Udupi | ಎಸೆಸೆಲ್ಸಿ ಫಲಿತಾಂಶ: ರಾಜ್ಯಕ್ಕೆ ಟಾಪರ್ ಆದ ಬಸ್ ಕಂಡಕ್ಟರ್ ಮಗ ಪ್ರೀತಮ್
ಕುಂದಾಪುರ, ಎ.23: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಗಳಲ್ಲಿ ಒಬ್ಬರಾಗಿದ್ದರೆ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಪ್ರೀತಮ್ ಪೂಜಾರಿ ಸೇರಿ ಒಟ್ಟು ಏಳು ಮಂದಿ ಗರಿಷ್ಠ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ ಪ್ರೀತಮ್ ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿಯವರು ಶ್ರೀ ಲಕ್ಷ್ಮೀ ಎಕ್ಸ್ಪ್ರೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿತಿದ್ದ. ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇಇ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಬಲ್ಮಠ, ರೇನಿಟಾ ಲೋಬೋ ಮಾತನಾಡಿ, ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆ ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ. 625 ಅಂಕ ಪಡೆಯುವ ನಿರೀಕ್ಷೆಯೂ ನಮಗೆ ಇತ್ತು. ಆತನ ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮ್ರತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಝ್ ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.
SSLC Result 2026: ಕನ್ನಡಕ್ಕೆ ಭರ್ಜರಿ ಜಯ, ಗಣಿತ-ಹಿಂದಿಯಲ್ಲೂ ಮುನ್ನಡೆ, ದಾಖಲೆ ಬರೆದ ಫಲಿತಾಂಶ
SSLC Subject Wise Result 2026: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಗಣಿತ ವಿಷಯದಲ್ಲಿ ಮಕ್ಕಳು ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ. 90 ಕ್ಕಿಂತ ಹೆಚ್ಚಿರಬೇಕು. ಆದರೆ ಅದು ಇಷ್ಟು ವರ್ಷ ಆಗಲಿರಲಿಲ್ಲ. ಆದರೆ 2026ರಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ.97.24 ರಷ್ಟು ದಾಖಲಾಗಿದೆ. ಅದೇ ರೀತಿ ಗಣಿತ
ಹೊಸದಿಲ್ಲಿ, ಏ. 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಉದ್ವಿಗ್ನತೆಯ ನಡುವೆಯೇ ಚಾಲನೆ ದೊರೆಯಿತು. ಕೆಲವೆಡೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಹಾಗೂ ಇವಿಎಂ ದೋಷಗಳು ವರದಿಯಾದವು. ಶಿವನಗರ ಪ್ರಾಥಮಿಕ ಶಾಲೆ ಬಳಿ ಬುಧವಾರ ರಾತ್ರಿ ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿದೆ. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ “ನಮಾಝ್ ಗೆ ತೆರಳುತ್ತಿದ್ದ ವೇಳೆ ಇಬ್ಬರು ಬಂದು ನನ್ನ ಬಳಿ ಬಾಂಬ್ ಎಸೆದರು” ಎಂದು ಗಾಯಾಳು ಆರೋಪಿಸಿದ್ದಾರೆ. ಗುರುವಾರ ಬೆಳಿಗ್ಗೆ ಮತದಾನದ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಮ್ ಜನತಾ ಉನ್ನಯನ್ ಪಕ್ಷದ ನಾಯಕ ಹುಮಾಯೂನ್ ಕಬೀರ್ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು. ಕೆಲವೆಡೆ ಲಘು ಲಾಠಿಚಾರ್ಜ್ ಕೂಡ ನಡೆಸಲಾಯಿತು. ಆದರೆ, ಹುಮಾಯೂನ್ ಕಬೀರ್ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕೆಲವೇ ಬೂತ್ ಗಳಲ್ಲಿ ಸಣ್ಣ ಘಟನೆಗಳು ನಡೆದಿವೆ ಎಂದರು. ಡೊಮ್ಕಲ್ ಪ್ರದೇಶದಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಯ್ಪುರ ಗ್ರಾಮದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹಾಜರಿದ್ದು ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಚುನಾವಣಾ ಆಯೋಗ ವರದಿ ಕೇಳಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ನಂತರ ಮತದಾನ ಮುಂದುವರಿಯಿತು. ಮುರ್ಷಿದಾಬಾದ್ನ ಕೆಲವು ಬೂತ್ಗಳಲ್ಲಿ ಇವಿಎಂ ದೋಷಗಳಿಂದ ಮತದಾನ ತಡವಾಯಿತು. ನಂದಿಗ್ರಾಮ್, ಮಾಲ್ಡಾ, ಕೂಚ್ ಬೆಹಾರ್ ಮತ್ತು ಸಿಲಿಗುರಿಯಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬಂದಿವೆ. “ನೂರಾರು ಮಂದಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಮತದಾನ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿ ಇಲ್ಲ” ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಅಧಿಕಾರಿ ತಿಳಿಸಿದ್ದಾರೆ. 152 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ. 18.76 ಮತದಾನ ದಾಖಲಾಗಿದೆ.
SSLC Exam | ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಗೆ 100 ಶೇ. ಫಲಿತಾಂಶ
ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಾಣಿಯ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜ್ಯೂನಿಯರ್ ದಅವಾ ವಿಭಾಗದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 100 ಶೇಕಡ ಫಲಿತಾಂಶ ದಾಖಲಿಸಿದೆ. 13 ವರ್ಷಗಳಿಂದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 100 ಶೇ. ಫಲಿತಾಂಶ ದಾಖಲಿಸುತ್ತಾ ಬಂದಿದೆ. ವಿದ್ಯಾರ್ಥಿ ಅಹ್ಮದ್ ಮನಾಸಿರ್ ಕರ್ನೂರ್ 574 (ಶೇ.91.84) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಅಬ್ದುಲ್ ಖಾದರ್ ಸುಜಾಹ್ ಪೇರಾಜೆ 568(ಶೇ.90.88 ) ದ್ವಿತೀಯ, ಅಹ್ಮದ್ ಶಮೀಲ್ ಕಾಪೆಜಾಲು 567(90.77%) ತೃತೀಯ ಹಾಗೂ ಮುಆಝ್ ಅರಿಯಡ್ಕ 566(90.56%) ಚತುರ್ಥ ಸ್ಥಾನ ಗಳಿಸಿದ್ದಾರೆ ಎಂದು ಶಾಲೆಯ ಪ್ರಕಟನೆ ತಿಳಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮರುಮೌಲ್ಯಮಾಪನ ಹೇಗೆ? ಪೂರಕ ಪರೀಕ್ಷೆ ಯಾವಾಗ? ಈ ಮಾಹಿತಿ ಸೋಲೊಪ್ಪಿಕೊಳ್ಳದ ಧೀರರಿಗಾಗಿ
ಕರ್ನಾಟಕ ಶಾಲಾ ಪರೀಕ್ಷೆ ಮಯತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏ.23-ಗುರುವಾರ) 10ನೇ ತರಗತಿ ಪರೀಕ್ಷೆ ಫಲಿತಾಂಶ 2026ನ್ನು ಪ್ರಕಟಿಸಿದೆ. ಒಟ್ಟು ಶೇ. 94.1ರಷ್ಟು ಫಲಿತಾಂಶ ಬಂದಿದೆ. ಈ ಮಧ್ಯೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸದ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಸಜ್ಜಾಗಿದ್ದು, ಇದರ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಹಾಗೆಯೇ ಪರೀಕ್ಷೆಯನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ತಯಾರಾಗಿದ್ದು, ಎರಡನೇ ಅವಕಾಶದಲ್ಲಿ ಗೆಲ್ಲುವ ಪಣ ತೊಟ್ಟಿದ್ದಾರೆ. ಎಸ್ಎಸ್ಎಲ್ಸಿ ಮರುಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆ ಸಂಬಂಧಿತ ಮಾಹಿತಿ ಇಲ್ಲಿದೆ.
ಸಿಸಿಟಿವಿ, ಆಟೋ ನೀಡಿದ ಸುಳಿವು: ಐಆರ್ಎಸ್ ಅಧಿಕಾರಿಯ ಮಗಳ ಹತ್ಯೆ ಮಾಡಿದ್ದ ಆರೋಪಿ 12 ಗಂಟೆಗಳೊಳಗೆ ಬಂಧನ
ಹೊಸದಿಲ್ಲಿ, ಎ. 23: ರಾಜಸ್ಥಾನದ ಅಲ್ವಾರ್ ಹಾಗೂ ಹೊಸದಿಲ್ಲಿಯಲ್ಲಿ 12 ಗಂಟೆಗಳೊಳಗೆ ನಡೆದ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತೊಡಗಿದ್ದಾನೆಂಬ ಆರೋಪದ ಮೇಲೆ 23 ವರ್ಷದ ವ್ಯಕ್ತಿಯನ್ನು ಹೊಸದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ಚಾಲಕನ ಮಾಹಿತಿ ಪ್ರಕರಣ ಭೇದಿಸಲು ನೆರವಾಯಿತು ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆಗೆ 15 ತಂಡಗಳನ್ನು ರಚಿಸಿ, ಸಂತ್ರಸ್ತೆ ವಾಸಿಸುತ್ತಿದ್ದ ವಸತಿ ಸಂಕೀರ್ಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಇದರಿಂದ ಆರೋಪಿಯ ಚಲನವಲನ ಹಾಗೂ ಪರಾರಿಯಾದ ದಿಕ್ಕು ಪತ್ತೆಯಾಯಿತು. ಅಪರಾಧದ ಬಳಿಕ ಆರೋಪಿಯು ಹತ್ತಿದ ಆಟೋರಿಕ್ಷಾವನ್ನು ಗುರುತಿಸಿದ ಪೊಲೀಸರು, ಆಟೋ ಚಾಲಕನನ್ನು ಪತ್ತೆಹಚ್ಚಿದರು. ಆತ ಆರೋಪಿಯನ್ನು ಒಂದು ಹೋಟೆಲ್ ಬಳಿ ಇಳಿಸಿದ್ದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದರು. ಪೊಲೀಸರ ಪ್ರಕಾರ, ಆರೋಪಿಯು ಬೆಳಿಗ್ಗೆ 6.28ರ ಸುಮಾರಿಗೆ ವಸತಿ ಸಂಕೀರ್ಣಕ್ಕೆ ಪ್ರವೇಶಿಸಿ, ಸುಮಾರು ಒಂದು ಗಂಟೆಯೊಳಗೆ ಹೊರಟಿದ್ದಾನೆ. ನಂತರ ಬಟ್ಟೆ ಬದಲಿಸಿಕೊಂಡು ಸ್ಥಳದಿಂದ ತೆರಳಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಈ ಘಟನೆಗೆ ಕೆಲವೇ ಗಂಟೆಗಳ ಮೊದಲು ಅಲ್ವಾರ್ ನಲ್ಲಿ ಆರೋಪಿಯು ತನ್ನ 22 ವರ್ಷದ ನೆರೆಹೊರೆಯವಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಅಲ್ವಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮರುದಿನ ಬೆಳಿಗ್ಗೆ ಆರೋಪಿಯು ಹೊಸದಿಲ್ಲಿಗೆ ಬಂದು, ಅಮರ್ ಕಾಲೋನಿಯಲ್ಲಿರುವ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಮನೆಗೆ ನುಗ್ಗಿದ್ದಾನೆ. ಅಲ್ಲಿ ಐಆರ್ಎಸ್ ಅಧಿಕಾರಿಯ 22 ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ಜಿಮ್ ನಿಂದ ಮನೆಗೆ ಮರಳಿದ ಪೋಷಕರು ಮಗಳನ್ನು ರಕ್ತದ ಮಡುವಿನಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯು ಹಿಂದೆ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಹಣಕಾಸು ಅಕ್ರಮಗಳು ಹಾಗೂ ಬೆಟ್ಟಿಂಗ್ ಹವ್ಯಾಸದ ಕಾರಣದಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ತಳಮಟ್ಟದ ತನಿಖೆ ಹಾಗೂ ಆಟೋ ಚಾಲಕನ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ: ಜಿಲ್ಲಾವಾರು ಫಲಿತಾಂಶದ ವಿವರ ಹೀಗಿದೆ
ಬೆಂಗಳೂರು: ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 94.10 ಶೇ. ದಾಖಲೆ ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಗಳಿಸಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶದ ವಿವರ ದಕ್ಷಿಣ ಕನ್ನಡ ಜಿಲ್ಲೆ- 98.40% ಉಡುಪಿ – 98.18% ಉತ್ತರ ಕನ್ನಡ- 98.09% ಹಾಸನ- 97.51% ಮಂಡ್ಯ- 97.45% ಶಿರಸಿ- 97.21% ಹಾವೇರಿ- 96.87% ಕೊಡಗು- 96.70% ಶಿವಮೊಗ್ಗ- 96.56% ವಿಜಯನಗರ- 96.39% ಬೆಂಗಳೂರು ಗ್ರಾಮಾಂತರ – 95.84% ಧಾರವಾಡ – 95.59% ಕೋಲಾರ- 95.50% ಬಾಗಲಕೋಟೆ- 95.42% ಬೆಂಗಳೂರು ಉತ್ತರ- 95.34% ಗದಗ- 95.24% ಚಿಕ್ಕಮಗಳೂರು- 94.99% ಬೆಳಗಾವಿ – 94.75% ದಾವಣಗೆರೆ- 94.64% ಮೈಸೂರು- 94.50% ರಾಯಚೂರು- 94.41% ವಿಜಯಪುರ- 94.17% ಚಿಕ್ಕೋಡಿ- 94.09% ಬಳ್ಳಾರಿ- 93.36% ಕೊಪ್ಪಳ- 93.10% ರಾಮನಗರ- 92.83% ಚಿತ್ರದುರ್ಗ- 92.25% ಬೀದರ್- 92.18% ತುಮಕೂರು- 92.04% ಚಾಮರಾಜನಗರ- 91.89% ಯಾದಗಿರಿ- 91.89% ಬೆಂಗಳೂರು ದಕ್ಷಿಣ- 91.65% ಚಿಕ್ಕಬಳ್ಳಾಪುರ- 90.88% ಮಧುಗಿರಿ- 90.26% ಕಲಬುರಗಿ-85.06% ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ವರ್ಷ ಪ್ರಥಮ ಬಾರಿ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ನಲ್ಲೂ ಅಪ್ಲೋಡ್ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು https://www.digilocker.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ 18ರಿಂದ ಎಪ್ರಿಲ್ 2ರವರೆಗೆ ಕರ್ನಾಟಕದಾದ್ಯಂತ 2870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು. ಒಟ್ಟು 8,66,046 ನೋಂದಣಿ ಮಾಡಿಕೊಂಡಿದ್ದು, 8,56,516 ಮಂದಿ ಪರೀಕ್ಷೆ ಬರೆದಿದ್ದರು.
ಬಿಸಿಲಿನ ತಾಪಕ್ಕೆ 32 ನವಿಲುಗಳ ಸಾವು: ತುಮಕೂರು ಜಿಲ್ಲೆಯಲ್ಲಿ ಹೀಟ್ಸ್ಟ್ರೋಕ್ ಭೀತಿ!
ತುಮಕೂರು: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿದ್ದು, ಕಳೆದ ಐದಾರು ದಿನಗಳಲ್ಲಿ ಬರೋಬ್ಬರಿ 32 ನವಿಲುಗಳು ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಮತ್ತು ಹುಲ್ಲೆನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಈ ರಾಷ್ಟ್ರಪಕ್ಷಿಗಳು ಮೃತಪಟ್ಟಿವೆ. ತೀವ್ರವಾಗಿ ಏರುತ್ತಿರುವ ತಾಪಮಾನ ಮತ್ತು ನೀರಿನ ಹಸಿವಿನಿಂದಾಗಿ ಉಂಟಾಗುವ ‘ಹೀಟ್ಸ್ಟ್ರೋಕ್’ (Heatsroke) ಈ ಸಾವಿಗೆ ಪ್ರಮುಖ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಒಂದೇ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನವಿಲುಗಳು ಬಲಿಯಾಗಿರುವುದು ಅರಣ್ಯ […] The post ಬಿಸಿಲಿನ ತಾಪಕ್ಕೆ 32 ನವಿಲುಗಳ ಸಾವು: ತುಮಕೂರು ಜಿಲ್ಲೆಯಲ್ಲಿ ಹೀಟ್ಸ್ಟ್ರೋಕ್ ಭೀತಿ! first appeared on Vistara News .
SSLC ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಮೊದಲ ಸ್ಥಾನದಲ್ಲಿ ಉಡುಪಿ; ಕಲಬುರಗಿಗೆ ಕೊನೆಯ ಸ್ಥಾನ
ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಶೇ.94.1ರಷ್ಟು ಫಲಿತಾಂಶ ಪ್ರಕಟವಾಗಿದೆ. 2024-25ನೇ ಸಾಲಿನಲ್ಲಿ ಶೇ. 80.04 ರಷ್ಟು ಫಲಿತಾಂಶ ಪ್ರಕಟವಾಗಿತ್ತು.ಪ್ರತಿವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಬಾಲಕಿಯರ ಪೈಕಿ ಶೇ. 96.18 ರಷ್ಟು ತೇರ್ಗಡೆಯಾಗಿದ್ದಾರೆ. ಶೇ.91.94 ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಈ ವರ್ಷ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಉತ್ತಮ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ. ಪರೀಕ್ಷೆಗೆ ಹಾಜರಾದ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ ಶೇ. 94.80 ರಷ್ಟು […] The post SSLC ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಮೊದಲ ಸ್ಥಾನದಲ್ಲಿ ಉಡುಪಿ; ಕಲಬುರಗಿಗೆ ಕೊನೆಯ ಸ್ಥಾನ first appeared on Vistara News .
Karnataka SSLC Results 2026: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
SSLC Results 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾಗಾದ್ರೆ ಜಿಲ್ಲಾವಾರು ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ
ಬೀದರ್| ಬಸವೇಶ್ವರ ರಥೋತ್ಸವದಲ್ಲಿ ಅವಘಡ: ರಥದ ಚಕ್ರದಲ್ಲಿ ಸಿಲುಕಿ ಮೂವರಿಗೆ ಗಾಯ
ಬಸವಕಲ್ಯಾಣ: ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ವೇಳೆ ಭೀಕರ ಅವಘಡ ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ಒಬ್ಬರ ಕಾಲು ತುಂಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ನಡೆದಿದೆ. ಧನರಾಜ್ ಎಂಬವರ ಎರಡು ಕಾಲುಗಳು ತುಂಡಾಗಿದ್ದು, ರಿಶಬ್ ಎಂಬವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಹಾಗೆಯೇ ಭೀಮಾಶಂಕರ್ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಘಟನೆ ಬಸವಕಲ್ಯಾಣ ನಗರದ ರಥ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಗೆ ಸಂಭವಿಸಿದೆ. ಬಸವೇಶ್ವರ ಜಾತ್ರಾ ರಥೋತ್ಸವದ ವೇಳೆ ಜನಸಮೂಹ ಹೆಚ್ಚಾಗಿದ್ದರಿಂದ ನೂಕಾಟ-ತಳ್ಳಾಟ ಉಂಟಾಗಿ ಘಟನೆ ಸಂಭವಿಸಿದೆ. ಗಾಯಾಳುಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಎಸೆಸೆಲ್ಸಿ ಫಲಿತಾಂಶ: ಏಳು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ
21 ವಿದ್ಯಾರ್ಥಿಗಳಿಗೆ 624 ಅಂಕ
ದೇವದುರ್ಗ: ಅರಿವಿನ ಮಠದ ಸಂಸ್ಥಾಪಕ ಬಸವ ದೇವರು ಲಿಂಗೈಕ್ಯ
ದೇವದುರ್ಗ, ಎ.22: ದೇವದುರ್ಗ ಪಟ್ಟಣದ ಅರಿವಿನ ಮಠದ ಸಂಸ್ಥಾಪಕರಾದ ಬಸವ ದೇವರು ಅವರು ಅನಾರೋಗ್ಯದಿಂದ ಬುಧವಾರ ಸಂಜೆ ಲಿಂಗೈಕ್ಯರಾದರು. ಮೃತರ ಅಂತ್ಯಸಂಸ್ಕಾರವು ಗುರುವಾರ ಮಧ್ಯಾಹ್ನ 3 ಗಂಟೆಗೆ ಅರಿವಿನ ಮನೆ ಮಠದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ವೆಂಕಟರಾವ್ ಬೆನಕನ್ ತಿಳಿಸಿದ್ದಾರೆ.
ಅಂಬಾನಿ ಮನೆ ಅಡುಗೆಮನೆ ಮೆನು ಹೇಗಿರುತ್ತೆ ಗೊತ್ತಾ? ಪ್ರತಿದಿನ 4000 ರೊಟ್ಟಿ ತಯಾರಾಗುವುದರ ಹಿಂದಿನ ಅಸಲಿ ಕಾರಣವೇನು?
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಕೇವಲ ಐಷಾರಾಮಿ ಜೀವನಕ್ಕೆ ಮಾತ್ರವಲ್ಲ, ಅಲ್ಲಿನ ಶಿಸ್ತುಬದ್ಧ ಆಹಾರ ಪದ್ಧತಿಗೂ ಹೆಸರುವಾಸಿ. ಅಂಬಾನಿ ಕುಟುಂಬದ ಸದಸ್ಯರು ಅಪ್ಪಟ ಸಸ್ಯಾಹಾರಿಗಳಾಗಿದ್ದು, ಅತ್ಯಂತ ಸಾತ್ವಿಕ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ. ಮುಖೇಶ್ ಅಂಬಾನಿ ಅವರ ದಿನಚರಿ ಬೆಳಿಗ್ಗೆ ಪಪ್ಪಾಯಿ ರಸ ಮತ್ತು ಇಡ್ಲಿ-ಸಾಂಬಾರ್ನೊಂದಿಗೆ ಆರಂಭವಾದರೆ, ನೀತಾ ಅಂಬಾನಿ ಅವರು ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್ ಗೆ ಆದ್ಯತೆ ನೀಡುತ್ತಾರೆ. ಮಧ್ಯಾಹ್ನದ ಊಟದಲ್ಲಿ ಗುಜರಾತಿ ಶೈಲಿಯ ದಾಲ್, ಅನ್ನ, […] The post ಅಂಬಾನಿ ಮನೆ ಅಡುಗೆಮನೆ ಮೆನು ಹೇಗಿರುತ್ತೆ ಗೊತ್ತಾ? ಪ್ರತಿದಿನ 4000 ರೊಟ್ಟಿ ತಯಾರಾಗುವುದರ ಹಿಂದಿನ ಅಸಲಿ ಕಾರಣವೇನು? first appeared on Vistara News .
SSLC 2026 ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಟಾಪರ್ಸ್ ಇವರೇ ನೋಡಿ..
