SENSEX
NIFTY
GOLD
USD/INR

Weather

27    C
...

ಬಿಟ್‌ ಕಾಯಿನ್‌ ಹಗರಣ : ವಂಚನೆ, ನಂಬಿಕೆ ದ್ರೋಹ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಶ್ರೀಕಿ, ರಾಬಿನ್‌

ಬೆಂಗಳೂರು: ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮತ್ತವರ ಸ್ನೇಹಿತ ರಾಬಿನ್‌ ಖಂಡೇಲವಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಹಾಗೂ ಪಶ್ಚಿಮ ಬಂಗಾಳದ ಮೂಲದ ಬಿಟ್‌ ಕಾಯಿನ್‌ ಟ್ರೇಡರ್‌ ರಾಬಿನ್‌ ಖಂಡೇಲವಾಲ್‌ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದಾಖಲೆಗಳನ್ನು ಪರಿಶೀಲಿಸಿ ವಾದ ಮಂಡಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ಪ್ರಕರಣವೇನು? : ಬೆಂಗಳೂರಿನ ಇಂದಿರಾನಗರದ ಯಶೋಧಾ ದೇವಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿ, ಶ್ರೀಕೃಷ್ಣ ಹಾಗೂ ರಾಬಿನ್‌ ಖಂಡೇಲವಾಲ್‌ ಅವರು 2019ರಲ್ಲಿ ಭೇಟಿಯಾಗಿ 28 ಲಕ್ಷ ರೂ. ನೀಡಿದರೆ ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಿ 28 ಲಕ್ಷ ರೂ. ಜತೆ 17 ಲಕ್ಷ ರೂ. ಸೇರಿಸಿ ಒಟ್ಟು 45 ಲಕ್ಷ ರೂ. ನೀಡುತ್ತೇವೆ ಎಂದು ಖಾತೆ ನಂಬರ್‌ ಒಂದನ್ನು ನೀಡಿದ್ದರು. ಅದಕ್ಕೆ ತಾಂತ್ರಿಕ ತೊಂದರೆಯಿಂದಾಗಿ ಹಣ ಹೋಗಿರಲಿಲ್ಲ. ಆನಂತರ, ಅಜಿತ್‌ ಖಂಡೇಲವಾಲ್‌ ಎಂಬಾತನ ಖಾತೆಗೆ ಹಣ ಹಾಕುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆಯೇ ಅಜಿತ್‌ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ಹಿಂದಿರುಗಿಸುವುದಾಗಿ ಹೇಳಿದ್ದ ಆರೋಪಿಗಳು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದ್ದರಿಂದ, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ದೂರು ಆಧರಿಸಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ರುಬಿಟ್‌ ಆನ್‌ಲೈನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ನ ರಾಬಿನ್‌ ಖಂಡೇವಾಲ್‌ ಮತ್ತು ಅಜಿತ್‌ ಖಂಡೇಲವಾಲ್‌ ವಿರುದ್ಧ ಪೊಲೀಸರು 2020ರ ನ.19ರಂದು ಐಪಿಸಿ ಸೆಕ್ಷನ್‌ 406 ಹಾಗೂ 420ರ ಅಡಿ ಪ್ರಕರಣ ದಾಖಲಿಸಿದ್ದರು. ಈ ಎಫ್‌ಐಆರ್‌ ಮತ್ತದರ ಸಂಬಂಧ 2021ರ ಫೆ.10ರಂದು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಾರ್ತಾ ಭಾರತಿ 4 Apr 2026 12:03 am

ಭಾರತದ ಸೆನ್ಸಾರ್‌ ಶಿಪ್ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಅಮೆರಿಕದ ವ್ಯಾಪಾರ ಪ್ರತಿನಿಧಿಯ 2026ರ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿಯು ಭಾರತದ ಯೂಸರ್ ಖಾತೆಗಳಿಂದ ಕಂಟೆಂಟ್ ತೆಗೆದುಹಾಕುವ ಅಭ್ಯಾಸವನ್ನು ಔಪಚಾರಿಕವಾಗಿ ಖಂಡಿಸಿದೆ, ರಾಜಕೀಯ ಪ್ರೇರಿತವೆಂದು ತೋರುವ ವಿಷಯಗಳನ್ನು ಬಳಕೆದಾರ ಖಾತೆಗಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಹಾಕುತ್ತಿರುವ ವಿನಂತಿಗಳನ್ನು ಯುಎಸ್ ಸಂಸ್ಥೆಗಳು ಎದುರಿಸುತ್ತಿವೆ ಎಂದು ಅದು ಹೇಳಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಐಟಿ ನಿಯಮಗಳ ಅಡಿಯಲ್ಲಿ ಕಂಟೆಂಟ್ ತೆಗೆದುಹಾಕುವಿಕೆಯನ್ನು, ಆಗಾಗ್ಗೆ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಜೊತೆಗೆ ಸುಂಕ ರಹಿತ ವ್ಯಾಪಾರ ಅಡೆತಡೆಗಳಾಗಿ ವರ್ಗೀಕರಿಸಲಾಗಿದೆ. ವಿಶ್ವಗುರು ಮೋದಿ ಒಮ್ಮೆ ‘ಟೀಕೆ ಪ್ರಜಾಪ್ರಭುತ್ವದ ಆತ್ಮ' ಎಂದು ಹೇಳಿದರು. ಆದರೂ ಈ ಆಡಳಿತವು ಹಿಂಜರಿಕೆಯಿಲ್ಲದೆ ಟೀಕೆಗಳನ್ನು ಹೂತುಹಾಕುವುದನ್ನು ಸಾಮಾನ್ಯಗೊಳಿಸಿದೆ ಎಂದು ದೂರಿದ್ದಾರೆ. ವಾಸ್ತವವಾಗಿ ಇತ್ತೀಚೆಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಕಾಶಕರಲ್ಲದವರು ಸಹ ಪೋಸ್ಟ್ ಮಾಡಿದ ಸುದ್ದಿ ವಿಷಯಕ್ಕಾಗಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಅವಕಾಶ ನೀಡುವ ಮೂಲಕ 2021ರ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಇದು ಪರಿಣಾಮಕಾರಿಯಾಗಿ ಸ್ವತಂತ್ರ ಧ್ವನಿಗಳನ್ನು ನೇರ ನಿಯಂತ್ರಣಕ್ಕೆ ತರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಬಿಜೆಪಿ ಐಟಿ ಕೋಶವು ಪರಿಶೀಲನೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಇದೆಲ್ಲವೂ ಒಂದೇ ಒಂದು ವಿಷಯವನ್ನು ಅರ್ಥೈಸಬಲ್ಲದು. ಭಿನ್ನಾಭಿಪ್ರಾಯದ ಧ್ವನಿ ಜೋರಾಗಿ ಬೆಳೆಯುತ್ತಿದೆ ಮತ್ತು ಬಿಜೆಪಿ ತುಂಬಾ ಭಯಭೀತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಾರ್ತಾ ಭಾರತಿ 4 Apr 2026 12:01 am

ಸುರಪುರ | ಗುಜರಿ ಅಂಗಡಿಯಲ್ಲಿ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ಸುರಪುರ : ಪಟ್ಟಣದ ಹಸನಾಪುರ ಕ್ಯಾಂಪ್ ಪ್ರದೇಶದಲ್ಲಿರುವ ಗುಜರಿ ಅಂಗಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಶೌಕತ್ ಅಲಿ ಎಂಬವರಿಗೆ ಸೇರಿದ ಗುಜುರಿ ಅಂಗಡಿಯಲ್ಲಿ ರಾತ್ರಿ ವೇಳೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು ನಡೆದಿದೆ ಎಂದು ತಿಳಿದು ಬಂದಿದೆ. ಎ.1ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಶೌಕತ್‌ ಅಲಿ ಎ.2ರಂದು ಬೆಳಗ್ಗೆ ಅಂಗಡಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯೊಳಗಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಹಳೆಯ ವಸ್ತುಗಳನ್ನು ಕಳವು ಗೈದಿರುವುದಾಗಿ ತಿಳಿದು ಬಂದಿದೆ . ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಅಂಗಡಿ ಮಾಲಕ ಶೌಕತ್ ಅಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.

ವಾರ್ತಾ ಭಾರತಿ 3 Apr 2026 11:57 pm

ಬಿಕೆ ಹರಿಪ್ರಸಾದ್‌ ಸೇರಿ ಕರ್ನಾಟಕದ 12 ಎಂಎಲ್‌ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!

ಕರ್ನಾಟಕ ವಿಧಾನ ಪರಿಷತ್ತಿನ 12 ಮಂದಿ ಎಂಎಲ್‌ಸಿಗಳು ಶೀಘ್ರ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಗಳಿಗೆ ಬಿಜೆಪಿ ಕಾಂಗ್ರೆಸ್‌ನಿಂದ ನೂರಾರು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ವಿಧಾನಸಭೆಯಿಂದ 4 ಸ್ಥಾನಗಳು ಕಾಂಗ್ರೆಸ್‌ಗೆ ಖಚಿತವಾಗಿ ಸಿಗಲಿದೆ. ಇನ್ನು ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಸಾಧ್ಯತೆ ಇದೆ. ನಿವೃತ್ತಿಯಾಗುತ್ತಿರುವವರು ಯಾರು? ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 3 Apr 2026 11:50 pm

Ballari |ಇಂಜಿನಿಯರ್ ಮೇಲೆ ಹಲ್ಲೆ ಆರೋಪ : ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ ಇಂಜಿನಿಯರ್ ಜಿ.ಎಂ.ವೀರೇಶ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಆರಂಭಿಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಸರ್ಕಾರಿ ನೌಕರರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ಪಾಲಿಕೆ ಕಚೇರಿ ಮುಂದೆ ಶುಕ್ರವಾರ ಸಂಜೆ ಆರಂಭವಾದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪದೇ ಪದೇ ಗಲಭೆಗಳು ಮತ್ತು ವಿವಾದಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಘಟನೆಗಳು ಬಳ್ಳಾರಿ ನಗರದ ಮಾನಕ್ಕೆ ಧಕ್ಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ತಡೆಗಟ್ಟಬೇಕು ಎಂದು ಹೇಳಿದರು. ಇಂಜಿನಿಯರ್ ಜಿ.ಎಂ. ವೀರೇಶ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಾಂಗ್ರೆಸ್ ಕಾರ್ಪೊರೇಟರ್ ವಿ.ಕುಬೇರ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಬಿಜೆಪಿ ಹಂತ ಹಂತವಾಗಿ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 11:36 pm

IPL 2026 | ಶ್ರೇಯಸ್ ಅಯ್ಯರ್ ಅರ್ಧಶತಕ; CSK ವಿರುದ್ಧ ಪಂಜಾಬ್‌ ಗೆ ಜಯ

ಚೆನ್ನೈ, ಎ.3: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ (50 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ನೆರವಿನಿಂದ ಶುಕ್ರವಾರ ನಡೆದ ಏಳನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಐದು ವಿಕೆಟ್‌ ಗಳ ಅಂತರದಿಂದ ಮಣಿಸಿತು. ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ CSK ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಆಯುಷ್ ಮ್ಹಾತ್ರೆ ಅವರ ಆಕರ್ಷಕ ಅರ್ಧಶತಕದ (73 ರನ್, 43 ಎಸೆತ, 6 ಬೌಂಡರಿ, 5 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‌ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್‌ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಸತತ ಎರಡನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಪಂಜಾಬ್ ಇನಿಂಗ್ಸ್ ಆರಂಭಿಸಿದ ಪ್ರಭ್‌ಸಿಮ್ರಾನ್ ಸಿಂಗ್ (43 ರನ್, 34 ಎಸೆತ) ಹಾಗೂ ಪ್ರಿಯಾಂಶ್ ಆರ್ಯ (39 ರನ್, 11 ಎಸೆತ) ಕೇವಲ 26 ಎಸೆತಗಳಲ್ಲಿ 61 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು. ಮ್ಯಾಟ್ ಹೆನ್ರಿ ಈ ಜೋಡಿಯನ್ನು ಬೇರ್ಪಡಿಸಿದರು. ಪ್ರಭ್‌ಸಿಮ್ರಾನ್ 43 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೂಪರ್ 36 ರನ್‌ ಗೆ ವಿಕೆಟ್ ಒಪ್ಪಿಸಿದರು. ಆಗ ಪಂಜಾಬ್ 127 ರನ್‌ ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ ಗೆ 32 ಎಸೆತಗಳಲ್ಲಿ 59 ರನ್ ಸೇರಿಸಿದ ಶ್ರೇಯಸ್ ಮತ್ತು ವಧೇರ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶ್ರೇಯಸ್ ಅರ್ಧಶತಕ ಗಳಿಸಿದ ಬೆನ್ನಲ್ಲೇ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್ (ಔಟಾಗದೆ 14) ಹಾಗೂ ಮಾರ್ಕಸ್ ಸ್ಟೋಯಿನಿಸ್ (ಔಟಾಗದೆ 9) ಪಂಜಾಬ್‌ ಗೆ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. CSK ಪರವಾಗಿ ಮ್ಯಾಟ್ ಹೆನ್ರಿ (2-54) ಹಾಗೂ ಅನ್ಶುಲ್ ಕಾಂಬೋಜ್ (2-35) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು CSK ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇವಲ 7 ರನ್‌ ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವಿಫಲರಾದರು. ಆಗ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ (28 ರನ್, 22 ಎಸೆತ) ಎರಡನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಋತುರಾಜ್, ಆಯುಷ್ ಹಾಗೂ ಕಾರ್ತಿಕ್ ಶರ್ಮಾ (1 ರನ್) ಔಟಾದಾಗ CSK 130 ರನ್‌ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಸರ್ಫರಾಝ್ ಖಾನ್ (32 ರನ್, 12 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶಿವಂ ದುಬೆ (ಔಟಾಗದೆ 45, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಐದನೇ ವಿಕೆಟ್‌ಗೆ 38 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು. ► ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ ಗಳಲ್ಲಿ 209/5 (ಆಯುಷ್ ಮ್ಹಾತ್ರೆ 73, ಶಿವಂ ದುಬೆ ಔಟಾಗದೆ 45, ಸರ್ಫರಾಝ್ ಖಾನ್ 32, ಋತುರಾಜ್ ಗಾಯಕ್ವಾಡ್ 28, ವಿ. ವೈಶಾಕ್ 2-38) ಪಂಜಾಬ್ ಕಿಂಗ್ಸ್: 18.4 ಓವರ್‌ ಗಳಲ್ಲಿ 210/5 (ಶ್ರೇಯಸ್ ಅಯ್ಯರ್ 50, ಪ್ರಭ್‌ಸಿಮ್ರಾನ್ ಸಿಂಗ್ 43, ಪ್ರಿಯಾಂಶ್ ಆರ್ಯ 39, ಕೂಪರ್ 36, ಅನ್ಶುಲ್ ಕಾಂಬೋಜ್ 2-43, ಮ್ಯಾಟ್ ಹೆನ್ರಿ 2-54)

ವಾರ್ತಾ ಭಾರತಿ 3 Apr 2026 11:36 pm

ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಡಿಪೋ ಶೀಘ್ರ; 400 ಕೋಟಿ ರೂ. ವೆಚ್ಚ- ಇನ್ನಷ್ಟು ರೈಲುಗಳ ಸಂಪರ್ಕ

ಮೈಸೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ನಿರ್ಹವಣೆಗೆ ಆತ್ಯಾಧುನಿಕ ಡಿಪೋ ಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ 400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಮತ್ತಷ್ಟು ರೈಲುಗಳ ಸಂಚಾರ, ನಿಲುಗಡೆಗೆ ಅನುಕೂಲವಾಗಲಿದೆ. 2 ವರ್ಷದಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಿಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆಯ ಡಿಆರ್‌ಎಂ ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 3 Apr 2026 11:13 pm

Hubballi | ಯುವತಿಯ ರಕ್ಷಣೆ, ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್

ದಾವಣಗೆರೆ : ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಎಂಬಾತನ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾನೂನು ಬಾಹಿರ ಕೃತ್ಯ ಎಸಗುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನಾನು ಈಗ ಹುಬ್ಬಳ್ಳಿಗೆ ತೆರಳುತ್ತಿದ್ದೇನೆ. ಅಲ್ಲಿಗೆ ತಲುಪುವಷ್ಟರಲ್ಲಿ ಪ್ರಕರಣದ ಸಮಗ್ರ ವರದಿಯನ್ನು ಸಿದ್ಧಪಡಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಅವರು ಹೇಳಿದರು. ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಯುವತಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರೆಸಿಕೊಟ್ಟು ಅತ್ಯಾಚಾರ ಎಸಗಲಾಗಿದೆ ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಜಿಮ್ ಟ್ರೈನರ್ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 3 Apr 2026 11:07 pm

Siddaramaiah: ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಈ ಕಾರಣಕ್ಕೆ ಕಾಂಗ್ರೆಸ್ ಬೇಕು: ಸಿದ್ದರಾಮಯ್ಯ

Siddaramaiah: ತಲಾ ಆದಾಯದಲ್ಲಿ ಕರ್ನಾಟಕದ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಕಾಂಗ್ರೆಸ್ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಏಪ್ರಿಲ್ 3ರ ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು.

ಒನ್ ಇ೦ಡಿಯ 3 Apr 2026 11:03 pm

Madikeri | ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ನಾಪತ್ತೆ

ಮಡಿಕೇರಿ : ಕೊಡಗಿನ ಅತ್ಯಂತ ಎತ್ತರದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಲ್ಲಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿ, ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ(36) ನಾಪತ್ತೆಯಾಗಿರುವ ಮಹಿಳೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯ ಒಟ್ಟು ನಾಲ್ಕು ತಂಡಗಳು ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ. ನಾಪೊಕ್ಲು ಸಮೀಪದ ಯವಕಪಾಡಿ ಕಕ್ಕಬ್ಬೆಯಿಂದ ಸುಮಾರು ಐದು ಕಿಲೋ ಮೀಟರ್ ದೂರ ಕಡಿದಾದ ಹಾದಿಯ ಚಾರಣ ನಡೆಸಿದಲ್ಲಿ, ತಡಿಯಂಡಮೋಳ್ ಶಿಖರವನ್ನು ತಲುಪಬಹುದು. ಗುರುವಾರ ಚಾರಣಕ್ಕೆ ಹೊರಟ ಶರಣ್ಯ ಅವರು ಒಬ್ಬಂಟಿಯಾಗಿದ್ದ ಹಿನ್ನೆಲೆಯಲ್ಲಿ, ಇತರ ಚಾರಣಿಗರ ಜೊತೆಗೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಚಾರಣ ತೆರಳಿದವರು ಮರಳಿ ಬಂದಿದ್ದರಾದರೂ, ಶರಣ್ಯ ಮಾತ್ರ ಹಿಂದಿರುಗಿರಲಿಲ್ಲ. ಈ ಬಗ್ಗೆ ಅಲ್ಲಿನ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಮೇಲೆ ಸ್ಥಳೀಯರು, ಪೊಲೀಸರು ಹಾಗೂ ಗ್ರಾಮಸ್ಥರು ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರಾದರೂ ಶರಣ್ಯ ಅವರು ಪತ್ತೆಯಾಗಿರಲಿಲ್ಲ. ತೀವ್ರ ಶೋಧ: ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ನಾಲ್ಕು ತಂಡಗಳು ಶ್ವಾನದಳದ ಸಹಕಾರದೊಂದಿಗೆ ಶರಣ್ಯ ಅವರ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 11:02 pm

ಈಜಿಪ್ಟ್ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ‘‘ಮುಸ್ಲಿಮ್-ವಿರೋಧಿ’’ ಘೋಷಣೆಗೆ ಲಮಿನ್ ಯಮಲ್ ಟೀಕೆ

ಬಾರ್ಸಿಲೋನ, ಎ. 3: ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯದ ವೇಳೆ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿರುವುದಕ್ಕಾಗಿ ಸ್ಪೇನ್ ಪ್ರೇಕ್ಷಕರ ಒಂದು ವರ್ಗವನ್ನು ದೇಶದ ಸ್ಟಾರ್ ಆಟಗಾರ ಲಮಿನ್ ಯಮಲ್ ಟೀಕಿಸಿದ್ದಾರೆ. ಫುಟ್ಬಾಲ್ ನಲ್ಲಿ ಇಂತಹ ವರ್ತನೆಯನ್ನು ಸಹಿಸಬಾರದು ಎಂದು ಅವರು ಹೇಳಿದ್ದಾರೆ. ಬಾರ್ಸಿಲೋನದ RCDE ಸ್ಟೇಡಿಯಮ್ ನಲ್ಲಿ ಮಂಗಳವಾರ ಘಟನೆ ನಡೆದಿದೆ. ಪ್ರೇಕ್ಷಕರ ಒಂದು ವರ್ಗವು ‘‘ಬೋಟೆ, ಬೋಟೆ, ಬೋಟೆ ಮುಸಲ್ಮಾನ್ ಎಲ್ ಕ್ಯೂ ನೋ ಬೋಟೆ (ಜಿಗಿ, ಜಿಗಿ, ಜಿಗಿ, ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್)’’ ಎಂಬ ಘೋಷಣೆಯನ್ನು ಕೂಗಿತ್ತು. ಪಂದ್ಯದ ವೇಳೆ ಹಲವು ಬಾರಿ ಈ ಘೋಷಣೆಯನ್ನು ಕೂಗಲಾಗಿತ್ತು. ಆಗ ಸ್ಟೇಡಿಮ್ ನಲ್ಲಿ, ಘೋಷಣೆಯೊಂದನ್ನು ಹೊರಡಿಸಿ, ಜನಾಂಗೀಯವಾದಿ ಭಾಷೆಯನ್ನು ಬಳಸದಂತೆ ಪ್ರೇಕ್ಷಕರಿಗೆ ಮನವಿ ಮಾಡಲಾಯಿತು. ಅದೇ ಸಂದೇಶವನ್ನು ದೊಡ್ಡ ಪರದೆಯಲ್ಲೂ ಪ್ರದರ್ಶಿಸಲಾಯಿತು. ಈ ಘೋಷಣೆಯನ್ನು ಪ್ರೇಕ್ಷಕರ ಒಂದು ವರ್ಗವು ಶಿಳ್ಳೆಗಳ ಮೂಲಕ ಸ್ವಾಗತಿಸಿತು. ಈಜಿಪ್ಟ್ ಮುಖ್ಯವಾಗಿ ಮುಸ್ಲಿಮ್ ಬಾಹುಳ್ಯದ ದೇಶ. 18 ವರ್ಷದ ಸ್ಪೇನ್ ಆಟಗಾರ ಲಮಿನ್ ಯಮಲ್ ಕೂಡ ಮುಸ್ಲಿಮ್. ಅವರು ಇದಕ್ಕೆ ಮೊದಲು ಕೂಡ ತನ್ನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ‘‘ನಾನೊಬ್ಬ ಮುಸ್ಲಿಮ್, ಧನ್ಯವಾದಗಳು ದೇವರೇ’’ ಎಂಬುದಾಗಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ‘‘ನಿನ್ನೆ ಸ್ಟೇಡಿಯಮ್ ನಲ್ಲಿ, ‘ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್’ ಎಂಬ ಘೋಷಣೆಯನ್ನು ನಾವು ಕೇಳಿದೆವು. ಅದನ್ನು ಎದುರಾಳಿ ತಂಡವನ್ನು ಉದ್ದೇಶಿಸಿ ಹೇಳಿರುವುದು ಎಂದು ನನಗೆ ಗೊತ್ತಿದೆ. ವೈಯಕ್ತಿಕವಾಗಿ ಅದು ನನ್ನ ಬಗ್ಗೆ ಹೇಳಿದ್ದಲ್ಲ. ಆದರೆ, ಸ್ವತಃ ಮುಸ್ಲಿಮ್ ಆಗಿರುವ ನನಗೂ ಈ ಘೋಷಣೆಯು ಅಗೌರವಯುತವಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಎಲ್ಲಾ ಅಭಿಮಾನಿಗಳು ಹಾಗಿಲ್ಲ ಎನ್ನುವುದೂ ನನಗೆ ಗೊತ್ತು. ಆದರೆ, ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಜನರನ್ನು ಹೀಯಾಳಿಸಲು ಧರ್ಮವನ್ನು ಬಳಸಿದರೆ, ನೀವು ಅಜ್ಞಾನಿಗಳು ಮತ್ತು ಜನಾಂಗೀಯವಾದಿಗಳಾಗುತ್ತೀರಿ. ಫುಟ್ಬಾಲ್ ಇರುವುದು ಆನಂದಿಸಲು ಮತ್ತು ಬೆಂಬಲಿಸುವುದಕ್ಕಾಗಿಯೇ ಹೊರತು, ಜನರು ಏನಾಗಿದ್ದಾರೋ ಮತ್ತು ಏನನ್ನು ನಂಬುತ್ತಾರೋ ಅದರ ಮೂಲಕ ಅವರನ್ನು ನೋಯಿಸಲು ಅಲ್ಲ’’ ಎಂದು ಅವರು ಬರೆದಿದ್ದಾರೆ. ‘‘ಆದರೂ, ಬೆಂಬಲಿಸಲು ಮೈದಾನಕ್ಕೆ ಬಂದ ಅಭಿಮಾನಿಗಳಿಗೆ ಧನ್ಯವಾದಗಳು’’ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 10:55 pm

ತಾಪಮಾನ ಹೆಚ್ಚಳ; ಕಲಬುರಗಿ ಕೋರ್ಟ್ ಕಾರ್ಯಕಲಾಪದ ಸಮಯದಲ್ಲಿ ಬದಲಾವಣೆ

ಬೆಂಗಳೂರು: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಎಪ್ರಿಲ್ 6 ರಿಂದ ಮೇ ಅಂತ್ಯದವರಗೆ ಅನ್ವಯವಾಗುವಂತೆ ಹೈಕೋರ್ಟ್‌ ಕಲಬುರಗಿ ಪೀಠಗಳ ಕಾರ್ಯಕಲಾಪದ ಸಮಯ ಬದಲಾವಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಕೆ.ಎಸ್‌. ಭರತ್‌ ಕುಮಾರ್‌ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಕಲಬುರಗಿ ಹೈಕೋರ್ಟ್‌ ಪೀಠದ ಕಲಾಪವು ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಪ್ರತಿದಿನ ಬೆಳಗ್ಗೆ 8ರಿಂದ 11 ಗಂಟೆ ಹಾಗೂ 11.3ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಶನಿವಾರ ಹೊರತುಪಡಿಸಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2ಗಂಟೆಯವರಿಗೆ ಇರಲಿದೆ. ಶನಿವಾರ ಬೆಳಗ್ಗೆ 7.30ರಿಂದ 11 ಗಂಟೆಯವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಿಚಾರಣಾ ಕೋರ್ಟ್‌ಗಳ ಸಮಯದಲ್ಲೂ ಬದಲಾವಣೆ: ಕಲಬುರಗಿ ವಿಭಾಗದಡಿ ಬರುವ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಯಾದಗಿರಿ ಮತ್ತು ಬೆಳಗಾವಿ ವಿಭಾಗದಕ್ಕೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್‌ ಮತ್ತು ಕ್ರಿಮಿನಲ್‌, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯ ಕಾರ್ಯ ಕಲಾಪದ ಸಮಯವನ್ನೂ ಸಹ ಎಪ್ರಿಲ್ 4ರಿಂದ ಮೇ ಅಂತ್ಯದವರೆಗೆ ಬದಲಿಸಲಾಗಿದೆ. ಈ ನ್ಯಾಯಾಲಯಗಳಲ್ಲಿ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ ಮಧ್ಯಾಹ್ನ 1.30ರವರೆಗೆ ಕಲಾಪ ನಡೆಯಲಿದೆ. ಮಧ್ಯಾಹ್ನ 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಬೆಳಗ್ಗೆ 7.30ಕ್ಕೆ ಆರಂಭವಾಗಿ ಮಧ್ಯಾಹ್ನ 2ಕ್ಕೆ ಕೊನೆಯಾಗಲಿದೆ. ಏಪ್ರಿಲ್ 24ರಂದು ನಾಲ್ಕನೇ ಶನಿವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 3 Apr 2026 10:54 pm

ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿ ಎತ್ತಿ ಹಿಡಿದ ಹೈಕೋರ್ಟ್ ಪೂರ್ಣಪೀಠ

ಬೆಂಗಳೂರು : ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್‌ ಪೂರ್ಣಪೀಠ, ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನಾಲ್ಕು ಬಿಂದು ರೋಸ್ಟರ್‌ ಅನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ಹಿರಿತನದ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಹಾಗೂ ಬಡ್ತಿ ಪಡೆದ ನ್ಯಾಯಾಧೀಶರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಸುನೀಲ್‌ ದತ್‌ ಯಾದವ್‌, ಲಲಿತಾ ಕನ್ನೆಗಂಟಿ ಹಾಗೂ ವಿಜಯಕುಮಾರ್‌ ಪಾಟೀಲ್‌ ಅವರಿದ್ದ ಪೂರ್ಣಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನಿರಾಕರಿಸಲಾಗಿದ್ದರೂ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಭವಿಷ್ಯದಲ್ಲಿ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು. ಹೈಕೋರ್ಟ್‌ ಮತ್ತು ರಾಜ್ಯ ಸರ್ಕಾರ '4 ಅಂಶಗಳ ರೋಸ್ಟರ್‌' ಅನ್ನು ಅಳವಡಿಸಿಕೊಳ್ಳಬೇಕು ಎಂದು ಅದೇಶಿಸಿರುವ ನ್ಯಾಯಪೀಠ, ಈ ವಿಚಾರದಲ್ಲಿ ಹಲವು ನಿರ್ದೇಶನಗಳನ್ನೂ ನೀಡಿದೆ. ಪೂರ್ಣಪೀಠದ ನಿರ್ದೇಶನಗಳು: * ಹೈಕೋರ್ಟ್‌ ಎಲ್ಲ ಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ನ್ಯಾಯಾಂಗ ಅಧಿಕಾರಿಗಳ ವೃಂದ ಬಲವನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಬೇಕು. ಆ ವೃಂದ ಬಲದ ಅಧಿಸೂಚನೆ ಆಧರಿಸಿ '4 ಅಂಶಗಳ ರೋಸ್ಟರ್‌' ಅನ್ನು ಜಾರಿಗೊಳಿಸಬೇಕು. * 4 ಅಂಶಗಳ ರೋಸ್ಟರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ವೃಂದ ಬಲದ ಅಧಿಸೂಚನೆ ಹೊರಡಿಸಬೇಕು. ಬಡ್ತಿ ಕೋಟಾದಲ್ಲಿ ಬದಲಾವಣೆಯಾಗಿ ಶೇ.50 ಬಡ್ತಿ, ಶೇ.25 ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೇ.25 ನೇರವಾಗಿ ನೇಮಕಗೊಂಡ ಜಿಲ್ಲಾನ್ಯಾಯಾಧೀಶರ ಕೋಟಾ ಪರಿಗಣಿಸಿ ಹೊಸ ಕೋಟಾ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಬೇಕು. * ಹಾಲಿ ಪ್ರತ್ಯೇಕ ಸೇವಾಹಿರಿತನ ನಿಯಮಗಳು ಜಾರಿಯಲ್ಲಿಲ್ಲದ ಕಾರಣ, ಹೈಕೋರ್ಟ್‌ ಜತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ಹೊಸ ಸೇವಾ ಹಿರಿತನ ನಿಯಮ ರೂಪಿಸಬೇಕು. ಹೈಕೋರ್ಟ್‌ ಜಿಲ್ಲಾ ನ್ಯಾಯಾಧೀಶರ ಹಿರಿತನ ಮತ್ತು ವೃಂದವನ್ನು ನಿಯಂತ್ರಿಸುವ ಕಾನೂನು ಚೌಕಟ್ಟನ್ನು ರೂಪಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣವೇನು? ಹೈಕೋರ್ಟ್‌ 2016ರಲ್ಲಿ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 2015ರಲ್ಲಿ ಎರಡು ಬಾರಿ ಪದೋನ್ನತಿ ನೀಡಲಾದ ಅಧಿಕಾರಿಗಳನ್ನು ಸೇವಾ ಹಿರಿತನ ಪಟ್ಟಿಯಲ್ಲಿ ನೇರ ನೇಮಕಾತಿ ಆಗಿರುವ ನ್ಯಾಯಾಧೀಶರಿಗಿಂತ ಮೇಲೆ ಇಡಲಾಗಿತ್ತು. ಇದನ್ನು ನೇರ ನೇಮಕಾತಿಯಾಗಿದ್ದ ನ್ಯಾಯಾಧೀಶರು ಪ್ರಶ್ನಿಸಿದ್ದರು. ಆ ಅರ್ಜಿ ಆಲಿಸಿದ್ದ ಏಕಸದಸ್ಯ ನ್ಯಾಯಪೀಠ, ಸೇವಾ ಹಿರಿತನ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಮತ್ತು ಬಡ್ತಿ ಪಡೆದು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಅನು ಶಿವರಾಮನ್‌ ಅವರು ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ರಾಜೇಶ್‌ ರೈ ಅವರು ಏಕಸದಸ್ಯ ನ್ಯಾಯಪೀಠದ ಆದೇಶದಂತೆ ಹೊಸದಾಗಿ ಸೇವಾ ಹಿರಿತನ ಪಟ್ಟಿ ಮಾಡಬೇಕೆಂದು ತೀರ್ಪು ನೀಡಿದ್ದರು. ಭಿನ್ನ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮೇಲ್ಮನವಿಗಳ ಇತ್ಯರ್ಥಕ್ಕೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠವನ್ನು ರಚನೆ ಮಾಡಿದ್ದರು. ಇದೀಗ ಮೇಲ್ಮನವಿಯ ಸಮಗ್ರ ವಿಚಾರಣೆ ನಡೆಸಿರುವ ಪೂರ್ಣಪೀಠ 142 ಪುಟಗಳ ತೀರ್ಪು ಪ್ರಕಟಿಸಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ.

ವಾರ್ತಾ ಭಾರತಿ 3 Apr 2026 10:50 pm

ಬೆಂಗಳೂರು ಸೇರಿ ಎಲ್ಲೆಡೆ ʼಗುಡ್‍ಫ್ರೈಡೆ ಆಚರಣೆʼ

ಬೆಂಗಳೂರು : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್‍ಫ್ರೈಡೆ) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಶುಕ್ರವಾರ ಬೆಳಗ್ಗೆ 7.30ರಿಂದಲೇ ಆಚರಣೆಗಳು ಆರಂಭಗೊಂಡವು. ಚರ್ಚ್‍ಗಳಲ್ಲಿ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಬೆಂಗಳೂರಿನ ಎಂ.ಜಿ.ರಸ್ತೆಯ ಈಸ್ಟ್ ಪರೇಡ್ ಮಲಯಾಳಂ ಚರ್ಚ್‍ನಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಚಾಮರಾಜಪೇಟೆಯ ಸೇಂಟ್ ಲೂಕ್ಸ್ ಚರ್ಚ್‍ನಲ್ಲೂ ಗುಡ್‍ಫ್ರೈಡೆ ಆಚರಣೆ ನಡೆಯಿತು. ಅದೇ ರೀತಿ, ಎಟಿಯನ್ ಸ್ಮಾರಕ ಚರ್ಚ್, ತಿಲಕನಗರ ಸೇಂಟ್ ಮೇರಿ ಚರ್ಚ್, ಶಿವಜಿಂಗಾರ್ ಫ್ರಾಂಚೈಸ್ ಕ್ಸೇವಿಯರ್ ಚರ್ಚ್, ಸೇಂಟ್ ಜೋಹಾನ್ಸ್ ರಸ್ತೆ, ಶಿಶು ಜೀಸಸ್ ಚರ್ಚ್ ವಿವೇಕನಗರ ಸೇರಿದಂತೆ ಹಲವೆಡೆ ವಿಶೇಷ ಪ್ರಾರ್ಥನೆ ಜರುಗಿತು. ಕೆಲವು ಚರ್ಚ್‍ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಎತ್ತಿಕೊಂಡು ಮೆರವಣಿಗೆ ಸಾಗಿದ ದೃಶ್ಯ ಕಂಡುಬಂದಿತು.  

