ಹೊಸ ವರ್ಷಾಚರಣೆ | ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ; ಪೊಲೀಸರಿಗೆ ಸಿಎಂ ತಾಕೀತು
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಹೊಸ ವರ್ಷಾಚರಣೆ ಬಳಿಕ ಬೆಂಗಳೂರಿನಲ್ಲಿ ಸುಲಭವಾಗಿ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಅನುಕೂಲವಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಬೇಕು. ಅದರಲ್ಲೂ, ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಗಳಿಂದ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕು ಎಂದು ಅವರು ಹೇಳಿದರು. 20 ಸಾವಿರ ಪೊಲೀಸರು : ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ನಿಯೋಜಿಸಲಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ 1200 ಪೊಲೀಸರನ್ನು ಈ ಬಾರಿ ನಿಯೋಜಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಆಗ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ನಿಯೋಜಿಸಬೇಕು ಎಂದು ಸೂಚನೆ ನೀಡಿದರು. ನಗರದಲ್ಲಿ ಹೊಸ ವರ್ಷಾಚರಣೆ ಸುಗಮವಾಗಿ ನಡೆಯಲು ಸಾಧ್ಯವಾಗುವಂತೆ 4 ನಿಯಂತ್ರಣ ಕೊಠಡಿ, 78 ಕಾವಲು ಗೋಪುರ, 164 ಮಹಿಳಾ ಸಹಾಯ ವಾಣಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ವಾಹನ ಚಾಲನೆ ಸಂದರ್ಭದಲ್ಲಿ ಮದ್ಯ ಸೇವನೆ ಆರೋಪದಡಿ 3,500 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಗರದಲ್ಲಿರುವ 50 ಮೇಲ್ಸುತುವೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರ ತಾತ್ಕಲಿಕವಾಗಿ ಬಂದ್ ಮಾಡುವಂತೆ ಸೂಚಿಸಿದರು. ದುಷ್ಕರ್ಮಿಗಳ ಮೇಲೆ ನಿರಂತರ ನಿಗಾ ಇರಿಸಬೇಕು. ಬೈಕ್ ಸವಾರರಿಗೆ ವ್ಹೀಲಿಂಗ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾದಕ ವಸ್ತು ಚಟುವಟಿಕೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಪ್ರಕರಣಗಳು ಬೆಳಕಿಗೆ ಬಂದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಆಳಂದ | ಗಡಿ ಅಪರಾಧ ನಿಯಂತ್ರಣಕ್ಕೆ ಕರ್ನಾಟಕ–ಮಹಾರಾಷ್ಟ್ರ ಪೊಲೀಸರ ಸಂಯುಕ್ತ ಸಭೆ
ಪರಸ್ಪರ ಸಹಕಾರದಿಂದ ಮಾತ್ರ ಅಪರಾಧಿಗಳಿಗೆ ಕಡಿವಾಣ: ಎಸ್ಪಿ ಅಡ್ಡೂರು ಶ್ರೀನಿವಾಸಲು
ಕಲಬುರಗಿ | ವಿದ್ಯಾರ್ಥಿಗಳು ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು: ಪ್ರೊ.ಬಿ.ಎಸ್ ಮಾಲಿಪಾಟೀಲ
ಕಲಬುರಗಿ: ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಸಂಪಾದಿಸುವುದು ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಬಹುದು. ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯಕತೆ ಇದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಎಸ್ ಮಾಲಿಪಾಟೀಲ ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಕೆವಿಪಿ ದಣ್ಣೂರ ಪಿಯು ಕಾಲೇಜು, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಆನಂದ ಸಿದ್ದಮಣಿ ಕನ್ನಡ ನಾಡುನುಡಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಶೇಷ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಮ್ಮ ಭಾಗದಲ್ಲಿ ನಡೆಯಬೇಕು ಎಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಉಪಯುಕ್ತ ವಾದ ನನ್ನ ನೆಚ್ಚಿನ ಪುಸ್ತಕ, ಪ್ರಬಂಧ ಸ್ಪರ್ಧೆ, ಕನ್ನಡ ಸಾಹಿತ್ಯ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಗಳ ಕುರಿತು ಹಾಗೂ 25 ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕ ನೀಡಿರುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕಲ್ಯಾಣರಾವ್ ಶೀಲವಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಉತ್ತರ ಮತಕ್ಷೇತ್ರದ ಅಧ್ಯಕ್ಷರಾದ ಪ್ರಭುಲಿಂಗ ಮೂಲಗೆ ಹಾಗೂ ಪ್ರಾಚಾರ್ಯ ಚಂದ್ರಶೇಖರ ರೆಡ್ಡಿ, ಆಡಳಿತಾಧಿಕಾರಿ ಗೀತಾ ಪಾಟೀಲ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶರಣು ನಿರೂಪಣೆ ಮಾಡಿದರು. ಉಪನ್ಯಾಸಕಿ ಮಾಣಿಕಮ್ಮ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಫಜಲಪುರ | ಕೇಂದ್ರ ಸರಕಾರದಿಂದ ರೈತರಿಗೆ ಅನ್ಯಾಯ: ಜೆ.ಎಂ.ಕೊರಬು
ಅಫಜಲಪುರ: ಈ ಹಿಂದೆ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು, ವಿದೇಶಿ ವಸ್ತುಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದು ಈಗ ಸ್ವದೇಶಿ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಿ ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದು, ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡದೆ ಅನ್ಯಾಯ ಮಾಡುತ್ತಿದೆ. ಈ ಹಿಂದೆ ಎಪಿಎಂಸಿ ರದ್ದು ಮಾಡಿ ರೈತರ ಬೆನ್ನು ಮುರಿಯುವ ಕೆಲಸ ಮಾಡಿದೆ. ಅನ್ಯ ದೇಶಗಳಿಗಿಂತ ನಮ್ಮ ದೇಶದಲ್ಲಿ ಸಕ್ಕರೆ ಹೆಚ್ಚಾಗಿ ಉತ್ಪನ್ನ ಮಾಡುತ್ತಿದ್ದರೂ ಸಹ ಬೇರೆ ದೇಶಗಳಿಂದ ಆಮದು ಮಾಡಿಕೊಂಡು ನಮ್ಮ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲಕರ ಜತೆ ಚರ್ಚೆ ನಡೆಸಿ ಉತ್ತಮ ಬೆಲೆ ಸಿಗುವಂತೆ ಮಾಡಿದೆ. ಅದೇ ರೀತಿ ಎಪಿಎಂಸಿ ರದ್ದು ಪಡಿಸುವುದಕ್ಕಿಂತ ಮುಂಚೆ ತೊಗರಿಗೆ 7,500 ರೂ., 8,500 ರೂ. ಬೆಂಬಲ ಬೆಲೆ ರೈತರಿಗೆ ಸಿಕ್ಕಿದೆ ಎಂದರು. ಎಪಿಎಂಸಿ ರದ್ದು ಮಾಡಿದ ಮೇಲೆ ಆಸ್ಟ್ರೇಲಿಯಾ, ಸುಡಾನ್, ಕೆನಡಾ, ರಷ್ಯಾ ಹೀಗೆ ಅನ್ಯ ದೇಶಗಳಿಂದ ತೊಗರಿಯನ್ನು ಆಮದು ಮಾಡಿಕೊಂಡು ಕೇಂದ್ರ ಸರ್ಕಾರ ನಮ್ಮ ದೇಶದ ರೈತರಿಗೆ ಮೋಸ ಮಾಡುತ್ತಿದೆ. ಆದರೆ ಆ ತೊಗರಿಯೂ ಜನಸಾಮಾನ್ಯರು ತಿನ್ನಲು ಯೋಗ್ಯವಿಲ್ಲದ ತೊಗರಿ ಆಮದು ಮಾಡಿಕೊಂಡು ನೇರವಾಗಿ ನಮ್ಮ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಭಾಗದಲ್ಲಿ ಉತ್ತಮವಾದ ತೊಗರಿ ಬೆಳೆಯುತ್ತಿದ್ದರೂ ಏಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುತ್ತಿಲ್ಲ. ಈಗ ರಾಜ್ಯ ಸರ್ಕಾರವೇ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಪ್ರತಿ ಕ್ವಿಂಟಲ್ ಗೆ 8 ಸಾವಿರ ರೂ. ಬೆಂಬಲ ಬೆಲೆ ನೀಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವು ಬೆಂಬಲ ಬೆಲೆ ನೀಡಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ; ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಬಳಸಲು ಸೂಚನೆ
ಬೆಂಗಳೂರು : ಹೊಸ ವರ್ಷ ದ ಸಂಭ್ರಮಾಚರಣೆ ಹಿನ್ನೆಲೆ ರಾಜಧಾನಿ ಬೆಂಗಳೂರಿನ ವಿವಿಧ ಮುಖ್ಯ ರಸ್ತೆಗಳಲ್ಲಿ ವಿಶೇಷ ಸಂಚಾರ ನಿಯಂತ್ರಣ ಮತ್ತು ನಿರ್ಬಂಧಗಳನ್ನು ನಗರ ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 2ರವರೆಗೂ ಸಂಚಾರ ಸುರಕ್ಷತೆಗಾಗಿ ನಗರದ ಕೆಲವು ರಸ್ತೆಗಳಲ್ಲಿ ವಾಹನ ನಿಷೇಧ ಹೇರಲಾಗಿದ್ದು, ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರ ಎಲ್ಲಾ ವಾಹನಗಳ ಸಂಚಾರವನ್ನು ಸಂಬಂಧಪಟ್ಟ ರಸ್ತೆಗಳಲ್ಲಿ ನಿಷೇಧಿಸಲಾಗಿದೆ. ಬದಲಾಗಿ ಪಾರ್ಕಿಂಗ್ ವ್ಯವಸ್ಥೆ ಮತ್ತು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಎಲ್ಲೆಲ್ಲಿ ಸಂಚಾರ ನಿರ್ಬಂಧ..?: ಎಂ.ಜಿ.ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ವರೆಗೆ, ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಪೇರಾ ಜಂಕ್ಷನ್ವರೆಗೆ, ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ವರೆಗೆ, ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್ನಿಂದ ಮೆಯೋ ಹಾಲ್ ಜಂಕ್ಷನ್ವರೆಗೆ, ಮ್ಯೂಸಿಯಂ ರಸ್ತೆ: ಎಂ.ಜಿ.ರಸ್ತೆ ಜಂಕ್ಷನ್ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ(ಎಸ್ಬಿಐ ವೃತ್ತ)ವರೆಗೆ, ರೆಸ್ಟ್ ಹೌಸ್ ರಸ್ತೆ: ಮ್ಯೂಸಿಯಂ ರಸ್ತೆ ಜಂಕ್ಷನ್ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ವರೆಗೆ, ರೆಸಿಡೆನ್ಸಿ ಕ್ರಾಸ್ ರಸ್ತೆ: ರೆಸಿಡೆನ್ಸಿ ರಸ್ತೆ ಜಂಕ್ಷನ್ನಿಂದ ಎಂ.ಜಿ.ರಸ್ತೆ ಜಂಕ್ಷನ್ವರೆಗೆ(ಶಂಕರ್ ನಾಗ್ ಚಿತ್ರಮಂದಿರದವರೆಗೆ) ವಾಹನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ಪರ್ಯಾಯ ವ್ಯವಸ್ಥೆ: ಕ್ವೀನ್ಸ್ ವೃತ್ತದಿಂದ ಹಲಸೂರು ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ.ಜಂಕ್ಷನ್ - ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ. ರಸ್ತೆಯನ್ನು ಸೇರಬಹುದು. ಹಲಸೂರಿನಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ - ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆ ಸೇರಬೇಕು. ಕಾಮರಾಜ್ ರಸ್ತೆ: ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲ ತಿರುವು ಪಡೆದು ಎ.ಎಸ್.ಸಿ. ಸೆಂಟರ್ನಲ್ಲಿ ಎಡ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು. ಎಚ್.ಎ.ಎಲ್. ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ. ಸೆಂಟರ್ನಲ್ಲಿ ಬಲ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು. ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್ನಿಂದ ಓಪೇರಾ ಜಂಕ್ಷನ್ ಕಡೆಗೆ ಮಾತ್ರ ಕಾಲ್ನಡಿಗೆಯಲ್ಲಿ ಸಾಗಬೇಕು; ವಿರುದ್ಧ ದಿಕ್ಕಿನಲ್ಲಿ ಸಂಚರಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ನಿರ್ಬಂಧ: ಡಿ.31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 3 ಗಂಟೆಯವರೆಗೆ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ಎಂ.ಜಿ. ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಲ್ಡ್ ಪಿ.ಎಸ್.ಜಂಕ್ಷನ್ವರೆಗೆ, ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಸೆಂಟ್ ಮಾಕ್ರ್ಸ್ ರಸ್ತೆ ಜಂಕ್ಷನ್ವರೆಗೆ, ರೆಸ್ಟ್ ಹೌಸ್ ರಸ್ತೆ: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ವರೆಗೆ, ಮ್ಯೂಸಿಯಂ ರಸ್ತೆ: ಎಂ.ಜಿ.ರಸ್ತೆ ಜಂಕ್ಷನ್ನಿಂದ ಎಸ್.ಬಿ.ಐ. ವೃತ್ತದವರೆಗೆ, ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್ನಿಂದ ಮೆಯೋ ಹಾಲ್ ಜಂಕ್ಷನ್ವರೆಗೆ ವಾಹನ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಹಾಗೂ ಸೆಂಟ್ ಮಾರ್ಕ್ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಡಿಸೆಂಬರ್ 31ರ ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಪಾರ್ಕಿಂಗ್ ವ್ಯವಸ್ಥೆ : ಸಾರ್ವಜನಿಕರ ಅನುಕೂಲಕ್ಕಾಗಿ ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್- 1ನೇ ಮಹಡಿ, ಯು.ಬಿ.ಸಿಟಿ, ಗರುಡಾ ಮಾಲ್, ಕಾಮರಾಜ್ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ವರೆಗೆ) ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕೋಗಿಲು ಮನೆಗಳ ತೆರವು ವಿವಾದ: ಚುನಾವಣೆ ಸೋಲಿನ ಭಯದಿಂದ ಪಿಣರಾಯ್ ವಿಜಯನ್ ರಾಜಕೀಯ: ಡಿಕೆಶಿ ವಾಗ್ದಾಳಿ
ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, ಖಂಡಿತಾ, ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಇಂತಹ ಭೂಗಳ್ಳರಿಗೆ ಬೆಂಗಳೂರಿನಲ್ಲಿ ಅವಕಾಶ ನೀಡುವುದಿಲ್ಲ. ಬಡವರಿಗೆ ನಾವು ಖಂಡಿತವಾಗಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತರಲಾಗುತ್ತಿದೆ ಎಂದು ಕೇಳಿದಾಗ, ಇದರಲ್ಲಿ ಯಾವ ಮುಜುಗರ ಇಲ್ಲ. ಬೆಂಗಳೂರು ನಗರದ ಸ್ವಚ್ಛತೆ, ಕಾನೂನು ನಾವು ಕಾಪಾಡಬೇಕಿದೆ. ಏಕಾಏಕಿ ಬಂದು ಇಲ್ಲಿ ಗುಡಿಸಲು ಹಾಕಲು ಬಿಡುವುದಿಲ್ಲ. ಪ್ರತಿಯೊಂದಕ್ಕೂ ದಾಖಲೆ ಇರಲೇಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಡ್ರಗ್ ಜಾಲ; ʻಯಾರು ಪತ್ತೆ ಹಚ್ಚಿದ್ರು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯʼ: ಪರಮೇಶ್ವರ್
ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಕರಣದ ಕುರಿತು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಕಾರ್ಯಾಚರಣೆಯ ಯಶಸ್ಸಿನ ಕ್ರೆಡಿಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಆಗೋದು ಮುಖ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್ ಉತ್ಪಾದನೆ ಆರಂಭವಾಗುವ ಮೊದಲೇ ಜಂಟಿ ಕಾರ್ಯಾಚರಣೆ ನಡೆಸಿ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2026 ಹೊಸ ವರ್ಷ ಸಂಭ್ರಮಾಚರಣೆ: ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿಷೇಧ
ಚಿಕ್ಕಮಗಳೂರು: ಹೊಸ ವರ್ಷವನ್ನು ನೀವು ಸಂಭ್ರಮದಿಂದ ಆಚರಣೆ ಮಾಡಬೇಕು, ಬೇರೆ ಬೇರೆ ಊರುಗಳಿಗೆ ಸುತ್ತಾಡುವ ಮೂಲಕ ಸಂಭ್ರಮಿಸಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಸಾಮಾನ್ಯವಾಗಿ ಹೊಸ ವರ್ಷ ಹಾಗೂ 2025ನೇ ಸಾಲಿನ ವರ್ಷಾಂತ್ಯ ರಜೆಗಳು ಸಿಗುವುದರಿಂದ ಕೆಲವರು ಊರುಗಳನ್ನು ಸುತ್ತುವುದಕ್ಕೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುವುದು ಇದೆ. ಆದರೆ
ಎಥೆನಾಲ್ ಖರೀದಿ, ರಾಜ್ಯ ಸರ್ಕಾರದ ಮನವಿಗೆ ಸಿಕ್ಕಿಲ್ಲ ಕೇಂದ್ರದ ಸ್ಪಂದನೆ: ಸಿದ್ದರಾಮಯ್ಯ ಅಸಮಾಧಾನ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76430 ಮೆ.ಟನ್ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್ ಮೆಕ್ಕೆಜೋಳ ಖರೀದಿಗೆ ಇಂಡೆಂಟ್ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೇ ಯೋಜನೆಗಳ ಭೂಸ್ವಾಧಿನ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ವರ್ಷಾಚರಣೆ; ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಡಿಜಿ-ಐಜಿಪಿ ಆದೇಶ
ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೋಮವಾರ ಆದೇಶಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಎಸ್ಪಿಗಳು, ವಲಯದ ಐಜಿಪಿಗಳು ಹಾಗೂ ನಗರಗಳ ಪೊಲೀಸ್ ಆಯುಕ್ತರುಗಳಿಗೆ 17 ಅಂಶಗಳುಳ್ಳ ಮಾರ್ಗಸೂಚಿಗಳನ್ನು ಹೊರಡಿರುವ ಅವರು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ವಾಹನಗಳ ನಿರಂತರ ಗಸ್ತು, ಪೊಲೀಸರ ಕಾಲ್ನಡಿಗೆ ಗಸ್ತು, ಅಶ್ವಾರೋಹಿ, ದ್ವಿಚಕ್ರ ವಾಹನ ಗಸ್ತುಗಳು ಸಾರ್ವಜನಿಕರಲ್ಲಿ ಪೊಲೀಸರ ಗೋಚರತೆಯನ್ನು ಹೆಚ್ಚಿಸುತ್ತದೆ ಹಾಗೂ ತುರ್ತು ಪ್ರತಿಕ್ರಿಯೆ ಸಾಧ್ಯವಾಗಿಸುತ್ತದೆ. ಪೂರ್ವನಿಯೋಜಿತ ಸ್ಥಳಗಳಲ್ಲಿ ಟ್ರಾಫಿಕ್ ಮತ್ತು ಎಸ್ಡಬ್ಲೂಎಟಿ ತಂಡಗಳನ್ನು ಒಳಗೊಂಡಂತೆ ಎಲ್ಲ ಘಟಕಗಳನ್ನು ನಿಯೋಜಿಸಬೇಕು ಹಾಗೂ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ವಿಡಿಯೋಗ್ರಾಫಿ ಮಾಡಿಸಬೇಕು ಎಂದು ಎಂ.ಎ.ಸಲೀಂ ತಿಳಿಸಿದ್ದಾರೆ. ಸಿಸಿಟಿವಿ, ಡ್ರೋನ್ ಮತ್ತು ನೈಜ ಸಮಯದ ಕ್ರೌಡ್ ಟ್ರ್ಯಾಕಿಂಗ್ ವ್ಯವಸ್ಥೆಗಳ ಮೂಲಕ ಜನಸಾಂದ್ರತೆಯ ಮೇಲ್ವಿಚಾರಣೆ, ವರ್ತನೆಯ ಸ್ವರೂಪ ಮತ್ತು ಒತ್ತಡಗಳು ಸಂಭವಿಸುವ ಸಾಧ್ಯತೆಗಳನ್ನು ನಿರ್ಧರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ಚೆಕ್ಪೋಸ್ಟ್ ಗಳಲ್ಲಿ ನಿಯೋಜಿಸಿ, ಲೋಹ ಶೋಧಕಗಳು, ಬ್ಯಾಗ್ ತಪಾಸಣೆ ಮತ್ತು ಟಿಕೆಟ್ ಪರಿಶೀಲನೆಯೊಂದಿಗೆ ಪ್ರವೇಶವನ್ನು ನಿಯಂತ್ರಿಸಿ ಅಪಾಯಗಳನ್ನು ಪತ್ತೆ ಹಚ್ಚುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂ.ಎ.ಸಲೀಂ ಹೇಳಿದ್ದಾರೆ. ಮಹಿಳೆಯರ ಚುಡಾಯಿಸುವುದನ್ನು ತಡೆಯಲು ಮಹಿಳಾ ಪೊಲೀಸ್ ತಂಡಗಳನ್ನು ನಿಯೋಜಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ದ ಸ್ಥಿತಿಯಲ್ಲಿ ಇಟ್ಟು ಸ್ಪಷ್ಟ ನಿರ್ಗಮನ ಮಾರ್ಗಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಡ್ರೋನ್ ಮತ್ತು ಸಿಸಿಟಿವಿಗಳ ಮೂಲಕ ನೈಜ ಸಮಯದ ನಿಗಾವಣೆ ಮಾಡಬೇಕು ಎಂದು ಎಂ.ಎ.ಸಲೀಂ ಆದೇಶಿಸಿದ್ದಾರೆ. ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಾರ್ಗಸೂಚಿಗಳ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಎಂ.ಎ.ಸಲೀಂ ಆದೇಶದಲ್ಲಿ ಸೂಚಿಸಿದ್ದಾರೆ.
ಮಂಗಳೂರು: ಬಿಜೆಪಿ ಮುಖಂಡನ ಪುತ್ರ ಮಗು ಕರುಣಿಸಿ ವಿವಾಹವಾಗದೆ ವಂಚಿಸಿದ ಪ್ರಕರಣದಲ್ಲಿ ಇನ್ನು ಸಂಧಾನ ಬದಲು ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವಕರ್ಮ ಸಮಾಜದ ಮುಂದಾಳು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿದ್ದಾರೆ. ಮಂಗಳೂರಿನಲ್ಲಿ ಸೋಮವಾರ ಮಗು ಸಹಿತ ಸಂತ್ರಸ್ತೆ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜೆ. ರಾವ್ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದು, ಆಕೆ ಆತನಿಂದ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟಿದೆ. ಹೀಗಾಗಿ ಆಕೆಯನ್ನು ವಿವಾಹವಾಗುವಂತೆ ಹಲವು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಯುವತಿ ಬಡ ಕುಟುಂಬವಾಗಿದ್ದು, ಇಬ್ಬರೂ ಒಂದಾಗಿ ಸಂಸಾರ ಮುನ್ನಡೆಸುವ ಯೋಚನೆಯಲ್ಲಿ ಆತನ ಪೋಷಕರ ಜೊತೆ ಸಂಧಾನ ನಡೆಸಲಾಗಿದೆ. ಆದರೆ ಆತನ ಪೋಷಕರು ವಿವಾಹಕ್ಕೆ ಆತ ಸಮ್ಮತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂಧಾನ ಮುರಿದುಬಿದ್ದಿದ್ದು, ಕಾನೂನು ಹೋರಾಟವೇ ಅನಿವಾರ್ಯವಾಗಿದೆ. ಅದರಲ್ಲಿ ಸಂತ್ರಸ್ತೆಗೆ ನ್ಯಾಯಸಿಗುತ್ತದೆ ಎಂಬ ಭರವಸೆ ಇದೆ ಎಂದರು. ಡಿಎನ್ಎ ಪರೀಕ್ಷೆಯಲ್ಲೂ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟ ಬಳಿಕವೂ ಆತ ಮದುವೆಗೆ ನಿರಾಕರಿಸುತ್ತಿದ್ದಾರೆ. ದ.ಕ. ಹಿಂದುತ್ವದ ನೆಲ, ವಿಶ್ವಕರ್ಮ ಸಮಾಜವವೂ ಅದನ್ನೇ ನಂಬಿಕೊಂಡು ಬಂದಿದೆ. ಆದರೆ ಈ ಬಡ ಕುಟುಂಬ ವಂಚನೆಗೆ ಒಳಗಾಗಿದೆ. ಕೃಷ್ಣ ಮತ್ತು ಸಂತ್ರಸ್ತೆ ಇಬ್ಬರೂ ತಪ್ಪು ಮಾಡಿದ್ದರೂ ಮಗುವಾದ ಕಾರಣ ಅವರನ್ನು ಒಂದು ಮಾಡಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸುವ ನಮ್ಮ ಪ್ರಯತ್ನ ಈಡೇರುತ್ತಿಲ್ಲ. ಕೃಷ್ಣನ ಪೋಷಕರು ಈಡೇರಿಸಲು ಸಾಧ್ಯವಾಗದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದರು. ಸಂತ್ರಸ್ತರಾದ ಮಗುವಿನ ತಾಯಿ ಹಾಗೂ ಆಕೆಯ ತಾಯಿ, ಸಮಾಜದ ಮುಂದಾಳುಗಳಾದ ರಾಜೇಶ್ ಆಚಾರ್ಯ, ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.
ಭಾರತೀಯರಿಗೆ ಚಿನ್ನವೆಂದರೆ ಕೇವಲ ಆಭರಣವಲ್ಲ, ಅದು ಒಂದು ಬಲವಾದ ಭಾವನೆ ಮತ್ತು ಭವಿಷ್ಯದ ಬಂಡವಾಳ. ಚಿನ್ನದ ದರ ಏರಿಕೆಯಾದಾಗಲೆಲ್ಲಾ, “ಅಯ್ಯೋ, ಆಗಲೇ ತೆಗೆದುಕೊಂಡಿರಬೇಕಿತ್ತು” ಎಂದು ಚರ್ಚಿಸುವುದು ಸಾಮಾನ್ಯ. ಪ್ರತಿಯೊಬ್ಬರೂ ಹಳದಿ ಲೋಹದ (Gold) ಏರಿಳಿತಗಳನ್ನೇ ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೆ, ನೀವೇನಾದರೂ ಕೇವಲ ಚಿನ್ನದ ಬೆಲೆಯನ್ನು ಮಾತ್ರ ಗಮನಿಸುತ್ತಿದ್ದರೆ, ನೀವು ಮಾರುಕಟ್ಟೆಯ ಮತ್ತೊಂದು ‘ಅಮೂಲ್ಯ’ ಅವಕಾಶವನ್ನು ಕಡೆಗಣಿಸುತ್ತಿರಬಹುದು. ಹೌದು, ಎಲ್ಲರ ಕಣ್ಣು ಚಿನ್ನದ ಮೇಲಿದ್ದರೆ, ಇಲ್ಲಿ ಇನ್ನೊಂದು ಲೋಹವು ಸದ್ದಿಲ್ಲದೇ ಹೂಡಿಕೆದಾರರಿಗೆ ಚಿನ್ನಕ್ಕಿಂತಲೂ ಹೆಚ್ಚಿನ ಪಟ್ಟು ಲಾಭವನ್ನು ತಂದುಕೊಟ್ಟಿದೆ. ... Read more The post ಚಿನ್ನ ಬಿಡಿ, ಬೆಳ್ಳಿ ನೋಡಿ: 1 ಲಕ್ಷ ಹೂಡಿಕೆಗೆ 2020ರಿಂದ 2025ರವರೆಗೆ ಚಿನ್ನಕ್ಕಿಂತ ಬೆಳ್ಳಿ ಕೊಟ್ಟ ಲಾಭ ಎಷ್ಟು ಗೊತ್ತಾ? appeared first on Karnataka Times .
ಕೋಗಿಲು ಬಳಿ ಅನಧಿಕೃತ ಮನೆಗಳ ನೆಲಸಮ; ಸ್ಥಳಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿ
ಬೆಂಗಳೂರು : ಕೋಗಿಲು ಬಳಿ ನಿರ್ಮಾಣಗೊಂಡಿದ್ದ ಅನಧಿಕೃತ ಮನೆಗಳನ್ನು ನೆಲಸಮಗೊಳಿಸಿದ ಸ್ಥಳಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಸೋಮವಾರ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮ್ ಭಟ್ ಅವರು, ಘಟನೆ ಕುರಿತು ಮಾನವ ಹಕ್ಕುಗಳ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಮನೆಗಳನ್ನು ತೆರವು ಮಾಡಿರುವ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದಿಂದ ವರದಿ ಕೇಳಿದ್ದೇವೆ ಎಂದು ಹೇಳಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿರುವ ಪೊಲೀಸ್ ಘಟಕದ ಎಡಿಜಿಪಿ ನೇತೃತ್ವದಲ್ಲಿ ಇಲ್ಲಿನ ಪರಿಸ್ಥಿತಿ ಕುರಿತು ತನಿಖೆ ಮಾಡುತ್ತೇವೆ. ಸ್ಥಳೀಯರಿಂದ ದಾಖಲಾತಿ ಪಡೆದು, ಅವುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಲಾಗುವುದು. ತನಿಖೆ ಪೂರ್ಣಗೊಂಡ ನಂತರ ಸರಕಾರಕ್ಕೆ ಶಿಫಾರಸುಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು. ಮನೆಗಳನ್ನು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಳಜಿ ಕೇಂದ್ರಗಳು ತುಂಬಾ ದೂರದ ಪ್ರದೇಶದಲ್ಲಿ ಇದೆ ಎಂದು ಸ್ಥಳೀಯರು ದೂರುತಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ಪೊಲೀಸರು ತನಿಖೆಗೆ ಬಂದಾಗ ನಿಮ್ಮ ಬಳಿ ಇರುವ ದಾಖಲೆಗಳನ್ನು ಅವರಿಗೆ ನೀಡುವಂತೆ ಇಲ್ಲಿರುವವರಿಗೆ ಸೂಚನೆ ನೀಡಿದ್ದೇನೆ ಎಂದು ಶ್ಯಾಮ್ ಭಟ್ ಹೇಳಿದರು. ರಾಜೀವ್ ಗಾಂಧಿ ವಸತಿ ನಿಗಮದಿಂದ ಸರ್ವೆ: ಫಕೀರ್ ಲೇಔಟ್ ಹಾಗೂ ವಸೀಮ್ ಲೇಔಟ್ನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದು, ಮನೆಗಳನ್ನು ಕಳೆದುಕೊಂಡಿರುವವರ ಬಳಿ ಇರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ನೀಡಿರುವ ತಾತ್ಕಾಲಿಕ ಹಕ್ಕುಪತ್ರ, ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸ್ಥಳೀಯರು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹಾವೇರಿ: ಜನವರಿ 11 ರಂದು ಸಂಸದರ ಕ್ರೀಡಾ ಮಹೋತ್ಸವ-2026
ಹಾವೇರಿ: ಕ್ರೀಡಾ ಸಂಸ್ಕೃತಿಯನ್ನು ಪೋಷಿಸುವುದು, ಸ್ಥಳೀಯ (ದೇಶಿಯ) ಮತ್ತು ಮುಖ್ಯವಾಹಿನಿಯ ಕ್ರೀಡೆಗಳನ್ನು ಉತ್ತೇಜಿಸಲು, ಯುವಕರು ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಾವೇರಿ - ಗದಗ ಲೋಕಸಭಾ ವ್ಯಾಪ್ತಿಯಲ್ಲಿ ಸಂಸದರ ಕ್ರೀಡಾ ಮಹೋತ್ಸವ-2026 ಆಯೋಜಿಸಲಾಗುತ್ತಿದೆ. ಇದು ಸಚಿವಾಲಯದ ಮಹತ್ವದ ದೃಷ್ಟಿಕೋನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಸೋಮವಾರ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಾವೇರಿ-ಗದಗ
ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋದ ವಿದ್ಯಾರ್ಥಿಗಳಿಗೆ ಗಡೀಪಾರಾಗುವ ಭೀತಿ!
