ಚುನಾವಣಾ ಆಯೋಗದ ಸಂದೇಹಾಸ್ಪದ ಸಾಫ್ಟ್ವೇರ್ : ಪ.ಬಂಗಾಳ, ಮಧ್ಯಪ್ರದೇಶದ 3.66 ಕೋಟಿ ಮತದಾರರ ಹಕ್ಕು ಅಪಾಯದಲ್ಲಿ
ಹೊಸದಿಲ್ಲಿ, ಜ.6: ಭಾರತದ ಚುನಾವಣಾ ಆಯೋಗವು ಯಾವುದೇ ಲಿಖಿತ ಸೂಚನೆಗಳು, ಅಧಿಕೃತ ಕಾರ್ಯವಿಧಾನಗಳು ಮತ್ತು ಕೈಪಿಡಿಗಳಿಲ್ಲದೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಬಳಸಿದ ಪರೀಕ್ಷಿ ಸಲ್ಪಡದ ಸಾಫ್ಟ್ವೇರ್ ಪಶ್ಚಿಮ ಬಂಗಾಳದಲ್ಲಿ 1.31 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.35 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸುವ ಮೂಲಕ ಅವರ ಮತದಾನದ ಹಕ್ಕನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು reporters-collective.in ತನ್ನ ತನಿಖಾ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಚು.ಆಯೋಗ ಈ ಅನುಮಾನಾಸ್ಪದ ಮತದಾರರನ್ನು ‘ತಾರ್ಕಿಕ ವ್ಯತ್ಯಾಸಗಳನ್ನು’ ಹೊಂದಿರುವ ಪ್ರಕರಣಗಳು ಎಂದು ಕರೆದಿದೆ. ಡಿಸೆಂಬರ್ ಪೂರ್ವಾರ್ಧದಲ್ಲಿ ಸಿದ್ಧಪಡಿಸಲಾದ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳ ಶಂಕಿತ ಮತದಾರ ಪಟ್ಟಿಯ ಸಾರಾಂಶ ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ಲಭ್ಯವಾಗಿದೆ. ಈ ದಾಖಲೆಗಳಲ್ಲಿನ ದತ್ತಾಂಶಗಳನ್ನು ಮೊದಲ ಬಾರಿಗೆ ಬಹಿರಂಗಗೊಳಿಸಲಾಗುತ್ತಿದೆ. ಚುನಾವಣಾ ಆಯೋಗ ಎಸ್ಐಆರ್ ನಡೆಯುತ್ತಿರುವ ಎಲ್ಲ 12 ರಾಜ್ಯಗಳ ಮತದಾರರ ಪಟ್ಟಿಗಳ ಇಂತಹ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಅಲಭ್ಯವಾಗಿಸಿದೆ. ಮತದಾರರನ್ನು ಶಂಕಿತರು ಎಂದು ಗುರುತಿಸಲು ಬಳಸಲಾದ ಸಾಫ್ಟ್ ವೇರ್ 20 ವರ್ಷಗಳಿಗೂ ಹಳೆಯ ಮತ್ತು ಸ್ಪಷ್ಟವಲ್ಲದ ಮತದಾರರ ಪಟ್ಟಿಗಳ ಡಿಜಿಟಲೀಕರಣವನ್ನು ಅವಲಂಬಿಸಿತ್ತು. ಡಿಜಿಟಲೀಕರಣವನ್ನು 12 ರಾಜ್ಯಗಳಲ್ಲಿ ತರಾತುರಿಯಿಂದ ನಡೆಸಲಾಗಿತ್ತು. ಪ್ರತಿಯೊಂದು ರಾಜ್ಯದಲ್ಲಿಯೂ ಈ ಡಿಜಿಟಲೀಕರಣದ ಗುಣಮಟ್ಟವನ್ನು ಪರಿಶೀಲಿಸಲು ವಿವರವಾದ ಪರೀಕ್ಷೆಗಳನ್ನು ನಡೆಸಲಾಗಿರಲಿಲ್ಲ. ಇದು ಸಾಫ್ಟ್ ವೇರ್ ಮತದಾರರನ್ನು ಅನುಮಾನಾಸ್ಪದರೆಂದು ತಪ್ಪಾಗಿ ಗುರುತಿಸಲು ಕಾರಣವಾಗಿರಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ‘ರಿಪೋರ್ಟರ್ಸ್ ಕಲೆಕ್ಟಿವ್’ಗೆ ದೃಢಪಡಿಸಿದ್ದಾರೆ. ವಯಸ್ಸಿನ ಅಸಮಾನತೆ, ಹೆಸರುಗಳ ವ್ಯತ್ಯಾಸ, ಒಂದೇ ಕುಟುಂಬಕ್ಕೆ ಹೆಚ್ಚು ಮತದಾರರ ದಾಖಲೆಗಳಿರುವುದು ಮುಂತಾದವುಗಳನ್ನು ಸಾಫ್ಟ್ವೇರ್ ‘ತಾರ್ಕಿಕ ವ್ಯತ್ಯಾಸಗಳು’ ಎಂದು ಗುರುತಿಸಿದೆ. ಮತದಾರರ ಹಕ್ಕುಗಳ ಬಗ್ಗೆ ಸಂದೇಹಗಳು ಉದ್ಭವಿಸಿದಾಗ ಕ್ಷೇತ್ರ ಮಟ್ಟದಲ್ಲಿ ಚುನಾವಣಾಧಿಕಾರಿಗಳು ಔಪಚಾರಿಕ ವಿಚಾರಣೆಯ ಮೂಲಕ ಪರಿಹರಿಸಬೇಕು ಎಂದು ಚುನಾವಣಾ ಆಯೋಗದ ನಿಯಮಗಳು ಹೇಳುತ್ತವೆ. ತಮ್ಮ ಹಕ್ಕುಗಳ ಬಗ್ಗೆ ಕಂಪ್ಯೂಟರ್ ವ್ಯಕ್ತಪಡಿಸಿರುವ ಸಂದೇಹಗಳನ್ನು ಎದುರಿಸಲು ಮತದಾರರು ಯಾವ ಪುರಾವೆಗಳನ್ನು ಒದಗಿಸಬೇಕು ಎನ್ನುವುದನ್ನು ಚುನಾವಣಾ ಆಯೋಗ ಲಿಖಿತವಾಗಿ ಸೂಚಿಸಿರಲಿಲ್ಲ. ಸಾಫ್ಟ್ವೇರ್ ಗುರುತಿಸಿದ ಅನುಮಾನಾಸ್ಪದ ಮತದಾರರ ಅಭೂತಪೂರ್ವ ಪ್ರಮಾಣದಿಂದ ದಿಗ್ಭ್ರಮೆಗೊಂಡ ಚುನಾವಣಾ ಆಯೋಗ ಆರಂಭದಲ್ಲಿ ಅನುಮಾನಾಸ್ಪದರು ಎಂದು ಗುರುತಿಸಲ್ಪಟ್ಟ ಕೋಟ್ಯಂತರ ಮತದಾರರನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ರಾಜ್ಯಗಳಾದ್ಯಂತ ಎಸ್ಐಆರ್ ನಡುವೆಯೇ ಕೈಬಿಟ್ಟಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ. ಚುನಾವಣಾ ಆಯೋಗ ಕನಿಷ್ಠ ಒಂದು ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಸಾಫ್ಟ್ವೇರ್ ಅನ್ನು ಪದೇ ಪದೇ ಪರಿಷ್ಕರಿಸಿತ್ತು ಎನ್ನುವುದನ್ನು ‘ರಿಪೋರ್ಟರ್ಸ್ ಕಲೆಕ್ಟಿವ್’ ದೃಢಪಡಿಸಿಕೊಂಡಿದೆ. ಇದು ಕ್ರಮೇಣ ಅನುಮಾನಾಸ್ಪದ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಿತ್ತು. ಈ ನಡುವೆ ಯಾವುದೇ ಸ್ಥಾಪಿತ ಕಾರ್ಯವಿಧಾನದ ಬದಲು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮತ್ತು ಕ್ಷೇತ್ರ ಮಟ್ಟದ ಚುನಾವಣಾಧಿಕಾರಿಗಳಿಗೆ ಬಿಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ ಮಧ್ಯದ ವೇಳೆಗೆ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ 1.31 ಕೋಟಿ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದ್ದು, ಜ.2ರ ವೇಳೆಗೆ ಈ ಸಂಖ್ಯೆ 95 ಲಕ್ಷಕ್ಕೆ ಇಳಿದಿದೆ. ಆದರೆ ಸಾಫ್ಟ್ವೇರ್ ಶಂಕಿತರೆಂದು ಗುರುತಿಸಿದ್ದ ಈ ಪ್ರಕರಣಗಳನ್ನು ಹೇಗೆ ಪರಿಹರಿಸಲಾಗಿದೆ ಎನ್ನುವುದನ್ನು ವಿವರಿಸಲು ಇಸಿ ಯಾವುದೇ ವರದಿಗಳನ್ನು ಬಿಡುಗಡೆಗೊಳಿಸಿಲ್ಲ. ಭಾರತದಲ್ಲಿ ಚುನಾವಣಾ ಆಯೋಗವು ಸ್ಥಾಪಿತ ಕಾರ್ಯವಿಧಾನಗಳಿಲ್ಲದೆ, ಅಪಾರದರ್ಶಕ ಅಲ್ಗಾರಿದಮ್ಗಳ ಮೂಲಕ ಅಸ್ತಿತ್ವದಲ್ಲಿರುವ ಕೋಟ್ಯಂತರ ಮತದಾರರ ಹಕ್ಕುಗಳ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿರುವುದು ಇದೇ ಮೊದಲು. ಇದು ಮತದಾನದ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನ್ನ ವರದಿಯಲ್ಲಿ ಹೇಳಿದೆ. ಪಶ್ಚಿಮ ಬಂಗಾಳದ ಒಟ್ಟು ಮತದಾರರ ಪೈಕಿ ಶೇ.17.11ರಷ್ಟು ಮತ್ತು ಮಧ್ಯಪ್ರದೇಶದಲ್ಲಿ ಶೇ.41.22ರಷ್ಟು ಜನರು ಸಂಶಯದ ಸುಳಿಗೆ ಸಿಲುಕಿದ್ದಾರೆ. ಎಸ್ಐಆರ್ ಭಾಗವಾಗಿ ಮತ ದಾರರ ನೋಂದಣಿ ನಡೆಯುತ್ತಿರುವ ಇತರ 10 ರಾಜ್ಯಗಳಲ್ಲಿಯೂ ಕೋಟ್ಯಂತರ ಮತದಾರರನ್ನು ಅನುಮಾನಾಸ್ಪದರು ಎಂದು ಗುರುತಿಸಲಾಗಿದೆ ಎಂದು ಸ್ವತಂತ್ರ ಮೂಲಗಳು ದೃಢಪಡಿಸಿವೆ.
ಮಕ್ಕಳ ಶೈಕ್ಷಣಿಕ ಪ್ರವಾಸ ಅವಧಿ ವಿಸ್ತರಣೆಗೆ ಆಕ್ಷೇಪ; ಪರೀಕ್ಷೆಯೋ? ಪ್ರವಾಸವೋ? ಗೊಂದಲ
ಬೆಳಗಾವಿ ಅಧಿವೇಶನದಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ಜನವರಿ 21ರ ವರೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರವಾಸವೋ? ಪರೀಕ್ಷೆಯೋ? ಎಂಬ ಗೊಂದಲದಲ್ಲಿದ್ದಾರೆ. ಪರೀಕ್ಷೆ ಸಿದ್ಧತೆ ನಡುವೆ ಪ್ರವಾಸ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಮರ್ ಖಾಲಿದ್ ಜಾಮೀನು ನಿರಾಕರಣೆಯಿಂದ ನಿಜಕ್ಕೂ ಅನ್ಯಾಯವಾಗಿರುವುದು ನಮ್ಮ ನ್ಯಾಯ ವ್ಯವಸ್ಥೆಗೆ. ಎಲ್ಲೆಡೆ ನ್ಯಾಯದ ಬಾಗಿಲು ಮುಚ್ಚಿದಾಗ ‘ಸುಪ್ರೀಂಕೋರ್ಟ್ಗೆ ಹೋಗಿಯಾದರೂ ನ್ಯಾಯವನ್ನು ಪಡೆಯುತ್ತೇನೆ’ ಎಂಬ ಶ್ರೀಸಾಮಾನ್ಯನೊಬ್ಬನ ಆತ್ಮವಿಶ್ವಾಸ, ನಂಬಿಕೆಯ ಬೆನ್ನು ಮೂಳೆಯನ್ನು ಉಮರ್ ಖಾಲಿದ್ಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಮುರಿದು ಹಾಕಿದೆ. ಒಂದೆಡೆ ಈ ದೇಶದಲ್ಲಿ ವಿಚಾರಣೆಯ ಹೆಸರಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಸುಪ್ರೀಂಕೋರ್ಟ್, ಉಮರ್ ಖಾಲಿದ್ ವಿಷಯದಲ್ಲಿ ಮಾತ್ರ ‘ದೀರ್ಘ ಕಾಲದ ಜೈಲು ವಾಸವು ಜಾಮೀನು ಪಡೆಯಲು ಸಂಪೂರ್ಣ ಅರ್ಹತೆಯಾಗುವುದಿಲ್ಲ’’ ಎಂದು ಷರಾ ಬರೆದಿದೆ. 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಆದರೆ ಅವರ ಸಹವರ್ತಿಗಳಾಗಿರುವ ಇತರ ಐದು ಮಂದಿಗೆ ಶರತ್ತುಗಳ ಜೊತೆಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿಗೆ ವಿಧಿಸಿರುವ ಕಠಿಣ ನಿಯಮಗಳು ಅವರ ಪಾಲಿಗೆ ಹೊರ ಜಗತ್ತನ್ನೂ ಜೈಲಾಗಿಯೇ ಪರಿವರ್ತಿಸಿದೆ. ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳಿಗೆ ಕತ್ತರಿ ಹಾಕಲಾಗಿದೆ ಮಾತ್ರವಲ್ಲ, ಅವರ ಪ್ರತಿ ಹೆಜ್ಜೆಗಳ ಮೇಲೂ ಕಣ್ಣಿಡುವುದಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಯಾವುದೇ ಭಯೋತ್ವ್ವಾದನಾ ಕೃತ್ಯಗಳಲ್ಲಿ ನೇರವಾಗಿ ಭಾಗವಹಿಸಿದ ಆರೋಪ ಉಮರ್ ಖಾಲಿದ್ ಮೇಲಾಗಲಿ, ಶರ್ಜೀಲ್ ಇಮಾಮ್ ಮೇಲಾಗಲಿ ಇಲ್ಲ. ಉಮರ್ ಖಾಲಿದ್ ಮೇಲಿರುವ ಆರೋಪಗಳ ವಿಚಾರಣೆಯೇ ಕಳೆದ ಐದು ವರ್ಷಗಳಲ್ಲಿ ನಡೆದಿಲ್ಲ. ಹೀಗಿರುವಾಗ, ಯುಎಪಿಎ ಕಾಯ್ದೆಯನ್ನು ಮುಂದಿಟ್ಟುಕೊಂಡು ಐದು ವರ್ಷಗಳ ದೀರ್ಘ ಸೆರೆಮನೆವಾಸದ ಬಳಿಕವೂ ಈ ಜಾಮೀನು ನಿರಾಕರಣೆ ಎಷ್ಟರಮಟ್ಟಿಗೆ ನ್ಯಾಯಯುತವಾಗಿದೆ ಎಂದು ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ದಿಲ್ಲಿ ಗಲಭೆಗೆ ಪೂರ್ವದಲ್ಲಿ ಬಿಜೆಪಿ ನಾಯಕನೊಬ್ಬ ‘‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗ ಕರೆ ನೀಡಿರುವುದು ದಿಲ್ಲಿ ಪೊಲೀಸರಿಗೆ ಪ್ರಚೋದನೆ ಎಂದು ಅನ್ನಿಸಿಲ್ಲ. ಆದರೆ ಯಾವುದೇ ಹಿಂಸಾತ್ಮಕ ಅಥವಾ ಪ್ರಚೋದನಾತ್ಮಕ ಹೇಳಿಕೆಗಳನ್ನು ತನ್ನ ಭಾಷಣದಲ್ಲಿ ನೀಡಿರದೇ ಇದ್ದರೂ ಉಮರ್ ಖಾಲಿದ್ರ ಮಾತುಗಳಲ್ಲಿ ಭಯೋತ್ಪಾದನೆಯ ‘ವಿಧಾನ’ಗಳು ಸುಪ್ರೀಂಕೋರ್ಟ್ಗೆ ಗೋಚರಿಸಿರುವುದು ಹೇಗೆ ಎಂದು ಹಿರಿಯ ನ್ಯಾಯವಾದಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.ಶರ್ಜೀಲ್ ಇಮಾಮ್ ರಸ್ತೆ ತಡೆ, ಚಕ್ಕಜಾಂಗೆ ಕರೆ ನೀಡಿರುವುದನ್ನು ಭಯೋತ್ಪಾದನಾ ಕೃತ್ಯವಾಗಿ ಸುಪ್ರೀಂಕೋರ್ಟ್ ಭಾವಿಸುತ್ತದೆ. ಆದರೆ ಈ ದೇಶದ ಹಲವು ಹೋರಾಟಗಳಲ್ಲಿ ರಸ್ತೆ ತಡೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಾ ಬಂದಿದ್ದಾರೆ. ಈ ದೇಶದ ರೈತ ಹೋರಾಟಗಳು ರಸ್ತೆ ತಡೆಗಳ ಮೂಲಕ ಹಲವು ಬಾರಿ ನಡೆದಿವೆ. ರಸ್ತೆ ತಡೆಗೆ ಕರೆ ನೀಡಿರುವುದು ಭಯೋತ್ಪಾದನಾ ಚಟುವಟಿಕೆಯಾಗಿ ಸುಪ್ರೀಂಕೋರ್ಟ್ಗೆ ಕಂಡ ಬಗೆಯಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ತಡೆಗಳನ್ನು ‘ಭಯೋತ್ಪಾದನಾ ಕೃತ್ಯ’ಗಳಾಗಿ ನ್ಯಾಯಾಲಯ ಪರಿಭಾವಿಸುವ ಸಾಧ್ಯತೆಗಳಿವೆಯೇ ಎಂದು ಆತಂಕಪಡುವಂತಾಗಿದೆ. ಜಾಮೀನು ನಿರಾಕರಣೆಗೆ ಸುಪ್ರೀಂಕೋರ್ಟ್ ಮಂಡಿಸಿರುವ ತರ್ಕವನ್ನು, ಮುಂದಿನ ದಿನಗಳಲ್ಲಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧದ ಎಲ್ಲ ಪ್ರತಿಭಟನೆಗಳ ವಿರುದ್ಧ, ಪ್ರತಿಭಟನಾಕಾರರ ವಿರುದ್ಧ ಅನ್ವಯಿಸಬಹುದಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹತ್ತು ಹಲವು ವಿರೋಧಾಭಾಸಗಳಿರುವುದನ್ನು ಕಾನೂನು ತಜ್ಞರು ಎತ್ತಿ ತೋರಿಸಿದ್ದಾರೆ. ವಿಚಾರಣೆ ಯಾಕೆ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಸಿದ್ಧವಿರಲಿಲ್ಲ. ಒಂದೆಡೆ ದೀರ್ಘಕಾಲ ವಶದಲ್ಲಿಟ್ಟಿರುವುದನ್ನು ತಪ್ಪು ಎಂದು ಹೇಳುತ್ತಲೇ, ಅದರ ಆಧಾರದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದೂ ಹೇಳುತ್ತದೆ. ವಿಚಾರಣೆಯೇ ನಡೆಯದ ಪ್ರಕರಣದಲ್ಲಿ, ಖಾಲಿದ್ರನ್ನು ಯಾವ ಆಧಾರದಲ್ಲಿ ಪ್ರಮುಖ ಆರೋಪಿಯೆಂದು ಭಾವಿಸುತ್ತದೆ ಎನ್ನುವುದೂ ಸ್ಪಷ್ಟವಿಲ್ಲ. ಒಂದು ರೀತಿಯಲ್ಲಿ ವಿಚಾರಣೆ ನಡೆಯುವ ಮುನ್ನವೇ ಉಮರ್ ಖಾಲಿದ್ರನ್ನು ನ್ಯಾಯಾಲಯ ಅಪರಾಧಿಯೆಂದು ಘೋಷಿಸಿದೆ. ‘ರಹಸ್ಯ ಸಾಕ್ಷ್ಯದ ಪರಿಶೀಲನೆ ಒಂದು ವರ್ಷದ ಒಳಗೆ ನಡೆಯದೇ ಇದ್ದಲ್ಲಿ ಮತ್ತೆ ಜಾಮೀನು ಅರ್ಜಿ ಹಾಕಬಹುದು’’ ಇದು ಸುಪ್ರೀಂ ಕೋರ್ಟ್ ಉಮರ್ ಖಾಲಿದ್ಗೆ ತೋರಿಸಿದ ಬಹುದೊಡ್ಡ ಕೃಪೆ. ಮೋದಿ ಸರಕಾರ ವರ್ಷಗಳ ಹಿಂದೆ ನ್ಯಾಯ ದೇವತೆಯ ಕಣ್ಣ ಪಟ್ಟಿಯನ್ನು ಬಿಚ್ಚಿತು. ತ್ವರಿತ ನ್ಯಾಯದ ಸಂಕೇತವಾಗಿದ್ದ ಖಡ್ಗವನ್ನು ಕಿತ್ತುಕೊಂಡು ನ್ಯಾಯ ದೇವತೆಯ ಕೈಗೆ ಪುಸ್ತಕವನ್ನು ನೀಡಿತು. ಇದೀಗ ನ್ಯಾಯ ದೇವತೆಯ ಕೈಯಲ್ಲಿರುವ ಆ ಪುಸ್ತಕ ನಿಜಕ್ಕೂ ಸಂವಿಧಾನದ ಪುಸ್ತಕ ಹೌದೇ ಎಂದು ಜನಸಾಮಾನ್ಯರು ಅನುಮಾನಿಸುವಂತಾಗಿದೆ. ಯಾವುದೇ ಜಾತಿ, ಧರ್ಮ, ವರ್ಗಗಳನ್ನು ನೋಡದೆ ನ್ಯಾಯ ನೀಡಬೇಕು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಕಟ್ಟಲಾಗಿತ್ತು. ಇದೀಗ ನ್ಯಾಯದೇವತೆಗೆ ತನ್ನೆದುರು ನಿಂತಿರುವ ಉಮರ್ ಖಾಲಿದ್ರ ಧರ್ಮ ಸ್ಪಷ್ಟವಾಗಿ ಕಾಣುತ್ತಿರುವ ಕಾರಣಕ್ಕೇ ನ್ಯಾಯ ವಿಳಂಬವಾಗುತ್ತಿದೆಯೇ ಎಂದು ಜನರು ಅನುಮಾನ ಪಡುವಂತಾಗಿದೆ. ಒಂದು ರೀತಿಯಲ್ಲಿ ಕಳೆದ ಐದು ವರ್ಷಗಳಿಂದ ಯುಎಪಿಎ ಕಾಯ್ದೆಯ ಹೆಸರಿನಲ್ಲಿ ಉವರ್ ಖಾಲಿದ್ ಮೂಲಕ ನಮ್ಮ ನ್ಯಾಯವ್ಯವಸ್ಥೆಯೇ ‘ಅಕ್ರಮ ಬಂಧನ’ದಲ್ಲಿದೆ ಎಂದು ಕಾನೂನು ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಈ ದೇಶದಲ್ಲಿ ಜಾಮೀನು ಮಂಜೂರಾಗಿದ್ದರೂ 5,000ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳು ಶರತ್ತುಗಳನ್ನು ಪೂರೈಸಲಾಗದೆ ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಲಕ್ಷಾಂತರ ವಿಚಾರಣಾಧೀನ ಕೈದಿಗಳು ಅಪರಾಧ ಸಾಬೀತಾಗದಿದ್ದರೂ ಪರೋಕ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಸುಪ್ರೀಂಕೋರ್ಟ್ ಹಲವು ಬಾರಿ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಉಮರ್ ಖಾಲಿದ್ರ ಪ್ರಕರಣ ಬಂದಾಗ ಸುಪ್ರೀಂಕೋರ್ಟ್ನ ಕಣ್ಣೇಕೆ ಕುರುಡಾಯಿತು? ಉಮರ್ ಖಾಲಿದ್ರ ವಿಷಯದಲ್ಲಿ ದಿಲ್ಲಿ ಪೊಲೀಸರ ಆಮೆಗತಿ ತನಿಖೆ ಕಾನೂನಿನ ವೈಫಲ್ಯವೆನ್ನುವುದು ಸುಪ್ರೀಂಕೋರ್ಟ್ಗೆ ಅರ್ಥವಾಗಿಲ್ಲವೆ? ಪೊಲೀಸರ ಪೂರ್ವಾಗ್ರಹ ಪೀಡಿತ ತನಿಖೆಗೆ ಬಲಿಯಾಗಿ ಅಕ್ರಮ ಬಂಧನದಲ್ಲಿ ಐದು ವರ್ಷ ಕಳೆದಿರುವ ನ್ಯಾಯ ದೇವತೆಗೆ ನ್ಯಾಯ ನೀಡುವವರು ಯಾರು? ಈ ಪ್ರಶ್ನೆಗೆ ಉತ್ತರ ಯಾರಲ್ಲಿದೆ?
ಚುನಾವಣೆ ಹಿನ್ನೆಲೆ: ಮಹಿಳೆಯರಿಗೆ ರೂ. 10 ಸಾವಿರ ನೀಡಿ ಓಲೈಕೆಗೆ ಮುಂದಾದ ಅಸ್ಸಾಂ ಸರ್ಕಾರ!
ಗುವಾಹತಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಹಿಮಾಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಮಹಿಳೆಯರ ಸ್ವಯಂ-ಉದ್ಯೋಗ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ರಾಜ್ಯದ 35 ಜಿಲ್ಲೆಗಳಲ್ಲಿನ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ತಲಾ 10,000 ರೂ. ವಿತರಿಸಲು ಸರ್ಕಾರ ಮುಂದಾಗಿದ್ದು, ಚುನಾವಣೆ ಹಿನ್ನೆಲೆ 40 ಲಕ್ಷ ಫಲಾನುಭವಿಗಳ ಗುರಿ ತಲುಪುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ. ಮುಖ್ಯಮಂತ್ರಿಗಳ ಮಹಿಳಾ ಉದ್ಯಮಿತ ಅಭಿಯಾನ (ಎಂಎಂಯುಎ) ಯೋಜನೆಯಡಿ ಈಗಾಗಲೇ 15 ಲಕ್ಷ ಮಹಿಳೆಯರು 10,000 ರೂ. ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್ 1ರಂದು ಘೋಷಿಸಲಾದ ಈ ಯೋಜನೆಯಡಿ ಆರಂಭದಲ್ಲಿ 32 ಲಕ್ಷ ಮಹಿಳೆಯರಿಗೆ ನೆರವು ನೀಡುವ ಉದ್ದೇಶವಿತ್ತು. ನಂತರ ಕಳೆದ ವರ್ಷದ ಬಜೆಟ್ನಲ್ಲಿ ಈ ಗುರಿಯನ್ನು 40 ಲಕ್ಷಕ್ಕೆ ವಿಸ್ತರಿಸಲಾಯಿತು. ಇದುವರೆಗೆ ಎಂಟು ಲಕ್ಷ ಮಹಿಳೆಯರು ‘ಲಕ್ಷಾಧಿಪತಿ’ ಸ್ಥಾನಮಾನ ಪಡೆದಿದ್ದು, ಕುಟುಂಬಗಳ ಆದಾಯ ಹೆಚ್ಚುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. “ನಾರಿ ಶಕ್ತಿಯ ಸಬಲೀಕರಣ ಮತ್ತು ಅವರ ಕನಸುಗಳು ನನಸಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರೂಪತರ್ ಬಳಿಕ ಬೊಕ್ಕಾಹಾತ್ನಲ್ಲಿ 27 ಸಾವಿರಕ್ಕೂ ಅಧಿಕ ಸಹೋದರಿಯರು ತಲಾ 10,000 ನೆರವು ಪಡೆದಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಸಶಕ್ತರಾಗಿದ್ದು, 40 ಲಕ್ಷ ಲಕ್ಷಾಧಿಪತಿಗಳನ್ನು ರೂಪಿಸುವ ಗುರಿಗೆ ನಾವು ಸನಿಹದಲ್ಲಿದ್ದೇವೆ,” ಎಂದು ಮುಖ್ಯಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ವೆನೆಝುವೆಲಾದಿಂದ ಅಮೆರಿಕಕ್ಕೆ ಮಾರುಕಟ್ಟೆ ದರದಲ್ಲಿ 50 ದಶಲಕ್ಷ ಬ್ಯಾರಲ್ ತೈಲ: ಟ್ರಂಪ್
ವಾಷಿಂಗ್ಟನ್: ವೆನೆಝುವೆಲಾ ಮಧ್ಯಂತರ ಸರ್ಕಾರ 30 ರಿಂದ 50 ದಶಲಕ್ಷ ಬ್ಯಾರಲ್ ಉತ್ತಮ ಗುಣಮಟ್ಟದ ತೈಲವನ್ನು ಅಮೆರಿಕಕ್ಕೆ ಮಾರಾಟ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ. ಈ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಇಂಧನ ಕಾರ್ಯದರ್ಶಿ ಕ್ರಿಸ್ ರಿಟ್ ಅವರಿಗೆ ಸೂಚಿಸಿದ್ದೇನೆ ಎಂದು ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಬಹಿರಂಗಪಡಿಸಿದ್ದಾರೆ. ದಾಸ್ತಾನು ಹಡಗುಗಳ ಮೂಲಕ ಇದನ್ನು ತರಲಾಗುತ್ತದೆ. ನೇರವಾಗಿ ಅಮೆರಿಕದ ಅನ್ಲೋಡಿಂಗ್ ಡಾಕ್ ಗಳಿಗೆ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷರಾಗಿ ಹಣವನ್ನು ತಾವೇ ನಿಯಂತ್ರಿಸಲಿದ್ದೇವೆ ಎಂದು ಹೇಳಿಕೊಂಡಿರುವ ಅವರು, ವೆನೆಝುವೆಲಾ ಮತ್ತು ಅಮೆರಿಕದ ಜನತೆಯ ಪ್ರಯೋಜನಕ್ಕಾಗಿ ಇದನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ವೆನೆಝುವೆಲಾಗೆ ಸಂಬಂಧಿಸಿದಂತೆ ಶ್ವೇತಭವನ ರವಿವಾರ ಓವಲ್ ಆಫೀಸ್ ನಲ್ಲಿ ತೈಲ ಕಂಪನಿ ಮುಖ್ಯಸ್ಥರ ಸಭೆ ಆಯೋಜಿಸಿದೆ. ಎಕ್ಸಾನ್, ಚೆರ್ವಾನ್ ಮತ್ತು ಕೊಂಕೊಫಿಲಿಪ್ಸ್ ಕಂಪನಿಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡನೆಗೆ ಸಜ್ಜು
ಹೊಸದಿಲ್ಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವ ನಿರೀಕ್ಷೆಯಿದ್ದು, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರವಿವಾರ ಬಜೆಟ್ ಮಂಡನೆಯಾಗುತ್ತಿದೆ. ರಾಷ್ಟ್ರಪತಿ ಭಾಷಣದೊಂದಿಗೆ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದೆ. ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ಬುಧವಾರ ಕೈಗೊಳ್ಳಲಿದ್ದು, ಫೆಬ್ರವರಿ 1ರಂದೇ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ 2017ರಿಂದೀಚೆಗೆ ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಾ ಬಂದಿದೆ. ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಈ ಸಂಪ್ರದಾಯವನ್ನು ಆರಂಭಿಸಿದ್ದು, ಆ ಬಳಿಕ ಸರ್ಕಾರ ಇದನ್ನೇ ಮುಂದುವರಿಸಿಕೊಂಡು ಬಂದಿದೆ. 2017ಕ್ಕೆ ಮುನ್ನ ಫೆಬ್ರವರಿ 28ರಂದು ಬಜೆಟ್ ಮಂಡನೆಯಾಗುತ್ತಿತ್ತು. ಈ ಬಾರಿ ಫೆಬ್ರವರಿ 1 ರವಿವಾರವಾಗಿದ್ದು, ಇದು ಗುರು ರವಿದಾಸ್ ಅವರ ಜಯಂತಿಯ ದಿನವೂ ಆಗಿದೆ. ಇದು ನಿರ್ಬಂಧಿತ ರಜಾದಿನ. ರಜಾದಿನವಾಗಿದ್ದರಿಂದ ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆ ಮುಚ್ಚಿರುತ್ತದೆ. ಜನವರಿ 29ರಂದು ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಬಳಿಕ ಜನವರಿ 30 ಮತ್ತು 31 ರಜಾದಿನವಾಗಿರುತ್ತದೆ. ಮೊದಲ ಹಂತದಲ್ಲಿ ಬಜೆಟ್ ಅಧಿವೇಶನ ಮೂರು ವಾರಗಳ ಕಾಲ ನಡೆಯಲಿದ್ದು, ಎರಡನೇ ಭಾಗ ನಾಲ್ಕು ವಾರ ನಡೆಯುತ್ತದೆ.
Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ, ಮುಂದುವರಿದ ಶೀತಗಾಳಿ
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶೀತಗಾಳಿ ಹಾಗೂ ಮೋಡ ಕವಿದ ವಾತಾವರಣವಿದ್ದು, ಕನಿಷ್ಠ ತಾಪಮಾನ ಕುಸಿತವಾಗುತ್ತಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೈ ಕೊರೆಯುವ ಚಳಿ ಇದೆ. ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಭಾರೀ ಚಳಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕನಿಷ್ಠ ತಾಪಮಾನವು 11.6 ಡಿಗ್ರಿ ಸೆಲ್ಸಿಯಸ್ ಧಾರವಾಡ, ಗದಗ
ಕಾಫಿ ದರ ಕುಸಿತಕ್ಕೆ ಬೆಳೆಗಾರ ಕಂಗಾಲು
ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಬಸ್ಟಾ ಕಾಫಿ ಫಸಲು ಬಂದಿದೆ. ಆದರೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇಂಡೋನೇಷ್ಯಾ, ವಿಯೆಟ್ನಾಂ, ಬ್ರೆಜಿಲ್ನಿಂದ ಕಾಫಿ ಬೀಜಗಳ ಪೂರೈಕೆ ಹೆಚ್ಚಾಗಿದೆ. ಇದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಕಳೆದ ವರ್ಷ 13 ಸಾವಿರ ರೂ. ಇದ್ದ 50 ಕೆಜಿ ರೋಬಸ್ಟಾ ಚೆರಿ ಚೀಲದ ಬೆಲೆ ಈಗ 9300 ರೂ.ಗೆ ಇಳಿದಿದೆ. ಇದು ತೋಟ ನಿರ್ವಹಣೆಗೆ ಸಮಸ್ಯೆಯಾಗಿದೆ.
