India U19 Team- ಅಂಡರ್ 19 ವಿಶ್ವಕಪ್ 2026ರ ಪ್ರಶಸ್ತಿ ಗೆದ್ದಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡಕ್ಕೆ ಇದೀಗ ಪ್ರಶಂಸೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಿರಿಯ ಕ್ರಿಕೆಟಿಗರ ಸಾಧನೆಯನ್ನು ಕೊಂಡಾಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಂಡದ ಅಜೇಯ ಅಭಿಯಾನಕ್ಕೆ ಮುಕ್ತ ಪ್ರಶಂಸೆ ಮಾಡಿದ್ದು ಬಿಸಿಸಿಐ ವತಿಯಿಂದ ವಿಶ್ವ ಚಾಂಪಿಯನ್ ತಂಡಕ್ಕೆ 7.5 ಕೋಟಿ ರೂಪಾಯಿ ನಗದು ಮೊತ್ತವನ್ನು ನೀಡಲಿರುವುದಾಗಿ ಘೋಷಣೆ ಮಾಡಿದ್ದಾರೆ.
ಮೆಟ್ರೋ ದರ ಏರಿಕೆ ಫೈಲ್ ಗೆ ನಾನು ಸಹಿ ಹಾಕಿಲ್ಲ! ಕೇಂದ್ರವೇ ಕಾರಣ ಎಂದ ಡಿಕೆಶಿ ಟೇಕನ್
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಅಲ್ಲ. ಮೆಟ್ರೋ ದರ ಏರಿಕೆಗೆ ಪ್ರತ್ಯೇಕವಾದ ಸಮಿತಿ ಇದೆ. ದರ ಏರಿಕೆ ಫೈಲ್ ಗೆ ನಾನು ಸಹಿ ಹಾಕೇ ಇಲ್ಲ. ಹೀಗಿರುವಾಗ ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರದ ಹೇಗೆ ಕಾರಣ ಆಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಯಾದಗಿರಿ | ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆ: ಕೊಲೆ ಶಂಕೆ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ತಾಂಡಾದಲ್ಲಿ 17 ವರ್ಷದ ಬಾಲಕನೊರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಣ ರಾಠೋಡ್ (17) ಎಂದು ಗುರುತಿಸಲಾಗಿದೆ. ಬಾಲಕನ ಮೃತದೇಹವು ಆತನ ಮನೆಯೊಳಗೆ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಘಟನೆ ಆತ್ಮಹತ್ಯೆಯಲ್ಲ, ಕೊಲೆ ಆಗಿರಬಹುದು ಎಂಬ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಯುವಕನ ಕೈಗಳನ್ನು ಹಗ್ಗದಿಂದ ಬಿಗಿದು ಕಟ್ಟಲಾಗಿದ್ದು, ಅರೆಬೆತ್ತಲೆಗೊಳಿಸಿ ನೇಣು ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹುಣಸಗಿ ಸಿಪಿಐ ರವಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೆಟ್ರೋ ದರ ಏರಿಕೆ ರಾಜ್ಯದ ವ್ಯಾಪ್ತಿಗೋ ಕೇಂದ್ರದ್ದೋ : ಎಲ್ಲಾ ರಾಜ್ಯದ್ದೇ, ಗೊಂದಲಕ್ಕೆ ತೆರೆ ಎಳೆದ ಕುಮಾರಸ್ವಾಮಿ
Namma Metro Fare Hike : ನಮ್ಮ ಮೆಟ್ರೋ ಮತ್ತೆ ದರ ಏರಿಕೆ ಮಾಡಿದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೆಟ್ರೋದಲ್ಲಿ ಕೇಂದ್ರದ ಪಾಲು ಶೇ. 20, ಹಾಗಾಗಿ ಬೆಲೆ ಏರಿಕೆ ಮಾಡುವುದು ಏನಿದ್ದರೂ, ರಾಜ್ಯ ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ.
India-US Interim Trade Deal ಚೌಕಟ್ಟು ಅಂತಿಮ; ಯಾರಿಗೆ ಹೆಚ್ಚಿನ ಲಾಭ?
ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ರೂಪಿಸಿದ್ದು, ಒಪ್ಪಂದದ ಅಡಿಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಗರಿಷ್ಠ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಲಾಗಿದೆ. ವ್ಯಾಪಾರ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಅಮೆರಿಕ ಶನಿವಾರ (ಫೆಬ್ರುವರಿ 7) ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು (Interim Trade Agreement Framework) ಅಂತಿಮಗೊಳಿಸಿರುವುದಾಗಿ ತಿಳಿಸಿವೆ. ►ಚೌಕಟ್ಟಿನ ಮುಖ್ಯಾಂಶಗಳು ►ಒಪ್ಪಂದದ ಅಡಿಯಲ್ಲಿ ಭಾರತ ಏನು ಮಾಡುತ್ತದೆ? * ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳ ಮೇಲಿನ ಸುಂಕಗಳನ್ನು ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ. * ಒಣಗಿದ ಡಿಸ್ಟಿಲರ್ಗಳ ಧಾನ್ಯಗಳು (DDGs), ಪಶು ಆಹಾರಕ್ಕಾಗಿ ಕೆಂಪು ಜೋಳ, ಬೀಜಗಳು, ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಮೆರಿಕದ ಕೃಷಿ ಮತ್ತು ಆಹಾರ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲಿದೆ. * ಸುಗಮ ವ್ಯಾಪಾರವನ್ನು ಉತ್ತೇಜಿಸಲು ಒಪ್ಪಿದ ವಲಯಗಳಲ್ಲಿ ಆದ್ಯತೆಯ ಮಾರುಕಟ್ಟೆ ಪ್ರವೇಶ ಒದಗಿಸಲಾಗುವುದು. ►ಅಮೆರಿಕ ಏನು ಮಾಡುತ್ತದೆ? * ಜವಳಿ, ಉಡುಪು, ಚರ್ಮ, ಪಾದರಕ್ಷೆಗಳು, ಪ್ಲಾಸ್ಟಿಕ್ಗಳು, ರಬ್ಬರ್, ಸಾವಯವ ರಾಸಾಯನಿಕಗಳು, ಗೃಹ ಅಲಂಕಾರ, ಕುಶಲಕರ್ಮಿ ಉತ್ಪನ್ನಗಳು ಮತ್ತು ಕೆಲವು ಯಂತ್ರೋಪಕರಣಗಳು ಸೇರಿದಂತೆ ಹೆಚ್ಚಿನ ಭಾರತೀಯ ಸರಕುಗಳ ಮೇಲೆ ಶೇ. 18ರಷ್ಟು ಪ್ರತಿಸುಂಕ ಅನ್ವಯವಾಗಲಿದೆ. * ಮಧ್ಯಂತರ ಒಪ್ಪಂದವು ಯಶಸ್ವಿಯಾಗಿ ಜಾರಿಗೆ ಬಂದ ನಂತರ, ಜೆನೆರಿಕ್ ಔಷಧಗಳು, ರತ್ನಗಳು ಮತ್ತು ವಜ್ರಗಳು ಹಾಗೂ ವಿಮಾನ ಭಾಗಗಳಂತಹ ವಲಯಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಭಾರತೀಯ ಸರಕುಗಳ ಮೇಲಿನ ಸುಂಕಗಳನ್ನು ತೆಗೆದುಹಾಕಲಾಗುವುದು. ►ಸ್ಟೀಲ್, ಅಲ್ಯೂಮಿನಿಯಂ ಮತ್ತು ಆಟೋ ಭಾಗಗಳು * ಸೆಕ್ಷನ್ 232ರ ಅಡಿಯಲ್ಲಿ ವಿಮಾನ ಬಿಡಿಭಾಗಗಳು, ಆಟೋ ಬಿಡಿಭಾಗಗಳ ಮೇಲಿನ ಸುಂಕ ಕೋಟಾ ಮತ್ತು ಜೆನೆರಿಕ್ ಔಷಧಗಳ ಮೇಲೆ ಭಾರತ ವಿನಾಯಿತಿ ಪಡೆಯಲಿದೆ. ►ಭಾರತ ಇನ್ನೇನು ಒಪ್ಪಿಕೊಂಡಿದೆ? ಸುಂಕದ ಅಡೆತಡೆಗಳ ಹೊರತಾಗಿ, ಭಾರತವು ಆಮದುಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲೀನ ಅಡೆತಡೆಗಳನ್ನು ಪರಿಶೀಲಿಸಲು ಒಪ್ಪಿಕೊಂಡಿದೆ: * ಯುಎಸ್ ವೈದ್ಯಕೀಯ ಸಾಧನಗಳು * ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸರಕುಗಳು * ಆಹಾರ ಮತ್ತು ಕೃಷಿ ಉತ್ಪನ್ನಗಳು ►ಡಿಜಿಟಲ್ ವ್ಯಾಪಾರ ಮತ್ತು ನಿಯಮಗಳು ಭಾರತ ಮತ್ತು ಅಮೆರಿಕದಲ್ಲಿನ ಉತ್ಪಾದಕರಿಗೆ ವ್ಯಾಪಾರ ಪ್ರಯೋಜನಗಳು ಹೆಚ್ಚಾಗಿ ಲಭಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಮೂಲದ ನಿಯಮಗಳನ್ನು ಈ ಒಪ್ಪಂದವು ವಿವರಿಸುತ್ತದೆ. ಸುಂಕದ ಮಟ್ಟದಲ್ಲಿ ಬದಲಾವಣೆಗಳಿದ್ದರೆ ಎರಡೂ ದೇಶಗಳು ತಮ್ಮ ಬದ್ಧತೆಗಳನ್ನು ಪರಿಷ್ಕರಿಸಲು ಇದು ಅನುಮತಿಸುತ್ತದೆ. ಇದಲ್ಲದೆ, ನಿರ್ಬಂಧಿತ ಡಿಜಿಟಲ್ ವ್ಯಾಪಾರ ಪದ್ಧತಿಗಳನ್ನು ನಿಭಾಯಿಸಲು ಮತ್ತು ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ಔಪಚಾರಿಕ ಡಿಜಿಟಲ್ ವ್ಯಾಪಾರ ನಿಯಮಗಳನ್ನು ಅಭಿವೃದ್ಧಿಪಡಿಸುವತ್ತ ಸಾಗಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ►ಭಾರತದ ಖರೀದಿ ಬದ್ಧತೆ ಭಾರತವು ಮುಂದಿನ ಐದು ವರ್ಷಗಳಲ್ಲಿ ಇಂಧನ ಸರಬರಾಜು, ವಿಮಾನ ಮತ್ತು ಘಟಕಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕಲ್ಲಿದ್ದಲು ಮುಂತಾದ ವಸ್ತುಗಳನ್ನು ಒಳಗೊಂಡಂತೆ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಸರಕುಗಳನ್ನು ಖರೀದಿಸಲು ಯೋಜಿಸಿದೆ. ಈ ಒಪ್ಪಂದವು ತಂತ್ರಜ್ಞಾನ-ಸಂಬಂಧಿತ ವ್ಯಾಪಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು, ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳು (GPUಗಳು) ಮತ್ತು ಡೇಟಾ ಕೇಂದ್ರಗಳಲ್ಲಿ ಬಳಸುವ ಉಪಕರಣಗಳ ಮೇಲೆ ಕೇಂದ್ರೀಕರಿಸುತ್ತದೆ. ►ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾರ್ಗಸೂಚಿ * ಮಧ್ಯಂತರ ಒಪ್ಪಂದವನ್ನು ತ್ವರಿತವಾಗಿ ಜಾರಿಗೆ ತರಲಾಗುವುದು. * ಎರಡೂ ಕಡೆಯವರು ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸುವತ್ತ ಕೆಲಸ ಮಾಡುತ್ತಾರೆ. * ವ್ಯಾಪಾರ ಒಪ್ಪಂದಗಳ ಮಾತುಕತೆಗಳ ಸಮಯದಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕಗಳನ್ನು ಮತ್ತಷ್ಟು ಕಡಿಮೆ ಮಾಡುವ ಭಾರತದ ವಿನಂತಿಯನ್ನು ಅಮೆರಿಕ ಪರಿಗಣಿಸುತ್ತದೆ. ►ಭಾರತದ ಕೃಷಿ ವಲಯಕ್ಕೆ ರಕ್ಷಣೆ ಈ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಮೆಕ್ಕೆಜೋಳ, ಗೋಧಿ, ಅಕ್ಕಿ, ಸೋಯಾ, ಕೋಳಿ, ಹಾಲು, ಚೀಸ್, ಎಥೆನಾಲ್ (ಇಂಧನ), ತಂಬಾಕು, ಕೆಲವು ತರಕಾರಿಗಳು ಮತ್ತು ಮಾಂಸ ಸೇರಿದಂತೆ ಸೂಕ್ಷ್ಮ ಕೃಷಿ ಮತ್ತು ಡೈರಿ ಉತ್ಪನ್ನಗಳನ್ನು ಸಂಪೂರ್ಣವಾಗಿ ರಕ್ಷಿಸುವ ಮೂಲಕ ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸುತ್ತದೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ರಫ್ತುದಾರರಿಗೆ, ವಿಶೇಷವಾಗಿ MSMEಗಳು, ರೈತರು ಮತ್ತು ಮೀನುಗಾರರಿಗೆ 30 ಟ್ರಿಲಿಯನ್ ಡಾಲರ್ ಮಾರುಕಟ್ಟೆಯನ್ನು ತೆರೆಯುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ. ►ಮೇಕ್ ಇನ್ ಇಂಡಿಯಾಗೆ ಬಲ: ಪ್ರಧಾನಿ ಮೋದಿ ‘ಭಾರತ-ಅಮೆರಿಕ ದೇಶಗಳಿಗೆ ಶುಭ ಸಮಾಚಾರ! ಎರಡು ಮಹಾನ್ ದೇಶಗಳ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ನಾವು ರೂಪಿಸಿದ್ದೇವೆ. ಉಭಯ ದೇಶಗಳ ನಡುವಣ ಬಾಂಧವ್ಯಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದ್ಧತೆಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಚೌಕಟ್ಟು ನಮ್ಮ ಬಲವಾದ ಮತ್ತು ಬೆಳೆಯುತ್ತಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಶ್ರಮಶೀಲ ರೈತರು, ಉದ್ಯಮಿಗಳು, MSMEಗಳು, ನವೋದ್ಯಮ ನಾವೀನ್ಯಕಾರರು, ಮೀನುಗಾರರು ಮತ್ತು ಇತರರಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಬಲಪಡಿಸುತ್ತದೆ. ಇದು ಮಹಿಳೆಯರು ಮತ್ತು ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತದೆ. ನಾವೀನ್ಯತೆಯನ್ನು ಉತ್ತೇಜಿಸಲು ಭಾರತ-ಅಮೆರಿಕ ಬದ್ಧವಾಗಿದೆ. ಈ ಚೌಕಟ್ಟು ಉಭಯ ದೇಶಗಳ ಹೂಡಿಕೆ ಹಾಗೂ ತಂತ್ರಜ್ಞಾನವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಈ ಒಪ್ಪಂದವು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ. ನಾವು ವಿಕಸಿತ ಭಾರತ ನಿರ್ಮಾಣದತ್ತ ಮುನ್ನಡೆಯುವಾಗ ಭವಿಷ್ಯದ ಜಾಗತಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ►ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದಿಂದ ಯಾವ ವಲಯಕ್ಕೆ ಏನೇನು ಲಾಭ? ►ಜವಳಿ ಮತ್ತು ಉಡುಪುಗಳು ಜವಳಿ ಮತ್ತು ಉಡುಪುಗಳಿಗೆ ಈ ಒಪ್ಪಂದದಿಂದ ಹೆಚ್ಚಿನ ಲಾಭವಾಗಲಿದೆ. ಅಮೆರಿಕದ ತೆರಿಗೆಗಳನ್ನು ಕಡಿಮೆ ಮಾಡುವುದರಿಂದ ಭಾರತೀಯ ಬಟ್ಟೆ ಬ್ರಾಂಡ್ಗಳು ವಿಶ್ವದ ಅತಿದೊಡ್ಡ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯವಾಗುತ್ತದೆ. ಸುಂಕಗಳು ಶೇ. 18ಕ್ಕೆ ಇಳಿಯುವುದರೊಂದಿಗೆ, ಭಾರತೀಯ ತಯಾರಕರು ಅಮೆರಿಕನ್ ಖರೀದಿದಾರರಿಗೆ ಹೆಚ್ಚು ಸ್ಪರ್ಧಾತ್ಮಕ ಬೆಲೆಯನ್ನು ನೀಡಬಹುದು. ಚೌಕಟ್ಟು ನಿರಂತರ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನೂ ಒದಗಿಸುತ್ತದೆ. ►ಚರ್ಮ ಮತ್ತು ಪಾದರಕ್ಷೆ ತೆರಿಗೆಗಳು ಕಡಿಮೆಯಾದಾಗ ಚರ್ಮ ಮತ್ತು ಪಾದರಕ್ಷೆ ಉತ್ಪನ್ನಗಳು ಜಾಗತಿಕ ಖರೀದಿದಾರರಿಗೆ ಹೆಚ್ಚು ಕೈಗೆಟುಕುವಂತಾಗುತ್ತವೆ. ಮೌಲ್ಯವರ್ಧಿತ ಚರ್ಮದ ಸರಕುಗಳಿಗೆ ಅಮೆರಿಕ ಪ್ರಮುಖ ತಾಣವಾಗಿದೆ. MSMEಗಳಿಗೆ ಇದು ವಿಶೇಷವಾಗಿ ಮಹತ್ವದ್ದಾಗಿದೆ. ►ರತ್ನಗಳು ಮತ್ತು ಆಭರಣಗಳು ರತ್ನಗಳು ಮತ್ತು ವಜ್ರಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ತರುವ ನಿರ್ಧಾರವು ಭಾರತದ ರತ್ನಗಳು ಮತ್ತು ಆಭರಣ ಉದ್ಯಮಕ್ಕೆ ತಕ್ಷಣದ ಉತ್ತೇಜನ ನೀಡುತ್ತದೆ. ಪಾಲಿಶ್ ಮಾಡಿದ ವಜ್ರಗಳು ಮತ್ತು ಆಭರಣಗಳ ಅತಿದೊಡ್ಡ ಖರೀದಿದಾರ ಅಮೆರಿಕ. ತೆರಿಗೆಗಳನ್ನು ತೆಗೆದುಹಾಕುವುದರಿಂದ ರಫ್ತುದಾರರು ಹೆಚ್ಚಿನ ಲಾಭ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ►ಜೆನೆರಿಕ್ ಫಾರ್ಮಾಸ್ಯುಟಿಕಲ್ಸ್ ಜೆನೆರಿಕ್ ಫಾರ್ಮಾಸ್ಯುಟಿಕಲ್ಸ್ ಹೆಚ್ಚಿನ ಲಾಭ ಪಡೆಯಲಿದೆ. ವ್ಯಾಪಕ ಶ್ರೇಣಿಯ ಜೆನೆರಿಕ್ ಔಷಧಿಗಳ ಮೇಲಿನ ಶೂನ್ಯ ಸುಂಕಗಳು, ನಿಯಂತ್ರಕ ಸಮಸ್ಯೆಗಳ ಪರಿಹಾರದಿಂದ ಯುಎಸ್ಗೆ ಭಾರತದ ಪೂರೈಕೆದಾರ ಪಾತ್ರ ಬಲವಾಗುತ್ತದೆ. ►ವಿಮಾನ ಭಾಗಗಳು ಒಪ್ಪಂದವು ವಿಮಾನ ಭಾಗಗಳು ಮತ್ತು ಸಂಬಂಧಿತ ಘಟಕಗಳ ಮೇಲೆ ಸೆಕ್ಷನ್ 232ರ ಅಡಿಯಲ್ಲಿ ಭಾರತಕ್ಕೆ ವಿನಾಯಿತಿಗಳನ್ನು ನೀಡುತ್ತದೆ. ಶೂನ್ಯ ಸುಂಕಗಳು ಮತ್ತು ಕೋಟಾ ಆಧಾರಿತ ಪ್ರವೇಶವು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತಕ್ಕೆ ಲಾಭಕರವಾಗುತ್ತದೆ. ಇದು ‘ಮೇಕ್ ಇನ್ ಇಂಡಿಯಾ’ಗೆ ಬಲ ನೀಡಲಿದ್ದು, ಹೆಚ್ಚಿನ ಕೌಶಲ್ಯ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.
ಭಾರತ–ಅಮೆರಿಕ ಮಧ್ಯಂತರ ಒಪ್ಪಂದದಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ವಸ್ತುಗಳಿಲ್ಲ: ಸಚಿವ ಪಿಯೂಷ್ ಗೋಯಲ್
ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಭಾರತೀಯ ರೈತರಿಗೆ ಹಾನಿ ಉಂಟುಮಾಡುವ ಯಾವುದೇ ವಸ್ತುಗಳನ್ನು ಒಳಗೊಂಡಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ತಿಳಿಸಿದ್ದಾರೆ. ಈ ಒಪ್ಪಂದದಿಂದ ಭಾರತೀಯ ರೈತರು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಅಮೆರಿಕ ಮಾರುಕಟ್ಟೆಯಲ್ಲಿ ಸುಂಕ ರಹಿತ ಪ್ರವೇಶ ದೊರೆಯುವ ಅನೇಕ ವಲಯಗಳು ತೆರೆಯಲಿವೆ ಎಂದರು. ಭಾರತ ಮತ್ತು ಅಮೆರಿಕ ಶನಿವಾರ ಬೆಳಿಗ್ಗೆ ಜಂಟಿ ಪ್ರಕಟಣೆ ಹೊರಡಿಸಿದ್ದು, ಮಧ್ಯಂತರ ಒಪ್ಪಂದಕ್ಕೆ ಚೌಕಟ್ಟನ್ನು ತಲುಪಿರುವುದಾಗಿ ಹಾಗೂ ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ದಿಕ್ಕಿನಲ್ಲಿ ಸಹಕಾರ ಮುಂದುವರಿಸುವುದಾಗಿ ಘೋಷಿಸಿವೆ. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಯಲ್, ‘ಯಾವುದೇ ಭಾರತೀಯ ರೈತರಿಗೆ ಹಾನಿಯಾಗುವ ವಸ್ತುಗಳನ್ನು ಒಪ್ಪಂದದಲ್ಲಿ ಸೇರಿಸಿಲ್ಲ. ಎಲ್ಲಾ ಸೂಕ್ಷ್ಮ ವಸ್ತುಗಳನ್ನು ಹೊರಗಿಡಲಾಗಿದೆ. ಆನುವಂಶಿಕವಾಗಿ ಮಾರ್ಪಡಿಸಿದ (GM) ವಸ್ತುಗಳಿಗೆ ಭಾರತಕ್ಕೆ ಪ್ರವೇಶವಿಲ್ಲ. ಮಾಂಸ, ಕೋಳಿ, ಹಾಲು ಉತ್ಪನ್ನಗಳು, ಸೋಯಾಬೀನ್, ಮೆಕ್ಕೆಜೋಳ, ಅಕ್ಕಿ, ಗೋಧಿ, ಸಕ್ಕರೆ, ರಾಗಿ, ಬಾಳೆಹಣ್ಣು, ಸ್ಟ್ರಾಬೆರಿ, ಚೆರ್ರಿ, ಸಿಟ್ರಸ್ ಹಣ್ಣುಗಳು, ಹಸಿರು ಬಟಾಣಿ, ಕಾಬುಲ್ ಕಡಲೆ, ಹೆಸರುಕಾಳು, ಎಣ್ಣೆಬೀಜಗಳು, ಎಥೆನಾಲ್ ಹಾಗೂ ತಂಬಾಕು ಸೇರಿದಂತೆ ಹಣ್ಣು–ತರಕಾರಿಗಳ ಮೇಲೆ ಅಮೆರಿಕಕ್ಕೆ ಯಾವುದೇ ಸುಂಕ ವಿನಾಯಿತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು. ►ಭಾರತಕ್ಕೆ ಲಾಭದಾಯಕ ವಲಯಗಳು ಅಮೆರಿಕಕ್ಕೆ ರಫ್ತು ಮಾಡುವ ಹಲವಾರು ವಸ್ತುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೂನ್ಯಕ್ಕೆ ಇಳಿಸಲಾಗಿದೆ ಎಂದು ಗೋಯಲ್ ವಿವರಿಸಿದರು. ರತ್ನಗಳು ಮತ್ತು ವಜ್ರಗಳು, ಔಷಧೀಯ ಉತ್ಪನ್ನಗಳು, ವಿಮಾನದ ಭಾಗಗಳು, ಯಂತ್ರೋಪಕರಣಗಳ ಭಾಗಗಳು, ಜೆನೆರಿಕ್ ಔಷಧಿಗಳು, ಕೆಲವು ವಾಹನ ಭಾಗಗಳು, ಪ್ಲಾಟಿನಂ, ಗಡಿಯಾರಗಳು ಹಾಗೂ ಕೈಗಡಿಯಾರಗಳು, ಸಾರಭೂತ ತೈಲಗಳು, ಗೊಂಚಲು ದೀಪಗಳಂತಹ ಗೃಹಾಲಂಕಾರ ವಸ್ತುಗಳು, ದೀಪದ ಭಾಗಗಳು, ಕೆಲವು ಅಜೈವಿಕ ರಾಸಾಯನಿಕಗಳು, ಕೆಲವು ಕಾಗದ, ಪ್ಲಾಸ್ಟಿಕ್ ಮತ್ತು ಮರದ ವಸ್ತುಗಳು ಇದರಲ್ಲಿ ಸೇರಿವೆ. ಇದೇ ವೇಳೆ, ಮಸಾಲೆಗಳು, ಚಹಾ, ಕಾಫಿ, ಕೊಬ್ಬರಿ, ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆ, ಸಸ್ಯಜನ್ಯ ಎಣ್ಣೆಗಳು, ಅಡಿಕೆ, ಬ್ರೆಝಿಲ್ ಬೀಜಗಳು, ಗೋಡಂಬಿ, ಚೆಸ್ಟ್ನಟ್, ಆವಕಾಡೊ, ಬಾಳೆಹಣ್ಣು, ಪೇರಲ, ಮಾವು, ಕಿವಿ, ಪಪ್ಪಾಯಿ, ಅಣಬೆಗಳು, ಬಾರ್ಲಿ ಸೇರಿದಂತೆ ಧಾನ್ಯಗಳು ಹಾಗೂ ಕೆಲವು ಸಂಸ್ಕರಿಸಿದ ಆಹಾರ ಪದಾರ್ಥಗಳ ರಫ್ತಿನ ಮೇಲಿನ ಸುಂಕವನ್ನೂ ಶೂನ್ಯಕ್ಕೆ ಇಳಿಸಲಾಗುವುದು ಎಂದರು. ಭಾರತ ಕಡಿತಗೊಳಿಸಿದ ಸುಂಕಗಳು ದೇಶದಲ್ಲಿ ಉತ್ಪಾದನೆಯಾಗದ ಅಥವಾ ಸಮರ್ಪಕ ಪ್ರಮಾಣದಲ್ಲಿ ಲಭ್ಯವಿಲ್ಲದ ಕೆಲವು ವಸ್ತುಗಳ ಮೇಲಿನ ಸುಂಕಗಳನ್ನು ಭಾರತ ಕಡಿಮೆ ಮಾಡಿದೆ ಅಥವಾ ತೆಗೆದುಹಾಕಿದೆ ಎಂದು ಗೋಯಲ್ ಒಪ್ಪಿಕೊಂಡರು. ‘ಕೆಲವು ವಸ್ತುಗಳ ಸುಂಕಗಳನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ; ಇನ್ನು ಕೆಲವು ವಸ್ತುಗಳಿಗೆ ಹಂತ ಹಂತವಾಗಿ ಕಡಿತಗೊಳಿಸಲಾಗುತ್ತದೆ; ಕೆಲವು ವಸ್ತುಗಳಿಗೆ ಕೋಟಾ ಆಧಾರಿತ ಸುಂಕ ವ್ಯವಸ್ಥೆ ಅನ್ವಯಿಸಲಾಗುತ್ತದೆ’ ಎಂದರು. ಈ ಪಟ್ಟಿಯಲ್ಲಿ ಸೇಬುಗಳು, ಡಿಡಿಜಿಎಸ್ (DDGS), ವೈನ್ ಮತ್ತು ಸ್ಪಿರಿಟ್ಗಳು (ಕನಿಷ್ಠ ಆಮದು ಬೆಲೆಯೊಂದಿಗೆ), ಪಿಸ್ತಾ, ವಾಲ್ನಟ್, ಬಾದಾಮಿ, ಕೆಲವು ಕೈಗಾರಿಕಾ ಉತ್ಪಾದನಾ ಒಳಹರಿವುಗಳು, ಕ್ಯಾನ್ಸರ್, ಹೃದಯ ಹಾಗೂ ನರವೈಜ್ಞಾನಿಕ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಔಷಧಿಗಳು, ಕೆಲವು ಸೌಂದರ್ಯವರ್ಧಕಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಕಂಪ್ಯೂಟರ್ ಸಂಬಂಧಿತ ಹಲವಾರು ಉತ್ಪನ್ನಗಳು ಹಾಗೂ ವಿವಿಧ ವೈದ್ಯಕೀಯ ಉಪಕರಣಗಳು ಸೇರಿವೆ. ‘ಭಾರತಕ್ಕೆ ಅಗತ್ಯವಿರುವ ವಿವಿಧ ಐಸಿಟಿ ಉತ್ಪನ್ನಗಳನ್ನು ಒದಗಿಸಲು ಅಮೆರಿಕ ಒಪ್ಪಿಕೊಂಡಿರುವುದು ದೊಡ್ಡ ಗೆಲುವು’ ಎಂದು ಗೋಯಲ್ ಹೇಳಿದರು.
Ballari | ʼಆರೋಗ್ಯದ ನಡಿಗೆ ಜನರ ಬಳಿಗೆ’ ಶಿಬಿರಕ್ಕೆ ಉತ್ತಮ ಸ್ಪಂದನೆ
ಬಳ್ಳಾರಿ/ ಕುರುಗೋಡು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪುರಸಭೆ ಆಡಳಿತ, ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ ಯಲ್ಲಾಪುರ ಗ್ರಾಮಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ‘ಆರೋಗ್ಯದ ನಡಿಗೆ ಜನರ ಬಳಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಯಲ್ಲಾಪುರ ಉಪಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಜವಳಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಾಂಕ್ರಾಮಿಕ ರೋಗಗಳು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳಾಗಿದ್ದು, ಬ್ಯಾಕ್ಟೀರಿಯಾ ಮತ್ತು ವೈರಸ್ ಮೂಲಕ ವ್ಯಾಪಿಸುತ್ತವೆ ಎಂದು ತಿಳಿಸಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 91ಕ್ಕೂ ಹೆಚ್ಚು ಹದಿಹರೆಯದವರು, ಗರ್ಭಿಣಿಯರು, ಚಿಕ್ಕ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಸುನಿಲ್, ನೇತ್ರಾಧಿಕಾರಿ ಜಿ. ಪಲ್ಲವಿ, ಆರೋಗ್ಯ ಇಲಾಖೆಯ PHCO ಸುನೀತಾ ಡಿ., ಸುಭಾನ್ ಕೆ., ಶ್ರೀಮತಿ ನೇತ್ರಾವತಿ, ಶೇಖರ್ ಹೆಚ್., ಬಸವರಾಜ್, ಗಣೇಶ್, ಅನಂತ್ ಕುಮಾರ್ ಸೇರಿದಂತೆ ಆಶಾ ಕಾರ್ಯಕರ್ತರು, ವಾರ್ಡ್ ಸದಸ್ಯರು, ಗ್ರಾಮ ಹಿರಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
SSLC Exam: 625 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನಗದು ಬಹುಮಾನ: ಚನ್ನಗಿರಿ ಶಾಸಕ ಘೋಷಣೆ
ದಾವಣಗೆರೆ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ. ವಾರ್ಷಿಕ ಅಂತಿಮ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಈ ಬಾರಿಯ ಪರೀಕ್ಷೆಯಲ್ಲಿ ಔಟ್ ಆಪ್ ಔಟ್ 625ಕ್ಕೆ 625 ಅಂಕಗಳನ್ನು ಪಡೆದರೆ ಅಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ದಾವಣಗೆರೆಯ ಚನ್ನಗಿರಿಯ ಶಾಸಕರು ಘೋಷಿಸಿದ್ದಾರೆ. ಈ ಮೂಲಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು
ʼಮೆಟ್ರೋ ದರ ಏರಿಕೆ ವಿಚಾರʼದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಸುಳ್ಳು ಹೇಳುತ್ತಿದೆ : ಎಚ್ಡಿಕೆ
ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜನತೆಗೆ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಮೆಟ್ರೋ ಯೋಜನೆಯಲ್ಲಿ ತನ್ನ ಪಾಲು ಜಾಸ್ತಿ ಇದೆ. ಹಾಗಿದ್ದ ಮೇಲೆ ಬೆಲೆ ಏರಿಕೆ ಮಾಡುವುದು ಯಾರು? ರಾಜ್ಯ ಸರಕಾರ ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದರು. ಕೇಂದ್ರ ಸರಕಾರ ಕೇವಲ 20%ರಷ್ಟು ಮಾತ್ರ ಅನುದಾನ ನೀಡುತ್ತದೆ. ಉಳಿದ 80%ರಷ್ಟು ಅನುದಾನವನ್ನು ರಾಜ್ಯ ಸರಕಾರವೇ ಭರಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಹೀಗಿದ್ದ ಮೇಲೆ ದರ ಏರಿಕೆ ಮಾಡಿದ್ದು ಯಾರು? ಕೇಂದ್ರ ಸರಕಾರವ ಅಥವಾ ರಾಜ್ಯ ಸರಕಾರವ? ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮಾತ್ರ ಮೆಟ್ರೋ ಪ್ರಯಾಣ ಪದೇ ಪದೇ ದೊಡ್ಡ ಮೊತ್ತದಲ್ಲಿ ಏರಿಕೆಯಾಗುತ್ತಿದೆ. ಅದೇ ರೀತಿ ಬೇರೆ ರಾಜ್ಯಗಳ ಮೆಟ್ರೋ ದರ ಯಾಕೆ ಏರಿಕೆ ಆಗುತ್ತಿಲ್ಲ? ಅಲ್ಲಿನ ಸರಕಾರಗಳು ಹೇಗೆ ನಡೆಸುತ್ತಿವೆ ಎಂಬುದನ್ನು ಇವರು ಹೇಳಬೇಕಲ್ಲವೇ? ಬೇರೆಯದಕ್ಕೆಲ್ಲ ನಮ್ಮ ಪಾಲು ಜಾಸ್ತಿ ಎನ್ನುವವರು ಪ್ರಯಾಣ ದರದ ವಿಷಯದಲ್ಲಿ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಅವರು ಕೇಳಿದರು. ಕಳೆದ ಎರಡೂವರೆ ವರ್ಷದಿಂದ ಇವರು ಮಾಡುತ್ತಿರುವ ತಪ್ಪು ನಿರ್ಣಯಗಳಿಂದ ಜನ ರೋಸಿ ಹೋಗಿದ್ದಾರೆ. ಅದನ್ನು ಕೇಂದ್ರದ ತಲೆಗೆ ಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದು ನಾನು ಹೇಳಲು ಇಚ್ಚಿಸುತ್ತೇನೆ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಲಬುರಗಿ | ಫೆ.8 ರಂದು ಹಿಂದೂ ಸಮ್ಮೇಳನ : ಆಯೋಜನಾ ಸಮಿತಿ ಅಧ್ಯಕ್ಷೆ ಇಂದಿರಾ ರಾಠೋಡ್
ಕಲಬುರಗಿ: ಹಿಂದೂ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಫೆ.8 ರಂದು ಸಂಜೆ 5.30ಕ್ಕೆ ನಗರದ ರಾಮಮಂದಿರ ಸಮೀಪ ʼಹಿಂದೂ ಸಮ್ಮೇಳನʼ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜನಾ ಸಮಿತಿಯ ಅಧ್ಯಕ್ಷೆ ಇಂದಿರಾ ರಾಠೋಡ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3.30ಕ್ಕೆ ಇಲ್ಲಿನ ಸಂತೋಷ್ ಕಾಲೋನಿಯ ಹನುಮಾನ್ ಮಂದಿರದಿಂದ ಪ್ರಾರಂಭವಾಗುವ ಶೋಭಾ ಯಾತ್ರೆಯು ಸಂಜೆ 5.30 ರವೆಗೆ ರಾಮಮಂದಿರಕ್ಕೆ ತಲುಪಲಿದೆ. ಬಳಿಕ ಅಲ್ಲಿಯೇ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ಚಿನ್ಮಯಗಿರಿ ಮಠದ ವೀರಮಹಾಂತ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಸಾಮಾಜಿಕ ಸಾಮರಸ್ಯ ವೇದಿಕೆಯ ಸಂಯೋಜಕ ಶಿವಲಿಂಗ ಕುಂಬಾರ, ಸುಮಂಗಲಾ ಚಕ್ರವರ್ತಿ ಉಪಸ್ಥಿತಿ ವಹಿಸಲಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎ.ಚ್. ರೆಡ್ಡಿ, ಸುಭಾಷಗೌಡ, ರಮೇಶ, ಗುರುರಾಜ, ಸುರೇಶ, ಅರವಿಂದ, ಪಲ್ಲವಿ, ಪ್ರಶಾಂತ, ಪಲ್ಲವಿ ಗುರುರಾಜ, ಸುಮಿತ್ರಾ ಕಲಶೆಟ್ಟಿ, ಮೋಹನ್ ಸೇರಿದಂತೆ ಇತರರಿದ್ದರು.