ಹೈಬ್ರಿಡ್ ಕೋರ್ಸ್ ಗುರುತಿಸುವಿಕೆಯಲ್ಲಾದ ಸಮಸ್ಯೆ ಮತ್ತು ವೀಸಾ ಅನುಸರಣೆಯನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವ ಗೊಂದಲದಿಂದಾಗಿ ವಿದ್ಯಾರ್ಥಿಗಳು ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ನೋಂದಣಿಯಾದ ನೂರಾರು ಭಾರತೀಯ ವಿದ್ಯಾರ್ಥಿಗಳು ಇದೀಗ ವೀಸಾ ಅನಿಶ್ಚಿತತೆ ಮತ್ತು ಭಾರತಕ್ಕೆ ಗಡೀಪಾರಾಗುವ ಆತಂಕದಲ್ಲಿದ್ದಾರೆ. ಹೈಬ್ರಿಡ್ ಕೋರ್ಸ್ ಗುರುತಿಸುವಿಕೆಯಲ್ಲಾದ ಸಮಸ್ಯೆ ಮತ್ತು ವೀಸಾ ಅನುಸರಣೆಯನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವ ಗೊಂದಲದಿಂದಾಗಿ ವಿದ್ಯಾರ್ಥಿಗಳು ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಒಟ್ಟಾರೆ ಪ್ರಕರಣವು ಜರ್ಮನಿಯ ಅಂತಾರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ. ನೂರಾರು ಭಾರತೀಯರಿಗೆ ಜರ್ಮನಿಯಲ್ಲಿ ಓದುವುದು ಜೀವನದ ದೊಡ್ಡ ತಿರುವು ಆಗಿರುತ್ತದೆ. ಜಾಗತಿಕವಾಗಿ ಗೌರವಯುತ ಪದವಿ, ಉತ್ತಮ ವೃತ್ತಿ ಆಯ್ಕೆಗಳು ಮತ್ತು ಯುರೋಪ್ನಲ್ಲಿ ಜೀವನ ಕಂಡುಕೊಳ್ಳುವ ಅವಕಾಶವಾಗಿರುತ್ತದೆ. ಬದಲಾಗಿ ಇದೀಗ ಬರ್ಲಿನ್ ಇಂಟರ್ನ್ಯಾಷನಲ್ ಯುನಿವರ್ಸಿಟಿಯಲ್ಲಿ (ಐಯು) ನೋಂದಣಿಯಾದ ಹಲವರಿಗೆ ವೀಸಾ ನೋಟೀಸ್ಗಳು ಬಂದಿವೆ. ನ್ಯಾಯಾಲಯದ ಮೇಲ್ಮನವಿಗಳು ಮತ್ತು ಗಡೀಪಾರಿನ ಭೀತಿ ಎದುರಾಗಿದೆ. Euronews ವರದಿಯ ಪ್ರಕಾರ ಲಕ್ಷಾಂತರ ಟ್ಯೂಷನ್ ಶುಲ್ಕ ಮತ್ತು ಶಿಕ್ಷಣ ಸಾಲವನ್ನು ತೆತ್ತು ಜರ್ಮನಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ದೇಶ ತೊರೆಯುವಂತೆ ಹೇಳಲಾಗಿದೆ. ವಿದ್ಯಾರ್ಥಿಗಳು ಕಾನೂನು ಉಲ್ಲಂಘಿಸಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲ. ಇದೀಗ ವಲಸೆ ಪ್ರಧಿಕಾರ ವಿಶ್ವವಿದ್ಯಾಲಯದ ಪ್ರೋಗ್ರಾಂ ಅನ್ನು ಭಿನ್ನವಾಗಿ ವ್ಯಾಖ್ಯಾನಿಸಿರುವುದು ಕಾರಣವಾಗಿದೆ. ಡೆಸರ್ಟೇಶನ್ಗಳು ಮತ್ತು ಅಂತಿಮ ಮೊಡ್ಯುಲ್ಗಳ ಕಡೆಗೆ ಗಮನ ಹರಿಸುವ ಬದಲಾಗಿ ವಿದ್ಯಾರ್ಥಿಗಳು ವಿದೇಶದಲ್ಲಿ ಓದುವ ತಮ್ಮ ಕಾನೂನಾತ್ಮಕ ಸ್ಥಿತಿ ಕೈಜಾರಿ ಹೋಗಿರುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಗೊಂದಲ ಏರ್ಪಟ್ಟರಿವುದೇಕೆ? ಈ ಸಮಸ್ಯೆಯ ಮೂಲ ಇರುವುದು ಹೈಬ್ರಿಡ್ ಮತ್ತು ಆನ್ಲೈನ್ ಪ್ರೋಗ್ರಾಂಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ನೀಡಲಾಗುತ್ತಿದೆ ಎನ್ನುವುದನ್ನು ವೀಸಾ ಅನುಸರಣೆಗಾಗಿ ಮೌಲ್ಯಮಾಪನ ಮಾಡಲಾಗುತ್ತಿರುವುದು. ವಿದ್ಯಾರ್ಥಿಗಳು ಕಾನೂನಾತ್ಮಕವಾಗಿಯೇ ಜರ್ಮನಿಯನ್ನು ಪ್ರವೇಶಿಸಿದ್ದರೂ, ಅವರು ಮಾನ್ಯತೆ ಹೊಂದಿರುವ ವೈಯಕ್ತಿಕವಾಗಿ ಕಾಲೇಜಿಗೆ ಹೋಗಿ ಕಲಿಯುವ ಪದವಿ ಪ್ರೋಗ್ರಾಂಗಳಿಗೆ ದಾಖಲಾಗಿದ್ದರೂ, ಈ ಕೋರ್ಸ್ಗಳಿಗೆ ಸ್ವತಃ ಸೇರ್ಪಡೆಯಾಗಿ ಕಲಿಯುವ ಅಗತ್ಯವಿದೆಯೇ ಅಥವಾ ಆನ್ಲೈನ್ನಲ್ಲಿ ಕಲಿಯಬಹುದೇ ಎಂದು ಅಧಿಕಾರಿಗಳು ಇದೀಗ ಪ್ರಶ್ನಿಸುತ್ತಿದ್ದಾರೆ. ಇಂತಹ ಸನ್ನಿವೇಶಗಳು ಅಂತಾರಾಷ್ಟ್ರೀಯ ಶಿಕ್ಷಣದ ಹಾದಿಯಲ್ಲಿನ ಸಂಕೀರ್ಣತೆಯನ್ನು ಪ್ರದರ್ಶಿಸುತ್ತವೆ. ಶೈಕ್ಷಣಿಕ ಕೋರ್ಸ್ ನೀಡುವಿಕೆ, ನಿಯಂತ್ರಣ ವಿವರಣೆಗಳು ಮತ್ತು ವೀಸಾ ಅನುಸರಣೆಯ ವ್ಯವಸ್ಥೆಗಳ ನಡುವೆ ಹೊಂದಾಣಿಕೆ ಇರಬೇಕಾದ ಮಹತ್ವವನ್ನು ಎತ್ತಿ ತೋರಿಸುತ್ತವೆ. ನೋಂದಣಿಯ ಸಮಯದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ವಿಶ್ವವಿದ್ಯಾಲಯಗಳು ಮತ್ತು ಮಧ್ಯವರ್ತಿಗಳು ನೀಡಿರುವ ಮಾಹಿತಿಯುನ್ನು ಅನುಸರಿಸಿ ಜೀವನ ಬದಲಾಗುವ ನಿರ್ಧಾರಗಳನ್ನು ವಿದ್ಯಾರ್ಥಿಗಳು ಕೈಗೊಂಡಿರುತ್ತಾರೆ. ಶೈಕ್ಷಣಿಕ ಪ್ರೋಗ್ರಾಂಗೆ ನಿಯಂತ್ರಣದ ವ್ಯಾಖ್ಯಾನ ಅಥವಾ ಅನುಸರಣೆಯ ಅಗತ್ಯವು ಕಾಲಾನುಸಾರ ಭಿನ್ನವಾಗಿ ಅನ್ವಯಿಸುವ ಸಾಧ್ಯತೆಯಿದೆ. ಸೂಕ್ತ ಸ್ಪಷ್ಟತೆ ಮತ್ತು ಅನುಕೂಲತೆ ಇಲ್ಲದಾಗ ವಿಶ್ವಾಸವಿಟ್ಟು ವಿದ್ಯಾಭ್ಯಾಸಕ್ಕಾಗಿ ಹೋದ ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆ ಮೂಡಿಸಬಹುದು. ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಲುಕಿದ ವಿದ್ಯಾರ್ಥಿಗಳು ಇದೀಗ ನಿಯಮದ ಮರುವಿಶ್ಲೇಷಣೆಯಿಂದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಬಹಳಷ್ಟು ಮಂದಿ 20,000 ಡಾಲರ್ಗೂ ಮೀರಿ ಶಿಕ್ಷಣ ಸಾಲವನ್ನು ಪಡೆದು ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾರೆ. ಅವರಲ್ಲಿ ಕೆಲವರಿಗೆ ಜರ್ಮನಿಯ ಕ್ಯಾಂಪಸ್ನಲ್ಲಿ ಓದುವ ಅವಕಾಶ ನೀಡಲಾಗಿದ್ದರೂ, ಇದೀಗ ನಿಯಮದ ಅನುಸರಣೆಗೆ ಸಂಬಂಧಿಸಿ ಭಾರತದಿಂದಲೇ ಆನ್ಲೈನ್ ಮೂಲಕ ವಿದ್ಯಾಭ್ಯಾಸವನ್ನು ಮಾಡುವಂತೆ ಸೂಚಿಸಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾಭ್ಯಾಸವು ಸಂಸ್ಥೆಗಳು, ಮಧ್ಯವರ್ತಿಗಳು ಮತ್ತು ವಲಸೆ ಅಧಿಕಾರಿಗಳ ನಡುವಿನ ಸಂವಹನದಲ್ಲಿ ನಡೆಯುತ್ತದೆ. ಆದರೆ ಈ ಸಂವಹನದಲ್ಲಿ ಏನೇ ಸಮಸ್ಯೆ ಕಂಡುಬಂದರೂ ವಿದ್ಯಾರ್ಥಿಗಳು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಅದನ್ನು ಅವರು ಸ್ವತಃ ನಿರ್ವಹಿಸಲು ಸಾಧ್ಯವಿಲ್ಲ. ಭಾರತೀಯ ಕುಟುಂಬಗಳಿಗೆ ಎಚ್ಚರಿಕೆಯ ಗಂಟೆ ಜರ್ಮನಿಯ ಪ್ರಕರಣ ತಮ್ಮ ಮಕ್ಕಳನ್ನು ವಿದೇಶಿ ಶಿಕ್ಷಣಕ್ಕೆ ಕಳುಹಿಸುವ ಭಾರತೀಯ ಕುಟುಂಬಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಜರ್ಮನಿ ಬಹಳ ದೀರ್ಘಕಾಲದಿಂದ ವಿದ್ಯಾರ್ಥಿಗಳಿಗೆ ಅನುಕೂಲಕರ ವಿದ್ಯಾಭ್ಯಾಸದ ತಾಣವಾಗಿದೆ. ಅಮೆರಿಕ ಮತ್ತು ಯುಕೆಗೆ ಹೋಲಿಸಿದರೆ ಪಾರದರ್ಶಕ ವ್ಯವಸ್ಥೆಯಿತ್ತು. ಇಂತಹ ಪ್ರಕರಣಗಳು ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಲಿದೆ. ದಾಖಲಾತಿ ಮತ್ತು ಶುಲ್ಕ ಪಾವತಿಯನ್ನು ಮೀರಿ ಪ್ರೋಗ್ರಾಂಗಳ ವಿವರಪಡೆಯುವುದು, ಟ್ಯೂಷನ್ ವಿವರ ಮತ್ತು ಕಾಲೇಜಿಗೆ ಹೋಗಿ ಕಲಿಯುವ ಅಗತ್ಯವಿದೆಯೇ, ವೀಸಾ ಲಭ್ಯತೆ ಇದೆಯೇ ಎನ್ನುವುದನ್ನು ಅಧಿಕೃತ ಮೂಲಗಳಿಂದ ತಿಳಿದುಕೊಳ್ಳಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ. ಈಗಿನ ಅನಿಶ್ಚಿತತೆಯು ಹೊಸ ಶಿಕ್ಷಣ ಮಾದರಿಗಳು ಮತ್ತು ಹಳೇ ನಿಯಂತ್ರಣ ಚೌಕಟ್ಟುಗಳ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನೂ ತೋರಿಸುತ್ತದೆ. ಹೈಬ್ರಿಡ್ ಮತ್ತು ಫ್ಲೆಕ್ಸಿಬಲ್ ಪದವಿಗಳು ಜಾಗತಿಕವಾಗಿ ಸಾಮಾನ್ಯವೆನಿಸಿವೆ. ಆದರೆ ವಲಸೆ ನಿಯಮಗಳು ಇದಕ್ಕೆ ತಕ್ಕಂತೆ ರೂಪುಗೊಂಡಿಲ್ಲ. ಇದು ಬರ್ಲಿನ್ಗೆ ಮಾತ್ರ ಸೀಮಿತ ಸಮಸ್ಯೆಯಲ್ಲ ಪ್ರಸ್ತುತ ಅನೇಕ ವಿದ್ಯಾರ್ಥೀಗಳು ಬರ್ಲಿನ್ನಲ್ಲಿ ಗಡೀಪಾರಾಗುವ ಆತಂಕ ಎದುರಿಸುತ್ತಿದ್ದಾರೆ. ಕಾನೂನಾತ್ಮಕವಾಗಿ ಅಸ್ತಿತ್ವದಲ್ಲಿದ್ದಾರೆ, ದಾಖಲಾತಿ ಆಗಿದೆ ಆದರೆ ಪದವಿ ಪೂರ್ಣಗೊಳ್ಳುವವರೆಗೆ ದೇಶದಲ್ಲಿ ಇರಲು ಅವಕಾಶವಿಲ್ಲ. ಅಂತಾರಾಷ್ಟ್ರೀಯ ವಿದ್ಯಾಭ್ಯಾಸದಲ್ಲಿ ವಿಶ್ವಾಸ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಸಮಯ, ಸಂಪನ್ಮೂಲ ಮತ್ತು ವೈಯಕ್ತಿಕ ಆಶೋತ್ತರಗಳನ್ನು ಇಟ್ಟುಕೊಂಡು ವಿದೇಶಿ ವಿದ್ಯಾಭ್ಯಾಸಕ್ಕೆ ಹೋಗಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗುವಂತಹ ನಿರಂತರ ಮಾಹಿತಿ, ಸಂಬಂಧಿತ ವ್ಯವಸ್ಥೆಗಳು ಮತ್ತು ಎರಡೂ ಕಡೆ ಬದ್ಧತೆ ಇರಬೇಕಾಗುತ್ತದೆ. ಜಾಗತಿಕವಾಗಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸಂಚರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಅನಿಶ್ಚಿತತೆ ಇತರೆಡೆಗಳಲ್ಲೂ ವ್ಯವಸ್ಥೆ ವಿಫಲವಾಗವ ಆತಂಕವನ್ನು ಒಡ್ಡಲಿದೆ. ಕೃಪೆ: India Today
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ: ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹಿಸಿ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ ಎಂದು ಆರೋಪಿಸಿದರು. ಡ್ರಗ್ ಪೆಡ್ಲರ್ಗಳನ್ನು ನಮ್ಮ ಸರಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊಲೀಸರು ದಾಳಿ ಮಾಡಬೇಕಾಯಿತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ರಾಜ್ಯದ ಗೃಹ ಇಲಾಖೆ ಸತ್ತು ಹೋಗಿದೆಯೇ? ಬೇಹುಗಾರಿಕಾ ದಳ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಪೊಲೀಸರು ಇದನ್ನು ಪತ್ತೆ ಹಚ್ಚಿದ ಬಳಿಕ ಇಲ್ಲಿನ ಕಾಂಗ್ರೆಸ್ ಸರಕಾರ ನಾವು ಹಿಡಿದಿದ್ದೇವೆ ಎಂದು ತಿಳಿಸಿ, ಘನ ಕಾರ್ಯ ಮಾಡಿದಂತೆ ವರ್ತಿಸುತ್ತದೆ ಎಂದು ಆರೋಪಿಸಿದರು.
ಈ ಐದು ಆಹಾರಗಳನ್ನು ಬೆಕ್ಕುಗಳಿಗೆ ನೀಡಲೇಬಾರದು!
ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಿರುವ ಆಹಾರ ಬೆಕ್ಕುಗಳಿಗೆ ಗರಿಷ್ಠ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಆಹಾರದಲ್ಲಿ ಬಳಸಲೇಬಾರದ ವಸ್ತುಗಳು ಯಾವುವು? ಬೆಕ್ಕುಗಳು ಮಾಂಸಾಹಾರಿಗಳು. ಬೆಕ್ಕುಗಳಿಗೆ ಹೃದಯಾಘಾತ ಅಥವಾ ಕಣ್ಣು ಕುರುಡಾಗುವ ರೋಗಗಳು ಬಾರದಂತೆ ತಡೆಯಲು ಅಮಿನೋ ಆಮ್ಲಗಳು ಮತ್ತು ಟೌರೀನ್ನಂತಹ ಪೋಷಕಾಂಶಗಳ ಅಗತ್ಯವಿದೆ. ಮಾಂಸ, ಮೀನು ಮತ್ತು ಹೈನುಗಾರಿಕಾ ಉತ್ಪನ್ನಗಳಿರುವ ಆಹಾರ ಗರಿಷ್ಠ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಆಹಾರದಲ್ಲಿ ಬಳಸಲೇಬಾರದ ವಸ್ತುಗಳು ಯಾವುವು? ಸಾಕುಪ್ರಾಣಿಗಳ ತಜ್ಞರು ಹೇಳುವ ಪ್ರಕಾರ ಆರೋಗ್ಯ ಮತ್ತು ದೀರ್ಘಕಾಲ ಬದುಕುವ ಉದ್ದೇಶಕ್ಕಾಗಿ ಐದು ವಸ್ತುಗಳನ್ನು ಬೆಕ್ಕಿಗೆ ನೀಡಲೇಬಾರದು. ಚಾಕಲೇಟು ವಿಗಲ್ಸ್ನಲ್ಲಿ ವೆಟರ್ನರಿ ಸರ್ವಿಸ್ ನಿರ್ದೇಶಕರಾಗಿರುವ ಡಾ ದಿಲಿಪ್ ಸೊನ್ಯುನ್ ಹೇಳುವ ಪ್ರಕಾರ ಚಾಕಲೇಟು ಬೆಕ್ಕಿಗೆ ಅತಿ ವಿಷಕಾರಿ ಆಹಾರ. ಚಾಕಲೇಟು ಹೊರತುಪಡಿಸಿ ಕಾಫಿ ಮತ್ತು ಕೆಫೈನ್ ಹೊಂದಿರುವ ವಸ್ತುಗಳನ್ನು ನೀಡಲೇಬಾರದು. ಮೀಥೈಲ್ಕ್ಸನ್ಥೈನ್ ಹೊಂದಿರುವ ವಸ್ತುಗಳನ್ನು ಬೆಕ್ಕಿಗೆ ನೀಡಬಾರದು. ಮೀಥೈಲ್ಕ್ಸನ್ಥೈನ್ ಸೇವನೆಯಿಂದ ಬೆಕ್ಕಿಗೆ ಬೇಧಿ, ವಾಕರಿಕೆ, ಉಸಿರುಗಟ್ಟಬಹುದು. ಮಾತ್ರವಲ್ಲದೆ, ಅತಿಯಾದ ಮೂತ್ರ ವಿಸರ್ಜನೆಯಾಗಬಹುದು ಅಥವಾ ಹಸಿವೆ, ಅತಿಯಾದ ಚಟುವಟಿಕೆ, ಕಂಪನ, ಪಾರ್ಶ್ವವಾಯು ಮೊದಲಾದುವು ಕಾಣಿಸಿಕೊಳ್ಳಬಹುದು. ಹೃದಯದಲ್ಲಿ ಅಸಹಜ ಲಯ ಮತ್ತು ಕೆಲವೊಮ್ಮೆ ಮರಣವೂ ಸಂಭವಿಸಬಹುದು. ಚಾಕಲೇಟು ಕಡುವಾದಷ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ. ದ್ರಾಕ್ಷಿಗಳು ಮತ್ತು ಒಣ ದ್ರಾಕ್ಷಿಗಳು ದ್ರಾಕ್ಷಿಗಳು ಮತ್ತು ಒಣ ದ್ರಾಕ್ಷಿಗಳು ಬೆಕ್ಕುಗಳಿಗೆ ತೀವ್ರ ವಿಷಕಾರಿ. ಇದರಿಂದ ಕಿಡ್ನಿ ವೈಫಲ್ಯ ಸಂಭವಿಸಬಹುದು. ಸಣ್ಣ ಪ್ರಮಾಣದಲ್ಲಿ ನೀಡಿದರೂ ಮಾರಕವಾಗಿ ಪರಿಣಮಿಸಬಹುದು. ಕಡಲೆಗಳು ಬಾದಾಮಿಗಳು, ವಾಲ್ನಟ್ಗಳು ಮತ್ತು ಪೀಕನ್ ಮರದ ಕಾಯಿಗಳು ಅತಿಯಾದ ಕೊಬ್ಬು ಮತ್ತು ಎಣ್ಣೆಮಯವಾಗಿರುತ್ತವೆ. ಈ ಅತಿಯಾದ ಕೊಬ್ಬುಗಳು ಬೆಕ್ಕುಗಳಲ್ಲಿ ಅತಿಸಾರ, ವಾಕರಿಕೆಗೆ ಕಾರಣವಾಗಬಹುದು. ಅಲ್ಲದೆ, ಮೇದೋಜೀರಕ ಗ್ರಂಥಿಯ ಉರಿಯೂತವೂ ಸಂಭವಿಸಬಹುದು. ಈರುಳ್ಳಿಗಳು ಮತ್ತು ಬೆಳ್ಳುಳ್ಳಿಗಳು ಈರುಳ್ಳಿಗಳು ಮತ್ತು ಬೆಳ್ಳುಳ್ಳಿಗಳ ಸೇವನೆಯಿಂದ ಜಠರಗರುಳಿನ ಸಮಸ್ಯೆ ಕಂಡುಬರಬಹುದು. ಅನೀಮಿಯ ಮತ್ತು ಕೆಂಪು ರಕ್ತ ಕಣದ ಹಾನಿಗೂ ಕಾರಣವಾಗಬಹುದು. ಬೆಕ್ಕುಗಳು ನಾಯಿಗಳಿಗಿಂತ ಹೆಚ್ಚು ಸುಲಭವಾಗಿ ರೋಗಕ್ಕೆ ತುತ್ತಾಗುತ್ತವೆ. ನಾಯಿಗಳೂ ಅತಿಯಾದ ಪ್ರಮಾಣದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಥವಾ ಚೀವ್ ತರಕಾರಿ ಸೇವಿಸಿದರೆ ಅನಾರೋಗ್ಯಕ್ಕೆ ಈಡಾಗಬಹುದು. ಸಕ್ಕರೆ ಸಕ್ಕರೆ ಮತ್ತು ಕ್ಸೈಲಿಟಾಲ್ ಬೆಕ್ಕುಗಳಿಗೆ ಹಾನಿಕರವಾಗಬಹುದು. ಕ್ಯಾಂಡಿ, ಚ್ಯೂಯಿಂಗ್ ಗಮ್, ಟೂತ್ಪೇಸ್ಟ್, ಕೇಕ್, ಕುಕೀಸ್ ಮತ್ತು ಬೇಕ್ ಮಾಡಿದ ಸರಕುಗಳಲ್ಲಿ ಕ್ಸೈಲಿಟಾಲ್ ಅನ್ನು ಸ್ವೀಟ್ನರ್ ಆಗಿ ಬಳಸಲಾಗುತ್ತದೆ. ಸಕ್ಕರೆ ಅಥವಾ ಕ್ಸೈಲಿಟಾಲ್ ಸೇವನೆಯಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಇದರಿಂದ ಲಿವರ್ (ಯಕೃತ್ತು) ವೈಫಲ್ಯವಾಗುವ ಸಾಧ್ಯತೆಯಿರುತ್ತದೆ. ಇನ್ಸುಲಿನ್ ಹೆಚ್ಚಾದಾಗ ನಿಮ್ಮ ಸಾಕುಪ್ರಾಣಿಯ ಸಕ್ಕರೆಯ ಪ್ರಮಾಣದಲ್ಲಿ ಕುಸಿತ ಸಂಭವಿಸಬಹುದು. ಅದನ್ನು ಹೈಪೊಗ್ಲೈಸೆಮಿಯ ಎಂದು ಹೇಳಲಾಗುತ್ತದೆ. ಕ್ಸೈಲಿಟಾಲ್ ವಿಷ ಸೇವನೆಯಾಗಿರುವ ಆರಂಭಿಕ ಚಿಹ್ನೆಗಳಲ್ಲಿ ವಾಂತಿ, ಸಮನ್ವಯದ ಕೊರತೆ ಮತ್ತು ಆಲಸ್ಯ ಕಂಡುಬರಬಹುದು. ಅವುಗಳು ನಂತರ ಕಂಪನ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು. ಕೃಪೆ: indianexpress.com
ಯುಟ್ಯೂಬ್ ನಲ್ಲಿ ಕಾಣುವ ಐದು ವೀಡಿಯೋಗಳಲ್ಲಿ ಒಂದು AI ಸ್ಲಾಪ್ ಎನ್ನುವುದು ನಿಮಗೆ ಗೊತ್ತೆ?
ಏನಿದು AI ಸ್ಲಾಪ್?; ಇಲ್ಲಿದೆ ಮಾಹಿತಿ…
ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡೋ ಈ ಬಿಹಾರಿ ಪೋರಿ ಕನ್ನಡ ಸಬ್ಜೆಕ್ಟ್ ನಲ್ಲಿ ಕ್ಲಾಸಿಗೇ ಟಾಪರ್!
ಬೆಂಗಳೂರಿನಲ್ಲಿ 10 ವರ್ಷದ ಮೃಗಾಂಕಾ ಅಭಿಷೇಕ್ ಎಂಬ ಬಾಲಕಿ ಕನ್ನಡದಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಶಾಲೆಯಲ್ಲಿ ಕನ್ನಡದಲ್ಲಿ ಟಾಪರ್ ಆಗಿರುವ ಈಕೆ, ತಂದೆಯ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿ, ಅದರ ಅರ್ಥವನ್ನೂ ವಿವರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಭತ್ತದ ಗದ್ದೆಗಳಲ್ಲಿ ಮೀಥೇನ್ ಕಡಿತಗೊಳಿಸಿ ಹಣ ಗಳಿಸಬಹುದು!
