SENSEX
NIFTY
GOLD
USD/INR

Weather

22    C
... ...View News by News Source

Toyota Mini Land Cruiser FJ: ಬೆಲೆ, ವಿನ್ಯಾಸ , ರಿಲೀಸ್ ಡೇಟ್ – ಇಲ್ಲಿದೆ ಸಂಪೂರ್ಣ ವಿವರ

ಟೊಯೋಟಾ ತನ್ನ ಪ್ರಸಿದ್ಧ ಲ್ಯಾಂಡ್ ಕ್ರೂಸರ್ ಸರಣಿಯನ್ನು ವಿಸ್ತರಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ಮಿನಿ ಲ್ಯಾಂಡ್ ಕ್ರೂಸರ್ FJ concept ಅನ್ನು Japan Mobility Show 2025ರಲ್ಲಿ ಅಧಿಕೃತವಾಗಿ ಪ್ರದರ್ಶಿಸಿದೆ. ಕಾಂಪ್ಯಾಕ್ಟ್ ಗಾತ್ರ, ಕ್ಲಾಸಿಕ್ FJ40 ವಿನ್ಯಾಸದ ಮರುರೂಪ ಮತ್ತು соврем modern Toyota ತಂತ್ರಜ್ಞಾನಗಳ ಸಂಯೋಜನೆಯಾಗಿ ಬಂದಿರುವ ಈ concept SUV ಜಾಗತಿಕ ಮಟ್ಟದಲ್ಲಿ ದೊಡ್ಡ ಗಮನ ಸೆಳೆದಿದೆ. Japan Mobility Show 2025ರಲ್ಲಿ ಅಧಿಕೃತ ಪ್ರದರ್ಶನ ಟೊಯೋಟಾ ಗ್ಲೋಬಲ್ ತಂಡವು ಮಿನಿ ಲ್ಯಾಂಡ್ ಕ್ರೂಸರ್ FJ ... Read more The post Toyota Mini Land Cruiser FJ: ಬೆಲೆ, ವಿನ್ಯಾಸ , ರಿಲೀಸ್ ಡೇಟ್ – ಇಲ್ಲಿದೆ ಸಂಪೂರ್ಣ ವಿವರ appeared first on Karnataka Times .

ಕರ್ನಾಟಕ ಟೈಮ್ಸ್ 9 Dec 2025 7:32 pm

ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ, ಡಿ.9: ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ರವಿವಾರ ಎ.ಎಚ್. ದಾರಿಮಿಯ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಮುಸ್ತಫಾ, ಕಾರ್ಯದರ್ಶಿಯಾಗಿ ಸಾದಿಕ್ ಕೆ., ಜೊತೆ ಕಾರ್ಯದರ್ಶಿ ನಝೀರ್, ಲೆಕ್ಕಪರಿಶೋಧಕರಾಗಿ ಅಸ್ಫಾಕ್ ಆಯ್ಕೆಯಾದರು. ಸದಸ್ಯರಾಗಿ ಕೆ.ಮುಹಮ್ಮದ್ (ಮೋನಾಕ), ಹನೀಫ್ ಬಿ.ಕೆ., ಫಾರೂಕ್, ಆಸಿಫ್ ಕೆ., ಇಮ್ತಿಯಾಝ್, ತೀಫ್, ಇಂಝಾಮ್ ಕೆ., ಅಜ್ಮಾನ್ ಕೆ. ಆಯ್ಕೆಯಾಗಿದ್ದಾರೆ.

ವಾರ್ತಾ ಭಾರತಿ 9 Dec 2025 7:30 pm

ಮಕ್ಕಳಿಗಿಲ್ಲ ಉದ್ಯೋಗದ ಚಿಂತೆ; ಹೆತ್ತವರಿಗಿದೆ ಖರ್ಚು ವೆಚ್ಚದ ಆತಂಕ!

ಎಐ ಉದ್ಯೋಗ ಕಸಿತ ಮತ್ತು ರೂಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿ ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ? ಕೃತಕ ಬುದ್ಧಿಮತ್ತೆ ಅಥವಾ ಎಐ ಅನೇಕ ಉದ್ಯಮಗಳನ್ನು ಪುನರ್ರೂಪಿಸುತ್ತಿರುವ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿರುವಾಗ ಹೊಸದಾಗಿ ಉದ್ಯೋಗ ಜಗತ್ತನ್ನು ಪ್ರವೇಶಿಸುತ್ತಿರುವವರು ಮತ್ತು ಅವರ ಹೆತ್ತವರ ಆತಂಕವೇನು? ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ? ಹುಬ್ಬಳ್ಳಿ ನಿವಾಸಿಯಾಗಿರುವ ಸಂಗಮೇಶ್ ಮೆಣಸಿನಕಾಯಿ ಅವರ ಮಗಳು ಇದೀಗ ಮೊದಲನೇ ವರ್ಷ ಪಿಯುಸಿ ಓದುತ್ತಿದ್ದಾರೆ. ಆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಮಗಳನ್ನು ವಿದೇಶಕ್ಕೆ ಕಳುಹಿಸುವ ಯೋಜನೆ ಹೊಂದಿದ್ದಾರೆ. “ಮಗಳು ಎಂಜಿನಿಯರಿಂಗ್ ಓದುವ ಉದ್ದೇಶ ಹೊಂದಿದ್ದಾರೆ. ಜಪಾನ್ ಅಥವಾ ಜರ್ಮನಿಗೆ ಕಳುಹಿಸಬೇಕೆನ್ನುವ ಯೋಜನೆಯಿದೆ. ಆ ಎರಡು ದೇಶಗಳು ಕಲಿಕೆ/ಗಳಿಕೆ ಎರಡನ್ನೂ ಪ್ರೋತ್ಸಾಹಿಸುವ ದೇಶಗಳಿಗೆ ಕಳುಹಿಸಲು ನಿರ್ಧರಿಸಿದ್ದೇವೆ. ಆದರೆ ಅತಿಯಾದ ಖರ್ಚು-ವೆಚ್ಚಗಳಾಗುವುದಾದಲ್ಲಿ ಕಳುಹಿಸುವುದಿಲ್ಲ. ಭಾರತದಲ್ಲಿ ಓದಿಗೆ ಎಷ್ಟು ಖರ್ಚಾಗುತ್ತದೆಯೋ ಅಷ್ಟೇ ಖರ್ಚಾಗುವುದಾದಲ್ಲಿ ಕಳುಹಿಸುತ್ತೇವೆ” ಎಂದು ಅಭಿಪ್ರಾಯಪಟ್ಟರು. ಎಐ ಉದ್ಯೋಗ ಕಡಿತ ಮಾಡುವ ಬಗ್ಗೆ ಸಂಗಮೇಶ್ ಅವರಿಗೆ ಚಿಂತೆಯಿಲ್ಲ “ಯಾವ ಕೋರ್ಸ್ ಮಾಡಿದರೆ ಉತ್ತಮ ಎನ್ನುವ ನಿರ್ಧಾರವನ್ನು ಮಗಳಿಗೇ ಬಿಟ್ಟಿದ್ದೇವೆ. ಆಕೆ ಪ್ರಸ್ತುತ ವೃತ್ತಿಪರ- ಉದ್ಯೋಗ ವಿಚಾರದಲ್ಲಿ ಸಾಕಷ್ಟು ಮಾಹಿತಿ ಹೊಂದಿದ್ದಾಳೆ. ಯಾವ ಉದ್ಯೋಗ ಉತ್ತಮ ಎನ್ನುವ ನಿರ್ಧಾರವನ್ನು ಆಕೆಗೇ ಬಿಟ್ಟಿದ್ದೇವೆ” ಎನ್ನುತ್ತಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಅದ್ಯಾಪಕಿಯಾಗಿರುವ ಶೈಲಶ್ರೀ ಅವರ ಪುತ್ರ ಜಾರ್ಜಿಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅವರ ಪ್ರಕಾರ, “ರೂಪಾಯಿ ಮೌಲ್ಯದಿಂದ ಏರುತ್ತಿರುವ ವೆಚ್ಚದ ಬಗ್ಗೆ ಕಳವಳವಿದೆ. ಇದೀಗ ಸ್ಥಿರವಾಗಿದ್ದ (ಮೊದಲು ಹೇಳಿದ್ದ) ಶುಲ್ಕ, ರೂಪಾಯಿ ಮೌಲ್ಯ ಕುಸಿತವಾದ ನಂತರ ಹತ್ತಿಪ್ಪತ್ತು ಸಾವಿರ ಹೆಚ್ಚಾಗಿದೆ. ವಿಭಿನ್ನ ವಿಶ್ವವಿದ್ಯಾಲಯಗಳ ನಿಯಮಗಳನ್ನು ಅನುಸರಿಸಿ ವೆಚ್ಚ ಏರಿಕೆ ಇರುತ್ತದೆ. ನನ್ನ ಮಗ ಕೆನ್ವಾಕರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಈ ಸಂಸ್ಥೆಗೆ ಅಮೆರಿಕದ ಜೊತೆಗೆ ಒಪ್ಪಂದವಿದೆ. ಹೀಗಾಗಿ ಅಮೆರಿಕದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಮಾತ್ರವಲ್ಲದೆ, ಇಲ್ಲಿ ಪದವಿ ಮುಗಿದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಕೂಡ ಕೊಡುತ್ತಾರೆ. ಉಳಿದಂತೆ ನಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಾರೆ ಎನ್ನುವುದನ್ನು ಅನುಸರಿಸಿದೆ.” ಮಂಗಳೂರಿನ ನಿವಾಸಿ ರಾಜೇಶ್ವರಿಯವರು ಇತ್ತೀಚೆಗೆ ತಮ್ಮ ಮಗನನ್ನು ಜರ್ಮನಿಗೆ ಕಳುಹಿಸಿದ್ದಾರೆ. ಅವರ ಮಗ ಜರ್ಮನಿಯಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಕಲಿಕೆಯಲ್ಲಿ ತೊಡಗಿದ್ದಾರೆ. ಅವರ ಪ್ರಕಾರ ಜರ್ಮನಿಯಲ್ಲಿ ಓದುವ ಸಂಪೂರ್ಣ ನಿರ್ಧಾರ ಮಗನದ್ದು! “ನಮಗೆ ಆತಂಕವಿದೆ. ಆದರೆ ಮಗ ಇಷ್ಟಪಟ್ಟಿದ್ದಾನೆ ಎಂದು ಕಳುಹಿಸಿದ್ದೇವೆ. ಸಾಲ ತೆಗೆಯಲು ನೆರವಾಗಿದ್ದು ಹೊರತುಪಡಿಸಿದರೆ ಎಲ್ಲಾ ನಿರ್ಧಾರ ಮಗನದ್ದೇ ಆಗಿದೆ” ಎಂದು ಅವರು ಹೇಳಿದರು. ಜರ್ಮನಿಯಲ್ಲಿ ಸ್ನಾತಕೋತ್ತರ ಓದು ಉಚಿತವಾಗಿ ಮಾಡುವ ಅವಕಾಶವಿದೆ. ಮೊದಲ ವರ್ಷದ ಓದಿಗೆ ಹಣ ಕಟ್ಟಿದರೆ ನಂತರ ಅಲ್ಲಿ ಕಲಿಕೆ/ಗಳಿಕೆಗೆ ಅವಕಾಶವಿದೆ. ಉಳಿದ ಎಲ್ಲಾ ಖರ್ಚು ಉಚಿತವಾಗಿ ಹೋಗುತ್ತದೆ. ಹೀಗಾಗಿ ಭಾರತೀಯರು ಸ್ನಾತಕೋತ್ತರ ಓದಿಗೆ ಜರ್ಮನಿಗೆ ಹೋಗಲು ಹೆಚ್ಚು ಬಯಸುತ್ತಾರೆ. ಮೂಲತಃ ಮಂಗಳೂರಿನವರಾಗಿದ್ದು ಕಳೆದೊಂದು ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಗರ್ಟ್ಯೂಡ್ ಅವರ ಮಗಳು ಆಸ್ಟ್ರೇಲಿಯದಲ್ಲಿ ಇತ್ತೀಚೆಗಷ್ಟೇ ಓದು ಮುಗಿಸಿದ್ದಾರೆ. ಮನಶ್ಯಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅವರು ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. “ವಿದೇಶದಲ್ಲಿ ದುಬಾರಿ ವಿದ್ಯಾಭ್ಯಾಸ ಮುಗಿಸಿದ ನಂತರದ ಭವಿಷ್ಯ ಏನು ಎನ್ನುವ ಚಿಂತೆ ನಮಗಿದೆ. ಆದರೆ ಮಕ್ಕಳಿಗೆ ಆ ಚಿಂತೆಯಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು. ಎಐನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ತೊಂದರೆ ಬಾರದು ಎಂದು ಹೇಳುತ್ತಾರೆ. ಆದರೆ ನಾಳೆ ಉದ್ಯೋಗ ನಷ್ಟವಾದರೆ ಏನು ಮಾಡುತ್ತಾರೆ ಎನ್ನುವ ಆತಂಕ ನನ್ನದು” ಎಂದು ಅಭಿಪ್ರಾಯಪಟ್ಟರು. ಈಗಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಬಯಸುತ್ತಾರೆ. ಅದು ವಿದೇಶಿ ಶಿಕ್ಷಣವಿರಲಿ ಅಥವಾ ವಿಷಯದ ಆಯ್ಕೆಯೇ ಇರಲಿ. ತಮ್ಮ ಭವಿಷ್ಯವನ್ನು ಸ್ವತಃ ನಿರ್ಧರಿಸುವಲ್ಲಿ ಜೆನ್ ಝೀ ಪ್ರಸಿದ್ಧರು. ಸಂಗಮೇಶ್ ಮಗಳು, ಗರ್ಟ್ಯೂಡ್ ಮಗಳು ಅಥವಾ ರಾಜೇಶ್ವರಿಯ ಮಗ ವಿದೇಶದಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಸ್ವಯಂ ನಿರ್ಧರಿಸಿದ್ದಾರೆ. ಆದರೆ ಇಂತಹ ನಿರ್ಧಾರಗಳು ಪ್ರತಿ ಬಾರಿ ಸರಿಯಾಗಿರುತ್ತದೆಯೆ? ಮಂಗಳೂರು ಮೂಲದ ಅನುವಾದಕಿ/ ಪತ್ರಕತರ್ತೆ ಫ್ಲೋರಿನ್ ಅವರು ಮಗ ಆಕ್ಚುವರಲ್ ಸೈನ್ಸ್ (ಅಂಕಿ-ಅಂಶಗಳಿಗೆ ಸಂಬಂಧಿಸಿ) ಸ್ನಾತಕೋತ್ತರ ಪದವಿ ಪಡೆದು ಇದೀಗ ಎಐ ಸಂಬಂಧಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಅವರ ಪ್ರಕಾರ ಪರಿಣತಿ ಇದ್ದವರು ಬದಲಾಗುವ ತಂತ್ರಜ್ಞಾನಕ್ಕೆ ಸಮವಾಗಿ ಉದ್ಯೋಗವನ್ನು ಹುಡುಕಿಕೊಳ್ಳುತ್ತಾರೆ. ಎಐ ಉದ್ಯೋಗ ಕಸಿದುಕೊಳ್ಳುವುದು ನಿಜವಾದರೂ, ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗಬಹುದು. ಹೀಗಾಗಿ ಮಗನ ಭವಿಷ್ಯದ ಬಗ್ಗೆ ಹೆಚ್ಚಿನ ಆತಂಕವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 9 Dec 2025 7:29 pm

ಡಿ.29-30ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ದ.ಕ.ಜಿಲ್ಲಾ ಪ್ರವಾಸ

ಮಂಗಳೂರು,ಡಿ.9: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಡಿ.29 ಮತ್ತು 30ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಡಿ.29ರಂದು ಪೂ.11ರಿಂದ ಆಯೋಗದ ವತಿಯಿಂದ ದ.ಕ.ಜಿಲ್ಲೆಯ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಗೆ ಏರ್ಪಡಿಸಿರುವ ತರಬೇತಿ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳೊಂದಿಗೆ (ಜಿಲ್ಲೆ ಹಾಗೂ ತಾಲೂಕು ಮಟ್ಟ) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009’ರ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಯಲಿದೆ. ಡಿ.30ರಂದು ಪೂ.11ಕ್ಕೆ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ ಕಾಯ್ದೆ -1986 ರ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 9 Dec 2025 7:27 pm

ಟಾಕ್ಸಿಸ್ ಗೆ ನೂರು ದಿನಗಳು ಬಾಕಿ; ಕೌಂಟ್ ಡೌನ್ ಆರಂಭಿಸಿದ ಯಶ್!

ಖ್ಯಾತ ನಟ ಯಶ್ ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಸಿನೆಮಾ ಬಿಡಗಡೆಗೆ ʼಕೌಂಟ್ ಡೌನ್ʼ ಆರಂಭಿಸಿದ್ದಾರೆ. ‘ಟಾಕ್ಸಿಸ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಸಿನಿಮಾ ಮಾರ್ಚ್ 19ರಂದು ಯುಗಾದಿಗೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ನೂರು ದಿನಗಳು ಬಾಕಿ ಇವೆ. ಮಾರ್ಚ್ 19 ಗುರುವಾರ ಬರುವ ಕಾರಣ ಸಿನಿಮಾಗೆ ದೀರ್ಘ ವಾರಾಂತ್ಯ ಸಿಗುತ್ತದೆ. ಹೀಗಾಗಿ ಸಿನಿಮಾಗೆ ಉತ್ತಮ ಓಪನಿಂಗ್ ನಿರೀಕ್ಷೆಯಲ್ಲಿದ್ದಾರೆ ಯಶ್. ಸ್ನಾನದ ತೊಟ್ಟಿಯಲ್ಲಿ ಕುಳಿತ ಪೋಸ್ಟರ್: ಪೋಸ್ಟರ್ ನಲ್ಲಿ ಯಶ್ ರಕ್ತ ಸಿಕ್ತ ಸ್ನಾನದ ತೊಟ್ಟಿಯಲ್ಲಿ ಕೂದಲು ಬಿಚ್ಚಿ ಹಾಕಿ ಬೆನ್ನು ತೋರಿಸಿ ಕುಳಿತಿದ್ದಾರೆ. ಅವರ ಮುಖ ಮರೆಯಾಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಹಾಲಿವುಡ್ ನಿರ್ದೇಶಕರ ಸಾಹಸ ದೃಶ್ಯ: “ಟಾಕ್ಸಿಸ್” ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿಯವರ ಛಾಯಾಗ್ರಹಣವಿದೆ. ಕೆಜಿಎಫ್ ಗೆ ಸಂಗೀತ ನೀಡಿರುವ ರವಿ ಬಸ್ರೂರ್ ‘ಟಾಕ್ಸಿಸ್’ಗೂ ಸಂಗೀತ ನೀಡಿದ್ದಾರೆ. ‘ಜಾನ್ ವಿಕ್’ ಸಿನಿಮಾದ ಕೆಲಸಕ್ಕಾಗಿ ಪ್ರಸಿದ್ಧಿ ಪಡೆದಿರುವ ಹಾಲಿವುಡ್ ಚಲನಚಿತ್ರ ನಿರ್ದೇಶಕ ಜೆಜೆ ಪೆರ್ರಿ ಸಿನಿಮಾದ ಕೆಲವು ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ಹೀಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ: ಟಾಕ್ಸಿಕ್’ ಸಿನಿಮಾ ಚಿತ್ರಕತೆಯನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಜೊತೆಗೂಡಿ ಬರೆದಿದ್ದಾರೆ. ಗೀತು ಮೋಹನ್ ದಾಸ್ ಈ ಸಿನಿಮಾದ ನಿರ್ದೇಶಕರೂ ಹೌದು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಜೊತೆಗೂಡಿ ನಿರ್ದೇಶಿಸಲಾಗಿರುವ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಉದ್ದೇಶವಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಶನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಮುಂದಿನ ವರ್ಷದ ಅತಿ ದೊಡ್ಡ ರಿಲೀಸ್ ಎನ್ನಲಾಗುತ್ತಿದೆ.

ವಾರ್ತಾ ಭಾರತಿ 9 Dec 2025 7:24 pm

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮದ್ಯದಂಗಡಿ ಮುಚ್ಚಲು ಆದೇಶ

ಮಂಗಳೂರು,ಡಿ.9 : ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಡಿ.11ರಂದು ಚುನಾವಣೆ ಮತ್ತು ಡಿ.13ರಂದು ಮತ ಎಣಿಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೇರಳದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಪ್ರದೇಶಗಳಲ್ಲಿ ಮತದಾನ ಮತ್ತು ಮತ ಎಣಿಕೆಯ ದಿನಗಳಂದು 3 ಕಿ.ಮೀ. ವ್ಯಾಪ್ತಿಯ ಗಡಿಭಾಗಗಳಲ್ಲಿ ಶುಷ್ಕದಿನ ಘೋಷಿಸಲಾಗಿದೆ. ಹಾಗಾಗಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳು ಮತ್ತು ಕಾಸರಗೋಡು ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಗಡಿಭಾಗದಿಂದ ದ.ಕ. ಜಿಲ್ಲೆಯ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಮದ್ಯದಂಗಡಿ/ಬಾರ್ ಗಳನ್ನು ಡಿ.9ರ ಸಂಜೆ 6ರಿಂದ ಡಿ.11ರ ಸಂಜೆ 6ರ ತನಕ ಮತ್ತು ಮತ ಎಣಿಕೆಯ ನಿಮಿತ್ತ ಡಿ.12ರಂದು ಮಧ್ಯರಾತ್ರಿ 12ರಿಂದ ಡಿ.13ರ ಮಧ್ಯರಾತ್ರಿ 12ರವರೆಗೆ ತನಕ ಮುಚ್ಚುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿದ್ದಾರೆ.

ವಾರ್ತಾ ಭಾರತಿ 9 Dec 2025 7:23 pm

ಮಂಗಳೂರು | ನೈಸರ್ಗಿಕ ಕೃಷಿಯಿಂದ ಆರೋಗ್ಯಯುತ ಸಮಾಜ ಸೃಷ್ಟಿ: ಹೊನ್ನಪ್ಪ ಗೌಡ

ಮಂಗಳೂರು, ಡಿ.9: ನೈಸರ್ಗಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ರಾಸಾಯನಿಕ ಮುಕ್ತ ತರಕಾರಿ ಹಾಗೂ ಬೆಳೆಗಳು ದೊರಕಿ ಜನರು ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ತಿಳಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕೇಂದ್ರ ಸರಕಾರ, ಕೃಷಿ ಇಲಾಖೆ, ದ.ಕ. ಜಿಪಂ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನೈಸರ್ಗಿಕ ಕೃಷಿ ಕುರಿತು ಐದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರದ ನೀತಿಯಂತೆ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತಿದ್ದು, ಸಾಂಪ್ರದಾಯಿಕವಾಗಿ ಪದ್ಧತಿ ಹಾಗೂ ಜಾನುವಾರು ಆಧಾರಿತ ಕೃಷಿ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ 2025ರ ಫೆಬ್ರವರಿಯಲ್ಲಿ ಸರಕಾರ ಮಾರ್ಗಸೂಚಿ ಹೊರಡಿಸಿದೆ. ಮಣ್ಣಿನ ಆರೋಗ್ಯ ಕಾಪಾಡುವುದು, ನೀರಿನ ಗುಣಮಟ್ಟ ಪರಿಶೀಲಿಸುವುದು ಮತ್ತು ಪ್ರಾಕೃತಿಕವಾಗಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುವುದು ಇದರ ಉದ್ದೇಶವಾಗಿದೆ ಎಂದರು. ಮುಂದಿನ ಮೂರು ವರ್ಷದವರೆಗೆ ಈ ಯೋಜನೆ ಜಾರಿಯಲ್ಲಿದ್ದು, ರೈತರಿಗೆ ಕೃಷಿ ಪರಿಕರಗಳ ವೆಚ್ಚ ತಗ್ಗಿಸಿ, ಯಾವುದೇ ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಇಲ್ಲದೆ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೊನ್ನಪ್ಪ ಗೌಡ ತಿಳಿಸಿದರು. ಉಪ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಮಣ್ಣು, ನೀರು, ಗಾಳಿ ಇವುಗಳು ಕೃಗೆ ಪೂರಕವಾದ ನೈಸರ್ಗಿಕ ಅಂಶಗಳಾಗಿವೆ. ಪರಿಸರಕ್ಕೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ನಡೆಸುವುದು, ಮಣ್ಣಿನಲ್ಲಿ ಸಾವಯವ ಇಂಗಾಲ ಜಾಸ್ತಿ ಮಾಡುವುದು ಮತ್ತು ರಾಸಾಯನಿಕ ಬಳಕೆ ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳಿಗೆ ಹೆಚ್ಚು ಬೇಡಿಕೆ ಇದೆ. ಇದನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಸಲು ಮತ್ತು ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೃಷಿ ವಿಜ್ಞಾನ ಕೇಂದ್ರವು ಶ್ರಮಿಸುತ್ತಿದೆ ಎಂದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ತರಬೇತಿ ಕೈಪಿಡಿ ಬಿಡುಗಡೆ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ಸ್ವಾಗತಿಸಿದರು. ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ವಂದಿಸಿದರು.

