SENSEX
NIFTY
GOLD
USD/INR

Weather

27    C
... ...View News by News Source

ಕಬ್ಬು, ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕ ಅರವಿಂದ ಕುಮಾರ್ ರಾವತ್ ರನ್ನು ಭೇಟಿಯಾದ ಸಚಿವ ಆರ್.ಬಿ. ತಿಮ್ಮಾಪುರ

ಬಾಗಲಕೋಟೆ: ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ‌ ಅವರು ಇಂದು ರಾಜಧಾನಿ ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕಬ್ಬು ಮತ್ತು ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕರಾದ ಅರವಿಂದ ಕುಮಾರ್ ರಾವತ್ ಅವರನ್ನು ಭೇಟಿ ಮಾಡಿ, ರಾಜ್ಯದ ಕಬ್ಬು ಬೆಳೆಗಾರರಿಗೆ, ವಿಶೇಷವಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರೈತರಿಗೆ ಎದುರಾಗುತ್ತಿರುವ ತೀವ್ರ ಸಮಸ್ಯೆಗಳ ಕುರಿತು ವಿವರವಾದ ಚರ್ಚೆ ನಡೆಸಿದರು. ಸಭೆಯಲ್ಲಿ ಸಚಿವ ತಿಮ್ಮಾಪೂರ ಅವರು, ಕಳೆದ ಕೆಲವು ವರ್ಷಗಳಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಕಬ್ಬಿನ ಬೆಲೆ ಕುಸಿತ, ಸಕ್ಕರೆ ಕಾರ್ಖಾನೆಗಳ ಸಾಲ ಮರುಪಾವತಿ ವಿಳಂಬ, ಕನಿಷ್ಠ ಬೆಂಬಲ ಬೆಲೆ (ಎಫ್‌ಆರ್‌ಪಿ) ಹೆಚ್ಚಳದ ಕೊರತೆ, ರಫ್ತು ನೀತಿಯಲ್ಲಿ ಏರ್ಪಡುತ್ತಿರುವ ಬದಲಾವಣೆಗಳಿಂದಾಗಿ ಉಂಟಾಗುತ್ತಿರುವ ಅನಿಶ್ಚಿತತೆ ಹಾಗೂ ಮುಧೋಳ ಸೇರಿದಂತೆ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ವಿಶೇಷವಾಗಿ ತಲುಪುತ್ತಿರುವ ತೊಂದರೆಗಳನ್ನು ಕೇಂದ್ರ ಅಧಿಕಾರಿಗಳ ಗಮನಕ್ಕೆ ತಂದರು. “ಕರ್ನಾಟಕದಲ್ಲಿ ಕಬ್ಬು ಬೆಳೆ ರೈತರ ಜೀವನಾಡಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಹು ಭಾಗದಲ್ಲಿ ಸಾವಿರಾರು ರೈತರು ಕಬ್ಬು ಬೆಳೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಅವರಿಗೆ ನ್ಯಾಯ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ರೈತರ ಹಿತ ಕಾಯಬೇಕು” ಎಂದು ಸಚಿವರು ನಿರ್ದೇಶಕರಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಬ್ಬಿನ ಎಫ್‌ಆರ್‌ಪಿ ಯುಕ್ತಿಯುಕ್ತ ಹೆಚ್ಚಳ, ಸಕ್ಕರೆ ರಫ್ತು ನೀತಿಯಲ್ಲಿ ಸ್ಥಿರತೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಸಹಾಯಧನ ಮತ್ತು ರೈತರ ಬಾಕಿ ಪಾವತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರು ಒತ್ತಡ ಹೇರಿದರು. ನಿರ್ದೇಶಕ ಅರವಿಂದ ಕುಮಾರ್ ರಾವತ ಅವರು ಸಚಿವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಆನಂದ ಹಟ್ಟಿ ಅವರು ಉಪಸ್ಥಿತರಿದ್ದರು

ವಾರ್ತಾ ಭಾರತಿ 19 Nov 2025 2:57 pm

ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ: ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ:  ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ. ಬಿಜೆಪಿ ಮೋಸದಿಂದ ಬಿಹಾರ ಚುನಾವಣೆ ಗೆದ್ದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ವೇಳೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ದೆಹಲಿ ಸ್ಫೋಟ ಆದಾಗ ಪ್ರಧಾನಿ ಎಲ್ಲಿದ್ದರು. ದುರ್ಘಟನೆ ಸಂಭವಿಸಿದ ಕೂಡಲೇ ಮೋದಿ ವಾಪಸ್ ಬರಬಹುದಿತ್ತು. ಆದರೆ ಭೂತನ್ ರಾಜನ ಹುಟ್ಟುಹಬ್ಬ ಮುಗಿಸಿ ಬಂದಿದ್ದಾರೆ ಎಂದು ಟೀಕಿಸಿದರು. ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ ಮಹಾಘಟ ಬಂಧನ್‌ಗೆ ಮುನ್ನಡೆ ಸಿಕ್ಕಿತ್ತು. ಆದರೆ ಇವಿಎಂ ನಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಅಲ್ಲಿನ ಗೋಲ್ ಮಾಲ್ ಗೆ ಚುನಾವಣೆಯ ಅಂಕಿ ಅಂಶ ಗಳೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.  ಕಬ್ಬು ಸಮಸ್ಯೆ ಸೇರಿ ರಾಜ್ಯದ ವಿವಿಧ ಸಮಸ್ಯೆಗಳನ್ನು ಪ್ರಧಾನಿ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಪ್ರಧಾನಿಗಳ ಬಳಿ ಐದು ಬೇಡಿಕೆ ಇಟ್ಟಿದ್ದಾರೆ. ಪ್ರಧಾನಿ ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡೋಣ ಎಂದರು. ಅಧಿಕಾರ ಬದಲಾವಣೆ ವಿಚಾರಕ್ಕೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೆ. ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿಯೇ ಚಳಿಗಾಲ ಅಧಿವೇಶನ ಮಾಡ್ತಾ ಇದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಕಾಂಗ್ರೆಸ್ ಅತೀ ಹೆಚ್ಚು ಸಮಯ ಕೊಟ್ಟಿದೆ. ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ. ಅದೇ ರೀತಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೂ ಚರ್ಚೆಗಳು ನಡೆಯುತ್ತೆ ಎಂದು ತಿಳಿಸಿದರು.  

ವಾರ್ತಾ ಭಾರತಿ 19 Nov 2025 2:52 pm

ದುಬೈ ಏರ್ ಶೋ 2025ನಲ್ಲಿ ಕಮಾಲ್‌ ಮಾಡಿದ ಭಾರತದ ತೇಜಸ್ MK-2 LAC; ಏರ್ ಶೋನಲ್ಲಿ ತೇಜಸ್‌ ಶೋ ಸ್ಟಾಫರ್‌ ಪ್ರದರ್ಶನಕ್ಕೆ ನೆಟ್ಟಿಗರು ಫಿದಾ!

ದುಬೈ ಏರ್ ಶೋ 2025 ರಲ್ಲಿ ಭಾರತದ ತೇಜಸ್ ಫೈಟರ್ ಜೆಟ್ ಗಮನ ಸೆಳೆಯಿತು. ಹಲವು ದೇಶಗಳ ವಿಮಾನಗಳ ನಡುವೆ ತೇಜಸ್ MK-2 ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದೊಂದಿಗೆ ತೇಜಸ್ ವೈಮಾನಿಕ ಕಸರತ್ತು ನಡೆಸಿತು. ಈ ಪ್ರದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದು ಭಾರತದ ವೈಮಾನಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಿತು.

ವಿಜಯ ಕರ್ನಾಟಕ 19 Nov 2025 2:40 pm

250 ಕ್ಕೂ ಹೆಚ್ಚು ಅಕ್ರಮಸಕ್ರಮ ಅರ್ಜಿಗಳು ವಿಲೇವಾರಿಗೆ ಬಾಕಿ : ಅರಣ್ಯ ಇಲಾಖೆಯ ಸಮಸ್ಯೆ

ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಜಂಟಿ ಸರ್ವೆಗೆ ತಹಶೀಲ್ಧಾರ್‌ ಹಾಗೂ ಅರಣ್ಯ ಇಲಾಖೆಗೆ ಮನವಿ

ವಾರ್ತಾ ಭಾರತಿ 19 Nov 2025 2:36 pm

ಕೆಂಪುಕಲ್ಲು ದರ ಸಮಸ್ಯೆ|ಪರವಾನಿಗೆ ಹೆಚ್ಚಿದ್ದಲ್ಲಿ 2 ತಿಂಗಳಲ್ಲಿ ದರ ಇಳಿಕೆ: ಕೆಂಪುಕಲ್ಲು ಪಾಯ ಒಕ್ಕೂಟ

ಮಂಗಳೂರು, ನ.19: ರಾಜ್ಯ ಸರಕಾರ ಈಗಾಗಲೇ ರಾಜಧನ ಇಳಿಕೆ ಮಾಡಿದ ಬಳಿಕ ಕೆಂಪು ಕಲ್ಲಿನ ದರ ಇಳಿಕೆಯ ಹಾದಿಯಲ್ಲಿದ್ದು, ಕೆಂಪು ಕಲ್ಲು ಗಣಿಗಾರಿಕೆಗೆ ಇನ್ನಷ್ಟು ಪರವಾನಿಗೆಗಳು ಲಭ್ಯವಾದಂತೆ ಮುಂದಿನ ಎರಡು ತಿಂಗಳಲ್ಲಿ ದರವೂ ಇಳಿಕೆಯಾಗಲಿದೆ ಎಂದು ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯಗಳ ಮಾಲಕರ ಒಕ್ಕೂಟ ತಿಳಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ, ಹಿಂದೆ 242ರಷ್ಟು ಕೆಂಪುಕಲ್ಲು ಪಾಯಗಳಿಗೆ ಪರವಾನಿಗೆ ಇದ್ದು, ಇಷ್ಟೊಂದು ನಿಯಮಗಳೂ ಇರಲಿಲ್ಲ. ಕಳೆದ ಆರು ತಿಂಗಳಿ‌ನಿಂದೀಚೆಗೆ ಸರಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಪರವಾನಿಗೆ ಸೀಮಿತಗೊಂಡಿದೆ. ಈಗಾಗಲೇ 55 ಕಡೆ ಕಲ್ಲು ಗಣಿಗಾರಿಕೆಗೆ ಪರವಾನಿಗೆ ದೊರಕಿದ್ದು, ಸುಮಾರು 29ರಷ್ಟು ಪರವಾನಿಗೆ ಪ್ರಕ್ರಿಯೆ ಹಂತದಲ್ಲಿದೆ. ಈ ಪರವಾನಿಗೆಗಳೂ ದೊರೆತಾಗ ಈಗಾಗಲೇ ಇಳಿಕೆಯಾಗುತ್ತಾ ಸಾಗಿರುವ ಕೆಂಪು ಕಲ್ಲಿನ ದರ ಇನ್ನಷ್ಟು ಇಳಿಕೆಯಾಗಲಿದೆ ಎಂದರು. ಕೆಂಪುಕಲ್ಲಿಗೆ ಸಾಕಷ್ಟು ಬೇಡಿಕೆ ಹೊರತಾಗಿಯೂ ಪರವಾನಿಗೆ ಸೀಮಿತವಾಗಿರುವುದರಿಂದ ಸಾಗಾಟ ದರ ಹೆಚ್ಚಳವಾಗಿದೆ. ಕೋರೆಗಳಲ್ಲಿ ಈಗಾಗಲೇ ಎರಡು ವಿಧದ ಕಲ್ಲು ತಲಾ 35 ರೂ.ದರದೊಳಗೆ ನೀಡಲಾಗುತ್ತಿದೆ. ನಗರಕ್ಕೆ ಹತ್ತಿರದಲ್ಲಿ 12 ಪರವಾನಿಗೆಗಳು ಮಾತ್ರವೇ ಇದ್ದು, ಉಳಿದೆಲ್ಲವೂ ಸುಳ್ಯ, ಪುತ್ತೂರು ಕಡೆ ಇರುವುದರಿಂದ ಸಾಗಾಟಕ್ಕೆ ಹೆಚ್ಚು ವೆಚ್ಚವಾಗುತ್ತಿದೆ ಎಂದವರು ಹೇಳಿದರು. ಪರವಾನಿಗೆ ಮಾಡಬೇಕಾದರೆ ನಕ್ಷೆ ಮಾಡಿ ಭೂ ದಾಖಲೆ ಅಧಿಕಾರಿಗಳಿಗೆ ಸಲ್ಲಿಸಿ ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆದು ಬಳಿಕ ಅನುಮತಿ ನೀಡಲಾಗುತ್ತದೆ. ನಿಗದಿಪಡಿಸಿದ ಸ್ಥಳದಲ್ಲಿ ಕಲ್ಲು ದೊರೆಯದಿದ್ದರೆ ಇನ್ನೊಂದು ಜಾಗದಲ್ಲಿ ಅವಕಾಶ ಕೋರಲು ಮತ್ತೆ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಕಲ್ಲು ತೆಗೆದ ಜಾಗದಲ್ಲಿ ಮಣ್ಣು ತುಂಬಿಸುವ ಕಾರ್ಯ ನಡೆಯಬೇಕು. ಕೃಷಿಗೆ ಅಗತ್ಯವಾದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ರೀತಿಯಾಗಿ ನಿಯಮಗಳು ಕಠಿಣಗೊಂಡಿರುವುದರಿಂದ ಪರವಾನಿಗೆ ಸಂಖ್ಯೆಯೂ ಕಡಿಮೆಯಾಗಿದೆ. 256 ರೂ.ಗಳಿಗೆ ಏರಿಕೆಯಾಗಿದ್ದ ರಾಜಧನ ಇದೀಗ ಹಿಂದಿನಂತೆ 97 ರೂ.ಗಳಿಗೆ ಇಳಿಕೆಯಾಗಿದೆ. ಒಂದು ಎಕರೆ ಭೂಮಿಯಲ್ಲಿ 16000 ಟನ್ ಮುರಕಲ್ಲು (5,28000 ಕೆಂಪುಕಲ್ಲು) ತೆಗೆಯಲು ಅವಕಾಶವಿದೆ. ಕಲ್ಲೊಂದರ ಉತ್ಪಾದನೆಗೆ ಎಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದಾಗ 28ರೂ. ಗಳಾಗುತ್ತದೆ. ಸದ್ಯ ಕಲ್ಲು ಕೋರೆಗಳಲ್ಲಿ 32ರೂ.ನಿಂದ 35 ರೂ. ದರದಲ್ಲಿ ಕಲ್ಲು ಪೂರೈಸಲಾಗುತ್ತಿದೆ ಎಂದು ಉಪಾಧ್ಯಕ್ಷ ರವಿಶಂಕರ್ ಮಾಹಿತಿ ನೀಡಿದರು. ಗೋಷ್ಟಿಯಲ್ಲಿ ಕೋಶಾಧಿಕಾರಿ ರಾಮ ಮುಗುರೋಡಿ, ಬಂಟವಾಳ ವಲಯದ ಅಧಯಕ್ಷ ಮೋಹನ್ ಶೆಟ್ಟಿ, ರವಿ ರೈ ಪಜೀರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Nov 2025 2:29 pm

ನವಜಾತ ಶಿಶು ಬಲಿ ಪಡೆದ ಹಾವೇರಿ ಜಿಲ್ಲಾಸ್ಪತ್ರೆ: ಕಾರಣ ಬಿಚ್ಚಿಟ್ಟ ಕುಟುಂಬಸ್ಥರು ಕಣ್ಣೀರು, ಆಕ್ರೋಶ

Medical Negligence: ಜಿಲ್ಲಾಸ್ಪತ್ರೆಗಳೆಂದರೆ ರೋಗಿಗಳು ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಒಂದು ರೀತಿಯ ಹೆದರಿಕೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಕಾಳಜಿ ಸಿಗದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೆಲವೊಮ್ಮೆ ವೈದ್ಯರು, ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾವುಗಳೇ ಸಂಭವಿಸಿಬಿಡುತ್ತವೆ. ಇಂತದ್ದೇ ಒಂದು ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿನ ಈ ಘಟನೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕೆಂಡ ಕಾರಿದ್ದಾರೆ. ರಾಜ್ಯ ಸರ್ಕಾರದ

ಒನ್ ಇ೦ಡಿಯ 19 Nov 2025 2:15 pm

ಅವಂತಿ ಫೀಡ್ಸ್‌ ಸೀಗಡಿ ಕಂಪನಿ ಷೇರುಗಳು ಶೇ. 10ಕ್ಕಿಂತ ಹೆಚ್ಚು ಏರಿಕೆ! ಕಾರಣ ಏನು?

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ಬಗ್ಗೆ ಸಕಾರಾತ್ಮಕ ಸುಳಿವು ನೀಡಿದ ನಂತರ, ಸೀಗಡಿ ರಫ್ತು ಕಂಪನಿಗಳ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜಪಾನಿನ ಸಮುದ್ರಾಹಾರಕ್ಕೆ ಚೀನಾ ನಿಷೇಧ ಹೇರಿರುವುದು ಕೂಡ ಈ ಬೆಳವಣಿಗೆಗೆ ಪೂರಕವಾಗಿದೆ, ಇದರಿಂದ ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ.

ವಿಜಯ ಕರ್ನಾಟಕ 19 Nov 2025 2:01 pm

ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕ ಪರಿಷ್ಕರಣೆ; ಹೊಸ ದರಗಳು ಹೀಗಿವೆ

ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ರಸ್ತೆ ಸಾರಿಗೆ ಸಚಿವಾಲಯವು ಪರಿಷ್ಕರಣೆ ಮಾಡಿದೆ. 10 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಹೆಚ್ಚಿನ ಶುಲ್ಕ ಅನ್ವಯವಾಗಲಿದ್ದು, ವಯಸ್ಸಿನ ಆಧಾರದ ಮೇಲೆ ದ್ವಿಚಕ್ರ, ತ್ರಿಚಕ್ರ, ಎಲ್‌ಎಂವಿ ಮತ್ತು ವಾಣಿಜ್ಯ ವಾಹನಗಳಿಗೆ ವಿಭಿನ್ನ ಶುಲ್ಕ ನಿಗದಿಪಡಿಸಲಾಗಿದೆ. ಈ ನಿಯಮಗಳು ವಾಹನಗಳ ಸುರಕ್ಷತೆ ಹೆಚ್ಚಿಸಲು ಮತ್ತು ಹಳೆಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಉದ್ದೇಶಿಸಿವೆ.

ವಿಜಯ ಕರ್ನಾಟಕ 19 Nov 2025 1:59 pm

ಚುನಾವಣಾ ಆಯೋಗವನ್ನು ಟೀಕಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್‌ ವಿರುದ್ಧ 272 ಗಣ್ಯ ನಾಗರಿಕರ ಬಹಿರಂಗ ಪತ್ರ; ಆರೋಪಗಳು ಏನು?

ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ 272 ಗಣ್ಯ ನಾಗರಿಕರು, 16 ನ್ಯಾಯಾಧೀಶರು, 123 ನಿವೃತ್ತ ಅಧಿಕಾರಿಗಳು ಮತ್ತು 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಬಹಿರಂಗ ಪತ್ರ ಬಿಡುಗಡೆ ಮಾಡಿದ್ದಾರೆ. ರಾಷ್ಟ್ರೀಯ ಸಂವಿಧಾನಾತ್ಮಕ ಪ್ರಾಧಿಕಾರಗಳ ಮೇಲಿನ ದಾಳಿ ಎಂಬ ಶೀರ್ಷಿಕೆಯ ಈ ಪತ್ರವು, ವಿರೋಧ ಪಕ್ಷದ ನಾಯಕರು ಪ್ರಮುಖ ಸಂಸ್ಥೆಗಳ ವಿರುದ್ಧ ವಿಷಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ವಿಜಯ ಕರ್ನಾಟಕ 19 Nov 2025 1:56 pm

ಬೆಂಗಳೂರಿನಲ್ಲಿ ನಡೆವ ವರ್ಲ್ಡ್ ಟೆನಿಸ್ ಲೀಗ್ ಗೆ ಖ್ಯಾತನಾಮರು! ಪ್ರಮುಖ ಆಕರ್ಷಣೆ ಯಾರು? ಯಾವಾಗ ಪ್ರಾರಂಭ?

