ಸೇಡಂ | ದುಗನೂರ ಗ್ರಾ.ಪಂ.ಯಲ್ಲಿ ಅವ್ಯವಹಾರ ಅರೋಪ : ತಾ.ಪಂ ಕಚೇರಿಗೆ ಮುತ್ತಿಗೆ
ಸೇಡಂ: ತಾಲೂಕಿನ ದುಗನೂರ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಕ ಮಿತ್ರರಾದ ಅನುರಾಧ ಸಾಬ್ಬಣ್ಣ ಅವರನ್ನು ಸೇವೆಯಿಂದ ವಜಾಗೋಳಿಸಬೇಕೆಂದು ಒತ್ತಾಯಿಸಿ ತಾಲೂಕು ಬಹುಜನ ಸಮಾಜ ಪಕ್ಷದ ವತಿಯಿಂದ ತಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನರೇಗಾ ಯೋಜನೆ ಅಡಿಯಲ್ಲಿ ಭ್ರಷ್ಟಾಚಾರ ಮಾಡಿದ ಕಾಯಕಮಿತ್ರ ಅನುರಾಧ ಸಾಬ್ಬಣ್ಣ ಅವರ ವಿರುದ್ಧ ದಾಖಲೆ ಸಮೇತ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸಹಾಯಕ ನಿರ್ದೇಶಕರು (ನರೇಗಾ ಎ.ಡಿ) ತಾಪಂ ಅಧಿಕಾರಿಗಳನ್ನು ದೂರು ಕೊಟ್ಟಿದ್ದೆವು. ಆದರೆ, ದೂರು ನೀಡಿ ಮೂರು ತಿಂಗಳು ಗತಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಸಿಂಧೆ ಆಗ್ರಹಿಸಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ಕಾರ್ಯನಿವಹಿಸುತ್ತಿರುವ ಅನುರಾಧ ಸಾಬ್ಬಣ್ಣ ಅವರಿಗೆ ಮೇಲಾಧಿಕಾರಿಗಳಿಗೆ ಬೆಂಬಲ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಮತ್ತು ಹಣದ ಆಮಿಷ ಒಡ್ಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ, ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ಇದ್ದರೂ, ಜನಪರ ಇರಬೇಕಾಗಿದವರು ಭ್ರಷ್ಟಾಚಾರ ಅಧಿಕಾರಿ ಪರ ನಿಂತಿದ್ದು ಕಂಡು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕರು (ನರೇಗಾ ಎ.ಡಿ) ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಲಬುರಗಿ | ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿಲ್ಲ: ಶಶೀಲ್ ನಮೋಶಿ
ಕಲಬುರಗಿ: ಬೆಳಗಾವಿಯ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು, ಸೂಕ್ತ ಚರ್ಚೆಗಳಿಗೆ ಸಮಯಾವಕಾಶವೇ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಲಾಗುತ್ತದೆ. ಆದರೆ ಕಲ್ಯಾಣ ಕರ್ನಾಟಕ ಭಾಗವು ಬಡತನ, ಮೂಲಭೂತ ಸೌಕರ್ಯ, ಶಿಕ್ಷಣ ಹಾಗೂ ನೀರಾವರಿ ಯೋಜನೆಗಳಲ್ಲಿ ಅತ್ಯಂತ ಹಿಂದುಳಿದಿದ್ದರೂ, ಈ ಬಗ್ಗೆ ಸಮರ್ಪಕ ಚರ್ಚೆ ನಡೆದಿಲ್ಲ ಎಂದು ಟೀಕಿಸಿದರು. ಉತ್ತರ ಕರ್ನಾಟಕ ಅಧಿವೇಶನವೆಂದು ಹೇಳಿಕೊಂಡು ಕೇವಲ ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯಮಟ್ಟದ ನೇಮಕಾತಿಗಳಲ್ಲಿ ಸಂವಿಧಾನದ 371 (ಜೆ) ವಿಧಿಯ ಅಡಿಯಲ್ಲಿ ಸಿಗಬೇಕಾದ ಶೇ.8ರಷ್ಟು ಮೀಸಲಾತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿಲ್ಲ. ಇದರಿಂದ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಭಾರೀ ಅನ್ಯಾಯವಾಗುತ್ತಿದೆ. ಮೀಸಲಿಟ್ಟಿರುವ ಹುದ್ದೆಗಳನ್ನು ‘ಬ್ಯಾಕ್ಲಾಗ್’ ಹುದ್ದೆಗಳೆಂದು ತೋರಿಸಿ, ನಂತರ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲಾಗುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ ವಿಷಯದಲ್ಲಿಯೂ ತಾರತಮ್ಯ ನಡೆಯುತ್ತಿದ್ದು, ರೋಸ್ಟರ್ ಪದ್ಧತಿಯನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ ಎಂದು ಆಪಾದಿಸಿದರು. ಇದಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ವಿಮಾನ ಸೇವೆ ರದ್ದಾಗಿರುವ ಹಿನ್ನೆಲೆಯಲ್ಲಿ, ಬೀದರ್ ವಿಮಾನ ನಿಲ್ದಾಣದಲ್ಲಿ ಕೆಕೆಆರ್ಡಿಬಿ ಅನುದಾನದಡಿಯಲ್ಲಿ ಸೇವೆ ನಡೆಸುತ್ತಿರುವ ಮಾದರಿಯಲ್ಲೇ ಕಲಬುರಗಿಯಲ್ಲೂ ಕೆಕೆಆರ್ಡಿಬಿ ಅನುದಾನದಡಿ ವಿಮಾನ ಸೇವೆ ಒದಗಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಶಶೀಲ್ ನಮೋಶಿ ಅವರು ಒತ್ತಾಯಿಸಿದರು. ಕಲಬುರಗಿಯಲ್ಲಿ ಅಧಿವೇಶನ ಮಾಡಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಸಮಸ್ಯೆಗಳಿವೆ. ಇಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲೇ ಅಧಿವೇಶನ ನಡೆಸಬೇಕು, ಹಿಂದುಳಿದಿರುವ ಹಣೆಪಟ್ಟಿ ಅಳಿಸಲು ವಿವಿಧ ವಲಯಗಳಿಗೆ ವಿಶೇಷ ಅನುದಾನ ಅಗತ್ಯವಾಗಿದೆ, ಅದನ್ನು ಈಡೇರಿಸಲು ಸರ್ಕಾರ ಪಣ ತೊಡಬೇಕು. -ಶಶೀಲ್ ನಮೋಶಿ (ಎಂಎಲ್ಸಿ)
ರೋಹಿತ್ ಶರ್ಮಾ ಗೋಲ್ಡನ್ ಡಕ್ ! ಮೊದಲ ಎಸೆತದಲ್ಲೇ ಹಿಟ್ ಮ್ಯಾನ್ ವಿಕೆಟ್ ಪಡೆದ ದೇವೇಂದ್ರ ಬೋರಾ ಯಾರು?
Devendra Singh Bora Vs Rohit Sharma- ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ನಲ್ಲಿದ್ದರು. ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದ ವಾತಾವರಣ ಸಹ ಅವರ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಿತ್ತು. ಆದರೆ ಶುಕ್ರವಾರ ಉತ್ತರಾಖಂಡದ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ನಡೆದದ್ದೇ ಬೇರೆ! ರೋಹಿತ್ ಶರ್ಮಾ ತಾನೆದುರಿಸಿದ ಮೊದಲ ಎಸೆತಕ್ಕೆ ಔಟ್! ಅಂದರೆ ಗೋಲ್ಡನ್ ಡಕ್ ! ಅಪಾರ ನಿರೀಕ್ಷೆ ಇರಿಸಿಕೊಂಡು ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ತಮ್ಮ ಕಣ್ಣುಗಳನ್ನು ತಮಗೇ ನಂಬಲು ಸಾಧ್ಯ ಆಗಲಿಲ್ಲ. ಹಾಗಿದ್ದರ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ ದೇವೇಂದ್ರ ಬೋರಾ ಯಾರು?
Kalaburagi | ಜೇವರ್ಗಿಯಲ್ಲಿ ಮನುಸ್ಮೃತಿ ದಹಿಸಿ ಪ್ರತಿಭಟನೆ
ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ ದಿನದ ನಿಮಿತ್ತ ಜೇವರ್ಗಿ ತಾಲೂಕು ದಲಿತ ಸಂಘಟನೆಗಳ ಸಮನ್ವ ಸಮಿತಿ ವತಿಯಿಂದ ಜೇವರ್ಗಿ ಪಟ್ಟಣದ ಡಾ.ಅಂಬೇಡ್ಕರ್ ಮೂರ್ತಿ ಸಮೀಪ ಗುರುವಾರ ರಾತ್ರಿ ಮನುಸ್ಮೃತಿ ಪ್ರತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಸಿದ್ದರಾಮ ಕಟ್ಟಿ, ಶ್ರೀಹರಿ ಕರ್ಕಳ್ಳಿ, ರವಿ ಕುಳಗೇರಿ, ಮಲ್ಲು ಹೊಸ್ಮನಿ, ಸುರೇಶ್ ಡುಗನ್ಕರ್, ದೇವೇಂದ್ರ ಮುದವಾಳ, ಯಶವಂತ್ ಮಂದೇವಾಲ, ದೇವು ಬಡಿಗೇರ್, ಶರಣಬಸಪ್ಪ ಲಕನಪುರ್, ಮಿಲಿಂದ ಸಾಗರ್, ಸೇರಿದಂತೆ ಅನೇಕರಿದ್ದರು.
ಜನವರಿಯಿಂದ ಹಣಕಾಸು ಕ್ಷೇತ್ರದಲ್ಲಿ ಜಾರಿಯಾಗುವ ಹೊಸ ನಿಯಮಗಳು ಯಾವುವು?; ಇಲ್ಲಿದೆ ಮಾಹಿತಿ...
ಹೊಸ ನೀತಿಯಲ್ಲಿ ಸ್ಥಿರ ಠೇವಣಿ ದರಗಳಲ್ಲಿ ಬದಲಾವಣೆ, ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯ, 8ನೇ ವೇತನ ಆಯೋಗದ ಜಾರಿ ಮೊದಲಾದವು ಸೇರಿವೆ. ಮುಂದಿನ ವರ್ಷ ಜನವರಿ 1ರಿಂದ ಹಣಕಾಸು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ಬರುವಂತೆ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಿಗಳು ಮತ್ತು ರೈತರಿಗೆ ಸಂಬಂಧಿಸಿದ ನಿಯಮಗಳು ಸೇರಿವೆ. ಹೊಸ ನೀತಿಯಲ್ಲಿ ಸ್ಥಿರ ಠೇವಣಿ ದರಗಳಲ್ಲಿ ಬದಲಾವಣೆ, ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯ, 8ನೇ ವೇತನ ಆಯೋಗದ ಜಾರಿ ಮತ್ತು ಪ್ರಧಾನ ಮಂತ್ರಿ ಕಿಸಾನ್ ಐಡಿಗಳಲ್ಲಿನ ಬದಲಾವಣೆ ಸೇರಿದೆ. ►ವಾರಕ್ಕೊಮ್ಮೆ ಸಿಬಿಲ್ ಅಪ್ಡೇಟ್ ಕ್ರೆಡಿಟ್ ಸ್ಕೋರ್ ಏಜೆನ್ಸಿಗಳು (CIBIL) ಇಷ್ಟು ದಿನ ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಡೇಟಾವನ್ನು ನವೀಕರಿಸುತ್ತಿದ್ದವು. ಆದರೆ ಇನ್ನು ಹೊಸ ವರ್ಷದಿಂದ ಡೇಟಾಗಳು ಪ್ರತಿ ವಾರ ನವೀಕರಣಗೊಳ್ಳುತ್ತವೆ. ಇದು ಸಾಲ ಪಡೆದವರ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿಯಲು ನೆರವಾಗುತ್ತದೆ. ಎಸ್ಬಿಐ, ಪಿಎನ್ಬಿ ಮತ್ತು ಎಚ್ಡಿಎಫ್ಸಿ ಸೇರಿ ಹಲವು ಬ್ಯಾಂಕ್ಗಳು ಸಾಲದ ಬಡ್ಡಿದರವನ್ನು ಕಡಿಮೆ ಮಾಡುತ್ತಿದ್ದು, 2026ರಲ್ಲಿ ಬದಲಾವಣೆಯನ್ನು ಕಾಣಬಹುದು. ಇದರ ಜೊತೆಗೆ ಸ್ಥಿರ ಠೇವಣಿ ಬಡ್ಡಿದರವೂ ಪರಿಷ್ಕರಣೆಗೊಳ್ಳುತ್ತಿದೆ. ಯುಪಿಐ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿ ಪ್ಯಾನ್, ಆಧಾರ್ ಲಿಂಕ್ ಇಲ್ಲದೆ ಬ್ಯಾಂಕ್ ಮತ್ತು ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟವಾಗಲಿದೆ. ವಂಚನೆ ಮತ್ತು ದುರುಪಯೋಗ ತಡೆಯಲು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂನಂತಹ ವೇದಿಕೆಯಲ್ಲಿ ಬಳಸಲು ಸಿಮ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ► ಸಾಮಾಜಿಕ ಮಾಧ್ಯಮ ಮತ್ತು ಟ್ರಾಫಿಕ್ ಸರ್ಕಾರವು ಆಸ್ಟ್ರೇಲಿಯ ಮತ್ತು ಮಲೇಷ್ಯಾದಲ್ಲಿರುವಂತೆ 16ನೇ ವಯಸ್ಸಿಗಿಂತ ಕೆಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಸದಂತೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಸಾಮಾಜಿಕ ಮಾಧ್ಯಮಗಳಿಗೆ ವಯಸ್ಸು ಆಧರಿತ ಮಿತಿ ಮತ್ತು ಪೋಷಕರ ನಿಯಂತ್ರಣಗಳನ್ನು ಹೇರಲು ಚರ್ಚೆಗಳು ನಡೆಯುತ್ತಿವೆ. ಬಹಳಷ್ಟು ನಗರಗಳು ಡೀಸೆಲ್ ಮತ್ತು ಪೆಟ್ರೋಲ್ನ ವಾಣಿಜ್ಯ ವಾಹನಗಳ ಆಗಮನವನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ. ದೆಹಲಿ ಮತ್ತು ನೋಯ್ಡಾದಲ್ಲಿ ಮಾಲಿನ್ಯವನ್ನು ತಡೆಯಲು ಪೆಟ್ರೋಲ್ ವಾಹನಗಳ ಡೆಲಿವರಿಗೆ ಮಿತಿ ಹೇರುವ ಸಾಧ್ಯತೆಯಿದೆ. ► 8ನೇ ವೇತನ ಆಯೋಗ ಜಾರಿ 7ನೇ ವೇತನ ಆಯೋಗವು ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳುವ ಕಾರಣದಿಂದ ಜನವರಿ 1ರಿಂದ 8ನೇ ವೇತನ ಆಯೋಗದ ಜಾರಿಗೆ ಬರುವ ಸಾಧ್ಯತೆಯಿದೆ. ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಾಗಲಿರುವುದರಿಂದ ಹಣದುಬ್ಬರದ ಸಂದರ್ಭದಲ್ಲಿ ವೇತನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳು ದಿನಗೂಲಿ ಮತ್ತು ಅರೆಕಾಲಿಕ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ► ರೈತರಿಗೆ ಬೆಳೆ ವಿಮೆ ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕಂತುಗಳನ್ನು ಪಡೆಯಲು ವಿಶೇಷ ಐಡಿಯನ್ನು ನೀಡುವ ಸಾಧ್ಯತೆಯಿದೆ. ಐಡಿಗಳು ಇಲ್ಲದವರಿಗೆ ಸಾಲದ ಮೊತ್ತ ಸಿಗದೆ ಇರಬಹುದು. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ವನ್ಯಜೀವಿಗಳಿಂದ ಹಾಳಾದ ಬೆಳೆಗೆ ಪರಿಹಾರ ನೀಡುವ ಸಾಧ್ಯತೆಯಿದೆ. ಆದರೆ ವನ್ಯಜೀವಿಗಳಿಂದ ಬೆಳೆ ಹಾಳಾದ 72 ಗಂಟೆಗಳಲ್ಲಿ ಅದನ್ನು ವರದಿ ಮಾಡುವ ಅಗತ್ಯವಿರುತ್ತದೆ. ► ಆದಾಯ ತೆರಿಗೆ ಫಾರ್ಮ್ ನಲ್ಲಿ ಖರ್ಚು ವೆಚ್ಚದ ವಿವರ ಆದಾಯ ತೆರಿಗೆ ಇಲಾಖೆಯು ‘ಆದಾಯ ತೆರಿಗೆ ಕಾಯ್ದೆ-2025’ರ ಅಡಿಯಲ್ಲಿ ಸರಳೀಕೃತ ಐಟಿಆರ್ ಫಾರ್ಮ್ ಹಾಗೂ ನಿಯಮಗಳ ಜಾರಿ ಕುರಿತು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ. ಇದು ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಹೊಸ ಕಾನೂನಿನ ಅಡಿಯಲ್ಲಿ ಬ್ಯಾಂಕಿಂಗ್ ಮತ್ತು ಖರ್ಚು ವೆಚ್ಚಗಳ ವಿವರ ಮೊದಲೇ ತುಂಬಿಸಿರುವ ಐಟಿಆರ್ ರಿಟರ್ನ್ ಫಾರ್ಮ್ ಗಳು ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸಲಿದೆ. ಅಲ್ಲದೆ 1961ರಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲಿದೆ. ಆದರೆ ಹಣಕಾಸು ವ್ಯವಹಾರಗಳ ಕುರಿತ ತನಿಖೆಯ ಸಾಧ್ಯತೆ ಹೆಚ್ಚಾಗಲಿದೆ. ಎಲ್ಪಿಜಿ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಜನವರಿ 1ರಿಂದ ಪರಿಷ್ಕರಿಸಲಾಗುವುದು. ಅದೇ ದಿನವೇ ವಾಯುಯಾನ ಟರ್ಬೈನ್ ಫ್ಯೂಯೆಲ್ (ಎಟಿಎಫ್) ಬೆಲೆಗಳು ನವೀಕರಣಗೊಳ್ಳಲಿವೆ. ಹೀಗಾಗಿ ವಾಯುಯಾನ ದರಗಳ ಬೆಲೆಯ ಮೇಲೆ ಪರಿಣಾಮ ಬೀರಿ ಪರೋಕ್ಷವಾಗಿ ಗೃಹೋಪಯೋಗಿ ಬಜೆಟ್ಗಳು ಹೆಚ್ಚಾಗಲಿವೆ.
ಕಿಕ್ಕಿರಿದ ಜನ, ಉಸಿರಾಡೋಕು ಜಾಗವಿಲ್ಲ; ಜನರಲ್ ಬೋಗಿ ರೈಲಿನ ಪ್ರಯಾಣದ ಬಗ್ಗೆ ಕೀನ್ಯಾ ವ್ಲಾಗರ್ ಟೀಕೆ
ಭಾರತದ ರೈಲ್ವೆಯ ಜನರಲ್ ಬೋಗಿಯಲ್ಲಿನ ಅತಿಯಾದ ಜನದಟ್ಟಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೀನ್ಯಾದ ವ್ಲಾಗರ್ ವಿನ್ ಸೌಲ್, 30 ಗಂಟೆಗಳ ಕಾಲ ಅತೀವ ದಟ್ಟಣೆಯ ನಡುವೆ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡಿದ್ದು, ಜಾಗವಿಲ್ಲದ ಕಾರಣ ಅಪರಿಚಿತ ವ್ಯಕ್ತಿಯೊಬ್ಬರು ಇವರ ಮಡಿಲಲ್ಲಿ ಮಲಗಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ಏರ್ ಪ್ಯೂರಿಫೈಯರ್ಗಳ ಮೇಲಿನ ಜಿಎಸ್ಟಿ ಕಡಿತಕ್ಕೆ ಕೇಂದ್ರದಿಂದ ವಿರೋಧ
“ಇದು ವೈದ್ಯಕೀಯ ಸಾಧನವಲ್ಲ” ಎಂದು ದಿಲ್ಲಿ ಹೈಕೋರ್ಟ್ಗೆ ತಿಳಿಸಿದ ಕೇಂದ್ರ ಸರಕಾರ
Ukraine War: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಕ್ರೋಶ
ಕೀವ್: ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಸಾರಿ ಇನ್ನೇನು 4 ವರ್ಷಗಳು ಪೂರ್ಣಗೊಳ್ಳಲಿದೆ. ಇಂತಹ ಸಮಯದಲ್ಲಿ ಈ ಭಯಾನಕ ಕದನ ನಿಲ್ಲಿಸಬೇಕು ಎಂಬ ಪ್ರಯತ್ನದಲ್ಲಿ ಅಮೆರಿಕ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದೆ. ಅತ್ತ ಉಕ್ರೇನ್ ಅಧ್ಯಕ್ಷನ ಮನವೊಲಿಸಿ, ಇತ್ತ ರಷ್ಯಾ ಅಧ್ಯಕ್ಷರನ್ನ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲು ಟ್ರಂಪ್ ಆಡಳಿತ ಪರದಾಡುತ್ತಿದೆ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ನೀಡಿರುವ
ಮನಮೋಹನ್ ಸಿಂಗ್ ರನ್ನು ಅಪಖ್ಯಾತಿಗೊಳಿಸಿದ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಶಾಂತ್ ಭೂಷಣ್
ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಪಖ್ಯಾತಿಗೊಳಿಸಲು ಕಾರಣವಾದ ರಾಜಕೀಯ ಚಳವಳಿಯಲ್ಲಿ ತಾವು ಭಾಗವಹಿಸಿದ್ದುದಕ್ಕೆ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ವಿಷಾದ ವ್ಯಕ್ತಪಡಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಮೊದಲ ಪುಣ್ಯತಿಥಿಯಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಪ್ರಶಾಂತ್ ಭೂಷಣ್ ಅವರು ಸಿಂಗ್ ಅವರನ್ನು “ವಿನಮ್ರ, ಸಭ್ಯ, ಸುಶಿಕ್ಷಿತ ಹಾಗೂ ಘನ ವ್ಯಕ್ತಿತ್ವದ ನಾಯಕ” ಎಂದು ವರ್ಣಿಸಿದ್ದಾರೆ. ಆದರೆ ಅವರ ಈ ವಿನಮ್ರತೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿ, ಸಾರ್ವಜನಿಕ ಜೀವನದಲ್ಲಿ ಅವರನ್ನು ನಿಂದಿಸಲಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಮನಮೋಹನ್ ಸಿಂಗ್ ಅವರನ್ನು ಅಪಖ್ಯಾತಿಗೊಳಿಸಲು ನೆರವಾದ ಚಳವಳಿಯೊಂದರಲ್ಲಿ ನಾನು ಭಾಗಿಯಾಗಿದ್ದೆ. ಅದರ ಪರಿಣಾಮವಾಗಿ ಒಂದು ರಾಕ್ಷಸಸ್ವರೂಪದ ಆಡಳಿತ ಅಧಿಕಾರಕ್ಕೆ ಬರಲು ಸಹಕಾರವಾದಂತಾಗಿದೆ. ಇದಕ್ಕಾಗಿ ನನಗೆ ವಿಷಾದವಿದೆ,” ಎಂದು ಭೂಷಣ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಭೂಷಣ್ ಅವರ ಈ ಹೇಳಿಕೆಯನ್ನು, ಸಿಂಗ್ ಅವರ ನೇತೃತ್ವದ ಎರಡನೇ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಎರಡನೇ ಅವಧಿಯಲ್ಲಿ ತೀವ್ರಗೊಂಡಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉಲ್ಲೇಖಿಸಿ ಪ್ರಶಾಂತ್ ಭೂಷಣ್ ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಈ ಚಳವಳಿ, ಕೇಂದ್ರ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಪ್ರಧಾನ ವಿಷಯವಾಗಿಸಿಕೊಂಡಿತ್ತು. ಈ ಚಳವಳಿ ದೇಶದ ರಾಜಕೀಯ ವಾತಾವರಣವನ್ನು ಪುನರ್ ಸೃಷ್ಟಿಸಿದ್ದು , ಅದರ ಪರಿಣಾಮವಾಗಿ ಮನಮೋಹನ್ ಸಿಂಗ್ ಅವರ ನಾಯಕತ್ವಕ್ಕೆ ಹಿನ್ನಡೆಯಾಯಿತು. ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ದಾರಿ ಮಾಡಿಕೊಟ್ಟಿತು ಎಂಬ ಅಭಿಪ್ರಾಯವನ್ನು ಹಲವು ವಿಮರ್ಶಕರು ವ್ಯಕ್ತಪಡಿಸಿದ್ದಾರೆ. 2004ರಿಂದ 2014ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು, ಮಿತಭಾಷೆಯ ಆಡಳಿತ ಶೈಲಿಯ ಮೂಲಕ ಭಾರತದ ಆರ್ಥಿಕ ಸುಧಾರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮುನಿತಿಮ್ಮಕ್ಕನ ವೈಚಾರಿಕ ಗೂಂಡಾಗಿರಿ
ಮುನಿತಿಮ್ಮಕ್ಕ ತುಂಬಾ ಖರಾಮತ್ ಹೆಂಗಸಾಗಿದ್ದಳು. ಸ್ವಲ್ಪ ಒರಟಾಗಿ ಮಾತಾಡಿದರೂ ಆಕೆಯ ಮಾತುಗಳಲ್ಲಿ ಖಚಿತತೆ ಇರುತ್ತಿತ್ತು. ಎಂಥಾ ಕಷ್ಟ ಬಂದರೂ ಅಕ್ಕಪಕ್ಕದವರ ಸಹಾಯ ಕೋರುತ್ತಿರಲಿಲ್ಲ. ಕೆಲವೊಮ್ಮೆ ತುಂಬಾ ವಿಕ್ಷಿಪ್ತವಾಗಿ ವರ್ತಿಸುತ್ತಿದ್ದಳು. ಸಮರಾತ್ರಿ, ಬೆಳಕುಹರಿಯುವವರೆಗೂ ತನಗೆ ತಾನೆ ಏನೇನೋ ಮಾತಾಡುತ್ತಿದ್ದಳು. ಕೆಲವೊಮ್ಮೆ ಈಕೆ ಉರ್ದು, ತಮಿಳು ಇನ್ನೂ ಅರ್ಥವಾಗದ ಭಾಷೆಗಳಲ್ಲಿ ಏಕಾಂಗಿಯಾಗಿ ತನಗೆ ತಾನೇ ಆರೋಪಿಸಿಕೊಂಡು ಮಾತನಾಡುತ್ತಿದ್ದಳು. ಗಂಗಪ್ಪ ತಳವಾರ್ ತನ್ನ ಬರಹಗಳ ಮೂಲಕ ಜಗದ ನೋವಿನ ತಂಬೂರಿಯನ್ನು ಮೀಟುವ ಗಂಗಪ್ಪ ತಳವಾರ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದವರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ‘ಧಾವತಿ’ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಚಿರಪರಿಚಿತರು. ‘ಮೋಹನ ಗಾನ’ ವ್ಯಕ್ತಿ ಬರಹ. ಗಟ್ಟಹಳ್ಳಿ ಅಂಜನಪ್ಪನವರ ಸುಜ್ಞಾನ ಬೋಧ ತತ್ವ ಪದಗಳ ಸಂಪುಟವನ್ನು ಇವರು ಪ್ರಕಟಿಸಿದ್ದಾರೆ. ಆದಿಮ ಸಂಸ್ಥೆಯ ಜೊತೆಗೆ ಕರುಳ ಸಂಬಂಧ ಬೆಸೆದಿರುವ ಇವರ ‘ಜಗದ ತಂಬೂರಿ’ ಪದ್ಯ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮುನಿತಿಮ್ಮಕ್ಕ ಎನ್ನುವ ಮಹಿಳೆಯ ವರ್ಣರಂಜಿತ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಬದುಕಿನ ನೋವು ಸಂಕಟಗಳನ್ನು ತಳವಾರ್ ಇಲ್ಲಿ ಕಟ್ಟಿಕೊಡುತ್ತಾರೆ. ಮುನಿತಿಮ್ಮಕ್ಕ ಪ್ರಾಯದಲ್ಲೇ ಗಂಡನನ್ನು ಕಳಕೊಂಡವಳು. ಯಾರ ಹಂಗಿಗೂ ಬೀಳದೆ ಸೊಪ್ಪುಸೊದೆ, ಕಾಯಿಕಸರು ಮಾರಿ ಹೊಟ್ಟೆಹೊರುತ್ತಿದ್ದಳು. ಈಕೆ ಈ ಹಿಂದೆ ನಮ್ಮೂರಿನ ಅವಧೂತ ಕೃಷ್ಣಸ್ವಾಮಿ ಮಠದಲ್ಲಿ ವಾಸವಾಗಿದ್ದಳು. ಆಕೆಯ ಬಳಿ ಅವರ ತಾಯಿಂದ ಬಳುವಳಿಯಾಗಿ ಬಂದಿದ್ದ ಮರದ ಪೆಟ್ಟಿಗೆ ಇತ್ತು. ಆಕೆ ಸಂಸಾರದ ಎಲ್ಲಾ ಪಾತ್ರೆ ಪಗಾರ, ತಟ್ಟೆ, ಗ್ಲಾಸನ್ನು ಈ ಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಳು. ನನಗೆ ಬುದ್ಧಿ ಹುಟ್ಟಿದಂದಿನಿಂದ ಈಕೆ ಶಾಶ್ವತವಾಗಿ ಎಲ್ಲೂ ನೆಲೆಯೂರಿರಲಿಲ್ಲ. ಪಾಳುಬಿದ್ದ ಮಂಟಪ, ಊರಾಚೆಗಿನ ಗುಡಿಗಳೇ ಈಕೆಯ ಮೆಚ್ಚಿನ ತಾಣಗಳಾಗಿದ್ದವು. ಈಕೆ ಸದಾ ಅಲೆಮಾರಿಯಂತೆ ಊರೂರು, ಹಳ್ಳಿ ಕಡೆ ಹಣ್ಣು ತರಕಾರಿ ಮಾರುತ್ತಿದ್ದಳು. ಒಂದು ಸರ್ತಿ ಗಂಟುಮೂಟೆ ಕಟ್ಟಿ ಊರು ಬಿಟ್ಟರೆ ಮತ್ತೆ ಹಲವು ತಿಂಗಳುಗಳ ಕಾಲ ಊರಿಗೆ ವಾಪಸ್ ಆಗುತ್ತಿರಲಿಲ್ಲ. ಈಕೆಯ ಅಣ್ಣನ ಹೆಸರು ವೆಂಕಟಗಿರೆಪ್ಪ. ಈತನ ಮನೆ ನಮ್ಮ ಮನೆ ಪಕ್ಕದಲ್ಲಿತ್ತು. ಆ ಕಾಲಕ್ಕೆ ಈತ ಏಳನೇ ಇಯತ್ತೆಯನ್ನು ಪಾಸ್ ಮಾಡಿದ್ದ. ಕೇರಿಯ ಮೊದಲ ಅಕ್ಷರಸ್ಥನಾಗಿದ್ದ. ಈತ ಪ್ರತಿ ದಿನವೂ ದಿನಪತ್ರಿಕೆ, ಹಲವು ಪುಸ್ತಕಗಳನ್ನು ಓದುತ್ತಿದ್ದ. ಈತನು ಕೂಲಿ ಮಾಡಿದ್ದನ್ನು ನಾನು ಕಂಡಿದ್ದಿಲ್ಲ. ಮೊದಲ ಅಕ್ಷರಸ್ಥ ಸೊಂಬೇರಿ. ಈತ ಸೀಮೆ ಹಸು ಮೇಯಿಸಿಕೊಂಡಿದ್ದ. ಈತನ ಹೆಂಡತಿ ಬೀರಮ್ಮ ಸದಾ ಹುಲ್ಲು ತರುವುದರ ಜೊತೆ ಬಿಡುವಿದ್ದಾಗ ಕೂಲಿಗೆ ಹೋಗುತ್ತಿದ್ದಳು. ಈ ಮುನಿತಿಮ್ಮಕ್ಕಳಿಗೂ ಇವರ ಅಣ್ಣ ವೆಂಕಟಗಿರಿಗೂ ಮೊದಲಿನಿಂದಲೂ ಆಗಿಬರುತ್ತಿರಲಿಲ್ಲ. ಪ್ರತಿದಿನವೂ ಇವರ ಮಧ್ಯೆ ತಂಟೆ ತಗಾದೆಗಳು ಸಾಮಾನ್ಯವೆಂಬಂತೆ ಇದ್ದವು. ಕೆಲವೊಮ್ಮೆ ನನ್ನಪ್ಪ ಅವರ ಮನೆ ಎದುರು ನಿಂತು ‘ನಾವು ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ ಬ್ಯಾಡವಾ’ ಅಂತ ಗದುರುತ್ತಿದ್ದ. ಈ ವೆಂಕಟಗಿರಿ ನಮ್ಮಪ್ಪನಿಗೂ ಆಪ್ತನಾಗಿದ್ದ. ಹೀಗೆ ಅಣ್ಣನಿಂದ ಮುನಿತಿಮ್ಮಕ್ಕ ದೂರವಾಗಿ ದಿಕ್ಕುದೆಸೆಯಿಲ್ಲದೋರು, ಭಿಕ್ಷುಕರು, ಕುರುಡರು, ಕುಂಟರು ವಾಸಿಸಲು ಯೋಗ್ಯವಿದ್ದ ಅವಧೂತ ಕೃಷ್ಣಸ್ವಾಮಿ ಮಠದಲ್ಲಿ ಮಲಗುತ್ತಿದ್ದಳು. ಈ ಮಠಕ್ಕೆ ಈಕೆ ಖಾಯಂ ಸದಸ್ಯೆಯಾಗಿದ್ದಳು. ಈ ಮಠದಲ್ಲಿ ಕೆಲವು ಜನ ಭಂಗಿ ಸೇದುತ್ತಿದ್ದರು. ಕೆಲ ಯುವಕರು ಈ ಮಠದಲ್ಲಿ ಪ್ರಾಯದ ಹೆಂಗಸರನ್ನು ಕೆಣಕಲೆಂದೇ ಬರುತ್ತಿದ್ದರು. ಇವರ ಪುಂಡತನ, ನಿಲ್ಲದ ತೊಂದರೆಗಳಿಂದಾಗಿ ಮುನಿತಿಮ್ಮಕ್ಕ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಳು. ಮಠದ ದಾರಿಯಲ್ಲಿ ಸಾಗಿ ಹೋಗುವ ಕೆಲ ಊರ ಹಿರೀಕರು ‘‘ಏನು ತಿಮ್ಮಕ್ಕ ಅಷ್ಟೋ ಇಷ್ಟೋ ಮನೆ, ಹೊಲ ಐತೆ. ಎಲ್ಲಾ ಇದ್ದೂ ಈ ಥರ ಅನಾಥಳಂತೆ ಇದ್ದೀಯಲ್ಲೆ’’ ಎಂದಾಗ ‘‘ಇಲ್ಲ ಸ್ವಾಮೆ ಇಲ್ಲಿರುವಂಥವರು ನನ್ನ ಬಂಧುಗಳೇ’’ ಅಂತ ಅವರ ಬಾಯಿ ಮುಚ್ಚಿಸುತ್ತಿದ್ದಳು. ಈಕೆ ನಿತ್ಯವೂ ಹಳ್ಳಿ, ಸಂತೆ ಸುತ್ತಿ ಒಂದಿಷ್ಟು ಪುಡಿಗಾಸನ್ನು ಕೂಡಾಕುತ್ತಿದ್ದಳು. ತನ್ನ ಸಂಪಾದನೆಯ ಕಾಸನ್ನು ತನ್ನ ಮರದ ಪೆಟ್ಟಿಗೆಯಲ್ಲಿ ಇಡುತ್ತಿದ್ದಳು. ಈ ಮಠದ ಸುತ್ತಲಿದ್ದ ಕೆಲವು ಪುಂಡು ಪೋಕರಿಗಳು ಈಕೆಯ ಪೆಟ್ಟಿಗೆ ಒಡೆದು ಅದರಲ್ಲಿದ್ದ ಪಾತ್ರೆಪಗಡೆ, ಕಾಸು, ಧಾನ್ಯಗಳನ್ನು ಎಗರಿಸಿಕೊಂಡು ಹೋಗಿದ್ದರು. ಈಕೆಯ ಈ ಪಡಿಪಾಟಲು ನೋಡಿದ ಊರ ಹಿರಿಯರು ‘‘ಅಲ್ಲಮ್ಮಾ ನಿಮ್ಮನೆ ಹತ್ರ ಸಾಯೋ ಅಷ್ಟು ಜಾಗ ಐತೆ. ನಿಮ್ಮಣ್ಣನ ಜಮೀನಿನಲ್ಲಿ ನಿನಗೂ ಹಕ್ಕು ಐತೆ, ಇದನ್ನು ಕೇಳಾಕ ಊರಾಗ ಚಿಕ್ಕೋರು ದೊಡ್ಡೋರು ಯಾರು ಇಲ್ವಾ?’’ ಇಂತಹ ಮಾತುಗಳನ್ನು ಸಹಿಸದೆ ಮತ್ತೆ ಅವರಿಗಿದ್ದ ಸ್ವಲ್ಪ ಜಾಗದಲ್ಲಿ ಚಪ್ಪರ ಹಾಕಿಕೊಂಡಳು. ಸಹಾಯಕ್ಕೆ ಯಾರೊಬ್ಬರನ್ನೂ ಕರೆಯುತ್ತಿರಲಿಲ್ಲ. ಮರದ ಪೆಟ್ಟಿಗೆಯನ್ನು ಚಪ್ಪರದ ಕೆಳಗಿಟ್ಟು ಪ್ಲಾಸ್ಟಿಕ್ ಕವರನ್ನು ಪೆಟ್ಟಿಗೆಗೆ ಹೊದಿಸಿ ಅಲ್ಲೇ ಮಲಗುತ್ತಿದ್ದಳು. ಮಳೆ ಹತ್ತಿರವಾಗುತ್ತಿದ್ದಂತೆ ಮುನಿತಿಮ್ಮಕ್ಕ ಒಬ್ಬಳೇ ಮಂಕರಿ, ಸನಿಕೆ ಹೆಗಲಿಗೇರಿಸಿಕೊಂಡು ಪ್ರತಿನಿತ್ಯವೂ ಮಣ್ಣನ್ನು ತಂದು ಗುಡ್ಡೆ ಮಾಡಿ, ಸಣ್ಣಗೆ ಹಂದಿಗೂಡಿನಂತಹ ಗುಡಿಸಲು ಕಟ್ಟಿಕೊಂಡಿದ್ದಳು. ಮುನಿತಿಮ್ಮಕ್ಕ ತುಂಬಾ ಖರಾಮತ್ ಹೆಂಗಸಾಗಿದ್ದಳು. ಸ್ವಲ್ಪ ಒರಟಾಗಿ ಮಾತಾಡಿದರೂ ಆಕೆಯ ಮಾತುಗಳಲ್ಲಿ ಖಚಿತತೆ ಇರುತ್ತಿತ್ತು. ಎಂಥಾ ಕಷ್ಟ ಬಂದರೂ ಅಕ್ಕಪಕ್ಕದವರ ಸಹಾಯ ಕೋರುತ್ತಿರಲಿಲ್ಲ. ಕೆಲವೊಮ್ಮೆ ತುಂಬಾ ವಿಕ್ಷಿಪ್ತವಾಗಿ ವರ್ತಿಸುತ್ತಿದ್ದಳು. ಸಮರಾತ್ರಿ, ಬೆಳಕುಹರಿಯುವವರೆಗೂ ತನಗೆ ತಾನೆ ಏನೇನೋ ಮಾತಾಡುತ್ತಿದ್ದಳು. ಕೆಲವೊಮ್ಮೆ ಈಕೆ ಉರ್ದು, ತಮಿಳು ಇನ್ನೂ ಅರ್ಥವಾಗದ ಭಾಷೆಗಳಲ್ಲಿ ಏಕಾಂಗಿಯಾಗಿ ತನಗೆ ತಾನೇ ಆರೋಪಿಸಿಕೊಂಡು ಮಾತನಾಡುತ್ತಿದ್ದಳು. ಈಕೆಯ ಈ ವಿಕ್ಷಿಪ್ತ ನಡತೆಯಿಂದ ಕೇರಿ ಜನ ಇವಳಿಗೆ ‘ದೆವ್ವ ಮೆಟ್ಕೊಂಡಿದೆ ಅಂತಲೂ... ಇವಳು ಒಂಟಿಯಾಗಿ ಇದ್ದೂಇದ್ದೂ ಹುಚ್ಚಿ ಆಗಿದ್ದಾಳೆ’ ಎಂದೂ ಮಾತನಾಡಿಕೊಂಡರು. ಕೇರಿ ಜನ ಈಕೆಯನ್ನು ಯೆರ್ರಿ ತಿಮ್ಮಕ್ಕ (ಹುಚ್ಚು ತಿಮ್ಮಕ್ಕ) ಅಂತ ಕರೆಯುತ್ತಿದ್ದರು. ಈಕೆ ಬಾಯಲ್ಲಿ ಕೆಟ್ಟ ಮಾತುಗಳನ್ನು ಬಳಸಿ ಮಾತನಾಡುತ್ತಿದ್ದುದರಿಂದ ಕೇರಿ ಜನ ಇವಳೊಟ್ಟಿಗೆ ಮಾತು ಮುರಿದುಕೊಂಡಿದ್ದರು. ಇಲ್ಲಿ ಮಾತು ಮುರಿದುಕೊಂಡಿದ್ದು ತಿಮ್ಮಕ್ಕನೋ ಕೇರಿಯೋ ನನಗಂತೂ ಇದು ಅಸ್ಪಷ್ಟವೇ. ಇಲ್ಲಿಂದ ಈಕೆಯ ಮಾತು ಗೆಳತನ ಇದ್ದುದ್ದು, ಕೇರಿಯಲ್ಲಿ ಸಾಕಿಕೊಂಡಿದ್ದ ನಾಯಿ, ಕೋಳಿ, ಬೆಕ್ಕುಗಳ ಜೊತೆಯಲ್ಲಿ ಮಾತ್ರ. ಒಮ್ಮೆ ಹೀಗೆ ಜೋರು ಮಳೆ ಸುರಿತಿತ್ತು. ಮುನಿತಿಮ್ಮಕ್ಕ ಮಲಗಿದವಳು ಮಲಗಿದ ಹಾಗೆಯೇ ಇದ್ದಳು. ಪಕ್ಕದ ಮನೆ ಮುದುಕಿಯೊಬ್ಬಳು ‘ಯಾಕೆ ತಿಮ್ಮಿ ನೆನಿತಾ ಇದ್ದಿಯಾ; ನಮ್ಮ ವಪ್ಪಾರಿಗಾದ್ರೂ ಬಾ’.. ಅಂತ ಕರೆದಿದ್ದೇ ತಡ, ಇದನ್ನ ಕೇಳಿಸಿಕೊಂಡ ತಿಮ್ಮಕ್ಕ ಉಗ್ರಪ್ರತಾಪ ಶುರುವಿಟ್ಟು ‘‘ಲೇ ಸೂಳೆಮುಂಡೆ, ವರಾಂಡಾ ನಿನ ಮಿಂಡನದಲ್ಲ: ನೆನಿತಾ ಇರೋದು ನಾನು. ನನ್ನ ಹೆತ್ತಮಕ್ಕಳು (ನಾಯಿಗಳು) ಏನು ಮಾಡಿದ್ರು ಕರಿಬೇಕಿರೋದು ಮಕ್ಕಳನ್ನ... ತಿರುಬೋಕಿ ಮುಂಡೆ ನಿನ್ ಸೀರೆ ಕಿತ್ತಾಕ್ತೀನಿ’’ ಅಂತ ಗುಡುಗಿದಳು. ಮುದುಕಿ ಎದ್ದೂಬಿದ್ದೂ ಬಾಗಿಲು ಹಾಕಿಕೊಂಡಳು. ಈಕೆಗೆ ಸಮಾಧಾನವಿದ್ದರೆ ಮಾತ್ರ ಪ್ರತಿಕ್ರಿಯಿಸುತ್ತಿದ್ದಳು. ಇಲ್ಲವೆಂದರೆ ಕೆಟ್ಟಬೈಗುಳಗಳಿಂದ ಬೈಯುತ್ತಿದ್ದಳು. ಇದಕ್ಕೆಂದೇ ಈಕೆಯ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ‘‘ಈಕೆ ಸಂತೆಮಾಳದಲ್ಲಿ ಯಾಪಾರ ಅದೆಂಗೆ ಮಾಡ್ತಾಳೋ; ಇವಳತ್ರ ಯಾರು ತರಕಾರಿ ತಗೋತಾರೆ; ನಮ್ಮ ಕೇರಿಯಲ್ಲಿ ಮಾಡಿದ ರೀತಿ ಬೇರೆ ಕಡೆ ಮಾಡಿದರೆ ಇವಳ ಸೀರೆ ಕಿತ್ತಾಕ್ತಾರೆ’’ ಅಂತ ಕೇರಿಯ ಕೆಲ ಹೆಂಗಸರ ಗುಂಪು ಮಾತಾಡುತ್ತಿತ್ತು. ಈಕೆಯ ದಿನಚರಿ ತುಂಬಾ ವಿಶಿಷ್ಟವಾಗಿತ್ತು. ತಾನೇ ಕೈಯಾರೆ ಕಟ್ಟಿಕೊಂಡಿದ್ದ ಹಂದಿಗೂಡಿನಂತಹ ಪುಟ್ಟ ಮನೆಯಲ್ಲಿ ಮರದ ಪೆಟ್ಟಿಗೆ ಇಟ್ಟುಕೊಂಡಿದ್ದಳು. ಅದರಲ್ಲಿ ಕೇವಲ ಒಬ್ಬರು ಮಾತ್ರ ಮಲಗುವಷ್ಟು ಜಾಗವಿತ್ತು. ನಿತ್ಯವೂ ಈಕೆ ಊಟವನ್ನು ಸಮರಾತ್ರಿಗೆ ಮಾಡುತ್ತಿದ್ದಳು. ಊಟ ರೆಡಿ ಆದ್ಮೇಲೆ ಅದನ್ನು ತಟ್ಟೆಗೆ ಹಾಕ್ಕೊಂಡು ಗುಡಿಸಿಲಿನಿಂದ ‘ಪಿಳ್ಳಿ ಪಿಳ್ಳಿ, ಸಣ್ಣಿ ಸಣ್ಣಿ, ರಾಮಿ ರಾಮಿ, ದೇಕಾ ದೇಕಾ, ಚಿಕ್ಕು ಚಿಕ್ಕು, ಈರ.. ಈರ..... ಗೌರಿ ಗೌರಿ’ ಅಂತ ಹೆಸರಿಟ್ಟು, ನಾಯಿಗಳನ್ನು ಎಳೆ ಮಕ್ಕಳಂತೆ ಕರೆಯುತ್ತಿದ್ದಳು. ಹೆಸರು ಕಿವಿಗೆ ಬಿದ್ದಾಗ ಅವು ಕೇರಿಯ ಯಾವ ಭಾಗದಲ್ಲಿದ್ದರೂ ಈಕೆಯೆದುರು ಬಂದು ನಿಲ್ಲುತ್ತಿದ್ದವು. ನಾಯಿಗಳು, ನಾಯಿಮರಿಗಳು ತಿಂದ ನಂತರ ಈಕೆ ಉಣ್ಣುತ್ತಿದ್ದಳು. ಕೇರಿಯ ಎಲ್ಲಾ ನಾಯಿಗಳು ತುತ್ತು ಅನ್ನ ನೀಡುವ ಈಕೆಯ ಜೀವಕಾರುಣ್ಯ ಕಂಡ ನನ್ನ ಮನಸ್ಸು ‘ಹುಚ್ಚು ಇರುವುದು ಕೇರಿಗೆ ಹೊರತು ಈಕೆಗಲ್ಲ’ ಎಂದು ಆಗಾಗ ಯೋಚಿಸುತ್ತಿತ್ತು. ಈಕೆ ಎಂದಿಗೂ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳನ್ನು ಮಾಡಿದವಳಲ್ಲ. ಮಣ್ಣಗೋಡೆಗೆ ಕೈವಾರ ತಾತಯ್ಯನ ಪಟವನ್ನು ಸಿಕ್ಕಿಸಿದ್ದಳು. ಹಾಗಂತ ಆಕೆ ಯಾವುದೇ ಭಜನೆಗಳಿಗೆ ಹೋದವಳಲ್ಲ. ಈಭೂತಿ ಹಚ್ಚಿದವಳಲ್ಲ. ಊರಲ್ಲಿ ಜಾತ್ರೆ, ಕರಗ, ದೇವರ ಮೆರವಣಿಗೆ, ತೇರು ಅಂತಂದ್ರೆ ತನ್ನ ಮನೆಗೆ ಚಿಲಕ ಹಾಕಿ ಅದೇನೇನೋ ಬಾಯಿಗೆ ಬಂದ ಪದಗಳನ್ನು ನುಲಿಯುತ್ತಿದ್ದಳು. ಆ ಭಾಷೆಯಂತೂ ನನಗೆ ಅರ್ಥವಾಗುತ್ತಿರಲಿಲ್ಲ. ಈಕೆ ಮನೆ ಮುಂದೆ ತಲೆಮ್ಯಾಲೆ ದೇವರನ್ನು ಹೊತ್ತು ಯಾರಾದರೂ ಭಿಕ್ಷೆ ಕೇಳಿದಾಗ ತಲೆಮ್ಯಾಲೆ ಇರೋ ದೇವರ ಮೈಯಲ್ಲೂ ಬೆವರು ಕಿತ್ಕೊಂಡು ಬರೋ ಹಾಗೆ ಬೈಯುತ್ತಿದ್ದಳು. ಸದಾ ದೇವರಿಗೆ ಬೈಯುತ್ತಿದ್ದಳು. ಪರಿಚಿತ ಭಿಕ್ಷುಕರ್ಯಾರೂ ಈಕೆಯ ಮನೆ ಬಾಗಿಲ ಕಡೆ ಹೆಜ್ಜೆ ಹಾಕುತ್ತಿರಲಿಲ್ಲ. ಒಮ್ಮೆ ಗೌಡರ ಕೇರಿಯಲ್ಲಿ ಸೊಪ್ಪಿನ ಮೂಟೆ ಹೊತ್ತು ಹೋಗುತ್ತಿದ್ದಾಗ ಅಲ್ಲಿದ್ದ ಹೆಂಗಸೊಬ್ಬಳು ‘ಇದು ದೊಡ್ಡತಿರುಪತಿ ಪ್ರಸಾದ ತಗೋ ಕಣ್ಣಿಗೊತ್ತಿಕೊಂಡು ತಿನ್ನು ಒಳ್ಳೆಯದಾಗುತ್ತೆ’ ಅಂದಾಗ, ಕೆಂಡಾಮಂಡಲವಾದ ತಿಮ್ಮಕ್ಕ ‘ಏನೇ ಬೋಸುಡಿ ನೀನು ನನಗೆ ಯೇಲು ಕೊಡ್ತಿಯಾ! ನಿನ್ ಸೀರೆ ಕಿತ್ತಾಕ್ತೀನಿ’ ಅಂತ ಪ್ರಸಾದವನ್ನು ಆಕೆ ಮೇಲೆ ಎರಚಿ ಮನೆ ಕಡೆ ತಿರುಗಿದಳು. ಆ ಹೆಂಗಸಿನ ಯಜಮಾನ ಕೇರಿಗೆ ಬಂದು ತಿಮ್ಮಕ್ಕನನ್ನು ಜಾತಿ ಪದವನ್ನು ಬಳಸಿ ಹಿಗ್ಗಾಮುಗ್ಗಾ ಬಯ್ದು ಹೋದನು. ಇದರಿಂದ ಕೇರಿ ತುಂಬಾ ಮುಜುಗರ ಪಡುವಂತಾಯಿತು. ‘ಇವಳು ಮಾಡೋ ಹೇಲು ತಿನ್ನೋ ಕೆಲ್ಸಕ್ಕೆ ಅವನು ಜಾತಿಗೆ ಬಯ್ದು ಹೋದ’ ಅಂತ ತಿಮ್ಮಕ್ಕನಿಗೆ ಹಿಡಿ ಶಾಪ ಹಾಕುತ್ತಿದ್ದರು. ಹೀಗೆ... ಮುನಿ ತಿಮ್ಮಕ್ಕ ಊರು ಕೇರಿಗೆ ಬೇಡದವಳಾಗಿದ್ದಳು. ಈಕೆ ಎಂದಿಗೂ ಒಳ್ಳೆ ಸೀರೆ ಉಟ್ಕೊಂಡು ಬೀದಿಗೆ ಬಂದವಳಲ್ಲ. ಈಕೆಯ ಈ ವಿಕ್ಷಪ್ತ ನಡತೆ ಕೇರಿ ಗಂಡಸರಲ್ಲಿ ಅಸಹ್ಯ ಹುಟ್ಟಿಸಿತ್ತು. ಹಸಿದಾಗ ಮಾತ್ರ ಉಂಡು ತಿನ್ನುತ್ತಿದ್ದಳು. ಇಲ್ಲವೆಂದರೆ ರಾತ್ರಿಯಿಡೀ ಅಪರಿಚಿತ ಭಾಷೇಲಿ ಸುಪ್ರಭಾತ ಶುರುವಾಗುತ್ತಿತ್ತು. ಈ ಭಾಷೆ ಅವಳದೇ ಬೆಡಗಿನ ಭಾಷೆಯಾಗಿರುತ್ತಿತ್ತು. ‘ಕೋತಿ ತಿಮ್ಮಕ್ಕ’ ಆಗಿದ್ದು... ಒಮ್ಮೆ ಈಕೆ ಕೈವಾರ ಕ್ಷೇತ್ರ ನೋಡಲು ಹೋಗಿದ್ದಾಗ ಕೈವಾರ ಬೆಟ್ಟ ಇಳಿಯುವಾಗ ಅನಾಥವಾಗಿ ಬಿದ್ದಿದ್ದ ಕೋತಿಮರಿಯನ್ನು ಮನೆಗೆ ತಂದು ಸಾಕಿಕೊಂಡಿದ್ದಳು. ಈ ಕೋತಿ ತನ್ನ ತಾಯಿಯನ್ನು ಕಳೆದು ತಬ್ಬಲಿ ಆಗಿತ್ತು. ನಾವು ಇಸ್ಕೂಲು ಬಿಟ್ಟಾಗ ಈ ಕೋತಿಯನ್ನು ನೋಡಲು ಒಂದಿಷ್ಟು ಹುಡುಗರು ಆಕೆಯ ಗುಡಿಸಿಲ ಬಳಿ ನಿಂತು ಇಣುಕಿ ನೋಡುತ್ತಿದ್ದೆವು. ಬಾಗಿಲಿನಿಂದ ಹೊರಗೆ ಬಂದ ತಿಮ್ಮಕ್ಕ ‘ಲೇ ರಾಮಾ.. ನಿನ್ನ ನೋಡಾಕ ಕೋತಿಗಳು ಬಂದಿವೆ. ಹೊರಗೆ ಕಾಲಿಟ್ಟರೆ ನಿನ್ ಚರ್ಮ ಸುಲೀತಿನಿ’ ಅಂತ ಬಾಗಿಲು ಹಾಕುತ್ತಾ.. ನಮ್ಮನ್ನು ಕೋಲಿನಿಂದ ಓಡಿಸುತ್ತಿದ್ದಳು. ಕೆಲವೊಮ್ಮೆ ಈ ಕೋತಿಮರಿಯ ಮುಂದೆ ನಾವು ಕೂಡ ಸಣ್ಣ ಕೋತಿಗಳಾಗಿಬಿಡುತ್ತಿದ್ದೆವು. ಈಕೆ ಸಂತೆ ಕಡೆ ಹೋಗುವಾಗ ಈ ಕೋತಿ ಆಕೆಯ ಭುಜದ ಮೇಲೆ ಕೂರುತ್ತಿತ್ತು. ಅದಕ್ಕೆ ಮಗುವಿನಂತೆ ಬಟ್ಟೆ ತೊಡಿಸಿದ್ದಳು. ಈಕೆ ಬಸ್ಟಾಂಡ್, ಅಂಗಡಿ ಕಡೆ ಹೊರಟಾಗ ಸುತ್ತಲ ಜನರು ಅಚ್ಚರಿಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಬೀದಿಯಲ್ಲಿನ ಮಕ್ಕಳು ಬೆಲ್ಲಕ್ಕೆ ಬಿದ್ದ ಇರುವೆಗಳ ಹಾಗೇ ತಿಮ್ಮಕ್ಕನ ಹಿಂದೆ ಬೀಳುತ್ತಿದ್ದರು. ದಿನೇದಿನೇ ಸ್ಕೂಲು ಮಕ್ಕಳೆಲ್ಲಾ ತಿಮ್ಮಕ್ಕನ ಮನೆ ಹುಡುಕಿ ಬರುತ್ತಿದ್ದರು. ಪುಟಾಣಿ ಮಕ್ಕಳಿಗೆ ನಮ್ಮ ಕೇರಿ ಪ್ರವಾಸಿ ತಾಣವಾಗಿ ಬದಲಾಗಿತ್ತು. ತಿಮ್ಮಕ್ಕನ ಬಗ್ಗೆ ಗೊತ್ತಿಲ್ಲದವರು ಈಕೆ ಕೋತಿ ಆಡಿಸುವವಳೆಂದು ನಂಬುತ್ತಿದ್ದರು. ಯಾರಾದರೂ ಕೋತಿ ಕೈಗೆ ನೋಟನ್ನೋ ಕಾಸನ್ನೋ ಕೊಟ್ಟರೆ ಅದನ್ನು ಕಿತ್ತು ಅವರತ್ತ ಎಸೆಯುತ್ತಿದ್ದಳು. ಹೀಗೆ ಮುನಿ ತಿಮ್ಮಕ್ಕ ಕೋತಿ ಸಾಕಿಕೊಂಡಿದ್ದರಿಂದ ಕೇರಿಯಲ್ಲಿ ‘ಕೋತಿ ತಿಮ್ಮಕ್ಕ’ ಅಂತಲೇ ಹೆಸರಾದಳು. ಕೆಲವೊಮ್ಮೆ ತಿಮ್ಮಕ್ಕನ ಮಾತುಗಳು ದಾರ್ಶನಿಕವಾಗಿರುತ್ತಿದ್ದವು. ಕೋಳಿಜಾವದ ಹೊತ್ತಿಗೆ ತಾತಯ್ಯ ಮತ್ತು ವೀರಬ್ರಹ್ಮಯ್ಯನವರ ಕಾರ್ಣಿಕಗಳನ್ನು ಹೇಳುತ್ತಿದ್ದಳು. ನಮಗಾಗ ಈಕೆಯ ಭಾಷೆಯನ್ನು ಹಿಡಿಯುವುದೇ ಕಷ್ಟವಾಗಿತ್ತು. ಒಮ್ಮೆ ಈಕೆ ಕೆ.ಆರ್. ಪುರ (ಕೃಷ್ಣರಾಜಪುರ)(ಸಂತೆ)ಕ್ಕೆೆ ಹೋಗಿದ್ದಾಗ ಪ್ರಾಣಿ ದಯಾ ಸಂಘದವರು ಈಕೆಯ ಹತ್ರ ಇದ್ದ ಕೋತಿಯನ್ನು ಕಿತ್ಕೊಂಡು ಹೋದ್ರಂತೆ. ಅಂದಿನಿಂದ ಈಕೆ ದೈಹಿಕವಾಗಿ ಕುಗ್ಗಿ ಹೋಗಿದ್ದಳು. ಕೇರಿಯಲ್ಲಿ ಭೌತಿಕ ತೆವಲುಗಳಲ್ಲಿದ್ದಂಥ ಕಣ್ಣುಗಳಿಗೆ ತಿಮ್ಮಕ್ಕ ತೀರಾ ಅಸಹ್ಯಳಾಗಿಯೇ ಕಾಣುತ್ತಿದ್ದಳು. ಯಾವುದೇ ಆಡಂಬರಗಳಿಲ್ಲದೆ, ಭಿನ್ನ ದಾರಿ ಆದರೂ ಸರಳವಾಗಿ ಬದುಕುತ್ತಿದ್ದಳು. ಹೀಗೆ.. ಒಂದು ದಿನ ಈಕೆ ಗುಡಿಸಿಲಿನಿಂದ ಹೊರಗೆ ಬಾರದಿದ್ದಾಗ ಈಕೆಯ ಅತ್ತಿಗೆ ಸಣ್ಣ ಕೋಲಿನಿಂದ ಬಾಯಿ ತೆರೆದುಕೊಂಡೇ ಮಲಗಿದ್ದ ತಿಮ್ಮಕ್ಕಳನ್ನು ಕೋಲಲ್ಲಿ ಕದಲಿಸಿ ನೋಡಿದಳು. ಆಕೆ ತುಟಿಕ್ ಪಿಟಿಕ್ ಅನ್ನದೇ ಇದ್ದಾಗ ತಡಿಕೆ ಸರಿಸಿ ಗುಡಿಸಿಲ ಒಳಹೊಕ್ಕಿ ನೋಡಿದಾಗ ಆಗಲೇ ಮುನಿ ತಿಮ್ಮಕ್ಕಳ ಉಸಿರು ನಿಂತಿತ್ತು. ಆಕೆ ಎದೆಯ ಮೇಲೆ ಕೈವಾರ ತಾತಯ್ಯನ ಪಟವಿಟ್ಟುಕೊಂಡೇ ಉಸಿರು ಬಿಟ್ಟಿದ್ದಳು. ಈಕೆ ಸತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೆ. ಕೇರಿಯ ಜನರೆದುರು ಬಂಡಾಯ ಸಾರಿದ್ದ ತಿಮ್ಮಕ್ಕಳ ಸಾವು ಅಷ್ಟೇ ನಿಕೃಷ್ಟವಾಗಿತ್ತು. ಆ ದಿನ ಊರಲ್ಲಿ ಶಿವನ ತೇರು. ಊರಿಗೆ ದೊಡ್ಡೋರು ‘‘ಆದಷ್ಟು ಬೇಗ ರಾತ್ರಿಯೊಳಗೆ ಮಣ್ಣು ಮಾಡಬೇಕೆಂದು’’ ಆದೇಶ ರವಾನಿಸಿದರು. ಇಲ್ಲವೆಂದರೆ ತೇರಿಗೆ ಕೇಡು ಅಂತ ಮಾತಾಡಿಕೊಂಡರು. ಕೇರಿಯ ಒಂದಿಷ್ಟು ಯುವಕರು ಆಕೆಯ ಹೆಣವನ್ನು ಗುಡಿಸಿಲಿನಿಂದ ಹೊರಕ್ಕೆ ಸಾಗಿಸಿದರು. ಆಕೆ ಉಟ್ಟಿದ್ದ ಸೀರೆ ಆಕೆಯ ಚರ್ಮಕ್ಕೆ ಫೆವಿಕೋಲಿನಂತೆ ಅಂಟಿಕೊಂಡಿತ್ತು. ಅರ್ಜೆಂಟಾಗಿ ತಂದಿದ್ದ ಸಾವಿನ ಬಟ್ಟೆ ವ್ಯರ್ಥವಾಯಿತು. ಅಲ್ಲಿದ್ದ ಹಿರಿತಲೆಗಳು ಸೀರೆ ಚರ್ಮಕ್ಕೆ ಅಂಟಿಕೊಂಡಿದ್ದರಿಂದ ಸೀರೆ ಕಳಚಿದರೆ ಮಾಂಸದ ಸಮೇತ ನೆಲಕ್ಕೆ ಉದುರುವುದೆಂದು ಅನಾಮತ್ತಾಗಿ ಹೆಗಲ ಮೇಲೆ ಹೊತ್ತು ಸ್ಮಶಾನದ ಕಡೆ ನಡೆದರು. ಕಟ್ಟಿದ ಪಾಡಿಯನ್ನು ಸೈಕಲ್ಲಿಗೆ ಕಟ್ಟಿಕೊಂಡರು. ಗುಣಿ ಸಿದ್ಧವಾಗಿತ್ತು. ಯಾವುದೇ ಹೂವಿನ ಹಾರಗಳ್ಯಾವು ಆಕೆಯ ಮೇಲಿರಲಿಲ್ಲ. ಹೂ ಹಾಕುವಂತಹ ಗೆಳೆಯರು ತಿಮಕ್ಕಳಿಗೆ ಇರಲಿಲ್ಲ. ಈಕೆಯ ಅಣ್ಣ ವೆಂಕಟಗಿರಿ ಗುಣಿ ಸಾಂಗ್ಯಗಳನ್ನು ನೆರವೇರಿಸಿದ. ಯಾವುದೇ ತಮಟೆ, ನಗಾರಿಗಳ ಸದ್ದು ಅಲ್ಲಿರಲಿಲ್ಲ. ಕೇವಲ ನೀರವತೆಯಲ್ಲಿಯೇ ಸ್ಮಶಾನಕ್ಕೆ ತಂದರು. ಕೇರಿಯಿಂದ ಯಾವೊಬ್ಬ ಹೆಂಗಸೂ ಸಾವಿಗೆ ಬಂದಿರಲಿಲ್ಲ. ಕಣ್ಣು ಮಬ್ಬಾಗುತ್ತಿತ್ತು. ಬಹುಶಃ ಈ ಮಣ್ಣಿಗೆ ಹತ್ತಾರು ಜನ ಮಾತ್ರ ಇದ್ದರು. ನನ್ನಪ್ಪ ಸಾರಾಯಿ ಖರ್ಚಿಗೆ ಏನಾದರೂ ಸಿಗಬಹುದೆಂದು ಬಂದಂಗಿತ್ತು. ಕೇರಿಯ ತೋಟಿ ವೆಂಕಟ್ರೋಣಪ್ಪ ಕಣಗಿಲೆ ಗಿಡ ತಂದು ಗುಣಿ ಮೇಲೆ ನೆಟ್ಟು ನೀರುಣಿಸಿದ. ಅಷ್ಟೊತ್ತಿಗೆ ಯಾರೊಬ್ಬರ ಮುಖವನ್ನು ಗುರುತಿಸಲಾರದಷ್ಟು ಕತ್ತಲಾಗಿತ್ತು. ಗುಣಿ ಅಗೆದವರು ಮೋಟು ಬೀಡಿ ತುಟಿಗೆ ತಗಲಿಸಿ ಬೆಂಕಿಕಡ್ಡಿ ಗೀಚಿದರು. ಆ ಬೀಡಿ ಕಿಚ್ಚಿನ ಬೆಳಕಲ್ಲಿಯೇ ಮಣ್ಣು ಮಾಡಿ ಮನೆಗಳ ಕಡೆ ಹೆಜ್ಜೆ ಹಾಕಿದರು. ನಾನು ಅಪ್ಪನ ಹೆಜ್ಜೆಗಳ ಮೇಲೆ ಹೆಜ್ಜೆ ಹಾಕುತ್ತಾ ಮನೆ ಸೇರಿದೆ. ಯಾಕೋ ಆ ರಾತ್ರಿ ಊರ ಪರಸೆ ಸುತ್ತುವಂಥ ಸಂಭ್ರಮಗಳೇನೂ ನನ್ನಲ್ಲಿರಲಿಲ್ಲ. ಮುನಿತಿಮ್ಮಕ್ಕ ಮತ್ತಾಕೆಯ ಕೋತಿ ನನ್ಮಲೆ ನೆಗೆದು ಬಿದ್ದಂತಹ ಚಿತ್ರವೊಂದು ಕಣ್ಮುಂದೆ ಸರಿದು ಹೋಗುತ್ತಿತ್ತು.
ಕೊಚ್ಚಿ: ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಕೊಡಂಗನೂರು ವಾರ್ಡ್ ಕೌನ್ಸಿಲರ್ ವಿ.ವಿ. ರಾಜೇಶ್ ತಿರುವನಂತಪುರಂ ಮಹಾ ನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ವಿ.ವಿ. ರಾಜೇಶ್ ಅವರು 50 ಬಿಜೆಪಿ ಕೌನ್ಸಿಲರ್ಗಳು ಮತ್ತು ಒಬ್ಬ ಸ್ವತಂತ್ರ ಸದಸ್ಯರ ಬೆಂಬಲವನ್ನು ಪಡೆದಿದ್ದಾರೆ. ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ 17 ಮತಗಳನ್ನು ಪಡೆದರೆ, ಎಲ್ಡಿಎಫ್ ಮೇಯರ್ ಅಭ್ಯರ್ಥಿ ಆರ್ಪಿ ಶಿವಾಜಿ 29 ಮತಗಳನ್ನು ಪಡೆದಿದ್ದಾರೆ. ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಕೊಡಂಗನೂರು ವಾರ್ಡ್ ಕೌನ್ಸಿಲರ್ ವಿ.ವಿ. ರಾಜೇಶ್ ಅವರನ್ನು ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಹಾಗೂ ಕರುಮಂ ವಾರ್ಡ್ ಕೌನ್ಸಿಲರ್ ಜಿ.ಎಸ್. ಆಶಾ ನಾಥ್ ಅವರನ್ನು ಉಪ ಮೇಯರ್ ಹುದ್ದೆಗೆ ಬಿಜೆಪಿ ಹೆಸರಿಸಿತ್ತು.
ಕ್ರಿಸ್ಮಸ್ ಮರುದಿನವೇ ಷೇರುಪೇಟೆ ಇಳಿಕೆ, 367 ಅಂಕ ಕುಸಿದ ಸೆನ್ಸೆಕ್ಸ್; ಮಾರುಕಟ್ಟೆ ಪತನಕ್ಕೆ ಇಲ್ಲಿವೆ 4 ಕಾರಣಗಳು
ಶುಕ್ರವಾರದಂದು ಷೇರುಪೇಟೆಯಲ್ಲಿ ಲಾಭದ ನಗದೀಕರಣ ಮತ್ತು ವಿದೇಶಿ ಬಂಡವಾಳದ ಹೊರಹರಿವಿನ ಕಾರಣದಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ನಷ್ಟದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿವೆ. ಅಮೆರಿಕದ ಆರ್ಥಿಕತೆಯ ಚೇತರಿಕೆ ಮತ್ತು ಕಚ್ಚಾ ತೈಲ ಬೆಲೆಯ ಏರಿಕೆ ಭಾರತೀಯ ಮಾರುಕಟ್ಟೆಯ ಮೇಲೆ ಒತ್ತಡ ಹೇರಿದೆ. ಆದಾಗ್ಯೂ, ಕಳೆದ ಮೂರು ವಾರಗಳ ನಷ್ಟದ ಓಟಕ್ಕೆ ಬ್ರೇಕ್ ಹಾಕಿ, ಈ ವಾರ ಸೂಚ್ಯಂಕಗಳು ಶೇ. 0.4ರಷ್ಟು ಚೇತರಿಕೆ ಕಂಡಿರುವುದು ಸಮಾಧಾನಕರ ಸಂಗತಿಯಾಗಿದೆ.
ರಾಜಸ್ಥಾನ| ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಬಲಪಂಥೀಯ ಕಾರ್ಯಕರ್ತರು
ಜೈಪುರ: ರಾಜಸ್ಥಾನದ ನಾಗೌರ್ನಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕ್ರಿಸ್ಮಸ್ ಆಚರಣೆಗೆ ಬಲಪಂಥೀಯ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಶಾಲೆಯಲ್ಲಿ ಅಕ್ರಮ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಅಲಂಕಾರಿಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು Times of India ವರದಿ ಮಾಡಿದೆ. ಸ್ಥಳೀಯ ಪೊಲೀಸರ ಪ್ರಕಾರ, ಆರಂಭದಲ್ಲಿ ಬಜರಂಗದಳದ ಸದಸ್ಯರು ಎಂದು ಗುರುತಿಸಿಕೊಂಡ ಮೂವರು ವ್ಯಕ್ತಿಗಳು, ಸೇಂಟ್ ಕ್ಸೇವಿಯರ್ಸ್ ಶಾಲೆಗೆ ಆಗಮಿಸಿದರು. ಶಾಲೆಯು ಯಾವುದೇ ಮಿಷನರಿ ಟ್ರಸ್ಟ್ನ ಒಡೆತನದಲ್ಲಿರದೆ ಖಾಸಗಿ ಒಡೆತನದಲ್ಲಿತ್ತು. ಕ್ರಿಸ್ಮಸ್ ಆಚರಣೆಗಳಿಗೆ ಈ ಮೂವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಮತಾಂತರದ ನಡೆಯುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇತರರು ಕೂಡ ಅವರ ಜೊತೆ ಸೇರಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲಾ ಮಾಲಕ ಶೈತಾನ್ ರಾಮ್ ಚಂಗಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ದುಷ್ಕರ್ಮಿಗಳ ಗುಂಪು ಮಕ್ಕಳನ್ನು ಬೆದರಿಸಿ ಶಿಕ್ಷಕರೊಂದಿಗೆ ಗಲಾಟೆಯಲ್ಲಿ ತೊಡಗಿತ್ತು. ನಾನು ಸ್ಥಳಕ್ಕೆ ತೆರಳಿದಾಗ ಅವರು ನನ್ನ ಮೇಲೆ ಕೂಡ ಹಲ್ಲೆ ನಡೆಸಲು ಪ್ರಾರಂಭಿಸಿದರು. ಶಾಲಾ ಸಿಬ್ಬಂದಿ ಮೂವರು ವ್ಯಕ್ತಿಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಗುಂಪು ಸ್ಥಳದಿಂದ ತೆರಳುವ ಮೊದಲು ಬಲೂನ್ಗಳು ಸೇರಿದಂತೆ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳನ್ನು ಕಿತ್ತು ಹಾಕಿದೆ. ಮೇಜುಗಳು ಮತ್ತು ಸ್ಟೂಲ್ಗಳಿಗೆ ಹಾನಿ ಮಾಡಿದೆ. ಇದರಿಂದಾಗಿ ಅವ್ಯವಸ್ಥೆ ಉಂಟಾಗಿದೆ. ಘಟನೆ ಬಗ್ಗೆ ಶಾಲಾ ಸಿಬ್ಬಂದಿ ಕೊಟ್ವಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯನ್ನು ದೃಢಪಡಿಸಿದ ಕೊಟ್ವಾಲಿ ಪೊಲೀಸ್ ಠಾಣಾ ಎಸ್ಎಚ್ಒ ವೇದಪಾಲ್ ಶಿವರಾನ್, ಈ ಬಗ್ಗೆ ಶಾಲಾ ಆಡಳಿತ ಯಾವುದೇ ಲಿಖಿತ ದೂರು ದಾಖಲಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. राजस्थान मे शिक्षा के मंदिर सेंट जेवियर्स स्कूल मे क्रिसमस डे पर स्कूल पर बड़ा हमला , नागौर मे एक निजी स्कूल मे अचानक 10- 15 लोग आये और तोड़फोड़ शुरू कर दी , लाठी, डंडे लेकर आये लोगो ने स्कूल स्टाफ से मारपीट करते हुए धमकी दी , स्कूल मे 400 बच्चे मौजूद थे जो अब दहशत मे है , pic.twitter.com/sC2lnAqWFp — Nargis Bano (@Nargis_Bano78) December 25, 2025
ಅಮೆರಿಕಾಗೆ ವಲಸೆ ಹೋಗುವ ಭಾರತೀಯರಿಗೆ ವೀಸಾ ಖಾತ್ರಿಪಡಿಸುವ ಭರವಸೆ ನೀಡಿ ಹಣ ದೋಚುವ ವಂಚಕರ ಬಗ್ಗೆ ಅಮೆರಿಕಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ವೀಸಾ ಸಂದರ್ಶನಗಳು ಮುಂದೂಡಲ್ಪಟ್ಟಿರುವುದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಏಜೆನ್ಸಿಗಳಿಂದ ಎಚ್ಚರವಿರಬೇಕು. ಅಧಿಕೃತ ವೆಬ್ಸೈಟ್ಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಿ, ವಂಚನೆಗೆ ಒಳಗಾಗಬೇಡಿ ಎಂದು ಸೂಚಿಸಲಾಗಿದೆ.
