IMD Rain Forecast: ಈ ಭಾಗಗಳಲ್ಲಿ ಮೈನಡುಗುವ ಚಳಿ, ನವೆಂಬರ್ 28ರವರೆಗೆ ಭಾರೀ ಮಳೆ
ರಾಜ್ಯದ ಕೆಲವೆಡೆ ಮಳೆ ತಗ್ಗಿದೆ. ಎಲ್ಲೆಡೆ ಮೈನಡುಗುವ ಚಳಿ ಕಾಡಲಾರಂಭಿಸಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ನವೆಂಬರ್ 28ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ 25ರವರೆಗೆ ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ 6 ದಿನಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಐಕ್ಯ ವೇದಿಕೆ ಕೊಡಾಜೆ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆ
ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಐಕ್ಯ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆಯಾದರು ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಶುಭ ಹಾರೈಸಿದರು. ಐಕ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತ್ ವೆಹಿಕಲ್ ಬಜಾರ್ ಮಾಲಕ ಅಶ್ರಫ್ ತಿಂಗಳಾಡಿ, ಉಪಾಧ್ಯಕ್ಷರಾಗಿ ರಝಾಕ್ ಅನಂತಾಡಿ, ಆದಂ ಎಸ್.ಎಂ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಅನಂತಾಡಿ, ಜೊತೆ ಕಾರ್ಯದರ್ಶಿಯಾಗಿ ಎಸ್.ಎಸ್. ಮಸೂದ್ ಕೊಡಾಜೆ, ಕೋಶಾಧಿಕಾರಿಯಾಗಿ ಎಸ್.ಎಸ್. ರಫೀಕ್ ಕೊಡಾಜೆ ಆಯ್ಕೆಯಾದವರು. ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸೋಡ್ತಿ ಉಸ್ತುವಾರಿಯಾಗಿ ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನ್ಸೂರ್ ನೇರಳಕಟ್ಟೆ, ಪತ್ರಿಕಾ ಕಾರ್ಯದರ್ಶಿ ಗಳಾಗಿ ನೌಫಲ್ ಕೊಡಾಜೆ ಹಾಗೂ ಮಜೀದ್ ಅನಂತಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ರಫೀಕ್ ಪಂಥಡ್ಕ ಹಾಗೂ ಫಾರೂಕ್ ಕೊಡಾಜೆ, ಆರೋಗ್ಯ ಕಾರ್ಯದರ್ಶಿಯಾಗಿ ಸಲೀಂ ಪರ್ಲೋಟ್ , ಶೈಕ್ಷಣಿಕ ಕಾರ್ಯದರ್ಶಿಯಾಗಿ ಹಫೀಝ್ ನೇರಳಕಟ್ಟೆ, ಸಾಮಾಜಿಕ ಕಾರ್ಯದರ್ಶಿಯಾಗಿ ಫಾರೂಕ್ ಪಂಥಡ್ಕ ಅವರನ್ನು ಆರಿಸಲಾಯಿತು. ಕಾರ್ಯದರ್ಶಿ ಶರೀಫ್ ಅನಂತಾಡಿ ಸ್ವಾಗತಿಸಿ, ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ವಂದಿಸಿದರು.
ಪವರ್ ಶೇರಿಂಗ್ ಆಗಿಲ್ಲ ಎನ್ನುವ ಡಿಕೆಶಿ ನಡೆ!
ಮೊದಲಿಂದಲೂ ಹೈಕಮಾಂಡ್ ಅನ್ನು ಒಲಿಸಿಕೊಂಡೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ಡಿ.ಕೆ. ಶಿವಕುಮಾರ್ ನಿಲುವಾಗಿತ್ತು. ಅದಕ್ಕೆ ಸಿದ್ದರಾಮಯ್ಯ ಜೊತೆ ಸೆಣಸಿ ಸಿಎಂ ಪಟ್ಟ ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ವಾಸ್ತವ ಕೂಡ ಕಾರಣವಾಗಿತ್ತು. ಅವು ಅವರ ಮಾತಿನಲ್ಲೂ ವ್ಯಕ್ತವಾಗುತ್ತಿದ್ದವು. ಜೊತೆಜೊತೆಗೆ ‘ಅಗತ್ಯ ತಯಾರಿ’ಗಳೂ ನಡೆಯುತ್ತಿದ್ದವು. ನವೆಂಬರ್ ಹತ್ತಿರ ಆಗುತ್ತಿದ್ದಂತೆ ಪ್ರಯತ್ನಗಳು ತೀವ್ರವಾಗತೊಡಗಿದವು. ಆದರೆ ಹೈಕಮಾಂಡ್ ಪೂರಕವಾಗಿ ಸ್ಪಂದಿಸಲಿಲ್ಲ. ರಾಹುಲ್ ಗಾಂಧಿ ಅವರನ್ನು ಬಿಡಿ, ಕೆ.ಸಿ. ವೇಣುಗೋಪಾಲ್ ಭೇಟಿ ಕೂಡ ಸಾಧ್ಯವಾಗಲಿಲ್ಲ. ವಾರಗಟ್ಟಲೆ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಇನ್ನೊಂದೆಡೆ ಸಿದ್ದರಾಮಯ್ಯ ದಿಲ್ಲಿ ವಿಮಾನ ಇಳಿಯುತ್ತಿದ್ದಂತೆ ನೇರವಾಗಿ 10 ಜನಪತ್ (ಸೋನಿಯಾ ಗಾಂಧಿ ನಿವಾಸ)ಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಅದಾದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿದರು. ಇದರಿಂದ ಡಿ.ಕೆ. ಶಿವಕುಮಾರ್ ವಿಚಲಿತರಾದರು. ವಿಚಲಿತರಾಗಿದ್ದು ಮಾತ್ರವಲ್ಲ, ವರಸೆ ಬದಲಿಸುವುದಕ್ಕೂ ನಿರ್ಧರಿಸಿದರು ಎನ್ನುತ್ತವೆ ಅವರ ಆಪ್ತ ಮೂಲಗಳು. ಡಿ.ಕೆ. ಶಿವಕುಮಾರ್ ಭೇಟಿಗೆ ಸಿಕ್ಕ ಏಕೈಕ ನಾಯಕ ಮಲ್ಲಿಕಾರ್ಜುನ ಖರ್ಗೆ. ಡಿ.ಕೆ. ಶಿವಕುಮಾರ್ ವರಸೆ ಬದಲಿಸಿದ್ದು ಕೂಡ ಖರ್ಗೆ ಭೇಟಿ ನಂತರ, ಖರ್ಗೆ ಹೇಳಿದ ‘ಅವರ ಬಳಿ ಸಂಖ್ಯೆಗಳಿವೆ, ನಿಮ್ಮ ಬಳಿ ಏನಿದೆ?’ ಎಂಬ ಮಾತಿನ ನಂತರವಂತೆ. ಇನ್ನಷ್ಟು ಪುರಾವೆಗಳು ಬೇಕೆಂದರೆ ಖರ್ಗೆ ಭೇಟಿ ಮಾಡಿ ಬಂದ ಕೆಲ ಹೊತ್ತಿನಲ್ಲೇ ಡಿ.ಕೆ. ಸುರೇಶ್ ಆಡಿದ ಮಾತುಗಳನ್ನು ಗಮನಿಸಬೇಕು. ಅವರು ಹೇಳಿದ್ದು ‘ಸಿದ್ದರಾಮಯ್ಯ ಆಟ ಶುರು ಮಾಡಿದ್ದಾರೆ, ನಾವು ಅದನ್ನು ಮುಗಿಸುತ್ತೇವೆ’ ಎಂದು. ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದವರೇ ‘ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯುತ್ತಾರೆ’ ಎಂಬ ಹೊಸ ದಾಳ ಉರುಳಿಸಿದರು. ಆ ಮೂಲಕ ‘ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೆ’ ಎಂದು ನಂಬಿಸುವ ಪ್ರಯತ್ನ ಮಾಡಿದರು. ಇವೆಲ್ಲಾ ಆದಮೇಲೆಯೇ ಇಷ್ಟು ದಿನ ಮಾತೆತ್ತಿದರೆ ‘ಹೈಕಮಾಂಡ್ ನೋಡಿ.ಕೆ.ೂಳ್ಳುತ್ತೆ’ ಎಂಬ ಮೈಂಡ್ ಗೇಮ್ ಆಡುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ಅದೇ ಹೈಕಮಾಂಡಿಗೆ ತನ್ನ ತಾಕತ್ತು ತೋರಿಸಿ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳುವ ನಂಬರ್ ಗೇಮ್ ಆಡಲು ಶುರು ಮಾಡಿದ್ದು. ಹೈಕಮಾಂಡ್ ಸಮ್ಮುಖದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದವಾಗಿರುವುದು ನಿಜವೇ ಆಗಿದ್ದರೆ, ರಾಹುಲ್ ಗಾಂಧಿ ಅವರಿಗೆ ಮಾತು ಕೊಟ್ಟಿದ್ದರೆ ಸಿದ್ದರಾಮಯ್ಯ ಈಗ ಕುರ್ಚಿ ಬಿಡುವುದಿಲ್ಲ ಎಂದು ಹೇಳಲು ಸಾಧ್ಯವೆ? ದಿಲ್ಲಿಯಲ್ಲಿ ಕುಳಿತು ಇಂಗ್ಲಿಷ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ನಾನೇ ಐದು ವರ್ಷಕ್ಕೂ ಸಿಎಂ, ನೋ ಪವರ್ ಶೇರಿಂಗ್’ ಎಂದು ಹೇಳಲು ಸಾಧ್ಯವಿತ್ತೆ? ಸಿದ್ದರಾಮಯ್ಯ ಹಾಗೆ ಹೇಳಿದ ಮೇಲೂ ಭೇಟಿಗೆ ಸಮಯಾವಕಾಶ ಕೊಡುತ್ತಿದ್ದರೆ ರಾಹುಲ್ ಗಾಂಧಿ? ಹಾಗೆಯೇ, ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಆಗ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರೆ ಈಗ ಇಲ್ಲ ಎಂದು ಹೇಳಲು ಸಾಧ್ಯವೆ? ಇವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡಿಗೆ ಹತ್ತಿರ ಇರುವ ದಿಲ್ಲಿಯ ಯಾವುದೇ ನಾಯಕರಿಗೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆಯಾ? ಎಂದು ಕೇಳಿದರೆ ನಮ್ಮ ಕಡೆಗೆ ವಾಪಸ್ ತೂರಿಬರುವ ಪ್ರಶ್ನೆಗಳು. ಅಷ್ಟೇ ಅಲ್ಲ, ಡಿ.ಕೆ. ಶಿವಕುಮಾರ್ ಮನೆಗೆ ಹೋಗಿ ‘ಜೈಕಾರ’ ಹಾಕಿಬಂದಿರುವ ಕೆಲ ಶಾಸಕರು ಕೂಡ ಹೇಳುವ ಮಾತುಗಳು. ಈ ವಾಸ್ತವ ಡಿ.ಕೆ. ಶಿವಕುಮಾರ್ ಅವರಿಗೆ ಇತರರಿಗಿಂತ ತುಸು ಚೆನ್ನಾಗಿಯೇ ಗೊತ್ತು. ಅದಕ್ಕಿಂತ ಜಾಸ್ತಿ ಹೈಕಮಾಂಡ್ ಲೆಕ್ಕಾಚಾರ, ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹತೆ ಮತ್ತು ಸಿದ್ದರಾಮಯ್ಯ ಅವರ ಶಕ್ತಿ ಬಗ್ಗೆ ಗೊತ್ತು. ಒಂದು ರೀತಿಯಲ್ಲಿ ಅವರೀಗ ಗೋಡೆಗೆ ತಳ್ಳಲ್ಪಟ್ಟವರು. ‘ತಿರುಗಿ ಬೀಳದೆ’ ಅವರಿಗೆ ಅನ್ಯ ಮಾರ್ಗವಿಲ್ಲ. ಅದರಿಂದಾಗಿಯೋ ಏನೋ ಇಷ್ಟು ದಿನ ಹೈಕಮಾಂಡ್ ನೋಡಿ.ಕೆ.ೂಳ್ಳುತ್ತದೆ ಎನ್ನುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ‘ಹೈಕಮಾಂಡ್ ನನ್ನ ಪರ ತೀರ್ಮಾನ ಕೈಗೊಳ್ಳುವಂತೆ ಮಾಡುತ್ತೇನೆ’ ಎಂದು ನಿರ್ಧರಿಸಿ ಮುಂದಡಿ ಇಟ್ಟಿದ್ದಾರೆ. ಇದರಿಂದ ಡಿ.ಕೆ. ಶಿವಕುಮಾರ್ ಅವರ ನಡೆಗಳಲ್ಲಿಯೇ ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ ಎನ್ನುವ ಸುಳಿವುಗಳು ಸ್ಪಷ್ಟವಾಗಿ ಸಿಗುತ್ತಿವೆ. ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಎರಡು ಬೆಳವಣಿಗೆಗಳಾಗುತ್ತಿವೆ. ಮನವೊಲಿಕೆ ಮೂಲಕ ಸಾಧಿಸಿಕೊಳ್ಳಲು ಸಾಧ್ಯವಿಲ್ಲ ಎನಿಸಿರುವುದರಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುವುದು. ಸಮಯ ಕೇಳಿದಾಗ ಕೊಡದೆ ಸತಾಯಿಸಿದರು ಎನ್ನುವ ಕಾರಣಕ್ಕೆ ಅವರಾಗಿಯೇ ಕರೆಯುವವರೆಗೆ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಿಸದೆ ಇರುವುದು. ಆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು. ಅದರ ಭಾಗವಾಗಿ ಈಗ ಶಾಸಕರ ವಿಶ್ವಾಸ ಗಳಿಸುವ ಕೆಲಸ ಭರದಿಂದ ಸಾಗುತ್ತಿದೆ. ಡಿಕೆಶಿ ಜೈಲಿಗೆ ಹೋಗಿದ್ದೇಕೆ? ಹೈಕಮಾಂಡ್ ಅನ್ನು ಬಲಪ್ರದರ್ಶನದ ಮೂಲಕವೇ ಮಣಿಸಬೇಕು ಎಂದರೆ ಕನಿಷ್ಠ 50 ಶಾಸಕರು ಬೇಕು ಎನ್ನುವ ಲೆಕ್ಕಾಚಾರದೊಂದಿಗೆ ತಂತ್ರಗಾರಿಕೆಗಳು ನಡೆಯುತ್ತಿವೆ. ಡಿ.ಕೆ. ಶಿವಕುಮಾರ್ ಬಳಿ ಈಗಾಗಲೇ ಅಷ್ಟು ಮಂದಿ ಶಾಸಕರಿದ್ದಾರಾ ಅಥವಾ ಶಾಸಕರನ್ನು ಇನ್ನಷ್ಟೇ ಹೊಂದಿಸಬೇಕಾ? ಅಷ್ಟು ದೊಡ್ಡ ಮಟ್ಟದ ಬಲ ಇದ್ದರೆ ಜೈಲಿಗೆ ಹೋಗಿ ಶಾಸಕರ ಬೆಂಬಲ ಕೇಳುವ ಅನಿವಾರ್ಯತೆ ಏನಿತ್ತು? ಅದರಲ್ಲೂ ಜೈಲಿನಲ್ಲಿರುವ ಶಾಸಕರನ್ನು ತಮ್ಮ ಬಣದವರು ಎಂದೇ ಹೇಳಲಾಗುತ್ತಿದ್ದರೂ ಭೇಟಿ ಮಾಡಿದ್ದೇಕೆ? ‘ನಾನು ಎಂಥದೇ ಪರಿಸ್ಥಿತಿಯಲ್ಲೂ ಶಾಸಕರ ಜೊತೆಗಿರುವೆ’ ಎಂಬ ಸಂದೇಶ ಕೊಡುವುದಕ್ಕಾಗಿಯೆ? ಈಗ ಡಿ.ಕೆ. ಶಿವಕುಮಾರ್ ಬಾಯಿ ಮಾತಿಗೆ ನನಗೆ ಬಣ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎನ್ನುತ್ತಿದ್ದಾರೆ. ಆದರೆ ಬಣ ರಾಜಕಾರಣ ಅವರಿಗೆ ಹೊಸದಲ್ಲ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಸಾಬೀತು ಮಾಡಿದ್ದಾರೆ. ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಎಸ್.ಎಂ. ಕೃಷ್ಣ ‘ನಮ್ಮ ಸರಕಾರದ ಬಗ್ಗೆ ಜನಾಭಿಪ್ರಾಯ ಹೇಗಿದೆ? ನಾವು ಮತ್ತೆ ಸರಕಾರ ರಚಿಸಲು ಸಾಧ್ಯವೆ? ಎಷ್ಟು ಶಾಸಕರು ಮತ್ತೆ ಗೆದ್ದು ಬರುಬಹುದು?’ ಎಂಬಿತ್ಯಾದಿ ಕೇಳಿದ್ದಾರೆ. ಮಂತ್ರಿಗಳು ಎಲ್ಲವೂ ಚೆನ್ನಾಗಿದೆ ಎಂಬ ಸುಳ್ಳನ್ನು ನವಿರಾಗಿ ಹೇಳಿದ್ದಾರೆ. ನಡುವೆ ಡಿ.ಕೆ. ಶಿವಕುಮಾರ್ ‘ಸಾರ್, ನಾವು 80ರಿಂದ 90 ಮಂದಿ ಗೆದ್ದರೂ ಸಾಕು, ಉಳಿದಿದ್ದನ್ನು ಮ್ಯಾನೇಜ್ ಮಾಡಬಹುದು’ ಎಂದಿದ್ದಾರೆ. ಸಹಜವಾಗಿ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೆ ಡಿ.ಕೆ. ಶಿವಕುಮಾರ್ ‘ನಾನು ಮ್ಯಾನೇಜ್ ಮಾಡುವೆ’ ಎಂದು ಉತ್ತರಿಸಿದ್ದಾರೆ. ಆಗ ಹಿರಿಯ ಸಚಿವರೊಬ್ಬರು ‘ಶಾಸಕರನ್ನು ಮ್ಯಾನೇಜ್ ಮಾಡುವ ಸಾಮರ್ಥ್ಯ ಇರುವ ನೀವು ಈಗಲೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದಕ್ಕಾಗಿ ಪ್ರಯತ್ನ ಮಾಡಬಹುದಲ್ಲಾ?’ ಎಂದು ಸವಾಲು ಹಾಕಿದ್ದಾರೆ. ಇವರ ಮಾತುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶುರುವಾದಾಗ ಎಸ್.ಎಂ. ಕೃಷ್ಣ ಮಧ್ಯ ಪ್ರವೇಶಿಸಿ ಕದನ ವಿರಾಮ ಘೋಷಿಸಿದರು ಎನ್ನುತ್ತದೆ ಇತಿಹಾಸ. ಆಗಲೇ ಮ್ಯಾನೇಜ್ ಮಾಡುತ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್ ಈಗ ‘ಗಾಳ ಹಾಕಿ ಮೀನು ಹಿಡಿಯುವ ಕಲೆ ನನಗೆ ಕರಗತ’ ಎಂದಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಆದರೆ ಆಗ ಅವರಿಂದ ಮ್ಯಾನೇಜ್ ಮಾಡಲು ಸಾಧ್ಯವಾಗಿರಲಿಲ್ಲ. 2004ರ ಫಲಿತಾಂಶ ಅತಂತ್ರವಾಗಿದ್ದಾಗ ಎಲ್ಲರಿಗಿಂತಲೂ ಮೊದಲು ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿದ್ದವರು ಎಸ್.ಎಂ. ಕೃಷ್ಣ. ಅವರ ಪರವಾಗಿ ಲಾಬಿ ಮಾಡಿದ್ದವರು ಇದೇ ಡಿ.ಕೆ. ಶಿವಕುಮಾರ್ ಮತ್ತು ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ. ದಿಲ್ಲಿಯ ಸಫ್ಧರ್ ಜಂಗ್ ಲೇನ್ ನಲ್ಲಿರುವ ದೇವೇಗೌಡರ ಮನೆಯ ಹೊರಗೆ ಡಿ.ಕೆ. ಶಿವಕುಮಾರ್ ಮತ್ತು ಒಳಗೆ ಸಿದ್ಧಾರ್ಥ ದಿನಗಟ್ಟಲೆ ಕಾದು ಕುಳಿತಿದ್ದರು. ಇಷ್ಟೆಲ್ಲಾ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು ಎಸ್.ಎಂ. ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡುವುದಿರಲಿ, ಕಡೆಗೆ ತಾವು ಮಂತ್ರಿ ಆಗುವುದಕ್ಕೂ ಸಾಧ್ಯವಾಗಿರಲಿಲ್ಲ. ಮ್ಯಾನೇಜ್ ಮಾಡುವುದು ಎಷ್ಟು ಕಷ್ಟ ಎಂದು ಅವರಿಗೆ ಆಗಲೇ ಗೊತ್ತಾಗಿರಬೇಕು. ಗೊತ್ತಿದ್ದೂ ಗುದ್ದಾಟಕ್ಕೆ ಇಳಿದಿದ್ದಾರೆ ಎಂದರೆ ಬೇರೆ ದಾರಿ ಇಲ್ಲದಿರಬಹುದು ಅಥವಾ ಬೇರೆ ಏನೋ ತಂತ್ರಗಾರಿಕೆ ಇರಬಹುದು. ಡಿಕೆಶಿ ಒಂಥರಾ, ಡಿಕೆಸು ಇನ್ನೊಂಥರಾ? ಡಿ.ಕೆ. ಶಿವಕುಮಾರ್ ಮಾತುಗಳು ಮಾರ್ಮಿಕವಾಗಿವೆ. ಮಾರಕವಾಗದಂತೆ ಹೆಜ್ಜೆ ಹೆಜ್ಜೆಗೂ ಜಾಗ್ರತೆ ವಹಿಸುತ್ತಿದ್ದಾರೆ. ಅಧ್ಯಕ್ಷನಾಗಿ ಪಕ್ಷದ ಪರಿಧಿ ದಾಟ ಬಾರದೆಂಬ ಎಚ್ಚರಿಕೆಯಲ್ಲಿದ್ದಾರೆ. ತನ್ನ ತಾಳ್ಮೆ ದೌರ್ಬಲ್ಯ ಎಂದು ಬಿಂಬಿತವಾಗಬಾರದು, ಹೈಕಮಾಂಡ್ ನನ್ನನ್ನು ಹಗುರವಾಗಿ ಪರಿಗಣಿಸಬಾರದು ಎನ್ನುವ ಕಾರಣಕ್ಕಾಗಿ ಸಿಡಿಯುವ ಸುಳಿವುಗಳನ್ನೂ ನೀಡುತ್ತಿದ್ದಾರೆ. ಇನ್ನೊಂದು ಕಡೆ ಅಣ್ಣ ಅಧ್ಯಕ್ಷನಾಗಿ ಮಾಡಲಾಗದ ಕೆಲ ಕೆಲಸಗಳನ್ನು ತಮ್ಮ ಡಿ.ಕೆ. ಸುರೇಶ್ ತನ್ನ ಹೆಗಲಿಗೆ ಎಳೆದುಕೊಂಡಿದ್ದಾರೆ. ತಾವೇ ಖುದ್ದಾಗಿ ಸಿದ್ದರಾಮಯ್ಯ ಬಳಿ ಹೋಗಿ ‘ಕೇಳಿ’ದ್ದಾರೆ. ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಸದ್ಯ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆಗಳೆಲ್ಲವೂ ಗೊತ್ತಿರುವುದು ಡಿ.ಕೆ. ಸುರೇಶ್ ಅವರಿಗೆ ಮಾತ್ರ. ಅವರು ಖಾಸಗಿಯಾಗಿ ಮಾತನಾಡುತ್ತಾ ‘ನಾವು ಅಂದುಕೊಂಡಂತೆ ಆಗದಿದ್ದರೆ, ಮೂರ್ನಾಲ್ಕು ದಿನದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಕರ್ನಾಟಕದ ಕಡೆ ನೋಡುವಂತೆ ಮಾಡುತ್ತೇವೆ’ ಎಂದು ಹೇಳಿದ್ದಾರಂತೆ. ‘ಸಿದ್ದರಾಮಯ್ಯ ಅವರ ಆಟವನ್ನು ನಾವು ನಿಲ್ಲಿಸುತ್ತೇವೆ’ ಎಂಬ ಮಾತಿನಿಂದ ಹಿಡಿದು ಡಿ.ಕೆ. ಸುರೇಶ್ ನಾಲ್ಕು ಗೋಡೆಗಳ ಒಳಗೆ ಆಡುತ್ತಿರುವ ಮಾತುಗಳು ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಆಡುವ ಮಾತುಗಳಿಗಿಂತ ಜಾಸ್ತಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಕರ್ನಾಟಕದ ಕಡೆ ನೋಡುವಂತೆ ಮಾಡುತ್ತೇವೆ’ ಎಂಬ ಮಾತು ಆಪರೇಷನ್ ಕಮಲದ ಅಸ್ತ್ರ ಇರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಕೆಲವು ವದಂತಿಯ ಸ್ವರೂಪದಲ್ಲಿವೆ. ಕೆಲವು ಅತಿಯಾದ ಲೆಕ್ಕಾಚಾರ, ಅತಿಯಾದ ವೇಗ ಎಂದು ಭಾಸವಾಗುತ್ತಿವೆ. ಅತಿಯಾದರೆ ಅಮೃತವೂ ವಿಷ ಎನ್ನುವುದು ರಾಜಕಾರಣದಲ್ಲಿ ಕೆಲವೊಮ್ಮೆ ಅನ್ವಯವಾಗುತ್ತದೆ, ಇನ್ನು ಕೆಲವೊಮ್ಮೆ ಅಂದುಕೊಂಡದ್ದನ್ನು ಸಾಧಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗಿ ಅತಿ ಎನಿಸುವಂಥ ಸಂಗತಿಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ ರಾಜಕಾರಣದಲ್ಲಿ ಸರಿತಪ್ಪುಗಳ ನಡುವಿನ ಗೆರೆ ತುಂಬಾ ಸಣ್ಣದು. ಆಫ್ ದಿ ರೆಕಾರ್ಡ್! ಇಷ್ಟು ದಿನ ಹೈಕಮಾಂಡ್ ಜಪ ಮಾಡುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ಶಕ್ತಿ ಪ್ರದರ್ಶನ ಎನ್ನುತ್ತಿದ್ದಾರೆ. ಈವರೆಗೆ ‘ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಶಾಸಕಾಂಗ ಪಕ್ಷದಲ್ಲಿ ನಿರ್ಧಾರವಾಗಲಿ’ ಎಂದು ಪಟ್ಟು ಹಾಕುತ್ತಿದ್ದ ಸಿದ್ದರಾಮಯ್ಯ ಈಗ ಹೈಕಮಾಂಡ್ ಮಾತಿಗೆ ಬದ್ಧ ಎನ್ನುತ್ತಿದ್ದಾರೆ. ಇಬ್ಬರೂ ಪಥ-ಶಪಥಗಳನ್ನು ಬದಲಿಸಿದ್ದಾರೆ. ಅಧಿಕಾರದ ರಥ ಯಾರಿಗೆ ಒಲಿಯುತ್ತದೆ ಎನ್ನುವುದನ್ನು ಕಾದುನೋಡಬೇಕು.