2026ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇಕಡಾ 94.10% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ರಾಜ್ಯಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆಗೈದ ಟಾಪರ್ಸ್ ಪಟ್ಟಿಯನ್ನು ಸಹ ಮಂಡಳಿಯು ಬಿಡುಗಡೆ
ತಮಿಳುನಾಡು ವಿಧಾನಸಭಾ ಚುನಾವಣೆ |ಎಐಎಡಿಎಂಕೆ-ಡಿಎಂಕೆ ಮತಗಟ್ಟೆ ಏಜೆಂಟ್ ಗಳ ನಡುವೆ ಮಾರಾಮಾರಿ
ಸೇಲಂ: ಗುರುವಾರದ ಮತದಾನದ ವೇಳೆ ಎಐಎಡಿಎಂಕೆ ಹಾಗೂ ಡಿಎಂಕೆ ಮತಗಟ್ಟೆ ಏಜೆಂಟ್ ಗಳ ನಡುವೆ ಸೇಲಂನ ಅರಿಸಿಪಾಳ್ಯಂ ಬಳಿಯ 139ನೇ ಮತಗಟ್ಟೆಯೊಳಗೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ. ಎಐಎಡಿಎಂಕೆ ಮತಗಟ್ಟೆ ಏಜೆಂಟ್ ಎಂ.ಕಂದಸ್ವಾಮಿ ಹಾಗೂ ಡಿಎಂಕೆ ಮತಗಟ್ಟೆ ಏಜೆಂಟ್ ಸಿ.ಸೆಂಥಿಲ್ ಮತಗಟ್ಟೆಯೊಳಗೆ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಯ ಪ್ರಕಾರ, ಮತಗಟ್ಟೆಯೊಳಗೆ ಸೆಂಥಿಲ್ ಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು ಎನ್ನಲಾಗಿದೆ. ಇದು ತಪ್ಪು ಗ್ರಹಿಕೆಗೆ ಕಾರಣವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎಂದು ಹೇಳಲಾಗಿದೆ. ಅವರಿಬ್ಬರ ನಡುವಿನ ಸಂಭಾಷಣೆಯನ್ನು ತನ್ನನ್ನು ಉದ್ದೇಶಿಸಿ ಹೇಳಿದ್ದು ಎಂದು ತಪ್ಪಾಗಿ ಗ್ರಹಿಸಿದ 27ನೇ ವಾರ್ಡ್ ನ ಮಹಿಳಾ ಮತದಾರೆ ಎಸ್.ಲೋಗನಾಯಕಿ ಆಕ್ರೋಶಗೊಂಡು ಕಂದಸ್ವಾಮಿಯ ಮೇಲೆ ಕೂಗಾಡಲು ಪ್ರಾರಂಭಿಸಿದ್ದಾರೆ. ಇದು ಅವರಿಬ್ಬರ ನಡುವೆ ಘರ್ಷಣೆಗೆ ಕಾರಣವಾಗಿದ್ದು, ಆಕೆ ಕಂದಸ್ವಾಮಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅದಕ್ಕೆ ಪ್ರತಿಯಾಗಿ ಕಂದಸ್ವಾಮಿ ಕೂಡಾ ಹೊಡೆದಿದ್ದರಿಂದ ಮತಗಟ್ಟೆಯೊಳಗೆ ಮಾರಾಮಾರಿ ನಡೆದಿದೆ. ಬಳಿಕ ಲೋಗನಾಯಕಿಯೊಂದಿಗೆ ಸೇರಿಕೊಂಡಿರುವ ಆಕೆಯ ಪುತ್ರ ವಿಘ್ನೇಶ್ವರನ್ ಹಾಗೂ ಆಕೆಯ ಸಹೋದರಿ ಎಂ.ರೇಣುಕಾ ಕಂದಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಂದಸ್ವಾಮಿ, “ಈ ಹಲ್ಲೆಯಲ್ಲಿ ನನಗೆ ಗಾಯಗಳಾಗಿದ್ದು, ನನ್ನ ಬಟ್ಟೆ ಹರಿದಿದೆ” ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಅಲ್ಲಗಳೆದಿರುವ ಲೋಗನಾಯಕಿ, ಕಂದಸ್ವಾಮಿಯೇ ಮೊದಲು ನನ್ನನ್ನು ನಿಂದಿಸಿದರು ಹಾಗೂ ಹಲ್ಲೆ ನಡೆಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. ‘ಮೂಗಿನಿಂದ ರಕ್ತ ಸುರಿಯುವುದು ಸೇರಿದಂತೆ ನನಗೆ ಹಲವು ಕಡೆ ಗಾಯಗಳಾಗಿವೆ” ಎಂದು ಆರೋಪಿಸಿರುವ ಲೋಗನಾಯಕಿ, ಈ ಘಟನೆಯ ಹಿಂದೆ ಎಐಎಡಿಎಂಕೆ ವಾರ್ಡ್ ಕಾರ್ಯದರ್ಶಿ ಎಂ.ಯುವರಾಜ್ ಇದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಯುವರಾಜ್, ಇತ್ತೀಚೆಗಷ್ಟೇ ಎಐಎಡಿಎಂಕೆ ತೊರೆದು ಡಿಎಂಕೆ ಸೇರ್ಪಡೆಯಾಗಿರುವ ಲೋಗನಾಯಕಿ, ಎಐಎಡಿಎಂಕೆ ವರ್ಚಸ್ಸಿಗೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ಮತಗಟ್ಟೆಯೊಳಗೆ ಉದ್ವಿಗ್ನತೆ ಸೃಷ್ಟಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪಲ್ಲಪಟ್ಟಿ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಮತಗಟ್ಟೆಯೊಳಗೆ ನಡೆದಿರುವ ಗಲಭೆಯ ಕುರಿತು ಚುನಾವಣಾಧಿಕಾರಿಗಳು ಇಂದು ಸಂಜೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ರಾಯಚೂರು : ಉಚಿತ ಹೆಲ್ಮೆಟ್ ವಿತರಣೆ, ಕಾನೂನು ಅರಿವು ಕಾರ್ಯಕ್ರಮ
ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ : ಎಸ್ಪಿ ಅರುಣಾಂಶು ಗಿರಿ
2025-26ನೇ ಎಸೆಸೆಲ್ಸಿ ಪರೀಕ್ಷೆ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ
94.10 ಶೇ. ಫಲಿತಾಂಶ ದಾಖಲು
SSLC ಫಲಿತಾಂಶ 2026: ಶಿಕ್ಷಣ ಸಚಿವರಿಂದ ಸಮಗ್ರ ವಿವರ -Live ವಿಡಿಯೊ ಇಲ್ಲಿದೆ
SSLC Results 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಲೈವ್ ವಿಡಿಯೋ ಇಲ್ಲಿದೆ ನೋಡಿ. ಪತ್ರಿಕಾಗೋಷ್ಠಿಯ ಮೂಲಕ ಈ ವರ್ಷದ ಫಲಿತಾಂಶದ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು, ವಿದ್ಯಾರ್ಥಿಗಳ ಸಾಧನೆಯ
ಕೊಡಗು: ಗ್ರಾಪಂಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ
ಆಕ್ಷೇಪ ಸಲ್ಲಿಸಲು ನಾಳೆ ಕೊನೆಯ ದಿನ
ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಎದುರಾಗಿರುವ ತೈಲ ಬಿಕ್ಕಟ್ಟಿನ ಮಧ್ಯೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂಬ ವರದಿಗಳಿಗೆ ಸ್ಪಷ್ಟನೆ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳುವ ಮೂಲಕ ತೈಲ ಬೆಲೆ ಏರಿಕೆಯಾಗುವುದಿಲ್ಲ ಎಂದು ತಿಳಿಸಿದೆ. ಇದರ ಜೊತೆಗೆ ಇಂತಹ ವರದಿಗಳನ್ನು ಹರಡುವವರು ಜನರಲ್ಲಿ ಭೀತಿಯನ್ನು ಸೃಷ್ಟಿಸುವಂತೆ ದುರುದ್ದೇಶದಿಂದ ಮಾಡಲಾಗಿದೆ ಎಂದು ಕಿಡಿಕಾರಿದೆ. ಈ ಕುರಿತ ವರದಿ ಇಲ್ಲಿದೆ..
ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಅಗ್ರಹಿಸಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗು ವಶ ಪಡಿಸಿಕೊಂಡ ಇರಾನ್; ವೀಡಿಯೊ ಬಿಡುಗಡೆ ಮಾಡಿದ IRGC
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ, ಇರಾನ್ ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗುಗಳನ್ನು ವಶಪಡಿಸಿಕೊಂಡಿದೆ. ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ವಶಪಡಿಸಿಕೊಂಡ ಹಡಗುಗಳಲ್ಲಿ ಒಂದನ್ನು ಇಸ್ರೇಲ್ಗೆ ಸಂಬಂಧಿಸಿದೆ ಎಂದು ತಿಳಿಸಿದೆ. ಜಲಸಂಧಿಯಲ್ಲಿ ಹಿಡಿದ ಎರಡೂ ಹಡಗುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ತಿಳಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವವರೆಗೆ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣ ಕ್ರಮಗಳನ್ನು ಹಿಂಪಡೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ನಡುವೆ, ಹಾರ್ಮುಝ್ ಜಲಸಂಧಿಯಲ್ಲಿ ಕಂಟೇನರ್ ಹಡಗನ್ನು ಸೆರೆಹಿಡಿಯುತ್ತಿರುವ ದೃಶ್ಯಗಳ ವೀಡಿಯೊವನ್ನು ಇರಾನ್ ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ ಶಸ್ತ್ರಸಜ್ಜಿತ ಹಾಗೂ ಮುಸುಕು ಧರಿಸಿದ ಇರಾನಿನ ಪಡೆಗಳು ಸರಕು ಹಡಗಿನ ಬದಿಯನ್ನು ಏರಿ ಹಡಗನ್ನು ವಶಪಡಿಸಿಕೊಳ್ಳುತ್ತಿರುವುದು ಕಾಣಿಸುತ್ತದೆ. ಪರ್ಷಿಯನ್ ಕೊಲ್ಲಿಯ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಝ್ ಜಲಸಂಧಿಯಲ್ಲಿ ಈ ಬೆಳವಣಿಗೆ ನಡೆದಿರುವುದು ಜಾಗತಿಕ ತೈಲ ಹಾಗೂ ವಾಣಿಜ್ಯ ಸಾಗಣೆಗೆ ಪರಿಣಾಮ ಬೀರುವ ಸಾಧ್ಯತೆಯನ್ನು ಉಂಟುಮಾಡಿದೆ. Iran has released footage showing IRGC forces using high-speed boats to intercept vessels that violated naval instructions, with elite units boarding the ships. pic.twitter.com/1Wuid2UYYM — Nova HD (@NOVA_PressHD) April 22, 2026
SSLC Results 2026: ಬಂತು ಎಸ್ಎಸ್ಎಲ್ಸಿ ರಿಸಲ್ಟ್; ಈ ಬಾರಿ ಶೇ 90ರಷ್ಟು ಸಾಧನೆ
SSLC Result 2026: ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ. ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ ಬಂದಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ
ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಕಾಳಗ ಕೇವಲ ಯುದ್ಧಭೂಮಿಗೆ, ಕ್ಷಿಪಣಿಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರುತ್ತಿದ್ದು, ಭಾರತದ ಷೇರುಪೇಟೆಯನ್ನು ಅಕ್ಷರಶಃ ನಡುಗಿಸುತ್ತಿದೆ. ಕಳೆದೆರಡು ದಿನಗಳಿಂದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು, ಇಂದಿನ (ಏ.23-ಗುರುವಾರ) ಷೇರುಪೇಟೆ ವ್ಯವಹಾರ ನೋಡಿ ಅಕ್ಷರಶಃ ಶಾಕ್ನಲ್ಲಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಎರಡರಲ್ಲೂ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ.
SSLC Exam 2026: ಫಲಿತಾಂಶ ಪ್ರಕಟ; ಯಾವ ಜಿಲ್ಲೆ ಫಸ್ಟ್ ಲಾಸ್ಟ್? ಸಚಿವ ಮಧು ಬಂಗಾರಪ್ಪ ಮಾಹಿತಿ
ಬಹುನಿರೀಕ್ಷಿತ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2026 ಫಲಿತಾಂಶ ಪ್ರಕಟವಾಗಿದೆ. ವೆಬ್ಸೈಟ್ ಹಾಗೂ ಮೊಬೈಲ್ಗಳಲ್ಲಿ ಫಲಿತಾಂಶ ಲಭ್ಯವಿದೆ. ಮಧ್ಯಾಹ್ನ ಬಳಿಕ ಶಾಲೆಗಳ ನೋಟಿಸ್ ಬೋರ್ಡ್ನಲ್ಲಿ ಫಲಿತಾಂಶ ಹಾಕಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಜಿಲ್ಲಾವಾರು ಫಲಿತಾಂಶದ ಬಗ್ಗೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪಿಲಿಕುಳದಲ್ಲಿ ಆದಿವಾಸಿ ಹೆರಿಟೇಜ್ ಮ್ಯೂಸಿಯಂ?
25 ಕೋಟಿ ರೂ. ವೆಚ್ಚದ ಯೋಜನೆ: ಕರಡು ಪ್ರಸ್ತಾವ ಸಿದ್ಧ
ಅಕ್ಷರ ದೇಗುಲಗಳ ಅಂಗಳದಲ್ಲಿ ಅಸ್ಪಶ್ಯತೆಯ ನೆರಳು
ಷೇಕ್ಸ್ಪಿಯರ್ ಒಮ್ಮೆ ‘ಹೆಸರಿನಲ್ಲೇನಿದೆ?’ ಎಂದು ಕೇಳಿರಬಹುದು. ಆದರೆ, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಆತನ ಈ ಪ್ರಶ್ನೆ ಸಂಪೂರ್ಣ ಅಪ್ರಸ್ತುತವಾಗುತ್ತದೆ. ಏಕೆಂದರೆ, ನಮ್ಮಲ್ಲಿ ಹೆಸರು ಕೇವಲ ವ್ಯಕ್ತಿ ಅಥವಾ ಸ್ಥಳದ ಭೌಗೋಳಿಕ ಗುರುತಲ್ಲ; ಅದೊಂದು ಸಾಮಾಜಿಕ ಶ್ರೇಣೀಕರಣದ ಕರಾಳ ಶಾಸನ. ತಲೆಮಾರುಗಳ ಶೋಷಣೆಯ ಇತಿಹಾಸವನ್ನು ಹೊತ್ತೊಯ್ಯುವ ವಾಹಕವದು. ನಮ್ಮ ಅಕ್ಷರ ದೇಗುಲಗಳಾದ ಶಾಲೆಗಳು ಸಮಾನತೆಯ ಪ್ರಯೋಗಶಾಲೆಗಳಾಗಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಇಂದಿಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಶಾಲೆಗಳ ನಾಮಫಲಕಗಳು ಅಸ್ಪಶ್ಯತೆಯ ಕಹಿಯನ್ನು ಉಗುಳುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ವಿಪರ್ಯಾಸ. ಇದಕ್ಕೆ ಜೀವಂತ ಸಾಕ್ಷಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲ ಗ್ರಾಮದ ‘ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹರಿಜನ ವಾಡಾ’. ಕೇವಲ ಕಡಚರ್ಲ ಮಾತ್ರವಲ್ಲ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಸರಕಾರಿ ದಾಖಲೆಗಳಲ್ಲಿ ಇಂದಿಗೂ ಶಾಲೆಗಳು ಮತ್ತು ಅಂಗನವಾಡಿಗಳು ‘ಹರಿಜನ ವಾಡಾ’, ’ಹರಿಜನ ಕೇರಿ’ ಎಂಬ ಹೆಸರಿನಿಂದಲೇ ಉಸಿರಾಡುತ್ತಿವೆ. ಭಾಷೆ ಎಂಬ ರಾಜಕೀಯ ಅಸ್ತ್ರ ಮತ್ತು ಹಿಂಸೆ ಭಾಷೆಗೂ ಶೋಷಣೆಗೂ ಇರುವ ನಂಟಿನ ಬಗ್ಗೆ ಆಫ್ರಿಕನ್-ಅಮೆರಿಕನ್ ಚಿಂತಕ ಜೇಮ್ಸ್ ಬಾಲ್ಡ್ವಿನ್ ಹೇಳುತ್ತಾರೆ, ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದೊಂದು ರಾಜಕೀಯ ಅಸ್ತ್ರ ಹಾಗೂ ಅಧಿಕಾರದ ದ್ಯೋತಕ. ಅಂದರೆ, ಆಳುವ ವರ್ಗವು ತಾನು ಸೃಷ್ಟಿಸಿದ ಭಾಷೆಯ ಮೂಲಕವೇ ಶೋಷಿತರನ್ನು ನಿಯಂತ್ರಿಸುತ್ತದೆ. ನೊಬೆಲ್ ಪುರಸ್ಕೃತೆ ಟೋನಿ ಮಾರಿಸನ್ ಇದೇ ಆಶಯವನ್ನು ಇನ್ನಷ್ಟು ಕಟುವಾಗಿ, ಶೋಷಕ ಭಾಷೆ ಹಿಂಸೆಯನ್ನು ಪ್ರತಿನಿಧಿಸುವುದು ಮಾತ್ರವಲ್ಲ; ಆ ಭಾಷೆಯೇ ಒಂದು ಹಿಂಸೆ ಎಂದು ವಿಶ್ಲೇಷಿಸುತ್ತಾರೆ. ಬ್ರಿಟಿಷ್ ಲೇಖಕ ಜಾರ್ಜ್ ಆರ್ವೆಲ್ ತನ್ನ ‘1984’ ಕಾದಂಬರಿಯಲ್ಲಿ ‘ನ್ಯೂಸ್ಪೀಕ್’ ಎಂಬ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಾನೆ. ವ್ಯವಸ್ಥೆಯು ಪದಗಳ ಅರ್ಥವನ್ನು ಬದಲಾಯಿಸುವ ಮೂಲಕ ಮನುಷ್ಯನ ಚಿಂತನೆಗಳನ್ನು ಹೇಗೆ ತನ್ನ ಗುಲಾಮಗಿರಿಯಲ್ಲಿಯೇ ಇಟ್ಟುಕೊಳ್ಳುತ್ತದೆ ಎಂಬುದನ್ನು ಆತ ವಿವರಿಸುತ್ತಾನೆ. ನಮ್ಮೂರಿನ ಶಾಲಾ ನಾಮಫಲಕಗಳಲ್ಲಿ ರಾರಾಜಿಸುತ್ತಿರುವ ಜಾತಿವಾಚಕ ಪದಗಳು ಮಾಡುವುದು ಇದನ್ನೇ. ಆ ಪದಗಳು ಶೋಷಿತ ಸಮುದಾಯದ ಮಕ್ಕಳನ್ನು ಕೀಳರಿಮೆಯ ಜೈಲಿನಲ್ಲಿ ಅರಿವಿಗೆ ಬಾರದಂತೆ ಬಂಧಿಸಿಡುತ್ತವೆ. ‘ಹರಿಜನ’ ಮತ್ತು ‘ವಾಡಾ’: ಕರುಣೆಯ ಸೋಗಿನಲ್ಲಿರುವ ಕ್ರೌರ್ಯ ಮಹಾತ್ಮಾ ಗಾಂಧಿಯವರು ಅಸ್ಪಶ್ಯರನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ‘ಹರಿಜನ’ (ದೇವರ ಮಕ್ಕಳು) ಎಂಬ ಪದವನ್ನು ಹುಟ್ಟುಹಾಕಿರಬಹುದು. ಆದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಪದವನ್ನು ಕಟುವಾಗಿ ತಿರಸ್ಕರಿಸಿದರು. ನಮಗೆ ಕರುಣೆ ಬೇಡ, ಹಕ್ಕುಗಳು ಬೇಕು. ‘ದೇವರ ಮಕ್ಕಳು’ ಎಂಬ ಹಣೆಪಟ್ಟಿ ನಮ್ಮ ಮೇಲಿನ ದೌರ್ಜನ್ಯವನ್ನು ಮರೆಮಾಚುವ ಕಾವ್ಯಾತ್ಮಕ ಸೋಗು ಎಂದು ಬಾಬಾಸಾಹೇಬರು ವಾದಿಸಿದ್ದರು. ಇಂದು ಸಂವಿಧಾನಾತ್ಮಕವಾಗಿಯೂ ‘ಹರಿಜನ’ ಪದದ ಬಳಕೆ ನಿಷೇಧಿತವಾಗಿದೆ. ಆದರೂ ಸರಕಾರಿ ಕಡತಗಳಲ್ಲಿ ಅದು ಜೀವಂತವಾಗಿರುವುದು ಆಡಳಿತ ಯಂತ್ರದ ಜಡತ್ವವನ್ನು ತೋರಿಸುತ್ತದೆ. ಇನ್ನು ‘ವಾಡಾ’ ಅಥವಾ ‘ಕೇರಿ’ ಎಂಬುದು ಕೇವಲ ಭೌಗೋಳಿಕ ಪದವಲ್ಲ; ಅದೊಂದು ಊರ ಹೊರಗಿನ, ಅವಕಾಶ ವಂಚಿತ, ಬಹಿಷ್ಕೃತ ಜಗತ್ತಿನ ಸಂಕೇತ. ಊರು ಮತ್ತು ವಾಡಾದ ನಡುವೆ ಇರುವ ಅದೃಶ್ಯ ರೇಖೆ ಜಾತಿವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ದೇವನೂರ ಮಹಾದೇವರ ಸಾಹಿತ್ಯದ ಒಳದನಿಯು ಹೇಳುವಂತೆ, ಇಂತಹ ಶಬ್ದಗಳು ಎದೆಗೆ ಬಿದ್ದಾಗ, ಅವು ಅಕ್ಷರವಾಗಿ ಅರಳುವ ಬದಲು ಕೀಳರಿಮೆಯ ಬೀಜಗಳಾಗಿ ಬೇರುಬಿಡುತ್ತವೆ. ಮಕ್ಕಳ ಮನಸ್ಸಿನ ಮೇಲಾಗುವ ಸಾಂಸ್ಥಿಕ ಹಿಂಸೆ ಒಮ್ಮೆ ಕಲ್ಪಿಸಿಕೊಳ್ಳಿ; ಮುಗ್ಧ ಮಗುವೊಂದು ಮೊದಲ ಬಾರಿಗೆ ಶಾಲೆಗೆ ಕಾಲಿಡುವಾಗ ನಾಮಫಲಕದಲ್ಲಿರುವ ‘ಹರಿಜನ ವಾಡಾ’ ಎಂಬ ಅಕ್ಷರಗಳನ್ನು ಓದುತ್ತದೆ. ಆ ಕ್ಷಣದಲ್ಲೇ ಆ ಮಗುವಿಗೆ ನೀನು ಈ ಊರಿನವನಲ್ಲ, ಊರ ಹೊರಗಿನ ವಾಡಾದವನು. ನಿನ್ನ ಇತಿಹಾಸ ಶೋಷಣೆಯದ್ದು ಎಂಬ ಕ್ರೂರ ಸಂದೇಶ ರವಾನೆಯಾಗುತ್ತದೆ. ಶಿಕ್ಷಣವು ಮಗುವಿಗೆ ಜಗತ್ತನ್ನು ಗೆಲ್ಲುವ ಆತ್ಮವಿಶ್ವಾಸವನ್ನು ತುಂಬಬೇಕು. ಬದಲಾಗಿ, ಶಾಲೆಯ ಹೆಸರೇ ಅವರ ಜಾತಿಯನ್ನು ಪ್ರತಿದಿನ ನೆನಪಿಸುತ್ತಿದ್ದರೆ, ಅದು ಶಿಕ್ಷಣ ವ್ಯವಸ್ಥೆ ಎಸಗುವ ‘ಸಾಂಸ್ಥಿಕ ಹಿಂಸೆ’ ಆಗುತ್ತದೆ. ಸ್ವಾಭಿಮಾನದ ಮರುನಾಮಕರಣ: ಕೇವಲ ಹೆಸರಲ್ಲ, ಅದೊಂದು ಅಸ್ಮಿತೆ ಹಾಗಾದರೆ ಪರಿಹಾರವೇನು? ಈ ಶೋಷಣೆಯ ಸಂಕೇತಗಳನ್ನು ಕಿತ್ತೊಗೆದು, ಆ ಜಾಗದಲ್ಲಿ ಸ್ವಾಭಿಮಾನದ, ಶೈಕ್ಷಣಿಕ ಕ್ರಾಂತಿಯ ಸಂಕೇತಗಳನ್ನು ಸ್ಥಾಪಿಸಬೇಕು. ಇಂತಹ ಶಾಲೆಗಳನ್ನು ಮತ್ತು ಬಡಾವಣೆಗಳನ್ನು ತಕ್ಷಣವೇ ‘ಜೈ ಭೀಮ್ ನಗರ’, ‘ಬಾಬಾಸಾಹೇಬ್ ನಗರ’ ಅಥವಾ ‘ಬಾಬೂಜಿ ನಗರ’ ಎಂದು ಮರುನಾಮಕರಣ ಮಾಡಬೇಕು. ‘ಜೈ ಭೀಮ್’ ಎಂದರೆ ಕೇವಲ ಘೋಷಣೆಯಲ್ಲ; ಅದೊಂದು ಸಮಾನತೆಯ ಉಸಿರು. ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕತೆಯ ಪ್ರತೀಕ. ಶಾಲೆಯೊಂದರ ಹೆಸರು ‘ಡಾ. ಬಿ.ಆರ್. ಅಂಬೇಡ್ಕರ್ ನಗರ ಸರಕಾರಿ ಶಾಲೆ’ ಎಂದಾದಾಗ, ಆ ಶಾಲೆಗೆ ಹೋಗುವ ಪ್ರತಿಯೊಂದು ಮಗುವಿನ ಎದೆಯಲ್ಲೂ ನಾನು ಈ ದೇಶದ ಸಂವಿಧಾನ ಶಿಲ್ಪಿಯ ವಾರಸುದಾರ ಎಂಬ ಹೆಮ್ಮೆ ಮೊಳಕೆಯೊಡೆಯುತ್ತದೆ. ಇದು ಕೇವಲ ಕಡತಗಳಲ್ಲಿ ನಡೆಯುವ ತಿದ್ದುಪಡಿಯಲ್ಲ, ಬದಲಾಗಿ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ನಾವು ಒದಗಿಸುವ ಸಾಂಕೇತಿಕ ಹಾಗೂ ‘ಚಾರಿತ್ರಿಕ ನ್ಯಾಯ’ವಾಗಿದೆ. ಇದು ಕೇವಲ ಸೇಡಂ ತಾಲೂಕಿನ ಸಮಸ್ಯೆಯಲ್ಲ. ನಮ್ಮ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು, ರಾಜ್ಯದಾದ್ಯಂತ ಸಮೀಕ್ಷೆ ನಡೆಸಬೇಕು. ಸರಕಾರಿ ದಾಖಲೆಗಳಲ್ಲಿ ಉಳಿದುಕೊಂಡಿರುವ ಇಂತಹ ಎಲ್ಲ ಅವಹೇಳನಕಾರಿ ಹೆಸರುಗಳನ್ನು ಅಳಿಸಿಹಾಕಿ, ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಅಧಿಕೃತ ಸರಕಾರಿ ಆದೇಶ ಹೊರಡಿಸಬೇಕು. ನಮ್ಮ ಶಾಲೆಗಳು ಊರಿನವರ, ವಾಡಾದವರ ಶಾಲೆಗಳಾಗಬಾರದು; ಅವು ಪ್ರಜ್ಞಾವಂತರ ಶಾಲೆಗಳಾಗಬೇಕು. ಶೋಷಣೆಯ ಕತ್ತಲಿನಿಂದ ಸ್ವಾಭಿಮಾನದ ಬೆಳಕಿನೆಡೆಗೆ ನಡೆಯುವ ಈ ಪ್ರಕ್ರಿಯೆ ಕೇವಲ ನಾಮಫಲಕಗಳ ಬದಲಾವಣೆಯಾಗದೆ, ನಮ್ಮೆಲ್ಲರ ಮನಸ್ಥಿತಿಯ ಬದಲಾವಣೆಯೂ ಆಗಬೇಕಿದೆ.