Siddaramaiah : ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ: ಸಿದ್ದರಾಮಯ್ಯ ರಿಯಾಕ್ಷನ್
ದಾವಣಗೆರೆ, ಡಿಸೆಂಬರ್ 26: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು (ಶುಕ್ರವಾರ) ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ
ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ವೇಗಿಗಳ ದರ್ಬಾರ್! ಮೊದಲ ದಿನವೇ 20 ವಿಕೆಟ್ ಪತನ; 131 ವರ್ಷಗಳಲ್ಲಿ ಇದೇ ಪ್ರಥಮ!
Ashes 2025-26- ಮೆಲ್ಬರ್ನ್ ಕ್ರಿಕೆಟ್ ಮೈದಾನ(MCG) ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 20 ವಿಕೆಟ್ ಉರುಳಿವೆ! ಆ್ಯಶಸ್ ಇತಿಹಾಸದಲ್ಲೇ 131 ವರ್ಷಗಳ ಬಳಿಕ ಈ ರೀತಿ ನಡೆದಿದೆ. ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ ನಲ್ಲಿ 152 ರನ್ ಗಳಿಗೆ ಆಲೌಟ್ ಆದರೆ, ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 110 ರನ್ ಗಳಿಗೆ ಸರ್ವಪತನ ಕಂಡಿತು. ಒಟ್ಟಾರೆ ಪಂದ್ಯದಲ್ಲಿ ಆಸ್ಟ್ರೇಲಿಯಾ 46 ರನ್ ಗಳ ಮುನ್ನಡೆ ಸಾಧಿಸಿದ್ದರೂ ಪಂದ್ಯ ರೋಚಕ ಹಂತ ತಲುಪಿದೆ.
ಮೆಡಿಕಲ್ ಕಾಲೇಜು ಹೋರಾಟಕ್ಕೆ ಶತಕ : ಒಕ್ಕೊರಲಿನ ಧ್ವನಿಗೆ ಸ್ಪಂದಿಸುವುದೇ ಸರಕಾರ?
ವಿಜಯಪುರ, ಡಿ.25: ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಕೈ ಬಿಟ್ಟು ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸಾರಥ್ಯದಲ್ಲಿ ನಡೆಯುತ್ತಿರುವ ಹೋರಾಟ ಶತಕ ಪೂರ್ಣಗೊಳಿಸಿದೆ. ಹೋರಾಟಕ್ಕೆ ಸರಕಾರದ ಸ್ಪಂದನೆ ದೊರಕಿಲ್ಲ, ಆದರೆ ಹೋರಾಟಗಾರರ ಅದಮ್ಯ ಉತ್ಸಾಹ ಮಾತ್ರ ಕುಂದಿಲ್ಲ. ಧರಣಿ ನಿರತ ಹೋರಾಟಗಾರರು ವಿವಿಧ ಸ್ವರೂಪದ ಹೋರಾಟ ಮಾಡಿ ಸರಕಾರದ ಕಣ್ಣು ತೆರೆಯುವ ಕೆಲಸ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಧರಣಿ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರ ನಿವಾಸದ ಎದುರು ಧರಣಿ ನಡೆಸುವ ಕಾರ್ಯಯೋಜನೆಯನ್ನು ಹೋರಾಟಗಾರರು ರೂಪಿಸಿದ್ದರು. ಸದ್ಯ, ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಿ ಮೆಡಿಕಲ್ ಕಾಲೇಜು ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸಿರುವುದರಿಂದ ಅವರ ನಿವಾಸದ ಎದುರು ಧರಣಿ ನಡೆಸುವುದನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ. ಸಚಿವ ಡಾ.ಎಂ.ಬಿ. ಪಾಟೀಲ ಅವರೂ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದು, ನಾನು ಪಿಪಿಪಿ ಪರವಾಗಿಲ್ಲ. ಸರಕಾರಿ ಮೆಡಿಕಲ್ ಕಾಲೇಜು ಪರವಾಗಿಯೇ ಇದ್ದೇನೆೆ. ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವೆ. ಈ ಹಿಂದೆಯೂ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಪ್ರಬಲವಾಗಿ ಮಂಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ 150 ಎಕರೆ ಜಾಗ, ತಾಯಿ-ಮಕ್ಕಳ ಆಸ್ಪತ್ರೆ, 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ಹೀಗೆ ಹಲವಾರು ಸೌಲಭ್ಯಗಳಿವೆ. ಹೀಗಿರುವಾಗಿ ಕೆಲವೇ ಕೋಟಿ ಅನುದಾನ ನೀಡಿದರೆ ಸರಕಾರಿ ಕಾಲೇಜು ಆರಂಭವಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಿಗೆ ಸಾಕಷ್ಟು ಅನುದಾನ ನೀಡಿ, ಅಷ್ಟೇ ಅಲ್ಲದೇ ಜಮೀನು ಖರೀದಿಸಲು ಸಹ ಅನುದಾನ ನೀಡಿ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಎಲ್ಲ ಸೌಲಭ್ಯ ಇದ್ದರೂ ಮೀನಮೇಷ ಎಣಿಸುತ್ತಿರುವ ಸರಕಾರದ ಧೋರಣೆ ಪ್ರತಿಭಟನಾನಿರತರ ಅಸಮಧಾನಕ್ಕೆ ಕಾರಣವಾಗಿದೆ. ಲಿಖಿತ ಆದೇಶ ದೊರಕುವವರೆಗೂ ಹೋರಾಟ ನಿಲ್ಲದು ಹೋರಾಟ 100 ದಿನ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಸಹಿ ಸಂಗ್ರಹಣೆಗೆ ಮುಂದಾಗಿರುವ ಹೋರಾಟಗಾರರು ಲಿಖಿತವಾಗಿ ಅಥವಾ ಸಚಿವ ಸಂಪುಟದ ನಿರ್ಣಯ ಪ್ರತಿ ದೊರಕುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಕೇವಲ ಹೇಳಿಕೆಯಿಂದ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಹಿ ಸಂಗ್ರಹಣೆಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವಂತೆ ಕೋರಲಾಗುತ್ತದೆ. ಸ್ಪಷ್ಟವಾದ ಲಿಖಿತ ಭರವಸೆ ದೊರಕುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ. ನಗರ ಶಾಸಕರು ಹೊರತುಪಡಿಸಿ ಉಳಿದ ಶಾಸಕರ ಬೆಂಬಲ ಈಗ ಹೋರಾಟ 100 ದಿನ ತಲುಪಿದ್ದು, ಕಳೆದ 10 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಯುತ್ತಿದೆ, ಸಚಿವರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದೂ ಆಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊರತುಪಡಿಸಿ ಎಲ್ಲ ಶಾಸಕರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದನದಲ್ಲಿಯೇ ಪಿಪಿಪಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಶಾಸಕರು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ಸಹಭಾಗಿತ್ವ ನೀಡಿ, ಬಂಡವಾಳ ಹೂಡಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿದ್ದರು. ಹೀಗಾಗಿ ಅವರು ಹೋರಾಟದ ಸ್ಥಳಕ್ಕೆ ಸುಳಿದಿಲ್ಲ. ಆದರೆ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿದ್ದ ರಾಘವ ಅಣ್ಣಿಗೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಅದೇ ಸ್ಥಳದಿಂದ ನಗರ ಶಾಸಕರಿಗೆ ಪಿಪಿಪಿ ಪರ ಧೋರಣೆ ಕೈ ಬಿಡುವಂತೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದೂ ಇದೆ. ಹೋರಾಟಕ್ಕೆ 100 ದಿನ ಪೂರ್ಣ ಗೊಳ್ಳಲಿದ್ದು, ನಮ್ಮ ಹೋರಾಟ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗುವರೆಗೂ ನಡೆಯಲಿದೆ. ದಾಖಲೆ ಪ್ರಮಾಣದ ಚಳಿಯಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ. ಆದರೂ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. <ಲಲಿತಾ ಬಿಜ್ಜರಗಿ ಜಿಲ್ಲಾ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸದಸ್ಯರು, ವಿಜಯಪುರ ರಕ್ತದಲ್ಲೂ ಮನವಿ: ಚಳಿಗೂ ಕಾವು ಕಳೆದುಕೊಳ್ಳದ ಹೋರಾಟ ಕಳೆದ 100 ದಿನಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರು ಅನೇಕ ರೂಪದ ಹೋರಾಟ ಮಾಡಿದ್ದಾರೆ. ರಕ್ತದಲ್ಲಿ ಸಹಿ ಮಾಡಿದ್ದಾರೆ, ರಕ್ತದಲ್ಲಿಯೇ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಸಂದೇಶ ರವಾನಿಸಿದ್ದಾರೆ. ಕವಿಗೋಷ್ಠಿಯ ಮೂಲಕ ಸರಕಾರಕ್ಕೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಪ್ರತಿಕೃತಿ ದಹನ, ಪ್ರತಿಭಟನಾ ಮೆರವಣಿಗೆ ಅನೇಕ ಸ್ವರೂಪಗಳ ಹೋರಾಟಗಳು ನಡೆಯುತ್ತಿವೆ. ಕಳೆದ 10 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ದಾಖಲೆ ಪ್ರಮಾಣದ ಚಳಿಯಲ್ಲಿಯೂ ಹೋರಾಟಗಾರರು ಟೆಂಟ್ ಹಾಕಿ ಸ್ಥಳದಲ್ಲಿಯೇ ಇದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಅಗ್ನಿ ಕಾಯಿಸಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಪ್ರತಿಭಟನಾ ಸ್ಥಳದಲ್ಲಿ ಕಂಡು ಬರುತ್ತದೆ.
ಮಂಗಳೂರು ಪ್ರೆಸ್ಕ್ಲಬ್ ಸಮಾಚಾರ 7ನೇ ಸಂಚಿಕೆ ಬಿಡುಗಡೆ
ಮಂಗಳೂರು, ಡಿ.26: ಪ್ರೆಸ್ಕ್ಲಬ್ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ದಾಖಲೀಕರಣದ ‘ಮಂಗಳೂರು ಪ್ರೆಸ್ಕ್ಲಬ್’ ಸಮಾಚಾರದ 7ನೆ ಸಂಚಿಕೆಯನ್ನು ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಲಾಯಿತು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಂಚಿಕೆ ಬಿಡುಗಡೆ ಗೊಳಿಸಿ, ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ಅವರ ಕಾರ್ಯ ಚಟುವಟಿಕೆಗಳನ್ನು ದಾಖಲೆ ಮಾಡುವುದು ಉತ್ತಮ ಕಾರ್ಯ. ಮಾಡಿದ ಕೆಲಸಗಳನ್ನು ಈ ರೀತಿ ದಾಖಲೀಕರಣ ಮಾಡಿದಾಗ ನೆನಪಿಸಿಕೊಳ್ಳಲು ಸಾಧ್ಯ ಆಗುತ್ತದೆ ಎಂದವರು ಹೇಳಿದರು. ಮುಖ್ಯ ಅತಿಥಿಯಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಭಾಗವಹಿಸಿದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಭಾಸ್ಕರ ರೈ ಉಪಸ್ಥಿತರಿದ್ದರು. ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ; ರಾಜ್ಯ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸಲಿ : ಸಿಎಂ ಸಿದ್ದರಾಮಯ್ಯ
ದಾವಣಗೆರೆ : ಕೇಂದ್ರ ಸರಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಸರಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಹಿರಿಯೂರು ಬಸ್ ಅಪಘಾತ: ತನಿಖೆ ನಡೆಸಲಾಗುವುದು: ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ ಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಕಾಂಗ್ರೆಸ್ ನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಇಂದು ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಕಿನ್ನಿಗೋಳಿ: 60ನೇ ವರ್ಷದ ಸಾರ್ವಜನಿಕ ಕ್ರಿಸ್ಮಸ್ ಸಂಭ್ರಮ
ಕಿನ್ನಿಗೋಳಿ: ಇಲ್ಲಿನ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ನೇತೃತ್ವದಲ್ಲಿ ಮಂಗಳೂರು ಉತ್ತರ ವಲಯದ ಸ್ಥಳೀಯ 7 ಚರ್ಚ್ ಗಳು, ಕೊಸೆಸಮ್ಮನವರ ಚರ್ಚ್ ಕಿನ್ನಿಗೋಳಿ, ಜ್ಯೋತಿ ಮಹಿಳಾ ಮಂಡಳಿ, ಧರ್ಮಸ್ಥಳ ಸ್ವ-ಸಹಾಯ ಸಂಘ, ರಾಕ್ ಗೈಸ್ ಪದ್ಮನೂರು ಇವರುಗಳ ಸಹಯೋಗದೊಂದಿಗೆ 60ನೇ ವರ್ಷದ ಸಾರ್ವಜನಿಕ ಕ್ರಿಸ್ಮಸ್ ಸಂಭ್ರಮವು ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣ ಗುರುವಾರ ರಾತ್ರಿ ನಡೆಯಿತು. ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಪ್ರಕಾಶ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾಮ್ಸ್ ಸಲ್ದಾನಾ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಅಸ್ಪಯ್ಯದ್ ಅಬ್ದುಲ್ ರೆಹಮಾನ್, ಸಾದತ್ ಬಾಅಲವಿ ತಂಙಳ್ ಉಪಸ್ಥಿತರಿದ್ದು ಕ್ರಿಸ್ಮಸ್ ಸೌಹಾರ್ದ ಸಂದೇಶ ನೀಡಿದರು. ಇದೇ ಸಂದರ್ಭ ಎನ್ಐಟಿಕೆ ನೌಕರರ ಸಂಘದ ಮಾಜಿ ಅಧ್ಯಕ್ಷ ದಾಮೋದರ ಕೆ. ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ಆಂಬ್ಯುಲೆನ್ಸ್ ಚಾಲಕಕರಾದ ಆಲ್ವಿನ್ ಸುವಾರಿಸ್, ಡಾಕ್ಟರೇಟ್ ಪದವಿ ಪುರಸ್ಕೃತರಾದ ಡಾ. ವನಿತಾ ಶೆಟ್ಟಿ, ರಾಷ್ಟ್ರೀಯ ಪವರ್ ಲಿಸ್ಟರ್ ಸಿಂಥಿಯಾ ಕುಟಿನ್ಹಾ, ರ್ಯಾಂಕ್ ವಿಜೇತ ರೋಹಿತ್ ಪೂಜಾರಿ ಮೊದಲಾದವರನ್ನು ಸನ್ಮಾಸಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ.ಫಾ. ಓಸ್ವಾಲ್ಡ್ ಮೊಂತೆರೊ, ಕಿನ್ನಿಗೋಳಿ ಕೊಸೆಸಮ್ಮನವರ ಧರ್ಮಕೇಂದ್ರ ವಂದನೀಯ ಫಾ. ಜೋಕಿಂ ಫೆರ್ನಾಂಡಿಸ್, ದಾಯ್ದಿವರ್ಲ್ಡ್ ಮೀಡಿಯಾ ಫ್ರೈ.ಲಿ. ಸಂಸ್ಥಾಪಕ ವಾಲ್ಟರ್ ನಂದಳಿಕೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಪ್ರಕಾಶ್ ಡಿಸೋಜ, ಉಪಾಧ್ಯಕ್ಷ ದಾಮೋದರ ಶೆಟ್ಟಿ, ಗೌರವಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ಕಾವ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ವಸಂತ್ ಶೆಟ್ಟಿಗಾರ್, ಸಂಚಾಲಕರಾದ ಸರಿತಾ ಕೋಟ್ಯಾನ್, ಸ್ವಾಗತ ಸಮಿತಿಯ ಸಂಚಾಲಕ ಹೆರಿಕ್ ಪಾಯಸ್, ಮೆರವಣಿಗೆ ಸಮಿತಿ ಸಂಚಾಲಕ ಶೇಖರ ಪೂಜಾರಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ನವೀನ್ ಡಿಕೋಸ್ತ, ಹಣಕಾಸು ಸಮಿತಿ ಸಂಚಾಲಕ ಸಿಪ್ರಿಯನ್ ಡಿಸೋಜ, ಸಹ ಭೋಜನ ಸಮಿತಿ ಸಂಚಾಲಕ ರವಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಸಹಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕಿನ್ನಿಗೋಳಿ ಚರ್ಚ್ ಬಳಿಯಿಂದ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ವರೆಗೆ ಸೌಹಾರ್ದ ಮೆರವಣಿಗೆ ನಡೆಯಿತು.
ವಿಜಯ್ ಹಜಾರೆ ಪಂದ್ಯ ಬಿಟ್ಟು ಮೋದಿ ಭೇಟಿಗಾಗಿ ದಿಲ್ಲಿಗೆ ಹಾರಿದ ವೈಭವ್ ಸೂರ್ಯವಂಶಿ! ಯಾಕೆ? ಏನು ವಿಷಯ?
ಭಾರತೀಯ ಕ್ರಿಕೆಟ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರು ವಿಜಯ್ ಹಜಾರೆ ಪಂದ್ಯವನ್ನು ತ್ಯಜಿಸಿ ದೆಹಲಿಗೆ ತೆರಳಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ್ ಪ್ರಶಸ್ತಿ ಸ್ವೀಕರಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೋಜನ ಸವಿದರು. ವೈಭವ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರವಾಗಿ ಆಡುತ್ತಾ 190 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಮೂಡುಬಿದಿರೆ : ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಕವನ ಪಿ ಜೈನ್ ಉತ್ತೀರ್ಣ
ಮೂಡುಬಿದಿರೆ : ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಬ್ಲೊಸಮ್ ಆಂಗ್ಲ ಮಾಧ್ಯಮ ಶಾಲೆ, ಬೆಳುವಾಯಿಯ 9ನೇ ತರಗತಿ ವಿದ್ಯಾರ್ಥಿನಿ ಕವನ ಪಿ ಜೈನ್ ಉತ್ತೀರ್ಣರಾಗಿದ್ದಾರೆ. ಇವರು ನಾಗಶ್ರೀ ಪ್ರವೀಣ್ ಜೈನ್ ಇವರ ಪುತ್ರಿಯಾಗಿದ್ದು, ಶಾಲೆಯ ಮೊದಲ ಬ್ಲ್ಯಾಕ್ ಬೆಲ್ಟ್ ಪಡೆದ ವಿದ್ಯಾರ್ಥಿನಿಯಾಗಿದ್ದಾರೆ. ಮೂಡುಬಿದಿರೆಯಲ್ಲಿ ಏಪ್ರಿಲ್ 22 ಮತ್ತು 23 ರಂದು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಅಫ್ ಮಾರ್ಷಲ್ ಆರ್ಟ್ಸ್ ನಿಂದ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿ ಕವನ ಅವರು ಮಾಧವ ಅಳಿಕೆ ಮತ್ತು ವಿಕ್ಟರ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್ ಎನ್ ಇವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಆದಿಲ್ಶಾಹಿ ಸಾಹಿತ್ಯ: ಕನ್ನಡ ಅನುವಾದಗಳು
ಬಿಜಾಪುರ ಜೋ-ಎಕ್ ಶಹರಾಂ ಮೇ ಶಾಹ, ಕೆ ಹೈ ಹಪ್ತ್ ಆಖ್ಖಿಂ ಕಾ ತಖ್ತ್ಗಾ
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 16 ನಗರ ಹೊಸ ಬಸ್ಗಳಿಗೆ ಚಾಲನೆ: ಶಾಸಕ ಡಾ.ಶಿವರಾಜ ಎಸ್ ಪಾಟೀಲ್
ರಾಯಚೂರು, ಡಿ.26 : ರಾಯಚೂರು ನಗರದ ವಿವಿಧೆಡೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 16 ನಗರ ಹೊಸ ಬಸ್ಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ. ಶಿವರಾಜ ಎಸ್. ಪಾಟೀಲ್ ಅವರು ಹೇಳಿದರು. ಡಿ.26ರ ಶುಕ್ರವಾರ ದಂದು ನಗರದ ಕೆ.ಕೆ.ಆರ್.ಟಿ.ಸಿ ಮೂರನೇ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ 16 ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಗರ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮೇ ಟಾಟಾ ಮೋಟಾರ್ಸ್ ತಯಾರಿಕೆಯ ಹೊಸ ನಗರ ಸಾರಿಗೆ ಬಸ್ಸಗಳನ್ನು ಸೇರ್ಪಡೆಗೊಳಿಸುತ್ತಿರುವುದು ಸಂತಷದ ಸಂಗತಿಯಾಗಿದೆ. ಈ ಬಸ್ಗಳಿಗೆ 187 ಎಚ್.ಪಿ. ಸಾಮರ್ಥ್ಯದ ಬಿಎಸ್-6 ಎಂಜಿನ್ಗಳನ್ನು ಅಳವಡಿಸಲಾಗಿದ್ದು, ಈ ಬಸ್ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್- ಎಐಎಸ್-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ. ಈ ಬಸ್ ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿದ್ದು, ಎಲ್ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ನಾಗೊಳಿಸಲಾಗಿದೆ ಎಂದರು. ಈ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು ನಾಲ್ಕು ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸಿಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣಗಳನ್ನು, ರೀವರ್ಸ್ ಪಾಕಿಂಗ್ ಅಲರಾಮ್ ವ್ಯವಸ್ಥೆ ಹಾಗೂ ಲೋಕೆಶನ್ ಟ್ರಾಕಿಂಗ್, ಪ್ಯಾನಿಕ್ ಬಟನಗಳನ್ನು ಅಳವಡಿಸಲಾಗಿದೆ. ಬಸ್ ಗಳನ್ನು ಸರಿಯಾಗಿ ಉಪಯೋಗಿಸಬೇಕೆಂದು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ, ವೇಳೆ ನೂತನ ಬಸ್ಗಳಲ್ಲಿ ಶಾಸಕರು ಸಂಚರಿಸಿ ಬಸ್ ಗಳ ಗುಣಮಟ್ಟ ಪರೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ರವಿ ಜಲ್ದಾರ್, ರಾಯಚೂರು ವಿಭಾಗದ ಸಂಚಾರಿ ಅಧಿಕಾರಿ ಚಂದ್ರಶೇಖರ ಕೆ.ಎಲ್., ವಿಭಾಗದ ತಾಂತ್ರಿಕ ಅಭಿಯಂತರರಾದ ನಾಗರಾಜ್ ವರಾದ್, ಆಡಳಿತ ಅಧಿಕಾರಿ ದೇವರಾಜ್, ಡಿಪೋ ವ್ಯವಸ್ಥಾಪಕ ನಾನೇಗೌಡ, ಭದ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀನಿವಾಸ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.
ಉತ್ತರ ಪ್ರದೇಶ | ಕಾರ್ಯಕ್ರಮದಿಂದ ಪ್ರಧಾನಿ ಮೋದಿ ನಿರ್ಗಮಿಸುತ್ತಿದ್ದಂತೆ ಹೂವಿನ ಕುಂಡಗಳನ್ನು ಹೊತ್ತೊಯ್ದ ಜನರು
ಲಕ್ನೋ: ಗುರುವಾರ ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ ʼರಾಷ್ಟ್ರೀಯ ಪ್ರೇರಣಾ ಸ್ಥಳʼ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪ್ರಧಾನಿಯವರ ಭೇಟಿಗೆ ಮುಂಚಿತವಾಗಿ ನಗರದ ಅಂದವನ್ನು ಹೆಚ್ಚಿಸಲು ರಸ್ತೆಬದಿಗಳಲ್ಲಿ ಸಾಲಾಗಿ ಹೂವಿನ ಕುಂಡಗಳನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮ ಕೊನೆಗೊಂಡ ತಕ್ಷಣ ಜನರು ಹೂವಿನ ಕುಂಡಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ರಾಷ್ಟ್ರೀಯ ಪ್ರೇರಣಾ ಸ್ಥಳದಿಂದ ಹೂವಿನ ಕುಂಡಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ. ಈ ಕುರಿತ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಪ್ರೇರಣಾ ಸ್ಥಳದ ಉದ್ಘಾಟನೆಗಾಗಿ, ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA) ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಪ್ರೇರಣಾ ಸ್ಥಳ, ವಸಂತ್ ಕುಂಜ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುತ್ತಲೂ ಹಸಿರು ಕಾರಿಡಾರ್ ನ್ನು ನಿರ್ಮಿಸಿತ್ತು. ವಿವಿಧ ಹೂವುಗಳು ಮತ್ತು ಸಸ್ಯಗಳ ಸಣ್ಣ ಕುಂಡಗಳಿಂದ ಅಲಂಕರಿಸಲ್ಪಟ್ಟ ಅಲಂಕಾರಿಕ ವಸ್ತುಗಳನ್ನು ನೇತು ಹಾಕಲಾಗಿತ್ತು. ಆದರೆ, ಪ್ರಧಾನಿ ನಿರ್ಗಮಿಸಿದ ಕೂಡಲೇ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಡಿಲಿಸಿದ ನಂತರ, ಹಲವರು ಹೂವಿನ ಕುಂಡಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಈ ಘಟನೆಯು ನಾಗರಿಕರ ಪ್ರಜ್ಞೆಯ ಬಗ್ಗೆ ಮಾತ್ರವಲ್ಲದೆ, ಆಡಳಿತದ ಜವಾಬ್ಧಾರಿಗಳ ಬಗ್ಗೆ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ. तहजीब और नवाबों के शहर लखनऊ में लोग ऐसा कब से करने लगे? पीएम मोदी के लौट जाने के बाद लोग बाइकों पर लादकर गमले उठा ले गये। गमला चोर बन गये। मतलब लुच्चई की हद है। pic.twitter.com/lfaHluhJt6 — Bhadohi Wallah (@Mithileshdhar) December 26, 2025
ರಾಯಚೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಶೇ.100 ರಷ್ಟು ಸಾಧನೆ
ರಾಯಚೂರು ಡಿ.26 : ರಾಷ್ಟೀಯ ಪಲ್ಸ್ ಪೋಲಿಯೋ ಅಭಿಯಾನದಡಿಯಲ್ಲಿ, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಅಭಿಯಾನ ಡಿ.21ರಿಂದ ಆರಂಭವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನವಿ, ದೇವದುರ್ಗ ತಾಲ್ಲೂಕಗಳಲ್ಲಿ ಮೊದಲ ದಿನ ಒಟ್ಟು 2,59,984 ಮಕ್ಕಳ ಪೈಕಿ 2,47,052 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.95.02 ರಷ್ಟು ಸಾಧನೆ ಮಾಡಲಾಗಿದೆ. ಡಿ.24 ರವರೆಗೆ ಉಳಿದ 12,932 ಮಕ್ಕಳಿಗು ಲಸಿಕೆ ಹಾಕಿ ಒಟ್ಟು 2,60, 002 ಮಕ್ಕಳನ್ನು ತಲುಪಿ ಶೇ. 100.02ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ. ಡಿ.21 ರಂದು, ಎನ್ ಎಸ್ ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರಕಾರ ಹಾಗೂ ಜಿ. ಕುಮಾರ್ ನಾಯಕ ಸಂಸದರು ರಾಯಚೂರು ಲೋಕಸಭಾ ಕ್ಷೇತ್ರ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದರು. ಗುರಿ ಸಾಧನೆಗಾಗಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವ ದಿಶೆಯಲ್ಲಿ 601 ಕ್ಲಿಷ್ಟಕರವಾದ ವಸತಿ ಪ್ರದೇಶಗಳನ್ನು, 203 ವಲಸೆ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿತ್ತು. ಜಿಲ್ಲೆಯಾದ್ಯಂತ 1132 ಲಸಿಕಾ ಬೂತ್ಗಳು 1,133 ಮನೆ ಭೇಟಿ ನೀಡುವ ತಂಡಗಳು, ಹೆಚ್ಚು ಜನಸೇರುವ ಹಾಗೂ ಸಂತೆ-ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 53 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 33 ಸಂಚಾರಿ ತಂಡಗಳ ಮೂಲಕ ಸಾಧನೆ ಮಾಡಲಾಗಿದೆ. ಈ ಸಾಧನೆಯನ್ನು ಸಾಧಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ರಿಮ್ಸ್ ಆಸ್ಪತ್ರೆ, ನವೋದಯ ವೈದ್ಯಕೀಯ ಕಾಲೇಜು, ನಂದಿನಿ, ಎಸ್ಕೆಇ ಪ್ಯಾರಾ ಮೆಡಿಕಲ್ ಕಾಲೇಜ್, ರೋಟರಿ, ಲಯನ್ಸ್, ರೆಡ್ಕ್ರಾಸ್ ಹಾಗೂ ಇತರೆ ಸಂಘ ಸಂಸ್ಥೆಯವರು ಸ್ವಯಂ ಸೇವಕರಾಗಿ, ಪೋಲಿಯೋ ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ 248 ಮೇಲ್ವಿಚಾರಕರು ಹಾಗೂ ಡಾ ನಂದೀತಾ ಎಮ್ ಎನ್ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಸೇರಿದಂತೆ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಗಣೇಶ್, ಡಾ.ಶಿವಕುಮಾರ್, ಡಾ.ಶಾಕೀರ್, ಚಂದ್ರಶೇಖರ್ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದು, ಜಿಲ್ಲೆಯಲ್ಲಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತದ ಸಂಪೂರ್ಣ ಬೆಂಬಲದಡಿ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಮತ್ತು ಬೆಂಬಲದೊಂದಿಗೆ ಈ ಗುರಿಯನ್ನು ಸಾಧಿಸಲಾಗಿದೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಭಿನಂದಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ: ವರದಿ ನೀಡಲು ಜಿ.ಪರಮೇಶ್ವರ್ ಸೂಚನೆ
ಬೆಂಗಳೂರು : ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ನಿನ್ನೆ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು. ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಕ್ನೋ ಮೂಲದ ಎನ್ನಲಾದ ವ್ಯಕ್ತಿ ಮೃತಪಟ್ಟಿದ್ದಾನೆ. ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲ ಎಂಬುದು ಕಾಣಿಸುತ್ತಿದೆ. ಪ್ರವಾಸಿಗರು ಬರುವುದರಿಂದ ಹೆಚ್ಚಿನ ರೀತಿಯಲ್ಲಿ ಕ್ರಮ ತೆಗೆಕೊಳ್ಳಬೇಕು. ಇದೆಲ್ಲವೆನ್ನು ಸೂಕ್ಷ್ಮದೃಷ್ಟಿಯಿಂದ ನೋಡಬೇಕು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಬಲೂನ್ ವ್ಯಾಪಾರಿಗೆ ಹೀಲಿಯಂ ಸಿಲಿಂಡರ್ ಹೇಗೆ ಸಿಕ್ಕಿದೆ, ಎಲ್ಲಿ ಖರೀದಿಸಿದ್ದ ಅದೆಲ್ಲವನ್ನು ತನಿಖೆ ಮಾಡಿ ವರದಿ ನೀಡಲಿದ್ದಾರೆ ಎಂದರು. ನಾನು ಸಿಡಬ್ಲೂಸಿ ಸದಸ್ಯ ಅಲ್ಲ. ಹಾಗಾಗಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿಲ್ಲ. ಸಭೆಯಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚೆ ಆದರೆ ಗೊತ್ತಾಗುತ್ತದೆ ಎಂದ ಅವರು, ಹೊಸ ವರ್ಷ ಸಂಭ್ರಮಾಚರಣೆಯ ಕುರಿತಂತೆ ಪೊಲೀಸ್ ಅಧಿಕಾರಿಗಳೊಂದಿಗೆ ರವಿವಾರ ಸಭೆ ಕರೆದಿದ್ದೇನೆ. ಚರ್ಚೆ ಮಾಡಿ ಅಗತ್ಯ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ರಾಯಚೂರು: ರಾಷ್ಟ್ರೀಯ ಮತದಾರ ದಿನಾಚರಣೆ