Indian Railways Safety Concerns: ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿದ್ಯುತ್ ಕೆಟಲ್ ಬಳಸಿ ತತ್ಕ್ಷಣದ ಆಹಾರ ತಿನಿಸು ನೂಡಲ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ರೈಲ್ವೆ ಸುರಕ್ಷತೆ, ಬೆಂಕಿ ಅವಘಡದಂತಹ ಸಂಭನೀಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ. ಈ ಮಹಿಳೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರೈಲ್ವೆಯು
ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಕೋರಿ ಭಾರತಕ್ಕೆ ಬಾಂಗ್ಲಾದೇಶ ಪತ್ರ
ಹೊಸದಿಲ್ಲಿ : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ರವಿವಾರ ಹೇಳಿದ್ದಾರೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಇತ್ತೀಚೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಹದಿನಾರು ವರ್ಷಗಳ ಅಧಿಕಾರಾವಧಿಯಲ್ಲಿ ರಾಜಕೀಯ ಕಾರ್ಯಕರ್ತರು ಮತ್ತು ವಿಮರ್ಶಕರ ಬಲವಂತದ ಕಣ್ಮರೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಸೀನಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಮತ್ತೊಂದು ವಿಚಾರಣೆಯನ್ನು ಘೋಷಿಸಿದ ದಿನವೇ ಹುಸೇನ್ ಅವರು ಪತ್ರ ಬರೆದಿರುವ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. 2024ರ ಜುಲೈ, ಆಗಸ್ಟ್ ತಿಂಗಳಲ್ಲಿ ನಿರಾಯುಧ ಪ್ರತಿಭಟನಾಕಾರರ ದಮನದಲ್ಲಿ ಹಸೀನಾ ಅವರ ಪಾತ್ರದ ಕುರಿತು ನ್ಯಾಯಾಲಯದ ತೀರ್ಪಿನ ವಿವರಗಳನ್ನು ಹೊಂದಿರುವ ಪತ್ರವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ತೌಹಿದ್ ಹುಸೇನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
Pakistan Paramilitary: ಪಾಕಿಸ್ತಾನ ಸೇನಾ ಕೇಂದ್ರಕ್ಕೆ ನುಗ್ಗಿದ ಆಗಂತುಕ, ಮುಂದೆ ಆಗಿದ್ದೆಲ್ಲಾ ಅನಾಹುತ!
ಪಾಕಿಸ್ತಾನ ಮತ್ತೊಮ್ಮೆ ಭೀಕರ ದಾಳಿಗೆ ನಲುಗಿದೆ, ಪದೇ ಪದೇ ಉಗ್ರರನ್ನು ಪೋಷಣೆ ಮಾಡುವ ಈ ದೇಶಕ್ಕೆ ಅದೇ ಉಗ್ರರಿಂದ ಮತ್ತೆ ಮತ್ತೆ ಆಪತ್ತು ಎದುರಾಗುತ್ತಿದೆ. ಇಂದು ದಿಢೀರ್ ಪಾಕಿಸ್ತಾನದ ಪ್ಯಾರಾ ಮಿಲಿಟರಿ ಅಂದ್ರೆ ಅರೆಸೇನಾ ಪಡೆಯ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿ ಪರಿಣಾಮ 3 ಸಾವು ಸಂಭವಿಸಿದೆ ಎಂದು ಸದ್ಯಕ್ಕೆ ಮಾಹಿತಿ ಸಿಗುತ್ತಿದೆ.
Explainer: 'ಗಡಿಗಳು ಬದಲಾಗಬಹುದು' - ಸಂಚಲನ ಸೃಷ್ಟಿಸಿದ ರಾಜನಾಥ್ ಸಿಂಗ್ ಹೇಳಿಕೆ; ಏನಿದು ಸಿಂಧ್ ವಿವಾದ?
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಂಧ್ ಪ್ರಾಂತ್ಯದ ಬಗ್ಗೆ ನೀಡಿದ ಹೇಳಿಕೆ ಭಾರೀ ಚರ್ಚೆಯ ಅಲೆಗಳನ್ನು ಎಬ್ಬಿಸಿದೆ. ಸಿಂಧ್ ಕೇವಲ ಪಾಕಿಸ್ತಾನದ ಒಂದು ಭಾಗವಷ್ಟೇ ಅಲ್ಲ, ಅದು ಭಾರತೀಯ ನಾಗರಿಕತೆಯ ತೊಟ್ಟಿಲಾಗಿದೆ. ವಿಭಜನೆಯ ಸಂದರ್ಭದಲ್ಲಿ ಸಿಂಧಿ ಸಮುದಾಯ ಅನುಭವಿಸಿದ ನೋವು, ರಾಜ್ಯವಿಲ್ಲದ ಅವರ ಅತಂತ್ರ ಸ್ಥಿತಿ ಮತ್ತು ಭಾರತದೊಂದಿಗಿನ ಅವರ ಸಾಂಸ್ಕೃತಿಕ ಸಂಬಂಧವನ್ನು ರಾಜನಾಥ್ ಸಿಂಗ್ ಅವರ ಹೇಳಿಕೆ ಪ್ರತಿಧ್ವನಿಸಿದೆ. ಅಷ್ಟೇ ಅಲ್ಲ, 'ಗಡಿಗಳು ಬದಲಾಗಬಹುದು' ಎಂಬ ಮಾತು ರಾಜಕೀಯವಾಗಿ ಪ್ರಚೋದನಕಾರಿಯಾಗಿದ್ದು, ಪಾಕಿಸ್ತಾನ ಕುಪಿತಗೊಳ್ಳುವಂತೆ ಮಾಡಿದೆ.
ಭಾರತ ಮತ್ತು ಕೆನಡಾ ಉಭಯ ದೇಶಗಳ ಸಂಬಂಧವನ್ನು ಪುನಶ್ಚೇತನಗೊಳಿಸಲು ಮುಂದಾಗಿವೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾಗಿ, ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡಿದ್ದಾರೆ. 2030ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು 50 ಶತಕೋಟಿ ಡಾಲರ್ಗೆ ಹೆಚ್ಚಿಸುವ ಗುರಿ ಹೊಂದಿದೆ. ನಿಜ್ಜರ್ ಹತ್ಯೆಯ ಬಳಿಕ ಹದಗೆಟ್ಟಿದ್ದ ಸಂಬಂಧ ಮತ್ತೆCEPA ಒಪ್ಪಂದದಿಂದ ಮತ್ತೆ ಹಳಿಗೆ ಮರಳುವ ನಿರೀಕ್ಷೆಯನ್ನು ಉಭಯ ದೇಶಗಳು ಹೊಂದಿವೆ.
West Bengal : ಬಿರುಗಾಳಿ ಎಬ್ಬಿಸುತ್ತಿರುವ SIR - ಅಕ್ರಮ ಬಾಂಗ್ಲಾದೇಶಿಗಳು ರಾಜ್ಯದಿಂದ ಖಾಲಿಖಾಲಿ
Effect of SIR in West Bengal : ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ, ದೇಶದಲ್ಲಿ ಭಾರೀ ಚರ್ಚೆಯಲ್ಲಿರುವ ವಿಷಯ. ಬಿಹಾರದಲ್ಲಿ, ಈ ಪ್ರಕ್ರಿಯೆಯ ನಂತರ ವಿಧಾನಸಭಾ ಚುನಾವಣೆ ನಡೆದಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು, ವಿಪಕ್ಷಗಳು ನಡೆಸಿದ ಪ್ರಚಾರಕ್ಕೆ ಮತದಾರ ತಲೆನೇ ಕೆಡಿಸಿಕೊಳ್ಳಲಿಲ್ಲ ಎನ್ನುವುದು ಫಲಿತಾಂಶದಲ್ಲಿ ಸಾಬೀತಾಗಿದೆ. ಈಗ, ಪಶ್ಚಿಮ ಬಂಗಾಳದಲ್ಲೂ ಈ ಪ್ರಕ್ರಿಯೆ ಆರಂಭವಾಗಿದೆ. ಅಕ್ರಮ ವಲಸೆಗಾರರು ದೇಶವನ್ನು ಖಾಲಿ ಮಾಡಲು ಆರಂಭಿಸಿದ್ದಾರೆ.
ರಾಯಚೂರು: ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ
ರಾಯಚೂರು: ಶ್ರೀ ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ನಗರದ ಶ್ರೀ ಅಲ್ಲಮ ಪ್ರಭು ಕಾಲೋನಿಯ ಸಹಕಾರಿ ಪ್ರಾಥಮಿಕ ಶಾಲೆಯ ಆವರಣದ ಮತಗಟ್ಟೆಯಲ್ಲಿ ಸಂಘದಲ್ಲಿ ಸುಮಾರು 173 ಸದಸ್ಯರು ಮತ ಚಲಾಯಿಸುವರು. ರಾಯಚುರು ಸಹಕಾರಿ ಸಂಘಗಳ ಸಹಾಯಕ ನಿಂಬದಕ ಕಚೇರಿಯ ಮಾರಾಟ ಅಧಿಕಾರಿ ಸಿದ್ದಪ್ಪ ಅವರ ನೇತ್ವದ ಅದಿಕಕಾರಿಗಳು ಚುನಾವಣೆ ಕಾರ್ಯ ನೇರವೆರಿಸಿದರು.
ಟ್ರಂಪ್ ಫ್ಯಾಸಿಸ್ಟ್ ಎಂಬ ಹೇಳಿಕೆಗೆ ಈಗಲೂ ಬದ್ಧ: ನ್ಯೂಯಾರ್ಕ್ನ ನೂತನ ಮೇಯರ್ ಮಮ್ದಾನಿ
ನ್ಯೂಯಾರ್ಕ್: ಟ್ರಂಪ್ ಫ್ಯಾಸಿಸ್ಟ್ ಎಂಬ ಬಗ್ಗೆ ತಾವು ಧೀರ್ಘಕಾಲದಿಂದ ಹೊಂದಿದ್ದ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ರವಿವಾರ ಸ್ಪಷ್ಟಪಡಿಸಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್ ಜತೆಗಿನ ಮೊದಲ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದ ಬೆನ್ನಲ್ಲೇ ಮಮ್ದಾನಿ ಈ ಹೇಳಿಕೆ ನೀಡಿದ್ದಾರೆ. ಇದನ್ನು ನಾನು ಹಿಂದೆಯೂ ಹೇಳಿದ್ದೆ; ಇಂದೂ ಹೇಳುತ್ತಿದ್ದೇನೆ ಎಂದು NBC ನ್ಯೂಸ್ ಜತೆ ಮಾತನಾಡಿದ ಮಮ್ದಾನಿ ಸ್ಪಷ್ಟಪಡಿಸಿದರು. ಅಮೆರಿಕದ ಅಧ್ಯಕ್ಷರು ಫ್ಯಾಸಿಸ್ಟ್ ಎಂಬ ತಮ್ಮ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಮಮ್ದಾನಿ ಈ ಮೇಲಿನ ಉತ್ತರ ನೀಡಿದರು. ಎಡಪಂಥೀಯ, ಡೆಮಾಕ್ರಟಿಕ್ ಸೋಶಲಿಸ್ಟ್ ಮುಖಂಡ ಝೊಹ್ರಾನ್ ಮಮ್ದಾನಿ ಶುಕ್ರವಾರ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಹಲವು ತಿಂಗಳ ಪರಸ್ಪರ ಕೆಸರೆರಚಾಟವನ್ನು ಬದಿಗಿರಿಸಿ, ನಗರದ ಭವಿಷ್ಯದ ದೃಷ್ಟಿಯಿಂದ ಒಗ್ಗೂಡಿ ಕೆಲಸ ಮಾಡುವ ನಿಟ್ಟಿನಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಪ್ರಮಾಣ ವಚನ ಸ್ವೀಕಾರ
ಹೊಸದಿಲ್ಲಿ : ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸುಪ್ರೀಂ ಕೋರ್ಟ್ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಸಿಜೆಐ ಬಿ.ಆರ್. ಗವಾಯಿ ಅವರು ರವಿವಾರ ನಿವೃತ್ತರಾಗಿದ್ದರು. ಸೂರ್ಯಕಾಂತ್ ಅವರನ್ನು ಸಿಜೆಐ ಆಗಿ ಅಕ್ಟೋಬರ್ 30ರಂದು ನೇಮಕ ಮಾಡಲಾಗಿತ್ತು. [BREAKING] Justice Surya Kant takes oath as Chief Justice of India https://t.co/ko92rEdhVU — Bar and Bench (@barandbench) November 24, 2025
ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆ ಕೊಟ್ಟ ಸುಳಿವು ಕೊಟ್ಟ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 24: ಕೆಲ ದಿನದಲ್ಲೇ ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸುಳಿವು ನೀಡಿದ್ದು, ಸದ್ಯ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು
ಮಂಗಳೂರು | ಹಿರಿಯ ನ್ಯಾಯವಾದಿ ಮುಹಮ್ಮದ್ ಅಲಿ ನಿಧನ
ಮಂಗಳೂರು: ನಗರದ ಹಿರಿಯ ನ್ಯಾಯವಾದಿ, ಸಮಾಜ ಸೇವಕ ಯು. ಮುಹಮ್ಮದ್ ಅಲಿ (71) ಅವರು ಸೋಮವಾರ ಮುಂಜಾನೆ ಹೊಸದಿಲ್ಲಿಯಲ್ಲಿ ನಿಧನರಾದರು. ಜಡ್ಜ್ ಉಳ್ಳಾಲ ಹಮ್ಮಬ್ಬ ಅವರ ಪುತ್ರನಾದ ಮುಹಮ್ಮದ್ ಅಲಿ ಅವರು ಸಮಾಜ ಸೇವೆಯ ಜೊತೆಗೆ ಕೆಲಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಈ ಹಿಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗೆಳೆಯರ ಜೊತೆಗೂಡಿ ಎರಡು ದಿನದ ಹಿಂದೆ ಪ್ರವಾಸ ಹೊರಟಿದ್ದ ಮುಹಮ್ಮದ್ ಅಲಿ ಅವರು ದೆಹಲಿಯಲ್ಲಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಮೃತ ಮುಹಮ್ಮದ್ ಅಲಿ ಅವರು ಮೂವರು ಹೆಣ್ಮಕ್ಕಳು, ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ಧಾರೆ.
ಏನಿದು ಜೆಫ್ರೀ ಎಪ್ಸ್ಟೀನ್ ಲೈಂಗಿಕ ಹಗರಣ?
ಅಪ್ರಾಪ್ತ ವಯಸ್ಕರ ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಟ: ಅಂತರ್ರಾಷ್ಟ್ರೀಯ ದಿಗ್ಗಜರೇ ಗ್ರಾಹಕರು?
ವಿಸ್ತರಣಾವಾದಿ ಹಿಂದುತ್ವ ಮನಸ್ಥಿತಿಯನ್ನು ತೋರಿಸುತ್ತವೆ: ರಾಜನಾಥ್ ಸಿಂಗ್ ಸಿಂಧ್ ಹೇಳಿಕೆಗೆ ಪಾಕ್ ಪ್ರತಿಕ್ರಿಯೆ
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಿಂಧ್ ಕುರಿತ ಹೇಳಿಕೆಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹೇಳಿಕೆಗಳು ವಿಸ್ತರಣಾವಾದಿ ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ತಪ್ಪಿಸುವಂತೆ ಭಾರತಕ್ಕೆ ಪಾಕಿಸ್ತಾನ ಒತ್ತಾಯಿಸಿದೆ.
’ಬಿಟ್ಟು ಕೊಡ್ತಾರ ಎಲ್ಲೂ ಮಿಸುಕಬೇಡ’ : ಸಿಎಂ ಕುರ್ಚಿಯ ಫೈಟ್ ನಡುವೆ ಭೈಲಮ್ಮ ಅಚ್ಚರಿಯ ಭವಿಷ್ಯವಾಣಿ
Next CM of Karnataka : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್ ತಾರಕಕ್ಕೇರಿದೆ. ಎರಡೂವರೆ ವರ್ಷದ ನಂತರ ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ, ಸಿಎಂ ಹುದ್ದೆಗಾಗಿ, ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಈ ನಡುವೆ, ಹುಲಿಗೆಮ್ಮ ದೇವಿಯ ಆರಾಧಕಿ ಭೈಲಮ್ಮ, ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ.
ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. ಇದರ ಬೆನ್ನಲ್ಲೇ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹಸೀನಾ ಅವರನ್ನು ಭಾರತದಿಂದ ಗಡಿಪಾರು ಮಾಡುವಂತೆ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ. 2024ರ ಪ್ರತಿಭಟನೆಗಳಲ್ಲಿನ ಅವರ ಪಾತ್ರದ ಕುರಿತು ನ್ಯಾಯಾಲಯದ ತೀರ್ಪಿನ ವಿವರಗಳನ್ನು ಪತ್ರದಲ್ಲಿ ನೀಡಲಾಗಿದೆ ಎಂದು ಬಾಂಗ್ಲಾದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು, ಈ ಮನವಿಗೆ ಭಾರತ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಿಡಿಎ ಶಿವರಾಮ ಕಾರಂತ ಬಡಾವಣೆ: ಭೂಮಿ ಕಳೆದುಕೊಂಡವರಿಗೆ ಕೊನೆಗೂ ಸಿಕ್ತು ರಿಲೀಫ್, ಶೀಘ್ರದಲ್ಲೇ ನಿವೇಶನ ಹಂಚಿಕೆ ಆರಂಭ
ಡಾ. ಕೆ. ಶಿವರಾಮ ಕಾರಂತ ಬಡಾವಣೆ ಯೋಜನೆ ಅಂತಿಮ ಹಂತಕ್ಕೆ ತಲುಪಿದ್ದು, ಭೂಮಿ ಕಳೆದುಕೊಂಡ ಸಾವಿರಾರು ಮಾಲೀಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬಿಡಿಎ 5,000 ನಿವೇಶನಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ. 60:40 ಯೋಜನೆಯಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗುತ್ತಿದ್ದು, ಪಾರದರ್ಶಕತೆಗಾಗಿ ವಿಶೇಷ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
ಅಣ್ಣಾದೊರೈ ತತ್ವಗಳನ್ನು ಕೈಬಿಟ್ಟು, ಹಣ ಲೂಟಿ ಮಾಡುವುದೇ ಸಿದ್ಧಾಂತವಾಗಿದೆ: ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ
ಕರೂರು ದುರಂತದ ನಂತರ, ನಟ-ರಾಜಕಾರಣಿ ವಿಜಯ್ ಅವರು ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ವಿಜಯ್ ಅವರು ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಹಿಂದಿನ ರ್ಯಾಲಿಯಲ್ಲಿ ಸಂಭವಿಸಿದ ದುರಂತವನ್ನು ಪ್ರಸ್ತಾಪಿಸದೆ, ವಿಜಯ್ ಅವರು ಡಿಎಂಕೆ ಪಕ್ಷವು ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ತತ್ವಗಳನ್ನು ಕೈಬಿಟ್ಟು, ಹಣ ಲೂಟಿ ಮಾಡುವುದನ್ನು ತಮ್ಮ ಸಿದ್ಧಾಂತವನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದರು. ಈ ಸಭೆಯು ಕರೂರು ದುರಂತದ ನಂತರ ಎಚ್ಚರಿಕೆಯ ಹೆಜ್ಜೆಯಾಗಿತ್ತು.