ಮತದಾನದ ಅವಧಿಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿ: ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ
ಚೆನ್ನೈ: ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ವ್ಯತ್ಯಯವಾಗಿರುವುದರಿಂದ ಸಾವಿರಾರು ಮಂದಿ ಮಾರ್ಗಮಧ್ಯದಲ್ಲಿ ಸಿಲುಕಿಕೊಂಡಿದ್ದು, ಮತದಾನದ ಅವಧಿಯನ್ನು 8 ಗಂಟೆಯವರೆಗೂ ವಿಸ್ತರಿಸಬೇಕು ಎಂದು ಗುರುವಾರ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಗೆ ಪತ್ರ ಬರೆದಿರುವ ವಿಜಯ್, ಜನರು ತಮ್ಮ ನಿಯೋಜಿತ ಮತಗಟ್ವೆಗಳನ್ನು ತಲುಪಲು ಯಾವುದೇ ಬಸ್ ಗಳಿಲ್ಲದೆ ಇರುವುದರಿಂದ ಅಥವಾ ಪರ್ಯಾಯ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದೆ ಇರುವುದರಿಂದ ಸಾವಿರಾರು ಮಂದಿ ಮತದಾರರು ಚೆನ್ನೈ ಟರ್ಮಿನಲ್ ಗಳಲ್ಲಿ ಹಾಗೂ ಇನ್ನಿತರ ಮೆಟ್ರೊ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
Gold Silver Price Update: ಚಿನ್ನಾಭರಣಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ ಹಾಗೂ ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಎರಡು ಲೋಹಗಳು ಬೆಲೆಗಳು ಇಳಿಮುಖವಾಗಿದ್ದು, ಆಭರಣ ಖರೀದಿಸುವವರಿಗೆ ಇದೊಂದು ಸೂಕ್ತ ಸಮಯ ಎನ್ನಬಹುದು. ವಾರಾಂತ್ಯದ ಹೊತ್ತಿಗೆ ಇನ್ನಷ್ಟು ಇಳಿಕೆಯ ನಿರೀಕ್ಷೆ ಇದೆ. ಇಂದು ಗುರುವಾರ (ಏಪ್ರಿಲ್ 23) ಕರ್ನಾಟಕ
ಪಶ್ಚಿಮ ಬಳಗಾಳ ವಿಧಾನಸಭೆ ಚುನಾವಣೆ 2026: ಟಿಎಂಸಿ-ಬಿಜೆಪಿ ನಡುವೆ ನೇರ ಪೈಪೋಟಿ
West Bengal Assembly Election 2026: ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 23, ಗುರುವಾರ) ಆರಂಭಗೊಂಡಿದೆ. 294 ಕ್ಷೇತ್ರಗಳ ಪೈಕಿ ಇಂದು ಅರ್ಧಕ್ಕಿಂತ ಹೆಚ್ಚು ಅಂದರೆ 152 ಸ್ಥಾನಗಳಿಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಹಾಗಾದ್ರೆ, ಯಾವ್ಯಾವ ಪಕ್ಷಗಳ ನಡುವೆ ನೇರಪೈಪೋಟಿ ಇದೆ ಎನ್ನುವ
SSLC ಫಲಿತಾಂಶ 2025: ಶೇ. 62.34ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1
ರಾಜ್ಯಾದ್ಯಂತ ಪೋಷಕರು ಹಾಗೂ ವಿದ್ಯಾರ್ಥಿಗಳ ಬಹುನಿರೀಕ್ಷಿತ 2026ರ ಎಸ್ಎಸ್ಎಲ್ಸಿ (SSLC) ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾವು ಕಳೆದ ವರ್ಷ ಅಂದರೆ 2025ರ ಎಸ್ಎಸ್ಎಲ್ಸಿ ಫಲಿತಾಂಶದ ಕಡೆಗೆ ಒಮ್ಮೆ ಗಮನ ಹರಿಸೋಣ. 2025ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಒಟ್ಟಾರೆ ಶೇ.
ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು
ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ತಿರುಪತಿಯ ಭವ್ಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಬೆಳಗಾವಿಯಲ್ಲಿಯೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸನ ಸನ್ನಿಧಿ ತಲೆಯೆತ್ತಲಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದ ಸುಮಾರು 7 ಎಕರೆ ಪ್ರದೇಶದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಭೂಮಿಯನ್ನು ಖರೀದಿಸಿ ಈಗಾಗಲೇ ಟಿಟಿಡಿ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಮೂಲಕ ಕುಂದಾನಗರಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಮೊದಲ […] The post ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು first appeared on Vistara News .
Thokkottu | ಆರಿಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿಯ ಸೆರೆ; ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
ಉಳ್ಳಾಲ, ತೊಕ್ಕೊಟ್ಟು ಫ್ಲೈ ಓವರನ್ ನಲ್ಲಿ ಇತ್ತೀಚೆಗೆ ನಡೆದ ರೌಡಿ ಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಸುಹೈಲ್ ಅಲಿಯಾಸ್ ಚಿಯಾ(24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಈತನು ಆರಿಫ್ ಮೇಲೆ ನಡೆದ ಮೊದಲ ದಾಳಿಗೆ ಮುಹಮ್ಮದ್ ಸುಹೈಲ್ ಸಹಕಾರ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ವಿವರವಾದ ತನಿಖೆಯ ನಂತರ ಸುಹೈಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನರ ಬಂಧನ ಆಗಿತ್ತು. ಇದೀಗ ಮುಹಮ್ಮದ್ ಸುಹೈಲ್ ಬಂಧನದೊಂದಿಗೆ ಈ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಆರಿಫ್ ಕೊಲೆ ಪ್ರಕರಣದಲ್ಲಿ 15 ಮಂದಿಯ ಪಾತ್ರ ಇರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಕಳೆದ ಮಾರ್ಚ್ 27ರ ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕಿನಲ್ಲಿ ಸಂಚರಿಸುತ್ತಿದ್ದ ಆರಿಫ್ ನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಬ್ರೇಕ್ ವಿಫಲ:ಉತ್ತರ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ: 11 ಮಂದಿ ಸಜೀವ ದಹನ
ಮಿರ್ಜಾಪುರ್: ಬ್ರೇಕ್ ವಿಫಲಗೊಂಡ ಪರಿಣಾಮ ಹೆದ್ದಾರಿಯಲ್ಲಿ ಯದ್ವಾತದ್ವಾ ಟ್ರಕ್ ಚಲಾಯಿಸಿದ್ದರಿಂದ ಭೀಕರಸರಣಿ ಅಪಘಾತವೊಂದು ಉತ್ತರ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಇದರ ಪರಿಣಾಮ 11 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಿರ್ಜಾಪುರ್–ರೆವಾ ರಾಷ್ಟ್ರೀಯ ಹೆದ್ದಾರಿ 135ರ ಧರ್ಮಾಗಂಜ್ನ ಬೈಸೋದಾ ಹಿಲ್ ಸಮೀಪ ಕಳೆದರಾತ್ರಿ 9 ಗಂಟೆ ವೇಳೆಗೆ ಸಂಭವಿಸಿದೆ.ಮಿರ್ಜಾಪುರಕ್ಕೆ ಚಲಿಸುತ್ತಿದ್ದ ಟ್ರಕ್, ಬ್ರೇಕ್ ವಿಫಲವಾಗಿ ಮುಂದೆ ಚಲಿಸುತ್ತಿದ್ದ ಆಲ್ಟೋ ಹಾಗೂ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್, ಆ ಎರಡೂ […] The post ಬ್ರೇಕ್ ವಿಫಲ:ಉತ್ತರ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ: 11 ಮಂದಿ ಸಜೀವ ದಹನ first appeared on Vistara News .
West Bengal ಮೊದಲ ಹಂತದ ಮತದಾನ| ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ 294 ಅಭ್ಯರ್ಥಿಗಳು
ಮಹಿಳೆಯರ ವಿರುದ್ಧದ ಪ್ರಕರಣಗಳು 98; ಮಹಿಳಾ ಅಭ್ಯರ್ಥಿಗಳು ಕೇವಲ 11%
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ
ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಹೇಳಿದರೆನ್ನಲಾದ ಮತ್ತು ಸಾಕಷ್ಟು ಬಾರಿ ಬಳಕೆಯಾದ ಒಂದು ಉಕ್ತಿ ಹೀಗಿದೆ: ‘‘ನೀವು ಕೆಲವರನ್ನು ಯಾವಾಗಲೂ ಮೂರ್ಖರನ್ನಾಗಿಸಬಹುದು ಮತ್ತು ಎಲ್ಲರನ್ನೂ ಕೆಲವೊಮ್ಮೆ ಮೂರ್ಖರನ್ನಾಗಿಸಬಹುದು, ಆದರೆ ಎಲ್ಲರನ್ನೂ ಯಾವಾಗಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.’’ ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಕಳೆದ ಒಂದು ದಶಕಕ್ಕೂ ಮಿಕ್ಕಿದ ತಮ್ಮ ಅಧಿಕಾರಾವಧಿಯಲ್ಲಿ ಸುಳ್ಳು ಮಾಡಿದರು ಮತ್ತು ಲಿಂಕನ್ ಮಾತುಗಳನ್ನು ಬಹುತೇಕ ಅಪ್ರಸ್ತುತಗೊಳಿಸಿದರು. ಇದು ಅರ್ಥವಾಗಬೇಕಾದರೆ ಇತ್ತೀಚೆಗಿನ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕೆಲವು ಹಿನ್ನೆಲೆ ಮತ್ತು ಬೆಳವಣಿಗೆಗಳನ್ನು ಪರಿಗಣಿಸಬೇಕು. 19.09.2023ರಂದು ಮಂಡಿಸಿದ ‘ಸಂವಿಧಾನದ (106ನೇ ತಿದ್ದುಪಡಿಯ) ಮಸೂದೆೆ’ಯ ಮೂಲಕ ಈಗಿರುವ ಸಂಸತ್ತು ಮತ್ತು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಗಳಲ್ಲಿ (ಕೇಂದ್ರ ಮತ್ತು ರಾಜ್ಯಗಳ ಮೇಲ್ಮನೆಗಳನ್ನು ಹೊರತುಪಡಿಸಿ) ಮಹಿಳಾ ಮೀಸಲಾತಿಯ ಕಾಯ್ದೆಯು ‘ನಾರೀಶಕ್ತಿ ವಂದನಾ ಅಧಿನಿಯಮ’ವೆಂಬ ಹೆಸರಿನಲ್ಲಿ ಅವಿರೋಧವಾಗಿ/ಒಮ್ಮತದಿಂದ ಸ್ವೀಕೃತವಾಯಿತು ಮತ್ತು 20.09.2023ರಂದು ವಿಧ್ಯುಕ್ತವಾಗಿ ಶಾಸನವಾಯಿತು. ಆದರೆ ಈ ಶಾಸನವನ್ನು ಮೋದಿ ಸರಕಾರವು 2024ರ ಚುನಾವಣೆಗೆ ಮೊದಲು ಜಾರಿ ಮಾಡಲೇ ಇಲ್ಲ. ಒಂದು ವೇಳೆ ಜಾರಿ ಮಾಡಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 180 ಮಹಿಳಾ ಸಂಸದರಿರುತ್ತಿದ್ದರು. ಸರಕಾರದ ಸುಳ್ಳುನಡೆಯಿಂದಾಗಿ ಹಾಗಾಗಲಿಲ್ಲ. ಈಗ ಲೋಕಸಭೆಯಲ್ಲಿ 74 ಅಂದರೆ ಶೇ. 14 ಮಹಿಳಾ ಸಂಸದರಿದ್ದಾರೆ. ಭಾಜಪ-240ರಲ್ಲಿ 31, ಕಾಂಗ್ರೆಸ್-99ರಲ್ಲಿ 13, ಟಿಎಂಸಿ-29ರಲ್ಲಿ 11, ಎಸ್ಪಿ-37ರಲ್ಲಿ 5, ಡಿಎಂಕೆ-22ರಲ್ಲಿ 3, ಮುಖ್ಯವಾದವು; ಇತರ ಅಂದರೆ ಜೆಡಿಯು-2. ಎಲ್ಜೆಪಿ-2, ಟಿಡಿಪಿ, ಎನ್ಸಿಪಿ-ಶರದ್ ಪವಾರ್, ಆರ್ಜೆಡಿ, ಜೆಎಂಎಂ ತಲಾ 1 ಮಹಿಳಾ ಸಂಸದರನ್ನು ಹೊಂದಿವೆ. ರಾಜ್ಯವೊಂದರ ಪ್ರಾತಿನಿಧ್ಯವನ್ನು ಗಮನಿಸಿದರೆ ಪಶ್ಚಿಮ ಬಂಗಾಳವು 11 ಮಹಿಳಾ ಸಂಸದರನ್ನು ಮತ್ತು 1/3ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ನೀಡಿದ ಹೆಗ್ಗಳಿಕೆಯನ್ನು ಪಡೆದಿದೆ. (ಆದರೂ ಯತ್ರ ನಾರ್ಯಸ್ತು ಪೂಜ್ಯಂತೇ ಮಾತ್ರ ಪುಸ್ತಕದೊಳಗೇ ಉಳಿದಿದೆ!) ಪ್ರಧಾನಿಯವರ ಕೂಗೊಂದು; ನಡೆಯೊಂದು. ವಿಶೇಷವೆಂದರೆ ಪ್ರತಿಪಕ್ಷಗಳೂ ಇದನ್ನು ಕಳೆದ ಮಹಾಚುನಾವಣೆಯಲ್ಲಿ ಮತದಾರರ ವಿಶೇಷವಾಗಿ ಮಹಿಳೆಯರ ಗಮನಕ್ಕೆ ತರಲೇ ಇಲ್ಲ. ಒಂದು ವೇಳೆ ಇದನ್ನೊಂದು ಚುನಾವಣಾ ವಿಷಯವನ್ನಾಗಿಸಿದ್ದರೆ ಆಡಳಿತ ಪಕ್ಷ ಮತ್ತು ಮತದಾರರ ಪ್ರತಿಕ್ರಿಯೆಯು ಹೇಗಿರುತ್ತಿತ್ತೆಂಬ ಬಗ್ಗೆ ಕುತೂಹಲವಿತ್ತು. ದುರದೃಷ್ಟವೆಂದರೆ ಯಾವ ಪಕ್ಷವೂ ಈ ತಿದ್ದುಪಡಿ ಕಾಯ್ದೆಯನ್ನು ತಾತ್ವಿಕವಾಗಿಯೂ ಅನುಸರಿಸಲಿಲ್ಲ. ಅನುಸರಿಸಿದ್ದರೆ ಸಾಂಕೇತಿಕವಾಗಿಯಾದರೂ ತಮ್ಮ ಅಭ್ಯರ್ಥಿಗಳಲ್ಲಿ ಮೂರನೇ ಒಂದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದವು. ಇಂತಹ ವಿರೋಧಾಭಾಸದ ದುರಂತಗಳು ಭಾರತೀಯ ಪ್ರಜಾಪ್ರಭುತ್ವದ ಸಹಜ ಲಕ್ಷಣಗಳು. ಈಚೆಗೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ಘೋಷಣೆೆಯಾಯಿತು. ಆಗಲೂ ಈ ಪ್ರಶ್ನೆ ಉದ್ಭವಿಸಲಿಲ್ಲ. ಆದರೆ ನಮ್ಮ ಪ್ರಧಾನಿ ದಾರಿತಪ್ಪಿಸುವ ಮತ್ತು ವಿಭಜನ ರಾಜಕಾರಣದಲ್ಲಿ ನಿಪುಣ. ಪ್ರತಿಪಕ್ಷಗಳನ್ನು ಟೀಕಿಸುವುದು ಅವರ ಕೈಲಾಸ ಕಾಯಕ, ಪ್ರತಿಪಕ್ಷಗಳ ರಾಜಕಾರಣಿಗಳನ್ನು ಸಾಧ್ಯವಾದರೆ ಖರೀದಿಸುವುದು, ಇಲ್ಲವೇ ತಮ್ಮ ನಿಯಂತ್ರಣದಲ್ಲಿರುವ ಈ.ಡಿ., ಸಿಬಿಐ, ಐಟಿ ಮುಂತಾದ ಕೇಂದ್ರಾಡಳಿತ ಸಂಸ್ಥೆಗಳ ಮೂಲಕ ತೊಂದರೆ ನೀಡಿ ಅವರನ್ನು ಬಗ್ಗಿಸಿ, ಬಾಗಿಸಿ, ತಮ್ಮವರನ್ನಾಗಿಸುವುದು ಅವರ ಆಡಳಿತದ ಕ್ರಮ. ಬಿಜೆಪಿಯೆಂದರೆ ಎಂತಹ ಕೊಚ್ಚೆಕೊಳೆಯನ್ನೂ ತೊಳೆಯುವ ಗಂಗೆಯಾಗಿಸಿದ್ದು ಅವರ ರಾಜಕೀಯ ಶ್ರಮ. ಬಹಳಷ್ಟು ಪ್ರತಿಪಕ್ಷ ರಾಜಕಾರಣಿಗಳು ಯಾವುದಾದರೊಂದು ಆರೋಪಕ್ಕೆ ಸಿಕ್ಕಾಗ ಗುದ್ದಾಡುವುದಕ್ಕಿಂತ ಶರಣಾಗುವುದು ಲೇಸೆಂದು ಅವರ ಜೊತೆಗೂಡುವುದು ಕಳೆದ ಒಂದು ದಶಕದ ದೃಶ್ಯಗಳು, (ಮಾಜಿ ಪ್ರಧಾನಿ ದೇವೇಗೌಡರೂ ಇದಕ್ಕೆ ಬಲಿಯಾಗಿದ್ದಾರೆ!) ಆದರೂ ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್, ಟಿಎಂಸಿ, ಆಪ್, ಡಿಎಂಕೆ, ಎಡಪಕ್ಷಗಳನ್ನು ಹಣಿಯುವಲ್ಲಿ ಮೋದಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ. ಕಾಂಗ್ರೆಸ್ ಎಂದರೆ ಹಾವು ಮೆಟ್ಟಿದಂತೆ ವರ್ತಿಸುವುದು ಅವರ ಚಾತುರ್ಯ. ಆಯಾಯ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಇನ್ನೊಮ್ಮೆ ಹುಟ್ಟಿದರೆ ಇಲ್ಲೇ ಹುಟ್ಟಬೇಕು ಎನ್ನುವುದು ಅಥವಾ ಆಯಾಯ ಆಡಳಿತದ ಕುರಿತು ಕುತ್ಸಿತ ಸಂಶಯಗಳನ್ನು ಹುಟ್ಟುಹಾಕುವುದು, ವಿನಾಕಾರಣ ಅಳುವುದು ಮತ್ತು ಆ ಮೂಲಕ ಅನುಕಂಪದ ಅಲೆಗಳ ಮೇಲೆ ತೇಲಾಡುವುದು ಅವರ ತಂತ್ರಗಾರಿಕೆ, ಶೈಲಿ. ಈ ರೀತಿಯಲ್ಲಿ ಮಾತನಾಡುವವರನ್ನು ನಂಬುವುದು ಈ ದೇಶದ ಬಹುಸಂಖ್ಯಾತರ ಹುಟ್ಟುಗುಣ. ರಾಜಕಾರಣದಲ್ಲಿ ಯಾರು ಯಾರನ್ನು ಯಾಕೆ ನಂಬುತ್ತಾರೆಂಬ ಬಗ್ಗೆ ಕಾರಣ ಹುಡುಕಬಾರದು. ಅಂತೂ ಲಿಂಕನ್ ಸೋತರು. ಇದ್ದಕ್ಕಿದ್ದಂತೆಯೇ ಜ್ಞಾನೋದಯವಾದಂತೆ ಮೋದಿ ಸರಕಾರವು ಒಂದು ವಿಶೇಷ ಅಧಿವೇಶನವನ್ನು ಕರೆದು 16/4/2026ರಂದು ಸಂವಿಧಾನ (131ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಿತು. ಈ ಮಸೂದೆಯನ್ನು ಮೋದಿ ಸರಕಾರ ಮಹಿಳಾ ಮೀಸಲಾತಿ ಮಸೂದೆಯೆಂದು ಬೊಗಳೆ ಬಿಟ್ಟಿತಾದರೂ ಅದು ಇನ್ನೊಂದು ಅಪಾಯಕಾರಿ ವಿಚಾರವನ್ನೊಳಗೊಂಡಿತ್ತು. ಅದರಂತೆ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ 850ನ್ನು ಮೀರದಂತೆ ಏರಿಸುವುದನ್ನು ಸೇರಿಸಿತ್ತು ಮತ್ತು ಅದರ ಆಧಾರದಲ್ಲಿ 2029ರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು ಉದ್ದೇಶಿಸಿತು. ಇದು ವಿಳಂಬ ತಂತ್ರವೂ ಹೌದು; ಬಿಜೆಪಿಯ ಪ್ರಭಾವವಿರುವ ಉತ್ತರಭಾರತದ ಸ್ಥಾನಗಳನ್ನು ಗಣನೀಯವಾಗಿ ಹೆಚ್ಚಿಸುವ ಕುತಂತ್ರವೂ ಹೌದು. ಕೇಂದ್ರ ಸರಕಾರವು ಈ ಮಸೂದೆಯನ್ನು ಮಹಿಳಾ ಮೀಸಲಾತಿಯ ಸುವರ್ಣ ವರ್ಷವೆಂಬಂತೆ ಪ್ರಚಾರ ಮಾಡಿತು. ಈ ವಂಚನೆ ಪ್ರಜ್ಞಾವಂತ ಮತದಾರರಿಗೆ ಮಾತ್ರ ಗೊತ್ತಾಗುವಂತಿತ್ತು. ಈ ಹಿಂದೆ 2023ರಲ್ಲಿ ಸ್ವೀಕೃತವಾದ ತಿದ್ದುಪಡಿಯನ್ನು ಜಾರಿಗೆ ತರುವುದಕ್ಕೆ ಏನು ಅಡ್ಡಿಯೆಂದು ಕೇಂದ್ರ ಸರಕಾರದ ಬೆಂಬಲಿಗರು ಕೇಳಲು ಅಸಮರ್ಥರಾದರೋ ಪಕ್ಷಪ್ರೀತಿಯೋ ಅಂತೂ ಸುಮ್ಮನಿದ್ದರು. ಮಾಮೂಲಿನಂತೆ ಗೋದಿಮಾಧ್ಯಮಗಳು ಕೇಂದ್ರ ಸರಕಾರದ ಪರವಾಗಿ ತುತ್ತೂರಿ ಊದಿದವು. ಈ ಮಸೂದೆಯ ಚರ್ಚೆಗೆ ಕೇವಲ ಒಂದು ದಿನ ಮಾತ್ರ ನಿಗದಿಪಡಿಸಿ 17/04/2026ರಂದು ಮತದಾನಕ್ಕೆ ಒಡ್ಡಲಾಯಿತು. ನಾರೀ ಸೆರಗಿನ ಹಿಂದೆ ಪುನರ್ವಿಂಗಡಣೆಯ ನೆಪದಲ್ಲಿ ತನ್ನ ಸ್ಥಾನಗಳನ್ನು ವೃದ್ಧಿಸುವುದು ಮೋದಿಪಕ್ಷದ ಹುನ್ನಾರವಾಗಿತ್ತು. ಆದರೆ ಇದರ ದುರುದ್ದೇಶ ಪ್ರತಿಪಕ್ಷಗಳಿಗೆ ಅರಿವಾದ್ದರಿಂದ ಅವು ಬೆಂಬಲವನ್ನು ಕ್ರೋಡೀಕರಿಸಿ ವಿರೋಧಿಸಿದ್ದರಿಂದ ಅದು ಸಾಂವಿಧಾನಿಕ ತಿದ್ದುಪಡಿಗೆ ಬೇಕಾದ 2/3 ಬಹುಮತವನ್ನು ಪಡೆಯಲು ವಿಫಲವಾಗಿ (298-230) ಸೋತಿತು. ಈ ಸಂದರ್ಭದಲ್ಲಿ 543 ಸದಸ್ಯರ ಲೋಕಸಭೆಯಲ್ಲಿ 528 ಮಂದಿ ಹಾಜರಿದ್ದರು. ಒಂದು ವೇಳೆ ಎಲ್ಲರೂ ಹಾಜರಿದ್ದರೂ ಮಸೂದೆಗೆ ಸೋಲಾಗುತ್ತಿತ್ತು. ಸಾಂವಿಧಾನಿಕ ತಿದ್ದುಪಡಿಯೊಂದು ಲೋಕಸಭೆಯಲ್ಲಿ ಸೋಲುವುದೆಂದರೆ ಸರಕಾರಕ್ಕೆ ಸೋಲೆಂದೇ ಅರ್ಥ. ಈ ಸೋಲಿನ ಬಗ್ಗೆ ಮೋದಿ ಸರಕಾರಕ್ಕೆ ಅರಿವಿತ್ತು. ಹಾಗಾದರೆ ಮಸೂದೆಯನ್ನು ಮಂಡಿಸಿದರೇಕೆ? ಕೆಲವು ಸಾಧ್ಯತೆಗಳಿವೆ: ಒಂದು, ಪ್ರತಿಪಕ್ಷಗಳ ಸದಸ್ಯರು ಒಟ್ಟಾಗದೆ ಕೆಲವರು ರಾಜ್ಯ ಚುನಾವಣೆಗಳಲ್ಲಿ ಭಾಗಿಯಾಗಿ, ಇನ್ನು ಕೆಲವರು ಗೈರುಹಾಜರಾಗಿ, ಹಾಜರಿದ್ದವರ ಪೈಕಿ 2/3 ಬಹುಮತ ಸಿಕ್ಕಲೂಬಹುದು: ಎರಡು, ಕೆಲವಾದರೂ ಸದಸ್ಯರಿಗೆ ಈ ಮಸೂದೆಯ ಆಂತರ್ಯದ ಅರಿವಿಲ್ಲದಿರಬಹುದು ಅಥವಾ ಮಸೂದೆಯನ್ನು ವಿರೋಧಿಸಿದರೆ ಅದು ಮಹಿಳಾ ವಿರೋಧಿ ನಿಲುವೆಂಬ ಅಂಜಿಕೆಯಿಂದ ಮಸೂದೆಯನ್ನು ಬೆಂಬಲಿಸಬಹುದು; ಮೂರು, ಒಂದು ವೇಳೆ ಮಸೂದೆಯು ಗೆಲುವನ್ನು ಪಡೆಯಲು ವಿಫಲವಾದರೆ ಅದು ಮಹಿಳಾ ವಿರೋಧಿ ನಿಲುವಿನಿಂದ ಎಂದು ಪ್ರಚಾರ ಮಾಡಿ ದೇಶದ ತುಂಬ ಇರುವ ಹುಂಬ ಮತದಾರರ ಅನುಕಂಪವನ್ನು ಪಡೆದು ಅದನ್ನು ಸದ್ಯದ ವಿಧಾನಸಭಾ ಚುನಾವಣೆಯಲ್ಲಿ ನಗದೀಕರಿಸಬಹುದು. ಮೋದಿ ಸರಕಾರಕ್ಕೆ ಮೊದಲ ಎರಡು ಸಾಧ್ಯತೆಗಳ ಅದೃಷ್ಟವಿರಲಿಲ್ಲ. ಆದ್ದರಿಂದ ಮೋದಿ 18/4/2026ರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಒಂದು ಪ್ರಸಾರ ಭಾಷಣ ಮಾಡಿದರು. ಇದು ನಿಜಕ್ಕೂ ಪ್ರಸಾರ ಭಾಷಣವಾಗದೆ ಪ್ರಚಾರ ಭಾಷಣವಾಗಿತ್ತು. ಈಗಾಗಲೇ ಕೆಲವಾದರೂ ಮಾಧ್ಯಮಗಳಲ್ಲಿ ವರದಿಯಾದಂತೆ ಇಂತಹ ಪ್ರಸಾರ ಭಾಷಣಗಳು ವಿಶೇಷ ಸಂದರ್ಭಗಳಲ್ಲಿ ದೇಶದ ವಿಕಾಸಕ್ಕೆ ಮತ್ತು ಆಕಸ್ಮಿಕ ಆಘಾತಗಳನ್ನೆದುರಿಸಲು ಜನರಿಗೆ ವಿವರಣೆ, ಸಹಾಯ ಮತ್ತು ಭರವಸೆಯನ್ನು ನೀಡಲು ಆಡಳಿತಕ್ಕೆ ಇರುವ ಸೌಲಭ್ಯಗಳು. ಇದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಧಾನಿಗಾಗಲಿ, ರಾಷ್ಟ್ರಪತಿಗಾಗಲಿ ಅಧಿಕಾರವಿಲ್ಲ. ಹಾಗೆಯೇ ಇದು ಇತರರನ್ನು ದೂಷಿಸಲು ಮತ್ತು ರಾಜಕೀಯ ಸ್ವಾರ್ಥವನ್ನು ಸಾಧಿಸಲು ಇರುವ ಸಂದರ್ಭ-ಅವಕಾಶವಲ್ಲ. ಆದರೆ ಪ್ರಧಾನಿ ಇದನ್ನು