ಕಾರ್ಬನ್ ಕ್ರೆಡಿಟ್ಗಳಿಂದ ಹಣ ಗಳಿಸುವುದು ಭಾರತೀಯ ರೈತರಿಗೆ ಹೊಸ ಆದಾಯದ ಮೂಲವಾಗಿದೆ. ನೀರಿನ ಬಳಕೆ ಕಡಿಮೆಗೊಳಿಸಿ ಹವಾಮಾನ ಗುರಿಯನ್ನೂ ತಲುಪುವುದು ಸುಲಭದ ಮಾತಲ್ಲ. ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಕಡಿತ ಮಾಡುವುದು ಮತ್ತು ಹವಾಮಾನ ಗುರಿಗಳನ್ನು ತಲುಪುವುದು ರೈತರಿಗೆ ಸುಲಭದ ಕೆಲಸವಲ್ಲ. ಮುಖ್ಯವಾಗಿ ಅದಕ್ಕಾಗಿ ಹೊಸ ಯಂತ್ರಗಳು ಬೇಕಾದಾಗ ಮತ್ತು ಇಳುವರಿಯೂ ಕಡಿಮೆಯಾದಾಗ ಅಂತಹ ಪ್ರಯತ್ನಗಳಿಗೆ ಇಳಿಯಲು ಹಿಂಜರಿಯುತ್ತಾರೆ. ಭಾರತದಂತಹ ದೇಶದಲ್ಲಿ ಇನ್ನೂ ಕಷ್ಟ. ಏಕೆಂದರೆ ಶೇ 86ರಷ್ಟು ರೈತರು ಸಣ್ಣ ಅಥವಾ ಮಧ್ಯಮ ಎಕರೆಗಳಷ್ಟು ಭೂಮಿ ಹೊಂದಿರುತ್ತಾರೆ. ಅಂದರೆ 2 ಹೆಕ್ಟೇರ್ಗಳು ಅಥವಾ 5 ಎಕರೆಗಳ ಒಳಗೆ ಭೂಮಿ ಹೊಂದಿರುವಾಗ ಸಮಸ್ಯೆ ದೊಡ್ಡದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕಡಿಮೆ ಪ್ರಯತ್ನದ ಅತಿ ಹೆಚ್ಚು ಪರಿಣಾಮ ಬೀರುವ ಕೃಷಿ ಚಟುವಟಿಕೆಯಿಂದ ವ್ಯತ್ಯಾಸ ತರಬಹುದು. ಅಂತಹ ಒಂದು ಅಭ್ಯಾಸದಲ್ಲಿ ನಿರ್ದಿಷ್ಟ ಭತ್ತದ ಕೃಷಿಯಲ್ಲಿ ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ (AWD) ವಿಧಾನ. ಅಂದರೆ ಇದೊಂದು ನೀರು ಉಳಿಸುವ ತಂತ್ರವಾಗಿದ್ದು, ಹೊಲವನ್ನು ಆವರ್ತನದಲ್ಲಿ ಕೆಲವು ದಿನಗಳವರೆಗೆ ಒಣಗಲು ಬಿಡಲಾಗುತ್ತದೆ ಮತ್ತು ನಂತರ ಪುನಃ ನೀರಾವರಿ ಮಾಡಲಾಗುತ್ತದೆ. ಸಾಂಪ್ರದಾಯಿಕ ಬಿತ್ತನೆ ವಿಧಾನ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಭತ್ತದ ಬಿತ್ತನೆ ಮಾಡಲಾಗುತ್ತದೆ ಮತ್ತು ಹೊಸ ಸಸ್ಯಗಳನ್ನು ಬೆಳೆಸಲಾಗುತ್ತದೆ. ಬಿತ್ತನೆಯಾದ 25-30 ದಿನಗಳಲ್ಲಿ ಅದನ್ನು ತೆಗೆದು ಮರಳಿ ನೆಡಲಾಗುತ್ತದೆ. ಬಿತ್ತನೆಯಾದ ಜಾಗದ ಹತ್ತುಪಟ್ಟು ಜಾಗದಲ್ಲಿ ನೆಡಲಾಗುತ್ತದೆ. ಸಾಮಾನ್ಯ ಬೆಳೆಯ ಅವಧಿ ನೆಟ್ಟ ನಂತರ 90-100 ದಿನಗಳಾಗಿರುತ್ತವೆ. ಕೆಲವು ವಿಧದ ಭತ್ತದ ಬೆಳೆಯಲ್ಲಿ 120 ದಿನಗಳವರೆಗೂ ಇಡಲಾಗುತ್ತದೆ. 65 ದಿನಗಳವರೆಗೆ ನೀರಿನೊಳಗೆ ಭತ್ತದ ಬೆಳೆಯನ್ನು ಇಡಲಾಗಿರುತ್ತದೆ. ನೀರಿನ ಆಳವನ್ನು 4-5 ಸೆಂ.ಮೀ.ನಷ್ಟು ಇಟ್ಟು ನಿರಂತರವಾಗಿ ನೀರು ಹರಿಸಲಾಗುತ್ತದೆ. ಮುಖ್ಯವಾಗಿ ಕಳೆಗಳು ಬರದಂತೆ ಹೀಗೆ ನೀರಿನ ಪ್ರವಾಹ ಇಡಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕಳೆಗಳ ಬೀಜಗಳಿಗೆ ಆಮ್ಲಜನಕ ಸಿಗದಂತೆ ಮಾಡಿ ಬೆಳವಣಿಗೆಯಾಗದಂತೆ ತಡೆಯಲಾಗುತ್ತದೆ. 65 ದಿನದ ನಂತರ ಭತ್ತದ ಬೆಳೆ ಸರಿಯಾಗಿ ಬೆಳೆದ ನಂತರ ಅಂತಹ ನೀರಿನ ಅಗತ್ಯವಿರುವುದಿಲ್ಲ. ಕಾಂಡದ ಒಳಗೆ ಹೂಗೊಂಚಲು ಮೂಡುತ್ತವೆ. ನೀರು ತುಂಬಿದ ಭತ್ತದ ಗದ್ದೆಗಳು ಕಳೆಗಳನ್ನು ನಿಯಂತ್ರಿಸಲು ನೆರವಾದರೂ, ಪರಿಣಾಮವಾಗಿ ಆಮ್ಲಜನಕ ಮುಕ್ತ ಮಣ್ಣಿನ ಪರಿಸರವು ಸಸ್ಯದ ಸಾವಯವ ಪದಾರ್ಥಗಳನ್ನು ಕೊಳೆಸುವ ಮೆಥನೋಜೆನಿಕ್ ಸೂಕ್ಷ್ಮಜೀವಿಗಳಾದ ಆರ್ಕಿಯ ಮತ್ತು ಬ್ಯಾಕ್ಟೀರಿಯಗಳು ಬೆಳೆಯಲು ಸೂಕ್ತವಾಗಿರುತ್ತದೆ. ಮೀಥೇನ್ ಒಂದು ಸಮರ್ಥ ಹಸಿರುಮನೆ ಅನಿಲವಾಗಿದೆ. 100 ವರ್ಷಗಳಲ್ಲಿ ಇಂಗಾಲದ ಡೈ ಆಕ್ಸೈಡ್ನ (CO2) ಜಾಗತಿಕ ತಾಪಮಾನ ಏರಿಕೆಯ ಸಾಮರ್ಥ್ಯಕ್ಕಿಂತ 28 ಪಟ್ಟು ಹೆಚ್ಚಾಗಿದೆ. ಪರ್ಯಾಯ ಕೃಷಿ ಚಟುವಟಿಕೆ ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ (AWD) ವಿಧಾನದಡಿ ಭತ್ತದ ಗದ್ದೆಗಳು ನಿರಂತರವಾಗಿ ನೀರು ಹರಿಸುವ ಬದಲಾಗಿ ಕಾಲಕಾಲಕ್ಕೆ ಒಣಗಿಸುವುದು ಮತ್ತು ಮರಳಿ ನೀರು ಹರಿಸುವುದು ಮಾಡಬೇಕಾಗುತ್ತದೆ. ಮೀಥೇನ್ ಉತ್ಪಾದಿಸುವ ಮೈಕ್ರೋಬ್ಗಳು ಬೆಳೆಯಲು ಸೂಕ್ತ ಸ್ಥಿತಿಯನ್ನು ನೀಡುವುದು ಉದ್ದೇಶವಾಗಿರುತ್ತದೆ. ಆರಂಭಿಕ 20 ದಿನಗಳ ಕಾಲ ನೀರು ಹರಿಸಲಾಗುತ್ತದೆ. ನಂತರ 45 ದಿನದಲ್ಲಿ 12 ದಿನಗಳ ಕಾಲ ಗದ್ದೆಯನ್ನು ಒಣಗಿಸಬೇಕಾಗುತ್ತದೆ. 45 ದಿನಗಳೊಳಗೆ ಆರು ದಿನಗಳ ಕಾಲ ಎರಡು ಬಾರಿ ಗದ್ದೆ ಒಣಗಿಸುವಂತೆ ಸೂಚಿಸಲಾಗುತ್ತದೆ. ಬೆಂಗಳೂರು ಮೂಲದ ಹವಾಮಾನ ತಂತ್ರಜ್ಞಾನದ ಸ್ಟಾರ್ಟಪ್ ಮಿಟ್ಟಿ ಲ್ಯಾಬ್ಸ್ ಈ ಕುರಿತು ವಿವರವಾದ ಅಧ್ಯಯನ ಮಾಡಿದೆ. ಸಂಸ್ಥೆಯು ತೆಲಂಗಾಣದ ವಾರಂಗಲ್ ಜಿಲ್ಲೆಯ ಮೂರು ಗ್ರಾಮಗಳ 30 ರೈತರ ಹೊಲಗಳಲ್ಲಿ ಈ ಅಧ್ಯಯನ ನಡೆಸಿದೆ. ಅಲ್ಲಿ ಭತ್ತವನ್ನು ಎಡಬ್ಲ್ಯುಡಿ ವಿಧಾನದಲ್ಲಿ ಬೆಳೆಯಲಾಗಿದೆ. ಸಾಂಪ್ರದಾಯಿಕ ವರ್ಸಸ್ AWD ಮಿಟ್ಟಿ ಲ್ಯಾಬ್ನ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಕಾರ AWD ಹೊಲಗಳಲ್ಲಿ ಸರಾಸರಿ ನೀರಿನ ಬಳಕೆ 3.24 ದಶಲಕ್ಷ ಲೀಟರ್ಗಳಾಗಿದ್ದರೆ, ಸಾಂಪ್ರದಾಯಿಕ ಹೊಲಗಳಲ್ಲಿ 4.96 ದಶಲಕ್ಷ ಲೀಟರ್ಗಳಷ್ಟು ನೀರನ್ನು ಬಳಸಿಕೊಳ್ಳಲಾಗಿತ್ತು. AWD ಹೊಲಗಳಲ್ಲಿ ಸರಾಸರಿ ಮೀಥೇನ್ ಹೊರಸೂಸುವಿಕೆ ಪ್ರತಿ ಎಕರೆಗೆ 1.4 ಟನ್ಗಳಷ್ಟಿದ್ದರೆ, ಸಾಂಪ್ರದಾಯಿಕ ಹೊಲಗಳಲ್ಲಿ ಎಕರೆಗೆ 2.4 ಟನ್ಗಳಷ್ಟು ಇತ್ತು. ಮುಖ್ಯವಾಗಿ ರೈತರ ಮಟ್ಟಿಗೆ ಸರಾಸರಿ ಇಳುವರಿ ಸಮಾನವಾಗಿತ್ತು. AWD ಎಂದರೆ ಬ್ರಷ್ ಮಾಡುವಾಗ ನಳ್ಳಿ ನೀರನ್ನು ನಿಲ್ಲಿಸುವ ರೀತಿಯ ವಿಧಾನ. ಅಗತ್ಯವಿದ್ದಾಗ ನೀರು ಪ್ರಸಾರ ಮಾಡುವುದು ಮತ್ತು ಅಗತ್ಯವಿಲ್ಲದಾಗ ತಡೆಯುವುದು! AWDನಿಂದ ಮಿಥೇನ್ ಹೊರಸೂಸುವಿಕೆ ಕಡಿಮೆ ಮಾಡುವುದಕ್ಕಿಂತ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ರೈತರಿಗೆ ಕಾರ್ಬನ್ ಕ್ರೆಡಿಟ್ಗಳನ್ನು ಗಳಿಸಲು ಅವಕಾಶ ನೀಡಲಿದೆ. 2023-24ರಲ್ಲಿ ಮಿಟಿ ಲ್ಯಾಬಗಸ್ 850 ರೈತರ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ತೆಲಂಗಾಣದ 600 ರೈತರು ಮತ್ತು ಆಂಧ್ರಪ್ರದೇಶದ 250 ರೈತರು AWD ಮಾದರಿಯಲ್ಲಿ ಭತ್ತದ ಕೃಷಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಭತ್ತದ ಗದ್ದೆಯ್ಲಲಿ 30 ಸೆಂಮೀ ಉದ್ದದ ಪರ್ಫೋರೇಟೆಡ್ ಪೈಪ್ಗಳನ್ನು (ನೀರಿನ ಆಳವನ್ನು ಮೇಲ್ವಿಚಾರಣೆ ಮಾಡಲು) ಮತ್ತು ಕ್ಲೋಸ್ಡ್ ಅಕ್ರಿಲಿಕ್ ಚೇಂಬರ್ಗಳನ್ನು (ಮೀಥೇನ್ ಹೊರಸೂಸುವಿಕೆ ವಿವರ ಸಂಗ್ರಹಿಸಲು) ಅಳವಡಿಸಲಾಗಿದೆ. ನಂತರ 2024-25ರಲ್ಲಿ 11,300 ರೈತರು ಈ ರೀತಿಯ ಕೃಷಿಪದ್ಧತಿಯನ್ನು (ತೆಲಂಗಾಣ: 6000, ಆಂಧ್ರಪ್ರದೇಶ :4000, ಒಡಿಶಾ: 800 ಮತ್ತು ತಮಿಳುನಾಡು: 500) ಅನುಸರಿಸಲು ಆರಂಭಿಸಿದರು. ಮುಂದುವರಿದು 2025-26ರಲ್ಲಿ 69,000 ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. (ತೆಲಂಗಾಣ: 35,000, ಆಂಧ್ರಪ್ರದೇಶ: 25,000, ಒಡಿಶಾ ಮತ್ತು ತಮಿಳುನಾಡು: 4000 ಮತ್ತು ಕರ್ನಾಟಕ: 1000). ಎರಡೂ ಖಾರಿಫ್ ಮತ್ತು ರಾಬಿ ಬೆಳೆ ಋತುಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ರೈತರಿಗೆ ಕಾರ್ಬನ್ ಕ್ರೆಡಿಟ್ ಗಳಿಕೆ ಕಾರ್ಬನ್ ಕ್ರೆಡಿಟ್ಗಳನ್ನು ಡಾಟಾ ಸೆಂಟರ್ ಆಪರೇಟರ್ಗಳು, ವಾಯುಯಾನಗಳು ಮತ್ತು ಇತರ ವ್ಯಾಪಕವಾಗಿ ಶಕ್ತಿ ಮತ್ತು ನೀರು ಬಳಕೆಯ ಉದ್ಯಮಗಳು ಖರೀದಿಸುತ್ತಿವೆ. ಕಾರ್ಬನ್ ಕ್ರೆಡಿಟ್ಸ್ಗಳು ಇದೀಗ ಪ್ರತಿ ಟನ್ಗೆ 15-25 ಡಾಲರ್ಗಳಷ್ಟು ಲಾಭ ತಂದುಕೊಡುತ್ತಿದೆ. ಏಕ ಭತ್ತದ ಬೆಳೆಯಿಂದ ಪ್ರತಿ ಹೆಕ್ಟೇರ್ಗೆ 2.5 ಟನ್ಗಳಷ್ಟು ಕಾರ್ಬನ್ ಕ್ರೆಡಿಟ್ ಪಡೆಯಬಹುದು. ಆ ಮೂಲಕ ಕನಿಷ್ಠ 35.5 ಡಾಲರ್ನಷ್ಟು ಕಾರ್ಬನ್ ಕ್ರೆಡಿಟ್ ಗಳಿಸಬಹುದು. ಈಗಿನ ದರದಲ್ಲಿ ನೋಡಿದರೆ ಪ್ರತಿ ಹೆಕ್ಟೇರ್ಗೆ 3,367 ರೂ. ಗಳಿಸಬಹುದಾಗಿದೆ. ಪ್ರತಿ ಎಕರೆಗೆ 1,363 ರೂ. ಗಳಿಸಬಹುದು. ಮುಂದಿನ 2 ವರ್ಷಗಳಲ್ಲಿ 3 ಲಕ್ಷ ರೈತರನ್ನು ಈ ಯೋಜನೆಯೊಳಗೆ ತರುವ ಉದ್ದೇಶವನ್ನು ಮಿಟ್ಟಿ ಲ್ಯಾಬ್ಸ್ ಹೊಂದಿದೆ. ಕೃಪೆ: indianexpress.com
ತ್ರಿಪುರಾ ವಿದ್ಯಾರ್ಥಿಯ ಹತ್ಯೆ | ದೇಶದಲ್ಲಿ ದ್ವೇಷ ಸಹಜವಾಗಿದೆ : ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಹೊಸದಿಲ್ಲಿ: ಡೆಹ್ರಾಡೂನ್ ನಲ್ಲಿ ಇಬ್ಬರು ತ್ರಿಪುರಾ ಮೂಲದ ಸಹೋದರರ ಮೇಲೆ ನಡೆದಿದ್ದ ಜನಾಂಗೀಯ ದಾಳಿಯಲ್ಲಿ, ಓರ್ವನನ್ನು ಹತ್ಯೆಗೈದಿರುವ ಘಟನೆಯನ್ನು ಖಂಡಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, “ದ್ವೇಷ ಕಾರುವ ನಾಯಕತ್ವವು ಹಿಂಸಾಚಾರದ ವಾತಾವರಣವನ್ನು ಸಹಜಗೊಳಿಸಿರುವುದರಿಂದ ಆಗಿರುವ ದ್ವೇಷಾಪರಾಧವಿದು” ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಡೆಹ್ರಾಡೂನ್ ನಲ್ಲಿ ಏಂಜೆಲ್ ಚಕ್ಮಾ ಹಾಗೂ ಆತನ ಸಹೋದರ ಮೈಕಲ್ ಚಕ್ಮಾಗೆ ಏನಾಗಿದೆಯೊ ಅದು ಭಯಾನಕ ದ್ವೇಷಾಪರಾಧ. ದ್ವೇಷ ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ನಮ್ಮ ಜನರಿಗೆ ದಿನನಿತ್ಯವೂ ವಿಷಕಾರಿ ತುಣುಕುಗಳು ಹಾಗೂ ಹೊಣೆಗೇಡಿ ನಿರೂಪಣೆಯ ಮೂಲಕ ದ್ವೇಷವನ್ನು ಉಣಿಸಲಾಗುತ್ತಿದೆ ಹಾಗೂ ಇದನ್ನು ಬಿಜೆಪಿಯ ದ್ವೇಷ ಕಾರುವ ನಾಯಕತ್ವವು ಸಹಜಗೊಳಿಸಿದೆ” ಎಂದು ಅವರು ಆರೋಪಿಸಿದ್ದಾರೆ. “ಭಾರತವನ್ನು ಗೌರವ ಮತ್ತು ಒಗ್ಗಟ್ಟಿನ ಮೇಲೆ ನಿರ್ಮಿಸಲಾಗಿದೆಯೆ ಹೊರತು ಭಯ ಮತ್ತು ನಿಂದನೆಯ ಮೇಲಲ್ಲ. ನಮ್ಮದು ಪ್ರೀತಿ ಮತ್ತು ವೈವಿಧ್ಯತತೆಯ ದೇಶವಾಗಿದೆ. ಭಾರತದ ಸಹ ಪ್ರಜೆಗಳನ್ನೇ ಗುರಿಯಾಗಿಸಿಕೊಂಡಾಗ ಅದನ್ನು ನೋಡದೆ ನಾವು ಮೃತ ಸಮಾಜವಾಗಬಾರದು” ಎಂದು ಹೇಳಿದ್ದಾರೆ. ಡಿ.9ರಂದು ಡೆಹ್ರಾಡೂನ್ ನಲ್ಲಿ ಜನಾಂಗೀಯ ನಿಂದನೆಯನ್ನು ಆಕ್ಷೇಪಿಸಿದ್ದಕ್ಕಾಗಿ ಆರು ಜನರ ಗುಂಪೊಂದು ಪಶ್ಚಿಮ ತ್ರಿಪುರ ಜಿಲ್ಲೆಯ 24 ವರ್ಷದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 26ರಂದು ಮೃತಪಟ್ಟಿದ್ದನು. ಈ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
3 ರಕ್ಷಣಾ ಪಡೆಗಳಿಗೆ ಹೈಟೆಕ್ ಸ್ಪರ್ಶ, ಬರೋಬ್ಬರಿ ₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅಸ್ತು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಒಟ್ಟು 79,000 ಕೋಟಿ ರೂಪಾಯಿಗಳ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. ಇದರಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆ, ಡ್ರೋನ್ ನಿಗ್ರಹ ತಂತ್ರಜ್ಞಾನ, ಕಡಲ ಕಣ್ಗಾವಲು ವ್ಯವಸ್ಥೆ ಮತ್ತು ಯುದ್ಧ ವಿಮಾನಗಳಿಗೆ ಅಗತ್ಯವಿರುವ ಅತ್ಯಾಧುನಿಕ ಕ್ಷಿಪಣಿಗಳು ಸೇರಿವೆ. ಈ ನಿರ್ಧಾರವು ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಿದೆ.
Uttar Pradesh | ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರು ಸೇವನೆ; 200ಕ್ಕೂ ಹೆಚ್ಚು ಮಂದಿಗೆ ರೇಬೀಸ್ ಲಸಿಕೆ
ಬುಡೌನ್ (ಉತ್ತರ ಪ್ರದೇಶ): ನಾಯಿ ಕಚ್ಚಿ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾದ ʼರಾಯಿತʼ (ಮೊಸರಿನಿಂದ ತಯಾರಿದ ಆಹಾರ) ಸೇವಿಸಿದ್ದ ಶಂಕೆಯ ಹಿನ್ನೆಲೆಯಲ್ಲಿ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ರೇಬೀಸ್ ನಿರೋಧಕ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ 23ರಂದು ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ಸಮಾರಂಭದಲ್ಲಿ ʼರಾಯಿತʼ ವಿತರಿಸಲಾಗಿತ್ತು. ನಂತರ, ಆ ರಾಯಿತವನ್ನು ತಯಾರಿಸಲು ಬಳಸಿದ ಹಾಲು ಕೆಲವು ದಿನಗಳ ಹಿಂದೆ ನಾಯಿಯಿಂದ ಕಡಿತಕ್ಕೊಳಗಾಗಿದ್ದ ಎಮ್ಮೆಯಿಂದ ಬಂದದ್ದು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಎಮ್ಮೆ ಡಿಸೆಂಬರ್ 26ರಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಂಕಿನ ಭೀತಿ ವ್ಯಾಪಿಸಿತು. ಭಯಭೀತರಾದ ಗ್ರಾಮಸ್ಥರು ಉಜಾನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆಗಳನ್ನು ಪಡೆದುಕೊಂಡರು. ಈ ಕುರಿತು ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಮಾತನಾಡಿ, “ರೇಬಿಸ್ ಪೀಡಿತ ನಾಯಿ ಕಚ್ಚಿದ್ದ ಎಮ್ಮೆ ರೇಬೀಸ್ ಲಕ್ಷಣಗಳಿಂದ ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುನ್ನೆಚ್ಚರಿಕೆಯಾಗಿ ರಾಯಿತ ಸೇವಿಸಿದ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ,” ಎಂದರು. “ಸಾಮಾನ್ಯವಾಗಿ ಹಾಲನ್ನು ಕುದಿಸಿದ ಬಳಿಕ ರೇಬೀಸ್ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೂ ಯಾವುದೇ ಸಂಭಾವ್ಯ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಲಸಿಕೆ ನೀಡಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಗ್ರಾಮದಲ್ಲಿ ಇದುವರೆಗೆ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಶನಿವಾರ ಹಾಗೂ ರವಿವಾರವೂ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿಟ್ಟು ಲಸಿಕೆ ಹಾಕಲಾಗಿದೆ. ವದಂತಿಗಳು ಮತ್ತು ಅನಗತ್ಯ ಭೀತಿ ಹರಡದಂತೆ ಗ್ರಾಮವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಯಾದಗಿರಿ | ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆ
ಯಾದಗಿರಿ : ಜಿಲ್ಲೆಯ ಸುರಪುರ ನಗರದ ವಡ್ಡರ ಓಣಿಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ. ಊಟ ಮಾಡುತ್ತಿದ್ದ ವೇಳೆ ಹಲ್ಲಿ ಕಾಣಿಸಿಕೊಂಡಿದ್ದರಿಂದ ಮಕ್ಕಳು ಆತಂಕಗೊಂಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ, ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಲೆಯಲ್ಲಿ ಒಟ್ಟು 42 ಮಕ್ಕಳಿದ್ದು, ಹಲ್ಲಿ ಪತ್ತೆಯಾಗುತ್ತಿದ್ದಂತೆ ಎಲ್ಲ ಮಕ್ಕಳನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಒಂದು ಮಗುವಿಗೆ ಮಾತ್ರ ವಾಂತಿ ಕಾಣಿಸಿಕೊಂಡಿದ್ದು, ಉಳಿದ ಮಕ್ಕಳಿಗೆ ಯಾವುದೇ ತೊಂದರೆ ಕಂಡುಬಂದಿಲ್ಲ. ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿಸಿದರು. ಅಡುಗೆ ತಯಾರಿಸುವ ಸಂದರ್ಭದಲ್ಲಿ ಅಡುಗೆ ಸಹಾಯಕಿಯರ ನಿರ್ಲಕ್ಷವೇ ಈ ಘಟನೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದ್ದು, ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.
ಧರ್ಮಸ್ಥಳ ವಾರ್ಷಿಕ ಸಾಮೂಹಿಕ ವಿವಾಹ 2026: ಏಪ್ರಿಲ್ 25ರೊಳಗೆ ಹೆಸರು ನೋಂದಾಯಿಸಿಕೊಳ್ಳಿ
ಉಜಿರೆ: ಅಪಾರ ಭಕ್ತಗಣ ಹೊಂದಿರುವ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ (ಆಲ್ ಎಡಿಶನ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು ಈ ಕೂಡಲೇ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮದುವೆ ದಿನಾಂಕ? ನೋಂದಣಿ ಕೊನೆ ದಿನ ಇತರ ವಿವರ ಇಲ್ಲಿದೆ. ಅದೆಷ್ಟೋ
`ಬಿಯರ್ ಬೇಕಾ ಡಿಯರ್?; ಕೆಣಕಿದ ಆಸ್ಟ್ರೇಲಿಯಾದ ಪ್ರೇಕ್ಷಕನಿಗೆ ಬೆನ್ ಡಕೆಟ್ ನೀಡಿದ ರಿಪ್ಲೈ ಮಾತ್ರ ಫುಲ್ ವೈರಲ್!
Ben Duckett Vs Australia Spectators- ಸಾಬೀತಿನಲ್ಲಿ ತಮ್ಮ ಪಾಡಿಗೆ ಆಢುವವರನ್ನೇ ಸುಮ್ಮನೇ ಬಿಡುವವರಲ್ಲ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಕ್ಷಕರು. ಅಂಥದ್ದರಲ್ಲಿ ಕುಡಿದು ತೂರಾಡಿದ್ದ ಬೆನ್ ಡಕೆಟ್ ಅನ್ನು ಸುಮ್ಮನೇ ಬಿಡುವ ಅಸಾಮಿಗಲಾ? ಮೊನ್ನೆ ಮೆಲ್ಬರ್ನ್ ಟೆಸ್ಟ್ ನಡೆಯುತ್ತಿದ್ದ ವೇಳೆ ಆಸ್ಟ್ರೇಲಿಯಾ ಪ್ರೇಕ್ಷಕರು ಬೆನ್ ಡೆಕೆಟ್ ಅವರನ್ನು 'ಬಿಯರ್ ಬೇಕಾ?' ಎಂದು ವ್ಯಂಗ್ಯವಾಡಿದ್ದಾರೆ.. ಇದಕ್ಕೆ ಬೆನ್ ಡೆಕೆಟ್ ಅವರು ನೀಡಿದ ಆತ್ಮವಿಶ್ವಾಸದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
New Year 2026: ಹೊಸ ವರ್ಷಾಚರಣೆ ಸಂಭ್ರಮ: ಪೊಲೀಸ್ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಗಳೇನು?
ಬೆಂಗಳೂರು: ಹೊಸ ವರ್ಷಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಿದ್ದವಾಗುತ್ತಿದೆ. ಹೊಸ ವರ್ಷದ ಸಂಭ್ರಮದ ವೇಳೆ ಕಾನೂನು ಸುವ್ಯವಸ್ಥೆಯನ್ನ ಕಾಪಾಡಲು ನಗರ ಪೊಲೀಸರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ಹಾಗೂ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ.
ಉತ್ತರಾಖಂಡದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ: ತ್ರಿಪುರಾದಲ್ಲಿ ಪ್ರತಿಭಟನೆ
ಅಗರ್ತಲಾ: ಉತ್ತರಾಖಂಡದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆಯನ್ನು ಖಂಡಿಸಿ ತ್ರಿಪುರದಲ್ಲಿ ರವಿವಾರ ಪ್ರತಿಭಟನೆ ನಡೆಯಿತು. ತ್ರಿಪುರ ಚಕ್ಮಾ ಸ್ಟೂಡೆಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಈಶಾನ್ಯ ರಾಜ್ಯಗಳ ಯುವಕರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕಿರುಕುಳಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರತಿನಿಧಿಗಳು, ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಗಂಭೀರವಾಗಿ ಹಲ್ಲೆಗೀಡಾಗಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ ಪ್ರಕರಣದತ್ತ ಗಮನ ಸೆಳೆದರು. ದೇಶಾದ್ಯಂತ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರ ಮತ್ತು ಅವಹೇಳನಕಾರಿ ವರ್ತನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಈಶಾನ್ಯ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ನಡೆಯುವ ದ್ವೇಷಾಪರಾಧಗಳು ಹಾಗೂ ಅವಮಾನಕಾರಿ ಹೇಳಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ತುರ್ತು ಮತ್ತು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಂಘಟನೆಯ ನಾಯಕರು ಒತ್ತಾಯಿಸಿದರು. ಈ ನಡುವೆ, ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ದೂರವಾಣಿ ಕರೆ ಮಾಡಿ, ಪ್ರಕರಣದ ಕುರಿತು ಚರ್ಚಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮೃತ ವಿದ್ಯಾರ್ಥಿಗೆ ನ್ಯಾಯ ಒದಗಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮಾಣಿಕ್ ಸಹಾ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಅಂಗನವಾಡಿ ಸೇವೆಗಳು, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಸೇವೆಗಳು ಗ್ರಾಮ ಪಂಚಾಯತ್ಗಳ ಮೂಲಕ ಲಭ್ಯವಿದೆ. ಗ್ರಾಮ ಸಭೆಯಲ್ಲಿ ಭಾಗವಹಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಲಾಭ ಪಡೆಯಬಹುದು.
14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿಯ ಸ್ಟ್ರೈಕ್ ರೇಟ್ ನೋಡ್ರಿ! ಇಷ್ಟಾದರೂ ವಿಜಯ್ ಹಜಾರೆ ಟೂರ್ನಿಯಿಂದ ಔಟ್!
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 14 ವರ್ಷದ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಅವರು ಭಾರತ ಅಂಡರ್-19 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೈಭವ್ ಅವರ ಬ್ಯಾಟಿಂಗ್ ಕೌಶಲ್ಯ ಗಮನ ಸೆಳೆದಿದೆ.
ಮಧುರೈ: ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕನೊಬ್ಬನ ಮೇಲೆ ನಾಲ್ವರು ಅಪ್ರಾಪ್ತ ವಯಸ್ಕರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ದಾಳಿಯ ದೃಶ್ಯಗಳನ್ನು ಆರೋಪಿಗಳೇ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಸಿರಾಜ್ ಎಂದು ಗುರುತಿಸಲಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, ಸಿರಾಜ್ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿಗಳು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲೇ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ಬಳಿಕ ಅವರನ್ನು ರೈಲ್ವೆ ನಿಲ್ದಾಣದ ಸಮೀಪದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮಚ್ಚಿನಿಂದ ತೀವ್ರ ಹಲ್ಲೆ ನಡೆಸಲಾಗಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ ಹಲ್ಲೆಯ ಕ್ರೌರ್ಯ ಸ್ಪಷ್ಟವಾಗಿ ಕಾಣುತ್ತಿದ್ದು, ದಾಳಿಯ ನಂತರ ಆರೋಪಿಗಳ ಪೈಕಿ ಒಬ್ಬ ‘ವಿಕ್ಟರಿ’ ಸಂಕೇತವನ್ನು ಪ್ರದರ್ಶಿಸಿರುವುದೂ ದಾಖಲಾಗಿದೆ. ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
BTS ಭಾರತಕ್ಕೆ ಬರಲಿದೆ ಎಂದು ಹಿಂಟ್ ಕೊಟ್ಟ V : ಇಂಡಿಯನ್ ಆರ್ಮಿಗೆ BTS V ಕೊಟ್ಟ ಸ್ಪೆಷಲ್ ಮೆಸೇಜ್ ಏನು ಗೊತ್ತಾ?
ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿ! ಕಡ್ಡಾಯ ಸೇವೆ ಮುಗಿಸಿ BTS ತಂಡವಾಗಿ ಹೊಸ ಆಲ್ಬಂ, ವರ್ಲ್ಡ್ ಟೂರ್ಗೆ ಸಜ್ಜಾಗುತ್ತಿದೆ. 2026ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರಲಿದ್ದಾರೆ. V ನೀಡಿದ ಸಂದೇಶ ಈ ಊಹಾಪೋಹಗಳಿಗೆ ಸ್ಪಷ್ಟತೆ ನೀಡಿದೆ. HYBE ಮುಂಬೈ ಕಚೇರಿ ಆರಂಭಿಸಿದ್ದು, ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿದೆ ಈವೆಲ್ಲಾ ಚಟುವಟಿಕೆಗಳು ಈ ಸುದ್ದಿಗೆ ಪುಷ್ಠಿ ನೀಡುತ್ತಿದೆ. ಇನ್ನು, ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಲಿಲ್ಲ, ಸಾಧ್ಯತೆಗಳು ದಟ್ಟವಾಗಿದ್ದು, ಒಂದು ವೇಳೆ ಈ ಸುದ್ದಿ ನಿಜವಾದರೆ ಭಾರತೀಯಆರ್ಮಿ ಹಾಗೂ ಸಂಗೀತ ಪ್ರೇಮಿಗಳಿಗೆ ಐತಿಹಾಸಿಕ ಕ್ಷಣವಾಗಲಿದೆ.
ನ್ಯೂ ಇಯರ್ ಸಂಭ್ರಮದಲ್ಲಿ ವ್ಹೀಲಿಂಗ್, ಡ್ರಗ್ಸ್ ಮಾಫಿಯಾ ಮೇಲೆ ಹದ್ದಿನ ಕಣ್ಣು: ಮಹಿಳೆಯರ ಸುರಕ್ಷತೆಗೆ ಆದ್ಯತೆ
ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆಯನ್ನು ನಡೆಸಿದರು. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ವ್ಹೀಲಿಂಗ್ ಹಾಗೂ ಡ್ರಗ್ಸ್ ಮಾಫಿಯಾಗೆ ಅವಕಾಶ ನೀಡಬೇಡಿ ಎಂಬ ಸೂಚನೆಗಳ್ನು ನೀಡಿದ್ದಾರೆ. ಸಭೆಯಲ್ಲಿ ಏನೆಲ್ಲಾ ನಡೆಯಿತು ಹಾಗೂ ಏನು ಸೂಚನೆಗಳನ್ನು ನೀಡಿದ್ದಾರೆ ಎಂಬ ಮತ್ತಷ್ಟು ಮಾಹಿತಿಗಳು ಇಲ್ಲಿವೆ.
ಚಿನ್ನ-ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ: ಇಳಿಕೆ ಕಂಡ ಹಿಂದುಸ್ತಾನ್ ಜಿಂಕ್, ಮುತ್ತೂಟ್, ಮಣಪ್ಪುರಂ ಷೇರು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿಕೆ ಕಂಡ ಬೆನ್ನಲ್ಲೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇವುಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಬೆಳ್ಳಿ ಬೆಲೆಯಲ್ಲಿನ ಕುಸಿತದಿಂದ ಹಿಂದುಸ್ತಾನ್ ಜಿಂಕ್ ಷೇರುಗಳು ನಷ್ಟ ಅನುಭವಿಸಿದರೆ, ಚಿನ್ನದ ದರ ಇಳಿಕೆಯಿಂದಾಗಿ ಮಣಪ್ಪುರಂ ಮತ್ತು ಮುತ್ತೂಟ್ ಫೈನಾನ್ಸ್ನಂತಹ ಗೋಲ್ಡ್ ಲೋನ್ ಕಂಪನಿಗಳ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಹಿನ್ನಡೆ ಅನುಭವಿಸಿವೆ.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದಿದ್ದರೆ ಉಗ್ರ ಹೋರಾಟ: ಬಸವರಾಜ ಬೊಮ್ಮಾಯಿ
ಹಾವೇರಿ: ಶಿಗ್ಗಾವಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ, ರೈತ ಶಕ್ತಿ ದೊಡ್ಡದೋ ಅಧಿಕಾರದ ಶಕ್ತಿ ದೊಡ್ಡದಿದೆಯೋ ನಿರ್ಣಯ ಆಗಲೇಬೇಕು. ರೈತರ ಪರವಾಗಿ ಹಿಂದೆಯೂ ನಿಂತಿದ್ದೇನೆ. ಜೀವನದ ಕೊನೆವರೆಗೂ ನಿಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ತಹಶಿಲ್ದಾರರ ಕಾರ್ಯಾಲಯದ ಆವರಣದಲ್ಲಿ ಗೋವಿನ ಜೋಳ
ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಪ್ರದೇಶದಲ್ಲಿ ಭಾನುವಾರ ಮಾದಕ ವಸ್ತು ಮಾರಾಟ ಮಾಡುವ ಕಾರ್ಖಾನೆಗಳ ವಿರುದ್ಧ ದಾಳಿ ನಡೆಸಿದೆ. ಇದು ಕಾರ್ ಹಲವು ಪ್ರಶ್ನೆಗಳನ್ನು ತೆರೆದಿಟ್ಟಿದೆ. ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಾರ್ಖಾನೆಗಳು ಬೆಳೆಯಲು ಕಾರಣಗಳೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ಯುವ ಸಮುದಾಯವನ್ನು ಈ ವ್ಯಸನದಿಂದ ಮುಕ್ತಗೊಳಿಸುವ ಬಗ್ಗೆಯೂ ನಾಗರಿಕ ಸಮಾಜ ಗಂಭೀರ ಚಿಂತನೆ ನಡೆಸಿದೆ.
