ಕಂಬಳ ಕ್ರೀಡೆ ಆಯೋಜನೆ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ... Kambala Race
ಕರಾವಳಿ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದೆ ಕಂಬಳ, ಹೀಗಿದ್ದಾಗ ಪ್ರತಿವರ್ಷ ಕೂಡ ಕರಾವಳಿಯ ಭಾಗದಲ್ಲಿ ಕಂಬಳ ಕ್ರೀಡೆ ಆಯೋಜನೆ ಮಾಡಿ ಸಂಭ್ರಮಿಸುತ್ತಾರೆ ಜನ. ಆದರೂ, ಪದೇ ಪದೇ ಇದೇ ವಿಚಾರವಾಗಿ ಕಿರಿಕ್ ಶುರುವಾಗುತ್ತಾ ಇತ್ತು, ಪ್ರಮುಖವಾಗಿ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಕೂಡ ಅರ್ಜಿ ಸಲ್ಲಿಕೆ ಆಗುತ್ತಿತ್ತು. ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ಗೆ ಕೂಡ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅಲ್ಲದೆ
ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ NWKRTC ವೇಗಧೂತ ಬಸ್ಗಳ ವ್ಯವಸ್ಥೆ: ಟಿಕೆಟ್ ದರ, ಮಾರ್ಗ-ವೇಳಾಪಟ್ಟಿ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಆರು ಜಿಲ್ಲೆಗಳ ಸುಮಾರು 59 ತಾಲೂಕುಗಳ ವ್ಯಾಪ್ತಿಯಲ್ಲಿ ನಿತ್ಯ ಲಕ್ಷಾಂತರ ಸಾರಿಗೆ ಸೇವೆ ನೀಡುತ್ತಿರುವ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ವಿಶೇಷ ಬಸ್ಗಳನ್ನು ಓಡಿಸುತ್ತದೆ. ಇದೀಗ ಚಂದ್ರಮಾನ ಯುಗಾಗಿ ಪ್ರಯುಕ್ತ ಮಾರ್ಚ್ 18ರವರೆಗೆ ಶ್ರೀಶೈಲಂಗೆ ವೇಗಧೂತ್ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್ಗಳ
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅಸ್ತು
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಎಂಬ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದೆ. 2018 ರ ಸುಪ್ರೀಂ ಕೋರ್ಟ್ನ ನಿಷ್ಕ್ರಿಯ ದಯಾಮರಣ ಮಾರ್ಗಸೂಚಿಗಳನ್ನು ಅನುಸರಿಸಿದೆ.
ತೀವ್ರಗೊಂಡ ಇರಾನ್ ಯುದ್ಧದ ಸಮಸ್ಯೆ, ತಿಕ್ಕಾಟ ಇನ್ನಷ್ಟು ಜೋರು | Operation Roaring Lion
ಮಧ್ಯಪ್ರಾಚ್ಯ ಈಗ ಭಾರಿ ದೊಡ್ಡ ಕಂಟಕದ ಕುಲುಮೆಗೆ ಸಿಲುಕಿದ್ದು, ಭವಿಷ್ಯವೇ ಮಂಕಾಗುತ್ತಾ ಇದೆ. ಇರಾನ್ &ಅಮೆರಿಕ ನಡುವಿನ ಯುದ್ಧ ಇನ್ನಷ್ಟು ಜೋರಾಗಿದ್ದು, ಮತ್ತಷ್ಟು ಘರ್ಷಣೆ ಈಗ ಹೆಚ್ಚಾಗಿದೆ. ನೋಡ ನೋಡುತ್ತಲೇ 2ನೇ ವಾರಕ್ಕೆ ಎಂಟ್ರಿ ಕೊಡುತ್ತಿರುವ ಇರಾನ್ &ಅಮೆರಿಕ ಯುದ್ಧ ಅರಬ್ನ ನೆಲದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ, ಇಂದು ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ
13 ವರ್ಷದಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ ನೀಡಿ ಸುಪ್ರೀಂ ಮಹತ್ವದ ತೀರ್ಪು: ಏನಿದು ಘಟನೆ?
13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಯೊಬ್ಬರ ದಯಾಮರಣಕ್ಕೆ ಕೋರಿ ಪೋಷಕರು ಸಲ್ಲಿಸದ್ದ ಅರ್ಜಿ ಪರಿಶೀಲನೆ ಮಾಡಿರುವ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಘನತೆಯಿಂದ ಸಾಯುವ ಮೂಲಭೂತ ಹಕ್ಕನಡಿಯಲ್ಲಿ ದಯಾಮರಣ ನೀಡಲು ಅನುಮತಿ ನೀಡುವ ಮೂಲಕ ಮಹತ್ವದ ತೀರ್ಪನ್ನು ಹೊರಡಿಸಿದೆ. ಹಾಗಾದ್ರೆ. ಏನಿದು ಘಟನೆ, ಮಗನ ದಯಾಮರಣಕ್ಕೆ ಪೋಷಕರು ಅರ್ಜಿಸಲ್ಲಿಸಿದ್ದೇಕೆ? ದಯಾಮರಣ ಅಂದರೆ ಏನು ಎಂಬ ಕುರಿತು ಮಾಹಿತಿ ಇಲ್ಲಿದೆ..
ಜಾಗತಿಕ ಮಾನದಂಡಗಳೊಂದಿಗೆ ʼರಕ್ತ ಉತ್ಪನ್ನʼಗಳ ಪರೀಕ್ಷೆಗೆ 1945ರ ಔಷಧ ನಿಯಮ ತಿದ್ದುಪಡಿಗೆ ಮುಂದಾದ ಕೇಂದ್ರ ಸರಕಾರ
ಹೊಸದಿಲ್ಲಿ : ರಕ್ತ ಉತ್ಪನ್ನಗಳ ಪರೀಕ್ಷಾ ಮಾನದಂಡಗಳನ್ನು ಜಾಗತಿಕ ಮಟ್ಟಕ್ಕೆ ಹೊಂದಾಣಿಕೆ ಮಾಡುವ ಉದ್ದೇಶದಿಂದ 1945ರ ಔಷಧ ನಿಯಮ(ಡ್ರಗ್ ರೂಲ್ಸ್) ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಈ ತಿದ್ದುಪಡಿ ಮೂಲಕ ಭಾರತದಲ್ಲಿ ಬಳಸುವ ರಕ್ತ ಹಾಗೂ ರಕ್ತ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಾ ವಿಧಾನಗಳನ್ನು ನವೀಕರಿಸುವ ಮೂಲಕ ರೋಗಿಗಳಿಗೆ ಸುರಕ್ಷಿತ ಚಿಕಿತ್ಸೆ ಒದಗಿಸುವ ಗುರಿಯನ್ನು ಹೊಂದಿದೆ. ಈ ಕುರಿತು ಕರಡು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಔಷಧ ನಿಯಮಗಳು 1945 ರ ಪ್ಯಾರಾಗ್ರಾಫ್ ಜಿ (ರಕ್ತ ಉತ್ಪನ್ನಗಳ ಪರೀಕ್ಷೆ), ಭಾಗ ಸಿ, ವೇಳಾಪಟ್ಟಿ ಎಫ್ ಅನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪ್ರಸ್ತಾಪಿತ ತಿದ್ದುಪಡಿಯು, ರಕ್ತ ಉತ್ಪನ್ನಗಳ ಪರೀಕ್ಷೆಗೆ ಸಂಬಂಧಿಸಿದ ನಿಯಂತ್ರಣಾತ್ಮಕ ಅವಶ್ಯಕತೆಗಳನ್ನು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಫಾರ್ಮಕೋಪಿಯಾ ಮಾನದಂಡಗಳಿಗೆ ಹೊಂದಾಣಿಕೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಭಾರತೀಯ ಫಾರ್ಮಾಕೋಪಿಯಾ (ಐಪಿ), ಬ್ರಿಟಿಷ್ ಫಾರ್ಮಾಕೋಪಿಯಾ (ಬಿಪಿ), ಯುನೈಟೆಡ್ ಸ್ಟೇಟ್ಸ್ ಫಾರ್ಮಾಕೋಪಿಯಾ (ಯುಎಸ್ಪಿ) ಮತ್ತು ಯುರೋಪಿಯನ್ ಫಾರ್ಮಾಕೋಪಿಯಾ (ಇಪಿ) ಮಾನೋಗ್ರಾಫ್ಗಳ ಪ್ರಕಾರ, ಸಂಗ್ರಹಿತ ಮಾನವ ಪ್ಲಾಸ್ಮಾಕ್ಕೆ ಕಠಿಣ ಪರೀಕ್ಷಾ ಪ್ರೋಟೋಕಾಲ್ಗಳನ್ನು ನಿಗದಿಪಡಿಸಲಾಗಿದೆ.
ಬಳ್ಳಾರಿ ಪ್ರಕರಣ: ಮಕ್ಕಳ ಬಾಲ್ಯ ಅತ್ಯಂತ ಸೂಕ್ಷ್ಮವಾದದ್ದು ಕೀಟಲೆ, ಏಕಾಂಗಿತನದ ಬಗ್ಗೆ ಇರಲಿ ಎಚ್ಚರ: ವಸುಧೇಂದ್ರ ಬರಹ
ಬಳ್ಳಾರಿಯ ವಸತಿ ಶಾಲೆಯಲ್ಲಿ ಈಚೆಗೆ ಸಹಪಾಠಿಗಳ ಮೇಲೆ ತೀವ್ರ ಹಲ್ಲೆ ಮಾಡಿ, ಒಬ್ಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ಎದುರಾಗಿದ್ದ ಸಮಸ್ಯೆಗಳ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ಹುಡುಗ ತೀವ್ರ ಕೀಟಲೆ / ಅಪಹಾಸ್ಯಕ್ಕೆ ಗುರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಆಪ್ತ ಸಮಾಲೋಚನೆ ವೇಳೆ ಬಾಲಕ ಈ ವಿಷಯವನ್ನು ವಿಚಾರಣಾ ತಂಡಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಬಾಹ್ಯಾಕಾಶದಿಂದ ತಪ್ಪಿದ ಅಪಾಯ: ಭೂಮಿಗೆ ಅಪ್ಪಳಿಸಿದ 600ಕೆಜಿ ತೂಕದ ನಾಸಾ ಉಪ್ರಗ್ರಹ
NASA Satellite : ಹದಿನಾಲ್ಕು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಸಾದ ಉಪಗ್ರಹವೊಂದು ಇಂದು (ಮಾರ್ಚ್ 11) ಭೂಮಿಗೆ ಅಪ್ಪಳಿಸಿದೆ. ಇನ್ನೂ ಎಂಟು ವರ್ಷಗಳ ಕಾಲ ಕಕ್ಷೆಯಲ್ಲಿ ಇರಬೇಕಾಗಿದ್ದ ಉಪ್ರಗ್ರಹ, ಸೂರ್ಯನ ತಾಪದ ಏರಿಳಿತದಿಂದಾಗಿ, ಭೂಮಿಗೆ ಅಪ್ಪಳಿಸಿದೆ. ಈ ವಿದ್ಯಮಾನದ ಹಿಂದೆ ಭೂಮಿಗೆ ಏನಾದರೂ ತೊಂದರೆ ಆಗಿದೆಯೇ?
Explainer: ಇರಾನ್ ಮೇಲಿನ ಯುದ್ಧಕ್ಕೂ ಭಾರತದಲ್ಲಿ LPG ಕೊರತೆಗೂ ಎಲ್ಲಿಗೆಲ್ಲಿಯ ಸಂಬಂಧ? ವಾಸ್ತವದ ಚಿತ್ರಣ ಇಲ್ಲಿದೆ…
‘ಎಲ್ಲೋ ನಡೆಯುವ ಯುದ್ಧಕ್ಕೂ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಆಗುವುದಕ್ಕೂ, ಎಲ್ಪಿಜಿ ಕೊರತೆ ಉಂಟಾಗುವುದಕ್ಕೂ ಏನು ಸಂಬಂಧ?’ - ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯಬಹುದು. ‘ಭಾರತದಲ್ಲಿ ಎಲ್ಪಿಜಿ ಉತ್ಪಾದನೆ ಆಗುವುದಿಲ್ಲವಾ?’ - ಎಂಬ ಪ್ರಶ್ನೆಯೂ ಅನೇಕರಿಗೆ ಕಾಡಬಹುದು. ಆದರೆ, ಭಾರತದಲ್ಲಿ ಉತ್ಪಾದನೆ ಆಗುವ ಎಲ್ಪಿಜಿ ಇರುವ ಡಿಮ್ಯಾಂಡ್ ಪೂರೈಸುತ್ತಾ? ಇಲ್ಲಿ ಉತ್ಪಾದನೆ ಹೆಚ್ಚಿದ್ಯೋ ಅಥವಾ ಆಮದುಗಳ ಮೇಲೆ ಭಾರತ ಡಿಪೆಂಡ್ ಆಗಿದ್ಯಾ? ಅಂಕಿ - ಅಂಶಗಳ ಜೊತೆಗೆ ಎಲ್ಪಿಜಿ ಕೊರತೆ ಹಿಂದಿನ ವಾಸ್ತವದ ಚಿತ್ರಣ ಇಲ್ಲಿದೆ..
ಸಪ್ಲೈ ಆಗದ ಎಲ್ಪಿಜಿ : ಬಹುತೇಕ ಬೆಂಗಳೂರಿನ ಹೋಟೆಲ್ಗಳು ಸಂಜೆಯ ನಂತರ ಬಂದ್ ಆಗುವ ಸಾಧ್ಯತೆ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿರುವುದರಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಗ್ಯಾಸ್ ಏಜೆನ್ಸಿಗಳು ಸ್ಥಗಿತಗೊಳಿಸಿದ್ದರಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಎಲ್ಪಿಜಿ ಗ್ಯಾಸ್ ಪೂರೈಕೆಯಲ್ಲಿ ಕೊರತೆಯಾಗುತ್ತಿದೆ. ಅಗತ್ಯಕ್ಕೆ ತಕ್ಕಟ್ಟು ಅಡುಗೆ ತಯಾರಿಸಲಾಗದೇ ಹೊಟೇಲ್ಗಳು ಇಂದು ಸಂಜೆಯಿಂದ ಬಂದ್ ಆಗುವ ಸಾಧ್ಯತೆ ಇದೆ.
ಒಳಮೀಸಲಾತಿಗೆ ಆಗ್ರಹಿಸಿ ರಾಯಚೂರು ನಗರ ಬಂದ್
ರಾಯಚೂರು: ಪರಿಶಿಷ್ಟ ಜಾತಿಯ ಜನರಿಗೆ ಒಳ ಮೀಸಲು ನಿಗದಿ ಮಾಡಿ ಸರಕಾರಿ ಹುದ್ದೆಗಳನ್ನು ನೇಮಿಸುವಂತೆ ಒತ್ತಾಯಿಸಿ ಮಾದಿಗ ಸಂಬಂಧಿತ ಸಂಘಟನೆಗಳಿಂದ ಕರೆ ನೀಡಿದ ರಾಯಚೂರು ಬಂದ್ ಹೋರಾಟಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. ರಾಜ್ಯ ಸರ್ಕಾರ 56,432 ಸರ್ಕಾರಿ ಹುದ್ದೆಗಳನ್ನು ನೇಮಿಸಲು ನಿರ್ಧರಿಸಿದೆ. ಆದರೆ ಪ್ರಕರಣವೊಂದರಲ್ಲಿ ಶೇ.50ರಷ್ಟು ಮೀಸಲಾತಿ ಮೀರದಂತೆ ನೀಡಿರುವ ತೀರ್ಪಿನಂತೆ ಶೇ.50 ಮೀಸಲಾತಿಯಂತೆ ನೇಮಕಾತಿ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಮಾದಿಗ ಸಮುದಾಯದ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗಲಿದ್ದು, ಒಳಮೀಸಲು ನಿಗದಿಪಡಿಸಿಯೇ ನೇಮಕಾತಿ ನಡೆಸಲು ಹೋರಾಟ ನಡೆಸಲಾಗುತ್ತದೆ. ಎಸ್ಸಿ-ಎಸ್ಟಿ ಸಮುದಾಯಗಳಿಗೆ ಶೇ.50 ಮೀಸಲು ನಿಗದಿಪಡಿಸಿದ ಒಳ ಮೀಸಲು ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದೆ. ನೇಮಕಾತಿಯಲ್ಲೇ ಒಳ ಮೀಸಲು ನಿಗದಿಪಡಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಉದ್ದೇಶ ಪೂರಕವಾಗಿ ತಪ್ಪಿಸುವ ಉದ್ದೇಶದಿಂದ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಶೇ.15 ಮೀಸಲಾತಿಯನ್ನು ಹಂಚಿಕೆ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಲೆಮಾರಿಗಳಿಗೆ ಅನ್ಯಾಯ ಮಾಡಿರುವ ಸರ್ಕಾರ ಈಗ ಮಾದಿಗರೂ ಅನ್ಯಾಯ ಮಾಡಲು ಹೊರಟಿದೆ ಎಂದು ದೂರಿದರು. ಹೋರಾಟದ ಭಾಗವಾಗಿ ಇಂದು ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಹೊರಡಲಿಲ್ಲ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರು ಟೆಂಟ್ ಹಾಕಿ ರಸ್ತೆ ತಡೆ ನಡೆಸಿದರು. ಕಿರಾಣಿ ಬಝಾರ್, ಬಟ್ಟೆ ಬಝಾರ್, ಸರಾಫ್ ಬಝಾರ್, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಎಲ್ಲಾ ವ್ಯಾಪಾರ ಮಳಿಗೆಗಳು ಬಂದ್ ಮಾಡಿತ್ತು, ರಮಝಾನ್ ಹಿನ್ನೆಲೆಯಲ್ಲಿ ಚಂದ್ರಮೌಳೇಶ್ವರ ರಸ್ತೆ, ಬಟ್ಟೆ ಬಝಾರ್ ನಲ್ಲಿ ವ್ಯಾಪಾರಿ ಮಳಿಗೆ ತೆರೆದರೂ ಬಳಿಕ ಹೋರಾಟಗಾರರ ಮನವಿ ಮೇರೆಗೆ ಬಂದ್ ಮಾಡಿ ಬೆಂಬಲ ಸೂಚಿಸಿದರು. ನಗರದ ಯಾವುದೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೇ ಸಂಪೂರ್ಣ ಸ್ತಬ್ಧವಾಗಿತ್ತು. ಪೋಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕುತ್ತಾರು : ಅಪರಿಚಿತ ವಾಹನ ಢಿಕ್ಕಿ; ಪಾದಚಾರಿ ಮೃತ್ಯು
ಉಳ್ಳಾಲ: ಅಪರಿಚಿತ ವಾಹನ ಢಿಕ್ಕಿಯಾದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕುತ್ತಾರ್ ಸಮೀಪದ ಮದನಿ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮುನ್ದೋಳಿ ನಿವಾಸಿ ದಿನೇಶ್ ಗಟ್ಟಿ (50) ಮೃತ ಪಟ್ಟವರು. ಘಟನೆ ವಿವರ: ಮಂಗಳವಾರ ರಾತ್ರಿ ಅಂಗಡಿಗೆ ತೆರಳಿದ್ದ ದಿನೇಶ್ ಗಟ್ಟಿ ಅವರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಢಿಕ್ಕಿ ಹೊಡೆದು ಪರಾರಿ ಆಗಿದ್ದಾನೆ ಎನ್ನಲಾಗಿದೆ. ಅಪಘಾತದ ಪರಿಣಾಮ ಗಂಭೀರವಾಗಿ ಗಾಯಗೊಂಡ ದಿನೇಶ್ ಗಟ್ಟಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಕೃಷಿಕರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾಗಾರ ನಿರ್ಮಿಸಲು 300 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದರು. ಈ ಸಂಸ್ಕರಣಾಗಾರವು 50 ವರ್ಷಗಳ ಬಳಿಕ ಅಮೆರಿಕದಲ್ಲಿ ನಿರ್ಮಾಣವಾಗುವ ಮೊದಲ ಹೊಸ ಸಂಸ್ಕರಣಾಗಾರವಾಗಿದ್ದು, ಯೋಜನೆಗೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡಲಿದೆ. ಟೆಕ್ಸಾಸ್ ರಾಜ್ಯದ ಬ್ರೌನ್ಸ್ವಿಲ್ಲೆ ಬಂದರಿನಲ್ಲಿ ಈ ಸಂಸ್ಕರಣಾಗಾರವನ್ನು ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಯಿಂದ ಇಂಧನ ಉತ್ಪಾದನೆ ಹೆಚ್ಚಳವಾಗುವುದರ ಜೊತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. “ಅಮೆರಿಕಾ ನಿಜವಾದ ಇಂಧನ ಪ್ರಾಬಲ್ಯಕ್ಕೆ ಮರಳುತ್ತಿದೆ. ಇಂದು ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಸಂಸ್ಥೆ ಟೆಕ್ಸಾಸ್ ನ ಬ್ರೌನ್ಸ್ವಿಲ್ಲೆಯಲ್ಲಿ 50 ವರ್ಷಗಳಲ್ಲಿ ಮೊದಲ ಹೊಸ ಯುಎಸ್ ತೈಲ ಸಂಸ್ಕರಣಾಗಾರವನ್ನು ತೆರೆಯುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಒಪ್ಪಂದ, ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡದು. ಅಮೆರಿಕದ ಕಾರ್ಮಿಕರು, ಇಂಧನ ವಲಯ ಮತ್ತು ದಕ್ಷಿಣ ಟೆಕ್ಸಾಸ್ ನ ಜನರಿಗೆ ಇದು ಭಾರಿ ಗೆಲುವು” ಎಂದು ಟ್ರಂಪ್ ಹೇಳಿದ್ದಾರೆ. ಭಾರತದಲ್ಲಿರುವ, ಮತ್ತು ದೇಶದ ಅತಿದೊಡ್ಡ ಖಾಸಗಿ ಇಂಧನ ಕಂಪೆನಿಯಾದ ರಿಲಯನ್ಸ್ ಗೆ ಈ ಹೂಡಿಕೆಗಾಗಿ ಧನ್ಯವಾದಗಳನ್ನೂ ಅವರು ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಪ್ರಕಾರ, ದೇಶೀಯ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅವರ ಆಡಳಿತ ಕೈಗೊಂಡಿರುವ ನೀತಿಗಳಿಂದ ಈ ಸಂಸ್ಕರಣಾಗಾರ ಯೋಜನೆ ಸಾಧ್ಯವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. “ಅಮೆರಿಕಾ ಫಸ್ಟ್ ಕಾರ್ಯಸೂಚಿ, ಪರವಾನಗಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ತೆರಿಗೆಗಳನ್ನು ಕಡಿಮೆ ಮಾಡುವ ಕ್ರಮಗಳಿಂದ ನಮ್ಮ ರಾಷ್ಟ್ರಕ್ಕೆ ಶತಕೋಟಿ ಡಾಲರ್ ಗಳ ಹೂಡಿಕೆಗಳು ಮರಳಿ ಬರುತ್ತಿವೆ” ಎಂದು ಅವರು ಹೇಳಿದ್ದಾರೆ. ಬ್ರೌನ್ಸ್ವಿಲ್ಲೆ ಬಂದರಿನಲ್ಲಿ ನಿರ್ಮಾಣವಾಗಲಿರುವ ಈ ಹೊಸ ಸಂಸ್ಕರಣಾಗಾರವು ಅಮೆರಿಕದ ಮಾರುಕಟ್ಟೆಗಳಿಗೆ ಇಂಧನ ಪೂರೈಸುವುದರ ಜೊತೆಗೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ, ಅಮೆರಿಕದ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಶತಕೋಟಿ ಡಾಲರ್ ಮೌಲ್ಯದ ಪರಿಣಾಮ ಉಂಟುಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. “ಇದು ವಿಶ್ವದ ಅತ್ಯಂತ ಸ್ವಚ್ಛವಾದ ಸಂಸ್ಕರಣಾಗಾರವಾಗಲಿದೆ. ಜಾಗತಿಕ ರಫ್ತುಗಳಿಗೆ ಇದು ಬೆಂಬಲ ನೀಡುತ್ತದೆ ಮತ್ತು ದಕ್ಷಿಣ ಟೆಕ್ಸಾಸ್ ಪ್ರದೇಶದಲ್ಲಿ ಸಾವಿರಾರು ಉದ್ಯೋಗಗಳು ಹಾಗೂ ಅಭಿವೃದ್ಧಿಯನ್ನು ತರಲಿದೆ. ಇದೇ ಅಮೆರಿಕದ ಇಂಧನ ಪ್ರಾಬಲ್ಯ. ಅಮೆರಿಕಾ ಮೊದಲು—ಯಾವಾಗಲೂ” ಎಂದು ಅವರು ಹೇಳಿದ್ದಾರೆ. ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಉತ್ಪಾದನೆಯನ್ನು ವಿಸ್ತರಿಸುವುದನ್ನು ಬೆಂಬಲಿಸುವ ‘ಇಂಧನ ಪ್ರಾಬಲ್ಯ’ ನೀತಿಯನ್ನು ಟ್ರಂಪ್ ಆಡಳಿತ ಮುಂದುವರಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಂದಿದೆ.
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು
ನವದೆಹಲಿ: ಕಳೆದ 13 ವರ್ಷಗಳಿಂದ ಒಂದು ಭೀಕರ ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 31 ವರ್ಷದ ವ್ಯಕ್ತಿಯೊಬ್ಬರಿಗೆ ಅವರ ಪೋಷಕರ ಮನವಿ ಆಧಾರದಲ್ಲಿ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡಿ ಆದೇಶಿಸಿದೆ. ಈ ಮೂಲಕ ದೇಶದಲ್ಲಿ ಮಹತ್ವದ ಆದೇಶವೊಂದು ಹೊರ ಬಿದ್ದಂತಾಗಿದೆ.
ಶೈಕ್ಷಣಿಕ ಪದವಿಗಳಿಗೆ ಅಂತ್ಯ ಹಾಡುವ ಕಾಲಘಟ್ಟದಲ್ಲಿದ್ದೇವೆಯೆ?
