ಮೈಕಲ್ ಡಿಸೋಜಾ ವಿಶನ್ 2030- ಕಾರ್ಯಯೋಜನೆಗೆ ಚಾಲನೆ
ಮಂಗಳೂರು: ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಮೈಕಲ್ ಡಿಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಉದ್ದೇಶದ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ವಂ.ಡಾ. ಪೀಟರ್ ಪೌಲ್ ಸಲ್ದಾನ್ಹ ಮತ್ತು ಉಡುಪಿಯ ಬಿಷಪ್ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು. ಪ್ರತಿಯೊಬ್ಬ ಮಾನವನಿಗೂ ವಸತಿ ಮತ್ತು ಶಿಕ್ಷಣವು ಮೂಲಭೂತ ಅಗತ್ಯಗಳು. ತಲೆ ಮೇಲೊಂದು ಸುರಕ್ಷಿತ ಸೂರು ಇಲ್ಲದೆ ನಿರಂತರ ಅನಿಶ್ಚಿತತೆಯಲ್ಲಿ ಬದುಕುವುದು ಮತ್ತು ಉನ್ನತ ಶಿಕ್ಷಣದ ಕೊರತೆಯಿಂದ ಘನತೆಯಿಂದ ಕೂಡಿದ ಜೀವನ ಸಾಗಿಸಲು ಕಷ್ಟಪಡುವುದು ಸಮುದಾಯ ಅಭಿವೃದ್ಧಿಯ ಪಥದಲ್ಲಿ ತೊಡಕುಗಳಾಗಿವೆ ಎಂದು ಮೈಕಲ್ ಡಿಸೋಜಾ ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು. ದಾನಧರ್ಮವು ಫಲಾನುಭವಿಗಳಿಗೆ ಘನತೆಯನ್ನು ಮರಳಿ ನೀಡುವ ಗುರಿಯನ್ನು ಹೊಂದಿರಬೇಕು. ಸಮುದಾಯಗಳನ್ನು ಸಬಲೀಕರಣಗೊಳಿಸಲು ಶಿಕ್ಷಣವು ಅತ್ಯುತ್ತಮ ಮಾರ್ಗ. ಧರ್ಮಸಭೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಯ ಪರೀಕ್ಷಿತ ಮಾದರಿಗಳಾಗಿವೆ. 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಸಮಗ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದ್ದು, ಗುಲ್ಬರ್ಗಾ ಮತ್ತು ಕಾರವಾರ ಬಿಷಪ್ರ ದೂರದೃಷ್ಟಿ ನಾಯಕತ್ವದಡಿ ಕಾರ್ಯಯೋಜನೆ ವಿಶನ್ 2030 ತಯಾರಿಸಲಾಗಿದೆ ಎಂದವರು ಹೇಳಿದರು. ಮೈಕಲ್ ಡಿಸೊಜಾ ಕುಟುಂಬ ಪ್ರೇರಿತ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸ್ವಸಹಾಯ ಗುಂಪು ಮಾದರಿ ಯೋಜನೆಗಳು 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಅದರ ಯಶಸ್ಸಿನ ಆಧಾರದಲ್ಲಿ ವಿಶನ್ 2030 ನಿರ್ಮಿತವಾಗಿದ್ದು, ದೀರ್ಘಕಾಲೀನ ಸಮುದಾಯ ಉನ್ನತೀಕರಣದ ಕಡೆ ಕೇಂದ್ರೀಕೃತವಾಗಿದೆ. ಮೈಕಲ್ ಡಿಸೋಜಾ ಸಮುದಾಯ ಯೋಜನೆಯ ಸಲಹೆಗಾರ ಓಸ್ವಾಲ್ಡ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಪ್ರೊ. ಸಿ.ಎ. ಲಾಯ್ನಲ್ ಅರಾನ್ಹಾ ತಿಳಿವಳಿಕೆ ಒಡಂಬಡಿಕೆಯ ಸಂದರ್ಭ ಮತ್ತು ಮಹತ್ವವನ್ನು ವಿವರಿಸಿದರು. ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗುಲ್ಬರ್ಗಾ ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂ. ಮೊ. ಸಂತೋಷ್ ಬಾಪು ಅವರು ತಮ್ಮ ಧರ್ಮಕ್ಷೇತ್ರದ ಪರವಾಗಿ ಮತ್ತು ಬಿಷಪ್ ಡುಮಿಂಗ್ ಡಾಯಸ್ ಅವರು ಕಾರವಾರ ಧರ್ಮಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಮೈಕಲ್ ಡಿ ಸೋಜಾ ಮತ್ತು ಅವರ ಪತ್ನಿ ಫ್ಲೇವಿಯಾ ಡಿ ಸೋಜಾ ಇವರನ್ನು ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳ ವತಿಯಿಂದ ಶಾಲು ಮತ್ತು ಪುಷ್ಪಗುಚ್ಛಗಳೊಂದಿಗೆ ಸನ್ಮಾನಿಸಲಾಯಿತು. ಕರ್ನಾಟಕ ಜೆಸ್ಯೂಟ್ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಡಯೋನಿಯಸ್ ವಾಸ್ ಎಸ್.ಜೆ., ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರಾಜೇಶ್ ರೊಸಾರಿಯೋ, ಅಪೋಸ್ತಲಿಕ್ ಕಾರ್ಮೆಲೈಟ್ ಪ್ರಾಂತೀಯ ಮುಖ್ಯಸ್ಥೆ ವಂ. ಭ. ನವೀನ್ ಎ.ಸಿ. ಮತ್ತು ಕಾರವಾರ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ. ವಂ. ರಿಚರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ಬೆಳಗಾವಿ: ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳು ಕಲ್ಯಾಣ
ಕ್ರೀಡಾಕೂಟ: ಕೇಮಾರಿನ ರಶ್ಮಿತಾ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೂಡುಬಿದಿರೆ : ದ.ಕ., ಉಡುಪಿ ಮತ್ತು ಕೊಡಗು ಅಂತರ್ ಜಿಲ್ಲಾ ಮಟ್ಟದ 18ನೇ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೇಮಾರಿನ ರಶ್ಮಿತಾ ಶೆಟ್ಟಿ ಯವರು ತ್ರಿವಿಧ ಜಿಗಿತ ಪ್ರಥಮ, ಈಟಿ ಎಸೆತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಹಲವಾರು ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಇವರು ಕಳೆದ ವರ್ಷವೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿರುತ್ತಾರೆ.
ತುಳು ನಾಡು ನುಡಿಗೆ ಜೈನರ ಕೊಡುಗೆ ಚಾರಿತ್ರಿಕವಾದುದು: ಅಭಯಚಂದ್ರ ಜೈನ್
ಮಂಗಳೂರು: ತುಳುನಾಡು ನುಡಿಗೆ ಜೈನ ವಿದ್ವಾಂಸರು, ಜೈನ ರಾಜರು, ರಾಜ ಮನೆತನಗಳು, ಜಿನಲಾಯಗಳು ಚಾರಿತ್ರಿಕವಾದ ಕೊಡುಗೆಗಳನ್ನು ನೀಡಿವೆ. ಶಾಂತಿ ಸಾಮರಸ್ಯ ಹಾಗೂ ಸಾಮಾಜಿಕ ಸಮನ್ವಯತೆಗೂ ಜೈನರ ಕೊಡುಗೆ ಅನನ್ಯವಾದುದು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮೂಡಬಿದಿರೆ ಶ್ರೀ ಜೈನ ಮಠದಲ್ಲಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಆಯೋಜಿಸಿದ ‘ತುಳುನಾಡು ನುಡಿಗೆ ಜೈನರ ಕೊಡುಗೆ’ ಎಂಬ ವಿಷಯದ ಬಗ್ಗೆ ಎಂ.ಕೆ. ರವೀಂದ್ರನಾಥ ದತ್ತಿ ನಿಧಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀವರ್ಚನ ನೀಡಿದರು. ಅನೇಕ ಮಂದಿ ಜೈನ ಕವಿಗಳು ತುಳುವಿಗೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ವಾಮೀಜಿಯವರು ಬಣ್ಣಿಸಿದರು. ಉಜಿರೆ ಎಸ್ .ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಅವರು ‘ತುಳುನಾಡು ನುಡಿಗೆ ಜೈನರ ಕೊಡುಗೆ’ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮಹಾತ್ಮ ಗಾಂಧೀಜಿ ಅವರು ಅನುಷ್ಠಾನ ಮಾಡಿದ ಶಾಂತಿ, ಉಪವಾಸದ ವಿಚಾರಗಳು ಜೈನ ತೀರ್ಥಂಕರು ಬೋಧಿಸಿದ ತತ್ವಗಳಾಗಿದ್ದವು . ತುಳುನಾಡಿನ ಸಾಹಿತ್ಯ ಸಾಂಸ್ಕ್ರತಿಕ ಸಮೃದ್ಧಿಯಲ್ಲಿ ಜೈನರ ಕೊಡುಗೆ ಅನನ್ಯವಾದುದು ಎಂದು ಡಾ.ಸನ್ಮತಿ ಕುಮಾರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳ ಪರವಾಗಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸುತೇಜ ಇವರು ‘ತುಳುನಾಡು ನುಡಿಗೆ ಜೈನರ ಕೊಡುಗೆ’ ವಿಷಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ವೀಣಾ ಬಿ.ಆರ್. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೆಲ್ಲಿಕ್ಕಾರು ಕ್ಷೇತ್ರದ ಮೋಕ್ತೇಸರ ವಿಮಲ್ ಕುಮಾರ್ ಬೆಟ್ಕೇರಿ , ನಾದ ನೂಪುರ ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು, ಕಾರ್ಯದರ್ಶಿ ಶುಭಾಶಯ ಉಪಸ್ಥಿತರಿದ್ದರು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ವಂದಿಸಿದರು.
Kushalnagar | ಉರುಳಿಗೆ ಸಿಲುಕಿ ಹುಲಿ ಸಾವು
ಮಡಿಕೇರಿ : ಉರುಳಿಗೆ ಸಿಲುಕಿ 5 ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ. ಅರಣ್ಯದಿಂದ ಬಂದು ಚೆಟ್ಟಳ್ಳಿ ಗ್ರಾಮವನ್ನು ಪ್ರವೇಶಿಸಿದ್ದ ಹುಲಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಎಫ್ಓ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ವೈದ್ಯಾಧಿಕಾರಿಗಳಾದ ಡಾ.ಮುಜೀಬ್, ಡಾ.ಸಂಜೀವ್ ಆರ್.ಸಿಂಧೆ, ಮೀನುಕೊಲ್ಲಿ ಉಪವಲಯದ ಉಪವಲಯಾಧಿಕಾರಿ ಸಚಿನ್ ಲಿಂಬಾಳ್ಕರ್, ಗಸ್ತುವನ ಪಾಲಕ ನಾಗರಾಜು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಮತ್ತು ಆರ್ಆರ್ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆಟ್ಟಳ್ಳಿ ಪೊಲೀಸ್ ಠಾಣಾ ಎಎಸ್ಐ ದಿನೇಶ್ ಮತ್ತು ಪೊಲೀಸ್ ಶ್ವಾನ ದಳ ತಂಡ ಕೂಡ ಸ್ಥಳ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನು ಕ್ರಮ ಅರಣ್ಯದ ಎಲ್ಲಾ ವಲಯಗಳಲ್ಲಿ ಸಿಬ್ಬಂದಿಗಳ ತಂಡಗಳನ್ನು ರಚಿಸಿ ಕಾಡಂಚಿನ ಗ್ರಾಮಗಳಲ್ಲಿ ಉರುಳಿನ ಶೋಧವನ್ನು ನಿಯಮಿತವಾಗಿ ನಡೆಸಬೇಕು ಮತ್ತು ಹುಲಿ ಸಾವಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಳಗಾವಿಯಲ್ಲಿ ಸೂಚಿಸಿದ್ದಾರೆ.
ಹೊಸದಿಲ್ಲಿ: ದಿಲ್ಲಿ ಮತ್ತು ಹೆಚ್ಚಿನ ಉತ್ತರ ಭಾರತ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿರುವ ನಡುವೆ ಕೇಂದ್ರ ಪರಿಸರ ಸಚಿವಾಲಯವು ದೇಶಾದ್ಯಂತ ಮಾಲಿನ್ಯ ನಿಯಂತ್ರಣ ಮಂಡಳಿಗಳು (ಪಿಸಿಬಿ) ಮತ್ತು ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿನಲ್ಲಿ ತಿಳಿಸಿದೆ. ಇತ್ತೀಚಿಗೆ ಲೋಕಸಭೆಯಲ್ಲಿ ಸಿಪಿಎಂ ಸಂಸದ ರತ್ನವೇಲ್ ಸಚ್ಚಿದಾನಂದಂ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪರಿಸರ ಖಾತೆ ರಾಜ್ಯಸಚಿವ ಕೀರ್ತಿವರ್ಧನ ಸಿಂಗ್ ಅವರು,ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ.16.28ರಷ್ಟು ಇಂತಹ ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದರು. ಸಿಪಿಸಿಬಿಯಲ್ಲಿ ಮಂಜೂರಾದ 393 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 64 ಖಾಲಿಯಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ (ಎಸ್ಪಿಸಿಬಿ) 6,137 ಹುದ್ದೆಗಳ ಪೈಕಿ 2,921 ಮತ್ತು ದಿಲ್ಲಿ-ಎನ್ಸಿಆರ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿನ್ಯನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) 402 ಹುದ್ದೆಗಳ ಪೈಕಿ 176 ಹುದ್ದೆಗಳು ಖಾಲಿಯಿವೆ. ಒಟ್ಟಾರೆಯಾಗಿ 6,932 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 3,161 ಅಥವಾ ಶೇ.45.6ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಸಿಂಗ್ ವಿವರಿಸಿದರು. ಎಸ್ಪಿಸಿಬಿಗಳು ಮತ್ತು ಪಿಸಿಸಿಗಳು ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಆಡಳಿತಾತ್ಮಕ ನಿಯಂತ್ರಣದಲ್ಲಿವೆ ಮತ್ತು ಅವುಗಳಲ್ಲಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸಂಬಂಧಿಸಿದ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶದ್ದಾಗಿದೆ ಎಂದು ತಿಳಿಸಿದ ಸಿಂಗ್,ಎಸ್ಪಿಸಿಬಿ ಮತ್ತು ಪಿಸಿಸಿಗಳು ತಮ್ಮ ನಿಯಮಾವಳಿಗಳಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳುತ್ತವೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ವಿಚಾರವಾಗಿ ಕಾಂಗ್ರೆಸ್ ಸದಸ್ಯ ಎ.ಎಸ್. ಪೊನ್ನಣ್ಣ ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ನಿಯಮಾವಳಿ ವಿರುದ್ಧ ಎಂದು ಬಿಜೆಪಿ ವಿರೋಧಿಸಿದರೂ, ತನಿಖಾ ಸಂಸ್ಥೆಗಳ ಬಗ್ಗೆ ಸದನದಲ್ಲಿ ಚರ್ಚಿಸಬಹುದು ಎಂದು ಸಚಿವ ಎಚ್.ಸಿ. ಮಹಾದೇವಪ್ಪ ಸಮರ್ಥಿಸಿದರು. ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಖಾದರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಡಿ.21ಕ್ಕೆ ಪಲ್ಸ್ ಪೋಲಿಯೋ ದಿನ |ತಪ್ಪದೇ ಪೋಲಿಯೋ ಹನಿ ಹಾಕಿಸಿ : ದಿನೇಶ್ ಗುಂಡೂರಾವ್
ಬೆಳಗಾವಿ : ಇದೇ ತಿಂಗಳ 21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದಾಜು 62 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬುಧವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಆಸ್ಪತ್ರೆ, ಅಂಗನವಾಡಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ, ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಆದ್ಯತೆ ಮೆರೆಗೆ ಲಸಿಕೆ ಹಾಕಲಾಗುವುದು ಎಂದರು. ಎಲ್ಲ ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ನಡೆಸಲಾಗುವುದು. 0-5 ವರ್ಷದ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಲೇಬೇಕು. ಮೊದಲು ಹಾಕಿಸಿದ್ದರೂ ಈ ಬಾರಿಯೂ ಎರಡು ಹನಿ ಲಸಿಕೆ ಹಾಕಿಸಲೇಬೇಕು. ಪೋಲಿಯೋ ಮುಕ್ತ ದೇಶವಾಗಿರುವ ಭಾರತ ಇದನ್ನು ಮುಂದುವರೆಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಮನವಿ ಮಾಡಿದರು. ಡಿ.21ರಂದು ಬೂತ್ಗಳಲ್ಲಿ ನಂತರ 2-3 ದಿನ ಮನೆ ಮನೆಗೆ ತೆರಳಿ 0-5 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸರ್ವಜನಿಕರು ಸಹಕರಿಸಬೇಕು. 33,258 ಬೂತ್ಗಳು, 1,030 ಸಂಚಾರಿ ತಂಡಗಳು, 1096 ಟ್ರಾನ್ಸಿಟ್ ತಂಡಗಳು, 1,13,115 ಲಸಿಕಾ ಕಾರ್ಯಕರ್ತರು, 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ. Nearby Vaccination centre Karnataka ಆಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರ ಸಂಪರ್ಕಿಸಬಹುದು. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ವದಂತಿಗಳಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಅವರು ಕೋರಿದರು.
ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಹೊಸ ಎತ್ತರಕ್ಕೆ ವರುಣ್ ಚಕ್ರವರ್ತಿ; ಒಂದನೇ ಸ್ಥಾನದಲ್ಲಿ ಅಪೂರ್ವ ಸಾಧನೆ!
ICC T20i Rankings- ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಟಿ20ಐ ಬೌಲರ್ ಗಳ ರ್ಯಾಂಕಿಂಗ್ನಲ್ಲಿ 1ನೇ ಸ್ಥಾನದಲ್ಲೇ ಹೊಸ ಎತ್ತರಕ್ಕೇರಿದ್ದಾರೆ. 818 ರೇಟಿಂಗ್ ಅಂಕಗಳೊಂದಿಗೆ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅವರುಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರೊಂದಿಗೆ ಉತ್ತಮ ರೇಟಿಂಗ್ ಅಂಕಗಳನ್ನು ಹೊಂದಿರುವುದು ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಉತ್ತಮ ಬೆಳವಣಿಗೆಯಾಗಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕಿಚ್ಚ ಸುದೀಪ್ ಮತ್ತು ಮಗಳ ಜುಗಲ್ಬಂದಿ: ಅಪ್ಪನ ಡ್ಯಾನ್ಸ್ಗೆ ಮಗಳೇ ಗಾಯಕಿ! ವೈರಲ್ ಆಯ್ತು ‘ಮಾರ್ಕ್’ಸಾಂಗ್
ಕಿಚ್ಚ ಸುದೀಪ್ (Kichcha Sudeep) ಅವರ ಅಭಿಮಾನಿಗಳಿಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ ಇದೆ. ಸ್ಯಾಂಡಲ್ವುಡ್ ಬಾದ್ ಶಾ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದ್ದು, ಈ ಹಾಡು ಈಗ ಇಂಟರ್ನೆಟ್ ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ ಈ ಹಾಡಿನ ನಿಜವಾದ ಹೈಲೈಟ್ ಏನೆಂದರೆ, ಕಿಚ್ಚನ ಜೊತೆ ಕೇಳಿಬಂದಿರುವ ಆ ವಿಶೇಷ ಕಂಠ. ಹೌದು, ತಂದೆಯ ಸಿನಿಮಾದ ಹಾಡಿಗೆ ಸ್ವತಃ ಮಗಳೇ ದನಿಯಾಗಿದ್ದಾರೆ. ಮಗಳ ಹಾಡಿಗೆ ಅಪ್ಪ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿರುವುದು ... Read more The post ಕಿಚ್ಚ ಸುದೀಪ್ ಮತ್ತು ಮಗಳ ಜುಗಲ್ಬಂದಿ: ಅಪ್ಪನ ಡ್ಯಾನ್ಸ್ಗೆ ಮಗಳೇ ಗಾಯಕಿ! ವೈರಲ್ ಆಯ್ತು ‘ಮಾರ್ಕ್’ ಸಾಂಗ್ appeared first on Karnataka Times .
ಮಹಿಳೆಯರು ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. 2026ರ ಜನವರಿ 15ರವರೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗಿನಿ, ಚೇತನ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಆರ್ಥಿಕ ಸಹಾಯ ಮತ್ತು ಪ್ರೋತ್ಸಾಹಧನ ಲಭ್ಯವಿದೆ. ಅರ್ಹ ಮಹಿಳೆಯರು ಇದರ ಸದುಪಯೋಗ ಪಡೆಯಬಹುದು.
ಸ್ಪೇಸ್ಎಕ್ಸ್ IPOಗೆ ಸಿದ್ಧತೆ ನಡೆಸುತ್ತಿದ್ದಂತೆ 600 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ತಲುಪಿದ ಎಲಾನ್ ಮಸ್ಕ್
ವಿಶ್ವದ ಮೊದಲ ವ್ಯಕ್ತಿ ಎಂಬ ಗೌರವ
ಪ್ರತಿಯೊಬ್ಬರ ಖಾತೆಗೂ 15 ಲಕ್ಷ, 2 ಕೋಟಿ ಉದ್ಯೋಗ, 200 ಲಕ್ಷ ಕೋಟಿ ಸಾಲ: ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬೆಳಗಾವಿ: ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಸಾಲ 200 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇಂದು
ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವೆಂಕಟರಮಣ ಎನ್ನುವ ಮೆಕ್ಯಾನಿಕ್ವೊಬ್ಬರು ಎದೆನೋವಿನಿಂದ ಬಳಲುತ್ತಿದ್ದರು ಅವರನ್ನು ಅವರ ಪತ್ನಿ, ಸ್ಕೂಟರ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಲೆದಾಡುತ್ತಿದ್ದರು. ಈ ಮಧ್ಯೆ ಅವರಿಗೆ ಅಪಘಾತವಾಗಿದೆ. ವಾಹನ ಸವಾರರ ಪತ್ನಿ ಅಂಗಲಾಚಿದರು ಯಾರು ವಾಹನ ನಿಲ್ಲಿಸಲೇ ಇಲ್ಲ. ಸಹಾಯ ಮಾಡಲಿಲ್ಲ. ಕೊನೆಗೊಂದು ಕ್ಯಾಬ್ ಡ್ರೈವರ್ ಸಹಾಯಕ್ಕೆ ಬಂದರು. ಆದರೆ, ಅಷ್ಟೊತ್ತಿಗೆ ವೆಂಕಟರಮಣ್ ಮೃತಪಟ್ಟಿದ್ದರು. ಸಾವಿನ ನೋವಿನಲ್ಲೂ ಕುಟುಂಬಸ್ಥರು ಮೃತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚುನಾವಣೆ ಬೇಕು ಎನ್ನುವವರು ನನಗೆ ರಾಜೀನಾಮೆ ಕೊಡಿ : ಸ್ಪೀಕರ್ ಯು.ಟಿ.ಖಾದರ್ ಚಾಟಿ
ಬೆಳಗಾವಿ : ‘ಚುನಾವಣೆ ಬೇಕು ಎನ್ನುವವರೆಲ್ಲರೂ ಕೈ ಎತ್ತಿ, ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ’ ಎಂದು ‘ಬನ್ನಿ ಚುನಾವಣೆಗೆ’ ಎಂದು ತಮ್ಮ ತಮ್ಮಲ್ಲೇ ಸವಾಲು ಹಾಕುತ್ತಿದ್ದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಗೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಚಾಟಿ ಬೀಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಬುಧವಾರ ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ವಿಚಾರ ಸಂಬಂಧ ಸದನದಲ್ಲಿ ಸಂದರ್ಭದಲ್ಲಿ ಬಿಜೆಪಿಯ ಸದಸ್ಯ ವಿ.ಸುನೀಲ್ ಕುಮಾರ್, ‘ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ನೀವು ಚುನಾವಣೆಗೆ ಬನ್ನಿ, ನಿಮಗೆ ಗೊತ್ತಾಗುತ್ತದೆ’ ಎಂದು ಆಡಳಿತ ಪಕ್ಷಗಳ ಸದಸ್ಯರನ್ನು ಕೆಣಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಯಾರಿಗೆ ಚುನಾವಣೆ ಬೇಕು ಕೈಎತ್ತಿ. ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಾನು ಕೂಡಲೇ ಆ ರಾಜೀನಾಮೆಯನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ರವಾನೆ ಮಾಡಿ ಚುನಾವಣೆ ನಡೆಸಲು ಕೋರುವೆ. ಚುನಾವಣೆ ಬೇಕು ಎನ್ನುವವರೆಲ್ಲರೂ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬನ್ನಿ’ ಎಂದು ಕಾಲೆಳೆದರು. ಈ ಹಂತದಲ್ಲಿ ಎದ್ದುನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಸರಕಾರಕ್ಕೆ ರಾಜ್ಯದ ಜನತೆ ಆಶೀರ್ವಾದವಿದೆ. ದೇಶಕ್ಕೆ ಮಾದರಿಯಾಗಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುತ್ತಿದ್ದೇವೆ ಎಂದು ಏರಿದ ಧ್ವನಿಯಲ್ಲಿ ನುಡಿದರು. ಆಗ ಮಧ್ಯಪ್ರವೇಶಿಸಿದ ಬಿಜೆಪಿ ಸಿ.ಸಿ.ಪಾಟೀಲ್, ‘ಪ್ರಿಯಾಂಕ್ ಖರ್ಗೆ ಅವರಿಗೆ ಸ್ಪೀಕರ್ ಪೀಠಕ್ಕಿಂತಲೂ ಎತ್ತರದ ಸ್ಥಾನವನ್ನು ಕಲ್ಪಿಸಬೇಕು. ಅವರು ಎಲ್ಲ ವಿಚಾರಕ್ಕೂ ಎದ್ದು ನಿಂತು ಮಾತನಾಡುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
IPL AUCTION 2026 | 14.2 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದ ಅನ್ ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್ ಯಾರು?
ಹೊಸದಿಲ್ಲಿ: ಐಪಿಎಲ್ 2026 ಋತುವಿನ ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ 20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ 14.2 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾದ ಅನ್ ಕ್ಯಾಪ್ಡ್ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಬುಧವಾರ ಅಬುಧಾಬಿಯಲ್ಲಿ ನಡೆದ 2026ರ ಐಪಿಎಲ್ ಋತುವಿನ ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ 20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 14.2 ಕೋಟಿ ರೂ. ಭಾರಿ ಮೊತ್ತ ತೆತ್ತು ಖರೀದಿಸಿದೆ. ಭಾರಿ ಮೊತ್ತಕ್ಕೆ ಮಾರಾಟವಾದ ಅನ್ ಕ್ಯಾಪ್ಡ್ ಆಟಗಾರ ಎಂಬ ಹಿರಿಮೆಗೆ ಪ್ರಶಾಂತ್ ವೀರ್ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ, 2022ರಲ್ಲಿ ಲಕ್ನೊ ಸೂಪರ್ ಜೇಂಟ್ಸ್ ತಂಡ ಅನ್ ಕ್ಯಾಪ್ಡ್ ಆಟಗಾರರಾಗಿದ್ದ ಬೌಲರ್ ಆವೇಶ್ ಖಾನ್ ರನ್ನು 10 ಕೋಟಿ ರೂ. ತೆತ್ತು ಖರೀದಿಸಿತ್ತು. ಪ್ರಶಾಂತ್ ವೀರ್ ಅವರ ಮೂಲಬೆಲೆ 30 ಲಕ್ಷ ರೂ. ಮಾತ್ರವಾಗಿದ್ದರೂ, ಮುಂಬೈ ಇಂಡಿಯನ್ಸ್ ತಂಡ ಹಾಗೂ ಲಕ್ನೊ ಸೂಪರ್ ಜೇಂಟ್ಸ್ ತಂಡ ಆರಂಭದಲ್ಲಿ ಅವರ ಖರೀದಿಗೆ ಪೈಪೋಟಿ ಪ್ರದರ್ಶಿಸಿದ್ದರಿಂದ, ಬಿಡ್ಡಿಂಗ್ ಮೊತ್ತ ಆಕಾಶಕ್ಕೇರಿತು. ಕೊನೆಗೆ ಲಕ್ನೊ ಸೂಪರ್ ಜೇಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪೈಪೋಟಿಯಲ್ಲಿ ಪ್ರಶಾಂತ್ ವೀರ್ ಅವರನ್ನು ಖರೀದಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಯಿತು. ಪ್ರಶಾಂತ್ ವೀರ್ ಈವರೆಗೆ 9 ದೇಶೀಯ ಟಿ-20 ಪಂದ್ಯಗಳನ್ನಾಡಿದ್ದಾರೆ. ಉತ್ತರ ಪ್ರದೇಶ ಟಿ-20 ಲೀಗ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ಉತ್ತರ ಪ್ರದೇಶ ಅಂಡರ್ 23ರೊಳಗಿನ ತಂಡದಲ್ಲಿ ಅವರ ತೋರಿದ ಪ್ರದರ್ಶನದಿಂದಾಗಿ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗುವ ಅವಕಾಶ ದೊರೆತಿದೆ.