Biryani: 9.3 ಕೋಟಿ ಬಿರಿಯಾನಿ ಆರ್ಡರ್ ಜೊತೆ ಜನ ಈ ವರ್ಷ ಹೆಚ್ಚು ಆರ್ಡರ್ ಮಾಡಿದ್ದೇನು
ಭಾರತೀಯರಿಗೆ ಬಿರಿಯಾನಿ ಎಂದರೆ ಪ್ರಿಯ ಎನ್ನುವುದು ಈ ವರ್ಷ ಮತ್ತೊಮ್ಮೆ ಸಾಬೀತಾಗಿದೆ. 2025ನೇ ಸಾಲಿನಲ್ಲಿ ಭರ್ಜರಿ ಬಿರಿಯಾನಿ ಮಾರಾಟವಾಗಿದೆ. ಈ ವರ್ಷ ಎಷ್ಟು ಬಿರಿಯಾನಿ ಮಾರಾಟವಾಗಿದೆ ಹಾಗೂ ಯಾವ ನಗರ ಮುಂಚೂಣಿಯಲ್ಲಿದೆ ಎನ್ನುವ ವಿವರ ಇಲ್ಲಿದೆ. 2025 ರಲ್ಲಿ ಸ್ವಿಗ್ಗಿ ಮೂಲಕ 9.3 ಕೋಟಿ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಭಾರತೀಯರು ಈ ವರ್ಷ ಅತ್ಯಂತ ಹೆಚ್ಚು ಬಿರಿಯಾನಿಯನ್ನು
ಚಿಕ್ಕಮಗಳೂರು | ಕುಡಿದ ಮತ್ತಿನಲ್ಲಿ ಗಲಾಟೆ : ಯುವಕನಿಗೆ ಚಾಕು ಇರಿತ
ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಬಾರ್ನೊಳಗೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಶಕ್ತಿನಗರದಲ್ಲಿ ನಡೆದಿದೆ. ಗಾಯಗೊಂಡ ಮೂಗುತಿ ಹಳ್ಳಿ ಗ್ರಾಮದ ಯುವಕ ಅನಿಲ್ ಕುಮಾರ್ ರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಗರೇಟ್ ವಿಚಾರವಾಗಿ ಎರಡು ತಂಡಗಳ ನಡುವೆ ಆರಂಭವಾದ ಮಾತಿನ ಚಕಮಕಿ ಗಲಾಟೆಗೆ ತಿರುಗಿದ್ದು, ಗಲಾಟೆ ವೇಳೆ ಏಕಾಏಕಿ ಯುವಕನೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಕು ಇರಿತ ನಡೆಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾರ್ನಲ್ಲಿ ನಡೆದ ಗಲಾಟೆ ಹಾಗೂ ಚಾಕು ಇರಿತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2026 ರಿಂದ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರಲಿವೆ ಈ 5 ಹೊಸ ರೂಲ್ಸ್ ಗಳು.
ನಾವು 2025ರ ಕೊನೆಯ ಹಂತದಲ್ಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ 2026 ಕಾಲಿಡಲಿದೆ. ಹೊಸ ವರ್ಷದ ಸಂಭ್ರಮದ ನಡುವೆ, ನೀವು ಮರೆಯಬಾರದ ಕೆಲವು ಪ್ರಮುಖ ಆರ್ಥಿಕ ಬದಲಾವಣೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಕೇವಲ ಕ್ಯಾಲೆಂಡರ್ ಬದಲಾದರೆ ಸಾಲದು, ನಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಸಹ ಜನವರಿ 1 ರಿಂದ ಬದಲಾಗಲಿವೆ. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ನೀವು ಅನಗತ್ಯವಾಗಿ ದಂಡ ಕಟ್ಟಬೇಕಾಗಬಹುದು. ಹಾಗಾದರೆ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ... Read more The post 2026 ರಿಂದ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರಲಿವೆ ಈ 5 ಹೊಸ ರೂಲ್ಸ್ ಗಳು. appeared first on Karnataka Times .
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಕರ್ನಾಟಕ ಹೆಜ್ಜೆ: ಅಡಚಣೆ ಇಲ್ಲದೆ ಗ್ರಾಹಕರಿಗೆ ಪೂರೈಕೆ
ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ ನಡೆಸಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ತ್ವರಿತಗೊಂಡು ರಾಜ್ಯವು ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಇನ್ನು ಯಾವುದೇ ಅಡಚಣೆಯಿಲ್ಲದಂತೆ ಗ್ರಾಹಕರಿಗೆ ವಿದ್ಯುತ್ ಪೂರೈಸುವತ್ತ ಗಮನ ಹರಿಸಬೇಕು. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದಕ್ಕೆ ಇಂಜಿನಿಯರುಗಳು ಸಹಕರಿಸಬೇಕು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೂಚನೆ ನೀಡಿದರು.
ಆರೆಸ್ಸೆಸ್ನ್ನು ಹೊಗಳಿದ ವಿವಾದ: ದಿಗ್ವಿಜಯ ಸಿಂಗ್ಗೆ ತಿರುಗೇಟು ನೀಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ!
ಹೊಸದಿಲ್ಲಿ: ಸಂಘಟನಾ ಸಾಮರ್ಥ್ಯಕ್ಕಾಗಿ ಮತ್ತು ತಳಮಟ್ಟದ ಕಾರ್ಯಕರ್ತರು ಉನ್ನತ ಹುದ್ದೆಗೇರಲು ಅವಕಾಶ ನೀಡುತ್ತಿರುವುದಕ್ಕಾಗಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಪ್ರಶಂಸಿಸಿ ಪಕ್ಷದೊಳಗೆ ವಿವಾದವನ್ನು ಹುಟ್ಟುಹಾಕಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ಗೆ ಸೋಮವಾರ ಎಕ್ಸ್ ಪೋಸ್ಟ್ನಲ್ಲಿ ತಿರುಗೇಟು ನೀಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು, ಸೋನಿಯಾ ಗಾಂಧಿಯವರ ನಾಯಕತ್ವದಡಿ ರಾಜಕೀಯ ಮುಖ್ಯವಾಹಿನಿಯ ಹೊರಗಿನ ಇಬ್ಬರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದನ್ನು ನೆನಪಿಸಿದ್ದಾರೆ. ಸೋನಿಯಾ ಗಾಂಧಿಯವರ ನಾಯಕತ್ವದಡಿ ತೆಲಂಗಾಣದ ಕುಗ್ರಾಮದಿಂದ ತನ್ನ ಸಾರ್ವಜನಿಕ ವೃತ್ತಿಜೀವನವನ್ನು ಆರಂಭಿಸಿದ್ದ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿ ಹುದ್ದೆಗೆ ಏರಲು ಸಾಧ್ಯವಾಗಿತ್ತು. ಸೋನಿಯಾ ಅವರು ಡಾ.ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರನ್ನೂ ಪ್ರಧಾನಿಯಾಗಿ ಮಾಡಿದ್ದರು ಎಂದು ರೆಡ್ಡಿ ಬರೆದಿದ್ದಾರೆ. ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರ ಟ್ವೀಟ್ ಕಾಂಗ್ರೆಸ್ನೊಳಗಿನ ಬಿರುಕನ್ನು ಬಹಿರಂಗಗೊಳಿಸಿದೆ ಎಂದು ಕೆಲವರು ಭಾವಿಸಿದ್ದಾರೆ ಎಂದು indiatoday.in ವರದಿ ಮಾಡಿದೆ. CONGRESS…A force for people of #India was born 140 years ago on this day. The story of the Indian National Congress is the story of Indian democracy in motion. When one reflects on the leadership of Smt #SoniaGandhi Ji, we find service, commitment, ethics and values. Under… pic.twitter.com/kSq1wajRWH — Revanth Reddy (@revanth_anumula) December 28, 2025
ಚೆನ್ನೈ ಸಮೀಪ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಹದಿಹರೆಯದ ಹುಡುಗರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಐಡಿಎಂಕೆಯ ನಾಯಕ ಪಳನಿಸ್ವಾಮಿ ಅವರು ಸಹ ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿ | ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಶಿವಶಕ್ತಿ ನಗರದಲ್ಲಿ ನಡೆದಿದೆ. ಖಂಡುರಾಜ್ ಢವಲಜಿ(42) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಗಂಡ ಹೆಂಡತಿಯ ನಡುವಿನ ಜಗಳದ ವೈಮನಸ್ಯವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು, ನಗರದ ಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಚೌಕ್ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಧರ್ಮಸ್ಥಳ ಕೇಸ್ ವರದಿಯಲ್ಲಿ ನನ್ನ ಹೇಳಿಕೆಗಳಲ್ಲಿ ಕೆಲವು ಸುಳ್ಳು- ಜಯಂತ್ ತಿರುಗೇಟು
ಧರ್ಮಸ್ಥಳ ಪ್ರಕರಣದ ಆರೋಪಿ ಜಯಂತ್, ತಾನು ಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ. ತನಗೆ ನೀಡಲಾದ ವರದಿಯಲ್ಲಿ ತಾನು ಹೇಳದ ಹೇಳಿಕೆಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿರುವ ಅವರು, ಬ್ಯಾಗ್ನಲ್ಲಿ ಏನಿದೆ ಎಂಬುದು ತನಗೆ ತಿಳಿದಿರಲಿಲ್ಲ ಎಂದಿದ್ದಾರೆ.
Sonam Yeshey- ಅಬ್ಬಬ್ಬಾ! ಟಿ20 ಕ್ರಿಕೆಟ್ ನಲ್ಲಿ 8 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಭೂತಾನ್ ಬೌಲರ್!
ಬ್ಯಾಟರ್ ಗಳದ್ದೇ ದರ್ಬಾರ್ ಆಗಿರುವ ಚುಟುಕು ಕ್ರಿಕೆಟ್ ನಲ್ಲಿ ಬೌಲರ್ ಗೆ ಒಂದೊಂದು ವಿಕೆಟ್ ಕೀಳುವುದೂ ಪ್ರಯಾಸಕರ. ಅಂಥದ್ದರಲ್ಲಿ ಭೂತಾನ್ನ ಸೋನಂ ಯೆಶಿ ಎಂಬ ಎಡಗೈ ಸ್ಪಿನ್ನರ್ 8 ವಿಕೆಟ್ ಪಡೆದು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಇಬ್ಬರು ಬೌಲರ್ ಗಳು 7 ವಿಕೆಟ್ ಗಳನ್ನು ಪಡೆದಿದ್ದರು. ಮೊದಲ ಬಾರಿಗೆ ಬೌಲರ್ ಒಬ್ಬ 8 ವಿಕೆಟ್ ಪಡೆದಿದ್ದಾರೆ. ಮ್ಯಾನ್ಮಾರ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 7 ರನ್ ನೀಡಿ ಯೆಶಿ ಆ ಸಾಧನೆ ಮೆರೆದಿದ್ದಾರೆ.
ವೈರಲ್ ವೀಡಿಯೊ ವಿವಾದ: ಲಲಿತ್ ಮೋದಿ ಕ್ಷಮೆಯಾಚನೆ
ಭಾರತ ಸರ್ಕಾರದ ಬಗ್ಗೆ ಅಪಾರ ಗೌರವವಿದೆ ಐಪಿಎಲ್ ನ ಮಾಜಿ ಅಧ್ಯಕ್ಷ
ಕಲಬುರಗಿ | ದೇಶದಲ್ಲಿ ಎಲ್ಲರೂ ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು : ರಾಬರ್ಟ್ ಮಿರಾಂಡಾ
ಕ್ರಿಸ್ತ ಜಯಂತಿ, ಹೊಸ ವರ್ಷದ ಅಂತರ್ ಧರ್ಮೀಯ ಆಚರಣೆ
INSV Kaundinya: ರೋಚಕ ಸಮುದ್ರಯಾನಕ್ಕೆ ಸಿದ್ಧವಾದ ಭಾರತದ ಇಂಜಿನ್ರಹಿತ ಹಡಗು; ಆದಿ ಮಾರ್ಗಕ್ಕೆ ಮರುಜೀವ
ಪ್ರಾಚೀನ ಭಾರತೀಯ ಹಡಗು ನಿರ್ಮಾಣ ತಂತ್ರಜ್ಞಾನ ಮತ್ತು ಸಂಚರಣೆಯ ಜ್ಞಾನ, ಜಾಗತಿಕ ಇತಿಹಾಸವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ನಮ್ಮ ಪೂರ್ವಜರ ಸಾಹಸಮಯ ಸಮುದ್ರಯಾನಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿನ ಮೂಲೆ ಮೂಲೆಗೂ ಕೊಂಡೊಯ್ದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಇದೀಗ ಈ ಗತವೈಭವವನ್ನು ಸಾರುವ ಉದ್ದೇಶದಿಂದ ಐಎನ್ಎಸ್ವಿ ಕೌಂಡಿನ್ಯ ಎಂಬ ಇಂಜಿನ್ರಹಿತ ಹಡಗು ತನ್ನ ಪ್ರಥಮ ನೌಕಾಯಾನವನ್ನು ಆರಂಭಿಸಿದೆ. ಗುಜರಾತ್ನ ಪೋರ್ಬಂದರ್ನಿಂದ ಒಮಾನ್ನ ಮಸ್ಕತ್ವರೆಗೆ ಐಎನ್ಎಸ್ವಿ ಕೌಂಡಿನ್ಯ ಸಂಚರಿಸಲಿದೆ.
ಕಲಬುರಗಿ | ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ, ಸಮುದಾಯದ ಸಹಸ್ರಾರು ಜನರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಕೋಲಿ, ಕಬ್ಬಲಿಗ ಸಮಾಜಗಳ ಪ್ರಮುಖ ಮುಖಂಡರುಗಳ ನೇತೃತ್ವದಲ್ಲಿ ಹಾವೇರಿಯ ಶಾಂತಬಿಷ್ಮ ಚೌಡಯ್ಯ ಸ್ವಾಮೀಜಿ ಅವರು ಧ್ವಜ ತೋರಿಸುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಜಗತ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತನಕ ನಡೆಯಿತು. ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ 1996ರಿಂದ ಒತ್ತಾಯಿಸುತ್ತಾ ಬಂದಿದ್ದೇವೆ, ಹಲವು ಬಾರಿ ಗಂಗಾಮತ ಮತ್ತು ಅದರ ಉಪಜಾತಿಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದರೂ ಪದೇ ಪದೇ ವಾಪಸ್ ಕಳುಹಿಸಲಾಗುತ್ತಿದೆ, ಹಾಗಾಗಿ ಈ ಬಾರಿ ಸೂಕ್ತ ದಾಖಲೆಗಳೊಂದಿಗೆ ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಕೋಲಿ ಸಮಾಜದ ಮುಖಂಡ ಶಿವಕುಮಾರ್ ನಾಟೀಕಾರ ಮಾತನಾಡಿ, ನಮ್ಮ ಹೋರಾಟ ಯಾವುದೇ ಸರಕಾರ, ಪಕ್ಷದ ವಿರುದ್ಧವಲ್ಲ. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಹಮ್ಮಿಕೊಂಡಿದ್ದು, ಇಲ್ಲಿ ಭಾಗಿಯಾದರು ಸ್ವಾಭಿಮಾನಿಗಳಾಗಿದ್ದಾರೆ ಹೊರತು ಪೇಮೆಂಟ್ ಗಿರಾಕಿಗಳಲ್ಲ ಎಂದು ವಾಗ್ದಾಳಿ ನಡೆಸಿದರು. 1996 ರಿಂದ ನಮ್ಮ ಪ್ರಸ್ತಾವನೆ ವಾಪಸ್ ಬರುತ್ತಿದೆ, ಮತ್ತೆ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕಿದೆ, 2 ವರ್ಷ ಆದರೂ ಅಹಿಂದ ಸರ್ಕಾರ ಎನಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಎಡವಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದಾರೆ, ನಮ್ಮ ಬೇಡಿಕೆ ಅವರೇ ಪೂರೈಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಾವೇರಿಯ ಶಾಂತಬಿಷ್ಮ ಚೌಡಯ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಾಬಣ್ಣ ಜಮಾದಾರ್, ಶರಣಪ್ಪ ತಳವಾರ, ಶೋಭಾ ಬಾಣಿ, ರವಿರಾಜ್ ಕೊರವಿ, ತಿಪ್ಪಣ್ಣ ರೆಡ್ಡಿ, ಪಿಡ್ಡಪ್ಪ ಜಾಲಗಾರ್, ಭಗವಂತರಾಯ ಬೆಣ್ಣೂರ, ವಿದ್ಯಾಧರ ಮಂಗಳೂರು, ದಿಗಂಬರ ಕರಜಗಿ, ಭೀಮರಾಯ ಜನಿವಾರ, ಸುರೇಶ್ ಹುಡಗಿ, ಲಕ್ಷ್ಮೀಪುತ್ರ ಜಮಾದಾರ್, ರಾಕೇಶ್ ಜಮಾದಾರ್, ಮಹಾಂತೇಶ್ ಜಮಾದಾರ್, ಸೇರಿದಂತೆ ಮತ್ತಿತರರು ಇದ್ದರು. ಯಾದಗಿರಿಯ, ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ, ಕಾಳಗಿ ಸೇರಿದಂತೆ ವಿವಿಧ ತಾಲೂಕುಗಳ ಗ್ರಾಮಗಳಿಂದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕುದ್ರೋಳಿ ಜಾಮಿಯಾ ಮಸೀದಿಯ ವಾರ್ಷಿಕ ಮಹಾಸಭೆ; ಕೆ.ಎಸ್. ಮುಹಮ್ಮದ್ ಮಸೂದ್ ಐದನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಮಂಗಳೂರು : ಕುದ್ರೋಳಿ ಜಾಮಿಯಾ ಮಸೀದಿಯ ಐದನೇ ವಾರ್ಷಿಕ ಮಹಾ ಸಭೆಯು ಮಸೀದಿಯ ಕೆಳ ಅಂತಸ್ತಿನ ಸಭಾಂಗಣದಲ್ಲಿ ಡಿ. 28 ರವಿವಾರ ನಡೆಯಿತು. ಸಭೆಯ ನಂತರ ಮುಂದಿನ ಮೂರು ವರ್ಷಕ್ಕೆ ನೂತನ ಕಮಿಟಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸರಕಾರದ ಮಾಜಿ ಮುಖ್ಯ ಸಚೇತಕರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಾಜಿ ಮಕ್ಬೂಲ್ ಅಹಮದ್, ಕಾರ್ಯದರ್ಶಿಯಾಗಿ ಹಾಜಿ ಎಸ್.ಎ ಖಲೀಲ್, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಸರ್ಫುದ್ದೀನ್, ಕೋಶಾಧಿಕಾರಿಯಾಗಿ ಶೇಖ್ ತಜ್ಮುಲ್ ಹುಸೈನ್ ಹಾಗೂ ಸದಸ್ಯರುಗಳಾಗಿ ಡಾ. ಮೊಹಮ್ಮದ್ ಆರೀಫ್ ಮಸೂದ್, ಎಸ್. ಸಲೀಂ, ಅಬ್ದುಲ್ ಖಾಲಿಕ್ ಎಸ್, ಅಶ್ಫಾಕ್ ಅಹ್ಮದ್, ಝಾಹೀದ್ ಎಂ.ಎಸ್, ಅಕ್ತರ್ ಹುಸೈನ್ ರವರನ್ನು ಆಯ್ಕೆ ಮಾಡಲಾಯಿತು.
2025 ಅಂತ್ಯವಾಗಿ 2026 ಆರಂಭವಾಗಲು ಇನ್ನೂ ಕೆಲದಿನಗಳಷ್ಟೇ ಬಾಕಿಯಿದ್ದು, 2026ರಲ್ಲಿ ದೇಶ, ವಿದೇಶ, ರಾಜಕೀಯ, ಆರ್ಥಿಕತೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳ ಭವಿಷ್ಯ ಹೇಗಿರಲಿದೆ. 2026ರಲ್ಲಿ ಯಾವೆಲ್ಲಾ ಬೆಳವಣಿಗೆಗಳು ಸಂಭವಿಸಲಿವೆ. ಈ ಎಲ್ಲಾ ಬೆಳವಣಿಗೆಗಳು ದೇಶ ಹಾಗೂ ದೇಶವಾಸಿಗಳ ಮೇಲೆ ಹೇಗೆ ಪರಿಣಾಮ ಬೀಳಲಿದೆ ಎಂಬ ಸಂಕ್ಷಿಪ್ತ ಮುನ್ನೊಟ ತಿಳಿಯಲು ಈ ಲೇಖನವನ್ನು ಮುಂದೆ ಓದಿ....
ಸರಕಾರಿ ಶಾಲೆಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಲಿ
ಭಾಗ - 1 ಕರ್ನಾಟಕ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಯೋಜನೆಯನ್ನು ವಿರೋಧಿಸಿ ಹಲವು ಗುಂಪುಗಳು ಸಾರ್ವಜನಿಕ ಹೋರಾಟಗಳನ್ನು ಆರಂಭಿಸಿವೆ. ಸರಕಾರ ವಿಲೀನದ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು(!!?) ಸರಕಾರಿ (kannada) ಶಾಲೆಗಳನ್ನು ಮುಚ್ಚುವ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಬೇಕಾದ ಶಿಕ್ಷಣ ಸಚಿವರು ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುವ ಅರ್ಧ ಸತ್ಯವನ್ನು ಪದೇ ಪದೇ ಹೇಳುತ್ತಾ ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಮುಚ್ಚುವುದು ಮತ್ತು ವಿಲೀನ ಎನ್ನುವ ಪದಗಳ ಅರ್ಥದಲ್ಲಿ ದೊಡ್ಡ ವ್ಯತ್ಯಾಸ ಇಲ್ಲ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಕೆಪಿಎಸ್ ಯೋಜನೆ ಜಾರಿ ಮಾಡಲು ದೃಢ ನಿರ್ಧಾರ ಮಾಡಿರುವ ಸರಕಾರಕ್ಕೆ ಸಾರ್ವಜನಿಕರ ಗೊಂದಲ ಮತ್ತು ಅಪನಂಬಿಕೆಯನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ. ಯೋಜನೆಯನ್ನು ವಿರೋಧಿಸುತ್ತಿರುವ ಗುಂಪುಗಳ ಕಾಳಜಿ ಕುರಿತು ಭಿನ್ನಾಭಿಪ್ರಾಯ ಇಲ್ಲ. ಆದರೆ ಅವರು ಅವಾಸ್ತವಿಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳನ್ನು ಮುಚ್ಚುವ ಬದಲು ಎಸ್ ಡಿ ಎಂ ಸಿ ಗಳಿಗೆ ವಹಿಸಿ ಕೊಡಿ. ಹಾಲು ಉತ್ಪಾದಕರ ಸೊಸೈಟಿ ಗಳ ಮಾದರಿಯಲ್ಲಿ ಶಾಲೆಗಳನ್ನು ನಡೆಸುತ್ತೇವೆ ಎನ್ನುವ ಅವರ ಬೇಡಿಕೆಯೇ ಹಾಸ್ಯಾಸ್ಪದವಾಗಿ ಕಾಣುತ್ತದೆ. ಇಂತಹ ಹೋರಾಟಗಳು ಮತ್ತು ಹೇಳಿಕೆಗಳಿಂದ ಕರ್ನಾಟಕದ ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಸರಕಾರಿ ಶಾಲೆಗಳ ದುಸ್ಥಿತಿಗೆ ಕಾರಣಗಳು ಕರ್ನಾಟಕದಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಆಕರ್ಷಣೆಯನ್ನು ಕಳೆದುಕೊಳ್ಳುತ್ತಿವೆ. ಕಳೆದ 10-15 ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಪ್ರಮಾಣ ಶೇ. 30 ರಷ್ಟು ಅಂದರೆ ಸುಮಾರು (17ಲಕ್ಷ ) ಕಡಿಮೆ ಆಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಹೌದು, ಇದು ನಾವು ಒಪ್ಪಿಕೊಳ್ಳಬೇಕಾದ ಕಟು ಸತ್ಯ. ಇದಕ್ಕೆ ಹಲವು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಮಾತ್ರ ಪಟ್ಟಿ ಮಾಡಿದ್ದೇನೆ. 1.ಸರಕಾರದ ತಪ್ಪು ಶಿಕ್ಷಣ ನೀತಿ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ. ಈ ಜವಾಬ್ದಾರಿಯನ್ನು ಖಾಸಗಿ ಶಿಕ್ಷಣ ವ್ಯಾಪಾರಿಗಳ ತೆಕ್ಕೆಗೆ ವರ್ಗಾಯಿಸುವ ಮೂಲಕ ಸರಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದುರ್ಬಲಗೊಳ್ಳಲು ಕಾರಣವಾಗಿದೆ. ಸರಕಾರದ ಬೇಜವಾಬ್ದಾರಿಯ ಕಾರಣದಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಾಸನ ಸಭೆಯ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕರಾಗಿ ಶಿಕ್ಷಣದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಥಳುಕು ಬಳುಕಿನ ಮುಂದೆ ಸರಕಾರಿ ಕನ್ನಡ ಶಾಲೆಗಳು ಪೇಲವವಾಗಿ ಕಾಣುತ್ತಿವೆ. ಹೀಗಾಗಿ ಸರಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಖಾಸಗಿ ಶಿಕ್ಷಣ ವ್ಯಾಪಾರದ ನಿಯಂತ್ರಣಕ್ಕೆ ಯಾವುದೇ ಪಕ್ಷದ ಸರಕಾರಗಳು ಕ್ರಮ ವಹಿಸುತ್ತಿಲ್ಲ. ಸರಕಾರಿ ಶಾಲೆಗಳ ಮೂಲಕ ರಾಜ್ಯದ ಎಲ್ಲ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ವನ್ನು ಉಚಿತವಾಗಿ ಮತ್ತು ತಾರತಮ್ಯ ರಹಿತವಾಗಿ ಒದಗಿಸುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. 2. ಶಿಕ್ಷಕರ ಅಸಡ್ಡೆ, ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಕರ್ನಾಟಕ ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುಸಿತದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರಿ ಶಾಲೆಗಳ ಶಿಕ್ಷಕರ ಪಾತ್ರ ತುಂಬಾ ದೊಡ್ಡದು. ಜನರ ತೆರಿಗೆಯ ಹಣದಿಂದ ವೇತನ ಪಡೆದು, ಜೀವನ ಭದ್ರತೆಯ ಗ್ಯಾರಂಟಿ ಪಡೆದಿರುವ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿಲ್ಲ. ಪ್ರಾಥಮಿಕ ಶಾಲೆಯ ಪ್ರತಿಯೊಂದು ತರಗತಿಯ ಮಕ್ಕಳ ಕಲಿಕಾ ಮಟ್ಟವನ್ನು ನಿಗದಿ ಪಡಿಸಲಾಗಿದೆ. ಈ ಮಟ್ಟವನ್ನು ಮಕ್ಕಳು ಸಾಧಿಸುವಂತೆ ನೋಡಿಕೊಳ್ಳುವುದು ಶಿಕ್ಷಕರ ಪ್ರಾಥಮಿಕ ಕರ್ತವ್ಯ. 10-20 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ಕೂಡ ತುಂಬಾ ಕಡಿಮೆ ಇದೆ. ಆದರೂ ವಿದ್ಯಾರ್ಥಿಗಳು ನಿಗದಿತ ಕಲಿಕಾ ಮಟ್ಟವನ್ನು ತಲುಪುವಂತೆ ಮಾಡುವಲ್ಲಿ ಶಿಕ್ಷಕರು ವಿಫಲರಾಗುತ್ತಿದ್ದಾರೆ. ಇದರಿಂದ ಪೋಷಕರು ಸರಕಾರಿ ಶಾಲೆಗಳ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. 3. ಆಂಗ್ಲ ಭಾಷಾ ಮಾಧ್ಯಮದಲ್ಲಿ ಕಲಿಕೆಯ ವ್ಯಾಮೋಹ ಪ್ರಸ್ತುತ ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಉತ್ತಮ ಭವಿಷ್ಯಕ್ಕೂ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೂ ಸಂಬಂಧವನ್ನು ಕಲ್ಪಿಸಲಾಗುತ್ತಿದೆ. ಕನ್ನಡ ಮಾಧ್ಯಮ ಕಳಪೆ, ಆಂಗ್ಲ ಮಾಧ್ಯಮ ಶ್ರೇಷ್ಠ ಎನ್ನುವ ಮನೋಭಾವ ಕಂಡು ಬರುತ್ತಿದೆ. ಸರಕಾರದ ತಪ್ಪು ಶಿಕ್ಷಣ ನೀತಿಯೇ ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ (English) ಕಲಿಕೆಗೆ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕುತ್ತಿದ್ದಾರೆ. ಸರಕಾರಿ ಶಾಲೆಗಳ ಶಿಕ್ಷಕರಿಗೆ ಕೂಡ ಸರಕಾರದ ಶಾಲೆಗಳ ಮೇಲೆ ನಂಬಿಕೆ ಇಲ್ಲ. ಅವರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆ ಮಾಡುತ್ತಿದ್ದಾರೆ. ಇದು ವಿಪರ್ಯಾಸ..!! ಒಂದು ಬಾರಿ ಖಾಸಗಿ ಆಂಗ್ಲ ಮಾಧ್ಯನಾ ಶಾಲೆಗಳು ನಡೆಸುತ್ತಿರುವ ಆಂಗ್ಲ ಮಾಧ್ಯಮ ಐಏಉ- Uಏಉ ವ್ಯವಸ್ಥೆಗೆ ಕಾಲಿಟ್ಟ ಯಾವ ಮಕ್ಕಳು ಕೂಡ ಮರಳಿ ಸರಕಾರಿ ಶಾಲೆಗೆ ಪ್ರವೇಶ ಮಾಡುವುದಿಲ್ಲ.! ಆಂಗ್ಲ ಮಾಧ್ಯಮ ಕಲಿಕೆಯ ವ್ಯಾಮೋಹ ಎಷ್ಟಿದೆಯೆಂದರೆ, ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸೇರ್ಪಡೆಯಾಗುವ ಮಕ್ಕಳ ಪ್ರಮಾಣದಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ. 2015-16ರಲ್ಲಿ ಖಾಸಗಿ ಶಾಲೆಗಳ ಮಕ್ಕಳ ದಾಖಲಾತಿ 30.3 ಲಕ್ಷದಷ್ಟು ಇತ್ತು. 2025-26 ನೇ ಸಾಲಿನಲ್ಲಿ ಇದು 47 ಲಕ್ಷಗಳಿಗೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಆಂಗ್ಲ ಭಾಷಾ ಮಾಧ್ಯಮದ ವ್ಯಾಮೋಹ ಸರಕಾರಿ ಕನ್ನಡ ಶಾಲೆಗಳ ಅವನತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 4. ಸ್ಥಳೀಯಾಡಳಿತ ಸಂಸ್ಥೆಗಳ ವೈಫಲ್ಯ ಆಯಾ ಹಂತಗಳ ಸ್ಥಳೀಯಾಡಳಿತ ಸಂಸ್ಥೆಗಳು (ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ಗಳು ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳು) ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಕಾಯ್ದೆಯನ್ನು ಬದ್ಧ ಜವಾಬ್ದಾರಿಯಿಂದ ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಸರಕಾರಗಳನ್ನು ಸಜ್ಜು ಗೊಳಿಸಲು ಸರಕಾರ ಗಮನ ನೀಡುತ್ತಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆ ತಮ್ಮ ಕಡ್ಡಾಯ ಪ್ರಕಾರ್ಯ ಎನ್ನುವುದನ್ನು ಮರೆತಿವೆ. 5. ಪೋಷಕರ ಸಮಿತಿಗಳ ವೈಫಲ್ಯ ಸರಕಾರಿ ಶಾಲೆಗಳ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೋಷಕರ ಪ್ರತಿನಿಧಿಗಳು ಇರುವ ಸಮಿತಿ (Sಆಒಅ) ಗಳನ್ನು ರಚಿಸುವುದು ಕಡ್ಡಾಯವಾಗಿದೆ. ಈ ಸಮಿತಿಗಳು ತಮ್ಮ ಉದ್ದೇಶಿತ ಕರ್ತವ್ಯಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ಗಳನ್ನು ಆಯೋಜಿಸಿ ಮನವರಿಕೆ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿವೆ. ಈ ಸಮಿತಿಗಳನ್ನು ಗ್ರಾಮ ಪಂಚಾಯತ್ಗಳ ಉಪಸಮಿತಿಗಳಾಗಿ ಕಾರ್ಯಕ್ರಮ ನಿರ್ವಹಿಸುವಂತೆ ಮಾಡುವ ಕಾಯಿದೆ ಬದ್ಧ ಅವಕಾಶವನ್ನು ಪಂಚಾಯತ್ ರಾಜ್ ಇಲಾಖೆ ಕೈ ಚೆಲ್ಲಿದೆ. ಮೇಲಿನ ಅಂಶಗಳಲ್ಲದೆ ಇನ್ನೂ ಹಲವು ಆಡಳಿತಾತ್ಮಕ ಸಮಸ್ಯೆಗಳು ಕೂಡ ಸರಕಾರಿ ಶಾಲೆಗಳ ಅವನತಿಗೆ ಕಾರಣವಾಗಿವೆ. ಕೆಪಿಎಸ್ ಯೋಜನೆಗೆ ವಿರೋಧ ರಾಜ್ಯ ಸರಕಾರ ಆರಂಭಿಸಿರುವ ಕೆಪಿಎಸ್ (Karnataka public school) ಯೋಜನೆಗೆ ಈಗ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದಲ್ಲಿ 2018-2019ರ ಅವಧಿಯಲ್ಲಿ ಕೆಪಿಎಸ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೊದಲಿಗೆ ಆಯ್ದ 176 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲಾಯಿತು. ಮುಂದಿನ ವರ್ಷ ಇನ್ನಷ್ಟು ಶಾಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಯಿತು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 309 ಶಾಲೆಗಳು ಕೆಪಿಎಸ್ ಯೋಜನೆಯಡಿಯಲ್ಲಿ ಉನ್ನತೀಕರಿಸಲ್ಪಟ್ಟಿವೆ. ನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಯೋಜನೆಯನ್ನು ಕೈಬಿಟ್ಟು ಮಾದರಿ ಶಾಲೆ ಎನ್ನುವ ಹೊಸ ಯೋಜನೆಯನ್ನು ಘೋಷಿಸಿತು. ಆದರೆ ಆ ಯೋಜನೆ ಕಾರ್ಯಗತ ಆಗಲೇ ಇಲ್ಲ. ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕೆಪಿಎಸ್ ಯೋಜನೆಗೆ ಮರು ಚಾಲನೆ ನೀಡಿ ಇನ್ನಷ್ಟು ವಿಸ್ತಾರಗೊಳಿಸಲು ಹೊರಟಿದೆ. ಮೊದಲ ಹಂತದಲ್ಲಿ ಯೋಜನೆಯನ್ನು ಆರಂಭಿಸಿದಾಗ ಕಾಣದಿದ್ದ ವಿರೋಧ ಈಗ ಮುನ್ನೆಲೆಗೆ ಬಂದಿದೆ. ಸರಕಾರದ ನಿರ್ಧಾರದ ವಿರುದ್ಧ ಜನವರಿ 26 ರಂದು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೂರಾಟಗಾರರು ಹೇಳಿಕೆ ನೀಡಿದ್ದಾರೆ.