ಮಸೂದೆಯ ಕುರಿತು ಮತದಾರರ ದಾರಿ ತಪ್ಪಿಸಲು ಮತ್ತು ಪ್ರತಿಪಕ್ಷಗಳನ್ನು ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಬಳಸಿಕೊಂಡರು. (ಪ್ರಧಾನಿ ತನ್ನ ಮನ್ ಕೀ ಬಾತ್ನ್ನೂ ಇದಕ್ಕೇ ಬಳಸಿಕೊಂಡಿದ್ದಾರೆ!) ಪ್ರಜ್ಞಾವಂತರಿಗೆ ಪ್ರಧಾನಿಯ ಈ ಹಾದಿ ಗೊತ್ತಿತ್ತು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ದೇಶ ಒಟ್ಟಾಗಿರಬೇಕಾದ ವೇದಿಕೆಗಳಲ್ಲೂ ಪ್ರಧಾನಿ ಮಾತ್ರವಲ್ಲ ರಾಷ್ಟ್ರಪತಿಯೂ 2014ರಿಂದ ದೇಶವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ರಾಜ್ಯಗಳ ಚುನಾವಣೆ ನಡೆಯುತ್ತಿರುವಾಗ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಸಂದರ್ಭದಲ್ಲಿ ಪ್ರಧಾನಿ ಈ ರೀತಿಯ ಸ್ವಾರ್ಥ ರಾಜಕೀಯ ಭಾಷಣವನ್ನು ಮಾಡುವುದು ಅಪ್ಪಟ ಅಕ್ರಮ. ಈ ಸಂದರ್ಭಕ್ಕೆ ಇನ್ನೂ ಒಂದು ಮುಖವಿದೆ: ಕೇಂದ್ರ ಸರಕಾರದ ಅಂಗ ಸಂಸ್ಥೆಯಾದರೂ ಆಕಾಶವಾಣಿಯು ಕಾಗದದಲ್ಲಾದರೂ ಸ್ವಾಯತ್ತವೆಂಬ ಮುಖವಾಡವನ್ನು ಧರಿಸಿದೆ/ಹೊದ್ದಿದೆ. ಅದು ಇಂತಹ ಭಾಷಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನೀಡಿದರೂ ಅದನ್ನು ಉತ್ತರಿಸಲು ಪ್ರತಿಪಕ್ಷ ನಾಯಕರಿಗೂ ಅವಕಾಶ ನೀಡಬೇಕು. ಆದರೆ ಈಗಿನ ಆಕಾಶವಾಣಿಯನ್ನು ಗಮನಿಸಿದರೆ ಅದು ತನ್ನತನವನ್ನು ಕಳೆದುಕೊಂಡಿರುವುದು ಮತ್ತು ಸರಕಾರದ ಗುಲಾಮನಾಗಿರುವುದು ಮಾತ್ರವಲ್ಲ ಆಡಳಿತ ಪಕ್ಷದ ಮುಖವಾಣಿಯಾಗಿರುವುದೂ ಸ್ಪಷ್ಟವಾಗಿದೆ. ಪ್ರಧಾನಿ ದೇಶದಲ್ಲಿ ತಾನೊಬ್ಬ ನಾರೀರಕ್ಷಕನ ಪೋಸ್ನಲ್ಲಿ ಮಾತನಾಡಿ ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸನ್ನು ದೂಷಿಸಿದರು. ಎಷ್ಟು ಬಾರಿ ಕಾಂಗ್ರೆಸ್ನ ಹೆಸರನ್ನು ಹೇಳಿದರೆಂಬುದನ್ನು ಹಲವರು ಲೆಕ್ಕ ಹಾಕಿದರು. ತಮಾಷೆಯೆಂದರೆ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವ ಘೋಷಣೆ ಹಾಕಿ ತನ್ನ ಅಧಿಕಾರವನ್ನು ಆರಂಭಿಸಿದ ಪ್ರಧಾನಿ ಮೋದಿ ಈಗ ಕಾಂಗ್ರೆಸನ್ನು ಮಟ್ಟಹಾಕಲು ಏದುಸಿರು ಬಿಡುತ್ತಿದ್ದಾರೆ. ಕಾಂಗ್ರೆಸ್ ತನ್ನಪಾಡಿಗೆ ತಾನು ನಿತ್ರಾಣವಾಗುತ್ತ ಹೋಗುತ್ತಿದ್ದರೂ ಅದಕ್ಕೆ ಜೀವರಸ ನೀಡಿ ಶಕ್ತವಾಗಿಸಿದ ಕೀರ್ತಿ ಮೋದಿಯವರಿಗೇ ಸಲ್ಲುತ್ತದೆ. ಕಂಸನ ಕನಸಲ್ಲಿ ಕೃಷ್ಣ ಬಂದಂತೆ ಮೋದಿಯವರಿಗೆ ರಾಹುಲ್ ಗಾಂಧಿ ಬರುವ ಚಿಹ್ನೆಗಳಿವೆ. ತನ್ಮಧ್ಯೆ ಸಂವಿಧಾನದ 106ನೇ ತಿದ್ದುಪಡಿಯನ್ನು ಜಾರಿಮಾಡಲು ಬೇಕಾದ ಆದೇಶವನ್ನು ಈ ವರೆಗೂ ಪ್ರಕಟಿಸದೆ 3 ವರ್ಷಗಳ ಬಳಿಕ ಮೊನ್ನೆ ಎಪ್ರಿಲ್ 16ರಂದು ಪ್ರಕಟಿಸಿದೆ. ಇದನ್ನು ಮೊದಲೇ ಯಾಕೆ ಮಾಡಲಿಲ್ಲವೆಂಬುದನ್ನು ಪ್ರಧಾನಿ ತನ್ನ ಭಾಷಣದಲ್ಲಿ ದೇಶಕ್ಕೆ ಹೇಳಬೇಕಾಗಿತ್ತು. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಮಹಿಳಾ ಮೀಸಲಾತಿಯನ್ನು ಎಷ್ಟು ಸಾಧ್ಯವೋ ಅಷ್ಟೂ ವಿಳಂಬಿಸಲು ಮೋದಿ ಸರಕಾರ ಹಾಕಿಕೊಂಡ ಸಂಚು ವಿಫಲವಾದದ್ದು ಮಾತ್ರವಲ್ಲ, ಬಯಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ. ಈ ದೇಶದ ಮತದಾರರನ್ನು ಮತ್ತು ಒಟ್ಟಿನಲ್ಲಿ ಜನರನ್ನು ಗಮನಿಸಿದರೆ ಕನ್ನಡದ ಕವಿ ನಿಸಾರ್ ಅಹಮದ್ ಬರೆದ ‘ಕುರಿಗಳು ಸಾರ್, ಕುರಿಗಳು’ ಕವಿತೆ ನೆನಪಾಗದಿರದು. ಮೋದಿಯವರು ತನ್ನ ಅವರೋಹಣಗತಿಯಲ್ಲಿದ್ದಾರೆ. ದುರಂತವೆಂದರೆ ಅವರು ಸಮರ್ಥರಾಗಿದ್ದಾಗಲೇ ಕಿರೀಟವನ್ನು ಇನ್ನೊಬ್ಬರ ಹೆಗಲಿಗಿರಿಸಿದ್ದರೆ ತನ್ನ ಪಕ್ಷವನ್ನಾದರೂ ಉಳಿಸಿಕೊಳ್ಳಬಹುದಿತ್ತು. ಆದರೆ ಅವರು ಕೋತಿ ತಾನು ಕೆಟ್ಟದ್ದಲ್ಲದೆ ಕಾಡನ್ನೂ ಕೆಡಿಸಿತು ಎಂಬ ಹಾಗೆ ತನ್ನ ಅಧಿಕಾರವನ್ನು ಮತ್ತು ತನ್ನ ಪಕ್ಷವನ್ನು ತನ್ನೊಂದಿಗೇ ರಾಜಕೀಯದ, ಅಧಿಕಾರದ, ಕಾಲಪ್ರವಾಹದಲ್ಲಿ ಒಯ್ಯುತ್ತಾರೆಂದು ಅನ್ನಿಸುತ್ತದೆ. ಎಲ್ಲ ಸರ್ವಾಧಿಕಾರ/ರಿಗಳೂ ಕೊನೆಯಾಗುವುದು ಹೀಗೆಯೇ. ಪ್ರಜಾಪ್ರಭುತ್ವದ, ಪ್ರಚಾರದ ಹೊದಿಕೆ ಕಾಲದ ಬಿರುಗಾಳಿಯೆದುರು ನಿಲ್ಲುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆಯನ್ನು ಮಹಿಳಾ ಮೀಸಲಾತಿಯ ಹೊದಿಕೆೆಯಡಿ ಅಡಗಿಸಿದರೆ ಅದು ತನ್ನನ್ನು ಧರಿಸಿದವನನ್ನು ಬೆತ್ತಲೆ ಮಾಡುತ್ತದೆ ಹಾಗೂ ಮೆಫಿಸ್ಟೋಫಿಲಿಸ್ ಫಾಸ್ಟಸ್ನನ್ನು ಎಳೆದೊಯ್ಯುವ ದೃಶ್ಯವನ್ನು ತೆರೆಯಲ್ಲಿ ಮೂಡಿಸುತ್ತದೆ.
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್ಲೈನ್’: ಸಿದ್ದರಾಮಯ್ಯ ಕುರ್ಚಿ ಸೇಫ್ ಆಗುತ್ತಾ, ಡಿಕೆಶಿ ಕನಸು ನನಸಾಗುತ್ತಾ?
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್ಲೈನ್’ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ನಡೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ ಸಂಪುಟ ಪುನಾರಚನೆ ಕುರಿತಾಗಿ ಬೇಡಿಕೆ ತೀವ್ರಗೊಳ್ಳುತ್ತಿವೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಸೇಫ್ ಆಗುತ್ತಾ? ಅಥವಾ ಡಿಕೆ ಶಿವಕುಮಾರ್ ಅವರ ಆಸೆ ಈಡೇರುತ್ತಾ? ಎಂಬ ಕುತೂಹಲ ತೀವ್ರಗೊಳ್ಳುತ್ತಿದೆ. ಸದ್ಯ ಸೈಲೆಂಟಾಗಿರುವ ಶಾಸಕರು ಸಂಪುಟಕ್ಕೆ ಸೇರ್ಪಡೆ ಅಗಲು ಒತ್ತಡ ಹೇರುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ನಿಮಗಾಗುತ್ತಿರುವ ಗೊಂದಲವನ್ನು, ಒತ್ತಡವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ ಎಂದನಿಸಿದ್ರೆ, ಅಂಗೈಯಲ್ಲಿರುವ ಮೊಬೈಲ್ ಸಹಾಯದಿಂದ ಇದಕ್ಕೆ ಪರಿಹಾರ ಸಿಗಲಿದೆ. ಹೌದು ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ಮೈಂಡ್ ನೋಟ್ ಎಂಬ ಆಪ್ ಹಲವು ರೀತಿಯಲ್ಲಿ ಸಹಕಾರಿ ಆಗಲಿದೆ.
Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಕುಟ್ಟ ಗ್ರಾಮದ 'ದೇವಿ ವಿಲ್ಲಾ ಹೋಂ ಸ್ಟೇ ಪರವಾನಿಗೆ ರದ್ದು
ಮಡಿಕೇರಿ, ಎ.23: ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಆರೋಪಿತ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇಯ ಪರವಾನಿಗೆಯನ್ನು ರದ್ದುಗೊಳಿಸಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರು ದೇವಿ ವಿಲ್ಲಾ ಹೋಂ ಸ್ಟೇ ನಡೆಸಲು ನೀಡಲಾಗಿದ್ದ ಪರವಾನಿಗೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದೇವಿ ವಿಲ್ಲಾ ಹೋಂ ಸ್ಟೇ ಮಾಲಕ ಸೇರಿದಂತೆ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕುಟ್ಟ ಗ್ರಾಮದ ಪಿ.ಎ. ಪೊನ್ನಪ್ಪ ಎಂಬವರಿಗೆ ದೇವಿ ಎಲ್ಲಾ ಹೋಂ ಸ್ಟೇ ನಡೆಸಲು 2024ರ ಜನವರಿ 15ರಂದು ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ನೀಡಲಾಗಿತ್ತು. ಕಳೆದ ಎ.12ರಂದು ಈ ಹೋಂ ಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಕುಟ್ಟ ಪೊಲೀಸರು ಹೋಂ ಸ್ಪೇ ಮಾಲಕ ಹಾಗೂ ನೌಕರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೋಂ ಸ್ಟೇ ಪರವಾನಿಯನ್ನು ರದ್ದುಗೊಳಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಸೋಮಶೇಖರ್ ಪರವಾನಿಗೆ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಇರಾನ್ ಮೇಲಿನ ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಗೆ ಟ್ರಂಪ್ ಮನವೊಲಿಸಿದ್ದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಂದು ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಯುದ್ಧದ ಕುರಿತು ಟ್ರಂಪ್ ಅವರಿಗಿಂತ ಮೊದಲೇ ಅಮೆರಿಕಾದ 3 ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್, ಒಬಾಮ್ ಹಾಗೂ ಜೋ ಬೈಡನ್ ಅವರ ಕಾಲದಲ್ಲೂ ನೆತನ್ಯಾಹು ಇದೇ ಪ್ರಸ್ತಾಪವನ್ನಿಟ್ಟಿದ್ದರು. ಆದರೆ, ಇದಕ್ಕೆ ಅವರ್ಯಾರು ಒಪ್ಪಿಗೆ ನೀಡಿಲ್ಲ ಎಂದು USನ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಬಹಿರಂಗ ಪಡಿಸಿದ್ದಾರೆ. ಇದು ಸದ್ಯ ನಡೆಯುತ್ತಿರುವ ಚರ್ಚೆಗಳಿಗೆ ಪೂರಕವಾಗುವಂತಿದೆ.
ಆಹಾ! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೇನಾಧ್ಯಕ್ಷ ಜನರಲ್ ಅಸಿಮ್ ಮುನೀರ್ ಅವರನ್ನು ಹೊಗಳಿದ್ದೇ ಹೊಗಳಿದ್ದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಕೇವಲ ಇವರಿಬ್ಬರಿಂದಲೇ ಸಾಧ್ಯ ಎಂಬುವಷ್ಟರ ಮಟ್ಟಿಗೆ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನ ನಾಯಕರು ಕೂಡ ಬೆಳಗ್ಗೆಂದು ನೀಟಾಗಿ ಡ್ರೆಸ್ ಮಾಡಿಕೊಂಡು, ಕ್ಯಾಮರಾಗಳ ಮುಂದೆ ಶಾಂತಿದೂತರ ರೀತಿ ಪೋಸ್ ಕೊಡುತ್ತಿದ್ದಾರೆ. ಹಾಗಿದ್ದರೆ ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ? ಅಮೆರಿಕ-ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆ ಪಾತ್ರದಲ್ಲಿ ಅದೆಷ್ಟು ಸತ್ಯಾಂಶವಿದೆ? ಇಲ್ಲಿದೆ ನೋಡಿ ವಿಶ್ಲೇಷಣೆ.
ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್! ಪೂರೈಕೆ ಕಟ್, ದರ ಡಬಲ್ –ಕಂಗಾಲಾದ ಗ್ರಾಹಕ
ಬೇಸಿಗೆಯ ತೀವ್ರ ಶಾಖ ಮತ್ತು ಬಿಸಿಗಾಳಿಯ ನಡುವೆ ದೇಹವನ್ನು ತಂಪು ಮಾಡಿಕೊಳ್ಳಲು ಬಯಸುವ ಜನರಿಗೆ ನಿಂಬೆಹಣ್ಣಿನ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ. ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆಹಣ್ಣಿನ ಬೆಲೆ ಬರೋಬ್ಬರಿ ₹250ರ ಗಡಿಯನ್ನು ದಾಟಿದ್ದು, ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಪೂರೈಕೆಯಾಗುತ್ತಿದ್ದ ನಿಂಬೆಹಣ್ಣಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೇವಲ ಒಂದು ತಿಂಗಳ ಹಿಂದೆ ಸಗಟು […] The post ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್! ಪೂರೈಕೆ ಕಟ್, ದರ ಡಬಲ್ – ಕಂಗಾಲಾದ ಗ್ರಾಹಕ first appeared on Vistara News .
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ; ಮತ ಚಲಾಯಿಸಿದ ಸುವೇಂದು ಅಧಿಕಾರಿ
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು. ರಾಜ್ಯದ 16 ಜಿಲ್ಲೆಗಳ ವ್ಯಾಪ್ತಿಯ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 3.60 ಕೋಟಿ ಮತದಾರರು 1,478 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಉತ್ತರ ಬಂಗಾಳದ ಎಂಟು ಹಾಗೂ ದಕ್ಷಿಣ ಬಂಗಾಳದ ಎಂಟು ಜಿಲ್ಲೆಗಳು ಈ ಹಂತದಲ್ಲಿ ಒಳಗೊಂಡಿವೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ನಡೆಯುತ್ತಿರುವ ಈ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಸುಮಾರು 12 ಶೇಕಡಾ ಕಡಿತವಾಗಿದೆ. ಭದ್ರತೆಗಾಗಿ ಚುನಾವಣಾ ಆಯೋಗವು ದಾಖಲೆಯ 2,450 ಕೇಂದ್ರ ಅರೆಸೈನಿಕ ಪಡೆಗಳ ತುಕಡಿಗಳನ್ನು ನಿಯೋಜಿಸಿದ್ದು, ಸುಮಾರು 2.5 ಲಕ್ಷ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ನಂದಿಗ್ರಾಮದಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ ಚಲಾಯಿಸಿದರು. “ರಾಜ್ಯದಲ್ಲಿ ಬದಲಾವಣೆ ಅಗತ್ಯ. ಆಡಳಿತವನ್ನು ಬಿಜೆಪಿ ಕೈಗೆ ನೀಡಬೇಕು. ಶಾಂತಿಯುತ ಮತದಾನ ನಡೆಯಲಿ” ಎಂದು ಹೇಳಿದರು. ಅಸನ್ಸೋಲ್ನಲ್ಲಿ ಮತದಾನ ಆರಂಭವಾಗುತ್ತಿದ್ದಂತೆಯೇ ಮತಗಟ್ಟೆಗಳ ಹೊರಗೆ ಮತದಾರರ ಉದ್ದನೆಯ ಸಾಲುಗಳು ಕಂಡುಬಂದವು. ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಮತ ಚಲಾಯಿಸಿದರು.
ರಾಯಚೂರಿನಲ್ಲಿ ಸುಡುಬಿಸಿಲು: ಪೊಲೀಸ್ ಶ್ವಾನಗಳಿಗೆ ಕೂಲರ್ ವ್ಯವಸ್ಥೆ!
ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಕಳೆದೊಂದು ತಿಂಗಳಿನಿಂದ ಬಿಸಿಲು ಧಗೆ ಜೋರಾಗಿದ್ದು, ಗರಿಷ್ಠ ತಾಪಮಾನ 42-44 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿದೆ. ಇದರಿಂದ ಜನರು, ಜಾನುವಾರುಗಳು ತತ್ತರಿಸಿ ಹೋಗಿವೆ. ಸಾಕು ಪ್ರಾಣಿಗಳನ್ನು ಮರಗಳ ನೆರಳಿನಲ್ಲಿ ಮಾಲಕರು ಕಟ್ಟಿ ಹಾಕಿ ಬಿಸಿಲ ಬೇಗೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ವಾನ ದಳಕ್ಕೂ ಕೂಲರ್ ಗಳ ವ್ಯವಸ್ಥೆ ಮಾಡಿ ತಂಪಾಗಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಬಿರುಬಿಸಿಲು ತಾಂಡವವಾಡುತ್ತಿದ್ದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ ದಳದಲ್ಲಿರುವ ಐದು ನಾಯಿಗಳಿದ್ದು, ಅವುಗಳ ಕೊಠಡಿಗಳಿಗೆ ಕೂಲರ್ ಸೌಲಭ್ಯ ಕಲ್ಪಿಸಿರುವ ಜತೆಗೆ ಆಹಾರ ಪದ್ದತಿಯಲ್ಲೂ ಬದಲಾವಣೆ ತರಲಾಗಿದೆ. ಶ್ವಾನಗಳ ಆಹಾರ ರೆಫ್ರಿಜರೇಟರ್ ನಲ್ಲಿ ಇಟ್ಟು ನೀಡಲಾಗುತ್ತಿದೆ. ಬಳ್ಳಾರಿಯಲ್ಲಿ 6, ಬೀದರ್ 4. ವಿಜಯನಗರ 2, ಕೊಪ್ಪಳ 4. ಕಲಬುರಗಿ 5, ರಾಯಚೂರಿನಲ್ಲಿ ಐದು ಸೇರಿ ರಾಜ್ಯದ ನಾನಾ ಜಿಲ್ಲೆಗಳ ಶ್ವಾನದಳದಲ್ಲಿ 270 ನಾಯಿಗಳಿವೆ. ಈ ಪೈಕಿ ಲ್ಯಾಬ್ರಡಾರ್ 98, ಬೆಳ್ಳಿಯಂ ಮೆಲೋನಿಸ್ 74, ಡಾಬರ್ ಮನ್ 61 ಮತ್ತು ಜರ್ಮನ್ ಶೆಫರ್ಡ್ 37 ನಾಯಿಗಳಿವೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ನೆರವಾಗುವ ಈ ನಾಯಿಗಳ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಈ ಬಾರಿ ತುಸು ಹೆಚ್ಚು ಮುತುವರ್ಜಿ ವಹಿಸಿದ್ದು ಕಾಣಬಹುದು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಶ್ವಾನದಳದ ಕಟ್ಟಡದಲ್ಲಿ ಸಿರಿ, ಲೂಸಿ, ರೀಟಾ, ಚೆರ್ರಿ, ಡಾರ್ಬಿ ಹೆಸರಿನ ಶ್ವಾನಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಐದು ಕೂಲರ್ ವ್ಯವಸ್ಥೆ ಮಾಡಲಾಗಿದೆ. ಲ್ಯಾಬ್ರಡಾರ್ ಬಲು ಸೂಕ್ಷ್ಮ ಮನ್, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೇವರ್ ತಳಿ ಸೇರಿ ಇತರ ನಾಯಿಗಳಿವೆ. ಲ್ಯಾಬ್ರಡಾರ್ ತಳಿ ಹೆಚ್ಚು ಉಷ್ಣಾಂಶ ತಡೆದುಕೊಳ್ಳದಷ್ಟು ಸೂಕ್ಷ್ಮವಾಗಿದೆ. ಲ್ಯಾಬ್ರಡಾರ್ ಸೇರಿ ಇತರ ನಾಯಿಗಳ ಆರೋಗ್ಯ ಕಾಪಾಡಲು ಕೂಲರ್ ಅಳವಡಿಸಿ, ದೇಹ ತಂಪುಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ನೀರಿನಾಂಶ ಇರುವ ಆಹಾರವನ್ನು ಈ ಶ್ವಾನಗಳಿಗೆ ನೀಡಲಾಗುತ್ತಿದೆ. ರಾಗಿ ಗಂಜಿ, ಮಜ್ಜಿಗೆ, ಎಳನೀರು, ಕೆಲವೆಡೆ ಸಬ್ಬಕ್ಕಿ, ಶ್ಯಾವಿಗೆ ಪಾಯಸ ನೀಡಲಾಗುತ್ತಿದೆ. ಬಿರುಬೇಸಿಗೆ ಹಿನ್ನೆಲೆ ಆಹಾರ ಮೆನುವಿನಲ್ಲಿ ಮಟನ್ ಪ್ರಮಾಣ ತಗ್ಗಿಸಲಾಗಿದೆ. ಪಶು ವೈದ್ಯರ ಸಲಹೆ ಮೇರೆಗೆ ತಣ್ಣೀರಿನಲ್ಲೇ ಸ್ನಾನ ಮಾಡಿಸಲಾಗುತ್ತಿದೆ. ಪೊಲೀಸ್ ಶ್ವಾನಗಳು ಸ್ಫೋಟಕ ವಸ್ತುಗಳ ಪತ್ತೆ, ಅಪರಾಧ ಪತ್ತೆಗೆ ತರಬೇತಿ ನೀಡಿ ಪರಿಣತಿ ಹೊಂದಿರುತ್ತವೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಪೊಲೀಸ್ ಸಿಬ್ಬಂದಿಗೆ ನೀಡುವ ಗೌರವ ಶ್ವಾನಗಳಿಗೂ ನೀಡಬೇಕು. ಮಾನವೀಯ ನೆಲೆಯಲ್ಲಿ ಅವುಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ. -ಅರುಣಾಂಗ್ಷುಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು
Tamil Nadu Assembly Election 2026: ದ್ರಾವಿಡ ರಾಜಕಾರಣದ ಭದ್ರಕೋಟೆ ತಮಿಳುನಾಡಿನಲ್ಲಿ ಈ ಬಾರಿ ಚುನಾವಣಾ ಕಣ ಹಿಂದೆಂದಿಗಿಂತಲೂ ಕುತೂಹಲ ಕೆರಳಿಸಿದೆ. ಅತಿರಥ ಮಹಾರಥರ ನಡುವೆ ಈ ಬಾರಿ ಸಿನಿಮಾ ರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಹೊಸ ಸಂಚಲನ ಮೂಡಿಸಿದೆ. ಹಾಗಾದ್ರೆ ಇವರಿಗೆ ಯಾವೆಲ್ಲ ಪಕ್ಷಗಳಿಂದ ತೀವ್ರ ಪೈಪೋಟಿ ಇದೆ ಎನ್ನುವ ಮಾಹಿತಿಯನ್ನು
KCET Exam 2026: ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ
ರಾಜ್ಯಾದ್ಯಂತ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET Exam 2026) ಇಂದಿನಿಂದ (ಏಪ್ರಿಲ್ 23) ಆರಂಭವಾಗಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಸೇರಿದಂತೆ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದು ಮಧ್ಯಾಹ್ನ 12ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಇಲಾಖೆಯಿಂದ ಅಧಿಕೃತ ಘೋಷಣೆ!