ಗೃಹಲಕ್ಷ್ಮಿ 24ನೇ ಕಂತಿನ ಹಣ ಜಮಾ: ನಿಮ್ಮ ಖಾತೆಗೆ ಬಂದಿದ್ಯಾ? ಬರದಿದ್ದರೆ ಹೀಗೆ ಮಾಡಿ
ರಾಜ್ಯದ ಲಕ್ಷಾಂತರ ಮಹಿಳೆಯರು ಕಳೆದ ಕೆಲ ದಿನಗಳಿಂದ ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಸಿಕ್ಕಿದೆ. ಪ್ರತಿ ತಿಂಗಳು ತಪ್ಪದೇ ಬರುವ 2,000 ರೂಪಾಯಿಗಳ ‘ಗೃಹಲಕ್ಷ್ಮಿ’ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇದೀಗ ಹೊಸ ವರ್ಷದ (2026) ಆರಂಭದಲ್ಲೇ ರಾಜ್ಯ ಸರ್ಕಾರ ಯಜಮಾನಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಹಲವರ ಮೊಬೈಲ್ಗೆ ‘Credited’ ಎಂಬ ಮೆಸೇಜ್ ಕೂಡ ಬಂದಿದೆ. ಹಾಗಾದರೆ, ನಿಮ್ಮ ಖಾತೆಗೆ ಹಣ ಬಂದಿದೆಯಾ? ... Read more The post ಗೃಹಲಕ್ಷ್ಮಿ 24ನೇ ಕಂತಿನ ಹಣ ಜಮಾ: ನಿಮ್ಮ ಖಾತೆಗೆ ಬಂದಿದ್ಯಾ? ಬರದಿದ್ದರೆ ಹೀಗೆ ಮಾಡಿ appeared first on Karnataka Times .
ಸಂಪಾದಕೀಯ | ಅರಣ್ಯ ಭೂಮಿ ಗುತ್ತಿಗೆ ನೀಡುವುದು ಬೇಡ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉದ್ಯಮಿಗಳು ವೃತ್ತಿಪರ ಚಿಂತಕರಾಗಬೇಕು: ಯಝ್ದಿನಿ ಫಿರೋಝ್
ಬಿಸಿಸಿಐ ಯುವ ಘಟಕಕ್ಕೆ ಚಾಲನೆ
ಮೈಸೂರು ವಿವಿ ಬಲವರ್ಧನೆಗೆ ವಿಶೇಷ ಆದ್ಯತೆ : ಸಿಎಂ ಸಿದ್ದರಾಮಯ್ಯ
ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಅಭಿನಂದನಾ ಕಾರ್ಯಕ್ರಮ
ಬಿಸಿಸಿಐ ಯುವ ಘಟಕಕ್ಕೆ ಚಾಲನೆ| ಉದ್ಯಮಿಗಳು ವೃತ್ತಿಪರ ಚಿಂತಕರಾಗಬೇಕು: ಯಝ್ದಿನಿ ಫಿರೋಝ್
ಮಂಗಳೂರು: ಜಗತ್ತು ಕೇವಲ ಕಠಿಣ ಪರಿಶ್ರಮಕ್ಕೆ ಮಾತ್ರವಲ್ಲದೆ ವೃತ್ತಿಪರ ಚಿಂತಕರಿಗೆ ತಮ್ಮ ದುಡಿಮೆಗೆ ಪ್ರತಿಫಲ ನೀಡುತ್ತದೆ. ಉದ್ಯಮಿಗಳು ವೃತ್ತಿಪರ ಚಿಂತಕರಾಗಿರುವುದು ಅಗತ್ಯ ಎಂದು ಖ್ಯಾತ ಉದ್ಯಮಿ ಯಝ್ದಿನಿ ಫಿರೋಝ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಓಶಿಯನ್ ಪರ್ಲ್ನಲ್ಲಿ ಮಂಗಳವಾರ ನಡೆದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಯುವ ವಿಭಾಗ - ಬಿಸಿಸಿಐ ಯೂತ್ ವಿಂಗ್ನ ಚಾಲನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಬ್ಯಾರಿ ಸಮುದಾಯದ ಉದ್ಯಮಿಗಳಿಗೆ ಭಾರತದಲ್ಲಿ ಮುಸ್ಲಿಮರನ್ನು ವ್ಯಾಪಾರ ಮತ್ತು ಉದ್ಯಮದಲ್ಲಿ ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಅವರು ಹೇಳಿದರು. ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಸಿಸಿಐ ಯುವ ವಿಭಾಗಕ್ಕೆ ಸಂಯೋಜಕರಾಗಿ ಝೀಶನ್ ರಮ್ಲಾನ್, ಅಸ್ಸರ್ ರಝಾಕ್, ಅಯಾನ್ ಹಾರಿಸ್ ಮತ್ತು ಮುಹಮ್ಮದ್ ಶಹಬಾಝ್ ಇದೇ ಸಂದರ್ಭದಲ್ಲಿ ನೇಮಕಗೊಂಡರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ ಮತ್ತು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು. ಬದ್ರುದ್ದೀನ್ ಪಣಂಬೂರು ಕಿರಾಅತ್ ಪಠಿಸಿದರು. ಈ ಕಾರ್ಯಕ್ರಮದ ಮೂಲಕ ಬ್ಯಾರಿ ಸಮುದಾಯದ ಮುಖಂಡರು, ವೃತ್ತಿಪರರು ಮತ್ತು ಒಟ್ಟು ಸೇರಿ ಉದ್ಯಮಶೀಲತೆ, ಸಮುದಾಯದ ಬೆಳವಣಿಗೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವ್ಯಾಪಾರದ ಪಾತ್ರದ ಕುರಿತು ಚರ್ಚಿಸಿದರು. ಬಿಸಿಸಿಐ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿದರು.
Chitradurga | ಮರಕ್ಕೆ ಬೊಲೆರೊ ವಾಹನ ಢಿಕ್ಕಿ; ನಾಲ್ವರು ಕಾರ್ಮಿಕರು ಮೃತ್ಯು
ಚಿತ್ರದುರ್ಗ : ಮರಕ್ಕೆ ಬೊಲೆರೊ ವಾಹನ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿರುವುದು ವರದಿಯಾಗಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ಇನ್ನುಳಿದ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Iran Protest: ಇರಾನ್ ಪ್ರತಿಭಟನೆ ಭೀಕರ, 35 ಜನರು ಹಿಂಸಾಚಾರಕ್ಕೆ ಬಲಿ
ಇರಾನ್ ನೆಲದಲ್ಲಿ ಭುಗಿಲೆದ್ದಿರುವ ಹೋರಾಟ ಭೀಕರ ಸ್ವರೂಪ ಪಡೆದುಕೊಂಡಿದೆ, ಇರಾನ್ ಜನ ತಮ್ಮದೇ ದೇಶದಲ್ಲಿ ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದಾರೆ. ಭೀಕರವಾದ ಹಣದುಬ್ಬರ ಮತ್ತು ಸೂಕ್ತ ಆರ್ಥಿಕ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಹೋರಾಟ ಭುಗಿಲೆದ್ದಿದೆ. ಹಾಗೇ ಅಲ್ಲಿ ಹತ್ತಾರು ವರ್ಷಗಳಿಂದ ಅಧಿಕಾರ ಹಿಡಿದಿರುವ ಸರ್ವಾಧಿಕಾರಿ ವಿರುದ್ಧ ಕೂಡ ರೊಚ್ಚಿಗೆದ್ದಿದ್ದಾರೆ ಅಲ್ಲಿನ ಜನ. ಇಷ್ಟೆಲ್ಲಾ ಬಡಿದಾಟದ ನಡುವೆ
Venezuela ಆಯ್ತು, ಈಗ ಗ್ರೀನ್ ಲ್ಯಾಂಡ್ ಮೇಲೆ ಡೊನಾಲ್ಡ್ ಟ್ರಂಪ್ ಕಣ್ಣು?
ತೈಲ ಸಂಪದ್ಭರಿತ ವೆನೆಜುಝುಲಾ ಮೇಲೆ ದಾಳಿ ನಡೆಸಿದ ನಂತರ, ಅಮೆರಿಕ ಈಗ ಗ್ರೀನ್ ಲ್ಯಾಂಡ್ ಮೇಲೂ ಕಣ್ಣು ಹಾಕಿದೆ. ವಿಶ್ವದ ಅತ್ಯಂತ ದೊಡ್ಡ ದ್ವೀಪವಾಗಿರುವ ಗ್ರೀನ್ ಲ್ಯಾಂಡ್ ಡೆನ್ಮಾರ್ಕ್ನ ಸ್ವಾಯತ್ತ ಪ್ರದೇಶವಾಗಿದ್ದು, ಭೌಗೋಳಿಕವಾಗಿ ಉತ್ತರ ಅಮೆರಿಕಕ್ಕೆ ಹತ್ತಿರದಲ್ಲಿದೆ. ಇದೇ ಕಾರಣದಿಂದ ಅಮೆರಿಕ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಜನವರಿ 4ರಂದು ಡೆನ್ಮಾರ್ಕ್ ಪ್ರಧಾನಮಂತ್ರಿ ಅಮೆರಿಕಕ್ಕೆ “ಬೆದರಿಕೆ ಹಾಕುವುದನ್ನು ನಿಲ್ಲಿಸಿ” ಎಂದು ಕರೆ ನೀಡಿದ್ದರೂ, ಕೇವಲ 57,000 ಜನಸಂಖ್ಯೆಯ ಗ್ರೀನ್ ಲ್ಯಾಂಡ್ ಯುನೈಟೆಡ್ ಸ್ಟೇಟ್ಸ್ನ ಭಾಗವಾಗಬೇಕು ಎಂಬ ತನ್ನ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದರು. “ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ನಮಗೆ ಗ್ರೀನ್ ಲ್ಯಾಂಡ್ ಅಗತ್ಯವಿದೆ. ಡೆನ್ಮಾರ್ಕ್ಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. 20 ದಿನಗಳಲ್ಲಿ ಗ್ರೀನ್ ಲ್ಯಾಂಡ್ ಬಗ್ಗೆ ಮಾತನಾಡೋಣ” ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರು, “ನಮಗೆ ಗ್ರೀನ್ ಲ್ಯಾಂಡ್ ಬೇಕು, ರಕ್ಷಣೆಗಾಗಿ ನಮಗೆ ಅದು ಬೇಕು” ಎಂದು ಹೇಳಿದ್ದರು. ►ಅಮೆರಿಕದ ಉಪಸ್ಥಿತಿ ಏನು? ವಾಯುವ್ಯ ಗ್ರೀನ್ ಲ್ಯಾಂಡ್ ನಲ್ಲಿರುವ ಪಿಟುಫಿಕ್ ಬಾಹ್ಯಾಕಾಶ ನೆಲೆಯಲ್ಲಿ ಅಮೆರಿಕ ತನ್ನ ಉಪಸ್ಥಿತಿಯನ್ನು ಕಾಯ್ದುಕೊಂಡಿದೆ. 1951ರಲ್ಲಿ ಅಮೆರಿಕ ಮತ್ತು ಡೆನ್ಮಾರ್ಕ್ ನಡುವೆ ನಡೆದ ಒಪ್ಪಂದವು, ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ಸೂಚನೆ ನೀಡುವವರೆಗೆ, ಗ್ರೀನ್ ಲ್ಯಾಂಡ್ ನಲ್ಲಿ ಮುಕ್ತವಾಗಿ ಸಂಚರಿಸುವ ಮತ್ತು ಮಿಲಿಟರಿ ನೆಲೆಗಳನ್ನು ನಿರ್ಮಿಸುವ ಹಕ್ಕನ್ನು ಅಮೆರಿಕಕ್ಕೆ ನೀಡಿತ್ತು. ರಷ್ಯಾದ ನೌಕಾಪಡೆಯ ಹಡಗುಗಳು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳು ಬಳಸುವ ದ್ವೀಪ–ಐಸ್ಲ್ಯಾಂಡ್–ಬ್ರಿಟನ್ ನಡುವಿನ ನೀರನ್ನು ವೀಕ್ಷಿಸಲು ರಡಾರ್ ಗಳನ್ನು ಸ್ಥಾಪಿಸುವುದು ಸೇರಿದಂತೆ, ಆರ್ಕ್ಟಿಕ್ ದ್ವೀಪದಲ್ಲಿ ತನ್ನ ಅಸ್ತಿತ್ವದಲ್ಲಿರುವ ಮಿಲಿಟರಿ ಉಪಸ್ಥಿತಿಯನ್ನು ವಿಸ್ತರಿಸಲು ಅಮೆರಿಕ ಆಸಕ್ತಿ ವ್ಯಕ್ತಪಡಿಸಿದೆ. ಆರ್ಕ್ಟಿಕ್ ನೀರಿನಲ್ಲಿ ಹೆಚ್ಚಿನ ಚೀನೀ ಸಾಗಣೆ ರಷ್ಯಾ ಬಳಿಯ ಪೆಸಿಫಿಕ್ ಆರ್ಕ್ಟಿಕ್ ಮತ್ತು ಉತ್ತರ ಸಮುದ್ರ ಮಾರ್ಗದಲ್ಲಿದೆ ಎಂದು ದತ್ತಾಂಶ ತೋರಿಸುತ್ತದೆ. ಆರ್ಕ್ಟಿಕ್ ನಲ್ಲಿ ಹೆಚ್ಚಿನ ರಷ್ಯಾದ ಸಾಗಣೆ ರಷ್ಯಾದ ಸ್ವಂತ ಕರಾವಳಿಯ ಸುತ್ತಲೂ ಇರುತ್ತದೆ. ಆದರೆ ವಿಶ್ಲೇಷಕರು, ರಷ್ಯಾದ ಜಲಾಂತರ್ಗಾಮಿ ನೌಕೆಗಳು ಹೆಚ್ಚಾಗಿ ಗ್ರೀನ್ ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಯುಕೆ ನಡುವಿನ ನೀರಿನಲ್ಲಿ ಸಂಚರಿಸುತ್ತವೆ ಎಂದು ಹೇಳುತ್ತಾರೆ. ►ಖನಿಜ, ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತು ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ಗಿಂತ ನ್ಯೂಯಾರ್ಕ್ ಗೆ ಹತ್ತಿರದಲ್ಲಿರುವ ಈ ದ್ವೀಪದ ರಾಜಧಾನಿ ನೂಕ್ ಅಪಾರ ಖನಿಜ, ತೈಲ ಮತ್ತು ನೈಸರ್ಗಿಕ ಅನಿಲ ಸಂಪತ್ತನ್ನು ಹೊಂದಿದೆ. ಆದರೆ ಅಭಿವೃದ್ಧಿ ನಿಧಾನವಾಗಿದ್ದು, ಗಣಿಗಾರಿಕೆ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆ ಬಹಳ ಸೀಮಿತವಾಗಿದೆ. ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ಭೂವೈಜ್ಞಾನಿಕ ಸಮೀಕ್ಷೆ–2023ರ ಪ್ರಕಾರ, ಯುರೋಪಿಯನ್ ಆಯೋಗ “ನಿರ್ಣಾಯಕ ಕಚ್ಚಾ ವಸ್ತುಗಳು” ಎಂದು ಪರಿಗಣಿಸಿರುವ 34 ಖನಿಜಗಳ ಪೈಕಿ 25 ಖನಿಜಗಳು ಈ ದ್ವೀಪದಲ್ಲಿ ಕಂಡುಬಂದಿವೆ. ಇದರಲ್ಲಿ ಗ್ರ್ಯಾಫೈಟ್, ಲಿಥಿಯಂ ಹಾಗೂ ವಿದ್ಯುತ್ ವಾಹನಗಳಲ್ಲಿ (EV) ಬಳಸುವ ಅಪರೂಪದ ಅಂಶಗಳು ಸೇರಿವೆ. ಆದರೆ ಪರಿಸರ ಕಾರಣಗಳಿಂದ ಗ್ರೀನ್ ಲ್ಯಾಂಡ್ ತೈಲ ಮತ್ತು ನೈಸರ್ಗಿಕ ಅನಿಲ ಹೊರತೆಗೆಯುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಇಲ್ಲಿನ ಆರ್ಥಿಕತೆ ಮುಖ್ಯವಾಗಿ ಮೀನುಗಾರಿಕೆಗೆ ಅವಲಂಬಿತವಾಗಿದೆ. ರಫ್ತುಗಳಲ್ಲಿ ಮೀನುಗಾರಿಕೆಯ ಪಾಲು ಶೇಕಡಾ 95ಕ್ಕಿಂತ ಹೆಚ್ಚಾಗಿದೆ. ಜೊತೆಗೆ, ಡೆನ್ಮಾರ್ಕ್ನಿಂದ ದೊರೆಯುವ ವಾರ್ಷಿಕ ಸಬ್ಸಿಡಿಗಳ ಮೇಲೆ ಗ್ರೀನ್ ಲ್ಯಾಂಡ್ ಅವಲಂಬಿತವಾಗಿದ್ದು, ದ್ವೀಪದ ಸಾರ್ವಜನಿಕ ಬಜೆಟ್ನ ಸರಿಸುಮಾರು ಅರ್ಧದಷ್ಟು ಭಾಗವನ್ನು ಇದು ಒಳಗೊಂಡಿದೆ. ►ಗ್ರೀನ್ ಲ್ಯಾಂಡ್ ನ ಸ್ಥಿತಿ ಡೆನ್ಮಾರ್ಕ್ನ ಹಿಂದಿನ ವಸಾಹತು ದ್ವೀಪವಾದ ಗ್ರೀನ್ ಲ್ಯಾಂಡ್ 1953ರಲ್ಲಿ ನಾರ್ಡಿಕ್ ಸಾಮ್ರಾಜ್ಯಕ್ಕೆ ಸೇರಿದ್ದು, ಡ್ಯಾನಿಶ್ ಸಂವಿಧಾನಕ್ಕೆ ಒಳಪಟ್ಟಿದೆ. ಅಂದರೆ ದ್ವೀಪದ ಕಾನೂನು ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ ಸಂವಿಧಾನಾತ್ಮಕ ತಿದ್ದುಪಡಿ ಅಗತ್ಯವಿರುತ್ತದೆ. 2009ರಲ್ಲಿ ಗ್ರೀನ್ ಲ್ಯಾಂಡ್ ಗೆ ವ್ಯಾಪಕ ಸ್ವ-ಆಡಳಿತ ಸ್ವಾಯತ್ತತೆ ನೀಡಲಾಗಿದ್ದು, ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಡೆನ್ಮಾರ್ಕ್ ನಿಂದ ಸ್ವಾತಂತ್ರ್ಯ ಘೋಷಿಸುವ ಹಕ್ಕೂ ಇದರಲ್ಲಿ ಸೇರಿದೆ. ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಗ್ರೀನ್ ಲ್ಯಾಂಡ್ ನಿವಾಸಿಗಳ ಮೇಲೆ ನಡೆದ ಐತಿಹಾಸಿಕ ದೌರ್ಜನ್ಯಗಳ ಬಹಿರಂಗಪಡಿಸುವಿಕೆಯ ನಂತರ, ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಆದರೆ ಟ್ರಂಪ್ ತೋರಿಸಿರುವ ಆಸಕ್ತಿಯು ಗ್ರೀನ್ ಲ್ಯಾಂಡ್ ನೊಂದಿಗಿನ ಸಂಬಂಧವನ್ನು ಸುಧಾರಿಸಲು ಡೆನ್ಮಾರ್ಕ್ ಅನ್ನು ಪ್ರೇರೇಪಿಸಿದೆ. ಗ್ರೀನ್ ಲ್ಯಾಂಡ್ ನ 57,000 ನಿವಾಸಿಗಳಲ್ಲಿ ಬಹುಪಾಲು ಜನರು ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ ಎಂದು ಸಮೀಕ್ಷೆಗಳು ತೋರಿಸುತ್ತವೆ. ಆದರೆ ಡೆನ್ಮಾರ್ಕ್ನಿಂದ ತಕ್ಷಣ ಸ್ವಾತಂತ್ರ್ಯ ಪಡೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಆತಂಕವೂ ಇಲ್ಲಿನ ಜನರಲ್ಲಿ ಇದೆ. ►ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣಿಟ್ಟಿದ್ದು ಇದೇ ಮೊದಲಲ್ಲ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಡೆನ್ಮಾರ್ಕ್ ನಿಂದ ದ್ವೀಪವನ್ನು ಖರೀದಿಸುವ ಆಸಕ್ತಿಯನ್ನು ಅವರು ವ್ಯಕ್ತಪಡಿಸಿದ್ದರು, ಆದರೆ ಅದನ್ನು ತಿರಸ್ಕರಿಸಲಾಗಿತ್ತು. ಈಗಿನ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿವೆ. ಗ್ರೀನ್ ಲ್ಯಾಂಡ್ ಪ್ರಧಾನಿ ಜೆನ್ಸ್–ಫ್ರೆಡೆರಿಕ್ ನೀಲ್ಸನ್, “ಈಗ ಇದು ಸಾಕು. ಯಾವುದೇ ಒತ್ತಡವಿಲ್ಲ. ಯಾವುದೇ ಆಕ್ಷೇಪಣೆಗಳಿಲ್ಲ. ಸ್ವಾಧೀನದ ಕಲ್ಪನೆಗಳಿಲ್ಲ. ನಾವು ಸಂವಾದಕ್ಕೂ ಚರ್ಚೆಗೂ ಮುಕ್ತರಾಗಿದ್ದೇವೆ. ಆದರೆ ಎಲ್ಲವೂ ಸರಿಯಾದ ಮಾರ್ಗಗಳ ಮೂಲಕ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ನೀಡುತ್ತಲೇ ನಡೆಯಬೇಕು” ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಟ್ರಂಪ್ ಹೇಳಿಕೆಗಳಿಗೆ ಡೆನ್ಮಾರ್ಕ್ ಕಠಿಣ ಪ್ರತಿಕ್ರಿಯೆ ನೀಡಿದೆ. “ಅಮೆರಿಕ ಗ್ರೀನ್ ಲ್ಯಾಂಡ್ ಅನ್ನು ನಿಯಂತ್ರಿಸಬೇಕು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಬೆದರಿಕೆ ಹಾಕುವುದನ್ನು ಅಮೆರಿಕ ನಿಲ್ಲಿಸಬೇಕು” ಎಂದು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಜನವರಿ 4ರಂದು ಹೇಳಿದ್ದಾರೆ. ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ಗೆ ಯುರೋಪಿಯನ್ ನಾಯಕರು ಜಂಟಿ ಹೇಳಿಕೆಯ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು, ಆ ಪ್ರದೇಶದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ಗಳ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಗ್ರೀನ್ ಲ್ಯಾಂಡ್ ಅಲ್ಲಿನ ಜನರಿಗೆ ಸೇರಿದ್ದು ಎಂದು ಪ್ರತಿಪಾದಿಸಿದ ಫ್ರಾನ್ಸ್, ಜರ್ಮನಿ, ಇಟಲಿ, ಪೋಲೆಂಡ್, ಸ್ಪೇನ್, ಬ್ರಿಟನ್ ಮತ್ತು ಡೆನ್ಮಾರ್ಕ್ ನಾಯಕರು, ಗ್ರೀನ್ ಲ್ಯಾಂಡ್ ಮತ್ತು ಡೆನ್ಮಾರ್ಕ್ಗೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಅವರಿಗೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಹಾಪುರ | ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾದರೆ ಕಠಿಣ ಕ್ರಮ: ಶರಣಪ್ಪ ಸಲಾದಪುರ
ಶಹಾಪುರ : ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತ ಆದೇಶ ಹೊರಡಿಸುವ ಮೂಲಕ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಭಾಗವಾಗಿ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು. ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆಯೋಜಿಸಿದ್ದ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಗ್ರಾಮಗಳ ಕಿರಾಣಿ ಅಂಗಡಿ, ಪಾನ್ಶಾಪ್ಗಳಲ್ಲಿ ಅಕ್ರಮ ಮದ್ಯ ಮಾರಾಟ ಅತಿಯಾಗಿ ನಡೆಯುತ್ತಿದೆ. ಸುಲಭವಾಗಿ ಮದ್ಯ ದೊರಕುತ್ತಿರುವುದರಿಂದ ಸಮಾಜದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಕುಟುಂಬಗಳ ಮನಶಾಂತಿ ಮತ್ತು ನೆಮ್ಮದಿ ಭಂಗವಾಗುತ್ತಿದೆ ಎಂದು ಅವರು ಹೇಳಿದರು. ಹಳ್ಳಿಗಳಲ್ಲಿ ಸಿಗುವ ಮದ್ಯ ಅಸಲಿಯೇ ಅಥವಾ ನಕಲಿಯೇ ಎಂಬುದು ಗೊತ್ತಿಲ್ಲ. ಇದರಿಂದ ಮದ್ಯ ಸೇವಿಸುವ ವ್ಯಕ್ತಿಯ ಜೊತೆಗೆ ಆತನ ಕುಟುಂಬವೂ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದೆ. ಹೀಗಾಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಯಬೇಕು. ಇದಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಗ್ರಾಮಗಳಲ್ಲಿ ಮದ್ಯ ಸೇವನೆಯಿಂದ ಅನೇಕ ಯುವಕರು ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರವಾನಗಿ ಇರುವ ಸ್ಥಳಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡಲು ಯಾವುದೇ ಹಕ್ಕು ಬಾರ್ ಮಾಲೀಕರಿಗೆ ಇಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹ ಬಾರ್ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ಮದ್ಯಪಾನ ಮುಕ್ತ ಗ್ರಾಮ ಅಭಿಯಾನಕ್ಕೆ ಸಹಕಾರ ನೀಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಹಾಗೂ ಗ್ರಾಮ ಪಂಚಾಯತ್ ಮುಖಂಡರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಆರೋಗ್ಯವೇ ಪ್ರತಿಯೊಬ್ಬನಿಗೂ ಅತಿ ಮುಖ್ಯ. ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟಕರ. ಆದ್ದರಿಂದ ಯುವಕರು ಹಾಗೂ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಪ್ರಜ್ಞಾವಂತರು ಹಾಗೂ ಮಹಿಳೆಯರು ಮದ್ಯಪಾನ ಮುಕ್ತ ಗ್ರಾಮ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಮದ್ಯವ್ಯಾಸನಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಕೆಕೆಆರ್ಡಿಬಿ ಅನುದಾನದಲ್ಲಿ ಒಂದು ಕೋಟಿ ರೂ. ಒದಗಿಸಲಾಗುವುದು ಎಂದು ಸಚಿವರು ಘೋಷಿಸಿದರು. ಈ ಸಂದರ್ಭದಲ್ಲಿ 2024–25ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಉಕ್ಕಿನಾಳ ಗ್ರಾಮದಿಂದ ಯಲ್ಲಮ್ಮ ಗುಡಿಗೆ ಹೋಗುವ ರಸ್ತೆ (ಯಡ್ರಾಮಿ ಗಡಿಭಾಗ), 2025–26ನೇ ಸಾಲಿನ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ಉಕ್ಕಿನಾಳ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಮದ್ಯಪಾನ ಮತ್ತು ವ್ಯಸನ ಮುಕ್ತ ಗ್ರಾಮ ಅಭಿಯಾನ ಜಾರಿಗೊಳಿಸಲಾಗುವುದು. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮದ್ಯ ಸೇವಿಸುವವರನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಿಳಿವಳಿಕೆ ನೀಡುವ ಮೂಲಕ ತಪ್ಪು ದಾರಿಗೆ ಹೋಗದಂತೆ ತಡೆಯಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಜನರು ಸ್ವಯಂಪ್ರೇರಿತರಾಗಿ ಕಡಿವಾಣ ಹಾಕಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಡಿಒ ಮಡಿವಾಳಪ್ಪ ಮುದ್ನೂರು, ಗ್ರಾಮ ಪಂಚಾಯತ್ ಅಧ್ಯಕ್ಷ ಗೇನುಸಿಂಗ್ ರಾಠೋಡ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ದೀರ್ಘಾವಧಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ; ಹಳೆಯ ಫೊಟೋಗಳನ್ನು ನೋಡಿ...
Delete Edit Delete Edit
2ನೇ ಮದುವೆಗೆ ಸಿದ್ಧತೆ, ಭಾರತದ ಸ್ಟಾರ್ ಕ್ರಿಕೆಟರ್ ಬಾಳಲ್ಲಿ ತಂಗಾಳಿ...
2ನೇ ಮದುವೆ.. 3ನೇ ಮದುವೆ... ಹೀಗೆ ದುಡ್ಡು ಇದ್ದವರಿಗೆ ಪದೇ ಪದೇ ಮದುವೆ ಆಗುತ್ತಲೇ ಇರುತ್ತೆ ಎಂದು ಜನಸಾಮಾನ್ಯರು ಗೊಣಗುತ್ತಲೇ ಇರುತ್ತಾರೆ. ಅದರಲ್ಲೂ ಡಿವೋರ್ಸ್ &ಮದುವೆ ಸಂಬಂಧ ಮುರಿದುಕೊಳ್ಳುವ ರೂಢಿ ದುಡ್ಡು ಇದ್ದವರಿಗೆ ಜಾಸ್ತಿ ಅನ್ನೋ ಮಾತು ಇದೆ. ಈ ಎಲ್ಲಾ ಚರ್ಚೆಗಳ ನಡುವೆ ಮದುವೆ ಹಂತಕ್ಕೆ ಹೋಗಿ ಸಂಬಂಧ ಕಡಿದುಕೊಂಡ ಜೋಡಿಗಳು ಕೆಲ ದಿನಗಳ
Kerala | Abu Dhabiಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಸಹೋದರರು, ಮಹಿಳೆ ಮೃತ್ಯು
ಪೋಷಕರ ಸ್ಥಿತಿ ಗಂಭೀರ
ಜಗತ್ತಿನ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್ ಕಣ್ಣು, ಯುರೋಪ್ ನೆಲದಲ್ಲಿ ಭಯ ಶುರು! Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದೊಂದು ವಿವಾದ ಮೈಮೇಲೆ ಹಾಕಿಕೊಂಡು, ಇಡೀ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ವೆನಿಜುಯೆಲಾ ಘಟನೆ ನಂತರ ಇಡೀ ಪ್ರಪಂಚಕ್ಕೆ ಟ್ರಂಪ್ ಅವರ ಕ್ಷಣಕ್ಷಣದ ನಿರ್ಧಾರದ ಬಗ್ಗೆಯೂ ಕುತೂಹಲ ಮೂಡುವ ರೀತಿ ಮಾಡಿದೆ. ಯಾವ ಕ್ಷಣದಲ್ಲಿ ಅಮೆರಿಕ ಮತ್ತೊಂದು ದೇಶದ ಮೇಲೆ ಎರಗುತ್ತೋ? ಎಂಬ ಚರ್ಚೆ ಕೂಡ
ಈಗ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು! ಅತ್ಯಂತ ವಿರಳ ಖನಿಜಗಳ ನಿಧಿಯ ಮೇಲೆ ಕಣ್ಣು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಡೆನ್ಮಾರ್ಕ್ ಸ್ವಾಯತ್ತ ಪ್ರದೇಶವಾದ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟದ ಹಲವು ದೇಶಗಳು ಈ ನಡೆಯನ್ನು ಖಂಡಿಸಿವೆ. ಗ್ರೀನ್ ಲ್ಯಾಂಡ್ ಅದರ ಜನರಿಗೆ ಸೇರಿದ್ದು ಎಂದು ಯುರೋಪಿಯನ್ ನಾಯಕರು ಹೇಳಿದ್ದಾರೆ. ಆರ್ಕ್ಟಿಕ್ ಪ್ರದೇಶದ ಕಾರ್ಯತಂತ್ರದ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.
ಬೀದರ್ | ವಿಬಿ-ಜಿ ರಾಮ್ ಜಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಬೀದರ್ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ, ಕೇವಲ ಸರ್ಕಾರದ ಆಣತಿಯ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ, ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರು ಹಾಗೂ ಬಡ ರೈತರು ತಮ್ಮ ಜೀವನೋಪಾಯಕ್ಕಾಗಿ ಈ ಕಾಯ್ದೆಯ ಮೇಲೆ ಅವಲಂಬಿತರಾಗಿದ್ದರು ಎಂದು ತಿಳಿಸಲಾಗಿದೆ. ಆದರೆ 2025ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ, ಸರ್ಕಾರದ ಆಣತಿಯಂತೆ ನಡೆಯುವ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಆರೋಪಿಸಲಾಗಿದೆ. ಈ ಹೊಸ ಕಾಯ್ದೆಯಿಂದ ಕೃಷಿ ಋತುವಿನಲ್ಲಿ 60 ದಿನಗಳ ಕೆಲಸ ನಿರ್ಬಂಧಿತವಾಗಿದ್ದು, 125 ದಿನಗಳ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೂಲಿಕಾರರು ಕೆಲಸದಿಂದ ವಂಚಿತರಾಗುವಂತಾಗಿದೆ ಎಂದು ದೂರಲಾಗಿದೆ. ಜೊತೆಗೆ, ಯಂತ್ರ ಬಳಕೆ ಮತ್ತು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಅಂಶಗಳು ಈ ಯೋಜನೆಯಲ್ಲಿ ಸೇರಿರುವುದರಿಂದ, ಕೂಲಿಕಾರರಿಗೆ ಕೆಲಸದ ದಿನಗಳು ಕಡಿಮೆಯಾಗುವ ಹಾಗೂ ಗುತ್ತಿಗೆದಾರರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಹೊಸ ಕಾಯ್ದೆಯಡಿ ಹಣಕಾಸಿನ ಭಾರವನ್ನು ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುಪಾತದಲ್ಲಿ ಭರಿಸಬೇಕು ಎನ್ನಲಾಗಿದ್ದು, ಕೇಂದ್ರ ಸರ್ಕಾರ ಸೂಚಿಸುವ ಕೆಲಸಗಳನ್ನು ಮಾತ್ರ ಮಾಡಬೇಕಾದ ಪರಿಸ್ಥಿತಿ ಇದೆ. ಇವೆಲ್ಲವನ್ನು ಗಮನಿಸಿದರೆ ಕೃಷಿ ಹಾಗೂ ಗ್ರಾಮೀಣ ಕೂಲಿಕಾರರನ್ನು ಉದ್ಯೋಗದಿಂದ ಹೊರಗಿಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಸಂಘ ಆರೋಪಿಸಿದೆ. ಆದ್ದರಿಂದ 2025ರ ಕಾಯ್ದೆ ಬದಲಾವಣೆ ಕೈಬಿಟ್ಟು, ಹಳೆಯ ಮನರೇಗಾ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘವು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಇಸಾಮೋದ್ದಿನ್ ಮೀರಾಸಾಬ್, ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ್, ಹುಮನಾಬಾದ್ ತಾಲೂಕು ಅಧ್ಯಕ್ಷ ಸೂರ್ಯಕಾಂತ್, ಮುಖಂಡರಾದ ಲಖನ್ ಮಹಾಜನ್, ಪ್ರಭು, ಕಾಸಿಬಾಯಿ ಹುಣಸಗೇರಾ, ಕಂಟೆಪ್ಪಾ, ಶ್ರೀಮಂತ್, ಶಶಿಕಲಾ, ಹುಸೈನ್, ಗಣಪತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಸಬಾ ಬೆಂಗರೆಯ ನೌಮಾನ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್ ಹೊರಡಿಸಿದರೂ ಹಾಜರಾಗದೆ ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಎಸ್ಸೈ ಮಲ್ಲಿಕಾರ್ಜುನ ಬಿರಾದಾರ್ರ ಮಾರ್ಗದರ್ಶನಂತೆ ಹೆಡ್ಕಾನ್ಸ್ಟೇಬಲ್ ಬಾಲಕೃಷ್ಣ, ಕಾನ್ಸ್ಟೇಬಲ್ಗಳಾದ ಚಂದ್ರಶೇಖರ, ರಾಘವೇಂದ್ರ ಎಚ್.ಎಂ. ಮಂಗಳವಾರ ಉಪ್ಪಳ ಸಮೀಪದ ಕೈಕಂಬ ಎಂಬಲ್ಲಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ
ಮೈಸೂರು: ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ. ವಿಧಾನ ಪರಿಷತ್ನ ನೂತನ ಸದಸ್ಯ ಕೆ.ಶಿವಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೃತ್ತ ನೌಕರರ ಪಿಂಚಣಿ ನೀಡಲು ಅನುದಾನ ಬಿಡುಗಡೆ ಜೊತೆಗೆ ಮೈಸೂರು ವಿವಿ ಸರಿಪಡಿಸಲು ವಿಶೇಷ ಗಮನ
ಶುಭಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ? ಯಾರು ಶ್ರೇಷ್ಠ ಎಂದು ಕೇಳಿದ್ದಕ್ಕೆ ಯುವರಾಜ್ ಸಿಂಗ್ ಅಚ್ಚರಿಯ ಉತ್ತರ!