ವಾರ್ತಾ ಭಾರತಿ 3 Apr 2026 10:45 pm

Bengaluru | ಚಾಕುವಿನಿಂದ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಬೆಂಗಳೂರು : ಮದ್ಯದ ಅಮಲಿನಲ್ಲಿ ದ್ವಿಚ್ರಕವಾಹನ ಸವಾರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಎಚ್.ಎಸ್.ಸಂದೀಪ್ ಹಾಗೂ ಶ್ಯಾಮ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ. ಮಾ.25ರ ಬೆಳಗಿನ ಜಾವ ವ್ಯಕ್ತಿಯೊಬ್ಬರು ತನ್ನ ಬೈಕ್‍ನಲ್ಲಿ ತೆರಳುವಾಗ ಹುಣಸಮಾರನಹಳ್ಳಿ ಬಳಿ ಇಬ್ಬರು ಆರೋಪಿಗಳು ನಿಲ್ಲಿಸಿದಲ್ಲದೆ, ಬೆದರಿಸಿ ಚಾಕು ಹಾಗೂ ಹೆಲ್ಮೆಟ್‍ನಿಂದ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಇವರಿಂದ ಸುಮಾರು 2.20 ಲಕ್ಷ ಮೌಲ್ಯದ ಬೈಕ್, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 10:41 pm

ಡಿಸಿಇಟಿ: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಬೆಂಗಳೂರು  : ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಎ.10ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಿದ್ದು, ಶುಲ್ಕ ಪಾವತಿಗೂ ಎ.10 ಕೊನೆ ದಿನವಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ https://cetonline.karnataka.gov.in/kea/   ವೆಬ್ ಸೈಟ್ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.  

ವಾರ್ತಾ ಭಾರತಿ 3 Apr 2026 10:38 pm

Bengaluru | ಕಬ್ಬನ್‍ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು : ವ್ಯಕ್ತಿಯೊಬ್ಬರು ನಗರದ ಕಬ್ಬನ್ ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದಿಂದಲೇ ಕಾಣೆಯಾಗಿದ್ದ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಎಚ್‍ಎಸ್‍ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಶುಕ್ರವಾರ ಬೆಳಗ್ಗೆ ಪಾರ್ಕ್‍ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಬ್ಬನ್ ಪಾರ್ಕ್ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಆತ ಬೆಂಗಳೂರಿನ ಎಸ್‍ಪಿ ರೋಡ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ನಂತರ ಆತನ ಕುಟುಂಬಕ್ಕೆ ಮಾಹಿತಿ ತಿಳಿಸಿದ ಅಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.  

ವಾರ್ತಾ ಭಾರತಿ 3 Apr 2026 10:35 pm

ಅದಾನಿ ಬಂದರುಗಳು - ವಿಶೇಷ ಆರ್ಥಿಕ ವಲಯ: 500 ಮಿಲಿಯನ್ ಟನ್ ಮೈಲಿಗಲ್ಲು ದಾಟಿದ ಅದಾನಿ ಬಂದರು, 2030ಕ್ಕೆ 1 ಬಿಲಿಯನ್ ಟನ್ ಗುರಿ

ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯವು 500 ಮಿಲಿಯನ್ ಟನ್ ಸರಕು ಸಾಮರ್ಥ್ಯದೊಂದಿಗೆ ಮಹತ್ವದ ಮೈಲಿಗಲ್ಲನ್ನು ಹೊಂದಿದೆ. ಇದು ಮುಂಚೂಣಿಯ ಕೆಲಸಗಾರರ ಪಾತ್ರ, ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಗೆ ಸಿದ್ಧವಾಗಿರುವ ಲಾಜಿಸ್ಟಿಕ್ಸ್ ಜಾಲವನ್ನು ಎತ್ತಿ ತೋರಿಸುತ್ತದೆ. ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ವಾಹಕರಾದ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ

ಒನ್ ಇ೦ಡಿಯ 3 Apr 2026 10:34 pm

ಬೆಂಗಳೂರಿನ 49 ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕ್ರಮಗಳ ವರದಿ ಸಲ್ಲಿಸಲು ನಿರ್ದೇಶನ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ 2025ನೆ ಸಾಲಿನಲ್ಲಿ 49 ಪ್ರದೇಶಗಳು ಪ್ರವಾಹ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಪ್ರದೇಶಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು. ಇದಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಐದು ನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಶಾಶ್ವತ ಪರಿಹಾರ ಒದಗಿಸದ ಪ್ರದೇಶಗಳಲ್ಲಿ, ನಗರ ಪಾಲಿಕೆಗಳ ಮುಖ್ಯ ಅಭಿಯಂತರರು, ಜಿಬಿಎ ಯೋಜನಾ ಅನುಷ್ಠಾನ ಘಟಕದ ಮುಖ್ಯ ಅಭಿಯಂತರರೊಂದಿಗೆ ಸಮನ್ವಯ ಸಾಧಿಸಿ ಮಳೆಯ ಸಮಯದಲ್ಲಿ ಯಾವುದೇ ತೊಂದರೆ ಅಥವಾ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ನಗರ ಪಾಲಿಕೆಗಳ ಅಪರ ಆಯುಕ್ತರು ಮೇಲ್ವಿಚಾರಣೆ ವಹಿಸಬೇಕು ಎಂದಿದ್ದಾರೆ. ಎಲ್ಲ ರಸ್ತೆಗಳ ಮಳೆ ನೀರು ಚರಂಡಿಗಳಲ್ಲಿ ಎಪ್ರಿಲ್ ಅಂತ್ಯದೊಳಗೆ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಪ್ರಸ್ತುತ ಅನುಮೋದನೆಗೊಂಡ ಟೆಂಡರ್‌ಗಳಡಿ ಆರಂಭಗೊಂಡ ಕಾಮಗಾರಿಗಳಲ್ಲಿ ಆದ್ಯತೆಯ ಮೇರೆಗೆ ಹೂಳು ತೆಗೆಯುವ ಕಾರ್ಯವನ್ನು ನಿರ್ವಹಿಸಿ, ಶೋಲ್ಡರ್ ಡ್ರೈನ್‍ಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ನಗರ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಚರಂಡಿಗಳಲ್ಲಿ ಹೂಳು ತೆಗೆಯುವಾಗ ಹತ್ತಿರದ ರಾಜಕಾಲುವೆವರೆಗೆ ಸಂಪರ್ಕ ಕಲ್ಪಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು. ಹೂಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಉಸ್ತುವಾರಿ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಗ್ನಿಶಾಮಕ ತಂಡಗಳೊಂದಿಗೆ ಸಮನ್ವಯ ಸಾಧಿಸಿ: ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯ ಅಗ್ನಿಶಾಮಕ ಠಾಣೆಗಳು ಹಾಗೂ ಎಸ್‍ಡಿಆರ್‍ಎಫ್ ತಂಡಗಳೊಂದಿಗೆ ಸಮನ್ವಯ ಸಾಧಿಸಿ, ಅಧಿಕಾರಿಗಳು/ಸಿಬ್ಬಂದಿಗಳ ಪಟ್ಟಿಯನ್ನು ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ನೆರವು ದೊರೆಯುವಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಮರ ತೆರವು ತಂಡಗಳನ್ನು ರಚಿಸಿ: ಮಳೆಯಿಂದಾಗಿ ಧರೆಗುರುಳುವ ಮರಗಳು ಹಾಗೂ ರೆಂಬೆ-ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಲು ನಗರ ಪಾಲಿಕೆ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಮುನ್ನೆಚ್ಚರಿಕೆಯಾಗಿ ಬಾಗಿರುವ ಅಥವಾ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸಬೇಕು ಎಂದು ಮಹೇಶ್ವರ್ ರಾವ್ ಹೇಳಿದ್ದಾರೆ.  

ವಾರ್ತಾ ಭಾರತಿ 3 Apr 2026 10:33 pm

ಕಾಂಗ್ರೆಸ್ ಪಕ್ಷ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನೀಡಿದೆ : ಕೆ.ಎಚ್.ಮುನಿಯಪ್ಪ

ಬಾಗಲಕೋಟೆ : ಕಾಂಗ್ರೆಸ್ ಪಕ್ಷ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಈ ಭಾಗದ ಜನರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಆಶೀರ್ವಾದ ಮಾಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು. ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಿರೂರು ಚನ್ನಯ್ಯನಗರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬಹುಮತದ ಗೆಲುವು ದೊರಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಬಡವರ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರಿಗೆ ಅಕ್ಕಿ ದೊರೆಯಬೇಕು, ಅವರು ನೆಮ್ಮದಿಯಾಗಿ ಊಟ ಮಾಡಬೇಕು ಮತ್ತು ಗೌರವಯುತ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಕಡುಬಡವರಿಗಾಗಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಯಿತು. ದೇಶದಲ್ಲಿ ಯಾವುದೇ ಸರಕಾರ ಇದ್ದರೂ ಬಡವರಿಗೆ ಅಕ್ಕಿ ನೀಡಲೇಬೇಕು ಎಂಬ ದೃಷ್ಟಿಯಿಂದ ಈ ಕಾನೂನು ರೂಪಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದರು. 2013ರಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಬಡವರಿಗೆ ಉಚಿತ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು, ಜನರಿಗೆ ನೆಮ್ಮದಿಯ ಜೀವನವನ್ನು ಕಲ್ಪಿಸಿದರು. ಬಳಿಕವೂ ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಿ, ಅಕ್ಕಿಯ ಜೊತೆಗೆ ಹಣ ಸಹಾಯ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಇದೊಂದೇ ಅಲ್ಲ, ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಮಾಸಿಕ 2 ಸಾವಿರ ರೂ.ಆರ್ಥಿಕ ನೆರವು, 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಉದ್ಯೋಗಕ್ಕಾಗಿ ತರಬೇತಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ-ಇವೆಲ್ಲವೂ ಬಡವರ ಬದುಕು ಸುಧಾರಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸುತ್ತವೆ ಎಂದು ಮುನಿಯಪ್ಪ ಹೇಳಿದರು.  ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 10:31 pm

POK ಭಾರತದೊಂದಿಗೆ ವಿಲೀನಗೊಳ್ಳಲಿದೆ: ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ

ಶ್ರೀನಗರ, ಎ. 3: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಶುಕ್ರವಾರ ಹೇಳಿದ್ದಾರೆ. ‘‘ಕಾಶ್ಮೀರದಲ್ಲಿ ನಿಂತುಕೊಂಡು ನಮ್ಮ ನೆರೆಯ ದೇಶಕ್ಕೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿ ಭಾರತದೊಂದಿಗೆ ವಿಲೀನಗೊಳ್ಳಲಿದೆ. ಏಕೆಂದರೆ ಪಿಒಕೆ ಜನರು ಜನಾಭಿಪ್ರಾಯ ಸಂಗ್ರಹಿಸಲು ಬಯಸಿದ್ದಾರೆ’’ ಎಂದರು. ‘‘ದೇವರು ಬಯಸಿದರೆ, ಅವರ ಘರ್ ವಾಪಸಿ ಶೀಘ್ರದಲ್ಲಿ ನಡೆಯಲಿದೆ. ಅಲ್ಲಿನ ಜನರು ಇದನ್ನು ಬಯಸುತ್ತಾರೆ. ಅವರು ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಸಂತೋಷಪಡುತ್ತಾರೆ. ಕಾಶ್ಮೀರ ಇಂದು ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ’’ ಎಂದು ಅವರು ಹೇಳಿದರು. 370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಉಂಟಾದ ಪರಿವರ್ತನೆಯನ್ನು ನೋಡಿ ತನಗೆ ತುಂಬಾ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 10:17 pm

ಬಂಗಾಳ, ತಮಿಳು ನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭಕ್ಕಾಗಿ ನೀತಿ ಸಂಹಿತೆ ಉಲ್ಲಂಘಿಸಿ ‘ವಿಶೇಷ ಅಧಿವೇಶನ’: ಕಾಂಗ್ರೆಸ್

ಹೊಸದಿಲ್ಲಿ, ಎ. 3: ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯಲು ಸರ್ಕಾರವು ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲು ವಿಶೇಷ ಅಧಿವೇಶನವನ್ನು ಕರೆದಿದ್ದು, ಇದು ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ‘ಸರ್ಕಾರವು ಅವಸರದಿಂದ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾದರೆ ಗಂಭೀರ ಪರಿಣಾಮಗಳು ಉಂಟಾಗಲಿವೆ. ಪ್ರಸ್ತುತ ಸ್ಥಿತಿಗೆ ಯಾವುದೇ ವ್ಯತ್ಯಯವನ್ನು ನಾವು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 2023ರ ನಾರಿ ಶಕ್ತಿ ವಂದನ ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ಅಂಗೀಕಾರಗೊಂಡ ಬಳಿಕ 30 ತಿಂಗಳುಗಳ ಕಾಲ ಸರ್ಕಾರವು ನಿದ್ರೆಗೆ ಜಾರಿತ್ತು. ಈಗ ಚುನಾವಣಾ ಸಮಯದಲ್ಲಿ ‘ದುಪ್ಪಟ್ಟು ಶ್ರೇಯ’ ಪಡೆಯುವ ಉದ್ದೇಶದಿಂದ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿದ ರಮೇಶ್, ಕ್ಷೇತ್ರ ಪುನರ್ವಿಂಗಡಣೆ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ಪ್ರಸ್ತಾವ ಹೊರಬಿದ್ದಿಲ್ಲ ಎಂದು ಬೆಟ್ಟು ಮಾಡಿದರು. ‘ಆದಾಗ್ಯೂ ಲೋಕಸಭಾ ಸ್ಥಾನಗಳಲ್ಲಿ ಪ್ರಮಾಣಾನುಪಾತದಲ್ಲಿ ಹೆಚ್ಚಳವಾಗಲಿದೆ ಎಂಬುದು ನಮಗೆ ತಿಳಿದುಬಂದಿದೆ. ಆದರೆ ವಾಸ್ತವದಲ್ಲಿ ಸಣ್ಣ ರಾಜ್ಯಗಳು ಹಾಗೂ ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮದ ರಾಜ್ಯಗಳು ತೀವ್ರ ತೊಂದರೆ ಎದುರಿಸಲಿವೆ. ಪ್ರಸ್ತಾವಿತ ಮಸೂದೆಯೊಂದಿಗೆ ಉತ್ತರ ಪ್ರದೇಶದ ಸಂಸದರ ಸಂಖ್ಯೆ 80ರಿಂದ 120ಕ್ಕೆ ಏರಿಕೆಯಾಗಲಿದ್ದು, ಕೇರಳದಲ್ಲಿ 20ರಿಂದ ಗರಿಷ್ಠ 30ಕ್ಕೆ ಹೆಚ್ಚಬಹುದು. ಹೀಗಾಗಿ ನಮಗೆ ಅನಧಿಕೃತವಾಗಿ ತಿಳಿದುಬಂದಿರುವ ಈ ಮಾಹಿತಿಯೂ ಹಲವಾರು ರಾಜ್ಯಗಳಿಗೆ ಅಪಾಯಕಾರಿಯಾಗಬಹುದು’ ಎಂದು ಹೇಳಿದರು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಮೇಲೆ ಪ್ರಭಾವ ಬೀರಲು ರಾಜಕೀಯ ಲಾಭ ಪಡೆಯುವುದು ಈ ವಿಶೇಷ ಅಧಿವೇಶನದ ಏಕೈಕ ಉದ್ದೇಶವಾಗಿದೆ ಎಂದ ಅವರು, 15 ದಿನಗಳ ಬಳಿಕ, ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಮುಗಿದ ನಂತರ ಅಧಿವೇಶನವನ್ನು ಕರೆಯುವುದು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಎ. 16ರ ಮೊದಲು ಹಿರಿಯ ಕಾಂಗ್ರೆಸ್ ಸಂಸದರ ಮತ್ತು ನಂತರ ಪ್ರತಿಪಕ್ಷ ನಾಯಕರ ಸಭೆಗಳನ್ನು ಕರೆಯಲಿದ್ದಾರೆ ಎಂದು ರಮೇಶ್ ತಿಳಿಸಿದರು. ಮಹಿಳಾ ಮೀಸಲಾತಿ ಕಾನೂನನ್ನು ಆದಷ್ಟು ಶೀಘ್ರ ಜಾರಿಗೊಳಿಸಲು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸಲು ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ಬಜೆಟ್ ಅಧಿವೇಶನವು ಸಂಕ್ಷಿಪ್ತ ವಿರಾಮದ ಬಳಿಕ ಎ. 16ರಂದು ಮರುಸಮಾವೇಶಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 3 Apr 2026 10:14 pm

Tumkur | 14ನೇ ಶತಮಾನದ ‘ಜಾತ್ರೆ ವೀರಗಲ್ಲು' ಶಾಸನ ಪತ್ತೆ

ತುಮಕೂರು : 14ನೇ ಶತಮಾನದ ಮಹತ್ವದ ಸಾಂಸ್ಕೃತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ.ಕೊಟ್ರೇಶ್ ಹಾಗೂ ಡಾ.ಸುಧಾ ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ. ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹವನ್ನು ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ‘ಸತ್ಯಮಂಗಲ’ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ. ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆಂದರೆ ಅದರಲ್ಲಿ ಕೆತ್ತಲಾಗಿರುವ ಸಾಂಸ್ಕೃತಿಕ ಚಿತ್ರಣ. 14ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜೀವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭಗಳನ್ನು ಹೊತ್ತುಕೊಂಡು ಸಂಭ್ರಮದಿಂದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕೆತ್ತಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ. ಇತಿಹಾಸಕಾರರ ವಿಶ್ಲೇಷಣೆಯ ಪ್ರಕಾರ, ಜನಸಾಮಾನ್ಯರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶತ್ರುಗಳು ಅಥವಾ ದರೋಡೆಕೋರರು ಅಡ್ಡಿಪಡಿಸಿರಬಹುದು. ಆ ಸಮಯದಲ್ಲಿ ಜನರ ರಕ್ಷಣೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ವೀರನ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ. 

ವಾರ್ತಾ ಭಾರತಿ 3 Apr 2026 10:00 pm

ಬಾಹ್ಯಾಕಾಶದಿಂದ ಆರ್ಟೆಮಿಸ್‌-2 ಗಗನಯಾತ್ರಿಗಳು ಕ್ಲಿಕ್ಕಿಸಿದ ಭೂಮಿಯ ಚಿತ್ರ; ಈ ಅಮೂಲ್ಯ ಆಸ್ತಿಯ ಒಡೆಯರು ಬಡಿದಾಡುವುದೇ ವಿಚಿತ್ರ

ಚಂದಿರನ ಕಕ್ಷೆ ಸುತ್ತಲು ಹೊರಟಿರುವ ನಾಸಾದ ನಾಲ್ವರು ಗಗನಯಾತ್ರಿಗಳು, ಮಾರ್ಗ ಮಧ್ಯೆ ಭೂಮಿಯ ಸುಂದರ ಚಿತ್ರವನ್ನು ಕ್ಲಿಕ್ಕಿಸಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್ಟೆಮಿಸ್‌-2 ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿ ಸುಂದರವಾಗಿ ಕಾಣುತ್ತದೆ ಎಂದು ತಿಳಿಸಿದ್ದು, ನಾಸಾ ಈ ಫೋಟೋಗಳನ್ನು ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದೆ. ಆರ್ಟೆಮಿಸ್‌-2ನ ಓರಾಯನ್‌ ನೌಕೆ ಈಗ ಎಲ್ಲಿದೆ? ಈ ಯೋಜನೆಯ ಅನುಸಾರ ಚಂದಿರ ಪ್ರದಕ್ಷಿಣೆ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 3 Apr 2026 10:00 pm

Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ

Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ ಹಿರಿಯ ಪತ್ರಕರ್ತ ಶಿವಕುಮಾರ್ ಮೆಣಸಿನಕಾಯಿ ಅವರ ಬರಹ ಇಲ್ಲಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರ ಅಣ್ಣಾಮಲೈ ಅವರನ್ನು ಬಿಜೆಪಿ ಈ ಬಾರಿ ಕಣಕ್ಕೆ ಇಳಿಸಿಲ್ಲ. ಕರ್ನಾಟಕದಲ್ಲಿ ಸೇವೆಯಲ್ಲಿದ್ದಷ್ಟು ದಿನ ಮನೆಮಾತಾಗಿದ್ದ ಅಣ್ಣಾಮಲೈ ರಾಜಕೀಯ ಉನ್ಮಾದಕ್ಕೆ ಒಳಗಾಗಿ ಕಷ್ಟಪಟ್ಟು ಗಳಿಸಿದ್ದ ಹುದ್ದೆಯನ್ನು ಕೈಚೆಲ್ಲಿ ಹೋದರು. ಈಗ

ಒನ್ ಇ೦ಡಿಯ 3 Apr 2026 9:57 pm

ಫೆಲೆಸ್ತೀನಿಯನ್ನರಿಗೆ ಮಾತ್ರ ಅನ್ವಯವಾಗುವ ಇಸ್ರೇಲ್‌ ನ ಮರಣದಂಡನೆ ಕಾನೂನು; ಏನಿದು?

ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸಲು ಇಸ್ರೇಲ್‌ ನಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು, ಇದು ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಇದನ್ನು ವರ್ಣಭೇದ ನೀತಿಯ ವಿಸ್ತರಣೆ ಎಂದು ಹೇಳಿದ್ದಾರೆ. ಈ ಕಾನೂನು ನಿರ್ದಿಷ್ಟವಾಗಿ ಯಹೂದಿ ನಾಗರಿಕರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವುದರಿಂದ, ಹಲವಾರು ಯುರೋಪಿಯನ್ ರಾಷ್ಟ್ರಗಳು ಇದನ್ನು 'ಬಹಿರಂಗವಾಗಿ ಜನಾಂಗೀಯ ಸ್ವರೂಪ' ಎಂದು ಹಣೆಪಟ್ಟಿ ಕಟ್ಟಿವೆ. ಇಸ್ರೇಲ್‌ ನಲ್ಲಿ ಬಲಪಂಥೀಯ ಬೆಂಬಲಿಗರು ಹರ್ಷೋದ್ಗಾರದೊಂದಿಗೆ ಅನುಮೋದನೆಯನ್ನು ಸ್ವಾಗತಿಸಿದರೆ, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ ನಾಯಕರು ಮಸೂದೆಯ ಉದ್ದೇಶಿತ ಸ್ವರೂಪ ಮತ್ತು ಪ್ರಾದೇಶಿಕ ಸ್ಥಿರತೆಗೆ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಾಸ್ತವಿಕ ತಾರತಮ್ಯದ ಸ್ವರೂಪದ ಬಗ್ಗೆ ನಾವು ವಿಶೇಷವಾಗಿ ಚಿಂತಿತರಾಗಿದ್ದೇವೆ. ಈ ಮಸೂದೆಯನ್ನು ಅಂಗೀಕರಿಸುವುದರಿಂದ ಇಸ್ರೇಲ್‌ ನ ಪ್ರಜಾಪ್ರಭುತ್ವ ತತ್ವಗಳಿಗೆ ಸಂಬಂಧಿಸಿದ ಬದ್ಧತೆಗಳು ದುರ್ಬಲಗೊಳ್ಳುವ ಅಪಾಯವಿದೆ ಎಂದು ವಿದೇಶ ಸಚಿವಾಲಯಗಳು ರವಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮಾನವ ಹಕ್ಕುಗಳ ಗುಂಪುಗಳು ಮಸೂದೆಯನ್ನು ಟೀಕಿಸಿವೆ. ಫೆಬ್ರವರಿಯಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಶಾಸನವು ಮರಣದಂಡನೆಯನ್ನು ಇಸ್ರೇಲ್‌ ನ ವರ್ಣಭೇದ ನೀತಿಯ ವ್ಯವಸ್ಥೆಯಲ್ಲಿ ಮತ್ತೊಂದು ತಾರತಮ್ಯದ ಸಾಧನವನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಹ್ಯೂಮನ್ ರೈಟ್ಸ್ ವಾಚ್ (HRW) ಮಂಗಳವಾರ ಕಾನೂನನ್ನು ತಾರತಮ್ಯ ಎಂದು ಕರೆದಿದೆ, ಏಕೆಂದರೆ ಇದು ಪ್ರಾಥಮಿಕವಾಗಿ, ಪ್ರತ್ಯೇಕವಾಗಿ ಅಲ್ಲದಿದ್ದರೂ, ಫೆಲೆಸ್ತೀನಿಯನ್ನರಿಗೆ ಅನ್ವಯಿಸುತ್ತದೆ. ಹ್ಯೂಮನ್ ರೈಟ್ಸ್ ವಾಚ್‌ನ ಆಡಮ್ ಕೂಗಲ್ ಅವರ ಪ್ರಕಾರ, ಮರಣದಂಡನೆಗೆ ಇಸ್ರೇಲ್‌ ನ ಒತ್ತಾಯವು ಭದ್ರತಾ ಕಾಳಜಿಗಳನ್ನು ಮೀರಿದೆ. ಈ ಕ್ರಮವು ದ್ವಂದ್ವ ನ್ಯಾಯ ವ್ಯವಸ್ಥೆ ಮತ್ತು ಬೇರೂರಿರುವ ತಾರತಮ್ಯವನ್ನು ಗಟ್ಟಿಗೊಳಿಸುತ್ತದೆ. ಈ ಕ್ರಮಗಳನ್ನು 'ವರ್ಣಭೇದ ನೀತಿಯ ಲಕ್ಷಣಗಳು' ಎಂದು ಅವರು ಹೇಳಿದ್ದಾರೆ. ಮರಣದಂಡನೆಯು ಬದಲಾಯಿಸಲಾಗದ್ದು ಮತ್ತು ಕ್ರೂರವಾದುದು. ಮೇಲ್ಮನವಿಗಳ ಮೇಲಿನ ಅದರ ಕಠಿಣ ನಿರ್ಬಂಧಗಳು ಮತ್ತು ಅದರ 90-ದಿನಗಳ ಮರಣದಂಡನೆ ಸಮಯದ ಜೊತೆಗೆ, ಈ ಮಸೂದೆಯು ಫೆಲೆಸ್ತೀನಿಯನ್ ಬಂಧಿತರನ್ನು ವೇಗವಾಗಿ ಮತ್ತು ಕಡಿಮೆ ಪರಿಶೀಲನೆಯೊಂದಿಗೆ ಕೊಲ್ಲುವ ಗುರಿಯನ್ನು ಹೊಂದಿದೆ ಎಂದು ಕೂಗಲ್ ಹೇಳಿದ್ದಾರೆ. ಅದೇನೇ ಇದ್ದರೂ, ಸಂಸತ್ತಿನಲ್ಲಿ ಯಶಸ್ವಿಯಾಗಿ ಅಂಗೀಕಾರವಾದಾಗ ಶಾಸನದ ಪ್ರಮುಖ ಪ್ರತಿಪಾದಕ, ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಅವರು ಷಾಂಪೇನ್ ಬಾಟಲಿ ಹಿಡಿದು ►ಕಾನೂನು ಇಸ್ರೇಲಿಗಳನ್ನು ಗುರಿಯಾಗಿಸದೆ ಫೆಲೆಸ್ತೀನಿಯನ್ನರನ್ನು ಹೇಗೆ ಗುರಿಯಾಗಿಸುತ್ತದೆ? ಈ ಶಾಸನವು ಪ್ರಾಥಮಿಕವಾಗಿ ಮಿಲಿಟರಿ ನ್ಯಾಯಾಲಯಗಳಿಗೆ ಸೀಮಿತವಾಗಿದೆ, ಇವು ಆಕ್ರಮಿತ ಪ್ರದೇಶಗಳಲ್ಲಿ ಫೆಲೆಸ್ತೀನಿಯನ್ನರ ಮೇಲೆ ಮಾತ್ರ ನ್ಯಾಯವ್ಯಾಪ್ತಿಯನ್ನು ಹೊಂದಿವೆ. ಈ ಹೊಸ ನಿಬಂಧನೆಗಳ ಅಡಿಯಲ್ಲಿ, ಪಶ್ಚಿಮ ದಂಡೆಯೊಳಗೆ ಇಸ್ರೇಲಿ ನಾಗರಿಕನನ್ನು ಕೊಂದ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಗೆ ಕಡ್ಡಾಯ ಮರಣದಂಡನೆ ವಿಧಿಸಲಾಗುತ್ತದೆ. ನ್ಯಾಯಾಲಯಗಳು ನಿಯಮಿತವಾಗಿ ಶಿಕ್ಷೆಯ ಅಂಕಿಅಂಶಗಳನ್ನು ಪ್ರಕಟಿಸದಿದ್ದರೂ, 2010ರಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಾಡಿದ ಅಪರಾಧಗಳಿಗಾಗಿ ವಿಚಾರಣೆಗೆ ಒಳಗಾದ ಫೆಲೆಸ್ತೀನಿಯನ್ನರಲ್ಲಿ 99.74 ಪ್ರತಿಶತದಷ್ಟು ಜನರು ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ ಎಂದು ನ್ಯಾಯಾಲಯ ವ್ಯವಸ್ಥೆಯು ಒಪ್ಪಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಬ್ರವರಿ ಅಂತ್ಯದಲ್ಲಿ ತಮ್ಮ ದೇಶವು ಇರಾನ್ ವಿರುದ್ಧ ಯುದ್ಧ ಪ್ರಾರಂಭಿಸಿದ ಕೆಲವೇ ವಾರಗಳಲ್ಲಿ ಏಳು ಫೆಲೆಸ್ತೀನಿಯನ್ನರನ್ನು ಕೊಂದ ಇಸ್ರೇಲಿ ವಸಾಹತುಗಾರರನ್ನು ಇಸ್ರೇಲ್‌ ನ ನಾಗರಿಕ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮಾರ್ಚ್ ಅಂತ್ಯದಲ್ಲಿ ಯುಕೆಯ ಗಾರ್ಡಿಯನ್ ಪತ್ರಿಕೆಯ ವಿಶ್ಲೇಷಣೆಯ ಪ್ರಕಾರ, ಈ ದಶಕದ ಆರಂಭದಿಂದಲೂ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದಿದ್ದಕ್ಕಾಗಿ ತನ್ನ ಯಾವುದೇ ನಾಗರಿಕರ ವಿರುದ್ಧ ಇನ್ನೂ ಕಾನೂನು ಕ್ರಮ ಜರುಗಿಸಿಲ್ಲ. ಹೊಸ ಶಾಸನದ ಅಡಿಯಲ್ಲಿ, ಇಸ್ರೇಲ್‌ ನ ನಾಗರಿಕ ನ್ಯಾಯಾಲಯಗಳಿಗೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದ ತಪ್ಪಿತಸ್ಥರೆಂದು ಕಂಡುಬಂದ ಇಸ್ರೇಲಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಹೆಚ್ಚುವರಿ ಮಟ್ಟದ ಸಡಿಲತೆಯನ್ನು ನೀಡಲಾಗುತ್ತದೆ. ನ್ಯಾಯಾಧೀಶರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ನಡುವೆ ಆರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಲೆಸ್ತೀನಿಯನ್ನರನ್ನು ವಿಚಾರಣೆ ನಡೆಸುವ ಮಿಲಿಟರಿ ನ್ಯಾಯಾಲಯಗಳಿಗೆ ಶಿಕ್ಷೆಗಳು ಸ್ವಯಂಚಾಲಿತ ಮರಣದಂಡನೆಯನ್ನು ಹೊಂದಿರುತ್ತವೆ; ತೀವ್ರ ಸಂದರ್ಭಗಳಲ್ಲಿ ಮಾತ್ರ ಜೀವಾವಧಿ ಶಿಕ್ಷೆ ಲಭ್ಯವಿದೆ. ಇಸ್ರೇಲಿ ಹಕ್ಕುಗಳ ಗುಂಪು ಯೆಶ್ ದಿನ್ ನಡೆಸಿದ ಅಧ್ಯಯನದ ಪ್ರಕಾರ, 2005 ಮತ್ತು 2024ರ ನಡುವೆ ಪಶ್ಚಿಮ ದಂಡೆಯಲ್ಲಿ (ಪೂರ್ವ ಜೆರುಸಲೆಮ್ ಹೊರತುಪಡಿಸಿ) ಫೆಲೆಸ್ತೀನಿಯನ್ನರ ವಿರುದ್ಧ ಅಪರಾಧಗಳನ್ನು ಎಸಗಿದ ನಾಗರಿಕ ನ್ಯಾಯಾಲಯಗಳು ತಪ್ಪಿತಸ್ಥರೆಂದು ಕಂಡುಕೊಂಡ ವಸಾಹತುಗಾರರ ಶಿಕ್ಷೆಯ ಪ್ರಮಾಣವು ಸುಮಾರು 3 ಪ್ರತಿಶತದಷ್ಟಿದೆ. ವಸಾಹತುಗಾರರ ಹಿಂಸಾಚಾರದ ಕುರಿತಾದ ಸುಮಾರು 93.8 ಪ್ರತಿಶತದಷ್ಟು ತನಿಖೆಗಳು ತನಿಖೆಯ ಕೊನೆಯಲ್ಲಿ ಯಾವುದೇ ದೋಷಾರೋಪಣೆಯನ್ನು ಸಲ್ಲಿಸದೆ ಮುಕ್ತಾಯಗೊಂಡಿವೆ ಎಂದು ಗುಂಪು ಗಮನಿಸಿದೆ. 2018ರ ರಾಷ್ಟ್ರ-ರಾಜ್ಯ ಕಾನೂನು ಈ ನೀತಿಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ಹಂತದ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಔಪಚಾರಿಕಗೊಳಿಸುತ್ತದೆ. ಕಾನೂನು ಇಸ್ರೇಲ್ ಅನ್ನು ಯಹೂದಿ ಜನರ ವಿಶೇಷ ತಾಯ್ನಾಡು ಎಂದು ಗುರುತಿಸುತ್ತದೆ ಮತ್ತು ಯಹೂದಿ ವಸಾಹತುವನ್ನು ರಾಷ್ಟ್ರೀಯ ಹಿತಾಸಕ್ತಿಯಾಗಿ ಆದ್ಯತೆ ನೀಡುತ್ತದೆ. ಇದು ಜನಸಂಖ್ಯೆಯ ಸುಮಾರು 20 ಪ್ರತಿಶತದಷ್ಟು ಇರುವ ಫೆಲೆಸ್ತೀನಿಯನ್ ನಾಗರಿಕರ ಸ್ಥಾನಮಾನವನ್ನು ಸಮಾನತೆಯ ಯಾವುದೇ ಖಾತರಿಯನ್ನು ಬಿಟ್ಟುಬಿಡುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ. ►ಅದು ಹೇಗೆ ಕಾನೂನುಬದ್ಧವಾಗಿದೆ? ಹಲವರ ಪ್ರಕಾರ, ಇದು ಕಾನೂನುಬದ್ಧವಾಗಿಲ್ಲ. ಪ್ರಧಾನ ಮಂತ್ರಿ ನೆತನ್ಯಾಹು ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ಆಡಳಿತಾತ್ಮಕ ಅಧಿಕಾರ ಹೊಂದಿರುವ ಅವರ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಫೆಲೆಸ್ತೀನಿಯನ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರೂ, ಅದು ಮಿಲಿಟರಿ ಆಕ್ರಮಣದಲ್ಲಿರುವ ವಿದೇಶಿ ಪ್ರದೇಶವಾಗಿ ಉಳಿದಿದೆ. ಇಸ್ರೇಲ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್‌ ನ ಭದ್ರತೆ ಮತ್ತು ಪ್ರಜಾಪ್ರಭುತ್ವ ಕೇಂದ್ರದ ಹಿರಿಯ ಸಹೋದ್ಯೋಗಿ ಅಮಿಚೈ ಕೊಹೆನ್ ಅವರ ಪ್ರಕಾರ, ಅಂತರರಾಷ್ಟ್ರೀಯ ಕಾನೂನು ಇಸ್ರೇಲ್‌ ನ ಸಂಸತ್ತು ಪಶ್ಚಿಮ ದಂಡೆಗೆ ಶಾಸನ ರಚಿಸಲು ಅನುಮತಿಸುವುದಿಲ್ಲ, ಏಕೆಂದರೆ ಈ ಪ್ರದೇಶವು ಕಾನೂನುಬದ್ಧವಾಗಿ ಇಸ್ರೇಲ್‌ ನ ಸಾರ್ವಭೌಮ ಪ್ರದೇಶದ ಭಾಗವಾಗಿಲ್ಲ. ಸೆಪ್ಟೆಂಬರ್ 2024ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಒಂದು ವರ್ಷದೊಳಗೆ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ನ ಇಸ್ರೇಲಿ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿತು. ಯುಎನ್‌ಜಿಎ ನಿರ್ಣಯವು ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹಾ ಅಭಿಪ್ರಾಯವನ್ನು ಬೆಂಬಲಿಸಿತು, ಅದು ಇಸ್ರೇಲಿ ಆಕ್ರಮಣವನ್ನು ಕಾನೂನುಬಾಹಿರ ಎಂದು ಕರೆದಿದೆ. ಅದೇ ರೀತಿ, ಇಸ್ರೇಲ್‌ ನಲ್ಲಿನ ನಾಗರಿಕ ಹಕ್ಕುಗಳ ಸಂಘವು ಮಸೂದೆಯನ್ನು ಅನುಮೋದಿಸಿದ ಕೆಲವೇ ನಿಮಿಷಗಳ ನಂತರ ಈ ವಿಷಯವನ್ನು ಇಸ್ರೇಲ್‌ ನ ಅತ್ಯುನ್ನತ ನ್ಯಾಯಾಲಯಕ್ಕೆ ಈಗಾಗಲೇ ಕೊಂಡೊಯ್ದಿದೆ ಎಂದು ಘೋಷಿಸಿತು. ಈ ಕ್ರಮವು ಯೋಜಿತವಾಗಿ ತಾರತಮ್ಯದಿಂದ ಕೂಡಿದೆ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಾಸಿಸುವ, ಇಸ್ರೇಲಿ ನಾಗರಿಕರಲ್ಲದ ಫೆಲೆಸ್ತೀನಿಯನ್ನರ ಮೇಲೆ ಅದನ್ನು ಹೇರಲು ಶಾಸಕರಿಗೆ ಯಾವುದೇ ಕಾನೂನು ಅಧಿಕಾರವಿಲ್ಲ ಎಂದು ಗುಂಪು ವಾದಿಸಿತು. ►ಫೆಲೆಸ್ತೀನಿಯನ್ನರನ್ನು ಗುರಿಯಾಗಿಸಲು ಇಸ್ರೇಲ್ ತನ್ನ ಕಾನೂನು ವ್ಯವಸ್ಥೆಯನ್ನು ಬಳಸುತ್ತಿದೆಯೇ? HRW ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸೇರಿದಂತೆ ಮಾನವ ಹಕ್ಕುಗಳ ಗುಂಪುಗಳು ಫೆಲೆಸ್ತೀನಿಯನ್ನರು ಮತ್ತು ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಾರರಿಗೆ ಅನ್ವಯಿಸುವ ಕಾನೂನು ವ್ಯವಸ್ಥೆಗಳು ಮೂಲಭೂತವಾಗಿ ಅಸಮಾನತೆಯಿಂದ ಕೂಡಿವೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿವೆ. ಅದೇ ಪ್ರದೇಶದಲ್ಲಿ, ಫೆಲೆಸ್ತೀನಿಯನ್ನರು ಮಿಲಿಟರಿ ಕಾನೂನಿಗೆ ಒಳಪಟ್ಟಿದ್ದರೆ, ಇಸ್ರೇಲಿ ವಸಾಹತುಗಾರರು ಇಸ್ರೇಲಿ ನಾಗರಿಕ ಕಾನೂನಿನಿಂದ ನಿಯಂತ್ರಿಸಲ್ಪಡುವ ದ್ವಿ-ಕಾನೂನು ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ಸಮಾನಾಂತರ ರಚನೆಯು ಆಡಳಿತಾತ್ಮಕ ಬಂಧನ ಸೇರಿದಂತೆ ತಾರತಮ್ಯದ ಅಭ್ಯಾಸಗಳನ್ನು ಸುಗಮಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವಾದಿಸುತ್ತವೆ. ಇವು ಆಡಳಿತಾತ್ಮಕ ಬಂಧನಕ್ಕೆ (ಜನರನ್ನು ಯಾವುದೇ ಆರೋಪವಿಲ್ಲದೆ ಅನಿರ್ದಿಷ್ಟವಾಗಿ ಬಂಧಿಸಬಹುದು) ಅನುವು ಮಾಡಿಕೊಡುತ್ತದೆ. ಕಾನೂನಿನ ಅಡಿಯಲ್ಲಿ ನಾಟಕೀಯವಾಗಿ ಅಸಮಾನ ರಕ್ಷಣೆಗಳು ಮತ್ತು ಆ ಕಾನೂನುಗಳ ಆಯ್ದ ಜಾರಿಯಂತಹ ತಾರತಮ್ಯದ ಬಂಧನ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ. ಇವೆಲ್ಲವೂ ವರ್ಣಭೇದ ನೀತಿಯ ವ್ಯಾಪಕ ಆರೋಪಗಳಿಗೆ ಆಧಾರವಾಗಿವೆ. ಮಾರ್ಚ್ 2026ರ ಹೊತ್ತಿಗೆ, ಸರಿಸುಮಾರು 9,500 ಫೆಲೆಸ್ತೀನಿಯನ್ನರನ್ನು ಇಸ್ರೇಲಿ ಜೈಲುಗಳಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಬಂಧಿಸಲಾಗಿದೆ. ಸುಮಾರು ಅರ್ಧದಷ್ಟು ಜನರು ಆಡಳಿತಾತ್ಮಕ ಬಂಧನದಲ್ಲಿ ಅಥವಾ ಕಾನೂನುಬಾಹಿರ ಹೋರಾಟಗಾರರು ಎಂದು ಹಣೆಪಟ್ಟಿ ಕಟ್ಟಲಾಗಿದೆ. ಅವರಿಗೆ ವಿಚಾರಣೆಯನ್ನು ನಿರಾಕರಿಸಲಾಗಿದ್ದು, ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಸ್ಟಡಿಯಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಅನೇಕ ಅಂತರರಾಷ್ಟ್ರೀಯ ವೀಕ್ಷಕರು ಮತ್ತು ಹಕ್ಕುಗಳ ಗುಂಪುಗಳಲ್ಲಿ ಕಳವಳಕ್ಕೆ ಕಾರಣವಾಗಿವೆ. ಪೋಷಕರ ಉಪಸ್ಥಿತಿಯಿಲ್ಲದೆ ಫೆಲೆಸ್ತೀನಿಯನ್ ಅಪ್ರಾಪ್ತ ವಯಸ್ಕರನ್ನು ವಿಚಾರಣೆ ಮಾಡಬಹುದು ಮತ್ತು ಇಸ್ರೇಲ್‌ ನ ಸ್ವಂತ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ಕಾನೂನು ಸಲಹೆಗಾರರನ್ನು ಸಮಯೋಚಿತವಾಗಿ ಸಂಪರ್ಕಿಸಲು ಅವರಿಗೆ ಅವಕಾಶ ನಿರಾಕರಿಸಲಾಗುತ್ತದೆ ಎಂದು HRW ಗಮನಿಸಿದೆ. ಅಂತರರಾಷ್ಟ್ರೀಯ ಕಳವಳದ ಪ್ರಮುಖ ಅಂಶವೆಂದರೆ ನಿರ್ಮಾಣ ಪರವಾನಗಿಗಳ ಕೊರತೆಯ ಕಾರಣ ನೀಡಿ ಫೆಲೆಸ್ತೀನಿಯನ್ ಮನೆಗಳನ್ನು ವ್ಯವಸ್ಥಿತವಾಗಿ ಕೆಡವುವುದು. ಫೆಲೆಸ್ತೀನಿಯನ್ನರು ಪರವಾನಗಿ ಪಡೆಯುವುದೇ ಅಸಾಧ್ಯ. ಇದಕ್ಕೆ ವ್ಯತಿರಿಕ್ತವಾಗಿ, ಅನಧಿಕೃತ ವಸಾಹತುಗಾರರ ಹೊರಠಾಣೆಗಳು ವಿರಳವಾಗಿ ತೊಂದರೆಗೊಳಗಾಗುತ್ತವೆ ಮತ್ತು ಹಿಂದಿನಿಂದಲೂ ಕಾನೂನುಬದ್ಧಗೊಳಿಸಲ್ಪಡುತ್ತವೆ. ►ಕಾನೂನಿಗೆ ಖಂಡನೆ ವ್ಯಕ್ತಪಡಿಸಿದ ಎಂಟು ದೇಶಗಳು ಮಾರಣಾಂತಿಕ ದಾಳಿಗಳಿಗೆ ಶಿಕ್ಷೆಗೊಳಗಾದ ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸುವ ಇಸ್ರೇಲ್‌ ನ ಏಕಪಕ್ಷೀಯ ಮಸೂದೆಯನ್ನು ಬಲವಾಗಿ ಖಂಡಿಸಿದ ಎಂಟು ಮುಸ್ಲಿಂ ಬಹುಸಂಖ್ಯಾತ ದೇಶಗಳು ಜಂಟಿ ಹೇಳಿಕೆಯನ್ನು ನೀಡಿವೆ. ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಖತರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವರ್ಣಭೇದ ನೀತಿಯನ್ನು ಬೇರೂರಿಸುವ, ಹೆಚ್ಚು ತಾರತಮ್ಯದ ಇಸ್ರೇಲಿ ಪದ್ಧತಿಗಳನ್ನು ಖಂಡಿಸಿವೆ ಎಂದು ಇಸ್ಲಾಮಾಬಾದ್ ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಎಂಟು ದೇಶಗಳು ಇಸ್ರೇಲ್ ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಪರಿಸ್ಥಿತಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ. ಚಿತ್ರಹಿಂಸೆ, ಅಮಾನವೀಯ ಮತ್ತು ಅವಮಾನಕರ ವರ್ತನೆ, ಹಸಿವು ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆ ಸೇರಿದಂತೆ ನಡೆಯುತ್ತಿರುವ ದೌರ್ಜನ್ಯಗಳ ವರದಿಗಳ ನಡುವೆ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ. ಈ ಕ್ರಮಗಳು ಫೆಲೆಸ್ತೀನಿಯನ್ ಜನರ ವಿರುದ್ಧ ಉಲ್ಲಂಘನೆಗಳ ವ್ಯಾಪಕ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ನೆಲದ ಮೇಲೆ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುವ ಇಸ್ರೇಲ್ ಕ್ರಮಗಳ ವಿರುದ್ಧವೂ ದೇಶಗಳು ಎಚ್ಚರಿಕೆ ನೀಡಿವೆ. ಈ ಕಾನೂನನ್ನು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟ ಕೂಡ ಟೀಕಿಸಿದೆ. ಆದಾಗ್ಯೂ, ಇಸ್ರೇಲ್‌ ನ ಮಿತ್ರ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಅದರದ್ದೇ ಆದ ಕಾನೂನುಗಳನ್ನು ನಿರ್ಧರಿಸುವ ಸಾರ್ವಭೌಮ ಹಕ್ಕನ್ನು ಬೆಂಬಲಿಸಿದೆ.