ವಾರ್ತಾ ಭಾರತಿ 9 Dec 2025 7:21 pm

ನ್ಯಾ.ಗವಾಯಿವರ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ ಗೆ ಚಪ್ಪಲಿಯೇಟು; ವೀಡಿಯೊ ವೈರಲ್

ಹೊಸದಿಲ್ಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು CJI ಆಗಿದ್ದಾಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ವೇಳೆ ಅವರ ಮೇಲೆ ಶೂ ಎಸೆದು ಸುದ್ದಿಯಾಗಿದ್ದ ʼವಿವಾದಿತʼ ವಕೀಲ ರಾಕೇಶ್ ಕಿಶೋರ್ ಗೆ ಮಂಗಳವಾರ ಚಪ್ಪಲಿಯೇಟು ಕೊಟ್ಟಿರುವ ಘಟನೆ ನಡೆದಿದೆ. ದಿಲ್ಲಿಯ ಕರ್ಕಾರ್ಡೂಮಾ ನ್ಯಾಯಾಲಯ ಸಂಕೀರ್ಣದಲ್ಲಿ ಆತನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. हिंसा का जवाब हिंसा नहीं हो सकता है! इनको पहचानिए! ये वही राकेश किशोर हैं जिन्होंने पूर्व CJI जस्टिस गवई पर जूता फेंका था। ये तस्वीर दिल्ली के कड़कड़डूमा कोर्ट परिसर की है। pic.twitter.com/XDFECWZK1p — Prabhakar Kumar Mishra (@PMishra_Journo) December 9, 2025 ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಕಿಶೋರ್ ಗೆ ಚಪ್ಪಲಿಯನ್ನು ಎತ್ತಿ ಹೊಡೆಯಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಜನರು ತಕ್ಷಣ ಮಧ್ಯಪ್ರವೇಶಿಸಿ ದಾಳಿಯನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ದಾಳಿ ನಡೆಸಿದ ವ್ಯಕ್ತಿಯ ಮುಖ ಸ್ಪಷ್ಟವಾಗಿಲ್ಲದ ಕಾರಣ, ಅಪರಿಚ ವ್ಯಕ್ತಿಯ ಗುರುತು ಇನ್ನೂ ನಿಖರವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಚಪ್ಪಲಿಯೇಟು ಬೀಳುತ್ತಿದ್ದಂತೆ ಸ್ವತಃ ರಕ್ಷಣೆಗೆ ಮುಂದಾಗುವ ವಕೀಲ ರಾಕೇಶ್ ಕಿಶೋರ್, ನನ್ನ ಮೇಲೆ ನೀನು ಹಲ್ಲೆ ಮಾಡುತ್ತಿಯಾ…? ನನಗೆ ಹೊಡೆಯುತ್ತಿಯಾ? ಎಂದು ದಾಳಿಕೋರನನ್ನು ಹಿಮ್ಮೆಟ್ಟಿಸುವುದು ಕಾಣಿಸುತ್ತಿದೆ. ಈ ವೇಳೆ ರಾಕೇಶ್ ಸನಾತನ ಧರ್ಮಕ್ಕೆ ಜೈ ಎನ್ನುವುದು ವೀಡಿಯೊದಲ್ಲಿ ಕೇಳಿ ಬರುತ್ತದೆ. ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ನಲ್ಲಿ CJI ಗವಾಯಿಯವರಿದ್ದ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ ವಕೀಲ ರಾಕೇಶ್ ಕಿಶೋರ್, ಗವಾಯಿ ಅವರತ್ತ ಶೂ ಎಸೆದಿದ್ದ ಘಟನೆ ನಡೆದಿತ್ತು. ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದ್ದ ರಾಕೇಶ್, ಖಜುರಾಹೊದ ವಿಷ್ಣುವಿನ ಶಿರಚ್ಛೇದಿತ ವಿಗ್ರಹ ಪುನಃಸ್ಥಾಪನೆ ವಿಚಾರಣೆಯ ವೇಳೆ CJI ಗವಾಯಿ ನೀಡಿದ ಹೇಳಿಕೆಗಳನ್ನು ಟೀಕಿಸಿದ್ದ. ಬುಲ್ಡೋಝರ್ ಧ್ವಂಸಗಳ ಕುರಿತ ಗವಾಯಿ ಅವರ ಅಭಿಪ್ರಾಯಕ್ಕೂ ಆತ ವಿರೋಧ ವ್ಯಕ್ತಪಡಿಸಿದ್ದ. ಘಟನೆಯ ನಂತರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಿಶೋರ್ ನ ವಕೀಲ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಕೂಡ ಆತನ ಸದಸ್ಯತ್ವವನ್ನು ರದ್ದು ಮಾಡಿತ್ತು. ಅಟಾರ್ನಿ ಜನರಲ್ ಅವರ ಮೇಲಿನ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನೀಡಿದ್ದರೂ, ನಂತರ ಪೀಠವು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರಿರಲಿಲ್ಲ. ಮಂಗಳವಾರ ರಾಕೇಶ್ ಕಿಶೋರ್ ಮೇಲೆ ನಡೆದ ದಾಳಿಯ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಬಾರ್ ಅಸೋಸಿಯೇಷನ್ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಇದಕ್ಕೆ ಸಂಬಂಧಿಸಿ ದೂರು ದಾಖಲಾಗಿದೆಯೋ ಇಲ್ಲವೋ ಎಂಬುದೂ ತಿಳಿದುಬಂದಿಲ್ಲ ಎಂದು barandbench.com ವರದಿ ಮಾಡಿದೆ.

ವಾರ್ತಾ ಭಾರತಿ 9 Dec 2025 7:20 pm

ಬೀದರ್ | ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ಮೃತ್ಯು

ಬೀದರ್‌ : ಶಾಲಾ ವಾಹನ ಹರಿದು 8 ವರ್ಷದ ಬಾಲಕಿಯೊರ್ವಳು ಮೃತಪಟ್ಟ ಘಟನೆ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ಮಂಗಳವಾರ ಸಾಯಂಕಾಲ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಔರಾದ್ ತಾಲೂಕಿನ ಗಡಿಕುಶನೂರ್ ಗ್ರಾಮದ ರುತ್ವಿ (8) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯು ಬೀದರ್ ತಾಲೂಕಿನ ಜನಾವಾಡಾ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಳು. ಮಂಗಳವಾರ ಸಾಯಂಕಾಲ ಶಾಲಾ ವಾಹನದಲ್ಲಿ ಮನೆಗೆ ಬಂದ ಬಾಲಕಿ ಶಾಲಾ ವಾಹನದಿಂದ ಇಳಿದು ಪಕ್ಕದಲ್ಲಿ ನಿಂತಿದ್ದಳು. ಆಕೆ ನಿಂತಿದ್ದನ್ನು ಗಮನಿಸದ ಚಾಲಕ ಆಕೆಯ ಮೇಲೆಯೇ ವಾಹನ ಹರಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾರ್ತಾ ಭಾರತಿ 9 Dec 2025 7:17 pm

ಉಡುಪಿ | ಅಕ್ರಮ ವಲಸೆ ಪ್ರಕರಣ :10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2ವರ್ಷ ಜೈಲು ಶಿಕ್ಷೆ

ಉಡುಪಿ, ಡಿ.9: ಅಕ್ರಮವಾಗಿ ಭಾರತಕ್ಕೆ ಬಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ವಲಸಿಗರಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯ ಡಿ.8ರಂದು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಬಾಂಗ್ಲಾ ದೇಶದ ಪ್ರಜೆಗಳಾದ ಹಕೀಮ್ ಆಲಿ, ಸುಜೋನ್ ಎಸ್.ಕೆ ಯಾನೆ ಫಾರೂಕ್, ಇಸ್ಮಾಯಿಲ್ ಎಸ್.ಕೆ., ಮುಹಮ್ಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ ಯಾನೆ ಅಬ್ದುಲ್ ಕರೀಮ್, ಸಲಾಂ ಎಸ್.ಕೆ ಯಾನೆ ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ., ಮುಹಮ್ಮದ್ ಸೋಜಿಬ್ ಯಾನೆ ಎಂ.ಡಿ.ಅಲ್ಲಾಂ ಅಲಿ, ರಿಮೂಲ್ ಯಾನೆ ಅಬ್ದುಲ್ ರೆಹಮಾನ್, ಮುಹಮ್ಮದ್ ಇಮಾಮ್ ಶೇಖ್, ಮುಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೆ ಗುರಿಯಾದ ಆರೋಪಿಗಳು. 2024ರ ಅ.11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ಮಲ್ಪೆ ಪೊಲೀಸರು ವಿಚಾರಿಸಿದ್ದರು. ಆಗ ಇವರೆಲ್ಲ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದು ತಿಳಿದುಬಂತು. ಅದರಂತೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಇವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ನಡೆಸಿದ್ದು, ಉಳಿದ 3 ಮಂದಿ ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಒಟ್ಟು 10 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳ ವಿರುದ್ದ ಉಡುಪಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು ತಲಾ 10,000ರೂ. ದಂಡವನ್ನು ವಿಧಿಸಿ ಆದೇಶಿಸಿದೆ.

ವಾರ್ತಾ ಭಾರತಿ 9 Dec 2025 7:15 pm

ಬಿ ಖಾತಾಗೆ ಅವಕಾಶ; ಭೂ-ಪರಿವರ್ತನೆ, ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ಕೊಟ್ಟ ರಹೀಂ ಖಾನ್

ಬೆಳಗಾವಿ, ಡಿಸೆಂಬರ್‌ 09: ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ವಿನ್ಯಾಸಗಳ, ಗ್ರಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುತ್ತಿದ್ದು, ಇದರಿಂದಾಗಿ ಭೂ-ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು. ಪರಿಷತ್ತಿನಲ್ಲಿ ಡಿಸೆಂಬರ್.09‌ ರಂದು ಪದವೀಧರರ ಕ್ಷೇತ್ರದ ಸದಸ್ಯರಾದ ರಾಮೋಜಿಗೌಡ

ಒನ್ ಇ೦ಡಿಯ 9 Dec 2025 7:11 pm

ʻಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದಿದ್ದು ತಪ್ಪು ಕ್ಷಮಿಸಿʼ; ಟೀಕೆಗೆ ಮಣಿದು ಯು-ಟರ್ನ್ ಹೊಡೆದ ಮೇಘನಾ ಫುಡ್ಸ್

ಮೇಘನಾ ಫುಡ್ಸ್‌ ಹೋಟೆಲ್‌ವೊಂದರಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್‌ ಬಳಸಬೇಡಿ, ಮೆಟ್ಟಿಲು ಬಳಸಿ ಎಂದು ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಛೀಮಾರಿ ಹಾಕುತ್ತಿದ್ದಂತೆ ಎಚ್ಚೆತ್ತ ಮೇಘನಾ ಫುಡ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಕ್ಷಮೆಯಾಚಿಸಿದೆ. ನಮ್ಮ ಲಾಭದ ಪ್ರಮುಖ ಪಾಲುದಾರರು ನೀವು. ಪೋಸ್ಟರ್‌ ಹಾಕಿದ್ದು ತಪ್ಪು ನಮ್ಮನ್ನು ಕ್ಷಮಿಸಿ ಎಂದು ಕೇಳಿಕೊಂಡಿದೆ. ನಿಮಗೆ ಲಾಭವಷ್ಟೇ ಮುಖ್ಯ ಪಾಲುದಾರರಲ್ಲ ಎಂದು ಜನರು ಕಿಡಿಕಾರಿದ್ದಾರೆ.

ವಿಜಯ ಕರ್ನಾಟಕ 9 Dec 2025 7:07 pm

ಮಂಗಳೂರು | ಕನಕದಾಸರು, ಬ್ರಹ್ಮಶ್ರೀ ನಾರಾಯಣ ಗುರುಗಳು ಬಹುತ್ವ, ಬಂಧುತ್ವ ಸಾರಿದ ಸಂತರು : ದೇರ್ಲ

ʼಕನಕದಾಸರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳು’ ಉಪನ್ಯಾಸ

ವಾರ್ತಾ ಭಾರತಿ 9 Dec 2025 7:06 pm

ಕಡೂರು ಮೂಲದ ಯೋಧ ರಾಜಸ್ಥಾನದಲ್ಲಿ ಮೃತ್ಯು

ಚಿಕ್ಕಮಗಳೂರು: ರಾಜಸ್ಥಾನದ ಬಿಕಾನೇರ್ ನಲ್ಲಿ ಬಿಎಸ್‍ಎಫ್ ಪಡೆಯ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಕಡೂರು ತಾಲೂಕಿನ ಗಿರೀಶ್ (37) ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ. ಕಡೂರು ತಾಲೂಕು ಜೋಡಿ ತಿಮ್ಮಾಪುರ ಗ್ರಾಮದವರಾದ ಗಿರೀಶ್ ಅವರು ಗಡಿ ಭದ್ರತಾ ಪಡೆಯಲ್ಲಿ ಕಳೆದ 18 ವರ್ಷಗಳಿಂದ ಯೋಧರಾಗಿ ಕೆಲಸ ಮಾಡುತ್ತಿದ್ದು, ಸದ್ಯ ಅವರು ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಡಿ.8ರಂದು ಗಿರೀಶ್ ಅವರಿಗೆ ವಾಂತಿಯಾದ ಕಾರಣಕ್ಕೆ ವಿಶ್ರಾಂತಿಗೆ ಕಳುಹಿಸಲಾಗಿತ್ತು. ಈ ವೇಳೆ ಅವರು ಕುಟುಂಬಸ್ಥರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದು, ಆರೋಗ್ಯವಾಗಿದ್ದೇನೆಂದು ತಿಳಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ಮಂಗಳವಾರ ಬೆಳಗ್ಗೆ ಬಿಎಸ್‍ಎಫ್ ಅಧಿಕಾರಿಗಳು ಗಿರೀಶ್ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ಗಿರೀಶ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಮೃತದೇಹವನ್ನು ಬೆಂಗಳೂರಿಗೆ ಕಳುಹಿಸಲಾಗುವುದು, ಅಲ್ಲಿಂದ ಜೋಡಿ ತಿಮ್ಮಾಪುರಕ್ಕೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಬುಧವಾರ ಸಂಜೆ ಜೋಡಿ ತಿಮ್ಮಾಪುರದಲ್ಲಿ ಗಿರೀಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಗಿರೀಶ್ ಕುಟುಂಬಸ್ಥರು ತಿಳಿಸಿದ್ದಾರೆ.

ವಾರ್ತಾ ಭಾರತಿ 9 Dec 2025 6:55 pm

E Khata: ಹಳೇ ಪದ್ದತಿಯಲ್ಲಿ ಇ-ಖಾತಾ ನೀಡಲು ವ್ಯವಸ್ಥೆ: ಬಿಗ್‌ ಅಪ್‌ಡೇಟ್‌ ಕೊಟ್ಟ ಡಿ.ಕೆ. ಶಿವಕುಮಾರ್

ಬೆಳಗಾವಿ, ಡಿಸೆಂಬರ್‌ 09: ಖಾತೆ ವಿಲೇವಾರಿಗೆ ತಂದಿದ್ದ ರೌಂಡ್‌ ರಾಬಿನ್‌ ಪದ್ಧತಿಯನ್ನು ರದ್ದು ಮಾಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತೆ ಹಂಚಿಕೆಗೆ 6,450 ಅರ್ಜಿಗಳು ಮಾತ್ರ ಬಾಕಿಯಿರುವ ಕಾರಣಕ್ಕೆ ಹಳೆ ಪದ್ಧತಿಯಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಗೋಪಾಲಯ್ಯ ಅವರು ಜಿಬಿಎ ವ್ಯಾಪ್ತಿಯಲ್ಲಿ ಇ

ಒನ್ ಇ೦ಡಿಯ 9 Dec 2025 6:45 pm

ಸಿಎಂಗೆ ಸಾಲ ರೈಟ್-ಆಫ್‌ಗೂ ಸಾಲಮನ್ನಾಗೂ ವ್ಯತ್ಯಾಸ ಗೊತ್ತಿಲ್ಲ: ಅಶೋಕ್‌

16 ಬಜೆಟ್‌ಗಳನ್ನು ಮಂಡಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ವಯಂ-ಘೋಷಿತ ಆರ್ಥಿಕ ತಜ್ಞರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೂ ಸಾಲ ವಜಾ ಮತ್ತು ಸಾಲಮನ್ನಾ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌ ಹಂಚಿಕೊಂಡು ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಸಾಲ ರೈಟ್-ಆಫ್‌ಗೂ ಸಾಲ ಮನ್ನಾಗೂ ವ್ಯತ್ಯಾಸ ಗೊತ್ತಿಲ್ಲದ

ಒನ್ ಇ೦ಡಿಯ 9 Dec 2025 6:43 pm

Konaje | ಉಳ್ಳಾಲ ಬಂಟರ ಸಂಘದ ವತಿಯಿಂದ ಪುಷ್ಪರಾಜ್ ಶೆಟ್ಟಿ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕೊಣಾಜೆ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರನ್ನು ಉಳ್ಳಾಲ ವಲಯ ಬಂಟರ ಸಂಘದ ವತಿಯಿಂದ ಭಾನುವಾರ ಅಸೈಗೋಳಿಯ ಬಂಟರ‌‌ ಸಂಘದ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್ ಅವರು, ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಬಂಟರ ಸಂಘದ ವತಿಯಿಂದ ನಡೆಯುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಪತ್ರಕರ್ತರ ಸಂಘವು ಕೂಡಾ ಸದಾ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಾ ಬಂದಿದೆ. ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಕ್ಷೇಮಾಭಿವೃದ್ಧಿಯೊಂದಿಗೆ ಜನಪರ ಕಾಳಜಿಯ ಅನೇಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಬಂಟರ ಸಂಘದ ವತಿಯಿಂದ ನಡೆದ ಸನ್ಮಾನವು ಜವಬ್ಧಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ,ಕೋಶಾಧಿಕಾರಿ ಯಶವಂತ ಶೆಟ್ಟಿ ಪಿಲಾರ್ ಉಪಾಧ್ಯಕ್ಷೆ ಮಲ್ಲಿಕಾ ಭಂಡಾರಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಯಾದ ಆನಂದ ಶೆಟ್ಟಿ ಸ್ವಾಗತಿಸಿದರು. ವಿವೇಕ್ ರೈ ವಂದಿಸಿದರು.

ವಾರ್ತಾ ಭಾರತಿ 9 Dec 2025 6:38 pm

ರೌಂಡ್‌ ರಾಬಿನ್‌ ಪದ್ದತಿ ರದ್ದು; ಹಳೆ ಪದ್ಧತಿಯಲ್ಲೇ ಆಸ್ತಿಗಳ ಇ - ಖಾತೆ ಅರ್ಜಿ ವಿಲೇವಾರಿ: ಡಿಸಿಎಂ ಡಿಕೆ ಶಿವಕುಮಾರ್‌

ಖಾತೆ ವಿಲೇವಾರಿಗೆ ರೌಂಡ್‌ ರಾಬಿನ್‌ ಪದ್ಧತಿ ರದ್ದುಗೊಳಿಸಿ ಹಳೆಯ ಪದ್ಧತಿಯಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಎರಡು ಘಟಕ ಸ್ಥಾಪಿಸಲಾಗುವುದು. ಕಸದಿಂದ ಗ್ಯಾಸ್‌, ಬಯೋ ಗ್ಯಾಸ್‌ ಉತ್ಪಾದನೆಗೆ ಒತ್ತು ನೀಡಲಾಗುವುದು. ಮನೆಗಳಲ್ಲಿ ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹಕ್ಕೆ ಪ್ರತ್ಯೇಕ ನೀತಿ ಚರ್ಚಿಸಲಾಗುವುದು ಎಂದರು.

ವಿಜಯ ಕರ್ನಾಟಕ 9 Dec 2025 6:29 pm

ರಾಯ್ ಬರೇಲಿ ಚುನಾವಣೆಯನ್ನು ಇಂದಿರಾ ಗಾಂಧಿ ಗೆದ್ದಿದ್ದೇ ವೋಟ್ ಚೋರಿಯಿಂದ - ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವೋಟ್ ಚೋರಿ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೇ ತಿರುಗೇಟು ನೀಡಿದರು. ಇಂದಿರಾ ಗಾಂಧಿಯವರು ರಾಯ್ ಬರೇಲಿಯಲ್ಲಿ ವೋಟ್ ಚೋರಿಯಿಂದಲೇ ಗೆದ್ದಿದ್ದರು ಎಂದು ಅವರು ಹೇಳಿದರು. ಚುನಾವಣಾ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆ ಇಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಆರೆಸ್ಸೆಸ್ ಸಂಸ್ಥೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದೂ ಅವರು ಹೇಳಿದರು.

ವಿಜಯ ಕರ್ನಾಟಕ 9 Dec 2025 6:29 pm

14.21 ಲಕ್ಷ ರೈತರಿಗೆ ಈ ವರ್ಷ 2249 ಕೋಟಿ ರೂ. ಪರಿಹಾರ: ಮಹತ್ವದ ಮಾಹಿತಿ ಕೊಟ್ಟ ಕೃಷ್ಣ ಭೈರೇಗೌಡ

ಬೆಳಗಾವಿ, ಡಿಸೆಂಬರ್‌ 09: ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆದ

ಒನ್ ಇ೦ಡಿಯ 9 Dec 2025 6:24 pm

ಲಕ್ಷಾಧಿಪತಿ ದೀದಿ ಯೋಜನೆಯಡಿ 10 ಕೋಟಿ ಮಹಿಳಾ ಸದಸ್ಯರ ಸೇರ್ಪಡೆ: ಸ್ವಸಹಾಯ ಗಂಪುಗಳಿಗೆ 11 ಲಕ್ಷ ಕೋಟಿ ರೂ. ಸಾಲ ವಿತರಣೆ! ಕರ್ನಾಟಕದಲ್ಲೂ ಜಾರಿ

ಕೇಂದ್ರ ಸರ್ಕಾರವು ಗ್ರಾಮೀಣ ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು 'ಲಕ್ಷಾಧಿಪತಿ ದೀದಿ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸಲು ಇದು ಸಹಾಯ ಮಾಡುತ್ತದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಈ ಯೋಜನೆ ಜಾರಿಯಲ್ಲಿದೆ. ಮಹಿಳೆಯರಿಗೆ ಆರ್ಥಿಕ ನೆರವು, ತರಬೇತಿ ಮತ್ತು ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದು ಗ್ರಾಮೀಣ ಬಡತನ ನಿವಾರಣೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಕುರಿತಾದ ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 9 Dec 2025 6:20 pm

ವಾಹನಗಳ ಸುಸ್ಥಿತಿ ಕಾಪಾಡಿ ವಾಯು ಮಾಲಿನ್ಯ ತಡೆಗಟ್ಟಿ : ಪ್ರಭುಸ್ವಾಮಿ ಹಿರೇಮಠ

ಕೊಪ್ಪಳ.ಡಿ09: ಸಾರ್ವಜನಿಕರು ತಮ್ಮ ವಾಹನಗಳಿಗೆ ಯಾವುದೇ ಕಲಬೆರಿಕೆಯಿಲ್ಲದ ಇಂಧನವನ್ನು ಉಪಯೋಗಿಸಿ ಅವುಗಳ ಸುಸ್ಥಿತಿಯನ್ನು ಕಾಪಾಡಿಕೊಂಡು ವಾಯು ಮಾಲಿನ್ಯವನ್ನು ತಡೆಗಟ್ಟಿಕೊಳ್ಳಬೇಕೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಹೇಳಿದರು. ಅವರು ಇತ್ತೀಚೆಗೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭುಸ್ವಾಮಿ ಹಿರೇಮಠ, ವಾಹನಗಳು ಹೊರಸೂಸುವ ಹೊಗೆಯಿಂದ ಗಾಳಿಯು ವಿಷಕಾರಿಯಾಗುತ್ತದೆ. ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ಹೈಡ್ರೋಕಾರ್ಬನ್, ಆಕ್ಸೈಡ್ ಆಫ್ ನೈಟ್ರೋಜನ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಸ್ಪೆಂಡೆಡ್ ಪಾರ್ಟಿಕುಲೇಟ್ ಮ್ಯಾರ್‌ಗಳಿಂದ ಮಾನವನ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳು ಆಗುತ್ತವೆ. ಹಾಗಾಗಿ ಹೆಚ್ಚು ಹೊಗೆ ಬಿಡುವ ವಾಹನಗಳ ಬಳಕೆಯನ್ನು ಮಾಡಬಾರದು. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.   ವಾಹನಗಳ ಹೊಗೆ ಸೂಸುವ ಪ್ರಮಾಣ ನಿಯಂತ್ರಣದಲ್ಲಿಡಲು ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳಿಗೆ ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು. ವಾಹನದ ಏರ್ ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಹನಗಳಿಗೆ ಕಲಬೆರಕೆ ಇಂಧನವನ್ನು ಮತ್ತು ಕಡಿಮೆ ದರ್ಜೆಯ ಕಳಪೆ ಇಂಜಿನ್ ಆಯಿಲ್ ಉಪಯೋಗಿಸಬಾರದು. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಯನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಕುರಿತಾಗಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಅವರಿಗೂ ಸಹ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲಾಗಿದೆ ಎಂದು ಹೇಳಿದರು. ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಅಮರ್ ಅವರು ವಿವಿಧ ಬಗೆಯ ಮಾಲಿನ್ಯದ ಬಗ್ಗೆ ವಿವರಿಸಿ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತಾ ವಾಯುಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕ್ಷಕ ಉಮೇಶ್ ಇಟಗಿ ಅವರು ಮಾತನಾಡಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು. ಈ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೊಟಾರು ವಾಹನ ನಿರೀಕ್ಷಕ ಜಿ.ಎಂ ಸುರೇಶ್, ಮೋಟಾರು ವಾಹನ ನಿರೀಕ್ಷಕ ವಿಜೇಂದ್ರ ಡವಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 6:10 pm

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಮಾಣ ಇಳಿಕೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಳಗಾವಿ (ಸುವರ್ಣ ವಿಧಾನಸೌಧ): ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಬಿಗಿ ಕ್ರಮಗಳಿಂದ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ ಅವರು, ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ 52,000 ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 22,250 ಪ್ರಕರಣ ದಾಖಲಾಗಿದ್ದು, 6,159 ಪತ್ತೆ ಹಚ್ಚಲಾಗಿದೆ. ಸುಮಾರು 880 ಕೋಟಿ ರೂ. ವಂಚನೆ ಆಗಿದೆ. ಈ ಪೈಕಿ 177 ಕೋಟಿ ರೂ.ವಶಕ್ಕೆ ಪಡೆಯಲಾಗಿದೆ. 2024ರಲ್ಲಿ 28,478 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,562 ಕೋಟಿ ರೂ. ವಂಚನೆಯಾಗಿದೆ. ಇದರಲ್ಲಿ 323 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. 2025 ರಲ್ಲಿ 13,000 ಪ್ರಕರಣಗಳು ದಾಖಲಾಗಿವೆ. 2,038 ಕೋಟಿ ರೂ. ವಂಚನೆ ಆಗಿದೆ. ಈ ಪೈಕಿ 127 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಸೈಬರ್ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ವಂಚನೆ ಪ್ರಕರಣ ತಡೆಯಲು ಸರಕಾರ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು. ಇದಕ್ಕೂ ಮೊದಲು ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಈ ವಿಚಾರವಾಗಿ ವಿಷಯ ಪ್ರಸ್ತಾಪಿಸಿ, ಆನ್‍ಲೈನ್ ಗೇಮಿಂಗ್‍ಗೆ ಯುವಕರು ಬಲಿಯಾಗುತ್ತಿದ್ದಾರೆ. ಕ್ರಮ ಕೈಗೊಂಡರೂ ಇದು ನಿಯಂತ್ರಣಕ್ಕೆ ಬಂದಿಲ್ಲ. ಆರೋಪಿಗಳ ಬಂಧನ ಆಗಿಲ್ಲ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಪ್ರಕರಣ ದಾಖಲಾಗಿದೆ. ಕೇಂದ್ರ ಸರಕಾರದ ಸಹಾಯವಾಣಿಗೆ ದೂರು ಕೊಡವಷ್ಟರಲ್ಲಿ ಹಣ ಕಳೆದುಕೊಳ್ಳುವ ಸ್ಥಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ʼಮುಖ್ಯಮಂತ್ರಿ ಬೆಟ್ಟಿಂಗ್ ಜೋರುʼ: ‘ಸೈಬರ್ ಬೆಟ್ಟಿಂಗ್ ನಿಯಂತ್ರಣ ಮಾಡುವಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಇದು ಶ್ಲಾಘನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಇದರ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ’ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಾಲೆಳೆದರು.

ವಾರ್ತಾ ಭಾರತಿ 9 Dec 2025 6:08 pm

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಖ್ಯ ಸಂಧಾನಕಾರರ ನೇಮಕ, ಕರ್ನಾಟಕ ಕೇಡರ್‌ ಅಧಿಕಾರಿಗೆ ಮಹತ್ವದ ಜವಾಬ್ದಾರಿ

ಭಾರತ ಮತ್ತು ಅಮೆರಿಕ ನಡುವಿನ ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಪರ ಮುಖ್ಯ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯ ನಿಯೋಗ ಡಿಸೆಂಬರ್ 9 ರಿಂದ 11, 2025 ರವರೆಗೆ ಭಾರತಕ್ಕೆ ಭೇಟಿ ನೀಡಲಿದೆ. ಡಿಸೆಂಬರ್ 10 ಮತ್ತು 11 ರಂದು ಉಭಯ ದೇಶಗಳ ನಡುವೆ ಅಧಿಕೃತ ಮಾತುಕತೆಗಳು ನಡೆಯಲಿವೆ. ಈ ಸಭೆಯಲ್ಲಿ ದರ್ಪಣ್ ಜೈನ್ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ.

ವಿಜಯ ಕರ್ನಾಟಕ 9 Dec 2025 6:07 pm

ಡಿ.27ರಂದು ನಶೆ ಮುಕ್ತ ಮಂಗಳೂರು ಅಭಿಯಾನ

ಮಂಗಳೂರು ನಗರ ಪೊಲೀಸ್ ಸಹಭಾಗಿತ್ವ: 102 ಕಾರ್ಯಕ್ರಮಗಳು

ವಾರ್ತಾ ಭಾರತಿ 9 Dec 2025 6:06 pm

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು: ಅಮ್ಜದ್ ಪಟೇಲ್

ಕೊಪ್ಪಳ: ಇಂದಿನ ಮಕ್ಕಳೇ ಈ ನಾಡಿನ ಬಾವಿ ಪ್ರಜೆಗಳಾಗಿದ್ದು ಅವರ ಭವಿಷ್ಯ ಉಜ್ವಲ ಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ವನ್ನು ಕಲಿಸಿಕೊಡಬೇಕು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. ಮಂಗಳವಾರ ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ ಅಯೋಜಿಸಿದ್ದ ಕೊಪ್ಪಳ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮ್ಜದ್ ಪಟೇಲ್, ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ.  ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು, ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವಂತಹ ಕೆಲಸ ಮಾಡಬೇಕು ಅವರ ಭವಿಷ್ಯ ಉಜ್ವಲ ಗೊಳಿಸಬೇಕು ಇದರಲ್ಲಿ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರು ತಮ್ಮ ಪಾಲಿನ ಜವಾಬ್ದಾರಿ ನಿಭಾಯಿಸಬೇಕು. ಈ ಭಾಗದ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಉರ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.   ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ.ಹೆಚ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಉತ್ತಮ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಮಾಡಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಶರಣಬಸವನಗೌಡ ಪಾಟೀಲ್, ಬೀರಪ್ಪ ಅಂಡಗಿ ಅಕ್ಷರದಾಸೋಹ ಅಧಿಕಾರಿ ಮಲ್ಲಿಕಾರ್ಜುನ, ಬಿ ಆರ್ ಸಿ ಸಂಯೋಜಕ ಮಹಿಬೂಬ್ ಹುಸೇನ್, ಸಿ ಆರ್ ಪಿ ಮೈನುದ್ದೀನ್ ಅತ್ತಾರ್, ನಫೀಸ ಪಠಾನ್ , ಹೋಳಿ ಬಸಯ್ಯ ವಾಹಿದಾ ಬೇಗಂ, ಕೆ ಎಮ್ ಅಲಿ, ಶರಣಪ್ಪ ರೆಡ್ಡಿ ಹನುಮರೆಡ್ಡಿ ರೇವಣಸಿದ್ದಪ್ಪ ಸೈಲಾನಿ ಬಾಷಾ, ಉರ್ದು ಸಾಹಿತಿ ಅನ್ವರ್ ಹುಸೇನ್,ಹಿರಿಯ ಸಮಾಜ ಸೇವಕ ಎಮ್ ಏ ಮಾಜಿದ ಸಿದ್ದಿಕ್ಕಿ ಅಂಜುಮನ್ ಅಧ್ಯಕ್ಷ ಎಂ ಡಿ ಆಸಿಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 6:04 pm

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ವೇತನಕ್ಕೆ ಕ್ರಮ : ಸಚಿವ ಶಿವಾನಂದ್ ಪಾಟೀಲ್

ಬೆಳಗಾವಿ : ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರಕಾರ ಕ್ರಮವಹಿಸಲಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದಾರೆ. ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಭೀಮರಾವ್ ಬಸವರಾಜ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಾನಂದ್ ಪಾಟೀಲ್, ಕಾರ್ಖಾನೆಯ ಪುನಶ್ಚೇತನ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್‍ದಾರರು ಆಸಕ್ತಿ ತೋರಲಿಲ್ಲ. ಎರಡನೇ ಬಾರಿಗೆ ಟೆಂಡರ್ ಕರೆದರೂ ಸಹ ಯಾರೊಬ್ಬ ಬಿಡ್‍ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎಂದು ಹೇಳಿದರು.   ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವವನ್ನು ಒಳಗೊಂಡಂತೆ ಒಟ್ಟು 6 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್ ಸಿ ಡಿ ಸಿ ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ಎನ್ ಸಿಡಿಸಿಯಿಂದ ಆರ್ಥಿಕ ನೆರವು ಲಭ್ಯವಾಗದಿದ್ದಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್ ಆರ್ ಓ ಟಿ ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಪ್ರಕಟಣೆ ಹೊರಡಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 9 Dec 2025 5:59 pm

‌ ʻವಂದೇ ಮಾತರಂ ಗೀತೆ ತುಂಡರಿಸಿದ್ದರಿಂದಲೇ ದೇಶ ವಿಭಜನೆಯಾಗಿದ್ದುʼ: ಅಮಿತ್‌ ಶಾ

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿಯೇ ವಂದೇ ಮಾತರಂನ 150ನೇ ವರ್ಷಾಚರಣೆಯ ಚರ್ಚೆಯನ್ನು ಕೇಂದ್ರ ಸರ್ಕಾರ ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿ.8ರಂದು ವಾಗ್ದಾಳಿ ನಡೆಸಿದ್ದರು. ಇದನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ ಅವರು, ವಂದೇ ಮಾತರಂ ಬಂಗಾಳಕ್ಕೆ ಸೀಮಿತವಲ್ಲ. ನೆಹರು ಅವರ ತುಷ್ಟೀಕರಣ ರಾಜಕಾರಣದಿಂದಿಲೇ ದೇಶ ವಿಭಜನೆಯಾಗಿದ್ದು ಎಂದು ಕಿಡಿಕಾರಿದರು. ಅಮಿತ್‌ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿ ಇತಿಹಾಸವನ್ನು ಉಲ್ಲೇಖಿಸಿ ಟಾಂಗ್‌ ಕೊಟ್ಟರು

ವಿಜಯ ಕರ್ನಾಟಕ 9 Dec 2025 5:56 pm

ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಉತ್ತೇಜನೆ: ಸಚಿವ ಎಂ.ಬಿ.ಪಾಟೀಲ್

ಬೆಳಗಾವಿ(ಸುವರ್ಣ ವಿಧಾನಸೌಧ): 2025-30ರ ಕೈಗಾರಿಕಾ ನೀತಿಯು ರಾಜ್ಯದ ಸಮಗ್ರ ಅಭಿವೃದ್ಧಿ ಗುರಿಯೊಂದಿಗೆ ಬೆಂಗಳೂರಿನಿಂದ ಹೊರಗಡೆ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗಾರಿಕಾ ನೀತಿಯಲ್ಲಿ ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳಾಗಿ ವರ್ಗೀಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲೂಕುಗಳು/ಜಿಲ್ಲೆಗಳನ್ನು ವಲಯ-1 ಮತ್ತು ವಲಯ-2ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3ರಲ್ಲಿ ವರ್ಗೀಕರಿಸಲಾಗಿದೆ ಎಂದರು. ರಾಜ್ಯದ ಸಮತೋಲನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು/ತಾಲೂಕುಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಕಂಪೆನಿಗಳೊಂದಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಸಭೆಗಳನ್ನು ನಡೆಸಲಾಗುತ್ತಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ಭೂಮಿ ಖರೀದಿ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ರಾಜ್ಯದ ಎನ್.ಒ.ಸಿ/ಒಪ್ಪಿಗೆಗಳನ್ನು ಸ್ವಯಂಘೋಷಣ ಪತ್ರದ ಆಧಾರದ ಮೇಲೆ ಪಡೆಯಲು 3 ವರ್ಷಗಳವರೆಗೆ ವಿಸ್ತರಿಸಿ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮ 2002ಕ್ಕೆ ತಿದ್ದುಪಡಿ ತರಲಾಗಿದೆ. ಅಲ್ಲದೆ, ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ಹಾಗೂ ಕರ್ನಾಟಕ ಏರೋಸ್ಪೇಸ್ ಅಂಡ್ ಡಿಫೆನ್ಸ್ ಪಾಲಿಸಿ 2022-27 ಅನ್ನು ಸಹ ಹೊರತಂದಿದ್ದು, ಈ ನೀತಿಗಳಡಿ ವಲಯವಾರು ಕೈಗಾರಿಕೆಗಳಿಗೆ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನಗಳನ್ನು ಒದಗಿಸಲಾಗುತ್ತಿದೆ. ಅನುಮೋದಿತ ಕೈಗಾರಿಕೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳ್ಳುತ್ತಿವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ರಾಜ್ಯದಲ್ಲಿ ಹಿಂದಿನ 3 ವರ್ಷಗಳಲ್ಲಿ (2022-23ರಿಂದ ಅಕ್ಟೋಬರ್-2025ರ ಅಂತ್ಯದವರೆಗೆ) ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 1888 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 5,03,539 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಲಿದ್ದು ಮತ್ತು 6,92,591 ಜನರಿಗೆ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು. ಅನುಮೋದಿತ ಯೋಜನೆಗಳ ಪೈಕಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು ಇವುಗಳಿಂದ 66435.09 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಿದೆ ಹಾಗೂ 93,925 ಸಂಖ್ಯೆಯ ಉದ್ಯೋಗ ಸೃಜನೆಯಾಗಿದೆ. ಉಳಿದ ಯೋಜನೆಗಳು ವಿವಿಧ ಅನುಷ್ಠಾನ ಹಂತಗಳಲ್ಲಿದ್ದು, ಇವೆಲ್ಲವೂ ಬೃಹತ್ ಕೈಗಾರಿಕೆಗಳಾಗಿರುವುದರಿಂದ, ಅನುಷ್ಠಾನಕ್ಕೆ ಕನಿಷ್ಠ 3-5 ವರ್ಷಗಳು ಬೇಕಾಗುತ್ತವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ವಾರ್ತಾ ಭಾರತಿ 9 Dec 2025 5:55 pm

Site Allotment: ಬಡಾವಣೆಗಳ ನಿವೇಶನ ಹಂಚಿಕೆ ಬಗ್ಗೆ ಸಚಿವ ಬೈರತಿ ಸುರೇಶ್‌ ಬಿಗ್‌ ಅಪ್ಡೇಟ್‌

ಬಡಾವಣೆಗಳ ಅಭಿವೃದ್ಧಿ ಕುರಿತಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಬೈರತಿ ಸುರೇಶ್, ರಾಜ್ಯದ ಎಲ್ಲ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿಯೇ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು

ಒನ್ ಇ೦ಡಿಯ 9 Dec 2025 5:55 pm

ತಿರುಪತಿ - ಶಿರಡಿ ಎಕ್ಸ್‌ಪ್ರೆಸ್‌ ಹೊಸ ರೈಲಿಗೆ ವಿ ಸೋಮಣ್ಣ ಚಾಲನೆ; ಕರ್ನಾಟಕದ ಮೂಲಕ ಸಂಚಾರ; ಎಲ್ಲೆಲ್ಲಿ ನಿಲುಗಡೆ?

ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಕರ್ನಾಟಕದ ಬೀದರ್ ಮತ್ತು ಬಾಲ್ಕಿ ಸೇರಿದಂತೆ 4 ರಾಜ್ಯಗಳ 31 ಕಡೆ ನಿಲುಗಡೆ ನೀಡಲಿದ್ದು, ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಡಿಸೆಂಬರ್ 9 ರಂದು ಉದ್ಘಾಟನಾ ಸಂಚಾರ ನಡೆಸಲಿದ್ದು, ಡಿಸೆಂಬರ್ 14 ರಿಂದ ಅಧಿಕೃತವಾಗಿ ಸಂಚಾರ ಆರಂಭಿಸಲಿದೆ.

ವಿಜಯ ಕರ್ನಾಟಕ 9 Dec 2025 5:37 pm

50 ಪೈಸೆ, 10 ರೂ. ನಾಣ್ಯ ಈಗಲೂ ಚಲಾವಣೆಯಲ್ಲಿದೆಯಾ? ಮಹತ್ವದ ಸ್ಪಷ್ಟನೆ ನೀಡಿದ ಆರ್‌ಬಿಐ

50 ಪೈಸೆ ಮತ್ತು ಹಳೆಯ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎಂಬ ವದಂತಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ತನ್ನ ಜಾಗೃತಿ ಅಭಿಯಾನದ ಮೂಲಕ ಮಾಹಿತಿ ನೀಡಿರುವ ಆರ್‌ಬಿಐ, 50 ಪೈಸೆಯಿಂದ ಹಿಡಿದು 20 ರೂಪಾಯಿವರೆಗಿನ ಎಲ್ಲಾ ನಾಣ್ಯಗಳು ಸಂಪೂರ್ಣವಾಗಿ ಮಾನ್ಯವಾಗಿವೆ ಮತ್ತು ಕಾನೂನುಬದ್ಧವಾಗಿವೆ ಎಂದು ತಿಳಿಸಿದೆ. ವಿನ್ಯಾಸಗಳು ಬೇರೆಯಾಗಿದ್ದರೂ ಹಳೆಯ ನಾಣ್ಯಗಳನ್ನು ನಿರ್ಭಯವಾಗಿ ಬಳಸಬಹುದು ಮತ್ತು ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಬ್ಯಾಂಕ್ ಸೂಚಿಸಿದೆ.

ವಿಜಯ ಕರ್ನಾಟಕ 9 Dec 2025 5:33 pm

ವಿಭಜನೆಯತ್ತ ಬೆಳಗಾವಿ ಜಿಲ್ಲೆ? ಮೂರು ಕೇಂದ್ರಗಳತ್ತ ರಾಜ್ಯ ಸರ್ಕಾರದ ಚಿತ್ತ? ಯಾವುವು?

ಬೆಳಗಾವಿ, ಡಿಸೆಂಬರ್‌ 09: ಉತ್ತರ ಕರ್ನಾಟಕ ಭಾಗವು ಪ್ರತಿಯೊಂದು ವಲಯದಲ್ಲೂ ನಿರಂತರವಾಗಿ ಅನ್ಯಾಯ, ತಾರತಮ್ಯ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಿದೆ. ಈ ಭಾಗದ 15 ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ರಚಿಸಬೇಕುʼ ಎಂದು ಉಲ್ಲೇಖಿಸಿ ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಅವರು ಕೆಲ ದಿನಗಳ ಹಿಂದೆಯಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು

ಒನ್ ಇ೦ಡಿಯ 9 Dec 2025 5:29 pm

ಮಂಗಳೂರು | ಡಿ.13, 14ರಂದು ಸೌಹಾರ್ದ ಕ್ರಿಸ್ಮಸ್ ಉತ್ಸವ

ಮಂಗಳೂರು, ಡಿ. 9: ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು ಹಾಗೂ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಆಶ್ರಯದಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಡಿ.13 ಹಾಗೂ ಡಿ.14ರಂದು ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ. ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು, ಮಧ್ಯಾಹ್ನ 2:30ರಿಂದ ರಾತ್ರಿ 9:30ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕ್ಯಾರಲ್ ಹಾಡುಗಳ ಸ್ಪರ್ಧೆ, ಕ್ರಿಸ್ಮಸ್ ಕೇಲ್ ಸ್ಪರ್ಧೆ, ಕ್ರಿಸ್ಮಸ್ ಕೇಕ್ ಸ್ಪರ್ಧೆ, ಕ್ರಿಸ್ಮಸ್ ಸ್ಟಾರ್ ಸ್ಪರ್ಧೆ, ವೈನ್ ಮೇಳ, ಆಹಾರ ಮಳಿಗೆಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸೌಹಾರ್ದ ಕ್ರಿಸ್ಮಸ್ ಉತ್ಸವವು ಸಾಮುದಾಯಿಕ ಏಕತೆ ಹಾಗೂ ಶಾಂತಿಯ ಸಂದೇಶ ಸಾರುವ ವೇದಿಕೆಯಾಗಿದೆ. ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬುದು ಮೂಲ ಆಶಯ. ರೋಚಕ ಸ್ಪರ್ಧೆಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಕ್ರಿಸ್ಮಸ್ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೋ, ಪ್ರಚಾರ ಸಮಿತಿಯ ಸ್ಟ್ಯಾನ್ಲಿ ಬಂಟ್ವಾಳ್, ರೆಹಮಾನ್ ಖಾನ್ ಕುಂಜತ್ತಬೈಲ್, ಸಮರ್ಥ್ ಭಟ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 5:03 pm

ದೇಶದ ಮಹಿಳೆಯರ ಖಾತೆಗೆ ಬರುತ್ತೆ7000 ರೂ! ಮೋದಿ ಹೊಸ ಯೋಜನೆ

ಭಾರತದ ಜೀವ ವಿಮಾ ನಿಗಮ (LIC) ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಮಹಿಳೆಯರ ಸಬಲೀಕರಣಕ್ಕಾಗಿ ‘ಬೀಮಾ ಸಖಿ – ಮಹಿಳಾ ಕ್ಯಾರಿಯರ್ ಏಜೆಂಟ್ (MCA)’ (Bima Sakhi Yojana) ಯೋಜನೆಯನ್ನು ರಾಷ್ಟ್ರವ್ಯಾಪಿಯಾಗಿ ಪ್ರಾರಂಭಿಸಿದೆ. 2024ರ ಡಿಸೆಂಬರ್ 9ರಂದು ಹರಿಯಾಣದ ಪಾನಿಪತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯ ರಾಷ್ಟ್ರೀಯ ಪ್ರಾರಂಭ ನಡೆದಿದೆ. ಈ ಯೋಜನೆಯ ಉದ್ದೇಶ ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ತರಬೇತಿ ನೀಡಿ, ಸ್ವಾವಲಂಬನೆ ಮತ್ತು ಸ್ಥಿರ ಆದಾಯ ಗಳಿಸುವ ಅವಕಾಶ ಒದಗಿಸುವುದಾಗಿದೆ. ... Read more The post ದೇಶದ ಮಹಿಳೆಯರ ಖಾತೆಗೆ ಬರುತ್ತೆ7000 ರೂ! ಮೋದಿ ಹೊಸ ಯೋಜನೆ appeared first on Karnataka Times .

ಕರ್ನಾಟಕ ಟೈಮ್ಸ್ 9 Dec 2025 5:03 pm

ಏನಿದು ತಮಿಳುನಾಡಿನ ತಿರುಪಾರಂಕುಂದ್ರಂ ಬೆಟ್ಟದ ವಿವಾದ? 'ಕಾರ್ತಿಕ ದೀಪ' ಹೆಸರಲ್ಲಿ ಭಾವೈಕ್ಯತೆಗೆ ಕೊಳ್ಳಿ ಇಟ್ಟಿದ್ಯಾರು?

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಇಂಡಿಯಾ ಬ್ಲಾಕ್ ಒಕ್ಕೂಟದ ಸಂಸದರು ಲೋಕಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ತಿರುಪಾರಂಕುಂದ್ರಂ ಬೆಟ್ಟದ ದೀಪೋತ್ಸವಕ್ಕೆ ಸಂಬಂಧಿಸಿದ ಅವರ ಆದೇಶ ವಿವಾದಕ್ಕೆ ಕಾರಣವಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಸಂಸದರು ನ್ಯಾಯಮೂರ್ತಿಗಳ ಪದಚ್ಯುತಿಗೆ ಒತ್ತಾಯಿಸಿದ್ದಾರೆ. ಈ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯ ಕರ್ನಾಟಕ 9 Dec 2025 5:01 pm

ವಿನಾಶದ ಅಂಚಿನಿಂದ ಬದುಕುಳಿದ ಪ್ರಾಣಿ-ಪಕ್ಷಿಗಳ ವಿವರ ಇಲ್ಲಿದೆ…

ಒಮ್ಮೆ ನಶಿಸಿ ಹೋಗಿರುವ ಪಟ್ಟಿಯಲ್ಲಿದ್ದ ಅನೇಕ ಪ್ರಭೇದಗಳನ್ನು ಉಳಿಸಿಕೊಳ್ಳಲಾಗಿದೆ. ಅಂತಹ ಐದು ಅಭೂತಪೂರ್ವ ವನ್ಯಜೀವಿಗಳ ರಕ್ಷಣೆಯ ವಿವರ ಇಲ್ಲಿದೆ. ಭಾರತದ ವನ್ಯಜೀವಿಗಳ ಕತೆಯಲ್ಲಿ ಸದಾ ನಷ್ಟವೇ ಬರೆದಿರಬೇಕು ಎಂದೇನಿಲ್ಲ. ಜಾಗತಿಕವಾಗಿ ಅತಿ ಯಶಸ್ವೀ ಸಂರಕ್ಷಣಾ ಪ್ರಯತ್ನಗಳಿಗೂ ಭಾರತ ಪ್ರಸಿದ್ಧಿ ಪಡೆದಿದೆ. ಸರ್ಕಾರಗಳ ಕ್ರಮ, ಸಮುದಾಯದ ಬೆಂಬಲ, ಆವಾಸಸ್ಥಾನಗಳ ರಕ್ಷಣೆ ಮತ್ತು ವೈಜ್ಞಾನಿಕವಾಗಿ ನಿರ್ವಹಣೆಯ ಮೂಲಕ ಒಮ್ಮೆ ನಶಿಸಿ ಹೋಗಿರುವ ಪಟ್ಟಿಯಲ್ಲಿದ್ದ ಅನೇಕ ಪ್ರಭೇದಗಳನ್ನು ಉಳಿಸಿಕೊಳ್ಳಲಾಗಿದೆ. ಅಂತಹ ಐದು ಅಭೂತಪೂರ್ವ ವನ್ಯಜೀವಿಗಳ ರಕ್ಷಣೆಯ ವಿವರ ಇಲ್ಲಿದೆ. ವಿನಾಶದ ಅಂಚಿನಲ್ಲಿದ್ದ ಏಷ್ಯಾಟಿಕ್ ಸಿಂಹಗಳು Photo: Wikipedia   ಗುಜರಾತ್ನ ಗಿರ್ ಅರಣ್ಯದಲ್ಲಿ ಮಾತ್ರ ನೆಲೆಸಿದ್ದ ಏಷ್ಯಾಟಿಕ್ ಸಿಂಹಗಳು 19ನೇ ಶತಮಾನದಲ್ಲಿ ವಿನಾಶದ ಅಂಚಿಗೆ ತಲುಪಿದ್ದು, 20 ಸಿಂಹಗಳು ಮಾತ್ರ ಉಳಿದಿದ್ದವು. ಜುನಾಗಢ್ನ ನವಾಬ್ ಮಧ್ಯಪ್ರವೇಶಿಸಿದ ಮೇಲೆ, ಸಿಂಹ ಯೋಜನೆ ಕೈಗೊಂಡು ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂತು. ಇಂದು ಗಿರ್ ಅರಣ್ಯ ಪರಿಸರದಲ್ಲಿ 670 ಏಷ್ಯಾಟಿಕ್ ಸಿಂಹಗಳಿವೆ. ಇದೀಗ ಅವುಗಳ ಆವಾಸಸ್ಥಾನಗಳು ಕೇಂದ್ರ ಅರಣ್ಯವನ್ನು ಮೀರಿ ವಿಸ್ತರಿಸುತ್ತಿವೆ. ನಿಯಮಿತ ಮೇಲ್ವಿಚಾರಣೆ, ಪಶುವೈದ್ಯಕೀಯ ಆರೈಕೆ ಮತ್ತು ಸಮುದಾಯ ಸಹಭಾಗಿತ್ವಗಳು ಅವುಗಳ ಭವಿಷ್ಯವನ್ನು ರಕ್ಷಿಸಲು ಮುಂದಾಗಿವೆ. ಒಂದು ಕೊಂಬಿನ ಘೇಂಡಾಮೃಗ Photo: Wikipedia   ಅಸ್ಸಾಂನ ಹೆಮ್ಮೆಯ ಪ್ರಾಣಿಯಾಗಿರುವ ಒಂದು ಕೊಂಬಿನ ಘೇಂಡಾಮೃಗ ಅಥವಾ ಖಡ್ಗಮೃಗ 1905ರಲ್ಲಿ 75ರ ಸಂಖ್ಯೆಗೆ ಇಳಿದು ಅಳಿವಿನಂಚಿಗೆ ಹೋಗಿತ್ತು. ಕಾಜಿರಂಗಾ ರಾಷ್ಟ್ರೀಯ ಅಭಯಾರಣ್ಯದ ನಿರ್ಮಾಣ ಮತ್ತು ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡ ಮೇಲೆ ದೊಡ್ಡ ಬದಲಾವಣೆ ಕಂಡುಬಂತು. ಇಂದು ಕಾಜಿರಂಗದಲ್ಲಿ 2,400 ಖಡ್ಗಮೃಗಗಳಿವೆ. ಜಾಗತಿಕವಾಗಿ ಒಂದೇ ಪ್ರದೇಶದ ಅತ್ಯಧಿಕ ಸಂಖ್ಯೆಯ ಖಡ್ಗಮೃಗಗಳು ಇಲ್ಲಿವೆ. ಇದಿಈಗ ಅಸ್ಸಾಂನ ಇತರ ಸಂರಕ್ಷಣಾ ಪ್ರದೇಶಗಳಾದ ಪೊಬಿಟೋರ, ಆರಂಗ್ ಮತ್ತು ಮಾನಸ್ಗಳಿಗೆ ಒಂದು ಕೊಂಬಿನ ಖಡ್ಗಮೃಗಗಳ ಆವಾಸಸ್ಥಾನವನ್ನು ವಿಸ್ತರಿಸಲಾಗಿದೆ. ಅಮುರ್ ಗಿಡುಗ Photo: Wikipedia   ಹಿಂಸ್ರ ಪಕ್ಷಿಗಳ ಸಾಲಿಗೆ ಸೇರುವ ಅಮುರ್ ಗಿಡುಗದ ರಕ್ಷಣೆ ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಅತ್ಯುತ್ತಮ ಸಂರಕ್ಷಣಾ ಕತೆ. ಪ್ರತಿ ವರ್ಷ ನಾಗಾಲ್ಯಾಂಡ್ಗೆ ಲಕ್ಷಾಂತರ ಅಮುರ್ ಗಿಡುಗಗಳು ಹಾದು ಬರುತ್ತವೆ. ಆದರೆ ದಶಕಗಳ ಹಿಂದೆ ವಲಸೆ ಪಕ್ಷಿಗಳ ಸಾಮೂಹಿಕ ಬೇಟೆಯಿಂದಾಗಿ ಅವುಗಳ ಉಳಿವಿಗೆ ಕಂಟಕ ಬಂದಿತ್ತು. 2012ರಲ್ಲಿ ಸಾಮುದಾಯಿಕ ಒಪ್ಪಂದಗಳು, ಕಠಿಣ ಶಿಕ್ಷೆ, ಜಾಗೃತಿ ಅಭಿಯಾನದ ಮೂಲಕ ತ್ವರಿತ ಕ್ರಮ ಕೈಗೊಳ್ಳಲಾಯಿತು. ಗ್ರಾಮಸ್ಥರೇ ರಕ್ಷಕರಾದರು. ಪಕ್ಷಿಗಳಿಗೆ ಸುರಕ್ಷಿತ ಸಂತಾನೋತ್ಪತ್ತಿ ಜಾಗಗಳನ್ನು ಸೃಷ್ಟಿಸಿದರು. ಇಂದು ನಾಗಾಲ್ಯಾಂಡ್ ಜಗತ್ತಿನ ಅಮುರ್ ಗಿಡುಗದ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಬೇಟೆಯ ವರದಿಯೂ ಆಗಿಲ್ಲ. ಆಲಿವ್ ರಿಡ್ಲೇ ಆಮೆ Photo: Wikipedia   ಒಡಿಶಾದ ಕರಾವಳಿಯಲ್ಲಿ ಮುಖ್ಯವಾಗಿ ಗಾಹಿರ್ಮಾತ ಮತ್ತು ರುಶಿಕುಲ್ಯ ಕಡಲ ತೀರಗಳು ಜಗತ್ತಿನಲ್ಲೇ ಆಲಿವ್ ರಿಡ್ಲೇ ಆಮೆಗಳ ಸಾಮೂಹಿಕ ಸಂತಾನೋತ್ಪತ್ತಿ ಜಾಗಗಳಾಗಿವೆ. 1980 ಮತ್ತು 1990ರಲ್ಲಿ ಮೊಟ್ಟೆ ಕದಿಯುವ ಪ್ರವೃತ್ತಿಯಿಂದ ಇದರ ಸಂತತಿ ವಿನಾಶದಂಚಿಗೆ ತಲುಪಿತ್ತು. ಸಾಗರ ವಲಯದ ರಕ್ಷಣೆ, ಕೆಲವು ಋತುವಿನಲ್ಲಿ ಮಾತ್ರ ಮೀನುಗಾರಿಕೆ ನಿಷೇಧ, ಆಮೆ ಪ್ರತ್ಯೇಕ ವಲಯಗಳು ಮತ್ತು ಸಮುದಾಯಗಳು ಕಡಲತೀರದ ಕಾವಲು ನಿಂತಿರುವುದು ಮೊದಲಾದ ಕಾರಣಗಳಿಂದ ಲಕ್ಷಾಂತರ ಆಮೆಗಳು ವಾರ್ಷಿಕವಾಗಿ ಇಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇದೀಗ ಈ ಪ್ರದೇಶ ಜಾಗತಿಕವಾಗಿ ಆಲಿವ್ ರಿಡ್ಲೇಗಳ ಅತಿ ದೊಡ್ಡ ಆವಾಸಸ್ಥಾನವಾಗಿದೆ. ಬರಸಿಂಘ Photo: Wikipedia   ಮಧ್ಯಪ್ರದೇಶದ ಪ್ರಾಣಿಯಾಗಿರುವ ಬರಸಿಂಘಗಳು ಒಂದು ಕಾಲದಲ್ಲಿ ಅಳಿವಿನಂಚಿಗೆ ತಲುಪಿದ್ದವು. 1960ರಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ 60 ಬರಸಿಂಘಗಳು ಮಾತ್ರ ಉಳಿದಿದ್ದವು. ಆವಾಸಸ್ಥಾನದ ರಕ್ಷಣೆ, ಭೇಟೆಗೆ ತಡೆಯೊಡ್ಡಿರುವುದು, ಪ್ರಭೇದಗಳನ್ನು ಜಾಗರೂಕವಾಗಿ ಸಂರಕ್ಷಿಸಿರುವುದು ಅವುಗಳ ಸಂಖ್ಯೆ 800ಕ್ಕೆ ಏರಲು ಕಾರಣವಾಗಿದೆ. ಇದೀಗ ಸತ್ಪುರ ಮತ್ತು ಇತರ ಪ್ರದೇಶಗಳಿಗೂ ಅವುಗಳನ್ನು ವಿಸ್ತರಿಸುವ ಕೆಲಸವಾಗುತ್ತಿದೆ. ಕೃಪೆ: indianexpress.com

