ಕರಾವಳಿ ಉತ್ಸವ| ಚಲನಚಿತ್ರೋತ್ಸವಕ್ಕೆ ಚಾಲನೆ
ಮಂಗಳೂರು, ಜ. 19: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮೂರು ದಿನಗಳ ನಡೆಯುವ ಕರಾವಳಿ ಉತ್ಸವ ಚಲನಚಿತ್ರೋತ್ಸವಕ್ಕೆ ಭಾರತ್ ಸಿನಿಮಾಸ್ನಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಉದ್ಘಾಟನೆ ನೆರವೇರಿಸಿ, ತುಳುನಾಡಿನ ಭಾಷಾ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಲನಚಿತ್ರೋತ್ಸವ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಪ್ರಾದೇಶಿಕ ಸಿನಿಮಾಗಳಿಗೆ ಒಳ್ಳೆಯ ಭವಿಷ್ಯವಿದ್ದು, ನಾನಿದ್ದಾಗ ಸಬ್ಸಿಡಿಯನ್ನೂ ಕೊಡಿಸಿದ್ದೆ. 2-3 ವರ್ಷಗಳಿಂದ ಸಬ್ಸಿಡಿ ಸ್ಥಗಿತಗೊಂಡಿದ್ದುö, ಎಲ್ಲ ಪ್ರಾದೇಶಿಕ ಚಲನಚಿತ್ರದವರು ದನಿ ಎತ್ತಬೇಕು ಎಂದರು. ನಿರ್ದೇಶಕ ರಾಜ್ ಬಿ.ಶೆಟ್ಟಿ ಮಾತನಾಡಿ, ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುವುದರಿಂದ ಹೊಸ ಕಥೆಗಳೂ ಹುಟ್ಟುತ್ತವೆ, ಯಕ್ಷಗಾನ, ಹುಲಿವೇಷ ಸಹಿತ ಕುಣಿತ ಪ್ರಕಾರಗಳಿರುವ ಕರಾವಳಿಯಿಂದ ಹೊಸ ಕಥಾ ಪ್ರಕಾರಗಳು ಹೊರಹೊಮ್ಮುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಿನಿಮಾಗಳ ಪಾತ್ರವೂ ಇದೆ. ಇಲ್ಲೇ ಶಾಶ್ವತ ಸಿನಿಮಾ ಸೆಟ್ ನಿರ್ಮಿಸಿದರೆ ಹೆಚ್ಚಿನ ಹೂಡಿಕೆ ಬರಲಿದೆ. ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ನಿರ್ಮಾಪಕರಾದ ಎಚ್.ಶ್ರೀನಿವಾಸ, ಧನರಾಜ್ ಆರ್., ಪ್ರಕಾಶ್ ಪಾಂಡೇಶ್ವರ, ಸಚಿನ್ ಎಸ್., ಬಿಗ್ ಸಿನಿಮಾಸ್ನ ಬಾಲಕೃಷ್ಣ ಶೆಟ್ಟಿ, ಚಲನಚಿತ್ರೋತ್ಸವ ಸಂಘಟಕ ಯತೀಶ್ ಬೈಕಂಪಾಡಿ, ಜಿಲ್ಲಾ ನಗರ ಕೋಶದ ಯೋಜನಾಕಾರಿ ಡಾ.ಜಿ.ಸಂತೋಷ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಉಪಸ್ಥಿತರಿದ್ದರು. ಅನುರಾಗ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಶೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜ.19: ಶೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 1,38,20,060 ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.15ರಂದು ರಿಶಿತಾ ಎಂಬ ಹೆಸರಿನಲ್ಲಿ ತನಗೆ ಬಂದ ವಾಟ್ಸ್ಆ್ಯಪ್ ಮೆಸೇಜ್ನಲ್ಲಿ ಡೆಕೋರೇಟರ್ಸ್ ಐಟಂಗಳು ಬೇಕಾಗಿದೆ ಎಂದಿತ್ತು. ಅದರಂತೆ ತಾನು ಡೆಕೋರೇಟರ್ಸ್ ಐಟಂಗಳ ಫೋಟೋವನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದೆ. ಎರಡು ದಿನಗಳ ಬಳಿಕ ಆನ್ಲೈನ್ ಶೇರು ಮಾರುಕಟ್ಟೆಯ ಬಗ್ಗೆ ಮೆಸೇಜ್ಗಳು ಬಂದಿತ್ತು. ಅದರಿಂದ ಪ್ರೇರಿತನಾದ ತಾನು ಹಣ ಹೂಡಿಕೆಗೆ ಒಪ್ಪಿಗೆ ಸೂಚಿಸಿ ಲಿಂಕ್ ಅದುಮಿದ್ದೆ. ಹಾಗೇ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಡಿ.17ರಿಂದ ಜ.14ರವರೆಗೆ 1,38,20,060 ರೂ.ವನ್ನು ವರ್ಗಾವಣೆ ಮಾಡಿದ್ದೇನೆ. ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ವಿತ್ಡ್ರಾ ಮಾಡಲು ಕೇಳಿದಾಗ ಅಪರಿಚಿತ ವ್ಯಕ್ತಿಗಳು ವಿತ್ ಡ್ರಾ ಮಾಡಲು ಸರ್ವೀಸ್ ಟ್ಯಾಕ್ಸ್ ಪಾವತಿಸುವಂತೆ ಒತ್ತಾಯಿಸಿದರು. ಆವಾಗ ತಾನು ಮೋಸ ಹೋಗಿರುವುದು ತಿಳಿಯಿತು ಎಂದು ವಂಚನೆಗೊಳಗಾದ ವ್ಯಕ್ತಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗುರುಪುರ, ಜ.19: ಪೊಳಲಿ ಸಮೀಪದ ಕಲ್ಲಗುಡ್ಡೆ ವರಕೋಡಿ ನಿವಾಸಿ, ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ (ಪಿಟಿಎ) ಅಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ವಿಶ್ವಾಂಭರ ಭಂಡಾರಿ (46) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. *ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಪದಾಧಿಕಾರಿಗಳು, ಶಿಕ್ಷಕ ವೃಂದವು ಸಂತಾಪ ಸೂಚಿಸಿದೆ.
ಮಂಗಳೂರು, ಜ.19: ಕಾಟಿಪಳ್ಳದ ಹವ್ವ ಫೌಂಡೇಶನ್ನ ಸದಸ್ಯ ಇಸ್ಮಾಯಿಲ್ (ಇಚ್ಛಾಲಿ) ಸೋಮವಾರ ನಿಧನ ಹೊಂದಿದರು. ಮೃತರು ಇಬ್ಬರು ಹೆಣ್ಣು ಮತ್ತು ಒಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. *ಇಸ್ಮಾಯೀಲ್ರ ಅಗಲಿಕೆಗೆ ಹವ್ವಾ ಫೌಂಡೇಶನ್ನ ಅಧ್ಯಕ್ಷ ಅಬ್ದುಲ್ ಅಝಝ್ ಕಂದಾವರ, ಕೋಶಾಧಿಕಾರಿ ಲತೀಫ್, ಹನೀಫ್, ಸಾಲಿ, ಮೈಯದ್ದಿ, ಗಫೂರ್ ಖಾಲಿದ್, ಫತ್ತಾಹ್ ಶರೀಫ್ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಜ.22ರಂದು ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣೆ ಶಿಬಿರ
ಮಂಗಳೂರು, ಜ.19: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಮೆಡಿಲಾಬ್ ಇಂಡಿಯಾ ಫಾರ್ಮ ಬೆಂಗಳೂರು ಇವುಗಳ ಆಶ್ರಯದಲ್ಲಿ ‘ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಸಣಾ ಶಿಬಿರ ಜ.22ರಂದು ಮಂಗಳೂರಿನ ಕಾರ್ಸ್ಟ್ರೀಟ್ನ ಲಕ್ಷ್ಮೀ ಕ್ಲಿನಿಕ್ನಲ್ಲಿ ಆಯೋಜಿಸಲಾಗಿದೆ. ಮಂಗಳೂರು ರೋಟರಿ ಸೆಂಟ್ರಲ್ನ ಅಧ್ಯಕ್ಷ ಭಾಸ್ಕರ ರೈ ಕಟ್ಟ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 10:30ರಿಂದ ಸಂಜೆ 5 :30ರ ತನಕ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಹಾಸನದ ಎಸ್ಡಿಎಂ ಆಯುರ್ವೇದ ಕಾಲೇಜಿನ ಮಾಜಿ ಪ್ರಾಧ್ಯಾಪಕಿ ಡಾ. ಜ್ಯೋತಿ ಕೆ ಅವರು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆ ಮತ್ತು ಸಮಾಲೋಚನೆ ನಡೆಸಲಿದ್ದಾರೆ ಎಂದರು. ಮೂಳೆ ಸವಕಳಿಯನ್ನು ತಡೆಗಟ್ಟಿದರೆ ದೀರ್ಘಕಾಲದ ಮಂಡಿ ನೋವು, ಬೆನ್ನುನೋವು ಸೇರಿದಂತೆ ಹಲವು ರೀತಿಯ ಮೂಳೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಮಂಡಿ ನೋವು. ಬೆನ್ನು ನೋವು, ಸಂಧಿ ನೋವು, ನಿರಂತರ ಮೂಳೆ ಮುರಿತಗಳಿಗೆ ಕಾರಣವಾಗುವುದು ಮೂಳೆ ಸವಕಳಿ, ಈ ರೀತಿಯ ಮೂಳೆ ಸವಕಳಿ ಹಾಗೂ ಮೂಳೆ ಟೊಳ್ಳಾಗುವಿಕೆಯನ್ನು ಪತ್ತೆ ಹಚ್ಚಿ ದೀರ್ಘ ಕಾಲದ ಅಸ್ವಸ್ಥತೆಯನ್ನು ನಿವಾರಿಸಲು ಮೂಳೆ ಸವಕಳಿಯನ್ನು ತಡೆಗಟ್ಟುವುದು ಅತ್ಯಗತ್ಯ. ಇದಕ್ಕೆ ಸಂಬಂಧಿಸಿದ ಉಪಯುಕ್ತ ತಪಾಸಣೆ ಮತ್ತು ಮಾಹಿತಿಯನ್ನು ಒದಗಿಸಲು ಈ ವಿಶೇಷ ಶಿಬಿರ ಏರ್ಪಡಿಸಲಾಗಿದೆ ಎಂದು ಭಾಸ್ಕರ ರೈ ಹೇಳಿದರು. ತಜ್ಞ ಆಯುರ್ವೇದ ವೈದ್ಯೆ ಡಾ. ಜ್ಯೋತಿ ಕೆ , ಮಂಗಳೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಸಂತೋಷ್ ಶೇಟ್ ಮತ್ತು ರಾಜೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಜ. 20 , 21ರಂದು ಮಂಗಳೂರಿನಲ್ಲಿ ಎಸ್ಡಿಪಿಐ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ
ಮಂಗಳೂರು, ಜ.19: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ ) ಇದರ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ (ಎನ್ಆರ್ಸಿ ) ಸಭೆ ಜನವರಿ 20 ಮತ್ತು 21ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದು ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಪಕ್ಷದ ಅತ್ಯುನ್ನತ ಪ್ರತಿನಿಧಿ ಅಂಗವಾಗಿದ್ದು, ಸಂಘಟನಾ ದಿಕ್ಕು ಮತ್ತು ಸಾಮಾಜಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯೂ ನಡೆಯ ಲಿದೆ ಎಂದರು. ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನೂತನ ರಾಷ್ಟ್ರೀಯ ನಾಯಕರಿಗೆ ಜ.21ರಂದು 6:30ಕ್ಕೆ ನಗರದ ಪುರಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಅಪರಾಹ್ನ 4:30ಕ್ಕೆ ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ )ದಿಂದ ಸಮಾವೇಶ ನಡೆಯಲಿರುವ ಪುರಭವನ ವರೆಗೆ ರ್ಯಾಲಿಯನ್ನು ಆಯೋಜಿಸ ಲಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ನೀಮ್ ,ರಾಜ್ಯ ಉಪಾಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷ ರಿಯಾಝ್ ಕಡಂಬು, ರಾಜ್ಯ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾಧಿಕಾರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ
ಕೊಪ್ಪಳ: 2025-26ನೇ ಸಾಲಿನಲ್ಲಿ ಆಚರಿಸಲಿರುವ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜ.19ರಂದು ಭಾರತ ಚುನಾವಣಾ ಆಯೋಗದಿಂದ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತ ಚುನಾವಣಾ ಆಯೋಗದಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾ ಕಾರ್ಯಗಳಲ್ಲಿ ಹಾಗೂ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಬಿಎಲ್ಓ ಮೇಲ್ವಿಚಾರಕರಿಗೆ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರೊಂದಿಗೆ 64-ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ : 208ರ ಬೂತ್ ಮಟ್ಟದ ಅಧಿಕಾರಿಯಾದ ಹಿರೇಬಗನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕರಾದ ಸತೀಶಚಂದ್ರ ಇವರಿಗೆ ಉತ್ತಮ ಬೂತ್ ಮಟ್ಟದ ಅಧಿಕಾರಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಅಧಿಕಾರಿ, ಸಿಬ್ಬಂದಿಗಳಿಗೆ ಜ.25 ರಂದು ಬೆಂಗಳೂರಿನ ಶ್ರೀ ಪುಟ್ಟಣ್ಣಚೆಟ್ಟಿ ಟೌನ್ಹಾಲ್ ನಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರು ಪ್ರಶಸ್ತಿ ಪ್ರಧಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
World Book Fair 2026: ನವದೆಹಲಿ ವಿಶ್ವ ಪುಸ್ತಕ ಮೇಳ ಯಶಸ್ವಿ ಮುಕ್ತಾಯ, 20% ಸಂದರ್ಶಕರ ಹೆಚ್ಚಳ
ನವದೆಹಲಿ: ನವದೆಹಲಿಯ ಪ್ರಗತಿ ಮೈದಾನದಲ್ಲಿ ಜ್ಞಾನದ ಹಬ್ಬವಾಗಿ ಮಾರ್ಪಟ್ಟಿದ್ದ 53ನೇ ಆವೃತ್ತಿಯ ವಿಶ್ವ ಪುಸ್ತಕ ಮೇಳಕ್ಕೆ (Book Fair 2026) ಭಾನುವಾರ ಅತ್ಯಂತ ಯಶಸ್ವಿಯಾಗಿ ತೆರೆ ಬಿದ್ದಿದೆ. ಈ ವರ್ಷ ಮೊದಲ ಬಾರಿಗೆ ಜಾರಿಗೆ ತಂದ 'ಉಚಿತ ಪ್ರವೇಶ'ದ ನಿರ್ಧಾರವು ಮೇಳದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಕಳೆದ 2025ಕ್ಕೆ ಹೋಲಿಸಿದರೆ ಸಂದರ್ಶಕರ ಸಂಖ್ಯೆಯಲ್ಲಿ ಸುಮಾರು ಶೇಕಡಾ 20
ಬಾಂಗ್ಲಾದೇಶ ಇನ್ನೂ ಹಠ ಹಿಡಿದರೆ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್? ಐಸಿಸಿ ಬಳಿ ರೆಡಿ ಇದೆ ಪ್ಲಾನ್ ಬಿ!
BCCI Vs BCB- ಐಪಿಎಲ್ ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಬಾಂಗ್ಲಾದೇಶ ಟಿ20 ವಿಶ್ವಕಪ್ ನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಅದಕ್ಕೆ ಬಹಳ ದುಬಾರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಬಾಂಗ್ಲಾದೇಶ ತಂಡ ತನ್ನ ಬೇಡಿಕೆಗೆ ಜೋತು ಬಿದ್ದರೆ ಅದು ಟೂರ್ನಿಯಿಂದಲೇ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ. ಆಗ ಅದರ ಸ್ಥಾನಕ್ಕೆ ಸ್ಕಾಟ್ಲೆಂಡ್ ಪ್ರವೇಶ ಗಿಟ್ಟಿಸಿಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ. ಇದೀಗ ಈ ವಿಚಾರವಾಗಿ ಅಂತಿಮ ನಿರ್ಧಾರ ಐಸಿಸಿ ಕೈಯಲ್ಲಿದ್ದು ಕುತೂಹಲಕ್ಕೆ ಕಾರಣವಾಗಿದೆ.
Mysuru | ಆರ್ಎಫ್ಒ ಕಾಂತರಾಜ್ ಅನುಮಾನಸ್ಪಾದ ಸಾವು: ಲಾಡ್ಜ್ ಬಳಿಯ ಸಮೀಪ ಮೃತದೇಹ ಪತ್ತೆ
ಮೈಸೂರು: ಮೈಸೂರು ಜಿಲ್ಲೆ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್ಎಫ್ಒ) ವಿಜಯಪುರ ಮೂಲದ ಕಾಂತರಾಜ್ ಚೌಹಾಣ್ (35) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಆರ್ಎಫ್ಒ ಕಾಂತರಾಜ್ ಔಹಾಣ್ ಅವರು ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಸ್ನೇಹಿತ ಮನು ಎಂಬವರ ಜೊತೆ ಪಾರ್ಟಿ ಮುಗಿಸಿ ಲಾಡ್ಜ್ ಗೆ ವಾಪಸ್ ಆಗಿದ್ದರು. ಬಳಿಕ ವಾಕಿಂಗ್ ಮಾಡಿ ಲಾಡ್ಜ್ ಗೆ ಬಂದು ನಿದ್ರೆ ಗೆ ಹೋಗಿದ್ದರು. ಆದರೆ ಸೋಮವಾರ ಬೆಳಿಗ್ಗೆ ಎದ್ದು ಮನು ನೋಡಿದಾಗ ಕಾಂತರಾಜ್ ಕಾಣಿಸಲಿಲ್ಲ. ನಂತರ ಮನು ಸುತ್ತಾ ಮುತ್ತಾ ಹುಡುಕಾಡಿದಾಗ ಲಾಡ್ಜ್ ಬಳಿಯ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪಡೆದ ಲಷ್ಕರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಲಾಕ್ಷಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಬಳಿಕ ಮೃತದೇಹವನ್ನು ಎಂಎಂಸಿ ಮತ್ತು ಆರ್ಐ ಮರಣೋತ್ತರ ಪರೀಕ್ಷಾ ಗೃಹಕ್ಕೆ ರವಾನಿಸಿದರು. ದೇವರಾಜಠಾಣೆ ಎಸಿಪಿ ಕೆ. ರಾಜೇಂದ್ರ ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಲಷ್ಕರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಎರಡು ತಿಂಗಳ ಬಾಕಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಪಾವತಿಯಾಗದೆ ಬಾಕಿ ಉಳಿದಿದ್ದ ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿ ನಾಯಕರು ಮಾಡಿರುವ ಅರೋಪಗಳಿಗೆ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು. ಎರಡು ತಿಂಗಳ ಹಣ ಬಿಡುಗಡೆ ಆಗದೆ ಇರುವ ವಿಚಾರ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು, ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಈ ಬಗ್ಗೆ ಸ್ವತಃ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟ್ ಪ್ರಿಯರಿಗೆ ಶಾಕ್, ಚಂದಾದಾರಿಕೆ ಬೆಲೆ ಏರಿಕೆ ಮಾಡಿದ ಜಿಯೋ ಹಾಟ್ಸ್ಟಾರ್; ಇಲ್ಲಿದೆ ಹೊಸ ದರ
ಜಿಯೋ ಹಾಟ್ಸ್ಟಾರ್ ತನ್ನ ಬಳಕೆದಾರರಿಗೆ ಮಿಶ್ರ ಸುದ್ದಿಯನ್ನು ನೀಡಿದೆ. ಜನವರಿ 28, 2026 ರಿಂದ ಜಾರಿಗೆ ಬರುವಂತೆ 'ಸೂಪರ್' ಮತ್ತು 'ಪ್ರೀಮಿಯಂ' ವಿಭಾಗದ ಚಂದಾದಾರಿಕೆ ದರಗಳನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ವಾರ್ಷಿಕ ಪ್ಲಾನ್ ಬೆಲೆ 1,499 ರೂ. ನಿಂದ 2,199 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, ಕಡಿಮೆ ಅವಧಿಗೆ ಒಟಿಟಿ ನೋಡುವವರಿಗಾಗಿ ಹೊಸ ಮಾಸಿಕ ಪ್ಲಾನ್ಗಳನ್ನು ಪರಿಚಯಿಸಿದ್ದು, ಮೊಬೈಲ್ ಚಂದಾದಾರಿಕೆ ತಿಂಗಳಿಗೆ 79 ರೂ.ಗಳಿಂದ ಪ್ರಾರಂಭವಾಗಲಿದೆ.
ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 2025-26ನೇ ಸಾಲಿನ ನೋಂದಣಿ ಆರಂಭವಾಗಿದೆ. ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬಕ್ಕೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ವಾರ್ಷಿಕ 5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಗ್ರಾಮೀಣರಿಗೆ 500 ರೂ., ನಗರವಾಸಿಗಳಿಗೆ 1000 ರೂ. ವಂತಿಗೆ ನಿಗದಿಪಡಿಸಲಾಗಿದೆ. ಮಾರ್ಚ್ 31, 2026 ರೊಳಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ನೀಡದೆ ಇರುವುದಕ್ಕೆ ಕಾರಣ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ನೀಡುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಬಹಳ ಸ್ಪಷ್ಟವಾಗಿ ಸಿಬಿಐ ಅವರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು, ಯಾವುದೇ ಕೇಸ್ ಆಗಿರಲಿ ನೀವೇ ನೋಡಿಕೊಳ್ಳಬೇಕು. ನಮ್ಮ ಬಳಿ ಸಿಬ್ಬಂದಿಗಳಿಲ್ಲ ಎಂದಿದ್ದಾರೆ. ಅಗತ್ಯ ಬಿದ್ದರೆ ಒಬ್ಬ ಅಧಿಕಾರಿ ಕೊಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ನಡೆದ ಪ್ರಕರಣಗಳ ತನಿಖೆಯನ್ನು ಸಿಬಿಐ ಕೂಡ ಮಾಡಿತ್ತು. ಆ ಸಂದರ್ಭದಲ್ಲಿ ರಾಜ್ಯ ಪೊಲೀಸರು ನಡೆಸಿದ ತನಿಖೆ ಸರಿಯಾಗಿದೆ ಎಂದಿತ್ತು ಎಂದು ಉಲ್ಲೇಖಿಸಿದರು.
ಬೆಳ್ಳಿಯ ಬೆಲೆ ಹೆಚ್ಚಲು ಪ್ರಮುಖ ಕಾರಣಗಳೇನು? ಭಾರತದಲ್ಲಿ ಬೆಳ್ಳಿಯ ಬೆಲೆಯ ಟ್ರೆಂಡ್ ಹೀಗೇ ಇರುತ್ತಾ?
ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 3 ಲಕ್ಷ ರೂ. ದಾಟಿದೆ. ಚೀನಾದ ಕಟ್ಟುನಿಟ್ಟಾದ ರಫ್ತು ನಿಯಮಗಳು, ಕೈಗಾರಿಕಾ ಬೇಡಿಕೆ ಹೆಚ್ಚಳ, ಮತ್ತು ಜಾಗತಿಕ ರಾಜಕೀಯ-ಭೌಗೋಳಿಕ ಉದ್ವಿಗ್ನತೆಗಳಿಂದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇವಿಗಳ ಉತ್ಪಾದನೆ ಹೆಚ್ಚುತ್ತಿರುವ ಕಾರಣ ಬೆಲೆ ಸದ್ಯಕ್ಕೆ ಕುಗ್ಗುವುದಿಲ್ಲ.
ಕೊರಂಟಿಕಟ್ಟೆ ನವೀಕೃತ ಮಸೀದಿ ಉದ್ಘಾಟನೆ; ಸೌಹಾರ್ದ ಸಂಗಮ
ಕಾಪು: ಕಳತ್ತೂರು ಕೊರಂಟಿಕಟ್ಟೆಯಲ್ಲಿ ನವೀಕೃತಗೊಂಡ ಮಸ್ಜಿದ್ ಇ ನೂರು ಮಸೀದಿ ಉದ್ಘಾಟನೆ ಕಾರ್ಯ ಕ್ರಮದ ಪ್ರಯುಕ್ತ ಸೌಹಾರ್ದ ಸಂಗಮ ಸಮಾರಂಭವನ್ನು ರವಿವಾರ ಮಸೀದಿ ವಠಾರದಲ್ಲಿ ಆಯೋಜಿಸಲಾಗಿತ್ತು. ಸೌಹಾರ್ದ ಸಂಗಮವನ್ನು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಬಿ.ಎ.ಫಕ್ರುದ್ದೀನ್ ಅಲಿ ವಹಿಸಿದ್ದರು. ಖತೀಬ್ ನೌಫಲ್ ಸಖಾಫಿ ದುವಾ ನೆರವೇರಿಸಿದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ ಸೌಹಾರ್ದ ಸಂದೇಶ ನೀಡಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝ್ಮತ್ ಅಲಿ, ಪಿಡಬ್ಲ್ಯುಡಿ ಮಂಗಳೂರು ವಿಭಾಗದ ಅಹಮದ್ ನೌಝಲ್, ಕಳತ್ತೂರು ಗ್ರಾಪಂ ಅಧ್ಯಕ್ಷ ಜನಾರ್ದನ ಆಚಾರ್ಯ, ಉದ್ಯಮಿಗಳಾದ ನಿತ್ಯಾ ನಂದ ಫೈಯರ್, ಶ್ರೀಧರ ಭಟ್ ಚಂದ್ರನಗರ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಪೈ ಗುರ್ಮೆ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಶೇಕ್, ಗ್ರಾಪಂ ಸದಸ್ಯ ಸ್ಟ್ಯಾನ್ಲಿ ಕೋರ್ದ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕಾಪು ಬೀಚ್ನಲ್ಲಿ ಹಲವು ಮಂದಿಯ ಜೀವ ರಕ್ಷಿಸಿದ ಮೊಗವೀರ ಸಮುದಾಯದ ಏಳು ಮಂದಿಯನ್ನು, ಸಮಾಜ ಸೇವಕ ಜಲಾಲುದ್ದೀನ್ ಉಚ್ಚಿಲ ಮತ್ತು ತಂಡ, ಪತ್ರಕರ್ತರಾದ ನಝೀರ್ ಪೊಲ್ಯ, ಖಲೀಲ್ ಕಾರ್ಕಳ, ಹಿರಿಯ ಖತೀಬ್ ಅಹ್ಮದ್ ಮುಸ್ಲಿಯಾರ್, ಲೈನ್ಮೆನ್ಗಳು ಸೇರಿದಂತೆ ಹಲವು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಮುಖರಾದ ಎಚ್.ಆರ್.ಹಸನ್, ಅಬ್ದುಲ್ ರಝಾಕ್ ಖಾಸಿಮಿ, ಅಬ್ದುಲ್ ಝಿಯಾನ್, ಅಲಿಯಬ್ಬ ಇಬ್ರಾಹಿಂ ಕೊರಂಟಿಕಟ್ಟೆ, ಅಹಮದ್ ಶಬೀರ್ ಸಖಾಫಿ, ಶಾಬಾನ್ ಕರಂದಾಡಿ, ಮುಹಮ್ಮದ್ ಮುಸ್ತಫಾ ಸಖಾಫಿ, ಅಬ್ದುಲ್ ಮಜೀದ್ ಹನೀಫ್, ಮುಹಿಯುದ್ದೀನ್ ಸಖಾಫಿ, ಯಾಕೂಬ್ ಸಅದಿ, ಸಾದಿಕ್ ದೀನರ್ ಕಾಪು, ನಝೀರ್ ಕೊಂಬಗುಡ್ಡೆ, ಅಬ್ದುಲ್ಲಾ ಸೂಪರ್ಸ್ಟಾರ್, ಅಬ್ದುಲ್ ಜಲೀಲ್ ಸಾಹೇಬ್, ಇಂಜಿನಿಯರ್ ಸುಲೈಮಾನ್ ಕಾಪು, ಇದ್ರೀಸ್ ಮೌಲಾನ, ಮೌಲಾನ ಅಲ್ಲಖ್ ರಝಾ, ಮೌಲಾನ ಝಮೀರ್ ಅಹ್ಮದ್ ರಶದಿ, ಅಬ್ಬಾಸ್ ಬ್ಯಾರಿ, ಮುಸ್ತಾಕ್ ಅಹ್ಮದ್, ಅಬ್ದುಲ್ಲಾ ಮೊಯಿದಿನ್ ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಇಮ್ರಾನ್ ಬಶೀರ್ ಸ್ವಾಗತಿಸಿದರು. ರಝಾಕ್ ಕೊರಂಟಿಕಟ್ಟೆ ವಂದಿಸಿದರು. ಆಸೀಫ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಮಸೀದಿ ಉದ್ಘಾಟನೆ: ನವೀಕೃತ ಮಸೀದಿಯ ಉದ್ಘಾಟನೆಯನ್ನು ಶುಕ್ರವಾರ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ನಾಯಿಬ್ ಖಾಝಿ ಅಬ್ದುಲ್ ರಹಿಮಾನ್ ಮದನಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಬಿ.ಎ.ಫಕ್ರುದ್ದೀನ್ ಅಲಿ, ಗೌರವಾಧ್ಯಕ್ಷ ಅಲ್ಹಾಜ್ ಅಬ್ದುಲ್ ಕರೀಂ, ಖತೀಬ್ ನೌಫಲ್ ಸಖಾಫಿ, ಮೂಳೂರು ಮಸೀದಿ ಖತೀಬ್ ಅಶ್ರಫ್ ಸಖಾಪಿ ಅಲ್ ಹಿಕಮಿ, ಶಿರ್ವ ಮಸೀದಿ ಖತೀಬ್ ಸಿರಾಜುದ್ದೀನ್ ಝೈನಿ ಅಲ್ ರಶಾದಿ, ಮಸೀದಿ ಕೋಶಾಧಿಕಾರಿ ಹನೀಫ್ ಚಂದ್ರನಗರ ಉಪಸ್ಥಿತರಿದ್ದರು.
ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಸಿಎಲ್ - 7 ಲೈಸೆನ್ಸ್ ನೀಡಲು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಪುತ್ರ, ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋವೊಂದನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ. ಈ ಸಂಬಂಧ ಪಕ್ಷದ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್,ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸಚಿವ ತಿಮ್ಮಾಪುರ ಪರವಾಗಿ ಅಧಿಕಾರಿ ಮಧ್ಯವರ್ತಿಗಳಿಂದ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಈ ವೇಳೆ ಬಿಡುಗಡೆ ಮಾಡಿದರು. ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ''ತಿಮ್ಮಾಪುರ ಅವರು ಅಧಿಕಾರದಲ್ಲಿಒಂದೇ ಒಂದು ಕ್ಷಣವೂ ಮುಂದುವರಿಯಬಾರದು. ಕಳಂಕ ಬರಬಾರದೆಂದರೆ ಇಂತಹ ಕಳಂಕಿತ ಸಚಿವರನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ತೋರಬೇಕು. ಅಬಕಾರಿ ಡಿಸಿ ಜಗದೀಶ್, ಸೂಪರಿಂಡೆಂಟ್ ತಮ್ಮಣ್ಣ ಮತ್ತು ಲಕ್ಕಪ್ಪ ಗಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಡಿಯೋದಲ್ಲಿ ಸಚಿವರಿಗೆ ತಿಂಗಳಿಗೆ ಎಷ್ಟೆಷ್ಟು ಲಂಚ ಕೊಡಬೇಕು? ಕೊಡದಿದ್ದರೆ ಲೈಸೆನ್ಸ್ ಹೇಗೆ ವಿಳಂಬ ಮಾಡುತ್ತಾರೆ ಎಂಬುದನ್ನು ಅವರೇ ಬಾಯಿ ಬಿಟ್ಟಿದ್ದಾರೆ. ಇದಕ್ಕಿಂತ ಇನ್ನೇನು ದಾಖಲೆ ಬೇಕು? ಸಿಎಲ್-7 ಒಟ್ಟು 750 ಲೈಸೆನ್ಸ್ ನೀಡಿದ್ದಾರೆ. ಪ್ರತಿ ಸಿಎಲ್-7ಗೆ ಒಂದೂವರೆ ಕೋಟಿ ಲಂಚಕ್ಕೆ ಬೇಡಿಕೆಗಳಿವೆ. 650 ಸಿಎಲ್-2 ಸನ್ನದುಗಳು ಒಂದೂವರೆ ಕೋಟಿಗೆ ಹರಾಜು ಮಾಡಲಾಗಿದೆ. ಇದರಿಂದ 950 ಕೋಟಿ ಕಿಕ್ಬ್ಯಾಕ್ ಒಂದು ಮೈಕ್ರೋಬ್ರೆವರಿಗಳಿಗೆ 2.50 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಒಟ್ಟು ರಾಜ್ಯದಲ್ಲಿ550 ಮೈಕ್ರೋ ಬ್ರೆವರಿಗಳಿವೆ. ಇಷ್ಟು ಹಣ ಯಾರ ಜೇಬು ಸೇರಿದೆ. ನಾವು ಏನೇ ಆರೋಪ ಮಾಡಿದರೂ ಸಾಕ್ಷಿ ಕೊಡಿ ಎನ್ನುತ್ತಿದ್ದರು. ಈಗ ಸಾಕ್ಷಿ ಸಮೇತ ಆಡಿಯೋ ಬಿಡುಗಡೆ ಮಾಡಿದ್ದೇವೆ. ಸಚಿವರಿಗೆ ತಿಂಗಳಿಗೆ ಇಂತಿಷ್ಟು ಕೊಡಬೇಕೆಂದು ಆಡಿಯೋದಲ್ಲಿಅಬಕಾರಿ ಡಿಸಿಯೇ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ?,'' ಎಂದು ಕೇಳಿದ್ದಾರೆ.
ಜಗತ್ತಿನ ಬೆಳವಣಿಗೆಯ ಇಂಜಿನ್; ಭಾರತದ 2026ರ ಆರ್ಥಿಕ ಬೆಳವಣಿಗೆಯನ್ನು ಶೇ. 7.3ಕ್ಕೆ ಏರಿಸಿದ ಐಎಂಎಫ್
ಭಾರತದ ಆರಿಕ ಬೆಳವಣಿಗೆ ದರದ ಬಗ್ಗೆ ಜಾಗತಿಕ ಮೌಲ್ಯಮಾಪನ ಸಂಸ್ಥೆಗಳು ಸಕಾರಾತ್ಮಕ ವರದಿಯನ್ನು ನೀಡುತ್ತಿವೆ. ಅದರಂತೆ ಈಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದ ಆರ್ಥಿಕ ಬೆಳವಣಿಗೆಯನ್ನು 2026ರಲ್ಲಿ ಶೇ. 7.3ಕ್ಕೆ ಹೆಚ್ಚಿಸಿದೆ. ಭಾರತವನ್ನು ಜಗತ್ತಿನ ಒಟ್ಟಾರೆ ಬೆಳವಣಿಗೆಯ ಇಂಜಿನ್ ಎಂದು ಹೇಳಿರುವ ಐಎಂಎಫ್, 2026ರ ಆರ್ಥಿಕ ವರ್ಷದ ಮೇಲ್ಮುಖ ಪರಿಷ್ಕರಣೆಯು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಹೇಳಿದೆ,. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ ಆರೋಪ : ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು
ಬಳ್ಳಾರಿ: ಪೋಕ್ಸೊ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಜ.18ರಂದು ಎಫ್ಐಆರ್ ದಾಖಲಿಸಲಾಗಿದೆ. ಬಳ್ಳಾರಿಯಲ್ಲಿ ಜ.1ರಂದು ನಡೆದ ಘರ್ಷಣೆ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಬಿಜೆಪಿ ಪಕ್ಷವು ಜ.17ರಂದು ಬಳ್ಳಾರಿಯ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ ಶ್ರೀರಾಮುಲು ಅವರು ಪೋಕ್ಸೊ ಸಂತ್ರಸ್ತೆಯೊಬ್ಬರ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಪೋಕ್ಸೊ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಆರೋಪದ ಮೇಲೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
IMD Weather Forecast: ಭಾರೀ ಶೀತಗಾಳಿ ನಡುವೆ ಈ ಭಾಗಗಳಲ್ಲಿ ಉತ್ತಮ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ನಡುವೆ ಮುಂದಿನ ಐದು ದಿನಗಳ ಕಾಲ ಹಲವೆಡೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇದೀಗ ಸದ್ಯ ದೇಶದ ಬಹುತೇಕ ಭಾಗಗಳಲ್ಲಿ
ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮೀಸಲಾತಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯುವಕರಿಗೆ ಅಧಿಕಾರ ನೀಡುವ ಉದ್ದೇಶವಿದೆ. ಮತಪತ್ರ ಬಳಕೆಯ ಬಗ್ಗೆ ರಾಜ್ಯ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕೊಪ್ಪಳ | ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ
ಕೊಪ್ಪಳ: ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ರೈತರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವಿನ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗ್ರಾಮದ ರೈತರಾದ ರುದ್ರಪ್ಪ ಏಣಿಗಿ ಹಾಗೂ ಬೆಟ್ಟದಪ್ಪ ಮೂಲಿಮನಿ ಅವರಿಗೆ ಸೇರಿದ ಜೋಳದ ಹುಲ್ಲು ಹಾಗೂ ಕಡಲೆ ಒಟ್ಟಿನ ಬಣವೆಗಳು ಬೆಂಕಿಗೆ ಆಹುತಿಯಾಗಿದೆ. ಗ್ರಾಮದ ಬಂಡಿಯ ಮೇಲೆ ಸಂಗ್ರಹಿಸಿದ್ದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ರೈತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕುಣಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ಶಿವಕುಮಾರ ಏಣಿಗಿ, “ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯಿಂದ ಮಾನಸಿಕ ಹಾಗೂ ಆರ್ಥಿಕವಾಗಿ ಕುಂದಿರುವ ರೈತರಿಗೆ ಸರ್ಕಾರವು ತಕ್ಷಣ ಸೂಕ್ತ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ನನ್ನ ಬೆಂಬಲಕ್ಕೆ 140 ಶಾಸಕರೂ ಇದ್ದಾರೆ, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂಬುದು ನಮಗೆ ಗೊತ್ತು. ಅದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಪ್ರಶ್ನೆಯೇ ಇಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ
ಸಾಹಿತ್ಯ ಅಕಾಡೆಮಿಗೆ ಸ್ಟಾಲಿನ್ ಸೆಡ್ಡು, ಕನ್ನಡ ಸೇರಿ 7 ಭಾಷೆಗಳಿಗೆ ಪ್ರಶಸ್ತಿ ಘೋಷಣೆ; ಬಹುಮಾನದ ಮೊತ್ತ ಎಷ್ಟು?
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿಚಾರದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅದಕ್ಕೆ ಪರ್ಯಾಯವಾಗಿ ರಾಷ್ಟ್ರಮಟ್ಟದ ಹೊಸ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರದ ವತಿಯಿಂದ ಪ್ರತಿ ವರ್ಷ ಕನ್ನಡ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಬಂಗಾಳಿ ಮತ್ತು ಮರಾಠಿ ಭಾಷೆಗಳ ಕೃತಿಗಳಿಗೆ ತಲಾ 5 ಲಕ್ಷ ರೂ.ಗಳ 'ಸೆಮ್ಮೊಳಿ ಇಲಕ್ಕಿಯ ವಿರುದು' ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಹಿಟ್ ಮ್ಯಾನ್ ವಿಫಲ!: ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಶುಭಮನ್ ಗಿಲ್ ನೇರಮಾತು
Shubman Gill On Rohit Sharma Form- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಮೂರು ಪಂದ್ಯಗಳಲ್ಲಿ ಕೇವಲ 61 ರನ್ ಗಳಿಸಿದರು. ಆದರೆ ಭಾರತ ತಂಡದ ನಾಯಕ ಶುಭಮನ್ ಗಿಲ್, ರೋಹಿತ್ ಶರ್ಮಾ ಉತ್ತಮ ಫಾರ್ಮ್ನಲ್ಲಿದ್ದು ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು ಎಂದು ಸಮರ್ಥಿಸಿಕೊಂಡಿದ್ದಾರೆ.
GBA Election - ಬಿಜೆಪಿ ಕೈಸೇರಿದ ಆಂತರಿಕ ರಹಸ್ಯ ವರದಿ : 5ರ ಪೈಕಿ 2ರಲ್ಲಿ ಸುಲಭ ಗೆಲುವು - ಯಾವ ಪಾಲಿಕೆ?