ಈ ಸಂಕ್ರಮಣಕಾಲದಲ್ಲಿ ನಮ್ಮ ಮುಂದಿರುವ ಮೂಲಭೂತ ಪ್ರಶ್ನೆಯು ನಾವು ಜ್ಞಾನವನ್ನು ಪ್ರಮಾಣಪತ್ರಗಳಲ್ಲಿ ತೋರಿಸುವ ಸಮಾಜವೇ ಅಥವಾ ಕಲಿಕೆಯನ್ನು ಜೀವನದ ಸ್ವರೂಪವನ್ನಾಗಿಸುವ ಸಮಾಜವೇ? ಎಂಬುದು. ಹಾಗಾಗಿ ಇದು ಪದವಿಗಳ ಅಂತ್ಯಕಾಲವಾಗದೆ ಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಬೇಕಾದ ಕಾಲವಾಗಿದೆ. ಪದವಿ ಶಿಕ್ಷಣವು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಯಾವುದೇ ಪದವಿಗಳಿಗೆ ಬೆಲೆಯಿಲ್ಲ ಎಂಬ ಮಾತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಉದ್ಯೋಗ ಮಾರುಕಟ್ಟೆ ಬದಲಾಗುತ್ತಿದೆ, ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಕಲಿಕೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ ಎಂಬ ಕಾರಣಗಳಿಂದ ವಿಶ್ವವಿದ್ಯಾನಿಲಯದ ಪದವಿಗಳ ಮೌಲ್ಯ ಕುಸಿಯುತ್ತಿದೆ ಎನ್ನುವ ವಾದಗಳು ಪ್ರಚಲಿತವಾಗಿವೆ. ಆದರೆ ಈ ಪ್ರಶ್ನೆಯನ್ನು ಸರಳವಾಗಿ ‘ಪದವಿಗಳ ಅಂತ್ಯ’ ಎಂದು ರೂಪಿಸುವುದು ಬೌದ್ಧಿಕವಾಗಿ ಅಪೂರ್ಣ ನಡೆಯಾಗುತ್ತದೆ. ಇದನ್ನು ಶಿಕ್ಷಣದ ಕುಸಿತವೆಂದು ನೋಡುವ ಅಗತ್ಯವಿಲ್ಲ. ಇದು, ಶಿಕ್ಷಣದ ಸ್ವರೂಪ, ಜ್ಞಾನಕ್ಕೆ ನೀಡಲಾಗುವ ಅರ್ಥ ಮತ್ತು ಸಮಾಜದಲ್ಲಿ ಕಲಿಕೆಯ ಸ್ಥಾನಮಾನ ಬದಲಾಗುತ್ತಿರುವ ಸಂಕ್ರಮಣದ ಘಟ್ಟವಾಗಿದೆ. ಔದ್ಯೋಗಿಕ ಕ್ರಾಂತಿಯ ಯುಗದಲ್ಲಿ ರೂಪುಗೊಂಡ ಪದವಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯು ಇಂದಿನ ಡಿಜಿಟಲ್ ಸಮಾಜದ ನಡುವೆ ತನ್ನ ಐತಿಹಾಸಿಕ ಪಾತ್ರವನ್ನು ಮರುಪರಿಶೀಲಿಸಿಕೊಳ್ಳುತ್ತಿದೆ. ಆಧುನಿಕ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಔದ್ಯೋಗಿಕ ಕ್ರಾಂತಿಯ ಅವಶ್ಯಕತೆಗಳ ಕಾರಣಕ್ಕೆ ಉದ್ಭವಿಸಿತು. ಆಡಳಿತ, ಕೈಗಾರಿಕೆ ಮತ್ತು ತಾಂತ್ರಿಕ ಕ್ಷೇತ್ರಗಳಿಗೆ ತರಬೇತಿ ಪಡೆದ ಮಾನವ ಸಂಪನ್ಮೂಲದ ಅಗತ್ಯವಿತ್ತು. ವಿಶ್ವವಿದ್ಯಾನಿಲಯಗಳು ಜ್ಞಾನ ಉತ್ಪಾದನೆಯ ಮತ್ತು ವಿತರಣೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಪದವಿ ಪ್ರಮಾಣಪತ್ರವು ಕೇವಲ ವಿದ್ಯಾಭ್ಯಾಸದ ಸಾಕ್ಷಿಯಷ್ಟೇ ಆಗದೆ, ಉದ್ಯೋಗ ಪಡೆಯಲು ಬೇಕಾಗಿದ್ದ ಗುರುತು ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಗಿತ್ತು. ಪದವಿ ಪಡೆದ ವ್ಯಕ್ತಿಯು ಜ್ಞಾನವಂತನಷ್ಟೇ ಅಲ್ಲ, ವ್ಯವಸ್ಥೆಯ ಗೌರವಾನ್ವಿತ ಸದಸ್ಯನೂ ಆಗಿದ್ದ. ಈ ಪ್ರಮಾಣೀಕರಣ ವ್ಯವಸ್ಥೆಯು ‘ಅರ್ಹತೆ’ ಎಂಬ ಹೊಸ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿತು. ಆದರೆ ಇಂದಿನ ಡಿಜಿಟಲ್ ಆರ್ಥಿಕತೆ ಮತ್ತು ಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯು ಈ ವ್ಯವಸ್ಥೆಯನ್ನು ಖಂಡಿತವಾಗಿ ಪ್ರಶ್ನಿಸುತ್ತಿವೆ. ಇಂದಿನ ಉದ್ಯೋಗ ಮಾರುಕಟ್ಟೆಯು ಪ್ರಮಾಣಪತ್ರಕ್ಕಿಂತ ಸಾಮರ್ಥ್ಯವನ್ನು ಬಯಸುತ್ತಿದೆ. ಅಭ್ಯರ್ಥಿಯು ಯಾವ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾನೆ ಎಂಬುದಕ್ಕಿಂತ, ಅವನು ಯಾವುದೇ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಬಲ್ಲನೇ ಎಂಬುದೇ ಮುಖ್ಯವಾಗುತ್ತಿದೆ. ‘ಕೌಶಲ್ಯ’ದ ವ್ಯವಸ್ಥೆಯತ್ತ ಸಮಾಜ ಚಲಿಸುತ್ತಿದೆ. ಇದರೊಂದಿಗೆ ಜ್ಞಾನ ಸಂಸ್ಥೆಗಳ ಸಾರ್ವಭೌಮತ್ವವೂ ಕುಸಿಯುತ್ತಿದೆ. ಒಮ್ಮೆ ಜ್ಞಾನಕ್ಕೆ ವಿಶ್ವವಿದ್ಯಾನಿಲಯವೇ ಏಕೈಕ ಮಾರ್ಗವಾಗಿತ್ತು. ಈಗ ಜ್ಞಾನವು ಮುಕ್ತವಾಗಿದೆ. ಆನ್ಲೈನ್ ಮತ್ತು ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ಗಳು, ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು, ಡಿಜಿಟಲ್ ವೇದಿಕೆಗಳು, ಸ್ವಯಂ ಕಲಿಕಾ ಸಮುದಾಯಗಳು, ಇವೆಲ್ಲವು ಜ್ಞಾನವನ್ನು ಸಂಸ್ಥೆಗಳ ಗೋಡೆಗಳಾಚೆಗೆ ಹರಡುತ್ತಿವೆ. ಈ ಪ್ರಕ್ರಿಯೆ ಜ್ಞಾನಾಧಿಕಾರದ ಪ್ರಜಾಸತ್ತಾತ್ಮಕೀಕರಣವನ್ನು ಸೂಚಿಸಿದರೂ, ಹೊಸ ಆತಂಕವೂ ಹುಟ್ಟುತ್ತದೆ: ಜ್ಞಾನದ ಲಭ್ಯತೆ ಹೆಚ್ಚಿದಂತೆ ಅದರ ಆಳ, ವಿಮರ್ಶಾತ್ಮಕತೆ ಮತ್ತು ಸಾಂದರ್ಭಿಕ ಅರ್ಥಗ್ರಹಣ ಉಳಿಯುತ್ತಿದೆಯೇ? ಏಕೆಂದರೆ ಕೇವಲ ಯಥೇಚ್ಛವಾದ ಮಾಹಿತಿಯು ಸಮೃದ್ಧಜ್ಞಾನಕ್ಕೆ ಸಮಾನವಲ್ಲ. ಈ ವ್ಯತ್ಯಾಸವನ್ನು ಗುರುತಿಸುವುದೇ ವಿಶ್ವವಿದ್ಯಾನಿಲಯಗಳ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಜ್ಞಾನವು ಸ್ಥಿರ ಸಂಪತ್ತಾಗಿಲ್ಲ. ಇಂದು ಕಲಿತ ವಿಷಯವು ಕೆಲವು ವರ್ಷಗಳಲ್ಲಿ ಅಪ್ರಸ್ತುತವಾಗಬಹುದು. ಹೀಗಾಗಿ ಹಳೆಯ ಮಾದರಿಯು, ಅಂದರೆ ಒಮ್ಮೆ ಕಲಿತದ್ದನ್ನೇ ಇಟ್ಟುಕೊಂಡು ಜೀವನಪರ್ಯಂತ ಉದ್ಯೋಗ ಮಾಡುವುದು ಇಂದಿನ ಕಾಲಕ್ಕೆ ಅನ್ವಯಿಸುವುದಿಲ್ಲ. ನಿರಂತರ ಕಲಿಕೆ, ಮರುಕಲಿಕೆ ಮತ್ತು ಹೊಸ ಕೌಶಲ್ಯಗಳ ಹೊಂದಾಣಿಕೆ ಜೀವನದ ಅವಿಭಾಜ್ಯ ಭಾಗವಾಗುತ್ತಿವೆ. ಇದು ಕಲಿಕೆಯ ಹೊಸ ಸ್ವರೂಪವಾಗಿದೆ. ಆದರೆ ಈ ಜಾಗತಿಕ ಪರಿವರ್ತನೆಯನ್ನು ಕರ್ನಾಟಕದ ಸಮಾಜದ ಸನ್ನಿವೇಶದಲ್ಲಿ ನೋಡಿದಾಗ ಅದರ ಅರ್ಥ ಇನ್ನಷ್ಟು ಸಂಕೀರ್ಣವಾಗುತ್ತದೆ. ಕರ್ನಾಟಕದಲ್ಲಿ ಪದವಿ ಶಿಕ್ಷಣವು ಕೇವಲ ಉದ್ಯೋಗದ ಸಾಧನವಾಗದೆ, ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆ. ಮೊದಲ ಬಾರಿಗೆ ಅಕ್ಷರಕ್ಕೆ ತೆರೆದುಕೊಂಡ ಮಹಿಳೆಯರಿಗೆ, ದಲಿತರಿಗೆ ಮತ್ತು ಹಿಂದುಳಿದ ಸಮುದಾಯಗಳಿಗೆ ಅದು ಸಬಲೀಕರಣದ ದಾರಿಯಾಗಿತ್ತು. ಗ್ರಾಮೀಣ ಯುವಕರು ನಗರ ಸಮಾಜಕ್ಕೆ ಪ್ರವೇಶ ಪಡೆಯುವ ಮಾರ್ಗವಾಯಿತು. ಮಹಿಳೆಯರಿಗೆ ಅದು ಸಾಮಾಜಿಕ ನಿರ್ಬಂಧಗಳಾಚೆಗೆ ಚಲನೆಯ ಅವಕಾಶ ನೀಡಿತು. ಪದವಿಯು ಸಾಂಸ್ಕೃತಿಕ ಬಂಡವಾಳವಾಗಿ ಕಾರ್ಯನಿರ್ವಹಿಸಿತು. ಒಬ್ಬ ಗ್ರಾಮೀಣ ವಿದ್ಯಾರ್ಥಿಗೆ ಪದವಿ ಎಂದರೆ ಕೇವಲ ವಿದ್ಯಾಭ್ಯಾಸವಷ್ಟೇ ಆಗದೆ ಆತನ ಜೀವನದ ಹೊಸ ಸಾಮಾಜಿಕ ಗುರುತಾಯಿತು. ಹೀಗಾಗಿ ಪದವಿಯ ಮೌಲ್ಯ ಕುಸಿತದ ಚರ್ಚೆಯನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶ್ಲೇಷಿಸಬೇಕು. ಇತಿಹಾಸವನ್ನು ಗಮನಿಸಿದರೆ, ಕರ್ನಾಟಕದ ವಿಶ್ವವಿದ್ಯಾನಿಲಯಗಳು ಕೇವಲ ಶಿಕ್ಷಣ ಸಂಸ್ಥೆಗಳಷ್ಟೇ ಆಗಿರದೆ ಅವು ಕನ್ನಡದ ಬೌದ್ಧಿಕ ವಲಯವನ್ನು ನಿರ್ಮಿಸಿದವು. ಭಾಷೆ, ಚಿಂತನೆ, ಸಾಹಿತ್ಯ ವಿಮರ್ಶೆ, ಸಾಮಾಜಿಕ ಚಳವಳಿಗಳು, ತಾತ್ವಿಕತೆ, ಪ್ರಾದೇಶಿಕತೆ, ಸಮಾನತೆ ಇವೆಲ್ಲವು ವಿಶ್ವವಿದ್ಯಾನಿಲಯಗಳ ಜ್ಞಾನ ಸಂಸ್ಕೃತಿಯೊಂದಿಗೆ ಆಳವಾಗಿ ಸಂಬಂಧ ಹೊಂದಿವೆ. ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಇಂದಿನ ವಿಶ್ವವಿದ್ಯಾನಿಲಯಗಳ ಸಂಕಟವು ಕೇವಲ ಶಿಕ್ಷಣ ವ್ಯವಸ್ಥೆಯ ಸಂಕಟವಷ್ಟೇ ಆಗಿರದೆ ಅದು ನಾಡಿನ ಬೌದ್ಧಿಕತೆಯ ಭವಿಷ್ಯದ ಪ್ರಶ್ನೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಮಧ್ಯಮ ವರ್ಗದವರಿಗೆ ಇಂಜಿನಿಯರಿಂಗ್ ಅಥವಾ ಯಾವುದೇ ವೃತ್ತಿಪರ ಪದವಿಯು ಜೀವನ ಭದ್ರತೆಯ ಭರವಸೆಯನ್ನು ನೀಡುತ್ತಿತ್ತು. ಸರಕಾರಿ ಉದ್ಯೋಗವು ಸಾಮಾಜಿಕ ಸ್ಥಿರತೆಯ ಸಂಕೇತವಾಗಿತ್ತು. ಆದರೆ ಗಿಗ್ ಆರ್ಥಿಕತೆ, ತಾತ್ಕಾಲಿಕ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಡಿಜಿಟಲ್ ವೃತ್ತಿಗಳು ಸ್ಥಿರ ವೃತ್ತಿಜೀವನದ ಕಲ್ಪನೆಯನ್ನು ಕುಸಿತಗೊಳಿಸುತ್ತಿವೆ. ಇದು ಶಿಕ್ಷಣದ ಸಂಕಟಕ್ಕಿಂತ ಹೆಚ್ಚಾಗಿ ಮಧ್ಯಮ ವರ್ಗದ ಭವಿಷ್ಯದ ಸಂಕಟವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ಕೆಲವು ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಬಲ್ಲವು. ಆದರೆ ನೈತಿಕ ನಿರ್ಧಾರ, ಮೌಲ್ಯಗಳು, ಪರಿಸರ, ಅರ್ಥಗ್ರಹಣ, ಸಾಮಾಜಿಕ ನ್ಯಾಯದ ಪ್ರಶ್ನೆಗಳು ಮತ್ತು ಮಾನವ ಅನುಭವದ ವ್ಯಾಖ್ಯಾನವನ್ನು ಅವು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕಗಳ ಮಹತ್ವ ಕಡಿಮೆಯಾಗುವುದರ ಬದಲಿಗೆ ಮತ್ತೂ ಹೆಚ್ಚುತ್ತದೆ. ತಂತ್ರಜ್ಞಾನದಲ್ಲಿನ ಪ್ರಗತಿಯು ಮಾನವೀಯ ಚಿಂತನೆಯ ಅಗತ್ಯವನ್ನು ಹೆಚ್ಚಿಸುತ್ತದೆ ಎಂಬ ವಿರೋಧಾಭಾಸವನ್ನು ಈ ಕಾಲವು ಸ್ಪಷ್ಟಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳನ್ನು ಕೇವಲ ಕೌಶಲ ತರಬೇತಿ ಕೇಂದ್ರಗಳಾಗಿ ಪರಿವರ್ತಿಸುವ ಮಾತು ಅಪಾಯಕಾರಿಯಾಗುತ್ತದೆ. ತಾಂತ್ರಿಕ ತರಬೇತಿ ಸಂಸ್ಥೆಗಳು ಕೌಶಲ್ಯವನ್ನು ನೀಡಬಹುದು, ಆದರೆ ವಿಶ್ವವಿದ್ಯಾನಿಲಯಗಳು ವಿಮರ್ಶಾತ್ಮಕ ಚಿಂತನೆ, ಪ್ರಜಾಸತ್ತಾತ್ಮಕ ಸಂವಾದ, ಜ್ಞಾನ ಉತ್ಪಾದನೆ ಮತ್ತು ಸಾಂಸ್ಕೃತಿಕ ಸ್ಮತಿ ಸಂರಕ್ಷಣೆಯ ಕೇಂದ್ರಗಳಾಗಿವೆ. ಸಮಾಜದ ಚಿಂತನಾ ಸಾಮರ್ಥ್ಯವು ವಿಶ್ವವಿದ್ಯಾನಿಲಯಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ವಿಶ್ವವಿದ್ಯಾನಿಲಯಗಳು ಕುಸಿದರೆ, ಸಮಾಜವು ತಂತ್ರಜ್ಞಾನದಲ್ಲಿ ಮುಂದುವರಿಯಬಹುದೇ ಹೊರತು ಬೌದ್ಧಿಕವಾಗಿ ದುರ್ಬಲವಾಗುತ್ತದೆ. ಉದಾಹರಣೆಗೆ ಪತ್ರಕರ್ತನಾಗುವ ಆಸಕ್ತಿ ಇರುವ ವಿದ್ಯಾರ್ಥಿ, ಒಳ್ಳೆಯ ಭಾಷೆ, ಕಂಪ್ಯೂಟರ್ ಜ್ಞಾನ ಮೊದಲಾದ ಕೌಶಲ್ಯಗಳ ಜೊತೆಗೆ ನಾಡಿನ ಸಾಹಿತ್ಯ, ಇತಿಹಾಸ, ಸಮಕಾಲೀನ ಜಗತ್ತಿನ ಕುರಿತ ಸಾಮಾಜಿಕ, ಭೌಗೋಳಿಕ ಜ್ಞಾನವನ್ನು ಪಡೆದಿರಬೇಕು. ಇದನ್ನು ಪದವಿ ಹಂತವು ಒದಗಿಸುತ್ತದೆ. ಹಾಗೆಯೇ ಕಾಲೇಜುಗಳಲ್ಲಿ ಸಾಮಾಜೀಕರಣವು ಸಹ ಉಂಟಾಗುತ್ತದೆ. ಕರ್ನಾಟಕದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವುದು, ವಿಭಾಗಗಳ ಮುಚ್ಚುವಿಕೆ, ಅತಿಥಿ ಉಪನ್ಯಾಸಕರ ಅವಲಂಬನೆ ಮತ್ತು ಕೌಶಲ ಕೋರ್ಸ್ಗಳ ಹೆಚ್ಚಳ, ಮೊದಲಾದವು ಸಂಕಟದ ಲಕ್ಷಣಗಳಂತೆ ಕಾಣುತ್ತವೆ. ಆದರೆ ಇವು ಶಿಕ್ಷಣ ವ್ಯವಸ್ಥೆಯ ಪುನರ್ರಚನೆಗೆ ಅವಕಾಶಗಳಾಗಬಹುದು. ಸಂಕ್ರಮಣಕಾಲದಲ್ಲಿ ಸಂಸ್ಥೆಗಳು ತಮ್ಮ ಮೂಲಭೂತ ಪಾತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ. ವಿದೇಶದ ವಿಶ್ವವಿದ್ಯಾನಿಲಯಗಳಲ್ಲಿನ ಆರ್ಥಿಕ ಸಂಕಷ್ಟಗಳು, ವಿಲೀನಗಳು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಕುಸಿತ ಮೊದಲಾದವು ಆಕಸ್ಮಿಕ ಘಟನೆಗಳಲ್ಲ. ಇದಕ್ಕೆ, ಶಿಕ್ಷಣದ ವೆಚ್ಚದ ಏರಿಕೆ, ಆನ್ಲೈನ್ ಕಲಿಕೆಯ ವಿಸ್ತರಣೆ, ವಿದ್ಯಾರ್ಥಿ ಸಾಲದ ಭಾರ, ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ನಾಲ್ಕು ವರ್ಷದ ಪದವಿ ಶಿಕ್ಷಣದ ವೆಚ್ಚ-ಲಾಭ ಸಮೀಕರಣ ಮೊದಲಾದವುಗಳು ಕಾರಣವಾಗಿದೆ. ಇವೆಲ್ಲವು ವಿಶ್ವವಿದ್ಯಾನಿಲಯಗಳ ವೈಫಲ್ಯವಾಗಿರದೆ ಅವು ಕಾರ್ಯನಿರ್ವಹಿಸಿದ ಸಮಾಜದ ಆರ್ಥಿಕ ತರ್ಕವು ಬದಲಾಗುತ್ತಿರುವುದರ ಲಕ್ಷಣವಾಗಿದೆ. ಈಗ ನಮ್ಮ ವಿಶ್ವವಿದ್ಯಾನಿಲಯಗಳು ಜ್ಞಾನ ಉತ್ಪಾದನೆಯ ಕೇಂದ್ರಗಳಾಗಬೇಕು, ಇದಕ್ಕೆ ವಿಭಾಗಾಧಾರಿತ ಕಲಿಕೆಯ ಬದಲು ಸಮಸ್ಯಾಧಾರಿತ ಅಂತರವಿಷಯ ಅಧ್ಯಯನವು ಅಗತ್ಯವಾಗುತ್ತದೆ. ಶಿಕ್ಷಣವು ಯುವಕರಿಗಷ್ಟೇ ಸೀಮಿತವಾಗದೆ, ಜೀವಮಾನ ಕಲಿಕೆಯ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು. ಸ್ಥಳೀಯ ಜ್ಞಾನ ಪರಂಪರೆ ಮತ್ತು ಜಾಗತಿಕ ಸಂವಾದಗಳ ನಡುವೆ ಸೇತುವೆ ನಿರ್ಮಿಸುವುದು ವಿಶ್ವವಿದ್ಯಾನಿಲಯಗಳ ಭವಿಷ್ಯದ ಪಾತ್ರವಾಗಿದೆ. ಈ ಸಂಕ್ರಮಣದೊಂದಿಗೆ ಶಿಕ್ಷಕರ ಪಾತ್ರವೂ ಬದಲಾಗುತ್ತದೆ. ಅವರು ಮಾಹಿತಿ ವಿತರಕರಷ್ಟೇ ಆಗದೆ ಕಲಿಕೆಯ ಸಹಭಾಗಿಗಳು, ಸಂವಾದ ನಿರ್ಮಾಪಕರು ಮತ್ತು ವಿಮರ್ಶಾತ್ಮಕ ಚಿಂತನೆಯ ಪ್ರೇರಕರೂ ಆಗಬೇಕಾಗುತ್ತದೆ. ಉಪನ್ಯಾಸದಿಂದ ಸಂವಾದದತ್ತ ಸಾಗುತ್ತಿರುವ ಶಿಕ್ಷಣವು, ಜ್ಞಾನದ ಹೊಸ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತದೆ. ನಾವೀಗ ಎದುರಿಸುತ್ತಿರುವುದು ಕೇವಲ ಪ್ರಮಾಣಪತ್ರ ಕೇಂದ್ರಿತ ಶಿಕ್ಷಣ ಪದ್ಧತಿಯ ಮಿತಿಗಳ ಅನಾವರಣವಾಗಿದೆ. ಕಲಿಕೆಯು ಜೀವನಪರ್ಯಂತ ಪ್ರಕ್ರಿಯೆಯಾಗಿದ್ದು ಪದವಿ ಎಂಬುದು ಕಲಿಕೆಯ ಒಂದು ಹಂತ ಮಾತ್ರವಾಗಿದೆ. ಶಿಕ್ಷಣವು ಉದ್ಯೋಗ ಭದ್ರತೆಗಾಗಿ ಮಾತ್ರವಲ್ಲದೆ ಉತ್ತಮ ನಾಗರಿಕತೆಯ ನಿರ್ಮಾಣಕ್ಕೂ ಬೇಕಿರುತ್ತದೆ. ವಿಶ್ವವಿದ್ಯಾನಿಲಯಗಳು ಕೇವಲ ಉದ್ಯೋಗ ಮಾರುಕಟ್ಟೆಗೆ ಜನರನ್ನು ಒದಗಿಸುವ ಸಂಸ್ಥೆಗಳಾಗಿರದೆ, ಅವು ಸಮಾಜದ ಬೆಳವಣಿಗೆಗೆ ಬೇಕಾದ ತಾತ್ವಿಕ, ಬೌದ್ಧಿಕ ಮೂಲಸೌಕರ್ಯಗಳನ್ನು ಒದಗಿಸುವ ಕೇಂದ್ರಗಳಾಗಿರುತ್ತವೆ. ಹಾಗಾಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೆ ಪೂರ್ಣಪ್ರಮಾಣದಲ್ಲಿ ಅತ್ಯುತ್ತಮ ಪ್ರಾಧ್ಯಾಪಕರುಗಳನ್ನು ನೇಮಿಸಬೇಕಿದೆ. ಈ ಸಂಕ್ರಮಣಕಾಲದಲ್ಲಿ ನಮ್ಮ ಮುಂದಿರುವ ಮೂಲಭೂತ ಪ್ರಶ್ನೆಯು ನಾವು ಜ್ಞಾನವನ್ನು ಪ್ರಮಾಣಪತ್ರಗಳಲ್ಲಿ ತೋರಿಸುವ ಸಮಾಜವೇ ಅಥವಾ ಕಲಿಕೆಯನ್ನು ಜೀವನದ ಸ್ವರೂಪವನ್ನಾಗಿಸುವ ಸಮಾಜವೇ? ಎಂಬುದು. ಹಾಗಾಗಿ ಇದು ಪದವಿಗಳ ಅಂತ್ಯಕಾಲವಾಗದೆ ಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಬೇಕಾದ ಕಾಲವಾಗಿದೆ.
ಸತತ ಏರು ಹಾದಿಯಲ್ಲಿರುವ ಚಿನ್ನ; ಇಂದಿನ ದರವೆಷ್ಟು?
ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ. ಮಾರ್ಚ್ ಆರಂಭದಲ್ಲಿ ಏರಿಕೆಯಾದ ಶುದ್ಧ ಚಿನ್ನದ ಬೆಲೆ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಇದೀಗ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಮತ್ತೆ ಸತತ ಏರಿಕೆಯಾಗಿದ್ದು, 16 ಸಾವಿರದ ಮಿತಿ ಮೀರಿ ಬೆಳೆದಿದೆ. ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿದ್ದವು. ಆದರೆ ಇದೀಗ ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಮಾರುಕಟ್ಟೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನ ನೀಡಿದ್ದಾರೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 11ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 93 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,63,310 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 85 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,49,700 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 69 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,22,480 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 11ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,331 (+93) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,970 (+85) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,248 (+69) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿ ದರ ಮಾರ್ಚ್ 02ರಂದು ಬೆಳ್ಳಿಯ ಬೆಲೆ ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ತಲುಪಿತ್ತು. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ನಿನ್ನೆ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ತಲುಪಿದೆ. ಇಂದು ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,336 (+93) ರೂ., 22 ಕ್ಯಾರೆಟ್ ಚಿನ್ನದ ದರ 14,975 (+85) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,495 (+77) ರೂ., 22 ಕ್ಯಾರೆಟ್ ಚಿನ್ನದ ದರ 15,120 (+70) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,331 (+93) ರೂ., 22 ಕ್ಯಾರೆಟ್ ಚಿನ್ನದ ದರ 14,970 (+85) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,331 (+93) ರೂ., 22 ಕ್ಯಾರೆಟ್ ಚಿನ್ನದ ದರ 14,970 (+85) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,346 (+93) ರೂ., 22 ಕ್ಯಾರೆಟ್ ಚಿನ್ನದ ದರ 14,985 (+85) ರೂ.
ಕೊಣಾಜೆ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರದ ಕೆರೆಯಲ್ಲಿ ಪತ್ತೆ
ಉಳ್ಳಾಲ: ಕಳೆದ ಸೋಮವಾರದಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೋರ್ವನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ವಿವೇಕ್ ಶೆಟ್ಟಿಗಾರ್ ( 32)ಮೃತ ಯುವಕ. ಮಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು, ವಿವೇಕ್ ಕರೆಯನ್ನ ಸ್ವೀಕರಿಸಿರಲಿಲ್ಲ. ವಿವೇಕ್ ಮಂಗಳವಾರವೂ ಮನೆಗೂ ಬಾರದೆ, ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಡಿದ್ದು,ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವೇಕ್ ಅವರ ದ್ವಿಚಕ್ರ ವಾಹನದ ಜೊತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲಕಿನಾರೆಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಮೃತ ವಿವೇಕ್ ವಿವಾಹಿತನಾಗಿದ್ದು, ಪತ್ನಿ ಆತನಿಂದ ವಿಚ್ಚೇದನ ಪಡೆದಿದ್ದಳು ಎನ್ನಲಾಗಿದೆ. ಇದೇ ವಿಚಾರದಲ್ಲಿ ವಿವೇಕ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಮೃತ ವಿವೇಕ್ ತಂದೆ,ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ.
ಹಾರ್ಮುಜ್ ಜಲಸಂಧಿ ಮುಚ್ಚಿದರೆ ಆಹಾರ ವೆಚ್ಚ ಹೆಚ್ಚಾಗುವ ಸಾಧ್ಯತೆ: UNCTAD ಎಚ್ಚರಿಕೆ
“ಏಷ್ಯಾದ ಅತ್ಯಂತ ದುರ್ಬಲ ವರ್ಗದ ಜನರ ಮೇಲೆ ಹೆಚ್ಚು ಹೊರೆ ಬೀಳಲಿದೆ”
ಗುಲ್ಬರ್ಗಾ ವಿವಿ ಅಂಕಪಟ್ಟಿ ಹಗರಣ ಮರು ತನಿಖೆ
ಕುಲಪತಿ ಸೇರಿ 13 ಅಧಿಕಾರಿಗಳಿಂದ ಕೋಟಿ ಲೂಟಿ; ಆರೋಪ
ಇರಾನ್ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಇಸ್ರೇಲ್-ಅಮೆರಿಕಾ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಬಳಿಕ ಇರಾನ್ ತಡಮಾಡದೇ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ಇರಾನ್ ಸುಪ್ರೀಂ ಲೀಡರ್ ಸ್ಥಾನಕ್ಕೇರಿಸಿದೆ. ಇದಕ್ಕೆ ಹಲವರಿಂದ ವಿರೋಧ ಕೇಳಿ ಬರುತ್ತಿದ್ದು, ಇವೆಲ್ಲದರ ನಡುವೆ ತನ್ನ ಮಗ ತನ್ ಉತ್ತರಾಧಿಕಾರಿಯಾಗೋದು ಸ್ವತಃ ಖಮೇನಿಗೆ ಇಷ್ಟವಿರಲಿಲ್ಲ ಹೀಗಾಗಿಯೇ ತಮ್ಮ ಉಯಿಲಿನಲ್ಲಿ ಮೊಜ್ತಬಾರನ್ನು ಈ ಸ್ಥಾನಕ್ಕೆ ಪರಿಗಣಿಸದಂತೆ ಉಲ್ಲೇಖಿಸಿದ್ದರು ಎಂಬ ವಿಚಾರ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ, ಇರಾನ್ ಅಧಿಕಾರಿಗಳಲ್ಲೂ ಈ ನಿರ್ಧಾರ ಇಷ್ಟವಿರಲಿಲ್ಲ ಆದರೆ, IRGC ಒತ್ತಡದಿಂದ ಮೊಜ್ತಬಾ ಪಟ್ಟಕ್ಕೇರಿದ್ದಾರೆ ಎಂಬ ಆರೋಪವಿದ್ದು, ಇದಕ್ಕೆ ಮೊಜ್ತಬಾರನ್ನು ಇರಾನಿ ಮಿಲಿಟರಿ ಕೈಗೊಂಬೆ ಮಾಡಿಕೊಳ್ಳುವ IRGC ಷಡ್ಯಂತ್ರವೇ ಕಾರಣ ಎಂದು ತಿಳಿದುಬಂದಿದೆ ಈ ಕುರಿತ ಮಾಹಿತಿ ಇಲ್ಲಿದೆ..
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಭಾರತವು ತನ್ನ ಎಲ್ಪಿಜಿ (LPG) ಅಗತ್ಯದ ಬಹುಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಇಂತಹ ಯುದ್ಧ ಸದೃಶ್ಯ ಸನ್ನಿವೇಶಗಳು ದೇಶದಲ್ಲಿ ಅಡುಗೆ ಅನಿಲದ ಅಭಾವ ಮತ್ತು ಬೆಲೆ ಏರಿಕೆಗೆ ಕಾರಣವಾಗಿದೆ. ಈ ತುರ್ತು ಸಂದರ್ಭದಲ್ಲಿ ಎಲ್ಪಿಜಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಅನಿವಾರ್ಯತೆ
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಬಯಸಿರುವ ಅಭ್ಯರ್ಥಿಗಳ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2025ಕ್ಕೆ (NEET PG 2025) ಸಂಬಂಧಿಸಿದಂತೆ ವಿವಿಧ ಸುತ್ತಿನ ಸೀಟು ಹಂಚಿಕೆ ಬಳಿಕವು ನೂರಾರು ಸೀಟುಗಳು ಹಂಚಿಕೆ ಅಗದೇ ಬಾಕಿ ಉಳಿದಿವೆ. ಇವುಗಳ ಹಂಚಿಕೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಜೊತೆಗೆ ಈಗಾಗಲೇ ಸೀಟು ಹಂಚಿಕೆ ಆದ ಅಭ್ಯರ್ಥಿಗಳು ನಾಳೆ ಮಾರ್ಚ್
ಹೋಟೆಲ್ ಬಂದ್ ಭೀತಿ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಗ್ಯಾಸ್ ಇಲ್ಲದೆ ಪರದಾಟ... LPG Shortage
ಹೋಟೆಲ್ ನಂಬಿ ಪ್ರತಿದಿನ ಕೋಟ್ಯಂತರ ಜನರು ಊಟ ಮಾಡುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಮಾತ್ರ ಅಲ್ಲ ಆರೋಗ್ಯ ಸರಿ ಇಲ್ಲದೇ ಇರುವವರ ಪಾಲಿಗೆ ಕೂಡ ಹೋಟೆಲ್ ಆಧಾರ. ಹೀಗಿದ್ದಾಗ ಕೋಟಿ ಕೋಟಿ ಜನರು ಆಹಾರಕ್ಕಾಗಿ ನಂಬಿರುವ ಇದೇ ಹೋಟೆಲ್ಗಳು ಬೀಗ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಂದಹಾಗೆ ವಾಣಿಜ್ಯ ಎಲ್ಪಿಜಿ ಕೊರತೆ ಕಾರಣಕ್ಕೆ ನಮ್ಮ
ಹರೀಶ್ ರಾಣಾ ಪ್ರಕರಣ | ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ
2018ರಲ್ಲಿ ದಯಾಮರಣಕ್ಕೆ ಅನುಮತಿಸುವ ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕದ ಮೊದಲ ಪ್ರಕರಣ
ಸಿದ್ದು ಬಜೆಟ್: ನವಸಮಾಜವಾದಿ ಬಾಟಲಲ್ಲಿ ಬಂಡವಾಳಶಾಹಿ ಮದ್ಯ!