ಕೈಮುಗಿದು ಪ್ರಾರ್ಥಿಸಿ 17ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರದ ಖ್ಯಾತ ಬೇಕರಿ ಮಾಲೀಕ
ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿ ಖ್ಯಾತ ಮಲ್ತಾನಿ ಬೇಕರಿ ಮಾಲೀಕ ಹಾಗೂ ಉದ್ಯಮಿ ಸುನಿಲ್ ಮೋತಿಲಾಲ್ ಸದಾರಂಗಾನಿ (59) ಅಪಾರ್ಟ್ಮೆಂಟ್ ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜನರಲ್ಲಿ ಆಘಾತ ಮೂಡಿಸಿದೆ. ಇಲ್ಲಿನ ವಿಜಯಪುರ ರಸ್ತೆಯಲ್ಲಿರುವ ಪನಾಶ್ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಸದಾರಂಗಾನಿ
ಕಲಬುರಗಿ | ಅಲಿ ಅಲ್ ಹುಸೈನಿ, ಅರುಣಕುಮಾರ್, ನೀಲಕಂಠರಾವ್, ಮುಹಮ್ಮದ್ ಚಿಸ್ತಿ, ಮರ್ತೂರಗೆ ರಾಜ್ಯ ಸಚಿವ ಸ್ಥಾನಮಾನ
ಬೆಂಗಳೂರು : ರಾಜ್ಯದ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ ಅಧ್ಯಕ್ಷರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಶನಿವಾರ ಆದೇಶಿಸಲಾಗಿದೆ. ಕಲಬುರಗಿ ಮೂಲದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ನೀಲಕಂಠರಾವ್ ಮೂಲಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಚಿಸ್ತಿ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮರ್ತೂರು ಸೇರಿದಂತೆ ಒಟ್ಟು 54 ಮಂದಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಆದೇಶಿಸಲಾಗಿದೆ. ಈ ಕುರಿತು ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿರುವ ಬಾಣದರಂಗಯ್ಯ ಎನ್.ಆರ್ ಅವರು, ರಾಜ್ಯದ ವಿವಿಧ ನಿಗಮ, ಮಂಡಳಿಯ ಅಧ್ಯಕ್ಷರಾದ 54 ಮಂದಿಗೆ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.
ನೆದರ್ಲೆಂಡ್ ವಿರುದ್ಧ ಗೆದ್ದು ನಿಟ್ಟುಸಿರುವ ಬಿಟ್ಟ ಪಾಕ್; ಆದರೂ ಸೂಪರ್ 8 ಹಾದಿ ಸುಲಭವಿಲ್ಲ ಯಾಕೆ?
Pakistan Vs Netherlands- ನೆದರ್ಲೆಂಡ್ ವಿರುದ್ಧ ರಾಜಾರೋಷವಾಗಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಒದ್ದಾಡಿ ಗೆದ್ದಿರುವ ಪಾಕಿಸ್ತಾನ ತಂಡ ಇದೀಗ ತನ್ನ ಕಾಲಿಗೆ ತಾನೇ ಚಪ್ಪಡಿ ಹಾಕಿಕೊಂಡಿದೆ. ಈಗಾಗಲೇ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಿರುವ ಪಾಕ್ ಗೆ ಸೂಪರ್ 8 ತಲುಪಲು ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಈ ಮೂರು ಪಂದ್ಯಗಳಲ್ಲಿ ಒಂದ ಪಂದ್ಯವನ್ನು ಸೋತರೂ ಅಥವಾ ಬೇರಾವುದೇ ಕಾರಣಕ್ಕೆ ರದ್ದುಗೊಂಡರೂ ಪಾಕಿಸ್ತಾನಕ್ಕೆ ಪರಿಸ್ಥಿತಿ ಕಠಿಣವಾಗಲಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯವನ್ನು 15 ಓವರ್ ಗಳೊಳಗೆ ಮುಗಿಸಿದ್ದಿದ್ದರೆ ಪಾಕ್ ನ ರನ್ ರೇಟ್ ಆಕರ್ಷಕವಾಗಿರುತ್ತಿತ್ತು. ಈಗ ಅಷ್ಟಕ್ಕಷ್ಟೇ ಎಂಬಂತಾಗಿದೆ.
ಕಲಬುರಗಿ | ಎಸ್ಸಿ, ಎಸ್ಪಿ, ಟಿಎಸ್ಪಿ ಯೋಜನೆಗಳಿಗೆ 50 ಕೋಟಿ ರೂ. ಮೀಸಲಿಡಿ: ಎಸ್.ಆರ್.ಕೊಲ್ಲೂರು ಒತ್ತಾಯ
ಕಲಬುರಗಿ : ಮುಂಬರುವ ಹಣಕಾಸು ವರ್ಷದ ಬಜೆಟ್ನಲ್ಲಿ ದಲಿತರ ಏಳಿಗೆಗಾಗಿ ಅನುಷ್ಠಾನಗೊಳ್ಳುವ ಎಸ್ಸಿ, ಎಸ್ಪಿ ಹಾಗೂ ಟಿಎಸ್ಪಿ ಯೋಜನೆಗಳಿಗೆ ಕನಿಷ್ಠ 50 ಕೋಟಿ ರೂ. ಅನುದಾನವನ್ನು ಪ್ರತ್ಯೇಕವಾಗಿ ನಿಗದಿಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರು ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನಲ್ಲಿ ಎಸ್ಸಿ, ಎಸ್ಪಿಗೆ 29,992 ಕೋಟಿ ರೂ. ಹಾಗೂ ಟಿಎಸ್ಪಿ ಯೋಜನೆಗೆ 12,026 ಕೋಟಿ ರೂ. ಮೀಸಲಿಟ್ಟು ಒಟ್ಟು 42,018 ಕೋಟಿ ರೂ. ಅನುದಾನ ಘೋಷಿಸಿದ್ದರು. ಆದರೆ ಈವರೆಗೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಎಷ್ಟು ಹಣ ಖರ್ಚಾಗಿದೆ ಎಂಬ ಸ್ಪಷ್ಟ ಅಂಕಿಅಂಶಗಳನ್ನು ಸರ್ಕಾರ ಹೊರಡಿಸಿಲ್ಲ ಎಂದು ಆರೋಪಿಸಿದರು. 2014ರಿಂದ 2025ರವರೆಗೆ ಎಸ್ಸಿ, ಎಸ್ಪಿ, ಟಿಎಸ್ಪಿ ಅನುದಾನವು ಸುಮಾರು 70 ಸಾವಿರ ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಆ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದ್ದು, ದಲಿತರ ಏಳಿಗೆಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಕಲಂ 7(ಸಿ) ಮೂಲಕ ದಲಿತರ ಅನುದಾನವನ್ನು ದುರುಪಯೋಗ ಮಾಡುತ್ತಿದೆ. ದಲಿತೋದ್ದಾರಕ್ಕಾಗಿ ಯಾವುದೇ ವಿಶೇಷ ಕಾರ್ಯಕ್ರಮಗಳು ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ದಲಿತರ ಸರ್ಕಾರ’ ಎಂದು ಹೇಳುತ್ತಲೇ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮೀಸಲಾದ ಅನುದಾನವನ್ನು ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಬಳಸಲು ಸರ್ಕಾರ ಯೋಜನೆ ರೂಪಿಸಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದರು. ಇನ್ನೂ ಯುಪಿಎ ಸರ್ಕಾರ ಜಾರಿಗೆ ತಂದ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ, ಬಿಜೆಪಿ ಸರ್ಕಾರ ವಿಬಿ ಜಿರಾಮ್ ಜಿ ಕಾಯ್ದೆ ಜಾರಿಗೊಳಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ವಿಬಿ ಜಿರಾಮ್ ಜಿ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮರೆಪ್ಪ ಬನ್ನಟ್ಟಿ, ಮಲ್ಲಿಕಾರ್ಜುನ್ ಮಾಳಗೆ ಹಾಗೂ ಪಾಂಡುರಂಗ ಮದನಕರ್ ಉಪಸ್ಥಿತರಿದ್ದರು.
ಕಲಬುರಗಿ : ಕಬ್ಬಿನ ಪ್ರೋತ್ಸಾಹಧನ ಬಿಡುಗಡೆ, ಸಿದ್ದಶ್ರೀ ಎಥಿನಾಲ್ ಕಂಪನಿಯಿಂದ ಬಾಕಿ ಹಣ ಪಾವತಿ, ಬೆಳೆ ವಿಮೆ ಪರಿಹಾರ, ಅತಿವೃಷ್ಟಿ ನಷ್ಟ ಪರಿಹಾರ, ತೊಗರಿ ಬೆಂಬಲ ಬೆಲೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಫೆ.12ರಂದು ಕಲಬುರಗಿ ಜಿಲ್ಲಾದ್ಯಂತ ಸಾರ್ವತ್ರಿಕ ಮುಷ್ಕರ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂದಾಜು 45,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಹೋರಾಟದ ಹಿನ್ನೆಲೆ ರಾಜ್ಯ ಸರ್ಕಾರ ನವೆಂಬರ್ನಲ್ಲಿ ಪ್ರತಿ ಟನ್ಗೆ 50 ರೂ. ಪ್ರೋತ್ಸಾಹಧನ ಘೋಷಿಸಿದರೂ, ಈಗಾಗಲೇ ಸುಮಾರು 28,000 ಹೆಕ್ಟೇರ್ ಕಬ್ಬು ನುರಿತಿದ್ದರೂ ಇದುವರೆಗೆ ಪ್ರೋತ್ಸಾಹಧನ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು. ಚಿಂಚೋಳಿಯ ಸಿದ್ದಶ್ರೀ ಎಥಿನಾಲ್ ಕಂಪನಿಯು ಮೊದಲ ಹಂತದಲ್ಲಿ ಪ್ರತಿ ಟನ್ಗೆ 2,550 ರೂ. ಹಾಗೂ ನಂತರ 150 ರೂ. ಮಾತ್ರ ಪಾವತಿಸಿ, ಉಳಿದ ಹಣ ಬಾಕಿ ಇಟ್ಟುಕೊಂಡಿದೆ. ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಸಂಪೂರ್ಣ ಹಣ ಪಾವತಿಸಬೇಕು. ವಿಳಂಬ ಪಾವತಿಗೆ ಶೇ.16ರಷ್ಟು ಬಡ್ಡಿಯೊಂದಿಗೆ ಹಣ ನೀಡಬೇಕು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾಬಿನ್, ತೊಗರಿ ಹಾಗೂ ಹತ್ತಿ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಮುಖ್ಯಮಂತ್ರಿ ಪರಿಶೀಲನೆ ನಡೆಸಿ NDRF–SDRF ಮಾನದಂಡದಂತೆ ಪರಿಹಾರ ಘೋಷಿಸಿದ್ದರೂ, ವಿತರಣೆಯಲ್ಲಿ ತಾರತಮ್ಯ ನಡೆದಿದೆ. ಎಲ್ಲ ರೈತರಿಗೆ ಸಮಾನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ 3,01,000 ರೈತರು ಒಟ್ಟು 99 ಕೋಟಿ ರೂ. ಬೆಳೆ ವಿಮೆ ಪಾವತಿಸಿದ್ದು, 3,78,990 ಹೆಕ್ಟೇರ್ ಪ್ರದೇಶ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಡಿಸೆಂಬರ್ನಲ್ಲಿ ನೀಡಬೇಕಿದ್ದ ಮಧ್ಯಂತರ ವಿಮೆ ಪರಿಹಾರ ಇನ್ನೂ ಬಿಡುಗಡೆ ಆಗಿಲ್ಲ. ರಾಜ್ಯ–ಕೇಂದ್ರ ಸರ್ಕಾರಗಳು ಹಾಗೂ ಇಫ್ಕೊ ಟೋಕಿಯೊ ವಿಮಾ ಕಂಪನಿ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ತೊಗರಿಗೆ ಸಮರ್ಪಕ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಂಎಸ್ಪಿಗೆ ಕಾನೂನು ಜಾರಿ ಇಲ್ಲದೆ ಖರೀದಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳಿಗೆ ಸಮರ್ಪಕ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹಧನ ನೀಡಬೇಕು ಎಂದು ಹೇಳಿದರು. ಎಪ್ರಿಲ್ 2025 ರಿಂದ ನವೆಂಬರ್ 2025ರವರೆಗೆ 47 ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗಿದ್ದರೂ ಆತ್ಮಹತ್ಯೆಗೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ದೇವು ಬಿರಾದಾರ ಹಾಗೂ ಬಸವರಾಜ ಉಪಸ್ಥಿತರಿದ್ದರು.
ಫೆಬ್ರವರಿ 7ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 7) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ಅವಹೇಳನಕಾರಿ ಬರಹ ಪ್ರಕರಣ : ಬಿಳಿದಾಳೆ ಈಶ ದೋಷಮುಕ್ತಿ
ಮಂಗಳೂರು: ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ಅವಹೇಳನಕಾರಿ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿದಾಳೆ ಈಶ ಅವರನ್ನು ಪುತ್ತೂರಿನ ನ್ಯಾಯಾಲಯವು ದೋಷಮುಕ್ತಿಗೊಳಿಸಿದೆ. ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ಮಠದ ವಿರುದ್ಧ 2009 ಮೇ 27 ರ ʼಗೌರಿ ಲಂಕೇಶ್ʼ ಪತ್ರಿಕೆಯಲ್ಲಿ ಅವಹೇಳನಕಾರಿ ಹಾಗೂ ಜಾತಿಗಳ ನಡುವೆ ವೈರುಧ್ಯ ಉಂಟುಮಾಡುವ ಬರಹ ಪ್ರಕಟವಾಗಿತ್ತು, ಎಂದು ಆರೋಪಿಸಿ ಮಠದ ಭಕ್ತರಾದ ಉಪ್ಪಿನಂಗಡಿಯ ಕೇಶವ ಕೃಷ್ಣ ಅವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿ ಗೌರಿ ಲಂಕೇಶ್ ಅವರನ್ನು ಮೊದಲ ಆರೋಪಿಯಾಗಿ, ಅಂಕಣಕಾರ ಬಿಳಿದಾಳೆ ಈಶ ಅವರನ್ನು ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳ ವಿರುದ್ಧ ದೋಷಾರೋಪಣೆ ರೂಪಿಸಿತ್ತು. ವಿಚಾರಣೆ ನಡೆಯುತ್ತಿರುವ ನಡುವೆಯೇ ಗೌರಿ ಲಂಕೇಶ್ ಹತ್ಯೆಗೊಳಗಾದರು. ಎರಡನೇ ಆರೋಪಿ ಬಿಳಿದಾಳೆ ಈಶ ವಿರುದ್ಧ ಸುದೀರ್ಘ 16 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಫೆ.7ರಂದು ಅವರನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್, ಸಲೀನಾ ನೆಕ್ಕಿಲಾಡಿ ಹಾಗೂ ಮಿಸ್ರಿಯಾ ಮಿತ್ತೂರು ವಾದ ಮಂಡಿಸಿದ್ದರು. ►ಪ್ರಕರಣವೇನು? ಮಠಕ್ಕೆ ಹಿಂದಿ ಸಿನಿಮಾ ನಟಿ ಮಲ್ಲಿಕಾ ಶೆರಾವತ್ ಭೇಟಿ ನೀಡಿದ್ದ ಹಿನ್ನೆಲೆಯನ್ನು ಉಲ್ಲೇಖಿಸಿ, ಪತ್ರಿಕೆಯ ಮುಖಪುಟದಲ್ಲಿ “ಪೋರಿ ಹಿಂದೆ ಹೋರಿ” ಎಂಬ ಶೀರ್ಷಿಕೆಯೊಂದಿಗೆ ಸ್ವಾಮೀಜಿ ಹಾಗೂ ಮಠದ ವಿರುದ್ಧ ಫೋಟೋ ಸಹಿತ ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಪತ್ರಿಕೆಯ ಪ್ರಮುಖ ಅಂಕಣಕಾರರಾದ ಬಿಳಿದಾಳೆ ಈಶ ಬರೆದಿದ್ದರು ಎಂದು ಆರೋಪಿಸಲಾಗಿತ್ತು.
ಉಳ್ಳಾಲ ನಗರಕ್ಕೆ ಭೂಗತ ಲೈನ್ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 186 ಕೋಟಿ ರೂ. ಮಂಜೂರು: ಯು.ಟಿ. ಖಾದರ್
ಮಂಗಳೂರು, ಫೆ.7: ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಭೂಗತ ಲೈನ್ ಮೂಲಕ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 186 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಲಿದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಮನೆಗಳ ಮೇಲೆ ಹಾದು ಹೋಗಿರುವ ಎಚ್ಟಿ ಲೈನ್, ಕಂಪೌಂಡ್ ಒಳಗೆ ವಿದ್ಯುತ್ ಕಂಬಗಳು ಇರುವಂತಹ ನಾನಾ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು. ನಗರವನ್ನು ಮಾದರಿಯಾಗಿ ರೂಪಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು. ಮಂಗಳೂರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ 32 ಕೆವಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು 110 ಕೆವಿ ವ್ಯವಸ್ಥೆಗೆ ಪರಿವರ್ತಿಸಲು 96 ಕೋಟಿ ರೂ. ಮಂಜೂರಾಗಿದೆ. ಮುಂದಿನ 30 ವರ್ಷಗಳಲ್ಲಿ ಎಷ್ಟೇ ಕಾರ್ಖಾನೆಗಳು, ಮನೆಗಳು ಹಾಗೂ ಅಭಿವೃದ್ಧಿ ಯೋಜನೆಗಳು ಬಂದರೂ ವಿದ್ಯುತ್ ಅಭಾವ ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ ಎಂದು ನುಡಿದರು. 252 ಕೋಟಿ ರೂ. ವೆಚ್ಚದ ಕೋಟೆಪುರ–ಉಳ್ಳಾಲ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಹೆದ್ದಾರಿಯನ್ನು ಹೊರತುಪಡಿಸಿ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕಿಸುವ ಇಷ್ಟೊಂದು ದೊಡ್ಡ ಸೇತುವೆ ಬೇರೆಡೆ ನಿರ್ಮಾಣವಾಗಿಲ್ಲ. ಒಂದೂವರೆ ಕಿಲೋಮೀಟರ್ ಉದ್ದದ ಈ ಸೇತುವೆ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸೇತುವೆಯ ಪಕ್ಕದಲ್ಲಿ ಹೋಟೆಲ್, ರೆಸ್ಟೋರೆಂಟ್ ಹಾಗೂ ಬೋಟ್ ಜಟ್ಟಿಗಳ ನಿರ್ಮಾಣಕ್ಕಾಗಿ 6 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು. ಪುನರ್ವಿಂಗಡಣೆಯಿಂದ ಮಂಗಳೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡ ತುಂಬೆ, ಮೇರಮಜಲು ಸೇರಿದಂತೆ ಇತರ ಗ್ರಾಮಗಳ ಅಭಿವೃದ್ಧಿಗೂ ಶ್ರಮಿಸಲಾಗುತ್ತಿದೆ. ಈಗಾಗಲೇ ಹರೇಕಳ–ತುಂಬೆ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ 62 ಕೋಟಿ ರೂ. ವೆಚ್ಚದ ಸಜಿಪ–ತುಂಬೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಶಾಸಕ ಶಿವಲಿಂಗೇ ಗೌಡ ಅವರು ಆಡಿದ ಮಾತಿನ ಕುರಿತು ಸುದ್ದಿಗಾರರು ಗಮನ ಸೆಳೆದಾಗ, “ಆ ರೀತಿ ಮಾತನಾಡಬಾರದಿತ್ತು. ಶಾಸಕರು ಕಾನೂನು ಹಾಗೂ ನಿಯಮಗಳನ್ನು ತಿಳಿದವರಾಗಿರಬೇಕು. ಸದನದಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಕ್ಷೇತ್ರದ ಜನರು ತಮ್ಮ ನಡೆನುಡಿಯನ್ನು ಗಮನಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಬಾರದು” ಎಂದು ಹೇಳಿದರು. ಅಧಿವೇಶನದಲ್ಲಿ ಗೊಂದಲ ಉಂಟಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧಿವೇಶನ ನಡೆಸುವುದು ಸರಿಯಲ್ಲ ಎಂದು ಸ್ಪೀಕರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಯು.ಟಿ. ಖಾದರ್ ಅವರು, ಮುಖ್ಯಮಂತ್ರಿ ಆ ರೀತಿಯ ಮಾತು ಆಡಿಲ್ಲ. ವಿಪಕ್ಷ ಸದಸ್ಯರು ಭಾಷಣಕ್ಕೆ ಅಡ್ಡಿಪಡಿಸಿದ ವೇಳೆ ‘ಸದಸ್ಯರು ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಸ್ಪೀಕರ್ ಪೀಠದಲ್ಲಿರುವವರು ಎಲ್ಲವನ್ನೂ ಸಮನ್ವಯದಿಂದ ನಡೆಸಬೇಕಾಗುತ್ತದೆ ಎಂದರು. ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ಗೇಟ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯ ಶಾಸಕರು ಹಾಗೂ ಸಂಸದರು ಚರ್ಚಿಸಿ ಜನರಿಗೆ ಸ್ಪಷ್ಟನೆ ನೀಡಬೇಕು. ಪ್ರತಿಯೊಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮೊದಲು ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡುವೆ ಎಂಒಯು ಮಾಡಲಾಗುತ್ತದೆ. ಅದರಲ್ಲಿ ಸಮಗ್ರ ಮಾಹಿತಿ ಇರುತ್ತದೆ. ಶಾಸಕರು ಹಾಗೂ ಸಂಸದರು ಇದನ್ನು ಪಡೆದು ಜನರಿಗೆ ತಿಳಿಸಬೇಕು ಎಂದು ಹೇಳಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ಗೆ ಕನ್ನಡ ಭವನ ನಿರ್ಮಾಣಕ್ಕಾಗಿ ವಾಮಂಜೂರಿನ ತಿರುವೈಲ್ನಲ್ಲಿ 50 ಸೆಂಟ್ಸ್ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.
ನಾನು ಸಿಎಂ ಆಗಬೇಕು ಅನ್ನೋ ಕನಸು ಜನರಿಗೆ, ಶಾಸಕರಿಗೂ ಇದೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ನಾನು ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ. ನಿಮಗೂ (ಮಾಧ್ಯಮಗಳಿಗೆ) ಇದೆ. ಆದರೆ ಪಕ್ಷ ಏನು ತೀರ್ಮಾನ ಮಾಡುತ್ತದೆ, ಅದನ್ನೇ ನಾವು ಕೇಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮುಖ್ಯಮಂತ್ರಿ ಕನಸಿನ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಇದು ವೈಯಕ್ತಿಕ
ಮರದ ಬೇರುಗಳ ಸೇತುವೆಗೆ ಹೆಸರುವಾಸಿ ಮೇಘಾಲಯದ ಈ ಗ್ರಾಮ
ನೈಸರ್ಗಿಕ ಸೇತುವೆಯ ಹರಿಕಾರ ಹ್ಯಾಲಿ ವಾರ್ ಹೆಗಲಿಗೆ ಪದ್ಮಶ್ರೀ ಪ್ರಶಸ್ತಿಯ ಗರಿಮೆ
'ಸರ್ಕಾರ ಅಲ್ಪ ಸಂಖ್ಯಾತರಷ್ಟೇ ಏಕೆ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ'
ಗದಗ: ಕರ್ನಾಟಕ ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಒಲೈಕೆ ರಾಜಕಾರಣ ಮಾಡುತ್ತಲೇ ಬಂದಿದೆ. ಹಿಂದುಳಿದವರು, ಬಡವರು, ರೈತರ ಸಾಲ ಮನ್ನಾ ಎಲ್ಲರಿಗೂ ಮಾಡಬೇಕಿತ್ತು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ವಿಮೆ ಹಣ ನೀಡುತ್ತಿಲ್ಲ. ರೈತರ ಬಡ್ಡಿ ಮನ್ನಾ ಸಹ ಆಗಿಲ್ಲ ಎಂದು ಮಾಜಿ
100ನೇ ದಿನಕ್ಕೆ ಕಾಲಿಟ್ಟ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿ ಧರಣಿ
ಬಿಎಸ್ಪಿಎಲ್ ಕಾರ್ಖಾನೆಯ ಆಳ ಮತ್ತು ಅಗಲ
MSIL ಚಿಟ್ಸ್ ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಬಿಡುಗಡೆ
ಬೆಂಗಳೂರು : ಜನರು ಉಳಿತಾಯದ ಹೂಡಿಕೆಗಳು ಸರಕಾರದ ಎಂಎಸ್ಐಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ MSIL ಚಿಟ್ಸ್ ಹೊಸ ಸಾಫ್ಟ್ ವೇರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು. ಜನರ ಹೂಡಿಕೆ ಭದ್ರತೆಯ ಖಾತ್ರಿ : ಹೂಡಿಕೆ ಹಣವನ್ನು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ ಐ ಎಲ್ ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯವಿರುತ್ತದೆ. ಆದರೆ ಎಂಎಸ್ ಐ ಎಲ್, ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ.5 ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದರು. ಚಿಟ್ ಫಂಡ್ ವಹಿವಾಟು 10000 ಕೋಟಿ ಗೆ ಏರಿಸುವ ಗುರಿ: ಕೇರಳ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ 47000 ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು 10000 ಕೋಟಿ ಯಷ್ಟು ವಹಿವಾಟು ನಡೆಸುವ ಗುರಿಯನ್ನು ಸಂಸ್ಥೇ ಹೊಂದಿದೆ. ಶಿಕ್ಷಣ, ಆರೋಗ್ಯ, ಮದುವೆ, ಮನೆ ಹೀಗೆ, ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ. ಹಣ ಗಳಿಸುವುದು ಹಾಗೂ ಸುಭದ್ರವಾಗು ಹೂಡಿಕೆ ಮಾಡುವುದೂ ಮುಖ್ಯ ಎಂದರು. ಕಿರುಸಾಲ ಪಡೆದ ಜನರ ರಕ್ಷಣೆಗಾಗಿ ಕಾಯ್ದೆ : ಎಂಎಸ್ ಐ ಎಲ್ ನ ಚಿಟ್ ಫಂಡ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಾಂಶವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ. ಆದ್ದರಿಂದ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025 ನ ರಕ್ಷಣೆ ನೀಡಲಾಗಿದೆ. ಸಾಲ ಪಡೆದ ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು.
ರಾಯಚೂರು ಜಿಲ್ಲಾ ಉತ್ಸವ–2026 | ಜಾನಪದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ಜಾನಪದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಸೊಗಡನ್ನು ಜೀವಂತವಾಗಿ ಎತ್ತಿಹಿಡಿದವು. ಉತ್ಸವ ಎಂದರೆ ಕೇವಲ ವೇದಿಕೆ, ಭಾಷಣ ಮತ್ತು ಕಾರ್ಯಕ್ರಮಗಳ ಸರಮಾಲೆಯಷ್ಟೇ ಅಲ್ಲ. ಅದು ಜನರ ಬದುಕಿನೊಳಗೆ ನುಗ್ಗಿ, ಸಂಸ್ಕೃತಿ–ಸಂಭ್ರಮ–ಸಹಭಾಗಿತ್ವವನ್ನು ಒಂದೇ ಕ್ಷಣದಲ್ಲಿ ಒಟ್ಟುಗೂಡಿಸುವ ಹಬ್ಬ. ರಾಯಚೂರು ಜಿಲ್ಲಾ ಉತ್ಸವದಲ್ಲೂ ಅಂಥದೇ ಅಪರೂಪದ ಕ್ಷಣಗಳು ಕಾಣಿಸಿಕೊಂಡವು. ಬೆಳಗ್ಗಿನಿಂದಲೇ ಜನರ ಹೆಜ್ಜೆಗಳು ಉತ್ಸವದತ್ತ ಹರಿದುಬಂದವು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ವಿವಿಧ ಸ್ಟಾಲ್ಗಳನ್ನು ಸುತ್ತಾಡಿದ ಜನರು, ಸಂಜೆ ಮನರಂಜನೆಯತ್ತ ಮನಸೊಟ್ಟು ಸಾಗಿದರು. ಎಲ್ಲೆಲ್ಲೂ ಜನಪದ ಸಂಗೀತದ ನಾದ, ಮಕ್ಕಳ ನಗು, ಹಿರಿಯರ ನೆನಪುಗಳ ಮಾತುಕತೆ—ಉತ್ಸವದ ಆವರಣ ಸಂಪೂರ್ಣವಾಗಿ ಜೀವಂತವಾಗಿತ್ತು. ಒಂದೆಡೆ ಜನಪದ ನೃತ್ಯ ತಂಡಗಳ ತಾಳಬದ್ಧ ಹೆಜ್ಜೆಗಳು ಮನ ಸೆಳೆದರೆ, ಮತ್ತೊಂದೆಡೆ ಮಹಿಳೆಯರು, ಮಕ್ಕಳು ಮತ್ತು ಯುವಕರು ಒಟ್ಟಾಗಿ ಸಂಭ್ರಮದಲ್ಲಿ ತೊಡಗಿದರು. ವೇದಿಕೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಯಚೂರು ಮಣ್ಣಿನ ಪರಂಪರೆಯನ್ನು ಮತ್ತೊಮ್ಮೆ ನೆನಪಿಸಿತು. ಜನಪದ ಹಾಡುಗಳಲ್ಲಿ ಹಳ್ಳಿಯ ಬದುಕು ಮಾತನಾಡಿದರೆ, ನೃತ್ಯಗಳಲ್ಲಿ ಕೃಷಿ, ಶ್ರಮ ಮತ್ತು ಸಂಸ್ಕೃತಿಯ ಕಥೆಗಳು ಜೀವಂತವಾಗಿ ಮೂಡಿಬಂದವು. ಕೆಲವರಿಗೆ ಇದು ಮನರಂಜನೆಯಾಗಿದ್ದರೆ, ಇನ್ನೂ ಕೆಲವರಿಗೆ ತಮ್ಮ ಬಾಲ್ಯದ ನೆನಪುಗಳ ಪುನರಾವರ್ತನೆಯಾಗಿತ್ತು. ಉತ್ಸವದ ಮತ್ತೊಂದು ಪ್ರಮುಖ ಮುಖ ಜನರ ಸಕ್ರಿಯ ಭಾಗವಹಿಸುವಿಕೆ. ಹಳ್ಳಿ ಕಲಾವಿದರ ಪ್ರದರ್ಶನಗಳಿಗೆ ವ್ಯಕ್ತವಾದ ಜನರ ಉತ್ಸಾಹ ಚಪ್ಪಾಳೆಗಳ ಮೂಲಕ ವ್ಯಕ್ತವಾಯಿತು. “ಇದು ಕೇವಲ ಕಾರ್ಯಕ್ರಮವಲ್ಲ, ನಮ್ಮ ಬದುಕಿನ ಹಬ್ಬ,” ಎಂಬ ಮಾತು ಜನರ ಕಣ್ಣುಗಳಲ್ಲಿ ಮಿನುಗುವ ಸಂತಸದಲ್ಲೇ ಸ್ಪಷ್ಟವಾಗಿತ್ತು. ರಾಜಕೀಯ ಭಾಷಣಗಳು ಹಾಗೂ ದೈನಂದಿನ ಒತ್ತಡಗಳ ಹೊರತಾಗಿ, ಜನರು ಒಂದಷ್ಟು ಸಮಯ ನಗು–ಸಂಭ್ರಮಕ್ಕೆ ಮೀಸಲಿಟ್ಟಿದ್ದರು. ಹೋರಾಟಗಾರ ಅಂಬಣ್ಣ ಅರೋಲಿಕರ್ ಅವರ ಕ್ರಾಂತಿಹಾಡುಗಳು ವಿಶೇಷವಾಗಿ ಗಮನ ಸೆಳೆದವು. ಜನಪದದ ಗಂಧ, ಸಂಸ್ಕೃತಿಯ ಸವಿ ಮತ್ತು ಒಗ್ಗಟ್ಟಿನ ಅನುಭವ—ಇವೆಲ್ಲ ಸೇರಿ ರಾಯಚೂರು ಜಿಲ್ಲಾ ಉತ್ಸವವನ್ನು ನೆನಪಿನಲ್ಲಿ ಉಳಿಯುವ ಹಬ್ಬವನ್ನಾಗಿ ಮಾಡಿವೆ.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026
ರಾಜೇಶ್ ಕೃಷ್ಣನ್ ಹಾಡಿಗೆ ಮನಸೋತ ಯುವಜನತೆ…
ತಡವಾಗಿ ಆಗಮಿಸಿದ ಭಾವಿ ಸೊಸೆ ಕುಟುಂಬ, ರೈಲ್ವೇ ನಿಲ್ದಾಣದಲ್ಲಿ ನಿಶ್ಚಿತಾರ್ಥ ನಡೆಸಿದ ಹುಡುಗನ ತಾಯಿ! ವಿಡಿಯೋ ವೈರಲ್
ನಿಶ್ಚಿತಾರ್ಥಗಳು ಮಂಟಪಗಳಲ್ಲಿ ನಡೆಯುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ನಡೆದಿದೆ. ಮುಂಬೈ ಮೆಟ್ರೋ ನಿಲ್ದಾಣದಲ್ಲಿ ತಂದೆ ತಾಯಿ ತಮ್ಮ ಮಗನ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಇದೊಂದು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್ ಆಗಿದೆ.