BJP Internal report on GBA Election : ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ಪ್ರಮುಖ ಪಾರ್ಟಿಗಳು, ಈ ಸಂಬಂಧ ತಾಲೀಮನ್ನು ಆರಂಭಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಪಾಲಿಕೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತ ಪಡಿಸಿವೆ. ಜಿಬಿಎ ಚುನಾವಣೆ, ಬ್ಯಾಲಟ್ ಪೇಪರ್’ನಲ್ಲಿ ನಡೆಯಲಿದೆ.
ರಾಸಲೀಲೆ ವೈರಲ್ ಬೆನ್ನಲ್ಲೇ ಸ್ಪಷ್ಟನೆ ಕೊಡಲು ಪರಮೇಶ್ವರ್ ನಿವಾಸಕ್ಕೆ ಬಂದ ಐಪಿಎಸ್ ಅಧಿಕಾರಿ: ಭೇಟಿಗೆ ಸಿಗದ ಅವಕಾಶ
ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯದ್ದು ಎನ್ನಲಾಗಿರುವ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿವೆ. ಡಿಜಿಪಿ ಶ್ರೇಣಿಯ ಹಿರಿಯ ಅಧಿಕಾರಿಯ ವಿಡಿಯೋಗಳು ಪೊಲೀಸ್ ಇಲಾಖೆಗೂ ತೀವ್ರ ಮುಜುಗರ ಉಂಟು ಮಾಡಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅವರನ್ನು ಭೇಟಿ ಮಾಡಲು ಪರಮೇಶ್ವರ್ ನಿರಾಕರಿಸಿದ್ದಾರೆ. ವಿಡಿಯೋ ಕುರಿತಾಗಿ ಐಪಿಎಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಬೀದರ್ | ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪನೆಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನಿಂದ ಮನವಿ
ಬೀದರ್: ಕರ್ನಾಟಕದ ಯುವಜನರ ಹಿತಾಸಕ್ತಿ ರಕ್ಷಣೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ತಕ್ಷಣವೇ 'ಕರ್ನಾಟಕ ರಾಜ್ಯ ಯುವ ಆಯೋಗʼವನ್ನು ಸ್ಥಾಪಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ (SYM) ಸಂಘಟನೆ ಒತ್ತಾಯಿಸಿದೆ. ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಯುವಜನತೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು. ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರಿದ್ದು, ಅವರು ಶಿಕ್ಷಣ, ಉದ್ಯೋಗ ಹಾಗೂ ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗೃಹ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2022ರಿಂದ 2025ರ ನವೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿದೆ. ಸುಮಾರು ಶೇ. 30ರಷ್ಟು ಯುವಕರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. 2022ರಲ್ಲಿ ರಾಜ್ಯ ಯುವ ನೀತಿ ಜಾರಿಗೆ ಬಂದಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ಕಾನೂನುಬದ್ಧ ಸಂಸ್ಥೆ ಇಲ್ಲದಿರುವುದು ದೊಡ್ಡ ನ್ಯೂನ್ಯತೆಯಾಗಿದೆ. ಕೇರಳ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಆಯೋಗದ ಅಗತ್ಯವಿದೆ ಎಂದು ಸಂಘಟನೆ ತಿಳಿಸಿದೆ. ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ (SYM) ಸಂಘಟನೆಯ ಜಿಲ್ಲಾಧ್ಯಕ್ಷ ಶಿಯುಬುದ್ದೀನ್, ರಫೀಯುದ್ದೀನ್ ಶೋಯಬ್, ಸೈಯದ್ ಫರಾಜ್ ಅಲಿ ಹಾಗೂ ರಾಜ್ಯ ಕಾರ್ಯದರ್ಶಿ ಅಸದುಲ್ಲಾ ಖಾನ್ ಉಪಸ್ಥಿತರಿದ್ದರು.
ಅಮೆರಿಕದ TC Candler 2025ರ ಅತ್ಯಂತ ಸುಂದರ ಮುಖದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆ-ಪಾಪ್ ತಾರೆ ರೋಸ್ ಮೊದಲ ಸ್ಥಾನ ಪಡೆದಿದ್ದಾರೆ. ಬ್ಲ್ಯಾಕ್ಪಿಂಕ್ ತಂಡದ ಜಿಸೂ, ಲಿಸಾ, ಜೆನ್ನಿ ಹಾಗೂ ಏಸ್ಪಾ ತಂಡದ ಕರೀನಾ, ಬೇಬಿಮಾನ್ಸ್ಟರ್ ತಂಡದ ಫರೀತಾ, ಟ್ವೈಸ್ ತಂಡದ ಟ್ಜುಯು, ಸನಾ, ಕೊರಿಯನ್ ಗಾಯಕಿ ನಾನಾ, ಜಿಯೋನ್ ಸೋಮಿ, ಐವ್ ತಂಡದ ವೊನ್ಯಾಂಗ್ ಸಹ ಸ್ಥಾನ ಪಡೆದಿದ್ದಾರೆ.
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಈಗಾಗಲೇ ಕುಂಠುತ್ತಾ ಸಾಗುತ್ತಿದ್ದು, ಈ ಮಾತುಕತೆಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಅಮೆರಿಕದ ಇಬ್ಬರು ರಿಪಬ್ಲಿಕನ್ ಸೆನೆಟರ್ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ. ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಭಾರತ ಶೇ. 30ರಷ್ಟು ಸುಂಕ ವಿಧಿಸಿರುವುದನ್ನು ವಿರೋಧಿಸಿರುವ ಈ ಸೆನೆಟರ್ಗಳು, ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಇಲ್ಲಿದೆ ಮಾಹಿತಿ.
3 ಮನೆ, ಡಿಸೈರ್ ಕಾರು, 3 ಆಟೋ... ಇಂದೋರ್ನ 'ಕೋಟ್ಯಧಿಪತಿ' ಭಿಕ್ಷುಕನ ಆಸ್ತಿ ಕೇಳಿ ಅಧಿಕಾರಿಗಳು ಸುಸ್ತು!
ಮಧ್ಯಪ್ರದೇಶದ ಇಂದೋರ್ ನಗರವನ್ನು 'ಭಿಕ್ಷುಕರ ಮುಕ್ತ' ನಗರವನ್ನಾಗಿ ಮಾಡುವ ಅಭಿಯಾನದ ವೇಳೆ ಅಧಿಕಾರಿಗಳಿಗೆ ಆಘಾತಕಾರಿ ಪ್ರಕರಣವೊಂದು ಸಿಕ್ಕಿದೆ. ಸರಫಾ ಬಜಾರ್ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಂಗಿಲಾಲ್ ಎಂಬ ಅಂಗವಿಕಲ ವ್ಯಕ್ತಿಯನ್ನು ರಕ್ಷಣೆ ಮಾಡಿದಾಗ, ಆತ ಒಬ್ಬ ಕೋಟ್ಯಧಿಪತಿ ಎಂಬುದು ಬಯಲಾಗಿದೆ. ಈತನ ಬಳಿ 3 ಮನೆ, 3 ಆಟೋ ಮತ್ತು ಒಂದು ಕಾರು ಇದ್ದು, ಎಲ್ಲವನ್ನೂ ಬಾಡಿಗೆಗೆ ಬಿಟ್ಟಿದ್ದಾನೆ. ಭಿಕ್ಷೆಯಿಂದ ಗಳಿಸಿದ ಹಣವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವ್ಯಾಪಾರಿಗಳಿಗೆ ಬಡ್ಡಿ ಸಾಲ ನೀಡುತ್ತಿದ್ದ ಎನ್ನುವುದು ಗೊತ್ತಾಗಿದೆ.
ಹೊಸದಿಲ್ಲಿ,ಜ.19: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆ ಪೋಲಿಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸೆಂಗಾರ್ಗೆ ವಿಧಿಸಲಾಗಿರುವ 10 ವರ್ಷಗಳ ಶಿಕ್ಷೆಯನ್ನು ಅಮಾನತುಗೊಳಿಸಲು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸೆಂಗಾರ್ಗೆ ದಿಲ್ಲಿ ಉಚ್ಚ ನ್ಯಾಯಾಲಯವು ಇತ್ತೀಚಿಗೆ ಜಾಮೀನು ಮಂಜೂರು ಮಾಡಿತ್ತಾದರೂ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ತಡೆ ನೀಡಿತ್ತು. ಪರಿಹಾರವನ್ನು ಒದಗಿಸಲು ಯಾವುದೇ ಕಾರಣಗಳಿಲ್ಲ. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸೋಮವಾರ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾ.ರವೀಂದ್ರ ದುಡೇಜಾ ಹೇಳಿದರು. ಸೆಂಗಾರ್ ದೀರ್ಘ ಕಾಲ ಜೈಲು ವಾಸ ಅನುಭವಿಸಿದ್ದರೂ ವಿಳಂಬದ ಕಾರಣದಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಏಕೆಂದರೆ ಅವರು ತನ್ನ ದೋಷ ನಿರ್ಣಯದ ವಿರುದ್ಧ ತನ್ನ ಮೇಲ್ಮನವಿಯಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದ ನ್ಯಾಯಾಧೀಶರು, ಮೇಲ್ಮನವಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕಿದೆ ಎಂದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.3ಕ್ಕೆ ನಿಗದಿಗೊಳಿಸಿದೆ. ಕಸ್ಟಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಮಾ.13, 2020ರಂದು ವಿಚಾರಣಾ ನ್ಯಾಯಾಲಯವು ಸೆಂಗಾರ್ಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 10 ಲಕ್ಷ ರೂ.ಗಳ ದಂಡವನ್ನು ವಿಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಸೆಂಗಾರ್ನ ಸೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಇತರ ಐವರಿಗೂ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಸೆಂಗಾರ್ ಸೂಚನೆಯ ಮೇರೆಗೆ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಬಂಧಿಸಲಾಗಿತ್ತು ಮತ್ತು ಕಸ್ಟಡಿಯಲ್ಲಿ ಪೋಲಿಸರ ದೌರ್ಜನ್ಯಗಳಿಂದಾಗಿ ಅವರು ಎ.9, 2018ರಂದು ಮೃತಪಟ್ಟಿದ್ದರು. ಸೆಂಗಾರ್ 2017ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಅತ್ಯಾಚಾರ ಮತ್ತು ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣಗಳಲ್ಲಿ ತನ್ನ ದೋಷ ನಿರ್ಣಯ ಮತ್ತು ಶಿಕ್ಷೆಯ ವಿರುದ್ಧ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಗಳು ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿವೆ.
GBA Election: ಜಿಬಿಎ ಚುನಾವಣೆಗೆ ಡೇಟ್ ಫಿಕ್ಸ್; ಇವಿಎಂಗಳ ಬದಲಿಗೆ ಮತಪತ್ರಗಳ ಬಳಕೆ
ಬೆಂಗಳೂರು: ಬೆಂಗಳೂರಿನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕ್ಷಣಗಣನೆ ಆರಂಭವಾದಂತಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆಯನ್ನೂ ಜೂನ್ 30ರೊಳಗೆ ನಡೆಸಲು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದು, ಇದೀಗ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಭರ್ಜರಿ ತಯಾರಿ ನಡೆಸಿದೆ. ಮೇ 25 ರ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA)
3 ಲಕ್ಷ ರೂ. ದಾಟಿದ ಬೆಳ್ಳಿ ! ಖರೀದಿಸಬೇಕೇ, ಮಾರಬೇಕೇ ಅಥವಾ ಕಾಯಬೇಕೇ? ತಜ್ಞರ ವಿಶ್ಲೇಷಣೆಯೇನು?
ಬೆಳ್ಳಿ ಬೆಲೆ ಜನವರಿ 19, 2026 ರಂದು ಪ್ರತಿ ಕೆಜಿಗೆ 3 ಲಕ್ಷ ರೂಪಾಯಿ ದಾಟಿದೆ, ಇದು ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಕೈಗಾರಿಕಾ ಬೇಡಿಕೆಯಿಂದಾಗಿ ಸುರಕ್ಷಿತ ಹೂಡಿಕೆಗಳ ಮೇಲಿನ ವಿಶ್ವಾಸ ಹೆಚ್ಚಿರುವುದನ್ನು ಸೂಚಿಸುತ್ತದೆ. ಕಳೆದ ಒಂದು ವರ್ಷದಲ್ಲಿ ಬೆಳ್ಳಿ ಬೆಲೆ ಶೇಕಡಾ 206 ರಷ್ಟು ಏರಿಕೆಯಾಗಿದೆ. ತಜ್ಞರು ಲಾಭ ಪಡೆಯಲು ಸಲಹೆ ನೀಡುತ್ತಿದ್ದಾರೆ, ಆದರೆ ದೀರ್ಘಕಾಲೀನ ಸಾಮರ್ಥ್ಯವನ್ನು ಅಲ್ಲಗಳೆಯುತ್ತಿಲ್ಲ.
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ; ವೀಡಿಯೊ ವೈರಲ್
ಬೆಂಗಳೂರು : ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೋರ್ವರ ಜೊತೆ ಡಿಜಿಪಿ ಇರುವ ಖಾಸಗಿ ವೀಡಿಯೊ ಇದಾಗಿದ್ದು, ಈ ವೀಡಿಯೊ 1 ವರ್ಷದ ಹಿಂದೆ ಸೆರೆಯಾಗಿದ್ದು ಎನ್ನಲಾಗಿದೆ. ಕಚೇರಿಯಲ್ಲಿ ಕುಳಿತು ಸಮವಸ್ತ್ರದಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿವೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಮಲ ಮಗಳು ನಟಿ ರನ್ಯಾ ರಾವ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ಈಗ ಆಕೆಯ ಮಲ ತಂದೆಯ ರಾಸಲೀಲೆಯ ವಿಡಿಯೋ ವೈರಲ್ ಆಗಿದೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಕುಲದೀಪ್ ಸಿಂಗ್ ಸೇಂಗಾರ್ಗೆ 10 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸೇಂಗಾರ್ಗೆ ಪರಿಹಾರ ನೀಡಲು ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕ ಗೃಹ ಕಾರ್ಮಿಕರ ವಿಧೇಯಕ 2026ಕ್ಕೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು, ಜನವರಿ 19: ಕರ್ನಾಟಕ ಗೃಹ ಕಾರ್ಮಿಕರ ವಿಧೇಯಕ, 2026ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಐತಿಹಾಸಿಕ ಋತುಚಕ್ರ ರಜೆಯನ್ನು ಜಾರಿ ಮಾಡಿದ ಬೆನ್ನಲ್ಲೆ ಮತ್ತೊಂದು ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಗೃಹ ಕಾರ್ಮಿಕರು ಹೆಚ್ಚಿನವರು ಮಹಿಳೆಯರೇ ಆಗಿದ್ದು, ಅವರ ಕಲ್ಯಾಣ ಮತ್ತು ಭದ್ರತೆಯ
ಎಸ್ಸಿ/ಎಸ್ಟಿ ಕಾಯ್ದೆಯಡಿ ಆರೋಪಗಳನ್ನು ರೂಪಿಸಲು ಸಂತ್ರಸ್ತ ವ್ಯಕ್ತಿಯ ಹೇಳಿಕೆ ಸಾಕು: ಕೇರಳ ಹೈಕೋರ್ಟ್
ಕೊಚ್ಚಿ,ಜ.19: ಮಹತ್ವದ ತೀರ್ಪೊಂದರಲ್ಲಿ ಕೇರಳ ಉಚ್ಚ ನ್ಯಾಯಾಲಯವು, ಇತರ ಸಾಕ್ಷಿಗಳ ಹೇಳಿಕೆಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ,2018ರ 3(1)(ಆರ್) ಮತ್ತು 3(1)(ಎಸ್) ಕಲಮ್ಗಳಡಿ ಅಪರಾಧಗಳ ಅಂಶಗಳನ್ನು ಬಹಿರಂಗಗೊಳಿಸುವುದಿಲ್ಲ ಎಂಬ ಏಕೈಕ ಕಾರಣದಿಂದಾಗಿ ಆರೋಪಿಯನ್ನು ದೋಷಮುಕ್ತಗೊಳಿಸುವಂತಿಲ್ಲ ಎಂದು ಎತ್ತಿ ಹಿಡಿದಿದೆ. ನೊಂದ ವ್ಯಕ್ತಿಯ ಹೇಳಿಕೆಯು ಸ್ವತಃ ಮೇಲ್ನೋಟಕ್ಕೆ ಅಪರಾಧವನ್ನು ಬಹಿರಂಗಗೊಳಿಸಿದರೆ ಅದು ಕಾನೂನು ಕ್ರಮವನ್ನು ಮುಂದುವರಿಸಲು ಸಾಕಾಗುತ್ತದೆ ಎಂದು ನ್ಯಾ.ಎ.ಬದರುದ್ದೀನ್ ಸ್ವಷ್ಟ ಪಡಿಸಿದರು. ಕಾನೂನಿಗೆ ಬಹು ಸಾಕ್ಷಿಗಳ ಅಗತ್ಯವಿಲ್ಲ ಮತ್ತು ಸಂಪೂರ್ಣ ವಿಶ್ವಾಸಾರ್ಹ ಏಕೈಕ ಸಾಕ್ಷಿಯ ಸಾಕ್ಷ್ಯವು ಸಾಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು, ಸಾಕ್ಷಿಗಳ ಹೇಳಿಕೆಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸದ ಕಾರಣ ತಾನು ಬಿಡುಗಡೆಗೆ ಅರ್ಹನಾಗಿದ್ದೇನೆ ಎಂಬ ಮೇಲ್ಮನವಿದಾರನ ವಾದವನ್ನು ತಿರಸ್ಕರಿಸಿತು. ಕಲಂ 3(1)(ಆರ್) ಇತರ ಸಮುದಾಯದವರಿಂದ ಎಸ್ಸಿ/ಎಸ್ಟಿ ಸಮುದಾಯದ ಸದಸ್ಯರ ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಕೆಗೆ ಸಂಬಂಧಿಸಿದ್ದರೆ, ಕಲಂ 3(1)(ಎಸ್) ಜಾತಿಯ ಹೆಸರಿನಲ್ಲಿ ನಿಂದಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಬಿಡುಗಡೆ ಅರ್ಜಿಯನ್ನು ಪರಿಶೀಲಿಸುವಾಗ ಮೇಲ್ನೋಟಕ್ಕೆ ಪ್ರಕರಣವು ಅಸ್ತಿತ್ವದಲ್ಲಿದೆಯೇ ಅಥವಾ ಆರೋಪಗಳನ್ನು ರೂಪಿಸಲು ಅಗತ್ಯವಿರುವ ಕನಿಷ್ಠ ಒಂದಾದರೂ ಬಲವಾದ ಶಂಕಿತ ಅಂಶವಿದೆಯೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಾಗಿದೆ ಎಂದು ಹೈಕೋರ್ಟ್ ವಿವರಿಸಿತು. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿರದ ಆರೋಪಿಯು ಸಭೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಎದುರು ಸಂತ್ರಸ್ತೆಯನ್ನು ಜಾತಿಯ ಹೆಸರಿನಿಂದ ಕರೆದು ಅವಮಾನಿಸಿದ್ದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ. ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ್ದ ವಿಶೇಷ ನ್ಯಾಯಾಲಯವು ಆರೋಪಿಯ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಆತ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.