Yuvraj Singh On Shubman Gill And Abhishek Sharma- ಯಾವುದೇ ಗುರುವಿನಲ್ಲಿ ನಿಮ್ಮ ಇಬ್ಬರು ಶಿಷ್ಯಂದಿರಲ್ಲಿ ಯಾರು ಶ್ರೇಷ್ಠ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಇನ್ನು ಯುವರಾಜ್ ಸಿಂಗ್ ಗಂತೂ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರು ಇಬ್ಬರು ಕಣ್ಣುಗಳಿದ್ದಂತೆ. ಆದರೂ ಈ ಪ್ರಶ್ನೆಗೆ ಯುವರಾಜ್ ಸಿಂಗ್ ಅವರು ಬಹಳ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ. ಇಬ್ಬರು ಶಿಷ್ಯಂದಿರ ಪ್ಲಸ್ ಪಾಯಿಂಟ್ ಗಳನ್ನು ವಿವರಿಸಿದ್ದಾರೆ. ಇಬ್ಬರಲ್ಲಿ ಶುಭಮನ್ ಗಿಲ್ ಯಾಕೆ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ.
ವಿಜಯನಗರ | ಹಂಪಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿದ್ಧ : ಗಜೇಂದ್ರ ಸಿಂಗ್ ಶೇಖಾವತ್
ವಿಜಯನಗರ / ಹೊಸಪೇಟೆ : ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರದ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೇಳಿದರು. ಹಂಪಿ ಹೆರಿಟೇಜ್ ಹೋಟೆಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪ ಅವರಿಂದ ಆಯೋಜಿಸಲಾಗಿದ್ದ ಹಂಪಿ ಅಭಿವೃದ್ಧಿ ಕುರಿತ ವಿಶೇಷ ಪಕ್ಷಿ ನೋಟ (ಬರ್ಡ್ಸ್ ಐ ವ್ಯೂ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ವಾಸ್ತುಶಿಲ್ಪಿಯವರು ಹಂಪಿ ಅಭಿವೃದ್ಧಿಗೆ ಸಂಬಂಧಿಸಿದ ಪಿಪಿಟಿ ಪ್ರಸ್ತುತಪಡಿಸಿದ್ದು, ಅದನ್ನು ವೀಕ್ಷಿಸಿದ ನಂತರ ಸಂತಸ ವ್ಯಕ್ತಪಡಿಸಿದ ಶೇಖಾವತ್ ಅವರು, ಹಂಪಿಯ ಧಾರ್ಮಿಕ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ಅದರ ಮೂಲ ಅಸ್ತಿತ್ವವನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು. ಈ ಮಹತ್ವದ ಯೋಜನೆ ಯಶಸ್ವಿಯಾಗಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಎಂದು ಪುನರುಚ್ಚರಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಅಭಿವೃದ್ಧಿಗೆ ಬದ್ಧವಾಗಿದ್ದು, ಹಣಕಾಸು ಸಚಿವರನ್ನು ಒಳಗೊಂಡಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಪಿಯ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದರು. ಹಂಪಿಯ ಅಭಿವೃದ್ಧಿ ಕಾರ್ಯಗಳ ಜವಾಬ್ದಾರಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚುನಾಯಿತ ಶಾಸಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಅಗತ್ಯ ಅಂಶಗಳ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರದ ಅನುಮೋದನೆ ದೊರೆತ ಬಳಿಕ, ಕೇಂದ್ರ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಕ್ಷೇತ್ರ, ಹೊಸಪೇಟೆ ಹಾಗೂ ಹಂಪಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕುರಿತು ಶಾಸಕರು ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರವನ್ನು ಸ್ವೀಕರಿಸಿದ ಶೇಖಾವತ್ ಅವರು, ಸೂಕ್ತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಮನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಲಿ ಅಕ್ರಮ್ ಶಾ, ಉಪಯುಕ್ತರು ವಿವೇಕಾನಂದ, ತಾಲೂಕು ದಂಡಾಧಿಕಾರಿ ಶ್ರುತಿ ಮಲ್ಲಪ್ಪ ಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು: ಸುರತ್ಕಲ್ ಸಮೀಪದ ಕೃಷ್ಣಾಪುರದ ಅಬ್ದುಲ್ ಖಾದರ್ ಯಾನೆ ಇದ್ದಿ (65) ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ನಾಲ್ಕು ಮಂದಿ ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಗರದ ಬಂದರ್ನ ಕೇಂದ್ರ ಜುಮಾ ಮಸೀದಿಯ ಬಳಿ ದಫನ ಕಾರ್ಯ ನೆರವೇರಿಸಲಾಯಿತು.
Chhattisgarh | ಬಂಗಾಳಿ ವಲಸೆ ಕಾರ್ಮಿಕರ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ; ಓರ್ವನಿಗೆ ಗಂಭೀರ ಗಾಯ
ಕೋಲ್ಕತಾ, ಜ. 6: ಪಶ್ಚಿಮ ಬಂಗಾಳದ ಎಂಟು ಮಂದಿ ವಲಸೆ ಕಾರ್ಮಿಕರ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಚತ್ತೀಸ್ ಗಡದ ರಾಯಪುರದಲ್ಲಿ ರವಿವಾರ ನಡೆದಿದೆ. ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ರಾಯಪುರ ಜಿಲ್ಲೆಯ ಕಟೊವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಜ್ಪುರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚೆಪ್ರಿ ಗ್ರಾಮದವರಾಗಿದ್ದು, ಅವರು ಸೂರಜ್ಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಈ ಕಾರ್ಮಿಕರು ತಮ್ಮ ವೇತನದ ಕುರಿತಾಗಿ ಬೇಕರಿಯ ನಿರ್ವಾಹಕರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಬಜರಂಗ ದಳ ಕಾರ್ಯಕರ್ತರು ಈ ಕಾರ್ಮಿಕರ ಮೇಲೆ ಲಾಠಿಗಳಿಂದ ಥಳಿಸಿದ್ದಾರೆ. ಈ ದಾಳಿಯಲ್ಲಿ ಓರ್ವ ವಲಸೆ ಕಾರ್ಮಿಕನ ಬಲಗೈ ಮೂಳೆ ಮುರಿದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಮಿಕರನ್ನು ಬಜರಂಗ ದಳ ಕಾರ್ಯಕರ್ತರ ದಾಳಿಯಿಂದ ರಕ್ಷಿಸಿದ್ದಾರೆ.
Kerala | ಮೆದುಳು ಜ್ವರಕ್ಕೆ ಇನ್ನೋರ್ವ ಬಲಿ
ಕೋಝಿಕ್ಕೋಡ್, ಜ. 5: ಕೆಲವು ದಿನಗಳ ಅಂತರದ ಬಳಿಕ ಕೇರಳದಲ್ಲಿ ಮೆದುಳು ಜ್ವರದಿಂದ ಮತ್ತೊಂದು ಸಾವು ಸಂಭವಿಸಿರುವ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಕೋಝಿಕ್ಕೋಡ್ ಜಿಲ್ಲೆಯ ಪುದಿಯಂಗಾಡಿ ನಿವಾಸಿ ಸಚ್ಚಿದಾನಂದನ್ (72) ಎಂದು ಗುರುತಿಸಲಾಗಿದೆ. ಮೆದುಳು ಜ್ವರದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸಚ್ಚಿದಾನಂದನ್ ಅವರನ್ನು ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಡೆಸಲಾದ ವೈದ್ಯಕೀಯ ಪರೀಕ್ಷೆಗಳಿಂದ ಅವರು ಸೋಂಕುಪೀಡಿತರಾಗಿರುವುದು ದೃಢಪಟ್ಟಿತ್ತು. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿದ್ದು, ಸೋಮವಾರ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಸಚ್ಚಿದಾನಂದನ್ ಅವರಿಗೆ ಮೆದುಳು ಜ್ವರದ ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Gujarat | ನ್ಯಾಯಾಲಯಗಳನ್ನು ಗಾಬರಿಗೊಳಿಸಿದ ಬಾಂಬ್ ಬೆದರಿಕೆ ಇಮೇಲ್
ಅಹ್ಮದಾಬಾದ್, ಜ. 6: ರಾಜ್ಯಾದ್ಯಂತ ನ್ಯಾಯಾಲಯಗಳ ಆವರಣದಲ್ಲಿ ಆರ್ಡಿಎಕ್ಸ್ ಸ್ಫೋಟಿಸಲಾಗುವುದು ಎಂದು ಎಚ್ಚರಿಸಿದ ಇಮೇಲ್ಗಳನ್ನು ಸ್ವೀಕರಿಸಿದ ಬಳಿಕ ಗುಜರಾತ್ ನ ಹಲವು ನ್ಯಾಯಾಲಯಗಳು ಮಂಗಳವಾರ ಗಾಬರಿಗೊಂಡವು. ಸೂರತ್ ನಿಂದ ರಾಜ್ಕೋಟ್, ಅಹ್ಮದಾಬಾದ್ನಿಂದ ಭರೂಚದವರೆಗೆ ನ್ಯಾಯಾಲಯಗಳಲ್ಲಿ ಆತಂಕ ಮೂಡಿತು. ಎಲ್ಟಿಟಿಇ ಹಾಗೂ ಐಎಸ್ಕೆಪಿಯೊಂದಿಗೆ ನಂಟು ಹೊಂದಿರುವುದಾಗಿ ಪ್ರತಿಪಾದಿಸಿ ಇಮೇಲ್ ಮೂಲಕ ಬೆದರಿಕೆ ಒಡ್ಡಲಾಗಿದ್ದು, ಜನರ ಸ್ಥಳಾಂತರ, ನ್ಯಾಯಾಲಯದ ಕಾರ್ಯಚಟುವಟಿಕೆಗಳ ಸ್ಥಗಿತ ಹಾಗೂ ರಾಜ್ಯಾದ್ಯಂತ ಭದ್ರತಾ ಪರಿಶೀಲನೆಗೆ ಕಾರಣವಾಯಿತು. ಆದರೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ನ್ಯಾಯಾಲಯದ ಆವರಣದಲ್ಲಿ ಆರ್ಡಿಎಕ್ಸ್ ಅಳವಡಿಸಿದ ಆತ್ಮಹತ್ಯಾ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಇಮೇಲ್ ನಲ್ಲಿ ಎಚ್ಚರಿಸಲಾಗಿದ್ದು, ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲು ಕಾರಣವಾಯಿತು. ಎಲ್ಟಿಟಿಇ ಹೆಸರಿನಲ್ಲಿ ಜವಾಬ್ದಾರಿ ಹೊತ್ತುಕೊಂಡ ಈ ಇಮೇಲ್, ಕಾಶ್ಮೀರ ಮೂಲದ ಐಎಸ್ಕೆಪಿ ಕಾರ್ಯಕರ್ತರು ಹಾಗೂ ಮಾಜಿ ಎಲ್ಟಿಟಿಇ ಸದಸ್ಯರೊಂದಿಗೆ ಸಹಯೋಗ ಹೊಂದಿರುವುದಾಗಿ ಪ್ರತಿಪಾದಿಸಿತ್ತು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದವು. ಸೂರತ್, ಆನಂದ್, ರಾಜ್ಕೋಟ್, ಅಹ್ಮದಾಬಾದ್ ಹಾಗೂ ಭರೂಚದ ಕೆಳ ನ್ಯಾಯಾಲಯಗಳನ್ನು ಗುರಿಯಾಗಿರಿಸಲಾಗಿದೆ ಎಂದು ಇಮೇಲ್ ನಲ್ಲಿ ಹೇಳಲಾಗಿತ್ತು. ಇದೇ ರೀತಿಯ ಇಮೇಲ್ಗಳು ಭರೂಚ ಜಿಲ್ಲಾಧಿಕಾರಿ ಹಾಗೂ ಗಾಂಧಿನಗರ ಜಿಲ್ಲಾಧಿಕಾರಿ ಕಚೇರಿಗಳಿಗೆ ಏಕಕಾಲದಲ್ಲಿ ತಲುಪಿದ್ದವು. ಇದರಿಂದ ಜನರನ್ನು ಕೂಡಲೇ ತೆರವುಗೊಳಿಸಲಾಗಿದ್ದು, ಲಾಕ್ಡೌನ್ ರೀತಿಯ ಕ್ರಮಗಳನ್ನು ಕೈಗೊಳ್ಳಲಾಯಿತು. ಸೂರತ್ ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಸಿದ ಇಮೇಲ್ ಅನ್ನು ಬೆಳಗ್ಗೆ 2 ಗಂಟೆಗೆ ಸ್ವೀಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಲಾಯಿತು. ಪೊಲೀಸರನ್ನು ಕೂಡಲೇ ಕರೆಸಲಾಯಿತು. ನ್ಯಾಯಾಲಯದ ಸಂಕೀರ್ಣವನ್ನು ಭದ್ರತಾ ವಲಯವಾಗಿ ಪರಿವರ್ತಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ, ಕ್ರೈಮ್ ಬ್ರಾಂಚ್ ಹಾಗೂ ಎಸ್ಒಜಿ ತಂಡಗಳು ಪ್ರತಿಯೊಂದು ಕಾರಿಡಾರ್, ನ್ಯಾಯಾಲಯದ ಕೊಠಡಿ ಹಾಗೂ ಕಚೇರಿಗಳನ್ನು ತಪಾಸಣೆ ನಡೆಸಿದವು. ಅಪರಾಹ್ನದೊಳಗೆ ತಪಾಸಣೆ ಪೂರ್ಣಗೊಂಡಿತು. ಆದರೆ ಯಾವುದೇ ರೀತಿಯ ಸಂಶಯಾಸ್ಪದ ವಸ್ತು ಪತ್ತೆಯಾಗಲಿಲ್ಲ.
ಪದ್ಮಶ್ರೀ ಪುರಸ್ಕೃತೆ, ರಾಜ್ಯಸಭಾ ಸದಸ್ಯೆ ಡಾ.ಮೀನಾಕ್ಷಿ ಜೈನ್ಗೆ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಘೋಷಣೆ
*ಜ.10-11ರಂದು ಮಂಗಳೂರು ಲಿಟ್ ಫೆಸ್ಟ್
ಪಾಕಿಸ್ತಾನಕ್ಕಾಗಿ ಅಂಬಾಲಾ ವಾಯುಪಡೆ ನೆಲೆಯ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಿ ಸುನಿಲ್ ಕುಮಾರ್ ಸೆರೆ
ಅಂಬಾಲಾ (ಹರ್ಯಾಣ), ಜ. 6: ಅಂಬಾಲಾ ವಾಯುಪಡೆ ನೆಲೆಯ ಬೇಹುಗಾರಿಕೆಯನ್ನು ನಡೆಸುತ್ತಿದ್ದ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಹರ್ಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅಂಬಾಲಾದ ಸಹಾ ಪ್ರದೇಶದ ಸಬ್ಕಾ ಗ್ರಾಮದ ನಿವಾಸಿ ಸುನಿಲ್ ಕುಮಾರ್ ಕಳೆದ ಏಳು ತಿಂಗಳುಗಳಿಂದ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ವೇದಿಕೆಯೊಂದರಲ್ಲಿ ಮಹಿಳೆಯೊಬ್ಬಳೊಂದಿಗೆ ಸಂಪರ್ಕದಲ್ಲಿದ್ದ. ವಾಯುಪಡೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರನೊಬ್ಬನ ಸಂಪರ್ಕದಿಂದ ಆತ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದ. ತನ್ನ ಲೊಕೇಶನ್, ಚಿತ್ರಗಳು ಮತ್ತು ವೀಡಿಯೊಗಳನ್ನು ಮೊಬೈಲ್ ಆ್ಯಪ್ ಮೂಲಕ ಪಾಕಿಸ್ತಾನಿ ಮಹಿಳೆಯೊಂದಿಗೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರ್ ಆಗಾಗ್ಗೆ ಮಹಿಳೆಯೊಂದಿಗೆ ಚಾಟ್ ಮಾಡುತ್ತಿದ್ದು, ಆತ ಹನಿಟ್ರ್ಯಾಪ್ನಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಹೇಳಿದರು. ಆರೋಪಿಯು ವಾಯುಪಡೆ ನಿಲ್ದಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದುದನ್ನು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ. ಸ್ಥಳೀಯ ನ್ಯಾಯಾಲಯವು ಆತನಿಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ ಎಂದು ಅಂಬಾಲಾ ಕ್ರೈಂ ಡಿಎಸ್ಪಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ. ಆರೋಪಿಯ ಮೊಬೈಲ್ ಫೋನ್ನಿಂದ ಅಳಿಸಲಾದ ದತ್ತಾಂಶವನ್ನು ಮರಳಿ ಪಡೆಯಲಾಗುತ್ತಿದ್ದು, ಅಪರಾಧದಲ್ಲಿ ಇತರರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಮಗೆ ಗ್ರೀನ್ಲ್ಯಾಂಡ್ ಬೇಕು: ಟ್ರಂಪ್
ವಾಷಿಂಗ್ಟನ್, ಜ. 6: ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಅಮೆರಿಕಾಕ್ಕೆ ಗ್ರೀನ್ಲ್ಯಾಂಡ್ ಅಗತ್ಯವಿದ್ದು, ಮುಂಬರುವ ವಾರಗಳಲ್ಲಿ ಈ ವಿಷಯವನ್ನು ಮರುಪರಿಶೀಲಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ‘‘ಪ್ರಸ್ತುತ ಗ್ರೀನ್ಲ್ಯಾಂಡ್ ಸುತ್ತಮುತ್ತ ರಷ್ಯಾ ಮತ್ತು ಚೀನಾದ ಹಡಗುಗಳಿವೆ. ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ಗ್ರೀನ್ಲ್ಯಾಂಡ್ ನಮ್ಮ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಗೆ ಅಗತ್ಯ. ಆದರೆ ಈ ವಿಷಯದ ಬಗ್ಗೆ ಸುಮಾರು 20 ದಿನಗಳ ನಂತರ ಗಮನ ಹರಿಸೋಣ. ಮೊದಲು ವೆನೆಝುವೆಲಾ, ರಷ್ಯಾ, ಉಕ್ರೇನ್ ಕುರಿತು ಮಾತನಾಡೋಣ’’ ಎಂದು ಟ್ರಂಪ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ. ಗ್ರೀನ್ಲ್ಯಾಂಡ್ ಪ್ರದೇಶವನ್ನು ರಕ್ಷಿಸಲು ಡೆನ್ಮಾರ್ಕ್ಗೆ ಸಾಧ್ಯವಾಗದು. ಗ್ರೀನ್ಲ್ಯಾಂಡ್ನಲ್ಲಿ ಭದ್ರತೆಯನ್ನು ಹೆಚ್ಚಿಸಲು ಇತ್ತೀಚೆಗೆ ಡೆನ್ಮಾರ್ಕ್ ಏನು ಮಾಡಿದೆ ಎಂಬುದು ನಿಮಗೆ ಗೊತ್ತೇ? ಆ ಪ್ರದೇಶಕ್ಕೆ ಒಂದು ನಾಯಿ ಗಾಡಿಯನ್ನು (ನಾಯಿಗಳು ಎಳೆಯುವ ಗಾಡಿ) ನಿಯೋಜಿಸಲಾಗಿದೆ. ಅದೊಂದು ದೊಡ್ಡ ನಡೆ ಎಂದು ಅವರು ಭಾವಿಸಿದ್ದಾರೆ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
West Bengal | SIRಗೆ ಚುನಾವಣಾ ಆಯೋಗ ಬಿಜೆಪಿ ಐಟಿ ಸೆಲ್ ನ ಮೊಬೈಲ್ ಆ್ಯಪ್ ಬಳಸುತ್ತಿದೆ: ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತಾ, ಜ. 6: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಚುನಾವಣಾ ಆಯೋಗದ ವಿರುದ್ಧ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದಾರೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅನ್ನು ಬಳಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮುಂಬರುವ ಗಂಗಾಸಾಗರ್ ಮೇಳದ ಸಿದ್ಧತೆಯ ಮೇಲ್ವಿಚಾರಣೆಗೆ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ್ ಐಲ್ಯಾಂಡ್ಗೆ ಎರಡು ದಿನಗಳ ಭೇಟಿ ಮುಕ್ತಾಯಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಎಲ್ಲಾ ರೀತಿಯ ತಪ್ಪು ನಡೆಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು. ‘‘ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗ ಅರ್ಹ ಮತದಾರರನ್ನು ಮೃತರು, ವೃದ್ಧರು ಹಾಗೂ ವಿಚಾರಣೆಗೆ ಹಾಜರಾಗಲು ಅಸ್ವಸ್ಥರು ಎಂದು ಗುರುತಿಸುತ್ತಿದೆ. ಈ ಪ್ರಕ್ರಿಯೆಗೆ ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅನ್ನು ಬಳಸಲಾಗುತ್ತಿದೆ. ಇದು ಕಾನೂನುಬಾಹಿರ, ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಇದು ಹೀಗೆ ಮುಂದುವರಿಯಬಾರದು’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘‘ವಿಶೇಷ ಪರಿಷ್ಕರಣೆಯಲ್ಲಿ ಭಾಗವಹಿಸುವ ಸಂದರ್ಭ ಜನರು ಜಾಗರೂಕರಾಗಿರಬೇಕು. ಸಹಾಯ ಬೇಕಾದವರ ಪಕ್ಕದಲ್ಲಿ ನಿಲ್ಲಬೇಕು. ಅವರು ನನ್ನನ್ನು ಬೆಂಬಲಿಸುವ ಅಗತ್ಯವಿಲ್ಲ. ಈ ಪ್ರಕ್ರಿಯೆಯಿಂದ ತೊಂದರೆಗೊಳಗಾಗುವವರಿಗೆ ಮಾತ್ರ ಬೆಂಬಲಿಸಿ’’ ಎಂದು ಅವರು ಹೇಳಿದ್ದಾರೆ.
ಡಾಲರ್ ಮೌಲ್ಯ ಭಾರೀ ಕುಸಿತ, ಚಿನ್ನ ಇನ್ನಷ್ಟು ದುಬಾರಿ: ರಂಗಸ್ವಾಮಿ ಮೂಕನಹಳ್ಳಿ
ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಹಾಗೂ ವೆನೆಜುವೆಲಾ ಅಧ್ಯಕ್ಷ ಮದುರೋ ದಂಪತಿಯ ಸೆರೆಯು ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಮತ್ತೊಂದೆಡೆ ಸದ್ದಿಲ್ಲದೆ ಡಾಲರ್ ಮೌಲ್ಯ ಕುಸಿತ ಕಾಣುತ್ತಿದ್ದು, ಚಿನ್ನ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ವಿಶ್ಲೇಷಣಾ ಬರಹ ಇಲ್ಲಿದೆ. 'ಮೂರ್ನಾಲ್ಕು ದಿನದಲ್ಲಿ ಅದೆಷ್ಟು ಬದಲಾವಣೆ! The North Atlantic
ಮಹಿಳೆಯರ ಜೀವನಮಟ್ಟ ಸುಧಾರಣೆಗೆ ದೊರೆತ ಮನ್ನಣೆ: ಡಾ.ಎಂ.ಎನ್. ರಾಜೇಂದ್ರ ಕುಮಾರ್
ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲ ದಿಂದ ಪ್ರಶಸ್ತಿ ಪ್ರದಾನ
Uttar Pradesh | ಮತದಾರರ ಪಟ್ಟಿಯಿಂದ 2.89 ಕೋಟಿ ಮತದಾರರ ಹೆಸರು ಹೊರಗೆ
ಹೊಸದಿಲ್ಲಿ, ಜ. 6: ವಿಶೇಷ ತೀವ್ರ ಪರಿಷ್ಕರಣೆಯ ವೇಳೆ ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ 2.89 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಪರಿಷ್ಕರಣೆ ಪ್ರಕ್ರಿಯೆಯ ಮತದಾರರ ಎಣಿಕೆ ಹಂತ ಮುಕ್ತಾಯದ ಬಳಿಕ ಭಾರತೀಯ ಚುನಾವಣಾ ಆಯೋಗ (ಇಸಿಐ)ವು ಮಂಗಳವಾರ ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಉತ್ತರಪ್ರದೇಶದ ಮತದಾರರ ಪಟ್ಟಿಯಲ್ಲಿ ಮೊದಲು 15.44 ಕೋಟಿ ಮತದಾರರ ಹೆಸರುಗಳಿದ್ದವು. ಪರಿಷ್ಕರಣೆಯ ಬಳಿಕ 2.89 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಪಟ್ಟಿಯಲ್ಲಿ ಈಗ 12.55 ಕೋಟಿ ಹೆಸರುಗಳು ಉಳಿದಿವೆ ಎಂದು ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ತಿಳಿಸಿದ್ದಾರೆ. ‘‘2025 ಅಕ್ಟೋಬರ್ 27ರಂದು ಮತದಾರರ ಪಟ್ಟಿಯಲ್ಲಿ 15,44,30,092 ಹೆಸರುಗಳಿದ್ದವು. ಈ ಪೈಕಿ 12,55,56,025 ಮಂದಿ ಎಣಿಕೆಯ ಕೊನೆಯ ದಿನಾಂಕವಾದ 2025 ಡಿಸೆಂಬರ್ 26ರವರೆಗೆ ತಮ್ಮ ಎಣಿಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ’’ ಎಂದು ಭಾರತೀಯ ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಹೆಸರುಗಳ ಪೈಕಿ 46.23 ಲಕ್ಷ (2.99 ಶೇಕಡ) ಮಂದಿ ಮೃತರಾಗಿದ್ದಾರೆ, 2.17 ಕೋಟಿ (14.06 ಶೇಕಡ) ಮಂದಿ ವಾಸ್ತವ್ಯ ಬದಲಾಯಿಸಿದ್ದಾರೆ ಮತ್ತು 25.46 ಲಕ್ಷ (1.65 ಶೇಕಡ) ಮಂದಿಯ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಕೈಬಿಡಲಾಗಿರುವ ಹೆಸರುಗಳಲ್ಲಿ ನೈಜ ಮತದಾರರಿದ್ದರೆ, ಅವರ ಹೆಸರುಗಳನ್ನು ಜನವರಿ 6ರಿಂದ ಫೆಬ್ರವರಿ 6ರವರೆಗಿನ ಆಕ್ಷೇಪ ಸಲ್ಲಿಕೆ ಅವಧಿಯಲ್ಲಿ ಮರಳಿ ಮತದಾರರ ಪಟ್ಟಿಗೆ ಸೇರಿಸಬಹುದಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಅದಕ್ಕಾಗಿ ನಮೂನೆ–6ರಲ್ಲಿ ಘೋಷಣಾ ಪತ್ರ ಹಾಗೂ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.
ಪಡುಬಿದ್ರಿ, ಜ.6: ಪಡುಬಿದ್ರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಹೊಸೂರು ಗ್ರಾಮದ ನಿಟ್ಟೂರು ಮೂಲದ ಸುರೇಶ್ ಎಂಬವರ ಪತ್ನಿ ಮಲ್ಲಿಕಾ(34) ಎಂಬವರು ಜ.5ರಂದು ಬೆಳಗ್ಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಸುರೇಶ್ ಜಾತ್ರೆಯಲ್ಲಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದು, ಇವರ ಪತ್ನಿ ಮಲ್ಲಿಕಾ, ತನ್ನ ಮಗಳೊಂದಿಗೆ ತಾಯಿ ಮನೆಯಾದ ರಾಮನಗರಕ್ಕೆ ಹೋಗುವು ದಾಗಿ ಹೇಳಿ ಹೋಗಿದ್ದರು. ಆದರೆ ಮಲ್ಲಿಕಾ ತಾಯಿ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಜನರಿಗೆ ದಿಢೀರ್ ಚಳಿಯ ಆಘಾತ, ಚಳಿಗಾಲದಲ್ಲಿ ಹಿಮಾಲಯ ಆಗಲಿದೆಯಾ ರಾಜಧಾನಿ? Bengaluru Weather
ಚಳಿ.. ಚಳಿ.. ಹೀಗೆ ಚಳಿಗಾಲದಲ್ಲಿ ಜನರು ಪರದಾಡುತ್ತಿದ್ದು, ಯಾವಾಗ ಚಳಿಗಾಲ ಮುಗಿದು ಬೇಸಿಗೆ ಬರುತ್ತೋ ಅಂತಾ ಕಾಯುತ್ತಿದ್ದಾರೆ. ಇನ್ನು ಬೇಸಿಗೆ ಬಂದಾಗ ತುಂಬಾ ಸೆಕೆ ಅನ್ನೋದು ಕೂಡ ಇದೇ ಜನರು. ಹೀಗೆ ಎಲ್ಲಾ ವಾತಾವರಣ ಅತಿಯಾದರೆ ಮನುಷ್ಯರಿಗೆ ಇಷ್ಟ ಆಗೋದಿಲ್ಲ. ಇಷ್ಟೆಲ್ಲಾ ಪರದಾಟಗಳ ನಡುವೆ ಇದೀಗ ನಮ್ಮ ಬೆಂಗಳೂರಿನಲ್ಲಿ ಚಳಿಯ ಅಬ್ಬರ ಹೆಚ್ಚಾಗುವ &ಚಳಿಯಲ್ಲಿ ಇಡೀ
ಐದನೇ ಆ್ಯಶಸ್ ಟೆಸ್ಟ್: ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ ಶತಕ
ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಬಿಗಿ ಹಿಡಿತ
ಡಾನ್ ಬ್ರಾಡ್ಮನ್ ದಾಖಲೆ ಹಿಂದಿಕ್ಕಿದ ಸ್ಟೀವ್ ಸ್ಮಿತ್
ಸಿಡ್ನಿ, ಜ.6: ಇಂಗ್ಲೆಂಡ್ ತಂಡದ ವಿರುದ್ಧ ಗರಿಷ್ಠ ರನ್ ಕಲೆ ಹಾಕಿದ ಸ್ಟೀವ್ ಸ್ಮಿತ್ ಲೆಜೆಂಡರಿ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿದು ಕ್ರಿಕೆಟ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಮಂಗಳವಾರ ತನ್ನ 37ನೇ ಟೆಸ್ಟ್ ಶತಕವನ್ನು ಸಿಡಿಸಿರುವ ಆಸ್ಟ್ರೇಲಿಯದ ಬ್ಯಾಟರ್ ಸ್ಮಿತ್ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ ಗಳಿಸಿ ಭಾರತದ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿದ್ದ ಪಟ್ಟಿಗೆ ಸೇರಿದರು. ಆಸ್ಟ್ರೇಲಿಯ ತಂಡದ ಹಂಗಾಮಿ ನಾಯಕ ಸ್ಮಿತ್ ಇದೀಗ ಇಂಗ್ಲೆಂಡ್ ತಂಡದ ವಿರುದ್ದ ಒಟ್ಟು 5,085 ರನ್ ಗಳಿಸಿದ್ದಾರೆ. ಒಂದೇ ಎದುರಾಳಿಯ ವಿರುದ್ಧ 5,028 ರನ್ ಗಳಿಸಿದ್ದ ಬ್ರಾಡ್ಮನ್ ದಾಖಲೆಯನ್ನು ಮುರಿದರು. ಒಂದೇ ಎದುರಾಳಿಯ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಸ್ಮಿತ್ಗಿಂತ ತೆಂಡುಲ್ಕರ್(6,707 ರನ್, ಆಸ್ಟ್ರೇಲಿಯದ ವಿರುದ್ಧ) ಹಾಗೂ ಕೊಹ್ಲಿ(ಆಸ್ಟ್ರೇಲಿಯ ವಿರುದ್ಧ 5,551 ರನ್) ಮುಂದಿದ್ದಾರೆ. ಸ್ಮಿತ್ ಆ್ಯಶಸ್ ಸರಣಿಯಲ್ಲಿ 13ನೇ ಶತಕ ದಾಖಲಿಸಿದರು. 19 ಶತಕಗಳನ್ನು ಸಿಡಿಸಿರುವ ಬ್ರಾಡ್ಮನ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸ್ಮಿತ್ ಅವರು ಇದೀಗ 72.05ರ ಸರಾಸರಿಯಲ್ಲಿ ಐದು ಶತಕಗಳ ಸಹಿತ 1,225 ರನ್ ಗಳಿಸಿದ್ದಾರೆ. ‘‘ಎಸ್ಸಿಜಿ ಪಿಚ್ ನನ್ನ ಆಟಕ್ಕೆ ಸೂಕ್ತವಾಗಿದೆ. ಅಗ್ರ ಸರದಿಯಲ್ಲಿ ಟ್ರಾವಿಸ್ ಹೆಡ್ ಉತ್ತಮ ಪ್ರದರ್ಶನ ನೀಡಿದ್ದಾರೆ. ನನ್ನ ತವರು ಮೈದಾನದಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಶತಕ ಗಳಿಸುವುದು ವಿಶೇಷ ಅನುಭವ’’ಎಂದು ಸ್ಮಿತ್ ಹೇಳಿದ್ದಾರೆ. ►ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎದುರಾಳಿಯ ವಿರುದ್ಧ ಗರಿಷ್ಠ ರನ್ 6,707-ಆಸ್ಟ್ರೇಲಿಯ ವಿರುದ್ಧ ಸಚಿನ್ ತೆಂಡುಲ್ಕರ್ 5,551-ಆಸ್ಟ್ರೇಲಿಯ ವಿರುದ್ಧ ವಿರಾಟ್ ಕೊಹ್ಲಿ 5,108-ಶ್ರೀಲಂಕಾ ವಿರುದ್ಧ ಸಚಿನ್ ತೆಂಡುಲ್ಕರ್ 5,085-ಇಂಗ್ಲೆಂಡ್ ವಿರುದ್ಧ ಸ್ಟೀವನ್ ಸ್ಮಿತ್ 5,028-ಇಂಗ್ಲೆಂಡ್ ವಿರುದ್ಧ ಡಾನ್ ಬ್ರಾಡ್ಮನ್ *ಆ್ಯಶಸ್ ಸರಣಿಯಲ್ಲಿ ಗರಿಷ್ಠ ಶತಕಗಳು 19-ಡಾನ್ ಬ್ರಾಡ್ಮನ್ 13-ಸ್ಟೀವನ್ ಸ್ಮಿತ್ 12-ಜಾಕ್ ಹೊಬ್ಸ್ 10 -ಸ್ಟೀವ್ ವಾ 9-ಹ್ಯಾಮ್ಮಂಡ್ 9-ಡೇವಿಸ್ ಗೋವರ್ ►ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಶತಕವೀರರು 51-ಸಚಿನ್ ತೆಂಡುಲ್ಕರ್ 45-ಜಾಕಸ್ ಕಾಲಿಸ್ 41-ರಿಕಿ ಪಾಂಟಿಂಗ್ 41-ಜೋ ರೂಟ್ 38-ಕುಮಾರ ಸಂಗಕ್ಕರ 37-ಸ್ಟೀವನ್ ಸ್ಮಿತ್ 36-ರಾಹುಲ್ ದ್ರಾವಿಡ್
Bengaluru | ಪಾಸ್ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್!
