PHOTOS | ಬಿಸಿಲಿನ ಬೇಗೆಯಿಂದ ಬಳಲಿದ್ದ ಬೆಂಗಳೂರಿನ ಜನರಿಗೆ ತಂಪೆರೆದ ಮಳೆ
ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ.
ಬೆಂಗಳೂರು: ಶಿಕ್ಷಕ ಎನಿಸಿಕೊಳ್ಳಲು ಯೋಗ್ಯನಲ್ಲದ ಒಬ್ಬ ವ್ಯಕ್ತಿ ಕಾಲೇಜಿನಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗೆ ಟೆರರಿಸ್ಟ್ (ಭಯೋತ್ಪಾದಕ) ಎಂದು ಕರೆದಿದ್ದಾನೆ. ಶಿಕ್ಷಣ ಕ್ಷೇತ್ರದಲ್ಲಿ ಅಂತವರು ಇರಬಾರದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ. ರವಿವಾರ ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹಸಿರುಸಿರಿ ಸಾಂಸ್ಕೃತಿ ಉತ್ಸವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಪವಿತ್ರವಾದದ್ದು, ಅಲ್ಲಿನ ಶಿಕ್ಷಕರು ಎಲ್ಲ ಮಕ್ಕಳನ್ನು ತಾಯಿಯಂತೆ ಪೊರೆಯಬೇಕು ಎಂದು ಹೇಳಿದರು. ಒಬ್ಬ ತಾಯಿಗೆ 5 ಜನ ಮಕ್ಕಳಿದ್ದರೆ, ಎಲ್ಲರಿಗೂ ಸಮಾನ ಪ್ರೀತಿಯನ್ನು ತೋರಿಸುತ್ತಾಳೆ. ಆದರೆ ಬಲಹೀನತೆಯುಳ್ಳ ಮಕ್ಕಳಿಗೆ ಸ್ವಲ್ಪ ಹೆಚ್ಚು ಪ್ರೀತಿ ತೋರಿಸುತ್ತಾಳೆ. ಅದೇ ರೀತಿ ತಾಯಿಗೆ ಇರುವ ಅಂತಃಕರಣ ಶಿಕ್ಷಕರಿಗೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇವತ್ತು ನಡೆಯುತ್ತಿರುವ ಹಾಗೂ ಹಿಂದೆ ನಡೆದಿರುವ ಎಲ್ಲ ಯುದ್ಧಗಳ ಹಿಂದಿನ ಶಕ್ತಿ ಧರ್ಮ. ಅದು ಮನುಷ್ಯ ಕಟ್ಟಿಕೊಂಡಿರುವ ಸಂಕುಚಿತ ದೃಷ್ಟಿಯೊಳಗಿನ ಧರ್ಮ. ಆದರೆ ಸಂಸ್ಕೃತಿ ಧರ್ಮವನ್ನೂ ಕೂಡ ನಿರ್ದೇಶಿಸಬೇಕಾದಂತಹ ದೊಡ್ಡ ಶಕ್ತಿ. ಅದು ಪೊರೆಯುವ ಶಕ್ತಿಯೇ ಹೊರತು ವಿನಾಶ ಮಾಡುವ ಶಕ್ತಿ ಅಲ್ಲ ಎಂದು ಹೇಳಿದರು. ಕಲಾವಿದ ಆದವರಿಗೆ ಕೇವಲ ಮಾತು ಮಾತ್ರವಲ್ಲ. ಇಡೀ ಅಂಗಾಂಗವು ಅಭಿನೇತ ಶಕ್ತಿಯಿಂದ ಕೂಡಿದಾಗ ಮಾತ್ರ ಸೃಜನಶೀಲವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಗಾಂಗ ಚಲನೆಯ ವಿಕಾರಗಳೇ ನಟನೆ ಎನ್ನುವ ಭ್ರಮೆಯನ್ನು ಸೃಷ್ಠಿಸಿರುವ ಹೊತ್ತಿನಲ್ಲಿ ಅಭಿನಯ ಸೃಜನಶೀಲವಾಗಬೇಕು ಎಂದು ತಿಳಿಸಿದರು. ಯಾವತ್ತೂ ಕಲಾವಿದ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡು ತನ್ನನ್ನು ನಿರ್ವಹಿಸಿಕೊಳ್ಳಬೇಕು. ಹಿಂದಿ ಜಗತ್ತಿನ ಮೇರು ನಟರು ಅನಿಸಿಕೊಂಡವರು ಎಂತಹ ಸಾಮಾಜಿಕ ಹೊಣೆಗೇಡಿತನದಲ್ಲಿ ವರ್ತಿಸುತ್ತಿದ್ದಾರೆ. ಅವರು ಜಾಹೀರಾತು ಮಾಡುವಾಗ ಹಣ ಮತ್ತು ವ್ಯಾಪಾರ ಮಾತ್ರ ಮುಖ್ಯವಲ್ಲ. ಸಾಮಾಜಿಕ ಜವಾಬ್ಧಾರಿಯೂ ಬಹಳ ಮುಖ್ಯ. ‘ಬಾಯಲ್ಲಿ ಹೇಳಿ ಕೇಸರಿ’ ಎನ್ನುವ ಜಾಹೀರಾತಿನ ಮೂಲಕ ಕೋಟ್ಯಾಂತರ ಯುವಜನವರು ಕ್ಯಾನ್ಸರ್ ಗೆ ಬಲಿಯಾಗುವ ರೀತಿಯಲ್ಲಿ ಹೊಣಗೇಡಿತನವನ್ನು ತೋರಿಸಿದ್ದಾರೆ ಎಂದು ಹೇಳಿದರು. ಡಾ.ರಾಜ್ಕುಮಾರ್ ಅವರನ್ನು ಯಾಕೆ ನೆನಪಿಸಿಕೊಳ್ಳುತ್ತೇವೆ ಎಂದರೆ, ಅವರು ಜೀವನದ ಪ್ರತೀ ಹಂತದಲ್ಲೂ ಸಾಮಾಜಿಕ ಎಚ್ಚರವನ್ನು ಇಟ್ಟುಕೊಂಡು ನಡೆದುಕೊಂಡಿದ್ದಾರೆ. ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅವರಿಗೂ ಈ ರೀತಿಯ ಸಾಮಾಜಿಕ ಎಚ್ಚರ ಇರಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಸಾಹಿತಿ ಎಸ್.ದಿವಾಕರ್, ಪತ್ರಕರ್ತ ಜೀವನ್ಮುಖಿ ಸುರೇಶ್, ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಹಸಿರು ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಪೊಲೀಸ್ ಉಪಮಹಾ ನಿರೀಕ್ಷಕ ಡಾ.ಎ.ಎನ್.ಪ್ರಕಾಶ್ಗೌಡ, ಮಾಜಿ ಶಾಸಕ ಕೆ.ಅನ್ನದಾನಿ, ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ರಘುನಂದನ ಮತ್ತಿತರರು ಉಪಸ್ಥಿತರಿದ್ದರು.
ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು: ಡಾ.ಬಂಜಗೆರೆ ಜಯಪ್ರಕಾಶ್
ಬೆಂಗಳೂರು: ಟಿಪ್ಪು ಸುಲ್ತಾನ ಅವರನ್ನು ಖಳನಾಯಕನನ್ನಾಗಿ ಮೊದಲು ಚಿತ್ರಿಸಿದವರು ಬ್ರಿಟಿಷರು. ಇದೀಗ ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಕಬ್ಬನ್ಪಾರ್ಕ್ನಲ್ಲಿರುವ ಸಚಿವಾಲಯ ಕ್ಲಬ್ನ ಸಭಾಂಗಣದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೈಸೂರು ರಾಜರಿಗೆ ರಾಜ್ಯವನ್ನು ಕಟ್ಟಲು ಅರ್ಹತೆ ಇದ್ದಂತೆ, ಟಿಪ್ಪುವಿಗೂ ರಾಜ್ಯವನ್ನು ಕಟ್ಟಲು ಅರ್ಹತೆ ಇತ್ತು. ಆತನ ಬಳಿ ತೋಳ್ಬಲವಿತ್ತು. ಜೊತೆಗೆ ಬಹಳ ತಿಳುವಳಿಕೆ ಇದ್ದಂತಹ ಆಡಳಿತಗಾರನಾಗಿದ್ದ. ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡಬೇಕು. ಆದರೆ, ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಖಳನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು. ಹಿರಿಯ ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಉರಿಗೌಡ-ನಂಜೇಗೌಡರ ಸೃಷ್ಟಿಕರ್ತರಿಗೆ ಎದುರಾಗಿ ಈ ಪುಸ್ತಕ ಬಂದಿದೆ. ಇತಿಹಾಸ ಮಾತ್ರವಲ್ಲ, ವಿಜ್ಞಾನವನ್ನು ಹಾಗೂ ಭವಿಷ್ಯವನ್ನೂ ಸಹ ತಿರುಚಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಟಿಪ್ಪು ಮತ್ತು ಹೈದರ್ ಅಲಿ ವಿಚಾರವನ್ನು ಅಂದಿನ ಕಾಲಘಟ್ಟದಲ್ಲಿ ನಿಂತು ಅಧ್ಯಯನ ಮಾಡುವುದು ಅವಶ್ಯವಿದೆ. ಅವರ ವಿರುದ್ಧವಾಗಿ ಸಮಾಜದಲ್ಲಿ ಇಂದು ಮಾಡುತ್ತಿರುವ ಅಪಪ್ರಚಾರದ ವಿರುದ್ಧ ಪತ್ರಕರ್ತ ನವೀನ್ ಸೂರಿಂಜೆ ಬರೆದಿದ್ದಾರೆ ಎಂದು ಡಾ.ಸಿದ್ದನಗೌಡ ಪಾಟೀಲ್ ಹೇಳಿದರು. ಟಿಪ್ಪು ಬ್ರಿಟಿಷ್ ವಿರೋಧಿ ಎಂದು ಹೇಳದ ಸಂಘಪರಿವಾರದವರು, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ಕರ್ನಾಟಕದಲ್ಲಿ ವೈದಿಕ(ಬಿಜೆಪಿ) ರಾಜಕಾರಣ ಮಾಡುತ್ತಿರುವ ಸಂಘರ್ಷವನ್ನು ಮುಚ್ಚಿಟ್ಟಿದ್ದಾರೆ. ಇತಿಹಾಸದ ಘಟನೆಗಳನ್ನು ಇಟ್ಟುಕೊಂಡು ಪ್ರಚೋದನೆ ಮಾಡುವ ಹಂತಕ್ಕೆ ಕರ್ನಾಟಕ ಬಂದು ನಿಂತಿದೆ ಎಂದು ಸಿದ್ದನಗೌಡ ಪಾಟೀಲ್ ತಿಳಿಸಿದರು. ಭಾರತವನ್ನು ನಿಯಂತ್ರಿಸುತ್ತಿರುವುದು ಮೋದಿನಾ?, ಟ್ರಂಪಾ?: ‘ಟಿಪ್ಪು ಅವರಲ್ಲಿದ್ದ ವಸಾಹತುಶಾಹಿ ವಿರೋಧಿ ಪ್ರಜ್ಞೆ ಇವತ್ತಿಗೂ ಅವಶ್ಯಕತೆ ಆಗಿದೆ. ಇರಾನ್ ನಾಶ ಆಗಬೇಕು ಎಂದು ಬಯಸಿದವರು ಈಗ ಎಲ್ಪಿಜಿ ಸಮಸ್ಯೆ ಆದ ಮೇಲೆ ಯುದ್ಧ ನಿಲ್ಲಬೇಕು ಅಂತ ಹೇಳುತ್ತಾರೆ. ಭಾರತವನ್ನು ನಿಯಂತ್ರಿಸುತ್ತಿರುವುದು ಮೋದಿನಾ? ಅಥವಾ ಟ್ರಂಪಾ?’ ಎಂದು ಡಾ.ಸಿದ್ದನಗೌಡ ಪಾಟೀಲ್ ಪ್ರಶ್ನಿಸಿದರು.