Ballari | ಗೋಡೌನ್ನಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹ; ಅಧಿಕಾರಿಗಳಿಂದ ದಾಳಿ
ಬಳ್ಳಾರಿ : ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಲ್ಲ. ಟಿಬಿ ಡ್ಯಾಂ ಗೇಟ್ ರಿಪೇರಿ ಹಿನ್ನೆಲೆ ಬಳ್ಳಾರಿಯಲ್ಲಿ ಬಹುತೇಕ ರೈತರು ಎರಡನೇ ಬೆಳೆ ಬೆಳೆದಿಲ್ಲ. ಹಾಗಾದರೆ ಯೂರಿಯಾ ಗೊಬ್ಬರ ಏಕೆ ಸಂಗ್ರಹ ಮಾಡಿದರು ಅನ್ನೊ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಜೂನ್ ತಿಂಗಳ ಮುಂಗಾರು ವೇಳೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಈಗಿನಿಂದಲೇ ಸಂಗ್ರಹ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಯೂರಿಯಾ ಗೊಬ್ಬರಕ್ಕೆ ಬಾರೀ ಬೇಡಿಕೆ ಬಂದಿತ್ತು. ಹೀಗಾಗಿ ಈಗಿನಿಂದಲೇ ಯೂರಿಯಾ ಗೊಬ್ಬರ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಸಂಬಂಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ವಾನ ಪ್ರದರ್ಶನ ಉದ್ಘಾಟನೆ : ಜನಮನ ಗೆದ್ದ ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಬಾಕ್ಸರ್
ಜನಮನ ಗೆದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಹಾವಳಿ: 4 ವರ್ಷದಲ್ಲಿ 35 ಬಲಿ! ನಿಯಂತ್ರಣ ಯಾಕಾಗ್ತಿಲ್ಲ
ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದನ್ನು ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನಾತ್ಮಕ ಅಡೆ ತಡೆಗಳಿಂದ ಸಮಸ್ಯೆ ಉಂಟಾಗುತ್ತಿವೆ. ಆನ್ ಲೈನ್ ಬೆಟ್ಟಿಂಗ್ ಗೆ ಕಳೆದ ನಾಲ್ಕು ವರ್ಷಗಳಲ್ಲಿ 35 ಬಲಿಯಾಗಿವೆ. ವಿದ್ಯಾರ್ಥಿಗಳು, ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಆನ್ ಲೈನ್ ಬೆಟ್ಟಿಂಗ್ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ. ಹಾಗಾದರೆ ಏನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ? ಈ ಕುರಿತಾದ ಒಂದು ವರದಿ ಇಲ್ಲಿದೆ.
ಸಂಪಾದಕೀಯ | ಅಂಗನವಾಡಿ ಸಹಾಯಕಿಯ ಬಲಿದಾನ ಸರಕಾರ ಗುರುತಿಸುವಂತಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
MSIL: ಚಿಟ್ಫಂಡ್ ವಹೀವಾಟು ರೂ.5000 ಕೋಟಿಗೆ ಹೆಚ್ಚಿಸುವ ಗುರಿ: ಪಾರದರ್ಶಕತೆಗೆ ಹೊಸ ಆಪ್ ಬಿಡುಗಡೆ
ಬೆಂಗಳೂರು: ಕರ್ನಾಟಕ ಸರ್ಕಾರಿ ಸ್ವಾಮ್ಯದ 'ಮೈಸೂರು ಸೇಲ್ಸ್ ಇಂಟರನ್ಯಾಷನಲ್ ಲಿಮಿಟೆಡ್' (MSIL) ಸಂಸ್ಥೆಯು ಸುಗಮ ಮತ್ತು ಪಾರದರ್ಶಕ ಚಿಟ್ ಫಂಡ್ ವ್ಯವಹಾರದ ಅನುಕೂಲಕ್ಕೆ ಅಭಿವೃದ್ಧಿ ಪಡಿಸಿರುವ ಸಾಫ್ಟವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬಿಡುಗಡೆ ಮಾಡಿದರು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯಾಗಿರುವುದರಿಂದ
ಆರ್ಸಿಬಿ ಕಪ್ ಗೆದ್ದರೂ ಸೆಲೆಬ್ರೇಷನ್ ಸಪ್ಪೆ, ಸಪ್ಪೆ... ಕಡಿಮೆ ಆಗುತ್ತಿದೆಯಾ ಫ್ಯಾನ್ಸ್ ಕ್ರೇಜ್? RCB Team
ಆರ್ಸಿಬಿ ಬೆಂಗಳೂರು ತಂಡ ಅಂದರೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ದೊಡ್ಡ ಪ್ರಮಾಣದ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ನಮ್ಮ ಆರ್ಸಿಬಿ ತಂಡಕ್ಕೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಕ್ರಿಕೆಟ್ ಅಭಿಮಾನಿಗಳ ಬೆಂಬಲ ಇದೆ ಎನ್ನುತ್ತಾರೆ ಬೆಂಬಲಿಗರು. ಹೀಗಿದ್ದಾಗ ಆರ್ಸಿಬಿ ಮಹಿಳಾ ತಂಡಕ್ಕೆ ಕೂಡ ಇಷ್ಟೇ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಹಾಗೇ ಈ ಬೆಂಬಲ
ತಿರುಪತಿ ಸೇರಿದಂತೆ 2 ದೇವಾಲಯಗಳ ಲಡ್ಡುಗೆ ’Bathroom Cleaner’ ಬಳಕೆ : ಜಗನ್ ವಿರುದ್ದ ಸಿಎಂ ನಾಯ್ಡು ಆರೋಪ
Chandrababu Naidu Vs YS Jagan : ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಿಂದಿನ ವೈಎಸ್ ಜಗನ್ ಸರ್ಕಾರ ಬಳಸಿತ್ತು ಎಂದು ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಕಲಬೆರಕೆ ತುಪ್ಪವನ್ನು ಲಡ್ಡು ತಯಾರಿಕೆಗೆ ಎರಡು ದೇವಾಲಯಗಳಲ್ಲಿ ಬಳಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಭಾರತಕ್ಕೆ ಭರ್ಜರಿ ಲಾಭ, ಅಮೆರಿಕ ಜೊತೆಗಿನ ಒಪ್ಪಂದದ ಪರಿಣಾಮ ಭರ್ಜರಿ ಲಾಟರಿ... India And America
ಭಾರತ ಮತ್ತು ಅಮೆರಿಕ ನಡುವೆ ನಡೆದಿರುವ ಬೃಹತ್ ವ್ಯಾಪಾರ ಒಪ್ಪಂದ ಇದೀಗ ದೊಡ್ಡ ಲಾಭಕ್ಕೆ ನಾಂದಿ ಹಾಡಿದೆ. ಸುಮಾರು 500 ಬಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದ ಭವಿಷ್ಯದಲ್ಲಿ ಭಾರತ ಹಾಗೂ ಅಮೆರಿಕ ಎರಡೂ ದೇಶಗಳಿಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡಲಿದೆ. ಇದರ ಜೊತೆ ವ್ಯಾಪಾರ ಮಾಡುವವರಿಗೆ ಕೂಡ ಇದರಿಂದ ಪ್ರಾಫಿಟ್ ಗ್ಯಾರಂಟಿ. ಜಾಗತಿಕ ಮಟ್ಟದಲ್ಲಿ ಭಾರತದಿಂದ
ಹಿರಿಯ ರಾಜಕಾರಣಿ 'ಅಪ್ಪಣ್ಣ ಹೆಗ್ಡೆ' ಇನ್ನಿಲ್ಲ: ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
ಉಡುಪಿ: ಉಡುಪಿ ಜಿಲ್ಲೆಯ ಪ್ರಮುಖ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ತಮ್ಮ 90 ವಯಸ್ಸಿನಲ್ಲಿ ಶನಿವಾರ (ಫೆಬ್ರವರಿ 7) ನಿಧನರಾದರು. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ರಾಜಕೀಯ ಜೀವನ, ಸೇವೆ, ಅಗಲಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ.
ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ
ಒಮಾನ್ ರಾಜಧಾನಿ ಮಸ್ಕತ್ನಲ್ಲಿ ಕನ್ನಡದ ಕಲರವ. ಅಲ್ಲಿನ ಕನ್ನಡ ಕುಟುಂಬದ ಮಕ್ಕಳು ಈಗ ಮಾತೃಭಾಷಯಲ್ಲೇ ಶಿಕ್ಷಣ ಪಡೆಯುತ್ತಾರೆ ಎಂದರೆ ಅದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಮಸ್ಕತ್ನ ಕನ್ನಡ ಕುಟುಂಬಗಳು ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಬದುಕುತ್ತಿದ್ದಾರೆ. ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುವ ಶಿಕ್ಷಕಿಯರನ್ನು ಗೌರವಿಸುವ ಉದ್ದೇಶದಿಂದ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ‘ಗಡಿನಾಡ ಚೇತನ ಪ್ರಶಸ್ತಿ’ ನೀಡಿ ಗೌರವಿಸಿವಿದೆ. ಇಲ್ಲಿದೆ ಮಾಹಿತಿ.
ಮತ್ತೆ ಮೇಲೇರಿದ ಚಿನ್ನ; ಇಂದಿನ ದರವೆಷ್ಟು?
ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ಭಾವನೆಗಳಿಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಗುರುವಾರ ಮತ್ತು ಶುಕ್ರವಾರದಂದು ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರ ಮತ್ತೆ ಅಲ್ಪ ಏರಿಕೆ ಕಂಡಿದೆ. ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ಭಾವನೆಗಳಿಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಒಂದೆಡೆ ಹೂಡಿಕೆದಾರರು ಲಾಭ ಗಳಿಕೆಯಲ್ಲಿ ಮಾರಾಟ ಮಾಡಿದರೆ, ಮತ್ತೊಂದೆಡೆ ದೇಸಿ ಮಾರುಕಟ್ಟೆಯಲ್ಲಿ ಜನರು ಖರೀದಿಗೆ ಇಳಿದ ಕಾರಣ ಜನವರಿ 29ರಂದು ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ನಂತರ ಚಂಚಲತೆ ಪ್ರದರ್ಶಿಸುತ್ತಿದೆ. ಫೆ.7ರ ವಿವರಗಳ ಪ್ರಕಾರ 24 ಕ್ಯಾರೆಟ್ನ ಶುದ್ಧ ಚಿನ್ನದ ಪ್ರತಿ ಗ್ರಾಂಗೆ 15,370 ರೂ. ಮತ್ತು 22 ಕ್ಯಾರೆಟ್ ಆಭರಣ ಚಿನ್ನದ ಪ್ರತಿ ಗ್ರಾಂಗೆ 14,089 ರೂ. ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 11,527 ರೂ.ಗೆ ಬಂದು ನಿಂತಿದೆ. ►ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶನಿವಾರ ಫೆಬ್ರವರಿ 07ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ. 24 ಕ್ಯಾರೆಟ್ ಚಿನ್ನದ ದರ 15,660 (+289) ರೂ. ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,355 (+265) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,745 (+217) ರೂ. ಬೆಲೆಗೆ ತಲುಪಿದೆ. ►ಬೆಳ್ಳಿಯ ಬೆಲೆಯಲ್ಲೂ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಮಾರುಕಟ್ಟೆ ತೆರೆದ ತಕ್ಷಣ ಸ್ವಲ್ಪ ಚೇತರಿಸಿಕೊಂಡಿದೆ. ಇಂದು ಗ್ರಾಂಗೆ 10 ರೂ.ನಷ್ಟು ಏರಿದ ಬೆಳ್ಳಿ ಕೆಜಿಗೆ 2,85,000 ಲಕ್ಷ ರೂ. ಗೆ ಬಂದು ನಿಂತಿದೆ. ►ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,675 (+289) ರೂ., 22 ಕ್ಯಾರೆಟ್ ಚಿನ್ನದ ದರ 14,370 (+265) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,660 (+ 289) ರೂ., 22 ಕ್ಯಾರೆಟ್ ಚಿನ್ನದ ದರ 14,355 (+ 265) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,665 (+289) ರೂ., 22 ಕ್ಯಾರೆಟ್ ಚಿನ್ನದ ದರ 14,360 (+265) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,731 (+185) ರೂ., 22 ಕ್ಯಾರೆಟ್ ಚಿನ್ನದ ದರ 14,420 (+170) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,660 (+289) ರೂ., 22 ಕ್ಯಾರೆಟ್ ಚಿನ್ನದ ದರ 14,355 (+265) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,660 (+289) ರೂ., 22 ಕ್ಯಾರೆಟ್ ಚಿನ್ನದ ದರ 14,355 (+265) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,675 (+289) ರೂ., 22 ಕ್ಯಾರೆಟ್ ಚಿನ್ನದ ದರ 14,370 (+265) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,665 (+289) ರೂ., 22 ಕ್ಯಾರೆಟ್ ಚಿನ್ನದ ದರ 14,360 (+265) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,675 (+289) ರೂ., 22 ಕ್ಯಾರೆಟ್ ಚಿನ್ನದ ದರ 14,370 (+265) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,675 (+289) ರೂ., 22 ಕ್ಯಾರೆಟ್ ಚಿನ್ನದ ದರ 14,370 (+265) ರೂ.
ಜನಮನ ಗೆದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ
ಬಿಜೆಪಿ ‘ಸಿದ್ಧಾಂತ’ ಸಮರ್ಥಿಸುವ ಚಲನಚಿತ್ರಗಳು
ರಾಷ್ಟ್ರೀಯ ಭದ್ರತಾ ಸಂಬಂಧಿ ಕತೆಗಳನ್ನು ಹೀಗೆ ಅತಿರಂಜಿತವಾಗಿ ಚಿತ್ರಿಸಿ ಚಲನಚಿತ್ರ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಭಾರತದ ಮುಸ್ಲಿಮರಿಗೂ ಮತ್ತು ಭಯೋತ್ಪಾದಕ ಚುಟುವಟಿಕೆಗಳಿಗೂ ಅನಗತ್ಯವಾಗಿ ತಳಕು ಹಾಕುವ ಈ ಪ್ರಯತ್ನ ಮತ ವಿಭಜನೆಯ ಕಾರ್ಯ ತಂತ್ರವಾಗಿದೆ. ನರೇಂದ್ರ ಮೋದಿಯವರು ನಿಜಕ್ಕೂ ವಿಕಸಿತ ಭಾರತದ ಕನಸುಗಾರನಾಗಿದ್ದರೆ ಮತೀಯ ಕಥಾನಕಗಳ ಸೃಷ್ಟಿಯ ಅಗತ್ಯವೇ ಬೀಳುವುದಿಲ್ಲ. ಭಾರತವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಚರಿತ್ರೆಯಲ್ಲಿನ ಮತೀಯ ಘಟನೆಗಳನ್ನು ಹೆಕ್ಕಿ ಹಿಂದೂ-ಮುಸ್ಲಿಮ್ ವಿಭಜನೆಯ ಕಥಾನಕ ರೂಪಿಸಲಾಗುತ್ತಿದೆ. ಭಾರತದ ಸೌಹಾರ್ದ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನಗಳು ಯಾವತ್ತೂ ಸಫಲವಾಗಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ನೈಜ ಶಕ್ತಿಯಾಗಿದೆ. ಚಲನಚಿತ್ರ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾದುದು. ಸಾಹಿತ್ಯ, ಸಂಗೀತ, ಅಭಿನಯ ಮಾತು ನೃತ್ಯ ಕಲಾ ಪ್ರಕಾರಗಳ ಸಂಗಮದಂತಿರುವ ಚಲನಚಿತ್ರ ತಂತ್ರಜ್ಞಾನದ ವಿಕಾಸದ ಫಲವಾಗಿ ಹೆಚ್ಚು ಜನಪ್ರಿಯವಾಗಿದೆ. ರಂಗಭೂಮಿ ಮತ್ತು ಇತರ ಪ್ರದರ್ಶಕ ಕಲೆಗಳು ಭಾರತೀಯ ಜ್ಞಾನ ಪರಂಪರೆಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿವೆ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಜನಮಾನಸಕ್ಕೆ ಹತ್ತಿರವಾಗಿದ್ದೇ ಪ್ರದರ್ಶಕ ಕಲೆಗಳ ಕ್ರಿಯಾಶೀಲತೆಯ ಕಾರಣಕ್ಕೆ. ಭಾರತದಲ್ಲಿ ಚಲನಚಿತ್ರಗಳಿಗೆ ಸುದೀರ್ಘ ಇತಿಹಾಸವಿಲ್ಲ. 1896ರಲ್ಲಿ ಮುಂಬೈಯ ಕೆಲವರು ಚಲನಚಿತ್ರ ನಿರ್ಮಾಣಕ್ಕೆ ಪ್ರಯತ್ನಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪಡೆಯಲಿಲ್ಲ. 1913ರಲ್ಲಿ ತೆರೆ ಕಂಡ, ದಾದಾ ಸಾಹೇಬ್ ಫಾಲ್ಕೆ ನಿರ್ಮಾಣ ಮತ್ತು ನಿರ್ದೇಶನದ ರಾಜಾ ಹರಿಶ್ಚಂದ್ರ ಮೂಕಿ ಚಲನಚಿತ್ರವೇ ‘ಮೊದಲ ಚಿತ್ರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1931ರಲ್ಲಿ ತೆರೆ ಕಂಡ, ಅರದೇಶಿ ಇರಾನಿ ನಿರ್ದೇಶನದ ‘ಆಲಮ್ಆರಾ’ ಚಲನಚಿತ್ರ ಮೊದಲ ಟಾಕಿ (ಮಾತನಾಡುವ)ಚಿತ್ರವೆನಿಸಿಕೊಂಡಿದೆ. 1940ರ ನಂತರ ಭಾರತೀಯ ಚಲನಚಿತ್ರ ರಂಗದ ಸುವರ್ಣ ಯುಗ ಆರಂಭವಾಯಿತು. ಅಲ್ಲಿಂದ ಟೆಲಿವಿಷನ್ ಮತ್ತು ಧಾರಾವಾಹಿ ಯುಗ ಆರಂಭವಾಗುವವರೆಗೂ ಚಲನಚಿತ್ರಗಳು ಅನಭಿಷಕ್ತ ದೊರೆಗಳಂತೆ ಮೆರೆದವು. ಭಾರತೀಯರ ಚಿಂತನಾ ಕ್ರಮದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಮೂಡಿಸಿದ ಚಲನಚಿತ್ರಗಳು ಯುವ ಸಮುದಾಯವನ್ನು ಸಾಕಷ್ಟು ಪ್ರಭಾವಿಸಿದ್ದವು. ಪ್ರಥ್ವಿರಾಜ್ ಕಪೂರ್, ರಾಜ್ ಕಪೂರ್ ಮತ್ತವರ ನಂತರದ ತಲೆಮಾರು ಚಲನಚಿತ್ರ ರಂಗವನ್ನು ಮಾತ್ರ ಉಸಿರಾಡುತ್ತಿತ್ತು. ಚೋಪ್ರಾ ಕುಟುಂಬ, ಕಪೂರ್ ಕುಟುಂಬ ಸೇರಿದಂತೆ ಹಲವಾರು ಮನೆತನಗಳು ಚಲನಚಿತ್ರ ರಂಗವನ್ನು ಅವಲಂಬಿಸಿ ಬದುಕು ಸಾಗಿಸುತ್ತಿವೆ. ದೇವದಾಸ್ ಖ್ಯಾತಿಯ ದಿಲೀಪ್ ಕುಮಾರ್, ಕಪೂರ್ ಕುಟುಂಬದ ಶಶಿ ಕಪೂರ್, ಶಮ್ಮಿ ಕಪೂರ್, ರಿಷಿ ಕಪೂರ್ ಅಷ್ಟೇ ಯಾಕೆ ಇತ್ತೀಚಿನ ರಣಬೀರ್ ಕಪೂರ್ ಚಲನಚಿತ್ರ ರಂಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ದೇವಾನಂದ, ಸಂಜೀವ್ ಕುಮಾರ್, ರಾಜ್ಕುಮಾರ್, ಧರ್ಮೇಂದ್ರ, ಅಮಿತಾಭ್ ಬಚ್ಚನ್, ವೈಜಯಂತಿ ಮಾಲಾ, ಮಧು ಬಾಲಾ, ಹೇಮಾ ಮಾಲಿನಿ, ಶ್ರೀದೇವಿ, ರೇಖಾ ಮತ್ತು ಇತ್ತೀಚಿನ ಬಹುಪಾಲು ಕಲಾವಿದರು ಪಕ್ಷಾತೀತವಾಗಿ ಚಲನಚಿತ್ರ ರಂಗವನ್ನು ಆರಾಧಿಸಿದ್ದಾರೆ. ಭಾರತೀಯ ಚಲನಚಿತ್ರಗಳು ಭಾರತದಲ್ಲಿ ಮಾತ್ರವಲ್ಲ ಅನೇಕ ಹೊರದೇಶಗಳಲ್ಲೂ ಜನಪ್ರಿಯತೆ ಪಡೆದುಕೊಂಡಿವೆ. ಮೊಗಲ್-ಇ-ಆಝಮ್, ಉಮ್ರಾ ಒ ಜಾನ್, ದೇವದಾಸ್, ಶೋಲೆ ಮುಂತಾದ ಚಲನಚಿತ್ರಗಳು ಭಾರತೀಯ ಚಿತ್ರರಂಗ ಅಭಿಮಾನ ಪಡುವಂತೆ ಮಾಡಿದ್ದವು. ಉತ್ಕಟವಾದ ಪ್ರೀತಿ, ತ್ಯಾಗ, ಸಮಾನತೆ, ಬಂಡಾಯ, ವೈಚಾರಿಕತೆ ಪ್ರತಿಪಾದಿಸಿದ ಭಾರತೀಯ ಚಲನಚಿತ್ರ ರಂಗ ಹಿಂದಿ ಮಾತ್ರವಲ್ಲ ಪ್ರಾದೇಶಿಕ ಭಾಷೆಗಳ ಚಿತ್ರಗಳು ಜನಜೀವನವನ್ನು ಆತ್ಯಂತಿಕವಾಗಿ ಪ್ರಭಾವಿಸಿವೆ. ಕನ್ನಡ, ತಮಿಳು, ಮಲಯಾಳಿ, ತೆಲುಗು ಮತ್ತು ಬೆಂಗಾಲಿ ಚಲನಚಿತ್ರಗಳು ಬಾಲಿವುಡ್ ಪರಂಪರೆಯನ್ನು ಗಾಢವಾಗಿ ಪ್ರಭಾವಿಸುವ ಮಟ್ಟಕ್ಕೆ ಬೆಳೆದು ನಿಂತಿವೆ. ಹಿಂದಿ ಮತ್ತು ಭಾರತೀಯ ಪ್ರಾದೇಶಿಕ ಭಾಷಾ ಚಲನಚಿತ್ರಗಳು ಸೌಹಾರ್ದ ಪರಂಪರೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡಿವೆ. ಅತ್ಯುತ್ತಮ ಸಮಾಜ ನಿರ್ಮಾಣದ ಕನಸು ಹೊತ್ತ ಚಲನಚಿತ್ರಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಸಮಾನತೆ ಪ್ರತಿಪಾದಿಸುವ, ದ್ವೇಷ ಭಾವ ಪ್ರಚೋದಿಸುವ ಮತ್ತು ಮತಭೇದ ಹುಟ್ಟು ಹಾಕುವ ಒಂದೇ ಒಂದು ಚಲನಚಿತ್ರವನ್ನು ಯಾರೊಬ್ಬರೂ ನಿರ್ಮಿಸಿರಲಿಲ್ಲ. ಜವಾಹರಲಾಲ್ ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ವಿ.ಪಿ. ಸಿಂಗ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ ಸೇರಿದಂತೆ ಯಾವ ಪ್ರಧಾನ ಮಂತ್ರಿಯೂ ಚಲನಚಿತ್ರ ರಂಗವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿರಲಿಲ್ಲ. ಚಲನಚಿತ್ರ ರಂಗದ ಮಂದಿಗೆ ಪ್ರಶಸ್ತಿ ಪುರಸ್ಕಾರ ನೀಡುವಾಗಲೂ ತಜ್ಞರ ಅಭಿಪ್ರಾಯಗಳನ್ನೇ ಗೌರವಿಸಿದ್ದಾರೆ ಹೊರತು ಅನಗತ್ಯ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ. ರಾಜಕೀಯ ವ್ಯವಸ್ಥೆಯನ್ನು ವಿಡಂಬಿಸುವ ‘ಅಂಧಾ ಕಾನೂನು’, ‘ಆಂಧಿ’ಯಂತಹ ಚಲನಚಿತ್ರಗಳನ್ನು ಗೌರವದಿಂದ ಕಾಣಲಾಗಿದೆ. ಖ್ಯಾತ ಚಿತ್ರ ಸಾಹಿತಿ ಗುಲ್ಝಾರ್ ನಿರ್ಮಾಣ ಮತ್ತು ನಿರ್ದೇಶನದ ‘ಆಂಧಿ’ ಚಲನಚಿತ್ರ 1975ರಲ್ಲಿ ತೆರೆ ಕಂಡಿತ್ತು. ಆಂಧಿ ಪರೋಕ್ಷವಾಗಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ನಿಲುವನ್ನು ವಿರೋಧಿಸುವ ಚಲನಚಿತ್ರವಾಗಿತ್ತು. ತುರ್ತು ಪರಿಸ್ಥಿತಿಯ ಕರಾಳ ಸತ್ಯವನ್ನು ಅನಾವರಣ ಮಾಡುವುದು ಗುಲ್ಝಾರ್ ಅವರ ಉದ್ದೇಶವಾಗಿತ್ತು. ಆಂಧಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಪಡೆಯಲಿಲ್ಲ. ಆದರೆ ತುರ್ತು ಪರಿಸ್ಥಿತಿಯ ಕರಾಳ ಮುಖಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿತ್ತು. ಆಂಧಿ ಚಲನಚಿತ್ರ ನಿರ್ಮಿಸಿದ ಗುಲ್ಝಾರ್ ಅವರನ್ನು ಇಂದಿರಾ ಗಾಂಧಿ ಶತ್ರುವೆಂದು ಪರಿಗಣಿಸಲಿಲ್ಲ. ಚಲನಚಿತ್ರ ಮಾಧ್ಯಮವನ್ನು ಸರ್ವಾಧಿಕಾರಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ಅಸಂಖ್ಯಾತ ನಿದರ್ಶನಗಳು ದೊರೆಯುತ್ತವೆ. ಜಗದ್ವಿಖ್ಯಾತ ನಟ, ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರನ್ನು ಬಹಳ ಜನ ಹಾಸ್ಯ ಕಲಾವಿದ ಎಂದು ಭಾವಿಸಿದ್ದಾರೆ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಆಡಳಿತ ವೈಖರಿಯನ್ನು ವಿರೋಧಿಸುವ ‘ದಿ ಗ್ರೇಟ್ ಡಿಕ್ಟೇಟರ್’ ಚಲನಚಿತ್ರವನ್ನು ನಿರ್ಮಿಸಿ ರಾಜಕೀಯ ಪ್ರಜ್ಞೆ ಮೂಡಿಸಲು ಯತ್ನಿಸಿದ್ದರು. ಚಲನಚಿತ್ರಗಳ ನಿರ್ಮಾಣದ ಉದ್ದೇಶವೇ ಅನ್ಯಾಯ, ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುವುದು. ಸುನೀಲ್ ದತ್ ದೇಶ ಭಕ್ತಿ ಜಾಗೃತಗೊಳಿಸುವ, ಸೌಹಾರ್ದ ಪರಂಪರೆ ಎತ್ತಿ ಹಿಡಿಯುವ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಗುರು ದತ್ ಅಭಿನಯಿಸಿದ ಚಲನಚಿತ್ರಗಳು ಈಗಲೂ ಪ್ರಸ್ತುತ ಎನಿಸುತ್ತಿವೆ. ಪ್ರೀತಿ, ಪ್ರಣಯ, ನೃತ್ಯ, ಕಾದಾಟದ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಆಮಿತಾಭ್ ಬಚ್ಚನ್ ತರಹದ ಅನೇಕ ನಾಯಕ ನಟರು ಸಾಮಾಜಿಕ ಕಾಳಜಿಯುಳ್ಳ ಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಅಮಿತಾಭ್ ಬಚ್ಚನ್ ಅವರು ಅಭಿನಯಿಸಿದ ‘ಪಿಂಕ್’ ಚಲನಚಿತ್ರ ಅತ್ಯಾಚಾರ ಪ್ರಕರಣಗಳ ವ್ಯಾಖ್ಯಾನವನ್ನೇ ಮರು ರೂಪಿಸಿತು. ಡಾ. ರಾಜಕುಮಾರ್ ಅಭಿನಯಿಸಿದ ‘ಬಂಗಾರದ ಮನುಷ್ಯ’ ಚಲನಚಿತ್ರ ಯುವ ಸಮುದಾಯವನ್ನು ಅಪಾರವಾಗಿ ಪ್ರಭಾವಿಸಿತ್ತು. ಎಂ.ಜಿ.ಆರ್., ಎನ್.ಟಿ.ಆರ್., ಶಿವಾಜಿ ಗಣೇಶನ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ಕಾಲದ ನಟರು ವ್ಯಾಪಕವಾಗಿ ಜನಜೀವನವನ್ನು ಆವರಿಸಿದ್ದರು. ನಂತರ ಬಂದ ಮಮ್ಮುಟ್ಟಿ, ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ಶಂಕರನಾಗ್, ಅನಂತನಾಗ್, ವಿಷ್ಣುವರ್ಧನ್, ಜಿತೇಂದ್ರ, ರಾಜೇಶ್ ಖನ್ನಾ ಮುಂತಾದವರು ಭಾರತೀಯ ಚಿತ್ರರಂಗಕ್ಕೆ ಹೊಸ ಸಂವೇದನೆಯನ್ನು ಜೋಡಿಸಿದರು. ವಿಶೇಷವಾಗಿ ಆಮಿರ್ ಖಾನ್ ಅಭಿನಯಿಸಿದ ‘ಲಗಾನ್’, ‘ಪಿ.ಕೆ.’, ‘ತಾರೆ ಝಮೀನ್ ಪರ್’, ‘ತ್ರೀ ಈಡಿಯಟ್’, ‘ದಂಗಲ್’ ಚಲನಚಿತ್ರಗಳು ಭಾರತೀಯ ಪರಂಪರೆಯ ಅಂತಃಸ್ಸತ್ವವನ್ನು ಮರು ಸ್ಥಾಪಿಸಲು ಯತ್ನಿಸಿದ್ದವು. ಆಮಿರ್ ಖಾನ್ ಅವರ ಚಲನಚಿತ್ರಗಳು ಚೀನಾ, ಜಪಾನ್ ದೇಶಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ್ದವು. ಶಾರುಕ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಮುಂತಾದ ನಟರು ಕತೆ ಆಯ್ಕೆಯಲ್ಲೇ ತಮ್ಮ ಕಾಳಜಿ ಸ್ಪಷ್ಟ ಪಡಿಸುತ್ತಿದ್ದರು. ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿ ಜಾನ್’ ಚಲನಚಿತ್ರ ಕೋಮು ಸೌಹಾರ್ದ ಪರಂಪರೆಗೆ ಹೊಸ ಅರ್ಥ ನೀಡಿತು. ಒಟ್ಟು ಹೇಳಬೇಕೆಂದರೆ, ಭಾರತೀಯ ಚಿತ್ರರಂಗದಲ್ಲಿ ಹಿಂದಿ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳು ಸೇರಿದಂತೆ ಎಲ್ಲೆಡೆ ಅತ್ಯುತ್ತಮ ಸಂದೇಶ ರವಾನಿಸುವ ಚಲನಚಿತ್ರಗಳೇ ನಿರ್ಮಾಣವಾಗುತ್ತಿವೆ. ಗುಣಮಟ್ಟದಲ್ಲಿ ಕಳಪೆ ಚಲನಚಿತ್ರಗಳು ನಿರ್ಮಾಣವಾಗಿರಬಹುದು. ಆದರೆ ಸಾಮಾನ್ಯವಾಗಿ ದ್ವೇಷ ಬಿತ್ತುವ ಚಿತ್ರಗಳು, ಜೀವ ವಿರೋಧಿ ವಿಚಾರ ಪ್ರಸಾರ ಮಾಡುವ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ದುಸ್ಸಾಹಸ ಯಾರೂ ಮಾಡುತ್ತಿರಲಿಲ್ಲ. ಆದರೆ ಸನ್ಮಾನ್ಯ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ದ್ವೇಷ ಬಿತ್ತುವ ಚಲನಚಿತ್ರಗಳು ಹೆಚ್ಚು ಹೆಚ್ಚು ತೆರೆ ಕಾಣುತ್ತಿವೆ. ಕೆಲವು ಚಲನಚಿತ್ರಗಳನ್ನು ಮೋದಿ-ಅಮಿತ್ ಶಾ ಜೋಡಿಯೇ ಸಲಹೆ ನೀಡಿ ನಿರ್ಮಿಸಿದಂತಿವೆ. ಚಲನಚಿತ್ರ ಮಾಧ್ಯಮವನ್ನು ಕೆಟ್ಟ ರಾಜಕಾರಣಕ್ಕೆ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸತ್ಯ ಘಟನೆಯ ಹೆಸರಲ್ಲಿ ದ್ವೇಷ ಬಿತ್ತುವ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕಟ್ಟು ಕತೆಗಳು ಚಲನಚಿತ್ರ ರೂಪು ಪಡೆಯುತ್ತಿವೆ. ಯುಪಿಎ ಕಾಲಾವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿ ಇತ್ತು. 