₹260 ಕೋಟಿ ಸಾಲ ತೀರಿಸಲು ಓಲಾ ಷೇರು ಮಾರಾಟ ಮಾಡಿದ ಭವಿಶ್ ಅಗರ್ವಾಲ್! ಕಂಪನಿ ಕಥೆ ಏನು?
ಓಲಾ ಎಲೆಕ್ಟ್ರಿಕ್ನ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ತಮ್ಮ ವೈಯಕ್ತಿಕ ಸಾಲವಾದ 260 ಕೋಟಿ ರೂ.ಗಳನ್ನು ಮರುಪಾವತಿಸಲು ಕಂಪನಿಯಲ್ಲಿನ ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮಂಗಳವಾರ ನಡೆದ ಈ 'ಬಲ್ಕ್ ಡೀಲ್' ಮೂಲಕ ಸುಮಾರು 2.6 ಕೋಟಿ ಷೇರುಗಳು ಮಾರಾಟವಾಗಿವೆ. ಈ ನಡೆ ಮೂಲಕ ಅಡಮಾನವಿಟ್ಟಿದ್ದ ಷೇರುಗಳು ಬಿಡುಗಡೆಯಾಗಲಿದ್ದು, ಹೂಡಿಕೆದಾರರ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಓಲಾ ಷೇರುಗಳ ಮೌಲ್ಯ ಐತಿಹಾಸಿಕ ಕುಸಿತ ಕಂಡಿರುವುದು ಕಳವಳಕಾರಿ ಸಂಗತಿಯಾಗಿದೆ.
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಗಿದ್ದು, ಮೊದಲ ಸಾಕ್ಷಿಯಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಕೇಳಿದ ಪ್ರಶ್ನೆಗಳಿಗೆ ರತ್ನಪ್ರಭಾ ಅವರು ನೀಡಿದ ಉತ್ತರಗಳು ಇಲ್ಲಿವೆ. ಮಗ ನಾಪತ್ತೆಯಾಗುವ ಮುನ್ನ ಸಂಪರ್ಕಿಸಿದ್ದರೇ, ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದರೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಬೆಳಗಾವಿ ರಾಜ್ಯದ ಎರಡನೆ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ: ಡಿ.ಕೆ.ಶಿವಕುಮಾರ್
ಬೆಳಗಾವಿ : ಬೆಳಗಾವಿ ರಾಜ್ಯದ ಎರಡನೆ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಬುಧವಾರ ಬೆಳಗಾವಿಯ ಅಶೋಕ ವೃತ್ತದಲ್ಲಿ ನಗರಾಭಿವೃದ್ಧಿ ಹಾಗೂ ಪೌರಾಡಳಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೆಲ್ಲರಿಗೂ ದೊಡ್ಡ ಜವಾಬ್ದಾರಿ ಇದೆ. ನಮಗೆ ಎಲ್ಲ ಧರ್ಮ, ಜಾತಿ ಒಂದೇ. ನಮಗೆ ಎಲ್ಲದರ ಮೇಲೂ ನಂಬಿಕೆ ಇದೆ. ನಾವೆಲ್ಲರೂ ನಮಗೆ ಸಿಕ್ಕ ಅವಕಾಶದಲ್ಲಿ ಪರಿಸರ ಕಾಪಾಡಲು ನಮ್ಮ ಸರಕಾರದ ಯೋಜನೆಯಲ್ಲಿ ಅನುದಾನ ನೀಡಲಾಗಿದೆ ಎಂದು ಹೇಳಿದರು. ಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವರಾದ ಬಳಿಕ ಸುಮಾರು 200 ಕೋಟಿ ರೂ.ಗಳಷ್ಟು ಅನುದಾನವನ್ನು ಅನೇಕ ಯೋಜನೆಗಳ ಮೂಲಕ ಈ ನಗರಕ್ಕೆ ನೀಡಿದ್ದಾರೆ. ಮುಂದೆ ನಮ್ಮ ಸರಕಾರ ಈ ಪ್ರದೇಶದ ಅಭಿವೃದ್ಧಿ ಮಾಡಿ, ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಿದೆ. ನಾವು ನೀವು ಜೊತೆಯಾಗಿ ಕೈ ಜೋಡಿಸಿ ಹೆಜ್ಜೆ ಹಾಕೋಣ ಎಂದು ಶಿವಕುಮಾರ್ ಕರೆ ನೀಡಿದರು. ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದರು. ಅದರ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷ ನಾವು ಬೆಳಗಾವಿಗೆ ಬಂದು ಗಾಂಧಿ ಭಾರತ ಎಂಬ ಕಾರ್ಯಕ್ರಮ ಮಾಡಿದೆವು. ಸ್ವಚ್ಛತೆ ಹಾಗೂ ಪರಿಸರ ಕಾಪಾಡುವುದು ಅದರ ಉದ್ದೇಶವಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು. ನಾನು ಚಿಕ್ಕ ವಯಸ್ಸಿನಲ್ಲಿ ಕ್ರಾಸ್ ಕಂಟ್ರಿ ಓಡುತ್ತಿದ್ದೆ. ಈಗ ವಯಸ್ಸಾಗಿದೆ. ಆದರೆ ನನ್ನ ಮನಸ್ಸು ನಿಮ್ಮಷ್ಟೇ ತಾರುಣ್ಯವಾಗಿದೆ. ನನ್ನ ಕೈಲಾದಷ್ಟು ನಡೆಯುತ್ತೇನೆ. ನಿಮಗೆ ಒಳ್ಳೆಯದಾಗಲಿ ಎಂದು ಶಿವಕುಮಾರ್ ತಿಳಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಕುಂದಾನಗರಿ ಬೆಳಗಾವಿ ಎಲ್ಲ ಕ್ಷೇತ್ರಗಳಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು, ಬೆಂಗಳೂರಿನಂತೆ ಉನ್ನತ ಮಟ್ಟಕ್ಕೆ ಏರುವತ್ತ ದಾಪುಗಾಲು ಇಟ್ಟಿದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕೆಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ನಮ್ಮ ಸರಕಾರ ನಗರ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿದೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ದೇಶದ ಸ್ವಚ್ಛ ನಗರಗಳ ಅಗ್ರ ಪಟ್ಟಿಯಲ್ಲಿ ನಮ್ಮ ರಾಜ್ಯದ ನಗರಗಳೂ ಸ್ಥಾನ ಪಡೆಯುತ್ತಿರುವುದು ಸಂತಸದ ವಿಚಾರ. ಮುಂಬರುವ ದಿನಗಳಲ್ಲಿ ಬೆಳಗಾವಿ ಸೇರಿ ಇನ್ನೂ ಹೆಚ್ಚಿನ ನಗರಗಳು ಈ ಪಟ್ಟಿಯಲ್ಲಿ ಸೇರುವಂತೆ ಮಾಡಲು ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉತ್ತರಾಖಂಡ| ಗುಂಪಿನಿಂದ ಥಳಿತಕ್ಕೊಳಗಾದ ಪತ್ರಕರ್ತ ಮೃತ್ಯು
ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಗುಂಪೊಂದು ಹಲ್ಲೆ ನಡೆಸಿದ ಬಳಿಕ ಪತ್ರಕರ್ತನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಕಜ್ ಮಿಶ್ರಾ ಮೃತ ಪತ್ರಕರ್ತ. ರಾಜ್ಪುರದಲ್ಲಿ ಈ ಘಟನೆ ನಡೆದಿದೆ. ಡೆಹ್ರಾಡೂನ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಸೋಮವಾರ ರಾತ್ರಿ ಪತ್ರಕರ್ತ ಪಂಕಜ್ ಮಿಶ್ರಾ ಅವರ ನಿವಾಸಕ್ಕೆ ನುಗ್ಗಿ ಅವರನ್ನು ಗುಂಪೊಂದು ಥಳಿಸಿದೆ. ಪ್ರಮುಖ ಆರೋಪಿ ಅಮಿತ್ ಸೆಹಗಲ್ ಡಿಜಿಟಲ್ ಮೀಡಿಯಾ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ನಡೆಸಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ತಿಳಿದಿಲ್ಲ. ಆದ್ದರಿಂದ ಕುಟುಂಬವು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ವಿನಂತಿಸಿದೆ. ನಾವು ವರದಿಯನ್ನು ಪರಿಶೀಲಿಸುತ್ತೇವೆ ಮತ್ತು ಹೇಳಿಕೆಗಳನ್ನು ಸಂಗ್ರಹಿಸುತ್ತೇವೆ. ನಂತರ ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದರು. ಮಿಶ್ರಾ ಅವರ ಸಹೋದರ ಅರವಿಂದ್ ನೀಡಿದ ದೂರಿನ ಆಧಾರದ ಮೇಲೆ ರಾಜ್ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಮಿತ್ ಮತ್ತು ಇತರ ಕೆಲವರು ಮಿಶ್ರಾ ಅವರ ನಿವಾಸಕ್ಕೆ ನುಗ್ಗಿ ಹತ್ಯೆ ಮಾಡುವ ಉದ್ದೇಶದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಗುಂಪು ಅಮಿತ್ ಅವರ ಎದೆ, ಹೊಟ್ಟೆಗೆ ಥಳಿಸಿದ ಪರಿಣಾಮ ಅವರ ಬಾಯಿಯಿಂದ ರಕ್ತಸ್ರಾವವಾಗಲು ಪ್ರಾರಂಭಿಸಿತು. ಮಿಶ್ರಾ ಮತ್ತು ಅವರ ಪತ್ನಿಯ ಮೊಬೈಲ್ ಫೋನ್ಗಳನ್ನು ಕೂಡ ಗುಂಪು ಕಿತ್ತುಕೊಂಡಿದೆ. ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಸ್ಥಿತಿ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ವರದಿಯಾಗಿದೆ.
ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ಗೆ ಸೋಲ್ಡ್ ಆದ ಸರ್ಫರಾಝ್ ಖಾನ್: `ಇದು ನ್ಯೂ ಲೈಫ್' ಎಂದು ಭಾವನಾತ್ಮಕ ಲೈನ್
Sarfaraz Khan Post- ಐಪಿಎಲ್ ನಲ್ಲಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವ ಬ್ಯಾಟರ್ ಸರ್ಫರಾಝ್ ಖಾನ್ಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ (CSK)ನಲ್ಲಿ ಅವಕಾಶ ಬಾಗಿಲು ತೆರೆದಿದೆ. ಇದೇ ಕಾರಣಕ್ಕಾಗಿ ಅವರು CSKಗೆ ಧನ್ಯವಾದಗಳು, ನನಗೆ ಹೊಸ ಜೀವನ ನೀಡಿದ್ದೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 22 ಎಸೆತಗಳಲ್ಲಿ 73 ರನ್ ಸಿಡಿಸಿ ಗಮನ ಸೆಳೆದಿದ್ದ ಸರ್ಫರಾಝ್, ಇದೀಗ CSK ತಂಡಕ್ಕೆ ಆರನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
GOAT TOUR | ಮೆಸ್ಸಿ ಭಾರತ ಭೇಟಿ; ಚಿತ್ರಗಳಲ್ಲಿ ನೋಡಿ
Weather: ಎಲ್ಕೆಜಿ-ಪಿಯುಸಿ ತರಗತಿ ಬೆಳಗ್ಗೆ 9.30ಕ್ಕೆ ಆರಂಭಿಸಲು ಮನವಿ: ಮಕ್ಕಳ ರಕ್ಷಣಾ ಆಯೋಗ
ಬೆಂಗಳೂರು, ಡಿಸೆಂಬರ್ 17: ರಾಜ್ಯಾದ್ಯಂತ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ದಾಖಲಾತಿ ಮುಂದುವರಿದಿದೆ. ಒಂದು ವಾರದಿಂದ ದಟ್ಟ ಮಂಜಿನ ವಾತಾವರಣ ಅನುಭವಿಸುತ್ತಿರುವ ಜನರು ಮೈಕೊರೆವ ಚಳಿಗೆ ನಡುಗಿದ್ದಾರೆ. ದೊಡ್ಡವರಿಗೇ ಚಳಿ ತಡೆದುಕೊಳ್ಳಲು ಕಷ್ಟವಾಗುತ್ತಿದ್ದು, ಮಕ್ಕಳು ಚಳಿ ಸಂಕಷ್ಟ ಹೇಳತೀರದಾಗಿದೆ. ಈ ಕಾರಣದಿಂದ ರಾಜ್ಯದಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗಿನ ತರಗತಿಗಳ ಸಮಯ ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ
IPL Salary Cap: ಭಾರತೀಯ ಆಟಗಾರರಿಗೂ ಹಣ ಕಟ್ ಆಗುತ್ತಾ? ಹರಾಜಿನ 18 ಕೋಟಿ ನಿಯಮದ ಸಂಪೂರ್ಣ ಮಾಹಿತಿ
ಐಪಿಎಲ್ 2026ರ (IPL 2026) ಮಿನಿ ಹರಾಜು ಮತ್ತು ಅದರಲ್ಲಿನ ಹೊಸ ನಿಯಮಗಳು ಈಗ ಕ್ರಿಕೆಟ್ ಜಗತ್ತಿನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿವೆ. ಮುಖ್ಯವಾಗಿ, “ಯಾವುದೇ ಆಟಗಾರ 18 ಕೋಟಿಗಿಂತ ಹೆಚ್ಚು ಮೊತ್ತಕ್ಕೆ ಹರಾಜಾದರೆ, ಹೆಚ್ಚುವರಿ ಹಣ ಬಿಸಿಸಿಐ ಪಾಲಾಗುತ್ತದೆ” ಎಂಬ ಸುದ್ದಿ ವೈರಲ್ ಆಗಿದೆ. ಇದರಿಂದಾಗಿ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ನಮ್ಮ ಭಾರತೀಯ ಸ್ಟಾರ್ ಆಟಗಾರರಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅಥವಾ ಕೆ.ಎಲ್. ರಾಹುಲ್ ಅವರು ಹರಾಜಿನಲ್ಲಿ 25 ಅಥವಾ 30 ಕೋಟಿ ರೂ.ಗೆ ಮಾರಾಟವಾದರೆ, ... Read more The post IPL Salary Cap: ಭಾರತೀಯ ಆಟಗಾರರಿಗೂ ಹಣ ಕಟ್ ಆಗುತ್ತಾ? ಹರಾಜಿನ 18 ಕೋಟಿ ನಿಯಮದ ಸಂಪೂರ್ಣ ಮಾಹಿತಿ appeared first on Karnataka Times .
ರೆಕಾರ್ಡ್ ಬ್ರೇಕ್! ಒಂದೇ ವರ್ಷದಲ್ಲಿ ಹಳೆ ದಾಖಲೆ ಉಡೀಸ್; 25 ಕೋಟಿ ಸರದಾರನಾದ ಗ್ರೀನ್.”
ಐಪಿಎಲ್ ಹರಾಜು (IPL Auction) ಎಂದರೆ ಅಲ್ಲಿ ಕೇವಲ ಆಟಗಾರರ ಖರೀದಿ ಮಾತ್ರ ನಡೆಯುವುದಿಲ್ಲ, ಬದಲಾಗಿ ಕೋಟಿ ಕೋಟಿ ಹಣದ ಹೊಳೆಯೇ ಹರಿಯುತ್ತದೆ. ಪ್ರತಿ ಬಾರಿಯೂ ಹರಾಜಿನಲ್ಲಿ ಒಂದಲ್ಲ ಒಂದು ಹೊಸ ದಾಖಲೆ ನಿರ್ಮಾಣವಾಗುವುದು ಸಾಮಾನ್ಯ. ಆದರೆ ಈ ಬಾರಿ ಅಬುಧಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ನಡೆದಿದ್ದು ಅನಿರೀಕ್ಷಿತ ಬೆಳವಣಿಗೆ. ಕಳೆದ ಬಾರಿ ಮಿಚೆಲ್ ಸ್ಟಾರ್ಕ್ ಸೃಷ್ಟಿಸಿದ್ದ ಆ ಸಾರ್ವಕಾಲಿಕ ದಾಖಲೆ ಕೇವಲ ಒಂದೇ ವರ್ಷದಲ್ಲಿ ಧೂಳೀಪಟವಾಗಿದೆ! ಯಾರು ಆ ಆಟಗಾರ? ಯಾವ ತಂಡ ಯಾರ ಮೇಲೆ ... Read more The post ರೆಕಾರ್ಡ್ ಬ್ರೇಕ್! ಒಂದೇ ವರ್ಷದಲ್ಲಿ ಹಳೆ ದಾಖಲೆ ಉಡೀಸ್; 25 ಕೋಟಿ ಸರದಾರನಾದ ಗ್ರೀನ್.” appeared first on Karnataka Times .
ಗುಡ್ನ್ಯೂಸ್: 6 ತಿಂಗಳ ಬಳಿಕ ಬೆಂಗಳೂರು - ಮಂಗಳೂರು ಹಗಲು ಸಂಚರಿಸುವ 6 ರೈಲುಗಳ ಸೇವೆ ಪುನರಾರಂಭ; ಯಾವೆಲ್ಲಾ?
ಬೆಂಗಳೂರು-ಮಂಗಳೂರು-ಕಾರವಾರ ಹಗಲು ರೈಲು ಸೇವೆ ಪುನರಾರಂಭಗೊಂಡಿದೆ. ಸಕಲೇಶಪುರ-ಘಾಟಿ ಸುಬ್ರಹ್ಮಣ್ಯ ರಸ್ತೆ ನಡುವಿನ ವಿದ್ಯುತ್ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಕಾರವಾರ ಎಕ್ಸ್ಪ್ರೆಸ್, ಗೊಮ್ಮಟೇಶ್ವರ ಎಕ್ಸ್ಪ್ರೆಸ್ ಸೇರಿದಂತೆ 6 ರೈಲುಗಳ ಸಂಚಾರ ಆರಂಭವಾಗಿದೆ. ಇದರಿಂದ ವಿಸ್ಟಾಡೋಮ್ ಕೋಚ್ ಪ್ರಯಾಣಿಕರ ಸೇವೆಗೆ ಮರಳಿದೆ.
ಬಿಹಾರ | ಮಹಿಳೆಯರಿಗೆ ಮೀಸಲಾಗಿದ್ದ ಯೋಜನೆಯ ನಗದು ಪುರುಷರಿಗೆ ಜಮೆ: ಮರಳಿ ಪಡೆಯಲು ಅಧಿಕಾರಿಗಳಿಂದ ಹರಸಾಹಸ
ದರ್ಭಾಂಗ/ಪಾಟ್ನಾ: ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಮಹಿಳೆಯರಿಗೆಂದೇ ಮೀಸಲಾಗಿದ್ದ ಯೋಜನೆಯಡಿ ಪುರುಷ ಗ್ರಾಮಸ್ಥರಿಗೆ 10,000 ರೂ. ನಗದು ವರ್ಗಾವಣೆಯಾಗಿದ್ದು, ಅದನ್ನು ಮರಳಿ ಪಡೆಯಲು ಬಿಹಾರದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ. ತಮ್ಮ ಖಾತೆಗಳಿಗೆ ತಲಾ 10,000 ರೂ. ನಗದು ಸ್ವೀಕರಿಸಿರುವ ಪುರುಷ ಗ್ರಾಮಸ್ಥರ ಗುಂಪೊಂದು ಆ ಮೊತ್ತವನ್ನು ಈಗಾಗಲೇ ಛತ್ ಪೂಜೆ, ದೀಪಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ್ದಾರೆ. ಮತ್ತೆ ಕೆಲವರು ಬಾತುಕೋಳಿಗಳು ಹಾಗೂ ಮೇಕೆಗಳನ್ನು ಖರೀದಿಸಿದ್ದು, ತಮಗೆ ಬಂದಿದ್ದ ಮೊತ್ತವನ್ನು ಮರಳಿ ನೀಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಸೆಪ್ಟೆಂಬರ್ 26ರಂದು ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಸುಮಾರು 1.40 ಕೋಟಿ ಮಹಿಳೆಯರಿಗೆ ತಲಾ 10,000 ರೂ. ಸಹಾಯ ಧನವನ್ನು ಅವರ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿತ್ತು. ಆದರೆ, ತಾಂತ್ರಿಕ ತೊಡಕಿನಿಂದ ಈ ಯೋಜನೆಯ ಮೊತ್ತವು ದರ್ಭಾಂಗ ಜಿಲ್ಲೆಯ ಜಾಲೆ ವಿಧಾನಸಭಾ ಕ್ಷೇತ್ರದ ಅಹಿಯಾರಿ ಗ್ರಾಮದ ಕೆಲವು ಪುರುಷರ ಖಾತೆಗಳಿಗೆ ತಪ್ಪಾಗಿ ವರ್ಗಾವಣೆಯಾಗಿದೆ ಎಂದು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರಕಾರಿ ಸಂಸ್ಥೆ ಜೀವಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮದ ಕನಿಷ್ಠ ಮೂವರು ಪುರುಷ ಗ್ರಾಮಸ್ಥರ ಖಾತೆಗಳಿಗೆ ಜೀವಿಕಾದ ಬ್ಲಾಕ್ ಯೋಜನಾ ನಿರ್ದೇಶಕರಿಂದ ವರ್ಗಾವಣೆಯಾಗಿರುವ ತಲಾ 10,000 ರೂ. ಅನ್ನು ಮರಳಿಸುವಂತೆ ಈಗಾಗಲೇ ಅವರಿಗೆಲ್ಲ ನೋಟಿಸ್ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಯಡಿ ತಪ್ಪಾಗಿ ನಗದು ಸ್ವೀಕರಿಸಿರುವ ಫಲಾನುಭವಿಗಳನ್ನು ನಾಗೇಂದ್ರ ರಾಮ್, ಬಲರಾಮ್ ಸಾಹ್ನಿ ಹಾಗೂ ರಾಮ್ ಸಾಗರ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ವಿಕಲಚೇತನರೂ ಹಾಗೂ ಆರ್ಥಿಕವಾಗಿ ಬಡವರೂ ಆಗಿದ್ದಾರೆ.
ಹಿರಿಯರ ಮನೆಬಾಗಿಲಿಗೆ ಪಡಿತರ: ಬೆಂಗಳೂರು ಗ್ರಾಮಾಂತರದಲ್ಲಿ 'ಅನ್ನ ಸುವಿಧಾ' ಯಶಸ್ವಿ!: ನೋಂದಣಿ ಆಗುವುದು ಹೇಗೆ?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಸುವಿಧಾ ಯೋಜನೆ ಈಗ ರಾಜ್ಯಾದ್ಯಂತ ಜಾರಿಯಾಗುತ್ತಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರವನ್ನು ಅವರ ಮನೆಬಾಗಿಲಿಗೆ ತಲುಪಿಸುವ ಈ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಇದರಿಂದ ಹಿರಿಯರ ಕಷ್ಟ ತಪ್ಪಿದೆ. ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ತಿಂಗಳ 1 ರಿಂದ 5ರೊಳಗೆ ಪಡಿತರ ವಿತರಣೆಯಾಗಲಿದೆ. ಪಾರದರ್ಶಕತೆಗಾಗಿ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತಿದೆ.
ಹಮಾಸ್ ಉಗ್ರರನ್ನು ಸದೆಬಡಿಯಲು ನಿಮ್ಮ ಸೇನೆ ಗಾಜಾಗೆ ಕಳುಹಿಸಿ : ಟ್ರಂಪ್ ಹೊಸ ಒತ್ತಡಕ್ಕೆ ಪಾಕಿಸ್ತಾನ ತಲ್ಲಣ
Gaza Stabilisation Force : ಪಾಕಿಸ್ತಾನದ ಮೂರು ಸೇನೆಯ ದಂಡನಾಯಕರಾಗಿರುವ ಆಸಿಮ್ ಮುನೀರ್, ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಒತ್ತಡಕ್ಕೆ ಸಿಲುಕಿದ್ದಾರೆ. ಗಾಜಾಗೆ ಸೇನೆಯನ್ನು ಕಳುಹಿಸಿಕೊಡಿ ಎನ್ನುವ ಟ್ರಂಪ್, ಒತ್ತಡದಿಂದ, ಆಂತರಿಕ ಸಮಸ್ಯೆಗಳನ್ನು ಮುನೀರ್ ಎದುರಿಸುವ ಸಾಧ್ಯತೆಯಿದೆ.
ನಕಲಿ ದಾಖಲೆ ಸೃಷ್ಟಿಸಿ ಕೆರೆ ಹಾಗೂ ಸ್ಮಶಾನದ 21 ಎಕರೆ ಜಮೀನು ಕಬಳಿಕೆ ಆರೋಪಕ್ಕೆ ಒಳಗಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಆರೋಪಗಳ ಕುರಿತು ತನಿಖೆಗೆ ಸಿದ್ದವಿರುವುದಾಗಿ ಸಚಿವರು ತಿಳಿಸಿದ್ದಾರೆ.
ಟಾಟಾ ಕಾರಿಗೆ ಮುಗಿಬಿದ್ದ ಗ್ರಾಹಕರು, ಮೊದಲ ದಿನವೇ 70,000 ಸಿಯೆರಾ ಕಾರು ಬುಕ್!
ಭಾರತೀಯ ಮಾರುಕಟ್ಟೆಗೆ ಬಹುನಿರೀಕ್ಷಿತ ಟಾಟಾ ಸಿಯೆರಾ ಎಸ್ಯುವಿ ಭರ್ಜರಿ ಎಂಟ್ರಿ ನೀಡಿದೆ. ಅಧಿಕೃತ ಬುಕ್ಕಿಂಗ್ ಆರಂಭವಾದ ಮೊದಲ ದಿನವೇ ಬರೋಬ್ಬರಿ 70,000 ಗ್ರಾಹಕರು ಬುಕ್ಕಿಂಗ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಸುಮಾರು 1.35 ಲಕ್ಷ ಗ್ರಾಹಕರು ತಮ್ಮಿಷ್ಟದ ಮಾದರಿಯನ್ನು ಕಾನ್ಫಿಗರ್ ಮಾಡಿದ್ದಾರೆ. 11.49 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಕಾರು, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
2026: ಈ ಕಾರಣಕ್ಕೆ ಭಾರತದಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ: ವರದಿ
ಭಾರತದಲ್ಲಿ ಇನ್ನಷ್ಟು ಉದ್ಯೋಗ ನಷ್ಟವಾಗುವ ಆತಂಕ ಶುರುವಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಾದ್ಯಂತ ಹಾಗೂ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮಾಡಿರುವವರಿಗೆ ಉದ್ಯೋಗ ಸಿಗುತ್ತಿಲ್ಲ. ಇದೀಗ 2026ನೇ ಸಾಲಿನಲ್ಲಿ ಉದ್ಯೋಗದ ವಿಚಾರದಲ್ಲಿ ಇನ್ನಷ್ಟು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಅಲ್ಲದೇ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುವ ಆತಂಕವೂ
ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ 64.43 ಕೋಟಿ ರೂ. ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ : ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತದಿಂದ ರೂ. 64.43 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೂ ರೂ. 54.82 ಕೋಟಿ ಬಳಕೆ ಮಾಡಲಾಗಿದೆ ಎಂದು ಕಂದಾಯ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅವರು ವಿಧಾನ ಪರಿಷತ್ನಲ್ಲಿ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಬಸವ ಅಂತಾರಾಷ್ಟ್ರೀಯ ಕೇಂದ್ರದ ಸಿವಿಲ್ ಕಾಮಗಾರಿಯ ಎ, ಬಿ, ಸಿ ಮತ್ತು ಎಫ್ ಬ್ಲಾಕ್ಗಳ ಕಾಮಗಾರಿ ಮುಕ್ತಾಯವಾಗಿದ್ದು, ಬಾಕಿ ಉಳಿದ ಡಿ ಮತ್ತು ಇ ಬ್ಲಾಕ್ಗಳ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ. ಕಟ್ಟಡದ ಸಿವಿಲ್ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಕಟ್ಟಡಗಳಲ್ಲಿ ಬಾಕಿ ಉಳಿದ ವಿದ್ಯುತ್, ಧ್ವನಿ ಮತ್ತು ಬೆಳಕು ಆಧುನಿಕ ಶೈಲಿಯ 3ಡಿ, ಡಯಾರಾಮ ಮಲ್ಟಿಮಿಡಿಯಾ ತಂತ್ರಜ್ಞಾನ ಮತ್ತು ಐನಿಮ್ಯಾಟ್ರಿಕ್ಸ್ ಇತ್ಯಾದಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮ್ಯೂಸಿಯಂ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಬಸವ ಮ್ಯೂಸಿಯಂ ತಜ್ಞರ ಸಲಹಾ ಸಮಿತಿ ರಚಿಸಲಾಗಿದೆ. ಹಾಗೂ ಬಸವೇಶ್ವರ ಜೀವನ ದರ್ಶನ ಮತ್ತು ತತ್ವದರ್ಶನದೊಂದಿಗೆ ಅವರ ಚರಿತ್ರೆ ಬಾಲ್ಯ, ಯೌವನ ಮತ್ತು ಜೀವನಕ್ಕೆ ಸಂಬಂಧಿದಂತೆ, ಚಿತ್ರಕಲೆ, ಶಿಲ್ಪಕಲೆ ತ್ರಿಡಿ ತಂತ್ರಜ್ಞಾನ ಮತ್ತು ಡಯಾರಾಮ್ ಕೆಲಸ ಹಾಗೂ ವಚನಾಧಾರಿತ ವಿವರಗಳ ಮಾಹಿತಿಯನ್ನು ಡಿಜಿಟಲ್ ಹಾಗೂ ಮೂರ್ತಿಗಳ ಮುಖಾಂತರ ಪ್ರದರ್ಶಿಸಲು ವಿಸ್ತೃತ ಯೋಜನಾ ವರದಿ'ಯನ್ನು (DPR) ತಯಾರಿಸಲು ಪ್ರೊ. ಕೆ.ಬಿ ಗುಡಿಸಿ ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಪ್ರಥಮ ಹಂತದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಈ ಮ್ಯೂಜಿಯಂನ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ಒಟ್ಟು 21 ಸಭೆಗಳನ್ನು ನಡೆಸಲಾಗಿದೆ. ಈ ಸಭೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಸ್ತು ಸಂಗ್ರಹಾಲಯವನ್ನು ಹೇಗೆ ಮಾಡಬೇಕೆಂದು ಚರ್ಚಿಸಲಾಗಿದೆ. 12 ನೇ ಶತಮಾನದಲ್ಲಿ ಸಮಗ್ರ ಶರಣರ ಜೀವನ ಸಾಧನೆಗಳನ್ನು ಒಳಗೊಂಡಂತೆ, ಬಸವಣ್ಣನವರ ಸಂಪೂರ್ಣ ಜೀವನ ಚಿತ್ರಣವನ್ನು, ವಚನಾಧಾರಿತ ಚಿಂತನೆಗಳನ್ನು, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಅದರಲ್ಲಿ ಅಳವಡಿಸಬೇಕೆಂದು ತೀರ್ಮಾನಿಸಲಾಗಿದೆ. ಎಲ್ಲಾ ಚಿಂತನೆಗಳನ್ನು ಕನ್ನಡ, ಹಿಂದಿ, ಭಾಷೆಗಳಲ್ಲಿ ದೊರುಕುವಂತೆ ಮಾಡಬೇಕು ಎಂದು ನಿರ್ಣಯಿಸಲಾಗಿದ್ದು, ಸದರಿ ಸಭೆಯ ನಿರ್ಣಯದಂತೆ ಪ್ರಚಲಿತ ಕಾಮಗಾರಿಗಳು ಸಾಗುತ್ತಾ ಬಂದಿವೆ ಎಂದು ತಿಳಿಸಿದರು.