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ
IPL 2026 MI Vs KKR: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ತನ್ನ ಮೇಲಿದ್ದ 14 ವರ್ಷಗಳ ಹಳೆಯ ಅಪಶಕುನವನ್ನು ಕೊನೆಗೂ ತೊಡೆದುಹಾಕಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸಿತು. ಈ ಮೂಲಕ 2012ರ ನಂತರ ಮೊದಲ ಬಾರಿಗೆ ಮುಂಬೈ ತಂಡವು ಸೀಸನ್ನ ತನ್ನ
ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದ ಮಳೆ
ಬೆಂಗಳೂರು: ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ. ಸಂಜೆಯವರೆಗೆ ಯಾವುದೇ ಮಳೆಯ ವಾತಾವರಣ ಇರದೆ, ಬಿಸಿಲಿನ ಪ್ರಮಾಣ ಸಾಧಾರಣವಾಗಿಯೇ ಇತ್ತು. ಆದರೆ ಸಂಜೆಯಾಗುತ್ತಿದ್ದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು. ನಗರದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕಾಪೋರೇಷನ್ ವೃತ್ತ, ರಿಚ್ಮಂಡ್ ವೃತ್ತ, ಶಾಂತಿ ನಗರ ಮಹಾತ್ಮಗಾಂಧಿ ರಸ್ತೆ, ಬನಶಂಕರಿ, ಇಂದಿರಾನಗರ, ದೊಡ್ಡನೆಕ್ಕುಂದಿ, ಮಲ್ಲೇಶ್ವರಂ, ಹನುಮಂತನಗರ, ಬ್ಯಾಂಕ್ ಕಾಲನಿ, ಹೊಸಕೆರೆಹಳ್ಳಿ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ.
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!
ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಎದುರಾಳಿಗಳ ಮೇಲೆ ಸವಾರಿ ಮಾಡಿದ 5 ಬಾರಿಯ ಚಾಂಪಿಯನ್ ತಂಡ 224 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 29 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ. 2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ. 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ ಶರ್ಮಾ ಔಟಾಗುವ ಮುನ್ನ 38 ಎಸೆತಗಳಲ್ಲಿ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಯಾನ್ ರಿಕೆಲ್ಟನ್ ಅವರು 43 ಎಸೆತಗಳಲ್ಲಿ 81 ರನ್ ಗಳಿಸಿದರು. ಇಧರಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಒಳಗೊಂಡಿದ್ದವು. ರೋಹಿತ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸೂುರ್ಯಕುಮಾರ್ ಯಾದವ್ ಅವರು ಕೇವಲ 8 ಎಸೆತಗಳಲ್ಲಿ 3ಬೌಂಡರಿಗಳಿದ್ದ 16 ರನ್ ಗಳಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ(11 ಎಸೆತದಲ್ಲಿ 18) ತಂಡವನ್ನು ಗೆಲುವಿನ ದಡ ಸೇರಿಸಿದರು. ಅಜಿಂಕ್ಯ ರಹಾನೆ ನಾಯಕನಾಟ ಇದಕ್ಕಿಂತ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ(40 ಎಸೆತದಲ್ಲಿ 67) ಮತ್ತು ಫಿನ್ ಅಲೆನ್(17 ಎಸೆತದಲ್ಲಿ 37) ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು 5.2 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 69 ರನ್ ಪೇರಿಸಿದರು. ಫಿನ್ ಅಲೆನ್ ಔಟಾದ ಬಳಿಕ ಕ್ಯಾಮರೂನ್ ಗ್ರೀನ್ (10 ಎಸೆತದಲ್ಲಿ 18) ಅವರೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ರಹಾನೆ ಅವರು ಅರ್ಧಶತಕ ಪೂರೈಸಿಕೊಂಡರು.ಮಧ್ಯಮ ಕ್ರಮಾಂಕದಲ್ಲಿ ಅಂಗರಿಕ್ಷ್ ರಘುವಂಶಿ(29 ಎಸೆತದಲ್ಲಿ 51) ಮತ್ತು ರಿಂಕು ಸಿಂಗ್ (21 ಎಸೆತದಲ್ಲಿ 31) ಉಪಯುಕ್ತ ಕೊಡುಗೆ ನೀಡಿದ್ದರಿಂದ ತಂಡ ಬೃಹತ್ ಮೊತ್ತ ಪೇರಿಸುವಂತಾಯಿತು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್ ಕೋಲ್ಕತಾ ನೈಟ್ ರೈಡರ್ಸ್ 220/4, ಅಜಿಂಕ್ಯ ರಹಾನೆ 67(40), ಫಿನ್ ಅಲೆನ್ 37(17), ಅಂಗರಿಕ್ಷ್ ರಘುವಂಶಿ 51(29), ರಿಂಕು ಸಿಂಗ್ ನಾಟೌಟ್ 33(22), ಶಾರ್ದೂಲ್ ಠಾಕೂರ್ 39ಕ್ಕೆ 3, ಹಾರ್ದಿಕ್ ಪಾಂಡ್ಯ 39ಕ್ಕೆ1.