ವಾರ್ತಾ ಭಾರತಿ 9 Dec 2025 4:58 pm

ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ: ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ, ಡಿ.9: ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ ತುಂಬಿಸುವ ಕಾರ್ಯ ನಡೆಯಬೇಕು ಎಂಬುದೇ ನಮ್ಮ ಹೆಬ್ಬಯಕೆ. ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ. ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ರವಿವಾರ ನಡೆದ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25ರಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು. ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದು ತಿಳಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬೆಳೆಯುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಇತ್ತೀಚೆಗೆ ಯಕ್ಷಗಾನಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಇನ್ನಾವ ಕಲೆಗೂ ಸಿಗುತ್ತಿಲ್ಲ. ಇದರಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ ಎಂಬುದು ದಿಟ. ಯಕ್ಷಗಾನಕ್ಕೆ ಈ ಭಾಗದಲ್ಲಿ ಯಶಸ್ವಿ ಕಲಾವೃಂದ ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು. ರಾಜ್ಯ ರಾಜ್ಯೋತ್ಸವ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ.ಹೆಗಡೆ, ಕೋಟ ಸುರೇಶ್ ಬಂಗೇರ ಮತ್ತು ಐರ್ಬೈಲ್ ಆನಂದ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಿ ಮಚ್ಚಿನ, ಸಮಾಜ ಸೇವಕ ಸತೀಶ್ ಪೂಜಾರಿ ಹಾಗೂ ಕ್ರೀಡಾಪಟು ಸುದೀಪ್ ಶೆಟ್ಟಿ ಮಲ್ಯಾಡಿ ಅವರನ್ನು ಅಭಿನಂದಿಸಲಾಯಿತು. ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಅವರನ್ನು ಗೌರವಿಸಲಾಯಿತು. ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್ ಶೆಟ್ಟಿ, ಕೃಷ್ಣಯ್ಯ ಆರ್ಚಾ ಬಿದ್ಕಲ್ಕಟ್ಟೆ, ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪೂಜ ಆಚಾರ್ಯ, ಪಂಚಮಿ ವೈದ್ಯ, ಪವನ್ ಆಚಾರ್ಯ, ಕಿಶನ್ ಪೂಜಾರಿ, ಹರ್ಷಿತಾ ಅಮೀನ್ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.

ವಾರ್ತಾ ಭಾರತಿ 9 Dec 2025 4:54 pm

ಬಾಬು ಜಗಜೀವನರಾಮ್ ಭವನಕ್ಕೆ ಮೀಸಲಿಟ್ಟ ಹಣ ಲೂಟಿ : ಫರ್ನಾಂಡಿಸ್ ಹಿಪ್ಪಳಗಾಂವ್ ಆರೋಪ

ಬೀದರ್: ಬಾಬು ಜಗಜೀವನರಾಮ ಭವನಕ್ಕೆ ಮೀಸಲಿಟ್ಟ 50 ಲಕ್ಷ ರೂ. ಲೂಟಿ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಜೈಲಿಗೆ ಕಳುಹಿಸಬೇಕು. ಈ ಭವನ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದಂತೆ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಹೇಳಿದ್ದಾರೆ.   ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫರ್ನಾಂಡಿಸ್ ಹಿಪ್ಪಳಗಾಂವ್,  2012-13ನೇ ಸಾಲಿನಲ್ಲಿ ಬೀದರ್ ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯಣಸ್ವಾಮಿ ಅವರು 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಅಂದಿನ ಬೀದರ್ ಜಿಲ್ಲಾಧಿಕಾರಿಗಳು ಬೀದರ್ ನ ನೌಬಾದ್ ನ ಡಯಟ್ ಕಾಲೇಜ್ ಹಿಂದುಗಡೆ 2 ಎಕರೆ ಜಮೀನನ್ನು ಭವನ ನಿಮಾರ್ಣಕ್ಕೆ ಗುರುತಿಸಿ ಗುದ್ದಲಿ ಪೂಜೆ ಕೂಡ ನೇರವೆರಿಸಿದ್ದರು ಎಂದು ಹೇಳಿದರು.  ಏ.5, 2025ರಂದು ಚಿಕ್ಕಪೇಟ್‌ನಲ್ಲಿ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಶಿಲ್ಪಾ ಶರ್ಮಾ ಹಾಗೂ ಸಮಾಜ ಕಲ್ಯಾಣ ಉಪನಿರ್ದೇಶಕರು ಸೇರಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೇರವೆರಿಸಿದ್ದಾರೆ. ಗುದ್ದಲಿ ಪೂಜೆ ನೇರವೆರಿಸಿದ ನಂತರ ಸಚಿವ ಈಶ್ವರ್ ಖಂಡ್ರೆ ಅವರು ಭವನ ನಿರ್ಮಾಣಕ್ಕೆ 5 ಕೋಟಿ ರೂ. ಹಣದ ಅಶ್ವಾಸನೆ ಕೂಡ ನೀಡಿದ್ದಾರೆ. 2012-13ನೇ ಸಾಲಿನಲ್ಲಿ ಭವನ ನಿರ್ಮಾಣಕ್ಕೆ ಮೀಸಲಿಟ್ಟ 1 ಕೋಟಿ ರೂ. ಹಾಗೆಯೇ ಉಳಿದಿರುತ್ತದೆ. ಆ ನಂತರ ಕಾಮಗಾರಿ ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ವಿಚಾರಿಸಿದಾಗ 1 ಕೋಟಿ ರೂ. ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿರುತ್ತೇವೆ ಎಂದು ಹೇಳುತ್ತಾರೆ. ಅಲ್ಲಿ ವಿಚಾರಿಸಿದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದರ ಬಗ್ಗೆ ಸಮಾಜ ಕಲ್ಯಾಣ ಉಪನಿರ್ದೇಶಕರಿಗೆ ವಿಚಾರಿಸಿದಾಗ ನಿರ್ಮಿತಿ ಕೇಂದ್ರ ಇಲ್ಲ. ಕೆ ಆರ್ ಐಡಿಎಲ್ ಗೆ ಹಣ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಅಲ್ಲಿನ ಅಧಿಕಾರಿಗಳಿಗೆ ವಿಚಾರಿಸಿದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೆ ನಾವು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರನ್ನು ವಿಚಾರಿಸಿದಾಗ 1 ಕೋಟಿ ರೂ.ನಲ್ಲಿ 50 ಲಕ್ಷ ರೂ. ಸರಕಾರ ಹಿಂಪಡೆದಿರುತ್ತದೆ ಎಂದು ತಿಳಿಸಿದ್ದಾರೆ. ಉಳಿದ 50 ಲಕ್ಷ ರೂ. ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಜೈಲಿಗೆ ಕಳುಹಿಸಿ, ಆದಷ್ಟು ಬೇಗ ಭವನದ ಕಾಮಗಾರಿ ಪ್ರಾರಂಭ ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.   ಈ ವೇಳೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರೀಶ್ ಗಾಯಕವಾಡ್, ಸದಸ್ಯರಾದ ಅಬ್ರಾಹಂ ಸೂರ್ಯವಂಶಿ, ರಾಹುಲ್ ನಂದಿ ಹಾಗೂ ಮಾರ್ಕ್ ಸಾಗರ್ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 9 Dec 2025 4:49 pm

IPL 2026- ಹರಾಜಿಂದ ಸಾವಿರಕ್ಕೂ ಹೆಚ್ಚು ಆಟಗಾರರು ಔಟ್! ಇಲ್ಲಿದೆ ವಿವಿಧ ಸೆಟ್ ಗಳಲ್ಲಿ ಲಭ್ಯ ಇರುವವರ ಅಂತಿಮ ಪಟ್ಟಿ!

IPL 2026 Mini Auction- ಐಪಿಎಲ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಮಿನಿ ಹರಾಜು ಪ್ರಕ್ರಿಯೆ ನಡೆಯಲು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಈ ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದು, 1355 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಲ್ರೌಂಡರ್ ಆಗಿರುವ ಕ್ಯಾಮೆರಾನ್ ಗ್ರೀನ್ ಅವರು ಈ ಬಾರಿ ಹರಾಜಿಗೆ ಲಭ್ಯರಿದ್ದು ಅವರನ್ನು ಕೊಂಡುಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಮುಗಿ ಬೀಳಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ವಿಜಯ ಕರ್ನಾಟಕ 9 Dec 2025 4:49 pm

ಉಡುಪಿ | ಪೆರಂಪಳ್ಳಿ ಶೀಂಬ್ರ ನದಿಗೆ ಸಂರಕ್ಷಣಾ ಕಾಮಗಾರಿಗೆ ಚಾಲನೆ

ಉಡುಪಿ, ಡಿ.9: ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟ ಕಳೆದ ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಕೊಚ್ಚಿ ಹೋಗಿ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ತಕ್ಷಣ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣಾ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿ ಇದೀಗ ಮಂಜೂರಾದ 2.25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ನಡೆಸಲಾಗುತ್ತಿದೆ ಎಂದರು. ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರಾದ ಕೆ.ರಮೇಶ್ ರಾವ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿದರು. ಈ ಸಂದರ್ಭಲ್ಲಿ ದೇವಳದ ಅರ್ಚಕ ನವೀನ್ ಶಿವತ್ತ, ಸ್ಥಳೀಯ ನಗರಸಭಾ ಸದಸ್ಯೆ ಅನಿಟ ಡಿಸೋಜ, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ, ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಡೆನಿಸ್ ಮಸ್ಕರೇನಸ್, ಶಶಾಂಕ್ ಶಿವತ್ತಾಯ, ವಿಜಯ ಪೂಜಾರಿ, ಸಂತೋಷ್ ಅಮೀನ್, ಸುಮ, ಯಶೋಧರ ಅಮೀನ್, ಲೀನಾ, ರಂಜಿತ್, ಸತೀಶ್, ಶೆರ್ಲಿನ್ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 4:48 pm

ಪೌರತ್ವಕ್ಕೂ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ಗಾಂಧಿಗೆ ದಿಲ್ಲಿ ನ್ಯಾಯಾಲಯದ ನೋಟಿಸ್

ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು 1983ರಲ್ಲಿ ಭಾರತೀಯ ಪೌರತ್ವವನ್ನು ಪಡೆಯುವ ಮೊದಲೇ 1980ರ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದರು, ವಂಚನೆ ಮತ್ತು ಫೋರ್ಜರಿ ಅಪರಾಧಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಕೋರಿ ಸಲ್ಲಿಸಲಾಗಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ದಿಲ್ಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಸೋನಿಯಾ ಮತ್ತು ದಿಲ್ಲಿ ಪೋಲಿಸರಿಗೆ ನೋಟಿಸ್‌ಗಳನ್ನು ಹೊರಡಿಸಿದೆ. 1983ರ ಎಪ್ರಿಲ್‌ನಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದರೂ 1980ರಲ್ಲಿ ಹೊಸದಿಲ್ಲಿ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಕ್ಕಾಗಿ ಸೋನಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ನೀಡಲು ನಿರಾಕರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿಕಾಸ ತ್ರಿಪಾಠಿ ಎನ್ನುವವರು ಸಲ್ಲಿಸಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಧೀಶ ವಿಶಾಲ ಗೋಗ್ನೆ ಅವರು ಸೋನಿಯಾ ಮತ್ತು ದಿಲ್ಲಿ ಪೋಲಿಸರಿಗೆ ನೋಟಿಸ್‌ಗಳನ್ನು ಹೊರಡಿಸುವಂತೆ ಆದೇಶಿಸಿದರು. ಸೆ.11ರಂದು ತ್ರಿಪಾಠಿಯವರ ಅರ್ಜಿಯನ್ನು ವಜಾಗೊಳಿಸಿದ್ದ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವೈಭವ ಚೌರಾಸಿಯಾ ಅವರು,ಅರ್ಜಿದಾರರು ಸೋನಿಯಾ ವಿರುದ್ಧ ವಂಚನೆ ಮತ್ತು ಫೋರ್ಜರಿ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ,ಆದರೆ ಅವರು ಆರೋಪಿಸಿರುವ ಅಪರಾಧಗಳನ್ನು ರೂಪಿಸಲು ಅಗತ್ಯವಾದ ಮೂಲಭೂತ ಅಂಶಗಳ ಕೊರತೆಯಿದೆ ಎಂದು ಹೇಳಿದ್ದರು.

ವಾರ್ತಾ ಭಾರತಿ 9 Dec 2025 4:47 pm

ಈ ಜಿಲ್ಲೆಗಳ ನಿವೇಶನ ಮಾಲೀಕರಿಗೆ ಸರ್ಕಾರ ಗುಡ್‌ನ್ಯೂಸ್‌, ಸದನದಲ್ಲಿ ಮಹತ್ವದ ನಿರ್ಧಾರ

ರಾಜ್ಯ ಸರ್ಕಾರವು ನಿವೇಶನದಾರರಿಗೆ ಸಿಹಿಸುದ್ದಿ ನೀಡಿದೆ. ಒಂದು ಅಥವಾ ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಅವರು ಮಾಹಿತಿ ನೀಡಿದ್ದಾರೆ. ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಏಕ ಅಥವಾ ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತು ವಿಶೇಷ

ಒನ್ ಇ೦ಡಿಯ 9 Dec 2025 4:47 pm

ಕುಡುಕರು ಆನ್‌ಲೈನ್ ಮೂಲಕ ಬೆಂಗಳೂರಲ್ಲಿ ಎಣ್ಣೆ ಆರ್ಡರ್ ಮಾಡಲು ಅವಕಾಶ ಕಲ್ಪಿಸಲು ದಿಢೀರ್... Liquor Online Delivery

ಎಣ್ಣೆ ಇಲ್ಲದೆ ಬಹುತೇಕರಿಗೆ ಜೀವನವೇ ಇಲ್ಲ ಅನ್ನುವ ವಾತಾವರಣ ಇದೆ, ಎಣ್ಣೆ ಇಲ್ಲದೆ ಏನೂ ಆಗಲ್ಲ ಅನ್ನೋ ಮನಸ್ಥಿತಿ ಕೂಡ ಇದೆ. ನಾವು ಮಾತನಾಡ್ತಾ ಇರೋದು ಅಡುಗೆ ಎಣ್ಣೆಯ ಬಗ್ಗೆ ಅಲ್ಲ, ಎಣ್ಣೆ ಅಂದ್ರೆ ಬಿಯರ್, ಬ್ರಾಂಡಿ, ರಮ್, ವಿಸ್ಕಿ... ಇತ್ಯಾದಿ &ಇತ್ಯಾದಿ ಬಗ್ಗೆ. ಅಷ್ಟಕ್ಕೂ ಹೀಗೆ ಎಣ್ಣೆ ಹೊಡೆಯುವವರನ್ನ ಕುಡುಕರು ಅಂತಾ ಆಡಿಕೊಳ್ಳುತ್ತಾರೆ ಜನ,

ಒನ್ ಇ೦ಡಿಯ 9 Dec 2025 4:44 pm

ದೀಪಂ ವಿವಾದ: ನ್ಯಾಯಾಧೀಶರ ವಿರುದ್ಧ ವಾಗ್ದಂಡನೆಗೆ ಲೋಕಸಭಾ ಸ್ಪೀಕರ್‌ಗೆ ನೋಟಿಸ್ ಸಲ್ಲಿಸಿದ ಡಿಎಂಕೆ

ಚೆನ್ನೈ: ಆಡಳಿತಾರೂಢ ಡಿಎಂಕೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ವಿರುದ್ಧ ವಾಗ್ಡಂಡನೆ ಪ್ರಕ್ರಿಯೆಗಳನ್ನು ಕೋರಿ ನೋಟಿಸನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಂಗಳವಾರ ಸಲ್ಲಿಸಿದೆ. ಇಂಡಿಯಾ ಮೈತ್ರಿಕೂಟದ ಸಂಸದರ ನಿಯೋಗವು 120 ಸಹಿಗಳಿರುವ ವಾಗ್ದಂಡನೆ ನೋಟಿಸನ್ನು ಸ್ಪೀಕರ್‌ಗೆ ಹಸ್ತಾಂತರಿಸಿತು. ದೇವಸ್ಥಾನ ಮತ್ತು ಸಮೀಪದಲ್ಲಿ ದರ್ಗಾ ಇರುವ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಕೋತ್ಸವದ ದೀಪವನ್ನು ಬೆಳಗಿಸಲು ಅನುಮತಿ ನೀಡಿ ನ್ಯಾ.ಸ್ವಾಮಿನಾಥನ್ ಅವರು ಆದೇಶಿಸಿದ ಬಳಿಕ ಹೊಗೆಯಾಡುತ್ತಿರುವ ವಿವಾದದ ನಡುವೆಯೇ ಈ ಬೆಳವಣಿಗೆ ನಡೆದಿದೆ. ನ್ಯಾಯಾಲಯದ ಆದೇಶದಂತೆ ಡಿ.4ರ ವೇಳೆಗೆ ‘ದೀಪತ್ತೋನ್’ ಸ್ತಂಭದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಸ್ಥಾನದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಸಮಿತಿ ಎತ್ತಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ಇದರಿಂದ ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಪೋಲಿಸರ ಬೆಂಗಾವಲಿನೊಂದಿಗೆ ದೀಪ ಹಚ್ಚುವ ವಿಧಿಯನ್ನು ನಡೆಸಲು ಭಕ್ತರ ಸಣ್ಣ ಗುಂಪೊಂದಕ್ಕೆ ಅವಕಾಶ ಒದಗಿಸುವಂತೆಯೂ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಆದರೆ ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಳವಳಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿತ್ತು. ಇದು ಹಿಂದುತ್ವ ಪರ ಗುಂಪುಗಳಿಂದ ಪ್ರತಿಭಟನೆಗಳು,ಪೋಲಿಸರೊಂದಿಗೆ ಸಂಘರ್ಷಗಳಿಗೆ ಕಾರಣವಾಗಿದ್ದು, ಈಗ ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ಸಂಘರ್ಷವಾಗಿ ಉಲ್ಬಣಗೊಂಡಿದೆ.

ವಾರ್ತಾ ಭಾರತಿ 9 Dec 2025 4:41 pm

ನಟ ವಿಜಯ್ ರ‍್ಯಾಲಿಗೆ ನುಗ್ಗಲು ಯತ್ನಿಸಿದ ಬಂದೂಕುಧಾರಿಯ ಬಂಧನ

ಪುದುಚೇರಿಯಲ್ಲಿ ಟಿವಿಕೆ ಪಕ್ಷದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ

ವಾರ್ತಾ ಭಾರತಿ 9 Dec 2025 4:37 pm

IPL 2026: ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ

IPL 2026 Player Auction List: ಐಪಿಎಲ್‌ 2025 ಫೈನಲ್‌ನಲ್ಲಿ ಆರ್‌ಸಿಬಿಯು ಪಂಜಾಬ್‌ ಕಿಂಗ್ಸ್‌ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದೆ. ಒಟ್ಟು 1,355 ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಇದೀಗ ಇದರಲ್ಲಿ ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಹಾಗಾದ್ರೆ, ಎಷ್ಟು ಮಂದಿಯನ್ನು ಕೈಬಿಡಲಾಗಿದೆ ಹಾಗೂ ಉಳಿದುಕೊಂಡಿರುವವರ ಸಂಖ್ಯೆ ಎಷ್ಟು ಎನ್ನುವ

ಒನ್ ಇ೦ಡಿಯ 9 Dec 2025 4:32 pm

ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರ, ತಪ್ಪು ಕಲ್ಪನೆ ಬೇಡ - ಸರಕಾರದ ಸ್ಪಷ್ಟನೆ

ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ 1,777 ಎಕರೆ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಸರಕಾರ ಘೋಷಿಸಿದೆ. ಈ ವಲಯದಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ, ಆದರೆ ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಕಡಿವಾಣ ಹಾಕಲಾಗಿದೆ. ಕೃಷಿ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿ, ಹೂಡಿಕೆ ಆಕರ್ಷಿಸುವ ಗುರಿ ಹೊಂದಿರುವುದಾಗಿ ಸರಕಾರ ಸ್ಪಷ್ಟನೆ ನೀಡಿದೆ.

ವಿಜಯ ಕರ್ನಾಟಕ 9 Dec 2025 4:31 pm

ಎಸ್‌ಐಆರ್ ಪಟ್ಟಿ ಪ್ರಕಟವಾದ ತಕ್ಷಣ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆ: ಸಿಎಂ ಮಮತಾ ಬ್ಯಾನರ್ಜಿ

ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಮತದಾರರಲ್ಲಿ ಭಯ ಮೂಡಿಸುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ನೇತೃತ್ವದ ಸರ್ಕಾರ ಅರಾಜಕ ಮತ್ತು ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.