ಪ್ರಬಂಧ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳಿಗೆ ಜಾಗೃತಿ
ಸಯ್ಯಿದ್ ಮದನಿ ಮಹಿಳಾ ಕಾಲೇಜು ಕಟ್ಟಡದ ಗೇಟ್ ಉದ್ಘಾಟನೆ, ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಉಳ್ಳಾಲ: ಅಭಿವೃದ್ಧಿ ನಮ್ಮ ಗುರಿ ಆಗಿದ್ದು , ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಅಭಿವೃದ್ಧಿ ಕಡೆ ಹೆಜ್ಜೆ ಇಡಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು. ಅವರು ಉಳ್ಳಾಲ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಹಝ್ರತ್ ಸಯ್ಯಿದ್ ಮದನಿ ಮಹಿಳಾ ಕಾಲೇಜು ಕಟ್ಟಡದ ಗೇಟ್ ಉದ್ಘಾಟನೆ ಹಾಗೂ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಶಿಕ್ಷಣ ಮುಂದುವರಿಸಿ ಒಂದು ಹಂತಕ್ಕೆ ತಲುಪಲು ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು ಎಂದರು. ಸಯ್ಯಿದ್ ಮಸೂದ್ ತಂಙಳ್ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸಗೈದು ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮ ದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್,ದರ್ಗಾ ಮಾಜಿ ಅಧ್ಯಕ್ಷ ಹಂಝ, ಹಾಲಿ ಸದಸ್ಯ ಝೈನುದ್ದೀನ್ ಮೇಲಂಗಡಿ, ವಕ್ಫ್ ಅಧಿಕಾರಿ ಅಬೂಬಕ್ಕರ್ , ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಕಾರ್ಯದರ್ಶಿ ಮುಸ್ತಫಾ, ಮಾಜಿ ಅಧ್ಯಕ್ಷ ಕಣಚೂರು ಮೋನು, ಚೆರೆ ಮೋನು, ಅಬ್ದುಲ್ ಖಾದರ್, ಅಬ್ಬಾಸ್ ಕೋಡಿ,ಝಿಯಾದ್ ತಂಙಳ್ ಮೊಯ್ದಿನ್ ಕಲ್ಲಾಪು, ಖಲೀಲ್, ಹಝ್ರತ್ ಸಯ್ಯಿದ್ ಮದನಿ ಮಹಿಳಾ ಕಾಲೇಜು ಪ್ರಾಂಶುಪಾಲ ರಸೂಲ್ ಖಾನ್, ಅಲ್ತಾಫ್ ,ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು. ಕೆಎಮ್ ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
ನಾಟಕ: ಪ್ರತಿ ಗಂಧರ್ವ ಮೂಲ ಕೃತಿ: ಡಾ. ರಹಮತ್ ತರೀಕೆರೆ ರಂಗರೂಪ: ಡಾ. ರಾಜಪ್ಪ ದಳವಾಯಿ ವಿನ್ಯಾಸ, ನಿರ್ದೇಶನ: ಮಾಲತೇಶ ಬಡಿಗೇರ ಸಂಗೀತ: ರವಿ ಮೂರೂರು ವಸ್ತ್ರಾಲಂಕಾರ: ಛಾಯಾ ಭಾರ್ಗವಿ ಪ್ರಸ್ತುತಿ: ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ರಂಗದ ಮೇಲೆ: ಸುರೇಂದ್ರಗೌಡ ಗೋಕರ್ಣ, ಡಾ. ಶೃತಿ ರಾಜ್, ಬಿ. ಸುಜಾತಾ ನೀಲಗುಂದ, ಕಲ್ಪನಾ ನಾಕೋಡ, ಸೋಮಶೇಖರ್ ಕಾರಿಗನೂರು, ಸಂತೋಷ್ ಸಂಗನಾಳ, ವೈ.ಶ್ವೇತಾ, ಜಿ.ಎಂ. ಪ್ರಕೃತಿ, ಬಸವರಾಜ ಕಡ್ಲೇಬಾಳು, ಕರಣಕುಮಾರ್, ಮುಖೇಶಕುಮಾರ್, ಅಮಿತ್ಕುಮಾರ್. ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಾಟಕ ‘ಪ್ರತಿ ಗಂಧರ್ವ’ ಬಹಳ ಮಹತ್ವವಾದುದು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಅನೇಕ ನಾಟಕಗಳು ದ್ವಂದ್ವ ಸಂಭಾಷಣೆ, ಐಟಂ ಸಾಂಗ್, ಸಿನೆಮಾ ಹಾಡುಗಳ ಮೂಲಕ ಪ್ರದರ್ಶನ ಗೊಳ್ಳುತ್ತಿರುವಾಗ ‘ಪ್ರತಿ ಗಂಧರ್ವ’ ನಾಟಕವು ತನ್ನ ಗಂಧದಿಂದ ಪರಿಮಳ ಸೂಸುತ್ತ ಗಮನ ಸೆಳೆಯುತ್ತದೆ. ಕಳೆದ ವಾರ ಮೈಸೂರಿನಲ್ಲಿ ನಿರಂತರ ರಂಗೋತ್ಸವ ತಂಡದ ನಾಟಕೋತ್ಸವ ಹಾಗೂ ಬಹುರೂಪಿಗೆ ಮುನ್ನುಡಿಯಾಗಿ ಮೈಸೂರು ರಂಗಾಯಣದ ವತಿಯಿಂದ ಪ್ರದರ್ಶನಗೊಂಡ ಈ ನಾಟಕ ಚೆನ್ನಾಗಿದೆ. ರಾಜಪ್ಪ ದಳವಾಯಿ ಅವರ ಸತ್ವಯುತ ನಾಟಕಕ್ಕೆ ಪೂರಕವಾಗಿ ಹಾಡು, ದೃಶ್ಯಗಳಿವೆ. ದಾವಣಗೆರೆ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ ಮಾತು ಗಮನಾರ್ಹ ‘‘ಕಂಪೆನಿ ಶೈಲಿಯ ರಂಗಸಂವೇದನೆಗಳನ್ನು ವರ್ತಮಾನೀಕರಿಸುವ ಸಮನ್ವಯದ ವಿಭಿನ್ನ ಯತ್ನವಿದು. ಬಯೋಪಿಕ್ ಕಥನವೊಂದನ್ನು ರಂಗಪಠ್ಯ ಆಗಿಸುವುದು ಸವಾಲಿನ ಕೆಲಸವೇ. ಒಂದೆಡೆ ಕನ್ನಡ-ಮರಾಠಿ ಮತ್ತು ಹಿಂದೂ-ಮುಸ್ಲಿಮ್ ಧರ್ಮಗಳ ಸಂಕೀರ್ಣತೆಗಳ ಗುದಮುರಗಿ. ಮತ್ತೊಂದೆಡೆ ಪ್ರೀತಿಪ್ರೇಮಗಳ ಸಾಮರಸ್ಯ, ಸೌಹಾರ್ದ. ಗಂಧರ್ವ ಮತ್ತು ಪ್ರತಿಗಂಧರ್ವ ಎಂಬ ನಾಟ್ಯಸಂಗೀತ ವ್ಯಕ್ತಿತ್ವಗಳ ಅನಾವರಣ. ಶತಮಾನದ ಹಿಂದೆ ಜರುಗುವ ಕನ್ನಡ, ಮರಾಠಿ ರಂಗಭೂಮಿಯ ಆನುಷಂಗಿಕ ಸಂಕಥನಗಳ ಹೂರಣ’’ ಇಂಥ ನಾಟಕ ಆರಂಭವಾಗುವುದೇ ಕೋಲ ಶಾಂತಪ್ಪ ಅವರ ನಾಂದಿ ಪದ್ಯದ ಮೂಲಕ. ಅದು ಹೀಗಿದೆ: ಪಾಹಿ ಶಾಂತಃ ಭುವನೇಶ್ವರ ಸುಮನೋಹರ ಭುವನತಾರ ಪಾಪಹಾರ ಆನಂದಸಾರ ವಿಕಾರ ದೂರ ಭವಸಂಹಾರ ಪಾಹಿ ಶಾಂತಃ ಭುವನೇಶ್ವರ ಸುಮನೋಹರ ಭುವನತಾರ ಗೌರೀನಾಥ ಶಿವಪಾನ ನಿತ್ಯಜ್ಞಾನ ಪರಿಶೋಧನ ದೇವ ದೇವ ಅಘನಾಶನ ಶಮದನವಿಭು ಸೌಖ್ಯಸಾರ ಪಾಹಿಶಾಂತಃ ಭುವನೇಶ್ವರ ಸುಮನೋಹರ ಭುವನತಾರ... ಈ ಹಾಡು ಹಾಡಿದ ನಂತರ ಎಲ್ಲ ಕಲಾವಿದರು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಜೈಕಾರ ಹಾಕುತ್ತಾರೆ. ನಾಟಕ ಮುಗಿದ ನಂತರವೂ ಈ ಜೈಕಾರ ಹಾಕುತ್ತಾರೆ. ಇದು ಕಂಪೆನಿ ನಾಟಕಗಳಲ್ಲಿ ‘‘ವೃತ್ತಿ ರಂಗಭೂಮಿಗೆ ಜಯವಾಗಲಿ’’ ಎಂದು ಹೇಳುವ ಹಾಗೆ. ಆಮೇಲೆ ಶಕ್ತನು ನೀನು ಭಕ್ತನು ನೀನು ಲಗುಣಗೊಂಡೆವು ಇನ್ನೇನು ಎಂದು ಬೀಳಗಿ ಸೋದರಿಯರಾದ ಗೋಹರ ಹಾಗೂ ಅಮೀರ ಹಾಡುತ್ತಾರೆ. ಇವರಿಗೆ ಹಾರ್ಮೋನಿಯಂ ಸಾಥ್ ನೀಡುವ ಅವರ ಸೋದರಮಾವ, ರಂಗಭೂಮಿ ಕಲಾವಿದರಾದ ಬೇವೂರ ಬಾದಷಾ ಮಾಸ್ತರ ಸೂಕ್ತ ಸಲಹೆಗಳನ್ನೂ ನೀಡುತ್ತಾರೆ. ಆಮೇಲೆ ಗೋಹರ ಹಾಗೂ ಅಮೀರ ಅವರು ನಾಟಕದಲ್ಲಿ ಪಾತ್ರಗಳಿಗೆ ಬಣ್ಣ ಹಚ್ಚಿದ ದೃಶ್ಯಗಳಿವೆ. ಮುಂದೆ ಬಸವರಾಜ ಮನ್ಸೂರ ಅವರ ಕಂಪೆನಿ ಸೇರುತ್ತಾರೆ. ಆಗ ಬಸವರಾಜ ಮನ್ಸೂರ ಅವರೊಂದಿಗೆ ಗೋಹರಬಾಯಿ ‘‘ನಾ ಮನಸ ಇಟ್ಟೀನಿ ಮಾಲಕರ, ನೀವೂ ಮನಸ್ಸು ಕೊಟ್ಟೀರಿ. ಅಡ್ಡಿಗಳ್ನ ಕಡ್ಡಿ ಮುರದಂಗ ತಗೀಬೇಕ್ರಿ’’ ಎಂದು ಹೇಳಿ ‘‘ಪ್ರೀತಿ ಮಾಡಿದ ಮ್ಯಾಲ ಮಾನಪಮಾನ ಎಲ್ಲ್ಯದ ಜಾತಿಪಾತಿ ಎಲ್ಲ್ಯದ, ಧರ್ಮ ಎಲ್ಲ್ಯದ?’’ ಎಂದು ಹಾಡುವ ಹಾಡು ಪ್ರೇಕ್ಷಕರನ್ನು ಸೆಳೆಯುತ್ತದೆ. ಮುಂದೆ ಮುಂಬೈಯಿಂದ ಬಂದ ನಟ ಹಾಗೂ ದಲ್ಲಾಳಿ ನಾನಾ ಚಾಪೇಕರ್ ಪರಿಚಯವಾಗಿ, ಮುಂಬೈಗೆ ಹಾಡಲು ಸೋದರಿಯರು ತೆರಳುತ್ತಾರೆ. ಅಲ್ಲಿ ಎಚ್ಎಂವಿ ಕಂಪೆನಿಯ ಧ್ವನಿಪರೀಕ್ಷೆಯಲ್ಲಿ ಗೋಹರ ಪಾಸಾದ ನಂತರ ಹಾಡುಗಳ ರೆಕಾರ್ಡಿಂಗ್ ನಡೆಯುತ್ತದೆ. ಅಲ್ಲಿಂದ ಹಿಂದಿ ಸಿನೆಮಾಗಳಿಗೂ ಗೋಹರಬಾಯಿ ಬಣ್ಣ ಹಚ್ಚುತ್ತಾರೆ. ಹೀಗಿದ್ದಾಗ ಬಸವರಾಜ ಮನ್ಸೂರ ಅವರ ಕಂಪೆನಿಯು ಬೆಳಗಾವಿಯಲ್ಲಿದ್ದಾಗ ಸುಟ್ಟು ಹೋದಾಗ ಅವರನ್ನು ನಾನಾ ಚಾಪೇಕರ್ ಗೋಹರಬಾಯಿ ಬಳಿ ಕರೆತರುತ್ತಾನೆ. ಆಮೇಲೆ ಗೋಹರಬಾಯಿ ಅವರೊಂದಿಗೆ ಬಸವರಾಜ ಅವರು ಕೂಡಾ ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾರೆ. ಹೀಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಸೋದರಿಯರಾದ ಗೋಹರಬಾಯಿ ಕರ್ನಾಟಕಿ ಹಾಗೂ ಅಮೀರಬಾಯಿ ಕರ್ನಾಟಕಿ ಅವರು ‘ಕರ್ನಾಟಕಿ’ ಎಂದು ಹೆಸರಿಟ್ಟುಕೊಂಡು ಮುಂಬೈಯಲ್ಲಿ ಮಿಂಚುತ್ತಾರೆ. ಆದರೆ ಬಾಲಗಂಧರ್ವರು ಹಾಡುತ್ತಿದ್ದ ಹಾಡುಗಳನ್ನು ಗೋಹರಬಾಯಿ ಹಾಡಿದ ಪರಿಣಾಮ ಕೋರ್ಟ್ನಲ್ಲಿ ಬಾಲಗಂಧರ್ವರು ದಾವೆ ಹೂಡುತ್ತಾರೆ. ವಿಚಾರಣೆ ನಂತರ ಬಾಲಗಂಧರ್ವರು ಸೋಲುತ್ತಾರೆ. ಈ ಸೋಲಿನಿಂದಲೇ ಬಾಲಗಂಧರ್ವರು ಗೋಹರಬಾಯಿಗೆ ಸೋಲುತ್ತಾರೆ. ಮುಂದೆ ಅವರ ಕಂಪೆನಿಯನ್ನು ಗೋಹರಬಾಯಿ ಸೇರಿದರೆ, ಅಮೀರಬಾಯಿಗೆ ಹಿಮಾಲಯವಾಲಾನೊಂದಿಗೆ ಪ್ರೀತಿ ಅರಳುತ್ತದೆ. ಆದರೆ ಹಿಮಾಲಯವಾಲಾ ಕೈಕೊಟ್ಟಾಗ ‘‘ನಿನ್ನನೇ ನೆನೆಯುತೆ ರಾತ್ರಿಯ ಕಳೆದೆ ಪ್ರೀತಿಯ ಮಾತಿಗೆ ನಾ ಮರುಳಾದೆ ಸುಡುತಿರುವುದು ಆ ಪ್ರೀತಿಯ ಬೇಗೆ ವಿರಹದ ಜಾವವ ಕಳೆಯುವುದು ಹೇಗೆ?’’ ಎಂದು ಅಳುತ್ತಾಳೆ. ಅಮೀರಬಾಯಿ ಪಾತ್ರ ಪೊರೆದ ಸುಜಾತಾ ನೀಲಗುಂದ ಅಕ್ಷರಶಃ ಅಳುತ್ತ ಹಾಡುತ್ತಾರೆ. ಬಳಿಕ ಬರುವ ನಾನಾ ಚಾಪೇಕರ್ ಸಮಾಧಾನಿಸುತ್ತಾನೆ. ಆಗ ಅವನ ಮಗಳ ಮದುವೆಗೆ ತನ್ನ ಚಿನ್ನಾಭರಣ ನೀಡುವ ಅಮೀರಬಾಯಿ, ತನ್ನ ಗಾಯನ ಮುಂದುವರಿಸುವುದಾಗಿ ಹೇಳುತ್ತಾಳೆ. ಅತ್ತ ಬಾಲಗಂಧರ್ವ ಕಂಪೆನಿಯಲ್ಲಿ ಮಿಂಚುವ ಗೋಹರಬಾಯಿ ‘‘ಮಾನಾಪಮಾನ ಜೀವನ ಯಾನ ಗೆಲುವು ಸೋಲುಗಳ ಸಹಯಾನ’’ ಎಂದು ಹಾಡುತ್ತ, ನಟಿಸುತ್ತ, ನರ್ತಿಸುತ್ತ ಕಂಪೆನಿ ಮುನ್ನಡೆಸುತ್ತಾಳೆ. ಆಗ 63 ವರ್ಷ ವಯಸ್ಸಿನ ಬಾಲಗಂಧರ್ವರು 40 ವರ್ಷ ವಯಸ್ಸಿನ ಗೋಹರಬಾಯಿಯನ್ನು ಮದುವೆಯಾಗುತ್ತಾರೆ. ಇದರಿಂದ ಅವರ ಸೋದರ ಕಂಪೆನಿ ಬಿಟ್ಟು ಹೋಗುತ್ತಾರೆ. ಅವರ ಮೊದಲ ಪತ್ನಿಯೂ ದೂರಾಗುತ್ತಾರೆ. ಆದರೆ ನಷ್ಟದಲ್ಲಿದ್ದ ಕಂಪೆನಿಯನ್ನು ಗೋಹರಬಾಯಿ ಮುನ್ನಡೆಸುತ್ತಾಳೆ. ಮುಂದೆ ಬಾಲಗಂಧರ್ವರು ಅನಾರೋಗ್ಯಕ್ಕೀಡಾಗುತ್ತಾರೆ. ಜೊತೆಗೆ ಹಿಂದೂ-ಮುಸ್ಲಿಮ್ ಕೋಮುದಳ್ಳುರಿಯಲ್ಲಿ ಮುಂಬೈ ಬೇಯುವಾಗ ಅವರ ನಾಟಕ ಕಂಪೆನಿಯು ನಷ್ಟ ಅನುಭವಿಸುತ್ತದೆ. ಆರ್ಥಿಕ ಅಡಚಣೆಯಿಂದ ಬಾಲಗಂಧರ್ವರು ನರಳುತ್ತಾರೆ. ಆಗ ಪುಣೆಯ ಬ್ರಾಹ್ಮಣ ಸಮುದಾಯದವರು ಸನ್ಮಾನಿಸಿ, ನಿಧಿ ಅರ್ಪಿಸಲು ಆಹ್ವಾನಿಸುತ್ತಾರೆ. ಆದರೆ ಗೋಹರಬಾಯಿಯನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಾಲಗಂಧರ್ವರು ಮುಂದಾಗುತ್ತಾರೆ. ಇದಕ್ಕೆ ಸಂಘಟಕರು ‘ಕಾನಡಿ ದೇಶದಾಕಿ, ಮುಸಲರಕಿ ಅದಾಳ’ ಎಂದು ಗೋಹರಬಾಯಿಯನ್ನು ಕರೆತರಬಾರದೆಂದು ಕಟ್ಟಪ್ಪಣೆ ಮಾಡಿದಾಗ ಬಾಲಗಂಧರ್ವರು ಗೋಹರಬಾಯಿ ಬಂದರೆ ಸನ್ಮಾನಕ್ಕೆ ಹೋಗುವೆನೆಂದು ಹಟ ಹಿಡಿಯುತ್ತಾರೆ. ಕೊನೆಗೆ ಗೋಹರಬಾಯಿ ದೂರ ನಿಂತು ಕಾರ್ಯಕ್ರಮ ನೋಡುವೆ ಎಂದಾಗ ಒಪ್ಪುತ್ತಾರೆ. ಸಮಾರಂಭದ ದಿನ ಸನ್ಮಾನ ಸ್ವೀಕರಿಸಿ ಹಾಡುವಾಗ ಕುಸಿದು ಬೀಳುವ ಬಾಲಗಂಧರ್ವರ ಬದಲು ಗೋಹರಬಾಯಿ ಹಾಡಲು ಮುಂದಾದಾಗ ಪ್ರೇಕ್ಷಕರು ತಿರಸ್ಕರಿಸುತ್ತಾರೆ. ಆಗ ತಮಗೆ ಸನ್ಮಾನಿಸಿದಾಗ ಕೊಟ್ಟಿದ್ದೆಲ್ಲವನ್ನೂ ಹಿಂದಿರುಗಿಸಲು ಬಾಲಗಂಧರ್ವರು ಮುಂದಾಗುತ್ತಾರೆ. ಆಗ ಸಂಘಟಕರು ಬೇಡವೆಂದು ಮನವಿ ಮಾಡಿಕೊಂಡಾಗ ಯಾವುದಾದರೂ ದೇವಸ್ಥಾನಕ್ಕೊ, ಮಸೀದಿಗೊ ದೇಣಿಗೆ ಕೊಟ್ಟುಬಿಡು ಎಂದು ಬಾಲಗಂಧರ್ವರು ಚಾಪೇಕರ್ಗೆ ಹೇಳುತ್ತಾರೆ. ಬಾಲಗಂಧರ್ವರ ನಂತರ ಗೋಹರಬಾಯಿ ಬದುಕಿರುವವರೆಗೂ ಹಾಡು ಹಾಡುತ್ತಾಳೆ. ಇಂಥ ಅಪರೂಪದ ನಾಟಕಕ್ಕೆ ಕಂಪೆನಿಯವರು ಬಳಸುವ ಹಾಗೆ ಪರದೆಗಳನ್ನು ಬಳಸಿದ್ದು ಮೆಚ್ಚತಕ್ಕ ಅಂಶ. ಆದರೆ ಕೆಲ ಕಲಾವಿದರ ಅಭಿನಯದ ಕೊರತೆಯಿಂದ ನಾಟಕ ಕಳೆಗಟ್ಟುವುದಿಲ್ಲ. ಅದರಲ್ಲೂ ಗೋಹರಬಾಯಿ ಪಾತ್ರ ಪೊರೆದ ಡಾ.ಶೃತಿ ರಾಜ್ ಅವರು ಕಾಲರ್ ಮೈಕ್ ಬಳಸಿದರೂ ಅವರ ಧ್ವನಿ ಪ್ರೇಕ್ಷಕರನ್ನು ತಲುಪುವುದು ಕಷ್ಟಸಾಧ್ಯವಿತ್ತು. ಆದರೆ ಬಾಲಗಂಧರ್ವ ಪಾತ್ರಧಾರಿ ಸುರೇಂದ್ರಗೌಡ ಗೋಕರ್ಣ, ಅಮೀರಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ ಸುಜಾತಾ ನೀಲಗುಂದ, ನಾನಾ ಚಾಪೇಕರ್ ಪಾತ್ರಧಾರಿ ಸೋಮಶೇಖರ ಕಾರಿಗನೂರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ಅದರಲ್ಲೂ ಬೇಸ್ ಧ್ವನಿಯ ಸುರೇಂದ್ರಗೌಡ ಅವರು ಬಾಲಗಂಧರ್ವ ಪಾತ್ರಕ್ಕೆ ಕಳೆ ತಂದಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನಾಗಠಾಣದ ನಾರಾಯಣರಾವ್ ರಾಜಹಂಸನನ್ನು ಬಾಲಗಂಧರ್ವರೆಂದು ಕರೆದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು. ಮಹಾರಾಷ್ಟ್ರದ ರಂಗಭೂಮಿಗೆ ಬಾಲಗಂಧರ್ವರ ಕೊಡುಗೆ, ಗೋಹರಬಾಯಿ ಹಾಗೂ ಅಮೀರಬಾಯಿ ಸೋದರಿಯರು ಮಹಾರಾಷ್ಟ್ರದಲ್ಲಿ ಮಿಂಚಿದ್ದು, ಅದರಲ್ಲೂ ಬಾಲಗಂಧರ್ವರಿಗೆ ಪ್ರತಿಗಂಧರ್ವಳಾಗಿ ಗೋಹರಬಾಯಿ ಮೆರೆದದ್ದು, ಕನ್ನಡ-ಮರಾಠಿ ಕೊಡುಕೊಳ್ಳುವಿಕೆ, ಕಂಪೆನಿ ಉಳಿಸುವ ಸಲುವಾಗಿ ನಟಿಯನ್ನು ಮದುವೆಯಾಗುವ ಅನಿವಾರ್ಯತೆ, ಪ್ರೀತಿ-ಪ್ರೇಮ, ವಿರಹ... ಇಂಥ ಹತ್ತಾರು ಅಂಶಗಳನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಕನ್ನಡಿಗರಾದ ಬೀಳಗಿ ಸೋದರಿಯರು ಹಾಗೂ ಮರಾಠಿಯ ಬಾಲಗಂಧರ್ವರನ್ನು ಹೊಸಬಗೆಯ ಪ್ರೇಕ್ಷಕರಿಗೆ ತಲುಪಿಸಿದ ಹೆಗ್ಗಳಿಕೆ ಮಲ್ಲಿಕಾರ್ಜುನ ಕಡಕೋಳ ಅವರದು. ಆದರೆ ಈ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಬೇಕಾದ ಜರೂರಿದೆ.
ಆಸ್ಟ್ರೇಲಿಯಾ ಸೋಶಿಯಲ್ ಮೀಡಿಯಾ ಬ್ಯಾನ್ ಮಾದರಿ ಅಳವಡಿಕೆ ಬಗ್ಗೆ ಪರಿಶೀಲಿಸಿ: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ
ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧದ ಹಿನ್ನೆಲೆಯಲ್ಲಿ, ಭಾರತದಲ್ಲೂ ಇದೇ ಮಾದರಿಯ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಮಕ್ಕಳನ್ನು ಅಶ್ಲೀಲ ವಿಷಯಗಳಿಂದ ರಕ್ಷಿಸಲು ಪೋಷಕರ ನಿಯಂತ್ರಣ ಮತ್ತು ಜಾಗೃತಿ ಮೂಡಿಸುವ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ.
ಕಲಬುರಗಿ: ಅಪರಿಚಿತ ವಾಹನ ಢಿಕ್ಕಿ; ಬೈಕ್ ಸವಾರ ಮೃತ್ಯು
ಕಲಬುರಗಿ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ಅಫಜಲಪುರ - ದುಧನಿ ಮಾರ್ಗಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಅಫಜಲಪುರ ಪಟ್ಟಣದ ನಿವಾಸಿ ಅನ್ವರ್ ಸಾಬ್ ಬನ್ನಟ್ಟಿ(50) ಮೃತ ವ್ಯಕ್ತಿ. ಸಹಸವಾರ ಉಮರ್ ಅಲಿ ಗಾಯಗೊಂಡಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕೂಟಿಯಲ್ಲಿ ಅನ್ವರ್ ಹಾಗೂ ಉಮರ್ ಅಲಿ ಅವರು ಅಫಜಲಪುರ ದಿಂದ ಅಕ್ಕಲಕೋಟೆ ಕಡೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಸಂಭ್ರಮಕ್ಕೆ ಭದ್ರತೆಗಾಗಿ ಖಾಕಿ ಸಿದ್ದತೆ: ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಪರಮೇಶ್ವರ್
ಬೆಂಗಳೂರು ನಗರದಲ್ಲಿ ಹೊಸ ವರ್ಷದ ಸಂಭ್ರಮ ಶುರುವಾಗುತ್ತಿದೆ. ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಜನನಿಬಿಡ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಾಗಿ ಪರಿಶೀಲನೆ ನಡೆಸಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
Aadhaar - PAN Linking : ಸಮೀಪಿಸುತ್ತಿರುವ ಡೆಡ್ಲೈನ್ - ದಂಡ ಎಷ್ಟು, ಬ್ಯಾಂಕ್ ಅಕೌಂಟ್ ಫ್ರೀಜ್?
Important Aadhaar PAN Linking : ಮುಂದಿನ ವರ್ಷದ ಮೊದಲ ದಿನದಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿದೆ. ಅದರಲ್ಲಿ ಪ್ರಮುಖವಾದದ್ದು ಆಧಾರ್ ಮತ್ತು ಪ್ಯಾನ್ ಲಿಂಕಿಂಗ್. ಇದರ ಗಡುವು ಮುಗಿಯುತ್ತಾ ಬಂದಿದ್ದು, ಲಿಂಕ್ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಲಿಂಕಿಂಗ್’ಗೆ ಮಾಡಬೇಕಾಗಿರುವುದು ಏನು?
Ration: ರಾಜ್ಯದ ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಹತ್ವದ ಮಾಹಿತಿ
Ration: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮುಂದುವರೆಸಿದೆ. ಈ ನಡುವೆಯೇ ಇದೀಗ ಇಂದಿರಾ ಕಿಟ್ ವಿತರಣೆ ಯಾವಾಗಿನಿಂದ ಆರಂಭ ಮಾಡಲಾಗಿತ್ತದೆ ಎನ್ನುವ ಅಪ್ಡೇಟ್ ಮಾಹಿತಿಯನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ
ಸಿಎಂ ಕುರ್ಚಿ ಅಲ್ಲಾಡುತ್ತಿದೆಯಲ್ಲ ಸಾರ್ ; ಮಾಧ್ಯಮಗಳ ಪ್ರಶ್ನೆಗೆ ಸಿಎಂ ಗರಂ
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪದೇ ಪದೇ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧವೇ ಗರಂ ಆದರು. ರೈಲ್ವೆ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
Gold Price Today: ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ, ಇಂದಿನ ದರಗಳು ಹೀಗಿದೆ
ಚಿನ್ನದ ದರಗಳು ಈ ವಾರವಿಡೀ ಏರಿಕೆ ಕಂಡಿವೆ. ಸೋಮವಾರದಿಂದಲೂ ನಿರಂತರವಾಗಿ ದರ ಗಗನಕ್ಕೇರುತ್ತಿದ್ದು, ನಿನ್ನೆಯೂ ಒಂದು ಗ್ರಾಂ ಚಿನ್ನದ ಮೇಲೆ 32 ರೂಪಾಯಿವರೆಗೆ ಏರಿಕೆ ಕಂಡಿತ್ತು. ಈ ವಾರಾಂತ್ಯದ ವೇಳೆಗೆ ಚಿನ್ನದ ದರಗಳು ಕುಸಿಯುವ ನಿರೀಕ್ಷೆಯಲ್ಲಿದ್ದರು ಚಿನ್ನ ಖರೀದಿದಾರರು. ಆದರೆ ಶುಕ್ರವಾರವೂ ದರ ಏರತೊಡಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ
ಮೈಸೂರಿನಲ್ಲಿ ಸಿಲಿಂಡರ್ ಸ್ಪೋಟ: ವರದಿ ನೀಡುವಂತೆ ಪರಮೇಶ್ವರ್ ಸೂಚನೆ
ಬೆಂಗಳೂರು: ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ನಿನ್ನೆ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಕ್ನೋ ಮೂಲದ ಎನ್ನಲಾದ ವ್ಯಕ್ತಿ ಮೃತಪಟ್ಟಿದ್ದಾನೆ. ಸಣ್ಣಪುಟ್ಟ ವಸ್ತುಗಳ ಮಾರಾಟ
‘ಬೆಂಗಳೂರಿನ ನಿಮ್ಹಾನ್ಸ್ ವೈದ್ಯರು ನನ್ನ ಪಾಲಿನ ದೇವರು’ ಎನ್ನುತ್ತಾ ‘ಅಮೆರಿಕ ಆಸ್ಪತ್ರೆಗಳ ಲಾಭಕೋರತನ ತೆರೆದಿಟ್ಟ NRI
ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರೊಬ್ಬರು ಅಲ್ಲಿನ ವೈದ್ಯಕೀಯ ಕ್ಷೇತ್ರದ ಲಾಭಕೋರತನವನ್ನು ಬಯಲು ಮಾಡಿದ್ದಾರೆ. 2017ರಲ್ಲಿ ತಮಗೆ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಗೆ ಅಮೆರಿಕದಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಬೆಂಗಳೂರಿನ ನಿಮ್ಹ್ಯಾನ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಭಾರತದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೇವೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿವೆ ಎಂದು ಅವರು ಹೇಳಿದ್ದಾರೆ. ಇದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೆರಿಕಾದ ಪೆಂಟಗಾನ್ ವರದಿ ಭಾರತ-ಚೀನಾ ಸಂಬಂಧದ ಬಗ್ಗೆ ಹೊಸ ತಿರುವು ನೀಡಿದೆ. ಭಾರತದೊಂದಿಗೆ ಸಂಬಂಧ ಸುಧಾರಿಸುತ್ತಿರುವಾಗಲೇ, ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ವರದಿ ಹೇಳಿದೆ. ಈ ವರದಿಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಬೆಂಬಲದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದ ನೆರೆಯ ರಾಷ್ಟ್ರವಾದ ಚೀನಾ ತನ್ನ ತಂತ್ರಗಳ ಮೂಲಕ ಭಾರತವನ್ನು ಅಮೆರಿಕಾದಿಂದ ದೂರ ಸರಿಸುವ ಪ್ರಯತ್ನ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಆದರೆ ನಾವು ಭಾರತದೊಂದಿಗೆ ನಿಕಟ ಹಾಗೂ ಸ್ಥಿರವಾದ ಸಂಬಂಧ ಮುಂದುವರೆಸುತ್ತೇವೆ ಎಂದು ಚೀನಾ ತಿರುಗೇಟು ನೀಡಿದೆ.
ಧೈರ್ಯ, ದೃಢನಿಶ್ಚಯ, ಸದಾಚಾರದ ದಿನ: ವೀರ ಬಾಲ ದಿವಸ್ನಲ್ಲಿ ಪ್ರಧಾನಿ ಮೋದಿ
ವೀರ್ ಬಾಲ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಹಿಬ್ಜಾದೆಗಳ ತ್ಯಾಗ ಮತ್ತು ಧೈರ್ಯವನ್ನು ಸ್ಮರಿಸಿದರು. ಮಾತಾ ಗುಜ್ರಿ ಜಿ ಅವರ ನಂಬಿಕೆ ಮತ್ತು ಗುರು ಗೋವಿಂದ ಸಿಂಗ್ ಜಿ ಅವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಯಿತು. ದೇಶಾದ್ಯಂತ ಕಾರ್ಯಕ್ರಮಗಳು ನಡೆದವು. ಸಾಹಿಬ್ಜಾದೆಗಳ ತ್ಯಾಗವು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಡಿಸೆಂಬರ್ 26 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಆರೋಪಿ ಬಾಲಮುರುಗನ್ ತನ್ನ ಪತ್ನಿಯ ಕೊಲೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾನೆ. ಈ ಕೊಲೆಗೆ ಸುಮಾರು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಹತ್ಯೆ ನಡೆಸಲು ಬಿಹಾರದಿಂದ ಪಿಸ್ತೂಲ್ ಖರೀದಿ ಮಾಡಿಕೊಂಡಿದ್ದ. ಅಲ್ಲದೆ ಅದನ್ನು ಬಳಸಲು ತರಬೇತಿಯನ್ನು ಪಡೆದುಕೊಂಡಿದ್ದ. ಒಂದು ವೇಳೆ ಪಿಸ್ತೂಲ್ ಕೈಕೊಟ್ಟರೆ ಹತ್ಯೆಗೆ ಬಳಸಲು ಚಾಕುವನ್ನು ಸಹ ಖರೀದಿಸಿದ್ದ ಎಂದು ಪೊಲೀಸರು ನಡೆಸುತ್ತಿರುವ ತನಿಖೆಯಿಂದ ತಿಳಿದುಬಂದಿದೆ. ಇನ್ನು ಪಿಸ್ತೂಲ್ ನ್ನು ಬಿಹಾರದಿಂದಲೇ ಖರೀದಿ ಮಾಡಿದ್ದಾನಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಓಲಾ, ಉಬರ್, ರ್ಯಾಪಿಡೋ ಸೇರಿ ರೈಡಿಂಗ್ ಪ್ಲಾಟ್ಫಾರ್ಮ್ಗಳಿಗೆ ಕೇಂದ್ರದ ಖಡಕ್ ಆದೇಶ: ಮಹಿಳೆಯರಿಗೆ ಅನುಕೂಲ
Ride-Hailing Apps: ದೇಶದಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಎಲ್ಲಾ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ಗಳಿಗೆ ಕೇಂದ್ರ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಜೊತೆಗೆ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಕೂಡ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಹುತೇಕ ಪ್ರಯಾಣಿಕರು ಓಲಾ,
ಬೆಂಗಳೂರಿನಲ್ಲಿ ಡಿ. 26ರಂದು ಚಿನ್ನದ ದರ - ಒಂದೇ ದಿನದ ಅಂತರದಲ್ಲಿ 770 ರೂ. ಜಾಸ್ತಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,002 ರೂ. ತಲುಪಿದೆ. 22 ಕ್ಯಾರಟ್ ಚಿನ್ನದ ಬೆಲೆ 12,835 ರೂ. ಮತ್ತು 18 ಕ್ಯಾರಟ್ ಚಿನ್ನದ ಬೆಲೆ 10,502 ರೂ. ಆಗಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಜನರು ಗೂಗಲ್ನಲ್ಲಿ ದರವನ್ನು ಹೆಚ್ಚಾಗಿ ಹುಡುಕುತ್ತಿದ್ದಾರೆ.
Chamarajanagar | ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಎರೆಕಟ್ಟೆ ಬಳಿ ಗಂಡಾನೆಯ ಕಳೇಬರ ಪತ್ತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ಅರಣ್ಯ ವಲಯದ ಪುರಾಣಿ ಶಾಖೆ ವ್ಯಾಪ್ತಿಯ ಎರೆಕಟ್ಟೆ ಕೆರೆ ಸಮೀಪ ಗಂಡು ಆನೆಯೊಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸುಮಾರು 30-35 ವರ್ಷ ವಯಸ್ಸಿನ ಗಂಡು ಆನೆ (ಟಸ್ಕರ್) ಇದಾಗಿದ್ದು, ಮತ್ತೊಂದು ಗಂಡು ಆನೆಯೊಂದಿಗೆ ನಡೆದ ಆಂತರಿಕ ಕಾಳಗವೇ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಅರಣ್ಯ ಇಲಾಖೆಯಿಂದ ವ್ಯಕ್ತವಾಗಿದೆ. ಅರಣ್ಯ ಸಿಬ್ಬಂದಿಗಳು ಪುರಾಣಿ ಶಾಖೆಯ ವ್ಯಾಪ್ತಿಯಲ್ಲಿ ನಡೆಸಿದ ನಿಯಮಿತ ಗಸ್ತು ಕಾರ್ಯದ ವೇಳೆ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಕಂಡುಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡಾಗ ಆನೆಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದ ಸುತ್ತಮುತ್ತ ವ್ಯಾಪಕವಾಗಿ ಹೆಜ್ಜೆ ಗುರುತುಗಳು, ಮಣ್ಣಿನ ಕಾಳಗ ಅಲುಗಾಡಿಕೆ ಹಾಗೂ ಸಂಘರ್ಷದ ಗುರುತುಗಳು ಕಂಡುಬಂದಿದ್ದು, ಆನೆಗಳ ನಡುವೆ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ. ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ನಂತರ ನಿಖರ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'
ಬಂಟ್ವಾಳ: ದಾರುಲ್ ಇರ್ಶಾದ್ ಅಧೀನದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರಿನಲ್ಲಿ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಸನದುದಾನ ಸಮಾರಂಭ ಇಂದು ನಡೆಯಲಿದೆ. ಪ್ರಸ್ತುತ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುತ್ತದೆ. ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಖಲೀಲುಲ್ ಬುಖಾರಿ ತಂಙಳ್, ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಆರ್ಸಿಬಿ ಕ್ರಿಕೆಟಿಗ ಯಶ್ ದಯಾಳ್ಗೆ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಣೆಯಾಗಿದೆ. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ಇದರಿಂದಾಗಿ ಯಶ್ ದಯಾಳ್ಗೆ ಬಂಧನದ ಭೀತಿ ಎದುರಾಗಿದೆ. ಕ್ರಿಕೆಟ್ ವೃತ್ತಿ ಜೀವನ ರೂಪಿಸಿಕೊಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಸಾಕ್ಷ್ಯಗಳು ಲಭ್ಯವಿದ್ದು, ತನಿಖೆ ನಡೆಯುತ್ತಿದೆ. ತನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು, ನನ್ನನ್ನು ಆರ್ಥಿಕವಾಗಿ ಶೋಷಿಸಲು ಹೀಗೆ ಮಾಡಲಾಗುತ್ತಿದೆ ಎಂದು ದಯಾಳ್ ಹೇಳಿಕೊಂಡಿದ್ದು, ಈ ನಡುವೆ ಜೈಪುರ ಪೋಕ್ಸೋ ನ್ಯಾಯಲಯದ ತೀರ್ಪು ಶಾಕ್ ನೀಡಿದ್ದು ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.
ಹೊಸ ವರ್ಷಕ್ಕೆ ಮೊದಲು ದಾಖಲೆ ಏರಿಕೆ ಕಂಡ ಚಿನ್ನ-ಬೆಳ್ಳಿ!