IPL 2026 | KKR ವಿರುದ್ದ ಮುಂಬೈಗೆ ರೋಚಕ ಜಯ
ರೋಹಿತ್ ಶರ್ಮ, ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ಬೇಸಿಗೆಯ ಬಿರುಬಿಸಿಲಿನ ವಾತಾವರಣದ ನಡುವೆಯೂ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಇದೀಗ ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 29)
LPG ಬಿಕ್ಕಟ್ಟಿನಿಂದ PNGಗೆ ಒತ್ತು; PNG ಎಲ್ಲಿಂದ ಬರುತ್ತದೆ? ಅದು ಮುಗಿಯುವುದಿಲ್ಲವೆ?
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೊಸ ಆದೇಶದ ಪ್ರಕಾರ, PNG ಮೂಲಸೌಕರ್ಯ ಈಗಾಗಲೇ ಲಭ್ಯವಿರುವ ಪ್ರದೇಶಗಳಲ್ಲಿ ಗ್ರಾಹಕರು PNGಗೆ ಪರಿವರ್ತನೆಗೊಂಡಲ್ಲಿ, ಮೂರು ತಿಂಗಳೊಳಗೆ LPG ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. ಅಮೆರಿಕ-ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಹೂಡಿರುವ ಹಿನ್ನೆಲೆಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಾಗರಿಕರನ್ನು ಪೈಪ್ಡ್ ನ್ಯಾಚುರಲ್ ಗ್ಯಾಸ್(PNG) ಗೆ ಬದಲಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಯುದ್ಧದಿಂದಾಗಿ ಹಾರ್ಮುಝ್ ಜಲಸಂಧಿ ಮೂಲಕ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ, ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ (LNG) ವ್ಯಾಪಾರದ ಸುಮಾರು ಐದನೇ ಭಾಗದಷ್ಟು ಹಾದು ಹೋಗುವ ದಾರಿಗೆ ಅಡಚಣೆ ಉಂಟಾಗಿದೆ. ಹೀಗಾಗಿ ಆಮದು ಮಾಡಿಕೊಂಡ ಅನಿಲದ ಮೇಲಿನ ಭಾರತದ ಅತಿಯಾದ ಅವಲಂಬನೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಭಾರತವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ LNG ಆಮದುದಾರ ರಾಷ್ಟ್ರ. ದೇಶದ ಅನಿಲ ಬೇಡಿಕೆಯ ಅರ್ಧದಷ್ಟು ಆಮದುಗಳ ಮೂಲಕ ಪೂರೈಕೆಯಾಗುತ್ತದೆ. ಭಾರತವು ನೈಸರ್ಗಿಕ ಅನಿಲವನ್ನು ದೇಶೀಯವಾಗಿ ಉತ್ಪಾದಿಸುತ್ತಿದ್ದರೂ, ನಗರ ಅನಿಲ ವಿತರಣಾ ಜಾಲಗಳು ಮತ್ತು PNG ಸಂಪರ್ಕಗಳನ್ನು ವಿಸ್ತರಿಸಲು ಸರ್ಕಾರ ಒತ್ತಾಯಿಸುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಪ್ರಕಾರ, PNG ಮೂಲಸೌಕರ್ಯ ಲಭ್ಯವಿರುವ ಪ್ರದೇಶಗಳಲ್ಲಿ ಗ್ರಾಹಕರು PNGಗೆ ಪರಿವರ್ತನೆಗೊಂಡಲ್ಲಿ, ಮೂರು ತಿಂಗಳೊಳಗೆ LPG ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. ಈ ಕ್ರಮವು ಒತ್ತಡಕ್ಕಿಂತ ಹೆಚ್ಚಾಗಿ ವಿರಳವಾಗಿರುವ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುವುದಾಗಿದೆ. ಪೈಪ್ಲೈನ್ ಸಂಪರ್ಕದ ಕೊರತೆಯಿರುವ ಪ್ರದೇಶಗಳಿಗೆ LPG ಅನ್ನು ಮುಕ್ತಗೊಳಿಸುವುದು ಮತ್ತು ಒಂದೇ ಆಮದು ಸೂಕ್ಷ್ಮ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಪೈಪ್ಡ್ ಅನಿಲ ಪೂರೈಕೆಯಾಗುವುದು ಹೇಗೆ? ಅಡುಗೆಮನೆಗಳು ಮತ್ತು ಕೈಗಾರಿಕೆಗಳಲ್ಲಿ ಬಳಕೆಯಾಗುವ PNGಗೆ ದೇಶೀಯ ಅನಿಲ ಕ್ಷೇತ್ರಗಳು ಅಥವಾ ವಿದೇಶಿ LNG ಸಾಗಣೆಗಳೇ ಮೂಲ. 2023ರ ವರದಿಗಳ ಪ್ರಕಾರ, ಭಾರತದ ಒಟ್ಟು ದೇಶೀಯ ಅನಿಲ ಉತ್ಪಾದನೆ 36.4 ಶತಕೋಟಿ ಕ್ಯೂಬಿಕ್ ಮೀಟರ್ (bcm) ತಲುಪಿದೆ. ಇದು ದೇಶದ ಅನಿಲ ಬೇಡಿಕೆಯ ಸರಿಸುಮಾರು ಅರ್ಧದಷ್ಟು ಪೂರೈಸುತ್ತದೆ. ಉಳಿದ ಅರ್ಧವನ್ನು ಮುಖ್ಯವಾಗಿ LNG ರೂಪದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಪೂರ್ವ ಕರಾವಳಿಯ ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಿಂದ ಗಮನಾರ್ಹ ಪಾಲು ಬರುತ್ತದೆ. ಅಲ್ಲಿ ಆರ್-ಕ್ಲಸ್ಟರ್, ಸ್ಯಾಟಲೈಟ್ ಕ್ಲಸ್ಟರ್ ಮತ್ತು ಎಂಜೆನಂತಹ ಆಳ ಸಮುದ್ರ ಕ್ಷೇತ್ರಗಳು ಒಟ್ಟು ಉತ್ಪಾದನೆಯ ಸುಮಾರು ನಾಲ್ಕನೇ ಭಾಗವನ್ನು ಪೂರೈಸುತ್ತವೆ. ಅಸ್ಸಾಂ ಮತ್ತು ತ್ರಿಪುರದ ಭೂಆಧಾರಿತ ಕ್ಷೇತ್ರಗಳು ಸಹ ದೇಶೀಯ ಉತ್ಪಾದನೆಯ ಬಹುಪಾಲನ್ನು ಒದಗಿಸುತ್ತವೆ. ಆದರೆ ದೇಶೀಯ ಪೂರೈಕೆ ಮಾತ್ರ ಸಾಕಾಗುವುದಿಲ್ಲ. ಉಳಿದ ಅನಿಲವನ್ನು LNG ರೂಪದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಅನಿಲವನ್ನು ಸೂಪರ್-ಕೂಲ್ಡ್ ಸ್ಥಿತಿಯಲ್ಲಿ ಟ್ಯಾಂಕರ್ಗಳಲ್ಲಿ ಸಾಗಿಸಿ, ಕರಾವಳಿ ಟರ್ಮಿನಲ್ ಗಳಲ್ಲಿ ಮರು ಅನಿಲೀಕರಿಸಿ ಪೈಪ್ಲೈನ್ ಗಳಿಗೆ ಪೂರೈಸಲಾಗುತ್ತದೆ. ಅಲ್ಲಿಂದ ಮನೆಗಳಿಗೆ PNG ಮತ್ತು ವಾಹನಗಳಿಗೆ CNG ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಇದೇ ಅನಿಲವನ್ನು ರಸಗೊಬ್ಬರ ಘಟಕಗಳು, ವಿದ್ಯುತ್ ಸ್ಥಾವರಗಳು ಮತ್ತು ಕೈಗಾರಿಕೆಗಳಿಗೂ ಸರಬರಾಜು ಮಾಡಲಾಗುತ್ತದೆ. ಹಾಗಿದ್ದರೂ, 2030ರವರೆಗೆ ದೇಶೀಯ ಉತ್ಪಾದನೆಯಲ್ಲಿ ಮಧ್ಯಮ ಮಟ್ಟದ ಬೆಳವಣಿಗೆ ಮಾತ್ರ ನಿರೀಕ್ಷಿಸಲಾಗಿದೆ. 2030ರಲ್ಲಿ ಉತ್ಪಾದನೆ 38 bcm ತಲುಪುವ ಸಾಧ್ಯತೆ ಇದೆ. ಇದು 2023ರ ಪ್ರಮಾಣಕ್ಕಿಂತ ಶೇ 8ರಷ್ಟು ಹೆಚ್ಚಳ ಮಾತ್ರ. ಮುಂಬೈ ಕರಾವಳಿ ಕ್ಷೇತ್ರಗಳು ಹಳೆಯದಾಗಿರುವುದು ಹಾಗೂ ಕೃಷ್ಣ-ಗೋದಾವರಿ D6 ಬ್ಲಾಕ್ ಗಳಿಂದ ಉತ್ಪಾದನೆ ಹೆಚ್ಚಾದರೂ, ಒಟ್ಟು ಬೇಡಿಕೆಗೆ ಸಾಲದು. ಹೊಸ ಯೋಜನೆಗಳು ಆರಂಭವಾದರೂ ಉತ್ಪಾದನೆ ಪ್ರಮಾಣ ಸೀಮಿತವಾಗಿರಬಹುದು. ಸರ್ಕಾರ PNGಗೆ ಒತ್ತು ನೀಡುವುದೇಕೆ? ಪ್ರಸ್ತುತ ಭೌಗೋಳಿಕ-ರಾಜಕೀಯ ಅಡಚಣೆ ಪ್ರಮುಖ ಕಾರಣವಾಗಿದೆ. ಭಾರತದ LNG ಆಮದುಗಳ ಶೇ 50ರಿಂದ 60ರಷ್ಟು ಪ್ರಮಾಣ ಮುಖ್ಯವಾಗಿ ಖತರ್ ಮತ್ತು