ವಿಜಯ ಕರ್ನಾಟಕ 9 Dec 2025 4:28 pm

5 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಲೈಟ್‍ಹೌಸ್ ಬೀಚ್ ಅಭಿವೃದ್ಧಿ: ಸಚಿವ ಎಚ್.ಕೆ.ಪಾಟೀಲ್

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.9: ಉಡುಪಿ ಜಿಲ್ಲೆಯ ಲೈಟ್ ಹೌಸ್ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದಿಂದ ಅನುಷ್ಠಾನಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು. ಕಾಪು ಕ್ಷೇತ್ರದ ಪಡುಬಿದ್ರಿ ನಡಿಘಟ್ಟ ಬೀಚ್ ರಸ್ತೆಯ ಎಂಡ್ ಪಾಯಿಂಟ್‍ನಲ್ಲಿ ಸಂಪರ್ಕ ಸೇತುವೆ ಹಾಗೂ ಕೂಡು ರಸ್ತೆ ನಿಮಾರ್ಣ ಕಾಮಗಾರಿಯನ್ನು 75 ಲಕ್ಷ ರೂ. ನಲ್ಲಿ ಪೂರ್ಣಗೊಳಿಸಲಾಗಿದೆ. 2025-26ನೆ ಸಾಲಿಗೆ ಆಯವ್ಯಯದಲ್ಲಿ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 86 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರಲ್ಲಿ ಪ್ರವಾಸಿ ತಾಣಗಳ ಆದ್ಯತೆಗೆ ಅನುಗುಣವಾಗಿ ಪರಿಶೀಲಿಸಿ 14 ಕೋಟಿ ರೂ., ವೆಚ್ಚದ ನೂತನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಲ್ಲಿ ಕಾಪು ತಾಲೂಕಿನ ಕಾಪು ಬೀಚ್, ಲೈಟ್ ಹೌಸ್, ಪಡುಬಿದ್ರೆ ಎಂಡ್ ಪಾಯಿಂಟ್, ಬ್ಲೂ ಫ್ಲಾಗ್ ಬೀಚ್, ಕಾಪು ಮಾರಿಗುಡಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಡುಪಿ ಕುಂಜರುಗಿರಿಯ ಶ್ರೀ ದುರ್ಗಾ ದೇವಿ ದೇವಸ್ಥಾನ ಹಾಗೂ ಮುಟ್ಟು ರಾಕ್ ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಲು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಾರ್ತಾ ಭಾರತಿ 9 Dec 2025 4:27 pm

23 ಕಂಬಳೋತ್ಸವಕ್ಕೆ ತಲಾ 5 ಲಕ್ಷ ರೂ. ನೆರವು : ಸಚಿವ ಎಚ್.ಕೆ.ಪಾಟೀಲ್

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ. 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ 23 ಕಂಬಳೋತ್ಸವಗಳಿಗೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಘೋಷಣೆ ಮಾಡಿದ್ದಾರೆ. ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2025-26ನೆ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ಉತ್ಸವಗಳಿಗೆ ಅನುದಾನ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಇದಕ್ಕೆ ಸರಕಾರದಿಂದ ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಕಡತ ರವಾನಿಸಲಾಗಿದೆ. 2024-25ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ವೇಣೂರಿನಲ್ಲಿ ಆಯೋಜಿಸಿದ್ದ ಕಂಬಳೋತ್ಸವಗಳಿಗೆ ತಲಾ 5 ಲಕ್ಷದಂತೆ ಒಟ್ಟು 50 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಕರಾವಳಿ ಭಾಗದ ಸದಸ್ಯರಾದ ಸುನೀಲ್ ಕುಮಾರ್, ವೇದವಾಸ್ ಕಮಾತ್, ಅಶೋಕ್ ಕುಮಾರ್ ರೈ ಸೇರಿದಂತೆ ಪ್ರಮುಖರು, ಕರಾವಳಿ ಭಾಗದಲ್ಲಿ ಕಂಬಳೋತ್ಸವ ಮುಖ್ಯವಾದ ಕ್ರೀಡೆ ಮಾತ್ರವಲ್ಲದೆ, ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜನ ನೀಡಲಿದೆ. ಹೀಗಾಗಿ, ರಾಜ್ಯ ಸರಕಾರ ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ ಕಂಬಳೋತ್ಸವಗಳಿಗೆ ಪ್ರತಿ ವರ್ಷ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಶಾಸಕರುಗಳ ಅಭಿಪ್ರಾಯದಂತೆ 23 ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆಗ ಸಚಿವರ ನಿರ್ಧಾರವನ್ನು ಸಭಾಧ್ಯಕ್ಷ ಯು.ಟಿ.ಖಾದರ್, ಸೇರಿ ಹಲವು ಶಾಸಕರುಗಳು ಒಕ್ಕೊರಲಿನಿಂದ ಅಭಿನಂದಿಸಿದರು. 

ವಾರ್ತಾ ಭಾರತಿ 9 Dec 2025 4:21 pm

ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ 150 ಕೋಟಿ ರೂ. ಬಿಡುಗಡೆ : ಸಚಿವ ರಹೀಂ ಖಾನ್

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಪೌರಾಡಳಿತ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿವಿಧ ಯೋಜನೆಗಳಡಿಯಲ್ಲಿ 2023 ಸಾಲಿನಿಂದ ಇಲ್ಲಿಯವರೆಗೆ 150.08 ಕೋಟಿ ರೂ. ಬಿಡುಗಡೆಯಾಗಿದ್ದು, 142.32 ಕೋಟಿ ರೂ. ವೆಚ್ಚವಾಗಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ಮಂಗಳವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೆ.ವಿವೇಕಾನಂದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.3 ಕಿ.ಮೀ. ರಸ್ತೆಗಳು ಅಧಿಕ ಮಳೆಯಿಂದ ಹಾಳಾಗಿದ್ದು, ಈ ರಸ್ತೆಗಳನ್ನು ದುರಸ್ಥಿಪಡಿಸಲು 3.30 ಕೋಟಿ ರೂ.ಗಳ ಮೊತ್ತಕ್ಕೆ ಅಂದಾಜು ಸಿದ್ಧಪಡಿಸಲಾಗಿದೆ. 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಅನುದಾನದಲ್ಲಿ ಸದರಿ ರಸ್ತೆಗಳನ್ನು ದುರಸ್ಥಿಪಡಿಸಲಾಗುತ್ತಿದೆ ಎಂದರು. ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ 13 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಒಟ್ಟು ಮೊತ್ತ 2.77 ಕೋಟಿ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 9 ಕಿ.ಮೀ. ರಸ್ತೆ, ದುರಸ್ತಿ ಕಾಮಗಾರಿಯನ್ನು ಸ್ಥಳೀಯ ಸಂಸ್ಥೆ ನಿಧಿಯಡಿ ಲಭ್ಯವಿರುವ 50 ಲಕ್ಷ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ರಹೀಂ ಖಾನ್ ಹೇಳಿದರು.

ವಾರ್ತಾ ಭಾರತಿ 9 Dec 2025 4:16 pm

ಐದು ವರ್ಷಗಳಲ್ಲಿ 6.15 ಲಕ್ಷ ಕೋಟಿ ರೂ. ಸಾಲಗಳನ್ನು ʼರೈಟ್ ಆಫ್ʼ ಮಾಡಿದ ಸರಕಾರಿ ಬ್ಯಾಂಕುಗಳು

ಹೊಸದಿಲ್ಲಿ: ಆರ್‌ಬಿಐ ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ ಸರಕಾರಿ ಬ್ಯಾಂಕುಗಳು ಕಳೆದ ಐದು ವಿತ್ತವರ್ಷಗಳಲ್ಲಿ ಮತ್ತು ಪ್ರಸಕ್ತ ವಿತ್ತವರ್ಷದಲ್ಲಿ ಸೆ.30ರವರೆಗಿನ ಅವಧಿಯಲ್ಲಿ 6.15 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿವೆ ಅಥವಾ ತಮ್ಮ ಲೆಕ್ಕ ಪುಸ್ತಕಗಳಿಂದ ತೊಡೆದುಹಾಕಿವೆ. ದೊಡ್ಡ ಪ್ರಮಾಣದಲ್ಲಿ ಸಾಲಗಳನ್ನು ರೈಟ್ ಆಫ್ ಮಾಡಲಾಗಿದ್ದರೂ ಕೇಂದ್ರ ಸರಕಾರವು ಸುಧಾರಿತ ಆರ್ಥಿಕ ಸಾಧನೆ ಮತ್ತು ಬಲವಾದ ಬಂಡವಾಳ ಸ್ಥಿತಿಯನ್ನು ಉಲ್ಲೇಖಿಸಿ 2022-23ನೇ ವಿತ್ತವರ್ಷದಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಬಂಡವಾಳವನ್ನು ಹರಿಸಿಲ್ಲ. ರೈಟ್ ಆಫ್ ಮಾಡಲಾದ ಸಾಲಗಳ ಮೊತ್ತ 2020-21ರಲ್ಲಿ 1.33 ಲಕ್ಷ ಕೋಟಿ ರೂ.ಗೇರಿತ್ತು. 2021-22ರಲ್ಲಿ 1.16 ಲಕ್ಷ ಕೋಟಿ ರೂ.ಇಳಿದಿದ್ದ ಅದು 2022-23ರಲ್ಲಿ ಮತ್ತೆ 1.27 ಲಕ್ಷ ಕೋಟಿ ರೂ.ಗೇರಿತ್ತು. ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ಸಾಲಗಳ ಪೈಕಿ ಕೇವಲ 1.65 ಲಕ್ಷ ಕೋಟಿ ರೂ.ಗಳನ್ನು ವಸೂಲಿ ಮಾಡಿವೆ. ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಬಂಡವಾಳ ಬೆಂಬಲದ ಅನುಪಸ್ಥಿತಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹವನ್ನು ಹೆಚ್ಚಿಸುತ್ತಿವೆ. ಅವು ಎ.2022 ಮತ್ತು ಸೆ.2025ರ ನಡುವೆ ಈಕ್ವಿಟಿ ಮತ್ತು ಬಾಂಡ್ ವಿತರಣೆಗಳ ಮೂಲಕ 1.79 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಬ್ಯಾಂಕುಗಳ ಲಾಭದಾಯಕತೆ ಹೆಚ್ಚಾಗಿರುವುದರಿಂದ ಅವು ಈಗ ಮಾರುಕಟ್ಟೆ ಹಣಕಾಸು ಮತ್ತು ಆಂತರಿಕ ಆದಾಯ ಸಂಗ್ರಹಗಳನ್ನು ನೆಚ್ಚಿಕೊಂಡಿವೆ ಎಂದು ಸರಕಾರವು ಹೇಳಿದೆ. ಸಹಾಯಕ ವಿತ್ತಸಚಿವ ಪಂಕಜ್ ಚೌಧರಿಯವರ ಪ್ರಕಾರ,‌ ಬ್ಯಾಂಕುಗಳು ಸಾಮಾನ್ಯವಾಗಿ ನಾಲ್ಕು ವರ್ಷಗಳ ಬಳಿಕ ಆರ್‌ಬಿಐ ನಿಯಮಗಳು ಮತ್ತು ಆಡಳಿತ ಮಂಡಳಿಯಿಂದ ಅನುಮೋದಿತ ನೀತಿಗಳ ಪ್ರಕಾರ ಅನುತ್ಪಾದಕ ಆಸ್ತಿಗಳಿಗೆ (ಎನ್‌ಪಿಎ) ಸಂಪೂರ್ಣ ಅವಕಾಶವನ್ನು ಕಲ್ಪಿಸಿದ ಬಳಿಕ ಸಾಲಗಳನ್ನು ರೈಟ್ ಆಫ್ ಮಾಡುತ್ತವೆ. ರೈಟ್ ಆಫ್ ಎಂದರೆ ಸಾಲಗಳ ಮನ್ನಾ ಎಂದು ಅರ್ಥವಲ್ಲ ಮತ್ತು ಸಾಲಗಾರರು ತಮ್ಮ ಸಾಲಬಾಕಿಗಳನ್ನು ಮರುಪಾವತಿಸಲು ಹೊಣೆಗಾರರಾಗಿರುತ್ತಾರೆ. ಸಿವಿಲ್ ನ್ಯಾಯಾಲಯಗಳು,ಸಾಲ ವಸೂಲಾತಿ ನ್ಯಾಯಮಂಡಳಿಗಳು, SARFAESI ಕಾಯ್ದೆಯಡಿ ಕ್ರಮ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ದಿವಾಳಿತನ ಪ್ರಕ್ರಿಯೆಗಳು ಸೇರಿದಂತೆ ವಿವಿಧ ಕಾರ್ಯವಿಧಾನಗಳ ಮೂಲಕ ಬ್ಯಾಂಕುಗಳು ಮರುವಸೂಲಿ ಪ್ರಯತ್ನಗಳನ್ನು ಮುಂದುವರಿಸುತ್ತವೆ ಎಂದು ಸಚಿವರು ವಿವರಿಸಿದರು.

ವಾರ್ತಾ ಭಾರತಿ 9 Dec 2025 4:15 pm

ನದಿ ಮೂಲ ಕಲುಷಿತಗೊಳ್ಳದಂತೆ ಬಡಾವಣೆಗಳ ಅಭಿವೃದ್ಧಿ: ಸಚಿವ ಬೈರತಿ ಸುರೇಶ್

ಬೆಳಗಾವಿ(ಸುವರ್ಣವಿಧಾನಸೌಧ), ಡಿ.9: ರಾಜ್ಯದ ಎಲ್ಲ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಮಂಗಳವಾರ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಎಸ್.ಟಿ.ಪಿ.ಯನ್ನು ಕಡ್ಡಾಯವಾಗಿ ಅಳವಡಿಸುವ ನಿಬಂಧನೆಯಿದ್ದು, ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲಾ ಬಡಾವಣೆಗಳಲ್ಲಿ ಎಸ್.ಟಿ.ಪಿ. ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ಮಾರ್ಗಸೂಚಿಗಳನುಸಾರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಲಾಗುವ ಬಡಾವಣೆಗಳಲ್ಲಿನ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ನಿಯಮಗಳು, 1991 ರಲ್ಲಿನ ಅವಕಾಶಗಳಂತೆ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು. ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಕ್ರಮದೊಂದಿಗೆ, ರೈತರ ಸಹಭಾಗಿತ್ವದೊಂದಿಗೆ ಕರ್ನಾಟಕ ನಗರಾಭಿವೃದ್ಧಿ, ಪ್ರಾಧಿಕಾರಗಳ (ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರಗಳ ಬದಲಿಗೆ ನಿವೇಶನಗಳ ಹಂಚಿಕೆ) ನಿಯಮಗಳು, 2009 ರಲ್ಲಿನ ಅವಕಾಶದಂತೆ ವ್ಯಾಪಕವಾಗಿ ಶೇ.50:50 ರ ಅನುಪಾತದಡಿಯಲ್ಲಿ ಬಡಾವಣೆ ನಿರ್ಮಿಸಲು ಕ್ರಮವಹಿಸುತ್ತಿವೆ ಎಂದು ಬೈರತಿ ಸುರೇಶ್ ಹೇಳಿದರು.

ವಾರ್ತಾ ಭಾರತಿ 9 Dec 2025 4:10 pm

Liquor Sales; ಆದಾಯ ಸಂಗ್ರಹ: ಮದ್ಯ ಮಾರಾಟಕ್ಕೆ ಗುರಿ ನಿಗದಿ ಬಗ್ಗೆ ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

ಬೆಳಗಾವಿ, ಡಿಸೆಂಬರ್‌ 09: ರಾಜ್ಯದಲ್ಲಿ ಮದ್ಯ ಮಾರಾಟ ಸಂಬಂಧಿಸಿದಂತೆ, ಇಷ್ಟೇ ಪ್ರಮಾಣದ ಮದ್ಯವನ್ನು ನಿಗದಿತ ಅವಧಿಯಲ್ಲಿ ಮಾರಾಟ ಮಾಡಬೇಕು ಎಂಬ ಯಾವುದೇ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಿಲ್ಲ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಸ್ಪಷ್ಟಪಡಿಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.

ಒನ್ ಇ೦ಡಿಯ 9 Dec 2025 4:04 pm

ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗಳಿಂದ ಬೆಂಕಿ ಉರಿಯುತ್ತಿರುವುದು ಮತ್ತು ಒಳಗೆ ಸಿಲುಕಿದವರನ್ನು ರಕ್ಷಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 9 Dec 2025 4:04 pm

ಇಂಡೋನೇಷ್ಯಾದಲ್ಲಿ ಭಾರಿ ಅಗ್ನಿ ದುರಂತ: 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, ಗರ್ಭಿಣಿ ಸೇರಿ 20 ಸಾವು

ಜರ್ಕಾತ್‌ನಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ಪರಿಣಾಮ ಇಪ್ಪತ್ತು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಖಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡದ ಮೇಲಿನ ಮಹಡಿಗಳಿಂದ ಬೆಂಕಿ ಉರಿಯುತ್ತಿರುವುದು ಮತ್ತು ಒಳಗೆ ಸಿಲುಕಿದವರನ್ನು ರಕ್ಷಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 9 Dec 2025 4:04 pm

ಉಡುಪಿ | ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

ಉಡುಪಿ, ಡಿ.9: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿಯಾಗಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದ ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಅನಿವಾರ್ಯ, ಇಲ್ಲವಾದರೆ ನಮ್ಮ ವಿದ್ಯಾರ್ಥಿಗಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಹೇಳಿದರು. ಕ್ರೀಡಾಕೂಟವನ್ನು ಉದ್ಯಮಿ ಹಾಗೂ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯ ಯಾಸೀನ್ ಕೋಡಿಬೆಂಗ್ರೆ ಶಾಂತಿಯ ಸಂಕೇತವಾಗಿರುವ ಪಾರಿವಾಳವನ್ನು ಹಾರಿಸುವುದರ ಮೂಲಕ ಉದ್ಘಾಟಿಸಿದರು. ಅನಿವಾಸಿ ಭಾರತೀಯ ಜನಾಬ್ ಖತೀಬ್ ಉಮ್ರಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಇತ್ತೀಚೆಗೆ ಮೈಸೂರು ವಿಭಾಗ ಮಟ್ಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಫುಟ್ ಬಾಲ್ ಪಂದ್ಯಾಟದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಹನವಾಜ್ ಹುಸೇನ್ ಹಾಗೂ ಹಿರಿಯ ವಿಶ್ವಸ್ಥ ಮಂಡಳಿ ಸದಸ್ಯ ಹುಸೇನ್ ಮಾಸ್ಟರ್ ಚಾಂಪಿಯನ್ ವಿಜೇತರಿಗೆ ಪಾರಿತೋಷಕ ವಿತರಿಸಿದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಮೌಲಾನಾ ಆದಂ ಸಾಹೇಬ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಮುಖ್ಯ ಶಿಕ್ಷಕಿ ಸುನಂದಾ, ಪ್ರಾಂಶುಪಾಲ ರುಗಳಾದ ಡಾ.ಶಬೀನಾ, ದಿವ್ಯಾ ಪೈ, ಜಾಮಿಯಾ ವಿಭಾಗದ ಮುಖ್ಯಸ್ಥ ಕುಲ್ಸುಮ್ ಅಬೂಬಕರ್, ಇಸ್ಲಾಮಿಕ್ ವಿಭಾಗದ ಮುಖ್ಯಸ್ಥೆ ಶಾಹಿದ್ ನದ್ವಿ ಮುಂತಾದವರು ಉಪಸ್ಥಿತರಿದ್ದರು. ಶಾಲಾ ವಿಭಾಗದ ಅಕಾಡೆಮಿ ಮುಖ್ಯಸ್ಥ ಹಾಸೀಬ್ ತರಫ್ದಾರ್ ಸ್ವಾಗತಿಸಿದರು. ಶಿಕ್ಷಕಿ ಯಾಸ್ಮೀನ್ ವಂದಿಸಿದರು. ಶಿಕ್ಷಕಿ ರುಮಾನಾ ಹಾಗೂ ಶಾಹದತ್ ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 9 Dec 2025 4:02 pm

1 ದಶಕದ ನಂತರ ಕ್ರೂಯಲ್‌ ಮೇಜರ್‌ ಪಾತ್ರದ ಮೂಲಕ ಕೊರಿಯನ್‌ ಇಂಡಸ್ಟ್ರಿಗೆ ಮತ್ತೆ ರೀ-ಎಂಟ್ರಿ ಕೊಟ್ಟ ಪಾರ್ಕ್‌ ಸಿ-ಹೂ

ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್‌ ಆಫ್‌ ಗಾಡ್‌' ಚಿತ್ರದ ಮೂಲಕ ಕೊರಿಯನ್‌ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿಯಿಂದ ಸ್ಪಷ್ಟನೆ ನೀಡಿದ್ದಾರೆ. ಕಠಿಣ ಚಿತ್ರೀಕರಣದಿಂದ ತಂಡದ ನಡುವೆ ಸಹೋದರತ್ವ ಬೆಳೆದಿದೆ ಎಂದು ನಟರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 4:00 pm

1 ದಶಕದ ನಂತರ ಕ್ರೂಯಲ್‌ ಮೇಜರ್‌ ಪಾತ್ರದ ಮೂಲಕ ಕೊರಿಯನ್‌ ಇಂಡಸ್ಟ್ರಿಗೆ ಮತ್ತೆ ರೀ-ಎಂಟ್ರಿ ಕೊಟ್ಟ ಪಾರ್ಕ್‌ ಸಿ-ಹೂ

ನಟ ಪಾರ್ಕ್ ಸಿ-ಹೂ ಅವರು ಸುಮಾರು ಒಂದು ದಶಕದ ಬಳಿಕ 'ಕೋಯರ್‌ ಆಫ್‌ ಗಾಡ್‌' ಚಿತ್ರದ ಮೂಲಕ ಕೊರಿಯನ್‌ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಈ ವೇಳೆ ವೈಯಕ್ತಿಕ ಜೀವನದ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಚಿತ್ರದ ಹಿತದೃಷ್ಟಿಯಿಂದ ಸ್ಪಷ್ಟನೆ ನೀಡಿದ್ದಾರೆ. ಕಠಿಣ ಚಿತ್ರೀಕರಣದಿಂದ ತಂಡದ ನಡುವೆ ಸಹೋದರತ್ವ ಬೆಳೆದಿದೆ ಎಂದು ನಟರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 4:00 pm

liquor lovers: ಮದ್ಯ ಪ್ರಿಯರ ಸಮಸ್ಯೆಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ, ಏನಿದು ಹೊಸ ಆರೋಗ್ಯ ಸಮಸ್ಯೆ!

liquor lovers: ಕರ್ನಾಟಕದಲ್ಲಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಹಲವು ಬಾರಿ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಆದರೆ, ಮದ್ಯ ಮಾರಾಟ ಇಳಿಕೆ ಹಾಗೂ ಮದ್ಯ ಬೆಲೆ ಏರಿಕೆಯ ನಡುವೆ ಇದೀಗ ಮದ್ಯ ಪ್ರಿಯರು ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ

ಒನ್ ಇ೦ಡಿಯ 9 Dec 2025 3:59 pm

'ವಂದೇ ಮಾತರಂ' ಗೀತೆಯ ಮೊದಲ ಭಾಗ ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ಇತಿಹಾಸದ ಉಲ್ಲೇಖ

1937ರಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಭಾಗವನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ರವೀಂದ್ರನಾಥ್ ಠಾಗೋರ್ ಅವರ ಸಲಹೆ ಕಾರಣವಾಗಿತ್ತು ಎಂದು ಇತಿಹಾಸಕಾರ ಸುಗತಾ ಬೋಸ್ ವಿವರಿಸಿದ್ದಾರೆ. ಪ್ರಧಾನಿ ಮೋದಿ ಅವರ 'ವಂದೇ ಮಾತರಂ' ವಿಭಜನೆ ಆರೋಪಕ್ಕೆ ಕಾಂಗ್ರೆಸ್ ಈ ಸ್ಪಷ್ಟನೆ ನೀಡಿದೆ. ಸುಭಾಸ್ ಚಂದ್ರ ಬೋಸ್ ಮತ್ತು ನೆಹರೂ ಅವರ ನಿಕಟ ಸಹಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ವಿಜಯ ಕರ್ನಾಟಕ 9 Dec 2025 3:59 pm

532 ಎಕರೆ ಭೂಮಿ ಕಬಳಿಕೆ ಯತ್ನ: ಸಿಐಡಿ ತನಿಖೆ ಕೋರಿ ಮುಖ್ಯಮಂತ್ರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: 532 ಎಕರೆ ಅರಣ್ಯ, ಸರಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ ಸಂಚನ್ನು ಬಯಲು ಮಾಡಿ, ಶಿಕ್ಷಿಸಲು ಸಿಐಡಿ ತನಿಖೆಗೆ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಎಂ.ಬಿ.ನೇಮಣ್ಣ ಗೌಡ ಯಾನೆ ಎಂ.ಬಿ.ಮನ್ಮಥ ಎಂಬ ವ್ಯಕ್ತಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇನಾಮ್ ರದ್ದು ಕಾಯಿದೆ ಅಡಿ ಹಾಸನದ ವಿಶೇಷ ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರು ಕೆಂಗೇರಿ ಬಳಿಯ ಬಿಎಂ ಕಾವಲ್ ನಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎನ್ನಲಾದ 482 ಎಕರೆ ಕಾಯ್ದಿಟ್ಟ ಅರಣ್ಯಭೂಮಿ ಸೇರಿದಂತೆ ಒಟ್ಟು 532 ಎಕರೆ ಜಮೀನಿನ ದಾಖಲೆಗಳನ್ನು 3 ತಿಂಗಳೊಳಗೆ ತಮ್ಮ ಹೆಸರಿಗೆ ಮಾಡಿಕೊಡುವಂತೆ ಆದೇಶ ಪಡೆದಿದ್ದಾರೆ. 90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಸರಕಾರದ ಹೆಚ್ಚುವರಿ ಸರಕಾರಿ ವಕೀಲ ಯೋಗಣ್ಣ ಈ ಮಾಹಿತಿಯನ್ನು ಸರಕಾರಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ನೀಡಿರುವುದಿಲ್ಲ. ಬದಲಾಗಿ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವಂತೆ ವರ್ತಿಸಿದ್ದು, ಇದು ಶಂಕಾಸ್ಪದವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಸುಮಾರು 25 ಸಾವಿರ ಕೋಟಿ ರೂ. ಬೆಲೆ ಬಾಳುವ ಈ ಭೂಮಿಯ ಬಗ್ಗೆ ಕೊನೆ ಕ್ಷಣದಲ್ಲಿ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೆ ತಾವು ಸಭೆ ನಡೆಸಿ ಮೇಲ್ಮನವಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿರುವ ಈಶ್ವರ್ ಖಂಡ್ರೆ, ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಮೇಲೆ ಹೇಳಲಾದ ವ್ಯಕ್ತಿ ಮನ್ಮಥ ಯಾನೆ ನೇಮಣ್ಣ ಗೌಡ ಈ ಹಿಂದೆಯೂ ಇದೇ ರೀತಿ ಸುಳ್ಳು ಮತ್ತು ನಕಲಿ ದಾಖಲೆ ನೀಡಿ ಸರಕಾರಿ ಭೂಮಿಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದ್ದಾರೆ ಎಂದು ಗಮನ ಸೆಳೆದಿದ್ದಾರೆ. ಈ ಸಂಬಂಧ ಚಿಕ್ಕಮಗಳೂರಿನ ಅಂದಿನ ಉಪ ವಿಭಾಗಾಧಿಕಾರಿ ದಬ್ಜೀತ್ ಕುಮಾರ್ ಸದರಿ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ 2024ರ ಸೆ.25ರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಬೆಂಗಳೂರು ಬಿ.ಎಂ. ಕಾವಲ್ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಸೂಚಿಸಿದ್ದು, ನ.28ರಂದು ದೂರು ಸ್ವೀಕರಿಸಿರುವ ಮೂಡಿಗೆರೆ ಆರಕ್ಷಕ ವೃತ್ತ ನಿರೀಕ್ಷಕರು ಈವರೆಗೆ ಎಫ್.ಐ.ಆರ್. ದಾಖಲಿಸದೆ ಇರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸುವವರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೆಲವು ಅಧಿಕಾರಿಗಳು ಮತ್ತು ಹೆಚ್ಚುವರಿ ಸರಕಾರಿ ವಕೀಲರು ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಈ ಬಗ್ಗೆ ಒಂದು ಎಸ್‍ಐಟಿ ರಚಿಸಿ ಅಥವಾ ಸಿಐಡಿಗೆ ವಹಿಸಿ ಸಮಗ್ರ ತನಿಖೆ ಮಾಡಿಸಬೇಕು. ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಎಸಿಎಫ್ ವಿರುದ್ಧ ಕ್ರಮಕ್ಕೂ ಸೂಚನೆ : ಈ ಮಧ್ಯೆ ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಕಬಳಿಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಚಿಕ್ಕಮಗಳೂರಿನ ಅಂದಿನ ಉಪ ವಿಭಾಗಾಧಿಕಾರಿ ಸೂಚಿಸಿದ್ದರೂ, ದೂರು ದಾಖಲಿಸಲು ವಿಳಂಬ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ವಾರ್ತಾ ಭಾರತಿ 9 Dec 2025 3:52 pm

ಉಚ್ಚಿಲ ಬೀಚ್ ರಸ್ತೆ ಅಗಲೀಕರಣಕ್ಕೆ ಶಿಲಾನ್ಯಾಸ

ಉಳ್ಳಾಲ : ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು, ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣಕ್ಕೆ ಸ್ಪೀಕರ್ ಯುಟಿ ಖಾದರ್ ಅವರು 80 ಲಕ್ಷ ರೂ. ಅನುದಾನ ಇಟ್ಟಿದ್ದು, 40 ಲಕ್ಷ ರೂ. ಬಿಡುಗಡೆ ಗೊಳಿಸಿದ್ದಾರೆ. ಈ ರಸ್ತೆ ಅಗಲೀಕರಣಕ್ಕೆ ಸ್ಥಳೀಯರು, ಗುತ್ತಿಗೆದಾರರ ಜೊತೆ ಸಹಕಾರ ನೀಡಬೇಕು ಎಂದು ಹೇಳಿದರು. ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಸದಸ್ಯ ಯು.ಸಲಾಮ್ ಉಚ್ಚಿಲ ಮಾತನಾಡಿದರು. ಪುರಸಭೆ ಅಧ್ಯಕ್ಷ ಕಮಲ, ಸಲಾಮ್ ಉಚ್ಚಿಲ, ಮನ್ಸೂರ್ ಮಂಚಿಲ, ಸೈಫುಲ್ಲಾ ಸೋಮೇಶ್ವರ, ಇಸ್ಮಾಯಿಲ್ ಹಾಜಿ ಕೊಪ್ಪಳ, ಮಜೀದ್ ಹಾಜಿ ಉಚ್ಚಿಲ, ರಾಘವ ಆರ್.ಉಚ್ಚಿಲ, ದೀಪಕ್ ಪಿಲಾರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ದಿಲೀಪ್ ರೇಗೋ, ಪುರುಷೋತ್ತಮ ಗಟ್ಟಿ, ಇಸ್ಮಾಯಿಲ್, ಕಿಶೋರ್ ಉಚ್ಚಿಲ, ಹರೀಶ್ ಉಚ್ಚಿಲ, ಕರೀಮ್ ನಾಗದೋಟ, ಚಂದ್ರ ಉಚ್ಚಿಲ, ಯು.ಎ. ಇಬ್ರಾಹೀಮ್, ನಾಸೀರ್ ಖಾನ್, ಇಸ್ಮಾಯೀಲ್ ತಲಪಾಡಿ, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 3:40 pm

ಕುಕ್ಕುಟ ಸಂಜೀವಿನಿ ಯೋಜನೆ: ಉಚಿತ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್‌ಗೆ ಹಣ, ಜೊತೆಗೆ ಮಹಿಳಾ ಸಂಘಗಳಿಗೆ 25,000 ಸಹಾಯಧನ! ಅರ್ಜಿ ಸಲ್ಲಿಕೆ ಹೇಗೆ?