ಕಳೆದೆರಡು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದ ಚಿನ್ನ ಇದೀಗ ಶುಕ್ರವಾರ ದಾಖಲೆ ಏರಿಕೆ ಕಂಡಿದೆ. ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಷ್ಟು ಎಂಬ ವಿವರ ಇಲ್ಲಿದೆ. ಕ್ರಿಸ್ಮಸ್ ಹಬ್ಬ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಸಾಮಾನ್ಯವಾಗಿ ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಏರುವುದು ವಾಡಿಕೆ. ಕಳೆದೆರಡು ದಿನಗಳಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದ ಚಿನ್ನ ಇಂದು ಶುಕ್ರವಾರ ಸಾರ್ವಕಾಲಿಕ ಏರಿಕೆ ಕಂಡುಬಂದಿದೆ. ಫೆಡ್ ದರ ಕಡಿತದ ಬೆಟ್ ಗಳಲ್ಲಿ ಏರಿಕೆಯಾಗಿರುವುದು ಮತ್ತು ಅಮೆರಿಕ- ವೆನೆಜುವೆಲಾ ನಡುವಿನ ಉದ್ವಿಗ್ನತೆಯಿಂದಾಗಿ ಬೆಳ್ಳಿಯ ದರದಲ್ಲೂ ಶೇ 4ರಷ್ಟು ಏರಿಕೆಯಾಗಿದೆ. ಶುಕ್ರವಾರ ಚಿನ್ನ ಶೇ 0.65 ರಷ್ಟು ಏರಿಕೆಯಾಗಿ 10 ಗ್ರಾಂಗೆ 1,38,994 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದರೆ, ಬೆಳ್ಳಿ ಶುಕ್ರವಾರದಂದು ಶೇ 4 ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 2,32,741 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು? ಶುಕ್ರವಾರ ಡಿಸೆಂಬರ್ 26ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,002 (+77) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,835(+70) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,502 (+58) ರೂ. ಬೆಲೆಗೆ ತಲುಪಿದೆ. ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಬೆಳಗಿನ ವಹಿವಾಟಿನಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1,39,220 ರೂ., ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 1,27,640 ರೂ., ಮತ್ತು ಹತ್ತು ಗ್ರಾಂ 18 ಕ್ಯಾರೆಟ್ ಚಿನ್ನ 1,04,410 ರೂ. ಬೆಲೆಗೆ ತಲುಪಿದೆ. ಬೆಂಗಳೂರು 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ದೆಹಲಿ 24 ಕ್ಯಾರಟ್: 1,39,410 ರೂ. 22 ಕ್ಯಾರಟ್: 1,27,810 ರೂ. ಚೆನ್ನೈ 24 ಕ್ಯಾರಟ್: 1,39,870 ರೂ. 22 ಕ್ಯಾರಟ್: 1,28,210 ರೂ. ಹೈದರಾಬಾದ್ 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ವಿಜಯವಾಡ / ವಿಶಾಖಪಟ್ಟಣಂ 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ಬೆಳ್ಳಿ ಬೆಲೆಯಲ್ಲೂ ದಾಖಲೆ ಏರಿಕೆ ಚಿನ್ನದ ಬೆಲೆಗೆ ಸಮಾನವಾಗಿ ಬೆಳ್ಳಿಯ ದರವೂ ಹೊಸ ದಾಖಲೆಗಳನ್ನು ತಲುಪುತ್ತಿದೆ. ಕೈಗಾರಿಕಾ ಬಳಕೆ ಹಾಗೂ ಹೂಡಿಕೆ ಆಸಕ್ತಿ ಹೆಚ್ಚುತ್ತಿರುವುದರಿಂದ ಬೆಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು: ಕಿಲೋ ಬೆಳ್ಳಿ 2,34,100 ರೂ. ಹೈದರಾಬಾದ್: ಕಿಲೋ ಬೆಳ್ಳಿ 2,45,100 ರೂ. ವಿಜಯವಾಡ / ವಿಶಾಖಪಟ್ಟಣಂ: 2,45,100 ರೂ. ಚೆನ್ನೈ: 2,45,100 ರೂ.
ಕ್ರೈಸ್ತರ ಆಚರಣೆಗಳ ಮೇಲಿನ ದಾಳಿ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ: ಶಶಿ ತರೂರ್ ಕಳವಳ
ಹೊಸದಿಲ್ಲಿ: ಕ್ರೈಸ್ತ ಸಂಪ್ರದಾಯಗಳ ಮೇಲಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಿಗೆ ಭಾರತದ ಸಂವಿಧಾನಾತ್ಮಕ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕ್ರಿಸ್ಮಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿ ತರೂರು, ಕ್ರೈಸ್ತ ಸಂಪ್ರದಾಯಗಳ ಮೇಲಿನ ಇತ್ತೀಚಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಾಗಿ ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಗಳಾಗಿವೆ. ಆರಾಧನ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾದಾಗ ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತಿದೆ ಎಂದು ಹೇಳಿದರು. ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ವೇಳೆ ಹಲವು ಚರ್ಚ್ ಗಳಿಗೆ ಭೇಟಿ ನೀಡುತ್ತೇನೆ. ಆದರೆ, ಈ ವರ್ಷ ವಿಮಾನ ವಿಳಂಬವಾದ ಕಾರಣ ಎಲ್ಲಾ ಚರ್ಚ್ಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ನನಗೆ, ನನ್ನ ಕ್ಷೇತ್ರದ ಸದಸ್ಯರೊಂದಿಗೆ ಐಕ್ಯತೆ ಪ್ರದರ್ಶಿಸುವುದು ಮತ್ತು ಎಲ್ಲಾ ಸಮುದಾಯಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುವುದು ಕೇರಳ ರಾಜಕಾರಣಕ್ಕೆ ಕೇಂದ್ರಬಿಂದುವಾಗಿದೆ. ದುಃಖಕರವೆಂದರೆ, ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಸಮುದಾಯದ ಜನರ ಮೇಲೆ ದಾಳಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಸಂಪ್ರದಾಯಗಳ ಮೇಲೆ ದಾಳಿಯಾದಾಗ, ಕೇವಲ ಕ್ರೈಸ್ತ ಸಮುದಾಯದ ಜನರ ಮೇಲೆಯಲ್ಲ. ನಮ್ಮೆಲ್ಲರ ನಮ್ಮೆಲ್ಲರ ಮೇಲೂ ದಾಳಿ ನಡೆಯುತ್ತದೆ. ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತದೆ ಎಂದು ಹೇಳಿದರು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುದುಶ್ಶೇರಿಯಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಗುಂಪಿನ ಮೇಲೆ ನಡೆದ ಹಲ್ಲೆಯು ನಿಜವಾಗಿಯೂ ಆಘಾತಕಾರಿ. ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದಾನೆ. ಸಂಗೀತ ವಾದ್ಯಗಳಿಗೆ ಹಾನಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದು ಜಾತ್ಯತೀತ ಸಂಪ್ರದಾಯದ ಮೇಲಿನ ದಾಳಿಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಮೈಸೂರು ಅರಮನೆಯ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ: ಘಟನೆಯ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಜಿ ಪರಮೇಶ್ವರ್
ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ಸಂಜೆ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಬಲೂನ್ ಮಾರುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಕೆಲವೊಂದು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿ ಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ. ಸುಧಾ ಆಡುಕಳ ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಧಾ ಆಡುಕಳ ಅವರು ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು, ’ಗೀತಾಂಜಲಿ’ ಕವನ ಸಂಕಲನವನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ ಜೊತೆಗೆ ಎಂದೂ ಹುಟ್ಟದ ಮಗುವಿಗೆ ಪತ್ರ ಎಂಬ ಪುಸ್ತಕವನ್ನೂ ಅನುವಾದಿಸಿದ್ದಾರೆ. ಬಕುಲದ ಬಾಗಿಲು, ಒಂದು ಇಡಿಯ ಬಳಪ, ಮಗುವಿನ ಭಾಷೆ ಮತ್ತು ಶಿಕ್ಷಕ, ನೀಲಿ ಮತ್ತು ಸೇಬು ಎಂಬ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟ ಹಕ್ಕಿಯೊಂದು ಅಮ್ಮ-ಅಪ್ಪ ಕಟ್ಟಿದ ಗೂಡಲ್ಲಿ ಬೆಚ್ಚಗೆ ಮಲಗಿರುತ್ತದೆ. ಹುಳ ಹುಪ್ಪಟೆಗಳನ್ನು ಹಿಡಿದು ಬರುವ ಅವರ ದಾರಿ ಕಾಯುತ್ತದೆ. ಹತ್ತಿರ ಬಂದವೆಂಬ ಸುಳಿವು ಸಿಕ್ಕಿದರೆ ಸಾಕು, ಬ್ರಹ್ಮಾಂಡವನ್ನೇ ನುಂಗಿಬಿಡುವ ಹಸಿವೆಯನ್ನು ಕೊಕ್ಕಿಗೆ ತಂದುಕೊಂಡು ಗೂಡಿನ ಹೊರಗೆ ಬಾಯಿ ಚಾಚುತ್ತವೆ. ಒಮ್ಮೆ ಮರಿಗಳು ಬಂದವೆಂದರೆ ಅಪ್ಪನಿಗೆ ಗೂಡಿನಲ್ಲಿ ಮತ್ತೆ ಜಾಗವಿಲ್ಲ. ಬೆಚ್ಚನೆಯ ಅಪ್ಪುಗೆಗಾಗಿ ಅಮ್ಮ ಮಾತ್ರವೇ ಕೆಲಸಮಯ ಗೂಡಿನಲ್ಲಿ ತುಸು ಜಾಗ ಮಾಡಿಕೊಳ್ಳುತ್ತದೆ. ನೋಡನೋಡುತ್ತಿದ್ದಂತೆ ರೆಕ್ಕೆ ಬೆಳೆಸಿಕೊಂಡ ಹಕ್ಕಿಗಳನ್ನು ಬಲವಂತವಾಗಿ ಗೂಡಿನಾಚೆಗೆ ದೂಡುತ್ತದೆ. ಕುಯ್ಯೋ... ಕುರ್ರೋ ಅನ್ನುತ್ತಲೇ ಗಾಳಿಯ ಮಡಿಲಿಗೆ ತನ್ನ ಭಾರವನ್ನು ತೇಲಿಬಿಡುವ ಮರಿಹಕ್ಕಿಗಳು ಹಗುರಾಗುವ ಹೊಸ ದಾರಿಗಳನ್ನು ಕಂಡುಕೊಳ್ಳುತ್ತವೆ. ಬಯಲಿಗೆ ಜಾರಿದ ಮರಿಹಕ್ಕಿ ಮತ್ತೆಂದೂ ತನ್ನ ಹಳೆಯ ಗೂಡಿಗೆ ಮರಳಲಾರದು. ಬೇಕೆನಿಸಿದರೆ ತನಗೆಂದು ಹೊಸಗೂಡೊಂದನ್ನು ಕಟ್ಟಿಕೊಳ್ಳುವುದು. ಸಿಟ್ಟು ಬಂದರೂ ಒಬ್ಬರಿಗೊಬ್ಬರು ದೂರವಿರಲಾರದಂತಹ ಪುಟ್ಟ ಗೂಡಿನಿಂದ ಹೊರಬಂದ ನಮ್ಮೆಲ್ಲರ ಸ್ಥಿತಿಯೂ ಪುಟ್ಟ ಹಕ್ಕಿಗಳಿಗಿಂತ ಬೇರೆಯೇನಲ್ಲ. ಆದರೆ ಹಕ್ಕಿಯಂತೆ ರೆಕ್ಕೆ ಬಲಿತ ಮೇಲೆ ಹುಟ್ಟಿಬೆಳೆದ ಗೂಡನ್ನು ಮರೆತು ಬಯಲಾಗಿಬಿಡುವ ಜಂಗಮತನ ನಮಗಿನ್ನೂ ದಕ್ಕಿಲ್ಲ. ಮತ್ತೆ, ಮತ್ತೆ ಅದೇ ಗೂಡಿಗೆ ಮರಳುವ, ಬಾಲ್ಯದ ಹಸಿತನವನ್ನು ಅನುಭವಿಸಬೇಕೆನ್ನುವ ತುಡಿತಕ್ಕೆ ಕೊನೆಯೆಂಬುದಿದೆಯೇ? ಮನಸ್ಸಿನ ಗೋಡೆಯ ಮೇಲೆ ಬಾಲ್ಯದ ನೆನಪುಗಳ ಚಿತ್ರ ಮಾಸುವುದೇ ಇಲ್ಲ. ಮನೆಯೆಂಬ ಪುಟ್ಟ ಗೂಡಿನ ಅಂಗಳದಲ್ಲಿ ನಿಂತು ನೋಡಿದರೆ ಒಂದು ಬದಿಯಲ್ಲಿ ಎತ್ತರೆತ್ತರಕ್ಕೆ ಎದ್ದುನಿಂತ ಪರ್ವತಗಳ ಸಾಲು, ಇನ್ನೊಂದು ಬದಿಯಲ್ಲಿ ಸಳಸಳವೆಂದು ಸದ್ದು ಮಾಡುತ್ತಾ ಹರಿಯುವ ಹೊಳೆ, ಮತ್ತೊಂದು ಬದಿಯಲ್ಲಿ ಹಸುರುಟ್ಟು ನಳನಳಿಸುವ ಹಸಿರು ಗದ್ದೆಯ ಬಯಲು. ಕೆಲಸಗಳ ಭರಾಟೆಯಲ್ಲಿ ಕಳೆದು ಹೋಗುವ ಹಗಲು, ಸಂಜೆಯಿಳಿಯಿತೆಂದರೆ ತೆರೆದುಕೊಳ್ಳುವ ಕಿನ್ನರ ಲೋಕದ ಬೆಡಗು. ಝಗಮಗಿಸುವ ವಿದ್ಯುದ್ದೀಪಗಳಿನ್ನೂ ಆ ಪುಟ್ಟ ಹಳ್ಳಿಯನ್ನು ತಲುಪಿರದ ದಿನಗಳವು. ರಾತ್ರಿಯ ಕತ್ತಲನ್ನು ಕಳೆಯಲು ಸೀಮೆಎಣ್ಣೆಯ ಬುಡ್ಡಿಗಳು ಹೊರಗಿಣುಕುತ್ತಿದ್ದವು. ಎಣ್ಣೆ ತೀರಿತೆಂದರೆ ಪುಟ್ಟ ಹಣತೆಗಳದೇ ಕಾರುಬಾರು. ದೀಪದ ಬೆಳಕಿನಲ್ಲಿ ಆ ಪುಟ್ಟ ಗೂಡಿನ ಒಳಗಿರುವ ವಸ್ತುಗಳೆಲ್ಲವೂ ತಮ್ಮ ನೆರಳನ್ನು ಅಡ್ಡಾದಿಡ್ಡಿಯಾಗಿ ಹರಿಬಿಟ್ಟು ಗೋಡೆ, ನೆಲದ ಮೇಲೆಲ್ಲ ಹೊಸ ಚಿತ್ರಗಳನ್ನು ಮೂಡಿಸುತ್ತಿದ್ದವು. ಬೀಸುವ ಗಾಳಿಯ ಅಲೆಗೆ ತಲೆಯಲ್ಲಾಡಿಸುವ ದೀಪದ ಕುಡಿಯ ತಾಳಕ್ಕೆ ತಕ್ಕಂತೆ ಅಲುಗಾಡುತ್ತ ಜೀವ ಪಡೆದುಕೊಳ್ಳುತ್ತಿದ್ದವು. ದೀಪದ ಸುತ್ತಲೂ ಬಟ್ಟಲನ್ನಿಟ್ಟು ಊಟ ಮುಗಿಸಿದ ಮೇಲೆ ತಾಂಬೂಲದ ತಟ್ಟೆ ಕೈಬೀಸಿ ಕರೆಯುತ್ತಿತ್ತು. ಹಸಿರೆಲೆ, ಕಂದು ಅಡಿಕೆ, ಬಿಳಿಯ ಸುಣ್ಣ, ಕಪ್ಪು ತಂಬಾಕಿನ ಚೂರು ಎಲ್ಲವೂ ಬಾಯೊಳಗೆ ಅರೆದು ಕೆಂಪಾಗುವ ಹೊತ್ತಿನಲ್ಲಿ ಗಿಳಿಗೂಟಕ್ಕೆ ತೂಗುಬಿಟ್ಟ ಮದ್ದಲೆ ‘ಬಾ ನನ್ನ ಬಾರಿಸು’ ಎಂದು ಅಪ್ಪನನ್ನು ಕರೆಯುತ್ತಿತ್ತು. ಬಾಯಿತುಂಬಿದ ಕೆಂಪುರಸವನ್ನು ಪಿಚಕ್ಕನೆ ಉಗಿದು ಮದ್ದಲೆಯನ್ನು ಮಗುವಂತೆ ಹಗುರಾಗಿ ಇಳಿಸಿ ತೊಡೆಗೇರಿಸಿಕೊಳ್ಳುವ ಹೊತ್ತಿಗೆ ಮನಸ್ಸಿನ ಭಾವಕ್ಕೆ ತಕ್ಕಂತೆ ಯಕ್ಷಗಾನದ ಆಲಾಪವೊಂದು ಅವರ ಗಂಟಲಿನಿಂದ ಹೊರಬರುತ್ತಿತ್ತು. ಹಾಡಿನ ರಾಗಕ್ಕೆ ತಕ್ಕಂತೆ ಬೆರಳುಗಳು ಮದ್ದಲೆಯ ಮೇಲೆ ನಲಿಯುತ್ತಿದ್ದವು. ಕತ್ತಲೆಯನ್ನು ಸೀಳಿಕೊಂಡು ಹೊರಡುವ ಯಕ್ಷಗಾನದ ರಾಗ ಸುತ್ತಲಿನವರ ಮನೆಯ ಬಾಗಿಲು ಬಡಿದಾಗ ಮನೆಯೆದುರು ಬಿದ್ದ ಮಡಲಿನ ಸೂಡಿ ಕಟ್ಟುವ ಆಟದ ಮಳ್ಳರು ಪುಟ್ಟ ಗೂಡಿನೆಡೆಗೆ ದೌಡಾಯಿಸುತ್ತಿದ್ದರು. ಬೆಂಕಿ ಹೊತ್ತಿಸಿದ ಸೂಡಿಯನ್ನು ಬೀಸುತ್ತಾ ಅವರು ಗದ್ದೆಯ ಹಾದಿಯಲ್ಲಿ ನಡೆದು ಬರುತ್ತಿದ್ದರೆ ಬೆಂಕಿಯ ಚೆಂಡುಗಳು ಉರುಳಿ ಬರುತ್ತಿರುವಂತೆ ಕಾಣುತ್ತಿತ್ತು. ಅಂಗಳದ ಸುತ್ತ ನೆರೆದು ಅಪ್ಪನ ಭಾಗವತಿಕೆಯನ್ನು ಮೈದುಂಬಿಸಿಕೊಳ್ಳುವ ಅವರು ಹಾಡು ಮುಗಿದೊಡನೇ ಕವಳವನ್ನು ಬಾಯ್ತುಂಬಿಸಿಕೊಂಡು ಬಂದ ಹಾದಿಯಲ್ಲಿ ಮರಳುತ್ತಿದ್ದರು. ನಾಳೆಗಾಗಿ ಎಣ್ಣೆಯುಳಿಸಲು ಹೊಂಚು ಹಾಕುತ್ತಿದ್ದ ಅಮ್ಮ ‘ಮಾತಾಡಲು ಬೆಳಕು ಬೇಕಿಲ್ಲ’ ಎನ್ನುತ್ತಲೇ ನಮ್ಮ ಮಾತುಕತೆಯ ನಡುವೆಯೇ ದೀಪವಾರಿಸುತ್ತಿದ್ದಳು. ಮತ್ತೆ ತಾಸುಗಟ್ಟಲೆ ಮುಂದುವರಿಯುವ ಮಾತುಕತೆಗಳು ಮನದ ಕತ್ತಲೆ ಕಳೆದು ಬೆಳಕು ತುಂಬುತ್ತಿದ್ದವು. ಆ ಪುಟ್ಟ ಗೂಡಿನ ಬಗ್ಗೆ ಇಷ್ಟೇ ನೆನಪುಗಳಿದ್ದರೆ ಮತ್ತೆ, ಮತ್ತೆ ಅಲ್ಲಿಗೆ ಹೊಕ್ಕಿಬರುವ ಹುಕಿಗೆ ಕೊನೆಯೆಂಬುದೇ ಇರುತ್ತಿರಲಿಲ್ಲ. ಹಸಿದ ಹಾವೊಂದು ಗೂಡಿಗೆ ದಾಳಿಯಿಟ್ಟರೆ ಹಕ್ಕಿಯ ಗೂಡು ಛಿದ್ರವಾಗುವಂತೆ ಮೃತ್ಯುವೆಂಬ ಹಾವು ತಾಯಿ ಹಕ್ಕಿಯನ್ನು ಕಚ್ಚಿಹೋಯಿತು. ಸಂಗಾತಿಯನ್ನು ಕಳಕೊಂಡ ಗಂಡುಹಕ್ಕಿ ಹಾಡುವುದನ್ನೇ ಮರೆತು ಮೌನವಾಯಿತು. ಸಡಿಲಗೊಂಡ ಮನೆ ಬೀಳಲು ಗಾಳಿಯ ನೆವವೂ ಸಾಕು. ಒಂದೊಂದೇ ಗೋಡೆಗಳುರುಳುತ್ತ ಮನೆಯೆಂಬುದು ಬಯಲಾಗಿಹೋಯ್ತು. ಸುರಿವ ಕಷ್ಟದ ಮಳೆಯಿಂದ ಬಚಾವಾಗಲು ಹಕ್ಕಿಗಳೆಲ್ಲವು ದಿಕ್ಕಾಪಾಲಾದವು. ಹೀಗೆ ಹಕ್ಕಿಯಂತೆ ಹಾರಿದವರು ಮನುಷ್ಯರಾಗಿರುವುದರಿಂದಲೇ ಮತ್ತೆ, ಮತ್ತೆ ಆ ಗೂಡನ್ನು, ಕಾಡನ್ನು ನೆನಪಿಸಿಕೊಳ್ಳುತ್ತಲೇ ಇದ್ದರು. ಒಮ್ಮೊಮ್ಮೆ ಅದೊಂದು ಸ್ವರ್ಗ ಸದೃಶ ಜಾಗವಾಗಿ ಮನದುಂಬುವುದು, ಮರುಗಳಿಗೆಯಲ್ಲಿಯೇ ಅಮ್ಮನನ್ನು ಕಸಿದುಕೊಂಡ ಮೃತ್ಯುಕೂಪ ಅಂತಲೂ ಅನಿಸುವುದು, ಇನ್ನೊಮ್ಮೆ ಅಲ್ಲಿ ನಮ್ಮದೆನ್ನುವುದು ಏನೂ ಇಲ್ಲವೆಂಬ ಶೂನ್ಯಭಾವ ಮೊಳೆಯುವುದು, ಮರುಕ್ಷಣದಲ್ಲಿಯೇ ಅಮ್ಮನಿನ್ನೂ ಅಲ್ಲಿಯೇ ಮಲಗಿದ್ದಾಳೆ ಎಂಬ ಆಪ್ತಭಾವ ಮೊಳೆಯುವುದು. ಈ ಭಾವಗಳ ತಾಕಲಾಟ ಅದೆಷ್ಟು ತೀವ್ರವಾಗಿತ್ತೆಂದರೆ ಎರಡು ದಶಕಗಳ ಕಾಲ ಆ ಜಾಗಕ್ಕೆ ಮರಳುವ ಧೈರ್ಯವೇ ಬರಲಿಲ್ಲ. ಅದೆಷ್ಟೋ ಸಲ ಹತ್ತಿರದವರೆಗೆ ಹೋಗಿ ಮೇಲಿನಿಂದ ಇಣುಕಿ, ಹೊಳೆಯಂಚಿನವರೆಗೂ ಸಾಗಿ ದಾಟಲಾರದೇ ಮರಳಿದ್ದೂ ಇದೆ. ಆತ್ಮದ ತುಣುಕೊಂದನ್ನು ಹೂಳಿದ್ದ ಜಾಗವದು ಎಂದೆನಿಸಿದ್ದು ಅದೆಷ್ಟು ಬಾರಿಯೋ. ತಹಬಂದಿಗೆ ತರಲಾರದ ತಾಕಲಾಟಗಳ ನಂತರ ಅದೊಂದು ಪುಟ್ಟ ಜಾಗ ನನ್ನ ನೆನಪಿನ ಕೋಶದ ಭಾಗವಾಗಿ ಹಾಗೇ ಉಳಿದುಬಿಡಲೆಂದು ಮರುಪ್ರಯಾಣದ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಮಾಂತ್ರಿಕ ಶಕ್ತಿಯಿದೆ. ನನ್ನ ಮಾತು-ಕತೆಗಳಲ್ಲಿ ಮತ್ತೆ, ಮತ್ತೆ ಬರುವ ಆ ಊರನ್ನು ತಮ್ಮದೇ ಕಾಲ್ಪನಿಕ ಲೋಕದಲ್ಲಿ ಕಟ್ಟಿಕೊಂಡ ಮಕ್ಕಳು ಅಲ್ಲಿಗೊಮ್ಮೆ ಭೇಟಿನೀಡುವ ಉತ್ಸಾಹ ತೋರಿದಾಗ ಇಲ್ಲವೆನ್ನಲಾಗದೇ ಹೊರಟಿದ್ದೆ. ಇಷ್ಟು ವರ್ಷಗಳ ನಂತರವೂ ಕರುಳ ಬಂಧದ ಎಳೆಗಳನ್ನು ಬೆಸೆದುಕೊಂಡಿರುವ ಜೀವಗಳಿಗೆ, ನಮ್ಮ ಪುಟ್ಟ ಗೂಡನ್ನು ತಮ್ಮದಾಗಿಸಿಕೊಂಡು ಇಮಾರತನ್ನು ಕಟ್ಟಿ ಬದುಕುತ್ತಿರುವ ಖರೀದಿದಾರರಿಗೆ ನಮ್ಮ ಬರವಿನ ಬಗ್ಗೆ ಮೊದಲೇ ತಿಳಿಸಿದ್ದೆ. ನಾನು ಓದಿದ ಸಣ್ಣ ಶಾಲೆಯಿಂದು ಅಮಿತೋತ್ಸಾಹದ ಶಿಕ್ಷಕರಿಂದಾಗಿ ರಾಜ್ಯದಲ್ಲಿಯೇ ಹೆಸರಾಗಿದ್ದುದರ ಬಗ್ಗೆ ಮೊದಲೇ ತಿಳಿದಿದ್ದೆ. ನಮ್ಮೂರ ಹೆಂಗಸರ ಆಪ್ತ ಗೆಳತಿಯರಂತಿದ್ದ ಮಾರಿಯಮ್ಮ, ದೇವಿಯಮ್ಮರಿಗೆಂದು ಅವರಿಗಿಷ್ಟದ ಕುಂಕುಮ, ಹಸಿರು ಬಳೆಗಳನ್ನು ಖರೀದಿಸಿದ್ದೆ. ಇಷ್ಟಾಗಿಯೂ ನಮ್ಮ ಕಾರು ಹೆದ್ದಾರಿಯನ್ನು ಬಿಟ್ಟು ಆ ಊರಿಗೆ ತಿರುಗುವಾಗ ಹೊಟ್ಟೆಯೊಳಗಿಂದ ನೋವು ಎದ್ದುಬಂದಂತಹ ತಳಮಳ. ‘ಅಂದು ಹೋದವಳು ಇಂದು ಬಂದೆಯೇನು?’ ಎಂದು ಅಮ್ಮನೇ ಎದುರು ನಿಂತು ಕೇಳಿದಷ್ಟು ಕಳವಳ. ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ. ಎಂಟು ಮೈಲಿ ನಡೆದು ಪೇಟೆಯ ಮುಖನೋಡುತ್ತಿದ್ದ ಹೈದರೆಲ್ಲ ಮನೆಯಿಂದ ಗದ್ದೆಗೆ ಹೋಗಲೂ ಸ್ಕೂಟರನ್ನೇರುತ್ತಾರೆ. ಅರೆ! ನನ್ನ ಊರೂ ನಾಗರಿಕತೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಸಂಭ್ರಮಿಸುತ್ತಲೇ ತಂಪಾದ ಐಸ್ ಕ್ರೀಮನ್ನು ಸವಿಯತೊಡಗಿದೆ. ಕಲಿತ ಶಾಲೆಯ ಎದುರಿಗೊಂದು ಫೋಟೊ ಹೊಡೆಸಿಕೊಂಡು, ಸುತ್ತ ಹತ್ತಾರು ಹಳ್ಳಿಗಳಿಂದ ಬರುವ ನೂರಾರು ಮಕ್ಕಳು ಶಾಲೆಯಂಗಳದಲ್ಲಿ ಆಡುವ ದೃಶ್ಯವನ್ನು ಕಣ್ತುಂಬಿಕೊಂಡಾಯಿತು. ಅಷ್ಟರಲ್ಲಿ ಬಂದ ಊರಿನ ಹೊಸ ಮುಖಂಡ ಇಲ್ಲಿರುವ ಕಟ್ಟಡವೆಲ್ಲ ತನ್ನದೇ ಎಂದು ಎದೆಯುಬ್ಬಿಸಿ ಹೇಳುತ್ತ, ಇದನ್ನೆಲ್ಲ ಕಟ್ಟಲು ಬೇಕಾದ ಸಾಲದ ಮಂಜೂರಾತಿಗಾಗಿ ಇಡಿಯ ಊರನ್ನೇ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ತಂದಿರುವುದಾಗಿ ಹೇಳಿದ. ಶಾಲೆಗೆ ಬರುವ ಮಕ್ಕಳಿಗೆ ಬಸ್ಸಿನ ಸೌಲಭ್ಯವಿದೆಯೆ? ಎಂದು ಕೇಳಿದರೆ, ‘‘ಬಸ್ ಎಲ್ಲ ಈಗ ಯಾರು ಹತ್ತುತ್ತಾರೆ? ಎಲ್ಲರಿಗೂ ಅವರವರದೇ ವೆಹಿಕಲ್ ಗಳಿವೆ’’ ಎಂದವನ ಮಾತನ್ನು ತುಂಡರಿಸುತ್ತಾ, ‘‘ಇಲ್ಲದವರಿಗೆ?’’ ಎಂಬ ಪ್ರಶ್ನೆಯ ಬಾಣವನ್ನು ತೂರಿದೆ. ‘‘ರಿಕ್ಷಾ, ಗಿಕ್ಷಾ ವ್ಯವಸ್ಥೆ ಮಾಡಿಕೊಳ್ತಾರೆ.’’ ಉಡಾಫೆಯ ಮಾತು ತೂರಿದ. ಜಿಲ್ಲಾ ಕೇಂದ್ರದ ಮಗ್ಗುಲಿನಲ್ಲಿಯೇ ಇರುವ ಊರಿನವರೂ ತಮ್ಮ ಮಕ್ಕಳಿಗೆ ಗ್ರಾಮೀಣ ಪ್ರಮಾಣಪತ್ರ ಬೇಕೆಂದು ಹಂಬಲಿಸಿ ಪಡೆದುಕೊಳ್ಳುತ್ತಿರುವಾಗ ಈಗಷ್ಟೇ ಅಕ್ಷರ ಲೋಕಕ್ಕೆ ಕಾಲಿಡುತ್ತಿರುವ ಈ ಮಕ್ಕಳು ಆ ಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ ಕೇಳಿದಾಗ ಖೇದವೆನಿಸಿತು. ವ್ಯಾಪಾರಿ ಮನಸ್ಥಿತಿಗೆ ಬಡತನವೂ ವ್ಯಾಪಾರದ ಸರಕೆ! ಮನೆಯಲ್ಲಿ ಮಾಡಿದ ಕೆಂಪಕ್ಕಿಯ ಅನ್ನ, ಹುಳಿಮಾವಿನ ಹಣ್ಣಿನ ಸಿಹಿಗೊಜ್ಜು, ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ, ಮನೆಯಲ್ಲೇ ಬೆಳೆದ ಅಳಸಂಡೆಯ ಪಲ್ಯ, ಊರ ಹಸುವಿನ ಹಾಲಿನ ಸಿಹಿಮೊಸರು, ಮಿಡಿಮಾವಿನ ಕಾಯಿಯ ಉಪ್ಪಿನ ಕಾಯಿಯೊಂದಿಗೆ ಚಪ್ಪರಿಸಿ ಉಣ್ಣುವಾಗ ಮತ್ತದೇ ಹಕ್ಕಿಯ ಗುಟುಕಿನ ನೆನಪು. ಹಸಿಯಡಿಕೆಯ ಕವಳ ತಿಂದು ಪಟ್ಟಾಂಗಕ್ಕೆ ಕೂತರೆ ಬಿಡಿಸಲಾರದ ಸಿಕ್ಕುಗಳ ಸುರಿಮಳೆ. ಇಪ್ಪತ್ತು ವರ್ಷಗಳಾದರೂ ಖಾತಾ ಆಗದ ಜಮೀನು, ಸತ್ತು ಹೋದೆನೆಂದರೂ ಕೈಗೆಟುಕದ ವೈದ್ಯಕೀಯ ಸೌಲಭ್ಯಗಳು, ಮನೆಯಿಂದ ಶಾಲೆಗೆ ಹುಡುಗಿಯೊಬ್ಬಳು ಮೊದಲಿನಂತೆ ನಡೆದುಹೋಗಲಾಗದ ಹೆದರಿಕೆ, ಮೈಲುಗಳಾಚೆಯ ಶಾಲೆಗೆ ಕಳಿಸುವ ರಿಕ್ಷಾಕ್ಕೆ ಸಾವಿರದ ಲೆಕ್ಕದಲ್ಲಿ ಸುರಿಯಬೇಕಾದ ನೋಟುಗಳು, ಬತ್ತಿದ ಹೊಳೆಯಿಂದಾಗಿ ಬಣಗುಡುವ ತೋಟ, ಸುಣ್ಣ ಕಾಣದೇ ಬಿರುಕು ಬಿಟ್ಟ ಮನೆಯ ಗೋಡೆಗಳು..... ಹಳ್ಳಿಗಳ ಬವಣೆ ತೀರುವುದೇ ಇಲ್ಲ ಎನಿಸಿ ಖಿನ್ನವಾಯಿತು ಮನಸ್ಸು. ವರ್ಷಕ್ಕೊಮ್ಮೆ ಮಹಾನವಮಿಯ ದಿನ ಪೂಜಾರಿಯ ಮೈದುಂಬುತ್ತಿದ್ದ ಮಾರಿಯೀಗ ವಾರಕ್ಕೆರಡು ದಿನ ಬಂದು ಊರ, ಪರವೂರಿನವರ ದುಃಖ ಪರಿಹರಿಸುವಳಂತೆ. ದೇವಿ ಗುಡಿಯ ಸುತ್ತಲೂ ಈಗ ವಿಶಾಲ ಬಯಲು, ಪ್ರತಿ ವರ್ಷವೂ ಜಾತ್ರೆ ನೆರೆಯುವುದಂತೆ. ಕೆಂಗಣ್ಣು ಬಿಟ್ಟು ಕುಳಿತ ಮಾರಮ್ಮನ ಗುಡಿಗೆ ಅಮ್ಮನೊಡನೆ ಬಂದು ದೇವಿಯ ನೋಟಕ್ಕೆ ಹೆದರುತ್ತಲೇ ಅಮ್ಮನ ಸೆರಗ ಹಿಡಿದು ನಿಂತು ನಮಿಸುತ್ತಿದ್ದುದು ನೆನಪಾಗಿ ಕೈಮುಗಿದೆ. ಸುತ್ತ ಸೋಕಿದ ಗಾಳಿಯಲ್ಲಿ ಅಮ್ಮನ ಉಸಿರಿನ ಘಮವಿತ್ತೆ? ಎಷ್ಟು ನೆನಪಿಸಿಕೊಂಡರೂ ನೆನಪಾಗುತ್ತಿಲ್ಲ ಈ ಹೊತ್ತು.
ಮೈಸೂರು ಅರಮನೆ ಮುಂಭಾಗ ಬಲೂನ್ ಗ್ಯಾಸ್ ಬ್ಲಾಸ್ಟ್ ದುರಂತ; ನಡೆದಿದ್ದೇನು?
ಮೈಸೂರು ಅರಮನೆ ಎದುರು ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಸ್ಫೋಟದ ಶಬ್ದ ದೂರದವರೆಗೂ ಕೇಳಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕದಲ್ಲಿ ಕುರ್ಚಿ ಕದನ; ಡಿಕೆ ಬಣದ ವಿರುದ್ಧ ಅಹಿಂದ ಸಮಾವೇಶಕ್ಕೆ ಸಿದ್ದು ಪ್ಲಾನ್: ಡಿಕೆಶಿ ಸಿಎಂ ಕನಸು ಭಗ್ನ!
ಬೆಂಗಳೂರು: ಮೈಕೊರೆಯುವ ಚಳಿಯಲ್ಲೂ ಕರ್ನಾಟಕ ರಾಜಕಾರಣದಲ್ಲಿ ಕುರ್ಚಿ ಕದನ ಕಾವೇರಿದೆ. ಮುಖ್ಯಮಂತ್ರಿ ಸ್ಥಾನದ ಕುರ್ಚಿ ಹಗ್ಗಜಗ್ಗಾಟ ಸದ್ಯ ತಾರಕಕ್ಕೇರಿಗೆ. ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂಬ ಚರ್ಚೆ ಕೇವಲ ಚರ್ಚೆಯಾಗಿಯೇ ಉಳಿದಿದೆ. ನವೆಂಬರ್ ಆಯ್ತು, ಡಿಸೆಂಬರ್ ಆಯ್ತು. ಸದ್ಯ ಇದೀಗ ಜನವರಿಯ ಸಂಕ್ರಾಂತಿ ನಡೆಯಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿಯೇ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ
ಎಸ್ ಜೆ ಎಂ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ 2026;ನಿರ್ವಹಣಾ ಸಮಿತಿ ಆಯ್ಕೆ
ಮಂಗಳೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಕರ್ನಾಟಕ ಇದರ ಅಧೀನದಲ್ಲಿ ನಡೆಯಲಿರುವ ಮದ್ರಸಾ ವಿದ್ಯಾರ್ಥಿಗಳ ಪ್ರತಿಭೋತ್ಸವ 2026 ಇದರ ನಿರ್ವಹಣಾ ರಾಜ್ಯ ಸಮಿತಿಯನ್ನು ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಚೇರ್ಮಾನಾಗಿ ಸಿರಾಜುದ್ದೀನ್ ಸಖಾಫಿ ಮಠ, ಉಪ ಚೇರ್ಮಾನಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ, ಚೀಫ್ ಕನ್ವೀನರಾಗಿ ಅಬೂಬಕರ್ ಮುಸ್ಲಿಯರ್ ಕುಕ್ಕಾಜೆ, ಜೊತೆ ಕನ್ವೀನರಾಗಿ ಶರೀಫ್ ಸಖಾಫಿ ನೆಕ್ಕಿಲ್ ಆಯ್ಕೆಗೊಂಡರು. ಸದಸ್ಯರುಗಳಾಗಿ ಎನ್ ಎ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಪಿ ಎಂ ಮಹಮ್ಮದ್ ಮದನಿ, ರಶೀದ್ ಸಖಾಫಿ ಮಜೂರು, ಹಾಫಿಲ್ ಹನೀಫ್ ಮಿಸ್ಬಾಹಿ, ಇಬ್ರಾಹಿಂ ಸಖಾಫಿ ಪುಂಡೂರ್, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ನಈಮಿ ಇವರನ್ನು ಆರಿಸಲಾಯಿತು. ಮದ್ರಸ, ರೇಂಜ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಲಿದೆಯೆಂದು ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ತಿಳಿಸಿದರು.