ಬೆಂಗಳೂರು : ಬೆಂಗಳೂರಿನ ಕೋರಮಂಗಲದಲ್ಲಿರುವ ಪಾಸ್ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಈ ಬಗ್ಗೆ ತಪಾಸಣೆ ನಡೆಸಿದ ಪೊಲೀಸರು ಇದೊಂದು ಹುಸಿ ಬೆದರಿಕೆಯ ಮೇಲ್ ಎಂದು ತಿಳಿಸಿದ್ದಾರೆ. ಮಂಗಳವಾರ(ಜ.6) ಬೆಳಗ್ಗೆ ಕಚೇರಿಯ ಇ-ಮೇಲ್ಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಕಚೇರಿಯನ್ನು ಸ್ಫೋಟಗೊಳಿಸುವುದಾಗಿ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಕೂಡಲೇ ಅಲ್ಲಿನ ಅಧಿಕಾರಿಗಳು ಕೋರಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಸ್ಪೋರ್ಟ್ ಕಚೇರಿಗೆ ಆಗಮಿಸಿದ ಕೋರಮಂಗಲ ಠಾಣಾ ಪೊಲೀಸರು ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಸಿ, ಕಚೇರಿಯ ಒಳಗೆ ಹಾಗೂ ಹೊರಗಡೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಹಾಗೂ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಬೆದರಿಕೆಯ ಮೇಲ್ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೇಲ್ ಬಂದಿರುವ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ: ಬಾರ್ ವಿರುದ್ಧ ಪ್ರಕರಣ ದಾಖಲು
ಮಲ್ಪೆ, ಜ.6: ಅಬಕಾರಿ ಇಲಾಖೆಯ ನಿಯಮ ಉಲ್ಲಂಘಿಸಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಬಾರ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನ ಸರೋವರ್ ಬಾರ್ ರೆಸ್ಟೊರೆಂಟ್ನ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ಆದರೂ ಜ.4ರಂದು ಕಟ್ಟಡದ ಹೊರಗೆ ಪರವಾನಿಗೆಯ ನಿಯಮ ಉಲಂಘನೆ ಮಾಡಿ ಬೆಳಗಿನ ಜಾವ ಗಿರಾಕಿಗಳಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪೋಟೋ ಸಮೇತ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದರಂತೆ ಮಲ್ಪೆ ಪೊಲೀಸರು ಪರಿಶೀಲನೆ ನಡೆಸಿದ್ದು, ಅಬಕಾರಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಕಟ್ಟಡದ ಹೊರಾಂಗಣ ದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುವ ಬಾರ್ ಮಾಲಕ ಸಂಪತ್ ಕುಮಾರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಪ್ಪಳ | ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ʼಭಿಕ್ಷಾಟನೆ ಮುಕ್ತ ಜಾತ್ರೆʼ ಅಭಿಯಾನ : 16 ಭಿಕ್ಷುಕರ ರಕ್ಷಣೆ
ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ “ಭಿಕ್ಷಾಟನೆ ಮುಕ್ತ ಶ್ರೀ ಗವಿಸಿದ್ದೇಶ್ವರ ಜಾತ್ರೆ” ಅಭಿಯಾನವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಿಕ್ಷಾಟನೆ ನಿರ್ಮೂಲನೆಗಾಗಿ ಜಾತ್ರಾ ಮೈದಾನದಲ್ಲಿ ಅನಿರೀಕ್ಷಿತ ದಾಳಿ ನಡೆಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ–1098, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಹೈಬ್ರಿಡ್ ನ್ಯೂಸ್–ಕೊಪ್ಪಳ ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರ–ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಈ ದಾಳಿ ಆಯೋಜಿಸಲಾಗಿತ್ತು. ದಾಳಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಅವರು, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ–1975ರನ್ವಯ ಭಿಕ್ಷೆ ಬೇಡುವುದು ಅಪರಾಧವಾಗಿದ್ದು, ಭಿಕ್ಷುಕರನ್ನು ಗುರುತಿಸಿ ರಕ್ಷಿಸಿ, ಪುನರ್ವಸತಿ ಕೇಂದ್ರಗಳಲ್ಲಿ ಇರಿಸಿ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. ಈ ಕಾರ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳು ಶೇ.3 ಸೆಸ್ ಸಂಗ್ರಹಿಸುವ ಮೂಲಕ ವೆಚ್ಚ ಭರಿಸುತ್ತಿವೆ ಎಂದು ತಿಳಿಸಿದರು. ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ–2015ರ ಕಲಂ 76ರನ್ವಯ ಮಕ್ಕಳಿಂದ ಭಿಕ್ಷೆ ಬೇಡಿಸುವುದು, ಭಿಕ್ಷೆಯ ಉದ್ದೇಶಕ್ಕಾಗಿ ಮಕ್ಕಳ ಅಂಗಾಂಗಗಳನ್ನು ಊನಗೊಳಿಸುವುದು ಗಂಭೀರ ಅಪರಾಧವಾಗಿದ್ದು, ಇದಕ್ಕೆ 7 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.1 ಲಕ್ಷ ದಂಡ ವಿಧಿಸುವ ಅವಕಾಶವಿದೆ ಎಂದರು. ಸಾರ್ವಜನಿಕರು ಭಿಕ್ಷೆ ನೀಡದೇ, ಅಂತಹವರನ್ನು ಅರ್ಹ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲು ಅಥವಾ ತುರ್ತು ಸಹಾಯವಾಣಿ 112 / ಮಕ್ಕಳ ಸಹಾಯವಾಣಿ–1098ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಕ್ಕಳಿಂದ ಭಿಕ್ಷೆ ಬೇಡುವುದು ನಿಷೇಧಿತವಾಗಿದ್ದು, ಅಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು. ಮಕ್ಕಳಿಗೆ ಭಿಕ್ಷೆ ನೀಡದೇ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ, ಭಿಕ್ಷುಕರ ಪುನರ್ವಸತಿ ಕೇಂದ್ರ ಬಳ್ಳಾರಿಯ ಅಧೀಕ್ಷಕ ಚಿನ್ನಪಾಲಯ್ಯ, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಶರಣಪ್ಪ ಚೌವ್ಹಾಣ ಹಾಗೂ ಸ್ವಯಂಸೇವಕರು, ಮಹಿಳಾ ಧ್ವನಿ ಸಂಘದ ಅಧ್ಯಕ್ಷೆ ಪ್ರಿಯದರ್ಶಿನಿ ಮುಂಡರಗಿಮಠ, ಹೈಬ್ರಿಡ್ ನ್ಯೂಸ್ ಸಂಸ್ಥಾಪಕ ಬಿ.ಎನ್. ಪೋರಪೇಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ರವಿಕುಮಾರ, ಮಕ್ಕಳ ಸಹಾಯವಾಣಿ–1098ರ ಶರಣಪ್ಪ ಸಿಂಗನಾಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಅನಿರೀಕ್ಷಿತ ದಾಳಿಯಲ್ಲಿ 16 ಮಂದಿ ಭಿಕ್ಷುಕರನ್ನು ರಕ್ಷಿಸಿ ಬಳ್ಳಾರಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.
ಹೋರಾಟದ ಛಲ, ಸಮರ್ಥ ನಾಯಕತ್ವ; ಸಿದ್ದರಾಮಯ್ಯ ದಾಖಲೆಯ ಮುಖ್ಯಮಂತ್ರಿ ಅವಧಿಗೆ ಕಾರಣಗಳಿವು
ರಾಜಕೀಯ ವಿರೋಧಿಗಳಿಗೂ ಇಷ್ಟವಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಜ.6-ಮಂಗಳವಾರ) ರಾಜ್ಯ ರಾಜಕಾರಣದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಅವಧಿಯನ್ನು ಮೀರಿ, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಸಿದ್ದರಾಮಯ್ಯನವರ ಈ ಅಪರೂಪದ ರಾಜಕೀಯ ಸಾಧನೆಗೆ ಹಲವು ಕಾರಣಗಳಿದ್ದು ಅದರಲ್ಲ ಅವರ ಸಮರ್ಥ ನಾಯಕತ್ವ ಮತ್ತು ಹೋರಾಟದ ಛಲ ಅತ್ಯಂತ ಪ್ರಮುಖವಾದುದು. ಸಿದ್ದರಾಮಯ್ಯನವರ ಸುದೀರ್ಘ ಅವಧಿಯ ಮುಖ್ಯಮಂತ್ರಿ ದಾಖಲೆಯ ಬಗ್ಗೆ ಇಲ್ಲಿದೆ ವಿಶೇಷ ಲೇಖನ.
ಇನಾಂ ವೀರಾಪುರ ಗ್ರಾಮಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಭೇಟಿ
ಧಾರವಾಡ : ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮಂಗಳವಾರ ಬೆಳಗ್ಗೆ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರು. ದಲಿತ ಕುಟುಂಬಗಳು ವಾಸಿಸುವ ಓಣಿ ಹಾಗೂ ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ ಹಾಗೂ ದೌರ್ಜನ್ಯ ಮತ್ತು ಕೊಲೆ ಕೃತ್ಯ ನಡೆದ ಸ್ಥಳ ಪರಿಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹಾಗೂ ಇತರರಿಂದ ವಿವರವಾದ ಮಾಹಿತಿಯನ್ನು ಅವರು ಪಡೆದುಕೊಂಡರು. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಶ್ಯಾಮ್ ಭಟ್ ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸಂಯುಕ್ತವಾಗಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು. ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ದೊರಕುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶ್ಯಾಮ್ ಭಟ್ ತಿಳಿಸಿದರು. ಮುಂಬರುವ ದಿನಗಳಲ್ಲಿಯೂ ಗ್ರಾಮಗಳಲ್ಲಿ ಶಾಂತಿ ಸಭೆಗಳನ್ನು ಜರುಗಿಸಿ, ಜನರಲ್ಲಿನ ಭಯವನ್ನು ದೂರ ಮಾಡಿ, ವಿಶ್ವಾಸದ ವಾತಾವರಣ ನಿರ್ಮಿಸುವಂತೆ ಪೊಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ ಅವರು, ಮಾನಸಿಕ ಧೈರ್ಯ, ಕಾನೂನು ಸಹಾಯ ಹಾಗೂ ಅಗತ್ಯ ಪರಿಹಾರ ಕಲ್ಪಿಸುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನವನ್ನು ನೀಡಿದರು. ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೆ ಸರಕಾರಕ್ಕೆ ಇನಾಂವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾಡಳಿತದಿಂದ ಗ್ರಾಮದಲ್ಲಿ ಶಾಂತಿ ಸಭೆಯನ್ನು ಜರುಗಿಸಲಾಗಿದ್ದು, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿ ಪರಸ್ಪರ ಸಹೋದರತ್ವ ಮತ್ತು ವಿಶ್ವಾಸದಿಂದ ಬದುಕುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ. ಸ್ಥಳೀಯ ನಿವಾಸಿಗಳ ಸಲಹೆಗಳನ್ನು ಆಲಿಸಲಾಗಿದೆ. ಗ್ರಾಮ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಯಾವುದೇ ರೀತಿಯ ತಪ್ಪು ಮಾಹಿತಿ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಗ್ರಾಮದಲ್ಲಿ ಶಾಂತಿ ಸಭೆ ಮೂಲಕ ಗ್ರಾಮದ ಸಾರ್ವಜನಿಕರ ಭಯ ಮತ್ತು ಆತಂಕವನ್ನು ದೂರ ಮಾಡಿ, ಕಾನೂನು ಮತ್ತು ಆಡಳಿತದ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಹ ಅಗತ್ಯವಿದ್ದರೆ ಮತ್ತಷ್ಟು ಶಾಂತಿ, ಸೌಹಾರ್ದತೆಯ ಸಭೆಗಳನ್ನು ಆಯೋಜಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿವೈಎಸ್ಪಿ ವಿನೋದ್ ಮುಕ್ತೆದಾರ, ತಹಶೀಲ್ದಾರ್ ಜಿ.ಆರ್.ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ, ಸಹಾಯಕ ನಿರ್ದೇಶಕಿ ಪ್ರೀಯದರ್ಶಿನಿ ಹಿರೇಮಠ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವೇಕಾನಂದ ದೊಡಮನಿ ಕುಟುಂಬದ ಸದಸ್ಯರು ಹಾಗೂ ಇತರರು ಇದ್ದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ : ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅವರು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದ ದಲಿತ ದೌರ್ಜನ್ಯ ಪೀಡಿತ ಕುಟುಂಬ ಸದಸ್ಯರ ಭೇಟಿ ಮತ್ತು ಗ್ರಾಮದಲ್ಲಿನ ವಾಸ್ತವಿಕ ಪರಿಸ್ಥಿತಿಯ ಅಧ್ಯಯನದ ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಬ್ರಹ್ಮಾವರ, ಜ.6: ವೈಯಕ್ತಿಕ ಕಾರಣದಿಂದ ಮನನೊಂದ ಲಕ್ಷ್ಮಣ್(43) ಎಂಬವರು ಜ.4ರ ಬೆಳಗ್ಗೆಯಿಂದ ಜ.5ರ ಬೆಳಗ್ಗಿನ ಮಧ್ಯಾವದಿಯಲ್ಲಿ ಮನೆಯ ಸಮೀಪದ ಕಮಾಂಡರ್ ಸ್ಪೋರ್ಟ್ಸ್ ಕ್ಲಬ್ ಒಳಗಡೆ ಹಾಲ್ನಲ್ಲಿದ್ದ ಮಾಡಿನ ಕಬ್ಬಿಣದ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯಡ್ಕ: ಅನಾರೋಗ್ಯದಿಂದ ಬಳಲುತ್ತಿದ್ದ ಕುಕ್ಕೆಹಳ್ಳಿಯ ನಾರಾಯಣ ಹಾಂಡ(73) ಎಂಬವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಜ.5ರಂದು ಮಧ್ಯಾಹ್ನ ವೇಳೆ ಮನೆಯ ಟ್ಯಾರಿಸ್ ಮನೆಯ ಮೇಲಿನ ದಂಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಿತರ ವಿತರಕರ ಮಾಲೀಕರ ಬೇಡಿಕೆಗಳ ಕುರಿತು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದೇನು?
ಬೆಂಗಳೂರು: ನಮ್ಮ ಸರ್ಕಾರವು ಪಡಿತರ ವಿತರಕರ ಮಾಲೀಕರಿಗೆ ಕಮಿಷನ್ ಹೆಚ್ಚಳ ಮಾಡಿದ್ದು, ಸರ್ಕಾರವು ಪಡಿತರ ವಿತರಕರ ಮಾಲೀಕರಿಗೆ ಪರವಾಗಿದೆ. ಮುಂದೆ ರಾಜ್ಯದ ಜನರಿಗೆ ಅನುಕೂಲವಾಗಲು ಇಂದಿರಾ ಕಿಟ್ ಮೂಲಕ ತೊಗರಿ ಬೇಳೆ,ಎಣ್ಣೆ,ಸಕ್ಕರೆ,ಉಪ್ಪು ನೀಡಲು ಯೋಜನೆ ರೂಪಿಸಿದ್ದು, ನಿಮಗೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಮ್ಮ ಪರವಾಗಿದ್ದೇವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್.
‘ಜಯದೇವಿತಾಯಿ ಲಿಗಾಡೆ, ಪ್ರಭುರಾವ ಕಂಬಳಿವಾಲೆ’ ಟ್ರಸ್ಟ್ ರಚಿಸಿ ರಾಜ್ಯ ಸರಕಾರ ಆದೇಶ
ಬೆಂಗಳೂರು : ಕರ್ನಾಟಕ ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳಾದ ಡಾ.ಜಯದೇವಿತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಅವರ ಹೆಸರಿನಲ್ಲಿ ಬೀದರ್ ಜಿಲ್ಲೆಯಲ್ಲಿ ಟ್ರಸ್ಟ್ ಗಳನ್ನು ರಚಿಸಿ ಸರಕಾರ ಆದೇಶಿಸಿದೆ. 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಹೊಸದಾಗಿ ರಚನೆಯಾಗುವ ಟ್ರಸ್ಟ್ ಗಳಿಗೆ 35ಲಕ್ಷ ರೂ.ಗಳನ್ನು ಅವಕಾಶ ಮಾಡಿಕೊಳ್ಳಲಾಗಿದ್ದು, ಬೀದರ್ ಜಿಲ್ಲಾಧಿಕಾರಿ ಪ್ರಸ್ತಾವದಂತೆ ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಇವರ ಹೆಸರಿನಲ್ಲಿ ಟ್ರಸ್ಟ್ ರಚಿಸಲಾಗಿದೆ ಎಂದು ಕನ್ನಡ ಸಂಸ್ಕೃ ತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ತಿಳಿಸಿದ್ದಾರೆ.
ಅಪ್ಪಾ ಐ ಲವ್ ಯೂ ಪಾ; ವೆನೆಜುವೆಲಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿಕೋಲಸ್ ಮಡುರೊ ಪುತ್ರನ ಭಾವುಕ ಭಾಷಣ
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಈಗ ಅಮೆರಿಕದ ವಶದಲ್ಲಿದ್ದಾರೆ. ಅತ್ತ ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಡುರೊ ಪುತ್ರ ನಿಕೋಲಸ್ ಮಡುರೊ ಗುಯೆರಾ ಭಾವನಾತ್ಮಕ ಭಾಷಣ ಮಾಡಿದ್ದಾರೆ. ತಂದೆ ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದು, ಅವರ ಮಾರ್ಗದಲ್ಲೇ ಮುನ್ನಡೆಯುವುದಾಗಿ ಗುಯೆರಾ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ. ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ಗೆ ಪೂರ್ಣ ಬೆಂಬಲ ನೀಡುವುದಾಗಿಯೂ ಮಡುರೊ ಪುತ್ರ ಘೋಷಿಸಿದ್ದಾರೆ. ಇನ್ನು ತಮ್ಮ ತಂದೆ ಮತ್ತು ತಾಯಿಯನ್ನು ಅಪಹರಿಸಿದ ಅಮೆರಿಕದ ವಿರುದ್ಧ ಗುಯೆರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಡಿಸಿಎಂ ಒಲವು : ಎನ್.ಎಸ್.ಭೋಸರಾಜು
ಬೆಂಗಳೂರು: ಮಲೇಷ್ಯಾದ ಪ್ರಮುಖ ಸೆಮಿಕಂಡಕ್ಟರ್ ಹಬ್ ಆಗಿರುವ ಪೆನಾಂಗ್ ರಾಜ್ಯದ ಉನ್ನತ ಮಟ್ಟದ ನಿಯೋಗವು, ಕರ್ನಾಟಕದೊಂದಿಗೆ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು. ಮಂಗಳವಾರ ವಿಕಾಸಸೌಧದಲ್ಲಿ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು. ಸಭೆಯಲ್ಲಿ ಮಾತನಾಡಿದ ಪೆನಾಂಗ್ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ, ತಮ್ಮ ರಾಜ್ಯದ ಯಶಸ್ಸಿನ ಮಾದರಿಯನ್ನು ವಿವರಿಸಿದರು. ಪೆನಾಂಗ್ ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿದ್ದರೂ, ಇಂದು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಬಲವಾದ ‘ಉದ್ಯಮ ಮತ್ತು ಸಂಶೋಧನಾ ಸಹಭಾಗಿತ್ವ'. ಇದರಲ್ಲಿ ಪೆನಾಂಗ್ ವಿಶ್ವವಿದ್ಯಾಲಯವು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಿದರು. ಉದ್ಯಮಗಳಿಗೆ ನೇರವಾಗಿ ಬೆಂಬಲ ನೀಡುವಂತಹ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ವಿವಿ ನಿರ್ಮಿಸಿದೆ. ಇದೇ ಮಾದರಿಯನ್ನು ಕರ್ನಾಟಕ ಮತ್ತು ಪೆನಾಂಗ್ ನಡುವೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಚರ್ಚೆಯ ವೇಳೆ ಎನ್.ಎಸ್. ಭೋಸರಾಜು ಅವರು ಸಣ್ಣ ನೀರಾವರಿ ಕ್ಷೇತ್ರದಲ್ಲಿ ಕರ್ನಾಟಕ ಸಾಧಿಸಿರುವ ಮೈಲಿಗಲ್ಲುಗಳನ್ನು ಪರಿಚಯಿಸಿದರು. ವಿಶೇಷವಾಗಿ ರಾಜ್ಯದ ‘ತ್ಯಾಜ್ಯದಿಂದ ಸಂಪತ್ತು' ಪರಿಕಲ್ಪನೆಯಡಿ ಜಾರಿಗೆ ತಂದಿರುವ ಕೆ.ಸಿ.ವ್ಯಾಲಿ (ಕೋರಮಂಗಲ-ಚಲ್ಲಘಟ್ಟ) ಮತ್ತು ಎಚ್.ಎನ್.ವ್ಯಾಲಿ (ಹೆಬ್ಬಾಳ-ನಾಗವಾರ) ಯೋಜನೆಗಳ ಬಗ್ಗೆ ಗಮನ ಸೆಳೆದರು. ನಗರದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅದನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಯಶಸ್ವಿಯಾಗಿ ಹೆಚ್ಚಿಸಿದ್ದೇವೆ. ಕೃಷಿ ಚಟುವಟಿಕೆಗಳಿಗೆ ಇದು ಜೀವ ತುಂಬಿದೆ ಎಂದು ಅವರು ನಿಯೋಗಕ್ಕೆ ವಿವರಿಸಿದರು. ಈ ಸುಸ್ಥಿರ ಅಭಿವೃದ್ಧಿ ಮಾದರಿಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು. ರಾಜ್ಯ ಸರಕಾರ ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ‘ಕ್ವಾಂಟಮ್ ಆಕ್ಷನ್ ಪ್ಲಾನ್' ನಲ್ಲಿ ಭಾಗಿಯಾಗಲು ಪೆನಾಂಗ್ ನಿಯೋಗ ಉತ್ಸುಕತೆ ತೋರಿತು. ‘ಪೂರ್ವದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಪೆನಾಂಗ್ ಜೊತೆಗಿನ ಸಹಭಾಗಿತ್ವಕ್ಕೆ ನಮ್ಮ ಸರಕಾರ ಮುಕ್ತವಾಗಿದೆ’ ಎಂದು ಸಚಿವರು ಸ್ವಾಗತಿಸಿದರು. ಬೆಂಗಳೂರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಾಗೂ ಪೆನಾಂಗ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯ ಸಮ್ಮಿಲನದಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಉಭಯ ನಾಯಕರು ಅಭಿಪ್ರಾಯವ್ಯಕ್ತಪಡಿಸಿದರು. ಸಭೆಯ ಅಂತ್ಯದಲ್ಲಿ, ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ಅವರು ಸಚಿವ ಭೋಸರಾಜು ಅವರಿಗೆ ಮಲೇಷ್ಯಾ ಮತ್ತು ಪೆನಾಂಗ್ಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು. ವಿಶೇಷವಾಗಿ ಪೆನಾಂಗ್ನ ವಿಶ್ವವಿದ್ಯಾಲಯದ ಸಂಶೋಧನಾ ಸೌಲಭ್ಯಗಳು ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿ ಒಪ್ಪಂದವನ್ನು ಅಂತಿಮಗೊಳಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕೆ-ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು ಸೇರಿದಂತೆ ಪೆನಾಂಗ್ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿ | ಶಿಕ್ಷಕರ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆ
ಕಲಬುರಗಿ : ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ಶಿಕ್ಷಕರ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ರಿಯಾಯಿತಿ ದರದಲ್ಲಿ ಲೀಸ್ಗೆ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ನಿಯೋಗವು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸಿದೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಶೇಖರೋಜಾ ಸರ್ವೆ ನಂ.111/2ರಲ್ಲಿ ಇರುವ 25,166 ಚದರ ಅಡಿ ಸಿ.ಎ. ನಿವೇಶನವನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಕಲಬುರಗಿಗೆ 30 ವರ್ಷಗಳ ಅವಧಿಗೆ ರಿಯಾಯಿತಿ ದರದಲ್ಲಿ ಲೀಸ್ ನೀಡಲು ಜ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶಿಕ್ಷಕರ ಶೈಕ್ಷಣಿಕ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಶಿಕ್ಷಕರ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಲು ವಿಶೇಷ ಮುತುವರ್ಜಿ ವಹಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿಸಿಕೊಟ್ಟ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಿವೇಶನ ಮಂಜೂರಿಗೆ ಪರೋಕ್ಷವಾಗಿ ಬೆಂಬಲ ನೀಡಿದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಹೂಗಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ, ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಜಮೀಲ್ ಮತ್ತು ಇಮ್ರಾನ್ ಅಹಮದ್, ಪದಾಧಿಕಾರಿಗಳಾದ ರಾಜೇಶ್ ನೀಲಹಳ್ಳಿ, ಮಲ್ಲಿಕಾರ್ಜುನ ಸಲಗರ, ರಾಘವೇಂದ್ರ ರೆಡ್ಡಿ, ಮೊಹಮ್ಮದ್ ರಫೀಕ್, ದೇವೇಂದ್ರ ಬಿರಾದಾರ್, ಚನ್ನಬಸಪ್ಪ ಬಿರಾದಾರ್, ಬಾಷಾ ಪಟೇಲ್, ರೇಣುಕಾ ಡಾಂಗೆ, ಭಾಗ್ಯಲಕ್ಷ್ಮಿ ಗಿರೇಗೋಳ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳಾದ ಚಂದ್ರಕಾಂತ ಏರಿ, ಧರ್ಮರಾಯ ಜವಳಿ, ಎಂ.ಬಿ. ಪಾಟೀಲ್, ಸಂತೋಷ್ ಗಂಗೂ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಜಮ್ಮು- ಕಾಶ್ಮೀರಕ್ಕೆ ಚೊಚ್ಚಲ ಬಿಸಿಸಿಐ ಟ್ರೋಫಿ: ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಅಂಡರ್ 16 ತಂಡ!
Historical Achievement By Jammu Kashmir Cricket Team- ಜಮ್ಮು ಮತ್ತು ಕಾಶ್ಮೀರ ಅಂಡರ್-16 ಕ್ರಿಕೆಟ್ ತಂಡವು ಚೊಚ್ಚಲ ಬಿಸಿಸಿಐ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇದೀಗ ಐತಿಹಾಸಿಕ ಸಾಧನೆ ಮಾಡಿದೆ. ಮಿಜೋರಾಂ ತಂಡವನ್ನು ಇನ್ನಿಂಗ್ಸ್ ಮತ್ತು 182 ರನ್ಗಳ ಅಂತರದಿಂದ ಸೋಲಿಸುವ ಮೂಲಕ ವಿಜಯ್ ಮರ್ಚೆಂಟ್ ಟ್ರೋಫಿ ಪ್ಲೇಟ್ ಗ್ರೂಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಹಿಂದೆ ರಾಜ್ಯದ ಕೆಲ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿದ್ದರು. ಇದೀಗ ಎಳೆಯ ಕ್ರಿಕೆಟಿಗರ ಗೆಲುವಿನಿಂದಾಗಿ ಇಡೀ ದೇಶದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಜಮ್ಮು ಕಾಶ್ಮೀರದ ಕಡೆಗೆ ತಿರುಗಿ ನೋಡುವಂತಾಗಿದೆ.