Gold Price Today Nov 24: ಚಿನ್ನ ಖರೀದಿಸಲು ಉತ್ತಮ ಸಮಯ, ಎಷ್ಟಿದೆ ಇಂದಿನ ಚಿನ್ನದ ದರ?
ಚಿನ್ನ ಹಾಗೂ ಬೆಳ್ಳಿ ಖರೀದಿದಾರರಿಗೆ ತುಸು ನಿರಾಳ ಮೂಡುವ ವಾತಾವರಣ ಈ ದಿನ ಇದೆ. ಹೌದು ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವ ಕಾರಣ ಖರೀದಿಗೆ ಯಾವ ಸಮಯ ಒಳ್ಳೆಯದು ಎಂದು ಖರೀದಿದಾರರು ಕಾಯುತ್ತಿದ್ದರು. ಈ ವಾರದ ಆರಂಭದಿಂದಲೂ ಚಿನ್ನ ಹಾಗೂ ಬೆಳ್ಳಿಯ ದರಗಳು ಏರಿಳಿತ ಕಾಣುತ್ತಿದ್ದು, ಚಿನ್ನ ಹಾಗೂ ಬೆಳ್ಳಿಯ ಆಭರಣ ಖರೀದಿಸುವವರು ಇಂದಿನ 24 ಕ್ಯಾರೆಟ್,
ಬಿಲ್ ಗೆ ಸ್ವಯಂಚಾಲಿತ ಸೇವಾಶುಲ್ಕ ಸೇರಿಸುತ್ತಿದ್ದ ಬಿಹಾರ ಕೆಫೆಗೆ ರೂ. 30 ಸಾವಿರ ದಂಡ
ಹೊಸದಿಲ್ಲಿ: ಮಾರ್ಗಸೂಚಿಯನ್ನು ಉಲ್ಲಂಘಿಸಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿದ್ದ ಪಾಟ್ನಾ ಹೋಟೆಲ್ ಒಂದಕ್ಕೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡ ವಿಧಿಸುವ ಜತೆಗೆ ಸಂಗ್ರಹಿಸಿದ ಎಲ್ಲ ಸೇವಾ ಶುಲ್ಕವನ್ನು ಮರಳಿಸುವಂತೆಯೂ ನಿದೇರ್ಶನ ನೀಡಲಾಗಿದೆ. ತಕ್ಷಣದಿಂದಲೇ ಸೇವಾ ಶುಲ್ಕ ವಿಧಿಸುವ ಕ್ರಮ ಕೈಬಿಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಸಿಸಿಪಿಎ ನೀಡಿರುವ ಮಾರ್ಗಸೂಚಿಗಳಿಗೆ ಎಲ್ಲ ರೆಸ್ಟೋರೆಂಟ್ ಗಳು ಬದ್ಧವಾಗಿರಬೇಕು ಎಂದು ದೆಹಲಿ ಹೈಕೋರ್ಟ್ ಮಾರ್ಚ್ 28ರಂದು ತೀರ್ಪು ನೀಡಿದ ಬಳಿಕ ಮಾರ್ಗಸೂಚಿ ಉಲ್ಲಂಘಿಸಿದ ರೆಸ್ಟೋರೆಂಟ್ ಗೆ ಸಿಸಿಪಿಎ ಈ ದಂಡ ವಿಧಿಸಿದೆ. ಮಾರ್ಗಸೂಚಿಗೆ ಅನುಸಾರವಾಗಿ ನಡೆದುಕೊಳ್ಳದ ರೆಸ್ಟೋರೆಂಟ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಹೈಕೋರ್ಟ್ ಸಲಹೆ ನೀಡಿತ್ತು. ಸಿಸಿಪಿಎ 2022ರ ಜುಲೈ 4ರಂದು ಮಾರ್ಗಸೂಚಿ ಹೊರಡಿಸಿ, ಯಾವುದೇ ಹೋಟೆಲ್ ಗಳು ಬಿಲ್ ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಅಥವಾ ತಿಂಡಿ ತಿನಿಸಿನ ಬಿಲ್ ಹಾಗೂ ಜಿಎಸ್ ಟಿ ಜತೆಗೆ ಗ್ರಾಹಕರಿಂದ ಸೇವಾಶುಲ್ಕ ಸೇರಿದ ಬಿಲ್ ಸಂಗ್ರಹಿಸುವಂತಿಲ್ಲ. ಸೇವಾ ಶುಲ್ಕ ಐಚ್ಛಿಕ ಮತ್ತು ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿತ್ತು. ಕೆಫೆ ಬ್ಲೂ ಬಾಟಲ್ ಎಂಬ ಪಾಟ್ನಾ ರೆಸ್ಟೋರೆಂಟ್ ಜಿಎಸ್ ಟಿ ಜತೆಗೆ 801 ರೂಪಾಯಿ ಸೇವಾ ಶುಲ್ಕವನ್ನು ವಿಧಿಸಿದೆ ಎಂದು ಆಪಾದಿಸಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ರವಿ ನಂದನ್ ಕುಮಾರ್ ಎಂಬವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಸಿಸಿಪಿಎ ವಿಚಾರಣೆ ಕೈಗೆತ್ತಿಕೊಂಡಿತ್ತು. ರವಿನಂದನ್ ಕುಮಾರ್ ಹೇಳಿಕೆಯನ್ನು ಪರಿಶೀಲಿಸಿದ ಸಿಸಿಪಿಎ, ಇಂಥ ಕ್ರಮದಿಂದ ಗ್ರಾಹಕ ವರ್ಗಕ್ಕೆ ಪರಿಣಾಮ ಆಗುತ್ತದೆಯೇ ಎಂದು ತನಿಖೆ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ರೆಸ್ಟೋರೆಂಟ್, ಸೇವಾ ಶುಲ್ಕ ಐಚ್ಛಿಕ; ಗ್ರಾಹಕರು ಅದನ್ನು ಪಾವತಿಸಲು ನಿರಾಕರಿಸಿದರೆ, ಬಿಲ್ನಿಂದ ಅದನ್ನು ಕಿತ್ತುಹಾಕಲಾಗುತ್ತದೆ ಎಂಬ ವಾದ ಮಂಡಿಸಿತ್ತು. ಗ್ರಾಹಕರಿಗೆ 591 ರೂಪಾಯಿ ಮರುಪಾವತಿ ಮಾಡಿದ ದಾಖಲೆಯನ್ನು ಕೂಡಾ ಸಿಸಿಪಿಎಗೆ ಸಲ್ಲಿಸಿತ್ತು.
ನವೆಂಬರ್ 24ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 24) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
\ಮಲ್ಲಿಕಾರ್ಜುನ್ ಖರ್ಗೆಗೆ ನಾಮಕಾವಸ್ತೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ\
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನನಗೇನೂ ಗೊತ್ತಿಲ್ಲ, ನನ್ನನೇನೂ ಕೇಳಬೇಡಿ. ಇವುಗಳ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ. ಈ ಹೇಳಿಕೆಯು ಈಗ ಟೀಕೆಗೆ ಕಾರಣವಾಗಿದೆ. ಸುಮ್ಮನೆ ನಾಮಕಾವಸ್ತೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯ ಮಾಡಿದ್ದಾರೆ. ಹಿರಿಯರಾದ
ನೋಯ್ಡಾ , ಬಹರೈಚ್ಗಳಲ್ಲಿಎಸ್ಐಆರ್ ನಿರ್ಲಕ್ಷ್ಯ; 60 ಕ್ಕೂ ಹೆಚ್ಚು ಬಿಎಲ್ಒಗಳ ವಿರುದ್ಧ ಎಫ್ಐಆರ್
ನೋಯ್ಡಾ ಮತ್ತು ಬಹರೈಚ್ಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ತೋರಿದ ಬೂತ್ ಮಟ್ಟದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನೋಯ್ಡಾದಲ್ಲಿ 60ಕ್ಕೂ ಹೆಚ್ಚು ಬಿಎಲ್ಒಗಳು ಮತ್ತು ಏಳು ಮೇಲ್ವಿಚಾರಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಹರೈಚ್ನಲ್ಲಿ ಇಬ್ಬರು ಬಿಎಲ್ಒಗಳನ್ನು ಅಮಾನತುಗೊಳಿಸಲಾಗಿದೆ. ಚುನಾವಣಾ ಆಯೋಗದ ಸೂಚನೆಗಳಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಎಲ್ಒಗಳು ನಿರ್ಲಕ್ಷ್ಯ ತೋರಿದ್ದಾರೆ.
ಉತ್ತರಾಖಂಡ: ಹಕ್ಕಿ ಬಡಿದು ವಿಮಾನಕ್ಕೆ ಹಾನಿ; ಪ್ರಯಾಣಿಕರು ಸುರಕ್ಷಿತ!
ಹೊಸದಿಲ್ಲಿ: ಮುಂಬೈನಿಂದ ಉತ್ತರಾಖಂಡದ ಡೆಹ್ರಾಡೂನ್ಗೆ ಆಗಮಿಸಿದ ಇಂಡಿಗೊ ವಿಮಾನಕ್ಕೆ ಹೃಷಿಕೇಶ ಬಳಿಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್ವೇಯಲ್ಲಿ ಹಕ್ಕಿ ಬಡಿದು ವಿಮಾನಕ್ಕೆ ಹಾನಿಯಾಗಿದೆ. ಆದರೆ ಘಟನೆಯ ವೇಳೆ ವಿಮಾನದಲ್ಲಿದ್ದ ಎಲ್ಲ 186 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ಈ ಘಟನೆ ಸಂಜೆ 6.45ಕ್ಕೆ ಸಂಭವಿಸಿದ್ದು, ರನ್ವೇನಲ್ಲಿ ಇಂಡಿಗೊ ವಿಮಾನ ಐಜಿಓ 5032ರ ಮುಂಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದು ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಸಮಗ್ರ ತಪಾಸಣೆ ಕೈಗೊಂಡರು ಮತ್ತು ಘಟನೆ ಹಿನ್ನೆಲೆಯಲ್ಲಿ ರನ್ವೇ ಮೌಲ್ಯಮಾಪನ ಕೈಗೊಂಡರು.
ಗೃಹ ಸಚಿವ ಪರಮೇಶ್ವರ್ ಅವರು ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. 2013ರ ಚುನಾವಣೆಯಲ್ಲಿ ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ ಎಂದೂ ಅವರು ತಿಳಿಸಿದ್ದಾರೆ. ಸಿಎಂ ಬದಲಾವಣೆ ಚರ್ಚೆಗಳ ನಡುವೆಯೇ ದಲಿತ ಸಿಎಂ ಕೂಗಿನ ಬಗ್ಗೆಯೂ ಅವರು ಮಾತನಾಡಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಂದ ನಂತರ ಪಕ್ಷದಲ್ಲಿ ಮಹತ್ತರ ಬೆಳವಣಿಗೆಗಳಾಗಬಹುದು ಎಂದು ಸುಳಿವು ನೀಡಿದರು.
ಬಾಲಾಪರಾಧಿಗಳ ಬದುಕಿನಲ್ಲಿ ಸುಧಾರಣೆಯಾಗಲಿ
ಬೀದರ್ನಲ್ಲಿ ಗಗನಚುಂಬಿಸಿದ ತರಕಾರಿ ದರ ! ಮಳೆ, ತೈಲ ಬೆಲೆ ಏರಿಕೆಗೆ ಗ್ರಾಹಕರಿಗೆ ಬರೆ
ಬೀದರ್ ಜಿಲ್ಲೆಯಲ್ಲಿ ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ನುಗ್ಗೆಕಾಯಿ ಪ್ರತಿ ಕೆಜಿಗೆ 400 ರೂ.ಗೆ ತಲುಪಿದ್ದು, ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅತಿವೃಷ್ಟಿಯಿಂದ ಬೆಳೆ ನಾಶವಾಗಿರುವುದರಿಂದ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.
Karnataka Rain: ಈ ಜಿಲ್ಲೆಗಳಲ್ಲಿ ರಣಭೀಕರ ಮಳೆ ಎಚ್ಚರಿಕೆ, ಎಷ್ಟು ದಿನ?
ರಾಜ್ಯದೆಲ್ಲೆಡೆ ಚಳಿ ತೀವ್ರಗೊಂಡಿದ್ದರೂ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಳಿಗ್ಗೆ ವೇಳೆ ಚಳಿ ಹಾಗೂ ಮಂಜು ಕೂಡ ತೀವ್ರಗೊಂಡಿದೆ. ಇದರ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಕ್ರಿಯವಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಹೀಗಾಗಿ ಕರಾವಳಿ ಕರ್ನಾಟಕದ ಹಲವೆಡೆ ಹಾಗೂ ದಕ್ಷಿಣ
'ಸಂಚಾರಿ ಕಾವೇರಿ'ಯಿಂದ ₹2.5 ಕೋಟಿ ಆದಾಯ, 6 ತಿಂಗಳಲ್ಲಿ ಆನ್ಲೈನ್ ಬುಕ್ಕಿಂಗ್ ಎಷ್ಟು?
ಬೆಂಗಳೂರು ಜಲಮಂಡಳಿಯ ಸಂಚಾರಿ ಕಾವೇರಿ ಯೋಜನೆ ಯಶಸ್ವಿಯಾಗಿದೆ. ಕಳೆದ ಆರು ತಿಂಗಳಲ್ಲಿ 99.1 ದಶಲಕ್ಷ ಲೀಟರ್ ನೀರು ಮಾರಾಟ ಮಾಡಿ 2.5 ಕೋಟಿ ರೂಪಾಯಿ ಆದಾಯ ಗಳಿಸಿದೆ. ಖಾಸಗಿ ಟ್ಯಾಂಕರ್ಗಳ ಮೇಲಿನ ಅವಲಂಬನೆ ತಪ್ಪಿಸಿ, ಕೈಗೆಟುಕುವ ದರದಲ್ಲಿ ಶುದ್ಧ ನೀರು ಒದಗಿಸುವ ಉದ್ದೇಶ ಈಡೇರಿದೆ. ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ.
ವಾರ್ಡ್ಗೆ ಡಿಕೆ ಶಿವಕುಮಾರ್ ಪುತ್ರನ ಹೆಸರು? ವಿವಾದಕ್ಕೆ ಕಾರಣವಾದ ಆಕಾಶ್ ವಾರ್ಡ್, ಬಿಜೆಪಿ ಪ್ರತಿಭಟನೆ
ಬೆಂಗಳೂರು ಉತ್ತರ ವಲಯದ ಎರಡನೇ ವಾರ್ಡ್ಗೆ 'ಆಕಾಶ್ ವಾರ್ಡ್' ಎಂದು ಮರುನಾಮಕರಣ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಪುತ್ರನ ಹೆಸರನ್ನಿಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ, ಹೆಸರು ಬದಲಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ನಕಲಿ ದಾಳಿ ನಡೆಸಿ ಕೋರಮಂಗಲದ ಕಂಪನಿ ಮಾಲೀಕನನ್ನು ಅಪಹರಿಸಿ ₹18.90 ಲಕ್ಷ ಸುಲಿಗೆ, ಕಾನ್ಸ್ಟೆಬಲ್ ಗ್ಯಾಂಗ್ ಬಂಧನ
ಬೆಂಗಳೂರಿನಲ್ಲಿ ಕಾಲ್ಸೆಂಟರ್ ಮಾಲೀಕನ ಅಪಹರಣ ಪ್ರಕರಣದಲ್ಲಿ ಪೊಲೀಸರ ಸೋಗಿನಲ್ಲಿ 18.90 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಧಾನ ಸೂತ್ರಧಾರ ಕಾನ್ಸ್ಟೆಬಲ್ ಸೇರಿದಂತೆ ಎಂಟು ಮಂದಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ಹಣ ಜಪ್ತಿಗೆ ಕ್ರಮ ಕೈಗೊಂಡಿದ್ದಾರೆ.
► ಒಂದು ಗ್ರಾಂ ಔಷಧಿಗೆ 1.60 ಲಕ್ಷ ರೂ.! ►ನಕಲಿ ಗುರೂಜಿ ವಿರುದ್ಧ ಪ್ರಕರಣ ದಾಖಲು
ಮೂಡುಬಿದಿರೆ | ಪ್ರಾದೇಶಿಕ ಮಾಧ್ಯಮ-ಸಂಸ್ಕೃತಿ ಸೇವೆಗೆ ಡಾ.ಮಂದಾರ ರಾಜೇಶ್ ಭಟ್ ಗೆ ರಾಷ್ಟ್ರೀಯ ಗೌರವ
ಮೂಡುಬಿದಿರೆ : ಪ್ರಾದೇಶಿಕ ಪತ್ರಿಕೋದ್ಯಮ, ತುಳು–ಕನ್ನಡ ಸಂಸ್ಕೃತಿ ಸಂರಕ್ಷಣೆ ಮತ್ತು ಜನಪದ ಕಲೆಗಳ ಪ್ರಚಾರ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಮೂಡುಬಿದಿರೆ ಶಿರ್ತಾಡಿಯ ಡಾ. ಮಂದಾರ ರಾಜೇಶ್ ಭಟ್ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಇವರು ಜಂಟಿಯಾಗಿ ಘೋಷಿಸಿರುವ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಡಾ. ಮಂದಾರ ರಾಜೇಶ್ ಭಟ್ಟರನ್ನು ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಮಾಧ್ಯಮಗಳ ಸಮನ್ವಯಿತ ಸೇವೆಗಾಗಿ ದೇಶದ ಮಟ್ಟದಲ್ಲಿ ಈ ಪ್ರಶಸ್ತಿಯು ಲಭಿಸಿದೆ. ಸಾಂಸ್ಕೃತಿಕ-ಸಾಮಾಜಿಕ ವಲಯಕ್ಕೆ ಕೊಡುಗೆ : ಡಾ. ಮಂದಾರ ರಾಜೇಶ್ ಭಟ್ಟರು ಪ್ರಾದೇಶಿಕ ದಿನಪತ್ರಿಕೆಗಳು ಮತ್ತು ದ್ವಿಭಾಷಾ ವಾರಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ. ಜೊತೆಗೆ, ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ನಿರೂಪಣೆ ಮತ್ತು ವರದಿಗಾರಿಕೆಯ ಮೂಲಕ ಜನಸಾಮಾನ್ಯರನ್ನು ತಲುಪಿದ್ದಾರೆ. ಅನೇಕ ಪುಸ್ತಕಗಳ ಪ್ರಕಟಣೆ ಹಾಗೂ ಉಚಿತ ವಿತರಣೆ ಮೂಲಕ ಅವರು ದಕ್ಷಿಣ ಕನ್ನಡದ ಸಾಂಸ್ಕೃತಿಕ–ಸಾಮಾಜಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ, ಅವರು ತುಳು ಮತ್ತು ಕನ್ನಡ ಭಾಷೆಯ ಪಾರಂಪರಿಕ ಶೈಲಿಯ “ಮಂದಾರ ರಾಮಾಯಣ” ಮಹಾಕಾವ್ಯದ ಸುಗಿಪು–ದುನೀಪು, ವಾಚನ–ವ್ಯಾಖ್ಯಾನ ಪ್ರಸಾರ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸ್ಥಳೀಯ ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅದರೊಂದಿಗೆ, ತುಳು ಭಾಷೆಯಲ್ಲಿ ಶ್ರೀಕೃಷ್ಣನ ಬಾಲ್ಯ ಲೀಲೆಗಳನ್ನು ಒಳಗೊಂಡಿರುವ “ಬೀರದ ಬೊಲ್ಪು” ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಮಕ್ಕಳಿಗೂ ಹಿರಿಯರಿಗೂ ತುಳು ಸಂಸ್ಕೃತಿ ತಲುಪುವಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ, ಅವರ ಮಾಧ್ಯಮ ಸೇವೆ ಮತ್ತು ಪರಿಸರ ಸಂರಕ್ಷಣೆಯ ಕಾಯಕವನ್ನು ಗುರುತಿಸಿ ಇಂಡಿಯನ್ ಅಂಪಯರ್ ಯುನಿವರ್ಸಿಟಿ ಹಾಗೂ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಅವರಿಗೆ “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸಲಾಗಿತ್ತು.
ಭಾರತ ಮಾತೆಗೆ ಮತ್ತೊಂದು ಕ್ರಿಕೆಟ್ ವಿಶ್ವಕಪ್... 2025 ವರ್ಲ್ಡ್ ಕಪ್ ಗೆದ್ದರು ಇವರು... T20 World Cup
ಭಾರತೀಯ ಕ್ರಿಕೆಟ್ ತಂಡ ಸಾಲು ಸಾಲು ವಿಶ್ವಕಪ್ ಗೆಲ್ಲುತ್ತಾ ಇದ್ದು, ಶತಕೋಟಿ ಭಾರತೀಯರು ಈ ಎಲ್ಲಾ ವಿಶ್ವಕಪ್ ಗೆಲುವನ್ನು ಸಂಭ್ರಮದಿಂದ ಕುಣಿದಾಡುತ್ತಾ ಸ್ವಾಗತ ಮಾಡುತ್ತಾ ಇದ್ದಾರೆ ಈಗ. ಭಾರತೀಯ ಕ್ರಿಕೆಟ್ ತಂಡ ಅದೆಷ್ಟು ಬಲಿಷ್ಠವಾಗಿದೆ ಮತ್ತು ಭಾರತದ ಎದುರು ಆಡುವ ಪ್ರತಿ ತಂಡ ಕೂಡ ಚಿಂತೆ ಮಾಡುವಂತೆ ಆಗಿದೆ. ಮೊನ್ನೆ ಮೊನ್ನೆ ತಾನೆ ಮಹಿಳಾ ತಂಡ ಕ್ರಿಕೆಟ್
ಒಂದು ಕಿಮೀ ಉದ್ದದ ಕನ್ನಡ ಧ್ವಜ ಮೆರವಣಿಗೆ
ಬೆಂಗಳೂರು: ಉದ್ಭವ ಗಣಪತಿ ಗೆಳೆಯರ ಬಳಗ ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ನಗರದಲ್ಲಿ ಒಂದು ಕಿಲೋ ಮೀಟರ್ ಉದ್ದದ ‘ಕನ್ನಡ ಧ್ವಜ’ ಮೆರವಣಿಗೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ರವಿವಾರ ಪಟ್ಟೇಗಾರಪಾಳ್ಯ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಜನರು ‘ಕನ್ನಡ ಧ್ವಜ’ ಹಿಡಿದು ಪ್ರಶಾಂತ ನಗರದ ವರೆಗೆ ಕನ್ನಡದ ಘೋಷ ವಾಕ್ಯಗಳನ್ನು ಕೂಗುತ್ತಾ ಸಾಗಿದರು. ಇದೇ ವೇಳೆ, ಕನ್ನಡೇತರರಿಗೆ ಕನ್ನಡ ಕಲಿಕೆಗೆ ಪ್ರೋತ್ಸಾಯಿಸಿ, ಬಿತ್ತಿಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರಿಯಕೃಷ್ಣ, ಉದ್ಭವ ಗಣಪತಿ ಗೆಳೆಯರ ಬಳಗ ಅಧ್ಯಕ್ಷ ಆರ್.ಮಂಜು, ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಪೂಜಾರಿ, ಉದ್ಭವ ಗಣಪತಿ ಗೆಳೆಯರ ಬಳಗದ ಸದಸ್ಯರಾದ ಪಾಪಣ್ಣ, ಮಹೇಶ್, ಜಮೀರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ನ.30ರೊಳಗೆ ವನ್ಯಜೀವಿ ಬೆಳೆ ಹಾನಿ ಪರಿಹಾರ ಪಾವತಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ಚಿರತೆ ಸೆರೆಗೆ 4 ಹೆಚ್ಚುವರಿ ಬೋನುಗಳನ್ನು ಇಡಲು ಅರಣ್ಯ ಸಚಿವ ಆದೇಶ
ಕಾಸರಗೋಡು | ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ; ಕನಿಷ್ಠ 15 ಮಂದಿಗೆ ಗಾಯ
ನಿರೀಕ್ಷೆಗೂ ಮೀರಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಬಿಹಾರದ ತಾಯಂದಿರ ಎದೆ ಹಾಲಿನಲ್ಲಿ ಯುರೇನಿಯಂ ಪತ್ತೆ; ಈ ವಿಷಕಾರಿ ಅಂಶದಿಂದ ಏನೆಲ್ಲ ಸಮಸ್ಯೆ ಕಾಡಲಿದೆ?