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತುರದಿಂದ ಕಾಯುತ್ತಿದ್ದ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 23, 2026) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 8.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಇಂದು ನಿರ್ಧಾರವಾಗಲಿದೆ. ಫಲಿತಾಂಶದ ನಂತರ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗಳಲ್ಲಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ಈ […] The post ಇಂದು ಮಧ್ಯಾಹ್ನ 12ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಇಲಾಖೆಯಿಂದ ಅಧಿಕೃತ ಘೋಷಣೆ! first appeared on Vistara News .
Kalaburagi | ಸಿಎಂ ಕಚೇರಿಯಿಂದ ಸ್ಪಂದನ: ಕುಸನೂರ ಹಾಸ್ಟೆಲ್ ಸಮಸ್ಯೆ ನಿವಾರಣೆಗೆ ಕ್ರಮ
ವಾರ್ತಾ ಭಾರತಿ ವರದಿ ಫಲಶ್ರುತಿ
ತಮಿಳುನಾಡಿನಲ್ಲಿ ಮತದಾನ ಹಬ್ಬ; ನಾಯಕರು, ಗಣ್ಯರಿಂದ ಹಕ್ಕಿನ ಚಲಾವಣೆ
ಮತ ಚಲಾಯಿಸಿದ ಸ್ಟಾಲಿನ್, ರಜನಿಕಾಂತ್, ವಿಜಯ್, ಇಪಿಎಸ್
Koppala | ಕನಕಗಿರಿಯಲ್ಲಿ ವಿದ್ಯುತ್ ಕಂಬದಲ್ಲಿ ಆಕಸ್ಮಿಕ ಬೆಂಕಿ
ಕನಕಗಿರಿ: ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಮಂಗಳವಾರ ರಾತ್ರಿ ವಿದ್ಯುತ್ ಕಂಬವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರು ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ರಾತ್ರಿ ಸುಮಾರು 10:20ರ ವೇಳೆಗೆ ವಾಲ್ಮೀಕಿ ವೃತ್ತದಲ್ಲಿರುವ ಹಣ್ಣಿನ ಅಂಗಡಿಗಳ ಮೇಲ್ಭಾಗದ ವಿದ್ಯುತ್ ಕಂಬದ ತಂತಿಗಳು ಪರಸ್ಪರ ತಗುಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮ ಕಂಬದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ನೀರು ಎರಚಿ ಬೆಂಕಿ ಹರಡದಂತೆ ಶ್ರಮಿಸಿದರು. ವಾಲ್ಮೀಕಿ ವೃತ್ತ ಅತಿ ಜನನಿಬಿಡ ಪ್ರದೇಶ. ಇಲ್ಲಿನ ಕಂಬಗಳ ಮೇಲೆ ಕೇಬಲ್, ಇಂಟರ್ ನೆಟ್ ವೈರ್ಗಳೆಲ್ಲಾ ಗೋಜಲಾಗಿವೆ. ಇವತ್ತು ಅನಾಹುತ ತಪ್ಪಿದೆ, ಆದರೆ ಇಲ್ಲಿ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಜೆಸ್ಕಾಂನವರು ಕೂಡಲೇ ಎಲ್ಲಾ ಕಂಬಗಳ ತಪಾಸಣೆ ನಡೆಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. -ನರಸಪ್ಪ ನಾಯಕ -ಸ್ಥಳೀಯ ನಿವಾಸಿ, ಕನಕಗಿರಿ
SSLC Result 2026: ಇಂದು ಮಧ್ಯಾಹ್ನ 12 ಗಂಟೆಗೆ ಎಸ್ಎಸ್ಎಲ್ಸಿ ಫಲಿತಾಂಶ, ಕ್ಷಣಗಣನೆ ಆರಂಭ
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ
Gold Rate Fall: ತೈಲ ಬೆಲೆ ಏರಿಕೆ ಪರಿಣಾಮ: ಚಿನ್ನದ ದರದಲ್ಲಿ ಭಾರಿ ಕುಸಿತ: ಬೆಳ್ಳಿ ದರವೂ ಇಳಿಕೆ
ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಯುದ್ಧದ ಸಂದರ್ಭದಲ್ಲಿ ಹೂಡಿಕೆದಾರರು ತೈಲ ಬೆಲೆಯತ್ತ ಮುಖ ಮಾಡಿರುವುದರಿಂದ ಚಿನ್ನ ಬೆಳ್ಳಿಯ ಬೆಲೆ ಇಳಿಕೆಯಾಗಿದೆ.
IPL 2026 : ಲಖನೌ ತಂಡಕ್ಕೆ ನಾಯಕನೇ ಸಮಸ್ಯೆ - ಪಂತ್, ಪೊರನ್ ಮೇಲೆ ಹೂಡಿದ 48 ಕೋಟಿ ನೀರಿನಲ್ಲಿ ಹೋಮ?
Pant and Pooran Poor Batting : ಹಾಲೀ ಐಪಿಎಲ್ ಸರಣಿಯಲ್ಲಿ ಕೆಲವರು ಪ್ರಚಂಡ ಫಾರಂನಲ್ಲಿದ್ದರೆ, ಒಂದಿಷ್ಟು ಆಟಗಾರರು ರನ್ ಬರ ಎದುರಿಸುತ್ತಿದ್ದಾರೆ. ಹಾಗಾಗಿ, ಇವರನ್ನು ಬಿಡ್ ಮಾಡಿದ ಮೊತ್ತ ಮತ್ತು ಅವರ ಆಟ, ಚರ್ಚೆಗೆ ಗ್ರಾಸವಾಗುತ್ತಿದೆ. ಅಂತಹ ಇಬ್ಬರು ಆಟಗಾರರು ಎಂದರೆ ರಿಷಬ್ ಪಂತ್ ಮತ್ತು ನಿಕೋಲಸ್ ಪೊರೆನ್. ಇಬ್ಬರೂ, ಲಖನೌ ತಂಡದ ಆಟಗಾರರಾಗಿದ್ದಾರೆ.
IPL 2026: ಚಾಹಲ್ ದಾಖಲೆ ಮುರಿದ ಜೋಫ್ರಾ ಆರ್ಚರ್
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೌಲರ್ ಜೋಫ್ರಾ ಆರ್ಚರ್, ಫ್ರಾಂಚೈಸಿ ಪರ ಅತಿಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ನಿರ್ಮಿಸಿದ್ದಾರೆ. ಕಡಿಮೆ ಸ್ಕೋರ್ನ ಪಂದ್ಯದಲ್ಲಿ ಕೇವಲ 20 ರನ್ ನೀಡಿ ಮೂರು ವಿಕೆಟ್ ಕಿತ್ತ ಜೋಫ್ರಾ ಆರ್ಚರ್, ರಾಜಸ್ಥಾನ ತಂಡದ 40 ರನ್ಗಳ ವಿಜಯದ ರೂವಾರಿ ಎನಿಸಿದರು. ರಾಜಸ್ಥಾನ ಪರ ಇದುವರೆಗೆ 68 ವಿಕೆಟ್ ಕಿತ್ತಿರುವ ಅವರು, ಯಜುವೇಂದ್ರ ಚಾಹಲ್ ಹೆಸರಿನಲ್ಲಿದ್ದ 66 ವಿಕೆಟ್ಗಳ ದಾಖಲೆಯನ್ನು ಮುರಿದರು. ಸಿದ್ಧಾರ್ಥ ತ್ರಿವೇದಿ (65), ಶೇನ್ ವಾಟ್ಸನ್ (61) ಮತ್ತು ಶೇನ್ ವಾರ್ನ್ (57) ಅತಿಹೆಚ್ಚು ವಿಕೆಟ್ ಪಡೆದ ಇತರ ಬೌಲರ್ಗಳು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಕೇವಲ 159 ರನ್ಗಳನ್ನು ಕಲೆಹಾಕಿದರೂ, ಬೌಲರ್ಗಳು ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. 18 ಓವರ್ಗಳಲ್ಲಿ ಕೇವಲ 119 ರನ್ಗಳಿಗೆ ಲಕ್ನೋ ಆಲ್ಔಟ್ ಆಯಿತು. ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಅತಿಕಡಿಮೆ ರನ್ ಗಳಿಸಿ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಯಿತು.
ತೃತೀಯ ಭಾಷೆಗೆ ಅಂಕ: ಮುಗಿಯದ ಗೊಂದಲ
ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮಕ್ಕಳಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪವಾಗಿದೆ. ಪರೀಕ್ಷೆ ನಡೆಯುತ್ತಿರುವ ಹೊತ್ತಿಗೇ ಸರಕಾರ ತೃತೀಯ ಭಾಷೆಯ ಕುರಿತಂತೆ ಮಹತ್ತರ ನಿರ್ಧಾರಕ್ಕೆ ಬಂತು. ಎಸೆಸೆಲ್ಲಿಯಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಬದಲಿಗೆ ಗ್ರೇಡನ್ನು ನೀಡಲಾಗುತ್ತದೆ ಎಂದು ಸರಕಾರ ನಿರ್ಧರಿಸಿತ್ತು. ಸರಕಾರದ ಈ ನಿರ್ಧಾರದ ಬಗ್ಗೆ ಪರ-ವಿರೋಧ ಅಭಿಪ್ರಾಯ ಎರಡೂ ಕೇಳಿ ಬಂದಿದ್ದವು. ಮುಖ್ಯವಾಗಿ ಹಿಂದಿ ಭಾಷೆಯನ್ನು ಪಠ್ಯಗಳಲ್ಲಿ ಹೇರುವ ಅಗತ್ಯ ಏನಿದೆ ಎನ್ನುವ ಪ್ರಶ್ನೆಯ ಬಗ್ಗೆ ಬಹುತೇಕ ಜನರಿಗೆ ಭಿನ್ನಾಭಿಪ್ರಾಯವಿರಲಿಲ್ಲ. ಇಂಗ್ಲಿ ಷ್, ಕನ್ನಡದ ಮೂಲಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯೇ ಇಲ್ಲದಿರುವಾಗ, ಸ್ಥಳೀಯವಲ್ಲದ ಹಿಂದಿ ಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಅಗತ್ಯ ಏನಿದೆ ಎನ್ನುವ ಪ್ರಶ್ನೆ ಇಂದು ನಿನ್ನೆಯದಲ್ಲ. ಹಿಂದಿ ಭಾಷಿಗರ ರಾಜ್ಯದಲ್ಲಿ ದಕ್ಷಿಣ ಭಾರತದ ಯಾವುದೇ ಭಾಷೆಗಳನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಿಲ್ಲ. ಹೀಗಿರುವಾಗ, ಕನ್ನಡ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಯಾಕೆ ಕಡ್ಡಾಯವಾಗಿ ಕಲಿಯಬೇಕು? ನೆರೆಯ ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಲ್ಲದ ನಿಯಮ ರಾಜ್ಯದ ವಿದ್ಯಾರ್ಥಿಗಳಿಗೇಕೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಅನಗತ್ಯ ಒತ್ತಡಗಳನ್ನು ವಿದ್ಯಾರ್ಥಿಗಳ ತಲೆಯ ಮೇಲಿಂದ ಇಳಿಸುವ ಸಲುವಾಗಿ ಸರಕಾರ ಹಿಂದಿ ಪರೀಕ್ಷೆಯ ಅಂಕವನ್ನು ಪರಿಗಣಿಸದಿರಲು ನಿರ್ಧರಿಸಿತ್ತು. ಹಿಂದಿ ಭಾಷೆಯ ಕಾರಣದಿಂದ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುವಂತಾಗಬಾರದು ಎನ್ನುವುದು ಇದರ ಮುಖ್ಯ ಉದ್ದೇಶವಾಗಿತ್ತು. ಸರಕಾರ ತೆಗೆದುಕೊಂಡ ನಿರ್ಧಾರ ಸರಿಯೇ ಆಗಿದ್ದರೂ, ಸಂದರ್ಭ ಮಾತ್ರ ಸರಿಯಾಗಿರಲಿಲ್ಲ. ಪರಿಣಾಮವಾಗಿ ಸರಕಾರಕ್ಕೆ ಹೈಕೋರ್ಟ್ನಲ್ಲಿ ಇದೀಗ ಹಿನ್ನಡೆಯಾಗಿದೆ. ಸರಕಾರದ ನಿರ್ಧಾರದ ವಿರುದ್ಧ ಕೆಲವು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು , ಪರೀಕ್ಷೆಯ ಹೊತ್ತಿನಲ್ಲೇ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದ್ದರು. ಈ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಈಗಾಗಲೇ ಹಿಂದಿ ಪರೀಕ್ಷೆಗಾಗಿ ಸಮಯ ಮೀಸಲಿಟ್ಟು ಓದಿದವರಿಗೆ ಸರಕಾರದ ನಿರ್ಧಾರದಿಂದ ನಿರಾಸೆೆಯಾಗಬಹುದು. ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಅಂಕಗಳನ್ನು ಪಡೆಯುವುದು ಕನ್ನಡ, ಇಂಗ್ಲಿಷ್ನಂತೆ ಕಠಿಣವಲ್ಲ. ಅದರ ಪ್ರಶ್ನೆ ಪತ್ರಿಕೆಯನ್ನು ಅತ್ಯಂತ ಸರಳವಾಗಿ ರೂಪಿಸಲಾಗಿರುತ್ತದೆ. ಅಂಕಗಳನ್ನು ಪಡೆಯುವುದು ಬಹಳ ಸುಲಭ. ಹೆಚ್ಚಿನ ವಿದ್ಯಾರ್ಥಿಗಳು ಹಿಂದಿಯ ಬಗ್ಗೆ ಒಲವು ತೋರಿಸಲು ಕಾರಣ ಹಿಂದಿ ಭಾಷೆಯ ಮೇಲಿನ ಪ್ರೀತಿಯಿಂದಲ್ಲ. ಹಿಂದಿ ಪರೀಕ್ಷೆಯಲ್ಲಿ ಸುಲಭವಾಗಿ ಅಂಕಗಳನ್ನು ಪಡೆಯಬಹುದು ಎನ್ನುವ ಕಾರಣಕ್ಕಾಗಿ. ಶಾಲೆಯಲ್ಲಿ ಹಿಂದಿ ಭಾಷೆಯನ್ನು ತನ್ನದಾಗಿಸಿಕೊಳ್ಳುವುದಂತೂ ಅಷ್ಟರಲ್ಲೇ ಇದೆ. ಹೀಗೆ ಸುಲಭದಲ್ಲಿ ಅಂಕ ಸಂಗ್ರಹ ಮಾಡುವ ಗುರಿಯುಳ್ಳ ವಿದ್ಯಾರ್ಥಿಗಳಿಗೆ ಸರಕಾರದ ಅನಿರೀಕ್ಷಿತ ನಿರ್ಧಾರದಿಂದ ನಿರಾಸೆಯಾಗಿರಬಹುದು. ಇದೇ ಹೊತ್ತಿಗೆ ಇನ್ನೊಂದು ಅಂಶದತ್ತ ನ್ಯಾಯಾಲಯ ಬೆಟ್ಟು ಮಾಡಿದೆ. ತಮಿಳು, ಉರ್ದು, ತೆಲುಗು ಮೊದಲ ಭಾಷೆಯಾಗಿರುವ ಕೆಲವು ಶಾಲೆಗಳಲ್ಲಿ ಕನ್ನಡ ತೃತೀಯ ಭಾಷೆಯಾಗಿದೆ. ಅಂತಹ ಶಾಲೆಗಳಲ್ಲಿ ಕನ್ನಡದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ನ್ಯಾಯಾಲಯ ಕೇಳಿದೆ. ಕನ್ನಡ ತೃತೀಯ ಭಾಷೆಯಾಗಿ ಕಲಿಸುವ ಶಾಲೆಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳದೆಯೇ ಏಕಾಏಕಿ ತೃತೀಯ ಭಾಷೆಯನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ಹೈಕೋರ್ಟ್ ಕೇಳಿದೆ. ಮೇಲಿನ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೈಕೋರ್ಟ್, ಎಪ್ರಿಲ್ 15ರಂದು ತೃತೀಯ ಭಾಷೆಗೆ ಅಂಕ ನೀಡಬೇಕು ಎನ್ನುವ ತನ್ನ ಆದೇಶವನ್ನು ಮಂಗಳವಾರ ಎತ್ತಿ ಹಿಡಿಯಿತು. ಹೈಕೋರ್ಟ್ ತೀರ್ಪಿನಿಂದ ಸಮಸ್ಯೆ ಪೂರ್ತಿಯಾಗಿ ಬಗೆಹರಿಯಿತು ಎಂದು ಹೇಳುವಂತಿಲ್ಲ. ಸರಕಾರದ ನಿರ್ಧಾರವನ್ನು ನಂಬಿ ಸಾವಿರಾರು ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಂಕಗಳು ಪರಿಗಣನೆಯಾಗುವುದಿಲ್ಲವಾದುದರಿಂದ ಹಿಂದಿ ಪರೀಕ್ಷೆಗೆ ವ್ಯಯ ಮಾಡುವ ಸಮಯವನ್ನು ಇತರ ವಿಷಯಗಳಿಗೆ ಹೊಂದಿಸಿಕೊಂಡಿದ್ದಾರೆ. ಅವರೆಲ್ಲರ ಗತಿಯೇನಾಗಬೇಕು? ಸರಕಾರ ಮತ್ತು ಹೈಕೋರ್ಟ್ ತಿಕ್ಕಾಟಗಳ ನಡುವೆ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಹಿಂದಿ ಪರೀಕ್ಷೆಯ ಒತ್ತಡದಿಂದ ಪಾರು ಮಾಡಬೇಕು ಎನ್ನುವ ಸದುದ್ದೇಶದಿಂದ ಸರಕಾರ ತೆಗೆದುಕೊಂಡ ನಿರ್ಧಾರದಿಂದಲೇ ವಿದ್ಯಾರ್ಥಿಗಳು ಇನ್ನಷ್ಟು ಒತ್ತಡ ಅನುಭವಿಸುವಂತಾಗಿದೆ. ಇದೀಗ ಪರೀಕ್ಷೆ ಮುಗಿದು, ಫಲಿತಾಂಶ ಹೊರ ಬೀಳುವ ಹೊತ್ತಿನಲ್ಲಿ ಹೈಕೋರ್ಟ್ ಇಂತಹದೊಂದು ತೀರ್ಪನ್ನು ನೀಡುವ ಅನಿವಾರ್ಯತೆಯಿತ್ತೇ ಎನ್ನುವ ಪ್ರಶ್ನೆಯೂ ತಲೆಯೆತ್ತ್ತಿದೆ. ಸರಕಾರ ಕೂಡ ಯೋಚಿಸಿ, ಮುಂದಿನ ವರ್ಷಕ್ಕೆ ಅನ್ವಯವಾಗುವಂತೆ ಈ ನಿರ್ಧಾರವನ್ನು ಘೋಷಿಸಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲವೇನೋ. 2025ರ ಅಕ್ಟೋಬರ್ 28ರಂದು ಎಸೆಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧ ಸುತ್ತೋಲೆ ಹೊರಡಿಸಿದ ಬಳಿಕ ಅದರ ಅನ್ವಯವೇ ಪರೀಕ್ಷೆಯನ್ನು ನಡೆಸಬಹುದಿತ್ತು. ನ್ಯಾಯಾಲಯ ಕೂಡ ಇದನ್ನೇ ಮುಂದಿಟ್ಟುಕೊಂಡು ತೀರ್ಪು ನೀಡಿದೆ. ‘ಭವಿಷ್ಯದಲ್ಲಿ ಈ ಸಂಬಂಧ ರಾಜ್ಯ ಸರಕಾರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುಸುವುದಿಲ್ಲ’’ ನ್ಯಾಯ ಪೀಠ ಸ್ಪಷ್ಟಪಡಿಸಿದೆ. ಈ ವರ್ಷದಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸುವುದೇ ಉಚಿತವೆನಿಸುತ್ತದೆ. ಹಾಗೆಯೇ ಮುಂದಿನ ಸಾಲಿನಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸುವ ಬಗ್ಗೆ ಶಿಕ್ಷಣ ತಜ್ಞರಿಂದ ಸೂಕ್ತಸಲಹೆಗಳನ್ನು ಪಡೆದು, ಸುದೀರ್ಘ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ನಿರ್ಧಾರ ತೃತೀಯ ಭಾಷೆಯಾಗಿ ಕನ್ನಡ ಕಲಿಯುತ್ತಿರುವ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಈಗಾಗಲೇ ಕನ್ನಡದ ಬಗ್ಗೆ ಇರುವ ಅಸಡ್ಡೆ ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಗಬಾರದು. ಒಟ್ಟಿನಲ್ಲಿ ‘ಆತುರಗಾರನಿಗೆ ಬುದ್ಧಿ ಮಟ್ಟ’ ಎನ್ನುವ ಗಾದೆಯು ತೃತೀಯ ಭಾಷೆಗೆ ಸಂಬಂಧಿಸಿ ಸರಕಾರ ತೆಗೆದುಕೊಂಡ ಆತುರದ ನಿರ್ಧಾರಕ್ಕೆ ಒಪ್ಪುವಂತಿದೆ.
''ಮೈಸೂರು ರೇಷ್ಮೆ ಪರಂಪರೆಗೆ ಮಹಾ ಗೆಲುವು; ಕನ್ನಡಿಗರ ಹೋರಾಟಕ್ಕೆ ಮಣಿದ ಭೂಗಳ್ಳ ಕಾಂಗ್ರೆಸ್ ಸರ್ಕಾರ''
ಮೈಸೂರು: ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದ್ದ KSIC ಭೂಮಿಯನ್ನು ಈಗ ಅಧಿಕೃತವಾಗಿ ಮರಳಿ ಪಡೆಯಲಾಗಿದೆ. ಈ ಮೂಲಕ ಮೈಸೂರು ಸಿಲ್ಕ್ನ ಅಸ್ಮಿತೆ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸಿದಂತಾಗಿದೆ. ಇದು ಕರ್ನಾಟಕದ ಜನತೆಯ ಹಾಗೂ ಮೈಸೂರು ರೇಷ್ಮೆ ಪರಂಪರೆಯನ್ನು ನಂಬಿರುವ ಸಾವಿರಾರು ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾರೆ. ಮೈಸೂರಿನ
ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ಮತದಾನ ಆರಂಭ
ಚೆನ್ನೈ/ಕೋಲ್ಕತ್ತ: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತದಾನ ಇಂದು (ಗುರುವಾರ) ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದರೆ, 294 ಕ್ಷೇತ್ರಗಳ ಪಶ್ಚಿಮ ಬಂಗಾಳ ವಿಧಾನಸಭೆಯ ಪೈಕಿ 152 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಹಾಗೂ ನಿರ್ದೇಶಕ ಸೀಮನ್ ಅವರ ಎನ್ಟಿಕೆ ಪಕ್ಷ ಕೂಡ ಸ್ಪರ್ಧೆಯಲ್ಲಿ ತೊಡಗಿದ್ದು, ಚುನಾವಣಾ ಕಣ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 5.73 ಕೋಟಿ ಮತದಾರರಿದ್ದು, ಇವರಲ್ಲಿ 2.93 ಕೋಟಿ ಪುರುಷರು, 2.83 ಕೋಟಿ ಮಹಿಳೆಯರು ಮತ್ತು 7,728 ತೃತೀಯ ಲಿಂಗಿಗಳು ಸೇರಿದ್ದಾರೆ. 33,133 ಕೇಂದ್ರಗಳಡಿ 75,064 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಆಗುಂಬೆ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ
ಶಿವಮೊಗ್ಗ: ಜಿಲ್ಲೆಯ ಆಗುಂಬೆ ಬಳಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಯ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ ಘಟನೆ ನಡೆದಿದೆ. ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು ರೂ. 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ವಿಶಾಲಾಕ್ಷಿ (74) ಎಂಬುವವರ ಮನೆಯಲ್ಲಿ ದರೋಡೆಯಾಗಿದೆ. ವಿಶಾಲಾಕ್ಷಿ ಅವರ ಪತಿ 15 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಹಾಗಾಗಿ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಏಪ್ರಿಲ್ 21ರಂದು ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ವಿಶಾಲಾಕ್ಷಿ ಅವರು ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ಕಿಟಕಿಯ ಮೂಲಕ ನೋಡಿದಾಗ ಮೂವರು ಅಪರಿಚಿತರು ನಿಂತಿದ್ದರು. ಮೂವರು ಅಪರಿಚಿತರು ಕುಡಿಯಲು ನೀರು ಕೊಡಿ ಎಂದು ವಿಶಾಲಾಕ್ಷಿ ಅವರನ್ನು ಕೇಳಿದ್ದರು. ಬಾಗಿಲು ತೆರೆಯದ ಅವರು, ಕಿಟಕಿಯ ಮೂಲಕವೇ “ನಲ್ಲಿಯಲ್ಲಿ ಇರುವ ನೀರು ಕುಡಿಯಿರಿ” ಎಂದು ತಿಳಿಸಿದ್ದಾರೆ. ಮೂವರು ಅಪರಿಚಿತರು ಅಲ್ಲೇ ಮರೆಯಾಗಿ ನಿಂತಿದ್ದರು. ಕೆಲವು ನಿಮಿಷಗಳ ಬಳಿಕ ಅನುಮಾನಗೊಂಡ ವೃದ್ಧೆ ಹಿತ್ತಲ ಬಾಗಿಲು ತೆರೆದು ಪರಿಶೀಲಿಸಿದರು. ಆಗ ಮೂವರು ಒಮ್ಮೆಲೆ ಮನೆಯೊಳಗೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಳ ನುಗ್ಗಿದ ದರೋಡೆಕೋರರು ವಿಶಾಲಾಕ್ಷಿ ಅವರ ಬಾಯಿಯನ್ನು ಒತ್ತಿಹಿಡಿದು ಬೆದರಿಸಿದ್ದಾರೆ. ಬಳಿಕ ಅವರ ಕೈಗಳನ್ನು ಸೀರೆಯಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ವೃದ್ಧೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದರೋಡೆಕೋರರು ಮನೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ವಿಶಾಲಾಕ್ಷಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಕೈಬಳೆ, ಕಿವಿಯೋಲೆ ಸೇರಿದಂತೆ ಒಟ್ಟು 146 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು ರೂ. 17.52 ಲಕ್ಷ ಎನ್ನಲಾಗಿದೆ. ಇದಲ್ಲದೆ ಬೀರುವಿನಲ್ಲಿದ್ದ ರೂ. 50,000 ನಗದು, ಟೇಬಲ್ ಮೇಲಿದ್ದ ಪರ್ಸ್ನಲ್ಲಿದ್ದ ರೂ. 1,000 ಹಾಗೂ ಒಂದು ಮೊಬೈಲ್ ಫೋನ್ನ್ನು ದೋಚಿದ್ದಾರೆ. ಬಳಿಕ ಹಿತ್ತಲ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ದರೋಡೆಕೋರರು ಹೋದ ನಂತರ ವಿಶಾಲಾಕ್ಷಿ ಅವರು ಕೈಕಟ್ಟುಗಳನ್ನು ಬಿಡಿಸಿಕೊಂಡಿದ್ದಾರೆ. ನಂತರ ಚಾಕುವಿನಿಂದ ಬಾಗಿಲಿಗೆ ತೂತು ಮಾಡಿ ಚಿಲಕ ತೆಗೆದು ಹೊರಬಂದಿದ್ದಾರೆ. ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ನಂತರ ಅವರ ಸಂಬಂಧಿಕರು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ವೃದ್ಧೆ ವಿಶಾಲಾಕ್ಷಿ ಹಾಗೂ ಅವರ ಸಂಬಂಧಿಕರನ್ನು ಭೇಟಿಯಾಗಿ ಘಟನೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಮತ್ತು ಆಗುಂಬೆ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.