ದಾವಣಗೆರೆ: ಕರ್ನಾಟಕದಲ್ಲಿ ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆಯಾಗಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಲವು ಬಾರೀ ಸರ್ಕಾರಿ ನೌಕರರು ಬೇಡಿಕೆ ಸಲ್ಲಿಸಿದ್ದು, ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಸರ್ಕಾರಿ ನೌಕರರು
KSCCFನಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನೇಮಕಾತಿಯಡಿ 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21,400 ರಿಂದ ರೂ.52,650ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF) 2026ರಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಕ್ಲರ್ಕ್, ಸೇಲ್ಸ್, ಅಸಿಸ್ಟಂಟ್ ಹಾಗೂ ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತಿ ಅಭ್ಯರ್ಥೀಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಬೆಂಗಳೂರು ಕೇಂದ್ರಿತವಾಗಿದೆ. ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು: https://virtualofficeerp.com/ksccf2026/new_registration ಪ್ರಮುಖ ದಿನಾಂಕಗಳು * ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 09 ಜನವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಫೆಬ್ರವರಿ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 07 ಫೆಬ್ರವರಿ 2026 * ಪರೀಕ್ಷೆ ದಿನಾಂಕ: ಶೀಘ್ರವೇ ಪ್ರಕಟಿಸಲಾಗುವುದು * ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು * ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. * ವಿವರಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ ಆನ್ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಎಸ್ಸಿ/ಎಸ್ಟಿ/ಪ್ರವರ್ಗ-1 ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ರೂ 500 ಮತ್ತು ಇತರ ಎಲ್ಲಾ ವರ್ಗದವರಿಗೆ ರೂ 1,000 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹುದ್ದೆಗಳ ವಿವರ ಈ ನೇಮಕಾತಿಯಡಿ ಒಟ್ಟು 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,400 ರಿಂದ ರೂ.52,650 ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ವಯೋಮಿತಿ ಅಭ್ಯರ್ಥಿಗಳು 2026 ಫೆಬ್ರವರಿ 07ರ ವೇಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು. ಸರಕಾರದ ನಿಯಮಗಳಂತೆ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯೂ ಇದೆ. ಕ್ಯಾಟ್–2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ, ಎಸ್ಸಿ/ಎಸ್ಟಿ ಹಾಗೂ ಪ್ರವರ್ಗ–1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಮತ್ತು ಪಿಡಬ್ಲ್ಯೂಡಿ ಹಾಗೂ ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಹತೆ ವಿವಿಧ ಹುದ್ದೆಗಳಿಗೆ ವಿವಿಧ ಅರ್ಹತೆಯನ್ನು ಸೂಚಿಸಲಾಗಿದೆ. ಅಧಿಸೂಚನೆಯನ್ನು ಜಾಗರೂಕವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಗಮನಹರಿಸಿ KSCCF ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು KSCCF ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಆನ್ಲೈನ್ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆ, ವ್ಯಕ್ತಿ ವಿವರ ಮತ್ತು ಅನುಭವ ಪ್ರಮಾಣಪತ್ರಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಡಬೇಕು. ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಇತ್ತೀಚಿನ ಫೋಟೋ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಮುಂದಿನ ಬಳಕೆಗೆ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ.
ಬಸ್ ನಲ್ಲಿ ಲೈಂಗಿಕ ಕಿರುಕುಳ ಆರೋಪ: ಟ್ರೋಲಿಂಗ್ನಿಂದ ತೀವ್ರ ಮುಜುಗರಕ್ಕೊಳಗಾಗಿ ಕೇರಳದ ವ್ಯಕ್ತಿ ನೇಣಿಗೆ ಶರಣು!
ಕೋಝಿಕ್ಕೋಡ್ನಲ್ಲಿ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ವೈರಲ್ ಆದ ಪರಿಣಾಮ, ಮುಜುಗರಕ್ಕೊಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಚಾರಕ್ಕಾಗಿ ಮಹಿಳೆ ವಿಡಿಯೋ ಮಾಡಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳ ವೈರಲ್ ಸಂಸ್ಕೃತಿ ಜೀವಗಳನ್ನು ಬಲಿಪಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಬಿಎ ಚುನಾವಣೆಯ ಟೈಮ್ಲೈನ್ ಬಹಿರಂಗಪಡಿಸಿದ ಚುನಾವಣಾ ಆಯುಕ್ತ ಸಂಗ್ರೇಶಿ, ಯಾವಾಗ? ಹೇಗಿರಲಿದೆ ಎಲೆಕ್ಷನ್?
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಜ್ಜಾಗುತ್ತಿದ್ದು, ಮೇ 25ರ ನಂತರ ಚುನಾವಣೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಘೋಷಿಸಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, 2015ರ ಚುನಾವಣೆಯಲ್ಲಿ ಬಳಸಲಾಗಿದ್ದ ಇವಿಎಂಗಳನ್ನು ಕೈಬಿಟ್ಟು, ಈ ಬಾರಿ ಮತಪತ್ರಗಳನ್ನು ಬಳಸಲು ಆಯೋಗ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಜೂನ್ 30ರ ಗಡುವು ನೀಡಿದ್ದು, ಅದಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹೊಸ ವಂದೇ ಭಾರತ್ ಸ್ಲೀಪರ್ ಉದ್ಘಾಟನೆಯಾದ ಕೆಲ ಗಂಟೆಲೇ ಕಸದ ತೊಟ್ಟಿ ಮಾಡಿದ ಪ್ರಯಾಣಿಕರು! ಎಂಥಾ ರೈಲು ಬಂದ್ರೂ ಇಷ್ಟೇನಾ?
ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಪ್ರಯಾಣಿಕರು ತಿಂಡಿ ತಿನಿಸು ಕವರ್ಗಳನ್ನು ಬರ್ತ್ನಲ್ಲೇ ಬಿಸಾಡಿ ಹೋಗಿದ್ದಾರೆ. ಈ ಘಟನೆ ನಾಗರಿಕ ಪ್ರಜ್ಞೆಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ದೇಶಕ್ಕೆ ಐಷಾರಾಮಿ ರೈಲು ಬಂದರೂ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.
ಭಾರತ ಪಂದ್ಯ ಕಳೆದುಕೊಂಡದ್ದು ಎಲ್ಲಿ?: ಹೀಗೆ ಒಂಟಿ ರನ್ ಬಿಟ್ಟುಕೊಟ್ರೆ ಹೇಗೆ ಎಂದು ಸುನಿಲ್ ಗವಾಸ್ಕರ್ ತರಾಟೆ!
India Vs New Zealand ODI Series - ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಕ್ ಮುಖಭಂಗ ಅನುಭವಿಸಿದ್ದ ಭಾರತ ತಂಡ ಇದೀಗ ಏಕದಿನ ಸರಣಿಯಲ್ಲೂ ಕಹಿಯುಂಡಿದೆ. ಇದೀಗ ಭಾರತ ತಂಡ ಆಟವಾಡಿದ ಶೈಲಿಗೆ ಅನೇಕ ರೀತಿಯ ಟೀಕೆ ಟಿಪ್ಪಣಿಗಳು ಕೇಳಿ ಬಂದಿವೆ. ಭಾರತ ಕ್ರಿಕೆಟ್ ನ ದಂತಕತೆ ಸುನಿಲ್ ಗವಾಸ್ಕರ್ ಅವರಂತೂ ವಾಚಾಮಗೋಚರ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಮುಖ್ಯವಾಗಿ ಈ ಎರಡು ಕಾರಣಕ್ಕಾಗಿ ಸೋಲನ್ನು ಅನುಭವಿಸಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಚಳಿಗಾಲದ ಅತಿಥಿ ಮೂಲಂಗಿಯ ಆರು ಲಾಭಗಳು
ಅಗತ್ಯ ಪೋಷಕಾಂಶಗಳು, ನೀರಿನಂಶದಿಂದಾಗಿ ಮತ್ತು ಮುಖ್ಯವಾಗಿ ಕಡಿಮೆ ಕ್ಯಾಲರಿ ಹೊಂದಿರುವ ಕಾರಣದಿಂದ ಮೂಲಂಗಿ ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮ ಆಯ್ಕೆಯಾಗುತ್ತಿದೆ. ಮೂಲಂಗಿ ಮಸ್ಟರ್ಡ್ ಅಥವಾ ಸಾಸಿವೆ ಕುಟುಂಬಕ್ಕೆ ಸೇರಿದ ಹೂಬಿಡುವ ಸಸ್ಯವಾಗಿದೆ. ತೀಕ್ಷ್ಣವಾದ ಪರಿಮಳ ಮತ್ತು ಬೇಗನೇ ಮುರಿಯುವ ರಚನೆಯನ್ನು ಹೊಂದಿದೆ. ಚಳಿಗಾಲದಲ್ಲಿ ಭಾರತೀಯ ಮನೆಗಳಲ್ಲಿ ಬಹುತೇಕ ಹೆಚ್ಚು ಬಳಕೆಯಾಗುತ್ತದೆ. ಈ ಬೇರು ತರಕಾರಿಯನ್ನು ಸಲಾಡ್ಗಳಲ್ಲೂ ಬಳಸಲಾಗುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನಂಶದಿಂದಾಗಿ ಮತ್ತು ಮುಖ್ಯವಾಗಿ ಕಡಿಮೆ ಕ್ಯಾಲರಿ ಹೊಂದಿರುವ ಕಾರಣದಿಂದ ಈ ತರಕಾರಿಯು ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮ ಆಯ್ಕೆಯಾಗುತ್ತಿದೆ. ಮೂಲಂಗಿಯ ಆರು ಲಾಭಗಳು ಹೀಗಿವೆ: ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಗಳು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಕಾರಿ. ನಾರು ಪದಾರ್ಥವಾಗಿರುವುದರಿಂದ ಕರುಳಿನ ಚಲನೆಯನ್ನು ಸುಗಮಗೊಳಿಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆಯುರ್ವೇದದಲ್ಲಿ ಊಟಕ್ಕೆ ಮೊದಲು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಬಳಸಲಾಗುತ್ತದೆ. ಜೀರ್ಣಾಂಗದ ರಸಗಳು ಮತ್ತು ಪಿತ್ತರಸ ಸ್ರವಿಸಲು ನೆರವು ನೀಡುತ್ತದೆ. ಕೊಬ್ಬನ್ನು ಒಡೆಯಲು ಮತ್ತು ಪೌಷ್ಠಿಕಾಂಶಗಳ ಹೀರುವಿಕೆ ಸುಧಾರಿಸಲು ನೆರವಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಮೂಲಂಗಿಯಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡಂಟ್ ಆಗಿರುವ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣದಿಂದ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸಾಮಾನ್ಯ ಸೋಂಕುಗಳಾದ ಶೀತ ಮತ್ತು ಜ್ವರದ ವಿರುದ್ಧ ದೇಹಕ್ಕೆ ಸಹಿಷ್ಣುತೆ ನೀಡುತ್ತದೆ. ಮೂಲಂಗಿಯಲ್ಲಿ ಬ್ಯಾಕ್ಟೀರಿಯ ವಿರೋಧಿ ಮತ್ತು ಶಿಲೀಂಧ್ರನಾಶಕ ತತ್ವಗಳಿರುವ ಸಲ್ಪರ್ ಸಂಯುಕ್ತವಾದ ರಾಫನಿನ್ ಇರುತ್ತದೆ. ಈ ಸಂಯುಕ್ತವು ದೇಹ ಸಣ್ಣಪುಟ್ಟ ಸೋಂಕುಗಳಿಂದ ಬೇಗನೇ ಚೇತರಿಕೆಯಾಗಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಸತು ಮತ್ತು ಕಬ್ಬಿಣದಂತಹ ಖನಿಜಾಂಶಗಳನ್ನೂ ಮೂಲಂಗಿ ನೀಡುತ್ತದೆ. ಹೀಗಾಗಿ ನಿಯಮಿತ ಸೇವನೆಯಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಮೂಲಂಗಿ ರಸವನ್ನು ಸಾಂಪ್ರದಾಯಿಕ ವೈದ್ಯದಲ್ಲಿ ಉಸಿರಾಟದ ಸೋಂಕುಗಳಿಗೆ ಬಳಸಲಾಗುತ್ತದೆ. ಮಧುಮೇಹದ ನಿಯಂತ್ರಣದಲ್ಲಿ ಪರಿಣಾಮಕಾರಿ ಮಧುಮೇಹಿಗಳಿಗೆ ಉಪಯುಕ್ತ. ಏಕೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ತ್ವರಿತವಾಗಿ ಏರಿಕೆಯಾಗದಂತೆ ಗಮನಹರಿಸುತ್ತದೆ. ಮೂಲಂಗಿಯಲ್ಲಿರುವ ನಾರಿನಂಶವು ರಕ್ತಪ್ರವಾಹಕ್ಕೆ ಸಕ್ಕರೆ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಸ್ಥಿರವಾದ ಗ್ಲುಕೋಸ್ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. 2024ರ ಅಧ್ಯಯನವೊಂದು ಹೇಳಿರುವ ಪ್ರಕಾರ ಮೂಲಂಗಿ ಬೇರಿನ ಸಾರವು ಗ್ಲುಕೋಸ್ ನಿಯಂತ್ರಣ ಮತ್ತು ಇನ್ಸುಲಿನ್ ಸೆನ್ಸಿಟಿವಿಟಿ ಸುಧಾರಿಸಲು ನೆರವಾಗುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಉತ್ತಮ ಆಹಾರ. ಲಿವರ್ ಮತ್ತು ಕಿಡ್ನಿಗೂ ಸಹಕಾರಿ ಮೂಲಂಗಿಗಳಲ್ಲಿನ ನಿರ್ವಿಷಗೊಳಿಸುವ (ಡಿಟಾಕ್ಸಿಫೈ) ಗುಣದಿಂದಾಗಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಕಾಮಾಲೆ ರೋಗಕ್ಕೆ ಮೂಲಂಗಿ ಜ್ಯೂಸ್ ಅನ್ನು ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ರಕ್ತದಿಂದ ಹೆಚ್ಚುವರಿ ಬಿಲಿರುಬಿನ್ ತೆಗೆದು ಹಾಕುವ ಕಾರಣದಿಂದ ಲಿವರ್ಗೆ ಉತ್ತಮ ಎನ್ನಲಾಗಿದೆ. ಮೂಲಂಗಿ ನೈಸರ್ಗಿಕವಾಗಿ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡಗಳು ಮತ್ತು ಮೂತ್ರನಾಳದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯಕ್ಕೂ ಉತ್ತಮ ಮೂಲಂಗಿಗಳಲ್ಲಿ ನೀರಿನಂಶ ಹೆಚ್ಚಿರುವ ಕಾರಣದಿಂದ ಆರೋಗ್ಯವಂತ ಚರ್ಮವನ್ನು ನಿರ್ವಹಿಸಲು ನೆರವಾಗುತ್ತವೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸಲು ಅಗತ್ಯವಿರುವ ಜಲಸಂಚಯನ ಮಾಡುತ್ತದೆ. ಚರ್ಮ ಮುಪ್ಪಾಗುವುದು, ಸುಕ್ಕುಗಳು ಮತ್ತು ಮಂದವಾಗಲು ಮುಖ್ಯ ಕಾರಣ ಆಕ್ಸಿಡೇಟಿವ್ ಒತ್ತಡವಾಗಿರುತ್ತವೆ. ಮೂಲಂಗಿಗಳಲ್ಲಿ ವಿಟಮಿನ್ ಸಿ ಮತ್ತು ಫ್ಲಾವನಾಯ್ಡ್ಗಳು ಸಮೃದ್ಧವಾಗಿರುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ತೊಡೆದು ಹಾಕುತ್ತವೆ. ಅಲ್ಲದೆ ಕಲಾಜಿನ್ ಸಂಶ್ಲೇಷಣೆಗೆ ನೆರವಾಗುವುದರಿಂದ ಚರ್ಮ ದೃಢವಾಗಿರುತ್ತದೆ. ಉರಿಯೂತ ವಿರೋಧಿ ಅಂಶಗಳು ಅನೇಕ ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಉರಿಯೂತ ಕಾರಣವಾಗಿರುತ್ತದೆ. ಸಂಧಿವಾತ, ಆಸ್ತಮಾ ಮತ್ತು ಹೃದಯದ ರೋಗಗಳಿಗೆ ಉರಿಯೂತ ಕಾರಣವಾಗಿರುತ್ತದೆ. ಮೂಲಂಗಿಗಳು ಜೈವಿಕ ಸಕ್ರಿಯವಾಗಿರುವ ಸಂಯುಕ್ತಗಳನ್ನು ಹೊಂದಿರುವುದರಿಂದ ಉರಿಯೂತವನ್ನು ಸಹಜವಾಗಿ ನಿವಾರಿಸುತ್ತವೆ. ಜರ್ನಲ್ ಆಫ್ ಫುಡ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ವೈಜ್ಞಾನಿಕ ಅಧ್ಯಯನದ ಪ್ರಕಾರ ನೋವು ಮತ್ತು ಊತಕ್ಕೆ ಕಾರಣವಾಗುವ COX-2ನಂತಹ ಉರಿಯೂತವನ್ನು ನಿಗ್ರಹಿಸುವ ಶಕ್ತಿ ಮೂಲಂಗಿಯಲ್ಲಿದೆ. ಈ ಲೇಖನವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವಿವರಗಳಿಂದ ಬರೆಯಲಾಗಿದೆ. ಯಾವುದೇ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.
Silver Price: ಬೆಳ್ಳಿ ದರ ₹3 ಲಕ್ಷ ದಾಟಿ ದಾಖಲೆ ಸೃಷ್ಟಿ, ಒಂದೇ ದಿನಕ್ಕೆ ಹೆಚ್ಚಾಗಿದ್ದೆಷ್ಟು?
ಬೆಂಗಳೂರು: ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಒಂದೇ ದಿನಕ್ಕೆ 10,000 ರೂಪಾಯಿ ಏರಿಕೆ ಆಗುವ ಮೂಲಕ ಒಂದು ಕೆಜಿ ಬೆಳ್ಳಿ ದರವು ಸೋಮವಾರ (ಜನವರಿ 19) 3,00,000 ರೂಪಾಯಿ ದಾಟಿದೆ. ಅತೀ ವೇಗವಾಗಿ ದುಪ್ಪಟ್ಟು ದರ ಹೆಚ್ಚಿಸಿಕೊಂಡ ಕೀರ್ತಿ ಈ ಬಿಳಿ ಲೋಹಕ್ಕೆ ಸಲ್ಲುತ್ತದೆ. ಇಂದು ಬೆಳ್ಳಿ 1 ಕೆಜಿ ದರ
ಭಾರತವಿಲ್ಲದ ಗ್ಲೋಬಲ್ ಆರ್ಡರ್ ಊಹಿಸಿಕೊಳ್ಳುವುದು ಬಲುಕಷ್ಟ. ಜಾಗತಿಕ ರಚನೆಯಲ್ಲಿ ಭಾರತ ನಿರ್ವಹಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ವಹಿಸಲಿರುವ ಪಾತ್ರದ ಬಗ್ಗೆ ಜಗತ್ತಿನ ಯಾವ ದೇಶಕ್ಕೂ ಯಾವುದೇ ತಕಾರರು ಇಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಗಾಜಾ ಶಾಂತಿ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಪತ್ರ ಕಳುಹಿಸಿದ್ದಾರೆ.ಹಾಗಿದ್ದರೆ ಗಾಜಾ ಶಾಂತಿ ಮಂಡಳಿಯಲ್ಲಿ ಭಾರತ ನಿರ್ವಹಿಸಲಿರುವ ಪಾತ್ರವೇನು? ಇಲ್ಲಿದೆ ಮಾಹಿತಿ.
ʻJDSಗೆಂದು ದ್ರೋಹ ಮಾಡಿಲ್ಲ, ಚಾಮುಂಡೇಶ್ವರಿ ಕಣದಿಂದ ಸ್ಪರ್ಧಿಸೋದು ನಾನೇʼ: ಸಾರಾ ಮಹೇಶ್ಗೆ, ಜಿಟಿ ದೇವೇಗೌಡ ಟಾಂಗ್
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನೇ ಜೆಡಿಎಸ್ ಅಭ್ಯರ್ಥಿ ನಾನು ಎಂದಿದ್ದ ಸಾ ರಾ.ಮಹೇಶ್ ಅವರ ಹೇಳಿಕೆಗೆ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ಟಾಂಗ್ ಕೊಟ್ಟಿದ್ದಾರೆ. ನನಗೆ ನೋವಾದಾಗ ಹೇಳಿಕೊಂಡಿದ್ದೇನೆ. ಆದರೆ, ಪಕ್ಷದ ವಿರುದ್ಧ ಎಂದಿಗೂ ಮಾತನಾಡಿಲ್ಲ. ನಾನು ಜೆಡಿಎಸ್ನಲ್ಲೇ ಇರುತ್ತೇನೆ, ಮುಂದುವರೆಯುತ್ತೇನೆ. ದೇವೇಗೌಡರ ಹಾದಿಯಲ್ಲಿ ಬೆಳೆದು ಬಂದವ ನಾನು ಪಕ್ಷಕ್ಕೆ ದ್ರೋಹ ಬಗೆದಿಲ್ಲ ಎಂದರು.