WTL 2025- ಈವರೆಗೂ ಯುಎಇನಲ್ಲಿ ನಡೆಯುತ್ತಿದ್ದ ವಿಶ್ವ ಟೆನಿಸ್ ಲೀಗ್ (WTL) ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ. ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ವಿಶ್ವ ವಿಖ್ಯಾತರಾದ ಡೇನಿಯಲ್ ಮೆಡ್ವೆಡೆವ್, ನಿಕ್ ಕಿರ್ಗಿಯೋಸ್, ಎಲೆನಾ ರೈಬಾಕಿನಾ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಭಾರತದಿಂದಲೂ ಯೂಕಿ ಬಾಂಭ್ರಿ, ಅಂಕಿತಾ ರೈನಾ, ದಕ್ಷಿಣೇಶ್ವರ ಸುರೇಶ್ ಮೊದಲಾದವರು ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 19 Nov 2025 1:56 pm

ಮಧುರೈನಿಂದ ಕೊಯಮತ್ತೂರಿಗೆ ಮೆಟ್ರೋ ಯೋಜನೆ ಕುರಿತ ಪ್ರಸ್ತಾಪ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಸೇಡಿನ ಕ್ರಮ : ಸಿಎಂ ಸ್ಟಾಲಿನ್

ಚೆನ್ನೈ: ಮಧುರೈನಿಂದ ಕೊಯಂಬತ್ತೂರಿನವರೆಗೆ ಯೋಜಿಸಲಾಗಿದ್ದ ಮೆಟ್ರೊ ರೈಲು ನಿರ್ಮಾಣ ಪ್ರಸ್ತಾವವನ್ನು ಕೇಂದ್ರ ಸರಕಾರ ತಳ್ಳಿ ಹಾಕಿರುವ ಕ್ರಮವನ್ನು ‘ತಮಿಳುನಾಡು ಜನರ ವಿರುದ್ಧದ ಸೇಡಿನ ಕ್ರಮ’ ಎಂದು ಬುಧವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಂ.ಕೆ.ಸ್ಟಾಲಿನ್, “ದೇವಾಲಯ ನಗರಿ ಮಧುರೈನಿಂದ ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಂಬತ್ತೂರಿಗೆ ಮೆಟ್ರೋ ರೈಲು ಯೋಜನೆ ಮಂಜೂರು ಮಾಡುವುದಿಲ್ಲ ಎಂದು ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ತಿಳಿಸಿದೆ. ಆದರೆ, ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿನ ಇಂತಹುದೇ ನಗರಗಳಲ್ಲಿ ಇದೇ ಬಗೆಯ ಯೋಜನೆಗಳಿಗೆ ಅನುಮತಿ ನೀಡಿದೆ” ಎಂದು ಆರೋಪಿಸಿದ್ದಾರೆ. “ದೇವಾಲಯ ನಗರಿ ಮಧುರೈನಿಂದ ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಂಬತ್ತೂರಿಗೆ ಯೋಜಿಸಲಾಗಿದ್ದ ಮೆಟ್ರೊ ರೈಲು ನಿರ್ಮಾಣ ಪ್ರಸ್ತಾವಕ್ಕೆ ಅನುಮತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ. ಯಾವುದೇ ಸರಕಾರ ಜನರಿಗೆ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಲು ಇರುತ್ತದೆ. ಹೀಗಿದ್ದೂ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸೇಡು ತೀರಿಸಿಕೊಳ್ಳಲು ತಮಿಳುನಾಡಿನ ಪ್ರಜಾಸತ್ತಾತ್ಮಕ ಸರಕಾರವನ್ನು ಒಂದು ನೆಪ ಮಾಡಿಕೊಂಡಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ, 2011ರ ಜನಗಣತಿ ಅನ್ವಯ ಕನಿಷ್ಠ 20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಗಳ ನಗರಾಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರದ ನೆರವು ಒದಗಿಸಲು 2017ರ ಮೆಟ್ರೊ ರೈಲು ನೀತಿ ನಿರ್ಬಂಧಿಸುತ್ತದೆ ಎಂದು ಉಲ್ಲೇಖಿಸಿ, ದ್ವಿತೀಯ ದರ್ಜೆಯ ನಗರಗಳಲ್ಲಿ ಮೆಟ್ರೊ ನಿರ್ಮಿಸಲು ತಮಿಳುನಾಡು ಸರಕಾರ ಮಂಡಿಸಿದ್ದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ಹೇಳಲಾಗಿದೆ.

ವಾರ್ತಾ ಭಾರತಿ 19 Nov 2025 1:56 pm

ತಾಯಿಯಿಂದಲೇ ಮಗನಿಗೆ ISIS ಸೇರಲು ಒತ್ತಾಯ, ಕೇರಳದಲ್ಲಿ ಪ್ರಕರಣ ದಾಖಲು; ಛತ್ತಿಸ್‌ ಗಢದಲ್ಲಿ ಐಸಿಸ್‌ ಸಂಪರ್ಕ ಹೊಂದಿದ್ದ 2 ಅಪ್ರಾಪ್ತರ ಬಂಧನ

ಭಾರತದಲ್ಲಿ ಭಯೋತ್ಪಾದನೆ ಆತಂಕ ಹೆಚ್ಚುತ್ತಿದೆ.ಯುಕೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಸ್ನೇಹಿತನ ಜೊತೆಗೂಡಿ ತನ್ನ 16 ವರ್ಷದ ಅಪ್ರಾಪ್ತ ಮಗನನ್ನು ಐಸಿಸ್‌ಗೆ ಸೇರಲು ಪ್ರೇರೇಪಿಸಿದ್ದಾಳೆ. ಈ ಬಗ್ಗೆ ಕೇರಳಕ್ಕೆ ಬಂದ ಬಾಲಕ ತನ್ನ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಆತನ ತಾಯಿ ಮಾತ್ರ ಆರೋಪಗಳೆಲ್ಲ ಸುಳ್ಳು, ವೈವಾಹಿಕ ಕಲಹಗಳಿಂದ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಇತ್ತ ಛತ್ತೀಸ್‌ಗಢದಲ್ಲಿ ಐಸಿಸ್‌ ಸಂಪರ್ಕ ಹೊಂದಿದ್ದ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಇವರು ಸಾಮಾಜಿಕ ಮಾಧ್ಯಮದ ಮೂಲಕ ಇತರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದ್ದು ತನಿಖೆ ನಡೆಯುತ್ತಿದೆ.

ವಿಜಯ ಕರ್ನಾಟಕ 19 Nov 2025 1:49 pm

ಕಾಪು: ಎಚ್ಆರ್ ಎಸ್ ವತಿಯಿಂದ ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರ

ಕಾಪು: ಹುಮ್ಯಾನಿಟರೈನ್ ರಿಲೀಫ್ ಸೊಸೈಟಿ (ಎಚ್.ಆರ್.ಎಸ್.), ಕಾಪು ಶಾಖೆ ವತಿಯಿಂದ ಸರಕಾರಿ ಉರ್ದು ಸಂಯುಕ್ತ ಪ್ರೌಢಶಾಲೆ ಮಲ್ಲಾರ್ ಮತ್ತು ಮೌಲಾನ ಅಝಾದ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಅಪಘಾತ, ಅವಘಡ ಸಂಭವಿಸಿದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಯಾವ ರೀತಿ ಮಾಡಬಹುದೆಂಬ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು. ಎಚ್.ಆರ್.ಎಸ್. ತರಬೇತುದಾರ ಮುಹಮ್ಮದ್ ಸಲೀಂ ಮಲ್ಪೆ ಮಾಹಿತಿ ನೀಡಿದರು. ಎಚ್.ಆರ್.ಎಸ್. ಮಾನವೀಯ ಸಹಕಾರಿ ಸಂಘಟನೆ ಆಗಿದ್ದು, ಇದು ಪ್ರಾಕೃತಿಕ ಅಥವಾ ಮಾನವ ವತಿಯಿಂದ ನಡೆಯುವ ದುರಂತಗಳ ಸಂದರ್ಭ ಆ ಪ್ರದೇಶಕ್ಕೆ ತೆರಳಿ ನಿಸ್ವಾರ್ಥವಾಗಿ ಜನರಿಗೆ ನೆರವಾಗುತ್ತದೆ. ಈ ಸಂಸ್ಥೆಯು ಕರ್ನಾಟಕದಲ್ಲಿ 2024ರಿಂದ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯಲ್ಲಿ ಈ ಸಂಸ್ಥೆಯು ಒಂದು ಆಂಬುಲೆನ್ಸ್ ಹೊಂದಿದೆ ಎಂದು ಮಾಜಿ ತ್ರಿ ಜಿಲ್ಲಾ ಸಂಚಾಲಕ ಅನ್ವರ್ ಅಲಿ ಕಾಪು ಹೇಳಿದ್ದಾರೆ. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಬಿಲಾಲ್ ಮಲ್ಪೆ, ತರಬೇತುದಾರ ಝುಬೇರ್ ಮಲ್ಪೆ, ಪುರಸಭೆ ಸದಸ್ಯ ನೂರುದ್ದೀನ್, ಉರ್ದು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜೋಯ್ಸಾ, ಮೌಲಾನ ಆಝಾದ್ ನ ಸಹಾಯಕ ಮುಖ್ಯೋಪಾಧ್ಯಾಯಿನಿ ನಿಹಾ, ಮುಹಮ್ಮದ್ ಫಾರೂಕ್, ಕಲೀಮುಲ್ಲಾ, ಶೇಕ್ ಸನಾವರ್ ಉಪಸ್ಥಿತರಿದ್ದರು. ಕಾಪು ಘಟಕದ ಗ್ರೂಪ್ ಮುಖಂಡ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಜಲೀಲ್ ವಂದಿಸಿದರು.

ವಾರ್ತಾ ಭಾರತಿ 19 Nov 2025 1:45 pm

'ವೈಟ್-ಕಾಲರ್ ಭಯೋತ್ಪಾದನೆ' ಕುರಿತ ತನಿಖೆ | ಶಂಕಿತರ ಬಂಧನದ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿದ ಕಿರುಕುಳ; ವರದಿ

ಸ್ಥಳೀಯ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಕೂಡ ಕೊಡುವುದಿಲ್ಲ : ವಿದ್ಯಾರ್ಥಿಗಳ ಆರೋಪ

ವಾರ್ತಾ ಭಾರತಿ 19 Nov 2025 1:36 pm

ಕೊಯಮುತ್ತೂರು - ಮಧುರೈ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಗಳ ಡಿಪಿಆರ್ ತಿರಸ್ಕಾರ: ಕೇಂದ್ರದ ವಿರುದ್ಧ ಸ್ಟಾಲಿನ್ ಕಿಡಿ

ಕೊಯಮುತ್ತೂರು ಮತ್ತು ಮಧುರೈ ಮೆಟ್ರೋ ಯೋಜನೆಗಳ ವರದಿಗಳನ್ನು ತಮಿಳುನಾಡು ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿದ್ದು, ಕೇಂದ್ರವು ತಿರಸ್ಕಾರ ಮಾಡಿದೆ. ಕೇಂದ್ರ ಸರ್ಕಾರ ತಿರಸ್ಕರಿಸಿದ್ದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೀವ್ರವಾಗಿ ಖಂಡಿಸಿದ್ದಾರೆ. 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಎಂಬ ಕಾರಣ ನೀಡಿ ವರದಿಗಳನ್ನು ಹಿಂದಿರುಗಿಸಿದ್ದು, ಬಿಜೆಪಿ ಆಡಳಿತದ ರಾಜ್ಯಗಳ ಟಿಯರ್-2 ನಗರಗಳಿಗೆ ಅನುಮೋದನೆ ನೀಡಿದ್ದನ್ನು ಪ್ರಶ್ನಿಸಿದ್ದಾರೆ.

ವಿಜಯ ಕರ್ನಾಟಕ 19 Nov 2025 1:24 pm

RCB ತಂಡಕ್ಕೆ ಅಪಾಯ.. ಕನ್ನಡಿಗರ ಬೆಂಗಳೂರು ತಂಡ ದಿಢೀರ್ 2026 ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗುವ ಬಗ್ಗೆ...

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿಗೆ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ, 2025 ಐಪಿಎಲ್ ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಿರುವ ನಮ್ಮ ಬೆಂಗಳೂರು ತಂಡ ಈಗ ಸಾಲು &ಸಾಲು ಆಘಾತ ಎದುರಿಸುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅವರು ನಿವೃತ್ತಿ ಘೋಷಣೆ ಮಾಡುತ್ತಾರಾ? ಎಂಬ ಭಯದ ನಡುವೆಯೇ, ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು 2026 ಐಪಿಎಲ್ ಟೂರ್ನಿ

ಒನ್ ಇ೦ಡಿಯ 19 Nov 2025 1:19 pm

India Cold Wave: ದೆಹಲಿಯಲ್ಲಿ 11ವರ್ಷದಲ್ಲೇ ದಾಖಲೆಯ ಚಳಿ! ತಾಪಮಾನ ಕುಸಿತ, ಈ ಭಾಗಗಳಿಗೆ ಮಳೆ ಎಚ್ಚರಿಕೆ

India Weather Alert: ದೇಶಾದ್ಯಂತ ಗರಿಷ್ಠ ತಾಪಮಾನದ ಜೊತೆಗೆ ಅತ್ಯಧಿಕ ಮೈಕೊರೆವ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ಆರೋಗ್ಯ ಕಳವಳ ಉಂಟು ಮಾಡಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಕುಸಿತವಾಗಿದೆ. ಎಲ್ಲೆಡೆ ಚಳಿ ಆವರಿಸಿದೆ. ಕಳೆದ ಸಾಮಾನ್ಯದಿನಗಳಿಗಿಂತಲೂ ಹೆಚ್ಚಿನ ಪ್ರಮಾಣದ ಚಳಿ ದಾಖಲಾಗಿದೆ. ದೆಹಲಿ ಕನಿಷ್ಠ ತಾಪಮಾನ ದಶಕದ ಬಳಿಕ ಒಂದಂಕಿಗೆ ಇಳಿದಿದೆ ಭಾರತ ಹವಾಮಾನ ಇಲಾಖೆ (IMD)

ಒನ್ ಇ೦ಡಿಯ 19 Nov 2025 1:17 pm

ಭಾರತ-ಪಾಕ್ ನಡುವಿನ ಶಾಂತಿ ಒಪ್ಪಂದ‌ ಕುರಿತು ಮತ್ತೆ ಹೇಳಿಕೆ ನೀಡಿದ ಟ್ರಂಪ್; 60ನೇ ಬಾರಿಯ ಹೇಳಿಕೆ ಎಂದು ವ್ಯಂಗ್ಯವಾಡಿದ ಕಾಂಗ್ರೆಸ್

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ನಾನು ಪರಿಹರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಇದು 60ನೇ ಬಾರಿಯ ಹೇಳಿಕೆಯಾಗಿದೆ ಎಂದು ವ್ಯಂಗ್ಯವಾಡಿದೆ. ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದು ಮಂಗಳವಾರ ಸೌದಿ ಅರೇಬಿಯ ಯುವರಾಜರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದರು. ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, “ಇಂತಹ ಹೇಳಿಕೆಗಳು ನಿಂತಂತೆ ಕಂಡು ಬಂದಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಮತ್ತೆ ಇಡೀ ಜಗತ್ತಿಗೆ ನೆನಪಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. “ಸೌದಿ ಅರೇಬಿಯಾ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯ ವೇಳೆ, ನಾನು ಮಧ್ಯಪ್ರವೇಶಿಸಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದ್ದಾರೆ. “ಖಂಡಿತವಾಗಿಯೂ ಅವರು ಇದೇ ಹೇಳಿಕೆಯನ್ನು ಇದಕ್ಕೂ ಮುನ್ನ ಸೌದಿ ಅರೇಬಿಯಾ, ಖತರ್, ಈಜಿಪ್ಟ್, ಬ್ರಿಟನ್, ನೆದರ್ ಲ್ಯಾಂಡ್ಸ್ ಹಾಗೂ ಜಪಾನ್ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿನ ಮಾಧ್ಯಮ ಸಂವಾದಗಳಲ್ಲಿ ನೀಡಿದ್ದರು” ಎಂದೂ ಅವರು ನೆನಪಿಸಿದ್ದಾರೆ. “ಇದೀಗ ಈ ಹೇಳಿಕೆಯ ಸಂಖ್ಯೆ 60ಕ್ಕೆ ತಲುಪಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದಕ್ಕೂ ಮುನ್ನ, ಸೌದಿ ಅರೇಬಿಯಾದ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯಲ್ಲಿ, “ನಾನು ವಾಸ್ತವವಾಗಿ ಈವರೆಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಮತ್ತೊಂದು ಯುದ್ಧ ಸ್ಥಗಿತಗೊಳ್ಳಲಿದೆ (ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ಮಾತುಕತೆ ನಡೆಯುತ್ತಿದೆ) ಆದರೆ, ಇದು ಅಂದುಕೊಂಡಿದ್ದಕ್ಕೆ ದೀರ್ಘಕಾಲ ತೆಗೆದುಕೊಳ್ಳುತ್ತಿರುವುದರಿಂದ, ನನಗೆ ಪುಟಿನ್ ಬಗ್ಗೆ ಕೊಂಚ ಅಚ್ಚರಿಯಾಗಿದೆ. ಹೀಗಿದ್ದೂ, ನಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಸ್ಥಗಿತಗೊಳಿಸಿದೆವು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು.

ವಾರ್ತಾ ಭಾರತಿ 19 Nov 2025 1:15 pm

ಶಬರಿಮಲೆಯಲ್ಲಿ ಕಂಡು ಕೇಳರಿಯದ ಭಕ್ತಸಾಗರ, ಅವ್ಯವಸ್ಥೆಯ ಆಗರ: ಪಂದಳದಿಂದಲೇ ನೂರಾರು ಭಕ್ತರು ವಾಪಸ್?

Sabarimala Crowd : ಶಬರಿಮಲೆ ಸೀಸನ್ ಆರಂಭವಾಗಿದೆ, ನಿರೀಕ್ಷೆಗೂ ಮೀರಿ ಭಕ್ತರು ಹರಿದು ಬರುತ್ತಿದ್ದಾರೆ. ಕೇರಳ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪ ಎದುರಾಗಿದೆ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ ಎಂದು ವರದಿಯಾಗಿದೆ.

ವಿಜಯ ಕರ್ನಾಟಕ 19 Nov 2025 1:05 pm

ಕೋಲ್ಕತಾ ಟೆಸ್ಟ್ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ವಜಾ ಮಾಡೇಬೇಕಾ? ಬೇಡ್ವಾ?: ಸೌರವ್ ಗಂಗೂಲಿ ಹೇಳಿದ್ದೇನು?

ಭಾರತ ತಂಡದ ಸಂಯೋಜನೆಯಲ್ಲಿ ವ್ಯಾಪಕ ಬದಲಾವಣೆ ಮಾಡುತ್ತಿರುವ ಕೋಚ್ ಗೌತಮ್ ಗಂಭೀರ್ ಅವರು ಕೋಚ್ ಆದ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ಸಾಧನೆ ಬಗ್ಗೆ ಚರ್ಚೆಗಳಾಗುತ್ತಿವೆ. ರೆಡ್ ಬಾಲ್ ಕ್ರಿಕೆಟ್ ಗೆ ಪ್ರತ್ಯೇಕ ಕೋಚ್ ನೇಮಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ ಇತ್ತೀಚೆಗಷ್ಟೇ ಗಂಭೀರ್ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಗೌತಮ್ ಗಂಭೀರ್ ಅವರನ್ನು ಈಗ ವಜಾ ಮಾಡುವುದು ಸರಿಯಲ್ಲ ಎಂದಿದ್ದಾರೆ. ಯಾಕೆ?

ವಿಜಯ ಕರ್ನಾಟಕ 19 Nov 2025 1:00 pm

ಶೋಲೆ ಸಿನಿಮಾ ಶೈಲಿಯಲ್ಲಿ ಸ್ಕೂಟರ್‌ ನಲ್ಲಿ ಸುತ್ತಾಡೋ 87 ವರ್ಷದ ಯಂಗ್‌ ಸಹೋದರಿಯರು, ವಿಡಿಯೋ ವೈರಲ್;‌ ಗಾಳಿಯ ವಿರುದ್ದ ಸಾಗುವ ಕಥೆ ಎಂದ ನೆಟ್ಟಿಗರು!