ಕುಕ್ಕುಟ ಸಂಜೀವಿನಿ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಭರವಸೆ ನೀಡಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನಾಟಿ ಕೋಳಿಮರಿ ವಿತರಣೆ, ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ವೈಜ್ಞಾನಿಕ ತರಬೇತಿ, ತಾಂತ್ರಿಕ ಸಲಹೆಗಳೊಂದಿಗೆ ಮೊಟ್ಟೆ ಮಾರಾಟಕ್ಕೆ ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಮಹಿಳೆಯರಿಗೆ ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ವಿಜಯ ಕರ್ನಾಟಕ 9 Dec 2025 3:39 pm

ಪುತ್ತೂರು | ಲಾರಿಯಿಂದ 80 ಕಾಫಿ ಚೀಲ ಕಳ್ಳತನ : ಐವರು ಆರೋಪಿಗಳ ಬಂಧನ

ಪುತ್ತೂರು: ಮಂಗಳೂರಿಗೆ ಕಾಫಿ ಬೀಜದ ಲೋಡು ಕೊಂಡೊಯ್ಯುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪುತ್ತೂರು ನಿವಾಸಿ ಆಶ್ಲೇಷ ಭಟ್ ಹಾಗೂ ಅವರ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾ‌ರ್, ವಿಜಯ ಶೆಟ್ಟಿ ಮತ್ತು ಮುಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 80 ಕಾಫಿ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುತ್ತೂರು ತಾಲೂಕಿನ ಕಬಕ ನಿವಾಸಿ ತೃತೇಶ್‌ ಎಂಬವರು ನೀಡಿದ ದೂರಿನಂತೆ, ಡಿ.3ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆ.ಜಿ ತೂಕದ 320 ಬ್ಯಾಗ್‌ಗಳನ್ನು KA 19 AB 2258 ಲಾರಿಯಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುವ ವೇಳೆ, ರಾತ್ರಿ ಪುತ್ತೂರಿನ ಕಬಕ ನೆಹರೂ ನಗರದಲ್ಲಿ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಡಿ.4ರಂದು ಮಂಗಳೂರಿನ ಬಂದರಿಗೆ ತಲುಪಿದಾಗ ಲಾರಿಯ ಹಿಂಭಾಗದ ಸೀಲ್ ತುಂಡಾಗಿದ್ದು, ತಪಾಸಣೆ ವೇಳೆ 21,44,000 ರೂ. ಮೌಲ್ಯದ 80 ಗೋಣಿ ಚೀಲಗಳು ಕಾಣೆಯಾಗಿರುವುದು ತಿಳಿದು ಬಂದಿತ್ತು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋ ಹಾಗೂ ಕಳವಾದ 80 ಕಾಫಿ ಚೀಲಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 9 Dec 2025 3:38 pm

ಬ್ಯಾಂಕ್‌ಗೆ ₹228 ಕೋಟಿ ವಂಚನೆ: ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ವಿರುದ್ಧ ಕೇಸ್‌ ದಾಖಲಿಸಿದ ಸಿಬಿಐ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 228 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ಸಿಬಿಐ, ಉದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಅನ್ಮೋಲ್ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿದೆ. ಕಂಪನಿಯು ವ್ಯವಹಾರಕ್ಕಾಗಿ ಬ್ಯಾಂಕ್‌ನಿಂದ ಪಡೆದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ, ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸದೆ ನಿಯಮ ಉಲ್ಲಂಘಿಸಲಾಗಿದೆ ಎಂದು ಬ್ಯಾಂಕ್ ದೂರು ನೀಡಿತ್ತು. ಫೊರೆನ್ಸಿಕ್ ತನಿಖೆಯಲ್ಲಿ ಸಾಲದ ಹಣವನ್ನು ಬೇರೆಡೆಗೆ ವರ್ಗಾಯಿಸಿರುವುದು ದೃಢಪಟ್ಟಿತ್ತು.

ವಿಜಯ ಕರ್ನಾಟಕ 9 Dec 2025 3:38 pm

ಮನೆ ಮನೆಗೆ ಅಂಬೇಡ್ಕರ್ ಅಭಿಯಾನವು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆ ಮೂಡಿಸಲಿ : ಭಂತೆ ವರಜ್ಯೋತಿ

ಬೀದರ್ : ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಡಿಯಲ್ಲಿ ನಡೆಯುವ ಮನೆ ಮನೆಗೆ ಅಂಬೇಡ್ಕರ್ ಅಭಿಯಾನವು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಲಿ ಎಂದು ಭಂತೆ ವರಜ್ಯೋತಿ ಅವರು ನುಡಿದರು. ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ನಿಮಿತ್ತ ಡಿ.6ರ, 2025 ರಿಂದ ಎ.14, 2026 ರ ಡಾ.ಅಂಬೇಡ್ಕರ್ ಅವರ ಜಯಂತಿವರೆಗೆ ನಡೆಯುವ 'ಮನೆ ಮನೆಗೆ ಅಂಬೇಡ್ಕರ್' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುದ್ದ ಭಾರತ ಸಮೃದ್ಧ ಭಾರತವಾಗಿದೆ. ಆದರೆ ಇಂದು ಮನುವಾದಿಗಳಿಂದ ದ್ವೇಷ, ಅಂದಕಾರ, ಅವೈಜ್ಞಾನಿಕತೆಯಿಂದ ಅದು ನಾಶವಾಗುತ್ತಿದೆ ಎಂದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 2,500 ವರ್ಷದ ಇತಿಹಾಸ ಅಧ್ಯಯನ ಮಾಡಿ, ಅಳಿದು ಹೋಗಿದ್ದ ಬುದ್ಧ ತತ್ವದ ಗತವೈಭವವನ್ನು ಸಂವಿಧಾನದ ಮೂಲಕ ಮರಳಿ ತಂದಿದ್ದಾರೆ. ಇಂದು ಸಂವಿಧಾನದ ಮೂಲಕವಾಗಿ ಬಡವರು, ಹಿಂದೂಳಿದ ವರ್ಗದವರು, ಅಲ್ಪಸಂಖ್ಯಾತ̧ರು ಶೋಷಿತರು, ಮಹಿಳೆಯರು ಹೀಗೆ ಎಲ್ಲರೂ ಶಿಕ್ಷಕಿ, ಡಾಕ್ಟರ್, ಇಂಜಿನಿಯರ್, ಪೈಲಟ್, ವಿಜ್ಞಾನಿ, ಶಾಸ̧ಕಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿ ಆಗುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಗಂಡು-ಹೆಣ್ಣು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದನ್ನು ಸಹಿಸದವರು ಡಾ. ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಂವಿಧಾನ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಇದರ ಕುರಿತು ಜಾಗೃತಿ ಮೂಡಿಸಲು ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಪೂರಕವಾಗಿದೆ. ಈ ಅಭಿಯಾನ ಯಶಸ್ವಿಯಾಗಬೇಕು ಎಂದು ಅವರು ಶುಭ ಕೋರಿದರು. ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಸಂಚಾಲಕ, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ್ ಗೋರನಾಳಕರ್ ಅವರು ಮಾತನಾಡಿ, ಅಂಬೇಡ್ಕರ್ ಅಂದರೆ ಶಿಕ್ಷಣ, ಮಹಿಳಾ ಅಭಿವೃದ್ಧಿ, ಉದ್ಯೋಗ, ಮೀಸಲಾತಿ, ಸಮಾನತೆ, ಬಂಧುತ್ವ, ಜಾತ್ಯತೀತ, ಭ್ರಾತೃತ್ವ, ರಾಷ್ಟ್ರಪ್ರೇಮ, ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದು ಹೇಳಿದರು. ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ಕಾಶಿನಾಥ್ ಚೆಲ್ವಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೊಡೆ, ಹೋರಾಟಗಾರ ಪ್ರಮುಖರಾದ ರಮೇಶ್ ಡಾಕುಳಗಿ, ಅನೀಲಕುಮಾರ್ ಬೆಲ್ದಾರ್, ಬಾಬುರಾವ್ ಪಾಸ್ವಾನ್, ದಶರಥ್ ಗುರು, ಶ್ರೀಪತರಾವ್ ದಿನೆ, ಶಿವಕುಮಾರ್ ನೀಲಿಕಟ್ಟಿ, ರಮೇಶ್ ಸಾಗರ್, ಶರಣು ಫುಲೆ, ಪ್ರಕಾಶ್ ರಾವಣ, ಹರ್ಷಿತ್ ದಾಂಡೆಕರ್, ಅಂಬಾದಾಸ್ ಗಾಯಕವಾಡ್, ಉಲ್ಲಾಸಿನಿ ಮುದಾಳೆ, ಲುಂಬಿಣಿ, ಸಂಗೀತಾ ಕಾಂಬಳೆ, ಪ್ರದೀಪ್ ನಾಟೆಕರ್, ಸಂದೀಪ್ ಕಾಂಟೆ, ಸುನೀಲ್ ಸಂಗಮ್ ಹಾಗೂ ರಮೇಶ್ ಪಾಸ್ವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 9 Dec 2025 3:28 pm

ಐದು ವರ್ಷ ಸಿಎಂ ಫಿಕ್ಸ್ ಹೇಳಿಕೆ: ವಿವಾದದ ಹೇಳಿಕೆ ಕೊಡದಂತೆ ಯತೀಂದ್ರಗೆ ಸಿದ್ದರಾಮಯ್ಯ ತಾಕೀತು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮತ್ತೆ ವಿವಾದಕ್ಕೆ ಕಾರಣವಾಗಿದ್ದು,ಈ ಕುರಿತು ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಯತೀಂದ್ರ ಅವರಿಗೆ ಖಡಕ್‌ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಇನ್ನು, ಶಾಸಕಾಂಗ ಪಕ್ಷದ ಸಭೆ ಯತೀಂದ್ರವರ ವಿವಾದಕಾರಿ ಹೇಳಿಕೆ ಕುರಿತು ಪ್ರಸ್ತಾಪಿಸಿ ಡಿಕೆ ಬಣ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ವಿಜಯ ಕರ್ನಾಟಕ 9 Dec 2025 3:24 pm

ಭಾರತ-ರಶ್ಯ ಸಂಬಂಧ ಎಷ್ಟು ಹಳೆಯದು?