ಯುಎಇಯಿಂದ ಬರುತ್ತದೆ ಹಾಗೂ ಹಾರ್ಮುಝ್ ಜಲಸಂಧಿ ಮೂಲಕ ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಡಚಣೆ ಉಂಟಾಗಿದೆ. ಇದರ ಪರಿಣಾಮ ಈಗಾಗಲೇ ಗೋಚರವಾಗುತ್ತಿದೆ. LPG ವಿತರಣೆಯಲ್ಲಿ ತಡವಾಗುತ್ತಿದೆ. ಯೂರಿಯಾ ಉತ್ಪಾದನೆ ಕಡಿಮೆಯಾಗಿದೆ. ಕೈಗಾರಿಕೆಗಳಿಗೆ ಇಂಧನ ಸರಬರಾಜಿನಲ್ಲಿ ಒತ್ತಡ ಹೆಚ್ಚಿದರೆ, ಅರ್ಥವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ PNGಗೆ ಒತ್ತು ನೀಡುವುದರಿಂದ ಹಲವು ಉದ್ದೇಶಗಳು ನೆರವೇರುತ್ತವೆ: ಗ್ರಾಹಕರಿಗೆ ಸ್ಥಿರ ಪೂರೈಕೆ: ಪೈಪ್ಲೈನ್ ಜಾಲಗಳ ಮೂಲಕ ಸಿಲಿಂಡರ್ ಆಧಾರಿತ ವ್ಯವಸ್ಥೆಗಿಂತ ಹೆಚ್ಚು ಸ್ಥಿರ ವಿತರಣೆ ಸಾಧ್ಯ. ಪೂರೈಕೆಯಲ್ಲಿ ವೈವಿಧ್ಯತೆ: ಅನಿಲವು ದೇಶೀಯ ಉತ್ಪಾದನೆ ಹಾಗೂ ವಿವಿಧ ಎಲ್ಎನ್ಜಿ ಮೂಲಗಳಿಂದ ಬರಬಹುದು. ದಕ್ಷತೆ ಮತ್ತು ವೆಚ್ಚದ ಸ್ಥಿರತೆ: ಲಾಜಿಸ್ಟಿಕ್ಸ್ ಹಾಗೂ ಶೇಖರಣಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಶುದ್ಧ ಇಂಧನದ ಬಳಕೆ: ಮಾಲಿನ್ಯಕಾರಕ ಇಂಧನಗಳಿಂದ ದೂರ ಸರಿಯಲು ಸಹಕಾರಿಯಾಗುತ್ತದೆ. ಪೈಪ್ಡ್ ಗ್ಯಾಸ್ ಖಾಲಿಯಾಗುವುದೆ? ತಕ್ಷಣಕ್ಕೆ PNG ಸಂಪೂರ್ಣ ಖಾಲಿಯಾಗುವ ಅಪಾಯವಿಲ್ಲ. ಅನಿಲ ಪೂರೈಸುವ ಸಂಸ್ಥೆಗಳು ಸಾಮಾನ್ಯವಾಗಿ 15ರಿಂದ 30 ದಿನಗಳಷ್ಟು ಸಂಗ್ರಹ ಇಟ್ಟುಕೊಂಡಿರುತ್ತವೆ. ಕೊರತೆಯ ಸಂದರ್ಭಗಳಲ್ಲಿ ವಾಹನಗಳ CNG ಬಳಕೆಗೆ ಕಡಿಮೆ ಆದ್ಯತೆ ನೀಡಿ, ಮನೆ ಮತ್ತು ಕೈಗಾರಿಕೆಗಳಿಗೆ ಪ್ರಾಥಮ್ಯ ನೀಡಲಾಗುತ್ತದೆ. ಆದರೆ ಹಾರ್ಮುಝ್ ಜಲಸಂಧಿಯ ಅಡಚಣೆ ಮುಂದುವರಿದಲ್ಲಿ, ಏಪ್ರಿಲ್ನಲ್ಲಿ PNG ಬೆಲೆಗಳು ಶೇ 20–30ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೇಡಿಕೆ ಹೆಚ್ಚಾದರೆ ದೆಹಲಿ, ಮುಂಬೈ ಮತ್ತು ಗುಜರಾತ್ ಪ್ರದೇಶಗಳಲ್ಲಿ ಪಡಿತರ ವ್ಯವಸ್ಥೆ ಜಾರಿಯಾಗಬಹುದು. PNG ತಕ್ಷಣ ಕಣ್ಮರೆಯಾಗುವುದಿಲ್ಲ. ಆದರೆ ಪೈಪ್ಲೈನ್ ಮೂಲಕ ಹರಿಯುವ ಅನಿಲವು ದೇಶೀಯ ಉತ್ಪಾದನೆ ಮತ್ತು ಆಮದು ಎರಡರ ಮೇಲೂ ಅವಲಂಬಿತವಾಗಿರುವುದರಿಂದ ಜಾಗತಿಕ ಸಂಕಷ್ಟಗಳಿಂದ ಪ್ರಭಾವಿತವಾಗುತ್ತದೆ. ಪ್ರಸ್ತುತ ಖತರ್ ನಿಂದ LNG ಪೂರೈಕೆ ಅಸ್ತವ್ಯಸ್ತವಾಗಿರುವ ಪರಿಣಾಮ ರಸಗೊಬ್ಬರ ಘಟಕಗಳ ಉತ್ಪಾದನೆ ಕುಂಠಿತವಾಗಿದೆ. ಭವಿಷ್ಯದಲ್ಲಿ ಭಾರತದ KNG ಬೇಡಿಕೆ ಸ್ಥಿರವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. 2030ರ ವೇಳೆಗೆ ವಾರ್ಷಿಕ ಬೇಡಿಕೆ 64 bcm ತಲುಪಬಹುದು. 2027ರ ವೇಳೆಗೆ ದೇಶೀಯ ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಾದರೂ, ಒಟ್ಟು ಬೇಡಿಕೆಯನ್ನು ಪೂರೈಸಲು ಅದು ಸಾಕಾಗುವ ಸಾಧ್ಯತೆ ಕಡಿಮೆ.