SMAT ಆಡುತ್ತಿರುವ ಯಶಸ್ವಿ ಜೈಸ್ವಾಲ್ ಗೆ ಅನಾರೋಗ್ಯ; ಉತ್ತಮ ಫಾರ್ಮ್ ನಲ್ಲಿರುವ ಓಪನರ್ ಗೆ ಏಕಾಏಕಿ ಏನಾಯ್ತು!
Yashasvi Jaiswal Illness- ಟೀಂ ಇಂಡಿಯಾ ಟೆಸ್ಟ್ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂದ್ಯದ ವೇಳೆ ಅನಾರೋಗ್ಯ ಇದ್ದರೂ ಅವರು ಆಡಿದ್ದರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರಿಗೆ ಗ್ಯಾಸ್ಟ್ರೋಎಂಟರೈಟಿಸ್ ದೃಢಪಟ್ಟಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಮುಂದಿನ ಟಿ20 ವಿಶ್ಭಾಕಪ್ ವೇಳೆ ಭಾರತ ಟಿ20 ತಂಡಕ್ಕೆ ಆಯ್ಕೆ ಆಗಬೇಕು ಎಂಬ ಅವರ ಪ್ರಯತ್ನಕ್ಕೆ ಇದೀಗ ಹಿನ್ನಡೆಯಾಗುವ ಸಾಧ್ಯತೆ ಇದೆ.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಅಮೆರಿಕಾದ ಸುಂಕ ನೀತಿಗಳಿಂದ ಏರಿದ್ದ ಕಚ್ಚಾತೈಲ ಬೆಲೆ ದಿಢೀರ್ ಕುಸಿತ ಕಂಡಿದೆ. ಸದ್ಯ ಬ್ಯಾರೆಲ್ಗೆ 55 ಡಾಲರ್ಗೆ ತಲುಪಿದ್ದು, 2021ರ ನಂತರದ ಅತಿ ಕನಿಷ್ಠ ಮಟ್ಟವಾಗಿದೆ. OPEC+ ಹೆಚ್ಚುವರಿ ಪೂರೈಕೆ ಮತ್ತು ಯುದ್ಧ ಮಾತುಕತೆಗಳ ಪ್ರಗತಿಯಿಂದ ಬೆಲೆ ಇಳಿಕೆಯಾಗಿದ್ದು, 2026ರ ವೇಳೆಗೆ 30-40 ಡಾಲರ್ಗೆ ತಲುಪುವ ನಿರೀಕ್ಷೆಯಿದೆ. ಆದರೆ ಇದು ಆರ್ಥಿಕ ತಜ್ಞರನ್ನು ಆತಂಕಕ್ಕೆ ದೂಡುವಂತೆ ಮಾಡಿದ್ದು, ತೈಲ ಬೆಲೆ ಕುಸಿತ ಹೀಗೆ ಮುಂದುವರಿದರೆ, ಕಚ್ಚಾತೈಲ ಉತ್ಪಾದನಾ ಮಾರುಕಟ್ಟೆಗೆ ಭಾರಿ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದ್ದಾರೆ.
ʻನನ್ನವರು ನಿನ್ನೊಡನೆ ಬದುಕಲು ಅವಕಾಶ ಕೊಟ್ಟಿಲ್ಲ ಕ್ಷಮಿಸುʼ; ಪ್ರಿಯಕರನಿಗೆ ಪತ್ರ ಬರೆದಿಟ್ಟು ರೈಲಿಗೆ ತಲೆಕೊಟ್ಟ ಯುವತಿ
ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಯುವತಿಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪಲ್ಲವಿ ಎನ್ನುವ ಯುವತಿಯ ಪೋಷಕರು ಆಕೆಯ ಇಷ್ಟಾರ್ಥಕ್ಕೆ ಬೆಲೆ ಕೊಡದೇ, ತಾನು ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆ ಹುಡುಗನ ಜೊತೆ ಮದುವೆ ಮಾಡಿಸಲು ನಿರ್ಧರಿಸಿದ್ದಕ್ಕೆ ನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಆಕೆ ಉಲ್ಲೇಖಿಸಿದ್ದಾಳೆ. ಸುಳ್ಳು ಮಾಹಿತಿ ಹಬ್ಬಿಸದಂತೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ವಿಭಜನೆ: ಮಹತ್ವದ ಅಪ್ಡೇಟ್ ನೀಡಿದ ಡಿ ಕೆ ಶಿವಕುಮಾರ್
ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ನೂತನ ಜಿಲ್ಲೆ ಘೋಷಿಸುವ ಸಂಬಂಧ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು
ರಾಜ್ಯದ ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ : ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ: ಸರಕಾರದ ಉಪವಿಭಾಗಾಧಿಕಾರಿಗಳ ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರಕಾರವು ಶೆ.80ರಷ್ಟು ವಿಲೇ ಮಾಡಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಸಹ ಇತ್ಯರ್ಥಗೊಳಿಸಲು ಸರಕಾರ ಬದ್ದವಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನ ಪರಿಷತ್ತಿ ನಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ವೇಳೆ ಸದಸ್ಯರಾದ ರಾಮೋಜಿ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ಸರಕಾರವು ಆದೇಶಿಸಿರುತ್ತದೆ. ಕಂದಾಯ ನ್ಯಾಯಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ, ಸಕಾಲಿಕ ವಿಲೇವಾರಿ ಮತ್ತು ಲಭ್ಯತೆಯ ಹಿತದೃಷ್ಟಿಯಿಂದ ಡಿಜಿಟಲ್ ಸಹಿ ಅಥವಾ ಸಮಾನವಾದ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟ ಎಲೆಕ್ಟ್ರಾನಿಕ್ ವಿಧಾನಗಳಿಂದ ದೃಢೀಕರಣದೊಂದಿಗೆ ಕೇಂದ್ರೀಕೃತ ವೇದಿಕೆಯ ಮೂಲಕ ಅಂತಹ ಎಲ್ಲಾ ಎರಡು ಪ್ರಕ್ರಿಯೆಗಳ ಆನ್ಲೈನ್ ಫೈಲಿಂಗ್ ಮತ್ತು ಎಲೆಕ್ಟ್ರಾನಿಕ್ ನಿರ್ವಹಣೆಯನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಿ ಕರ್ನಾಟಕ ಕಂದಾಯ ನ್ಯಾಯಾಲಯದ ನಡವಳಿಗಳು (ಆನ್ಲೈನ್ ಸಲ್ಲಿಕೆ, ದೃಢೀಕರಣ ಮತ್ತು ಡಿಜಿಟಲೀಕರಣ) ಸರಕಾರವು ದಿ.29.08.2025ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇದರಿಂದಾಗಿ ಕಂದಾಯ ನ್ಯಾಯಾಲಯಗಳು ನಿರ್ವಹಣೆಯನ್ನು ಕಡ್ಡಾಯವಾಗಿ ಆರ್ಸಿಸಿಎಂಎಸ್ ತಂತ್ರಾಂಶದಲ್ಲಿಯೇ ನಿರ್ದೇಶಿಸಲಾಗಿರುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ಸಹಜ ಪಾಲುದಾರರು: ಪಿಎಂ ಮೋದಿ
ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ ಮಾಡಿದರು. ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ಸಹಜ ಪಾಲುದಾರರು ಎಂದು ಬಣ್ಣಿಸಿದರು. ಅಭಿವೃದ್ಧಿಶೀಲ ರಾಷ್ಟ್ರಗಳಾಗಿ ಪರಸ್ಪರ ಕಲಿಯಲು ಮತ್ತು ನೀಡಲು ಬಹಳಷ್ಟು ಇದೆ ಎಂದು ಅವರು ಹೇಳಿದರು. ಈ ಭೇಟಿಯು ಉಭಯ ದೇಶಗಳ ಸಂಬಂಧವನ್ನು 'ವ್ಯೂಹಾತ್ಮಕ ಪಾಲುದಾರಿಕೆ'ಗೆ ಏರಿಸುವ ನಿರೀಕ್ಷೆಯಿದೆ.
ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್ ಗೆ ತ್ವರಿತ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ : ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು. ಪರಿಷತ್ತಿನಲ್ಲಿ ಸದಸ್ಯರಾದ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್ಟಿಸಿ, ಮೋಜಿಣಿ ನಕ್ಷೆ, ಇ ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್ ಎಮ್ ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಇಂಡಿಗೊ ಅವ್ಯವಸ್ಥೆ: ಹೊಸ ಪಿಐಎಲ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಇಂಡಿಗೊ ವಿಮಾನ ರದ್ದತಿಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಕೋರಿ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿರುದ್ಧ ತನಿಖೆ ನಡೆಸುವಂತೆ ಕೋರಿ ಎನ್ಜಿಒ ಸೆಂಟರ್ ಫಾರ್ ಅಕೌಂಟೆಬಿಲಿಟಿ ಅಂಡ್ ಸಿಸ್ಟಮ್ಯಾಟಿಕ್ ಚೇಂಜ್ (ಸಿಎಎಸ್ಸಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ಯಾವುದೇ ನಿರ್ದೇಶನಗಳನ್ನು ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಇಂಡಿಗೊ ವಿಮಾನ ಅವ್ಯವಸ್ಥೆ ಕುರಿತ ಪಿಐಎಲ್ ಈಗಾಗಲೇ ಹೈಕೋರ್ಟ್ನಲ್ಲಿ ಬಾಕಿ ಇದೆ. ಅರ್ಜಿದಾರರು ಹೊಸ ಪಿಐಎಲ್ ಸಲ್ಲಿಸುವ ಬದಲು ಆ ವಿಷಯದಲ್ಲಿ ಕಕ್ಷಿದಾರನಾಗಲು ಕೋರಿಕೆ ಸಲ್ಲಿಸಬೇಕಿತ್ತು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠ ಹೇಳಿದೆ. ಪ್ರಸ್ತುತ ಪಿಐಎಲ್ನಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಹಿಂದಿನ ಪಿಐಎಲ್ನಲ್ಲಿ ನ್ಯಾಯಾಲಯ ಈಗಾಗಲೇ ಪರಿಶೀಲಿಸುತ್ತಿದೆ ಎಂದು ಹೈಕೋರ್ಟ್ ಗಮನಿಸಿದೆ.
ಕುಂದಾಪುರದ ಬರ್ನಾಡ್ ಡಿಕೋಸ್ತಾಗೆ ಗೌರವ ಪುರಸ್ಕಾರ
ಕುಂದಾಪುರ, ಡಿ.17: ಕೊಂಕಣಿಯ ಸಾಹಿತಿ ವಾಲೇರಿಯನ್ ಕ್ವಾಡರ್ಸ್ ಇವರ ಆಶಾವಾದಿ ಪ್ರಕಾಶನದ ಬೆಳ್ಳಿ ಹಬ್ಬ ಮತ್ತು ಪಯ್ಣಾರಿ ಸುದ್ದಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ವೇಳೆ, ಕೊಂಕಣಿಯಲ್ಲಿ ಸಾಹಿತ್ಯ, ಸಾಮಾಜಿಕ ಸೇವೆ, ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡಿದವರ ಜೊತೆ ಕುಂದಾಪುರದ ಸಾಹಿತಿ, ಕವಿ, ನಾಟಕಾರ, ಹಾಗೂ ಮಾಧ್ಯಮದ ಸೇವೆಯನ್ನು ಪರಿಗಣಿಸಿ ಬರ್ನಾಡ್ ಡಿಕೋಸ್ತಾ ಅವರನ್ನು ಡಿ.14ರಂದು ಮಂಗಳೂರಿನ ಹಂಪನ್ ಕಟ್ಟೆಯ ಎಂ.ಸಿ.ಸಿ. ಬ್ಯಾಂಕಿನ ಸಭಾಭವನದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಫಾ.ರುಷೇಶ್ ಮಾಡ್ತಾ, ಡೊ.ಜಯವಂತ ನಾಯ್ಕ್ ಶಾಲಿನಿ ವಾಲೆನ್ಸಿಯಾ, ಡೇವಿಡ್ ಡಿಸೋಜ್ ಅಜೆಕಾರ್, ಶೈಲೇಂದ್ರ ಮೆಹ್ತಾ, ಚಾರ್ಲ್ ಲೋಬೊ, ಅ್ಯಂಡ್ರೂ ಎಲ್. ಡಿಕುನ್ಹಾ, ಎಚ್ಚೆಮ್ ಪೆರ್ನಾಲ್ ಫಾ ಚೇತನ್ ಲೋಬೊ, ಮೆಲ್ಟಿನ್ ರೊಡ್ರಿಗಸ್, ಫಾ.ಆಲ್ವಿನ್ ಸೆರಾವೊ, ಡೊ.ಎಡ್ಬರ್ಡ್ ಎಲ್ ನಜ್ರೆತ್, ವಿನ್ಸಿ ಕ್ಹಾಡ್ರಸ್, ಎಚ್. ಆರ್.ಆಳ್ವ, ಎಮ್. ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಜೋನ್ ಪೆರ್ಮನ್ನೂರ್, ವಾಯ್ದೆಟ್ ಜೆ. ಪಿರೇರಾ, ಸಾವ್ರಾಟ್ ಭೊಜೆ, ಕೊನ್ಸೆಪ್ಪಾ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ | ಅಲೆವೂರು ಗ್ರೂಪ್ ಆವಾರ್ಡ್ಗೆ ನಟಿ ಮಾನಸಿ ಆಯ್ಕೆ
ಉಡುಪಿ, ಡಿ.17: ಅಲೆವೂರು ಗ್ರೂಪ್ ಫಾರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2025ನೇ ಸಾಲಿನ ಅಲೆವೂರು ಗ್ರೂಪ್ ಅವಾರ್ಡ್ಗೆ ಭರತನಾಟ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಮಾನಸಿ ಸುಧೀರ್ ಆಯ್ಕೆಯಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಮಾನಸಿ, ಭರತನಾಟ್ಯ ವಿದುಷಿಯಾಗಿದ್ದು, ನೃತ್ಯನಿಕೇತನ ಕೊಡವೂರು ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಡಿ.20ರಂದು ಬೆಳಿಗ್ಗೆ 9.30ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 21ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮಾನಸಿ ಅವರಿಗೆ ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲೆ ಡಾ.ಲೀನಾ ಸಿಕ್ವೆರಾ ಮುಖ್ಯ ಅಥಿತಿಯಾಗಿ ಭಾಗವಹಿಸಲಿರುವರು. ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಅಧ್ಯಕ್ಷತೆ ವಹಿಸಲಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಎ.ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಡ್ನ್ಯೂಸ್: BPL ರೇಷನ್ ಕಾರ್ಡ್ 2.95 ಲಕ್ಷ ಅರ್ಜಿಗಳ ವಿಲೇವಾರಿ: ಕೆಎಚ್ ಮುನಿಯಪ್ಪ; ಕಾರ್ಡ್ ಪಡೆಯುವುದೇಗೆ?
ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ಗಾಗಿ ಬಂದ 3.96 ಲಕ್ಷ ಅರ್ಜಿಗಳಲ್ಲಿ 2.95 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಗಿ, ಜೋಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದ್ದು, 78 ಸಕ್ಕರೆ ಕಾರ್ಖಾನೆಗಳ ಪರಿಶೀಲನೆ ನಡೆದಿದೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಉಡುಪಿ ನಗರಸಭೆ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ
ರಸ್ತೆ ಅಭಿವೃದ್ಧಿ, ಕ್ಲಾಕ್ಟವರ್ ಯೋಜನೆ, ಕಲ್ಸಂಕ ಸಿಗ್ನಲ್ ಸಮಸ್ಯೆ ಪ್ರಸ್ತಾಪ
ಗಾಂಧಿ-ನೆಹರೂ ಸೇರಿ ಸರ್ದಾರ್ ಪಟೇಲರಿಗೆ ಮೋಸ ಮಾಡಿದ್ದರೇ?
ಚರಿತ್ರೆಯಲ್ಲಿ ದಾಖಲಾಗದ ಸುಳ್ಳನ್ನು ಸೇರಿಸಿ ಹೇಳುವುದಷ್ಟೇ ಇತಿಹಾಸದ ತಿರುಚುವಿಕೆ ಎನಿಸಿಕೊಳ್ಳುವುದಿಲ್ಲ. ಇತಿಹಾಸದ ಪುಟಗಳಿಂದ selective factಗಳನ್ನು ಹೆಕ್ಕಿಕೊಂಡು, ಅದಕ್ಕೆ ತಮಗೆ ಬೇಕಾದ ಕಥೆಯನ್ನು ಹೆಣೆದು, ತಮ್ಮ ದುರ್ಲಾಭಕ್ಕಾಗಿ ಜನರನ್ನು ಗೊಂದಲಗೊಳಿಸುವುದೂ ಕೂಡಾ ಇತಿಹಾಸದ ತಿರುಚುವಿಕೆ. ಯಾಕೆಂದರೆ, ಇತಿಹಾಸ ಎನ್ನುವುದು ಕೇವಲ factಗಳಲ್ಲಿ ಮಾತ್ರ ಅಡಗಿರುವುದಿಲ್ಲ, ಆ factನ ಹಿಂದಿರುವ Contextನಲ್ಲಿಯೂ ಅವಿತಿರುತ್ತದೆ. ದೇಹ ಮತ್ತು ಜೀವವಿದ್ದಂತೆ. ದೇಹವನ್ನು ನಾವು ಸುಲಭವಾಗಿ ಕಾಣಬಹುದು. ಆದರೆ ಅದರೊಳಗೆ ಜೀವವಿದೆಯಾ ಎಂದು ಪತ್ತೆಹಚ್ಚಲು ನಮ್ಮ ವಿವೇಚನೆ, ಅಧ್ಯಯನ, ಪರಾಮರ್ಶೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಾಮನ್ಸೆನ್ಸ್ಗಳು ಕೆಲಸ ಮಾಡಬೇಕಾಗುತ್ತದೆ. ಜೀವವಿಲ್ಲದ ದೇಹವೊಂದು ವ್ಯಕ್ತಿ ಎನಿಸಿಕೊಳ್ಳುವುದಿಲ್ಲ; ಶವ ಎನಿಸಿಕೊಳ್ಳುತ್ತದೆ. ಹಾಗಾಗಿ fact ಎಂಬ ದೇಹವನ್ನು Context ಎಂಬ ಜೀವವಿಲ್ಲದೆ ನೋಡಲು ಮುಂದಾಗುವುದು ಸತ್ಯವನ್ನು ನೋಡಿದಂತಲ್ಲ; ಶವದ ಅಂತಿಮ ದರ್ಶನ ಮಾಡಿದಂತೆ. ಸಂಘ ಪರಿವಾರ ವ್ಯವಸ್ಥಿತವಾಗಿ ಇಂತಹ selective factಗಳ ಹಿಂದಿರುವ ಜೀವಂತಿಕೆಯ Contextನ್ನು ಕಿತ್ತೆಸೆದು, ಸುಲಭಕ್ಕೆ ನಿರಾಕರಿಸಲಾಗದಂತಹ ಕಥೆಗಳ ಮೂಲಕ ಚರಿತ್ರೆಯನ್ನು ವಿರೂಪಗೊಳಿಸುತ್ತಿದೆ. ಇದು ಉದ್ದೇಶಪೂರ್ವಕವಾಗಿ, ಜಾಣತನದಿಂದ ಮಾಡುತ್ತಿರುವ ವಿರೂಪೀಕರಣ. ನಮ್ಮ ವಿವೇಚನೆ, ಅಧ್ಯಯನ, ಪರಾಮರ್ಶೆ, ಕಾಮನ್ಸೆನ್ಸ್ಗಳು ಹೆಚ್ಚು ಶ್ರಮಹಾಕಿ ಈ ವಿರೂಪೀಕರಣವನ್ನು ಮುಖಾಮುಖಿಯಾಗಬೇಕಿದೆ. ಸಂಘ ಪರಿವಾರದ ಇಂತಹ ಸುಳ್ಳಿನ ಇತಿಹಾಸದ ಪ್ರಧಾನ ಗುರಿಗಳು ಗಾಂಧಿ ಮತ್ತು ನೆಹರೂ. ಅವರ ಚಾರಿತ್ರ್ಯವಧೆಯಿಂದ ಹಿಡಿದು ಅವರ ಕೊಡುಗೆಗಳ ಅಪವ್ಯಾಖ್ಯಾನದವರೆಗೆ ಎಷ್ಟುಸಾಧ್ಯವೋ ಅಷ್ಟು ವಿರೂಪಗೊಳಿಸಲಾಗುತ್ತಿದೆ. ಪ್ರಧಾನಿ ಹುದ್ದೆಯನ್ನು ತಪ್ಪಿಸಿ ಸರ್ದಾರ್ ಪಟೇಲರಿಗೆ ಅವರಿಬ್ಬರು ವಂಚಿಸಿದರು ಎನ್ನುವ ಸುಳ್ಳಿನ ಕಥೆಯೂ ಇದರಲ್ಲಿ ಒಂದು. ಪ್ರದೇಶ ಕಾಂಗ್ರೆಸ್ ಸಮಿತಿಗಳ ನಾಮನಿರ್ದೇಶನ ಶಿಫಾರಸಿನ fact ಅನ್ನು ಬಳಸಿಕೊಂಡು ಈ ಕಥೆಯನ್ನು ನಿಜದಂತೆ ನಂಬಿಸಲಾಗುತ್ತಿದೆ. ಆ ಸುಳ್ಳಿನ ಸಾರಾಂಶ ಹೀಗಿದೆ: ‘‘ಸ್ವತಂತ್ರ ಭಾರತದ ಪ್ರಧಾನಿ ಯಾರಾಗಬೇಕೆಂದು ಕಾಂಗ್ರೆಸ್ನೊಳಗೆ ಚುನಾವಣೆ ನಡೆದಾಗ, 15 ಪ್ರದೇಶ ಕಾಂಗ್ರೆಸ್ ಸಮಿತಿಗಳ ಪೈಕಿ 12 ಸಮಿತಿಗಳು ಸರ್ದಾರ್ ಪಟೇಲರ ಪರ ಮತ ಹಾಕಿದ್ದವು. ಆದರೆ ಆ ಮತದಾನವನ್ನು ಗಾಂಧಿ Override ಮಾಡಿ, ನೆಹರೂ ಅವರನ್ನು ಪ್ರಧಾನಿಯಾಗಿ ಮಾಡಿದರು.’’ ಇದು ನಿಜವೇ? ಮೊದಲೇ ಹೇಳಿದಂತೆ selective factಗಳನ್ನು ಸೇರಿಸಿ ಹೆಣೆದ ನಾಜೂಕಿನ ಕಥೆ ಇದು. ಹಾಗಾದ್ರೆ ನಿಜ ಸಂಗತಿಯೇನು? ಇಡೀ Context ಸಮೇತ ನೋಡಿದಾಗ ನಮಗೆ ಸತ್ಯದ ಚಿತ್ರಣ ಗೋಚರಿಸುತ್ತದೆ. ಅಸಲಿಗೆ, ಭಾರತದ ಪ್ರಧಾನಿ ಯಾರಾಗಬೇಕೆಂದು ಇಂತಹದ್ದೊಂದು ಮತದಾನ ನಡೆದಿದ್ದೇ ಸುಳ್ಳು. ಇಲ್ಲಿ ಉಲ್ಲೇಖಿಸಲಾಗಿರುವ ಪ್ರದೇಶ ಕಾಂಗ್ರೆಸ್ ಸಮಿತಿಗಳ ಘಟನೆಯು 1946ರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರಾಗಬೇಕು ಎಂಬ ಚರ್ಚೆಗೆ ಸಂಬಂಧಿಸಿದ್ದು. ಆದರೆ ಭಾರತವು ಸ್ವಾತಂತ್ರ್ಯದ ಸನಿಹಕ್ಕೆ ಬಂದು ನಿಂತಿದ್ದರಿಂದ, ಯಾರು ಆಗ ಕಾಂಗ್ರೆಸ್ನ ಅಧ್ಯಕ್ಷರಾಗುತ್ತಾರೋ, ಅವರೇ ಭವಿಷ್ಯದಲ್ಲಿ ಭಾರತದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಹಾಗಾಗಿ ಆ ಆಯ್ಕೆ ಗಮನ ಸೆಳೆದಿದ್ದು ಸುಳ್ಳಲ್ಲ. ಸಾಮಾನ್ಯವಾಗಿ ಕಾಂಗ್ರೆಸ್ನಲ್ಲಿ ಅಧ್ಯಕ್ಷರ ಆಯ್ಕೆಗೆ ಒಂದು ಪ್ರಜಾತಾಂತ್ರಿಕ ಮಾನದಂಡವನ್ನು ಅನುಸರಿಸಿಕೊಂಡು ಬರಲಾಗಿತ್ತು. ಪ್ರದೇಶ ಕಾಂಗ್ರೆಸ್ ಸಮಿತಿಗಳು ನಾಮನಿರ್ದೇಶನ ಶಿಫಾರಸನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ಸಲ್ಲಿಸುತ್ತವೆ. ಆ ಶಿಫಾರಸುಗಳ ಮೇಲೆ ಅಲ್ಲಿ ಚರ್ಚೆ ನಡೆದು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಒಂದುವೇಳೆ, ಅವಿರೋಧ ಆಯ್ಕೆಗೆ ಒಮ್ಮತಕ್ಕೆ ಬರಲಾಗದಿದ್ದರೆ ಆಗ ಅಧಿಕೃತ ಆಂತರಿಕ ಚುನಾವಣೆ ನಡೆಸಿ, ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದು ಚಾಲ್ತಿಯಲ್ಲಿದ್ದ ಪ್ರಕ್ರಿಯೆ. 