'7 ನಿಮಿಷಗಳ ವೈರಲ್ ವಿಡಿಯೋ' ಹೆಸರಲ್ಲಿ ಸಂಚಲನ ಮೂಡಿಸಿದ ಈ ಸಂತೂರ್ ಮಮ್ಮಿ ಯಾರು?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀಲ್ಸ್ಗಳು ಜನರ ಗಮನ ಸೆಳೆಯುತ್ತಿವೆ. ಕೆಲವರು ಸಿಂಗಲ್ ಮಾಡಿ ರೀಲ್ ಮಾಡಿದರೆ, ಇನ್ನೂ ಕೆಲವರು ತನ್ನ ಪಾರ್ಟ್ನರ್ ಜೊತೆ ರೀಲ್ಸ್ ಮಾಡಿ ಹೈಪ್ ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಅಮ್ಮ-ಮಗನ ರೀಲ್ಗಳ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಅನೇಕ ವೀಡಿಯೊಗಳು ಭಾವನಾತ್ಮಕ ಸಂಪರ್ಕ ಮತ್ತು ತಲೆಮಾರುಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದನ್ನು ತಿಳಿಸಿದರೆ,
ಕೇಂದ್ರ ಸರಕಾರದಿಂದ ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ : ಚಿಂತಕ ಶಿವಸುಂದರ್
ಸ್ಲಂ ಜನಾಂದೋಲನದ 16ನೇ ಸಂಸ್ಥಾಪನಾ ದಿನ
ಮಂಗಳೂರು: ನದಿಗೆ ಬಿದ್ದು ಮೀನುಗಾರ ಮೃತ್ಯು
ಮಂಗಳೂರು: ಮೀನುಗಾರಿಕಾ ಬೋಟ್ ಲಂಗರು ಹಾಕುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿನದಿಗೆ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ನಗರದ ಹಳೆ ಬಂದರ್ನಲ್ಲಿ ನಡೆದಿದೆ. ಚತ್ತೀಸ್ಘಡ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್(33) ಮೃತಪಟ್ಟ ಮೀನುಗಾರ. ವರ್ಷದ ಹಿಂದೆ ಮಂಗಳೂರಿಗೆ ಬಂದು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದ ತೊಡಗಿಸಿಕೊಂಡಿದ್ದ ಇವರು ಸೋಮವಾರ ರಾತ್ರಿ 11ಕ್ಕೆ ಹಳೆ ಬಂದರ್ ಉಪ್ಪುದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಹಸನ್ ಅಲ್ ಬಹಾರ್ ಪರ್ಸಿನ್ ಬೋಟಿನ ಹಗ್ಗ ಕಟ್ಟುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿನದಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೋಟ್ನಲ್ಲಿದ್ದ ಇತರ ಮೀನುಗಾರರು ಕಾರ್ಯಾಚರಣೆ ನಡೆಸಿ ನೀರಿನಿಂದ ಮೇಲಕ್ಕೆತ್ತಿದರೂ ಪ್ರಹ್ಲಾದ್ ಅದಾಗಲೇ ಮೃತಪಟ್ಟಿದ್ದರು. ಮೃತದೇಹದ ಶವಪರೀಕ್ಷೆ ನಡೆಸಿದ ಬಳಿಕ ತವರೂರಿಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
‘ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಕ್ಷಮಿಸುವುದಿಲ್ಲ’ : ಸಿದ್ದರಾಮಯ್ಯರ ಸಾಧನೆಗೆ ಬಿಜೆಪಿ ಆಕ್ಷೇಪ
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಾವು ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ಕೇವಲ ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ. ತಮ್ಮ ತುಘಲಕ್ ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ’ ಎಂದು ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ನೀಡಿದೆ. ಮಂಗಳವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ದಾಖಲೆ ಬರೆದ ‘ಅಭಿನವ ಅರಸು’ಗೆ ಅಭಿನಂದನೆಗಳು... ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ ಸಿದ್ದರಾಮಯ್ಯನವರೇ.. ಏಳು ವರ್ಷ 240 ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಸಾಲದ ಹೊರೆ ಅಧಿಕವಾಗಿದೆ, ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಟೀಕಿಸಿದೆ. ಕರುನಾಡು ಗೂಂಡಾ ರಾಜ್ಯವಾಗಿದೆ, ಶಾಲೆಗಳು ಪಾಳು ಬಿದ್ದಿವೆ, ಜಲಾಶಯಗಳು ಹೂಳು ತುಂಬಿವೆ, ನೇಮಕಾತಿ ನಡೆಯದಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ, ರೈತರ ಆತ್ಮಹತ್ಯೆ ಲೆಕ್ಕಕ್ಕೆ ಸಿಗದಾಗಿದೆ, ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಓಲೈಕೆ ರಾಜಕಾರಣ ಮಿತಿಮೀರಿದೆ ಇವಿಷ್ಟೇ ಅಲ್ಲ ಪಟ್ಟಿ ಮುಂದುವರಿಯಲಿದೆ ಎಂದು ಬಿಜೆಪಿ ತಿಳಿಸಿದೆ. ದಾಖಲೆ ಬರೆದ ಅಭಿನವ ಅರಸುಗೆ ಅಭಿನಂದನೆಗಳು... ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ @siddaramaiah ನವರೇ.. ➡️ 7 ವರ್ಷ 240 ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ➡️ ಸಾಲದ ಹೊರೆ ಅಧಿಕವಾಗಿದೆ ➡️ ಅಭಿವೃದ್ಧಿ ಶೂನ್ಯವಾಗಿದೆ ➡️ ಕರುನಾಡು ಗೂಂಡಾ ರಾಜ್ಯವಾಗಿದೆ ➡️… pic.twitter.com/KM1OWAtTVn — BJP Karnataka (@BJP4Karnataka) January 6, 2026
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸಿದ ಸ್ಪೀಕರ್ ಯುಟಿ ಖಾದರ್
ಮಂಗಳೂರು: ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯರನ್ನು ಸ್ಪೀಕರ್ ಯು.ಟಿ. ಖಾದರ್ ಅಭಿನಂದಿಸಿದ್ದಾರೆ. ದೇವರಾಜ್ ಅರಸು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ.ಫರೀದ್ ಶಾಸಕ ರಾಗಿದ್ದರು. ಈಗ ನೀವು ದೀರ್ಘಕಾಲ ಮುಖ್ಯಮಂತ್ರಿಯಾಗಿರುವಾಗ ನಿಮ್ಮ ಜೊತೆ ನಾನು ಉನ್ನತ ಹುದ್ದೆಯಲ್ಲಿರು ವುದು ಸಂತೋಷದ ವಿಚಾರ. ರಾಜ್ಯದ ಜನತೆ ನಿಮ್ಮನ್ನು ಸಿದ್ದರಾಮಯ್ಯರ ಕಾಲ ಎಂದು ಹೆಮ್ಮೆಯಿಂದ ಹೇಳಿಕೊ ಳ್ಳುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ನಾವು ಜೊತೆಗಿರುವುದು ನಮಗೂ ಹೆಮ್ಮಯ ವಿಚಾರ. ಮನಸ್ಸುಗಳನ್ನು ಒಡೆಯುವ ಈ ಕಾಲದಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ವ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ. ಶೋಷಿತರ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ ಎಂದು ಸ್ಪೀಕರ್ ಖಾದರ್ ತನ್ನ ಶುಭಾಶಯದಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪ್ರತಿಪಾದಕ : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ರಾಜ್ಯ ರಾಜಕಾರಣದ ಚರಿತ್ರೆಯಲ್ಲೆ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ನಾಡಿನ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಮಂಗಳವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ ‘ಅರಸು’ ಅವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಮೌಲ್ಯಗಳ ರಕ್ಷಣೆಗೆ ಕಟ್ಟಿಬದ್ದರಾಗಿ, ಬಡ ಜನರ, ಹಿಂದುಳಿದ, ದೀನ-ದಲಿತರ ಆಶೋತ್ತರಗಳಿಗುಣವಾಗಿ ಮತ್ತಷ್ಟು ಈ ನಾಡಿಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ. ರಾಜ್ಯ ರಾಜಕಾರಣದ ಚರಿತ್ರೆಯಲ್ಲೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ನಾಡಿನ ಮುಖ್ಯಮಂತ್ರಿಗಳು, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಶ್ರೀ @siddaramaiah ಅವರಿಗೆ ಶುಭಾಶಯಗಳು. ಈ ನಾಡು ಕಂಡ ದಮನಿತ ವರ್ಗಗಳ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದ ಅರಸುಅವರ ದಾಖಲೆಯನ್ನು ಸರಿಗಟ್ಟಿದ ಶ್ರೀ… pic.twitter.com/2QER6cz2hy — Hariprasad.B.K. (@HariprasadBK2) January 6, 2026
ಹನುಮಸಾಗರ | ಬೆಟ್ಟದ ಮೇಲ್ಭಾಗದಲ್ಲಿ ಯುವಕನ ಮೃತದೇಹ ಪತ್ತೆ
ಹನುಮಸಾಗರ : ಹನುಮಸಾಗರ ಪಟ್ಟಣದ ಸಮೀಪದ ಬೆಟ್ಟದ ಮೇಲ್ಭಾಗದಲ್ಲಿ ಯುವಕನೊರ್ವನ ಮೃತದೇಹ ಇಂದು(ಜ.6) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಟ್ಟದ ಮೇಲ್ಭಾಗದಲ್ಲಿ ಮೃತದೇಹ ಕಂಡುಬಂದಿರುವ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತದೇಹ ಸಮೀಪದಲ್ಲೇ ಒಂದು ಮೊಬೈಲ್ ಫೋನ್ ಹಾಗೂ ವಿಷದ ಬಾಟಲಿ ಪತ್ತೆಯಾಗಿದ್ದು, ಸಾವಿನ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ಯುವಕನನ್ನು ಸಮೀಪದ ಗುಡ್ಡದೇವಲಾಪೂರ ಗ್ರಾಮದ ನಿವಾಸಿ ಸಂತೋಷ ಹನುಮನಾಳ್ ಎಂದು ಗುರುತಿಸಲಾಗಿದೆ. ಮೃತದೇಹವು ಬಹಳ ದಿನಗಳ ಹಿಂದಿನದಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ಭಾಗಗಳನ್ನು ಬಿಟ್ಟು ಕಾಲುಗಳನ್ನು ಮಾತ್ರ ಪ್ರಾಣಿಗಳು ತಿಂದಿರುವ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಸಾವಿನ ಹಿಂದೆ ಅಪಘಾತ, ಆತ್ಮಹತ್ಯೆ ಅಥವಾ ಇನ್ನಾವುದೇ ಕಾರಣವಿದೆಯೇ ಎಂಬುದು ತನಿಖೆಯ ನಂತರವೇ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಶುರಾಮ ಪಾರ್ಕ್ ಕಳ್ಳತನ| ಶಾಸಕ ಸುನಿಲ್ರ ವ್ಯವಸ್ಥಿತ ಸಂಚು; ಉದಯ ಶೆಟ್ಟಿ ಮುನಿಯಾಲು ಆರೋಪ
ಉಡುಪಿ, ಜ.6: ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದ ಲ್ಲಿರುವ ಪರಶುರಾಮ ಥೀಮ್ ಪಾರ್ಕಿನಲ್ಲಿ ಮೊನ್ನೆ ನಡೆದ ತಾಮ್ರ ಹೊದಿಕೆ ಕಳ್ಳತನ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಇದು ಕ್ಷೇತ್ರದ ಶಾಸಕ ಸುನಿಲ್ಕುಮಾರ್ ಅವರ ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಕಳ್ಳತನ ನಡೆದು ಅದಕ್ಕೆ ಸಂಬಂಧಪಟ್ಟವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲೇ ಸುನಿಲ್ ಕುಮಾರ್ ತನ್ನ ಫೇಸ್ಬುಕ್ ಪೋಸ್ಟ್ ಮೂಲಕ ಕಳ್ಳತನದ ಮಾಹಿತಿಯನ್ನು ಹಂಚಿಕೊಳ್ಳಲು ಹೇಗೆ ಸಾಧ್ಯವಾ ಯಿತು..? ಎಂದು ಉಡುಪಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಪೊಲೀಸರಿಗೆ ಮಾಹಿತಿ ಸಿಕ್ಕಿ ಅವರು ಪ್ರಕರಣ ದಾಖಲಿಸಿಕೊಳ್ಳುವ ಮೊದಲೇ ಕಳ್ಳತನದ ಪ್ರಥಮ ಮಾಹಿತಿ ಸುನಿಲ್ ಕುಮಾರ್ಗೆ ಹೇಗೆ ದೊರಕಿತು...?. ಘಟನೆ ನಡೆದ ಮರುದಿನ ಸುನಿಲ್ ಕುಮಾರ್ ಮತ್ತವರ ತಂಡ ಪರಶುರಾಮ ಬೆಟ್ಟದ ಮೇಲೆ ಹೋಗಿ ಮಾಧ್ಯಮದ ಮುಂದೆ ಮಾತನಾಡಿದ ವಿಚಾರಗಳು ಇದು ಪೂರ್ವ ಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ ಎಂದವರು ಹೇಳಿದರು. ಮೊದಲಿಗೆ ತಾವೇ ಕಳ್ಳತನ ನಡೆಸಿ ನಂತರ ಇವರದೇ ತಂಡ ಬೆಟ್ಟದ ಮೇಲೆ ಹೋಗಿ ಅದನ್ನು ಪರಿಶೀಲನೆ ಮಾಡಿ, ನಂತರ ಅಲ್ಲಿ ಸ್ವಚ್ಚತಾ ಕಾರ್ಯದ ಕಾರ್ಯಕ್ರಮ ಮಾಡುತ್ತೇವೆ ಎಂದಿರುವುದು ಏನನ್ನು ಸೂಚಿಸುತ್ತದೆ...?. ಬೆಟ್ಟದ ಮೇಲೆ ಯಾವುದೇ ರಕ್ಷಣೆ ಇಲ್ಲದೇ, ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳಿರುವಾಗ, ರಸ್ತೆಗೆ ಕಾಣುವಂತೆ ಎತ್ತರ ದಲ್ಲಿದ್ದ ಮಾಡಿನ ಒಂದೆರಡು ಸಾವಿರ ರೂ.ಮೌಲ್ಯದ ಕೆಲವು ತುಂಡು ತಾಮ್ರದ ಹೊದಿಕೆಯನ್ನು ಮಾತ್ರ ಕಳ್ಳತನ ಮಾಡಿರುವುದು ಕಳ್ಳ ಯಾರು ಎಂಬುದಕ್ಕೆ ಸಾಕ್ಷಿ ನುಡಿಯುತ್ತದೆ ಎಂದು ಮುನಿಯಾಲು ನುಡಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸುನಿಲ್ ಕುಮಾರ್ ಮತ್ತವರ ತಂಡ ಥೀಮ್ ಪಾರ್ಕ್ನಲ್ಲಿ ಸ್ವಚ್ಛತಾ ಕಾರ್ಯ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಅವರೇ ಮಾಡಿದ ಕಸವನ್ನು, ತ್ಯಾಜ್ಯವನ್ನು ಅವರೇ ಸ್ವಚ್ಛ ಮಾಡುವುದು ಒಳ್ಳೆಯ ಕ್ರಮ. ಅದೇ ರೀತಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಕ್ಕೂ ನಮ್ಮ ಸಹಮತವಿದೆ. ಅಲ್ಲಿಗೆ ಬರುವ ಎಲ್ಲರೂ, ಶಾಸಕರು ಮತ್ತವರ ತಂಡ ಪರಶುರಾಮನ ಕಂಚಿನ ಮೂರ್ತಿಯ ಹೆಸರಿನಲ್ಲಿ ಅಲ್ಲಿ ಮಾಡಿದ ಅವಾಂತರವನ್ನು, ಬೆಟ್ಟದ ಮೇಲೆ ನಿಂತಿರುವ ನಕಲಿ ಮೂರ್ತಿ ಯನ್ನು ನೋಡಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಲ್ಲರು ಎಂದು ವ್ಯಂಗ್ಯವಾಡಿದರು. ಉಮಿಕಲ್ ಬೆಟ್ಟದ ಮೇಲೆ ಮತ್ತೆ ಭವ್ಯವಾದ ಪರಶುರಾಮನ ಪ್ರತಿಮೆ ನಿರ್ಮಾಣ ಆಗಬೇಕೆಂದು ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದಿರುವ ಮುನಿಯಾಲು, ನನ್ನ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ 5 ಲಕ್ಷ ರೂ. ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿದ್ದು ಅದರಂತೆ ನಾನು ಮೊತ್ತವನ್ನು ಪಾವತಿಸಿ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇನೆ ಎಂದರು. ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಕಂಗೆಟ್ಟಿರುವ ಶಾಸಕರು ಸಾರ್ವಜನಿಕರ ಗಮನವನ್ನು ಸೆಳೆಯಲು ಮತ್ತೆ ಹಳೆಯ ನಾಟಕವಾಡುತಿದ್ದು, ಎಲ್ಲರ ಗಮನ ಸೆಳೆಯಲು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶಾಸಕರು ಅಲ್ಲಿರುವ ಕಸವನ್ನು ಎತ್ತಲೇ ಬೇಕು ಎಂದು ಲೇವಡಿ ಮಾಡಿದರು. ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಮತ್ತೆ ಶಾಸ್ತ್ರೋಕ್ತವಾಗಿ ಪುನರಾರಂಭಿಸಬೇಕೆಂಬುದು ನನ್ನ ಉದ್ದೇಶವಾಗಿದೆ. ಆದರೆ ಅದಕ್ಕೂ ಸುನಿಲ್ ಕುಮಾರ್ ತಡೆಯೊಡ್ಡುವ ಕೆಲಸ ಮಾಡುತಿದ್ದಾರೆ. ಪರಶುರಾಮ ಪಾರ್ಕ್ ಆವರಣದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕೆಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಇನ್ನೂ ಕೂಡ ಸಿಸಿ ಕ್ಯಾಮೆರಾ ಅಳವಡಿಸದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿ ಯಾಗಿದೆ. ಅಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವೇ ಹೊಣೆ ಆಗುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಪರಶುರಾಮ ಥೀಮ್ ಪಾರ್ಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಡಳಿತವೇ ನಡೆಸಿ ಅಲ್ಲಿನ ಸುರಕ್ಷತೆಯನ್ನು ಕಾಪಾಡಬೇಕು. ಪೊಲೀಸರು ಕಳ್ಳತನ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಕಾರ್ಕಳ ಮತ್ತು ಹೆಬ್ರಿಯ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತ ರಿದ್ದರು.
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ: ನಾಲ್ವರ ಬಂಧನ, 60 ಬೈಕ್ ವಶಕ್ಕೆ
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಕೆ.ಆರ್.ಪುರ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 60 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ರಂಜಿತ್, ಯುವರಾಜ್, ವಿನೋದ್ ಹಾಗೂ ಮಣಿಕಂಠ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ. ಈ ಆರೋಪಿಗಳಿಂದ ಬರೋಬ್ಬರಿ 60 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳು ಕಳ್ಳತನಕ್ಕೆ ವಿಶೇಷ ತಂತ್ರಗಳನ್ನು ಬಳಸುತ್ತಿದ್ದರು. ನಕಲಿ ಕೀಲಿಗಳನ್ನು ಉಪಯೋಗಿಸಿ ಅಥವಾ ಹ್ಯಾಂಡಲ್ ಲಾಕ್ ಮುರಿದು ಕೆಲವೇ ನಿಮಿಷಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ದಿನಕ್ಕೆ ಸರಾಸರಿ ನಾಲ್ಕು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಸಿಸಿಟಿವಿ ಆಧಾರಿಸಿ ಬಂಧನ : ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು. ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳನ್ನು ತಮಿಳುನಾಡಿನ ಜೋಲಾರಪೇಟೆ ಹಾಗೂ ತಿರುಪತ್ತೂರು ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ | ಮಹಾದಾಸೋಹದಲ್ಲಿ 400 ಮಂದಿ ಬಾಣಸಿಗರಿಂದ ಮಿರ್ಚಿ ತಯಾರಿಕೆ
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಜ.6ರ ಮಂಗಳವಾರದಂದು ಉತ್ತರ ಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿ ವಿತರಿಸಲಾಯಿತು. ಮಿರ್ಚಿ ತಯಾರಿಕೆಗೆ 25 ಕ್ವಿಂಟಾಲ್ ಹಸೆ ಹಿಟ್ಟು, 12 ಬ್ಯಾರಲ್ ಎಣ್ಣೆ, 22 ಕ್ವಿಂಟಾಲ್ ಮೆಣಸಿನಕಾಯಿ, ರುಚಿಗೆ ತಕ್ಕಂತೆ ಅಜಿವಾನ, ಸಣ್ಣ ಉಪ್ಪು, ಸೊಡಾಪುಡಿ ಬಳಸಲಾಗಿದೆ. ಮಿರ್ಚಿ ತಯಾರಿಕೆಗೆ ಐವತ್ತು ಜನರ ನಾಲ್ಕು ತಂಡದಂತೆ ಒಟ್ಟು 400 ಜನ ಬಾಣಸಿಗರು ಹಾಗೂ ಅವರಿಗೆ 150 ಜನ ಸಹಾಯ ಮಾಡುವುದರ ಮೂಲಕ ಮಿರ್ಚಿ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟು 6 ಲಕ್ಷ ಮಿರ್ಚಿಗಳನ್ನು ವಿವಿಧ ಗ್ರಾಮದ ಬಾಣಸಿಗರು ಆಗಮಿಸಿ ತಯಾರಿಸುವುದರ ಮೂಲಕ ಸೇವೆಗೈದರು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
ಕುಂದಾಪುರ| ಬಸ್-ಟಿಪ್ಪರ್ ಅಪಘಾತ ಪ್ರಕರಣ: ಮೂವರ ವಿರುದ್ಧ ಪ್ರಕರಣ ದಾಖಲು, ಇಬ್ಬರ ಬಂಧನ
ಕುಂದಾಪುರ: ತಲ್ಲೂರು ಮೂಲಕ ನೇರಳಕಟ್ಟೆ-ಆಜ್ರಿ-ಸಿದ್ದಾಪುರ ರಸ್ತೆಯ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಟಿಪ್ಪರ್ ಮತ್ತು ಕೆಎಸ್ಆರ್ಟಿಸಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ಬಂಧಿತ ಆರೋಪಿಗಳು. ಕೆಂಪು ಮಣ್ಣು ಜಾಗದ ಮಾಲಕ ಮಂಜುನಾಥ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೆಎಸ್ಆರ್ಟಿಸಿ ಮತ್ತು ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಿಂದ ಬಸ್ಸಿನಲ್ಲಿದ್ದ 39 ಮಂದಿ ಪ್ರಯಾಣಿಕರ ಪೈಕಿ 18 ಮಂದಿಗೆ ಗಾಯಗೊಂಡಿದ್ದು, ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಹಿತ ಮೂರು ಮಂದಿ ತೀವ್ರ ಗಾಯ ಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆಎಸ್ಆರ್ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ಅಕ್ರಮ ಮಣ್ಣು ಸಾಗಾಟ: ಚಾಲಕ ಟಿಪ್ಪರ್ನಲ್ಲಿ ಮಣ್ಣು ಸಾಗಾಟದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಕೆಂಪು ಮಣ್ಣು ತುಂಬಿಸಿ ಕೊಂಡು ಕಿರಿದಾದ ರಸ್ತೆಯಲ್ಲಿ ಓಡಿಸಿರುವುದಾಗಿ ದೂರಲಾಗಿದೆ. ಟಿಪ್ಪರ್ ಚಾಲಕ ಎದುರಿನಿಂದ ಬರುವ ವಾಹನಗಳಲ್ಲಿರುವ ಪ್ರಯಾಣಿಕರಿಗೆ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎಂಬ ಅರಿವಿದ್ದರೂ ಕೂಡ ವಿಮಾ ಪತ್ರ(ಇನ್ಸೂರೆನ್ಸ್), ಪರವಾನಿಗೆ ಇಲ್ಲದ ಟಿಪ್ಪರ್ನಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವರು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗದಲ್ಲಿರಿಸಲಾಗಿದೆ ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿವೆ.
Gruha Lakshmi Scheme: ಮಹಿಳೆಯರ 2000 ರೂ ಗೃಹಲಕ್ಷ್ಮಿ ಹಣ ದುರುಪಯೋಗ; 11 ಸಾವಿರ ಕೋಟಿ ರೂ. ನಾಪತ್ತೆ: ಸಿ ಟಿ ರವಿ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣದ ದುರುಪಯೋಗ, 2 ವರ್ಷದಲ್ಲಿ 11 ಸಾವಿರ ಕೋಟಿ ರೂ. ಹಣ ನಾಪತ್ತೆಯಾಗಿದೆ. ಇದು ಸುರೇಶ್ ಕುಮಾರ್ ಅವರು ಹೇಳಿದಂತೆ ಹೈದರಾಲಿ ಲೆಕ್ಕ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಡ ಮಹಿಳೆಯರಿಗೆ ಕೊಡಬೇಕಾದ ಹಣ ನುಂಗಿದ ಸರಕಾರದ
ಜಿಬಿಎ ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸಿದ ಮಾನದಂಡಗಳೇನು? : ಸರಕಾರದಿಂದ ಮಾಹಿತಿ ಕೇಳಿದ ಹೈಕೋರ್ಟ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸಲಾಗಿರುವ ಪ್ರಕ್ರಿಯೆ ಮತ್ತು ಮಾನದಂಡಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಜಿಬಿಎ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ಹೆಸರನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಿರುವುದನ್ನು ಆಕ್ಷೇಪಿಸಿ ಎಚ್.ಸಿ. ಬಸವರಾಜಪ್ಪ ಸೇರಿ ಹೆಮ್ಮಿಗೆಪುರ ಹಾಗೂ ಸುತ್ತಲಿನ ಪ್ರದೇಶಗಳ 15 ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಾರ್ಡ್ ಮರುವಿಂಗಡಣೆ, ಮೀಸಲಾತಿ ನಿಗದಿ ಇವೆಲ್ಲವೂ ಕಾನೂನು ಪ್ರಕ್ರಿಯೆಗಳು ಎಂಬುದೇನೋ ಸರಿ. ಆದರೆ, ವಾರ್ಡ್ಗಳ ಹೆಸರು ಬದಲಿಸುವುದು ಏತಕ್ಕೆ? ಎಂದು ಪ್ರಶ್ನಿಸಿತಲ್ಲದೆ, ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು. ಅರ್ಜಿದಾರರ ವಾದವೇನು? ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಿಬಿಎ ಅಸ್ತಿತ್ವಕ್ಕೆ ಬಂದು ವಾರ್ಡ್ಗಳ ಮರುವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ. ಬಿಬಿಎಂಪಿ ರಚನೆ ಆದಾಗಿಂದಲೂ ಹೆಮ್ಮಿಗೆಪುರ ವಾರ್ಡ್ ಅಸ್ತಿತ್ವದಲ್ಲಿದೆ. ಜಿಬಿಎ ರಚನೆ ಬಳಿಕ 2025ರ ಸೆಪ್ಟೆಂಬರ್ 30ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಹೆಮ್ಮಿಗೆಪುರ ವಾರ್ಡ್ ಎಂದೇ ಇತ್ತು. ಆಕ್ಷೇಪಣೆ ಆಲಿಸಿದ ಬಳಿಕ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಿ ಹೆಮ್ಮಿಗೆಪುರ ವಾರ್ಡ್ ಎಂದು ಹೆಸರು ಅಂತಿಮಗೊಳಿಸಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಮುಂದುವರಿದು, ಡಿಸೆಂಬರ್ 1ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ ಯಾವುದೇ ಆಕ್ಷೇಪಣೆಗಳನ್ನೂ ಆಲಿಸದೆ ಹೆಸರನ್ನು ಹೆಮ್ಮಿಗೆಪುರ ವಾರ್ಡ್ನಿಂದ ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಲಾಗಿದೆ. ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ರಾಜಕೀಯ ಕಾರಣಗಳಿಗೆ ಯಶವಂತಪುರ ಹಾಲಿ ಶಾಸಕ ಎಸ್. ಸೋಮಶೇಖರ್ ಅವರ ಸೂಚನೆಯಂತೆ ಹೆಸರು ಬದಲಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಟ ಭಾಗ ಮತ್ತು ಸಮುದಾಯದ ಮತಗಳನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪಿಸಿದರು. ಸರ್ಕಾರದ ಪರ ವಕೀಲರು, ಹೆಸರು ಬದಲಿಸಲು ಜಿಬಿಎ ಕಾಯ್ದೆಯಲ್ಲಿ ಅವಕಾಶವಿದೆ. ಅದಾಗ್ಯೂ, ಈ ಕುರಿತು ಸರ್ಕಾರದಿಂದ ಹೆಚ್ಚಿನ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ಯಾದಗಿರಿ | ಸರಕಾರಿ ಕಚೇರಿಗಳಿಗೆ ರಾಜ್ಯ ಲೋಕಾಯುಕ್ತರಿಂದ ಅನಿರೀಕ್ಷಿತ ಭೇಟಿ
ಫಲಾನುಭವಿ ಆಧಾರಿತ ಯೋಜನೆಗಳ ಲಾಭ ರೈತರಿಗೆ ಸಕಾಲಕ್ಕೆ ತಲುಪಿಸಿ: ನ್ಯಾ.ಬಿ.ಎಸ್.ಪಾಟೀಲ್
ಛಲವಾದಿ ನಾರಾಯಣಸ್ವಾಮಿಗೆ ಜೀವ ಬೆದರಿಕೆ ಆರೋಪ | ಆರೋಪಿಗಳನ್ನು ತಕ್ಷಣ ಬಂಧಿಸದಿದ್ದರೆ ಪ್ರತಿಭಟನೆ : ಪರಶುರಾಮ ಕುರಕುಂದಿ
ಯಾದಗಿರಿ : ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೆಂಕಟೇಶ್ ಅಪ್ಪು ಎಂಬ ಹೆಸರಿನ ಫೇಸ್ಬುಕ್ ಐಡಿ ಮೂಲಕ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ತಕ್ಷಣವೇ ಬಂಧಿಸದಿದ್ದರೆ ಯಾದಗಿರಿ ಜಿಲ್ಲೆದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನಾತ್ಮಕ ಹುದ್ದೆ ಹೊಂದಿರುವ ವಿರೋಧ ಪಕ್ಷದ ನಾಯಕನಿಗೆ ಜೀವ ಬೆದರಿಕೆ ಹಾಕುವುದು ಅತ್ಯಂತ ಗಂಭೀರ ಅಪರಾಧ. ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ನೇರ ಧಕ್ಕೆ ತರುತ್ತವೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಭಯ ಸೃಷ್ಟಿಸುವ ಪ್ರಯತ್ನವನ್ನು ಯಾವತ್ತೂ ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಈ ಪ್ರಕರಣದ ಕುರಿತು ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ, ಬೆದರಿಕೆ ಸಂದೇಶಗಳನ್ನು ಕಳುಹಿಸಿದ ವ್ಯಕ್ತಿಯ ಗುರುತು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಯಾದಗಿರಿ ಜಿಲ್ಲೆದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪರಶುರಾಮ ಕುರಕುಂದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಹಾರಾಷ್ಟ್ರದಲ್ಲಿ BMC ಚುನಾವಣೆ: ಮತ್ತೆ ಒಂದಾದ ಪವಾರ್ ಕುಟುಂಬ, ಠಾಕ್ರೆ ಸಹೋದರರು; ಹೇಗಿದೆ ಪವರ್ ಗೇಮ್?
ಮಹಾರಾಷ್ಟ್ರದ 29 ಸ್ಥಳೀಯ ಸಂಸ್ಥೆಗಳಿಗೆ ಜನವರಿ 15 ರಂದು ಚುನಾವಣೆಗಳು ನಡೆಯಲಿದ್ದು, 2026ರ ಮೊದಲ ಚುನಾವಣಾ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಮಹಾರಾಷ್ಟ್ರ ಚುನಾವಣಾ ಆಯೋಗದ ಪ್ರಕಾರ, ಈ ನಿಗಮಗಳಿಗೆ 2015 ಮತ್ತು 2018ರ ನಡುವೆ ವಿಭಿನ್ನ ದಿನಾಂಕಗಳಲ್ಲಿ ಚುನಾವಣೆಗಳು ನಡೆದಿದ್ದವು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ಇತರ 19 ಪ್ರಮುಖ ನಗರಗಳಿಗೆ ಕೊನೆಯದಾಗಿ 2017ರಲ್ಲಿ ಚುನಾವಣೆಗಳು ನಡೆದವು. ವಸಾಯಿ–ವಿರಾರ್, ಕೊಲ್ಹಾಪುರ, ಔರಂಗಾಬಾದ್, ನವಿ ಮುಂಬೈ ಮತ್ತು ಕಲ್ಯಾಣ್–ಡೊಂಬಿವಲಿ ಸೇರಿದಂತೆ ಐದು ಪುರಸಭೆಗಳಿಗೆ 2015ರಲ್ಲಿ ಚುನಾವಣೆ ನಡೆದಿದ್ದು, ಧುಲೆ, ಜಲಗಾಂವ್, ಅಹ್ಮದ್ನಗರ ಮತ್ತು ಸಾಂಗ್ಲಿ–ಮಿರಾಜ್–ಕುಪ್ವಾಡ್ ಗಳು 2018ರಲ್ಲಿ ತಮ್ಮ ಮೇಯರ್ ಗಳನ್ನು ಆಯ್ಕೆ ಮಾಡಿದ್ದವು. ಈ ಚುನಾವಣೆಗೆ ಮುನ್ನ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಸಂಭವಿಸಿವೆ. ಠಾಕ್ರೆ ಮತ್ತು ಪವಾರ್ ಕುಟುಂಬಗಳು ಮತ್ತೆ ಒಂದಾಗಿದ್ದು, ವಿವಿಧ ಪಕ್ಷಗಳ ಅನೇಕ ಕಾರ್ಪೊರೇಟರ್ ಗಳು ಚುನಾವಣೆಗೆ ಮುಂಚೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. BMC 74,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಬಜೆಟ್ ಹೊಂದಿದ್ದು ದೇಶದ ಅತ್ಯಂತ ಶ್ರೀಮಂತ ಪುರಸಭೆಯಾಗಿದೆ. ಅದರ ಸಂಪತ್ತು ಮತ್ತು ಅಲ್ಲಿನ ಕೈಗಾರಿಕೆಗಳ ಕಾರಣದಿಂದ ಈ ಪ್ರದೇಶ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ. ಆದ್ದರಿಂದ, ಈ ಪ್ರದೇಶಗಳ ನಿಗಮಗಳು ರಾಜಕೀಯ ಪಕ್ಷಗಳಿಗೆ ಬಹಳ ಮುಖ್ಯವಾಗಿವೆ. ಮಹಾಯುತಿ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA) ಪ್ರಮುಖ ಸ್ಪರ್ಧಿಗಳಾಗಿವೆ. ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳೂ ಕಣದಲ್ಲಿದ್ದು, ನಗರ ಆಡಳಿತದ ಸ್ಥಳೀಯ ಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಲು ನಿರ್ಧರಿಸಿವೆ. ಮಹಾಯುತಿಯ ಘಟಕಗಳಾದ ಬಿಜೆಪಿ ಮತ್ತು ಶಿವಸೇನಾ ಕ್ರಮವಾಗಿ 137 ಮತ್ತು 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಮಹಾಯುತಿ ಒಕ್ಕೂಟದ ಮೂರನೇ ಮಿತ್ರ ಪಕ್ಷವಾದ NCP ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, 94 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಂದರೆ ಯಾವುದೇ ನಾಮಪತ್ರಗಳನ್ನು ಹಿಂತೆಗೆದುಕೊಳ್ಳದಿದ್ದರೆ, ಪಕ್ಷವು ಸುಮಾರು 100 ಸ್ಥಾನಗಳಲ್ಲಿ ತನ್ನ ರಾಜ್ಯ ಮಟ್ಟದ ಪಾಲುದಾರರೊಂದಿಗೆ ಸ್ಪರ್ಧಿಸಲಿದೆ. ವಿರೋಧ ಪಕ್ಷ ಕಾಂಗ್ರೆಸ್ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರ ಹೊಸ ಮಿತ್ರ ಪಕ್ಷವಾದ ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಾಡಿ (VBA)ಗೆ ಚುನಾವಣಾ ಪೂರ್ವ ಒಪ್ಪಂದದಲ್ಲಿ 62 ಸ್ಥಾನಗಳನ್ನು ನೀಡಿದ್ದರೂ, 42 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಮಿತ್ರ ಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್ಎಸ್ಪಿ) ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) 150ಕ್ಕೂ ಹೆಚ್ಚು ಸ್ಥಾನಗಳಲ್ಲಿ, NCP (ಎಸ್ಪಿ) 11 ಸ್ಥಾನಗಳಲ್ಲಿ ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಉಳಿದ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. 20 ವರ್ಷಗಳ ನಂತರ ಠಾಕ್ರೆ ಸಹೋದರರಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗಿದ್ದಾರೆ. ►ಮರಾಠಿ ಅಸ್ಮಿತೆ ಶಿವಸೇನಾ (UBT) ಮತ್ತು ಎಂಎನ್ಎಸ್ ತಮ್ಮ ರಾಜಕೀಯ ಪರಂಪರೆಯನ್ನು ದಿವಂಗತ ಬಾಳಾ ಠಾಕ್ರೆ ಸ್ಥಾಪಿಸಿದ ಶಿವಸೇನಾದಿಂದ ಪಡೆದಿದ್ದು, ಅದು ಮರಾಠಿ ಅಸ್ಮಿತೆಯನ್ನು ಆಧರಿಸಿದೆ. ಅಂದಿನಿಂದ ಮರಾಠಿ ಅಸ್ಮಿತೆ ಈ ಎರಡೂ ಪಕ್ಷಗಳಿಗೆ ಭಾವನಾತ್ಮಕ ವಿಷಯವಾಗಿದೆ. 2006ರಲ್ಲಿ ಎಂಎನ್ಎಸ್ ಸ್ಥಾಪಿಸಿದ ಬಳಿಕ, ರಾಜ್ ಠಾಕ್ರೆ ತಮ್ಮ ರಾಜಕೀಯ ಟ್ರೇಡ್ಮಾರ್ಕ್ ಆಗಿ ಉತ್ತರ ಭಾರತ ವಿರೋಧಿ ನಿಲುವಿನ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಮತ್ತೊಂದೆಡೆ, ಉದ್ಧವ್ ಠಾಕ್ರೆ ತಮ್ಮ ಕಾರ್ಯಸೂಚಿಯನ್ನು ಮುನ್ನಡೆಸಲು ‘ಮರಾಠಿ ಮನೂಸ್’ ನಿರೂಪಣೆಯನ್ನು ಬೆಂಬಲಿಸಿದ್ದಾರೆ. 2024ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕಳಪೆ ಪ್ರದರ್ಶನ ನೀಡಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ, ಹಿಂದಿ ಹೇರಿಕೆಗೆ ವಿರೋಧದ ಮೂಲಕ ಮರಾಠಿ ಅಸ್ಮಿತೆಯ ವಿಷಯವು ಮತದಾರರಲ್ಲಿ ಮರಾಠಿ ಹೆಮ್ಮೆಯನ್ನು ಹುಟ್ಟುಹಾಕಲು ಎರಡೂ ಪಕ್ಷಗಳಿಗೆ ಹೊಸ ಶಕ್ತಿಯನ್ನು ನೀಡಿದೆ. ►‘ಪವರ್’ ಮೈತ್ರಿ ಇತ್ತ ಅಜಿತ್ ಪವಾರ್ ನೇತೃತ್ವದ NCP ಕೂಡ ಪಿಂಪ್ರಿ–ಚಿಂಚ್ವಾಡ್ ಮತ್ತು ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನು NCP (ಶರದ್ ಪವಾರ್ ಬಣ) ಜೊತೆ ಸೇರಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಪಿಂಪ್ರಿ–ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ‘ಗಡಿಯಾರ’ ಮತ್ತು ‘ತುತ್ತೂರಿ’ ಒಂದಾಗಿವೆ. ಹಿರಿಯ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಪಕ್ಷದಿಂದ ಬೇರ್ಪಟ್ಟು, ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆಯೊಂದಿಗೆ ಕೈಜೋಡಿಸಿದ ಎರಡು ವರ್ಷಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಶರದ್ ಪವಾರ್ ಅವರಿಗೆ ವಯಸ್ಸಾಗಿದ್ದು ಪಕ್ಷವನ್ನು ಮುನ್ನಡೆಸುವುದನ್ನು ಅಜಿತ್ ಪವಾರ್ ವಿರೋಧಿಸಿದ್ದರು. ಹೊಸ ಮೈತ್ರಿಕೂಟದಡಿಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ಒಕ್ಕೂಟದೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆದರೆ ಶರದ್ ಪವಾರ್ ಅವರ ಬಣವು ವಿರೋಧ ಪಕ್ಷದೊಂದಿಗೆ ಉಳಿಯುವುದಾಗಿ ಘೋಷಿಸಿತು. ಬಳಿಕ ಚುನಾವಣಾ ಆಯೋಗವು ಅಜಿತ್ ಪವಾರ್ ಅವರ ಬಣವನ್ನು ಕಾನೂನುಬದ್ಧ NCPಯಾಗಿ ಗುರುತಿಸಿ ‘ಗಡಿಯಾರ’ ಚಿಹ್ನೆಯನ್ನು ಅವರಿಗೆ ನೀಡಿತು. ಶರದ್ ಪವಾರ್ ಅವರ ಬಣಕ್ಕೆ ‘ತುತ್ತೂರಿ’ ಚಿಹ್ನೆ ದೊರಕಿತು. ಎರಡೂ ಬಣಗಳು ಪ್ರತ್ಯೇಕವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿವೆ. 2024ರ ಲೋಕಸಭಾ ಚುನಾವಣೆಯ ನಂತರ ಹಿನ್ನಡೆ ಅನುಭವಿಸಿದಾಗ ಕುಟುಂಬವನ್ನು ಕೈಬಿಟ್ಟಿದ್ದು ‘ತಪ್ಪು’ ಎಂದು ಅಜಿತ್ ಪವಾರ್ ಒಪ್ಪಿಕೊಂಡರು. ►NDA ಜತೆ ಕೈಜೋಡಿಸಲಿದೆಯೇ NCP (ಎಸ್ಪಿ)? ಪ್ರಚಾರದ ವೇಳೆ ಶಿವಸೇನಾ ಸಚಿವ ಸಂಜಯ್ ಶಿರ್ಸತ್ ಅವರು, NCP (ಎಸ್ಪಿ) ಬಿಜೆಪಿ ನೇತೃತ್ವದ NDA ಸರ್ಕಾರಕ್ಕೆ ಸೇರುವ ಸಾಧ್ಯತೆಯ ಕುರಿತು ಊಹಾಪೋಹಗಳನ್ನು ಹುಟ್ಟುಹಾಕಿದ್ದರು. ಭವಿಷ್ಯದಲ್ಲಿ ಶರದ್ ಪವಾರ್ NDA ಸೇರುವ ಸಾಧ್ಯತೆ ಇದೆ. ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ಯಾರಾದರೂ ನಂಬಿದ್ದರೆ? ಆದರೆ ಅವರು ಹಾಗೆ ಮಾಡಿದರು. ಅವರು ಎರಡುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಅವರು ಸೋನಿಯಾ ಗಾಂಧಿಯನ್ನು ವಿರೋಧಿಸಿ ಕಾಂಗ್ರೆಸ್ ತೊರೆದರು. ನಂತರ ತಕ್ಷಣವೇ ಅವರೊಂದಿಗೆ ಮೈತ್ರಿ ಮಾಡಿಕೊಂಡರು. ಅವರು NDA ಸೇರಿದರೆ ಆಶ್ಚರ್ಯವೇನಿಲ್ಲ. ರಾಜಕೀಯವನ್ನು ಅಧ್ಯಯನ ಮಾಡಿದರೆ, ಇದು ಅವರ ವೃತ್ತಿಜೀವನದ ಮಾದರಿಯೇ ಎಂದು ಶಿರ್ಸತ್ ಹೇಳಿದ್ದಾರೆ. ►ಮೈತ್ರಿ ಲೆಕ್ಕಾಚಾರ ರಾಜ್ಯಾದ್ಯಂತ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಬಿಜೆಪಿ ಹೆಚ್ಚಿನ ಸ್ಥಳಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಗೆಲುವಿನ ಸಾಧ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ, ವಿಶೇಷವಾಗಿ ಮುಂಬೈನಲ್ಲಿ, ಅದು ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿರೋಧ ಪಕ್ಷಗಳು ಪರಸ್ಪರ ಕೈಜೋಡಿಸಿವೆ. ಪಿಂಪ್ರಿ–ಚಿಂಚ್ವಾಡ್ನಲ್ಲಿ ಪವಾರ್ ಅವರ ಎರಡೂ ಬಣಗಳು ಒಟ್ಟಾಗಿವೆ. ನಾಸಿಕ್ನಲ್ಲಿ ಶಿಂಧೆ ಮತ್ತು ಅಜಿತ್ ಪವಾರ್ ಬಿಜೆಪಿ ವಿರುದ್ಧ ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಕೂಡ ದೀರ್ಘಕಾಲೀನ ಕಾರ್ಯತಂತ್ರವನ್ನು ಅನುಸರಿಸಿದ್ದು, ರಾಜ್ಯದ ಏಕೈಕ ವಿಶ್ವಾಸಾರ್ಹ ಬಿಜೆಪಿ ವಿರೋಧಿ ಪಕ್ಷವೆಂದು ತನ್ನನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂಬೈ, ಲಾತೂರ್ ಮತ್ತು ನಾಂದೇಡ್ನಲ್ಲಿ ವಿಬಿಎ ಜೊತೆ ಹಾಗೂ ಧಂಗರ್ (ಕುರುಬ) ಸಮುದಾಯದ ಬಲವಾದ ಬೆಂಬಲ ಹೊಂದಿರುವ ಮಹಾದೇವ್ ಜಂಕರ್ ಅವರ ರಾಷ್ಟ್ರೀಯ ಸಮಾಜ ಪಕ್ಷ (ಆರ್ಎಸ್ಪಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಇಚಲಕರಂಜಿಯಲ್ಲಿ ಕಾಂಗ್ರೆಸ್ ರಾಜು ಶೆಟ್ಟಿ ಅವರ ಸ್ವಾಭಿಮಾನಿ ಪಕ್ಷವನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಶರದ್ ಪವಾರ್ ಅವರ ರಾಜಕೀಯ ಶೈಲಿಗೆ ತೀವ್ರ ವಿರೋಧ ಹೊಂದಿದ್ದ ಕಾರಣ ಪ್ರಕಾಶ್ ಅಂಬೇಡ್ಕರ್, ಜಂಕರ್ ಮತ್ತು ಶೆಟ್ಟಿ ಕಾಂಗ್ರೆಸ್ನಿಂದ ದೂರ ಉಳಿದಿದ್ದರು. ವರ್ಷಗಳ ಕಾಲ ಮಹಾರಾಷ್ಟ್ರ ಕಾಂಗ್ರೆಸ್ ಪವಾರ್ ಅವರ ನಿಷ್ಠಾವಂತ ಮಿತ್ರನಾಗಿ ಉಳಿದಿತ್ತು. ಆದರೆ ಪವಾರ್ ಬಿಜೆಪಿಗೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ತನ್ನದೇ ಆದ ಹಾದಿಯನ್ನು ರೂಪಿಸಿಕೊಳ್ಳಲು ಮುಂದಾಗಿದೆ. ►MVA ವಿಭಜನೆಯಾಗುತ್ತದೆಯೇ? ಅಧಿಕಾರಕ್ಕಾಗಿ ಠಾಕ್ರೆ ಸಹೋದರರು ಮತ್ತು ಹಿರಿಯ–ಕಿರಿಯ ಪವಾರ್ ಗಳ ಒಗ್ಗೂಡಿಕೆ ಮಹಾ ವಿಕಾಸ್ ಅಘಾಡಿ (MVA) ತೆರೆಮರೆಗೆ ಸರಿಯುತ್ತಿರುವುದನ್ನು ಸೂಚಿಸುತ್ತದೆ. ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ NCPಯೊಂದಿಗೆ 2019ರಲ್ಲಿ ರಚಿಸಿದ ಒಕ್ಕೂಟವೇ MVA. 2024ರ ಲೋಕಸಭಾ ಚುನಾವಣೆಯಲ್ಲಿ ಈ ವಿರೋಧ ಪಕ್ಷದ ಒಕ್ಕೂಟ ರಾಜ್ಯದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿತು. ಆದರೆ ಅದೇ ವರ್ಷದ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ MVA 288 ಸ್ಥಾನಗಳಲ್ಲಿ ಕೇವಲ 46 ಸ್ಥಾನಗಳನ್ನು ಮಾತ್ರ ಗಳಿಸಿತು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ, ರಾಜ್ ಠಾಕ್ರೆ ಅವರ ಎಂಎನ್ಎಸ್ ಉತ್ತರ ಭಾರತೀಯರನ್ನು ‘ಹೊರಗಿನವರು’ ಎಂದು ಹೇಳಿದ್ದರಿಂದ ಕಾಂಗ್ರೆಸ್ ಮೈತ್ರಿಕೂಟದಿಂದ ದೂರ ಉಳಿದಿದೆ. ಜನವರಿ 15ರ ಚುನಾವಣೆಯಲ್ಲಿ ಎಲ್ಲಾ 227 ವಾರ್ಡ್ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮೊದಲೇ ಘೋಷಿಸಿದ್ದ ಕಾಂಗ್ರೆಸ್ ಈಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಿಬಿಎ ಜೊತೆ ಕೈಜೋಡಿಸಿ 62 ಸ್ಥಾನಗಳನ್ನು ಹಂಚಿಕೊಂಡಿದೆ. ವಿಬಿಎ ಹೊರತುಪಡಿಸಿ, ಕಾಂಗ್ರೆಸ್ ಆರ್ಎಸ್ಪಿಗೆ 10 ಸ್ಥಾನಗಳು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಗವಾಯಿ ಬಣ)ಗೆ ಎರಡು ಸ್ಥಾನಗಳನ್ನು ಹಂಚಿದೆ. ಮಹಾರಾಷ್ಟ್ರದಲ್ಲಿ ತನ್ನದೇ ಆದ ಹಾದಿಯನ್ನು ರೂಪಿಸಲು ಕಾಂಗ್ರೆಸ್ ತೆಗೆದುಕೊಂಡ ಈ ನಡೆ ದಿಟ್ಟ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ. 2009ರವರೆಗೆ ರಾಜ್ಯ ರಾಜಕೀಯದಲ್ಲಿ ಬಲವಾದ ಅಸ್ತಿತ್ವ ಹೊಂದಿದ್ದ ಕಾಂಗ್ರೆಸ್ ನಂತರ ಕ್ರಮೇಣ ಸ್ಥಾನಗಳನ್ನು ಕಳೆದುಕೊಂಡಿದೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಕೇವಲ 16 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಅದರ ಮತ ಹಂಚಿಕೆ 12.42% ಆಗಿದೆ. ►ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿದ್ದು ಯಾರು? ಹಿಂದಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಪ್ರಾಬಲ್ಯ ಸಾಧಿಸಿ ಮುಂಬೈ ಮತ್ತು ಥಾಣೆ ಸೇರಿದಂತೆ 15 ಪುರಸಭೆಗಳಲ್ಲಿ ಸರ್ಕಾರ ರಚಿಸಿವೆ. ಪುಣೆ, ಜಲಗಾಂವ್, ಮೀರಾ–ಭಯಂದರ್, ನಾಗ್ಪುರ ಮತ್ತು ಪಿಂಪ್ರಿ–ಚಿಂಚ್ವಾಡ್ ಸೇರಿದಂತೆ 13 ನಿಗಮಗಳಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಶಿವಸೇನಾ ತನ್ನ ಭದ್ರಕೋಟೆಯಾದ ಥಾಣೆಯಲ್ಲಿ ಬಹುಮತ ಸಾಧಿಸಿತು. ಮುಂಬೈನಲ್ಲಿ 2022ರಲ್ಲಿ ಅಧಿಕಾರಾವಧಿ ಮುಗಿಯುವವರೆಗೆ ಎರಡೂ ಪಕ್ಷಗಳು ಪಾಲುದಾರರಾಗಿ ಆಡಳಿತ ನಡೆಸಿದವು. ►ಪುರಸಭೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಯಾರು? 2025ರ ಡಿಸೆಂಬರ್ನಲ್ಲಿ ನಡೆದ ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟ 288 ಪುರಸಭೆಗಳು ಮತ್ತು ನಗರ ಪಂಚಾಯತ್ಗಳಲ್ಲಿ ಸುಮಾರು 207ರಲ್ಲಿ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿತು. 117ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಅತಿದೊಡ್ಡ ಲಾಭ ಗಳಿಸಿತು.
