ಮೆಲ್ಕಾರ್ ಮಹಿಳಾ ಕಾಲೇಜಿನ 17ನೇ ವಾರ್ಷಿಕೋತ್ಸವ, ಪದವಿ ಪ್ರದಾನ ಕಾರ್ಯಕ್ರಮ
ಬಂಟ್ವಾಳ: ಪದವಿ ಎನ್ನುವ ಮೈಲುಗಲ್ಲು ಅಂತ್ಯವಲ್ಲ ಇದು ಒಂದು ಉಡಾವಣೆ ವೇದಿಕೆ. ಜೀವನವು ಹೊಸ ಪಾಠಗಳು, ಹೊಸ ಸವಾಲುಗಳು ಮತ್ತು ಹೊಸ ಸಂತೋಷಗಳನ್ನು ನೀಡುತ್ತದೆ. ನೀವು ಯಾವಾಗಲೂ ಕುತೂಹಲದಿಂದಿರಿ, ಧೈರ್ಯಶಾಲಿಯಾಗಿರಿ ಮತ್ತು ದಯೆಯಿಂದಿರಿ ಎಂದು ಎ.ಎಂ. ಸ್ಟುಡಿಯೋ ಸಂಸ್ಥೆಯ ಆರ್ಕಿಟೆಕ್ಟ್ ಆಸಿಫ್ ಮುಹಮ್ಮದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಅವರು ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪದವಿ ಪೂರ್ವ ತರಗತಿಗಳಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ದಾಖಲಾತಿ ಪಡೆದರೆ ಶೇಕಡ 50ರಷ್ಟು ಶುಲ್ಕವನ್ನು ತಾವು ಪಾವತಿಸುವುದಾಗಿ ಗಡಿಯಾರ ಗ್ರೂಪ್ ಆಫ್ ಕಂಪೆನೀಸ್ ಮಾಲಕ ಇಬ್ರಾಹೀಂ ಗಡಿಯಾರ ಈ ಸಂದರ್ಭದಲ್ಲಿ ಘೋಷಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ ಮಾಡಿದ ಕಾಲೇಜು ಸಂಸ್ಥಾಪಕ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಜಗತ್ತಿಗೆ ನಿಮ್ಮ ವಿಶಿಷ್ಟ ಪ್ರತಿಭೆಗಳು, ನಿಮ್ಮ ಹೊಸ ದೃಷ್ಟಿಕೋನಗಳು ಮತ್ತು ನಿಮ್ಮ ಸಹಾನುಭೂತಿಯ ಹೃದಯಗಳು ಬೇಕಾಗಿವೆ. ಮತ್ತು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಿರಿ, ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸಿರ್, ನಿರ್ದೇಶಕ ನಿಸಾರ್ ಫಕೀರ್ ಮುಹಮ್ಮದ್, ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್ ಸಂಚಾಲಕ ಬಿ.ಎ.ನಝೀರ್ ಮಾತನಾಡಿ ಶುಭ ಹಾರೈಸಿದರು. ಬಂಟ್ವಾಳ ಸಂಚಾರ ಪೊಲೀಸ್ ಠಾಣಾಧಿಕಾರಿ ಸುತೇಶ್ ಕೆ.ಪಿ., ದಾರುಲ್ ಇಸ್ಲಾಮ್ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಹಮೀದ್ ಕೆ. ಮಾಣಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಅಬ್ದುಲ್ ಮಜೀದ್ . ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಪಾತಿಮಾ ನಿದಾ ಸ್ವಾಗತಿಸಿದರು, ಕೆ.ಪಿ.ಆಯಿಶತ್ ಸುಹಾನ ವಂದಿಸಿದರು . ಉಪ ಪ್ರಾಂಶುಪಾಲೆ ಅಂಜಲಿನಾ ಸುನೀತಾ ಪಿರೇರ ಹಾಗೂ ಮಶ್ಮೂಮ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದಲ್ಲಿ 3 ವರ್ಷಗಳಲ್ಲಿ 6157 ಬಾಲ್ಯ ವಿವಾಹ ತಡೆ! ಕಾನೂನು ಮೀರಿ ನಡೆದಿದೆ 2198 ಮದುವೆ
ರಾಜ್ಯದಲ್ಲಿ 3 ವರ್ಷಗಳಲ್ಲಿ 8355 ಬಾಲ್ಯವಿರುದ್ದ ದೂರುಗಳು ಸ್ವೀಕೃತವಾಗಿದ್ದು,ಇದರಲ್ಲಿ ಸುಮಾರು 2198 ವಿವಾಹಗಳು ಕಾನೂನು ಉಲ್ಲಂಘಿಸಿ ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯ ನಿರ್ವಹಿಸಿ, ಈವರೆಗೂ ಸುಮಾರು 6157 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ರಾಜ್ಯ ಅಭಿವೃದ್ದಿ ಹೊಂದಿ ಮುಂದೆ ಸಾಗುತ್ತಿದ್ದರೂ ಸಹ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗು ಇನ್ನು, ಸಮಾಜದಲ್ಲಿ ಹಾಗೇ ಉಳಿದಿದ್ದು, ಸರ್ಕಾರ ಇದನ್ನು ತಡೆಗಟ್ಟಲು ನಾನಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ.
BELTHANGADY | ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೆ ಗಡಿಪಾರು ಆದೇಶ
ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟದ ನೇತೃತ್ವ ವಹಿಸಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡಿ ಎರಡನೇ ಬಾರಿ ಪುತ್ತೂರು ಸಹಾಯಕ್ತ ಆಯುಕ್ತೆ ಆದೇಶ ಹೊರಡಿಸಿದ್ದಾರೆ. ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಡಿ.17 ರಂದು ಈ ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿಯನ್ನು ಈ ಹಿಂದೆ ಗಡಿಪಾರು ಮಾಡಿ ಪುತ್ತೂರು ಎ.ಸಿ. ಆದೇಶ ಹೊರಡಿಸಿದ್ದರು ಇದನ್ನು ಮರು ಪರಿಶೀಲಿಸಲು ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ಮರು ಪರಿಶೀಲನೆ ಮಾಡಿ ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಗಡಿಪಾರು ಆದೇಶದ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಮೇರಗೆ ಡಿ.18ರಂದು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಬೆಳ್ತಂಗಡಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ ಆದರೆ ತಿಮರೋಡಿ ಈ ಸಂದರ್ಭ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಮತ್ತೆ ಚೇತರಿಸಿಕೊಳ್ಳುವುದೇ ಜೆಡಿಎಸ್?
ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ. ► ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ಬಂತೆಂದರೆ ಹುಬ್ಬಳ್ಳಿ ಜನರಿಗೆ ಆತಂಕ ಶುರುವಾಗುತ್ತಿತ್ತು. ಈದ್ಗಾ ಮೈದಾನದ ಬಳಿ ಹಿಂದೂ-ಮುಸ್ಲಿಮ್ ಘರ್ಷಣೆ ನಡೆಯುತಿತ್ತು. ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿತ್ತು. ಅಂಜುಮನ್ ಇಸ್ಲಾಮ್ ಸಂಸ್ಥೆ ಪ್ರತಿರೋಧ ತೋರುತ್ತಿತ್ತು. 1992ರಲ್ಲಿ ವಿವಾದ ಉತ್ಕಟ ಸ್ಥಿತಿ ತಲುಪಿತ್ತು. 94ರ ಆಗಸ್ಟ್ 15ರಂದು ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ಎಚ್.ಡಿ. ದೇವೇಗೌಡರ ಜನತಾ ದಳ ಸರಕಾರ 95ರ ಆಗಸ್ಟ್ 15ರಂದು ಅಂಜುಮನ್ ಸಂಸ್ಥೆ ಪದಾಧಿಕಾರಿಗಳ ಮನವೊಲಿಸಿ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿತು. ಸಮಸ್ಯೆ ಪರಿಹಾರವಾಯಿತು. ಈ ವಿವಾದವೇ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ನಾಂದಿಯಾಯಿತು. ► ಒಮ್ಮೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡುತ್ತಿದ್ದಾಗ, ‘ಕೃಷ್ಣಾ ಮೇಲ್ದಂಡೆ ಯೋಜನೆ’ ವಿಷಯ ಪ್ರಸ್ತಾಪವಾಯಿತು. ‘‘ಯುಕೆಪಿ ತುಂಡು ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ ನಿಜವೇ?’’ ಎಂದು ಕೇಳಿದೆ. ತುಂಡು ಗುತ್ತಿಗೆ ಕಾಮಗಾರಿ ನಡೆದಿದ್ದು ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ. ‘‘ಅಕ್ರಮ ಆರೋಪ ಸುಳ್ಳು. ಹೆಚ್ಚೆಂದರೆ ಅಲ್ಪಸ್ವಲ್ಪ ಪಾರ್ಟಿ ಫಂಡ್ ಬಂದಿರಬಹುದು. ತುಂಡು ಗುತ್ತಿಗೆ ಕೊಡದಿದ್ದರೆ ಯೋಜನೆಯೇ ಪೂರ್ಣಗೊಳ್ಳುತ್ತಿರಲಿಲ್ಲ’’ ಎಂದರು ಬೊಮ್ಮಾಯಿ. ಈ ಚರ್ಚೆ ನಡೆದಾಗ ಅವರು ಬಿಜೆಪಿ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ► 2000ನೇ ಇಸವಿ. ಧಾರವಾಡ ಜಿಲ್ಲೆಯ ನವಲೂರು ಗ್ರಾಮದ ರೈತನೊಬ್ಬ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರು. ಹೊಲದಲ್ಲಿ ಬೆಳೆದ ಆಲೂಗೆಡ್ಡೆ ಕೈ ಕೊಟ್ಟಿತ್ತು. ಸಾಲ ತೀರಿಸಲು ಎತ್ತು ಮಾರಿ ಬೇಸತ್ತಿದ್ದರು. ಈ ಸುದ್ದಿ ಹೊರ ದೇಶಗಳಲ್ಲೂ ಸದ್ದು ಮಾಡಿತ್ತು. ಬಿಬಿಸಿ ಪತ್ರಕರ್ತರೂ ಧಾರವಾಡಕ್ಕೆ ಬಂದಿದ್ದರು. ದೇವೇಗೌಡರೂ ರೈತನ ಮನೆಗೆ ಭೇಟಿ ಕೊಟ್ಟಿದ್ದರು. ತಮ್ಮ ಜೇಬಿನಿಂದ 25 ಸಾವಿರ ರೂಪಾಯಿ ತೆಗೆದು ಮೃತನ ಕುಟುಂಬಕ್ಕೆ ಕೊಟ್ಟರು. ಆಗವರು ಅಧಿಕಾರದಲ್ಲಿ ಇರಲಿಲ್ಲ. ದೇವೇಗೌಡರ ವ್ಯಕ್ತಿತ್ವ, ಬದ್ಧತೆ, ಅಂತಃಕರಣ ಮತ್ತು ನಾಯಕತ್ವದ ಗುಣ ಅರಿಯಲು ಈ ಮೂರು ಪ್ರಸಂಗಗಳೇ ಸಾಕು. ಕೃಷಿ, ನೀರಾವರಿ ಮತ್ತು ಲೋಕೋಪಯೋಗಿ ಕ್ಷೇತ್ರಗಳಲ್ಲಿ ಅವರು ಚಾಂಪಿಯನ್. ಅವರನ್ನು ಸರಿಗಟ್ಟುವ ಇನ್ನೊಬ್ಬ ನಾಯಕನಿಲ್ಲ. ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ರಾಜಿ ಇಲ್ಲ. ರಾಜಕೀಯ ಲಾಭ-ನಷ್ಟದ ವಿಚಾರದಲ್ಲಿ ಅವರ ದಾರಿಯೇ ಬೇರೆ. ಸ್ವಾರ್ಥಿ ಮತ್ತು ಅವಕಾಶವಾದಿ. ಮಕ್ಕಳ ವಿಷಯದಲ್ಲಂತೂ ‘ಧೃತರಾಷ್ಟ್ರ’. ದೇವೇಗೌಡರು ಮುಖ್ಯಮಂತ್ರಿ ಆಗಿದ್ದು ಬರೀ 16 ತಿಂಗಳು. ಮುಖ್ಯಮಂತ್ರಿ ಆಗುವುದಕ್ಕೆ ಭಾರೀ ಹೋರಾಟ ಮಾಡಿದ್ದರು. ಪ್ರಧಾನಿ ಹುದ್ದೆ ಅನಾಯಾಸವಾಗಿ ಬಂದಿತ್ತು. ಅದೂ ಹೆಚ್ಚು ಕಾಲ ಉಳಿಯಲಿಲ್ಲ. 10 ತಿಂಗಳಲ್ಲಿ ಅಧಿಕಾರ ಹೋಯಿತು. ಆಗಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಜತೆ ಸ್ವಲ್ಪ ಹೊಂದಾಣಿಕೆಯಿಂದ ಹೋಗಿದ್ದರೂ ಸರಕಾರ ಉಳಿಯುತ್ತಿತ್ತು. ಹಾಸನದ ಹೊಳೆನರಸೀಪುರದಲ್ಲಿ ತಳಮಟ್ಟದಿಂದ ರಾಜಕೀಯ ಪ್ರವೇಶಿಸಿದ ದೇವೇಗೌಡರು ಪ್ರಧಾನಿ ಆಗಿದ್ದು ಆಕಸ್ಮಿಕ, ಅದೃಷ್ಟ. ಕನಸು-ಮನಸ್ಸಿನಲ್ಲೂ ಇಂಥ ಅವಕಾಶ ಬರಬಹುದು ಎಂದು ಅವರು ಎಣಿಸಿರಲಿಲ್ಲ. ಈಗದು ಇತಿಹಾಸ. ರಾಜೀನಾಮೆಗೆ ಮೊದಲು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ‘‘ಫೀನಿಕ್ಸ್ನಂತೆ ಧೂಳಿನಿಂದ ಎದ್ದು ಬರುವೆ’’ ಎಂದು ಹೇಳಿದ್ದು ನಿಜವಾಗಲಿಲ್ಲ. ಆದರೂ ಛಲ ಬಿಟ್ಟಿಲ್ಲ. ರಾಜಕಾರಣದಿಂದ ದೂರ ಸರಿದಿಲ್ಲ. ಈಗಲೂ ಜೆಡಿಎಸ್ನ ‘ಬ್ರ್ಯಾಂಡ್ ಅಂಬಾಸಿಡರ್’. ಇಳಿ ವಯಸ್ಸಲ್ಲೂ ರಾಜಕೀಯ ಸಮಾವೇಶಗಳಲ್ಲಿ ಭಾಗಿ. ಅವರದು ದೈತ್ಯ ಶಕ್ತಿ. ಈ ವಿವರಗಳು ಪ್ರಾಸಂಗಿಕ ಅಷ್ಟೇ. ವಾಸ್ತವವಾಗಿ ಜನತಾದಳ (ಜಾತ್ಯತೀತ) ಪಕ್ಷ ಕುರಿತಾದ ವಿಶ್ಲೇಷಣೆ ಇದು. ಜೆಡಿಎಸ್ಗೀಗ 25ರ ಪ್ರಾಯ. ಸ್ಥಾಪನೆ ಆಗಿದ್ದು 99ರಲ್ಲಾದರೂ, ನೋಂದಣಿ ಆಗಿದ್ದು 2000ದ ನವೆಂಬರ್ನಲ್ಲಿ. ಅನೇಕ ಏಳುಬೀಳು ಕಂಡಿದೆ. ಅಧಿಕಾರಕ್ಕಾಗಿ ಆಗಾಗ ಮಗ್ಗಲು ಬದಲಿಸಿದೆ. ಎರಡು ಸಲ ಕಾಂಗ್ರೆಸ್, ಒಂದು ಸಲ ಬಿಜೆಪಿ ಬೆಂಬಲದಲ್ಲಿ ರಾಜ್ಯದಲ್ಲಿ ಸರಕಾರ ಮಾಡಿದೆ. ಈಗ ಎನ್ಡಿಎ ಪಾಲುದಾರ ಪಕ್ಷ. ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್ ಮತ್ತು ಜೆ.ಎಚ್. ಪಟೇಲರು ಎನ್ಡಿಎ ಬೆಂಬಲಿಸಿದ್ದನ್ನು ಪ್ರತಿಭಟಿಸಿ ದೇವೇಗೌಡರು ಜನತಾ ದಳ ತೊರೆದು ಜೆಡಿಎಸ್ ಕಟ್ಟಿದ್ದರು. ಯಾವ ಪಕ್ಷ ಸಿದ್ಧಾಂತ ವಿರೋಧಿಸಿದ್ದರೋ ಅದರ ಜತೆ ದೇವೇಗೌಡರು ಸಖ್ಯ ಬೆಳೆಸಿದ್ದಾರೆ. ಇದು ವಿಪರ್ಯಾಸ. ಪಕ್ಷದ ಹೆಸರಿನ ಮುಂದೆ ‘ಜಾತ್ಯತೀತ’ ಟ್ಯಾಗ್ ಇದ್ದರೂ ರಾಜಕೀಯ ಲಾಭಕ್ಕಾಗಿ ‘ಹಿಂದುತ್ವ’ ರಾಜಕಾರಣ ಬೆಂಬಲಿಸಿದ್ದಾರೆ. ಮೋದಿ ಅವರನ್ನು ಫ್ಯಾಶಿಸ್ಟ್, ಕೋಮುವಾದಿ, ‘ಬಂಡವಾಳಶಾಹಿ ದುಷ್ಟಕೂಟ’ದ (ಕ್ರೋನಿ ಕ್ಯಾಪಿಟಲಿಸಂ) ಎಂದು ಟೀಕೆ ಮಾಡುತ್ತಿದ್ದ ಗೌಡರೀಗ ಅವರನ್ನು ಹೊಗಳುತ್ತಿದ್ದಾರೆ. ರಾಜ್ಯಸಭೆಯಲ್ಲಿ ಮೊನ್ನೆ ಪ್ರಧಾನಿ ಪರ ಬ್ಯಾಟ್ ಮಾಡಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ, ಹಣದುಬ್ಬರ, ರೂಪಾಯಿ ಬೆಲೆ ಕುಸಿತ ಮತ್ತಿತರ ವಿಷಯ ಕುರಿತು ಮಾಜಿ ಪ್ರಧಾನಿ ಚಕಾರ ಎತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತದ ನಾಯಕರನ್ನು ಇತಿಹಾಸ ಕ್ಷಮಿಸುವುದಿಲ್ಲ. ಜೆಡಿಎಸ್ ನಾಯಕರಿಟ್ಟ ತಪ್ಪು ಹೆಜ್ಜೆ, ಕೈಗೊಂಡ ತಪ್ಪು ನಿರ್ಧಾರಗಳಿಂದ ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಗ್ರಾಫ್ ಇಳಿಮುಖವಾಗುತ್ತಿದೆ. ಯಡಿಯೂರಪ್ಪ ಅವರಿಗೆ 2008ರಲ್ಲಿ ಆಡಳಿತ ನಡೆಸಲು ಬಿಡಲಿಲ್ಲ. ‘ಆಡಿದ ಮಾತಿನಂತೆ ನಡೆಯಲಿಲ್ಲ’ ಎಂಬ ಕಳಂಕವೇ ಜೆಡಿಎಸ್ ನೆಲ ಕಚ್ಚಲು ಕಾರಣವಾಯಿತು. ಹಿಂದಿನ ಚುನಾವಣೆಯ ಸೋಲು ಹೀನಾಯ. ಅದರ ಪಾಲು ಬರೀ 19 ಸ್ಥಾನ. ಜೆಡಿಎಸ್ ಹಳೇ ಮೈಸೂರು ಭಾಗ ಅದರಲ್ಲೂ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಿಗೇ ಸೀಮಿತ ಎನ್ನುವ ಹಣೆಪಟ್ಟಿ ಕಳಚಿಕೊಂಡು ಹೊರಬರಲು ಸಾಧ್ಯವಾಗಿಲ್ಲ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದಲ್ಲಿ ನೆಲೆ ವಿಸ್ತರಿಸಲು ಸೋತಿದೆ. ಆ ಕಡೆ ನಾಯಕತ್ವ ಬೆಳೆಸಲಿಲ್ಲ. ಕಡೇ ಪಕ್ಷ ಯುಕೆಪಿ ಕುರಿತು ಮಾತನಾಡಿದ್ದರೂ ಸಾಕಿತ್ತು. ಪಕ್ಷ ಕಟ್ಟಬಹುದಿತ್ತು. ಯಾವುದೇ ಪಕ್ಷ ಒಂದು ಜಾತಿ-ಧರ್ಮ ಅವಲಂಬಿಸಿ ರಾಜಕಾರಣ ಮಾಡಲಾಗದು. ಎಲ್ಲ ಜಾತಿ-ಧರ್ಮ ಒಳಗೊಳ್ಳಬೇಕು. ಮೊದಲು ಗೌಡರನ್ನು ಮುಸ್ಲಿಮರು ನಂಬಿದ್ದರು. ಬಿಜೆಪಿ ಜತೆ ಸೇರಿದ್ದರಿಂದ ಮುಸ್ಲಿಮರು ದೂರ ಸರಿದರು. ಜೆಡಿಎಸ್ ವರಿಷ್ಠ ಮನಸ್ಸು ಮಾಡಿದ್ದರೆ ಹಿಂದುಳಿದ, ಅತೀ ಹಿಂದುಳಿದ ವರ್ಗ, ದಲಿತ ಸಮಾಜಗಳನ್ನು ಒಗ್ಗೂಡಿಸಬಹುದಿತ್ತು. ಈ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಅಂಥ ಚಿಂತನೆಯೂ ಅವರಿಗಿದ್ದಂತೆ ಕಾಣಲಿಲ್ಲ. ‘ದೇವೇಗೌಡರು ಒಬಿಸಿ ನಾಯಕ’ ಎಂದೇ ಲಾಲು ಪ್ರಸಾದ್, ಮುಲಾಯಂ ಸಿಂಗ್ ಪ್ರಧಾನಿ ಹುದ್ದೆಗೆ ಅವರನ್ನು ಬೆಂಬಲಿಸಿದ್ದು. ಅವರ ಹೆಸರನ್ನು ಜ್ಯೋತಿ ಬಸು ಸೂಚಿಸಿದ್ದು. ಈ ಪ್ರಭಾವ ಬಳಸಿ ಬಲಿಷ್ಠವಾಗಿ ಪಕ್ಷ ಕಟ್ಟಬಹುದಿತ್ತು. ಅದ್ಯಾಕೊ ಹಾಗೆ ಮಾಡಲಿಲ್ಲ. ಹಳೇ ಮೈಸೂರು ಜಿಲ್ಲೆಗಳಲ್ಲೂ ಅದರ ಶಕ್ತಿ ಕ್ಷೀಣಿಸಿದೆ. ಒಕ್ಕಲಿಗರ ಕೋಟೆಗೂ ಕಾಂಗ್ರೆಸ್ ಮತ್ತು ಬಿಜೆಪಿ ಲಗ್ಗೆ ಹಾಕಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿದು ರುಜುವಾತಾಗಿದೆ. ಜೆಡಿಎಸ್ ‘ಕುಟುಂಬ ಕೇಂದ್ರಿತ’ವಾಗಿದೆ. ‘ಬೇರೆ ಜಾತಿಗಳ ನಾಯಕರು ಹೋಗಲಿ, ಅವರದೇ ಜಾತಿ ನಾಯಕರನ್ನು ಬೆಳೆಸಲಿಲ್ಲ’ ಎಂಬ ಅಪವಾದ ಗೌಡರ ಮೇಲಿದೆ. ಈ ಕಾರಣಕ್ಕೆ ಬಹಳಷ್ಟು ನಾಯಕರು ಜೆಡಿಎಸ್ ತೊರೆದಿದ್ದಾರೆ. ಇಷ್ಟೇ ಹೇಳಿದರೆ ಪೂರ್ಣ ಸತ್ಯವಾಗುವುದಿಲ್ಲ. ಅರ್ಧ ಸತ್ಯವಾಗುತ್ತದೆ. ಅವರು ಬೆಳೆಸಿದ ಅನೇಕ ನಾಯಕರೂ ಗೌಡರಿಗೆ ಕೈಕೊಟ್ಟು ಹೋಗಿದ್ದಾರೆ. ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿ ಆದಾಗ ಜನತಾದಳ 115 ಸ್ಥಾನ ಗೆದ್ದಿತ್ತು. 1999ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಚುನಾವಣೆ ಎದುರಿಸಿದಾಗ ಗೆಲುವು ಸಾಧ್ಯವಾಗಿದ್ದು ಬರೀ 10 ಕ್ಷೇತ್ರಗಳಲ್ಲಿ. ಅದಕ್ಕೆ ಬಿದ್ದ ಶೇಕಡಾವಾರು ಮತಗಳು 10.42. ಜೆಡಿಯುಗೆ ಸಿಕ್ಕಿದ್ದ ಸ್ಥಾನ 18. ಜನತಾದಳ ಹೋಳಾಗದಿದ್ದರೆ ರಾಜ್ಯದ ರಾಜಕೀಯ ಚಿತ್ರಣ ಬೇರೆಯಾಗಿರುತ್ತಿತ್ತೇನೋ 2004ರ ಚುನಾವಣೆಯಲ್ಲಿ ಜೆಡಿಎಸ್ ಕೊಂಚ ಚೇತರಿಸಿಕೊಂಡರೂ ಸರಕಾರ ರಚಿಸುವಷ್ಟು ಸೀಟುಗಳು ಬರಲಿಲ್ಲ. ಆಗ ದೇವೇಗೌಡರು ನೋಡಿದ್ದು ಕಾಂಗ್ರೆಸ್ ಕಡೆ. 58 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತ್ತು. 65 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಲ್ಪ ಬಹುಮತಕ್ಕೆ 113 ಸ್ಥಾನ ಬೇಕು. ಎರಡು ಪಕ್ಷಗಳು ಸೇರಿ ಸರಕಾರ ಮಾಡಿದವು. ಧರಂಸಿಂಗ್ ಮುಖ್ಯಮಂತ್ರಿ ಆದರು. ಸಿಂಗ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಬಂಡಾಯವೆದ್ದು, ಸರಕಾರ ಕೆಡವಿದರು. ಬಿಜೆಪಿಯ ಯಡಿಯೂರಪ್ಪನವರ ಜತೆಗೂಡಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ರಚಿಸಿ, ಅವರೇ ಮುಖ್ಯಮಂತ್ರಿಯಾದರು. ಯಡಿಯೂರಪ್ಪನವರ ಜತೆ ಸೇರುವ ತಪ್ಪನ್ನು ಕುಮಾರಸ್ವಾಮಿ ಅವರು ಮಾಡದಿದ್ದರೆ ಬಿಜೆಪಿ ಇಷ್ಟು ಪ್ರಬಲವಾಗುತ್ತಿರಲಿಲ್ಲ. ಜೆಡಿಎಸ್ ದುರ್ಬಲವಾಗುತ್ತಿರಲಿಲ್ಲ. ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಟಿಎಂಸಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಂತೆ ಬಲಿಷ್ಠ ಪ್ರಾದೇಶಿಕ ಪಕ್ಷ ಆಗಬಹುದಿತ್ತು. ಅಂಥದೊಂದು ಅವಕಾಶ ಕಳೆದು ಹೋಯಿತು. 2028ಕ್ಕೆ ಜೆಡಿಎಸ್ ತನ್ನ ನೆಲೆಯನ್ನು ಮರಳಿ ಸ್ಥಾಪಿಸದಿದ್ದರೆ ಕಥೆ ಮುಗಿದಂತೆ. 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರವನ್ನು ಅಧಿಕಾರಕ್ಕೆ ತರುವುದಾಗಿ ದೇವೇಗೌಡರು ರಾಜ್ಯಸಭೆಯಲ್ಲಿ ಶಪಥ ಮಾಡಿದ್ದಾರೆ. ಈ ನಿಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಕಿತ್ತಾಟದ ಲಾಭ ಪಡೆಯಲು ತಂತ್ರ ರೂಪಿಸಬೇಕು. ಬಿಜೆಪಿ ಮೇಲೂ ನಿಗಾ ಇಡಬೇಕಿದೆ. ಏಕೆಂದರೆ, ಪ್ರಾದೇಶಿಕ ಪಕ್ಷಗಳ ‘ಬಂಡವಾಳ’ದಲ್ಲಿ ಅದು ಬೆಳೆಯುತ್ತಿದೆ. ಬಂಡವಾಳ ನಷ್ಟವಾದರೆ ಕಷ್ಟ. ಈ ವಾಸ್ತವ ದೇವೇಗೌಡರಿಗೂ ಗೊತ್ತಿದೆ. 2018ರಲ್ಲೂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಜೆಡಿಎಸ್ ಬೆಂಬಲಿಸುವುದು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿತ್ತು. ಆದರೆ, ಸರಕಾರ ದೀರ್ಘ ಕಾಲ ಬಾಳಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಿತ್ರ ಪಕ್ಷಗಳ ಜತೆ ನಡೆದುಕೊಂಡ ರೀತಿಯಲ್ಲೇ ಅವರೂ ವರ್ತಿಸಿದರು. ಕಾಂಗ್ರೆಸ್ ನಾಯಕರ ಸಲಹೆ, ಸೂಚನೆ-ಬೇಡಿಕೆಗಳಿಗೆ ಕಿವಿಗೊಡಲಿಲ್ಲ. ಸರಕಾರ ಬೀಳಿಸಲು ಕೈ ನಾಯಕರು ತೆರೆಮರೆಯಲ್ಲಿ ಪಿತೂರಿ ಮಾಡಿದರು. ಜೆಡಿಎಸ್ ಮತ್ತು ಕಾಂಗ್ರೆಸ್ನ 17 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ದೇವೇಗೌಡರ ಮನೆ ಬಾಗಿಲಿಗೇ ಹೋಗಿ ದುಂಬಾಲು ಬಿದ್ದು ಬೆಂಬಲಿಸಿದವರೇ ಕುಮಾರಸ್ವಾಮಿ ಕಾಲೆಳೆದರು. ನಿತ್ಯ ಕಿರುಕುಳ ಕೊಟ್ಟರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೊರ ಜಗತ್ತಿನ ದೃಷ್ಟಿಯಲ್ಲಿ ಒಂದಾಗಿದ್ದರೇ ವಿನಾ, ಒಳಗೊಳಗೇ ಕುದಿಯುತ್ತಿದ್ದರು. ಪರಸ್ಪರ ನಂಬಿಕೆ-ವಿಶ್ವಾಸವಿರಲಿಲ್ಲ. ಎಲ್ಲರೂ ಲಾಭ ಮತ್ತು ನಷ್ಟವನ್ನೇ ಲೆಕ್ಕ ಹಾಕಿದರು. ಪಕ್ಷ ಮತ್ತು ಸರಕಾರದಿಂದ ತಮಗೇನು ಲಾಭ ಎಂದು ಯೋಚನೆ ಮಾಡಿದರೇ ಹೊರತು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭ ಎಂದು ನೋಡಲಿಲ್ಲ. ಈ ಪ್ರವೃತ್ತಿ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚು. ಇದು ಆ ಪಕ್ಷದ ಬೆಳವಣಿಗೆಗೂ ಅಡ್ಡಿಯಾಗಿದೆ. ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ದೇವೇಗೌಡರು ಮಾಡಲಾಗದ್ದನ್ನು ಕುಮಾರಸ್ವಾಮಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮ ವಾಸ್ತವ್ಯ’ದ ಮೂಲಕ ಸರಕಾರವನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ದಿದ್ದಾರೆ. ದುಃಖ-ದುಮ್ಮಾನ ಕೇಳಿದ್ದಾರೆ. ಅದರಿಂದಾಗಿ ಎಷ್ಟು ಪ್ರಯೋಜನವಾಯಿತು ಎನ್ನುವುದು ಬೇರೆ ಮಾತು. ಮುಖ್ಯಮಂತ್ರಿ ಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಹೂಡಿದ್ದೇ ಸಕಾರಾತ್ಮಕ ನಿಲುವು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಕ್ರಿಯೆ. ಕೆಲವರು ಇದನ್ನು ‘ಢೋಂಗಿ ರಾಜಕಾರಣ’ ಎಂದು ಕರೆಯಬಹುದು. ಎಲ್ಲವೂ ಅವರವರ ಭಾವಕ್ಕೆ ಸಂಬಂಧಪಟ್ಟಿದ್ದು. ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ.