2004ರಿಂದ 2014ರವರೆಗೆ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು ಆಕಸ್ಮಿಕವಾಗಿ ಭಾರತದಂತಹ ದೊಡ್ಡ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಹೌದು ಡಾ. ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ರಾಜಕಾರಣದ ಪಟ್ಟುಗಳು ಗೊತ್ತಿರಲಿಲ್ಲ. ಆದರೆ ಅಭಿವೃದ್ಧಿ ರಾಜಕಾರಣದ ಪಟ್ಟುಗಳು ತಿಳಿದಿದ್ದವು. ಭಾರತ ವಿಶ್ವ ಮಾರುಕಟ್ಟೆಗೆ ತೆರೆದುಕೊಂಡಾಗ ಆ ಸಂದರ್ಭವನ್ನು ಇತ್ಯಾತ್ಮಕವಾಗಿ ಬಳಸಿಕೊಳ್ಳುವ ಜಾಣ್ಮೆಯುಳ್ಳ ಪ್ರಧಾನಿ ಬೇಕಿತ್ತು. ಡಾ. ಮನಮೋಹನ್ ಸಿಂಗ್ ಅವರ ಪ್ರಯತ್ನದ ಫಲವಾಗಿಯೇ ಐ.ಟಿ., ಬಿ.ಟಿ. ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದವು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ನಿರುದ್ಯೋಗ ಪ್ರಮಾಣ ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಡಾ. ಮನಮೋಹನ್ ಸಿಂಗ್ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ಭಾರತವನ್ನು ಸಾಕಷ್ಟು ಮುನ್ನಡೆಸಿದರು. ದುರಂತವೆಂದರೆ, ಡಾ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಜಾರಿಗೆ ತಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಒಳ್ಳೆಯ ಕೆಲಸಗಳ ಪ್ರಚಾರ ಮಾಡಿಕೊಳ್ಳುವುದು ದೂರದ ಮಾತಾಯಿತು. ಡಾ. ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಮೋದಿ ಮತ್ತವರ ತಂಡದ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಲು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದ ದೌರ್ಬಲ್ಯ ಮನಗಂಡೇ ಮೋದಿ ಅಭಿಮಾನಿಗಳು ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಲನಚಿತ್ರ ನಿರ್ಮಿಸಿ ಬಿಡುಗಡೆ ಮಾಡಿದರು. ಆ ಚಲನಚಿತ್ರ ಚುನಾವಣಾ ಪ್ರಚಾರದ ಸರಕಿನಂತಿತ್ತು. ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷ ಗತಿಸಿವೆ. ಅವರು ಸೃಷ್ಟಿಸಿದ ಅವಾಂತರಗಳ ಕುರಿತು ನೂರಾರು ಚಲನಚಿತ್ರಗಳು ನಿರ್ಮಾಣವಾಗಬೇಕಿತ್ತು. ಚಾರ್ಲಿ ಚಾಪ್ಲಿನ್ ನಿರ್ಮಾಣದ ಗ್ರೇಟ್ ಡಿಕ್ಟೇಟರ್ ಚಲನಚಿತ್ರವನ್ನು ಭಾರತೀಯ ಭಾಷೆಗಳಿಗೆ ಡಬ್ ಮಾಡಿ ತೋರಿಸಿದರೆ ಅದು ಮೋದಿ ಆಡಳಿತ ವೈಖರಿಯನ್ನೇ ಪ್ರತಿ ಬಿಂಬಿಸುತ್ತದೆ. ಚಲನಚಿತ್ರ ಮಾಧ್ಯಮವನ್ನು ಮೋದಿ ಆಡಳಿತದ ವಿರುದ್ಧ ಇಲ್ಲಿಯವರೆಗೆ ಯಾರೂ ಬಳಸಿಲ್ಲ. ಬದಲಿಗೆ ಮೋದಿ ತಂಡವೇ ಬಿಜೆಪಿಯ ಕೋಮುವಾದಿ ಸಿದ್ಧಾಂತ ಪ್ರಚಾರ ಮಾಡುವ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ ನಿರ್ಮಾಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ಮಾಣದ ಉದ್ದೇಶವೇ ಭಾರತೀಯ ಮುಸ್ಲಿಮ್ ಸಮುದಾಯದ ಬಗ್ಗೆ ಅಪನಂಬಿಕೆ ಮೂಡಿಸುವುದಾಗಿತ್ತು. ಸಂಸ್ಕಾರ ಭಾರತಿ ಸಾಂಸ್ಕೃತಿಕ ಸಂಘಟನೆಯೊಂದಿಗೆ ಸಂಬಂಧ ಇಟ್ಟುಕೊಂಡಿರುವ ವಿವೇಕ್ ಅಗ್ನಿ ಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತವರು. ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣಗಳನ್ನು ವೈಭವೀಕರಿಸುವ ಮತ್ತು ಕಾಶ್ಮೀರಿ -ಭಾರತೀಯ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಈ ಕಟ್ಟು ಕತೆ ಮನುಷ್ಯ ಸಂಬಂಧಗಳ ನೆಲೆಯನ್ನೇ ಸ್ಪರ್ಶಿಸಿಲ್ಲ. ಭಯೋತ್ಪಾದಕ ಸಂಘಟನೆಗಳ ವಿಧ್ವಂಸಕ ಕೃತ್ಯಗಳಿಗೆ ಭಾರತೀಯ ಮುಸ್ಲಿಮ್ ಸಮುದಾಯ ಹೊಣೆಗಾರರಾಗುವುದಿಲ್ಲ. ಭಯೋತ್ಪಾದಕ ಸಂಘಟನೆಗಳ ಕುಕೃತ್ಯಕ್ಕೆ ಅನೇಕ ಭಾರತೀಯ ಮುಸ್ಲಿಮ್ ಯೋಧರೂ ಪ್ರಾಣ ಕಳೆದುಕೊಂಡಿರುತ್ತಾರೆ. ಚರಿತ್ರೆಯೊಳಗಿನ ಒಂದು ದುಷ್ಕೃತ್ಯಕ್ಕೆ ವರ್ತಮಾನದ ಒಂದು ಸಮುದಾಯವನ್ನು ಹೊಣೆಗಾರರನ್ನಾಗಿಸುವುದೇ ಅಮಾನವೀಯ ಎನಿಸಿಕೊಳ್ಳುತ್ತದೆ. ಬ್ರಿಟಿಷರು ಭಾರತವನ್ನು ದೀರ್ಘ ಕಾಲ ಆಳಿದ್ದರು. ಅವರ ಆಳ್ವಿಕೆಯ ಅವಧಿಯಲ್ಲಿ ಅತ್ಯಂತ ಭೀಕರವಾದ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ನಡೆಯಿತು. ಜನರಲ್ ರಿಜಿನಾಲ್ಡ್ ಡೈರ್ ಗೋಲಿಬಾರ್ಗೆ ಆದೇಶ ನೀಡಿದ್ದರಿಂದ ಅಂದಾಜು ಒಂದೂವರೆ ಸಾವಿರ ಭಾರತೀಯರು ಜೀವ ಕಳೆದುಕೊಂಡರು. ಹನ್ನೆರಡು ನೂರಕ್ಕೂ ಹೆಚ್ಚು ಜನ ಗಾಯಗೊಂಡರು. ಜನರಲ್ ಡೈರ್ ಮಾಡಿದ ತಪ್ಪಿಗೆ ಇಂದಿನ ಬ್ರಿಟಿಷ್ ಪ್ರಜೆಗಳನ್ನು ಹೊಣೆಗಾರರನ್ನಾಗಿಸಿ ಅವರನ್ನು ದ್ವೇಷ ಮಾಡಬಹುದು. ಅಸಂಖ್ಯಾತ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೌಹಾರ್ದ ಬದುಕು ಕಟ್ಟಿಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿಗೆ ಭಾರತೀಯರು, ಮುಸ್ಲಿಮರು ಸೇರಿದಂತೆ ಎಲ್ಲರೂ ಕಣ್ಣೀರು ಮಿಡಿದಿದ್ದಾರೆ. ಹೀಗಿದ್ದಾಗ ‘ದಿ ಕಾಶ್ಮೀರ್ ಫೈಲ್ಸ್’ನಂತಹ ಕೆಟ್ಟ ಚಲನಚಿತ್ರ ನಿರ್ಮಿಸಿ ಚುನಾವಣಾ ಲಾಭ ಮಾಡಿಕೊಳ್ಳುವುದು ನೀಚತನದ ಪರಮಾವಧಿ. ದುರಂತವೆಂದರೆ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ರಾಷ್ಟ್ರ ಪ್ರಶಸ್ತಿ ನೀಡುತ್ತಾರೆ. ಪಲ್ಲವಿ ಜೋಶಿಗೆ ಅತ್ಯುತ್ತಮ ಪೋಷಕ ನಟಿ ಎಂದು ರಾಷ್ಟ್ರ ಪ್ರಶಸ್ತಿ ದಯ ಪಾಲಿಸುತ್ತಾರೆ. ಅಂದರೆ ಭಾರತ ಸರಕಾರವೇ ದ್ವೇಷ ಬಿತ್ತುವ ಚಲನಚಿತ್ರಗಳನ್ನು ಉತ್ತೇಜಿಸುತ್ತಿದೆ ಎಂದಾಯಿತು. ‘ದಿ ಕೇರಳ ಸ್ಟೋರಿ’ 2023ರಲ್ಲಿ ನಿರ್ಮಾಣವಾದ ಹಿಂದಿ ಚಲನಚಿತ್ರ. ಸುದೀಪ್ತೊ ನಿರ್ದೇಶನದ ಈ ಚಲನಚಿತ್ರವನ್ನು ವಿಪುಲ್ ಅಮೃತ್ ಲಾಲ್ ಅವರು ನಿರ್ಮಿಸಿದ್ದಾರೆ. ಈ ಚಿತ್ರ ಹಿಂದುತ್ವ ಪ್ರತಿಪಾದಕರ ‘ಲವ್ ಜಿಹಾದ್’ ತತ್ವವನ್ನು ನಿರೂಪಿಸುತ್ತದೆ. ಇದು ಕೂಡ ಸತ್ಯ ಘಟನೆಗಳನ್ನು ಆಧರಿಸಿದ ಚಲನಚಿತ್ರ ಎಂದು ಹೇಳಿಕೊಂಡಿದ್ದಾರೆ. ಆದರೆ ಸಮರ್ಪಕ ಆಧಾರಗಳೇ ಇಲ್ಲ. ಹಿಂದೂ ಮಹಿಳೆಯರನ್ನು ಮುಸ್ಲಿಮ್ ಯುವಕರು ‘ಲವ್ ಜಿಹಾದ್’ ಮೂಲಕ ಬಳಸಿಕೊಳ್ಳುತ್ತಾರೆ ಎಂದು ದ್ವೇಷ ಬಿತ್ತುವ ಉದ್ದೇಶ ಹೊಂದಿದೆ. ಈ ಚಲನಚಿತ್ರಕ್ಕೂ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ದಯ ಪಾಲಿಸಲಾಯಿತು. ಒಂದು ಚಲನಚಿತ್ರವಾಗಿಯೂ ‘ದಿ ಕೇರಳ ಸ್ಟೋರಿ’ ಸದಭಿರುಚಿಯ ಚಿತ್ರ ಎನಿಸುವುದಿಲ್ಲ. ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದ ಭಾಗವಾಗಿ ಈ ಚಲನಚಿತ್ರ ನಿರ್ಮಾಣವಾಗಿತ್ತು. ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಈ ಚಿತ್ರವನ್ನು ವ್ಯಾಪಕವಾಗಿ ಪ್ರದರ್ಶನ ಮಾಡಲಾಯಿತು. ಆದರೆ ಕರ್ನಾಟಕದ ಮತದಾರ ‘ದಿ ಕೇರಳ ಸ್ಟೋರಿ’ಯ ಕಟ್ಟು ಕತೆಯನ್ನು ನಂಬಲಿಲ್ಲ. ಬಿಜೆಪಿ ಸಂಸದೆ ಮತ್ತು ಚಿತ್ರ ನಟಿ ಕಂಗನಾ ರಣಾವತ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ ‘ಎಮರ್ಜೆನ್ಸಿ’ ಚಲನಚಿತ್ರ 2025ರಲ್ಲಿ ತೆರೆ ಕಂಡಿದೆ. ಇಂದಿರಾಗಾಂಧಿ ಮತ್ತು ಗಾಂಧಿ ಪರಿವಾರವನ್ನು ಖಳನಾಯಕರನ್ನಾಗಿ ಬಿಂಬಿಸಿ ಇಂದಿನ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದ ಭಾಗವಾಗಿ ಆ ಚಲನಚಿತ್ರ ಹುಟ್ಟಿಕೊಂಡಿದೆ. ಇತ್ತೀಚೆಗೆ ‘ಹಕ್’ ಎಂಬ ಹಿಂದಿ ಚಲನಚಿತ್ರ ತೆರೆ ಕಂಡಿದೆ. ಸುಪರ್ಣ ವರ್ಮಾ ನಿರ್ದೇಶನದ ಈ ಚಲನಚಿತ್ರ ಶಾಬಾನು ಪ್ರಕರಣವನ್ನು ಮುಖ್ಯ ತಿರುಳನ್ನಾಗಿಸಿ ಕತೆ ಚಿತ್ರಕತೆ ಸಿದ್ಧಪಡಿಸಲಾಗಿದೆ. ಮುಸ್ಲಿಮ್ ಸಮುದಾಯ ಮತ್ತು ಆ ಸಮುದಾಯದ ಧರ್ಮ ಗುರುಗಳು ಮಹಿಳಾ ವಿರೋಧಿ ಮನಸ್ಥಿತಿಯವರು ಎಂದು ನಿರೂಪಿಸಲು ಯತ್ನಿಸಲಾಗಿದೆ. ಶಾಬಾನು ಪ್ರಕರಣ, ಅದರಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸಾರ್ವಜನಿಕವಾಗಿ ಲಭ್ಯ ಇವೆ. ಹೀಗಿರುವಾಗ ಆ ಕಥೆಯನ್ನೇ ಮರು ರೂಪಿಸುವ ಮೂಲಕ ಭಾರತೀಯ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ದುರಂಧರ್’ ಚಲನಚಿತ್ರ ಕೂಡಾ ಚರಿತ್ರೆಯ ಒಂದು ಘಟನೆ ಹೆಕ್ಕಿ ತೆಗೆದು ಪಾಕಿಸ್ತಾನಿ ಮುಸ್ಲಿಮರ ಕ್ರೌರ್ಯವನ್ನು ಅತಿರಂಜಿತವಾಗಿ ಚಿತ್ರಿಸಿ ಇಂದಿನ ಭಾರತೀಯ ಮುಸ್ಲಿಮರು ಕ್ರೂರಿಗಳು ಎಂದು ನಿರೂಪಿಸುವ ಪ್ರಯತ್ನ ಇಲ್ಲಿ ನಡೆದಿದೆ. ಈ ಚಲನಚಿತ್ರವನ್ನು ಆರು ಗಲ್ಫ್ ದೇಶಗಳು ಬ್ಯಾನ್ ಮಾಡಿವೆ. ಯುಎಇ, ಸೌದಿ ಅರೇಬಿಯ, ಖತರ್, ಕುವೈತ್, ಒಮಾನ್ ಮತ್ತು ಬಹರೈನ್ ದೇಶಗಳಲ್ಲಿ ಈ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ‘ಫ್ರೀಡಂ ಅಟ್ ಮಿಡ್ ನೈಟ್’ ಕೃತಿ ಮೂಲತಃ ಮಹಾತ್ಮಾ ಗಾಂಧೀಜಿಯವರ ಮಹತ್ವ ಸಾರುವ ಪುಸ್ತಕ. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಒಬ್ಬರೇ ನೈಜ ಕಾಳಜಿಯೊಂದಿಗೆ ಶ್ರಮಿಸಿ ರಕ್ತ ಪಾತದ ನಷ್ಟದ ಪ್ರಮಾಣ ತಗ್ಗಿಸಿದವರು. ಮಹಾತ್ಮಾ ಗಾಂಧಿ ಅಂದು ನೌಕಾಲಿ ಮತ್ತು ಕೋಲ್ಕತಾ ನಗರದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ ಕಥಾನಕ ಈ ಕೃತಿಯ ಮುಖ್ಯ ಕಾಳಜಿ. ಡಾಮಿನಿಕ್ ಲ್ಯಾಪಿರ್ರೆ ಮತ್ತು ಲ್ಯಾರಿ ಕಾಲಿನ್ಸ್ ರಚಿಸಿದ ಈ ಪುಸ್ತಕವನ್ನು ಆಧರಿಸಿ ನಿಖಿಲ್ ಅಡ್ವಾಣಿ ವೆಬ್ ಸೀರೀಸ್ ತಯಾರಿಸಿದ್ದಾರೆ. ಈ ಸೀರೀಸ್ ವೀಕ್ಷಿಸಿದ ಎಲ್ಲರಿಗೂ ಮಹಾತ್ಮಾ ಗಾಂಧಿ ಖಳನಾಯಕನಾಗಿ ಕಾಣುತ್ತಾರೆ. ಹಠಮಾರಿ ಸ್ವಭಾವದ ಮಹಾತ್ಮಾ ಗಾಂಧಿ ಪಾಕಿಸ್ತಾನ ದೇಶಕ್ಕೆ ರೂ.55 ಕೋಟಿ ನೀಡಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಕಾರಣಕ್ಕೆ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ಎಂಬ ಭಾವನೆ ಮೂಡುವಂತೆ ಕಟ್ಟಿಕೊಟ್ಟಿದ್ದಾರೆ. ಈ ವೆಬ್ ಸೀರೀಸ್ ನೋಡಿದ ಎಲ್ಲರಿಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಹೀರೋ ಎನಿಸಿಕೊಳ್ಳುತ್ತಾರೆ. ಆದರೆ ಮಹಾತ್ಮಾ ಗಾಂಧಿಯವರ ಬಗ್ಗೆ ಗೌರವ ಮೂಡುವುದಿಲ್ಲ. ಜವಾಹರಲಾಲ್ ನೆಹರೂ ಕೂಡಾ ಅವಕಾಶವಾದಿಯಾಗಿ ಕಾಣುತ್ತಾರೆ. ಸೌಹಾರ್ದಯುತ ಭಾರತದ ಚರಿತ್ರೆಯನ್ನು ಕೋಮುವಾದಿ ಕಣ್ಣುಗಳಿಂದ ಪುನರ್ ವ್ಯಾಖ್ಯಾನಿಸುವ ಪರಿಯೇ ವಿಕೃತವಾದುದು. ಕಂದಹಾರ್, ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಮತ್ತು ಅಜಿತ್ ದೋವಲ್ ಅವರನ್ನು ಹೀರೋ ಆಗಿ ಬಿಂಬಿಸುವ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ಗಳು ನಿರಂತರ ನಿರ್ಮಾಣಗೊಳ್ಳುತ್ತಿವೆ. ರಾಷ್ಟ್ರೀಯ ಭದ್ರತಾ ಸಂಬಂಧಿ ಕತೆಗಳನ್ನು ಹೀಗೆ ಅತಿರಂಜಿತವಾಗಿ ಚಿತ್ರಿಸಿ ಚಲನಚಿತ್ರ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಭಾರತದ ಮುಸ್ಲಿಮರಿಗೂ ಮತ್ತು ಭಯೋತ್ಪಾದಕ ಚುಟುವಟಿಕೆಗಳಿಗೂ ಅನಗತ್ಯವಾಗಿ ತಳಕು ಹಾಕುವ ಈ ಪ್ರಯತ್ನ ಮತ ವಿಭಜನೆಯ ಕಾರ್ಯ ತಂತ್ರವಾಗಿದೆ. ನರೇಂದ್ರ ಮೋದಿಯವರು ನಿಜಕ್ಕೂ ವಿಕಸಿತ ಭಾರತದ ಕನಸುಗಾರನಾಗಿದ್ದರೆ ಮತೀಯ ಕಥಾನಕಗಳ ಸೃಷ್ಟಿಯ ಅಗತ್ಯವೇ ಬೀಳುವುದಿಲ್ಲ. ಭಾರತವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಚರಿತ್ರೆಯಲ್ಲಿನ ಮತೀಯ ಘಟನೆಗಳನ್ನು ಹೆಕ್ಕಿ ಹಿಂದೂ-ಮುಸ್ಲಿಮ್ ವಿಭಜನೆಯ ಕಥಾನಕ ರೂಪಿಸಲಾಗುತ್ತಿದೆ. ಭಾರತದ ಸೌಹಾರ್ದ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನಗಳು ಯಾವತ್ತೂ ಸಫಲವಾಗಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ನೈಜ ಶಕ್ತಿಯಾಗಿದೆ.
ಭಾರತದ ಬಾಹ್ಯಾಕಾಶ ನಾಗಾಲೋಟವನ್ನು ಕಂಡು ಅನೇಕ ರಾಷ್ಟ್ರಗಳಿಗೆ ಹೊಟ್ಟೆಯುರಿ ಶುರುವಾಗಿದೆ. ಆ ರಾಷ್ಟ್ರಗಳು ನಮ್ಮ ಹೆಮ್ಮೆಯ ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕುತಂತ್ರ ನಡೆಸುವ ಸಾಧ್ಯತೆ ಇಲ್ಲದ್ದಿಲ್ಲ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರ ನಿರ್ದೇಶನದ ಮೇರೆಗೆ, ಕಳೆದ ಜ.22ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿರುವನಂತಪುರಂ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇದೀಗ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರು, ಇಸ್ರೋ ಕಾರ್ಯಾಚರಣೆಗಳಲ್ಲಿ ಬೇಹುಗಾರಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾದಗಿರಿ : ಐಎಎಂಎಂ–ಕೆಸಿ 30ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ
ರಾಜ್ಯದಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸುವುದು ನನ್ನ ಗುರಿ : ಸಚಿವ ಡಾ. ಶರಣಪ್ರಕಾಶ ಪಾಟೀಲ್
Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
ಬೆಂಗಳೂರು: ಜಾಗತಿಕವಾಗಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಕಳೆದ ಎಂಟು ದಿನಗಳಿಂದ ನಿರಂತರವಾಗಿ ಇಳಿಕೆ ಮತ್ತು ಆಗಾಗ ಏರಿಕೆ ಕಾಣುತ್ತಿರುವ ಚಿನ್ನ-ಬೆಳ್ಳಿ ಎರಡು ಲೋಹಗಳ ದರದಲ್ಲಿ ಇಂದು ಶನಿವಾರ ಫೆಬ್ರವರಿ 07ರಂದು ಮತ್ತೆ ಹೆಚ್ಚಾಗಿದೆ. ಅದರಲ್ಲೂ ಬಂಗಾರದ ಬೆಲೆಯಲ್ಲಿ ದಾಖಲೆಯ ಏಕದಿನದ ಗರಿಷ್ಠ ಹೆಚ್ಚಳ ಕಂಡು ಬಂದಿದೆ. ಶ್ವೇತ ಲೋಹ
ಕಾರ್ಮಿಕ ನೀತಿ ವಿರೋಧಿಸಿ ಮೂಡುಬಿದಿರೆಯಲ್ಲಿ ವಾಹನ ಜಾಥಾ: ಫೆ.12ರಂದು ದೇಶವ್ಯಾಪಿ ಮಹಾ ಮುಷ್ಕರಕ್ಕೆ ಕರೆ
ಮೂಡುಬಿದಿರೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ರೈತ–ಕಾರ್ಮಿಕರ ಜಂಟಿ ಸಮಿತಿಯ ಆಶ್ರಯದಲ್ಲಿ ಫೆಬ್ರವರಿ 12ರಂದು ದೇಶಾದ್ಯಂತ ಅಖಿಲ ಭಾರತ ಮಹಾ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಇದರ ಪೂರ್ವಭಾವಿಯಾಗಿ ಮೂಡುಬಿದಿರೆಯಲ್ಲಿ ವಾಹನ ಜಾಥಾ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್, “ಕೇಂದ್ರ ಸರ್ಕಾರವು ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳುವ ಉದ್ದೇಶ ಹೊಂದಿದೆ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು, ಕಾರ್ಮಿಕ ಚಳವಳಿಗಳನ್ನು ಹತ್ತಿಕ್ಕಲು ಹಾಗೂ ದೇಶದ ಶ್ರೀಮಂತರನ್ನು ರಕ್ಷಿಸಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ, ಕಾರ್ಪೊರೇಟ್ ಪರವಾದ ನಾಲ್ಕು ಸಂಹಿತೆಗಳನ್ನು ಜಾರಿಗೆ ತಂದಿದೆ. ಇದು ಕಾರ್ಮಿಕರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸುತ್ತದೆ.ಸಾಮಾನ್ಯ ವರ್ಗದವರು ಮಹಾ ಮುಷ್ಕರಕ್ಕೆ ಕೈಜೋಡಿಸಬೇಕು. ಒಂದು ದಿನದ ದುಡಿಮೆಯನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು,” ಎಂದು ಅವರು ಮನವಿ ಮಾಡಿದರು. ಎಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಯಾದವ ಶೆಟ್ಟಿ, ವಸಂತ ಆಚಾರ, ರಮಣಿ, ಯೋಗೀಶ್ ಜಪ್ಪಿನಮೊಗರು, ಕಾರ್ಮಿಕ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.
Pakistan | ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: ಹೊಣೆ ಹೊತ್ತ ಐಎಸ್
ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್ ನ ಶಿಲ್ಟೆ ಮಸೀದಿಯಲ್ಲಿ ಸಂಭವಿಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಹೊತ್ತುಕೊಂಡಿದೆ. ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್ ನಲ್ಲಿ 2008ರ ಮ್ಯಾರಿಯಟ್ ಹೋಟೆಲ್ ಮೇಲಿನ ಬಾಂಬ್ ದಾಳಿಯ ನಂತರ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ. ಇಸ್ಲಾಮಾಬಾದ್ ನ ಹೊರವಲಯದಲ್ಲಿರುವ ತಲರಾಯಿ ಪ್ರದೇಶದ ಇಮಾಂ ಬರ್ಗಾ ಕಸರ್-ಇ-ಖಾದಿಜತುಲ್ ಕುಬ್ರಾ ಮಸೀದಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ. ಶುಕ್ರವಾರದ ಪ್ರಾರ್ಥನೆಗಾಗಿ ದೇಶದಾದ್ಯಂತ ಮಸೀದಿಗಳು ಜನರಿಂದ ಕಿಕ್ಕಿರಿದು ತುಂಬಿದ್ದ ವೇಳೆ ಈ ಬಾಂಬ್ ಸ್ಫೋಟ ಸಂಭವಿಸಿದೆ. “ದಾಳಿಕೋರನನ್ನು ಮಸೀದಿಯ ದ್ವಾರದ ಬಳಿಯೇ ತಡೆಯಲಾಗಿದ್ದು, ಆತ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ” ಎಂದು ಭದ್ರತಾ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಇಸ್ಲಾಮಿಕ್ ಸ್ಟೇಟ್, “ನಮ್ಮ ಸದಸ್ಯನೊಬಬ್ಬ ಸಭೆಯ ಮೇಲೆ ಬಾಂಬ್ ದಾಳಿ ನಡೆಸಿದ್ದು, ಇದರಿಂದ ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿದೆ” ಎಂದು ಹೇಳಿಕೊಂಡಿದೆ ಎಂದು ಅವರ ಮೇಲೆ ನಿಗಾವಹಿಸಿಯರುವ SITE ಗುಪ್ತಚರ ಗುಂಪು ತಿಳಿಸಿದೆ.
ನಾನು ಸಿಎಂ ಆಗಬೇಕೆಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ; ಪಕ್ಷ ಏನು ಹೇಳುತ್ತದೆ ನೋಡಬೇಕು : ಡಿ.ಕೆ.ಶಿವಕುಮಾರ್
ಮಂಗಳೂರು: ''ನಾನು ಸಿಎಂ ಆಗಬೇಕೆಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮದವರಿಗೂ ಇದೆ. ಆದರೆ, ಪಕ್ಷ ಏನು ಹೇಳುತ್ತದೆ ಎಂದು ಕೇಳಬೇಕು'' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು. ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂದು ಮಾಧ್ಯಮದವರು ಮಂಗಳೂರಿನಲ್ಲಿ ಕೇಳಿದಾಗ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಅವರು ತಿಳಿಸಿದರು. ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು. ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, ಸಮಯವೇ ಉತ್ತರ ನೀಡಲಿದೆ ಎಂದರು.
25,000 ರೂಪಾಯಿ ಪರಿಹಾರ, ಡಿಜಿಟಲ್ ಸಂತ್ರಸ್ತರಿಗೆ ಭರ್ಜರಿ ಸುದ್ದಿ ಕೊಡಲು ಸಜ್ಜಾದ ಆರ್ಬಿಐ... RBI Compensation
ಜಗತ್ತು ಆಧುನಿಕತೆ ಕಡೆಗೆ ಹೋದಂತೆಲ್ಲಾ ವಂಚನೆ ಪ್ರಕರಣ ಹಾಗೂ ಮೋಸ ಮಾಡುವುದು ಕೂಡ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಡಿಜಿಟಲ್ ಜಗತ್ತಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಆನ್ಲೈನ್ ವಂಚನೆಗಳ ಮೂಲಕ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರು ದುಡ್ಡು ಕಳೆದುಕೊಂಡು ಪರದಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಲಗಾಮು ಹಾಕಲು ಮತ್ತು ದುಡ್ಡು ಕಳೆದುಕೊಳ್ಳುವ ಜನರಿಗೆ ರಕ್ಷಣೆ ನೀಡಲು ಇದೀಗ ಆರ್ಬಿಐ
Mumbai | ಬಿಜೆಪಿಯ ರಿತು ತಾವ್ಡೆ ಮುಂಬೈ ಮೇಯರ್; ಶಿವಸೇನೆಯ ಸಂಜಯ್ ಶಂಕರ್ ಘಡಿ ಉಪ ಮೇಯರ್
ಮುಂಬೈ: ಬಿಜೆಪಿಯ ರಿತು ತಾವ್ಡೆ ಅವರನ್ನು ಮುಂಬೈ ಮೇಯರ್ ಆಗಿ ನೇಮಕ ಮಾಡಲಾಗಿದ್ದು, 25 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಶಿವಸೇನೆಯೇತರ ಪಕ್ಷದ ನಾಯಕರೊಬ್ಬರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಮುಂಬೈನ ಉಪ ಮೇಯರ್ ಆಗಿ ದಹಿಸಾರ್ನಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ಶಿವಸೇನೆಯ ಸಂಜಯ್ ಶಂಕರ್ ಘಡಿ ನೇಮಕವಾಗಿದ್ದಾರೆ. ಬಿಜೆಪಿಯ ಹಿರಿಯ ಕಾರ್ಪೊರೇಟರ್ ಆದ ರಿತು ತಾವ್ಡೆ 2017ರಲ್ಲಿ ಘಾಟ್ಕೋಪಾರ್ನ 121ನೇ ವಾರ್ಡ್ನಿಂದ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ಅವರು ಬೃಹನ್ ಮುಂಬೈ ನಗರ ಪಾಲಿಕೆಯ ಶಿಕ್ಷಣ ಸಮಿತಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.
Vaibhav Suryavanshi : ಮೈದಾನ ಚಿಕ್ಕದಾಯಿತೇ? ಸ್ಟೇಡಿಯಂ ಹೊರಕ್ಕೆ ಚೆಂಡು ಅಟ್ಟುವುದೇ ಈತನ ಹವ್ಯಾಸ!
Sensational Vaibhav Suryavanshi : ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರಿಗೆ ಅಭಿನಂದನೆಗಳು. ಇಡೀ ಟೂರ್ನಮೆಂಟ್’ನಲ್ಲಿ ವಿರೋಧಿಗಳಿಗೆ ಅಕ್ಷರಸಃ ಕಾಡಿದ್ದು ಭಯಾನಕ ಹುಡುಗ ವೈಭವ್ ಸೂರ್ಯವಂಶಿ. ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ರೀತಿಗೆ ಜಾಗತಿಕ ಕ್ರಿಕೆಟ್ ಬೆಚ್ಚಿಬಿದ್ದಿದೆ. ಮೈದಾನದ ಹೊರಗೆ ಸಿಕ್ಸ್ ಹೊಡೆಯುವುದೇ ವೈಭವ ಬ್ಯಾಟಿಂಗ್ ಶೈಲಿ ಎನ್ನುವ ರೀತಿಯಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.
ಭಾರತದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ ಸಾಧ್ಯವೆ?