ಬಿಹಾರದ ಕೆಲವು ಜಿಲ್ಲೆಗಳಲ್ಲಿ ಏಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂಧ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಅಪಾಯಕಾರಿ ಯುರೇನಿಯಂ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಅಧ್ಯಯನನದ ವೇಳೆ ಪರೀಕ್ಷೆಗೆ ಒಳಪಡಿಸಿದ ಎಲ್ಲ 40 ತಾಯಂದಿರ ಹಾಲಿನ ಮಾದರಿಗಳಲ್ಲಿ ಯುರೇನಿಯಂ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮಕ್ಕಳು ಗಂಭೀರ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು.
ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್ ಗೆ ಫ್ರಾನ್ಸ್ ಗೌರವ; ಅಂಚೆ ಚೀಟಿ ಬಿಡುಗಡೆ
ಲಂಡನ್: ಟಿಪ್ಪು ಸುಲ್ತಾನ್ ವಂಶಸ್ಥೆ ಹಾಗೂ ಎರಡನೇ ಮಹಾಯುದ್ಧದ ವೇಳೆ ನಾಝಿಗಳ ವಿರುದ್ಧ ರಹಸ್ಯ ಕಾರ್ಯಾಚರಣೆಯಲ್ಲಿ ಪಾತ್ರವಹಿಸಿದ್ದ ನೂರ್ ಇನಾಯತ್ ಖಾನ್ ಅವರಿಗೆ ಫ್ರಾನ್ಸ್ ಸರ್ಕಾರ ಗೌರವ ಸಲ್ಲಿಸಿದೆ. ಫ್ರೆಂಚ್ ಅಂಚೆ ಸೇವೆ ಲಾ ಪೋಸ್ತೆ ನೂರ್ ಅವರ ಚಿತ್ರ ಹೊಂದಿದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು, ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆ ಅವರಾಗಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎರಡನೇ ಮಹಾಯುದ್ಧದ 80 ವರ್ಷಾಚರಣೆ ಅಂಗವಾಗಿ ನಾಝಿ ವಿರೋಧಿ ಹೋರಾಟದಲ್ಲಿ ಹೆಸರಾಗಿದ್ದ 12 ವೀರರು ಮತ್ತು ನಾಯಕಿಯರ ಗೌರವಾರ್ಥವಾಗಿ ಅಂಚೆ ಚೀಟಿ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನೂರ್ ಅವರನ್ನೂ ಸೇರಿಸಲಾಗಿದೆ. ಬ್ರಿಟನ್ ವಿಶೇಷ ಕಾರ್ಯಾಚರಣೆ ವಿಭಾಗ (SOE) ಗೆ ರಹಸ್ಯ ಪ್ರತಿನಿಧಿಯಾಗಿ ನೂರ್ ಫ್ರಾನ್ಸ್ ಪರ ಕಾರ್ಯ ನಿರ್ವಹಿಸಿದ್ದು, ಗುಪ್ತ ಸಂವಹನ ಜಾಲ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ನಾಝಿಗಳಿಂದ ಬಂಧನಕ್ಕೆ ಒಳಗಾಗಿ ಹುತಾತ್ಮರಾದರು. ‘ಫ್ರಾನ್ಸ್ ಸರ್ಕಾರ ನೂರ್ ಇನಾಯತ್ ಖಾನ್ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ’ ಎಂದು ನೂರ್ ಅವರ ಜೀವನ ಚರಿತ್ರೆ ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಕೃತಿಯ ಲೇಖಕಿ ಶ್ರಬಾನಿ ಬಸು ಪ್ರತಿಕ್ರಿಯಿಸಿದ್ದಾರೆ. ‘ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಮಹಿಳೆಯ ಮುಖ ಫ್ರಾನ್ಸ್ ನಲ್ಲಿ ಸಾಮಾನ್ಯರು ಬಳಸುವ ಅಂಚೆ ಚೀಟಿಯಲ್ಲಿ ಕಾಣಿಸಿಕೊಳ್ಳುವುದು ಅದ್ಭುತ’ ಎಂದು ಅವರು ಹೇಳಿದ್ದಾರೆ.
ಕನ್ನಡ ಬಿಗ್ ಬಾಸ್ ಸ್ಟುಡಿಯೊದಲ್ಲಿ ಪರಿಸರ ಮಾನದಂಡಗಳ ಪಾಲನೆ: 7 ದಿನಗಳಲ್ಲಿ ತಪಾಸಣೆ ನಡೆಸುವಂತೆ NGT ಗಡುವು
ಬೆಂಗಳೂರು: ಕನ್ನಡ ಬಿಗ್ ಬಾಸ್ ಶೋ ಆತಿಥ್ಯ ವಹಿಸಿರುವ ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಇನ್ನು ಏಳು ದಿನಗಳೊಳಗಾಗಿ ತಪಾಸಣೆ ನಡೆಸಿ, ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗಡುವು ವಿಧಿಸಿದೆ. ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಮುಚ್ಚಬೇಕು ಎಂಬ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಪ್ರಶಾಂತ್ ಗಾರ್ಗವರನ್ನೊಳಗೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ನ್ಯಾಯಪೀಠ ಈ ಸೂಚನೆ ನೀಡಿದೆ. ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಪೂರ್ವಾನುಮತಿಯಿಲ್ಲದೆ ಹಾಗೂ ತನ್ನ ಆವರಣದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಸ್ಕರಿಸದೆ ಹೊರಗೆ ಬಿಡುತ್ತಿದೆ ಎಂದು ಆರೋಪಿಸಿ, ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟುಡಿಯೊದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ನೀರು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ, 1974ರ ಅಡಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಕ್ಟೋಬರ್ 6, 2025ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎತ್ತಿ ತೋರಿಸಿದ್ದ ಎಲ್ಲ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಎಂದು ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡಲಾಗಿದೆ ಹಾಗೂ ತನ್ನ ಆದೇಶವನ್ನು ಮರುಪರಿಶೀಲಿಸಲು ಸ್ಥಳದ ತಪಾಸಣೆ ನಡೆಸುವಂತೆ ಅಕ್ಟೋಬರ್ 29ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಕಂಪೆನಿಯ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿದಾರರ ಪರ ವಾದವನ್ನು ಆಲಿಸಿದ ನ್ಯಾಯಮಂಡಳಿ, ಕಂಪೆನಿಯ ಪತ್ರದ ಪ್ರಕಾರ, ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗಿದೆಯೆ ಎಂಬುದನ್ನು ಪರಿಶೀಲಿಸಲು ಸ್ಥಳದ ತಪಾಸಣೆ ನಡೆಸಬೇಕು ಹಾಗೂ ನವೆಂಬರ್ 21ರಿಂದ ಏಳು ದಿನಗಳೊಳಗಾಗಿ ಆದಷ್ಟೂ ಶೀಘ್ರವಾಗಿ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.
ಅಮಿತ್ ಶಾ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬೆಂಗಳೂರು: ‘ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು’ ಎಂಬ ಒತ್ತಾಯಗಳ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ರವಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ವಿಜಯೇಂದ್ರ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿ ಮಾಡಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದ್ದ ಬಿಹಾರ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಎನ್ಡಿಎ ಮಿತ್ರಕೂಟ ಐತಿಹಾಸಿಕ ದಿಗ್ವಿಜಯ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿ ಚುನಾವಣಾ ನೈಪುಣ್ಯತೆ ಮೆರೆದ ಅಮಿತ್ ಶಾ ಅವರು ಬಿಜೆಪಿಗೆ ಕಾರ್ಯಕರ್ತರಿಗೆ ಪ್ರೇರಣಾಶೀಲ ನಾಯಕರಾಗಿದ್ದಾರೆ’ ಎಂದು ಬಣ್ಣಿಸಿದ್ದಾರೆ. ‘ದಿಲ್ಲಿಯಲ್ಲಿ ಅಮಿತ್ ಶಾ ಅವರ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಮಾಹಿತಿ ನೀಡಲಾಯಿತು. ಬಿಜೆಪಿ ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಪಡೆಯಲಾಯಿತು ಎಂದು ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರದ ವಿರುದ್ಧ ಆದೇಶ ನೀಡದಿದ್ದರೆ ಅಂಥವರು ಸ್ವತಂತ್ರರಲ್ಲ ಎಂಬುದು ಸರಿಯಲ್ಲ: ನಿರ್ಗಮಿತ ಸಿಜೆಐ ಗವಾಯಿ
ಹೊಸದಿಲ್ಲಿ: ಯಾರಾದರೂ ನ್ಯಾಯಾಧೀಶರು ಸರಕಾರದ ವಿರುದ್ಧ ಆದೇಶ ನೀಡದಿದ್ದರೆ, ಅಂಥವರು ಸ್ವತಂತ್ರರಲ್ಲ ಎಂಬ ಜನಪ್ರಿಯ ಪರಿಕಲ್ಪನೆಯನ್ನು ರವಿವಾರ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಇದೊಂದು ತಪ್ಪು ಧೋರಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ಸೇವೆಯ ಕೊನೆಯ ದಿನವಾದ ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಲ ನ್ಯಾಯಮೂರ್ತಿ ಗವಾಯಿ, “ನೀವು ಸರಕಾರದ ವಿರುದ್ಧ ನಿರ್ಣಯ ಕೈಗೊಳ್ಳದಿದ್ದರೆ, ನೀವು ಸ್ವತಂತ್ರ ನ್ಯಾಯಾಧೀಶರಲ್ಲ ಎಂಬುದು ಸರಿಯಲ್ಲ. ಅರ್ಜಿದಾರರು ಸರಕಾರವೊ ಅಥವಾ ಖಾಸಗಿ ನಾಗರಿಕರೊ ಎಂಬುದರ ಮೇಲೆ ನೀವು ನಿರ್ಧರಿಸುವುದಿಲ್ಲ. ನಿಮ್ಮ ಮುಂದಿರುವ ದಾಖಲೆಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳುತ್ತೀರಿ” ಎಂದು ಅವರು ಹೇಳಿದ್ದಾರೆ. ಇದು ತಪ್ಪು ಧೋರಣೆ ಎಂದು ಅಭಿಪ್ರಾಯಪಟ್ಟ ಗವಾಯಿ, ಪ್ರಚಲಿತ ಕಾಲಘಟ್ಟದಲ್ಲಿ ಸರಕಾರದ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳುವವರನ್ನು ಮಾತ್ರ ಸ್ವತಂತ್ರ ನ್ಯಾಯಾಧೀಶರು ಎಂದು ಭಾವಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ಇದಕ್ಕಿಂತ ಹೆಚ್ಚಾಗಿ, ನ್ಯಾಯಾಂಗ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಾವು ಸರಕಾರವನ್ನೇ ಅವಲಂಬಿಸಬೇಕಿದೆ. ನಮಗೆ (ನ್ಯಾಯಾಂಗಕ್ಕೆ) ಆರ್ಥಿಕ ವೆಚ್ಚದ ಅಧಿಕಾರವಿಲ್ಲ. ಹೀಗಾಗಿ ಆಗಾಗ ಘರ್ಷಣೆ ನಡೆಯುತ್ತಿರುತ್ತದೆ. ಆದರೆ, ನಿರಂತರವಾಗಿ ಘರ್ಷಣೆ ನಡೆಯುತ್ತಿರಬೇಕು ಎಂದು ನಾನು ಭಾವಿಸುವುದಿಲ್ಲ. ಇದು ಅನಗತ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ” ಎಂದೂ ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ಸಹಕಾರವನ್ನು ಉಲ್ಲೇಖಿಸಿದ ನ್ಯಾ. ಗವಾಯಿ, ನನ್ನ ಅವಧಿಯಲ್ಲಿ ಕೊಲಿಜಿಯಂ ಶಿಫಾರಸು ಮಾಡಿದ ಬಹುತೇಕ ಎಲ್ಲ ನ್ಯಾಯಾಧೀಶರ ಹೆಸರುಗಳನ್ನು ಸರಕಾರ ಅನುಮೋದಿಸಿದೆ ಎಂದು ಹೇಳಿದ್ದಾರೆ. “ಎಲ್ಲ ಹೈಕೋರ್ಟ್ ಗಳಲ್ಲಿ ಸುಮಾರು 107 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ನಾನು ಬಾಂಬೆ ಹೈಕೋರ್ಟ್ ಗೆ 14 ನ್ಯಾಯಾಧೀಶರು ಹಾಗೂ ಮಧ್ಯಪ್ರದೇಶ ಹೈಕೋರ್ಟ್ ಗೆ 12 ನ್ಯಾಯಾಧೀಶರನ್ನು ನೇಮಕ ಮಾಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಮುಂಬೈ: ಕೌಟುಂಬಿಕ ಕಲಹದಿಂದ ಬೇಸತ್ತು ಮಹಾರಾಷ್ಟ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಪಂಕಜಾ ಮುಂಡೆಯ ಆಪ್ತ ಸಹಾಯಕ ಅನಂತ್ ಗಾರ್ಜೆಯ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮುಂಬೈನ ವೊರ್ಲಿ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಡಾ. ಗೌರಿ ಪಲ್ವೆ ಎಂದು ಗುರುತಿಸಲಾಗಿದ್ದು, ಅವರು ಮುಂಬೈನ ಪರೇಲ್ ನಲ್ಲಿರುವ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ದಂತಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಸಾವಿಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದ್ದು, ವಿಸ್ತೃತ ತನಿಖೆ ಪ್ರಗತಿಯಲ್ಲಿದೆ. ಇಂಜಿನಿಯರಿಂಗ್ ಪದವೀಧರರಾದ ಅನಂತ್ ಗಾರ್ಜೆ ಹಾಗೂ ಅವರ ಪತ್ನಿ ಗೌರಿ ಪಲ್ವೆ (27) ಫೆಬ್ರವರಿ 7, 2025ರಲ್ಲಿ ವಿವಾಹವಾಗಿದ್ದರು. ಶನಿವಾರ ಸಂಜೆ ಅವರ ಮೃತದೇಹವು ವೊರ್ಲಿಯಲ್ಲಿನ ಆಕೆಯ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ವೊರ್ಲಿ ಠಾಣೆಯ ಪೊಲೀಸರು ಆಕಸ್ಮಿಕ ಸಾವು ವರದಿ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಘಟನೆಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ರಾಜ್ಯ ಪಶು ಸಂಗೋಪನೆ ಮತ್ತು ಪರಿಸರ ಸಚಿವೆ ಪಂಕಜಾ ಮುಂಡೆ, ಈ ಘಟನೆಯ ಕುರಿತು ಆಳವಾದ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಕಲಬುರಗಿ | ಪ್ರತ್ಯೇಕ ರಾಜ್ಯದ ಬೇಡಿಕೆ ಕಿತ್ತೂರು ಕರ್ನಾಟಕದವರ ಕುತಂತ್ರ : ಡಾ.ಲಕ್ಷ್ಮಣ್ ದಸ್ತಿ
ಕಲಬುರಗಿ : ಕಿತ್ತೂರು ಕರ್ನಾಟಕದ ನಾಯಕರು ಮತ್ತು ಸಂಘಟನೆಗಳು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆಯ ಹೆಸರಿನಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಕೂಡಲೇ ಈ ಬೇಡಿಕೆ ಕೈಬಿಡದಿದ್ದರೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ್ ದಸ್ತಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಲಕ್ಷ್ಮಣ್ ದಸ್ತಿ, 15 ಜಿಲ್ಲೆಗಳ ಉತ್ತರ ಕರ್ನಾಟಕ ರಚನೆಯ ಬಗ್ಗೆ ಶಾಸಕ ರಾಜು ಕಾಗೆ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರಕ್ಕೆ ಪ್ರತಿಯಾಗಿ ಸಮಿತಿ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬಲವಾಗಿ ಖಂಡಿಸಿದೆ. ಈ ಕುರಿತು ಸದನದಲ್ಲಿ ಕೂಗು ಕೇಳಿಬಂದರೆ ನಮ್ಮ ಭಾಗದ ಶಾಸಕರು ಇಂತಹ ಬೇಡಿಕೆಯನ್ನು ತಿರಸ್ಕಾರ ಮಾಡಬೇಕೆಂದು ಕಲ್ಯಾಣ ಕರ್ನಾಟಕದ ಶಾಸಕ, ಸಚಿವರಿಗೆ ಒತ್ತಾಯ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಡಾ.ಬಸವರಾಜ ದೇಶಮುಖ್, ಪ್ರೊ. ಬಸವರಾಜ ಗುಲಶೆಟ್ಟಿ, ಮನೀಷ್ ಜಾಜು, ಡಾ.ಶರಣಪ್ಪ ಸೈದಾಪೂರ, ಚಂದ್ರಶೇಖರ ಪಾಟೀಲ್ ಹುಚಕನಳ್ಳಿ, ರೌಫ್ ಖಾದ್ರಿ, ಲಿಂಗರಾಜ ಸಿರಗಾಪೂರ, ಎಂ.ಬಿ. ನಿಂಗಪ್ಪ, ಅಸ್ಲಂ ಚೌಂಗೆ ಉಪಸ್ಥಿತರಿದ್ದರು.
ಕಣ್ಣೂರು,ನ.23: ಕೇರಳದ ಪಾಲಾದಾಯಿ ಎಂಬಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ಕೇರಳ ಸಾಮಾನ್ಯ ಶಿಕ್ಷಣ ಸಚಿವ ವಿ.ಸಿವನ್ಕುಟ್ಟಿ ರವಿವಾರ ತಿಳಿಸಿದ್ದಾರೆ. ತಲಶ್ಯೇರಿಯ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜಲರಜನಿ ಅವರು ನವೆಂಬರ್ 15ರಂದು ನೀಡಿದ ತೀರ್ಪಿನಲ್ಲಿ ಕಡವತ್ತೂರ್ ನ ನಿವಾಸಿ ಶಿಕ್ಷಕ, ಬಿಜೆಪಿ ಮುಖಂಡ ಪದ್ಮರಾಜನ್ ಯಾನೆ ಪಾಪ್ಪೆನ್ ಮಾಸ್ಟರ್ (48), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ದೋಷಿಯೆಂದು ಪರಿಗಣಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಪದ್ಮರಾಜನ್ನನ್ನು ಸೇವೆಯಿಂದ ವಜಾಗೊಳಿಸುವ ಆದೇಶವನ್ನು ಆತ ಅಧ್ಯಾಪಕನಾಗಿದ್ದ ಶಾಲೆಯ ಮ್ಯಾನೇಜರ್ ಜಾರಿಗೊಳಿಸಿದ್ದಾರೆಂದು ಸಚಿವ ಸಿವನ್ಕುಟ್ಟಿ ತನ್ನ ಫೇಸ್ ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ. ಆರೋಪಿ ಪದ್ಮರಾಜನ್ ಬಿಜೆಪಿ ಮುಖಂಡನೂ ಆಗಿದ್ದನೆಂದು ತಿಳಿದುಬಂದಿದೆ. ಆರೋಪಿ ಪದ್ಮರಾಜನ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸಿದ ಬೆನ್ನಲ್ಲೇ ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಾಲಾಡಳಿತಕ್ಕೆ ಸಾಮಾನ್ಯ ಶಿಕ್ಷಣ ಇಲಾಖೆ ನಿರ್ದೇಶನ ನೀಡಿತ್ತು. ಆರೋಪಿ ಪದ್ಮರಾಜನ್ 10 ವರ್ಷದ ವಿದ್ಯಾರ್ಥಿನಿಗೆ ಶಾಲೆಯ ಶೌಚಾಲಯದಲ್ಲಿ ಹಾಗೂ ತನ್ನ ನಿವಾಸದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು. ಪದ್ಮರಾಜನ್ ವಿರುದ್ಧ ಪಾನೂರ್ ಪೊಲೀಸರು 2020ರ ಮಾರ್ಚ್ 17ರಂದು ಪ್ರಕರಣ ದಾಖಲಿಸಿದ್ದು, ಎಪ್ರಿಲ್ 15ರಂದು ಆತನನ್ನು ಬಂಧಿಸಿದ್ದರು. ಆದರೆ ಈ ಪ್ರಕರಣವು ಎಸ್ಡಿಪಿಐ ಪಕ್ಷವು ನಡೆಸಿದ ಸಂಚಿನ ಭಾಗವಾಗಿದೆಯೆಂದು ಬಿಜೆಪಿಯು ಆಪಾದಿಸಿದೆ. ಭಾರೀ ವಿವಾದ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಹಸ್ತಾಂತರಿಸಲಾಗಿತ್ತು. ಆರಂಭಿಕ ಹಂತಲ್ಲಿ ಪೊಸ್ಕೊ ಆರೋಪಗಳನ್ನು ಒಳಗೊಂಡಿಲ್ಲವಾದ್ದರಿಂದ, ಆರೋಪಿಯು ಜಾಮೀನು ಪಡೆಯುವಲ್ಲಿ ಸಫಲನಾಗಿದ್ದನು. ಆದರೆ ಸಂತ್ರಸ್ತೆಯ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಕೇರಳ ಹೈಕೋರ್ಟ್ ಹೊಸದಾಗಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ತನಿಖೆಯ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತವಾದ ಕಾರಣ ತನಿಖಾ ತಂಡವನ್ನು ಎರಡು ಸಲ ಬದಲಿಸಲಾಗಿತ್ತು. ಅಂತಿಮವಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಇ.ಜೆ.ಜಯರಾಜ್ ಅವರು ತನಿಖೆಯನ್ನು ಪೂರ್ಣಗೊಳಿಸಿ, ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಬಿಹಾರ | ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆ!
