒಂದಿಷ್ಟು ಹಣ ಉಳಿಯುತ್ತಿತ್ತು. ಆದರೆ ಮಾಹಿತಿ ನೀಡಲಾಗದಷ್ಟು ಅವರನ್ನು ಸಿಲುಕಿಸಿರುವಂತಿದೆ. 30 ಕೋಟಿಗೂ ಹೆಚ್ಚಿನ ಹಣ ವರ್ಗಾವಣೆಯಾದ ಮೇಲೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಅವರು ಉಲ್ಲೇಖಿಸಿದರು.

ವಾರ್ತಾ ಭಾರತಿ 18 Nov 2025 7:28 pm

ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ : ಸಚಿವ ಈಶ್ವರ್ ಖಂಡ್ರೆ

31 ಕೃಷ್ಣಮೃಗಗಳ ಅಸಹಜ ಮೃತ್ಯು; ಮೃಗಾಲಯಗಳ ಮುಖ್ಯಸ್ಥರೊಂದಿಗೆ ವಿಡಿಯೊ ಸಂವಾದ

ವಾರ್ತಾ ಭಾರತಿ 18 Nov 2025 7:27 pm

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು: ಶಬರಿಮಲೆ ಯಾತ್ರೆ ಹೊರಟ ಭಕ್ತರಿಗೆ ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿ

ಶಬರಿಮಲೆ ಯಾತ್ರೆ ಆರಂಭವಾಗಿದೆ. ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕ ಆರೋಗ್ಯ ಇಲಾಖೆ ಯಾತ್ರಿಕರಿಗೆ ಎಚ್ಚರಿಕೆ ನೀಡಿದೆ. ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಎಚ್ಚರ ವಹಿಸಿ. ಮೂಗಿಗೆ ನೀರು ಹೋಗದಂತೆ ನೋಡಿಕೊಳ್ಳಿ. ಜ್ವರ, ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ವಿಜಯ ಕರ್ನಾಟಕ 18 Nov 2025 7:23 pm

ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದ 14 ಪಿಜಿಗಳಿಗೆ ಬೀಗ

ಬೆಂಗಳೂರು : ಮಂಗಳವಾರದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಧಿಕಾರಿಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದ 14 ಪಿಜಿಗಳಿಗೆ(ಪೇಯಿಂಗ್ ಗೆಸ್ಟ್) ಬೀಗ ಹಾಕಿದ್ದಾರೆ. ಪಟ್ಟಂದೂರು ಅಗ್ರಹಾರದಲ್ಲಿರುವ ಎಸ್.ವಿ.ಕೆ. ಪಿಜಿ, ವಂಶಿ ಕೃಷ್ಣ ಪಿಜಿ, ಲಕ್ಷ್ಮಿನಾರಾಯಣಪುರದ ಡ್ವೆಲ್ ಕೋ-ಲಿವಿಂಗ್ ಪಿಜಿ, ವೈಟ್‍ಫೀಲ್ಡ್‌ ನ ರಾಯಲ್ ಹೋಮ್ ಸ್ಟೇಸ್ ಪಿಜಿ, ಡ್ರೀಮ್ ಲ್ಯಾಂಡ್ ಪಿಜಿ, ಝೋಲೋ ಅಸ್ಮಿ ಜೆಂಟ್ಸ್ ಪಿಜಿ, ಮಾರತ್‍ಹಳ್ಳಿಯ ಕೆ.ಆರ್.ಜೆಂಟ್ಸ್ ಪಿಜಿಗೆ ಬೀಗ ಹಾಕಲಾಗಿದೆ. ಕೆ.ಆರ್.ಪುರಂನ ಎಸ್.ಎಲ್.ವಿ ಕಂಫರ್ಟ್ಸ್‌ ಜೆಂಟ್ಸ್ ಪಿಜಿ, ಗಣೇಶ ಜೆಂಟ್ಸ್ ಪಿ.ಜಿ., ಎಸ್.ಎಸ್.ವಿ ಟವರ್ ಪಿಜಿ, ಬಿ ನಾರಾಯಣಪುರದ ಬ್ಲಿಸ್ ಕೋ-ಲಿವಿಂಗ್ ಪಿ.ಜಿ. ವಿ.ಡಿ.ಎಸ್ ಲಕ್ಸುರಿ ಪಿಜಿ ಫಾರ್ ಲೇಡೀಸ್, ದೂರವಾಣಿನಗರದ ಸೆಂಟ್ ಮರಿಯಾ ಲೇಡೀಸ್ ಪಿಜಿ, ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿಜಿಗೆ ಬೀಗ ಹಾಕಲಾಗಿದೆ. ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ. ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ನ.10ರಿಂದ ನ.15ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸಲಾಗಿದ್ದು, ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್‍ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ಒಟ್ಟು 25,52,800 ರೂ. ಶುಲ್ಕ ಪಾವತಿಸಿ, ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 18 Nov 2025 7:18 pm