ಅಹಮದಾಬಾದ್‌ನಲ್ಲಿ 87 ವರ್ಷದ ಮಂದಾಕಿನಿ ಶಾ ಅವರು ತಮ್ಮ ಸಹೋದರಿ ಉಷಾ ಅವರೊಂದಿಗೆ ಸ್ಕೂಟರ್‌ನಲ್ಲಿ ನಗರ ಸುತ್ತಾಡುತ್ತಿದ್ದಾರೆ. 62ನೇ ವಯಸ್ಸಿನಲ್ಲಿ ಸ್ಕೂಟರ್ ಓಡಿಸಲು ಕಲಿತ ಮಂದಾಕಿನಿ ಅವರು ಜೀವನವನ್ನು ಪೂರ್ಣವಾಗಿ ನಡೆಸುವ ಉತ್ಸಾಹವನ್ನು ಹೊಂದಿದ್ದಾರೆ. ಅವರ ಧೈರ್ಯ ಮತ್ತು ಮುಕ್ತ ಮನಸ್ಸು ಹಲವರಿಗೆ ಸ್ಪೂರ್ತಿಯಾಗಿದೆ. ಬಡತನದಲ್ಲೂ ಸ್ವಾವಲಂಬನೆ ಮತ್ತು ಸ್ವತಂತ್ರವಾಗಿ ನಿಲ್ಲುವ ಮಹತ್ವವನ್ನು ಅವರು ಅರಿತರು. ಮಹಿಳಾ ಹಕ್ಕುಗಳ ಬಗ್ಗೆಯೂ ಅವರು ತಿಳುವಳಿಕೆ ನೀಡುತ್ತಿದ್ದರು.ಇವರ ಜೀವನ ನೆಟ್ಟಿಗರ ಮನಗೆದ್ದಿದ್ದು, ಗಾಳಿಯ ವಿರುದ್ದ ಸಾಗುವ ಕಥೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ವಿಜಯ ಕರ್ನಾಟಕ 19 Nov 2025 12:57 pm

ಕಾರ್ಕಳ: ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮ

 ಕಾರ್ಕಳ : ಪರಿಸರವನ್ನು ಸಂರಕ್ಷಣೆ ಮಾಡಿ ಸ್ವಚ್ಛ ಸುಂದರ ಪರಿಸರ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಕಾರ್ಕಳ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ನಡೆದ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ಜಾಗೃತಗೊಳಿಸುವಲ್ಲಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಹಮ್ಮಿಕೊಂಡ ಈ ಕಾರ್ಯಕ್ರಮವು ಪ್ರಶಂಸನೀಯ ಎಂದರು. ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಭರತ್ ನಿಡ್ಪಳ್ಳಿ ಮತ್ತು ಬಿಜು ಜಯ ,ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ್ ಅಂಚನ್, ಸ್ಥಾಪಕ ಅಧ್ಯಕ್ಷೆ ಜ್ಯೋತಿ ರಮೇಶ್ ಹಾಗೂ ಸದಸ್ಯರು, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ.ಚೇತನ್ ನಾಯಕ್, ರೊ.ಶೇಖರ್ H, ರೊ. ಅಂತೋನಿ ಎಲಿಯಾಸ್, ರೊ.ಇಕ್ಬಲ್ ಅಹ್ಮದ್, ರೊ.ವಿಜೇಂದ್ರ ಕುಮಾರ್ ಮತ್ತು ಪುರಸಭಾ ಸದಸ್ಯರೂ ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ ಇದರ ಅಧ್ಯಕ್ಷೆ ನಳಿನಿ ವಿಜಯೇಂದ್ರ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಫೆಲಿಕ್ಸ್ ವಾಜ್ ಮತ್ತು ಸದಸ್ಯರು, ಶ್ರೀ ಭುವನೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ್ ಶೆಣೈ,ವೆಂಕಟರಮಣ ಮಹಿಳಾ ಕಾಲೇಜಿನ ಮುಖ್ಯಸ್ಥೆ ಗೀತಾ ಜಿ, ಧಾರ್ಮಿಕ ಕಾರ್ಯಕರ್ತರಾದ ಹರೀಶ್ ಆಚಾರ್ಯ, ಸತೀಶ್ ಆಚಾರ್ಯ, ಮತ್ತು ಪ್ರಾಚಾರ್ಯ ರೊ. ಶಂಕರ್ ಕುಡ್ವ ನೇತೃತ್ವದ ಭುವನೆಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು, ಕಾರ್ಕಳ ಟೈಗರ್ಸನ ಸದಸ್ಯರು ಭಾಗವಹಿಸಿದ್ದರು. ಕಾರ್ಕಳ ವೆಂಕಟರಮಣ ದೇವಸ್ಥಾನದಿಂದ ಮಾರ್ಕೆಟ್ ಮೂಲಕ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು.  

ವಾರ್ತಾ ಭಾರತಿ 19 Nov 2025 12:50 pm

Gold Price on November 19: ವಾರದ ಬಳಿಕ ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ, ಕುಸಿತಕ್ಕೆ ಕಾರಣವೇನು?

Gold Price Today: ವಿದೇಶದಲ್ಲಿನ ಒಂದಷ್ಟು ಬದಲಾವಣೆಗಳ ಕಾರಣದಿಂದಾಗಿ ಭಾರತದ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡು ಲೋಹಗಳ ಬೆಲೆ ಇಳಿಕೆ ಆಗಿದೆ. ದಿನದಿಂದ ದಿಕ್ಕೆ ಬೆಲೆ ಹೆಚ್ಚಿಕೊಂಡಿದ್ದ ಚಿನ್ನಾಭರಣಗಳ ದರವು ಕಳೆದ ಒಂದೇ ವಾರದಲ್ಲಿ ನಾಲ್ಕು ಭಾರಿ ಕುಸಿತ ಕಂಡಿದೆ. ಹೆಚ್ಚಳಕ್ಕಿಂತ ತಗ್ಗುವ ಪ್ರಮಾಣದಲ್ಲೂ ಹೆಚ್ಚಾಗಿದ್ದನ್ನು ಇಲ್ಲಿ ಗಮನಿಸಬೇಕಾಗಿದೆ. ಇಂದು ನವೆಂಬರ್ 19ರಂದು ದರ ಕುಗ್ಗಿತಾ,

ಒನ್ ಇ೦ಡಿಯ 19 Nov 2025 12:43 pm

ನಿತೀಶ್‌ ಕುಮಾರ್‌ಗೆ ಬಿಹಾರದ ಸಾರಥ್ಯ; ನ.20 ರಂದು ಪ್ರಮಾಣ ವಚನ ಸ್ವೀಕಾರ!

ಪಾಟ್ನಾ, ನವೆಂಬರ್‌ 19: ಪ್ರಚಂಡ ಬಹುಮತದ ಮೂಲಕ ಪ್ರತಿಪಕ್ಷಗಳನ್ನು ಧೂಳಿಪಟ ಮಾಡಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ನವೆಂಬರ್‌ 20 ರಂದು ಅಧಿಕೃತವಾಗಿ ಸರ್ಕಾರ ರಚನೆ ಮಾಡಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯ ನಿರ್ಣಾಯಕ ಗೆಲುವಿನ ನಂತರ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನವೆಂಬರ್ 20ರ ಗುರುವಾರ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಪ್ರಮಾಣ

ಒನ್ ಇ೦ಡಿಯ 19 Nov 2025 12:30 pm

ಕಂಪನಿ ಆಫೀಸ್‌ಗೆ ಆದಾಯ ತೆರಿಗೆ ಅಧಿಕಾರಿಗಳ ಭೇಟಿ, ಬೆನ್ನಲ್ಲೇ ಕಂಪನಿ ಷೇರು ಬರೋಬ್ಬರಿ 6% ಇಳಿಕೆ!

ನವೀಕರಿಸಬಹುದಾದ ಇಂಧನ ವಲಯದ ಪ್ರಮುಖ ಕಂಪನಿಯಾದ ವಾರೀ ಎನರ್ಜಿಸ್‌ನ ಕಚೇರಿಗಳು ಮತ್ತು ಘಟಕಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಂಪನಿಯ ಷೇರುಗಳ ಮೌಲ್ಯದಲ್ಲಿ ಶೇ. 6ರಷ್ಟು ಭಾರೀ ಕುಸಿತ ಕಂಡುಬಂದಿದೆ. ಅಧಿಕಾರಿಗಳ ಪರಿಶೀಲನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಕಂಪನಿ ತಿಳಿಸಿದ್ದು, ಈ ಬೆಳವಣಿಗೆಯು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ವಿಜಯ ಕರ್ನಾಟಕ 19 Nov 2025 12:26 pm

Gold Rate Rise: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಹೆಚ್ಚಳ : ಒಂದೇ ದಿನಕ್ಕೆ 1200 ರೂ ಏರಿಕೆ, ಬೆಂಗಳೂರಲ್ಲಿ ಬೆಲೆ ಎಷ್ಟಾಯಿತು ಗೊತ್ತಾ?

ಡಾಲರ್ ಮೌಲ್ಯ ಸ್ಥಿರವಾಗಿರುವುದರಿಂದ ಹಾಗೂ ಚಿನ್ನಕ್ಕೆ ಬೇಡಿಕೆ ಹೆಚ್ಚಳ ಆಗಿರುವುದರಿಂದ ಇಂದು ಚಿನ್ನ ಬೆಳ್ಳಿ ದರ ಮತ್ತೆ ಗಗನಕ್ಕೇರಿದೆ. ನವೆಂಬರ್ ತಿಂಗಳಲ್ಲಿ ಬೆಲೆ ಕುಸಿತಕ್ಕಿಂತ ಏರಿಕೆ ಆಗಿದ್ದೇ ಹೆಚ್ಚು, ಸದ್ಯ ಬೆಲೆ ಏರಿಕೆಯ ಗತಿಯಲ್ಲೇ ಸಾಗಿದೆ.

ವಿಜಯ ಕರ್ನಾಟಕ 19 Nov 2025 12:21 pm

ಎಚ್.ಡಿ.ರೇವಣ್ಣ ವಿರುದ್ಧದ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ರದ್ದುಗೊಳಿಸಿದ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಆರೋಪ ಪರಿಗಣಿಸಲು ವಿಚಾರಣಾ ಕೋರ್ಟ್ ಗೆ ಪ್ರಕರಣ ವಾಪಸ್

ವಾರ್ತಾ ಭಾರತಿ 19 Nov 2025 12:21 pm

Gruha Lakshmi Scheme: ಗೃಹ ಲಕ್ಷ್ಮೀ ಸಹಕಾರ ಬ್ಯಾಂಕ್‌; ಏನೆಲ್ಲ ಷರತ್ತು?ಸಾಲ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್‌ 19: ರಾಜ್ಯ ಕಾಂಗ್ರೆಸ್‌ ಸರ್ಕಾರ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ಹಣವನ್ನ ಜಮಾ ಮಾಡಲಾಗುತ್ತಿದೆ. ಇದೀಗ ರಾಜ್ಯದ ಕೋಟ್ಯಂತರ ಗೃಹಲಕ್ಷ್ಮಿಯರಿಗೆ, ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ‌ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಇದೇ ನವೆಂಬರ್ 28 ರಂದು ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಅಧಿಕೃತವಾಗಿ

ಒನ್ ಇ೦ಡಿಯ 19 Nov 2025 12:08 pm

1996ರ ಗಾಝಿಯಾಬಾದ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದ ನ್ಯಾಯಾಲಯ

ವಾರ್ತಾ ಭಾರತಿ 19 Nov 2025 12:05 pm

ನಿತೀಶ್ ಕುಮಾರ್ 10 ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಪ್ರಕ್ರಿಯೆ ಆರಂಭ

ಬಿಹಾರದಲ್ಲಿ ನಿತೀಶ್ ಕುಮಾರ್ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ದಾಖಲೆಯ 10ನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಶುರುವಾಗಿದೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ್ದು, ನಿತೀಶ್ ಕುಮಾರ್ ಅವರನ್ನು ಒಕ್ಕೂಟದ ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ. ಸಚಿವ ಸ್ಥಾನಗಳ ಹಂಚಿಕೆ, ವಿಶೇಷವಾಗಿ ಗೃಹ ಖಾತೆ ಮತ್ತು ಸ್ಪೀಕರ್ ಸ್ಥಾನಕ್ಕಾಗಿ ಮಿತ್ರಪಕ್ಷಗಳ ನಡುವೆ ಮಾತುಕತೆಗಳು ತೀವ್ರಗೊಂಡಿವೆ.

ವಿಜಯ ಕರ್ನಾಟಕ 19 Nov 2025 12:01 pm

ಬಿಹಾರ| ಇಂದು ನಿತೀಶ್ ಕುಮಾರ್ ರಾಜೀನಾಮೆ; 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜು

ಪಾಟ್ನಾ: ಬುಧವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದು, 10ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಅಧಿಕೃತ ವೇದಿಕೆ ಸಜ್ಜಾಗಿದೆ. ಇದಕ್ಕೂ ಮುನ್ನ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಪ್ರಚಂಡ ಜಯಭೇರಿ ಬಾರಿಸಿತ್ತು. ಜೆಡಿಯು ರಾಜ್ಯ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಆಯೋಜನೆಗೊಂಡಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಜೆಡಿಯು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ಬಳಿಕ, ಮಧ್ಯಾಹ್ನ 3.30 ಗಂಟೆಗೆ ಎನ್ಡಿಎ ಮೈತ್ರಿಕೂಟದ ಎಲ್ಲ ಮಿತ್ರಪಕ್ಷಗಳೂ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ನಾಯಕನನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲು ಬಿಹಾರ ವಿಧಾನ ಸಭೆಯ ಸೆಂಟ್ರಲ್ ಹಾಲ್ ನಲ್ಲಿ ಸೇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ, ಮುಖ್ಯಮಂತ್ರಿ ಹುದ್ದೆಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲು ರಾಜಭವನಕ್ಕೆ ತೆರಳಲಿರುವ ನಿತೀಶ್ ಕುಮಾರ್, ಇದೇ ವೇಳೆ ತಮ್ಮ ಬೆಂಬಲದ ಪತ್ರವನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಸಲ್ಲಿಸಿ, ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದಾದ ಬಳಿಕ ಅವಧಿ ಮುಗಿದಿರುವ ವಿಧಾನಸಭೆ ವಿಸರ್ಜನೆಗೊಳ್ಳಲಿದೆ.

ವಾರ್ತಾ ಭಾರತಿ 19 Nov 2025 11:49 am

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ: 135ಕ್ಕೂ ಹೆಚ್ಚು ಉದ್ಯೋಗ ಆಧಾರಿತ ಎಐ ಹಾಗೂ ಐಟಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ; ಯಾರೆಲ್ಲಾ ಅರ್ಹರು?

ರಾಷ್ಟ್ರೀಯ ಕೌಶಲ್ಯ ಅಕಾಡೆಮಿಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ , ಡೇಟಾ ಸೈನ್ಸ್, ಚಾಟ್‌ಜಿಪಿಟಿ ಮತ್ತು ಇತರ 135 ಇತ್ತೀಚಿನ ಉದ್ಯೋಗ-ಆಧಾರಿತ/ಕೌಶಲ್ಯ ಅಭಿವೃದ್ಧಿ ಐಟಿ ಮತ್ತು ಸಾಫ್ಟ್‌ವೇರ್ ಸರ್ಟಿಫಿಕೇಶನ್ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯದಾದ್ಯಂತ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಏನಿದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ? ಇದರ ಅಡಿಯಲ್ಲಿ ಯಾವೆಲ್ಲಾ ಕೋರ್ಸ್‌ಗಳು ಲಭ್ಯವಿದೆ? ಯೋಜನೆಗೆ ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ.

ವಿಜಯ ಕರ್ನಾಟಕ 19 Nov 2025 11:48 am

ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ: ಗಣಪತರಾವ.ಕೆ.ಮಾನೆ

ಕಲಬುರಗಿ: ಪ್ರಜಾಪ್ರಭುತ್ವದ ಮುಖವಾಡ ಹೊತ್ತಿರುವ ದೇಶದ ಬಂಡವಾಳಶಾಹಿ ಸರಕಾರಗಳು ಕಾರ್ಮಿಕರನ್ನು ಹಾಗೂ ದೇಶದ ಸಂಪತ್ತನ್ನು ಲೂಟಿ ಮಾಡಲು ಮುಕ್ತ ಅವಕಾಶವನ್ನು ಕೆಲವೇ ಕೆಲವು ಶ್ರೀಮಂತರಿಗೆ ತೆರೆದಿಟ್ಟಿದ್ದಾರೆ. ಇಂತಹ ಸರಕಾರಗಳನ್ನು ಕಿತ್ತೊಗೆದು, ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಕ್ರಾಂತಿಯ ಮೂಲಕ ಸಮಾಜವಾದಿ ಸರಕಾರಗಳನ್ನು ಸ್ಥಾಪಿಸಲು ಕಾರ್ಮಿಕರು ಒಗ್ಗಟ್ಟಾಗಬೇಕಿದೆ ಎಂದು ಎಸ್.ಯು.ಸಿ.ಐ (ಸಿ) ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ರವರು ಹೇಳಿದರು. ಅವರು ಶಹಾಬಾದ್ ನಗರದ ಎಸ್.ಯು.ಸಿ.ಐ (ಐ) ಪಕ್ಷದ ವತಿಯಿಂದ ಎಸ್.ಯು.ಸಿ.ಐ ಕಚೇರಿಯಲ್ಲಿ ರಷ್ಯಾದ ನವೆಂಬರ್ ಕ್ರಾಂತಿಯ 108ನೇ ವರ್ಷಾಚರಣೆಯನ್ನು ಆಚರಿಸಿ ಮಾತನಾಡಿದರು. ಸಾಮ್ರಾಜ್ಯಶಾಹಿಗಳು ಹಾಗೂ ಬಂಡವಾಳಶಾಹಿಗಳ ಅತಿಯಾದ ಧನದಾಹದಿಂದ್ದಾಗಿ ದೇಶದ ರೈತ-ಕಾರ್ಮಿಕವರ್ಗವು ಸಮಸ್ಯೆಯ ಬವಣೆಯಲ್ಲಿ ಸಿಲುಕಿದ್ದಾರೆ. ಸಂಪತ್ತನ್ನು ಸೃಷ್ಟಿ ಮಾಡುವ ರೈತ-ಕಾರ್ಮಿಕರು ನಿರ್ಗತಿಕರಾಗಿದ್ದಾರೆ. ಈ ಹೋರಾಟಕ್ಕೆ 1917ರ ರಷ್ಯಾದ ಮಹಾಕ್ರಾಂತಿಯು ನಮಗೆ ಸ್ಫೂರ್ತಿಯಾಗಿದೆ ಎಂದರು. ಪ್ರಪoಚದಲ್ಲಿಯೇ ರೋಗಗ್ರಸ್ಥವಾದ ದೇಶವಾದ ರಷ್ಯಾದಲ್ಲಿ ಕಾಮ್ರೇಡ್ ಲೆನಿನ್ ರವರು ಶೋಷಿತ ಕಾರ್ಮಿಕರನ್ನು ಕಮ್ಯೂನಿಸ್ಟ್ ವಿಚಾರಧಾರೆಯ ಆಧಾರದ ಮೇಲೆ ಸಂಘಟಿಸಿ ಕ್ರೂರ ಝಾರ್ ದೊರೆಗಳ ವಿರುದ್ಧ ಹೋರಾಟಗಳನ್ನು ಬೆಳೆಸಿ, 1917ರ ನವೆಂಬರನಲ್ಲಿ ಸಮಾಜವಾದಿ ಕ್ರಾಂತಿ ನೇರವೆರಿಸಿದರು. ಕ್ರಾಂತಿಯ ನಂತರ ಯು.ಎಸ್.ಎಸ್.ಆರ್ ಆದ ರಷ್ಯಾ ದೇಶವನ್ನು ಮುನ್ನಡೆಸಿದ ಲೆನಿನ್ ಹಾಗೂ ಸ್ಟಾಲಿನ್ ರವರು ಸಮಾಜವಾದಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೊಳಿಸಿದರು. ಬಡತನ, ನಿರುದ್ಯೋಗ, ಬೆಲೆಏರಿಕೆ, ಅನಕ್ಷರತೆ, ವೈಶ್ಯವಾಟಿಕೆಯಂತಹ ಹಲವು ಸಮಸ್ಯೆಗಳನ್ನು ಬುಡಸಮೇತ ಕಿತ್ತುಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ್ದರು. ಭಾರತದಲ್ಲಿ ಅಂತಹ ಸಮಾನತೆಯ ಸಮಾಜದ ಕನಸು ಕಂಡಿದ್ದ ಭಗತಸಿಂಗ್, ನೇತಾಜಿ ಸುಭಾಷಚಂದ್ರ ಬೋಸರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ದೇಶವನ್ನು ಇಲ್ಲಿಯವರೆಗೆ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿರುವುದರಿಂದ, ಜನಸಾಮಾನ್ಯರ ಸಮಸ್ಯೆಗಳು ಹಾಗಿಯೇ ಉಳಿದಿವೆ ಎಂದು ಹೇಳುತ್ತಾ ಜನಾಂದೋಲದ ಮೂಲಕ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾನತೆಯ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದರು. ಜಿಲ್ಲಾ ಸಮಿತಿಯ ಸದಸ್ಯರಾದ ರಾಮಣ್ಣ.ಎಸ್.ಇಬ್ರಾಹಿಂಪೂರ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಸಿ) ನಾಯಕ ನಿಲಕಂಠ.ಎಮ್.ಹುಲಿ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ ಎಸ್.ಎಚ್. ರಾಘವೇಂದ್ರ.ಎಮ್.ಜಿ. ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್, ಭಾಗಣ್ಣ ಬುಕ್ಕ, ರಮೇಶ ದೇವಕರ. ತಿಮ್ಮಣ್ಣ ಮಾನೆ. ಸಿದ್ದು ಚೌದರಿ. ಮಹಾದೇವಿ ಮಾನೆ, ಮಹಾದೇವಿ ಆತ್ನೂರ, ಶಿವುಕುಮಾರ ಕುಸಾಳೆ, ರೇಣುಕಾ. ಸ್ಪೂರ್ತಿ ಗುರಜಾಲಕರ್, ರಾಧಿಕಾ ಚೌದರಿ. ಸುಕನ್ಯಾ. ರಘು ಪವಾರ. ಆನಂದ, ಕಿರಣ ಮಾನೆ, ಅಜಯ ಗುರಜಾಲಕರ್, ಬಾಬು ಸೇರಿ ಹಲವಾರು ಜನ ಭಾಗವಹಿಸಿದ್ದರು.