ಏನಿದು ಟ್ರೇಡ್ ಬಜೂಕಾ?
ಕೋಝಿಕೋಡ್: ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ 42 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಗೋವಿಂದಪುರದಲ್ಲಿ ವಾಸಿಸುತ್ತಿದ್ದ ಪುತಿಯಾರ ಮೂಲದ ದೀಪಕ್ ಯು ಎಂದು ಗುರುತಿಸಲಾಗಿದೆ. ರವಿವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದೀಪಕ್ ಅವರನ್ನು ಎಬ್ಬಿಸಲು ಪೋಷಕರು ಕೊಠಡಿಯ ಬಾಗಿಲು ಬಡಿದಿದ್ದಾರೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ನೆರೆಹೊರೆಯವರ ಸಹಾಯದಿಂದ ಕೊಠಡಿಯ ಬಾಗಿಲು ತೆಗೆದಾಗ ದೀಪಕ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ದೀಪಕ್ ಜವಳಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಶುಕ್ರವಾರ ಕೆಲಸದ ನಿಮಿತ್ತ ಕಣ್ಣೂರಿಗೆ ಪ್ರಯಾಣಿಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದೇ ದಿನ ಅವರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ದೀಪಕ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವೀಡಿಯೊ ವೈರಲ್ ಮಾಡಿದ್ದರು. ಅದು ದೀಪಕ್ ಅವರ ಗಮನಕ್ಕೂ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧಿಗಳ ಪ್ರಕಾರ, ದೀಪಕ್ ಈ ಆರೋಪವನ್ನು ನಿರಾಕರಿಸಿದ್ದು, ವೀಡಿಯೊ ವೈರಲ್ ಆದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಈ ಕುರಿತು ವೈದ್ಯಕೀಯ ಕಾಲೇಜು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಶಂಕಿತ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಕಚೇರಿಗೆ ಪಾದಯಾತ್ರೆ ಮಾಡುತ್ತೇನೆ: ಎಚ್ಚರಿಕೆ ಕೊಟ್ಟ ಪ್ರದೀಪ್ ಈಶ್ವರ್, ಕಾರಣ ಏನು
ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಮಿಷನ್ ದಂಧೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂಬುವುದು ಪ್ರದೀಪ್ ಈಶ್ವರ್ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರಾದ ಆರ್ ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಕಚೇರಿಗೆ ಪಾದಯಾತ್ರೆ ನಡೆಸುವ ಎಚ್ಚರಿಕೆಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಕರ್ನಾಟಕದ ಡಿಜಿಪಿ ಶ್ರೇಣಿಯ IPS ಅಧಿಕಾರಿ ರಾಸಲೀಲೆ? ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯ ವರ್ತನೆ ವಿಡಿಯೋ ವೈರಲ್
ರಾಜ್ಯದ ಡಿಜಿಪಿ ಶ್ರೇಣಿಯ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲೇ ನಡೆದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಮವಸ್ತ್ರದಲ್ಲಿದ್ದ ಅಧಿಕಾರಿಯು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಡಿಯೋಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 19) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ರೈತರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ 'ಅಕ್ರಮ-ಸಕ್ರಮ' ಯೋಜನೆಯನ್ನು ಪುನರಾರಂಭಿಸಿದೆ. ಅನಧಿಕೃತ ಪಂಪ್ಸೆಟ್ಗಳಿಗೆ ಕಾನೂನುಬದ್ಧ ಸಂಪರ್ಕ ನೀಡಲಾಗುತ್ತಿದೆ. 500 ಮೀಟರ್ ಒಳಗೆ ಇರುವ ಪಂಪ್ಸೆಟ್ಗಳಿಗೆ ನಿಗದಿತ ಶುಲ್ಕದಲ್ಲಿ ಸಕ್ರಮಗೊಳಿಸಲಾಗುತ್ತದೆ. ದೂರವಿರುವ ಪಂಪ್ಸೆಟ್ಗಳಿಗೆ ಕುಸುಮ್-ಸಿ ಯೋಜನೆಯಡಿ ಸೌರಶಕ್ತಿ ಪಂಪ್ಸೆಟ್ ಅಳವಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಉಚಿತ ವಿದ್ಯುತ್, ಉಚಿತ ಟ್ರಾನ್ಸ್ಫಾರ್ಮರ್ ದುರಸ್ತಿ ಸೌಲಭ್ಯಗಳು ದೊರೆಯಲಿವೆ.
ಆಸ್ಟ್ರೇಲಿಯಾದ ಸ್ಟಾನ್ ಹಿಲ್ನಲ್ಲಿ ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಕಿಡಿಗೇಡಿತನ ಮತ್ತು ಗುಂಪು ಸೇರುವುದನ್ನು ತಡೆಯಲು ವಿಶಿಷ್ಟ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ನಿಯೋಜನೆ ಮತ್ತು ಕಟ್ಟುನಿಟ್ಟಿನ ಕ್ರಮಗಳು ವಿಫಲವಾದ ನಂತರ, ಸ್ಥಳೀಯ ಕೌನ್ಸಿಲ್ ಶಾಸ್ತ್ರೀಯ ಸಂಗೀತವನ್ನು ಬಳಸುವ ಮ್ಯೂಸಿಕ್ ಮಂತ್ರದ ಮೊರೆ ಹೋಗಿದೆ. 6 ತಿಂಗಳ ಪ್ರಾಯೋಗಿಕ ಯೋಜನೆಯು ಯಶಸ್ವಿಯಾದರೆ, ಇದನ್ನು ಅಧಿಕೃತಗೊಳಿಸಲಾಗುವುದು ಎಂದು ಕೌನ್ಸಿಲ್ ತಿಳಿಸಿದ್ದು, ಈ ಮೆಗಾ ಪ್ಲ್ಯಾನ್ ಹೇಗಿದೆ ನೋಡೋಣ ಬನ್ನಿ..
ಬಳ್ಳಾರಿ ಗಲಾಟೆ ತನಿಖೆ ಸಿಬಿಐಗೆ ಕೊಡಲು ಹಿಂದೇಟೇಕೆ? ರಾಜ್ಯ ಸರ್ಕಾರದ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ
ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡಬೇಕೆಂಬ ಯೋಚನೆ ಯಾವತ್ತೂ ಇರಲಿಲ್ಲ; ಸಾಕ್ಷಾತ್ ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳಿಕೊಂಡು ಆ ಜನಾಂಗಕ್ಕೆ ನೀವು ಮಾಡಿದ್ದು ಏನೂ ಇಲ್ಲ; ಆದರೆ, ವಾಲ್ಮೀಕಿ ಹೆಸರಿನಲ್ಲಿ ಇನ್ನೆಷ್ಟು ಮಂದಿ ಕೊಲೆ ಮಾಡುತ್ತೀರಿ? ಇನ್ನೆಷ್ಟು ಪ್ರಾಣ ತೆಗೆಯುತ್ತೀರಿ ಎಂದು ಕೇಳುವ ಉದ್ದೇಶದಂದ ಶ್ರೀರಾಮುಲು ಅವರು ಪಾದಯಾತ್ರೆ ಮಾಡುವ ತೀರ್ಮಾನ ಮಾಡಿದ್ದರು. ಅದನ್ನು ಪಕ್ಷದ ಗಮನಕ್ಕೆ ತರಲಾಗಿತ್ತು ಎಂದು ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿವರಿಸಿದರು.
ಯಾರದ್ದೋ ಮೇಲಿನ ದ್ವೇಷಕ್ಕೆ ಹೆಣ್ಮಕ್ಕಳ ಫೋಟೋ ದಾಳ;ಅಮಾಯಕ ಯುವತಿಯರ ಫೋಟೋ ದುರ್ಬಳಕೆ ಮಾಡ್ತಿದ್ದ ಕಾಮುಕ ಕೃಷ್ಟ ಅರೆಸ್ಟ್
ವೈಯಕ್ತಿಕ ದ್ವೇಷದಿಂದಾಗಿ ಯುವತಿಯ ಫೋಟೋವನ್ನನು ಸೋಶಿಯಲ್ ಮೀಡಿಯಾದಿಂದ ಡೌನ್ಲೋಡ್ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ವಿಡಿಯೋಗಳಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಬೇರೆ ಬೇರೆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಕೃಷ್ಣ ಎಂಬಾತನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಾಗಲೂರು ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
Basavakalyan | ಕೆಟ್ಟು ನಿಂತಿದ್ದ ಲಾರಿಗೆ ಗುದ್ದಿದ ಕಾರು; ಚಾಲಕ ಸ್ಥಳದಲ್ಲೇ ಮೃತ್ಯು
ಬೀದರ್ : ಕೆಟ್ಟು ನಿಂತದ್ದ ಲಾರಿಗೆ ವೇಗವಾಗಿ ಬಂದ ಕಾರೊಂದು ಗುದ್ದಿದೆ. ನಂತರ ಆ ಕಾರಿನ ಹಿಂಬದಿಯಲ್ಲಿ ಬಂದಿದ್ದ ಕಂಟೇನರ್ ಲಾರಿಯೊಂದು ಆ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮ ಬಳಿಯ NH-65 ಹೆದ್ದಾರಿಯಲ್ಲಿ ನಡೆದಿದೆ. ಚಿಟಗುಪ್ಪಾ ತಾಲೂಕಿನ ಇಟಗಾ ಗ್ರಾಮದ ನಿವಾಸಿಯಾದ ಜೈಭೀಮ್ (36) ಮೃತಪಟ್ಟ ಕಾರು ಚಾಲಕನಾಗಿದ್ದಾನೆ. ಜೈಭೀಮ್ ಕಾರಿನಲ್ಲಿ ಇಟಗಾ ಗ್ರಾಮದಿಂದ ಬಸವಕಲ್ಯಾಣ ತಾಲೂಕಿನ ಇಲ್ಯಾಳ ಗ್ರಾಮಕ್ಕೆ ಹೋಗುತಿದ್ದರು ಎನ್ನಲಾಗಿದೆ. ರಸ್ತೆ ಮಧ್ಯದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಆ ಲಾರಿಯನ್ನು ರಸ್ತೆ ಮೇಲೆಯೇ ಒಂದು ಕಡೆ ನಿಲ್ಲಿಸಿ ಲಾರಿಯ ಸಮಸ್ಯೆಯನ್ನು ನೋಡುತ್ತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಕಾರಿನ ಹಿಂದೆಯೇ ವೇಗವಾಗಿ ಬಂದ ಕಂಟೇನರ್ ಲಾರಿಯು ಆ ಕಾರಿನ ಹಿಂಬದಿಯಿಂದ ಗುದ್ದಿದೆ. ಎರಡು ಲಾರಿಗಳ ಮಧ್ಯ ಸಿಲುಕಿರುವ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹುಮನಾಬಾದ್ ಡಿವೈಎಸ್ಪಿ ಮುಡೋಳಪ್ಪ ಹಾಗೂ ಬಸವಕಲ್ಯಾಣ ಸಿಪಿಐ ಅಲಿಸಾಬ್ ಹಾಗೂ ಹುಮನಾಬಾದ್ ಸಿಪಿಐ ಸಂತೋಷ ತಟ್ಟೆಪಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಫಜಲಪುರ: ಭಾರತೀಯ ಸಮ್ಮಾನ್ ಪ್ರಶಸ್ತಿ ಪಡೆದ ಡಾ. ಖುರ್ಷೀದ್ಗೆ ಸನ್ಮಾನ
ಕಲಬುರಗಿ: 2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಭಾಜನರಾದ ಡಾ. ಸೈಯದ್ ಅನ್ವರ್ ಖುರ್ಷೀದ್ ಅವರನ್ನು ಅಂಜುಮನ್ ಇಸ್ಲಾಂ ಕಮಿಟಿ ಮತ್ತು ಬೈತುಲ್ ಮಾಲ್ ಕಮಿಟಿ ವತಿಯಿಂದ ಸನ್ಮಾನಿ ಸಲಾಯಿತು. ಪಟ್ಟಣದ ಜಾಮಿಯಾ ಮಸೀದಿಯ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಮಕ್ಬೂಲ್ ಪಟೇಲ್, ಮುನೀರ್ ಪಟೇಲ್, ಜಾಫರ್ ಪಟೇಲ್, ಖಾಲೀದ್ ಜಾಗಿರದಾರ, ಮುಫ್ತಿಕ್ ಖಮರೂಜಾ, ಮೌಲಾನಾ ಅಮೀನಸಾಬ್, ಹಾಜಿಸಾಬ ಮುಜಾವರ, ರಹೀಮ್ ಖೇಡಗಿ, ಬಿಲಾಲ್ ಪೀರಾವಲೇ, ರಫೀಕ್ ತೋಟೆಗಾರ, ಸೋಂದುಸಾಬ ನಗಾರ್ಚಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಡಬ: ಜಾತಿ ನಿಂದನೆ, ಹಲ್ಲೆ ಆರೋಪ; ಮೂವರ ವಿರುದ್ಧ ಪ್ರಕರಣ ದಾಖಲು
ಕಡಬ, ಜ.19: ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಜಾತಿ ನಿಂದನೆ ನಡೆಸಿ ಹಲ್ಲೆ ಮಾಡಿದ ಆರೋಪದಡಿ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಲ್ತಾಡು ಗ್ರಾಮ, ಕಡಬ ತಾಲೂಕು ನಿವಾಸಿ ಜಗದೀಶ್ (28) ಅವರು ನೀಡಿದ ದೂರಿನಂತೆ, ಜನವರಿ 16ರಂದು ರಾತ್ರಿ ಸುಮಾರು 10.00–10.30 ಗಂಟೆಯ ನಡುವೆ ಅವರು ಬಾರ್ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಸಮೀಪ ನಿಂತಾಗ, ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಅವರು ವಿನಾಕಾರಣ ಜಗಳ ಆರಂಭಿಸಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿ, ಕೈಯಿಂದ ಕೆನ್ನೆ, ತಲೆ, ಭುಜ ಮತ್ತು ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 08/2026. ಕಲಂ: 115(2), 352, 351(3) BNS-2023 & : 3(1), (r), & (S) the Sc & St (Prevention of atrocities) Amendment act-2015. ನಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಶಿರ್ವ: ಅಕ್ಕಿ ಮಿಲ್ಲಿನ ಬಿಸಿ ನೀರಿಗೆ ಬಿದ್ದು ಮಹಿಳೆ ಮೃತ್ಯು
ಉಡುಪಿ, ಜ.19: ಅಕ್ಕಿ ಮಿಲ್ಲಿನಲ್ಲಿ ಭತ್ತದ ಬೊಬ್ಬೆ ತೆಗೆಯುವ ವೇಳೆ ಆಕಸ್ಮಿಕವಾಗಿ ಬಿಸಿನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಂಟಕಲ್ಲು ಸಡಂಬೈಲು ಎಂಬಲ್ಲಿ ನಡೆದಿದೆ. ಮೃತರನ್ನು ಬಂಟಕಲ್ಲು ಸಡಂಬೈಲು ನಿವಾಸಿ ರೋಹಿಣಿ ಪುಷ್ಪಲತಾ(53) ಎಂದು ಗುರುತಿಸಲಾಗಿದೆ. ತನ್ನ ಗಂಡನ ಮನೆಯಲ್ಲಿರುವ ಅಕ್ಕಿಮಿಲ್ಲಿನಲ್ಲಿ ಇವರು ಕೆಲಸ ಮಾಡಿ ಕೊಂಡಿದ್ದು, ಡಿ.24ರಂದು ಬಿಸಿ ನೀರಿನಿಂದ ಭತ್ತದ ಬೊಬ್ಬೆ ತೆಗೆಯುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ಬಿಸಿ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಸುಟ್ಟ ಗಾಯಗೊಂಡ ಅವರು, ಜ.18ರಂದು ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ | ಪರ್ಯಾಯ ಮಹೋತ್ಸವಕ್ಕೆ ತೆರಳಿ ವಾಪಸ್ಸಾದ ವ್ಯಕ್ತಿ ಮನೆಯಲ್ಲಿ ಮೃತ್ಯು
ಉಡುಪಿ, ಜ.19: ಪರ್ಯಾಯ ಮಹೋತ್ಸವಕ್ಕೆ ಹೋಗಿ ಬಂದು ಮನೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಅಲ್ಲೇ ಮೃತಪಟ್ಟ ಘಟನೆ ಜ.18ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಕರಂಬಳ್ಳಿ ಸಂತೋಷ ನಗರದ ಶಶಿಧರ(47) ಎಂದು ಗುರುತಿಸಲಾಗಿದೆ. ಹೈಪರ್ ಟೆನ್ಶನ್ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು, ಜ.17ರಂದು ರಾತ್ರಿ ಪರ್ಯಾಯ ಉತ್ಸವಕ್ಕೆ ಹೋಗಿ, ಜ.18ರಂದು ಬೆಳಗ್ಗೆ 5:45 ಗಂಟೆಗೆ ಮನೆಗೆ ಬಂದು ಮಲಗಿದ್ದರು. ಗಾಢ ನಿದ್ರೆಯಲ್ಲಿದ್ದ ಶಶಿಧರ್ ಅವರನ್ನು ಎಬ್ಬಿಸಿದಾಗ ಏದ್ದೇಳಲೇ ಇಲ್ಲ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ವೈದ್ಯರು ಪರೀಕ್ಷಿಸಿ, ಶಶಿಧರ್ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಖಿಲ ಭಾರತ ಕಾರ್ಮಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಎಐಸಿಸಿಟಿಯು ಕರೆ
ರಾಯಚೂರು: ವಿಬಿ ಜಿರಾಮ್ ಜಿ-ವಿಮಾ ತಿದ್ದುಪಡಿ ಕಾಯ್ದೆ - ಶಾಂತಿ ಕಾಯ್ದೆ ರದ್ದುಗೊಳಿಸಿ, ಮನರೇಗಾ ಕಾಯ್ದೆ ಪುನರ್ ಸ್ಥಾಪಿಸಿ ಬಲಪಡಿಸಿ, ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಹಿಂಪಡೆಯಿರಿ ಮತ್ತು ಬೀಜ ಮಸೂದೆ ವಿರೋಧಿಸಿ ಫೆಬ್ರವರಿ 12 ರಂದು ನಡೆಯುವ ಸಾರ್ವತ್ರಿಕ ಮುಷ್ಕರದಲ್ಲಿ ದುಡಿಯುವ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಅಜೀಜ್ ಜಾಗೀರ್ದಾರ್ ಕರೆ ನೀಡಿದರು. ರಾಯಚೂರು ತಾಲೂಕಿನ ಅರಳಿಬೆಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎಐಸಿಸಿಟಿಯು ಸಂಘಟನೆ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮುಷ್ಕರದ ಪೂರಕವಾಗಿ ಜನಜಾಗೃತಿ, ಕರಪತ್ರ ಹಂಚಿ ಪ್ರಚಾರಾಂದೋಲನ ನಡೆಸಿದರು. ದುಡಿಯುವ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನುಗಳನ್ನು ಜಾರಿ ಮಾಡದೆ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ಕಾನೂನು ಜಾರಿ ಮಾಡಿ ದುಡಿಯುವ ವರ್ಗಗಳ ಜನರನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಈ ಕಾನೂನುಗಳ ರದ್ದತಿಗಾಗಿ ಫೆಬ್ರವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ. ಈ ಬೇಡಿಕೆಗಳಷ್ಟೇ ಅಲ್ಲದೆ ನೂತನ ಶಿಕ್ಷಣ ನೀತಿ, ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ, ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪನೆ, ಕೆಲಸದ ಅವಧಿ 12ಗಂಟೆಗೆ ವಿಸ್ತರಣೆ ಸೇರಿ ವಿವಿಧ ಆದೇಶಗಳನ್ನು ಧಿಕ್ಕರಿಸಿ ದೇಶದ ಎಲ್ಲ ಭಾಗಗಳಲ್ಲಿ ಮುಷ್ಕರ ನಡೆಸಲಾಗುತ್ತಿದೆ. ರಾಯಚೂರು ತಾಲೂಕಿನ ಅತ್ಯಂತ ಕೂಡ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ದುಡಿಯುವ ವರ್ಗದವರು ಭಾಗವಹಿಸುವ ಮೂಲಕ ಮುಷ್ಕರ ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ:ನಾಗೇಂದ್ರ, ನರಸಪ್ಪ, ಈರಣ್ಣ, ಸಣ್ಣ ತಾಯಪ್ಪ, ಯಲ್ಲಪ್ಪ,ದೇವರಾಜ, ನರಸಿಹಲು, ಆಂಜನೇಯ.ವೆಂಕಟೇಶ್, ತಿಪ್ಪಣ್ಣ ಇದ್ದರು.