ವಾರ್ತಾ ಭಾರತಿ 3 Apr 2026 9:56 pm

ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿತ ಮರಗಳಲ್ಲಿ ಶೇ.43ರಷ್ಟು ಸತ್ತಿವೆ: ಸರಕಾರ

ಹೊಸದಿಲ್ಲಿ, ಎ.3: ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿಸಲಾಗಿದ್ದ ಮರಗಳಲ್ಲಿ ಸುಮಾರು ಶೇ.43ರಷ್ಟು ಸತ್ತು ಹೋಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. 2019ರಲ್ಲಿ ಆರಂಭಗೊಂಡಿರುವ ಈ ಯೋಜನೆಯು ಸೆಂಟ್ರಲ್ ದಿಲ್ಲಿಯ ಒಂದು ಭಾಗದ ಪುನರ್‌ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಈವರೆಗೆ ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿಯ ನಿವಾಸ ಮತ್ತು ನೂತನ ಪ್ರಧಾನಮಂತ್ರಿ ಕಚೇರಿ ಪೂರ್ಣಗೊಂಡಿವೆ. ಟೀಕಾಕಾರರು ಈ ಯೋಜನೆಯನ್ನು ಬಿಜೆಪಿ ಸರ್ಕಾರದ ‘ಆಡಂಬರದ ಯೋಜನೆ’ ಎಂದು ಬಣ್ಣಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು, ಯೋಜನೆಗಾಗಿ 3,609 ಮರಗಳನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ 1,545 ಮರಗಳು ನಾಶಗೊಂಡಿವೆ ಎಂದು ತಿಳಿಸಿದರು. ಕಾನೂನುಬದ್ಧ ಅಗತ್ಯಗಳ ಪ್ರಕಾರ ಮರಗಳ ಕಡಿತಕ್ಕೆ ಬದಲಿಯಾಗಿ ದಿಲ್ಲಿಯ ಬದರ್‌ ಪುರ ಪ್ರದೇಶದ ಎನ್‌ಟಿಪಿಸಿ ಇಕೋ ಪಾರ್ಕ್‌ನಲ್ಲಿ 24,450 ಮತ್ತು ಘಿಟ್ರೋನಿಯಲ್ಲಿ 1,730 ಗಿಡಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು. 2023-24ರಿಂದ 2025-26ರ ಅವಧಿಯಲ್ಲಿ ಮರಗಳ ಸ್ಥಳಾಂತರ ಹಾಗೂ ಬದಲಿ ಗಿಡಗಳ ನೆಡುವಿಕೆಗೆ 5.2 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆಯು ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯ ನೂತನ ಅಧಿಕೃತ ನಿವಾಸಗಳು, ನೂತನ ಪ್ರಧಾನಿ ಕಚೇರಿ ಹಾಗೂ ‘ಕರ್ತವ್ಯ ಭವನಗಳು’ ಎಂದು ಹೆಸರಿಸಲಾದ 10 ಸರ್ಕಾರಿ ಕಚೇರಿ ಕಟ್ಟಡಗಳ ನಿರ್ಮಾಣವನ್ನು ಒಳಗೊಂಡಿದೆ. ಅಸ್ತಿತ್ವದಲ್ಲಿರುವ ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಿದ ಬಳಿಕ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನೂತನ ಪ್ರಧಾನಿಯ ನಿವಾಸ ಮತ್ತು ಉಳಿದ ಏಳು ಸಚಿವಾಲಯ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಚೇರಿಗಳನ್ನು ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವುದೂ ಯೋಜನೆಯಲ್ಲಿ ಸೇರಿದೆ.

ವಾರ್ತಾ ಭಾರತಿ 3 Apr 2026 9:47 pm

ಅಬುಧಾಬಿಯ ಮೇಲೆ ಕ್ಷಿಪಣಿ ದಾಳಿ | ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ

ಅಬುಧಾಬಿ, ಎ.3: ಶುಕ್ರವಾರ ಅಬುಧಾಬಿಯ ಮೇಲೆ ಇರಾನ್ ಪ್ರಯೋಗಿಸಿದ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆ ನಿರ್ಬಂಧಿಸಿದ ಬಳಿಕ, ಅದರ ಅವಶೇಷಗಳು ಅಜ್ಬಾನ್ ಪ್ರದೇಶದಲ್ಲಿ ಬಿದ್ದು ಐವರು ಭಾರತೀಯರು ಮತ್ತು 7 ನೇಪಾಳಿ ಪ್ರಜೆಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಮತ್ತೊಂದು ಕ್ಷಿಪಣಿಯ ಅವಶೇಷದಿಂದ ಹಬ್ಷಾನ್ ಗ್ಯಾಸ್ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿಯ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು: • ಇರಾನ್‌ ನಿಂದ ಪ್ರಯೋಗಿಸಲಾದ 18 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಕ್ರೂಸ್ ಕ್ಷಿಪಣಿಗಳು ಮತ್ತು 47 ಡ್ರೋನ್‌ಗಳನ್ನು ನಿರ್ಬಂಧಿಸಿರುವುದಾಗಿ ಯುಎಇ ತಿಳಿಸಿದೆ. • ಇರಾನ್‌ ನ ಗಲ್ಫ್ ಬಂದರು ಚರಾಕ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಪ್ರಯಾಣಿಕರ ಟರ್ಮಿನಲ್‌ಗೆ ಹಾನಿಯಾಗಿದೆ. • ಉತ್ತರ ಇರಾನ್‌ ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯ ಮತ್ತು ಮೆಹರಾಬಾದ್ ವಿಮಾನ ನಿಲ್ದಾಣ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. • ದಕ್ಷಿಣ ಇರಾನ್‌ನಲ್ಲಿ ನೆರವು ವಿತರಣೆಗಾಗಿ ಬಳಸುತ್ತಿದ್ದ ಕಂಟೈನರ್‌ಗಳು ಮತ್ತು ತುರ್ತು ಸೇವಾ ವಾಹನಗಳಿದ್ದ ಗೋದಾಮಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 2 ಕಂಟೈನರ್‌ಗಳು, 2 ಬಸ್ಸುಗಳು ಹಾಗೂ ಹಲವು ಆಂಬ್ಯುಲೆನ್ಸ್‌ಗಳಿಗೆ ಹಾನಿಯಾಗಿದೆ ಎಂದು ರೆಡ್‌ಕ್ರಾಸ್ ತಿಳಿಸಿದೆ. • ಮಧ್ಯಪ್ರಾಚ್ಯದಾದ್ಯಂತ ಅಮೆರಿಕಕ್ಕೆ ಸಂಬಂಧಿಸಿದ ಸ್ವತ್ತುಗಳು, ಇಂಧನ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. • ಗುರುವಾರ ತಡರಾತ್ರಿ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆದಿದ್ದು, 4 ಮಂದಿ ಗಾಯಗೊಂಡಿದ್ದಾರೆ.

ವಾರ್ತಾ ಭಾರತಿ 3 Apr 2026 9:43 pm

ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ‘ಹಿಟ್‌ಲಿಸ್ಟ್’ನಲ್ಲಿ ಗಲ್ಫ್‌ನ 8 ಸೇತುವೆಗಳು

ಟೆಹ್ರಾನ್, ಎ.3: ಕರಾಜ್‌ ನ B1 ಸೇತುವೆಯ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಗಲ್ಫ್ ಪ್ರದೇಶದ ಪ್ರಮುಖ ಸೇತುವೆಗಳನ್ನು ‘ಹಿಟ್‌ಲಿಸ್ಟ್’ನಲ್ಲಿ ಸೇರಿಸಲಾಗಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ. ಕುವೈತ್, ಬಹ್ರೇನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ದೇಶಗಳ ಸೇತುವೆಗಳನ್ನು ಇರಾನ್ ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ. ಗುರುವಾರ ಇರಾನ್‌ನ ಕರಾಜ್ ನಗರದಲ್ಲಿರುವ B1 ಸೇತುವೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಭಾರೀ ಹಾನಿಯಾಗಿದೆ. ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ದಾಳಿಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, “ಅಪೂರ್ಣ ಸೇತುವೆಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದರಿಂದ ಇರಾನಿಯನ್ನರನ್ನು ಶರಣಾಗತಿಗೆ ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 9:39 pm

Jammu and Kashmir | ಗಾಂದರ್ಬಲ್ ಎನ್‌ಕೌಂಟರ್; ನ್ಯಾಯಾಂಗ ತನಿಖೆಗೆ ಆದೇಶ

ಶ್ರೀನಗರ, ಎ.3: ಗಾಂದರ್ಬಲ್ ಜಿಲ್ಲೆಯ ಅರಹ್ಮಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಈ ಪ್ರಕರಣದ ಕುರಿತು ಕೂಲಂಕಷ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ 7 ದಿನಗಳೊಳಗೆ ಗೃಹ ಇಲಾಖೆಗೆ ವರದಿ ಸಲ್ಲಿಸುವಂತೆ ಜಿಲ್ಲಾ ದಂಡಾಧಿಕಾರಿಗೆ ಸೂಚಿಸಲಾಗಿದೆ. ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ರಶೀದ್ ಅಹ್ಮದ್ ಮುಘಲ್ ಹತ್ಯೆಯಾಗಿದ್ದಾರೆ ಎಂಬ ಸೇನೆಯ ಹೇಳಿಕೆಯನ್ನು ಕುಟುಂಬ ಸದಸ್ಯರು ವಿರೋಧಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ. ರಶೀದ್‌ಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಕುಟುಂಬ ಹೇಳಿದೆ. “ರಶೀದ್ ಮಾರ್ಚ್ 31ರಂದು ಬೆಳಗ್ಗೆ ಮನೆಯಿಂದ ತೆರಳಿದ್ದ. ಆದರೆ ಹಿಂದಿರುಗಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು” ಎಂದು ಸಹೋದರ ಏಜಾಝ್ ಅಹ್ಮದ್ ಮುಘಲ್ ತಿಳಿಸಿದ್ದಾರೆ. “ನಂತರ ಶ್ರೀನಗರದಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ರಶೀದ್‌ ನ ಮೃತದೇಹವನ್ನು ಗುರುತಿಸಿದೆ” ಎಂದೂ ಅವರು ಹೇಳಿದ್ದಾರೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ಉತ್ತರ ಕಾಶ್ಮೀರದಲ್ಲಿ ದಫನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತ್ಯಕ್ರಿಯೆಗೆ ಮೃತದೇಹ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕುಟುಂಬ ಆಗ್ರಹಿಸಿದೆ. ಕುಟುಂಬದ ಪ್ರಕಾರ, ರಶೀದ್ ವಿದ್ಯಾವಂತನಾಗಿದ್ದು ಎಂಕಾಂ ಪದವಿ ಪಡೆದಿದ್ದ. ಸ್ಥಳೀಯರಿಗೆ ದಾಖಲೆ ಸಂಬಂಧಿತ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 3 Apr 2026 9:37 pm

Hubballi | ಜಿಮ್ ತರಬೇತುದಾರನಿಗೆ ಹಲ್ಲೆ ವಿಚಾರ; ವೈಯಕ್ತಿಕ ಕಾರಣಗಳ ಹಿನ್ನೆಲೆ ಸಂಘರ್ಷ : ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಹುಬ್ಬಳ್ಳಿ : ಜಿಮ್‌ ತರಬೇತುದಾರನಿಗೆ ಹಲ್ಲೆ ನಡೆಸಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ. ಜಿಮ್‌ ನಲ್ಲಿ ಪರಿಚಯವಾಗಿದ್ದ ಯುವಕ-ಯುವತಿಯ ನಡುವಿನ ಸ್ನೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು, ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಎಂಬ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಮತ್ತು ಸಮೀರ್ ನಡುವೆ ಜಿಮ್‌ ನಲ್ಲಿ ಪರಿಚಯವಾಗಿದ್ದು, ಅದನ್ನೇ ʼಲವ್ ಜಿಹಾದ್ʼ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಯುವಕನ ಮನೆ ಬಳಿ ಸುಮಾರು ಜನರು ಹೋಗಿ, ʼನಮ್ಮ ಹುಡುಗಿ ಜೊತೆ ಯಾಕೆ ನೀನು ಹೆಚ್ಚು ವಿಶ್ವಾಸದಿಂದ ಇದ್ದೀಯಾʼ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅಲ್ಲಿ ಸಂಘರ್ಷವಾಗಿದೆ. ಬಳಿಕ ಯುವಕನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ ಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಯುವಕನನ್ನು ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಹುಡುಗನ ಕಡೆಯವರು ಹುಡುಗಿ ಮನೆ ಬಳಿ ಹೋಗಿದ್ದಾರೆ. ಅಲ್ಲಿಯೂ ಕೂಡ ಸಂಘರ್ಷ ನಡೆದಿದೆ. ಒಬ್ಬನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನಾವು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಸಂಘರ್ಷ ಆಗಿದೆ. ಹುಡುಗನ ಕಡೆಯವರು ಹೇಳುವ ಪ್ರಕಾರ ಹುಡುಗಿ ನಮಗೆ ಪರಿಚಯ ಎಲ್ಲ ಇತ್ತು, ಆದರೆ ಯಾಕೆ ಈ ರೀತಿ ಆಗಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಮನೆಗಳ ಹತ್ತಿರ ಗುಂಪುಗಳಲ್ಲಿ ಹೋಗಿರುವುದು ತಪ್ಪು. ಅದಕ್ಕೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಬಣ್ಣ ಬೆಳೆಯುವಂತದ್ದು ಮಾಡಬಾರದು. ಅಲ್ಲಿ ಆಗಿರುವ ಘಟನೆಗೆ ಅನುಗುಣವಾಗಿ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದ್ದು, ಸಮೀರ್‌ ನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎಂದು ಆರೋಪಿಸಿ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಯುವತಿ ಮನೆಯವರು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಕುಟುಂಬಗಳು ಕಿಮ್ಸ್‌ಗೆ ದಾಖಲಾಗಿದ್ದು, ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಎರಡು ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ►ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ: ಯುವತಿ ಆರೋಪ ಈ ಸಂಬಂಧ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಸಮೀರ್‌ನ ಅಕ್ಕ ನನ್ನ ಸ್ನೇಹಿತೆ. ಅವರಿಂದ ಸಮೀರ್ ಪರಿಚಯವಾಗಿತ್ತು. ಅವನ ಅಕ್ಕನ ಜೊತೆಗೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ , ವೀಕೆಂಡ್ ಪಾರ್ಟಿಗೆ ಹೋಗಿದ್ದೆವು. ಆಗ ಸಮೀರ್ ಕೂಡ ಬಂದಿದ್ದ. ಇದಾದ ಮೇಲೆ ಸಮೀರ್ ಆತ್ಮೀಯನಾದ. ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಮತ್ತು ಬರುವ ಪಾನೀಯ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ಅದನ್ನು ವೀಡಿಯೊ ಮಾಡಿದ್ದಾನೆ. ಇದು ನನಗೆ ಗೊತ್ತಿರಲಿಲ್ಲ. ವೀಡಿಯೊ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ► ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ : ಸಮೀರ್ ಸಹೋದರಿ ಈ ಕುರಿತು ಪ್ರತಿಕ್ರಿಯಿಸಿದ ಸಮೀರ್ ಸಹೋದರಿ, ಸಮೀರ್ ಜೊತೆಗೆ ಯುವತಿಗೆ ಸ್ನೇಹ ಇತ್ತು. ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ಕೆಲವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನು ಅಪಹರಣ ಮಾಡಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್‌ ಗೆ ಹೋಗುತ್ತಿದ್ದೆವು. ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಅಪಹರಣ ಮಾಡಿದ್ದಾರೆ. ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ. ದನದ ಶೆಡ್ಡಿಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ದೆವು. ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ತಮ್ಮನನ್ನು ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 3 Apr 2026 9:33 pm

ನಾನು ಹೇಳಿದರೆ ಇಸ್ರೇಲ್ ದಾಳಿ ನಿಲ್ಲಿಸುತ್ತದೆ: ಟ್ರಂಪ್

ವಾಶಿಂಗ್ಟನ್, ಎ.3: ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಮೇಲೆ ತಾನು ಬಲವಾದ ನಿಯಂತ್ರಣ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ತನ್ನ ನಿರ್ಧಾರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ನಾನು ಹೇಳಿದುದನ್ನೇ ಅವರು ಮಾಡುತ್ತಾರೆ. ಅವರು ಉತ್ತಮ ಟೀಮ್ ಪ್ಲೇಯರ್‌ ಗಳು. ನಾನು ನಿಲ್ಲಿಸಿದಾಗ ಅವರು ಕೂಡ ನಿಲ್ಲಿಸುತ್ತಾರೆ. ಅವರನ್ನು ಪ್ರಚೋದಿಸದಿದ್ದರೆ ಅವರು ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಬೇರೆ ಆಯ್ಕೆಗಳಿಲ್ಲ; ನಾನು ನಿಲ್ಲಿಸಿದಾಗ ಅವರು ಕೂಡ ನಿಲ್ಲಿಸಬೇಕು’ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 3 Apr 2026 9:33 pm

ಹಾರ್ಮುಝ್‌ ಜಲಸಂಧಿಯಲ್ಲಿ ವಿಶ್ವಸಂಸ್ಥೆ ಮಿಲಿಟರಿ ಕ್ರಮಕ್ಕೆ ರಷ್ಯ, ಚೀನಾ, ಫ್ರಾನ್ಸ್ ವಿರೋಧ

ವಿಶ್ವಸಂಸ್ಥೆ, ಎ.3: ಹಾರ್ಮುಝ್‌ ಜಲಸಂಧಿಯನ್ನು ಪುನಃ ತೆರೆಯಲು ಮಿಲಿಟರಿ ಕ್ರಮಕ್ಕಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುವ ಗುರಿಯನ್ನು ಹೊಂದಿರುವ ಅರಬ್ ಉಪಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯ, ಚೀನಾ ಮತ್ತು ಫ್ರಾನ್ಸ್ ತಡೆಯಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹಾರ್ಮುಝ್‌ ಜಲಸಂಧಿಯಲ್ಲಿ ಭದ್ರತೆ ಖಾತರಿಪಡಿಸುವ ಪ್ರಸ್ತಾಪವನ್ನು ಒಳಗೊಂಡಿರುವ ಕರಡು ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ರಷ್ಯ ಮತ್ತು ಚೀನಾ ಆಕ್ಷೇಪ ಎತ್ತಿದ ಬಳಿಕ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಆರಂಭಿಕ ಕರಡು ನಿರ್ಣಯವು ಹಾರ್ಮುಝ್‌ ಜಲಸಂಧಿ, ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಮಾರ್ಗವನ್ನು ಸುರಕ್ಷಿತಗೊಳಿಸಲು ಮತ್ತು ಸಂಚಾರದಲ್ಲಿ ಹಸ್ತಕ್ಷೇಪದ ಪ್ರಯತ್ನಗಳನ್ನು ತಡೆಯಲು ಎಲ್ಲಾ ‘ಅಗತ್ಯ ವಿಧಾನಗಳನ್ನು ಬಳಸಲು’ (ಸಂಭಾವ್ಯ ಮಿಲಿಟರಿ ಕ್ರಮಗಳನ್ನು ಒಳಗೊಂಡಂತೆ) ದೇಶಗಳಿಗೆ ಅವಕಾಶ ನೀಡುತ್ತಿತ್ತು. ಆದರೆ ವೀಟೊ ಅಧಿಕಾರ ಹೊಂದಿರುವ ರಷ್ಯ, ಚೀನಾ ಮತ್ತು ಫ್ರಾನ್ಸ್ ‘ಬಲ ಪ್ರಯೋಗ’ದ ಉಲ್ಲೇಖವನ್ನು ವಿರೋಧಿಸಿವೆ. ಪರಿಷ್ಕರಿಸಿದ ಕರಡು ನಿರ್ಣಯದಲ್ಲಿ ‘ಆಕ್ರಮಣಕಾರಿ ಮಿಲಿಟರಿ ಕ್ರಮವನ್ನು ಅನುಮತಿಸುವ’ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಹಾರ್ಮುಝ್‌ ಜಲಸಂಧಿ ಹಾಗೂ ಪಕ್ಕದ ನೀರಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ರಕ್ಷಣಾತ್ಮಕ ವಿಧಾನಗಳನ್ನು ಬಳಸಲು ಮತ್ತು ಕನಿಷ್ಠ 6 ತಿಂಗಳ ಅವಧಿಗೆ ಅಂತಾರಾಷ್ಟ್ರೀಯ ಸಂಚಾರದಲ್ಲಿ ಹಸ್ತಕ್ಷೇಪಗಳನ್ನು ತಡೆಯಲು ಅವಕಾಶ ನೀಡಲಾಗಿದೆ.

ವಾರ್ತಾ ಭಾರತಿ 3 Apr 2026 9:31 pm

ಅಮೆರಿಕದಲ್ಲಿ ʼತಲೆದಂಡʼ | ಮುಂದಿನ ಸರದಿ ಕಾಶ್ ಪಟೇಲ್, ತುಳಸಿ ಗ್ಯಾಬರ್ಡ್?

ವಾಶಿಂಗ್ಟನ್: ಟ್ರಂಪ್ ಆಡಳಿತದ ಉನ್ನತ ಸ್ತರದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿದ್ದು, ಮುಂದಿನ ಸುತ್ತಿನಲ್ಲಿ ಅಧ್ಯಕ್ಷ ಟ್ರಂಪ್ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ನ್ಯಾಶನಲ್ ಇಂಟೆಲಿಜನ್ಸ್ ನಿರ್ದೇಶಕಿ ತುಳಸಿ ಗ್ಯಾಬರ್ಡ್ ಅವರನ್ನು ವಜಾಗೊಳಿಸುವ ಸಾಧ್ಯತೆ ಬಗ್ಗೆ ಊಹಾಪೋಹಗಳು ಹರಡಿವೆ. ಮುಂದಿನ ಸುತ್ತಿನಲ್ಲಿ ಕಾಶ್ ಪಟೇಲ್, ಸೇನಾ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕೋಲ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚವೇಝ್-ಡೆರೆಮರ್ ಅವರನ್ನು ವಜಾಗೊಳಿಸುವ ಸಾಧ್ಯತೆ ಕುರಿತು ಆಂತರಿಕ ವಲಯದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ‘ದ ಅಟ್ಲಾಂಟಿಕ್’ ವರದಿ ತಿಳಿಸಿದೆ. ಆದರೆ ಇದು ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಷಯದಲ್ಲಿ ಅಧ್ಯಕ್ಷ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಇವರ ಕಾರ್ಯನಿರ್ವಹಣೆಯ ಮೇಲೂ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ‘‘ಸಂಪೂರ್ಣ ಪುನರ್‌ರಚನೆ’’ಯ ಭಾಗವಾಗಿ ಪಟೇಲ್ ಅವರನ್ನು ತಕ್ಷಣವೇ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಕನ್ಸರ್ವೇಟಿವ್ ವೀಕ್ಷಕ ಕೈಲ್ ಸೆರಾಫಿನ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:28 pm

Uttar Pradesh | ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪತಿ!