ವಿತ್ತೀಯ ಶಿಸ್ತಿನ ಸಾರ ಕಾರ್ಪೊರೇಟ್ ಬಂಡವಾಳಶಾಹಿ ಆಸಕ್ತಿಯ ಪರವಾಗಿ ರಾಜ್ಯದ ಸಂಪನ್ಮೂಲಗಳನ್ನು ನಿಯೋಜಿಸಿ ಜನಸಾಮಾನ್ಯರ ಆರ್ಥಿಕ ಆಸಕ್ತಿಗಳ ಮೇಲೆ ಅಂಕುಶ ಹೇರುವ ಕಾರ್ಪೊರೇಟ್ ಬಂಡವಾಳಶಾಹಿ ಶಿಸ್ತೇ ಆಗಿದೆ. ಯಾವ ಸರಕಾರ ತಾನು ವಿತ್ತೀಯ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆಂದು ಹೇಳುತ್ತದೋ ಆ ಸರಕಾರ ಪರೋಕ್ಷವಾಗಿ ಘೋಷಿಸುತ್ತಿರುವುದು ತಾನೂ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಬಜೆಟನ್ನು ಯಶಸ್ವಿಯಾಗಿ ಮಂಡಿಸಿದ್ದೇನೆ ಎಂದೇ ಆಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 17ನೇ ಬಾರಿ ಬಜೆಟನ್ನು ಮಂಡಿಸಿದ್ದಾರೆ. ಯಥಾಪ್ರಕಾರ ಆರಾಧಕರು ಅದನ್ನು ಅತ್ಯುತ್ತಮ ಬಜೆಟ್ ಎಂದೂ, ವಿರೋಧಿಗಳು ಜನವಿರೋಧಿ ಬಜೆಟ್ ಎಂದೂ ಯಾವುದೇ ಅರ್ಥಪೂರ್ಣ ವಿಶ್ಲೇಷಣೆ ಮತ್ತು ಅಂಕಿಅಂಶಗಳಿಲ್ಲದೆ ಸಾಂಪ್ರದಾಯಿಕ ‘ಪ್ರತಿಕ್ರಿಯೆ’ಗಳನ್ನು ನೀಡಿದ್ದಾರೆ. ಮಾಧ್ಯಮಗಳು ಕೂಡ ಡೆಡ್ಲೈನ್ ಒತ್ತಡದಲ್ಲೋ ಅಥವಾ ಮುಖ್ಯಮಂತ್ರಿಗಳು ಬಜೆಟ್ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಕಳೆಯುವ ‘ಆಪ್ತ ಸಮಯದ’ ಮುಲಾಜಿಗೋ ಬಿದ್ದು ಬಣ್ಣಬಣ್ಣದ ಸಕಾರಾತ್ಮಕ ಶೀರ್ಷಿಕೆಗಳನ್ನು ಕೊಟ್ಟು ಋಣ ತೀರಿಸಿವೆ. ಈ ಬಾರಿ ಈ ರೂಢಿಗತ ರಿವಾಜುಗಳ ಜೊತೆಗೆ ಕೋಮುವಾದಿ ಬಿಜೆಪಿ ಮತ್ತು ಅದರ ಭಟ್ಟಂಗಿ ಮಾಧ್ಯಮಗಳು ಸಿದ್ದು ಬಜೆಟನ್ನು ಯಾವುದೇ ಪುರಾವೆಯಿಲ್ಲದೆ ‘ಸಾಬರ ಪರ’ ಬಜೆಟೆಂದು ಕೋಮುದ್ವೇಷ ಹೆಚ್ಚಿಸಲು ಪ್ರಯತ್ನಿಸಿದ್ದವು. ಆದರೆ ಬಜೆಟ್ನ ಅಂಕಿಅಂಶಗಳೇ ಈ ಬಾರಿ ಅಲ್ಪಸಂಖ್ಯಾತರಿಗೆ ಕಳೆದ ಬಜೆಟ್ಗಿಂತ ಕಡಿಮೆ ಅನುದಾನವನ್ನು ನೀಡಿದೆ. ರಾಜ್ಯದ ಶೇ.12ಕ್ಕಿಂತಲೂ ಹೆಚ್ಚಿರುವ ಮುಸ್ಲಿಮ್ ಸಮುದಾಯದ ವಿಶೇಷ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಮುಸ್ಲಿಮ್ ಸಮುದಾಯದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಈ ಬಜೆಟ್ನಲ್ಲೂ ಮುಂದುವರಿದಿರುವುದೇ ಸತ್ಯ. ಅದೇ ರೀತಿ ಗ್ಯಾರಂಟಿಗಳನ್ನು ಪೂರೈಸಲು ದಲಿತ ಸಮುದಾದ ಹಕ್ಕಿನ ಪಾಲಾದ SCSP/TSP ಮೊತ್ತದಲ್ಲಿ ಈ ಬಾರಿಯೂ 14,000 ಕೋಟಿ ರೂ.ಗಳನ್ನು ಕಿತ್ತುಕೊಳ್ಳಲಾಗಿದೆ. ಹಾಗೆ ನೋಡಿದರೆ ಬಿಜೆಪಿ ಒಂದು ಜವಾಬ್ದಾರಿಯುತ ಜನಪರ ವಿರೋಧಪಕ್ಷವಾಗಿದ್ದರೆ ತಾತ್ವಿಕವಾಗಿ ವಿರೋಧಿಸಲು ಸಿದ್ದು ಬಜೆಟ್ನಲ್ಲಿ ಮೂಲಭೂತವಾದ ಹಲವಾರು ಜನವಿರೋಧಿ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳಿವೆ. ಆದರೆ ಬಿಜೆಪಿಯಾಗಲೀ, ಜೆಡಿಎಸ್ ಆಗಲೀ ಅಂಥ ಮೂಲಭೂತ ಜನವಿರೋಧಿ ನೀತಿಗಳ ಬಗ್ಗೆ ಚಕಾರವೆತ್ತುವುದಿಲ್ಲ. ಅವುಗಳ ವಿರೋಧ ಏನಿದ್ದರೂ ತಮ್ಮ ಆಸಕ್ತ ಕ್ಷೇತ್ರಗಳಿಗೆ ಇನ್ನೂ ಹೆಚ್ಚು ಹಣಕಾಸು ಒದಗಿಸಿಲ್ಲ ಎಂಬ ಮೇಲ್ಸ್ಥರದ ಅಥವಾ ಸಾಬರಿಗೆ ಹೆಚ್ಚುಕೊಡಲಾಗಿದೆ ಎಂಬ ಕೋಮುವಾದಿ ವಿರೋಧದ ಮಿತಿ ದಾಟುವುದಿಲ್ಲ. ಹಾಗೆಯೇ ಕೇಂದ್ರದ ಬಿಜೆಪಿ ಬಜೆಟ್ನ ಬಗ್ಗೆ ಕಾಂಗ್ರೆಸ್ನ ವಿರೋಧವೂ ಸಹ ಮೋದಿ ಬಜೆಟ್ನ ಹಿಂದಿನ ಮೂಲಭೂತ ಜನವಿರೋಧಿ ನೀತಿಗಳನ್ನು ಮುಟ್ಟುವುದೇ ಇಲ್ಲ. ಏಕೆಂದರೆ 1991ರಲ್ಲಿ ಕಾಂಗ್ರೆಸ್ನ ನೇತೃತ್ವದಲ್ಲಿ ಮತ್ತು ಬಿಜೆಪಿಯಾದಿಯಾಗಿ ಇತರ ಪಕ್ಷಗಳ ಉಗ್ರ ಬೆಂಬಲದೊಂದಿಗೆ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯಕ್ಕೆ ತದ್ವಿರುದ್ಧವಾದ ಕಾರ್ಪೊರೇಟ್ ಬಂಡವಾಳಶಾಹಿ ಪರವಾದ ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಯಾಗಿವೆ. ಸಂವಿಧಾನದ ಅಶಯವಾದ ಕಲ್ಯಾಣ ರಾಜ್ಯದ ಸಾರ ಸಂಪತ್ತಿನ ಸಮಾನ ಹಂಚಿಕೆ ಮತ್ತು ಉಳ್ಳವರಿಂದ ಇಲ್ಲದವರಿಗೆ ಸಂಪತ್ತಿನ ಹರಿವು. ಅದಕ್ಕೆ ತಕ್ಕ ಹಾಗೆ ಕೃಷಿ, ಕೈಗಾರಿಕಾ ಮತ್ತು ತೆರಿಗೆ ನೀತಿಗಳು. ಆದರೆ 1991ರ ನಂತರದ ನವ ಆರ್ಥಿಕ ನೀತಿಗಳೆಲ್ಲವೂ ಅದಕ್ಕೆ ತದ್ವಿರುದ್ಧವಾಗಿ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಯನ್ನು ಕೇಂದ್ರದಲ್ಲಿಟ್ಟುಕೊಂಡು ರೂಪಿತವಾಗುತ್ತವೆ. ತೆರಿಗೆ ನೀತಿಗಳೂ ಸಹ. ತೆರಿಗೆ ನೀತಿಗಳೂ ಕಾರ್ಪೊರೇಟ್ ಪರವಾಗಿ ರೂಪಿತಗೊಳ್ಳಬೇಕೆಂಬುದು ಈಗ ಕಾನೂನಾಗಿದೆ. 2002ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಇದಕ್ಕಾಗಿಯೇ Fiscal Responsibility and Budget Management Act ಅನ್ನು (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ)ಕೂಡ ಜಾರಿಗೆ ತಂದಿದೆ. ಅದನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಚಾಚೂ ತಪ್ಪದೆ ಜಾರಿಗೆ ತರುತ್ತಿವೆ. ವಿತ್ತೀಯ ಶಿಸ್ತಲ್ಲ-ಕಾರ್ಪೊರೇಟ್ ಆಸಕ್ತಿಯ ಸರ್ವಾಧಿಕಾರ ಮೇಲ್ನೋಟಕ್ಕೆ ಈ ಕಾಯ್ದೆ ವಿತ್ತೀಯ ಶಿಸ್ತನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಆಶಯವನ್ನು ಹೊಂದಿದೆ. ವಿತ್ತೀಯ ಶಿಸ್ತು ಸರಕಾರ ನಡೆಸಲು ಬೇಕೇ ಬೇಕು. ಆದರೆ ಆ ಶಿಸ್ತು ಹೇಗಿರಬೇಕು. 2002ರ ಈ ಕಾಯ್ದೆಯ ಪ್ರಕಾರ ಸರಕಾರಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಂಡು, ಆದಾಯವನ್ನು ಹೆಚ್ಚಿಸಿಕೊಂಡು ದೀರ್ಘಕಾಲೀನ ಅಭಿವೃದ್ಧಿಯ ಮೇಲಿನ ವೆಚ್ಚವನ್ನು ಹೆಚ್ಚು ಮಾಡುತ್ತಾ ವಿತ್ತೀಯ ಶಿಸ್ತು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಸರಕಾರ ತನ್ನ ರೆವೆನ್ಯೂ ಕೊರತೆ ಅಂದರೆ ಸರಕಾರದ ಆಡಳಿತಾತ್ಮಕ ಮತ್ತು ಕಲ್ಯಾಣ ವೆಚ್ಚಗಳನ್ನು (ಸಂಬಳ, ಪಿಂಚಣಿ, ಜನರಿಗೆ ನೀಡುವ ಸಬ್ಸಿಡಿ, ಇನ್ನಿತರ ಬೆಂಬಲಗಳು) ತನ್ನ ತೆರಿಗೆ ಸಂಪನ್ಮೂಲ ಎಷ್ಟಿದೆಯೋ ಅಷ್ಟರೊಳಗೆ ಮಾಡಬೇಕು. ಆದಾಯ ಮೀರಿದ ವೆಚ್ಚವಿದ್ದರೆ ಸರಕಾರ ತನ್ನ ವೆಚ್ಚಗಳನ್ನು ಕಡಿತಗೊಳಿಸಿಕೊಳ್ಳಬೇಕು. ಎಂದರೆ ಸಿಬ್ಬಂದಿ ಕಡಿತ ಮಾಡಬೇಕು, ನೇಮಕಾತಿ ಕಡಿಮೆ ಮಾಡಿಕೊಳ್ಳಬೇಕು, ನೇಮಕಾತಿ ಮಾಡಿಕೊಂಡರೂ ಪಿಂಚಣಿ ಮತ್ತು ಸಂಬಳ ಏರಿಕೆಯ ಹೊರೆಯಿಲ್ಲದ ನೇಮಕಾತಿ ಮಾಡಿಕೊಳ್ಳಬೇಕು, ದುರ್ಬಲ ಜನಸಮುದಾಯಗಳಿಗೆ ಕೊಡುತ್ತಿದ್ದ ಉಚಿತ ಅಥವಾ ರಿಯಾಯಿತಿಗಳನ್ನು ನಿಲ್ಲಿಸಬೇಕು. ಇದು ವಿತ್ತೀಯ ಶಿಸ್ತು ಬೋಧಿಸುವ ರೆವೆನ್ಯೂ ಕೊರತೆ ಸೊನ್ನೆಯಾಗಬೇಕೆಂಬುದರ ಸಾರ. ಇನ್ನು ವಿತ್ತೀಯ ಕೊರತೆ ಒಟ್ಟಾರೆ ರಾಜ್ಯ ಜಿಡಿಪಿಯ ಶೇ.3ನ್ನು ದಾಟಬಾರದು ಎಂಬುದು ಅದರ ಇನ್ನೊಂದು ಷರತ್ತು. ವಿತ್ತೀಯ ಕೊರತೆ ಎಂದರೆ ಸರಕಾರ ತನ್ನ ರೆವೆನ್ಯೂ ವೆಚ್ಚಗಳನ್ನು ದಾಟಿ ಇತರ ವೆಚ್ಚಗಳಿಗೆ ಆಯಾ ವರ್ಷ ಮಾಡುವ ಸಾಲದ ಮೊತ್ತ ಹಾಗೂ ರಾಜ್ಯದ ಒಟ್ಟಾರೆ ಸಾಲದ ಹೊರೆ ಒಟ್ಟಾರೆ ರಾಜ್ಯ ಜಿಡಿಪಿಯ ಶೇ. 25ನ್ನು ದಾಟಬಾರದು ಹಾಗೂ ಹೀಗೆ ಉಳಿತಾಯ ಮಾಡುವ ರಾಜ್ಯದ ಸಂಪನ್ಮೂಲವನ್ನು ಸರಕಾರವು ದೂರಗಾಮಿ ಅಭಿವೃದ್ಧಿ ವೆಚ್ಚಗಳಿಗೆ ಅರ್ಥಾತ್ ‘Capital Expenditure’ಗೆ ವ್ಯಯಿಸಬೇಕು. ಈ ವಿತ್ತೀಯ ಶಿಸ್ತಿನ ಕಾಯ್ದೆಯ ಪ್ರಕಾರ ರಾಜ್ಯಗಳ ಬಂಡವಾಳ ವೆಚ್ಚ ಹೆಚ್ಚಾದಷ್ಟು ರಾಜ್ಯ ಅಭಿವೃದ್ಧಿಯ ಪಥದಲ್ಲಿದೆ ಎಂದರ್ಥ. ಆದರೆ ಈ ಅಭಿವೃದ್ಧಿಶೀಲ ಬಂಡವಾಳ ವೆಚ್ಚ ಎಂದರೇನು? ಇದನ್ನು ತೀರ್ಮಾನ ಮಾಡುವುದು ಆಯಾ ಸರಕಾರಗಳ ಅಭಿವೃದ್ಧಿ ವ್ಯಾಖ್ಯಾನ. ಈ ವಿಷಯದಲ್ಲಿ 1991ರ ನಂತರ ಯಾವುದೇ ಸರಕಾರಗಳ ಅಭಿವೃದ್ಧಿ ವ್ಯಾಖ್ಯಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲವೂ ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ಗಳ ಬಂಡವಾಳ ಹೂಡಿಕೆಗೆ ಪೂರಕವಾದ ಮೂಲಭೂತ ಸೌಕರ್ಯಗಳ ಮೇಲಿನ ವೆಚ್ಚವನ್ನು ಮಾತ್ರ ಆದ್ಯತೆಯನ್ನೇ ಅಭಿವೃದ್ಧಿ ವೆಚ್ಚ ಅರ್ಥಾತ್ ‘Capital Expenditure’ ಎಂದು ಪರಿಗಣಿಸುತ್ತವೆ. ಸಣ್ಣ ರೈತರಿಗೆ ಬೇಕಾದ ಸರ್ವಋತು ಗ್ರಾಮೀಣ ರಸ್ತೆಯನ್ನಲ್ಲ ಅಥವಾ ಸಣ್ಣ ಉದ್ದಿಮೆಗಳಿಗೆ ಬೇಕಾದ ಸೌಕರ್ಯಗಳನ್ನಲ್ಲ. ಹೀಗಾಗಿ ವಿತ್ತೀಯ ಶಿಸ್ತಿನ ಸಾರ ಕಾರ್ಪೊರೇಟ್ ಬಂಡವಾಳಶಾಹಿ ಆಸಕ್ತಿಯ ಪರವಾಗಿ ರಾಜ್ಯದ ಸಂಪನ್ಮೂಲಗಳನ್ನು ನಿಯೋಜಿಸಿ ಜನಸಾಮಾನ್ಯರ ಆರ್ಥಿಕ ಆಸಕ್ತಿಗಳ ಮೇಲೆ ಅಂಕುಶ ಹೇರುವ ಕಾರ್ಪೊರೇಟ್ ಬಂಡವಾಳಶಾಹಿ ಶಿಸ್ತೇ ಆಗಿದೆ. ಯಾವ ಸರಕಾರ ತಾನು ವಿತ್ತೀಯ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇನೆಂದು ಹೇಳುತ್ತದೋ ಆ ಸರಕಾರ ಪರೋಕ್ಷವಾಗಿ ಘೋಷಿಸುತ್ತಿರುವುದು ತಾನೂ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಬಜೆಟನ್ನು ಯಶಸ್ವಿಯಾಗಿ ಮಂಡಿಸಿದ್ದೇನೆ ಎಂದೇ ಆಗಿದೆ. ಆದರೆ ಈ ದೇಶವು ಪ್ರಜಾತಂತ್ರ ದೇಶವಾಗಿರುವುದರಿಂದ ಬಹುಸಂಖ್ಯಾತ ಮತದಾರರು ಬಡ ಮಧ್ಯಮವರ್ಗದವರೇ ಆಗಿರುವುದರಿಂದ ಅವರ ಆಸಕ್ತಿಗಳನ್ನು ಗಣನೆಗೆ ತೆಗೆದುಕೊಂಡಿರುವ ಭ್ರಮೆ ಮೂಡಿಸಲು ಉಬ್ಬರದ ಅಂಕಿಸಂಖ್ಯೆಗಳನ್ನು, ಅನುದಾನವಿಲ್ಲದ ಭರವಸೆಗಳನ್ನು, ಒಂದು ಕೈಯಿಂದ ಕಿತ್ತು ಮತ್ತೊಂದು ಕೈಗೆ ಕೊಡುವ ಗ್ಯಾರಂಟಿಗಳನ್ನು ಮಾಡುವ ಕಸರತ್ತನ್ನಷ್ಟೇ ಪ್ರತೀ ಬಜೆಟ್ನಲ್ಲಿ ಮಾಡಲಾಗುತ್ತದೆ. ಇದಲ್ಲದೆ 2002ರಿಂದ ಎಲ್ಲಾ ಸರಕಾರಗಳು ಜನರಿಂದ ಮುಚಿಟ್ಟಿರುವ ಮಹಾಸತ್ಯವೊಂದಿದೆ. ಪ್ರತೀ ಸರಕಾರವೂ ತನ್ನ ಬಜೆಟ್ ಮಂಡನೆಯೊಂದಿಗೆ ಈ Fiscal Responsibility and Budget Management Act (FRBM)ಗೆ ಬದ್ಧವಾಗಿದ್ದೇವೆ ಎಂದು ಘೋಷಿಸಬೇಕು ಮತ್ತು ಬಜೆಟ್ ದಾಖಲೆಗಳೊಂದಿಗೆ ಪ್ರತೀ ಬಜೆಟ್ ಮಂಡನೆಯ ಜೊತೆಗೆ ಈ ವೆಚ್ಚ ಕಡಿತ ಹಾಗೂ ಆದಾಯ ಹೆಚ್ಚಳ ಮತ್ತು ಕಾರ್ಪೊರೇಟ್ ಅಭಿವೃದ್ಧಿಯನ್ನು ಮುಂದಿನ ಐದು ವರ್ಷಗಳಲ್ಲಿ ಹೇಗೆ ಸಾಧಿಸಲಾಗುವುದು ಎಂಬ Medium Term Fiscal Plam (MTFP) ನೀಲನಕ್ಷೆಯನ್ನು ಮಂಡಿಸಬೇಕು. ಈ MTFPಯೇ ಅಸಲಿ ಬಜೆಟ್. ಮುಖ್ಯಮಂತ್ರಿಗಳ ಹುಸಿ ಅಬ್ಬರಗಳು, ಉಬ್ಬರದ ಅಂಕಿಸಂಖ್ಯೆಗಳ ಉದ್ದುದ್ದ ಭಾಷಣವಲ್ಲ. ಇದನ್ನು ಅವರು ಸರಕಾರಕ್ಕೆ ಸಾಲ ಕೊಡುವ ಸಂಸ್ಥೆಗಳಿಗೆ, ಅಂತರ್ರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಗಳಿಗೆ, ಐಎಂಎಫ್ ಮತ್ತು ವಿಶ್ವಬ್ಯಾಂಕುಗಳಿಗೆ ಸಲ್ಲಿಸಬೇಕು. ಹೀಗಾಗಿ MTFPಯಲ್ಲಿ ಬೊಗಳೆಗಳು ಇರುವುದಿಲ್ಲ. ಅಸಕ್ತರು ಈ ವರ್ಷದ MTFPಯು ಈ ವಿಳಾಸದಲ್ಲಿ ಓದಬಹುದು: https://finance.karnataka.gov.in/uploads/MTFP2026-27_1772787123.pdf ರಾಜ್ಯದ ಜನರ ನೈಜ ಕಲ್ಯಾಣದ ಬಗ್ಗೆ ಆಸಕ್ತಿ ಇರುವವರು ಸಿದ್ದು ಬಜೆಟ್ ಈ ಒಖಿಈPಯಲ್ಲಿ ಸರಕಾರದ ಆದಾಯ ಹೆಚ್ಚಳ, ವೆಚ್ಚ ಕಡಿತ ಮತ್ತು ಅಭಿವೃದ್ಧಿ ಮಾದರಿಯ ಬಗ್ಗೆ ಏನು ಹೇಳಿದೆ ಎಂಬುದನ್ನು ಗಮನಿಸಬೇಕೇ ಹೊರತು ಯಾವ್ಯಾವ ಕ್ಷೇತ್ರಕ್ಕೆ ದಕ್ಕಿದ್ದು ಹೆಚ್ಚೋ ಅಥವಾ ಕಡಿಮೆಯೋ ಎಂಬ ಹುಸಿ ಅಂಕಿಆಂಶಗಳನ್ನು ಮಾತ್ರವಲ್ಲ. GST-ದರ ಇಳಿದರೂ ಸಂಗ್ರಹ ಏಕೆ ಹೆಚ್ಚಲಿಲ್ಲ? ಸಿದ್ದು ಸರಕಾರ ತೆರಿಗೆ ಸಂಪನ್ಮೂಲ ಸಂಗ್ರಹಣೆಯ ವಿಷಯದಲ್ಲಿ ಮೋದಿ ಸರಕಾರ ಬಂದಮೇಲೆ ಜಿಎಸ್ಟಿಯಿಂದಾಗಿರುವ ತೆರಿಗೆ ಸಂಗ್ರಹ ಕೊರತೆಗೆ ಪರಿಹಾರ ಕೊಡುವುದರಲ್ಲಿ ಆಗುತ್ತಿರುವ ಅನ್ಯಾಯ, ಕೇಂದ್ರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಸಿಗಬೇಕಾದ ಪಾಲಿನಲ್ಲಿ ಆಗುತ್ತಿರುವ ತಾರತಮ್ಯಗಳಿಂದಾಗಿ ರಾಜ್ಯಕ್ಕೆ ಆಗುತ್ತಿರುವ ಹಣಕಾಸು ನಷ್ಟದ ಬಗ್ಗೆ ಹೇಳುತ್ತಿರುವುದು ಫೆಡರಲ್ ಸತ್ಯ. ಆದರೆ ಜನಪರ ಸತ್ಯವಲ್ಲ. ಏಕೆಂದರೆ ಈ ಜಿಎಸ್ಟಿ ಎಂಬುದೇ ಪರೋಕ್ಷ ತೆರಿಗೆಯಾಗಿದ್ದು ಜನವಿರೋಧಿ ತೆರಿಗೆ ಪದ್ಧತಿಯಾಗಿದೆ. ಈವರೆಗೆ ರಾಜ್ಯ ಮತ್ತು ಕೇಂದ್ರಗಳು ಹಾಕುತ್ತಿದ್ದ ಬಹುಪಾಲು ಪರೋಕ್ಷ ತೆರಿಗೆಗಳನ್ನು ಒಂದೇ ಸಂಗ್ರಹ ಪದ್ಧತಿಯಡಿ ತಂದಿದ್ದರಿಂದ ರಾಜ್ಯ ಮತ್ತು ಕೇಂದ್ರಗಳ ಪರೋಕ್ಷ ಆದಾಯವು ಹೆಚ್ಚಾಯಿತು ಎಂಬುದನ್ನಷ್ಟೇ ಎರಡೂ ಸರಕಾರಗಳು ಹೇಳುತ್ತವೆ. ಆದರೆ ಈ ಜಿಎಸ್ಟಿಯನ್ನು ಕಟ್ಟಬೇಕಿರುವುದು ಜನಸಾಮಾನ್ಯರೇ ಅಲ್ಲವೇ? ಜಿಎಸ್ಟಿ ಸಂಗ್ರಹ ಹೆಚ್ಚಾಯಿತೆಂದರೆ ಜನಸಾಮಾನ್ಯರ ಪರೋಕ್ಷ ಸುಲಿಗೆಯೂ ಹೆಚ್ಚಾಯಿತು ಎಂದೇ ಅರ್ಥ. ಏಕೆಂದರೆ ಶೇ. 97ರಷ್ಟು ಜಿಎಸ್ಟಿ ಸಂಗ್ರಹವಾಗುವುದು ಶೇ. 99ರಷ್ಟು ಜನಸಾಮಾನ್ಯರು ಉಪ್ಪು, ಬೇಳೆ ಕೊಂಡರೂ ಕಟ್ಟುವ ಈ ಜಿಎಸ್ಟಿ ತೆರಿಗೆಗಳಿಂದ. ಆದ್ದರಿಂದಲೇ ಸಾಮಾನ್ಯವಾಗಿ ಹೆಚ್ಚು ಪ್ರಜಾತಂತ್ರ ಇರುವ ದೇಶಗಳಲ್ಲಿ ಆದಾಯ ಎಷ್ಟೆ ಇದ್ದರೂ ಒಂದೇ ಬಗೆಯ ತೆರಿಗೆ ಕಟ್ಟುವ ಪರೋಕ್ಷ ತೆರಿಗೆಗಿಂತ ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟುವ ಪ್ರತ್ಯಕ್ಷ ತೆರಿಗೆಯ ಪಾಲು ಹೆಚ್ಚು. ಜಿಎಸ್ಟಿ ಪದ್ಧತಿ ತೆರಿಗೆ ತಾರತಮ್ಯವನ್ನು ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಬಗೆಯ ಕಾರ್ಪೊರೇಟ್ ಪರ ತೆರಿಗೆ ಪದ್ಧತಿಯನ್ನು ಬಿಜೆಪಿ ಜಾರಿಗೆ ತಂದರೂ ಅದರ ಮೂಲ ಕಲ್ಪನೆ ಮತ್ತು ಆನಂತರ ಜಾರಿಗೆ ಸಮ್ಮತಿ ನೀಡಿದ್ದು ಕಾಂಗ್ರೆಸ್ ಪಕ್ಷವೇ. ಈ ಬಜೆಟ್ನಲ್ಲಿ ಜಿಎಸ್ಟಿಯಿಂದ ನಿರೀಕ್ಷಿತ ಆದಾಯ ಬಂದಿಲ್ಲವಾದ್ದರಿಂದ ಒಟ್ಟಾರೆ ಬಜೆಟ್ನ ಪ್ರಮಾಣ ಕಳೆದ ವರ್ಷದ ಮುಂಗಡ ಅಂದಾಜಿಗಿಂತ 10,000 ಕೋಟಿ ರೂ. ಕಡಿಮೆಯಾಗಿದೆ ಎಂದು ಸಿದ್ದು ಸರಕಾರ ಹೇಳಿದೆ. ಇದಕ್ಕೆ ಪ್ರಧಾನ ಕಾರಣ ಹೋದವರ್ಷ ಸೆಪ್ಟಂಬರ್ ತಿಂಗಳಲ್ಲಿ ಮೋದಿ ಸರಕಾರ ಜಿಎಸ್ಟಿ ತೆರಿಗೆ ದರಗಳನ್ನು ಒಂದಷ್ಟು ಕಡಿಮೆ ಮಾಡಿತ್ತು. ಅದರ ಹಿಂದಿನ ಗ್ರಹಿಕೆ ದರ ಕಡಿಮೆಯಾದ್ದರಿಂದ ತಾತ್ಕಾಲಿಕವಾಗಿ ತೆರಿಗೆ ಸಂಗ್ರಹದ ಪ್ರಮಾಣ ಕಡಿಮೆಯಾದರೂ ತೆರಿಗೆ ದರ ಕಡಿಮೆಯಾಗುವುದರಿಂದ ಬೆಲೆಗಳು ಕಡಿಮೆಯಾಗಿ ಖರೀದಿಯ ಪ್ರಮಾಣ ಹೆಚ್ಚಾಗುವುದು. ಅದರಿಂದಾಗಿ ನಿಧಾನವಾಗಿ ಮೊದಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗುವುದು ಎಂಬ ಭ್ರಮಾತ್ಮಕ ತರ್ಕವನ್ನು ಮೋದಿ ಸರಕಾರ ಮುಂದಿಟ್ಟಿತ್ತು. ಅದಕ್ಕೆ ಜಿಎಸ್ಟಿ ಮಂಡಲಿಯಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ ಎಲ್ಲಾ ಪಕ್ಷಗಳ ಸರಕಾರಗಳು ಒಪ್ಪಿಕೊಂಡಿದ್ದವು. ಆದರೆ ದರಗಳು ಕಡಿಮೆಯಾದರೂ ಖರೀದಿ ಹೆಚ್ಚಾಗಲಿಲ್ಲ. ಕಾರಣವೇನು? ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸುವಂತಹ ಆದಾಯವೇ ಇಲ್ಲದಿದ್ದಾಗ ಏರ್ ಕಂಡಿಶನರ್, ಕಾರು, ಚಿನ್ನ ಇವುಗಳ ಮೇಲೆ ತೆರಿಗೆ ಕಡಿಮೆ ಮಾಡಿದ ತಕ್ಷಣ ಜನರು ಖರೀದಿಸಲು ಸಾಧ್ಯವೇ? ಹಾಗೆ ನೋಡಿದರೆ ಭಾರತದ ರಾಷ್ಟ್ರೀಯ ತಲಾವಾರು ಆದಾಯ ರೂ. 2.19 ಲಕ್ಷವಾದರೆ, ಕರ್ನಾಟಕದ ತಲಾವಾರು ಆದಾಯ ರೂ. 4.33 ಲಕ್ಷ. ಆದರೂ ಇತರ ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲೂ ತೆರಿಗೆ ದರ ಇಳಿದ ತಕ್ಷಣ ಖರೀದಿಯೇನೂ ಹೆಚ್ಚಲಿಲ್ಲ. ಅದಕ್ಕೆ ಕಾರಣ ರಾಜ್ಯದ ಸರಾಸರಿ ಆದಾಯ 4.33 ಲಕ್ಷವಾಗಿದ್ದರೂ ಬೆಂಗಳೂರು ಜಿಲ್ಲೆಯ ಸರಾಸರಿ ರೂ. 8 ಲಕ್ಷವಾಗಿದ್ದರೆ ಗುಲ್ಬರ್ಗ ವಲಯದ ತಲಾವಾರು ಆದಾಯ ರೂ. 1.4 ಲಕ್ಷ, ರಾಷ್ಟ್ರೀಯ ಸರಾಸರಿಗಿಂತ ಶೇ. 50ರಷ್ಟು ಕಡಿಮೆ. ಬೆಂಗಳೂರಿನಲ್ಲೂ ಸ್ಲಂಗಳಲ್ಲಿ ವಾಸಿಸುವ ಶೇ. 40ಕ್ಕೂ ಹೆಚ್ಚಿನ ಜನರ ತಲಾವಾರು ಆದಾಯ ಗುಲ್ಬರ್ಗದಷ್ಟೆ. ಹೀಗಾಗಿ ಈ ಅಸಮಾನತೆಯನ್ನು ನಿವಾರಿಸುವ, ಜನಸಾಮಾನ್ಯರ ಅದಾಯವನ್ನು ಹೆಚ್ಚಿಸುವ ಯೋಜನೆಗಳಿಲ್ಲದೆ ಜಿಎಸ್ಟಿ ಇಳಿಕೆಯಿಂದ ಅಭಿವೃದ್ಧಿ ಸಾಧ್ಯ ಎನ್ನುವ ಮೋದಿ ಸರಕಾರದ ಮತ್ತು ಅದಕ್ಕೆ ಸಮ್ಮತಿ ನೀಡಿದ್ದ ಕಾಂಗ್ರೆಸ್ ಸರಕಾರಗಳ ಅಭಿವೃದ್ಧಿ ಗ್ರಹಿಕೆಯೇ ಜನವಿರೋಧಿಯಾಗಿದೆ. ಸಿದ್ದು ಬಜೆಟ್ ಮೋದಿ ಮಾಡಿದ ಜಿಎಸ್ಟಿ ಇಳಿಕೆಯಿಂದ ರಾಜ್ಯದ ತೆರಿಗೆ ಸಂಗ್ರಹ ಕಡಿಮೆಯಾಯಿತು ಎಂದು ದೂರುತ್ತದೆ. ಆದರೆ ಅದಕ್ಕೆ ಕಾರಣವಾದ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಕಾರ್ಪೊರೇಟ್ ಬಂಡವಾಳಶಾಹಿಪರ ಆರ್ಥಿಕ ನೀತಿಗಳ ವಿಷಯವನ್ನು ಸಮಾಜವಾದಿ ಸಿದ್ದು ಕೂಡ ಮುಚ್ಚಿಡುತ್ತಾರೆ. ವಿದೇಶಿ ಹೂಡಿಕೆಯೇ ಸಿದ್ದು ಬಜೆಟ್ನ ಇಂಜಿನ್! ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲಿ ರೈತರ, ದಲಿತರ, ಮಹಿಳೆಯರ, ಬಡವರ ಪರವಾದ ಹಲವಾರು ಕವನಗಳನ್ನು ಬಳಸಿ ಮೆರುಗು ಹೆಚ್ಚಿಸಿಕೊಂಡಿದ್ದರೂ ಬಜೆಟ್ನಲ್ಲಿ ಮಾತ್ರ ತಮ್ಮ ಆರ್ಥಿಕ ನೀತಿಗಳ ಇಂಜಿನ್ ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯೇ ಎಂದು ಸ್ಪಷ್ಟ ಪಡಿಸಿದ್ದಾರೆ. ‘‘2019-25ರ ನಡುವೆ ರಾಜ್ಯವು 67 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಸಾಧಿಸಿದ್ದು, ಇದಕ್ಕೆ ನೀತಿ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆದಾರ ಸ್ನೇಹಿ ವಾತಾವರಣವೇ ಕಾರಣ’’ವೆಂದೂ ಘೋಷಿಸಿದ್ದಾರೆ. ಹೂಡಿಕೆದಾರ ಸ್ನೇಹಿ ವಾತಾವರಣವೆಂದರೆ ಕಾರ್ಪೊರೇಟ್ ಬಂಡವಾಳಶಾಹಿಗಳ ಹೂಡಿಕೆಗಳ ರಕ್ಷಣೆ, ಲಾಭ ಹೆಚ್ಚಳಕ್ಕೆ ಪೂರಕವಾದ ಉಚಿತ ಭೂಮಿ, ನೀರು, ವಿದ್ಯುತ್ ನೀತಿಗಳು ಮತ್ತು ಕಾರ್ಪೊರೇಟ್ ಲಾಭಕ್ಕೆ ಅಡ್ಡಿಯಾಗದ ಕಾರ್ಮಿಕ ನೀತಿಗಳು ಎಂದೇ ಅರ್ಥ. ಹೀಗಾಗಿಯೇ ದೇವನಹಳ್ಳಿಯಲ್ಲೂ ಒಳಗೊಂಡು ಇಡೀ ಬೆಂಗಳೂರಿನ ಸುತ್ತ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಟೌನ್ಶಿಪ್, ಫ್ಯಾಕ್ಟರಿ ಕಟ್ಟಲು ರೈತರ ಭೂಮಿ ಕಬಳಿಕೆ ಇತ್ಯಾದಿಗಳು ವೇಗವಾಗಿ ನಡೆಯುತ್ತಿವೆ. ಮತ್ತೊಂದು ಕಡೆ ಈ ಬಹುಪಾಲು ಉದ್ಯಮಗಳು ಬಂಡವಾಳಸಾಂದ್ರಿತ ಉನ್ನತ ತಂತ್ರಜ್ಞಾನ ಮತ್ತು ಎಐ ಆಧಾರಿತ ಉದ್ದಿಮೆಗಳಾಗಿದ್ದು ರಾಜ್ಯದ ಜಿಡಿಪಿ ಹೆಚ್ಚಿಸಬಹುದೇ ವಿನಾ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡುವುದಿಲ್ಲ. ಬದಲಿಗೆ ಬದುಕನ್ನು ಕಿತ್ತುಕೊಳ್ಳುತ್ತದೆ. ಸಮಾಜವಾದಿ ಸಿದ್ದು ಸರಕಾರವು ಹೀಗೆ ಬಜೆಟ್ನಲ್ಲೂ ಜನವಿರೋಧಿ ಯೋಜನೆ ಮತ್ತು ನೀತಿಗಳಲ್ಲಿ ಮೋದಿಯ ಬಿಜೆಪಿಗೆ ಪೈಪೋಟಿ ಕೊಡುತ್ತಿದೆ. ವೆಚ್ಚ ಕಡಿತ -KPS ಮಾದರಿ ವಿತ್ತೀಯ ಶಿಸ್ತಿನ ಸಿಪಾಯಿಯಾಗಿರುವ ಸಿದ್ದರಾಮಯ್ಯನವರ ಬಜೆಟ್ನಲ್ಲಿ ವೆಚ್ಚ ಕಡಿತ ಬಹಿರಂಗವಾಗಿಯೂ ಇದೆ. ಅಂತರ್ಗತವಾಗಿಯೂ ಇದೆ. ಉದಾಹರಣೆಗೆ 54,000 ಉದ್ಯೋಗ ಭರ್ತಿಯನ್ನು ಘೋಷಿಸಿರುವ ಸಿದ್ದು ಸರಕಾರ ಈ ಬಜೆಟ್ನಲ್ಲಿ ಬೇಕಾಗುವ ಹೆಚ್ಚುವರಿ ಹಣಕಾಸನ್ನೇ ಎತ್ತಿಟ್ಟಿಲ್ಲ. ಬದಲಿಗೆ ಉದ್ಯೋಗಗಳ ಪ್ರಮಾಣವನ್ನೇ ಕಡಿಮೆ ಮಾಡುವ ಹಲವಾರು ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಪ್ರಮುಖವಾದದ್ದು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾರಿ ಮಾಡುತ್ತಿರುವ KPS ಶಾಲೆಗಳು. ಸರಕಾರದಲ್ಲಿ ಭರ್ತಿಯಾಗದೇ ಬಾಕಿ ಇರುವ 2.5 ಲಕ್ಷ ಉದ್ಯೋಗಗಳಲ್ಲಿ ಅತಿ ಹೆಚ್ಚು ಉದ್ಯೋಗಗಳೆಂದರೆ 80,000ದಷ್ಟು ಉಪಾಧ್ಯಾಯರು. ಆದರೆ ಸರಕಾರ ಈಗಾಗಲೇ FRBM ಕಾಯ್ದೆಯಡಿ ಸರಕಾರಿ ವೆಚ್ಚಗಳಲ್ಲಿ ಪ್ರಧಾನವಾದ ಸಂಬಳ ಮತ್ತು ಪಿಂಚಣಿಗಳ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಹೀಗಾಗಿ 70,000 ಉಪಾಧ್ಯಾಯರನ್ನು ಭರ್ತಿ ಮಾಡಿ ವೆಚ್ಚವನ್ನು ಜಾಸ್ತಿ ಮಾಡಿಕೊಳ್ಳುವ ಬದಲಿಗೆ KPS ಎಂಬ ಸ್ವರ್ಗವನ್ನು ತೋರಿಸಿ ಸಾವಿರಾರು ಶಾಲೆಗಳನ್ನೇ ಮುಚ್ಚಿಬಿಡುವ ಅರ್ಥಾತ್ ಸಾವಿರಾರು ಉಪಾಧ್ಯಾಯರ ಹುದ್ದೆಗಳನ್ನೇ ಹಂತಹಂತವಾಗಿ ರದ್ದು ಮಾಡುವ ಸಿದ್ಧ ಮಾದರಿಯನ್ನು ಅನುಸರಿಸುತ್ತಿದೆ. ಅದಕ್ಕೆ ತಕ್ಕಂತೆ ಎಡಿಬಿಯಿಂದ ಈಗ ಕೆಪಿಎಸ್ ಶಾಲಾ ನಿರ್ಮಾಣಕ್ಕಾಗಿ ಪಡೆದುಕೊಂಡಿರುವ ರೂ. 2,500 ಕೋಟಿಗಳನ್ನು ಬಿಟ್ಟರೆ ಸರಕಾರ ಕೆಪಿಎಸ್ಗೆ ಯಾವುದೇ ಪೂರಕ ಅನುದಾನವನ್ನು ಕೊಡುವುದಿಲ್ಲವೆಂದು ಘೋಷಿಸಿದೆ. ಹಾಗೆಯೇ ಉನ್ನತ ಶಿಕ್ಷಣಗಳಲ್ಲಿನ ಸಾವಿರ ಹುದ್ದೆಗಳ ಭರ್ತಿಯನ್ನು ‘after rationalisation’ ಅರ್ಥಾತ್ ಹುದ್ದೆಗಳ ಸಂಖ್ಯಾ ಕಡಿತವನ್ನು ಮಾಡಿದ ನಂತರ ಮಾಡಲಾಗುವುದೆಂದು ಹೇಳಲಾಗಿದೆ. ಇವಲ್ಲದೆ ಉಳಿದ ಬಡವರ ಪರ ಯೋಜನೆಗಳನ್ನು ಇನ್ನುಮುಂದೆ ಅತ್ಯಂತ ಅಗತ್ಯವಿರುವ Targetted ಫಲಾನುಭವಿಗಳಿಗೆ ಮಾತ್ರ ನೀಡುತ್ತಾ 2030ರ ಒಳಗೆ ಸಂಬಳದ ವೆಚ್ಚವನ್ನು ಜಿಎಸ್ಡಿಪಿಯ ಶೇ. 2.66ಕ್ಕೆ ಹಾಗೂ ಪಿಂಚಣಿ ವೆಚ್ಚವನ್ನು ಶೇ.1.20ಕ್ಕೆ ಇಳಿಸುವುದಾಗಿ ಸಮಾಜವಾದಿ ಸಿದ್ದು ಅವರು MTFPಯಲ್ಲಿ ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ. ಸರಕಾರದ ಆದಾಯ ಹೆಚ್ಚಿಸಲು ಬಗೆಬಗೆಯಾಗಿ ಜನರ ಸುಲಿಗೆ ಸಿದ್ದು ಸರಕಾರವು ಸರಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೋದಿ ಸರಕಾರದಂತೆ ಮತ್ತು FRBM ಕಾಯ್ದೆಯ ಷರತ್ತುಗಳಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜನರನ್ನು ಸುಲಿಯುವ ಮಾರ್ಗಗಳನ್ನೇ ಅನುಸರಿಸುತ್ತಿದೆ. ಉದಾಹರಣೆಗೆ ರಾಜ್ಯ ಸರಕಾರದ ರಾಜಸ್ವದಲ್ಲಿ ಪ್ರಧಾನ ಪಾಲು ವಾಣಿಜ್ಯ ತೆರಿಗೆಗಳು. ಅದರಲ್ಲಿ ಜಿಎಸ್ಟಿ, ಪೆಟ್ರೋಲ್ ಮತ್ತು ಡಿಸೆಲ್ ತೆರಿಗೆ ಮತ್ತು ವೃತ್ತಿ ತೆರಿಗೆ ಸೇರಿಕೊಳ್ಳುತ್ತವೆ. ಈ ಬಾಬತ್ತುಗಳಿಂದ ಹೋದ ವರ್ಷ ರಾಜ್ಯ ಸರಕಾರಕ್ಕೆ 1,20,000 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್ಟಿ ದರ ಕಡಿಮೆಯಾದ್ದರಿಂದ ಜಿಎಸ್ಟಿ ಸಂಗ್ರಹ ಕಳೆದ ವರ್ಷ ರೂ. 10,000 ಕೋಟಿ ಕಡಿಮೆಯಾಗಿ ಕೇವಲ ರೂ. 1,10,000 ಕೋಟಿ ಸಂಗ್ರಹವಾಯಿತು. ಮುಂದಿನ ವರ್ಷವೂ ಜಿಎಸ್ಟಿ ಸಂಗ್ರಹ ರೂ. 15,000 ಕೋಟಿ ಕಡಿಮೆಯಾಗುತ್ತದೆ ಎಂದು ಹೇಳುವ ಬಜೆಟ್ ಒಟ್ಟಾರೆ ವಾಣಿಜ್ಯ ತೆರಿಗೆಯಿಂದ ಮುಂದಿನ ವರ್ಷ 1,25,00 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಲಿದೆ ಎಂದು ಅಂದಾಜಿಸಿದೆ. ಈ ಹೆಚ್ಚುವರಿ 15,000 ಕೋಟಿ ರೂ. ಜಿಎಸ್ಟಿಯಿಂದ ಅಲ್ಲ. ಹಾಗಿದ್ದರೆ ಸರಕಾರ ಪೆಟ್ರೊಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಿಸಲಿದೆಯೇ? ಅದರ ಪರಿಣಾಮವೇನು? ಹಾಗೆಯೇ ರಾಜ್ಯ ಸರಕಾರವು ರಾಜಸ್ವ ಹೆಚ್ಚಿಸಲು ಸಂಪನ್ಮೂಲ ಕ್ರೋಡೀಕರಣ ಸಮಿತಿಯನ್ನು ರಚಿಸಿತ್ತು. ಅದು ರಾಜಸ್ವ ಹೆಚ್ಚಿಸಲು ಮುಖ್ಯವಾಗಿ ರಾಜ್ಯ ಸರಕಾರವು ಕೊಡುವ ಸೇವೆಯ ಶುಲ್ಕಗಳನ್ನು ಹೆಚ್ಚಿಸಲು ಮತ್ತು ಸರಕಾರದ ಆಸ್ತಿಗಳನ್ನು ಸುಧಾರಿಸಿ ನಗದೀಕರಣ ಮಾಡಲು ಸಲಹೆ ನೀಡಿದೆ. ಅಂದರೆ ಸರಕಾರ ನೀರು, ವಿದ್ಯುತ್, ಸಾರಿಗೆ, ಇನ್ನಿತರ ಸೇವೆಗಳ ಮೇಲಿನ ಶುಲ್ಕವನ್ನು ಹೆಚ್ಚಿಸಲಿದೆಯೇ? ಸರಕಾರದ ಬಳಿ ಒಟ್ಟು 1,11,91,070 ಎಕರೆ ಜಮೀನಿದೆ. ರಾಜ್ಯದಲ್ಲಿ 32 ಲಕ್ಷ ರೈತರು ಸರಕಾರಿ ಜಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ ಸರಕಾರ ಅದನ್ನು ಕಾರ್ಪೊರೇಟ್ಗಳಿಗೆ invIT, PPP ಮಾರ್ಗದಲ್ಲಿ ಖಾಸಗೀಕರಿಸಿ, ನಗದೀಕರಿಸಿ, ಸರಕಾರದ ಆದಾಯ ಹೆಚ್ಚಿಸಿಕೊಳ್ಳುತ್ತದಂತೆ. ಹೀಗಾಗಿಯೇ ಇದು ನವ ಸಮಾಜವಾದಿ ಲೇಬಲ್ನಲ್ಲಿರುವ ಹಳೆಯ ಬಂಡವಾಳಶಾಹಿ ಮತ್ತು ಬಿಜೆಪಿ ಮದ್ಯವೇ!