ಹೊಸವರ್ಷಕ್ಕೆ ಪುಂಡಾಟಿಕೆ ತೋರಿದಲ್ಲಿ ತಕ್ಕ ಶಾಸ್ತಿ; ಹೋಮ್ಸ್ಟೇ, ಹೋಟೆಲ್ ಮಾಲೀಕರಿಗೆ ಸೂಚನೆ
ಹೊಸ ವರ್ಷದ ಸಂಭ್ರಮಾಚರಣೆಗೆ ವಿಜಯನಗರ ಜಿಲ್ಲಾ ಪೊಲೀಸ್ ಪಡೆ ಸಜ್ಜಾಗಿದೆ. ಹಂಪಿ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಅಳವಡಿಕೆ, ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ: ಪುರುರಾಜ ಸಿಂಗ್ ಸೋಲಂಕಿ
ಚಿತ್ರದುರ್ಗ ಬಸ್ ದುರಂತ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮೃತ್ಯು
ಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪದ ಆನೆಸಿದ್ರಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ನಡೆದ ಬಸ್ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಸೀ ಬರ್ಡ್ ಬಸ್ ಚಾಲಕ ಮಹಮದ್ ರಫೀಕ್ ಮೃತ ವ್ಯಕ್ತಿ. ಬಸ್ ದುರಂತದಲ್ಲಿ ಮಹಮದ್ ರಫೀಕ್ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಎರಡು ಕಾಲು, ಒಂದು ಕೈ ಮುರಿತಕ್ಕೊಳಗಾಗಿತ್ತು. ಇವರನ್ನು ಹುಬ್ಬಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಆಪರೇಷನ್ ವೇಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾದಕೀಯ | ನಾಲಗೆ ಕತ್ತರಿಸಲ್ಪಟ್ಟ ಮೂಗ ವರ್ಷ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Year Ender 2025: 'ಸಂವತ್ಸರದಲ್ಲಿ ಅಗ್ನಿದುರಂತಗಳು ಹೆಚ್ಚಾಗಲಿವೆ' ಎನ್ನುವ ಭವಿಷ್ಯ ನುಡಿದಿದ್ದ ಕೋಡಿಶ್ರೀ
Kodi Mutt Swamiji Fire accident prediction : ರಾಜಕೀಯ ಬೆಳವಣಿಗೆ ಮತ್ತು ಪ್ರಾಕೃತಿಕವಾಗಿ ನಡೆಯುವ ದುರಂತದ ಭವಿಷ್ಯ ನುಡಿಯುವ ಕೋಡಿಮಠದ ಸ್ವಾಮೀಜಿ, ವರ್ಷದಲ್ಲಿ ಹಲವು ಅಗ್ನಿ ಅವಘಡಗಳು ಸಂಭವಿಸಲಿದೆ ಎಂದು ಹೇಳಿದ್ದರು. ಅದರಂತೆಯೇ, ಈ ವರ್ಷದಲ್ಲಿ (2025) ಹಲವು ದುರಂತಗಳು ಸಂಭವಿಸಿದೆ.
ರೈಲ್ವೆ ಷೇರುಗಳ ಮೌಲ್ಯ ದಿಢೀರ್ ಏರಿಕೆ - ಏನು ಕಾರಣ? ಈಗ ಷೇರುಗಳನ್ನು ಕೊಳ್ಳೋದು ಸರಿಯೇ?
ರೈಲ್ವೆ ಷೇರುಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಆರ್ ವಿ ಎನ್ ಎಲ್ ಮತ್ತು ಐ ಆರ್ ಎಫ್ ಸಿ ಷೇರುಗಳು ಉತ್ತಮ ಪ್ರದರ್ಶನ ತೋರುತ್ತಿವೆ. ಕೇಂದ್ರ ಬಜೆಟ್ ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ರೈಲು ದರದಲ್ಲಿ ಸಣ್ಣ ಹೆಚ್ಚಳವಾಗಿದೆ. ರೈಲು ಸುರಕ್ಷತೆಗೆ ಹೆಚ್ಚಿನ ಹಣ ಮೀಸಲಿಡುವ ಸಾಧ್ಯತೆ ಹೂಡಿಕೆದಾರರನ್ನು ಆಕರ್ಷಿಸಿದೆ.
‘ಗ್ರೀನ್ ಕ್ರೆಡಿಟ್’ನಿಂದ ಯಾರಿಗೆ ಲಾಭ?
2023ರಲ್ಲಿ ಮೋದಿ ಸರಕಾರ ‘ಗ್ರೀನ್ ಕ್ರೆಡಿಟ್’ ಎಂಬ ಕಾರ್ಯಕ್ರಮ ಪ್ರಾರಂಭಿಸಿತು. ಅದು ಪರಿಸರ ಸಂರಕ್ಷಣೆಗೆ ಆಧುನಿಕ ವಿಧಾನ ಎಂದು ಜಾಗತಿಕ ಮಟ್ಟದಲ್ಲಿ ಹೇಳಲಾಯಿತು. ಕ್ಷೀಣಗೊಂಡ ಅರಣ್ಯ ಭೂಮಿ ಗುರುತಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಆದೇಶಿಸುತ್ತದೆ. ಅಂದರೆ, ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರದ, ಆದರೆ ಮರಗಳನ್ನು ಬೆಳೆಸಿ ಮರಳಿ ಕಾಡು ಸೃಷ್ಟಿಸಬಹುದಾದ ಪ್ರದೇಶಗಳನ್ನು ಗುರುತಿಸುವುದು ಇದರ ಉದ್ದೇಶವೆನ್ನಲಾಗಿತ್ತು. ಕೇಂದ್ರ ಸರಕಾರ ‘ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ’ಗೆ (ICFRE) ಅಂತಹ ಎಲ್ಲಾ ಭೂಮಿಯನ್ನು ನೋಂದಾಯಿಸುವ ಭೂ ಬ್ಯಾಂಕ್ ಅನ್ನು ರಚಿಸುವ ಕೆಲಸ ವಹಿಸಿತು. ಈ ಭೂಮಿಯನ್ನು ಕಂಪೆನಿಗಳು ಮತ್ತು ಇತರ ಸಂಸ್ಥೆಗಳಿಗೆ ಅರಣ್ಯೀಕರಣಕ್ಕಾಗಿ ನೀಡಬೇಕಾಗಿತ್ತು. ಕಂಪೆನಿಗಳು ವಿವಿಧ ಯೋಜನೆ, ಕಾರ್ಖಾನೆ ಅಥವಾ ಗಣಿಗಳನ್ನು ಪ್ರಾರಂಭಿಸಿದಾಗ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆ ಮತ್ತು ಕಾಡು ನಾಶಮಾಡಲಾಗುತ್ತದೆ. ಇದರಿಂದಾದ ಪರಿಸರ ಹಾನಿ ಸರಿದೂಗಿಸಲು, ಕಂಪೆನಿಗಳು ಗೊತ್ತುಪಡಿಸಿದ ಪ್ರದೇಶದಲ್ಲಿ ಕಡ್ಡಾಯವಾಗಿ ಮರಗಳನ್ನು ನೆಡಬೇಕಾಗುತ್ತದೆ. ಆದ್ದರಿಂದ ಕಂಪೆನಿಗಳು ಕತ್ತರಿಸಿದ ಅದೇ ಪ್ರಮಾಣದ ಅರಣ್ಯವನ್ನು ಮರಳಿ ನಿರ್ಮಿಸುವುದು ಈ ಯೋಜನೆಯ ಮೇಲ್ನೋಟದ ಉದ್ದೇಶವಾಗಿತ್ತು. ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಗಣಿಗಾರಿಕೆ, ಕಾರ್ಖಾನೆ ಮತ್ತು ಯೋಜನೆಗಳನ್ನು ಪ್ರಾರಂಭಿಸುವ ಉದ್ಯಮಿಗಳು ಸ್ವತಃ ಮರಗಳನ್ನು ನೆಡುವ ಬದಲು, ಇತರ ಕಂಪೆನಿಗಳು ಅಥವಾ ಅರಣ್ಯ ಇಲಾಖೆ ಬೆಳೆಸಿದ್ದನ್ನು ‘ಕ್ರೆಡಿಟ್’ ರೂಪದಲ್ಲಿ ಖರೀದಿಸಲು ಅನುವು ಮಾಡಿಕೊಡುವ ಕಾರ್ಯಕ್ರಮವಾಗಿದೆ. ಆದರೆ, ಪರಿಸರ ರಕ್ಷಣೆಗೆ ಎಂದು ಹೇಳಿಕೊಳ್ಳಲಾಗಿದ್ದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಹಿಂದಿನ ವಾಸ್ತವವೇ ಬೇರೆಯಿತ್ತು. ಅದಾನಿಯಂತಹ ಉದ್ಯಮಿಗಳಿಗೆ ಕಾಡುಗಳನ್ನು ಸರಾಗವಾಗಿ ಹಸ್ತಾಂತರಿಸಲೆಂದೇ ಈ ಕಾರ್ಯಕ್ರಮದ ನಿಯಮಗಳನ್ನು ತಿರುಚಲಾಗಿದೆಯೇ ಎಂಬ ಅನುಮಾನಗಳು ಬಲವಾಗಿವೆ. ಪರಿಸರ ಕಾಳಜಿ ವಿಷಯವಾಗಿ ಭಾರತ ಮುಂಚೂಣಿಯಲ್ಲಿದೆ ಎಂದು ವಿದೇಶಿ ವೇದಿಕೆಗಳಲ್ಲಿ ಬಿಂಬಿಸುತ್ತಿದ್ದ ಮೋದಿ ಸರಕಾರ, ಅದಾನಿಗೆ ಕಾಡುಗಳನ್ನು ಹಸ್ತಾಂತರಿಸುವ ಮೂಲಕ ದೇಶದ ಜನರ ಕಿವಿಯ ಮೇಲೆ ಹೂ ಇಡಲು ಯೋಜನೆಗಳನ್ನು ರೂಪಿಸುತ್ತಿತ್ತು. ಭಾರತದ ಪರಿಸರ ರಕ್ಷಣೆ ಬಗ್ಗೆ ಮೋದಿ ಎಷ್ಟು ಗಂಭೀರವಾಗಿದ್ದಾರೆ ಎಂದು ಜಗತ್ತಿಗೆ ತೋರಿಸಲು ವೀಡಿಯೊ ನಿರ್ಮಾಣಕ್ಕಾಗಿ ಸುಮಾರು 35 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಅದಾನಿಗೆಂದೇ ರೂಪಿಸಲಾಗಿದ್ದ ಯೋಜನೆಗಳ ಮೇಲೆ ಗುಟ್ಟಾಗಿ ಕೆಲಸ ನಡೆಯುತ್ತಿತ್ತು ಎನ್ನುತ್ತದೆ ಆ ವರದಿ. ಎಲ್ಲೆಲ್ಲೂ ಹಸಿರು ಎಂದು ತೋರಿಸಿ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ತರಾತುರಿಯಲ್ಲಿ ಪ್ರಾರಂಭಿಸಲಾಯಿತು. ಅದರ ಅಡಿಯಲ್ಲಿ, ದೇಶಾದ್ಯಂತ ಹಲವಾರು ರಾಜ್ಯಗಳು ಹೆಚ್ಚಿನ ಮರಗಳನ್ನು ನೆಡಲು ಬಳಸಬಹುದಾದ ಭೂಮಿಯನ್ನು ನೋಂದಾಯಿಸಿದವು. ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಪ್ರಕಾರ, ಗುಜರಾತ್ ಸರಕಾರ ಹಲವಾರು ಅರಣ್ಯ ಭಾಗಗಳನ್ನು ನೋಂದಾಯಿಸಿದ ಪ್ರಮುಖ ರಾಜ್ಯವಾಗಿದೆ. ಆದರೆ ನಂತರ, ಅದಾನಿ ಇಚ್ಛೆಯ ಮೇರೆಗೆ ಗುಜರಾತ್ ಸರಕಾರ ಆ ಅರಣ್ಯ ಭೂಮಿಯನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ಕೈಬಿಟ್ಟಿತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಗುಜರಾತ್ ಸರಕಾರ ತಾನು ನೋಂದಾಯಿಸಿದ್ದ ಅರಣ್ಯ ಪ್ರದೇಶಗಳನ್ನು ತೆಗೆದುಹಾಕಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತದೆ ಮತ್ತು ಗುಜರಾತ್ ಸರಕಾರದ ಮನವಿಯನ್ನು ಕೇಂದ್ರ ಕೂಡಲೇ ಒಪ್ಪಿಕೊಳ್ಳುತ್ತದೆ. ಜುಲೈ 2024ರಲ್ಲಿ ಗುಜರಾತ್ ಅರಣ್ಯ ಇಲಾಖೆ ICFREಗೆ ಪತ್ರ ಬರೆದಿತ್ತೆಂಬುದನ್ನು ವರದಿ ಸಾಕ್ಷ್ಯ ಸಮೇತ ಹೇಳುತ್ತದೆ. ಆ ಪತ್ರದಲ್ಲಿ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಅಡಿಯಲ್ಲಿ ಸೇರಿಸಲಾದ 13 ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್ನಿಂದ ತೆಗೆದುಹಾಕಬೇಕೆಂದು ಗುಜರಾತ್ ಸರಕಾರ ವಿನಂತಿಸಿತ್ತು. ಈ ಭೂಮಿಗಳಲ್ಲಿ ಮರಗಳನ್ನು ನೆಡುವುದು ಸಾಧ್ಯವಿಲ್ಲ ಎಂದು ಕುಂಟುನೆಪ ನೀಡಲಾಯಿತು. ಕೆಲವು ಸ್ಥಳಗಳಲ್ಲಿ ಭೂಮಿ ತುಂಬಾ ಕಲ್ಲಿನಿಂದ ಕೂಡಿದೆ ಎಂದು ಹೇಳಲಾಯಿತು. ಭೂಪ್ರದೇಶ ತುಂಬಾ ಕಡಿದಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಹೇಳಲಾಯಿತು. ಭೂಮಿಯನ್ನು ತಪ್ಪಾಗಿ ಎರಡು ಬಾರಿ ನೋಂದಾಯಿಸಲಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಸಬೂಬು ನೀಡಲಾಯಿತು. ಅಂತೂ, ಮರ ಬೆಳೆಸಲು ಸೂಕ್ತ ಎಂದಿದ್ದ ಪ್ರದೇಶಗಳನ್ನೇ ಆ ಪಟ್ಟಿಯಿಂದ ತೆಗೆಯಲು ಏನೇನು ಕಾರಣ ಕೊಡಬಹುದೋ ಅವೆಲ್ಲವನ್ನೂ ಮಾಡಿ, ಪ್ರಶ್ನೆಗಳು ಬಂದರೆ ತಪ್ಪಿಸಿಕೊಳ್ಳಲು ನೆಪ ಹುಡುಕಿಕೊಳ್ಳಲಾಯಿತು. ಇಲ್ಲಿ ಕಾಡುವ ಪ್ರಶ್ನೆಯೆಂದರೆ, ಅದಾನಿ ಗ್ರೂಪ್ ಆ ಭೂಮಿಯ ಮೇಲೆ ಕಣ್ಣು ಹಾಕುವವರೆಗೂ ಅದು ಅರಣ್ಯೀಕರಣಕ್ಕೆ ಯೋಗ್ಯವಾಗಿತ್ತು. ಆದರೆ ಅದಾನಿಯ ಪ್ರಸ್ತಾವನೆ ಬಂದ ತಕ್ಷಣ ಅದೇ ಭೂಮಿ ಕಲ್ಲಿನಿಂದ ಕೂಡಿದ, ನಿಷ್ಪ್ರಯೋಜಕ ಭೂಮಿಯಾಗಿ ಬದಲಾದದ್ದು ಹೇಗೆ? ಆದರೂ, ಈ ಪಟ್ಟಿಯಲ್ಲಿಯೇ, ಸ್ಪಷ್ಟ ಕಾರಣಗಳ ಉಲ್ಲೇಖವಿತ್ತು. ಅದಾನಿ ಕಂಪೆನಿಯ ಅರಣ್ಯ ತೆರವು ಪ್ರಸ್ತಾವನೆಯಲ್ಲಿ ಅದನ್ನು ರದ್ದುಗೊಳಿಸಲು ವಿನಂತಿಸಲಾಗಿರುವುದರಿಂದ ನಾಲ್ಕು ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಉಲ್ಲೇಖವಿತ್ತು. ಗುಜರಾತ್ ಸರಕಾರವೇ ಈ ಮೊದಲು ಅರಣ್ಯ ವಿಸ್ತರಣೆಗಾಗಿ ಗುರುತಿಸಿದ್ದ ಮತ್ತು ಅಲ್ಲಿ ಮರಗಳನ್ನು ಸುಲಭವಾಗಿ ನೆಡಬಹುದು ಎನ್ನಲಾಗಿದ್ದ ಪ್ರದೇಶವೇ ಇದ್ದಕ್ಕಿದ್ದಂತೆ ಮರಗಳನ್ನು ನೆಡಲು ಯೋಗ್ಯವಲ್ಲದ ಭೂಮಿಯಾಯಿತು. ಆದರೆ ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ. ಗುಜರಾತ್ ಸರಕಾರದ ಪತ್ರದ ನಂತರ, ವಿಷಯ ICFRE ಅಂಗಳವನ್ನು ತಲುಪಿತು. ಈ ವಿಷಯದ ಬಗ್ಗೆ ICFRE ನಿರ್ಧರಿಸುವುದು ಸುಲಭವಲ್ಲದಿದ್ದರೂ, ಸಂಸ್ಥೆಯೊಳಗೆ ಹಲವಾರು ಸುತ್ತಿನ ಚರ್ಚೆಗಳು ನಡೆದವು. ಗುಜರಾತ್ ಸರಕಾರದ ಬೇಡಿಕೆಗಳು ವಿರೋಧಾಭಾಸದಿಂದ ಕೂಡಿವೆ ಎಂದು ಸ್ವತಃ ಅಧಿಕಾರಿಗಳೇ ಭಾವಿಸಿದರು. ICFRE ಅಧಿಕಾರಿಯೊಬ್ಬರು ಸಹ, ಈ ಹಿಂದೆ ಮರ ಬೆಳೆಸಬಹುದು ಎನ್ನಲಾಗಿದ್ದ ಭೂಮಿಯೇ ಈಗ ಮರ ಬೆಳೆಸಲು ಯೋಗ್ಯವಲ್ಲ ಎಂದು ಹೇಗಾಯಿತು? ಎಂಬ ಪ್ರಶ್ನೆಯನ್ನೇ ಆಂತರಿಕವಾಗಿ ಎತ್ತಿದರು. ಒಂದು ವೇಳೆ ಕಂಪೆನಿ ಈಗಾಗಲೇ ಆ ಅರಣ್ಯ ಪ್ರದೇಶಗಳ ಮೇಲೆ ಹಕ್ಕು ಹೊಂದಿದ್ದರೆ, ಮೊದಲೇ ಅವುಗಳನ್ನು ಯೋಜನೆಯಲ್ಲಿ ಏಕೆ ಸೇರಿಸಲಾಯಿತು ಎಂಬ ಗೊಂದಲವೂ ಇತ್ತು. ಗ್ರೀನ್ ಕ್ರೆಡಿಟ್ ಪೋರ್ಟಲ್ನಲ್ಲಿ ಭೂಮಿಯನ್ನು ತೆಗೆದುಹಾಕಲು ಅಥವಾ ತಿರಸ್ಕರಿಸಲು ಸ್ಪಷ್ಟ ಆಯ್ಕೆಯಿಲ್ಲ ಎಂಬುದನ್ನು ಅಧಿಕಾರಿಗಳು ಗಮನಿಸಿದರು. ಅಂದರೆ, ಮಧ್ಯದಲ್ಲಿಯೇ ಈ ಕಾಡುಗಳನ್ನು ಯೋಜನೆಯಿಂದ ಹೊರಗಿಡಲು ಅನುಮತಿ ನೀಡುವ ನಿಯಮಗಳು ಇರಲಿಲ್ಲ. ಆಗಸ್ಟ್ 2024 ರ ಹೊತ್ತಿಗೆ, ICFRE ಈ ಪ್ರಕರಣದ ವಿವರಗಳನ್ನು ಪರಿಶೀಲಿಸಿತ್ತು. ಅದಾನಿ ಆ ಅರಣ್ಯ ಭೂಮಿಗಾಗಿ ಬೇಡಿಕೆ ಇಟ್ಟಿದ್ದರು. ಹಾಗಾಗಿ, ವಿಷಯ ಸಂಕೀರ್ಣವಾಗಿತ್ತು ಮತ್ತು ರಾಜಕೀಯ ಒತ್ತಡವಿತ್ತು. ಅಧಿಕಾರಿಗಳು ಕೂಡ ಅದೇ ಕಾರಣಕ್ಕಾಗಿ ಈ ವಿಷಯದ ಬಗ್ಗೆ ನೇರ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿದ್ದರು. ಅಂತಿಮ ನಿರ್ಧಾರ ಪರಿಸರ ಸಚಿವಾಲಯದಿಂದಲೇ ಬರಬೇಕು ಎಂದು ಅಧಿಕಾರಿಗಳು ಕೈತೊಳೆದುಕೊಂಡರು. ಅಂದರೆ, ಎಲ್ಲವನ್ನೂ ಸಚಿವಾಲಯದ (ರಾಜಕೀಯ) ನಿರ್ಣಯಕ್ಕೆ ಬಿಡಲಾಯಿತು. ಸೆಪ್ಟಂಬರ್ 2024ರಲ್ಲಿ ICFRE ಈ ವಿಷಯವನ್ನು ಪರಿಸರ ಸಚಿವಾಲಯಕ್ಕೆ ಕಳುಹಿಸಿತು. ಡಿಸೆಂಬರ್ 2024ರಲ್ಲಿ ಗುಜರಾತ್ ಸರಕಾರ ಹೊಸ ವಾದವನ್ನು ಮಂಡಿಸಿತು. ಅದಾನಿ ಗ್ರೂಪ್ ಅನ್ನು ಹೆಸರಿಸದೆ, ಯಾರೂ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಮರಗಳನ್ನು ನೆಡದ ಅಥವಾ ಮರಗಳನ್ನು ನೆಡಲು ಆಸಕ್ತಿ ವ್ಯಕ್ತಪಡಿಸದ ಭೂಮಿಯನ್ನು ಯೋಜನೆಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಹೇಳಿತು. ಕೇಂದ್ರ ಸರಕಾರ ತಡಮಾಡದೆ ಈ ಭೂಮಿಯನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್ನಿಂದ ತೆಗೆದುಹಾಕಿತು. ದಾಖಲೆಗಳು ಇದನ್ನು ಆಡಳಿತಾತ್ಮಕ ನಿರ್ಧಾರವೆಂದು ತೋರಿಸಿದವು. ಆದರೆ, ಇದು ವಾಸ್ತವವಾಗಿ ಅದಾನಿ ಗ್ರೂಪ್ಗೆ ಈಗಾಗಲೇ ಮೀಸಲಿಟ್ಟಿದ್ದ ಅದೇ ನಾಲ್ಕು ಅರಣ್ಯ ಪ್ರದೇಶಗಳನ್ನು ಹೊರಗಿಟ್ಟಿತ್ತು. ಆರ್ಟಿಐ ಮೂಲಕ ಗುಜರಾತ್ ಸರಕಾರವನ್ನು ಇದರ ಬಗ್ಗೆ ಕೇಳಿದಾಗ, ಸರಕಾರ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು. ಗ್ರೀನ್ ಕ್ರೆಡಿಟ್ ಪ್ರೋಗ್ರಾಂನಿಂದ ಯಾವುದೇ ಅರಣ್ಯ ಭೂಮಿಯನ್ನು ತೆಗೆದುಹಾಕಲು ಅದಾನಿ ಗ್ರೂಪ್ ಎಂದಿಗೂ ಕೇಳಿಲ್ಲ ಎಂದು ಅದು ಹಸಿ ಸುಳ್ಳು ಹೇಳಿತು. ಸರಕಾರದ ಬಾಯಲ್ಲಿ ಒಂದು ಮಾತು, ಕಡತಗಳಲ್ಲಿ ಇನ್ನೊಂದು ಕಥೆ. ಸಾರ್ವಜನಿಕವಾಗಿ ನಿರಾಕರಿಸುತ್ತಲೇ, ಗುಟ್ಟಾಗಿ ಕಾರ್ಪೊರೇಟ್ ಪ್ರಸ್ತಾವನೆಗಳಿಗೆ ಕೆಂಪು ಹಾಸು ಹಾಸುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಗುಜರಾತ್ ಸರಕಾರ ಭೂಮಿ ತೆರವುಗೊಳಿಸಲು ವಿನಂತಿಸಿದ್ದು ಮಾತ್ರವಲ್ಲದೆ, ಆ ಭೂಮಿ ಎಫ್ಸಿಎ ಅಡಿಯಲ್ಲಿ ಅದಾನಿ ಕಂಪೆನಿಗಳ ಪ್ರಸ್ತಾವನೆಯ ಭಾಗವಾಗಿದೆ ಎಂದು ಹೇಳಿದೆ ಎಂಬುದನ್ನೇ ಪರಿಸರ ಸಚಿವಾಲಯ ಮತ್ತು ICFREನ ಆಂತರಿಕ ದಾಖಲೆಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ವರದಿ ಹೇಳುತ್ತದೆ. ಆರ್ಟಿಐ ಅಡಿಯಲ್ಲಿ ಪಡೆದ ಈ ದಾಖಲೆಗಳನ್ನು ಗುಜರಾತ್ ಸರಕಾರಕ್ಕೆ ತೋರಿಸಿದಾಗ, ಅದು ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ, ಮೌನಕ್ಕೆ ಶರಣಾಗಿದೆ. ಕೇಂದ್ರ ಸರಕಾರ ಮತ್ತು ICFRE ಕೂಡ ಇದೇ ಮೌನವನ್ನು ಅನುಸರಿಸಿವೆ. ICFRE ತಾನು ಸ್ವತಃ ಅರಣ್ಯ ತೆರವು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಮತ್ತು ಹಾಗಾಗಿ ಕಂಪೆನಿಗಳ ಪ್ರಸ್ತಾವನೆಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಮತ್ತೊಂದು ಆರ್ಟಿಐ ಉತ್ತರದಲ್ಲಿ ಹೇಳಿದೆ. ಅಂದರೆ, ಇಡೀ ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಅನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಗೇ ಯಾರಿಗೆ ಅಥವಾ ಏಕೆ ಅರಣ್ಯಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದಿಲ್ಲ! ಅಥವಾ ಹಾಗೆಂದು ಅದು ಹೇಳಿಕೊಳ್ಳುತ್ತಿದೆ. ಅದಾನಿ ಗ್ರೂಪ್ನ ಪ್ರತಿಕ್ರಿಯೆಯೂ ಜಾರಿಕೊಳ್ಳುವ ರೀತಿಯದ್ದಾಗಿದೆ ಎಂದು ವರದಿ ಹೇಳುತ್ತದೆ. ಅಕ್ಟೋಬರ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಪ್ರಾರಂಭಿಸಿದ ಕೆಲವೇ ತಿಂಗಳುಗಳ ನಂತರ, ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಬಂತು. ಒಟ್ಟು ಅರಣ್ಯ ಪ್ರದೇಶದ ವಿಷಯದಲ್ಲಿ ಭಾರತ ಒಂಭತ್ತನೇ ಸ್ಥಾನದಲ್ಲಿದೆ ಮತ್ತು ವಾರ್ಷಿಕ ಅರಣ್ಯ ಬೆಳವಣಿಗೆ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದಿತು. ಪರಿಸರ ಸಚಿವ ಭೂಪೇಂದ್ರ ಯಾದವ್, ಇದಕ್ಕೆ ಮೋದಿ ಸರಕಾರದ ನೀತಿಗಳು ಮತ್ತು ರಾಜ್ಯಗಳು ಕೈಗೊಂಡ ಬೃಹತ್ ಪ್ಲಾಂಟೇಷನ್ ಪ್ರಯತ್ನಗಳು ಕಾರಣ ಎಂದು ಎದೆಯುಬ್ಬಿಸಿ ಹೇಳಿದರು. ಆದರೆ ವಾಸ್ತವ ಬೇರೆಯೇ ಇದೆ. ಸರಕಾರ ಸಹಜ ಕಾಡುಗಳನ್ನು ಏಕಜಾತಿಯ ಪ್ಲಾಂಟೇಷನ್ಗಳ ಜೊತೆ ಸಮೀಕರಿಸುತ್ತಿದೆ. ಪರಿಸರ ವಿಜ್ಞಾನದ ಪ್ರಕಾರ, ಒಂದೇ ಜಾತಿಯ ನೀಲಗಿರಿ ಅಥವಾ ಅಕೇಶಿಯಾ ಮರಗಳನ್ನು ನೆಡುವುದು ಕಾಡಾಗುವುದಿಲ್ಲ. ಅದು ‘ಹಸಿರು ಮರುಭೂಮಿ’ ಇದ್ದಂತೆ. ಅಲ್ಲಿ ಜೀವವೈವಿಧ್ಯವಿರುವುದಿಲ್ಲ. ಆದರೆ ಸರಕಾರದ ಲೆಕ್ಕದಲ್ಲಿ, ಜೀವವೈವಿಧ್ಯವಿರುವ ನೈಸರ್ಗಿಕ ಕಾಡುಗಳು ನಾಶವಾಗುತ್ತಿದ್ದರೂ, ರಸ್ತೆಬದಿಗಳಲ್ಲಿ ಅಥವಾ ಖಾಲಿ ಭೂಮಿಯಲ್ಲಿ ನೆಟ್ಟ ವಾಣಿಜ್ಯ ಮರಗಳನ್ನು ಸಹ ‘ಕಾಡು’ಗಳೆಂದು ಪರಿಗಣಿಸಿ ಅಂಕಿಅಂಶಗಳನ್ನು ಉಬ್ಬಿಸಲಾಗುತ್ತದೆ. ದಾಖಲೆಗಳಲ್ಲಿ ಮಾತ್ರ ಹಸಿರೋ ಹಸಿರು. ಆದರೆ ವಾಸ್ತವದಲ್ಲಿ ಶತಮಾನದಷ್ಟು ಹಳೆಯ ಕಾಡುಗಳು ನಾಶವಾಗುತ್ತಿವೆ. 2014-15ರಿಂದ 2023-24 ರ ನಡುವೆ ಕೇಂದ್ರ ಸರಕಾರ 1.74 ಲಕ್ಷ ಹೆಕ್ಟೇರ್ ಅರಣ್ಯವನ್ನು ಕಡಿಯಲು ಅನುಮೋದನೆ ನೀಡಿತು. ಪ್ರತೀ ವರ್ಷ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಕಂಪೆನಿಗಳಿಗೆ ಬೇರೆಡೆ ಮರಗಳನ್ನು ನೆಡಲು ಅಥವಾ ಗ್ರೀನ್ ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅತ್ಯಮೂಲ್ಯವಾದ ನೈಸರ್ಗಿಕ ಕಾಡುಗಳನ್ನು ಕಡಿಯುವುದನ್ನು ಮುಂದುವರಿಸಲಾಗುತ್ತದೆ. ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಆಧುನಿಕ ಪರಿಸರ ಸಂರಕ್ಷಣಾ ಯೋಜನೆಯಂತೆ ದಾಖಲೆಗಳಲ್ಲಿ ಕಂಡುಬಂದರೂ, ವಾಸ್ತವದಲ್ಲಿ ಅದನ್ನು ಅರಣ್ಯ ಸಂರಕ್ಷಣೆಗಿಂತ ಅರಣ್ಯನಾಶಕ್ಕೇ ಹೆಚ್ಚು ಬಳಸಲಾಗುತ್ತಿರುವಂತೆ ಕಾಣುತ್ತಿದೆ. ‘ಅವನತಿ ಹೊಂದಿದ ಕಾಡುಗಳನ್ನು ಮತ್ತೆ ನಿರ್ಮಿಸಬೇಕಿದ್ದ’ ಯೋಜನೆಯೇ, ಈಗ ಅರಣ್ಯ ನಾಶಕ್ಕೆ ಅಡಿಪಾಯವಾಗಿದೆ ಮತ್ತು ಅವುಗಳನ್ನು ಕಾರ್ಪೊರೇಟ್ಗಳಿಗೆ ತೆರೆದಿಟ್ಟಿದೆ. ಗುಜರಾತ್ ಪ್ರಕರಣ ಕೇವಲ ಒಂದು ತಾಂತ್ರಿಕ ದೋಷವಲ್ಲ. ಬದಲಿಗೆ ಸರಕಾರದ ಪರಿಸರ ನೀತಿ ಹೇಗೆ ವ್ಯವಸ್ಥಿತವಾಗಿ ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿ ವಾಲುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಡಿಕೆಶಿಗಿಲ್ಲ ಆಹ್ವಾನ, ದೆಹಲಿ ವಿಮಾನ ಏರಲಿರುವ ಸಿದ್ದರಾಮಯ್ಯ!
ಡಿಸೆಂಬರ್ 27 ಅಂದರೆ ಶನಿವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಭೆಗೆ ಆಹ್ವಾನ ಸಿಕ್ಕಿಲ್ಲ. ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಇದೇ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
Canada| ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತೀಯ ವಿದ್ಯಾರ್ಥಿಯ ಹತ್ಯೆ
ಟೊರಂಟೊ: ಕೆನಡಾದ ಟೊರಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಾರತೀಯ ಮೂಲದ ಸಂಶೋಧನಾ ವಿದ್ಯಾರ್ಥಿ ಶಿವಾಂಕ್ ಅವಸ್ಥಿ(20) ಹತ್ಯೆಯಾದವರು. ಘಟನೆಯನ್ನು ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ದೃಢಪಡಿಸಿದ್ದಾರೆ. ಟೊರಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಅವರ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಈ ನೋವಿನ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ ಎಂದು ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎಕ್ಸ್ನಲ್ಲಿ ತಿಳಿಸಿದೆ.
28 Km ವರೆಗೆ ಮೈಲೇಜ್ ನೀಡುವ ಬಡವರ ಈ ಕಾರುಗಳ ಮೇಲೆ 2 ಲಕ್ಷದವರೆಗೆ ಡಿಸ್ಕೌಂಟ್
ನೀವು ಹೊಸ ಕಾರು ಖರೀದಿಸುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ವರ್ಷದ ಅಂತ್ಯದಲ್ಲಿ ಕಾರು ತಯಾರಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿವೆ. ಸ್ಟಾಕ್ ಕ್ಲಿಯರೆನ್ಸ್ (Stock Clearance) ಹಿನ್ನೆಲೆಯಲ್ಲಿ ಲಕ್ಷ ಲಕ್ಷ ರೂಪಾಯಿ ಉಳಿಸುವ ಅವಕಾಶ ಈಗ ನಿಮ್ಮ ಮುಂದಿದೆ. ಈ ಡಿಸೆಂಬರ್ ತಿಂಗಳು ಕಾರು ಪ್ರಿಯರಿಗೆ ನಿಜಕ್ಕೂ ಹಬ್ಬದಂತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki), ತನ್ನ ಗ್ರಾಹಕರಿಗೆ ಬರೋಬ್ಬರಿ ₹2.19 ಲಕ್ಷದವರೆಗಿನ ರಿಯಾಯಿತಿಗಳನ್ನು ... Read more The post 28 Km ವರೆಗೆ ಮೈಲೇಜ್ ನೀಡುವ ಬಡವರ ಈ ಕಾರುಗಳ ಮೇಲೆ 2 ಲಕ್ಷದವರೆಗೆ ಡಿಸ್ಕೌಂಟ್ appeared first on Karnataka Times .