ಬಹರಾಯಿಚ್, ಎ. 3: ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ತನ್ನ ಮಾಜಿ ಪತ್ನಿಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಹತ್ಯೆಗೈಯಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ನಾನ್ಪಾರ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಹಾಗೂ ಆರೋಪಿ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ರಾಮ್‌ಗಾಂವ್ ಪ್ರದೇಶದ ಮುಸಲ್ಲಂಪುರ ಗ್ರಾಮದ ನಿವಾಸಿ ರಹೀಸ್ ಎಂದು ಗುರುತಿಸಲಾಗಿದೆ. ಈತ ನನ್ಪಾರದ ನಿವಾಸಿ ರೇಷ್ಮಾರನ್ನು ವರ್ಷದ ಹಿಂದೆ ವಿವಾಹವಾಗಿದ್ದ. ವಿವಾದಗಳ ಕಾರಣಕ್ಕೆ ಅವರಿಬ್ಬರು ಪ್ರತ್ಯೇಕವಾಗಿದ್ದರು. ಅವರ ವಿಚ್ಛೇದನ ನ್ಯಾಯಾಲಯದಲ್ಲಿ ಜನವರಿಯಲ್ಲಿ ಅಂತ್ಯಗೊಂಡಿತ್ತು. ನಂತರ ರೇಷ್ಮಾ ಅವರು ತಮ್ಮ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಬುಧವಾರ ನನ್ಪಾರಕ್ಕೆ ಬಂದಿದ್ದಾನೆ. ಮನೆಗೆ ಹಿಂದಿರುಗುತ್ತಿದ್ದ ತನ್ನ ಮಾಜಿ ಪತ್ನಿಯನ್ನು ಲಕ್ಷ್ಮಣಪುರ ಮತೇಹಿ ಗ್ರಾಮದ ಬಳಿ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಹಿಂಸಾಚಾರಕ್ಕೆ ತಿರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ರಹೀಸ್ ತನ್ನ ಮೋಟಾರು ಸೈಕಲ್‌ನಿಂದ ಮಾಜಿ ಪತ್ನಿಗೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮೋಟಾರು ಸೈಕಲ್‌ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಅಳುವುದನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದರು. ಕೋಪೋದ್ರಿಕ್ತರಾದ ಗುಂಪು ಆರೋಪಿಗೆ ಥಳಿಸಿತು. ಇದರಿಂದ ರಹೀಸ್ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಪಹುಪ್ ಸಿಂಗ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:26 pm

Madhya Pradesh | ವಿಧಾನಸಭೆಯಿಂದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅನರ್ಹ

ಭೋಪಾಲ, ಎ. 3: ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರನ್ನು ಮಧ್ಯ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ ಈ ವಿಷಯದ ಕುರಿತು ಚರ್ಚೆ ನಡೆದ ಬಳಿಕ ವಿಧಾನಸಭೆಯ ಅಧಿಕಾರಿಗಳು ದತಿಯಾ ವಿಧಾನಸಭಾ ಕ್ಷೇತ್ರದಿಂದ ಭಾರ್ತಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ದತಿಯಾ ಕ್ಷೇತ್ರದಲ್ಲಿ ಭಾರ್ತಿ ಅವರು ಮಧ್ಯ ಪ್ರದೇಶದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಅವರನ್ನು ಸೋಲಿಸಿದ್ದರು. ವಂಚನೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ಭಾರ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ದತಿಯಾ ಸ್ಥಾನವನ್ನು ಖಾಲಿ ಎಂದು ಘೋಷಿಸಿರುವ ಆದೇಶವನ್ನು ಉಲ್ಲೇಖಿಸಿ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಶರ್ಮಾ ಅವರು ಏಪ್ರಿಲ್ 2ರಂದು ರಾತ್ರಿ ಅಧಿಸೂಚನೆ ಹೊರಡಿಸಿದರು. ಶುಕ್ರವಾರ ಬೆಳಗ್ಗೆ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ವಾರ್ತಾ ಭಾರತಿ 3 Apr 2026 9:22 pm

ಕುವೈತ್, ಬಹ್ರೈನ್ ಮತ್ತು ಜೋರ್ಡಾನ್‌ ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ: ಇರಾನ್

ಟೆಹರಾನ್: ಕುವೈತ್, ಬಹ್ರೈನ್ ಮತ್ತು ಜೋರ್ಡಾನ್ ಸೇರಿದಂತೆ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕ ಸಂಬಂಧಿತ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಪ್ರಕಟಣೆಯಲ್ಲಿ ತಿಳಿಸಿದೆ ಎಂದು Tasnim News Agency ವರದಿ ಮಾಡಿದೆ. ಇಸ್ಫಹಾನ್ ಮತ್ತು ಖುಝೆಸ್ತಾನ್‌ ನಲ್ಲಿರುವ ಇರಾನ್‌ನ ಕೈಗಾರಿಕೆಗಳು ಮತ್ತು ಉಕ್ಕಿನ ಕಾರ್ಖಾನೆಗಳ ಮೇಲೆ ಹಾಗೂ ಕರಾಜ್‌ ನಲ್ಲಿರುವ B-1 ಸೇತುವೆಯ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಮೆರಿಕ ಪಡೆಗಳಿಗೆ ಸಂಬಂಧಿಸಿದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ಹೇಳಿದೆ. “ಇಂದು ಬೆಳಗ್ಗಿನಿಂದ ಪ್ರಾರಂಭವಾಗಿ, ಜೋರ್ಡಾನ್‌ ನಲ್ಲಿರುವ ಅಮೆರಿಕ ಸೇನಾ ಪಡೆಗಳಿಗೆ ಸಂಬಂಧಿಸಿದ ಸಾಧನಗಳ ಗೋದಾಮುಗಳು ಹಾಗೂ ಅವುಗಳ ವಾಸ್ತವ್ಯ ಮತ್ತು ನೆರವಿನ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಇದರೊಂದಿಗೆ, ಕುವೈತ್‌ನ ಆರಿಫ್ ಜಾನ್ ಶಿಬಿರದಲ್ಲಿರುವ ಅಮೆರಿಕ ಸಶಸ್ತ್ರ ಬ್ರಿಗೇಡ್‌ನ ಯಾಂತ್ರಿಕ ತುಕಡಿಯ ಮೇಲೆಯೂ ದಾಳಿ ನಡೆಸಲಾಗಿದೆ” ಎಂದು ಪ್ರಕಟಣೆಯಲ್ಲಿ ಇರಾನ್ ತಿಳಿಸಿದೆ. “ಬಹ್ರೈನಲ್ಲಿರುವ ಅಮೆರಿಕ ಸೇನಾ ಕೈಗಾರಿಕೆಗಳಿಗೆ ನೆರವು ನೀಡುತ್ತಿದ್ದ ಅಲ್ಯೂಮಿನಿಯಂ ಕುಲುಮೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಯನ್ನೂ ನಡೆಸಲಾಗಿದೆ” ಎಂದು ಇರಾನ್ ಹೇಳಿದೆ.

ವಾರ್ತಾ ಭಾರತಿ 3 Apr 2026 9:19 pm

ಉಡುಪಿ: ಎ.4ರಂದು ಪಿಪಿಸಿಯಲ್ಲಿ ರಾ.ವಿಜ್ಞಾನ, ತಂತ್ರಜ್ಞಾನ ಸಮ್ಮೇಳನ; ವಿಜ್ಞಾನಿಗಳೊಂದಿಗೆ ಸಂವಾದ

ಉಡುಪಿ, ಎ.3: ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಕಾಲೇಜಿನ ವಿಜ್ಞಾನ ಸಂಘದ ಮಾರ್ಗ ದರ್ಶನದಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಹಾಗೂ ವಿಜ್ಞಾನಿಗಳ ಸಮಾವೇಶ ಎ.4ರಂದು ಕಾಲೇಜಿನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಬೆಂಗಳೂರಿನ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್) ನಿವೃತ್ತ ನಿರ್ದೇಶಕ ಹಾಗೂ ಬ್ರಹ್ಮೋಸ್ ಕ್ಷಿಪಣಿಯ ವಿಜ್ಞಾನಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪ್ರಹ್ಲಾದ್ ರಾಮರಾವ್, ಇಸ್ರೋ ಸಂಸ್ಥೆಯ ನಿವೃತ್ತ ಅಂತರಿಕ್ಷ ವಿಜ್ಞಾನಿ ಬೆಂಗಳೂರಿನ ಡಾ.ಬಿ.ಆರ್.ಗುರುಪ್ರಸಾದ್, ಬೆಂಗಳೂರು ಜೆಎಸ್‌ಸಿಎಎಸ್‌ಆರ್‌ನ ಡೀನ್ ಪ್ರೊ.ವಿದ್ಯಾಧಿರಾಜ್ ಎನ್.ಎಸ್., ಜೆಎನ್‌ಸಿಎಎಸ್‌ಆರ್‌ನ ಸಂಶೋಧಕರು ಹಾಗೂ ವಿಜ್ಞಾನ ಸಂವಹನಕಾರರಾದ ಡಾ.ವಿನಾಯಕ ಕೆ.ಪತ್ತಾರ್ ಅವರು ಉಪಸ್ಥಿತರಿರುವರು. ಸಮ್ಮೇಳನದ ಉದ್ಘಾಟನೆ ಬೆಳಗ್ಗೆ 10:00ಗಂಟೆಗೆ ನಡೆಯಲಿದ್ದು, ಪ್ರೊ.ವಿದ್ಯಾಧಿರಾಜ ಎನ್.ಎಸ್. ಅವರು ಕ್ವಾಟಂಮ್ ಫಿಸಿಕ್ಸ್ ಕುರಿತಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ 1:30ರ ಅಧಿವೇಶನದಲ್ಲಿ ಡಾ.ಬಿ.ಆರ್.ಗುರುಪ್ರಸಾದ್ ಅವರು ಆಂತರಿಕ್ಷ ವಿಜ್ಞಾನ ಸಂಶೋದನೆ ಕುರಿತು ಹಾಗೂ ಬಳಿಕ ಡಾ.ಪ್ರಹ್ಲಾದ್ ರಾಮರಾವ್ ಅವರೊಂದಿಗೆ ವಿದ್ಯಾರ್ಥಿ- ವಿಜ್ಞಾನಿಗಳ ಸಂವಾದ ನಡೆಯಲಿದೆ. ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ವಿಜ್ಞಾನಿಗಳನ್ನು ಸನ್ಮಾನಿಸಲಿದ್ದಾರೆ. ಜೊತೆಗೆ ಪೂರ್ಣ ಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರೂ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಪಶ್ಚಿಮ ಘಟ್ಟ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಪ್ರೊ.ಎನ್.ಎ.ಮಧ್ಯಸ್ಥರಿಗೆ ಸನ್ಮಾನವೂ ನಡೆಯಲಿದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Apr 2026 9:19 pm

ಮಧ್ಯಪ್ರಾಚ್ಯ ಸಂಘರ್ಷ | ಯುದ್ಧ ಅಂತ್ಯಗೊಳಿಸುವಂತೆ ಇಸ್ರೇಲ್‌ ಅಧ್ಯಕ್ಷ ಹೆರ್ಝೋಗ್‌ ಗೆ ಪೋಪ್ ಲಿಯೊ ಮನವಿ

ರೋಮ್, ಎ.3: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಪೋಪ್ ಲಿಯೊ XIV ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಝೋಗ್ ಅವರಿಗೆ ಮನವಿ ಮಾಡಿದ್ದಾರೆ. ಈಸ್ಟರ್ ಹಬ್ಬದ ಸಂದರ್ಭದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ, ಪ್ರಸ್ತುತ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಎಲ್ಲಾ ಸಾಧ್ಯವಾದ ರಾಜತಾಂತ್ರಿಕ ಮಾರ್ಗಗಳನ್ನು ತೆರೆದಿಡುವ ಅಗತ್ಯತೆಯನ್ನು ಪೋಪ್ ಒತ್ತಿಹೇಳಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Apr 2026 9:12 pm

NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ; ತನ್ನದೇ ಪದವಿಗಳನ್ನು ನೀಡುವ ಅಧಿಕಾರ

ಹೊಸದಿಲ್ಲಿ, ಎ.3: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಗೆ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಔಪಚಾರಿಕವಾಗಿ ಘೋಷಿಸಲಾಗಿದ್ದು, ಅದು ತನ್ನದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ NCERTಯನ್ನು ಅದರ ಆರು ಘಟಕಗಳೊಂದಿಗೆ ಡೀಮ್ಡ್ ವಿವಿಯಾಗಿ ಘೋಷಿಸಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ. ಈ ಘಟಕಗಳಲ್ಲಿ ಅಜ್ಮೇರ್, ಭೋಪಾಲ, ಭುವನೇಶ್ವರ, ಮೈಸೂರು ಮತ್ತು ಶಿಲ್ಲಾಂಗ್‌ ನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಹಾಗೂ ಭೋಪಾಲದ ಪಂಡಿತ ಸುಂದರಲಾಲ್ ಶರ್ಮಾ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ವೊಕೇಷನಲ್ ಎಜ್ಯುಕೇಷನ್ ಸೇರಿವೆ. ಶಾಲಾ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿರುವ NCERT, ಶೈಕ್ಷಣಿಕ ಸಂಶೋಧನೆ ಮತ್ತು ನವೀನತೆ, ಪಠ್ಯಕ್ರಮ ಅಭಿವೃದ್ಧಿ ಹಾಗೂ ಪಠ್ಯ ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ‘ಡೆ ನೊವೊ’ ವರ್ಗದಲ್ಲಿ NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ ನೀಡಿಕೆಯನ್ನು ಅನುಮೋದಿಸಿತ್ತು. ಡೆ-ನೊವೊ ಡೀಮ್ಡ್ ವಿವಿಯು ಡೀಮ್ಡ್-ಟು-ಬಿ ವಿವಿಯಾಗಿ ಹೊಸ ಸಂಸ್ಥೆಯನ್ನು ಸ್ಥಾಪಿಸಲು UGCಗೆ ಅರ್ಜಿ ಸಲ್ಲಿಸಬಹುದು. ಹೊಸ ಸಂಸ್ಥೆಯು ಅಸ್ತಿತ್ವದಲ್ಲಿರುವ ಯಾವುದೇ ಸಂಸ್ಥೆ ನೀಡದ ವಿಶಿಷ್ಟ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುತ್ತದೆ. NCERT ಯಾವುದೇ ವಾಣಿಜ್ಯಿಕ ಮತ್ತು ಲಾಭಾರ್ಜಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು; ಎಲ್ಲಾ ಶೈಕ್ಷಣಿಕ ಕೋರ್ಸ್‌ಗಳು ಅಥವಾ ಕಾರ್ಯಕ್ರಮಗಳು UGC ಹಾಗೂ ಶಾಸನಬದ್ಧ ಸಂಸ್ಥೆಗಳು ಅಥವಾ ಮಂಡಳಿಗಳು ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂಬುದನ್ನು ಸೇರಿದಂತೆ ಹಲವು ಷರತ್ತುಗಳನ್ನು ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾಗಿದೆ.

ವಾರ್ತಾ ಭಾರತಿ 3 Apr 2026 9:09 pm

ದಿಢೀರ್ ಚೀನಾದತ್ತ ದಿಕ್ಕು ಬದಲಿಸಿದ ಇರಾನ್‌ ನಿಂದ ಭಾರತಕ್ಕೆ ಸಾಗುತ್ತಿದ್ದ ಕಚ್ಚಾ ತೈಲ ಟ್ಯಾಂಕರ್

ಹೊಸದಿಲ್ಲಿ, ಎ.3: ಅಮೆರಿಕವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ ನಿಂದ ಭಾರತಕ್ಕೆ ಕಚ್ಚಾ ತೈಲವನ್ನು ತರುತ್ತಿದ್ದ ಟ್ಯಾಂಕರ್, ಪಯಣದ ಮಧ್ಯೆ ತನ್ನ ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್‌ ನ ದತ್ತಾಂಶಗಳು ತೋರಿಸಿವೆ. ದತ್ತಾಂಶಗಳ ಪ್ರಕಾರ, 2025ರಲ್ಲಿ ಅಮೆರಿಕದಿಂದ ನಿರ್ಬಂಧಿಸಲ್ಪಟ್ಟಿದ್ದ ‘ಪಿಂಗ್ ಷನ್’ ಹಡಗು ಸುಮಾರು ಆರು ಲಕ್ಷ ಬ್ಯಾರೆಲ್ ಇರಾನ್ ತೈಲವನ್ನು ಹೊತ್ತಿದ್ದು, ಈಗ ಚೀನಾದ ಡೊಂಗ್ಯಾಂಗ್ ಕಡೆಗೆ ಸಾಗುತ್ತಿರುವ ಸಂಕೇತವನ್ನು ತೋರಿಸುತ್ತಿದೆ. ಈ ಟ್ಯಾಂಕರ್ ವಾರದ ಆರಂಭದಲ್ಲಿ ಗುಜರಾತಿನ ವಾಡಿನಾರ್ ಅನ್ನು ತನ್ನ ಗಮ್ಯಸ್ಥಾನವಾಗಿ ಪಟ್ಟಿ ಮಾಡಿತ್ತು. ಅಮೆರಿಕವು ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ 30 ದಿನಗಳ ವಿನಾಯಿತಿ ನೀಡಿದ ಬಳಿಕ, ಭಾರತೀಯ ಸಂಸ್ಕರಣಾಗಾರಗಳು ನಿರ್ಬಂಧದಿಂದಾಗಿ ಸಮುದ್ರದಲ್ಲಿ ಬಾಕಿಯಾಗಿದ್ದ ಹಡಗುಗಳಲ್ಲಿನ ಇರಾನ್ ತೈಲವನ್ನು ಖರೀದಿಸಲು ಅವಕಾಶಗಳನ್ನು ಅನ್ವೇಷಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. 2019ರಲ್ಲಿ ಅಮೆರಿಕದ ಕಠಿಣ ನಿರ್ಬಂಧಗಳು ಜಾರಿಯಾದಾಗ ಭಾರತವು ಇರಾನಿನಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿತ್ತು. ‘ಪಿಂಗ್ ಷನ್’ ಟ್ಯಾಂಕರ್ ಭಾರತವನ್ನು ತಲುಪಿದ್ದರೆ, ಅದು ಕಳೆದ ಏಳು ವರ್ಷಗಳಲ್ಲಿ ಇರಾನಿನಿಂದ ದೇಶಕ್ಕೆ ಬಂದ ಮೊದಲ ಕಚ್ಚಾ ತೈಲ ಆಮದಾಗಿರುತ್ತಿತ್ತು. ಕೆಪ್ಲರ್‌ ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಅವರ ಪ್ರಕಾರ, ಘೋಷಿತ ಗಮ್ಯಸ್ಥಾನವನ್ನು ಬದಲಿಸಿ ಚೀನಾದತ್ತ ಸಾಗುವ ಮೊದಲು ಮೂರು ದಿನಗಳ ಕಾಲ ಹಡಗು ವಾಡಿನಾರ್ ಮಾರ್ಗದಲ್ಲೇ ಚಲಿಸುತ್ತಿತ್ತು. ಮಾರ್ಗ ಬದಲಾವಣೆ ಪಾವತಿ ಸಂಬಂಧಿತ ಕಳವಳಗಳಿಗೆ ಸಂಬಂಧಿಸಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಮಾರಾಟಗಾರರು ತಮ್ಮ ನಿಬಂಧನೆಗಳನ್ನು ಕಠಿಣಗೊಳಿಸುತ್ತಿದ್ದು, ಹಿಂದಿನ 30–60 ದಿನಗಳ ಸಾಲ ಸೌಲಭ್ಯದಿಂದ ದೂರ ಸರಿದು ಮುಂಗಡ ಅಥವಾ ಅಲ್ಪಾವಧಿಯ ಪಾವತಿಯನ್ನು ಹೆಚ್ಚಾಗಿ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಾಣಿಜ್ಯ ಹಡಗುಗಳಿಗೆ ಕಡ್ಡಾಯವಾಗಿರುವ ಆಟೊಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಮ್ (AIS) ತೋರಿಸುವ ಗಮ್ಯಸ್ಥಾನ ಅಂತಿಮವಾಗಿರುವುದಿಲ್ಲ ಮತ್ತು ಯಾನದ ಯಾವುದೇ ಹಂತದಲ್ಲಿ ಬದಲಾಗಬಹುದು. ಹಡಗು ಆರಂಭದಲ್ಲಿ ಸೂಚಿಸಿದ್ದ ವಾಡಿನಾರ್ ಬಂದರುದಲ್ಲಿ ರಷ್ಯಾ ಬೆಂಬಲಿತ ನಯಾರಾ ಎನರ್ಜಿ ನಿರ್ವಹಿಸುತ್ತಿರುವ ವಾರ್ಷಿಕ 20 ಮಿಲಿಯನ್ ಟನ್ ಸಾಮರ್ಥ್ಯದ ಸಂಸ್ಕರಣಾಗಾರವಿದೆ. ಹಣಪಾವತಿ ಸಮಸ್ಯೆಗಳು ಬಗೆಹರಿದರೆ, ಟ್ಯಾಂಕರ್ ಮತ್ತೆ ಭಾರತೀಯ ಸಂಸ್ಕರಣಾಗಾರದತ್ತ ದಿಕ್ಕು ಬದಲಿಸುವ ಸಾಧ್ಯತೆ ಇದೆ ಎಂದು ರಿಟೋಲಿಯಾ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 9:07 pm

ವಿಜಯಪುರ ಏರ್‌ಪೋರ್ಟ್‌ ಆರಂಭದ ಬಗ್ಗೆ ಮಾಹಿತಿ ಹಂಚಿಕೊಂಡ MB ಪಾಟೀಲ್; ವಿಮಾನಯಾನ ಕಂಪನಿಗಳ ಜತೆ ಮಾತುಕತೆ

ವಿಜಯಪುರದಲ್ಲಿ ನಿರ್ಮಾಣವಾಗಿರುವ ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ತೀರ್ಪಿನ ಪ್ರಕಟಣೆ ಮಾತ್ರ ಬಾಕಿ ಇದ್ದು, ಹೊರಬಿದ್ದ ತಕ್ಷಣ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈಗಾಗಲೇ ವಿಮಾನ ಯಾವ ಕಂಪನಿಗಳ ಜತೆ ಮಾತುಕತೆಯನ್ನು ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 3 Apr 2026 9:03 pm

ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು?

ಕರ್ನಾಟಕ ಸೇರಿದಂತೆ ದೇಶದಲ್ಲಿ ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಿಸಿಲಿನ ತಾಪಕ್ಕೆ ಜನರು ಫ್ಯಾನ್ಸ್ ಕೂಲರ್, ಎಸಿಗಳ ಮೊರೆ ಹೋಗುತ್ತಿದ್ದಾರೆ. ಕೆಲವರಲ್ಲಿ 'ಏರ್ ಕೂಲರ್ ಉತ್ತಮವೋ' ಅತವಾ 'ಎಸಿ (ಏರ್ ಕಂಡಿಷನರ್)' ಉತ್ತಮವೋ? ಯಾವುದು ಆಯ್ಕೆ ಮಾಡುವುದೆಂಬ ಗೊಂದಲ ಇದೆ. ಏರ್ ಕೂಲರ್‌ಗಳು ಬಜೆಟ್‌ ಸ್ನೆಹಿ ಆಯ್ಕೆ ಹೌದಾದರೂ, ಏರ್ ಕಂಡಿಷನರ್‌ ಹೆಚ್ಚು ಆರಾಮದಾಯಕ, ತಂಪು ಅನುಭವ ನೀಡುತ್ತವೆ.

ಒನ್ ಇ೦ಡಿಯ 3 Apr 2026 9:00 pm

ನಿಟ್ಟೆ: ಮೋಹನ್ ಪೂಜಾರಿಗೆ ಡಾಕ್ಟರೇಟ್

ನಿಟ್ಟೆ, ಎ.3: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಪೂಜಾರಿ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಸುರತ್ಕಲ್‌ನ ಕರ್ನಾಟಕ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿಕೆ) ಡಾಕ್ಟರೇಟ್ ಪದವಿ ಘೋಷಿಸಿದೆ. ಎನ್‌ಐಟಿಕೆ ಮೈನಿಂಗ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಹರ್ಷವರ್ಧನ ಅವರ ಮಾರ್ಗದರ್ಶನದಲ್ಲಿ ಮೋಹನ್ ಪೂಜಾರಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದರು.

ವಾರ್ತಾ ಭಾರತಿ 3 Apr 2026 8:45 pm

ಸೆನ್ಶಿಯಾದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು ಚಾಂಪಿಯನ್

ಕಾರ್ಕಳ: ಮೂಡಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಇ) ಆಯೋಜಿಸಿದ್ದ ‘ಸೆನ್ಶಿಯಾ- 2026’ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯವು ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿತು.

ವಾರ್ತಾ ಭಾರತಿ 3 Apr 2026 8:39 pm

Europe ಗೆ ಸಾಗಣೆಯಾಗುವ 12 ಟನ್ Kit Kat ಕಳವು; ಪತ್ತೆ ಮಾಡಲು ಬಳಕೆದಾರರು ಸ್ಕ್ಯಾನ್ ಮಾಡಬೇಕು!

ಇದು ‘ಫಾಸ್ಟ್ ಆಂಡ್ ಫ್ಯೂರಿಯಸ್’ ಚಿತ್ರದ ಚಾಕಲೇಟ್ ಆವೃತ್ತಿ ಎಂದ ಜನರು

ವಾರ್ತಾ ಭಾರತಿ 3 Apr 2026 8:39 pm

ಮುಂಬೈಯಲ್ಲಿ ಕಾಮಗಾರಿ: ಹಲವು ರೈಲು ಸಂಚಾರದಲ್ಲಿ ವ್ಯತ್ಯಯ

ಉಡುಪಿ, ಎ.3: ಮುಂಬೈಯ ಸಿಎಸ್‌ಎಂಟಿ ಹಾಗೂ ಕಲ್ಯಾಣ್ ಜಂಕ್ಷನ್ ವಿಭಾಗದ ಪರೇಲ್- ಕರ್ರಿ ರೋಡ್ ನಿಲ್ದಾಣಗಳ ನಡುವಿನ ರೈಲ್ವೆ ಓವರ್‌ಬ್ರಿಡ್ಜ್‌ನ್ನು ಕೆಡಹುವ ಕಾಮಗಾರಿಯನ್ನು ನಡೆಸಲು ಕೇಂದ್ರ ರೈಲ್ವೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಮಂಗಳೂರು ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ರೈಲು ನಂ.12134 ಎಕ್ಸ್‌ಪ್ರೆಸ್ ರೈಲಿನ ಎ.4ರ ಪ್ರಯಾಣವನ್ನು ಥಾಣೆ ನಿಲ್ದಾಣದಲ್ಲಿ ಕೊನೆಗೊಳಿಸಲಿದೆ. ಅದೇ ರೀತಿ ಮಡಗಾಂವ್ ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ಜನಶತಾಬ್ದಿ ರೈಲು ಹಾಗೂ ತೇಜಸ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಪನ್ವೇಲ್ ನಿಲ್ದಾಣದಲ್ಲೇ ಕೊನೆಗೊಳಿಸ ಲಾಗುತ್ತದೆ. ಈ ಎಲ್ಲಾ ರೈಲುಗಳ ಎ.5ರ ಪ್ರಯಾಣ ಪನ್ವೇಲ್ ನಿಲ್ದಾಣದಿಂದ ಪ್ರಾರಂಭಗೊಳ್ಳಲಿದೆ. ಮುಂಬಯಿ ಸಿಎಸ್‌ಎಂಟಿ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನ ಎ.5ರ ಪ್ರಯಾಣ 15 ನಿಮಿಷ ತಡವಾಗಿ ಮುಂಜಾನೆ 5:40ಕ್ಕೆ ಪ್ರಾರಂಭಗೊಳ್ಳಲಿದೆ. ಇವುಗಳೊಂದಿಗೆ ಇನ್ನೂ ಹಲವು ರೈಲುಗಳ ಸಂಚಾರದ ಸಮಯ ಹಾಗೂ ಸ್ಥಳದಲ್ಲೂ ವ್ಯತ್ಯಯವಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Apr 2026 8:33 pm

ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ ಪ್ರದಾನ

ಉಡುಪಿ, ಎ.3: ಯಕ್ಷಗಾನದ ಶ್ರೇಷ್ಠ ಕಲಾವಿದರಿಗೆ ಪಲಿಮಾರು ಮಠದ ವತಿಯಿಂದ ನೀಡಲಾಗುವ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ಯನ್ನು ಗುರುವಾರ ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರದಾನ ಮಾಡಲಾಯಿತು. ಪಲಿಮಾರು ಮೂಲಮಠದಲ್ಲಿ ಹನುಮಜ್ಜಯಂತಿಯ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪಾಕತಜ್ಞರಾದ ಯಜ್ಞನಾರಾಯಣ ಭಟ್ಟರಿಗೆ ‘ಪಾಕ ವಿದ್ಯಾಮಾನ್ಯ ಪ್ರಶಸ್ತಿ’ ನೀಡಿ ಶ್ರೀಪಾದರು ಅನುಗ್ರಹಿಸಿದರು. ಇಬ್ಬರು ಸಾಧಕರ ಪತ್ನಿಯರಿಗೂ ಸ್ವಾಮೀಜಿ ಮಂಗಳಸೀರೆ ನೀಡಿ ಹರಸಿದರು. ಪ್ರಶಸ್ತಿಯು ಪ್ರಶಸ್ತಿ ಫಲಕ, ಸ್ಮರಣಿಕೆ ಮತ್ತು ತಲಾ 50,000ರೂ. ನಿಧಿಯನ್ನು ಒಳಗೊಂಡಿದ್ದು, ಪ್ರಶಸ್ತಿ ವಿಜೇತರ ಕುರಿತು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು.

ವಾರ್ತಾ ಭಾರತಿ 3 Apr 2026 8:30 pm

ದೇಶದಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಳ: ಸಂಶೋಧನೆ, ಸಂಶಯಗಳು - ರಾಜಕೀಯ ಭಾಷೆಯ ಪ್ರಶ್ನೆ ರಾಜಾರಾಂ ತಲ್ಲೂರು ಬರಹ

Heart Attack: ದೇಶದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆ ಹೆಚ್ಚಳ: ಸಂಶೋಧನೆ, ಸಂಶಯಗಳು - ರಾಜಕೀಯ ಭಾಷೆಯ ಪ್ರಶ್ನೆಗಳ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಸಂಶೋಧನೆಗಳ ರಾಜಕೀಯ ಭಾಷೆ! ಕೆಲ ಪತ್ರಿಕೆಗಳಲ್ಲಿ, ದೇಶದ ಒಳಗೆ ಹೃದಯಾಘಾತಗಳು ಹೆಚ್ಚುತ್ತಿರುವ ಬಗ್ಗೆ ಒಂದು ಸಂಶೋಧನೆ ನಡೆದ ವಿವರಗಳು ಪ್ರಕಟಗೊಂಡಿವೆ. ಸಾಮಾನ್ಯ ಹೃದಯ ತಪಾಸಣೆಗಳಲ್ಲಿ ಏನೂ ಐಬು