1946ರಲ್ಲೂ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರ ಆಯ್ಕೆ ಶುರುವಾಗಿತ್ತು. ಆಗ 15 ಸಮಿತಿಗಳ ಪೈಕಿ 12 ಸಮಿತಿಗಳು ಪಟೇಲರ ನಾಮನಿರ್ದೇಶನವನ್ನು ಶಿಫಾರಸು ಮಾಡಿದ್ದವು. ಅದು ಮತದಾನವಾಗಿರಲಿಲ್ಲ; ಪಕ್ಷದ ಆಂತರಿಕ ನಾಮನಿರ್ದೇಶನ ಶಿಫಾರಸು ಮಾತ್ರ. ನೆಹರೂ ಹೆಸರನ್ನು ಯಾವೊಂದು ಸಮಿತಿಯೂ ಶಿಫಾರಸು ಮಾಡಿರಲಿಲ್ಲ. ಇಷ್ಟು ಮಾತ್ರ ಇದು ಸತ್ಯ. ಆದರೆ ಆಯ್ಕೆಯಲ್ಲಿ ಸಮಿತಿಗಳ ಶಿಫಾರಸು ಮಾತ್ರವೇ ಅಂತಿಮವಾಗಿರಲಿಲ್ಲ. ಆ ಶಿಫಾರಸುಗಳನ್ನು ಆಧರಿಸಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಅಲ್ಲಿ ಒಮ್ಮತಕ್ಕೆ ಬರಲಾಗದಿದ್ದರೆ ಚುನಾವಣೆಯೂ ನಡೆಯಬಹುದಿತ್ತು. ಒಂದುವೇಳೆ, ಚುನಾವಣೆ ನಡೆದಿದ್ದರೆ ಪಟೇಲರೇ ಗೆಲ್ಲುತ್ತಿದ್ದರು ಎಂಬುದರಲ್ಲಿ ಅನುಮಾನವಿರಲಿಲ್ಲ. ಯಾಕೆಂದರೆ ಪಕ್ಷದ ತಳಮಟ್ಟದಲ್ಲಿ ಪಟೇಲರಿಗೆ ಉತ್ತಮ ಸಂಪರ್ಕ ಮತ್ತು ಸಂಘಟನಾ ಪ್ರಭಾವವಿತ್ತು. 1945ರ ಪ್ರಾಂತೀಯ ಚುನಾವಣೆಗಳಲ್ಲಿ ಒಟ್ಟು 1,585 ಸ್ಥಾನಗಳ ಪೈಕಿ ಕಾಂಗ್ರೆಸ್ 923 (ಶೇ. 58.23) ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಸರ್ದಾರ್ ಪಟೇಲರ ಸಂಘಟನಾ ಕ್ರಿಯಾಶೀಲತೆ ಪ್ರಧಾನ ಪಾತ್ರ ವಹಿಸಿತ್ತು. ಸ್ವತಃ ನೆಹರೂ ಅವರೇ ‘‘ಕಾಂಗ್ರೆಸ್ ಪಕ್ಷದಲ್ಲಿ ಮತ್ತು ದೇಶದಲ್ಲಿ ಸರ್ದಾರ್ ಪಟೇಲರಿಗೆ ಅಗಾಧವಾದ ಪ್ರಭಾವವಿತ್ತು. ಆ ಪ್ರಭಾವದ ಬಗ್ಗೆ ನನಗೆ ಗೌರವವಿತ್ತು’’ ((Selected Works of Jawaharlal Nehru, Vol. 2) ಎಂದು ಉಲ್ಲೇಖಿಸಿರುವ ಮಾತು ಇದಕ್ಕೆ ಸಾಕ್ಷಿ. ಈಗಾಗಲೇ ತಿಳಿಸಿದಂತೆ ಆ ಬಾರಿಯದ್ದು ಕೇವಲ ಕಾಂಗ್ರೆಸ್ನ ಅಧ್ಯಕ್ಷಗಿರಿ ಮಾತ್ರವಲ್ಲದೆ, ಭವಿಷ್ಯದಲ್ಲಿ ಸ್ವತಂತ್ರ ಭಾರತದ ನಾಯಕತ್ವವನ್ನು ಮುನ್ನಡೆಸುವ ಹೊಣೆಯೂ ಅಧ್ಯಕ್ಷರ ಹೆಗಲೇರಲಿತ್ತಾದ್ದರಿಂದ ಸಹಜವಾಗಿಯೇ ಆಯ್ಕೆಯಲ್ಲಿ ಕಾಂಗ್ರೆಸ್ ತುಂಬಾ ಎಚ್ಚರಿಕೆ ವಹಿಸಿತ್ತು. ಮಹಾತ್ಮಾ ಗಾಂಧಿಯವರ ಪಾತ್ರ ಪ್ರವೇಶವಾಗುವುದೇ ಈ ಹಂತದಲ್ಲಿ. ಗಾಂಧೀಜಿ ಕಾಂಗ್ರೆಸ್ನ ಆಡಳಿತಾತ್ಮಕ ಹುದ್ದೆಯಲ್ಲಿ ಇಲ್ಲದೆ ಹೋದರೂ, ಅವರು ಕಾಂಗ್ರೆಸ್ನ ಆತ್ಮವಾಗಿದ್ದರು. ಸ್ವಾತಂತ್ರ್ಯ ಚಳವಳಿಯ ಪ್ರಧಾನ ಶಕ್ತಿಯಾಗಿದ್ದರು. ಪಟೇಲ್, ನೆಹರೂ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಗಾಂಧಿಯವರ ಮಹತ್ವ, ಮಾರ್ಗದರ್ಶನಗಳನ್ನು ಗೌರವಿಸುತ್ತಿದ್ದರು. ಗಾಂಧಿಯವರ ಬಳಿ ಈ ಪ್ರಸ್ತಾವ ಚರ್ಚೆಗೆ ಬರುತ್ತದೆ. ಬಹುಶಃ, ಈ ಹಿಂದಿನಂತೆ ಅದು ಮತ್ತೊಂದು ಅವಧಿಗೆ ಇನ್ನೋರ್ವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾತ್ರವಾಗಿದ್ದರೆ, ಗಾಂಧೀಜಿಯೂ ಪಟೇಲರ ಹೆಸರನ್ನೇ ಅನುಮೋದಿಸುತ್ತಿದ್ದರೇನೊ; ಆದರೆ ಅದು ಸ್ವತಂತ್ರ ದೇಶದ ಭವಿಷ್ಯವನ್ನು ನಿರ್ಧರಿಸಬಹುದಾದ ಸನ್ನಿವೇಶವಾಗಿತ್ತು. ಆಗ ಅವರು ಪಟೇಲರ ಜೊತೆ ಚರ್ಚಿಸಿ, ಅವರ ಸಮ್ಮತಿಯ ನಂತರವೇ ನೆಹರೂ ಹೆಸರನ್ನು ಶಿಫಾರಸು ಮಾಡುತ್ತಾರೆ. ಇದು ಕೂಡಾ ಶಿಫಾರಸು ಮಾತ್ರವಾಗಿತ್ತು; ಅಂತಿಮ ತೀರ್ಮಾನವಾಗಿರಲಿಲ್ಲ. ಆದರೆ ಗಾಂಧಿಯವರ ಮುನ್ನೋಟದ ಬಗ್ಗೆ ಅರಿವಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅದನ್ನು ಪರಿಗಣಿಸಿ ನೆಹರೂ ಅವರನ್ನು ಅವಿರೋಧ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ. ಅಲ್ಲಿ ಚುನಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಂದೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ನೆಹರೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ಗಾಂಧಿ ಯಾಕೆ ಪಟೇಲರ ಬದಲು ನೆಹರೂ ಹೆಸರನ್ನು ಶಿಫಾರಸು ಮಾಡಿದರು? ಈ ಮಹತ್ವದ ಪ್ರಶ್ನೆಗೆ ದಾಟುವುದಕ್ಕು ಮುನ್ನ, ಮೇಲಿನ ವಿವರಣೆಯಿಂದ ನಾವು ಎರಡು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಪ್ರಧಾನಿ ಹುದ್ದೆಗಾಗಿ ಯಾವುದೇ ಚುನಾವಣೆ ನಡೆದಿರಲಿಲ್ಲ ಮತ್ತು ಗಾಂಧಿಯವರು ಅಂತಹ ಯಾವುದೇ ಮತದಾನದ ತೀರ್ಪನ್ನು ಉಲ್ಲಂಘಿಸಿ ನೆಹರೂ ಅವರನ್ನು ಪ್ರಧಾನಿ ಮಾಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಶಿಫಾರಸುಗಳ ಹಂತದಲ್ಲಿ ತಮ್ಮದೂ ಒಂದು ಶಿಫಾರಸು ಮುಂದಿಟ್ಟಿದ್ದರಷ್ಟೇ. ಸರಿ ಹಾಗಾದರೆ, ಗಾಂಧಿ ಯಾಕೆ ನೆಹರೂ ಹೆಸರು ತೆಗೆದುಕೊಂಡರು? ಇದರಿಂದ ಪಟೇಲರಿಗೆ ಬೇಸರವಾಗಿರಲಿಲ್ಲವೇ? ‘Collected Works of Mahatma Gandhi’ ಕೃತಿಯಲ್ಲಿ ‘‘ಮುಂಬರುವ ಸವಾಲಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ನಾಯಕತ್ವದ ಭಾರವನ್ನು ಹೊರಬಹುದಾದ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡಾಗ ನೆಹರೂ ನನ್ನ ಆಯ್ಕೆಯಾಗಿದ್ದರು’’ ಎಂದು ಉಲ್ಲೇಖವಾಗಿರುವ ಗಾಂಧಿಯವರ ಮಾತು ಈ ಪ್ರಶ್ನೆಗೆ ಉತ್ತರವಾಗುತ್ತದೆ. ಸ್ವತಂತ್ರಗೊಂಡ ನಂತರ ಭಾರತದ ಮುಂದೆ ಎರಡು ಸವಾಲುಗಳನ್ನು ಗಾಂಧಿ ಮುಂಗಂಡಿದ್ದರು. ದೇಶವನ್ನು ಪ್ರಗತಿಶೀಲ ದಿಕ್ಕಿನಲ್ಲಿ ಕೊಂಡೊಯ್ಯುವ ಆಂತರಿಕ ಆಡಳಿತಾತ್ಮಕ ಸವಾಲು ಮೊದಲನೆಯದ್ದಾದರೆ, ಜಗತ್ತಿನ ಇತರ ದೇಶಗಳ ಮುಂದೆ ಭಾರತಕ್ಕೆ ತನ್ನದೇ ಆದ ಗೌರವಪೂರ್ಣ ಅಸ್ಮಿತೆಯನ್ನು ರೂಪಿಸಿಕೊಳ್ಳುವುದು ಮತ್ತೊಂದು ಸವಾಲು. ಆಡಳಿತ ಸೂಕ್ಷ್ಮತೆಗಳ ಜೊತೆಗೆ, ಅಂತರ್ರಾಷ್ಟ್ರೀಯ approach ಕೂಡಾ ಭಾರತದ ನಾಯಕತ್ವಕ್ಕೆ ಬೇಕಾಗಿತ್ತು. ಆಗ ಮಾತ್ರ, ವಿಶ್ವಯುದ್ಧಗಳಿಂದ ಜರ್ಜರಿತವಾದ ಜಗತ್ತಿಗೆ ಶಾಂತಿ-ಸಹಕಾರದ ಹೊಸ ಮಾದರಿಯನ್ನು ಭಾರತ ಮುಂದಿಡಬಹುದು ಮತ್ತು ಆ ಮೂಲಕ ತೃತೀಯ ಶಕ್ತಿಯಾಗಿ ತನ್ನ ಛಾಪು ಮೂಡಿಸಬಹುದು ಎಂಬುದು ಗಾಂಧಿಯವರ ದೂರದೃಷ್ಟಿ. ಆವತ್ತಿನ ಸಮಕಾಲೀನ ಅಂತರ್ರಾಷ್ಟ್ರೀಯ ನಾಯಕರ ಜೊತೆ ಉತ್ತಮ ಒಡನಾಟ, ವಿದೇಶಿ ನೀತಿಗಳ ಅಪಾರ ಅರಿವು, ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದ ನೆಹರೂ ಅವರೇ ಉತ್ತಮ ಆಯ್ಕೆಯಾಗಿ ಗಾಂಧಿಯವರಿಗೆ ಗೋಚರಿಸಿದ್ದರ ಬಗ್ಗೆ ಸ್ವತಃ ಪಟೇಲರಿಗೂ ಸಮ್ಮತಿಯಿತ್ತು. ಸರ್ದಾರ್ ಪಟೇಲರಿಗೆ ಗಾಂಧೀಜಿಯ ವ್ಯಕ್ತಿತ್ವದ ಮೇಲೆ ಮಾತ್ರವಲ್ಲದೆ, ಅವರ ಮುನ್ನೋಟದ ಮೇಲೆಯೂ ಸಾಕಷ್ಟು ಗೌರವವಿತ್ತು. ‘‘ನಾನು ಪ್ರದೇಶ ಸಮಿತಿಗಳ ಬೆಂಬಲ ಹೊಂದಿರಬಹುದು, ಒಂದುವೇಳೆ, ಬಾಪೂ ಬೇರೆಯದನ್ನೇ ಇಚ್ಛಿಸಿದರೆ ನಾನು ಆಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತೇನೆ’’ ಎಂಬ ಅವರ ಮಾತು ಇದಕ್ಕೆ ಸಾಕ್ಷಿ. ಗಾಂಧಿಯವರು ಪಟೇಲರ ಜೊತೆ ಚರ್ಚಿಸಿ, ಅವರ ಸಮ್ಮತಿಯ ನಂತರವೇ ನೆಹರೂ ಹೆಸರನ್ನು ಶಿಫಾರಸು ಮಾಡಿದ್ದರು. ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ತಮ್ಮ ‘India wins Freedom’ ಕೃತಿಯಲ್ಲಿ ‘‘ಗಾಂಧಿಯವರ ಅಭಿಪ್ರಾಯವನ್ನು ಗೌರವಿಸಿ, ಸ್ವತಃ ಪಟೇಲರು ತಮ್ಮ ನಾಮನಿರ್ದೇಶನವನ್ನು ಪ್ರತಿಪಾದಿಸಲು ಮುಂದಾಗಲಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ದೇಶದ ಹಿತದೃಷ್ಟಿಯ ಎದುರು ಅವರು ಯಾವತ್ತೂ ತಮ್ಮ ವೈಯಕ್ತಿಕ ವಿಚಾರಗಳನ್ನು ಪರಿಗಣಿಸಿದವರಲ್ಲ’’ ಎಂದು ಅಭಿಪ್ರಾಯಪಟ್ಟಿರುವುದು ಪಟೇಲರ ಸಮ್ಮತಿಗೆ ಸಾಕ್ಷಿ. ಇನ್ನು ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಕೂಡಾ ತಮ್ಮ ‘India after Gandhi’ ಕೃತಿಯಲ್ಲಿ ‘‘ಅವರ ಬಯಕೆಯನ್ನು ಕಡೆಗಣಿಸಿ, ಪ್ರಧಾನಿ ಹುದ್ದೆಯಿಂದ ಪಟೇಲರನ್ನು ವಂಚಿಸಲಾಯಿತು ಎಂದು ವಾದಿಸುವುದು ಇತಿಹಾಸವನ್ನು ತಿರುಗುಮುರುಗಾಗಿಸಿದಂತೆ’’ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದುರ್ಗಾದಾಸ್ ಅವರು ಸಂಪಾದಿಸಿರುವ ‘Sardar Patel’s Correspondence Vol. 6’ ಕೃತಿಯಲ್ಲಿ ಉಲ್ಲೇಖವಾಗಿರುವ ಪಟೇಲರ 1948ರ ಪತ್ರವೊಂದರಲ್ಲಿ ‘‘ನೆಹರೂ ನನ್ನ ನಾಯಕ. ನಾನದನ್ನು ಒಪ್ಪಿ ಸ್ವೀಕರಿಸಿದ್ದೇನೆ’’ ಎಂದು ಅವರೇ ಬರೆದುಕೊಂಡಿದ್ದಾರೆ. ‘Collected Works of Sardar Vallabhbhai Patel, Vol. 10’’ ಕೃತಿಯಲ್ಲಿ ಉಲ್ಲೇಖವಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಪಟೇಲರು ‘‘ನನ್ನ ಮತ್ತು ಪಂಡಿತ್ ನೆಹರೂ ಅವರ ನಡುವೆ ಯಾವುದೇ ರೀತಿಯ ಮನಸ್ತಾಪವಿಲ್ಲ. ದೇಶದ ಸೇವೆಗೆ ಇಬ್ಬರೂ ಸಹಚರರಾಗಿ ದುಡಿಯುತ್ತಿದ್ದೇವೆ’’ ಎಂದು ಹೇಳಿದ್ದರು. ಗಾಂಧಿಯವರ ನೆಹರೂ ಆಯ್ಕೆಗೆ ಇತಿಹಾಸಕಾರರು ಇನ್ನೊಂದು ಆಯಾಮದ ವಿಶ್ಲೇಷಣೆಯನ್ನೂ ಮುಂದಿಡುತ್ತಾರೆ. ಗಾಂಧಿಯವರಾಗಲಿ ಅಥವಾ ಬೇರಾವುದೇ ಕಾಂಗ್ರೆಸ್ ನಾಯಕರಾಗಲಿ ಇದನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ ‘‘ಮುಂಬರುವ ಸವಾಲಿನ ದಿನಗಳಲ್ಲಿ ದೇಶದ ಭವಿಷ್ಯ ಮುಖ್ಯ’’ ಎಂಬ ಗಾಂಧಿಯವರ ಒತ್ತಾಸೆಗೆ ಈ ವಿಶ್ಲೇಷಣೆ ಪೂರಕವಾಗಿದೆ. ಅದು ಪಟೇಲರ ವಯಸ್ಸು ಮತ್ತು ಆರೋಗ್ಯ. ಬ್ರಿಟಿಷರ ನಿರಂತರ ವಸಾಹತುಶಾಹಿ ಶೋಷಣೆ ಮತ್ತು ಜಾತಿವ್ಯವಸ್ಥೆಯ ಸಾಮಾಜಿಕ ಅಸಮಾನತೆಯಿಂದಾಗಿ ತಾಂಡವವಾಡುತ್ತಿದ್ದ ಬಡತನದ ಜೊತೆಗೆ, ಅಷ್ಟೊತ್ತಿಗಾಗಲೇ ಮುನ್ನೆಲೆಗೆ ಬಂದಿದ್ದ ದೇಶವಿಭಜನೆ, ಕೋಮುಗಲಭೆಗಳಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವುದೆಂದರೆ ದೂರದೃಷ್ಟಿಯ ಯೋಜನೆಯಾಗಿತ್ತು. ಅದಕ್ಕಾಗಿ ದೀರ್ಘಕಾಲೀನ ಉತ್ಸಾಹಿ ನಾಯಕತ್ವ ಬೇಕಾಗಿತ್ತು. 1946ರ ವೇಳೆಗಾಗಲೇ ಸರ್ದಾರ್ ಪಟೇಲರಿಗೆ 71 ವರ್ಷ ವಯಸ್ಸಾಗಿತ್ತು. ವಯಸ್ಸಿಗಿಂತ ಮುಖ್ಯವಾಗಿ, ನಿರಂತರ ಸ್ವಾತಂತ್ರ್ಯ ಚಳವಳಿಯಿಂದಾಗಿ ಪಟೇಲರ ದೇಹಸ್ಥಿತಿ ವಯಸ್ಸನ್ನು ಮೀರಿ ಕೃಶವಾಗಿತ್ತು. 1946ರಲ್ಲಿ ಅವರಿಗೆ ಮೊದಲ ಸಲ ಹೃದಯಾಘಾತವಾಗಿತ್ತು. ಇತಿಹಾಸಕಾರ ರಾಜಮೋಹನ್ ಗಾಂಧಿಯವರು ತಮ್ಮ ‘Patel : A Life’ ಕೃತಿಯಲ್ಲಿ ‘‘1946ರ ವೇಳೆಗಾಗಲೇ ಪಟೇಲರ ಹೃದಯ ದುರ್ಬಲಗೊಂಡಿತ್ತು. ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಅವರದನ್ನು ಗಂಭೀರವಾಗಿ ಪರಿಗಣಿಸಲಿಲ್ಲ’’ ಎಂದು ಉಲ್ಲೇಖಿಸಿದ್ದಾರೆ. ಅಧಿಕಾರ ಹಂಚಿಕೆಯ ಕ್ಯಾಬಿನೆಟ್ ಮಿಷನ್ ಚರ್ಚೆ, ದೇಶ ವಿಭಜನೆಯ ಒತ್ತಡ, ಭುಗಿಲೆದ್ದ ಕೋಮುಗಲಭೆಗಳು, ನಿರಾಶ್ರಿತ ಸಮಸ್ಯೆಗಳು ಅವರಿಗೆ ವಿಶ್ರಾಂತಿಯ ಆಸ್ಪದ ಕೊಡಲಿಲ್ಲ. Mountbatten Papers: Official papers: India, 1947 ದಾಖಲೆಗಳಲ್ಲಿ ಸ್ವತಃ ಲಾರ್ಡ್ ಮೌಂಟ್ಬ್ಯಾಟನ್ ‘‘ಅಧಿಕಾರ ಹಂಚಿಕೆಯ ನಿರ್ಣಾಯಕ ಕೊನೇ ಘಟ್ಟದಲ್ಲಿ ಪಟೇಲರು ವಿಪರೀತ ಶ್ರಮಪಟ್ಟು ತಮ್ಮನ್ನು ತಾವು ದಂಡಿಸಿಕೊಂಡರು’’ ಎಂದು ಉಲ್ಲೇಖಿಸಿದ್ದಾರೆ. ಸ್ವಾತಂತ್ರ್ಯ ಸಿಗುವ ವೇಳೆಗಾಗಲೇ ಹಲವು ಬಾರಿ ಲಘು ಹೃದಯಾಘಾತವಾಗಿದ್ದ ಅವರಿಗೆ 1948ರ ನವೆಂಬರ್ನಲ್ಲಿ ಗಂಭೀರ ಹೃದಯಾಘಾತವಾಗುತ್ತದೆ. ಆಗಂತೂ ವೈದ್ಯರು, ಇನ್ನೊಂದು ಹೃದಯಾಘಾತವಾದರೆ ನೀವು ಬದುಕುಳಿಯುವುದೇ ಕಷ್ಟ ಎಂದು ಎಚ್ಚರಿಸುತ್ತಾರೆ. ‘‘ಸರ್ದಾರ್ ಅವರ ಆರೋಗ್ಯದ ಬಗ್ಗೆ ನನಗೆ ಅತೀವ ಆತಂಕವಾಗುತ್ತಿದೆ. ಈ ವಯಸ್ಸಿನ ವ್ಯಕ್ತಿಯೊಬ್ಬರು ಹೊರಬಾರದಷ್ಟು ಹೊರೆಯನ್ನು ಅವರು ಹೊರುತ್ತಿದ್ದಾರೆ’’ ಎಂದು ನೆಹರೂ ಕಳವಳ (Selected Works of Jawaharlal Nehru) ಹೊರಹಾಕಿ ದ್ದುಂಟು. ಕೊನೆಗೆ 1950ರಲ್ಲಿ, ಅಂದರೆ ಸ್ವಾತಂತ್ರ್ಯ ಲಭಿಸಿ ಕೇವಲ ಮೂರು ವರ್ಷಗಳಲ್ಲಿ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಆಗಷ್ಟೇ ಸ್ವಾತಂತ್ರ್ಯ ಪಡೆದು ಬಡತನ, ಹಸಿವು, ಕೋಮುಗಲಭೆ, ಗಡಿವಿವಾದ, ಅಂತರ್ರಾಷ್ಟ್ರೀಯ ನೀತಿಗಳ ಚರ್ಚೆ, ಆಂತರಿಕ ಆಡಳಿತ ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿದ್ದ ದೇಶವೊಂದು ಹಠಾತ್ತನೆ ತನ್ನ ನಾಯಕನನ್ನು ಕಳೆದುಕೊಂಡು ಅನಾಥಪ್ರಜ್ಞೆಗೆ ಜಾರಿದ್ದರೆ ದೇಶದ ಪರಿಸ್ಥಿತಿಯನ್ನು ಆ ಕಾಲಘಟ್ಟಕ್ಕೆ ಹೋಗಿ ಒಮ್ಮೆ ಊಹಿಸಿಕೊಂಡು ನೋಡಿ. ಆದರೆ ಈ ಕಾರಣಕ್ಕಾಗಿಯೇ ಗಾಂಧೀಜಿಯವರು, ಪಟೇಲರಗಿಂತ ಹದಿನಾಲ್ಕು ವರ್ಷ ಕಿರಿಯರಾದ ನೆಹರೂ ಅವರನ್ನು ಶಿಫಾರಸು ಮಾಡಿದರು ಎಂದು ಹೇಳಲಾಗದು. ಯಾಕೆಂದರೆ ಎಲ್ಲಿಯೂ ಈ ಬಗ್ಗೆ ಚಾರಿತ್ರಿಕ ಉಲ್ಲೇಖಗಳಿಲ್ಲ. ಆಂತರಿಕ ಆಡಳಿತ ನಿರ್ವಹಣೆಯ ಜೊತೆಗೆ ದೇಶಕ್ಕೆ ಒಂದು ಪ್ರಗತಿಶೀಲ, ವೈಜ್ಞಾನಿಕ ದಿಕ್ಕನ್ನು ತೋರಿಸಿಕೊಡುವುದು ಮತ್ತು ಜಾಗತಿಕ ಅಸ್ಮಿತೆಯನ್ನು ಗುರುತಿಸುವುದು ಗಾಂಧಿಯವರ ಶಿಫಾರಸಿನ ಆಶಯವಾಗಿತ್ತು. ನೆಹರೂ ಅವರ ಜಾಗತಿಕ ದೂರದೃಷ್ಟಿಯ ಜೊತೆಗೆ ಪಟೇಲರ ಆಡಳಿತಾತ್ಮಕ ದೃಢತೆಗಳು ದೇಶವನ್ನು ನಿರ್ಮಿಸಲೆಂಬ ಕಾರಣಕ್ಕೆ ಅವರನ್ನು ಉಪಪ್ರಧಾನಿಯಾಗಿ ಕಾಂಗ್ರೆಸ್ ಆರಿಸಿಕೊಂಡಿತು. ಸಂಸ್ಥಾನಗಳ ಏಕೀಕರಣದ ಮೂಲಕ ಪಟೇಲರು ಅದನ್ನು ರುಜುವಾತು ಪಡಿಸಿದರೆ, ಆಲಿಪ್ತ ನೀತಿ ಹಾಗೂ ಪಂಚವಾರ್ಷಿಕ ಯೋಜನೆಗಳ ಮೂಲಕ ನೆಹರೂ ಅವರು ಗಾಂಧೀಜಿಯ ಕನಸನ್ನು ಸಾಕಾರಗೊಳಿಸಿದರು. ‘‘ಸರ್ದಾರರು ಆಡಳಿತದ ಭಾರೀ ಒತ್ತಡಗಳನ್ನು ನಿಭಾಯಿಸಿದರೆ, ಪಂಡಿತ್ಜೀ ದೇಶದ ವರ್ಚಸ್ಸನ್ನು ಹಿಗ್ಗಿಸಿದರು’’ ಎಂಬ ಬಾಬು ರಾಜೇಂದ್ರ ಪ್ರಸಾದ್ ಅವರ ಮಾತು ಇದಕ್ಕೆ ಸಾಕ್ಷಿ.
ಇಮ್ರಾನ್ ಖಾನ್ ಗೆ ಜೈಲಿನಲ್ಲಿ ಮಾನಸಿಕ ಚಿತ್ರಹಿಂಸೆ: ಡೆತ್ಸೆಲ್ನಲ್ಲಿ ಕೊಳೆಯುತ್ತಿದ್ದಾರಾ ಪಾಕ್ ಮಾಜಿ ಪ್ರಧಾನಿ?
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಮಾನಸಿಕ ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಅವರ ಪುತ್ರರು ಆರೋಪಿಸಿದ್ದಾರೆ. ಅವರಿಗೆ ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ, ಮಾನವ ಸಂಪರ್ಕವೂ ಇಲ್ಲದೆ ಏಕಾಂಗಿಯಾಗಿಡಲಾಗಿದೆ.ಅವರನ್ನು ಜೈಲಿನಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಜೊತೆಗೆ ಅವರ ಕೋಣೆ ಡೆತ್ ಸೆಲ್ನಂತಿದ್ದು, ಅದರಲ್ಲೇ ದಿನವಿಡೀ ಕಳೆಯುವ ಪರಿಸ್ಥಿತಿ ಇದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆದೂ ಅವರನ್ನು ನೋಡಲಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ಕೋಲಾಹಲ, ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ, ಕ್ಷಮೆಗೆ ಬಿಜೆಪಿ ಬಿಗಿ ಪಟ್ಟು
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಈ ವರ್ಷದಲ್ಲಿ ಫೆಬ್ರವರಿ ಮತ್ತು ಮಾರ್ಚ್ನಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 5 ಸಾವಿರ ಕೋಟಿ ರೂ. ಹಣ ನೀಡಿರುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿ ಕೊಟ್ಟಿದ್ದರು. ಆದರೆ, ಇದು ಸುಳ್ಳು ಎಂದು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಇದೇ ವಿಚಾರವಾಗಿ ಮಾತನಾಡಿ ಹೆಬ್ಬಾಳ್ಕರ್ ಅವರು ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಬಳಿ ಮಾತನಾಡುವೆ ಎಂದು ಹೇಳಿದ್ದಾರೆ.
ಕ್ರಾಂತಿಕಾರಿ ಚಟುವಟಿಕೆಯ ಮುಂಚೂಣಿಯಲ್ಲಿ ಬಾಲಕಿಯರು: ಇವರಾರೂ ಕ್ಷಮೆ ಯಾಚಿಸಲಿಲ್ಲ!
► ಬ್ರಿಟಿಷ್ ಅಧಿಕಾರಿಯ ಹತ್ಯೆಗೈದಿದ್ದ 14ರ ಹರೆಯದ ಸುನೀತಿ ಚೌಧರಿ-16ರ ಶಾಂತಿ ಘೋಷ್ ► ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
ಭಾರತದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಇರುವ ಕಾನೂನುಗಳು, ದೌರ್ಜನ್ಯದ ವಿಧಗಳು, ರಕ್ಷಣೆ ಪಡೆಯುವ ವಿಧಾನ, ಅಧಿಕಾರಿಗಳ ಪಾತ್ರ, ನ್ಯಾಯಾಲಯದಿಂದ ಸಿಗುವ ಪರಿಹಾರಗಳು ಮತ್ತು ಸಹಾಯವಾಣಿ ಸಂಖ್ಯೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಕಾನೂನಿನ ನೆರವು ಪಡೆಯಬಹುದು. ಸಹಾಯಕ್ಕಾಗಿ ಹಲವು ಕೇಂದ್ರಗಳು ಸಿದ್ಧವಾಗಿವೆ. ಕರ್ನಾಟಕದಲ್ಲಿ ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯದಿಂದ ರಕ್ಷಿಸಲು ಸಹಾಯ ಕೇಂದ್ರಗಳನ್ನು ತೆರೆಯಾಗಿದೆ.
US ಕೇಂದ್ರಬಿಂದುವಾಗಿಸಿ, ಡಿ.19ರಂದು ಪ್ರಬಲ ’ರಾಜಕೀಯ ಭೂಕಂಪ’, ಮೋದಿ ಸರ್ಕಾರದ ಪತನ : ಸಂಜಯ್ ರಾವತ್
Modi Government Will Collapse : ಇನ್ನೆರಡು ದಿನಗಳಲ್ಲಿ ಪ್ರಬಲ ರಾಜಕೀಯ ಸಂಭವಿಸಲಿದ್ದು, ನರೇಂದ್ರ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಶಿವಸೇನೆಯ್ ಉದ್ದವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ನೀಡಿದ್ದರು. ಹೆಚ್ಚಿನ ಮಾಹಿತಿಯನ್ನು ನೀಡಲು, ರಾವತ್ ನಿರಾಕರಿಸಿದ್ದಾರೆ.
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಬುಧವಾರ ನಿರಾಕರಿಸಿದ್ದಾರೆ. “ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಾನು ಯಾಕೆ ಕ್ಷಮೆಯಾಚಿಸಬೇಕು? ಸಂವಿಧಾನ ನನಗೆ ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ನೀಡಿದೆ” ಎಂದು ಹೇಳಿದ್ದಾರೆ. ಮಂಗಳವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, “ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ಜನರು ಒಪ್ಪಿಕೊಂಡರೂ ಇಲ್ಲದಿದ್ದರೂ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ ಪಾಕಿಸ್ತಾನ ಅದನ್ನು ಹೊಡೆದುರುಳಿಸುವ ಸಾಧ್ಯತೆ ಇತ್ತು ಎಂದು ಹೇಳಿದ್ದರು. ಪೃಥ್ವಿರಾಜ್ ಚವಾಣ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಕಾಂಗ್ರೆಸ್ ಪಕ್ಷ ಭಾರತೀಯ ಸಶಸ್ತ್ರ ಪಡೆಗಳನ್ನು ಪದೇ ಪದೇ ಅಗೌರವಿಸುತ್ತಿದೆ ಎಂದು ಆರೋಪಿಸಿದ್ದರು.
ಢಾಕಾ ರಾಯಭಾರ ಕಚೇರಿಗೆ ಬೆದರಿಕೆ| ಬಾಂಗ್ಲಾದೇಶದ ಹೈಕಮಿಷನರ್ಗೆ ಭಾರತ ಸಮನ್ಸ್
ಹೊಸದಿಲ್ಲಿ: ಇತ್ತೀಚೆಗೆ ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆದರಿಕೆ ಹಿನ್ನೆಲೆ ಹೈಕಮಿಷನ್ನ ಭದ್ರತೆಯ ಬಗ್ಗೆ ಕಳವಳವನ್ನು ತಿಳಿಸಲು ಭಾರತ ಬುಧವಾರ ಬಾಂಗ್ಲಾದೇಶದ ಹೈಕಮಿಷನರ್ಗೆ ಸಮನ್ಸ್ ನೀಡಿರುವ ಬಗ್ಗೆ ANI ವರದಿ ಮಾಡಿದೆ. ಸರಕಾರ ಭಾರತೀಯ ರಾಯಭಾರ ಕಚೇರಿಗೆ ಬಂದಿರುವ ಬೆದರಿಕೆಯ ನಿಖರ ಸ್ವರೂಪದ ಬಗ್ಗೆ ಬಹಿರಂಗಪಡಿಸಿಲ್ಲ. ಈಶಾನ್ಯ ರಾಜ್ಯಗಳನ್ನು ಉಲ್ಲೇಖಿಸಿ ಬೆದರಿಕೆ ಹಾಕಿದ ಬೆನ್ನಲ್ಲೆ ಬಾಂಗ್ಲಾದೇಶದ ಹೈಕಮಿಷನರ್ ಎಂ ರಿಯಾಝ್ ಹಮೀದುಲ್ಲಾ ಅವರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.
ಬಳ್ಳಾರಿ | ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಬಳ್ಳಾರಿ: ತಾಲ್ಲೂಕಿನ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ವಿರೋಧಿಸಿ ಗ್ರಾಮಸ್ಥರು ಮಂಗಳವಾರ ಮಧ್ಯೆ ರಾತ್ರಿ 1ಗಂಟೆಗೆ ಪ್ರತಿಭಟನೆ ನಡೆಸಿದ್ದಾರೆ. ರೂಪ ಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಗೋಳು ಕೇಳುವವರಿಲ್ಲ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮತ್ತು ಮೆಡಿಸಿನ್ ಸಿಗದೇ ರೋಗಿಗಳು ಪರದಾಟ ಸಾಮಾನ್ಯವಾಗಿದೆ. ಆಂಬ್ಯುಲೆನ್ಸ್ ಇಲ್ಲ, ಗರ್ಭಿಣಿ ಸ್ತ್ರೀಯರಿಗೆ ಸರಿಯಾದ ಚಿಕಿತ್ಸೆ ಇಲ್ಲ. ಆಸ್ಪತ್ರೆಯಲ್ಲಿ ಸಿಬ್ಬಂದಿ ಪ್ರತಿಯೊಂದಕ್ಕೂ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರ ಸುತ್ತಮುತ್ತಲಿನ 6 ಹಳ್ಳಿಗಳ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಗೆ ಬಹಳಷ್ಟು ರೋಗಿಗಳು ಚಿಕಿತ್ಸೆ ಅರಸಿ ಬರುತ್ತಾರೆ. ಬಂದ ರೋಗಿಗಳಿಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳಕ್ಕೆ ಡಿಹೆಚ್ ಓ ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಪ್ರತಿಭಟನೆಯನ್ನು ನಡೆಸಿದರು. ಬೆಳಿಗ್ಗೆ 10ಗಂಟೆಗೆ ಸ್ಥಳಕ್ಕೆ ಆಗಮಿಸಿದ ಡಿಹೆಚ್ ಓ ಅವರಿಗೆ ಸ್ಥಳೀಯರು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಯುವತಿಯೊಬ್ಬಳು ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಪದೇ ಪದೇ ಕರೆ ಮಾಡಿ, ಹೂಗುಚ್ಛ, ರಕ್ತದಲ್ಲಿ ಪ್ರೇಮ ಪತ್ರ ನೀಡಿದ್ದಾಳೆ. ಸಚಿವಾಲಯದಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ರೋಸಿ ಹೋದ ಇನ್ಸ್ ಪೆಕ್ಟರ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಳ್ಳಾರಿಗೆ ಮಲತಾಯಿ ಧೋರಣೆ ಅನುಸರಣೆ ಸರಿಯಲ್ಲ : ಶಾಸಕ ನಾರಾ ಭರತ್ ರೆಡ್ಡಿ
ಬೆಳಗಾವಿ(ಸುವರ್ಣಸೌಧ ): ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಬದಲಾಗಿ ಉದ್ಯೋಗ ಅರಸಿ ಯುವಕರು ದೂರದ ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಅನ್ಯ ರಾಜ್ಯದವರು ಇಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಕೂಡ ಬಳ್ಳಾರಿ ಜಿಲ್ಲೆಗೆ ಹಲವು ವಿಷಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲವೆಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಸರ್ಕಾರಿ ಅಧಿಕಾರಿಗಳು ಗ್ರೂಪ್ - ಎ ಅಡಿ ಶೇ.65ರಷ್ಟು ಉದ್ಯೋಗಾವಕಾಶ ನೀಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಗ್ರೂಪ್ - ಬಿ ನಲ್ಲಿ ಶೇ.80, ಗ್ರೂಪ್ - ಸಿ ಮತ್ತು ಡಿ-ನಲ್ಲಿ ಶೇ.100 ರಷ್ಟು ಉದ್ಯೋಗ ನೀಡಿರುವುದಾಗಿ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ಬೆಂಗಳೂರಿನ ಯಾವುದೇ ಗಲ್ಲಿಗೆ ಹೋದರೂ ನಮ್ಮ ಬಳ್ಳಾರಿ ಜಿಲ್ಲೆಯ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುವುದನ್ನು ಕಾಣಬಹುದು. ನಾನು ಬೆಂಗಳೂರಿಗೆ ಹೋದಾಗ ಅಣ್ಣ, ನಾನು ನಿಮ್ಮ ಕ್ಷೇತ್ರದವನು, ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದಿದ್ದೇನೆ ಎನ್ನುತ್ತಾರೆ. ಇದು ನನಗೆ ನಿಜಕ್ಕೂ ಅಳು ತರಿಸುವ ವಿಚಾರ ಎಂದು ತಿಳಿಸಿದರು. ಬೆಂಗಳೂರಿನಂತಹ ಮಹಾನಗರಗಳಲ್ಲಿ ನಮ್ಮ ಜಿಲ್ಲೆಯ ಯುವಕರು ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ನಮ್ಮ ಬಳ್ಳಾರಿ ಜಿಲ್ಲೆಯ ಭೂಮಿ, ನೆಲ, ನೀರು ಇತ್ಯಾದಿ ಭೌಗೋಳಿಕ ಸಂಪನ್ಮೂಲ ಬಳಸಿಕೊಂಡು ಸ್ಥಾಪನೆಯಾದ ಕೈಗಾರಿಕೆಗಳು ಅನ್ಯ ರಾಜ್ಯದ ಯುವಕರಿಗೆ ಪ್ರಾಧಾನ್ಯತೆ ನೀಡುತ್ತಿವೆ. 1 ಸಾವಿರ ಉದ್ಯೋಗಗಳಲ್ಲಿ ನೇರ ನೇಮಕಾತಿಯನ್ನು 100 ಯುವಕರಿಗೆ ನೀಡಿದರೆ, ಉಳಿದ ಉದ್ಯೋಗಗಳು ಗುತ್ತಿಗೆ ಆಧಾರದ ಮೇಲೆ ನೇಮಕವಾಗುತ್ತಿವೆ. ಧೂಳು ತಿಂದು ಅನಾರೋಗ್ಯಕ್ಕೆ ಈಡಾಗುವವರು ನಾವುಗಳಾದರೆ, ಕೈಗಾರಿಕೆ ಸ್ಥಾಪಿಸಿ ಜನರನ್ನು ಗೋಳು ಹೊಯ್ದುಕೊಳ್ಳುವುದು ಉದ್ಯಮಿಗಳ ಕೆಲಸವಾಗಿದೆ. ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾದರೆ ಸದನದಲ್ಲಿ ಯಾರೂ ಧ್ವನಿಯಾಗುವುದಿಲ್ಲ. ಅದೇ ಬೆಂಗಳೂರು-ಮೈಸೂರು ಭಾಗದಲ್ಲಿ ಅನ್ಯಾಯವಾದರೆ ಇಡೀ ಸದನವೇ ಕೋಲಾಹಲಗೊಳ್ಳುತ್ತದೆ. ಈ ತಾರತಮ್ಯ ಬಿಡಬೇಕು. ಯುವ ಜನತೆಗೆ ಅನ್ಯಾಯವಾಗಲು ಬಿಡಬಾರದು. ಎಲ್ಲರಿಗೂ ಉದ್ಯೋಗಾವಕಾಶಗಳು ಲಭಿಸಬೇಕು. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಜೆಸ್ಕಾಂ ನಿಂದ ಅದಾಲತ್ ನಡೆಸಿ : ನನ್ನ ಕ್ಷೇತ್ರದಲ್ಲಿ ಶೇ.90 ರಷ್ಟು ಸ್ಲಂ ಪ್ರದೇಶವಿದೆ. ಇಲ್ಲಿ ವಾಸಿಸುವ ಜನರಿಗೆ ಕನಿಷ್ಟ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗದ ಸ್ಥಿತಿ ಇತ್ತು. ಅಧಿಕಾರಿಗಳು ವಿದ್ಯುತ್ ಬಿಲ್ ಗೆ ಬಡ್ಡಿ, ಚಕ್ರಬಡ್ಡಿ ಹಾಕಿದ್ದರಿಂದ ಮನೆ ಮನೆಗೆ 70 ಸಾವಿರ ರೂ. ನಿಂದ 80 ಸಾವಿರ ರೂ.ವರೆಗೆ ವಿದ್ಯುತ್ ಬಿಲ್ ನೀಡಿ, ಅದನ್ನು ಪಾವತಿಸುವಂತೆ ಒತ್ತಡ ತರಲಾಗುತ್ತಿದೆ. ಸ್ಲಂ ನಲ್ಲಿ ವಾಸಿಸುವ ಬಡವರು ಅಷ್ಟೊಂದು ದೊಡ್ಡ ಮೊತ್ತ ಹಣ ಇರುವ ಬಿಲ್ ಪಾವತಿಸುವುದು ಹೇಗೆ ಸಾಧ್ಯ? ಎಂದ ಅವರು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ವಿದ್ಯುತ್ ಬಿಲ್ ಪಾವತಿಸಲು ಬಡ್ಡಿ ಮನ್ನಾ ಮಾಡಬೇಕು. ಅಸಲು ಕಟ್ಟಲು ಅದಾಲತ್ ನಡೆಸಬೇಕು. ವಿದ್ಯುತ್ ಬಿಲ್ ಪಾವತಿಸಲು ಕನಿಷ್ಟ 6 ತಿಂಗಳು ಕಾಲಾವಕಾಶ ನೀಡಬೇಕು. ಅಧಿಕಾರಿಗಳು ವಿದ್ಯುತ್ ಮೀಟರ್ ಕಿತ್ತುಕೊಂಡು ಹೋಗದಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಡಿಎಂಎಫ್ ಫಂಡ್ ಬಳಕೆಗೆ ಅನುಮತಿ ಕೊಡಿ : ನಮ್ಮದೇ ಜಿಲ್ಲೆಯ ಸಂಪನ್ಮೂಲ ಬಳಸಿ ಜಿಲ್ಲಾ ಖನಿಜ ನಿಧಿ ಸ್ಥಾಪಿಸಲಾಗಿದೆ. ಅದರಲ್ಲಿ ಹೇರಳವಾದ ಹಣ ಇದ್ದರೂ ನಮ್ಮ ಜಿಲ್ಲೆಗೆ ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರ ಅನುದಾನ ನೀಡದೇ ಇದ್ದರೂ ಚಿಂತೆ ಇಲ್ಲ, ನಮ್ಮದೇ ಜಿಲ್ಲೆಯ ಡಿ.ಎಂ.ಎಫ್. ಅಡಿ ಬಳ್ಳಾರಿ ನಗರ, ಗ್ರಾಮೀಣ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 200 ಕೋಟಿ ರೂ. ಹಣ ಬಳಕೆ ಮಾಡಲು ಅವಕಾಶ ನೀಡಬೇಕು. ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇನ್ನಾದರೂ ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಡಿ.ಎಂ.ಎಫ್.ನಲ್ಲಿ ಹಣ ಬಳಕೆ ಮಾಡಲು ಅವಕಾಶ ನೀಡಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಕೋರಿದರು.
B to A Khata: ಎ ಖಾತಾ ಪ್ರಕ್ರಿಯೆಗೆ ಚಾಲನೆ ಸಿಕ್ಕಿ 60 ದಿನಗಳ ಮೇಲಾಯಿತು; ಕೊಟ್ಟ ಮಾತು ಏನಾಯಿತು?
ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ಸರ್ಕಾರವು ಇ ಖಾತಾ ಮಾಡುವ ಅಭಿಯಾನವನ್ನು ದೊಡ್ಡಮಟ್ಟದಲ್ಲಿ ಕೈಗೊಂಡಿದೆ. ಉಳಿದಂತೆ ಬೆಂಗಳೂರಿನಲ್ಲಿ ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ಪರಿವರ್ತನೆ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಿ ಖಾತಾಆಸ್ತಿಯನ್ನ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಿದೆ. ನವೆಂಬರ್ 1ರಿಂದ ಫೆಬ್ರವರಿ ಮೊದಲ ವಾರದವರೆಗೆ, ಅಂದರೆ 100 ದಿನಗಳ ಅಭಿಯಾನ
ಸೌದಿ ಅರೇಬಿಯಾದಲ್ಲಿ ಮತ್ತೆ ನಡುಗಿದ ನೆಲ; ಭೂಕಂಪ ವಲಯವಲ್ಲದಿದ್ದರೂ ಭೂಮಿ ಬಾಯ್ತೆರೆಯುವುದೇಕೆ?
ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕಂಪನದಿಂದ ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿಲ್ಲ. ಈ ವರ್ಷ ಸೌದಿಯಲ್ಲಿ ಇದು ನಾಲ್ಕನೇ ಭೂಕಂಪವಾಗಿದೆ.ಭೂಕಂಪ ವಲಯವಲ್ಲದ ಸೌದಿಯಲ್ಲಿ ಈ ನಿರಂತರ ಭೂಕಂಪನಗಳ ಸರಣಿ ಹಲವರನ್ನು ಬೆಚ್ಚಿಬೀಳಿಸಿದ್ದು, ಇದಕ್ಕೆ ಉತ್ತರ ನೀಡಿರುವ ಭೂಗರ್ಭಶಾಸ್ತ್ರಜ್ಞರು ಇದು ಅರೇಬಿಯನ್ ಟೆಕ್ಟೋನಿಕ್ ಪ್ಲೇಟ್ನ ಚಟುವಟಿಕೆಯಿಂದ ಉಂಟಾಗುವ ನೈಸರ್ಗಿಕ ಒತ್ತಡದ ಬಿಡುಗಡೆಯಾಗಿದೆ ಹಾಗಾಗಿ ಇದು ಆತಂಕಕಾರಿ ವಿಚಾರವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಭೂ ಕಂದಾಯ 2025 ವಿಧೇಯಕಕ್ಕೆ ತಿದ್ದುಪಡಿ: ಈ ಭಾಗದ ಆಸ್ತಿದಾರರಿಗೆ ಗುಡ್ನ್ಯೂಸ್
ರಾಜ್ಯ ಕಾಂಗ್ರೆಸ್ ಸರ್ಕಾರವು ಭೂ ಕಂದಾಯ ವಿಚಾರದಲ್ಲಿ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) 2025 ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಕೆಲವು ಭಾಗದ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಹೇಳಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಭೂ ಕಂದಾಯ
ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ | ಸಂಸತ್ತಿನ ಆವರಣದಲ್ಲಿ ಚಂದ್ರಶೇಖರ್ ಆಝಾದ್ ಪ್ರತಿಭಟನೆ
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯದ ಹೆಚ್ಚಳವನ್ನು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ತಿನ ಆವರಣದಲ್ಲಿ ಗಾಳಿ ವಿಷಕಾರಿಯಾಗಿದೆ. ಸರಕಾರ ನಾಪತ್ತೆಯಾಗಿದೆ ಎಂಬ ಬ್ಯಾನರ್ ಹಿಡಿದು ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ. “ವಾಯು ಗುಣಮಟ್ಟ ಸೂಚ್ಯಂಕ(AQI) 450ಕ್ಕಿಂತ ಹೆಚ್ಚಾದರೂ ದಿಲ್ಲಿ ಸರಕಾರಕ್ಕೆ ಇದು ಏಕೆ ಗೋಚರಿಸುತ್ತಿಲ್ಲ? ದಿಲ್ಲಿಯ ಜನರು ಶುದ್ಧ ಗಾಳಿಗೆ ಅರ್ಹರು. ಗಾಳಿ ವಿಷಕಾರಿಯಾಗಿದೆ. ಆದರೆ ಸರಕಾರ ಏನನ್ನೂ ಮಾಡುತ್ತಿಲ್ಲ. ಅವರು ಈ ವಿಷಯವನ್ನು ಮರೆಮಾಚುತ್ತಿದ್ದಾರೆ” ಎಂದು ಚಂದ್ರಶೇಖರ್ ಆಝಾದ್ ಆರೋಪಿಸಿದ್ದಾರೆ. VIDEO | Parliament winter session: MP Chandrashekhar Azad protests inside Parliament premises over Delhi pollution, holding a banner reading, ehrili hawa hai, sarkar lapata hai. (Full video available on PTI Videos - https://t.co/n147TvrpG7 ) pic.twitter.com/tdN0WZoWbJ — Press Trust of India (@PTI_News) December 17, 2025
ಸಂಪಾದಕೀಯ | ರಾಮನ ಮರೆಯಲ್ಲಿ ನಿಂತು ನರೇಗಾದ ಎದೆಗೆ ಬಾಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಕ್ರಮ ಸಾಲ ಆ್ಯಪ್ಗಳಿಂದ ಕಿರುಕುಳ ಹೆಚ್ಚಳ: ನಾಗರಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಭಾರತದಲ್ಲಿ ಹೆಚ್ಚುತ್ತಿರುವ ಅಕ್ರಮ ಡಿಜಿಟಲ್ ಸಾಲ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಅನೇಕ ರಾಜ್ಯಗಳಲ್ಲಿ ನಿಯಂತ್ರಕ ಮಾನದಂಡಗಳ ಹೊರಗೆ ಕಾರ್ಯನಿರ್ವಹಿಸುವ ಇಂತಹ ಅಕ್ರಮ ಅಪ್ಲಿಕೇಶನ್ಗಳಿಗೆ ಹಲವರು ಬಲಿಪಶುಗಳಾಗಿದ್ದಾರೆ, ಕೆಲವೊಮ್ಮೆ ಅವರ ವೈಯಕ್ತಿಕ ಡೇಟಾವನ್ನು ಪ್ರವೇಶಿಸಿ, ಹಣ ಪಾವತಿಸುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ
ವಿಶ್ವಕಪ್ ವಿಜೇತ ವನಿತೆಯರಿಗೆ ಟಾಟಾ ಮೋಟಾರ್ಸ್ ಭರ್ಜರಿ ಗಿಫ್ಟ್; ಪ್ರತಿಯೊಬ್ಬರಿಗೂ ಸಿಗಲಿದೆ ಈ ವಿಶೇಷ ಕಾರ್!
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇತ್ತೀಚೆಗೆ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2025ರ (ICC Women’s World Cup 2025) ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಈ ಗೆಲುವು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಈಗ ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ದೇಶದ ದಿಗ್ಗಜ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ಅತ್ಯಂತ ಆಕರ್ಷಕ ಘೋಷಣೆಯೊಂದನ್ನು ಮಾಡಿದೆ. ವಿಶ್ವದ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಂಡದ ಪ್ರತಿಯೊಬ್ಬ ಸದಸ್ಯರಿಗೂ ... Read more The post ವಿಶ್ವಕಪ್ ವಿಜೇತ ವನಿತೆಯರಿಗೆ ಟಾಟಾ ಮೋಟಾರ್ಸ್ ಭರ್ಜರಿ ಗಿಫ್ಟ್; ಪ್ರತಿಯೊಬ್ಬರಿಗೂ ಸಿಗಲಿದೆ ಈ ವಿಶೇಷ ಕಾರ್! appeared first on Karnataka Times .
ದೇಶದಾದ್ಯಂತ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೂಡಿಕೆ ಮಾಡುವ ಹೆಸರಿನಲ್ಲಿ ನಿರಂತರವಾಗಿ ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತವೆ. ಸೈಬರ್ ವಂಚಕರು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಆನ್ಲೈನ್ ವಂಚನೆ ಮಾಡುತ್ತಿದ್ದು, ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಕೆಲವು ತಿಂಗಳುಗಳುಗಳಲ್ಲಿ ನಕಲಿ ವ್ಯಾಪಾರ ಯೋಜನೆ ಹೆಸರಿನಲ್ಲಿ ಜನರನ್ನು ಆಕರ್ಷಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎನ್ನುವುದಕ್ಕೆ
ದೇಶದ ಚಿನ್ನದ ಆಮದು ಶೇ 17ರಷ್ಟು ಕುಸಿತ; ಇಂದು ಚಿನ್ನದ ಬೆಲೆ ಹೇಗಿದೆ?
ಚಿನ್ನದ ಆಮದು ಪ್ರಮಾಣ ಇಳಿದಿದ್ದರೂ ಅದರ ಮೇಲಿನ ವೆಚ್ಚ ಹೆಚ್ಚಾಗಿದೆ. 2024-25ರಲ್ಲಿ ಆಮದು ಶುಲ್ಕ ಸುಮಾರು 58 ಬಿಲಿಯನ್ ಡಾಲರ್ಗೆ ತಲುಪಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಈ ಪ್ರಮಾಣ ಶೇ 69ರಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಚಿನ್ನದ ಬೆಲೆ, ರೂಪಾಯಿ- ಡಾಲರ್ ವಿನಿಮಯ ದರ ಮತ್ತು ಸರ್ಕಾರ ವಿಧಿಸುವ ತೆರಿಗೆಗಳು ಮುಖ್ಯವಾಗಿ ದೇಶದಲ್ಲಿ ಚಿನ್ನದ ಏರಿಳಿತಕ್ಕೆ ಕಾರಣವಾಗಿದೆ. ಇತ್ತೀಚಿಗಿನ ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಅನಿಶ್ಚಿತತೆ, ವಿವಿಧ ದೇಶಗಳ ಕೇಂದ್ರ ಬ್ಯಾಂಕ್ಗಳ ಚಿನ್ನ ಖರೀದಿ ಮತ್ತು ಸುರಕ್ಷಿತ ಹೂಡಿಕೆ ಎಂಬ ಮನೋಭಾವ ಎಲ್ಲವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿವೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟು? ಬುಧವಾರ ಡಿಸೆಂಬರ್ 17ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,451(+65), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,330 (+60) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ ರೂ 10,088 (+49)ಬೆಲೆಗೆ ಏರಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ರೂ 1,33,850 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: ರೂ 1,22,690 ಬೆಳ್ಳಿ ಬೆಲೆ 1 ಕೆಜಿ: ರೂ 1,90,100 ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಗ್ರಾಂ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 10,038 ಒಂದು ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,269 ಒಂದು ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,385 ಚಿನ್ನದ ಆಮದು ಕುಸಿತ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಚಿನ್ನದ ಆಮದು ಪ್ರಮಾಣದಲ್ಲಿ ಸ್ಪಷ್ಟವಾದ ಇಳಿಕೆ ಕಂಡಿದೆ. ಸರ್ಕಾರಿ ದತ್ತಾಂಶಗಳ ಪ್ರಕಾರ, 2014-15ರಲ್ಲಿ ಸುಮಾರು 9.15 ಲಕ್ಷ ಕಿಲೋಗ್ರಾಂ ಚಿನ್ನ ಆಮದು ಆಗಿದ್ದರೆ, 2024-25ರ ವೇಳೆಗೆ ಅದು 7.57 ಲಕ್ಷ ಕಿಲೋಗ್ರಾಂಗೆ ಇಳಿದಿದೆ. ಅಂದರೆ ಪ್ರಮಾಣದ ಮಟ್ಟದಲ್ಲಿ ಸುಮಾರು ಶೇ 17 ಕ್ಕೂ ಹೆಚ್ಚು ಕುಸಿತವಾಗಿದೆ. ಇದು ಚಿನ್ನದ ಬಳಕೆ ಮತ್ತು ಆಮದು ಕುರಿತು ದೇಶದಲ್ಲಿ ನಿಧಾನವಾದ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಚಿನ್ನದ ಆಮದು ಪ್ರಮಾಣ ಇಳಿದಿದ್ದರೂ ಅದರ ಮೇಲಿನ ವೆಚ್ಚ ಹೆಚ್ಚಾಗಿದೆ. 2024-25ರಲ್ಲಿ ಆಮದು ಶುಲ್ಕ ಸುಮಾರು 58 ಬಿಲಿಯನ್ ಡಾಲರ್ಗೆ ತಲುಪಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಶೇ 69ರಷ್ಟು ಹೆಚ್ಚಳವಾಗಿದೆ. ಕಡಿಮೆ ಚಿನ್ನ ಆಮದು ಮಾಡಿದರೂ ಹೆಚ್ಚು ಹಣ ತೆರಬೇಕಾಗಿ ಬಂದಿದೆ.