ಉತ್ತರ ಪ್ರದೇಶ ಸರಕಾರ ಸಂತರನ್ನು ಅವಮಾನಿಸಿದೆ: ಅಖಿಲೇಶ್ ಯಾದವ್ ಆಕ್ರೋಶ
ಕನಕಪುರ, ರಾಮನಗರದಲ್ಲಿ ಡಿಕೆ ಬ್ರದರ್ಸ್ ಕಟ್ಟಿಹಾಕಲು ದೇವೇಗೌಡರ ಚಾಣಕ್ಯ ತಂತ್ರ : ಆಗಲೇ ಅಭ್ಯರ್ಥಿ ಫೈನಲ್?
Deve Gowda Master Plan : ಯುಗಾದಿ ನಂತರ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಯಾಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ಇದರಲ್ಲಿ ಪ್ರಮುಖವಾಗಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ. ಇನ್ನು, ಕನಕಪುರದಲ್ಲಿ ಡಿಕೆ ಬ್ರದರ್ಸ್ ಪ್ರಭಾವ ಕಡಿಮೆ ಮಾಡಲು ಗೌಡರು ಹೊಸ ದಾಳ ಉರುಳಿಸುವ ಸಾಧ್ಯತೆಯಿದೆ.
ಚಿನ್ನದ ಮೇಲಿನ ಜಿಎಸ್ಟಿ ಇಳಿಸುವಂತೆ ಜ್ಯುವೆಲ್ಲರ್ಸ್ ಒಕ್ಕೂಟ ಮನವಿ; ಬಜೆಟ್ ಬಳಿಕ ಇಳಿಕೆಯಾಗುತ್ತಾ ಬಂಗಾರದ ದರ?
2026-27ರ ಕೇಂದ್ರ ಬಜೆಟ್ಗೂ ಮುನ್ನ, ಅಖಿಲ ಭಾರತ ರತ್ನ ಮತ್ತು ಆಭರಣಗಳ ದೇಶೀಯ ಮಂಡಳಿ (ಜಿಜೆಸಿ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ ಗ್ರಾಹಕರು ಮತ್ತು ವರ್ತಕರು ಇಬ್ಬರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಜಿಎಸ್ಟಿ ದರವನ್ನು ತರ್ಕಬದ್ಧಗೊಳಿಸುವುದು, ದಾಸ್ತಾನು ಮೌಲ್ಯಮಾಪನದಲ್ಲಿ ತೆರಿಗೆ ವಿನಾಯಿತಿ ಮತ್ತು ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವುದು ಈ ಬಾರಿಯ ಬಜೆಟ್ನಲ್ಲಿ ಅತ್ಯಗತ್ಯ ಎಂದು ಮಂಡಳಿ ಪ್ರತಿಪಾದಿಸಿದೆ.
ಅಮೆರಿಕಾ ವೀಸಾ ಪಡೆದು ಅಲ್ಲಿ ಜೀವ ನ ರೂಪಿಸಿಕೊಳ್ಳಬೇಕೆಂದು ಹಲವು ಭಾರತೀಯರು ಕನಸು ಕಾಣುತ್ತಿದ್ದು, ಅವರಿಗೆ ಸಾಕಷ್ಟು ನಿರ್ಬಂಧಗಳನ್ನು ಎದುರಿಸುತ್ತಿದ್ದರೆ. ಆ ಸುವರ್ಣಾವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳದೆ ಭಾರತೀಯ ಮೂಲದ ದಂಪತಿಗಳು ಹೋಟೆಲ್ನಲ್ಲಿ ಲೈಂಗಿಕ ದಂಧೆ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ಜಾಲ ನಡೆಸುತ್ತಿದ್ದದ್ದು ಬಯಲಾಗಿದೆ. ವರ್ಜೀನಿಯಾದಲ್ಲಿ 'ರೆಡ್ ಕಾರ್ಪೆಟ್ ಇನ್' ಹೋಟೆಲ್ ನಡೆಸುತ್ತಿದ್ದ ಕೋಶಾ ಮತ್ತು ತರುಣ್ ಶರ್ಮಾ ಸೇರಿದಂತೆ 5ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹೊಟೇಲ್ ನ 3ನೇ ಮಹಡಿಯನ್ನು ಸಂಪೂರ್ಣವಾಗಿ ಅಕ್ರಮ ದಂಧೆಯ ಅಡ್ಡೆಯನ್ನಾಗಿ ಮಾರ್ಪಡಿಸಿರುವುದು ಮಾತ್ರವಲ್ಲದೆ ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದ ಮಹಿಳೆಯರಿಗೆ ಕಿರುಕುಳವನ್ನು ಸಹ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಖಚಿತ ಮಾಹಿತಿ ಮೇರೆಗ ಪೊಲೀಸರು ದಾಳಿ ನಡೆಸಿದ್ದುಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
Magnilal: 3 ಮನೆ, 3 ಆಟೋ, ಕಾರು ಕೋಟ್ಯಾಂತರ ರೂ. ಇದ್ದರೂ ಭಿಕ್ಷೆ ನಿಲ್ಲಿಸದ ಶ್ರೀಮಂತ ಮಂಗಿಲಾಲ್
ಇಂದೋರ್: ಎಷ್ಟೇ ಹಣ, ಶ್ರೀಮಂತಿಕೆ ಬಂದರೂ ಮಾಡುವ ಕಾಯಕದ ಮೇಲೆ ಗೌರವ ಇರಬೇಕು. ಅಟ್ಟಕ್ಕೇರಿಸಿದರೂ ಏರಿಸಿದ ವೃತ್ತಿ ಕೈ ಬಿಡಬಾರದು ಎಂಬ ಮಾತಿದೆ. ಅದರಂತೆ ಇಲ್ಲೊಬ್ಬರು ಶ್ರೀಮಂತ ಭಿಕ್ಷುಕ ತನ್ನ ಬಳಿ ಹಣ, ಮನೆ, ಕಾರು, ಆಟೋಗಳಿದ್ದರು ಸಹಿತ ಭಿಕ್ಷಾಟನೆ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರ ಭಿಕ್ಷಾಟನೆ ನಿರ್ಮೂಲನೆ ಅಭಿಯಾನದಲ್ಲಿ ಪತ್ತೆಯಾದ ಈ ಶ್ರೀಮಂತ ಭಿಕ್ಷುಕನ ಆಸ್ತಿ ನೋಡಿದ
ಕೇಂದ್ರ ಬಜೆಟ್ಗೂ ಮುನ್ನ ನಿರ್ಮಲಾ ಸೀತಾರಾಮನ್ ಮುಂದೆ ಮಹತ್ವದ ಬೇಡಿಕೆ ಇಟ್ಟ ಟಾಟಾ ಮೋಟಾರ್ಸ್; ಏನದು?
ಮುಂಬರುವ ಕೇಂದ್ರ ಬಜೆಟ್ನಲ್ಲಿ ಆರಂಭಿಕ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ಅಥವಾ ಪ್ರೋತ್ಸಾಹಕಗಳನ್ನು ನೀಡುವಂತೆ ಟಾಟಾ ಮೋಟಾರ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಯಾಣಿಕ ವಾಹನಗಳ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದರೂ, ಕಡಿಮೆ ದರದ ಎಲೆಕ್ಟ್ರಿಕ್ ಕಾರುಗಳು ಪೈಪೋಟಿ ಎದುರಿಸುತ್ತಿವೆ ಎಂದು ಕಂಪನಿಯ ಎಂಡಿ ಶೈಲೇಶ್ ಚಂದ್ರ ಹೇಳಿದ್ದಾರೆ. ಇದೇ ವೇಳೆ, ಪರಿಸರ ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲೆಕ್ಟ್ರಿಕ್ ಟ್ಯಾಕ್ಸಿಗಳಿಗೂ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಬಲ ನೀಡಬೇಕು ಎಂದು ಅವರು ಕೋರಿದ್ದಾರೆ.
ಕುಂಬಳೆ: ಮನೆ ಬಾಗಿಲು ಮುರಿದು ಕಳ್ಳತನ
ಕಾಸರಗೋಡು: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 29 ಪವನ್ ಚಿನ್ನಾಭರಣ, 25 ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಗ್ರಿಗಳು ಹಾಗೂ 5 ಸಾವಿರ ರೂ. ನಗದು ಕಳವುಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ರವಿವಾರ ನಡೆದಿದೆ. ನ್ಯಾಯವಾದಿ ಚೈತ್ರ ಎಂಬವರ ಮನೆಯ ಹಿಂಭಾಗದ ಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ. ಕುಟುಂಬಸ್ಥರು ರವಿವಾರ ಸಂಜೆ ಕುಂಬಳೆಯ ದೇವಸ್ಥಾನಕ್ಕೆ ತೆರಳಿದ್ದು, ಸುಮಾರು ಒಂದೂವರೆ ಗಂಟೆ ಬಳಿಕ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸಂಜೆ 6.30 ರಿಂದ 8 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕರೂರ್ ಕಾಲ್ತುಳಿತ ಪ್ರಕರಣ| ಎರಡನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ TVK ಮುಖ್ಯಸ್ಥ ವಿಜಯ್
ಹೊಸದಿಲ್ಲಿ: ತಮಿಳುನಾಡಿನ ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಸೋಮವಾರ ಕೇಂದ್ರ ತನಿಖಾ ದಳದ (ಸಿಬಿಐ) ಮುಂದೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾದರು. ಲೋಧಿ ರಸ್ತೆಯಲ್ಲಿರುವ ಸಿಬಿಐ ಪ್ರಧಾನ ಕಚೇರಿಗೆ ವಿಜಯ್ ಅವರು ಸೋಮವಾರ ಬೆಳಿಗ್ಗೆ ಆಗಮಿಸಿದರು. ಭ್ರಷ್ಟಾಚಾರ ನಿಗ್ರಹ ಘಟಕದ ಉಪ ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದ ತಂಡವು ವಿಜಯ್ ರನ್ನು ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಹಿಂದೆ ಜನವರಿ 12ರಂದು ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು. ಬಳಿಕ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪೊಂಗಲ್ ಹಬ್ಬದ ಕಾರಣ ಅವರು ಮತ್ತೊಂದು ದಿನಾಂಕವನ್ನು ಕೋರಿದ್ದರು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ ವಿಚಾರಣೆಗೆ ವಹಿಸಿಕೊಂಡಿರುವ ಸಿಬಿಐ, ಸೆಪ್ಟೆಂಬರ್ 27, 2025ರಂದು ಕರೂರ್ನಲ್ಲಿ ನಡೆದ ಕಾಲ್ತುಳಿತದ ಕುರಿತು ತನಿಖೆಯನ್ನು ಮುಂದುವರಿಸಿದೆ. ಆ ಘಟನೆಯಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಸಂಗ್ರಹ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ವಿಷಯಾಂತರ ಮಾಡುತ್ತಿರುವುದು ಸರಿಯಲ್ಲ, ಸಿಬಿಐಗೆ ಕೊಡಲು ಹಿಂದೇಟೇಕೆ? : ಜನಾರ್ಧನ ರೆಡ್ಡಿ
ಬೆಂಗಳೂರು : ಸಿದ್ದರಾಮಯ್ಯನವರು ಪ್ರಾಮಾಣಿಕರೆಂದು ಬಿಂಬಿಸಲು, ಈ ರಾಜ್ಯದ ಸಿಎಂ ಆಗಿ ಕಾನೂನು ರಕ್ಷಿಸಲು ನಾನು ನಿಜವಾಗಿಯೂ ಕಂಕಣಬದ್ಧವಾಗಿ ಇದ್ದೇನೆ ಎಂದು ತೋರಿಸಲು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟವರು. ಅಂಥ ಮಹಾನುಭಾವ, ಬಳ್ಳಾರಿಯ ಪ್ರಕರಣವನ್ನು ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಇರುವ ಸಂದರ್ಭದಲ್ಲಿ ಸುಮಾರು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಬಿಜೆಪಿಯವರು ಒಂದು ಕೇಸನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ ಎಂದು ಮುಖ್ಯಮಂತ್ರಿಗಳು ಕೇಳಿದ್ದಾರೆ. ಯಡಿಯೂರಪ್ಪ ಅವರ ಸರಕಾರದ ಅವಧಿಯಲ್ಲಿ ಎಷ್ಟು ಸಿಬಿಐಗೆ ಕೊಟ್ಟಿದ್ದಾರೆ, ಸಿದ್ದರಾಮಯ್ಯರ ಅವಧಿಯಲ್ಲಿ ಎಷ್ಟು ಸಿಬಿಐಗೆ ವಹಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಲ್ಲ ಎಂದು ನುಡಿದರು. ನಿಮ್ಮ ಶಾಸಕನೇ ಕೊಲೆ ಮಾಡಿಸಿದ್ದೆಂದು ನಿಮಗೆ ಈಗಾಗಲೇ ಗೊತ್ತಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಮುಜುಗರ ಆಗಿದೆ. ಕೇವಲ ಮೂವರು ಖಾಸಗಿ ಗನ್ಮೆನ್ಗಳನ್ನು ಬಂಧಿಸಿ, ಸಿಐಡಿಗೆ ಕೊಡುವ ಮೂಲಕ ಇದನ್ನು ಜನರು ಮರೆಯುವಂತೆ ಮಾಡಬೇಕು. ಶಾಸಕರ ಬಂಧನ ಮಾಡಬಾರದೆಂಬ ನಿಮ್ಮ ಕೆಟ್ಟ ಯೋಚನೆ ಇದರಿಂದ ಬಹಿರಂಗ ಆಗುತ್ತಿದೆ ಎಂದು ಆರೋಪಿಸಿದರು. 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ ಎಂದು ಎದೆ ತಟ್ಟಿಕೊಳ್ಳುವ ಸಿದ್ದರಾಮಯ್ಯನವರು, ಈ ಪ್ರಕರಣವನ್ನೂ ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ. ಅದನ್ನು ಬಿಟ್ಟು ವಿಷಯಾಂತರ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಒಬ್ಬ ಅಮಾಯಕ ಪ್ರಾಣ ಕಳೆದುಕೊಂಡ. ಅದೇ ವಾಲ್ಮೀಕಿ ಬ್ಯಾನರ್ ಹೆಸರಿನಲ್ಲಿ ಜನಾರ್ಧನ ರೆಡ್ಡಿ ಕೊಲೆ ಪ್ರಯತ್ನ ಮಾಡುತ್ತೀರಿ. ಬ್ಯಾನರ್ ಹೆಸರಿನಲ್ಲಿ ರಾತ್ರಿ 9 ಗಂಟೆಗೆ ಒಬ್ಬ ಶಾಸಕ ಐದಾರು ಸಾವಿರ ಜನರನ್ನು ಕರೆದುಕೊಂಡು ಬಂದು ಮನೆ ಮೇಲೆ ಫೈರಿಂಗ್ ಮಾಡಿ, ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದಾರೆ. ಅವರ ಕಾರ್ಯಕರ್ತನನ್ನೇ ಅವರ ಖಾಸಗಿ ಗನ್ಮೆನ್ಗಳು ಸಾಯಿಸಿದ್ದಾರೆ. ಅದನ್ನು ನಮ್ಮ ಮೇಲೆ ಹಾಕಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ವಾಲ್ಮೀಕಿ ಹೆಸರಿನಲ್ಲಿ ಇನ್ನೆಷ್ಟು ಅಮಾಯಕರ ಪ್ರಾಣ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತೀರಿ? ಅನ್ನುವ ವಿಚಾರದಲ್ಲಿ ಶ್ರೀರಾಮುಲು ಅವರು ಆ ಜನಾಂಗದ ಒಬ್ಬ ದೊಡ್ಡ ನಾಯಕನಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಬಯಕೆ ಅವರಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಮುಂಬೈ ಮೇಯರ್ ಗದ್ದುಗೆ ಗುದ್ದಾಟ: 29 ಕಾರ್ಪೊರೇಟರ್ಗಳನ್ನು ಹೋಟೆಲ್ಗೆ ಶಿಫ್ಟ್ ಮಾಡಿದ ಏಕನಾಥ್ ಶಿಂಧೆ ಬಣ
ಬೃಹನ್ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆಯ ಮೈತ್ರಿಕೂಟ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಶಿವಸೇನೆಯ 29 ಕಾರ್ಪೊರೇಟರ್ಗಳನ್ನು ಏಕನಾಥ್ ಶಿಂಧೆ ಅವರು ಹೋಟೆಲ್ನಲ್ಲಿ ಇರಿಸಿದ್ದಾರೆ. ಕುದುರೆ ವ್ಯಾಪಾರದ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಮಹಾಯುತಿ ಬಿಎಂಸಿ ಗದ್ದುಗೆ ಏರಲಿದೆ. ಪ್ರತಿಪಕ್ಷಗಳು ಈ ಕ್ರಮವನ್ನು ಟೀಕಿಸಿವೆ.
ಕೋಲಾರ: ಮಾಲೂರಿನಲ್ಲಿ ದೇವಾಲಯದ ಪೂಜಾರಿ ಕೊಲೆ; ದುಷ್ಕರ್ಮಿಗಳು ಪರಾರಿ
ಕೋಲಾರ: ದೇವಾಲಯದ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹರಳೇರಿ ಸಮೀಪ ನಡೆದಿದೆ. ಮಾಲೂರು ತಾಲ್ಲೂಕು ಕಲ್ಲೂರು ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಆಂಜಿನಪ್ಪ (45) ಮೃತರು. ರವಿವಾರ ರಾತ್ರಿ ಮಾಲೂರು ನಗರದಿಂದ ಬೈಕ್ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆಯ ಹಿಂದೆ ಇರುವ ದುಷ್ಕರ್ಮಿಗಳು ಯಾರು ಹಾಗೂ ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ವ್ಯಕ್ತಿಗತ ದ್ವೇಷವೇ ಈ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಾಲೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿ 5 ವರ್ಷದ ಮಗನನ್ನೇ ಕೊಂದ ಹೆತ್ತ ತಾಯಿ; ಪೊಲೀಸ್ ಕಾನ್ಸ್ಟೇಬಲ್ ಪತ್ನಿಗೆ ಜೀವಾವಧಿ ಶಿಕ್ಷೆ
ಪ್ರೇಮಿಯೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದ ತಾಯಿಯನ್ನು ಮಗ ಕಣ್ಣಾರೆ ಕಂಡ. ಇದರಿಂದ ಭಯಗೊಂಡ ತಾಯಿ, ಆತನನ್ನು ಎರಡನೇ ಮಹಡಿಯಿಂದ ತಳ್ಳಿದ ಘಟನೆ 2023ರ ಏಪ್ರಿಲ್ 28ರಂದು ನಡೆದಿತ್ತು. ಕೊನೆಗೆ ತನ್ನ ಪತಿ ಬಳಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಳು ರಹಸ್ಯವಾಗಿ ಆಕೆಯ ಹೇಳಿಕೆ ರೆಕಾರ್ಡ್ ಮಾಡಿಕೊಂಡ ಪತಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಸಂಪೂರ್ಣ ತನಿಖೆ ನಡೆಸಲಾಯಿತು. ಸದ್ಯ ಆಕೆಯ ತಪ್ಪು ಸಾಬೀತಾಗಿದ್ದು, ಆಕೆಯ ಪ್ರೇಮಿ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲದ ಕಾರಣ ಖುಲಾಸೆಗೊಳಿಸಲಾಗಿದೆ.