ವಾರ್ತಾ ಭಾರತಿ 19 Nov 2025 11:47 am

ಕಲಬುರಗಿ: ಅಂಜುಕುಮಾರಿ ಜೆ. ವಂಟಿಗೆ ಪಿಎಚ್‌ಡಿ

ಕಲಬುರಗಿ: 'ಕಲಬುರಗಿಯ ಬಿಸಿ ಒಣ ವಾತಾವರಣದಲ್ಲಿ ಆಧುನಿಕ ಮನೆಗಳನ್ನು ತಂಪಾಗಿಸುವ ವ್ಯವಸ್ಥೆ ರೂಪಿಸಲು ಹೊಸ ವಿಧಾನ’ ಎಂಬ ಕುರಿತು ಇಲ್ಲಿನ ಭರತ್‌ ನಗರದ ನಿವಾಸಿ ಅಂಜುಕುಮಾರಿ ಜೆ. ವಂಟಿ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಅವರ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ಗೋಪಾಲನ್ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ಪ್ರಾಂಶುಪಾಲೆ ಡಾ. ವಿಮಲಾ ಸ್ವಾಮಿ ಅವರು ಮಾರ್ಗದರ್ಶನ ನೀಡಿದ್ದಾರೆ. ಸದ್ಯ ಅಂಜುಕುಮಾರಿ, ಕಲಬುರಗಿಯ ಪಿಡಿಐ ಎಂಜಿನಿಯರಿoಗ್ ಕಾಲೇಜಿನಲ್ಲಿ ಅಸೋಸಿಯೆಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಾರ್ತಾ ಭಾರತಿ 19 Nov 2025 11:41 am

38ರಲ್ಲೂ ಸೂಪರ್ ಚುರುಕು!: ರೋಜರ್ ಫೆಡರರ್, ರಾಫೆಲ್ ನಡಾಲ್ ಮಾಡಿದ್ದ ಅಪರೂಪದ ದಾಖಲೆ ಮುರಿದ ನೊವಾಕ್ ಜೊಕೊವಿಚ್

ಹಿರಿಯ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಅವರು 2025ರ ಅಂತ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆನಿಸ್ ಲೋಕದಲ್ಲಿ ಇಂದು ಸಿನ್ನರ್, ಅಲ್ಕರಾಝ್ ಮೊದಲಾದ ಯುವ ಆಟಗಾರರ ಪ್ರಾಬಲ್ಯವಿದ್ದರೂ ತಮ್ಮ 38ನೇ ವಯಸ್ಸಿನಲ್ಲಿಯೂ ಜೊಕೊವಿಚ್ ಶ್ರೇಷ್ಠ ಆಟ ಮುಂದುವರಿಸಿದ್ದಾರೆ. ಈ ವರ್ಷ ನಾಲ್ಕೂ ಗ್ರ್ಯಾಂಡ್ ಸ್ಲಾಮ್‌ಗಳ ಸೆಮಿಫೈನಲ್ ತಲುಪಿದ್ದಾರೆ. ಹೀಗಾಗಿ ವರ್ಷಾಂತ್ಯದ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಹಿಂದಿನ ಪ್ರತಿಸ್ಪರ್ಧಿಗಳಾಗಿದ್ದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ.

ವಿಜಯ ಕರ್ನಾಟಕ 19 Nov 2025 11:37 am

ಕನ್ನಡ ನಾಡು-ನುಡಿ ರಕ್ಷಣೆಗೆ ಇಂದಿನ ವಿದ್ಯಾರ್ಥಿ ಸಮೂಹ ಮುಂದಾಗಬೇಕಿದೆ : ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ: ನಾವು ಬದುಕುವ ನೆಲದ ಋಣದ ಮಕ್ಕಳಾಗಲು ನಾವೆಲ್ಲ ನಾಡು-ನುಡಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದನ್ನು ಸದಾ ಉಸಿರಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕರೆ ನೀಡಿದರು. ನಗರದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಪಬ್ಲಿಕ್ ಶಾಲಾ ಪ್ರಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಶ್ರೀಮಂತಿಕೆಯಿoದ ಕೂಡಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ನಾಡಿನ ಹಿರಿಮೆಯ ಸಂಕೇತಗಳಾಗಿವೆ. ನಾವು ಆಚರಿಸುತ್ತಿರುವ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ ನಿತ್ಯೋತ್ಸವವಾಗಿ ಆಚರಿಸಬೇಕು ಎಂದ ಅವರು, ನಮ್ಮ ಶ್ರೀ ಶರಣಬಸವೇಶ್ವರ ಸಂಸ್ಥಾನ ಸ್ವಾತಂತ್ರ್ಯ ಪೂರ್ವದಿoದಲೂ ಕನ್ನಡ ನಾಡು-ನುಡಿಯ ಸೇವೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಡಾ. ಶರಣಬಸವಪ್ಪ ಅಪ್ಪಾ ಅವರ ಶ್ರಮ ಈ ನಾಡು ಸದಾ ಸ್ಮರಿಸುತ್ತದೆ ಎಂದು ಹೇಳಿದರು. ಶಾಲೆಯ ಪ್ರಾಂಶುಪಾಲರಾದ ಶಂಕರಗೌಡ ಹೊಸಮನಿ ಮಾತನಾಡಿ, ಕನ್ನಡ ನಾಡು-ನುಡಿ ರಕ್ಷಣೆಗೆ ಇಂದಿನ ವಿದ್ಯಾರ್ಥಿ ಸಮೂಹ ಮುಂದಾಗಬೇಕಿದೆ. ಕನ್ನಡ ಭಾಷೆಯೇ ನಮ್ಮ ಉಸಿರು ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಕನ್ನಡ ಪರಂಪರೆಯನ್ನು ಬಿಂಬಿಸುವ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತಿವೆ ಎಂದರು. ಉಪ ಪ್ರಾಂಶುಪಾಲರಾದ ವಿಜ್ಜು ಜೋಶ್, ಪರಿಸರ ಪ್ರೇಮಿ ಇಮ್ರಾನ್ ಸೌದಾಗರ್, ಮಂಜುನಾಥ ಪಾಟೀಲ, ಶಿವಲೀಲಾ ಪೂಜಾರಿ, ಆಶಾರಾಣಿ ಪಾಟೀಲ, ಆಶೀಷ್ ದೇಶಮಾನ್ಯೆ, ಮಹೇಶ ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ಪ್ರಭವ ಪಟ್ಟಣಕರ್, ಧರ್ಮಣ್ಣ ಎಚ್ ಧನ್ನಿ, ಎಂ.ಎನ್. ಸುಗಂಧಿ ಸೇರಿದಂತೆ ಅನೆಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Nov 2025 11:33 am

ಸಂಪಾದಕೀಯ | ಭಯೋತ್ಪಾದನೆಗೆ ಧರ್ಮವಿದೆಯೇ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 19 Nov 2025 11:33 am

ಬಾರಾಮತಿ ಪುರಸಭೆ ಚುನಾವಣೆ: ಪವಾರ್ ಪಾಲಿಟಿಕ್ಸ್ ತೀವ್ರ, ಎನ್‌ಸಿಪಿ-ಎಸ್‌ಪಿ ನಡುವೆ ನೇರ ಸ್ಪರ್ಧೆ

ಬಾರಾಮತಿ ಪುರಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಕೂಡ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ರಾಜಕೀಯ ಕದನ ರಂಗೇರಿದೆ. ಶರದ್ ಪವಾರ್ ಬಣವು ಮಹಾ ವಿಕಾಸ್ ಅಘಾಡಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಯುಗೇಂದ್ರ ಪವಾರ್ ಪ್ರಚಾರ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 19 Nov 2025 11:31 am

ಕಲಬುರಗಿ: ರಾಜ್ಯ ಮಟ್ಟದ ರಾಜ್ಯೋತ್ಸವದ ಪ್ರಶಸ್ತಿಗೆ ಡಾ. ಖಾಜಾವಲಿ ಈಚನಾಳ ಆಯ್ಕೆ

ಕಲಬುರಗಿ : ಕಳೆದ ಎರಡುವರೆ ದಶಕಗಳಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಬಂಡಾಯ ಸಾಹಿತಿ, ಸಂಶೋಧಕ, ರಂಗಭೂಮಿಯ ನಟ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಗುಲ್ಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಅವರನ್ನು ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿಯಿಂದ ಕೊಡಮಾಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಶಿವರಾಜ ತಿಳಿಸಿದ್ದಾರೆ. ನ.19 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗುವುದು. ವಿವಿಧ ರಂಗದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆಂದು ಅಕಾಡೆಮಿಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Nov 2025 11:28 am

ನ್ಯೂಯಾರ್ಕ್ ನಲ್ಲಿ $12 ಮಿಲಿಯನ್‌ ಗೆ ಮಾರಾಟವಾಯ್ತು ಚಿನ್ನದ ಟಾಯ್ಲೆಟ್!! ಚಿನ್ನದ ಟಾಯ್ಲೆಟ್‌ ಗೆ ʼಅಮೆರಿಕಾʼ ಎಂಬ ಹೆಸರಿಟ್ಟಿದ್ದೇಕೆ?

ನ್ಯೂಯಾರ್ಕ್‌ನಲ್ಲಿ 18-ಕ್ಯಾರೆಟ್ ಚಿನ್ನದ 223 ಪೌಂಡ್ ತೂಕದ 'ಅಮೆರಿಕಾ' ಎಂಬ ಹೆಸರಿನ ಟಾಯ್ಲೆಟ್ ಸೋಥಬಿಸ್ ಹರಾಜಿನಲ್ಲಿ ಬರೋಬ್ಬರಿ 12.1 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದೆ. ಇಟಾಲಿಯನ್ ಕಲಾವಿದ ಮೌರಿಜಿಯೋ ಕ್ಯಾಟೆಲಾನ್ ರಚಿಸಿದ ಈ ಕಲಾಕೃತಿ, ಅತಿಯಾದ ಸಂಪತ್ತಿನ ಮೇಲೆ ವ್ಯಂಗ್ಯವಾಡಲು ರಚಿಸಿಲಾಗಿದ್ದು, ಇದು ಹಲವರ ಗಮನ ಸೆಳೆದಿದೆ.

ವಿಜಯ ಕರ್ನಾಟಕ 19 Nov 2025 11:26 am

Bihar Election : ಮುಸ್ಲಿಮರು ನಿಜವಾಗಿಯೂ ಬಿಜೆಪಿ ಮೈತ್ರಿಕೂಟಕ್ಕೆ ಮತ ಚಲಾಯಿಸಿದರೇ - ಏನು ಹೇಳುತ್ತೆ ಡೇಟಾ?

Muslim Voting Patter in Bihar : ಅತಿಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮ್ ಮತದಾರರನ್ನು ಹೊಂದಿರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಮತ ಯಾರ ಪರವಾಗಿ ಬಿದ್ದಿದೆ? ರಾಷ್ಟ್ರೀಯ ಜನತಾದಳದ ಸಾಂಪ್ರದಾಯಿಕ ಈ ಮತಗಳು, ಬಿಹಾರದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ವಿಜಯ ಕರ್ನಾಟಕ 19 Nov 2025 11:25 am

Shivamogga | ಲಾಡ್ಜ್ ನಲ್ಲಿ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ : ನಗರದ ಸಾಗರ ರಸ್ತೆಯಲ್ಲಿರುವ ಖಾಸಗಿ ವಸತಿಗೃಹವೊಂದರಲ್ಲಿ ದಾವಣಗೆರೆ ಮೂಲದ ಮಹಿಳೆಯೊಬ್ಬರು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಗೀತಾ (48) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಬೆಂಕಿಯಿಂದ ಶೇ.70ರಷ್ಟು ಸುಟ್ಟಿರುವ ಗೀತಾರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಪರಿಚಿತ ವ್ಯಕ್ತಿಯೊಂದಿಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದ ಗೀತಾ, ಜಗಳದಿಂದ ಬೇಸತ್ತು ಆತ್ಮಹತ್ಯೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.ಆಕೆಯೊಂದಿಗೆ ಇದ್ದ ವ್ಯಕ್ತಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ

ವಾರ್ತಾ ಭಾರತಿ 19 Nov 2025 10:58 am

ಸಂಪುಟ ಪುನಾರಚನೆ ಇನ್ನೂ ಫಿಕ್ಸಾಗಿಲ್ಲ, ಆದ್ರೆ ಆಕಾಂಕ್ಷಿಗಳಿಂದ ಲಾಬಿಯೋ ಲಾಬಿ! ಮಂತ್ರಿಗಿರಿಗಾಗಿ ಯಾರು ಏನಂದ್ರು?

ಸಚಿವ ಸಂಪುಟ ಪುನಾರಚನೆಯಾಗಲಿದೆ ಎನ್ನುವ ವಿಚಾರ ಹೊರಬಿದ್ದ ಬೆನ್ನಲ್ಲೇ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಹಿರಿತನ, ಅನುಭವ, ಪಕ್ಷ ನಿಷ್ಠೆ ಹಾಗೂ ಸಾಧನೆಗಳನ್ನು ಮುಂದಿಟ್ಟುಕೊಂಡು ಕೆಲವರು ಬಹಿರಂಗವಾಗಿ, ಮತ್ತೆ ಕೆಲವರು ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಹಲವು ಶಾಸಕರು ತಮ್ಮ ಪ್ರೊಫೈಲ್ ಸಿದ್ಧಪಡಿಸಿಕೊಂಡು ಒತ್ತಡ ಹೇರುತ್ತಿದ್ದಾರೆ.

ವಿಜಯ ಕರ್ನಾಟಕ 19 Nov 2025 10:49 am

ಹರಿಣಗಳಲ್ಲಿ ಗಾಯದ ಸಮಸ್ಯೆ; ಈಡನ್ ಗಾರ್ಡನ್ ನಲ್ಲಿ ಭಾರತವನ್ನು ನಡುಗಿಸಿದ್ದ ಇಬ್ಬರು ಬೌಲರ್ಸ್ ಗುವಾಹಟಿ ಟೆಸ್ಟ್ ಗೆ ಡೌಟ್

India Vs South Africa Test Series- ಐತಿಹಾಸಿಕ ಈಡನ್ ಗಾರ್ಡನ್ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 30 ರನ್ ಗಳಿಂದ ಸೋಲಿಸಿದ ಉತ್ಸಾಹದಲ್ಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಇದೀಗ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ನರ್ ಸೈಮನ್ ಹಾರ್ಮರ್ ಮತ್ತು ಮಧ್ಯಮ ವೇಗಿ ಮಾರ್ಕೋ ಯಾನ್ಸೆನ್ ಗಾಯಗೊಂಡಿದ್ದು 2ನೇ ಟೆಸ್ಟ್ ನಲ್ಲಿ ಆಡುವುದು ಅನುಮಾನವಾಗಿದೆ. ಇವರ ಅನುಪಸ್ಥಿತಿ ಸರಣಿ ಗೆಲುವಿನ ಕನಸು ಕಾಣುತ್ತಿರುವ ಟೆಂಬಾ ಬವುಮಾ ಬಳಗಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ವಿಜಯ ಕರ್ನಾಟಕ 19 Nov 2025 10:43 am

ಭಟ್ಕಳ: ಗೃಹಬಳಕೆ ಸಾಮಗ್ರಿಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಲಕ್ಷಾಂತರ ರೂ. ವಂಚನೆ ಆರೋಪ; ಮೂವರ ಬಂಧನ

ಭಟ್ಕಳ: ಗೃಹ ಬಳಕೆಯ ಸಾಮಗ್ರಿಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಜನರಿಗೆ ಮೋಸಮಾಡಿ ಲಕ್ಷಾಂತರ ರೂ. ವಂಚನೆ ನಡೆಸಿದ ಗ್ಯಾಂಗ್‌ನ ಮೂವರು ಆರೋಪಿ­ಗಳನ್ನು ಪೊಲೀಸರು ಮಂಗಳವಾರ ಮಂಗಳೂರಿನಲ್ಲಿ ಬಂಧಿಸಿದ್ದಾರೆ.  ನ. 4ರಂದು ರಾತ್ರಿ ಲಕ್ಷಾಂತರ ರೂಪಾಯಿಗಳೊಂದಿಗೆ ಪರಾರಿಯಾಗಿದ್ದ ನಾಲ್ವರಲ್ಲಿ ಮೂವರನ್ನು ಪೊಲೀಸರು ಗುರುತಿಸಿದ್ದು, ಎಂ. ಗಣೇಶ್ (ಮತಯ್ಯ), ತ್ಯಾಗರಾಜನ್ (ಶಿವಕಡಸಂ) ಮತ್ತು ಮೈನಾದನ್ (ಕೃಪಯ್ಯ) ಎಂದು ತಿಳಿದುಬಂದಿದೆ.  ಬಿಗಿ ಭದ್ರತೆಯೊಂದಿಗೆ ಆರೋಪಿಗಳನ್ನು ಭಟ್ಕಳಕ್ಕೆ ಕರೆತಂದು ಗ್ಲೋಬಲ್ ಎಂಟರ್ಪ್ರೈಸಸ್ ಶೋರೂಮ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಶೋರೂಮ್ ಹಾಗೂ ಕಚೇರಿಯಿಂದ ಮಹತ್ವದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ, ಅಲ್ಲಿ ನಡೆದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಆರೋಪಿಗಳ ಬಾಡಿಗೆ ಮನೆಯನ್ನೂ ಪರಿಶೀಲಿಸಿದ ಪೊಲೀಸರು, ಅವರ ಚಟುವಟಿಕೆಗಳು, ಸ್ಥಳೀಯ ಸಂಪರ್ಕಗಳು ಹಾಗೂ ವರ್ತನೆ ಕುರಿತಂತೆ ವಿವರಗಳನ್ನು ದಾಖಲಿಸಿದರು. ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಇವರನ್ನು ಬಂಧಿಸಿದ ನಂತರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಪೊಲೀಸ್ ರಿಮಾಂಡ್ ಪಡೆದು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಈಗಾಗಲೇ ಫ್ರೀಝ್ ಮಾಡಲಾಗಿದ್ದು, ಖಾತೆಗಳಲ್ಲಿ ಇರುವ ಹಣ, ನಡೆದಿರುವ ವ್ಯವಹಾರಗಳು ಹಾಗೂ ಶಂಕಾಸ್ಪದ ಟ್ರಾನ್ಸಾಕ್ಷನ್‌ಗಳ ಪರಿಶೀಲನೆ ನಡೆಯುತ್ತಿದೆ‌ ಎಂದು ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಹೇಳಿದ್ದಾರೆ. ಈ ಕಾರ್ಯಾಚರಣೆಗೆ ಡಿವೈಎಸ್ಪಿ ಮಹೇಶ್ ನೇತೃತ್ವ ವಹಿಸಿದ್ದು, ಸಿಪಿಐ ದಿವಾಕರ್, ಪಿಎಸ್‌ಐ ನವೀನ್, ಪಿಎಸ್‌ಐ ತಂಪ ಮುಗೇರ ಹಾಗೂ ಇತರೆ ಸಿಬ್ಬಂದಿ ತಂಡದಲ್ಲಿ ಭಾಗಿಯಾಗಿದ್ದರು. ಇದಲ್ಲದೆ, ಈ ಮೋಸ ಕೃತ್ಯದ ಮುಖ್ಯ ಆರೋಪಿ ಉದಯ್ ಕುಮಾರ ರಂಗರಾಜು ಪರಾರಿಯಾಗಿದ್ದು, ಆತನನ್ನು ಬಂಧಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 Nov 2025 10:43 am

Australia | ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆ ಮೃತ್ಯು

ಆಸ್ಟ್ರೇಲಿಯಾ | ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆ ಮೃತ್ಯು ಸಿಡ್ನಿ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಗರ್ಭಿಣಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಪುತ್ರನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹಾರ್ನ್ಸ್ ಬೈಯ ಜಾರ್ಜ್ ಸ್ಟ್ರೀಟ್‌ನಲ್ಲಿ ಸಮನ್ವಿತಾ ಧಾರೇಶ್ವರ್ ಅವರು ಪತಿ ಮತ್ತು ಮಗುವಿನ ಜೊತೆ ರಸ್ತೆ ದಾಟಲು ಪ್ರಯತ್ನಿಸುವಾಗ ಅವರಿಗೆ ದಾರಿ ಕೊಡಲು ಕಿಯಾ ಕಾರು ನಿಂತಿದೆ. ಈ ವೇಳೆ ಬಿಎಂಡಬ್ಲ್ಯು ಕಾರು ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಕಿಯಾ ಕಾರು ಸಮನ್ವಿತಾ ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮನ್ವಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಸಮನ್ವಿತಾ ಮತ್ತು ಗರ್ಭದಲ್ಲಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅಪಘಾತದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ವಾರ್ತಾ ಭಾರತಿ 19 Nov 2025 10:39 am