ಮಕ್ಕಳ ಹಕ್ಕುಗಳು- ರಕ್ಷಣೆ ಬಗ್ಗೆ ಅರಿವು ಕಾರ್ಯಾಗಾರ
ಮಾಹಿತಿ ಕೊರತೆಯಿಂದ ಅರ್ಹರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ: ಡಾ. ತಿಪ್ಪೇಸ್ವಾಮಿ
ರಾಯಚೂರು | ವಾಲ್ಮೀಕಿ ನಾಯಕ ಸಮುದಾಯದ 3 ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ರಾಯಚೂರು: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ವರ್ಗಗಳ ಇಲಾಖೆಗೆ ಸಚಿವ ಸ್ಥಾನ ಖಾಲಿ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಇಲಾಖೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿರುವುದರಿಂದ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗಿಲ್ಲ. ಕೂಡಲೇ ಈ ಇಲಾಖೆಗೆ ಸಚಿವರನ್ನು ನೇಮಿಸುವುದರ ಜೊತೆಗೆ ವಾಲ್ಮೀಕಿ ಸಮುದಾಯಕ್ಕೆ ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಆಗ್ರಹಿಸಿದರು. ಅವರು ಸೋಮವಾರ ರಾಯಚೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯಕ್ಕೆ ಈ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂದು ಆರೋಪಿಸಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾದ 15 ಕ್ಷೇತ್ರಗಳ ಪೈಕಿ ಸುಮಾರು 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಲ್ಲದೆ 3 ಸಾಮಾನ್ಯ ಕ್ಷೇತ್ರಗಳ ಪೈಕಿ ಒಂದರಲ್ಲಿ ಕೂಡ ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಶಾಸಕ ಗೆದ್ದಿದ್ದಾರೆ. ಆದರೂ ಈ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ತಾರತಮ್ಯಕ್ಕೆ ನಿದರ್ಶನವಾಗಿದೆ ಎಂದರು. ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿ ವೇತನ ತಲುಪುತ್ತಿಲ್ಲ, ಪ್ರೈಸ್ ಮನಿ ಯೋಜನೆ ನೆನಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಅನೇಕ ವಾಲ್ಮೀಕಿ ಭವನಗಳು ಅನುದಾನದ ಕೊರತೆಯಿಂದ ಅಪೂರ್ಣವಾಗಿವೆ. ವಸತಿ ನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಾಸಿಗೆ ಮತ್ತು ಮಂಚಗಳೇ ಇಲ್ಲ. ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿಯೂ ಅಗತ್ಯ ಸೌಕರ್ಯಗಳ ಕೊರತೆ ಎದುರಾಗಿದೆ ಎಂದು ದೂರಿದರು. ಇನ್ನೂ ಸಾಕಷ್ಟು ವರ್ಷಗಳಿಂದ ಇಲಾಖೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಇಡೀ ರಾಯಚೂರು ಜಿಲ್ಲೆಗೆ ಕೇವಲ ಒಂದೇ ಒಂದು ಏಕಲವ್ಯ ವಸತಿ ಶಾಲೆ ಇದೆ. ಪ್ರತಿ ತಾಲೂಕಿಗೆ ಒಂದರಂತೆ ಸುಮಾರು 7 ಏಕಲವ್ಯ ವಸತಿ ಶಾಲೆಗಳು ಅಗತ್ಯವಿದ್ದರೂ ಈವರೆಗೆ ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ಕೇವಲ 3 ಆಶ್ರಮ ಶಾಲೆಗಳಿದ್ದು, ಎಲ್ಲಾ ತಾಲೂಕುಗಳಿಗೆ ಒಂದರಂತೆ ಸುಮಾರು 7 ಆಶ್ರಮ ಶಾಲೆಗಳು ಇರಬೇಕೆಂದು ಅವರು ತಿಳಿಸಿದರು. ಪ್ರತಿಷ್ಠಿತ ಶಾಲೆಗಳ ದಾಖಲಾತಿ ಗುರಿ ಜಿಲ್ಲೆಗೆ ಕೇವಲ 63ಕ್ಕೆ ಸೀಮಿತವಾಗಿದ್ದು, ಅದನ್ನು ಕನಿಷ್ಠ 200ಕ್ಕೆ ಹೆಚ್ಚಿಸಬೇಕು. ಜೊತೆಗೆ ರಾಯಚೂರು ನಗರದಲ್ಲಿ ಒಂದೇ ಒಂದು ಪ್ರತಿಷ್ಠಿತ ಶಾಲೆಯೂ ನೋಂದಣಿಯಾಗದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದಾದ್ಯಂತ ಪರಿಶಿಷ್ಟ ವರ್ಗಗಳ ಇಲಾಖೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಇಲಾಖೆಗೆ ಪೂರ್ಣಾವಧಿ ಸಚಿವರ ನೇಮಕ ಅನಿವಾರ್ಯವಾಗಿದೆ ಎಂದರು. ಸಾಮಾನ್ಯ ಕ್ಷೇತ್ರದಿಂದ ಗೆದ್ದು ಸಹಕಾರ ಸಚಿವರಾಗಿದ್ದ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರಿಂದ ಸಚಿವ ಸ್ಥಾನ ಹಿಂಪಡೆದ ಬಳಿಕ ಅವರಿಗೆ ಗೌರವಯುತ ಸ್ಥಾನಮಾನ ನೀಡಿಲ್ಲ. ಹೀಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ವಾಲ್ಮೀಕಿ ನಾಯಕ ಸಮುದಾಯದ ಕನಿಷ್ಠ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ, ರಮೇಶ್ ನಾಯಕ, ರಾಮು ನಾಯಕ, ನರೇಂದ್ರ ನಾಯಕ ಉಪಸ್ಥಿತರಿದ್ದರು.
ಕೈ ಪಕ್ಷದಲ್ಲಿ ಕಾಂಗ್ರೆಸ್ Vs ಕಾಂಗ್ರೆಸ್ : ಆಂತರಿಕ ತಳಮಳದ ಬೆಂಕಿಗೆ ರೇವಂತ್ ರೆಡ್ಡಿ ತುಪ್ಪ!
Congress Vs Congress in Congress : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೊಗಳಿದ ವಿಚಾರ, ಕಾಂಗ್ರೆಸ್ಸಿನಲ್ಲಿ ಆಂತರಿಕ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಎಂಟ್ರಿ ಕೊಟ್ಟಿದ್ದು, ಸೋನಿಯಾ ಗಾಂಧಿಯವರನ್ನು ಮನಸಾರೆ ಹೊಗಳಿದ್ದಾರೆ.
ಭಟ್ಕಳ: ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಸಾಧಕರಿಗೆ ಸನ್ಮಾನ
ಭಟ್ಕಳ: ಭಟ್ಕಳ ತಾಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಮೇಶ್ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ 2025ನೇ ಸಾಲಿನ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್ ಪಡೆದ ಕುಮಾರಿ ಸಿಂಚನಾ ತಿಮ್ಮಪ್ಪ ಮಡಿವಾಳ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ಯುನಿವರ್ಸಿಟಿ ಬ್ಲ್ಯೂ ಪಡೆದ ಪವಿತ್ರ ರಘುರಾಮ್ ಮಡಿವಾಳ ಹಾಗೂ ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ನಾಗರಾಜ್ ಗಣೇಶ್ ಶಿರಾಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಮಾರ್ಗದರ್ಶಕರಾಗಿರುವ ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ. ಮಡಿವಾಳ, ಶ್ರೀವಲಿ ಪ್ರೌಢಶಾಲೆ ಚಿತ್ರಾಪುರದ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ವೆಂಕಟೇಶ ಮಡಿವಾಳ ಶಿರಾಲಿ, ಕಾರ್ಯದರ್ಶಿ ನಿತ್ಯಾನಂದ ತೀರ್ಥಹಳ್ಳಿ, ಖಜಾಂಚಿ ರಾಜೇಶ್ ಮಡಿವಾಳ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಘದ ಆರ್ಥಿಕ ಸಲಹೆಗಾರ ಕೃಷ್ಣಾನಂದ ಮಡಿವಾಳ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಮಡಿವಾಳ ಕಾರ್ಯಕ್ರಮವನ್ನು ನಿರೂಪಿಸಿದರು.
ಭಟ್ಕಳ: ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥಆರ್.ಎಸ್. ನಾಯಕ್ ಅವರಿಗೆ ಸನ್ಮಾನ
ಭಟ್ಕಳ: ದಶಕಗಳ ಕಾಲ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಟ್ಕಳದ ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಎಸ್. ನಾಯಕ್ ಅವರ ಸೇವಾನಿವೃತ್ತಿಯ ಅಂಗವಾಗಿ ಜಮಾಅತ್-ಎ-ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಡಿ. 28ರಂದು ಭಟ್ಕಳದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಆರ್.ಎಸ್. ನಾಯಕ್ ಅವರು, ಮನುಷ್ಯ ಮೊದಲು ಮನುಷ್ಯನಾಗಿ ಬದುಕಬೇಕು ಎಂದು ಅಭಿಪ್ರಾಯಪಟ್ಟರು. “ನಾವು ಕೇವಲ ನಮ್ಮ ಧರ್ಮ ಅಥವಾ ಜಾತಿಯ ಚೌಕಟ್ಟಿನಲ್ಲಿ ಸೀಮಿತವಾಗದೆ ಪರಸ್ಪರ ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕಬೇಕು. ಮನುಷ್ಯತ್ವವೇ ಶ್ರೇಷ್ಠ ಮೌಲ್ಯ” ಎಂದು ಹೇಳಿದರು. ಭಟ್ಕಳದಲ್ಲಿ ಕಳೆದ 25 ವರ್ಷಗಳ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, 1990ರ ದಶಕದಲ್ಲಿ ನಡೆದ ಗಲಭೆ ಮತ್ತು ಕರ್ಫ್ಯೂ ದಿನಗಳನ್ನು ಸ್ಮರಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿ ಮತ್ತು ಸಹಬಾಳ್ವೆಯ ಸೇತುವೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮಾಅತ್-ಎ-ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ., ಸದ್ಭಾವನಾ ಮಂಚ್ ನ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸದ್ಭಾವನಾ ಮಂಚ್ ಪದಾಧಿಕಾರಿ ಗಂಗಾಧರ್ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರೊ.ರವೂಫ್ ಆಹಮದ್ ಸವಣೂರು ಕಾಯರ್ಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಜಮಾಅತ್ ನ ಪದಾಧಿಕಾರಿಗಳು, ಹಾಗೂ ಸದ್ಭಾವನಾ ಮಂಚ್ನ ಪದಾಧಿಕಾರಿಗಳು, ಅಂಜುಮನ್ ಕಾಲೇಜಿನ ಸಹೋದ್ಯೋಗಿಗಳು, ಸ್ಥಳೀಯ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Maharashtra | ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 'ಪವರ್'ಗಾಗಿ ಒಂದಾದ ಪವಾರ್ ಪರಿವಾರ!
ಮುಂಬೈ: ಮುಂಬರುವ ಪಿಂಪ್ರಿ-ಚಿಂಚ್ವಾಡ್ ನಗರ ಪಾಲಿಕೆ ಚುನಾವಣೆಗೆ ತಮ್ಮ ಸೋದರ ಮಾವ ಶರದ್ ಪವಾರ್ ರೊಂದಿಗೆ ಮೈತ್ರಿ ಪ್ರಕಟಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಆ ಮೂಲಕ ಪವಾರ್ ಪರಿವಾರದ ಮಹತ್ವದ ಒಗ್ಗೂಡುವಿಕೆಗೆ ಮುನ್ನುಡಿ ಬರೆದಿದ್ದಾರೆ. ರವಿವಾರ ಪಿಂಪ್ರಿ-ಚಿಂಚ್ವಾಡ್ ನಗರ ಪಾಲಿಕೆ ಚುನಾವಣೆಗಾಗಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಜಿತ್ ಪವಾರ್, ಎನ್ಸಿಪಿಯ ಎರಡೂ ಬಣಗಳು ಒಗ್ಗೂಡಿದ್ದು, ನಮ್ಮ ಪರಿವಾರ (ಕುಟುಂಬ) ಒಟ್ಟಾಗಿದೆ ಎಂದು ಹೇಳಿದ್ದಾರೆ. “ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ, ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಆ ಮೂಲಕ ಕುಟುಂಬವನ್ನು ಮತ್ತೆ ಒಂದಾಗಿಸುತ್ತಿದ್ದೇವೆ. ಈ ಬೆಳವಣಿಗೆಯಿಂದ ಹಲವು ಪ್ರಶ್ನೆಗಳೆದ್ದಿವೆ. ಆದರೆ, ಕೆಲವೊಮ್ಮೆ ಮಹಾರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ನಾನು ಸೀಟು ಹಂಚಿಕೆಯ ಕುರಿತು ಸ್ಥಳೀಯ ನಾಯಕರೊಂದಿಗೂ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು” ಎಂದು ಅವರು ಹೇಳಿದ್ದಾರೆ. ಈ ಒಗ್ಗೂಡುವಿಕೆಯ ಮೂಲಕ ಗಡಿಯಾರ ಮತ್ತು ತುತ್ತೂರಿ ಒಟ್ಟಾಗಿವೆ ಎಂದೂ ಅವರು ಹೇಳಿದ್ದಾರೆ. ಶರದ್ ಪವಾರ್ ಬಣದ ತುತ್ತೂರಿ ಹಾಗೂ ಅಜಿತ್ ಪವಾರ್ ಬಣದ ಗಡಿಯಾರ ಚಿಹ್ನೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಜನವರಿ 15ರಂದು ಪಿಂಪ್ರಿ-ಚಿಂಚ್ವಾಡ್ ಹಾಗೂ ಪುಣೆ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಮಹಾರಾಷ್ಟ್ರದಾದ್ಯಂತ ಒಟ್ಟು 29 ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ.
ಮಂಗನ ಕಾಯಿಲೆ: ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ
ಶಿವಮೊಗ್ಗ, ಡಿ.28: ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಕಾರ್ತಿಕ ಮಾಸದಲ್ಲೇ ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸುಮಾರು 7 ದಶಕಗಳಿಂದ ಮಲೆನಾಡು ಗ್ರಾಮೀಣ ಭಾಗದ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆ ಸೋಂಕಿಗೆ ಇನ್ನೂ ಯಾರೂ ಔಷಧಿ ಕಂಡುಹಿಡಿದಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಕಾಣಿಸಿಕೊಳ್ಳುವ ಮಂಗನ ಕಾಯಿಲೆಗೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದಾರೆ. ಡಿ.1ರಿಂದ 17ರವರೆಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಮಂಗನ ಕಾಯಿಲೆ ಬಾಧಿಸಿದೆ. ಅಲ್ಲದೇ 36 ಮಂಗಗಳು ಸಾವನ್ನಪ್ಪಿವೆ. ಹೀಗಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ. 1957ರಿಂದ 2024ರವರೆಗೆ ರಾಜ್ಯದಲ್ಲಿ 597 ಜನರು ಮಂಗನ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಮಂಗನ ಕಾಯಿಲೆ ಅಬ್ಬರ ಹೆಚ್ಚಿದೆ. 2019ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡುನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿತ್ತು. ಅದೇ ವರ್ಷ ಬರೋಬ್ಬರಿ 23 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು. ವ್ಯಾಕ್ಸಿನ್ ಪೂರೈಕೆ ಆಗಿಲ್ಲ: ಕಳೆದ ಮೂರು ವರ್ಷಗಳಿಂದ ಮಂಗನ ಕಾಯಿಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ನೀಡಬೇಕಾದ ವ್ಯಾಕ್ಸಿನ್ ಅನ್ನು ಸರಕಾರ ಸಮರ್ಪಕವಾಗಿ ಪೂರೈಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಇನ್ನೂ ಕಂಡುಹಿಡಿದಿಲ್ಲ ಮದ್ದು: ಮಲೆನಾಡು ಭಾಗದಲ್ಲಿ ಹಲವು ದಶಕದಿಂದ ಮಂಗನ ಕಾಯಿಲೆ ಬಾಧಿಸುತ್ತಿದ್ದರೂ ಈವರೆಗೆ ಕಾಯಿಲೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ಮಂಗನ ಕಾಯಿಲೆ ವ್ಯಾಕ್ಸಿನೇಶನ್ ಹಾಕಲಾಗುತ್ತದೆ. ಜೊತೆಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್ ಅನ್ನು ನೀಡಲಾಗುತ್ತದೆ. ವ್ಯಾಕ್ಸಿನ್ ಹಾಕುವುದರಿಂದ ಕಾಯಿಲೆಯಿಂದ ಸ್ವಲ್ಪಮಟ್ಟಿನ ರಕ್ಷಣೆ ಸಿಗುತ್ತಿತ್ತು. ಹೀಗಾಗಿ, ಆರೋಗ್ಯ ಇಲಾಖೆ ನವಂಬರ್ ನಿಂದಲೇ ಕಾಡಂಚಿನ ಜನರಿಗೆ ವ್ಯಾಕ್ಸಿನ್ ನೀಡುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಬೂಸ್ಟರ್ ಡೋಸ್ ಕೂಡ ನೀಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. 1957ರಲ್ಲಿ ಗುರುತಿಸಲಾದ ವೈರಾಣು: ಕಾಡಿನಲ್ಲಿ ಇರುವ ಉಣುಗು ಮಂಗನ ಕಾಯಿಲೆ ಹರಡಲು ಕಾರಣ. ಇದು ಮಂಗಗಳ ಮೂಲಕ ಜನರಿಗೆ ಹರಡುತ್ತದೆ. ಕಾಡಿಗೆ ಜನರು ಮತ್ತು ಜಾನುವಾರುಗಳು ತೆರಳಿದ ವೇಳೆ ಉಣುಗಿನ ಮೂಲಕ ದೇಹ ಪ್ರವೇಶಿಸಿ, ಮಾರಣಾಂತಿಕ ರೋಗ ಉಂಟು ಮಾಡುತ್ತದೆ. 1957ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಮೃತ ಮಂಗವೊಂದರ ಶರೀರದಲ್ಲಿ ಈ ವೈರಾಣು ಗುರುತಿಸಲಾಯಿತು. ಹೀಗಾಗಿ, ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್ಡಿ) ಎಂದು ಕರೆಯಲಾಗುತ್ತಿದೆ. 1957ರಿಂದ 73ರ ವರೆಗೆ ಅಂದರೆ 15 ವರ್ಷ ಶಿವಮೊಗ್ಗ ಜಿಲ್ಲೆಗೆ ಕೆಎಫ್ಡಿ ಸೀಮಿತವಾಗಿತ್ತು. 1980ರಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರವೇಶಿಸಿತ್ತು. ಕ್ರಮೇಣ ರಾಜ್ಯ ವಿಸ್ತರಿಸಿದ ಬಳಿಕ 2002ರಲ್ಲಿ ಮೊದಲಿಗೆ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. 2012ರಲ್ಲಿ ಕೇರಳದ ವಯನಾಡಿನಲ್ಲಿ ಮೊದಲ ಮಂಗನ ಕಾಯಿಲೆ ಪ್ರಕರಣ ಕಂಡುಬಂದಿದ್ದು, ಬಳಿಕ ಆ ರಾಜ್ಯದ ವಿವಿಧೆಡೆ ಕಾಣಿಸಿಕೊಂಡಿದೆ. 2015ರಲ್ಲಿ ಗೋವಾದ ಸತ್ತಾರಿ ತಾಲೂಕು, 2016ರಲ್ಲಿ ಮಹಾರಾಷ್ಟ್ರದ ದೋಡಾಮಾರ್ಗ್, ಸಿಂಧುದುರ್ಗ್ ಹೀಗೆ ಕ್ರಮೇಣ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕೆಎಫ್ಡಿ ಕಾಣಿಸಿಕೊಂಡಿದೆ. ಕಾಯಿಲೆ ವ್ಯಾಪ್ತಿ ಕ್ರಮೇಣ ವಿಸ್ತಾರವಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಇದರ ಬಾಧೆ ಹೆಚ್ಚಾಗಿದೆ. ಪ್ರಸಕ್ತ ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಬೆಳಗಾವಿ, ಕೇರಳದ ವಯನಾಡ್, ಮಲ್ಲಪ್ಪುರಂ, ಗೋವಾದ ಸತ್ತಾರಿ, ಪೆರ್ನಂ, ವಲ್ಪೊಯಿ, ಧರ್ಬೋಂದರ, ಮಹಾರಾಷ್ಟ್ರದ ಸಿಂಧುದುರ್ಗ್, ಸವಂತವಾಡಿ, ದೋಡಾಮಾರ್ಗ್, ತಮಿಳುನಾಡಿನ ನೀಲಗಿರಿಯಲ್ಲಿ ಕಾಯಿಲೆ ವಿಸ್ತಾರಗೊಂಡಿದೆ ಎಂದು ತಿಳಿದು ಬಂದಿದೆ. ಮುಂಜಾಗ್ರತೆ ಅಗತ್ಯ ಜಿಲ್ಲೆಯ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸಿರುವ ಮಂಗನ ಕಾಯಿಲೆ ಸೋಂಕಿಗೆ ಇನ್ನೂ ಸರಕಾರ ಮದ್ದು ಕಂಡು ಹಿಡಿಯದ ಪರಿಣಾಮ ಮುಂಜಾಗ್ರತೆಯೇ ಸೋಂಕು ನಿಯಂತ್ರಣಕ್ಕೆ ಸದ್ಯಕ್ಕಿರುವ ಮದ್ದಾಗಿದೆ. ಜ್ವರದಿಂದ ಬಳಲುತ್ತಿರುವವರು ಯಾವುದೇ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಜೊತೆಗೆ ಮಂಗಗಳು ಮೃತಪಟ್ಟಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಲು ತಿಳಿಸಲಾಗಿದೆ. ಈವರೆಗೆ ಕಾಯಿಲೆ ದೃಢ ಪಟ್ಟಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ರೋಗದ ಕುರಿತು ಭಯಪಡಬೇಕಿಲ್ಲ. ಆದರೆ, ಮುಂಜಾಗ್ರತೆ ಅಗತ್ಯ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. ರೋಗ ಲಕ್ಷಣಗಳು ಹಠಾತ್ ಜ್ವರ, ತೀವ್ರ ತಲೆನೋವು, ಮೈ ಕೈ ನೋವು, ವಾಂತಿ, ನಿಶ್ಶಕ್ತಿ, ಕೆಲವೊಮ್ಮೆ ರಕ್ತಸ್ರಾವ
ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿದೆ. ಆದರೆ, ತೈವಾನ್ ಇದನ್ನು ಮಿಲಿಟರಿ ಬೆದರಿಕೆ ಎಂದು ಖಂಡಿಸಿದ್ದು, ಅಂತರಾಷ್ಟ್ರೀಯ ಕಾನೂನುಗಳನ್ನು ಪ್ರಶ್ನಿಸುವ ಚೀನಾದ ಕ್ರಮವನ್ನು ತೀವ್ರವಾಗಿ ವಿರೋಧಿಸಿದೆ. ಇನ್ನು, ಚೀನಾ 2022ರಿಂದ ಈವರೆಗೆ ಸುಮಾರು 6 ಬಾರಿಗೆ ಈ ಭೀಕರ ಮಿಲಿಟರಿ ಡ್ರಿಲ್ ಗಳನ್ನು ಮಾಡಿದ್ದು, ಇದು ಯುಎಸ್ ಹಾಗೂ ಜಪಾನ್ ಗೆ ನೀಡುತ್ತಿರುವ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.
ಅರಾವಳಿ ಪರ್ವತ ಶ್ರೇಣಿ ಕುರಿತ ಆದೇಶಕ್ಕೆ 'ಸುಪ್ರೀಂ' ತಡೆ
ವ್ಯಾಖ್ಯಾನ ಮರುಪರಿಶೀಲನೆಗೆ ತಜ್ಞರ ಸಮಿತಿ ನೇಮಕಕ್ಕೆ ಸೂಚನೆ
ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದುವರಿಯಲಿದ್ದಾರೆ. ಹೈಕೋರ್ಟ್ನ ವ್ಯಾಖ್ಯಾನದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಜೆಜೆಎಂ ಕಾಮಗಾರಿ
ಚಿಕ್ಕಮಗಳೂರು, ಡಿ.28: ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಹು ನಿರೀಕ್ಷಿತ ಯೋಜನೆ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಜಿಲ್ಲಾದ್ಯಂತ ಕುಂಟುತ್ತ ಸಾಗುತ್ತಿದೆ. ಕಾಫಿನಾಡಿನಲ್ಲಿ 226 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ 1,006 ಗ್ರಾಮಗಳಿವೆ. ಈ ಪೈಕಿ 3,719 ಜನವಸತಿ ಪ್ರದೇಶವಿದ್ದು, 2,40,307 ಕುಟುಂಬಗಳಿವೆ. ಒಂದಿಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಮತ್ತೊಂದಿಷ್ಟು ಕಾಮಗಾರಿಗಳು ಮುಗಿದಿವೆ ಎನ್ನಲಾಗುತ್ತಿದ್ದರೂ ಜೆಜೆಎಂ ಯೋಜನೆಯ ನೀರು ಮಾತ್ರ ಮರೀಚಿಕೆಯಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಜೀವ ಜಲವೇ ಮನೆಗಳನ್ನು ತಲುಪುತ್ತಿಲ್ಲ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2,40,307 ಮನೆಗಳಿದ್ದು, ಇಲ್ಲಿಯವರೆಗೆ 1,96,867 ಕಾರ್ಯಾತ್ಮಕ ನಳ ನೀರು ಸಂಪರ್ಕ ನೀಡಲಾಗಿದೆ. 43,440 ನಳ ನೀರು ಸಂಪರ್ಕ ಕಲ್ಪಿಸಲು ಬಾಕಿ ಇದೆ. ನಾಲ್ಕು ಬ್ಯಾಚ್ಗಳಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಮೊದಲ ಬ್ಯಾಚ್ನಲ್ಲಿ 251 ಕಾಮಗಾರಿಗಳನ್ನು 103.57 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಎರಡನೇ ಬ್ಯಾಚ್ನಲ್ಲಿ 275 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 127.2 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಮೂರನೇ ಬ್ಯಾಚ್ನಲ್ಲಿ 129 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 52.56 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನಾಲ್ಕನೇ ಬ್ಯಾಚ್ನಲ್ಲಿ 1,130 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 476.83 ಕೋಟಿ ರೂ. ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,785 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 760.16 ಕೋಟಿ ರೂ. ವಿನಿಯೋಗಿಸಲಾಗಿದೆ. ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗಿದೆ. ತರೀಕೆರೆ ಮತ್ತು ಅಜ್ಜಂಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಚಿಕ್ಕಮಗಳೂರು ತಾಲೂಕಿನಲ್ಲಿ 146 ಜನವಸತಿ ಪ್ರದೇಶ, ಕಡೂರು 434 ಜನವಸತಿ ಪ್ರದೇಶ, ತರೀಕೆರೆ ತಾಲೂಕಿನ 156 ಜನವಸತಿ ಪ್ರದೇಶ, ತರೀಕೆರೆ ಪಟ್ಟಣಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ನಬಾರ್ಡ್ ನೆರವಿನಿಂದ 1,265 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ತರೀಕೆರೆ ತಾಲೂಕಿನ 172 ಗ್ರಾಮೀಣ ಜನವಸತಿಗಳು ಮತ್ತು ಅಜ್ಜಂಪುರ ಪಟ್ಟಣ ಪ್ರದೇಶದ ಜನವಸತಿಗಳಿಗೆ ಜಲ್ಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್ ನೆರವಿನೊಂದಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ 249 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಇದುವರೆಗೆ ಶೇ.90ರಷ್ಟು ಜಲಜೀವನ್ ಮಿಷನ್ ಕಾಮಗಾರಿ ನಡೆಸಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಆದರೆ ಜಲಜೀವನ್ ಮಿಷನ್ನಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳು ಅನೇಕ ಲೋಪಗಳಿಂದ ಕೂಡಿದ್ದು, ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜಿಪಂ ಕೆಡಿಪಿ ಸಭೆಗಳಲ್ಲಿ ಜೆಜೆಎಂ ಕಳಪೆ ಕಾಮಗಾರಿ ಮತ್ತು ಕಾಮಗಾರಿಗಳ ವಿಳಂಬ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕುಗ್ರಾಮಗಳಿಗೆ ಈ ಯೋಜನೆಯಡಿ ನೀರು ತಲುಪಿಸಲು ಇನ್ನೂ ಸಾಧ್ಯವಾಗಿಲ್ಲ. ಮಲೆನಾಡಿನಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಅಂತರ ಹೆಚ್ಚಿರುವುದರಿಂದ ಯೋಜನೆ ಅನುಷ್ಠಾನಕ್ಕೆ ತೊಡಕುಂಟಾಗಿದೆ. ಯೋಜನೆಗೆ ಬೇಕಾದ ನೀರಿನ ಲಭ್ಯತೆ ಇಲ್ಲದಂತಾಗಿದೆ. ಕೊಳವೆ ಬಾವಿಗಳು ವಿಫಲವಾಗಿವೆ. ಕಾಮಗಾರಿ ನೀಲನಕ್ಷೆ ತಯಾರಿಕೆಯಲ್ಲಿನ ಎಡವಟ್ಟುಗಳಿಂದ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಗೆ ಮೂಲಕಾರಣವಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ಜಲಜೀವನ್ ಮಿಷನ್ ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಪೂರೈಸುವ ಕೋಟ್ಯಂತರ ರೂ. ವೆಚ್ಚದ ಯೋಜನೆ ಜಿಲ್ಲಾದ್ಯಂತ ಹಳ್ಳ ಹಿಡಿಯುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ನೀರಿನ ಲಭ್ಯತೆಯ ಕೊರತೆ ಅನೇಕ ಮನೆಗಳಿಗೆ ನಳ ಮತ್ತು ಮೀಟರ್ ಬಾಕ್ಸ್ಗಳನ್ನು ಅಳವಡಿಸಲಾಗಿದೆ. ನೀರಿನ ಲಭ್ಯತೆಯ ಕೊರತೆಯಿಂದ ಕೆಲವು ಕಡೆಗಳಲ್ಲಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರೂ ಈ ಯೋಜನೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಝರಿನೀರಿನ ಲಭ್ಯತೆ ಅವಲಂಬಿಸಿ ಯೋಜನೆ ರೂಪಿಸಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.90ರಷ್ಟು ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಂಡಿದೆ. ಕೆಲವು ಕಡೆಗಳಲ್ಲಿ ಕೆಲ ಲೋಪದೋಷಗಳಿದ್ದು, ಸರಿಪಡಿಸಲಾಗುತ್ತಿದೆ. ಲೋಪದೋಷಗಳನ್ನು ಶೀಘ್ರವೇ ಸರಿಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. -ಚಿದಾನಂದಪ್ಪ, ಕಾರ್ಯಪಾಲಕ ಇಂಜಿನಿಯರ್ ನಳಸಂಪರ್ಕ ಕಲ್ಪಿಸಿ ಅನೇಕ ತಿಂಗಳು ಕಳೆದಿದೆ. ನಳಕ್ಕೆ ಪೈಪ್ ಅಳವಡಿಕೆ ಮಾಡಿಲ್ಲ. ಸಿಮೆಂಟ್ ಕಟ್ಟೆ ಕಟ್ಟಿದ ನಳವನ್ನು ಮನೆಯ ಮುಂದೆ ಇಟ್ಟು ಹೋಗಿದ್ದಾರೆ. ನೀರು ಯಾವಾಗ ಬರುತ್ತದೆಯೋ ಗೊತ್ತಿಲ್ಲ. -ನಾಗೇಂದ್ರ, ಜಯಪುರ ನಿವಾಸಿ
ಗುಡ್ ನ್ಯೂಸ್: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಮಹತ್ವದ ಮಾಹಿತಿ ಇಲ್ಲಿದೆ
ಬೆಂಗಳೂರು: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಕನ್ನಡಪರವಾದ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು. ಕರ್ನಾಟಕಕ್ಕೆ ಅನ್ಯಾಯವಾದಾಗ ಒಗ್ಗಟ್ಟಿನಿಂದ ಹೊರಡಬೇಕು. ಕನ್ನಡಿಗರು ಯಾವುದಕ್ಕೂ ಕಡಿಮೆಯಿಲ್ಲ. ಕನ್ನಡ ಭಾಷೆ, ನೆಲ, ಜಲ, ಗಡಿಗಳ ರಕ್ಷಣೆಗೆ ಪಣ
ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಫುಟ್ಪಾತ್ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ನ್ಯಾಯಾಲಯದ ಆದೇಶವಿದ್ದರೂ ತೆರವು ಕಾರ್ಯಾಚರಣೆ ನಡೆದಿದೆ. ಇದು ಬೀದಿಬದಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಯೋಜನೆಗಳ ಮರುನಾಮಕರಣ: ರಾಜಕೀಯ ಲಾಭವೇ ಅಥವಾ ಸಾರ್ವಜನಿಕ ಹಿತವೇ?