ಗಿಲ್ಲಿ ನಟನಿಗೆ ಬಿಗ್ ಬಾಸ್ ಕಿರೀಟ; ರಕ್ಷಿತಾ ರನ್ನರ್ ಅಪ್
ಬೆಂಗಳೂರು : ಕನ್ನಡದ ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ನಿರೀಕ್ಷೆಯಂತೆ ವಿನ್ನರ್ ಆಗಿದ್ದಾರೆ. ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್ಗಳನ್ನು ಅವರು ಪಡೆದಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ. ಪ್ರತಿ ಸೀಸನ್ನಂತೆಯೇ ಈ ಬಾರಿಯೂ ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ 50 ಲಕ್ಷ ರೂ. ಹಾಗೂ ಮಾರುತಿ ಸುಜುಕಿ ಎಸ್ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
ಹೊಸದಿಲ್ಲಿ: 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡನ್ನೂ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿಗೆ ಮುಕ್ತವಾಗಿರುವುದಾಗಿ ಸಿಪಿಐ(ಎಂ) ತಿಳಿಸಿದೆ. ರವಿವಾರ ತಿರುವನಂತಪುರದಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಟಿಎಂಸಿ ಹಾಗೂ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಿದ್ಧವಿರುವ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸುವುದು ಪಕ್ಷದ ತಂತ್ರವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಕಾಂಗ್ರೆಸ್ ಅನ್ನು ಹೆಸರಿಸದೇ ನೀಡಿದ ಹೇಳಿಕೆಯಲ್ಲಿ ಬಿಜೆಪಿಯೇತರ ಹಾಗೂ ಟಿಎಂಸಿಯೇತರ ಮತಗಳನ್ನು ಏಕೀಕರಿಸುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ನೇತೃತ್ವದ ಒಂದು ಗುಂಪು ಎಡರಂಗದೊಂದಿಗೆ ಮೈತ್ರಿಗೆ ಹಿಂಜರಿದಿದ್ದರೂ, ಇಂತಹ ಒಪ್ಪಂದದಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಹೇಳಿದ್ದರೂ ಸಹ ಸಿಪಿಐ(ಎಂ) ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ಹಾಗೂ ಎಡರಂಗವು 2016 ಮತ್ತು 2021ರ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಐ(ಎಂ) 26 ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಕಾಂಗ್ರೆಸ್ ಹಾಗೂ ಎಡರಂಗ ಎರಡೂ ಶೂನ್ಯ ಸ್ಥಾನಗಳಿಗೆ ಸೀಮಿತವಾಗಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದರೆ, ಎಡಪಕ್ಷಗಳು ಯಾವುದೇ ಸ್ಥಾನ ಗಳಿಸಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದವು. ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪರಸ್ಪರ ಎದುರಾಳಿಗಳಾಗಿರುವ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಪಿಐ(ಎಂ) ಟೀಕೆ ನಡೆಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕೇರಳಕ್ಕೆ ನ್ಯಾಯಸಮ್ಮತವಾಗಿ ದೊರಕಬೇಕಾದ ಬಾಕಿಗಳನ್ನು ನಿರಾಕರಿಸುತ್ತಿದ್ದು, ಹಣಕಾಸಿನ ನಿರ್ಬಂಧಗಳನ್ನು ವಿಧಿಸುತ್ತಿರುವುದನ್ನು ಬಹಿರಂಗಪಡಿಸಲಾಗುವುದು ಎಂದು ಪಕ್ಷ ಹೇಳಿದೆ. ಸಂಸತ್ತಿನ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾಗಿದೆ ಎಂದು ಆರೋಪಿಸಿದೆ. ಕೇರಳದಲ್ಲಿ ಕೋಮುವಾದಿ ಆರೆಸ್ಸೆಸ್–ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ಗೆ ಸೈದ್ಧಾಂತಿಕ ಕೊರತೆಗಳಿವೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದ್ದು, ಈ ವಿಚಾರವನ್ನು ಜನರ ಮುಂದೆ ಇಡುವುದಾಗಿ ತಿಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳನ್ನು ಸೋಲಿಸಲು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೊಂದಿಗೆ ಸ್ಪರ್ಧಿಸುವುದಾಗಿ ಸಿಪಿಐ(ಎಂ) ತಿಳಿಸಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಒಕ್ಕೂಟದಲ್ಲಿ ಭಾಗವಹಿಸುವ ಕುರಿತು ಕಾಂಗ್ರೆಸ್ನ ಒಂದು ಭಾಗದಲ್ಲಿ ಗೊಂದಲವಿರುವುದನ್ನೂ ಅದು ಉಲ್ಲೇಖಿಸಿದೆ. ಅದೇ ರೀತಿ, ಅಸ್ಸಾಂನಲ್ಲಿ ಕೋಮುವಾದಿ ಮತ್ತು ವಿಭಜಕ ಬಿಜೆಪಿ ಸರಕಾರವನ್ನು ಸೋಲಿಸಲು ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸುವುದಾಗಿ ಸಿಪಿಐ(ಎಂ) ಹೇಳಿದೆ. ಈಶಾನ್ಯ ರಾಜ್ಯದಲ್ಲಿ ಎಡಪಕ್ಷಗಳು ಈಗಾಗಲೇ ಕಾಂಗ್ರೆಸ್ ಜೊತೆ ಸಹಕರಿಸುತ್ತಿವೆ. ಪುದುಚೇರಿಯಲ್ಲೂ ಬಿಜೆಪಿ ಮೈತ್ರಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಹೊಸೂರು ಏರ್ಪೋರ್ಟ್ ಯೋಜನೆಗೆ ಭಾರೀ ಹಿನ್ನಡೆ, ತಮಿಳುನಾಡು ಪ್ರಸ್ತಾವ ತಿರಸ್ಕರಿಸಿದ ರಕ್ಷಣಾ ಇಲಾಖೆ; ಕಾರಣ ಏನು?
ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಈ ಪ್ರದೇಶದ ವಾಯುಪ್ರದೇಶವು ಎಚ್ಎಎಲ್ ಬಳಕೆಗೆ ಅಗತ್ಯವಿದೆ ಎಂದು ಕಾರಣ ನೀಡಿ, ರಕ್ಷಣಾ ಸಚಿವಾಲಯವು ಯೋಜನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ತಮಿಳುನಾಡು ಸರ್ಕಾರವು ಈ ಹಿಂದೆಯೇ ವಿವರವಾದ ವರದಿ ಸಲ್ಲಿಸಿದ್ದರೂ, ಯಾವುದೇ ಚರ್ಚೆಯಿಲ್ಲದೆ ಮನವಿಯನ್ನು ತಿರಸ್ಕರಿಸಿರುವುದು ಅಧಿಕಾರ ವರ್ಗದಲ್ಲಿ ಅಸಮಾಧಾನ ಮೂಡಿಸಿದೆ.
ಕನ್ನಡ ಸ್ಪೆಲ್ ಚೆಕ್: ಕರ್ನಾಟಕ ಸರಕಾರದ ಹೊಣೆ
ತಮಿಳು ಸ್ಪೆಲ್ ಚೆಕ್ ಬರಲು ದಶಕಗಳ ಹಿಂದೆ ತಮಿಳು ಸರಕಾರವೇ ಮುಂದಡಿಯಿಟ್ಟಿದ್ದರಿಂದ ತಮಿಳು ಸ್ಪೆಲ್ ಚೆಕ್ ಈಗ ಜಾರಿಯಲ್ಲಿದೆ. ಕನ್ನಡದಲ್ಲೂ ಸ್ಪೆಲ್ ಚೆಕ್ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಸಾಧ್ಯವಾದದ್ದೇನಲ್ಲ. ಕನ್ನಡದ ಹೊಸ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಬಹುದಾದ ಕೆಲಸ. ಇಂಗ್ಲಿಷ್ ಅಧ್ಯಾಪಕರೊಬ್ಬರು ಈಚೆಗೆ ಕಳಿಸಿದ ಒಂದು ಮೆಸೇಜ್: ‘ನಿಮ್ಮ ಇಂತಿ ನಮಸ್ಕಾರಗಳು’ ಪುಸ್ತಕ ಓದುತ್ತಾ ಇದ್ದೀನಿ. ನನಗೆ ತುಂಬಾ ಖುಷಿ ಕೊಟ್ಟ ವಿಷಯ ಅಂದ್ರೆ typing mistakes ಇಲ್ಲ. ಇತ್ತೀಚೆಗೆ ನಾನು ಓದಿದ ಕೆಲವು ಕನ್ನಡ ಪುಸ್ತಕಗಳಲ್ಲಿ ಈ mistakesತುಂಬಾ ನೋಡ್ತಿದೀನಿ. ಈ ಇಂಗ್ಲಿಷ್ ಅಧ್ಯಾಪಕ-ಸಂಶೋಧಕರು ಹೆಚ್ಚು ಓದುವ ಇಂಗ್ಲಿಷ್ ಪುಸ್ತಕಗಳಲ್ಲಿ ಕಾಗುಣಿತದ ತಪ್ಪುಗಳನ್ನು ಕಾಣುವುದು ಕಡಿಮೆ. ಇಂಗ್ಲಿಷ್ನಲ್ಲಿ ‘ಸ್ಪೆಲ್ ಚೆಕ್’ ಇದೆ; ಸ್ಪೆಲ್ಲಿಂಗ್ ತಪ್ಪಾದರೆ ಯಾವುದು ಸರಿ ಎಂಬುದನ್ನು ಅದು ಸೂಚಿಸುತ್ತದೆ. ಇಂಗ್ಲಿಷ್ ವಾಕ್ಯಗಳ ಸರಿ, ತಪ್ಪುಗಳನ್ನೂ ಸೂಚಿಸುವ ವ್ಯವಸ್ಥೆಗಳಿವೆ. ಕನ್ನಡದಲ್ಲಿ ಈ ಅನುಕೂಲ ಇಲ್ಲ. ಜೊತೆಗೆ ಲೇಖಕರ ಬೇಜವಾಬ್ದಾರಿ, ಅವಸರ, ಅದಕ್ಷತೆ, ದಕ್ಷ ಪ್ರೂಫ್ ರೀಡರುಗಳ ಕೊರತೆ, ಪ್ರಾಮಾಣಿಕ ಪ್ರೂಫ್ ರೀಡರುಗಳಿಗೆ ತಕ್ಕಮಟ್ಟಿನ ಸಂಭಾವನೆಯನ್ನಾದರೂ ಕೊಡಲು ಲೇಖಕರ, ಸಂಸ್ಥೆಗಳ ಹಿಂಜರಿತ ಇವೆಲ್ಲ ಇದರಲ್ಲಿ ಸೇರಿವೆ. 1990ರ ಸುಮಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕಗಳ ಪ್ರೂಫ್ ರೀಡಿಂಗ್ ಸಂಭಾವನೆ 3ರೂಪಾಯಿ 80 ಪೈಸೆ. 2025ರಲ್ಲಿ ಈ ಸಂಭಾವನೆ ಪುಟಕ್ಕೆ 10 ರೂಪಾಯಿ ಅಷ್ಟೇ! ‘ಈಗ ಕೊನೇ ಪಕ್ಷ ಪುಟಕ್ಕೆ ಇಪ್ಪತ್ತು ಮೂವತ್ತು ರೂಪಾಯಿಯನ್ನಾದರೂ ಮಾಡಿ, ಕಳೆದ ಮೂವತ್ತೈದು ವರ್ಷಗಳಲ್ಲಿ ನಿಮ್ಮ ಸಂಬಳ, ಭತ್ತೆ ಎಷ್ಟು ಏರಿದೆ ಎಂಬುದನ್ನು ನೋಡಿಕೊಂಡಾದರೂ ಇದನ್ನು ಏರಿಸಿ’ ಎಂದರೆ, ದಿವ್ಯ ನಿರ್ಲಿಪ್ತತೆಯೇ ಅಧಿಕಾರಿಗಳ ಉತ್ತರ! ಕನ್ನಡ ಪುಸ್ತಕಗಳ ಪ್ರೂಫ್ ರೀಡಿಂಗ್ ನಿಜಕ್ಕೂ ಅಸಲಿ ವಿಜ್ಞಾನ ಎಂದು ‘ವಿನ್ಯಾಸವಿಜ್ಞಾನಿ’ ಸುಜ್ಞಾನಮೂರ್ತಿಯವರು ಬಡಕೊಂಡರೂ ಅನೇಕರಿಗೆ ಅರ್ಥವಾಗುವುದಿಲ್ಲ. ಆದರೂ ಪರಿಸ್ಥಿತಿ ತೀರಾ ಕೈಮೀರಿಲ್ಲ! ನನ್ನ ವಲಯದಲ್ಲಿ ಕೆಲವರಾದರೂ ಸೂಕ್ಷ್ಮ ಕಣ್ಣಿನ ಗೆಳೆಯ, ಗೆಳತಿಯರು, ಭಾಷಾಜ್ಞಾನ ಇರುವವರು, ಸದಾ ಕನ್ನಡ ಭಾಷೆಯ ಜೊತೆಯಿರುವವರು ಇರುವುದರಿಂದ, ನಾನೂ ಸಾಕಷ್ಟು ಗಮನ ಕೊಡುವುದರಿಂದ, ನನ್ನಂಥವರ ಪುಸ್ತಕಗಳು ಕೊಂಚ ಬಚಾವ್. ಆದರೂ, ಬರೆವವರೆಲ್ಲ ಇಂಥ ವಲಯವನ್ನು ಸೃಷ್ಟಿಸಿಕೊಳ್ಳುವುದು ಕಷ್ಟವಿರಬಹುದು. ಈ ಸಮಸ್ಯೆಗೆ ಖಾಯಂ ಉತ್ತರ ಬೇಕಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಅವರನ್ನು ಕೇಳಿದೆ. ಹಿಂದೊಮ್ಮೆ ‘ಪ್ರಜಾವಾಣಿ’ಯಲ್ಲಿ ‘ಇ-ಹೊತ್ತು’ ಅಂಕಣ ಬರೆಯುತ್ತಿದ್ದ ಇಸ್ಮಾಯಿಲ್ ಆಧುನಿಕ ಡಿಜಿಟಲ್ ತಂತ್ರಜ್ಞಾನ ವಲಯದ ಆಳವಾದ ಜ್ಞಾನವುಳ್ಳ ಕರ್ನಾಟಕದ ಅಪರೂಪದ ಪ್ರತಿಭೆ. ನನ್ನಂಥವರು ಇಂಥ ಸಮಸ್ಯೆಗಳಿಗೆಲ್ಲ ಮೊರೆ ಹೋಗುವುದು ಅವರನ್ನೇ. ಇಸ್ಮಾಯಿಲ್ ಕನ್ನಡ ಸ್ಪೆಲ್ ಚೆಕ್ ಕುರಿತು ಹಲವು ವರ್ಷಗಳಿಂದ ಯೋಚಿಸಿ ಕೆಲಸ ಮಾಡುತ್ತಿರುವವರು. ಪ್ರಜಾವಾಣಿಯಲ್ಲಿದ್ದಾಗ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದವರು. ಈ ಅಂಕಣಕ್ಕಾಗಿ ನಾನು ಕೇಳಿಕೊಂಡಾಗ, ‘ಕನ್ನಡ ಕಾಗುಣಿತ ಪರೀಕ್ಷಕ’ ಅಥವಾ ‘ಸ್ಪೆಲ್ ಚೆಕ್’ ಕುರಿತು ಇಸ್ಮಾಯಿಲ್ ಕೊಟ್ಟ ಟಿಪ್ಪಣಿಯ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ: ‘ಕನ್ನಡದಲ್ಲಿ ಸ್ಪೆಲ್ ಚೆಕ್ ಸುತ್ತ ಕೆಲವು ಕೆಲಸಗಳೂ ಆಗಿವೆ. ಮುಖ್ಯವಾದದ್ದು ಓಪನ್ ಆಫೀಸ್ ಅಥವಾ ಲಿಬ್ರೆ ಆಫೀಸ್ಗಾಗಿ ಕೆಲವು ಉತ್ಸಾಹಿ ತಂತ್ರಜ್ಞರು ಸ್ವಯಂಸೇವಕರಾಗಿ ಮಾಡಿದ ಕೆಲಸ. ಇದು ಒಂದು ಹಂತದವರೆಗೂ ಆಗಿ ಉಳಿದಿದೆ. ಏಕೆಂದರೆ, ಇದಕ್ಕೆ ಬಹಳ ಮುಖ್ಯವಾಗಿ ಬೇಕಿದ್ದ tagged corpus of words (ಒಂದು ಪದ ನಾಮಪದವೋ, ಕ್ರಿಯಾಪದವೋ, ವಿಶೇಷಣವೋ ಎಂಬುದನ್ನು ಸೂಚಿಸುವ, ಪದಸ್ವರೂಪವನ್ನು ವಿವರಿಸುವ, ಪದಕೋಶ) ಕನ್ನಡದಲ್ಲಿ ಲಭ್ಯವೇ ಇಲ್ಲ. ಮೈಸೂರಿನ ಭಾಷಾಸಂಸ್ಥಾನ ಇಂಥದ್ದೊಂದನ್ನು ಮಾಡಿದೆಯಂತೆ. ಅದು ಓಪನ್ ಸೋರ್ಸ್ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರಿಗೆ ಲಭ್ಯವಿರುವ ಮಾಹಿತಿ ನನಗಿಲ್ಲ. ಇಂಗ್ಲಿಷ್ನಲ್ಲಿ ಸ್ಪೆಲ್ ಚೆಕ್ ಆರಂಭವಾದದ್ದು 1960ರಲ್ಲಿ. ಅಮೆರಿಕದ ಬ್ರೌನ್ ಯೂನಿವರ್ಸಿಟಿ 1960ರಲ್ಲಿ ಈ ಪ್ರಯತ್ನ ಆರಂಭಿಸಿ ಸುಮಾರು 10 ಲಕ್ಷ ಪದಗಳ tagged corpora ಅಭಿವೃದ್ಧಿಪಡಿಸಿತು. ಇದರಿಂದ ಪ್ರೇರಿತರಾಗಿ ಲ್ಯಾಂಕಾಸ್ಟರ್, ಓಸ್ಲೋ, ಬರ್ಗನ್ ವಿಶ್ವವಿದ್ಯಾಲಯಗಳು 1970ರಲ್ಲಿ ‘ಬ್ರಿಟಿಷ್ ಇಂಗ್ಲಿಷ್ ಕಾರ್ಪೋರಾ’ ಅಭಿವೃದ್ಧಿಪಡಿಸಿದವು. ಈಗ ಇಂಥ ಅನೇಕ ಕಾರ್ಪೊರಾಗಳಿವೆ. ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ 365 ನಲ್ಲಿ ಕನ್ನಡ ಸ್ಪೆಲ್ ಚೆಕ್ ಲಭ್ಯವಿದೆ. ಆದರೆ ಇದು ಸ್ವತಂತ್ರ ಪದಗಳನ್ನು ಗುರುತಿಸುತ್ತದೆಯೇ ಹೊರತು, ಒಂದು ಪದದಿಂದ ಪಡೆದ, ರೂಪುಗೊಂಡ,‘derivative’ ಪದಗಳಲ್ಲಿ ಇರುವ ತಪ್ಪನ್ನು ಗುರುತಿಸುವುದಿಲ್ಲ. ಆದರೂ ಬಹುತೇಕ ತಪ್ಪುಗಳನ್ನು ಗುರುತಿಸಲು ಇದರಿಂದ ಸಾಧ್ಯ. ಸಾಮಾನ್ಯ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪುಗಳನ್ನು ಇದು ಹೇಳುತ್ತದೆ. ಆದರೆ ಇದನ್ನು ಬಳಸುವುದಕ್ಕೆ ಹೊಸ ಆವೃತ್ತಿಯ ಆಫೀಸ್ ಪ್ಯಾಕೇಜ್ ಖರೀದಿಸಬೇಕಾಗುತ್ತದೆ. ನಮ್ಮಲ್ಲಿ ಬಹುತೇಕರು ಅನಧಿಕೃತ ಆವೃತ್ತಿಗಳನ್ನು ಬಳಸುತ್ತಾರೆ; ಆದ್ದರಿಂದ ಜನಸಾಮಾನ್ಯರಿಗೆ ಇದು ಸುಲಭವಾಗಿ ಸಿಗುವುದಿಲ್ಲ. ಗೂಗಲ್ ಡಾಕ್ಸ್ನಲ್ಲಿ ಕನ್ನಡ ಸ್ಪೆಲ್ ಚೆಕ್ ನೇರವಾಗಿ ಲಭ್ಯವಿಲ್ಲ. ನೀವು ಗೂಗಲ್ ವರ್ಕ್ ಸ್ಪೇಸ್ ಬಳಸುವವರಾದರೆ, ಪರೋಕ್ಷವಾಗಿ ಈ ಸವಲತ್ತು ಲಭ್ಯವಿದೆ. ಉemiಟಿi ಂI ಯನ್ನು ಗೂಗಲ್ ಡಾಕ್ಸ್ನಲ್ಲಿ ಬರವಣಿಗೆ ಸಹಾಯಕನಂತೆ ಬಳಸಿಕೊಂಡರೆ ಅದು ತಪ್ಪುಗಳನ್ನೂ ತಿದ್ದಿಕೊಡುತ್ತದೆ. ಇದಕ್ಕೆ ಸಣ್ಣಮಟ್ಟಿಗಿನ ಕಸರತ್ತು ಮಾಡಬೇಕಾಗುತ್ತದೆ. ಜೊತೆಗೆ ಗೂಗಲ್ ವರ್ಕ್ ಸ್ಪೇಸ್ನ ಚಂದಾದಾರಿಕೆಯ ಅಗತ್ಯವೂ ಇದೆ. ಸದ್ಯದ ಮಟ್ಟಿಗೆ ಜಿಯೋ ಮೊಬೈಲ್ನ ಚಂದಾದಾರರಿಗೆ ಗೂಗಲ್ ಸೇವೆ ಒಂದೂವರೆ ವರ್ಷದ ಮಟ್ಟಿಗೆ ಉಚಿತವಾಗಿ ದೊರೆಯುತ್ತದೆ. ಜಿಯೋ ಮೊಬೈಲ್ ನಂಬರ್ ಇರುವವರು ಇದನ್ನು ಬಳಸಲು ಸಾಧ್ಯವಿದೆ. ಕನ್ನಡ ಪದಗಳ tagged corpus(ಪದ ಸ್ವರೂಪಗಳನ್ನು ವಿವರಿಸುವ ಕೋಶ) ಮಾಡುವ ಯೋಜನೆಯೊಂದನ್ನು ಪೂರ್ಣಚಂದ್ರ ತೇಜಸ್ವಿಯವರ ಸಲಹೆಯ ಮೇರೆಗೆ ಪ್ರೊ. ವಿವೇಕ ರೈಯವರು ಕುಲಪತಿಗಳಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿತ್ತು. ಆದರೆ ಅದು ಮುಂದುವರಿದಂತಿಲ್ಲ. ಕನ್ನಡ ವಿಶ್ವವಿದ್ಯಾಲಯ ಇವತ್ತಿಗೂ ಇದನ್ನು ಮಾಡಬಹುದು. ಇಂಥದ್ದೊಂದು ವ್ಯವಸ್ಥೆ ಇದ್ದಿದ್ದರೆ ಓಪನ್ ಸೋರ್ಸ್ ಉತ್ಸಾಹಿಗಳು, ಜೊತೆಗೆ ಮೈಕ್ರೋಸಾಫ್ಟ್ ನಂಥ ಕಂಪೆನಿಗಳೂ, ಸ್ಪೆಲ್ ಚೆಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದರು. ಈಗ ಅವರ ಬಳಿ ಇರುವುದು ಅವರೇ ಅಭಿವೃದ್ಧಿಪಡಿಸಿದ ಕಾರ್ಪೊರಾಗಳನ್ನು ಅವಲಂಬಿಸಿರುವ ಸ್ಪೆಲ್ ಚೆಕ್ಗಳು. ಎಐ ಬಂದಮೇಲೆ ಈ ಕೆಲಸ ಇನ್ನೂ ಸುಲಭವಾಗಿದೆ. ಆದರೆ ಈ ಕಂಪೆನಿಗಳಿಗೆ ಇದನ್ನು ಮಾಡಲೇಬೇಕಾದಷ್ಟು ದೊಡ್ಡ ಮಾರುಕಟ್ಟೆಯೇ ಕಾಣಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಸುಲಭವಾಗಿ ಹಾಗೂ ಅತ್ಯಗತ್ಯವಾಗಿ ಮಾಡಬಹುದಾದ ಕೆಲಸ ಇದು: ಕರ್ನಾಟಕ ಸರಕಾರ ತಾನು ಖರೀದಿಸುವ ಆಫೀಸ್ 365 ತಂತ್ರಾಂಶದಲ್ಲಿ ಕನ್ನಡ ಸ್ಪೆಲ್ ಚೆಕ್ನ ಮಟ್ಟ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಲು ತೀರ್ಮಾನಿಸಿದರೆ ನಿರ್ಣಾಯಕ ಬದಲಾವಣೆ ಸಾಧ್ಯವಿದೆ. ಆದರೆ ಅದಕ್ಕೆ ಸರಕಾರ ಮನಸ್ಸು ಮಾಡಬೇಕಷ್ಟೇ. ಕನ್ನಡ ಬಳಸಬಲ್ಲ ಕಂಪ್ಯೂಟರ್ಗಳನ್ನೂ, ಸಾಫ್ಟ್ವೇರ್ಗಳನ್ನೂ ಖರೀದಿಸುವುದರಲ್ಲಿ ಕರ್ನಾಟಕ ಸರಕಾರಕ್ಕಿಂತ ದೊಡ್ಡ ಗ್ರಾಹಕ ಮತ್ತಾರೂ ಇರಲು ಸಾಧ್ಯವಿಲ್ಲ. ಇದನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಜಾಣತನ, ಕಾಳಜಿ ಸರಕಾರಕ್ಕೆ ಇರಬೇಕು. ಕರ್ನಾಟಕದ ವಿಜ್ಞಾನ ತಂತ್ರಜ್ಞಾನ ಅಕಾಡಮಿಗೂ ಈ ಕೆಲಸವನ್ನು ಒಪ್ಪಿಸಿ ಮಾಡಿಸಬಹುದು. ಆದರೆ ಈ ಬಗೆಯ ಕೆಲಸಕ್ಕೆ ವಿಷನ್ ಮುಖ್ಯ. ವಿಜ್ಞಾನ ತಂತ್ರಜ್ಞಾನ ಅಕಾಡಮಿಯ ತುಂಬಾ ಅಧಿಕಾರಿಗಳು ಮತ್ತು ಹಳೆಯ ತಲೆಮಾರಿನವರೇ ಇದ್ದಾರೆ. ಇದೇ ದೊಡ್ಡ ಸಮಸ್ಯೆ. ಸುಮಾರು 2015ರ ತನಕವೂ ನಮ್ಮ ಓಪನ್ ಸೋರ್ಸ್ ಗ್ರೂಪ್ಗಳು ಸ್ವಲ್ಪ ಮಟ್ಟಿಗೆ ಕನ್ನಡ ತಂತ್ರಜ್ಞಾನದ ಸುತ್ತ ಕೆಲಸ ಮಾಡುತ್ತಿದ್ದವು. ಆದರೆ ಈಗ ಅದೂ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಕನ್ನಡ ಭಾಷೆ ಗೊತ್ತಿರುವ, ಕನಿಷ್ಠ ಕನ್ನಡವನ್ನು ಟೈಪ್ ಮಾಡುವ ಉತ್ಸಾಹವಿರುವ, ಸ್ವಯಂ ಉತ್ಸಾಹದಿಂದ ಈ ಕೆಲಸ ಮಾಡುವ ವಿದ್ಯಾರ್ಥಿ ವಾಲೆಂಟಿಯರ್ಗಳೇ ಈಗ ಇಲ್ಲವಾಗಿದ್ದಾರೆ. ಇಂಜಿನಿಯರಿಂಗ್ ಕಾಲೇಜುಗಳಿಗೆ ಬರುವ ಅನೇಕರು ಕನ್ನಡವನ್ನು ಪಾಸ್ ಆಗಲು ಬೇಕಾದ ಭಾಷೆಯಾಗಿಯಷ್ಟೇ ಗ್ರಹಿಸಿ ಕಲಿತವರು. ಹಾಗಾಗಿ ಇಂಥವರು ಕನ್ನಡ ಪ್ರಾಜೆಕ್ಟ್ಗಳಿಗೆ ಸಿಗುವುದೇ ಇಲ್ಲ. ಈ ಮಟ್ಟಿಗೆ ತಮಿಳು ಮತ್ತು ಮಲಯಾಳಂಗಳೇ ಪರವಾಗಿಲ್ಲ. ಅಲ್ಲಿ ಇನ್ನೂ ಉತ್ಸಾಹ ಉಳಿದುಕೊಂಡಿದೆ. ತಮಿಳು ಸ್ಪೆಲ್ ಚೆಕ್ ಬರಲು ದಶಕಗಳ ಹಿಂದೆ ತಮಿಳು ಸರಕಾರವೇ ಮುಂದಡಿಯಿಟ್ಟಿದ್ದರಿಂದ ತಮಿಳು ಸ್ಪೆಲ್ ಚೆಕ್ ಈಗ ಜಾರಿಯಲ್ಲಿದೆ. ಕನ್ನಡದಲ್ಲೂ ಸ್ಪೆಲ್ ಚೆಕ್ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಸಾಧ್ಯವಾದದ್ದೇನಲ್ಲ. ಕನ್ನಡದ ಹೊಸ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಬಹುದಾದ ಕೆಲಸ. ಸದಾ ಸಮಾಜಮುಖಿ-ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾತಾಡುವ, ಬರೆಯುವ ಎನ್.ಎ.ಎಂ. ಇಸ್ಮಾಯಿಲ್ ಅವರ ಅನುಭವ ಮತ್ತು ಜ್ಞಾನದ ಕಾಳಜಿಯ ಮಾತುಗಳನ್ನು ಕರ್ನಾಟಕ ಸರಕಾರ ಹಾಗೂ ಕನ್ನಡ ಸಂಸ್ಥೆಗಳು ಕಿವಿಗೊಟ್ಟು ಕೇಳಿಸಿಕೊಳ್ಳುವ ಕಾಲ ಬೇಗ ಬರಲಿ.
ಇಂಗ್ಲೆಂಡ್ನಲ್ಲಿ 12ರ ಹರೆಯದ ಜಾಕ್ ಹೌಲ್ಸ್ ಎಂಬ ಬಾಲಕ, ಕಾರು ಚಲಾಯಿಸುತ್ತಿದ್ದ ತಾಯಿ ಪ್ರಜ್ಞೆ ಕಳೆದುಕೊಂಡಾಗ, ಸಮಯೋಚಿತವಾಗಿ ಕಾರಿನ ನಿಯಂತ್ರಣ ಪಡೆದು ತಾಯಿಯನ್ನು ರಕ್ಷಿಸಿದ್ದಾನೆ. ನಿಯಂತ್ರಣ ಕೆಳದುಕೊಂಡು ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಧಾನಗೊಳಿಸಿ ತಡೆಗೋಡೆಗೆ ತಗುಲಿಸಿ ನಿಲ್ಲಿಸಿದ ಈ ಬಾಲಕನ ಧೈರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿಯ ಜೀವ ಉಳಿಸಿದ ಈ ಪುಟ್ಟ ಹೀರೋನ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗಿಗ್ ಕಾರ್ಮಿಕರು, ಮನೆಗೆಲಸದವರಿಗೆ ಮೈಕ್ರೋಕ್ರೆಡಿಟ್ ಯೋಜನೆ: 10,000 ರೂ.ಗಳ ಮೇಲಾಧಾರ ರಹಿತ ಸಾಲ ಮತ್ತು ಉಚಿತ ವಿಮೆ!
ಕೇಂದ್ರ ಸರ್ಕಾರವು ಗಿಗ್ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಮೈಕ್ರೋಕ್ರೆಡಿಟ್ ಯೋಜನೆಯನ್ನು ರೂಪಿಸಿದೆ. ಏಪ್ರಿಲ್ 2026 ರಿಂದ ಜಾರಿಯಾಗುವ ಈ ಯೋಜನೆಯಡಿ, ಯಾವುದೇ ಭದ್ರತೆ ಇಲ್ಲದೆ 10,000 ರೂ. ವರೆಗೆ ಸಾಲ ದೊರೆಯಲಿದೆ. ಸಕಾಲಕ್ಕೆ ಮರುಪಾವತಿಸಿದರೆ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹತೆ ಪಡೆಯಬಹುದು. ಡಿಜಿಟಲ್ ಪಾವತಿಗಳಿಗೆ ಕ್ಯಾಶ್ಬ್ಯಾಕ್ ಸೌಲಭ್ಯವೂ ಲಭ್ಯವಿದೆ. ಈ ಯೋಜನೆಯು ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲಿದೆ.
ಸಂಪಾದಕೀಯ | ಬೇಲಿಗೆ ಹೆದರುತ್ತಿರುವ ಹೊಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
TVK Vijay: ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಗೆ ನಟ ವಿಜಯ್ ಹಾಜರು
ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ತಮಿಳು ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಅವರು ಇಂದು ಸೋಮವಾರ (ಜನವರಿ 19) ನವದೆಹಲಿಯಲ್ಲಿ ಎರಡನೇ ಸುತ್ತಿನ ಸಿಬಿಐ ವಿಚಾರಣೆಗೆ ಹಾಜರಾದರು. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ಸಂಸ್ಥೆಯು (CBI) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಇಂದು ಬೆಳಗ್ಗೆ
ಬಂಗಾರ ಬಲು ದುಬಾರಿ| ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ಏರಿಕೆ: ಇಂದಿನ ದರವೆಷ್ಟು?
ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಭೌಗೋಳಿಕ-ರಾಜಕೀಯ ಸಂಘರ್ಷದ ನಡುವೆ ಹೂಡಿಕೆದಾರರು ಸುರಕ್ಷಿತ ಚಿನ್ನದ ಬೆಲೆ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಸೋಮವಾರ ಮಾರುಕಟ್ಟೆ ತೆರೆಯುತ್ತಲೇ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ ಬರೋಬ್ಬರಿ 1910 ರೂ. ಏರಿಕೆ ಕಂಡು, ದರ ಗರಿಷ್ಠ ಮಟ್ಟಕ್ಕೇರಿದೆ. ಇದೀಗ ಚಿನ್ನದ ದರ ಸಾರ್ವಕಾಲಿಕ ಏರಿಕೆಯಾಗಿ 1,45,690 ರೂ.ಗೆ ತಲುಪಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ ಜನವರಿ 19ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,569 (+191) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,355 (+175) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,927 (+143) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 14,569 ರೂ. ಆಗಿದ್ದು, ರವಿವಾರ 14,378 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ದಿಢೀರ್ ಪ್ರತೀ ಗ್ರಾಂ ಚಿನ್ನದ ಬೆಲೆ 191 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,355 ರೂ. ಆಗಿದ್ದು, ನಿನ್ನೆ 13,180 ರೂ. ಇತ್ತು. ನಿನ್ನೆಗಿಂತ ಇಂದು 175 ರೂ. ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 10,927 ರೂ. ಆಗಿದ್ದು, ನಿನ್ನೆ 10,784 ರೂ. ಇತ್ತು. ನಿನ್ನೆಗಿಂತ ಇಂದು 143 ರೂ. ಹೆಚ್ಚಳವಾಗಿದೆ. ಭಾರತದಲ್ಲಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ: ಚೆನ್ನೈ: 24 ಕ್ಯಾರೆಟ್ 14,673 ರೂ., 22 ಕ್ಯಾರೆಟ್ 13,450 ರೂ., 18 ಕ್ಯಾರೆಟ್ 11,230 ರೂ. ಮುಂಬೈ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ದಿಲ್ಲಿ: 24 ಕ್ಯಾರೆಟ್ ರೂ14,584 ರೂ., 22 ಕ್ಯಾರೆಟ್ 13,370 ರೂ., 18 ಕ್ಯಾರೆಟ್ 10,942 ರೂ. ಕೋಲ್ಕತ್ತಾ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಬೆಂಗಳೂರು: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಹೈದರಾಬಾದ್: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಕೇರಳ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ. ಪುಣೆ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್13,355 ರೂ., 18 ಕ್ಯಾರೆಟ್ 10,927 ರೂ. ವಡೋದರಾ: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್ 13,360 ರೂ., 18 ಕ್ಯಾರೆಟ್ 10,932 ರೂ. ಅಹಮದಾಬಾದ್: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್13,360 ರೂ., 18 ಕ್ಯಾರೆಟ್ 10,932 ರೂ.
ಬೇಸಿಗೆಗೂ ಮುನ್ನವೇ ಕರ್ನಾಟಕ ಸೇರಿ ಹಿಮಾಲಯದ ತಪ್ಪಲಿನಲ್ಲಿ ಕಾಡ್ಗಿಚ್ಚು; ತಜ್ಞರು ಹೇಳೋದೇನು?
ಕರ್ನಾಟಕ ಮತ್ತು ಹಿಮಾಲಯದ ತಪ್ಪಲಿನಲ್ಲಿ ಒಣಹವೆಯಿಂದಾಗಿ ಇತ್ತೀಚೆಗೆ ಕಾಡ್ಗಿಚ್ಚಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಾನವನ ಹಸ್ತಕ್ಷೇಪ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಅವಘಡ ಸಂಭವಿಸುತ್ತಿದೆ. ಈಹಿಂದೆ ಗ್ರಾಮಸ್ಥರು ಒಣ ಹುಲ್ಲು ಮೇಯಿಸುವ ಕೆಲಸ ಮಾಡುತ್ತಿದ್ದರು. ಆದರೆ, ಈ ಗ ಬದಲಾದ ಜೀವನ ಶೈಲಿಯಿಂದ ಪರಿಸ್ಥಿತಿ ಬಿಗಡಾಯಿಸಿದೆ. ಅಷ್ಟೇ ಅಲ್ಲದೆ, ಒಣ ಹುಲ್ಲಿಗೆ ಜನರು ಬೆಂಕಿ ಹಾಕುವ ಕಾರಣದಿಂದಲೂ ಈ ಪರಿಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.
ಮಂಗಳೂರಿಗೆ ಕಾಲಿಡಲಿದೆ ಜಾಗತಿಕ ದಿಗ್ಗಜ 'ಡೆಲಾಯ್ಟ್', ಭಾರತದಲ್ಲಿ 50,000 ಉದ್ಯೋಗಿಗಳ ನೇಮಕ ಘೋಷಣೆ
ಮಂಗಳೂರಿನಲ್ಲಿ ನಡೆದ 'ಟೈಕಾನ್ ಮಂಗಳೂರು 2026' ಸಮಾವೇಶದಲ್ಲಿ ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ಕಂಪನಿಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಇದರ ಭಾಗವಾಗಿ ಸುಮಾರು 50,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು. ವಿಶೇಷವಾಗಿ ಮಂಗಳೂರಿನಲ್ಲಿ ಲಭ್ಯವಿರುವ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಡೆಲಾಯ್ಟ್ ಮಂಗಳೂರಿಗೂ ವಿಸ್ತರಣೆಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಸಾಮರ್ಥ್ಯಕ್ಕೆ ಎಲ್ಲೆಯಿಲ್ಲ: ಶಕ್ತಿ ಸಂವಾದದಲ್ಲಿ ರೂಪಾ ಮೌದ್ಗಿಲ್, ಬಾಲ್ಯದ ಕನಸು, ಸವಾಲುಗಳ ಹಾದಿ ಹೇಗಿತ್ತು
ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಆದರೆ ಇದಕ್ಕೆ ಕಾರಣ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ ಎಂಬುದು ಅವರನ್ನು ಅಧಿಕಾರದಿಂದ ದೂರವಿಡಲು ಹೇಳುವ ಕುಂಟು ನೆಪವಷ್ಟೇ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅಭಿಪ್ರಾಯ ಪಟ್ಟಿದ್ದಾರೆ. ವಿಜಯ ಕರ್ನಾಟಕ ವೆಬ್ ಹಮ್ಮಿಕೊಂಡಿದ್ದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಹಿಳಾ ಸಬಲೀಕರಣದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಲ್ಲದೆ, ಐಪಿಎಸ್ ಅಧಿಕಾರಿಯಾಗಬೇಕೆಂಬ ಅವರ ಬಾಲ್ಯದ ಕನಸು, ಅಧಿಕಾರಿಯಾಗಿ ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ದಟ್ಟ ಮಂಜು, ಭಾರೀ ಶೀತಗಾಳಿ ಮುಂದುವರೆಯುವ ಮುನ್ಸೂಚನೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಟ್ಟ ಮಂಜಿನ ಜೊತೆ ಭಾರೀ ಶೀತಗಾಳಿ ಮುಂದುವರೆದಿದೆ. ಪರಿಣಾಮ ಜನರು ತತ್ತರಿಸಿ ಹೋಗಿದ್ದಾರೆ. ಹಾಗೆಯೇ ಮುಂದಿನ ಹಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 19) ಬೆಳಗ್ಗೆ

28 C