ರಿತ್ವಿಕ್ ಘಟಕ್ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮರಾ
ರಿತ್ವಿಕ್ ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ನೂರು ವರ್ಷ(ನವೆಂಬರ್ 4, 1925- ಫೆಬ್ರವರಿ 6, 1976) ಪೂರೈಸಿದ್ದಾರೆ. ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್ ಕಿರಿಯರು(ಸತ್ಯಜಿತ್ ರೇ, ಮೃಣಾಲ್ ಸೇನ್ ಇನ್ನಿಬ್ಬರು). ರಾಜಕೀಯ ನಂಬಿಕೆಯಷ್ಟೇ ತೀವ್ರತೆ-ಬದ್ಧತೆಯಿಂದ ಸಿನೆಮಾ ಮಾಡುತ್ತಿದ್ದ ಅವರ ಜತೆಗಾರರಿಗೆ ಕೂಡ ಅವರ ತೀವ್ರ ಕ್ರಾಂತಿಕಾರಿ ಆಲೋಚನೆಗಳನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ; ಹೀಗಾಗಿ, ಸೈದ್ಧಾಂತಿಕ ಏಕಾಂಗಿತನ ಅನುಭವಿಸಬೇಕಾಯಿತು. ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿ ಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ. ಚಿತ್ರಯಾನ ರಿತ್ವಿಕ್ ತಂದೆ ಸುರೇಶ್ ಚಂದ್ರ ಘಟಕ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಕವಿ ಮತ್ತು ನಾಟಕಕಾರ; ತಾಯಿ ಇಂದುಬಾಲಾ ದೇವಿ. ದೇಶ ವಿಭಜನೆ ಬಳಿಕ ಢಾಕಾದಿಂದ ಭಾರತಕ್ಕೆ ವಲಸೆ. ಪತ್ನಿ ಸುರಮಾ ಮತ್ತು ಮಕ್ಕಳು ಸಂಹಿತಾ(ಸಾಕ್ಷ್ಯಚಿತ್ರ ನಿರ್ದೇಶಕಿ), ಸುಶ್ಮಿತಾ ಹಾಗೂ ಮಗ ರಿತಬನ್(ಚಿತ್ರ ನಿರ್ಮಾಪಕ). ಘಟಕ್ ಅವರಿಗೆ ವೇದ, ಭಾರತೀಯ ಸಂಸ್ಕೃತಿ/ ಸಂಪ್ರದಾಯಗಳ ಆಳವಾದ ಜ್ಞಾನ ಇದ್ದಿತ್ತು. ಅವರ ಚಿತ್ರಗಳಲ್ಲಿ ಬಂಗಾಳದ ವಿಭಜನೆ, ಅದರ ಮಾನುಷ ದುರಂತಗಳು ಮತ್ತು ಸಾಂಸ್ಕೃತಿಕ ನಷ್ಟ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಸ್ಪ್ಯಾನಿಷ್ ಮತ್ತು ಮೆಕ್ಸಿಕೋ ಚಿತ್ರ ನಿರ್ದೇಶಕ ಲೂಯಿಸ್ ಬುನುಯಲ್ ಅವರ ಸಿನೆಮಾ ‘ನಜರಿನ್’ (1959) ಅವರ ಮೆಚ್ಚಿನ ಚಿತ್ರ. ಸ್ವೀಡಿಷ್ ನಿರ್ದೇಶಕ ಇಂಗ್ಮರ್ ಬರ್ಗ್ಮನ್ ಸಿನೆಮಾಗಳ ಬಗ್ಗೆ ಅವರಿಗೆ ಹೆಚ್ಚು ಒಲವು ಇರಲಿಲ್ಲ; ಬರ್ಗ್ಮನ್ ಸಿನೆಮಾಗಳಲ್ಲಿನ ಧಾರ್ಮಿಕತೆಯನ್ನು ತಳ್ಳಿ ಹಾಕಿದ್ದರು. ಬಾರಿ ಥೇಕೆ ಪಾಲಿಯೆ, ಅಜಾಂತ್ರಿಕ್(1958), ಮೇಘೆ ಡಾಕಾ ತಾರಾ(1960), ಕೋಮಲ್ ಗಾಂಧಾರ್(1961), ಸುಬರ್ಣರೇಖಾ(1965), ತಿತಾಸ್ ಏಕ್ತಿ ನದಿರ್ ನಾಮ್(1973), ನಾಗರಿಕ್ ಮತ್ತು ಜುಕ್ಟಿ ತಕ್ಕೋ ಔರ್ ಗಪ್ಪೊ(1977). ನಾಗರಿಕ್ 1952ರಲ್ಲೇ ನಿರ್ಮಾಣಗೊಂಡಿದ್ದರೂ ಬಿಡುಗಡೆಯಾಗಿದ್ದು ಸೆಪ್ಟಂಬರ್ 20, 1977ರಲ್ಲಿ. 7 ಚಿತ್ರಗಳಿಗೆ ಕಥೆ/ಚಿತ್ರಕತೆ(ಮುಸಾಫಿರ್, ಮಧುವತಿ, ಸ್ವರಲಿಪಿ, ಕುಮಾರಿ ಮೋನ್, ದೀಪರ್ ನಾಮ್ ತಿಯಾ ರೊಂಗ್, ರಾಜ್ಕನ್ಯಾ, ಹೀರೆರ್ ಪ್ರಜಾಪತಿ) ಬರೆದಿದ್ದಾರೆ. ಸಾಕ್ಷ್ಯಚಿತ್ರಗಳೆಂದರೆ, ದ ಲೈಫ್ ಆಫ್ ಆದಿವಾಸಿಸ್ ಮತ್ತು ಪ್ಲೇಸಸ್ ಆಫ್ ಹಿಸ್ಟಾರಿಕಲ್ ಇಂಟೆರೆಸ್ಟ್ ಇನ್ ಬಿಹಾರ್ 1955, ಒರಾನ್ 1957, ಸಿಸರ್ಸ್ 1962, ಉಸ್ತಾದ್ ಅಲ್ಲಾವುದ್ದೀನ್ ಖಾನ್ 1963, ಫಿಯರ್/ರೆಂಡೆವೋ ಮತ್ತು ಸಿವಿಲ್ ಡಿಫೆನ್ಸ್ 1965, ಸೈಂಟಿಸ್ಟ್ಸ್ ಆಫ್ ಟುಮಾರೋ 1967, ಯೆಕ್ಯೋ/ಅಮರ್ ಲೆನಿನ್/ಪುರುಲಿಯರ್ ಚೌ 1970 ಹಾಗೂ ದರ್ಬಾರ್ ಗತಿ ಪದ್ಮಾ 1971. ಅಪೂರ್ಣ ಚಿತ್ರ/ಸಾಕ್ಷ್ಯಚಿತ್ರಗಳು 6 ಮತ್ತು 25 ಚಿತ್ರಕತೆಗಳು ಚಿತ್ರೀಕರಣಕ್ಕೆ ಮುನ್ನವೇ ನಿಲುಗಡೆಯಾದವು. ಬಿಮಲ್ ರಾಯ್ ಅವರ ಚಿತ್ರ ಮಧುಮತಿ(1958)ಗೆ ಘಟಕ್ ಕಥೆ-ಚಿತ್ರಕತೆ ಬರೆದಿದ್ದಾರೆ(ಸಹಲೇಖಕ ರಾಜಿಂದರ್ ಸಿಂಗ್ ಬೇಡಿ). ಇದು ಕ್ಲಾಸಿಕ್ಗಳಲ್ಲಿ ಒಂದು. ಅನೂಪ್ ಸಿಂಗ್ ನಿರ್ದೇಶಿತ ಏಕ್ತಿ ನದಿರ್ ನಾಮ್ ಮತ್ತು ಕಮಲೇಶ್ವರ್ ನಿರ್ದೇಶನದ ಮೇಘೆ ಡಾಕಾ ತಾರಾ(2013) ಅವರನ್ನು ಕುರಿತ ಚಿತ್ರಗಳು. ಘಟಕ್ ಅವರ ಸಿನೆಮಾಗಳು ಅನಿರ್ದಿಷ್ಟ ಮೋಹಕತೆ, ಕಲ್ಪನೆಯಲ್ಲಿ ನಾವೀನ್ಯತೆ, ಅಂಕುಶವಿಲ್ಲದ ಕ್ರಿಯಾಶೀಲ ಚೈತನ್ಯ ಮತ್ತು ದಿನನಿತ್ಯದ ಬದುಕಿನ ನಿಷ್ಕೃಷ್ಟ ಚಿತ್ರಣದಿಂದ ಸೆಳೆಯುತ್ತವೆ. ಸಾಮಾನ್ಯ ನಿರ್ದೇಶಕನ ಕೈಯಲ್ಲಿ ಮೆಲೋಡ್ರಾಮಾ(ಭಾವೋದ್ರೇಕ, ಗೋಳು ಕರೆಯುವಿಕೆ) ಆಗಬಹುದಾದ ಚಿತ್ರಗಳನ್ನು ಉನ್ನತ ಕಲೆಯನ್ನಾಗಿಸುವ ಪ್ರತಿಭೆ ಅವರಲ್ಲಿ ಇತ್ತು. ಹಿನ್ನೆಲೆ ಶಬ್ದ, ಸಂಗೀತ ಮತ್ತು ದೃಶ್ಯತೆಯನ್ನು ಅಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಜನ ನಾಟ್ಯ ಮಂಚ್ ಹಾಗೂ ಇಪ್ಟಾ(ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್)ದಲ್ಲಿ ಕಲಿತ ರಂಗಭೂಮಿಯ ತಂತ್ರಗಳನ್ನು ಸಿನೆಮಾದಲ್ಲಿ ಬಳಸಿದರು. ಪಠ್ಯಕತೆಯನ್ನು ಆಧರಿಸಿ, ಒಂದು ದೃಶ್ಯ ಇಲ್ಲವೇ ದೃಶ್ಯಾವಳಿಯನ್ನು ವಿಸ್ತರಿಸಲಾಗುತ್ತದೆ. ಆದರೆ, ಘಟಕ್ ಇದನ್ನು ತದ್ವಿರುದ್ಧವಾಗಿ ಮಾಡುತ್ತಿದ್ದರು. ಅಪರಿಚಿತ ಕೋನ, ಮಸೂರ, ನೆರಳು-ಬೆಳಕಿನ ಬಳಕೆ, ಸಂಗೀತದ ಮೂಲಕ ತೀವ್ರತೆ ತರುತ್ತಿದ್ದರು. ಅವರ ಸಿನೆಮಾಗಳಲ್ಲಿ ದೃಶ್ಯತೆಯಷ್ಟೇ ಮುಖ್ಯ ಸ್ಥಾನ ಹಿನ್ನೆಲೆ ಶಬ್ದ-ಸಂಗೀತಕ್ಕೆ ಇದೆ. ಅವುಗಳನ್ನು ನಾಟಕೀಯ ಪರಿಣಾಮಕ್ಕಾಗಿ ಬಳಸುತ್ತಿದ್ದರು. ಹಲವು ಪದರಗಳ ಶಬ್ದಗಳು, ಸಂಗೀತ, ಸಂಭಾಷಣೆಯನ್ನು ಒಳಗೊಂಡ ಸೌಂಡ್ ಟ್ರ್ಯಾಕ್ನಿಂದ ದೃಶ್ಯ ಹಾಗೂ ಸಿನೆಮಾದ ಒಟ್ಟಾರೆ ಪರಿಣಾಮ ಹೆಚ್ಚುತ್ತಿತ್ತು. ಅವರ ಚಿತ್ರಗಳ ಸಂಗೀತ ನಿರ್ದೇಶಕ ಅವರೇ! ರೇ-ಘಟಕ್ ಸಂಬಂಧ ರೇ ಮತ್ತು ಘಟಕ್ ನಡುವೆ ವೈಮನಸ್ಸು ಇತ್ತು; ಸೌಹಾರ್ದ ಸಂಬಂಧ ಇರಲಿಲ್ಲ ಎಂಬ ತಪ್ಪು ಕಲ್ಪನೆ ಬಹಳ ಜನರಲ್ಲಿ ಇದೆ. ಆದರೆ, ಅದು ಸುಳ್ಳು. ಘಟಕ್ 1963ರಲ್ಲಿ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ಗೆ ಉಪಪ್ರಾಚಾರ್ಯ ಮತ್ತು ಸಿನೆಮಾ ನಿರ್ದೇಶನದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರನ್ನು ಫಿಲ್ಮ್ ಇನ್ಸ್ಟಿಟ್ಯೂಟ್ಗೆ ನೇಮಕ ಮಾಡಬೇಕೆಂದು ಆಗಿನ ವಾರ್ತಾ ಮತ್ತು ಪ್ರಚಾರ ಸಚಿವೆ ಇಂದಿರಾ ಗಾಂಧಿ ಅವರಿಗೆ ರೇ ಶಿಫಾರಸು ಮಾಡಿದ್ದರು. ರೇ ಒಮ್ಮೆ ‘‘ಘಟಕ್ ರಕ್ತನಾಳದಲ್ಲೇ ಸಿನೆಮಾ ಹರಿಯುತ್ತಿದೆ’’ ಎಂದು ಶ್ಲಾಘಿಸಿದ್ದರು. ನಿರ್ದಿಷ್ಟ ಸನ್ನಿವೇಶವೊಂದರ ಪರಿಣಾಮವನ್ನು ಹಿನ್ನೆಲೆ ಶಬ್ದ-ಸಂಗೀತ ಹೇಗೆ ವರ್ಧಿಸುತ್ತದೆ ಮತ್ತು ವೀಕ್ಷಕರಿಗೆ ಹೊಸ ಆಯಾಮವನ್ನು ನೀಡುತ್ತದೆ ಎಂಬುದನ್ನು ಹಾಗೂ ಸಿನೆಮಾ ಕಟ್ಟುವಿಕೆ ಕುರಿತ ರಾಜಿಯಾಗದ ಮನೋಭಾವ ಮತ್ತು ಭಾವತೀವ್ರತೆ(ಮೆಲೋಡ್ರಾಮಾ) ಕುರಿತು ವಿದ್ಯಾರ್ಥಿಗಳಿಗೆ ಕಲಿಸಿದರು. ತರಗತಿಯಲ್ಲಿ ಒಮ್ಮೆ ಸತ್ಯಜಿತ್ ರೇ ಅವರ ‘ಅಪರಾಜಿತೊ’ ಪ್ರದರ್ಶನದ ವೇಳೆ ‘‘ಇದು ಒಂದು ಮಹಾನ್ ಚಿತ್ರ’’ ಎಂದು ಶ್ಲಾಘಿಸಿದ್ದರು. ಹೀಗಿದ್ದರೂ, ಇಬ್ಬರ ನಡುವಿನ ಸಂಬಂಧ ಕುರಿತ ತಪ್ಪು ಕಲ್ಪನೆಗಳು ಉಳಿದೇ ಇದ್ದವು. ‘‘ಮೃತ ಘಟಕ್ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ನನ್ನನ್ನು ನೋಡಿದ ಕೆಲವರು, ನೀನು ಅವರನ್ನು ಕೊಂದೆ ಎಂದು ದೂಷಿಸಿದರು’’ ಎಂದು ರೇ, ಖ್ಯಾತ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ಅವರಿಗೆ ಒಮ್ಮೆ ಹೇಳಿದ್ದರು. ಘಟಕ್ ಕುರಿತ ಇನ್ನೊಂದು ತಪ್ಪು ಕಲ್ಪನೆ-ಮದ್ಯಪಾನಕ್ಕೆ ಸಂಬಂಧಿಸಿದೆ. ಆದರೆ, ಒಂದೇ ಒಂದು ದಿನ ಅವರು ತರಗತಿಗೆ ಮದ್ಯ ಸೇವಿಸಿ ಬಂದಿರಲಿಲ್ಲ ಎಂದು ಆಡೂರ್ ಹೇಳುತ್ತಾರೆ. ರೇ, ಸೇನ್ ಮತ್ತು ಘಟಕ್ ಮೂವರೂ ನಗರ ಕುರಿತು ಬೇರೆಯದೇ ಸಂವೇದನೆ ಹೊಂದಿದ್ದಾರೆ. ರೇ ಅವರಿಗೆ ಕೋಲ್ಕತಾ ಸಾಮಾಜಿಕೋ-ರಾಜಕೀಯ ಘಟಕವಾಗಿದ್ದು, ಅಲ್ಲಿ ಮನುಷ್ಯರು ತಮ್ಮ ಪಾತ್ರ ನಿರ್ವಹಿಸುತ್ತಿರುತ್ತಾರೆ; ಸೇನ್ ಅವರಿಗೆ ಕೋಲ್ಕತಾ ಒಂದು ಮಾಂತ್ರಿಕ ಮತ್ತು ನಿಗೂಢ ನಗರ. ಆದರೆ, ಘಟಕ್ ಅವರಿಗೆ ಕೋಲ್ಕತಾ ಒಂದು ಪಾತ್ರ. ನಿರ್ವಸಿತರಿಗೆ ನೆಲೆ ನೀಡಿರುವಂಥದ್ದು; ಮೇಲ್ನೋಟಕ್ಕೆ ಕರುಣೆರಹಿತ ಹಾಗೂ ಕ್ಷೇಮದ ಕಡೆಗೆ ಗಮನವಿಲ್ಲದ ಕಠಿಣನಂತೆ ಕಾಣಿಸಿದರೂ, ಹುದುಗಿದ ಮಾನವೀಯ ಮಿಡಿತಗಳಿರುವ ನಗರ. ಅವರ ಮೊದಲ ಚಿತ್ರ ‘ಬಾರಿ ಥೇಕೆ ಪಾಲಿಯೆ’ಯಲ್ಲಿ ತಂದೆಯನ್ನು ಇಷ್ಟಪಡದ ತುಂಟ ಬಾಲಕನೊಬ್ಬ ಇದ್ದಾನೆ. ಆತ ‘ರಾತ್ರಿ ಕೂಡ ಬೆಳಕು ಇರುವ ನಗರ’ಕ್ಕೆ ಓಡಿಹೋಗುತ್ತಾನೆ. ಸೂರ್ಯ ಮೂಡುತ್ತಿರುವ ಹೌರಾ ಸೇತುವೆ ಮೂಲಕ ಕೋಲ್ಕತಾವನ್ನು ಪರಿಚಯಿಸಲಾಗುತ್ತದೆ. ಇಂದಿಗೂ ನೂರಾರು ಚಿತ್ರಗಳಲ್ಲಿ ಕೋಲ್ಕತಾವನ್ನು ತೋರಿಸುವುದು ಹೀಗೆಯೇ; ಕನಸುಗಳು ನನಸಾಗದೆ ಇದ್ದರೂ, ಬದುಕುಳಿಯುವ ತಾಣದಂತೆ. ಟ್ರಾಮ್ಗಳ ನಾಪತ್ತೆ ಮತ್ತು ಸರ್ವವ್ಯಾಪಿಯಾಗಿರುವ ಮೊಬೈಲ್ ಹೊರತುಪಡಿಸಿದರೆ, 1958ರ ಕೋಲ್ಕತಾ ಹೆಚ್ಚೇನೂ ಬದಲಾಗಿಲ್ಲ; ಸಂಜೆ ವೇಳೆ ಹೌರಾ ಮೇಲೆ ಕಿಕ್ಕಿರಿದ ಜನ, ಹೊರೆ ಹೊತ್ತ ಕಾರ್ಮಿಕರ ನಡಿಗೆ ಮತ್ತು ಓಟದ ನಡುವಿನ ಚಲನೆ, ಚೀಲ ತುಂಬಿದ ಗಾಡಿ ಎಳೆಯುವ ವ್ಯಕ್ತಿ ಇತ್ಯಾದಿ ಬಿಂಬಗಳು ಅಂತೆಯೇ ಇವೆ. ಬಹುಮಹಡಿ ಕಟ್ಟಡಗಳ ಎದುರು ಪೆಟ್ಟಿಗೆ ಅಂಗಡಿಗಳು, ಸಣ್ಣ ವ್ಯಾಪಾರಿಗಳು, ಚಪ್ಪಲಿ-ಕೊಡೆ ರಿಪೇರಿ ಮಾಡುವವರು ಇದ್ದಾರೆ. ಕಾರ್ಮಿಕರು ನಿಂತರೆ ಕೋಲ್ಕತಾ ಸ್ತಬ್ಧವಾಗುತ್ತದೆ. ಜನದಟ್ಟಣೆಯಿಂದ ತುಳುಕುತ್ತಿರುವ ರಸ್ತೆಯಲ್ಲಿರುವ ಪ್ರತಿಯೊಬ್ಬರಲ್ಲೂ ಇನ್ನೊಂದು ಮೇಘೆ ಡಾಕಾ ತಾರಾ ಇಲ್ಲವೇ ಸುಬರ್ಣರೇಖದಂಥ ಕತೆ ಇರಬಹುದು. ಇದು ಕೋಲ್ಕತಾ ಮಾತ್ರವಲ್ಲ; ಎಲ್ಲ ನಗರಗಳಿಗೂ ಅನ್ವಯಿಸುವ ಸಾರ್ವಕಾಲಿಕ ಸತ್ಯ. ಆದರೆ, ಹೌರಾ ಸೇತುವೆಯಡಿ ಸಾಕಷ್ಟು ನೀರು ಹರಿದಿದೆ. ಆಗಿನ ವಲಸಿಗರು ಈಗ ಸಿಟಿ ಆಫ್ ಜಾಯ್ ಭಾಗವಾಗಿದ್ದಾರೆ; ಆದರೆ, ಅವರಲ್ಲಿ ಎಲ್ಲರನ್ನೂ ನಗರ ಒಳಗೊಂಡಿದೆಯೇ? ಪ್ರಾಯಶಃ ಇಲ್ಲ. ಹಿಂದಿ ಸಿನೆಮಾ ಮೇಲೆ ಛಾಯೆ ನವ್ಯ(ಹೊಸ ಅಲೆ, ಆರ್ಟ್ ಹೌಸ್) ಸಿನೆಮಾಗಳು ಯುದ್ಧೋತ್ತರ ಇಟಲಿಯ ನವವಾಸ್ತವವಾದ ಮತ್ತು ಫ್ರೆಂಚ್ ನವ್ಯ ಅಲೆಯಿಂದ ಸ್ಫೂರ್ತಿ ಪಡೆದಿವೆ. ವಾಸ್ತವವಾದಿ ಸಿನೆಮಾದಲ್ಲಿ ಸರಳವಾದ, ರೇಖಾತ್ಮಕವಾದ ದೃಶ್ಯಾವಳಿಗಳ ಸರಣಿ ಇರುತ್ತದೆ. ಘಟಕ್ ಅವರ ವಾಸ್ತವವಾದಿ ಸಿನೆಮಾಗಳಲ್ಲಿಯೂ ಮೆಲೋಡ್ರಾಮಾ ಇರುತ್ತಿತ್ತು. ಎಫ್ಟಿಟಿಐಯಲ್ಲಿ ಶಿಕ್ಷಕರಾಗಿದ್ದರಿಂದ ಮತ್ತು ಭಾವಾತಿರೇಕವನ್ನು ಸಂವಹನಕ್ಕೆ ಬಳಸಿದ್ದರಿಂದ, ಅವರ ಛಾಯೆಯನ್ನು ಹಲವು ನಿರ್ದೇಶಕರಲ್ಲಿ ನೋಡಬಹುದು. ಅಡೂರ್ ಗೋಪಾಲಕೃಷ್ಣನ್, ಮಣಿ ಕೌಲ್, ಕುಮಾರ್ ಶಹಾನಿ, ಸಯೀದ್ ಅಖ್ತರ್ ಮಿರ್ಜಾ ಮಾತ್ರವಲ್ಲದೆ, ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಛೋಪ್ರಾ ಅವರ ಪ್ರಭಾವಕ್ಕೆ ಸಿಲುಕಿದವರು. ಪಾಯಲ್ ಕಪಾಡಿಯಾ ಅವರ ಸಾಕ್ಷ್ಯಚಿತ್ರ ‘ಎ ನೈಟ್ ಆಫ್ ನೋಯಿಂಗ್ ನಥಿಂಗ್’ನಲ್ಲಿ ಎಫ್ಟಿಟಿಐಯಲ್ಲಿರುವ ಘಟಕ್ ಅವರ ಮ್ಯೂರಲ್ ಇದೆ. ಘಟಕ್ ತಮ್ಮ ಚಿತ್ರಗಳಲ್ಲಿ ಶಬ್ದವನ್ನು ಮನಶಾಸ್ತ್ರೀಯ ತಂತ್ರವಾಗಿ ಬಳಸುತ್ತಿದ್ದರು. ಮೇಘೆ ಡಾಕಾ ತಾರಾದಲ್ಲಿ ನಾಯಕಿ ನೀತಾ(ಸುಪ್ರಿಯಾ ಚೌಧುರಿ) ಕೃತಘ್ನ ಕುಟುಂಬದ ಜವಾಬ್ದಾರಿ ಹೊರಲು ವಿದ್ಯಾಭ್ಯಾಸ ನಿಲ್ಲಿಸುತ್ತಾಳೆ; ಸ್ನೇಹಿತ ಅವಳನ್ನು ತೊರೆದು, ಆಕೆಯ ತಂಗಿಯನ್ನು ವಿವಾಹವಾಗುತ್ತಾನೆ; ಅಷ್ಟಲ್ಲದೆ, ಕ್ಷಯಕ್ಕೆ ತುತ್ತಾಗುತ್ತಾಳೆ! ಅವಳ ನೋವನ್ನು ತೋರಿಸಲು ಘಟಕ್, ಚಾಟಿ ಶಬ್ದವನ್ನು ಬಳಸುತ್ತಾರೆ. ಸ್ನೇಹಿತನ ಅಪಾರ್ಟ್ಮೆಂಟಿನಲ್ಲಿ ಬೇರೆ ಹುಡುಗಿ ಇರುವುದನ್ನು ಗ್ರಹಿಸಿ, ಮೆಟ್ಟಿಲಿನಿಂದ ಇಳಿಯುವಾಗ ಚಾಟಿ ಸದ್ದು ಕೇಳಿಬರುತ್ತದೆ. ತಂಗಿಯ ವಿವಾಹದಲ್ಲಿ ಹಾಡಲು ಅಭ್ಯಾಸ ಮಾಡುತ್ತಿರುವಾಗ ಕುಸಿಯುತ್ತಾಳೆ. ಆಗ ಪದೇಪದೇ ಚಾಟಿ ಸದ್ದು ಅನುರಣಿಸುತ್ತದೆ. ಸುಬರ್ಣರೇಖಾ ಚಿತ್ರದ ನಾಯಕಿ ಸೀತಾ(ಮಾಧಬಿ ಮುಖರ್ಜಿ), ಸಹೋದರ ಈಶ್ವರನಿಂದ ಬೇರೆಯಾಗುತ್ತಾಳೆ; ದುರಂತವೊಂದರಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾಳೆ ಮತ್ತು ಬದುಕಲು ವೇಶ್ಯಾವೃತ್ತಿಯನ್ನು ಅವಲಂಬಿಸುತ್ತಾಳೆ; ಆಕಸ್ಮಿಕವೋ ಎಂಬಂತೆ ಆಕೆಯ ಮೊದಲ ಗಿರಾಕಿಯೇ ಸೋದರ! ಇಂಥ ನಾಟಕೀಯ-ಭಾವನಾತ್ಮಕ ದೃಶ್ಯಗಳು ಬಾಲಿವುಡ್ನಲ್ಲಿ ದಂಡಿಯಾಗಿರುತ್ತವೆ. ಬನ್ಸಾಲಿ ಅವರ ದೇವದಾಸ್ ಚಿತ್ರದಲ್ಲಿ ನಾಯಕ ತಂದೆಯನ್ನು ಧಿಕ್ಕರಿಸಿ, ಮನೆ ಬಿಟ್ಟು ಹೊರಟಾಗ ಇಂಥದ್ದೇ ಸದ್ದು ಕೇಳಿಬರುತ್ತದೆ. ಮೇಘೆ ಡಾಕಾ ತಾರಾ, ಸುಬರ್ಣರೇಖಾ, ತಿತಾಶ್ ಏಕ್ತಿ ನದಿರ್ ನಾಮ್ ಚಿತ್ರಗಳಲ್ಲಿ ನಾಯಕ/ನಾಯಕಿ ಸಾಯುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದನ್ನು ಬನ್ಸಾಲಿ ಅವರ ಚಿತ್ರಗಳಲ್ಲೂ ಕಾಣಬಹುದು. ಜೊತೆಗೆ, ಪಾತ್ರಗಳಲ್ಲಿ ಹುಚ್ಚುತನದ ಎಳೆಗಳು ಇರುತ್ತವೆ- ಗೆಳತಿ ಪಾರೋಳನ್ನು ತಂದೆ ಅವಮಾನಿಸಿದ್ದರಿಂದ, ಮದ್ಯ ಸೇವಿಸಿ ಸಾಯುವ ದೇವದಾಸ್(ಶಾರುಕ್ ಖಾನ್) ಇಲ್ಲವೇ ಮೃತ ತಂದೆಯೊಂದಿಗೆ ಮಾತಾಡುವ ಸಮೀರ್(ಸಲ್ಮಾನ್ ಖಾನ್, ಹಮ್ ದಿಲ್ ಚುಕೆ ಸನಂ) ಅಥವಾ ಪತ್ನಿ ಮಸ್ತಾನಿಯನ್ನು ತಾಯಿ ಮತ್ತು ಹಿರಿಯ ಮಗ ನಾನಾ ಸಾಹೇಬ್ ಸೆರೆಯಲ್ಲಿಟ್ಟಿದ್ದಾರೆ; ಅವರ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಭ್ರಮಿಸುತ್ತ ಸಾಯುವ ಒಂದನೇ ಬಾಜಿರಾಯ(ರಣವೀರ್ ಕಪೂರ್) ಇವರೆಲ್ಲರೂ ಚಂಚಲ-ದುರ್ಬಲ ಮನಸ್ಥಿತಿಯವರು. ಜೊತೆಗೆ, ಘಟಕ್ ಬಾಲಿವುಡ್ನಲ್ಲಿ ಸಾಕಷ್ಟು ಬಳಕೆಯಾಗಿರುವ ಪುನರ್ಜನ್ಮ ಕಲ್ಪನೆಯನ್ನು ಬಿಮಲ್ ರಾಯ್ ಅವರ ‘ಮಧುಮತಿ’ ಸಿನೆಮಾದ ಚಿತ್ರಕತೆಯಲ್ಲಿ ಅಳವಡಿಸಿದ್ದರು. ಈ ಸಿನೆಮಾದ ನೆರಳು ಸುಭಾಷ್ ಘಾಯ್ ಅವರ ಕರ್ಜ್(1980) ಮತ್ತು ಫರಾ ಖಾನ್ ಅವರ ಓ ಶಾಂತಿ ಓಂ(2007)ರಲ್ಲಿ ಇದೆ. ಬಾಲ್ಯ ಸ್ನೇಹಿತರು ಆನಂತರ ಪ್ರೇಮಿಗಳಾಗುವುದು ಇನ್ನೊಂದು ಥೀಮ್; ಸುಬರ್ಣರೇಖಾದಲ್ಲಿ ಸೀತಾ ಮತ್ತು ಅಭಿರಾಂ ಬಾಲ್ಯ ಸ್ನೇಹಿತರಾಗಿದ್ದು, ದೊಡ್ಡವರಾದ ಬಳಿಕ ಪ್ರೀತಿಸುತ್ತಾರೆ. ಮೇಘೆ ಡಾಕಾ ತಾರಾದಲ್ಲಿ ಸೀತಾ, ಶಿಕ್ಷಕ ತಂದೆಯ ವಿದ್ಯಾರ್ಥಿಯಾಗಿದ್ದ ಸನತ್ನ ಗೆಳೆತನ ಮಾಡುತ್ತಾಳೆ. ಇದನ್ನು ವಿಧು ವಿನೋದ್ ಛೋಪ್ರಾ ಅನುಸರಿಸಿದ್ದಾರೆ. ಪರಿಂದಾದಲ್ಲಿ ಕರಣ್(ಅನಿಲ್ ಕಪೂರ್) ಮತ್ತು ಪಾರೋ(ಮಾಧುರಿ ದೀಕ್ಷಿತ್) ಹಾಗೂ ಮಿಷನ್ ಕಾಶ್ಮೀರ್ನಲ್ಲಿ ಅಲ್ತಾಫ್(ಹೃತಿಕ್ ರೋಷನ್) ಮತ್ತು ಸೂಫಿಯಾ (ಪ್ರೀತಿ ಜಿಂಟಾ) ಬಾಲ್ಯ ಸ್ನೇಹಿತರು. ಬದುಕಿದ್ದಾಗ ಸಿಗದ ಗೌರವ ಜೀವಿತಾವಧಿಯಲ್ಲಿ ಅವರ ಸಿನೆಮಾಗಳು ಯಾವುದೇ ಅಂತರ್ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿಲ್ಲ ಮತ್ತು ಅವರು ವಿದೇಶ ಪ್ರವಾಸ ಮಾಡಲಿಲ್ಲ. ಚಿತ್ರ ವಿಮರ್ಶಕಿ ಅಲಕಾ ಸಹಾನಿ ತಮ್ಮ ಲೇಖನ ‘ಎ ರಿವರ್ ನೇಮ್ಡ್ ರಿತ್ವಿಕ್’(ಇಂಡಿಯನ್ ಎಕ್ಸ್ ಪ್ರೆಸ್ನಲ್ಲಿ ಪ್ರಕಟಿತ)ದಲ್ಲಿ ರಿತ್ವಿಕ್ ಸಾವಿಗೆ ಕೆಲ ದಿನಗಳ ಮುನ್ನ ಮಗಳು ಸಂಹಿತಾಗೆ ‘ಸಾವಿನ ಬಳಿಕ ನನ್ನ ಚಿತ್ರಗಳನ್ನು ಶ್ಲಾಘಿಸುತ್ತಾರೆ ಎಂದು ಸಮಾಧಾನ ಪಡಿಸಿದ್ದರು’ ಎಂದಿದ್ದಾರೆ. ಮರಣಾನಂತರ ಸಾಲುಸಾಲು ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳ ರೆಟ್ರಾ ಸ್ಪೆಕ್ಟಿವ್ಗಳು ನಡೆದವು. ಈ ಜೀವನದಲ್ಲಿ ನ್ಯಾಯ ಪಡೆಯುವುದು ಕಷ್ಟ ಎಂದು ತಮ್ಮ ಕೃತಿಗಳ ಮೂಲಕ ಹೇಳಿದ್ದ ಘಟಕ್, ಸಾವಿನ ನಂತರ ತಮ್ಮನ್ನು ಜನ ಶ್ಲಾಘಿಸುತ್ತಾರೆ ಎಂದು ಸರಿಯಾಗಿಯೇ ಊಹಿಸಿದ್ದರು. ನಾನು ಅವರ ಬಹುತೇಕ ಸಿನೆಮಾಗಳನ್ನು ನೋಡಿದ್ದು ಬೆಂಗಳೂರಿನ ಬದಾಮಿ ಹೌಸ್ನಲ್ಲಿ(ಜಾರ್ಜ್ ಓಕ್ಸ್ ಕಟ್ಟಡ); ಅದೀಗ ಇತಿಹಾಸ ಸೇರಿದೆ. ಆದರೆ, ಜಗತ್ತಿನಲ್ಲಿ ಸಿನೆಮಾಗಳು ಇರುವವರೆಗೆ ಘಟಕ್ ಚಿರಸ್ಥಾಯಿಯಾಗಿರುತ್ತಾರೆ ಮತ್ತು ಅವರ ಚಿತ್ರಗಳು ಬಡವರು-ವಲಸಿಗರ ಕಣ್ಣೀರು ಒರೆಸುತ್ತಲೇ ಇರುತ್ತವೆ. ಪ್ರೊಪಗಾಂಡಾ ಸಿನೆಮಾಗಳು ಕಸದ ಬುಟ್ಟಿ ಸೇರುತ್ತವೆ!
ಸಾವಿನ ಅಂಚಿಗೆ ಜಾರಿದ ಸಾವಿರಾರು ಅಡಕೆ ಮರಗಳು; ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿ
ತೀರ್ಥಹಳ್ಳಿಯ ಪ್ರಸಿದ್ಧ ದೇಶಾವರಿ ಅಡಕೆಗೆ ಎಲೆಚುಕ್ಕಿ ರೋಗ ಆವರಿಸಿದ್ದು, ಇಳುವರಿ ಕುಸಿತದಿಂದ ರೈತರ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ರೋಗಕ್ಕೆ ಪರಿಹಾರ ಸಿಗದೆ, ಮರಗಳು ನಾಶವಾಗುತ್ತಿವೆ. ಸರ್ಕಾರದಿಂದ ಸೂಕ್ತ ಸ್ಪಂದನೆ ಹಾಗೂ ಸಂಶೋಧನೆಗೆ ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ.
ಟೊರಾಂಟೊ ವಿಶ್ವವಿದ್ಯಾಲಯದ ಬಳಿ 20 ವರ್ಷದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವರ್ಷ ಟೊರಾಂಟೊದಲ್ಲಿ ಇದು 41ನೇ ಗುಂಡೇಟಿನ ಪ್ರಕರಣವಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ನೆರವು ಒದಗಿಸುತ್ತಿದೆ. ಈ ಹಿಂದೆ ಕಳೆದ ವಾರವಷ್ಟೇ, 30 ವರ್ಷದ ಹಿಮಾಂಶಿ ಖುರನಾ ಎಂಬ ಭಾರತೀಯ ಮಹಿಳೆಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು.ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು, ಹೀಗೆ ದಿನದಿಂದ ದಿನಕ್ಕೆ ಕೆನಡಾದಲ್ಲಿ ಭಾರತೀಯರ ಮೇಲಿನ ಹಿಂಸಾಚಾರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಕಾರ್ಯಕರ್ತನಾಗಿರುವುದೇ ಶಾಶ್ವತ: ಡಿಕೆಶಿ ವೈರಾಗ್ಯದ ಮಾತಿನ ಹಿಂದೆ, ’ಪವರ್ ಶೇರಿಂಗ್ ಮರೀಚಿಕೆಯ’ ಸತ್ಯ?
Karnataka CM Change : ಇದ್ದಕ್ಕಿದ್ದಂತೆಯೇ ವೇಗವನ್ನು ಪಡೆಯುತ್ತಾ, ಸ್ವಲ್ಪ ದಿನದ ನಂತರ ಎಲ್ಲವೂ ಶಾಂತವಾಗಿ ಮತ್ತೆ ಮುನ್ನಲೆಗೆ ಬರುವ ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ವಿಚಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅವರ ಕಾರ್ಯಕರ್ತನಾಗಿರುವುದೇ ಪರ್ಮನೆಂಟ್ ಎನ್ನುವ ಹೇಳಿಕೆಯಿಂದಾಗಿ ಇನ್ನೊಂದು ಮಜಲಿಗೆ ಬಂದು ನಿಂತಿದೆ.