ರಾಯಚೂರು | ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಸುಧಾರಿಸಿ : ರಶ್ಮಿ ಮಹೇಶ್ ಸೂಚನೆ

ರಾಯಚೂರು : ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ವಿಜಯನಗರ, ಕಲಬುರಗಿ, ಬೀದರ್‌ ಮತ್ತು ಬಳ್ಳಾರಿ ಜಿಲ್ಲೆಗಳ ತಾಲೂಕುವಾರು ಸಂಪನ್ಮೂಲ ಶಿಕ್ಷಕರಿಗಾಗಿ ಹಾಗೂ ಧಾರವಾಡ ವಿಭಾಗದ  ಸಂಪನ್ಮೂಲ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಗಾರವು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪೂರ್ಣಿಮಾ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ನಡೆಯಿತು. ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಬೇಕು. ಇದು ಈ ಕಾರ್ಯಗಾರದ ಮುಖ್ಯ ಗುರಿ ಮತ್ತು ಉದ್ದೇಶವಾಗಿದೆ ಎಂದರು. ಫಲಿತಾಂಶ ಸುಧಾರಣೆಯ ವಿಷಯವನ್ನೇ ಈಗ ಶಿಕ್ಷಕರು ಪ್ರಥಮ ಆದ್ಯತೆ ಎಂದು ಭಾವಿಸಿ ಶಾಲಾ ಹಂತದಲ್ಲಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಚಯಿಸಬೇಕು. ಪಠ್ಯ ಆಧಾರಿತ ಮೌಲ್ಯಮಾಪನದ ಬಗ್ಗೆ ಅರಿಯಬೇಕು. ಜನವರಿ ಮೊದಲ ವಾರ, ಕೊನೆಯ ವಾರ ಮತ್ತು ಫೆಬ್ರುವರಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಕೈಗೊಳ್ಳಲು ಇಲಾಖೆಯು ತೀರ್ಮಾನಿಸಿ ವೇಳಾಪಟ್ಟಿ ನೀಡಿದೆ. ಇದನ್ನು ವಿದ್ಯಾರ್ಥಿಗಳಿಗೆ ಮತ್ತು ಪಾಲಕ ಪೋಷಕರಿಗೆ ತಿಳಿಸಬೇಕು. ಈ ಭಾಗದ ಫಲಿತಾಂಶ ಸುಧಾರಣೆ ಮಾಡಬೇಕು. ಜಿಲ್ಲಾ ಹಂತದ ಮತ್ತು ತಾಲೂಕು ಹಂತದ ಅಧಿಕಾರಿಗಳು ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ನಿರಂತರ ಫಾಲೋ ಅಪ್ ಮಾಡಿ ನೀಡಿರುವ ಚೆಕ್ ಲಿಸ್ಟ್ ಗಳ ಪ್ರಕಾರ ಫಲಿತಾಂಶಗಳನ್ನು ವಿಶ್ಲೇಷಿಸುವ ಕಾರ್ಯಪಡೆ ರಚನೆ ಮಾಡಿ ನಮಗೆ ವರದಿ ನೀಡಬೇಕು ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಾದ ಪಾಂಡ್ವೆ ರಾಹುಲ್ ತುಕಾರಾಮ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆಯು ನೀಡಿದ ಅಂಶಗಳನ್ನು ಎಲ್ಲಾ ಹಂತದ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು. ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಇಲಾಖೆಯ ಕಾರ್ಯಯೋಜನೆಗೆ ಒಳಪಡಬೇಕು. ಈ ಕಾರ್ಯಾಗಾರದಲ್ಲಿ ನೀಡುವ ಸಂಪನ್ಮೂಲಗಳ ಪ್ರಕಾರ ಪ್ರತಿವಾರ ಮಾಡುವ ಹಂತ-1, 2, 3, 4 ಗಳ ಅನುಸಾರ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಬೇಕು. ಈ ಬಾರಿ ನೀಡಿದ ಬ್ಲೂ ಪ್ರಿಂಟ್ ಪ್ರಕಾರ ನವೆಂಬರ್, ಡಿಸೆಂಬರ್-ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪರಿಣಾಮಕಾರಿಯಾಗಿ ವಿಷಯ ವಸ್ತು ಪುನರಾವರ್ತನೆಗೊಳ್ಳಬೇಕು ಎಂದರು. ರಾಯಚೂರಿನ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಮಾತನಾಡಿ, ಈ ಬಾರಿ ರಾಯಚೂರು ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶವು ಕಳೆದ ಬಾರಿಗಿಂತ ಉತ್ತಮಪಡಿಸಬೇಕು. ಜೊತೆಗೆ ಇಲಾಖೆಯು ನೀಡಿದ ಎಲ್ಲಾ ಅಂಶಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಬೇಕು. ಕ್ರಿಯಾಯೋಜನೆಯಂತೆ ಕಾರ್ಯ ನಿರ್ವಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಪಾಲಕ ಪೋಷಕರ ಸಭೆ ಮಾಡಿ ಅವರೊಂದಿಗೆ ಚರ್ಚಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಬೇಕು ಎಂದು ಸೂಚನೆ ನೀಡಿದರು. ಕಾರ್ಯಾಗಾರದಲ್ಲಿ ನಾಲ್ಕು ಜಿಲ್ಲೆಗಳ ಆರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ 12 ವಾರಗಳ ಕಾರ್ಯಯೋಜನೆ ಸಿದ್ದಪಡಿಸಿದರು.  ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಪ್ರಕಾಶ್ ನಿಟ್ಟಾಲಿ, ರಾಯಚೂರಿನ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಈಶ್ವರ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕೆ.ಎಸ್.ಈ.ಎ.ಬಿ ಮತ್ತು ಡಿ.ಎಸ್.ಈ.ಆರ್.ಟಿ ಬೆಂಗಳೂರು ನಿರ್ದೇಶಕರಾದ  ಗೋಪಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 7:10 pm