Special Trains: ಹುಬ್ಬಳ್ಳಿ, ಮೈಸೂರಿನಿಂದ ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆ; ಮಾರ್ಗ, ವೇಳಾಪಟ್ಟಿ
ಬೆಂಗಳೂರು: ಬೇಸಿಗೆ ರಜೆ ಶುರುವಾಗಿ ವಾರಗಳು ಕಳೆದಿವೆ. ಮಹಿಳೆಯರು, ಮಕ್ಕಳು ಕುಟುಂಬಸ್ಥರಾಗಿ ಪ್ರವಾಸಿ ತಾಣಗಳಿಗೆ, ಬೇರೆ ಬೇರೆ ಊರುಗಳಿಗೆ ತೆರಳುವವರ ಪ್ರಮಾಣ ಹೆಚ್ಚಾಗಿದೆ. ಇದರಿಂದ ರೈಲುಗಳ ಸಂಚಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆ ವಲಯದ (SWR) ರಾಜ್ಯದಿಂದ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಬೆಂಗಳೂರಿನ ಯಶವಂತಪುರ, ಮೈಸೂರು
Bihar | ಒಂದೇ ಕುಟುಂಬದ ನಾಲ್ವರು ಗಂಗೆಯಲ್ಲಿ ಮುಳುಗಿ ಮೃತ್ಯು
ಪಾಟ್ನಾ: ಒಂದೇ ಕುಟುಂಬದ ನಾಲ್ಕು ಮಂದಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುವ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಿಹಾರದ ಸರನ್ ಜಿಲ್ಲೆಯ ಸೋನ್ಪುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸರನ್ ಜಿಲ್ಲೆಯ ಸೋನ್ಪುರದ ಬೈಜಲ್ಪುರ ಸ್ನಾನಘಟ್ಟದಲ್ಲಿ ಈ ಕುಟುಂಬವು ವಿವಾಹ ಸಮಾರಂಭದ ಬಳಿಕ ನಾಲ್ಕನೇ ದಿನ ಚೌತಾರಿ ವಿಧಿವಿಧಾನವನ್ನು ಪೂರೈಸಲು ಸೇರಿದ್ದರು. ಸಂಪ್ರದಾಯದಂತೆ ವಧುವಿನ ಸಂಬಂಧಿಕರು ವಿವಾಹದ ಬಳಿಕ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇದು ಅತ್ಯಂತ ಪವಿತ್ರ ಎಂಬ ನಂಬಿಕೆ ಇದೆ. ಆದರೆ ಈ ಘಟನೆಯಲ್ಲಿ ಧಾರ್ಮಿಕ ವಿಧಿವಿಧಾನ ದುರಂತ ಅಂತ್ಯ ಕಂಡಿದೆ. ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನಾಲ್ಕು ಮಂದಿ ನದಿಯ ಆಳಕ್ಕೆ ಜಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದರು. ನೆರವಿಗಾಗಿ ಸ್ಥಳೀಯರು ಮತ್ತು ಮುಳುಗು ತಜ್ಞರು ಸ್ಥಳಕ್ಕೆ ಧಾವಿಸುವಾಗ ಕಾಲ ಮಿಂಚಿತ್ತು. ಬೈಜಲ್ಪುರ ನಿವಾಸಿ ಜನಾರ್ದನ್ ಸಿಂಗ್ ಎಂಬವರ ಪತ್ನಿ ಬಬಿತಾ ದೇವಿ (42), ಪಾಟ್ನಾ ಜಿಲ್ಲೆಯ ಭಕ್ತಿಯಾರ್ಪುರ ನಿವಾಸಿ ರವಿಕುಮಾರ್ ಅವರ ಪತ್ನಿ ಗುಡಿಯಾ ದೇವಿ (40) ಮೃತಪಟ್ಟವರಲ್ಲಿ ಸೇರಿದ್ದಾರೆ. ಘಟನೆಯಲ್ಲಿ ಕಾಣೆಯಾಗಿರುವ 16 ವರ್ಷದ ಯುವತಿ ಮತ್ತು 15ರ ಬಾಲಕನಿಗೆ ಹುಡುಕಾಟ ನಡೆದಿದ್ದು, ಇಬ್ಬರೂ ಗಂಧಕ್ ನದಿಯಲ್ಲಿ ಮುಳುಗಿರಬೇಕು ಎಂದು ಶಂಕಿಸಲಾಗಿದೆ. ಜನಾರ್ದನ್ ಸಿಂಗ್ ಅವರ ಪುತ್ರಿಯ ವಿವಾಹ ನಾಲ್ಕು ದಿನ ಮೊದಲು ನಡೆದಿತ್ತು. ಸಂಪ್ರದಾಯದ ವಿಧಿವಿಧಾನಗಳನ್ನು ನೆರವೇರಿಸಲು ನಾಲ್ಕನೇ ದಿನ ಕುಟುಂಬ ಸದಸ್ಯರು ಮತ್ತು ಬಂಧುಗಳು ಆಗಮಿಸಿದ್ದರು.
Wind Power Energy : ಸದ್ದಿಲ್ಲದೇ ಭಾರತದ ಐತಿಹಾಸಿಕ ಸಾಧನೆ, ಜಾಗತಿಕವಾಗಿ 4ನೇ ಸ್ಥಾನದ ಕಿರೀಟ
Wind Power Achievement : ಪವನ ಶಕ್ತಿ ಉತ್ಪಾದನೆಯಲ್ಲಿ ಭಾರತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಾಗತಿಕವಾಗಿ ಭಾರತದ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಸಾರಂಗಿ ಮತ್ತಿತರರು ಉಪಸ್ಥಿತರಿದ್ದರು.
Karnataka Rains: ಹವಾಮಾನ ವೈಪರೀತ್ಯ, ರಾಜ್ಯದ 20 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ, ಆರೆಂಜ್-ಯೆಲ್ಲೋ ಅಲರ್ಟ್
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಧಗೆ ತಕ್ಕಮಟ್ಟಿಗೆ ಕಡಿಮೆ ಆಗುವ ಲಕ್ಷಣಗಳು ಇವೆ. ಅಂದರೆ ರಾಜ್ಯದಲ್ಲಿ ಮೈಸುಡುವ ಬಿಸಿಲ ಮಧ್ಯೆ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆ ಆಗಲಿದೆ. ಈ ಸಂಬಂಧ 05 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ವಿವಿಧೆ ಒಣಹವೆ ವಾತಾವರಣವು ಮುಂದುವರಿಯಲಿದೆ. ಹವಾಮಾನ
ತಮಿಳುನಾಡು 234 ಕ್ಷೇತ್ರಗಳಿಗೆ ಮತದಾನ ಆರಂಭ: ಪ.ಬಂಗಾಳದಲ್ಲಿ ನಡೆಯಲಿದೆ ಮೊದಲ ಹಂತದ ಚುನಾವಣೆ
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಇಂದು ಆರಂಭವಾಗಿದೆ. ಶಾಂತಿಯುತ ಚುನಾವಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
TN and WB Election 2026: ಇಂದು ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ, ಮತದಾನ ಆರಂಭ, ಅಪ್ಡೇಟ್ಸ್
Assembly Election 2026: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಬಾ ಚುನಾವಣೆ 2026 ಮತದಾನ ಇಂದು ಗುರುವಾರ (ಏ.23)ರಂದು ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹತದಲ್ಲಿ ಹಾಗೂ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಒಟ್ಟ ಎರಡು ಹಂತಗಳ ಪೈಕಿ ಇಂದು 152 ಕ್ಷೇತ್ರಗಳಿಗೆ ಮೊದಲ
ಇಸ್ರೇಲ್ ದಾಳಿಯಲ್ಲಿ ಲೆಬನಾನ್ ಪತ್ರಕರ್ತೆ ಅಮಲ್ ಖಲೀಲ್ ಹತ್ಯೆ
ಬೈರೂತ್, ಎ.23: ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಲೆಬನಾನಿನ ಪತ್ರಕರ್ತೆ ಅಮಲ್ ಖಲೀಲ್ ಮೃತಪಟ್ಟಿದ್ದಾರೆ ಎಂದು ಲೆಬನಾನಿನ ರಾಷ್ಟ್ರೀಯ ಸುದ್ದಿ ಸಂಸ್ಥೆ ದೃಢಪಡಿಸಿದೆ ದಾಳಿಯ ನಂತರ ಅವಶೇಷಗಳಡಿ ಅಮಲ್ ಅವರ ಮೃತದೇಹ ಪತ್ತೆಯಾಗಿದೆ ಎಂದು ರಾಯಿಟರ್ಸ್ ಉಲ್ಲೇಖಿಸಿ ಲೆಬನಾನಿನ ಹಿರಿಯ ಸೈನಿಕ ಅಧಿಕಾರಿ ತಿಳಿಸಿದ್ದಾರೆ. ಆಶ್ರಯ ಪಡೆದಿದ್ದ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ದಾಳಿಯಲ್ಲಿ ಅಮಲ್ ಜೊತೆಗೆ ಮತ್ತೊಬ್ಬ ಪತ್ರಕರ್ತೆ ಝೈನಬ್ ಫರಾಝ್ ಕೂಡ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ. ಘಟನೆಯನ್ನು ಖಂಡಿಸಿರುವ ಲೆಬನಾನಿನ ಪ್ರೆಸ್ ಕ್ಲಬ್, “ತಾನು ನಂಬಿದ ಕಾರಣಕ್ಕಾಗಿ ಅಮಲ್ ತಮ್ಮ ಜೀವವನ್ನೇ ಬಲಿಕೊಟ್ಟಿದ್ದಾರೆ” ಎಂದು ಹೇಳಿಕೆ ನೀಡಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವ ಅಭಿಯಾನದ ಭಾಗವಾಗಿಯೇ ಈ ದಾಳಿ ನಡೆದಿದೆ ಎಂದು ಪ್ರೆಸ್ ಕ್ಲಬ್ ಆರೋಪಿಸಿದೆ. ಲೆಬನಾನಿನ ಮಾಹಿತಿ ಸಚಿವ ಪಾಲ್ ಮೊರ್ಕೋಸ್, “ಪತ್ರಕರ್ತರನ್ನು ಗುರಿಯಾಗಿಸುವುದು ಘೋರ ಅಪರಾಧ. ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಆರಂಭದಿಂದ ಇಸ್ರೇಲ್ ದಾಳಿಗಳಲ್ಲಿ ಲೆಬನಾನ್ನಲ್ಲಿ ಕನಿಷ್ಠ ಐದು ಪತ್ರಕರ್ತರು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.
ಮಂಡ್ಯದಲ್ಲಿ ಕೈ ಸುಡುತ್ತಿದೆ ಎಳನೀರು ಬೆಲೆ: ಈ ವರ್ಷವೂ ತೆಂಗಿನಕಾಯಿ ಭಾರಿ ಬೆಲೆ ಏರಿಕೆ ಸಾಧ್ಯತೆ
ಬೇಸಿಗೆಯಲ್ಲಿ ಎಳನೀರಿಗೆ ಬೆಲೆ ಏರಿಕೆಯಾದರೂ ಭಾರೀ ಭೇಡಿಕೆ ಸೃಷ್ಟಿಯಾಗಿದೆ. ಇದರ ಲಾಭ ಮಾತ್ರ ರೈತರಿಗೆ ಸಿಗದೆ ಮಧ್ಯವರ್ತಿಗಳಿಗೇ ಹೆಚ್ಚು ಸಿಗುತ್ತಿದೆ. ಹೆಚ್ಚು ಎಳನೀರನ್ನು ಬಳಕೆ ಮಾಡುತ್ತಿರುವುದರಿಂದ ತೆಂಗಿನಕಾಯಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.
ಸಾವು ತರಬಲ್ಲ ಈ ಅಮೀಬಿಕ್ ಮೆದುಳು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ನೆರವು ಪಡೆಯಬೇಕಾಗುತ್ತದೆ. ಅತಿಯಾದ ಬಿಸಿಲಿಗೆ ನೀರಿನಡಿಯಲ್ಲಿ ಅಮೀಬ ಸೃಷ್ಟಿಯಾಗಿ, ರೋಗ ಬರುಲು ಕಾರಣವಾಗುತ್ತದೆ, ಸೇರಿದಂತೆ ಹಲವು ಪ್ರಮುಖ ವಿಷಯಗಳು ಇಲ್ಲಿವೆ.
ಹರ್ಮುಜ್ ಜಲಸಂಧಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಇರಾನ್, ಇದಕ್ಕೆ ದಿಗ್ಭಂಧನ ಹಾಕಿರುವ ಅಮೆರಿಕದ ನಡೆಗೆ ತೀವ್ರ ವಿರೋಧೀಸಿ, ಸಂಧಾನ ಸಭೆಗೂ ಮುಂದಾಗುತ್ತಿಲ್ಲ. ಅಲ್ಲದೆ ಅಲ್ಲಿ ದಾಟಲೆತ್ನಿಸಿದ ಹಡಗುಗಳ ಮೇಲೂ ಇರಾನ್ ಮಿಲಿಟರಿ ಪಡೆ ದಾಳಿ ನಡೆಸಿದ್ದಾರೆ. ಇದರಲ್ಲಿ ಭಾರತಕ್ಕೆ ಬರುತ್ತಿದ್ದ ಹಡಗುಗಳೂ ಸೇರಿವೆ.
ನೂತನ ಜವಳಿ ಯೋಜನೆಗಳ ಕುರಿತು ದಕ್ಷಿಣ ವಲಯದ ಸಮಾಲೋಚನಾ ಕಾರ್ಯಾಗಾರ
ಗ್ರಾಹಕರ ಆದ್ಯತೆಗಳಿಗೆ ಗಮನಹರಿಸಿ : ನೀಲಂ ಶಮಿ ರಾವ್
ಖಾಮಿನೈ ಹತ್ಯೆಗೈದ ಕಾರ್ಯಾಚರಣೆಯ ರೂವಾರಿ ಮೊಸಾದ್ ಏಜೆಂಟ್ ಮೃತ್ಯು
ಟೆಲ್ ಅವೀವ್, ಎ.22: ಇರಾನ್ ವಿರುದ್ಧ ಇಸ್ರೇಲ್ ನಡೆಸಿದ್ದ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಯ ರೂವಾರಿ, ಇಸ್ರೇಲ್ ನ ಗುಪ್ತಚರ ಏಜೆನ್ಸಿ ಮೊಸಾದ್ನ ಏಜೆಂಟ್ ದೇಶದ ಹೊರಗೆ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಹತರಾಗಿದ್ದಾರೆ ಎಂದು ವರದಿಯಾಗಿದೆ. ಈ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಯಲ್ಲಿ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತರಾಗಿದ್ದರು. ಹತ್ಯೆಯಾದ ಹಿರಿಯ ಏಜೆಂಟ್ ನ ಹೆಸರನ್ನು ಮೊಸಾದ್ ಬಹಿರಂಗಪಡಿಸಿಲ್ಲ, ಆದರೆ ಸಂತಾಪ ಸಂದೇಶದಲ್ಲಿ ‘ಎಂ’ ಎಂದು ಉಲ್ಲೇಖಿಸಲಾಗಿದೆ. ‘ಎಂ’ ಅವರು ಸೂಕ್ಷ್ಮತೆ, ತಂತ್ರಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿದ ಸಂಕೀರ್ಣ ಕಾರ್ಯಾಚರಣೆಗಳ ಮೂಲಕ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯ ಹೇಳಿದ್ದಾರೆ. ಆದರೆ ‘ಎಂ’ ಎಂಬ ಸಂಕೇತನಾಮ ಹೊಂದಿದ್ದ ಮೊಸಾದ್ ಸದಸ್ಯನ ಪೂರ್ಣ ಹೆಸರು ಎರೆಝ್ ಶಿಮೋನಿ ಎಂದು ತಿಳಿದುಬಂದಿದೆ. ಈತ 2023ರ ಮೇ 31ರಂದು ಉತ್ತರ ಇಟಲಿಯಲ್ಲಿ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕ ದುರಂತವೇ ಅಥವಾ ಹತ್ಯೆ ಕಾರ್ಯಾಚರಣೆಯ ಭಾಗವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಇಸ್ರೇಲ್ ನ ಚಾನೆಲ್ 12 ಸುದ್ದಿಸಂಸ್ಥೆ ವರದಿ ಮಾಡಿದೆ. ಖಾಮಿನೈ ಹತ್ಯೆಗೆ ಇಸ್ರೇಲ್ ದಶಕಗಳಿಂದಲೂ ಯೋಜನೆ ರೂಪಿಸುತ್ತಿತ್ತು ಮತ್ತು ಇದರಲ್ಲಿ 50 ವರ್ಷದ ಶಿಮೋನಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿ ಹೇಳಿದೆ.
ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮುಡಾ ಸಲ್ಲಿಸಿದ್ದ ಮೇಲ್ಮನವಿ ವಜಾ
ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ 460 ದಿನಗಳಿಗೂ ಅಧಿಕ ಸಮಯ ವಿಳಂಬ ಮಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಶಾಸನಬದ್ಧ ಪ್ರಾಧಿಕಾರವೊಂದು ಸಾಕಷ್ಟು ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದೆ ಎಂಬ ಒಂದೇ ಕಾರಣಕ್ಕೆ ಕಾನೂನು ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತಿತರರಿಗೆ ಸೇರಿದ್ದ ಜಮೀನಿನ ಸ್ವಾಧೀನಕ್ಕಾಗಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಡಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸುಮಾರು 460ಕ್ಕೂ ಅಧಿಕ ದಿನಗಳ ವಿಳಂಬದ ಬಳಿಕ ಮುಡಾ ಮೇಲ್ಮನವಿ ಸಲ್ಲಿಸಿದೆ. ವಿಳಂಬಕ್ಕೆ ನೀಡಲಾಗಿರುವ ಕಾರಣಗಳು ಅಸ್ಪಷ್ಟವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ದಾವೆಗಳಿಗೆ ಒಂದು ಅಂತಿಮ ರೂಪ ನೀಡುವುದು 'ಕಾನೂನು ಮಿತಿಗಳ ಕಾಯ್ದೆ'ಯ (Limitation Act) ಉದ್ದೇಶವಾಗಿದೆ. ಅಧಿಕಾರಿಗಳ ವಿಳಂಬ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ. ಸೂಕ್ತ ಕಾರಣಗಳಿಲ್ಲದೆ ಇಂತಹ ವಿಳಂಬವನ್ನು ಪುರಸ್ಕರಿಸುವುದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಮೇಲ್ಮನವಿ ಸಲ್ಲಿಕೆಯ ವಿಳಂಬಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರ ಅತ್ಯಂತ ಅಸ್ಪಷ್ಟವಾಗಿದೆ. ಈ ವಿಳಂಬವನ್ನು ಪರಿಗಣಿಸುವುದಕ್ಕೆ ಸೂಕ್ತ ವಿವರಣೆಯನ್ನು ನೀಡಿಲ್ಲ. ಇಂತಹ ವಿಳಂಬವನ್ನು ಪರಿಗಣಿಸಿದಲ್ಲಿ ಸತ್ತಂತಿರುವ ಮುಡಾದ ಹಕ್ಕನ್ನು ಮತ್ತೆ ಉಳಿಸಿದಂತಾಗಲಿದ್ದು, ತಮ್ಮ ಹಕ್ಕುಗಳ ಬಗ್ಗೆ ಶ್ರದ್ಧ ಇಲ್ಲದವರ ಪರ ಆದೇಶ ನೀಡಿದಂತಾಗಲಿದೆ. ಲಿಮಿಟೇಷನ್ ಕಾಯ್ದೆಯ ಉದ್ದೇಶ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿ ನಡೆದಂತಾಗಲಿದ್ದು, ಪ್ರತಿವಾದಿಗಳಿಗೆ ದೊಡ್ಡ ಅನ್ಯಾಯವನ್ನುಂಟು ಮಾಡಿದಂತಾಗಲಿದೆ ಎಂದು ನ್ಯಾಯಪೀಠ ಹೇಳಿದೆ. ಮುಡಾ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಮಂಜಸ ವಿವರಣೆ ಇಲ್ಲವಾಗಿದ್ದು, ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವದಿಂದ ವಿಳಂಬಕ್ಕೆ ಕಾರಣವಾಗಿದೆ ಎಂಬ ಅಂಶ ಗೊತ್ತಾಗಲಿದೆ ಎಂದಿರುವ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ. ಪ್ರಕರಣವೇನು? ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ಆಲನಹಳ್ಳಿ 2ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಮತ್ತಿತರರಿಗೆ ಸೇರಿದ್ದ ವಿವಿಧ ಸರ್ವೇ ನಂಬರ್ಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಡಾ 1992ರ ಜೂನ್ 25ರಂದು ಪ್ರಾಥಮಿಕ ಮತ್ತು 1996ರ ಮಾರ್ಚ್ 18ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಸಿ. ನಾಗರಾಜು ಎಂಬುವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಗಳನ್ನು 2022ರ ಆಗಸ್ಟ್ 1ರಂದು ರದ್ದುಪಡಿಸಿ, ಭೂಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮುಡಾ 2023ರ ಡಿಸೆಂಬರ್ 11ರಂದು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
‘ಕೂಲ್ ಲಿಪ್’ ಮಾರಾಟಕ್ಕೆ ನಿಷೇಧ ಹೇರಿಲ್ಲ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ
ಬೆಂಗಳೂರು : ‘ಕೂಲ್ ಲಿಪ್’ ಎಂಬ ಉತ್ಪನ್ನವನ್ನು ಇದೇ ಮೊದಲ ಬಾರಿಗೆ ನಾನು ಕೇಳುತ್ತಿದ್ದು, ಬಾಯಿ ಫ್ರೆಶ್ನರ್ ಆಗಿ ಬಳಸುವ ಹಾಗೂ ಆಹಾರ ಪ್ರದಾರ್ಥವಲ್ಲದ ಇದನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡಿಲ್ಲ’ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಪ್ರೀ ಕೋರ್ಟ್ ಆದೇಶ ಇರುವ ಹಿನ್ನೆಲೆಯಲ್ಲಿ ತಂಬಾಕು ಆಧಾರಿತ ಉತ್ಪನ್ನ ಮಾರಾಟವನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಆದರೆ ತಮಿಳುನಾಡು ರಾಜ್ಯದಲ್ಲಿ ‘ಕೂಲ್ ಲಿಪ್’ ಎಂಬ ಉತ್ಪನ್ನವನ್ನು ಯಾವ ರೀತಿ ನಿಷೇಧ ಮಾಡಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಇಷ್ಟಕ್ಕೂ ‘ಕೂಲ್ ಲಿಪ್’ ಎಂಬ ಉತ್ಪನ್ನ ಆಹಾರ ಪದಾರ್ಥವಲ್ಲ. ಹೀಗಾಗಿ ನಮ್ಮ ಇಲಾಖೆಗೂ ಈ ಪದಾರ್ಥಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು. ಕೂಲ್ ಲಿಪ್ಅನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಿಲ್ಲ. ಇದನ್ನು ಆಹಾರ ಮತ್ತು ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ನಿಷೇಧಿಸಬಹುದಾಗಿದೆ. ಇದನ್ನು ಕಾರ್ಯಗತಗೊಳಿಸಲು ಅಧಿಕೃತ ಇಲಾಖೆಯು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಾಗಿದೆ. - ಗುರುದತ್ತ ಹೆಗಡೆ, ಆಯುಕ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅಂಬೇಡ್ಕರ್ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ : ಚೇತನ್ ಅಹಿಂಸಾ
ಮಂಡ್ಯ: ಅಂಬೇಡ್ಕರ್ ವಿಚಾರಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಟ ಚೇತನ್ ಅಹಿಂಸಾ ಹೇಳಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ವತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂದು ವಿಷಾದಿಸಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ರಾಜ್ ಮಾತನಾಡಿ, ಇಂದಿನ ವಿದ್ಯಮಾನಗಳಲ್ಲಿ ದಲಿತರ ಏಕತೆ ಅತ್ಯವಶ್ಯಕ. ದಲಿತ ಚಳವಳಿಗಳು ಚದುರಿ ಹೋಗಬಾರದು ಮತ್ತು ಎಲ್ಲಾ ಒಳಪಂಗಡಗಳು ಒಗ್ಗೂಡಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಸಂವಿಧಾನಕ್ಕೆ ಧಕ್ಕೆ ತರುವ ಯತ್ನಗಳು ನಡೆಯುತ್ತಿದೆ. ಸಂವಿಧಾನ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ವ್ಯವಸಾಯ ಕಾಲನಿ ಚನ್ನಕೇಶವ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಶ್ರೀನಿವಾಸ್, ಮೈಸೂರು ವಿಭಾಗೀಯ ಸಂಚಾಲಕ ಚಂದ್ರಶೇಖರ್ ಆಲಗೂಡು, ಮಹಿಳಾ ಅಧ್ಯಕ್ಷೆ ರಾಣಿ, ಬಲರಾಮು, ಎಸ್.ಕುಮಾರ್, ಆರ್ಮುಗಂ, ಇತರ ಮುಖಂಡರು ಉಪಸ್ಥಿತರಿದ್ದರು. ಅಂದಿನ ಕಾಲದ ಜಾತಿವಾದಿ ಶಕ್ತಿಗಳ ಮತ್ತು ರಾಜಕೀಯ ಅಡೆತಡೆಗಳ ನಡುವೆಯೂ ಬಾಬಾಸಾಹೇಬರು ನಮಗಾಗಿ ಹಕ್ಕುಗಳನ್ನು ಮತ್ತು ಸಂವಿಧಾನವನ್ನು ತಂದುಕೊಟ್ಟರು. ಆ ಹಕ್ಕುಗಳನ್ನು ಉಳಿಸಿಕೊಳ್ಳಲು ನಾವು ಇಂದು ಹೋರಾಡಬೇಕಿದೆ. ಅಹಿಂಸಾ ಚೇತನ್,ನಟ ಹಾಗೂ ಸಾಮಾಜಿಕ ಹೋರಾಟಗಾರ
ಜಾಲತಾಣಗಳಲ್ಲಿ ಮಾನಹಾನಿಕರ ಕಮೆಂಟ್ ಮಾಡುವವರ ವಿರುದ್ಧ ದೂರು : ಟಿ.ಎ.ನಾರಾಯಣಗೌಡ
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ, ಮಾನಹಾನಿಕರ, ಬೆದರಿಕೆಯ ಕಮೆಂಟ್ಗಳನ್ನು ಮಾಡುವವರ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದು, ಈಗಾಗಲೇ ಹಲವರ ವಿರುದ್ಧ ದೂರುಗಳನ್ನು ದಾಖಲಿಸಿದ್ದೇವೆ. ಬಹುತೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾಲತಾಣಗಳಲ್ಲಿ ಆರೋಗ್ಯಕರ ಚರ್ಚೆ, ಟೀಕೆ, ವಿಮರ್ಶೆಯನ್ನು ಕರವೇ ಸ್ವಾಗತಿಸುತ್ತದೆ. ಇಂತಹ ಚರ್ಚೆಗಳಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಆದರೆ ಚರ್ಚೆಯ ಹೆಸರಿನಲ್ಲಿ ಕೀಳುಮಟ್ಟದ ತೇಜೋವಧೆ, ಬೆದರಿಕೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅಂಥವರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಜಾಲತಾಣದಲ್ಲಿ ಮಹಿಳಾ ಮುಖಂಡರೊಬ್ಬರಿಗೆ ವ್ಯಕ್ತಿಯೋರ್ವ ಖಾಸಗಿ ಅಂಗವನ್ನು ಬಳಸಿ ಕೆಟ್ಟದಾಗಿ ಕಾಮೆಂಟ್ ಮಾಡಿರುವುದಲ್ಲದೇ, ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದ. ಇಂಥ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಾವು ನೋಡಬೇಕೆ? ಇಂಥವರ ಕುರಿತು ಕಾನೂನು ಕೂಡ ಮೃದುಧೋರಣೆ ಹೊಂದಲು ಸಾಧ್ಯವೇ? ಈ ನಿಟ್ಟಿನಲ್ಲಿ ನಾವು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಫೆಲೆಸ್ತೀನಿಗೆ ಬೆಂಬಲ ಸೂಚಿಸಲು ಇನ್ ಸ್ಟಾಗ್ರಾಮ್ ಪ್ರೊಫೈಲ್ ಚಿತ್ರ ಬದಲಿಸಿದ NBA ತಾರೆ ಕೈರಿ ಇರ್ವಿಂಗ್
ಇಸ್ರೇಲಿ ಸೈನಿಕರಿಂದ ಶಾಲೆಗೆ ಹೋಗಲು ನಿರ್ಬಂಧಿಸಲ್ಪಟ್ಟಿರುವ ಫೆಲೆಸ್ತೀನಿನ ಬಾಲಕನ ಚಿತ್ರ
ಸ್ಟಾರ್ಟ್ಅಪ್ ಸ್ಪಾರ್ಕ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ
ಬೆಂಗಳೂರು : ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಉದ್ಯಮಶೀಲತೆ ಕೇಂದ್ರಿತ ಕಾರ್ಯಕ್ರಮ ‘ಸ್ಟಾರ್ಟ್ಅಪ್ ಸ್ಪಾರ್ಕ್-2026’ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದ 150ಕ್ಕೂ ಹೆಚ್ಚು ಯುವ ಉದ್ಯಮಿಗಳು, ಕೈಗಾರಿಕಾ ಪರಿಣಿತರು ಮತ್ತು ಮಾರ್ಗದರ್ಶಕರು ಭಾಗವಹಿಸಿ, ಚರ್ಚೆ, ಕಲಿಕೆ ಮತ್ತು ನೆಟ್ವರ್ಕಿಂಗ್ನ ವೇದಿಕೆಯಾಯಿತು. ಈ ಕಾರ್ಯಕ್ರಮವನ್ನು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಉದ್ಯಮಶೀಲತೆ ಹಾಗೂ ಸ್ಟಾರ್ಟ್ಅಪ್ ಮಾರ್ಗದರ್ಶನ ದ ಯೋಜನೆಯಾದ ‘ರಿಪ್ಪಲ್’ ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸ್ಪಾರ್ಕ್ ಸಂಯೋಜಕ ಮುಹಮ್ಮದ್ ಸುಹೈಲ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಸ್ಥಾಪನೆ ಮತ್ತು ವಿಸ್ತರಣೆ ಸಂಬಂಧಿತ ಪ್ರಮುಖ ಅಂಶಗಳನ್ನು ಒಳಗೊಂಡ ಚರ್ಚೆಗಳು ನಡೆದವು. ವಕ್ತಾರರು ಸ್ಥಿರತೆ, ಆರ್ಥಿಕ ಶಿಸ್ತು ಮತ್ತು ದೀರ್ಘಕಾಲಿಕ ಬೆಳವಣಿಗೆ ತಂತ್ರಗಳ ಕುರಿತು ಪ್ರಾಯೋಗಿಕ ಅನುಭವಗಳನ್ನು ಹಂಚಿಕೊಂಡರು. ಮೊದಲ ಅಧಿವೇಶನ ‘ಸ್ಟಾರ್ಟ್ಅಪ್ ಪ್ರಯಾಣ: ಕಲ್ಪನೆಯಿಂದ ಮೊದಲ ಮೈಲಿಗಲ್ಲುವರೆಗೆ’ ಎಂಬ ವಿಷಯದ ಮೇಲೆ ಮುಹಮ್ಮದ್ ಅಬ್ರಾರ್ ಆಸಿಫ್ ಅವರ ಸಂಚಾಲನೆಯಲ್ಲಿ ನಡೆಯಿತು. ಈ ಪ್ಯಾನೆಲ್ನಲ್ಲಿ ಡಾ. ಶೈಮಾ ಸೋಹೇನ್ವರ್ಡಿ (ಇಂಟೆಗ್ರೋ ಆಸ್ಪತ್ರೆ), ಸಮೀರ್ ಖಾನ್ (ಸಿಎ ಇಂಡಿಯಾ), ಅಬ್ದುಲ್ ಖದೀರ್ ಶಿರಹಟ್ಟಿ (ಲಾರಿಷ್ ಎಕ್ಸ್ಪಿರಿಯೆನ್ಷಿಯಲ್ ಟಾಯ್ಸ್ ಎಲ್ಎಲ್ಪಿ), ಹಾಗೂ ಹಮ್ಝಾ ಮೊಅಝ್ಝಂ ಅಲಿ (ಸ್ಟ್ಯಾಂಡರ್ಡ್ ಟಚ್) ಭಾಗವಹಿಸಿ ಆರಂಭಿಕ ಹಂತದ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಿದರು. ಎರಡನೇ ಅಧಿವೇಶನ ಸ್ಟಾರ್ಟ್ಅಪ್ ವಿಸ್ತರಣೆ ಮತ್ತು ನಿಧಿ ಸಂಗ್ರಹಣೆಯ ನೈಜ ಸವಾಲುಗಳು ಎಂಬ ವಿಷಯದ ಮೇಲೆ ಅಬ್ದುಲ್ ಖದೀರ್ ಶಿರಹಟ್ಟಿ ಮತ್ತು ಗೌಸ್ ಗಡಾದ್ ಅವರ ಸಂಚಾಲನೆಯಲ್ಲಿ ನಡೆಯಿತು. ಈ ಚರ್ಚೆಯಲ್ಲಿ ಮುಹಮ್ಮದ್ ಅಲಿ ಶರೀಫ್ (ಮೌಂಟ್ ಜುಡಿ), ಸಯ್ಯದ್ ಮುಮ್ತಾಝ್ ಮನ್ಸೂರಿ (ರಗ್ರೆಲ್ ಪ್ರೈವೇಟ್ ಲಿಮಿಟೆಡ್), ಮತ್ತು ಮುಹಮ್ಮದ್ ಖಿಝರ್ (ಇಕೊ ಕ್ರೆವ್) ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಮಾತನಾಡಿ, ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದ ವ್ಯವಹಾರ ಪದ್ಧತಿಗಳೇ ದೀರ್ಘಕಾಲಿಕ ಯಶಸ್ಸಿನ ಕೀಲಿಕೈ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಸಂಪರ್ಕಜಾಲದ ಅವಕಾಶಗಳು ಮತ್ತು ಸಂವಾದಾತ್ಮಕ ಅಧಿವೇಶನಗಳೂ ಸೇರಿದ್ದು, ಭಾಗವಹಿಸಿದವರು ತಮ್ಮ ಆಲೋಚನೆಗಳು ಮತ್ತು ಸವಾಲುಗಳನ್ನು ಮಾರ್ಗದರ್ಶಕರೊಂದಿಗೆ ನೇರವಾಗಿ ಚರ್ಚಿಸಲು ಅವಕಾಶ ದೊರಕಿತು. ಬೆಂಗಳೂರಿನ ನಗರಾಧ್ಯಕ್ಷರಾದ ಸುಹೈಲ್ ಅಹ್ಮದ್ ಧನ್ಯವಾದ ಅರ್ಪಿಸಿದರು.
ರಾಯಚೂರು । ಭೀಕರ ರಸ್ತೆ ಅಪಘಾತ: ಯುವಕ ಮೃತ್ಯು
ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಗಿಮಾನಗಡ್ಡೆ ಬಡಾವಣೆಯ ನಿವಾಸಿ ಆಕಾಶ್(20) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ವೇಳೆ ಯುವಕ ಲಾರಿಯ ಚಕ್ರದ ಕೆಳಗೆ ಸಿಲುಕಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶಂಕರ ಜಯಂತಿಗೆ ಅನುಮತಿ ನಿರಾಕರಿಸಿದ್ದ ಆದೇಶ ಹೈಕೋರ್ಟ್ನಿಂದ ರದ್ದು
ಬೆಂಗಳೂರು : ನಗರದ ವೈಯಾಲಿಕಾವಲ್ನ ಸ್ಯಾಂಕಿ ಪಾರ್ಕ್ನ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಜಾತ್ಯತೀತತೆ ಎಂದರೆ ಧಾರ್ಮಿಕ ಚಟುವಟಿಕೆಯನ್ನು ಹೊರಗಿಡುವುದಲ್ಲ ಎಂದು ಅಭಿಪ್ರಾಯಪಟ್ಟಿದೆ. ಪಶ್ಚಿಮ ನಗರ ಪಾಲಿಕೆ ಕ್ರಮವನ್ನು ಪ್ರಶ್ನಿಸಿ ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್ನ ಕಾರ್ಯದರ್ಶಿ ಕೌಶಿಕ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಶಂಕರಾಚಾರ್ಯರು ಭಾರತದ ಅತ್ಯಂತ ಗೌರವಾನ್ವಿತ ಆಚಾರ್ಯರಲ್ಲಿ ಒಬ್ಬರು. ಅವರು ಪ್ರಚಾರ ಮಾಡಿದ ಅದ್ವೈತ ತತ್ವಶಾಸ್ತ್ರವು ದೇಶದ ಪ್ರಮುಖ ತಾತ್ವಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಶಂಕರಾಚಾರ್ಯ ಜಯಂತಿ ಆಚರಣೆಯನ್ನು ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಎರಡೂ ರೀತಿಯಲ್ಲಿ ಪರಿಗಣಿಸಬೇಕಾಗಿದೆ. ಭಾರತ ಜಾತ್ಯತೀತ ದೇಶವಾಗಿದೆ. ದೇಶದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಆಚರಿಸಲಾಗುವುದಿಲ್ಲವೆಂದು ಅದರ ಅರ್ಥವಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಶಂಕರ ಜಯಮತಿಗೆ ಅನುಮತಿ ನೀಡದೆ ಪಶ್ಚಿಮ ಪಾಲಿಕೆ ಹಿಂಬರಹ ನೀಡಿರುವುದಕ್ಕೆ ಯಾವುದೇ ಆಧಾರವಿಲ್ಲ. ಆ ರೀತಿ ಧಾರ್ಮಿಕ ಜಯಂತಿ ನಿಷೇಧಕ್ಕೆ ಸರಕಾರಿ ನೀತಿಯೂ ಇಲ್ಲ. ಆದ್ದರಿಂದ, ಪಾಲಿಕೆಯ ಆದೇಶವು ಏಕಪಕ್ಷೀಯ ಹಾಗೂ ಸಕಾರಣವಿಲ್ಲದ್ದೆಂದು ಭಾವಿಸಿ, ಅದನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಪ್ರಕರಣವೇನು? ಬೆಂಗಳೂರಿನ ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್ ಸ್ಯಾಂಕಿ ಕೆರೆಯ ಆವರಣದ ಯೋಗ ಸಭಾಂಗಣದಲ್ಲಿ ಶಂಕರ ಜಯಂತಿ ಆಚರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಗೆ ಅನುಮತಿ ಕೋರಿದ್ದರು. ಆದರೆ, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗದು ಎಂದು ಪಶ್ಚಿಮ ಪಾಲಿಕೆ ಹಿಂಬರಹ ನೀಡಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಟ್ರಸ್ಟ್, ಸಭಾಂಗಣದಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧಿಸಲು ಯಾವುದೇ ನಿಯಮ ಹಾಗೂ ನಿಬಂಧನೆಗಳಿಲ್ಲ. ಆದರೂ ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿತ್ತು.
RR Vs LSG- ಬೌಲರ್ ಗಳ ಮೆರೆದಾಟದ ನಡುವೆ ರವೀಂದ್ರ ಜಡೇಜಾ ಆಲ್ರೌಂಡ್ ಆಟ; ಏಕಾನಾದಲ್ಲಿ ಲಖನೌ ಗೆ ಮುಖಭಂಗ
ರವೀಂದ್ರ ಜಡೇಜಾ ಅವರ ಅಲ್ರೌಂಡ್ ಆಟ ಮತ್ತು ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 40 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಆಢಿದ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಕಲೆ ಹಾಕಿರುವ ರಿಯಾನ್ ಪರಾಗ್ ಬಳಗ ಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಸೀಸನ್ ನಲ್ಲಿ ನಿರಂತರ 4 ಸೋಲು ಕಂಡ ಲಖನೌ ಸೂಪರ್ ಜೈಂಟ್ಸ್ ತಂಡ 9ನೇ ಸ್ಥಾನದಲ್ಲಿದೆ. ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ 18 ಓವರ್ ಗಳಲ್ಲಿ 119 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.()ಲಖನೌ ಪರ ಆರಂಭಿಕ ಮಿಚೆಲ್ ಮಾರ್ಷ್(41 ಎಸೆತದಲ್ಲಿ 55 ರನ್) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೋರಾಟದ ಮನೋಭಾವ ಪ್ರದರ್ಶಿಸಲಿಲ್ಲ. ಆಯುಶ್ ಬದೋನಿ, ರಿಷಬ್ ಪಂತ್ ಮತ್ತು ಐಡನ್ ಮಾರ್ಕಂ ಅವರು ಶೂನ್ಯ ರನ್ ಗೆ ಔಚಾಗಿದ್ದು ತಂಡಕ್ಕೆ ಮುಳುವಾಯಿತು. ರಾಜಸ್ಥಾನ ತಂಡದ ಪರ ಜೋಫ್ರಾ ಆರ್ಚರ್ 3 ವಿಕೆಟ್ ಕಬಳಿಸಿದರು. ನ್ಯಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ ತಲಾ 2 ವಿಕೆಟ್ ಗಳಿಸಿದರು. ಉಳಿದೆರಡು ವಿಕೆಟ್ ಗಳನ್ನು ರವೀಂದ್ರ ಜಡೇಜಾ ಮತ್ತು ರವಿ ಬಿಷ್ಣೋಯಿ ಹಂಚಿಕೊಂಡರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. 4 ಓವರ್ ಗಳಲ್ಲಿ ತಂಡದ ಮೊತ್ತ 32 ಅಗುವುದರೊಳಗೆ ಯಶಸ್ವಿ ಜೈಸ್ವಾಲ್, ಧ್ರುವ್ ಜ್ಯುರೆಲ್ ಮತ್ತು ವೈಭವ್ ಸೂರ್ಯವಂಶಿ ಅವರ ವಿಕೆಟ್ ಅನ್ನು ತಂಡ ಕಳೆದುಕೊಂಡಿತು. ವೈಭವ್ ಸೂರ್ಯವಂಶಿ ಅವರು ಈ ಹಂತದಲ್ಲಿ ಗಳಿಸಿದ ದಾಖಲೆಯನ್ನು ಬರೆದರು. ಈ ಹಿಂದೆ ಈ ದಾಖಲೆ ಗ್ಲೆನ್ ಮ್ಯಾಕ್ಸ್ ವೆಲ್ ಹೆಸರಿನಲ್ಲಿತ್ತು. ವೈಭವ್ ಸೂರ್ಯವಂಶಿ ಅವರ ವಿಕೆಟ್ ಪತನದ ಬಳಿಕ ನಾಯಕ ರಿಯಾನ್ ಪರಾಗ್ (19 ಎಸೆತದಲ್ಲಿ 22), ಶಿಮ್ರಾನ್ ಹೆಟ್ಮೇಯರ್ (18 ಎಸೆತದಲ್ಲಿ 22), ರವೀಂದ್ರ ಜಡೇಜಾ(29 ಎಸೆತಗಳಲ್ಲಿ ಅಜೇಯ 43) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ತಂಡ 150ರ ಗಡಿ ದಾಟುವಂತಾಯಿತು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 159/6, ರವೀಂದ್ರ ಜಡೇಜಾ 43(29), ಜೈಸ್ವಾಲ್ 22(12), ಹೆಟ್ಮೇಯರ್ 22(18), ಮೊಹ್ಸಿನ್ 17ಕ್ಕೆ 2, ಪ್ರಿನ್ಸ್ ಯಾದವ್ 29ಕ್ಕೆ 2, ಮೊಹಮ್ಮದ್ ಶಮಿ 30ಕ್ಕೆ 2. ಲಖನೌ ಸೂಪರ್ ಜೈಂಟ್ಸ್ 18 ಓವರ್ ಗಳಲ್ಲಿ 119/10, ಮಿಚೆಲ್ ಮಾರ್ಷ್ 55(41), ನಿಕೋಲಸ್ ಪೂರನ್ 22(25), ಹಿಮ್ಮತ್ ಸಿಂಗ್ 15(15), ಜೋಫ್ರಾ ಆರ್ಚರ್ 20ಕ್ಕೆ 3, ಬರ್ಗರ್ 27ಕ್ಕೆ2, ಬ್ರಿಜೇಶ್ 18ಕ್ಕೆ2, ರವೀಂದ್ರ ಜಡೇಜಾ 29ಕ್ಕೆ1, ರವಿ ಬಿಷ್ಣೋಯಿ 23ಕ್ಕೆ1.