ಹೊಸದಿಲ್ಲಿ,ನ.23: ಬಿಹಾರದಲ್ಲಿ ಎದೆಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿರುವುದಾಗಿ ಅಧ್ಯಯನ ವರದಿಯೊಂದು ತಿಳಿಸಿದೆ. ಆದರೆ ಎದೆಹಾಲಿನಲ್ಲಿ ಪತ್ತೆಯಾದ ಯುರೇನಿಯಂ ಅಂಶವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ)ಯ ಅನುಮತಿಸಲ್ಪಟ್ಟ ಮಿತಿಗಿಂತ ತುಂಬಾ ಕಡಿಮೆಯಿದ್ದು, ಈ ಬಗ್ಗೆ ಆತಂಕ ಪಡಬೇಕಾಗಿಲ್ಲವೆಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಸದಸ್ಯ ಹಾಗೂ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಮಾಜಿ ಸಮೂಹ ನಿರ್ದೇಶಕರಾದ ಡಾ. ದಿನೇಶ್ ಕೆ. ಅಸ್ವಾಲ್ ಅವರು, ಈ ಕುರಿತು ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಧ್ಯಯನದ ವರದಿಯಲ್ಲಿ ಬೆಳಕಿಗೆ ಬಂದ ಅಂಶಗಳ ಬಗ್ಗೆ ಆತಂಕ ಪಡಬೇಕಾಗಿಲ್ಲವೆಂದು ಹೇಳಿದರು. ‘‘ಬಿಹಾರದ ತಾಯಂದಿರ ಎದೆಹಾಲಿನಲ್ಲಿ ಪತ್ತೆಯಾಗಿರುವ ಯುರೇನಿಯಂ ಅಂಶವು ಸುರಕ್ಷಿತ ಮಿತಿಯ ಒಳಗಿದೆ”, ಎಂದರು. ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ ಹಾಗೂ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಮಿತಿ, ಹೊಸದಿಲ್ಲಿಯ ಏಮ್ಸ್, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಈ ಬಗ್ಗೆ ಅಧ್ಯಯನವನ್ನು ನಡೆಸಿತ್ತು. ಬಿಹಾರದ ತಾಯಂದಿರ ಎದೆಹಾಲಿನಲ್ಲಿ 5 ಪಿಪಿಬಿ (ಪ್ರತಿಬಿಲಿಯದ ಭಾಗಗಳು) ಯುರೇನಿಯಂ ಅಂಶವು ಪತ್ತೆಯಾಗಿರುವುದಾಗಿ ಅಧ್ಯಯನ ವರದಿ ಬಹಿರಂಗಪಡಿಸಿತ್ತು. 40 ಮಂದಿ ತಾಯಂದಿರ ಎದೆಹಾಲನ್ನು ಈ ಅಧ್ಯಯನದಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಎಲ್ಲಾ ಸ್ಯಾಂಪಲ್ ಗಳಲ್ಲಿ ಯುರೇನಿಯಂ (ಯು-238) ಪತ್ತೆಯಾಗಿದೆ.ಶೇ.70ರಷ್ಟು ಶಿಶುಗಳು ಸಂಭಾವ್ಯ ಕಾನ್ಸರ್ ಕಾರಕವಲ್ಲದ ಆರೋಗ್ಯದ ತೊಂದರೆಗಳನ್ನು ಪ್ರದರ್ಶಿಸಿದ್ದರಾದರೂ, ಎಲ್ಲಾ ಸ್ಯಾಂಪಲ್ ಗಳಲ್ಲಿಯೂ ಯುರೇನಿಯಂ ಮಟ್ಟವು ಅನುಮತಿಸಲ್ಪಟ್ಟ ಮಿತಿಗಿಂತ ತುಂಬಾ ಕೆಳಗಿತ್ತು ಮತ್ತು ತಾಯಿ ಮತ್ತು ಶಿಶುಗಳ ಮೇಲೆ ಕನಿಷ್ಠ ಮಟ್ಟದ ಆರೋಗ್ಯ ಪರಿಣಾಮವನ್ನು ಪ್ರದರ್ಶಿಸಿಸುವ ನಿರೀಕ್ಷೆಯಿದೆ ’’ ಎಂದು ಈ ಅಧ್ಯಯನದ ಸಹಲೇಖಕರಾದ ಡಾ. ಅಶೋಕ್ ಶರ್ಮಾ ತಿಳಿಸಿದ್ದರು.
ಸಿಎಂ ಆಕಾಂಕ್ಷಿ ಪಟ್ಟಿಗೆ ಮತ್ತೆರಡು ಸೇರ್ಪಡೆ; ಹೈಕಮಾಂಡ್ ಅಂಗಳದಲ್ಲಿ ನಾಯಕತ್ವ ಬಿಕ್ಕಟ್ಟು
ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವದ ಗೊಂದಲ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತಾತ್ಕಾಲಿಕ ವಿರಾಮ ಹಾಕಲು ಪ್ರಯತ್ನಿಸಿದ್ದಾರೆ. ವಿದೇಶದಿಂದ ರಾಹುಲ್ ಗಾಂಧಿ ವಾಪಸ್ಸಾದ ಬಳಿಕ ನಾಯಕತ್ವದ ಬಗ್ಗೆ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
ಹಳೆಯಂಗಡಿ: ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟ ಇದರ ಆಶ್ರಯದಲ್ಲಿ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಂ.ಹನೀಫ್ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಜೈಕೃಷ್ಣ ಕೋಟ್ಯಾನ್ ಅವರಿಗೆ ಹುಟ್ಟೂರ ಸನ್ಮಾನ ಸಮಾರಂಭವು ಹಳೆಯಂಗಡಿ ಬಿಲ್ಲವ ಭವನದಲ್ಲಿ ರವಿವಾರ ನಡೆಯಿತು. ಸಮಾರಂಭವನ್ನು ಬೊಳ್ಳೂರು ಜುಮಾ ಮಸೀದಿಯ ಮುದಗ್ರಿಸ್ ಮುಹಮ್ಮದ್ ಶರೀಫ್ ಅರ್ಶದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಭಾನ್ವಿತರಿಗೆ ಯಾವುದೇ ಸನ್ಮಾನ ಗೌರವಕ್ಕಿಂತಲೂ ಹುಟ್ಟೂರಿನಲ್ಲಿ ನಡೆಯುವ ಸಾಸಿವೆ ಗಾತ್ರದ ಸನ್ಮಾನವಾದರೂ ಅದು ಬಹುದೊಡ್ಡ ಬೆಲೆಬಾಳುವ ಸನ್ಮಾನ ಎಂದು ನುಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಂ.ಹನೀಫ್, ರಾಜ್ಯದ ಹಲವೆಡೆ ಸನ್ಮಾನ ಸ್ವೀಕರಿಸಿದ್ದೇನೆ. ಆದರೆ ಹುಟ್ಟೂರಿನ ಸನ್ಮಾನ ನೀಡುವಷ್ಟು ಸಂತೋಷ ಇನ್ನೊಂದಿಲ್ಲ ಎಂದ ಅವರು, ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಜೈಕೃಷ್ಣ ಕೋಟ್ಯಾನ್ ಅವರು ಮಾತನಾಡಿ, ಪೂಜಾ ಸಂಸ್ಥೆಯ ಸಮಾಜಿಕ ಕಾರ್ಯಗಳನ್ನು ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದರಲ್ಲಿ ನನ್ನ ಸಂಸ್ಥೆಯ ಜೊತೆಗೆ ಊರಿನ ಎಲ್ಲರ ಸಹಕಾರ ಇದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ಕದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಝನಿ ಬಡಗನ್ನೂರು ಅಭಿನಂದನಾ ನುಡುಗಳನ್ನಾಡಿದರು. ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಹಳೆಯಂಗಡಿ ಅಮ್ಮಾನ್ ಮೆಮೋರಿಯಲ್ ಚರ್ಚ್ ನ ಧರ್ಮಗುರು ರೆಫಾ ಅಮೃತ್ ರಾಜ್ ಖೋಡೆ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಮಾತನಾಡಿ ಸನ್ಮಾನಿತರಿಗೆ ಶುಭಹಾರೈಸಿದರು. ಸಮಾರಂಭದಲ್ಲಿ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಕುಡುಂಬೂರು ಸಾಗ್, ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ ಬಿ.ಇ.ಮುಹಮ್ಮದ್, ಇಂದಿರಾನಗರ ತಖ್ವಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಲತೀಫ್ ಲೈಟ್ಹೌಸ್, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಸಾಗ್, ತೋಕೂರು ಜುಮಾ ಮಸೀದಿಯ ಅಧ್ಯಕ್ಷ ಅಲ್ತಾಫ್ ಹುಸೇನ್ ಮೆಹೆತಾಬ್, ಹಳೆಯಂಗಡಿ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಪಡುತೋಟ ಮೊದಲಾದವರು ಉಪಸ್ಥಿತರಿದ್ದರು. ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಕಾರ್ಯದರ್ಶಿ ವಾಹಿದ್ ತೋಕೂರು ಸ್ವಾಗತಿಸಿದರು. ಮೊಯ್ದೀನ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.
ಸಿಎಂ ಬದಲಾವಣೆ ಚರ್ಚೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ನಾವು ಪ್ರತಿಕ್ರಿಯೆ ನೀಡಲ್ಲ: ಶೋಭಾ ಕರಂದ್ಲಾಜೆ
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರವಿವಾರ ನಗರದ ಜಿಕೆವಿಕೆ ಆವರಣದ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ‘ಸಂಸದ್ ಕ್ರೀಡಾ ಮಹೋತ್ಸವ’ ಭಾಗವಾಗಿ ಅಯೋಜಿಸಲಾಗಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸಂಕಷ್ಟ ಕೇಳುವವರು ಇಲ್ಲ. ಆದರೆ, ಸಿಎಂ ಕುರ್ಚಿ ಬದಲಾವಣೆ ಜಗಳ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ಹೇಳಿದರು. 2036ರ ಒಲಿಂಪಿಕ್ಸ್ ಗೆ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ನಮ್ಮ ಸರಕಾರ ಕೈಗೊಂಡ ಸಂಸದ್ ಕ್ರೀಡಾ ಮಹೋತ್ಸವವನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ಅಭಿಯಾನದ ಭಾಗವಾಗಿ ನನ್ನೊಂದಿಗೆ ಜೊತೆಯಾಗಿ ನಿಂತ ಎಲ್ಲ ಶಾಸಕರಿಗೆ ಧನ್ಯವಾದ ಎಂದರು. ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಪ್ರಮುಖರಿದ್ದರು.
ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸ್ ಬಿ.ವಿ. ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ
ಬೆಂಗಳೂರು: ರವಿವಾರದ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ(ಎಐಸಿಸಿ) ಕಾರ್ಯದರ್ಶಿಯಾಗಿ(ಗುಜರಾತ್ ಉಸ್ತುವಾರಿ) ನೂತನವಾಗಿ ನೇಮಕಗೊಂಡ ಶ್ರೀನಿವಾಸ್ ಬಿ.ವಿ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಶ್ರೀನಿವಾಸ್ ಅವರು ಹೊಸ ಹುದ್ದೆಯನ್ನು ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಭೇಟಿ ನೀಡಿದರು. ಈ ವೇಳೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಅವರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರು, ಎನ್ಎಸ್ಯುಐ ಸದಸ್ಯರು ಮತ್ತು ಬೆಂಬಲಿಗರು ಸ್ವಾಗತಿಸಿದರು. ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿನ ಕ್ವೀನ್ಸ್ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯ ವರೆಗೆ ಬೆಂಬಲಿಗರು ಆಕರ್ಷಕ ಬೈಕ್ ಮತ್ತು ಕಾರು ರ್ಯಾಲಿಯನ್ನು ನಡೆಸಿದರು. ಇಡೀ ಮಾರ್ಗದಲ್ಲಿ, ಸಾರ್ವಜನಿಕರು ಹಾಗೂ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಶ್ರೀನಿವಾಸ್ ಅವರಿಗೆ ಬೃಹತ್ ಹಾರ ಹಾಕಿ ಹಾಗೂ ಹೂವುಗಳನ್ನು ಸುರಿಸಿ, ಶುಭಾಶಯಗಳನ್ನು ತಿಳಿಸಿದರು.
ಮಂಡ್ಯ| ಬೈಕ್ ಗೆ ಸಾರಿಗೆ ಬಸ್ ಢಿಕ್ಕಿ: ಪತಿ ಮೃತ್ಯು, ಪತ್ನಿ ಗಂಭೀರ
ಮಂಡ್ಯ: ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿ ಪತಿ ಮೃತಪಟ್ಟಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಗಾಂಧಿನಗರ ಬಳಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮದ ಕೃಷ್ಣೇಗೌಡ (69) ಮೃತಪಟ್ಟವರು. ಅವರ ಪತ್ನಿ ಯಶೋಧಮ್ಮ(58) ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೃಷ್ಣೆಗೌಡ ದಂಪತಿ ಕೆ.ಆರ್.ಪೇಟೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಮೈಸೂರುನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಬೈಕ್ ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣೇಗೌಡ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; 262 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಹೊಸದಿಲ್ಲಿ,ನ.23: ಮಾದಕವಸ್ತು ನಿಯಂತ್ರಣ ದಳ ಹಾಗೂ ದಿಲ್ಲಿ ಪೊಲೀಸರು ಜಂಟಿಯಾಗಿ ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿದ್ದು, 262 ಕೋಟಿ ರೂ. ಮೌಲ್ಯದ ಮೆಥಾಫೆಟಾಮೈನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ‘ಆಪರೇಶನ್ ಸ್ಪಟಿಕದ ಕೋಟೆ’ಎಂಬ ಹೆಸರಿನಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ದಿಲ್ಲಿಯ ಛತರ್ಪುರ ಪ್ರದೇಶದಲ್ಲಿರುವ ಮನೆಯಿಂದ ಉತ್ಕೃಷ್ಟ ಗುಣಮಟ್ಟದ 328 ಕಿ.ಗ್ರಾಂ.ನಷ್ಟು ಮೆಥಾಫೆಟಾಮೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ. ಹಲವು ತಿಂಗಳಿಂದ ಬೇಹುಗಾರಿಕೆ ಹಾಗೂ ತಾಂತ್ರಿಕ ಕದ್ದಾಲಿಕೆಗಳ ಮೂಲಕ ಸತತವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮವಾಗಿ ಅತ್ಯಂತ ಸುಸಂಘಟಿತವಾಗಿದ್ದ ಈ ಮಾದಕದ್ರವ್ಯ ಕಳ್ಳಸಾಗಣೆ ಜಾಲ ಸರಪಣಿಯನ್ನು ಭೇದಿಸಲು ಸಾಧ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಗಾಲ್ಯಾಂಡ್ನ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇವರ ನಿವಾಸದಲ್ಲಿ ಈ ಮಾದಕದ್ರವ್ಯವನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿತ್ತು. ವಿದೇಶದಿಂದ ಕಾರ್ಯಾಚರಿಸುತ್ತಿರುವ ಜಾಲದ ಕಿಂಗ್ಪಿನ್ ಸೇರಿದಂತೆ ಅದನ್ನು ನಿರ್ವಹಿಸುತ್ತಿರುವ ಇತರ ಆರೋಪಿಗಳನ್ನು ಕೂಡಾ ಗುರುತಿಸಲಾಗಿ. ಈ ಜಾಲದ ಸೂತ್ರಧಾರಿಯು ಈ ಹಿಂದೆ ದಿಲ್ಲಿಯಲ್ಲಿ 82.5 ಗ್ರಾಂ. ಉನ್ನತ ದರ್ಜೆ ಕೊಕೈನ್ ಮಾದಕದ್ರವ್ಯ ಪತ್ತೆ ಪ್ರಕರಣದಲ್ಲಿ ದಿಲ್ಲಿಯ ಎನ್ಸಿಬಿಗೆ ಬೇಕಾಗಿದ್ದಾನೆ. ಈತನನ್ನು ಭಾರತಕ್ಕೆ ಕರೆತರಲು ಅಂತಾರಾಷ್ಟ್ರೀಯ ಕಾನೂನು ಅನುಷ್ಠಾನದ ಭಾಗೀದಾರರ ಜೊತೆ ಮಾತುಕತೆಗಳು ನಡೆಯುತ್ತಿವೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ. ಆಪರೇಶನ್ ಸ್ಫಟಿಕದ ಕೋಟೆ ಕಾರ್ಯಾಚರಣೆಯ ಮೂಲಕ ಅಂತಾರಾಷ್ಟ್ರೀಯ ಮಾದಕದ್ರವ್ಯ ಜಾಲವನ್ನು ಭೇದಿಸಿದ ಎನ್ಸಿಬಿ ಹಾಗೂ ದಿಲ್ಲಿ ಪೊಲೀಸರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ‘‘ನಮ್ಮ ಸರಕಾರವು ಅಪೂರ್ವ ವೇಗದಲ್ಲಿ ಮಾದಕದ್ರವ್ಯ ಜಾಲಗಳನ್ನು ಭಗ್ನ್ರಗೊಳಿಸುತ್ತಿವೆ. ಭಾರತವನ್ನು ಮಾದಕಮುಕ್ತಗೊಳಿಸುವ ಪ್ರಧಾನಿ ಮೋದಿಜೀಯವರ ದೂರದೃಷ್ಟಿಯನ್ನು ಸಾಧಿಸಲು, ವಿವಿಧ ಏಜೆನ್ಸಿಗಳ ಸಮನ್ವಯದ ಕಾರ್ಯಾಚರಣೆಗೆ ಇದೊಂದು ಉಜ್ವಲ ನಿದರ್ಶನವಾಗಿದೆ. ಎನ್ಸಿಬಿ ಹಾಗೂ ದಿಲ್ಲಿ ಪೊಲೀಸರಿಗೆ ಜಂಟಿ ಅಭಿನಂದನೆಗಳು ’’ ಎಂದು ಹೇಳಿದ್ದಾರೆ.
ಬೆಂಗಳೂರು: ಎಟಿಎಂ ಹಣ ದರೋಡೆ ಪ್ರಕರಣದ ಸೂತ್ರಧಾರ ಪೊಲೀಸ್ ಕಾನ್ಸ್ಟೇಬಲ್ ಅಮಾನತು
ಎಲ್ಲ ಠಾಣೆಯ ಸಿಬ್ಬಂದಿಗಳ ಮೇಲ್ವಿಚಾರಣೆಗೆ ಆಯುಕ್ತರ ಸೂಚನೆ
ಜಿ20 ಅಧ್ಯಕ್ಷತೆಯನ್ನು ಅಮೆರಿಕದ ಪ್ರತಿನಿಧಿಗೆ ಹಸ್ತಾಂತರಿಸುವುದಿಲ್ಲ: ದಕ್ಷಿಣ ಆಫ್ರಿಕಾ
ಜೊಹಾನ್ಸ್ ಬರ್ಗ್, ನ.23: ಜಿ20 ಗುಂಪಿನ ಮುಂದಿನ ಅಧ್ಯಕ್ಷತೆಯನ್ನು ಅಮೆರಿಕ ರಾಯಭಾರಿ ಕಚೇರಿಯ `ಕಿರಿಯ ಅಧಿಕಾರಿಗೆ' ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಹಸ್ತಾಂತರಿಸುವುದಿಲ್ಲ ಎಂದು ಅಧ್ಯಕ್ಷರ ಕಚೇರಿ ರವಿವಾರ ಹೇಳಿದೆ. ನವೆಂಬರ್ 22ರಂದು ಜೊಹಾನ್ಸ್ ಬರ್ಗ್ ನಲ್ಲಿ ಆರಂಭಗೊಂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದಿದ್ದರು. `ಅಧ್ಯಕ್ಷರು ಜಿ20 ಅಧ್ಯಕ್ಷತೆಯನ್ನು ರಾಯಭಾರಿ ಕಚೇರಿಯ ಅಧಿಕಾರಿಗೆ ಹಸ್ತಾಂತರಿಸುವುದಿಲ್ಲ. ಅಮೆರಿಕವು ಜಿ20ರ ಸದಸ್ಯನಾಗಿದೆ ಮತ್ತು ಅವರು ದೇಶವನ್ನು ಪ್ರತಿನಿಧಿಸಲು ಅಧ್ಯಕ್ಷರು ನೇಮಿಸಿದ ವಿಶೇಷ ಪ್ರತಿನಿಧಿ ಅಥವಾ ಸಚಿವರಂತಹ ಉನ್ನತ ಮಟ್ಟದ ಅಧಿಕಾರಿಯನ್ನು ಕಳುಹಿಸಬೇಕಿತ್ತು. ಇಲ್ಲದಿದ್ದರೆ ಸರ್ಕಾರಿ ಕಚೇರಿಯಲ್ಲಿ ಸಮಾನ ಶ್ರೇಣಿಯ ಅಧಿಕಾರಿಗಳ ನಡುವೆ ಅಧಿಕಾರ ಹಸ್ತಾಂತರ ನಡೆಯುತ್ತದೆ' ಎಂದು ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ರೊನಾಲ್ಡ್ ಲಮೋಲಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೆರಿಕ 2026ರಲ್ಲಿ ಜಿ20ರ ಅಧ್ಯಕ್ಷತೆ ವಹಿಸಲಿದೆ. ತನ್ನ ಅನುಪಸ್ಥಿತಿಯಲ್ಲಿ ಜೊಹಾನ್ಸ್ ಬರ್ಗ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಯಾವುದೇ ಜಂಟಿ ಘೋಷಣೆ ಅಂಗೀಕರಿಸುವುದಕ್ಕೆ ತನ್ನ ಆಕ್ಷೇಪವಿದೆ ಎಂದು ಅಮೆರಿಕ ಹೇಳಿತ್ತು. ಅಮೆರಿಕದ ವಿರೋಧದ ಹೊರತಾಗಿಯೂ ಜಿ20 ಗುಂಪಿನ ಜಾಗತಿಕ ನಾಯಕರು ಜಿ20 ಶೃಂಗಸಭೆಯ ಪ್ರಾರಂಭದಲ್ಲಿ ಘೋಷಣೆಯನ್ನು ಅಂಗೀಕರಿಸಿದ್ದು ಒಂದು ದೇಶದಿಂದ ನಮ್ಮನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷರ ವಕ್ತಾರ ವಿನ್ಸೆಂಟ್ ಮಗ್ವೆನ್ಯಾ ಹೇಳಿದ್ದಾರೆ. ಜಿ20 ಶೃಂಗಸಭೆಯ ಘೋಷಣೆ `. ಸುಡಾನ್, ಕಾಂಗೋ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಉಕ್ರೇನ್ನಲ್ಲಿ ನ್ಯಾಯಯುತ, ಸಮಗ್ರ ಮತ್ತು ಶಾಶ್ವತ ಶಾಂತಿಗಾಗಿ ಕೆಲಸ ಮಾಡುವುದಾಗಿ' ಪ್ರತಿಜ್ಞೆ ಮಾಡಿದೆ.