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಬಗ್ಗೆ ಭಾರತದಲ್ಲಿಯೂ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ ಕಾನೂನಿನ ಬೆನ್ನಲ್ಲೇ ಭಾರತದ ಎರಡು ರಾಜ್ಯಗಳ ಸಚಿವರು ಆ ಕಾನೂನನ್ನು ಅಧ್ಯಯನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 2025–26ರ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಗೆ ಫೆಡರಲ್ ಸರ್ಕಾರವು ವಯಸ್ಸಿನ ಆಧಾರಿತ ಮಿತಿಗಳನ್ನು ಪರಿಗಣಿಸಬೇಕು ಎಂದು ತಿಳಿಸಿದೆ. ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಅವರನ್ನು ಗುರಿಯಾಗಿಟ್ಟುಕೊಂಡ ಡಿಜಿಟಲ್ ಜಾಹೀರಾತುಗಳಿಗೆ ವಯಸ್ಸಿನ ಆಧಾರಿತ ಮಿತಿಗಳನ್ನು ಜಾರಿಗೆ ತರಲು ಶಿಫಾರಸು ಮಾಡಿದೆ. ಯುವ ಬಳಕೆದಾರರಲ್ಲಿ “ಡಿಜಿಟಲ್ ವ್ಯಸನ”ದ ಸುತ್ತಲಿನ ದೊಡ್ಡ ಕಾಳಜಿಗಳಿಂದ ಈ ಶಿಫಾರಸು ಹುಟ್ಟಿಕೊಂಡಿದೆ. ಕಿರಿಯ ಬಳಕೆದಾರರು ಹಾನಿಕಾರಕ ವಿಷಯಗಳಿಗೆ ಹೆಚ್ಚು ಗುರಿಯಾಗುವುದರಿಂದ, ವಯಸ್ಸಿನ ಆಧಾರಿತ ಪ್ರವೇಶ ಮಿತಿಗಳ ನೀತಿಗಳನ್ನು ಪರಿಗಣಿಸಬಹುದು. ವಿಶೇಷವಾಗಿ ಸಾಮಾಜಿಕ ಮಾಧ್ಯಮ, ಜೂಜಾಟದ ಅಪ್ಲಿಕೇಶನ್ ಗಳು, ಆಟೋ-ಪ್ಲೇ ವೈಶಿಷ್ಟ್ಯಗಳು ಮತ್ತು ಉದ್ದೇಶಿತ ಜಾಹೀರಾತುಗಳಿಗೆ ವಯಸ್ಸಿನ ಪರಿಶೀಲನೆ ಹಾಗೂ ವಯಸ್ಸಿಗೆ ಸೂಕ್ತವಾದ ಡೀಫಾಲ್ಟ್ಗಳನ್ನು ಜಾರಿಗೊಳಿಸಲು ವೇದಿಕೆಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು. ಮಕ್ಕಳಿಗೆ ಬೇಸಿಕ್ ಫೋನ್ ಅಥವಾ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರುವ ಟ್ಯಾಬ್ಲೆಟ್ ಗಳ ಬಳಕೆಯನ್ನು ಕಂಟೆಂಟ್ ಫಿಲ್ಟರ್ ಗಳೊಂದಿಗೆ ಪ್ರಚಾರ ಮಾಡಬೇಕು. ಇದು ಹಿಂಸಾತ್ಮಕ, ಲೈಂಗಿಕ ಅಥವಾ ಜೂಜಾಟ ಸಂಬಂಧಿತ ವಿಷಯ ಸೇರಿದಂತೆ ಹಾನಿಕಾರಕ ವಸ್ತುಗಳಿಗೆ ಅವರ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು ಎಂದು ಸಮೀಕ್ಷೆ ಹೇಳಿದೆ. ಆದಾಗ್ಯೂ, ಭಾರತದಲ್ಲಿ ಅಂತಹ ನಿಷೇಧವು ಸುಲಭವಲ್ಲ. ಇದು ಕಾನೂನು ಸವಾಲುಗಳನ್ನು ಎದುರಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆಸ್ಟ್ರೇಲಿಯಾ ಇತ್ತೀಚೆಗೆ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದೆ. ಈ ಕಾನೂನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಬಳಕೆದಾರರ ವಯಸ್ಸನ್ನು ಪರಿಶೀಲಿಸುವುದು ಹಾಗೂ ಅಪ್ರಾಪ್ತ ಬಳಕೆದಾರರ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಕಳೆದ ವಾರ ಫ್ರಾನ್ಸ್ನ ಕೆಳಮನೆಯ ಶಾಸಕರು 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದರು. ಇದನ್ನು ಇನ್ನೂ ಸೆನೆಟ್ ಅಂಗೀಕರಿಸಬೇಕಾಗಿದೆ. ಯುಕೆಯೂ ಇದೇ ರೀತಿಯ ನಿಷೇಧವನ್ನು ಪರಿಗಣಿಸುತ್ತಿದೆ. ►ಭಾರತದಲ್ಲಿಯೂ ಚರ್ಚೆ ಜೋರು ಕಳೆದ ವಾರ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಶಾಸಕರಾದ ಎಲ್ಎಸ್ಕೆ ದೇವರಾಯಲು ಅವರು 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ನಿಷೇಧಿಸುವ ಮಸೂದೆಯನ್ನು ಪ್ರಸ್ತಾಪಿಸಿದರು. ಖಾಸಗಿ ಸದಸ್ಯರ ಮಸೂದೆಯಾದ ಈ ಪ್ರಸ್ತಾಪವು ಸರ್ಕಾರಿ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಕಾನೂನಾಗುವ ಸಾಧ್ಯತೆ ಕಡಿಮೆ. ಆದರೆ ಇದು ಸಂಸತ್ತಿನ ಚರ್ಚೆಗಳನ್ನು ರೂಪಿಸಬಹುದು. ಆಂಧ್ರಪ್ರದೇಶ ಸರ್ಕಾರವು ಜಾಗತಿಕ ನಿಯಂತ್ರಣ ಚೌಕಟ್ಟುಗಳನ್ನು ಅಧ್ಯಯನ ಮಾಡಲು ಸಚಿವರ ಗುಂಪನ್ನು ರಚಿಸಿದ್ದು, ಮೆಟಾ, ಎಕ್ಸ್, ಗೂಗಲ್ ಮತ್ತು ಶೇರ್ಚಾಟ್ ಸೇರಿದಂತೆ ಪ್ರಮುಖ ವೇದಿಕೆಗಳನ್ನು ಸಮಾಲೋಚನೆಗಾಗಿ ಆಹ್ವಾನಿಸಿದೆ. ಕಂಪೆನಿಗಳು ಇನ್ನೂ ಆಹ್ವಾನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಕಳೆದ ವಾರ ಎಕ್ಸ್ನಲ್ಲಿ, ಮಕ್ಕಳು ಸಾಮಾಜಿಕ ಮಾಧ್ಯಮದ ನಿರಂತರ ಬಳಕೆಯಲ್ಲಿ ತೊಡಗಿದ್ದಾರೆ. ಇದು ಅವರ ಗಮನ ವ್ಯಾಪ್ತಿ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಮಾಧ್ಯಮವು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ಸ್ಥಳವಾಗುವುದನ್ನು ನಾವು ಖಚಿತಪಡಿಸುತ್ತೇವೆ; ಅದರ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇತರ ರಾಜ್ಯಗಳೂ ಇದೇ ರೀತಿಯ ಕ್ರಮಗಳಲ್ಲಿ ಆಸಕ್ತಿ ವ್ಯಕ್ತಪಡಿಸಿವೆ. ಗೋವಾದ ಪ್ರವಾಸೋದ್ಯಮ ಮತ್ತು ಐಟಿ ಸಚಿವ ರೋಹನ್ ಖೌಂಟೆ ಅವರು, ರಾಜ್ಯವು ನಿಷೇಧವನ್ನು ಜಾರಿಗೆ ತರಬಹುದೇ ಎಂದು ಪರಿಶೀಲಿಸುತ್ತಿದೆ; ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು ಎಂದಿದ್ದಾರೆ. ಕರ್ನಾಟಕದ ವಿಧಾನಸಭೆಯಲ್ಲಿ ಮಾತನಾಡಿದ ರಾಜ್ಯ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರವು ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಯ ಬಗ್ಗೆ ಚರ್ಚಿಸುತ್ತಿದೆ ಎಂದರು. ಸರ್ಕಾರವು ಮೆಟಾ ಜೊತೆಗಿನ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಮತ್ತು 1 ಲಕ್ಷ ಶಿಕ್ಷಕರನ್ನು ಒಳಗೊಂಡ “ಡಿಜಿಟಲ್ ಡಿಟಾಕ್ಸ್” ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಆದಾಗ್ಯೂ, ಕಾನೂನು ಜಾರಿಗೆ ತರಲಾಗುತ್ತಿದೆಯೇ ಅಥವಾ ಯಾವ ವಯಸ್ಸಿನ ಗುಂಪುಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬುದನ್ನು ಖರ್ಗೆ ನಿರ್ದಿಷ್ಟಪಡಿಸಲಿಲ್ಲ. ರಾಜ್ಯ ಮಟ್ಟದ ನಿಷೇಧಗಳನ್ನು ಜಾರಿಗೊಳಿಸುವುದು ಜಟಿಲವಾಗಿರುತ್ತದೆ ಎಂದು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ್ ಪಹ್ವಾ ಹೇಳಿದ್ದಾರೆ. ಕಂಪೆನಿಗಳು ಐಪಿ ವಿಳಾಸಗಳ ಮೂಲಕ ಬಳಕೆದಾರರ ಸ್ಥಳಗಳನ್ನು ಊಹಿಸಬಹುದಾದರೂ, ಅಂತಹ ವ್ಯವಸ್ಥೆಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ರಾಜ್ಯಗಳ ಗಡಿಗಳು ಹತ್ತಿರದಲ್ಲಿರುವ ಸಂದರ್ಭಗಳಲ್ಲಿ ಒಂದು ರಾಜ್ಯವು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಿ, ಇನ್ನೊಂದು ರಾಜ್ಯವು ನಿಷೇಧಿಸದಿದ್ದರೆ ಸಂಘರ್ಷಗಳು ಉಂಟಾಗಬಹುದು. ವಯಸ್ಸಿನ ಪರಿಶೀಲನೆ ಸರಳವಲ್ಲ; ಅಂತಹ ನಿಷೇಧಗಳಿಗೆ ಬದ್ಧವಾಗಿರಲು ಕಂಪೆನಿಗಳು ಇಂಟರ್ನೆಟ್ನಲ್ಲಿರುವ ಪ್ರತಿಯೊಂದು ಸೇವೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಇಂಥ ಕಾನೂನು ಜಾರಿಯು ವೇದಿಕೆಗಳು ಮತ್ತು ಮಧ್ಯವರ್ತಿಗಳ ಸಹಕಾರವನ್ನು ಅವಲಂಬಿಸಿರುತ್ತದೆ. ಇಂಟರ್ನೆಟ್ ಸೇವಾ ಪೂರೈಕೆದಾರರು ಅಥವಾ ತಂತ್ರಜ್ಞಾನ ಕಂಪೆನಿಗಳು ಐಪಿ ವಿಳಾಸಗಳ ಮೂಲಕ ಸ್ಥಳವನ್ನು ಊಹಿಸಬಹುದು. ಆದರೆ ಅಪ್ಲಿಕೇಶನ್ಗಳನ್ನು ನಿರ್ವಹಿಸುವ ಕಂಪೆನಿಗಳು ಅಂತಹ ನಿರ್ದೇಶನಗಳನ್ನು ಅನುಸರಿಸುತ್ತವೆಯೇ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಟೆಕ್ ಗ್ಲೋಬಲ್ ಇನ್ಸ್ಟಿಟ್ಯೂಟ್ನ ಸಾರ್ವಜನಿಕ ನೀತಿ ತಜ್ಞ ಪ್ರತೀಕ್ ವಾಘ್ರೆ ಹೇಳಿದ್ದಾರೆ. 1,277 ಭಾರತೀಯ ಹದಿಹರೆಯದವರನ್ನು ಸಮೀಕ್ಷೆ ಮಾಡಿದ ಎನ್ಜಿಒದ ಇತ್ತೀಚಿನ ಅಧ್ಯಯನವು ಭಾರತದ ಡಿಜಿಟಲ್ ಭೂದೃಶ್ಯದಲ್ಲಿ ವಯಸ್ಸಿನ ಆಧಾರಿತ ನಿರ್ಬಂಧಗಳು ಮತ್ತು ಪರಿಶೀಲನಾ ವ್ಯವಸ್ಥೆಗಳು ಹೆಚ್ಚುವರಿ ಅಡೆತಡೆಗಳನ್ನು ಎದುರಿಸಬಹುದು ಎಂದು ಸೂಚಿಸಿದೆ. ಅನೇಕ ಖಾತೆಗಳು ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಸಹಾಯದಿಂದ ರಚಿಸಲ್ಪಟ್ಟಿದ್ದು, ವೈಯಕ್ತಿಕ ಇಮೇಲ್ ವಿಳಾಸಗಳಿಗೆ ಲಿಂಕ್ ಮಾಡಲಾಗಿಲ್ಲ. ಇದು ವಯಸ್ಸಿನ ಪರಿಶೀಲನಾ ವ್ಯವಸ್ಥೆಗಳ ಆಧಾರವಾಗಿರುವ ವೈಯಕ್ತಿಕ ಮಾಲೀಕತ್ವದ ಊಹೆಗಳನ್ನು ಸಂಕೀರ್ಣಗೊಳಿಸುತ್ತದೆ ಎಂದು ಹೇಳಿದೆ. DataReportal ಪ್ರಕಾರ, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಭಾರತದಲ್ಲಿ 400 ಮಿಲಿಯನ್ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿವೆ — ಇದು ಯಾವುದೇ ದೇಶಕ್ಕಿಂತ ಹೆಚ್ಚು. ಸ್ನ್ಯಾಪ್ಚಾಟ್ ತನ್ನ ಪ್ಲಾಟ್ಫಾರ್ಮ್ನಲ್ಲಿ 200 ಮಿಲಿಯನ್ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಎಕ್ಸ್ ವೇದಿಕೆ 20 ಮಿಲಿಯನ್ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ. ►ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧಿಸಿದ ಆಸ್ಟ್ರೇಲಿಯಾ ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯಸ್ಸನ್ನು ಜಾರಿಗೊಳಿಸಿದ ವಿಶ್ವದ ಮೊದಲ ದೇಶ ಆಸ್ಟ್ರೇಲಿಯಾ. ಕಳೆದ ವರ್ಷ ಇದು Instagram, YouTube ಮತ್ತು Snap ನಂತಹ ವೇದಿಕೆಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ನಿಷೇಧ ಹೇರಿತು. ‘Online Safety Amendment (Social Media Minimum Age) Act’ ಎಂದು ಕರೆಯಲ್ಪಡುವ ಹೊಸ ಕಾನೂನು ಪ್ರಕಾರ, ವಯಸ್ಸಿನ ನಿರ್ಬಂಧಿತ ವೇದಿಕೆಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೊಂದಿರುವ ಅಸ್ತಿತ್ವದಲ್ಲಿರುವ ಖಾತೆಗಳನ್ನು ಕಂಡುಹಿಡಿದು ನಿಷ್ಕ್ರಿಯಗೊಳಿಸಲು ಅಥವಾ ತೆಗೆದುಹಾಕಲು, ಹಾಗೂ ಹೊಸ ಖಾತೆಗಳನ್ನು ತೆರೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನಿರ್ಬಂಧಗಳನ್ನು ತಪ್ಪಿಸಲು ಅನುಮತಿಸುವ ಯಾವುದೇ ಪರಿಹಾರೋಪಾಯಗಳನ್ನು ನಿಷೇಧಿಸುವುದೂ ಇದರಲ್ಲಿ ಸೇರಿದೆ. ಯಾರಾದರೂ ತಪ್ಪಾಗಿ ನಿರ್ಬಂಧಗಳಿಂದ ತಪ್ಪಿಸಿಕೊಂಡಿದ್ದರೆ ಅಥವಾ ನಿರ್ಬಂಧಗಳಲ್ಲಿ ಸೇರಿಸಲ್ಪಟ್ಟಿದ್ದರೆ ದೋಷಗಳನ್ನು ಸರಿಪಡಿಸಲು ಪ್ಲಾಟ್ಫಾರ್ಮ್ಗಳು ಪ್ರಕ್ರಿಯೆಗಳನ್ನು ಹೊಂದಿರಬೇಕು. ಆದ್ದರಿಂದ ಯಾರ ಖಾತೆಯನ್ನೂ ಅನ್ಯಾಯವಾಗಿ ತೆಗೆದುಹಾಕಲಾಗುವುದಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ. ಆಸ್ಟ್ರೇಲಿಯಾ ಸರ್ಕಾರದ ಪ್ರಕಾರ, ಬಳಕೆದಾರರು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಲಾಗಿನ್ ಆಗಿರುವಾಗ ಒಡ್ಡಿಕೊಳ್ಳಬಹುದಾದ “ಒತ್ತಡಗಳು ಮತ್ತು ಅಪಾಯಗಳಿಂದ” ಯುವಜನರನ್ನು ರಕ್ಷಿಸುವ ಗುರಿಯನ್ನು ಈ ನಿರ್ಬಂಧಗಳು ಹೊಂದಿವೆ. ಅರ್ಧಕ್ಕಿಂತ ಹೆಚ್ಚು ಯುವ ಆಸ್ಟ್ರೇಲಿಯನ್ನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೈಬರ್ ಬೆದರಿಕೆಯನ್ನು ಎದುರಿಸಿದ್ದಾರೆ ಎಂದು ಸರ್ಕಾರಿ ನಿಯಂತ್ರಕರು ಸಮೀಕ್ಷೆಯ ಮೂಲಕ ಕಂಡುಹಿಡಿದಿದ್ದಾರೆ.
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ : ಸಚಿವ ಡಾ. ಶರಣಪ್ರಕಾಶ ಪಾಟೀಲ್
ಯಾದಗಿರಿ: ಕಲಬುರಗಿಯ ಪಕ್ಕದ ಜಿಲ್ಲೆಯಾದ ಯಾದಗಿರಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ಬರುವ ದಿನಗಳಲ್ಲಿ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸುವ ಉದ್ದೇಶವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಸಂಪುಟ ಸದಸ್ಯ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ಯಿಮ್ಸ್ ಆವರಣದಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಪ್ರಶ್ನೆಗಳ ಕುರಿತು ಉತ್ತರ ನೀಡುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ ಬಗ್ಗೆ ಮಾತ್ರ ಪ್ರಶ್ನೆ ಕೇಳಬಹುದು ಎಂದು ತಿಳಿಸಿದರು. ಯಾದಗಿರಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ಭರ್ತಿಗೆ ಟೆಂಡರ್ ಕರೆಯಲಾಗಿದ್ದು, ನಿಯಮಾನುಸಾರ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿ ಮಾಡಲು ಸೂಚಿಸಲಾಗಿದೆ. ನೂತನ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆಡಳಿತ ಮಂಡಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದರು. ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆ ನೆರವೇರಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಬಡವರು, ಕೂಲಿ ಕಾರ್ಮಿಕರು ಹಾಗೂ ಪ್ರತಿಭಾವಂತ ಮಕ್ಕಳು ವೈದ್ಯರಾಗಬೇಕೆಂಬುದು ನನ್ನ ಹಂಬಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತನ್ನೂರ್, ಡೀನ್ ಸಂದೀಪ್ ವಿ.ಎಚ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಯುಡಾ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆನಿಗಳ ‘PLI’ ಓಕೆ; ಬಡವರಿಗೆ ‘ಸಬ್ಸಿಡಿ’ ಯಾಕೆ?
ಬಡವರ ಅನ್ನ ಅಂಕೆಯಿಲ್ಲದೇ ಹಾಳಾಗುತ್ತಿರುವಾಗ, ಶ್ರೀಮಂತರ ಕಿಸೆ ಭರ್ತಿ ಮಾಡುವಾಗ ಏನೂ ಅನ್ನಿಸದ ಸರಕಾರಗಳಿಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸರಕಾರದ ನೀತಿಗಳಿಂದಾಗಿ ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕ್ಕೆ ತುತ್ತಾಗಿರುವ ಜನರಿಗೆ ಯೂನಿವರ್ಸಲ್ ಬೇಸಿಕ್ ಇನ್ಕಂ ಕಲ್ಪನೆಯಡಿ ಕೈಗೆ ಸ್ವಲ್ಪ ನಗದು ಒದಗಿಸಿದರೆ ಹೊಟ್ಟೆಯುರಿ ಯಾಕೆ? 16ನೇ ಹಣಕಾಸು ಆಯೋಗದ ವರದಿ ಮತ್ತು 2026-27ನೇ ಸಾಲಿನ ಆರ್ಥಿಕ ಸಮೀಕ್ಷೆಗಳೆರಡೂ ಕೂಡ ದೇಶದಲ್ಲಿ ಬಡ, ದುರ್ಬಲ ಮತ್ತು ಅವಕಾಶ ವಂಚಿತರಿಗೆ ಸಿಗುವ ಸಬ್ಸಿಡಿಗಳಿಗೆ ‘ರೆಡ್ ಫ್ಲ್ಯಾಗ್’ ತೋರಿಸಿದ್ದು, ‘ಆನಿ’ ಕಂಪೆನಿಗಳಿಗೆ ಕೊಡುತ್ತಿರುವ ಉತ್ಪಾದನೆ ಆಧರಿತ ಪ್ರೋತ್ಸಾಹನ (PLI)ಗಳ ಕುರಿತು ಮೌನ ತಳೆದಿರುವುದು ಅಥವಾ ‘ಗ್ರೀನ್ ಫ್ಲ್ಯಾಗ್’ ತೋರಿಸುತ್ತಿರುವುದು, ಹಾಲಿ ಭಾರತ ಸರಕಾರದ ಚಹರೆಗಳು ಚೆನ್ನಾಗಿ ಗೊತ್ತಿರುವವರಿಗೆ ಅಚ್ಚರಿಯ ಸಂಗತಿಯೇನಲ್ಲ. ಈ ರೆಡ್ ಹಾಗೂ ಗ್ರೀನ್ ಫ್ಲ್ಯಾಗ್ಗಳ ಹಿಂದಿನ ತರ್ಕಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದು. ಐದು ಗ್ಯಾರಂಟಿಗಳ ಆಶ್ವಾಸನೆಯ ಬೆನ್ನೇರಿ ಕರ್ನಾಟಕದಲ್ಲಿ, 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಚುನಾವಣಾ ಯಶಸ್ಸು, ಹಲವು ರಾಜ್ಯಗಳಲ್ಲಿ ಇಂತಹದೇ ಸಾರ್ವತ್ರಿಕ ಮೂಲಾದಾಯ (ಯುಬಿಐ) ಭರವಸೆಯ ಮಾದರಿಯನ್ನು ಅನುಸರಿಸಲು ಮತ್ತು ಪೈಪೋಟಿಯ ಮೇಲೆ ‘ಉಚಿತಗಳು’ ಮತ್ತು ‘ಗ್ಯಾರಂಟಿಗಳನ್ನು’ ನೀಡಲು ಹಾದಿ ತೆರೆದಿದೆ. ಈ ರೀತಿಯ ‘ಉಚಿತ ಕೊಡುಗೆ’ಗಳ ಬಗ್ಗೆ ಡಾ. ಅರವಿಂದ ಪನಗಾರಿಯಾ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು ಗಂಭೀರ ಆಕ್ಷೇಪಗಳನ್ನು ಎತ್ತಿದೆ. ದೇಶದ ಎಲ್ಲ 21 ರಾಜ್ಯಗಳು ಒಟ್ಟಾಗಿ 2025-26ನೇ ಸಾಲಿಗೆ 9.73 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿವೆ. ಇದು ರಾಜ್ಯಗಳ ಒಟ್ಟು ರೆವೆನ್ಯೂ ವೆಚ್ಚಗಳ ಶೇ. 19.8 ಆಗುತ್ತದೆ. ಅಗತ್ಯ ಇರುವವರನ್ನು ಆಯ್ದು ಇಂತಹ ಸಬ್ಸಿಡಿ ನೀಡುವ ಬದಲು ದೊಡ್ಡ ಗಾತ್ರದ ಜನಸಮುದಾಯಗಳಿಗೆ, ಷರತ್ತು ರಹಿತ ನಗದು ವರ್ಗಾವಣೆ ಮಾಡುವುದು ರಾಜ್ಯಗಳಲ್ಲಿ ಚಟವಾಗಿ ಬೆಳೆಯುತ್ತಿದೆ. 2025-26ನೇ ಸಾಲಿನಲ್ಲಿ ರಾಜ್ಯಗಳು ಇದಕ್ಕೆಂದೇ 1.96 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಿವೆ ಎಂದಿರುವ ಹಣಕಾಸು ಆಯೋಗವು ಕರ್ನಾಟಕದ ಗೃಹಲಕ್ಷ್ಮಿ, ಮಹಾರಾಷ್ಟ್ರದ ಲಾಡ್ಕಿ ಬಹೀಣ ಯೋಜನೆ, ಪ.ಬಂಗಾಳದ ಲಕ್ಷ್ಮೀರ್ ಭಂಡಾರ್ ಯೋಜನೆಗಳತ್ತ ಬೆಟ್ಟು ಮಾಡಿದೆ. ಹಿಂದೆಲ್ಲ ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ವಯಸ್ಕರು, ವಿಧವೆಯರು, ದೈಹಿಕ ವೈಕಲ್ಯಗಳಿರುವವರಿಗೆ ನೀಡುತ್ತಿದ್ದ ನಗದು ವರ್ಗಾವಣೆ 2018-19ರಲ್ಲಿ ಕೇವಲ ಶೇ. 3 ಇತ್ತು. ಈಗ ಈ ಗ್ಯಾರಂಟಿಯಂತಹ ಹೊಸ ಯೋಜನೆಗಳ ಕಾರಣದಿಂದಾಗಿ ನಗದು ವರ್ಗಾವಣೆಯ ಪ್ರಮಾಣ ಶೇ. 20.2ಕ್ಕೆ ಏರಿದೆ ಎಂಬುದು ಆಯೋಗದ ಆತಂಕ. 25-26ನೇ ಸಾಲಿಗೆ 1.96 ಲಕ್ಷ ಕೋಟಿ ರೂ. ನಗದು ವರ್ಗಾವಣೆ ಸಬ್ಸಿಡಿ, 1.58 ಲಕ್ಷ ಕೋಟಿ ರೂ. ಸಾಮಾಜಿಕ ಭದ್ರತೆ ಪಿಂಚಣಿಗಳು, 91,389 ಕೋಟಿ ರೂ.ಗಳ ಕೃಷಿ ಸಬ್ಸಿಡಿ, 2.85 ಲಕ್ಷ ಕೋಟಿ ರೂ.ಗಳ ಆಹಾರ ಸಬ್ಸಿಡಿ (ಇದರಲ್ಲಿ ಕೇಂದ್ರದ ಪಾಲು 2.3 ಲಕ್ಷ ಕೋಟಿ ರೂ.), 2.60 ಲಕ್ಷ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿ ಸರಕಾರಗಳಿಂದ ಜನರಿಗೆ ವರ್ಗಾವಣೆ ಆಗುತ್ತಿದೆ. (ಆಧಾರ: 16ನೇ ಹಣಕಾಸು ಆಯೋಗದ ವರದಿ) ಇವೆಲ್ಲವನ್ನೂ ದಾಟಿ, ಈಗ ರಾಜ್ಯಗಳು (ಕರ್ನಾಟಕದ ಗ್ಯಾರಂಟಿ ಮಾದರಿಯಲ್ಲಿ) 4.14 ಲಕ್ಷ ಕೋಟಿ ರೂ.ಗಳನ್ನು ಜನರಿಗೆ ವರ್ಗಾಯಿಸುತ್ತಿವೆ. ಕೆಲವು ರಾಜ್ಯಗಳು ಈ ಸಬ್ಸಿಡಿಗಳಿಗೆ ಹಣ ಪೂರೈಸಲು ಬಜೆಟ್ ಚೌಕಟ್ಟಿನ ಹೊರಗಿನಿಂದ (ಆಫ್-ಬಜೆಟ್) ಸಾಲ ತರುತ್ತಿವೆ. ಒಕ್ಕೂಟ ಸರಕಾರ ಕೂಡ 6.33 ಲಕ್ಷ ಕೋಟಿ ರೂ.ಗಳ ಸಬ್ಸಿಡಿಯನ್ನು (ಆಹಾರ, ವಸತಿ, ರಸಗೊಬ್ಬರ, ಇಂಧನ ವಲಯಗಳಿಗೆ) ನೀಡುತ್ತಿದೆ. ಕರ್ನಾಟಕದಂತಹ ರಾಜ್ಯಗಳು ಗೃಹಲಕ್ಷ್ಮಿ ಯೋಜನೆಯನ್ನು ತನ್ನ ಅಕೌಂಟಿಂಗ್ನಲ್ಲಿ ಸಬ್ಸಿಡಿ ಎಂದು ತೋರಿಸುತ್ತಿಲ್ಲ ಎಂದೆಲ್ಲ ಆಕ್ಷೇಪಗಳನ್ನು ಹಣಕಾಸು ಆಯೋಗ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಸಾಲ ತಂದು ಸಬ್ಸಿಡಿ ನೀಡುವ ಮೂಲಕ ರಾಜ್ಯಗಳ ಆರ್ಥಿಕ ಆರೋಗ್ಯ ಕೆಡಿಸುವ ಬದಲು, ತಮ್ಮ ಸಬ್ಸಿಡಿ ಯೋಜನೆಗಳನ್ನು ಮರುಪರಿಶೀಲಿಸಬೇಕು. ಷರತ್ತು ರಹಿತ ಸಬ್ಸಿಡಿ ವರ್ಗಾವಣೆಗಳು ಅಗತ್ಯ ಇಲ್ಲದವರಿಗೂ ತಲುಪುತ್ತಿವೆ. ಅದನ್ನು ಸರಿಪಡಿಸಿ, ರೆವೆನ್ಯೂ ಕೊರತೆ ಕಡಿಮೆಗೊಳಿಸಿಕೊಳ್ಳಬೇಕು, ಇಂತಹ ಸಬ್ಸಿಡಿಗಳು ಯಾವಾಗ ಮುಕ್ತಾಯ ಎಂಬುದನ್ನು (ಸನ್ಸೆಟ್ ಷರತ್ತು) ನಿಗದಿಪಡಿಸಬೇಕು ಹಾಗೂ ಈ ಸಬ್ಸಿಡಿಗಳ ಲೆಕ್ಕಾಚಾರವನ್ನು ದೇಶದಾದ್ಯಂತ ಏಕಪ್ರಕಾರ ಇರಿಸುವ ನಿಟ್ಟಿನಲ್ಲಿ ಅಂಉ ಇದನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು 16ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಈ ವರ್ಷದ ಬಜೆಟ್ಗೆ ಮುನ್ನ ದೇಶದ ಆರ್ಥಿಕ ಮುಖ್ಯ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿ, ಸಂಸತ್ತಿನಲ್ಲಿ ಮಂಡಿತವಾದ ದೇಶದ ಆರ್ಥಿಕ ಸರ್ವೇ 2025-26ರಲ್ಲಿ, ಸಬ್ಸಿಡಿ ನೀಡಿಕೆಯನ್ನು ತಾರ್ಕಿಕಗೊಳಿಸುವ ಮೂಲಕ ಕಳೆದ 10 ವರ್ಷಗಳಲ್ಲಿ ಸಂಭವಿಸಿರುವ 3.48 ಲಕ್ಷ ಕೋಟಿ ರೂ.ಗಳ ಸೋರಿಕೆಯನ್ನು ಈಗ ಸಂಪೂರ್ಣವಾಗಿ ತಡೆಯಲಾಗಿದೆ. ಸಬ್ಸಿಡಿ ಫಲಾನುಭವಿಗಳ ಸಂಖ್ಯೆ ಕೂಡ 10 ವರ್ಷಗಳ ಹಿಂದೆ 11 ಕೋಟಿ ಇದ್ದುದು, ಈಗ ಪಡಿತರ, ನರೇಗಾ, ಪಿಎಂಕಿಸಾನ್, ರಸಗೊಬ್ಬರ ಸಬ್ಸಿಡಿ ಯೋಜನೆಗಳ ಕಾರಣದಿಂದಾಗಿ 177 ಕೋಟಿಗೆ ಏರಿದೆ. ಇನ್ನು ರೈಲ್ವೆ, ವಿದ್ಯುತ್ ಕ್ಷೇತ್ರಗಳಲ್ಲಿ ಕ್ರಾಸ್ ಸಬ್ಸಿಡಿ ವ್ಯವಸ್ಥೆ ಸುಧಾರಿಸಬೇಕಿದೆ. ಕಳೆದ 10 ವರ್ಷಗಳಲ್ಲಿ ಸಬ್ಸಿಡಿ ಪ್ರಮಾಣವನ್ನು ಗರಿಷ್ಠ ಪ್ರಮಾಣದಲ್ಲಿ ತಗ್ಗಿಸಲಾಗಿದೆ ಎಂದಿದ್ದಾರೆ. (ಆಧಾರ: ಆರ್ಥಿಕ ಸರ್ವೇ 2025-26) ‘ಆನಿ’ ಸಬ್ಸಿಡಿ ಸುದ್ದಿ ಇಲ್ಲ ದೇಶದ ಶೇ. 70 ಇರುವ ಬಡ, ಮಧ್ಯಮ ವರ್ಗದ ಜನರಿಗೆ ನೀಡಲಾಗುವ ಸಬ್ಸಿಡಿಗಳ ಮೇಲೆ ಹದ್ದಿನ ಕಣ್ಣಿಟ್ಟುಕೊಂಡಿರುವ ಆಳುವವರು ಮತ್ತವರ ಯೋಜನಾ ಪರಿಣತರುಗಳಿಗೆ, ವಾಣಿಜ್ಯ ವ್ಯವಹಾರಗಳು, ಕಾರ್ಪೊರೇಟ್ಗಳಿಗೆ ನೀಡಲಾಗುತ್ತಿರುವ ಭರಪೂರ ರಿಯಾಯಿತಿ, ತೆರಿಗೆ ರಜೆ, ನೆಲ, ಜಲ, PLI/ELIನಂತಹ ಪ್ರೋತ್ಸಾಹನ ಮತ್ತಿತರ ಅಸಂಖ್ಯ ಸಬ್ಸಿಡಿಗಳ ಕಡೆ ಕಣ್ಣು ಹೊರಳುವುದೇ ಇಲ್ಲ. ಎಲ್ಲ ಸಬ್ಸಿಡಿಗಳ ಬಗ್ಗೆ ತಗಾದೆ ತೆಗೆದಿರುವ 16ನೇ ಹಣಕಾಸು ಆಯೋಗವು ಈ ‘ಆನಿ’ ಸಬ್ಸಿಡಿಗಳ ಕುರಿತು ಚಕಾರ ಎತ್ತಿಲ್ಲ. ಅದೇ ವೇಳೆಗೆ, ಆರ್ಥಿಕ ಸರ್ವೇಯಲ್ಲಿ 2020ರ ಎಪ್ರಿಲ್ನಿಂದೀಚೆಗೆ ನೀಡಲಾಗುತ್ತಿರುವ 14 ಕ್ಷೇತ್ರಗಳ ಉತ್ಪಾದನೆ ಆಧರಿತ ಪ್ರೋತ್ಸಾಹನ (PLI)ಗಳ ಬಗ್ಗೆ ಭರ್ಜರಿ ಹೊಗಳಿಕೆ ಇದೆ, ಅದು ದೇಶದ ರಫ್ತು ಸಾಮರ್ಥ್ಯ ಹೆಚ್ಚಿಸಿದೆ ಎಂಬ ಶಹಬ್ಬಾಸ್ಗಿರಿ ಇದೆ. ಕೇವಲ ಅದೊಂದೇ ಬಾಬ್ತಿಗೆ ಸರಕಾರ 1.97ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಇದು ಕೇವಲ ಒಂದಂಶ. ಇದಲ್ಲದೆ ಒಕ್ಕೂಟ ಸರಕಾರದ ಕಡೆಯಿಂದ, ರಾಜ್ಯಗಳ ಕಡೆಯಿಂದ ಕಾರ್ಪೊರೇಟ್ಗಳಿಗೆ ಸಿಗುವ ಸಮಗ್ರ ‘ಕೊಡುಗೆ’ಗಳ ಲೆಕ್ಕಾಚಾರ ಎಲ್ಲೂ ಒಂದೆಡೆ ಏಕತ್ರವಾಗಿ ಸಿಗುವುದಿಲ್ಲ. ಅದು ಸಿಕ್ಕಿದರೆ, ಬಡವರ ಸಬ್ಸಿಡಿಗಳ ಬಗ್ಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅದೇ ‘ಆನಿ’ ಆಟದ ಮೂಲ ನಿಯಮ. ಹಾದಿ ತಪ್ಪಿಸುವ ಅಂಕಿ-ಸಂಖ್ಯೆ ಅಶಕ್ತರ ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ಸರಕಾರದ ಅಂಕಿಸಂಖ್ಯೆಗಳು ಎಷ್ಟೊಂದು ಅತಾರ್ಕಿಕ ಎಂದು ಗಮನಿಸಿ. ದೇಶದಲ್ಲಿ ಸಾಂಪ್ರದಾಯಿಕವಾಗಿ ಶೇ. 70 ಮಂದಿ ಬಡವರು ಎಂಬುದು ಒಪ್ಪಿತ ಲೆಕ್ಕಾಚಾರ. ಅವರ ಪೈಕಿ ಬಡವರ ಸಂಖ್ಯೆ ಕಳೆದ 10 ವರ್ಷಗಳಲ್ಲಿ 25 ಕೋಟಿಯಷ್ಟು ಕಡಿಮೆ ಆಗಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಅವರ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಅಂದಾಜು ಕೇವಲ 7.52 ಕೋಟಿ. 2011-12ರಲ್ಲಿ ಆ ಪ್ರಮಾಣ 34.45 ಕೋಟಿ ಇತ್ತು. (PIB release ID 149221). ವಾಸ್ತವ ಹೀಗಿದ್ದರೂ, Pಒಉಏಙ ಯೋಜನೆಯ ಅಡಿಯಲ್ಲಿ ದೇಶವು ಓಈSಂ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ, ದೇಶದ 81ಕೋಟಿ ಜನರಿಗೆ ಪ್ರತೀ ತಿಂಗಳು ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ವಾರ್ಷಿಕ 36-38ಒಖಿ ಅಕ್ಕಿ, 18-20ಒಖಿ ಗೋಧಿಗಳನ್ನು ಆಹಾರ ನಿಗಮದ ದಾಸ್ತಾನುಗಳಿಂದ ವ್ಯಯಿಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ಸರಕಾರ ಖರೀದಿಸುವ ಈ ಧಾನ್ಯಗಳು ಆಹಾರ ನಿಗಮದ ಉಗ್ರಾಣ (FCI)ಗಳಲ್ಲಿ ಕೊಳೆಯುತ್ತಿದ್ದು, ಅದನ್ನು ತೆರೆದ ಮಾರುಕಟ್ಟೆಯಲ್ಲಿ ಸಬ್ಸಿಡಿ ದರಕ್ಕೆ ಮಾರಾಟ ಮಾಡಿ, ರಾಜ್ಯಗಳಿಗೆ ಪಡಿತರಕ್ಕಾಗಿ ಹಂಚಿ, ಎಥೆನಾಲ್ ಉತ್ಪಾದನೆಗೆ ಒದಗಿಸಿದ ಬಳಿಕವೂ ದಾಸ್ತಾನು-ಸಾಗಾಟ ಕಷ್ಟ ಆಗುವಷ್ಟು ಉಳಿಯುತ್ತಿದ್ದು, ಅದರ ಸಾಗಣೆ-ದಾಸ್ತಾನು-ನಿರ್ವಹಣೆಗಳಿಗೆ ಈ ಬಾರಿ ಬಜೆಟ್ನಲ್ಲಿ ತೆಗೆದಿರಿಸಿರುವ 2.27ಲಕ್ಷ ಕೋಟಿ ರೂ.ಗಳಿಗೆ ಇನ್ನೂ 25,000 ಕೋಟಿ ರೂ. ಸೇರಿಸಿಕೊಡಿ ಎಂದು ಆಹಾರ ನಿಗಮ ಸರಕಾರಕ್ಕೆ ಬಜೆಟೋತ್ತರ ಮನವಿ ಸಲ್ಲಿಸಿದೆಯಂತೆ! ಬಡವರ ಅನ್ನ ಅಂಕೆಯಿಲ್ಲದೇ ಹಾಳಾಗುತ್ತಿರುವಾಗ, ಶ್ರೀಮಂತರ ಕಿಸೆ ಭರ್ತಿ ಮಾಡುವಾಗ ಏನೂ ಅನ್ನಿಸದ ಸರಕಾರಗಳಿಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸರಕಾರದ ನೀತಿಗಳಿಂದಾಗಿ ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕ್ಕೆ ತುತ್ತಾಗಿರುವ ಜನರಿಗೆ ಯೂನಿವರ್ಸಲ್ ಬೇಸಿಕ್ ಇನ್ಕಂ ಕಲ್ಪನೆಯಡಿ ಕೈಗೆ ಸ್ವಲ್ಪ ನಗದು ಒದಗಿಸಿದರೆ ಹೊಟ್ಟೆಯುರಿ ಯಾಕೆ?
ಒಮಾನ್ ಮಾತುಕತೆ ಬಳಿಕ ಇರಾನ್ ತೈಲದ ಮೇಲೆ ಅಮೆರಿಕದ ನಿರ್ಬಂಧ; ಮತ್ತಷ್ಟು ಹದಗೆಟ್ಟ ಸಂಬಂಧ!