ದಕ್ಷಿಣ ಕನ್ನಡ ಜಿಲ್ಲಾ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಐದು ಪ್ರಮುಖ ನಿರ್ಣಯಗಳು
ಬಂಟ್ವಾಳ : ಇಲ್ಲಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅವೇಶನದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮತ್ತು ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು. ಜಿಲ್ಲಾ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ನಿರ್ಣಯ ವಾಚಿಸಿದರು. ಕೇರಳ ಸರಕಾರ ಜಾರಿಗೆ ತಂದಿರುವ ಭಾಷಾ ಮಸೂದೆ ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಕನ್ನಡಿ ಗರ ಶಿಕ್ಷಣದ ಹಕ್ಕು ಹಾಗೂ ಭಾಷಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದು, ಕೇರಳ ಸರಕಾರವು ಈ ಕೂಡಲೇ ಭಾಷಾ ಮಸೂದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ, ಗಡಿನಾಡ ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸಬೇಕು. ಖಾಸಗಿ ಹಾಗೂ ಪರಿಗಣಿತ ವಿಶ್ವವಿದ್ಯಾನಿಲಯಗಳು ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯುತ್ತಿರುವು ದಾದರೂ ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಪದವಿ ಹಂತದಲ್ಲಿ ಕನ್ನಡ ಭಾಷೆಯ ಕಲಿಕೆಯ ಅವಧಿಯನ್ನು ಕುಂಠಿತಗೊಳಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ನಾಲ್ಕು ಸೆಮಿಸ್ಟರ್ ಗಳ ಕಾಲ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸರಕಾರವು ಪ್ರೋತ್ಸಾಹ ನೀಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಲು ಇರುವ ನಿಯಮಗಳನ್ನು ಸಡಿಲಗೊಳಿಸಬೇಕು. ಕರ್ನಾಟಕದಲ್ಲಿ ಬೆಳೆದು ಬಂದಿರುವ ದೊಡ್ಡ ಶಿಕ್ಷಣ ಸಂಸ್ಥೆಗಳು ಕನಿಷ್ಠ ಒಂದಾದರೂ ಕನ್ನಡ ಮಾಧ್ಯಮ ಶಾಲೆ ಸ್ಥಾಪಿಸಬೇಕು ಎಂಬುದನ್ನು ಸರಕಾರ ಕಡ್ಡಾಯಗೊಳಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಸರಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ವಿವಿಧ ಭಾಷೆಗಳ ಕೃತಿಗಳನ್ನು ಸಗಟುವಾಗಿ ಖರೀದಿಸುವ ಕಾರ್ಯ ಕುಂಠಿತಗೊಂಡಿದೆ, ಈ ಪ್ರಕ್ರಿಯೆಗೆ ಯಾವುದೇ ತೊಡಕು ಬಾರದಂತೆ ಕನಿಷ್ಠ 300 ಕನ್ನಡ ಪುಸ್ತಕ ಖರೀದಿ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಬೇಕು. ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಸಾಹಿತ್ಯದ ಒಲವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಹಾಗೂ ಬೋಧನಾ ವಿಧಾನವನ್ನು ಇನ್ನಷ್ಟು ನಾವೀನ್ಯಗೊಳಿಸುವ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಮೆರಿಕಕ್ಕೆ ಟಾರ್ಗೆಟ್ ಮಾಡುವ ಸಾಮರ್ಥ್ಯವಿರುವ ಕ್ಷಿಪಣಿ ಇಂಜಿನ್ ಪರೀಕ್ಷಿಸಿದ ಉತ್ತರ ಕೊರಿಯಾ
ಪ್ಯೋಂಗ್ಯಾಂಗ್, ಮಾ.29: ಕ್ಷಿಪಣಿಗಳಿಗೆ ಬಳಸುವ ಸುಧಾರಿತ ತಂತ್ರಜ್ಞಾನದ ಬಲಿಷ್ಠ ಇಂಧನ ಇಂಜಿನ್ ಪರೀಕ್ಷೆಯನ್ನು ರವಿವಾರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ವೀಕ್ಷಿಸಿದರು. ಇದು ದೇಶದ ಕಾರ್ಯತಂತ್ರದ ಮಿಲಿಟರಿ ಸಾಮರ್ಥ್ಯಕ್ಕೆ ಉತ್ತೇಜನ ನೀಡಲಿದೆ ಎಂದು ಅವರು ಶ್ಲಾಘಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕೆಸಿಎನ್ಎ ಸುದ್ದಿಸಂಸ್ಥೆ ವರದಿ ಮಾಡಿದೆ. ಅಮೆರಿಕದ ಮುಖ್ಯ ಭೂಭಾಗವನ್ನು ಗುರಿಯಾಗಿಸುವ ಸಾಮರ್ಥ್ಯವಿರುವ ಕ್ಷಿಪಣಿಯ ಇಂಜಿನ್ ಪರೀಕ್ಷೆ ಇದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಿಮ್, “ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭಿಸುವ ಮೂಲಕ ಅಮೆರಿಕ ಜಾಗತಿಕ ಭಯೋತ್ಪಾದನೆ ಮತ್ತು ಆಕ್ರಮಣ ಕೃತ್ಯಗಳನ್ನು ಮುಂದುವರಿಸಿದೆ” ಎಂದು ಆರೋಪಿಸಿದರು. ಉತ್ತರ ಕೊರಿಯಾವು ಪರಮಾಣು ಶಸ್ತ್ರಾಸ್ತ್ರ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದರು ಎಂದು ವರದಿ ತಿಳಿಸಿದೆ.
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು?
Jacob Duffy: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ವೇಗಿ ಜೇಕಬ್ ಡಫಿ ಎಸ್ಆರ್ಎಚ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಹೈದರಾಬಾದ್ ತಂಡದ ಪ್ರಮುಖ ವಿಕೆಟ್ಗಳನ್ನು ಉರುಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ ಪ್ರಮುಖ ಪಾತ್ರವಹಿಸಿರು. ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ದಾಳಿ ನಡೆಸಿದ