ಯಾದಗಿರಿ | ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಳ : ಹಣಮಂತ ಇಟಗಿ ಆರೋಪ
ಯಾದಗಿರಿ : ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕರ ಗನ್ಮ್ಯಾನ್ ಗುಂಡು ಹಾರಿಸಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಲ್ಲದೇ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮನೆ ಎದುರು ಗುಂಡು ಹಾರಿಸಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಿರುವ ದೃಶ್ಯಗಳು ವಿಡಿಯೋ ಫುಟೇಜ್ಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದರೂ, ಸಂಬಂಧಪಟ್ಟವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದರು. ಈ ಎಲ್ಲ ಘಟನೆಗಳನ್ನು ಮರೆಮಾಚಿ, ಬಿಜೆಪಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷಪಾತಿ ಹಾಗೂ ಉದ್ಧಟನಾ ಆಡಳಿತವನ್ನು ತೋರಿಸುತ್ತಿದೆ ಎಂದು ಹಣಮಂತ ಇಟಗಿ ಕಿಡಿಕಾರಿದರು. ಇದಲ್ಲದೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರು ಸಾರ್ವಜನಿಕವಾಗಿ ಅವಾಚ್ಯ ಶಬ್ದ ಬಳಸಿ ಜೀವ ಬೆದರಿಕೆ ಹಾಕಿರುವ ಪ್ರಕರಣದಲ್ಲಿಯೂ ಸರ್ಕಾರ ಮೌನ ವಹಿಸಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು, ಸಂಬಂಧಿಸಿದ ಜಿಲ್ಲಾ ವರಿಷ್ಠಾಧಿಕಾರಿಯನ್ನು ಅಮಾನತು ಮಾಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮತ್ತೊಂದೆಡೆ, ಬೀದರ್ ಜಿಲ್ಲೆಯಲ್ಲಿ ನಡೆದ ಕೆಡಿಪಿ ಸಭೆಯ ವೇಳೆ ಕಾಂಗ್ರೆಸ್ ಶಾಸಕೊಬ್ಬರು ಬಿಜೆಪಿ ಶಾಸಕರ ಮೇಲೆ ಗುಂಡಾ ವರ್ತನೆ ತೋರಿ ಹಲ್ಲೆಗೆ ಮುಂದಾದ ಘಟನೆ ಬಹಿರಂಗವಾಗಿದೆ. ಇಂತಹ ಗುಂಡಾ ಸ್ವಭಾವದ ಶಾಸಕರಿರುವ ಸರ್ಕಾರದಿಂದ ಜನಸಾಮಾನ್ಯರಿಗೆ ರಕ್ಷಣೆ ಸಿಗಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ಗುಂಡಾ ರಾಜಕಾರಣಕ್ಕೆ ಕಡಿವಾಣ ಹಾಕಬೇಕು ಎಂದು ಹಣಮಂತ ಇಟಗಿ ಆಗ್ರಹಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲ್ಯಾಟಿನ್ ಅಮೆರಿಕದ ಸಮಾಜವಾದಿ ರಾಷ್ಟ್ರಗಳು ತೊಡೆ ತಟ್ಟಲಾರಂಭಿಸಿವೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧದ ಕಾರ್ಯಾಚರಣೆಯನ್ನು ವಿರೋಧಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ತಾಕತ್ತಿದ್ದರೆ ತಮ್ಮನ್ನು ಬಂಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸವಾಲು ಹಾಕಿದ್ದಾರೆ. ಪೆಟ್ರೋ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಟ್ರಂಪ್ ಆಡಳಿತ ಕೊಲಂಬಿಯಾದಲ್ಲೂ ಸೈನಿಕ ಕಾರ್ಯಾಚರಣೆ ನಡೆಸಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಲ್ಲಿದೆ ಮಾಹಿತಿ.
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶ್ರೀಶೈಲ ಹೊಸಮನಿ ನೇಮಕ : ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನ
ಶಹಾಪುರ : ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯದರ್ಶಿಯಾಗಿ ಶ್ರೀಶೈಲ ಹೊಸಮನಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಳಮಟ್ಟದಿಂದಲೇ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು. ನೂತನ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಶೈಲ ಹೊಸಮನಿ ಮಾತನಾಡಿ, ನನ್ನ ಆಯ್ಕೆಗಾಗಿ ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಂತಪ್ಪ ಸಾಹು, ಮಲ್ಲಿಕಾರ್ಜುನ ಪೂಜಾರಿ, ನಿಜಗುಣ ದೊರನಹಳ್ಳಿ, ಹೊನ್ನಪ್ಪ ಗಂಗನಾಳ, ಭೀಮರಾಯ ಜುನ್ನ, ಶರಣಪ್ಪ ಭೂತಳಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Bengaluru | 3.5 ಕೋಟಿ ಮೌಲ್ಯದ ಮಾದಕ ವಸ್ತು ವಶ; ಇಬ್ಬರ ಬಂಧನ
ಬೆಂಗಳೂರು : ಹೊಸ ವರ್ಷಾಚರಣೆಯ ಪಾರ್ಟಿಗೆಂದು ಮಾದಕ ವಸ್ತು ತಂದಿಟ್ಟಿದ್ದ ಎಂಬಿಎ ಪದವೀಧರ ಸೇರಿದಂತೆ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 3.5 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ನಿವಾಸಿ, ಎಂಬಿಎ ಪದವೀಧರ ಮೊಹಮದ್ ತಾರಿಖ್(34) ಹಾಗೂ ಕಾಡುಗೋಡಿ ನಿವಾಸಿ, ಶೇಖ್ ಅಹಮದ್ ಅರ್ಬಾಸ್ ಖಾನ್(29) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮೊಹಮದ್ ತಾರಿಖ್ ಖಾಸಗಿ ಕಂಪೆನಿ ಯೊಂದರ ಉದ್ಯೋಗಿ. ಶೇಖ್ ಅಹಮದ್ ವೃತ್ತಿಯಲ್ಲಿ ಸೆಕೆಂಡ್ಹ್ಯಾಂಡ್ ಕಾರು ವ್ಯಾಪಾರಿ. ವಿದೇಶಿ ಪ್ರಜೆಯಿಂದ ಈ ಇಬ್ಬರು ಮಾದಕ ವಸ್ತು ಖರೀದಿಸಿ ಹೊಸ ವರ್ಷ ಚರಣೆಗೆ ತಂದಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಹೊಸ ವರ್ಷಾಚರಣೆಯ ಸಮಯದಲ್ಲಿ ಯುವಕರಿಗೆ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಮಾಹಿತಿಯನ್ನಾಧರಿಸಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ನಂತರ ಕಾರ್ಯಾಚರಣೆ ಕೈಗೊಂಡು ಡಿ.31ರಂದು ಹೊಸೂರು ರಸ್ತೆಯ ಹಿಂದೂ ಸ್ಮಶಾನದ ಬಳಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಬ್ಬ ಸಹಚರನೊಂದಿಗೆ ಸೇರಿಕೊಂಡು ಅಪರಿಚಿತ ವ್ಯಕ್ತಿಯಿಂದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿದ್ದು ಹೊಸ ವರ್ಷಾಚರಣೆಯ ಸಮಯದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಎಂಬಿಎ ಪದವೀಧರನನ್ನು ಸುದೀರ್ಘ ವಿಚಾರಣೆ ನಡೆಸಿ, ಸ್ಮಶಾನದಲ್ಲಿರುವ ಸಮಾಧಿಯೊಂದರ ಪಕ್ಕದಲ್ಲಿ ಅಡಗಿಸಿಟ್ಟಿದ್ದ 2 ಕೆ.ಜಿ. 480 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ಆತನ ಸಹಚರನನ್ನು ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಕಾಡುಗೋಡಿಯ ಸೀಗೇಹಳ್ಳಿಯ ವಾಸದ ಮನೆಯಲ್ಲಿಟ್ಟಿದ್ದ 720 ಗ್ರಾಂ ಎಂಡಿಎಂಎ ಕ್ರಿಸ್ಟಲ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 3.50 ಕೋಟಿ ರೂ. ಮೌಲ್ಯದ 3 ಕೆ.ಜಿ. 200 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ ಹಾಗೂ 1 ಮೊಬೈಲ್ನನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಟ್ರಂಪ್ ಮೋದಿಯನ್ನೂ ಅಪಹರಿಸುತ್ತಾರಾ?' ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿಕೆ
ಭಾರತವನ್ನು ವೆನೆಜುವೆಲಾ ಜೊತೆ ಹೋಲಿಸುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೆ 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ಮದುರೋ ಅವರನ್ನು ಅಪಹರಿಸಿದಂತೆ ನಮ್ಮ ಪ್ರಧಾನಿ ಮೋದಿಯನ್ನು ಅಪಹರಿಸಲು ಸಾಧ್ಯವೇ?' ಎಂದು ಕೇಳಿದ್ದಾರೆ. ವೆನೆಜುವೆಲಾಗೆ ಆದದ್ದು ಭಾರತಕ್ಕೂ ಆಗಬಹುದೇ ಎಂದಿರುವ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ
ಕರ್ನಾಟಕದ ಹಲವು ನ್ಯಾಯಾಲಯ, ಪಾಸ್ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ
ಕರ್ನಾಟಕದಲ್ಲಿ ಪದೇ ಪದೇ ಸಾರ್ವಜನಿಕ ಸ್ಥಳಗಳಿಗೆ ಬೆದರಿಕೆ ಕರೆ ಹಾಗೂ ಇ-ಮೇಲ್ ಕಳಿಸುವ ಕಿಡಿಗೇಡಿಗಳ ಹಾವಳಿ ಜಾಸ್ತಿ ಆಗಿದೆ. ಇಷ್ಟು ದಿನಗಳ ಕಾಲ ಶಾಲೆ &ಕಾಲೇಜುಗಳು ಸೇರಿದಂತೆ, ಶಿಕ್ಷಣ ಸಂಸ್ಥೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಿಡಿಗೇಡಿಗಳು ಇದೀಗ ನೇರವಾಗಿ ಕನ್ನಡ ನಾಡಿನ ನ್ಯಾಯಾಲಯಗಳನ್ನೇ ಗುರಿಯಾಗಿಸಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಾರೆ. ಈ ರೀತಿಯಾಗಿ, ಬಾಂಬ್ ಬೆದರಿಕೆ ಮೇಲ್
ಕರ್ನಾಟಕದ ಕಟ್ಟಡಗಳ ಮುಂದೆ ರಾರಾಜಿಸುತ್ತಿರುವ ‘ಆ’ಮಹಿಳೆ ಯಾರು? ಇಲ್ಲಿದೆ ಅಸಲಿ ಕಹಾನಿ!
ನೀವು ಬೆಂಗಳೂರಿನ ರಸ್ತೆಗಳಲ್ಲಿ ಅಥವಾ ಕರ್ನಾಟಕದ ಯಾವುದೇ ಊರಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ಗಮನಿಸಿದರೆ, ಒಂದು ಮುಖ ನಿಮಗೆ ಖಂಡಿತಾ ಪರಿಚಯವಿರುತ್ತದೆ. ದೊಡ್ಡ ಕಣ್ಣು, ಹಣೆಯಲ್ಲೊಂದು ದೊಡ್ಡ ಕುಂಕುಮ, ಕೆಂಪು ಸೀರೆ ಉಟ್ಟು, ಕೋಪದಿಂದ ದಿಟ್ಟಿಸಿ ನೋಡುವ ಆ ಮಹಿಳೆಯ ಫೋಟೋ (Viral Poster Woman) ಈಗ ಎಲ್ಲೆಡೆ ವೈರಲ್ ಆಗಿದೆ. ತರಕಾರಿ ಅಂಗಡಿಯಿಂದ ಹಿಡಿದು, ಕೋಟಿ ಬೆಲೆಯ ಬಂಗ್ಲೆ ಕಟ್ಟುವವರವರೆಗೂ ಎಲ್ಲರೂ ಈಕೆಯ ಫೋಟೋವನ್ನೇ ಗೇಟ್ಗೆ ನೇತು ಹಾಕುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಮಹಿಳೆ? ಈಕೆ ... Read more The post ಕರ್ನಾಟಕದ ಕಟ್ಟಡಗಳ ಮುಂದೆ ರಾರಾಜಿಸುತ್ತಿರುವ ‘ಆ’ ಮಹಿಳೆ ಯಾರು? ಇಲ್ಲಿದೆ ಅಸಲಿ ಕಹಾನಿ! appeared first on Karnataka Times .
ಅಸೂಯೆಯಿಂದ ವಾಲ್ಮೀಕಿ ಬ್ಯಾನರ್ ಕಿತ್ತುಹಾಕಿದ್ದು ಬಳ್ಳಾರಿ ದುರ್ಘಟನೆಗೆ ಕಾರಣ: ಡಿ.ಕೆ.ಶಿವಕುಮಾರ್
ಮೃತ ರಾಜಶೇಖರ್ ನಿವಾಸಕ್ಕೆ ಡಿಸಿಎಂ ಭೇಟಿ
ತಿರುಪರಂಕುಂದ್ರಂ ದೀಪತೂಣ್ ನಲ್ಲಿ ದೀಪ ಬೆಳಗಲು ಆದೇಶ; ಏನಿದು ವಿವಾದ? ಹೈಕೋರ್ಟ್ ತೀರ್ಪು ಏನು ಹೇಳುತ್ತದೆ?
ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ವಿಧ್ಯುಕ್ತವಾಗಿ ದೀಪ ಬೆಳಗಲು ಅನುಮತಿ ನೀಡಿದ ಏಕಸದಸ್ಯ ನ್ಯಾಯಾಧೀಶರ ತೀರ್ಪನ್ನು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಂಗಳವಾರ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ಪೀಠವು, ದೇವಸ್ಥಾನವು ದೀಪತೂಣ್ ನಲ್ಲಿ (ದೀಪಸ್ತಂಭ) ದೀಪ ಬೆಳಗಿಸಬೇಕು ಎಂದು ಆದೇಶಿಸಿದೆ. ದೀಪ ಬೆಳಗಲು ಅವಕಾಶವಿರುವ ಕಲ್ಲಿನ ಸ್ತಂಭವನ್ನು ತಮಿಳಿನಲ್ಲಿ ‘ದೀಪತೂಣ್’ (ತೂಣ್ ಅಂದರೆ ಕಂಬ) ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲಿನ ಸ್ಮಾರಕಗಳನ್ನು ರಕ್ಷಿಸಲು ASI ಅಗತ್ಯವಾದ ಷರತ್ತುಗಳನ್ನು ವಿಧಿಸಬೇಕು. ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ದೇವಸ್ಥಾನವು ತನ್ನ ತಂಡದ ಮೂಲಕವೇ ದೀಪ ಬೆಳಗಿಸಬೇಕು. ದೇವಸ್ಥಾನ ತಂಡದೊಂದಿಗೆ ಯಾವುದೇ ಸಾರ್ವಜನಿಕರನ್ನು ಹೋಗಲು ಅನುಮತಿಸಬಾರದು. ತಂಡದ ಸದಸ್ಯರ ಸಂಖ್ಯೆಯನ್ನು ASI ಮತ್ತು ಪೊಲೀಸರೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕು. ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಸಂಘಟಿಸಬೇಕು ಮತ್ತು ಮೇಲ್ವಿಚಾರಣೆ ವಹಿಸಬೇಕು. ದೀಪ ಬೆಳಗುವಿಕೆಯನ್ನು ಪ್ರಶ್ನಿಸುವವರು ಆಗಮ ಶಾಸ್ತ್ರಗಳ ಪ್ರಕಾರ ಈ ದೀಪವನ್ನು ಬೆಳಗಿಸಲು ಅನುಮತಿ ಇಲ್ಲ ಎಂದು ತೋರಿಸಲು ಯಾವುದೇ ಪ್ರಬಲ ಪುರಾವೆಗಳನ್ನು ಸಲ್ಲಿಸಿಲ್ಲ ಎಂದು ಪೀಠ ಹೇಳಿದೆ. ಅದೇ ವೇಳೆ, ಬೆಟ್ಟದ ಮೇಲೆ ದೀಪ ಹಚ್ಚಿದರೆ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಬಹುದು ಎಂಬ ವಾದಗಳನ್ನು ಪೀಠ ತಿರಸ್ಕರಿಸಿದೆ. ದೇವಾಲಯದ ಭೂಮಿಯಲ್ಲಿ ದೇವಾಲಯದ ಆಡಳಿತ ಮಂಡಳಿಯು ದೀಪ ಹಚ್ಚುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ತಮಿಳುನಾಡು ಸರ್ಕಾರದ ಆತಂಕ ಹಾಸ್ಯಾಸ್ಪದ ಹಾಗೂ ನಂಬಲು ಕಷ್ಟಕರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯಾವುದೇ ರಾಜ್ಯವು ತನ್ನ ರಾಜಕೀಯ ಅಜೆಂಡಾವನ್ನು ಸಾಧಿಸಲು ಆ ಮಟ್ಟಕ್ಕೆ ಇಳಿಯಬಾರದು ಎಂದು ಪೀಠ ಹೇಳಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ವ್ಯಕ್ತಪಡಿಸಿರುವ ಆತಂಕ ಕಾಲ್ಪನಿಕವಾಗಿದ್ದು, ಇದು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಅನುಮಾನ ಮತ್ತು ನಿರಂತರ ಅಪನಂಬಿಕೆಗೆ ಒಳಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ. ಕಲ್ಲಿನ ಕಂಬವು ದರ್ಗಾಕ್ಕೆ ಸೇರಿದೆ ಎಂದು ವಕ್ಫ್ ಮಂಡಳಿಯು ಮಾಡಿದ ವಾದವನ್ನು ನ್ಯಾಯಾಲಯ ತೀವ್ರವಾಗಿ ಟೀಕಿಸಿದ್ದು, ದೇವಾಲಯವು ಕಲ್ಲಿನ ಕಂಬದಲ್ಲೇ, ಅಂದರೆ ದೀಪತೂಣ್ ನಲ್ಲಿ, ದೀಪವನ್ನು ಬೆಳಗಿಸಬೇಕು ಎಂದು ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಸಮನ್ವಯವನ್ನು ವಹಿಸಬೇಕು ಎಂದು ಸೂಚಿಸಿದೆ. ನಾವು ಎರಡೂ ಪಕ್ಷಗಳ ಶಾಂತಿಯುತ ಸಹಬಾಳ್ವೆಯನ್ನು ಬಯಸುತ್ತೇವೆ. ಕೆಲವು ರೀತಿಯ ಪರಸ್ಪರ ತಿಳುವಳಿಕೆ ಮತ್ತು ಏಕರೂಪತೆ ಇದ್ದರೆ ಅದನ್ನು ಸಾಧಿಸಬಹುದು. ದಯವಿಟ್ಟು ಆದೇಶವನ್ನು ಪಾಲಿಸಿ. ಸಂವಿಧಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ಎಲ್ಲರಿಗೂ ಸೇರಿವೆ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ. ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲು ಕೋರಿ ಕೆಲವು ದೇವಾಲಯ ಭಕ್ತರು ಅರ್ಜಿಗಳನ್ನು ಸಲ್ಲಿಸಿದ ನಂತರ, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಮೇಲೆ ಈ ತೀರ್ಪು ನೀಡಲಾಗಿದೆ. ಡಿಸೆಂಬರ್ 1ರಂದು ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ನ್ಯಾಯಮೂರ್ತಿ ಜಿ. ಸ್ವಾಮಿನಾಥನ್ ಅವರು ಹಿಂದೂ ತಮಿಳರ್ ಕಚ್ಚಿ ಸಂಸ್ಥಾಪಕ ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡು ತಿರುಪರಂಕುಂದ್ರಂ ಬೆಟ್ಟದ ‘ದೀಪತೂಣ್’ ಸ್ತಂಭದಲ್ಲಿ ಭಕ್ತರು ದೀಪ ಬೆಳಗಲು ಅನುಮತಿ ನೀಡಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತು. ಡಿಸೆಂಬರ್ 3ರಂದು ಆಚರಿಸಲಾಗುವ ‘ಕಾರ್ತಿಗೈ ದೀಪಂ’ (ಕಾರ್ತಿಕ ದೀಪ) ಹಬ್ಬದ ಸಂದರ್ಭದಲ್ಲಿ ದೀಪ ಬೆಳಗಲು ಅವಕಾಶ ನೀಡದಿದ್ದ ಹಿನ್ನೆಲೆಯಲ್ಲಿ, ರವಿಕುಮಾರ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಅದೇ ದಿನ ಏಕಸದಸ್ಯ ಪೀಠವು ರವಿಕುಮಾರ್ ಸೇರಿದಂತೆ ಇತರ 10 ಮಂದಿಗೆ ದೀಪತೂಣ್ ನಲ್ಲಿ ದೀಪ ಬೆಳಗಲು ಅವಕಾಶ ಮಾಡಿಕೊಟ್ಟಿತು. ಇವರಿಗೆ CISF ಸಿಬ್ಬಂದಿಯಿಂದ ಭದ್ರತೆ ಒದಗಿಸಲು ಆದೇಶಿಸಿತು. ಆದರೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಉಲ್ಲೇಖಿಸಿ ಪೊಲೀಸರು ಮತ್ತೆ ಬೆಟ್ಟದ ತಪ್ಪಲಿನಲ್ಲಿ ಗುಂಪನ್ನು ತಡೆದಿದ್ದರು. ►ವಿವಾದ ಆರಂಭವಾದದ್ದು ಹೇಗೆ? ತಿರುಪರಂಕುಂದ್ರಂ ಬೆಟ್ಟವು ಮುರುಗನ್ ದೇವರ ಆರು ಪವಿತ್ರ ಸ್ಥಳಗಳಾದ ಅರುಪದೈ ವೀಡುಗಳಲ್ಲಿ ಒಂದಾಗಿದೆ. ಈ ಬೆಟ್ಟವು ಪ್ರಾಚೀನ ಬಂಡೆಯಲ್ಲಿ ಕೊರೆದ ಗುಹಾ ದೇವಾಲಯವನ್ನು ಹೊಂದಿದೆ. ಇದು ತಮಿಳುನಾಡಿನಾದ್ಯಂತ ಭಕ್ತರಿಗೆ ಬಹುಕಾಲದಿಂದ ಯಾತ್ರಾ ಸ್ಥಳವಾಗಿದೆ. ಇಲ್ಲಿ ಒಂದು ದರ್ಗಾವೂ ಇದೆ. ಕೇವಲ ಮೂರು ಕಿಮೀ ಅಂತರದಲ್ಲಿರುವ ದೇವಾಲಯ ಮತ್ತು ದರ್ಗಾದ ಅಸ್ತಿತ್ವವು ಬೆಟ್ಟದ ಮೇಲಿನ ಹಕ್ಕುಗಳ ಕುರಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯನ್ನು ಹುಟ್ಟುಹಾಕಿತು. 1920ರಲ್ಲಿ ಬೆಟ್ಟದ ಮಾಲೀಕತ್ವದ ಕುರಿತು ದೇವಾಲಯ ಮತ್ತು ದರ್ಗಾ ನಡುವೆ ವಿವಾದ ಉಂಟಾಯಿತು. ನಂತರ ಪ್ರಿವಿ ಕೌನ್ಸಿಲ್ ದೃಢೀಕರಿಸಿದ ಸಿವಿಲ್ ನ್ಯಾಯಾಲಯದ ತೀರ್ಪು, ದರ್ಗಾಗೆ ಸಂಬಂಧಿಸಿದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಬೆಟ್ಟವು ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ಹೇಳಿತು. ಈ ತೀರ್ಪು ಬೆಟ್ಟದ ಮಾಲೀಕತ್ವವನ್ನು ಇತ್ಯರ್ಥಪಡಿಸಿತು. ಆದರೆ ಇದು ಆಚರಣೆಗಳು, ಪದ್ಧತಿಗಳು ಅಥವಾ ದೀಪ ಬೆಳಗುವ ಸಂಪ್ರದಾಯವನ್ನು ಸ್ಪಷ್ಟಪಡಿಸಲಿಲ್ಲ. ಪ್ರಿವಿ ಕೌನ್ಸಿಲ್ ಆ ಕಾಲದಲ್ಲಿ ಬ್ರಿಟಿಷ್ ಆಡಳಿತಕ್ಕೆ ಸಲಹೆ ನೀಡುವ ಉನ್ನತ ಸಂಸ್ಥೆಯಾಗಿತ್ತು. 1994ರಲ್ಲಿ ಭಕ್ತರೊಬ್ಬರು ದೇವಾಲಯದಲ್ಲಿರುವ ಉಚಿಪಿಳ್ಳರ್ ಕೋವಿಲ್ ಮಂಟಪದಿಂದ ದರ್ಗಾದ ಸಮೀಪವಿರುವ ಬೆಟ್ಟದ ತುದಿಯಲ್ಲಿನ ದೀಪತೂಣ್ ನಲ್ಲಿ ದೀಪ ಬೆಳಗಿಸಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ಇದರಿಂದ ದೀಪ ಬೆಳಗುವ ಆಚರಣೆಯ ಸ್ಥಳವೇ ವಿವಾದಾಸ್ಪದವಾಯಿತು. 1996ರಲ್ಲಿ ಮದ್ರಾಸ್ ಹೈಕೋರ್ಟ್, ಉಚಿಪಿಳ್ಳರ್ ಕೋವಿಲ್ ಬಳಿಯ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಮಂಟಪದಲ್ಲಿರುವ ಸಾಂಪ್ರದಾಯಿಕ ಸ್ಥಳದಲ್ಲೇ ದೀಪವನ್ನು ಬೆಳಗಿಸಬೇಕು ಎಂದು ಆದೇಶಿಸಿತು. ಆದರೆ ಈ ತೀರ್ಪು ಭವಿಷ್ಯದಲ್ಲಿ ದೇವಾಲಯದ ಆಡಳಿತ ಮಂಡಳಿಗೆ, ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಯ ಅನುಮತಿಯೊಂದಿಗೆ, ಬೆಟ್ಟದ ಮೇಲೆ ದೀಪ ಬೆಳಗಿಸಲು ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ನೀಡಿತು. ಆ ಸ್ಥಳವು ದರ್ಗಾಯಿಂದ ದೂರವಿರಬೇಕು ಎಂಬ ಷರತ್ತನ್ನೂ ವಿಧಿಸಿತು. ಕಾನೂನು ದೃಷ್ಟಿಕೋನದಿಂದ, ತಿರುಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಗೈ ದೀಪವನ್ನು ಹಚ್ಚಲು ನ್ಯಾಯಾಲಯಗಳು ಗುರುತಿಸಿರುವ ಏಕೈಕ ಸ್ಥಳ ಮಂಟಪವೇ ಆಗಿದೆ. ದೀಪ ಹಚ್ಚುವ ಸ್ಥಳದ ಬಗ್ಗೆ ವಾದಿಸುವವರು, ಉಚಿಪಿಳ್ಳೈಯರ್ ಕೋವಿಲ್ನಲ್ಲಿ ದೀಪ ಹಚ್ಚುವ ಪ್ರಸ್ತುತ ಪದ್ಧತಿ ಆಗಮ ಶಾಸ್ತ್ರಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಾರೆ. ಆದರೆ ದೇವಾಲಯದ ಆಡಳಿತವು, ಉಚಿಪಿಳ್ಳೈಯರ್ ಕೋವಿಲ್ ಮಂಟಪವೇ ಆಚರಣೆಗೆ ಸಾಂಪ್ರದಾಯಿಕ ಸ್ಥಳವಾಗಿದ್ದು, ಈ ಪದ್ಧತಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ ಎಂದು ನಿರಂತರವಾಗಿ ಸಮರ್ಥಿಸಿಕೊಂಡಿದೆ. --- ►ದೀಪ ಬೆಳಗಿಸಲು ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು 2014ರಲ್ಲಿ ಮತ್ತೊಬ್ಬ ಭಕ್ತರು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ಕೋರಿ ಹೈಕೋರ್ಟ್ಗೆ ಮೊರೆ ಹೋದರು. ನ್ಯಾಯಮೂರ್ತಿ ಎಂ. ವೇಣುಗೋಪಾಲ್ ಅವರು ಹಲವು ಕಾರಣಗಳಿಂದ ಆ ಅರ್ಜಿಯನ್ನು ವಜಾಗೊಳಿಸಿದರು. ಅರ್ಜಿದಾರರು ದೇವಾಲಯದ ಆಚರಣೆಗಳ ಮೇಲೆ ಕಾನೂನುಬದ್ಧ ಹಕ್ಕನ್ನು ಸ್ಥಾಪಿಸಲು ವಿಫಲರಾಗಿದ್ದಾರೆ ಹಾಗೂ ಅವರಿಗೆ ಸ್ಥಳದ ಹಕ್ಕಿಲ್ಲ ಎಂದು ನ್ಯಾಯಾಲಯ ತಿಳಿಸಿತು. ನ್ಯಾಯಾಲಯಗಳು ಶಾಸನಬದ್ಧ ಕರ್ತವ್ಯಗಳನ್ನು ಉಲ್ಲಂಘಿಸದ ಹೊರತು ಆಧ್ಯಾತ್ಮಿಕ ಅಥವಾ ಐಚ್ಛಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಧಾರ್ಮಿಕ ಆದ್ಯತೆಗಳನ್ನು ಜಾರಿಗೊಳಿಸಲು ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠ ಪುನರುಚ್ಚರಿಸಿತು. ಇದಲ್ಲದೆ, ದೇವಾಲಯವು ಹಿಂದಿನ ವರ್ಷಗಳಲ್ಲಿ ಅನುಸರಿಸಿದ್ದ ಕ್ರಮಗಳನ್ನೇ ಮುಂದುವರಿಸುತ್ತಿದ್ದು, ಯಾವುದೇ ಆಡಳಿತಾತ್ಮಕ ವೈಫಲ್ಯ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಂದರೆ, ಭಕ್ತರು ರಿಟ್ ಅರ್ಜಿಗಳ ಮೂಲಕ ಧಾರ್ಮಿಕ ಆದ್ಯತೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ತೀರ್ಪಿನಿಂದ ಸ್ಪಷ್ಟವಾಗಿದೆ. ಅರ್ಜಿದಾರರು ಮೇಲ್ಮನವಿ ಸಲ್ಲಿಸಿದಾಗ, 2017ರಲ್ಲಿ ಹೈಕೋರ್ಟ್ನ ವಿಭಾಗೀಯ ಪೀಠವು ಈ ಆದೇಶವನ್ನು ಎತ್ತಿಹಿಡಿದು ಮೂರು ಪ್ರಮುಖ ಅಂಶಗಳನ್ನು ಗಮನಿಸಿತು. ದೀಪವನ್ನು ಬೆಳಗಿಸಬೇಕಾದ ನಿಖರ ಸ್ಥಳವನ್ನು ನ್ಯಾಯಾಲಯಗಳು ನಿರ್ದೇಶಿಸಲು ಸಾಧ್ಯವಿಲ್ಲ, ಏಕೆಂದರೆ ಅದು ದೇವಾಲಯ ಆಡಳಿತದ ವಿಶೇಷಾಧಿಕಾರವಾಗಿದೆ. ಭಕ್ತರಾಗಿರುವ ಅರ್ಜಿದಾರರು ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ದೀಪ ಬೆಳಗಿಸುವ ವೈಯಕ್ತಿಕ ಕಾನೂನು ಹಕ್ಕನ್ನು ಹೊಂದಿಲ್ಲ. ದೇವಾಲಯವು ತನ್ನ ಕರ್ತವ್ಯಗಳನ್ನು ಉಲ್ಲಂಘಿಸದೆ ಕಾರ್ಯನಿರ್ವಹಿಸುವವರೆಗೆ, ಆಚರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು ಎಂದು ಪೀಠ ಹೇಳಿತು. HR&CE ಕಾಯ್ದೆಯಡಿಯಲ್ಲಿ ದೇವಾಲಯದ ಸ್ವಾಯತ್ತತೆ ಆಡಳಿತಾತ್ಮಕ ವಿವೇಚನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. --- ►ಆನಂತರ ಏನಾಯಿತು? ಅರ್ಜಿದಾರ ರಾಮ ರವಿಕುಮಾರ್ ಮತ್ತೆ ಸಲ್ಲಿಸಿದ ಅರ್ಜಿಯಲ್ಲಿ ಮೂರು ಪ್ರಮುಖ ವಾದಗಳನ್ನು ಮಂಡಿಸಿದರು. ಮೊದಲನೆಯದಾಗಿ, 1920ರ ತೀರ್ಪು ಇಡೀ ಬೆಟ್ಟದ ಮೇಲೆ ದೇವಾಲಯದ ಮಾಲೀಕತ್ವವನ್ನು ಸ್ಥಾಪಿಸುತ್ತದೆ. ಅಂದರೆ ದೇವಾಲಯದ ಆಸ್ತಿಯೊಳಗೆ ಎಲ್ಲಿಯಾದರೂ ದೀಪವನ್ನು ಕಾನೂನುಬದ್ಧವಾಗಿ ಬೆಳಗಿಸಬಹುದು ಎಂದು ವಾದಿಸಿದರು. ಎರಡನೆಯದಾಗಿ, ಯಾವುದೇ ನ್ಯಾಯಾಂಗ ಆದೇಶವು ದೀಪತೂಣ್ ನಲ್ಲಿ ದೀಪ ಬೆಳಗಿಸುವುದನ್ನು ನಿಷೇಧಿಸಿಲ್ಲ ಎಂದು ಹೇಳಿದರು. ಮೂರನೆಯದಾಗಿ, 2025ರಲ್ಲಿ ದೀಪತೂಣ್ ಅನ್ನು ಆಚರಣೆಯ ಸ್ಥಳವೆಂದು ಪರಿಗಣಿಸಲು ದೇವಾಲಯ ನಿರಾಕರಿಸಿರುವುದಕ್ಕೆ ಯಾವುದೇ ಸಮಂಜಸ ಕಾರಣವಿಲ್ಲ; ಇದು ಕಾರ್ಯವಿಧಾನದ ನ್ಯಾಯಸಮ್ಮತತೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. ಈ ವಾದಗಳು ಧಾರ್ಮಿಕ ಸ್ಥಳದ ಪ್ರಶ್ನೆಯನ್ನು ಮತ್ತೆ ಚರ್ಚೆಗೆ ತಂದವು. --- ►ರಾಜಕೀಯ ವಿವಾದ ಡಿಸೆಂಬರ್ 1 ಮತ್ತು ಡಿಸೆಂಬರ್ 3ರಂದು ಏಕಸದಸ್ಯ ಪೀಠ ನೀಡಿದ ಆದೇಶಗಳಿದ್ದರೂ, ಗುರುವಾರ ಜಿಲ್ಲಾಡಳಿತವು ಭಕ್ತರ ಗುಂಪೊಂದು ದೀಪತೂಣ್ಗೆ ತೆರಳುವುದನ್ನು ತಡೆದಿತು. ಇದರಿಂದ ರಾಜ್ಯದ ವಿರೋಧ ಪಕ್ಷಗಳು ಡಿಎಂಕೆ ಸರ್ಕಾರ ಹಿಂದೂಗಳಿಗೆ ದೀಪ ಹಚ್ಚಲು ಬಿಡುತ್ತಿಲ್ಲ ಎಂದು ಆರೋಪಿಸಿತು. ಆದರೆ ಡಿಎಂಕೆ ಸರ್ಕಾರವು ಹೈಕೋರ್ಟ್ ನ ಹಿಂದಿನ ಆದೇಶಗಳನ್ನು ಪಾಲಿಸುತ್ತಿದೆ ಎಂದು ಪ್ರತಿಕ್ರಿಯಿಸಿತು.