ಚಾಮರಾಜನಗರ | ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಾಮರಾಜನಗರ : ಗರ್ಭಿಣಿಯೊಬ್ಬಳನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಶಿಲ್ಪಾ ಪುರುಷೊತ್ತಮ್ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ಶಿಲ್ಪಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆ್ಯಂಬುಲೆನ್ಸ್ ನಲ್ಲಿ ಕೌದಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಕೊಳ್ಳೇಗಾಲದ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ಅದರಂತೆ ಆ್ಯಂಬುಲೆನ್ಸ್ ನಲ್ಲಿ ಕೊಳ್ಳೇಗಾಲಕ್ಕೆ ಕರೆದೊಯ್ಯುತ್ತಿದ್ದ ವೇಳೆ ದಾರಿಮಧ್ಯೆ ಹನೂರು ಪಟ್ಟಣದ ಹೊರವಲಯದ ಎಲ್ಲೆಮಾಳ ಮುಖ್ಯರಸ್ತೆಯ ಕಣಿವೆ ಆಂಜನೇಯಸ್ವಾಮಿ ದೇವಾಲಯದ ಬಳಿ ಶಿಲ್ಪಾರಿಗೆ ಹೆರಿಗೆಯಾಗಿದೆ. ಪ್ರಾಥಮಿಕ ಶುಶ್ರೂಷೆ ಮಾಡಿದ ಆ್ಯಂಬುಲೆನ್ಸ್ ಸಿಬ್ಬಂದಿ ರಾಣಿ ಸೇರಿದಂತೆ ನಾಗಾರಾಜು ಅವರು ಶಿಲ್ಪಾರನ್ನು ತಕ್ಷಣ ಕೊಳ್ಳೇಗಾಲ ಆಸ್ಪತ್ರೆಗೆ ತಲುಪಿಸಿದ್ದಾರೆ. ಆ್ಯಂಬುಲೆನ್ಸ್ ಸಿಬ್ಬಂದಿಯ ತುರ್ತು ಸ್ಪಂದನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಾರ್ತಾ ಭಾರತಿ 19 Nov 2025 10:29 am

ಭಾರತದ ಅರ್ಥವ್ಯವಸ್ಥೆ: ಯೋಜನಾ ಆಯೋಗದಿಂದ ‘ಚಿಂತಕರ ಚಾವಡಿ’ಯತ್ತ

ರಾಷ್ಟ್ರೀಯ ಯೋಜನಾ ಆಯೋಗ (1951-2014)

ವಾರ್ತಾ ಭಾರತಿ 19 Nov 2025 10:29 am

Explainer : ಬಿಹಾರ ಚುನಾವಣೆಯಲ್ಲಿ ಸದ್ದು ಮಾಡದ ಸುದ್ದಿಗಳು, ಅಂಕಿಅಂಶಗಳು

Bihar Election 2025 News : ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ - ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಿಹಾರದ ಮತದಾರ ಊಹಿಸಲೂ ಅಸಾಧ್ಯವಾದ ಜನಾದೇಶವನ್ನು ನೀಡಿದ್ದಾನೆ. ಕಾಂಗ್ರೆಸ್ ಪಾರ್ಟಿಯು ಗಣನೀಯ ವೈಫಲ್ಯವನ್ನು ಕಂಡಿದೆ. ಜಿದ್ದಾಜಿದ್ದಿನ ಈ ಹೋರಾಟದಲ್ಲಿ ಸದ್ದು ಮಾಡದ ಸುದ್ದಿಗಳು/ ಅಂಕಿಅಂಶಗಳನ್ನು ಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ವಿಜಯ ಕರ್ನಾಟಕ 19 Nov 2025 10:12 am

ಆಸ್ಟ್ರೇಲಿಯಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿ ಭಾರತೀಯ ಮಹಿಳೆ ದುರ್ಮರಣ

ಸಿಡ್ನಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಸಮನ್ವಿತಾ ಧರೇಶ್ವರ್ ಎಂಬ 33 ವರ್ಷದ ಗರ್ಭಿಣಿ ಮಹಿಳೆ, ತನ್ನ ಪತಿ ಮತ್ತು ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ವೇಗವಾಗಿ ಬಂದ BMW ಕಾರು, ನಿಧಾನವಾಗಿ ತೆರಳುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು, ಆ ಕಾರು ಸಮನ್ವಿತಾಳ ಮೇಲೆ ನುಗ್ಗಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮತ್ತು ಮಗು ಮೃತಪಟ್ಟಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಅಪಾಯಕಾರಿ ಚಾಲನೆ , ನಿರ್ಲಕ್ಷ್ಯದ ಚಾಲನೆ ಮತ್ತು ಗರ್ಭಪಾತದ ಆರೋಪಗಳನ್ನು ಹೊರಿಸಲಾಗಿದ್ದು ಕಠಿಣ ಶಿಕ್ಷೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವಿಜಯ ಕರ್ನಾಟಕ 19 Nov 2025 10:08 am

Bengaluru Second Airport: 2ನೇ ವಿಮಾನ ನಿಲ್ದಾಣ: ಹೊಸ ಅಪ್‌ಡೇಟ್‌ ಕೊಟ್ಟ ಡಿ ಕೆ ಶಿವಕುಮಾರ್

ಬೆಂಗಳೂರು, ನವೆಂಬರ್‌ 19: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎರಡನೇ ವಿಮಾನ ನಿರ್ಮಾಣ ಆಗಬಹುದು. ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಸರ್ಕಾರ ಬರಲಿದೆ ಎಂದು ಹೇಳಿದ್ದಾರೆ. ಉತ್ತಮ ಸೇವೆ ಮತ್ತು ವಿಸ್ತಾರವಾದ ಜಾಗದ ಉದ್ದೇಶದಿಂದ ಈ ಸ್ಥಳವನ್ನು ಪರಿಗಣಿಸಲಾಗುತ್ತಿದೆ. ಸರ್ಕಾರವು ದಕ್ಷಿಣ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪರಿಗಣಿಸುತ್ತಿದೆ, ಎರಡನೇ ಏರ್ ಫೋರ್ಟ್ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ.

ಒನ್ ಇ೦ಡಿಯ 19 Nov 2025 9:58 am

ಕಲಬುರಗಿ | ವರ್ಣಕಲಾಶ್ರಿ ಪ್ರಶಸ್ತಿಗೆ ಕಲಾವಿದ ರೆಹಮಾನ್ ಪಟೇಲ್ ಆಯ್ಕೆ

ಕಲಬುರಗಿ: ಬೆಳಗಾವಿ ಆಧಾರಿತ ವರ್ಣಕಲಾ ಸಾಂಸ್ಕೃತಿಕ ಸಂಘವು 2024–25ರ ವರ್ಣಕಲಾಶ್ರಿ ಪ್ರಶಸ್ತಿಗೆ ಇಲ್ಲಿನ ಖ್ಯಾತ ಚಿತ್ರ ಕಲಾವಿದ ರೆಹಮಾನ್ ಪಟೇಲ್ ಅವರನ್ನು ಆಯ್ಕೆ ಮಾಡಿದೆ. ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಸುರಪುರ ಪರಂಪರೆಯ ಕಲೆಯನ್ನು ಪುನರುಜ್ಜೀವನಗೊಳಿಸಿ, ಅದನ್ನು ಪೋಷಿಸಿ ಬೆಳೆಸಿದ ರೆಹಮಾನ್ ಪಟೇಲ್ ಅವರ ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವರ್ಣಕಲಾ ಸಾಂಸ್ಕೃತಿಕ ಸಂಘದ ಪ್ರಕಟನೆ ತಿಳಿಸಿದೆ. ನ.23ರಂದು ಬೆಳಗಾವಿಯ ಕಲಾಮಹರ್ಷಿ ಕೆ.ಬಿ.ಕುಲಕರ್ಣಿ ಕಲಾ ಗ್ಯಾಲರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಬಿಇಒ ರವಿ ಭಜನತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಖ್ಯಾತ ಕಲಾವಿದ ಪಿ.ಎಸ್. ಕಡೆಯಮಣಿ ಮುಖ್ಯ ಅತಿಥಿಯಾಗಿರುವರು. ವರ್ಣಕಲಾ ಸಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ್ ಸಿ. ಚಿಮರೋಳ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಕಲಾವಿದರಾದ ದಿಲೀಪ್ಕುಮಾರ್ ಕಾಳೆ ಮತ್ತು ಆರ್.ಎ. ದೇವರುಷಿ ಗೌರವ ಅತಿಥಿಗಳಾಗಿರುವರು ಎಂದು ಸಂಘದ ಕಾರ್ಯದರ್ಶಿ ಸಂತೋಷ ಎಸ್. ಮಲ್ಲೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Nov 2025 9:51 am

ಪೊಕ್ಸೊ ಪ್ರಕರಣ: ಬಿ.ಎಸ್.ಯಡಿಯೂರಪ್ಪರಿಗೆ ಸಮನ್ಸ್ ಜಾರಿ ಮಾಡಿದ ವಿಶೇಷ ನ್ಯಾಯಾಲಯ

ಡಿ.2ರಂದು ಕೋರ್ಟ್ ಗೆ ಹಾಜರಾಗಲು ಆದೇಶ

ವಾರ್ತಾ ಭಾರತಿ 19 Nov 2025 9:44 am

ಧರ್ಮಸ್ಥಳದಲ್ಲಿ ಅಗೆದಾಗ ಸಿಗುವುದು ಬುರುಡೆಯಲ್ಲ, ಖಾವಂದರ ಜನಸೇವೆ : ತನ್ವೀರ್ ಅಹ್ಮದ್

Tanveer Ahmed on Dharmasthala : ಧರ್ಮಸ್ಥಳ ಅಭಿಯಾನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹ್ಮದ್ ಉಲ್ಲಾ, ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಜನಸೇವೆಯನ್ನು ಹಾಡಿ ಹೊಗಳಿದ್ದಾರೆ. ಧರ್ಮಸ್ಥಳದ ನೆಲವನ್ನು ಅಗೆದರೆ, ಹೆಗ್ಗಡೆ ಕುಟುಂಬದ ಸಾಮಾಜಿಕ ಸೇವೆ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯ ಕರ್ನಾಟಕ 19 Nov 2025 9:42 am

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ಸೌದಿ ರಾಜಕುಮಾರನಿಗೆ ಏನೂ ತಿಳಿದಿರಲಿಲ್ಲ: ಟ್ರಂಪ್ ಸಮರ್ಥನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಗುಪ್ತಚರ ವರದಿಗಳನ್ನು ತಳ್ಳಿಹಾಕಿದ ಟ್ರಂಪ್, ರಾಜಕುಮಾರನಿಗೆ ಏನೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಈ ಘಟನೆ ಖಶೋಗಿ ಹತ್ಯೆಯ ನಂತರ ರಾಜಕುಮಾರನ ಮೊದಲ ವೈಟ್ ಹೌಸ್ ಭೇಟಿಯ ಸಂದರ್ಭದಲ್ಲಿ ನಡೆಯಿತು.

ವಿಜಯ ಕರ್ನಾಟಕ 19 Nov 2025 9:40 am

ಸೌದಿ ಅರೆಬೀಯಾಗೆ ಎಫ್-35 ಯುದ್ಧ ವಿಮಾನ ಮಾರಾಟ ಮಾಡಲು ಟ್ರಂಪ್‌ ಒಪ್ಪಿಗೆ; ಆದರೆ ವಿಮಾನ ಪಡೆಯಲು ಸೌದಿಗಿದೆ ಹಲವು ಸವಾಲು!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಗೆ ಅತ್ಯಾಧುನಿಕ ಎಫ್-35 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಮಾರಾಟವು ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಹದಾಸೆಯನ್ನು ಪೂರೈಸುವಂತಿದೆ. ಈ ಕುರಿತು ಮತನಾಡಿದ ಟ್ರಂಪ್‌ ಸೌದಿಯನ್ನು ನ್ಯಾಟೋ ಅಲ್ಲದ ಮಿತ್ರ ರಾಷ್ಟ್ರ ಎಂದು ಕರೆದಿದ್ದಾರೆ. ಆದರೆ, ಈ ಒಪ್ಪಂದಕ್ಕೆ ಪೆಂಟಗಾನ್‌ನಿಂದ ಕಳವಳ ವ್ಯಕ್ತವಾಗಿದ. ಚೀನಾ ತಂತ್ರಜ್ಞಾನ ಪಡೆಯುವ ಆತಂಕವಿದೆ. ಈ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ವರ್ಷಗಳ ಮಾತುಕತೆ ಬೇಕಾಗಬಹುದು ಎಂದು ವರದಿಯಾಗಿದೆ.

ವಿಜಯ ಕರ್ನಾಟಕ 19 Nov 2025 9:39 am

ಎಪ್ಸ್ಟೀನ್ ಕಡತ ಬಲವಂತದ ಬಿಡುಗಡೆಗೆ ಅಮೆರಿಕ ಸೆನೆಟ್ ಅಸ್ತು

ವಾಷಿಂಗ್ಟನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ಕಡತಗಳ ಬಲವಂತದ ಬಿಡುಗಡೆಗೆ ಅನುವು ಮಾಡಿಕೊಡುವ ಎಪ್ಸ್ಟೀನ್ ಕಡತಗಳ ಪಾರದರ್ಶಕ ಕಾಯ್ದೆಗೆ ಅಮೆರಿಕದ ಸೆನೆಟ್ ಒಪ್ಪಿಗೆ ನೀಡಿದೆ. ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟಿವ್ಸ್ ಈ ಮಸೂದೆಯನ್ನು ಆಂಗೀಕರಿಸಿದ ಬೆನ್ನಲ್ಲೇ ಸೆನೆಟ್ ಒಪ್ಪಿಗೆಯೂ ಸಿಕ್ಕಿದ್ದು, ಕಡತ ಬಿಡುಗಡೆಯ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುನ್ನಡೆದಂತಾಗಿದೆ. ಮಸೂದೆಯನ್ನು ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ. ಅಮೆರಿಕದ ಸೆನೆಟ್ ಈ ಮಸೂದೆಯನ್ನು ಅವಿರೋಧವಾಗಿ ಆಂಗೀಕರಿಸಿದ್ದರಿಂದ ಮತಕ್ಕೆ ಹಾಕುವ ಪ್ರಮೇಯ ಉದ್ಭವಿಸಲಿಲ್ಲ. ಯಾವುದೇ ಚರ್ಚೆಯಿಲ್ಲದೇ ಈ ಕಾಯ್ದೆಯನ್ನು ಕಾನೂನಾಗಿ ಪರಿವರ್ತಿಸುವುದಾಗಿ ಟ್ರಂಪ್ ಈಗಾಗಲೇ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಅಮೆರಿಕ ಕಾಂಗ್ರೆಸ್ನ ಕೆಳಮನೆಯಲ್ಲಿ ಮಸೂದೆ 247-1 ಮತಗಳ ಅಂತರದಿಂದ ಒಪ್ಪಿಗೆ ಪಡೆದಿತ್ತು. ಕ್ಲೇ ಹಿಗ್ಗಿನ್ಸ್ ಮಾತ್ರ ಕಾಯ್ದೆ ವಿರುದ್ಧ ಮತ ಚಲಾಯಿಸಿದರು. ಈ ಕಡತ ಬಹಿರಂಗಪಡಿಸುವುದರಿಂದ ಅಮಾಯಕ ಜನರಿಗೆ ತೊಂದರೆಯಾಗುತ್ತದೆ ಎಂದು ಪ್ರತಿಪಾದಿಸಿ ಅವರು ಕಾಯ್ದೆಯ ವಿರುದ್ಧ ಮತ ಹಾಕಿದರು. ಆರಂಭದಿಂದಲೂ ತಾತ್ವಿಕವಾಗಿ ಈ ಮಸೂದೆಯನ್ನು ವಿರೋಧಿಸುತ್ತಾ ಬಂದಿದ್ದಾಗಿ ಹಿಗ್ಗಿನ್ಸ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಮಸೂದೆಯನ್ನು ಅವಿರೋಧವಾಗಿ ಆಂಗೀಕರಿಸುವಂತೆ ಸೆನೆಟ್ ನಲ್ಲಿ ಮನವಿ ಮಾಡಿದ ಡೆಮಾಕ್ರಟಿಕ್ ಪಕ್ಷದ ಅಲ್ಪಸಂಖ್ಯಾತಮುಖಂಡ ಚುಕ್ ಶೂಮೆರ್, ಈ ಕಾಯ್ದೆಯು ಅಮೆರಿಕದ ಜನ ಆಗ್ರಹಿಸುತ್ತಿರುವ ಪಾರದರ್ಶಕತೆಯನ್ನು ತಂದುಕೊಡಲಿದೆ ಎಂದರು. ಅಮೆರಿಕದ ಜನತೆ ಕಾಯುತ್ತಿದ್ದಾರೆ; ಜೆಫ್ರಿ ಎಪ್ಸ್ಟೀನ್ ಸಂತ್ರಸ್ತರು ಸುಧೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಸತ್ಯ ಹೊರಬರಲಿ ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ವಾರ್ತಾ ಭಾರತಿ 19 Nov 2025 9:17 am

ಪರಿಸರ ಅನುಮತಿ ಇಲ್ಲದೆ ನಿರ್ಮಾಣಗೊಂಡ ಯೋಜನೆಗಳಿಗೆ ಅವಕಾಶವಿಲ್ಲ: ಹಳೆ ತೀರ್ಪನ್ನು ಹಿಂಪಡೆದ ಸುಪ್ರೀಂಕೋರ್ಟ್

ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪನ್ನು ಹಿಂಪಡೆದಿದೆ. ಪರಿಸರ ಅನುಮತಿ ಇಲ್ಲದ ಯೋಜನೆಗಳಿಗೆ ಅನುಮತಿ ನೀಡುವ ಕೇಂದ್ರ ಸರ್ಕಾರದ ಅಧಿಸೂಚನೆಗೆ ಈಗ ಅವಕಾಶವಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನಿನ ಲೋಪಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯ ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಚಂದ್ರನ್ ಅವರು ಈ ತೀರ್ಪಿನ ಪರವಾಗಿದ್ದರು. ಈ ನಿರ್ಧಾರವು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಸಂಘರ್ಷವನ್ನು ಎತ್ತಿ ತೋರಿಸಿದೆ.

ವಿಜಯ ಕರ್ನಾಟಕ 19 Nov 2025 9:16 am

ಆಗ ತಾನೇ ನನಗೆ ಕ್ಯಾನ್ಸರ್ ಸರ್ಜರಿ ಆಗಿತ್ತು, ಪ್ರಧಾನಿ ಕಚೇರಿಯಿಂದ ಫೋನ್ ಬಂತು.. : ರಾಜ್‍ದೀಪ್ ಸರ್ದೇಸಾಯಿ

Journalist Rajdeep Sardesai surprisingly praised PM Modi : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಹಿರಿಯ ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಹೊಗಳಿದ್ದಾರೆ. ಒಬ್ಬ ಲೀಡರ್ ಹೇಗಿರಬೇಕು ಹಾಗೆ ನಮ್ಮ ಮೋದಿ ಇದ್ದಾರೆ ಎಂದು ನನ್ನ ಸಹೋದರಿ ನನಗೆ ಹೇಳಿದ್ದರು ಎಂದು ರಾಜ್‍ದೀಪ್ ಹೇಳಿದ್ದಾರೆ.