ಬೆಂಗಳೂರು ಮೆಗಾ ದರೋಡೆ ಕೇಸ್; ಮತ್ತೊಬ್ಬ ಆರೋಪಿ ಸೆರೆ, ಕಾನ್ಸ್ಟೆಬಲ್ ಅಮಾನತು
ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸದ್ಯ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, 80 ಲಕ್ಷ ರೂ. ದೊಂದಿಗೆ ನಾಪತ್ತೆಯಾಗಿರುವ ಮತ್ತೊಬ್ಬ ದಿನೇಶ್ಗಾಗಿ ನೆರೆ ರಾಜ್ಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಜೊತೆಗೆ ಪ್ರಕರಣದ ಮಾಸ್ಟರ್ಮೈಂಡ್ ಆದ ಗೋವಿಂದಪುರ ಠಾಣೆಯ ಬಂಧಿತ ಕಾನ್ಸ್ಟೆಬಲ್ ಅಣ್ಣಪ್ಪ ನಾಯ್ಕ್ನನ್ನು ಅಮಾನತುಗೊಳಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಕೆಳ ಹಂತದ ಸಿಬ್ಬಂದಿ ಮೇಲೆ ನಿಗಾ ವಹಿಸಲು ಪರಮೇಶ್ವರ್ ಸೂಚನೆ.
ಜಿ20 ಘೋಷಣೆ ಬಹುಪಕ್ಷೀಯತೆಗೆ ಬದ್ಧತೆಯನ್ನು ಪ್ರತಿಬಿಂಬಿಸಿದೆ: ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ
ಜೊಹಾನ್ಸ್ ಬರ್ಗ್, ನ.23: ಜಿ20 ನಾಯಕರು ಒಮ್ಮತದಿಂದ ಅನುಮೋದಿಸಿದ ಶೃಂಗಸಭೆಯ ಘೋಷಣೆಯು `ಬಹುಪಕ್ಷೀಯ ಸಹಕಾರಕ್ಕೆ ನವೀಕೃತ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ರವಿವಾರ ಹೇಳಿದ್ದಾರೆ. ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಶೃಂಗಸಭೆಯನ್ನು ಬಹಿಷ್ಕರಿಸಿದ್ದ ಅಮೆರಿಕದ ತೀವ್ರ ಆಕ್ಷೇಪಣೆ ಮತ್ತು ವಿರೋಧದ ಹೊರತಾಗಿಯೂ ಹವಾಮಾನ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳನ್ನು ಪರಿಹರಿಸಲು ಕರೆ ನೀಡುವ ಘೋಷಣೆಯನ್ನು ಸಭೆ ಅನುಮೋದಿಸಿದೆ. ಎಲ್ಲಾ ಮೂಲಗಳಿಂದ ಹವಾಮಾನ ನಿಧಿಗಳನ್ನು ವಿಸ್ತರಿಸುವ ಅಗತ್ಯವನ್ನು ಜಿ20 ಶೃಂಗಸಭೆ ಪರಿಗಣಿಸಿದೆ. ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಜಿ20 ಧೈರ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ರಮಫೋಸ ಪ್ರತಿಪಾದಿಸಿದ್ದಾರೆ. ► ಜಿ20 ಶೃಂಗಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಿದ ನಿರ್ಣಯದ ಪ್ರಮುಖ ಅಂಶಗಳು: ► ಯಾವುದೇ ರಾಷ್ಟ್ರದ ಪ್ರಾದೇಶಿಕ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬೆದರಿಕೆ ಅಥವಾ ಬಲ ಪ್ರಯೋಗದ ಬಳಕೆಯಿಂದ ದೂರ ಇರಬೇಕು. ► ಆಕ್ರಮಿತ ಫೆಲೆಸ್ತೀನಿಯನ್ ಪ್ರಾಂತ, ಉಕ್ರೇನ್, ಸುಡಾನ್, ಕಾಂಗೋ ಗಣರಾಜ್ಯದಲ್ಲಿ `ನ್ಯಾಯಯುತ, ಸಮಗ್ರ ಮತ್ತು ಶಾಶ್ವತ ಶಾಂತಿ' ನೆಲೆಸಲು ಜಾಗತಿಕ ಸಮುದಾಯ ಪ್ರಯತ್ನಿಸಬೇಕು. ► ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು, ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ) ನಿಯಮಗಳಿಗೆ ವಿರುದ್ಧವಾದ ಏಕಪಕ್ಷೀಯ ವ್ಯಾಪಾರ ಕ್ರಮಗಳು, ಸಾಂಕ್ರಾಮಿಕ ರೋಗಗಳು ಅಥವಾ ನೈಸರ್ಗಿಕ ವಿಕೋಪಗಳು ನಿರ್ಣಾಯಕ, ವಿರಳ ಖನಿಜಗಳ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗದಂತೆ ಸೂಕ್ತ ಕ್ರಮದ ಅಗತ್ಯವಿದೆ. ವಿರಳ, ನಿರ್ಣಾಯಕ ಖನಿಜಗಳ ಪೂರೈಕೆಯಲ್ಲಿ ಚೀನಾದ ಪ್ರಾಬಲ್ಯವು ಜಾಗತಿಕ ಕೈಗಾರಿಕಾ ಕ್ಷೇತ್ರದಲ್ಲಿ ಕಳವಳಕ್ಕೆ ಕಾರಣವಾಗಿದೆ. ► ದೇಶದೊಳಗೆ ಮತ್ತು ದೇಶಗಳ ನಡುವೆ ಸಂಪತ್ತು ಮತ್ತು ಅಭಿವೃದ್ಧಿಯಲ್ಲಿನ ಅಸಮಾನತೆಯನ್ನು ಪರಿಹರಿಸುವ ಅಗತ್ಯವನ್ನು ಘೋಷಣೆ ಒತ್ತಿಹೇಳಿದೆ.
ಉತ್ತರ ಪ್ರದೇಶ | ಕೆಮ್ಮಿನ ಸಿರಪ್ ಅಕ್ರಮ ಮಾರಾಟ; 12 ಔಷಧ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು
ಜೌನ್ಪುರ, ನ. 23: ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಕೊಡೈನ್ ಇರುವ ಕೆಮ್ಮಿನ ಸಿರಪ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ 12 ಔಷಧ ಅಂಗಡಿಗಳ ಮಾಲಕರು ಹಾಗೂ ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಔಷದ ನಿರೀಕ್ಷಕ ರಜತ್ ಕುಮಾರ್ ಪಾಂಡೆ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ಶ್ರೀವಾತ್ಸವ ಹೇಳಿದ್ದಾರೆ. ಆರೋಪಿಗಳಲ್ಲಿ ಕೆಮ್ಮಿನ ಸಿರಪ್ ಅಕ್ರಮ ಮಾರಾಟ ಜಾಲದ ರೂವಾರಿಯಾಗಿರುವ ಶುಭಂ ಜೈಸ್ವಾಲ್ ಹಾಗೂ ಆತನ ತಂದೆ ಭೋಲಾ ಪ್ರಸಾದ್ ಕೂಡ ಸೇರಿದ್ದಾರೆ. ಅವರ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದೆ. ಔಷದ ಇಲಾಖೆಯ ತನಿಖೆಯಲ್ಲಿ ಸುಮಾರು 57 ಕೋಟಿ ರೂ. ಮೌಲ್ಯದ 37 ಲಕ್ಷಕ್ಕೂ ಅಧಿಕ ಬಾಟಲಿ ಕೊಡೈನ್ ಸಿರಪ್ ಅನ್ನು 12ಕ್ಕಿಂತಲೂ ಹೆಚ್ಚು ಔಷಧ ಅಂಗಡಿಗಳು ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡಿರುವುದು ಕಂಡು ಬಂದಿದೆ. ಗಾಝಿಯಾದಬಾದ್ ನಲ್ಲಿ ಸಿರಪ್ ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಂಡ ಬಳಿಕ ಈ ಜಾಲ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶ | ಅಂಗವಿಕಲ ವ್ಯಕ್ತಿಗೆ ಸಂಬಂಧಿಕರಿಂದ ಥಳಿತ, ಮೂತ್ರ ವಿಸರ್ಜನೆ; ಇಬ್ಬರ ಬಂಧನ
ಭೋಪಾಲ, ನ. 23: ಅಂಗವಿಕಲ ವ್ಯಕ್ತಿಯೋರ್ವನಿಗೆ ಆತನ ಸಂಬಂಧಿಕರೇ ಕ್ರೂರವಾಗಿ ಹಲ್ಲೆ ನಡೆಸಿದ ಹಾಗೂ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ. ಈ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್ ಪಂಪ್ ಒಂದರ ಸಮೀಪ ಚಿತ್ರೀಕರಿಸಲಾದ 37 ಸೆಕೆಂಡ್ಗಳ ವೀಡಿಯೊದಲ್ಲಿ ಅಂಗವಿಕಲ ವ್ಯಕ್ತಿಯೋರ್ವರಿಗೆ ಆತನ ಸಂಬಂಧಿಕರು ಥಳಿಸುತ್ತಿರುವುದು ಹಾಗೂ ಆತನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ. ಆದರೂ ಅಲ್ಲಿದ್ದವರು ನೆರವಿಗೆ ಧಾವಿಸದೆ ಘಟನೆಯನ್ನು ವೀಕ್ಷಿಸುತ್ತಿರುವುದು, ವೀಡಿಯೊ ಮಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ವೀಡಿಯೊ ವೈರಲ್ ಆದ ದಿನದ ಬಳಿಕ ಘಟನೆಗೆ ಸಂಬಂಧಿಸಿ ಆರೋಪಿಗಳಾದ ರಾಜ್ಕುಮಾರ್ ಲವಾಂಶಿ ಹಾಗೂ ಗೋವಿಂದ್ ಲವಾಂಶಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭತ್ತ ಮಾರಾಟ ಮಾಡಿ ಮದ್ಯ ಸೇವಿಸಿದ ಬಳಿಕ ಸಂತ್ರಸ್ತ ಹಾಗೂ ಆರೋಪಿಗಳು ಮನೆಗೆ ಹಿಂದಿರುಗುತ್ತಿದ್ದಾಗ ಅವರ ನಡುವೆ ಜಗಳ ಆರಂಭವಾಯಿತು. ಅದು ಹಲ್ಲೆಗೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಸಂತ್ರಸ್ತನ ಮೇಲೆ ಹತ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮತ್ತೋರ್ವ ಸಂತ್ರಸ್ತನನ್ನು ಹಿಡಿದು ಎಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಶೀಲಾ ಸುರಾನಾ ಆರೋಪಿಗಳ ಬಂಧನವನ್ನು ದೃಢಪಡಿಸಿದ್ದಾರೆ. ಅಲ್ಲದೆ, ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗವಾಯಿ ಉತ್ತರಾಧಿಕಾರಿಯಾಗಿ ನ್ಯಾ. ಸೂರ್ಯ ಕಾಂತ್; ನ.24ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ
ಹೊಸದಿಲ್ಲಿ, ನ. 23: ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೂರ್ಯ ಕಾಂತ್ ಅವರು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ 370ನೇ ವಿಧಿಯ ರದ್ದು, ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ, ಪೆಗಾಸಸ್ ಸ್ಪೈವೇರ್ ಪ್ರಕರಣಗಳ ಕುರಿತಂತೆ ಹಲವು ಮಹತ್ವದ ತೀರ್ಪು, ಆದೇಶಗಳನ್ನು ನೀಡಿದ್ದರು. ಸೂರ್ಯ ಕಾಂತ್ ಅವರು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್ 30ರಂದು ನೇಮಕ ಮಾಡಲಾಗಿತ್ತು. ಅವರು ಮುಂದಿನ ಸುಮಾರು 15 ತಿಂಗಳು ಅಧಿಕಾರದಲ್ಲಿ ಇರಲಿದ್ದಾರೆ. 2027 ಫೆಬ್ರವರಿ 9ರಂದು ತನ್ನ 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ.
Bengaluru | ಎಟಿಎಂ ಹಣ ದರೋಡೆ ಪ್ರಕರಣ: ಪೊಲೀಸ್ ಠಾಣೆಗೆ ತಾನೇ ಬಂದು ಶರಣಾದ ಮತ್ತೊಬ್ಬ ಆರೋಪಿ
ಬಂಧಿತರ ಸಂಖ್ಯೆ 7ಕ್ಕೆ ಏರಿಕೆ
ಮಧ್ಯಪ್ರದೇಶ | ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲ ಭೇದಿಸಿದ ಪುಣೆ ಪೋಲಿಸರು; 36 ಜನರ ಬಂಧನ, ಶಸ್ತ್ರಾಸ್ತ್ರಗಳು ವಶ
ಪುಣೆ,ನ.23: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮರ್ತಿ ಗ್ರಾಮದಿಂದ ಕಾರ್ಯಾಚರಿಸುತ್ತಿದ್ದ ಅಂತರರಾಜ್ಯ ಅಕ್ರಮ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಪುಣೆ ಪೋಲಿಸರು 36 ಜನರನ್ನು ಬಂಧಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ವಾರಗಳಲ್ಲಿ ನಗರದ ವಿವಿಧೆಡೆಗಳಿಂದ ಒಟ್ಟು 21ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದ ಪುಣೆ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಅವು ಮಧ್ಯಪ್ರದೇಶದಿಂದ ಪೂರೈಕೆಯಾಗಿದ್ದವು ಎನ್ನುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮ.ಪ್ರದೇಶ ಪೋಲಿಸರೊಂದಿಗೆ ಉಮರ್ತಿ ಗ್ರಾಮದಲ್ಲಿ ದಾಳಿ ನಡೆಸಿದ ಪುಣೆ ಪೋಲಿಸರು 50 ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳನ್ನು ಧ್ವಂಸಗೊಳಿಸಿದ್ದಾರೆ. 36 ಜನರನ್ನು ಬಂಧಿಸಲಾಗಿದೆ. ಇದು ಶಸ್ತ್ರಾಸ್ತ್ರಗಳ ಪೂರೈಕೆ ಜಾಲವಾಗಿದೆ. ಅವುಗಳನ್ನು ಪುಣೆಗೆ ಕಳುಹಿಸಿದ್ದ ವ್ಯಕ್ತಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ಜಾಲದಲ್ಲಿ ಹಲವಾರು ವ್ಯಕ್ತಿಗಳು ಭಾಗಿಯಾಗಿದ್ದು,ಈಗಲೂ ವಿಚಾರಣೆ ನಡೆಯುತ್ತಿದೆ ಎಂದು ಜಂಟಿ ಪೋಲಿಸ್ ಆಯುಕ್ತ ರಂಜನ್ ಕುಮಾರ್ ಶರ್ಮಾ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್ಐಆರ್ ಹಂತ 2 ಚುನಾವಣಾ ಅಧಿಕಾರಿಗಳ ಸಾವುಗಳು: ಬಿಜೆಪಿಗೆ ಖರ್ಗೆ ತರಾಟೆ
ಹೊಸದಿಲ್ಲಿ,ನ.23: ಪ್ರಸಕ್ತ ನಡೆಯುತ್ತಿರುವ ಎರಡನೇ ಹಂತದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಕೆಲಸದ ಹೊರೆಯಿಂದಾಗಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ)ಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಓರ್ವ ಬಿಎಲ್ಒ ಆತ್ಮಹತ್ಯೆ, ನಂತರ ಪಶ್ಚಿಮ ಬಂಗಾಳದಲ್ಲಿಯೂ ಇಂತಹುದೇ ಘಟನೆಯ ಬಳಿಕ ವಿವಾದ ಭುಗಿಲೆದ್ದಿದೆ. ಆರು ರಾಜ್ಯಗಳಲ್ಲಿ 16 ಬಿಎಲ್ಒಗಳು ಸಾವನ್ನಪಿದ್ದಾರೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ತನ್ನ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಖರ್ಗೆ, ಚುನಾವಣಾ ವಂಚನೆಯು ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ‘ಬಲವಂತದ ಕ್ರಮ’ ಎಂದು ಬಣ್ಣಿಸಿರುವ ಅವರು ಅದನ್ನು ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ ಸಮಯಗಳಿಗೆ ಹೋಲಿಸಿದ್ದಾರೆ. ಬಿಎಲ್ಒಗಳ ಸಾವುಗಳ ಕುರಿತು ಚುನಾವಣಾ ಆಯೋಗದ ಮೌನವನ್ನೂ ಅವರು ಪ್ರಶ್ನಿಸಿದ್ದಾರೆ. ‘ಬಿಜೆಪಿಯ ಮತಗಳ್ಳತನ ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ. ಅತಿಯಾದ ಕೆಲಸದ ಹೊರೆಯಿಂದಾಗಿ ಬಿಎಲ್ಒಗಳು ಮತ್ತು ಮತಗಟ್ಟೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪೀತಿಪಾತ್ರನ್ನು ಕಳೆದುಕೊಂಡಿರುವ ಪ್ರತಿಯೊಂದೂ ಕುಟುಂಬಕ್ಕೆ ನನ್ನ ಗಾಢ ಸಂತಾಪಗಳು. ವಾಸ್ತವದಲ್ಲಿ ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚಾಗಿದ್ದು,ಇದು ಅತ್ಯಂತ ಆತಂಕಕಾರಿಯಾಗಿದೆ. ಈ ಕುಟುಂಬಗಳಿಗೆ ನ್ಯಾಯವನ್ನು ಒದಗಿಸುವವರು ಯಾರು? ಬಿಜೆಪಿ ಮತಗಳ್ಳತನದ ಮೂಲಕ ಅಧಿಕಾರದ ರುಚಿಯನ್ನು ಅನುಭವಿಸುವುದರಲ್ಲಿ ವ್ಯಸ್ತವಾಗಿದ್ದರೆ,ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ. ಯಾವುದೇ ಪೂರ್ವ ಯೋಜನೆಯಿಲ್ಲದ ಅವಸರದ,ಬಲವಂತದ ಎಸ್ಐಆರ್ ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ಗಳನ್ನು ನೆನಪಿಸಿದೆ ಎಂದಿದ್ದಾರೆ. ಆತ್ಮಹತ್ಯೆಗಳು ಬಿಜೆಪಿಯ ಅಧಿಕಾರದಾಹದ ಫಲಶ್ರುತಿ ಎಂದು ಬಣ್ಣಿಸಿರುವ ಖರ್ಗೆ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎಸ್ಐಆರ್ ವಿರುದ್ಧ ಧ್ವನಿಯೆತ್ತುವಂತೆ ಜನತೆಯನ್ನು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ: ಸೈಬರ್ ವಂಚನೆ ಹಣದ ಚಲಾವಣೆಗೆ ಜನಧನ್ ಖಾತೆಗಳ ಬಳಕೆ, ಮೂವರ ಬಂಧನ
ಭೋಪಾಲ,ನ.23: ಬ್ಯಾಂಕ್ ಖಾತೆಗಳು ಇಲ್ಲದವರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸಲು ಪಿಎಂ ಜನಧನ್ ಯೋಜನೆಯಡಿ ಸೃಷ್ಟಿಸಲಾಗಿದ್ದ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳನ್ನು ಈಗ ಮಧ್ಯಪ್ರದೇಶದಲ್ಲಿ ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಈವರೆಗೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ಲೂಟಿ ಮಾಡಿದ ಹಣದ ಚಲಾವಣೆಗಾಗಿ ವಂಚಕರು ಏಳು ಬ್ಯಾಂಕ್ ಖಾತೆಗಳ ದುರ್ಬಳಕೆ ಮಾಡಿಕೊಂಡಿದ್ದಾರೆ. ಓರ್ವ ಮೃತ ವ್ಯಕ್ತಿಯ ಖಾತೆ ಸೇರಿದಂತೆ ಈ ಪೈಕಿ ಐದು ಖಾತೆಗಳು ಜನಧನ್ ಬ್ಯಾಂಕ್ ಖಾತೆಗಳಾಗಿವೆ. ಇತ್ತೀಚಿಗೆ ದಿನಗೂಲಿ ಕಾರ್ಮಿಕ ಬಿಸ್ರಾಮ್ ಇವ್ನೆ (40),ಜೂನ್ 2025ರಿಂದ ತನ್ನ ಜನಧನ್ ಖಾತೆಯ ಮೂಲಕ ಸುಮಾರು ಎರಡು ಕೋಟಿ ರೂ.ಗಳ ವಹಿವಾಟುಗಳು ನಡೆದಿವೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತನ್ನ ಕೆವೈಸಿ ವಿವರಗಳ ನವೀಕರಣಕ್ಕಾಗಿ ಬ್ಯಾಂಕಿಗೆ ಭೇಟಿ ನೀಡಿದಾಗ ಈ ವಿಷಯ ಅವರಿಗೆ ಗೊತ್ತಾಗಿತ್ತು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬೇತುಲ್ ಜಿಲ್ಲಾ ಎಸ್ಪಿ ವೀರೇಂದ್ರ ಜೈನ್ ಅವರು,ಜಿಲ್ಲಾ ಪೋಲಿಸ್ನ ಸೈಬರ್ ಸೆಲ್ ಈ ಬಗ್ಗೆ ತನಿಖೆ ನಡೆಸಿದ್ದು,ಖಾತೆಯಲ್ಲಿ ಜೂನ್ನಿಂದ ಸುಮಾರು 1.5 ಕೋಟಿ ರೂ.ಗಳ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು. ನಂತರ ಇಂತಹುದೇ ಇನ್ನೂ ಕೆಲವು ದೂರುಗಳ ಆಧಾರದಲ್ಲಿ ಪೋಲಿಸರು ನಡೆಸಿದ ತನಿಖೆಯಲ್ಲಿ ನಾಲ್ಕು ಜನಧನ್ ಖಾತೆಗಳು ಸೇರಿದಂತೆ ಇನ್ನೂ ಆರು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 9.84 ಕೋಟಿ ರೂ.ಗಳ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯ ವಿಷಯವೆಂದರೆ ಶಂಕಾಸ್ಪದ ಹಣಕಾಸು ವಹಿವಾಟುಗಳು ನಡೆದಿರುವ ಒಂದು ಜನಧನ್ ಖಾತೆಯು ರಾಜೇಂದ್ರ ವರ್ಡೆ ಎನ್ನುವವರ ಹೆಸರಿನಲ್ಲಿದ್ದು, ಅವರು ಜೀವಂತವಾಗಿಲ್ಲ. ಕಾಲೇಜು ವಿದ್ಯಾರ್ಥಿನಿ ನರ್ಮದಾ ಇವ್ನೆಯ ವಿದ್ಯಾರ್ಥಿ ವೇತನ ಖಾತೆಯಲ್ಲಿಯೂ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ. ಈ ಖಾತೆಗಳಲ್ಲಿ 9.84 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಇರಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ಕಂಡು ಬಂದಿದೆ. ವಂಚಕರು ಇವುಗಳನ್ನು ಮ್ಯೂಲ್ ಖಾತೆಗಳನ್ನಾಗಿ ಬಳಸಿಕೊಂಡಿದ್ದರು. ಮಹಾರಾಷ್ಟ್ರ,ಕರ್ನಾಟಕ,ದಿಲ್ಲಿ ಮತ್ತು ಹರ್ಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸೈಬರ್ ವಂಚನೆಗಳ ಮೂಲಕ ದೋಚಲಾಗಿದ್ದ ಹಣವನ್ನು ಈ ಖಾತೆಗಳಲ್ಲಿ ಇರಿಸಲಾಗಿತ್ತು ಎಂದು ಎಸ್ಪಿ ಜೈನ್ ತಿಳಿಸಿದರು.
ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ರದ್ದುಗೊಳಿಸುವ ಪ್ರಯತ್ನ: ವಿಪಕ್ಷ
ಹೊಸದಿಲ್ಲಿ,ನ.23: ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳು,ಅದು ಇತ್ತೀಚಿಗೆ ತಂದಿರುವ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಮತ್ತು ರದ್ದುಗೊಳಿಸುವ ಪ್ರಯತ್ನವಾಗಿದ್ದು,ಉದ್ಯೋಗದಾತರ ಪರವಾಗಿವೆ ಎಂದು ಕಿಡಿಕಾರಿವೆ. ಎಕ್ಸ್ ಪೋಸ್ಟ್ನಲ್ಲಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ನಿಯಮಗಳನ್ನು ಇನ್ನೂ ಅಧಿಸೂಚಿಸಿಲ್ಲವಾದರೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಸಂಬಂಧಿತ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮರು-ಪ್ಯಾಕ್ ಮಾಡಲಾಗಿದೆ ಮತ್ತು ಅವುಗಳನ್ನು ಏನೋ ಕ್ರಾಂತಿಕಾರಿ ಸುಧಾರಣೆಗಳೆಂಬಂತೆ ಮಾರ್ಕೆಟಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಭಾರೀ ಪ್ರಚಾರದೊಂದಿಗೆ ಪರಿಚಯಿಸಲಾಗಿರುವ ನೂತನ ಕಾರ್ಮಿಕ ಸಂಹಿತೆಗಳಡಿ ‘ಶ್ರಮಿಕ ನ್ಯಾಯ’ವನ್ನು ವಾಸ್ತವವನ್ನಾಗಿ ಮಾಡಲು ಮೋದಿ ಸರಕಾರವು ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂ.ಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ನಗರ ಪ್ರದೇಶಗಳಲ್ಲಿನ ಭಾರತೀಯ ಕಾರ್ಮಿಕರಿಗೆ ಉದ್ಯೋಗ ಖಾತರಿ ಕಾಯ್ದೆಯನ್ನು ಖಚಿತಪಡಿಸಬೇಕು ಎಂದಿರುವ ರಮೇಶ,ಆದರೆ ಈ ಸಂಹಿತೆಗಳು ನರೇಗಾ ಸೇರಿದಂತೆ ದಿನಕ್ಕೆ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ, 25 ಲಕ್ಷ ರೂಗಳ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸಲು ಆರೋಗ್ಯ ಹಕ್ಕು ಕಾನೂನು,ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಕಾಯ್ದೆ,ಜೀವವಿಮೆ ಮತ್ತು ಅಪಘಾತ ವಿಮೆ ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಹಾಗೂ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಗುತ್ತಿಗೆಯಾಧಾರಿತ ಉದ್ಯೋಗ ಪದ್ಧತಿಗೆ ಅಂತ್ಯ;ಶ್ರಮಿಕ ನ್ಯಾಯವನ್ನು ವಾಸ್ತವವಾಗಿಸಲು ಕಾರ್ಮಿಕರ ಈ ಐದು ಅಗತ್ಯ ಬೇಡಿಕೆಗಳನ್ನು ಈಡೇರಿಸುತ್ತವೆಯೇ ಎಂದು ಪ್ರಶ್ನಿಸಿದ್ದಾರೆ. ಕಷ್ಟ ಪಟ್ಟು ಪಡೆಯಲಾಗಿದ್ದ 29 ಕಾರ್ಮಿಕ ಕಾನೂನುಗಳು ಈವರೆಗೆ ಕಾರ್ಮಿಕರಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ನೀಡಿದ್ದವು,ಆದರೆ ನೂತನ ಕಾರ್ಮಿಕ ಸಂಹಿತೆಗಳು ಈ ಕಾನೂನುಗಳನ್ನು ರದ್ದುಗೊಳಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಿಪಿಎಂ, ಹಲವು ಮಿತಿಗಳ ಹೊರತಾಗಿಯೂ ಸೂಕ್ತ ವೇತನ,ಕೆಲಸದ ಸಮಯ,ಸಾಮಾಜಿಕ ಭದ್ರತೆ,ಕೈಗಾರಿಕಾ ಸುರಕ್ಷತೆ ಮತ್ತು ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗದಾತರ ನಡುವೆ ಒಪ್ಪಂದಕ್ಕೆ ಅವಕಾಶ ಇವು ಸ್ವಲ್ಪ ಮಟ್ಟಿಗಾದರೂ ಅಸ್ತಿತ್ವದಲ್ಲಿದ್ದವು. ನೂತನ ಸಂಹಿತೆಗಳು ಸರಳೀಕರಣದ ಬದಲು ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ದುರ್ಬಲಗೊಳಿಸಲು ಮತ್ತು ರದ್ದುಗೊಳಿಸಲು ಉದ್ದೇಶಿಸಿವೆ. ಅವು ಉದ್ಯೋಗದಾತರ ಪರವಾಗಿವೆ ಎಂದು ಹೇಳಿದೆ. ನೂತನ ಕಾರ್ಮಿಕ ಸಂಹಿತೆಗಳು ಉದ್ಯೋಗಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂಬ ಸರಕಾರದ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದೂ ಸಿಪಿಎಂ ಪ್ರತಿಪಾದಿಸಿದೆ.
ರಾವಣನ ಪತನಕ್ಕೆ ದುರಹಂಕಾರವೇ ಕಾರಣವಾಗಿತ್ತು: ಬಿಜೆಪಿ ವಿರುದ್ಧ ಏಕನಾಥ ಶಿಂದೆ ಪರೋಕ್ಷ ದಾಳಿ
ಮುಂಬೈ,ನ.23: ಶಿವಸೇನೆಯ ಶಾಸಕರನ್ನು ಬೇಟೆಯಾಡಲು ಪ್ರಯತ್ನಕ್ಕಾಗಿ ಮಿತ್ರಪಕ್ಷ ಬಿಜೆಪಿಯನ್ನು ಟೀಕಿಸಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರು, ತನ್ನ ಪಕ್ಷದ ಬೆನ್ನು ಬೀಳುತ್ತಿರುವವರಿಗೆ ರಾವಣನ ಗತಿಯೇ ಎದುರಾಗಲಿದೆ ಎಂದು ಹೇಳಿದ್ದಾರೆ. ಶಿಂದೆ ಅವರು ನಗರ ಪಂಚಾಯತ್ ಅಧ್ಯಕ್ಷ ಹುದ್ದೆಗೆ ತನ್ನ ಪಕ್ಷದ ಅಭ್ಯರ್ಥಿಯಾಗಿರುವ ಭರತ ರಾಜಪೂತ್ ಪರ ಪ್ರಚಾರಕ್ಕಾಗಿ ದಹನುಗೆ ಭೇಟಿ ನೀಡಿದ್ದ ಸಂದರ್ಭ ‘ರಾವಣನ ದುರಹಂಕಾರ’ದ ವಿರುದ್ಧ ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ ಶಿಂದೆ,‘ನಾವು ಸರ್ವಾಧಿಕಾರ ಮತ್ತು ನಿರಂಕುಶತೆಯ ವಿರುದ್ಧ ಒಂದಾಗಿ ಇಲ್ಲಿಗೆ ಬಂದಿದ್ದೇವೆ’ ಎಂದರು. ರಾಜಪೂತ್ ಪಾಲ್ಘರ್ ಜಿಲ್ಲಾ ಬಿಜೆಪಿಯ ಅಧ್ಯಕ್ಷರೂ ಆಗಿದ್ದಾರೆ. ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣದಿಂದ ಹಿಂದೆಗೆದುಕೊಂಡಿದ್ದು,ಶಿವಸೇನೆ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯೇರ್ಪಟ್ಟಿದೆ. ‘ನಮ್ಮ ಸೋದರಿಯರು ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವು ನೋಡಿದ್ದೇವೆ. ನಮ್ಮ ಸೋದರಿಯರು ಅದೇ ರೀತಿ ಮತ ಚಲಾಯಿಸಿದರೆ ಈ ಚುನಾವಣೆಗಳಲ್ಲಿ ನಾವು ಭಾರೀ ಗೆಲುವನ್ನು ಸಾಧಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈ ಗೆಲುವು ಈ ಪ್ರದೇಶದಲ್ಲಿ ಪ್ರಮುಖ ಅಭಿವೃಧ್ಧಿಗೆ ಕಾರಣವಾಗಲಿದೆ ’ಎಂದು ಹೇಳಿದ ಶಿಂದೆ,‘ಭ್ರಷ್ಟಾಚಾರವನ್ನು ಬೇರು ಸಹಿತ ನಿರ್ಮೂಲನಗೊಳಿಸಲು ನಾವು ಬಯಸಿದ್ದೇವೆ,ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದು ತುಂಬ ಮುಖ್ಯವಾಗಿದೆ’ ಎಂದರು. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿನ ಆಂತರಿಕ ತಿಕ್ಕಾಟವನ್ನು ಕೇಸರಿ ಪಕ್ಷದ ಉನ್ನತ ನಾಯಕತ್ವದ ಗಮನಕ್ಕೆ ತರುವ ಶಿಂದೆ ಪ್ರಯತ್ನಗಳು ನಿರೀಕ್ಷಿತ ಫಲವನ್ನು ನೀಡಿಲ್ಲ. ತಾನು ತನ್ನ ವಿಸ್ತರಣಾ ಯೋಜನೆಯನ್ನು ಮುಂದುವರಿಸುವುದಾಗಿ ಬಿಜೆಪಿ ಅವರಿಗೆ ತಿಳಿಸಿದೆ ಎನ್ನಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮುನ್ನ ಶಿವಸೇನೆ ನಾಯಕರನ್ನು ಬೇಟೆಯಾಡಲು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರ ಪ್ರಯತ್ನಗಳು ಮತ್ತು ಮಹಾಯುತಿ ಸರಕಾರದಲ್ಲಿನ ಮಲತಾಯಿ ಧೋರಣೆಯ ಬಗ್ಗೆ ಶಿಂದೆ ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
44 ದಿನಗಳಲ್ಲಿ ಸುಮಾರು 500 ಸಲ ಗಾಝಾ ಕದನ ವಿರಾಮವನ್ನು ಉಲ್ಲಂಘಿಸಿ ನೂರಾರು ಜನರನ್ನು ಕೊಂದ ಇಸ್ರೇಲ್ !
ಗಾಝಾ,ನ.23: ಗಾಝಾ ಸರಕಾರದ ಮಾಧ್ಯಮ ಕಚೇರಿಯ ಪ್ರಕಾರ, ಅಕ್ಟೋಬರ್ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಾಝಾ ಕದನ ವಿರಾಮ ಜಾರಿಗೊಂಡ ಬಳಿಕ 44 ದಿನಗಳಲ್ಲಿ ಕನಿಷ್ಠ 497 ಸಲ ಅದನ್ನು ಉಲ್ಲಂಘಿಸಿರುವ ಇಸ್ರೇಲ್ ನೂರಾರು ಫೆಲೆಸ್ತೀನಿಗಳನ್ನು ಕೊಂದಿದೆ. ದಾಳಿಗಳಲ್ಲಿ ಸುಮಾರು 342 ನಾಗರಿಕರು ಸಾವನ್ನಪ್ಪಿದ್ದು, ಬಲಿಯಾದವರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರಾಗಿದ್ದಾರೆ. ‘ಇಸ್ರೇಲಿ ಅಧಿಕಾರಿಗಳಿಂದ ಕದನ ವಿರಾಮ ಒಪ್ಪಂದದ ನಿರಂತರ ಗಂಭೀರ ಮತ್ತು ವ್ಯವಸ್ಥಿತ ಉಲ್ಲಂಘನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಮಾಧ್ಯಮ ಕಚೇರಿಯು,ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಒಪ್ಪಂದಕ್ಕೆ ಲಗತ್ತಾದ ಮಾನವೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಗಳಾಗಿವೆ. ಈ ಉಲ್ಲಂಘನೆಗಳ ಪೈಕಿ 27 ಇಂದು( ಶನಿವಾರ) ಸಂಭವಿಸಿದ್ದು, 24 ಜನರು ಹುತಾತ್ಮರಾಗಿದ್ದಾರೆ ಮತ್ತು 87 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ತನ್ನ ಉಲ್ಲಂಘನೆಗಳಿಂದ ಉಂಟಾಗುವ ಮಾನವೀಯ ಮತ್ತು ಭದ್ರತಾ ಪರಿಣಾಮಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಯಾಗಿದೆ ಎಂದೂ ಅದು ಹೇಳಿದೆ. ಧ್ವಂಸಗೊಂಡಿರುವ ಗಾಝಾಕ್ಕೆ ತೀರ ಅಗತ್ಯವಿರುವ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳ ಸಂಪೂರ್ಣ ಮತ್ತು ಮುಕ್ತ ಪೂರೈಕೆಯನ್ನು ಕದನ ವಿರಾಮ ಒಪ್ಪಂದದಲ್ಲಿ ಕಡ್ಡಾಯಗೊಳಿಸಿದ್ದರೂ ಇಸ್ರೇಲ್ ಅದನ್ನು ನಿರ್ಬಂಧಿಸುತ್ತಲೇ ಇದೆ. ಇಸ್ರೇಲ್ ಸೇನೆಯು ಶನಿವಾರ ಗಾಝಾದಾದ್ಯಂತ ಸರಣಿ ವಾಯುದಾಳಿಗಳನ್ನು ನಡೆಸಿದ್ದು,ಮಕ್ಕಳು ಸೇರಿದಂತೆ ಕನಿಷ್ಠ 24 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ. ಗಾಝಾದ ‘ಹಳದಿ ರೇಖೆ’ಯಿಂದ ಒಳಗೆ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಹಮಾಸ್ ಹೋರಾಟಗಾರನೋರ್ವ ಇಸ್ರೇಲಿ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಈ ದಾಳಿಗಳನ್ನು ನಡೆಸಲಾಗಿದ್ದು,ಐವರು ಹಿರಿಯ ಹಮಾಸ್ ಹೋರಾಟಗಾರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರ ಕಚೇರಿಯು ತಿಳಿಸಿದೆ. ಇಸ್ರೇಲಿ ಸೇನೆಯು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ತನ್ನ ಪಡೆಗಳನ್ನು ತೀರ ಒಳಪ್ರದೇಶಗಳಿಗೆ ಸ್ಥಳಾಂತರಿಸಿರುವುದರಿಂದ ಉತ್ತರ ಗಾಝಾದಲ್ಲಿ ಡಝನ್ಗಟ್ಟಲೆ ಫೆಲೆಸ್ತೀನಿ ಕುಟುಂಬಗಳು ಮುತ್ತಿಗೆಯಡಿ ಇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದಲ್ಲಿ ನಿಗದಿಗೊಳಿಸಲಾಗಿರುವ ಹಳದಿ ರೇಖೆಯು ಗುರುತಿಸದ ಗಡಿಯನ್ನು ಸೂಚಿಸುತ್ತಿದ್ದು,ಕಳೆದ ತಿಂಗಳು ಕದನ ವಿರಾಮ ಒಪ್ಪಂದ ಜಾರಿಗೆ ಬಂದಾಗ ಇಸ್ರೇಲ್ ಸೇನೆಯು ಅಲ್ಲಿ ಮರುಸ್ಥಾಪನೆಗೊಂಡಿತ್ತು. ಇದು ಗಡಿ ರೇಖೆಯನ್ನು ಸಮೀಪಿಸುವ ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಲ್ಲುತ್ತಿರುವ ಇಸ್ರೇಲ್ಗೆ ಅರ್ಧಕ್ಕೂ ಹೆಚ್ಚಿನ ಕರಾವಳಿ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಒದಗಿಸಿದೆ. ಇಸ್ರೇಲ್ ‘ಕಲ್ಪಿತ ನೆಪಗಳಡಿ’ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಶನಿವಾರ ಆರೋಪಿಸಿರುವ ಹಮಾಸ್,ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ, ಈಜಿಪ್ಟ್ ಮತ್ತು ಖತರ್ ತಕ್ಷಣ ಮಧ್ಯ ಪ್ರವೇಶಿಸುವಂತೆ ಕರೆ ನೀಡಿದೆ.
ಕೊಪ್ಪಳ | ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ : ಪಿಡಿಒ ಅಮಾನತು
ಗಂಗಾವತಿ : ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಹಣವಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗೌಸ್ ಸಾಬ ಮುಲ್ಲಾ ಅಮಾನತಾದ ಅಧಿಕಾರಿ. ಇವರು ಗ್ರಾಮ ಪಂಚಾಯತ್ ಸದಸ್ಯರ 1.32 ಲಕ್ಷ ರೂ. ಗೌರವಧನ ಬೇರೆ ಕಾಮಗಾರಿಗೆ ಬಳಕೆ ಮಾಡಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಲ್ಲಪ್ಪ ದಾನಶೆಟ್ಟಿ ಎಂಬವರು ದೂರು ನೀಡಿದ್ದರು. ಈ ಕುರಿತು ತನಿಖೆಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು. ಇಒ ಅವರ ವರದಿಯ ಆಧಾರದ ಮೇಲೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣೀತ್ ನೇಗಿ ಅವರು ಗೌಸ್ ಸಾಬ ಮುಲ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Gautam Adani: ಇಂಡಾಲಜಿ ಮಿಷನ್ ಎಡಿಟರ್ಸ್ ರೂಪುರೇಷೆಗೆ ಬರೋಬ್ಬರಿ 100 ಕೋಟಿ ರೂ ಕೊಡುಗೆ ಘೋಷಿಸಿದ ಗೌತಮ್ ಅದಾನಿ
Gautam Adani: ಅದಾನಿ ಗ್ಲೋಬಲ್ ಇಂಡಾಲಜಿ ಕಾನ್ಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಶ್ರೀ ಗೌತಮ್ ಅದಾನಿ ಅವರು ಭಾರತ್ ನಾಲೆಡ್ಜ್ ಗ್ರಾಫ್ ಅನ್ನು ನಿರ್ಮಿಸುವ ಹೆಗ್ಗುರುತು ಬದ್ಧತೆಯನ್ನು ಘೋಷಿಸಿದರು. ಇದು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಭಾರತೀಯರ ಜ್ಞಾನವನ್ನು ಸಂರಕ್ಷಿಸಲು, ಹೆಚ್ಚಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ವಿನ್ಯಾಸಗೊಳಿಸಲಾದ ಮೊದಲ ರೀತಿಯ ಡಿಜಿಟಲ್ ಚೌಕಟ್ಟು ಇದಾಗಿದೆ ಎಂದರು.
ಮಂಗಳೂರು | ಮಾನವರಲ್ಲಿ ಸೌಹಾರ್ದ, ಸದ್ಭಾವನೆ ರಕ್ತಗತವಾಗಿರಬೇಕು : ಡಾ.ಶಿಖಾರಿಪುರ ಕೃಷ್ಣಮೂರ್ತಿ
ಸದ್ಭಾವನಾ ವೇದಿಕೆಯಿಂದ ದೀಪಾವಳಿ, ಈದ್, ಕ್ರಿಸ್ಮಸ್ ಸೌಹಾರ್ದ ಕೂಟ
ʼಸಂಪುಟ ಪುನರ್ ರಚನೆʼ: ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ದೌಡು!
ʼನಾಯಕತ್ವ ಬದಲಾವಣೆʼ ವದಂತಿಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಏನು?
ʻಕಾಂಗ್ರೆಸ್ ಸರ್ಕಾರ ಬೀಳಲ್ಲ, ಕುರ್ಚಿ ಪೈಪೋಟಿ ಮಧ್ಯೆ ಲೂಟಿ ಬಗ್ಗೆ ಯೋಚನೆ ಮಾಡ್ತಿರ್ತಾರೆʼ: ಎಚ್ಡಿ ಕುಮಾರಸ್ವಾಮಿ
ರಾಜ್ಯ ಸರಕಾರದ ಪತನದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ಸರಕಾರ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನತೆಯ ಮೇಲೆ ದಾಖಲೆಯ ತೆರಿಗೆ ವಿಧಿಸಲಾಗಿದೆ ಎಂದು ಅವರು ಟೀಕಿಸಿದರು. ಬಿಜೆಪಿ ಜತೆಗಿನ ಮೈತ್ರಿ ಬಗ್ಗೆಯೂ ಅವರು ಮಾತನಾಡಿದರು. ಸಂಸದ ಜಗದೀಶ ಶೆಟ್ಟರ ಅವರು ಕೂಡ ಸರಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.
ರಾಯಚೂರು | ಜಿಲ್ಲಾಡಳಿತದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಆರಂಭ
ರಾಯಚೂರು : ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಯ ತರಗತಿಗಳು ಯಶಸ್ವಿಯಾಗಿ ಆರಂಭವಾದವು. ತರಬೇತಿಯ ಮೊದಲ ದಿನವಾದ ನವೆಂಬರ್ 22ರಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು, ತರಬೇತಿಗೆ ಆಯ್ಕೆಯಾದ 120 ವಿದ್ಯಾರ್ಥಿಗಳೊಂದಿಗೆ ನೇರ ಸಂವಹನ ನಡೆಸಿದರು. ರಾಯಚೂರು ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಗಜಾನನ ಬಾಳೆ, ತರಬೇತಿಯ ಅವಧಿ, ತರಬೇತಿಯ ಪಾಠಗಳು, ತರಬೇತಿಯ ಪ್ರತಿದಿನದ ಸಮಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ತರಬೇತಿಯ ನೋಡಲ್ ಅಧಿಕಾರಿಗಳು ಆಗಿರುವ ತಹಶೀಲ್ದಾರರಾದ ಸುರೇಶ ವರ್ಮಾ, ಅಮರೇಶ್ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಪ್ರವೀಣ್ ಕುಮಾರ್, ಜಿಲ್ಲಾ ಗ್ರಂಥಾಲಯ ಇಲಾಖೆಯ ಅಧಿಕಾರಿಗಳಾದ ಡಾ.ಕಲಾಲ್, ನಿರ್ಮಲಾ ಹೆಚ್ ಹೊಸೂರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಆಹಾರ ಇಲಾಖೆಯ ಅಧಿಕಾರಿ ನಝೀರ್ ಅಹ್ಮದ್, ಹಟ್ಟಿ ಚಿನ್ನದ ಗಣಿ ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕೃಷ್ಣ ಶಾವಂತಗೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ಚಂದಪ್ಪ, ಅರಣ್ಯ ಇಲಾಖೆಯ ಮಹೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ಪ್ರತಿಭೆಯು ಪ್ರತಿಯೊಬ್ಬರಲ್ಲೂ ಇರುತ್ತದೆ. ಪರಿಸರ ಮತ್ತು ಪ್ರಯತ್ನದಿಂದ ಗುರಿ ಸಾಧನೆ, ಯಶಸ್ಸು ಸಾಧ್ಯವಾಗುತ್ತದೆ. ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬೀದರ, ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ವಿದ್ಯಾರ್ಥಿಗಳು ಯಾವುದೇ ಸಾಧನೆಯಲ್ಲಿ ಹಿಂದೆ ಉಳಿದಿಲ್ಲ. ಬಡತನ, ತಿಳಿವಳಿಕೆ ಕೊರತೆಯಿಂದ ಹಿಂದೆ ಬೀಳುವ ರಾಯಚೂರು ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಪರಿಸರ ಮೂಡಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಬಾವಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಈ ತರಬೇತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಿರುವ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಕಾರ್ಯಕ್ರಮವನ್ನು ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ನಾನಾ ಸಮಿತಿಗಳನ್ನು ರಚಿಸಿ ಹಲವು ದಿನಗಳಿಂದ ಮಾರ್ಗದರ್ಶನ ಮಾಡಿದ್ದಾರೆ. ತಹಶೀಲ್ದಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ತಯಾರಿಸುವುದು, ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ತರಬೇತಿಗಳ ಹಾಲ್ ಸಿದ್ಧಪಡಿಸುವುದು ಸೇರಿದಂತೆ ಹತ್ತಾರು ಮಹತ್ವದ ಕಾರ್ಯಗಳನ್ನು ತಿಂಗಳುಗಟ್ಟಲೇ ನಿರಂತರ ನಡೆಸಿ ಶ್ರಮಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು ತಪ್ಪದೇ ತರಗತಿಗೆ ಹಾಜರಾಗಿ ತರಬೇತಿ ಪಡೆದುಕೊಂಡಲ್ಲಿ ಜಿಲ್ಲಾಡಳಿತದ ಕಾರ್ಯಕ್ಕೆ ಅರ್ಥ ಬರಲಿದೆ ಎಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಹೇಳಿದ್ದಾರೆ.