CM vs DCM: ಸಿಎಂ ಬದಲಾವಣೆ ಚರ್ಚೆ ನಡುವೆ ಡಿ.ಕೆ ಸುರೇಶ್ ಮಾರ್ಮಿಕ ಪೋಸ್ಟ್ ವೈರಲ್
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬಂದ ದಿನವೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಅಂತಿಮವಾಗಿ ಸಿಎಂ ಪಟ್ಟ ಸಿದ್ದರಾಮಯ್ಯ ಪಾಲಾಯಿತು. ಸದ್ಯ ಸರ್ಕಾರ ಎರಡವರೆ ವರ್ಷ ಪೂರೈಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಮತ್ತೆ ಡಿಸಿಎಂ ಡಿ ಕೆ ಶಿವಕುಮಾರ್ ಭರ್ಜರಿ ಪೈಪೋಟಿ
IMD Weather: ಈ ಭಾಗಗಳಲ್ಲಿ ನಾಳೆಯಿಂದ ಗುಡುಗು ಸಹಿತ ಮಳೆ ಸಾಧ್ಯತೆ, ಚಳಿಯೂ ಹೆಚ್ಚು
ಡಿಸೆಂಬರ್ 27ರಿಂದ 31ರವರೆಗೆ ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್ನಲ್ಲಿ ಚದುರಿದಂತೆ ಮಳೆ, ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿರುಗಾಳಿಯ ವೇಗ 30-40 ಕಿಮೀನೊಂದಿಗೆ ಗುಡುಗು ಸಹಿತ ಮಳೆ ಮತ್ತು ಮಿಂಚು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ತೆಲಂಗಾಣದ ಹಲವು ಭಾಗಗಳು, ದಕ್ಷಿಣ ಒಳನಾಡು ಕರ್ನಾಟಕ, ಉತ್ತರ
ಚಿಮುಲ್ ಎಲೆಕ್ಷನ್ ಅಖಾಡದಲ್ಲಿ ಫೈಟ್ ಜೋರು; ಶುರುವಾಗಿದೆ ಕ್ರೆಡಿಟ್ ವಾರ್
ಕೋಚಿಮುಲ್ನಿಂದ ಪ್ರತ್ಯೇಕ ಹಾಲು ಒಕ್ಕೂಟವಾಗಿ ಚಿಮುಲ್ ಆದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ಎದುರಾಗಿದೆ. ಹೀಗಾಗಿ ಚಿಮುಲ್ ಚುನಾವಣೆ ಅಖಾಡ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಪ್ರತ್ಯೇಕ ಒಕ್ಕೂಟ ಮಾಡಿದ ಕ್ರೆಡಿಟ್ ಹಿಡಿದು ಅಖಾಡಕ್ಕಿಳಿದಿರುವ ಘಟಾನುಘಟಿಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತುಗಳನ್ನು ಶುರು ಮಾಡಿದ್ದಾರೆ. ಈ ಎಲ್ಲಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ವರದಿ ಇಂದಿನಿಂದ.
ಬರೀ 180 ರೂ. ಕೊಟ್ಟು ಅಮೆರಿಕ ಲಾಟರಿ ಖರೀದಿಸಿದ ವ್ಯಕ್ತಿಗೆ 15 ಸಾವಿರ ಕೋಟಿ ರೂ. ಬಂಪರ್ ಬಹುಮಾನ!
ಅರ್ಕಾನ್ಸಾಸ್ನಲ್ಲಿ ಕ್ರಿಸ್ಮಸ್ ಈವ್ ರಂದು ನಡೆದ ಪವರ್ ಬಾಲ್ ಲಾಟರಿ ಟಿಕೆಟ್ ಲಕ್ಕಿ ಡ್ರಾನಲ್ಲಿ ಅರ್ಕನ್ಸಾಸ್ ಎಂಬ ನಿವಾಸಿಯೊಬ್ಬರಿಗೆ 1.7 ಶತಕೋಟಿ ಡಾಲರ್ ಪವರ್ಬಾಲ್ ಬಂಪರ್ ಪ್ರೈಸ್ ಲಭ್ಯವಾಗಿದೆ. ಅವರು ಖರೀದಿಸಿದ್ದ 19 ಕ್ರಮಸಂಖ್ಯೆ ಇದ್ದ ಟಿಕೆಟ್ ಗೆ ಈ ಬಂಪರ್ ಬಹುಮಾನ ಹೊಡೆದಿದೆ. ಇದು ಅಮೆರಿಕಾದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಬಹುಮಾನವಾಗಿದ್ದು, ಅರ್ಕನ್ಸಾಸ್ ನ ಲಿಟಲ್ ರಾಕ್ ಎಂಬಲ್ಲಿನ ಕ್ಯಾಬೋಟ್ ಎಂಬ ಪುಟ್ಟ ಗ್ರಾಮದವರೊಬ್ಬರು ಟಿಕೆಟ್ ಮಾರಾಟವಾಗಿರುವುದಾಗಿ ಪವರ್ ಬಾಲ್ ಕಂಪನಿ ತಿಳಿಸಿದೆ. ಆದರೆ, ಬಹುಮಾನ ಗೆದ್ದವರ ವಿವರಗಳನ್ನು ಕಂಪನಿ ಪ್ರಕಟಿಸಿಲ್ಲ.
ಡಿಸೆಂಬರ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 26) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಇಂದಿನಿಂದ ರೈಲ್ವೆ ಟಿಕೆಟ್ ದರ ಹೆಚ್ಚಳ, ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ರೈಲ್ವೆ ಸಚಿವಾಲಯವು ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಪರಿಷ್ಕೃತ ದರಗಳು ಜಾರಿಯಾಗಲಿವೆ. 215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣದ ಸಾಮಾನ್ಯ ದರ್ಜೆಗೆ ಪ್ರತಿ ಕಿ.ಮೀ.ಗೆ 1 ಪೈಸೆ ಮತ್ತು ಎಕ್ಸ್ಪ್ರೆಸ್ ರೈಲುಗಳ ನಾನ್ ಎಸಿ ಕ್ಲಾಸ್ಗಳು ಮತ್ತು ಎಲ್ಲ ರೈಲುಗಳ ಎಸಿ ಕ್ಲಾಸ್ಗಳಿಗೆ ಅನ್ವಯವಾಗುವಂತೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದೆ. ಡಿಸೆಂಬರ್ 21ರಂದು
ಸಿಕ್ಕಿಂ ಆಟಗಾರ ರೋಹಿತ್ ಶರ್ಮಾರ ಪಾದ ಮುಟ್ಟಿ ನಮಸ್ಕರಿಸಿದ್ದು ನಿಜವೇ?
ಮುಂಬೈ: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಸಿಕ್ಕಿಂ ಆಟಗಾರರೊಬ್ಬರು ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ ಎಂದು ಬಿಂಬಿಸುವ ವಿಡಿಯೊ ಬಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಕ್ಕಿಂ ಆಟಗಾರ ರೋಹಿತ್ ಅವರ ಪಾದ ಸ್ಪರ್ಶಿಸಲು ಬಾಗಿದಂತೆ ವಿಡಿಯೊದಲ್ಲಿ ಕಂಡುಬರುತ್ತಿತ್ತು. ಆದರೆ ವಾಸ್ತವವಾಗಿ ರೋಹಿತ್ ಶರ್ಮಾ ಅವರ ಕೈ ಕುಲುಕುವ ವೇಳೆ ಬಿದ್ದ ಟೊಪ್ಪಿಯನ್ನು ಹೆಚ್ಚಿಕೊಳ್ಳಲು ಈ ಆಟಗಾರ ಬಾಗಿರುವುದು ವಿಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಕಂಡುಬರುತ್ತಿದೆ. ಹಿರಿಯ ಕ್ರಿಕೆಟಿಗ ರೋಹಿತ್ ಶರ್ಮಾ ಆಗ ಈ ಆಟಗಾರನ ಬೆನ್ನುತಟ್ಟಿದರು. ಈ ಪಂದ್ಯದಲ್ಲಿ ಕೇವಲ 94 ಎಸೆತಗಳಲ್ಲಿ 155 ರನ್ ಸಿಡಿಸುವ ಮೂಲಕ ರೋಹಿತ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. 9 ಸಿಕ್ಸರ್ ಹಾಗೂ 18 ಬೌಂಡರಿಗಳ ಸಹಿತ 164.89 ಸ್ಟ್ರೈಕ್ ರೇಟ್ ನೊಂದಿಗೆ ಅಚ್ಚರಿ ಮೂಡಿಸಿದ್ದರು. ಆರಂಭಿಕ ಆಟಗಾರ ಅಂಕ್ರಿಶ್ ರಘುವಂಶಿ ಜತೆಗೆ 141 ರನ್ ಗಳ ಜತೆಯಾಟ ಹಾಗೂ ಮುಶೀರ್ ಖಾನ್ ಜತೆ 85 ರನ್ ಗಳ ಜತೆಯಾಟ ನೀಡುವ ಮೂಲಕ ರೋಹಿತ್, ಮುಂಬೈ ತಂಡದ ಸುಲಭ ಜಯಕ್ಕೆ ಕಾರಣರಾಗಿದ್ದರು.
ಇಎಸ್ಇ ಪರೀಕ್ಷೆಯಲ್ಲಿ 112ನೇ ರ್ಯಾಂಕ್; ಸೆರೆಬ್ರಲ್ ಪಾಲ್ಸಿ ಬಾಧಿತ ಯುವಕನ ಅಮೋಘ ಸಾಧನೆ
ಮೀರಠ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ಎಂಜಿನಿಯರಿಂಗ್ ಸೇವಾ ಪರೀಕ್ಷೆ (ಇಎಸ್ಇ) ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ 112ನೇ ರ್ಯಾಂಕ್ ಗಳಿಸಿದ ಮನ್ವೇಂದ್ರ ಸಿಂಗ್, ಮೊದಲನೇ ಪ್ರಯತ್ನದಲ್ಲೇ ಎಂಜಿನಿಯರಿಂಗ್ ಸೇವೆಗೆ ಆಯ್ಕೆಯಾದ ವಿಶಿಷ್ಟ ಸಾಧನೆಯಿಂದ ಗಮನ ಸೆಳೆದಿದ್ದಾರೆ. 24 ವರ್ಷ ವಯಸ್ಸಿನ, ಐಐಟಿ ಪದವೀಧರನ ಹೋರಾಟದ ಪಯಣ ಈ ಸಾಧನೆಯೊಂದಿಗೆ ದೊಡ್ಡ ಮೈಲುಗಲ್ಲು ತಲುಪಿದೆ. ಅಂಗಾಂಗಗಳ ನಿಯಂತ್ರಣ ಕಷ್ಟಸಾಧ್ಯವಾದ ಸೆರೆಬ್ರಲ್ ಪಾಲ್ಸಿಕಾಯಿಲೆಯ ವಿರುದ್ಧ ಹೋರಾಡಿ ಜಯಿಸಿರುವುದು ಈತನ ಯಶೋಗಾಥೆಯನ್ನು ಜಗಜ್ಜಾಹೀರು ಮಾಡಿದೆ. ಬಾಲ್ಯದಿಂದಲೇ ನಡೆಸಿದ ಬಾಳಿನ ಹೋರಾಟದಲ್ಲಿ ಯಶಸ್ಸು ಸಿಕ್ಕಿರುವುದು ವಿಶೇಷ. ಬಾಲ್ಯದಲ್ಲಿ ಪ್ರತಿಕೂಲ ದೈಹಿಕ ಸ್ಥಿತಿಯಿಂದಾಗಿ ಪೆನ್ಸಿಲ್ ಹಿಡಿಯಲೂ ಕಷ್ಟಪಡಬೇಕಾದ ಸ್ಥಿತಿ. ಅಲ್ಲಿಂದ ಹೋರಾಟದ ಬದುಕು ಎಂಜಿನಿಯರಿಂಗ್ ಕಲಿಕೆಯವರೆಗೆ ಮುಂದುವರಿದಿತ್ತು. ಇದೀಗ ದೈಹಿಕ ಇತಿಮಿತಿಯ ಹೊರತಾಗಿಯೂ ಮಹತ್ವಾಕಾಂಕ್ಷಿ ಸಾಧನೆ ಮಾಡುವಲ್ಲಿಗೆ ಬಾಳಿನ ಒಂದು ಅಧ್ಯಾಯ ಮುಗಿದಂತಾಗಿದೆ. ಬುಲಂದರ್ ಶಹರ್ ಜಿಲ್ಲೆಯ ಅವಾಸ್ ವಿಕಾಸ್ ನಿವಾಸಿಯಾಗಿರುವ ಮನ್ವೇಂದರ್ ಗೆ ಚಲನೆಯನ್ನು ನಿಯಂತ್ರಿಸುವ ಮತ್ತು ಮಾಂಸಖಂಡದ ನಿಯಂತ್ರಣ ಕಳೆದುಕೊಳ್ಳುವ ನರಸಂಬಂಧಿ ಸಮಸ್ಯೆ ಸೆರೆಬ್ರಲ್ ಪಾಲ್ಸಿ ಎಂಬ ಭಯಾನಕ ಕಾಯಿಲೆ ಆರು ತಿಂಗಳ ಬಾಲಕನಿದ್ದಾಗಲೇ ಪತ್ತೆಯಾಗಿತ್ತು. ಎರಡು ವರ್ಷದವನಾಗಿದ್ದಾಗ ಕತ್ತು ಎತ್ತಿ ನಿಲ್ಲಲೂ ಸಾಧ್ಯವಾಗದ ಸ್ಥಿತಿ. ಬೆಳೆಯುತ್ತಿದ್ದಂತೆ ಪ್ರತಿಯೊಂದು ಕೆಲಸ ನಿರ್ವಹಿಸಲೂ ಹರಸಾಹಸ ಮಾಡಬೇಕಾಗಿತ್ತು. ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿರುವ ತಾಯಿ ರೇಣು ಸಿಂಗ್ ಮಗನ ಯಶೋಗಾಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಯುಪಿಎಸ್ಸಿಯಲ್ಲಿ ಉತ್ತೀರ್ಣವಾಗುವುದು ಕಠಿಣ ಹಾಗೂ ಹಲವು ಹಂತಗಳ ಪ್ರಕ್ರಿಯೆ. ಬದುಕಿನ ಪ್ರತಿ ಹಂತದಲ್ಲೂ ದೈಹಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಿಕೊಂಡು ಪೆನ್ಸಿಲ್ ಹಿಡಿಯುವುದನ್ನು ಕಲಿಯುವುದರಿಂದ ಹಿಡಿದು, ಸಂಕೀರ್ಣ ಶೈಕ್ಷಣಿಕ ಸವಾಲುಗಳಲ್ಲಿ ಪ್ರಾವೀಣ್ಯತೆ ಸಾಧಿಸಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಜೀವನ ಪರ್ಯಂತ ಈ ಬಾಧೆಯಿಂದಾಗಿ ಭವಿಷ್ಯ ಭಯಾನಕ ಎಂದ ವೈದ್ಯರು ಆರಂಭದಲ್ಲೇ ಎಚ್ಚರಿಕೆ ನೀಡಿದ್ದರು. ರೇಣು ಸಿಂಗ್ ಬಾಲಕನನ್ನು ದೇಶಾದ್ಯಂತ 50ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ವೈದ್ಯಕೀಯ ಚಿಕಿತ್ಸೆಯ ಜತೆಗೆ ಇಚ್ಛಾಶಕ್ತಿ ಕೆಲಸ ಮಾಡಿತು ಎಂದು ಅವರು ಹೇಳುತ್ತಾರೆ. 17ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ, ತಾಯಿಯ ನಿರಂತರ ಬೆಂಬಲದಿಂದ ಪಾಟ್ನಾ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಬಳಿಕ ಎಂಜಿನಿಯರಿಂಗ್ ಸೇವೆ ಪರೀಕ್ಷೆಯನ್ನೂ ಯಶಸ್ವಿಯಾಗಿ ನಿಭಾಯಿಸಿರುವುದು ವಿಕಲ ಚೇತನರಿಗೆ ನಿಜಕ್ಕೂ ಸ್ಫೂರ್ತಿ.
ಖಾಸಗಿ ಬಸ್ಗಳಲ್ಲಿ ಡೇಂಜರ್ ಲಗೇಜು ; ಜಂಟಿ ಕಾರ್ಯಾಚರಣೆಯೇ ಪರಿಹಾರ
ಖಾಸಗಿ ಬಸ್ಗಳಲ್ಲಿ ನಿಯಮ ಮೀರಿ ಸರಕು ಸಾಗಾಟ ಮಾಡುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡಿದೆ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳು, ಸ್ಫೋಟಗಳು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿವೆ. ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಪಾಯಕಾರಿ ವಸ್ತುಗಳ ಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ.
ಚಿತ್ರದುರ್ಗ ಬಸ್ ಅಪಘಾತದಲ್ಲಿ ಬಲಿಯಾದ ಗೆಳತಿಯರ ದುರಂತ ಕಥೆ, ಕಮರಿದ ಕನಸು
ಬೆಂಗಳೂರಿನಲ್ಲಿ ವಾಸವಿದ್ದ ಮೂವರು ಸ್ನೇಹಿತೆಯರಲ್ಲಿ ಇಬ್ಬರು, ಶಿವಮೊಗ್ಗದ ಸಿಗಂದೂರು ದೇವಸ್ಥಾನಕ್ಕೆ ಪ್ರವಾಸ ಹೋಗುತ್ತಿದ್ದಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಮರನಾಥ್ ನವ್ಯಾ (26) ಮತ್ತು ಹರದೇಶಿ ಮಂಜುಳಾ (27) ಮೃತಪಟ್ಟಿದ್ದು, ಮಿಲನಾ ನಾರಾಯಣಮೂರ್ತಿ (26) ಪಾರಾಗಿದ್ದಾರೆ. ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು, ಮದುವೆಗೆ ಸಿದ್ಧರಾಗಿದ್ದರು.
Karnataka Weather: ಡಿ.31ರಂದು ಈ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ
ರಾಜ್ಯದ ಉತ್ತರ ಒಳನಾಡಿನಲ್ಲಿ ಸದ್ಯ ಶೀತಲ ಅಲೆಯ ಪರಿಸ್ಥಿತಿ ಮುಂದುವರಿದಿದ್ದು, ಚಳಿ ತೀವ್ರಗೊಂಡಿದೆ. ಮುಂದಿನ ಐದು ದಿನಗಳವರೆಗೆ ಇದೇ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿ ಇರಲಿದೆ. ಡಿಸೆಂಬರ್ 31ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ವರ್ಷದ ಕೊನೆಯ ಕೊನೆಯ ದಿನದಂದು ರಾಜ್ಯದ ಜನ ಮಳೆ ಕಾಣಲಿದ್ದಾರೆ. ಯಾವೆಲ್ಲ
ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರ ಹತ್ಯೆಗೈದ ಐಸಿಸ್ ಉಗ್ರರ ಮೇಲೆ ಮಾರಕ ದಾಳಿಗೆ ಟ್ರಂಪ್ ಆದೇಶ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಶಾನ್ಯ ನೈಜೀರಿಯಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವ ISIS ಭಯೋತ್ಪಾದಕರ ವಿರುದ್ಧ ಶಕ್ತಿಶಾಲಿ ದಾಳಿ ನಡೆಸಲು ಆದೇಶಿಸಿದ್ದಾರೆ. ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಈ ಬಗ್ಗೆ ತಿಳಿಸಿದ ಅವರು, ಉಗ್ರರನ್ನು 'ಭಯೋತ್ಪಾದಕ ತ್ಯಾಜ್ಯ' ಎಂದು ಕರೆದಿದ್ದಾರೆ. ಕ್ರೈಸ್ತರ ಹತ್ಯೆ ನಿಲ್ಲದಿದ್ದರೆ ನರಕವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
(ವಿಕ ಫೋಕಸ್) ಭಾರತ ಮಾಡಿದ ಉಪಕಾರಗಳನ್ನೆಲ್ಲಾ ಮರೆತ ಬಾಂಗ್ಲಾದೇಶದ ಯುವ ಪೀಳಿಗೆ
ಭಾರತವು ಬಾಂಗ್ಲಾದೇಶಕ್ಕೆ ನೀಡಿದ್ದ ಸ್ನೇಹ ಮತ್ತು ಬೆಂಬಲ ಈಗ ಬದಲಾಗಿದೆ. ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿದ್ದು, ಚುನಾವಣೆಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಯೂನಸ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಭಾರತದ 'ಚಿಕನ್ ನೆಕ್' ಪ್ರದೇಶದ ಬಗ್ಗೆ ಬಾಂಗ್ಲಾದೇಶದ ಬೆದರಿಕೆಗಳು ಉಲ್ಲೇಖಗೊಂಡಿವೆ. ಮಾಲ್ಡೀವ್ಸ್ ನಂತೆ ಬಾಂಗ್ಲಾದೇಶವೂ ತನ್ನ ತಪ್ಪುಗಳನ್ನು ತಿದ್ದಿಕೊಂಡು ಭಾರತದೊಂದಿಗೆ ಮತ್ತೆ ಸ್ನೇಹ ಬೆಳೆಸಿಕೊಳ್ಳುತ್ತದೆಯೇ ಕಾದು ನೋಡಬೇಕು.
ಮೈಸೂರು ಗಸ್ತು ವ್ಯವಸ್ಥೆ ಬದಲು - ನಿರ್ಜನ ಪ್ರದೇಶದಲ್ಲೂ ಅನೈತಿಕ ಚಟುವಟಿಕೆ ನಡೆಸುವವರ ಮುಖ ಇನ್ನು ನಿಖರವಾಗಿ ಗೋಚರ
ಮೈಸೂರು ನಗರ ಪೊಲೀಸರು ಈಗ ಡ್ರೋನ್ಗಳ ಸಹಾಯದಿಂದ ಗಸ್ತು ತಿರುಗುತ್ತಿದ್ದಾರೆ. ಇದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮತ್ತು ತಲುಪಲು ಕಷ್ಟಕರವಾದ ಸ್ಥಳಗಳಲ್ಲಿಯೂ ಡ್ರೋನ್ಗಳ ಮೂಲಕ ನಿಗಾ ಇಡಬಹುದು. ಇದು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಅವರ ಚಲನವಲನಗಳನ್ನು ಗುರುತಿಸಲು ಸಹಕಾರಿಯಾಗಿದೆ. ಈ ಹೊಸ ತಂತ್ರಜ್ಞಾನವು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಿದೆ.
ಮೈಸೂರಲ್ಲಿ ಮಾಜಿ ಎಂಎಲ್ಸಿ ಸಿದ್ದರಾಜುಗೆ ಸೇರಿದ ಭೂಮಿ ಕಬಳಿಸಲು ಯತ್ನ - 22 ಸೈಟ್ ಮಾರಾಟಕ್ಕೆ ಮುಂದು - ಕಡೆಗೆ ಪರಾರಿ!
ಮೈಸೂರಿನಲ್ಲಿ 30 ಕೋಟಿ ರೂ. ಮೌಲ್ಯದ 22 ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲು ಭೂಗಳ್ಳರ ಯತ್ನ ವಿಫಲವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ಕರೆತಂದು ನೋಂದಣಿ ಮಾಡಲು ಮುಂದಾಗಿದ್ದರು. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಎಚ್ಚೆತ್ತುಕೊಂಡು ನೋಂದಣಿ ತಡೆದು, ಸಿದ್ದರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ : ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು : ಕಳೆದ ಒಂದು ದಶಕದಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ಇತ್ತೀಚಿಗೆ ಯುವ ಇತಿಹಾಸಕಾರರು ಬರುತ್ತಿದ್ದಾರೆ. ಅವರು ಭಾರತದ ಇತಿಹಾಸ ತಪ್ಪಾಗಿದೆ. ಅದನ್ನು ನಾವು ಬದಲಾಯಿಸುತ್ತೇವೆ ಎಂದು ಅವರದೇ ಆದ ರೀತಿಯಲ್ಲಿ ಇತಿಹಾಸ ಬರೆಯುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದ್ದಾರೆ. ಗುರುವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಆಯೋಜಿಸಿದ್ದ ‘ಕನ್ನಡ ನುಡಿ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಒಬ್ಬರು ಅಶೋಕನ ಕುರಿತು ಬರೆದಿರುವ ಕೃತಿಯಲ್ಲಿ ಬುದ್ಧನನ್ನು ಕಡಿಮೆ ಎನ್ನುವಂತೆ ಚಿತ್ರಿಸಿದ್ದಾರೆ ಎಂದು ತಿಳಿಸಿದರು. ಬೌದ್ಧ ಧರ್ಮ ವಿಭಿನ್ನ ಮತ್ತು ವಿಶಿಷ್ಟ ಧರ್ಮವಾಗಿ ಬೆಳೆದಿದ್ದರೂ ಕೂಡ ಉಪನಿಷತ್ತಿನಲ್ಲಿ ಹೇಳಿರುವುದನ್ನೇ ಬುದ್ಧ ಹೇಳಿರುವುದಾಗಿ ಸುಳ್ಳುಗಳನ್ನು ಭಿತ್ತಲಾಗಿದೆ. ಈ ರೀತಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಡಾ.ಸಿ.ಚಂದ್ರಪ್ಪ ಅವರಂತಹ ವಿದ್ವಾಂಸರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಗಾಂಧಿ ಅವರನ್ನು ಕೂಡ ನಗಣ್ಯವನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಮಹಾತ್ಮ ಗಾಂಧಿ ನರೇಗಾ ಎನ್ನುವ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ತೆಗೆದಿದ್ದಾರೆ. ಖಾತ್ರಿಯಾಗಿದ್ದ ಯೋಜನೆಯನ್ನು ಖಾತ್ರಿ ಅಲ್ಲವಾಗಿಸುವಂತೆ ಮಾಡಿದ್ದಾರೆ. ಅದರಲ್ಲಿ ಬೇಡಿಕೆಗೆ ತಕ್ಕ ಹಾಗೆ ಉದ್ಯೋಗವನ್ನು ಪಡೆಯಬಹುದಾಗಿತ್ತು. ಆದರೆ ಈಗ ಕೆಲಸ ಇದ್ದರೆ ಮಾತ್ರ ಕೆಲಸ ಮಾಡಬೇಕಿದೆ. ಉದ್ಯೋಗದ ಖಾತ್ರಿ ಈಗ ಹೋಗಿದೆ ಎಂದರು. ಭಾರತದ ಅಸ್ಮಿತೆ ಗಾಂಧಿಯ ಹೆಸರನ್ನೇ ಅಳಿಸುವ ಈ ಕಾಲದಲ್ಲಿ ಇತಿಹಾಸ ತಿರುವಚುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ. ಹಿಂದೂ ಧರ್ಮವನ್ನು ನಾನು ಬಾಲ್ಯದಿಂದ ನೋಡಿಕೊಂಡು ಬಂದಿರುವ ಹಾಗೆ ಸೌಹಾರ್ದ ಮತ್ತು ಸಹಬಾಳ್ವೆಯ ಧರ್ಮ. ಯಾವುದೇ ಧರ್ಮದ ಜನರನ್ನು ಸಹಿಸಿಕೊಳ್ಳುವ ಮನೋಧರ್ಮ ಹಿಂದೂಗಳಲ್ಲಿ ಇತ್ತು. ಜಾತಿ ಪದ್ಧತಿಯ ಹೊರತಾಗಿಯೂ ಇನ್ನೊಬ್ಬರನ್ನು ಸಹಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಮುಸ್ಲಿಂ, ಕ್ರೈಸ್ತ ಧರ್ಮದ ಹಬ್ಬದ ಸಂದರ್ಭಗಳಲ್ಲಿ ಕೊಡು, ಕೊಳ್ಳುವಿಕೆ ಇರುತ್ತಿತ್ತು. ಈಗ ಕಾಲ ಎಷ್ಟು ಬದಲಾಗಿದೆ ಎಂದರೆ ಕೇರಳದಲ್ಲಿ ಕ್ರಿಸ್ಮಸ್ ಪ್ರಯುಕ್ತ ಮಕ್ಕಳು ಹಾಡು ಹಾಡುತ್ತಾ ಹೋಗುವಾಗ ಸಂಘಪರಿವಾರದವರು ಹೊಡೆದಿದ್ದಾರೆ. ಇಷ್ಟೊಂದು ಅಸಹನೆ ಈಗ ಬಂದಿದೆ. ಸೌಹಾರ್ದವನ್ನು ಇಲ್ಲವಾಗಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಎಲ್ಲವನ್ನೂ ಹಿಂದುತ್ವದ ಕನ್ನಡಿಯಲ್ಲಿ ನೋಡುವಂತಾಗಿದೆ. ನಮ್ಮ ನಮ್ಮಲ್ಲೇ ಬೇಧ ಭಾವ ಮಾಡುವಂತಹ ರಾಜಕೀಯ ಕ್ರೌರ್ಯವನ್ನು ನಾವು ಖಂಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಲೇಖಕ ಡಾ.ಸಿ.ಚಂದ್ರಪ್ಪ, ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ, ಪ್ರೊ.ಅಂಜಿನ ರೆಡ್ಡಿ ಕೆ.ಆರ್, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜೀವನ್ಮುಖಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಕುವೆಂಪು ಅವರು ಬಹಳ ದೊಡ್ಡ ಕನ್ನಡದ ಚೇತನ. ಅವರ ಬಗ್ಗೆ ಒಂದು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಕುವೆಂಪು ಅವರು ಭಾರತ ರತ್ನಕ್ಕೆ ಅರ್ಹರು ಅವರಿಗೆ ಆದಷ್ಟು ಬೇಗ ಭಾರತ ರತ್ನ ಸಿಗಲಿ. - ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ
ಹುಣಸೂರು | ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ದಹನ
ಹುಣಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಗರ ಸಂವಿಧಾನ ವೃತ್ತದಲ್ಲಿ ಮನುಸ್ಮೃತಿಯನ್ನು ದಹಿಸಲಾಯಿತು. ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಅಂಬೇಡ್ಕರ್ ಚಿರಾಯುವಾಗಲಿ, ಜೀವ ವಿರೋಧಿ ಮನುಸ್ಮೃತಿಗೆ ಧಿಕ್ಕಾರ. ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಲಿ ಎಂದು ಮುಂತಾದ ಘೋಷಣೆ ಕೂಗಿ ಮನುಸ್ಮೃತಿಯನ್ನು ದಹಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಹಿರಿಯ ಹೋರಾಟಗಾರ ಜೆ.ಮಹದೇವು ಮಾತನಾಡಿ, ಜಾತಿ ವ್ಯವಸ್ಥೆಗೆ ಮತ್ತು ಅಸ್ಪೃಶ್ಯತೆಗೆ ಮುನ್ನುಡಿ ಬರೆದಿದ್ದ ಮನುಸ್ಮೃತಿಯನ್ನು ಬಹುಜನರಿಗೆ ಮಾರಕವಾಗಿದೆ ಎಂದು ಅರಿತ್ತಿದ್ದ ಅಂಬೇಡ್ಕರ್ ಅಂದೇ ಸುಟ್ಟು ಹಾಕಿದ್ದರು. ಆದರೂ ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಸ್ಪೃಶ್ಯತೆ, ಪಾಳೇಗಾರಿಕೆ ಸಂಸ್ಕೃತಿ, ಇನ್ನು ಜೀವಂತವಾಗಿದ್ದು ಹೆಚ್ಚು ಹೆಚ್ಚು ಜನಪರ ಸಂಘಟನೆಗಳು ಸಂಘಟಿತರಾಗಿ ಇದನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು. ಜಾತಿ ವ್ಯವಸ್ಥೆ ವಿರುದ್ಧ ಅಂದೇ ಧ್ವನಿ ಎತ್ತಿದ್ದ ಅಂಬೇಡ್ಕರ್ ಸಂವಿಧಾನದ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಆದರೆ, ಇಲ್ಲಿನ ಕೋಮುವಾದಿ ಶಕ್ತಿಗಳು ಮನುಸ್ಮೃತಿಯನ್ನು ಮತ್ತೊಮ್ಮೆ ಸಮಾಜದ ಮೇಲೆ ಏರಲು ಹವಣಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿಪಿಐ(ಎಂ) ಮುಖಂಡ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿದರು. ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ತಾಸಂ ಸಂಚಾಲಕ ಮುತ್ತು ರಾಯನ ಹೊಸಳ್ಳಿ ಶಿವರಾಜು, ಜಿಲ್ಲಾ ಸಂಯೋಜಕ ಪ್ರಕಾಶ್, ಖಜಾಂಚಿ ಸಿದ್ದೇಶ್ ಅತ್ತಿಕುಪ್ಪೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀರನಹಳ್ಳಿ ಬಾಲಸುಂದರ್, ದಸಂಸ ತಾಲೂಕು ಮಹಿಳಾ ಸಂಚಾಲಾಕಿ ರುಕ್ಮಿಣಿ, ಹಳೇಪುರ ಕೃಷ್ಣ, ಚಲುವರಾಜು, ಸೋಮಯ್ಯ ತರಿಕಲ್ಲು ಕಿಟ್ಟಪ್ಪ, ಕೆಇಬಿ ರಾಜಪ್ಪ, ಪ್ರೊ. ಮಹದೇವ್, ಗಿರೀಶ್ ಬಿಳಿಕೆರೆ, ನಾರಾಯಣ, ವಕೀಲ ಅಶೋಕ್, ಪಾಸ್ಟಾರ್ ಸುರೇಶ್ ಕುಮಾರ್ ಕೆಎಂ ವಾಡಿ, ಸುಂದರ್ ಹೊಸಕೋಟೆ ಮುಂತಾದವರಿದ್ದರು. ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರ ಅಮಾನುಷ ಕೊಲೆಯನ್ನು ತೀವ್ರವಾಗಿ ಖಂಡಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
Chikkaballapur | ಟಿಪ್ಪರ್–ಬೈಕ್ ನಡುವೆ ಢಿಕ್ಕಿ; ನಾಲ್ವರು ಸ್ಥಳದಲ್ಲೇ ಮೃತ್ಯು
ಚಿಕ್ಕಬಳ್ಳಾಪುರ : ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಜಿಲ್ಲಾಡಳಿತ ಭವನದ ಕೂಗಳತೆ ದೂರದ ಅಜ್ಜವಾರ ಬಳಿ ಗುರುವಾರ ರಾತ್ರಿ ಸುಮಾರು 9.30ರ ವೇಳೆಗೆ ಸಂಭವಿಸಿರುವುದಾಗಿ ವರದಿಯಾಗಿದೆ. ಮೃತರನ್ನು ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ನಂದೀಶ್, ನರಸಿಂಹ, ಅರುಣ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ನಾಲ್ವರೂ ಪರಸ್ಪರ ಸ್ನೇಹಿತರಾಗಿದ್ದು, ಚಿಕ್ಕಬಳ್ಳಾಪುರ ನಗರದಿಂದ ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಶಿಡ್ಲಘಟ್ಟ ಕಡೆಯಿಂದ ಚಿಕ್ಕಬಳ್ಳಾಪುರದತ್ತ ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ನಾಲ್ವರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ಸಾಗಿಸಲಾಯಿತು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hardik Pandya Reaction- ಬ್ಯಾಡ್ ಬಾಯ್ ಇಮೇಜ್ ನಿಂದ ಹೊರಬಂದಿರುವ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬಹಳ ಬದಲಾದಂತೆ ಕಂಡುಬರುತ್ತಿದ್ದಾರೆ. ಇದೀಗ ಅಭಿಮಾನಿಯೊಬ್ಬ ಸೆಲ್ಫಿ ನೀಡದ್ದಕ್ಕೆ ನಿಂದಿಸಿದರೂ ಶಾಂತಚಿತ್ತರಾಗಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದು ಇದಕ್ಕೆ ಸಾಕ್ಷಿ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಾರ್ದಿಕ್ ಪಾಂಡ್ಯ ಅವರ ವರ್ತನೆ ಪ್ರಶಂಸೆಗೆ ಪಾತ್ರವಾಗಿದೆ. ತಮ್ಮ ಗರ್ಲ್ ಫ್ರೆಂಡ್ ಜೊತೆ ಅವರು ಕ್ರಿಸ್ಮಸ್ ಔಟಿಂಗ್ ವೇಳೆ ಈ ಘಟನೆ ನಡೆದಿದೆ.
ಒಳಮೀಸಲಾತಿಯಲ್ಲೂ ನುಸುಳಿಕೊಂಡ ಮನುಸ್ಮೃತಿ : ಜ್ಞಾನ ಪ್ರಕಾಶ್ ಸ್ವಾಮೀಜಿ
ಮೈಸೂರಿನಲ್ಲಿ ಮನುಸ್ಮೃತಿ ದಹನ ದಿನಾಚರಣೆ
ವಿಜಯನಗರ | ಎತ್ತಿನ ಬಂಡಿಗೆ ಬೈಕ್ ಢಿಕ್ಕಿ : ಸ್ಥಳದಲ್ಲೇ ಇಬ್ಬರು ಮೃತ್ಯು
ವಿಜಯನಗರ : ಎತ್ತಿನ ಬಂಡಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರಿಬ್ಬರು ಮೃತಪಟ್ಟ ಘಟನೆ ಹರಪನಹಳ್ಳಿ ತಾಲೂಕಿನ ಸಾಸಿವೆಹಳ್ಳಿ-ಹುಣಸಿಹಳ್ಳಿ ಹತ್ತಿರ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಶಿವಕುಮಾರ್ ( 37) ರವಿಕುಮಾರ್ (41) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಪಡೆದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹಾಗೂ ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಗಟೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಅಫಜಲಪುರ | ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
ಅಫಜಲಪುರ : ಪಟ್ಟಣದ ಮದರ್ ತೆರೇಸಾ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ಕಾಲೇಜಿನ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಆರ್.ಎಸ್. ನಂದೂರ ಗುಂಡೆರಾವ್ ದೇಶಮುಖ, ಸುರೇಶ್ ಘಂಟೆ, ಪತ್ರಕರ್ತ ಸಿದ್ದು ಶಿವಣಗಿ ಸಾಂಚಿ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಸಿಂಗೆ ಆನೂರ ಹಾಗೂ ಮಧ್ವರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು ಜಂಟಿಯಾಗಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕ್ಯಾಲೆಂಡರ್ ಬಿಡುಗಡೆ ನಂತರ ಮಾತನಾಡಿದ ಮದರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು, ಶೈಕ್ಷಣಿಕ ಚಟುವಟಿಕೆಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಕ್ಯಾಲೆಂಡರ್ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದ್ದು, ಅವುಗಳನ್ನು ಸಮರ್ಪಕವಾಗಿ ರೂಪಿಸಲು ಈ ಕ್ಯಾಲೆಂಡರ್ ಸಹಕಾರಿಯಾಗಲಿದೆ ಎಂದು ಹೇಳಿದರು. ಪತ್ರಕರ್ತರಾದ ಸಿದ್ದು ಶಿವಣಗಿ ಮಾತನಾಡಿದರು.

25 C