'ಅನುದಾನ ಕೇಳಿ ಕೇಳಿ ನಮಗೂ ಸಾಕಾಗಿದೆ' ಸದನದಲ್ಲಿ ಬೇಸರ ತೋಡಿಕೊಂಡ ಕಾಂಗ್ರೆಸ್ ಶಾಸಕ!
ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಕದಲೂರ್ ಅನುದಾನಕ್ಕಾಗಿ ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಮದ್ದೂರಿನಲ್ಲಿ ಎಸ್ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು, ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಅಮೆರಿಕದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ: ಮಹಾಂತೇಶ್
ಮಂಗಳೂರು: ಅಮೆರಿಕ- ಇಸ್ರೇಲ್ ನ ಯುದ್ಧಕೋರ ನೀತಿಗಳಿಂದಾಗಿ ಜಗತ್ತಿನೆಲ್ಲಡೆ ಯುದ್ಧದ ಕಾರ್ಮೋಡ ಕವಿದಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಅಮೆರಿಕನ್ ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸಮದೂಗಿಸಲು ಪ್ರತೀ ಸಂದರ್ಭದಲ್ಲೂ ಯುದ್ಧವನ್ನೇ ಅಸ್ತ್ರವನ್ನಾಗಿಸಿದೆ.ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ದುಡಿಯುವ ವರ್ಗದ ಬದುಕು ಸಂಕಷ್ಟಕ್ಕೀಡಾಗಿದೆ. ಈ ಮೂಲಕ ಅಮೆರಿಕದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದ್ದಾರೆ. ಎಪ್ರಿಲ್ 4 ಮತ್ತು 5 ರಂದು ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದ್ದು, ಅದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಸಂಸತ್ತಿನೊಳಗೆ ಪ್ರತಿಭಟನೆಯ ನಾಟಕವಾಡಿದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು, ಸಂಹಿತೆಗಳ ವಿರುದ್ಧ ನಿಲ್ಲಬೇಕಾಗಿತ್ತು. ಆದರೆ ಅದೇ ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ಪೂರಕವಾಗಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸಿರುವುದು ಕಾಂಗ್ರೆಸ್ ನ ದ್ವಂದ್ವ ನೀತಿಯ ದ್ಯೋತಕವಾಗಿದೆ ಎಂದು ಟೀಕಿಸಿದರು. ಸಭೆಯಲ್ಲಿ ಕಾರ್ಯಾಗಾರದ ಯಶಸ್ವಿಗಾಗಿ 101 ಮಂದಿಯನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಜೆ.ಬಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಬಿ.ಎಂ.ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ಆಯ್ಕೆಯಾದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ಆಳುವ ವರ್ಗಗಳ ಆಕ್ರಮಣಕಾರಿ ನೀತಿಗಳನ್ನು ಸಮರಶೀಲ ಹೋರಾಟಗಳ ಮೂಲಕ ಹಿಮ್ಮೆಟ್ಟಿಸಬೇಕಾದರೆ ಬಲಿಷ್ಠ ಕಾರ್ಮಿಕ ಚಳವಳಿಯಿಂದ ಮಾತ್ರ ಸಾಧ್ಯ. ಅಂತಹ ಚಳವಳಿಯನ್ನು ಕಟ್ಟಲು ನಾಂದಿ ಹಾಡಬೇಕಾದ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ವಿನಂತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕಾರ್ಯಾಗಾರದ ಮಹತ್ವ ಹಾಗೂ ಅದನ್ನು ಯಶಸ್ವಿಗೊಳಿಸಲು ಬೇಕಾದ ತಯಾರಿಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ವಸಂತ ಆಚಾರಿ, ಸಂತೋಷ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ್, ಬಿ.ಎಂ.ಮಾಧವ, ಮುನೀರ್ ಕಾಟಿಪಳ್ಳ, ಪುರುಷೋತ್ತಮ ಪೂಜಾರಿ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ಫ್ಲೇವಿ ಕ್ರಾಸ್ತಾ ಅತ್ತಾವರ, ಯೋಗಿತಾ ಉಳ್ಳಾಲ, ಶೈಲೇಶ್, ರವಿಚಂದ್ರ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.
Gold Price March 11: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ಯುದ್ಧ ಮುಂದುವರಿಯುತ್ತಿದ್ದು, ಇದರಿಂದ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು ಇದರಿಂದ ಚಿನ್ನ - ಬೆಳ್ಳಿ ಬೆಲೆಯು ದುಬಾರಿಯಾಗುತ್ತಿದೆ. ಇದರೊಂದಿಗೆ ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದ್ದು, ಪೆಟ್ರೋಲ್ - ಡೀಸೆಲ್ ಬೆಲೆ ಸಹ
Kasargod | ನಿರ್ಮಾಣ ಹಂತದ ಕಟ್ಟಡದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಮೃತದೇಹ ಪತ್ತೆ: ಕೊಲೆ ಶಂಕೆ
ಕಾಸರಗೋಡು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ರಾತ್ರಿ ಪತ್ತೆಯಾಗಿದೆ. ಮೃತದೇಹದ ಅಂಗಿಯ ಜೇಬಿನಲ್ಲಿ ದೊರೆತ ದಾಖಲೆಯಿಂದ ಕರ್ನಾಟಕ ಮೂಲದ ಮಂಜುನಾಥ್ (46) ಎಂಬ ಮಾಹಿತಿ ಲಭಿಸಿದೆ. ಕಟ್ಟಡದ ಲಿಫ್ಟ್ ಗಾಗಿ ತೋಡಿರುವ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕಟ್ಟಡದ ಮೇಲಂತಸ್ತಿ ನಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಕೊಲೆಗೈದು ಬಳಿಕ ಎಳೆದೊಯ್ಡು ಹೊಂಡಕ್ಕೆ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ದ ಹಾಗೂ ಹೊರ್ಮುಜ್ ಜಲಸಂಧಿ ಸ್ಥಗಿತದಿಂದಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ಈ ನಡುವೆ ಅಮೆರಿಕಾ ತೈಲಬೆಲಯಲ್ಲಿನ ಅನಿಶ್ಚಿತತೆಯನ್ನು ಶಮನಗೊಳಿಸುವ ಜೊತೆಜೊತೆಗೆ ಅಮೆರಿಕಾ ಫಸ್ಟ್ ನೀತಿಯಡಿ ಯುಎಸ್ ಮತ್ತೆ ಇಂಧನ ವಲಯದಲ್ಲಿ ಪ್ರಾಬಲ್ಯತೆ ಸಾಧಿಸುವ ನಿಟ್ಟಿನಲ್ಲಿ ಟ್ರಂಪ್ ಭಾರತದ ದೈತ್ಯ ಖಾಸಗಿ ಸಂಸ್ಥೆ ರಿಲಯನ್ಸ್ ನೊಂದಿಗೆ ಬರೋಬ್ಬರಿ $300 ಬಿಲಿಯನ್ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ 50 ವರ್ಷಗಳಲ್ಲೇ ಮೊದಲ ಬಾರಿಗೆ ಹೊಸ ತೈಲ ಸಂಸ್ಕರಣಾಗಾರ ತೆರೆಯುವ ಯೋಜನೆಯನ್ನು ರೂಪಿಸಿದ್ದು, ಈ ಮೂಲಕ ಶತಕೋಟಿ ಡಾಲರ್ ಗಳನ್ನು ಆರ್ಥಿಕತೆಯನ್ನು ಸಾಧಿಸುವ ಜೊತೆಗೆ ಜಾಗತಿಕವಾಗಿ ಇಂಧನವಲಯದಲ್ಲಿ ಅಮೆರಿಕಾ ತೈಲ ರಫ್ತನ್ನು ಹೆಚ್ಚಿಸುವ ಪ್ರಾಬಲ್ಯತೆ ಸಾಧಿಸಲು ಮುಂದಾಗಿದೆ.
ಧಾರವಾಡ ಪೇಡಕ್ಕೆ ಸ್ವಾದ ತಂದ ಧನಗಾರ್ ಗೌಳಿಗಳು
ಸರಕಾರದ ಅರಿವಿಗೇ ಭಾರದಿರುವ ಧನಗಾರ್ ಗೌಳಿಗಳು ಸರಕಾರದಿಂದ ಮೂರು ಕಾಸಿನ ಪ್ರಯೋಜನ ಪಡೆದಿಲ್ಲ! ಇವರಿಗೆ ಶಾಲೆಯ ಮುಖವನ್ನೇ ಸರಕಾರ ತೋರಿಸಿಲ್ಲ ಎಂದ ಮೇಲೆ ಇನ್ನು ಸರಕಾರದ ಸವಲತ್ತು, ಅನುದಾನ, ಸಾಲಸೋಲ, ಉದ್ಯೋಗಗಳು ಎಲ್ಲಿಂದ ಬರಬೇಕು? ಧಾರವಾಡದ ಪೇಡ ಎಲ್ಲರಿಗೂ ಗೊತ್ತು ಆದರೆ ಆ ಪೇಡ ಮಾಡಲು ಬಳಸುವ ಹಾಲು ‘ಧನಗಾರ್ ಗೌಳಿ’ಗಳದು ಎಂಬುದು ಯಾರಿಗೂ ಗೊತ್ತಿಲ್ಲ! ಧನಗಾರ್ ಗೌಳಿಗಳ ಸಮುದಾಯ ಧಾರವಾಡ, ಕಾರವಾರ, ಬೆಳಗಾವಿಯ ಕಾಡಂಚಲ್ಲಿ ಜೀವಿಸುತ್ತಿದ್ದು, ಅವರ ಎಮ್ಮೆಗಳು ಕಾಡಿನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮೇಯ್ದು ಧನಗಾರ್ ಗೌಳಿಗಳಿಗೆ ಹಾಲು ನೀಡುವುದರಿಂದ ಆ ಹಾಲಿಗೆ ಒಂದು ವಿಶೇಷವಾದ ಸ್ವಾದ ಇರುತ್ತದೆ, ಆ ಹಾಲಿನಲ್ಲಿ ತಯಾರಿಸಿದ ಪೇಡಕ್ಕೂ ಈ ಸ್ವಾದ ಬಂದು ಧಾರವಾಡದ ಪೇಡ ವಿಶೇಷ ರುಚಿಯಿಂದ ಕೂಡಿರುತ್ತದೆ ಎಂಬುದು ಧನಗಾರ್ ಗೌಳಿಗಳ ಕುರಿತು ಅಧ್ಯಯನ ಮಾಡಿರುವ ಅನೇಕರ ಅಭಿಪ್ರಾಯ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ನನ್ನ ಅವಧಿ ಮುಗಿಯುತ್ತಿತ್ತು, ಸರಕಾರವನ್ನು ವಿರೋಧ ಮಾಡಿಕೊಂಡು, ಎಲ್ಲಾ ರೀತಿಯ ಅಸಹಕಾರವನ್ನು ಅನುಭವಿಸಿ, ಕಡೆಗೆ ಎಷ್ಟಾದರೂ ನೋವು ಅನುಭವಿಸಿ ವರದಿ ಕೊಟ್ಟೇ ಹೋಗುವ ಧಾವಂತದಲ್ಲಿದ್ದೆ. ಈ ಸಂದರ್ಭದಲ್ಲಿ ಪ್ರೊ. ಕೆ.ಎಂ. ಮೇತ್ರಿ ಅವರು ಧನಗಾರ್ ಗೌಳಿಗಳ ದೊಡ್ಡ ಗುಂಪನ್ನು ಆಯೋಗದ ಕಚೇರಿಗೆ ಕರೆತಂದರು. ದೊಡ್ಡ ದೊಡ್ಡ ವಿವಿಧ ಬಣ್ಣಗಳ ಪೇಟಾಗಳನ್ನು ಕಟ್ಟಿಕೊಂಡು ಕಚ್ಚೆ ಹಾಕಿದ್ದ ಪಂಚೆ ಉಟ್ಟು ಉತ್ತರ ಕನ್ನಡದಿಂದ ಬಂದ ಧನಗಾರ್ ಗೌಳಿಗಳು ನನ್ನ ಮುಂದೆ ಕುಳಿತಿದ್ದರು. ಆಯೋಗದ ಕಟ್ಟಕಡೆಯ ಸಾರ್ವಜನಿಕ ವಿಚಾರಣೆಯಲ್ಲಿ ಧನಗಾರ್ ಗೌಳಿಗಳ ಪ್ರಕರಣವನ್ನು ಕೇಳಿಸಿಕೊಳ್ಳಲು ತಯಾರಾಗಿದ್ದೆವು. ಧನಗಾರ್ ಗೌಳಿಗಳ ಪ್ರತಿನಿಧಿಯಾಗಿ ಜಾನಪ್ಪ ಬಿನ್ ಭೈರು ಎಂಬವರು ಬಂದಿದ್ದರು. ಇವರಿಗೆ ಕನ್ನಡ, ಇಂಗ್ಲಿಷ್ ಬರುತ್ತಿರಲಿಲ್ಲ, ಇವರೊಂದಿಗೆ ಜೂಲಿಯಾನ ಎಂಬ ಸಿದ್ದಿ ಸಮುದಾಯದ ಹೆಣ್ಣುಮಗಳು ಧನಗಾರ್ ಗೌಳಿಗಳಿಗೆ ಧ್ವನಿಯಾಗಿ ಬಂದು ಧನಗಾರ್ ಗೌಳಿಗಳ ಜೀವನಕ್ರಮ, ಅವರ ಹಿಂದುಳಿದಿರುವಿಕೆ ಕಾರಣಗಳೇ ಮುಂತಾದ ವಿಷಯಗಳನ್ನು ಆಯೋಗದ ಮುಂದೆ ಮಂಡಿಸಿದರು. ಹಿಂದುಳಿದ ವರ್ಗದ ಪಟ್ಟಿಯ ಪ್ರವರ್ಗ-1 ರಲ್ಲಿ ಕ್ರಮಸಂಖ್ಯೆ ಗೊಲ್ಲ ಜನಾಂಗದ ಪರ್ಯಾಯ ಪದವಾಗಿ ‘ಗೌಳಿ’ ಇದೆ. ಅದೇ ರೀತಿ ಪ್ರವರ್ಗ 2(ಎ)ರಲ್ಲಿನ ಕ್ರಮ ಸಂಖ್ಯೆ 7ರ ಕುರುಬ ಜನಾಂಗದ ಪರ್ಯಾಯ ಪದವಾಗಿ ‘ಧನಗಾರ್’ ಎಂಬ ಹೆಸರಿದೆ. ಆದರೆ ಧನಗಾರ್ ಮತ್ತು ಗೌಳಿ ಎರಡನ್ನೂ ಸೇರಿಸಿದಂತೆ ‘ಧನಗಾರ್ ಗೌಳಿ’ ಎಂಬ ಹೆಸರು ಜಾತಿ ಪಟ್ಟಿಯ ಯಾವ ಪ್ರವರ್ಗದಲ್ಲೂ ಇಲ್ಲ. ಹೀಗಾಗಿ ಈ ಸಮುದಾಯ ತನ್ನ ಅಸ್ಮಿತೆ(identity)ಗಾಗಿ ಪರದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಮಾನಾಯಿ, ಹಳಿಯಾಳ, ಕಳಕಿವಾಡ ಮುಂತಾದೆಡೆ ಈ ಸಮುದಾಯ ವಾಸಿಸುತ್ತದೆ. ಆಯೋಗ ಕಾರವಾರದ ಜಿಲ್ಲೆಯ ಹಳಿಯಾಳ ತಾಲೂಕಿನ ಕಳಕಿವಾಡಕ್ಕೆ ಭೇಟಿ ನೀಡಿದಾಗ, ಹುಲ್ಲಿನಿಂದ ಛಾವಣಿ ಹಾಕಿ ಬಿದಿರಿನ ತಡಿಕೆ ಎಣೆದು ಗೋಡೆಯಂತೆ ಬಳಸಲಾದ ಮನೆಗಳಿಗೆ ಬಾಗಿಲೇ ಇರಲಿಲ್ಲ! ಎಂಟರಿಂದ ಹತ್ತು ಅಡಿ ವಿಸ್ತಾರದಲ್ಲಿ ಈ ಮನೆಗಳೆಂಬ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಈ ಗುಡಿಸಲ ಮುಂದೆ ಎಮ್ಮೆಗಳು ಕೂಡಿಕೊಳ್ಳುವ ಒಂದು ಸಣ್ಣ ಜಾಗವಿದೆ. ಇಲ್ಲಿ ಎಮ್ಮೆಗಳನ್ನು ಕಟ್ಟಿಹಾಕುವುದಿಲ್ಲ. ಅವು ದಿನವೆಲ್ಲ ಕಾಡಲ್ಲಿ ಮೇಯ್ದು ಸಂಜೆ ಬಂದು ಧನಗಾರ್ ಗೌಳಿಗಳಿಗೆ ಹಾಲು ಕೊಟ್ಟು ರಾತ್ರಿಯಿಡೀ ಧನಗಾರ್ ಗೌಳಿಗಳ ಗುಡಿಸಲುಗಳ ಮುಂದೆಯೇ ಇದ್ದು, ಮುಂಜಾನೆ ಕಾಡಿಗೆ ಹೋಗುತ್ತವೆ! ಧನಗಾರ್ ಗೌಳಿಗಳು ಈ ಎಮ್ಮೆಗಳ ಹಾಲು ಮಾರಿ ಜೀವನ ಸಾಗಿಸುತ್ತಾರೆ. ಮನುಷ್ಯ ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಇದು ಅತ್ಯುತ್ತಮ ಉದಾಹರಣೆ. ಇವರ ಗುಡಿಸಲುಗಳಲ್ಲಿ ಹಾಲು, ಮೊಸರು, ಬೆಣ್ಣೆ ಇಡಲಿಕ್ಕೆ ‘ಸಿಖಾ’(ನಲ್ಲಿ) ಮಾಡಿ ಬೊಂಬಿಗೆ ಮೇಲಿಂದ ಕೆಳಕ್ಕೆ ನೇತು ಹಾಕಿರುತ್ತಾರೆ. ನಾಯಿ, ಬೆಕ್ಕುಗಳಿಂದ ರಕ್ಷಿಸಲು ಈ ರೀತಿ ಮಾಡಿರುತ್ತಾರೆ. ಇವರ ಗುಡಿಸಲ ಸುತ್ತಲೂ ಬೇಟಿ, ರೋಜಾ, ನಂದಿ, ತೇಗಾ, ಮತ್ತಿ, ಹೊನ್ನೆ, ಕೊಳೆಮತ್ತಿ, ಬಿಳಿಮತ್ತಿ, ಎದ್ದಾಲೆ, ಕಿಂದಲ್ ಮುಂತಾದ ಬೆಲೆಬಾಳುವ ದಟ್ಟವಾದ ಕಾಡಿರುತ್ತದೆ. ಇವೆಲ್ಲಾ ಕಾಡಿನ ಸ್ವತ್ತಾಗಿರುವುದರಿಂದ ಧನಗಾರ್ ಗೌಳಿಗಳು ಈ ಬೆಲೆಬಾಳುವ ಮರಗಳನ್ನು ರಕ್ಷಿಸುತ್ತಾರೆಯೇ ಹೊರತು ಎಂದೂ ಕಡಿಯುವುದಿಲ್ಲ. ಇದು ಇವರು ತಮಗೆ ನೆಲೆ ಕೊಟ್ಟ ಕಾಡಿಗೆ ತೋರುವ ನಿಯತ್ತು. ಸರಕಾರದ ಅರಿವಿಗೇ ಭಾರದಿರುವ ಧನಗಾರ್ ಗೌಳಿಗಳು ಸರಕಾರದಿಂದ ಮೂರು ಕಾಸಿನ ಪ್ರಯೋಜನ ಪಡೆದಿಲ್ಲ! ಇವರಿಗೆ ಶಾಲೆಯ ಮುಖವನ್ನೇ ಸರಕಾರ ತೋರಿಸಿಲ್ಲ! ಎಂದ ಮೇಲೆ ಇನ್ನು ಸರಕಾರದ ಸವಲತ್ತು, ಅನುದಾನ, ಸಾಲಸೋಲ, ಉದ್ಯೋಗಗಳು ಎಲ್ಲಿಂದ ಬರಬೇಕು? ಕರ್ನಾಟಕದ ಧಾರವಾಡ, ಬೆಳಗಾವಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧನಗಾರ್ ಗೌಳಿಗಳು ಕಾಣಿಸಿಕೊಳ್ಳುತ್ತಾರೆ. ಇವರ ಪೂರ್ವಜರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ನೂರಾರು ವರ್ಷಗಳ ಹಿಂದೆ ಅಲೆಮಾರಿಗಳಾಗಿ ಬಂದವರು. ಪಶುಪಾಲನೆ ಇವರ ಕುಲಕಸುಬು, ಪಶುಗಳ ಮೇವು ಮತ್ತು ನೀರು ಸಿಗುವ ಕಡೆ ಅಲೆಮಾರಿಗಳಾಗಿ ಹೋಗುತ್ತಾ ಬದುಕು ಸಾಗಿಸಿದವರು. ಮುಂಬೈ ಗೆಜೆಟಿಯರ್ ನಲ್ಲಿ ಇವರ ಸಮುದಾಯದ ದಾಖಲೆಯಿದ್ದು ‘ಇವರು ಕಾನಡಾ ಜಿಲ್ಲೆ ಯಲ್ಲಾಪುರ ಅಡವಿಯಲ್ಲಿ ಇರುತ್ತಾರೆ’ ಎಂದು ದಾಖಲಿಸಿದ್ದಾರೆ. ಧನಗಾರ ಗೌಳಿಯರು ಪ್ರಧಾನವಾಗಿ ವಿಠೋಬನನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾರೆ. ಛತ್ರಪತಿ ಶಿವಾಜಿಯ ಮೂಲ ಧನಗಾರ ಗೌಳಿಗಳಲ್ಲಿದೆ ಎಂದು ಕೆಲ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಎಮ್ಮೆಗಳೇ ಇವರಿಗೆ ಅನ್ನದಾತ ದೈವಗಳು. ‘‘ಎಮ್ಮೆಗಳ ನಾಡನ್ನು ಮೈಸೂರು ರಾಜ್ಯ, ದನಗಳ ನಾಡನ್ನು ಮಹಾರಾಷ್ಟ್ರ ರಾಜ್ಯ..’’ ಎಂದು ಕರೆಯುವುದರೊಂದಿಗೆ ತಮ್ಮ ಮೂಲಸ್ಥಾನ ಕರ್ನಾಟಕವೇ ಎಂದು ತಮ್ಮ ನೆಲೆಯನ್ನು ಧನಗಾರ್ ಗೌಳಿಗಳು ಸಮರ್ಥಿಸಿಕೊಳ್ಳುತ್ತಾರೆ. ಧಾರವಾಡ, ಬೆಳಗಾವಿಯಲ್ಲಿ ಸಣ್ಣ ಪ್ರಮಾಣದಲ್ಲಿರುವ ಗೌಳಿಗಳು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮಾಗವಾಡಿ, ಕುಮ್ಮಾಕಾನ ಹಟ್ಟಿ, ಜತಗಾ ಗೌಳಿವಾಡ, ರಹೀಮನ್ ಶೇತ್, ತಟ್ಟಿಗೇರಾ, ಅಡಿಕೆ ಹೊಸೂರು, ಬಸ್ಸೊಳ್ಳಿ ಉತ್ತಾರ, ಭಿಮಾಹಳ್ಳಿ, ಭಾಗವತಿ ಮುಂತಾಗಿ ಐವತ್ತಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಇದ್ದಾರೆ. ಇವರಲ್ಲಿ ಯಡಗೆ, ಲಾಂಬೋರೆ, ಪಿಂಗಳ, ಬರಾಗಡೆ, ಕೊಳಕರ ಮುಂತಾಗಿ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಬೆಡಗುಗಳಿವೆ. ಈ ಎಲ್ಲದರ ಕುರಿತು ನಮ್ಮ ಆಯೋಗ ವಿಸ್ತೃತವಾಗಿ ಅಧ್ಯಯನ ಮಾಡಿ. ಧನಗಾರರು ಗೌಳಿಗಳು ಮೂಲತಃ ಕುರುಬರ ಉಪಪಂಗಡದವರೂ ಅಲ್ಲ, ಗೊಲ್ಲರ ಉಪಪಂಗಡದವರೂ ಅಲ್ಲ, ಇವರಿಗೆ ತಮ್ಮದೇ ಆದ ವಿಶಿಷ್ಟವಾದ ಅಸ್ಮಿತೆ ಇದೆ ಎಂದು ಸುದೀರ್ಘ ವರದಿ ನೀಡಿ ಈ ಸಮುದಾಯವನ್ನು ಅತಿಹಿಂದುಳಿದ (most backward) ಪಟ್ಟಿಗೆ ಸೇರಿಸಬೇಕೆಂದು ನಮ್ಮ ಆಯೋಗ 2010ರಲ್ಲೇ ಸರಕಾರಕ್ಕೆ ಸಲಹೆ ನೀಡಿದೆ. ದುರಂತವೆಂದರೆ ಯಾವುದೇ ಸರಕಾರ ಇದನ್ನು ತೆರೆದು ಕೂಡ ನೋಡಿಲ್ಲ. ಇನ್ನೂ ವಿಪರ್ಯಾಸವೆಂದರೆ ಸಾಮಾಜಿಕ ನ್ಯಾಯ ಮತ್ತು ಅಹಿಂದ ಎಂಬ ಶಬ್ದಗಳನ್ನು ತಮ್ಮ ಕನಸಿನಲ್ಲೂ ಪಠಿಸುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಈ ನಾಡಿಗೆ ಬಂದರೆ ಇಂತಹ ಸಣ್ಣಸಣ್ಣ ಸಮುದಾಯಗಳ ಉದ್ಧಾರವಾಗುತ್ತವೆ ಎಂದು ಸಿದ್ದರಾಮಯ್ಯನವರ ಭಾಷಣಗಳನ್ನು ಕೇಳಿಸಿಕೊಂಡಿದ್ದ ಇಂತಹ ಸಮುದಾಯಗಳು ಬಲವಾಗಿ ನಂಬಿದ್ದವು. ಆದರೆ ‘ಹಿಂದುಳಿದ ಸಮುದಾಯಗಳ ನಾಯಕ’ ಸಿದ್ದರಾಮಯ್ಯನವರು ಹಿಂದಿನ ಯಾವುದೇ ಆಯೋಗದ ವರದಿಗಳನ್ನು ಮುಟ್ಟಿಕೂಡ ನೋಡಲಿಲ್ಲ. ಇಂತಹ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕುರಿತು ಕನಿಷ್ಠ ಕಾಳಜಿ ತೋರಲಿಲ್ಲ! ಬದಲಿಗೆ ಇಂತಹ ಅಲೆಮಾರಿ ಸಮುದಾಯಗಳಿಗೆ ಇದ್ದ ಒಂದು ಪರ್ಸೆಂಟ್ ಮೀಸಲಾತಿಯನ್ನೂ ಕಸಿದುಕೊಂಡು ಇಂತಹ ಕಡುಬಡವ, ನಿರ್ಗತಿಕ, ತಬ್ಬಲಿ ಸಮುದಾಯಗಳಿಗೆ ಚಾರಿತ್ರಿಕ ದ್ರೋಹ ಬಗೆದರು. ಇಂತಹ ಅಸಹಾಯಕ ಸಮುದಾಯಗಳಿಗೆ ಕನಿಷ್ಠ ಅಸ್ಮಿತೆ, ಅಸ್ತಿತ್ವ ನೀಡಲು ದೇವರಾಜ ಅರಸು ರಂತಹ ಪುಣ್ಯಾತ್ಮರು ಮತ್ತೆ ಹುಟ್ಟಿ ಬರಬೇಕಷ್ಟೇ.