Year Ender 2025: ಭಾರತದ ಸೇನಾ ಸಾಮರ್ಥ್ಯದ ಪರಿಚಯ, ಬಿಜೆಪಿಯ ಚುನಾವಣಾ ದಿಗ್ವಿಜಯ; ಏನೆಲ್ಲಾ ಆಯ್ತು?
ಇನ್ನೇನು ವರ್ಷ 2025 ಮುಗಿಯುತ್ತಾ ಬಂತು.ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಒಂದು ವರ್ಷ ಕಳೆದು ಹೋಗಿದೆ. ದಿನಗಳು ಉರುಳಿದ್ದೇ ಗೊತ್ತಾಗಲ್ಲ ಅನ್ನೋರಿಗೆ ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ವೆಬ್ ವಿವಿಧ ಕ್ಷೇತ್ರಗಳಲ್ಲಿ ಭಾರತದಲ್ಲಾದ ಬೆಳವಣಿಗೆಗಳ ಸಮಗ್ರ ಮಾಹಿತಿಯನ್ನು Year Ender 2025 ಸರಣಿ ಲೇಖನದಲ್ಲಿ ಒದಗಿಸಲಿದೆ. ಅದರಂತೆ ಈ ಲೇಖನದಲ್ಲಿ ಭಾರತದ ರಾಷ್ಟ್ರ ರಾಜಕಾರಣದಲ್ಲಾದ ಪ್ರಮುಖ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸೋಣ. ಜೊತೆಗೆ ಭಾರತದ ಸೇನಾ ಕಾರ್ಯಾಚರಣೆಯ ಕಿರು-ಪರಿಚಯ ಮಾಡಿಕೊಳ್ಳೋಣ.
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳದ ಹಿನ್ನೆಲೆ ಸರಕಾರ ಕಠಿಣ ನಿಯಮಗಳನ್ನು ಅಳವಡಿಸಿಕೊಂಡಿದೆ. ಬಿಎಸ್-4 ಎಂಜಿನ್ ಹೊಂದಿರದ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಮಾಲಿನ್ಯ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಸೇರಿದಂತೆ ಇಂಧನವನ್ನು ನಿಷೇಧಿಸಲಾಗಿದೆ. ದಿಲ್ಲಿಯಾದ್ಯಂತ ಪೆಟ್ರೋಲ್ ಬಂಕ್ಗಳು ಸೇರಿದಂತೆ ಇಂಧನ ಕೇಂದ್ರಗಳಲ್ಲಿ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಹೊಂದಿರದ ವಾಹನಗಳಿಗೆ ಇಂಧನ ನೀಡುವುದನ್ನು ನಿಲ್ಲಿಸಲಾಗಿದೆ. ಪೆಟ್ರೋಲ್ ಪಂಪ್ಗಳಲ್ಲಿ ಧ್ವನಿ ವ್ಯವಸ್ಥೆ ಮೂಲಕ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೊಸ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ದೃಷ್ಠಿಯಿಂದ ಪ್ರಮುಖ ಗಡಿ ಪ್ರದೇಶಗಳು ಸೇರಿದಂತೆ 126 ಚೆಕ್ಪೋಸ್ಟ್ಗಳಲ್ಲಿ 580 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ನಿಯಮ ಉಲ್ಲಂಘನೆ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ನಿಯಮ ಪಾಲಿಸದ ವಾಹನಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ಸಾರಿಗೆ ಇಲಾಖೆಯ ತಂಡಗಳನ್ನು ಪೆಟ್ರೋಲ್ ಪಂಪ್ಗಳು ಮತ್ತು ಗಡಿ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಢಾಕಾದಲ್ಲಿರುವ ಭಾರತೀಯ ವೀಸಾ ಕಚೇರಿಯನ್ನು ಮುಚ್ಚಿದ ಮೋದಿ ಸರ್ಕಾರ
ಭಾರತದ ವಿರುದ್ಧ ಬಾಂಗ್ಲಾದೇಶದ ರಾಜಕೀಯ ನಾಯಕರು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ವಿಲೇವಾರಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ವೀಸಾ ಸಂದರ್ಶನಗಳನ್ನು ರದ್ದುಪಡಿಸಲಾಗಿದೆ. ಭಾರತವು ಬಾಂಗ್ಲಾದೇಶದ ಹೈಕಮಿಷನರ್ ಅವರನ್ನು ಕರೆಸಿ, ಅಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮುಚ್ಚಲಾಗಿದೆ ಎಂದು ತಿಳಿಸಿದೆ.
ಡಿ.20 ರಂದು ವಾರ್ತಾ ಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿಗೆ ನಟ ಪ್ರಕಾಶ್ ರಾಜ್, ಸಿದ್ಧಾರ್ಥ್ ವರದರಾಜನ್, ಸ್ಪೀಕರ್ ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ
ರೈತರಿಗೆ ಗುಡ್ ನ್ಯೂಸ್: \7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಗುರಿ ನಿಗದಿ\
ಬೆಳಗಾವಿ: ರಾಜ್ಯದ ಎಥೆನಾಲ್ ಹಾಗೂ ಡಿಸ್ಟಲರಿ ಕಾರ್ಖಾನೆಗಳಿಂದ ಬೆಂಬಲ ಬೆಲೆಯಡಿ 7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿ ನಿಗಿದ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕರುಗಳಾದ ಎನ್.ಹೆಚ್.ಕೋನರೆಡ್ಡಿ ಹಾಗೂ ಬಸವರಾಜ
ಕುತ್ತಾರ್ | ಕಾರು- ಬೈಕ್ ಮಧ್ಯೆ ಢಿಕ್ಕಿ: ಇಬ್ಬರಿಗೆ ತೀವ್ರ ಗಾಯ
ಉಳ್ಳಾಲ: ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಢಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರ್ ಬಳಿ ಬುಧವಾರ ತಡರಾತ್ರಿ ನಡೆದಿದೆ. ಗಾಯಗೊಂಡವರನ್ನು ನಿಖಿಲ್, ಗಗನ್ ಜೀತ್ ಎಂದು ಗುರುತಿಸಲಾಗಿದೆ. ಇವರು ವಾಮಂಜೂರು ಮತ್ತು ದೇರಳಕಟ್ಟೆ ಮೂಲದವರು ಎಂದು ತಿಳಿದು ಬಂದಿದೆ ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎದುರಿನಿಂದ ಚಲಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾತ್ಮಾಗಾಂಧಿಯವರ ಹೆಸರಿನ ಉದ್ಯೋಗ ಯೋಜನೆಯು ಈಗ ‘ವಿಬಿ-ಜಿ ರಾಮ್-ಜಿ’ಯಾಗಿ ಪರಿವರ್ತನೆಯಾಗಲು ಹೊರಟಿದೆ. ಹೂವಿನ ಎಸಳುಗಳನ್ನು ಕಿತ್ತು ಹಾಕಿ ಅರಳಿಸುವ ವಿಕಸಿತ ಯೋಜನೆಗೆ ಒಕ್ಕೂಟ ಸರಕಾರವು ತುರ್ತಾಗಿ ಹೊರಟಿದೆ. ಇದರ ದುರುದ್ದೇಶವು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಇದನ್ನು ಪ್ರತಿಭಟಿಸದಿದ್ದರೆ ಮುಂದಿನ ಹಂತದಲ್ಲಿ ಭಾರತದ ನೋಟುಗಳಲ್ಲಿ ಮಹಾತ್ಮನ ಚಿತ್ರ ಮರೆಯಾಗುವುದು ಖಚಿತ. ನಮ್ಮ ಜನರು ಎಷ್ಟು ಬುದ್ಧಿವಂತರೆಂದರೆ ಅಂತಹ ಸಂದರ್ಭದಲ್ಲಿ ಹಳೆಯ ಒಂದಷ್ಟು ನೋಟುಗಳನ್ನು ಸಂಗ್ರಹಿಸಿಡಬಹುದೇ ಹೊರತು ಪ್ರತಿಭಟಿಸಲಾರರು. ಜನಪದ ಕತೆಯೊಂದರಲ್ಲಿ ಮೀನು ಮಾರುವವಳೊಬ್ಬಳು ನಗರಕ್ಕೆ ಹೋಗಿ ದಿನದ ವ್ಯಾಪಾರ ಮುಗಿಸಿ ಬರುವಾಗ ಕತ್ತಲಾಗಿ ಹೂಮಾರುವವಳೊಬ್ಬಳ ಮನೆಯಲ್ಲಿ ಅಶ್ರಯ ಪಡೆದಳಂತೆ. ರಾತ್ರಿ ಅಲ್ಲಿ ಹೂಗಳ ಪರಿಮಳವನ್ನು ತಡೆಯಲಾಗದೆ ಮುಖಕ್ಕೆ ಮೀನಿನ ಬುಟ್ಟಿಯನ್ನು ಮುಚ್ಚಿಕೊಂಡು ಮಲಗಿದಳಂತೆ. ಮೋದಿ ಸರಕಾರಕ್ಕೆ ಯಾಕೋ ಗಾಂಧಿ-ನೆಹರೂ ಹೆಸರು ಕೇಳಿದರೆ ತಡೆಯಲಾಗದ ತುರಿಕೆ. ಇದೊಂದು ರೀತಿಯ ಮೂಲವ್ಯಾಧಿ. ಈಗ ಮಹಾತ್ಮಾ ಗಾಂಧಿ ಉದ್ಯೋಗ ಯೋಜನೆಯನ್ನು ಮರುನಾಮಕರಣ ಮಾಡಿ ವಿಕಸಿತ ಭಾರತ ಉದ್ಯೋಗ ಯೋಜನೆ ಎಂದೇನೋ ಹೆಸರಿಟ್ಟು ಅದರ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಹಂಚಿದೆಯಂತೆ. ಶೇಕ್ಸ್ಪಿಯರ್ ಹೆಸರಿನಲ್ಲೇನಿದೆ? ಎಂದ. ಅವನ ಕಾಲಕ್ಕೆ ಅದು ಸರಿಯಾಗಿತ್ತೇನೋ? ಅಥವಾ ಅದೊಂದು ಕಾವ್ಯಸತ್ಯವಾಗಿ ಉಳಿಯಬಹು ದೇನೋ? ಆದರೆ ಜನರು ಹೆಸರಿನಿಂದಲೇ ಮಾರುಹೋಗು ವುದುಂಟು. ಸರಿಸುಮಾರು ಶೇಕ್ಸ್ಪಿಯರ್ನ ಕಾಲದಲ್ಲೇ ಇದ್ದ ಪುರಂದರದಾಸರು ‘‘ನಿನ್ನ ನಾಮದ ಬಲವೊಂದಿದ್ದರೆ ಸಾಕು’’ ಎಂದರು. ‘‘ನಾರಾಯಣನೆಂಬೋ ನಾಮವೇ ಕಾಯ್ದು..’’ ಎಂದು ಹಾಡಿದರು ಈ ಮಣ್ಣಿನ ಜನರು. ಶೇಕ್ಸ್ಪಿಯರ್ ಅದೃಷ್ಟಶಾಲಿ. ಯುರೋಪಿನಲ್ಲಿ ಬದುಕಿದ. ಇಲ್ಲಾಗಿದ್ದರೆ ಆತನ ಸುತ್ತ ಅನೇಕ ಪವಾಡಗಳು ಸೃಷ್ಟಿಯಾಗುತ್ತಿದ್ದವು, ನಮ್ಮ ಕನಕ-ಪುರಂದರರ ಸುತ್ತ ಹಬ್ಬಿದ ಹುತ್ತಗಳಂತೆ. ಹೆಸರಿನ ಸುತ್ತ ಭಾರತೀಯರ ಚಿತ್ತ ಕೇಂದ್ರೀಕರಿಸಿದೆಯೆಂಬುದು ಒಂದು ಜಾಗತಿಕ ಸತ್ಯ. (ಈ ಸುತ್ತ, ಚಿತ್ತ, ಹುತ್ತ ಇವೆಲ್ಲ ಇವತ್ತಿನ ಮಾಧ್ಯಮ ಪದಗಳು! ಅವನ್ನು ಕೈಬಿಡಲು ಮನಸ್ಸಾಗದೆ ಬಳಸಿದ್ದೇನೆ!) ತಾವಿರುವ ಜಾಗದಲ್ಲೇ ವಿಶ್ವವಿಖ್ಯಾತಿ ಗಳಿಸಿದವರು ಎಷ್ಟಿಲ್ಲ! ತಮ್ಮೂರಿನಿಂದ ಹೊರಹೋದರೆ ಅವರನ್ನು ಕೇಳುವವರೇ ಇಲ್ಲ; ಆದರೂ ಅವರು ವಿಶ್ವವಿಖ್ಯಾತಿಗಳು! ಹೀಗೆ ತಮ್ಮ ಮನೆಯ ಕನ್ನಡಿಯಲ್ಲೇ ನಿತ್ಯ ಮುಖ ನೋಡಿಕೊಂಡು ಸೊರಗಿ ಸತ್ತವರು ಬೇಕಷ್ಟಿದ್ದಾರೆ. ಇದು ಭಾರತದಲ್ಲಂತೂ ಮರುನಾಮಕರಣದ ಯುಗ. ಈಗಷ್ಟೇ ಹುಟ್ಟಿದವರಿಗೆ ಹೆಸರಿಡುವುದು ಸಹಜ. ಹುಟ್ಟಿ ಹೆಸರನ್ನು ಹೊಂದಿದವರನ್ನು ಹೊಸ ಹೆಸರಿನಿಂದ ಕರೆಯುವುದು ಒಂದು ಮೋಜು. ಅದು ಅವರ ಗುಣವನ್ನಾಗಲೀ, ಖ್ಯಾತಿ/ಅಪಖ್ಯಾತಿಯನ್ನಾಗಲೀ ಬದಲಾಯಿಸದು. ಆದರೆ ನಮ್ಮ ರಾಷ್ಟ್ರೀಯತೆ, ಆತ್ಮನಿರ್ಭರತೆ, ದೇಶಭಕ್ತಿ ಹೇಗಿದೆಯೆಂದರೆ, ಹೆಸರನ್ನು ಬದಲಾಯಿಸಿದರೆ ಸಾಕು ಅದೇ ಮೋಕ್ಷಕ್ಕೆ ಹಾದಿಯೆಂದು ನಂಬಲಾಗಿದೆ. ಕಾಲಕಾಲಕ್ಕೆ ಯಾವುದೋ ಒಂದು ಹೆಸರಿಡುತ್ತಾರೆ. ಅದರ ಹಿಂದೆ ಸ್ವಲ್ಪ ಕಳಕಳಿ, ಸ್ವಲ್ಪ ರಾಜಕೀಯ, ಸ್ವಲ್ಪ ಸ್ವಾರ್ಥವಿರಬಹುದು. ಆದರೆ ಸಂಖ್ಯಾನಾಮಕ್ಕಿಂತ ಪದನಾಮ ಒಳಿತೆಂದು ಯಾವುದೋ ಹೆಸರಿಡುತ್ತಾರೆ. ಋತುಮಾನದಲ್ಲಿ ಪ್ರಕೃತಿಯೂ ಬದಲಾಗುತ್ತದೆ. ಹಾಗೆಂದು ಮಾವಿಗೆ ಬೇವೆಂದು ನಾಮಕರಣ ಮಾಡಿದ ಉದಾಹರಣೆಯಿಲ್ಲ. ಗುಣಲಕ್ಷಣಗಳನ್ನು ವಿವರಿಸುವಾಗ ಸಿಹಿಕಹಿಗಳಿಗೆ ಅವುಗಳದ್ದೇ ಆದ ಸಹಿಗಳಿರುತ್ತವೆ. ಜಗತ್ತಿನಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆಂಬ ಮಾತು ವಾಡಿಕೆಯಲ್ಲಿದೆ. ಆದರೆ ಹೆಬ್ಬೆರಳಿನ ಗುರುತು ಅವರವರದ್ದೇ. ಆದ್ದರಿಂದ ಹೆಸರಷ್ಟೇ ಸಾಕಾಗುವುದಿಲ್ಲ ಮನುಷ್ಯನ ಚಹರೆಯನ್ನು ನಿರ್ದಿಷ್ಟಗೊಳಿಸುವುದಕ್ಕೆ. ಭಾರತದ ಅಂತಲ್ಲ ವಿಶ್ವದ ಬೇರೆ ಬೇರೆ ಭಾಗಗಳಲ್ಲಿರುವ ನೆಲ-ಜಲಗಳ, ಹೂ-ಹಣ್ಣುಗಳ, ರೀತಿ-ರಿವಾಜುಗಳ ಗ್ರಾಮ-ನಗರಗಳ ಹೆಸರು ಕಾಲಾನುಕಾಲದಲ್ಲಿ ಬದಲಾದದ್ದು ಚರಿತ್ರೆಯಲ್ಲಿದೆ. ಒಂದೊಂದು ಭಾಷೆಯಲ್ಲಿ ಒಂದೊಂದು ಹೆಸರು ಇರುವುದೂ ಇದೆ. ಒಬ್ಬೊಬ್ಬ ಆಳುವವನ ಕಾಲದಲ್ಲಿ ಆತನ ಇಷ್ಟಾನಿಷ್ಟಗಳಿಗನುಗುಣವಾಗಿ ಹೆಸರು ಬದಲಾದದ್ದಿದೆ. ಇವುಗಳ ಅಧ್ಯಯನವೇ ಒಂದಲ್ಲ ಹತ್ತಾರು ಪಿಎಚ್ಡಿಗಳಿಗೆ ವಸ್ತುವಾದೀತು. ಕರಾವಳಿಯ ಮಂಗಳೂರಿಗೆ ತುಳುವಿನಲ್ಲಿ ‘ಕುಡ್ಲ’ ಎಂದು ಹೇಳುತ್ತಾರೆ; ಮಲಯಾಳಿಗಳು ‘ಮಂಗಳಾಪುರಂ’ವೆನ್ನುತ್ತಾರೆ. ಬೆಂಗಳೂರಿಗೆ ‘ಬೆಂದಕಾಳೂರು’ ಎನ್ನುತ್ತಿದ್ದರಂತೆ. ಕರ್ನಾಟಕ ಸರಕಾರವು ಸ್ಥಳಗಳ ಹೆಸರುಗಳನ್ನು ಬದಲಾಯಿಸಿದೆ. ಗುಲ್ಬರ್ಗಾ ‘ಕಲಬುರಗಿ’ಯಾಗಿದೆ. ಸಣ್ಣಪುಟ್ಟ ಬದಲಾವಣೆಯಾದದ್ದೂ ಇದೆ. ಬ್ಯಾಂಗಲೂರ್ ಈಗ ‘ಬೆಂಗಳೂರು’ ಆಗಿದೆ; ಮೈಸೂರ್ ಈಗ ‘ಮೈಸೂರು’ ಆಗಿದೆ; ಬಿಜಾಪುರ ಈಗ ‘ವಿಜಯಪುರ’ವಾಗಿದೆ. ಈ ಬದಲಾವಣೆ ಏನು ಸಾಧಿಸಿದೆಯೋ ಗೊತ್ತಿಲ್ಲ. ಅದನ್ನು ಎಷ್ಟು ಜನರು ಅನಿವಾರ್ಯವಲ್ಲದ ಸಂದರ್ಭಗಳಲ್ಲಿ ಬಳಸುತ್ತಾರೋ ಗೊತ್ತಿಲ್ಲ. ಆದರೆ ಮುದ್ರಕರಿಗೆ, ಫಲಕ ಬರೆಯುವವರಿಗೆ ಇವು ಉದ್ಯೋಗ ನೀಡಿದ್ದಂತೂ ನಿಜ. ಸರಕಾರಿ ಸಂಸ್ಥೆಗಳಿಗೂ ಹೆಸರು ಬದಲಾಯಿಸಲಾಗಿದೆ. ಜಿಲ್ಲಾ ‘ಪರಿಷತ್’ ಜಿಲ್ಲಾ ‘ಪಂಚಾಯತ್’ ಆಗಿದೆ. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ನಮ್ಮ ಐಎಎಸ್ಗಳಿಗೆ ಮತ್ತು ಅವನ್ನು ಸಲಹುವ ಮತ್ತು ಪೋಷಿಸುವ ರಾಜಕಾರಣಿಗಳಿಗೆ ಮಾಡುವುದಕ್ಕೆ ಇದಕ್ಕಿಂತ ಬೇರೆ ಕೆಲಸವಿದ್ದಂತಿಲ್ಲ. ಮಾಡಬೇಕಾದ್ದನ್ನು ಮಾಡದಿದ್ದರೆ ಮಾಡಬಾರದ ಕೆಲಸಗಳಿಗೆ ಮನಸೋಲುವುದೇ ಹೆಚ್ಚು. ಆದರೆ ಬಹು ಹೀನ ಕೆಲಸವೆಂದರೆ ರಾಜಕೀಯ ಅನುಕೂಲಕ್ಕಾಗಿ ಚರಿತ್ರೆಯನ್ನು ಅಳಿಸಿಹಾಕಿ ಹೊಸ ಬರೆಹವನ್ನು ಸ್ಥಾಪಿಸುವುದು. ಚರಿತ್ರೆ ನಾವು ಇಷ್ಟಪಟ್ಟು ಸೃಷ್ಟಿಸಿದ್ದಲ್ಲ. ಅದರ ಪಾಲಿಗೆ ಅದು ನಡೆದದ್ದು. ಕೆಲವು ಕ್ರೂರಿಗಳ, ಕೆಲವು ಮೂಲಭೂತವಾದಿಗಳ ಕೈಗೆ ಯಾವುದು ಸಿಕ್ಕಿದರೂ ಅದನ್ನು ಹೊಸಕಿ ಹಾಕುತ್ತಾರೆ. ಹಿಂದೆ ರಾಜಸತ್ತೆಯಿದ್ದಾಗ ರಾಜನೇ ಪ್ರತ್ಯಕ್ಷ ದೇವರಾಗಿದ್ದಾಗ, ಕಾಲಸ್ಯ ಕಾರಣನಾಗಿದ್ದಾಗ ಆತನ ಅನುಕೂಲ- ಅದೆಷ್ಟೇ ಮೂರ್ಖತನವಾದ್ದೇ ಇರಲಿ-ಈಡೇರುತ್ತಿತ್ತು. ಅದನ್ನು ಟೀಕಿಸುವ ಧೈರ್ಯ ಸಾಮಾನ್ಯರಿಗೆ ಇರುತ್ತಿರಲಿಲ್ಲ. ಹೇಳುವ ಧೈರ್ಯ ತೋರಿದವರು ಅಪಾಯಕ್ಕೆ ಆಹ್ವಾನ ನೀಡುತ್ತಾರೆ. ಕೆಲವರಂತೂ ಹೀಗಿರುವ ಮೂರ್ಖತನವನ್ನು ಹೊಗಳಿ ಆಡಳಿತಕ್ಕೆ ಹತ್ತಿರವಾಗುತ್ತಿದ್ದರು. ಈ ಸಾಮೀಪ್ಯ, ಸಾನ್ನಿಧ್ಯ, ಸಾಯುಜ್ಯವು ದೇವರುಗಳ ಕಾಲವೆಂದು ಕಲ್ಪಿಸಲಾದ ಕಾಲದಿಂದಲೂ ಇತ್ತೆಂದು ಪುರಾಣಗಳು ಹೇಳುತ್ತವೆ. ಮಾರೀಚನೆಂಬವನು ರಾವಣನಿಗೆ ಹಿತ ನುಡಿದು ತನ್ನ ಪ್ರಾಣವನ್ನೇ ಒತ್ತೆಯಿಡಬೇಕಾಯಿತು. ವಿಭೀಷಣನು ತತ್ಕಾಲಕ್ಕಾದರೂ ದೇಶಭ್ರಷ್ಟನಾದ. ಇವು ನಡೆದಿವೆಯೋ ಇಲ್ಲವೋ ಅಂತೂ ಉದಾಹರಣೆಗಳಾಗಿ ನಿಲ್ಲುತ್ತವೆ. ಭಾರತವೆಂಬ ಈ ಭೂಭಾಗವು ಬಹಳ ಕಾಲ ಭಿನ್ನಭಿನ್ನ ರಾಜ್ಯಗಳನ್ನು, ಸಾಮ್ರಾಜ್ಯಗಳನ್ನು ಹೊಂದಿತ್ತು. ಅವರವರ ಇಷ್ಟಾನುಸಾರ ಅವರವರ ದೇವರುಗಳನ್ನು ಹೊಂದಿರುತ್ತಿದ್ದರು. ಆದರೆ ಹರನಿಗೆ ಹರಿಯೆಂದು, ಹರಿಗೆ ಹರನೆಂದು ಮರುನಾಮಕರಣ ಮಾಡಿದ ಉದಾಹರಣೆಗಳಿಲ್ಲ. ಪೂಜಾಸ್ಥಳಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ಕಟ್ಟಿಕೊಂಡದ್ದು ಇದೆ. ಹಳೆಯ ಪೂಜಾಸ್ಥಾನಗಳಿದ್ದಲ್ಲಿ ಹೊಸ ಪೂಜಾಸ್ಥಾನಗಳು ಹುಟ್ಟಿವೆ. ಆಗೆಲ್ಲ ಧಾರ್ಮಿಕ ಕಾರಣಗಳಿಗಿಂತ ತನ್ನಿಚ್ಛೆಯೇ ಕಾರಣವಾಗಿತ್ತೆನ್ನಬಹುದು. ಅನೇಕ ಶತಮಾನಗಳ ಕಾಲ ಭಾರತವೆಂಬ ಈ ಭೂಭಾಗವು ಪರಕೀಯರೆಂದು ನಾವಂದುಕೊಳ್ಳುವ ಮಂದಿಯ ಆಕ್ರಮಣಕ್ಕೆ ತುತ್ತಾಗಿದೆ. ರಾಜರಾಜಚೋಳ ಶ್ರೀಲಂಕಾ, ಮಲೇಶ್ಯ, ಇಂಡೋನೇಶ್ಯದ ವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾಗ ಆತನನ್ನು ದುರಾಕ್ರಮಣಮಾಡಿದನೆಂದು, ಪಂಜಾಬಿನ ರಣ್ಜಿತ್ಸಿಂಗ್ ಅಫ್ಘಾನಿಸ್ತಾನದವರೆಗೂ ತನ್ನ ಆಡಳಿತವನ್ನು ವಿಸ್ತರಿಸಿದಾಗ ನಾವದನ್ನು ಆಕ್ರಮಣವೆಂದು ಹೇಳುವುದಿಲ್ಲ. ಆದ್ದರಿಂದ ಈ ಆಕ್ರಮಣ, ವಿದೇಶ, ಪರಕೀಯ ಇವೆಲ್ಲ ಅಳಿಸಿಹಾಕಬಹುದಾದ ಕಲ್ಪನೆಗಳು. ನಾವೆಲ್ಲಿ ನಿಂತು ಹೇಳುತ್ತೇವೆಂಬುದು ಇವುಗಳ ತಳಹದಿ. ಆದರೆ ಹೀಗೆಲ್ಲ ಚರಿತ್ರೆ ಸಾಗಿದಾಗ ಮೂಲ ಚೌಕಟ್ಟು ಬದಲಾದದ್ದು ಕಡಿಮೆ. ಮೊಗಲರು ಭಾರತದ ಬಹುಭಾಗವನ್ನು ಆಕ್ರಮಿಸಿ ತಮ್ಮ ಆಡಳಿತವನ್ನು ಸ್ಥಾಪಿಸಿದಾಗ ಕೆಲವೊಂದು ಬದಲಾವಣೆಯನ್ನು ಮಾಡಿದರು. ಕಾಶಿ ಬನಾರಸ್ ಆಯಿತು. ದೇವಗಿರಿಯು ದೌಲತಾಬಾದ್, ಪ್ರಯಾಗವು ಅಲ್ಲಹಾಬಾದ್, ಆದರೂ ಅದರ ಚಾರಿತ್ರಿಕ ಹೊಳಹು ಬದಲಾಗಲಿಲ್ಲ. ಆಳುವವರ ವಿಕೃತಿ ಬಯಲಾಗಲಿಲ್ಲ. ಬಹಳಷ್ಟು ಸ್ಥಳಗಳು ಅದೇ ಹೆಸರಿನಲ್ಲಿ ಉಳಿದವು ಎಂಬುದು ಚರಿತ್ರೆಯ ಹೆಗ್ಗಳಿಕೆ. ನಮ್ಮ ನದಿಗಳ ಹೆಸರನ್ನು ಯಾವ ಆಕ್ರಮಣ ಆಡಳಿತವೂ ಬದಲಾಯಿಸಲಿಲ್ಲ. ಮೊಗಲರ ಬಳಿಕ ಬ್ರಿಟಿಷರು ಆಳಿದಾಗಲೂ ಈ ನದಿಗಳು ಹಾಗೆಯೇ ಉಳಿದುಕೊಂಡವು. ಗಂಗೆ ಇಂಗ್ಲಿಷ್ನ ಅಪಭ್ರಂಶದಲ್ಲಿ ಗ್ಯಾಂಜಸ್ ಆಯಿತೇ ಹೊರತು ತನ್ನ ಗುರುತನ್ನು, ಚಹರೆಯನ್ನು, ಲಕ್ಷಣವನ್ನು ಕಳೆದುಕೊಳ್ಳುವ ಬದಲಾವಣೆಯನ್ನು ಹೊಂದಲಿಲ್ಲ. ಇದು ಬಹುತೇಕ ನಗರಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಕಾರಣವೆಂದರೆ ಈ ಆಳುವವರು ಇಲ್ಲಿನ ‘ಸಂಸ್ಕೃತಿ’ಯೆಂದು ನಾವು ಹೇಳುವ ಜೀವನವಿಧಾನವನ್ನು ತಿರಸ್ಕರಿಸದೇ ಇದ್ದದ್ದು. ಅದೊಂದು ರೀತಿಯ ರಾಸಾಯನಿಕ ಸಂಯುಕ್ತವನ್ನು ಸೃಷ್ಟಿಸಿತೇ ಹೊರತು ಮಿಶ್ರಣವನ್ನಲ್ಲ. ಈ ರೀತಿಯಲ್ಲಿ ಜೀವನವಿಧಾನಗಳು ಹೆಚ್ಚು ವಿಶ್ವಾತ್ಮಕವಾದವೇ ಹೊರತು ಒಂದನ್ನೊಂದು ನುಂಗುವ ವಿಕೃತಿಯಾಗಲಿಲ್ಲ. ಪ್ರಾಯಃ ಸಂಸ್ಕೃತ ಶಿಕಣವೊಂದೇ ತನ್ನ ಮಡಿವಂತಿಕೆಯನ್ನು ಉಳಿಸಿಕೊಂಡು ಜನರಿಂದ ದೂರವಾದದ್ದು. ಬದಲಾಗಿ ಮೆಕಾಲೆಯ ಶಿಕ್ಷಣ ಪದ್ಧತಿಯು ಈ ದೇಶದ ಜನಜೀವನವನ್ನು ವಿಸ್ತರಿಸಿ ಯಾರಿಗೆ ಈ ಹಿಂದೆ ಶಿಕ್ಷಣ, ಉದ್ಯೋಗ, ಪ್ರಾಶಸ್ತ್ಯ, ಪ್ರತಿಷ್ಠೆ ಮುಂತಾದವು ಗಗನಕುಸುಮವಾಗಿತ್ತೋ ಅವರಿಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಟ್ಟಿತು. ಕುವೆಂಪು ಹೇಳಿದಂತೆ ಇಂಗ್ಲಿಷ್ ಶಿಕ್ಷಣವು ಅವರಿಗೆ ಬದುಕನ್ನು ಕೊಟ್ಟಿತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮತ್ತು ಸ್ವತಂತ್ರ ಭಾರತದ ಮೊದಲ ಸುಮಾರು ಏಳು ದಶಕಗಳ ಕಾಲ (ವಾಜಪೇಯಿ ಆಡಳಿತವೂ ಸೇರಿ) ಭಾರತವು ಎಚ್ಚರಿಕೆಯಿಂದ ಕಾಲಿಟ್ಟಿತ್ತು. ಎಲ್ಲಿಯೂ ವಿಶ್ವದ ಅಂಗವಾಗುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಭಾರತವು ಒಂದು ಜಾತಿ-ಮತದ ದೇಶವಲ್ಲ, ಬದಲಾಗಿ ವೈವಿಧ್ಯವನ್ನು ತನ್ನ ವಿಶಿಷ್ಟ ಗುರುತೆಂಬಂತೆಯೇ ನಡೆದುಕೊಂಡಿತು. ಪಂಥಗಳು, ಸಿದ್ಧಾಂತಗಳು-ತತ್ವಗಳು ರಾಜಕೀಯದ ಕುಲಗೆಡಿಸಿರಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಣಾಳಿಕೆಯನ್ನು ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಮಾತ್ರ ಬಲಪಂಥೀಯ ಭಾಜಪವು ಸ್ವೀಕರಿಸಿತ್ತು. ಆದರೆ ಮೋದಿ ಸರಕಾರ ಬಂದ ನಂತರ ಇವೆಲ್ಲ ಬದಲಾಗಿ ರಾಷ್ಟ್ರೀಯತೆಯ ಈ ಮೂಲಭೂತವಾದವು ಚಿಗುರಿತು. ಈಗ ಅಭಿವೃದ್ಧಿ, ಉದ್ಯೋಗ, ಸುಖ ಸಮೃದ್ಧಿ, ವಿಶ್ವಾತ್ಮಕತೆ ಇವೆಲ್ಲ ಮೂಲೆಪಾಲಾಗಿ ಅಧಿಕಾರವನ್ನು ಯಾವ ರೀತಿ ಉಳಿಸಿ ಬೆಳೆಸಿಕೊಳ್ಳಬೇಕೆಂಬುದೇ ರಾಮಮಂತ್ರವಾಯಿತು. ಜಾತಿ-ಮತಗಳ ಆಧಾರದಲ್ಲಿ ಜನರನ್ನೊಡೆದು ಆಳುವ ತಂತ್ರವನ್ನು ಬ್ರಿಟಿಷರಿಗಿಂತಲೂ ಚೆನ್ನಾಗಿ ಬಲಪಂಥೀಯ ಹಿಂದುತ್ವದ ರಾಜಕಾರಣದ ಮೂಲಕ ಈಗಿನ ಮೋದಿ ಸರಕಾರ ಮಾಡುತ್ತಿದೆ. ಪ್ರಾಯಃ ಇವತ್ತಿನ ಈ ಪ್ರವೃತ್ತಿಯ ಕಾಲದಲ್ಲಿ ಡಿವಿಜಿಯವರಿದ್ದಿದ್ದರೆ ‘ಮನ್ನಣೆಯ ದಾಹ’ಕ್ಕಿಂತ ಅಧಿಕವಾಗಿ ‘ಅಧಿಕಾರ ದಾಹ’ವನ್ನು ಕಾಣುತ್ತಿದ್ದರು. ಅಧಿಕಾರದಾಹದ ಮುಖ್ಯಾಂಗವಾಗಿ ಚರಿತ್ರೆಯನ್ನು ಅಳಿಸುವುದು, ಕೃತಕ ಚರಿತ್ರೆಯನ್ನು ಕಟ್ಟುವುದು, ಜನರಿಗೆ ಸುಳ್ಳು ಹೇಳಿ ಅವರನ್ನು ತಪ್ಪುಹಾದಿಗೆಳೆಯುವುದು ಈಗಿನ ತಂತ್ರ. ಇದರ ಒಂದಂಗವಾಗಿ ಹಿಂದಿನ ಆದರ್ಶಗಳನ್ನು ಮೂಲೆಗುಂಪು ಮಾಡುವುದು. ಇದಕ್ಕಾಗಿ ಬಹಳಷ್ಟು ಪುನರ್ನಾಮಕರಣಗಳಾದವು. ನೀತಿ ಆಯೋಗದ ಹೆಸರಿನಲ್ಲಿ ಅನೀತಿಗಳನ್ನು ಪ್ರಚುರಪಡಿಸಲಾಯಿತು. ಜನರಿಗೆ ಇದೇನೂ ಅಡ್ಡಿಯಾಗಲಿಲ್ಲ. ಇದು ಪರೋಕ್ಷವಾಗಿ ಸರಕಾರಕ್ಕೆ ಇನ್ನಷ್ಟು ಕೆಟ್ಟದಾಗಿ ನಡೆದುಕೊಳ್ಳಲು ಮಣೆಹಾಕಿದಂತಾಗಿದೆ. ಜೊತೆಗೆ ತಾವೇನು ಮಾಡಿದರೂ ಅದನ್ನು ಬೆಂಬಲಿಸುವ ಒಂದು ಮಹಾನ್ ಮೂರ್ಖಗುಂಪು-ಸಮುದಾಯ ಈ ಮಣ್ಣಲ್ಲಿದೆಯೆಂಬುದು ಒಕ್ಕೂಟ ಸರಕಾರಕ್ಕೆ ಅರ್ಥವಾಗಿದೆ. ಇದರ ಮೊದಲ ಪ್ರಧಾನ ಹೆಜ್ಜೆ ಸರಕಾರದ ಯೋಜನೆಗಳಿಗೆ ಹೊಸಹೆಸರಿಡುವುದು. ಯಾರದ್ದೋ ಮಕ್ಕಳಿಗೆ ತಂದೆಯೆನಿಸುವ ಮೋದಿ ಸರಕಾರದ ಹುನ್ನಾರವು ಕಳೆದ ಕೆಲವು ವರ್ಷಗಳಿಂದಲೇ ನಡೆಯುತ್ತಿತ್ತು. ಪಠ್ಯ ಪುಸ್ತಕದಿಂದ ಪುಟಗಳನ್ನು ತೆಗೆದುಹಾಕುವ, ಅಲ್ಲಿಗೆ ತಮಗೆ ಬೇಕಾದ ಪುಟಗಳನ್ನು ಸೇರಿಸುವ ಕಾಯಕವು ಸಾಕಷ್ಟು ನಡೆದಿದೆ. ಪ್ರವೃತ್ತಿ ಆದರೆ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆಂದು ಜನರು ನಿರೀಕ್ಷಿಸಿದರೆ ರಾಜಕಾರಣವು ತನ್ನ/ತಮ್ಮನ್ನು ಹೆತ್ತವರ ಹೆಸರನ್ನೇ ಬದಲಾಯಿಸುವ ಯೋಜನೆ ಆರಂಭವಾಗಿದೆ. ಮೀನಿನ ಬಗ್ಗೆ ತಿರಸ್ಕಾರ ಬೇಡ. ಆದರೆ ಅದರ ವಾಸನೆಗೆ ಒಗ್ಗಿದವರು ಹೂವಿನ ವಾಸನೆಯನ್ನು ಸಹಿಸಲಾರರಾದರೆ ಮತ್ತು ಹೂವಿನ ವಾಸನೆಗೆ ಪ್ರತಿಯಾಗಿ ಇಡೀ ಸಮಾಜವೇ ಮೀನಿನ ಬುಟ್ಟಿಯನ್ನು ಮೂಗಿಗೆ ಮುಚ್ಚಿಕೊಳ್ಳುತ್ತದೆಯಾದರೆ ಅದು ಮಾರಕರೋಗಗಳಿಗಿಂತಲೂ ಅಪಾಯಕಾರಿ. ಆಗ ಚಿಕಿತ್ಸೆ ಅಗತ್ಯ. ಇಡೀ ದೇಶ ಚರ್ಚಿಸುವ ಕಾರಣ ಪ್ರತ್ಯೇಕವಾದದ್ದೇನನ್ನೂ ಹೇಳುವಂತಿಲ್ಲ: ಮಹಾತ್ಮಾಗಾಂಧಿಯವರ ಹೆಸರಿನ ಉದ್ಯೋಗ ಯೋಜನೆಯು ಈಗ ‘ವಿಬಿ-ಜಿ ರಾಮ್-ಜಿ’ಯಾಗಿ ಪರಿವರ್ತನೆಯಾಗಲು ಹೊರಟಿದೆ. ಹೂವಿನ ಎಸಳುಗಳನ್ನು ಕಿತ್ತು ಹಾಕಿ ಅರಳಿಸುವ ವಿಕಸಿತ ಯೋಜನೆಗೆ ಒಕ್ಕೂಟ ಸರಕಾರವು ತುರ್ತಾಗಿ ಹೊರಟಿದೆ. ಇದರ ದುರುದ್ದೇಶವು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಇದನ್ನು ಪ್ರತಿಭಟಿಸದಿದ್ದರೆ ಮುಂದಿನ ಹಂತದಲ್ಲಿ ಭಾರತದ ನೋಟುಗಳಲ್ಲಿ ಮಹಾತ್ಮನ ಚಿತ್ರ ಮರೆಯಾಗುವುದು ಖಚಿತ. ನಮ್ಮ ಜನರು ಎಷ್ಟು ಬುದ್ಧಿವಂತರೆಂದರೆ ಅಂತಹ ಸಂದರ್ಭದಲ್ಲಿ ಹಳೆಯ ಒಂದಷ್ಟು ನೋಟುಗಳನ್ನು ಸಂಗ್ರಹಿಸಿಡಬಹುದೇ ಹೊರತು ಪ್ರತಿಭಟಿಸಲಾರರು. ಕೇರಳದಲ್ಲಿ ಯಾವಳೋ ಒಬ್ಬಳಿಗೆ ‘ಸೋನಿಯಾ ಗಾಂಧಿ’ ಎಂದು ಹೆಸರಿಟ್ಟು ಆಕೆ ಭಾಜಪದ ಪರವಾಗಿ ಸ್ಪರ್ಧಿಸಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮುಂದೆ ನಮ್ಮ ಪ್ರಧಾನಿಯವರ ಹೆಸರು ‘ಮಹಾತ್ಮಾಗಾಂಧಿ’ ಎಂದು ಬದಲಾದರೆ ಮತ್ತು ಅವರ ಚಿತ್ರ ನಮ್ಮ ನೋಟುಗಳಲ್ಲಿ ಮುದ್ರಿತವಾದರೆ ಅಚ್ಚರಿಯಿಲ್ಲ. ವಿಕಸಿತ ಭಾರತವಾಗುವ ಕಾರಣ ಅವುಗಳ ಜಾಹೀರಾತಿಗೆ ಹೊಸ ವಿನ್ಯಾಸ ಮೂಡಬಹುದು. ನಮ್ಮ ಜನರು ಎಷ್ಟು ಮುಗ್ಧರೆಂದರೆ ಗಾಂಧಿಗೂ ಗೋಡ್ಸೆಗೂ ಅಂತರವನ್ನು ಅರಿಯಲಾರರು. ಚತುರ್ವೇದಗಳನ್ನೂ ಬಲ್ಲ ಬ್ರಾಹ್ಮಣ ರಾವಣನಿಗೆ ರಾಮನೆಂದು ಹೆಸರು ಬದಲಾಯಿಸುವ ಕಾಲದಲ್ಲಿ ಎಲ್ಲರೂ ಮಾಜಿ ರಾವಣನ ಪದತಲದಲ್ಲಿ ಭಜನೆ ಮಾಡುತ್ತ ಕುಳಿತಾರು. ಪ್ರಾಯಃ ಅದು ಸನಿಹದಲ್ಲಿದೆ. ತಾವು ಮತ್ತು ತಮ್ಮ ಅಧಿಕಾರ ಶಾಶ್ವತವೆಂದು ನಂಬಿದವರಿಂದ ಏನೂ ನಡೆಯಬಹುದು. ಹಿಟ್ಲರ್ ಇದನ್ನು ನಂಬಿದ್ದ. ಆತನ ನಂಬಿಕೆ ಆತನ ಪಾಲಿಗೆ ಹುಸಿಯಾದರೂ ಭಾರತದ ಪಾಲಿಗೆ ಈಗ ಹುಸಿಯಾಗದೆಂದು ಬದುಕುವ ಹಕ್ಕು ತಮಗೆ ಮಾತ್ರ ಇದೆಯೆಂದು ಒಂದು ಸಮುದಾಯ ಈಗಲೂ ನಂಬಿದೆ. ಆದ್ದರಿಂದಲೇ ಗುಂಪು ಹಲ್ಲೆಗೆ ಮಾನ್ಯತೆ ಲಭಿಸುವ ಕಾಲ ಬಂದಿದೆ. ಇದನ್ನು ಒಪ್ಪದವರಿಗೆ, ಪ್ರತಿಭಟಿಸುವವರಿಗೆ ಕೊನೆಗೂ ಬದುಕು ಇರುವುದೇ ಭರವಸೆಯಲ್ಲಿ; ಎಲ್ಲ ಕೇಡಿಗೂ ಕೊನೆಯಿದೆಯೆಂದು ನಂಬುವುದರಲ್ಲಿ.
ಧರ್ಮಸ್ಥಳ ಪ್ರಕರಣ | ಜಾಮೀನು ಮಂಜೂರಾಗಿ 24 ದಿನಗಳ ಬಳಿಕ ಜೈಲಿನಿಂದ ಚಿನ್ನಯ್ಯ ಬಿಡುಗಡೆ
ಶಿವಮೊಗ್ಗ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಚಿನ್ನಯ್ಯ ಜಾಮೀನ ಮಂಜೂರಾಗಿ 24 ದಿನಗಳ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಗೊಂಡಿದ್ದಾನೆ. ಗುರುವಾರ ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಜೈಲಿನಿಂದ ಕರೆದೊಯ್ದರು. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ. ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬುಧವಾರ ಆತನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಜಾಮೀನುದಾರರೊಂದಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ ಕಾನೂನು ಪ್ರಕ್ರಿಯೆ ಪೂರೈಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ನಡೆಸಿದ ಭಾಷಣದಲ್ಲಿ ತಮ್ಮ 2 ನೇ ಆಡಳಿತವಧಿಯಲ್ಲಿ ತಾವು ಮಾಡಿದ ಸಾಧನೆಗಳನ್ನು ಹೊಗಳಿಕೊಳ್ಳುತ್ತಾ, ಗಡಿ ಭದ್ರತೆಯನ್ನು ಬಲಪಡಿಸಿ, ಜಾಗತಿಕ ಸಂಘರ್ಷಗಳನ್ನು ಬಗೆಹರಿಸಿ, ಅಮೆರಿಕಾದ ಆರ್ಥಿಕತೆಯನ್ನು ದಾಖಲೆಯ ಮಟ್ಟಕ್ಕೆ ಏರಿಸಿದ್ದಾಗಿ ಹೇಳಿಕೊಂಡರು.ಅಲ್ಲದೆ, ನಾನು 10 ತಿಂಗಳಲ್ಲಿ 8 ಯುದ್ದ ಬಗೆಹರಿಸಿದ್ದೇನೆ ಎಂದು ಮತ್ತೊಮ್ಮೆ ಕ್ರೆಡಿಟ್ ಪಡೆದುಕೊಂಡ ಟ್ರಂಪ್ ಇದೇ ವೇಳೆ ಸದಾ ಶಿವನಿಗೆ ಅದೇ ಧ್ಯಾನ ಎಂಬತೇ ಈ ವೇಳೆಯೂ ಮಾಜಿ ಅಧ್ಯಕ್ಷ ಬೈಡನ್ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬೈಡನ್ ಕಾಲದಲ್ಲಿ ದೇಶ ಅತ್ಯಂತ ಹೀನಾಯ ಪರಿಸ್ಥಿತಿಯ ಗಡಿ ವ್ಯವಸ್ಥೆ ಹೊಂದಿತ್ತು ಆದರೆ ನಾನು ಅನದನು ಸರಿಪಡಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಸುಂಕ ಎಂಬುದು ನನ್ನ ನೆಚ್ಚಿನ ಪದ, ಸುಂಕದಿಂದಲೇ ದೇಶ ಅಭಿವೃದ್ದಿಯಾಗಿದೆ ಎಂದು ಪುನರುಚ್ಚರಿಸಿದರು.
ರಾಯಚೂರು | ದೇವಸ್ಥಾನದ ಹುಂಡಿ ಹಣ ಕಳವು: ಪ್ರಕರಣ ದಾಖಲು
ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಲ್ಕರಾಗಿ ಗ್ರಾಮದ ಉಟಕನೂರು ಮರಿ ಬಸವಲಿಂಗ ಸ್ವಾಮಿಗಳ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಹಣ ಕದ್ದೊಯ್ದ ಘಟನೆ ಬುಧವಾರ ಜರುಗಿದೆ. ಕಾಣಿಕೆ ಪೆಟ್ಟಿಗೆಯನ್ನು ಹೊತ್ತೊಯ್ದ ಕಳ್ಳರು, ಬೀಗ ಮುರಿದು 20,000ಕ್ಕೂ ಅಧಿಕ ಹಣ ಕದ್ದು ಪೆಟ್ಟಿಗೆಯನ್ನು ಸ್ಮಶಾನದಲ್ಲಿ ಬಿಸಾಡಿ ಹೋಗಿದ್ದಾರೆ. ಗ್ರಾಮಸ್ಥರು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಕವಿತಾಳ ಪಿಎಸ್ಐ ಗುರುಚಂದ್ರ ಯಾದವ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರು ತಿಂಗಳ ಹಿಂದೆ ಹುಂಡಿ ಇಟ್ಟಿದ್ದು, ಹಣ ಎಣಿಕೆ ಮಾಡಿರಲಿಲ್ಲ ಚಳಿಯ ವಾತಾವರಣ ಇರುವ ಹಿನ್ನೆಲೆ ಜನರು ಸ್ವಲ್ಪ ತಡವಾಗಿ ಓಡಾಡುವುದರಿಂದ ನಸುಕಿನ ಜಾವದಲ್ಲಿ ಕಳ್ಳರು ಈ ಕೆಲಸವನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
India Weather Forecast: ಶೀತಗಾಳಿ ನಡುವೆಯೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಮುನ್ಸೂಚನೆ
India Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಪ್ರಮಾಣ ಕಡಿಯಾಗುತ್ತಿದ್ದು, ಚಳಿ ಹೆಚ್ಚಾಗಿದೆ. ಈ ನಡುವೆಯೆ ಹಲವೆಡೆ ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಶೀತಗಾಳಿ ಹೆಚ್ಚಿದೆ ಹಾಗೂ ವರುಣನ ಆರ್ಭಟ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಗುರುವಾರ (ಡಿಸೆಂಬರ್ 18) ಬೆಳಗ್ಗೆ ರಾಷ್ಟ್ರ ರಾಜಧಾನಿ
ಮಂಗಳೂರು: ಶಿಕ್ಷಕರ ಸೇವಾ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧೀನ ಸಂಸ್ಥೆಯಾದ ಶಿಕ್ಷಕರ ಸೇವಾ ಪ್ರತಿಷ್ಠಾನದಿಂದ ಐದರಿಂದ ಪಿಯುಸಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಶಿಕ್ಷಕರ ಸಹಕಾರಿ ಸಂಘದ ಸಭಾಂಗಣದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಕೆಎಂ ಕೆ ಮಂಜನಾಡಿ, ಸಾಂಕೇತಿಕವಾಗಿ ಇವತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಅವರವರ ಖಾತೆಗೆ ವಿದ್ಯಾರ್ಥಿ ವೇತನವನ್ನು ಜಮಾ ಮಾಡಲಾಗುವುದು. ವಿದ್ಯಾರ್ಥಿಗಳು ಪಡೆದುಕೊಂಡ ಈ ವಿದ್ಯಾರ್ಥಿ ವೇತನವನ್ನು ತಮ್ಮ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಬಳಸಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು. ಸಮುದಾಯದ ಪ್ರತಿ ಒಬ್ಬ ರಿಗೆ ಪರಸ್ಪರ ಸಹಕಾರ ನೀಡಬೇಕು ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ರವಿಕಲಾ ಶೆಟ್ಟಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದು, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರುಗಳಾದ ಹಿಲ್ದಾ ಕ್ಲೈಮಾನ್ಸಿಯ ಪಿಂಟೋ, ನಿವೃತ್ತ ಪ್ರಾಂಶುಪಾಲರಾದ ಡಾ. ಎನ್ ಇಸ್ಮಾಯಿಲ್, ಚಂದ್ರಶೇಖರ್, ರಘುನಾಥ್ ಭಟ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರ್ಮಿಳ, ಮಹಾದೇವಿ, ಪ್ರತಿಷ್ಠಾನದ ನಿರ್ದೇಶಕರುಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಉದಯ ನಾಯಕ ರವರು ಕಾರ್ಯಕ್ರಮ ನಿರೂಪಿಸಿದರು.
ಹೊಸದಿಲ್ಲಿ: ಸಾರ್ವಜನಿಕ ಸಮಾರಂಭದಲ್ಲಿ ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ- ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ, ನಿತೀಶ್ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿವಾದಕ್ಕೆ ತುಪ್ಪ ಸುರಿದಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿಕೊಂಡಾಗ, ಅವರು ಮಾಡಿರುವುದರಲ್ಲಿ ತಪ್ಪೇನಿದೆ? ಎಂದು ಮರು ಪ್ರಶ್ನೆ ಎಸೆದರು. ನೇಮಕಾತಿ ಪತ್ರ ಪಡೆಯಲು ಬರುವಾಗ ಮುಖ ತೋರಿಸಲು ಆಕೆ ಏಕೆ ಭಯ ಪಡಬೇಕು? ನೀವು ಮತ ಚಲಾಯಿಸಲು ನಿಮ್ಮ ಮುಖ ತೋರಿಸಬೇಡವೇ? ಎಂದು ಸಿಂಗ್ ಸಮರ್ಥಿಸಿಕೊಂಡರು. ಮಂಗಳವಾರ 1200ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ವೇಳೆ ಕುಮಾರ್ ಆರಂಭದಲ್ಲಿ ಹಿಜಾಬ್ ಧರಿಸಿದ್ದ ವೈದ್ಯೆ ಜತೆ ಮಾತನಾಡುತ್ತಿರುವುದು ದಾಖಲಾಗಿದೆ. ಬಳಿಕ ಸಿಎಂ ವೈದ್ಯೆಯ ಹಿಜಾಬ್ ಎಳೆಯುತ್ತಿದ್ದಾಗ ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಸಿಎಂ ಕ್ರಮದ ವಿರುದ್ಧ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಕ್ರಮವನ್ನು ಸಮರ್ಥಿಸಿಕೊಳ್ಳಲು ಜೆಡಿಯು ಹೆಣಗಾಡುತ್ತಿದೆ. ನಿತೀಶ್ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಝಮಾ ಖಾನ್ ಹೇಳಿಕೆ ನೀಡಿ, ನಿತೀಶ್ ಅವರು ಮುಸ್ಲಿಂ ಹೆಣ್ಣುಮಗಳ ಬಗ್ಗೆ ಪ್ರೀತಿ ತೋರಿದ್ದಾರೆ. ಜೀವನದಲ್ಲಿ ಯಶಸ್ವಿಯಾದ ಮುಸ್ಲಿಂ ಹುಡುಗಿಯ ಮುಖವನ್ನು ಸಮಾಜಕ್ಕೆ ಪ್ರದರ್ಶಿಸಲು ಸಿಎಂ ಬಯಸಿದ್ದರು ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಪ್ರತಿಪಕ್ಷಗಳ ವಿದೇಶ ಪ್ರೀತಿ; ಪಾಕಿಸ್ತಾನ, ಅಮೆರಿಕ, ಚೀನಾ ಸಾಕಾ? ನರೇಂದ್ರ ಮೋದಿ ಸರ್ಕಾರ ಬೀಳಿಸಲು ಮತ್ಯಾರಾದರೂ ಬೇಕಾ?
ಕೌಟುಂಬಿಕ ಕಲಹಗಳು, ಅಣ್ಣ-ತಮ್ಮಂದಿರ ಹೊಡೆದಾಟಗಳು, ಅತ್ತೆ-ಸೊಸೆಯಂದಿರ ಜಗಳಗಳು ನಾಲ್ಕು ಗೋಡೆಗಳ ಮಧ್ಯೆ ಇದ್ದರೆ ಚೆಂದ. ಈ ವಿಷಯಗಳು ಮನೆಯನ್ನು ದಾಟಿ ಹೊರಗೆ ಬಂದರೆ, ಇಡೀ ಕುಟುಂಬದ ಅವಮಾನ ಕಟ್ಟಿಟ್ಟಬುತ್ತಿ. ಇದು ರಾಜಕಾರಣಕ್ಕೂ ಅನ್ವಯಿಸುತ್ತದೆ. ದೇಶದ ಆಂತರಿಕ ರಾಜಕಾರಣವನ್ನು ದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು. ಇದರಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪದ ಬಗ್ಗೆ ಅನುಮಾನ ಮೂಡಿದರೆ, ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯೇ ಹೌದು. ಕಳೆದ ಕೆಲವು ದಿನಗಳಿಂದ ವಿಪಕ್ಷ ನಾಯಕರು ನೀಡುತ್ತಿರುವ ಹೇಳಿಕೆಗಳು, ಇಂತದ್ದೊಂದು ಆತಂಕವನ್ನು ಸೃಷ್ಟಿಸಿದೆ.
ಶಿವಮೊಗ್ಗ: ರಸ್ತೆ ಬದಿಯಲ್ಲಿ ನವಜಾತ ಶಿಶು ಪತ್ತೆ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಗ್ರಾಮದ ಬಳಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಸಾಸ್ವೆಹಳ್ಳಿ ಗ್ರಾಮದ ಕುಶ ಎಂಬವರು ತಮ್ಮ ದೊಡ್ಡಪ್ಪನ ಪುತ್ರನಿಗೆ ಆನಾರೋಗ್ಯದ ಕಾರಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುವಾಗ ಸಮೀಪದ ಮಲ್ಲಾಪುರ ಗ್ರಾಮದ ಬಳಿ ಮಗು ಅಳುವ ಶಬ್ದ ಕೇಳಿಸಿದೆ. ಬಳಿಕ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ 2–3 ದಿನದ ಗಂಡು ಮಗು ಪತ್ತೆಯಾಗಿದೆ. ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗುವು ಯಾರಿಗೂ ಸಂಬಂಧಪಟ್ಟಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಅವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಮೂಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಮಹತ್ವದ ದಿನ; 'ಬಿ ರಿಪೋರ್ಟ್' ಬಗ್ಗೆ ಇಂದು ಕೋರ್ಟ್ ತೀರ್ಪು ಪ್ರಕಟ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮಹತ್ವದ ದಿನವಾಗಿದ್ದು, ಲೋಕಾಯುಕ್ತರು ಸಲ್ಲಿಸಿದ್ದ 'ಬಿ ರಿಪೋರ್ಟ್' ಬಗ್ಗೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಆದೇಶ ಕಾಯ್ದಿರಿಸಲಾಗಿತ್ತು. 'ಬಿ ರಿಪೋರ್ಟ್' ಅಂಗೀಕರಿಸಿದರೆ ಮುಖ್ಯಮಂತ್ರಿ ಕುಟುಂಬಕ್ಕೆ ನಿರಾಳತೆ ಸಿಗಲಿದೆ.
ತಮ್ಮದೇ ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ ಕುಮಾರಸ್ವಾಮಿ : ಏನದು ಒತ್ತಾಯ?
Kumaraswamy request to Central Government : ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ರೂಪಾಯಿ ಪತನಕ್ಕೆ ತಟ್ಟೆ ಬಡಿದರೆ ಸಾಕೆ?