ಒನ್ ಇ೦ಡಿಯ 3 Apr 2026 8:30 pm

ರೂಪಾಯಿ ಆಧಾರಿತ NDDಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಡಿವಾಣ; ಹೊಸ ನಿಯಮಗಳು ಏನು ಹೇಳುತ್ತವೆ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೂಪಾಯಿ ಆಧಾರಿತ ನಾನ್-ಡೆಲಿವರೇಬಲ್ ಡೆರಿವೇಟಿವ್ (NDD) ಒಪ್ಪಂದಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಿದೆ. ಇದು ಮಾರುಕಟ್ಟೆ ಪಾರದರ್ಶಕತೆಯತ್ತ ಒಂದು ಕಾರ್ಯತಂತ್ರದ ನಡೆಯನ್ನು ಪ್ರತಿನಿಧಿಸುತ್ತದೆ. ಈ ಹಸ್ತಕ್ಷೇಪವು ಸಂಕಷ್ಟದಲ್ಲಿರುವ ಕರೆನ್ಸಿಗೆ ಅಗತ್ಯವಾದ ಏರಿಕೆಯನ್ನು ಒದಗಿಸಿತು. 95 ರ ಗಡಿ ದಾಟಿದ ನಂತರ, ಗುರುವಾರ (ಏಪ್ರಿಲ್ 2) ರೂಪಾಯಿ ಗಮನಾರ್ಹ ಚೇತರಿಕೆ ಕಂಡಿತು, ಡಾಲರ್ ವಿರುದ್ಧ 1.73 ರೂ. ಏರಿಕೆಯಾಗಿ 93.10 ಕ್ಕೆ ಮುಕ್ತಾಯವಾಯಿತು. ಪಶ್ಚಿಮ ಏಷ್ಯಾ ಸಂಘರ್ಷದ ನಂತರ ಏರುತ್ತಿರುವ ತೈಲ ಬೆಲೆಗಳು ಮತ್ತು ಬಂಡವಾಳ ಹೊರಹರಿವುಗಳಿಂದ ತೀವ್ರವಾಗಿ ಹಾನಿಗೊಳಗಾದ ಕರೆನ್ಸಿ ಚಲನೆಯನ್ನು ಸ್ಥಿರಗೊಳಿಸಲು ಮತ್ತು ದೇಶದಲ್ಲಿ ಕಡಲಾಚೆಯ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಬಲಪಡಿಸಲು RBI ಪ್ರಯತ್ನಿಸುತ್ತಿದೆ. ಊಹಾತ್ಮಕ ಚಟುವಟಿಕೆಗೆ ಪ್ರಮುಖ ಮಾರ್ಗವನ್ನು ತೆಗೆದುಹಾಕುವ ಮೂಲಕ, ಇದು ಕರೆನ್ಸಿ ಚಲನೆಯನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ►NDD ಮಾರುಕಟ್ಟೆ ಎಂದರೇನು? ಪ್ರಮುಖವಾಗಿ ಸಿಂಗಾಪುರ, ಲಂಡನ್ ಮತ್ತು ದುಬೈನಂತಹ ಕಡಲಾಚೆಯ ಹಣಕಾಸು ಕೇಂದ್ರಗಳಲ್ಲಿ ವಹಿವಾಟು ನಡೆಸಲಾಗುವ ನಾನ್-ಡೆಲಿವರೇಬಲ್ ಫಾರ್ವರ್ಡ್‌ ಗಳು (NDFಗಳು) ಹೂಡಿಕೆದಾರರಿಗೆ ರೂಪಾಯಿಯ ಚಲನೆಯ ಬಗ್ಗೆ ಊಹಿಸಲು ಅನುವು ಮಾಡಿಕೊಡುತ್ತವೆ. ಈ ಒಪ್ಪಂದಗಳನ್ನು ನಗದು ರೂಪದಲ್ಲಿ ಸಾಮಾನ್ಯವಾಗಿ ಅಮೆರಿಕನ್ ಡಾಲರ್‌ ಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಅಂದರೆ, ಸ್ಥಳೀಯ ಕರೆನ್ಸಿಯ ಯಾವುದೇ ಭೌತಿಕ ವಿನಿಮಯವು ವಾಸ್ತವವಾಗಿ ಸಂಭವಿಸುವುದಿಲ್ಲ. NDD ಎನ್ನುವುದು ನಗದು-ಇತ್ಯರ್ಥಪಡಿಸಿದ ಉತ್ಪನ್ನವಾಗಿದ್ದು, ಇದರಲ್ಲಿ ಪಕ್ಷಗಳು ರೂಪಾಯಿಗೆ ಭವಿಷ್ಯದ ವಿನಿಮಯ ದರವನ್ನು ಊಹಿಸುತ್ತವೆ. ವ್ಯತ್ಯಾಸವನ್ನು ಸಾಮಾನ್ಯವಾಗಿ ಅಮೆರಿಕನ್ ಡಾಲರ್‌ ಗಳಲ್ಲಿ ಪರಿಹರಿಸಲಾಗುತ್ತದೆ. ಭಾರತವು ವಿದೇಶಿ ಹೂಡಿಕೆದಾರರಿಂದ ರೂಪಾಯಿಯ ಭೌತಿಕ ವ್ಯಾಪಾರವನ್ನು ನಿರ್ಬಂಧಿಸುವ ಬಂಡವಾಳ ನಿಯಂತ್ರಣಗಳನ್ನು ನಿರ್ವಹಿಸುತ್ತಿರುವುದರಿಂದ, NDD ಮಾರುಕಟ್ಟೆ ಪರ್ಯಾಯವಾಗಿ ಹೊರಹೊಮ್ಮಿತು. ಆದಾಗ್ಯೂ, ಈ ಸಾಧನಗಳು ಬೆಲೆ ಆವಿಷ್ಕಾರವನ್ನು ತಿರುಚುವುದಕ್ಕಾಗಿ ಆಗಾಗ್ಗೆ ಟೀಕಿಸಲ್ಪಡುತ್ತವೆ. ವಿದೇಶಿ ಭಾವನೆಯು ದೇಶೀಯ ಮೂಲಭೂತ ಅಂಶಗಳಿಂದ ತೀವ್ರವಾಗಿ ಭಿನ್ನವಾಗಬಹುದು, ಇದು ಮಾರುಕಟ್ಟೆಯನ್ನು ತಿರುವುಗೊಳಿಸುವ ಸಾಧ್ಯತೆಯನ್ನುಂಟುಮಾಡುತ್ತದೆ. ►NDD ಮಾರುಕಟ್ಟೆಯ ದುರುಪಯೋಗ NDD ಮಾರುಕಟ್ಟೆಯು ಆಗಾಗ್ಗೆ ದುರುಪಯೋಗಕ್ಕೆ ಒಳಗಾಗಿದೆ. ಈ ಒಪ್ಪಂದಗಳನ್ನು ತಮ್ಮ ಉದ್ದೇಶಿತ ಉದ್ದೇಶಕ್ಕಾಗಿ ಬಳಸುವ ಬದಲು, ಕೆಲವು ಭಾಗವಹಿಸುವವರು ಅಲ್ಪಾವಧಿಯ ಏರಿಳಿತಗಳಿಂದ ಲಾಭ ಪಡೆಯಲು ಸ್ಥಾನಗಳನ್ನು ರದ್ದುಗೊಳಿಸಿ ಮರುಪ್ರವೇಶಿಸುತ್ತಾರೆ, ಪರಿಣಾಮಕಾರಿಯಾಗಿ ಅವುಗಳನ್ನು ಊಹಾತ್ಮಕ ಸಾಧನಗಳಾಗಿ ಪರಿವರ್ತಿಸುತ್ತಾರೆ ಎಂದು ತಿಳಿದುಬಂದಿದೆ. ಭೌಗೋಳಿಕ ಮತ್ತು ವ್ಯಾಪಾರ ಉದ್ವಿಗ್ನತೆಗಳ ಲಾಭವನ್ನು ಪಡೆದುಕೊಂಡು ಕಡಲಾಚೆಯ ವ್ಯಾಪಾರಿಗಳು ಕೆಲವೊಮ್ಮೆ ರೂಪಾಯಿ ಕುಸಿಯುತ್ತದೆ ಎಂದು ಪಣತೊಟ್ಟು ಬೃಹತ್ ಸ್ಥಾನಗಳನ್ನು ತೆಗೆದುಕೊಳ್ಳುತ್ತಾರೆ, ಇದು ಭಾರತದ ಕಡಲಾಚೆಯ ಮಾರುಕಟ್ಟೆಯಲ್ಲಿ ಪರಿಣಾಮ ಬೀರುತ್ತದೆ. ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗ ಇದು ಸಂಭವಿಸುತ್ತಿತ್ತು. ಈ ಅಭ್ಯಾಸವನ್ನು ನಿರ್ಬಂಧಿಸುವ ಮೂಲಕ, RBI ನಿಯಂತ್ರಕ ಮಧ್ಯಸ್ಥಿಕೆಗೆ ಅನುವು ಮಾಡಿಕೊಡುವ ಲೋಪದೋಷವನ್ನು ಮುಚ್ಚುತ್ತಿದೆ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಸಂಬಂಧಿತ ಪಕ್ಷಗಳೊಂದಿಗಿನ ವಹಿವಾಟಿನ ಮೇಲಿನ RBIನ ನಿರ್ಬಂಧ. ಈ ಕ್ರಮವು ನಿಜವಾದ ಅಪಾಯದ ಮಾನ್ಯತೆಯನ್ನು ಮರೆಮಾಚುವ ಅಥವಾ ನ್ಯಾಯವ್ಯಾಪ್ತಿಯಲ್ಲಿ ಲಾಭ ಮತ್ತು ಅಪಾಯಗಳನ್ನು ಬದಲಾಯಿಸಲು ಬಳಸಬಹುದಾದ ಒಳಗುಂಪು ವ್ಯವಹಾರಗಳ ಮೇಲಿನ ಕಳವಳಗಳನ್ನು ಪರಿಹರಿಸುತ್ತದೆ. ಜಾಗತಿಕ ಲೆಕ್ಕಪತ್ರ ಮಾನದಂಡಗಳೊಂದಿಗೆ ವ್ಯಾಖ್ಯಾನಗಳನ್ನು ಜೋಡಿಸುವ ಮೂಲಕ, RBI ಭಾರತೀಯ ವಿದೇಶೀ ವಿನಿಮಯ ಅಭ್ಯಾಸಗಳನ್ನು ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳಿಗೆ ಅನುಗುಣವಾಗಿ ತರುವ ಉದ್ದೇಶವನ್ನು ಸೂಚಿಸುತ್ತಿದೆ, ಇದರಿಂದಾಗಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಪಾವಧಿಯಲ್ಲಿ, ಊಹಾತ್ಮಕ ವಹಿವಾಟುಗಳು ಕಡಿಮೆಯಾಗುತ್ತಿದ್ದಂತೆ ರೂಪಾಯಿ ಕಡಿಮೆಯಾದ ಚಂಚಲತೆಯನ್ನು ಕಾಣುವ ಸಾಧ್ಯತೆಯಿದೆ. ►ಹೊಸ ನಿಯಮಗಳು ಏನು ಹೇಳುತ್ತವೆ? ಏಪ್ರಿಲ್ 1, 2026 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಡೀಲರ್‌ ಗಳು ನಿವಾಸಿ ಮತ್ತು ಅನಿವಾಸಿ ಘಟಕಗಳ ನಡುವೆ ಭಾರತೀಯ ರೂಪಾಯಿ ಒಳಗೊಂಡ ನಾನ್-ಡೆಲಿವರೇಬಲ್ ಡೆರಿವೇಟಿವ್ (NDD) ಒಪ್ಪಂದಗಳನ್ನು ಸುಗಮಗೊಳಿಸುವುದನ್ನು ಅಧಿಕೃತವಾಗಿ ನಿಷೇಧಿಸಿದೆ. ಕರೆನ್ಸಿಯ ಭೌತಿಕ ವಿನಿಮಯವನ್ನು ಒಳಗೊಂಡಿರದ ಈ ನಗದು-ಇತ್ಯರ್ಥಪಡಿಸಿದ ಸಾಧನಗಳು ಬಹಳ ಹಿಂದಿನಿಂದಲೂ ಕಡಲಾಚೆಯ ಮಾರುಕಟ್ಟೆಗಳ ಪ್ರಧಾನ ಅಂಶವಾಗಿದ್ದರೂ, ಈಗ ಹೊಸ ನಿರ್ದೇಶನದ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಈಗ, RBI ಅಧಿಕೃತ ಡೀಲರ್‌ ಗಳು ಫಾರೆಕ್ಸ್ ಡೆರಿವೇಟಿವ್ ಒಪ್ಪಂದಗಳನ್ನು ನೀಡುವುದನ್ನು ಮುಂದುವರಿಸಲು ಅನುಮತಿಸಿದೆ. ಇವು ಕರೆನ್ಸಿಗಳ ವಿನಿಮಯವನ್ನು ಒಳಗೊಂಡಿರುತ್ತವೆ ಮತ್ತು ಕರೆನ್ಸಿ ಅಪಾಯವನ್ನು ನಿರ್ವಹಿಸಲು ಬಳಸಲಾಗುತ್ತದೆ. ಅಂತಹ ಒಪ್ಪಂದಗಳಿಗೆ ಪ್ರವೇಶಿಸುವ ಬಳಕೆದಾರರು NDDಗಳಲ್ಲಿ ಅವುಗಳನ್ನು ರದ್ದು ಮಾಡಬಾರದು. ಅಧಿಕೃತ ಡೀಲರ್‌ ಗಳು ಅನುಸರಣೆಯನ್ನು ಜಾರಿಗೊಳಿಸಲು ದಾಖಲೆಗಳು ಮತ್ತು ಮಾಹಿತಿಯನ್ನು ಕೇಳುವ ಆಯ್ಕೆಯನ್ನು ಹೊಂದಿವೆ. ಮಾರ್ಗಸೂಚಿಗಳು ತಕ್ಷಣ ಜಾರಿಗೆ ಬಂದಿವೆ ಮತ್ತು ಮುಂದಿನ ಪರಿಶೀಲನೆಯವರೆಗೆ ಜಾರಿಯಲ್ಲಿರುತ್ತವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999 ರ ವಿಭಾಗ 10(4), 11(1) ಮತ್ತು 11(2) ಅಡಿಯಲ್ಲಿ RBI ಈ ಸೂಚನೆಗಳನ್ನು ನೀಡಿದೆ. ►ರದ್ದಾದ ಒಪ್ಪಂದಗಳನ್ನು ಮರುಬುಕ್ ಮಾಡುವ ಮಿತಿಗಳು ಹೊಸ ನಿಯಮಗಳನ್ನು ಹೊರಡಿಸಿದ ನಂತರ ಫಾರೆಕ್ಸ್ ಉತ್ಪನ್ನ ಒಪ್ಪಂದಗಳು ರದ್ದಾದರೆ, ಅವುಗಳನ್ನು ಭಾರತದ ರೂಪಾಯಿಯಲ್ಲಿ ಮರುಬುಕ್ ಮಾಡುವುದನ್ನು ಸುತ್ತೋಲೆ ನಿಷೇಧಿಸುತ್ತದೆ. ಇದು ಡೆಲಿವರೇಬಲ್ ಮತ್ತು ನಾನ್-ಡೆಲಿವರೇಬಲ್ ಒಪ್ಪಂದಗಳಿಗೆ ಅನ್ವಯಿಸುತ್ತದೆ. ಮರುಬುಕ್ ಮಾಡುವುದರಿಂದ ಬಳಕೆದಾರರು ಅಸ್ತಿತ್ವದಲ್ಲಿರುವ ಒಪ್ಪಂದವನ್ನು ರದ್ದುಗೊಳಿಸಲು ಮತ್ತು ಹೊಸದನ್ನು ನಮೂದಿಸಲು ಅನುಮತಿಸುತ್ತದೆ. ಈ ಮಿತಿಯು ಭವಿಷ್ಯದಲ್ಲಿ ರೂಪಾಯಿ-ಸಂಬಂಧಿತ ಉತ್ಪನ್ನಗಳಿಗೆ ಆಯ್ಕೆಯನ್ನು ತೆಗೆದುಹಾಕುತ್ತದೆ. ಅಧಿಕೃತ ಡೀಲರ್‌ ಗಳು ಅನುಸರಣೆಯನ್ನು ದೃಢೀಕರಿಸಬೇಕು ಮತ್ತು ಪೋಷಕ ದಾಖಲೆಗಳನ್ನು ಒದಗಿಸಲು ಕೇಳಬಹುದು. ►ಸಂಬಂಧಿತ ಪಕ್ಷಗಳೊಂದಿಗೆ ಯಾವುದೇ ವ್ಯವಹಾರಗಳಿಲ್ಲ ಅಧಿಕೃತ ಡೀಲರ್‌ ಗಳು ರೂಪಾಯಿ ಬಳಸಿಕೊಂಡು ಸಂಬಂಧಿತ ಪಕ್ಷಗಳೊಂದಿಗೆ ಫಾರೆಕ್ಸ್ ಉತ್ಪನ್ನ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ. ಸಂಬಂಧಿತ ಪಕ್ಷಗಳನ್ನು ವ್ಯಾಖ್ಯಾನಿಸುವ ಲೆಕ್ಕಪತ್ರ ಮಾನದಂಡಗಳು IAS 24 ಅಥವಾ Ind AS 24 ಅನ್ನು ಒಳಗೊಂಡಿವೆ.

ವಾರ್ತಾ ಭಾರತಿ 3 Apr 2026 8:26 pm

ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಪಡೆಯಲಿದೆ ಭಾರತ : Qdenga ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಕ್ಯೂಡೆಂಗಾ (Qdenga) ಎಂಬ ಡೆಂಗ್ಯೂ ಲಸಿಕೆಯನ್ನು 2026 ರಲ್ಲಿ ಬಿಡುಗಡೆ ಮಾಡಲಾಗುವುದು. ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ರೋಗದ ವೈವಿಧ್ಯಮಯ ತಳಿಗಳ ನಡುವೆ ಭಾರತೀಯ ಜನಸಂಖ್ಯೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲಸಿಕೆಯನ್ನು ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗಿದ್ದು, ಭಾರತದ ಕೇಂದ್ರ ಔಷಧ ಪ್ರಾಧಿಕಾರ (CDSCO)ದಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಟಕೆಡಾ ಫಾರ್ಮಾ ಎಂಬ ಜಪಾನಿನ ಔಷಧೀಯ ಕಂಪನಿಯು ‘ಮೇಕ್-ಇನ್-ಇಂಡಿಯಾ’ ಉಪಕ್ರಮಕ್ಕೆ ಅನುಗುಣವಾಗಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ (Bio E) ಜೊತೆ ಉತ್ಪಾದನಾ ಪಾಲುದಾರಿಕೆಯ ಮೂಲಕ TAK-003 ಅನ್ನು ಭಾರತದಲ್ಲಿ ಲಭ್ಯವಾಗುವಂತೆ ಮಾಡಲು ಸಿದ್ಧವಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಭಾರತದಲ್ಲಿ ಪ್ರತೀ ಹವಾಮಾನದಲ್ಲಿ ಇದರ ಹರಡುವಿಕೆ ಹೆಚ್ಚುತ್ತಿದೆ. ಬಯೋ ಇನ್ಫರ್ಮೇಷನ್ ಜರ್ನಲ್‌ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 2014 ಮತ್ತು 2023 ರ ನಡುವೆ ಡೆಂಗ್ಯೂ ಪ್ರಕರಣಗಳಲ್ಲಿ 39.4% ಹೆಚ್ಚಳ ದಾಖಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ರೋಗಕ್ಕೆ ದಿನದ 24 ಗಂಟೆ ವೈದ್ಯಕೀಯ ಆರೈಕೆ ಅಗತ್ಯ. ಅದೇ ವೇಳೆ, ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮಾತ್ರ ರೋಗದಿಂದ ಸಂಪೂರ್ಣ ಗುಣಮುಖರಾಗಬಹುದು. ►ಕ್ಯೂಡೆಂಗಾ ಲಸಿಕೆ ಭಾರತದಲ್ಲಿ ಡೆಂಗ್ಯೂ ಹೈಪರ್‌ಎಂಡೆಮಿಕ್ ಆಗಿ ಉಳಿದಿದೆ. ನಾಲ್ಕು ವೈರಸ್ ಸಿರೊಟೈಪ್‌ಗಳು ಚಲಿಸುತ್ತಿದ್ದು, ಇದರಿಂದ ಪುನರಾವರ್ತಿತ ರೋಗ ಉಲ್ಬಣ ಉಂಟಾಗುತ್ತವೆ, ಇದು ವಿಶೇಷವಾಗಿ ಮಳೆಗಾಲದಲ್ಲಿ ಸಂಭವಿಸುತ್ತದೆ. ಅದಕ್ಕಾಗಿಯೇ ಡೆಂಗ್ಯೂ ಹೆಚ್ಚುತ್ತಿರುವ ರೋಗದ ಹೊರೆಯನ್ನು ನಿಭಾಯಿಸಲು ಕ್ಯೂಡೆಂಗಾ ಲಸಿಕೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಎನ್‌ಡಿಟಿವಿ ಜೊತೆ ಮಾತನಾಡಿದ ಅಜಿಲಸ್ ಡಯಾಗ್ನೋಸ್ಟಿಕ್ಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಜಿಎಂ ಮತ್ತು ಆಣ್ವಿಕ ಸಾಂಕ್ರಾಮಿಕ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ ಖಡಪ್ಕರ್ ಹೇಳಿದ್ದಾರೆ. ಯುರೋಪ್, ಯುನೈಟೆಡ್ ಕಿಂಗ್‌ ಡಮ್, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಸೇರಿದಂತೆ 40 ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಬಳಸಲು ಈಗಾಗಲೇ ಅನುಮೋದಿಸಲಾಗಿದೆ. ಭಾರತವು ದೊಡ್ಡ ಮತ್ತು ವೈವಿಧ್ಯಮಯ ಜನಸಂಖ್ಯಾಶಾಸ್ತ್ರವನ್ನು ಹೊಂದಿರುವುದರಿಂದ ಹಾಗೂ ಹವಾಮಾನ ಬದಲಾವಣೆಯ ಸವಾಲುಗಳು ಡೆಂಗ್ಯೂ ಪ್ರಕರಣಗಳ ಮೇಲೆ ಪರಿಣಾಮ ಬೀರುವ ಸೊಳ್ಳೆ ತಳಿಗಳಲ್ಲಿ ರೂಪಾಂತರಗಳನ್ನು ಉಂಟುಮಾಡುತ್ತಿರುವುದರಿಂದ, ಲಸಿಕೆಯು ಈ ಸಮಯದ ಅಗತ್ಯವಾಗಿದೆ. ಕ್ಯೂಡೆಂಗಾವು ಜಾಗತಿಕವಾಗಿ 60,000 ಕ್ಕೂ ಹೆಚ್ಚು ಭಾಗವಹಿಸುವವರನ್ನು ಹೊಂದಿರುವ ಅತ್ಯಂತ ಸಮಗ್ರವಾಗಿ ಅಧ್ಯಯನ ಮಾಡಲಾದ ಡೆಂಗ್ಯೂ ಲಸಿಕೆಯಾಗಿದೆ. ಇದನ್ನು ಈಗಾಗಲೇ 40 ಕ್ಕೂ ಹೆಚ್ಚು ದೇಶಗಳಲ್ಲಿ ಅನುಮೋದಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಪೂರ್ವ ಅರ್ಹತೆಯನ್ನು ಪಡೆದಿದೆ. ಇದು ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದಲ್ಲಿ ಜಾಗತಿಕ ವಿಶ್ವಾಸವನ್ನು ಸೂಚಿಸುತ್ತದೆ. ಇದನ್ನು 2023 ರಲ್ಲಿ ಪ್ರಾರಂಭಿಸಲಾಗಿದ್ದು, 10 ಮಿಲಿಯನ್ ಡೋಸ್‌ಗಳು ಮಾರಾಟವಾಗಿವೆ. ಹೈದರಾಬಾದ್‌ ನ ಯಶೋದಾ ಆಸ್ಪತ್ರೆಗಳ ಸಲಹಾ ವೈದ್ಯ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ. ಹರಿ ಕಿಶನ್ ಬೂರುಗು ಅವರು, “ಡೆಂಗ್‌ವಾಕ್ಸಿಯಾದಂತಹ ಹಿಂದಿನ ಲಸಿಕೆಗಳು ಮಿತಿಗಳನ್ನು ಹೊಂದಿದ್ದವು. ಮೊದಲು ಡೆಂಗ್ಯೂ ಸೋಂಕು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಶಿಫಾರಸು ಮಾಡಲ್ಪಟ್ಟವು. ಕ್ಯೂಡೆಂಗಾವು ಡೆಂಗ್ಯೂ ವೈರಸ್‌ನ ನಾಲ್ಕು ಸೆರೋಟೈಪ್‌ಗಳಾದ DEN1, DEN2, DEN3 ಮತ್ತು DEN4 ವಿರುದ್ಧ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾದ ಲೈವ್ ಅಟೆನ್ಯೂಯೇಟೆಡ್ ಟೆಟ್ರಾವೇಲೆಂಟ್ ಲಸಿಕೆಯಾಗಿದೆ” ಎಂದಿದ್ದಾರೆ. ►ಕ್ಯೂಡೆಂಗಾ ಹೇಗೆ ಕೆಲಸ ಮಾಡುತ್ತದೆ? ಕ್ಯೂಡೆಂಗಾ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗುರುಗ್ರಾಮ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ ನಲ್ಲಿ ಸಾಂಕ್ರಾಮಿಕ ರೋಗಗಳ ಹಿರಿಯ ಸಲಹೆಗಾರರಾಗಿರುವ ಡಾ. ನೇಹಾ ರಸ್ತೋಗಿ ವಿವರಿಸಿದ್ದಾರೆ. ಈ ಲಸಿಕೆಯನ್ನು ಈ ಹಿಂದೆ ಡೆಂಗ್ಯೂ ಸೋಂಕಿಗೆ ಒಳಗಾದ ಜನರಲ್ಲಿಯೂ ಸಹ ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಎರಡು ಡೋಸ್‌ ಗಳಲ್ಲಿ ನೀಡಲಾಗುತ್ತದೆ, ಕೆಲವು ತಿಂಗಳ ಅಂತರದಲ್ಲಿ. ಹಿಂದೆ ಡೆಂಗ್ಯೂ ಸೋಂಕು ಬಂದಿದ್ದರೂ ವ್ಯಕ್ತಿಗಳಿಗೆ ನೀಡಬಹುದಾಗಿದೆ. ಇದು ಹಿಂದಿನ ಲಸಿಕೆಗಳಿಗಿಂತ ಪ್ರಮುಖ ಪ್ರಯೋಜನವಾಗಿದೆ. ಲಸಿಕೆ ಭರವಸೆ ನೀಡುತ್ತಿದ್ದರೂ, ಇದು ಸ್ವತಂತ್ರ ಪರಿಹಾರವಲ್ಲ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ಸೊಳ್ಳೆ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು, ಸೊಳ್ಳೆ ನಿವಾರಕಗಳನ್ನು ಬಳಸುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತಹ ಕ್ರಮಗಳು ಇನ್ನೂ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಲಸಿಕೆಯನ್ನು ಹೆಚ್ಚುವರಿ ರಕ್ಷಣೆಯ ಪದರವಾಗಿ ನೋಡಬೇಕು ಎಂದಿದ್ದಾರೆ ಅವರು. ಇದನ್ನು ಸಾಮಾನ್ಯವಾಗಿ ಎರಡು ಡೋಸ್‌ಗಳಲ್ಲಿ ಚುಚ್ಚುಮದ್ದು ಮೂಲಕ ನೀಡಲಾಗುತ್ತದೆ. ಸಾಮಾನ್ಯವಾಗಿ ಮೂರು ತಿಂಗಳ ಅಂತರದಲ್ಲಿ ಇದನ್ನು ನೀಡಲಾಗುತ್ತಿದ್ದು, ಇದು ಸೋಂಕಿನ ಅಪಾಯ ಮತ್ತು ಆಸ್ಪತ್ರೆಗೆ ದಾಖಲಾಗುವಂತಹ ತೀವ್ರ ತೊಡಕುಗಳನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತೀವ್ರವಾದ ಡೆಂಗ್ಯೂಗೆ ಇದು ಪರಿಣಾಮಕಾರಿ ಎಂದು ಕ್ಲಿನಿಕಲ್ ಡೇಟಾ ಹೇಳಿದೆ. ಇದು ರೋಗ ಪ್ರಕರಣಗಳ ಸಂಖ್ಯೆ ಹೆಚ್ಚದಂತೆ ಕಾಪಾಡಲು ನಿರ್ಣಾಯಕವಾಗಿದೆ ಎಂದಿದ್ದಾರೆ ಡಾ. ರಶ್ಮಿ ಖಡಪ್ಕರ್. ►ಭಾರತದಲ್ಲಿ ಲಸಿಕೆ ಆರೋಗ್ಯ ವೃತ್ತಿಪರರು ಸಾರ್ವಜನಿಕ ಜಾಗೃತಿಯ ಮಹತ್ವವನ್ನು ಎತ್ತಿ ತೋರಿಸುತ್ತಾರೆ. ಒಮ್ಮೆ ಪರಿಚಯಿಸಿದ ನಂತರ, ಮಾರ್ಗಸೂಚಿಗಳು ಮೊದಲು ಲಸಿಕೆಯನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ದಿಷ್ಟಪಡಿಸುತ್ತವೆ. ಬಹುಶಃ ದುರ್ಬಲ ಜನಸಂಖ್ಯೆ ಮತ್ತು ಆಗಾಗ್ಗೆ ರೋಗ ಹರಡುವ ಪ್ರದೇಶಗಳಿಗೆ ಆದ್ಯತೆ ನೀಡಲಾಗುವುದು. ಯಾವುದೇ ಲಸಿಕೆಯಂತೆ, ಜ್ವರ, ತಲೆನೋವು ಅಥವಾ ಇಂಜೆಕ್ಷನ್ ಸ್ಥಳದಲ್ಲಿ ನೋವು ಮುಂತಾದ ಸಣ್ಣ ಅಡ್ಡಪರಿಣಾಮಗಳು ಸಂಭವಿಸಬಹುದು, ಆದರೆ ಗಂಭೀರ ಪ್ರತಿಕೂಲ ಪ್ರತಿಕ್ರಿಯೆಗಳು ಅಪರೂಪವೆಂದು ಪರಿಗಣಿಸಲಾಗುತ್ತದೆ. ಒಟ್ಟಾರೆಯಾಗಿ, ಭಾರತದಲ್ಲಿ ಕ್ಯೂಡೆಂಗಾ ಆಗಮನವು ಸಾರ್ವಜನಿಕ ಆರೋಗ್ಯದಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಬಹುದು. ಅಸ್ತಿತ್ವದಲ್ಲಿರುವ ತಡೆಗಟ್ಟುವ ತಂತ್ರಗಳ ಜೊತೆಗೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದರೆ, ಅದು ಡೆಂಗ್ಯೂ ಹೊರೆಯನ್ನು ಕಡಿಮೆ ಮಾಡುವ ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಾ. ನೇಹಾ ರಸ್ತೋಗಿ ಹೇಳಿದ್ದಾರೆ. ►ಯಾರು ಅದನ್ನು ಪಡೆಯಬೇಕು? *ಮಕ್ಕಳು ಸೇರಿದಂತೆ ಹೆಚ್ಚಿನ ಅಪಾಯದ ಗುಂಪುಗಳಲ್ಲಿರುವ ಜನರು, ಸಮಯಕ್ಕೆ ಸರಿಯಾಗಿ ಸಹಾಯ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲಕ್ಷಣಗಳು ಕಾಣಿಸಿಕೊಳ್ಳಲು ಒಂದೆರಡು ದಿನಗಳು ಬೇಕಾಗುತ್ತದೆ. *ವಯಸ್ಸಾದವರು ಅಪಾಯದಲ್ಲಿದ್ದಾರೆ. ಏಕೆಂದರೆ ಡೆಂಗ್ಯೂ ಸೋಂಕು ತಗುಲಿದರೆ ಅದು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. *ಜನರು ಪ್ರಯಾಣ ಮಾಡುವಾಗ ಬೇರೆ ಜಾಗಕ್ಕೆ ಹೋಗಿ ಸೋಂಕು ತಗುಲದಂತೆ ತಪ್ಪಿಸಿಕೊಳ್ಳಲು ಪ್ರಯಾಣಿಕರಿಗೆ ಇದು ಅಗತ್ಯವಾಗಿರುತ್ತದೆ. *ತೆರೆದ ಸ್ಥಳಗಳಲ್ಲಿ ಕೆಲಸ ಮಾಡುವ ಜನರು ನಗರ ಜನಸಂಖ್ಯೆಯೊಂದಿಗೆ ಆದ್ಯತೆಯ ಮೇಲೆ ಇದನ್ನು ಪಡೆಯಬೇಕು. ಏಕೆಂದರೆ ಡೆಂಗ್ಯೂ ಸೊಳ್ಳೆ ಯಾವುದೇ ಸಮಯದಲ್ಲಿ ಕಚ್ಚಬಹುದು. *ಲಸಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪ್ರಕಟಿಸುವ ನಿರೀಕ್ಷೆಯಿದೆ. ►ಲಸಿಕೆಯ ಸುರಕ್ಷತೆ ಮತ್ತು ಅಡ್ಡಪರಿಣಾಮಗಳು ಪ್ರತಿಯೊಂದು ಲಸಿಕೆಯು ಸಾಂಕ್ರಾಮಿಕ ತಳಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಆದ್ದರಿಂದ, ಹೆಚ್ಚಿನ ಲಸಿಕೆಗಳಂತೆ ಜ್ವರ, ಆಯಾಸ ಮತ್ತು ಇಂಜೆಕ್ಷನ್ ಸ್ಥಳದಲ್ಲಿ ನೋವು ಸೇರಿದಂತೆ ಸಾಮಾನ್ಯ ಅಡ್ಡಪರಿಣಾಮಗಳ ಬಗ್ಗೆ ಜನರು ತಿಳಿದಿರಬೇಕು. ►ಲಸಿಕೆ ಲಭ್ಯತೆ ಸಾಮಾನ್ಯವಾಗಿ ಸುರಕ್ಷಿತ ಉಡಾವಣೆ ಮತ್ತು ದೊಡ್ಡ ಜನಸಂಖ್ಯೆಗೆ ಪ್ರಕ್ರಿಯೆಗಳನ್ನು ನಿರ್ವಹಿಸಲು ತೆಗೆದುಕೊಳ್ಳುವ ಸರಾಸರಿ ಸಮಯವನ್ನು ಆಧರಿಸಿ ನಿರ್ಧರಿಸುವ ಸ್ಥಾಪಿತ ಕಾಲಮಿತಿ ಇದೆ. ನಿಖರವಾದ ಅನುಮೋದನೆ ಮತ್ತು ವಿತರಣಾ ಯೋಜನೆಗಳ ವಿಷಯಕ್ಕೆ ಬಂದಾಗ, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪ್ರಕಟಿಸುವ ನಿರೀಕ್ಷೆಯಿದೆ. ಲಸಿಕೆ ಬಿಡುಗಡೆಯಲ್ಲಿ ಪ್ರತ್ಯೇಕ ರಾಜ್ಯ ಆರೋಗ್ಯ ಇಲಾಖೆಗಳು ಮತ್ತು ಲಸಿಕೆ ಕೇಂದ್ರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ, ಭಾರತದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಪಡೆದ ನಂತರ ಅವು ಕಾರ್ಯನಿರ್ವಹಿಸುವ ವೇಗವು ಮುಖ್ಯವಾಗಿರುತ್ತದೆ. ►ಡೆಂಗ್ಯೂ ಲಸಿಕೆಯ ಸಾರ್ವಜನಿಕ ಆರೋಗ್ಯ ಪರಿಣಾಮಗಳು ಪ್ರಸ್ತುತ, ಸೊಳ್ಳೆ ಕಡಿತವನ್ನು ತಪ್ಪಿಸಲು ಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು, ನಗರ ವಾಸಸ್ಥಳಗಳಲ್ಲಿ ಸೊಳ್ಳೆ-ಕೊಲ್ಲುವ ರಾಸಾಯನಿಕಗಳನ್ನು ನಿಯಮಿತವಾಗಿ ಸಿಂಪಡಿಸುವ ಮೂಲಕ ಡೆಂಗ್ಯೂ ಅನ್ನು ನಿಯಂತ್ರಿಸಲಾಗುತ್ತದೆ. ಆದರೆ ಲಸಿಕೆ ಬಿಡುಗಡೆಯಾದ ನಂತರ ಡೆಂಗ್ಯೂ ನಿಯಂತ್ರಣ ವಿಧಾನದಲ್ಲಿ ಬದಲಾವಣೆ ಕಂಡುಬರಬಹುದು. ಲಸಿಕೆಯನ್ನು ಸುರಕ್ಷಿತವಾಗಿ ನೀಡಿದ ನಂತರ, ಗರಿಷ್ಠ ಪರಿಣಾಮಕಾರಿತ್ವಕ್ಕಾಗಿ ಅದನ್ನು ಅಸ್ತಿತ್ವದಲ್ಲಿರುವ ಸೊಳ್ಳೆಯಿಂದ ಹರಡುವ ರೋಗ ಕಾರ್ಯಕ್ರಮಗಳೊಂದಿಗೆ ಸಂಯೋಜಿಸಬೇಕಾಗಿದೆ. ಕ್ಯೂಡೆಂಗಾ ಭರವಸೆ ನೀಡುತ್ತದೆ, ಆದರೆ ತಡೆಗಟ್ಟುವಿಕೆ ಇನ್ನೂ ಸಮಗ್ರ ತಂತ್ರಗಳನ್ನು ಅವಲಂಬಿಸಿದೆ. ಏಕೆಂದರೆ ಅಪಾಯವನ್ನು ತೊಡೆದುಹಾಕಲು ಡೆಂಗ್ಯೂ ಉಂಟುಮಾಡುವ ಸೊಳ್ಳೆಯನ್ನು ಅದರ ಮೂಲದಲ್ಲೇ ನಿಗ್ರಹಿಸಬೇಕಾಗುತ್ತದೆ. ಪ್ರಸ್ತುತ, ಲಸಿಕೆ ಬಿಡುಗಡೆಯ ಕುರಿತು ಆರೋಗ್ಯ ಅಧಿಕಾರಿಗಳಿಂದ ಅಪ್ಡೇಟ್‌ ಗಳಿಗಾಗಿ ಜನರು ಕಾಯಬೇಕಾಗಿದೆ.