ಉಪ್ಪು ನೀರಿನ ಸಮಸ್ಯೆಯಿಂದ ಹೆಚ್ಚಿದ ಆತಂಕ; ಹಳ್ಳಿಗಳಲ್ಲಿ ಜಲಕ್ಷಾಮದ ಭೀತಿ
ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಎಲ್ಲೆಡೆ ಶುರುವಾಗಿದೆ. ಕೆಜಿಎಫ್ ತಾಲೂಕಿನ ಪಾರಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ಕೋಲಾರ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಅವ್ಯವಸ್ಥೆಯಿಂದಾಗಿ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆಯುಂಟಾಗಿದೆ.
ಗ್ಯಾಸ್ ಬೇಕಾ.. ಗ್ಯಾಸ್, ಓನ್ಲಿ 3 ಸಾವಿರ : ಕಾಳಸಂತೆಯಲ್ಲಿ LPG ಮಾರಾಟ - ಕಂಗೆಟ್ಟ ಹೋಟೆಲ್ ಮಾಲೀಕರು
LPG Shortage in Bengaluru : ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಿಸಿ, ದಿನದಿಂದ ದಿನಕ್ಕೆ ಮನೆಬಾಗಿಲಿಗೆ ತಟ್ಟುತ್ತಿದೆ. ವಾಣಿಜ್ಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದ ನಂತರ, ಏಕಾಏಕಿ, ಸಿಲಿಂಡರ್ ಅಭಾವ ಎದುರಾಗಿದೆ. ಪ್ರಮುಖವಾಗಿ, ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿರುವುದು ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತವನ್ನು ನೀಡುತ್ತಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಕಾಳಸಂತೆ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ.
ಭಾರತಕ್ಕೆ ಬಂಪರ್, ರಷ್ಯಾ ಮೂಲಕ 30 ಮಿಲಿಯನ್ ಬ್ಯಾರಲ್ ತೈಲ ಖರೀದಿ | Operation Roaring Lion
ಇರಾನ್ ಮೇಲೆ ಮುಗಿಬಿದ್ದು ದಾಳಿ ಮಾಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಭಾರಿ ದೊಡ್ಡ ಹಾನಿ ಮಾಡುತ್ತಿದ್ದು, ನೋಡ ನೋಡುತ್ತಲೇ ಇಬ್ಬರ ನಡುವಿನ ವಾರ್ ಇಡೀ ಜಗತ್ತನ್ನು ಆರ್ಥಿಕವಾಗಿ ಬೀದಿಗೆ ಬೀಳುವಂತೆ ಮಾಡುತ್ತಿದೆ. ಈಗಾಗಲೇ, ಭಾರತ ಸೇರಿದಂತೆ ದೊಡ್ಡ ದೊಡ್ಡ ದೇಶಗಳ ಷೇರು ಮಾರುಕಟ್ಟೆಗಳು ಪರದಾಡಿ ಹೋಗಿದ್ದು ಹೂಡಿಕೆದಾರರಿಗೆ ಭಯ ಶುರುವಾಗಿದೆ. ಇಂತಹ ಸಮಯದಲ್ಲೇ ತೈಲ ಎಂದರೆ
ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಹೋಟೆಲ್ಗಳಿಗೆ ವಾಣಿಜ್ಯ ಬಳಕೆ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಇರುವ ಗ್ಯಾಸ್ ಮುಗಿದ ಬಳಿಕ ಹೋಟೆಲ್ಗಳ ಕಿಚನ್ ಶೀಘ್ರ ಬಂದ್ ಆಗುವ ಸಾಧ್ಯತೆ ಇದೆ. ಮನೆ ಬಳಕೆಯ ಗ್ಯಾಸ್ ಪೂರೈಕೆಯಲ್ಲಿ ಸದ್ಯಕ್ಕೆ ತೊಂದರೆ ಇfಲಲ, ಆದರೆ ಬೆಲೆ ಏರಿಕೆ ಹಾಗೂ ಪೂರೈಕೆ ವಿಳಂಬದ ಬಿಸಿ ಮುಟ್ಟಿದೆ.
ಮಾ.12: ಕೆ.ಸಿ.ರೋಡ್ ಜುಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ಮಜ್ಲಿಸ್
ಉಳ್ಳಾಲ: ಕೋಟೆಕಾರ್ ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ನಲ್ಲಿ ಮಾ.12ರಂದು ರಾತ್ರಿ ತರಾವೀಹ್ ನಮಾಝ್ ಬಳಿಕ ದ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್ ಕೆ.ಪಿ.ಹುಸ್ಸೈನ್ ಸಅದಿ ಕೆ.ಸಿ.ರೋಡ್ ನೇತೃತ್ವದಲ್ಲಿ ಜರುಗಲಿದೆ. ಮುನೀರ್ ಸಖಾಫಿ ಅಲ್ ಫುರ್ಖಾನಿ ಉಪಸ್ಥಿತರಿರುವರು ಎಂದು ಮಸೀದಿ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.
Gold: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಉತ್ಖನನದಲ್ಲಿ ವಿಜಯನಗರ ಕಾಲದ ಆಭರಣಗಳು, 500-600 ವರ್ಷಗಳಷ್ಟು ಹಳೆಯ ಚಿನ್ನದ ನಾಣ್ಯಗಳು, ಕಲ್ಲಿನ ಮುಕುಟಮಣಿ, ತ್ರಿಮುಖ ನಾಗಶಿಲೆ, ಮತ್ತು ಪುರಾತನ ದೇವಾಲಯಗಳ ಅವಶೇಷಗಳು ಪತ್ತೆ ಆಗಿವೆ. ಇದರ ಮೌಲ್ಯವು ಕೋಟ್ಯಾಂತರ ರೂಪಾಯಿ ಎಂದು ಈಗ ಖಚಿತವಾಗಿದೆ. ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉತ್ಖನನ ಕಾರ್ಯ ನಡೆದಿತ್ತು.
ಹಾರ್ಮುಜ್ ಜಲಸಂಧಿಯ ಬಳಿ ಇರಾನ್ನ 16 ಯುದ್ಧನೌಕೆಗಳನ್ನು ನಾಶಪಡಿಸಿದ ಅಮೆರಿಕ
ವಿಶ್ವದ ಸುಮಾರು 20% ತೈಲ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಸಮೀಪವೇ ಇರಾನ್ನ 16 ಮೈನ್ಲೇಯರ್ ನೌಕೆಗಳನ್ನ ಎಲಿಮಿನೇಟ್ ಮಾಡಿದ್ದಾಗಿ ಅಮೆರಿಕದ ಸೈನ್ಯ ತಿಳಿಸಿದೆ. ಇದರಿಂದ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು : ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್ನಿಂದ ಹಲ್ಲೆ, ಮೂಗು ಮುರಿತ
ಫುಡ್ ಡಿಲವರಿ ವಿಚಾರಕ್ಕೆ ಜಗಳ ಶುರುವಾಗಿ, ಮಾತಿಗೆ ಮಾತು ಬೆಳೆದು, ಡಿಲವರಿ ಏಜೆಂಟ್ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲ 8 ನೇ ಬ್ಲಾಕ್ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಗ್ರಾಹಕರ ಮೇಲೆ ಬ್ಲಿಂಕಿಟ್ ಡಿಲವರಿ ಏಜೆಂಟ್ ಹಲ್ಲೆ ನಡೆಸಿದ್ದಾನೆ. ಮೂಗು, ತುಟಿಗೆ ಗಾಯಗಳಾಗಿವೆ.
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಎರಡು ದಿನಗಳ ಕಾಲ 'ವಿಕಸಿತ ಭಾರತದಲ್ಲಿ ಕಾರ್ಪೊರೇಟ್ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಪಾತ್ರ' ವಿಷಯದ ಕುರಿತು ರಾಷ್ಟೀಯ ಸಮಾವೇಶ ನಡೆಯಿತು. ದೇಶದ ಅಭಿವೃದ್ದಿಯಲ್ಲಿ ಕಾರ್ಪೊರೇಟ್ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಪ್ರಮುಖ ಪಾತ್ರವಹಿಸುತ್ತದೆ ಎಂದು 'ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಅಭಿಪ್ರಾಯಪಟ್ಟರು. ಸಮಾವೇಶದಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಆಧಾರವಾಗಿರಿಸಿಕೊಂಡು ದೇಶವನ್ನು ವಿಕಸಿತಗೊಳಿಸಬಹುದು
ನೇತ್ರಾವತಿ ಒಡಲು ಕಲುಷಿತ ; ಮೌನಕ್ಕೆ ಜಾರಿದ ಆಡಳಿತ
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ನೀರೆತ್ತುವ ಜಾಗಗಳಲ್ಲೇ ಕೊಳಚೆ ನದಿಗೆ ಸೇರುತ್ತಿದೆ. ವಿಜಯ ಕರ್ನಾಟಕ ಪ್ರತಿನಿಧಿ, ಈ ಕುರಿತು ಪ್ರತ್ಯಕ್ಷ ವರದಿಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಕುಡಿಯುವ ನೀರು ಎಂದೇ ಪರಿಗಣಿಸಲಾದ ಜಕ್ರಿಬೆಟ್ಟು ಡ್ಯಾಂನಲ್ಲಿದ್ದ ನೀರು ಸಂಗ್ರಹದಲ್ಲೇ ಸ್ನಾನ, ಶೌಚಾದಿಗಳನ್ನು ವಲಸೆ ಕಾರ್ಮಿಕರ ತಂಡ ಮಾಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಕಾಲುವೆಯಿಂದ ಹೆಪ್ಪುಗಟ್ಟಿದ ಕೊಳಚೆ ನೀರು ಕಾಣಿಸುತ್ತಿತ್ತು.
Vehicle Loan: ವಾಹನಗಳನ್ನು ಸಾಲದ ಮೇಲೆ / ಇಎಂಐ ಮೂಲಕ ಖರೀದಿ ಮಾಡುವ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ವಾಹನ ಸಾಲ ತೀರಿಸಿದ ನಂತರ ಆರ್ಸಿ ಯಿಂದ ಹೈಪೋಥೆಕೇಶನ್ ಎನ್ನುವ ಅಂಶವನ್ನು ತೆಗೆದುಹಾಕುವ ಪ್ರಕ್ರಿಯೆ ಈಗ ಸ್ವಯಂಚಾಲಿತ ಆನ್ಲೈನ್ ವ್ಯವಸ್ಥೆಯ ಮೂಲಕ ನಡೆಯಲಿದೆ. ಇದರಿಂದ ವಾಹನದ ಮಾಲೀಕರು ಬ್ಯಾಂಕ್ ಹಾಗೂ ಆರ್ಟಿಒ ಕಚೇರಿಗಳಿಗೆ
ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವಿಶ್ವವಿದ್ಯಾನಿಲಯವನ್ನು ಘಟಕವನ್ನಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾನಿಲಯವು ಸರಕಾರಕ್ಕೆ ತನ್ನ ಅಭಿಪ್ರಾಯವನ್ನು ಸಲ್ಲಿಸಿದೆ. ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅಥವಾ ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸುವ ಸಂಬಂಧ ಡಾ.ಮನಮೋಹನ್ ಸಿಂಗ್ ಬೆಂಗಳೂರು ವಿವಿ ನೀಡಿರುವ ಅಭಿಪ್ರಾಯದಲ್ಲಿ ಈ ಆತಂಕವನ್ನು ವ್ಯಕ್ತಪಡಿಸಿದೆ. ಮೈಸೂರು, ಕೊಡಗು, ಕರ್ನಾಟಕ ಸಂಸ್ಕೃತ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯವು ತನ್ನ ಅಭಿಪ್ರಾಯ ನೀಡಿವೆ. ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಈ ವಿಶ್ವವಿದ್ಯಾನಿಲಯಗಳು 2026ರ ಮಾರ್ಚ್ 2, 3, 4ರಂದು ನೀಡಿರುವ ಅಭಿಪ್ರಾಯಗಳ ಪ್ರತಿಗಳು he-file.inಗೆ ಲಭ್ಯವಾಗಿವೆ. ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಅಥವಾ ವಿಷಯವಾರು ಮೀಸಲಾತಿ ಅನ್ವಯಿಸಬೇಕೇ ಎಂಬ ಬಗ್ಗೆ ಸಾಧಕ-ಬಾಧಕಗಳ ಸಲಹೆ, ಶಿಫಾರಸುಗಳನ್ನು ಸಲ್ಲಿಸಲು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2026ರ ಫೆ.26ರಂದು ಸಭೆ ನಡೆದಿತ್ತು. ಈ ಸಭೆಯ ನಂತರ ಈ ಸಂಬಂಧ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ ವಿಶ್ವವಿದ್ಯಾನಿಲಯದ ಸೂಕ್ತವಾದ ಸಲಹೆ, ಶಿಫಾರಸುಗಳನ್ನು ಕೋರಿ ಉನ್ನತ ಶಿಕ್ಷಣ ಇಲಾಖೆಯು ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆದಿತ್ತು. ಮನಮೋಹನ್ ಸಿಂಗ್ ಬೆಂ.ನಗರ ವಿವಿ ಅಭಿಪ್ರಾಯವೇನು?: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವಿಶ್ವವಿದ್ಯಾನಿಲಯವನ್ನು ಘಟಕವಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದ್ದು ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಆತಂಕ ವ್ಯಕ್ತಪಡಿಸಿರುವುದು ಅಭಿಪ್ರಾಯದಿಂದ ಗೊತ್ತಾಗಿದೆ. ಕೊಡಗು ವಿವಿಯ ನಿಲುವಿನಲ್ಲೇನಿದೆ?: ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ಪರಿಗಣಿಸಿ ರೋಸ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್ಗಳನ್ನು ಅಳವಡಿಸುವ ಬಗ್ಗೆ ಕೊಡಗು ವಿವಿ ಆಂತರಿಕವಾಗಿ ಚರ್ಚಿಸಿದೆ. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿನ ಸಭೆಯು ನೀಡಿದ್ದ ಸೂಚನೆಯನ್ನು ಕೊಡಗು ವಿಶ್ವವಿದ್ಯಾಲಯವೂ ಸಮ್ಮತಿಸಿದೆ. ಮೈಸೂರು ವಿವಿಯ ಅಭಿಪ್ರಾಯದಲ್ಲೇನಿದೆ?: ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಕುರಿತು ಮೈಸೂರು ವಿವಿಯು ಚರ್ಚಿಸಿದೆ. ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ ಎ, ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇ.17ರಷ್ಟು ಮೀಸಲಾತಿ, ಪ್ರವರ್ಗ ಎ ರಲ್ಲಿ ಸಮುದಾಯಗಳಿಗೆ ಶೇ.6, ಪ್ರವರ್ಗ ಬಿಯಲ್ಲಿನ ಸಮುದಾಯಗಳಿಗೆ ಶೆ. 6 ಮತ್ತು ಪ್ರವರ್ಗ ಸಿ ಯಲ್ಲಿನ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿ ಸರಕಾರವು 2025ರ ಆಗಸ್ಟ್ 25ರಲ್ಲಿ ಆದೇಶ ಹೊರಡಿಸಿದೆ ಎಂದು ಸರಕಾರದ ಗಮನ ಸೆಳೆದಿದೆ. ಅದೇ ರೀತಿ 2022ರ ಡಿಸೆಂಬರ್ 28ರಂದು ಹೊರಡಿಸಿರುವ ಸರಕಾರದ ಆದೇಶದ ಅನುಬಂಧದಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಅನುಬಂಧದ ಪ್ರಕಾರ ಪುನರ್ ವರ್ಗೀಕರಿಸಿ ಆದೇಶಿಸಿದೆ. ಸರಕಾರದ ಆದೇಶದಂತೆಯೇ ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರ ವೃಂದದ ಹುದ್ದೆಗಳನ್ನು ವಿಷಯವಾರು ಮೀಸಲಾತಿ ಅನ್ವಯಿಸಿ ಭರ್ತಿ ಮಾಡಬೇಕಾಗುತ್ತದೆ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ. ಕನ್ನಡ ವಿಭಾಗದಲ್ಲಿ ಪ.ಜಾತಿ, ಪ್ರವರ್ಗ ಎ (ಸಾಮಾನ್ಯ), ಸಾಮಾನ್ಯ ಅಭ್ಯರ್ಥಿ, ಪ.ಪಂಗಡ (ಸಾಮಾನ್ಯ, ಸಾಮಾನ್ಯ ಆಭ್ಯರ್ಥಿ (ಮಹಿಳೆ), ಪ್ರವರ್ಗ 1 (ಸಾಮಾನ್ಯ ಅಭ್ಯರ್ಥಿ), ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅರ್ಥ ಶಾಸ್ತ್ರ ವಿಭಾಗದಲ್ಲಿಯೂ ಇದೇ ಮಾದರಿ ಅನುಸಾರವೇ ಭರ್ತಿ ಮಾಡಬೇಕು ಎಂದು ವಿವರಿಸಿರುವುದು ಗೊತ್ತಾಗಿದೆ. ಮಹಿಳಾ ವಿವಿ ಅಭಿಪ್ರಾಯವೇನು?: ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಪ್ರಸ್ತುತ ವಿವಿಯನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದೇ ನಿಯಮಗಳನ್ನು ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಅನುಸರಿಸಬೇಕಾದ ವಿಧಾನಗಳ ಸಾಧಕ ಬಾಧಕಗಳನ್ನು ಸರಕಾರದ ಗಮನ ಸೆಳೆದಿದೆ. ವಿಷಯವಾರು ಮೀಸಲಾತಿ ಅನ್ವಯಿಸುವ ಕುರಿತು ಚರ್ಚಿಸಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಈ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿದೆ ಎಂದು ಹೇಳಿದೆ. ಅಲ್ಲದೇ ಬಾಧಕಗಳ ಕುರಿತು ವಿವಿ ವಿವರಿಸಿದೆ. ಇದರ ಪ್ರಕಾರ 100 ಬಿಂದು ರೋಸ್ಟರ್ ಅನುಸರಿಸಿ ಮೀಸಲಾತಿ ಸೌಕರ್ಯವನ್ನು ನೀಡಲಾಗುತ್ತಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳಲ್ಲಿ ವಿಷಯವಾರು ಎರಡು ಅಥವಾ ಮೂರು ಹುದ್ದೆಗಳು ಮಾತ್ರ ಇವೆ. ಬಿಂದು 1- ಎಸ್ಸಿ, ಬಿಂದು 2-ಸಾಮಾನ್ಯ ಹಾಗೂ ಬಿಂದು 3- ಎಸ್ಟಿ ಮಾತ್ರ ತುಂಬಲ್ಪಡುವ ಸಾಧ್ಯತೆಗಳೇ ಹೆಚ್ಚಿವೆ. ಹೀಗೆ ಒಮ್ಮೆ ಭರ್ತಿಯಾದ ಹುದ್ದೆಗಳು ಆ ವ್ಯಕ್ತಿ ನಿವೃತ್ತವಾಗುವವರೆಗೂ ಖಾಲಿ ಆಗುವುದಿಲ್ಲ. ಅಂದರೆ ಸುಮಾರು 30ರಿಂದ 33 ವರ್ಷದವರೆಗೆ ರೋಸ್ಟರ್-3 ಅಥವಾ ರೋಸ್ಟರ್ 4ನೇ ಬಿಂದುವನ್ನು ಕಾರ್ಯಗತಗೊಳಿಸುವುದಿಲ್ಲ. ಹೀಗಾಗಿ ರೋಸ್ಟರ್ ಬಿಂದು 100 ತಲುಪಿ ಮೀಸಲಾತಿ ಸೌಲಭ್ಯವು ಎಲ್ಲರಿಗೂ ತಲುಪುವುದು ಅಸಾಧ್ಯ ಎಂದು ವಿವರಿಸಿದೆ. ತುಮಕೂರು ವಿವಿ ಅಭಿಪ್ರಾಯ: ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಬಿಂದು ಅಳವಡಿಸುವ ಮೂಲಕ ವಿಶ್ವವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಬಹುದು ಎಂದು ತುಮಕೂರು ವಿವಿ ಅಭಿಪ್ರಾಯಿಸಿದೆ. ವಿವಿಯಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ವೃಂದವಾರು ಒಟ್ಟುಗೂಡಿಸಿ ವಿವಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಮೀಸಲಾತಿ ಬಿಂದುಗಳನ್ನು ಗುರುತಿಸಬಹುದು ಎಂದು ವಿವರಿಸಿದೆ. ಪ್ರವರ್ಗಗಳಿಗೆ ನ್ಯಾಯ ಕಷ್ಟಸಾಧ್ಯವೆಂದ ಬೆಂಗಳೂರು ಉತ್ತರ ವಿವಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಸಹ ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ರೋಷ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್ಗಳನ್ನು ಅಳವಡಿಸಲು ಅಭಿಪ್ರಾಯ ನೀಡಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಪ್ರವರ್ಗಗಳಿಗೆ ಮೀಸಲಾತಿ ಅನ್ವಯವಾಗುವಂತೆ ರೋಸ್ಟರ್ ಹೆಚ್ಚಿಸಿ ಖಾಲಿ ಇರುವ ಸಂಬಂಧದಲ್ಲಿ ಎಲ್ಲ ಪ್ರವರ್ಗಗಳಿಗೂ ಮೀಸಲಾತಿ ಜಾರಿಗೊಳಿಸುವ ಸಂಬಂಧ ಯಾವುದೇ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳನ್ನು ಕಡೆಗಣಿಸುವಂತಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ. ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ: ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವಿಭಾಗಗಳಲ್ಲೂ ಕೇವಲ ಒಂದು ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮಾತ್ರ ಇರುವುದರ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರೋಸ್ಟರ್ ಬಿಂದುಗಳನ್ನು ಅಳವಡಿಸಲು ತುಂಬಾ ಕಠಿಣ ಹಾಗೂ ಎಲ್ಲಾ ಪ್ರವರ್ಗಗಳಿಗೂ ನ್ಯಾಯ ದೊರಕಿಸಿಕೊಡುವುದು ಕಷ್ಟ ಸಾಧ್ಯ ಎಂದಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ಖಾಲಿ ಇರುವ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದ ಹುದ್ದೆಗಳಿಗೆ ವಿವಿಯನ್ನು ಒಂದ ಘಟಕವನ್ನಾಗಿ ಪರಿಗಣಿಸಿ ಮೀಸಲಾತಿಯನ್ನು ಅಳವಡಿಸುವುದು ಸರಿಯಾದ ಮಾರ್ಗ ಹಾಗೂ ಹೀಗೆ ಮಾಡುವ ಮೂಲಕ ಎಲ್ಲ ವರ್ಗಗಳಿಗೂ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ವಿವಿಯ ಕುಲಪತಿ ಪ್ರೊ.ಬಿ.ಕೆ ರವಿ ಅವರು ತಮ್ಮ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ಗೆ ವಿವರಿಸಿದ್ದಾರೆ.
ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಹೆಸರು ಬದಲಿಸಿದ ಅಸ್ಸಾಂ ಸರ್ಕಾರ
ಗುವಾಹತಿ: ಅಸ್ಸಾಂನ ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಬರ್ಪೇಟಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ. ಮಾಜಿ ರಾಷ್ಟ್ರಪತಿಗಳ ಗೌರವಾರ್ಥ ಬರ್ಪೇಟಾದಲ್ಲಿದ್ದ ಕಾಲೇಜಿಗೆ ಅವರ ಹೆಸರನ್ನು ಇಡಲಾಗಿತ್ತು. ಆದರೆ ರಾಜ್ಯದ ಇಂಥ ಸಂಸ್ಥೆಗಳಿಗೆ ಈ ಹೆಸರು ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಹೆಸರನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಆರಂಭಿಸಿದ ಎಲ್ಲ 15 ವೈದ್ಯಕೀಯ ವಿಜ್ಞಾನ ಕಾಲೇಜುಗಳಿಗೆ ಆಯಾ ಕಾಲೇಜುಗಳು ಇರುವ ಸ್ಥಳದ ಹೆಸರನ್ನು ಇಡಲಾಗಿದೆ. ಆದರೆ ಬರ್ಪೇಟಾ ಕಾಲೇಜಿಗೆ ಮಾತ್ರ ಫಕ್ರುದ್ದೀನ್ ಅಲಿ ಅಹ್ಮದ್ ಹೆಸರು ಇದೆ. ಇದು ಇತರ ಹೆಸರುಗಳಿಗಿಂತ ಭಿನ್ನವಾಗಿದ್ದು, ಇದು ಖಾಸಗಿ ಕಾಲೇಜೇ ಎಂಬ ಸಂದೇಹದ ಹಲವು ಪ್ರಶ್ನೆಗಳು ಕೇಳಿ ಬರುತ್ತಿದ್ದವು ಎಂದು ಶರ್ಮಾ ಸ್ಪಷ್ಟಪಡಿಸಿದರು. ಆದ್ದರಿಂದ ಸಂಸ್ಥೆಗೆ ಬರ್ಪೇಟಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಆದಾಗ್ಯೂ ಫಕ್ರುದ್ದೀನ್ ಅಲಿ ಅಹ್ಮದ್ ಅವರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ರಾಜ್ಯದ ಏಕೈಕ ನಾಯಕರಾಗಿರುವ ಹಿನ್ನೆಲೆಯಲ್ಲಿ, ಇನ್ನೊಂದು ಶೈಕ್ಷಣಿಕ ಅಥವಾ ಸಾಂಸ್ಕೃತಿಕ ಸಂಸ್ಥೆಗೆ ಅವರ ಹೆಸರನ್ನು ಇಡಲಾಗುವುದು. ಈ ಸಂಬಂಧ ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಬರ್ಪೇಟಾದಲ್ಲಿ 2011ರಲ್ಲಿ ಆರಂಭವಾದ ಎಫ್ಎಎಎಂಸಿಎಚ್ (ಫಕ್ರುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ) ರಾಜ್ಯದ ಐದನೇ ವೈದ್ಯಕೀಯ ವಿಜ್ಞಾನ ಕಾಲೇಜು ಆಗಿದ್ದು, ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಗಳನ್ನು ನೀಡುತ್ತಿದೆ. 500 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಂದಿದ್ದು, ಎಂಬಿಬಿಎಸ್ ಕೋರ್ಸ್ ಗೆ 125 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಫಕ್ರುದ್ದೀನ್ ಅಲಿ ಅಹ್ಮದ್ ಅವರು ಭಾರತದ ಐದನೇ ರಾಷ್ಟ್ರಪತಿಗಳಾಗಿದ್ದು, 1974ರಿಂದ 77ರ ವರೆಗೆ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದರು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಸಲಹೆಯಂತೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.
ಮನೆ ಬಾಗಿಲಿಗೇ ಇ-ಖಾತೆ ; ಮಾರ್ಚ್ 13 ರಿಂದ ಮೆಗಾ ಅಭಿಯಾನ ಶುರು
ನಾಗರಿಕರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಾಲಿಕೆಯ ಸಿಬ್ಬಂದಿ ಮತ್ತು ತಾಂತ್ರಿಕ ತಂಡಗಳು ವಾರ್ಡ್ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ ನಾಗರಿಕರ ಆಸ್ತಿ ದಾಖಲೆಗಳನ್ನು ಪರಿಶೀಲಿಸಿ ಇ-ಖಾತಾ ಪ್ರಕ್ರಿಯೆಯನ್ನು ಸ್ಥಳದಲ್ಲೇ ನಡೆಸುತ್ತಿದ್ದಾರೆ.
ISI ಪರವಾಗಿ ಬೇಹುಗಾರಿಕೆ ಆರೋಪ: ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ
ಲಕ್ನೋ, ಮಾ. 11: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ನೌಕಾಪಡೆ ಸಿಬ್ಬಂದಿಗೆ ಸಂಬಂಧಿಸಿದ ಶಂಕಿತ ಬೇಹುಗಾರಿಕೆ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧನ ಕ್ರಮ ಕೈಗೊಂಡಿದೆ. ಬಂಧಿತ ಆದರ್ಶ್ ಕುಮಾರ್ (ಲಕ್ಕಿ) ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಗರೋಲ್ ನಿವಾಸಿ. ಆತ ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ನಿಯೋಜಿಸಲ್ಪಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆದರ್ಶ್ ಕುಮಾರ್ ಪಾಕಿಸ್ತಾನದ ಇಂಟರ್–ಸರ್ವೀಸಸ್ ಇಂಟೆಲಿಜೆನ್ಸ್ (ISI) ಗೆ ಸಂಪರ್ಕ ಹೊಂದಿರುವ ಹ್ಯಾಂಡ್ಲರ್ ಗಳಿಗೆ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದನೆಂದು ಆರೋಪಿಸಲಾಗಿದೆ. ಡಿಜಿಟಲ್ ಸಂವಹನದ ಮೂಲಕ ಆತ ಪ್ರಮುಖ ನೌಕಾ ಮಾಹಿತಿಯ ಛಾಯಾಚಿತ್ರಗಳು ಮತ್ತು ವಿವರಗಳನ್ನು ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಆತ ಸಂಪರ್ಕದಲ್ಲಿದ್ದ ಹ್ಯಾಂಡ್ಲರ್ ಗೆ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ನೌಕಾಪಡೆ ಸಿಬ್ಬಂದಿಯನ್ನು ಒಳಗೊಂಡ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಮಾಹಿತಿ ದೊರೆತ ನಂತರ ಉತ್ತರ ಪ್ರದೇಶ ಎಟಿಎಸ್ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪರಿಶೀಲನೆಯ ಬಳಿಕ ಸಂಸ್ಥೆಯು ಆದರ್ಶ್ ಕುಮಾರ್ ನನ್ನು ಬಂಧಿಸಿ, ಆತನ ಸಂಪರ್ಕಗಳು ಹಾಗೂ ಹಂಚಿಕೊಳ್ಳಲ್ಪಟ್ಟಿರಬಹುದಾದ ಮಾಹಿತಿಯ ಕುರಿತು ವಿಚಾರಣೆ ಆರಂಭಿಸಿದೆ. ಆಪಾದಿತ ಬೇಹುಗಾರಿಕೆ ಚಟುವಟಿಕೆಯ ಅವಧಿಯಲ್ಲಿ ಆದರ್ಶ್ ಕುಮಾರ್ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದುಬಂದಿದೆ. ಬೇರೆ ಯಾರಾದರೂ ಈ ಬೇಹುಗಾರಿಕೆ ಜಾಲದಲ್ಲಿ ಭಾಗಿಯಾಗಿರಬಹುದೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರ್ಶ್ ಕುಮಾರ್ ನ ಸಂರ್ಕು, ಹಣಕಾಸಿನ ವಹಿವಾಟುಗಳು ಹಾಗೂ ಪಾಕಿಸ್ತಾನದ ಗುಪ್ತಚರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಹ್ಯಾಂಡ್ಲರ್ ಗಳೊಂದಿಗಿನ ಸಂಪರ್ಕಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂದು ತಿಳಿದು ಬಂದಿದೆ.
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್
Rain In Karnataka: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಆದರೆ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಾದ್ಯಂತ ತಾಪಮಾನ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡು ವಲಯಗಳಲ್ಲಿ ಇನ್ನೊಂದು ವಾರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ನೈಋತ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಉತ್ತರ ಶ್ರೀಲಂಕಾದ
ರೈಲ್ವೆ ಇಲಾಖೆ ಅನುಮತಿಗೆ ಕಾಯುತ್ತಿದೆ ಹುಡಾ ; ವಿಳಂಬಕ್ಕೆ ಆಕಾಂಕ್ಷಿಗಳ ಆಕ್ರೋಶ
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶೇ.50ರ ಅನುಪಾತದಲ್ಲಿ ನಿವೇಶನ ದೊರೆಯುತ್ತದೆ ಎಂದು ಜಮೀನು ಕಳೆದುಕೊಂಡಿರುವ ರೈತರು ಮಕ್ಕಳ ವ್ಯಾಸಂಗ, ಮದುವೆ ಮತ್ತಿತರ ಶುಭಕಾರ್ಯಕ್ಕೆ ಸಾಲ ಮಾಡಿಕೊಂಡು ಕುಳಿತಿದ್ದಾರೆ. ನಮ್ಮ ನಿವೇಶನ ಕೊಡಿ ಮಾರಿಯಾದರೂ ಸಾಲ ತೀರಿಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
Iran-America Conflict: ತುಸು ಇಳಿದ ಕಚ್ಚಾತೈಲ ಬೆಲೆ : ಸಂಘರ್ಷ ಉಲ್ಬಣಗೊಂಡರೆ ಮತ್ತೆ ದರಗಳ ಏರಿಕೆ ಆತಂಕ
ಇರಾನ್- ಅಮೆರಿಕಾ ಹಾಗೂ ಇಸ್ರೇಲ್ ಸಂಘರ್ಷದಿಂದಾಗಿ ಇರಾನ್ನಲ್ಲಿ ವಾಯುನೆಲೆ, ನೌಕಾನೆಲೆಗಳು ಧ್ವಂಸಗೊಂಡಿವೆ. ತೈಲಾಗಾರಗಳ ಮೇಲೂ ದಾಳಿಯಾಗಿವೆ. ಆದರೆ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆ ಇಡೀ ಜಗತ್ತಿಗೆ ತೈಲ ಸಮಸ್ಯೆಗಳು ಎದುರಾಗಿವೆ. ಇನ್ನು ಮುಂದೆಯೂ ಯಾವುದೇ ಬೆದರಿಕೆಗೂ 1 ಲೀಟರ್ ತೈಲ ಕೂಡಾ ರಫ್ತು ಮಾಡಲು ಬಿಡುವುದಿಲ್ಲವೆಂದು ಇರಾನ್ ಗುಡುಗಿದೆ.
ವಾರದ ದಿನಗಳಾದ ಬುಧವಾರ ಹಾಗೂ ಗುರುವಾರ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಾಂದರ್ಭಿಕವಾಗಿ ವಿದ್ಯುತ್ ವ್ಯತ್ಯಾಸ ಆಗಲಿದೆ.