ರಾಜ್ಯ ಸರಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆ ಆರಂಭಿಸಲಿದೆ : ಡಿ.ಕೆ.ಶಿವಕುಮಾರ್

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025

ವಾರ್ತಾ ಭಾರತಿ 18 Nov 2025 7:00 pm

ಪ್ರಪಂಚದಾದ್ಯಂತ X ಸೇವೆಯಲ್ಲಿ ವ್ಯತ್ಯಯ; ಸರ್ವರ್ ಡೌನ್

ಬೆಂಗಳೂರು, ನ.18: ಎಲಾನ್ ಮಸ್ಕ್ ಮಾಲೀಕತ್ವದ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಮಂಗಳವಾರ ಜಾಗತಿಕ ಮಟ್ಟದಲ್ಲಿ ಸೇವೆಯಲ್ಲಿ ವ್ಯತ್ಯಯವಾಗಿದೆ. ಲಕ್ಷಾಂತರ ಬಳಕೆದಾರರು ಲಾಗಿನ್, ಫೀಡ್, ಹೊಸ ಪೋಸ್ಟ್‌ಗಳನ್ನು ತೋರಿಸದಿರುವುದು ಹಾಗೂ ಅಪ್ಲಿಕೇಶನ್–ವೆಬ್‌ಸೈಟ್ ಎರಡಕ್ಕೂ ಪ್ರವೇಶ ಸಾಧ್ಯವಾಗದೇ ಸಮಸ್ಯೆ ಎದುರಿಸಿದರು. ಡೌನ್‌ಡೆಕ್ಟರ್ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5:15 ಕ್ಕೆ X ಕುರಿತು 11,500 ಕ್ಕೂ ಹೆಚ್ಚು ದೂರು ದಾಖಲಾಗಿವೆ. ಇವುಗಳಲ್ಲಿ 47% ಫೀಡ್ ಲೋಡ್ ಸಮಸ್ಯೆ, 30% ವೆಬ್‌ಸೈಟ್ ದೋಷ, 23% ಸರ್ವರ್ ಸಂಪರ್ಕ ವ್ಯತ್ಯಯ ಕುರಿತು ದೂರು ದಾಖಲಾಗಿದೆ. ಅಡಚಣೆಗೆ ಮೂಲ ಕಾರಣದ ಬಗ್ಗೆ ಎಕ್ಸ್ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ವಾರ್ತಾ ಭಾರತಿ 18 Nov 2025 6:58 pm

Tirupati : ಕಾಲ್ತುಳಿತ ಘಟನೆ ಮರುಕಳಿಸದಂತೆ ಟಿಟಿಡಿ ಎಚ್ಚರ - ವೈಕುಂಠ ಏಕಾದಶಿ, ವೈಕುಂಠದ್ವಾರ ದರ್ಶನದ ಸ್ಪಷ್ಟ ವೇಳಾಪಟ್ಟಿ ಪ್ರಕಟ

2025 Decembe Vaikunta Ekadasi : ವೈಕುಂಠದ್ವಾರ ದರ್ಶನ ಮತ್ತು ಹೊಸವರ್ಷಾಚರಣೆಯ ದಿನದಂದು ದರ್ಶನಕ್ಕೆ ತಿರುಮಲ ತಿರುಪತಿ ದೇವಸ್ಥಾನಂ, ಸ್ಪಷ್ಟವಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆ ಮೂಲಕ, ಕಡೇ ಗಳಿಗೆಯಲ್ಲಿ ಗೊಂದಲವಾಗುವುದನ್ನು ತಪ್ಪಿಸಲು ಈ ನಿರ್ಧಾರವನ್ನು ಟಿಟಿಡಿ ತೆಗೆದುಕೊಂಡಿದೆ.

ವಿಜಯ ಕರ್ನಾಟಕ 18 Nov 2025 6:56 pm

Chamarajanagar | ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಲ್ಲಿಕತ್ರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಂಬೆಗಲ್ಲಿನ ಕೇತೇಗೌಡ (70) ಮೃತರು. ಕೇತೇಗೌಡ ಕೆಲಸ ನಿಮಿತ್ತ ತಮ್ಮ ದ್ವಿಚಕ್ರ ವಾಹನದಲ್ಲಿ ಒಡೆಯರಪಾಳ್ಯ ಗ್ರಾಮಕ್ಕೆ ಬರುತ್ತಿರುವಾಗ ಬೈಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪ್ರಮೋದ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಘಟನೆ ನಡೆದಂತಹ ಕೆಲ ದೂರದಲ್ಲಿ ಕಾಡಾನೆ ಒಂದೆಡೆ ನಿಂತಿರುವ ಬಗ್ಗೆ ಅರಿತ ಸಿಬ್ಬಂದಿಗಳು ಆನೆಯನ್ನು ಕಾಡಿಗೆ ಓಡಿಸುವಲ್ಲಿ ಸಫಲರಾಗಿದ್ದಾರೆ.