ಡಾಲರ್ ಮುಂದೆ ರೂಪಾಯಿಯ ಬೆಲೆ ದಯನೀಯವಾಗಿ ಕೆಳಗಿಳಿಯುತ್ತಿದೆ. ಈ ವೇಗವು ಭಾರತದ ಆರ್ಥಿಕತೆಯ ಭವಿಷ್ಯವನ್ನು ಜಗತ್ತಿನ ಮುಂದೆ ಬಿಡಿಸಿಡುತ್ತಿದೆ. ಡಾಲರ್ನ ಮುಂದೆ ಭಾರತದ ರೂಪಾಯಿ ಕೆಳಗಿಳಿಯುತ್ತಿರುವುದು ಇದೇ ಮೊದಲೇನೂ ಅಲ್ಲ. ಯುಪಿಎ ಅಧಿಕಾರಾವಧಿಯಲ್ಲೂ ರೂಪಾಯಿಗೆ ಡಾಲರ್ ಮುಂದೆ ವಿಶೇಷ ಮರ್ಯಾದೆಯೇನೂ ಸಿಗುತ್ತಿರಲಿಲ್ಲ. ಆದರೆ, ಡಾಲರ್ನ ಎದುರು ರೂಪಾಯಿ ಪತನವಾದಂತೆಲ್ಲ ಅದನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳುತ್ತಿತ್ತು. ಆರ್ಥಿಕ ತಜ್ಞರು ಅವುಗಳನ್ನು ಗಂಭೀರ ವಿಶ್ಲೇಷಣೆಗಳಿಗೆ ಒಳಪಡಿಸುತ್ತಿದ್ದರು. ಸಂಸತ್ನಲ್ಲಿ ಅದು ಚರ್ಚೆಯ ವಿಷಯವಾಗುತ್ತಿತ್ತು. ಈ ಹಿಂದೆ ವಿರೋಧ ಪಕ್ಷವಾಗಿದ್ದ ಕಾಲದಲ್ಲಿ ರೂಪಾಯಿಯ ದೈನೇಸಿ ಸ್ಥಿತಿಯನ್ನು ಮುಂದಿಟ್ಟುಕೊಂಡು ಬಿಜೆಪಿಯು ಯುಪಿಎ ಸರಕಾರದ ಮೇಲೆ ತೀವ್ರ ದಾಳಿಗಳನ್ನು ಮಾಡಿತ್ತು.ರೂಪಾಯಿ ಬೆಲೆ ಇಳಿಕೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನರೇಂದ್ರ ಮೋದಿಯವರು ಹೊಣೆ ಮಾಡಿದ್ದರು. ಮಾತ್ರವಲ್ಲ, ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಡಾಲರ್ನ ಮುಂದೆ ರೂಪಾಯಿ ಬೆಲೆ ಪಡೆದುಕೊಳ್ಳುತ್ತದೆ ಎಂದು ದೇಶವನ್ನು ನಂಬಿಸಲಾಗಿತ್ತು. ಆದರೆ ಆ ನಂಬಿಕೆ ಹುಸಿಯಾಗಿದೆ. ಮಾತ್ರವಲ್ಲ, ಸಂಸತ್ ಅಧಿವೇಶನದಲ್ಲಿ ರೂಪಾಯಿ ಸ್ಥಿತಿ ಚರ್ಚೆಗೆ ಅರ್ಹವೇ ಅಲ್ಲದ ವಿಷಯವಾಗಿದೆ. ಬಿಜೆಪಿಯು ‘ವಂದೇಮಾತರಂ’ ಹಾಡಿನ ಕುರಿತಂತೆ ಚರ್ಚಿಸಿ ಇಡೀ ಕಲಾಪದ ಉದ್ದೇಶವನ್ನು ವ್ಯರ್ಥಗೊಳಿಸಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ರೂಪಾಯಿಯ ಇಂದಿನ ಸ್ಥಿತಿಗೆ ನೇರ ಕಾರಣವಾಗಿದೆ. ಈ ಹಿಂದೆ, ನೋಟು ನಿಷೇಧವನ್ನು ಮಾಡಿದಾಗ, ದೇಶದೊಳಗಿರುವ ಕಪ್ಪು ಹಣವೆಲ್ಲ ಪತ್ತೆಯಾಗಿ ರೂಪಾಯಿಯ ಬೆಲೆ ಏಕಾಏಕಿ ಡಾಲರ್ ಮುಂದೆ ಏರಿಕೆಯಾಗುತ್ತದೆ ಎಂದು ದೇಶದ ಜನರನ್ನು ಮೋದಿ ನೇತೃತ್ವದ ಸರಕಾರ ನಂಬಿಸಿತ್ತು. ರಾಜಕೀಯ ನಾಯಕರ ಈ ಮಾತುಗಳನ್ನು ನಂಬಿ ಈ ದೇಶದ ಲಕ್ಷಾಂತರ ಮಂದಿ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದರು. ದೈನಂದಿನ ವ್ಯವಹಾರಗಳಲ್ಲಿ ನಾಶ, ನಷ್ಟವಾದರೂ ಅದನ್ನು ‘ದೇಶಕ್ಕಾಗಿ’ ಸಹಿಸಿಕೊಂಡರು. ನೋಟು ನಿಷೇಧದಿಂದ ಕಪ್ಪು ಹಣ ಬರಲಿಲ್ಲ. ಇದೇ ಸಂದರ್ಭದಲ್ಲಿ ರೂಪಾಯಿಯ ಬೆಲೆ ಮಾತ್ರ ಇಳಿಯುತ್ತಲೇ ಬಂತು. ಇದಾದ ಬಳಿಕ ಲಾಕ್ಡೌನ್ ಭಾರತದ ಅಳಿದುಳಿದ ಭರವಸೆಯನ್ನೂ ಇಲ್ಲವಾಗಿಸಿತು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಸ್ವದೇಶಿ ಆರ್ಥಿಕತೆಯ ಬಗ್ಗೆ ಮೋದಿ ಭರವಸೆಯ ಮಾತುಗಳನ್ನಾಡಿದ್ದರು. ವಿದೇಶದಿಂದ ಬಂಡವಾಳವನ್ನು ತರುತ್ತೇನೆ ಎಂದು ವಿಮಾನ ಏರಿ ಹಲವು ದೇಶಗಳನ್ನು ಸುತ್ತಿದರು. ಸ್ವದೇಶಿ ಆರ್ಥಿಕತೆಗೆ ಒತ್ತು ನೀಡುತ್ತಿದ್ದೇನೆ ಎಂದರು. ದೇಶದ ಸಾರ್ವಜನಿಕ ಸೊತ್ತುಗಳನ್ನೆಲ್ಲ ಒಂದೊಂದಾಗಿ ಖಾಸಗಿಯವರಿಗೆ ಮಾರಿದರು. ಭಾರತದ ಆರ್ಥಿಕತೆಯನ್ನು ಅದಾನಿ, ಅಂಬಾನಿ ಕೇಂದ್ರವಾಗಿಟ್ಟುಕೊಂಡು ರೂಪಿಸಿದರು. ಅತ್ತ ಸಾವಿರಾರು ಕೋಟಿ ರೂಪಾಯಿಗಳನ್ನು ನಮ್ಮ ಬ್ಯಾಂಕುಗಳಿಗೆ ವಂಚಿಸಿ ಬೃಹತ್ ಉದ್ಯಮಿಗಳು ವಿದೇಶ ಸೇರಿದರು. ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ಬರುವುದು ದೂರದ ಮಾತಾಯಿತು. ಈಗ ನೋಡಿದರೆ, ರೂಪಾಯಿ ದರ ದಯನೀಯವಾಗಿ ಕೆಳಗಿಳಿಯುತ್ತಿದೆ. ಮೋದಿಯವರು ಸಂಸತ್ನಲ್ಲಿ ‘ವಂದೇ ಮಾತರಂ’ ಭಜಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕೊರೋನ ವೈರಸ್ನ್ನು ಓಡಿಸಲು ತಟ್ಟೆಗಳನ್ನು ಬಡಿಯಲು ಕರೆ ನೀಡಿದಂತೆ. ಆತಂಕಕಾರಿ ಸಂಗತಿಯೆಂದರೆ, ರೂಪಾಯಿ ಬೆಲೆ ಇಳಿಕೆಯಾಗುತ್ತಿರುವ ಈ ದಿನಗಳಲ್ಲಿ ಬಿಕ್ಕಟ್ಟಿಗೆ ಮುಖಾಮುಖಿಯಾಗುವ ಬದಲು ಸರಕಾರ ಪಲಾಯನ ದಾರಿಗಳನ್ನು ಹುಡುಕುತಿದೆ. ಈ ಹಿಂದೆ ವಿತ್ತ ಸಚಿವರು ‘ರೂಪಾಯಿ ಬೆಲೆ ಇಳಿಕೆಯಾಗುತ್ತಿಲ್ಲ. ಬದಲಿಗೆ ಡಾಲರ್ ಬೆಲೆ ಏರಿಕೆಯಾಗುತ್ತಿದೆ’ ಎನ್ನುವ ಹೇಳಿಕೆಯನ್ನು ನೀಡಿ ಸರಕಾರದ ಮಾನ ಉಳಿಸಲು ಯತ್ನಿಸಿದ್ದರು. ಇದು ತೀವ್ರ ವ್ಯಂಗ್ಯ ತಮಾಷೆಗೀಡಾಗುತ್ತಿದ್ದಂತೆಯೇ, ‘ಹಿಂದೆಯೂ ಬೆಲೆ ಇಳಿಕೆಯಾಗಿತ್ತು. ಭಾರತದ ಪಾಲಿಗೆ ಇದು ಹೊಸತಲ್ಲ’ ಎನ್ನುವ ರೀತಿಯಲ್ಲಿ ಸರಕಾರವನ್ನು ಸಮರ್ಥಿಸತೊಡಗಿದರು. ಯುಪಿಎ ಸರಕಾರದ ಅವಧಿಯಲ್ಲಿ ರೂಪಾಯಿ ಪತನವನ್ನು ತೋರಿಸಿಯೇ ಎನ್ಡಿಎ ಅಧಿಕಾರದೆಡೆಗೆ ದಾಪುಗಾಲು ಇಟ್ಟಿತು. ಸರಕಾರದಿಂದ ರೂಪಾಯಿ ಪತನವನ್ನು ತಡೆಯುವುದು ಸಾಧ್ಯವಿಲ್ಲವಾದರೂ, ಪತನದ ವೇಗವನ್ನು ನಿಯಂತ್ರಿಸೀತು ಎಂದು ಭಾವಿಸಲಾಗಿತ್ತು. ಆದರೆ ಸರಕಾರ ತೆಗೆದುಕೊಂಡ ಬೇಜವಾಬ್ದಾರಿ ಆರ್ಥಿಕ ನೀತಿಗಳು ರೂಪಾಯಿ ಬೆಲೆ ಇನ್ನಷ್ಟು ಕುಸಿಯುವುದಕ್ಕೆ ಕಾರಣವಾಯಿತು. ಈ ವಾಸ್ತವವನ್ನು ಒಪ್ಪಿಕೊಂಡು ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಕಡೆಗೆ ಸರಕಾರ ಹೆಜ್ಜೆಯಿಡಬೇಕು. ಆದರೆ ಈಗ ‘ಡಾಲರ್ ಮುಂದೆ ಬೆಲೆ ಇಳಿಕೆಯಾಗುವುದರಲ್ಲೇ ಭಾರತೀಯರಿಗೆ ಲಾಭವಿದೆ’ ಎಂದು ನಂಬಿಸಲು ಹೊರಟಿದೆ. ಡಾಲರ್ ಏರಿಕೆಯಾದರೆ ರಫ್ತುದಾರರಿಗೆ ಲಾಭವಿದೆ. ಹಾಗೆಯೇ ಅನಿವಾಸಿ ಭಾರತೀಯರೂ ಇದರ ಲಾಭವನ್ನು ತನ್ನದಾಗಿಸಿಕೊಳ್ಳಬಹುದು ಎಂದು ತಲೆಬುಡವಿಲ್ಲದ ಸಮರ್ಥನೆಗೆ ಇಳಿಯುವುದಕ್ಕೂ ಸರಕಾರ ಹಿಂದು ಮುಂದು ನೋಡಿಲ್ಲ. ಮುಖ್ಯವಾಗಿ ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವ ನುರಿತ ಆರ್ಥಿಕ ತಜ್ಞರ ಕೊರತೆ ಅದರ ಸ್ಪಷ್ಟೀಕರಣದಲ್ಲಿ ಮತ್ತು ಪಲಾಯನದಲ್ಲಿ ಎದ್ದು ಕಾಣುತ್ತದೆ. ಇತ್ತೀಚೆಗೆ ಅಮೆರಿಕವು ಭಾರತದ ಮೇಲೆ ಹೇರುತ್ತಿರುವ ಸುಂಕದ ಕಾರಣದಿಂದಾಗಿ ರಫ್ತಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಇದು ಭಾರತದ ಗಾಯಗಳ ಮೇಲೆ ಎಳೆದ ಬರೆಯೇ ಸರಿ. ಇತ್ತೀಚೆಗೆ ರಫ್ತಿನ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ. ಅಷ್ಟೇ ಅಲ್ಲ, ಅಮೆರಿಕದಲ್ಲಿರುವ ಅನಿವಾಸಿಗಳನ್ನು ಹಂತಹಂತವಾಗಿ ಗಡಿಪಾರು ಮಾಡಲು ಆ ದೇಶ ಬೇರೆ ಬೇರೆ ನೆಪಗಳನ್ನು ಹುಡುಕುತ್ತಿದೆ. ದೇಶದಲ್ಲಿ ಬಂಡವಾಳ ಹೂಡಿಕೆಯೂ ಕಡಿಮೆಯಾಗುತ್ತಿದೆ. ಶೇರು ಮಾರುಕಟ್ಟೆಯ ಏಳು ಬೀಳುಗಳಿಂದಾಗಿ ಕಳೆದ ಜನವರಿಯಿಂದ 1.48 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಸಂಸ್ಥೆಗಳು ಹಿಂಪಡೆದಿವೆ. ಇವೆಲ್ಲವೂ ರೂಪಾಯಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿವೆ. ವಿಪರ್ಯಾಸವೆಂದರೆ, ಡಾಲರ್ ಮುಂದೆ ಮಲೇಶ್ಯ, ಫಿಲಿಪ್ಪೀನ್ಸ್, ಥಾಯ್ಲೆಂಡ್ ರಾಷ್ಟ್ರಗಳು ಸ್ಥಿರವಾಗಿ ನಿಂತಿವೆ. ಏಶ್ಯದಲ್ಲಿ ಭಾರತದ ರೂಪಾಯಿಗಷ್ಟೇ ಈ ದಯನೀಯ ಸ್ಥಿತಿಯಿದೆ. ಇವೆಲ್ಲಕ್ಕೂ ಪ್ರಧಾನಿ ಮೋದಿಯವರು ಉತ್ತರಿಸಬೇಕು. ಸಂಸತ್ ಅಧಿವೇಶನದಲ್ಲಿ ಇದು ಚರ್ಚೆಯಾಗಬೇಕು. ಆದರೆ, ಸಂಸತ್ನಲ್ಲಿ ವಂದೇ ಮಾತರಂ ಹೆಸರಿನಲ್ಲಿ ತಟ್ಟೆ ಬಾರಿಸಿ ‘ರೂಪಾಯಿ ಸಮಸ್ಯೆ’ಯನ್ನು ನಿವಾರಿಸಲಾಯಿತು. ಅನಗತ್ಯ ಆಮದುಗಳನ್ನು ಕಡಿಮೆಗೊಳಿಸಿ, ಡಾಲರ್ನ ಮೇಲಿನ ಅವಲಂಬನೆಯಿಂದ ಭಾರತವು ನಿಧಾನಕ್ಕಾದರೂ ಸ್ವತಂತ್ರವಾಗಬೇಕು. ಈ ನಿಟ್ಟಿನಲ್ಲಿ ಸ್ವದೇಶಿ ಆರ್ಥಿಕತೆಯನ್ನು ಸದೃಢಗೊಳಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಭಾರತವು ತನ್ನ ಆರ್ಥಿಕ ನೀತಿಗಳನ್ನು ಮರು ಪರಿಶೀಲಿಸಬೇಕು. ನೆರೆಹೊರೆಯ ಜೊತೆಗೆ ಅನಗತ್ಯ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆ ವ್ಯಾಪಾರ ವಿನಿಮಯ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಯೋಚನೆ ಮಾಡಬೇಕು. ಡಾಲರ್ ಕೇಂದ್ರಿತವಾದ ಆಮದುಗಳನ್ನು ಕಡಿತಗೊಳಿಸಿ ಇರಾನ್ನಂತಹ ದೇಶಗಳ ಜೊತೆಗೆ ವ್ಯವಹಾರಗಳನ್ನು ವಿಸ್ತರಿಸುವ ದಾರಿಗಳನ್ನು ಕಂಡುಕೊಳ್ಳಬೇಕು. ಅಮೆರಿಕದ ಒತ್ತಡಕ್ಕೆ ಮಣಿದು ರಶ್ಯದ ಜೊತೆಗೆ ಭಾರತ ಎಂದಿಗೂ ಸಂಬಂಧವನ್ನು ಕಡಿದುಕೊಳ್ಳಬಾರದು. ಇದೇ ಸಂದರ್ಭದಲ್ಲಿ, ನೆರೆಯ ಚೀನಾದ ಜೊತೆಗೆ ಗಡಿ ವಿಷಯಗಳನ್ನು ಮಾತುಕತೆಯಲ್ಲಿ ಪರಿಹರಿಸಿಕೊಳ್ಳುತ್ತಾ ಇತರ ಆರ್ಥಿಕ ಸಂಬಂಧಗಳಿಗೆ ಒತ್ತು ನೀಡಬೇಕು. ದೇಶದೊಳಗೆ ಸರಕಾರದ ನೇತೃತ್ವದಲ್ಲೇ ಜಾರಿಯಲ್ಲಿರುವ ದ್ವೇಷ ರಾಜಕಾರಣ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಿದೆ. ಮೊತ್ತ ಮೊದಲು ದೇಶದಲ್ಲಿ ವ್ಯಾಪಾರ, ಉದ್ದಿಮೆಗಳನ್ನೂ ಕಾಡುತ್ತಿರುವ ಕೋಮು ರಾಜಕೀಯಗಳಿಗೆ ಔಷಧಿ ಹುಡುಕಬೇಕು. ಸೌಹಾರ್ದ-ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳು. ರೂಪಾಯಿಯು ತನ್ನ ಬೆಲೆಯನ್ನು ಮತ್ತೆ ಪಡೆದುಕೊಳ್ಳಬೇಕಾದರೆ, ಮೊದಲು ಭಾರತದಲ್ಲಿ ರಾಜಕೀಯವು ಮೌಲ್ಯ ಪಡೆದುಕೊಳ್ಳಬೇಕು. ರಾಜಕಾರಣಿಗಳು ಪ್ರಬುದ್ಧರಾಗಿ, ವಿವೇಕಿಗಳಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ದೇಶದ ಹಿತಾಸಕ್ತಿಯ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಇದು ಸಾಧ್ಯ.
School Holiday: ಈ ಭಾಗದಲ್ಲಿ 5ನೇ ತರತಗತಿವರೆಗೆ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
School Holiday: ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಶೀತಗಾಳಿ ಜೊತೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಲಿದೆ. ಪರಿಣಾಮ ಜನರು ತತ್ತರಿಸಿದ್ದಾರೆ. ಇನ್ನೂ ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು
ಕೆಐಎಸ್ಎಸ್ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು; ಸಹಪಾಠಿಗಳಿಂದಲೇ ಹತ್ಯೆ!
ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್ಎಸ್)ನಲ್ಲಿ ಕಳೆದ ವಾರ ಸಂಭವಿಸಿದ 9ನೇ ತರಗತಿ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿ ಸ್ನಾನಗೃಹದಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾನೆ ಎಂದು ಸಂಸ್ಥೆಯ ಅಧಿಕಾರಿಗಳು ನೀಡಿದ ಹೇಳಿಕೆಗೆ ವಿರುದ್ಧವಾಗಿ, ಆತ ಸಹಪಾಠಿಗಳಿಂದಲೇ ಹತ್ಯೆಗೀಡಾಗಿರುವ ಅಂಶ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಕೆಐಎಸ್ಎಸ್ನಲ್ಲಿ ಓದುತ್ತಿದ್ದ ಕೊಯೆಂಜಾರ್ ಜಿಲ್ಲೆಯ ತಿಕರ್ಗುಮುರಾ ಗ್ರಾಮದ 14 ವರ್ಷದ ಸಿಬಾ ಮುಂಡಾ ಡಿಸೆಂಬರ್ 12ರಂದು ಭುವನೇಶ್ವರದ ಕೆಐಎಂಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ವಿದ್ಯಾರ್ಥಿಯ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿ, ವಸತಿಶಾಲೆಯ ಅಧಿಕಾರಿಗಳು ಸತ್ಯಾಂಶವನ್ನು ಮುಚ್ಚಿಟ್ಟಿದ್ದಾರೆ ಹಾಗೂ ವೈದ್ಯಕೀಯ ವರದಿಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದರು. ಶುಕ್ರವಾರ ಬಾಲಕನ ಕುಟುಂಬವನ್ನು ಸಂಪರ್ಕಿಸಿದ ಕೆಐಎಸ್ಎಸ್ ಅಧಿಕಾರಿಗಳು, ಅಸ್ವಸ್ಥಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದರು ಎಂದು ಹುಡುಗನ ತಂದೆ ರಘುನಾಥ್ ಮುಂಡಾ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಇನ್ಫೋಸಿಟಿ ಠಾಣೆಯ ಅಧಿಕಾರಿಗಳು, ಬೇಳೆಕಾಳು ವಿಚಾರದಲ್ಲಿ ಜಗಳವಾಡಿ ಬಾಲಕನನ್ನು ಸ್ನಾನಗೃಹದ ಒಳಗೆ ಹೊಡೆದು ಉಸಿರುಗಟ್ಟಿಸಿ ಮೂವರು ಸಹಪಾಠಿಗಳು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೆಐಎಸ್ಎಸ್ ಅಧಿಕಾರಿಗಳು ಹೇಳಿದಂತೆ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿಲ್ಲ ಎನ್ನುವುದನ್ನು ಮರಣೋತ್ತರ ಪರೀಕ್ಷೆ ದೃಢಪಡಿಸುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿ ಹೇಳಿದ್ದಾರೆ. ಪ್ರಕರಣದಲ್ಲಿ ಎಲ್ಲ ಮೂವರು ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಖುರ್ದಾ ಜಿಲ್ಲೆಯ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಸುಧಾರಣಾಗೃಹಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಕೆಐಎಸ್ಎಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಸಂಸ್ಥೆಯ ಹೆಚ್ಚುವರಿ ಸಿಇಓ ಪ್ರಮೋದ್ ಪಾತ್ರಾ ಹಾಗೂ ಹಲವು ಮಂದಿ ಶಿಕ್ಷಕರು ಸೇರಿದಂತೆ ಎಂಟು ಮಂದಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಭುವನೇಶ್ವರ ಪೊಲೀಸ್ ಆಯುಕ್ತ ಸುರೇಶ್ ದೇವದತ್ ಸಿಂಗ್ ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸಿದ ಆರೋಪ ಇವರ ಮೇಲಿದೆ.
ಹನುಮಂತನ ಬಾಲದಂತೆ ಬೆಳೆಯುತ್ತಿದೆ ಯುಎಸ್ ಟ್ರಾವೆಲ್ ಬ್ಯಾನ್ ಪಟ್ಟಿ; ನಿಶ್ಚಿತಾರ್ಥ ವೀಸಾ ಅರ್ಜಿದಾರರೂ ಗೆಟೌಟ್?
ತನ್ನ ವಲಸೆ ವಿರೋಧಿ ನೀತಿಯನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿರುವ ಅಮೆರಿಕ, ತನ್ನ ಪ್ರಯಾಣ ನಿಷೇಧ ಪಟ್ಟಿಯನ್ನು ಹನುಮಂತನ ಬಾಲದಂತೆ ಬೆಳೆಸುತ್ತಲೇ ಇದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಒಟ್ಟು 39 ದೇಶಗಳ ಮೇಲೆ ಸಂಪೂರ್ಣ ಮತ್ತು ಭಾಗಶಃ ಪ್ರಯಾಣ ನಿಷೇಧವನ್ನು ಹೇರಿದೆ. ಟ್ರಂಪ್ ಆಡಳಿತ ಟ್ರಾವೆಲ್ ಬ್ಯಾನ್ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳಿವೆ? ಯಾವ ದೇಶಗಳಿಗೆ ಏನು ವಿನಾಯಿತಿ ನೀಡಲಾಗಿದೆ? ಟ್ರಾವೆಲ್ ಬ್ಯಾನ್ ಪರಿಣಾಗಗಳೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಚಡಚಣ | ಚಿರತೆ ಕಾಟ: ಸೆರೆ ಹಿಡಿಯಲು ಒತ್ತಾಯ
ಚಡಚಣ: ಚಡಚಣ ತಾಲೂಕಿನ ತದ್ದೇವಾಡಿ, ಮಣಕಂಲಗಿ, ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದಾದ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಈ ಭಾಗದ ಗ್ರಾಮಸ್ಥಗಳು ಆತಂಕಕ್ಕೊಳಗಾಗಿದ್ದಾರೆ. ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಿಂದ ಚಿರತೆ ದಾಳಿಯಿಂದ ಪಾರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗೇಂದ್ರ ಬಿರಾದಾರ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಬೋನನ್ನು ಇಟ್ಟು ಚಿರತೆ ಸೆರೆ ಹಿಡಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಅರಣ್ಯ ಇಲಾಖೆ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಭಾಗದ ಜನರಿಗೆ ಉಪಟಳ ನೀಡುತ್ತಿರುವ ಚಿರತೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವ ಮೂಲಕ ಈ ಭಾಗದ ಸಾಕು ಪ್ರಾಣೀಗಳ ಜೀವಕ್ಕೆ ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಈ 5 ಜಿಲ್ಲೆಗಳ ವಿಭಜನೆಗೆ ತೆರೆಮರೆಯ ಕಸರತ್ತು, ಯಾವೆಲ್ಲಾ ಜಿಲ್ಲೆಗಳಿವೆ
ಕರ್ನಾಟಕದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಹಾಗೂ ಎರಡನೇ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಬೆಳಗಾವಿಯ ವಿಭಜನೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಬೆಳಗಾವಿಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜನೆ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಬೆಳಗಾವಿ ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳ ವಿಭಜನೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಯಾವೆಲ್ಲಾ ಜಿಲ್ಲೆಗಳ ವಿಭಜನೆಗೆ ಚರ್ಚೆ ನಡೆಯುತ್ತಿದೆ ಎನ್ನುವ
ವಿಮಾನ ನಿಲ್ದಾಣದ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಬೂಮ್ರಾ ತಾಳ್ಮೆ ಕಳೆದುಕೊಂಡಿದ್ದೇಕೆ?; ವಿಡಿಯೊ ವೈರಲ್
ಹೊಸದಿಲ್ಲಿ: ವಿಮಾನ ನಿಲ್ದಾಣದಲ್ಲಿ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ಅಭಿಮಾನಿಯ ಕಿರಿಕಿರಿ ತಾಳಲಾರದೇ ತಾಳ್ಮೆ ಕಳೆದುಕೊಂಡು ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಯೊಬ್ಬ ಭಾರತದ ವೇಗಿಯ ಅನುಮತಿ ಪಡೆಯದೇ ಸೆಲ್ಫಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಗಮನಕ್ಕೆ ಬಂದ ತಕ್ಷಣ ಬೂಮ್ರಾ ಚಿತ್ರೀಕರಣ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಆದರೆ ಅಭಿಮಾನಿ ಅದನ್ನು ನಿರ್ಲಕ್ಷಿಸಿದಾಗ ಆಕ್ರೋಶಗೊಂಡ ಬೂಮ್ರಾ ಫೋನ್ ಕಸಿದುಕೊಂಡರು ಎಂದು ವರದಿಯಾಗಿದೆ. ಅವರ ನಡುವಿನ ಸಂಭಾಷಣೆಯ ತುಣುಕುಗಳು ಹೀಗಿವೆ: ಅಭಿಮಾನಿ - ಆಪ್ಕೇ ಸಾಥ್ ಹಿ ಜಾವೂಂಗಾ ಸರ್ ಮೀ (ಸರ್, ನಾನು ನಿಮ್ಮೊಂದಿಗೆಯೇ ಬರುತ್ತೇನೆ) ಬೂಮ್ರಾ: ಫೋನ್ ಗಿರ್ ಗಯಾ ಆಪ್ಕಾ ತೋ ಮೇರೆಕೊ ಬ್ಲೇಮ್ ನಹಿ (ನಿಮ್ಮ ಫೋನ್ ಬಿದ್ದರೆ ನನ್ನನ್ನು ದೂಷಿಸಬೇಡ) ಅಭಿಮಾನಿ: ಕೋಯಿ ಬಾತ್ ನಹಿ ಸರ್ (ಅಡ್ಡಿಯಲ್ಲ ಸರ್) ಬೂಮ್ರಾ: ಕೂಲ್ ಈ ಎಚ್ಚರಿಕೆ ನೀಡಿದ ಬಳಿಕ ಬೂಮ್ರಾ ಫೋನ್ ಕಿತ್ತುಕೊಂಡಲ್ಲಿಗೆ ಘಟನೆ ಮುಕ್ತಾಯವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 17 ರನ್ಗಳಿಗೆ 2 ವಿಕೆಟ್ ಕಿತ್ತು ಮಿಂಚಿದ್ದ ಬೂಮ್ರಾ ಎರಡನೇ ಪಂದ್ಯದಲ್ಲಿ 45 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ. ಧರ್ಮಶಾಲೆಯಲ್ಲಿ ನಡೆದ ಮೂರನೇ ಪಂದ್ಯಕ್ಕೆ ಬೂಮ್ರಾ ಅಲಭ್ಯರಾಗಿದ್ದರು. What an arrogant behavior by Jasprit Bumrah. First he threatened his fan that he would throw his phone, and later he snatched the fan's phone. pic.twitter.com/O2e4jSLw7s — (@Goatlified) December 17, 2025
ಲಾಲ್ಬಾಗ್ ಫ್ಲವರ್ ಶೋನಲ್ಲಿ'ತೇಜಸ್ವಿ ವಿಸ್ಮಯ': ಜ.15 ರಿಂದ 26 ರವರೆಗೆ ನಡೆಯಲಿದೆ ಫಲಪುಷ್ಪ ಪ್ರದರ್ಶನ
ಬೆಂಗಳೂರಿನ ಲಾಲ್ಬಾಗ್ನಲ್ಲಿ ಜನವರಿ 15 ರಿಂದ 26 ರವರೆಗೆ 'ತೇಜಸ್ವಿ ವಿಸ್ಮಯ' ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಪರಿಸರ ಪ್ರೇಮವನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲು ಯೋಜಿಸಲಾಗಿದೆ. ತೇಜಸ್ವಿ ಅವರ ಕ್ಯಾರಿಕೇಚರ್ಗಳ ಸೆಲ್ಫಿ ಪಾಯಿಂಟ್ಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ನಾಟಕ, ಸಂವಾದಗಳು ನಡೆಯಲಿವೆ.