ಕ್ಷಮಿಸಿ, ಆಪರೇಷನ್ ಸಿಂಧೂರದಲ್ಲಿ ಭಾರತ ಸೋಲಿಸಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಕ್ಷಮೆಯೂ ಕೇಳಲ್ಲ
ಭಾರತ-ಪಾಕಿಸ್ತಾನ ನಡುವಿನ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಯುದ್ಧದಲ್ಲಿ ಭಾರತ ಸೋತಿತ್ತು ಎಂಬ ಚೌಹಾಣ್ ಹೇಳಿಕೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಕಾಂಗ್ರೆಸ್ ನಾಯಕ ತಮ್ಮ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಚೌಹಾಣ್ ಅವರ ಈ ನಡೆ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದ್ದು, ಸೇನೆಯನ್ನು ಅವಮಾನಿಸುವುದು ಕಾಂಗ್ರೆಸ್ನ ಹುಟ್ಟುಗುಣ ಎಂದು ಹರಿಹಾಯ್ದಿದೆ. ಈ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ | ಆಪ್ ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ
ಚಂಡೀಗಢ: ರವಿವಾರ ಪಂಜಾಬ್ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಆಪ್ ಹಾಗೂ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ರಾಜ್ಯದ 154 ಮತ ಎಣಿಕೆ ಕೇಂದ್ರಗಳು ಹಾಗೂ 141 ಸ್ಥಳಗಳಲ್ಲಿ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಡಿಸೆಂಬರ್ 14ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 22 ಜಿಲ್ಲಾ ಪರಿಷತ್ ಗಳ 347 ವಲಯದ ಸದಸ್ಯರು, 153 ಪಂಚಾಯತಿ ಸಮಿತಿಯ 2,838 ವಲಯಗಳ ಸದಸ್ಯರ ಆಯ್ಕೆಗಾಗಿ ಮತದಾನ ನಡೆದಿತ್ತು. ಈ ವೇಳೆ ಶೇ. 48ರಷ್ಟು ಮತದಾನ ಮಾತ್ರವಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತಪತ್ರಗಳಲ್ಲಿ ನಡೆದಿರುವುದರಿಂದ, ಮತ ಎಣಿಕೆ ಸಾಮಾನ್ಯಕ್ಕಿಂತ ಹೆಚ್ಚು ಅವಧಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. ಅಂತಿಮ ಫಲಿತಾಂಶಗಳು ಇಂದು ಮಧ್ಯಾಹ್ನ ಅಥವಾ ರಾತ್ರಿಯ ವೇಳೆಗೆ ನಿಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಸ್ಪೃಶ್ಯ ಅಲೆಮಾರಿಗಳನ್ನು ನಂಬಿಸಿ ವಂಚಿಸಿದ ರಾಜ್ಯ ಸರಕಾರ!
ಹಂತಹಂತಗಳಲ್ಲಿ ಅಲೆಮಾರಿಗಳಿಗೆ ಸುಳ್ಳು ಭರವಸೆಯನ್ನೇ ಕೊಡುತ್ತಾ ಬಂದ ಕಾಂಗ್ರೆಸ್ ಸರಕಾರ ಹೋರಾಟಗಾರರ ಬಳಿ ತಾವು ಅಲೆಮಾರಿ ಮೀಸಲಾತಿಗೆ ಬದ್ಧ ಎಂದು ಹೇಳಿದ ದಿನವೇ ನ್ಯಾಯಾಲಯದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವಿಲ್ಲ. ಏಕೆಂದರೆ ಅವರು ಇತರರಿಗಿಂತ ಹೆಚ್ಚು ಹಿಂದುಳಿದಿಲ್ಲ ಎಂದು ವಾದಿಸಿದೆ. ಇದು ದ್ರೋಹವಲ್ಲವೇ? ನಂಬಿಸಿ ಬೆನ್ನಿಗಿರಿದದ್ದಲ್ಲವೇ? ಕರ್ನಾಟಕದ 101 ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಉಳಿದವರಿಗಿಂತ ಸಾಕಷ್ಟು ಹಿಂದಿರುವ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಸಿದ್ದು ಸರಕಾರ ಕೊನೆಗೂ ನಂಬಿಸಿ ವಂಚಿಸಿ ಬೆನ್ನಿಗಿರಿದು ದ್ರೋಹಬಗೆದಿದೆ. ಒಳಮೀಸಲಾತಿಯ ಬಗ್ಗೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಶಿಫಾರಸು ಮಾಡಿದ 1:6:5:4:1 ಸೂತ್ರವನ್ನು ತಿರಸ್ಕರಿಸಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯವನ್ನು ಪರಿಶಿಷ್ಟರಲ್ಲೇ ಕಡಿಮೆ ಹಿಂದುಳಿದ ಲಂಬಾನಿ. ಭೋವಿ, ಕೊರಮ ಮತ್ತು ಕೊರಚ ಸಂಬಂಧಿತ ಜಾತಿಗಳ ಗುಂಪಿನಲ್ಲಿ ವಿಲೀನಗೊಳಿಸಿ ಜಾರಿ ಮಾಡಿದ್ದ 6:6:5 ಸೂತ್ರದ ಅನ್ಯಾಯಯುತ ಆದೇಶಕ್ಕೆ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯ ಸ್ವರೂಪವನ್ನು ಕೊಟ್ಟು ಅನ್ಯಾಯವನ್ನು ಶಾಶ್ವತಗೊಳಿಸುತ್ತಿದೆ. ಹಾಗೆಯೇ ಇದರ ವಿರುದ್ಧ ಅಸ್ಪಶ್ಯ ಅಲೆಮಾರಿ ಒಕ್ಕೂಟವು ಹೈಕೋರ್ಟ್ ನಲ್ಲಿ ಹೂಡಿರುವ ದಾವೆಗೆ ಅಧಿಕೃತ ಆಕ್ಷೇಪಣೆಗಳನ್ನು ಸಲ್ಲಿಸುತ್ತಾ: ‘‘ಅಸ್ಪಶ್ಯ ಅಲೆಮಾರಿ ಸಮುದಾಯಗಳು ಈಗ ಸೇರಿಸಲಾಗಿರುವ ಗುಂಪಿನಲ್ಲಿರುವ ಲಂಬಾಣಿ, ಭೋವಿ ಇನ್ನಿತರ ಜಾತಿಗಳಿಗಿಂತ ಹಿಂದುಳಿದಿಲ್ಲ’’ವೆಂದು ಪ್ರತಿಪಾದನೆ ಮಾಡಿ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳನ್ನು ವಂಚಿಸಿ ಬೆನ್ನಿಗಿರಿದಿದೆ. ಹುಸಿ ಭರವಸೆಗಳ ನಂಬಿಕೆ ದ್ರೋಹ ವಾಸ್ತವದಲ್ಲಿ ಸರಕಾರವು ಆಗಸ್ಟ್ 19ರಂದು 6:6:5 ಸೂತ್ರವನ್ನು ಘೋಷಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದ ರಾತ್ರಿಯಿಂದಲೇ ಅಲೆಮಾರಿಗಳು ಮತ್ತು ಅವರ ಬೆನ್ನಿಗೆ ನಿಂತ ಮಾದಿಗ ಸಮುದಾಯದ ಸಂಘಟನೆಗಳು ಸರಕಾರದ ವಿರುದ್ಧ ಹೋರಾಟ ಪ್ರಾರಂಭಿಸಿದ್ದವು. ಈ ಹೋರಾಟಕ್ಕೆ ನಾಡಿನ ಹಲವಾರು ಪ್ರಗತಿಪರ ಸಂಘಟನೆಗಳು ಹೃತ್ಪೂರ್ವಕ ಬೆಂಬಲ ನೀಡಿ ಸರಕಾರದ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದವು. ಪರಿಣಾಮವಾಗಿ ಅಲೆಮಾರಿ ಹೋರಾಟದ ನಾಯಕರನ್ನು ಹಲವಾರು ಬಾರಿ ಭೇಟಿ ಮಾಡಿದ ಸರಕಾರವು ತಮ್ಮಲ್ಲಿ ವಿಶ್ವಾಸವಿಡಬೇಕೆಂದೂ, ಶೇ. 1 ರಷ್ಟು ಮೀಸಲಾತಿ ನಿರಾಕರಿಸುವುದು ಸರಿಯಲ್ಲವೆಂದು ತಿಳಿದಿದೆಯೆಂದೂ, ಕಾಲಾವಕಾಶ ಕೊಟ್ಟರೆ ಸರಿಪಡಿಸುವುದಾಗಿಯೂ, ನ್ಯಾಯಾಲಯದಲ್ಲಿ ಸರಕಾರದ ಆದೇಶದ ವಿರುದ್ಧ ದಾವೆ ಹೂಡಬಾರದೆಂದೂ ನಯವಾದ ಮಾತುಗಳಲ್ಲಿ ಭರವಸೆ ಕೊಡುತ್ತಲೇ ಬಂದಿತ್ತು. ಆದರೆ ಯಾವುದೇ ಇತ್ಯಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಿಗೆ 6:6:5 ಸೂತ್ರದ ಅನ್ವಯವೇ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಾರಂಭಿಸಿತು. ಹೀಗಾಗಿ ಅಲೆಮಾರಿ ಸಂಘಟನೆಗಳು ಮತ್ತು ಇತರರು ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಲು ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಲು ದಿಲ್ಲಿ ಚಲೋ ಕೂಡ ಮಾಡಿದರು. ಹೋರಾಟಗಾರರಿಗೆ ಸಿಕ್ಕ ದಿಲ್ಲಿ ನಾಯಕರು ಕರ್ನಾಟಕದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ರ ಮಧ್ಯಸ್ಥಿಕೆಯಲ್ಲಿ ಮಂತ್ರಿಗಳೊಂದಿಗೆ ಮಾತನಾಡುವ ಶಾಸ್ತ್ರವನ್ನು ಮಾಡಿದರು. ಸರಕಾರದ ಪರವಾಗಿ ಸಮಾಜ ಕಲ್ಯಾಣ ಮಂತ್ರಿ ಎಚ್.ಸಿ. ಮಹದೇವಪ್ಪನವರು ಕೂಡಲೇ ಕರ್ನಾಟಕಕ್ಕೆ ಮರಳಬೇಕೆಂದೂ ಅಲೆಮಾರಿಗಳ ಬೇಡಿಕೆ ಈಡೇರಿಸುವುದಾಗಿಯೂ ಭರವಸೆ ನೀಡಿದರು. ಗೆಲುವಿನ ಸಂಭ್ರಮದೊಂದಿಗೆ ಕರ್ನಾಟಕಕ್ಕೆ ಹಿಂದಿರುಗಿದ ಅಲೆಮಾರಿ ಹೋರಾಟಗಾರರೊಂದಿಗೆ ತಡವಾಗಿ ಮಾತುಕತೆಯ ಶಾಸ್ತ್ರ ಮಾಡಿದ ಸರಕಾರ ಅಲೆಮಾರಿಗಳಿಗೆ ನಿಗಮ ಇತ್ಯಾದಿಗಳ ಭರವಸೆಯನ್ನು ನೀಡಿತೇ ವಿನಾ ಶೇ. 1ರ ಮೀಸಲಾತಿ ಕಲ್ಪಿಸುವ ಬಗ್ಗೆ ಮತ್ತೆ ಸಮಯ ಕೊಡಿರಿ ಎಂಬ ರಾಗವನ್ನೇ ಹಾಡಿತು. ಇತ್ತೀಚೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಪ್ರಾರಂಭದಲ್ಲೂ ಹೋರಾಟಗಾರರೊಂದಿಗೆ ಮಾತನಾಡಿದ ಸರಕಾರದ ಮಂತ್ರಿಗಳು ‘ಅಸ್ಪಶ್ಯ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ’ ಎಂಬ ವಿಷಯದ ಬಗ್ಗೆ ತಮ್ಮ ತಾತ್ವಿಕ ಬದ್ಧತೆಯನ್ನು ಮತ್ತೊಮ್ಮೆ ನುಡಿದು ಸಮಯ ಕೇಳಿದರು ಹಾಗೂ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂದೆಗೆದುಕೊಳ್ಳಲು ಮನವಿ ಮಾಡಿದರು. ಹೀಗೆ ಹಂತಹಂತಗಳಲ್ಲಿ ಅಲೆಮಾರಿಗಳಿಗೆ ಸುಳ್ಳು ಭರವಸೆಯನ್ನೇ ಕೊಡುತ್ತಾ ಬಂದ ಕಾಂಗ್ರೆಸ್ ಸರಕಾರ ಹೋರಾಟಗಾರರ ಬಳಿ ತಾವು ಅಲೆಮಾರಿ ಮೀಸಲಾತಿಗೆ ಬದ್ಧ ಎಂದು ಹೇಳಿದ ದಿನವೇ ನ್ಯಾಯಾಲಯದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವಿಲ್ಲ. ಏಕೆಂದರೆ ಅವರು ಇತರರಿಗಿಂತ ಹೆಚ್ಚು ಹಿಂದುಳಿದಿಲ್ಲ ಎಂದು ವಾದಿಸಿದೆ. ಇದು ದ್ರೋಹವಲ್ಲವೇ? ನಂಬಿಸಿ ಬೆನ್ನಿಗಿರಿದದ್ದಲ್ಲವೇ? ರಾಜ್ಯ ಸರಕಾರದ ಸಾಮಾಜಿಕ ಅನ್ಯಾಯದ ಪ್ರತಿವಾದಗಳು! ಬೆಳಗಾವಿ ಅಧಿವೇಶನಕ್ಕೆ ಮುಂಚೆ ಹೋರಾಟಗಾರರ ಮುಂದೆ ಅಲೆಮಾರಿ ಮೀಸಲಾತಿಯ ಬಗ್ಗೆ ಹುಸಿ ಬದ್ಧತೆಯನ್ನು, ಹುಸಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾಗಲೇ ಸರಕಾರದ 6:6:5 ಸೂತ್ರವನ್ನು ಪ್ರಶ್ನಿಸಿ ಅಸ್ಪಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಹೈಕೋರ್ಟ್ನಲ್ಲಿ ಹೂಡಿದ ದಾವೆಗೆ (WP 28612/2025) 2-12-2025ರಂದು ಕರ್ನಾಟಕ ಸರಕಾರ ಆಕ್ಷೇಪಣೆಗಳನ್ನು ಸಲ್ಲಿಸಿಯಾಗಿತ್ತು ಆ ಆಕ್ಷೇಪಣೆಗಳು ಈವರೆಗೆ ಅಲೆಮಾರಿ ಸಮುದಾಯಗಳಿಗೆ ಸರಕಾರ ಕೊಡುತ್ತಾ ಬಂದಿದ್ದ ಭರವಸೆಗಳನ್ನೆಲ್ಲಾ ಮತ್ತಷ್ಟು ಹುಸಿಗೊಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ,... ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಅಸ್ಪಶ್ಯ ಅಲೆಮಾರಿ ಸಮುದಾಯಗಳು ಇತರ ಜಾತಿಗಳಿಗಿಂತ ಸಾಪೇಕ್ಷವಾಗಿ ಹೆಚ್ಚು ಹಿಂದುಳಿದಿದ್ದಾರೆ ಎನ್ನುವುದನ್ನೇ ತಾತ್ವಿಕವಾಗಿ ನಿರಾಕರಿಸಿದೆ. ಇದು ಶೇ. 1ರ ಮೀಸಲಾತಿ ನಿರಾಕರಣೆಗಿಂತ ದೊಡ್ಡ ದ್ರೋಹವಾಗಿದೆ. ಅಷ್ಟು ಮಾತ್ರವಲ್ಲದೆ, ಅಸ್ಪಶ್ಯ ಅಲೆಮಾರಿಗಳು ಸರಕಾರ 6:6:5 ಸೂತ್ರವನ್ನು ರದ್ದುಗೊಳಿಸಬೇಕೆಂದು ಹೂಡಿದ್ದ ದಾವೆಗೆ ಆಕ್ಷೇಪಣೆಗಳನ್ನು ಸಲ್ಲಿಸಿರುವ ಸರಕಾರ ಆ ಪ್ರಕ್ರಿಯೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ, ಅನುಸರಿಸಿದ ಮಾನದಂಡಗಳೇ ಮೂಲಭೂತವಾಗಿ ತಪ್ಪೆಂದು ವಾದಿಸಿದೆ. ಸರಕಾರದ ಪ್ರಕಾರ: 1. The Castes and the Sub Castes the petitioners belong are not socially backward than the castes and the subcastes under category D of the report of the Justice Nagmohandas Commission. Therefore the clubbing of the Castes and the Sub castes to which petitioners belong , with the said category D in the impugned Governments orders is in consonance with the principles and the basis of which internal reservation with in the scheduled castes is siad to be permissible under the constitution as per the said decision of Honorbale Apex Court: ಅಂದರೆ ಸಾರವಿಷ್ಟೆ. ನಾಗಮೋಹನ್ ದಾಸ್ ವರದಿಯಲ್ಲಿ ಗ್ರೂಪ್ ‘ಎ’ಯಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಗ್ರೂಪ್ ‘ಡಿ’ಗೆ ಸೇರಿಸಲ್ಪಟ್ಟಿರುವ ಲಂಬಾಣಿ, ಭೋವಿ, ಕೊರಮ, ಕೊರಚ ಸಂಬಂಧಿತ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ. ಹೀಗಾಗಿ ಅಲೆಮಾರಿಗಳನ್ನು ಆ ಗುಂಪಿನಲ್ಲಿ ಸೇರಿಸಿರುವುದರಲ್ಲಿ ತಪ್ಪಿಲ್ಲ. ಆದರೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟರಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಅರೆ ಅಲೆಮಾರಿಗಳಾದ, 5.22 ಲಕ್ಷ ಜನರಿರುವ 59 ಜಾತಿಗಳನ್ನು ಪ್ರವರ್ಗ ‘ಎ’ಯಲ್ಲಿ ಒಟ್ಟುಗೂಡಿಸಿ ಶೇ.1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿದ್ದಕ್ಕೆ ಪ್ರಧಾನ ಕಾರಣವೇ ಇತರ ಉಪಜಾತಿಗಳ ಪ್ರವರ್ಗಗಳೊಡನೆ ಈ ಅತ್ಯಂತ ಹಿಂದುಳಿದ ಜಾತಿಗಳನ್ನು ಸೇರಿಸಿದರೆ ಅವರಿಗೆ ಈವರೆಗೆ ಹಾಗೂ ಹೀಗೂ ಸಿಕ್ಕಿರುವ ಅವಕಾಶವೂ ಇಲ್ಲದಂತಾಗುತ್ತದೆ ಎಂಬ ಸಾಮಾಜಿಕ ನ್ಯಾಯದ ಮಾನದಂಡ! 2. ಸಿದ್ದು ಸರಕಾರದ ಮತ್ತೊಂದು ಅತ್ಯಂತ ಅನ್ಯಾಯದ ಪ್ರತಿವಾದವೆಂದರೆ ಗ್ರೂಪ್ ‘ಎ’ಯಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಇತರ ಎಸ್ಸಿ ಜಾತಿಗಳಿಗಿಂತ ಹೇಗೆ ಸಾಮಾಜಿಕವಾಗಿ ಹಿಂದುಳಿದಿವೆ ಎಂದು ಸಾಬೀತು ಮಾಡುವುದರಲ್ಲಿ ನಾಗಮೋಹನ್ದಾಸ್ ಆಯೋಗ ವಿಫಲವಾಗಿದೆ. ಅದಕ್ಕೆ ಸರಕಾರವು ಮುಂದಿಟ್ಟಿರುವ ಅಪಾಯಕಾರಿ ಮತ್ತು ವಿತಂಡ ವಾದ ಹೀಗಿದೆ: 59 ಅಸ್ಪಶ್ಯ ಅಲೆಮಾರಿ ಜಾತಿಗಳಲ್ಲಿ 4-5 ಜಾತಿಗಳು (ಬುಡ್ಗ ಜಂಗಮ, ಚನ್ನ ದಾಸರ್, ಹೊಲೆಯ ದಾಸರ್, ಸಿಳ್ಳೆಕ್ಯಾತ, ಸುಡುಗಾಡು ಸಿದ್ದ..) ಸರಕಾರಿ ಹುದ್ದೆಗಳಲ್ಲಿ ಹೆಚ್ಚಿನ ಪ್ರಮಾಣಾತ್ಮಕ ಪ್ರಾತಿನಿಧ್ಯವನ್ನೂ ಹೊಂದಿವೆ ಹಾಗೂ ಕೆಲವು ಪರಿಶಿಷ್ಟ ಜಾತಿಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಾಕ್ಷರತೆಯನ್ನು ಪಡೆದಿವೆ. ಮತ್ತು ಅಲೆಮಾರಿಗಳ ಕೆಲವೇ ಕೆಲವು ಜಾತಿಗಳ ಭೂ ಹಿಡುವಳಿ ಗ್ರೂಪ್ ‘ಬಿ’ಯಲ್ಲಿ ಸೇರಿಸಲ್ಪಟ್ಟ ಕೆಲವು ಜಾತಿಗಳಿಗಿಂತ (ಮಾಲಾ ಹನ್ನಾನಿ, ಪರಯನ್, ಮಾಹ್ಯವಂಶಿ) ಹೇಗೆ ಹೆಚ್ಚಿದೆ. ಆದರೆ ಸರಕಾರದ ಈ ಪ್ರತಿವಾದದಲ್ಲಿ ಬಲಿಷ್ಠರ ಹಿತಾಸಕ್ತಿಗೆ ತಕ್ಕಂತೆ ವಾಸ್ತವಗಳನ್ನು ತಪ್ಪು ವ್ಯಾಖ್ಯಾನ ಮಾಡುವ ಹಾಗೂ ತಮ್ಮ ನಿರ್ಧಾರಕ್ಕೆ ಸೂಕ್ತವಾದ ಮಾಹಿತಿಗಳನ್ನು ಆಯ್ಕೆ ಮಾಡುವ ಕುತಂತ್ರವೇ ಎದ್ದು ಕಾಣುತ್ತದೆ. ಸಾಮಾಜಿಕ ನ್ಯಾಯದ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸುವಾಗ ಅನುಸರಿಸಬೇಕಾದ ಮಾನದಂಡವೇ ಅಸಮಾನ ಗುಂಪುಗಳನ್ನು ಸಮಾನವಾಗಿ ಕಾಣಬಾರದು ಮತ್ತು ಸಮಾನರನ್ನು ಅಸಮಾನರಾಗಿ ವರ್ಗೀಕರಿಸಬಾರದೆಂಬ ಮಾನದಂಡ. ಇದರ ಅನುಸಾರ ನ್ಯಾ. ನಾಗಮೋಹನ್ ದಾಸ್ ಆಯೋಗ ವಾಸ್ತವಿಕ ಅಂಕಿಅಂಶಗಳನ್ನು ಆಧರಿಸಿ ವಾಸ್ತವಗಳನ್ನು ಸಮಗ್ರವಾಗಿ ಪರಿಶೀಲಿಸೋಣ. ಸರಕಾರ ಹೈಕೋರ್ಟ್ನಲ್ಲಿ ನೀಡಿರುವ ಪ್ರತಿವಾದದ ಪ್ರಕಾರ ನಾಗ್ ಮೋಹನ್ ದಾಸ್ ವರದಿಯ ಪ್ರಕಾರ ಗ್ರೂಪ್ ‘ಎ’ಯಲ್ಲಿದ್ದ ಅಸ್ಪಶ್ಯ ಅಲೆಮಾರಿಗಳ ಸಾಮಾಜಿಕ ಸ್ಥಿತಿಗತಿ ಮತ್ತು ಗ್ರೂಪ್ ‘ಡಿ’ಯಯಲ್ಲಿದ್ದ ಸ್ಪಶ್ಯ ಲಂಬಾಣಿ, ಭೋವಿ, ಕೊರಮ, ಕೊರಚರಿಗಿಂತ ಹಿಂದುಳಿದಿಲ್ಲ. ಉದಾಹರಣೆಗೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಗ್ರೂಪ್ ‘ಎ’ಯಲ್ಲಿ ವರ್ಗೀಕರಿಸಿದ ಈ 59 ಜಾತಿಗಳ ಶೈಕ್ಷಣಿಕ, ಪ್ರಾತಿನಿಧ್ಯಗಳ ಪರಿಸ್ಥಿತಿ ಯನ್ನು, ಗ್ರೂಪ್ ‘ಡಿ’ ಎಂದು ವರ್ಗೀಕರಿಸಲ್ಪಟ್ಟಿದ್ದ ಸಾಪೇಕ್ಷವಾಗಿ ಹೆಚ್ಚು ಮುಂದುವರಿದ ಸ್ಪಶ್ಯ ಜಾತಿಗಳ ಪರಿಸ್ಥಿತಿಯೊಡನೆ ಹೋಲಿಸಿ ನೋಡೋಣ: ಗ್ರೂಪ್ ‘ಎ’ ಮತ್ತು ಗ್ರೂಪ್ ‘ಡಿ’ (ಆಯಾ ಜನಸಂಖ್ಯೆಯ ಶೇಕಡಾವಾರು) ಪಿಯುಸಿ ತೇರ್ಗಡೆ 6.64---9.12 ಪದವಿ ಪಡೆದವರು 3.66---5.07 ಇಂಜಿನಿಯರಿಂಗ್ 0.93---1.23 ವಸತಿ ಶಾಲೆ 0.50---0.84 ವಿದ್ಯಾರ್ಥಿನಿಲಯ 0.19---0.28 ವಿದ್ಯಾರ್ಥಿ ವೇತನ 15.26---20.09 ಸರಕಾರಿ ಉದ್ಯೋಗ 0.86---1.29 (ನ್ಯಾ. ನಾಗ್ ಮೋಹನ್ ದಾಸ್ ವರದಿ, ಪು. 324) ಮೇಲಿನ ಕೋಷ್ಟಕ ಸ್ಪಷ್ಟಪಡಿಸುವಂತೆ ಗ್ರೂಪ್ ‘ಎ’ಯಲ್ಲಿದ್ದ 59 ಜಾತಿಗಳೂ ಪರಿಶಿಷ್ಟರಲ್ಲೇ ಎಲ್ಲಾ ಮಾನದಂಡಗಳಲ್ಲೂ ಅತ್ಯಂತ ಹಿಂದುಳಿದವರು. ಗ್ರೂಪ್ ‘ಡಿ’ಯಲ್ಲಿ ವರ್ಗೀಕರಿಸಲಾದ ಗುಂಪು ಪರಿಶಿಷ್ಟರಲ್ಲೇ ಎಲ್ಲ ಮಾನದಂಡಗಳಲ್ಲೂ ಮುಂದಿರುವರು. ಹೀಗಾಗಿ ಅವೆರಡನ್ನೂ ಒಂದಾಗಿ ವರ್ಗೀಕರಿಸಿರುವ ಸರಕಾರಿ ಸೂತ್ರ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಅಸಮಾನರನ್ನು ಸಮಾನವಾಗಿ ಕಾಣುತ್ತದೆ ಮತ್ತು ಹೊಸದಾಗಿ ರೂಪಿಸಲಾದ ವರ್ಗದಲ್ಲಿ ಏಕರೂಪತೆಯೂ ಇಲ್ಲ. ಇವೆರಡೂ ಸುಪ್ರೀಂ ನಿರ್ದೇಶನದ ಮತ್ತು ಸಾಮಾಜಿಕ ನ್ಯಾಯ ಮಾನದಂಡದ ಉಲ್ಲಂಘನೆಯೇ ಆಗಿದೆ. ಹಾಗೆಯೇ, ಪರಿಶಿಷ್ಟರ 101 ಜಾತಿಗಳಲ್ಲಿ: -25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ. -14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ. -14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ. -54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ. ಇಲ್ಲ. -ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ ಇತರ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ. -27,917 ಪರಿಶಿಷ್ಟ ಗ್ರಾಮಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. -ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ. -ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ. -ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗೂ -ಪಟ್ಟಣ ಪಂಚಾಯತ್ನ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಈ ರೀತಿ ಅವಕಾಶ ವಂಚಿತರಲ್ಲಿ ಅಲೆಮಾರಿ ಸಮುದಾಯದ ಶೇ. 90 ಜಾತಿಗಳು ಸೇರಿಕೊಳ್ಳುತ್ತವೆ ಹಾಗೂ ಅವಕಾಶ ಪಡೆದವರಲ್ಲಿ ಈಗ ಅಲೆಮಾರಿಗಳನ್ನು ಸೇರಿಸಿರುವ ಗ್ರೂಪ್ ‘ಡಿ’ ಜಾತಿಗಳು ಇತರ ಜಾತಿಗಳಿಗಿಂತ ಹೆಚ್ಚು ಪಾಲು ಪಡೆದುಕೊಂಡಿವೆ. ಇದಲ್ಲದೆ ಮೇಲ್ನೋಟಕ್ಕೆ ಸರಕಾರ ಹೈಕೋರ್ಟ್ನಲ್ಲಿ ಕೊಟ್ಟಿರುವ ನಾಲ್ಕು ಅಲೆಮಾರಿ ಜಾತಿಗಳ ಮಾಹಿತಿ ಸರಿ ಎಂದು ಭಾವಿಸಿದರೂ ಅದು ಅನ್ವಯವಾಗುವುದು 59 ಜಾತಿಗಳಲ್ಲಿ ಕೇವಲ 4ಕ್ಕೆ. ಹಾಗಿದ್ದಲ್ಲಿ ಉಳಿದ 55 ಜಾತಿಗಳನ್ನು ಮುಂದುವರಿದ ಗ್ರೂಪಿಗೆ ಸೇರಿಸಿದ್ದೇಕೆ? ಹೀಗೆ ಸರಕಾರ ಅಸಮಂಜಸ ಹಾಗೂ ಅತಾರ್ಕಿಕ ಮತ್ತು ಆಯ್ದ ಉದಾಹರಣೆಗಳನ್ನು ನೀಡಿ ಅಸ್ಪಶ್ಯ ಅಲೆಮಾರಿಗಳ ಬೆನ್ನಿಗಿರಿದಿದೆ. 