ಟ್ರಂಪ್ ಬಗ್ಗೆ ಮೋದಿಗೇಕೆ ಇಷ್ಟೊಂದು ಭಯ ಎಂದು ಕೇಳಿದ ಸುಬ್ರಹ್ಮಣ್ಯನ್ ಸ್ವಾಮಿ
ಟ್ರಂಪ್ ಜೊತೆ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ನಾಯಕ
ಅಬುಧಾಬಿ ಕೈಗಾರಿಕಾ ಪ್ರದೇಶದ ಮೇಲೆ ಡ್ರೋನ್ ದಾಳಿ: ವರದಿ
ಅಬುಧಾಬಿ: ಮಂಗಳವಾರ ಅಬುಧಾಬಿಯ ರುವೈಸ್ ಕೈಗಾರಿಕಾ ವಲಯದ ಮೇಲೆ ಮಂಗಳವಾರ ಡ್ರೋನ್ ದಾಳಿ ನಡೆದ ಬಳಿಕ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರದೇಶದಲ್ಲಿ `ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್ಒಸಿ) ಸೌಲಭ್ಯಗಳಿದ್ದು ಇಲ್ಲಿ ದಿನಕ್ಕೆ 9,22,000 ಬ್ಯಾರೆಲ್ಗಳಷ್ಟು ತೈಲವನ್ನು ಸಂಸ್ಕರಿಸಬಹುದು. ಜೊತೆಗೆ ಹಲವಾರು ರಾಸಾಯನಿಕ, ರಸಗೊಬ್ಬರ ಮತ್ತು ಕೈಗಾರಿಕಾ ಅನಿಲ ಸ್ಥಾವರಗಳಿವೆ. ಈ ಮಧ್ಯೆ, ಮಂಗಳವಾರ ತನ್ನ ವಾಯುರಕ್ಷಣಾ ವ್ಯವಸ್ಥೆಯು 9 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು ಇದರಲ್ಲಿ 8ನ್ನು ಹೊಡೆದುರುಳಿಸಲಾಗಿದೆ. ಒಂದು ಕ್ಷಿಪಣಿ ಸಮುದ್ರದಲ್ಲಿ ಪತನಗೊಂಡಿದೆ ಎಂದು ಯುಎಇ ರಕ್ಷಣಾ ಇಲಾಖೆ ಹೇಳಿದೆ.
ಅಫ್ಘಾನ್ ಮೇಲಿನ ಪಾಕಿಸ್ತಾನದ ಗಡಿಯಾಚೆಗಿನ ದಾಳಿಗೆ ಭದ್ರತಾ ಮಂಡಳಿಯಲ್ಲಿ ಭಾರತದ ಖಂಡನೆ
ವಿಶ್ವಸಂಸ್ಥೆ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಬಲವಾಗಿ ಖಂಡಿಸಿದ್ದು ಪಾಕಿಸ್ತಾನ `ನಕಲಿ ಮುಸ್ಲಿಮ್ ಸಹೋದರತ್ವ'ದ ಬೂಟಾಟಿಕೆ ಪ್ರದರ್ಶಿಸಿದೆ ಎಂದು ಟೀಕಿಸಿದೆ. ಅಫ್ಘಾನಿಸ್ತಾನ ಕುರಿತು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ` ಪವಿತ್ರ ರಮಝಾನ್ ತಿಂಗಳಿನಲ್ಲಿ ನಿರ್ದಯವಾಗಿ ವಾಯುದಾಳಿಗಳನ್ನು ನಡೆಸುತ್ತಿರುವಾಗ, ಒಂದು ಕಡೆ ಅಂತಾರಾಷ್ಟ್ರೀಯ ಕಾನೂನು ಮತ್ತು ಇಸ್ಲಾಮಿಕ್ ಒಗ್ಗಟ್ಟಿನ ಉನ್ನತ ತತ್ವಗಳನ್ನು ಪ್ರತಿಪಾದಿಸುವುದು ಬೂಟಾಟಿಕೆಯಾಗಿದೆ' ಎಂದು ಟೀಕಿಸಿದರು. ಗಡಿಯಾಚೆಗಿನ ಹಿಂಸಾಚಾರದಿಂದ ಉಂಟಾದ ನಾಗರಿಕ ಸಾವು-ನೋವುಗಳ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಕಳವಳವನ್ನು ಪುನರುಚ್ಚರಿಸಿದ ಹರೀಶ್, ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ಚಾರ್ಟರ್(ಸನದು) ಮತ್ತು ದೇಶದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿರುವ ವಾಯುದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದರು. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಾಮೂಹಿಕ ಜಾಗತಿಕ ಕ್ರಮಕ್ಕೆ ಕರೆ ನೀಡಿದ ಅವರು, ಅಂತರರಾಷ್ಟ್ರೀಯ ಸಮುದಾಯದ ಸಂಘಟಿತ ಪ್ರಯತ್ನಗಳು ಮಾತ್ರ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವವರು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗುವುದಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ದುಬೈಯಲ್ಲಿ ಸಿಲುಕಿರುವ ಭಾರತೀಯರಿಗೆ ತನ್ನ ಅಪಾಟ್ರ್ಮೆಂಟ್ ನಲ್ಲಿ ಆಶ್ರಯ ಕಲ್ಪಿಸಿದ ಭಾರತೀಯ ಉದ್ಯಮಿ
ದುಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಪ್ರದೇಶದಲ್ಲಿನ ಅನಿಶ್ಚಿತತೆಯ ಮಧ್ಯೆ, ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು, ಪ್ರಯಾಣಿಸಲು ಅಸಾಧ್ಯವಾಗಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಪ್ರಜೆಗಳಿಗೆ ತನ್ನ ವಸತಿ ಕಟ್ಟಡದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿದ್ದಾರೆ. ಅಲ್ ಮಿಝಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೋಗೇಶ್ ದೋಷಿ 64 ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿರುವ ತನ್ನ ಸಂಪೂರ್ಣ ವಸತಿ ಕಟ್ಟಡವನ್ನು ನಗರದಲ್ಲಿ ಸಿಲುಕಿರುವ ಭಾರತೀಯರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ವಸತಿ ಸೌಕರ್ಯವನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಆಹಾರದಂತಹ ಮೂಲಭೂತ ಸೌಲಭ್ಯವನ್ನು ಒಳಗೊಂಡಿದೆ. ಯುಎಇಯಲ್ಲಿನ ʼಇಂಡಿಯನ್ ಪೀಪಲ್ಸ್ ಫೋರಂ' ಮತ್ತು ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಸಮನ್ವಯದಲ್ಲಿ ಈ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ದೋಷಿಯವರನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಇಸ್ರೇಲ್ ನ ಹೈಫಾ ತೈಲ ಸಂಸ್ಕರಣಾಗಾರ, ಟೆಲ್ ಅವೀವ್ ಸಮೀಪದ ಸಂವಹನ ಕೇಂದ್ರದ ಮೇಲೆ ದಾಳಿ: ಇರಾನ್
ಟೆಹ್ರಾನ್: ಇಸ್ರೇಲ್ ನಲ್ಲಿನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಈ ಕುರಿತು ಇರಾನ್ ನ ಖತಮ್ ಅಲ್-ಅನ್ಬಿಯಾ ಸಶಸ್ತ್ರ ಪಡೆಗಳ ಪ್ರಧಾನ ಕಚೇರಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ. ಉತ್ತರ ಇಸ್ರೇಲ್ ನ ಹೈಫಾದಲ್ಲಿರುವ ತೈಲ ಮತ್ತು ಅನಿಲ ಸಂಸ್ಕರಣಾಗಾರ ಹಾಗೂ ಇಂಧನ ಸಂಗ್ರಹ ಟ್ಯಾಂಕ್ ಗಳನ್ನು ಗುರಿಯಾಗಿಸಿ ಡ್ರೋನ್ ಗಳನ್ನು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಟೆಲ್ ಅವೀವ್ ಸಮೀಪದಲ್ಲಿರುವ ಉಪಗ್ರಹ ಸಂವಹನ ಕೇಂದ್ರವನ್ನೂ ಇರಾನ್ ಪಡೆಗಳು ನಾಶಪಡಿಸಿದ್ದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇರಾನ್ ನ ತೈಲ ಡಿಪೋಗಳನ್ನು ಗುರಿಯಾಗಿಸಿಕೊಂಡಿದ್ದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಇರಾನ್ ನಡೆಸಿದ ದಾಳಿಗಳ ‘33ನೇ ಅಲೆ’ ಸಮಯದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಇದಲ್ಲದೆ, ಉತ್ತರ ಇರಾಕ್ ನ ಕುರ್ದಿಶ್ ಪ್ರದೇಶದ ಹರಿರ್ ನೆಲೆಯಲ್ಲಿರುವ ಅಮೆರಿಕ ಸೇನೆಯ ಪ್ರಧಾನ ಕಚೇರಿಯ ಮೇಲೂ ಇರಾನ್ ಐದು ಕ್ಷಿಪಣಿಗಳನ್ನು ಹಾರಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಮೆರಿಕ, ಇಸ್ರೇಲ್-ಇರಾನ್ ಯುದ್ಧ ವಿರೋಧಿಸಿ ಧರಣಿ
ಬೆಂಗಳೂರು, ಮಾ.10: ಅಮೆರಿಕ, ಇಸ್ರೇಲ್ ಇರಾನ್ ಮೇಲಿನ ಆಕ್ರಮಣಕಾರಿ ಯುದ್ಧ ವಿರೋಧಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜನಪರ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಧರಣಿ ನಡೆಸಲಾಯಿತು. ಅಮೆರಿಕ, ಇಸ್ರೇಲ್ ಇರಾನ್ ಮೇಲಿನ ಕೂಡಲೇ ನಿಲ್ಲಿಸಬೇಕು. ಅಮಾಯಕ ಜೀವಗಳು ಉಳಿಯಲಿ, ಜಗತ್ತಿನಲ್ಲಿ ಸಂಕಟ ತಪ್ಪಲಿ, ಜಗತ್ತಿನಲ್ಲಿ ಶಾಂತಿಯನ್ನು ಮರು ಸ್ಥಾಪಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಭಾರತ ಸಾರ್ವಭೌಮ ದೇಶ ಯಾರದೇ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿ ಮಣಿಯಬಾರದು. ಇರಾನ್ ಮೇಲಿನ ಯುದ್ಧವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಬಾರದು. ಇದೇ ವೇಳೆ ಪ್ರತಿಭಟನಾನಿರತರು ಮೇಣದ ಬತ್ತಿ ಹಚ್ಚಿ, ಯುದ್ಧದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪ್ರೊ.ನಗರಗೆರೆ ರಮೇಶ್, ಸಿರಿಮನೆ ನಾಗರಾಜ್, ನಾಗೇಶ್, ಹನುಮೇಗೌಡ, ಶರತ್, ರವಿ ಮತ್ತಿತರರು ಹಾಜರಿದ್ದರು.
ಇರಾನ್ ಶಾಲೆಯ ದಾಳಿಯಲ್ಲಿ ಅಮೆರಿಕದ ಪಾತ್ರವನ್ನು ಒಪ್ಪಿಕೊಂಡ ರಿಪಬ್ಲಿಕನ್ ಸೆನೆಟರ್
ವಾಷಿಂಗ್ಟನ್: ಫೆಬ್ರವರಿ 28ರಂದು ಇರಾನ್ ನ ಮಿನಾಬ್ ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಪಾತ್ರವನ್ನು ರಿಪಬ್ಲಿಕನ್ ಸೆನೆಟರ್ ಜಾನ್ ಕೆನಡಿ ಒಪ್ಪಿಕೊಂಡಿದ್ದು ಇದೊಂದು ದೊಡ್ಡ ಪ್ರಮಾದ ಎಂದು ಹೇಳಿರುವುದಾಗಿ ವರದಿಯಾಗಿದೆ. ಇರಾನ್ ನ ಶಾಲೆಯ ಮೇಲಿನ ದಾಳಿಗೆ ಅಮೆರಿಕದ ಪಡೆಗಳು ಕಾರಣವೆಂದು ಅಮೆರಿಕದ ಮಿಲಿಟರಿ ತನಿಖಾಧಿಕಾರಿಗಳು ನಂಬಿದ್ದಾರೆ ಎಂದು ವರದಿಯಾಗಿತ್ತು. ʼಇದು ಭಯಾನಕವಾಗಿತ್ತು. ನಾವು ತಪ್ಪು ಮಾಡಿದೆವು. ರಶ್ಯದಂತಹ ಇತರ ರಾಷ್ಟ್ರಗಳು ಇಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತವೆ. ನಾವೆಂದೂ ಅದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ರಕ್ಷಣಾ ಸಚಿವಾಲಯ ಇದನ್ನು ತನಿಖೆ ನಡೆಸುತ್ತಿದೆ. ಕ್ಷಮಿಸಿ, ಅದು ಸಂಭವಿಸಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಇದು ತಪ್ಪು' ಎಂದು ಕೆನಡಿ ಹೇಳಿದ್ದಾರೆ.
ಹೊಸಪೇಟೆ | ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಹೊಸಪೇಟೆ : ಉದಾರವಾಗಿ ನೀಡಿ – ಮಹಿಳೆಯರಿಗೆ ಲಾಭ, ಸಮಾಜಕ್ಕೆ Give to Gain” ಎಂಬ ಆಶಯದೊಂದಿಗೆ ಡಾನ್ ಬಾಸ್ಕೋ ಸಂಸ್ಥೆ ಹಾಗೂ ತರುಣಿ ಮಹಿಳಾ ಅಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ನಗರದ ಡಾನ್ ಬಾಸ್ಕೋ ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಆರ್ ಪತ್ತಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾ.ರೋಶನ್ ವಹಿಸಿದ್ದರು. ಉದ್ಘಾಟನಾ ಭಾಷಣದಲ್ಲಿ ತ್ರಿವೇಣಿ ಆರ್ ಪತ್ತಾರ್ ಅವರು ಮಾತನಾಡಿ, ಮಹಿಳೆಯರು ಸಬಲೀಕರಣ ಹೊಂದಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು. ಹೆಣ್ಣುಮಕ್ಕಳಿಗೂ ಸಮಾನ ಹಕ್ಕುಗಳಿದ್ದು ಅವರಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಚಟ್ಲ ವೆಂಕಟೇಶ್ ಮಾತನಾಡಿ, ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಳೆಯಲು ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕು. ಉಳಿತಾಯದ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು. ಮುಖ್ಯ ಭಾಷಣಕಾರರಾದ ವಕೀಲರು ಹಾಗೂ ಸಮಾಜಸೇವಕಿ ಭಾಗ್ಯಲಕ್ಷ್ಮಿ ಭರದೆ ಮಾತನಾಡಿ, ಡಾನ್ ಬಾಸ್ಕೋ ಸಂಸ್ಥೆ ಕಳೆದ 30 ವರ್ಷಗಳಿಂದ ಮಹಿಳಾ ದಿನಾಚರಣೆ ಆಚರಿಸುತ್ತಾ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಸಮಾಜಸೇವಕಿ ರಶ್ಮಿ ರಾಜಶೇಖರ್ ಹಿಟ್ನಾಲ್ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಆಟೋ ಚಾಲನೆಯಿಂದ ವಿಮಾನ ಚಾಲನೆವರೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. ಮಹಿಳೆಯರಿಗೆ ಶಿಕ್ಷಣ ಬಹುಮುಖ್ಯವಾಗಿದ್ದು ಮಕ್ಕಳಿಗೆ ಹಬ್ಬ-ಹರಿದಿನಗಳ ಮಹತ್ವ ತಿಳಿಸಬೇಕು ಎಂದು ಹೇಳಿದರು. ಸಮಾಜಸೇವಕಿ ರೂಪಾ ಲಾಡ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸಮಾಜದಲ್ಲಿ ಹೊರಗೆ ಬರಲು ಅವಕಾಶ ಕಡಿಮೆ ಇತ್ತು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಸಾಧನೆಯ ಮೂಲಕ ಉನ್ನತ ಸ್ಥಾನಗಳನ್ನು ಗಳಿಸುತ್ತಿದ್ದಾರೆ ಎಂದು ಹೇಳಿದರು. ವಿಜಯನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಈಶ್ವರ್ ಸಿಂಗ್ ಮಾತನಾಡಿ, ಮಹಿಳೆ ಆಬಲೆಯಲ್ಲ ಸಬಲೆ ಎಂದು ಹೇಳಿದರು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ನೀಡುವುದು ತಪ್ಪು ಎಂದು ತಿಳಿಸಿ, ಮಕ್ಕಳ ಬೆಳವಣಿಗೆಯ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಾರ್ಯ ವಿಭಾಗದ ನಿರ್ದೇಶಕರಾದ ಫಾದರ್ ಫ್ರಾನ್ಸಿಸ್, ಡಾನ್ ಬಾಸ್ಕೋ ಐಸಿಐಸಿ ಶಾಲೆಯ ಪ್ರಿನ್ಸಿಪಲ್ ಫಾದರ್ ಸಜಿ ಜಾರ್ಜ್, ಸಂಸ್ಥೆಯ ಆಡಳಿತಾಧಿಕಾರಿ ಮೈಕಲ್ ಫಾದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಳ್ಳಾರಿ | ವಡ್ಡರಬಂಡೆ ಶಾದಿ ಮಹಲ್ ಕಾಮಗಾರಿ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ : ವಡ್ಡರಬಂಡೆ ಪ್ರದೇಶದಲ್ಲಿ ಶಾದಿ ಮಹಲ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಮಂಗಳವಾರ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಸೈಯದ್ ನಾಸಿರ್ ಹುಸೇನ್ ಅವರ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ನೆರವಿನಿಂದ ನಗರದಲ್ಲಿ ಎರಡು ಶಾದಿ ಮಹಲ್ ನಿರ್ಮಾಣಕ್ಕೆ ಈಗಾಗಲೇ ತೀರ್ಮಾನಿಸಲಾಗಿದೆ. ಇದರಿಂದ ಬಡ ಕುಟುಂಬಗಳ ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ನಗರದ ಮುಸ್ಲಿಂ ಸಮುದಾಯದ ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿತ್ತು. ಅದೇ ರೀತಿ ಈಗ ನಗರದ ಈದ್ಗಾ ಹಾಗೂ ಖಬರಸ್ತಾನದ ಸ್ವಚ್ಛತೆ, ರಕ್ಷಣೆ ಮತ್ತು ಹಸೀರೀಕರಣ ಕಾರ್ಯವನ್ನು ಯುವಕರು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಇದೇ ರೀತಿಯಲ್ಲಿ ನಗರದಲ್ಲಿನ ಜನವಸತಿ ಬಡಾವಣೆಗಳಲ್ಲೂ ಹಸೀರೀಕರಣ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಭೂಮಿ ಪೂಜೆಯ ನಂತರ “ಯೂತ್ ರೆವಲ್ಯೂಷನ್” ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆಯ ಸದಸ್ಯರಾದ ಎಂ.ಪ್ರಭಂಜನಕುಮಾರ್, ನಾಜು, ಆಸಿಫ್, ಕಾಂಗ್ರೆಸ್ ಮುಖಂಡರಾದ ಆಯಾಜ್ ಅಹ್ಮದ್, ದಾದಾಭಾಯ್, ಕಣೇಕಲ್ ಮೆಹಬೂಬಸಾಬ, ಹುಸೇನ್ ಪೀರಾ, ಯೂನುಸ್ ಭಾಯ್, ಮಹಮ್ಮದ್ ಭಾಯ್, ಉಸ್ಮಾನ್, ಅನ್ವರ್, ಅರ್ಷದ್, ಅತೀಕ್, ತೌಸೀಫ್, ಸಮೀರ್, ಅಫಾಕ್, ನೂರ್, ಫರಾಜ್, ತಬರೇಜ್ ಮತ್ತಿತರರು ಹಾಜರಿದ್ದರು.
ಇರಾನ್ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಕೆಲವು ದೇಶಗಳ ಮೇಲಿನ ತೈಲ ನಿರ್ಬಂಧ ತೆರವು: ಟ್ರಂಪ್
ವಾಷಿಂಗ್ಟನ್: ಇರಾನ್ನೊಂದಿಗಿನ ಯುದ್ದ ಕೊನೆಗೊಳ್ಳುವ ತನಕ ಅಮೆರಿಕವು ಕೆಲವು ರಾಷ್ಟ್ರಗಳ ತೈಲ ಮಾರಾಟದ ಮೇಲಿನ ನಿಷೇಧವನ್ನು ತೆರವುಗೊಳಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬೆಲೆಗಳನ್ನು ಕಡಿಮೆ ಮಾಡಲು ನಾವು ಕೆಲವು ತೈಲ ಸಂಬಂಧಿತ ನಿರ್ಬಂಧಗಳನ್ನು ಸಹ ಮನ್ನಾ ಮಾಡುತ್ತೇವೆ. ಕೆಲವು ದೇಶಗಳ ಮೇಲೆ ನಾವು ನಿರ್ಬಂಧ ಹೇರಿದ್ದೇವೆ. ಆದರೆ ಪರಿಸ್ಥಿತಿ ಸುಧಾರಿಸುವವರೆಗೆ ಈ ನಿರ್ಬಂಧವನ್ನು ತೆರವುಗೊಳಿಸುತ್ತೇವೆ. ಅಗತ್ಯ ಬಿದ್ದರೆ ಅಮೆರಿಕದ ನೌಕಾಪಡೆ ಮತ್ತು ಅದರ ಪಾಲುದಾರರು ಜಲಸಂಧಿಯ ಮೂಲಕ ಟ್ಯಾಂಕರ್ಗಳನ್ನು ಬೆಂಗಾವಲು ಮಾಡುತ್ತಾರೆ. ನಾವು ಇದನ್ನು ಮಾಡಿದರೆ ತೈಲ ಬೆಲೆಗಳು ಕಡಿಮೆಯಾಗುತ್ತದೆ ಎಂದು ನನಗೆ ತಿಳಿದಿದೆ. ಇರಾನ್ ಪರಮಾಣು ಕ್ಷಿಪಣಿ ಪಡೆಯಬಾರದು ಎಂಬ ಏಕೈಕ ಉದ್ದೇಶ ನಮ್ಮದಾಗಿದೆ. ದೀರ್ಘಾವಧಿಯಲ್ಲಿ ಇರಾನ್ ನ ಬೆದರಿಕೆಯಿಲ್ಲದೆ ತೈಲ ಸರಬರಾಜು ಸುರಕ್ಷಿತವಾಗಿರುತ್ತದೆ. ಈ ಬೆದರಿಕೆಯನ್ನು ಶಾಶ್ವತವಾಗಿ ಕೊನೆಗೊಳಿಸುತ್ತೇವೆ' ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
Shivam Dube: ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತ ತಂಡದ ಐತಿಹಾಸಿಕ ಜಯದ ನಂತರ, ಕ್ರೀಡಾಂಗಣದಲ್ಲಿ ಕಂಡುಬಂದ ದೃಶ್ಯಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಅಭಿಮಾನಿಗಳ ಮನಗೆದ್ದಿವೆ. ಈ ಪೈಕಿ, ಟೀಂ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ನ್ಯೂಜಿಲೆಂಡ್ ವಿರುದ್ಧದ
ವಿಜಯನಗರ | ಪ್ರವಾಸಿ ಮಾರ್ಗದರ್ಶಿಗಳು ಜಿಲ್ಲೆಯ ಸಂಸ್ಕೃತಿಯ ರಾಯಭಾರಿಗಳು: ಡಿಸಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ (ಹೊಸಪೇಟೆ): ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಅವರು ಜಿಲ್ಲೆಯ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ರಾಯಭಾರಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 87 ಪ್ರವಾಸಿ ಮಾರ್ಗದರ್ಶಿಗಳಿಗೆ ಶೂ ಮತ್ತು ಜಾಕೆಟ್ಗಳನ್ನು ವಿತರಿಸಿ ಅವರು ಮಾತನಾಡಿದರು. ಇಂದು ವಿತರಿಸಲಾದ ಸಮವಸ್ತ್ರಗಳು ಕೇವಲ ಸೌಲಭ್ಯವಲ್ಲ, ಮಾರ್ಗದರ್ಶಿಗಳ ವೃತ್ತಿಪರತೆಯ ಗುರುತಾಗಿದೆ. ಸಮವಸ್ತ್ರ ಧರಿಸುವುದರಿಂದ ಪ್ರವಾಸಿಗರಲ್ಲಿ ವಿಶ್ವಾಸ ಮೂಡುತ್ತದೆ ಹಾಗೂ ಸುರಕ್ಷಿತ ಭಾವನೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಅವರು ಸಲಹೆ ನೀಡಿದರು. ಪ್ರವಾಸೋದ್ಯಮ ಕ್ಷೇತ್ರ ದಿನೇ ದಿನೇ ಬೆಳೆಯುತ್ತಿದ್ದು, ಮಾರ್ಗದರ್ಶಿಗಳು ಕೇವಲ ಹಳೆಯ ಇತಿಹಾಸಕ್ಕೆ ಸೀಮಿತವಾಗದೆ ಜಿಲ್ಲೆಯ ಹೊಸ ಪ್ರವಾಸಿ ತಾಣಗಳ ಬಗ್ಗೆಯೂ ನಿಖರ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಹೊಂದಿರಬೇಕು. ಅವರ ಉತ್ತಮ ಮಾರ್ಗದರ್ಶನ ಹಾಗೂ ಜಿಲ್ಲೆಯ ಆತಿಥ್ಯದಿಂದ ಪ್ರಭಾವಿತರಾದ ಪ್ರವಾಸಿಗರು ಮತ್ತೆ ಭೇಟಿ ನೀಡುವಂತಾಗಬೇಕು. ಆಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮದ ನೈಜ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಐಪಿಎಲ್ 2026: ಮಾ.12ರಂದು ಮೊದಲ 20 ದಿನಗಳ ವೇಳಾಪಟ್ಟಿ ಪ್ರಕಟ
ಹೊಸದಿಲ್ಲಿ: ಮುಂಬರುವ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾರ್ಚ್ 12ರಂದು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 28ರಿಂದ ಮೇ 31ರ ತನಕ ನಡೆಯಲಿದೆ. ಈ ಹಿಂದೆ ಪಂದ್ಯಾವಳಿಯನ್ನು ಮಾರ್ಚ್ 26ರಿಂದ ಮೇ 30ರ ತನಕ ಆಯೋಜಿಸಲು ಯೋಜಿಸಲಾಗಿತ್ತು. ಇದೀಗ ದಿನಾಂಕದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಲಾಗಿದೆ. ‘‘ನಾವು ಮಾರ್ಚ್ 12ರಂದು 2026ರ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೆವು. ಇದೀಗ ನಾವು ಮೊದಲ 20 ದಿನಗಳ ಐಪಿಎಲ್ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಿದ್ದೇವೆ’’ ಎಂದು ಸೈಕಿಯಾ ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡು ವಿಧಾನಸಭೆ ಚುನಾವಣೆಯ ದಿನಾಂಕದೊಂದಿಗಿನ ಘರ್ಷಣೆಯನ್ನು ತಪ್ಪಿಸಲು ಉದ್ದೇಶಿಸಿರುವ ಬಿಸಿಸಿಐ, ಪಂದ್ಯಾವಳಿಯ ಉಳಿದ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲು ನಿರ್ಧರಿಸಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲೇ ಐಪಿಎಲ್ ತಂಡಗಳು ಈಗಾಗಲೇ ಹೊಸ ಋತುವಿಗೆ ತಮ್ಮ ಸಿದ್ಧತೆಯನ್ನು ಆರಂಭಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 1ರಂದು ನವಲೂರ್ನ ಉನ್ನತ-ಪ್ರದರ್ಶನ ಕೇಂದ್ರದಲ್ಲಿ ತರಬೇತಿ ಆರಂಭಿಸಿದೆ. ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಎಂ.ಎಸ್. ಧೋನಿ ಇದರಲ್ಲಿ ಭಾಗಿಯಾಗಿದ್ದಾರೆ. ಹಾಲಿ ಚಾಂಪಿಯನ್ RCB ಫೆ.10ರಂದು ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಕಿರು ತರಬೇತಿ ಶಿಬಿರವನ್ನು ಆಯೋಜಿಸಿದೆ. ಇದೇ ವೇಳೆ, 2022ರ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮಿರಾಜ್ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಎರಡು ಬಾರಿ ಅಭ್ಯಾಸ ನಡೆಸಿದೆ. ಪಂಜಾಬ್ ಕಿಂಗ್ಸ್ ತಂಡವು ಅಬುಧಾಬಿಯಲ್ಲಿ ಫೆಬ್ರವರಿಯಲ್ಲಿ ತರಬೇತಿ ನಡೆಸಿದೆ. ಇದೀಗ ಧರ್ಮಶಾಲಾದಲ್ಲಿ ಶಿಬಿರ ಆಯೋಜಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ದೇಶೀಯ ಅಟಗಾರರೊಂದಿಗೆ ಮಾರ್ಚ್ 1ರಂದು ತನ್ನ ಶಿಬಿರವನ್ನು ಆರಂಭಿಸಿದೆ. ಮುಂಬೈ ಇಂಡಿಯನ್ಸ್ ತಂಡ ಕೂಡ ತನ್ನ ತಯಾರಿ ಆರಂಭಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಮಾ.15ರಂದು ಜೈಪುರದಲ್ಲಿ ತನ್ನ ತರಬೇತಿ ಶಿಬಿರ ಆರಂಭಿಸುವ ನಿರೀಕ್ಷೆ ಇದೆ. ಕೋಲ್ಕತಾ ತಂಡವು ಮಾ.18ರಂದು ತನ್ನ ಪೂರ್ವತಯಾರಿ ಶಿಬಿರ ಆರಂಭಿಸಲಿದೆ.
ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಅರ್ಷದೀಪ್ ಸಿಂಗ್ ಗೆ ದಂಡ
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ರವಿವಾರ ನಡೆದ ಐಸಿಸಿ ಪುರುಷರ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನೀತಿ ಸಂಹಿತೆಯ ಲೆವೆಲ್-1ನ್ನು ಉಲ್ಲಂಘಿಸಿರುವ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಗೆ ಪಂದ್ಯದ ಶುಲ್ಕದಲ್ಲಿ ಶೇ.15ರಷ್ಟು ದಂಡ ವಿಧಿಸಲಾಗಿದೆ. ಅಂತರ್ರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಸನಿಹಕ್ಕೆ ಚೆಂಡನ್ನು( ಅಥವಾ ಇತರ ಯಾವುದೆ ಕ್ರಿಕೆಟ್ ಸಲಕರಣೆಯನ್ನು)ಅಸಮರ್ಪಕವಾಗಿ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆದಿರುವುದಕ್ಕೆ ಸಂಬಂಧಿಸಿದ ಆಟಗಾರರ ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.9 ಅನ್ನು ಅರ್ಷದೀಪ್ ಸಿಂಗ್ ಉಲ್ಲಂಘಿಸಿರುವುದು ಕಂಡುಬಂದಿದೆ. ಅರ್ಷದೀಪ್ ಗೆ ದಂಡ ವಿಧಿಸಿದ್ದಲ್ಲದೆ, ಅವರ ಅಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿನ ಮೊದಲ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ನ್ಯೂಝಿಲ್ಯಾಂಡ್ ತಂಡದ ಇನಿಂಗ್ಸ್ ನ 11ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಅರ್ಷದೀಪ್ ಅವರು ಫೀಲ್ಡಿಂಗ್ ವೇಳೆ ಚೆಂಡನ್ನು ಸ್ಟ್ರೈಕ್ನಲ್ಲಿದ್ದ ಡ್ಯಾರಿಲ್ ಮಿಚೆಲ್ ಪ್ಯಾಡ್ಗೆ ಸಿಟ್ಟಿನಿಂದ ಜೋರಾಗಿ ಎಸೆದಿದ್ದರು. ಅರ್ಷದೀಪ್ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಪ್ರಸ್ತಾವಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದು, ಯಾವುದೇ ಅಧಿಕೃತ ವಿಚಾರಣೆ ಇರುವುದಿಲ್ಲ.