ಸೂಕ್ತ ತಪಾಸಣೆ ಇಲ್ಲದೇ ಡಿಬಿಟಿ ಖಾತೆಗಳಿಗೆ ಕೋಟ್ಯಂತರ ರೂಪಾಯಿ: ಸಿಎಜಿ ಕಳವಳ
ನಾಗ್ಪುರ: ದೇಶಾದ್ಯಂತ ಜಾರಿಯಲ್ಲಿರುವ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ಆಡಿಟರ್ ಜನರಲ್ ಸಂಜಯ್ಮೂರ್ತಿ, ದುರ್ಬಲ ಡಾಟಾ ಸಮನ್ವಯ ಮತ್ತು ಇಲಾಖೆಗಳ ನಡುವಿನ ಸಂಪರ್ಕದ ಕೊರತೆಯಿಂದಾಗಿ ಕಡ್ಡಾಯ ಪರಿಶೀಲನೆಯಿಲ್ಲದೇ ಕೋಟ್ಯಂತರ ರೂಪಾಯಿ ಮೊತ್ತ ಫಲಾನುಭವಿ ಖಾತೆಗಳಿಗೆ ಹರಿದಿದೆ ಎಂದು ಹೇಳಿದ್ದಾರೆ. ಡೂಪ್ಲಿಕೇಶನ್ ತಡೆಯುವ ಮತ್ತು ಮರು ಪರಿಶೀಲನೆ ನಡೆಸುವ ಮಟ್ಟದಲ್ಲಿ ಭಾರಿ ಅಂತರ ಕಂಡುಬಂದಿದೆ. ಸರ್ಕಾರಿ ಇಲಾಖೆಗಳು ಪರಸ್ಪರ ಸಂಪರ್ಕವಿಲ್ಲದೇ ಕಾರ್ಯನಿರ್ವಹಿಸುವ ಮಟ್ಟ ಎಷ್ಟಿದೆಯೆಂದರೆ ಒಂದೇ ಇಲಾಖೆಗೆ ವಿವಿಧ ಜಂಟಿ ಕಾರ್ಯರ್ಶಿಗಳು ಒಂದೇ ಡಾಟಾಬೇಸ್ ಪರಾಮರ್ಶಿಸುತ್ತಿಲ್ಲ ಎಂದು ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಐಆರ್ಎಸ್ ಅಧಿಕಾರಿಗಳ ತರಬೇತಿ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಕಳವಳ ವ್ಯಕ್ತಪಡಿಸಿದರು. ನಾವು ಜನ ಧನ್, ಆಧಾರ್ ಮತ್ತು ಮೊಬೈಲ್ ಫೋನ್ ಆಧರಿತ ಡಾಟಾಬೇಸ್ ಸಂಪರ್ಕದ ಬಗ್ಗೆ ಮಾತನಾಡಬಹುದು. ಆದಾಗ್ಯೂ ಡಾಟಾಬೇಸ್ ನಿಯೋಜಿಸುವ ಪ್ರೌಢತೆಯ ಮಟ್ಟವನ್ನು ನೋಡಿದರೆ, ಮುಖ್ಯವಾಗಿ ನಾವು ಸೃಷ್ಟಿಸುವ ವರದಿಗಳನ್ನು ನೋಡಿದರೆ ತೀರಾ ಅಂತರ ಇರುವುದು ಕಾಣಿಸುತ್ತದೆ ಎಂದು ಹೇಳಿದರು. ಇವೆಲ್ಲ ಆಧಾರ್ ಆಧರಿತ ಫಲಾನುಭವಿಗಳು ಎಂದು ನಾವು ಹೇಳುತ್ತೇವೆ; ಆದರೆ ಆದರೆ ಡಿಬಿಟಿ ಮಿಷನ್ ಕಡ್ಡಾಯಪಡಿಸಿದಂತೆ ಡೂಪ್ಲಿಕೇಶನ್ ತಡೆಯುವ ನಿಟ್ಟಿನಲ್ಲಿ ಅಥವಾ ಡಾಟಾಬೇಸ್ ಮರುಪರಿಶೀಲನೆ ದೃಢೀಕರಿಸುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳು ಈ ವ್ಯವಸ್ಥೆಗೆ ವಿತ್ತೀಯ ಸೇರ್ಪಡೆ ಯೋಜನೆಯಡಿ ಮೂಲಭೂತ ಪರಿಶೀಲನೆ ಇಲ್ಲದೇ ಹರಿಯುತ್ತಿದೆ ಎಂದು ವಿಶ್ಲೇಷಿಸಿದರು.
ದೆಹಲಿ ವಾಯು ಮಾಲಿನ್ಯ ನಿವಾರಣೆಗೆ ಚೀನಾ ಸಾಥ್
ನವದೆಹಲಿ, ಡಿಸೆಂಬರ್ 18: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇಲ್ಲಿನ ಕಳಪೆ ಗುಣಮಟ್ಟದ ಗಾಳಿ ಜನರಿಗೆ ತೊಂದರೆ ನೀಡುತ್ತಿದೆ. ಚಳಿಗಾಲದಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಈ ಮಾಲಿನ್ಯ ಸಮಸ್ಯೆ ನಿವಾರಣೆಗೆ ಭಾರತದೊಂದಿಗೆ ಚೀನಾ ದೇಶ ಕೈಜೋಡಿಸುವುದಾಗಿ ತಿಳಿಸಿದೆ. ಚೀನಾದಲ್ಲಿ ತಾನು ಕೈಗೊಂಡ ಯಶಸ್ವಿ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿ ಹಂತ ಹಂತವಾಗಿ ದೆಹಲಿ ಮಾಲಿನ್ಯ
ನೆರೆಯ ಚೀನಾ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಇರಾದೆ ಹೊಂದಿದೆ. ಅದು ಗಡಿ ಸಂಘರ್ಷ ಆಗಬಹುದು, ಬ್ರಹ್ಮಪುತ್ರ ನದಿ ವಿವಾದ ಆಗಬಹುದು ಅಥವಾ ಗಡಿಯಲ್ಲಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ, ಭಾರತದ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವುದಾಗಿರಬಹುದು. ಒಟ್ಟಿನಲ್ಲಿ ಭಾರತಕ್ಕೆ ತೊಂದರೆ ಕೊಡುವುದೇ ಡ್ರ್ಯಾಗನ್ ರಾಷ್ಟ್ರದ ಪರಮಧ್ಯೇಯ. ಅದರಂತೆ ಯಾರ್ಲುಂಗ್ ತ್ಸಾಂಗ್ಪೊ ನದಿಗೆ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಭಾರತದ ಮೇಲೆ ಗಂಭೀಋ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
IPL 2026 RCB: ಐಪಿಎಲ್ 2026ಕ್ಕೆ ಆರ್ಸಿಬಿ ಹೊಸ ತಂಡ ಇಲ್ಲಿದೆ
IPL 2026 RCB: ಈಗಾಗಲೇ ಆರ್ಸಿಬಿಯು ಐಪಿಎಲ್ 2025ರ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಎಲ್ಲದರ ಚಿತ್ತ 2026ರ ಸೀಸನ್ನತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ಬಾರಿಗೆ ಫ್ರಾಂಚೈಸಿಯು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಹಾಗಾದ್ರೆ, 19ನೇ ಆವೃತ್ತಿಗೆ ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್ಸಿಬಿ ಐಪಿಎಲ್ 2026ರ ಮಿನಿ
ವಿದ್ಯಾರ್ಥಿನಿಯರ ನೆರವಿಗೆ ಬರಲಿದೆ ಬಾಲ್ಯ ರಕ್ಷಣಾ ಪಡೆ: ವಿಟಿಯು ಮೊದಲ ಹೆಜ್ಜೆ
ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು 'ಬಾಲ್ಯ ರಕ್ಷಣಾ ಪಡೆ' ರಚನೆಯಾಗುತ್ತಿದೆ. ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಇದರ ಪ್ರತಿನಿಧಿಗಳಾಗಿರುತ್ತಾರೆ. ಈ ಪಡೆ ಮಕ್ಕಳಿಗೆ ರಕ್ಷಣೆ ನೀಡಲಿದೆ. ವಿಟಿಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದರೆ ಈ ಪಡೆ ನೆರವಿಗೆ ಧಾವಿಸಲಿದೆ. ಮಾರ್ಗಸೂಚಿ ನಂತರ ಸ್ಪಷ್ಟತೆ ಸಿಗಲಿದೆ.
Railway New Line: ಆಲಮಟ್ಟಿ-ಕುಷ್ಟಗಿ ಹೊಸ ರೈಲು ಮಾರ್ಗ ಯೋಜನೆಗೆ ಸಮ್ಮತಿ
ನವದೆಹಲಿ, ಡಿಸೆಂಬರ್ 18: ನೈಋತ್ಯ ರೈಲ್ವೆ ವಿಭಾಗದ ಕರ್ನಾಟಕ ವ್ಯಾಪ್ತಿಯಲ್ಲಿ ವಿವಿಧೆಡೆ ಹೊಸ ರೈಲು ಮಾರ್ಗದ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ಕೆಲವು ಮಾರ್ಗಗಳ ಕಾಮಗಾರಿ ಆರಂಭವಾದರೆ, ಇನ್ನೂ ಕೆಲವು ಡಿಪಿಆರ್ ಹಂತದಲ್ಲಿವೆ. ಈವರೆಗೆ ಚರ್ಚೆಯಲ್ಲಿದ್ದ ರಾಜ್ಯದ ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗ ಯೋಜನೆಗೆ ವೇಗ ಸಿಕ್ಕಿದೆ. ಇದರ ವಿಸ್ತೃತ ಯೋಜನಾ ವರದಿ (DPR) ಬಗ್ಗೆ ಕೇಂದ್ರ ಹೊಸ
ಕೇರಳದಲ್ಲಿ ತಾಪಮಾನ ತೀವ್ರ ಏರಿಕೆ: ಕಣ್ಣೂರಿನಲ್ಲಿ ಗರಿಷ್ಠ , ಹಗಲು ಬಿಸಿ, ರಾತ್ರಿ ಚಳಿ
ಕೇರಳದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ. ಹಗಲಿನಲ್ಲಿ ಉರಿಬಿಸಿಲು ಇದ್ದರೆ, ರಾತ್ರಿ ಮತ್ತು ಮುಂಜಾನೆ ಮೈಕೊರೆಯುವ ಚಳಿ ಅನುಭವಕ್ಕೆ ಬರುತ್ತಿದೆ. ಮುನ್ನಾರ್ನಂತಹ ಪ್ರದೇಶಗಳಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗೆ ಇಳಿಯುತ್ತಿದೆ.
ಜಾಹೀರಾತಿನಿಂದ ಬಿಎಂಟಿಸಿಗೆ ಬರಲಿದೆ 263 ಕೋಟಿ ರೂ. ಆದಾಯ!
ಆರ್ಥಿಕ ನಷ್ಟದಿಂದ ಹೊರಬರಲು ಬಿಎಂಟಿಸಿ ಬಸ್ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಮುಂದಾಗಿದೆ. ಮುಂದಿನ 3-4 ವರ್ಷಗಳಲ್ಲಿ 263.41 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ಬಸ್ಗಳಿಗೆ ತಿಂಗಳಿಗೆ 12,616 ರೂ. ಹಾಗೂ ವೋಲ್ವೊ ಬಸ್ಗಳಿಗೆ 25,255 ರೂ. ಶುಲ್ಕ ನಿಗದಿಪಡಿಸಲಾಗಿದೆ.
21 ಎಕರೆ ಜಮೀನು ಕಬಳಿಕೆ: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಆರೋಪ
ಬೆಳಗಾವಿ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಬೆಳಗಾವಿ ನಗರದಲ್ಲಿ ಬಿಜೆಪಿ ಮುಖಂಡ ತಮ್ಮೇಶ ಗೌಡ, ಸಚಿವ ಕೃಷ್ಣಬೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೈಟ್ ಕಾಲರ್ ರಾಜಕಾರಣಿ, ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣಬೈರೇಗೌಡ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದರು. ಪಿತ್ರಾರ್ಜಿತ ಆಸ್ತಿ: ಕೃಷ್ಣಬೈರೇಗೌಡ ಸ್ಪಷ್ಟನೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಬೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ, ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು. ಅವರಿಗೆ ವಿಭಾಗವಾಗಿ ನಮಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಕೆಸರೆರಚಾಟಕ್ಕೆ ವಿಪಕ್ಷದವರು ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಷ್ಟೋ, ಇಷ್ಟೋ ತಲೆ ಎತ್ತಿಕೊಂಡು ಇದ್ದೇವೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದು ನಾನ್ಯಾಕೆ ದೂರು ನೀಡಲಿ. ಕಾನೂನು ಪ್ರಕಾರ ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.
ಆರೋಗ್ಯದಲ್ಲಿ ಏರುಪೇರು; ಕಲಾಪಗಳಿಂದ ದೂರ ಉಳಿದ ಸಿಎಂ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಲು ಹಲವು ನಾಯಕರು ದೌಡಾಯಿಸಿದ್ದರು. ಕೇಂದ್ರ ಸರಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ, ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅದಾದ ಬಳಿಕ ಸದನದೊಳಗೆ ಹೋದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆಯವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಸಿಎಂ ಆರೋಗ್ಯ ವಿಚಾರಿಸಿ ವಾಪಸ್ ಆದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ''ತಂದೆಯವರ ಆರೋಗ್ಯ ಚೆನ್ನಾಗಿದೆ, ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ. ಡೈರಿಯಾ ಸಮಸ್ಯೆ ತರಹ ಇದೆ. ವೈದ್ಯರು ತಪಾಸಣೆ ನಡೆಸಿ ಮಾತ್ರೆಗಳನ್ನು ಕೊಟ್ಟಿದ್ದಾರೆ. ತಂದೆಯವರು ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನಕ್ಕೆ ಬರುತ್ತಾರೆ'' ಎಂದು ಹೇಳಿದರು.
ಕೊಪ್ಪಳ| ಬೈಕ್ಗೆ ಬೊಲೆರೋ ಢಿಕ್ಕಿ: ಮೂವರು ಯುವಕರು ಮೃತ್ಯು
ಕೊಪ್ಪಳ: ಬೈಕ್ಗೆ ಬೊಲೆರೋ ವಾಹನ ಢಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಹುಸೇನ್(18), ಆಸೀಫ್(16) ಮತ್ತು ವಾಜಿದ್(19) ಮೃತರು. ಈ ಮೂವರು ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್ನಲ್ಲಿ ಹೋಗುವಾಗ ಇಂದರಗಿ ಗ್ರಾಮದ ಸಮೀಪ ಬೊಲೆರೋ ವಾಹನ ಢಿಕ್ಕಿಯಾಗಿದೆ. ಅಪಘಾತದ ಬಳಿಕ ಬೊಲೆರೋ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯೆಯ ಹಿಜಾಬ್ ಎಳೆದ ಪ್ರಕರಣ | CM ನಿತೀಶ್ ಕುಮಾರ್, ಹೇಳಿಕೆ ನೀಡಿದ UP ಸಚಿವ ಸಂಜಯ್ ನಿಶದ್ ವಿರುದ್ಧ ದೂರು
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಸಂಜಯ್ ನಿಶದ್ ವಿರುದ್ಧ ಸಮಾಜವಾದಿ ಪಕ್ಷದ ನಾಯಕಿ ಸುಮಯ್ಯಾ ರಾಣಾ ಅವರು ಲಕ್ನೋದ ಕೈಸರ್ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ಪಾಟ್ನಾ ದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಹಿಡಿದು ಎಳೆಯುತ್ತಿರುವಂತೆ ಕಾಣಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಈ ವಿವಾದದ ನಡುವೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶದ್ ನೀಡಿದ ಹೇಳಿಕೆಗಳೂ ಟೀಕೆಗೆ ಗುರಿಯಾಗಿವೆ. ಹಿಜಾಬ್ ವಿಚಾರವಾಗಿ ಅವರು ಮಾಡಿದ ಟಿಪ್ಪಣಿಗಳು ಮಹಿಳೆಯ ಗೌರವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಸುಮಯ್ಯಾ ರಾಣಾ, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ವರ್ತನೆ ನಡೆಯುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಕೃತ್ಯಗಳು ಸಮಾಜದಲ್ಲಿ ತಪ್ಪಾದ ಸಂದೇಶವನ್ನು ನೀಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ರಾಣಾ ಅವರ ಪರ ವಕೀಲ ಮಿಶಮ್ ಝೈದಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಹ ನಡೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸಚಿವ ಸಂಜಯ್ ನಿಶದ್ ನೀಡಿರುವ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ವಭಾವದ್ದಾಗಿದ್ದು, ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ : ವಿದ್ಯಾರ್ಥಿನಿ ಆತ್ಮಹತ್ಯೆ
ಧಾರವಾಡ : ವಿದ್ಯಾರ್ಥಿನಿಯೋರ್ವಳು ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಧಾರವಾಡ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಬಳ್ಳಾರಿ ಮೂಲದ ಕಗ್ಗಲ್ ಗ್ರಾಮದ ಪಲ್ಲವಿ (24) ಆತ್ಮಹತ್ಯೆಗೈದ ವಿದ್ಯಾರ್ಥಿನಿ. ಆಕೆ ನೇಮಕಾತಿ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ. ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಲ್ಲವಿ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ನೇಮಕಾತಿ ವಿಳಂಬ ಕಾರಣಕ್ಕೆ ಪಲ್ಲವಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ʼಕೆಲವರು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ವಿದ್ಯಾರ್ಥಿಗಳ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ಯಾರೂ ಮಾಡಬಾರದು. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕುಟುಂಬಸ್ಥರ ಸ್ಪಷ್ಟನೆ : ಪಲ್ಲವಿಗೆ ಆರೋಗ್ಯ ಸಮಸ್ಯೆ ಇತ್ತು. ಅಲ್ಲದೆ, ಆಕೆ ಪೊಲೀಸ್ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಆದರೆ, ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಮತ್ತೆ ಸ್ಪರ್ಧಾ ಪರೀಕ್ಷೆ ಎದುರಿಸಲು ಧಾರವಾಡಕ್ಕೆ ಬಂದಿದ್ದಳು. ಮಗಳು ಓದುತ್ತಾಳೆ ಅನ್ನುವ ನಂಬಿಕೆ ಇತ್ತು. ಆದರೆ, ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಪಲ್ಲವಿ ತಂದೆ ಉತ್ತೆಪ್ಪ ಹೇಳಿದ್ದಾರೆ.
ನನಗೆ ಹೊಸ ಜೀವನ ನೀಡಿದ CSKಗೆ ಧನ್ಯವಾದಗಳು: ಸರ್ಫರಾಝ್
ಹೊಸದಿಲ್ಲಿ, ಡಿ.17: ಅಬುಧಾಬಿಯಲ್ಲಿ ಮಂಗಳವಾರ ನಡೆದ 2026ರ ಐಪಿಎಲ್ ನ ಮಿನಿ ಹರಾಜಿನ ವೇಳೆ ಮೂಲ ಬೆಲೆ 75 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಭಾರತೀಯ ಬ್ಯಾಟರ್ ಸರ್ಫರಾಝ್ ಖಾನ್, ‘‘ನನಗೆ ಹೊಸ ಜೀವನ ನೀಡಿದ ಸಿಎಸ್ಕೆಗೆ ತುಂಬಾ ಧನ್ಯವಾದಗಳು’ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಮಂಗಳವಾರ ರಾಜಸ್ಥಾನ ತಂಡದ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 27ರ ವಯಸ್ಸಿನ ಸರ್ಫರಾಝ್ ಅವರು 22 ಎಸೆತಗಳಲ್ಲಿ 73 ರನ್ ಗಳಿಸಿದ ಬೆನ್ನಿಗೇ ಸಿಎಸ್ಕೆ ತಂಡಕ್ಕೆ ಆಯ್ಕೆಯಾದರು. ಆರಂಭಿಕ ಸುತ್ತಿನ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸರ್ಫರಾಝ್ ಕೊನೆಗೂ ಸಿಎಸ್ಕೆ ತೆಕ್ಕೆಗೆ ಸೇರಿದರು. ಸಾಮಾಜಿಕ ಮಾಧ್ಯಮದ ಮೂಲಕ ಫ್ರಾಂಚೈಸಿಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 64ರ ಸರಾಸರಿಯಲ್ಲಿ ಹಾಗೂ 182.85ರ ಸ್ಟ್ರೈಕ್ರೇಟ್ನಲ್ಲಿ ಆರು ಇನಿಂಗ್ಸ್ಗಳಲ್ಲಿ ಒಟ್ಟು 256 ರನ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಬ್ಯಾಟರ್ ಸರ್ಫರಾಝ್ ಕೊನೆಗೂ ಐಪಿಎಲ್ನಲ್ಲಿ ಮತ್ತೊಮ್ಮೆ ಆಡುವ ಅವಕಾಶ ಪಡೆದರು. ಹರಾಜಿನುದ್ದಕ್ಕೂ ಸಕ್ರಿಯವಾಗಿದ್ದ ಸಿಎಸ್ಕೆ, ಹೊಸ ಆಟಗಾರರಾದ ಕಾರ್ತಿಕ್ ಶರ್ಮಾ ಹಾಗೂ ಪ್ರಶಾಂತ್ ವೀರ್ ಅವರನ್ನು ತಲಾ 14.20 ಕೋ.ರೂ.ಗೆ ಖರೀದಿಸಿತು. ಮ್ಯಾಟ್ ಹೆನ್ರಿ ಹಾಗೂ ರಾಹುಲ್ ಚಹಾರ್ರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿದೆ. ಹರಾಜಿಗಿಂತ ಮೊದಲು ಸಿಎಸ್ಕೆ ತಂಡವು ಸಂಜು ಸ್ಯಾಮ್ಸನ್ರನ್ನು 18 ಕೋ.ರೂ. ನೀಡಿ ಖರೀದಿಸಿತ್ತು. ದೀರ್ಘ ಸಮಯದಿಂದ ತಂಡದಲ್ಲಿದ್ದ ರವೀಂದ್ರ ಜಡೇಜ ಹಾಗೂ ಸ್ಯಾಮ್ ಕರನ್ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಸೇರಿದರು. ಐದು ಬಾರಿಯ ಚಾಂಪಿಯನ್ ಸಿಎಸ್ಕೆ, ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರನ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಈ ನಿರ್ಧಾರದಿಂದ 13 ಕೋ.ರೂ. ಉಳಿಸಿಕೊಂಡಿತು. ಸರ್ಫರಾಝ್ ಅವರು 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಸರ್ಫರಾಝ್ ಅವರು ಈ ಬಾರಿ ಐಪಿಎಲ್ ಗೆ ಪ್ರವೇಶಿಸಿದ್ದಾರೆ.
ಧರ್ಮಸ್ಥಳ ಕೇಸ್ನಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಮುಕ್ತಿ; ಪತ್ನಿಯಿಂದ ಬಾಂಡ್ ಸಲ್ಲಿಕೆ
ಧರ್ಮಸ್ಥಳ ಪ್ರಕರಣದ ಆರೋಪಿ 'ಬುರುಡೆ' ಪಾತ್ರಧಾರಿ ಚಿನ್ನಯ್ಯ, ಜಾಮೀನು ಸಿಕ್ಕ 23 ದಿನಗಳ ನಂತರ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಪತ್ನಿ ಮಲ್ಲಿಕಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಶ್ಯೂರಿಟಿ ಒದಗಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಸುಮಾರು 4 ತಿಂಗಳ ಜೈಲುವಾಸದ ಬಳಿಕ ಚಿನ್ನಯ್ಯ ಹೊರಬಂದಿದ್ದಾರೆ.
ಆನೆಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ : ಈಶ್ವರ್ ಖಂಡ್ರೆ
ಬೆಳಗಾವಿ : ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕೇಂದ್ರ ಸರಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ. ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರಕಾರಕ್ಕಿದೆ ಎಂದರು. ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆನೆ-ಮಾನವ ಸಂಘರ್ಷ ತಗ್ಗಿಸಲು ರಾಜ್ಯ ಸರಕಾರ 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದೆ.1775 ಕಿ.ಮೀ ಆನೆ ಕಂದಕ ನಿರ್ಮಿಸಿದ್ದೇವೆ. 1361 ಕಿ.ಮೀ. ಸೌರ ಬೇಲಿ ಹಾಕಿದ್ದೇವೆ. ಆದರೆ ಹಾಸನದಲ್ಲಿ ಮತ್ತು ಕೊಡಗಿನಲ್ಲಿ ಹಲವು ವರ್ಷದಿಂದ ತಲಾ 100ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಗಿವೆ. ಅಲ್ಲಿ ತೋಟ ಮತ್ತು ಕಾಡು ಒಂದೇ ರೀತಿ ಇದೆ ಎಂದರು. ತಾವು ಸಚಿವರಾದ ತರುವಾಯ 8 ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ಆನೆಗಳ ಕಾರಿಡಾರ್ ವಿಭಜನೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜ್ಯ ಸರಕಾರ ರೈತರ ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳುತ್ತಿದೆ. ವನ್ಯಜೀವಿಗಳಿಂದ ಆಗಿರುವ ಬೆಳೆ ಹಾನಿಯ ಸಂಪೂರ್ಣ ಪರಿಹಾರ ನೀಡಲಾಗಿದೆ. ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು. ಎಲ್ಲರೂ ಸೇರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ: ಮಾಜಿ ಸಚಿವ ಅಮರೇಗೌಡ ಪಾಟೀಲ್
ಲಿಂಗಸಗೂರು.ನ.17- ಕೇವಲ ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಡಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಲಿಂಗಸುಗೂರು ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಆಯೋಜಿಸಿದ 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ, ನಾನು ನಾಗರಾಳ ಮಂಡಲ ಪಂಚಾಯತಿ ಪ್ರಧಾನರಾಗಿದ್ದಾಗ ನಮ್ಮ ಪಂಚಾಯತಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ನನ್ನ ಹಿರಿಯ ಸಹೋದರ ಅನ್ನಾದಾನಿಗೌಡ ಬಯ್ಯಾಪುರ ಬೆಂಬಲ ಹಾಗೂ ಆಶೀರ್ವಾದ ನನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಜನತಾ ಪಕ್ಷದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಲಿಂಗಸುಗೂರ ಕ್ಷೇತ್ರದಿಂದ ಮೂರು ಭಾರಿ ಶಾಸಕನಾಗಿದ್ದ ನಾನು ಶೈಕ್ಷಣಿಕ, ನೀರಾವರಿ ಮೂಲಸೌಕರ್ಯಗಳಿಗಾಗಿ ಶ್ರಮಿಸಿದೇನೆ. ಅಲ್ಲದೇ ಕುಷ್ಟಗಿ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿದ್ದು ಕಾರಣ ಕ್ಷೇತ್ರದ ಜನರು ನನ್ನ ಮೇಲೆಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಡಿ.ಜಿ.ಗುರಿಕಾರ, ಡಾ.ನಾಗನಗೌಡ ಪಾಟೀಲ್ ಬಯ್ಯಾಪೂರ, ಡಾ.ದಿವಟರ್, ಬಸವರಾಜಗೌಡ ಗಣೇಕಲ್, ಗುಂಡಪ್ಪ ನಾಯಕ, ಹನುಮಂತಪ್ಪ ಕಂದಗಲ್, ಸಿದ್ರಾಮಪ್ಪ ಸಾಹುಕಾರ, ಪ್ರಮೋದ ಕುಲಕರ್ಣಿ, ಅನಿಷಾ ಪಾಷಾ, ಶಶಿಧರ ಪಾಟೀಲ್, ಡಾ.ಡಿ.ಹೆಚ್.ಕಡದಳ್ಳಿ, ವಕೀಲರ ಸಂಘದ ಅಧ್ಯಕ್ಷ ಭೂಪನ ಗೌಡ ಪಾಟೀಲ್, ಸೋಮಶೇಖರ ಐದನಾಳ, ಬಸವರಾಜ ಅಂಗಡಿ, ಜಗದೀಶಗೌಡ, ಚೆನ್ನರೆಡ್ಡಿ ಬಿರಾದರ ಸೇರಿ ಹಲವರು ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣ ಬಳಕೆ ಮುನ್ನ ಎಚ್ಚರಿಕೆ ಅಗತ್ಯ: ವೆಂಕಟೇಶ್ ಹೊಗೆಬಂಡಿ
ಲಿಂಗಸುಗೂರು: ಮೊಬೈಲ್, ಆನ್ ಲೈನ್ ಶಾಪಿಂಗ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ರಾಯಚೂರಿನ ಸೈಬರ್ ಕ್ರೈಂ ಉಪ ಅಧೀಕ್ಷಕ ವೆಂಕಟೇಶ್ ಹೊಗೆಬಂಡಿ ತಿಳಿಸಿದರು. ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟೇಶ ಹೊಗೆಬಂಡಿ, ಸಾಮಾಜಿಕ ಜಾಲತಾಣ ನಮ್ಮ ದಿನನಿತ್ಯದ ಆಗ ಹೋಗುಗಳ ತಿಳುವಳಿಕೆಗೆ ಬಳಕೆ ಮಾಡುವಾಗ ನಮಗೆ ಅರಿವಿರದೇ ಮೋಸಕ್ಕೆ ಒಳಗಾಗುತ್ತೇವೆ. ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮೋಹದ ಜಾಲದೊಳಗೆ ಸಿಲುಕಿ ವಂಚನೆಗೆ ಒಳಗಾಗದೇ, ಸೈಬರ್ ಕೃತ್ಯಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಇರಬೇಕು. ಈ ದೃಷ್ಟಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ತಹಶೀಲ್ದಾರ್ ಸತ್ಯಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸೇರಿ ಹಲವರು ಉಪಸ್ಥಿತರಿದ್ದರು.
ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿ ಚಲೋ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ರಾಯಚೂರು: ಪರಿಶಿಷ್ಟ ಜಾತಿಗಳ ಸಂಪೂರ್ಣ ಒಳ ಮೀಸಲಾತಿ ಕಾನೂನಾತ್ಮಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಯಚೂರು ನಗರದಿಂದ ಬೆಳಗಾವಿಗೆ ತೆರಳುತ್ತಿದ್ದ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರನ್ನು ಲಿಂಗಸುಗೂರು ತಾಲೂಕಿನ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಚಲೋ ಹೋರಾಟದ ವೇಳೆ, ಕಾರ್ಯಕರ್ತರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾನೂನು ರೂಪದಲ್ಲಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು. ಚಳಿಗಾಲ ಅಧಿವೇಶನದಲ್ಲೇ ಸಂಪೂರ್ಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಹಾಗೂ ಮುಂದಿನ ರಾಜಕೀಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಕ್ತ ಮೀಸಲಾತಿ ಕಲ್ಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು. ಈ ಹೋರಾಟದಲ್ಲಿ ರಂಜಿತ್ ದಂಡೋರ, ಕಾಶಪ್ಪ ಹೆಗ್ಗಣ್ಗೆರ, ಗಂಗಣ್ಣ ಸಿದ್ದಾಪುರ, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಭೀಮೇಶ್ ತುಂಟಾಪುರ, ಯಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Robin Uthappa On Dhoni Retirement- ಮಹೇಂದ್ರ ಸಿಂಗ್ ಧೋನಿ ಅವರು 2026ರ ಐಪಿಎಲ್ ನಂತರ ಕ್ರಿಕೆಟ್ನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆಯುವುದು ಪಕ್ಕಾ ಎಂದು ಸಿಎಸ್ ಕೆಯ ಅವರ ಹಳೇ ಸಹೋದ್ಯೋಗಿ ರಾಬಿನ್ ಉತ್ತಪ್ಪ ಖಚಿತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ ಯುವ ಪ್ರತಿಭೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, 2026ರ ಸೀಸನ್ ಬಳಿಕ ಧೋನಿ ಅವರು ಮೆಂಟರ್ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ದೇವದುರ್ಗ| ಕೋಣಚಪ್ಪಳಿ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು; ಕ್ರಮಕ್ಕೆ ಒತ್ತಾಯ
ದೇವದುರ್ಗ: ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ಇಲ್ಲದೇ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವ ಕಾರಣ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂಗನಗೌಡ ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈರ್ಮಲ್ಯ ಸಮಿತಿ ಸರಕಾರದ ಆದೇಶದಂತೆ ಕಾರ್ಯ ನಿರ್ವಹಿಸುತಿಲ್ಲ. ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ನೀರಿನಿಂದ ಅನೇಕ ರೋಗಗಳು ಬರುತ್ತಿದೆ. ಮುಖ್ಯ ರಸ್ತೆಯಲ್ಲಿ ಇರುವ ಚರಂಡಿಯ ಹೂಳು ತೆಗೆಯುವ ಕೆಲಸ ಕೂಡಲೇ ಆರಂಭಿಸಬೇಕು. ಅಕ್ಕ ಪಕ್ಕದ ಹೊಲದ ಮಾಲಕರು ಹಾಗೂ ತಕರಾರು ಮಾಡುವವರು ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ನೈರ್ಮಲ್ಯ ಸಮಿತಿ ಸದಸ್ಯರು ಕಾಟಾಚಾರಕ್ಕೆ ಸಮಿತಿ ಮಾಡಿ ಜನ ಸಾಮಾನ್ಯರ ಜೊತೆ ಚೆಲ್ಲಾಟವಾಡುತಿದ್ದಾರೆ. ಕೂಡಲೇ ಸಂಬಂಧಪಟ್ಟ ಸಮಿತಿಯ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಸಂಗನಗೌಡ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ವತಿಯಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿತೀಶ್ ಕೆ, ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕು. ಅಲ್ಲದೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶದಲ್ಲಿನ ಅಂಶಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ನಾಯಿ ಹಿಡಿಯುವ ತಂಡವು ಸಂಬಂಧಪಟ್ಟ ಸಾರ್ವಜನಿಕ ಸಂಸ್ಥೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ತಿಳಿಸಬೇಕು. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಹಿಡಿದ ನಂತರ ಅವುಗಳಿಗೆ ಆಶ್ರಯ ನೀಡಲು ನಿಗದಿತ ಕಟ್ಟಡ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅಲ್ಲದೆ ರೇಬೀಸ್ ಪೀಡಿತ ನಾಯಿಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪ ನಿರ್ದೇಶಕರಾದ ಪೋಮ್ಸಿಂಗ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚಂದ್ರಶೇಖರ, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಿಮ್ಮಪ್ಪ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
MGNREG ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ರಾಯಚೂರು: ಯುಪಿಎ ಸರಕಾರ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಬದಲಾಯಿಸಿ ಗಾಂಧೀಜಿ ಅವರ ಹೆಸರು ತೆಗೆದು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾನಿರತರು ಮಹಾತ್ಮ ಗಾಂಧೀಜಿ ಅವರ ಪೋಸ್ಟರ್ಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೇಣ್ಣೆ ಮಾತನಾಡಿ, ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಎಂದು ಮಾಡಿರುವುದು ಖಂಡನೀಯ. ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಮಹಾತ್ಮಾ ಗಾಂಧಿ ಅವರು ಏನು ಎನ್ನುವುದು ಗೊತ್ತಿದೆ. ಬಿಜೆಪಿ ಸರಕಾರ ಆರ್ ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಹಾತ್ಮಾ ಗಾಂಧಿ ಅವರ ಹೆಸರು ತೆಗೆದುಹಾಕಿದೆ ಎಂದು ದೂರಿದರು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಮುಂದುವರಿಸದಿದ್ದರೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನರೇಗಾ ಯೋಜನೆ ಬಡವರ ಪರವಾದ ಉದ್ಯೋಗ ಖಾತ್ರಿ ಯೋಜನೆ. ಅದರ ಹೆಸರನ್ನು ಬದಲಿಸುವ ಅಗತ್ಯವೇನು? ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರಕಾರ ದೇಶದ ಮಹಾನ್ ನಾಯಕನಿಗೆ ಅಪಮಾನ ಮಾಡುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಆರತಿ ಚಂದ್ರಶೇಖರ, ಸುರೇಖಾ, ಕವಿತಾ, ಪ್ರತಿಭಾ ರೆಡ್ಡಿ ವಂದಾನ, ರೇಹಾನ ಬೇಗಂ, ಹರಿವಿನ್ ಬೇಗಂ, ಪಿ ಮಾದೇವಿ, ಲಕ್ಷ್ಮಿ ನರಸಿಂಹಲು, ಬಿ.ಉಮಾ ಜ್ಯೋತಿ, ಅಮಿತಾ ಬೇಗಂ, ನಿರ್ಮಲಾ ಭಂಡಾರಿ, ಸುರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು | ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 190 ಟನ್ ಯೂರಿಯಾ ವಶ
ಬೆಂಗಳೂರು : ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 190 ಟನ್ ಯೂರಿಯಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ನಗರದ ಹೊರವಲಯದಲ್ಲಿರುವ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ದಾಸ್ತಾನು ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಕಾಳಸಂತೆಯಲ್ಲಿ 200 ರೂ. ಯೂರಿಯಾವನ್ನು 1,500 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ಮಂಗಳೂರು| ಜಿಎಸ್ಟಿ ಸುಧಾರಣೆಗಳು 2.0: ವಿಚಾರ ಸಂಕಿರಣ
ಮಂಗಳೂರು, ಡಿ.17: ‘ಜಿಎಸ್ಟಿ ಸುಧಾರಣೆಗಳು 2.0, ಜಿಎಸ್ಟಿಆರ್-9 ಫೈಲಿಂಗ್ ಮತ್ತು ಜಿಎಸ್ಟಿಯಲ್ಲಿನ ಇತರ ಇತ್ತೀಚಿನ ಬದಲಾವಣೆಗಳು’ ಕುರಿತು ವಿಚಾರಸಂಕಿರಣವನ್ನು ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಆಶ್ರಯದಲ್ಲಿ ನಗರದ ಬಂದರ್ನ ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೆಸಿಸಿಐ ಪರೋಕ್ಷ ತೆರಿಗೆ ಸಮಿತಿಯ ಅಧ್ಯಕ್ಷರಾದ ಸಿಎ ಕೇಶವ ಎನ್. ಬಳ್ಳಕುರಾಯ ಅವರು ‘ಜಿಎಸ್ಟಿ 2.0 ಹೆಚ್ಚು ನಾಗರಿಕ-ಕೇಂದ್ರಿತ, ವ್ಯವಹಾರ-ಸ್ನೇಹಿ ಮತ್ತು ಸರಳೀಕೃತ ತೆರಿಗೆ ಆಡಳಿತದತ್ತ ಬದಲಾವಣೆಯನ್ನು ಸೂಚಿಸುತ್ತದೆ’ ಎಂದು ವಿವರಿಸಿದರು ಸಿಎ ಸಬಾನಾ ಅವರು 56ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಪ್ರಮುಖ ಶಿಫಾರಸುಗಳನ್ನು ಮತ್ತು ಜಿಎಸ್ಟಿ ಸುಧಾರಣೆಗಳು , ಜಿಎಸ್ಟಿ ದರಗಳ ಪ್ರಸ್ತಾವಿತ ಸರಳೀಕರಣ ಮತ್ತು ಅನುಷ್ಠಾನದ ಸಮಯದ ಬಗ್ಗೆ ತಿಳಿಸಿದರು. ಸಿಎ ಶ್ರದ್ಧಾ ಸಾಂಘ್ವಿ ಅವರು ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯ ಕಾರ್ಯಾಚರಣೆಯನ್ನು ಅವರು ವಿವರಿಸಿದರು. ಕೆಸಿಸಿಐ ಖಜಾಂಚಿ ಸಿಎ ಅಬ್ದುರ್ರಹಿಮಾನ್ ಮುಸ್ಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಸ್ವಾಗತಿಸಿ ಲೆಕ್ಕಪತ್ರ ವೃತ್ತಿಪರರ ಜ್ಞಾನವನ್ನು ನವೀಕರಿಸುವಲ್ಲಿ ಇಂತಹ ವಿಚಾರ ಸಂಕಿರಣಗಳ ಅಗತ್ಯತೆಯ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್ ವಂದಿಸಿದರು.
ಕಾರಾಗೃಹಗಳ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್, ಗಾಂಜಾ ವಶ: ಅಲೋಕ್ ಕುಮಾರ್
ಬೆಂಗಳೂರು : ರಾಜ್ಯದಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್ಗಳು ಮತ್ತು ಗಾಂಜಾ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ(ಕಾರಾಗೃಹ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜೈಲಿನಿಂದ ಆರು ಮೊಬೈಲ್ ಫೋನ್ಗಳು ಮತ್ತು ನಾಲ್ಕು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೈಸೂರು ಜೈಲಿನಿಂದ ಒಂಬತ್ತು ಮೊಬೈಲ್ ಫೋನ್ಗಳು ಮತ್ತು 11 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಬೆಳಗಾವಿ ಜೈಲಿನಲ್ಲಿ ನಾಲ್ಕು ಮೊಬೈಲ್ ಫೋನ್ಗಳು ಮತ್ತು ಹೊರಗಿನಿಂದ ಎಸೆದ 366 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಜೈಲಿನಿಂದ ನಾಲ್ಕು ಮೊಬೈಲ್ ಫೋನ್ಗಳು ಮತ್ತು ವಿಜಯಪುರ ಜೈಲಿನಿಂದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ. ಜೈಲುಗಳೊಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ತಿಳಿಸಿದರು.
ಬಲವಂತವಾಗಿ ವೈದ್ಯೆಯ ಹಿಜಾಬ್ ತೆಗೆದ ಬಿಹಾರ ಸಿಎಂ ನಿತೀಶ್ ಕುಮಾರ್ ಕೃತ್ಯ ಖಂಡನೀಯ: ಲತಾ ರವಿ ರಾಠೋಡ್
ಕಲಬುರಗಿ: ಸಾರ್ವಜನಿಕ ಕಾರ್ಯಕ್ರಮದ ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮಹಿಳಾ ವೈದ್ಯೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆಸಿರುವ ಘಟನೆ ಖಂಡನೀಯ ಎಂದು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ್ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಲವಂತದಿಂದ ಹಿಜಾಬ್ ತೆಗೆದಿರುವುದು ಖಂಡನಾರ್ಹ. ಈ ಘಟನೆ ಮಹಿಳೆಯರ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಮಾಡುವುದಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಈ ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ, ನ್ಯಾಯ ಮತ್ತು ಮಹಿಳೆಯರ ಗೌರವವನ್ನು ಕಾಪಾಡುವುದು ಸರ್ಕಾರದ ಮತ್ತು ಸಮಾಜದ ಜವಾಬ್ದಾರಿಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಒಳನುಸುಳುವಿಕೆ ಯತ್ನ: ಬಾಂಗ್ಲಾ ಗಡಿಯಲ್ಲಿ ಗರಿಷ್ಠ: ಗೃಹ ಸಚಿವಾಲಯ
ಜನವರಿ-ನವೆಂಬರ್ ನಡುವೆ 1100 ಪ್ರಕರಣಗಳು ಪತ್ತೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರಿನ ಪ್ರಮುಖ ಹೆದ್ದಾರಿಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಮಾಹಿತಿ ಫಲಕಗಳನ್ನು ಅಳವಡಿಸಿದೆ. ಇದು ತುರ್ತು ಸೇವೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಹೆದ್ದಾರಿ ವಿಸ್ತರಣೆ, ಟೋಲ್ ಪ್ಲಾಜಾ, ರಸ್ತೆ ಬದಿಯ ಸೌಲಭ್ಯಗಳು ಮತ್ತು ತುರ್ತು ಸಂಪರ್ಕಗಳ ಮಾಹಿತಿಯನ್ನು ಒದಗಿಸುತ್ತದೆ. ಆದರೆ, ಸಾರ್ವಜನಿಕರು ಈ ಫಲಕಗಳು ಉಪಯುಕ್ತ ಮಾಹಿತಿಯನ್ನು ಒದಗಿಸುವುದಿಲ್ಲ ಮತ್ತು ತೆರಿಗೆ ಹಣ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಜನಾಡಿ: ನಮ್ಮ ಜೀವನದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳು ಆಗಬೇಕು. ಶಿಕ್ಷಣ ಎಂಬುದು ಅಭಿವೃದ್ಧಿ ಗೆ ಇರುವ ದಾರಿಯಾಗಿದ್ದು, ಇದಕ್ಕೆ ಒತ್ತು ನೀಡಬೇಕು ಎಂದು ಉಡುಪಿ ಖಾಝಿ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ಅಭಿಪ್ರಾಯ ಪಟ್ಟರು. ಅವರು ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ 11 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ,ದುಆ ಆಶೀರ್ವಚನ ನೀಡಿ ಮಾತನಾಡಿದರು. ನಮ್ಮ ಜೀವನ ಯಾವಾಗ ಕೊನೆ ಎಂದು ಹೇಳಲು ಸಾಧ್ಯವಿಲ್ಲ. ಬದುಕಿರುವಷ್ಟು ದಿನ ನಾವು ಉತ್ತಮ ಹಾದಿಯಲ್ಲಿ ಸಾಗಬೇಕು.ಇಸ್ಲಾಮಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಸಯ್ಯಿದ್ ವಿ.ಪಿ.ಎ.ಅಬ್ದುಲ್ ರಹ್ಮಾನ್ ತಂಙಳ್ ದಾರಿಮಿ ಆಟೀರಿ , ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ, ಧಾರ್ಮಿಕ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮ ದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮೊಹಮ್ಮದ್ ಮಸೂದ್ ಸಅದಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಕಲ್ಕಟ್ಟ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ, ಸದ್ ರ್ ಮೊಹಮ್ಮದ್ ಸ ಈ ದ್ ಸಅದಿ, ಇರ್ಷಾದ್ ರಝ್ವಿ,ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮೈಸೂರು ಬಾವ, ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ,ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮೊಹಮ್ಮದ್, ಅಬ್ದುಲ್ ರಹ್ಮಾನ್ ರಝ್ವಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ| VB–G RAM G ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: VB–G RAM G ಮಸೂದೆ ವಾಪಸ್ಸಿಗೆ ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಕೇಂದ್ರದ ಹೊಸ ಮಸೂದೆಯಿಂದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಹೊಸ ಮಸೂದೆಯನ್ನು ಕೇಂದ್ರದ ನಿಯಂತ್ರಣವನ್ನು ವಿಸ್ತರಿಸುವ ಮತ್ತು ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ವರ್ಗಾಯಿಸುವ ಪ್ರಯತ್ನ ನಡೆದಿದೆ. ಮಸೂದೆಯು ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ಇದು ಪ್ರತಿ ವರ್ಷ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಉದ್ಯೋಗದ ಕಾನೂನು ಖಾತರಿಯನ್ನು ಒದಗಿಸುತ್ತದೆ. ಆದರೆ, ಈಗ ಯೋಜನೆಯ ವೆಚ್ಚದ ಶೇ.40 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿದೆ. ಹೀಗಾಗಿ ಇದು ಆರ್ಥಿಕ ಹೊರೆಯನ್ನು ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಡಾ.ಮೀನಾಕ್ಷಿ ಬಾಳಿ, ಮೇಘರಾಜ ಕಠಾರೆ, ಸಲ್ಮಾನ್ ನಗರ, ಪ್ರಮೋದ್ ಪಾಂಚಾಳ, ಶಾಂತಾ ಘಂಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೊಲೀಸರ ಕಾರ್ಯಾಚರಣೆ : ಮಂಗಳೂರು ಕಾರಾಗೃಹದಲ್ಲಿ 4 ಮೊಬೈಲ್ ಫೋನ್ ಪತ್ತೆ
ಮಂಗಳೂರು, ಡಿ.17: ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಜೈಲಿನ ಕೊಠಡಿಯೊಳಗೆ ಒಟ್ಟು 4 ಮೊಬೈಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಾಗಹ ಅಧೀಕ್ಷಕ ಶರಣಬಸಪ್ಪ ಅವರು ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾೀನ ಕೈದಿಗಳು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ದಿನ ಮತ್ತೆ ಅನಿರೀಕ್ಷಿತ ತಪಾಸಣೆ ಮಾಡಲಾಗಿತ್ತು. ಸಂಜೆ ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್ಗಳನ್ನು ಅಲ್ಲಾಡಿಸುತ್ತಾ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಮಂಗಳೂರು ನಗರ ಪೊಲೀಸರು, ವಿಶೇಷ ಕಾರ್ಯಪಡೆ ಹಾಗೂ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರಾಗಹದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೇ ಸಮಯದಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ 2 ಕೊಠಡಿಗಳಲ್ಲಿ ಗಲಾಟೆಗೆ ಸಂಬಂಸಿದಂತೆ ಪರಿಸ್ಥಿತಿ ನಿಯಂತ್ರಣಗೊಂಡ ಅನಂತರ ಸಿ.ಸಿ.ಟಿ.ವಿ ದಶ್ಯಾವಳಿಗಳನ್ನು ಪರಿಶೀಲಿಸಿದಾಗ ಗಲಾಟೆಯಲ್ಲಿ ‘ಎ’ ವಿಭಾಗದ ಮೊಯಿದ್ದಿನ್ ಫರಾದ್, ಸರ್ಫರಾಜ್, ಮೊಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಜೀದ್, ಮೊಹಮ್ಮದ್ ಸಾಯಿಲ್ ಅಕ್ರಂ ಮತ್ತು ಮಹಮ್ಮದ್ ಹನೀಫ್ ಹಾಗೂ ‘ಬಿ’ ವಿಭಾಗದ ಲತೇಶ್ ಜೋಗಿ , ಮಂಜುನಾಥ , ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ, ಗುರುರಾಜ ಹಾಗೂ ಸುಮಂತ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿದ್ದು ,ಅವರ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ನೆಹರು ದಾಖಲೆಗಳು ನಾಪತ್ತೆಯಾಗಿಲ್ಲ, ಸೋನಿಯಾರಿಗೆ ಕಳುಹಿಸಿದ್ದ ಖಾಸಗಿ ಪತ್ರಗಳನ್ನು ಪತ್ತೆ ಹಚ್ಚಲಾಗುತ್ತಿಲ್ಲ: ಕೇಂದ್ರ
ಹೊಸದಿಲ್ಲಿ,ಡಿ.17: ನೆಹರು ಅವರಿಗೆ ಸಂಬಂಧಿಸಿದ ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು 2008ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಕಳುಹಿಸಲಾಗಿತ್ತು ಮತ್ತು ಆಗಿನಿಂದ ಅವುಗಳನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಸಂಸ್ಕೃತಿ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ (ಪಿಎಂಎಂಎಲ್) ಸದಸ್ಯ ರಿಜ್ವಾನ್ ಕಾದ್ರಿ ಅವರು ಸೆಪ್ಟಂಬರ್ನ ಲ್ಲಿ ಸೋನಿಯಾರಿಗೆ ಪತ್ರ ಬರೆದು,ಅವರ ವಶದಲ್ಲಿರುವ ನೆಹರು ದಾಖಲೆಗಳನ್ನು ಮರಳಿಸುವಂತೆ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ,ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ ಎಂದು ಕೆಲವು ದಿನಗಳ ಹಿಂದೆ ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿತ್ತು. ಸಚಿವಾಲಯದ ಹೇಳಿಕೆಯ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು ಸರಕಾರವು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಬುಧವಾರದ ಸ್ಪಷ್ಟೀಕರಣ ಹೊರಬಿದ್ದಿದೆ. ನೆಹರು ಅವರ ಎಲ್ಲ ಖಾಸಗಿ ಕುಟುಂಬ ಪತ್ರಗಳು ಮತ್ತು ಟಿಪ್ಪಣಿಗಳನ್ನು ಮರಳಿ ಪಡೆಯಲು ಬಯಸಿದ್ದಾರೆ ಎಂದು ಅವರ ಪ್ರತಿನಿಧಿ ಎಂ.ವಿ.ರಾಜನ್ 29,ಎಪ್ರಿಲ್ 2008ರಂದು ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. ಅದರಂತೆ ನೆಹರು ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು ಸೋನಿಯಾರಿಗೆ ಕಳುಹಿಸಲಾಗಿತ್ತು. ಹೀಗಾಗಿ ಅವು ಎಲ್ಲಿವೆ ಎನ್ನುವುದು ತಿಳಿದಿರುವುದರಿಂದ ಪಿಎಂಎಂಎಲ್ ನಿಂದ ನೆಹರುಗೆ ಸಂಬಂಧಿಸಿದ ಯಾವುದೇ ದಾಖಲೆಯು ನಾಪತ್ತೆಯಾಗಿಲ್ಲ ಎಂದು ಸಚಿವಾಲಯವು ಬುಧವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಪಿಎಂಎಂಎಲ್ನಿಂದ ಬರೆಯಲಾಗಿದ್ದ ಪತ್ರಗಳು ಸೇರಿದಂತೆ ಈ ಎಲ್ಲ ದಾಖಲೆಗಳನ್ನು ಮರಳಿಸುವಂತೆ ತಾನು ಸೋನಿಯಾರ ಕಚೇರಿಯೊಂದಿಗೆ ನಿರಂತರ ಪತ್ರ ವ್ಯವಹಾರವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿರುವ ಸಚಿವಾಲಯವು,ಭಾರತದ ಮೊದಲ ಪ್ರಧಾನಿಗೆ ಸಂಬಂಧಿಸಿದ ದಾಖಲೆಗಳು ದೇಶದ ಪರಂಪರೆಯ ಭಾಗವಾಗಿದ್ದು, ಖಾಸಗಿ ಆಸ್ತಿಯಲ್ಲ. ಅವು ಪಿಎಂಎಂಎಲ್ ಬಳಿ ಇರುವುದು ಮತ್ತು ಸಂಶೋಧನೆಗಾಗಿ ನಾಗರಿಕರು ಮತ್ತು ವಿದ್ವಾಂಸರು ಅವುಗಳಿಗೆ ಪ್ರವೇಶ ಹೊಂದಿರುವುದು ಅಗತ್ಯವಾಗಿದೆ ಎಂದೂ ಹೇಳಿದೆ.
ಮಂಗಳೂರು: ಕಾರು ಚಾಲಕನಿಗೆ ದಂಡ ವಿಧಿಸಿದ ನ್ಯಾಯಾಲಯ
ಮಂಗಳೂರು, ಡಿ.17: ಪಾದಚಾರಿಗಳಿಗೆ ಕಾರು ಹೊಡೆದ ಕಾರ್ನ ಚಾಲಕನಿಗೆ ನ್ಯಾಯಾಲಯ ದಂಡ ವಿಧಿಸಿದೆ. ಆರೋಪಿ ಚಾಲಕ ಎಂ.ಶ್ರೀಕಷ್ಣ 2023ರ ಡಿ.24ರಂದು ಪಡೀಲ್ ಕಡೆಯಿಂದ ಬಿಕರ್ಣಕಟ್ಟೆ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿ ಇಬ್ಬರು ಪಾದಚಾರಿಗಳಿಗೆ ಢಿಕ್ಕಿ ಹೊಡೆಯಲು ಕಾರಣರಾಗಿರುವುದಾಗಿ ಆರೋಪಿಸಲಾಗಿತ್ತು. ಆರೋಪಿ ಚಾಲಕ ಎಂ.ಶ್ರೀಕಷ್ಣ ಸ್ಕೂಟರೊಂದನ್ನು ಎಡಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಎಡಬದಿಗೆ ಹೋಗುವ ಭರದಲ್ಲಿ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋದ ಪರಿಣಾಮ ಇಬ್ಬರು ಪಾದಚಾರಿಗಳಿಗೆ ಢಿಕ್ಕಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂದರ್ಭದಲ್ಲಿ ಕಾರು ಚಾಲಕನ ಚಾಲನಾ ಅನುಜ್ಞಾಪತ್ರದ ಅವಧಿ ಮುಕ್ತಾಯಗೊಂಡಿತ್ತು. ಅಪಘಾತ ಪಡಿಸಿದ ಕಾರಿನ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಯು ಊರ್ಜಿತದಲ್ಲಿ ಇರಲಿಲ್ಲ. ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾೀಶರಾದ ಫವಾಜ್ ಪಿ.ಎ ಅವರು ಡಿ.15ರಂದು ಆರೋಪಿಗೆ 8,500 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪನಿರೀಕ್ಷಕ ಈಶ್ವರ ಸ್ವಾಮಿ ಅವರು ಭಾಗಶ: ತನಿಖೆ ನಡೆಸಿ ಪೊಲೀಸ್ ಉಪನಿರೀಕ್ಷಕ ವೈ.ಎನ್.ಚಂದ್ರಮ್ಮ ಪೂರ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ಅವರು ಸಾಕ್ಷಿ ವಿಚಾರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕ ಅರೋನ್ ಡಿ ಸೋಜ ವಿಟ್ಲ ಅವರು ವಾದ ಮಂಡಿಸಿದ್ದರು.
ಮುದ್ರಣ ತಂತ್ರಜ್ಞಾನಕ್ಕೆ ಜೀವ ಸಂಕುಲ ಇರುವವರೆಗೂ ಸಾವಿಲ್ಲ: ಡಾ.ವಸುಂಧರಾ ಭೂಪತಿ
ಬಳ್ಳಾರಿ: ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ವಸುಂಧರಾ ಭೂಪತಿ, ಎಐ, ಇ-ಪುಸ್ತಕಗಳು, ಪ್ರಿಂಟ್ ಆನ್ ಡಿಮಾಂಡ್(ಪಿಓಡಿ) ಮುಂತಾದ ತಂತ್ರಜ್ಞಾನದ ಯುಗದಲ್ಲಿ ಕೇವಲ ಗಂಟೆಯಲ್ಲಿಯೇ ಪುಸ್ತಕವನ್ನು ಹೊರತರಬಹುದು. ಆದರೆ ಮುದ್ರಣವಾಗುವ ಪುಸ್ತಕಗಳು, ದಿನನಿತ್ಯ ಬಳಸುವ (ಕರೆನ್ಸಿ) ನೋಟುಗಳು ಮುದ್ರಣದ ಅವಿಭಾಜ್ಯ ಅಂಗವಾಗಿದ್ದು, ಅವುಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಕ್ರಿ.ಶ. 400ರಲ್ಲಿ ಚೀನಾದಲ್ಲಿ ಉಗಮವಾದ ಹಿರಾಕಸೂತ್ರ ಎಂಬ ಮುದ್ರಣವು ಮುಂದೆ ಜಪಾನ್, ಜರ್ಮನಿ ದೇಶಗಳಲ್ಲಿ ಅಚ್ಚುಮೊಳೆಗಳ ಮೂಲಕ ಮುಂದುವರೆದು ಗುಟೆನ್ಬರ್ಗ್ ಪ್ರೆಸ್ ವಿಕಸನಕ್ಕೆ ನಾಂದಿ ಹಾಡಿದವು. ಕ್ರಿ.ಶ.1556ರಲ್ಲಿ ಭಾರತದಲ್ಲಿ ಪ್ರಥಮ ಮುದ್ರಣ ಯಂತ್ರವು ಗೋವಾದಲ್ಲಿ ಬಂದಿಳಿಯಿತು. 1578ರಲ್ಲಿ ಭಾರತದ ಪ್ರಥಮ ಭಾಷಾ ಪುಸ್ತಕವಾದ ತಮಿಳಿನ ಥಂಬಿರನ್ ಒನಕ್ಕಮ್ ಪ್ರಕಟವಾಯಿತು ಎಂದು ಹೇಳಿದರು. ವಿವಿಯ ಸಿಂಡಿಕೇಟ್ ಸದಸ್ಯರಾದ ಅಮರೇಶ್ ನುಗಡೋಣಿ ಮಾತನಾಡಿ, ಲೇಖಕ, ಪ್ರಕಾಶಕ, ಓದುಗ ಮತ್ತು ಪುಸ್ತಕಗಳು ಎಂಬ ನಾಲ್ಕು ದಿಸೆಯ ಅನನ್ಯವಾದ ಸಮಾಗಮ ನೆಲೆಗೊಂಡಿದೆ. 10ನೇ ಶತಮಾನದಲ್ಲಿ ಶಿಕ್ಷಿತರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ ವಚನಕಾರರು, ಸಂತಕವಿಗಳು ತಮ್ಮ ಅನುಭವ, ಸಂವಾದ, ಚರ್ಚೆಗಳು ಎಂಬ ಮೌಖಿಕ ಸಂವಹನದ ಮೂಲಕ ಜನಪದ ಕಾವ್ಯಗಳನ್ನು ಎಲ್ಲೆಡೆ ಹರಡಿದರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಕಲೆ, ಸಾಹಿತ್ಯದ ಆಸಕ್ತಿ ಎಲ್ಲರಲ್ಲಿಯೂ ಕ್ಷೀಣಿಸುತ್ತಿದೆ. ಓದುವ, ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ವಿವಿಧ ತಾಂತ್ರಿಕ ಕೋರ್ಸ್ಗಳನ್ನು ಶೀಘ್ರದಲ್ಲೆ ಆರಂಭಿಸುವುದಾಗಿ ಕುಲಪತಿಗಳು ಘೋಷಿಸಿದರು. ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ವಿವಿಯ ಸಿಂಡಿಕೇಟ್ ಸದಸ್ಯರಾದ ಬಿ ಪೀರ್ಬಾಷಾ, ಶಿವಕುಮಾರ್ ಕೆ ಮತ್ತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನ.ರವಿಕುಮಾರ್ ವೇದಕೆಯಲ್ಲಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿವಿಯ ಪ್ರಸಾರಾಂಗದ ಪ್ರಭಾರ ನಿರ್ದೇಶಕರಾದ ಪ್ರೊ.ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಪ್ರೊ ಅರುಣ್ಕುಮಾರ್ ಲಗಶೆಟ್ಟಿ ಸ್ವಾಗತಿಸಿದರು. ಡಾ ಶಶಿಧರ್ ಕೆಲ್ಲೂರ್ ನಿರೂಪಿಸಿದರು.