ಯೋಜನೆಗಳ ಮರುನಾಮಕರಣದ ಹಿಂದೆ ರಾಜಕೀಯ ಲಾಭದ ಅಂಶವೂ ಅಡಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಹೊಸ ಹೆಸರುಗಳು ಸಾರ್ವಜನಿಕ ಗಮನ ಸೆಳೆಯುತ್ತವೆ, ಆಡಳಿತದ ಸಾಧನೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತವೆ. ಆದರೆ ಇದು ದೀರ್ಘಕಾಲೀನ ಪರಿಹಾರವಲ್ಲ. ಹಳೆಯ ಯೋಜನೆಗಳಲ್ಲಿ ಕಂಡುಬಂದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವಿಲ್ಲದೆ ಕೇವಲ ಹೆಸರು ಬದಲಿಸಿದರೆ, ಜನರ ವಿಶ್ವಾಸ ಕ್ರಮೇಣ ಕುಸಿಯುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಸಂಪತ್ತು; ಅದು ಕಳೆದುಹೋದರೆ, ಅತ್ಯುತ್ತಮ ಯೋಜನೆಗಳೂ ಫಲ ನೀಡುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೇಂದ್ರ, ರಾಜ್ಯ ಅಥವಾ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೊತೆಯಾಗಿ ಪ್ರತೀ ವರ್ಷ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಿವೆ. ಕೇಂದ್ರ ಅಥವಾ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ತಮ್ಮದೇ ಆದ ಕಾರ್ಯತಂತ್ರಗಳ ಮೂಲಕ ಅಭಿವೃದ್ಧಿ ಸಾಧಿಸಲು ಹಿಂದಿನ ಸರಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಕೆಲವು ಮಾರ್ಪಾಡಿನೊಂದಿಗೆ ಮುಂದುವರಿಸುತ್ತಾ ಅಥವಾ ಮರುನಾಮಕರಣ ಮಾಡಿ ಅಥವಾ ಹೊಸದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಈ ಯೋಜನೆಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಲು ಸಹಾಯವಾಗಿದೆ ಎಂಬುದನ್ನು ಕಾಲ ಕಾಲಕ್ಕೆ ತಕ್ಕಂತೆ ಸರಕಾರಗಳು ಯೋಜನೆಗಳನ್ನು ಮೌಲ್ಯಮಾಪನ ಮಾಡುವುದರ ಮೂಲಕ ಕ್ರಮವಹಿಸಿದ್ದರೂ ಕೂಡ ಯೋಜನೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಲ್ಲಿ ಹಲವು ಸಂದರ್ಭಗಳಲ್ಲಿ ವಿಫಲವಾಗಿವೆ. ಪ್ರಸ್ತುತ, ಯೋಜನೆಗಳ ಮರುನಾಮಕರಣಕ್ಕೆ ಸೀಮಿತವಾಗದೆ ಪರಿಣಾಮಕಾರಿ ಅನುಷ್ಠಾನಕ್ಕೆ ದಾರಿಯಾಗಬೇಕು ಎಂಬ ವಿಚಾರ ಭಾರತದ ಅಭಿವೃದ್ಧಿ ಚರ್ಚೆಯ ಕೇಂದ್ರಬಿಂದುವಾಗಿದೆ. ಸರಕಾರಗಳು ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು, ಹಳೆಯ ಯೋಜನೆಗಳಿಗೆ ಹೊಸ ಹೆಸರುಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿದ್ದರೂ, ಈ ಪ್ರಕ್ರಿಯೆಯಿಂದ ಸಮಾಜದ ಅಂಚಿನಲ್ಲಿರುವ ಜನರ ಬದುಕಿನಲ್ಲಿ ಎಷ್ಟು ವಾಸ್ತವಿಕ ಬದಲಾವಣೆ ಆಗುತ್ತಿದೆ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತವಾಗಿದೆ. ಅಭಿವೃದ್ಧಿ ಎಂದರೆ ಕೇವಲ ಘೋಷಣೆಗಳು, ಜಾಹೀರಾತುಗಳು ಅಥವಾ ಆಕರ್ಷಕ ಹೆಸರುಗಳ ಸರಣಿ ಅಲ್ಲ; ಅದು ಜನರ ದಿನನಿತ್ಯದ ಬದುಕಿನಲ್ಲಿ ಕಂಡುಬರುವ ಸುಧಾರಣೆ, ಭದ್ರತೆ ಮತ್ತು ಗೌರವದ ಅನುಭವ. ಈ ಅರ್ಥದಲ್ಲಿ ನೋಡಿದರೆ, ಯೋಜನೆಗಳ ಮರುನಾಮಕರಣಕ್ಕಿಂತ ಅವುಗಳ ಪರಿಣಾಮಕಾರಿ ಅನುಷ್ಠಾನವೇ ನಿಜವಾದ ಅಭಿವೃದ್ಧಿಯ ಮಾನದಂಡವಾಗಬೇಕು. ಭಾರತದ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಯ ಇತಿಹಾಸವನ್ನು ನೋಡಿದರೆ, ಅನೇಕ ಮಹಾನ್ ಚಿಂತಕರು ಕಾನೂನು, ನೀತಿ ಮತ್ತು ಯೋಜನೆಗಳಿಗಿಂತ ಅವುಗಳ ಕಾರ್ಯಗತಗೊಳಿಸುವಿಕೆಗೆ ಹೆಚ್ಚು ಮಹತ್ವ ನೀಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಸಂದರ್ಭದಲ್ಲಿ ‘‘ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗದು, ಅದಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಬೆಂಬಲ ಅಗತ್ಯ’’ ಎಂದು ಎಚ್ಚರಿಸಿದ್ದರು. ಅಂದರೆ, ಕಾನೂನುಗಳು ಮತ್ತು ಯೋಜನೆಗಳು ಕಾಗದದಲ್ಲೇ ಉಳಿಯದೆ, ಸಮಾಜದ ದುರ್ಬಲ ವರ್ಗಗಳಿಗೆ ನಿಜವಾದ ಹಕ್ಕುಗಳು, ಅವಕಾಶಗಳು ಮತ್ತು ಗೌರವ ತಲುಪಬೇಕು. ಇಂದಿನ ದಿನಗಳಲ್ಲಿ ಅನೇಕ ಕಲ್ಯಾಣ ಯೋಜನೆಗಳು ಸಂವಿಧಾನದ ಮೌಲ್ಯಗಳನ್ನು ಉಲ್ಲೇಖಿಸುತ್ತಿದ್ದರೂ, ಅವುಗಳ ಅನುಷ್ಠಾನದಲ್ಲಿ ಕಾಣುವ ಅಸಮರ್ಥತೆ, ವಿಳಂಬ ಮತ್ತು ನಿರ್ಲಕ್ಷ್ಯ ಅಂಬೇಡ್ಕರ್ ಅವರ ಕನಸಿನ ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಅಡ್ಡಿಯಾಗುತ್ತಿದೆ. ಅದೇ ರೀತಿ, ಮಹಾತ್ಮಾ ಗಾಂಧೀಜಿ ಅವರು ‘‘ಕಟ್ಟಕಡೆಯ ವ್ಯಕ್ತಿಯ ತತ್ವವು ಅಭಿವೃದ್ಧಿ ಚರ್ಚೆಗೆ ಗಾಢವಾದ ನೈತಿಕ ಆಧಾರ ಒದಗಿಸುತ್ತದೆ. ಯಾವುದೇ ಯೋಜನೆ ಅಥವಾ ನೀತಿಯನ್ನು ರೂಪಿಸುವಾಗ, ಅದರ ಲಾಭ ಸಮಾಜದ ಅತಿ ದುರ್ಬಲ ವ್ಯಕ್ತಿಗೆ ತಲುಪುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕು’’ ಎಂದು ಹೇಳಿದ್ದರು. ಇಂದು ಹಲವಾರು ಯೋಜನೆಗಳು ಬಡವರು, ಗ್ರಾಮೀಣ ಜನರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಘೋಷಿಸಲ್ಪಡುತ್ತವೆ. ಆದರೆ ತಳಮಟ್ಟದಲ್ಲಿ ಅನುಷ್ಠಾನವಾಗುವಾಗ ಮಧ್ಯವರ್ತಿಗಳ ಪ್ರಾಬಲ್ಯ, ಮಾಹಿತಿ ಕೊರತೆ, ಭ್ರಷ್ಟಾಚಾರ ಮತ್ತು ತಾಂತ್ರಿಕ ಅಡಚಣೆಗಳಿಂದಾಗಿ ಕಟ್ಟಕಡೆಯ ವ್ಯಕ್ತಿಯವರೆಗೆ ಯೋಜನೆಗಳ ಪ್ರತಿಫಲ ತಲುಪದೆ ಹೋಗುವ ಉದಾಹರಣೆಗಳು ಸಾಕಷ್ಟು ಕಂಡುಬರುತ್ತಿವೆ. ಈ ಪರಿಸ್ಥಿತಿಯಲ್ಲಿ, ಯೋಜನೆಗೆ ಹೊಸ ಹೆಸರು ಕೊಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ; ಗಾಂಧೀಜಿಯ ತತ್ವದಂತೆ, ಯೋಜನೆಯ ಪರಿಣಾಮ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಆರ್ಥಿಕ ಚಿಂತನೆಯ ದೃಷ್ಟಿಯಿಂದಲೂ ಅನುಷ್ಠಾನದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಅಮರ್ತ್ಯ ಸೇನ್ ‘‘ಸಾಮರ್ಥ್ಯ ವಿಕಾಸ ಸಿದ್ಧಾಂತವು ಅಭಿವೃದ್ಧಿಯನ್ನು ಕೇವಲ ಆದಾಯ ಅಥವಾ ಜಿಡಿಪಿ ಸಂಖ್ಯೆಗಳ ಮೂಲಕ ಅಳೆಯುವ ಪ್ರವೃತ್ತಿಯನ್ನು ಪ್ರಶ್ನಿಸುತ್ತದೆ. ಜನರು ತಮ್ಮ ಜೀವನವನ್ನು ಸ್ವತಂತ್ರವಾಗಿ ಆಯ್ಕೆಮಾಡುವ ಸಾಮರ್ಥ್ಯ ಹೊಂದಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ’’ ಎಂದು ವಾದಿಸುತ್ತಾರೆ. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಭದ್ರತೆ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯು ಸಾಮರ್ಥ್ಯ ವಿಕಾಸದ ಪ್ರಮುಖ ಅಂಶಗಳು. ಸರಕಾರದ ಯೋಜನೆಗಳು ಈ ಕ್ಷೇತ್ರಗಳಲ್ಲಿ ಸ್ಪಷ್ಟ ಪರಿಣಾಮ ತೋರದೆ ಇದ್ದರೆ, ಅವುಗಳಿಗೆ ಎಷ್ಟೇ ಆಕರ್ಷಕ ಹೆಸರುಗಳಿದ್ದರೂ ಅವು ಅಭಿವೃದ್ಧಿಯ ಗುರಿಯನ್ನು ಸಾಧಿಸಿದಂತಾಗುವುದಿಲ್ಲ. ಹೀಗಾಗಿ, ಯೋಜನೆಗಳ ಅನುಷ್ಠಾನವು ಜನರ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆಯೇ ಎಂಬುದೇ ಮುಖ್ಯ ಪ್ರಶ್ನೆಯಾಗಬೇಕು. ಯೋಜನೆಗಳ ಮರುನಾಮಕರಣದ ಹಿಂದೆ ರಾಜಕೀಯ ಲಾಭದ ಅಂಶವೂ ಅಡಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಹೊಸ ಹೆಸರುಗಳು ಸಾರ್ವಜನಿಕ ಗಮನ ಸೆಳೆಯುತ್ತವೆ, ಆಡಳಿತದ ಸಾಧನೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತವೆ. ಆದರೆ ಇದು ದೀರ್ಘಕಾಲೀನ ಪರಿಹಾರವಲ್ಲ. ಹಳೆಯ ಯೋಜನೆಗಳಲ್ಲಿ ಕಂಡುಬಂದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವಿಲ್ಲದೆ ಕೇವಲ ಹೆಸರು ಬದಲಿಸಿದರೆ, ಜನರ ವಿಶ್ವಾಸ ಕ್ರಮೇಣ ಕುಸಿಯುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಸಂಪತ್ತು; ಅದು ಕಳೆದುಹೋದರೆ, ಅತ್ಯುತ್ತಮ ಯೋಜನೆಗಳೂ ಫಲ ನೀಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಸಾಧಿಸಲು ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ಅನುಷ್ಠಾನದ ಹಂತದಲ್ಲಿ ಎದುರಾಗುವ ಅಡ್ಡಿಗಳು ಬಹುಮುಖ್ಯವಾಗಿವೆ. ಆಡಳಿತಾತ್ಮಕ ಅಸಮರ್ಥತೆ, ಇಲಾಖೆಗಳ ನಡುವೆ ಸಮನ್ವಯದ ಕೊರತೆ, ತಳಮಟ್ಟದ ಸಿಬ್ಬಂದಿಗೆ ಸಮರ್ಪಕ ತರಬೇತಿ ಇಲ್ಲದಿರುವುದು, ಫಲಾನುಭವಿಗಳಿಗೆ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಇಲ್ಲದಿರುವುದು ಹಾಗೂ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಲು ಅಸಮರ್ಥರಾಗಿರುವ ಜನರು ಇವೆಲ್ಲವೂ ಯೋಜನೆಗಳ ಯಶಸ್ಸಿಗೆ ದೊಡ್ಡ ಸವಾಲುಗಳಾಗಿವೆ. ಇವುಗಳನ್ನು ಪರಿಹರಿಸದೆ ಹೊಸ ಯೋಜನೆಗಳ ಘೋಷಣೆ ಅಥವಾ ಮರುನಾಮಕರಣ ಮಾಡಿದರೆ, ಅದು ಸಮಸ್ಯೆಯನ್ನು ಮರೆಮಾಚುವ ಪ್ರಯತ್ನವಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡಿದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರುವ ಒಂದೇ ಮಾದರಿಯ ಯೋಜನೆ/ನೀತಿಗಳು ಎಲ್ಲರಿಗೂ ಸಮಾನವಾಗಿ ಪರಿಣಾಮಕಾರಿಯಾಗುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಭಾರತವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವೈವಿಧ್ಯತೆಯಿಂದ ಕೂಡಿದ ದೇಶ. ಹೀಗಾಗಿ, ಯೋಜನೆಗಳ ಅನುಷ್ಠಾನವು ಸ್ಥಳೀಯ ಅಗತ್ಯಗಳು, ಪ್ರಾದೇಶಿಕ ವೈಶಿಷ್ಟ್ಯಗಳು ಮತ್ತು ಸಾಮಾಜಿಕ ಹಿನ್ನೆಲೆಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಸಮಾನತೆ ಎಂದರೆ ಎಲ್ಲರಿಗೂ ಒಂದೇ ನೀಡುವುದು ಅಲ್ಲ, ಅಗತ್ಯಕ್ಕೆ ಅನುಗುಣವಾಗಿ ನೀಡುವುದು ಎಂಬ ಅರ್ಥವನ್ನು ಅನುಷ್ಠಾನ ಹಂತದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಮಾನತೆಯು ಎಲ್ಲರಿಗೂ ಒಂದೇ ರೀತಿಯ ಸಂಪನ್ಮೂಲಗಳನ್ನು ಮತ್ತು ಅವಕಾಶಗಳನ್ನು ನೀಡುವುದನ್ನು ಸೂಚಿಸುತ್ತದೆ. ಆದರೆ ಎಲ್ಲರೂ ಒಂದೇ ಹಂತದಿಂದ ಜೀವನವನ್ನು ಆರಂಭಿಸುವುದಿಲ್ಲ. ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಗಳು ಭಿನ್ನವಾಗಿರುತ್ತವೆ. ಪ್ರತಿಯೊಬ್ಬರ ವೈಯಕ್ತಿಕ ಅಗತ್ಯಗಳ ಆಧಾರದ ಮೇಲೆ ವಿಭಿನ್ನ ಸಂಪನ್ಮೂಲಗಳನ್ನು ಒದಗಿಸುವುದರಿಂದ ನ್ಯಾಯಸಮ್ಮತ ಹಾಗೂ ಸಮಾನ ಫಲಿತಾಂಶಗಳು ಸಾಧ್ಯವಾಗುತ್ತವೆ. ಕೆಲವರು ಹೆಚ್ಚು ಅಡೆತಡೆಗಳನ್ನು ಎದುರಿಸುವುದರಿಂದ, ಅವರಿಗೆ ಹೆಚ್ಚು ಬೆಂಬಲ ಅಗತ್ಯ. ಹಾಗಾಗಿ ಸಮತೆಯ ಮೂಲಕವೇ ಎಲ್ಲರೂ ಒಂದೇ ಗುರಿಯನ್ನು ತಲುಪಲು ಸಮಾನತೆಗಿಂತ ಸಮತೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರ್ಥಿಕ ಚಿಂತಕರು ಸಾರ್ವಜನಿಕ ವೆಚ್ಚದ ಪರಿಣಾಮಕಾರಿತ್ವದ ಮೇಲೂ ಸದಾ ಒತ್ತಡ ಹಾಕಿದ್ದಾರೆ. ತೆರಿಗೆದಾರರ ಹಣದಿಂದ ನಡೆಯುವ ಯೋಜನೆಗಳು ನಿಜವಾದ ಫಲಿತಾಂಶ ನೀಡುತ್ತಿವೆಯೇ ಎಂಬುದನ್ನು ಅಳೆಯುವ ವ್ಯವಸ್ಥೆ ಬಲವಾಗಬೇಕು. ಫಲಿತಾಂಶ ಆಧಾರಿತ ಮೌಲ್ಯಮಾಪನ, ಸಾಮಾಜಿಕ ಲೆಕ್ಕಪತ್ರ ಮತ್ತು ಸಾರ್ವಜನಿಕ ಪರಿಶೀಲನೆಗಳ ಮೂಲಕ ಯೋಜನೆಗಳ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಬೇಕು. ಇದರಿಂದ ಕೇವಲ ಅಂಕಿಅಂಶಗಳ ಸಾಧನೆಯಲ್ಲ, ಜನರ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಳೆಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ, ಸಾಮಾಜಿಕ ಮತ್ತು ಆರ್ಥಿಕ ಚಿಂತಕರ ಆಲೋಚನೆಗಳು ಒಂದೇ ಸಂದೇಶವನ್ನು ನೀಡುತ್ತವೆ: ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆ; ಅದು ಘೋಷಣೆಗಳಲ್ಲಿ ಅಲ್ಲ, ಅನುಷ್ಠಾನದಲ್ಲಿ ಅಡಗಿದೆ. ಯೋಜನೆಗಳ ಮರುನಾಮಕರಣ ತಾತ್ಕಾಲಿಕ ರಾಜಕೀಯ ಲಾಭ ನೀಡಬಹುದು, ಆದರೆ ಸಮಾಜದ ತಳಮಟ್ಟದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕನಸು, ಗಾಂಧೀಜಿಯ ಕಟ್ಟಕಡೆಯ ವ್ಯಕ್ತಿಯ ತತ್ವ ಮತ್ತು ಅಮರ್ತ್ಯ ಸೇನ್ ಅವರ ಸಾಮರ್ಥ್ಯ ವಿಕಾಸದ ದೃಷ್ಟಿಕೋನ - ಇವೆಲ್ಲವೂ ಒಟ್ಟಾಗಿ ಪರಿಣಾಮಕಾರಿ ಅನುಷ್ಠಾನವು ಆಡಳಿತದ ನಿಜವಾದ ಪರೀಕ್ಷೆ ಎಂಬುದನ್ನು ನಮಗೆ ನೆನಪಿಸುತ್ತದೆ. ಮುಂದಿನ ದಿನಗಳಲ್ಲಿ ಸರಕಾರಗಳು ಮತ್ತು ನೀತಿ ರೂಪಿಸುವವರು ಯೋಜನೆಗಳಿಗೆ ಹೊಸ ಹೆಸರುಗಳನ್ನು ಘೋಷಿಸುವುದಕ್ಕೆ ಸೀಮಿತವಾಗದೆ, ಅವುಗಳು ಜನರ ದಿನನಿತ್ಯದ ಬದುಕಿನಲ್ಲಿ ನಿಜವಾದ ಭದ್ರತೆ, ಸಾಮಾಜಿಕ ಗೌರವ ಮತ್ತು ಸಮಾನ ಅವಕಾಶಗಳನ್ನು ಎಷ್ಷರ ಮಟ್ಟಿಗೆ ಸೃಷ್ಟಿಸುತ್ತಿವೆ ಎಂಬುದನ್ನು ಕೇಂದ್ರಬಿಂದು ಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ, ಭಾರತದ ಅಭಿವೃದ್ಧಿಯ ಪಥವು ನಿಜಾರ್ಥದಲ್ಲಿ ಅರ್ಥಪೂರ್ಣವಾಗಿಯೂ ಹಾಗೂ ಒಳಗೊಳ್ಳುವಿಕೆಯಾಗಿಯೂ ರೂಪುಗೊಳ್ಳುತ್ತದೆ.
ಉನ್ನಾವೋ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಜಾಮೀನಿಗೆ ಸುಪ್ರೀಂಕೋರ್ಟ್ ತಡೆ
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜಾಮೀನು ನೀಡಿದ್ದ ದಿಲ್ಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದೆ. ಇದರೊಂದಿಗೆ, ಸೆಂಗಾರ್ ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಈ ಪ್ರಕರಣವು ‘ಕಾನೂನಿನ ಬಗ್ಗೆ ಗಣನೀಯ ಪ್ರಶ್ನೆಗಳನ್ನು’ ಹುಟ್ಟುಹಾಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಡೆ ನೀಡಿದ ನ್ಯಾಯಾಲಯ, ಸೆಂಗಾರ್ ಈಗಾಗಲೇ ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವುದನ್ನೂ ಉಲ್ಲೇಖಿಸಿದೆ. .
ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕು ಎಂಬುದು ಜಗತ್ತಿನ ಬಯಕೆಯಾಗಿದ್ದು, ಹಿಂದೂಗಳು ಈ ಕನಸನ್ನು ನನಸು ಮಾಡಲು ಒಂದಾಗಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಹಿಂದೂ ಜಗತ್ತಿಗೆ ಕೇವಲ ತನ್ನ ಜ್ಞಾನವನ್ನು ಹಂಚುತ್ತಾನೆಯೇ ಹೊರತು ಯಾರ ಮೇಲೂ ಬಲಪ್ರಯೋಗ ಮಾಡುವುದಿಲ್ಲ ಎಂದಿರುವ ಭಾಗವತ್, ಭಾರತ ತನ್ನ ಜ್ಞಾನದ ಬಲದೊಂದಿಗೆ ಇಡೀ ಜಗತ್ತಿಗೆ ದಾರಿದೀಪವಾಗುವ ಕಾಲ ಸನ್ನಿಹಿತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಅಕ್ರಮ ನಿರ್ಮಾಣದ ಹೆಸರಿನಲ್ಲಿ ರಾಜಧಾನಿಯ 2 ಕಾಲನಿಗಳು ನೆಲಸಮ
ಕಮರಿ ಹೋದ 300ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಭವಿಷ್ಯ..!
ಮಾರುಕಟ್ಟೆಯಲ್ಲಿ ಸೋನೆ ಅವರೆ ಕಾಯಿ ಘಮಲು
ಹೊಸಕೋಟೆ: ಚುಮುಚುಮು ಚಳಿಯಲ್ಲಿ ಮಾರುಕಟ್ಟೆ ತುಂಬೆಲ್ಲ ಸೋನೆ ಅವರೆ ಘಮಲು ಹೆಚ್ಚಾಗಿದ್ದು, ಚಳಿಗಾಲದ ವಿಶೇಷ ಖಾದ್ಯ ಅವರೆಕಾಯಿ ಖರೀದಿಸಲು ಗ್ರಾಹಕರು ಅತ್ಯುತ್ಸಾಹ ತೋರುತ್ತಿದ್ದಾರೆ. ಅವರೆ ಜತೆಗೆ ತೊಗರಿ ಕೂಡ ಬೇಡಿಕೆ ಸೃಷ್ಟಿಸಿಕೊಂಡು ಅವರ ಜತೆ ಪೈಪೋಟಿಗಿಳಿದಿದೆ. ಕೇವಲ ತರಕಾರಿ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ, ತಳ್ಳುವ ಗಾಡಿಗಳಲ್ಲಿ ರಸ್ತೆ ಬದಿಗಳಲ್ಲಿ ನಗರ ಮತ್ತು ಗ್ರಾಮಿಣ ಭಾಗದ ಮನೆ-ಮನೆಗಳ ಮುಂದೆಲ್ಲಾ ಅವರೆಕಾಯಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಸೂರ್ಯನ ಬಿಸಿಲು ನೆಲಕ್ಕೆ ತಾಗುವ ಸಮಯ ಹಾಗೂ ಸಂಜೆ ಮುಳುಗುವ ಹೊತ್ತು ಬಂತೆಂದರೆ ಸಾಕು ಅವರೆ ಕಾಯಿ ವ್ಯಾಪಾರ ಜೋರಾಗಿ ನಡೆಯುತ್ತದೆ. ರೈತರೆ ಹೊಲದಿಂದ ಬಿಡಿಸಿ ಕೊಂಡು ತಂದ ಸೋನೆ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದ್ದಾಗ್ಯೂ ಕೂಡ ಹೊರ ಜಿಲ್ಲೆಯಿಂದ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿರುವ ತಾಜಾ ಅವರೆಕಾಯಿ ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅವರೆಕಾಯಿ ಘಮಲಿಗೆ ಗ್ರಾಹಕರು ಮನಸೋತಿದ್ದು ಇದರಿಂದ ಸಹಜವಾಗಿಯೇ ಇತರ ತರಕಾರಿಗಳಿಗೆ ಬೇಡಿಕೆ ಕುಸಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರತುಪಡಿಸಿ ಬೇರೆಡೆ ಅವರೆಕಾಯಿಯನ್ನು ಹೆಚ್ಚಾಗಿ ಬೆಳೆಯುವುದಿಲ್ಲ. ಹಾಗಾಗಿ ಹೊರ ಜಿಲ್ಲೆ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದ ಮಾರುಕಟ್ಟೆ ಪ್ರವೇಶಿಸಿದೆ. ದರದಲ್ಲಿ ಸ್ವಲ್ಪಹೆಚ್ಚಳ: ಕಳೆದ ಸಾಲಿನಲ್ಲಿ ಅವರೆಕಾಯಿಗೆ 40 ರಿಂದ 50 ದರ ಇತ್ತು. ಈ ವರ್ಷ ತುಸು ಹೆಚ್ಚಾಗಿದ್ದು, ಕೆ.ಜಿ.ಗೆ 50ರಿಂದ 60 ರೂ.ವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಕಾಯಿಗಳು ಮಾರುಕಟ್ಟೆಗೆ ಬಂದಿವೆ. ಚಳಿಗಾಲದಲ್ಲಿ ಸಿಗುವ ಅವರೆಕಾಯಿಗೆ ಸಾಮಾನ್ಯವಾಗಿ ವಿಶೇಷ ಬೇಡಿಕೆ ಇರುತ್ತದೆ. ಸಾರ್ವ ಜನಿಕರು ತರಹೇ ವಾರಿ ಅವರೆಕಾಯಿ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಉಪ್ಸಾರು, ಸಾರು, ಉಪ್ಪಿಟ್ಟು ರೊಟ್ಟಿ ಚಪಾತಿ ಜತೆಗೆ ಫಲ್ಯವಾಗಿಯೂ ಅವರೆಕಾಳು ಸ್ವಾದಿಷ್ಟ ರುಚಿ ನೀಡುತ್ತದೆ. ಚಳಿಗಾಲದಲ್ಲಿ ಸಿಗುವ ತಾಜಾ ಅವರೆಕಾಯಿ ಘಮಲು ಮೂಗಿಗೆ ಬಡಿದ ಕೂಡಲೇ ಖರೀದಿಸುವ ಮನಸ್ಸಾಗುತ್ತದೆ. ಕಾಯಿ ಬಿಡಿಸುವುದು, ಹುಳ ಬಾಧೆ ತುಸು ಕಿರಿಕಿರಿ ಎನಿಸಿದರೂ ಮನೆ ಮಂದಿಯೆಲ್ಲ ಇಷ್ಟಪಟ್ಟು ಸವಿಯುವುದರಿಂದ ಅವರೆಕಾಯಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಸೋನೆ ಅವರೆ ಕಾಯಿಗೆ ಹೆಚ್ಚು ಬೇಡಿಕೆಯಿದ್ದು ಕೆಲವರು ರೈತರ ಹೊಲಗಳಿಗೆ ತೆರಳಿ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಜನವರಿವರೆಗೂ ಅವರೆಕಾಯಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಸಸ್ಯಹಾರಕ್ಕೂ ಮಾಂಸಾಹಾರಕ್ಕೂ ಸೈ: ಅವರೆಕಾಯಿ ಕೇವಲ ಸಸ್ಯಹಾರಕ್ಕೆ ಮಾತ್ರ ಬಳಕೆಯಾಗುತ್ತದೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಸ್ಯಹಾರದ ಜತೆಗೆ ಮಾಂಸಹಾರಕ್ಕೂ ಅವರೆಕಾಯಿ ಬಳಕೆ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಕೋಳಿ, ಕುರಿ ಮಾಂಸದ ಸಾರಿಗೆ ಅವರೆಕಾಯಿ ವಿಶೇಷ ರುಚಿ ನೀಡುತ್ತದೆ. ಸಂಜೆಯ ಕುರುಕಲು ತಿಂಡಿಯಾಗಿಯೂ ಬಳಕೆಯಾಗುತ್ತದೆ. ಹೆದ್ದಾರಿ ಬದಿಯಲ್ಲಿ ವ್ಯಾಪಾರ ಜೋರು: ಅವರೆಕಾಯಿ ಮತ್ತು ತೊಗರಿಕಾಯಿಗಳ ರಾಶಿ ರಾಶಿಯನ್ನು ಬೆಂಗಳೂರು-ಕೋಲಾರ ಚಿಂತಾಮಣಿ ಹೆದ್ದಾರಿಯ ರಸ್ತೆ ಬದಿಗಳಲ್ಲಿ ಕಾಣಬಹುದು. ಈ ಸ್ಥಳಗಳಲ್ಲಿ ವ್ಯಾಪಾರಿಗಳು ತಮ್ಮ ತಳ್ಳುಗಾಡಿ ಅಥವಾ ಟೆಂಟ್ ಕೆಳಗಡೆ ಹಾಕಿಕೊಂಡಿರುತ್ತಾರೆ. ಹೊರ ಜಿಲ್ಲೆಗಳಿಂದ ಟೆಂಪೊಗಳಲ್ಲಿ ಮೂಟೆ ಮೂಟೆಗಳು ಪ್ರತೀ ಅಂಗಡಿ ಮುಂದೆ ಇಳಿಸುತ್ತಾರೆ. ತೊಗರಿಗೂ ಬೇಡಿಕೆ ಚಳಿಗಾಲದ ಅತಿಥಿಯಾಗಿರುವ ಅವರೆಕಾಯಿ ಜತೆಗೆ ತೊಗರಿ ಕಾಯಿ ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, ತನ್ನದೇ ಆದ ಬೇಡಿಕೆ ಸೃಷ್ಟಿಸಿಕೊಂಡಿದೆ. ಗುಣಮಟ್ಟದ ಕಾಯಿ ಮತ್ತು ದಪ್ಪಕಾಳುಗಳ ಗಾತ್ರದ ಆಧಾರದ ಮೇಲೆ ಕೆ.ಜಿ.ಗೆ 50ರಿಂದ 60ಕ್ಕೆ ತೊಗರಿಕಾಯಿ ಕೂಡ ಮಾರಾಟವಾಗುತ್ತಿದೆ.