ಮೂರು ಬಾರಿ ಆರುನೂರು! ವಿಜಯ್ ಹಜಾರೆ ಟ್ರೋಫಿಯಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ದೇವದತ್ ಪಡಿಕ್ಕಲ್!
Devdutt Padikkal In VHT- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಮೂರನೇ ಬಾರಿ 600 ರನ್ ಕಲೆ ಹಾಕಿರುವ ಸಾಧನೆ ಮಾಡಿದ್ದಾರೆ. ಯಾವುದೇ ಬ್ಯಾಟ್ಸ್ ಮನ್ ಸಹ ಈ ಟೂರ್ನಿಯಲ್ಲಿ ಇಂತಹ ಸಾಧನೆ ಮಾಡಿಲ್ಲ. ಈ ಹಿಂದೆ 2019-20 ಮತ್ತು 2020-21 ಹೀಗೆ ನಿರಂತರ 2 ಋತುವಿನಲ್ಲಿ ಅವರು ಈ ಸಾಧನೆ ಮಾಡಿದ್ದರು. 2026ರ ಏಕದಿನ ವಿಶ್ವಕಪ್ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಎದುರು ನೋಡುತ್ತಿರುವ ಅವರು ಈ ಮೂಲಕ ಆಯ್ಕೆದಾರರ ಸಮಿತಿಯ ಕದ ತಟ್ಟಿದ್ದಾರೆ.
ಅಮೆರಿಕದಿಂದ ವೆನೆಝುವೆಲಾ ಅಧ್ಯಕ್ಷ ಮಡುರೊ ಸೆರೆ; ಚೀನಾದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ಸುಮಾರು ಎರಡು ದಶಕಗಳಿಂದ, ಚೀನಾ ವೆನೆಝುವೆಲಾಗೆ ಕೇವಲ ವ್ಯಾಪಾರ ಪಾಲುದಾರ ಮಾತ್ರವಲ್ಲ ಪ್ರಮುಖ ರಾಜಕೀಯ ಬೆಂಬಲಿಗ ಕೂಡಾ ಆಗಿದೆ . ಆದರೆ ಶನಿವಾರ ಮುಂಜಾನೆ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಯುಎಸ್ ಪಡೆಗಳು ವಶಪಡಿಸಿಕೊಂಡಿರುವುದು ಬೀಜಿಂಗ್-ಕ್ಯಾರಕಾಸ್ ಕಾರ್ಯತಂತ್ರದ ಪಾಲುದಾರಿಕೆಯ ಬಲವನ್ನು ಪರೀಕ್ಷೆಗೆ ಒಡ್ಡಿದೆ. ಅಮೆರಿಕದ ಅಧಿಪತ್ಯದ ಕೃತ್ಯಗಳನ್ನು ಟೀಕಿಸಿದ ಚೀನಾ, ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತ್ತು. ಅದೇ ವೇಳೆ ಚೀನಾದ ವಿದೇಶಾಂಗ ಸಚಿವಾಲಯವು ವೆನೆಝುವೆಲಾ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯ ವೈಯಕ್ತಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಅವರನ್ನು ತಕ್ಷಣವೇ ಬಿಡುಗಡೆ ಮಾಡಲು, ವೆನೆಝುವೆಲಾ ಸರ್ಕಾರವನ್ನು ಉರುಳಿಸುವುದನ್ನು ನಿಲ್ಲಿಸಲು ಮತ್ತು ಸಂವಾದ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕಕ್ಕೆ ಕರೆ ನೀಡಿತು. ಈ ಹಿಂದೆ ಆಗಸ್ಟ್ನಿಂದ ಕೆರಿಬಿಯನ್ನಲ್ಲಿ ಅಮೆರಿಕ ನಿರ್ವಹಿಸುತ್ತಿರುವ ನೌಕಾ ಮತ್ತು ವಾಯು ನಿಯೋಜನೆಗಳಿಗೆ ಕೂಡಾ ಚೀನಾ ವಿರೋಧ ವ್ಯಕ್ತಪಡಿಸಿತ್ತು. ವೆನೆಝುವೆಲಾಗೆ ಯುಎಸ್ ಒತ್ತಡ ಹೆಚ್ಚಾದಂತೆ ಮಡುರೊ ಆಡಳಿತಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿತು. ಡಿಸೆಂಬರ್ ಮಧ್ಯದಲ್ಲಿ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ವೆನೆಝುವೆಲಾದ ವಿದೇಶಾಂಗ ಸಚಿವ ಯವಾನ್ ಗಿಲ್ ಅವರಿಗೆ ದೂರವಾಣಿ ಮೂಲಕ ತಮ್ಮ ದೇಶವು ಎಲ್ಲಾ ರೀತಿಯ ಬೆದರಿಕೆಯನ್ನು ವಿರೋಧಿಸುತ್ತದೆ. ವೆನೆಝುವೆಲಾದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಘನತೆಯ ರಕ್ಷಣೆಯನ್ನು ಬೆಂಬಲಿಸುತ್ತದೆ ಎಂದು ಭರವಸೆ ನೀಡಿದ್ದರು. ವೆನೆಝುವೆಲಾದಲ್ಲಿ ಅಧಿಕಾರ ಸ್ಥಾಪಿಸಲು ಅಮೆರಿಕ ಆಡಳಿತವು ನಡೆಸುತ್ತಿರುವ ಪ್ರಯತ್ನವು ಅನೇಕ ದೇಶಗಳಿಗೂ ಮುನ್ನೆಚ್ಚರಿಕೆಯನ್ನು ನೀಡುವ ಸೂಚನೆಯಂತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾ ವಿರುದ್ಧ ಸಂಭಾವ್ಯ ಯುಎಸ್ ಮಿಲಿಟರಿ ಕ್ರಮವನ್ನು ಸೂಚಿಸಿದ ನಂತರ ಬೊಗೋಟಾ ಮತ್ತು ಮೆಕ್ಸಿಕೊ ನಗರವು ಜಾಗರೂಕವಾಗಿದೆ. ಕೋಪನ್ ಹ್ಯಾಗನ್ ನಲ್ಲಿ, ಟ್ರಂಪ್ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶದ ಬೆದರಿಕೆ ಈಗ ಮೊದಲಿಗಿಂತ ಹೆಚ್ಚು ನೈಜವಾಗಿ ಕಾಣುತ್ತಿದೆ. ಟ್ರಂಪ್ ಅವರ ಪ್ರಭಾವಿ ಸಲಹೆಗಾರ ಮತ್ತು ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಅವರ ಪತ್ನಿ ಕೇಟೀ ಮಿಲ್ಲರ್, ವೆನೆಝುವೆಲಾ ವಿರುದ್ಧ ಯುಎಸ್ ಮಿಲಿಟರಿ ಕಾರ್ಯಾಚರಣೆಯ ಕೆಲವೇ ಗಂಟೆಗಳ ನಂತರ ಶನಿವಾರ ತಡರಾತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಡ್ಯಾನಿಶ್ ಸ್ವಾಯತ್ತ ಪ್ರದೇಶದ ಚಿತ್ರವನ್ನು ಶೇರ್ ಮಾಡಿ, SOON ಎಂಬ ಶೀರ್ಷಿಕೆ ನೀಡಿದ್ದರು. SOON pic.twitter.com/XU6VmZxph3 — Katie Miller (@KatieMiller) January 3, 2026 ಆದಾಗ್ಯೂ, ಅಮೆರಿಕದ ಹಸ್ತಕ್ಷೇಪದ ಅತಿದೊಡ್ಡ ಪರಿಣಾಮ ಬೀಜಿಂಗ್ ಗೆ ತಾಕುವ ಸಾಧ್ಯತೆಯಿದೆ. ಜನವರಿ 3 ರಂದು ಕ್ಯಾರಕಾಸ್ನಲ್ಲಿ ತಡರಾತ್ರಿ ನಡೆದ ದಾಳಿಯ ನಂತರ, ವೆನೆಝುವೆಲಾ ಜೊತೆಗಿನ ಚೀನಾದ ಸಂಬಂಧಗಳು ಈಗ ಅಪಾಯಕ್ಕೆ ಸಿಲುಕಬಹುದು. ►ವೆನೆಝುವೆಲಾದಲ್ಲಿ ಚೀನಾದ ಹೂಡಿಕೆಗಳು ಮಡುರೊ ಅವರನ್ನು ಅಮೆರಿಕ ವಶ ಪಡಿಸಿದಕ್ಕೆ ಚೀನಾದ ಪ್ರತಿಕ್ರಿಯೆಯು ಆಕ್ರೋಶದಿಂದ ಕೂಡಿದ್ದು, ಬೀಜಿಂಗ್ ಅಮೆರಿಕದ ಪ್ರಾಬಲ್ಯದ ಬಗ್ಗೆ ಮಾತನಾಡಿದೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದ ವಿಶ್ಲೇಷಕರ ಪ್ರಕಾರ, ವಾಷಿಂಗ್ಟನ್ ಪಶ್ಚಿಮ ಗೋಳಾರ್ಧದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವಾಗ, ಲ್ಯಾಟಿನ್ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನೀ ಕಂಪನಿಗಳು ಹೆಚ್ಚಿನ ಅನಿಶ್ಚಿತತೆಗೆ ಸಿದ್ಧವಾಗುತ್ತಿವೆ ಎಂಬ ವರದಿಗಳು ಈಗಾಗಲೇ ಇವೆ. ಅಮೆರಿಕದಲ್ಲಿ ಚೀನಾದ ಬೆಳೆಯುತ್ತಿರುವ ಪ್ರಭಾವವನ್ನು ಎದುರಿಸುವ ಉದ್ದೇಶದಿಂದ ಟ್ರಂಪ್ ಶೈಲಿಯ ಮನ್ರೋ ಸಿದ್ಧಾಂತವನ್ನು ಚೀನಾದ ಶಿಕ್ಷಣ ತಜ್ಞರು ನೋಡುತ್ತಾರೆ. ಆಗಿನ ಅಮೆರಿಕದ ಅಧ್ಯಕ್ಷ ಜೇಮ್ಸ್ ಮನ್ರೋ ಅವರ ಹೆಸರಿನ 1823 ರ ತತ್ವವು ಪಶ್ಚಿಮ ಗೋಳಾರ್ಧದಲ್ಲಿ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಿ , ಅಮೆರಿಕದಲ್ಲಿ ವಸಾಹತುಶಾಹಿಯನ್ನು ಪ್ರಯತ್ನಿಸುವುದರ ವಿರುದ್ಧ ಯುರೋಪಿಯನ್ ಶಕ್ತಿಗಳಿಗೆ ಎಚ್ಚರಿಕೆ ನೀಡಿತ್ತು. ಕಳೆದ ದಶಕದಲ್ಲಿ ಖನಿಜಗಳು, ಇಂಧನ ಮತ್ತು ಬಂದರು ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಹೂಡಿಕೆಗಳೊಂದಿಗೆ ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಚೀನಾದ ಹೆಜ್ಜೆಗುರುತು ಗಮನಾರ್ಹವಾಗಿ ಬೆಳೆದಿದೆ. ಚೀನಾ ವೆನೆಝುವೆಲಾದ ಅತಿದೊಡ್ಡ ಬಾಹ್ಯ ಆರ್ಥಿಕ ಪಾಲುದಾರರಾಗಿದೆ. ಆಗಾಗ್ಗೆ ತೈಲಕ್ಕಾಗಿ ಸಾಲಗಳು ಒಪ್ಪಂದಗಳ ಮೂಲಕ ಚೀನಾ ವೆನೆಝುವೆಲಾಗೆ ರಫ್ತು ಮಾಡುವ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಗ್ರಾಹಕ ಸರಕುಗಳ ವಿರುದ್ಧ ಆಮದು ಮಾಡಿಕೊಳ್ಳುವ ತೈಲದಿಂದ ವ್ಯಾಪಾರವು ಪ್ರಾಬಲ್ಯ ಹೊಂದಿದೆ. ಟ್ರೇಡಿಂಗ್ ಎಕನಾಮಿಕ್ಸ್ನ ಡೇಟಾವು 2024 ರಲ್ಲಿ ಚೀನಾ ವೆನೆಝುವೆಲಾಕ್ಕೆ $4.8 ಬಿಲಿಯನ್ ರಫ್ತು ಮಾಡಿದೆ ಎಂದು ತೋರಿಸುತ್ತದೆ. ಇದರಲ್ಲಿ ತೈಲವು ಚೀನಾಕ್ಕೆ ವೆನೆಝುವೆಲಾ ರಫ್ತಿನ ದೊಡ್ಡ ಭಾಗವಾಗಿದೆ. ವೆನೆಝುವೆಲಾದಿಂದ ಚೀನಾಕ್ಕೆ ತೈಲ ಪೂರೈಕೆ ಪರೋಕ್ಷ ರೂಪದಲ್ಲಿದ್ದು, ನಿರ್ಬಂಧಗಳನ್ನು ತಪ್ಪಿಸಲು ವೆನೆಝುವೆಲಾದಿಂದ ಹೋಗುವ ಹೆಚ್ಚಿನ ಸಾಗಣೆಗಳು ಮಲೇಷ್ಯಾ, ಪನಾಮ ಅಥವಾ ಲೈಬೀರಿಯಾದಂತಹ ಮೂರನೇ ದೇಶಗಳ ಟ್ಯಾಂಕರ್ಗಳಲ್ಲಿರುತ್ತವೆ. ಈಗ ಮಡುರೊ ಇಲ್ಲವಾದ್ದರಿಂದ, ಈ ಸಾಗಣೆಗಳನ್ನು ನಿರ್ವಹಿಸುವುದು ಕೂಡಾ ಸಮಸ್ಯೆಯಾಗುತ್ತದೆ. ಅಲ್ಲದೆ, ವೆನೆಝುವೆಲಾ ಚೀನಾಕ್ಕೆ ತೈಲ-ನಗದು ಒಪ್ಪಂದಗಳ ಅಡಿಯಲ್ಲಿ ಚೀನಾದಿಂದ ಬರುವ ಸರಕುಗಳಿಗಾಗಿ $19 ಶತಕೋಟಿಗಿಂತ ಹೆಚ್ಚು ಸಾಲವನ್ನು ಹೊಂದಿದೆ ಎಂದು ವ್ಯಾಪಾರ ತಜ್ಞರು ಅಂದಾಜಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಬೀಜಿಂಗ್ 2007 ಮತ್ತು 2015 ರ ನಡುವೆ ವೆನೆಝುವೆಲಾಗೆ ಒಟ್ಟು $60 ಶತಕೋಟಿಗಿಂತ ಹೆಚ್ಚು (ಅದರ GDP ಯ 16% ಗೆ ಸಮ) ತೈಲ ಬೆಂಬಲಿತ ಸಾಲಗಳನ್ನು ಒದಗಿಸಿದೆ ಎಂದು ಇಂಟರ್-ಅಮೆರಿಕನ್ ಡೈಲಾಗ್ ಮತ್ತು ಬೋಸ್ಟನ್ ವಿಶ್ವವಿದ್ಯಾಲಯದ ದತ್ತಾಂಶಗಳು ತಿಳಿಸಿವೆ. ತೈಲ ಉತ್ಪಾದನೆಯ ಕುಸಿತ, 2014 ರಿಂದ ವೆನೆಝುವೆಲಾದ ಆರ್ಥಿಕ ಹಿಂಜರಿತ ಮತ್ತು ನಿರ್ಬಂಧಗಳನ್ನು ಬಿಗಿಗೊಳಿಸಿದ ನಂತರ, ಚೀನಾ ಹಣಕಾಸು ಮತ್ತು ನೇರ ಹೂಡಿಕೆಯನ್ನು ತೀವ್ರವಾಗಿ ಕಡಿತಗೊಳಿಸಿತು. ಅಂದಿನಿಂದ, ಬ್ರೆಝಿಲ್, ಚಿಲಿ, ಪೆರು ಮತ್ತು ಮೆಕ್ಸಿಕೊದಂತಹ ಇತರ ಪ್ರಾದೇಶಿಕ ಪಾಲುದಾರರೊಂದಿಗೆ ಹೋಲಿಸಿದರೆ ಚೀನಾಕ್ಕೆ ವೆನೆಝುವೆಲಾದ ಆರ್ಥಿಕ ಸಂಬಂಧ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳ ಸಂಬಂಧವು ಇಂಧನ ವಲಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ವಿಶ್ವದ ಅತಿದೊಡ್ಡ ಕಚ್ಚಾ ಆಮದುದಾರ ಚೀನಾ, 2019 ರಿಂದ ವೆನೆಝುವೆಲಾದ ತೈಲ ರಫ್ತಿಗೆ ಪ್ರಮುಖ ತಾಣವಾಗಿದೆ. ಏಕೆಂದರೆ ಅಮೆರಿಕದ ನಿರ್ಬಂಧಗಳು ಇತರ ಮಾರುಕಟ್ಟೆಗಳನ್ನು ಮುಚ್ಚಿವೆ. ಚೀನಾದ ಒಟ್ಟು ಆಮದಿನ ಕೇವಲ ಶೇ. 4 ರಷ್ಟು ವೆನೆಝುವೆಲಾದ ಕಚ್ಚಾ ತೈಲದ ಪಾಲು ಇದ್ದರೂ, ಇದು ಕ್ಯಾರಕಾಸ್ಗೆ ಜೀವನಾಡಿಯಾಗಿದೆ. ರಾಯಿಟರ್ಸ್ ಉಲ್ಲೇಖಿಸಿದ ಲೆಕ್ಕಾಚಾರಗಳ ಪ್ರಕಾರ 2023 ಮತ್ತು 2025 ರ ನಡುವೆ, ಚೀನಾ ಹಲವು ತಿಂಗಳುಗಳಲ್ಲಿ ವೆನೆಝುವೆಲಾದ ರಫ್ತಿನ 55% ರಿಂದ 80% ರಷ್ಟನ್ನು ಹೊಂದಿದೆ. ಪಾಶ್ಚಿಮಾತ್ಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿದಾಗ,ವೆನೆಝುವೆಲಾಗೆ ವಿದೇಶಿ-ಕರೆನ್ಸಿ ಆದಾಯದ ಕನಿಷ್ಠ ಹರಿವನ್ನು ಕಾಯ್ದುಕೊಳ್ಳಲು ಈ ಮಾರಾಟಗಳು ಅತ್ಯಗತ್ಯವಾಗಿವೆ. ►ತೈವಾನ್ ಪ್ರಶ್ನೆ ಆದಾಗ್ಯೂ, ವೆನೆಝುವೆಲಾದಲ್ಲಿನ ಅಮೆರಿಕದ ಕ್ರಮವು ಬೀಜಿಂಗ್ ತೈವಾನ್ ಅನ್ನು ವಶಪಡಿಸಿಕೊಳ್ಳಲು ಧೈರ್ಯ ತುಂಬುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೇಲ್ನೋಟಕ್ಕೆ, ಇದು ಈಗ ಹೆಚ್ಚು ಸಮರ್ಥನೀಯವೆಂದು ತೋರುತ್ತದೆ. ಏಕೆಂದರೆ ಚೀನಾ ವೆನೆಝುವೆಲಾದಲ್ಲಿ ಅಮೆರಿಕ ಮಾಡಿದ್ದನ್ನು ಉಲ್ಲೇಖಿಸುವ ಮೂಲಕ ಅಂತಹ ಯಾವುದೇ ಕ್ರಮವನ್ನು ಸಮರ್ಥಿಸಬಹುದು. ಉಕ್ರೇನ್ನಲ್ಲಿ ರಷ್ಯಾವೂ ಸಹ ಇದೇ ರೀತಿ ಮಾಡಬಹುದು. ಆದರೆ ಕೆಲವು ತಜ್ಞರು ಅಮೆರಿಕದ ಕ್ರಮವು ವಾಸ್ತವವಾಗಿ ವಿರುದ್ಧ ಪರಿಣಾಮವನ್ನು ಬೀರಬಹುದು ಎಂದು ಹೇಳಿದ್ದಾರೆ. ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂದು ಭಾವಿಸುವ ಸಂದರ್ಭಗಳಲ್ಲಿ ಅಮೆರಿಕ ಏಕಪಕ್ಷೀಯವಾಗಿ ವರ್ತಿಸಲು ಸಿದ್ಧವಾಗಿದೆ ಎಂಬುದನ್ನು ಅಮೆರಿಕ ಈಗಾಗಲೇ ತೋರಿಸಿದೆ. ಮಡುರೊ ಅವರನ್ನು ಅಮೆರಿಕ ಸೆರೆ ಹಿಡಿದ ವಿಧಾನದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಇಡೀ ಪ್ರಕ್ರಿಯೆ ಅಮೆರಿಕದ ದೃಷ್ಟಿಕೋನದಿಂದ ಯುದ್ಧತಂತ್ರದ ಯಶಸ್ಸು ಎಂಬುದರಲ್ಲಿ ಸಂದೇಹವಿಲ್ಲ. ಬೀಜಿಂಗ್ಗೆ ಇರುವ ಇನ್ನೊಂದು ಸಮಸ್ಯೆಯೆಂದರೆ, ವೆನೆಝುವೆಲಾದಲ್ಲಿ ಮಾಡಿದಂತೆ, ಕಳೆದ ಎರಡು ದಶಕಗಳಲ್ಲಿ ಅದು ಆಫ್ರಿಕಾ ಮತ್ತು ಅಮೆರಿಕಾಗಳಿಗೆ ತನ್ನ ಪ್ರಭಾವದ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ವೆನೆಝುವೆಲಾದಲ್ಲಿನ ಅಮೆರಿಕದ ಕ್ರಮವು ಅಮೆರಿಕನ್ನರು ಈ ಪ್ರಭಾವವನ್ನು ಮಿತಿಗೊಳಿಸಲು ನಿರ್ಧರಿಸಿದರೆ, ಅವರು ಹಾಗೆ ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ ಎಂಬ ಸಂಕೇತವನ್ನು ಕಳುಹಿಸುತ್ತದೆ. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವೆ ವ್ಯಾಪಾರ ಯುದ್ಧ ಮತ್ತು ಕಾರ್ಯತಂತ್ರದ ಸ್ವತ್ತುಗಳ ಮೇಲಿನ ನಿಯಂತ್ರಣಕ್ಕಾಗಿ ಜಗಳವು ಹೆಚ್ಚು ಸ್ಪಷ್ಟವಾಗುತ್ತಿರುವಾಗ ಇತ್ತೀಚಿನ ವರ್ಷಗಳಲ್ಲಿ ಚೀನಾದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ದೇಶಗಳಿಗೆ ಇದು ಕಳವಳಕಾರಿ ವಿಷಯವಾಗಿದೆ. ವೆನೆಝುವೆಲಾದಲ್ಲಿನ ಇತ್ತೀಚಿನ ವಿದ್ಯಮಾನಗಳ ನಂತರ ಅದರ Belt-and-Road ಉಪಕ್ರಮದ ಅಡಿಯಲ್ಲಿ ಚೀನಾದ ವಿದೇಶಿ ಸಾಲದ ಕ್ರಮಕ್ಕೂ ಹೊಡೆತ ಬಿದ್ದಿದೆ.