ಮಧ್ಯಪ್ರಾಚ್ಯವೂ ಸೇರಿದಂತೆ ಇಡೀ ವಿಶ್ವದ ಆತಂಕ ಹೆಚ್ಚಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ (ಫೆ.6-ಶುಕ್ರವಾರ) ಒಮಾನಲ್ಲಿ ಉಭಯ ದೇಶಗಳ ನಡುವೆ ನಡೆದ ಮಾತುಕತೆ ಬಳಿಕ, ಅಮೆರಿಕವು ಇರಾನ್ ತೈಲದ ಮೇಲೆ ಹೊಸದಾಗಿ ನಿರ್ಬಂಧಗಳನ್ನು ವಿಧಿಸಿದೆ. ಈ ಬೆಳವಣಿಗೆ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಶಮನಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
Adani Ports ಜಮೀನು ವಾಪಾಸ್ ನೀಡುವಂತೆ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮುಂದ್ರಾದಲ್ಲಿ ಅದಾನಿ ಕಂಪೆನಿಗೆ ಮಂಜೂರು ಮಾಡಲಾಗಿದ್ದ 108 ಹೆಕ್ಟೇರ್ ಹುಲ್ಲುಗಾವಲು ಪ್ರದೇಶವನ್ನು ಹಿಂಪಡೆಯುವಂತೆ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಾದ ಮಂಡಿಸುವ ಅವಕಾಶ ನೀಡದೆ ಆದೇಶ ಹೊರಡಿಸಿರುವುದರಿಂದ ಮಂಜೂರಾತಿ ಪ್ರಕ್ರಿಯೆ ಅಸ್ಥಿರವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಮಾಹೇಶ್ವರಿ ಮತ್ತು ನ್ಯಾ. ಅತುಲ್ ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಗುಜರಾತ್ ಹೈಕೋರ್ಟ್ ಆದೇಶವನ್ನು ಬದಿಗಿರಿಸಿತು. ಜುಲೈ 4, 2024ರಂದು ಸಂಬಂಧಿತ ಗ್ರಾಮದ ಹುಲ್ಲುಗಾವಲು ಜಮೀನಿನ ಕುರಿತು ರಾಜ್ಯ ಮರುಸ್ಥಾಪನೆ ಪ್ರಾಧಿಕಾರದ ಆದೇಶವನ್ನು ಆಧರಿಸಿ ನೇರವಾಗಿ ಹೈಕೋರ್ಟ್ ಈ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ನ ಈ ಆದೇಶವನ್ನು ಬದಿಗಿರಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ. ಈ ಕುರಿತು ಹೊಸದಾಗಿ ನಿರ್ಣಯ ಕೈಗೊಳ್ಳುವಂತೆ ಪ್ರಾಧಿಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಒಂದು ವೇಳೆ ಅದಾನಿ ಪೋರ್ಟ್ಸ್ ಎರಡು ವಾರಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಿದರೆ ಅವನ್ನು ಪರಿಗಣಿಸುವಂತೆಯೂ ರಾಜ್ಯ ಪ್ರಾಧಿಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹೊಸದಾಗಿ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನ ಎಲ್ಲ ವಾದಿಗಳಿಗೂ ವಿಚಾರಣೆಯ ಅವಕಾಶ ಒದಗಿಸುವುದು ಕಡ್ಡಾಯ ಎಂದೂ ನ್ಯಾಯಾಲಯ ಹೇಳಿದೆ. ಇದೇ ವೇಳೆ, ರಾಜ್ಯ ಸರ್ಕಾರ ಮರುಪರಿಗಣನೆಯ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವವರೆಗೂ ಜುಲೈ 10, 2024ರ ಆದೇಶ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದೂ ನ್ಯಾಯಾಲಯ ಹೇಳಿದೆ. 2005ರಲ್ಲಿ ಈ ವ್ಯಾಜ್ಯ ಸ್ಫೋಟಗೊಂಡಿದ್ದು, ನವಿನಾಲ್ ಗ್ರಾಮದ ಹುಲ್ಲುಗಾವಲು ಜಮೀನು ಎಂದು ವರ್ಗೀಕೃತಗೊಂಡಿದ್ದ 231 ಹೆಕ್ಟೇರ್ ಜಮೀನನ್ನು ಮುಂದ್ರಾ ಪೋರ್ಟ್ಸ್ಗೆ ಮಂಜೂರು ಮಾಡಲಾಗಿತ್ತು. ಈ ಜಮೀನನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿತ್ತು. ಈ ಕ್ರಮವನ್ನು ಪ್ರಶ್ನಿಸಿ 2014ರಲ್ಲಿ ನವಿನಾಲ್ ಗ್ರಾಮಸ್ಥರು ಗುಜರಾತ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸೌಜನ್ಯ: barandbench.com
ಜಿಮ್–ಫಿಟ್ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ, ಬಲವಂತದ ಮತಾಂತರ ಆರೋಪ: ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್
National Human Rights Commission | Photo Credit: Wikimedia Commons ಹೊಸದಿಲ್ಲಿ: ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳಲ್ಲಿ ಮಹಿಳೆಯರ ಶೋಷಣೆ ಹಾಗೂ ಬಲವಂತದ ಧಾರ್ಮಿಕ ಮತಾಂತರ ನಡೆಯುತ್ತಿರುವ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಬುಧವಾರ (ಫೆಬ್ರವರಿ 4, 2026) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (SAI)ಕ್ಕೆ ನೋಟಿಸ್ ಜಾರಿಗೊಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಜಿಮ್ಗಳು ಮತ್ತು ಫಿಟ್ನೆಸ್ ಕ್ಲಬ್ಗಳಲ್ಲಿ ತರಬೇತುದಾರರು ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ಶೋಷಣೆ ನಡೆಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಕಳಪೆ ಗುಣಮಟ್ಟದ ಪೂರಕ ಆಹಾರಗಳ ಬಳಕೆ ಮತ್ತು ನಿಯಂತ್ರಣವಿಲ್ಲದ ದೈಹಿಕ ಚಟುವಟಿಕೆಗಳು ಮಾನವ ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆಯೂ ಇದೆ ಎಂದು ಆಯೋಗ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಜಿಮ್ ಗಳು ಮತ್ತು ಫಿಟ್ನೆಸ್ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳ ವಿವರಗಳನ್ನು ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳು, ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ ಹಾಗೂ ಕ್ರೀಡಾ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಲಾಗಿದೆ. “ಈ ವಲಯದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಪ್ರಿಯಾಂಕ್ ಕನೂಂಗೊ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಈ ನೋಟಿಸ್ ಹೊರಡಿಸಲಾಗಿದೆ. ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳ ಹೆಸರಿನಲ್ಲಿ ಯುವತಿಯರನ್ನು ಶೋಷಣೆ ಮಾಡಲಾಗುತ್ತಿದ್ದು, ಬಲವಂತದ ಧಾರ್ಮಿಕ ಮತಾಂತರಕ್ಕಾಗಿ ಗುರಿಯಾಗಿಸಿಕೊಂಡು ಸಂಘಟಿತ ದಂಧೆ ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ದೂರುದಾರರು, ಈ ಚಟುವಟಿಕೆಗಳಲ್ಲಿ ಪೊಲೀಸರ ಸಹಭಾಗಿತ್ವವೂ ಇದೆ ಎಂದು ಆರೋಪಿಸಿದ್ದಾರೆ. ಪೊಲೀಸರ ಪಾಲ್ಗೊಳ್ಳುವಿಕೆಯನ್ನು “ಅಧಿಕಾರದ ದುರುಪಯೋಗ, ಕಾನೂನು ಜಾರಿ ವೈಫಲ್ಯ ಮತ್ತು ಮಾನವ ಹಕ್ಕುಗಳು, ಮಹಿಳಾ ಸುರಕ್ಷತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ” ಎಂದಿರುವ ಅವರು ಆಯೋಗದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. 1993ರ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯ ಸೆಕ್ಷನ್ 12ರಡಿ ಈ ದೂರನ್ನು ಪರಿಗಣಿಸಿರುವ ಆಯೋಗವು, ರಾಜ್ಯಗಳಲ್ಲಿ ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳ ಸ್ಥಾಪನೆ, ನೋಂದಣಿ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಮಾರ್ಗಸೂಚಿಗಳು, ನೀತಿಗಳು ಹಾಗೂ ಮಾನದಂಡಗಳನ್ನು ರೂಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳಿಗೆ ಸಂಬಂಧಿಸಿದ ಯಾವುದೇ ಮಾರ್ಗಸೂಚಿಗಳು, ನೀತಿಗಳು ಅಥವಾ ನೋಂದಣಿ ಮಾನದಂಡಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೂ ಸೂಚಿಸಲಾಗಿದೆ. ಆಯೋಗದ ಪರಿಶೀಲನೆಗಾಗಿ ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ NHRC ಸೂಚಿಸಿದೆ.
India And Russia: ರಷ್ಯಾ ತೈಲ ಖರೀದಿ ವಿಚಾರದಲ್ಲಿ ದೊಡ್ಡ ಚರ್ಚೆ, ಭಾರತದ ನಡೆ ಬಗ್ಗೆ ಮೂಡಿದೆ ಕುತೂಹಲ
ಭಾರತ ಮತ್ತು ರಷ್ಯಾ ನಡುವೆ ತೈಲ ಖರೀದಿ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಒಪ್ಪಂದಗಳು ನಡೆದು ಹೋಗಿವೆ. ಆದರೆ ಇದನ್ನ ಕೆಡಿಸಲು ಸುತ್ತಮುತ್ತ ಸಾಕಷ್ಟು ಶತ್ರು ದೇಶಗಳು ಪ್ರಯತ್ನ ಮಾಡುತ್ತಾ ಕಾಯುತ್ತಿದ್ದಾರೆ. ಅದರಲ್ಲೂ ಮಿತ್ರರ ವೇಷ ಹಾಕಿರುವ ಶತ್ರುಗಳ ಕಾಟ ಕೂಡ ಭಾರತಕ್ಕೆ ಹೆಚ್ಚಾಗಿದೆ, ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಭಾರತದೊಂದಿಗಿನ ತನ್ನ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನೂ ಜಾರಿಗೊಳಿಸಿದೆ. ಇದರ ಮುಂದಿನ ಭಾಗವಾಗಿ ನಿನ್ನೆ (ಫೆ.6-ಶುಕ್ರವಾರ) ಉಭಯ ರಾಷ್ಟ್ರಗಳು ಪರಸ್ಪರ ವ್ಯಾಪಾರ ಚೌಕಟ್ಟನ್ನು ಘೋಷಿಸಿವೆ. ಅಲ್ಲದೇ ಶೇ. 18ರ ತೆರಿಗೆ ವ್ಯಾಪ್ತಿಗೆ ಒಳಪಡುವ ವಸ್ತುಗಳ ಬಗ್ಗೆಯೂ ಉಭಯ ರಾಷ್ಟ್ರಗಳು ಚರ್ಚೆ ನಡೆಸಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಲಾರಾ ಶೈಲಿಯ ಬ್ಯಾಕ್ಲಿಫ್ಟ್; ವೈಭವ್ ಸೂರ್ಯವಂಶಿಯ ಅದ್ಭುತ ಬ್ಯಾಟಿಂಗ್
ಹೊಸದಿಲ್ಲಿ: ಸಾಮಾನ್ಯವಾಗಿ 90 ಕಿಲೋಮೀಟರ್ ವೇಗದ ಬೌಲಿಂಗ್ ಎದುರಿಸಲು ಕೂಡ 13 ವರ್ಷದ ಬಾಲಕರು ಹೆಣಗಾಡುತ್ತಿರುವ ಸಂದರ್ಭದಲ್ಲಿ, ಭಾರತದ ಹೊಸ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಜೋಫ್ರಾ ಆರ್ಚರ್ ಅವರಂತಹ ಬೌಲರ್ಗಳ ಎಸೆತಗಳನ್ನು ಲೀಲಾಜಾಲವಾಗಿ ಮೈದಾನದ ಮೂಲೆಮೂಲೆಗೆ ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್ ಕೋಚಿಂಗ್ನಲ್ಲಿ ಬ್ಯಾಟರ್ಗಳಿಗೆ ಬ್ಯಾಟ್ ಸ್ವಿಂಗ್ ನಿಯಂತ್ರಣ ಸಾಧಿಸಲು ಬ್ಯಾಕ್ಲಿಫ್ಟ್ ವೇಳೆ ಕೈಯನ್ನು ದೇಹಕ್ಕೆ ಸನಿಹದಲ್ಲೇ ಇಟ್ಟುಕೊಳ್ಳುವಂತೆ ತರಬೇತಿ ನೀಡಲಾಗುತ್ತದೆ. ಆದರೆ ಸೂರ್ಯವಂಶಿ ಇಲ್ಲಿ ಸಂಪೂರ್ಣ ಭಿನ್ನ. ಅವರ ಬ್ಯಾಕ್ಲಿಫ್ಟ್ ಚಲನೆಗಳು ದೇಹದಿಂದ ದೂರವಿದ್ದು, ಪಠ್ಯಾಧಾರಿತ ತಂತ್ರಗಳಿಗೆ ವಿರುದ್ಧವಾಗಿವೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ಗಿಂತಲೂ ವೈಭವ್ ವಯಸ್ಸು ಇನ್ನೂ ಎರಡು ವರ್ಷ ಕಡಿಮೆ. ವೈಭವ್ನ ಬ್ಯಾಟ್ ಸ್ವಿಂಗ್ ಬ್ರಿಯಾನ್ ಲಾರಾ, ಹರ್ಮನ್ಪ್ರೀತ್ ಕೌರ್ ಹಾಗೂ ಯುವರಾಜ್ ಸಿಂಗ್ ಅವರ ಶೈಲಿಯನ್ನು ನೆನಪಿಸುತ್ತದೆ. ಫುಟ್ಬಾಲ್ನಲ್ಲಿ ಹದಿಹರೆಯದಲ್ಲೇ ಅಗ್ರಗಣ್ಯ ಮಟ್ಟಕ್ಕೇರಿದ ಲಮಿನ್ ಯಮಾಲ್ ಅವರಂತೆ, ಸೂರ್ಯವಂಶಿಯೂ ವಯಸ್ಸಿಗಿಂತ ಹೆಚ್ಚಿನ ಪ್ರೌಢಿಮೆಯನ್ನು ಸತತವಾಗಿ ಪ್ರದರ್ಶಿಸುತ್ತಿದ್ದಾರೆ. ಬಾಲಕನ ಪ್ರತಿಭೆ ಪ್ರಶ್ನಾತೀತ. ಶುಕ್ರವಾರ ನಡೆದ ವಿಶ್ವಕಪ್ ಫೈನಲ್ನಲ್ಲಿ 80 ಎಸೆತಗಳಲ್ಲಿ 175 ರನ್ಗಳನ್ನು ಸಿಡಿಸಿದ ವೈಭವ್, ದೊಡ್ಡ ವೇದಿಕೆಯಲ್ಲೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಛಾತಿಯ ಕುರಿತು ಎದ್ದಿದ್ದ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಇದು 19 ವರ್ಷದ ವಯೋಮಿತಿಯ ವಿಭಾಗದಲ್ಲಿ ಅತ್ಯಂತ ಪ್ರಭಾವಿ ಇನಿಂಗ್ಸ್ ಎಂದು ವಿಶ್ಲೇಷಿಸಲಾಗುತ್ತಿದ್ದು, 15 ಸಿಕ್ಸರ್ಗಳ ನೆರವಿನಿಂದ ಸಿಡಿಸಿದ ಈ 175 ರನ್ಗಳ ಪರಿಣಾಮವಾಗಿ ಭಾರತ 9 ವಿಕೆಟ್ ನಷ್ಟಕ್ಕೆ 411 ರನ್ಗಳನ್ನು ಕಲೆಹಾಕಿತು. ಬಳಿಕ ಇಂಗ್ಲೆಂಡ್ ತಂಡವನ್ನು 100 ರನ್ಗಳಿಂದ ಸೋಲಿಸಿ ಟ್ರೋಫಿ ಗೆದ್ದಿತು. 55 ಎಸೆತಗಳಲ್ಲಿ ಶತಕ ಸಾಧಿಸಿದ ಸೂರ್ಯವಂಶಿ, 19 ವರ್ಷದ ವಯೋಮಿತಿಯಲ್ಲಿ ಅತಿವೇಗದ ಶತಕ ದಾಖಲಿಸಿದ ಕೀರ್ತಿಗೂ ಪಾತ್ರರಾದರು. ಈ ವಯೋಮಿತಿಯ ಫೈನಲ್ ಪಂದ್ಯದಲ್ಲಿ ಬ್ಯಾಟ್ಸ್ಮನ್ ಒಬ್ಬರು ಗಳಿಸಿದ ಗರಿಷ್ಠ ರನ್ಗಳ ದಾಖಲೆಯೂ ಇದೇ ಆಗಿದ್ದು, ತಂಡದ ಗರಿಷ್ಠ ಮೊತ್ತವೂ ಹೌದು. ವೈಭವ್ ಮೊದಲ ಅರ್ಧಶತಕವನ್ನು 32 ಎಸೆತಗಳಲ್ಲಿ ಸಾಧಿಸಿದರೆ, ಎರಡನೇ ಅರ್ಧಶತಕವನ್ನು ಕೇವಲ 23 ಎಸೆತಗಳಲ್ಲಿ ಪೂರ್ಣಗೊಳಿಸಿದರು. 15 ಸಿಕ್ಸರ್ ಹಾಗೂ ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಸಿಡಿಸಿದ ಸೂರ್ಯವಂಶಿಯ ಇನಿಂಗ್ಸ್ನಲ್ಲಿ 150 ರನ್ಗಳು ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕವೇ ಬಂದಿರುವುದು ವಿಶೇಷವಾಗಿದೆ.
ಪವರ್ ಶೇರಿಂಗ್ ಮುಗಿದ ಅಧ್ಯಾಯ ಎಂದ ಯತೀಂದ್ರ : ’ಈ ಬಂಡೆಗೆ ಅನೇಕ ಪೆಟ್ಟು ಬಿದ್ದಿದೆ’ ಎಂದ ಡಿಕೆಶಿ
DK Shivakumar Vs Yathindra Siddaramaiah : ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪವರ್ ಶೇರಿಂಗ್ ವಿಚಾರ ಈಗಾಗಲೇ ಸೆಟ್ಲ್ ಆಗಿದೆ, ನಮ್ಮ ತಂದೆಯೇ ಪೂರ್ಣಾವಧಿಗೆ ಸಿಎಂ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಕೌಂಟರ್ ಕೊಟ್ಟಿರುವ ಡಿಕೆ ಶಿವಕುಮಾರ್ , ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳಿದ್ದಾರೆ.
DEMU Rail: ದಾಂಡೇಲಿ-ಅಳ್ನಾವರ ಮಧ್ಯ ಡೆಮು ರೈಲುಗಳ ಸೇವೆ ಆರಂಭ, ವೇಳಾಪಟ್ಟಿ, ಸಂಚಾರ ವಿವರ
ದಾಂಡೇಲಿ: ಕರ್ನಾಟಕದ ಎರಡು ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಸಿಹಿ ಸುದ್ದಿ ನೀಡಿದೆ. ದಾಂಡೇಲಿ ಮತ್ತು ಅಳ್ನಾವರ ನಡುವೆ ಸಂಚರಿಸುವ ಪ್ರಯಾಣಿಕರ ಬೇಡಿಕೆ ಈಡೇರಿಕೆಗೆ ಕಾಲ ಕೂಡಿ ಬಂದಿದೆ. ಈ ಎರಡು ನಗರಗಳ ನಡುವೆ ಹೊಸ ಡೆಮು (DEMU) ರೈಲುಗಳ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಈ ಸೇವೆಯ ಆರಂಭಕ್ಕೆ ಇಂದು ಫೆಬ್ರವರಿ 07ರಂದು ದಾಂಡೇಲಿ ರೈಲು
ಅಂಗನವಾಡಿ ಸಹಾಯಕಿಯ ಬಲಿದಾನ ಸರಕಾರ ಗುರುತಿಸುವಂತಾಗಲಿ
ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ತನ್ನ ಅಂಗನವಾಡಿಯಲ್ಲಿದ್ದ 20 ಪುಟಾಣಿ ಮಕ್ಕಳ ಜೀವವನ್ನು ಕಾಪಾಡುವುದಕ್ಕಾಗಿ ಪ್ರಾಣವನ್ನು ಬಲಿಕೊಟ್ಟ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಪ್ರಾಣಾರ್ಪಣೆ ಮಾಡಿರುವುದು ಯಕಶ್ಚಿತ್ ಅಂಗನವಾಡಿ ಸಹಾಯಕಿಯಾಗಿರುವುದರಿಂದ ಘಟನೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದನ್ನೇ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಸೇನಾನಿ ಮಾಡಿದ್ದರೆ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗಿ ಬಿಡುತ್ತಿತ್ತೇನೋ. ಮಾದವಾಡ ಪಂಚಾಯತ್ ವ್ಯಾಪ್ತಿಯ ರಾಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಅಂಗನವಾಡಿ ಮಕ್ಕಳು ಆಟವಾಡುತ್ತಿದ್ದ ಆವರಣಕ್ಕೆ ದೊಡ್ಡ ಸಂಖ್ಯೆಯ ಜೇನು ನೊಣಗಳ ಹಿಂಡು ದಾಳಿ ಇಟ್ಟಿತ್ತು. ಆಗ, ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡುತ್ತಿದ್ದ ಕಾಂಚನಾಬಾಯಿ ಮೇಘ್ವಾಲ್ ತನ್ನ ಸುರಕ್ಷೆಯ ಬಗ್ಗೆ ಚಿಂತಿಸದೆ ಜೀವವನ್ನೇ ಪಣಕ್ಕಿಟ್ಟು ಟರ್ಪಲ್ ಮತ್ತು ಪರದೆಯನ್ನು ಬಳಸಿ ಎಲ್ಲ ಮಕ್ಕಳನ್ನು ಅದರಲ್ಲಿ ಸುತ್ತಿ ಜೇನು ನೊಣಗಳ ದಾಳಿಯಿಂದ ರಕ್ಷಿಸಿದರು. ಆದರೆ ಈ ಸಂದರ್ಭದಲ್ಲಿ ಜೇನು ನೊಣಗಳ ಹಿಂಡಿನ ನಡುವೆ ಸಿಲುಕಿದ ಕಾಂಚನಾಬಾಯಿ ತೀವ್ರ ದಾಳಿಗೆ ಈಡಾದರು. ಇಷ್ಟಾದರೂ ಮಕ್ಕಳ ರಕ್ಷಣೆಯಿಂದ ಹಿಂದೆ ಸರಿಯಲಿಲ್ಲ. ಕಟ್ಟ ಕಡೆಯ ಮಗುವನ್ನು ರಕ್ಷಿಸುವವರೆಗೂ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಗ್ರಾಮಸ್ಥರು ನೆರವಿಗೆ ಧಾವಿಸುವ ವೇಳೆ ಕಾಂಚನಾಬಾಯಿ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದರು. ಬಹುಶಃ ಆಕೆಯೇನಾದರೂ ಹೆದರಿ ಹಿಂದೆ ಸರಿದಿದ್ದರೆ ಕೆಲವು ಮಕ್ಕಳಾದರೂ ಜೇನುನೊಣಗಳ ದಾಳಿಗೆ ಬಲಿಯಾಗಬೇಕಾಗಿತ್ತು. ಅಂಗನವಾಡಿ ಕಾರ್ಯಕರ್ತೆಯಾಗಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸಿದ್ಧಪಡಿಸುತ್ತಿದ್ದ ಕಾಂಚನಾಬಾಯಿ ಜೈಮಾತಾದಿ ಸ್ವ ಸಹಾಯ ಗುಂಪಿನ ಅಧ್ಯಕ್ಷೆಯಾಗಿಯೂ ಕೆಲಸ ಮಾಡುತ್ತಿದ್ದರು. ಮೃತ ಕಾಂಚನಾ ಅವರ ಪತಿ ಪಾರ್ಶ್ವಪೀಡಿತರಾಗಿದ್ದರು. ಪುತ್ರ, ಪುತ್ರಿ ಸಹಿತ ಇಡೀ ಕುಟುಂಬದ ಭಾರ ಕಾಂಚನಾ ಅವರ ಮೇಲಿತ್ತು. ಇದೀಗ ಅವರಿಲ್ಲದೆ ಕುಟುಂಬ ಅನಾಥವಾಗಿದೆ. ಇದು ಎಲ್ಲೋ ದೂರದ ಮಧ್ಯಪ್ರದೇಶದಲ್ಲಿ ನಡೆದ ಘಟನೆಯಾಗಿದ್ದರೂ, ಕಾಂಚನಾ ತನ್ನ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಪ್ರದರ್ಶಿಸಿದ ಧೈರ್ಯ, ಆಕೆಯ ಬಲಿದಾನ ಎಲ್ಲರಿಗೂ ಮಾದರಿಯಾಗಬೇಕಾದುದು. ಸಾಧಾರಣವಾಗಿ ಅಂಗನವಾಡಿಯ ಸಹಾಯಕಿಯರ ಬಗ್ಗೆ ಸರಕಾರ ಮತ್ತು ಸಮಾಜ ತಾತ್ಸಾರವನ್ನೇ ಪ್ರಕಟಿಸುತ್ತಾ ಬಂದಿವೆ. ಸಣ್ಣ ಮಟ್ಟದ ವೇತನ ಹೆಚ್ಚಳಕ್ಕೂ ಅವರು ಪ್ರತಿ ಬಾರಿ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಸಣ್ಣ ವೇತನಕ್ಕಾಗಿ ಅವರು ನಿರ್ವಹಿಸುತ್ತಿರುವುದು ಕೇವಲ ಮಕ್ಕಳ ಪಾಲನೆ, ಪೋಷಣೆ ಮಾತ್ರವಲ್ಲ, ಸರಕಾರ ಅವರನ್ನು ಬೇರೆ ಬೇರೆ ಬಗೆಯ ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಸಣ್ಣ ತಪ್ಪುಗಳು ನಡೆದರೂ ಅದನ್ನು ಮುಂದಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರನ್ನು ಸಮಾಜ ಟೀಕಿಸುತ್ತದೆ. ಅವರ ಜಾತಿ, ಧರ್ಮವನ್ನು ಮುಂದಿಟ್ಟುಕೊಂಡು ದೌರ್ಜನ್ಯಗಳನ್ನು ಎಸಗುತ್ತದೆ. ಆದರೆ ಇವೆಲ್ಲವನ್ನೂ ಸಹಿಸುತ್ತಾ ಈ ಕಾರ್ಯಕರ್ತೆಯರು ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ. ಮಕ್ಕಳನ್ನು ಜೋಪಾನ ಮಾಡುವುದು ಎನ್ನುವುದು ಸುಲಭದ ಕೆಲಸವಲ್ಲ. ಇದು ತುಂಬಾ ಸೂಕ್ಷ್ಮ ಕೆಲಸ. ಇನ್ನೂ ಜಗತ್ತಿಗೆ ತೆರೆದುಕೊಳ್ಳದ ಈ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾ ಸಹನೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಈ ಕಾರ್ಯಕರ್ತೆಯರು ತಮ್ಮ ಸಹನೆಯನ್ನು ಕಳೆದುಕೊಂಡು ಏನಾದರೂ ಎಡವಟ್ಟು ಮಾಡಿದರೆ ಅದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಕೆಲಸ ಕಳೆದುಕೊಳ್ಳುವ ಭಯದ ಜೊತೆಗೇ ಅವರು ಪ್ರತೀ ದಿನ ಕಾರ್ಯನಿರ್ವಹಿಸುತ್ತಿರುತ್ತಾರೆ. ನೀತಿ ಆಯೋಗದ 2024ರ ವರದಿ ಪ್ರಕಾರ ಭಾರತದಲ್ಲಿ 13,99,661 ಅಂಗನವಾಡಿ ಕೇಂದ್ರಗಳು ಕೆಲಸ ಮಾಡುತ್ತಿವೆ. 12, 93,448 ಅಂಗನವಾಡಿ ಕಾರ್ಯಕರ್ತೆಯರು, 11, 64,178 ಸಹಾಯಕಿಯರೂ ದುಡಿಯುತ್ತಿದ್ದಾರೆ. 2026ರಲ್ಲಿ ಇವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಒಂದು ಮೂಲದ ಪ್ರಕಾರ ಕೇಂದ್ರ ಸರಕಾರದ ಐಸಿಡಿಎಸ್ ಯೋಜನೆಯ ವ್ಯಾಪ್ತಿಯಲ್ಲಿ ಹತ್ತು ಕೋಟಿ ಫಲಾನುಭವಿಗಳು ಸೇವೆ ಪಡೆಯುತ್ತಿದ್ದಾರೆ. ಆದರೆ ಭಾರತದ ಬಹುತೇಕ ಅಂಗನವಾಡಿಗಳು ಅವ್ಯವಸ್ಥೆಯ ಗೂಡಾಗಿವೆ. ಮೂಲಭೂತ ಸೌಕರ್ಯದ ಕೊರತೆಗಳ ನಡುವೆ ಅವುಗಳು ಈ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಾಮರ್ಥ್ಯದ ಕಾರಣಕ್ಕಾಗಿಯೇ ಮುಂದುವರಿಯುತ್ತಿವೆ. ಸರಕಾರದ ವರದಿಯ ಪ್ರಕಾರ ಈ ದೇಶದ ಶೇ. 30ರಷ್ಟು ಅಂಗನವಾಡಿಗಳು ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿಲ್ಲ. ಶೇ. 40ರಷ್ಟು ಅಂಗನವಾಡಿಗಳು ಶೌಚಾಲಯದ ಸೌಲಭ್ಯವನ್ನು ಹೊಂದಿಲ್ಲ. ಆದರೆ ಇವು ಸರಕಾರದ ಅಂಕಿಅಂಶಗಳಷ್ಟೇ. ವಾಸ್ತವ ಇದಕ್ಕಿಂತ ಭಯಾನಕವಾಗಿದೆ. ಬಹುತೇಕ ಅಂಗನವಾಡಿಯ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಂಗನವಾಡಿ ಮುಚ್ಚದಿರಲಿ ಎನ್ನುವ ಕಾರಣಕ್ಕೆ ಮೂಲಭೂತ ಸೌಕರ್ಯಕ್ಕಾಗಿ ಸಾರ್ವಜನಿಕರನ್ನು ಕಾಡಿ ಬೇಡುತ್ತಿರುತ್ತಾರೆ. ಕರ್ನಾಟಕದಲ್ಲೇ ಒಂದು ಅಂಕಿಅಂಶದ ಪ್ರಕಾರ, ಸುಮಾರು 23,000 ಸಾವಿರ ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಈ ಅಂಗನವಾಡಿಗಳಿಗೆ ಒದಗಿಸುವ ಮೊಟ್ಟೆ, ಹಾಲು ಮೊದಲಾದವುಗಳ ಹೆಸರಿನಲ್ಲಿ ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಾರೆ. ಇವೆಲ್ಲದರ ಹೊರೆಯೂ ಅಂತಿಮವಾಗಿ ಬೀಳುವುದು ಈ ಸಹಾಯಕಿಯರ ಮೇಲೆ. ಅವರು ದಿನ ನಿತ್ಯ ನಡೆಸುವ ಹೋರಾಟ ಯಾರ ಕಣ್ಣಿಗೂ ಬೀಳುವುದಿಲ್ಲ. ಆದರೆ ಇವರಿಂದ ಸಂಭವಿಸುವ ಸಣ್ಣ ತಪ್ಪು ದೊಡ್ಡದಾಗಿ ಸದ್ದು ಮಾಡುತ್ತದೆ. ಈ ಕಾರಣಕ್ಕಾಗಿಯೇ, 20 ಮಕ್ಕಳ ಜೀವ ಉಳಿಸಿದ ಕಾಂಚನಾ ಬಾಯಿಯ ಬಲಿದಾನ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಾಗಿದೆ. ತಳಸ್ತರದಲ್ಲಿ ಕೆಲಸ ಮಾಡುವ ಇಂತಹ ಕಾರ್ಮಿಕರ ಕೆಲಸವನ್ನು ಮೇಲ್ ಸ್ತರದ ಜನರು ಗುರುತಿಸುವಂತಾಗುವುದು ಅತ್ಯಗತ್ಯವಾಗಿದೆ. ಇವರಂತೆಯೇ ಬೇರೆ ಬೇರೆ ತಳಸ್ತರದ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ನಡೆಸುತ್ತಿರುವ ಸಂಘರ್ಷಗಳೂ ಸುದ್ದಿಯಾಗುವುದಿಲ್ಲ. ತಮ್ಮ ಕೆಲಸವನ್ನು ಖಾಯಂ ಮಾಡಿ, ತಮ್ಮ ವೇತನವನ್ನು ಹೆಚ್ಚಿಸಿ ಎಂದು ಕೇಳಿದಾಕ್ಷಣ ಸಿಡಿಮಿಡಿಗೊಳ್ಳುವ ಸಮಾಜ, ಇವರು ಒಂದು ತಿಂಗಳು ತಮ್ಮ ಕೆಲಸವನ್ನು ನಿಲ್ಲಿಸಿದರೆ ಅದು ಸಮಾಜದ ಮೇಲೆ ಬೀರುವ ಪರಿಣಾಮಗಳೇನು ಎನ್ನುವುದನ್ನು ಚಿಂತಿಸುವುದಿಲ್ಲ. ಶುಚಿತ್ವದ ಕೆಲಸ ನಿರ್ವಹಿಸುತ್ತಾ ಆರೋಗ್ಯಕಳೆದುಕೊಂಡು 40 ವರ್ಷಗಳಲ್ಲೇ ಮೃತಪಡುವ ಪೌರ ಕಾರ್ಮಿಕರ ಸ್ಥಿತಿಗತಿ ಯಾರಿಗೂ ಬೇಡ. ಕೊಳಚೆಗುಂಡಿಗೆ ಇಳಿದು ಮೇಲೆ ಬರಲಾಗದೆ ಸಾಯುವ ಈ ಕಾರ್ಮಿಕರ ಬಲಿದಾನ, ಯಾವುದೇ ಸೇನಾನಿಯ ಬಲಿದಾನಕ್ಕಿಂತ ಕಮ್ಮಿಯಿಲ್ಲ ಎಂದು ಸಮಾಜಕ್ಕೆ ಅನ್ನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಕಾಂಚನಾ ಅವರ ಬಲಿದಾನವನ್ನು ಕೇಂದ್ರ ಸರಕಾರ ಗುರುತಿಸಬೇಕು. ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಆಕೆಗೆ ನೀಡಬೇಕು. ಇದೇ ಸಂದರ್ಭಲ್ಲಿ ಪದ್ಮಪ್ರಶಸ್ತಿಯಂತಹ ಅತ್ಯುನ್ನತ ಗೌರವ ನೀಡುವ ಸಂದರ್ಭದಲ್ಲೂ ತಳಸ್ತರದಲ್ಲಿ ಸೇವೆ ಮಾಡುವ ಈ ಸಹಾಯಕಿಯರನ್ನು ಗುರುತಿಸುವ ಕೆಲಸ ಮಾಡಬೇಕು. ರಾಜ್ಯ ಸರಕಾರ ಕೂಡ ಪ್ರತೀ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಕಡ್ಡಾಯವಾಗಿ ಪೌರ ಕಾರ್ಮಿಕರನ್ನು, ಅಂಗನವಾಡಿಯ ಹಿರಿಯ ಸಹಾಯಕರನ್ನು ಗುರುತಿಸಿ ಅವರಿಗೆ ಕೃತಜ್ಞವಾಗಬೇಕು.
ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (90) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ ಇವರು 1960ರಲ್ಲಿ ಸಹಕಾರಿ ಸಂಘದ ಸದಸ್ಯರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದರು. 1988-94ರ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
5 ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಸರಕು ಆಮದು ನಿರೀಕ್ಷೆ
ಹೊಸದಿಲ್ಲಿ: ಭಾರತವು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 500 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯವಾಗಿ ವಿದ್ಯುತ್ ಉತ್ಪನ್ನಗಳು, ವಿಮಾನಗಳು ಹಾಗೂ ವಿಮಾನಗಳ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳು ಮತ್ತು ಕೊಕಿಂಗ್ ಕಲ್ಲಿದ್ದಲು ಸೇರಿವೆ ಎಂದು ಉಭಯ ದೇಶಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತ–ಅಮೆರಿಕ ನಡುವಿನ ತಂತ್ರಜ್ಞಾನ ಉತ್ಪನ್ನಗಳ ವಿನಿಮಯ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ. ವಿಶೇಷವಾಗಿ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ಗಳು (GPU) ಹಾಗೂ ಡೇಟಾ ಸೆಂಟರ್ಗಳಲ್ಲಿ ಬಳಸುವ ಇತರ ಉನ್ನತ ತಂತ್ರಜ್ಞಾನ ಉತ್ಪನ್ನಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜೊತೆಗೆ, ಜಂಟಿ ತಂತ್ರಜ್ಞಾನ ಸಹಕಾರವನ್ನೂ ಮತ್ತಷ್ಟು ಬಲಪಡಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. “ಭಾರತವು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ವಿದ್ಯುತ್ ಉತ್ಪನ್ನಗಳು, ವಿಮಾನಗಳು ಮತ್ತು ಅವುಗಳ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಹಾಗೂ ಕೊಕಿಂಗ್ ಕಲ್ಲಿದ್ದಲು ಸೇರಿ ಸುಮಾರು 500 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಿದೆ” ಎಂದು ಜಂಟಿ ಹೇಳಿಕೆ ವಿವರಿಸಿದೆ. ಇದೇ ವೇಳೆ, ವ್ಯಾಪಾರಕ್ಕೆ ಅಡ್ಡಿಯಾಗಿರುವ ಹಲವು ಸಮಸ್ಯೆಗಳನ್ನು ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಮುಂದಾಗಿವೆ. ಜೊತೆಗೆ, ಡಿಜಿಟಲ್ ವಹಿವಾಟಿನ ಮೇಲೆ ಇರುವ ಅಡೆತಡೆಗಳನ್ನು ನಿವಾರಿಸುವುದಕ್ಕೂ ಒಪ್ಪಂದವಾಗಿದೆ. ಇದರ ಮೂಲಕ ಆಕರ್ಷಕ, ಮಹತ್ವಾಕಾಂಕ್ಷಿ ಮತ್ತು ಉಭಯ ರಾಷ್ಟ್ರಗಳಿಗೆ ಲಾಭದಾಯಕವಾಗುವ ಡಿಜಿಟಲ್ ವ್ಯವಹಾರ ನಿಯಮಾವಳಿಯನ್ನು ರೂಪಿಸುವುದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಮುಖ ಅಂಶವಾಗಿದೆ.
ರಷ್ಯಾದಿಂದ ತೈಲ ಆಮದು ಸ್ಥಗಿತ: ಭಾರತದ ವಿರುದ್ಧ ಅಮೆರಿಕ ವಿಧಿಸಿದ್ದ ಶೇ. 25ರ ಸುಂಕ ರದ್ದು
ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಆಮದು ಮಾಡುವುದನ್ನು ನಿರ್ಬಂಧಿಸುವ ಸಲುವಾಗಿ ಭಾರತದ ಸರಕುಗಳ ಮೇಲೆ ವಿಧಿಸಿದ್ದ ಶೇಕಡ 25ರ ವಿಶೇಷ ಸುಂಕವನ್ನು ರದ್ದುಪಡಿಸುವ ಕಾರ್ಯಾದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ. ಧೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಉಭಯ ದೇಶಗಳು ಅಂತಿಮಪಡಿಸಿದ ಬಳಿಕ ಟ್ರಂಪ್ ಈ ಕಾರ್ಯಾದೇಶಕ್ಕೆ ಸಹಿ ಮಾಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ಪರೋಕ್ಷವಾಗಿ ರಷ್ಯಾಗೆ ನೆರವಾಗುತ್ತಿದೆ ಎಂದು ಟ್ರಂಪ್ ಆಪಾದಿಸಿದ್ದರು. ಭಾರತದ ವಿರುದ್ಧ ವಿಧಿಸಿರುವ ಶೇಕಡ 50ರ ಸುಂಕವನ್ನು 18ಕ್ಕೆ ಇಳಿಸುವುದಾಗಿ ಟ್ರಂಪ್ ಈ ವಾರದ ಆರಂಭದಲ್ಲಿ ಪ್ರಕಟಿಸಿದ್ದರು. ಭಾರತ ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಲು ಒಪ್ಪಿಕೊಂಡಿತ್ತು ಮತ್ತು ಹಲವು ವ್ಯಾಪಾರ ತಡೆಗಳನ್ನು ತೆರವುಗೊಳಿಸಿತ್ತು. ಇದೀಗ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ರದ್ದುಪಡಿಸಲಾಗಿದೆ. ಅಮೆರಿಕ ವಿಧಿಸಿದ ಶೇಕಡ 25ರ ಪ್ರತಿಸುಂಕದ ಮೇಲೆ ಈ ಸುಂಕ ವಿಧಿಸಲಾಗಿತ್ತು ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಭಾರತವು ರಷ್ಯಾದಿಂದ ಅತ್ಯಧಿಕ ತೈಲ ಖರೀದಿ ಮಾಡುವ ರಾಷ್ಟ್ರವಾಗಿದ್ದು, ಧೀರ್ಘಾವಧಿ ಒಪ್ಪಂದಗಳ ಮೂಲಕ ಒಟ್ಟು ಬೇಡಿಕೆಯ ಶೇಕಡ 90ರಷ್ಟು ಪಾಲನ್ನು ರಷ್ಯಾದಿಂದ ಖರೀದಿಸುತ್ತಿದೆ.
ಡೀಲ್ ಡನ್; ಭಾರತಕ್ಕೆ ರಷ್ಯಾದ ತೈಲ ಆಮದಿನ ಮೇಲಿನ ದಂಡದ ಸುಂಕ ರದ್ದತಿ ಆದೇಶ ಪ್ರತಿಗೆ ಡೊನಾಲ್ಡ್ ಟ್ರಂಪ್ ಸಹಿ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧವನ್ನ ಗಟ್ಟಿಮಾಡಿಕೊಂಡಿರುವ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 25ಕ್ಕೆ ಇಳಿಸಿ ಇಡೀ ಜಗತ್ತನ್ನು ದಂಗು ಬಡಿಸಿದೆ. ಈ ಮಧ್ಯೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಕಾರಣಕ್ಕೆ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ದಂಡದ ರೂಪದ ಸುಂಕವನ್ನೂ ಅಮೆರಿಕ ರದ್ದುಗೊಳಿಸಿದೆ. ಕುರಿತ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಭಾರತವು ರಷ್ಯಾ ತೈಲ ಖರೀದಿಯನ್ನು ಹಂತ ಹಂತವಾಗಿ ಕಡಿಮೆ ಮಾಡುವುದಾಗಿ ಭರವಸೆ ನೀಡಿದೆ.
Karnataka Heat Wave: ರಾಜ್ಯದಲ್ಲಿ ಫೆಬ್ರವರಿ ಅಂತ್ಯಕ್ಕೆ ಶಾಖದ ಅಲೆ ವಾತಾವರಣ ನಿರೀಕ್ಷೆ, 7 ದಿನದ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಹವಾಮಾನ ಬದಲಾಗುತ್ತಿದೆ. ತೀವ್ರ ಸ್ವರೂಪದ ಚಳಿಯಿಂದ ಅಧಿಕ ಬಿಸಿಲಿನ ವಾತಾವರಣ ನಿಧಾನವಾಗಿ ಸೃಷ್ಟಿಯಾಗುತ್ತಿದೆ. ಹೀಗಿದ್ದರೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಚಳಿ ವಾತಾವರಣ, ಬೆಳಗ್ಗೆ ದಟ್ಟ ಮಂಜು ಕಂಡು ಬರುತ್ತಿದೆ. ಉಳಿದಂತೆ ಕರಾವಳಿ ಹಾಗೂ ಉತ್ತರ ಒಳನಾಡು ಸೇರಿದಂತೆ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ
ಮೈಸೂರಿನ ಜನತೆಗೆ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್ ಕಾಣಿಕೆ; ಎಲ್ಲಿಂದ ಎಲ್ಲಿಗೆ? ವೆಚ್ಚ ಎಷ್ಟು?
ದಿನಗಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ. ನಗರವು ಬೆಳೆದಂತೆ ಟ್ರಾಫಿಕ್ ಕಿರಿಕಿರಿ ಹೆಚ್ಚುತ್ತಿದ್ದು, ಇದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಮೈಸೂರಿನಲ್ಲಿ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್ ತಲೆಯೆತ್ತಲಿದೆ. ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬಳಿಯ ಎಪಿಎಂಸಿ ಗೇಟ್-1ರಿಂದ ರಿಂಗ್ ರಸ್ತೆ ಜಂಕ್ಷನ್ ದಾಟಿ ಎಪಿಎಂಸಿ 2ನೇ ಗೇಟ್ವರೆಗೆ, ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ನಡೆಯಲಿದೆ.
2009ರ ಲಾಹೋರ್ ದಾಳಿ ಮರೆತಂತಿದೆ; ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನಕ್ಕೆ ಇತಿಹಾಸ ನೆನಪಿಸಿದ ಶ್ರೀಲಂಕಾ
ದಪ್ಪ ಚರ್ಮದ ಪಾಕಿಸ್ತಾನಕ್ಕೆ ಯಾವ ಭಾಷೆಯಲ್ಲಿ ಅರ್ಥವಾಗುತ್ತದೆಯೋ ಅದೇ ಭಾಷೆಯಲ್ಲಿ ಮಾತನಾಡಿದರೆನೇ ಚೆಂದ. ಟಿ-20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಪತ್ರ ಕಳುಹಿಸಿರುವ ಶ್ರೀಲಂಕಾ ಕ್ರಿಕೆಟ್, 2009ರಲ್ಲಿ ಲಾಹೋರ್ನಲ್ಲಿ ತನ್ನ ಆಟಗಾರರ ಮೇಲೆ ನಡೆದ ಉಗ್ರ ದಾಳಿಯ ಇತಿಹಾಸವನ್ನು ನೆನಪಿಸಿದೆ. ಅಲ್ಲದೇ 2025ರಲ್ಲಿ ಇಸ್ಲಾಮಾಬಾದ್ನಲ್ಲಿ ನಡೆದ ಭಯೋತ್ಫಾದಕ ದಾಳಿಯ ಬಳಿಕವೂ ಪಾಕಿಸ್ತಾನಕ್ಕೆ ತನ್ನ ರಾಷ್ಟ್ರೀಯ ತಂಡ ಪ್ರವಾಸ ಕೈಗೊಂಡಿದ್ದನ್ನು ಶ್ರೀಲಂಕಾ ಉಲ್ಲೇಖಿಸಿದೆ, ಈ ಕುರಿತು ಇಲ್ಲಿದೆ ಮಾಹಿತಿ.
ಇಸ್ಲಾಮಾಬಾದ್ ಮಸೀದಿ ಸ್ಪೋಟ ಖಂಡಿಸಿದ ಭಾರತ; ಪಾತ್ರದ ಆರೋಪ ಹೊರಿಸಿದರೆ ಹುಷಾರ್ ಎಂದು ಪಾಕಿಸ್ತಾನಕ್ಕೆ ತಾಕೀತು!
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿಯಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಪೋಟವನ್ನು ಭಾರತ ಅತ್ಯುಗ್ರವಾಗಿ ಖಂಡಿಸಿದೆ. ಆದರೆ ಇದೇ ವೇಳೆ ಈ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು ಆರೋಪಿಸಿರುವ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಬಾಂಬ್ ದಾಳಿಯಲ್ಲಿ ಮುಗ್ಧ ನಾಗರಿಕರು ಬಲಿಯಾಗಿರುವುದು ನಿಜಕ್ಕೂ ನೋವಿನ ಸಂಗತಿ, ಆದರೆ ದಾಳಿಯಲ್ಲಿ ಯಾವುದೇ ಸಾಕ್ಷ್ಯ ನೀಡದೆ ನಮ್ಮ ಪಾತ್ರವಿದೆ ಎಂದು ಆರೋಪಿಸುವುದನ್ನು ಸಹಿಸುವುದಿಲ್ಲ ಎಂದು ಭಾರತ ತನ್ನ ಅಧಿಕೃತ ಪ್ರಕಟಣೆಯಲ್ಲಿ ಎಚ್ಚರಿಸಿದೆ. ಇಲ್ಲಿದೆ ಮಾಹಿತಿ.
T20 World Cup- ಗಾಯಾಳು ಹರ್ಷಿತ್ ರಾಣಾ ಟೂರ್ನಿಯಿಂದಲೇ ಔಟ್: ಮೊಹಮ್ಮದ್ ಸಿರಾಜ್ ಗೆ ಹಠಾತ್ ಒಲಿದ ಅದೃಷ್ಟ!
ಐಸಿಸಿ ಟಿ10 ವಿಶ್ವಕಪ್ 2026ರ ಅಭಿಯಾನದ ಹೊಸ್ತಿಲಲ್ಲೇ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಮಧ್ಯಮ ವೇಗದ ಬೌಲರ್ ಹರ್ಷಿತ್ ರಾಣಾ ಅವರು ಗಾಯಗೊಂಡಿರುವ ಕಾರಣ ತಂಡದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಅನುಭವಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಫೆಬ್ರವರಿ 4ರಂದು ನವಿಮುಂಬೈನಲ್ಲಿ ನಡೆದ ಅಭ್ಯಾಸ ಪುಂದ್ಯದ ವೇಳೆ ಹರ್ಷಿತ್ ರಾಣಾ ಅವರ ಮೊಣಕಾಲಿಗೆ ಗಾಯವಾಗಿತ್ತು.ಈ ಬಗ್ಗೆ ಶುಕ್ರವಾರದಂದು ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದ್ದು ಹರ್ಷಿತ್ ರಾಣಾ ಅವರು ಟೂರ್ನಿಯಲ್ಲಿ ಮುಂದುವರಿಯವುದು ಸೂಕ್ತ ಅಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿರುವುದರಿಂದ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.ಹರ್ಷಿತ್ ರಾಣಾ ಅವರು ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇವಲ ಒಂದು ಓವರ್ ಅನ್ನೇ ಎಸೆದಿದ್ದರು. ಎರಡು ಬಾರಿ ರನ್ ಅಪ್ ತೆಗೆದುಕೊಂಡವರು ಓಡಲಾಗದೆ ಮೊಣಕಾಲನ್ನು ಹಿಡಿದುಕೊಂಡಿದ್ದರು. ಬಳಿಕ ಮೈದಾನ ತೊರೆದಿದ್ದರು. ಹಾಕಿದ ಒಂದು ಓವರ್ ನಲ್ಲೂ 16 ರನ್ ಬಿಟ್ಟುಕೊಟ್ಟಿದ್ದರು.ಶುಕ್ರವಾರ ಬೆಳಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಸೂರ್ಯಕುಮಾರ್ ಯಾದವ್ ಅವರನ್ನು ಅನಾರೋಗ್ಯ ಕಾಡುತ್ತಿದೆ ಎಂದು ಸಣ್ಣ ಸುಳಿವು ನೀಡಿದ್ದರು. ಸಂಜೆ ವೇಳೆ ಅವರು ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ನೀಡಿದೆ.ಈಗಾಗಲೇ ಭಾರತ ತಂಡದಲ್ಲಿ ಅನೇಕ ಮಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ತಂಡದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿರುವ ವಾಶಿಂಗ್ಟನ್ ಸುಂದರ್ ಅವರು ಗಾಯದ ಕಾರಣಕ್ಕಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಅವರು ಪಂದ್ಯಾವಳಿ ಪ್ರಾರಂಭವಾಗುವ ವೇಳೆಗೆ ಸಂಪೂರ್ಣ ಗುಣಮುಖರಾಗುತ್ತಾರೆಂಬ ನಂಬಿಕೆಯಿಂದ ಅವರನ್ನು ತಂಡದೊಳಗ ಸೇರಿಸಿಕೊಳ್ಳಲಾಗಿದೆ. ಇನ್ನು ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ತಿಲಕ್ ವರ್ಮಾ ಅವರು ಸಹ ಗಾಯದಿಂದ ಚೇತರಿಸಿಕೊಂಡು ಇದೀಗ ತಂಡವನ್ನು ಸೇರಿಕೊಂಡಿದ್ದಾರೆ. ಪರಿಷ್ಕೃತ ಭಾರತ ತಂಡ ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್
ಹಿಂದೂ ಸಮ್ಮೇಳನಕ್ಕೆ ಸೂಲಿಬೆಲೆ, ಹಾರಿಕಾ ನಿರ್ಬಂಧಿಸಿದ್ದ ಬೆಳಗಾವಿ ಪೊಲೀಸರ ನೋಟಿಸ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು/ಧಾರವಾಡ : ಬೆಳಗಾವಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಫೆಬ್ರವರಿ 6 ಮತ್ತು 8ರಂದು ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಚಕ್ರವರ್ತಿ ಸೂಲಿಬೆಲೆ ಮತ್ತು ಹಾರಿಕಾ ಮಂಜುನಾಥ್ ಅವರನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಪೊಲೀಸ್ ನೋಟಿಸ್ಗಳನ್ನು ಹೈಕೋರ್ಟ್ ಧಾರವಾಡ ಪೀಠ ರದ್ದುಪಡಿಸಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸಿ 2026ರ ಜನವರಿ 22ರಂದು ಬೆಳಗಾವಿ ಪೊಲೀಸರು ಹೊರಡಿಸಿದ್ದ ನೋಟಿಸ್ಗಳನ್ನು ಪ್ರಶ್ನಿಸಿ ಹಿಂದೂ ಸಮ್ಮೇಳನ ಸಮಿತಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಗುರುವಾರ (ಫೆಬ್ರವರಿ 5) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಚಕ್ರವರ್ತಿ ಸೂಲಿಬೆಲೆ ಹಾಗೂ ಹಾರಿಕಾ ಅವರು ಉಂಟು ಮಾಡಬಹುದಾದ ಸಮಸ್ಯೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲದೆಯೇ, ಅವರ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿವೆ ಎಂಬ ಕಾರಣಕ್ಕೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಆಕ್ಷೇಪಾರ್ಹ ನೋಟಿಸ್ಗಳು ಕಾರಣರಹಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ನಿಜವಾದ ಅಥವಾ ತಕ್ಷಣದ ಅಪಾಯ ಎದುರಾಗಿದೆ ಎಂಬುದನ್ನು ತೋರಿಸಲು ವಿಫಲವಾಗಿವೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಪೊಲೀಸರು ಮಾಡಿರುವ ಆದೇಶವು ಸಕಾರಣಗಳನ್ನು ಹೊಂದಿಲ್ಲ. ಈ ರೀತಿಯಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಪೊಲೀಸರು ಕಸಿಯಲಾಗದು. ಭಾಷಣಕಾರರ (ಸೂಲಿಬೆಲೆ, ಹಾರಿಕಾ) ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದ ಮಾತ್ರಕ್ಕೆ ಪೊಲೀಸರು ಸಮ್ಮೇಳದಲ್ಲಿ ಅರ್ಜಿದಾರರು ಭಾಗವಹಿಸದಂತೆ ನಿರ್ಬಂಧಿಸಲಾಗದು ಎಂದು ತಿಳಿಸಿರುವ ನ್ಯಾಯಪೀಠ, ಪೊಲೀಸ್ ನೋಟಿಸ್ಗಳನ್ನು ರದ್ದುಪಡಿಸಿ ಆದೇಶಿಸಿದೆ. ಇದೇ ವೇಳೆ, ಅನುಮತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ಅನುಸಾರ ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕು ಎಂದು ಪ್ರತಿವಾದಿ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಕಾರ್ಯಕ್ರಮದ ಭಾಷಣಕಾರರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಹಾರಿಕಾ ಮಂಜುನಾಥ್ ಅವರು ಈ ಹಿಂದೆ ಇಂಥ ಐದು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಎಲ್ಲಿಯೂ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಾಗಿಲ್ಲ. ಅರ್ಜಿದಾರರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೇ ಪೊಲೀಸರು ಆಕ್ಷೇಪಾರ್ಹ ಆದೇಶಗಳನ್ನು ಹೊರಡಿಸಿದ್ದು, ಅವುಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ.ಎಂ. ಗಂಗಾಧರ್ ಅವರು, ಈ ಇಬ್ಬರೂ ಭಾಷಣಕಾರರು ಈ ಹಿಂದೆ ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಾಗಿವೆ. ಈಗ ಅರ್ಜಿದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದು, ಅವುಗಳನ್ನು ಪರಿಗಣಿಸಿ ಸೂಕ್ತ ಆದೇಶ ಮಾಡಲಾಗುವುದು. ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪಾಕಿಸ್ತಾನದ ಘಟನೆಗೆ ಸಂತಾಪ ಸೂಚಿಸಿದ ಭಾರತ, ಪಾಕ್ ಆರೋಪಕ್ಕೆ ಖಡಕ್ ತಿರುಗೇಟು | Islamabad Incident
ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಯುದ್ಧ ನಡೆದಿತ್ತು, ಹಾಗೇ ಪಾಕಿಸ್ತಾನ ಮಾಡುವ ಎಲ್ಲಾ ಕುತಂತ್ರಗಳಿಗೆ ಭಾರತ ಸರಿಯಾದ ಉತ್ತರ ಕೊಡುತ್ತಲೇ ಬಂದಿದೆ. ಮತ್ತೊಂದು ಕಡೆ ಪಾಕ್ನ ನಿಜ ಬಣ್ಣ ಬಯಲು ಮಾಡುತ್ತಲೇ ಇರುತ್ತದೆ ಭಾರತ, ಹೀಗಿದ್ದರೂ ಭಾರತದ ವಿಚಾರದಲ್ಲಿ ಪಾಕ್ನ ಸರ್ಕಾರ &ರಾಜಕೀಯ ನಾಯಕರು ಪದೇ ಪದೇ ನಂಜು ತುಂಬಿದ ಮನಸ್ಸಿನಿಂದ ಮಾತನಾಡುತ್ತಾರೆ.
WPL 2026: ಆರ್ಸಿಬಿ ಡಬ್ಲ್ಯೂಪಿಎಲ್ 2026 ಟ್ರೋಫಿ ಗೆಲುವಿಗೆ ಪ್ರಮುಖ ಕಾರಣಗಳು
RCB Won WPL 2026 Trophy: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಹಾಗಾದ್ರೆ, ಆರ್ಸಿಬಿ ಟ್ರೋಫಿ ಗೆಲ್ಲಲು ಪ್ರಮುಖ ಕಾರಣಕರ್ತೆಯರಾದ ಆಟಗಾರ್ತಿಯರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಫಬ್ರವರಿ 5ರಂದು ವಡೋದರಾದಲ್ಲಿ ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ ಫೈನಲ್
ಕುಕನೂರು | ಮಸೀದಿಗೆ ಆಗಮಿಸಿ ಆರೆಸ್ಸೆಸ್ ಶತಾಬ್ದಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸ್ವಾಮೀಜಿ
ಕುಕನೂರು: ಆರೆಸ್ಸೆಸ್ ಸಂಘದ ಶತಾಬ್ದಿ ವರ್ಷಾಚರಣೆ ಹಾಗೂ ಹಿಂದೂ ಸಮಾಜೋತ್ಸವದ ಅಂಗವಾಗಿ ಮುಸ್ಲಿಮರಿಗೆ ಆಹ್ವಾನ ನೀಡುವ ಉದ್ದೇಶದಿಂದ ಮಹದೇವ ಸ್ವಾಮೀಜಿ ಮಸೀದಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಧರ್ಮಭೇದಗಳನ್ನು ಮೀರಿದ ಮನುಷ್ಯತ್ವ ಮತ್ತು ಸಹಬಾಳ್ವೆಯ ಪರಂಪರೆ ಈ ನಾಡಿನ ಶಕ್ತಿಯಾಗಿದೆ ಎಂದು ಹೇಳಿದರು. ಮುಸ್ಲಿಂ ಅಂಜುಮನ್ ಕಮೀಟಿ ಅಧ್ಯಕ್ಷ ರಷೀದ್ ಅಹ್ಮದ್ ಹಣಜಗಿರಿ ಮಾತನಾಡಿ, ಧರ್ಮಕ್ಕಿಂತ ಮನುಷ್ಯತ್ವವೇ ದೊಡ್ಡದು. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಉಳಿಯಬೇಕೆಂದರೆ ಪರಸ್ಪರ ಗೌರವ ಮತ್ತು ವಿಶ್ವಾಸ ಅಗತ್ಯ ಎಂದು ಅಭಿಪ್ರಾಯಪಟ್ಟರು. ಬಸನಗೌಡ ತೊಂಡಿಹಾಳ ಅವರು, ಕುಕನೂರಿನ ಸೌಹಾರ್ದ ಪರಂಪರೆ ಎಲ್ಲರಿಗೂ ಮಾದರಿಯಾಗಿದೆ ಎಂದರು. ಅಂದಪ್ಪ ಜವಳಿ ಅವರು ಸಮಾಜೋತ್ಸವವನ್ನು ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಬಳಕೆಯಲ್ಲಿಲ್ಲದ 194 ಜಾಗಗಳಿಗೆ ಮರುಜೀವ; 'ಬಯಸಿದಂತೆ ಬಯಲು' ವಿಶ್ರಾಂತಿ ತಾಣ ನಿರ್ಮಾಣ: ಏನಿದು ಯೋಜನೆ?
Open Air Ralaxation Spots In Bengaluru- ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರು ವಿಶ್ರಾಂತಿ ಪಡೆಯುವ ಸಲುವಾಗಿ ವಿವಿಧೆಡೆ ಬಯಸಿದಂತೆ ಬಯಲು ಉಪಕ್ರಮದಡಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ತಿಳಿಸಿದ್ದಾರೆ. ಇದಕ್ಕಾಗಿ ನಗರದಲ್ಲಿ ಬಳಕೆಯಲ್ಲಿ ಇಲ್ಲದ 194 ಸ್ಥಳಗಳನ್ನು ಗುರುಸಿತಲಾಗಿದೆ. ಬೆಂಗಳೂರು ಕೇಂದ್ರದಲ್ಲಿ 43, ಉತ್ತರದಲ್ಲಿ 49, ಪೂರ್ವದಲ್ಲಿ 21, ಪಶ್ಚಿಮದಲ್ಲಿ 31 ಮತ್ತು ದಕ್ಷಿಣದಲ್ಲಿ 50 ಜಾಗಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉಳ್ತೂರು: ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ ಕಾರ್ಯಕ್ರಮ
ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಮರ್ಹೂಂ ಮುಹಮ್ಮದ್ ಫಾಳಿಲಿ ಅನುಸ್ಮರಣೆಯು ಜಮಾಅತ್ ಅಧ್ಯಕ್ಷರಾದ ಕೆ.ಎಚ್ ಅಝೀಝುದ್ದೀನ್ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು. ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ರವರು ಅನುಸ್ಮರಣೆಗೆ ನೇತೃತ್ವ ನೀಡಿ ದುಆಶೀರ್ವಚನ ನೀಡಿದರು. ಪಾಂಡಿಯಾಳ್ ಮುದರ್ರಿಸ್ ಉಸ್ತಾದ್ ಐ.ಎಂ.ಉಮರ್ ಅಹ್ಸನಿ ಇನೋಳಿ ಸಭೆಯನ್ನು ಉದ್ಘಾಟಿಸಿ ದರು. ಉಳ್ತೂರು ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ ರವರು ದಿಕ್ಸೂಚಿ ಭಾಷಣ ಮಾಡಿದರು. ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟ್ಟಪಡವು ಮುಖ್ಯ ಭಾಷಣ ಮಾಡಿದರು. ಬಶೀರ್ ಲತೀಫಿ ಮದ್ದಡ್ಕ, ನೆಲ್ವಿಸ್ಟರ್ ಪಿಂಟೋ, ಚಂದ್ರಶೇಖರ್ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿ ಗಳಿಗೆ ತೆರಳುವ ವಿದ್ಯಾರ್ಥಿಗಳಾದ ಸಾಬಿತ್ ಎಮ್ಮೆಮ್ಮಾಡು, ಝೈನುಲ್ ಆಬಿದ್ ಕನಕಮಜಲು, ಹಾಶಿರ್ ಕೊಯ್ಯೂರು ರವರಿಗೆ ಬೀಳ್ಕೊಡಿಗೆ ನೀಡಲಾಯಿತು. ಸಯ್ಯಿದ್ ಮುಸ್ತಫ ತಂಙಳ್ ಉಳ್ತೂರು, ಸಯ್ಯಿದ್ ಶರಪುದ್ದೀನ್ ತಂಙಳ್ ವೇಣೂರು, ನವಾಝ್ ಸಅದಿ ಕಕ್ಕೆ ಪದವು, ನಈಮುದ್ದೀನ್ ಅಝ್ಹರಿ ಪಿಲ್ಯ, ಪಿ.ಎ ಮುಹಮ್ಮದ್ ಮುಸ್ಲಿಯಾರ್ ಉಳ್ತೂರು, ತಾಜುದ್ದೀನ್ ಸಖಾಫಿ ಪುಲಾಬೆ, ಮನ್ಸೂರ್ ಸಖಾಫಿ ಕಬಕ ಗೋಳಿಯಂಗಡಿ, ಯು. ಅಬ್ಬಾಸ್ ಹಾಜಿ, ಯು.ಎಂ ಅಬ್ದುರಹ್ಮಾನ್, ಯು.ಎಂ ಸಯ್ಯದ್ ಹಸನ್, ಯು.ಎಚ್ ಇಬ್ರಾಹಿಂ, ಪಿ.ಇಸ್ಮಾಈಲ್ ಶಾಂತಿನಗರ, ಬಿ.ಮುಹಮ್ಮದ್, ರಶೀದ್ ಮಡಂತ್ಯಾರ್, ಸಯ್ಯಿದ್ ಸಲೀತ್ ತಂಙಳ್, ತೌಫೀಕ್ ವೇಣೂರು ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮುಈನಿ ಸ್ವಾಗತಿಸಿ, ಕೆ.ಎಚ್ ಸಿರಾಜುದ್ದೀನ್ ಝುಹ್ರಿ ಕಾರ್ಯಕ್ರಮ ನಿರೂಪಿಸಿದರು.
ಭಾರತ, ಬಾಂಗ್ಲಾ ಗಡಿಯ ಪ್ರಕೃತಿ ರಮಣೀಯ ತಾಣ ಶ್ನೊಂಗ್ ಪೆಡೆಂಗ್
ಸ್ವಚ್ಛ, ಪಾರದರ್ಶಕ ನೀರಿಗೆ ಖ್ಯಾತಿ ಇಲ್ಲಿನ ಉಗಂತ್ ನದಿ
ಮಹಾರಾಷ್ಟ್ರ | 17ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ; ಕಾರಣ ನಿಗೂಢ
ಸೊಲ್ಲಾಪುರ: ನಗರದ ಪ್ರಸಿದ್ಧ ‘ಮುಲ್ತಾನಿ ಬೇಕರಿ’ಯ ಮಾಲಕ ಹಾಗೂ ಹೆಸರಾಂತ ಉದ್ಯಮಿ ಸುನೀಲ್ ಮೋತಿಲಾಲ್ ಸದರಂಗಾನಿ (59) ಗುರುವಾರ ಮಧ್ಯಾಹ್ನ ವಿಜಾಪುರ ರಸ್ತೆಯ ಬಹುಮಹಡಿಯ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಜಾಪುರ ರಸ್ತೆಯ ಪನಾಸ್ ಅಪಾರ್ಟ್ ಮೆಂಟ್ ನ 17ನೇ ಮಹಡಿಯ ಮೇಲೆ ಸದರಂಗಾನಿ ಅವರು ಅನುಮಾನಾಸ್ಪದವಾಗಿ ಅತ್ತಿಂದಿತ್ತ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅದನ್ನು ವಿಡಿಯೊ ಚಿತ್ರೀಕರಣ ಮಾಡಿರುವುದಲ್ಲದೆ, ಕಟ್ಟಡದ ಭದ್ರತಾ ಸಿಬ್ಬಂದಿಗೂ ತಕ್ಷಣವೇ ಮಾಹಿತಿ ನೀಡಿದ್ದಾರೆ. ತಕ್ಷಣವೇ 17ನೇ ಮಹಡಿಗೆ ಧಾವಿಸಿರುವ ಭದ್ರತಾ ಸಿಬ್ಬಂದಿ ಹಾಗೂ ಕಚೇರಿಯ ಸಿಬ್ಬಂದಿಯೊಬ್ಬರು ಸದರಂಗಾನಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದಾದ ಬಳಿಕ, ಸದರಂಗಾನಿಯನ್ನು 10ನೇ ಮಹಡಿಯವರೆಗೂ ಕೆಳಕ್ಕೆ ಕರೆತರಲಾಗಿತ್ತು. ಆದರೆ, ಈ ವೇಳೆ, “ನನ್ನ ಕಾರಿನ ಕೀ ಮೇಲೆ ಇದೆ” ಎಂದು ಹೇಳಿದ ಸದರಂಗಾನಿ, ಅವರ ಹಿಡಿತದಿಂದ ತಪ್ಪಿಸಿಕೊಂಡು ಮತ್ತೆ ಮಹಡಿಯ ಮೇಲೆ ಓಡಿದರು. ಇತರರು ಅವರನ್ನು ತಡೆಯಲು ಪ್ರಯತ್ನಿಸುವಷ್ಟರಲ್ಲೇ ಅವರು ಕಟ್ಟಡದಿಂದ ಕೆಳಕ್ಕೆ ಜಿಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದರಂಗಾನಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸದರಂಗಾನಿಯ ವಾಹನದ ಸಂಖ್ಯಾಫಲಕದ ಆಧಾರದಲ್ಲಿ ಅವರ ಗುರುತು ಪತ್ತೆ ಹಚ್ಚಲಾಗಿದೆ. ಪುಣೆಯಿಂದ ಸೊಲ್ಲಾಪುರಕ್ಕೆ ಬಂದಿದ್ದ ಸುನೀಲ್, ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಅವರು ಪುಣೆಯಿಂದ ಸೊಲ್ಲಾಪುರಕ್ಕೆ ಬರಲು ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಲ್ಲಾ ಪ್ರಾಣಿಗಳ ಮೇಲೂ ದಯಾಭಾವ ಇರಲಿ: ಸಚಿವ ಎನ್.ಎಸ್. ಬೋಸರಾಜು
ಸಚಿವರು, ಸಂಸದರು, ಶಾಸಕರಿಂದ ಶ್ವಾನಗಳ ವೀಕ್ಷಣೆ
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ: ಗ್ರಾಮೀಣ ಕ್ರೀಡೆಗಳಿ ವೈಭವ
ರಾಯಚೂರು : ರಾಯಚೂರು ಜಿಲ್ಲಾ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಲು ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ರಾಯಚೂರು ಜಿಲ್ಲಾ ಉತ್ಸವ-2026ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಜ. 16ರಿಂದಲೇ ವಿವಿಧ ಸ್ಪರ್ಧೆಗಳು ಪ್ರಾರಂಭಗೊಂಡು ಸೈಕ್ಲಿಂಗ್ ಮ್ಯಾರಥಾನ್ ಹಾಗೂ ಮ್ಯಾರಥಾನ್ ಓಟ, ಬಾಡಿ ಬಿಲ್ಡಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಈಗಾಗಲೇ ಯಶಸ್ವಿಯಾಗಿ ಜರುಗಿವೆ. ಫೆ. 6ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಮತ್ತು ಕುಸ್ತಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಜನರ ಮೆಚ್ಚುಗೆ ಪಡೆದುಕೊಂಡವು. ಶುಕ್ರವಾರ ನಡೆದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಿಗೆ ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷ ರಾಣಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಡಿ ಬಡಿಗೇರ, ಆಹಾರ ಇಲಾಖೆಯ ಉಪನಿರ್ದೇಶಕ ನಾಸಿರ ಅಹ್ಮದ್, ಶಿಕ್ಷಣ ಇಲಾಖೆಯ ರಂಗಸ್ವಾಮಿ, ಪಾಲಿಕೆ ಎಇ ಮಹೇಶ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ಅತ್ಯಂತ ರೋಚಕತೆಯಿಂದ ಕೂಡಿದ್ದ ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಮತ್ತು ಕುಸ್ತಿ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಾರ್ವಜನಿಕರು ಬಿಸಿಲಿನ ತಾಪವನ್ನು ಲೆಕ್ಕಿಸದೆ ಕುತೂಹಲದಿಂದ ಸ್ಪರ್ಧೆಗಳನ್ನು ವೀಕ್ಷಿಸಿದರು. ಚಪ್ಪಾಳೆ ಹಾಗೂ ಶಿಳ್ಳೆ ಹಾಕುವ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿರುವುದು ಕಂಡುಬಂತು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ವಿಜೇತರು : ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಇದರಲ್ಲಿ ರಾಮು ತೆಲಂಗಾಣ ಅವರು ಪ್ರಥಮ ಸ್ಥಾನ ಪಡೆದುಕೊಂಡರು. ಅದೇ ರೀತಿ ಪ್ರತಾಪ್ ನಾಯಕ ನಾಗನದೊಡ್ಡಿ ದ್ವಿತೀಯ ಮತ್ತು ಪ್ರಕಾಶ ಯಾದವ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡರು. ಉಸುಕಿನ ಮೂಟೆ ಎತ್ತುವ ಸ್ಪರ್ಧೆ : ಉಸುಕಿನ ಮೂಟೆ ಎತ್ತುವ ಸ್ಪರ್ಧೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು, ಇದರಲ್ಲಿ ಮರಿಯಪ್ಪ ಅವರು 230 ಕೆಜಿ ಉಸುಕಿನ ಮೂಟೆ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು. ಅದೇ ರಿತಿ ಸಕ್ರಪ್ಪ ನಾಯಕ ಅವರು 210 ಕೆಜಿ ಎತ್ತುವುದರೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಶಿವಕುಮಾರ ಅವರು 200 ಕೆಜಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಕುಸ್ತಿ ಸ್ಪರ್ಧೆಯ ವಿಜೇತರು : ಕುಸ್ತಿ ಸ್ಪರ್ಧೆಯಲ್ಲಿ 56 ಕುಸ್ತಿಪಟುಗಳು ಭಾಗವಹಿಸಿದ್ದು, ಪುರುಷರ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ್ ಅವರು ‘ಎಡೆದೊರೆ ಕಂಠೀರವ’, ಹನುಮಂತ ಮರಮ್ಮನಹಳ್ಳಿ ‘ಎಡೆದೊರೆ ಕೇಸರಿ’, ಯೋಗೇಶ ‘ಎಡೆದೊರೆ ಕಿಶೋರ’ ಹಾಗೂ ಮಾರುತಿ ಅವರು ‘ಎಡೆದೊರೆ ಕುಮಾರ’ ಕುಸ್ತಿ ಗದೆ ಗೆದ್ದರು. ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಜಲಜಾಕ್ಷಿ ಎಸ್ ಅವರು ಎಡೆದೊರೆ ಕಿಶೋರಿ ಮತ್ತು ಸತ್ಯಶ್ರೀ ಅವರು ‘ಎಡೆದೊರೆ ಕುಮಾರಿ’ ಕುಸ್ತಿ ಗಧೆ ಪಡೆದುಕೊಂಡರು. ಗಮನ ಸೆಳೆದ ಕುಸ್ತಿ, ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಸ್ಪರ್ಧೆಗಳು : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಫೆ.6ರಂದು ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಮತ್ತು ಕುಸ್ತಿ ಕ್ರೀಡಾ ಸ್ಪರ್ಧೆಗಳಿಗೆ ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಚಾಲನೆ ನೀಡಿದರು. ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ರಾಯಚೂರು ಸೇರಿದಂತೆ ಬಳ್ಳಾರಿ, ಗುಲ್ಬರ್ಗ, ಯಾದಗಿರಿ ಹಾಗೂ ಬೇರೆ ಬೇರೆ ಭಾಗಗಳಿಂದ 80ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೀರೇಶ ನಾಯಕ, ಶಾಲಾ ಶಿಕ್ಷಣ ಇಲಾಖೆಯ ಕೆ.ಡಿ ಬಡಿಗೇರ, ರಂಗಸ್ವಾಮಿ ಬೇರೆ ಬೇರೆ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.