ಸತತ ಏರಿಕೆಯ ನಂತರ ಕುಸಿದ ಚಿನ್ನದ ಬೆಲೆ
ಚಿನ್ನದ ಬೆಲೆ ಏರಿಕೆ ಆಭರಣ ಉದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಮಾರಾಟವು ಈಗ ನಿಧಾನಗತಿಯಲ್ಲಿ ಸಾಗಿದೆ ಎಂದು ವರದಿಯಾಗಿದೆ. ರವಿವಾರ ಮಾರುಕಟ್ಟೆಗೆ ರಜೆ ಇದ್ದ ಕಾರಣ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಸೋಮವಾರ ವಾರದ ಮೊದಲ ವಹಿವಾಟು ಆರಂಭವಾಗಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 2025ರ ಇಡೀ ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಹೊಸ ದಾಖಲೆಯನ್ನು ನಿರ್ಮಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ಸುಮಾರು 4500 ಡಾಲರ್ ಮೀರಿದೆ. ಅದೇ ಸಮಯದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 1.40 ಲಕ್ಷ ರೂ. ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಜೊತೆಗೆ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ದೇಶಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2.50 ಲಕ್ಷ ರೂ. ದಾಟುವ ಮೂಲಕ ಗರಿಷ್ಠ ಬೆಲೆ ಕಂಡಿದೆ. ಆಭರಣ ಮಳಿಗೆಗಳಲ್ಲಿ ಖರೀದಿದಾರರ ಕೊರತೆ ಆದರೆ ಖರೀದಿದಾರರು ಕಡಿಮೆಯಾಗುತ್ತಿರುವ ಕಾರಣದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಯುವ ಸಾಧ್ಯತೆಯಿದೆ ಎಂದೂ ತಜ್ಞರು ಹೇಳುತ್ತಿದ್ದಾರೆ. ಒಂದೇ ದಿನದಲ್ಲಿ ಶೇ.10 ರಿಂದ 20 ರಷ್ಟು ಭಾರೀ ಕುಸಿತದ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಜ್ಞರ ಪ್ರಕಾರ, “ಆಭರಣ ಅಥವಾ ದೈನಂದಿನ ಬಳಕೆಗೆ ಚಿನ್ನ ಖರೀದಿ ಇಳಿಕೆಯಾಗಿದೆ. ದುಬೈ ಮತ್ತು ಭಾರತದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ರಿಯಾಯಿತಿಯಲ್ಲಿ ಲಭ್ಯವಿದೆ ಎಂಬ ಸುದ್ದಿ ಇದಕ್ಕೆ ಸಾಕ್ಷಿಯಾಗಿದೆ. ಇದರರ್ಥ ಗ್ರಾಹಕರ ಖರೀದಿಗಳು ಕಡಿಮೆಯಾಗಿವೆ, ಆದರೆ ಬೆಲೆಗಳು ಏರಿಕೆಯಾಗುತ್ತಿವೆ. ಬೆಲೆ ಹೆಚ್ಚಿರುವ ಪರಿಣಾಮ ಆಭರಣ ಉದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಮಾರಾಟವು ಈಗ ನಿಧಾನಗತಿಯಲ್ಲಿ ಸಾಗಿದೆ. ಹಿಂದೆ 22 ಕ್ಯಾರೆಟ್ ಚಿನ್ನವನ್ನು ಆರಾಮವಾಗಿ ಖರೀದಿಸುತ್ತಿದ್ದವರು ಈಗ ಹಗುರವಾದ ಆಭರಣಗಳಾದ 18 ಅಥವಾ 14 ಕ್ಯಾರೆಟ್ ಚಿನ್ನದತ್ತ ಮುಖ ಮಾಡುತ್ತಿದ್ದಾರೆ”. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು? ಸೋಮವಾರ ಡಿಸೆಂಬರ್ 29ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,171(-71) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,990(-65) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,628 (-54) ರೂ. ಬೆಲೆಗೆ ತಲುಪಿದೆ. ಭಾರತದಲ್ಲಿ ಇಂದಿನ ಚಿನ್ನದ ದರ ಡಿಸೆಂಬರ್ 29ರಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 1,41,710 ರೂ.ಗೆ ಏರಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 710 ರೂ. ಕುಸಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ ರೂ. 1,29,900 ಗೆ ಏರಿದ್ದು, 650 ಕುಸಿತ ಕಂಡಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 540 ರೂ. ಗೆ ಕುಸಿದು 1,06280 ರೂ. ತಲುಪಿದೆ.
ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು; 128 ವಿಮಾನಗಳು ರದ್ದು
ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. 128 ವಿಮಾನಗಳು ರದ್ದಾಗಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. ವಾಯು ಗುಣಮಟ್ಟವೂ ತೀವ್ರವಾಗಿ ಹದಗೆಟ್ಟಿದ್ದು, 403ರಷ್ಟು AQI ದಾಖಲಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ್ಗಳಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರೈಲು ಸಂಚಾರವೂ ವಿಳಂಬವಾಗಿದೆ.
ಉನ್ನಾವೋ ಪ್ರಕರಣ: ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು, ಕುಲದೀಪ್ ಸಿಂಗ್ ಸೆಂಗರ್ಗೆ ನೋಟಿಸ್
ನವದೆಹಲಿ: ದೇಶದಾದ್ಯಂತ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್ನಲ್ಲಿ ನಡೆದಿದೆ. ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ (ಡಿಸೆಂಬರ್ 29)ರಂದು ವಿಚಾರಣೆ ನಡೆಯಿತು.
ನಿರಾಮಯ ಆರೋಗ್ಯ ವಿಮಾ ಯೋಜನೆ: ವಿಕಲಚೇತನರಿಗೆ 1 ಲಕ್ಷ ರೂ.ವರೆಗಿನ ಸಮಗ್ರ ಆರೋಗ್ಯ ವಿಮೆ; ಅರ್ಜಿ ಸಲ್ಲಿಕೆ ಹೇಗೆ?
ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಜೀವನದಲ್ಲಿ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ವೆಚ್ಚಗಳು ದೊಡ್ಡ ಸವಾಲಾಗಿರುತ್ತವೆ. ಹೀಗಾಗಿ ಅಂಗವೈಕಲ್ಯ ಉಳ್ಳವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿರುವ 'ನ್ಯಾಷನಲ್ ಟ್ರಸ್ಟ್' ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ನಿರಾಮಯ ಆರೋಗ್ಯ ವಿಮಾ ಯೋಜನೆಯೂ ಒಂದು. ಈ ಯೋಜನೆಯು ವಿಕಲಚೇತನರಿಗೆ ಕೈಗೆಟುಕುವ ದರದಲ್ಲಿ ಸಮಗ್ರ ಆರೋಗ್ಯ ವಿಮೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ವೈಶಿಷ್ಟ್ಯತೆಗಳೇನು? ಯೋಜನೆಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಕರ್ನಾಟಕ ನೋಂದಣಿಯ ವಾಹನಗಳಿಗೆ ಬೇರೆ ರಾಜ್ಯಗಳಲ್ಲಿ ₹10,000 ದಂಡ, ಕಾರಣ ಇಲ್ಲಿದೆ
ಕರ್ನಾಟಕದಲ್ಲಿ ನೋಂದಣಿಯಾಗಿರುವ (KA) ವಾಹನಗಳಿಗೆ ಬೇರೆ ರಾಜ್ಯಗಳಲ್ಲಿ ಭಾರೀ ಮೊತ್ತದ ದಂಡದ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರವಾಸ, ಇನ್ನಿತರೆ ಉದ್ದೇಶಗಳಿಗೆ ಬೇರೆ ರಾಜ್ಯಗಳಿಗೆ ತೆರಳುವ ಕರ್ನಾಟಕದ ವಾಹನಗಳಿಗೆ ಈ ಸಮಸ್ಯೆ ಎದುರಾಗಿದೆ. ಒಡಿಶಾ ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಎಲ್ಲ ದಾಖಲೆ ಇದ್ದರೂ ಸಹ ಕರ್ನಾಟಕದ ಮಾಹನ ಮಾಲೀಕರು ಭಾರೀ
ಕಾರವಾರ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಆದ್ಯತೆ : ಡಿಸಿಎಂ ಡಿ.ಕೆ.ಶಿವಕುಮಾರ್
ಕಾರವಾರ, ಡಿ.28: ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಭಾನುವಾರ ರಾತ್ರಿ ನಡೆದ ಕರಾವಳಿ ಉತ್ಸವದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು. ಶಾಸಕರಾದ ಸತೀಶ್ ಸೈಲ್ ಅವರು ನಮ್ಮ ಜನರು ಗೋವಾ, ಉಡುಪಿ, ಮಂಗಳೂರಿಗೆ ಉತ್ತಮ ಚಿಕಿತ್ಸೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ನಮಗೆ ಅತ್ಯುತ್ತಮ ಆಸ್ಪತ್ರೆ ಬೇಕು ಎಂದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ ಎಂದರು. ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಜನ ಶಾಸಕರನ್ನು ನೀಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದೀರಿ. ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದ ಈ ಕೈ ಗಟ್ಟಿಯಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು. ನಿಮಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜ.10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದರು. ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ಪ್ರವಾಸಿಗರ ಸ್ವರ್ಗ ಈ ಸಮುದ್ರ ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು. ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಸತೀಶ್ ಸೈಲ್ ಅವರು ಜಿಲ್ಲಾ ಮಂತ್ರಿ ಮಂಕಾಳ್ ವೈದ್ಯ ಅವರು ಒತ್ತಾಯ ಪೂರ್ವಕವಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದೇವರು ವರ, ಶಾಪ ಎರಡನ್ನೂ ನೀಡುವುದಿಲ್ಲ. ಆದರೆ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಇದನ್ನು ಸತೀಶ್ ಸೈಲ್ ಅವರು ಬಳಸಿಕೊಂಡು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕರಿಗೆ ಅವಕಾಶ ಸೃಷ್ಟಿಸಿ ಕೊಟ್ಟಿದ್ದಾರೆ ಎಂದು ಹೇಳಿದರು. ನಾನು ಸಹ ಕಳೆದ 10-15 ವರ್ಷದಿಂದ ನನ್ನ ಕ್ಷೇತ್ರ ಕನಕಪುರದಲ್ಲಿ ಕನಕೋತ್ಸವ ನಡೆಸಿಕೊಂಡು ಬಂದಿದ್ದೇನೆ. ನನ್ನಿಂದಲೂ ಇಂತಹ ಭವ್ಯವಾದ ಕಾರ್ಯಕ್ರಮ ಮಾಡಲು ಅಗಿಲ್ಲ. ಆದರೆ ಸತೀಶ್ ಸೈಲ್ ಅವರು ಅತ್ಯಂತ ಭವ್ಯವಾದ ಕಾರ್ಯಕ್ರಮ ಮಾಡಿರುವುದು ನೋಡಿ ಸಂತೋಷವಾಗಿದೆ ಎಂದರು. ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಾರೆ. ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ, ನೃತ್ಯ ನೋಡಲು ಬಂದಿಲ್ಲ. ಕಾರವಾರದ ಜನತೆಯ ಜೊತೆ ಇದ್ದೇನೆ ಎಂದು ಹೇಳಲು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಆರು ಮಂದಿ ಶಾಸಕರನ್ನು ಆಯ್ಕೆ ಮಾಡಿ ಕೈ ಬಲಪಡಿಸಬೇಕು ಎಂದರು.
ಕೋಗಿಲು ಕ್ರಾಸ್ ಒತ್ತುವರಿ ತೆರವು, ಯಾವ ಒತ್ತಡಕ್ಕೂ ಸರ್ಕಾರ ಮಣಿಯಲ್ಲ ಎಂದ ಎಚ್ ಸಿ ಮಹದೇವಪ್ಪ
ರಾಜ್ಯ ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಕೋಗಿಲು ಕ್ರಾಸ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಸ ವಿಲೇವಾರಿಗೆ ಸೀಮಿತವಾದ ಜಾಗ ಅದು. ಅನಧಿಕೃತವಾಗಿ ಬಡವರೇ ಶೆಡ್ ಹಾಕಿಕೊಂಡಿದ್ದರು. ಆ ಜಾಗಕ್ಕೆ ಅತಿಕ್ರಮಣ ಪ್ರವೇಶವಾಗಿದೆ. ಕಾಂಗ್ರೆಸ್ ಸರ್ಕಾರ ಅವರನ್ನು ಒಕ್ಕಲೆಬ್ಬಿಸಿಲ್ಲ. ಪುನರ್ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ನಟ ದರ್ಶನ್ ಸಹಾಯಹಸ್ತ ಚಾಚಿದ್ದ ‘ಅರ್ಜುನನ ಸ್ಮಾರಕ’ ಇನ್ನೂ ಉದ್ಘಾಟನೆಯಾಗಿಲ್ಲ!
ಸಕಲೇಶಪುರದಲ್ಲಿ ಕಾಡಾನೆ ಅರ್ಜುನನ ಸ್ಮಾರಕ ಮತ್ತು ಪ್ರತಿಮೆ ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಮೊದಲು ಈ ಸ್ಮಾರಕ ನಿರ್ಮಿಸಲು ಸಹಾಯ ಮಾಡಲು ನಟ ದರ್ಶನ್ ಮುಂದೆ ಬಂದಿದ್ದರು. ಆದೆ, ಸರ್ಕಾರವೇ ಸ್ಮಾರಕ ತಾನೇ ನಿರ್ಮಿಸುವುದಾಗಿ ಹೇಳಿತ್ತು. ಸ್ಮಾರಕದ ಬಗ್ಗೆ ಮುಖ್ಯಮಂತ್ರಿಗಳ ಭರವಸೆಯ ಹೊರತಾಗಿಯೂ ಕಾಮಗಾರಿ ವಿಳಂಬವಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರಕಕ್ಕೆ ಹೋಗುವ ದಾರಿ ಕಲ್ಲು, ಮುಳ್ಳುಗಳಿಂದ ಕೂಡಿದ್ದು ಮೂಲ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ.
ಭಾರತ ಈಗಲೇ ಹಿಂದೂ ರಾಷ್ಟ್ರವಾಗಿದೆ. ಅದಕ್ಕೆ ಸಂವಿಧಾನದ ಮಾನ್ಯತೆ ಅಗತ್ಯವಿಲ್ಲ ಎಂದು ನೋಂದಣಿ ಆಗದ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಇತ್ತೀಚೆಗೆ ಹೇಳಿದರು. ಮಾನಸಿಕವಾಗಿ ರಾಜ್ಯಾಂಗವನ್ನು ಎಂದೂ ಗೌರವಿಸದ ಅವರಿಂದ ಇಂಥ ಮಾತು ಅನಿರೀಕ್ಷಿತವೇನಲ್ಲ. ಇದು ಅವರ ಸಂಘದ ಅಧಿಕೃತ ಹೇಳಿಕೆ ಅಲ್ಲ ಎಂಬ ಅಸಲಿ ಸತ್ಯ ಗೊತ್ತಾಗುತ್ತದೆ. ಇವರ ಸಂಘದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿ ನಮ್ಮನ್ನೇ ಗೊಂದಲದ ಮಡುವಿಗೆ ತಳ್ಳುತ್ತಾರೆ. ಇವರ ಸಂಘದ ಹಿರಿಯ ಸ್ವಯಂ ಸೇವಕ ಹಾಗೂ ಸಂವಿಧಾನಕ್ಕೆ ಬದ್ಧರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಿಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಸಂಘದ ಸಹ ಕಾರ್ಯವಾಹ ಹಾಗೂ ನಮ್ಮ ಕರ್ನಾಟಕದವರೇ ಆದ ದತ್ತಾತ್ರೇಯ ಹೊಸಬಾಳೆ ಅವರು ಮುಸಲ್ಮಾನರು ಮತ್ತು ಕ್ರೈಸ್ತರು ಸೂರ್ಯ ನಮಸ್ಕಾರ ಮಾಡಬೇಕೆಂದು ಅಪ್ಪಣೆ ಕೊಡಿಸುತ್ತಾರೆ. ಮತ್ತೊಂದೆಡೆ ತನ್ನ ವ್ಯಾಪಾರ, ದಂಧೆಗಳ ಅನುಕೂಲಕ್ಕಾಗಿ ಬಿಜೆಪಿ ಸೇರಿದ ಹಾಗೂ ಕೇಂದ್ರ ಮಂತ್ರಿಯಾಗಿದ್ದ ಮತ್ತು ಈಗ ಕೇರಳದ ಎಡರಂಗವನ್ನು ಮುಗಿಸಲು ಸುಪಾರಿ ಪಡೆದು ಅಲ್ಲಿಗೆ ಹೋಗಿರುವ ರಾಜೀವ್ ಚಂದ್ರಶೇಖರ್ ಅಲ್ಪಸಂಖ್ಯಾತರ ಓಲೈಕೆಗಾಗಿ ಅಲ್ಲಿ ನಾನಾ ನಾಟಕಗಳನ್ನು ನಡೆಸಿದ್ದಾರೆ. ಇವರೆಲ್ಲರ ಮೂಲ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರವಾಗಿದೆ. ಈ ವರ್ಷ ಆರೆಸ್ಸೆಸ್ನ ಶತಮಾನೋತ್ಸವದ ಸಂಭ್ರಮ. ಸಂಘಟನೆಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಅಧಿಕೃತ ವಾಗಿ ಘೋಷಿಸುವುದು ಸಂಘದ ಗುರಿಯಾಗಿತ್ತು. ಆದರೆ, ಬಾಬಾಸಾಹೇಬರ ಸಂವಿಧಾನ ಇರುವವರೆಗೆ ಅದು ಸಾಧ್ಯವಿಲ್ಲ ಎಂದು ಖಚಿತವಾದ ನಂತರ ಭಾಗವತರು ತಮಗೆ ತಾವೇ ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಂಡು ಖುಷಿ ಪಡುತ್ತಿದ್ದಾರೆ. ಖುಷಿ ಪಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇದಕ್ಕಾಗಿ ನಾನಾ ನಾಟಕಗಳ ಮನರಂಜನೆ ಅಗತ್ಯವಿರಲಿಲ್ಲ. ಇವರ ಸಂಘಟನೆ ಮಾತ್ರವಲ್ಲ ಇವರಿಗೆ ಸೈದ್ಧಾಂತಿಕ ಎದುರಾಳಿಯಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷಕ್ಕೂ ಇದು ಶತಮಾನೋತ್ಸವದ ವರ್ಷ. ಚುನಾವಣಾ ರಾಜಕಾರಣದಲ್ಲಿ ಪ್ರಭಾವ ಕಳೆದುಕೊಂಡ ಕಮ್ಯುನಿಸ್ಟರು ತಮ್ಮ ಪಾಡಿಗೆ ತಾವು ಶತಮಾನೋತ್ಸವವನ್ನು ಆಚರಿಸುತ್ತಿದ್ದಾರೆ. ಆದರೆ ಇವರಂತೆ ಅವರು ಯಾವುದೇ ನಾಟಕಗಳನ್ನು ಮಾಡದೇ ತಮ್ಮ ಪಾಡಿಗೆ ತಾವು ಸಂಭ್ರಮಿಸುತ್ತಿದ್ದಾರೆ.ಕಮ್ಯುನಿಸ್ಟರಿಗೆ ತ್ಯಾಗ, ಬಲಿದಾನದ ದೊಡ್ಡ ಇತಿಹಾಸವೇ ಇದೆ.ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕಮ್ಯುನಿಸ್ಟರು ಎಂದೂ ಬ್ರಿಟಿಷ್ ಸರಕಾರದ ಕ್ಷಮೆ ಕೇಳಲಿಲ್ಲ.ಅಂಡಮಾನ್ ನಿಕೋಬಾರ್ಗೆ ಹೋಗಿ ಅಲ್ಲಿ ಹಚ್ಚಿದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಂಡಮಾನ್ ಜೈಲಿನಲ್ಲಿ ಇದ್ದವರ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ. ಸಾವರ್ಕರ್ ಅವರಂತೆ ಇವರು ಕ್ಷಮೆ ಕೇಳಿ ಹೊರಗೆ ಬರಲಿಲ್ಲ. ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ನಾಯಕರಾಗಿದ್ದ ಸೀತಾರಾಮ ಯಚೂರಿಯವರು ಸದನದಲ್ಲೇ ಈ ಪಟ್ಟಿಯನ್ನು ಓದಿದ್ದರು. ಪಟ್ಟಿಯಲ್ಲಿ ಇದ್ದ ಬಹುತೇಕ ಮಂದಿ ಕಮ್ಯುನಿಸ್ಟ್ ಚಳವಳಿಯ ಜೊತೆಗೆ ಗುರುತಿಸಿಕೊಂಡವರು. ಇದನ್ನು ಪ್ರಸ್ತಾಪಿಸಲು ಕಾರಣ ರಾಷ್ಟ್ರವಾದಿಗಳೆಂದು ಹೇಳಿಕೊಳ್ಳುವ ಇವರು ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಆಗ ಸ್ವಾತಂತ್ರ್ಯಾ ಹೋರಾಟದಲ್ಲಿ ಪಾಲ್ಗೊಳ್ಳದ ಇವರು ಈಗ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದಾರೆ. ಇವರು ಈಗ ಮಾಡುತ್ತಿರುವುದನ್ನು ನಾಟಕ ಎಂದು ಯಾಕೆ ಹೇಳಬೇಕಾಯಿತೆಂದರೆ ಇವರ ಕಾರ್ಯಕರ್ತರು ಹಾಗೂ ಭಕ್ತರು ದೇಶಾದ್ಯಂತ ಕ್ರಿಸ್ಮಸ್ ಆಚರಿಸುತ್ತಿದ್ದ ಕ್ರೈಸ್ತ ಬಾಂಧವರ ಮೇಲೆ 60 ಕಡೆ ದಾಳಿ ಮಾಡಿದರು. ಕೆಲವು ಕಡೆ ಚರ್ಚುಗಳ ಮುಂದೆ ಕುಳಿತು ಹನುಮಾನ್ ಚಾಲಿಸಾ ಪಠಿಸಿದರು. ಏಸು , ಮೇರಿಯವರ ಪ್ರತಿಮೆಗಳನ್ನು ಭಗ್ನಗೊಳಿಸಿದವರಿಗೆ, ಬೈಬಲ್ ಸುಟ್ಟವರಿಗೆ ಇದೇನು ಹೊಸದಲ್ಲ. ಆದರೆ ಒಂದೆಡೆ ಭಕ್ತರು ಇದನ್ನೆಲ್ಲ ಮಾಡುತ್ತಿದ್ದರೆ, ಇನ್ನೊಂದೆಡೆ ಇವರ ವಿಶ್ವಗುರು ದಿಲ್ಲಿಯಲ್ಲಿ ಚರ್ಚ್ಗೆ ಹೋಗಿ ಕ್ರೈಸ್ತರ ಜೊತೆ ನಿಂತು ಪ್ರಾರ್ಥನೆ ಮಾಡಿದರು. ಕೆಲವೆಡೆ ದಾಳಿ, ದಿಲ್ಲಿಯಲ್ಲಿ ಪ್ರಾರ್ಥನೆ ಇದನ್ನೇ ನಾಟಕ ಎಂದು ಕರೆಯುವುದು. ಸಂಘದ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೊಳ್ವಾಲ್ಕರ್ ಅವರು ಮುಸಲ್ಮಾನರು , ಕ್ರೈಸ್ತರು ಮತ್ತು ಕಮ್ಯುನಿಸ್ಟರು ತಮ್ಮ ಪ್ರಧಾನ ಶತ್ರುಗಳು ಎಂದು ಏಳು ದಶಕಗಳ ಹಿಂದೆಯೇ ಘೋಷಿಸಿರುವುದರಿಂದ ಸಹಜವಾಗಿ ಭಕ್ತರು ಚರ್ಚ್ ಮುಂದೆ ಹನುಮಾನ್ ಚಾಲಿಸಾ ಪಠಿಸಿ ಕಂಡ ಕಂಡಲ್ಲಿ ಹಲ್ಲೆಗಳನ್ನು ಮಾಡಿದರು. ಆದರೆ ‘ವಿಶ್ವಗುರು’ ಗಳೇಕೆ ದಿಢೀರನೇ ಚರ್ಚ್ಗೆ ಹೋದರು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಕೇರಳ ರಾಜ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಭಾರತದ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ನಾನಾ ಕಸರತ್ತುಗಳನ್ನು ಮಾಡಿ ಗೆಲುವು ಸಾಧಿಸಿದ ಇವರಿಗೆ ಕೇರಳ ಮಾತ್ರ ಈ ವರೆಗೆ ಕೈಗೆ ಸಿಗುತ್ತಿಲ್ಲ.ಅಲ್ಲಿ ಹಲವಾರು ವರ್ಷಗಳಿಂದ ಕಮ್ಯುನಿಸ್ಟರು ಬೇರು ಬಿಟ್ಟಿದ್ದಾರೆ. ಈ ಕೆಂಪು ಕೋಟೆಯನ್ನು ಭೇದಿಸಲು ಸಂಘ ಮಾಡದ ಕಸರತ್ತು ಗಳು ಇಲ್ಲ. ಈ ಸೇರಿದಂತೆ ಹಿಂದುಳಿದ ಸಮುದಾಯಗಳ ಅಚಲ ಬೆಂಬಲದಿಂದ ಬೆಳೆದು ನಿಂತ ಕಮ್ಯುನಿಸ್ಟರಿಗೆ ಚುನಾವಣಾ ರಾಜಕೀಯದಲ್ಲಿ ನೇರ ಎದುರಾಳಿ ಎಂದರೆ ಕಾಂಗ್ರೆಸ್ ಮತ್ತು ಅದು ಕಟ್ಟಿಕೊಂಡ ಸಂಯುಕ್ತ ರಂಗ (ಯುಡಿಎಫ್). ಹೀಗಾಗಿ ಸಂಘದ ರಾಜಕೀಯ ಅಂಗವಾದ ಬಿಜೆಪಿ ಅಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಈ ವರೆಗೆ ಸಾಧ್ಯವಾಗಿಲ್ಲ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಹಿಂದೂಗಳು ಹಾಗೂ ಶೇಕಡಾ 40 ರಷ್ಟು ಅಲ್ಪಸಂಖ್ಯಾತರು (ಮುಸಲ್ಮಾನರು ಮತ್ತು ಕ್ರೈಸ್ತರು ಹಾಗೂ ಜೈನರು ಇದ್ದಾರೆ. ಹಿಂದೂಗಳ ಅಂದರೆ ಆಳವರ (ಬಿಲ್ಲವರು) ನಡುವೆ ನಾರಾಯಣ ಗುರುಗಳ ಸೈದ್ಧಾಂತಿಕ ವಾರಸುದಾರರಾದ ಕಮ್ಯುನಿಸ್ಟರ ಪ್ರಭಾವವಿದೆ. ಜೊತೆಗೆ ಮುಸಲ್ಮಾನರು ಹಾಗೂ ಕ್ರೈಸ್ತರ ಬೆಂಬಲವೂ ಇದೆ. ಕಮ್ಯುನಿಸ್ಟರನ್ನು ಬಿಟ್ಟರೆ ಕಾಂಗ್ರೆಸ್ ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳಿವೆ. ಹೀಗಾಗಿ ಕೇರಳದ ರಾಜಕೀಯದಲ್ಲಿ ಪ್ರವೇಶ ಪಡೆಯಲು ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲವೂ ಬೇಕು.ಅದಕ್ಕಾಗಿಯೇ ವಿಶ್ವಗುರುಗಳ ದಿಢೀರ್ ಚರ್ಚ್ ಭೇಟಿ.ಇದನ್ನೇ ನಾಟಕ ಎಂದು ಕರೆಯುವುದು.ಇದು ಓಲೈಕೆಯ ನಾಟಕವಲ್ಲದೇ ಬೇರೇನೂ ಅಲ್ಲ. ನಾಗಪುರದ ಗುರುಗಳು ಈ ನಾಟಕದ ನಿರ್ದೇಶಕರು. ಉಳಿದವರು ಪಾತ್ರಧಾರಿಗಳು. ಚರ್ಚುಗಳ ಮುಂದೆ ಹನುಮಾನ್ ಚಾಲಿಸಾ ಪಠಿಸುವುದು, ಹಬ್ಬದ ಸಂಭ್ರಮದಲ್ಲಿರುವ ಕ್ರೈಸ್ತರ ಮೇಲೆ ದಾಳಿ ಮಾಡುವುದು ಭಕ್ತರಿಗೆ ವಹಿಸಿದ ಪಾತ್ರವಾದರೆ , ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ಗೆ ಹೋಗಿ ಪ್ರಾರ್ಥನೆ ಮಾಡುವುದು ‘ವಿಶ್ವಗುರು’ವಿಗೆ ವಹಿಸಿದ ಪಾತ್ರ. ಅವರವರ ಪಾತ್ರವನ್ನು ಸರಿಯಾಗಿ ನಿರ್ವಹಿಸಿದರು. ಒಂದಲ್ಲ, ಎರಡಲ್ಲ ಇಂಥ ಹಲವಾರು ನಾಟಕಗಳಿವೆ. ಭಾರತದ ಉಳಿದೆಡೆ ಗೊಮಾಂಸ ಭಕ್ಷಣೆ ಬಗ್ಗೆ ಬಹುದೊಡ್ಡ ರಂಪಾಟವನ್ನೇ ಮಾಡುವ ಹಾಗೂ ಹಲ್ಲೆ, ದಾಳಿಗಳನ್ನು ಮಾಡಲು ಹಿಂಜರಿಯದ ಇವರು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಅದನ್ನು ವಿರೋಧಿಸುವುದಿಲ್ಲ. ಅಲ್ಲಿ ಸಂಖ್ಯಾಬಲದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವ ಕ್ರೈಸ್ತರು ಹಾಗೂ ಮುಸಲ್ಮಾನರ ಒಂದಿಷ್ಟಾದರೂ ಮತಗಳನ್ನುಗಳಿಸಲು ಅಲ್ಲಿ ಮತದಾರರಿಗೆ ಉತ್ತಮ ದನದ ಮಾಂಸ ಒದಗಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನೀಡುತ್ತ ಬಂದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹಲವೆಡೆ ಗೋಹತ್ಯೆಯನ್ನು ವಿರೋಧಿಸಿದರೂ ಸಾವಿರಾರು ಟನ್ ಗೊಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲು ಇವರ ವಿರೋಧವಿಲ್ಲ. ಇವರ ವಿಶ್ವಗುರುವಿನ ಸರಕಾರವೇ ಗೋ ಮಾಂಸ ರಫ್ತಿಗೆ ಮುಕ್ತ ಅವಕಾಶ ನೀಡಿದೆ. ಒಮ್ಮೆ ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಅವರು ಆಕಳುಗಳನ್ನು ಸಾಗಿಸುತ್ತಿದ್ದಾರೆ ಎಂದು ಅವರನ್ನು ಬೆತ್ತಲೆ ಮಾಡಿ ಚಿತ್ರ ಹಿಂಸೆ ನೀಡಿದ ಘಟನೆ ದೊಡ್ಡ ಸುದ್ದಿಯಾಯಿತು. ಇದನ್ನು ಪ್ರತಿಭಟಿಸಿ ಆಗ ಉಡುಪಿಯಲ್ಲಿ ಭಾರೀ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಅಂದಿನ ಸಭೆಯಲ್ಲಿ ನಾನು ಮಾತನಾಡಿದ್ದೆ. ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟವರು ತಮ್ಮ ಸಂಘಟನೆಯನ್ನು ಜೀವಂತವಾಗಿಡಲು ಇಂಥ ಹಲವಾರು ಕಸರತ್ತು ಗಳನ್ನು ಮಾಡುತ್ತ ಬಂದಿದ್ದಾರೆ. ಇವರದು ರಾಷ್ಟ್ರೀಯವಾದಿ ಸಂಘಟನೆ ಎಂದು ಮಾಧ್ಯಮಗಳು ಕರೆಯುತ್ತ ಬಂದಿವೆ. ಇವರೂ ತಾವು ಮಹಾನ್ ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುತ್ತ ಬಂದಿದ್ದಾರೆ.ಆದರೆ ಇವರನ್ನು ಹಾಗೆ ಕರೆಯುವುದು ಕೂಡ ಸರಿಯಲ್ಲ.ಒಂದು ರಾಷ್ಟ್ರ ಅಂದರೆ ಅದರಲ್ಲಿ ಒಂದೇ ಸಮುದಾಯದವರು ಇರುವುದಿಲ್ಲ. ಅದರಲ್ಲೂ ಭಾರತದಂಥ ರಾಷ್ಟ್ರದಲ್ಲಿ ನೂರಾರು ಸಮುದಾಯಗಳು,ಭಾಷೆಗಳನ್ನು ಆಡುವ ಜನರು, ಬುಡಕಟ್ಟುಗಳು ಸೇರಿವೆ.