ವಿಜಯ ಕರ್ನಾಟಕ 19 Nov 2025 8:30 am

ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ: ಅನ್ಮೋಲ್ ಬಿಷ್ಣೋಯಿ ಭಾರತಕ್ಕೆ ಗಡೀಪಾರು

ಹೊಸದಿಲ್ಲಿ: ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈ ಬಗ್ಗೆ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಮಂಗಳವಾರ ಆರೋಪಿಯನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದ್ದು, ಬುಧವಾರ ಬೆಳಿಗ್ಗೆ 10 ಗಂಟೆ ವೇಳೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ ಗಡೀಪಾರು ಪ್ರಕ್ರಿಯೆಯನ್ನು ಸಂಯೋಜಿಸುತ್ತಿದೆ. ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 200 ಮಂದಿ ಅಕ್ರಮ ವಾಸಿಗಳನ್ನು ಹೊತ್ತ ವಿಶೇಷ ವಿಮಾನದಲ್ಲಿ ಬಿಷ್ಣೋಯಿ ಕೂಡಾ ಇದ್ದಾನೆ ಎಂದು ಮೂಲಗಳು ಹೇಳಿದ್ದು, ಭಾರತದ ಪೊಲೀಸರಿಗೆ ಬೇಕಿದ್ದ ಪಂಜಾಬ್ ನ ಇಬ್ಬರು ದೇಶಭ್ರಷ್ಟರು ಕೂಡಾ ಇದರಲ್ಲಿ ಸೇರಿದ್ದಾರೆ ಎನ್ನಲಾಗಿದೆ. ಮೃತ ಬಾಬಾ ಸಿದ್ದೀಕಿ ಅವರ ಮಗ ಝೀಷಾನ್ ಈ ಗಡೀಪಾರನ್ನು ದೃಢಪಡಿಸಿದ್ದು, ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಇ-ಮೇಲ್ ಮೂಲಕ ಅಧಿಕೃತವಾಗಿ ಗಡೀಪಾರನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ. ರಹಸ್ಯ ವೆಬ್ ಆಧರಿತ ಡಿಎಚ್ಎಸ್-ವಿಐಎನ್ಇ ಎಂಬ ವ್ಯವಸ್ಥೆ ಮೂಲಕ ಈ ಇ-ಮೇಲ್ ಕಳುಹಿಸಲಾಗಿದ್ದು, ಅಮೆರಿಕದ ವಶದಲ್ಲಿರುವ ಅಕ್ರಮ ವಲಸೆಯವರು ಎಸಗಿದ ಅಪರಾಧಗಳಿಂದ ಸಂತ್ರಸ್ತರಾಗಿ ನೋಂದಾಯಿತರಾದವರಿಗೆ ಅಧಿಕೃತ ಅಧಿಸೂಚನೆಯನ್ನು ಈ ವ್ಯವಸ್ಥೆ ಮೂಲಕ ಕಳುಹಿಸಲಾಗುತ್ತದೆ. ಬಿಷ್ಣೋಯಿ ಚಲನ ವಲನಗಳ ಬಗ್ಗೆ ಮುಂಬೈ ಪೊಲೀಸರಿಂದ ಯಾವುದೇ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಝೀಷಾನ್ ಸಿದ್ದೀಕಿ ಅವರು ಅಮೆರಿಕದ ಅಧಿಕಾರಿಗಳಿಂದ ಮಾಹಿತಿ ಕೋರಿದ್ದರು. ಅಮೆರಿಕದ ಫೆಡರಲ್ ಸರ್ಕಾರ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದ ನೆಲದಿಂದ ಕಳುಹಿಸಿದೆ ಎಂಬ ಮಾಹಿತಿಯನ್ನು ಒಳಗೊಂಡ ಇ-ಮೇಲ್ ಸಂದೇಶವನ್ನು ಸಿದ್ದೀಕಿ ಹಂಚಿಕೊಂಡಿದ್ದಾರೆ.

ವಾರ್ತಾ ಭಾರತಿ 19 Nov 2025 8:16 am

ಶೇಖ್ ಹಸೀನಾರಿಗೆ ಭಾರತ ಆಶ್ರಯ, ಭದ್ರತೆ, ಗೌರವ ನೀಡಲಿದೆ: ಅವಾಮಿ ಲೀಗ್ ನಾಯಕರ ವಿಶ್ವಾಸ

ಅಂತಾರಾಷ್ಟ್ರೀಯ ಕ್ರೈಮ್ಸ್ ಟ್ರಿಬ್ಯುನಲ್‌ನಿಂದ ಮರಣದಂಡನೆ ವಿಧಿಸಲ್ಪಟ್ಟ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಬಾಂಗ್ಲಾದೇಶ ಸರ್ಕಾರ ಮನವಿ ಮಾಡಿದೆ. ದೇಶದ ಹೊರಗಿರುವ ಆವಾಮಿ ಲೀಗ್ ನಾಯಕರು ಭಾರತದಿಂದ ಆಶ್ರಯ ಮತ್ತು ಭದ್ರತೆಯನ್ನು ನಿರೀಕ್ಷಿಸುತ್ತಿದ್ದಾರೆ. ಪಕ್ಷದ ಮೇಲಿನ ನಿಷೇಧ ಹಿಂಪಡೆದರೆ ಮಾತ್ರ ದೇಶಕ್ಕೆ ಮರಳಲು ಸಿದ್ಧ ಎಂದು ಅವರು ಹೇಳಿದ್ದಾರೆ.

ವಿಜಯ ಕರ್ನಾಟಕ 19 Nov 2025 8:11 am

ಕಾಸರಗೋಡು: ಹಿಂದಕ್ಕೆ ಚಲಿಸಿ ಉರುಳಿ ಬಿದ್ದ ಜೀಪ್; ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು: ಇಳಿಜಾರು ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪ್ ಹಿಂದಕ್ಕೆ ಚಲಿಸಿ ಉರುಳಿ ಬಿದ್ದ ಪರಿಣಾಮ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೇಕೂರು ಸಮೀಪದ ಬೊಳ್ಳಾಯಿ ಎಂಬಲ್ಲಿ ನಡೆದಿದೆ. ಜಯಂತಿ ಭಂಡಾರಿ (74) ಮತ್ತು ಪುತ್ರಿ ಸುಮಲತಾ ಶೆಟ್ಟಿ (47) ಗಾಯಗೊಂಡವರು. ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಿಜಾರು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸೊಸೈಟಿಯೊಂದಕ್ಕೆ ಸಂಬಂಧಿಸಿದ ಜೀಪ್, ‌ಹಿಂದಕ್ಕೆ ಚಲಿಸಿ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳಿಗೆ ಬಡಿದು ಸಮೀಪದ ತೋಟಕ್ಕೆ ಉರುಳಿದೆ ಎನ್ನಲಾಗಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಜೀಪಿನಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 Nov 2025 8:05 am

Bengaluru Second Airport: ಬೆಂಗಳೂರಿಗೆ ಮತ್ತೆ ಟಕ್ಕರ್ ಕೊಟ್ಟ ತಮಿಳುನಾಡು, ಬೆಂಗಳೂರು ಸಮೀಪ ವಿಮಾನ ನಿಲ್ದಾಣ ಪ್ರಕ್ರಿಯೆ ಜೋರು!

Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕ್ರಿಯೆಯು ವಿಳಂಬವಾಗುತ್ತಲ್ಲೇ ಇದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಕಗ್ಗಂಟಾಗಿ ಉಳಿದಿದೆ. ಅಲ್ಲದೇ ವಾಯುಮಾರ್ಗದ ಒತ್ತಡ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಗತಿ ಕಾಣುತ್ತಿಲ್ಲ. ಇದರ ನಡುವೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಟಕ್ಕರ್ ಕೊಡುವುದಕ್ಕೆ ತಮಿಳುನಾಡು

ಒನ್ ಇ೦ಡಿಯ 19 Nov 2025 7:45 am

ಕೃಷ್ಣಬೈರೇಗೌಡರ ಜಮೀನಿಗೂ ನಕಲಿ ದಾಖಲೆ ಸೃಷ್ಟಿ, ಬೋನಾಫೈಡ್‌ ಪ್ರಕರಣದಲ್ಲಿ 6 ಕಡೆ ಲೋಕಾ ದಾಳಿ; ಏನಿದು ಕೇಸ್‌?

ಕೋಲಾರದಲ್ಲಿ ನಕಲಿ ಬೊನಾಫೈಡ್‌ ಪ್ರಮಾಣಪತ್ರ ಹಗರಣ ಬಯಲಾಗಿದೆ. ಲೋಕಾಯುಕ್ತ ಪೊಲೀಸರು ಚಿಂತಾಮಣಿ ಸೇರಿದಂತೆ ಆರು ಕಡೆ ದಾಳಿ ನಡೆಸಿದ್ದಾರೆ. ನಿವೃತ್ತ ಉಪ ತಹಸೀಲ್ದಾರ್‌ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್‌ ಖರೀದಿಗೆ ತೆರಿಗೆ ವಿನಾಯಿತಿ ಪಡೆಯಲು ಈ ಅಕ್ರಮ ನಡೆದಿದ್ದು, ಇದರಿಂದ ಸರಕಾರಕ್ಕೆ ಸುಮಾರು 2 ಕೋಟಿ ರೂ. ನಷ್ಟವಾಗಿದೆ.

ವಿಜಯ ಕರ್ನಾಟಕ 19 Nov 2025 7:43 am

ದೆಹಲಿ ಬಾಂಬರ್ ವಿಡಿಯೋದಿಂದ ಭಯೋತ್ಪಾದಕರ ಬ್ರೈನ್‌ವಾಶ್ ತಂತ್ರ ಬಯಲಾಗಿದೆ: ಮನೋವೈದ್ಯರು

ದಿಲ್ಲಿ ಕಾರ್ ಬಾಂಬರ್ ಉಮರ್ ಉನ್ ನಬಿಯ ವಿಡಿಯೋವೊಂದು ಲಭ್ಯವಾಗಿದ್ದು, ಅದರಲ್ಲಿ ಆತ ಆತ್ಮಹತ್ಯಾ ದಾಳಿಯನ್ನು 'ಶಹಾದತ್ ಕಾರ್ಯಾಚರಣೆ' ಎಂದು ಸಮರ್ಥಿಸಿಕೊಂಡಿದ್ದಾನೆ. ಈ ವಿಡಿಯೋವನ್ನು ಆತ ದೆಹಲಿ ಸ್ಫೋಟಕ್ಕೆ ಕೆಲವೇ ದಿನಗಳ ಮೊದಲು ಚಿತ್ರೀಕರಿಸಿದ್ದ ಎನ್ನಲಾಗಿದೆ. ಮನೋವೈದ್ಯರ ಪ್ರಕಾರ, ಉಮರ್ ಸಂಪೂರ್ಣವಾಗಿ ಬ್ರೈನ್‌ವಾಶ್ ಆಗಿದ್ದ ಮತ್ತು ತನ್ನ ಕೃತ್ಯದ ಬಗ್ಗೆ ಹೆಮ್ಮೆಪಡುತ್ತಿದ್ದ. ಉಗ್ರ ಸಂಘಟನೆಗಳು, ವಿಶೇಷವಾಗಿ ಐಎಸ್‌ಐ, ಯುವಕರನ್ನು ಹೇಗೆ ದಾರಿ ತಪ್ಪಿಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ವಿಜಯ ಕರ್ನಾಟಕ 19 Nov 2025 7:40 am

ಚಿರಾಗ್ ಪಕ್ಷಕ್ಕೆ ಡಿಸಿಎಂ ಹುದ್ದೆಗೆ ಆಗ್ರಹ: ಬಿಜೆಪಿ, ಜೆಡಿಯು ವಿರೋಧ

ಹೊಸದಿಲ್ಲಿ: ಗುರುವಾರ ಪ್ರಮಾಣವಚನ ಸ್ವೀಕರಿಸುವ ಬಿಹಾರದ ನೂತನ ಸರ್ಕಾರದಲ್ಲಿ ಲೋಕಜನಶಕ್ತಿ (ರಾಮ್‌ ವಿಲಾಸ್) ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಚಿರಾಗ್ ಪಾಸ್ವಾನ್ ಆಗ್ರಹಕ್ಕೆ ಎನ್‌ಡಿಎ ಘಟಕ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ವಿರೋಧ ವ್ಯಕ್ತಪಡಿಸಿವೆ. ಎನ್‌ಡಿಎ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳು ಮಂಗಳವಾರ ಈ ಸಂಬಂಧ ಸುಧೀರ್ಘ ಚರ್ಚೆ ನಡೆಸಿದ್ದು, ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಬಿಜೆಪಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿವೆ. ಜೆಡಿಯು ಕೂಡಾ ಸ್ಪೀಕರ್ ಹುದ್ದೆಯಲ್ಲಿ ಆಸಕ್ತಿ ಹೊಂದಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ ಉಭಯ ಪಕ್ಷಗಳು ಆಕಾಂಕ್ಷೆಗಳನ್ನು ಅಭಿವ್ಯಕ್ತಪಡಿಸಿದ್ದು, ಹೊಸ ಸರ್ಕಾರದ ರಚನೆ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸುತ್ತಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಎನ್ಡಿಎ ಕೂಟಕ್ಕೆ ದಲಿತ ಮತಗಳನ್ನು ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ(ಆರ್ವಿ) 19 ಶಾಸಕರನ್ನು ಹೊಂದಿದ್ದು, ಡಿಸಿಎಂ ಹುದ್ದೆಗೆ ಲಾಬಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಆದರೆ ನಿರ್ಗಮಿತ ಸರ್ಕಾರದಲ್ಲಿ ಬಿಜೆಪಿ ಎರಡು ಡಿಸಿಎಂ ಹುದ್ದೆಗಳನ್ನು ಹೊಂದಿದ್ದು, ಹೊಸ ವ್ಯವಸ್ಥೆಯಲ್ಲೂ ಅದನ್ನು ಉಳಿಸಿಕೊಳ್ಳಲಿದೆ. ಚಿರಾಗ್ ಅವರ ಭಾವ ಹಾಗೂ ಜಮೂಯಿ ಸಂಸದ ಅರುಣ್ ಭಾರ್ತಿಯವರ ಹೆಸರು ಎಲ್ಜೆಪಿ ಕೋಟಾದಡಿ ಡಿಸಿಎಂ ಹುದ್ದೆಗೆ ಪ್ರಸ್ತಾವಿತವಾಗಿದೆ. ಜೆಡಿಯು ಸದಸ್ಯರ ಸಂಖ್ಯೆ ಗಣನೀಯ ಹೆಚ್ಚಳವಾಗಿರುವುದು ಮತ್ತು ಎಲ್ಜೆಪಿ(ಆರ್ವಿ) ಹಾಗೂ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮೈತ್ರಿಕೂಟಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರಕ್ಕಿಂತ ಹೊಸ ಸರ್ಕಾರ ಭಿನ್ನ ಸಂಯೋಜನೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಕೇಂದ್ರ ಸಚಿವ ಲಲನ್ ಸಿಂಗ್ ಅವರ ಜತೆ ಚರ್ಚೆ ನಡೆಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಬಿಜೆಪಿ 80 ಶಾಸಕರನ್ನು ಹೊಂದಿದ್ದರೆ, ಜೆಡಿಯು 43 ಶಾಸಕರನ್ನು ಹೊಂದಿತ್ತು. ಆದರೆ ಈ ಬಾರಿ ಸಮೀಕರಣ ಬದಲಾಗಿದ್ದು, ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಯು 85 ಸ್ಥಾನಗಳನ್ನು ಪಡೆದಿದೆ. ಈ ಹಿಂದೆ ಬಿಜೆಪಿ 21 ಸಚಿವರನ್ನು ಹೊಂದಿದ್ದರೆ, ಪ್ರಾದೇಶಿಕ ಪಕ್ಷಗಳ 14 ಸದಸ್ಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಇದರಿಂದ ಜೆಡಿಯು ಕೋಟಾ ಹೆಚ್ಚಲಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 Nov 2025 7:29 am

ಚಿರಾಗ್ ಪಕ್ಷಕ್ಕೆ ಡಿಸಿಎಂ ಹುದ್ದೆ: ಬಿಜೆಪಿ, ಜೆಡಿಯು ವಿರೋಧ

ಹೊಸದಿಲ್ಲಿ: ಗುರುವಾರ ಪ್ರಮಾಣವಚನ ಸ್ವೀಕರಿಸುವ ಬಿಹಾರದ ನೂತನ ಸರ್ಕಾರದಲ್ಲಿ ಲೋಕಜನಶಕ್ತಿ (ರಾಮ್ವಿಲಾಸ್) ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಚಿರಾಗ್ ಪಾಸ್ವಾನ್ ಆಗ್ರಹಕ್ಕೆ ಎನ್ಡಿಎ ಘಟಕ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ವಿರೋಧ ವ್ಯಕ್ತಪಡಿಸಿವೆ. ಎನ್ಡಿಎ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳು ಮಂಗಳವಾರ ಈ ಸಂಬಂಧ ಸುಧೀರ್ಘ ಚರ್ಚೆ ನಡೆಸಿದ್ದು, ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಬಿಜೆಪಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿವೆ. ಜೆಡಿಯು ಕೂಡಾ ಸ್ಪೀಕರ್ ಹುದ್ದೆಯಲ್ಲಿ ಆಸಕ್ತಿ ಹೊಂದಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ ಉಭಯ ಪಕ್ಷಗಳು ಆಕಾಂಕ್ಷೆಗಳನ್ನು ಅಭಿವ್ಯಕ್ತಪಡಿಸಿದ್ದು, ಹೊಸ ಸರ್ಕಾರದ ರಚನೆ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸುತ್ತಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಎನ್ಡಿಎ ಕೂಟಕ್ಕೆ ದಲಿತ ಮತಗಳನ್ನು ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ(ಆರ್ವಿ) 19 ಶಾಸಕರನ್ನು ಹೊಂದಿದ್ದು, ಡಿಸಿಎಂ ಹುದ್ದೆಗೆ ಲಾಬಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಆದರೆ ನಿರ್ಗಮಿತ ಸರ್ಕಾರದಲ್ಲಿ ಬಿಜೆಪಿ ಎರಡು ಡಿಸಿಎಂ ಹುದ್ದೆಗಳನ್ನು ಹೊಂದಿದ್ದು, ಹೊಸ ವ್ಯವಸ್ಥೆಯಲ್ಲೂ ಅದನ್ನು ಉಳಿಸಿಕೊಳ್ಳಲಿದೆ. ಚಿರಾಗ್ ಅವರ ಭಾವ ಹಾಗೂ ಜಮೂಯಿ ಸಂಸದ ಅರುಣ್ ಭಾರ್ತಿಯವರ ಹೆಸರು ಎಲ್ಜೆಪಿ ಕೋಟಾದಡಿ ಡಿಸಿಎಂ ಹುದ್ದೆಗೆ ಪ್ರಸ್ತಾವಿತವಾಗಿದೆ. ಜೆಡಿಯು ಸದಸ್ಯರ ಸಂಖ್ಯೆ ಗಣನೀಯ ಹೆಚ್ಚಳವಾಗಿರುವುದು ಮತ್ತು ಎಲ್ಜೆಪಿ(ಆರ್ವಿ) ಹಾಗೂ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮೈತ್ರಿಕೂಟಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರಕ್ಕಿಂತ ಹೊಸ ಸರ್ಕಾರ ಭಿನ್ನ ಸಂಯೋಜನೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಕೇಂದ್ರ ಸಚಿವ ಲಲನ್ ಸಿಂಗ್ ಅವರ ಜತೆ ಚರ್ಚೆ ನಡೆಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಬಿಜೆಪಿ 80 ಶಾಸಕರನ್ನು ಹೊಂದಿದ್ದರೆ, ಜೆಡಿಯು 43 ಶಾಸಕರನ್ನು ಹೊಂದಿತ್ತು. ಆದರೆ ಈ ಬಾರಿ ಸಮೀಕರಣ ಬದಲಾಗಿದ್ದು, ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಯು 85 ಸ್ಥಾನಗಳನ್ನು ಪಡೆದಿದೆ. ಈ ಹಿಂದೆ ಬಿಜೆಪಿ 21 ಸಚಿವರನ್ನು ಹೊಂದಿದ್ದರೆ, ಪ್ರಾದೇಶಿಕ ಪಕ್ಷಗಳ 14 ಸದಸ್ಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಇದರಿಂದ ಜೆಡಿಯು ಕೋಟಾ ಹೆಚ್ಚಲಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 Nov 2025 7:29 am

Karnataka Weather: ಚಂಡಮಾರುತ ಪ್ರಸರಣ: ಕೆಲವೆಡೆ ಮಳೆ, ಶೀತಗಾಳಿ ಎಚ್ಚರಿಕೆ: ಬಹುತೇಕ ಕಡೆ ಒಣಹವೆ..

Karnataka Weather Today: ಕರ್ನಾಟಕದಾದ್ಯಂತ ಮೈ ಕೊರೆವ ಚಳಿ ವಾತಾವರಣ ಸೃಷ್ಟಿಯಾಗುತ್ತಿದೆ. ಮಧ್ಯಾಹ್ನವಾದರೆ ಸಾಕು ಅಧಿಕ ಬಿಸಿಲು, ಕೆಲವೆಡೆ ಮಬ್ಬು ವಾತಾವರಣ ಕಂಡು ಬರುತ್ತಿದೆ. ಕಳೆದ ಐದಾರು ದಿನಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಮತ್ತೊಂದೆಡೆ ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾ ಸಮೀಪ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಮುಂದಿನ ಐದು (ನ.24) ದಿನದಲ್ಲಿ ಕೆಲವೆಡೆ ಮಳೆ, ಹಲವೆಡೆ

ಒನ್ ಇ೦ಡಿಯ 19 Nov 2025 7:17 am

ಚಾರಣಪ್ರಿಯರಿಗೆ ಬಂಡಾಜೆ ಜಲಪಾತ ವೀಕ್ಷಣೆಗೆ ನ.20ರಿಂದ ಅವಕಾಶ, ಬುಕ್ಕಿಂಗ್‌ ಮಾಡುವುದು ಹೇಗೆ?