ವಾರ್ತಾ ಭಾರತಿ 3 Apr 2026 8:22 pm

Raichur | ಎ.5ರಂದು ʼಬೊಹಬ್ಬತಿನ ಮಹಲಿಗೂ ಬೆಂಕಿʼ ಕೃತಿ ಬಿಡುಗಡೆ

ರಾಯಚೂರು: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುದೀಕ್ಷಾ ಪ್ರಕಾಶನದ ವತಿಯಿಂದ ‘ಮೊಹಬ್ಬತಿನ ಮಹಲಿಗೂ ಬೆಂಕಿ’ ಎಂಬ ಕೃತಿ ಬಿಡುಗಡೆ ಸಮಾರಂಭ ಹಾಗೂ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿ ಶಿಕ್ಷಕಿಯರಿಗೆ ವಿದ್ಯಾಧಾತೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎ.5ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶನದ ಸಂಸ್ಥಾಪಕ ಹಾಗೂ ಕೃತಿಕಾರ ಮಹಾಂತೇಶ ಬಿರಾದಾರ ಹೇಳಿದರು. ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮೊಹಬ್ಬತಿನ ಮಹಲಿಗೂ ಬೆಂಕಿ ಕೃತಿಯು ನನ್ನ ಚೊಚ್ಚಲ ಕೃತಿಯಾಗಿದ್ದು, ಕೃತಿ ಲೋಕಾರ್ಪಣೆ ಹಾಗೂ ವಿದ್ಯಾಧಾತೆ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರವೂ ಇದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ವೆಂಕಟೇಶ ಉದ್ಘಾಟಿಸಲಿದ್ದಾರೆ. ಪುಸ್ತಕ ಲೋಕಾರ್ಪಣೆಯನ್ನು ಇಲಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಾಗೂ ಕವಿ ಆರೀಫ್ ರಾಜಾ ನೆರವೇರಿಸಲಿದ್ದು, ಕಥೆಗಾರ ಶರಣಬಸವ ಕೆ.ಗುಡದಿನ್ನಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ವಿಜಯರಾಜೇಂದ್ರ ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಜಿಲ್ಲೆಯ ಸಾಹಿತಿಗಳು, ಕವಿಗಳು ಕಾರ್ಯಕ್ರಮದ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ವಿದ್ಯಾಧಾತೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಗರ ಸಾಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಲಿದ್ದು, ಪ್ರಶಸ್ತಿಯನ್ನು ಎಂಎಲ್‍ಸಿಗಲಾದ ಎ.ವಸಂತಕುಮಾರ, ಶರಣಗೌಡ ಬಯ್ಯಾಪೂರ, ಶಾಸಕಿ ಜಿ.ಕರೆಮ್ಮ ನಾಯಕ ಸೇರಿ ಅಧಿಕಾರಿಗಳು ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಸುಖದೇವ, ಶಿಕ್ಷಕಿಯರಾದ ಸಬಿಹಾ ನಿಖತ್ ಹಾಗೂ ಮಹಾಲಕ್ಷ್ಮೀ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತದೆ. ಉಳಿದ ಜಿಲ್ಲೆ ಮತ್ತು ತಾಲೂಕಿನ ಶಿಕ್ಷಕಿಯರಿಗೆ ವಿದ್ಯಾಧಾತೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರತಿಭಾ ಗೋನಾಳ, ಪ್ರಮುಖರಾದ ನಂದೀಶ, ಸಂತೋಷ ನಂದಿನಿ, ಧನಲಕ್ಷ್ಮೀ, ರಾಘವೇಂದ್ರ, ರಾಜಶೇಖರ ಸೇರಿ ಅನೇಕರಿದ್ದರು

ವಾರ್ತಾ ಭಾರತಿ 3 Apr 2026 8:21 pm

ಡಾ. ಮೋಹನ ಆಳ್ವರಿಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್

ಮೂಡುಬಿದಿರೆ: ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಎ. 4ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿ ರುವ 5ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. ಎಂ. ಮೋಹನ್ ಆಳ್ವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾಗಿದ್ದು, ಕರಾವಳಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸಿದ ಗಣ್ಯರಲ್ಲಿ ಒಬ್ಬರಾಗಿದ್ದಾರೆ. ಮೂಡುಬಿದಿರೆ ಕೇಂದ್ರವಾಗಿ ಕಾರ್ಯ ನಿರ್ವಹಿಸುವ ಆಳ್ವಾಸ್ ಸಂಸ್ಥೆಗಳ ಮೂಲಕ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ನೂರಾರು ಕೋರ್ಸ್‌ಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಇವರ ನೇತೃತ್ವದಲ್ಲಿ ಶಿಕ್ಷಣದ ಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಅಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ಪರಂಪರೆಯನ್ನು ಉತ್ತೇಜಿಸುವಲ್ಲಿ ಇವರ ಪಾತ್ರ ದೊಡ್ಡದಿದೆ. ಈ ಹಿಂದೆಯೂ ಇವರ ಸಾಧನೆಗಳನ್ನು ಗುರುತಿಸಿ 2010ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತ್ತು. ಇತ್ತೀಚೆಗೆ ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠವು ಇವರಿಗೆ 'ಫೆಲೋ ಆಫ್ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ' ಗೌರವ ನೀಡಿ ಪುರಸ್ಕರಿಸಿತ್ತು. ಈ ದೀರ್ಘಕಾಲದ ಸೇವೆ ಯನ್ನು ಪರಿಗಣಿಸಿ ಬೆಂಗಳೂರು ನಗರ ವಿಶ್ವವಿದ್ಯಾಲಯವು ಇದೀಗ ಡಾಕ್ಟರೇಟ್ ನೀಡುತ್ತಿದೆ. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಪ್ರದಾನ ಮಾಡಲಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಿನಯಕುಮಾರ್ ದಾಸ್, ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ರಮೇಶ್ ಬಿ. ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ವಾರ್ತಾ ಭಾರತಿ 3 Apr 2026 8:21 pm

Vaibhav Suryavanshi: ವೈಭವ್ ಸೂರ್ಯವಂಶಿಗೆ ಯುವರಾಜ್ ಸಿಂಗ್ ಮಹತ್ವದ ಸಲಹೆ: ಟೀಮ್ ಇಂಡಿಯಾ ಪ್ರವೇಶದ ಬಗ್ಗೆ ಭವಿಷ್ಯವಾಣಿ

Vaibhav Suryavanshi: ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಅಲೆ ಹಾಗೂ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವ ಯುವ ಬ್ಯಾಟಿಂಗ್ ಸೆನ್ಸೇಷನ್ ಸೃಷ್ಟಿಸುತ್ತಿರುವ ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಮಹತ್ವದ ಸಲಹೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಮಿಂಚುತ್ತಿರುವ ಹಾಗೂ ಹೊಸ ದಾಖಲೆಗಳನ್ನು ಬರೆಯುತ್ತಿರುವ ಯುವ ಬ್ಯಾಟರ್ ಸೂರ್ಯವಂಶಿಗೆ ಮಹತ್ವದ ಸಲಹೆ ನೀಡಲಾಗಿದೆ.ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ಆಗಿರುವ

ಒನ್ ಇ೦ಡಿಯ 3 Apr 2026 8:16 pm

ತೋಟದ ಶೆಡ್‌ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಮೃತ್ಯು

ಕೊಲ್ಲೂರು, ಎ.3: ತೋಟದ ಶೆಡ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಎ.2ರಂದು ಬೆಳಗ್ಗೆ ಜಡ್ಕಲ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜಡ್ಕಲ್ ಗ್ರಾಮದ ಮೋಳಿ ಎಂಬವರ ಮಗ ಸೇವಿಯರ್ ಸಿ.ಜೆ.(49) ಎಂದು ಗುರುತಿಸಲಾಗಿದೆ. ಇವರು ತನ್ನ ತೋಟದ ಶೆಡ್ ನಲ್ಲಿ ಒಬ್ಬನೇ ವಾಸವಿದ್ದು, ಈತನ ಹೆಂಡತಿ ಕುಂದಾಪುರದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು. ಮದ್ಯಪಾನದ ಚಟ ಹಾಗೂ ಪತ್ನಿ ಹಾಗೂ ಮಕ್ಕಳು ಕುಂದಾಪುರದಲ್ಲಿ ವಾಸವಾಗಿರುವ ಕಾರಣ ಒಂಟಿತನ ಉಂಟಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಇವರು, 6 ತಿಂಗಳ ಹಿಂದೆ ತನ್ನ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆನ್ನಲಾಗಿದೆ. ಮೋಳಿ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಹಬ್ಬಕ್ಕೆ ತನ್ನ ಮಗನನ್ನು ಮನೆಗೆ ಬರ ಹೇಳಲು ಶೆಡ್ ಸಮೀಪಕ್ಕೆ ಹೋದಾಗ ಸೇವಿಯರ್ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಇವರ ಮರಣದ ಬಗ್ಗೆ ಸಂಶಯ ಇರುವುದಾಗಿ ಮೋಳಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Apr 2026 8:13 pm

Kalaburagi | ಇತಿಹಾಸದ ಪರಂಪರೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು : ಮುಡುಬಿ ಗುಂಡೇರಾವ

ಕಲಬುರಗಿ : ನಾಡಿನ ಕಲೆ ಸಾಹಿತ್ಯ ಸಂಸ್ಕ್ರತಿಗಳ ಜೊತೆಗೆ ನಮ್ಮ ಇತಿಹಾಸ ಪರಂಪರೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಂಶೋಧನಾ ಸಾಹಿತಿ ಮುಡುಬಿ ಗುಂಡೇರಾವ ಕರೆ ನೀಡಿದರು. ನಗರದ ಕನ್ನಡ ಭವನದಲ್ಲಿ ಶನಿವಾರ ಜರುಗಿದ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅವರು ಏರ್ಪಡಿಸಿದ ಸೌಹಾರ್ದ ಕೂಟ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಸ್ಮಾರಕಗಳು, ಐತಿಹಾಸಿಕ ಸ್ಥಳ ಮತ್ತು ಶಾಸನಗಳ ಕುರಿತು ತಿಳಿವಳಿಕೆ ಇದ್ದಾಗ ಹೊಸ ಪರಂಪರೆ ಹುಟ್ಟು ಹಾಕಬಹುದು. ನಮ್ಮ ಒತ್ತಡದ ಬದುಕಿನಿಂದಾಗಿ ಇತಿಹಾಸದ ಅನೇಕ ಸ್ಮಾರಕಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಸಂಶೋಧನಾ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಇಂದು ನಾವು ಇತಿಹಾಸ ಅರಿತರೆ ಹೊಸ ಇತಿಹಾಸ ಸೃಷ್ಟಿಸಬಹುದು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ವರ್ತಮಾನದ ಪ್ರಜ್ಞೆಯ ಜೊತೆಗೆ ಇತಿಹಾಸದ ಪ್ರಜ್ಞೆಯೂ ಮುಖ್ಯವಾಗಿದೆ. ಇತಿಹಾಸಕ್ಕೆ ಸಂಬಂಧಿಸಿದ ಸ್ಮಾರಕಗಳು, ಸ್ಥಳಗಳ ಉಲ್ಲೇಖಗಳನ್ನು ಉಳಿಸಿ ಪೋಷಿಸಬೇಕಾಗಿದೆ. ಈ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕಾರ್ಯ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ ಎಂದರು. ಕಸಾಪ ಕೇಂದ್ರ ಸಮಿತಿ ಸದಸ್ಯ ಸಯ್ಯದ ನಜೀರುದ್ದಿನ್‌ ಮುತ್ತವಲ್ಲಿ, ಖ್ಯಾತ ಚಿತ್ರ ಕಲಾವಿದ ಆಯೋಜುದ್ದೀನ್ ಪಟೇಲ್, ಸರಕಾರಿ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಧರ್ಮರಾಜ ಜವಳಿ, ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಅಮೃತಪ್ಪ ಅಣುರ, ರವಿ ಶಹಾಪೂರಕರ, ಡಾ.ರೆಹಮನ ಪಟೇಲ್, ಪ್ರಕಾಶ ಗೊಣಗಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 3 Apr 2026 8:12 pm

CSK vs PBKS: ಆಟ ಆರಂಭಿಸುವ ಮುನ್ನವೇ ಆಯುಷ್‌ ಮಾತ್ರೆಯ ಬ್ಯಾಟ್‌ 2 ಬಾರಿ ಬದಲಿಸಿದ ಅಂಪೈರ್;‌ ಕಾರಣವೇನು?

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) vs ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ನಡುವಿನ ಐಪಿಎಲ್‌ ಪಂದ್ಯದಲ್ಲಿ, ಸಿಎಸ್‌ಕೆ ಬ್ಯಾಟ್ಸಮನ್‌ ಆಯುಷ್‌ ಮಾತ್ರೆ ಅವರ ಬ್ಯಾಟ್‌ನ್ನು ಪಂದ್ಯದ ಅಂಪೈರ್‌ ಎರಡು ಬಾರಿ ಪರೀಕ್ಷೆ ನಡೆಸಿದ ಘಟನೆ ನಡೆದಿದೆ.

ವಿಜಯ ಕರ್ನಾಟಕ 3 Apr 2026 8:10 pm

ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ

ಕೋಟ, ಎ.3: ಮಣೂರು ಗ್ರಾಮದ ಬಾಳೆಬೆಟ್ಟು ಬಸ್ಸು ನಿಲ್ದಾಣದ ಬಳಿ ಎ.2ರಂದು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೇಳೂರು ಗ್ರಾಮದ ಆದಿತ್ಯ ಶೆಟ್ಟಿ(28) ಎಂದು ಗುರುತಿಸಲಾಗಿದೆ. ಇನ್ನೋರ್ವ ಸಂದೀಪ ಗಾಣಿಗ ನೂಜಿ ಎಂಬಾತ ಪರಾರಿ ಯಾಗಿ ತಲೆಮರೆಸಿಕೊಂಡಿದ್ದಾನೆ. ಐಪಿಎಲ್ ಕ್ರಿಕೆಟ್ ಪಂದ್ಯಾಟ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಬೆಟ್ಟಿಂಗ್ ಅಕ್ರಮ ದಂಧೆ ಯಲ್ಲಿ ತೊಡಗಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಓರ್ವನನ್ನು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Apr 2026 8:09 pm

ಕುಂದಾಪುರ: ಗುಡ್ ಫ್ರೈಡೇ ಆಚರಣೆ

ಕುಂದಾಪುರ, ಎ.3: ಕುಂದಾಪುರ ಇಗರ್ಜಿ ಮೈದಾನದಲ್ಲಿ ಶುಭ ಶುಕ್ರವಾರದ(ಗುಡ್ ಫ್ರೈಡೆ) ಪ್ರಯುಕ್ತ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯವನ್ನು ಚರ್ಚ್‌ನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೆರವೇರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ಅ.ವಂ.ಪೌಲ್ ರೇಗೊ ಶಿಲುಬೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿ ದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಪಾಲನ ಮಂಡಳಿ, ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪ್ರತಿನಿಧಿಗಳು ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ವಾರ್ತಾ ಭಾರತಿ 3 Apr 2026 8:08 pm

‘ಮಂಗಳೂರು ರೈಲುಗಳ ವಿಳಂಬಕ್ಕೆ ಪಂಚಗಂಗಾ ರೈಲು ಕಾರಣ ಅಲ್ಲ’

ಕುಂದಾಪುರ, ಎ.3: ಬೆಂಗಳೂರು-ಮಂಗಳೂರು ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಬಹುತೇಕ ಬಾರಿ ಸರಿಯಾದ ಸಮಯಕ್ಕೆ ಬಂದರೂ ಕೂಡ ಮಂಗಳೂರಿನ ಮತ್ತೊಂದು ನಿಲ್ದಾಣ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರುವಾಗ ವಿಳಂಬಕ್ಕೆ ಬೆಂಗಳೂರು -ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲನ್ನು ಕಾರಣವಾಗಿಸಿ ಹೇಳಿಕೆ ಕೊಡುತ್ತಿರುವುದನ್ನು ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದಲೇ ಪಂಚಗಂಗಾ ಎಕ್ಸ್‌ಪ್ರೆಸ್ ಅತ್ಯಂತ ಕ್ಲಿಷ್ಟಕರ ಸಮಯವಾದ ಸಂಜೆ 6.50ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದು ಇಲ್ಲವಾದಲ್ಲಿ ಸಂಜೆ 7.30ಕ್ಕೆ ಹೊರಡಬಹುದಾಗಿತ್ತು. ಅಲ್ಲದೇ ಬೆಳಿಗ್ಗೆಯೂ ಬೆಂಗಳೂರಿಗೆ ಆರು ಗಂಟೆಗೆ ತಲುಪಬಹುದಾಗಿದ್ದ ಪಂಚ ಗಂಗಾ ರೈಲಿಗೆ ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದ ಏಳು ಗಂಟೆ ಸುಮಾರಿಗೆ ತಲುಪುವ ಸಮಯಪಟ್ಟಿ ಸಿಕ್ಕಿದ್ದು ಅಷ್ಟಾಗಿಯೂ ಮಂಗಳೂರು ರೈಲುಗಳ ವಿಳಂಬಕ್ಕೆ ಪಂಚಗಂಗಾ ರೈಲನ್ನೇ ಕಾರಣವಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ತಿಳಿಸಿದೆ. ಬಹುತೇಕ ದಿನ ಮಂಗಳೂರು ಜಂಕ್ಷನ್ ನಿಲ್ಕಾಣಕ್ಕೆ ಬೆಳಿಗ್ಗೆ 6.50ರ ಬದಲು 7 ಗಂಟೆ ಸುಮಾರಿಗೆ ಬರುವ ರೈಲಿನ ಹತ್ತು ನಿಮಿಷ ವಿಳಂಬವನ್ನು ದೂರುವುದು ಹಾಸ್ಯಾಸ್ಪದವಾಗಿದ್ದು, ಈ ಹಿಂದೆ ಸುಬ್ರಮಣ್ಯ ನಿಲ್ದಾಣಕ್ಕೆ ಐದು ಹತ್ತಕ್ಕೆ ಬರುತಿದ್ದ ಬೆಂಗಳೂರು ಮಂಗಳೂರು ರೈಲನ್ನು ಅನಗತ್ಯ ಒತ್ತಡ ಹೇರಿ ನಾಲ್ಕೂ ಐವತ್ತಕ್ಕೆ ಬರುವಂತೆ ಇಲಾಖೆ ಯಿಂದ ಸಮಯಪಟ್ಚಿ ಬದಲಾಯಿಸಿ ಈಗ ರೈಲು ಹತ್ತು ನಿಮಿಷ ವಿಳಂಬವಾಗುತ್ತದೆ ಎಂಬುದು ಸರಿಯಲ್ಲ ಎಂದು ಸಮಿತಿ ತಿಳಿಸಿದೆ. ಬೆಂಗಳೂರು ಮಂಗಳೂರು ರೈಲುಗಳ ಸಮಯಪಟ್ಚಿ ಬೇಕಾದರೆ ಬದಲಾಯಿಸುವ ಅವಕಾಶಗಳನ್ನು ಗಮನಿಸ ಬೇಕೇ ಹೊರತೂ ಬೆಂಗಳೂರು ಉಡುಪಿ ಕಾರವಾರದ ಜೀವನಾಡಿ ಪಂಚಗಂಗಾ ರೈಲಿನ ಕ್ರಾಸಿಂಗ್ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 8:07 pm

ಹುಲಸೂರ್ | ಹೋಟೆಲ್‌ಗಳಿಗೆ ತಹಶೀಲ್ದಾರ್ ಭೇಟಿ : ಮನೆಬಳಕೆ ಗ್ಯಾಸ್ ವಶ

ಹುಲಸೂರ್ : ತಾಲ್ಲೂಕಿನ ವಿವಿಧ ಹೋಟೆಲ್‌ಗಳಲ್ಲಿ ಮನೆಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿರುವುದಾಗಿ ಬಂದ ಮಾಹಿತಿ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಶಿವಾನಂದ್ ಮೇತ್ರೆ ಅವರು ಶುಕ್ರವಾರ ಅಚ್ಚರಿಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ನಿಯಮ ಉಲ್ಲಂಘಿಸಿ ಮನೆಬಳಕೆ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದ್ದು, ಸಂಬಂಧಿತ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಇತ್ತೀಚೆಗೆ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಪೂರೈಕೆ ಸಮಸ್ಯೆ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಅವರು ಸ್ಥಳೀಯ ಮಾತೋಶ್ರೀ ಗ್ಯಾಸ್ ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಲಿಂಡರ್ ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾಮಾನ್ಯ ಜನರಿಗೆ ನೀಡಬೇಕಾದ ಕಡಿಮೆ ಬೆಲೆಯ ಮನೆಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಗ್ರಾಹಕರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ನೀಡಬೇಕು. ವಿಳಂಬ ಅಥವಾ ಅಸಮರ್ಪಕ ವಿತರಣೆಯಿಂದ ಜನರಿಗೆ ತೊಂದರೆ ಆಗಬಾರದು. ಪಾರದರ್ಶಕ ಹಾಗೂ ಸಮರ್ಪಕ ವ್ಯವಸ್ಥೆಯ ಮೂಲಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಹೇಳಿದ ಅವರು, ಗ್ಯಾಸ್ ವಿತರಣೆ ವ್ಯವಸ್ಥೆ ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಗಮನಹರಿಸಬೇಕೆಂದು ಸೂಚಿಸಿದರು.

ವಾರ್ತಾ ಭಾರತಿ 3 Apr 2026 8:03 pm

ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದಾಗಿ ಇಂಧನ ಪೂರೈಕೆ ಕೊರತೆ ಆಗಿದೆ. ಅದರ ಪರಿಣಾಮವಾಗಿ ಡೀಸೆಲ್, ಪೆಟ್ರೋಲ್ ದರ ಏರಿಕೆ ಆಗಿದೆ. ಅದರ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಇವಿ ಬಳಕೆ ಏರಿಕೆ ಆಗುತ್ತಿದೆ. ದುಬಾರಿ ಇಂಧನ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳತ್ತ ಸವಾರರು ಮುಖ ಮಾಡಿದ್ದಾರೆ.

ಒನ್ ಇ೦ಡಿಯ 3 Apr 2026 8:00 pm

ಭಾಲ್ಕಿ | ಯೇಸು ಕ್ರಿಸ್ತರು ತಮ್ಮನ್ನು ಕಷ್ಟಪಡಿಸಿದವರಿಗೂ ಕ್ಷಮೆ ತೋರಿಸಿದರು : ರೇವರಂಡ್ ದಿಲೀಪ್ ಸಿ ಬಿ.

ಭಾಲ್ಕಿ : ಯೇಸು ಕ್ರಿಸ್ತರು ಪ್ರೀತಿ, ದಯೆ, ಕ್ಷಮೆ ಮತ್ತು ಸತ್ಯದ ಮಾರ್ಗವನ್ನು ಜನರಿಗೆ ಬೋಧಿಸಿದ ಮಹಾನ್ ವ್ಯಕ್ತಿಯಾಗಿದ್ದು, ತಮ್ಮನ್ನು ಹಿಂಸೆಗೊಳಪಡಿಸಿದವರಿಗೂ ಕ್ಷಮೆ ತೋರಿಸಿದ ಉದಾಹರಣೆಯಾಗಿದ್ದಾರೆ ಎಂದು ರೇವರಂಡ್ ದಿಲೀಪ್ ಸಿ.ಬಿ. ಹೇಳಿದರು. ಪಟ್ಟಣದ ಮೆಥಡಿಸ್ಟ್ ಚರ್ಚ್‌ನಲ್ಲಿ ಶುಕ್ರವಾರ ಶುಭ ಶುಕ್ರವಾರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದಿನ ಕ್ರೈಸ್ತರ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ. ಯೇಸು ಕ್ರಿಸ್ತರು ಮಾನವಕುಲದ ಪಾಪಗಳಿಗಾಗಿ ಶಿಲುಬೆಯಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿದ ದಿನವೆಂದು ನಂಬಲಾಗುತ್ತದೆ. ಆದ್ದರಿಂದ ಈ ದಿನವನ್ನು ಶೋಕದ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಭಕ್ತರು ಉಪವಾಸವಿದ್ದು ಶಾಂತವಾಗಿ ದಿನವನ್ನು ಆಚರಿಸಿದರು. ಕೆಲವೆಡೆ ಶಿಲುಬೆಯ ಮೆರವಣಿಗೆಗಳ ಮೂಲಕ ಯೇಸು ಕ್ರಿಸ್ತರ ಕಷ್ಟಗಳನ್ನು ಸ್ಮರಿಸಲಾಯಿತು. ಈ ದಿನವು ಪ್ರೀತಿ, ದಯೆ, ಕ್ಷಮೆ ಮತ್ತು ಸಹನೆಯ ಮಹತ್ವವನ್ನು ಸಾರುತ್ತದೆ. ಇತರರನ್ನು ಕ್ಷಮಿಸಿ, ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು. ಶುಭ ಶುಕ್ರವಾರದ ನಂತರ ಆಚರಿಸಲಾಗುವ ಈಸ್ಟರ್ ಹಬ್ಬದಲ್ಲಿ ಯೇಸು ಕ್ರಿಸ್ತರ ಪುನರುತ್ಥಾನವನ್ನು ಸ್ಮರಿಸಲಾಗುತ್ತದೆ. ಆದ್ದರಿಂದ ಅದು ಸಂತೋಷದ ಹಬ್ಬವಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ರೇವರಂಡ್ ಫಾದರ್ ಪ್ರವೀಣ್, ಜೋಸೆಫ್, ಗಿಪ್ಸನ್, ಸುನೀತಾದೇವಿ, ಶ್ರೀದೇವಿ, ಪುಟ್ಟರಾಜು, ಸಚಿನ್, ಸ್ಯಾಮುವೆಲ್, ಆಕಾಶ್, ಗ್ಯಾಲವಿನ್ಸನ್, ಗುಂಡಪ್ಪ ಸೇರಿದಂತೆ ನೂರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು.

ವಾರ್ತಾ ಭಾರತಿ 3 Apr 2026 7:42 pm

ನ್ಯಾಯಾಲಯದ ಆದೇಶ ಪಾಲಿಸದ ಹಿನ್ನಲೆ: ಮೈಸೂರು ಜಿಲ್ಲಾಧಿಕಾರಿಗೆ ಬಂಧನದ ವಾರೆಂಟ್

ಮೈಸೂರು : ಭೂವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ ಬಂಧನ ವಾರಂಟ್ ಜಾರಿಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಒಂದನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯ ಈ ಆದೇಶ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಎ.24ಕ್ಕೆ ಮುಂದೂಡಲಾಗಿದೆ. ಕುಂಬಾರಕೊಪ್ಪಲು ನಿವಾಸಿ ಜಯರಾಮು ಅವರ ಜಮೀನು ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪನ್ನು ಜಿಲ್ಲಾಡಳಿತ ಜಾರಿಗೊಳಿಸದ ಹಿನ್ನೆಲೆ, ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆದೇಶ ಪಾಲನೆ ಆಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಪ್ರಕರಣದ ಹಿನ್ನೆಲೆ: ಹೆಬ್ಬಾಳು ಗ್ರಾಮದ ಸರ್ವೆ ನಂ. 155 ಮತ್ತು 159/1ರಲ್ಲಿ ಇರುವ ಸುಮಾರು ಐದು ಎಕರೆ ಜಮೀನನ್ನು 1980ರಲ್ಲಿ ನಗರ ಭೂ ಕಾಯ್ದೆಯಡಿ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಈ ಕ್ರಮ ಪ್ರಶ್ನಿಸಿ ಮೂಲ ಮಾಲೀಕರಾದ ಸೀತಾರಾಮೇಗೌಡ ಅವರ ಪುತ್ರ ಚೆಲುವೇಗೌಡ ಮತ್ತು ಮೊಮ್ಮಗ ಜಯರಾಮು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಳ ನ್ಯಾಯಾಲಯ ಹಾಗೂ ಮೇಲ್ಮನವಿ ನ್ಯಾಯಾಲಯ ಎರಡೂ ಅರ್ಜಿದಾರರ ಪರ ತೀರ್ಪು ನೀಡಿದ್ದರೂ, ಜಮೀನು ಹಸ್ತಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಭೂ ಮಾಲೀಕರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯ ಕಠಿಣ ನಿಲುವು ತಾಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಮಾಧ್ಯಮಗಳ ಮೂಲಕವೇ ತಿಳಿದುಬಂದಿದೆ. ಪರಿಶೀಲಿಸಿ ನ್ಯಾಯಾಲಯದ ಆದೇಶದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 7:42 pm

ಉಡುಪಿ: ರೌಡಿಶೀಟರ್ ಸಹಿತ ಇಬ್ಬರ ಗಡಿಪಾರು

ಉಡುಪಿ: ಉಡುಪಿ ಜಿಲ್ಲೆಯ ರೌಡಿ ಶೀಟರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಗಡಿಪಾರು ಮಾಡಿ ಉಡುಪಿ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿಯಾಗಿರುವ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಎ.2ರಂದು ಆದೇಶ ಹೊರಡಿಸಿದ್ದಾರೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಪಿತ್ರೋಡಿ ಸಿಂಡಿಕೇಟ್ ಬ್ಯಾಂಕ್ ಬಳಿ ನಿವಾಸಿ ವಿಜೇತ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲೂರು ಗ್ರಾಮದ ಮುದರಂಗಡಿಯ ಆರೀಫ್ ಸಾಹೇಬ್ ಗಡಿಪಾರಾದ ಆರೋಪಿಗಳು. ವಿಜೇತ ವಿರುದ್ಧ 4 ಕೊಲೆಗೆ ಪ್ರಯತ್ನ ಪ್ರಕರಣ ಮತ್ತು ಹಲ್ಲೆ ಪ್ರಕರಣಗಳು ಹಾಗೂ ಆರೀಫ್ ವಿರುದ್ಧ 5 ಕೊಲೆಗೆ ಪ್ರಯತ್ನ, ಹಲ್ಲೆ ಹಾಗೂ ಮಾದಕ ದ್ರವ್ಯ ಸೇವನೆ ಪ್ರಕರಣಗಳು ದಾಖಲಾಗಿವೆ. ಈತನ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ. ವಿಜೇತನನ್ನು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಆರೀಫ್ ಸಾಹೇಬ್‌ನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 7:41 pm

ಕನಕಗಿರಿ | ಗಣತಿದಾರರಿಗೆ ತರಬೇತಿ: ಮನೆ ಮನೆಗೆ ಮಾಹಿತಿ ಸಂಗ್ರಹಕ್ಕೆ ಸೂಚನೆ

ಕನಕಗಿರಿ : ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉಸ್ತುವಾರಿ ಅಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, 2026ರ ಅಂದಾಜು ಪ್ರಕಾರ ಪಟ್ಟಣದ ಜನಸಂಖ್ಯೆ 19,942 ಇದೆ. ಒಟ್ಟು 35 ಗಣತಿದಾರರು ಹಾಗೂ 6 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು. ತರಬೇತಿದಾರ ಜಯಪ್ರಕಾಶ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೀವ್ ಎಂ.ಆರ್ ತರಬೇತಿ ನೀಡಿದರು. ನೋಡಲ್ ಅಧಿಕಾರಿ ಸೋಮಶೇಖರಗೌಡ ಕಾರ್ಯಕ್ರಮಕ್ಕೆ ಭೇಟಿ ನೀಡಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ವಾರ್ತಾ ಭಾರತಿ 3 Apr 2026 7:38 pm

ಅಫಜಲಪುರ | ದೇಸಾಯಿ ಕಲ್ಲೂರದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ

ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಎ. 1ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೇ. ಗುರುಪಾದಯ್ಯ ಮೇಲಿನಮಠ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ನೆರವೇರಿತು. ಗ್ರಾಮದ ಸುಮಂಗಲೆಯರಿಂದ ಕುಂಭಾಭಿಷೇಕ ಕಾರ್ಯಕ್ರಮವೂ ಶ್ರದ್ಧಾಭಕ್ತಿಯಿಂದ ನಡೆಯಿತು. ಗುರುವಾರ ಮುಂಜಾನೆ 10:30ಕ್ಕೆ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಮೆರವಣಿಗೆಯು ಭಜನಾ ತಂಡಗಳು, ಕಲ್ಲೂರ ಶಾಲೆಯ ಬಾಲಕರಿಂದ ಕೋಲಾಟ ಹಾಗೂ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು. ಬಳಿಕ ದೇಶಮುಖ ಮನೆತನದಿಂದ ಪ್ರಾರಂಭವಾದ ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಸಿದ್ದರಾಮೇಶ್ವರ ಪುರಾಣಗಳು ಶ್ರೀ ವೇ. ಸಿದ್ದಲಿಂಗಯ್ಯ ಶಾಸ್ತ್ರಿಗಳು, ಮಂಜುನಾಥ ತೇರದಾಳ ಗವಾಯಿ ಮತ್ತು ಆಕಾಶವಾಣಿ ಕಲಾವಿದ ಸಿದ್ದಣ್ಣ ಹೂಗಾರ ಅವರ ಸಂಗೀತ-ಸಾಹಿತ್ಯದೊಂದಿಗೆ ಭಕ್ತಿಭಾವದಲ್ಲಿ ನಡೆಯಿತು. ಸಂಜೆ 6 ಗಂಟೆಗೆ 24ನೇ ವರ್ಷದ ರಥೋತ್ಸವವು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು.  ಈ ಸಂದರ್ಭದಲ್ಲಿ ವಿಶ್ವರಾಧ್ಯ ಶಿವಾಚಾರ್ಯರು, ವೇ.ಮೂ. ಗುರುಪಾದಯ್ಯ ಮೇಲಿನಮಠ, ಜಗದೀಶ್ ದೇಶಮುಖ, ಎಸ್.ವೈ.ಪಾಟೀಲ್, ಸಿದ್ದಯ್ಯ ಆಕಾಶಮಠ, ದೇವೇಂದ್ರ ದೇಸಾಯಿ ಕಲ್ಲೂರ, ಬಸಯ್ಯ ಆಕಾಶಮಠ, ಭಗವಂತ್ರಾಯ ಪಂಚಿಕಟ್ಟಿ, ಅಡೇವಪ್ಪ ಪಂಚಿಕಟ್ಟಿ, ಮುತ್ತಪ್ಪ ವರರ್ಗಿ, ಅರುಣಕುಮಾರ ಉಪ್ಪಿನ, ಗುಂಡೇರಾವ್ ದೇಶಮುಖ, ಶಂಕರ ತಳವಾರ, ಶರಣು ಜೇರಟಗಿ, ಮಲ್ಲಿನಾಥ ಪಟೇದಾರ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 3 Apr 2026 7:35 pm

‌ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ಬೆಂಗಳೂರು : ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕದ ವತಿಯಿಂದ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ‘ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಪಿ.ಜಿ.ಆರ್.ಸಿಂಧ್ಯ ಅವರಿಗೆ ಅಭಿನಂದನಾ ಸಮಾರಂಭ’ದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತೋಷ್ ಹೆಗ್ಡೆಯವರು, ಕೆಲವೇ ನಿಮಿಷದ ಭಾಷಣದ ಮುಗಿಸಿ ವೇದಿಕೆಯಲ್ಲಿ ಕುಳಿತುಕೊಂಡಿದ್ದರು. ಆರೋಗ್ಯದಲ್ಲಿ ಏರುಪೇರು ಆಗಿದೆ (ತಲೆ ಸುತ್ತು ಬಂದು) ಎಂದು ನಿರ್ಗಮಿಸುವ ಸಂದರ್ಭದಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿರುವ ಘಟನೆ ನಡೆಯಿತು. ಕೆಲ ಕಾಲ ಸಭಾಂಗಣದಲ್ಲಿ ಗೊಂದಲವುಂಟಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಆತಂಕಕ್ಕೆ ಒಳಗಾದರು. ಘಟನೆಯ ವೇಳೆ ವೇದಿಕೆಯಲ್ಲಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಕ್ಷಣವೇ ಸ್ಪಂದಿಸಿ, ತಮ್ಮ ಕಾರಿನಲ್ಲಿ ಸಂತೋಷ್‌ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು.  