ಇದು ಆರೆಸ್ಸೆಸ್ ಪರಿಕಲ್ಪನೆಯ ರಾಷ್ಟ್ರವಲ್ಲ. ರಾಷ್ಟ್ರಕ್ಕಾಗಿ ಮಾತಾಡುವುದನ್ನು ಬಿಟ್ಟರೆ ಇವರು ಏನನ್ನೂ ಮಾಡಿಲ್ಲ. 1925ರಲ್ಲಿ ಅಸ್ತಿತ್ವಕ್ಕೆ ಬಂದರೂ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗವಹಿಸಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನು ಬ್ರಿಟಿಷ್ ಪೊಲೀಸರಿಗೆ ಹಿಡಿದು ಕೊಟ್ಟ ಆರೋಪಗಳೂ ಇವರ ಮೇಲಿವೆ. ಸ್ವಾತಂತ್ರ್ಯಾ ನಂತರವೂ ರಾಷ್ಟ್ರಕ್ಕೆ ಇವರ ಕೊಡುಗೆ ಏನು? ಅಧಿಕಾರ ಕೈಗೆ ಸಿಕ್ಕರೆ ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಲು ಕಾರ್ಪೊರೇಟ್ ಖದಿಮರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.ಸ್ವಾತಂತ್ರ್ಯಾ ನಂತರ ಜವಾಹರಲಾಲ್ ನೇಹರೂ ನೇತೃತ್ವದ ಸರಕಾರ ನಿರ್ಮಿಸಿದ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಮುಂಬೈ, ಮಂಗಳೂರು ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳನ್ನು ಅಂಬಾನಿ ಮತ್ತು ಅದಾನಿಗಳ ಮಡಿಲಿಗೆ ಹಾಕಿದ್ದಾರೆ. ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿರುವ ಛತ್ತೀಸ್ಗಡ, ಮಧ್ಯಪ್ರದೇಶ, ಬಸ್ತಾರ ಮೊದಲಾದ ಕಡೆಯ ಅರಣ್ಯವನ್ನು ನಾಶ ಮಾಡಲು ಅವುಗಳನ್ನು ಅಗ್ಗದ ಬೆಲೆಗೆ ಅದಾನಿ, ಅಂಬಾನಿಗಳಿಗೆ ಬಿಟ್ಟು ಕೊಟ್ಟಿದ್ದಾರೆ. ಭಾರತ ಮಾತೆಯನ್ನು ಹೀಗೆ ತುಂಡು, ತುಂಡಾಗಿ ಮಾರಾಟ ಮಾಡುವವರು ರಾಷ್ಟ್ರೀಯವಾದಿಗಳು ಹೇಗಾಗುತ್ತಾರೆ? ಇವರು ಬಹಿರಂಗವಾಗಿ ಹೇಳುವುದು ಒಂದಾದರೆ ಅಂತರಂಗದಲ್ಲಿ ಮಾತಡುವುದು ಇನ್ನೊಂದು ರೀತಿ. ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ ಗೊಡ್ಸೆಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ‘ಗಾಂಧಿಯನ್ನು ನಾನೇಕೆ ಕೊಂದೆ ’ ಎಂಬ ಗೊಡ್ಸೆಯ ಪುಸ್ತಕವನ್ನು ಗುಟ್ಟಾಗಿ ಮಾರಾಟ ಮಾಡುತ್ತಾರೆ.ಮತ್ತೊಂದೆಡೆ ಗಾಂಧೀಜಿ ಸಂಘದ ಶಾಖೆಗೆ ಭೇಟಿ ನೀಡಿದ್ದರು ಎಂದು ರೈಲು ಬಿಡುತ್ತಾರೆ,ಮಗದೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಭಕ್ತ ಪಡೆಯ ಮೂಲಕ ಗಾಂಧಿಯವರ ವೈಯಕ್ತಿಕ ಜೀವನದ ಬಗ್ಗೆ ಕಟ್ಟುಕತೆಗಳನ್ನು ಹರಿಬಿಡುತ್ತಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಬಗ್ಗೆ ಅತ್ಯಂತ ಕೆಟ್ಟ ಅಪಪ್ರಚಾರ ಮಾಡುತ್ತಾರೆ, ಇದನ್ನು ಮಾಡುವುದು ಬರೀ ಭಕ್ತರಲ್ಲ, ಇವರ ‘ವಿಶ್ವಗುರು’ ಸ್ವತಃ ತನ್ನ ಸ್ಥಾನದ ಘನತೆ, ಗೌರವಗಳನ್ನು ಮರೆತು ನೆಹರೂ ಅವರ ಮಗಳು , ಮೊಮ್ಮಕ್ಕಳ ಬಗ್ಗೆ ಆಡಬಾರದ ಮಾತನ್ನು ಆಡುತ್ತಾರೆ, ಇನ್ನೊಂದೆಡೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ನೆಹರೂ ಆಮಂತ್ರಿಸಿದ್ದರು ಎನ್ನುತ್ತಾರೆ. ಇದರಲ್ಲಿ ಯಾವುದು ಸತ್ಯ? ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನಾದರೂ ಇವರು ಬಿಟ್ಟಿದ್ದಾರಾ? ಇಲ್ಲ ಅವರ ಬಗ್ಗೆ ಒಳಗೊಳಗೆ ನಿಂದಾ ಸ್ತುತಿ ಮಾಡುತ್ತಾರೆ. ಬಹಿರಂಗವಾಗಿ ಹೊಗಳಿ ಅವರನ್ನು ಗಾಂಧಿ, ನೆಹರೂ ವಿರುದ್ಧ ಎತ್ತಿ ಕಟ್ಟುವ ಮಸಲತ್ತು ಮಾಡುತ್ತಾರೆ ಅಂಬೇಡ್ಕರ್ ಬಗ್ಗೆ ತೇಜೋವಧೆ ಮಾಡುವ ಅರುಣ್ ಶೌರಿ ಅವರ ಪುಸ್ತಕವನ್ನು ಇವರೇ ಪ್ರಚಾರ ಮಾಡಿ ಎಲ್ಲೆಡೆ ಮಾರಾಟವಾಗುವಂತೆ ಮಾಡಿದರು. ಅದಕ್ಕೆ ದಲಿತ ಮತ್ತು ಹಿಂದುಳಿದ ಸಮುದಾಯಗಳಿಂದ ತೀವ್ರ ವಿರೋಧ ಬಂದ ನಂತರ ಹಿಂದೆ ಸರಿದು ಪ್ಲೇಟ್ ಬದಲಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಇವರು, ಗಾಂಧಿ,ನೆಹರೂ , ಪಟೇಲ್, ಸುಭಾಷ್ ನಡುವೆ ಭಿನ್ನಾಭಿಪ್ರಾಯ ಇತ್ತು, ಪಟೇಲ್ ಪ್ರಧಾನಿಯಾಗುವುದನ್ನು ನೆಹರೂ ತಪ್ಪಿಸಿದರು ಎಂದು ಸುಳ್ಳು ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದಂತೂ ನಿಜ ಗಾಂಧಿ, ನೆಹರೂ, ಸುಭಾಷ್, ಭಗತ್ ಸಿಂಗ್ ವಲ್ಲಭಭಾಯಿ ಪಟೇಲ್ ಒಂದು ವಿಷಯದಲ್ಲಿ ಮಾತ್ರ ಒಮ್ಮತಾಭಿಪ್ರಾಯ ಹೊಂದಿದ್ದರು. ಕೋಮುವಾದ ಮತ್ತು ಜಾತಿವಾದಗಳನ್ನು ಅವರು ಕಟುವಾಗಿ ವಿರೋಧಿಸಿದ್ದರು. ಇದಕ್ಕೆ ಅಂದಿನ ಅಮೂಲ್ಯ ದಾಖಲೆಗಳೇ ಸಾಕ್ಷಿಯಾಗಿವೆ. ಮತ್ತೆ ಭಾಗವತರ ಪುರಾಣಕ್ಕೆ ಬರೋಣ. ಹಿಂದೂ ರಾಷ್ಟ್ರ ಎಂದು ಘೋಷಿಸಲು ಸಂವಿಧಾನದ ಅನುಮೋದನೆ ಅಗತ್ಯವಿಲ್ಲವಂತೆ ದೇಶದ ಸಂವಿಧಾನಕ್ಕಿಂತ ಅವರ ಸಂಘಟನೆಯೂ ದೊಡ್ಡದಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ. ತಮಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಸಂಘ ಪಕ್ಷಾತೀತ ಸಂಘಟನೆ ಎಂದು ಹೇಳುತ್ತಲೇ ಭಾಗವತರು ಸುತ್ತಿ ಬಳಸಿ ರಾಜಕಾರಣದ ಕುರಿತೇ ಮಾತನಾಡುತ್ತಾರೆ. ಕೇಂದ್ರ ದ ಚುಕ್ಕಾಣಿ ಹಿಡಿದಿರುವ ಪಕ್ಷದಲ್ಲಿ ಬಿಕ್ಕಟ್ಟು ಉಂಟಾದಾಗ ಸಂಘ ಮಧ್ಯ ಪ್ರವೇಶ ಮಾಡಿ ಜಗಳಗಳನ್ನು ಬಗೆಹರಿಸುತ್ತದೆ. ಇನ್ನೊಂದೆಡೆ ಮಹಿಳೆಯರನ್ನು ಮಾತೆಯರೆಂದು ಕರೆಯುವ ಸಂಘದ ಮುಖ್ಯಸ್ಥರಾದ ಭಾಗವತರು ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ನ ಜೀವಾವಧಿ ಶಿಕ್ಷೆಯನ್ನು ದಿಲ್ಲಿಯ ಹೈಕೋರ್ಟ್ ಅಮಾನತುಗೊಳಿಸಿ ಜಾಮೀನು ನೀಡಿದ ಬಗ್ಗೆ ಎಂದೂ ಪ್ರತಿಕ್ರಿಯೆ ನೀಡುವುದಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಇವರದು ದಿವ್ಯ ಮೌನ.ಬಹುಶಃ ಇದು ಅವರಿಗೆ ಮಹತ್ವದ ವಿಷಯವಾಗಿರಲಿಕ್ಕಿಲ್ಲ. ಭಾಗವತರ ಪರಿಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಇವೆಲ್ಲ ಸಹಜ ಎಂದು ಅವರು ಭಾವಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಅವರಿಗೆ ನೀಡಿದೆ. ಅದಕ್ಕಾದರೂ ಕೃತಜ್ಞರಾಗಿರಲಿ.
230 ಹೆರಿಗೆ ಆಸ್ಪತ್ರೆಯನ್ನು ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ : ನಿಮಗೆ ಶೋಭೆ ತರುವುದಿಲ್ಲ ಎಂದ ಆರೋಗ್ಯ ಸಚಿವರು
Closing down Maternity Hospital in Karnataka : ಸಿದ್ದರಾಮಯ್ಯನವರ ಸರ್ಕಾರ ಹೆರಿಗೆ ಆಸ್ಪತ್ರೆಯನ್ನು ಮುಚ್ಚಿತ್ತಿದೆ ಎನ್ನುವ ಆರೋಪವನ್ನು ಜೆಡಿಎಸ್ ಮಾಡಿದೆ. ಇದಕ್ಕೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆಯನ್ನು ನೀಡಿದ್ದಾರೆ. ಅಧಿಕಾರಕ್ಕಾಗಿ ಹತಾಶೆಗೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಸಚಿವರು ಕಿಡಿಕಾರಿದ್ದಾರೆ.
Uttar Pradesh: SIR ಪ್ರಕ್ರಿಯೆ ಪೂರ್ಣ; ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರುಗಳು ಡಿಲೀಟ್ ಸಾಧ್ಯತೆ!
ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದ್ದು, ಇದರ ಪರಿಣಾಮವಾಗಿ ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು 2.89 ಕೋಟಿ ಹೆಸರುಗಳು ಅಳಿಸಲ್ಪಡುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. SIR ಪ್ರಕ್ರಿಯೆಗೆ ಮುನ್ನ ರಾಜ್ಯದಲ್ಲಿ 15.44 ಕೋಟಿ ಮತದಾರರ ಹೆಸರುಗಳು ಇದ್ದವು. ಪರಿಷ್ಕರಣೆ ಬಳಿಕ ಈ ಸಂಖ್ಯೆ 12.55 ಕೋಟಿಗೆ ಇಳಿಯುವ ನಿರೀಕ್ಷೆ ಇದೆ. ಡಿ. 31ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವವರು 2026ರ ಜ. 30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಹೆಸರುಗಳನ್ನು ಮರು ಸೇರ್ಪಡೆಗೊಳಿಸಲು ಅವಕಾಶವಿದ್ದು, ಫೆಬ್ರವರಿ 28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಜಿಲ್ಲಾವಾರು ಅಳಿಸುವಿಕೆಯ ವಿವರಗಳ ಪ್ರಕಾರ, ಲಕ್ನೋದಲ್ಲಿ ಗರಿಷ್ಠ 12 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಪ್ರಯಾಗ್ ರಾಜ್ ನಲ್ಲಿ 11 ಲಕ್ಷ, ಕಾನ್ಪುರದಲ್ಲಿ 9 ಲಕ್ಷ ಹೆಸರುಗಳು ಅಳಿಸಲಾಗಿದೆ. ಅಲ್ಲದೆ ಆಗ್ರಾ ಮತ್ತು ಗಾಝಿಯಾಬಾದ್ ಜಿಲ್ಲೆಗಳಲ್ಲಿ ತಲಾ ಸುಮಾರು ಎಂಟು ಲಕ್ಷ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ವಲಸೆ, ನಕಲಿ ಮತದಾರರು, ಮೃತಪಟ್ಟವರು ಹಾಗೂ ಕಾಣೆಯಾದ ಮತದಾರರು ಸೇರಿದಂತೆ ವಿವಿಧ ಕಾರಣಗಳಿಂದ ಹೆಸರುಗಳನ್ನು ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಅತಿಹೆಚ್ಚು ಅಳಿಸುವಿಕಗೆ ಮತದಾರರು ವಲಸೆ ಹೋಗಿರುವುದು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನೂ ಶೇಕಡಾ 9.81 ಮತದಾರರನ್ನು ‘ಮ್ಯಾಪ್ ಮಾಡದ’ ವರ್ಗದಲ್ಲಿ ಗುರುತಿಸಲಾಗಿದೆ. ಈ ವರ್ಗದಲ್ಲಿರುವ ಮತದಾರರಿಗೆ ತಮ್ಮ ಗುರುತನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಕಳುಹಿಸಲಾಗುತ್ತದೆ. ದಾಖಲೆ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. SIR ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ತಮ್ಮ ಬೆಂಬಲಿಗರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದುಹಾಕಿ ಆಡಳಿತಾರೂಢ ಬಿಜೆಪಿಗೆ ಲಾಭ ಮಾಡಿಕೊಡುವ ಪ್ರಯತ್ನವಾಗಿದೆ ಎಂದು ಆರೋಪಿಸಿವೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಅನರ್ಹರು ಹಾಗೂ ಅಕ್ರಮ ವಲಸಿಗರ ಹೆಸರುಗಳನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಸಿಂಧನೂರು | ಉಚಿತ ಆಹಾರ ವಿತರಿಸುತ್ತಿರುವ ಜೈಹಿಂದ್ ಉಚಿತ ಆಹಾರ ಕೇಂದ್ರದ ದಾಸೋಹ ಕಾರ್ಯ ಮಾದರಿ: ಡಾ.ಚನ್ನಬಸವ
ಸಿಂಧನೂರು : ನಿತ್ಯ ಅನ್ನ ದಾಸೋಹ ಕಾರ್ಯ ದೇವರಿಗೆ ಇಷ್ಟವಾಗಿದ್ದು. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಳೆದ ಎರಡು ವರ್ಷಗಳಿಂದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಆಶ್ರಯದಲ್ಲಿ ಉಚಿತ ಆಹಾರ ವಿತರಿಸುತ್ತಿರುವ ಜೈಹಿಂದ್ ಉಚಿತ ಆಹಾರ ಕೇಂದ್ರದ ದಾಸೋಹ ಕಾರ್ಯ ಮಾದರಿಯಾಗಿದೆ ಎಂದು ಜನನಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಚನ್ನಬಸವ ಗೊರೇಬಾಳ ಹೇಳಿದರು. “ಜೈ ಹಿಂದ್ ಉಚಿತ ಆಹಾರ ಕೇಂದ್ರ”ದ ಸೇವಾ ಕಾರ್ಯಕ್ಕೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿರಂತರ ಎರಡು ವರ್ಷಗಳ ಕಾಲ ದಾಸೋಹ ಸೇವೆ ಕೈಗೊಳ್ಳುವುದು ಸುಲಭದ ಮಾತಲ್ಲ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟದ ಪರಿಸ್ಥಿತಿಯನ್ನು ಅರಿತು, ಸಾಲಡಾರಿಟಿ ಯೂತ್ ಮೂವ್ಮೆಂಟ್ನವರ ಮಾನವೀಯತೆ ಹಾಗೂ ಸೇವಾಮನೋಭಾವದಿಂದ ಈ ಕಾರ್ಯ ನಡೆಸುತ್ತಿರುವುದು ಇತರೆ ಸಂಘಟನೆಗಳವರಿಗೆ ಮಾದರಿಯಾಗಿದೆ ಎಂದರು. ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಅಧ್ಯಕ್ಷ ಅಬುಲೈಸ್ ನಾಯಕ್ ಮಾತನಾಡಿ, ನಮ್ಮ ಸಂಘಟನೆ ಕಳೆದ 2 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಮಾಡಲು ದಾನಿಗಳು, ಸ್ವಯಂಸೇವಕರು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವರ ಸಹಾಯ, ಸಹಕಾರವಿದೆ ಎಂದು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಜೈ ಹಿಂದ್ ಉಚಿತ ಆಹಾರ ಕೇಂದ್ರದ ಸೇವೆಯನ್ನು ಇನ್ನಷ್ಟು ವಿಸ್ತರಿಸಿ, ಹೆಚ್ಚು ಅಗತ್ಯವಿರುವ ಜನರಿಗೆ ತಲುಪಿಸುವ ಉದ್ದೇಶವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ನ ಅಧ್ಯಕ್ಷ ಹುಸೇನ್ಸಾಬ್, ಮಿಲಾಪ್ ಶಾದಿಮಹಲ್ನ ಅಧ್ಯಕ್ಷ ಖಾಜಿ ಜಿಲಾನಿಸಾಬ್, ಮುಖಂಡರಾದ ಮೌಲಾನಾ ತಾಜಿಮುದ್ದೀನ್ ಸಾಬ್, ಬಸವರಾಜ ಬಾದರ್ಲಿ, ಸಿರಾಜ್, ಇಮ್ತಿಯಾಜ್ ಬೇಗ್ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಡಾ.ವಸೀಂ ಅಹ್ಮದ್ ಮಾತನಾಡಿದರು. ತನ್ವೀರ್ ನಿರೂಪಿಸಿದರು. ಇಸ್ಮಾಯಿಲ್, ನಯೀಮ್, ಮನ್ಸೂರ್, ಸನಾವುಲ್ಲಾ, ಖಾಜಾ, ಉಮರ್ ಮತ್ತು ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಅನೇಕ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಕ್ರೀಡಾ ಸಮುಚ್ಚಯ: ಅಂದಾಜು ಪಟ್ಟಿ ತಯಾರಿಗೆ ಸಿದ್ಧತೆ
ಬೆಂಗಳೂರಿನಲ್ಲಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಬಹುಕ್ರಿಡಾ ಸಂಕೀರ್ಣಕ್ಕೆ ಕರ್ನಾಟಕ ಗೃಹ ಮಂಡಳಿ ಸಿದ್ಧತೆ ಆರಂಭಿಸಿದೆ. ಸುಮಾರು 1650 ಕೋಟಿ ರೂ. ವೆಚ್ಚದ ಈ ಯೋಜನೆಗೆ 93,448 ಆಸನಗಳು, ಅತ್ಯಾಧುನಿಕ ತಾಂತ್ರಿಕತೆ, ವಿನ್ಯಾಸ, ಮತ್ತು ವಿವಿಧ ಕ್ರೀಡಾ ಸೌಲಭ್ಯಗಳು ಇರಲಿವೆ. ಟೆಂಡರ್ ಪ್ರಕ್ರಿಯೆಗಾಗಿ ದರಪಟ್ಟಿ ಆಹ್ವಾನಿಸಲಾಗಿದೆ.
ಕೇರಳ ಜನಪ್ರತಿನಿಧಿಗಳ ಕಣ್ಣು ಬೆಂಗಳೂರು ಮೇಲೆ ಯಾಕೆ, ಇಲ್ಲಿದೆ ಟ್ವಿಸ್ಟ್
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಅಕ್ರಮ ಶೆಡ್ಗಳ ತೆರವು ಕಾರ್ಯಾಚರಣೆಯು ಇದೀಗ ದೇಶದಾದ್ಯಂತ ಸುದ್ದಿಯಾಗುವುದಕ್ಕೆ ಪ್ರಾರಂಭವಾಗಿದೆ. ಅಚ್ಚರಿ ಎನ್ನುವಂತೆ ಕೇರಳ ಸರ್ಕಾರ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ರಾಜಕಾರಣಿಗಳು ಲಾಭವಿಲ್ಲದೆ ಯಾವುದನ್ನೂ ಮಾಡುವುದಿಲ್ಲ ರಾಜಕೀಯದ ಬಗ್ಗೆ ಜನ ಸಾಮಾನ್ಯರು ಬಳಸುವ ಸಾಮಾನ್ಯ ಪದವಿದು. ಈ ಮಾತಿನಿಂದ ಕರ್ನಾಟಕ ಮತ್ತು
ಧರ್ಮಸ್ಥಳ ಕೇಸ್ ನಲ್ಲಿ ತೀವ್ರವಾಗಿ ಗಮನ ಸೆಳೆದಿದ್ದು ಚಿನ್ನಯ್ಯ ಎಂಬಾತ ತಂದಿದ್ದ ತಲೆಬುರುಡೆ. ಎಸ್ಐಟಿ ಮುಂದಿದ್ದ ಆ ತಲೆ ಬುರುಡೆಯ ಬಗ್ಗೆ ನಾನಾ ವರದಿಗಳು ಬಂದಿದೆ. ಆದರೆ, ಆ ತಲೆಬುರುಡೆಯನ್ನು ತಂದ ಹೊಸತರಲ್ಲಿ ಆರೋಪಿ ಜಯಂತ್ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ ಎಂಬ ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಜಯಂತ್ ಅವರು ತಲೆಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದಾಗ ಕೆಟ್ಟ ಕನಸು ಬಿದ್ದು ಅವರು ಭಯಭೀತರಾಗಿದ್ದರಂತೆ. ಆಮೇಲೆ ಅಲ್ಲಿಂದ ಬೆಂಗಳೂರಿಗೆ ಓಡಿಬಂದಿದ್ದರಂತೆ. ಇಲ್ಲಿದೆ ನೋಡಿ ಆ ವಿಚಾರದ ಡಿಟೇಲ್ಸ್.
ಜ.1 ರಂದು ಕೇರಳ ಯಾತ್ರೆ ಗೆ ಉಳ್ಳಾಲದಲ್ಲಿ ಚಾಲನೆ
ಉಳ್ಳಾಲ :ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಯು ಜ. 1ರಂದು ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭವಾಗಲಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೇಳಿದರು. ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ಗ್ರಾಂಡ್ ಮುಫ್ತಿ, ಉಳ್ಳಾಲ ದರ್ಗಾ ಸಂಯುಕ್ತ ಜಮಾಅತ್ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಧಾರ್ಮಿಕ ಸೌಹಾರ್ದತೆ, ಮಾನವೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವ ಈ ಯಾತ್ರೆಗೆ ಕೇರಳದ 17 ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿವೆ. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ತಂಙಳ್ ಬುಖಾರಿ ಹಾಗೂ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರು ಉಪನಾಯಕರಾಗಲಿದ್ದಾರೆ. ಸಯ್ಯಿದ್ ಅಲಿ ಬಾಫಖಿ ತಂಙಳ್ ಝಿಯಾರತ್ಗೆ ನೇತೃತ್ವ ನೀಡಲಿದ್ದಾರೆ. ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಸಮಸ್ತದ ತ್ರಿವರ್ಣ ಧ್ವಜವನ್ನು ಜಾಥಾ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಸಂದೇಶ ಭಾಷಣ ಮಾಡಲಿದ್ದಾರೆ ಎಂದರು. ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಜನರಲ್ ಸೆಕ್ರೆಟರಿ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಎಸ್ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಎಸ್ಎಸ್ಎಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ, ಎಸ್ಜೆಎಂ ಅಧ್ಯಕ್ಷ ಎನ್.ಎಂ. ಅಬ್ದುರಹ್ಮಾನ್ ಮದನಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ವಿ.ಕೆ. ಮುಹಮ್ಮದ್ ಮದನಿ, ಎಸ್ಎಂಎ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯದ್ ಅಬ್ದುಲ್ ರಹ್ಮಾನ್ ತಂಙಳ್ , ಕಾರ್ಯದರ್ಶಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ವೈ. ಅಬ್ದುಲ್ಲ ಕುಂಞಿ ಹಾಜಿ ಯೆನಪೊಯ, ಯು.ಕೆ. ಮೋನು ಹಾಜಿ ಕಣಚೂರು, ಡಾ. ಯು.ಟಿ. ಇಫ್ತಿಕಾರ್, ಹಾಜಿ ಎಸ್.ಎಂ. ರಶೀದ್, ಇನಾಯತ್ ಅಲಿ, ಬಿ.ಎಂ. ಫಾರೂಕ್, ಅಬೂಬಕ್ಕರ್ ಹಾಜಿ (ರೈಸ್ಕೋ), ಡಾ. ಅಬ್ದುಲ್ ರಶೀದ್, ಝೈನಿ ಕಾಮಿಲ್ ಸಖಾಫಿ, ಕೆ.ಎಸ್. ಮುಹಮ್ಮದ್ ಹಾಜಿ ಸಾಗರ್, ಶಾಕಿರ್ ಹಾಜಿ ಹೈಸಂ, ಅಬ್ದುಲ್ ನಾಸಿರ್ ಲಕ್ಕಿ ಸ್ಪಾರ್, ಎಸ್.ಕೆ. ಖಾದರ್ ಹಾಜಿ, ತೌಫೀಕ್ ಅಬ್ದುಲ್ಲ ಹಾಜಿ , ಮತ್ತಿತರರು ಭಾಗವಹಿಸಲಿದ್ದಾರೆ. ಯಾತ್ರೆಗೆ ದರ್ಗಾ ಸಮಿತಿಯ ನೇತೃತ್ವದಲ್ಲಿ ವಿಶೇಷ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ , ಕೋಶಾಧಿಕಾರಿ ನಾಝಿಂ ರಹ್ಮಾನ್ ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು.
ಕೇರಳ v/s ಕರ್ನಾಟಕ ಒತ್ತುವರಿ ಪಾಲಿಟಿಕ್ಸ್: ಕೋಗಿಲು ಪ್ರಕರಣದಲ್ಲಿ ಸಿಪಿಐಎಂ ದಿಢೀರ್ ಎಂಟ್ರಿಗೆ ಅಸಲಿ ಕಾರಣ ಏನು?
ಉತ್ತರ ಪ್ರದೇಶದ ಬುಲ್ದೋಜರ್ ರಾಜ್ ಕರ್ನಾಟಕಕ್ಕೆ ಬಂದಿದೆ ಎಂಬ ಆರೋಪವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಮಾಡುತ್ತಿದೆ. ಯಲಹಂಕದ ಕೋಗಿಲು ಕ್ರಾಸ್ ನ ಫಕೀರ್ ಬಡಾವಣೆಯಲ್ಲಿ ನಿರ್ಮಿಸಿಕೊಂಡಿದ್ದ ಸುಮಾರು 180 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಲಾಗಿದೆ. ಇದು ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕೇರಳದ ಸಿಎಂ ಪಿಣರಾಯ್ ವಿಜಯನ್ ಈ ಕುರಿತಾಗಿ ಟ್ವೀಟ್ ಮಾಡಿರುವುದರಿಂದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಹಾಗಾದರೆ ಸಿಪಿಐಎಂ ದಿಢೀರ್ ಎಂಟ್ರಿ ಕೊಡಲು ಏನು ಕಾರಣ? ಇಲ್ಲಿದೆ ಮಾಹಿತಿ.
5,700 ಕಿ.ಮೀ ನಾನ್ಸ್ಟಾಪ್ ಪಯಣ: Amur Falcon ಹಕ್ಕಿಯ ರೋಚಕ ವಲಸೆಯ ಸಾಹಸಗಾಥೆ
ನಾವು ದೀರ್ಘ ಪ್ರಯಾಣ ಮಾಡಬೇಕೆಂದರೆ ಸಾಕಷ್ಟು ತಯಾರಿ ಬೇಕು. ವಿಮಾನದಲ್ಲಿ ಹೋದರೂ ನಡುವೆ ವಿಶ್ರಾಂತಿ ಬೇಕಾಗುತ್ತದೆ. ಆದರೆ, ಕೇವಲ ನೈಸರ್ಗಿಕ ಶಕ್ತಿಯನ್ನೇ ನಂಬಿಕೊಂಡು, ಯಾವುದೇ ತಂತ್ರಜ್ಞಾನದ ಸಹಾಯವಿಲ್ಲದೆ ಸಾವಿರಾರು ಮೈಲಿ ಪ್ರಯಾಣಿಸುವ ಜೀವಿಯೊಂದರ ಬಗ್ಗೆ ನಿಮಗೆ ಗೊತ್ತಾ? ವಿಶಾಲವಾದ ಸಾಗರದ ಮೇಲೆ, ಎಲ್ಲಿಯೂ ಕುಳಿತುಕೊಳ್ಳಲು ಜಾಗವಿಲ್ಲದಿದ್ದರೂ, ಸತತವಾಗಿ ಐದು ದಿನಗಳ ಕಾಲ ಹಾರುವ ಈ ಪುಟ್ಟ ಪ್ರವಾಸಿಗನ ಕಥೆ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಭಾರತದ ಮೂಲಕ ಹಾದುಹೋಗುವ ಈ ಸಾಹಸಿ ಯಾರು ಎಂಬ ಕುತೂಹಲ ನಿಮಗಿದ್ದರೆ, ಈ ... Read more The post 5,700 ಕಿ.ಮೀ ನಾನ್ಸ್ಟಾಪ್ ಪಯಣ: Amur Falcon ಹಕ್ಕಿಯ ರೋಚಕ ವಲಸೆಯ ಸಾಹಸಗಾಥೆ appeared first on Karnataka Times .
ಬೊಳ್ಳಾರಿ : ಆಶೀರ್ವಾದ್ ಸೇವಾ ಸಂಘದ ಆಶ್ರಯದಲ್ಲಿ ʼಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3ʼ ಕ್ರಿಕೆಟ್ ಪಂದ್ಯಾಟ
ಬಂಟ್ವಾಳ : ಆಶೀರ್ವಾದ್ ಸೇವಾ ಸಂಘ ಬೊಳ್ಳಾರಿ ಇದರ ಅಶ್ರಯದಲ್ಲಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3 ಕ್ರಿಕೆಟ್ ಪಂದ್ಯಾಟ ರವಿವಾರ ನಡೆಯಿತು. ಪತ್ರಕರ್ತ ಸಂತೋಷ್ ನೆತ್ತರಕೆರೆ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು, ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು, ನಾರಾಯಣ್ ಕಿರೋಡಿಯನ್, ಸುಧಾಕರ ಕೊಟ್ಟಿಂಜ, ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್, ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ, ದಯಾನಂದ ಬೊಳ್ಳಾರಿ, ಭವಾನಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್ ಕುಲಾಲ್ ಸ್ವಾಗತಿಸಿ, .ವಿನೋದ್ ಬೊಳ್ಳಾರಿ ವಂದಿಸಿದರು. ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿಜಯಪುರ | ಕೃಷ್ಣ ಪ್ಯಾಲೆಸ್ ನಲ್ಲಿ ಬೆಂಕಿ ಅವಘಡ : ಅಪಾರ ಹಾನಿ
ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿರುವ ಉಡುಪಿ ಕೃಷ್ಣ ಪ್ಯಾಲೆಸ್ನಲ್ಲಿ ಭಾನುವಾರ ತಡರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿರುವ ಘಟನೆ ನಡೆದಿದೆ. ಮೂರು ಅಂತಸ್ತಿನ ಹೊಟೆಲ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶ್ರಮಪಟ್ಟು ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಗ್ಯಾಸ್ ಲೀಕ್ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

26 C