ಯಾದಗಿರಿ | ಯುಪಿಎಸ್ಸಿ ಸಾಧಕ ಸಂದೀಪ್ ಬಾಡದ್ಗೆ ಸನ್ಮಾನ
ಯಾದಗಿರಿ: ನಾಗರಿಕ ಸೇವಾ ಪರೀಕ್ಷೆಯಾದ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ ಸಂದೀಪ್ ಬಡಾದ್ ಅವರನ್ನು ಬಿಜೆಪಿ ಹಿರಿಯ ಮುಖಂಡ ರಾಚನ್ನಗೌಡ ಮುದ್ನಾಳ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಚಣ್ಣಗೌಡ ಮುದ್ನಾಳ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಂದೀಪ್ ಬಾಡದ್ ಅಪಾರ ಪರಿಶ್ರಮದಿಂದ ಅಧ್ಯಯನ ಮಾಡಿದ್ದಾರೆ. ಅವರ ಸಾಧನೆಯಿಂದ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇಂತಹ ಸಾಧಕರನ್ನು ನೋಡಿ ಜಿಲ್ಲೆಯ ಯುವಕರು ಪ್ರೇರಣೆ ಪಡೆದು ಮುಂದಕ್ಕೆ ಬರಬೇಕು ಎಂದು ಹೇಳಿದರು. ಯಾದಗಿರಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಹೇಳಲಾಗುತ್ತದೆ. ಆದರೆ ಸಂದೀಪ್ ಬಾಡದ್ ಅವರಂತಹ ಪ್ರತಿಭೆಗಳು ಆ ಮಾತು ತಪ್ಪು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಜಿಲ್ಲೆಯ ಯುವಕರಿಗೆ ಅವರು ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಭೀಮಣ್ಣಗೌಡ ಕ್ಯಾತನಾಳ, ಡಾ.ಸುಪುತ್ರರೆಡ್ಡಿ, ವೆಂಕಟರಡ್ಡಿ ತಂಗಡಗಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸುರಪುರ | ಕ್ಷೇತ್ರದ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಗಮನ ಸೆಳೆದ ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ: ಬಜೆಟ್ ಅಧಿವೇಶನದಲ್ಲಿ ಕ್ಷೇತ್ರದ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಅವರು ಮುಖ್ಯವಾಗಿ ಸುರಪುರ ವಿಧಾನಸಭಾ ಕ್ಷೇತ್ರದ ರಸ್ತೆಗಳ ಸಮಸ್ಯೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಚುಕ್ಕಿ ಗುರುತಿನ ಪ್ರಶ್ನೆ ಕೇಳಿದರು. ಅಂತರ ಜಿಲ್ಲಾ ಸಂಪರ್ಕ ರಸ್ತೆಗಳ ಸ್ಥಿತಿ ಹಾಗೂ ಅವುಗಳ ದುರಸ್ತಿ ಕಾರ್ಯದ ಕುರಿತು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸಚಿವರು ಲಿಖಿತ ಉತ್ತರ ನೀಡಿ, ವಿವಿಧ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕಿಲೋಮೀಟರ್ಗಳ ಅಂಕಿ–ಅಂಶಗಳೊಂದಿಗೆ ವಿವರ ನೀಡಿದ್ದಾರೆ. ಇದಲ್ಲದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಕೂಡ ಪ್ರಶ್ನೆ ಕೇಳಿದ ಶಾಸಕರು, ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳ ಕೊರತೆ ಇರುವುದನ್ನು ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗಿರುವ ಎರಡು ವಸತಿ ನಿಲಯಗಳ ಜೊತೆಗೆ ಹೊಸ ವಸತಿ ನಿಲಯ ಆರಂಭಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಯ ವಿಷಯಕ್ಕೂ ಸಂಬಂಧಿಸಿ ಉಪನ್ಯಾಯಾಧಿಕಾರಿಗಳ ಕಚೇರಿಯ ಸಮಸ್ಯೆಗಳ ಕುರಿತು ಶಾಸಕರು ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರ ಗಮನ ಸೆಳೆಯಲು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ನಿರಂತರವಾಗಿ ಪ್ರಯತ್ನಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಚ್ಚಿಲ: ಅಬ್ದುಲ್ ರಝಾಕ್ YSಗೆ 'ಪರ್ಸನಾಲಿಟಿ ಆಫ್ ದಿ ಈಯರ್-2026' ಪ್ರಶಸ್ತಿ ಪ್ರದಾನ
ಉಚ್ಚಿಲ: ತವಕ್ಕಲ್ ಓವರ್ಸಿಸ್ ಹಾಗು ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷ ರಮಝಾನ್ ಸಂದರ್ಭ ನೀಡಲಾಗುವ 'ಪರ್ಸನಾಲಿಟಿ ಆಫ್ ದಿ ಈಯರ್-2026 (ವರ್ಷದ ಶ್ರೇಷ್ಠ ವ್ಯಕ್ತಿ)' ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ ಉಚ್ಚಿಲದ ಅಬ್ದುಲ್ ರಝಾಕ್ YS ಅವರಿಗೆ ನೀಡಿ ಗೌರವಿಸಲಾಯಿತು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ, ಜನರ ಕಷ್ಟಕ್ಕೆ ತಕ್ಷಣ ಸ್ಪಂದನೆ ಮಾಡುವಂತ ವ್ಯಕ್ತಿತ್ವದ ವರಾಗಿರುವ ಅಬ್ದುಲ್ ರಝಾಕ್, ತವಕ್ಕಲ್ ಓವರ್ಸಿಸ್ ನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ದುಬೈಯಲ್ಲಿ ಹಲವಾರು ವರ್ಷಗಳ ಕಾಲ 'ತವಕ್ಕಲ್ ಓವರ್ಸಿಸ್ ದುಬೈ'ನಲ್ಲಿ ಸೇವೆ ಸಲ್ಲಿಸಿ, ಬಳಿಕ ತಾಯಿನಾಡಿಗೆ ತೆರಳಿ, ಅಲ್ಲಿಯೂ ಸಮುದಾಯ ಹಾಗು ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅಬ್ದುಲ್ ರಝಾಕ್ ಅವರ ಸೇವೆಯನ್ನು ಗುರುತಿಸಿ ಸೋಮವಾರ ಉಚ್ಚಿಲದ ತವಕ್ಕಲ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ 'ಪರ್ಸನಾಲಿಟಿ ಆಫ್ ದಿ ಈಯರ್-2026' ಪ್ರಶಸ್ತಿ ನೀಡಲಾಯಿತು. 'Personality of the Year ' ಪ್ರಶಸ್ತಿಯನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕರಿಗೆ ನೀಡಲಾಗು ತ್ತಿದ್ದು, ಪ್ರಶಸ್ತಿ ಘೋಷಣೆಗೂ ಮೊದಲು ವಯಸ್ಸನ್ನು(ಪುರುಷ ಅಥವಾ ಮಹಿಳೆ) ಪರಿಗಣಿಸದೆ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ನಾಮನಿರ್ದೇಶನ ಮಾಡಿ, ಬಳಿಕ ಸದಸ್ಯರ ಸಭೆಯಲ್ಲಿ ಮತದಾನದ ಮೂಲಕ ಆಯ್ಕೆ ಮಾಡಲಾಗು ತ್ತದೆ. ಪ್ರಶಸ್ತಿ ವಿಜೇತರಿಗೆ ಸನ್ಮಾನ ಜೊತೆಗೆ 25,000 ರೂ. ನಗದು ಬಹುಮಾನ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನದ ವೇಳೆ ಉಚ್ಚಿಲ ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಹರ್ಷ್ ಇಬ್ರಾಹಿಂ, ಗೌರವಾಧ್ಯಕ್ಷ ಉಸ್ಮಾನ್ ಕಟ್ಟಿಂಗೇರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕುಚ್ಚಿಕಾಡ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಶಾಬಾನ್ ಮೊಯಿದಿನ್, ಕೋಶಾಧಿಕಾರಿ ಅಹ್ಮದ್ ಗುಲಾಮ್, ತವಕ್ಕಲ್ ಓವರ್ಸಿಸ್ ಗೌರವಾಧ್ಯಕ್ಷ ಮೊಹಮ್ಮದ್ ದಾವೂದ್, ಸದಸ್ಯ ಇಬ್ರಾಹಿಂ ದಾವೂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಶ್ಚಿಮ ಏಶ್ಯ ಬಿಕ್ಕಟ್ಟು | ವಿಮಾನ ಪ್ರಯಾಣ ದರಕ್ಕೆ ಸರ್ಚಾರ್ಜ್ ವಿಧಿಸಲು ಏರ್ ಇಂಡಿಯಾ ನಿರ್ಧಾರ
ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ (ಎಟಿಎಫ್)ದ ದರದಲ್ಲಿ ಭಾರೀ ಏರಿಕೆಯಾಗಿರುವುದರಿಂದ ತನ್ನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣದ ಮೇಲೆ ಇಂಧನ ಮೇಲ್ತೆರಿಗೆ (ಸರ್ಚಾರ್ಜ್)ಯನ್ನು ವಿಧಿಸುವುದಾಗಿ ಏರ್ ಇಂಡಿಯಾ ಮಂಗಳವಾರ ತಿಳಿಸಿದೆ. ಮಾರ್ಚ್ 2026ರ ಆರಂಭದಲ್ಲಿ ಪಶ್ಚಿಮ ಏಶ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿದ ಬಳಿಕ ತೈಲ ಪೂರೈಕೆಗೆ ಅಡಚಣೆಯಾಗುತ್ತಿದ್ದು, ತೈಲ ದರ ಭಾರೀ ಏರಿಕೆ ಕಂಡಿದೆ. ಪರಿಷ್ಕೃತ ಮೇಲ್ತೆರಿಗೆಯನ್ನು ತನ್ನ ವಿವಿಧ ವಿಮಾನಯಾನ ಮಾರ್ಗ ಜಾಲಗಳಿಗೆ ಮೂರು ಹಂತಗಳಲ್ಲಿ ಜಾರಿಗೆ ತರುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಯಾದಗಿರಿ | ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ : ಮುದ್ನಾಳ್
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಣೆ
ವಾಷಿಂಗ್ಟನ್: ಸೌತ್ವೆಸ್ಟ್ ಏರ್ಲೈನ್ಸ್ನ ವಿಮಾನದಲ್ಲಿದ್ದ ಪ್ರಯಾಣಿಕನ ಫೋನ್ ನಲ್ಲಿ ಆಝಾನ್ ಅಲರಾಂ ಆಗಿದ್ದನ್ನು ‘ಬಾಂಬ್ ಬೆದರಿಕೆ’ ಎಂದು ತಪ್ಪಾಗಿ ಅರ್ಥೈಸಿದ ಪರಿಣಾಮ, ಆತನನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಫ್ಲೋರಿಡಾಕ್ಕೆ ತೆರಳುತ್ತಿದ್ದ ವಿಮಾನವನ್ನು ಈ ಘಟನೆಯ ಬಳಿಕ ಜಾರ್ಜಿಯಾ ರಾಜ್ಯದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಕೆಲ ಪ್ರಯಾಣಿಕರು ಆ ವ್ಯಕ್ತಿಯ ಫೋನ್ ಅಲರಾಂ ಅನ್ನು ತಪ್ಪಾಗಿ ಗ್ರಹಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು. ವಿಮಾನವನ್ನು ಭೂಸ್ಪರ್ಶ ಮಾಡಿಸಿದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯಾವುದೇ ರೀತಿಯ ಬೆದರಿಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಈ ಘಟನೆ ಸಂಪೂರ್ಣವಾಗಿ ‘ತಪ್ಪು ಗ್ರಹಿಕೆ’ಯಿಂದ ಸಂಭವಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. A passenger on a Southwest Airlines flight was removed after their call to prayer was mistaken for a bomb threat. Officials later called it a “misunderstanding” after the Florida-bound plane made an emergency landing in Georgia. pic.twitter.com/VdDqLM1GfU — Al Jazeera English (@AJEnglish) March 10, 2026
ಅಂಗಾಂಗ ಕಸಿ | 2025ರಲ್ಲಿ 217 ನೋಂದಾಯಿತ ಆಸ್ಪತ್ರೆಗಳು ಎನ್ಆರ್ಪಿಗೆ ದತ್ತಾಂಶ ವರದಿ ಮಾಡಲು ವಿಫಲ
ಹೊಸದಿಲ್ಲಿ: ಅಂಗಾಂಗ ಕಸಿ ಮಾಡುತ್ತಿರುವ ಒಟ್ಟು 804 ನೋಂದಾಯಿತ ಆಸ್ಪತ್ರೆಗಳಲ್ಲಿ 217 ಆಸ್ಪತ್ರೆಗಳು 2025ರಲ್ಲಿ ರಾಷ್ಟ್ರೀಯ ನೋಂದಣಿ ಪೋರ್ಟಲ್ (ಎನ್ಆರ್ಪಿ)ನಲ್ಲಿ ದತ್ತಾಂಶವನ್ನು ವರದಿ ಮಾಡಲು ವಿಫಲವಾಗಿವೆ. ಈ ಆಸ್ಪತ್ರೆಗಳ ವಿರುದ್ಧ ಆಯಾ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಲಿವೆ ಎಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಪ್ರತಾಪ್ರಾವ್ ಜಾಧವ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ. ಅಂಗಾಂಗ ಕಸಿ ನಡೆಸಲು ಆಸ್ಪತ್ರೆಗಳ ನೋಂದಣಿಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸೂಕ್ತ ಪ್ರಾಧಿಕಾರ ಮಾಡುತ್ತದೆ ಎಂದು ಜಾಧವ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು. ಮಾನವ ಅಂಗಾಂಗ ಹಾಗೂ ಅಂಗಾಂಶ ಕಸಿ ಕಾಯ್ದೆ, 1984 ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ ಅಂತಹ ಆಸ್ಪತ್ರೆಗಳ ವಿರುದ್ಧ ನಿಯಂತ್ರಣ ಕ್ರಮಗಳನ್ನು ರಾಜ್ಯ ಸರಕಾರಗಳು ತೆಗೆದುಕೊಳ್ಳುತ್ತದೆ ಎಂದು ಜಾಧವ್ ಹೇಳಿದ್ದಾರೆ. ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ನೋಂದಣಿ ಪೋರ್ಟಲ್ 2015ರಿಂದ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆಯ ವೆಬ್ಸೈಟ್ ಮೂಲಕ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ಸೇರಿದಂತೆ ಅಧಿಕೃತ ಬಳಕೆದಾರರಿಗೆ ಇದು ಲಭ್ಯವಾಗುತ್ತದೆ. 2026 ಮಾರ್ಚ್ 3ರ ವರೆಗೆ ಆಸ್ಪತ್ರೆಗಳು ಹಾಗೂ ಕಸಿ ಕೇಂದ್ರಗಳು ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಸ್ಥೆಯ ರಾಷ್ಟ್ರೀಯ ನೋಂದಣಿ ಪೋರ್ಟಲ್ ನಲ್ಲಿ ವರದಿ ಮಾಡಿದ ದತ್ತಾಂಶದ ಪ್ರಕಾರ ದೇಶದಲ್ಲಿ 89,839 ಜನರು ಪ್ರಮುಖ ಅಂಗಾಂಶ ಕೃಷಿಗಾಗಿ ಕಾಯುವವರ ಪಟ್ಟಿಯಲ್ಲಿ ಇದ್ದಾರೆ. 2025ರಲ್ಲಿ ದೇಶದಲ್ಲಿ 20,019 ಅಂಗಾಂಶ ಕಸಿ ಮಾಡಲಾಗಿದೆ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು.
ಗುರುಮಠಕಲ್ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ಬೃಹತ್ ಪ್ರತಿಭಟನೆ
ಗುರುಮಠಕಲ್: ನ್ಯಾಯಬದ್ಧ ಹಾಗೂ ಸಂವಿಧಾನಾತ್ಮಕ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಮಾದಿಗ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಮತ್ತು ಸದಸ್ಯರು ಸೇರಿ ಘೋಷಣೆಗಳೊಂದಿಗೆ ಜಾಥಾ ನಡೆಸಿದರು. ಬಳಿಕ ಬಸವೇಶ್ವರ ವೃತ್ತದ ಬಳಿ ರಸ್ತೆ ಹಾಗೂ ಹೈದರಾಬಾದ್ ಮುಖ್ಯ ರಸ್ತೆಯನ್ನು ಕೆಲಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕೆ. ಬಿ. ವಾಸು, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ದೇವದಾಸ್ ಮಾತನಾಡಿ, ರಾಜ್ಯ ಸರ್ಕಾರ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸ್ವಾಗತಾರ್ಹ. ಆದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಮತ್ತು ಬಡ್ತಿ ಮೀಸಲಾತಿಯನ್ನು ಸರ್ಕಾರಿ ನೌಕರರಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೂವತ್ತು ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು, ಸರ್ಕಾರ ನಮ್ಮ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಒಳಮೀಸಲಾತಿ ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು ಆಶಾನ್ನ ಬುದ್ಧ ಪುರಸಭೆ ಮಾಜಿ ಸದಸ್ಯರು. ಭೀಮಶಪ್ಪ ಗುಡಸೆ ಪುರಸಭೆ ಮಾಜಿ ಅಧ್ಯಕ್ಷ ಹನುಮಂತು ಶನಿವಾರಮ್ ಅಶೋಕ್ ಶನಿವಾರಮ್ kdss ಅಧ್ಯಕ್ಷ. ರವಿ ಬುರನೋಳ್ ಮಾದಿಗ ದಂಡೋರ ತಾಲೂಕು ಅಧ್ಯಕ್ಷ. ಭೀಮಶಪ್ಪ ಕೆಳಮನಿ ಮಾಣಿಕ್ ಮುಕ್ಕಿಡಿ ಡಾ. ಕೃಷ್ಣ ಚೇಪೆಟ್ಲಾ ಕಿಷ್ಟಪ್ಪ ಸೈಪೋಳ ಮಲ್ಲಿಕಾರ್ಜುನ ಸೈದಪೋಳ ಕರಣಪ್ಪ ಎಂ ಟಿ ಪಲ್ಲಿ ನಾಗೇಶ್ ಚಂಡರಿಕಿ ಗುಂಡೆಸ ಗಜಾರಕೋಟ ಇನ್ನು ಅನೇಕ ಮಾದಿಗ ಸಮಾಜದ ಮುಖಂಡರು ಮತ್ತು ಹೋರಾಟಗಾರರು ಭಾಗಿಯಾಗಿದ್ದರು
LPG ಪೂರೈಕೆ, ವಿತರಣೆಗೆ ಕೇಂದ್ರ ಸರಕಾರದ ನಿಯಂತ್ರಣ; ಮನೆ,ವಾಹನಗಳಿಗೆ LPG ಪೂರೈಕೆ ಶೇ.100ರಷ್ಟು ಗ್ಯಾರಂಟಿ
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಸಾಗಾಟದಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅವುಗಳ ಪೂರೈಕೆ ಹಾಗೂ ವಿತರಣೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲವು ಅಬಾಧಿತವಾಗಿ ದೊರೆಯುವುದನ್ನು ಖಾತರಿಪಡಿಸಲು ಅತ್ಯವಶ್ಯಕ ಸಾಮಾಗ್ರಿಗಳ ಕಾಯ್ದೆಯ ನಿಯಮಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಈ ಬಗ್ಗೆ ಆದೇಶವೊಂದನ್ನು ಹೊರಡಿಸಿದ್ದು, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ದ್ರವೀಕೃತ ನೈಸರ್ಗಿಕ ಇಂಧನದ ಸಾಗಾಟದ ಮೇಲೆ ಪರಿಣಾಮವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ನೈಸರ್ಗಿಕ ಅನಿಲವನ್ನು ಮನೆ, ಆಸ್ಪತ್ರೆ ಮತ್ತಿತರ ಅತ್ಯವಶ್ಯಕ ವಲಯಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ. ನೂತನ ರಾಷ್ಟ್ರೀಯ ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ 2026ರ ಪ್ರಕಾರ ಮನೆಬಳಕೆಯ ಅಡುಗೆ ಅನಿಲ, ಸಾರಿಗೆಗೆ ಬಳಸಲಾಗುವ ಸಿಎನ್ಜಿ, ಎಲ್ಪಿಜಿ ಉತ್ಪಾದನೆ ಹಾಗೂ ಅತ್ಯಗತ್ಯ ಕೊಳವೆಮಾರ್ಗಗಳ ನಿರ್ವಹಣೆಗಾಗಿ ನೈಸರ್ಗಿಕ ಅನಿಲದ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಈ ಆದ್ಯತಾ ವಲಯಗಳಿಗೆ ಅವುಗಳ ಅವಶ್ಯಕತೆಯ ಶೇ.100ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುತ್ತದೆ. ರಸಗೊಬ್ಬರ ಕಾರ್ಖಾನೆಗಳನ್ನು ದ್ವಿತೀಯ ಆದ್ಯತಾ ವಲಯವಾಗಿ ಪರಿಗಣಿಸಲಾಗಿದ್ದು, ಅವುಗಳಿಗೆ ಸರಾಸರಿ ಅಗತ್ಯದ ಶೇ.70ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುವುದು. ಕೈಗಾರಿಕಾ ವಲಯದ ಗ್ರಾಹಕರು ಸರಾಸರಿ ಅವಶ್ಯಕತೆಯ ಶೇ.80ರಷ್ಟು ಅಡುಗೆ ಅನಿಲವನ್ನು ಪಡೆಯಲಿದ್ದಾರೆ. ಈ ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲವು ನಿಯಮಿತ ಪೂರೈಕೆಯನ್ನು ಕಾಪಾಡಿಕೊಳ್ಳಲು, ಪೆಟ್ರೋಕೆಮಿಕಲ್ ಕಾರ್ಖಾನೆಗಳು ಹಾಗೂ ನಿರ್ದಿಷ್ಟ ವಿದ್ಯುತ್ ಸ್ಥಾವರಗಳು ಸೇರಿದಂತೆ ಕೆಳ ಆದ್ಯತಾ ವಲಯದ ಬಳಕೆದಾರರಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲವನ್ನು ತಿರುಗಿಸಲಾಗುವುದು.
ಬೆಂಗಳೂರಿನಲ್ಲಿ ಕಂಬಳ ಪ್ರದರ್ಶನಕ್ಕೆ ಹಸಿರು ನಿಶಾನೆ: ಪೇಟಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
Supreme Court On Bengaluru Kambala- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕ್ರೀಡೆ ನಡೆಸುವುದನ್ನು ಪ್ರಶ್ನಿಸಿ 'ಪೇಟಾ' ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಕರಾವಳಿಯ ಈ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಾಜ್ಯದ ಇತರ ಭಾಗದ ಜನರಿಗೂ ಪರಿಚಯಿಸುವುದರಲ್ಲಿ ತಪ್ಪೇನಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪಿನಿಂದಾಗಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಇದ್ದ ಕಾನೂನು ಅಡ್ಡಿ ಇದೀಗ ನಿವಾರಣೆಯಾದಂತಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಾಯಿದೆಯ ಮೂಲಕ ತಡೆಗಟ್ಟಬಹುದೇ ಹೊರತು, ಕ್ರೀಡೆಯನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅಡುಗೆ ಅನಿಲ ಪೂರೈಕೆಯಲ್ಲಿ ಅಡಚಣೆ: ಐಪಿಎಲ್ ಮೇಲೂ ಪರಿಣಾಮ!
ಮುಂಬೈ: ಇನ್ನೆರಡು ವಾರಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದ್ದು, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಗಳ ಪೂರೈಕೆಯಲ್ಲಿ ಆಗಿರುವ ಅಡಚಣೆಯು ದೊಡ್ಡ ಸವಾಲಾಗಿದೆ. ಅಡುಗೆ ಅನಿಲ ಸಿಲಿಂಡರ್ಗಳ ಅನುಪಸ್ಥಿತಿಯಲ್ಲಿ ರೆಸ್ಟೋರೆಂಟ್ ಗಳು, ಹೊಟೇಲ್ ಗಳು ಮತ್ತು ಆಹಾರ ಉದ್ಯಮಗಳು ಮುಚ್ಚುವುದರಿಂದ ಐಪಿಎಲ್ ನಡೆಸುವುದು ಕಷ್ಟಕರವಾಗುತ್ತದೆ. ಹಾಗಾಗಿ, ಈ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಅಗತ್ಯ ಬಿದ್ದರೆ ಪರ್ಯಾಯ ಕ್ರಮಗಳನ್ನು ಅನ್ವೇಷಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಐಪಿಎಲ್ ಮಾರ್ಚ್ 28ರಂದು ಆರಂಭಗೊಳ್ಳಲು ನಿಗದಿಯಾಗಿದೆ. ಫೈನಲ್ ಪಂದ್ಯವು ಮೇ 31ರಂದು ನಡೆಯಲಿದೆ. ‘‘ಪರಿಸ್ಥಿತಿಯು ನಿರಂತರವಾಗಿ ಬದಲಾಗುತ್ತಿದೆ. ಮಾರ್ಚ್ 28ರ ವೇಳೆಗೆ ಪರಿಸ್ಥಿತಿಯು ನಿಯಂತ್ರಣಕ್ಕೆ ಬರಲಿದೆ ಎಂದು ನಾವು ಆಶಿಸುತ್ತೇವೆ. ಆದರೆ, ಇದು ಹೀಗೆಯೇ ಮುಂದುವರಿದರೆ ಬೇರೆ ಆಯ್ಕೆಗಳತ್ತ ನೋಡಬೇಕಾಗುತ್ತದೆ. ಯಾಕೆಂದರೆ ಇದು ತಂಡಗಳು ಮತ್ತು ಆಟಗಾರರ ಮೇಲೆ ಮಾತ್ರವಲ್ಲ, ಪ್ರೇಕ್ಷಕರ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಈ ವಿಷಯದ ಮೇಲೆ ನಾವು ನಿಕಟ ಗಮನ ಇಟ್ಟಿದ್ದೇವೆ’’ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ‘ಸ್ಪೋರ್ಟ್ಸ್ ಸ್ಟಾರ್’ಗೆ ತಿಳಿಸಿದರು. ತಮ್ಮಲ್ಲಿ ಒಂದು ಅಥವಾ ಎರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಅಡುಗೆ ಅನಿಲವಿದೆ ಎಂದು ಬೆಂಗಳೂರಿನಲ್ಲಿ ಹೊಟೇಲ್ ಮಾಲೀಕರ ಸಂಘ ಹೇಳಿದೆ. ಮುಂಬೈಯಲ್ಲಿ, ಅಡುಗೆ ಅನಿಲ ಕೊರತೆಯಿಂದಾಗಿ ಈಗಾಗಲೇ 20 ಶೇಕಡ ಹೊಟೇಲ್ ಗಳು ಮತ್ತು ರೆಸ್ಟೋರೆಂಟ್ ಗಳು ಮುಚ್ಚಿವೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸುತ್ತಿರುವ ಜಂಟಿ ದಾಳಿಯಿಂದಾಗಿ ಪಶ್ಚಿಮ ಏಶ್ಯದಿಂದ ಬರುವ ತೈಲ ನಿಂತುಹೋಗಿದೆ.
Hubballi | ವಿಶ್ವ ಶಾಂತಿಗಾಗಿ ತಕ್ಷಣವೇ ಯುದ್ಧ ನಿಲ್ಲಿಸಲು ಆಗ್ರಹ; ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಧರಣಿ
ಹುಬ್ಬಳ್ಳಿ : ಇರಾನ್ ಮತ್ತು ಜಗತ್ತಿನ ಇತರ ಭಾಗಗಳ ಮೇಲೆ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ಹುಬ್ಬಳ್ಳಿಯ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ‘ವಿಶ್ವ ಶಾಂತಿಗಾಗಿ ಯುದ್ಧ ವಿರೋಧಿಸಿ’ ಕಾರ್ಮಿಕರ ಪ್ರದರ್ಶನ ನಡೆಯಿತು. ಈ ವೇಳೆ ಮಾತನಾಡಿದ ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್, ಇರಾನ್ ಮೇಲಿನ ಯುಎಸ್-ಇಸ್ರೇಲ್ ಮಿಲಿಟರಿ ಆಕ್ರಮಣವನ್ನು ಬಲವಾಗಿ ಖಂಡಿಸಿದರು. ಜಾಗತಿಕವಾಗಿ ತೈಲೋತ್ಪನ್ನಗಳ ಮೇಲೆ ಅಧಿಪತ್ಯ ಸಾಧಿಸಲು ಸಲುವಾಗಿ ಅಮೆರಿಕ ಹೀನ ಕೃತ್ಯಕ್ಕೆ ಇಳಿದಿದ್ದು, ವೆನಿಝುವೆಲಾ, ಲಿಬಿಯಾ, ಇರಾನ್ ಮೇಲೆ ದಾಳಿ ನಡೆಸಿದೆ. ಇದರಿಂದ ಭಾರತದ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ಹೀಗಾಗಿ ಈ ಸಾಮ್ರಾಜ್ಯಶಾಹಿ ಯುದ್ಧವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ, ಅಮೆರಿಕ ಏಕಪಕ್ಷೀಯ ಅಸಮಂಜಸ ಸುಂಕ ಯುದ್ಧದ ನಂತರ, ಈಗ ಇರಾನ್ ಮೇಲೆ ಏಕಪಕ್ಷೀಯ ಬಾಂಬ್ ದಾಳಿಯು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಸ್ಥಿತಿಗೆ ಮತ್ತು ಇಡೀ ಜಗತ್ತನ್ನು ಆರ್ಥಿಕ ಪ್ರಕ್ಷುಬ್ಧತೆಯ ಸ್ಥಿತಿಗೆ ತಳ್ಳಿದೆ. ನಾಗರಿಕ ಮೂಲಸೌಕರ್ಯ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಗರ ಪ್ರದೇಶಗಳನ್ನು ಹೇಡಿತನದಿಂದ ಗುರಿಯಾಗಿಸಿಕೊಂಡಿರುವುದು ಜಿನೇವಾ ಸಮಾವೇಶಗಳು ಸೇರಿದಂತೆ ಅಂತರ್ರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುತ್ತದೆ. ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಆಯತುಲ್ಲಾ ಖಾಮಿನೈ ಮತ್ತು ಅನೇಕ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ದಕ್ಷಿಣ ಇರಾನ್ನ ಮಿನಾಬ್ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ 165 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಅಪರಾಧಿ ಆಡಳಿತಗಳ ಕ್ರೌರ್ಯ ಮತ್ತು ಅನಾಗರಿಕತೆಯ ವಿಸ್ತರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಮಹೇಶ ಪತ್ತಾರ, ಬಿ.ಐ.ಈಳಿಗೇರ, ತಿಲಕ ಗೌಡ, ಯಮುನಾ ಗಾಂವಕರ, ಗುರುಸಿದ್ದಪ್ಪ ಅಂಬಿಗೇರ, ಬಾಬಾಜಾನ ಮುಧೋಳ, ಚಿದಾನಂದ ಸವದತ್ತಿ, ಮಂಜುಳಾ ಪವಾರ, ಬಸೀರ ಮುಧೋಳ, ದೊಡ್ಡವ್ವ ಪೂಜಾರಿ, ಮಹೇಶ ಹುಲಗೋಡ, ಜಯಶ್ರೀ, ದೊಡ್ಡವ್ವ ಪೂಜಾರಿ, ಮಂಜುನಾಥ ಹುಜರಾತಿ, ಮಂಜುಳಾ ಪವಾರ ಹಾಗು ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಎರಡು ವರ್ಷಗಳ ಹಿಂದೆ ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ 70 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದು ಅಮೆರಿಕ ಮತ್ತು ಇಸ್ರೇಲ್ ಯುದ್ಧ ದಾಹಕ್ಕೆ ಉದಾಹರಣೆ ಆಗಿದೆ. ಸಮಾಜವಾದಿ ದೇಶಗಳ ಅನುಪಸ್ಥಿತಿಯಿಂದಾಗಿ ಅಮೆರಿಕನ್ ಸಾಮ್ರಾಜ್ಯಶಾಹಿ ಏಕಚಕ್ರಾಧಿಪತ್ಯದಿಂದಾಗಿ ಜಗತ್ತು ನಲುಗಿ ಹೋಗಿದೆ. ಇದರ ವಿರುದ್ಧ ಜಾಗತಿವಾಗಿ ಪ್ರತಿರೋಧ ಬೆಳೆದು ಬರಬೇಕು. ಸನತ್ ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತ
ಶಹಾಬಾದ್ | ರೈಲು ಹಳಿ ದಾಟಲು ಸಂಕಷ್ಟ: ಮೇಲ್ಸೇತುವೆ ನಿರ್ಮಾಣಕ್ಕೆ ಯಲ್ಲಾಲಿಂಗ ಹೈಯ್ಯಳಕರ್ ಆಗ್ರಹ
ಶಹಾಬಾದ್: ನಗರಸಭೆ ವ್ಯಾಪ್ತಿಯ ಕೊಳಸಾ ಫೈಲ್, ದಕ್ಕಾ ತಾಂಡಾ, ಚುನ್ನಾ ಭಟ್ಟಿ, ಬಂಜಾರಾ ನಗರ, ಸಿದ್ಧಾರ್ಥ ನಗರ, ಬಾರಿ ನಗರ ಹಾಗೂ ರಾಂಭೋಫೈಲ್ ಬಡಾವಣೆಯ ನಿವಾಸಿಗಳು ದಿನನಿತ್ಯ ರೈಲು ಹಳಿಯನ್ನು ದಾಟಿ ಸಂಚರಿಸಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಕರವೇ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಳಕರ್ ಆಗ್ರಹಿಸಿದ್ದಾರೆ. ಈ ಬಡಾವಣೆಗಳಲ್ಲಿ ಹಿರಿಯರು ಹಾಗೂ ಮಕ್ಕಳು ಸೇರಿ ಸಾವಿರಾರು ಜನರು ವಾಸಿಸುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ. ರೈಲ್ವೆ ಮೇಲ್ಸೇತುವೆ ಇಲ್ಲದ ಕಾರಣ ಸ್ಥಳೀಯರು ಹಾಗೂ ಶಾಲೆಗೆ ಹೋಗುವ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ರೈಲು ಹಳಿ ದಾಟಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇಲ್ಲಿಂದ ನಗರಕ್ಕೆ ವಾಹನ ಸಂಚಾರಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು, ರೋಗಿಗಳು ಹಾಗೂ ವೃದ್ಧರಿಗೆ ಭಾರೀ ತೊಂದರೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು. ಶಾಲೆಗೆ ತೆರಳಿದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಪೋಷಕರು ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ. ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಆದ್ದರಿಂದ ತಕ್ಷಣ ರೈಲು ಹಳಿ ದಾಟುವ ಸಮಸ್ಯೆಯನ್ನು ತಪ್ಪಿಸಲು ಮೇಲ್ಸೇತುವೆ ನಿರ್ಮಿಸಿ ಸ್ಥಳೀಯರ ಜೀವ ಭದ್ರತೆ ಕಾಪಾಡುವಂತೆ ರೈಲ್ವೆ ಅಧಿಕಾರಿಗಳಿಗೆ ಅವರು ಆಗ್ರಹಿಸಿದರು.
ಪಶ್ಚಿಮ ಏಶ್ಯ ಸಂಘರ್ಷದ ನಡುವೆ ಭಾರತದಿಂದ ಬಾಂಗ್ಲಾಕ್ಕೆ 5 ಸಾವಿರ ಟನ್ ಡೀಸೆಲ್ ಪೂರೈಕೆ
ಹೊಸದಿಲ್ಲಿ: ಪಶ್ಚಿಮ ಏಶ್ಯ ಸಂಘರ್ಷವು ಜಾಗತಿಕ ಇಂಧನ ಭದ್ರತೆಯ ಮೇಲೆ ಪರಿಣಾಮವನ್ನು ಬೀರಿರುವ ನಡುವೆಯೇ ಭಾರತವು ಅಸ್ಸಾಂನ ನುಮಾಲಿಗಢ ತೈಲ ಸಂಸ್ಕರಣಾಗಾರದಿಂದ ಕೊಳವೆಮಾರ್ಗವಾಗಿ ಬಾಂಗ್ಲಾದೇಶಕ್ಕೆ ಡೀಸೆಲ್ ಪೂರೈಕೆಯನ್ನು ಆರಂಭಿಸಿದೆ. ಕನಿಷ್ಠ 5 ಸಾವಿರ ಟನ್ ಡೀಸೆಲ್ ಕೊಳವೆಮಾರ್ಗದ ಮೂಲಕ ಗಡಿದಾಟಿ ಮಂಗಳವಾರ ಬಾಂಗ್ಲಾವನ್ನು ತಲುಪಲಿದೆಯೆಂದು ಬಾಂಗ್ಲಾದೇಶ ಪೆಟ್ರೋಲಿಯಂ ನಿಗಮದ ಅದ್ಯಕ್ಷ (ಬಿಪಿಸಿ) ಮುಹಮ್ಮದ್ ರೆಝಾನುರ್ ರಹ್ಮಾನ್ ತಿಳಿಸಿದ್ದಾರೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದಾಗಿ ಬಾಂಗ್ಲಾವು ತೈಲದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಡೀಸೆಲ್ ಪೂರೈಕೆಯು, ಉಭಯ ನೆರೆಹೊರೆಯ ದೇಶಗಳ ನಡುವೆ ಏರ್ಪಟ್ಟ ಬೃಹತ್ ವಾರ್ಷಿಕ ತೈಲ ಪೂರೈಕೆ ಒಪ್ಪಂದದ ಭಾಗವಾಗಿದೆ. ಈ ಡೀಸೆಲ್ ಅಸ್ಸಾಂನ ನುಮಾಲಿಗಡ ತೈಲಸಂಸ್ಕರಣಾಗಾರದಿಂದ ಬಾಂಗ್ಲಾದೇಶ- ಭಾರತ ಮಿತ್ರತ್ವ ಪೈಪ್ಲೈನ್ ಮೂಲಕ ಬಾಂಗ್ಲಾದೇಶದ ದಿನಾಜ್ಪುರವನ್ನು ತಲುಪಲಿದೆ. ಬಾಂಗ್ಲಾದೇಶ-ಭಾರತ ಮಿತ್ರತ್ವ ಪೈಪ್ಲೈನ್ ಅನ್ನು 2023ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ಬಾಂಗ್ಲಾ ಪ್ರಧಾನಿ ಹಸೀನಾ ಶೇಖ್ ಉದ್ಘಾಟಿಸಿದ್ದರು.