ಅಮೆರಿಕ ಜೊತೆ ಇರಾನ್ ಸಭೆ ಬಹುತೇಕ ಸಕ್ಸಸ್, ಮಧ್ಯಪ್ರಾಚ್ಯ ಶಾಂತಿಗಾಗಿ ಭಾರಿ ಪ್ರಯತ್ನ | Iran Foreign Minister
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮೂಡಿಸುವ ಪ್ರಯತ್ನ ಮೊದಲ ಹಂತದಲ್ಲೇ ಭರ್ಜರಿಯಾಗಿ ಸಕ್ಸಸ್ ಆಗುತ್ತಿದೆ. ಎರಡೂ ದೇಶಗಳ ನಡುವೆ ಇನ್ನೇನು ಪರಮಾಣು ಯುದ್ಧ ನಡೆಯುವ ಆತಂಕವು ಆವರಿಸಿತ್ತು, ಅಲ್ಲದೆ ಅಮೆರಿಕ ತನ್ನ ಸೇನೆಯ ದೊಡ್ಡ ಯುದ್ಧ ನೌಕೆ ಹಾಗೂ ಯುದ್ಧ ವಿಮಾನಗಳನ್ನ ಇರಾನ್ ಸಮೀಪಕ್ಕೆ ನುಗ್ಗಿಸಿತ್ತು. ಎಲ್ಲವನ್ನೂ ಕಂಡು ಇಡೀ ಪ್ರಪಂಚ ಮತ್ತೊಂದು ಮಹಾಯುದ್ಧ ಫಿಕ್ಸ್
ಹರಪನಹಳ್ಳಿ | ಆರೆಸ್ಸೆಸ್ ನಿರ್ದೇಶನದಂತೆ ಮನರೇಗಾ ರದ್ದು : ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ : ಕೇಂದ್ರ ಸರಕಾರ ಆರೆಸ್ಸೆಸ್ ಮಾರ್ಗದರ್ಶನದಂತೆ ನಡೆಯುತ್ತಿದೆ. ಮಹಿಳೆಯರು, ದಲಿತರ ಬಳಿ ಹಣ ಇರಬಾರದು ಎಂದು ಹೇಳುವ ಮನುಸ್ಮತಿಯ ಉದ್ದೇಶದಂತೆ ಬಿಜೆಪಿ ನೇತೃತ್ವದ ಸರಕಾರ ಮನರೇಗಾ ರದ್ದು ಮಾಡಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆರೋಪಿಸಿದ್ದಾರೆ. ನಗರದ ಸರಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನರೇಗಾ ಬಚಾವೊ’ ಧರಣಿಯ ನೇತೃತ್ವ ವಹಿಸಿ ಅವರು ಮಾತನಾಡಿದರು ರಾಮನಾಮದ ಬಗ್ಗೆ ಮಾತನಾಡುವ ಬಿಜೆಪಿ ರಾಮನ ಆರಾಧಕ ಗಾಂಧೀಜಿ ಅವರನ್ನೇ ಮರೆತಿದೆ. ಗುಜರಾತ್ ಮೂಲದ ಮಹಾತ್ಮಾ ಗಾಂಧೀಜಿ ಅವರ ಹೆಸರಿಗೆ ಕಳಂಕತರುವ ಕೆಲಸವನ್ನು ಗುಜರಾತ್ನವರೇ ಮಾಡುತ್ತಿರುವುದು ಬೇಸರ ತರಿಸಿದೆ ಎಂದರು. ಬಡ ಕುಟುಂಬಗಳು ಸ್ವಾವಲಂಬಿಯಾಗಿ ಬದುಕಲು ಜಾರಿಗೆ ತಂದಿದ್ದ ಮಹಾತ್ಮಾ ಗಾಂಧೀಜಿ ಹೆಸರುಳ್ಳ ನರೇಗಾ ರದ್ದು ಮಾಡಿ ಗುಲಾಮಗಿರಿ ಪದ್ಧತಿ ಹೇರಲು ಕೇಂದ್ರ ಸರಕಾರ ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೆ ಬಿಜೆಪಿಯ ಮನುಸ್ಮತಿ ಯೋಚನೆಯಿಂದ ಇಂದು ಬೀದಿಗೆ ಇಳಿದು ಧಿಕ್ಕಾರ ಕೂಗುವ ಅನಿವಾರ್ಯತೆ ಸೃಷ್ಟಿಸಿದೆ ಎಂದರು. ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್ ಮಾತನಾಡಿ, ಬಿಜೆಪಿಯು ಅನೇಕ ಯೋಜನೆಗಳ ಮೂಲಕ ಮಹಾತ್ಮಾ ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದು, ಅಂಬೇಡ್ಕರ್ ಹೆಸರಿಗೂ ತಪ್ಪುವುದಿಲ್ಲ ಎಂದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ಇಸ್ಮಾಯಿಲ್ ಎಲೆಗಾರ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರ ಗೌಡ, ಕಾನೂನು ಸಲಹೆಗಾರ ವಕೀಲ ವೆಂಕಟೇಶ್, ಹಲಗೇರಿ ಮಂಜಪ್ಪ, ಅಗ್ರಹಾರ ಅಶೋಕ, ಕಂಚಿಕೆರೆ ಜಯಲಕ್ಷ್ಮೀ, ಬಸವರಾಜ ಸಂಗಪ್ಪನವರ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯ ಶಂಕರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಮೈದೂರು ರಾಮಪ್ಪ, ಹೊನ್ನನಾಯ್ಕ, ನಂದಿಬೇವೂರು ಅಶೋಕ, ಎಂ.ಅಜ್ಜಣ್ಣ, ಪೊಮ್ಯನಾಯ್ಕ, ಎಲ್. ಮಂಜ್ಯ ನಾಯ್ಕ, ಮತ್ತೂರು ಬಸವರಾಜ, ಮೊರಗೇರಿ ಹೇಮಣ್ಣ, ಹುಲಿಕಟ್ಟೆ ಚಂದ್ರಪ್ಪ, ಶಶಿಕುಮಾರ್ ನಾಯ್ಕ, ತಿಮ್ಮ ನಾಯ್ಕ, ಕೆ.ಎಂ. ಮಂಜುನಾಥ,ಕಂಚಿಕೆರೆ ಎಂ.ಬಿ.ಅಂಜಿನಪ್ಪ, ದಾದಾಪೀರ್, ಯುವ ಕಾಂಗ್ರೆಸ್ ಅಧ್ಯಕ್ಷ ಚೌಡಪ್ಪ, ಎಚ್.ಟಿ.ಹನುಮಂತ, ರೆಹಮಾನ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಭಾರತ-ಬಾಂಗ್ಲಾದೇಶ ನಂಟು ತೃತೀಯ ದೇಶಗಳೊಂದಿಗೆ ಸಂಬಂಧಗಳಿಂದ ಸ್ವತಂತ್ರವಾಗಿದೆ:ಕೇಂದ್ರ ಸರಕಾರ
ಹೊಸದಿಲ್ಲಿ: ಬಾಂಗ್ಲಾದೇಶದೊಂದಿಗೆ ಭಾರತದ ಬಾಂಧವ್ಯವು ತೃತೀಯ ದೇಶಗಳೊಂದಿಗೆ ಅದರ ಸಂಬಂಧಗಳಿಂದ ಸ್ವತಂತ್ರವಾಗಿದೆ ಮತ್ತು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳನ್ನು ಸರಕಾರವು ನಿರಂತರವಾಗಿ ಗಮನಿಸುತ್ತಿದ್ದು, ಅವುಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರವು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು,ಪ್ರಜಾಸತ್ತಾತ್ಮಕ,ಸ್ಥಿರ,ಶಾಂತಿಪೂರ್ಣ,ಪ್ರಗತಿಶೀಲ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಸಂಬಂಧಿತ ಎಲ್ಲ ಸಂವಹನಗಳಲ್ಲಿ ಅಲ್ಲಿಯ ಮಧ್ಯಂತರ ಸರಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು. ಇನ್ನೊಂದು ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಿಂಗ್,ಸರಕಾರವು ನೆರೆಯ ದೇಶಗಳಲ್ಲಿ,ವಿಶೇಷವಾಗಿ ಭಾರತದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮವನ್ನು ಬೀರಬಲ್ಲ ಬೆಳವಣಿಗೆಗಳ ಮೇಲೆ ನಿರಂತರ ನಿಗಾಯಿರಿಸಿದೆ. ಭಾರತವು ತನ್ನ ನೆರೆ ರಾಷ್ಟ್ರಗಳೊಂದಿಗೆ ಹೊಂದಿರುವ ಸಂಬಂಧಗಳಿಗೆ ಅತ್ಯಂತ ಹೆಚ್ಚು ಆದ್ಯತೆಯನ್ನು ನೀಡುತ್ತದೆ. ಈ ಸಂಬಂಧಗಳು ಬಹು ಆಯಾಮಗಳನ್ನು ಹೊಂದಿವೆ ಮತ್ತು ಪರಸ್ಪರ ಹಿತಾಸಕ್ತಿಗಳು,ಸಂವೇದನೆಗಳು ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ,ಪ್ರಾದೇಶಿಕ ಮತ್ತು ಜಾಗತಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿಕಸನಗೊಳ್ಳುತ್ತವೆ ಎಂದು ಹೇಳಿದರು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳು ಪ್ರಸ್ತುತ ಸೂಕ್ಷ್ಮ ಹಂತದಲ್ಲಿವೆಯೇ ಮತ್ತು ಪಾಕಿಸ್ತಾನವು ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆಯೇ ಎಂದು ಸಚಿವಾಲಯವನ್ನು ಪ್ರಶ್ನಿಸಲಾಗಿತ್ತು. ನೆರೆಯ ದೇಶಗಳಾಗಿ ಭಾರತ ಮತ್ತು ಬಾಂಗ್ಲಾದೇಶ ಗಾಢವಾದ ಐತಿಹಾಸಿಕ,ಭೌಗೋಳಿಕ,ಸಾಂಸ್ಕೃತಿಕ,ಭಾಷಾತ್ಮಕ ಮತ್ತು ಸಾಮಾಜಿಕ ಸಂಬಂಧಗಳನ್ನು ಹಂಚಿಕೊಂಡಿವೆ. ನಮ್ಮ ದ್ವಿಪಕ್ಷೀಯ ಸಂಬಂಧಗಳು ಜನ ಕೇಂದ್ರಿತ ಅಭಿವೃದ್ಧಿಯತ್ತ ಗಮನ ಹರಿಸಿವೆ. ಸಾಂಸ್ಥಿಕ ದ್ವಿಪಕ್ಷೀಯ ವ್ಯವಸ್ಥೆಗಳಡಿ ಎರಡೂ ದೇಶಗಳ ನಡುವೆ ಹಲವಾರು ವಿನಿಮಯಗಳು ಮತ್ತು ಸಭೆಗಳು ಮುಂದುವರಿದಿವೆ ಎಂದು ಸಿಂಗ್ ತಿಳಿಸಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ,ವಿಶೇಷವಾಗಿ ಹಿಂದೂಗಳ ಬಹಿರಂಗ ಹತ್ಯೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿಂಗ್, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ವಿಷಯವನ್ನು ಭಾರತವು ಎಲ್ಲ ಸಂಬಂಧಿತ ಸಂದರ್ಭಗಳಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಮತ್ತು ಅತ್ಯುನ್ನತ ಮಟ್ಟದಲ್ಲಿಯೂ ನಿರಂತರವಾಗಿ ಪ್ರಸ್ತಾವಿಸಿದೆ. ಪ್ರಧಾನಿಯವರು ಬಾಂಗ್ಲಾದೇಶದೊಂದಿಗೆ ಈ ವಿಷಯವನ್ನು ಎತ್ತಿದ್ದಾರೆ. ಫೆ.16,2025ರಂದು ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ತೌಹಿದ್ ಹುಸೇನ್ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೂ ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ ಎಂದು ತಿಳಿಸಿದರು.
ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ನ ಸೈಬರ್ ಅಪರಾಧ ಕೇಂದ್ರಗಳಿಂದ 6,998 ಭಾರತೀಯರ ರಕ್ಷಣೆ: ಕೇಂದ್ರ ಸರಕಾರ
ಹೊಸದಿಲ್ಲಿ: 2022 ಮತ್ತು 2025ರ ನಡುವೆ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್ನ ಸೈಬರ್ ಅಪರಾಧ ಕೇಂದ್ರಗಳಿಂದ ಒಟ್ಟು 6,998 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು ಆಗ್ನೇಯ ಏಶ್ಯಾದಲ್ಲಿಯ ಸೈಬರ್ ಅಪರಾಧ ಕೇಂದ್ರಗಳಿಗೆ ಭಾರತೀಯರನ್ನು ಕಳ್ಳಸಾಗಣೆ ಮಾಡಲಾಗುತ್ತಿರುವ ಅಥವಾ ಅಲ್ಲಿ ಅವರನ್ನು ಸಿಲುಕಿಸಲಾಗುತ್ತಿರುವ ಕುರಿತು ಟಿಎಂಸಿ ಸಂಸದ ಸಾಕೇತ್ ಗೋಖಲೆಯವರ ಪ್ರಶ್ನೆಗೆ ಗುರುವಾರ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದರು. ಕಾಂಬೋಡಿಯಾ,ಮ್ಯಾನ್ಮಾರ್ ಮತ್ತು ಲಾವೋಸ್ನಲ್ಲಿ ನಕಲಿ ಉದ್ಯೋಗದ ಆಫರ್ಗಳನ್ನು ನೀಡಿ ಆಮಿಷವೊಡ್ಡುವ ಮೂಲಕ ಭಾರತೀಯ ಪ್ರಜೆಗಳನ್ನು ಅಲ್ಲಿ ಸೈಬರ್ ಅಪರಾಧಗಳು ಮತ್ತು ಇತರ ವಂಚಕ ಚಟುವಟಿಕೆಗಳಲ್ಲಿ ತೊಡಗಿಸುವ ‘ಸಂದೇಹಾಸ್ಪದ ಕಂಪನಿಗಳ’ ಬಗ್ಗೆ ಭಾರತ ಸರಕಾರಕ್ಕೆ ಮಾಹಿತಿ ಲಭಿಸಿದೆ ಎಂದು ಸಿಂಗ್ ತಿಳಿಸಿದರು. ಅಕ್ರಮ ಹಾಗೂ ವಂಚಕ ನೇಮಕಾತಿ ಏಜೆಂಟ್ಗಳು/ಸಂಸ್ಥೆಗಳ ಮೂಲಕ ಮತ್ತು ಅಕ್ರಮ ಮಾರ್ಗಗಳ ಮೂಲಕ ಭಾರತೀಯರು ತಮ್ಮ ಸ್ವಂತ ಇಚ್ಛೆಯಿಂದ ಈ ಸೈಬರ್ ಅಪರಾಧ ಕೇಂದ್ರಗಳನ್ನು ತಲುಪುತ್ತಿರುವುದರಿಂದ ಈ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಪ್ರಜೆಗಳ ನಿಖರ ಸಂಖ್ಯೆ ತಿಳಿದಿಲ್ಲ ಎಂದು ಅವರು ಹೇಳಿದರು. ಭಾರತ ಸರಕಾರವು 2022 ಮತ್ತು 2025ರ ನಡುವೆ ಕಾಂಬೋಡಿಯಾದ ಸೈಬರ್ ಅಪರಾಧ ಕೇಂದ್ರಗಳಿಂದ 2,533,ಮ್ಯಾನ್ಮಾರ್ನಿಂದ 2,168 ಮತ್ತು ಲಾವೋಸ್ನಿಂದ 2,297 ಭಾರತೀಯರನ್ನು ರಕ್ಷಿಸಿದೆ ಎಂದೂ ಸಿಂಗ್ ತಿಳಿಸಿದರು. ಈ ದೇಶಗಳಲ್ಲಿಯ ಸೈಬರ್ ಅಪರಾಧ ಕೇಂದ್ರಗಳಲ್ಲಿ ಭಾರತೀಯರನ್ನು ಬಲವಂತದಿಂದ ದುಡಿಸುತ್ತಿರುವ ವಿಷಯವನ್ನು ಕೇಂದ್ರ ಸರಕಾರವು ಅಲ್ಲಿಯ ಸರಕಾರಗಳ ಬಳಿ ಪ್ರಸ್ತಾವಿಸಿದೆ ಎಂದು ಸಿಂಗ್ ತಿಳಿಸಿದರು. ಕಾಂಬೋಡಿಯಾ ಮತ್ತು ಲಾವೋಸ್ಗಳಲ್ಲಿ ನಕಲಿ ಉದ್ಯೋಗಾವಕಾಶಗಳ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಸರಕಾರದಿಂದ ಅನುಮೋದನೆ ಹೊಂದಿರುವ ಅಧಿಕೃತ ಏಜೆಂಟ್ಗಳ ಮೂಲಕ ಮಾತ್ರ ಉದ್ಯೋಗಕ್ಕಾಗಿ ಪ್ರಯತ್ನಿಸುವಂತೆ ಆಗ್ರಹಿಸಿದೆ.
Uttar Pradesh | ಯೋಧನ ಗುಂಡಿಕ್ಕಿ ಹತ್ಯೆ
ಹಾಥರಸ್: ಯೋಧನೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಯೋಧನನ್ನು ಅಖಿಲೇಶ್ ಚತುರ್ವೇದಿ (28) ಎಂದು ಗುರುತಿಸಲಾಗಿದೆ. ಸಮದ್ಪುರ ಗ್ರಾಮದ ನಿವಾಸಿಯಾಗಿರುವ ಅಖಿಲೇಶ್ ಚತುರ್ವೇದಿಯನ್ನು ಆಗ್ರಾದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಅಖಿಲೇಶ್ ಚೌಧರಿ ಅವರು ಹಾಥರಸ್ನತ್ತ ವಾಹನದಲ್ಲಿ ಹೋಗುತ್ತಿರುವಾಗ ಅಲಿಗಢ-ಆಗ್ರಾ ರಸ್ತೆಯಲ್ಲಿರುವ ಕೋಲ್ಡ್ ಸ್ಟೋರೇಜ್ ಸಮೀಪ ಕಾರು ಹಾಗೂ ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಅವರನ್ನು ಸುತ್ತುವರಿದು ಮನಬಂದಂತೆ ಗುಂಡು ಹಾರಿಸಿದರು. ಅಖಿಲೇಶ್ ಚೌಧರಿ ಅವರು ತನ್ನ ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದರು. ಆದರೆ, ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿ | ಜಿಲ್ಲಾ ಕೇಂದ್ರದಲ್ಲಿ ಮಹನೀಯರ ಜಯಂತಿ ಶಿಷ್ಟಾಚಾರದನ್ವಯ ಅಚ್ಚುಕಟ್ಟಾಗಿ ಆಚರಣೆ
ಬಳ್ಳಾರಿ : ಜಿಲ್ಲಾ ಕೇಂದ್ರದಲ್ಲಿ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಶಿಷ್ಟಾಚಾರದನ್ವಯ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ಮಹನೀಯರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರೊಂದಿಗೆ ಏರ್ಪಡಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರು, ಜಿಲ್ಲಾಡಳಿತದಿಂದ ಫೆ.15 ರಂದು ಸಂತ ಸೇವಾಲಾಲ್ ಜಯಂತಿ, ಫೆ.19 ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ ಫೆ.20 ರಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಬ್ಯಾನರ್ ಅಳವಡಿಕೆಗೆ ಕಟ್ಟುನಿಟ್ಟಿನ ನಿಯಮಗಳಿದ್ದು, ಮಹಾನಗರ ಪಾಲಿಕೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಡಿಜೆ ಧ್ವನಿವರ್ಧಕ ಬಳಕೆ ಹಾಗೂ ಬೈಕ್ ರ್ಯಾಲಿಗೆ ಅವಕಾಶವಿಲ್ಲ. ಶಾಂತಿ–ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಕ್ತಿ–ಭಾವದಿಂದ ಮಹನೀಯರ ಜಯಂತಿಗಳನ್ನು ಆಚರಿಸಬೇಕು ಎಂದು ಅವರು ಹೇಳಿದರು. ಶಿಷ್ಟಾಚಾರದನ್ವಯ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರು, ಸಂಘ–ಸಂಸ್ಥೆಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಹನೀಯರ ಆಚಾರ–ವಿಚಾರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪರಿಣಿತರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ನಿಯೋಜಿಸಿ ವಿಶೇಷ ಉಪನ್ಯಾಸಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು. ಜಯಂತಿ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಲಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನು ನಿಯೋಜಿಸಲಾಗುವುದು ಎಂದರು. ವೇದಿಕೆ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಜಯಂತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ತಮ್ಮ ಸಲಹೆ–ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಡಿಡಿಪಿಐ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
T20 World Cup 2026: ಫೆಬ್ರವರಿ 7ರಿಂದ ಟಿ20 ವಿಶ್ವಕಪ್ 2026 ಶುರು: ಇಲ್ಲಿದೆ ಭಾರತದ ಪಂದ್ಯಗಳ ವೇಳಾಪಟ್ಟಿ
T20 World Cup 2026: ಫೆಬ್ರವರಿ 7ರ ಶನಿವಾರದಿಂದ ಆರಂಭ ಆಗಲಿರುವ ಟಿ20 ವಿಶ್ವಕಪ್ 2026ಕ್ಕೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾರತ ಮತ್ತು ಶ್ರೀಲಂಕಾ ಸಹ-ಆತಿಥ್ಯ ವಹಿಸಿಕೊಂಡಿರುವ ಈ ಮಹತ್ವದ ಟೂರ್ನಿ ಒಂದು ತಿಂಗಳ ಕಾಲ ನಡೆಯಲಿದೆ. ಹಾಗಾದ್ರೆ ಭಾರತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವಿಶ್ವಕಪ್ಗೆ ಮುನ್ನ ನಡೆದ ಅಭ್ಯಾಸ
ಬಳ್ಳಾರಿ | ಬಿ.ಇಡಿ ಫಲಿತಾಂಶ; ಒಂದೇ ದಿನದಲ್ಲಿ ಪ್ರಕಟಣೆ : ಶ್ರೀಕೃಷ್ಣದೇವರಾಯ ವಿವಿಯ ಸಾಧನೆ
ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಿ.ಇಡಿ ಪದವಿಯ ಮೌಲ್ಯಮಾಪನ ಮುಗಿದ ಒಂದೇ ದಿನದಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ಗಳ ಬಿ.ಇಡಿ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಸತತ 10 ದಿನಗಳಲ್ಲಿ ಪೂರ್ಣಗೊಳಿಸಿ, ಫಲಿತಾಂಶವನ್ನು ಯುಯುಸಿಎಂಎಸ್ ಪೋರ್ಟಲ್ನಲ್ಲಿ ಗುರುವಾರ ಪ್ರಕಟಿಸಲಾಗಿದೆ. ವಿಶ್ವವಿದ್ಯಾಲಯದ ಅಧೀನದಲ್ಲಿರುವ 14 ಕಾಲೇಜುಗಳ ಸುಮಾರು 2,500 ವಿದ್ಯಾರ್ಥಿಗಳು ಈ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಅವರು ಬರೆದಿದ್ದ ಸುಮಾರು 15,000 ಉತ್ತರಪತ್ರಿಕೆಗಳನ್ನು ಬಿ.ಇಡಿ ಕೋರ್ಸ್ನ 42 ಮೌಲ್ಯಮಾಪಕರು ನಿರಂತರವಾಗಿ ಮೌಲ್ಯಮಾಪನ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ಇದು ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತ್ವರಿತವಾಗಿ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ಎಂ. ಸಾಲಿ ಅವರು, ಫಲಿತಾಂಶ ಪ್ರಕಟಣೆಗೆ ಮಾರ್ಗದರ್ಶನ ನೀಡಿದ ಕುಲಪತಿಗಳಿಗೆ, ಮೌಲ್ಯಮಾಪನ ಮೇಲ್ವಿಚಾರಕರು, ಮೌಲ್ಯಮಾಪಕರು ಹಾಗೂ ಕಚೇರಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿ.ಇಡಿ ಪರೀಕ್ಷಾ ಫಲಿತಾಂಶಗಳನ್ನು ತುರ್ತಾಗಿ ಪ್ರಕಟಿಸಲು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿದ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಆಡಳಿತಾಧಿಕಾರಿ ಪ್ರೊ. ತಿಪ್ಪೇರುದ್ರಪ್ಪ ಜೆ., ವಿತ್ತಾಧಿಕಾರಿ ನಾಗರಾಜ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಎಲ್ಒ ಸಾವು: ಎಸ್ಐಆರ್ ಕೆಲಸದ ಒತ್ತಡ ಕಾರಣ ಎಂದು ಆರೋಪಿಸಿದ ಕುಟುಂಬ
ಕೋಲ್ಕತಾ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಕೆಲಸದ ಒತ್ತಡದಿಂದ ಸಾವು ಸಂಭವಿಸಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಯನ್ನು ಮಾಯಾ ಮುಖೋಪಾಧ್ಯಾಯ (58) ಎಂದು ಗುರುತಿಸಲಾಗಿದೆ. ಇವರು ಹರಿಹರ್ಪರ ಬ್ಲಾಕ್ ವ್ಯಾಪ್ತಿಯ ಶ್ರೀಪುರ ನಮುಪಾಡ ಶಿಶು ಶಿಕ್ಷಾ ಕೇಂದ್ರದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ನಡೆಯುತ್ತಿರುವ ನಡುವೆ ಅವರನ್ನು ಇತ್ತೀಚೆಗೆ ಬೂತ್ ನಂ. 251ರಲ್ಲಿ ಬಿಎಲ್ಒ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರು ಗುರುವಾರ ರಾತ್ರಿ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ಬಿಎಲ್ಒ ಜವಾಬ್ದಾರಿ ನೀಡಿದ ಬಳಿಕ ಮಖೋಪಾಧ್ಯಾಯ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿದರೆ, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗುವ ಭೀತಿ ಅವರಿಗಿತ್ತು ಎಂದು ಅವರ ಕುಟುಂಬ ಆರೋಪಿಸಿದೆ. ‘‘ಬಿಎಲ್ಒ ಆಗಿ ನಿಯೋಜಿತರಾದ ಬಳಿಕ ನನ್ನ ತಾಯಿಗೆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಒತ್ತಡದಿಂದಾಗಿ ಅವರ ಆರೋಗ್ಯ ಹದಗೆಟ್ಟಿತು. ಅನಂತರ ಅವರನ್ನು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಯಿತು’’ ಎಂದು ಅವರ ಕಿರಿಯ ಪುತ್ರ ರೂಬೆಲ್ ಮಂಡಲ್ ತಿಳಿಸಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ ಇರುವ ಮತಗಟ್ಟೆಯಲ್ಲಿ ಸುಮಾರು 830 ಮತದಾರರಿದ್ದರು. ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ಸುಮಾರು 320 ಮತದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಲಾಗಿತ್ತು ಎಂದು ಅವರು ಪ್ರತಿಪಾದಿಸಿದ್ದರು. ‘‘ಹೆಸರುಗಳನ್ನು ಅಳಿಸಿದರೆ, ಗ್ರಾಮಸ್ಥರು ನಮ್ಮ ಮನೆ ಮೇಲೆ ದಾಳಿ ಮಾಡಬಹುದು ಎಂದು ಅವರು ಆಗಾಗ ಹೇಳುತ್ತಿದ್ದರು. ಅವರು ನಿರಂತರ ಭೀತಿಯಲ್ಲಿ ಜೀವಿಸುತ್ತಿದ್ದರು’’ ಎಂದು ಮಂಡಲ್ ಹೇಳಿದ್ದಾರೆ. ಮುಖೋಪಾಧ್ಯಾಯ ಅವರಿಗೆ ವಯೋಸಹಜ ಕಾಯಿಲೆಗಳಿದ್ದುವು. ಬಿಎಲ್ಒ ಕರ್ತವ್ಯವನ್ನು ನಿರ್ವಹಿಸಲು ಅವರಿಗೆ ಇಷ್ಟ ಇರಲಿಲ್ಲ. ಆದರೆ, ಆಡಳಿತಾತ್ಮಕ ಆದೇಶಗಳನ್ನು ಪಾಲಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ದಾರಿ ಇರಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
Bihar | ಧರ್ಮಶಾಲಾದಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗಳ ಮೃತದೇಹ ಪತ್ತೆ
ಪಾಟ್ನಾ: ಬಿಹಾರದ ನಲಂದಾ ಜಿಲ್ಲೆಯ ರಾಜಗಿರ್ನ ದಿಗಂಬರ ಜೈನ ಧರ್ಮಶಾಲಾದ ಕೊಠಡಿಯಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೊಠಡಿಯ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು. ಈ ಸಾವಿನ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಧರ್ಮಶಾಲಾದ ನೋಂದಣಿ ಪ್ರಕಾರ ಇಬ್ಬರು ಮಹಿಳೆಯರು ಸೇರಿದಂತೆ ಬೆಂಗಳೂರಿನ ನಾಲ್ವರು ಜನವರಿ 31ರಂದು ಕೊಠಡಿ ಕಾಯ್ದಿರಿಸಿದ್ದರು. ಅವರು ನೇಪಾಳಕ್ಕೆ ಭೇಟಿ ನೀಡಿದ ಬಳಿಕ ರಾಜಗಿರ್ಗೆ ಆಗಮಿಸಿದ್ದರು. ಅಲ್ಲಿಂದ ನಲಂದಾ ಜಿಲ್ಲೆಯ ಪಾವಾಪುರಿಗೆ ತೆರಳಲು ಯೋಜಿಸಿದ್ದರು ಎಂದು ಅವು ತಿಳಿಸಿವೆ. ಧರ್ಮಶಾಲಾದ ಸಿಬ್ಬಂದಿ ಮಾಹಿತಿ ನೀಡಿದ ಕೂಡಲೇ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪಾಟ್ನಾದಿಂದ ವಿಧಿ ವಿಜ್ಞಾನ ತಂಡ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ರಾಜಗಿರ್ ಠಾಣಾಧಿಕಾರಿ ರಮಣ್ ಕುಮಾರ್ ಘಟನೆಯನ್ನು ದೃಢಪಡಿಸಿದ್ದು, ಸುತ್ತಮುತ್ತ ವಾಸಿಸುವ ಜನರು ಕೊಠಡಿಯಿದ ದುರ್ವಾಸನೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಕ್ರಮ ಕೈಗೊಂಡರು ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಈ ಪ್ರವಾಸಿಗರು ಮಾರುಕಟ್ಟೆ ಪ್ರದೇಶದಲ್ಲಿ ತಿರುಗಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ. ರಾಜಗೀರ್ ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದೆ.
ಬಳ್ಳಾರಿ | ಬಸವರಾಜ ಈಳಿಗನೂರ ಅವರಿಗೆ ಪಿ.ಎಚ್.ಡಿ ಪದವಿ
ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಬಸವರಾಜ ಈಳಿಗನೂರ ಅವರಿಗೆ ಡಾಕ್ಟರೇಟ್ (ಪಿ.ಎಚ್.ಡಿ) ಪದವಿ ಪ್ರದಾನಿಸಲಾಗಿದೆ. ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ರವಿ ಬಿ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ಇನ್ಸ್ಟಿಟ್ಯೂಷನಲ್ ಸಪೋರ್ಟ್ ಫಾರ್ ಸ್ಟಾರ್ಟ್ಅಪ್ ಇನಿಶಿಯೇಟಿವ್ಸ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ ಹಿನ್ನೆಲೆಯಲ್ಲಿ ಅವರಿಗೆ ಪಿ.ಎಚ್.ಡಿ ಪದವಿ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಬಸವರಾಜ ಈಳಿಗನೂರ ಅವರು ಪ್ರಸ್ತುತ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

28 C