ರಕ್ತದಾನ ಜೀವ ಉಳಿಸುವ ಪುಣ್ಯದ ಕಾರ್ಯ: ವಂ.ಸೈಮನ್ ಡಿ ಸೋಜ
ಪೆರುವಾಯಿ: ನಾವು ನೀಡುವ ರಕ್ತ ಯಾವ ಧರ್ಮದ ವ್ಯಕ್ತಿಗೆ ಹೋಗುತ್ತೆ ಗೊತ್ತಿಲ್ಲ. ಆದರೆ ಒಂದು ಜೀವ ಉಳಿಸುವ ಪುಣ್ಯದ ಕಾರ್ಯ ಆಗತ್ತೆ ಅಂದರೆ ಸಂತೋಷ ಪಡಬೇಕು. ಇದುವೇ ನಿಜವಾದ ಬಂಧುತ್ವ, ಇದೇ ನಿಜವಾದ ಭ್ರಾತೃತ್ವ, ಇದೇ ನಿಜವಾದ ಸಹೋದರತ್ವ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂ.ಸೈಮನ್ ಡಿಸೋಜ ಅವರು ಹೇಳಿದರು. ಅವರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯ ಮುಚ್ಚಿರಪ ದವಿನಲ್ಲಿ ಫಾತಿಮಾ ಮಾತೆಯ ದೇವಾಲಯ ಇದರ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಹಾಗೂ ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ, ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಘ ಮುರುವ-ಮಾಣಿಲ ಹಾಗೂ ಟಾಸ್ಕ್ ಬಳಗ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಬಂಧುತ್ವ ಕ್ರಿಸ್ಮಸ್-2025 ಹಾಗೂ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕತ್ತಲೆಯಲ್ಲಿ, ಪಾಪ, ಮೌಢ್ಯ, ಅಹಂನಲ್ಲಿದ್ದ ಜನರಿಗೆ ರಕ್ಷಣೆ, ಬೆಳಕು ಹಾಗೂ ಬಿಡುಗಡೆ ನೀಡಲು ದೇವರು ತಮ್ಮ ಪುತ್ರನನ್ನೇ ಈ ಮನುಕುಲಕ್ಕೆ ನೀಡಿದರು. ದೇವರು ಎಲ್ಲವನ್ನೂ ನೀಡಿದಾಗ ನಾವೇನು ನೀಡಬಹುದು ಎಂದು ಯೋಚಿಸಿದಾಗ ಸರ್ವಧರ್ಮೀಯರೊಂದಿಗೆ ನಾವು ರಕ್ತದಾನ ಶಿಬಿರದ ಕಾರ್ಯಕ್ರಮ ಹಮ್ಮಿಕೊಂಡೆವು. ರಕ್ತದಾನ ಎಂಬುವುದು ಮತ್ತೊಬ್ಬರೊಂದಿಗೆ ಹಂಚುವ ಸಂಭ್ರಮ. ಇತರರ ಜೀವನ ಉಳಿಸಲು ನಮ್ಮನ್ನೇ ಅರ್ಪಿಸಿ ಕೊಳ್ಳುವುದು ರಕ್ತದಾನದ ಮಹತ್ವ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸೈಯದ್ ಹಬೀಬುಲ್ಲಾ ಪೂಕೋಯ ತಂಙಲ್ ಪೆರುವಾಯಿ ಇವರು ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಯೇಸುಕ್ರಿಸ್ತ ಎಂದು ಆರಾಧಿಸುವ ಮಹಾನ್ ವ್ಯಕ್ತಿಯನ್ನು ಮುಸಲ್ಮಾನರೂ ಕೂಡ ಅವರನ್ನು ಗೌರವಿಸುತ್ತಾರೆ. ನಮ್ಮ ಧರ್ಮದಲ್ಲೂ ಯೇಸುಕ್ರಿಸ್ತರಿಗೆ ಮಹತ್ತರವಾದ ಸ್ಥಾನ ವಿದೆ. ಅವರ ಹೆಸರಿನಲ್ಲಿ ಈ ರಕ್ತದಾನ ಶಿಬಿರ ಆಯೋಜಿಸಿದ್ದು ಸಂತೋಷ. ದಾನಗಳಲ್ಲಿ ಪವಿತ್ರ ದಾನವೆಂದರೆ ಮತ್ತೊಬ್ಬರಿಗೆ ಬದುಕು ಕೊಡುವ ದಾನ. ರಕ್ತದಾನಕ್ಕೆ ಜಾತಿ, ಮತ ಬೇಧದ ಹಂಗಿಲ್ಲ. ರಕ್ತವನ್ನು ಯಾರಿಗೂ ಸೃಷ್ಟಿ ಸಲು ಸಾಧ್ಯವಿಲ್ಲ.ಪ್ರಾರ್ಥನೆಗಿಂತ ಕೈಗಳಿಂದ ಕೊಡುವ ದಾನವು ಶ್ರೇಷ್ಠವಾದದ್ದು ಎಂಬ ಮಾತಿದೆ. ಅದೇ ರೀತಿ ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತವನ್ನು ಮತ್ತೊಬ್ಬರ ಜೀವ ಉಳಿಸಲು ನೀಡುವ ಕಾಣಿಕೆಗಿಂತ ಮಿಗಿಲಾದದ್ದು ಬೇರಾವುದೇ ಇಲ್ಲ. ಧರ್ಮವನ್ನು ನೋಡಿ ಯಾರೂ ರಕ್ತ ಕೊಡುವುದಿಲ್ಲ ಮತ್ತು ತೆಗೆದುಕೊಳ್ಳುವುದಿಲ್ಲ. ಅದೇ ರೀತಿ ಸಾಮಾಜಿಕ ಬದುಕಿನಲ್ಲಿ ಧರ್ಮದ ಗೋಡೆಗಳನ್ನು ತರುವುದು ಅಕ್ಷಮ್ಯ ಅಪರಾಧ. ಧರ್ಮಗಳ ಮಧ್ಯೆ ನಡೆಯುವ ಹೊಡೆದಾಟ, ಸಂಶಯ, ಅಪನಂಬಿಕೆಯ ಈ ಕಾಲಘಟ್ಟದಲ್ಲಿ ಇಂತಹ ಬಂಧುತ್ವ ಕಾರ್ಯಕ್ರಮವು ಸಕಾಲಿಕ ಬೇಡಿಕೆಯಾಗಿದ್ದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಸರ್ವಧರ್ಮೀಯರಿಗೆ ಚರ್ಚ್ ಹಾಗೂ ಸ್ತ್ರೀ ಸಂಘಟನೆ ವತಿಯಿಂದ ಕುಸ್ವಾರ್ ಹಂಚಲಾಯಿತು. 40ಕ್ಕೂ ಅಧಿಕ ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ಜೊತೆಗೆ ಅಭಿನಯ ಹಾಗೂ ಕ್ಯಾರಲ್ಸ್ ಗಾಯನದ ಮೂಲಕ ಕ್ರಿಸ್ಮಸ್ ಸಂದೇಶದ ಸಾರಿದರು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸ್ತ್ರೀ ಸಂಘಟನೆಯ ಘಟಕ ಅಧ್ಯಕ್ಷೆ ರೇಷ್ಮಾ ಡಿಸೋಜ, ಐಸಿವೈಎಂ ಘಟಕ ಅಧ್ಯಕ್ಷ ಸ್ಟ್ಯಾನಿ ಡಿಸೋಜ, ಟಾಸ್ಕ್ ಸಂಘಟನೆ ಗೌರವ ಅಧ್ಯಕ್ಷ ಹಮೀದ್ ಹಾಜಿ ದರ್ಖಾಸ್, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ ಇದರ ಸ್ಥಾಪಕ ರವಿಚಂದ್ರ ಕುಲಾಲ್, ಹ್ಯುಮಾನಿಟಿ ಅಭಿಮಾನಿ ಬಳಗದ ಮೌರಿಸ್ ಡಿಸೋಜ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇದರ ಸಂಪರ್ಕಾಧಿಕಾರಿ ಡಾ.ಶೇಖ್ ಇಕ್ಬಾಲ್ ಹುಸೇನ್, ಸರ್ವ ಆಯೋಗಗಳ ಸಂಚಾಲಕ ರಾಲ್ಫ್ ಡಿಸೋಜ ಸೇರಿ ಹಲವರು ಉಪಸ್ಥಿತರಿದ್ದರು.
Kalaburagi | ಸೇಡಂ ತಾಲ್ಲೂಕು ಕಚೇರಿಗೆ ಹುಸಿ ಬಾಂಬ್ ಬೆದರಿಕೆ : ಪರಿಶೀಲನೆ
ಕಲಬುರಗಿ : ಸೇಡಂ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿ ಪ್ರಜಾಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆ ಮಂಗಳವಾರ ನಡೆದಿದೆ. ಅನಾಮಿಕ ಇಮೇಲ್ ಮೂಲಕ ತಹಶೀಲ್ದಾರ್ ಅವರ ಅಧಿಕೃತ ಇಮೇಲ್ಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು ತಕ್ಷಣವೇ ಸೇಡಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನದಳದ ಸಿಬ್ಬಂದಿ ಪ್ರಜಾಸೌಧಕ್ಕೆ ದೌಡಾಯಿಸಿ ಕಟ್ಟಡದ ಒಳಭಾಗ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಿದರು. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಭಯಭೀತರಾದ ಕಚೇರಿ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯಿಂದ ಹೊರಗೆ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಇಮೇಲ್ ಮೂಲ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ರಾಜ್ಕೋಟ್ನಲ್ಲಿ ನಡೆದ ವಿಜಯ್ ಹಜಾರೆ ಪಂದ್ಯದಲ್ಲಿ, ಹೈದರಾಬಾದ್ನ ಆರಂಭಿಕ ಆಟಗಾರ ಅಮನ್ ರಾವ್ 108 ಎಸೆತಗಳಲ್ಲಿ ಶತಕ ಸಿಡಿಸಿ, ನಂತರ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ 107 ರನ್ಗಳ ಅಂತರದಿಂದ ಬಂಗಾಳವನ್ನು ಸೋಲಿಸಿತು.
ಜ.11ರಂದು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2026
ಮಂಗಳೂರು: ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.11ರಂದು ಬೆಳಗ್ಗೆ 8:30ರಿಂದ ಸಂಜೆ 4:15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2026 ಆಯೋಜಿಸಲಾಗಿದೆ ಎಂದು ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಬೆಳಿಗ್ಗೆ 9:30ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಉಪ ಸಹ ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಮೇಳದ ಉದ್ಘಾಟನೆಯನ್ನು ನೆರವೇರಿಸುವರು. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್, ಮಂಗಳೂರು ಎಂಆರ್ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಿಯಾರ್ ಅತಿಥಿಯಾಗಿ ಭಾಗವಹಿಸುವರು. ದ.ಕ, ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಮಕ್ಕಳ ಸಹಿತ ಎಲ್ಲ ವಯೋಮಾನದ ದಿವ್ಯಾಂಗರಿಗಾಗಿ ಈ ಮೇಳ ಏರ್ಪಡಿಸಲಾಗಿದೆ ಎಂದು ತಿಳಿಸಿದರು. 18 ವರ್ಷ ಮೇಲ್ಪಟ್ಟ ಸ್ವಲೀನತೆ (ಆಟಿಸಂ), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ಈ ಬಾರಿಯ ಮೇಳದಲ್ಲಿ ನೀಡಲಾಗುವುದು ಎಂದರು. ‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಸಬಲೀಕರಣ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು. 7 ಮಂದಿ ದಿವ್ಯಾಂಗ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರಿಗೆ ಕಳೆದ ಡಿಸೆಂಬರ್ 21ರಂದು ಪ್ರವಾಸವನ್ನು ಆಯೋಜಿಸಿಸಲಗಿತ್ತು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಮತ್ತು ಸೇವಾ ಭಾರತಿ ಸಂಸ್ಥೆಯು ಮೊಂಟೆಪದವು ಮಾಧವ ವನದ ಕ್ಯಾಂಪಸ್ ಹಾಗೂ ಅಲ್ಲಿನ ಉದ್ಯಾನವನಕ್ಕೆ ಕರೆದುಕೊಂಡು ಹೋಗಲಾಗಿತ್ತು. 190 ಮಂದಿ ದಿವ್ಯಾಂಗರು ಮತ್ತು ಪೋಷಕರು, ಶಿಕ್ಷಕರು ಈ ಪ್ರವಾಸದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಸೇವಾ ಭಾರತಿ ಮಂಗಳೂರು ವತಿಯಿಂದ ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿ ದಿವ್ಯಾಂಗರಿಗಾಗಿ ಮಾಧವ ವನ ಆರಂಭಿಸಲಾಗಿದೆ. ದಿವ್ಯಾಂಗರಿಗೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ಈ ಸಂಸ್ಥೆ ಪ್ರಾರಂಭಿಸಲಾಗಿದೆ. ಪ್ರಸ್ತುತ ಇಲ್ಲಿ ಹಗಲು ಪಾಲನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 300 ಮಂದಿ ದಿವ್ಯಾಂಗರಿಗೆ ವಸತಿ ವ್ಯವಸ್ಥೆಯ ಸಾಮರ್ಥ್ಯ ಇರುವ ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ದಿವ್ಯಾಂಗರಿಗೆ ವಸತಿ ವ್ಯವಸ್ಥೆ ಶೀಘ್ರ ಆರಂಭವಾಗಲಿದೆ ಎಂದು ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಶಾಜ್ಯೋತಿ ಸಂಸ್ಥೆಯ ಜೊತೆ ಕಾರ್ಯದರ್ಶಿ ಗಣರಾಜ ವೈ., ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ, ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಖಜಾಂಚಿ ಪಿ. ವಿನೋದ್ ಶೆಣೈ ಉಪಸ್ಥಿತರಿದ್ದರು. *ವಿಶಿಷ್ಟ ಮೇಳದ ವಿಶೇಷತೆ ಮೇಳದಲ್ಲಿ ಬೆಳಗ್ಗೆ 8:30ಡಿ ಕ್ಕೆ ನೋಂದಣಿ, 9:30ಕ್ಕೆ ಸಭಾ ಕಾರ್ಯಕ್ರಮ, 10.15ರಿಂದ ದಿವ್ಯಾಂಗರಿಗೆ ವಿವಿಧ ಚಟುವಟಿಕೆಗಳು, ಮನೋರಂಜನೆಗಳು, ಮಧ್ಯಾಹ್ನ 1ಕ್ಕೆ ಭೋಜನ, 2ರಿಂದ ದಿವ್ಯಾಂಗರಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ತಿರುಗುವ ಕುದುರೆ, ತಿರುಗುವ ತೊಟ್ಟಿಲು, 25ಕ್ಕೂ ಅಧಿಕ ತಿಂಡಿ ತಿನಿಸುಗಳ ಮಳಿಗೆಗಳು, ಪಾನೀಯ ಮಳಿಗೆಗಳು, ಹಣ್ಣಿನ ಅಂಗಡಿಗಳು, ಬೇತಾಳ ಕುಣಿತ, ಮನೋರಂಜನಾ ಆಟಗಳು, ಕುದುರೆ, ಒಂಟೆ ಸವಾರಿ ಇರಲಿದೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತ ಎಂದು ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದರು.
ಕೆನಡಾದ ಕೆಲಸದ ಪರವಾನಗಿಯಲ್ಲಿ ಬದಲಾವಣೆ; ಅಪಾಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಭಾರತೀಯ ವಲಸಿಗರು!
ಕೆನಡಾದಲ್ಲಿ ಕೆಲಸದ ಪರವಾನಗಿ ಕಳೆದುಕೊಳ್ಳುವ ಅಥವಾ ದಾಖಲೆರಹಿತ ಕಾರ್ಮಿಕರಾಗುವ ಅಪಾಯದಲ್ಲಿರುವವರಲ್ಲಿ ಅರ್ಧದಷ್ಟು ಭಾರತೀಯರೇ ಇದ್ದಾರೆ. ಕೆನಡಾದಲ್ಲಿ ಈ ವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಕೆಲಸದ ಪರವಾನಗಿಗಳು ಮುಗಿಯಲಿದ್ದು, ತಾತ್ಕಾಲಿಕ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಹೊಸ ವೀಸಾ ಅಥವಾ ಶಾಶ್ವತವಾಗಿ ನೆಲೆಸಲು ಪರವಾನಗಿ ಪಡೆಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದರೆ ಕೆನಡಾ ಇತ್ತೀಚೆಗೆ ವಲಸೆ ನೀತಿಯನ್ನು ಬಿಗಿಗೊಳಿಸಿದ ನಂತರ ಸುಲಭವಾಗಿ ಕೆಲಸದ ಪರವಾನಗಿ ಸಿಗುತ್ತಿಲ್ಲ. ಹೀಗೆ ಕೆಲಸದ ಪರವಾನಗಿ ಕಳೆದುಕೊಳ್ಳುವ ಅಥವಾ ದಾಖಲೆರಹಿತ ಕಾರ್ಮಿಕರಾಗುವ ಅಪಾಯದಲ್ಲಿರುವವರಲ್ಲಿ ಅರ್ಧದಷ್ಟು ಭಾರತೀಯರೇ ಇದ್ದಾರೆ ಎಂದು India Today ವರದಿ ಮಾಡಿದೆ. ಮಾರ್ಕ್ ಕಾರ್ನಿ ಆಡಳಿತದಲ್ಲಿ ಕೆನಡಾದ ವಲಸೆ ನೀತಿಗೆ ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಅಭೂತಪೂರ್ವ ಪ್ರಮಾಣದಲ್ಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಕೆಲಸದ ಪರವಾನಗಿ ಕೊನೆಗೊಳ್ಳಲಿದ್ದು, ದಾಖಲೆರಹಿತ ವಲಸಿಗರ ಸಂಖ್ಯೆ ಹೆಚ್ಚಾಗಲಿದೆ. ಕೆನಡಾದ ವಲಸೆ ನಿರಾಶ್ರಿತರು ಮತ್ತು ಪೌರತ್ವದ ದತ್ತಾಂಶದ ಪ್ರಕಾರ 2025ರ ಅಂತ್ಯದಲ್ಲಿ ಸುಮಾರು 1,053,000 ಕೆಲಸದ ಪರವಾನಗಿಗಳು ಅವಧಿ ಮೀರಿವೆ. ಮಿಸ್ಸಿಸೌಗಾ ಮೂಲದ ವಲಸೆ ಸಲಹೆಗಾರ ಕನ್ವರ್ ಸೈರಾಹ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ 2026ರಲ್ಲಿ 9,27,000ರಷ್ಟು ಕೆಲಸದ ಪರವಾನಗಿಗಳು ರದ್ದಾಗಲಿವೆ. ಕೆಲಸದ ಪರವಾನಗಿ ಮುಗಿದಾಗ ಕಾರ್ಮಿಕರು ದಾಖಲೆ ರಹಿತರಾಗುತ್ತಾರೆ. ಅವರು ಹೊಸ ವೀಸಾ ಪಡೆಯಬೇಕು ಅಥವಾ ಶಾಶ್ವತವಾಗಿ ನಿವಾಸಿಯಾಗಬೇಕು. ಆದರೆ ಇತ್ತೀಚೆಗೆ ಕೆನಡಾದಲ್ಲಿ ವಲಸಿಗರಿಗೆ ನಿಯಮವನ್ನು ಬಿಗಿಗೊಳಿಸಿದ ನಂತರ ಈ ಆಯ್ಕೆಗಳು ಕಠಿಣವಾಗಿವೆ. ಮುಖ್ಯವಾಗಿ ತಾತ್ಕಾಲಿಕ ಕಾರ್ಮಿಕರು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಂತಹ ಶಾಶ್ವತವಲ್ಲದ ವರ್ಗಗಳಲ್ಲಿ ನಿಯಮಗಳು ಬಿಗಿಯಾಗಿವೆ. ಆಶ್ರಯ ಹಕ್ಕುಗಳನ್ನು ನಿಯಂತ್ರಿಸಲು ಕೈಗೊಂಡಿರುವ ಹೊಸ ಕ್ರಮಗಳಿಂದ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ. ಭಾರತೀಯ ವಲಸಿಗರೇಕೆ ಅಪಾಯದಲ್ಲಿದ್ದಾರೆ? ಇಷ್ಟೊಂದು ಪ್ರಮಾಣದಲ್ಲಿ ದಾಖಲೆರಹಿತ ವಲಸಿಗರನ್ನು ನಿಭಾಯಿಸಿದ ಅನುಭವ ಕೆನಡಾಗೆ ಇಲ್ಲದ ಕಾರಣ ಗೊಂದಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2026ರ ಮೊದಲ ತ್ರೈಮಾಸಿಕ ಅವಧಿಯಲ್ಲಿಯೇ 3,15,000 ಕೆಲಸದ ಪರವಾನಗಿ ರದ್ದಾಗಲಿದೆ. ಈಗಾಗಲೇ 2025ರಲ್ಲಿ 2,91,000 ಕ್ಕೂ ಮೀರಿ ಕೆಲಸದ ಪರವಾನಗಿಗಳು ರದ್ದಾಗಿವೆ. ಹೀಗಾಗಿ 2026 ಮಧ್ಯಭಾಗದಲ್ಲಿ ಕೆನಡಾದಲ್ಲಿ 20 ಲಕ್ಷ ದಾಖಲೆರಹಿತ ವಲಸಿಗರು ಇರಲಿದ್ದಾರೆ. ಅದರಲ್ಲಿ ಅರ್ಧದಷ್ಟು ಮಂದಿ ಭಾರತೀಯರೇ ಇದ್ದಾರೆ. ಈಗಾಗಲೇ ಗ್ರೇಟರ್ ಟೊರೊಂಟೊ ಪ್ರದೇಶದ ಕೆಲವು ಭಾಗಗಳಲ್ಲಿ ಸಮಸ್ಯೆಯ ತೀವ್ರತೆ ಗೋಚರಿಸುತ್ತಿದ್ದು, ಬ್ರಾಂಪ್ಟನ್ ಮತ್ತು ಕ್ಯಾಲೆಡನ್ನ ಅರಣ್ಯ ಪ್ರದೇಶಗಳಲ್ಲಿ ವಲಸಿಗರು ಬೀಡುಬಿಟ್ಟಿದ್ದಾರೆ. ಅನುಕೂಲಕ್ಕಾಗಿ ವಿವಾಹವಾಗುವ ವ್ಯವಸ್ಥೆಯ ಬ್ಯೂರೋಗಳನ್ನು ತೆರೆಯಲಾಗಿದೆ. ಹೀಗೆ ಅನಿಶ್ಚಿತತೆಯಲ್ಲಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾರ್ಮಿಕ ಹಕ್ಕುಗಳಿಗೆ ಪ್ರತಿಭಟನೆಗಳನ್ನು ನಡೆಸುವ ಯೋಜನೆಗಳೂ ರೂಪುಗೊಳ್ಳುತ್ತಿವೆ ಎಂದು ಕೆನಡಾ ಮೂಲದ ಪತ್ರಕರ್ತರು ಮಾಧ್ಯಮಗಳಲ್ಲಿ ಬರೆದಿದ್ದಾರೆ. ಅಭೂತಪೂರ್ವ ಸಂಖ್ಯೆಯಲ್ಲಿ ದಾಖಲೆರಹಿತ ಕಾರ್ಮಿಕರು ಕಾರ್ಮಿಕರಿಗೆ ಕೆನಡಾದಲ್ಲಿ ಕಾನೂನುಬದ್ಧವಾಗಿ ನೆಲೆಯೂರಲು ವಲಸಿಗರ ಪರವಾನಗಿಗೆ ಹಾದಿಯ ಕೊರತೆ ವಿರುದ್ಧ ಜನವರಿಯಲ್ಲಿ ಪ್ರತಿಭಟನೆಯಾಗುವ ಸಾಧ್ಯತೆಯಿದೆ. 2028ರವರೆಗೆ ವಲಸೆ ಸಂಖ್ಯೆಗೆ ಮಿತಿ ಹೇರುವ ಕೆನಡಾದ ನಿರ್ಧಾರದಿಂದಾಗಿ 2026ರಲ್ಲಿ ಶಾಶ್ವತ ನಿವಾಸಿಗಳಾಗುವವರ ಸಂಖ್ಯೆ 3,80,000ಕ್ಕೆ ಮಿತಿಗೊಳಿಸಲಾಗಿದೆ. ಹಾಗೆಯೇ ತಾತ್ಕಾಲಿಕ ವಿದೇಶಿ ಕಾರ್ಮಿಕರ ನೇಮಕಾತಿಯಲ್ಲೂ ಕುಸಿತವಾಗಲಿದೆ. ವಿದ್ಯಾರ್ಥಿ ವೀಸಾಗಳು ಮತ್ತು ನಿರಾಶ್ರಿತರ ಭರ್ತಿಯಲ್ಲೂ ಕಡಿತವಾಗಲಿದೆ. 2027ರೊಳಗೆ ತಾತ್ಕಾಲಿಕ ನಿವಾಸಿಗರ ಸಂಖ್ಯೆಯನ್ನು ಶೇ 7ರಿಂದ ಶೇ 5ಕ್ಕೆ ಇಳಿಸಲು ಕೆನಡಾ ನಿರ್ಧರಿಸಿದೆ. ತಾತ್ಕಾಲಿಕ ನಿವಾಸಿಗರು ವೀಸಾ ಮುಗಿದ 90 ದಿನಗಳೊಳಗೆ ಹೊಸ ವೀಸಾಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಪ್ರಕ್ರಿಯೆ ದುಬಾರಿಯಾಗಿದೆ. ಅರ್ಜಿಗಳು ಪ್ರಕ್ರಿಯೆಯಲ್ಲಿರುವಾಗ ಕೆಲಸ ಮಾಡುವುದನ್ನು ತಡೆಹಿಡಿಯಲಾಗಿದೆ. ವೀಸಾ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿ ಬರಬಹುದು. ಕೆನಡಾ ಕಾನೂನುಬದ್ಧ ವಸತಿ ಸೌಲಭ್ಯಕ್ಕೆ ಮಿತಿ ಹೇರುತ್ತಿರುವುದೇಕೆ? ಕೆನಡಾ 2022ರಿಂದ 2023ರ ನಡುವೆ 1.2 ದಶಲಕ್ಷ ಹೊಸ ವಲಸಿಗರನ್ನು ಆಹ್ವಾನಿಸಿದೆ. ಹೀಗಾಗಿ 1950ಗೆ ಹೋಲಿಸಿದಲ್ಲಿ ದೇಶದ ಜನಸಂಖ್ಯೆಯಲ್ಲಿ ವೇಗದ ಪ್ರಗತಿಗೆ ಕಾರಣವಾಗಿದೆ. ಹೀಗಾಗಿ ವಸತಿ ಮತ್ತು ಆರೋಗ್ಯಸೇವೆ ಸಂಪನ್ಮೂಲದ ಮೇಲೆ ಒತ್ತಡ ಬಿದ್ದಿದೆ. ಆಂಗಸ್ ರೈಡ್ ಸಂಸ್ಥೆಯ ಸಮೀಕ್ಷೆಯಲ್ಲಿ ಕಂಡುಬಂದಿರುವ ಪ್ರಕಾರ ಶೇ. 28ರಷ್ಟು ಕೆನಡಾದ ಪ್ರಜೆಗಳು ವಸತಿ ಸೌಲಭ್ಯದ ಕೊರತೆಯಿಂದ ತಮ್ಮ ಪ್ರಸ್ತುತ ಪ್ರದೇಶವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಮತ್ತೊಂದು ಸಮೀಕ್ಷೆಯ ಪ್ರಕಾರ ವಲಸಿಗರು ಹೆಚ್ಚಾಗಿ ವಸತಿ ಬಿಕ್ಕಟ್ಟು ಬಂದೊದಗಿದೆ ಎಂದು ಶೇ 44.5ರಷ್ಟು ಕೆನಡಿಯನ್ನರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಗೆ ವೈದ್ಯರ ಕೊರತೆ ಮತ್ತು ಕ್ಲಿನಿಕ್ಗಳ ಕೊರತೆ ಕಾಣಿಸುತ್ತಿದೆ. ಈ ದೇಶಿ ಒತ್ತಡಗಳ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಮಿತಿ ಹೇರಲು ಒತ್ತಡ ಹೇರಿರುವುದು ವಲಸೆ ನೀತಿ ಬಿಗಿಗೊಳಿಸಲು ಕಾರಣವಾಗಿದೆ.
ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ ರಜತ ವರ್ಷಾಚರಣೆಗೆ ಚಾಲನೆ
ಮಂಗಳೂರು, ಜ.6: ಮಾಂಡ್ ಸೊಭಾಣ್ ತಿಂಗಳ ವೇದಿಕೆ ದಾಖಲೆ ಪುಸ್ತಕಗಳಲ್ಲಿ ದಾಖಲಿಸುವಂತಹ ಸಾಧನೆ. ಕಲಾವಿದರಿಗೆ ವೇದಿಕೆ ಕೊಟ್ಟ ಈ ಸರಣಿಯಿಂದ ಕೊಂಕಣಿಗೆ ಬಹು ದೊಡ್ಡ ಗೌರವ ಲಭಿಸಿದೆ. ಇಂತಹ ಸಾಧನೆಗಾಗಿ ಮಾಂಡ್ ಸೊಭಾಣ್ ಸಂಸ್ಥೆಯನ್ನು ಸರಕಾರ ಗೌರವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಮಾಂಡ್ ಸೊಭಾಣ್ ಕಲಾಂಗಣದಲ್ಲಿ ಜ.4ರಂದು ಆಯೋಜಿಸಲಾದ ತಿಂಗಳ ವೇದಿಕೆ ಸರಣಿಯ ರಜತ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಗೌರವ ಅತಿಥಿ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಬೆಂಗಳೂರು ಸಂಸ್ಥೆಯ ನವೀಕೃತ ಜಾಲತಾಣವನ್ನು ಲೊಕಾರ್ಪಣೆಗೊಳಿಸಿದರು. ನವೀಕೃತ ಜಾಲತಾಣ ಬಗ್ಗೆ ಕೇರನ್ ಮಾಡ್ತಾ ಮಾಹಿತಿ ನೀಡಿದರು. ನವೀಕೃತ ಜಾಲತಾಣ ರೂಪಿಸಿದ ತಂಡದ ವಿಕಾಸ್ ಲಸ್ರಾದೊ ತಾಂತ್ರಿಕ ಸಹಾಯ ಒದಗಿಸಿದ ಟೆಕ್ಹಾರ್ಮೊನಿಕ್ಸ್ ಇದರ ಅಜಯ್ ಡಿ ಸೋಜ ,ಆನಿ ಪ್ರಿನ್ಸನ್ ಕಾರ್ಡೊಜಾ ಇವರನ್ನು ಗೌರವಿಸಲಾಯಿತು. ತಿಂಗಳ ವೇದಿಕೆ ಸರಣಿಗೆ ನೀಡಿದ ಸಹಕಾರಕ್ಕಾಗಿ ಆಸ್ಟಿನ್ ರೋಚ್ರನ್ನು ಸನ್ಮಾನಿಸಲಾಯಿತು. ಆಸ್ಟ್ರೇಲಿಯಾದ ಸಾಫ್ಟ್ವೇರ್ ತಜ್ಞ ಪ್ರಜೋತ್ ಡೆಸಾರಿಂದ ಸಂಗೀತ ರಸಮಂಜರಿ ನಡೆಯಿತು. ಸೋನಲ್ ಮೊಂತೇರೊ, ಕ್ಲಿಯೊನ್ ಡಿಸಿಲ್ವಾ ಆಯುಶ್ ಮಿನೇಜಸ್, ಬ್ಲೂ ಏಂಜಲ್ಸ್ ಕೊಯರ್ ಇವರು ಗಾಯನದಲ್ಲಿ ಹಾಗೂ ರಸೆಲ್ ರೊಡ್ರಿಗಸ್, ಹೃಷಿಕೇಶ್ ಉಪಾಧ್ಯಾಯ, ಜೊಸ್ವಿನ್ ಡಿಕುನ್ಹಾ ಮತ್ತು ಮಿಲ್ಟನ್ ಬ್ರಾಗ್ಸ್ ಸಂಗೀತದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ - 2026 ಇದರ ಮಂಜೂರಾತಿ ಪತ್ರವನ್ನು ಜಾಸ್ಮಿನ್ ಲೋಬೊ ಆಗ್ರಾರ್ರಿಗೆ ಹಸ್ತಾಂತರಿಸಲಾಯಿತು. ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಿ ಕ್ರಾಸ್ತಾ ಮತ್ತು ಕೋಶಾಧಿಕಾರಿ ಸುನಿಲ್ ಮೊಂತೆರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಸ್ವಾಗತಿಸಿ , ವಿತೊರಿ ಕಾರ್ಕಳ ಸಭಾ ಕಾರ್ಯಕ್ರಮ ನಿರೂಪಿಸಿದರು.
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇಲ್ಲದೆ ಸರಕಾರ, ಕಾಂಗ್ರೆಸ್ ಪಕ್ಷ ಉಳಿಸೋದು ಕಷ್ಟ: ಎಚ್.ಸಿ.ಮಹದೇವಪ್ಪ
ಮೈಸೂರು : ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇಲ್ಲದೇ ಸರಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಉಳಿಸೋದು ಕಷ್ಟ. ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿಯಾಗಿರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಅಭಿನಂದನಾ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2028ರಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕು ಎಂದು ಸಭಿಕರ ಆಗ್ರಹಕ್ಕೆ ದನಿಗೂಡಿಸಿದ ಸಚಿವ ಮಹದೇವಪ್ಪ ಅವರು, 2028ರಲ್ಲೂ ಸಿದ್ದರಾಮಯ್ಯ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾದರೂ ನಮ್ಮದೇನು ತಕರಾರು ಇಲ್ಲ ಎಂದರು. ಸಿದ್ದರಾಮಯ್ಯ ಅವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಅವರ ಮೇಲೆ ಜನರಿಗೆ ಬಲವಾದ ನಂಬಿಕೆ ಇದೆ. ಸಿದ್ದರಾಮಯ್ಯ ಇಲ್ಲದಿದ್ದರೆ ಅಹಿಂದ ಬಲಹೀನವಾಗುತ್ತದೆ. ಹಾಗಾಗಿ ಅಹಿಂದ ಸಮಾಜಗಳು ಎಚ್ಚರಿಕೆಯಿಂದ ಇರಬೇಕು. ಸಿದ್ದರಾಮಯ್ಯ ನಾಯಕತ್ವ ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಎಂದು ಹೇಳಿದರು. ದಲಿತರು ಬಹಳ ಬುದ್ಧಿವಂತರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಿಸುವುದಾದರೆ ದಲಿತರಿಗೆ ಅವಕಾಶ ಕೊಡಬೇಕೆಂದು ಪರೋಕ್ಷವಾಗಿ ಕೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕು. ಸಿದ್ದರಾಮಯ್ಯ ಎಂದೂ ಭ್ರಷ್ಟಾಚಾರಕ್ಕೆ ಮಣೆ ಹಾಕಿಲ್ಲ. ಕಳ್ಳರನ್ನು ಪ್ರೋತ್ಸಾಹಿಸಲಿಲ್ಲ. ಹಾಗಾಗಿ ಅವರ ನಾಯಕತ್ವ ಮತ್ತು ಮುಂದಾಳತ್ವ ಅಹಿಂದ ಸಮುದಾಯಗಳಿಗೆ ಅಗತ್ಯ ಎಂದು ತಿಳಿಸಿದರು. ಬ್ಯಾಕ್ಲಾಗ್ ಹುದ್ದೆಗೆ ಕ್ರಮ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 72 ಸಾವಿರ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಕ್ರಮವಹಿಸಿದ್ದೇವೆ. ಹುದ್ದೆಗಳ ಭರ್ತಿಗಾಗಿ 5 ತಂಡಗಳನ್ನು ರಚಿಸಿದ್ದು, ಸಭೆ ನಡೆಸಲಾಗಿದೆ. ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು.
ಪತ್ರಕರ್ತ ಪ್ರಕಾಶ ಸುವರ್ಣರ ’ಪಂಜುರ್ಲಿ’ ಕೃತಿ ಬಿಡುಗಡೆ
ಉಡುಪಿ, ಜ.6: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ-2026 ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಬರೆದಿರುವ ’ಪಂಜುರ್ಲಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿಯನ್ನು ಬಿಡುಗಡೆ ಗೊಳಿಸಿದರು. ತುಳುನಾಡಿನ ಪ್ರಾಚೀನ ದೈವ ಪಂಜುರ್ಲಿಯ ಕುರಿತು ಪ್ರಕಾಶ ಸುವರ್ಣ ಕಟಪಾಡಿ ಅಧ್ಯಯನ ನಡೆಸಿ ಬರೆದಿರುವ ಪಂಜುರ್ಲಿ ಕೃತಿ ಮೌಲ್ಯಯುತವಾಗಿದ್ದು, ಈ ಕೃತಿ ಯುವಪೀಳಿಗೆಗೆ ದೈವಾರಾಧನೆಯ ಕುರಿತು ಸ್ಪಷ್ಟ ಚಿತ್ರಣ ನೀಡಲಿದೆ ಎಂದರು. ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ್ಷ ಬಿ.ರಘುನಾಥ್ ಸೋಮಯಾಜಿ, ಮೂಡುಬಿದ್ರಿ ಉದ್ಯಮಿ ಶ್ರೀಪತಿ ಭಟ್, ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್, ತೇವು ತಾರನಾಥ ಕೊಟ್ಟಾರಿ, ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ, ಡಾ.ಶಾಂತಾ ಪುತ್ತೂರು, ಡಾ.ಜೋಸೆಫ್ ಲೋಬೊ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನೀಮಾ ಲೋಬೊ, ಪದ್ಮನಾಭ ಆರ್.ಕೋಟ್ಯಾನ್, ದೇವಕಿ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರಿನ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ..ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಕೊಟ್ಟಾರಿ ಸ್ವಾಗತಿಸಿದರು. ಶೋಭಾ ದಿನೇಶ್ ಉದ್ಯಾವರ ಮತ್ತು ಸನ್ಮತಿ ಇಂದ್ರ ಕಾರ್ಯಕ್ರಮ ನಿರೂಪಿಸಿದರು.

17 C