ದಿಲ್ಲಿಯಲ್ಲಿನ 23 ನೇ ಭಾರತ-ರಶ್ಯ ವಾರ್ಷಿಕ ಶೃಂಗಸಭೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಂದುಹೋಗಿದ್ದಾರೆ. 2021ರಲ್ಲಿ ಭಾರತದಲ್ಲಿ ನಡೆದ ಶೃಂಗಸಭೆಯಲ್ಲಿ ಪುಟಿನ್ ಪಾಲ್ಗೊಂಡಿದ್ದರು. ಆನಂತರದ 4 ವರ್ಷಗಳಲ್ಲಿ ಸಂಭವಿಸಿರುವ ಅಸಾಧಾರಣ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಲದ ಅವರ ಭೇಟಿಗೆ ಬಹಳ ಮಹತ್ವವಿತ್ತು. ಉಕ್ರೇನ್ ಯುದ್ಧ ಆರಂಭವಾದ ನಂತರದ ಅವರ ಮೊದಲ ಭಾರತ ಭೇಟಿ ಇದಾಗಿತ್ತು. ಜಾಗತಿಕ ಮಟ್ಟದಲ್ಲಿನ ಹಲವು ಒತ್ತಡಗಳ ಹಿನ್ನೆಲೆಯಲ್ಲಿ ಭಾರತ ಮತ್ತು ರಶ್ಯ ಒಟ್ಟಿಗೇ ನಿಲ್ಲುತ್ತಿರುವುದು ಬೇರೆ ಬೇರೆ ಶಕ್ತಿಗಳನ್ನು ಎದುರಿಸುವ ಸಂಗತಿಯಾಗುತ್ತಲೇ, ದೀರ್ಘ ಇತಿಹಾಸವುಳ್ಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಕೂಡ ಈ ಭೇಟಿಯ ಮಹತ್ವವನ್ನು ಹೆಚ್ಚಿಸಿದೆ. ಭಾರತ-ರಶ್ಯ ಸಂಬಂಧವನ್ನು ಪುಟಿನ್ ಅಚಲ ಭರವಸೆಯ ಪಾಲುದಾರಿಕೆ ಎಂದು ಕರೆದಿದ್ದಾರೆ. ಎರಡೂ ದೇಶಗಳ ನಡುವಿನ ಬಹಳ ಗಟ್ಟಿಯಾದ ನಂಬಿಕೆಯ ಬಗ್ಗೆ ಅವರು ಹೇಳಿದ್ದಾರೆ. ಮಾತ್ರವಲ್ಲದೆ, ಎರಡೂ ದೇಶಗಳ ನಡುವಿನ ಈ ಸಂಬಂಧವನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮೂಲಕ ಅಮೆರಿಕಕ್ಕೂ ತಕ್ಕ ಉತ್ತರ ಕೊಟ್ಟಿದ್ದಾರೆ. ಭಾಗ - 1 ಭಾರತ-ರಶ್ಯ ಸಂಬಂಧಕ್ಕೆ 78 ವರ್ಷಗಳ ಇತಿಹಾಸವಿದೆ. ಈಗ ಎರಡು ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಪುಟಿನ್ ದಿಲ್ಲಿಗೆ ಭೇಟಿ ನೀಡಿದ್ದರು. ಅವರ ಭೇಟಿಯ ನಂತರದ ಬೆಳವಣಿಗೆಗಳು, ಮೂಡಿದ ಭರವಸೆಗಳನ್ನು ನೋಡುವುದಕ್ಕೂ ಮೊದಲು ಪ್ರಸ್ತಾಪಿಸಬೇಕಿರುವ ಕೆಲವು ವಿಚಾರಗಳನ್ನು, ಕಾಂಗ್ರೆಸ್ ಉಲ್ಲೇಖಿಸಿದ ಒಂದು ಸಂಗತಿಯೊಂದಿಗೆ ಶುರುಮಾಡಬಹುದು. ಭಾರತ-ರಶ್ಯ ಸಂಬಂಧಗಳನ್ನು 1955ರಲ್ಲಿ ಸ್ಥಾಪಿತವಾದ ಇಂಡೋ-ಸೋವಿಯತ್ ಪಾಲುದಾರಿಕೆಯ ನೇರ ಫಲಿತಾಂಶ ಎಂದು ಕಾಂಗ್ರೆಸ್ ಬಣ್ಣಿಸಿದೆ. ಬಲ್ಗನಿನ್-ಕ್ರುಶ್ಚೇವ್ ಭೇಟಿ ಇಂಡೋ-ಸೋವಿಯತ್ ಸಹಯೋಗದ ಅಡಿಪಾಯಕ್ಕೆ ಕಾರಣವಾಯಿತು. ಭಿಲಾಯಿ ಸ್ಟೀಲ್ ಪ್ಲಾಂಟ್ ಮತ್ತು ಐಐಟಿ ಬಾಂಬೆ ಎರಡು ಆರಂಭಿಕ ಉದಾಹರಣೆಗಳು ಮಾತ್ರ ಎಂದು ಜೈರಾಂ ರಮೇಶ್ ಹೇಳಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಮೊದಲು ಈ ಉಲ್ಲೇಖ ಮಾಡಿದ ಕಾಂಗ್ರೆಸ್, ಸೋವಿಯತ್ ನಾಯಕರಾದ ನಿಕೊಲಾಯ್ ಬಲ್ಗನಿನ್ ಮತ್ತು ನಿಕಿತಾ ಕ್ರುಶ್ಚೇವ್ ಅವರ ಭಾರತ ಪ್ರವಾಸವನ್ನು ನೆನಪಿಸಿಕೊಂಡಿದೆ. ಭಾರತ-ರಶ್ಯ ಸಂಬಂಧಗಳು 1955ರ ಉತ್ತರಾರ್ಧದಲ್ಲಿ ಮೊದಲ ಬಾರಿಗೆ ಸ್ಥಾಪಿತವಾದ ಇಂಡೋ-ಸೋವಿಯತ್ ಪಾಲುದಾರಿಕೆಯ ನೇರ ಫಲಿತಾಂಶ ಮತ್ತು ಮುಂದುವರಿಕೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ. ಕಳೆದ 26 ವರ್ಷಗಳಲ್ಲಿ ರಶ್ಯ ಅಧ್ಯಕ್ಷರು ಮತ್ತು ಭಾರತದ ಪ್ರಧಾನ ಮಂತ್ರಿಗಳ ನಡುವೆ ನಡೆಯುತ್ತಾ ಬಂದಿರುವ ವಾರ್ಷಿಕ ಶೃಂಗಸಭೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ಧಾರೆ. 70 ವರ್ಷಗಳ ಹಿಂದೆ ಯುಎಸ್‌ಎಸ್‌ಆರ್ ನಾಯಕರುಗಳಾದ ನಿಕೋಲಾಯ್ ಬಲ್ಗಾನಿನ್ ಮತ್ತು ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಬಂದರು. ಅವರು 1955ರ ನವೆಂಬರ್ 18ರಿಂದ 30 ಮತ್ತು ಅದೇ ವರ್ಷ ಡಿಸೆಂಬರ್ 7ರಿಂದ 14ರವರೆಗೆ 19 ದಿನಗಳ ಕಾಲ ಇಲ್ಲಿ ಇದ್ದರೆಂಬುದು ಅಸಾಮಾನ್ಯ ಸಂಗತಿಯಾಗಿತ್ತು. ಇದಕ್ಕೂ 6 ತಿಂಗಳ ಮೊದಲು ಜವಾಹರಲಾಲ್ ನೆಹರೂ ಅವರು ಯುಎಸ್‌ಎಸ್‌ಆರ್‌ಗೆ ಭೇಟಿ ನೀಡಿದ್ದರು ಎಂಬುದನ್ನು ಜೈರಾಂ ರಮೇಶ್ ನೆನಪು ಮಾಡಿಕೊಟ್ಟಿದ್ದಾರೆ. ಇದಾದ ಕೆಲ ವರ್ಷಗಳ ನಂತರ ಮಿಗ್ ವಿಮಾನಗಳನ್ನು ಎಚ್‌ಎಎಲ್ ತಂತ್ರಜ್ಞಾನ ವರ್ಗಾವಣೆ ಮೂಲಕ ತಯಾರಿಸಿತು. ಈ ಭೇಟಿ ಒಎನ್‌ಜಿಸಿ ಮತ್ತು ಐಡಿಪಿಎಲ್ ಅಂಥ ಅನೇಕ ಸಾರ್ವಜನಿಕ ವಲಯದ ಕಂಪೆನಿಗಳ ಭವಿಷ್ಯವನ್ನು ರೂಪಿಸಲು ನೆರವಾಯಿತು. ಜೊತೆಗೇ ಖಾಸಗಿ ಉದ್ಯಮಗಳಿಗೂ ನಾಂದಿಯಾಯಿತು ಎಂದು ಜೈರಾಂ ರಮೇಶ್ ಹೇಳಿದ್ಧಾರೆ. 1955ರ ಸೋವಿಯತ್ ನಾಯಕರ ಭಾರತ ಭೇಟಿಯ ವೀಡಿಯೊ ತುಣುಕುಗಳನ್ನು ಕೂಡ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡೂ ದೇಶಗಳ ಸಂಬಂಧ ಅವತ್ತಿನಿಂದಲೂ ಹೇಗೆ ಗಾಢವಾದುದಾಗಿದೆ ಎಂಬುದನ್ನು ಇದರ ಮೂಲಕ ಅರ್ಥ ಮಾಡಿಕೊಳ್ಳಬಹುದು. ಏನೇ ಜಾಗತಿಕ ರಾಜಕೀಯದಲ್ಲಿನ ಬದಲಾವಣೆಗಳಿದ್ದರೂ ಅದರಿಂದ ಭಾರತ-ರಶ್ಯ ಬಾಂಧವ್ಯಕ್ಕೆ ಧಕ್ಕೆಯಾಗಿಲ್ಲ. ಇದು ಈ ಎರಡೂ ದೇಶಗಳಿಗೇ ವಿಶಿಷ್ಟವಾದ ಮತ್ತು ಇತರ ಎಲ್ಲಾ ಕಾರ್ಯತಂತ್ರದ ಪಾಲುದಾರಿಕೆಗಳಿಗಿಂತ ಭಿನ್ನವಾದ ಸಂಬಂಧವಾಗಿದೆ. ಕಾಲು ಶತಮಾನದ ವಾರ್ಷಿಕ ಶೃಂಗಸಭೆಗಳು ಈ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಬಂದಿವೆ. ಯಾವುದೇ ಭೌಗೋಳಿಕ ರಾಜಕೀಯದ ಪ್ರಕ್ಷುಬ್ಧತೆಯನ್ನು ಮೀರಿ ಸಂಬಂಧ ಉಳಿಸಿಕೊಳ್ಳುವ ಒಂದು ಎಳೆಯೆಂದರೆ, ಎರಡೂ ದೇಶಗಳ ನಡುವಿನ ಈ ಉನ್ನತ ಮಟ್ಟದ ನಿಯಮಿತ ಸಂವಾದ. ಪ್ರಾದೇಶಿಕ ಭದ್ರತೆಯಿಂದ ಹಿಡಿದು ಎಲ್ಲ ಸಮಕಾಲೀನ ವಿಷಯಗಳ ಕುರಿತು ಮಾತುಕತೆಗಳು ಸತತವಾಗಿ ಉಭಯ ದೇಶಗಳ ನಡುವೆ ನಡೆಯುತ್ತಲೇ ಇರುತ್ತವೆ. ಆರ್ಥಿಕ ಸಹಕಾರ ಕೂಡ ವಿಸ್ತರಿಸುತ್ತಲೇ ಇದೆ. 2024-25ನೇ ಹಣಕಾಸು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರ 68.7 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಮುಖ್ಯವಾಗಿ ಭಾರತವು ರಶ್ಯದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದು ಪಾಲಿದೆ. ಭಾರತದ ರಫ್ತು 5 ಬಿಲಿಯನ್ ಡಾಲರ್ಗಳಿಗಿಂತ ಕಡಿಮೆಯಿದ್ದರೂ, ಬೆಳವಣಿಗೆಗೆ ಅವಕಾಶವಿದೆ. ಭಾರತೀಯ ಔಷಧಗಳು, ಜವಳಿ ಮತ್ತು ಉಡುಪುಗಳು, ಕೃಷಿ ಉತ್ಪನ್ನಗಳು ಮತ್ತು ಸೀಗಡಿಯಂತಹ ಸಮುದ್ರ ರಫ್ತುಗಳಿಗೆ ರಶ್ಯ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯಿದೆ. ಕೈಗಾರಿಕಾ ಸಹಯೋಗ, ತಂತ್ರಜ್ಞಾನ ವರ್ಗಾವಣೆ ಮತ್ತು ಹೂಡಿಕೆಯಲ್ಲಿ ಹೆಚ್ಚು ವೈವಿಧ್ಯಮಯ ಮತ್ತು ಇನ್ನೂ ದೃಢತೆಯ ಆರ್ಥಿಕ ಪಾಲುದಾರಿಕೆ ಕಡೆಗೆ ಸಾಗುವ ದೊಡ್ಡ ಗುರಿ ಎದುರಲ್ಲಿದೆ. ಚೆನ್ನೈ-ವ್ಲಾಡಿವೋಸ್ಟಾಕ್ ಪೂರ್ವ ಸಾಗರ ಕಾರಿಡಾರ್ ಮತ್ತು ಉತ್ತರ ಸಮುದ್ರ ಮಾರ್ಗ ಲಾಜಿಸ್ಟಿಕ್ಸ್ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಭಾರತ-ಯುರೇಷಿಯನ್ ಆರ್ಥಿಕ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಲ್ಲಿನ ಈಚಿನ ಬೆಳವಣಿಗೆಗಳು ಕೂಡ ಅವಕಾಶಗಳನ್ನು ಮತ್ತಷ್ಟು ತೆರೆಯುವಂತೆ ಕಾಣುತ್ತಿದೆ. ರಶ್ಯಕ್ಕೆ ನುರಿತ ಭಾರತೀಯ ಕಾರ್ಮಿಕರ ಸುರಕ್ಷಿತ, ನಿಯಂತ್ರಿತ ವಲಸೆಗಾಗಿ ಹೊಸ ಹಲವಾರು ಪ್ರಮುಖ ಒಪ್ಪಂದಗಳು ನಿರ್ಣಾಯಕ ಹಂತಗಳಲ್ಲಿವೆ. ಭಾರತ-ರಶ್ಯ ಸಂಬಂಧಗಳಿಗೆ ಬಹುಕಾಲದಿಂದ ಮೂಲಾಧಾರವಾಗಿರುವ ರಕ್ಷಣಾ ಸಹಕಾರ ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ಖರೀದಿ ಮೂಲಗಳನ್ನು ವೈವಿಧ್ಯಗೊಳಿಸಿದ್ದರೂ, ರಶ್ಯದ Su-30MKI ಫೈಟರ್ ಜೆಟ್, T-90S ಟ್ಯಾಂಕ್ ಮತ್ತು S-400 ವಾಯು ರಕ್ಷಣಾ ವ್ಯವಸ್ಥೆಯಂಥವು ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಪ್ರಮುಖವಾಗಿವೆ. ಜಂಟಿ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ, ಎರಡೂ ದೇಶಗಳ ನಡುವಿನ ಪಾಲುದಾರಿಕೆ ಆಮದು-ರಫ್ತಿನ ಮಾದರಿಯನ್ನು ಮೀರಿ ಬೆಳೆದಿದೆ. ನಾಗರಿಕ ಪರಮಾಣು ಸಹಕಾರ ಎರಡು ದೇಶಗಳ ಸಂಬಂಧಕ್ಕೆ ಮತ್ತೊಂದು ಆಯಾಮ ಒದಗಿಸಿದೆ. ತಮಿಳುನಾಡಿನ ಕೂಡಂಕುಳಂನಲ್ಲಿರುವ ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ನಮ್ಮ ತಾಂತ್ರಿಕ ಸಹಕಾರದ ಪ್ರಮುಖ ಅಂಶವಾಗಿದೆ. ಭಾರತ-ರಶ್ಯ ಸಂಬಂಧ ಎರಡೂ ದೇಶಗಳಲ್ಲಿನ ರಾಜಕೀಯ ಸಮೀಕರಣಗಳನ್ನು ಮೀರಿ ಬಹಳ ಹಿಂದಿನಿಂದಲೂ ಬೆಳೆದುಕೊಂಡುಬಂದಿದೆ. ಭಾರತವನ್ನು ರಶ್ಯ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಬೆಂಬಲಿಸಿದ ವಿಶ್ವಾಸಾರ್ಹ ಪಾಲುದಾರ ದೇಶವಾಗಿದೆ ಎಂಬುದನ್ನು ಗಮನಿಸಲೇಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಸಿಕ್ಕಿರುವುದರಲ್ಲೂ ರಶ್ಯ ಪಾತ್ರವಿದೆ. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಡಿಪಾಯಗಳು ಕೂಡ ದೃಢವಾಗಿವೆ. ಪ್ರಸ್ತುತ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ರಶ್ಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ರಕ್ಷಣೆ, ಇಂಧನ, ಪರಮಾಣು ಸಹಕಾರ ಮತ್ತು ಬಾಹ್ಯಾಕಾಶದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ರಶ್ಯ ಭಾರತದ ಅತಿ ನಿಕಟ ಮಿತ್ರನಾಗಿದೆ. ಮುಂಬರುವ ದಶಕದಲ್ಲಿ, ಆರ್ಥಿಕ ವೈವಿಧ್ಯೀಕರಣ, ಉನ್ನತ ತಂತ್ರಜ್ಞಾನ ಸಹಯೋಗ ಇವೆಲ್ಲವೂ ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಉನ್ನತ ಹಂತಕ್ಕೆ ಒಯ್ಯಲಿವೆ. ಪುಟಿನ್ ಅವರ ಈಗಿನ ಭೇಟಿ ಭಾರತ-ರಶ್ಯ ಸಂಬಂಧಗಳನ್ನು ಬದಲಾಗಿರುವ ಭೌಗೋಳಿಕ ರಾಜಕೀಯದ ಸನ್ನಿವೇಶದಲ್ಲಿ ಮತ್ತಷ್ಟು ಉತ್ತಮಗೊಳಿಸಲು ಹಾಗೂ ಪರಸ್ಪರ ಸಹಕಾರದ ಹೊಸ ದೃಷ್ಟಿಕೋನಗಳು ಮೂಡಲು ನೆರವಾಗಬಹುದು ಎಂದೇ ಹೇಳಲಾಗುತ್ತಿದೆ. ಇದರ ಒಂದು ದೊಡ್ಡ ಸೂಚನೆಯೆನ್ನುವಂತೆ, ಪುಟಿನ್ ಹೊಸದಿಲ್ಲಿ ಭೇಟಿಗೆ ಮುಂಚಿತವಾಗಿ ಭಾರತದೊಂದಿಗಿನ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯ (ರೆಲೋಸ್) ಒಪ್ಪಂದವನ್ನು ರಶ್ಯ ಅನುಮೋದಿಸಿದೆ. ಇದು ಎರಡೂ ದೇಶಗಳ ರಕ್ಷಣಾ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಈ ಒಪ್ಪಂದ ಎರಡೂ ಕಡೆಯ ಮಿಲಿಟರಿ ವಿಮಾನಗಳು, ಹಡಗುಗಳು ಜಂಟಿ ಸಮರಾಭ್ಯಾಸ, ತರಬೇತಿ, ಮಾನವೀಯ ಕಾರ್ಯಾಚರಣೆ ಮತ್ತು ವಿಪತ್ತು-ಪರಿಹಾರ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪರಸ್ಪರ ಸೌಲಭ್ಯಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ರಶ್ಯ ಮತ್ತು ಭಾರತೀಯ ಹಡಗುಗಳು ಹಾಗೂ ವಿಮಾನಗಳು ಪರಸ್ಪರರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಇಂಧನ, ತೈಲ, ಬಿಡಿಭಾಗಗಳು ಮತ್ತು ನಿರ್ವಹಣಾ ಬೆಂಬಲವನ್ನು ಸುಲಭವಾಗಿ ಮತ್ತು ವಿಳಂಬವಿಲ್ಲದೆ ಪಡೆಯಲು ಸಾಧ್ಯವಾಗುತ್ತದೆ. ಇದು ಭಾರತೀಯ ನೌಕಾಪಡೆಗೆ ಆರ್ಕ್ಟಿಕ್ ಪ್ರದೇಶದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಸುವರ್ಣಾವಕಾಶವಾಗಿದೆ. ಭಾರತ-ರಶ್ಯ ಸಂಬಂಧದ ಇತಿಹಾಸವನ್ನು ನೆನಪಿಸಿಕೊಂಡರೆ, ಸ್ವಾತಂತ್ರ್ಯ ಗಳಿಸಿದ ಆರಂಭದಲ್ಲಿ ಭಾರತ ತನ್ನ ಅಲಿಪ್ತ ನೀತಿಯನ್ನು ಬಿಟ್ಟುಕೊಡದೆ ಇತರ ರಾಷ್ಟ್ರಗಳ ಸ್ನೇಹ ಬಯಸಿದ್ದಾಗ, ದೊಡ್ಡ ಬಲವಾಗಿ ಒದಗಿಬಂದದ್ದು ರಶ್ಯ. ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ ಬೆಳೆಸಲು ಷರತ್ತುಗಳನ್ನು ಒಡ್ಡಿದ್ದೇ ಹೆಚ್ಚು. ಶೀತಲ ಸಮರದ ಆ ಕಾಲಘಟ್ಟದಲ್ಲಿ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳಲು ಬಯಸಿರದ ಭಾರತದ ಕಡೆ ತಿರುಗಿ ನೋಡಿದ್ದು ಸೋವಿಯತ್ ಒಕ್ಕೂಟ (ಯುಎಸ್‌ಎಸ್‌ಆರ್). ಇವತ್ತು ಕಾಣುತ್ತಿರುವ ಅತ್ಯಂತ ಬಲವಾದ ಭಾರತ-ರಶ್ಯ ಸಂಬಂಧ ಮೊದಲುಗೊಂಡದ್ದೇ ಅಲ್ಲಿಂದ. ಹಾಗೆ ಶುರುವಾದದ್ದು, ಕಾಲದ ಅಗ್ನಿಪರೀಕ್ಷೆಗಳನ್ನು ದಾಟಿ, ಆಳವಾದ ನಂಬಿಕೆ, ಒಗ್ಗಟ್ಟು ಮತ್ತು ಪರಸ್ಪರ ಸ್ವಾತಂತ್ರ್ಯವನ್ನು ಗೌರವಿಸುವ ನಿಲುವಿನೊಂದಿಗೆ ಬೆಳೆದಿದೆ. ಭಾರತ ತನ್ನದೇ ಆದ ರಕ್ಷಣಾ ನೀತಿಯನ್ನು ನಿರ್ಧರಿಸಬೇಕಾಗಿದ್ದ ಆ ನಿರ್ಣಾಯಕ ಸಮಯದಲ್ಲಿ ಯಾವುದೇ ಷರತ್ತುಗಳಿಲ್ಲದೆ ತನ್ನೊಂದಿಗೆ ನಿಲ್ಲಬಲ್ಲ ಮಿತ್ರರಾಷ್ಟ್ರಕ್ಕಾಗಿ ಎದುರು ನೋಡುತ್ತಿದ್ದಾಗ ಸೋವಿಯತ್ ಒಕ್ಕೂಟ ಸ್ನೇಹ ಹಸ್ತ ಚಾಚಿತ್ತು. ಆಗ, ಸೋವಿಯತ್ ಒಕ್ಕೂಟಕ್ಕೆ ಏಶ್ಯದಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳುವುದು ಮುಖ್ಯವಾಗಿದ್ದರೆ, ಭಾರತಕ್ಕೆ ತನ್ನ ಮಿಲಿಟರಿ ಸ್ವಾವಲಂಬನೆಗೆ ದಾರಿ ಕಂಡುಕೊಳ್ಳುವುದು ಅಗತ್ಯವಾಗಿತ್ತು. ಕೈಗಾರಿಕೀಕರಣಕ್ಕೆ ಭಾರತ ಪ್ರೇರಣೆ ಮತ್ತು ಸಹಕಾರ ಪಡೆದದ್ದು ಕೂಡ ಸೋವಿಯತ್ ಒಕ್ಕೂಟದಿಂದಲೇ ಎಂಬುದನ್ನು ನೋಡಿದರೆ, ಎರಡು ದೇಶಗಳ ಸಂಬಂಧದಲ್ಲಿನ ಅವಿನಾಭಾವ ಅಂಶ ಎಂಥದೆಂಬುದು ತಿಳಿಯುತ್ತದೆ. ಆನಂತರದ ದಾರಿಯಲ್ಲಿನ ಮಹತ್ವದ ಕೆಲವು ಮೆಟ್ಟಿಲುಗಳನ್ನು ಗಮನಿಸುವುದಾದರೆ, 1951-ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬಂದಾಗ, ಭಾರತಕ್ಕೆ ಬೆಂಬಲವಾಗಿ ಸೋವಿಯತ್ ಒಕ್ಕೂಟ ತನ್ನ ವೀಟೊ ಚಲಾಯಿಸಿತ್ತು. 1953-ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್, ಭಾರತದ ಆಗಿನ ಉಪರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರೊಂದಿಗಿನ ಮಾತುಕತೆಯಲ್ಲಿ, ಯಾವ ಅನುಮಾನವಿಲ್ಲದೆ ನಂಬುವಂತೆ ಭರವಸೆ ಮೂಡಿಸಿದರು. 1955-ಸೋವಿಯತ್ ರಶ್ಯಕ್ಕೆ ಭಾರತದ ಮೊದಲ ಪ್ರಧಾನಿ ನೆಹರೂ ಭೇಟಿ ನೀಡಿದರು ಮತ್ತು ಅದೇ ವರ್ಷ ಸೋವಿಯತ್ ನಾಯಕರಾದ ನಿಕೊಲಾಯ್ ಬಲ್ಗನಿನ್ ಮತ್ತು ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಬಂದುಹೋದರು. 1960ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟ ಭಾರತಕ್ಕೆ ಮಿಗ್ -21 ಫೈಟರ್ ಜೆಟ್‌ಗಳನ್ನು ಪೂರೈಸಲು ಮುಂದಾಯಿತು. ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ತಮ್ಮ ಆಧುನಿಕ ಜೆಟ್‌ಗಳನ್ನು ಪೂರೈಸಲು ನಿರಾಕರಿಸಿದ್ದ ಹೊತ್ತಲ್ಲಿ ಸೋವಿಯತ್ ಒಕ್ಕೂಟದ ಈ ಸಹಕಾರ ದೊಡ್ಡ ಬಲವಾಯಿತು. ಸೋವಿಯತ್ ಒಕ್ಕೂಟ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಮಾತ್ರವಲ್ಲದೆ ತಂತ್ರಜ್ಞಾನ ವರ್ಗಾಯಿಸುವುದಕ್ಕೂ ಸಿದ್ಧವಾಗಿತ್ತು. 1971-ಬಾಂಗ್ಲಾ ವಿಮೋಚನೆ ಯುದ್ಧದ ಹೊತ್ತಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರ ಹಂತ ಮುಟ್ಟಿದ್ದಾಗ, ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ್ದ ಅಮೆರಿಕ, ತನ್ನ ಏಳನೇ ನೌಕಾಪಡೆಯನ್ನು ಭಾರತವನ್ನು ಬೆದರಿಸಲೆಂದೇ ಬಂಗಾಳ ಕೊಲ್ಲಿಯ ಕಡೆಗೆ ಕಳಿಸಿದಾಗ, ಒಬ್ಬಂಟಿಯಾಗಿದ್ದ ಭಾರತದ ನೆರವಿಗೆ ಬಂದದ್ದು ಸೋವಿಯತ್ ಒಕ್ಕೂಟ. ಸೋವಿಯತ್ ಒಕ್ಕೂಟ ತನ್ನ ಯುದ್ಧನೌಕೆಗಳನ್ನು ಭಾರತೀಯ ಗಡಿಯ ಬಳಿ ನಿಯೋಜಿಸಿತು.ಮತ್ತದು, ಅಮೆರಿಕದ ನೌಕಾಪಡೆ ಹಿಮ್ಮೆಟ್ಟುವಂತಾಗಲು ಕಾರಣವಾಯಿತು. ಸೋವಿಯತ್ ಒಕ್ಕೂಟದ ಬಗ್ಗೆ ಭಾರತ ಅಚಲ ನಂಬಿಕೆ ಹೊಂದುವಂತಾಗಲು, ಬೇಷರತ್ತಾಗಿ ಅದು ಭಾರತದ ಬೆಂಬಲಕ್ಕೆ ಬಂದ ಆ ವಿದ್ಯಮಾನ ಮಹತ್ವದ ಪಾತ್ರ ನಿರ್ವಹಿಸಿತ್ತು. ಮತ್ತದು ವಿವಿಧ ಕ್ಷೇತ್ರಗಳಲ್ಲಿನ ಸೋವಿಯತ್ ಸಹಕಾರಕ್ಕೆ ನಾಂದಿಯಾಯಿತು. 1984-ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ ಭಾರತದ ರಾಕೇಶ್ ಶರ್ಮಾ ಗಗನಯಾತ್ರೆ ನಡೆಸಿದರು. 1985-ತಮಿಳುನಾಡಿನ ಕೂಡಂಕುಳಂನಲ್ಲಿ ಸೋವಿಯತ್ ನೆರವಿನೊಂದಿಗೆ ಪರಮಾಣು ವಿದ್ಯುತ್ ಸ್ಥಾವರ ಆರಂಭವಾಯಿತು. 1991-ಸೋವಿಯತ್ ಒಕ್ಕೂಟ ಕುಸಿತದ ನಂತವೂ ರಶ್ಯ ಭಾರತ ಜೊತೆಗಿನ ಸಂಬಂಧವನ್ನು ಉಳಿಸಿಕೊಂಡು ಮುಂದುವರಿಯಿತು. ಹಾಗೆಯೆ, ಭಾರತದ ವಿದೇಶಾಂಗ ರಶ್ಯಕ್ಕೆ ಆದ್ಯತೆ ಸಿಕ್ಕಿತು. 1993-ಭಾರತ ಮತ್ತು ರಶ್ಯ ನಡುವಿನ ಸ್ನೇಹ ಸಹಕಾರ ಒಪ್ಪಂದ ನವೀಕರಣಗೊಂಡಿತು. 2000-ವ್ಲಾದಿಮಿರ್ ಪುಟಿನ್ ರಶ್ಯ ಅಧ್ಯಕ್ಷರಾದ ಬಳಿಕ ಎರಡೂ ದೇಶಗಳ ಸಂಬಂಧ ಇನ್ನೂ ಗಾಢವಾಯಿತು. ಅದೇ ವರ್ಷ ಅಕ್ಟೋಬರ್‌ನಲ್ಲಿ, ಅಂದರೆ ಅಧ್ಯಕ್ಷರಾದ ಐದು ತಿಂಗಳುಗಳ ಬಳಿಕ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. 2003-ಪರಮಾಣು ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ರಶ್ಯ ಸಹಿ ಹಾಕಿದವು. 2010-ಪುಟಿನ್ ಭಾರತ ಭೇಟಿ ವೇಳೆ ವಿಶೇಷ ಕಾರ್ಯತಾಂತ್ರಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2021-ಪುಟಿನ್ ಭಾರತ ಭೇಟಿಯ ಸಂದರ್ಭದಲ್ಲಿ ಬಾಹ್ಯಾಕಾಶ, ರಕ್ಷಣೆ ಮತ್ತು ಇಂಧನ ಸುರಕ್ಷತೆ ಸಹಕಾರ ಸೇರಿದಂತೆ ಒಟ್ಟು 28 ಒಪ್ಪಂದಗಳಿಗೆ ಅಂಕಿತ ಬಿತ್ತು.

ವಾರ್ತಾ ಭಾರತಿ 9 Dec 2025 3:23 pm

ರಾಯಚೂರು | ಸಾರಿಗೆ ಬಸ್ ಪಲ್ಟಿ : ಕಂಡಕ್ಟರ್ ಮೃತ್ಯು, 20 ಪ್ರಯಾಣಿಕರಿಗೆ ಗಾಯ

ರಾಯಚೂರು: ಸಾರಿಗೆ ಬಸ್ ಪಲ್ಟಿಯಾಗಿ ಕಂಡಕ್ಟರ್ ಮೃತಪಟ್ಟು, 20 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ನಡೆದಿದೆ. ಮೃತರನ್ನು ಲಿಂಗಸುಗೂರು ತಾಲೂಕಿನ ಬಸವರಾಜ್ ( 36 ) ಎಂದು ಗುರುತಿಸಲಾಗಿದೆ. ಅಂಜಳ ಗ್ರಾಮದಿಂದ ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿ 39 ಜನ ಪ್ರಯಾಣಿಕರಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಸ್‌ ಚಾಲಕ ಗಂಭೀರ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗಿ ಕೆಲ ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್ ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾರ್ತಾ ಭಾರತಿ 9 Dec 2025 3:14 pm

`ರೋಹಿತ್ - ಕೊಹ್ಲಿಗಿಂತಲೂ ದೊಡ್ಡ ಆಟಗಾರರು ಯಾರಾದ್ರೂ ಇದ್ದಾರಾ?': BCCIಗೆ ಬಿಸಿ ಮುಟ್ಟಿಸಿದ ಹರ್ಭಜನ್ ಸಿಂಗ್

Harbhajan SIngh On RoKo- ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಡೆಗಣಿಸಿದರೆ ದೊಡ್ಡ ಪಂದ್ಯಗಳಲ್ಲಿ ಸಮಸ್ಯೆಯಾಗಬಹುದು ಎಂದು ಎಚ್ಚರಿಕೆ ನೀಡಿರುವ ಹರ್ಭಜನ್ ಸಿಂಗ್ 2027ರ ಏಕದಿನ ವಿಶ್ವಕಪ್ ನಲ್ಲಿ ಅವರಿಬ್ಬರು ಆಡುವುದೇ ಸರಿಯಾದ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವ ತಂಡವನ್ನು ಕಟ್ಟುವ ಭರದಲ್ಲಿ ಅವರಿಬ್ಬರನ್ನು ಕಡೆಗಣಿಸುವುದಲ್ಲ. ಬದಲಾಗಿ ತಂಡದಲ್ಲಿ ಇಬ್ಬರನ್ನೂ ಉಳಿಸಿಕೊಂಡು ಅವರ ಸುತ್ತಲೂ ಯುವ ಆಟಗಾರರನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲ ತುಂಬಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 3:08 pm

ಮುಟ್ಟಿನ ರಜೆ: ರಾಜ್ಯ ಸರಕಾರದ ಅಧಿಸೂಚನೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆ ಹಿಂಪಡೆದ ಹೈಕೋರ್ಟ್

ರಾಜ್ಯ ಸರಕಾರದ ಮನವಿ ಪರಿಗಣಿಸಿ ಕ್ರಮ, ಡಿ.10ಕ್ಕೆ ವಿಚಾರಣೆ ಮುಂದೂಡಿಕೆ

ವಾರ್ತಾ ಭಾರತಿ 9 Dec 2025 3:04 pm

1 ವರ್ಷದಲ್ಲೇ 85ಸಾವಿರ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: 8ಸಾವಿರ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟ ಟ್ರಂಪ್‌ ವಲಸೆ ವಿರೋಧಿ ನೀತಿ

ಅಮೆರಿಕಾ ಅಧ್ಯಕ್ಷರ ಕಠಿಣ ವಲಸೆ ನೀತಿಯಿಂದಾಗಿ 2025 ರಲ್ಲಿ 85 ಸಾವಿರಕ್ಕೂ ಹೆಚ್ಚು ವೀಸಾಗಳು ರದ್ದಾಗಿವೆ. ಇದು ವಿದ್ಯಾರ್ಥಿಗಳು ಸೇರಿದಂತೆ ಹಲವು ವಲಸಿಗರ ಕನಸುಗಳಿಗೆ ಅಡ್ಡಿಯಾಗಿದೆ. ಅಮೆರಿಕಾದ ಸುರಕ್ಷತೆಗಾಗಿ ವೀಸಾ ನಿಯಮಗಳನ್ನು ಕಠಿಣ ಪಡಿಸಿದ್ದು, ರದ್ದಾಗಿರುವ ವೀಸಾಗಳಲ್ಲಿ ಅರ್ಧದಷ್ಟು ಅಮೆರಿಕಾದ ಭದ್ರತೆಗೆ ಅಡ್ಡಿಪಡಿಸುವವರ ವೀಸಾಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಅಫ್ಘಾನಿಸ್ತಾನದಂತಹ ಪ್ರದೇಶಗಳಿಂದ ಬರುವ ಅರ್ಜಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 3:02 pm

ಮೂಡುಬಿದಿರೆ, ಮುಲ್ಕಿ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿ ಒದಗಿಸಲು ಕ್ರಮ: ಗೃಹ ಸಚಿವ ಪರಮೇಶ್ವರ್

ಬೆಳಗಾವಿ, ಡಿ. 9: ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಪಿಎಸ್ಸೈ ಮತ್ತು ಪೊಲೀಸ್ ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಲಾಗುವುದು. ಪ್ರಸಕ್ತ 545 ಪಿಎಸ್ಸೈ ಮತ್ತು 3500 ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಶೀಘ್ರದಲ್ಲೇ ಎರಡೂ ಠಾಣೆಗಳಿಗೆ ಅಧಿಕಾರಿ-ಸಿಬ್ಬಂದಿ ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ. ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಉಮಾನಾಥ್ ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೇಲ್ಕಂಡ ಎರಡೂ ಪೊಲೀಸ್ ಠಾಣೆಗಳಿಗೆ ಮಂಜೂರಾದ ಹುದ್ದೆಗಳ ಪೈಕಿ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಕಳೆದ ಐದು ವರ್ಷಗಳಿಂದ ಪಿಸ್ಸೈ ಅಧಿಕಾರಿಗಳ ಹುದ್ದೆ ನೇಮಕ ಸಂಬಂಧ ಇದ್ದ ಗೊಂದಲವನ್ನು ಪರಿಹರಿಸಿದ್ದು, 545 ಪಿಎಸ್ಸೈ ನೇಮಕಾತಿ ಆಗಿದ್ದು ತರಬೇತಿ ಹಂತದಲ್ಲಿದ್ದು ಇನ್ನೂ ಮೂರು ತಿಂಗಳಲ್ಲಿ ಠಾಣೆಗಳಿಗೆ ಸಿಬ್ಬಂದಿ ಒದಗಿಸಲಾಗುವುದು ಎಂದರು. ಅಪರಾಧ ಪ್ರಮಾಣ ಇಳಿಕೆ: ಕರಾವಳಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಿದ್ದು, ಮನೆಗೆ ಮನೆಗೆ ಪೊಲೀಸ್ಎಂಬ ದೇಶದಲ್ಲೇ ಮಾದರಿ ಯೋಜನೆ ರೂಪಿಸಿದ್ದು, ಪ್ರತೀ 50 ಮನೆಗೆ ಒಬ್ಬ ಪೊಲೀಸ್ ಸಿಬ್ಬಂದಿ ನೀಡಲಾಗಿದೆ. ಆ ಸಿಬ್ಬಂದಿ ಆ ವ್ಯಾಪ್ತಿಯಲ್ಲಿನ ಮನೆಗಳ ಮಾಹಿತಿಯನ್ನು ಸಂಗ್ರಹಿಸಿ ಡೆಟಾವನ್ನು ಇಲಾಖೆಗೆ ನೀಡಲಿದ್ದಾರೆ. ಇದರಿಂದ ಅಪರಾಧಗಳ ಪ್ರಯಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 202 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ 224 ಪ್ರಕರಣಗಳು ದಾಖಲಾಗಿದ್ದವು. ಇದೀಗ 2025ರಲ್ಲಿ 174ಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅದೇ ರೀತಿಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 120, 2024ರಲ್ಲಿ 149 ಇದ್ದದ್ದು, ಇದೀಗ 2025ರಲ್ಲಿ 121ಕ್ಕೆ ಇಳಿಕೆಯಾಗಿವೆ. ಅಲ್ಲದೆ, ಮಹಿಳೆಯರ ಸುರಕ್ಷತೆಗಾಗಿ ಅಕ್ಕ ಪಡೆ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಾರ್ತಾ ಭಾರತಿ 9 Dec 2025 2:47 pm

Hassan | ಡ್ರಗ್ಸ್ ಅಮಲಿನಲ್ಲಿ ಯುವಕನ ಬರ್ಬರ ಹತ್ಯೆ: ಮೃತದೇಹದ ಎದುರು ನಿಂತು ವಿಡಿಯೋ ಮಾಡಿದ ಆರೋಪಿಗಳು

ಹಾಸನ: ಡ್ರಗ್ಸ್ ಅಮಲಿನಲ್ಲಿ ಯುವಕನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು, ಹತ್ಯೆಯ ಬಳಿಕ ಮೃತದೇಹದ ಎದುರು ನಿಂತು ವಿಡಿಯೋ ಚಿತ್ರೀಕರಿಸಿರುವ ಅಮಾನವೀಯ ಕೃತ್ಯ ಹಾಸಗ ನಗರದ ಹೊರವಲಯದಲ್ಲಿ ನಡೆದಿದೆ. ಹೊಳೆನರಸೀಪುರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದವನ ಗುರುತು ಪತ್ತೆಯಾಗಿಲ್ಲ. ವೈರಲ್ ವೀಡಿಯೊದಲ್ಲಿ ನಾವು ಕೊಲೆ ಮಾಡಿದ್ದೇವೆ ಎಂದು ಯುವಕನೋರ್ವ ಮೃತದೇಹವನ್ನು ತೋರಿಸುತ್ತಿರುವುದು ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಹಾಗೂ ಹತ್ಯೆಯ ಹಿಂದಿರುವ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 9 Dec 2025 2:43 pm

ಬೆಂಗಳೂರು - ಹುಬ್ಬಳ್ಳಿ ನಡುವೆ 2 ಸೂಪರ್‌ಫಾಸ್ಟ್‌ ಖಾಯಂ ರೈಲುಗಳ ಸಂಚಾರ ಆರಂಭ; ಟಿಕೆಟ್‌ ದರ ಭಾರೀ ಇಳಿಕೆ!

ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲುಗಳು ಡಿಸೆಂಬರ್ 9 ರಿಂದ ಖಾಯಂ ಆಗಿದ್ದು, ಟಿಕೆಟ್ ದರ ಗರಿಷ್ಠ ಶೇ. 60ರಷ್ಟು ಇಳಿಕೆಯಾಗಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಈ ಕ್ರಮ ಕೈಗೊಂಡಿದೆ. ಇದರಿಂದ ಮಧ್ಯ ಹಾಗೂ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ.

ವಿಜಯ ಕರ್ನಾಟಕ 9 Dec 2025 2:38 pm

ಛೂ ಬಾಣ – ಪಿ. ಮೊಹಮ್ಮದ್ ಕಾರ್ಟೂನ್

ವಾರ್ತಾ ಭಾರತಿ 9 Dec 2025 2:35 pm

ಬಿಜೆಪಿ ನಾಯಕರಿಗೆ ಇರುವ ಸಮಸ್ಯೆಯನ್ನು ಸದನದಲ್ಲಿ ಬಹಿರಂಗ ಪಡಿಸಿದ ಸಚಿವ ಕೃಷ್ಣ ಬೈರೇಗೌಡ

Krishna Byre Gowda Vs BJP : ಆಡಳಿತ ಪಕ್ಷದ ವಿರುದ್ದ ಮಾತನಾಡಲು ಬಿಜೆಪಿಯವರಿಗೆ ಏನೂ ವಿಷಯ ಸಿಗುತ್ತಿಲ್ಲ. ಪ್ರಶ್ನೋತ್ತರ ಅವಧಿಗೆ ಮುನ್ನವೇ, ಉತ್ತರ ಕರ್ನಾಟಕ ಭಾಗದ ವಿಷಯವನ್ನು ಚರ್ಚಿಸಲು ನಿಲುವಳಿ ಮಂಡಿಸಿದ್ದಾರೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ವಿಜಯ ಕರ್ನಾಟಕ 9 Dec 2025 1:58 pm

ಚುನಾವಣಾ ಆಯೋಗಕ್ಕೆ SIR ನಡೆಸುವ ಕಾನೂನುಬದ್ಧ ಹಕ್ಕಿಲ್ಲ: ಲೋಕಸಭೆಯಲ್ಲಿ ಮನೀಶ್ ತಿವಾರಿ ವಾಗ್ದಾಳಿ

ಹೊಸದಿಲ್ಲಿ: ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಂಗಳವಾರ ಗರಿಗೆದರಿದ ವಾತಾವರಣ ನಿರ್ಮಾಣಗೊಂಡಿದ್ದು, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಭಾರತೀಯ ಚುನಾವಣಾ ಆಯೋಗದ (ECI) ತಟಸ್ಥತೆ ಮತ್ತು ಅದರ ಅಧಿಕಾರ ವ್ಯಾಪ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ರಾಜ್ಯಗಳಲ್ಲಿ ಜಾರಿಯಲ್ಲಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಆಯೋಗದ ಬಳಿ ಕಾನೂನುಬದ್ಧ ಆಧಾರವಿಲ್ಲ ಎಂದು ಅವರು ಆರೋಪಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಮನೀಷ್ ತಿವಾರಿ, “ಚುನಾವಣೆಗಳಂತಹ ಮೂಲಭೂತ ಪ್ರಕ್ರಿಯೆಯನ್ನು ನಿರ್ವಹಿಸುವ ಸಂಸ್ಥೆಯ ತಟಸ್ಥತೆ ಸಂಶಯಕ್ಕೆ ಒಳಗಾಗಿರುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಬೆಳವಣಿಗೆಯಲ್ಲ” ಎಂದು ಅಭಿಪ್ರಾಯಪಟ್ಟರು. ಚುನಾವಣಾ ಸುಧಾರಣೆಗಳ ಮೊದಲ ಹೆಜ್ಜೆಯಾಗಿ ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ವಿಧಾನದಲ್ಲಿ ಬದಲಾವಣೆಯಾಗಬೇಕು ಎಂದು ತಿವಾರಿ ಆಗ್ರಹಿಸಿದರು. ಅವರ ಪ್ರಸ್ತಾಪದ ಪ್ರಕಾರ, ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ಮತ್ತು ಭಾರತದ ಮುಖ್ಯ ನ್ಯಾಯಾಧೀಶರು (CJI) ಆಯೋಗದ ಸದಸ್ಯರ ಆಯ್ಕೆ ಸಮಿತಿಯಲ್ಲಿ ಇರಬೇಕು.“ಆಯೋಗದ ರಚನೆ ಪಾರದರ್ಶಕವಾಗಿರಬೇಕಾದರೆ ಈ ಬದಲಾವಣೆ ಅತ್ಯಾವಶ್ಯಕ,” ಎಂದು ಅವರು ಹೇಳಿದರು. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ SIR ಕುರಿತು ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. “ದೇಶದ ಅನೇಕ ರಾಜ್ಯಗಳಲ್ಲಿ SIR ನಡೆಯುತ್ತಿದೆ, ಆದರೆ ಅದಕ್ಕೆ ಚುನಾವಣಾ ಆಯೋಗವು ಯಾವ ಕಾನೂನು ಸಮರ್ಥನೆಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲ,” ಎಂದು ಅವರು ಹೇಳಿದರು. ಚರ್ಚೆಯಲ್ಲಿ ಕೆ.ಸಿ. ವೇಣುಗೋಪಾಲ್, ವರ್ಷಾ ಗಾಯಕ್ವಾಡ್, ಮುಹಮ್ಮದ್ ಜಾವೈದ್, ಉಜ್ವಲ್ ರಮಣ್ ಸಿಂಗ್, ಇಸಾ ಖಾನ್, ರವಿ ಮಲ್ಲು, ಇಮ್ರಾನ್ ಮಸೂದ್, ಗೋವಾಲ್ ಪದವಿ, ಎಸ್. ಜ್ಯೋತಿಮಣಿ ಸೇರಿ ಹಲವು ವಿರೋಧ ಪಕ್ಷದ ಸಂಸದರು ಪಾಲ್ಗೊಂಡರು. ಲೋಕಸಭೆಯ ವಿರೋಧ ಪಕ್ಷದ ನಾಯಕರು ಕೂಡ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುವ ನಿರೀಕ್ಷೆಯಿದೆ. ರಾಜ್ಯಸಭೆಯಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನಿರೀಕ್ಷೆ SIR ಮತ್ತು ಚುನಾವಣಾ ಸುಧಾರಣೆಗಳ ಕುರಿತ ಚರ್ಚೆ ರಾಜ್ಯಸಭೆಯಲ್ಲೂ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ನಿಲುವನ್ನು ವಿವರಿಸುವ ಸಾಧ್ಯತೆಯಿದೆ. ಉಭಯ ಸದನಗಳಲ್ಲಿ ಚರ್ಚೆಗೆ ಒಟ್ಟು 10 ಗಂಟೆಗಳನ್ನು ಮೀಸಲಿರಿಸಲಾಗಿದೆ.

ವಾರ್ತಾ ಭಾರತಿ 9 Dec 2025 1:58 pm

ಅನುಮತಿಯಿಲ್ಲದೆ ಕಾಶ್ಮೀರಕ್ಕೆ ಬಂದ ಚೀನಿ ಪ್ರಜೆ ಬಂಧನ; ಬಂಧಿತನ ಪೋನ್‌ ನಲ್ಲಿ ಆರ್ಟಿಕಲ್‌ 370, ಭದ್ರತಾ ವಿವರಗಳ ಬಗ್ಗೆ ಸರ್ಚ್!

ಭದ್ರತಾ ಪಡೆಗಳು ಶ್ರೀನಗರದಲ್ಲಿ 29 ವರ್ಷದ ಚೀನಿ ಪ್ರಜೆಯನ್ನು ವೀಸಾ ನಿಯಮ ಉಲ್ಲಂಘಿಸಿ ಲಡಾಖ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಆರೋಪದ ಮೇಲೆ ಬಂಧಿಸಿವೆ. ಹು ಕಾಂಟೈ ಎಂಬ ಈತ, ಅನುಮತಿಯಿಲ್ಲದೆ ದೇಶದಲ್ಲಿ 2 ವಾರಗಳಿಗೂ ಹೆಚ್ಚು ಕಾಲ ಸುತ್ತಾಡಿದ್ದು, ಭದ್ರತಾ ವಿವರಗಳ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ, ವಿದೇಶಿ ಪ್ರಜೆಗಳ ವರದಿ ಮಾಡದ ವಸತಿ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ.

ವಿಜಯ ಕರ್ನಾಟಕ 9 Dec 2025 1:58 pm

ಈ ಬ್ಯಾಂಕಿನಲ್ಲಿ 1 ಲಕ್ಷ ರೂ ಇಟ್ಟ ಹಿರಿಯ ನಾಗರೀಕರಿಗೆ ಸಿಹಿಸುದ್ದಿ

ನಿವೃತ್ತಿ ಜೀವನದಲ್ಲಿ ಸ್ಥಿರ ಆದಾಯ ಬಯಸುತ್ತಿರುವ ಹಿರಿಯ ನಾಗರಿಕರಿಗೆ 2025ರಲ್ಲಿ ಬ್ಯಾಂಕ್‌ಗಳು ಸಂತಸದ ಸುದ್ದಿ ನೀಡಿವೆ . ಈಗ ಹಲವಾರು ಬ್ಯಾಂಕ್‌ಗಳು ಹಿರಿಯರಿಗೆ ವಿಶೇಷ FD ಯೋಜನೆಗಳಲ್ಲಿ(Senior Citizen FD) 8.25% ವರೆಗೆ ಬಡ್ಡಿ ದರ ನೀಡುತ್ತಿವೆ. ಇದು ಮಾಸಿಕ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯಕಾರಿಯಾಗಿದೆ. ಮಾರುಕಟ್ಟೆ ಅಪಾಯಗಳಿಲ್ಲದೆ ಭದ್ರವಾದ ಆದಾಯ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಯಾವ ಬ್ಯಾಂಕ್‌ಗಳು ಹೆಚ್ಚು ಬಡ್ಡಿ ನೀಡುತ್ತಿವೆ? ಡಿಸೆಂಬರ್ 2025ರ ಇತ್ತೀಚಿನ ವಿವರಗಳ ಪ್ರಕಾರ, ಹಿರಿಯ ನಾಗರಿಕರಿಗೆ ಲಭ್ಯವಿರುವ ಉನ್ನತ ... Read more The post ಈ ಬ್ಯಾಂಕಿನಲ್ಲಿ 1 ಲಕ್ಷ ರೂ ಇಟ್ಟ ಹಿರಿಯ ನಾಗರೀಕರಿಗೆ ಸಿಹಿಸುದ್ದಿ appeared first on Karnataka Times .

ಕರ್ನಾಟಕ ಟೈಮ್ಸ್ 9 Dec 2025 1:40 pm

ಜನರಿಗೆ ತೊಂದರೆಯಾಗಬಾರದು, ಅವರ ಅನುಕೂಲಕ್ಕಾಗಿ ನಿಯಮಗಳನ್ನು ರೂಪಿಸಬೇಕು: ಸಂಸದರಿಗೆ ಪ್ರಧಾನಿ ಮೋದಿ ಕರೆ

ಜನರಿಗೆ ತೊಂದರೆ ನೀಡುವ ನಿಯಮಗಳಲ್ಲ, ಅನುಕೂಲ ಕಲ್ಪಿಸುವ ನಿಯಮಗಳಿರಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಕರೆ ನೀಡಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಗೊಂದಲಗಳ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಪೈಲಟ್ ಕೊರತೆಯಿಂದ ನೂರಾರು ವಿಮಾನ ರದ್ದಾಗಿ, ಪ್ರಯಾಣಿಕರು ಪರದಾಡಿದ್ದರು. ಈ ಬಗ್ಗೆ ಡಿಜಿಸಿಎ ಇಂಡಿಗೋ ಸಿಇಒಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿಜಯ ಕರ್ನಾಟಕ 9 Dec 2025 1:40 pm

DL And RC: ಆರ್‌ಸಿ ಹಾಗೂ ಡಿಎಲ್‌ ಕುರಿತು ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಅಪ್ಡೇಟ್‌

DL And RC: ರಾಜ್ಯದಲ್ಲಿ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಮಹತ್ವದ ಮಾಹಿತಿಗಳನ್ನು ನೀಡುತ್ತಲಿರುತ್ತದೆ. ಇದೀಗ ಆರ್‌ಸಿ ಹಾಗೂ ಡಿಎಲ್‌ ಕುರಿತು ಸಚಿವ ರಾಮಲಿಂಗಾರೆಡ್ಡಿ ಅವರು ಅಪ್ಡೇಟ್‌ ಮಾಹಿತಿಯೊಂದನ್ನು ನೀಡಿದ್ದಾರೆ. ಹಾಗಾದ್ರೆ ಅದರಲ್ಲಿ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಕ್ಯೂಆರ್ ಕೋಡ್ ಆಧಾರಿತ ನೋಂದಣಿ ಪ್ರಮಾಣಪತ್ರ

ಒನ್ ಇ೦ಡಿಯ 9 Dec 2025 1:28 pm

ಜ.15, 2026ರೊಳಗೆ ಜನಗಣತಿ ಸಿಬ್ಬಂದಿ ನೇಮಕಾತಿ ಪೂರ್ಣಗೊಳಿಸಲು ರಾಜ್ಯಗಳಿಗೆ ಸೂಚಿಸಿದ ರಿಜಿಸ್ಟ್ರಾರ್‌ ಜನರಲ್

ಹೊಸದಿಲ್ಲಿ: 2027ರ ಜನಗಣತಿಗೆ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ, ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿಯನ್ನು ಜನವರಿ 15, 2026ರೊಳಗೆ ಪೂರ್ಣಗೊಳಿಸಬೇಕೆಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ರಿಜಿಸ್ಟ್ರಾರ್‌ ಜನರಲ್‌ (RGI) ನೂತನ ಸುತ್ತೋಲೆಯ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸುತ್ತೋಲೆಯ ಪ್ರಕಾರ, ದೇಶವ್ಯಾಪಿ ನಡೆಯಲಿರುವ ದತ್ತಾಂಶ ಸಂಗ್ರಹಣೆಯ ಪ್ರಮುಖ ಹೊಣೆ ಗಣತಿದಾರರು ಮತ್ತು ಮೇಲ್ವಿಚಾರಕರ ಮೇಲಾಗಿರುತ್ತದೆ. ಪ್ರತಿ ಗಣತಿದಾರರಿಗೆ 700–800 ಜನಸಂಖ್ಯೆಯ ಜವಾಬ್ದಾರಿ ನೀಡಲಾಗುತ್ತಿದ್ದು, ಪ್ರತಿ ಆರು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕನನ್ನು ನಿಯೋಜಿಸುವಂತೆ ಸೂಚಿಸಲಾಗಿದೆ. ಜೊತೆಗೆ, ತುರ್ತು ಪರಿಸ್ಥಿತಿಗಳಿಗೆ ಉಪಯೋಗವಾಗುವಂತೆ 10% ಮೀಸಲು ಸಿಬ್ಬಂದಿಯನ್ನು ಇಡಬೇಕೆಂದು ಸೂಚಿಸಲಾಗಿದೆ. ಜನಗಣತಿ ನಿಯಮಗಳು–1990ರ ಪ್ರಕಾರ, ಶಿಕ್ಷಕರು, ಗುಮಾಸ್ತರು ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯನ್ನು ಗಣತಿದಾರರಾಗಿ ನೇಮಿಸಬಹುದು. ಮೇಲ್ವಿಚಾರಕರು ಸಾಮಾನ್ಯವಾಗಿ ಗಣತಿದಾರರಿಗಿಂತ ಹಿರಿಯ ಹುದ್ದೆಯವರಾಗಿರಬೇಕು. ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ವಿಭಾಗಗಳಲ್ಲಿ ವಿಭಾಗೀಯ ಆಯುಕ್ತರು ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾರೆ. ಮಹಾನಗರ ಪ್ರದೇಶಗಳಲ್ಲಿ ಪುರಸಭೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿ ಅಥವಾ ಹೆಚ್ಚುವರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಜನಗಣತಿಗಾಗಿ ದೇಶಾದ್ಯಂತ ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸುವ ಯೋಜನೆ ರೂಪಿಸಲಾಗಿದೆ. ನೇಮಕಾತಿ, ಬ್ಲಾಕ್ ಹಂಚಿಕೆ, ಮೇಲ್ವಿಚಾರಣಾ ವಲಯಗಳ ನಿಗದಿ ಮತ್ತು ಕ್ಷೇತ್ರ ಕಾರ್ಯದ ನೈಜ ಸಮಯದ ಪ್ರಗತಿಯ ಮೇಲ್ವಿಚಾರಣೆ ನಡೆಸಲು RGI ‘Census Management and Monitoring System (CMMS)’ ಎಂಬ ಡಿಜಿಟಲ್‌ ಪೋರ್ಟಲ್ ಅನ್ನು ನಿರ್ಮಿಸಿದೆ. ಸುತ್ತೋಲೆಯಲ್ಲಿ, 2027ರ ಜನಗಣತಿಯಲ್ಲಿ ಡಿಜಿಟಲ್ ವಿಧಾನಗಳ ಬಳಕೆ ಹೆಚ್ಚಿರುವುದರಿಂದ, ಸಿಬ್ಬಂದಿಗಳ ಗುರುತಿಸುವಿಕೆ ಮತ್ತು CMMS ಪೋರ್ಟಲ್‌ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮುಂಚಿತವಾಗಿ ಆರಂಭಿಸಿ ಪೂರ್ಣಗೊಳಿಸುವುದು ಅತ್ಯವಶ್ಯಕ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ನೈಜ ದತ್ತಾಂಶ ಸಂಗ್ರಹಣೆಯನ್ನು ನೇಮಕಾತಿಯ ನಂತರ ಮಾಡಬಹುದಾದರೂ, ಗುರುತು ಮತ್ತು ನೋಂದಣಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸಲಾಗಿದೆ. 2027ರ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ ಎಪ್ರಿಲ್‌ ನಿಂದ ಸೆಪ್ಟೆಂಬರ್ 2026ರ ನಡುವೆ ಪ್ರತಿ ರಾಜ್ಯದ ಅನುಕೂಲಕ್ಕೆ ತಕ್ಕಂತೆ 30 ದಿನಗಳ ಅವಧಿಯಲ್ಲಿ ನಡೆಸಲಾಗುತ್ತದೆ. ಎರಡನೇ ಹಂತವಾದ ಜನಸಂಖ್ಯಾ ಗಣತಿಯನ್ನು ಫೆಬ್ರವರಿ 2027ರಲ್ಲಿ ನಡೆಸಲಾಗುತ್ತಿದ್ದು, ದೇಶದ ಬಹುತೇಕ ಭಾಗಗಳಿಗೆ ಮಾರ್ಚ್ 1, 2027ರ 00:00 ಗಂಟೆಯನ್ನು ಆರಂಭಿಸುವ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಲಡಾಖ್, ಜಮ್ಮು–ಕಾಶ್ಮೀರ ಮತ್ತು ಹಿಮಾವೃತ ಉತ್ತರಾಖಂಡ–ಹಿಮಾಚಲ ಪ್ರದೇಶಗಳಿಗೆ ಅಕ್ಟೋಬರ್ 1, 2026ರ 00:00 ಗಂಟೆಯನ್ನು ಆರಂಭಿಕ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಈ ಬಾರಿ ಜನಗಣತಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯಲಿದ್ದು, ಜಾತಿ ಗಣತಿಯನ್ನು ಸಹ ಒಳಗೊಂಡಿರುತ್ತದೆ. ಈ ಬಗ್ಗೆ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು.

ವಾರ್ತಾ ಭಾರತಿ 9 Dec 2025 1:24 pm

2023 ರಲ್ಲಿ 22ಸಾವಿರ ಪ್ರಕರಣ, 2025 ರಲ್ಲಿ 13,000 ಪ್ರಕರಣ: ರಾಜ್ಯದಲ್ಲಿ ಸೈಬರ್ ವಂಚನೆ ಕೇಸ್ ಇಳಿಕೆ!

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 52,000 ಪ್ರಕರಣಗಳು ದಾಖಲಾಗಿದ್ದರೂ, 2023, 2024, ಮತ್ತು 2025ರ ಅಂಕಿಅಂಶಗಳು ಇಳಿಕೆಯ ಪ್ರವೃತ್ತಿಯನ್ನು ತೋರಿಸುತ್ತವೆ. ವಂಚನೆ ತಡೆಯಲು ಕಾನೂನು ತಿದ್ದುಪಡಿ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 1:19 pm

ಬಿಜೆಪಿಯಿಂದ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ: ಹಲವರು ವಶಕ್ಕೆ

ಬೆಳಗಾವಿ : ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿಯ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಅಲಾರವಾಡ್ ಕ್ರಾಸ್ ಕಡೆಗೆ ಸಾಗುತ್ತಿದ್ದ ಬಿಜೆಪಿಯ ನಾಯಕರ ಸಹಿತ ಹಲವು ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಅಲಾರವಾಡ್ ಕ್ರಾಸ್‌ ನಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಲಿಸಿದ್ದಾರೆ. ಅಗತ್ಯವಿದ್ದರೆ ಜಲಧಾರೆ ಬಳಕೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿ ನಿಗ್ರಹಿಸುತ್ತಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸುವರ್ಣ ಸೌಧ ಮುತ್ತಿಗೆ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ಹಾಗೂ ಅನೇಕ ನಾಯಕರು ಭಾಗವಹಿಸಿದ್ದಾರೆ.

ವಾರ್ತಾ ಭಾರತಿ 9 Dec 2025 1:19 pm

Menstrual Leave: ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಕರ್ನಾಟಕದಲ್ಲಿ ಮಹಿಳಾ ನೌಕರರಿಗೆ ಋತುಚಕ್ರ ಸಂದರ್ಭದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಮಹಿಳಾ ಉದ್ಯೋಗಿಗಳು ಸ್ವಾಗತಿಸಿದ್ದರು. ಅಲ್ಲದೆ ಬಹುತೇಕ ಸಂಸ್ಥೆಗಳಲ್ಲಿ ಈಗಾಗಲೇ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ ನೀಡುವ ನಿಯಮ ಜಾರಿಯೂ ಆಗಿದೆ. ಆದರೆ ಸರ್ಕಾರದ ಈ ಆದೇಶವನ್ನು

ಒನ್ ಇ೦ಡಿಯ 9 Dec 2025 1:17 pm

ವಿಜಯಪುರ ರೈತನ ಯಶೋಗಾಥೆ: 4 ಎಕರೆ ಜಮೀನಿನಲ್ಲಿ 60 ದಿನಕ್ಕೆ 70ಟನ್ ಕಲ್ಲಂಗಡಿ ಬೆಳೆದು 15 ಲಕ್ಷ ರೂ ಗಳಿಕೆ!

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತ ಸತೀಶ್ ಮ. ಬಿರಾದಾರ್ ಅವರು ಕೇವಲ 4 ಎಕರೆ ಜಮೀನಿನಲ್ಲಿ 2 ತಿಂಗಳಲ್ಲಿ 70 ಟನ್ ಕಲ್ಲಂಗಡಿ ಬೆಳೆದು, ಪ್ರತಿ ಕೆ.ಜಿಗೆ 25 ರೂ.ನಂತೆ ಮಾರಾಟ ಮಾಡಿ 15 ಲಕ್ಷ ರೂ. ಆದಾಯ ಗಳಿಸಿದ್ದಾರೆ. ನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಇದು ಸಾಧ್ಯವಾಗಿದೆ ಎಂದು ರೈತ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 9 Dec 2025 1:05 pm

ಜಿಲ್ಲಾಮಟ್ಟದ ಬೋಚಿ ಸ್ಪರ್ಧೆಯಲ್ಲಿ ಕಾರ್ಕಳ ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕಾರ್ಕಳ : ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಪಾಂಬೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ಇವರ ಜಂಟಿ ಆಶ್ರಯದಲ್ಲಿ ಪಾಂಬೂರಿನಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬೋಚಿ ಸ್ಪರ್ಧೆಯಲ್ಲಿ ಕಾರ್ಕಳದ ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡಿದ ಶಿಕ್ಷಕರಿಗೆ ಜೀವನ ವೆಲ್ಪರ್ ಟ್ರಸ್ಟ್‌ (ರಿ)ನ ಆಡಳಿತ ಮಂಡಳಿ ಶಿಕ್ಷಕ, ಶಿಕ್ಷಕರೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ವಾರ್ತಾ ಭಾರತಿ 9 Dec 2025 12:53 pm