ಹೊಸದಿಲ್ಲಿ, ಡಿ. 17: ದಿಲ್ಲಿಯ ಬಿಗಡಾಯಿಸುತ್ತಿರುವ ವಾಯು ಮಾಲಿನ್ಯವನ್ನು ತಹಬಂದಿಗೆ ತರುವ ಪ್ರಯತ್ನವಾಗಿ, ದಿಲ್ಲಿ ಸರಕಾರವು ಸರಕಾರಿ ಮತ್ತು ಖಾಸಗಿ ಎರಡೂ ಸಂಸ್ಥೆಗಳ 50 ಶೇಕಡ ಉದ್ಯೋಗಿಗಳಿಗೆ ಗುರುವಾರದಿಂದ ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಉದ್ಯೋಗಿಗಳ ದೈನಂದಿನ ಪ್ರಯಾಣವನ್ನು ಕಡಿತಗೊಳಿಸಿ ವಾಹನಗಳ ಹೊಗೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ದಿಲ್ಲಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಹೇಳಿದರು. ಈ ನಿಯಮವನ್ನು ಅನುಸರಿಸಲು ನಿರಾಕರಿಸುವ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು. ಅದೇ ವೇಳೆ, ಈ ನಿರ್ಬಂಧಗಳು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಅವರು ಒಪ್ಪಿಕೊಂಡರು ಹಾಗೂ ಕೆಲಸ ಕಳೆದುಕೊಳ್ಳುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 10,000 ರೂ. ಪರಿಹಾರವನ್ನೂ ಘೋಷಿಸಿದರು. ಗ್ರೇಡಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್ (ಜಿಆರ್ಎಪಿ)ನ ಮೂರನೇ ಹಂತವು ಕಳೆದ 16 ದಿನಗಳಿಂದ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದರು. ಈ ಅವಧಿಯಲ್ಲಿ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ನಿರ್ಬಂಧವಿರುವುದರಿಂದ ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟವನ್ನು ದೂರ ಮಾಡುವುದಕ್ಕಾಗಿ ಕಾರ್ಮಿಕರಿಗೆ 10,000 ರೂ. ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಉಪಗ್ರಹ ಆಧಾರಿತ ಮುಕ್ತ ಸಂಚಾರ ಟೋಲ್ ವ್ಯವಸ್ಥೆ 2026ರಲ್ಲಿ ಪೂರ್ಣ: ರಾಜ್ಯಸಭೆಗೆ ನಿತಿನ್ ಗಡ್ಕರಿ ಮಾಹಿತಿ
ಹೊಸದಿಲ್ಲಿ, ಡಿ. 17: ವಾಹನಗಳ ಮುಕ್ತ ಸಂಚಾರ ಟೋಲ್ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ ಹೆದ್ದಾರಿ ನಿರ್ವಹಣೆ ಜಾರಿಯನ್ನು ದೇಶಾದ್ಯಂತ 2026ರ ಕೊನೆಯ ವೇಳೆಗೆ ಪೂರ್ಣಗೊಳಿಸಲಾಗುವುದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿದರು. ಈ ವ್ಯವಸ್ಥೆಯ ಜಾರಿ ಬಳಿಕ, ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯುವ ಸಮಯದಲ್ಲಿ ಗಣನೀಯ ಕಡಿತವಾಗುತ್ತದೆ ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ, ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ, ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿದೆ ಎಂದು ಹೇಳಿದರು. ಇನ್ನು ಮುಂದೆ ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯಬೇಕಾಗಿಲ್ಲ ಎಂದು ಹೇಳಿದ ಅವರು, ಇದರಿಂದ 1,500 ಕೋಟಿ ರೂಪಾಯಿ ಬೆಲೆಯ ಇಂಧನ ಉಳಿಯುತ್ತದೆ ಮತ್ತು ಸರಕಾರಕ್ಕೆ 6,000 ಕೋಟಿ ರೂ. ಆದಾಯ ಬರುತ್ತದೆ ಎಂದರು. ‘‘‘ಮಲ್ಟಿ-ಲೇನ್ ಫ್ರೀ ಫ್ಲೋ ಟೋಲ್’ ಅತ್ಯುತ್ತಮ ವ್ಯವಸ್ಥೆಯಾಗಿದೆ. ಮೊದಲು ನಾವು ಟೋಲ್ ಕೇಂದ್ರಗಳಲ್ಲಿ ಹಣ ಪಾವತಿಸಬೇಕಾಗುತ್ತಿತ್ತು. ಅದಕ್ಕೆ 3ರಿಂದ 10 ನಿಮಿಷ ಬೇಕಾಗುತ್ತಿತ್ತು. ನಂತರ ಬಂದ ಫಾಸ್ಟ್ ಟ್ಯಾಗ್ ನಿಂದಾಗಿ, ಈ ಸಮಯವು ಒಂದು ನಿಮಿಷಕ್ಕಿಂತಲೂ ಕಡಿಮೆಯಾಯಿತು. ನಮ್ಮ ಆದಾಯವು ಕನಿಷ್ಠ 5,000 ಕೋಟಿ ರೂಪಾಯಿಯಷ್ಟು ಹೆಚ್ಚಾಯಿತು. ಈಗ ಫಾಸ್ಟ್ಟ್ಯಾಗ್ ಸ್ಥಾನದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ಬಂದ ಮೇಲೆ, ಈಗ ಕಾರುಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಟೋಲ್ ಕೇಂದ್ರಗಳನ್ನು ದಾಟಬಹುದಾಗಿದೆ ಮತ್ತು ಕೇಂದ್ರದಲ್ಲಿ ಯಾರನ್ನೂ ನಿಲ್ಲಿಸಲಾಗುವುದಿಲ್ಲ’’ ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದರು. ‘‘ಟೋಲ್ ಕೇಂದ್ರಗಳಲ್ಲಿ ಕಾಲ ನಷ್ಟವಾಗುವುದನ್ನು ತಪ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ಫಾಸ್ಟ್ ಟ್ಯಾಗ್ ಜೊತೆಗೆ ಉಪಗ್ರಹ ಮೂಲಕ ವಾಹನಗಳ ಸಂಖ್ಯಾ ಫಲಕವನ್ನು ಗುರುತಿಸಲಾಗುತ್ತದೆ’’ ಎಂದರು. ‘‘2026ರ ಕೊನೆಯ ವೇಳೆಗೆ, ನಾವು ನೂತನ ವ್ಯವಸ್ಥೆಯನ್ನು 100 ಶೇಕಡ ಜಾರಿಗೊಳಿಸುತ್ತೇವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ನಾವು 1,500 ಕೋಟಿ ರೂ. ಬೆಲೆಯ ಇಂಧನ ಉಳಿಸುತ್ತೇವೆ ಮತ್ತು 6,000 ಕೋಟಿ ರೂ. ಆದಾಯ ಗಳಿಸುತ್ತೇವೆ. ಜೊತೆಗೆ ಟೋಲ್ ಕಳ್ಳತನ ಕೊನೆಯಾಗುತ್ತದೆ. ಏನೂ ಸಮಸ್ಯೆ ಇರುವುದಿಲ್ಲ. ಜನರು ಟೋಲ್ ಕೇಂದ್ರಗಳಲ್ಲಿ ನಿಲ್ಲಬೇಕಾಗಿಲ್ಲ’’ ಎಂದು ಗಡ್ಕರಿ ನುಡಿದರು.
ಪಲ್ಸ್ ಪೋಲಿಯೋ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಮೂಡಿಸಲು ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿ.21ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವು ಜರುಗಲಿರುವುದು. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ 0-5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಈ ಕಾರ್ಯಕ್ರಮದ ಬಗ್ಗೆ ಮಸೀದಿಗಳಲ್ಲಿ, ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರುಗಳಿಗೆ ಅರಿವು ಮೂಡಿಸಿ ಲಸಿಕಾ ದಿನದಂದು ತಮ್ಮ ಸಮುದಾಯದ ಎಲ್ಲಾ 0-5 ವರ್ಷದ ಮಕ್ಕಳು ಲಸಿಕೆ ಪಡೆಯುವ ಸಲಹೆ ನೀಡುವಂತೆ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ, ಹೊಸಪೇಟೆ ಹಾಸ್ಟೆಲ್ಗಳಿಗೆ ಜಿಪಂ ಸಿಇಒ ಧೀಡಿರ್ ಭೇಟಿ
ವಿಜಯನಗರ: ಹೊಸಪೇಟೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹಗರಿಬೊಮ್ಮನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧವಾರ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ ಅವರು ಧೀಡಿರ್ ಭೇಟಿ ನೀಡಿ ಪರಿಶೀಲಿಸಿದರು. ಹೊಸಪೇಟೆಯ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಪರಿಶೀಲನೆ ವೇಳೆ ದಾಖಲಾತಿ ನಿರ್ವಹಣೆಯಲ್ಲಿ ವೈಫಲ್ಯ ಕಂಡು ಹಾಸ್ಟೆಲ್ ವಾರ್ಡನ್ ಭೀಮದಾಸ್ ಅವರಿಗೆ ಎಚ್ಚರಿಕೆ ನೀಡಿದರು. ಹಾಸ್ಟೆಲ್ನಲ್ಲಿ ಅಹಾರ ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ದಾಖಲಾತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಿದರು. ಈ ವೇಳೆ ಜಿಪಂ ಸಹಾಯಕ ಯೋಜನಾಧಿಕಾರಿ ಉಮೇಶ್, ವಸತಿ ಮೇಲ್ವಿಚಾರಕ ಭೀಮದಾಸ್, ಹಗರಿಬೊಮ್ಮನಹಳ್ಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ವಸತಿ ಮೇಲ್ವಿಚಾರಕಿ ಎ.ಗೀತಾ ಉಪಸ್ಥಿತರಿದ್ದರು.
Bengaluru | ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ನಿಷೇಧ!
ಬೆಂಗಳೂರು : ಪಾರಿವಾಳಗಳಿಂದ ಶ್ವಾಸಕೋಶದ ಕಾಯಿಲೆಗಳು ಹರಡುತ್ತಿರುವುದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) 270, 271 ಮತ್ತು 271ರಂತೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದೆ. ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ, ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ಅವರಿಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಾರದು ಅಥವಾ ಆಹಾರವನ್ನು ನೀಡಲು ಪ್ರೇರೇಪಿಸಬಾರದು ಎಂದು ಹೇಳಿದೆ.
ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಇನಾಯತ್ ಅಲಿ
ಮಂಗಳೂರು, ಡಿ.17: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕೈಕಂಬ-ಪೊಳಲಿ ದ್ವಾರದ ಬಳಿ ಇರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯಲ್ಲಿ ಡಿ. 17ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಭೂ-ವಿವಾದ, ರಸ್ತೆ ವಿವಾದ, ಅತಿಕ್ರಮಣ, ಆರೋಗ್ಯ ಸಮಸ್ಯೆ, ನೀರು, ಚರಂಡಿ ಸಮಸ್ಯೆ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ನೀಡಿದ ಕೆಲವರು ಪಂಚಾಯತ್, ಸರಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಕೆಲವರು ತಮ್ಮ ಕಷ್ಟದ ಜೀವನಕ್ಕೆ ನೆರವಾಗು ವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಇನಾಯತ್ ಅಲಿ ಮಾತನಾಡಿ, ‘ನೀವು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಸರಕಾರದ ಇಲಾಖೆ, ಸಚಿವರೊಂದಿಗೆ ಚರ್ಚಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದವರು, ಕೆಲವು ಅರ್ಜಿಗಳಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾಂಗ್ರೆಸ್ ಪ್ರಮುಖರಾದ ಕೃಷ್ಣ ಅಮೀನ್, ಮಾಲತಿ ಗಂಜಿಮಠ, ಗಿರೀಶ್ ಆಳ್ವ, ಪ್ರಥ್ವೀರಾಜ್ ಆರ್. ಕೆ, ಸುನಿಲ್ ಜಿ, ಜಿ. ಮುಹಮ್ಮದ್ ಉಂಞ, ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ, ದಯಾನಂದ ಶೆಟ್ಟಿ ಕುಪ್ಪೆಪದವು, ಟಿ. ಹನೀಫ್, ಅಬ್ದುಲ್ ಅಝೀಝ್ ಕಂದಾವರ, ಜಯಲಕ್ಷ್ಮೀ ಅಡ್ಡೂರು, ಶೋಭಾ ಗುರುಪುರ, ಯಶವಂತ ಶೆಟ್ಟಿ ಗುರುಪುರ, ಚಂದ್ರಶೇಖರ ಬಿ. ಪೂಜಾರಿ, ಜಯಂತಿ ಡಿ. ಅಮೀನ್ ತಿರುವೈಲು, ಬಾಷಾ ಮಾಸ್ಟರ್, ಕಲ್ಲಾಡಿ ಅಬೂಬಕ್ಕರ್ ಕುಪ್ಪೆಪದವು, ಹಸನ್ ಬಾವಾ, ತೌಶೀಫ್ ಅಡ್ಡೂರು, ರಝಾಕ್ ಕುಪ್ಪೆಪದವು, ಅಶ್ರಫ್ ಬಿತ್ತುಪಾದೆ ಮತ್ತಿತರರು ಇದ್ದರು.
ಬೆಳಗಾವಿ : ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಮತ್ತು ಘಟಕ ವೆಚ್ಚ ಹೆಚ್ಚಿಸುವ ಪ್ರಸ್ತಾವವು ಪರಿಶೀಲನೆಯಲ್ಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬುಧವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಪ್ರಶ್ನೆಗೆ ವಸತಿ ಸಚಿವ ಝಮೀರ್ ಅಹ್ಮದ್ ಪರವಾಗಿ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 2024-2025ನೇ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ(ಗ್ರಾ)ಯಡಿ ಹಾಗೂ ರಾಜ್ಯ ಸರಕಾರದ ವಸತಿ ಯೋಜನೆಗಳಡಿ ಮರು ಹಂಚಿಕೆ ಮಾಡಲಾದ 36,150 ಮನೆಗಳನ್ನು ಒಳಗೊಂಡಂತೆ ಒಟ್ಟಾರೆ 7,38,881 ಮನೆಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದ್ದು, 3,27,747 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಅಲೆಮಾರಿ ಜನಾಂಗದವರಿಗೆ 2024-25ನೇ ಸಾಲಿನಲ್ಲಿ ಪ್ರತ್ಯೇಕವಾಗಿ ಗುರಿ ಹಂಚಿಕೆಯಾಗಿಲ್ಲ. ಅಲೆಮಾರಿ ವರ್ಗದ ವಸತಿ ರಹಿತರನ್ನು ಒಳಗೊಂಡಂತೆ ಎಲ್ಲಾ ವಸತಿ ರಹಿತರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸ್ಪೀಕರ್ ವಿರುದ್ಧ ಯಶಪಾಲ್ ಆರೋಪ: ಪ್ರಸಾದ್ರಾಜ್ ಖಂಡನೆ
ಉಡುಪಿ ಡಿ.17: ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಾಡಿರುವ ಆರೋಪಗಳನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಶಾಸಕರಾಗಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರಲ್ಲಿ ಕೋಮು ಭಾವನೆ ಕೆರಳಿಸುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಅಭಿವೃದ್ಧಿಯ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವ ಬದಲು ಸಣ್ಣ ವಿಷಯವನ್ನು ದೊಡ್ಡದು ಮಾಡಿ ವಿವಾದಗೊಳಿಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು. ಹರಿಕಥೆ ಎಂಬುದು ಶ್ರೇಷ್ಠ ಕಲೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಅದನ್ನು ಅನಗತ್ಯವಾಗಿ ಸುದೀರ್ಘ ಮಾತನಾಡು ವವರಿಗೆ ಎಲ್ಲರೂ ಬಳಸುತ್ತಾರೆ. ಆದರೆ ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಶಾಸಕರು ಧರ್ಮ ಹಾಗೂ ಸಂಪ್ರದಾಯವನ್ನು ಗುರಾಣಿಯಾಗಿ ಬಳಸುತ್ತಿರುವುದು ಖಂಡನೀಯ ಎಂದರು. ಸದನದ ಘನತೆ ಹಾಗೂ ಸಮಯವನ್ನು ಕಾಪಾಡುವುದು ಸಭಾಧ್ಯಕ್ಷರ ಕರ್ತವ್ಯ. ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳುವುದು ಸಂಸದೀಯ ಶಿಸ್ತಿನ ಭಾಗವಾಗಿದೆಯೇ ಹೊರತು ಸಂಪ್ರದಾಯಕ್ಕೆ ಮಾಡಿದ ಅವಮಾನವಲ್ಲ ಎಂದು ಕಾಂಚನ್, ಖಾದರ್ ನಡೆಯನ್ನು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕುಶಲ ಶೆಟ್ಟಿ, ಕೆ.ಟಿ.ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಆದೇಶ ಜಾರಿ ಕೋರಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ನಿಂದ ನೋಟಿಸ್ ಜಾರಿ
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿನ ಮಹಿಳಾ ನೌಕರರಿಗೆ ಮುಟ್ಟಿನ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡುವ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ನೀತಿಯ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲು ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿಚಾರಣೆ ಮುಂದೂಡಲಾಗಿದೆ.
ಹಾವೇರಿಯ 9 ಗ್ರಾಮಗಳಲ್ಲಿ ನೀರಿನಲ್ಲಿ ಪ್ಲೋರೈಡ್ ಅಂಶ ಪತ್ತೆ : ಪ್ರಿಯಾಂಕ್ ಖರ್ಗೆ
ಬೆಳಗಾವಿ : ಹಾವೇರಿ ಜಿಲ್ಲಾ ವ್ಯಾಪ್ತಿಯ 9 ಗ್ರಾಮಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚಾಗಿ ನೀರಿನಲ್ಲಿ ಪ್ಲೋರೈಡ್ ಅಂಶವು ಪತ್ತೆಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾವೇರಿಯ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ 685 ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಹಾವೇರಿ ತಾಲೂಕಿನ ಬೆಳವಿಗಿ, ಮರಡೂರ, ತೆರೆದಹಳ್ಳಿ, ಗುಯಿಲಗುಂದಿ, ಮೇವುಂಡಿ, ಗೂಡೂರು, ಮರೋಳ, ದೇವಗಿರಿ ಹಾಗೂ ಶಿಗ್ಗಾಂವ್ ತಾಲ್ಲೂಕಿನ ಕಂಕಣವಾಡ ಗ್ರಾಮಗಳ ಮಾದರಿಯಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಮೇಲ್ಮೈ ನೀರನ್ನು ಒದಗಿಸಲಾಗುತ್ತಿದೆ ಎಂದರು. ಜತೆಗೆ, ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಕಂಕಣವಾಡಿ ಗ್ರಾಮದಲ್ಲಿ ಪರ್ಯಾಯ ಕೊಳವೆ ಬಾವಿ ನೀರು ಮತ್ತು ಪಕ್ಕದ ಹನುಮರಹಳ್ಳಿ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಸುಮಾರು 6.50 ಲಕ್ಷ ನೀರಿನ ಮಾದರಿಗಳನ್ನು ರಾಜ್ಯಾದ್ಯಂತ ಪರೀಕ್ಷಿಸಲಾಗಿದೆ. ಗ್ರಾಮಗಳಿಗೆ ನೀರು ಪರೀಕ್ಷಾ ಕಿಟ್ ಒದಗಿಸಲಾಗಿದೆ ಎಂದು ಅವರು ವಿವರಿಸಿದರು. ಈ ವೇಳೆ ಸದಸ್ಯರಾದ ಎಸ್.ಆರ್.ಶ್ರೀನಿವಾಸ್, ಡಾ.ಚಂದ್ರು ಲಮಾಣಿ ಸೇರಿದಂತೆ ಪ್ರಮುಖರು ಕೆಟ್ಟು ನಿಂತು ಹೋದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು, ಗ್ರಾಮ ಪಂಚಾಯಿತಿಗಳಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಸರಕಾರದಿಂದ ನಿರ್ವಹಣೆಗೆ ಅನುದಾನ ನೀಡಲಾಗಿದೆ. ಆದರೆ ಶಾಸಕರು, ಸಂಸದರು ಇತರೆ ಅನುದಾನಗಳಡಿ ನಿರ್ಮಿಸಿರುವ ಘಟಕಗಳ ನಿರ್ವಹಣೆ ತೊಂದರೆ ಉಂಟಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿದರು.
ಯಕ್ಷಗಾನ ಕಲಾರಂಗದಿಂದ ಕಲಾವಿದರಿಗೆ ಬಸ್ಪಾಸ್ ವಿತರಣೆ
ಉಡುಪಿ, ಡಿ.17: ಯಕ್ಷಗಾನ ಕಲಾರಂಗ ಪ್ರತೀವರ್ಷ ಪ್ರಕಟಿಸುತ್ತಿರುವ ವೃತ್ತಿನಿರತ ಯಕ್ಷಗಾನ ಕಲಾವಿದರಾದ 1300 ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ 2026ನೇ ಸಾಲಿನ ಡೈರಿಯನ್ನು ಪ್ರಕಟಿಸಿ ಬಿಡುಗಡೆಗೊಳಿಸಿದೆ. 2026ರ ಯಕ್ಷನಿಧಿ ಡೈರಿಯನ್ನು ಇಂದು ಬಾರಕೂರು ಸಮೀಪದ ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಳದಲ್ಲಿ ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು. ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘ ನೀಡುತ್ತಾ ಬಂದ ಶೇ.50ರ ರಿಯಾಯತಿಯ ಬಸ್ಪಾಸನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. ಸದ್ಯ ಇರುವ 10 ತಿಂಗಳ ಅವಧಿಯ ಬಸ್ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂದು ಈ ಸಂದರ್ಭದಲ್ಲಿ ಸುರೇಶ್ ನಾಯಕರು ನುಡಿದರು. ಕರಾವಳಿಯ ವಿವಿಧ ಯಕ್ಷಗಾನ ಮೇಳಗಳ 500ಕ್ಕೂ ಅಧಿಕ ಕಲಾವಿದರು ಪ್ರತಿ ವರ್ಷ ಈ ಸೌಲಭ್ಯವನ್ನು ಪಡೆಯು ತ್ತಿದ್ದಾರೆ ಎಂದು ತಮ್ಮ ಪ್ರಾಸಾವ್ತಿಕ ಮಾತುಗಳಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ, ಭುವನಪ್ರಸಾದ್ ಹೆಗ್ಡೆ, ಸಂತೋಷ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಮೇಳಗಳ ಪ್ರತಿನಿಧಿಗಳಾದ ಹರಿಶ್ಚಂದ್ರ ಆಚಾರ್ಯ, ಕೃಷ್ಣ ಪಿ., ಜ್ಞಾನೇಂದ್ರ ತೀರ್ಥಹಳ್ಳಿ, ಆನಂದ ದೇವಾಡಿಗ, ರವಿ ನಾಯಕ, ಶ್ರೇಯಸ್, ಸುದೇಶ್, ರಾಜೇಶ್ ಬೈಕಾಡಿ, ಶ್ರೀನಿವಾಸ ಅಡಿಗ, ರವಿ ನಾಯ್ಕ್ ಬಾಡ, ಸುಕೇಶ್, ಸುರೇಶ್ ಆಚಾರ್ಯ, ವಂಡಾರು ರಮೇಶ್ ಮಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಹ್ಮದಾಬಾದ್ ನ 10 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ
ಹೊಸದಿಲ್ಲಿ, ಡಿ.17: ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿ ಬುಧವಾರ ಅಹ್ಮದಾಬಾದ್ ನ 10 ಶಾಲೆಗಳಲ್ಲಿ ಇಮೇಲ್ ಸಂದೇಶ ಬಂದಿದೆ. ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲವಾದ್ದರಿಂದ ಇದೊಂದು ಹುಸಿಬೆದರಿಕೆಯೆಂದು ದೃಢಪಟ್ಟಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಇ ಮೇಲ್ ನಲ್ಲಿ ಬಾಂಬ್ ಬೆದರಿಕೆಯ ಸಂದೇಶವನ್ನು ಸ್ವೀಕರಿಸುವ ಮುನ್ನ ಬೆಳಗ್ಗಿ ಹೊತ್ತಿನ ತರಗತಿಗಳು ಮುಗಿದಿದ್ದರಿಂದ ಮಧ್ಯಾಹ್ನದ ಆನಂತರ ಶಾಲೆಗಳಿಗೆ ರಜೆಯನ್ನು ಘೋಷಿಸಲಾಯಿತು. ಈ ಶಾಲೆಗಳಿಗೆ ಬಂದಿರುವ ಬೆದರಿಕೆ ಸಂದೇಶವು ಒಂದೇ ರೀತಿಯದ್ದಾಗಿದೆ ಎಂದು ಅಹ್ಮದಾಬಾದ್ ನ ಉಪಪೊಲೀಸ್ ಆಯುಕ್ತ ಹರ್ಷದ್ ಪಟೇಲ್ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ವಿಧ್ವಂಸಕೃತ್ಯ ನಿಗ್ರಹ ದಳವು ಶಾಲೆಗಳಿಗೆ ಆಗಮಿಸಿ, ಕೂಲಂಕಷವಾಗಿ ಶೋಧ ಕಾರ್ಯಾಚರಣೆ ನಡೆಸಿದವು. ಆದರೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ. ಇದೀಗ ಸೈಬರ್ ಅಪರಾಧ ತಡೆ ದಳವು ಈ ಇ-ಮೇಲ್ ಗಳ ಮೂಲವನ್ನು ಹಾಗೂ ಅದರ ಹಿಂದೆ ಯಾರಿದ್ದಾರೆಂಬ ಬಗ್ಗೆ ತನಿಖೆಯನ್ನು ನಡೆಸುತ್ತಿವೆ ಎಂದು ಪಟೇಲ್ ಹೇಳಿದ್ದಾರೆ. ಮಧ್ಯಾಹ್ನ 1.11ರ ವೇಳೆಗೆ ಈ ಶಾಲೆಗಳಲ್ಲಿ ಬಾಂಬ್ ಸ್ಫೋಟಗಳು ನಡೆಯಲಿವೆಯೆಂದು ಇಮೇಲ್ ನಲ್ಲಿ ಬೆದರಿಕೆಹಾಕಲಾಗಿತ್ತು.
21 ದಿನ ಗಂಡನ ಜತೆ ಸಂಸಾರ ಮಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ತರಾಟೆ!
ಕೇವಲ 21 ದಿನಗಳ ವೈವಾಹಿಕ ಜೀವನದ ಬಳಿಕ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚ್ಛೇದನ ಕೋರಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯ ಮೇಲೆ ನಡೆಯುವ ಬಂಧನ ಎಂದು ಹೇಳಿದ ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅರ್ಜಿಯನ್ನು ವಜಾ ಮಾಡಿದೆ. ಮಹಿಳೆಯ ಆರೋಪಗಳು ನಂಬಲರ್ಹವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
ಕೋಟ, ಡಿ.17: ವೈಯಕ್ತಿಕ ಕಾರಣದಿಂದ ಮನನೊಂದ ಕಾರ್ಕಡ ಗ್ರಾಮದ ಶೈಲಾ(37) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.15ರಂದು ರಾತ್ರಿ ವೇಳೆ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ನಿದ್ರಾಹೀನತೆಯಿಂದ ಬಳಲುತ್ತಿದ್ದ ಕುಂಜಿಬೆಟ್ಟು ನಿವಾಸಿ ಸೀತಾ ನಾಯಕ್ (67) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.16ರಂದು ಸಂಜೆ ವೇಳೆ ಮನೆ ಸಮೀಪದ ಖಾಲಿ ಜಾಗದಲ್ಲಿರುವ ಪಾಳು ಬಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಿಯಾರ ಗ್ರಾಮದ ಶಾರದಾ (83) ಎಂಬವರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.16ರಂದು ಸಂಜೆ ವೇಳೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ ಪಡುಕೆರೆ ಯುವಕನ ಕೊಲೆ ಪ್ರಕರಣ| ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ: ಎಸ್ಪಿ ಹರಿರಾಂ ಶಂಕರ್
ಉಡುಪಿ, ಡಿ.17: ಕೋಟ ಸಮೀಪದ ಪಡುಕೆರೆಯ ಸಂತೋಷ್ ಮೊಗವೀರ(31) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಡಿ.14ರಂದು ರಾತ್ರಿ ವೇಳೆ ಪಡುಕೆರೆ ಸರ್ಕಲ್ ಬಳಿ ಕುಡಿದ ಮತ್ತಿನಲ್ಲಿ ದರ್ಶನ್, ಕೌಶಿಕ್, ಅಂಕಿತ್, ಸುಜನ್ ಎಂಬವರು ನಡೆಸಿದ ಹಲ್ಲೆಯಿಂದಾಗಿ ಸಂತೋಷ್ ಮೊಗವೀರ ಮೃತಪಟ್ಟಿದ್ದು, ಈ ಸಂಬಂಧ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಎಲ್ಲ ಆರೋಪಿ ಗಳಿಗೆ ಡಿ.29ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ‘ಇವರೆಲ್ಲ ಇತ್ತೀಚೆಗೆ ಶಬರಿಮಲೆಗೆ ವೃತ್ತ ಆಚರಿಸಿಕೊಂಡು ಹೋಗಿದ್ದು, ಇವರ ಗುರುಸ್ವಾಮಿ ವಿಚಾರವಾಗಿ ಕೆಟ್ಟದಾಗಿ ಮಾತನಾಡಿದಕ್ಕೆ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಅದೇ ರೀತಿ ಇನ್ನೊಂದು ಹುಡುಗಿ ವಿಚಾರವಾಗಿ ಇವರ ಮಧ್ಯೆ ಗಲಾಟೆ ಆಗಿದೆ ಎಂಬುದು ಕೂಡ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿ ಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು. ಇದರಿಂದ ಕೊಲೆಗೆ ಸ್ಪಷ್ಟ ಕಾರಣ ತಿಳಿದುಬರಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಗಾಝಾಕ್ಕೆ ಸೇನಾ ತುಕಡಿ ಕಳುಹಿಸಲು ಟ್ರಂಪ್ ಒತ್ತಾಯ; ಇಕ್ಕಟ್ಟಿನಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್: ವರದಿ
ಇಸ್ಲಾಮಾಬಾದ್, ಡಿ.17: ಗಾಝಾದಲ್ಲಿ ನಿಯೋಜನೆಗೊಳ್ಳಲಿರುವ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಮೇಲೆ ನಿರಂತರ ಒತ್ತಡ ಹಾಕುತ್ತಿರುವುದರಿಂದ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸಿಮ್ ಮುನೀರ್ ಇಕ್ಕಟ್ಟಿಗೆ ಸಿಲುಕಿರುವುದಾಗಿ ವರದಿಯಾಗಿದೆ. ಟ್ರಂಪ್ ಒತ್ತಾಯವನ್ನು ನಿರಾಕರಿಸಿದರೆ ಅಮೆರಿಕಾದ ಬೆಂಬಲವನ್ನು ಕಳೆದುಕೊಳ್ಳುವ ಅಪಾಯ, ಒಪ್ಪಿದರೆ ದೇಶದಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನೀರ್ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಗಾಝಾ ಯುದ್ಧ ಆರಂಭಗೊಂಡಂದಿನಿಂದಲೂ ಪಾಕಿಸ್ತಾನದಲ್ಲಿ ಫೆಲೆಸ್ತೀನೀಯರ ಪರ ಸಾರ್ವಜನಿಕ ಅಭಿಪ್ರಾಯ ಬಲವಾಗಿದೆ. ಮುಂದಿನ ವಾರದಲ್ಲಿ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅಮೆರಿಕಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. 6 ತಿಂಗಳಲ್ಲಿ ಮೂರನೇ ಬಾರಿ ಟ್ರಂಪ್ ರೊಂದಿಗೆ ನಡೆಸಲಿರುವ ಸಭೆಯಲ್ಲಿ ಗಾಝಾ ಸ್ಥಿರೀಕರಣ ಪಡೆಗೆ ತುಕಡಿಯನ್ನು ಕಳುಹಿಸುವ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. ಟ್ರಂಪ್ ಅವರ 20 ಅಂಶಗಳ ಗಾಝಾ ಶಾಂತಿ ಯೋಜನೆಯು `ಗಾಝಾದಲ್ಲಿ ಪುರ್ನನಿರ್ಮಾಣ ಮತ್ತು ಆರ್ಥಿಕ ಚೇತರಿಕೆಯ ಮೇಲೆ ಕೇಂದ್ರೀಕರಿಸಿದ ಪರಿವರ್ತನೆಯ ಹಂತವನ್ನು ಮೇಲ್ವಿಚಾರಣೆ ಮಾಡಲು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಸೈನ್ಯವನ್ನು ನಿಯೋಜಿಸಲು' ಕರೆ ನೀಡುತ್ತದೆ. ಹಮಾಸ್ ಗುಂಪನ್ನು ನಿಶ್ಯಸ್ತ್ರಗೊಳಿಸುವುದನ್ನು ಒಳಗೊಂಡಿರುವ ಕಾರ್ಯಾಚರಣೆಗೆ ಪಡೆಗಳನ್ನು ಕಳುಹಿಸುವ ಬಗ್ಗೆ ಹಲವಾರು ದೇಶಗಳು ಎಚ್ಚರಿಕೆಯಿಂದ ಪರಿಶೀಲಿಸುತ್ತಿವೆ. ಇದು ತಮ್ಮನ್ನೂ ನೇರವಾಗಿ ಸಂಘರ್ಷಕ್ಕೆ ಎಳೆಯಬಹುದು ಎಂಬ ಭಯವೂ ಇದಕ್ಕೆ ಕಾರಣವಾಗಿದೆ. ಶಾಂತಿಪಾಲನೆ ಕರ್ತವ್ಯಗಳಿಗೆ ತುಕಡಿಗಳನ್ನು ಒದಗಿಸುವ ಬಗ್ಗೆ ಪಾಕಿಸ್ತಾನ ಪರಿಗಣಿಸಬಹುದು. ಆದರೆ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ನಮ್ಮ ಕೆಲಸವಲ್ಲ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಕಳೆದ ತಿಂಗಳು ಹೇಳಿದ್ದರು. ಗಾಝಾ ಸ್ಥಿರೀಕರಣ ಪಡೆಗೆ ಯೋಧರನ್ನು ಕಳುಹಿಸದಿರುವುದು ಟ್ರಂಪ್ರನ್ನು ಕೆರಳಿಸಬಹುದು. ಅಮೆರಿಕಾ ಅಧ್ಯಕ್ಷರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಅಮೆರಿಕಾದ ಹೂಡಿಕೆ ಮತ್ತು ಭದ್ರತಾ ಸಹಾಯವನ್ನು ಪಡೆಯಬಹುದು ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
MGNREGA ಬದಲಿಗೆ ಹೊಸ ‘G RAM G’ಮಸೂದೆ ಮಂಡನೆ: ಗ್ರಾಮೀಣ ಜನತೆಗೆ 125 ದಿನಗಳ ಕೆಲಸ ಗ್ಯಾರಂಟಿ?
ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (MGNREGA) ಬದಲಾಗುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಅಂದರೆ VB-G RAM G ಮಸೂದೆ-2025 ಅನ್ನು ಮಂಡಿಸಿದೆ. ಹಾಗಾದರೆ ಹಳೆಯ ಯೋಜನೆಗಿಂತ ಈ ಹೊಸ ಮಸೂದೆಯಲ್ಲಿ ಏನಿದೆ? ಜನಸಾಮಾನ್ಯರಿಗೆ ಇದರಿಂದ ಲಾಭವೇ ಅಥವಾ ನಷ್ಟವೇ? ವಿರೋಧ ಪಕ್ಷಗಳು ಇದನ್ನು ಏಕೆ ವಿರೋಧಿಸುತ್ತಿವೆ? ಇಲ್ಲಿದೆ ... Read more The post MGNREGA ಬದಲಿಗೆ ಹೊಸ ‘G RAM G’ ಮಸೂದೆ ಮಂಡನೆ: ಗ್ರಾಮೀಣ ಜನತೆಗೆ 125 ದಿನಗಳ ಕೆಲಸ ಗ್ಯಾರಂಟಿ? appeared first on Karnataka Times .
ವೆನೆಝುವೆಲಾಗೆ ತೈಲ ಟ್ಯಾಂಕರ್ ಪ್ರವೇಶಕ್ಕೆ ದಿಗ್ಬಂಧನ: ಟ್ರಂಪ್ ಆದೇಶ
ವಾಷಿಂಗ್ಟನ್, ಡಿ.17: ನಿರ್ಬಂಧಕ್ಕೆ ಗುರಿಯಾಗಿರುವ ತೈಲ ಟ್ಯಾಂಕರ್ಗಳು ವೆನೆಝುವೆಲಾ ಪ್ರವೇಶಿಸುವುದನ್ನು ತಡೆಗಟ್ಟಲು ಆದೇಶಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧದ ಒತ್ತಡವನ್ನು ತೀವ್ರಗೊಳಿಸಿದ್ದಾರೆ. ವೆನೆಝುವೆಲಾ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಇತರ ಅಪರಾಧಗಳಿಗೆ ಹಣ ಒದಗಿಸಲು ತೈಲದ ಆದಾಯವನ್ನು ಬಳಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. `ನಮ್ಮ ತೈಲ, ಭೂಮಿ ಹಾಗೂ ಇತರ ಆಸ್ತಿಗಳನ್ನು ಕದ್ದಿರುವುದು , ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಸೇರಿದಂತೆ ಹಲವಾರು ಕಾರಣಕ್ಕಾಗಿ ವೆನೆಝುವೆಲಾದ ಆಡಳಿತವನ್ನು `ವಿದೇಶಿ ಭಯೋತ್ಪಾದಕ ಸಂಘಟನೆ'ಯೆಂದು ಗೊತ್ತುಪಡಿಸಲಾಗಿದೆ. ನಿರ್ಬಂಧಕ್ಕೆ ಒಳಗಾಗಿರುವ ಎಲ್ಲಾ ತೈಲ ಟ್ಯಾಂಕರ್ ಗಳು ವೆನೆಝುವೆಲಾ ಪ್ರವೇಶ ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲು ನಾನು ಆದೇಶಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ವೆನೆಝುವೆಲಾ ಕರಾವಳಿಯ ಬಳಿ ಅಮೆರಿಕಾದ ಪಡೆಗಳು ತೈಲ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿದ್ದವು. ಇದರ ಜೊತೆಗೆ, ಅಮೆರಿಕಾದ ಹನ್ನೆರಡಕ್ಕೂ ಅಧಿಕ ಸಮರ ನೌಕೆಗಳು, ವಿಮಾನವಾಹಕ ಯುದ್ಧನೌಕೆ, ಸಾವಿರಾರು ಯೋಧರನ್ನು ಕೆರಿಬಿಯನ್ ಸಮುದ್ರ ವಲಯಕ್ಕೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಮಂಗಳವಾರ ಸಂಜೆ ರಾಜಧಾನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ `ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ವೆನೆಝುವೆಲಾದ ಇಂಧನ, ಗ್ಯಾಸ್, ಚಿನ್ನ ಮತ್ತಿತರ ಖನಿಜಗಳ ಮೇಲೆ ಕಣ್ಣುಹಾಕಿವೆ. ನಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ನಾವು ದೃಢನಿರ್ಧಾರ ಮಾಡಿದ್ದೇವೆ. ವೆನೆಝುವೆಲಾದಲ್ಲಿ ಶಾಂತಿ ಜಯಿಸುತ್ತದೆ' ಎಂದು ಹೇಳಿದ್ದಾರೆ.
ಋತುಚಕ್ರ ರಜೆ ನೀತಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕೋರಿ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿನ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಧಾರವಾಡದಲ್ಲಿ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಋತುಚಕ್ರ ರಜೆ ಸೌಲಭ್ಯ ನೀತಿ ಅಸ್ತಿತ್ವದಲ್ಲಿರುವ ಕುರಿತು ಮಹಿಳಾ ಉದ್ಯೋಗಿಗಳ ಗಮನಕ್ಕೆ ತರುವಂತೆ ಉದ್ಯೋಗ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸಲಾಗುವ ಸಂವಹನವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 5ಕ್ಕೆ ಮುಂದೂಡಿತು. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲೆ ದೀಕ್ಷಾ ಅಮೃತೇಶ್, ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಸ್ರಾವದ ಸಂದರ್ಭದಲ್ಲಿ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಹೊಸ ನೀತಿಯ ಅಡಿ ಅರ್ಜಿದಾರರು ಕೋರಿದ್ದ ರಜೆಯನ್ನು ಅವರಿಗೆ ನೀಡಲಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಈ ನೀತಿಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ, ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಋತುಚಕ್ರದ ರಜೆಯ ನೀತಿ ಜಾರಿಗೊಳಿಸಲು ನಿರ್ದೇಶಿಸಬೇಕು ಹಾಗೂ ಆ ನೀತಿ ಅಸ್ತಿತ್ವದಲ್ಲಿರುವ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವಂತಾಗಬೇಕು. ಇದರಿಂದ, ಮಹಿಳಾ ಉದ್ಯೋಗಿಗಳು ರಜೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು. ಸರಕಾರದ ಪರ ವಕೀಲರು ವಾದ ಮಂಡಿಸಿ, ಇದು ರಾಜ್ಯದ ನೀತಿಯಾಗಿದ್ದು, ಜಾರಿಗೊಳಿಸದಿರುವ ಪ್ರಶ್ನೆಯೇ ಇಲ್ಲ. ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರಕಾರದ ಆದೇಶಕ್ಕೆ ಒಳಪಡುವ ಎಲ್ಲ ಸಂಸ್ಥೆಗಳು, ಹೋಟೆಲ್ಗಳು ಇನ್ನಿತರ ಉದ್ಯೋಗ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಂಡು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದರು. ಪ್ರಕರಣವೇನು? ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಭಾರತ ವಿರೋಧಿ ಹೇಳಿಕೆ | ಬಾಂಗ್ಲಾದೇಶಿ ರಾಯಭಾರಿಯನ್ನು ಕರೆಸಿದ ಕೇಂದ್ರ, ಪ್ರತಿಭಟನೆ ಸಲ್ಲಿಕೆ
ಹೊಸದಿಲ್ಲಿ,ಡಿ.17: ಢಾಕಾದಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಇತ್ತೀಚಿನ ಬೆದರಿಕೆಗಳು ಮತ್ತು ಬಾಂಗ್ಲಾದೇಶಿ ರಾಜಕೀಯ ನಾಯಕರಿಂದ ಪ್ರಚೋದನಾಕಾರಿ ಭಾರತ ವಿರೋಧಿ ಹೇಳಿಕೆಗಳ ಕುರಿತು ಬುಧವಾರ ದಿಲ್ಲಿಯಲ್ಲಿಯ ಬಾಂಗ್ಲಾದೇಶ ರಾಯಭಾರಿ ಮುಹಮ್ಮದ್ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಧ್ಯುಕ್ತ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ. ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿಯ (ಎನ್ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ,ತನ್ನ ದೇಶವು ಭಾರತ ವಿರೋಧಿ ಪಡೆಗಳಿಗೆ ಆಶ್ರಯ ನೀಡಲಿದೆ ಮತ್ತು ಭಾರತ ‘ಏಳು ಸೋದರಿಯರನ್ನು(ಈಶಾನ್ಯ ರಾಜ್ಯಗಳನ್ನು ಬಣ್ಣಿಸಲು ಬಳಸುವ ಪದ)’ ಅದರಿಂದ ಬೇರ್ಪಡಿಸುವುದಾಗಿ ಕಳೆದ ವಾರ ಬೆದರಿಕೆಯೊಡ್ಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಬಾಂಗ್ಲಾದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಹಮೀದುಲ್ಲಾ ಅವರಿಗೆ ಭಾರತದ ತೀವ್ರ ಕಳವಳಗಳನ್ನು ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಬೆದರಿಕೆಯೊಡ್ಡಿರುವ ಕೆಲವು ಉಗ್ರಗಾಮಿ ಶಕ್ತಿಗಳ ಚಟುವಟಿಕೆಗಳ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ ಎಂದಿದೆ. ಬಾಂಗ್ಲಾದೇಶದಲ್ಲಿಯ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಉಗ್ರಗಾಮಿ ಶಕ್ತಿಗಳ ಸುಳ್ಳು ನಿರೂಪಣೆಯನ್ನು ತಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದೂ ಭಾರತವು ತಿಳಿಸಿದೆ. ಭಾರತವು ಬಾಂಗ್ಲಾದೇಶದ ಜನರ ಜೊತೆ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿದೆ. ಈ ಸಂಬಂಧಗಳು ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ಬೇರೂರಿದ್ದು,ವಿವಿಧ ಅಭಿವೃದ್ಧಿ ಉಪಕ್ರಮಗಳಿಂದ ಬಲಗೊಂಡಿವೆ. ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಪರವಾಗಿದ್ದೇವೆ ಹಾಗೂ ಶಾಂತಿಯುತ ವಾತಾವರಣದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ನಿರಂತರವಾಗಿ ಕರೆ ನೀಡುತ್ತಿದ್ದೇವೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ತನ್ನ ರಾಜತಾಂತ್ರಿಕ ಬಾಧ್ಯತೆಗಳಿಗೆ ಅನುಗುಣವಾಗಿ ಭಾರತದ ರಾಯಭಾರ ಕಚೇರಿ ಮತ್ತು ಇತರ ನೆಲೆಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಜೈವಿಕ ಉದ್ಯಾನದ (ನಿಸರ್ಗಧಾಮ) ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ. ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ 'ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್' (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೇಂದ್ರ ಮೃಗಾಲಯ ಪ್ರಾಧಿಕಾರದ ಪರ ಹಾಜರಾದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಪಿಲಿಕುಳ ಜೈವಿಕ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದನೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಕುರಿತ ದಾಖಲೆಯನ್ನು ನಿನ್ನೆ ಮೃಗಾಲಯ ಪ್ರಾಧಿಕಾರದಿಂದ ಕಳುಹಿಸಲಾಗಿದ್ದು, ಅದು ನಮ್ಮ ಕೈಸೇರಿದ ಬಳಿಕ ಪರಿಶೀಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದಕ್ಕಾಗಿ ಕೊಂಚ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಮಾಣಪತ್ರ ಸಲ್ಲಿಸಲು ಮೃಗಾಲಯ ಪ್ರಾಧಿಕಾರಕ್ಕೆ 2 ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಕಂಬಳ ಕ್ರೀಡೆ ಆಯೋಜನೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿಸಬಾರದು ಎಂದು ಕೋರಿ ಪೆಟಾ 2024ರಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ನವೆಂಬರ್ 14ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ನಿರಾಕರಿಸಿತ್ತು. ಇದೇ ವೇಳೆ, ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಂಬಳ ಆಯೋಜಿಸಲು ಅನುಮತಿಸಬಾರದೆಂಬ ಅರ್ಜಿದಾರರ ಎರಡನೇ ಮನವಿ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಂಬಳ ಆಯೋಜಿಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಲ್ಲಿ ಕಂಬಳ ನಡೆಸುವುದು ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಪಿಲಿಕುಳ ನಿಸರ್ಗಧಾಮವು 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆ ಎಂದು ಹೇಳಲಾಗಿದ್ದು, ಕಂಬಳ ಕಾರ್ಯಕ್ರಮ ನಡೆಯಬೇಕಿರುವ ಸ್ಥಳವು 80 ಹೆಕ್ಟೇರ್ಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರವನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.
ಆರ್ ಸಿಬಿಯಿಂದ ವೆಂಕಟೇಶ್ ಅಯ್ಯರ್ ಖರೀದಿ ಇದ್ದೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ತರುತ್ತಾ ಕುತ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ ವರ್ಷ ನಡೆದ ಮೆಗಾ ಹರಾಜಿನ ವೇಳೆ ವೆಂಕಟೇಶ್ ಅಯ್ಯರ್ ಖರೀದಿಗೆ ದುಂಬಾಲು ಬಿದ್ದಿದ್ದು ನಿಮಗೆ ನೆನಪಿರಬಹುದು. ಈ ಬಾಕಿ ಅಂತೂ ಪಟ್ಟಿಗೆ ಬಿದ್ದು ಖರೀದಿಸಿಯೇ ಬಿಟ್ಟಿದೆ. 2024ರ ಸೀಸನ್ ನಲ್ಲಿ ವೆಂಕಟೇಶ್ ಅಯ್ಯರ್ ಬಹಳ ಚನ್ನಾಗಿ ಆಟವಾಡಿದ್ದರು ನಿಜ. ಆದರೆ ಕಳೆದ ಸೀಸನ್ ನಲ್ಲಿ ಇನ್ನಿಲ್ಲದ ರೀತಿಯಲ್ಲಿ ನೆಲಕಚ್ಚಿದ್ದೇ ಕೆಕೆಆರ್ ರಿಲೀಸ್ ಮಾಡಲು ಕಾರಣ. ಈ ಬಾರಿ ಆರ್ ಸಿಬಿ ಬೆನ್ನಿಗೆ ಬಿದ್ದು ಖರೀದಿಸಿರುವುದರ ಹಿಂದಿದೆ ಒಂದು ಲೆಕ್ಕಾಚಾರ! ಇದು ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಕುತ್ತು ತರುತ್ತದಾ ಎಂಬುದೇ ಕುತೂಹಲ ಕೆರಳಿಸಿರುವ ಸಂಗತಿ.
PCBಗಳು, ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ: ಕೇಂದ್ರ
ಹೊಸದಿಲ್ಲಿ,ಡಿ.17: ದಿಲ್ಲಿ ಮತ್ತು ಹೆಚ್ಚಿನ ಉತ್ತರ ಭಾರತ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿರುವ ನಡುವೆ ಕೇಂದ್ರ ಪರಿಸರ ಸಚಿವಾಲಯವು ದೇಶಾದ್ಯಂತ ಮಾಲಿನ್ಯ ನಿಯಂತ್ರಣ ಮಂಡಳಿಗಳು (PCB) ಮತ್ತು ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿನಲ್ಲಿ ತಿಳಿಸಿದೆ. ಇತ್ತೀಚಿಗೆ ಲೋಕಸಭೆಯಲ್ಲಿ ಸಿಪಿಎಂ ಸಂಸದ ರತ್ನವೇಲ್ ಸಚ್ಚಿದಾನಂದಂ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪರಿಸರ ಖಾತೆ ರಾಜ್ಯಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ.16.28ರಷ್ಟು ಇಂತಹ ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದರು. ಸಿಪಿಸಿಬಿಯಲ್ಲಿ ಮಂಜೂರಾದ 393 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 64 ಖಾಲಿಯಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ (ಎಸ್ಪಿಸಿಬಿ) 6,137 ಹುದ್ದೆಗಳ ಪೈಕಿ 2,921 ಮತ್ತು ದಿಲ್ಲಿ-ಎನ್ಸಿಆರ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿನ್ಯನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) 402 ಹುದ್ದೆಗಳ ಪೈಕಿ 176 ಹುದ್ದೆಗಳು ಖಾಲಿಯಿವೆ. ಒಟ್ಟಾರೆಯಾಗಿ 6,932 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 3,161 ಅಥವಾ ಶೇ.45.6ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಸಿಂಗ್ ವಿವರಿಸಿದರು. ಎಸ್ಪಿಸಿಬಿಗಳು ಮತ್ತು ಪಿಸಿಸಿಗಳು ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಆಡಳಿತಾತ್ಮಕ ನಿಯಂತ್ರಣದಲ್ಲಿವೆ ಮತ್ತು ಅವುಗಳಲ್ಲಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸಂಬಂಧಿಸಿದ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶದ್ದಾಗಿದೆ ಎಂದು ತಿಳಿಸಿದ ಸಿಂಗ್,ಎಸ್ಪಿಸಿಬಿ ಮತ್ತು ಪಿಸಿಸಿಗಳು ತಮ್ಮ ನಿಯಮಾವಳಿಗಳಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳುತ್ತವೆ ಎಂದು ಹೇಳಿದರು.
ಭಾರತದ SIR ಪ್ರಜಾಪ್ರಭುತ್ವ ಮತ್ತು ಮುಸ್ಲಿಮರಿಗೆ ಬೆದರಿಕೆಯೊಡ್ಡಿದೆ: ಟೀಕಾಕಾರರು
ಕೃಪೆ: theguardian.com
ನೈಸರ್ಗಿಕ ಕೃಷಿಯಿಂದ ಮಣ್ಣಿನ ಆರೋಗ್ಯ ವೃದ್ಧಿ: ನಿತ್ಯಾನಂದ ನಾಯಕ್
ಶಿರ್ವ, ಡಿ.17: ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಸಂಪನ್ಮೂಲಗಳಾದ ದನದ ಸೆಗಣಿ, ಗೋಮೂತ್ರ, ಮಲ್ಚಿಂಗ್ ಬಳಸಿ ಜಮೀನಿನಲ್ಲಿ ಲಭ್ಯ ಇರುವ ಜೀವರಾಶಿಗಳನ್ನು ಆಧರಿಸಿ ಮಾಡುವ ಕೃಷಿ ಪದ್ಧತಿಯಾಗಿದೆ ಎಂದು ಪಾದೂರು ಗ್ರಾಮದ ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ ಹೇಳಿದ್ದಾರೆ. ಕಾಪು ರೈತಕೇಂದ್ರದ ವತಿಯಿಂದ ಶಿರ್ವದ ಕೃಷಿಕ ಬೆಟ್ಸಿ ಅರಾನ್ಹಾರವರ ನಿವಾಸದಲ್ಲಿ ಸೋಮವಾರ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಪರಿಸರದ ಕೃಷಿಕರಿಗಾಗಿ ಏರ್ಪಡಿಸಿದ ನೈಸರ್ಗಿಕ ಕೃಷಿ ಪ್ರಾತಿಕ್ಷಿಕೆ ಸಹಿತ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನೈಸರ್ಗಿಕ ಮಾದರಿಯ ಕೃಷಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಣ್ಣಿನ ಆರೋಗ್ಯವನ್ನೂ ಕಾಪಾಡು ತ್ತದೆ ಎಂದರು. ನೈಸರ್ಗಿಕ ಕೃಷಿಕ ಘಟಕಗಳಾದ ಜೀವಾಮೃತ ಹಾಗೂ ಬೀಜಾಮೃತ ತಯಾರಿಕೆ ಹಾಗೂ ಬಳಸುವ ವಿಧಾನದ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿ ನೀಡಿದರು. ಹಿರಿಯರಾದ ಜೆರಾಲ್ಡ್ ಅರಾನ್ಹಾ ಸಹಕರಿಸಿದರು. ಕೃಷಿಕರಾದ ಪ್ರಕಾಶ್ ಪಾಲಮೆ, ಲಕ್ಷ್ಮಣ ನಾಯಕ್ ಪಾಲಮೆ, ಮ್ಯಾಕ್ಸಿಮ್ ಫೆರ್ನಾಡಿಸ್, ಜೆರೋಮ್ ಕೆಸ್ತಲಿನೊ ಬಿ.ಸಿ.ರೋಡ್, ಗಿಲ್ಬರ್ಟ್ ಮೋನಿಸ್, ರೊನಾಲ್ಡ್ ಮೋನಿಸ್, ಶಿಲ್ಪಾ ಪ್ರಭು ಪಾಲಮೆ, ಡಯಾನಾ ಫೆರ್ನಾಂಡಿಸ್ ಸಹಿತ 40ಕ್ಕೂ ಅಧಿಕ ಕೃಷಿಕರು ಪ್ರಯೋಜನ ಪಡೆದುಕೊಂಡರು. ಕಾಪು ರೈತ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಪಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಕೃಷಿ ಸಖಿಯರಾದ ಪ್ರಜ್ಞಾ ಸಂತೋಷ್, ಕೇಶವತಿ ಸಹಕರಿಸಿದರು.
ವಿದ್ಯಾರ್ಥಿನಿ ವಿರುದ್ಧ ಪೊಲೀಸ್ ದೌರ್ಜನ್ಯ ಆರೋಪ| ಬ್ರಹ್ಮಾವರ ಠಾಣೆ ಎದುರು ಪ್ರತಿಭಟನೆ: ಎಫ್ಐಆರ್ ದಾಖಲಿಸಲು ಆಗ್ರಹ
ಬ್ರಹ್ಮಾವರ, ಡಿ.17: ಉಪ್ಪೂರಿನ ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಲ್ಲವರ ಯುವವೇದಿಕೆ ನೇತೃತ್ವದಲ್ಲಿ ಬುಧವಾರ ಬ್ರಹ್ಮಾವರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. ವೇದಿಕೆಯ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಕಾರರು ಬ್ರಹ್ಮಾವರದ ಆಕಾಶವಾಣಿ ಶ್ರೀನಾರಾಯಣಗುರು ಸಭಾಭವನದಿಂದ ಬ್ರಹ್ಮಾವರ ಪೋಲಿಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದರು. ಠಾಣೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ದೌರ್ಜನ್ಯ ಎಸಗಿರುವ ಪೋಲಿಸರ ವಿರುದ್ಧ ಎಫ್ಐಆರ್ ದಾಖಲಿಸಿ, ಕರ್ತವ್ಯದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಧರಣಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ವಾರೆಂಟ್ ಜಾರಿ ಸಂಬಂಧ ಮಲ್ಪೆ ಪೊಲೀಸರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರಿನಲ್ಲಿರುವ ಆರೋಪಿಯ ಸಂಬಂಧಿಕರ ಮನೆಗೆ ಬಂದು ಅಕ್ಷತಾಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಗ್ಗೆ ಅಕ್ಷತಾ ಪೂಜಾರಿ ಬ್ರಹ್ಮಾವರ ಠಾಣೆಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಲಿಲ್ಲ. ಆದರೆ ಆಕೆಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಆದುದರಿಂದ ಅಕ್ಷತಾ ನೀಡಿರುವ ಹೇಳಿಕೆಯಂತೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಅವರು ತಿಳಿಸಿದರು. ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಹಾಗೂ ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಈಗಾಗಲೇ ಎಸ್ಪಿ ಈ ಬಗ್ಗೆ ಕ್ರಮ ಜರಗಿಸಿರುವುದಾಗಿ ಭರವಸೆ ನೀಡಿದ್ದಾರೆ ಎಂದುವ ಅವರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅಕ್ಷತಾಳಿಗೆ ಪೋಲಿಸರಿಂದ ದೌರ್ಜನ್ಯ ಆಗಿದ್ದರೇ, ಉಡುಪಿ ಜಿಲ್ಲಾ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಲು ಮನವಿ ಮಾಡಿದರು. ಈ ಪ್ರಾಧಿಕಾರದ ಮೂಲಕ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಆದರೆ ಇದಕ್ಕೂ ಪ್ರತಿಭಟನಾಕಾರರು ಒಪ್ಪದೆ ತಮ್ಮ ಪಟ್ಟನ್ನು ಮುಂದುವರೆಸಿದರು. ಮಧ್ಯಾಹ್ನ ಆರಂಭಗೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ತಮ್ಮ ಪಟ್ಟು ಸಡಿಲಿಸದೆ ಸಂಜೆ 7.30ರವರೆಗೆ ಮುಂದುವರೆಸಿದರು. ಪರಿಸ್ಥಿತಿ ತೀವ್ರ ಗೊಳ್ಳುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಠಾಣಾ ಆವರಣದಲ್ಲಿ ನಿಯೋಜಿಸಲಾಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಠಾಣೆಗೆ ಆಗಮಿಸಿ, ಅಕ್ಷತಾ ನೀಡಿದ ದೂರಿನಂತೆ ಎಫ್ಐಆರ್ ದಾಖಲಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಬಿಲ್ಲವ ಮುಖಂಡರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಿರಣ್ ಕುರ್ಮಾ ಬೈಲೂರು, ಬಿಎನ್ ಶಂರ್ಕ ಪೂಜಾರಿ, ಶಿವಕುರ್ಮಾ ಅಂಬಲಪಾಡಿ, ಶಿವಾಜಿ ಸುವರ್ಣ, ಸುನೀಲ್ ಬಂಗೇರ, ದಿನರ್ಕ ಹೇರೂರು, ಪ್ರಭಾರ್ಕ ಪೂಜಾರಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಬಿಜೆಪಿ ಯುವ ಮೋರ್ಚಾದ ಪೃಥ್ವಿರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಐವರ ವಿರುದ್ಧ ಎಫ್ಐಆರ್: ಪ್ರತಿಭಟನೆ ಅಂತ್ಯ ಬಿಲ್ಲವ ಮುಖಂಡರು ಸೇರಿದಂತೆ ನೂರಾರು ಪ್ರತಿಭಟನಕಾರರ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ ಕೊನೆಗೆ ಅಕ್ಷತಾ ನೀಡಿದ ದೂರಿನಂತೆ ಮೂವರು ಪೊಲೀಸರು ಸಹಿತ ಐವರ ವಿರುದ್ಧ ಪ್ರಕರಣ ದಾಖಲಿಸಿತು. ಈ ಹಿನ್ನೆಲೆಯಲ್ಲಿ ಬಿಲ್ಲವರ ಯುವವೇದಿಕೆ ಪ್ರತಿಭಟನೆಯನ್ನು ರಾತ್ರಿ 8ಗಂಟೆ ಸುಮಾರಿಗೆ ಅಂತ್ಯಗೊಳಿಸಿತು. ವಾರೆಂಟ್ ಜಾರಿ ಸಂಬಂಧ ಅಕ್ಷತಾ ಪೂಜಾರಿ ಮನೆಗೆ ತೆರಳಿ ದೌರ್ಜನ್ಯ ಎಸಗಿದ್ದಾರೆಂದು ದೂರಲಾದ ಮಲ್ಪೆ ಠಾಣೆಯ ಮೂವರು ಪೊಲೀಸರು ಹಾಗೂ ವಾರೆಂಟ್ ಜಾರಿಯಾದ ಪ್ರಕರಣದ ದೂರುದಾರ ಮತ್ತು ಆತನ ಮಗನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 C