ಚಾರಣಪ್ರಿಯರಿಗೆ ನವೆಂಬರ್‌ 20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಾಡ್ಗಿಚ್ಚು ಮತ್ತು ಮಳೆಗಾಲದ ಕಾರಣದಿಂದ ನಿಷೇಧವಿದ್ದ ಈ ಪ್ರದೇಶಕ್ಕೆ ಈಗ ಪ್ರವೇಶ ಮುಕ್ತವಾಗಿದೆ. 11 ಕಿಮೀ ಚಾರಣದ ಮೂಲಕ ತಲುಪಬೇಕಾದ ಈ ಜಲಪಾತಕ್ಕೆ ತೆರಳುವಾಗ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ವಿಜಯ ಕರ್ನಾಟಕ 19 Nov 2025 7:10 am

ಸಂಪುಟ ಪುನಾರಚನೆ ಸಂಕ್ರಾಂತಿಗೆ ಶಿಫ್ಟ್‌? ಜಿಲ್ಲಾಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖುಷ್‌- ಶಾಸಕ ರಾಯರಡ್ಡಿ, ಹಿಟ್ನಾಳ್‌ಗೆ ಬೇಸರ

ಸಂಪುಟ ಪುನಾರಚನೆ ವಿಳಂಬದಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖುಷಿಯಾಗಿದ್ದರೆ, ಶಾಸಕರಾದ ರಾಯರಡ್ಡಿ ಮತ್ತು ಹಿಟ್ನಾಳ್‌ಗೆ ಬೇಸರವಾಗಿದೆ. ದಿಲ್ಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸಿದರೂ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗದಿರುವುದು ನಿರಾಸೆ ಮೂಡಿಸಿದೆ. ಸಂಕ್ರಾಂತಿ ಅಥವಾ ಮಾರ್ಚ್ ಬಳಿಕ ಪುನಾರಚನೆ ಸಾಧ್ಯತೆ ಇದೆ.

ವಿಜಯ ಕರ್ನಾಟಕ 19 Nov 2025 6:47 am

ಹಳೆ ಅಡಕೆ ದರದಲ್ಲಿ ಭಾರೀ ಜಿಗಿತ, ಒಂದೇ ವರ್ಷದಲ್ಲಿ ₹90 ಏರಿಕೆ, ಬೆಳೆಗಾರರು ಖುಷ್‌; ಎಷ್ಟಿದೆ ಬೆಲೆ?

ಮಹಾಳಿ ಮತ್ತು ಎಲೆಚುಕ್ಕೆ ರೋಗದಿಂದ ಸಂಕಷ್ಟದಲ್ಲಿದ್ದ ಅಡಕೆ ಬೆಳೆಗಾರರಿಗೆ ಬೆಲೆ ಏರಿಕೆ ಸಂತಸ ತಂದಿದೆ. ಉತ್ತಮ ಗುಣಮಟ್ಟದ ಹಳೆ ಅಡಕೆ ಬೆಲೆ ಕೆಜಿಗೆ 540 ರೂ. ತಲುಪಿದ್ದು, ಹೊಸ ಅಡಕೆ ಬೆಲೆಯೂ 400 ರೂ. ಗಡಿಯಲ್ಲಿದೆ. ನವೆಂಬರ್ ಅಂತ್ಯಕ್ಕೆ ಕ್ವಿಂಟಾಲ್‌ಗೆ 70 ಸಾವಿರ ರೂ. ದಾಟುವ ನಿರೀಕ್ಷೆ ವ್ಯಕ್ತವಾಗಿದೆ

ವಿಜಯ ಕರ್ನಾಟಕ 19 Nov 2025 6:02 am

ಆಸ್ಪತ್ರೆಗಳ ಕರಾಳ ಮುಖ ಬಯಲು, ಚಿಕಿತ್ಸೆ ನಿರಾಕರಣೆಯೇ ಅಂಕೋಲಾದ ಚಂದ್ರಹಾಸ ಆಗೇರ ಸಾವಿಗೆ ಕಾರಣ!

ಅಂಕೋಲಾದಲ್ಲಿ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಚಂದ್ರಹಾಸ ಆಗೇರ, ಹಣಕಾಸಿನ ಅಸಮರ್ಥತೆಯಿಂದಾಗಿ ಐದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ 600 ಕಿ.ಮೀ. ಪ್ರಯಾಣಿಸಿ ಮೃತಪಟ್ಟಿದ್ದರು. ಆರೋಗ್ಯ ಇಲಾಖೆಯ ತನಿಖೆಯೂ ಈ ವಿಷಯವನ್ನು ದೃಢಪಡಿಸಿದ್ದು, ಆಂಬ್ಯುಲೆನ್ಸ್ ವಿಳಂಬ, ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ವಿಜಯ ಕರ್ನಾಟಕ 19 Nov 2025 5:53 am

ನ.28 ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ : ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು : ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ನಡೆಯುಲಿರುವ ಕಾರ್ಯಕ್ರಮದಲ್ಲಿ ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಮಹತ್ತರ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮೀ ಬ್ಯಾಂಕ್ ಉದ್ಘಾಟನೆ ಕುರಿತ ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಗರ್ಭಿಣಿಯರಿಗೆ ಬಾಗಿನ ಅರ್ಪಿಸಿ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ಅಂಧ ವಿಕಲ ಚೇತನರಿಗೆ ಬ್ರೈಲ್ ಲಿಪಿ ಹಾಗೂ ಕೇಳುವ ಲಿಪಿ ಸಾಧನದ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಎಸ್., ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಲಿಷ್ಠ ಭಾರತ ನಿರ್ಮಾಣದ ಕನಸು ಹೊತ್ತು 1975ರಲ್ಲಿ ಆರಂಭಿಸಿದ ಸಮಗ್ರ ಶಿಶು ಅಭಿವದ್ಧಿ ಸೇವೆಗಳ ಯೋಜನೆ ಐಸಿಡಿಎಸ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಪ್ರಮುಖ ಮೂರು ಯೋಜನೆಗೆ ರಾಜ್ಯ ಸರಕಾರ ಮುಂದಾಗಿದ್ದು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ

ವಾರ್ತಾ ಭಾರತಿ 19 Nov 2025 12:48 am

ವಿಚ್ಚೇದಿತ ಪತ್ನಿಗೆ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟ ಬೆದರಿಕೆ; ಆರೋಪಿ ಬಂಧನ

ಬೆಂಗಳೂರು : ‘ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ' ಎಂದು ಬಿಎಂಆರ್‍ಸಿಎಲ್ ಅಧಿಕೃತ ಖಾತೆಗೆ ವ್ಯಕ್ತಿಯೊಬ್ಬ ಬೆದರಿಕೆ ಇಮೇಲ್ ಕಳುಹಿಸಿರುವ ಪ್ರಸಂಗವೊಂದು ವರದಿಯಾಗಿದೆ. ಇಮೇಲ್‌ ಖಾತೆಯಿಂದ ನವೆಂಬರ್ 13 ರಂದು ರಾತ್ರಿ 11:25ಕ್ಕೆ ಮೇಲ್ ರವಾನಿಸಿರುವ ಆರೋಪಿಯು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಬಿಎಂಆರ್‍ಸಿಎಲ್ ಸಹಾಯಕ ನಿರ್ವಾಹಕ ಇಂಜಿನಿಯರ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇಮೇಲ್ ಸಂದೇಶದಲ್ಲೇನಿದೆ?: ‘ಕೆಲಸದ ಅವಧಿ ಮುಗಿದ ನಂತರವೂ ನನ್ನ ವಿಚ್ಚೇದಿತ ಪತ್ನಿಗೆ ಮೆಟ್ರೋದ ಯಾವುದೇ ಉದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದರೆ, ಎಚ್ಚರವಿರಲಿ. ನಿಮ್ಮ ನಿಲ್ದಾಣವೊಂದನ್ನು ಸ್ಪೋಟಿಸಲಾಗುತ್ತದೆ’ ಎಂದು ಆರೋಪಿ ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ. ಆರೋಪಿ ಬಂಧನ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ..! ಈ ಬೆದರಿಕೆಯ ಇಮೇಲ್ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು, ಆರೋಪಿ ರಾಜೀವ್(62) ಎಂಬಾತನನ್ನು ಬಂಧಿಸಿದ್ದಾರೆ. ಆತ ಮಾನಸಿಕವಾಗಿ ಅಸ್ವಸ್ಥನಿರುವ ಶಂಕೆಯಿದ್ದು, ಆರೋಪಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಯಾವ ಕಾರಣದಿಂದ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Nov 2025 12:39 am

ಮೇಕೆದಾಟು ಯೋಜನೆ ಬಗ್ಗೆ ಹೊಸದಾಗಿ ಡಿಪಿಆರ್ - ಡಿಸಿಎಂ ಡಿಕೆಶಿ ಪ್ರಕಟಣೆ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸದಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ, ಯೋಜನೆಯ ಸಂಪೂರ್ಣ ವಿವರಗಳೊಂದಿಗೆ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು. ಅರಣ್ಯ ಪ್ರದೇಶದ ಮುಳುಗಡೆಯ ಮಾಹಿತಿಯನ್ನೂ ಇದರಲ್ಲಿ ಸೇರಿಸಲಾಗುತ್ತದೆ.

ವಿಜಯ ಕರ್ನಾಟಕ 19 Nov 2025 12:29 am

ಬಿಜೆಪಿ ಟಿಕೆಟ್‌ ಕೊಡಿಸಲು ಹಣ ಪಡೆದ ಪ್ರಕರಣ: ಸಂಧಾನಕ್ಕೆ 10 ದಿನ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು : ಉಡುಪಿಯ ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ 5 ಕೋಟಿ ರೂ. ಪಡೆದ ಆರೋಪ ಪ್ರಕರಣದಲ್ಲಿ ಉಭಯ ಪಕ್ಷಕಾರರು ಸಂಧಾನ ಮಾಡಿಕೊಳ್ಳಲು ಹೈಕೋರ್ಟ್‌ 10 ದಿನ ಕಾಲಾವಕಾಶ ನೀಡಿದೆ. ಪ್ರಕರಣದ ತನಿಖೆಯ ವೇಳೆ ಜಪ್ತಿ ಮಾಡಲಾಗಿರುವ ಹಣವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ದೂರುದಾರ ಪೂಜಾರಿ ಹಾಗೂ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಮುಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು. ಗೋವಿಂದ ಪೂಜಾರಿ ಪರ ಹಿರಿಯ ವಕೀಲ ಎಚ್.ಎಸ್‌. ಚಂದ್ರಮೌಳಿ ವಾದ ಮಂಡಿಸಿ, ಪೂಜಾರಿ ಅವರಿಗೆ ತನಿಖೆಯ ವೇಳೆ ಜಪ್ತಿ ಮಾಡಿರುವ ಹಣವನ್ನು ಮಧ್ಯಂತರ ಕಸ್ಟಡಿಯ ರೂಪದಲ್ಲಿ ನೀಡಬೇಕು ಎಂದು ಕೋರಿದ್ದೇವೆ. ಗೋವಿಂದ ಪೂಜಾರಿ ದೂರು ನೀಡಿದ್ದು, ಚೈತ್ರಾ ಮತ್ತಿತರರು ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ತನಿಖೆ ನಡೆಸಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ವಿವಿಧ ವ್ಯಕ್ತಿಗಳಿಂದ ಹಣ ಜಪ್ತಿ ಮಾಡಲಾಗಿದ್ದು, ಆ ಹಣದ ಮಧ್ಯಂತರ ಕಸ್ಟಡಿಯನ್ನು ನಮಗೆ ನೀಡುವಂತೆ ಕೋರಿದ್ದೇವೆ ಎಂದರು. ಆಗ ನ್ಯಾಯಪೀಠ, ಹಣವನ್ನು ಆರೋಪಿಗಳಿಗೆ ನೀಡಿರುವುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಆರೋಪಿಗಳಿಗೆ ಹಣ ನೀಡಿರುವುದಕ್ಕೆ ಏನು ದಾಖಲೆ ಇದೆ? ಅವರ ಬಳಿ ಬೇರೆ ಹಣ ಇರಬಹುದು. ಆರೋಪ ಪಟ್ಟಿ ಸಲ್ಲಿಸಿರಬಹುದು, ಅವರು ದೋಷಿ ಎಂದು ಸಾಬೀತಾಗಿಲ್ಲ. ದೂರುದಾರರು ಆರೋಪಿಗಳಿಗೆ ನೀಡಿರುವ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ ಎಂದಿತು. ಬಳಿಕ ನ್ಯಾಯಪೀಠ, ಪೂಜಾರಿ ಹಾಗೂ ಸ್ವಾಮೀಜಿ ಅವರಿಗೆ ತಲಾ 50 ಲಕ್ಷ ರೂ. ಗಳನ್ನು ನೀಡೋಣ, ಇಬ್ಬರೂ ಬ್ಯಾಂಕ್‌ ಗ್ಯಾರಂಟಿ ನೀಡಬೇಕು ಎಂದು ಹೇಳಿತು. ಅದಕ್ಕೆ ಪ್ರತಿಕ್ರಿಯಿಸಿದ ಚಂದ್ರಮೌಳಿ ಅವರು, ನಾವು ಆದಾಯ ತೆರಿಗೆ ತೋರಿಸಿದ್ದೇನೆ. ಏನೆಲ್ಲ ದಾಖಲೆ ನೀಡಬೇಕು ಅದೆಲ್ಲವನ್ನೂ ನೀಡಿದ್ದೇವೆ. ಪೂಜಾರಿ ಅವರು ಬ್ಯಾಂಕ್‌ ಭದ್ರತೆ ನೀಡಲು ಸಿದ್ಧರಿದ್ದಾರೆ. ಎಷ್ಟು ವರ್ಷಗಳ ಕಾಲ ನಾವು ಕಾಯಬೇಕು? ಪೂಜಾರಿ ಅವರು ಶೇ. 24 ಬಡ್ಡಿ ಪಾವತಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ನಿಶ್ಚಿತ ಠೇವಣಿ ಇಡಲಾಗಿದ್ದು, ಶೇ. 6 ಬಡ್ಡಿ ಬರುತ್ತಿದೆ. ಉಳಿದ ಹಣ ಎಲ್ಲಿಂದ ಬರಿಸಬೇಕು? ಮಠದ ಸ್ವಾಮೀಜಿ ಹಣ ಬಿಡುಗಡೆ ಕೋರುತ್ತಿದ್ದಾರೆ. ಅವರು ಹೇಗೆ ಹಣ ಬಿಡುಗಡೆ ಕೇಳುತ್ತಾರೆ? ಸ್ವಾಮೀಜಿ ಹೊರತುಪಡಿಸಿ ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ನಾವು ಹಣ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು. ಸ್ವಾಮೀಜಿ ಪರ ವಕೀಲ ಸುಯೋಗ್‌ ಹೇರಳೆ ಅವರು, ಸಂಧಾನ ಮಾತುಕತೆ ನಡೆದಿದೆ. 10 ಲಕ್ಷ ರೂ. ವ್ಯತ್ಯಾಸಕ್ಕೆ ಪೂಜಾರಿ ಅವರು ಒಪ್ಪುತ್ತಿಲ್ಲ. ಹಣ ಬಿಡುಗಡೆ ಮಾಡುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ನಮ್ಮ ವಿರುದ್ಧದ ಪ್ರಕರಣ ರದ್ದತಿಗೆ ಅವರು ಒಪ್ಪುತ್ತಿಲ್ಲ. ಹೆಚ್ಚುವರಿಯಾಗಿ ಬಡ್ಡಿಯ ರೂಪದಲ್ಲಿ 10 ಲಕ್ಷ ಸೇರಿಸಿಕೊಡಬೇಕು ಎನ್ನುತ್ತಿದ್ದಾರೆ ಎಂದರು. ಇದನ್ನು ಆಲಿಸಿದ ನ್ಯಾಯಪೀಠ, ಗೋವಿಂದ ಪೂಜಾರಿ ಅವರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗದು. ಪ್ರಕರಣ ವಜಾ ಅಥವಾ ಸಂಧಾನ ಯಾವುದು ಬೇಕು ನೋಡಿ. ನಿಮ್ಮ ಹಣ ನಿಮಗೆ ಬರಬೇಕು ಅಷ್ಟೆ. ಸಂಧಾನ ಮಾಡಿಕೊಂಡು ಬನ್ನಿ ಎಂದು ಮೌಖಿಕವಾಗಿ ತಿಳಿಸಿ, ವಿಚಾರಣೆಯನ್ನು ಡಿಸೆಂಬರ್‌ 2ಕ್ಕೆ ಮುಂದೂಡಿತು.

ವಾರ್ತಾ ಭಾರತಿ 19 Nov 2025 12:28 am

ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು : ಪುರುಷೋತ್ತಮ ಬಿಳಿಮಲೆ

ಮೈಸೂರು : ಜಾನಪದ ಕಲೆಗಳ ಕೇಂದ್ರಿಕೃತವಾದ ದಾಖಲೆ ರೂಪಿಸುವುದು ಇಂದಿನ ಅಗತ್ಯವಾಗಿದೆ. ಈ ದಾಖಲೆಯಲ್ಲಿ ಕಲಾವಿದರ ಕಲೆ, ಬದುಕು, ಜೀವನವನ್ನು ತಿಳಿಸಬೇಕು. ಜೊತೆಗೆ ಮಂಟೇಸ್ವಾಮಿ ಪರಂಪರೆ ಹಾಡು ಜಾಗತಿಕವಾಗಿ ಮನ್ನಣೆ ಪಡೆಯುತ್ತಿದ್ದು, ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ನಗರದ ಮಾನಸ ಗಂಗೋತ್ರಿಯ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಮತ್ತು ‘ನಾವು ಕೂಗುವಾ ಕೂಗು’ ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇಂದಿನ ಪೀಳಿಗೆ ಅಂತರ್ಜಲದ ಬಳಕೆ ಹೆಚ್ಚು ಮಾಡಲಿದೆ. ಈ ನಿಟ್ಟಿನಲ್ಲಿ ನಾವು ಡಿಜಟಿಲೀಕರಣ ಮಾಡಿದರೆ ಪೀಳಿಗೆಯಿಂದ ಪೀಳಿಗೆ ತಲುಪಿಸಬಹುದು. ಪುಸ್ತಕಗಳ ದಾಖಲು ಮಾಡುವ ಜೊತೆಗೆ ಡಿಜಿಟಿಲೀಕರಣ ಕೂಡ ಮಾಡಬೇಕು. ಜಾನಪದ ವಿಶ್ವವಿದ್ಯಾನಿಲಯ, ಪ್ರಸಾರಾಂಗದಿಂದ ಈ ಕೆಲಸವಾಗಬೇಕು. ದಾಖಲೆ ನಿರ್ಮಿಸುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಯಕ್ಷಗಾನ ಮತ್ತು ಭೂತರಾಧನೆ ಬಹಳ ದೊಡ್ಡ ಕಲೆಗಳು. ಪ್ರಸ್ತುತ ಸಂದರ್ಭದಲ್ಲಿ ಮುಂದಿನ 28 ವರ್ಷಗಳಿಗೆ ಆಟವೂ ಬುಕ್ ಆಗಿದ್ದು, ಅಷ್ಟೊಂದು ಜನಪ್ರಿಯತೆ ಪಡೆದುಕೊಂಡಿದೆ. ಒಟ್ಟಾರೆ 750 ಭೂತಗಳಿದ್ದು, ಈ ಭೂತ ಕಥನಗಳ ಕಾವ್ಯವೂ ಇದೆ. ಆದರೆ, ಪ್ರತಿಯೊಂದು ಭೂತಕ್ಕೂ ಒಬ್ಬೊಬ್ಬರು ಕಲಾವಿದರಿದ್ದಾರೆ. ಭೂತಾರಾಧನೆಯು ಕಲಾವಿದನ ಆತ್ಮಚರಿತ್ರೆಯ ಕಾದಂಬರಿಯಾಗಿ ಅಥವಾ ಕೃತಿಯಾಗಿ ಪ್ರಕಟವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಮೈಸೂರು ವಿವಿಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ನೀಲಗಾರರ ಆತ್ಮಕಥನ ಪ್ರಕಟಿಸುವುದು ಮತ್ತು ಮಂಟೇಸ್ವಾಮಿ ಕಾವ್ಯವನ್ನು ಮುಂದಿನ ಪೀಳಿಗೆಗೆ ಪೂರ್ತಿ ಉಳಿಸಬೇಕು ಎನ್ನುವ ಯೋಜನೆಗಳನ್ನು ಕೈಗೊಂಡು ಕಲಾವಿದರು ಮತ್ತು ಲೇಖಕರನ್ನು ಒಟ್ಟಿಗೆ ಸೇರಿಸಲು ನಿರ್ಧರಿಸಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಬಳಿ ಹೋಗಿ ಅತಿಥಿ ಗೃಹ ನೀಡುವಂತೆ ಮನವಿ ಮಾಡಿದೆ. ನನ್ನ ಮನವಿಗೆ ಸಮ್ಮತಿಸಿದ ಅವರು ಅತಿಥಿ ಗೃಹದ ಜೊತೆಗೆ ಸಕಲ ಸೌಲಭ್ಯ ನೀಡಿದರು. ಹೀಗಾಗಿ ಅವರಿಗೆ ಸುತ್ತೂರು ಶ್ರೀಗಳಿಗೆ ಕೃತಜ್ಞತೆ ತಿಳಿಸುತ್ತೇನೆ. ಈ ಎರಡು ಪುಸ್ತಕಗಳು ಆಗಲು ಮೂಲ ಕಾರಣ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ. -ಕೃಷ್ಣಮೂರ್ತಿ ಹನೂರು, ಕೃತಿಗಳ ಸಂಪಾದಕರು