ವಾರ್ತಾ ಭಾರತಿ 3 Apr 2026 7:35 pm

ಇರಾನ್ ಅನ್ನು ಶಿಲಾಯುಗದ ಕಾಲಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ: ಅಮೆರಿಕದ ಬೆದರಿಕೆ ಮತ್ತು ಬಾಂಬ್ ದಾಳಿಗಳ ಇತಿಹಾಸ

ಮಾತುಕತೆಗೆ ಮುಂದಾಗದಿದ್ದರೆ ಇರಾನ್ ಅನ್ನು ಶಿಲಾಯುಗದ ಕಾಲಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದರು. ಇದಾಗಿ ಕೆಲವೇ ಕ್ಷಣಗಳ ನಂತರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಕ್ಸ್‌ನಲ್ಲಿ Back to the Stone Age ಎಂದು ಪೋಸ್ಟ್ ಮಾಡಿದ್ದಾರೆ. ಒಂದು ಪ್ರದೇಶಕ್ಕೆ ಬಾಂಬ್ ಹಾಕಿ ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಹೇಳುವುದು ಸಾಮಾನ್ಯವಾಗಿ ಅದರ ಮೇಲೆ ಬಾಂಬ್ ಸುರಿಮಳೆ ಮಾಡುವುದನ್ನು ಸೂಚಿಸುತ್ತದೆ. ಅಂದರೆ, ಈ ರೀತಿ ಬಾಂಬ್ ದಾಳಿಯಲ್ಲಿ ಆಧುನಿಕ ಮೂಲಸೌಕರ್ಯಗಳು ನಾಶವಾಗುತ್ತವೆ. ಹೀಗೆ ನಾಶವಾದಾಗ ಅದು ಪ್ರಾಚೀನ ಸ್ಥಿತಿಯನ್ನು ತಲುಪುತ್ತದೆ. ಆದರೆ ಟ್ರಂಪ್ ಮತ್ತು ಅಮೆರಿಕದಿಂದ ಇಂಥಾ ಬೆದರಿಕೆಗಳು ಹೊಸತಲ್ಲ. ಬದಲಾಗಿ, ಅವು ವಾಷಿಂಗ್ಟನ್‌ ನ ದಶಕಗಳಷ್ಟು ಹಳೆಯದಾದ ಪರಂಪರೆಯನ್ನು ಆಧರಿಸಿವೆ. ಅದರ ಮಿಲಿಟರಿ ಕಾರ್ಯಾಚರಣೆಗಳ ಸಮಯದಲ್ಲಿ ಅದು ವ್ಯಾಪಕ ನಾಶವೆಸಗುವ ದೊಡ್ಡ ಪ್ರಮಾಣದ ಬಾಂಬ್ ದಾಳಿ ಮಾಡುವುದಾಗಿ ಅಮೆರಿಕ ಆಗಾಗ್ಗೆ ಬೆದರಿಕೆ ನೀಡುತ್ತಿರುತ್ತದೆ. ಟ್ರಂಪ್ ಇತ್ತೀಚೆಗೆ ಹೇಳಿದ್ದೇನು? ಅಮೆರಿಕದ ಅಧ್ಯಕ್ಷರು ಈ ಹಿಂದೆ ಏನು ಹೇಳಿದ್ದಾರೆ? ಏನು ಮಾಡಿದ್ದಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ►ಇರಾನ್ ಬಗ್ಗೆ ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದೇನು? ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ, ಟ್ರಂಪ್ ಇರಾನ್ ಅನ್ನು ಉಲ್ಲೇಖಿಸುತ್ತಾ, ಮುಂದಿನ ಎರಡು-ಮೂರು ವಾರಗಳಲ್ಲಿ ನಾವು ಅವರ ಮೇಲೆ ಪ್ರಬಲ ದಾಳಿ ಮಾಡಲಿದ್ದೇವೆ. ನಾವು ಅವರನ್ನು ಶಿಲಾಯುಗಕ್ಕೆ ತಳ್ಳಲಿದ್ದೇವೆ, ಅವರು ಅಲ್ಲಿಗೆ ಸೇರಿದವರು, ಎಂದು ಹೇಳಿದ್ದಾರೆ. ಚರ್ಚೆಗಳು ನಡೆಯುತ್ತಿವೆ, ಸಂಘರ್ಷವು ಅದೇ ಅವಧಿಯಲ್ಲಿ ಕೊನೆಗೊಳ್ಳಬಹುದು ಎಂದಿದ್ದಾರೆ ಟ್ರಂಪ್. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಗಳನ್ನು ಪ್ರಾರಂಭಿಸಿದಾಗ ಇರಾನ್ ಮೇಲಿನ ಪ್ರಸ್ತುತ ಯುದ್ಧ ಪ್ರಾರಂಭವಾಯಿತು. ಇಸ್ರೇಲ್ ಮತ್ತು ಗಲ್ಫ್ ದೇಶಗಳನ್ನು ಗುರಿಯಾಗಿಸಿಕೊಂಡು ಟೆಹ್ರಾನ್ ಪ್ರತಿದಾಳಿ ನಡೆಸಿತು. ಇಲ್ಲಿಯವರೆಗೆ 2,000 ಕ್ಕೂ ಹೆಚ್ಚು ಇರಾನಿಯನ್ನರು ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಔಷಧ ಕಾರ್ಖಾನೆಗಳು ಸೇರಿದಂತೆ ಸಾವಿರಾರು ನಾಗರಿಕ ಸ್ಥಳಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜಾಗತಿಕ ಭದ್ರತಾ ಪ್ರಾಧ್ಯಾಪಕಿ ಜನಿನಾ ಡಿಲ್, ಟ್ರಂಪ್ ಅವರ ಶಿಲಾಯುಗ ಬೆದರಿಕೆಯು ಆಧುನಿಕ ಸಮಾಜವನ್ನು ನಿರೂಪಿಸುವ ರಚನೆಗಳು ಮತ್ತು ಕಟ್ಟಡಗಳನ್ನು ಯುಎಸ್ ನಾಶಪಡಿಸುತ್ತದೆ ಎಂದು ಸೂಚಿಸುತ್ತವೆ ಎಂದು ಹೇಳಿದ್ದಾರೆ. ಆದಾಗ್ಯೂ, ಇದು ಕಾನೂನುಬಾಹಿರವಾಗಿರುತ್ತದೆ. ಏಕೆಂದರೆ ಅದು ನಾಗರಿಕ ವಸ್ತುಗಳ ವಿರುದ್ಧ ದಾಳಿಗಳನ್ನು ನಿರ್ದೇಶಿಸುವುದನ್ನು ಸೂಚಿಸುತ್ತದೆ ಎಂದು Al Jazeera ಗೆ ತಿಳಿಸಿದ್ದಾರೆ. ಆಧುನಿಕ ಸಮಾಜವನ್ನು ನಿರೂಪಿಸುವ ರಚನೆಗಳು ಮತ್ತು ಕಟ್ಟಡಗಳು ಇಂಧನ ಮೂಲಸೌಕರ್ಯ, ದೂರಸಂಪರ್ಕ ರಚನೆಗಳು, ನಾಗರಿಕ ಉದ್ಯಮ, ಶೈಕ್ಷಣಿಕ, ಸಾಂಸ್ಕೃತಿಕ ಅಥವಾ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿವೆ. ಅದೇನೇ ಇದ್ದರೂ ಅವುಗಳ ಮೇಲೆ ಗುರಿಯಿಡಲಾಗುವುದು ಎಂಬ ಘೋಷಣೆಯು ದೀರ್ಘಕಾಲದ ಯುದ್ಧ ಕಾನೂನುಗಳ ವ್ಯವಸ್ಥಿತ ಮತ್ತು ಗಂಭೀರ ಉಲ್ಲಂಘನೆಯಾಗಿದೆ ಎಂದು ಡಿಲ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾನವೀಯ ಕಾನೂನು, ಯುದ್ಧದ ಸಮಯದಲ್ಲಿ ನಾಗರಿಕ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ನಿಷೇಧಿಸುತ್ತದೆ ಎಂದು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ICRC) ತಿಳಿಸಿದೆ. ಈ ಹೇಳಿಕೆಯು ಭಯಾನಕವಾಗಿದೆ. ಏಕೆಂದರೆ ಅದು ಯುನೈಟೆಡ್ ಸ್ಟೇಟ್ಸ್ ಇರಾನಿನ ಆಡಳಿತದ ವಿರುದ್ಧ ಹೋರಾಡುತ್ತಿದೆ ಎಂಬ ಹೇಳಿಕೆಯನ್ನು ನಿರಾಕರಿಸುತ್ತದೆ, ಇದು ಇರಾನಿನ ಜನರು ಮತ್ತು ಸಮಾಜದ ವಿರುದ್ಧ ಹೆಚ್ಚು ವಿಶಾಲವಾಗಿ ಯುದ್ಧವನ್ನು ಸೂಚಿಸುತ್ತದೆ, ಎಂದು ಐಸಿಆರ್‌ಸಿ ಹೇಳಿದೆ. ಅಮೆರಿಕದ ಹುಟ್ಟುವುದಕ್ಕಿಂತ ಸಹಸ್ರಮಾನದ ಮೊದಲು, ಇರಾನ್‌ ನ ಆರಂಭಿಕ ಸಾಮ್ರಾಜ್ಯಗಳು ಈಗಾಗಲೇ ಜಗತ್ತನ್ನು ಪುನರ್‌ರೂಪಿಸುತ್ತಿದ್ದವು. ಅವರು ಕಾಲುವೆಗಳು ಮತ್ತು ಹೆದ್ದಾರಿಗಳೊಂದಿಗೆ ಮುಂದುವರಿದ ಎಂಜಿನಿಯರಿಂಗ್‌ ನಲ್ಲಿ ಪರಿಣತಿ ಹೊಂದಿದ್ದರು. ಅತ್ಯಾಧುನಿಕ ಹಣಕಾಸು ಮತ್ತು ಮಿಲಿಟರಿ ವ್ಯವಸ್ಥೆಗಳನ್ನು ಸ್ಥಾಪಿಸಿದರು ಮತ್ತು ಜಾಗತಿಕ ವಿಜ್ಞಾನ ಮತ್ತು ತತ್ವಶಾಸ್ತ್ರಕ್ಕೆ ಬೌದ್ಧಿಕ ಅಡಿಪಾಯವನ್ನು ಹಾಕಿದರು. ►ಅಮೆರಿಕವು ಇದೇ ರೀತಿಯ ಬೆದರಿಕೆಗಳನ್ನು ಈ ಹಿಂದೆ ಹಾಕಿದೆಯೇ? 1965 ರ ಲೆಮೇ ಅವರ ಪುಸ್ತಕ ಮಿಷನ್ ವಿತ್ ಲೆಮೇ ನಲ್ಲಿ ಉತ್ತರ ವಿಯೆಟ್ನಾಂ ವಿರುದ್ಧದ ಅಮೆರಿಕದ ಬೆದರಿಕೆಗಳ ಸಂದರ್ಭದಲ್ಲಿ, ಬಾಂಬ್ ದಾಳಿ ನಡೆಸಿ ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂಬ ವಾಕ್ಯವು ಯುಎಸ್ ವಾಯುಪಡೆಯ ಅಧಿಕಾರಿ ಕರ್ಟಿಸ್ ಲೆಮೇ ಅವರೊಂದಿಗೆ ವ್ಯಾಪಕವಾಗಿ ಸಂಬಂಧ ಹೊಂದಿದೆ. ನಾವು ಬಾಂಬ್ ದಾಳಿ ನಡೆಸಿ ಅವರನ್ನು ಶಿಲಾಯುಗಕ್ಕೆ ಕಳುಹಿಸಲಿದ್ದೇವೆ, ಎಂದು ಅವರು ಬರೆದಿದ್ದಾರೆ. 240,000 ರಿಂದ 900,000 ಜನರು ಸಾವನ್ನಪ್ಪಿದ ಜಪಾನಿನ ನಗರಗಳ ಮೇಲೆ ಎರಡನೇ ಮಹಾಯುದ್ಧದ ಕಾರ್ಪೆಟ್ ಬಾಂಬ್ ದಾಳಿಯನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲೆಮೇ, ವಿಯೆಟ್ನಾಂ ಯುದ್ಧದ ಹೊತ್ತಿಗೆ ವಾಯುಪಡೆಯ ಮುಖ್ಯಸ್ಥರಾಗಿ ಹುದ್ದೆಗೆ ಏರಿದ್ದರು. ನಿವೃತ್ತರಾಗುವ ಮುನ್ನ ಅವರ ಪುಸ್ತಕ ಪ್ರಕಟವಾಗಿತ್ತು. ವಿಯೆಟ್ನಾಂನಲ್ಲಿ ನಡೆದ ಕೆಲವು ರಕ್ತಸಿಕ್ತ ಯುಎಸ್ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಅಧಿಕಾರದಲ್ಲಿಲ್ಲದಿದ್ದರೂ, ಅಮೆರಿಕನ್ ನಾಯಕರು ಕರ್ಟಿಸ್ ಅವರ ಸಲಹೆಯನ್ನು ಅನುಸರಿಸುತ್ತಿದ್ದರು. ►ವಿಯೆಟ್ನಾಂ ಯುದ್ಧ ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್ ತನ್ನ ವಸಾಹತು ಇಂಡೋಚೈನಾ ಮೇಲೆ ನಿಯಂತ್ರಣವನ್ನು ಮರಳಿ ಸ್ಥಾಪಿಸಲು ಮಾಡಿದ ಪ್ರಯತ್ನದಿಂದ ವಿಯೆಟ್ನಾಂ ಯುದ್ಧವು ಬೆಳೆಯಿತು. ಕಮ್ಯುನಿಸ್ಟ್ ನೇತೃತ್ವದ ವಿಯೆಟ್ನಾಂ ರಾಷ್ಟ್ರೀಯವಾದಿಗಳಾದ ಹೋ ಚಿ ಮಿನ್ಹ್ ನೇತೃತ್ವದ ವಿಯೆಟ್ ಮಿನ್ಹ್, 1954 ರಲ್ಲಿ ಫ್ರೆಂಚ್ ವಿರುದ್ಧ ಹೋರಾಡಿ ಅವರನ್ನು ಸೋಲಿಸಿದರು. ತರುವಾಯ ದೇಶವನ್ನು 17ನೇ ಪ್ಯಾರಲಲ್‌ನಲ್ಲಿ ವಿಭಜಿಸಲಾಯಿತು, ಇದರ ಪರಿಣಾಮವಾಗಿ ಹೋ ಚಿ ಮಿನ್ಹ್ ನೇತೃತ್ವದಲ್ಲಿ ಕಮ್ಯುನಿಸ್ಟ್ ನೇತೃತ್ವದ ಉತ್ತರ ಮತ್ತು ದಕ್ಷಿಣದಲ್ಲಿ ಯುಎಸ್ ಬೆಂಬಲಿತ ಕಮ್ಯುನಿಸ್ಟ್ ವಿರೋಧಿ ಆಡಳಿತ ಉಂಟಾಯಿತು. 1950ರ ದಶಕದಲ್ಲಿ ದಕ್ಷಿಣ ವಿಯೆಟ್ನಾಂ ಸರ್ಕಾರಕ್ಕೆ ಹಣಕಾಸಿನ ನೆರವು ಮತ್ತು ಮಿಲಿಟರಿ ಸಲಹೆಗಾರರಿಂದ 1960ರ ದಶಕದ ಮಧ್ಯಭಾಗದಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಹಸ್ತಕ್ಷೇಪಕ್ಕೆ, ದೊಡ್ಡ ಸೈನ್ಯದ ನಿಯೋಜನೆ ಮತ್ತು ವ್ಯಾಪಕ ಬಾಂಬ್ ದಾಳಿ ಸೇರಿದಂತೆ, ಯುಎಸ್ ತನ್ನ ಒಳಗೊಳ್ಳುವಿಕೆಯನ್ನು ಸ್ಥಿರವಾಗಿ ಹೆಚ್ಚಿಸಿತು. 1972 ಡಿಸೆಂಬರ್‌ನಲ್ಲಿ, ಅಧ್ಯಕ್ಷ ರಿಚರ್ಡ್ ನಿಕ್ಸನ್ ಉತ್ತರ ವಿಯೆಟ್ನಾಂ ವಿರುದ್ಧ, ವಿಶೇಷವಾಗಿ ಹನೋಯಿ ಮತ್ತು ಹೈಫಾಂಗ್ ವಿರುದ್ಧ, ಅಮೆರಿಕದಲ್ಲಿ ಕ್ರಿಸ್‌ಮಸ್ ಬಾಂಬ್ ದಾಳಿ ಎಂದು ಕರೆಯಲ್ಪಡುವ ಪ್ರಮುಖ ಬಾಂಬ್ ದಾಳಿ ಕಾರ್ಯಾಚರಣೆಯನ್ನು ಆದೇಶಿಸಿದರು. ಅಮೆರಿಕವು ದಕ್ಷಿಣ ವಿಯೆಟ್ನಾಂನಲ್ಲಿ ಹಾಗೂ ಕಾಂಬೋಡಿಯಾ ಮತ್ತು ಲಾವೋಸ್‌ನಲ್ಲಿಯೂ ತೀವ್ರವಾದ ಬಾಂಬ್ ದಾಳಿ ನಡೆಸಿತು. ಅದು ಶತ್ರು ನೆಲೆಗಳು ಮತ್ತು ಪೂರೈಕೆ ಮಾರ್ಗಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿತು. ಒಟ್ಟಾರೆಯಾಗಿ, ಲಕ್ಷಾಂತರ ವಿಯೆಟ್ನಾಂ ಸೈನಿಕರು ಮತ್ತು ನಾಗರಿಕರು ಯುದ್ಧದಲ್ಲಿ ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡರು. ►ಮೊದಲ ಕೊಲ್ಲಿ ಯುದ್ಧ 1990 ಆಗಸ್ಟ್‌ ನಲ್ಲಿ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಕುವೈತ್ ಮೇಲೆ ಆಕ್ರಮಣಕ್ಕೆ ಆದೇಶಿಸಿದರು. 1980ರ ದಶಕದಲ್ಲಿ ಹೆಚ್ಚಿನ ಕಾಲ ಇರಾನ್ ಜೊತೆಗಿನ ದೀರ್ಘಕಾಲದ ಸಂಘರ್ಷದ ನಂತರ, ನಾಯಕರು ಬೆಲೆಗಳನ್ನು ಕಡಿಮೆ ಮಾಡಲು ಅತಿಯಾದ ತೈಲ ಉತ್ಪಾದನೆ ಮಾಡಿದ್ದಾರೆ ಮತ್ತು ಇರಾಕ್‌ ನ ಯುದ್ಧಪೀಡಿತ ಆರ್ಥಿಕತೆಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು. ಒಟ್ಟೋಮನ್ ಮತ್ತು ಬ್ರಿಟಿಷ್ ಯುಗದ ಗಡಿಗಳಿಂದಲೂ ಕುವೈತ್‌ ನ ಮೇಲಿನ ತನ್ನ ದೀರ್ಘಕಾಲದ ಪ್ರಾದೇಶಿಕ ಹಕ್ಕನ್ನು ಪುನರುಜ್ಜೀವನಗೊಳಿಸುವ ಮೂಲಕ ಇರಾಕ್ ಆಕ್ರಮಣವನ್ನು ಸಮರ್ಥಿಸಿಕೊಂಡಿತು. ಇರಾಕಿ ಸೈನ್ಯವು ಕುವೈತ್ ಅನ್ನು ವೇಗವಾಗಿ ಆಕ್ರಮಿಸಿಕೊಂಡಿತು, ಕೆಲವೇ ದಿನಗಳಲ್ಲಿ ಅದರ ರಾಜಧಾನಿಯನ್ನು ಆಕ್ರಮಿಸಿಕೊಂಡಿತು. ಕುವೈತ್‌ ನ 13ನೇ ಎಮಿರ್ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಬೇಕಾಯಿತು. ಶೇಖ್ ಜಾಬರ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ದೇಶಭ್ರಷ್ಟರಾಗಿಯೂ ಕುವೈತ್ ಸರ್ಕಾರವನ್ನು ಮುನ್ನಡೆಸಿದರು. ಇರಾಕಿ ಸೇನೆಗಳು ತಾಯ್ನಾಡನ್ನು ನಿಯಂತ್ರಿಸಿದವು. 1991 ಜನವರಿಯಲ್ಲಿ ಕುವೈತ್ ಮತ್ತು ನೆರೆಯ ಗಲ್ಫ್ ಮಿತ್ರರಾಷ್ಟ್ರಗಳ, ವಿಶೇಷವಾಗಿ ಸೌದಿ ಅರೇಬಿಯಾದ ಕೋರಿಕೆ ಮೇರೆಗೆ, ಅಮೆರಿಕ ಇರಾಕಿ ಪಡೆಗಳನ್ನು ಹೊರಹಾಕಲು ಅಂತರರಾಷ್ಟ್ರೀಯ ಒಕ್ಕೂಟವನ್ನು ಮುನ್ನಡೆಸಿತು. ಪಾಶ್ಚಿಮಾತ್ಯ, ಅರಬ್ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು ಒಂದುಗೂಡಿಸಿದ ಈ ಬಹುರಾಷ್ಟ್ರೀಯ ಅಭಿಯಾನವನ್ನು ಆಪರೇಷನ್ ಡೆಸರ್ಟ್ ಸ್ಟಾರ್ಮ್ ಎಂದು ಹೆಸರಿಸಲಾಯಿತು. ಇದರ ನಡುವೆ, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಬೇಕರ್ ಜನವರಿ 9 ರಂದು ಜಿನೀವಾದಲ್ಲಿ ಇರಾಕಿನ ವಿದೇಶಾಂಗ ಸಚಿವ ತಾರಿಕ್ ಅಜೀಜ್ ಅವರನ್ನು ಭೇಟಿಯಾದರು. ಆ ಸಭೆಯಲ್ಲಿ, ಕುವೈತ್‌ ನಿಂದ ಹಿಂದೆ ಸರಿಯದಿದ್ದರೆ ಅಮೆರಿಕವು ಇರಾಕ್ ಅನ್ನು ಶಿಲಾಯುಗಕ್ಕೆ ಮರಳಿಸುತ್ತೇವೆ ಎಂದು ಬೇಕರ್ ಬೆದರಿಕೆ ಹಾಕಿದರು. ಕೆಲವು ವಿಶ್ಲೇಷಕರು ಹೇಳುವಂತೆ, ವಿಶೇಷವಾಗಿ 1991ರ ಕೊಲ್ಲಿ ಯುದ್ಧದ ನಂತರ, ಯುನೈಟೆಡ್ ಸ್ಟೇಟ್ಸ್ ಸಂಪೂರ್ಣ ನಗರಗಳನ್ನು ವಿವೇಚನೆಯಿಲ್ಲದೆ ಬಾಂಬ್ ದಾಳಿ ಮಾಡುವ ಬದಲು ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳನ್ನು ಹೆಚ್ಚಾಗಿ ಅವಲಂಬಿಸಿತು ಮತ್ತು ನಿರ್ದಿಷ್ಟ ಮಿಲಿಟರಿ ಹಾಗೂ ಕಾರ್ಯತಂತ್ರದ ತಾಣಗಳನ್ನು ಗುರಿಯಾಗಿಸಿಕೊಂಡಿತು. ಆದರೆ ಇತರ ವಿಶ್ಲೇಷಕರು ಇರಾಕ್‌ ನಲ್ಲಿ ಯುಎಸ್ ಬಾಂಬ್ ದಾಳಿಯು ಪ್ರಾಯೋಗಿಕವಾಗಿ ದೊಡ್ಡ ಪ್ರಮಾಣದ ಬಾಂಬ್ ದಾಳಿಗೆ ಸಮನಾಗಿತ್ತು ಎಂದು ಹೇಳುತ್ತಾರೆ. ಏಕೆಂದರೆ ಯುಎಸ್ ಪಡೆಗಳು ಹೆಚ್ಚಿನ ಸಂಖ್ಯೆಯ ಮಾರ್ಗದರ್ಶನವಿಲ್ಲದ ಬಾಂಬ್‌ಗಳನ್ನು ಬೀಳಿಸಿದವು, ಅದು ಮೂಲಸೌಕರ್ಯ ಮತ್ತು ನಗರ ಪ್ರದೇಶಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು. ►9/11 ರ ನಂತರ 2001 ಸೆಪ್ಟೆಂಬರ್ 11 ರಂದು, 19 ಅಲ್-ಖೈದಾ ಅಪಹರಣಕಾರರು ನಾಲ್ಕು ಯುಎಸ್ ವಾಣಿಜ್ಯ ವಿಮಾನಗಳನ್ನು ವಶಪಡಿಸಿಕೊಂಡರು. ಎರಡು ನ್ಯೂಯಾರ್ಕ್‌ ನ ವಿಶ್ವ ವ್ಯಾಪಾರ ಕೇಂದ್ರದ ಗೋಪುರಗಳಿಗೆ ಹಾರಿಸಲ್ಪಟ್ಟವು, ಇನ್ನೊಂದು ವರ್ಜೀನಿಯಾದ ಪೆಂಟಗನ್‌ ಗೆ ಡಿಕ್ಕಿ ಹೊಡೆದಿತು. ಮತ್ತೊಂದು ಪ್ರಯಾಣಿಕರು ವಿರೋಧಿಸಿದ ನಂತರ ಪೆನ್ಸಿಲ್ವೇನಿಯಾದ ಹೊಲದಲ್ಲಿ ಅಪ್ಪಳಿಸಿತು. ಇದರಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದರು. ಈ ದಾಳಿಗಳು ಅಲ್-ಖೈದಾ ಮತ್ತು ಅದು ಭಯೋತ್ಪಾದಕ ಸಂಘಟನೆಗಳೆಂದು ಗುರುತಿಸಿದ ಇತರ ಗುಂಪುಗಳನ್ನು ಗುರಿಯಾಗಿಸಿಕೊಂಡು ಜಾಗತಿಕ ಭಯೋತ್ಪಾದನೆಯ ವಿರುದ್ಧ ಯುದ್ಧವನ್ನು ಪ್ರಾರಂಭಿಸಲು ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರೇರೇಪಿಸಿತು. ದಾಳಿಗಳ ನಂತರ, 2001 ರಿಂದ 2008ರವರೆಗೆ ಅಧ್ಯಕ್ಷರಾಗಿದ್ದ ಪಾಕಿಸ್ತಾನದ ಪರ್ವೇಜ್ ಮುಷರಫ್, ಹಿರಿಯ ಯುಎಸ್ ಅಧಿಕಾರಿ ರಿಚರ್ಡ್ ಆರ್ಮಿಟೇಜ್ ತಾಲಿಬಾನ್ ವಿರುದ್ಧದ ಯುದ್ಧಕ್ಕೆ ಸೇರಲು ನಿರಾಕರಿಸಿದರೆ ತಮ್ಮ ದೇಶವನ್ನು ಶಿಲಾಯುಗಕ್ಕೆ ತಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ ಎಂದು ತಿಳಿಸಿದ್ದಾರೆ. ►ಯುಎಸ್ ಇತರ ದೇಶಗಳ ಮೇಲೆ ಬಾಂಬ್ ಸುರಿಮಳೆ ಮಾಡಿದೆಯೇ? ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಜಪಾನಿನ ನಗರಗಳ ಮೇಲೆ ಮತ್ತು ಫಿಲಿಪೈನ್ಸ್ ಸೇರಿದಂತೆ ಜಪಾನಿನ ಪಡೆಗಳಿಂದ ನಿಯಂತ್ರಿಸಲ್ಪಡುವ ಏಷ್ಯಾದ ನಗರಗಳ ಮೇಲೆ ಬಾಂಬ್ ಸುರಿಮಳೆ ಮಾಡಿತ್ತು. 1950 ರಿಂದ 1953ರವರೆಗೆ ನಡೆದ ಕೊರಿಯನ್ ಯುದ್ಧದ ಸಮಯದಲ್ಲಿ, ಅಮೆರಿಕವು ಉತ್ತರ ಕೊರಿಯಾದ ಮೇಲೆ ಭಾರೀ ಬಾಂಬ್ ದಾಳಿ ನಡೆಸಿತು. ಇದು ಬಹುತೇಕ ಪ್ರತಿಯೊಂದು ಪಟ್ಟಣವನ್ನು ನಾಶಪಡಿಸಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಬಾಂಬ್ ದಾಳಿಯಲ್ಲಿ ಉತ್ತರ ಕೊರಿಯಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 95 ಪ್ರತಿಶತ ಮತ್ತು ಅದರ ಕಟ್ಟಡಗಳ 80 ಪ್ರತಿಶತಕ್ಕಿಂತ ಹೆಚ್ಚು ನಾಶವಾಯಿತು.

ವಾರ್ತಾ ಭಾರತಿ 3 Apr 2026 7:32 pm

ಸಿರುಗುಪ್ಪ | ಸಿಎಂಐಡಿಪಿ ಯೋಜನೆಯಡಿ 125.78 ಲಕ್ಷ ರೂ. ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಅಡಿಗಲ್ಲು

ಸಿರುಗುಪ್ಪ : ಕರ್ನಾಟಕ ಸರ್ಕಾರದ 2025-26ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ಮಂಜೂರಾದ 125.78 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ. ನಾಗರಾಜ ಅವರು ಅಡಿಗಲ್ಲು ನೆರವೇರಿಸಿದರು. ಸಿರುಗುಪ್ಪ ತಾಲೂಕಿನ ಬಾಗೇವಾಡಿಯಿಂದ ರಾಜ್ಯ ಹೆದ್ದಾರಿ-63 ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯ 3.45 ಕಿ.ಮೀ ವ್ಯಾಪ್ತಿಯ ಗಜಗಿನ ಹಾಳ್-ಕರ್ಚಿಗನೂರು ಹತ್ತಿರ ಹಾಗೂ 7.50 ಕಿ.ಮೀ ವ್ಯಾಪ್ತಿಯ ಚಾಣಕನೂರು ಹತ್ತಿರ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿ ಸ್ಥಳೀಯರ ಸಂಚಾರ ಸುಗಮಗೊಳಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ರೈತ ಸಹಕಾರ ಸೊಸೈಟಿ ಅಧ್ಯಕ್ಷರು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ನಾಂಚರಯ್ಯ, ಆರ್. ಪಂಪನಗೌಡ, ಟಿ. ದೊಡ್ಡ ವೀರೇಶಗೌಡ, ಬಿ. ಬಸವನಗೌಡ (ಕರ್ಚಿಗನೂರು), ಎಂ. ಬಗ್ಗೂರುಗೌಡ, ಯು. ಬಗ್ಗೂರುಗೌಡ (ಚಾಣಕನೂರು), ಚೂಡಿ ಈರಯ್ಯ, ವಡ್ಡರ ಚೂಡಿ ರಮೇಶ್, ಹನುಮಂತಪ್ಪ, ಚೆನ್ನಯ್ಯಸ್ವಾಮಿ, ಗೋಪಾಲಪ್ಪ, ನಗರಸಭೆ ಮಾಜಿ ಸದಸ್ಯರಾದ ಅನ್ಸಾರಿ ಇಸಾಕ್, ಹೆಚ್. ಗಣೇಶ್, ಬಿ. ವೆಂಕಟೇಶ್, ಜಾಜಿ ರಾಮಪ್ಪ, ಬಿಎಂ ಮಣಿಕಂಠ ನಾಯಕ, ಪವನ್ ದೇಸಾಯಿ, ಪಿಡಬ್ಲ್ಯುಡಿ ಇಂಜಿನಿಯರ್‌ಗಳಾದ ಗಂಗಪ್ಪ, ರಾಕೇಶ್, ಮೊಹಮ್ಮದ್ ಪಾಷಾ, ಗ್ರಾಮ ಪಂಚಾಯತ್ ಪಿಡಿಓ ಶಾಕಿರ್ ಸಾಬ್, ಸ್ಥಳೀಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 7:29 pm

ವಿಜಯನಗರ | ಹರಾಳು ಗ್ರಾಮದಲ್ಲಿ ಕರಿಯಮ್ಮ ದೇವಿಯ ಕಳಸಾರೋಹಣ

ಕೊಟ್ಟೂರು (ವಿಜಯನಗರ) :ತಾಲೂಕಿನ ಹರಾಳು ಗ್ರಾಮದಲ್ಲಿ ಅಧಿದೇವತೆ ಶ್ರೀ ಕರಿಯಮ್ಮ ದೇವಿಯ ಕಳಸಾರೋಹಣ ಹಾಗೂ ನೂತನ ಕರಿಗಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮವು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಲೇಖಕ ಹಾಗೂ ಪತ್ರಕರ್ತರಾದ ಭೀಮಣ್ಣ ಗಜಾಪುರ ಅವರ “ಅರಣ್ಯ ರಕ್ಷಕ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪ್ಪಾರ್ ಕೊಟ್ರೇಶ್ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಳ್ಳಾರಿ-ವಿಜಯನಗರ ಸಂಸದ ಇ.ತುಕಾರಾಂ ಅವರು, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಸಾಧ್ಯವೆಂದು ಅಭಿಪ್ರಾಯಪಟ್ಟರು. ಮತದಾರರೇ ತಮ್ಮ ರಾಜಕೀಯ ಜನ್ಮದಾತರು ಎಂದು ಹೇಳಿದರು. ವೇದಿಕೆಯಲ್ಲಿ ಮಾಜಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್ ಎಸ್., ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಎ. ನಂಜಪ್ಪ, ರಾಜ್ಯ ಬೀಜ ನಿಗಮ ನಿರ್ದೇಶಕ ಸಾವಜ್ಜಿ ರಾಜೇಂದ್ರಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಾಲಸ್ವಾಮಿ ಎಂ ನಿರೂಪಿಸಿದರು. ಕೊಟ್ರೇಶ್ ಮಾಳ್ಗಿ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.

ವಾರ್ತಾ ಭಾರತಿ 3 Apr 2026 7:24 pm

ಅಣ್ಣಾಮಲೈ ಪಕ್ಷನಿಷ್ಠೆಗೆ ಜನಬೆಂಬಲದ ಮಹಾಪೂರ; ಭಾವನೆಗಳ ಅಲೆಯಲ್ಲಿ ಭರವಸೆಗಳು ಭರಪೂರ; ಟಿಕೆಟ್‌ ಸಿಗದಿದ್ದರೂ ಗೆದ್ದ ಸಿಂಗಂ

ನಾನು ಪಕ್ಷದ ನಿಷ್ಢಾವಂತ ಕಾರ್ಯಕರ್ತ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕರ್ತವ್ಯ ಎನ್ನುವ ಅನೇಕ ರಾಜಕಾರಣಿಗಳು, ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದಾಗ, ಪಕ್ಷದಲ್ಲಿ ಉನ್ನತ ಸ್ಥಾನ ಸಿಗದಿದ್ದಾಗ, ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿಕೆ ನೀಡಿ ಪಕ್ಷದಿಂದ ಕಾಲು ಹೊರಗಿಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಚಹರೆಯಾಗಿರುವ ಕೆ. ಅಣ್ಣಾಮಲೈ ಅವರಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡಿಲ್ಲ. ಆದರೆ ಪಕ್ಷ ನೀಡಿರುವ ಪ್ರಚಾರ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಅಣ್ಣಾಮಲೈ ನೀಡಿರುವ ಹೇಳಿಕೆಗೆ ಜನಬೆಂಬಲ ವ್ಯಕ್ತವಾಗಿದೆ.