3. ಆದರೂ ನಾಗಮೋಹನ್ ದಾಸ್ ಆಯೋಗ ಎಸ್ಸಿ ಸಮುದಾಯಗಳೊಳಗೆ ಸಾಪೇಕ್ಷ ಹಿಂದುಳಿದಿರುವಿಕೆಯನ್ನು ಆಧರಿಸಿ ಮಾಡಿದ ಗುಂಪುಗಳ ನಡುವೆ ನೈಜ ವ್ಯತ್ಯಾಸವನ್ನು ಮತ್ತು ಗುಂಪುಗಳೊಳಗೆ ನೈಜ ಸಾಮ್ಯತೆಯನ್ನು ಸಾಬೀತು ಮಾಡಿಲ್ಲ ಎಂದು ಘೋಷಿಸಿ ಪರೋಕ್ಷವಾಗಿ ನಾಗಮೋಹನ್ ದಾಸ್ ವರದಿಯನ್ನೇ ತಿರಸ್ಕರಿಸುತ್ತದೆ. 4. ಆದರೆ ಮತ್ತೊಂದು ಕಡೆ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯು ಅತ್ಯಂತ ಹಿಂದುಳಿದವರಿಗೆ ಹೆಚ್ಚು ಮೀಸಲಾತಿ ಕೊಡುವುದೇ ಸಾಮಾಜಿಕ ನ್ಯಾಯ ಎಂದು ಹೇಳಿದ್ದರೂ ಅಲೆಮಾರಿ ಸಮುದಾಯಗಳಿಗೆ ಕೊಟ್ಟಿದ್ದು ಕೇವಲ ಶೇ. 1 ಮೀಸಲಾತಿ. ಅದರಿಂದಲೂ ಆ ಸಮುದಾಯಗಳನ್ನು ಶೇ. 5 ಮೀಸಲಾತಿ ಇರುವ ಗ್ರೂಪ್ ‘ಡಿ’ಗೆ ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಈ ಕಾಳಜಿ ಎಷ್ಟು ಅಪ್ರಾಮಾಣಿಕ ಎಂದರೆ ಹೆಚ್ಚು ಮೀಸಲಾತಿ ಸಿಗಲಿ ಅಂತಲೇ ಶೇ. 5 ಮೀಸಲಾತಿ ಪಡೆಯುವ ಗ್ರೂಪ್ ‘ಡಿ’ಗೆ ಯಾಕೆ ಸೇರಿಸಬೇಕಿತ್ತು? ಶೇ. 6 ಮೀಸಲಾತಿ ಪಡೆಯುವ ಮಾದಿಗ ಸಮುದಾಯದ ಗುಂಪಿಗಾಗಲೀ, ಹೊಲೆಯ ಸಮುದಾಯದ ಗುಂಪಿಗಾಗಲಿ ಏಕೆ ಸೇರಿಸಲಿಲ್ಲ? ಅದರ ಅರ್ಥ ಅಸ್ಪಶ್ಯ ಅಲೆಮಾರಿ ಸಮುದಾಯವು ಹೊಲೆಯ ಸಮುದಾಯಕ್ಕಿಂತ, ಮಾದಿಗ ಸಮುದಾಯಕ್ಕಿಂತ ಮುಂದುವರಿದವರು ಎಂದೇ? ಹುಸಿ ಭರವಸೆಗಳ ಹೊಸ ಶಾಸನ ಹೀಗೆ ಹೈಕೋರ್ಟ್ನಲ್ಲಿ ಮುಂದಿಟ್ಟಿರುವ ವಾದದಲ್ಲಿ ಅಲೆಮಾರಿಗಳ ಹೀನಾಯ ಹಿಂದುಳಿದಿರುವಿಕೆಯನ್ನೇ ನಿರಾಕರಿಸಿದ ಸಿದ್ದು ಸರಕಾರ ಡಿ. 15 ರಂದು ಅದನ್ನೇ ಕಾಯ್ದೆ ಮಾಡಲು ಶಾಸನವನ್ನು ಮಂಡಿಸಿದೆ. ಅದರಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನಿರಾಕರಿಸುವ 6:6:5 ಸೂತ್ರವನ್ನು ಕಾಯ್ದೆ ಮಾಡಲಾಗಿದೆ. ಆ ಮೂಲಕ ಅಲೆಮಾರಿಗಳಿಗೆ ಈವರೆಗೆ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಹುಸಿ ಮಾಡಿದೆ. ಅದೇ ಕಾಯ್ದೆಯಲ್ಲಿ ‘ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗ’ಕ್ಕೆ ಒಂದು ಸೂಚನೆಯನ್ನು ಕೊಡಲಾಗಿದೆ. ಅದರ ಪ್ರಕಾರ ಆಯೋಗವು ಹೊಸ ಮಾಹಿತಿ ಮತ್ತು ದತ್ತಾಂಶಗಳು ದೊರಕುತ್ತಿದ್ದಂತೆ ಅದನ್ನು ಆಧರಿಸಿ ಒಳಮೀಸಲಾತಿ ವರ್ಗಗಳಲ್ಲಿ ಮೀಸಲಾತಿ ಪ್ರಮಾಣವನ್ನು ಬದಲಾಯಿಸುವ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲು ಸೂಚಿಸಲಾಗಿದೆ. ಇದು ಮತ್ತೊಮ್ಮೆ ಮೂಗಿಗೆ ತುಪ್ಪ..ಅಲ್ಲಲ್ಲ.. ಖಾರ ಸವರುವ ಕ್ರಮ. ನ್ಯಾ. ದಾಸ್ ಆಯೋಗವು ಆಳವಾದ ಅಧ್ಯಯನ ಮತ್ತು ಅಂಕಿಅಂಶಗಳನ್ನು ಆಧರಿಸಿ ಅಲೆಮಾರಿಗಳು ಗ್ರೂಪ್ ‘ಡಿ’ಯಲ್ಲಿರುವ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಸೂಚಿಸಿದ್ದಾಗಲೂ ಅದನ್ನು ಬಲಿಷ್ಠರ ಒತ್ತಡಕ್ಕೆ ಮಣಿದು ತಿರಸ್ಕರಿಸಿದ ಸರಕಾರ ಇನ್ನು ಮುಂದೆ ಯಾವಾಗಲೋ ದೊರಕುವ ಅಂಕಿಅಂಶಗಳನ್ನು ಆಧರಿಸಿ ನ್ಯಾಯ ಒದಗಿಸುವುದೇ? ಅಂತಹ ಕ್ರಮಗಳಿಗೆ ಮುಂದಾಗುವುದೇ? ಹೀಗಾಗಿ ವಿಷಯ ಸ್ಪಷ್ಟ. ಇದುವರೆಗೆ ಎಸ್ಸಿ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಕೊಡುವ ಬಗ್ಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರು ಮತ್ತು ದಿಲ್ಲಿಯಲ್ಲಿ ಕೊಟ್ಟ ಭರವಸೆಗಳೆಲ್ಲಾ ಹಸಿ ಸುಳ್ಳು. ಅಷ್ಟು ಮಾತ್ರವಲ್ಲ. ಈವರೆಗೆ ಸರಕಾರ ತಾವು ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲು ಬದ್ಧ. ಆದರೆ ಸದ್ಯಕ್ಕೆ ಅದನ್ನು ಜಾರಿ ಮಾಡದೆ ಇರುವುದಕ್ಕೆ ತಾತ್ಕಾಲಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ ಎಂದು ಹೋರಾಟಗಾರರ ಮುಂದೆ ಅಲವತ್ತುಕೊಳ್ಳುತ್ತಿದ್ದವು. ಆದರೆ ಈಗ ಸರಕಾರ ಕೋರ್ಟ್ನಲ್ಲಿ ದಾಖಲಿಸಿರುವುದು ಯಾವುದೇ ಆಡಳಿತಾತ್ಮಕ ಕಾರಣಗಳಲ್ಲ. ಬದಲಿಗೆ ಅಸ್ಪಶ್ಯ ಅಲೆಮಾರಿಗಳು ಇತರ ಎಸ್ಸಿ ಸಮುದಾಯಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ ಎಂಬ ನಿಲುವನ್ನು ಪ್ರತಿಪಾದಿಸಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವನ್ನೇ ತಾತ್ವಿಕವಾಗಿ ನಿರಾಕರಿಸಿದೆ. ಇದು ಮಹಾದ್ರೋಹ. ಇದನ್ನು ನಾಡಿನ ಎಲ್ಲಾ ನೈಜ ಪ್ರಗತಿಪರರು ಖಂಡತುಂಡವಾಗಿ ಖಂಡಿಸಬೇಕು. ಸಿದ್ದರಾಮಯ್ಯ ಸರಕಾರ ಕುರುಡಿನಿಂದ ಹೊರಬಂದು ಅಲೆಮಾರಿಗಳ ಜೊತೆಗೆ ನಿಲ್ಲಬೇಕು. ಅಲೆಮಾರಿಗಳ ವಿಷಯದಲ್ಲಿ, ದೇವನಹಳ್ಳಿ ರೈತರ ವಿಷಯದಲ್ಲಿ, ಸರಕಾರಿ ಶಾಲೆಗಳನ್ನು ಮುಚ್ಚುವ ವಿಷಯದಲ್ಲಿ, ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆಯ ಸಮೀಕ್ಷೆಯ ವಿಷಯದಲ್ಲಿ, ಕಾರ್ಮಿಕರ ಹಕ್ಕುಗಳ ವಿಷಯದಲ್ಲಿ ... ಪ್ರತಿಯೊಂದರಲ್ಲೂ ಕಾಂಗ್ರೆಸ್ ಸರಕಾರ ಸಿಹಿ ಮಾತುಗಳಿಂದ ಹೋರಾಟಗಾರರಿಗೆ ಮಂಕು ಬೂದಿ ಎರಚುತ್ತಿದೆ. ಆಳುವ ಪಕ್ಷದಲ್ಲಿರಬಹುದಾದ ಸಜ್ಜನರ ಕಾಳಜಿ ಆಳುವ ವರ್ಗದ ವರ್ಗ ಹಾಗೂ ಜಾತಿ ಹಿತಾಸಕ್ತಿಯ ಜೊತೆ ಘರ್ಷಣೆಗಿಳಿದು ಜನಪರವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಈಗಲಾದರೂ ಅರ್ಥವಾಗಬೇಕು. ಸಿದ್ದು ಸರಕಾರಕ್ಕೆ ಮನವರಿಕೆ ಮಾಡಿದರೆ ಬದಲಾಗುತ್ತಾರೆ ಎಂಬುದು ಹುಸಿ ಎಂಬುದು ಈಗಲಾದರೂ ಅರಿವಾಗಬೇಕಿದೆ. ಅದು ಅರಿವಿನ ಕೊರತೆಯಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ. ಮೇಲ್ಜಾತಿ ಮೇಲ್ವರ್ಗದ, ಬಂಡವಾಳಶಾಹಿ ಆಸಕ್ತಿಗಳನ್ನು ಎದುರು ಹಾಕಿಕೊಂಡು ದಲಿತ-ದಮನಿತ-ಶೋಷಿತ ಜನತಾ ಹಿತಾಸಕ್ತಿಯ ಪರವಾಗಿ ನಿಲ್ಲಲಾಗದ ವರ್ಗ ಮತ್ತು ಜಾತಿ ಹಿತಾಸಕ್ತಿ. ಆದ್ದರಿಂದ ಪರಿಹಾರ ಇರುವುದು ಸಮಾಲೋಚನೆ, ಸಮನ್ವಯ, ಸಂವಾದಗಳಲ್ಲ. ಹಾಗೆಂದು ಇದಕ್ಕೆ ಪರಿಹಾರ ಖಂಡಿತ ಬಿಜೆಪಿಯೂ ಅಲ್ಲ. ಕಾಂಗ್ರೆಸ್ ಕಳ್ಳನಾದರೆ ಬಿಜೆಪಿ ಮತ್ತು ಸಂಘಪರಿವಾರ ಹಗಲು ದರೋಡೆಕೋರರು ಮತ್ತು ಕೊಲೆಗಡುಕರು. ಆದ್ದರಿಂದ ಪರಿಹಾರ ಇರುವುದು ನೈಜ ಸಾಮಾಜಿಕ ನ್ಯಾಯಕ್ಕಾಗಿ ಬೀದಿಯಲ್ಲಿ ಕಟ್ಟಬೇಕಾದ ದಮನಿತ-ದಲಿತ ಸಮುದಾಯಗಳ ರಾಜಿ ರಹಿತ ಹೋರಾಟದಲ್ಲಿ. ಅಲ್ಲವೇ?
ಗೋಕರ್ಣದಲ್ಲಿ ಪ್ರವಾಸಿಗರ ಹೆಚ್ಚಳ: ವಾಹನ ಸಂಚಾರ ದಟ್ಟಣೆ
ಗೋಕರ್ಣ, ಡಿ.16: ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಗೋಕರ್ಣಕ್ಕೆ ಬರುತ್ತಿದ್ದು, ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದು, ಹೀಗಾಗಿ ಎಲ್ಲಿ ನೋಡಿದರೂ ಪ್ರವಾಸಿಗರ ದಂಡು ಕಾಣುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಮುಖ್ಯ ಕಡಲ ತೀರದಲ್ಲಿ ಕಂಡುಬರುತ್ತಿದ್ದಾರೆ. ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದ್ದು, ಈಗಾಗಲೇ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಗೋಕರ್ಣಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ವಿಫಲವಾಗಿದೆ. ಕೆಲವು ಪ್ರಮುಖ ಬೀಚ್ಗಳಲ್ಲಿ ಸಾರ್ವಜನಿಕ ಶೌಚಾಲಯ, ಸ್ನಾನಗೃಹದ ಸೌಲಭ್ಯವೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಹೊಟೇಲ್, ಹೋಮ್ಸ್ಟೇಗಳಿಗೆ ತೆರಳಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಗೋಕರ್ಣಕ್ಕೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಪಾರಂಪರಿ ಕವಾಗಿ ಹಾಗೂ ಪ್ರವಾಸೋದ್ಯಮದಿಂದಲೂ ಅತ್ಯಂತ ಆಕರ್ಷಣೀಯ ತಾಣವಾಗಿದೆ. ಆದರೆ ಇಲ್ಲಿ ಮೂಲ ಸೌಕರ್ಯ ಇಲ್ಲದೇ ಪ್ರವಾಸಿಗರಿಗೆ ಸಮಸ್ಯೆ ಉಂಟಾಗುತ್ತಿದೆ. ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಗೋಕರ್ಣದ ಸಮಸ್ಯೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು. -ರಾಜಗೋಪಾಲ ಅಡಿ ಗುರೂಜಿ, ಅಧ್ಯಕ್ಷರು, ಆನುವಂಶೀಯ ಉಪಾಧಿವಂತ ಮಂಡಳ ಗೋಕರ್ಣ
ಮಂಗಳೂರು | ಜೆ.ಎಫ್. ಡಿಸೋಜಾರ ‘ಭಾಂಗಾರಾಚೊ ಕೊಳ್ಸೊ’ ಕೃತಿ ಬಿಡುಗಡೆ
ಮಂಗಳೂರು, ಡಿ.17: ಕೊಂಕಣಿ ಸಾಹಿತಿ, ಲೇಖಕ ಜೆ.ಎಫ್. ಡಿಸೋಜಾರ 18ನೆ ಕಥೆ ಪುಸ್ತಕ ‘ಭಾಂಗಾರಾಚೊ ಕೊಳ್ಸೊ’ (ಬಂಗಾರದ ಗಡಿಗೆ) ನಗರದ ಪ್ರೆಸ್ಕ್ಲಬ್ನಲ್ಲಿ ಸಾಹಿತಿ ರೊನಾಲ್ಡ್ ರೋಚ್ ಕಾಸ್ಸಿಯಾ ಅವರು ಬುಧವಾರ ಬಿಡುಗಡೆಗೊಳಿಸಿದರು. ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೆ.ಎಫ್. ಡಿಸೋಜಾ, ಮಕ್ಕಳ ಕಥೆಗಳು, ಇತರ ಕಥೆ, ಚುಟುಕುಗಳ ಮೂಲಕ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. 2004ರಲ್ಲಿ ಇವರ ಭಾಂಗಾರಾಚಿ ಮಾಸ್ಲಿ ಕೊಂಕಣಿ ಮಕ್ಕಳ ಕಥೆಗಳ ಪ್ರಥಮ ಆವೃತ್ತಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಲಂಡನ್ನ ಕೊಂಕಣಿ ಫ್ರೆಂಡ್ಸ್ ಕಾಮ್ ಕೊಂಕಣ್ ಸ್ಟಾರ್ ಬಿರುದು ನೀಡಿ ಸನ್ಮಾನಿಸಿದೆ. 2018ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿದೆ ಎಂದು ಸಾಹಿತಿ ಡಾಲ್ಪಿ ಲೋಬೋ ಅವರು ಕೃತಿಕಾರರ ಪರಿಚಯ ನೀಡಿದರು. ಕೃತಿ ಬಿಡುಗಡೆ ಸಮಾರಂಭದಲ್ಲಿ ಜಾನೆಟ್ ಡಿಸೋಜಾ, ಮಾರ್ಸೆಲ್ ಡಿಸೋಜಾ, ಡ್ಯಾಫ್ನಿ ಮಿನೇಜಸ್ ಉಪಸ್ಥಿತರಿದ್ದರು.
ಬೈರಮಂಗಲ ಕೆರೆಗೆ ಬರಲಿದೆ ಹೊಸ ಕಳೆ: ಸರ್ಕಾರದಿಂದ ಬರೋಬ್ಬರಿ 391 ಕೋಟಿ ರೂ ಯೋಜನೆಗೆ ಗ್ರೀನ್ ಸಿಗ್ನಲ್
ಬೆಂಗಳೂರಿನ ಬೈರಮಂಗಲ ಕೆರೆಗೆ 391 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ವೃಷಭಾವತಿ ಕಣಿವೆಯ ತ್ಯಾಜ್ಯದಿಂದ ಕಲುಷಿತಗೊಂಡಿದ್ದ ಕೆರೆಯನ್ನು ಸ್ವಚ್ಛಗೊಳಿಸಿ, ನಂಬಲರ್ಹ ನೀರಿನ ಮೂಲವನ್ನಾಗಿ ಪರಿವರ್ತಿಸುವ ಗುರಿ ಇದೆ. ಹೊಸ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದ್ದು, ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕೆರೆಯ ಹೂಳೆತ್ತಿ, ಶುದ್ಧ ನೀರು ಹರಿಸುವ ಯೋಜನೆ ರೂಪಿಸಲಾಗಿದೆ.
National Herald ಪ್ರಕರಣದಲ್ಲಿ ಸೋನಿಯಾ ಗಾಂಧಿಗೆ ರಿಲೀಫ್: ಮೋದಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರನ್ನು ಪರಿಗಣಿಸಲು ದಿಲ್ಲಿ ನ್ಯಾಯಾಲಯ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಅವರ ವಿರುದ್ಧ ಹೋರಾಡುತ್ತಲೇ ಇರುತ್ತೇವೆ. ಅವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದರು. ಈ ತೀರ್ಪಿನ ನಂತರ ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು. ಏಕೆಂದರೆ ಅದು ಅವರ ಮುಖಕ್ಕೆ ಬಾರಿಸಿದಂತಿದೆ. ಅವರು ರಾಜೀನಾಮೆ ನೀಡಬೇಕು. ಅವರು ಈ ರೀತಿ ಜನರಿಗೆ ಕಿರುಕುಳವನ್ನು ನೀಡಬಾರದು. ಅವರು ಈ ರೀತಿ ಮಾಡಿದರೆ ಜನರು ಅದನ್ನು ಸಹಿಸುವುದಿಲ್ಲ ಎಂದು ತಿಳಿದಿರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಕೆ.ಸಿ ವೇಣುಗೋಪಾಲ್, ಮೋದಿ ಸರಕಾರದ ರಾಜಕೀಯ ಪಿತೂರಿಯನ್ನು ಕಾಂಗ್ರೆಸ್ ಬಹಿರಂಗಪಡಿಸಲಿದೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಸಿಂಘ್ವಿ, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಉಪಸ್ಥಿತರಿದ್ದರು.
ಗೃಹ ಲಕ್ಷ್ಮೀ ಯೋಜನೆಯ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಪಾವತಿ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಉತ್ತರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬಿಗಿ ಪಟ್ಟು ಹಿಡಿದಿದ್ದರಿಂದ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಬೇಕಾಯಿತು.
ಮಂಗಳೂರು | ಹೊಸ ವರ್ಷಾಚರಣೆ: ಪೊಲೀಸ್ ಆಯುಕ್ತರಿಂದ ಮಾರ್ಗಸೂಚಿ ಪ್ರಕಟ
ಮಂಗಳೂರು, ಡಿ.17 : ನಗರದಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರು ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಹೊಸ ವರ್ಷಾಚರಣೆ ಆಯೋಜಿಸುವ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಇತರ ಸಂಸ್ಥೆಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಕಾರ್ಯಕ್ರಮ ರಾತ್ರಿ 12.30ರ ಒಳಗೆ ಪೂರ್ಣಗೊಳ್ಳಬೇಕು. ಅದಕ್ಕಾಗಿ ಡಿ. 23ರಂದು ಸಂಜೆ 5 ಗಂಟೆಯ ಒಳಗೆ ಅರ್ಜಿ ಸಲ್ಲಿಸಿ ಅನುಪತಿ ಪಡೆಯಬೇಕು ಎಂದು ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇತರ ಪ್ರಮುಖ ಮಾರ್ಗಸೂಚಿಗಳು : ► ಪೂರ್ವಾನುಮತಿ ಇಲ್ಲದೆ ಹೊಸ ವರ್ಷಾಚರಣೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು. ► ಧ್ವನಿವರ್ದಕ ಮಟ್ಟವು ಶಬ್ಧ ಮಾಲಿನ್ಯ ನಿಯಮ 2000 ಮತ್ತು ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಅನುಸರಿಸಬೇಕು. ಡಿಜೆ ಬಳಕೆಯನ್ನು ಕಟ್ಟು ನಿಟ್ಟಾಗಿ ನಿಷೇಧವಿದ್ದು, ಸಂಭ್ರಮಾಚರಣೆ ನೆಪದಲ್ಲಿ ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನ, ಜೂಜು ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ► ಮದ್ಯ ಮಾರಾಟ ಮತ್ತು ವಿತರಣೆಗೆ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ► ಆಯೋಜಕರು ಸಂಬಂಧಿತ ಇಲಾಖೆಗಳಿಂದ ಪಡೆದ ಲೈಸೆನ್ಸ್, ಅನುಮತಿ ಪ್ರಕಾರ ನಿರ್ಧರಿತ ನಿಯಮಗಳನ್ನು ಪಾಲಿಸಬೇಕು. ► ಸಾರ್ವಜನಿಕ ಸ್ಥಳಗಳಾದ ಬಸ್ಸು ನಿಲ್ದಾಣ, ಉದ್ಯಾನವನ, ಕ್ರೀಡಾಂಗಣಗಳು, ರೈಲ್ವೇ ನಿಲ್ದಾಣಗಳು ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದು ನಿಷೇಧ. ► ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಕಿಡಿಗೇಡಿತನ ಪ್ರದರ್ಶಿಸಿದರೆ ನಿರ್ದಾಕ್ಷಿಣ್ಯ ಕ್ರಮ. ► ಆಯೋಜಕರು ಅಗತ್ಯವಿರುವ ಸುರಕ್ಷತಾ ಕ್ರಮಗಳೊಂದಿಗೆ ಅಗ್ನಿಶಾಮಕ ಸಾಧನ, ತುರ್ತು ವೈದ್ಯಕೀಯ ವಾಹನ ಹಾಗೂ ಇತರ ಭದ್ರತಾ ಕ್ರಮ ಸಂಯೋಜಿಸಿರಬೇಕು. ► ಯಾವುದೇ ಅನಾಹುತದ ತಡೆಗಾಗಿ ಪೂರಕ ಮುಂಜಾಗೃತಾ ಕ್ರಮ, ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆಯೋಜಕರು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ► ಹೊಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಕಾರ್ಯಕ್ರಮಗಳಲ್ಲಿ ಮದ್ಯ ವಿತರಣೆ ವ್ಯವಸ್ಥೆಗೊಳಿಸಿದ್ದರೆ 18 ವರ್ಷ ಕೆಳಗಿನವರಿಗೆ ಪ್ರವೇಶ ನಿಷೇಧಿಸಬೇಕು. ► ಮಹಿಳೆಯರು, ಹೆಣ್ಣು ಮಕ್ಕಳನ್ನು ಚುಡಾಯಿಸುವ, ಕಿರುಕುಳ ನೀಡುವ, ಹಿಂಸಾಚಾರ ಅಥವಾ ಅಶ್ಲೀಲ ಚಟುವಟಿಕೆಗಳನ್ನು ತಡೆಹಿಡಿಯಲು ವಿಶೇಷ ಕಾರ್ಯಪಡೆಗಳು ನಿಯೋಜನೆಗೊಳ್ಳುತ್ತವೆ. ► ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆಯು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ ವಹಿಸಿ ವಾಹನ ಮುಟ್ಟುಗೋಲುಹಾಕಲಾಗುವುದು. ► ಸ್ಟಂಟ್ ಚಟುವಟಿಕೆಗಳು, ವೀಲಿಂಗ್, ಡ್ರಾಗ್ ರೇಸಿಂಗ್, ವೇಗದ ಚಾಲನೆ ಮತ್ತು ಧ್ವನಿ ಮತ್ತು ಶಬ್ಧ ಉತ್ಪಾದಿಸುವ ಕಾರ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ► ಸಾರ್ವಜನಿಕ ಹಾಗೂ ಸಮುದ್ರ ಬದಿಗಳಲ್ಲಿ ಮದ್ಯಪಾನ, ಅಶ್ಲೀಲ ವರ್ತನೆ, ಅಶ್ಲೀಲ ಪ್ರದರ್ಶನ ನಿಷೇಧಿಸಲಾಗಿದೆ. ► ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: 21,381 ಹುದ್ದೆಗಳ ಭರ್ತಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್
ಬೆಳಗಾವಿ, ಡಿಸೆಂಬರ್ 17: ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತಾಗಿ ತಜ್ಞರ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ 17,274 ಹುದ್ದೆಗಳು (ಒಟ್ಟು ಹುದ್ದೆಗಳ 38.2%) ಮತ್ತು ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳ (34.8%) ಭರ್ತಿಗೆ ಶಿಫಾರಸ್ಸು
Gold Price Dec 17: ಚಿನ್ನದ ಬೆಲೆ ದಿಢೀರ್ ಏರಿಕೆ, ಇಲ್ಲಿದೆ ಇಂದಿನ ದರಪಟ್ಟಿ
ಮಂಗಳವಾರ ಚಿನ್ನದ ದರಗಳು ಭಾರೀ ಕುಸಿತ ಕಂಡಿದ್ದರಿಂದ ಖರೀದಿದಾರರು ಖುಷಿಪಟ್ಟಿದ್ದರು. ಅಂತೂ ಚಿನ್ನದ ಬೆಲೆ ಕಡಿಮೆ ಆಯ್ತಲ್ಲಾ? ಖರೀದಿಸೋಣ ಎಂದುಕೊಂಡಿದ್ದರು. ಆದರೆ ಒಂದೇ ದಿನದಲ್ಲಿ ಚಿನ್ನದ ದರಗಳು ಮತ್ತೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿದೆ ನೋಡಿ.. ಮಂಗಳವಾರ 24 ಕ್ಯಾರೆಟ್
ವಾರಾಂತ್ಯದಲ್ಲಿ ಸಭೆ ನಿಗದಿ : ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಹೊಸ ಸೂತ್ರ ಮುಂದಿಟ್ಟ ಕಾಂಗ್ರೆಸ್ ಹೈಕಮಾಂಡ್ ?
Karnataka power tussle : ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿರುವ ಅಧಿಕಾರ ಹಸ್ತಾಂತರದ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಹೈಕಮಾಂಡ್ ಹೊಸ ಸೂತ್ರ ಮುಂದಿಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜವಾಗಿದ್ದೇ ಆದಲ್ಲಿ ಇದೇ ಬರುವ ಡಿಸೆಂಬರ್ ಇಪ್ಪತ್ತು ಅಥವಾ ಇಪ್ಪತ್ತೊಂದಕ್ಕೆ ಸಿಎಂ ಮತ್ತು ಡಿಸಿಎಂ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ.