Belagavi : ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಚಿಂಚಲಿ ಪ.ಪಂ. ಮುಖ್ಯಾಧಿಕಾರಿ ಮೃತ್ಯು
ಬೆಳಗಾವಿ : ರಾಜ್ಯದಲ್ಲಿ ತೀವ್ರ ಬಿಸಿಲಿನ ತಾಪ ಹೆಚ್ಚಳವಾಗಿದೆ. ಈ ನಡುವೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿಸಿಲಿ ತಾಪದಿಂದ ಕುಸಿದುಬಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರನ್ನು ರಾಯಬಾಗ ಪಟ್ಟಣದ ನಿವಾಸಿ ವೆಂಕಟೇಶ್ ಬಳ್ಳಾರಿ (35)ಎಂದು ಗುರುತಿಸಲಾಗಿದೆ. ಸೋಮವಾರ ಬಸವೇಶ್ವರ ಜಯಂತಿ ಅಂಗವಾಗಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರು ಏಕಾಏಕಿ ಸುಸ್ತಾಗಿ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ತೀವ್ರ ಬಿಸಿಲಿನ ತಾಪದಿಂದ ಉಂಟಾದ ಹೀಟ್ ಸ್ಟ್ರೋಕ್ ಅಥವಾ ಸಂಬಂಧಿತ ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಧಿಕೃತ ಮರಣ ಕಾರಣ ವೈದ್ಯಕೀಯ ವರದಿ ಬಳಿಕ ತಿಳಿದುಬರುವ ನಿರೀಕ್ಷೆಯಿದೆ. ಕಳೆದ 48 ಗಂಟೆಗಳಲ್ಲಿ ರಾಜ್ಯದಲ್ಲಿ ಇದು ಎರಡನೇ ಹೀಟ್ ಸ್ಟ್ರೋಕ್ ಅನುಮಾನಿತ ಸಾವು ಎನ್ನಲಾಗಿದೆ. ವೆಂಕಟೇಶ್ ನಿಧನಕ್ಕೆ ಸಾರ್ವಜನಿಕರು ಹಾಗೂ ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆ ಎಚ್ಚರಿಕೆ: ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನವು 40ರಿಂದ 45 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುತ್ತಿರುವ ಹಿನ್ನೆಲೆ, ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು ಮಧ್ಯಾಹ್ನ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸುವಂತೆ ಹಾಗೂ ಸಾಕಷ್ಟು ನೀರು ಸೇವಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
IPL 2026 | ಲಕ್ನೊ ವಿರುದ್ಧ ರಾಜಸ್ಥಾನಕ್ಕೆ ಜಯ; ಮಾರ್ಷ್ ಹೋರಾಟ ವ್ಯರ್ಥ
ಲಕ್ನೊ, ಎ. 22: ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ ಆತಿಥೇಯ ಲಕ್ನೊ ಸೂಪರ್ ಜಯಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 40 ರನ್ ಗಳ ಅಂತರದಿಂದ ಸೋಲುಂಡಿತು. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡವು ತಾನಾಡಿದ ಏಳನೇ ಪಂದ್ಯದಲ್ಲಿ ಐದನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಲಕ್ನೊ ತಂಡವು ಏಳನೇ ಪಂದ್ಯದಲ್ಲಿ ಐದನೇ ಸೋಲು ಅನುಭವಿಸಿ 9ನೇ ಸ್ಥಾನದಲ್ಲಿದೆ. ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ 32ನೇ ಐಪಿಎಲ್ ಪಂದ್ಯದಲ್ಲಿ ಲಕ್ನೊ ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ರವೀಂದ್ರ ಜಡೇಜ (ಔಟಾಗದೆ 43, 29 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರ ಸಾಹಸದಿಂದ ರಾಜಸ್ಥಾನ ತಂಡವು ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 159 ರನ್ ಗಳಿಸಿತು. ಗೆಲ್ಲಲು 160 ರನ್ ಗುರಿ ಪಡೆದ ಲಕ್ನೊ ತಂಡವು 18 ಓವರ್ ಗಳಲ್ಲಿ ಕೇವಲ 119 ರನ್ ಗಳಿಸಿ ಆಲೌಟ್ ಆಯಿತು. ಲಕ್ನೊ ತಂಡವು 2.5 ಓವರ್ ಗಳಲ್ಲಿ 11 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತು. ಆಯುಷ್ ಬದೋನಿ, ನಾಯಕ ರಿಷಭ್ ಪಂತ್ ಹಾಗೂ ಮರ್ಕ್ರಮ್ ಶೂನ್ಯಕ್ಕೆ ಔಟಾದರು. ಮಾರ್ಷ್ ಹಾಗೂ ಪೂರನ್ ನಾಲ್ಕನೇ ವಿಕೆಟ್ ಗೆ 43 ರನ್ ಸೇರಿಸಿ ಇನ್ನಿಂಗ್ಸ್ನ್ನು ಪುನರ್ನಿರ್ಮಿಸಲು ಯತ್ನಿಸಿದರು. ರಾಜಸ್ಥಾನದ ಪರವಾಗಿ ಜೋಫ್ರಾ ಆರ್ಚರ್ (3-20) ಯಶಸ್ವಿ ಪ್ರದರ್ಶನ ನೀಡಿದರು. ನಾಂಡ್ರೆ ಬರ್ಗರ್ (2-27) ಹಾಗೂ ಬ್ರಿಜೇಶ್ ಶರ್ಮಾ (2-18) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ರಾಜಸ್ಥಾನ ತಂಡಕ್ಕೆ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ (8 ರನ್) ಹಾಗೂ ಯಶಸ್ವಿ ಜೈಸ್ವಾಲ್ (22 ರನ್) 2.5 ಓವರ್ ಗಳಲ್ಲಿ 32 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಮುಹಮ್ಮದ್ ಶಮಿ ಅವರು ಜೈಸ್ವಾಲ್ ವಿಕೆಟ್ ಉರುಳಿಸಿದ ತಕ್ಷಣವೇ ಧ್ರುವ್ ಜುರೆಲ್ (0) ಹಾಗೂ ಸೂರ್ಯವಂಶಿ ಪೆವಿಲಿಯನ್ ಗೆ ಮರಳಿದರು. ನಾಲ್ಕನೇ ವಿಕೆಟ್ ಗೆ 30 ರನ್ ಸೇರಿಸಿದ ನಾಯಕ ರಿಯಾನ್ ಪರಾಗ್ (20 ರನ್, 19 ಎಸೆತ) ಹಾಗೂ ಶಿಮ್ರೊನ್ ಹೆಟ್ಮೆಯರ್ (22 ರನ್, 18 ಎಸೆತ) ತಂಡವನ್ನು ಆಧಾರಿಸಿದರು. ಪರಾಗ್ ಹಾಗೂ ಹೆಟ್ಮೆಯರ್ ಬೆನ್ನುಬೆನ್ನಿಗೆ ಔಟಾದರು. ಆಗ ಆರನೇ ವಿಕೆಟ್ ಗೆ 33 ರನ್ ಜೊತೆಯಾಟ ನಡೆಸಿದ ರವೀಂದ್ರ ಜಡೇಜ ಹಾಗೂ ಡೊನೋವನ್ ಫೆರೇರಾ (20 ರನ್, 19 ಎಸೆತ, 2 ಬೌಂಡರಿ) ರಾಜಸ್ಥಾನದ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಫೆರೇರಾ ಔಟಾದ ನಂತರ ಬಂದ ಶುಭಮ್ ದುಬೆ (ಔಟಾಗದೆ 19, 11 ಎಸೆತ) ಜಡೇಜ ಜೊತೆಗೂಡಿ ಏಳನೇ ವಿಕೆಟ್ ಗೆ ಕೇವಲ 25 ಎಸೆತಗಳಲ್ಲಿ 49 ರನ್ ಸೇರಿಸಿ ತಂಡದ ಸ್ಕೋರ್ ಅನ್ನು 159ಕ್ಕೆ ತಲುಪಿಸಿದರು. ಲಕ್ನೊ ತಂಡದ ಪರವಾಗಿ ಮುಹ್ಸಿನ್ ಖಾನ್ (2-17), ಪ್ರಿನ್ಸ್ ಯಾದವ್ (2-29) ಹಾಗೂ ಮುಹಮ್ಮದ್ ಶಮಿ (2-30) ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್: 20 ಓವರ್ ಗಳಲ್ಲಿ 159/6 (ರವೀಂದ್ರ ಜಡೇಜ ಔಟಾಗದೆ 43, ಯಶಸ್ವಿ ಜೈಸ್ವಾಲ್ 22, ಹೆಟ್ಮೆಯರ್ 22, ಪರಾಗ್ 20, ಫೆರೇರಾ 20, ಶುಭಮ್ ದುಬೆ ಔಟಾಗದೆ 19, ಮುಹ್ಸಿನ್ ಖಾನ್ 2-17, ಪ್ರಿನ್ಸ್ ಯಾದವ್ 2-29, ಮುಹಮ್ಮದ್ ಶಮಿ 2-30) ಲಕ್ನೊ ಸೂಪರ್ ಜಯಂಟ್ಸ್: 18 ಓವರ್ ಗಳಲ್ಲಿ 119 ರನ್ ಗೆ ಆಲೌಟ್ (ಮಿಚೆಲ್ ಮಾರ್ಷ್ 55, ನಿಕೊಲಸ್ ಪೂರನ್ 22, ಆರ್ಚರ್ 3-20, ನಾಂಡ್ರೆ ಬರ್ಗರ್ 2-27, ಬ್ರಿಜೇಶ್ ಶರ್ಮಾ 2-18, ಜಡೇಜ 1-29)
ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಮೀನು ಮಂಜೂರಾತಿ ಪ್ರಶ್ನಿಸಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರಕಾರಿ ಜಮೀನನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂಬ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಎನ್.ಎನ್. ಗೋಪಾಲಕೃಷ್ಣ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಹಾಗೂ ಕಾಂಗ್ರೆಸ್ ಭವನ ಟ್ರಸ್ಟ್ಗೆ ನೊಟೀಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ತುಮಕೂರು ಹೋಬಳಿಯ ಮಾರಲೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿರುವ ಸುಮಾರು 4 ಎಕರೆ ಜಮೀನನ್ನು 1942ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ (ನಗರದ ಕಸ ವಿಲೇವಾರಿಗಾಗಿ) ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಈ ಜಮೀನಿನಲ್ಲಿ 2 ಎಕರೆ ಪ್ರದೇಶವನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ರಾಜೀವ್ ಗಾಂಧಿನಗರ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಮಂಜೂರಾತಿ ನೀಡುವಾಗ ಯಾವುದೇ ಅರ್ಜಿ ಸಲ್ಲಿಸದ 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ಜಮೀನು ನೀಡಲಾಗಿದೆ. ಜಮೀನು ಮಂಜೂರಾಗುವ ಸಂದರ್ಭದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಅಸ್ತಿತ್ವದಲ್ಲೇ ಇರಲಿಲ್ಲ. ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಈ ಖಾಸಗಿ ಸಂಸ್ಥೆಯ ಉದ್ದೇಶವೇ ಬಹಿರಂಗವಾಗಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಮಾರುಕಟ್ಟೆ ದರದ ಪ್ರಕಾರ ಈ ಜಮೀನಿನ ಮೌಲ್ಯ ಸುಮಾರು 23 ಕೋಟಿ ರೂ. ಆಗಿದ್ದರೂ, ಸರ್ಕಾರ ಇದನ್ನು ಕೇವಲ 17 ಲಕ್ಷ ರೂ.ಗಳಿಗೆ (ಮಾರ್ಗದರ್ಶಿ ದರದ ಶೇ. 5 ರಷ್ಟು) ನೀಡಿದೆ. ಇದರಿಂದ, ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಸರ್ಕಾರಿ ಸುತ್ತೋಲೆಗಳ ಪ್ರಕಾರ ಇಂಥ ಜಮೀನುಗಳನ್ನು ಮಾರುಕಟ್ಟೆ ದರದಲ್ಲಿ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವಿದ್ದು, ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಆದ್ದರಿಂದ, ಕಾಂಗ್ರೆಸ್ ಭವನ ಟ್ರಸ್ಟ್ಗೆ ಜಮೀನು ಮಂಜೂರು ಮಾಡಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾಗ ಕೆಎಲ್ ರಾಹುಲ್ ಅವರಿಗೆ ತಂಡದ ಮಾಲೀಕ ನಿಧಾನಗತಿಯ ಆಟ ಎಂದು ತರಾಟೆಗೆ ತೆಗೆದುಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ದಿಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ವಿರುದ್ಧ 47 ರನ್ ಗಳ ಪರಾಭವ ಅನುಭವಿಸಿದ ಬಳಿಕ ಕೆಎಲ್ ರಾಹುಲ್ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಅವರು ಮತ್ತು ಮತ್ತೊಬ್ಬ ಬ್ಯಾಟರ್ ನಿತೀಶ್ ರಾಣಾ ಅವರ ಬ್ಯಾಟಿಂಗ್ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಏಪ್ರಿಲ್ 21ರ ಮಂಗಳವಾರದಂದು ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ದಿಲ್ಲಿ ಕ್ಯಾಪಿಟಲ್ಸ್ ತಂಡವನ್ನು . ಈ ಪಂದ್ಯದಲ್ಲಿ 2413 ರನ್ ಗಳ ಗುರಿ ಪಡೆದಿದ್ದರೂ ಕೆಎಲ್ ರಾಹುಲ್(23 ಎಸೆತಗಳಲ್ಲಿ 37) ಮತ್ತು ನಿತೀಶ್ ರಾಣಾ(30 ಎಸೆತಗಳಲ್ಲಿ 57) ಅವರು ಅಮೆಗತಿಯಲ್ಲಿ ಆಡಿದರು ಎಂಬ ಟೀಕೆ ಕೇಳಿ ಬಂದಿದೆ. ()ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ತಂಡದ ನಿರ್ದೇಶಕ ವೇಣುಗೋಪಾಲ ರಾವ್ ಅವರು ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ರನ್ ಪೇರಿಸಲು ವಿಫಲರಾಗಿದ್ದೇ ತಂಡದ ಸೋಲಿಗೆ ಕಾರಣ ಎಂದರು, ನಮ್ಮ ಬ್ಯಾಟರ್ಗಳು ಲಯ ಕಂಡುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡರು. ಇಂತಹ ಬೃಹತ್ ಗುರಿ ಇರುವಾಗ ಪ್ರತಿಯೊಂದು ಎಸೆತವೂ ಮುಖ್ಯ. ನಾವು ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಬೇಕಿತ್ತು. ಕೆ.ಎಲ್. ರಾಹುಲ್ ಅವರಂತಹ ಅನುಭವಿ ಆಟಗಾರನಿಗೆ ಪವರ್ಪ್ಲೇನಲ್ಲಿ ಸರಿಯಾದ ಬೆಂಬಲ ಸಿಗಲಿಲ್ಲ ಮತ್ತು ನಿತೀಶ್ ರಾಣಾ ಅವರ ನಿಧಾನಗತಿಯ ಆರಂಭ ನಮಗೆ ಮುಳುವಾಯಿತು, ಎಂದು ವೇಣುಗೋಪಾಲ್ ರಾವ್ ವಿಶ್ಲೇಷಿಸಿದರು. ಪವರ್ ಪ್ಲೇನಲ್ಲಿ 25-30 ರನ್ ವ್ಯತ್ಯಾಸ 240ಕ್ಕೂ ಅಧಿಕ ರನ್ಗಳನ್ನು ಬೆನ್ನಟ್ಟುವಾಗ ಮೊದಲ 6 ಓವರ್ಗಳಲ್ಲಿ ಕನಿಷ್ಠ 80 ರಿಂದ 90 ರನ್ ಗಳಿಸುವುದು ಅತ್ಯಗತ್ಯ. ಆದರೆ ನಾವು ಕೇವಲ 59 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ 25-30 ರನ್ಗಳ ವ್ಯತ್ಯಾಸವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು, ಎಂದು ಅವರು ಬೇಸರ ವ್ಯಕ್ತಪಡಿಸಿದರು.ಕೆ.ಎಲ್. ರಾಹುಲ್: ಪವರ್ಪ್ಲೇನಲ್ಲಿ ರಾಹುಲ್ ಅವರಿಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ. ಆರಂಭಿಕ ಜೊತೆಗಾರ ಪಥುಮ್ ನಿಸ್ಸಾಂಕ ಬೇಗನೇ ಔಟಾದ ನಂತರ, ರಾಹುಲ್ ಅಬ್ಬರಿಸಬೇಕಿತ್ತು. ಆದರೆ ನಿತೀಶ್ ರಾಣಾ ಕ್ರೀಸ್ಗೆ ಬಂದಾಗ ರನ್ ಗತಿ ಮತ್ತಷ್ಟು ಕುಸಿಯಿತು. ನಿತೀಶ್ ರಾಣಾ: ರಾಣಾ ಅವರು ತಮ್ಮ ಇನಿಂಗ್ಸ್ನ ಆರಂಭದ 15-20 ಎಸೆತಗಳಲ್ಲಿ ರನ್ ಗಳಿಸಲು ಪರದಾಡಿದರು. ಇದು ರಾಹುಲ್ ಅವರ ಮೇಲೂ ಒತ್ತಡ ಹೇರಿತು. ನಂತರ ರಾಣಾ ದೊಡ್ಡ ಹೊಡೆತಗಳನ್ನು ಬಾರಿಸಿದರೂ, ಅಷ್ಟರಲ್ಲೇ ಅಗತ್ಯ ರನ್ ರೇಟ್ 15ಕ್ಕಿಂತಲೂ ಅಧಿಕವಾಗಿತ್ತು. ಜಾಲತಾಣಗಳಲ್ಲಿ ಟ್ರೋಲ್ 'ಎಕ್ಸ್'ನಲ್ಲಿ ಅಭಿಮಾನಿಗಳು ವಿವಿಧ ಮೀಮ್ಗಳ (Memes) ಮೂಲಕ ರಾಹುಲ್ ಅವರನ್ನು ಲೇವಡಿ ಮಾಡುತ್ತಿದ್ದಾರೆ. ಅವರು ಟೆಸ್ಟ್ ಪಂದ್ಯದಂತೆ ಐಪಿಎಲ್ ಆಡುತ್ತಿದ್ದಾರೆ, ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಿದ್ದಾರೆ ಎಂಬಂತಹ ಕಮೆಂಟ್ಗಳು ಹರಿದಾಡುತ್ತಿವೆ. ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್ ಗಳಿಸಿದರೂ, ತಂಡ ಸೋತಾಗ ಅವರ ಇನ್ನಿಂಗ್ಸ್ನ ವೇಗದ ಬಗ್ಗೆ ಚರ್ಚೆಗಳು ನಡೆದಿದ್ದವು.
ಸಮಗ್ರ ಮಹಿಳಾ ಮೀಸಲಾತಿಯನ್ನು ಕೋರಿದ ವಿಮ್; ತಿರಸ್ಕೃತ ಮಸೂದೆಗೆ ಸ್ವಾಗತ: ಯಾಸ್ಮಿನ್ ಇಸ್ಲಾಂ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಸಂಸತ್ತಿನಲ್ಲಿ ಸಂವಿಧಾನ (131ನೇ ತಿದ್ದುಪಡಿ ) ಮಸೂದೆ, 2026ಯ ತಿರಸ್ಕಾರವನ್ನು ಸ್ವಾಗತಿಸಿದೆ. ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡನೆ ಸಮಾನ ಪ್ರತಿನಿಧಿತ್ವದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟು ಹಾಕಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಹೇಳಿದರು. ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು WIM ಪರಿಗಣಿಸಿದ್ದು, ಮುಂಬರುವ ಚುನಾವಣೆಗಳ ಮುನ್ನ ಜನರ ಗ್ರಹಿಕೆಯನ್ನು ರೂಪಿಸಲು ಮತ್ತು ಮಹಿಳಾ ಹಕ್ಕುಗಳ ರಕ್ಷಕ ಎಂದು ಆಡಳಿತ ವ್ಯವಸ್ಥೆಯನ್ನು ಬಿಂಬಿಸಲು ಇದನ್ನು ಬಳಸಲಾಗಿದೆ ಎಂದು ಆರೋಪಿಸಿದರು. ಆದರೆ ಇಲ್ಲಿ ನಿಜವಾದ ಸಬಲೀಕರಣದ ಪ್ರಶ್ನೆಯನ್ನು ಪರಿಹರಿಸಲಾಗಿಲ್ಲ ಎಂದು ಅವರು ಹೇಳಿದರು. ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡನೆ ಅಥವಾ ಸ್ಥಾನ ವಿಸ್ತರಣೆಗೆ ಹೊಂದಿಸಿಕೊಳ್ಳುವ ಮೂಲಕ ಅನಿಶ್ಚಿತತೆಗೆ ಅಥವಾ ಪ್ರಕ್ರಿಯಾತ್ಮಕ ವಿಳಂಬಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು WIM ಒತ್ತಿ ಹೇಳಿದೆ. ಮಹಿಳಾ ಪ್ರತಿನಿಧಿತ್ವದ ದೀರ್ಘಕಾಲದ ಬೇಡಿಕೆಯನ್ನು ಯಾವುದೇ ಷರತ್ತುಗಳಿಲ್ಲದೆ, ತಕ್ಷಣ ಮತ್ತು ಸ್ವತಂತ್ರವಾಗಿ ಮುಂದುವರಿಸಬೇಕು. ಭಾರತದ ಸಾಮಾಜಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಅರ್ಥಪೂರ್ಣ ಪ್ರತಿನಿಧಿತ್ವವನ್ನು ಖಚಿತಪಡಿಸುವ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಲು WIM ಒತ್ತಾಯಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
Bengaluru | ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಸಾವು: ಆರೋಪ
ಬೆಂಗಳೂರು : ನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮರ್ಮಾಂಗದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನವಾಜ್ಗೆ ಚಿಕಿತ್ಸೆ ನೀಡಿದರೂ, ಗಾಯಕ್ಕೆ ಹೊಲಿಗೆ ಹಾಕಿರಲಿಲ್ಲ. ಹೀಗಾಗಿ ನೋವು ತಾಳಲಾರದೆ ನರಳಿ ಅವರು ಪ್ರಾಣಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ನವಾಜ್ ಮರ್ಮಾಂಗ ದಲ್ಲಿ ಗಡ್ಡೆ ಕಾಣಿಸಿಕೊಂಡ ಹಿನ್ನೆಲೆ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿದ್ದರು. ಸೋಂಕಿನ ಕಾರಣ ಆತನ ಮರ್ಮಾಂಗ ಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು, ಮುಂದಿನ ಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಆಪರೇಷನ್ ವಿಭಾಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಡುವೆ ಸಮನ್ವಯತೆಯ ಕೊರತೆಯ ಕಾರಣದಿಂದ, ಗಾಯ ಆರುವ ಮುನ್ನವೇ ರೋಗಿಯನ್ನು ಡಿಸ್ಚಾರ್ಜ್ ಆಗುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಡ ಹೇರಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಜಾಗಕ್ಕೆ ಹೊಲಿಗೆಯನ್ನೂ ಹಾಕದೆ ಅವರನ್ನು ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತೆ ದಾಖಲಿಸಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅನಿವಾರ್ಯವಾಗಿ ಪತ್ನಿ ತನ್ನ ಗಂಡ ನವಾಜ್ ಅವರನ್ನು ಮೂರು ದಿನಗಳ ಕಾಲ ಆಸ್ಪತ್ರೆಯ ಹೊರಗಿನ ಫುಟ್ಪಾತ್ನಲ್ಲೇ ಇರಿಸಿದ್ದರು. ರಕ್ತಸ್ರಾವ, ತೀವ್ರ ನೋವಿನಿಂದ ನರಳಿ ನವಾಜ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ನವಾಜ್ ಅವರ ಪತ್ನಿ ಮತ್ತು ನಾಲ್ವರು ಮಕ್ಕಳು ಬೀದಿಗೆ ಬಿದ್ದಿದ್ದಾರೆ. ‘ಪ್ರಕರಣದ ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ರೋಗಿಯನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ ನಮ್ಮ ಗಮನಕ್ಕೆ ಬಂದಿದೆ. ಸಮಿತಿಯ ವರದಿಯ ಆಧಾರದ ಮೇಲೆ ವೈದ್ಯರು ಅಥವಾ ಸಿಬ್ಬಂದಿಯ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ -ಡಾ. ದೀಪಕ್, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ
ʼವಿದ್ಯಾರ್ಥಿಗಳ ಚುನಾವಣೆʼ ನಾಯಕತ್ವ ರೂಪಿಸಿಕೊಳ್ಳಲು ಅತ್ಯುತ್ತಮ ಹೆಜ್ಜೆ: ಡಾ. ಎಂ.ಸಿ ಸುಧಾಕರ್
ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾದ ಚುನಾವಣೆಗಳು ಅನಿವಾರ್ಯವಾಗಿದ್ದು, ಕಾಲೇಜುಗಳಲ್ಲಿ ನಡೆಯುವ ವಿದ್ಯಾರ್ಥಿಗಳ ಚುನಾವಣೆ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನಾಯಕತ್ವ ರೂಪಿಸಿಕೊಳ್ಳಲು ಅತ್ಯುತ್ತಮ ಹೆಜ್ಜೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಇಲ್ಲಿನ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಪ್ರಕ್ರಿಯೆ ಸಂಬಂಧಪಟ್ಟಂತೆ ಆಯೋಜಿಸಿದ್ದ ‘ರಾಜ್ಯದ ವಿದ್ಯಾರ್ಥಿ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ನಿವೃತ್ತ ಕೇಂದ್ರ ಚುನಾವಣಾ ಆಯುಕ್ತ ಲಿಂಗ್ಡೊ ಸಮಿತಿ ನೀಡಿರುವ ಶಿಫಾರಸುಗಳ ಆಧಾರದ ಮೇಲೆ ದೇಶದ ಕೆಲವು ವಿಶ್ವವಿದ್ಯಾಲಯಗಳು ಚುನಾವಣೆ ನಡೆಸುತ್ತಿವೆ. ಈ ಮಾನದಂಡದ ಆಧಾರದ ಮೇಲೆಯೇ ರಾಜ್ಯದಲ್ಲಿಯೂ ಚುನಾವಣೆಯನ್ನು ನಡೆಸಲಾಗುವುದು ಎಂದರು. ಅಧ್ಯಾಪಕರ ಬೆಂಬಲ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಸ್ಥೆಗಳ ಅಧ್ಯಾಪಕರು ಮತ್ತು ಶಿಕ್ಷಕರ ಸಂಘಗಳ ಪ್ರತಿನಿಧಿಗಳು ವಿದ್ಯಾರ್ಥಿ ಚುನಾವಣೆಗಳ ಆರಂಭಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾಲೇಜು ಆಡಳಿತ ಮಂಡಳಿಗಳ ವಿರೋಧ: ಸಭೆಯಲ್ಲಿ ಭಾಗವಹಿಸಿದ್ದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿವೆ. ಚುನಾವಣೆ ನಡೆದಲ್ಲಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ವ್ಯವಸ್ಥೆಗೆ ತೊಡಕು ಉಂಟಾಗುತ್ತದೆ ಎಂಬ ಅಭಿಪ್ರಾಯವನ್ನು ಕೆಲವು ಆಡಳಿತ ಮಂಡಳಿಯ ಸದಸ್ಯರು ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಂಘಟನೆಗಳಾದ ಎಸ್.ಎಫ್.ಐ, ಎ.ಬಿ.ವಿ.ಪಿ, ಎನ್.ಎಸ್.ಯು.ಐ, ಎ.ಐ.ಡಿ.ಎಸ್.ಒ, ಎ.ಐ.ಎಸ್.ಎಫ್, ಮತ್ತು ಎ.ಐ.ಎಸ್.ಒನ ಪ್ರತಿನಿಧಿಗಳು ಭಾಗವಹಿಸಿದ್ದರು.
ಭಟ್ಕಳ: ಅಕ್ರಮ ಜಾನುವಾರು ಸಾಗಾಟ ಆರೋಪ; ಪ್ರಕರಣ ದಾಖಲು
ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿ ವಧೆಗೆ ಯತ್ನಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಗರದ ಬಂದರ್ ರೋಡ್ 3ನೇ ಕ್ರಾಸ್ ನಿವಾಸಿ ಶಿಯಾಮ್ (42) ಸೇರಿದಂತೆ ಇತರರು ಸೇರಿಕೊಂಡು ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳು ಬಂದರ್ ರೋಡ್ 6ನೇ ಕ್ರಾಸ್ ಸಮೀಪದ ಖಾಲಿ ಜಾಗಕ್ಕೆ ವಾಹನದ ಮೂಲಕ ಎತ್ತುಗಳನ್ನು ತಂದು, ಅವುಗಳಿಗೆ ನೀರು ಹಾಗೂ ಮೇವು ನೀಡದೆ ಕಟ್ಟಿ ಹಾಕಿ, ವಧೆ ಮಾಡುವ ಉದ್ದೇಶದಿಂದ ಬೇರೆಡೆಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಎತ್ತುಗಳನ್ನು ರಕ್ಷಿಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಿಎಸ್ಐ ತಿಮ್ಮಪ್ಪ ಎಸ್. ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿಗೆ ರಾಜಕೀಯ ಅಸ್ತ್ರವಾಗಿರುವ ಮಹಿಳಾ ಮೀಸಲಾತಿ : ಡಾ.ಆರತಿ ಕೃಷ್ಣ ಆಕ್ರೋಶ
ಬೆಂಗಳೂರು : ನಾರಿ ಶಕ್ತಿ ವಂದನ ಅಧಿನಿಯಮ-2023ರ ಅನುಷ್ಠಾನ ವಿಧೇಯಕ ಲೋಕಸಭೆಯ ಅನುಮೋದನೆ ಪಡೆಯುವಲ್ಲಿ ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಹಿಳಾ ಮೀಸಲಾತಿಯು ರಾಜಕೀಯ ಅಸ್ತ್ರವಾಗಿದೆಯೆ ಹೊರತು, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಡೆ ಗಮನವಿಲ್ಲ ಎಂದು ವಿಧಾನಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳೆಯರಿಗೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಿದ್ದೇ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ. ಇದು ಬಿಜೆಪಿಯವರಿಗೆ ತಿಳಿದರಲಿ. ಈಗ ಮಂಡನೆಯಾಗಿರುವ ವಿಧೇಯಕದಲ್ಲಿರುವ ಲೋಪಗಳನ್ನು ಸರಿಪಡಿಸಿಬೇಕೆಂಬುದು ಕಾಂಗ್ರೆಸ್ ಪಕ್ಷದ ಆಗ್ರಹ ಎಂದು ಹೇಳಿದ್ದಾರೆ. ಕ್ಷೇತ್ರ ಮರು ವಿಂಗಡಣೆ ಕಡ್ಡಾಯ ಮಸೂದೆಯ ಪ್ರಕಾರ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಮರು ವಿಂಗಡಣೆ ನಂತರವೇ ಜಾರಿಗೆ ಬರುತ್ತದೆ. ಇದು ಜಾರಿಯಲ್ಲಾಗುವ ವಿಳಂಬ ನೀತಿ. ಮಸೂದೆ ತಕ್ಷಣ ಜಾರಿಯಾಗದೆ 2029ಕ್ಕೆ ಜಾರಿಯಾದಲ್ಲಿ, ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಅನ್ಯಾಯವಾಗುತ್ತದೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಎಂದು ಆರತಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಇಲ್ಲದಿರುವುದು ಮತ್ತು ಆರ್ಥಿಕವಾಗಿ ಬಲಾಢ್ಯರಿಗೆ ಮಾತ್ರ ಅವಕಾಶಗಳಿರುವುದರಿಂದ ಸೂಕ್ತ ಮಾನದಂಡಗಳನ್ನು ಅಳವಡಿಸಿ ಸಮಾಜದ ಎಲ್ಲ ವರ್ಗದ ಹೆಣ್ಣು ಮಕ್ಕಳು ಶೇ.33ರ ಮೀಸಲಾತಿಯೊಳಗೆ ಬರಬೇಕೆಂಬ ಸಂಕಲ್ಪ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಕಾಂಗ್ರೆಸ್ ವಿರೋಧಿಸುತ್ತಿರುವುದು ಮಸೂದೆಯನ್ನಲ್ಲ, ಬದಲಾಗಿ ಅದರಲ್ಲಿರುವ ಅನ್ಯಾಯದ ಸರಮಾಲೆಗಳನ್ನು ನ್ಯಾಯಯುತವಾಗಿ ಸರಿಪಡಿಸಿದ್ದಲ್ಲಿ ಕಾಂಗ್ರೆಸ್ ಯಾವುದೆ ಕಾರಣಕ್ಕೂ ಈ ಮಸೂದೆಯನ್ನು ವಿರೋಧಿಸುವುದಿಲ್ಲ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಪರಿಕಲ್ಪನೆ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದಲೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.

33 C