ವಾರ್ತಾ ಭಾರತಿ 18 Nov 2025 6:52 pm

ರಾಯಚೂರು | ಶರಬಣ್ಣ ಪಾಟೀಲ್, ಸೈಯದ್ ಸಾಬ ಮನ್ಸಲಾಪೂರ ಅವರಿಗೆ ಸಹಕಾರ ರತ್ನ ಪ್ರಶಸ್ತಿ: ಗಣ್ಯರಿಂದ ಸನ್ಮಾನ

ರಾಯಚೂರು: ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ನಿರ್ದೇಶಕರಾದ ಶರಬಣ್ಣ ಪಾಟೀಲ್ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮೀನುಗಾರರ ಸಹಕಾರ ಮಹಾಮಂಡಲದ ಸೈಯದ್ ಸಾಬ ಮನ್ಸಲಾಪೂರು ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ಸಹಕಾರ ಚಳುವಳಿಯ ಬೆಳವಣೆಗೆಗೆ ಇವರು ಸಲ್ಲಿಸಿರುವ ಅವಿರತ ಸೇವೆಗಾಗಿ ಈ ಪುರಸ್ಕಾರ ಲಭಿಸಿದೆ. ಬೆಂಗಳೂರಿನ ಗಾಯಿತ್ರಿ ವಿಹಾರ್ ಮೇಕ್ರಿ ಸರ್ಕಲ್ ಬಳಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಹಕಾರ ಇಲಾಖೆಯ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಿದರು. ಅದೇ ರೀತಿ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ  ಶರಬಣ್ಣ ಪಾಟೀಲ್ ಹಾಗೂ ಸೈಯದ್ ಸಾಬ ಇವರಿಗೆ ಸಚಿವರಾದ ಎನ್.ಎಸ್. ಭೋಸರಾಜು, ಶಾಸಕರಾದ ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಎ.ವಸಂತಕುಮಾರ್ ಹಾಗೂ ಇತರರು ಸನ್ಮಾನಿಸಿದ್ದರು.   ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ರಾಯಚೂರಿನ ಮುಖ್ಯ ಕಚೇರಿಯಲ್ಲಿ ಕೂಡ ಶರಬಣ್ಣ ಪಾಟೀಲ್ ಹಾಗೂ ಸೈಯದ್ ಸಾಬ ಅವರಿಗೆ ಸಂಘದ ಅಧ್ಯಕ್ಷ  ಜಯವಂತರಾವ್, ಉಪಾಧ್ಯಕ್ಷ ಶಶಿಧರ ಪಾಟೀಲ್, ಮಲ್ಲನಗೌಡ ಪಾಟೀಲ್ ಇನ್ನಿತರರು ಸನ್ಮಾನಿಸಿ ಗೌರವಿಸಿದರು.

ವಾರ್ತಾ ಭಾರತಿ 18 Nov 2025 6:50 pm

ಶಿಕ್ಷಣವನ್ನು ಎಂದಿಗೂ ನಿಲ್ಲಿಸಬೇಡಿ: ವಿದ್ಯಾರ್ಥಿಗಳಿಗೆ ಝಕರಿಯಾ ಜೋಕಟ್ಟೆ ಹಿತವಚನ

ಅಲ್ ಇಬಾದ ಇಂಡಿಯನ್ ಸ್ಕೂಲ್‌ನಲ್ಲಿ ರಾಜ್ಯೋತ್ಸವ ಪುರಸ್ಕೃತ ಝಕರಿಯಾ ಜೋಕಟ್ಟೆ ಅವರಿಗೆ ಸನ್ಮಾನ ಸಮಾರಂಭ

ವಾರ್ತಾ ಭಾರತಿ 18 Nov 2025 6:46 pm

ಮಹಿಳೆಯವರಿಗೆ ಗುಡ್‌ನ್ಯೂಸ್‌; 4000 ಗೃಹ ಲಕ್ಷ್ಮಿ ಹಣ ಬಿಡುಗಡೆ: ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು, ನವೆಂಬರ್‌ 18: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಗುಡ್‌ನ್ಯೂಸ್‌ ನೀಡಿದ್ದಾರೆ. ಬಾಕಿ ಇರುವಂತ ಸೆಪ್ಟೆಂಬರ್, ಅಕ್ಟೋಬರ್ ಎರಡು ತಿಂಗಳ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ

ಒನ್ ಇ೦ಡಿಯ 18 Nov 2025 6:44 pm