ಮಹಾರಾಷ್ಟ್ರ | ಮತ ನೀಡಿದರಷ್ಟೇ ಅನುದಾನದ ಬೆದರಿಕೆ ಹಾಕಿದ ಅಜಿತ್ ಪವಾರ್: ಕ್ರಮಕ್ಕೆ ಆಗ್ರಹಿಸಿದ ಎನ್ಸಿಪಿ ಶರದ್ ಬಣ
ನಾಗ್ಪುರ: ಮತದಾರರ ಬೆಂಬಲಕ್ಕಾಗಿ ಅಭಿವೃದ್ಧಿ ಅನುದಾನಗಳನ್ನು ಸಂಪರ್ಕಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಂತಹವರ ಹೇಳಿಕೆಯ ಮೇಲೆ ಚುನಾವಣಾ ಆಯೋಗ ನಿಗಾವಹಿಸಬೇಕು ಎಂದು ಎನ್ಸಿಪಿ (ಶರದ್ ಬಣ) ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಪ್ರಿಯಾ ಸುಳೆ, “ಇಂತಹ ಹೇಳಿಕೆಗಳ ಮೇಲೆ ನಿಗಾವಹಿಸುವುದು ಒಂದು ಬಲಿಷ್ಠ ಪ್ರಜಾತಂತ್ರದಲ್ಲಿ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹದ್ದು ಆಗುತ್ತಿರುವುದನ್ನು ನಾವು ಕಾಣುತ್ತಿಲ್ಲ. ನಾನೇ ನನ್ನ ಪ್ರಕರಣವೊಂದರಲ್ಲಿ ಚುನಾವಣಾ ಆಯೋಗದಲ್ಲಿ ಹೋರಾಟ ನಡೆಸಿದ್ದೆ. ಆದರೆ, ಎಲ್ಲ ದಾಖಲೆಗಳಿದ್ದರೂ ನಮಗೆ ನ್ಯಾಯ ದೊರೆಯಲಿಲ್ಲ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎನ್ಸಿಪಿ (ಶರದ್ ಬಣ)ದ ವಕ್ತಾರ ಮಹೇಶ್ ತಾಪಸೆ, ಈ ಹೇಳಿಕೆಗಾಗಿ ಅಜಿತ್ ಪವಾರ್ ಸಾರ್ವಜನಿಕ ಕ್ಷಮೆ ಕೋರಬೇಕು ಎಂದೂ ಒತ್ತಾಯಿಸಿದ್ದಾರೆ. ಶುಕ್ರವಾರ ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯತ್ ಗೆ ನಡೆಯುತ್ತಿರುವ ಚುನಾವಣೆಯ ಭಾಗವಾಗಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅಜಿತ್ ಪವಾರ್, ಒಂದು ವೇಳೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಾತರಿಗೊಳಿಸಿದರೆ, ನಗರದ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಅದೇ ಒಂದು ವೇಳೆ ನಮ್ಮನ್ನು ತಿರಸ್ಕರಿಸಿದರೆ, ನಾನೂ ಕೂಡಾ ನಿಮ್ಮನ್ನು ತಿರಸ್ಕರಿಸುತ್ತೇನೆ ಎಂದು ಮತದಾರರಿಗೆ ಬೆದರಿಕೆ ಒಡ್ಡಿದ್ದರು. ಇದು ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಮಂಡ್ಯ | ತೆರೆದ ಬಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಪತ್ತೆ
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅಘಲಯ- ದೊಡ್ಡಸೋಮನಹಳ್ಳಿ ತಿರುವಿನಲ್ಲಿರುವ ತೆರೆದ ಬಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಶನಿವಾರ ಪತ್ತೆಯಾಗಿದೆ. ವಿದ್ಯಾರ್ಥಿಯು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಳೆಸಿದ್ದರಹಳ್ಳಿ( ಎಮ್ಮೆದೊಡ್ಡಿ) ಗ್ರಾಮದ ಸಿದ್ದಪ್ಪ ಅವರ ಪುತ್ರ ಎಸ್. ಕರಣ್ (22). ಈತ ಹಾಸನ ಜಿಲ್ಲೆಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬಾವಿಯ ದಡದಲ್ಲಿ ಸುಮಾರು 3 ಲಕ್ಷ ಬೆಲೆ ಬಾಳುವ ಬೈಕ್, 50 ಸಾವಿರ ಬೆಲೆ ಬಾಳುವ ಮೊಬೈಲ್, ಕಾಲೇಜು ಬ್ಯಾಗ್ ದೊರೆತಿದ್ದು, ಯುವಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಯ ಮುಖದ ಭಾಗಕ್ಕೆ ಗಾಯಗಳಾಗಿದ್ದು, ಸಾವಿನ ನಿಖರತೆಗೆ ಕಾರಣ ತಿಳಿಯುವ ಬಗ್ಗೆ ಕೆ.ಆರ್.ಪೇಟೆ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೋಷಕರಿಗೆ ನೀಡಲಾಯಿತು.
ಯಾದಗಿರಿ | ನೂತನ ಆಂಬುಲೆನ್ಸ್ಗಳ ಲೋಕಾರ್ಪಣೆ
ಸುರಪುರ : ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾಗಿರುವ ಆಂಬುಲೆನ್ಸ್ಗಳನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್ ವಿ ನಾಯಕ್, ನಮ್ಮ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ತಾಯಿ ಮಕ್ಕಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಎರಡು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದಲ್ಲದೆ ಇನ್ನು ಮುಂದೆ ಸುರಪುರದಲ್ಲಿ ಆಂಬುಲೆನ್ಸ್ ಸೇವೆ ದೊರೆಯಲಿದೆ. ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್ ವಿ ನಾಯಕ್, ಕೆವೈಡಿಸಿಸಿ ಅಧ್ಯಕ್ಷ ವಿಠಲ ಯಾದವ್, ತಾಲೂಕು ವಕ್ಕಲುತನ ಹುಟ್ಟುವಳಿ ಮಾರಾಟಗಾರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಂತೋಷ್ ನಾಯಕ್, ಯೂಥ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ್ ನಾಯಕ್, ಮಲ್ಲಣ್ಣ ಸಾಹುಕಾರ್ ನರಸಿಂಗಪೇಟ, ದೊಡ್ಡ ದೇಸಾಯಿ ದೇವರಗೋನಾಲ, ಗುಂಡಪ್ಪ ಸೋಲಾಪುರ, ಬೀರಲಿಂಗ ಬಾದ್ಯಾಪೂರ, ರಾಘವೇಂದ್ರ ಗೆದ್ದಲಮರಿ, ಶಕೀಲ್ ಅಹ್ಮದ್ ಖುರೇಶಿ, ಗೋಪಾಲ ಗುತ್ತೇದಾರ್, ನಾಸೀರ್ ಕುಂಡಾಲೆ, ಅಬ್ದುಲ್ ಅಲಿಮ್ ಗೋಗಿ, ಮಾರ್ಥಂಡಪ್ಪ ದೇವರಗೋನಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕುಂಪಲದಲ್ಲಿ ಕೆರೆ-ಪಾರ್ಕ್ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರು : ಸದಾಶಿವ ಉಳ್ಳಾಲ್
ಅಂಬಿಕಾನಗರ ಬಡಾವಣೆಯ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಕಲಬುರಗಿ | ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ : ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಅಲ್ಲಮಪ್ರಭು ದೇಶಮುಖ್ ಮಾತನಾಡಿ, ಡಾ. ಶರಣಬಸಪ್ಪ ಅಪ್ಪಾಜಿ ಅವರ ಕನಸಿನಂತೆ ಶರಣಬಸವೇಶ್ವರ ಸಂಸ್ಥೆಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಬದುಕುತ್ತೇನೆ, ಓದುತ್ತೇನೆ, ಪ್ರಯತ್ನಿಸುತ್ತೇನೆ, ಸ್ವತಂತ್ರವಾಗಿ ಚಿಂತನೆಯನ್ನು ಮಾಡುತ್ತೇನೆ ಎನ್ನುವ ಕಲ್ಪನೆ ಬೆಳೆಯಬೇಕು. ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಪಡೆದು, ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯ ಡಾ. ಅಲ್ಲಮ ಪ್ರಭು ಗುಡ್ಡ ಮಾತನಾಡಿ, ಪ್ರಕೃತಿಯನ್ನು ಆರಾಧಿಸಬೇಕು. ಪ್ರಕೃತಿ ದೇವತೆಯನ್ನು ನಾವು ರಕ್ಷಿಸಬೇಕು. ಪ್ರಕೃತಿಯಲ್ಲಿರುವ ಹಲವಾರು ಆಯುರ್ವೇದಿಕ್ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡಲು ಹಾಗೂ ರಕ್ಷಣೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ ರಾಮಕೃಷ್ಣ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ನೀವು ಆಯ್ಕೆ ಮಾಡಿಕೊಂಡ ವಿಷಯವನ್ನು ಆಳವಾಗಿ ಅಧ್ಯಯನ ಮಾಡಬೇಕು. ಆ ವಿಷಯದಲ್ಲಿ ವಿದ್ಯಾರ್ಥಿ ಆಸಕ್ತಿ ಹೊಂದಿರಬೇಕು. ನಿರಂತರ ಪ್ರಯತ್ನವಿದ್ದಾಗ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಗಿರೀಶ್ ಜನ್ನಿ, ಡಾ. ರಾಮಗೋಲ್ ರಾಯ್, ಡಾ. ಲತಾದೇವಿ ಕರಿಕಲ್, ಪ್ರದೀಪ್, ಡಾ. ಅಮಿತ್ ಹೆಗಡೆ, ಡಾ. ಖನೀಝಾ ಫಾತಿಮಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಎನ್.ವಿ ಕಾಲೇಜಿನ ವಿದ್ಯಾರ್ಥಿಗಳು, ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಂಕರನಾರಾಯಣ | ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು
ಶಂಕರನಾರಾಯಣ, ನ.23: ಮದ್ಯ ಬಿಟ್ಟು ಕೆಲಸಕ್ಕೆ ಹೋಗದೆ ಮಾನಕಸಿವಾಗಿ ಖಿನ್ನತೆ ಒಳಗಾಗಿದ್ದ ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ ನಾಗೇಂದ್ರ ಎಂಬವರು ನ.22ರಂದು ಬೆಳಗ್ಗೆ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಬಿವೈ ವಿಜಯೇಂದ್ರ ದೆಹಲಿಗೆ ತೆರಳಿ ಅಮಿತ್ ಶಾ, ಬಿಎಲ್ ಸಂತೋಷ್ ಭೇಟಿಯಾಗಿ ಚರ್ಚೆ; ರಾಜ್ಯಾಧ್ಯಕ್ಷ ಸ್ಥಾನ ಗಟ್ಟಿ?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಕರ್ನಾಟಕ ರಾಜಕಾರಣದ ಪ್ರಸಕ್ತ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಪಕ್ಷ ಸಂಘಟನೆಗೆ ಅಮಿತ್ ಶಾ ಅವರಿಂದ ಮಾರ್ಗದರ್ಶನ ಪಡೆದರು. ಬಿಹಾರ ಚುನಾವಣೆಯಲ್ಲಿ ಎನ್ಡಿಎ ಗೆಲುವಿಗೆ ಅಮಿತ್ ಶಾ ಅವರ ಪಾತ್ರವನ್ನು ಶ್ಲಾಘಿಸಿದರು. ಶನಿವಾರ ಬಿಎಲ್ ಸಂತೋಷ್ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದರು.
Priyank Kharge: ನನ್ನ ನಿರ್ಧಾರ ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ: ಸಚಿವ ಪ್ರಿಯಾಂಕ್ ಖರ್ಗೆ
Priyank Kharge: ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸದಿರುವ ನನ್ನ ನಿರ್ಧಾರವನ್ನು ಒಪ್ಪಿ ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ನಮ್ಮನ್ನು ಪ್ರೀತಿಸುವವವರು ತೋರುವ ವಾತ್ಸಲ್ಯ, ಅಭಿಮಾನ ಹಾಗೂ ಕಾಳಜಿ ನಾನೆಂದಿಗೂ ಚಿರಋಣಿ.ನಿಮ್ಮೆಲ್ಲರ ಈ ಅದಮ್ಯ ಪ್ರೀತಿಯೇ ನನ್ನ ಕೆಲಸಗಳಿಗೆ ಪ್ರೇರಣೆ
ಕಲಬುರಗಿ | ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಮುಖ್ಯ ಶಿಕ್ಷಕರ ಪಾತ್ರ ಮುಖ್ಯ : ಬಿಇಓ ಶಶಿಧರ್
ಕಲಬುರಗಿ: ಒಂದು ಶಾಲೆಯ ನಾಯಕನೆಂದರೆ ಮುಖ್ಯ ಶಿಕ್ಷಕ. ಅವರು ತಮ್ಮ ಜವಾಬ್ದಾರಿ ಅರಿತು ಸರಿಯಾಗಿ ಕಾರ್ಯನಿರ್ವಹಿಸಿದರೆ ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಲಿದೆ ಎಂದು ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಹೇಳಿದರು. ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಪೌಂಡೇಶನ ವತಿಯಿಂದ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಲಾದ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ತಾಪುರ ತಾಲೂಕಿನ ಫಲಿತಾಂಶ ಹೆಚ್ಚಳವಾಗಬೇಕಾದರೆ ಆ ತಾಲೂಕಿನಲ್ಲಿರುವ ಎಲ್ಲಾ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅಲ್ಲಿನ ಮುಖ್ಯಶಿಕ್ಷಕರು ತಮ್ಮ ಶಾಲೆಯ ಸಹಶಿಕ್ಷಕರಿಗೆ ಸರಿಯಾಗಿ ನಿರ್ದೇಶನ ನೀಡಬೇಕಾಗುತ್ತದೆ. ಈ ಬಾರಿ ಪ್ರತಿಯೊಂದು ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ಈ ಮೂರು ತಿಂಗಳಲ್ಲಿ ಆಗಬೇಕಿದೆ ಎಂದು ಹೇಳಿದರು. ಈ ವೇಳೆ ಅಜೀಂ ಪ್ರೇಮಜಿ ಪೌಂಡೇಶನ್ನ ಸಂಪನ್ಮೂಲ ವ್ಯಕ್ತಿಗಳು ವಿಷಯವಾರು ಯಾವ ರೀತಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಉತ್ತಮಪಡಿಸಬಹುದು ಎಂಬ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಜೀಂ ಪ್ರೇಮಜಿ ಪೌಂಡೇಶನ್ ಸಂಯೋಜಕಿ ಅನನ್ಯ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ, ತಾಲೂಕು ಮುಖ್ಯಗುರುಗಳ ಸಂಘದ ಕಾರ್ಯದರ್ಶಿ ರಮೇಶ್ ಬಟಗೇರಿ, ಇಸಿಓ ರವೀಂದ್ರ , ಅಬ್ಬಿಗೇರಿ ಶರಣಪ್ಪ ಹಾಗೂ ತಾಲೂಕಿನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಶಂಕರನಾರಾಯಣ | ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಶಂಕರನಾರಾಯಣ, ನ.23: ಬೈಕೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದ ಕಲ್ಲಗದ್ದೆ ಎಂಬಲ್ಲಿ ನ.22ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸಚಿನ್ ಕಲ್ಲಪ್ಪ್ ಸಂಕ್ರಟ್ಟಿ(28) ಎಂದು ಗುರುತಿಸಲಾಗಿದೆ. ಇವರು ಶಂಕರನಾರಾಯಣ ಪದವಿ ಕಾಲೇಜಿನಲ್ಲಿ ನಡೆಯುತ್ತಿದ್ದ ಹುಟ್ಟೂರು ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದು, ನಂತರ ಸ್ನೇಹಿತ ಬಸವ ಕಿರಣ ಎಂಬವರನ್ನು ಬೆಳಗಾಂಗೆ ಬಸ್ಸಿಗೆ ಬಿಡಲು ಕುಂದಾಪುರಕ್ಕೆ ಬೈಕಿನಲ್ಲಿ ಹೊರಟಿದ್ದರು. ಅಂಪಾರು ಮಾರ್ಗವಾಗಿ ಕುಂದಾಪುರಕ್ಕೆ ಹೊಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಚಿನ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ | ಸಾಧಕ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ, ನ.23: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ನೀಡುವ ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸವಾರಂಭವು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಜರಗಿತು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಜಿ.ಶಂಕರ್ ಪ್ರಶಸ್ತಿ ಪ್ರದಾನ ಮಾಡಿ, ಶುಭಹಾರೈಸಿದರು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ರಾವೇಂದ್ರ ಭಟ್ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ, ಬೆಂಗಳೂರು ಉದ್ಯಮಿ ಹರೀಶ್ ರಾಯಸ್, ಬೆಂಗಳೂರಿನ ಡಾ.ಕಬ್ಯಾಡಿ ಹರಿರಾಮ ಆಚಾರ್ಯ, ಮಂದಾರ್ತಿ ಕೆ.ಎಂ.ಉಡುಪ, ಟ್ರಸ್ಟ್ ನ ವಿಶ್ವಸ್ಥ ಕೆ.ಮಹೇಶ್ ಉಡುಪ, ಅಡಿಕೆ ಪತ್ರಿಕೆಯ ಪ್ರಕಾಶಕ ಡಾ.ಪಡಾರು ರಾಮಕಷ್ಣ ಶಾಸ್ತ್ರಿ, ಲೀಲಾಕ್ಷ ಬಿ.ಕರ್ಕೇರ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಲಾವಿದರನ್ನು ಪರಿಚಯಿಸಿದರು. ಸದಾಶಿವ ರಾವ್ ವಂದಿಸಿದರು.
ʻಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಲವರ ಶ್ರಮವಿದೆ ಎಲ್ಲ ನನ್ನಿಂದಲೇ ಅನ್ನೋದು ತಪ್ಪುʼ: ಸತೀಶ ಜಾರಕಿಹೊಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಲವು ನಾಯಕರ ಶ್ರಮವಿದೆ, ಕೆಲವೇ ಜನರಿಂದ ಮಾತ್ರವಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ವಿಚಾರದಲ್ಲಿ ಪರಮೇಶ್ವರ್ ಹೇಳಿಕೆಗೆ ಬೆಳಗಾವಿಯಲ್ಲಿ ಬೆಂಬಲ ಸೂಚಿಸಿದ ಸತೀಶ್ ಜಾರಕಿಹೊಳಿ ಅವರು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯ ಹೊರ ಹಾಕಿದರು.
ಸತ್ಯ ಸಾಯಿ ಬಾಬಾಗೆ ನಾದ ನಮನ, ವೈಭವದ ಸಮಾರೋಪ ಸಮಾರಂಭದ ಮೂಲಕ ಜನ್ಮ ಶತಮಾನೋತ್ಸವ ಸಂಪನ್ನ
ಚಿಕ್ಕಬಳ್ಳಾಪುರ: ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು 400ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು. ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ 'ಸಾಯಿ ಸಿಂಫನಿ
ಮಂಗಳೂರಿನಲ್ಲಿ ʼನಮೋ ಚೆಸ್ ಟೂರ್ನಮೆಂಟ್ʼ
ಚೆಸ್ ಆಡಿ ಗಮನ ಸೆಳೆದ ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಂಸದ ಕ್ಯಾ. ಚೌಟ
ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾಗಿರುವ ಆರ್.ಡಿ. ಪಾಟೀಲ್ ಮತ್ತು ಜೈಲು ವಾರ್ಡನ್ ಶಿವಕುಮಾರ್ ಮಧ್ಯೆ ಕೇಂದ್ರ ಕಾರಾಗೃಹದಲ್ಲಿ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ. ಸುಪ್ರೀಂಕೋರ್ಟ್ನಿಂದ ಮೂರು ವಾರಗಳ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ವಾರ್ಡನ್ ಶಿವಕುಮಾರ್ ಬಿಡುಗಡೆಗೆ ನಿರಾಕರಿಸಿ ಹಲ್ಲೆ ಮಾಡಿದ್ದಾಗಿ ಆರ್.ಡಿ.ಪಾಟೀಲ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್.ಡಿ.ಪಾಟೀಲ್ ಕೂಡ ಹಲ್ಲೆ ಮಾಡಿದ್ದಾಗಿ ವಾರ್ಡನ್ ಶಿವಕುಮಾರ್ ದೂರು ನೀಡಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್ಐಆರ್ ದಾಖಲಾಗಿದೆ.
ಮಂಗಳೂರು | ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಮಂಗಳೂರು, ನ.23: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ರೇಷ್ಮಾ ಮೆಮೊರಿಯಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಬಬಿತ ಸೂರಜ್ ಅವರು ಶಕ್ತಿ ಶಾಲೆಯ ಮುದ್ದು ಪುಟಾಣಿಗಳೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬೆಳೆಯುವುದಕ್ಕೆ ಮೌಲ್ಯಗಳ ಬೇರುಗಳು ಮತ್ತು ಆಸಕ್ತಿಯ ರೆಕ್ಕೆಗಳು ಇರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಮಾತಿನಂತೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಜೀವನದಲ್ಲಿ ಸದೃಢರಾಗಿ ಬೆಳೆಯಬೇಕು ಎಂದರು. ಶಿಕ್ಷಕಿ ವಿದ್ಯಾ ಲಕ್ಷ್ಮೀ ಸ್ವಾಗತಿಸಿದರು, ಶಿಕ್ಷಕಿ ಮರಿಯಾ ವಂದಿಸಿದರು. ಶಿಕ್ಷಕಿ ನಯನ ಅವರು ದಿನದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.

24 C