ವಿಜಯ ಕರ್ನಾಟಕ 3 Apr 2026 7:23 pm

ಉತ್ತಮ ನಾಗರೀಕರಾಗಲು ಕಾಲೇಜುಗಳಿಲ್ಲ: ಸ್ಪೀಕರ್‌ ಯು.ಟಿ.ಖಾದರ್

ʼಗೌರವ ಡಾಕ್ಟರೇಟ್‍ʼಗೆ ಭಾಜನರಾಗಿರುವ ಪಿ.ಜಿ.ಆರ್.ಸಿಂಧ್ಯ ಅವರಿಗೆ ಅಭಿನಂದನಾ ಸಮಾರಂಭ

ವಾರ್ತಾ ಭಾರತಿ 3 Apr 2026 7:22 pm

ಎ.9: ಉದ್ಯೋಗಕ್ಕಾಗಿ ನೇರ ಸಂದರ್ಶನ

ಮಂಗಳೂರು: ಎಕ್ಸ್‌ಫರ್ಟ್ ಕಾಲೇಜು ಮಂಗಳೂರು, ಕಲ್ಚರಲ್ ಹೈವೇ ಮಂಗಳೂರು ಹಾಗೂ ಕೆಎನ್‌ಎನ್‌ಡಿ ಅಸೋಸಿಯೇಟ್ಸ್ ಪ್ರೈ.ಲಿ. ಮಂಗಳೂರು ಖಾಸಗಿ ಕಂಪೆನಿಗಳ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಸರ್ವಿಸ್ ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಸರ್ವೀಸ್ ಇಂಜಿನಿಯರ್, ಸರ್ವೀಸ್ ಟೆಕ್ನಿಶಿಯನ್, ಸಿಸ್ಟಮ್ ಆಪರೇಟರ್, ಫುಡ್ ಕುಕ್, ಹೆವಿ ವೆಹಿಕಲ್ ಡ್ರೈವರ್, ಮೆಕ್ಯಾನಿಕಲ್ ಟೆಕ್ನಿಶಿಯನ್, ಸೇಲ್ಸ್ ಮಾರ್ಕೆಟಿಂಗ್, ವೇರ್ ಹೌಸ್ ಅಸೋಸಿಯೇಟ್ಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೀನಿಯರ್ ವೇರ್ ಹೌಸ್ ಅಸೋಸಿ ಯೇಟ್ಸ್, ಆಫೀಸ್ ಎಕ್ಸಿಕ್ಯೂಟಿವ್, ಹಾಸ್ಟೆಲ್ ವಾರ್ಡನ್, ಸ್ಟಡಿ ಇನ್ವಿಜಿಲೇಟರ್ ಹುದ್ದೆಗಳಿಗೆ ಉದ್ಯೋಗದ ಅವಕಾಶ ಲಭ್ಯವಿದೆ. ಹಾಗಾಗಿ ಎ.9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ಪಡೀಲ್ ಪ್ರಜಾ ಸೌಧದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಎಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 7:20 pm

ವಿಜಯನಗರ | ತಾಯಿ-ಮಕ್ಕಳ ಆಸ್ಪತ್ರೆಗೆ ಉಚಿತ ವಸತಿ ನಿಲಯ ಹಸ್ತಾಂತರ

ವಿಜಯನಗರ : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರ ಪಾಲಕರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ವಸತಿ ನಿಲಯ (ಡಾರ್ಮಿಟರಿ)ಯನ್ನು ಹಸ್ತಾಂತರಿಸಿದರು. ಈ ವಸತಿ ನಿಲಯದಲ್ಲಿ ಸುಸಜ್ಜಿತ ಕಾಟ್-ಬೆಡ್‌ಗಳು, ಶೌಚಾಲಯ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಆಸ್ಪತ್ರೆಗೆ ದೂರದಿಂದ ಬರುವ ಕುಟುಂಬಗಳಿಗೆ ಇದು ಬಹಳ ಸಹಾಯಕವಾಗಲಿದೆ. ಈ ಸಂದರ್ಭದಲ್ಲಿ ಬಿಎಂಎನ್‌ನ ಗಣೇಶ ಹೆಗ್ಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಶಸ್ತ್ರಚಿಕಿತ್ಸಕರು, ವಿವಿಧ ಕಾರ್ಯಕ್ರಮಾಧಿಕಾರಿಗಳು, ಹಿರಿಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 7:18 pm

ಡ್ರಗ್ಸ್ ಮಾಫಿಯಾ, ರೈತರ ಆತ್ಮಹತ್ಯೆ ಹಾಗೂ ಆಡಳಿತ ವೈಫಲ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಚಾರ್ಜ್ ಶೀಟ್ ಬಿಡುಗಡೆ!

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಸಿಟಿ ರವಿ ಮುಂದಿಟ್ಟರು. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 3 Apr 2026 7:17 pm

ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ BDA ಹೊಸ ಎಲಿವೇಟೆಡ್ ಕಾರಿಡಾರ್; 1.6 KM, 4 ಪಥ - 420 ಕೋಟಿ ರೂ. ವೆಚ್ಚದ ಟೆಂಡರ್‌

ಬಿಡಿಎಯಿಂದ ವಿಮಾನ ನಿಲ್ದಾಣ ರಸ್ತೆಯ ಮೇಖ್ರಿ ವೃತ್ತದ ಬಳಿಕ ಹೊಸ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. 1.6 ಕಿ.ಮೀ ಉದ್ಧವಿದ್ದು, 4 ಪಥಗಳಿವೆ. ಒಟ್ಟು 420 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾವುದೇ ಭೂಸ್ವಾಧೀನ ಅವಶ್ಯಕತೆ ಇಲ್ಲ. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ನಿಯಮ ವಿಧಿಸಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 3 Apr 2026 7:16 pm

ಲೇಡಿಗೋಷನ್ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಕೊಡುಗೆ

ಮಂಗಳೂರು, ಎ.3: ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ವತಿಯಿಂದ ಸುಮಾರು 25ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು. ಗುರುವಾರ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಟ್ರಾಸೌಂಡ್ ಉಪಕರಣವನು ಹಸ್ತಾಂತರಿಸಲಾ ಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ದುರ್ಗಾಪ್ರಸಾದ್.ಎಂ.ಆರ್. ವಹಿಸಿದ್ದರು. ತಾಯಿ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಿನಂಪ್ರತಿ 130 ಕ್ಕಿಂತಲೂ ಹೆಚ್ಚು ಸ್ಕ್ಯಾನಿಂಗ್‌ಗಳು ನಡೆಯುತ್ತಿದ್ದು ಗುಣಮಟ್ಟದ ಸೇವೆಯನ್ನು ಜನತೆಗೆ ನೀಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಉಪಕರಣದ ಅನಾವರಣ ಮಾಡಿದ ಕೆಎಂಸಿ ಅಸೋಸಿಯೇಟ್ ಡೀನ್ ಡಾ.ಅಶ್ಫಾಕ್‌ಆಲಿ ಅವರು ಕೆಎಂಸಿ ಹಾಗೂ ಸರಕಾರಿ ಸಹಭಾಗಿತ್ವದಿಂದ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ವಿಶೇಷ ಅರ್ಥವಿದೆ. ಹೆಚ್‌ಪಿಸಿಎಲ್ ನೀಡಿದ ಈ ಉಪಕರಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವ ಭರವಸೆಯನ್ನು ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್‌ಪಿಸಿಎಲ್ ಜನರಲ್ ಮ್ಯಾನೇಜರ್ ಅಜಿತ್, ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆಯನ್ನು ಸಿಆರ್‌ಎಸ್ ನಿಧಿಯಡಿ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹೆಚ್‌ಪಿಸಿಎಲ್‌ನ ದಿನೇಶನ್, ಅಶೀಶ್ ಅಭಿಮನ್ಯು, ಮುಹಮ್ಮದ್ ಕಾಸಿಂ, ದ್ಯಾವರಿ ಭರತ್ ಕುಮಾರ್, ಕೆಎಂಸಿಯ ಡಾ.ನಿಖಿಲ್ ಶೆಟ್ಟಿ, ಡಾ.ಸುಪ್ರಸನ್ನ, ಡಾ.ಶ್ವೇತಾ ಪೂಜಾರಿ, ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್ ಉಪಸ್ಥಿತರಿದ್ದರು. ಅಂಬಿಕಾ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಲವೀನಾ ವಂದಿಸಿದರು.

ವಾರ್ತಾ ಭಾರತಿ 3 Apr 2026 7:15 pm

ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ: ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದ ರಾಜ್ಯಪಾಲರು

ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕ ವ್ಯವಸ್ಥೆ ಕೈಬಿಟ್ಟು ಗ್ರೇಡ್ ವ್ಯವಸ್ಥೆಯನ್ನು ಜಾರಿ ಮಾಡುವ ತೀರ್ಮಾನವನ್ನು ಮರು ಪರಿಶೀಲಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‍ಗೆ ಪತ್ರ ಬರೆದಿದ್ದಾರೆ. ಅಂಕಗಳ ಬದಲಿಗೆ ಕೇವಲ ಗ್ರೇಡ್‍ಗಳನ್ನು ನೀಡುವ ವ್ಯವಸ್ಥೆಯಿಂದಾಗಿ ತೃತೀಯ ಭಾಷಾ ವಿಷಯದ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಗಂಭೀರವಾಗಿ ಕಲಿಯುವ ಆಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷಣ ಕ್ಷೇತ್ರದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಆದುದರಿಂದ ಶಾಲಾ ಶಿಕ್ಷಣ ಇಲಾಖೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಪರಿಶೀಲಿಸುವುದು ಸೂಕ್ತವಾಗಿದೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ರಾಜ್ಯದ ಶೈಕ್ಷಣಿಕ ಉದ್ದೇಶಗಳ ಹಿತದೃಷ್ಟಿಯಿಂದ ತೃತೀಯ ಭಾಷೆಗೆ ಅಂಕ ವ್ಯವಸ್ಥೆಯನ್ನು ಜಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ.  

ವಾರ್ತಾ ಭಾರತಿ 3 Apr 2026 7:14 pm

ರಾಷ್ಟ್ರೀಯ ಮಟ್ಟದ ಸಿಎಂಇ ಕಾರ್ಯಕ್ರಮ

ಉಡುಪಿ, ಎ.3: ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ವಿಭಾಗವು ಆಂತರಿಕ ಗುಣಮಟ್ಟ ಕ್ಷಮತೆ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಮುಂದುವರೆದ ವೈದ್ಯಕೀಯ ಶಿಕ್ಷಣ(ಸಿ.ಎಂ.ಇ) ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಯಿತು. ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ಉಪ ಪ್ರಾಂಶುಪಾಲರಾದ ಡಾ. ನಿರಂಜನ್ ರಾವ್ ಮತ್ತು ಡಾ.ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ., ಸ್ನಾತಕ ವಿಭಾಗ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್, ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ.ರಾಜಲಕ್ಷ್ಮಿ, ಪಠ್ಯೇತರ ಸಮಿತಿಯ ಮುಖ್ಯಸ್ಥೆ ಡಾ.ರಮಾದೇವಿ ಹಾಗೂ ಕ್ರೀಡಾ ವಿಭಾಗದ ಸಹಾಯಕ ಡೀನ್ ಡಾ.ಸುಧೀಂದ್ರ ಮೊಹೆರರ ಮತ್ತು ಡಾ.ಮೊಹಮ್ಮದ್ ಫೈಸಲ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ.ನಿರಂಜನ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡೆ ಮತ್ತು ಫಿಟ್‌ನೆಸ್ ಅಗತ್ಯತೆಗಳು ಎಂಬ ವಿಷಯದ ಕುರಿತು ಮೂಡುಬಿದಿರೆಯ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಮಧು ಜಿ.ಆರ್ ಉಪನ್ಯಾಸ ನೀಡಿದರು. ಸಂಸ್ಥೆಯ ಶಲ್ಯಾತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ನಾಯರ್ ತಜ್ಞ ಕ್ರೀಡೆಯಿಂದ ಉಂಟಾಗುವ ಗಾಯಗಳು ಹಾಗು ಅದರ ಆಯುರ್ವೇದೀಯ ಪರಿಹಾರೋಪಾಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ.ಕೊಚುಥ್ರೆಸಿಯಾ ಜೋಸ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಅನೀಶ್ ಸಂವಾದಾತ್ಮಕ ಅಧಿವೇಶನವನ್ನು ನಡೆಸಿಕೊಟ್ಟರು. ಡಾ.ಮೊಹಮ್ಮದ್ ಫೈಸಲ್ ಸ್ವಾಗತಿಸಿದರು. ಡಾ.ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಡಾ.ಸುಶ್ಮಿತಾ ವಂದಿಸಿದರು.

ವಾರ್ತಾ ಭಾರತಿ 3 Apr 2026 7:11 pm

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಭಿತ್ತಿಚಿತ್ರ ಅನಾವರಣ

ಉಡುಪಿ, ಎ.3: ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮೇ3ರಂದು ನಡೆಯಲಿರುವ ಉಡುಪಿ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಬಿತ್ತಿ ಚಿತ್ರವನ್ನು ಉಡುಪಿ ಶಾಸಕ ಯಶ್‌ಪಾಲ ಸುವರ್ಣ ಅನಾವರಣಗೊಳಿಸಿದರು., ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಮ್ಮೇಳನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದಬಸಯ್ಯ ಸ್ವಾಮಿಚಿಕ್ಕಮಠ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಮಹಿಳಾ ಪ್ರತಿನಿಧಿ ಅನಿತಾ ಸಿಕ್ವೇರಾ, ಸದಸ್ಯರಾದ ದೀಪ ಕರ್ಕಿ, ಪ್ರಸನ್ನ ಕುರ್ಮಾ ಹಿರೇಮಠ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Apr 2026 7:09 pm

ಉಡುಪಿ ಜಿಲ್ಲೆಯಾದ್ಯಂತ ಬಿಜೆಪಿ ಸ್ಥಾಪನಾ ದಿನಾಚರಣೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ, ಎ.3: ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನವನ್ನು ಏ.6ರಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು. ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಎ.6ರಂದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುವ ಜೊತೆಗೆ ಜಿಲ್ಲೆಯ ಎಲ್ಲಾ 1,112 ಬೂತ್‌ಗಳ ಅಧ್ಯಕ್ಷರು ತಮ್ಮ ಮನೆಯ ಮೇಲೆ ಪಕ್ಷದ ಧ್ವಜವನ್ನು ಹಾರಿಸಿ, ಬೂತ್ ಸಮಿತಿ ಸಭೆಯನ್ನು ಆಯೋಜಿಸಬೇಕು. ಎ.14ರಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲಿ ಆಚರಿಸಬೇಕು ಎಂದು ಅವರು ತಿಳಿಸಿದರು. ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್ ಕೊಡಗು ಎಸ್‌ಐಆರ್ ಅಭಿಯಾನ, ಪ್ರಶಿಕ್ಷಣ ವರ್ಗ ಸಹಿತ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮಂಡಲವಾರು ಸಂಘಟನಾತ್ಮಕ ಚಟುವಟಿಕೆಗಳ ವರದಿ ಸಂಗ್ರಹಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಎ.ನಾಯ್ಕ್ ವಂದಿಸಿದರು.

ವಾರ್ತಾ ಭಾರತಿ 3 Apr 2026 7:04 pm

ಅಟೋ ರಿಕ್ಷಾಗಳ ಗ್ಯಾಸ್‌ ದರ ಹೆಚ್ಚಳ: ಸರಕಾರದ ಮಧ್ಯಪ್ರವೇಶಕ್ಕೆ ಐಟಿಯು ಆಗ್ರಹ

ಉಡುಪಿ, ಎ.3: ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಹೆಸರಿನಲ್ಲಿ ಅಡುಗೆ ಅನಿಲ ಮತ್ತು,ಅಟೋ ಗ್ಯಾಸ್ ದರ ಹೆಚ್ಚಳ ಮಾಡಿ ಖಾಸಗಿ ಅನಿಲ ಕಂಪನಿಗಳು ರಿಕ್ಷಾ ಚಾಲಕರನ್ನು ಹಾಗೂ ಸಾರ್ವಜನಿಕರನ್ನು ಲೂಟಿ ಮಾಡುತ್ತಿ ರುವುದನ್ನು ಸಿಐಟಿಯು ಉಡುಪಿ ವಲಯ ಸಮಿತಿ ಖಂಡಿಸಿದೆ. ಎಪ್ರಿಲ್ 1ರಿಂದ ಅಟೋ ರಿಕ್ಷಾ ಗ್ಯಾಸ್ ದರ ಸಿಎನ್‌ಜಿ ಕಂಪನಿಯವರು 2ರೂ ಮತ್ತು ಎಲ್‌ಪಿಜಿ ಕಂಪನಿಯವರು 30ರೂ. ಹೆಚ್ಚಳ ಮಾಡಿ ರಿಕ್ಷಾ ಚಾಲಕರಿಂದ ಹಗಲು ದರೋಡೆ ಮಾಡುತ್ತಿದೆ. ಇದರಿಂದಾಗಿ ಅನಿವಾರ್ಯವಾಗಿ ರಿಕ್ಷಾ ದರ ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ. ಇದರಿಂದ ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ ದೊಡ್ಡ ಹೊರೆ ಬಿಳಲಿದೆ. ಈಗಾಗಲೇ ಯುದ್ಧದ ಭೀತಿಯಿಂದ ಎಲ್ಲಾ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಅಡುಗೆ ಅನಿಲ ದರ 60ರೂ. ಹೆಚ್ಚಳವಾಗಿದ್ದು ಜನಸಾಮಾನ್ಯರು ತತ್ತರಿಸಿ ಹೊಗಿದ್ದಾರೆ. ಆದ್ದರಿಂದ ಸರಕಾರ, ಜಿಲ್ಲಾಡಳಿತ ಕೂಡಲೇ ಮಧ್ಯಪ್ರದೇಶಿಸಿ ಖಾಸಗಿ ಅನಿಲ ಕಂಪನಿಗಳಿಗೆ ಅನಿಲ ದರ ಹೆಚ್ಚಳ ಮಾಡದ ರೀತಿಯಲ್ಲಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಹಾಗೂ ಸಮರ್ಪಕ ವಾಗಿ ಅನಿಲ ವಿತರಣೆ ಮಾಡಬೇಕು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 3 Apr 2026 7:02 pm

ಆದಾಯವಿಲ್ಲದಿದ್ದರೂ ಸಿಗಲಿದೆ ಕ್ರೆಡಿಟ್ ಕಾರ್ಡ್: FD ಆಧಾರಿತ ಕ್ರೆಡಿಟ್ ಕಾರ್ಡ್‌ಗಳ ಲಾಭ-ನಷ್ಟಗಳೇನು? ಇಲ್ಲಿದೆ ಮಾಹಿತಿ

ನಿರಂತರ ಆದಾಯ ಅಥವಾ ದೀರ್ಘಕಾಲೀನ ಉತ್ತಮ ಕ್ರೆಡಿಟ್ ಇತಿಹಾಸ ಇಲ್ಲದಿದ್ದರೆ ಹೊಸ ಕ್ರೆಡಿಟ್ ಕಾರ್ಡ್ ಪಡೆಯುವುದು ಸವಾಲಿನ ಕೆಲಸ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಂತಹ ಸನ್ನಿವೇಶಗಳನ್ನು ನಿಭಾಯಿಸಲು, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD) ಆಧಾರಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಇವುಗಳನ್ನು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್‌ಗಳು (Secured Credit

ಒನ್ ಇ೦ಡಿಯ 3 Apr 2026 7:00 pm

ಡಾ.ಹರೇಕಳ ಹಾಜಬ್ಬರಿಗೆ ರಜತ ಸಂಭ್ರಮ ಪುರಸ್ಕಾರ ಪ್ರದಾನ

ಕೋಟ, ಎ.3: ಮಣೂರು ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಗೀತಾನಂದ ವೇದಿಕೆಯಲ್ಲಿ ಮಣೂರು ಫ್ರೆಂಡ್ಸ್ ಮಣೂರು ಇದರ ರಜತ ಸಂಭ್ರಮ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಕ್ಷರ ಸಂತ ಡಾ.ಹರೇಕಳ ಹಾಜಬ್ಬ ಇವರಿಗೆ ರಜತ ಸಂಭ್ರಮ ಪುರಸ್ಕಾರ ಪ್ರದಾನ ಮಾಡಲಾ ಯಿತು ಸ್ಥಳೀಯರಾದ ರವೀಂದ್ರ ಪೈ ಇವರಿಗೆ ಸಾಧಕ ಪುರಸ್ಕಾರ, ನಿಧಿ ಪೈಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಸಾಧಕರಾದ ಕಂಬಳ ಕ್ಷೇತ್ರದ ರಘುರಾಮ ಶೆಟ್ಟಿ, ಶಿವರಾಮ ಶೆಟ್ಟಿ ನಡುಬೆಟ್ಟು, ಮೆಸ್ಕಾಂ ಉಮ್ಮರ್ ಸಾಹೇಬ್, ನಿರ್ಮಲ ಟೀಚರ್ ಅವರಿಗೆ ಶೇಷ ಅಭಿನಂದನೆ, ಕೋಟದ ಪಂಚವರ್ಣ ಸಂಘಟನೆಗೆ ಸಂಘಟನಾ ಪುರಸ್ಕಾರ, ಮಣೂರು ಫ್ರೆಂಡ್ಸ್ ಹುಟ್ಟಿಗೆ ಕಾರಣಿಭೂತರಾದ ಗೌರವಾಧ್ಯಕ್ಷ ಸುರೇಶ್ ಆಚಾರ್ ಇವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರಸಲಾಯಿತು. ಅಶಕ್ತ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು, ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ನೆರವನ್ನು ಹಸ್ತಾಂತರಿ ಸಲಾಯಿತು. ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ದೇಗುಲದ ಪರವಾಗಿ ಸಂಘಟಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್‌ನ ಗೌರವ ಸಲಹೆಗಾರ ಸುಬ್ರಾಯ ಆಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಗಣೇಶ್ ಸೀಲ್ಕ್ಸ್ ಅನಂತ್ ನಾಯಕ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್, ಉದ್ಯಮಿ ನವೀನ್ ಶೆಟ್ಟಿ ಪಟೇಲರ ಮನೆ, ಸಂತೋಷ್ ಸುವರ್ಣ ಉಪಸ್ಥಿತರಿದ್ದರು. ಮಣೂರು ಫ್ರೆಂಡ್ಸ್ ಸ್ಥಾಪಕ ಸದಸ್ಯರಾದ ಪ್ರಭಾಕರ್ ಆಚಾರ್ ಸ್ವಾಗತಿಸಿದರು. ಪ್ರಣುತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು. ಸುಧಾಕರ ಆಚಾರ್, ದಿನೇಶ್ ಆಚಾರ್ ಮತ್ತಿತರರು ಸಹಕರಿಸಿದರು.

ವಾರ್ತಾ ಭಾರತಿ 3 Apr 2026 7:00 pm

ಉಡುಪಿ| ಅಪಾಯ ಸ್ಥಿತಿಯಲ್ಲಿ ನಗರದ ಸಿಗ್ನಲ್ ಕಂಬ!

ಉಡುಪಿ, ಎ.3: ನಗರದ ಕವಿ ಮುದ್ದಣ ಮಾರ್ಗ ಪ್ರಾರಂಭ ಪಡೆಯುವ ತ್ರಿವೇಣಿ ವೃತ್ತದ ಬಳಿ, ನಿರುಪಯುಕ್ತ ಎರಡು ಕಬ್ಬಿಣದ ಸಿಗ್ನಲ್ ಕಂಬಗಳಿದ್ದು, ಇದು ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿದೆ. ಹದಿನೈದು ವರ್ಷಗಳ ಹಿಂದೆ ಅಳವಡಿಸಿರುವ ಈ ಕಂಬಗಳು ಜಂಗು ಹಿಡಿದು ಬಿರುಕು ಬಿಟ್ಟಿರುವುದು ಕಾಣಿಸುತ್ತಿದ್ದು, ಆಗಲೋ ಈಗಲೋ ಧರೆಗುರುಳಿಯುವ ಸ್ಥಿತಿಯಲ್ಲಿದೆ. ವಾಹನ ದಟ್ಟಣೆ, ಜನಸಂಚಾರ ಇರುವ ನಗರದ ಮುಖ್ಯ ರಸ್ತೆ ಇದಾಗಿದ್ದು, ಮಳೆ ಗಾಳಿಗೆ ಕಂಬವು ಆಯಾತಪ್ಪಿ ಬಿದ್ದು, ಅವಘಡ ಸಂಭವಿಸುವ ಆತಂಕ ಎದುರಾಗಿದೆ. ಸಂಭವನೀಯ ದುರಂತವನ್ನು ತಡೆಯೊಡ್ಡಲು ನಿರುಪಯುಕ್ತ ಸಿಗ್ನಲ್ ಕಂಬವನ್ನು ಸಂಚಾರ ಪೋಲಿಸ್ ಇಲಾಖೆ, ನಗರಾಡಳಿತ, ಜಿಲ್ಲಾಡಳಿತವು, ತಕ್ಷಣವಾಗಿ ತೆರವುಗೊಳಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 3 Apr 2026 6:56 pm

ಆಳಂದ | ಸಿಯುಕೆಯಲ್ಲಿ ದೃಶ್ಯಕಲಾ ಪ್ರದರ್ಶನ ಉದ್ಘಾಟನೆ

ಚಿತ್ರಕಲೆ ಜಾಗತಿಕ ಭಾಷೆ : ಕುಲಸಚಿವ ಪ್ರೊ.ಬಿರಾದಾರ್‌

ವಾರ್ತಾ ಭಾರತಿ 3 Apr 2026 6:56 pm

ದಾಹ ತಣಿಸಲೆಂದು ಸ್ಥಾಪಿಸಿರುವ ಅರವಟ್ಟಿಗೆ ಉದ್ಘಾಟನೆ

ಉಡುಪಿ, ಎ.3: ನಗರದಲ್ಲಿ ಸುಡು ಬಿಸಿಲಿನ ತಾಪಮಾನವು ಹೆಚ್ಚಿದ್ದು, ಸಾರ್ವಜನಿಕರ ದೇಹ ದಾಹ ತಣಿಸಲು ಉಡುಪಿ ಜಿಲ್ಲಾ ನಾಗರೀಕ ಸಮಿತಿಯು, ಜೋಸ್ ಆಲುಕ್ಕಾಸ್ ಆಭರಣಮಳಿಗೆಯ ಸಹಕಾರದಿಂದ, ನಗರದ ಮಾರುಥಿ ವೀಥಿಕಾದಲ್ಲಿ ವ್ಯವಸ್ಥೆಗೊಳಿಸಿರುವ ಅರವಟ್ಟಿಗೆ ಉದ್ಘಾಟನೆ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ ಹುಬ್ಬಳ್ಳಿ, ಸಮಾಜ ಸೇವಕ ನರಸಿಂಹ ಭಟ್ ಮಣಿಪಾಲ, ಜೋಸ್ ಅಲುಕ್ಕಾಸ್ ಮಳಿಗೆಯ ಮೆನೇಜರ್ ರಾಜೇಶ್ ಎನ್.ಆರ್. ಮತ್ತು ಗೋಪಾಲ್, ಉದ್ಯಮಿ ಉದಯ ಕುಮಾರ್, ಕೊಟೆಕ್ ಮಹೀಂದ್ರ ಬ್ಯಾಂಕಿನ ರಾಹುಲ್, ವಿಷ್ಣು, ಮತ್ತು ಸಿಬಂದಿಗಳು ಉಪಸ್ಥಿತರಿದ್ದರು. ಹನುಮಾನ್ ಜಯಂತಿಯ ಪ್ರಯುಕ್ತವಾಗಿ ಪಾನಕ ಸೇವೆಯನ್ನು ಸುದರ್ಶನ್ ನಾಯಕ್ ನೀಡಿದರು. ಅರವಟ್ಟಿಗೆಯಲ್ಲಿ ನಿತ್ಯವು ಮೃತ್ತಿಕೆಯ ಹೂಜಿಯಲ್ಲಿ ಸಂಗ್ರಹಿಸಿಟ್ಟಿರುವ ಪರಿಶುದ್ಧ ತಂಪು ನೀರು, ಹಾಗೂ ಹಣ್ಣು ಹಂಪಲುಗಳ ಪಾನೀಯ ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಈ ಯೋಜನೆ ಮಳೆಗಾಲ ಆರಂಭದವರೆಗೆ ಮುಂದು ವರಿಯಲಿದೆ ಎಂದು ಅರವಟ್ಟಿಗೆ ಸ್ಥಾಪಕ, ಸಮಾಜಸೇವಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Apr 2026 6:53 pm

ಶಹಾಬಾದ್ | ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕರನ್ನು ವರ್ಗಾವಣೆ ಮಾಡಲು ಒತ್ತಾಯ

ಶಹಾಬಾದ್ : ತಾಲೂಕಿನ ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕ ಗಣಮಂತರಾವ ಪಾಟೀಲ ಅವರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮಗೆ ಬೇಕಾದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತಾಲೂಕಿನಿಂದ ವರ್ಗಾವಣೆ ಮಾಡಬೇಕೆಂದು ಕರವೇ (ಪ್ರವೀಣಶೆಟ್ಟಿ ಬಣ) ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಾಬಾದ ತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಗ್ರಾಮದಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡದೇ ಹಾಗೂ ಆಸ್ತಿ ವರ್ಗಾವಣೆಯ ಸಂದರ್ಭಗಳಲ್ಲಿ ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆಸ್ತಿ ವರ್ಗಾವಣೆಗೆ ಗ್ರಾಮದಲ್ಲಿನ ನಾಲ್ಕು ಪಂಚರ ಸಾಕ್ಷಿ ಅಗತ್ಯವಿದ್ದರೂ, ಬೇರೆ ಊರಿನವರ ಸಾಕ್ಷಿ ಪಡೆದು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಜೊತೆಗೆ ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡದೆ ಹಣದ ಆಸೆಗಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಇದೇ ವೇಳೆ, 2024-25 ಮತ್ತು 2025-26ರಲ್ಲಿ ಉಂಟಾದ ಪ್ರವಾಹದಿಂದ ಗ್ರಾಮದಲ್ಲಿ ಮನೆಗಳು ಮತ್ತು ಬೆಳೆಗಳಿಗೆ ಭಾರಿ ಹಾನಿಯಾಗಿದ್ದರೂ, ನಿಜವಾಗಿ ಹಾನಿಗೊಳಗಾದವರಿಗೆ ಪರಿಹಾರ ನೀಡದೇ, ಹಾನಿಯೇ ಆಗದ ಕೆಲವರಿಗೆ ಪರಿಹಾರ ಒದಗಿಸಿರುವ ಆರೋಪವೂ ಕೇಳಿಬಂದಿದೆ. ಗಂಡ ಮೃತಪಟ್ಟ ನಂತರ ಆಸ್ತಿ ಹೆಂಡತಿಗೆ ವರ್ಗಾವಣೆ ಮಾಡಬೇಕಾದಲ್ಲಿ ಇತರರಿಗೆ ವರ್ಗಾವಣೆ ಮಾಡಿರುವುದು ಕೂಡ ಗಂಭೀರ ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ತಹಶೀಲ್ದಾರ್‌ ನೀಲಪ್ರಭ ಬಬಲಾದ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮಲೇಖಪಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಂಡು ವರ್ಗಾವಣೆ ಮಾಡಬೇಕು. ಇಲ್ಲವಾದರೆ ತಹಶೀಲ್ದಾರ್‌ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಸಿದ್ದಾರೆ. ಕರವೇ ಉಪಾಧ್ಯಕ್ಷ ಲಿಂಗರಾಜ ಕಮರಡಗಿ, ಶರಣು ತಳವಾರ, ದತ್ತು ಹೀರಾಪೂರ, ಪ್ರಭು ಮಂಗಳೂರ, ಭೂತಾಳ ಪೂಜಾರಿ ಇತರರು ಇದ್ದರು.

ವಾರ್ತಾ ಭಾರತಿ 3 Apr 2026 6:52 pm

ಮಹಿಳೆಯರು ಯಕ್ಷಗಾನ ಕಲಿತರೆ ಸಂಸ್ಕಾರದ ಮಾರ್ಗ ತೆರೆದಂತೆ: ತಲ್ಲೂರು

ಉಡುಪಿ, ಎ.3: ಯಕ್ಷಗಾನ ಜ್ಞಾನ ಭಂಡಾರವಿದ್ದಂತೆ. ಇಂದಿನ ಆಧುನಿಕ ಸಮಾಜಕ್ಕೆ ಸಂಸ್ಕಾರ ಮಾರ್ಗವನ್ನು ಯಕ್ಷಗಾನದ ಮೂಲಕ ನೀಡಬಹುದು. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಯಕ್ಷಗಾನ ಕಲಿತ ಮಹಿಳೆ ತನ್ನ ಕುಟುಂಬಕ್ಕೆ, ಸಮಾಜಕ್ಕೆ ಉತ್ತಮ ಸಂಸ್ಕಾರದ ದಾರಿಯನ್ನು ತೋರಬಲ್ಲಳು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ. ಕಲಾಪೀಠ ಕೋಟ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಪ್ರಾಯೋಜಕತ್ವದಲ್ಲಿ ಕೆ.ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ಸಾಲಿಗ್ರಾಮ ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ಮಹಿಳೆಯರಿಂದ ಯಕ್ಷಗಾನ ’ಶೂರ್ಪನಖಾ ಮಾನಭಂಗ’ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡುತಿದ್ದರು. ಮಕ್ಕಳಿಗೆ ಸಂಸ್ಕಾರವನ್ನು ಬೆಳೆಸಬೇಕಾದರೆ ಯಕ್ಷಗಾನವನ್ನು ಕಲಿಸಿ. ನಮ್ಮ ಪುರಾಣಗಳ ಬಗ್ಗೆ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಕೂಡಾ ನೀಡಿದಂತಾಗುತ್ತದೆ. ಇದರಿಂದ ವೃದ್ಧಾಪ್ಯದಲ್ಲಿ ತಂದೆತಾಯಿಯರು ವೃದ್ಧಾಶ್ರಮ ವನ್ನು ಸೇರುವ ಪ್ರಮೇಯ ತಪ್ಪುತ್ತದೆ. ನನ್ನ ಮಗ, ಮಗಳು, ಮೊಮ್ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ನೋವನ್ನು ಅನುಭವಿಸುವ ಸಂಕಷ್ಟವೂ ತಪ್ಪುತ್ತದೆ. ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಕಾರಣವಾಗುತ್ತದೆ ಎಂದ ಅವರು ಯಕ್ಷಗಾನ ಅಕಾಡೆಮಿ ಈ ನಿಟ್ಟಿನಲ್ಲಿ ಮಕ್ಕಳ ಹಾಗೂ ಮಹಿಳೆಯರ ಯಕ್ಷಗಾನ ತರಬೇತಿ, ಪ್ರದರ್ಶನಕ್ಕೆ ಹಚ್ಚಿನ ಮಹತ್ವ, ಪ್ರೋತ್ಸಾಹ ನೀಡುತ್ತಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಮಕ್ಕಳು, ಹಿರಿಯರ ಜೊತೆಗೆ ಮಾತನಾಡಲು, ಬೆರೆಯಲು ಸಮಯವೇ ಇಲ್ಲ ಎಂಬಂತಾಗಿದೆ. ಹೀಗಾಗಿ ಯಕ್ಷಗಾನದಂತಹ ಕಲೆಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿದರೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ಮಾರ್ಗವನ್ನು ತೋರಿಸಿದಂತಾಗುತ್ತದೆ. ಇಂದಿನ ಶಿಕ್ಷಣದ ಜೊತೆಗೆ ಯಕ್ಷಗಾನವನ್ನು ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೂ ಪೂರಕವಾಗುತ್ತಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ತಂದೆತಾಯಿ ಯಾವುದೇ ಅಳುಕಿಲ್ಲದೆ ಮಕ್ಕಳಿಗೆ ಯಕ್ಷಗಾನದಂತಹ ಕಲೆಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾಗವತ ಗಣೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಲಾ ನಿರ್ದೇಶಕ ಕೆ.ನರಸಿಂಹ ತುಂಗ ಸ್ವಾಗತಿಸಿದರು. ಬಳಿಕ ಮಹಿಳೆಯರಿಂದ ಪ್ರದರ್ಶನಗೊಂಡ ‘ ಶೂರ್ಪನಖಾ ಮಾನ ಭಂಗ ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಬಿಲ್ಲಾಡಿ ಗಣೇಶ್ ಆಚಾರ್ಯ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ ಹಾಗೂ ಮುಮ್ಮೇಳದಲ್ಲಿ ವೃಂದಾ, ಅನುಷಾ, ಮಾನ್ಯ, ನಮನ, ಜಾಹ್ನವಿ, ಸುಜಾತಾ, ಮೇಧಾ, ಧನುಶ್ರೀ, ಇಂಚರ, ಆರಭಿ, ಈಶಾನಿ, ತನಿಷಾ ಪ್ರದರ್ಶನ ನೀಡಿದರು.

ವಾರ್ತಾ ಭಾರತಿ 3 Apr 2026 6:51 pm