ವಾರ್ತಾ ಭಾರತಿ 19 Nov 2025 12:23 am

ಅರಕಲಗೂಡು | ಪತಿ-ಅತ್ತೆಯಿಂದ ಕಿರುಕುಳ ಆರೋಪ; ವೀಡಿಯೊ ಮಾಡಿ ಮಗುವಿನೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಅರಕಲಗೂಡು : ಪತಿ ಮತ್ತು ಅತ್ತೆಯ ಕಿರುಕುಳದಿಂದ ಮನನೊಂದು ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ತಾಲೂಕಿನ ರಾಮನಾಥಪುರ ಬಳಿಯ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೂಲತಃ ಮೈಸೂರು ಜಿಲ್ಲೆ ಸಾಲಿಗ್ರಾಮ ಮೂಲದ ಮಹಾದೇವಿ(29) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮನೆಯವರ ಕಿರುಕುಳದಿಂದ ಬೇಸತ್ತು ತಾಯಿ-ಮಗು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಬೆಟ್ಟಸೋಗೆ ಬಳಿ ಎರಡೂ ಮೃತದೇಹಗಳು ಪತ್ತೆಯಾಗಿವೆ. ಮಹಾದೇವಿ ಮೂರು ವರ್ಷಗಳ ಹಿಂದೆ ಸೀಬಿಹಳ್ಳಿ ಗ್ರಾಮದ ಕುಮಾರ್ ಎಂಬುವನನ್ನ ಮದುವೆಯಾಗಿದ್ದರು. ಮೊದಲ ಮದುವೆಯಾಗಿ ವಿಚ್ಚೇದನ ಪಡೆದಿದ ಮಹಾದೇವಿ ನಂತರ ಕುಮಾರ್ ನೊಂದಿಗೆ ಎರಡನೇ ಮದುವೆ ಆಗಿದ್ದರು. ಸಾಯುವ ಮುನ್ನ ವೀಡಿಯೊ ಮಾಡಿರುವ ತಾಯಿ, ಕಣ್ಣೀರು ಇಡುತ್ತಲೇ ತನಗೆ ಆಗುತ್ತಿರುವ ನೋವನ್ನು ಮಗುವನ್ನು ಎತ್ತಿಕೊಂಡೇ ಎಳೆ ಎಳೆಯಾಗಿ ಪತಿ ಹಾಗೂ ಅತ್ತೆಯಿಂದ ಕಿರುಕುಳಗಳ ಬಗ್ಗೆ ವಿವರಿಸಿದ್ದಾರೆ. ಇದಲ್ಲದೆ ಡೆತ್‌ನೋಟ್ ಸಹ ಬರೆದಿರುವ ಮಹಾದೇವಿ, ಮದುವೆ ಆದಾಗಿನಿಂದಲೂ ಕಿರುಕುಳ ಕೊಡುತ್ತಿದ್ದ ಗಂಡನ ನಡತೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಒಂದೆಡೆ ಪತಿ ಹಾಗೂ ಆಕೆಯ ತಾಯಿಯ ಕಿರುಕುಳ ಮತ್ತೊಂದೆಡೆ ಪೊಲೀಸರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Nov 2025 12:18 am

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪ್ರಕರಣ ಪತ್ತೆ: ಶಬರಿಮಲೆ ಯಾತ್ರಿಕರಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಕೇರಳ ರಾಜ್ಯದಲ್ಲಿ ‘ನೇಗ್ಲೇರಿಯಾ ಫೌಲೇರಿ’ (ಮಿದುಳು ತಿನ್ನುವ ಅಮೀಬಾ) ಜೀವಿಯಿಂದ ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್’ ಪ್ರಕರಣಗಳು ಕಂಡುಬಂದಿದ್ದು, ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನೇಗ್ಲೇರಿಯಾ ಫೌಲೆರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ, ಅದು ಮೆದುಳನ್ನು ತಲುಪುತ್ತದೆ. ಇದರಿಂದ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಎನ್ನುವ ಅಪರೂಪದ ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‍ಗಳನ್ನು ಬಳಸಿ ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ ತೀವು ತಲೆನೋವು, ವಾಕರಿಕೆ/ ವಾಂತಿ, ಕುತ್ತಿಗೆ ಬಿಗಿತ, ಗೊಂದಲ/ ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆಯು ಹೇಳಿದೆ. ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ನಿಂತ ನೀರು, ಕೊಳ, ಈಜುಕೊಳ, ಕೆರೆ ಸೇರಿದಂತೆ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಈ ಸೂಕ್ಷ್ಮಜೀವಿಯಿಂದ ಬರುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ ಎಂದು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 19 Nov 2025 12:14 am

ಕಾರವಾರ | ಟ್ಯಾಂಕರ್ ಉರುಳಿ ಮಿಥೇನ್ ಗ್ಯಾಸ್ ಸೋರಿಕೆ: ಸಾರ್ವಜನಿಕರು, ವಾಹನ ಓಡಾಟಕ್ಕೆ ನಿರ್ಬಂಧ

ಕಾರವಾರ, ನ.18: ರಾಷ್ಟ್ರೀಯ ಹೆದ್ದಾರಿ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಸಮೀಪ ಮಿಥೇನ್ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಘಟನೆ ಮಂಗಳವಾರ ನಡೆದಿದೆ. ಘಟನೆಯಿಂದಾಗಿ ಟ್ಯಾಂಕರ್ನಲ್ಲಿರುವ ಗ್ಯಾಸ್ ಸೋರಿಕೆಯಾಗುತ್ತಿದ್ದು, ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಟ್ಯಾಂಕರ್ ತೆರವುಗೊಳಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಸ್ಥಳದ 1 ಕಿ.ಮೀ. ವ್ಯಾಪ್ತಿಯೊಳಗೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಓಡಾಟ, ವಾಹನಗಳ ಓಡಾಟ, ನಿಲುಗಡೆ ನಿರ್ಬಂಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಾರ್ತಾ ಭಾರತಿ 18 Nov 2025 11:55 pm

ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ತನ್ವೀರ್ ಅಹ್ಮದುಲ್ಲಾಗೆ ಸ್ವಾಗತ

ಬೆಳ್ತಂಗಡಿ, ನ.18: ಧರ್ಮಸ್ಥಳ ಸರ್ವಧರ್ಮ ಸಮ್ಮೇಳನದ ಉಪನ್ಯಾಸಕ ತನ್ವೀರ್ ಅಹ್ಮದುಲ್ಲಾ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಹೆಗ್ಗಡೆಯವರೊಂದಿಗೆ ತನ್ನ ಅನುಭವ ಹಂಚಿಕೊಂಡ ತನ್ವೀರ್, ದಾರಿಯುದ್ಧಕ್ಕೂ ಹೆಗ್ಗಡೆ ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು ಎಂದು ಹೇಳಿದರು.

ವಾರ್ತಾ ಭಾರತಿ 18 Nov 2025 11:49 pm

Ukraine War: ಫ್ರಾನ್ಸ್ ಜೊತೆ ಉಕ್ರೇನ್ ದೊಡ್ಡ ಡೀಲ್, ರಷ್ಯಾ ಜೊತೆಗೆ ಮತ್ತಷ್ಟು ಘೋರ ಯುದ್ಧ ಶುರು?

ರಷ್ಯಾ ಬಾರಿಸುವ ಏಟಿಗೆ ಉಕ್ರೇನ್ ನಲುಗಿ ಹೋಗಿದ್ದು, ಜೀವ ಉಳಿಸಿಕೊಂಡರೆ ಸಾಕಪ್ಪಾ ದೇವರೇ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಕೂಡ ರೊಚ್ಚಿಗೆದ್ದು ತನ್ನ ಶತ್ರು &ಆಜನ್ಮ ವೈರಿ ಉಕ್ರೇನ್ ವಿರುದ್ಧ ಪದೇ ಪದೇ ದಾಳಿ ಮಾಡುತ್ತಲೇ ಇದೆ. ಹೀಗೆ ಎಲ್ಲಾ ರೀತಿಯ ದಾಳಿ ಮತ್ತು ಪ್ರತಿದಾಳಿ ನಡುವೆ ನಲುಗಿ ಹೋಗಿರುವ ಉಕ್ರೇನ್

ಒನ್ ಇ೦ಡಿಯ 18 Nov 2025 11:48 pm

ಕಾನ | ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಧರಣಿ

ಸುರತ್ಕಲ್, ನ.18: ಇಲ್ಲಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಾನ-ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ದುರಸ್ತಿಗೆ ಆಗ್ರಹಿಸಿ, ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕಾನ ಜಂಕ್ಷನ್ ಬಳಿ ಧರಣಿ ನಡೆಯಿತು. ರಸ್ತೆಯನ್ನು ಪೂರ್ಣಗೊಳಿಸದೆ ನಿತ್ಯ ಅಪಘಾತಕ್ಕೆ ಕಾರಣರಾಗುತ್ತಿರುವ ಪಿಡಬ್ಲ್ಯುಡಿ ಮತ್ತು ನಗರಪಾಲಿಕೆಯ ನಿರ್ಲಕ್ಷ್ಯತನವನ್ನು ಧರಣಿ ನರತರು ಖಂಡಿಸಿದರು. ಈ ಸಂದರ್ಭ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಇಮ್ತಿಯಾಝ್, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಪವಿತ್ರ ಗುತ್ತಿಗೆ ಸಂಬಂಧದಿಂದ ಕಳಪೆ ಮತ್ತು ಅವೈಜ್ಞಾನಿಕವಾಗಿ ಸುರತ್ಕಲ್ ಎಂಆರ್‌ಪಿಎಲ್ ರಸ್ತೆಯ ನಿರ್ಮಾಣ ಮಾಡಲಾಗಿದೆ. ಹಲವೆಡೆ ಕಾಮಗಾರಿ ಅಪೂರ್ಣ ವಾಗಿದೆ. ಕಾನ -ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದ್ದರೂ ಜನಪ್ರತಿನಿದಿನಗಳು ಮೌನವಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಕಾರ್ಪೊರೇಟರ್ ಆಯಾಝ್ ಕೃಷ್ಣಾಪುರ, ಶ್ರೀನಾಥ್ ಕುಲಾಲ್ ಮಾತನಾಡಿದರು. ಈ ಸಂದರ್ಭ ಡಿವೈಎಫ್‌ಐ ಮುಖಂಡರಾದ ಬಿ.ಕೆ.ಮಕ್ಸೂದ್, ಅಜ್ಮಲ್ ಅಹ್ಮದ್, ನವಾಝ್ ಕುಳಾಯಿ, ಮುಸ್ತಫ ಬಾಳ, ಜೋಯ್ ರೋಷನ್ ಡಿಸೋಜ, ಮುನೀಬ್, ಆಟೊ ರಿಕ್ಷಾ ಚಾಲಕರ ಸಂಘದ ಮುಖಂಡ ಲಕ್ಷ್ಮೀಶ ಅಂಚನ್, ಬಶೀರ್ ಕಾನ, ಹಂಝ ಮೈಂದಗುರಿ, ರಹೀಮ್, ನಾಗರಿಕ ಹೋರಾಟ ಸಮಿತಿಯ ಮೆಹಬೂಬ್ ಖಾನ್, ಜಗದೀಶ್ ಕಾನ, ರಾಜೇಶ್ ಕಾನ, ಅಬೂಬಕರ್ ಅಂಗಡಿ, ಇಕ್ಬಾಲ್ ಜೋಕಟ್ಟೆ, ಸಿರಾಜ್ ಮೈಂದಗುರಿ, ಫ್ರಾನ್ಸಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Nov 2025 11:46 pm

ಬಾರೆಬೆಟ್ಟು | ಸಿಡಿಲು ಬಡಿದು ಮನೆಗೆ ಹಾನಿ

ವಿಟ್ಲ, ನ.18: ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಅಬ್ದುಲ್ ಲತೀಫ್ ಎಂಬವರ ಮನೆಗೆ ನ.18ರಂದು ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲು ಬಡಿದ ಸಂದರ್ಭದಲ್ಲಿ ಮನೆಯೊಳಗೆ ಪುಟಾಣಿ ಮಗು ಹಾಗೂ ಇಬ್ಬರು ಮಹಿಳೆಯರಿದ್ದರು. ಮಗುವಿನ ಕಿವಿಗೆ ಗಾಯವಾಗಿದೆ.

ವಾರ್ತಾ ಭಾರತಿ 18 Nov 2025 11:41 pm

ದೆಹಲಿ ಸ್ಫೋಟ 2025 - ತಲೆಮರೆಸಿಕೊಂಡಿದ್ದ ಅಲ್ ಫಲಾಹ್ ವಿವಿ ಮುಖ್ಯಸ್ಥನ ಬಂಧನ

ಅಲ್ ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಸಿದ್ದಿಕಿ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಬಂಧನವು ವಿಶ್ವವಿದ್ಯಾಲಯದ ನಕಲಿ ಮಾನ್ಯತೆ ಹಕ್ಕುಗಳ ತನಿಖೆಯ ಹಿನ್ನೆಲೆಯಲ್ಲಿ ನಡೆದಿದೆ. ಇದಕ್ಕೂ ಮೊದಲು, ಅವರ ಸಹೋದರ ಹಮೂದ್ ಅಹ್ಮದ್ ಸಿದ್ದಿಕಿ ಅವರನ್ನು 25 ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಘಟನೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ವಿಜಯ ಕರ್ನಾಟಕ 18 Nov 2025 11:41 pm

\ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ ಖರ್ಚು!\

ಕರ್ನಾಟಕ ಸರ್ಕಾರವು ಪ್ರಚಾರದ ಹೆಸರಿನಲ್ಲಿ ಭಾರೀ ಮೊತ್ತ ಖರ್ಚು ಮಾಡಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗೆ ಭಾರೀ ಮೊತ್ತವನ್ನು ಖರ್ಚು ಮಾಡುತ್ತಿದೆ. ಅಲ್ಲದೇ ಇದಕ್ಕಾಗಿಯೇ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದು ವಿಪಕ್ಷಗಳು ದೂರುತ್ತಿರುವುದು ಸಹ ಇದೆ. ಈ ರೀತಿ ಇರುವಾಗಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ

ಒನ್ ಇ೦ಡಿಯ 18 Nov 2025 11:40 pm

ಸುಳ್ಯ | ಅಕ್ರಮ ಸಾಗಾಟ : ತೋಡಿಕಾನ, ಸೋಣಂಗೇರಿಯಲ್ಲಿ ಮರದ ದಿಮ್ಮಿಗಳು ವಶ

ಸುಳ್ಯ, ನ.18: ತೋಡಿಕಾನ ಗ್ರಾಮದ ಅಡ್ಯಡ್ಕ ಮತ್ತು ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ತೋಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಸಾಗುವಾನಿ ಮರದ ದಿಮ್ಮಿ ಸಾಗಿಸುತ್ತಿದ್ದಾರೆಂಬ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಒಂದು ಸಾಗುವಾನಿ ಮರದ ದಿಮ್ಮಿ ವಶ ಪಡಿಸಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಪಂಜ ವಲಯದ ಕಲ್ಮಡ್ಕ ಗ್ರಾಮದ ಓಟೆಕಜೆ ಎಂಬಲ್ಲಿಂದ ಎರಡು ಕಿರಾಲ್‌ಬೋಗಿ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ ಜಾಲ್ಸೂರು ಗ್ರಾಮದ ಸೋಣಂಗೇರಿ ಬಳಿ ವಾಹನ ಸಮೇತ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಪಂಜ ವಲಯ ಆರ್‌ಎ್‌ಒ ಸಂ‘್ಯಾ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಳ್ಯ ಮತ್ತು ಪಂಜ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ ‘ಾಗವಹಿಸಿದ್ದರು.

ವಾರ್ತಾ ಭಾರತಿ 18 Nov 2025 11:38 pm

ಡಿ.1ರಿಂದ 5 : ಐ.ಡಿ.ಪೀಠಕ್ಕೆ ಯಾತ್ರಾರ್ಥಿ-ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು : ತಾಲೂಕಿನ ಐ.ಡಿ.ಪೀಠ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಡಿಸೆಂಬರ್ 2 ರಿಂದ 4ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಡಿ.1ರ ಬೆಳಗ್ಗೆ 6ರಿಂದ ಡಿ.5ರ ಬೆಳಗ್ಗೆ 10 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದತ್ತ ಜಯಂತಿಗೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ವಾಹನಗಳ ಮುಖಾಂತರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸಲಿದ್ದು, ದತ್ತಮಾಲಾಧಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು, ಕಾರ್ಯಕರ್ತರು, ಸುತ್ತಮುತ್ತಲಿನ ವ್ಯಾಪ್ತಿಯ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವವರು ಮತ್ತು ಮೇಲ್ಕಂಡ ಸ್ಥಳಗಳಲ್ಲಿ ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್‌ಗಳನ್ನು ಬುಕಿಂಗ್ ಮಾಡಿಕೊಂಡವರನ್ನು ಈ ನಿರ್ಬಂಧದಿಂದ ಹೊರತುಪಡಿಸಲಾಗಿದೆ. ಸಂಸ್ಥೆಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿದೆ. ಇದರಿಂದಾಗಿ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನಸಂದಣಿಯಾಗಿ ಅನನುಕೂಲವಾಗುವ ಸಂಭವವಿರುವುದರಿಂದ ಹಾಗೂ ಜಿಲ್ಲಾ ಲೋಕೋಪಯೋಗಿ ಇಲಾಖೆಯ ವರದಿ ಮೇರೆಗೆ ಕೈಮರದಿಂದ ಕವಿಕಲ್‌ಗುಂಡಿ ಮೂಲಕ ಹೋಗುವ ಅತ್ತಿಗುಂಡಿ ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ರಸ್ತೆಯು ಕುಸಿದಿದೆ ಮಾತ್ರವಲ್ಲ, ರಸ್ತೆಯ ಭಾಗವು ಅತೀ ಕಿರಿದಾಗಿದ್ದು ಹಾಗೂ ಏರಿಳಿತಗಳಿಂದ ಕೂಡಿರುವುದರಿಂದ ಉದ್ದ ಚಾಸ್ಸಿ ಇರುವ ವಾಹನಗಳ ಸಂಚಾರವು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೈಮರ ಚೆಕ್‌ಪೋಸ್ಟ್‌ನಿಂದ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಉದ್ದಚಾಸ್ಸಿ ವಾಹನಗಳ ಸಂಚಾರವನ್ನು (ಎರಡು ಆಕ್ಸೆಲ್‌ಗಿಂತ ಹೆಚ್ಚಿನ ಆಕ್ಸೆಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳು) ಡಿ.1ರಿಂದ 5 ರವರೆಗೆ ನಿರ್ಬಂಧಿಸಲಾಗಿದೆ. (ಈ ಆದೇಶವು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಉಪಯೋಗಿಸುವ ಕೆಎಸ್ಸಾರ್ಟಿಸಿ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಮತ್ತು ಇತರ ಅಗತ್ಯ ತುರ್ತು ಸೇವೆಗಳ ವಾಹನಗಳಿಗೆ ಅನ್ವಯಿಸುವುದಿಲ್ಲ). ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಕೋರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Nov 2025 11:28 pm

ಗಾಜಾ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ಲಾನ್, ಜೈ ಎಂದ ವಿಶ್ವಸಂಸ್ಥೆ!

ಗಾಜಾ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಇಡೀ ಪ್ರಪಂಚ ಸೋತು ಸೋತು ಹೋಗಿದೆ. ಹೀಗೆ ಇಬ್ಬರ ನಡುವಿನ ಈ ಬಡಿದಾಟ ಇನ್ನೆಷ್ಟು ದಿನ? ಎಂಬ ಪ್ರಶ್ನೆ ಕೂಡ ಇದೀಗ ಉದ್ಭವಿಸಿದೆ. ಈ ಎಲ್ಲಾ ತಿಕ್ಕಾಟದ ನಡುವೆ ಕೂಡ ಮತ್ತೊಂದು ಮಹತ್ವದ ಬೆಳವಣಿಗೆ ಅಮೆರಿಕ ನೆಲದಲ್ಲೇ ಆಗುತ್ತಿದ್ದು, ಯುದ್ಧ ನಿಲ್ಲಿಸಲು ಬೇಕಾಗಿರುವ ಎಲ್ಲಾ ರೀತಿಯ ಪ್ರಯತ್ನಗಳು

ಒನ್ ಇ೦ಡಿಯ 18 Nov 2025 11:26 pm