ಹೊಸಪೇಟೆ | ತಾಲೂಕು ಪಂಚಾಯತ್ ಕಟ್ಟಡದ ಮೇಲ್ಚಾವಣಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ
ವಿಜಯನಗರ / ಹೊಸಪೇಟೆ: ನಗರದ ತಾಲೂಕು ಪಂಚಾಯಿತಿ ಕಟ್ಟಡದ ಮೇಲ್ಚಾವಣಿಯಲ್ಲಿ ಮಂಗಳವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಶ್ರುತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆಲಂ ಬಾಷಾ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್-19 ಲಸಿಕೆಯ ಅಡ್ಡ ಪರಿಣಾಮಗಳಿಂದ ಬಾಧಿತರಾದವರಿಗೆ ಪರಿಹಾರ ನೀಡಬೇಕು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ
ಹೊಸದಿಲ್ಲಿ: ಕೋವಿಡ್-19 ಲಸಿಕೆಯ ಅಡ್ಡಪರಿಣಾಮಗಳಿಂದ ಬಾಧಿತರಾದವರಿಗೆ ನ್ಯಾಯಯುತವಾದ ಪರಿಹಾರವನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ಲೋಪರಾಹಿತ್ಯತೆಯ ಆಧಾರದಲ್ಲಿ ಈ ನೀತಿಯನ್ನು ಜಾರಿಗೆ ತರಬೇಕೆಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಆದೇಶದಲ್ಲಿ ತಿಳಿಸಿದೆ. ಈ ಕಾನೂನು ನಿಯಮದ ಪ್ರಕಾರ ಯಾರಿಂದಲೂ ಗಾಯಗಳು, ನಷ್ಟಗಳು ಅಥವಾ ಹಾನಿಗಳು ಯಾರಿಂದಲೇ ಆಗಿರಲಿ ಬಾಧಿತರಿಗೆ ಪರಿಹಾರ ದೊರೆಯಬೇಕಾಗಿದೆ ಎಂದು ವರದಿ ಹೇಳಿದೆ. ಕೋವಿಡ್19 ನಿರೋಧಕ ಲಸಿಕೆಯ ಅಡ್ಡ ಪರಿಣಾಮಗಳಿಂದಾಗಿ ತಮ್ಮ ಪುತ್ರಿಯರು ಸಾವನ್ನಪ್ಪಿದ್ದಾರೆಂದು ಆರೋಪಿಸಿ ದಂಪತಿಯೊಂದು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ತಮ್ಮ ಪುತ್ರಿಯರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಮಿತಿಯಿಂದ ನಡೆಸಬೇಕೆಂದು ದಂಪತಿ ಅರ್ಜಿಯಲ್ಲಿ ಕೋರಿದ್ದರು. ಮೃತರ ಶವಪರೀಕ್ಷೆ (ಅಟಾಪ್ಸಿ) ಮತ್ತು ತನಿಖೆಯ ವರದಿಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದರು. ತಮ್ಮ ಪುತ್ರಿಯರ ಸಾವಿಗಾಗಿ ತಮಗೆ ಸೂಕ್ತವಾದ ಆರ್ಥಿಕ ಪರಿಹಾರ ನೀಡಬೇಕೆಂದು ಪಾಲಕರು ಅರ್ಜಿಯಲ್ಲಿ ಕೋರಿದ್ದರು. ಲಸಿಕೆಗಳ ವ್ಯತಿರಿಕ್ತ ಅಡ್ಡಪರಿಣಾಮಗಳಿಂದ ಬಳಲುತ್ತಿರುವವರನ್ನು ತ್ವರಿತವಾಗಿ ಗುರುತಿಸಲು ಹಾಗೂ ಅವರಿಗೆ ಚಿಕಿತ್ಸೆ ನೀಡಲು ಮಾರ್ಗದರ್ಶಿಸೂತ್ರಗಳನ್ನು ರೂಪಿಸುವಂತೆ ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಪ್ರಕರಣದ ಆಲಿಕೆ ನಡೆಸಿದ ನ್ಯಾಯಪೀಠವು ಕೋವಿಡ್19 ಬಾಧಿತರಿಗೆ ಪರಿಹಾರ ನೀಡುವ ಯೋಜನೆಯಿಂದಾಗಿ, ಕೇಂದ್ರ ಸರಕಾರವು ಅದರ ಬಾಧ್ಯತೆಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಪರಿಗಣಿಸಬಾರದು ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ. ಆದಾಗ್ಯೂ, ಕೋವಿಡ್-19 ಲಸಿಕೆಗಳ ಅಡ್ಡಪರಿಣಾಮಗಳ ಪರಿಶೀಲನೆಗೆ ನೂತನ ತಜ್ಞರ ಸಮಿತಿಯನ್ನು ಸ್ಥಾಪಿಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ತಿಳಿಸಿದೆ.
ನೇರ ನೇಮಕಾತಿಯಲ್ಲಿ ಒಬಿಸಿಗೆ 27 ಶೇ. ಮೀಸಲಾತಿ: ಲೋಕಸಭೆಗೆ ಮಾಹಿತಿ
ಹೊಸದಿಲ್ಲಿ: ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಸಿವಿಲ್ ಹುದ್ದೆಗಳು ಮತ್ತು ಸೇವೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವಾಗ ಸರಕಾರವು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ 27 ಶೇಕಡ ಮೀಸಲಾತಿ ನೀಡುವುದು ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಯಿತು. ಮೀಸಲಾತಿ ನೀತಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜಾರಿಗೊಳಿಸುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ಬಿ.ಎಲ್. ವರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ‘‘ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ 8-9-1993ರ ಕಚೇರಿ ತಿಳುವಳಿಕೆ ಪತ್ರ ಮತ್ತು ಕಾಲ ಕಾಲಕ್ಕೆ ಹೊರಡಿಸಲಾಗಿರುವ ಇತರ ಸೂಚನೆಗಳ ಆಧಾರದಲ್ಲಿ ಸರಕಾರವು ಮೀಸಲಾತಿ ನೀತಿಯೊಂದನ್ನು ಹೊಂದಿದೆ. ಇದರ ಪ್ರಕಾರ, ಸರಕಾರದ ಅಡಿಯಲ್ಲಿ ಬರುವ ಸಿವಿಲ್ ಹುದ್ದೆಗಳು ಮತ್ತು ಸೇವೆಗಳಿಗೆ ಸರಕಾರ ಮಾಡುವ ನೇರ ನೇಮಕಾತಿಗಳಲ್ಲಿ 27 ಶೇಕಡ ಹುದ್ದೆಗಳನ್ನು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುತ್ತದೆ’’ ಎಂದು ಸಚಿವರ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಛಲ ಇದ್ದರೆ ಗುರಿ ಸಾಧನೆ ಸಾಧ್ಯ: ವಿಜಯಕುಮಾರ ಪಾಟೀಲ
ಕಲಬುರಗಿ: ಪ್ರತಿಯೊಬ್ಬರೂ ಯಶಸ್ವಿ ಜೀವನ ನಡೆಸಬೇಕಾದರೆ ಸಾಧಿಸುವ ಛಲ ಹೊಂದಿರಬೇಕು. ಅಂಥ ದೃಢಸಂಕಲ್ಪ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ವಿಜಯಕುಮಾರ ತೇಗಲತಿಪ್ಪಿ ಹೇಳಿದರು. ರಾಜ್ಯಮಟ್ಟದ ವಿಶ್ವ ಕನ್ನಡಿಗ ಪ್ರಶಸ್ತಿ ಪಡೆದ ಹಿನ್ನೆಲೆ ರಾಜೇಶ್ವರಿ ಸಾಹು ಅವರಿಗೆ ಕನ್ನಡ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಅವಕಾಶಗಳ ಕೊರತೆಯಿಂದ ಅವರು ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವಕಾಶಗಳನ್ನು ಸ್ವತಃ ಸೃಷ್ಟಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರಲ್ಲಿ ರಾಜೇಶ್ವರಿ ಸಾಹು ಮುಂಚೂಣಿಯಲ್ಲಿದ್ದಾರೆ. ಅವರ ಸಾಮಾಜಿಕ ಕಳಕಳಿ, ವೃತ್ತಿ ಬದ್ಧತೆ ಹಾಗೂ ಸೇವಾ ಮನೋಭಾವದಿಂದ ರಾಜ್ಯದಾದ್ಯಂತ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸೇವೆ ದೇಶದಾದ್ಯಂತ ಪಸರಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್, ಪಂಚಾಯತ್ ರಾಜ್ ಇಲಾಖೆಯಲ್ಲಿ ಜನಪರ ಸೇವೆ ಸಲ್ಲಿಸುವ ಮೂಲಕ ರಾಜೇಶ್ವರಿ ಸಾಹು ಉತ್ತಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಪರಿಶ್ರಮದ ಮೂಲಕ ಸಾಧನೆ ಮಾಡಿರುವುದು ಪ್ರೇರಣಾದಾಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೇಣುಕಾ ಡಾಂಗೆ ಮಾತನಾಡಿದರು. ಮುಖಂಡರಾದ ಸುಭಾಶ ಮುರುಡ, ಬಸವರಾಜ ಬಿರಬಿಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು. ನಂತರ ರಾಜೇಶ್ವರಿ ಸಾಹು ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿದ ರಾಜೇಶ್ವರಿ ಸಾಹು ಮಾತನಾಡಿ, ಬಡತನದಲ್ಲಿದ್ದರೂ ಓದನ್ನು ನಿಲ್ಲಿಸದೆ ಪಿಎಸ್ಐ ಆಗಬೇಕೆಂಬ ಕನಸು ಕಂಡಿದ್ದೆ. ಆ ಕನಸು ನನಸಾಗದಿದ್ದರೂ ಛಲದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದಕ್ಕೆ ಪಾಲಕರು ಹಾಗೂ ಹಿರಿಯರ ಪ್ರೋತ್ಸಾಹ ಕಾರಣವಾಗಿದೆ ಎಂದು ಸ್ಮರಿಸಿದರು. ಪ್ರಮುಖರಾದ ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ ಇತರರಿದ್ದರು.
ಅನಿಲ ದರ ಏರಿಕೆ: ಕೇಂದ್ರದ ಅಸಮರ್ಥ ನಾಯಕತ್ವವೇ ಕಾರಣ: ಬಿ.ಕೆ.ಹರಿಪ್ರಸಾದ್
ಬೆಂಗಳೂರು : ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಿಂದ ಸಾಮಾನ್ಯ ಜನ, ರೈತರು, ಕಾರ್ಮಿಕರ ಕುಟುಂಬಗಳು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೋವನ್ನು ಅರ್ಥಮಾಡಿಕೊಳ್ಳುವ ಬದಲು ತೆರಿಗೆಗಳ ಮೂಲಕ ಅವರ ಜೇಬಿಗೆ ಕೈಹಾಕುವ ನೀತಿಯನ್ನು ಕೇಂದ್ರ ಸರಕಾರ ತಕ್ಷಣವೇ ನಿಲ್ಲಿಸಬೇಕು. ಜನರ ಬದುಕನ್ನು ದುಬಾರಿಯ ಸಂಕಷ್ಟಕ್ಕೆ ತಳ್ಳುತ್ತಿರುವುದಕ್ಕೆ ಕೇಂದ್ರದ ಅಸಮರ್ಥ ನಾಯಕತ್ವವೇ ಕಾರಣ’ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ. ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರಧಾನಿ ಮೋದಿಯ ಸ್ವಯಂ ಘೋಷಿತ ಅಮೃತಕಾಲದಲ್ಲಿ ಕಪಲೋಕಲ್ಪಿತ ಗಟಾರ್ ಗ್ಯಾಸ್ ಕತೆಗಳು ಭಾರತವನ್ನು ಆಪತ್ತಿನ ಕಾಲಕ್ಕೆ ತಳ್ಳಿದೆ. ಸಾರ್ವಜನಿಕ ವೇದಿಕೆಯಲ್ಲಿ ವಿಜ್ಞಾನಿಗಳ ಎದುರೇ ಕಲ್ಪನೆಯನ್ನು ಮಾಡಲು ಸಾಧ್ಯವಾಗದ ಗಟಾರ್ ಗ್ಯಾಸ್ ಕತೆಗಳನ್ನು ಯಾವುದೇ ಲಜ್ಜೆ ಇಲ್ಲದೆ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೇ ಹೊರತು, ಭಾರತದ ಗ್ಯಾಸ್ ಅನಿಲ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿಯಿಂದ ಸಾಧ್ಯವಿಲ್ಲ ಎಂಬುದಕ್ಕೆ ವರ್ತಮಾನದಲ್ಲಿ ಆಗುತ್ತಿರುವ ಗ್ಯಾಸ್ ಅಡುಗೆ ಅನಿಲ ಬಿಕ್ಕಟ್ಟೆ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ. ‘ಮಧ್ಯಪ್ರಾಚ್ಯದಲ್ಲಿನ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ, ಇದರಿಂದ ಎಲ್ಪಿಜಿ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮನೆ-ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆಗಳು ಹೆಚ್ಚಾಗಿದ್ದು, ಯುದ್ಧದ ವಾತಾವರಣವು ಆರ್ಥಿಕತೆಯ ಮೇಲೆ ಆತಂಕ ಮೂಡಿಸಿದೆ. ನಗರಗಳಲ್ಲಿ ಗ್ಯಾಸ್ ಸಿಲೆಂಡರ್ ಅಭಾವದಿಂದ ಹೋಟೆಲ್, ರೆಸ್ಟೋರೆಂಟ್ಗಳು ಬಂದ್ ಆಗುತ್ತಿದ್ದರೆ ಗ್ರಾಮೀಣ ಭಾಗದ ಜನರ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ‘ಮಧ್ಯಪ್ರಾಚ್ಯ ದೇಶಗಳ ಯುದ್ಧದ ಕುರಿತು ಪ್ರಧಾನಿಗಳ ಮೌನಕ್ಕೆ ದೇಶ ಭಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಭಾರತದ ಜನತೆಗೆ ಗ್ಯಾಸ್ ಮತ್ತು ಪೆಟ್ರೋಲ್ ಸಮಸ್ಯೆ ಬರದಂತೆ ಪರಿಹಾರ ಕಂಡುಹಿಡಿಯಿರಿ’ ಎಂದು ಭಾಷಣೆ ಬಿಗಿಯುತ್ತಿದ್ದ ಅಂದಿನ ಗುಜರಾತಿನ ಮುಖ್ಯಮಂತ್ರಿ, ಇಂದಿನ ಪ್ರಧಾನಿ ಮೋದಿ ಸರಕಾರ ಮೌನವಹಿಸಿರುವುದು ಯಾಕೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಧಾನಿ @narendramodi ಯ ಸ್ವಯಂ ಘೋಷಿತ ಅಮೃತಕಾಲದಲ್ಲಿ ಕಪಲೋಕಲ್ಪಿತ ಗಟಾರ್ ಗ್ಯಾಸ್ ಕತೆಗಳು ಭಾರತವನ್ನು ಆಪತ್ತಿನ ಕಾಲಕ್ಕೆ ತಳ್ಳಿದೆ. ಸಾರ್ವಜನಿಕ ವೇದಿಕೆಯಲ್ಲಿ ವಿಜ್ಞಾನಿಗಳ ಎದುರೇ ಕಲ್ಪನೆಯನ್ನು ಕೂಡ ಮಾಡಲು ಸಾಧ್ಯವಾಗದ ಗಟಾರ್ ಗ್ಯಾಸ್ ಕತೆಗಳನ್ನು ಯಾವುದೇ ಲಜ್ಜೆ ಇಲ್ಲದೆ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೇ ಹೊರತು, ಭಾರತದ… pic.twitter.com/K7hvygKJmJ — Hariprasad.B.K. (@HariprasadBK2) March 10, 2026
ಶಿಲ್ಲಾಂಗ್: ಮೇಘಾಲಯದ ಪಶ್ಚಿಮ ಗಾರೋ ಬೆಟ್ಟಗಳ ಜಿಲ್ಲೆಯಲ್ಲಿ ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (GHADC) ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಸಂದರ್ಭ ಉಂಟಾದ ಉದ್ವಿಗ್ನತೆಯಲ್ಲಿ ಮಂಗಳವಾರ ಮುಂಜಾನೆ ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಬಿನಾಂಗ್ ಪ್ರದೇಶದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟು ಅಲ್ಲದ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು, ಹಿಂಸಾತ್ಮಕ ಗುಂಪುಗಳನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪಶ್ಚಿಮ ಗಾರೋ ಬೆಟ್ಟಗಳ ಪೊಲೀಸ್ ವರಿಷ್ಠಾಧಿಕಾರಿ ಅಬ್ರಹಾಂ ಟಿ. ಸಂಗ್ಮಾ ತಿಳಿಸಿದ್ದಾರೆ. ‘ಮೃತಪಟ್ಟ ಇಬ್ಬರೂ ಚಿಬಿನಾಂಗ್ ನಿವಾಸಿಗಳೇ. GHADC ಚುನಾವಣೆಗೆ ಸಂಬಂಧಿಸಿ ಬುಡಕಟ್ಟು ಜನರು ಮತ್ತು ಬುಡಕಟ್ಟು ಅಲ್ಲದವರ ನಡುವೆ ಘರ್ಷಣೆ ನಡೆದಿದೆ. ಕಾನೂನುಬಾಹಿರವಾಗಿ ಸೇರಿದ್ದ ಗುಂಪನ್ನು ಚದುರಿಸುವ ವೇಳೆ ಗುಂಡು ಹಾರಿಸಲಾಗಿದೆ’ ಎಂದು ಅವರು ಹೇಳಿದರು. ಪ್ರದೇಶದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ ಎಂದು ಸಂಗ್ಮಾ ತಿಳಿಸಿದ್ದಾರೆ. ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಪಶ್ಚಿಮ ಗಾರೋ ಬೆಟ್ಟಗಳಾದ್ಯಂತ ಮಂಗಳವಾರ ಇಡೀ ದಿನ ಕರ್ಫ್ಯೂ ಜಾರಿಗೊಳಿಸಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ಕೋರಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಾರಿಕೆ, ಹಲ್ಲೆ ಮತ್ತು ತಪ್ಪು ಮಾಹಿತಿಯ ಪ್ರಸರಣದ ವರದಿಗಳ ಹಿನ್ನೆಲೆ ಮೇಘಾಲಯ ಸರ್ಕಾರ ಮಂಗಳವಾರದಿಂದ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಆದರೆ ಕರೆಗಳು ಮತ್ತು ಎಸ್ಎಂಎಸ್ ಸೇವೆಗಳು ಮುಂದುವರಿಯಲಿವೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಉಪ ಆಯುಕ್ತ ವಿಭೋರ್ ಅಗರ್ವಾಲ್ ಅವರು ಮಂಗಳವಾರ ತುರಾದ ಸರ್ಕ್ಯೂಟ್ ಹೌಸ್ನಲ್ಲಿ ಚರ್ಚ್ ಮುಖಂಡರು, ಎನ್ಜಿಒ ಪ್ರತಿನಿಧಿಗಳು ಹಾಗೂ ಸ್ಥಳೀಯ ಅಭಿವೃದ್ಧಿ ಸಮಿತಿಗಳೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 16ರವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಪ್ರಿಲ್ 10ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ತುರಾದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಫುಲ್ಬರಿಯ ಮಾಜಿ ಶಾಸಕ ಎಸ್ತಮುರ್ ಮೋಮಿನ್ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಬುಡಕಟ್ಟು ಜನಾಂಗದವರಲ್ಲದವರು ಜಿಎಚ್ಎಡಿಸಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅಥವಾ ಭಾಗವಹಿಸುವುದನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು. ಫೆಬ್ರವರಿ 17ರಂದು ಜಿಎಚ್ಎಡಿಸಿ ಕಾರ್ಯಕಾರಿ ಸಮಿತಿಯು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಮಾನ್ಯ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತ್ತು.
ಕಲಬುರಗಿ | ಪಿಡಿಒಗೆ ಜೀವ ಬೆದರಿಕೆ: ಆರೋಪಿಯ ಬಂಧನಕ್ಕೆ ರಾಜೇಶ್ವರಿ ಸಾಹು ಆಗ್ರಹ
ಕಲಬುರಗಿ: ಜೇವರ್ಗಿ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಮಮದಾಪುರ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಆಗ್ರಹಿಸಿದ್ದಾರೆ. ಈ ಕುರಿತು ಅವರು ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಿಂಗಣ್ಣ ಎಂಬ ವ್ಯಕ್ತಿ ಮಹಿಳಾ ಅಧಿಕಾರಿ ಇಮ್ತಾಜ್ ಮಮದಾಪುರ ಅವರಿಗೆ ಅಸಭ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರೌಡಿಶೀಟ್ ತೆರೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಮೇಲಿನ ಹಲ್ಲೆ ಹಾಗೂ ಅಸಹಜ ಸಾವುಗಳ ಕುರಿತು ರಚಿಸಲಾದ ಮೀನಾಕ್ಷಿ ಸುಂದರಂ ಅಧ್ಯಯನ ಸಮಿತಿಯ ವರದಿ ಪಡೆದು ನೌಕರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಲ್ಲದೆ ಬಡ್ತಿ, ವೇತನ ತಾರತಮ್ಯ ಹಾಗೂ ಹುದ್ದೆ ಉನ್ನತೀಕರಣ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳನ್ನು ಗ್ರೂಪ್-ಬಿ ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪುಟಿನ್ ಗೆ ಟ್ರಂಪ್ ದೂರವಾಣಿ ಕರೆ; ಇರಾನ್ ಯುದ್ಧ ಶೀಘ್ರ ಕೊನೆಗೊಳಿಸುವ ಬಗ್ಗೆ ಪ್ರಸ್ತಾಪ
ಮಾಸ್ಕೋ: ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ದೂರವಾಣಿ ಕರೆ ಮಾಡಿದ್ದು ಇರಾನ್ ನಲ್ಲಿ ಈಗ ನಡೆಯುತ್ತಿರುವ ಯುದ್ದವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದ ಹಲವು ಸಲಹೆಗಳನ್ನು ಹಂಚಿಕೊಂಡರು ಎಂದು ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ. ಜಾಗತಿಕ ತೈಲ ಮಾರುಕಟ್ಟೆ ಪರಿಸ್ಥಿತಿಯ ಸಂದರ್ಭದಲ್ಲಿ ಉಕ್ರೇನ್ ನ ಸಂಘರ್ಷ ಮತ್ತು ವೆನೆಝುವೆಲಾದ ಪರಿಸ್ಥಿತಿಯ ಬಗ್ಗೆಯೂ ಟ್ರಂಪ್ ಮತ್ತು ಪುಟಿನ್ ಚರ್ಚೆ ನಡೆಸಿದರು ಎಂದು ರಶ್ಯ ಅಧ್ಯಕ್ಷರ ವಿದೇಶಾಂಗ ನೀತಿ ಸಹಾಯಕ ಯೂರಿ ಉಶಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾತುಕತೆ ಉತ್ಪಾದಕ ಮತ್ತು ಪ್ರಾಮಾಣಿಕವಾಗಿತ್ತು. ಇರಾನ್ನೊಂದಿಗಿನ ಸಂಘರ್ಷದ ಸುತ್ತಮುತ್ತಲಿನ ಪರಿಸ್ಥಿತಿ, ಉಕ್ರೇನ್ ಶಾಂತಿ ಮಾತುಕತೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ದಕ್ಕೆ ತ್ವರಿತ ರಾಜಕೀಯ ಮತ್ತು ರಾಜತಾಂತ್ರಿಕ ಇತ್ಯರ್ಥಕ್ಕೆ ಪುಟಿನ್ ಕರೆ ನೀಡಿದರು ಎಂದು ಯೂರಿ ಉಶಕೋವ್ ಹೇಳಿದ್ದಾರೆ.
ಮಧ್ಯಪ್ರಾಚ್ಯ ಯುದ್ದದಲ್ಲಿ ಗೆದ್ದದ್ದು ರಶ್ಯ ಮಾತ್ರ: ಯುರೋಪಿಯನ್ ಯೂನಿಯನ್
ಬ್ರಸೆಲ್ಸ್: ಇಂಧನ ಬೆಲೆ ಗಗನಕ್ಕೇರಿರುವುದರಿಂದ ಮತ್ತು ಉಕ್ರೇನ್ ವಿರುದ್ದದ ಯುದ್ದದತ್ತ ಜಾಗತಿಕ ಗಮನ ಮಸುಕಾಗಿರುವುದರಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಲ್ಲಿ ಇದುವರೆಗೆ ಗೆದ್ದಿರುವುದು ರಶ್ಯ ಮಾತ್ರ ಎಂದು ಯುರೋಪಿಯನ್ ಯೂನಿಯನ್(ಇಯು) ಸಮಿತಿ ಅಧ್ಯಕ್ಷ ಅಂಟೋನಿಯೊ ಕೋಸ್ಟ ಮಂಗಳವಾರ ಹೇಳಿದ್ದಾರೆ. ಬ್ರಸೆಲ್ಸ್ ನಲ್ಲಿ ಇಯು ರಾಯಭಾರಿಗಳ ಸಭೆಯಲ್ಲಿ ಮಾತನಾಡಿದ ಕೋಸ್ಟ ʼಇಂಧನ ಬೆಲೆ ಹೆಚ್ಚಿರುವುದು ಉಕ್ರೇನ್ ವಿರುದ್ದದ ಯುದ್ದಕ್ಕೆ ಹೊಸ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಪ್ರಾಮುಖ್ಯತೆ ಪಡೆದಿರುವುದರಿಂದ ಉಕ್ರೇನ್ ಯುದ್ದದತ್ತ ಗಮನ ಕಡಿಮೆಯಾಗಿದೆʼ ಎಂದ ಅವರು, ಈಗ ಅಮೆರಿಕದಿಂದ ಸವಾಲು ಎದುರಿಸುತ್ತಿರುವ ಅಂತಾರಾಷ್ಟ್ರೀಯ ನಿಯಮಗಳ ಆಧಾರಿತ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ಮಧ್ಯಪ್ರಾಚ್ಯದ ಎಲ್ಲಾ ಪಕ್ಷಗಳು ಸಮಾಲೋಚನೆ ಪ್ರಕ್ರಿಯೆಗೆ ಮರಳುವ ಅಗತ್ಯವನ್ನು ಒತ್ತಿ ಹೇಳಿದರು. ʼಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಬಾಂಬ್ ಗಳ ಮೂಲಕ ಸಾಧಿಸಲಾಗದು. ಅಂತಾರಾಷ್ಟ್ರೀಯ ಕಾನೂನು ಮಾತ್ರ ಅವುಗಳನ್ನು ಎತ್ತಿಹಿಡಿಯುತ್ತದೆ. ನಾವು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಬೇಕು. ಅಂತಹ ಮಾರ್ಗವು ಮಧ್ಯಪ್ರಾಚ್ಯ, ಯುರೋಪ್ ಮತ್ತು ಅದರಾಚೆಗೆ ಬೆದರಿಕೆ ಹಾಕುತ್ತದೆ' ಎಂದು ಕೋಸ್ಟ ಹೇಳಿರುವುದಾಗಿ ವರದಿಯಾಗಿದೆ.
ರಾಜ್ಯದಲ್ಲಿ 6,70,560 ಕೋಟಿ ಬಂಡವಾಳ ಹೂಡಿಕೆ : ಎಂ.ಬಿ.ಪಾಟೀಲ್
ಬೆಂಗಳೂರು, ಮಾ.10: ರಾಜ್ಯದಲ್ಲಿ ಹಿಂದಿನ ಮೂರು ವರ್ಷಗಳಿಂದ 6,70,560 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. 2,47,571 ಉದ್ಯೋಗ ಸೃಜನೆಗಾಗಿ 117 ಹೂಡಿಕೆ ಒಪ್ಪಂದಗಳು ಆಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಡಂಬಡಿಕೆ ಮಾಡಿಕೊಂಡಿರುವ ಯೋಜನೆಗಳ ಪೈಕಿ ಒಟ್ಟು 57 ಯೋಜನೆಗಳು ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಅನುಮೋದನೆ ಪಡೆದಿರುತ್ತಾರೆ. ಇವುಗಳಿಂದ 79,907.94 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 55,729 ಉದ್ಯೋಗ ಸೃಜನೆ ನಿರೀಕ್ಷಿಸಲಾಗಿದೆ ಎಂದರು. ಅನುಮೋದನೆಯಾಗಿರುವ 57 ಯೋಜನೆಗಳ ಪೈಕಿ 6 ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 6,900.14 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. 6,654 ಉದ್ಯೋಗ ಸೃಜನೆಯಾಗಿದೆ. ಬಾಕಿ ಯೋಜನೆಗಳು ಅನುಷ್ಠಾನದ ಹಂತದಲ್ಲಿರುತ್ತವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಬಾಹುಬಲಿ ಮಹಾಮಸ್ತಕಾಭಿಷೇಕ ಪೂರ್ವ ಸಿದ್ಧತೆಗಾಗಿ ಸಮಿತಿ ರಚನೆಗೆ ಕ್ರಮ : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಮಾ.10: ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಾರ್ಕಳದಲ್ಲಿ ಜರುಗಲಿರುವ ಬಾಹುಬಾಲಿಯ ಮಹಾಮಸ್ತಕಾಭಿಷೇಕ ಧಾರ್ಮಿಕ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿನ ಸದಸ್ಯ ಸುನಿಲ್ ಕುಮಾರ್ ಗಮನ ಸೆಳೆದ ಸೂಚನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರ ನೀಡಿದ ಅವರು, ಸರಕಾರವು ಈ ಪ್ರಮುಖ ಧಾರ್ಮಿಕ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಮಿತಿಯನ್ನು ರಚಿಸಲಿದೆ. ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಗಮನಕ್ಕೆ ತಂದು ಜಿಲ್ಲಾ ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿಯೇ ಸಮಿತಿಯನ್ನು ರಚಿಸಲು ಕ್ರಮವಹಿಸಲಾಗುವುದು ಎಂದರು. ಈಗಾಗಲೇ ಇದರ ಸಿದ್ಧತೆಗೆ ಅಂದಾಜು 7 ಕೋಟಿ ರೂಗಳ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹನ್ನೆರಡು ವರ್ಷಗಳಿಗೆ ಒಮ್ಮೆ ಜರುಗುವ ಈ ಧಾರ್ಮಿಕ ಆಚರಣೆಯನ್ನು ಅಚ್ಚುಕಟ್ಟಾಗಿ ನಡೆಸಲು ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಸರಕಾರ ಮಾಡಿಕೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಉಳ್ಳಾಲ: ಸಮರ್ಪಣಾ ಪರಿವಾರ್ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ; ಸಾಧಕಿಯರಿಗೆ ಸನ್ಮಾನ
ಉಳ್ಳಾಲ: ಸಮರ್ಪಣಾ ಪರಿವಾರ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಮಹಿಳಾ ದಿನಾಚರಣೆ 2026 ಸಾಧಕಿಯರಿಗೆ ಸನ್ಮಾನ ಹಾಗೂ ಪರಿವಾರ ಕುಟುಂಬ ಮಿಲನ ಕಾರ್ಯಕ್ರಮ ಕೊಲ್ಯ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಮಾತನಾಡಿ, ಹಿಂದೆ ಅಡುಗೆ ಕೋಣೆಗೆ ಸೀಮಿತಳಾಗಿದ್ದ ಮಹಿಳೆಯರು ಪ್ರಸ್ತುತ ಅಂತರೀಕ್ಷಕ್ಕೆ ಏರುವ ಮೂಲಕ ಎಲ್ಲಾ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆ ಸಕಾರಾತ್ಮಕವಾಗಿ ಇರುವ ಮನೆ ಬೆಳಗುತ್ತದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಮೈಮೂನ ಎಂ.ಎ.ಹರೇಕಳ, ಚಂದ್ರಕಲಾ ಎಸ್, ಲಿಜಿ ನೊರೋನ್ಹ, ಸುಮಂಗಲಿ ರಾವ್, ವಜ್ರ ಗುಜರನ್ ಇವರನ್ನು ಸನ್ಮಾನಿಸಲಾಯಿತು. ಸಮರ್ಪಣಾ ಪರಿವಾರ್ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಪ್ರಶಾಂತ್ ಉಡುಪ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ತೀಯಾ ಸಮಾಜದ ಅಧ್ಯಕ್ಷ ಜಯಂತ್ ಕೊಂಡಾಣ, ಲಯನ್ಸ್ ಕ್ಲಬ್ ಪೆರ್ಮನ್ನೂರು ವಲಯಾಧ್ಯಕ್ಷೆ ಜೆಸಿಂತಾ ಮೆಂಡೋನ್ಸ, ಛೋಟಾ ಮಂಗಳೂರು ಘಟಕಾಧ್ಯಕ್ಷೆ ಹರಿಣಾಕ್ಷಿ, ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಸುರೇಶ್ ಆಚಾರ್ಯ, ರೈಲ್ವೇ ಸಲಹಾ ಮಂಡಳಿ ಸದಸ್ಯೆ ಸುಷ್ಮಾ ಕೋಟ್ಯಾನ್, ಸರ್ವಜ್ಞಾ ಅಕಾಡೆಮಿ ಆಡಳಿತ ವ್ಯವಸ್ಥಾಪಕ ಸುರೇಶ್ ಎಂ.ಎಸ್, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದಿನೇಶ್ ನಾಯಕ್, ಸಮಾಜ ಸೇವಕಿ ಗಾಯತ್ರಿ ಕಿಶೋರ್ ಕುತ್ತಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯ್ಸ್ ಮತ್ತಿತರರು ಉಪಸ್ಥಿತರಿದ್ದರು. ಸಮರ್ಪಣಾ ಪರಿವಾರ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ಶಿಕ್ಷಕರಾದ ಜಯಲಕ್ಷ್ಮಿ, ಚಂದ್ರಶೇಖರ ಹಾಗೂ ವಸಂತ ರೈ ಸನ್ಮಾನ ಪತ್ರ ವಾಚಿಸಿದರು. ವಸಂತ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

30 C