ಮೂಡುಬಿದಿರೆ | ಮಾದಕ ವಸ್ತು ಸಾಗಾಟ ಆರೋಪ: ರೌಡಿ ಶೀಟರ್ ನ ಬಂಧನ
ಮೂಡುಬಿದಿರೆ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಕೊಡಂಗಲ್ಲು ಎಂಬಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ. ಬಂಧಿತನನ್ನು ಕಲ್ಲಡ್ಕ ನಿವಾಸಿ ತೌಸೀಫ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತನಿಂದ ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ ರೂ.ಮೌಲ್ಯದ ಕಾರು, ಈತನ ಕಾರಿನಲ್ಲಿ ಪತ್ತೆಯಾಗಿದ್ದ ತಲವಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು - ಮಹಾವೀರ ಕಾಲೇಜು ಮಾರ್ಗವಾಗಿ ಮಂಗಳೂರಿಗೆ ಎಂಡಿಎಂಎ ಸಹಿತ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರಿಗೆ ಮಾಹಿತಿ ದೊರೆತಿತ್ತು. ಅದರಂತೆ ಆತನ ಕಾರು ನಿಲ್ಲಿಸಿ ಬಂಧಿಸಲು ಹೋಗಿದ್ದ ಸಂದರ್ಭ ಆರೋಪಿಯು ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಸರಕಾರಿ ವಾಹನದಲ್ಲಿ ಬೆನ್ನು ಹತ್ತಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ತಡೆದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಮೂಡಬಿದಿರೆ ಅಪರಾಧ ಕ್ರಮಾಂಕ 200/2025 ಕಲಂ 8(c), 22(c) ಎನ್ ಡಿಪಿಎಸ್ ಕಾಯ್ದೆ 3, 25(1B)(a) Arms Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು ವಿವಿಯಲ್ಲಿ ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಅಲೂಮ್ನಿ ಮೀಟ್-ಸಮನ್ವಿತ ಕಾರ್ಯಕ್ರಮ
ಹಳೆ ವಿದ್ಯಾರ್ಥಿಗಳ ಕೊಡುಗೆ ಅವಿಸ್ಮರಣೀಯ : ಪ್ರೊ. ಪಿ.ಎಲ್. ಧರ್ಮ
ದೆಹಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು : ಸರ್ಕಾರಿ ಖಾಸಗಿ ಕಂಪನಿಗಳ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಂ ಕಡ್ಡಾಯ
ದೆಹಲಿಯಲ್ಲಿ ತೀವ್ರಗೊಂಡ ವಾಯುಮಾಲಿನ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಶೇ.50ರಷ್ಟು ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿ, ಕಾರ್ಮಿಕರಿಗೆ 10,000 ರೂ. ಪರಿಹಾರ ಘೋಷಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 60 ವರ್ಷದೊಳಗಿನ ಅರ್ಹ ಕಾರ್ಮಿಕರಿಗೆ ಉಚಿತ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಜೊತೆಗೆ, ಸುಮಾರು 20,000 ರೂ. ಮೌಲ್ಯದ ವೃತ್ತಿಪರ ಟೂಲ್ಕಿಟ್ ಸಹ ಉಚಿತವಾಗಿ ವಿತರಿಸಲಾಗುತ್ತದೆ. ಇದು ಕಾರ್ಮಿಕರ ಕೌಶಲ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸಿ ಅವರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ.
ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ. ಸಾಂದರ್ಭಿಕ ಚಿತ್ರ ನಮ್ಮ ಆಯೋಗ ಅತಿ ಹೆಚ್ಚು ಕ್ಷೇತ್ರಕಾರ್ಯ ಮಾಡಿದ್ದು ದರ್ವೇಸು ಸಮುದಾಯದ ಕುರಿತಂತೆ. ಬಳ್ಳಾರಿಯ ಬಡಮಕಾನ್, ಕಂಪ್ಲಿ, ಗಂಗಾವತಿ, ಭದ್ರಾವತಿಯ ಧರ್ವೇಸು ಕಾಲನಿ, ಶಿವಮೊಗ್ಗ, ಚಿಕ್ಕಮಗಳೂರಿನ ದಂಟರಮಕ್ಕಿ, ಬಾಬಾಬುಡಾನ್ಗಿರಿ ಮುಂತಾದೆಡೆ ದರ್ವೇಸು ಸಮುದಾಯವನ್ನು ಹುಡುಕಾಡುತ್ತಾ ಅಲೆದ ಅನುಭವ ಅನನ್ಯ. ‘ಆಲ್ ಕರ್ನಾಟಕ ದರ್ವೇಶ್ ಆಂಡ್ ಸೂಫಿ ಕ್ಯಾಟಗರಿ-1 ಅಸೋಸಿಯೇಷನ್’ ರಾಜ್ಯಾದ್ಯಕ್ಷ ಸೈಯದ್ ಖಲಾಮುಲ್ಲಾ ಶಾ ದರ್ವೇಸ್ರವರು ನಮ್ಮನ್ನು ಕರೆದೊಯ್ದು ನಮಗೆ ದರ್ವೇಸು ಸಮುದಾಯದ ನಿಜ ದರ್ಶನ ಮಾಡಿಸಿದರು. ದರ್ವೇಸು, ದರ್ವೇಸಿ, ದರ್ವೇಶ್, ಫಕೀರ್ ಎಂದು ಕರೆಯಲಾಗುವ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ಕಣ್ಣಾರೆ ಕಂಡೆವು. ಕರ್ನಾಟಕದಲ್ಲಿ ಬೀದರ್, ಬಿಜಾಪುರ, ಗುಲ್ಬರ್ಗಾ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಹಾಸನ, ಮೈಸೂರು, ಕೋಲಾರ, ಚಾಮರಾಜನಗರ ಮತ್ತು ಬೆಂಗಳೂರಿನಲ್ಲೂ ಇರುವ ದರ್ವೇಸು ಅಥವಾ ಫಕೀರ್ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಇಸ್ಲಾಮ್ ಮತವನ್ನು ಅವಲಂಬಿಸಿರುವ ಸಮುದಾಯವಾಗಿದ್ದು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ ಒಂದರಲ್ಲಿ ಇದೆ. ದರ್ವೇಸು ಸಮುದಾಯ ಸೂಫಿ ತಾತ್ವಿಕ ಪರಂಪರೆಗೆ ಸೇರಿದ್ದು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದು ಹಾಗೂ ದಾನ ಇಲ್ಲವೇ ಭಿಕ್ಷೆಯ ಮೂಲಕ ತಮ್ಮ ಜೀವನವನ್ನು ನಿರ್ವಹಿಸಿಕೊಳ್ಳುವ ಅನನ್ಯತೆಯನ್ನು ತನ್ನದಾಗಿಸಿಕೊಂಡಿದೆ. ದರ್ವೇಸು ಎಂಬ ಪದದ ಮೂಲವು ಪರ್ಷಿಯನ್ ಭಾಷೆಯದಾಗಿದ್ದು, ಇದರ ಅರ್ಥ ಧಾರ್ಮಿಕ ಸೇವಕ ಎಂದಾಗುತ್ತದೆ. ದರ್ವೇಸ್ ಎಂಬ ಪದದ ಅರ್ಥ ‘ದರ್ವಾಸ್’ ಅಂದರೆ ಬಾಗಿಲು. ಪ್ರೀತಿ, ಕರುಣೆ, ಮಾನವೀಯತೆಗೆ ಹೃದಯದ ಬಾಗಿಲು ಸದಾ ತೆರೆದಿದೆ ಎಂದರ್ಥ. ದರ್ವೇಸುಗಳೇ ಆದ ಫಕೀರ್ ಎಂಬ ಪದದ ಮೂಲ ಅರಬಿಕ್ ಭಾಷೆಯದಾಗಿದ್ದು, ಅಧ್ಯಾತ್ಮ ಮತ್ತು ಆತ್ಮಾಭಿಮಾನವನ್ನು ಸೂಚಿಸುತ್ತದೆ. ದರ್ವೇಸು ಮತ್ತು ಫಕೀರ್ ಎಂಬ ಎರಡೂ ಪದಗಳು ಧಾರ್ಮಿಕ ಅಥವಾ ಆಧ್ಯಾತ್ಮಿಕ ಅನನ್ಯತೆಯನ್ನು ಸೂಚಿಸುತ್ತವೆ. ಇದರಿಂದಾಗಿ ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ. ಇಸ್ಲಾಮ್ ಧರ್ಮ ಸಂಸ್ಥಾಪನೆಯ ಮೂರನೇ ತಲೆಮಾರಿನಿಂದ ಆರಂಭಗೊಂಡ ದರ್ವೇಸು ಪರಂಪರೆ, ಬಗ್ದಾದ್ನಿಂದ ಆರಂಭಗೊಂಡರೂ, ಭಾರತದಲ್ಲಿ ಅಜ್ಮೀರ್ನ ಖ್ವಾಜಾ ಗರೀಬ್ ನವಾಝ್ರಿಂದ ಆರಂಭವಾಗಿ, ಕರ್ನಾಟಕದ ದರ್ವೇಸುಗಳು ಗುಲ್ಬರ್ಗಾ, ಬಿಜಾಪುರ, ಬೀದರ್, ಬಾಬಾಬುಡಾನ್ ಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿರುವ ಪ್ರತೀ ದರ್ಗಾ ಹಾಗೂ ದರ್ಗಾ ಕೇಂದ್ರಿತ ಭೌಗೋಳಿಕ ವಲಯದಲ್ಲಿ ದರ್ವೇಸು/ಫಕೀರರನ್ನು ಕಾಣಬಹುದು. ದರ್ಗಾವನ್ನು ಕೇಂದ್ರವಾಗಿಟ್ಟುಕೊಂಡು ಅವರದೇ ಆದ ಚೌಕ ಅಥವಾ ಮಂಡಲಗಳನ್ನು ಕಲ್ಪಿಸಿಕೊಂಡಿರುತ್ತಾರೆ. ಪ್ರತೀ ದರ್ವೇಸು ಕುಟುಂಬವು ಇಂತಹ ಚೌಕಗಳ ಕಲ್ಪಿತ ವ್ಯಾಪ್ತಿಯಲ್ಲಿರುತ್ತವೆ. ದರ್ವೇಸುಗಳು ಎಲ್ಲೆಡೆ ಸಂಚಾರಕ್ಕೆ ಮುಕ್ತರಾಗಿದ್ದರೂ ಭಿನ್ನ ಚೌಕಗಳ ಅಸ್ತಿತ್ವ ಸಮುದಾಯ ಮಾನ್ಯವಾಗಿರುತ್ತದೆ. ದರ್ವೇಸು ಸಮುದಾಯವು ಗುರುದೀಕ್ಷಾ ವಿಧಾನವನ್ನು ಹೊಂದಿದ್ದು, ಕುಲವೃತ್ತಿಯನ್ನು ಮುಂದುವರಿಸ ಬಯಸುವ ಪ್ರತೀ ದರ್ವೇಸಿಯೂ ಗುರುವಿನಿಂದ ದೀಕ್ಷೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ದೀಕ್ಷಾ ಕ್ರಮದಲ್ಲಿ ಮೂರು ಹಂತಗಳಿದ್ದು, ಮೊದಲನೆಯದನ್ನು ಮುರೀದ್ ಎಂದು, ಎರಡನೆಯದನ್ನು ತರೀಖ್ ಎಂದು ಮೂರನೆಯದನ್ನು ಖಿಲಾಫತ್ ಎಂದು ಕರೆಯುತ್ತಾರೆ. ದೀಕ್ಷಾ ಬದ್ಧರಾದ ದರ್ವೇಸಿಗಳು ಲಂಗೋಟಿ, ಲುಂಗಿಗಳನ್ನು ಧರಿಸಿ ಭಿಕ್ಷಾಪಾತ್ರೆ ಹಿಡಿಯುವುದು ಕಡ್ಡಾಯವಾಗಿರುತ್ತದೆ. ದಪ್ತ್ ಸುಲ್ತಾನಿ, ಗುರ್ಜ್ ಇವರ ಸಾಮಾನ್ಯ ವಸ್ತುಗಳಾಗಿರುತ್ತವೆ. ರಫಾಯಿ, ಜಲಾಲಿಗಳು ತಲವಾರನ್ನು ಧರಿಸಿರುತ್ತಾರೆ. ಇವರಲ್ಲಿ ಮುಖ್ಯಸ್ಥರನ್ನು ಸರ್ ಗುರು ಸರ್ ಖಲೀಫಾ ಎಂದು ಕರೆಯುತ್ತಾರೆ. ದರ್ವೇಸುಗಳಲ್ಲಿ 1. ಬಾನುವಾ, 2. ರಫಾಯಿ, 3. ಜಲಾಲ್(ಖಾದ್ರಿಯಾ, ಖಲಂದರಿಯಾ) 4. ಅಹಲೇತಪ್ಕಾತ್ ಎಂದು ನಾಲ್ಕು ಒಳ ಪಂಗಡಗಳಿರುವುದು ತಿಳಿದುಬರುತ್ತದೆ. ಅಲೆಮಾರಿ ಭಿಕ್ಷಾಟನೆಯನ್ನು ತೊರೆದು ನೆಲೆನಿಂತವರನ್ನು ಮಕಾಂದಾರರೆಂದು ಕರೆಯುತ್ತಾರೆ. ಈ ಎಲ್ಲಾ ವಿವರಗಳನ್ನು ನಮ್ಮ ಆಯೋಗದಲ್ಲಿ ನಾವೇ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಇಲ್ಲಿ ವಿವರಗಳನ್ನು ನೀಡುತ್ತಿದ್ದೇನೆ. ಸೂಫಿ ಸಮುದಾಯದ ಕುರಿತು ಹೆಚ್ಚಿನ ಮಾಹಿತಿ ಪ್ರೊ. ರಹಮತ್ ತರೀಕೆರೆಯವರು ಬರೆದ ‘ಕರ್ನಾಟಕದ ಸೂಫಿಗಳು’ ಪುಸ್ತಕದಲ್ಲಿ ಲಭ್ಯವಿದೆ. ದರ್ವೇಸು ಮತ್ತು ಸೂಫಿ ಪರಂಪರೆ ಭಾರತೀಯ ಅನುಭಾವಿಗಳ ಮೇಲೆ ಅಪಾರ ಪ್ರಭಾವ ಬೀರಿದಂತಿದೆ. ಮಲೆ ಮಾದೇಶ್ವರ, ಮಾಂಟೇಸ್ವಾಮಿಗಳಿಂದ ಹಿಡಿದು ಸಿದ್ದಪ್ಪಾಜಿ, ಎತ್ತಪ್ಪ, ಜುಂಜಪ್ಪ, ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜನಪ್ಪ, ಬೇರಿಕಿ ಪುಟ್ಟಪ್ಪ, ದಾದಿನಾಯಕನದೊಡ್ಡಿ ವೆಂಕಟಗಿರಿಯಪ್ಪ, ಶಿಶುನಾಳ ಷರೀಫಜ್ಜ ಮುಂತಾಗಿ ಅನೇಕ ಮಂದಿ ಅನುಭಾವಿಗಳು, ಶರಣರು, ತತ್ವಪದಕಾರರು ಸೂಫಿಗಳಿಂದ ಪ್ರಭಾವಿತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಕರ್ನಾಟಕದಲ್ಲಿ ಕುಳಿತು ಅನುಭಾವಿ ವಚನಗಳನ್ನು ಬರೆಯುತ್ತಿದ್ದಾಗ, ಅದೇ ಸಂದರ್ಭದಲ್ಲಿ ಜಲಾಲುದ್ದೀನ್ ರೂಮಿ ಕೂಡ ಪರ್ಷಿಯಾದಲ್ಲಿ ಕುಳಿತು ಅನುಭಾವಿ ಪದಗಳನ್ನು ಬರೆಯುತ್ತಿದ್ದದನ್ನು ಕಂಡಾಗ ನಮಗೆ ಎಲ್ಲೋ ಸೂಫಿ ಮತ್ತು ಶರಣ ಪರಂಪರೆಗಳು ಒಂದೇ ಧಾರೆಯಲ್ಲಿ ಯೋಚಿಸಿದ ದಾಟಿ ಆಶ್ಚರ್ಯವನ್ನುಂಟು ಮಾಡುತ್ತದೆ. ದರ್ವೇಸು ಸಮುದಾಯದ ಅಧ್ಯಾತ್ಮದ ಎತ್ತರವನ್ನು ಅರಿಯದವರು ದರ್ವೇಸು ಸಮುದಾಯವನ್ನು ಕೇವಲ ಬೈಗುಳವಾಗಿ ಬಳಸುತ್ತಿರುವುದು ದುರಂತ. ಅತ್ಯಂತ ಬಡವರು ಮತ್ತು ನಿರ್ಗತಿಕರಾದ ದರ್ವೇಸುಗಳು ಸರಕಾರದ ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಸರಕಾರಕ್ಕೂ ಹೃದಯವೆನ್ನುವುದು ಇದ್ದರೆ ದರ್ವೇಸುಗಳನ್ನೂ ತನ್ನ ಹೃದಯದ ಬಾಗಿಲು ತೆರೆದು ಒಮ್ಮೆ ನೋಡಲಿ...
ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ಡ್ರಾ, ಕೇಂದ್ರದಿಂದ ಮಹತ್ವದ ಘೋಷಣೆ; ಡಿಜಿಟಲ್ ಪೋಷಣೆ
ನೌಕರರ ಪಿಎಫ್ ಹಣ ಡ್ರಾ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವತ್ತ ಇಟ್ಟಿರುವ ಮಹತ್ವದ ಹೆಜ್ಜೆಯೊಂದರಲ್ಲಿ, ಕೇಂದ್ರ ಕಾರ್ಮಿಕ ಇಲಾಖೆಯು ಶೀಘ್ರದಲ್ಲೇ ಎಟಿಎಂ ಮತ್ತು ಯುಪಿಐ ಮೂಲಕ ಶೇ. 75ರಷ್ಟು ಪಿಎಫ್ ಹಣವನ್ನು ಹಿಂಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರುವ ಘೋಷಣೆ ಮಾಡಿದೆ. ಈ ಕುರಿತು ಮಾತನಾಡಿರುವ ಕಾರ್ಮಿಕ ಸಚಿವ ಮುನ್ಸುಖ್ ಮಾಂಡವಿಯಾ, ಎಟಿಎಂ ಮೂಲಕ ಪಿಎಫ ಹಿಂಪಡೆಯುವ ಡಿಜಿಟಲ್ ವ್ಯವಸ್ಥೆ ಮಾರ್ಚ್ 2026ರೊಳಗೆ ಜಾರಿಯಾಗುವ ಭರವಸೆ ಇದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಮಂಗಳೂರು | ಗಲ್ಲಿ ಪ್ರೀಮಿಯರ್ ಲೀಗ್ : ಆಟಗಾರರ ಹರಾಜು ಪ್ರಕ್ರಿಯೆ
ಮಂಗಳೂರು : ಗಲ್ಲಿ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ ಡಿ.26 ರಿಂದ ಜ.4 ರವರೆಗೆ ನಡೆಯಲಿದ್ದು, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಅತ್ತಾವರದ ರಾಯಲ್ ಪ್ಲಾಜಾದಲ್ಲಿ ನಡೆಯಿತು. ಹರಾಜಿನಲ್ಲಿ 42 ಆಟಗಾರರು ಹೆಸರು ನೋಂದಾಯಿಸಿದ್ದು, ನಿಯಾಜ್ ಮುರ್ಶಾದ್ ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಖರೀದಿಯಾದರು. ಉಳಿದಂತೆ ಮುಕ್ತಾರ್ ಕೆ., ಮುಹಮ್ಮದ್ ರಿಲ್ವಾನ್, ಅನ್ಸಾಫ್, ಮುಹಮ್ಮದ್ ಅನ್ವಾಝ್, ಇಬ್ರಾಹಿಂ ಶಕೀಬ್, ಜಾಫರ್ ಸಾಧಿಕ್, ದುಬಾರಿ ಮೊತ್ತದಲ್ಲಿ ಖರೀದಿಯಾದರು. ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಫ್ರಾಂಚೈಸಿಗಳಾದ ಅಫ್ತಾಬ್ ಬೋಳಾರ್ ಮಾಲಕತ್ವದ ಕಂದಕ್ ಬುಲ್ಸ್, ಮುಹಮ್ಮದ್ ಅಶ್ರಫ್ ಮಾಲಿಕತ್ವದ ಕಂದಕ್ ನೈಟ್ ರೈಡರ್, ದಾವೂದ್ ಹಕೀಂ ನೇತೃತ್ವದ ಕಂದಕ್ ವಾರಿಯರ್ಸ್, ಯಹ್ಯಾ ಮಾಲಕತ್ವದ ಕಂದಕ್ ಸೂಪರ್ ಕಿಂಗ್ಸ್, ಮುಝಫರ್ ಮಾಲಕತ್ವದ ಕಂದಕ್ ಯುನೈಟೆಡ್, ಹಾಗೂ ಮುಹಮ್ಮದ್ ಯೂಸುಫ್ ಮೋಶಿನ್ ನೇತೃತ್ವದ ರಾಯಲ್ ಕಂದಕ್ ತಂಡಗಳು ಈ ಬಾರಿಯ ಹರಾಜಿನಲ್ಲಿ ಭಾಗವಹಿಸಿತು. ಸತತ ಎರಡು ಬಾರಿಯ ಚಾಂಪಿಯನ್ಸ್ ತಂಡ ಕಂದಕ್ ಸೂಪರ್ ಕಿಂಗ್ಸ್ ಮುಹಮ್ಮದ್ ಫಾಝಿಲ್ ಮತ್ತು ನಿಯಾಝ್ ಮುರ್ಶಾದ್ ರವರನ್ನು ಹರಾಜಿನಲ್ಲಿ ಪೈಪೋಟಿ ನೀಡಿ ತಂಡ ಈ ಎರಡೂ ಆಟಗಾರರನ್ನು ಪಡೆಯಲು ಯಶಸ್ವಿಯಾಯಿತು. ಕಳೆದ ಎರಡು ಬಾರಿ ಫೈನಲ್ ಎಡವಿದ ಕಂದಕ್ ವಾರಿಯರ್ಸ್ ಮತ್ತೆ ಈ ಬಾರಿ ಫೈನಲ್ ಧಾವಿಸಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಕಂದಕ್ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉಳಿದ ನಾಲ್ಕು ತಂಡ ಮೊದಲ ಬಾರಿ ಪ್ರಶಸ್ತಿ ಪಡೆಯುತ್ತೋ? ಕಾದು ನೋಡಬೇಕಾಗಿದೆ. ಕಾರ್ಯಕ್ರಮದಲ್ಲಿ ರಾವ್ ಆ್ಯಂಡ್ ಬ್ರದರ್ಸ್ ಮಾಲಕರಾದ ಶಿವಾನಂದ ರಾವ್, ಸಚಿನ್ ರಾವ್, ಉದ್ಯಮಿಗಳಾದ ಶರೀಫ್, ಸತ್ತಾರ್, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಬುರ್ಖಾ ಫ್ಯಾಶನ್ ಮಾಲಕರಾದ ರಿಯಾಝ್, ಕಮಲ್ ವಿಡಿಯೋ ಮಾಲಕರಾದ ಕಮಲಕ್ಷಾ ಜೆ., ಉಪಸ್ಥಿತರಿದ್ದರು. ಹರಾಜು ಪ್ರಕ್ರಿಯೆಯನ್ನು ನೀರಸವಾಗಿ ರಾಬಿನ್ ಎಮ್ಮೆಕರೆ ನೆರವೇರಿಸಿದರು.
ನ್ಯಾಷನಲ್ ಹೆರಾಲ್ಡ್ ಕೇಸ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್, ಸುವರ್ಣಸೌಧದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಹಳೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಲು ಪ್ರವಾಸಿ ಕೂಟ ವಿಟ್ಲ (ರಿ) ನಿಯೋಗದಿಂದ ಮನವಿ
ಬೆಂಗಳೂರು : ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಮುಂದಿನ ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು, ನಿವೃತ್ತ ಅನಿವಾಸಿ ಕನ್ನಡಿಗರಿಗೆ ಪಿಂಚಣಿ ಭತ್ಯೆ ನೀಡಬೇಕು ಹಾಗೂ ಸ್ವ ಉದ್ಯೋಗಕ್ಕೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ನಿಯೋಗವೊಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಪ್ರಮುಖರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷರಾದ ಮುಹಮ್ಮದ್ ಮಸೂದ್ ವಿಟ್ಲ (ಬಹ್ರೈನ್) ಅವರ ನೇತೃತ್ವದ ನಿಯೋಗವು ಡಿ.4ರ, ಗುರುವಾರದಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ನಿಯೋಗ ಮಂಡಿಸಿದ ಬೇಡಿಕೆಗಳನ್ನು ಗಮನಪೂರ್ವಕವಾಗಿ ಪರಿಶೀಲಿಸಿದ ಅವರು, ಮುಂದಿನ ರಾಜ್ಯ ಬಜೆಟ್ನಲ್ಲಿ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಅನಿವಾಸಿಗಳಿಗಾಗಿ ಪ್ರವಾಸಿ ಕೂಟ ವಿಟ್ಲ (ರಿ) ನಡೆಸುತ್ತಿರುವ ನಿರಂತರ ಹೋರಾಟ ಹಾಗೂ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಸ್ಥಾಪಕರಾದ ಹೈದರಾಲಿ ಇಸ್ಮಾಯಿಲ್ ಮೇಗಿನಪೇಟೆ (ಸೌದಿ ಅರೇಬಿಯಾ), ಮಾಧ್ಯಮ ವಕ್ತಾರ ಸಫ್ವಾನ್ ಕೋಡಪದವು (ಬಹ್ರೈನ್), ಬದ್ರುದ್ದೀನ್ (ಬಹ್ರೈನ್) ಹಾಗೂ ಕಾನೂನು ಸಲಹೆಗಾರ ಅಡ್ವಕೇಟ್ ಅನ್ಸಾರ್ ವಿಟ್ಲ ಉಪಸ್ಥಿತರಿದ್ದರು.
ಅಬ್ಬಬ್ಬಾ.. ಡಾಲರ್ ವಿರುದ್ಧ ಕಡೆಗೂ ಚೇತರಿಕೆ ಕಂಡ ರುಪಾಯಿ! ಮಧ್ಯಮ ವರ್ಗಕ್ಕೆ ಚೇತೋಹಾರಿ?
ಬುಧವಾರ, ಅಮೆರಿಕನ್ ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿತು, 91.07 ಕ್ಕೆ ತಲುಪಿತು. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರೂಪಾಯಿ ಚೇತರಿಸಿಕೊಂಡಿತು, ಇದು ಕಳೆದ ಏಳು ತಿಂಗಳಲ್ಲಿ ಅತಿ ದೊಡ್ಡ ದಿನದ ಚೇತರಿಕೆ. ಅಮೆರಿಕ-ಭಾರತ ವ್ಯಾಪಾರ ಮಾತುಕತೆಯಲ್ಲಿನ ಅಡೆತಡೆ ಮತ್ತು ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದು ರೂಪಾಯಿ ಕುಸಿತಕ್ಕೆ ಕಾರಣವಾಗಿತ್ತು.
ಚಾಮರಾಜನಗರ | ಮಹದೇಶ್ವರ ದೇವಸ್ಥಾನದ ಸಮೀಪ ಹುಲಿ ಸಂಚಾರ : ಸ್ಥಳೀಯರಲ್ಲಿ ಆತಂಕ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಸಮೀಪ ಬೆಳ್ಳಂಬೆಳಿಗ್ಗೆ ಹುಲಿಯೊಂದು ರಸ್ತೆ ಸಮೀಪ ಸಂಚರಿಸಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಗ್ರಾಮದಿಂದ ರಾಮಾಪುರ ಕಡೆಗೆ ತೆರಳುತ್ತಿದ್ದ ಬಸ್ ಸಮೀಪದಲ್ಲೇ ಹುಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿದ್ದು, ಈ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಗೊಂಡರು. ಇನ್ನು ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ವೀಡಿಯೊ ಮಾಡಿದ್ದಾರೆ. ಇದೇ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಸುಮಾರು ಐದು ತಿಂಗಳ ಹಿಂದೆ ಐದು ಹುಲಿಗಳು ವಿಷಪ್ರಯೋಗದಿಂದ ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಹುಲಿಯ ಚಲನವಲನ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
IPL-2026 RCB: ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ: ಕೆಎಸ್ಸಿಎ
ಕ್ರಿಕೆಟ್ ಪ್ರಿಯರ ಹಬ್ಬ ಐಪಿಎಲ್-2026 ಸಮೀಪದಲ್ಲಿದೆ. ಈಗಾಗಲೇ ಐಪಿಎಲ್ ತಂಡಗಳು ಕೂಡ ಸಜ್ಜಾಗುತ್ತಿವೆ. ಆರ್ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ನಂತರ ಅಭಿಮಾನಿಗಳು ಈ ಸಲವೂ ಕಪ್ ನಮ್ದೇ ಎನ್ನಲು ರೆಡಿಯಾಗಿದ್ದಾರೆ. ಇನ್ನು ಐಪಿಎಲ್ ಉದ್ಘಾಟನಾ ಪಂದ್ಯದ ಬಗ್ಗೆ ಮಹತ್ವದ ವಿಚಾರ ಹೊರಬಿದ್ದಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ ನಡೆಸಲು ಕರ್ನಾಟಕ ರಾಜ್ಯ
ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ 8804 ಕೋಟಿ ಬಿಲ್ ಬಾಕಿ ; ಯಾವಾಗ ಆಗಲಿದೆ ಪಾವತಿ?
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಳಂಬ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 8804 ಕೋಟಿ ರೂ.ಗಳ ಬಿಲ್ ಬಾಕಿ ಇದ್ದು, ಅನುದಾನ ಲಭ್ಯತೆಯ ಆಧಾರದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಗುತ್ತಿಗೆದಾರರು ಶೀಘ್ರದಲ್ಲೇ ಬಾಕಿ ಮೊತ್ತ ಪಾವತಿಸುವಂತೆ ಪದೇ ಪದೇ ಮನವಿ ಮಾಡುತ್ತಿದ್ದಾರೆ.

26 C