ಕಂಬಳ ರಾಷ್ಟವನ್ನು ಮುಟ್ಟುವಂತಾಗಲಿ: ಮಹೇಶ್ ಕಜೆ
ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರವನ್ನು ಮುಟ್ಟು ವಂತಾಗಲಿ ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು. ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದಲ್ಲಿ ಮಾ.29 ರಂದು ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿಯೂ ಕಂಬಳವನ್ನು ನಡೆಸಿದ ಕೀರ್ತಿ ಶಾಸಕ ಅಶೋಕ್ ಕುಮಾರ್ ರೈಯವರದ್ದು. ಅವರು ಪರುಷಮಣಿಯಂತೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಕಂಬಳಕ್ಕೆ ಈಗ ಸ್ಟಾರ್ ವ್ಯಾಲ್ಯೂ ಬಂದಿದ್ದು, ಯುವ ಜನತೆಯೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಕಂಬಳದಲ್ಲಿ ತುಳು ಭಾಷಾ ಸಂಸ್ಕೃತಿಯು ಅರಳಲು ಸಾಧ್ಯವಾಗಿದೆ. ನಮ್ಮ ಜನಪದ ಕ್ರೀಡೆಯಾದ ಕಂಬಳವನ್ನು ಸಂಸ್ಕøತಿಯ ಮೌಲ್ಯಗಳನ್ನು ಉಳಿಸಿಕೊಂಡು ಹೆಮ್ಮೆ, ಗೌರವದೊಂದಿಗೆ ಮುಂದುವರಿಸಿಕೊಂಡು ಹೋದಾಗ ಕಂಬಳವು ಅಳಿಯಲು ಸಾಧ್ಯವಿಲ್ಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ, ರಾಜ್ಯ ಸರಕಾರ ಈಗಾಗಲೇ ಕಂಬಳಕ್ಕೆ ಅನುದಾನ ಮಂಜೂರು ಮಾಡಿದ್ದು, ಈ ಭಾಗದ 13 ಜನ ಶಾಸಕರು ರಾಜಕೀಯ ಬಿಟ್ಟು ಒಮ್ಮತಿನಿಂದ ಕಂಬಳಕ್ಕಾಗಿ ಧ್ವನಿಯೆತ್ತಿದಾಗ ಕಂಬಳಕ್ಕೆ ಎಷ್ಟು ಬೇಕಾದರೂ ಅನುದಾನ ತರಿಸಬಹುದು. ಸರಕಾರಿ ಜಾಗ ಇರುವ ಪ್ರತಿ ಊರಿನಲ್ಲಿಯೂ ಕಂಬಳದ ಕರೆಗಳನ್ನು ನಿರ್ಮಿಸಿ ಕಂಬಳ ನಡೆಸಬಹುದು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಗೆ 352 ಕೋ.ರೂ.ನ ಯೋಜನೆ ರೂಪಿಸಲಾಗಿದ್ದು, ಅದು ಸರಕಾರದ ಹಂತದಲ್ಲಿದೆ. ಅದಕ್ಕೆ ಅನುದಾನ ದೊರೆತ್ತಲ್ಲಿ ಮುಂದೆ ಇಲ್ಲಿ ಕಂಬಳ ನಡೆಸಲು ಸಾಧ್ಯವಾಗಲ್ಲ. ಆದರೆ ಹಣಕ್ಕೆ ಜಾಗ ಖರೀದಿಸಿಯಾದರೂ ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ದೇವರು ಶಕ್ತಿ ಕೊಟ್ಟಲ್ಲಿಯವರೆಗೆ ನಡೆಸುತ್ತೇನೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಬೆಂಗಳೂರಿ ನಲ್ಲಿ ಕಂಬಳ ನಡೆಸುವ ಕನಸು ಇದೆ. ಕೇಂದ್ರ ಅನುಮತಿ ನೀಡಿದರೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಎರಡು ಜೋಡಿ ಕಂಬಳ ಕೋಣಗಳು ಭಾಗವಹಿಸುವಂತೆ ಮಾಡುವ ಯೋಜನೆಯಿದೆ ಎಂದರು. ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾಯಕ್ ಕಂಪ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನೋಟರಿ ವಕೀಲೆ ಅರುಣಾ ದಿನಕರ್ ರೈ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಸುಮಾ ಅಶೋಕ್ ಕುಮಾರ್ ರೈ, ಪ್ರಮುಖರಾದ ಜಗನ್ನೀವಾಸ್ ರೈ, ಪ್ರವೀಣ್ ರೈ, ಕೋರ್ಮಂಡ ಆನಂದ ರೈ, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಸುದೇಶ್ ಶೆಟ್ಟಿ ಶಾಂತಿನಗರ, ಶಿವಪ್ರಸಾದ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ವಿಕ್ರಂ ಶೆಟ್ಟಿ ಅಂತರ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕ ಜಯಪ್ರಕಾಶ್ ಬದಿನಾರು ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕಂಬಳದ ನಿರೂಪಕ ರಾಜೀವ್ ಶೆಟ್ಟಿ ಎಡ್ತೂರು ಅವರು ಕಂಬಳದ ನಿರೂಪಣೆ ವೇಳೆ ಮಾತನಾಡಿ, ಇತ್ತೀಚೆಗೆ ಕಂಬಳವೊಂದರಲ್ಲಿ ನಿರೂಪಣೆಯ ವೇಳೆ ನಾನು ಕ್ಯಾಮರಾದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿತ್ತು. ಆದರೆ ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಅವರನ್ನು ನಿಂದಿಸಿಲ್ಲ. ನಾನು ಹೇಳಿದ್ದು ಇಷ್ಟೇ ಮದುವೆ ನಡೆಯುತ್ತಿರುವಾಗ ಕ್ಯಾಮರಾದವರು ಸ್ಟೇಜ್ನಲ್ಲಿ ಅಡ್ಡ ನಿಂತಿರುತ್ತಾರೆ. ಎದುರಿನಲ್ಲಿ ಕುಳಿತುಕೊಂಡವರು ಅವರ ಬೆನ್ನು ನೋಡಬೇಕಷ್ಟೇ ಎಂದು. ಒಂದು ವ್ಯವಸ್ಥೆಗೆ ತೊಂದರೆಯಾದಾಗ ಅದರ ವಿರುದ್ಧ ಮಾತನಾಡುವುದು ಧರ್ಮ. ಮದುವೆಯ ಸಂಪ್ರದಾಯ, ವಿಧಿ- ವಿಧಾನಗಳನ್ನು ಯುವ ಜನತೆ ಕೂಡಾ ಕಲಿತುಕೊಳ್ಳಬೇಕು. ಆಗ ಕ್ಯಾಮರಾದವರು ಹೀಗೆ ನಿಂತರೆ ಅವರಿಗೇನು ಕಾಣೋದಿಲ್ಲ. ಅಷ್ಟೇನು ಆರೋಗ್ಯವಂತರಲ್ಲದ ಅಜ್ಜ- ಅಜ್ಜಿಗೆ ತನ್ನ ಮೊಮ್ಮಕ್ಕಳ ಮದುವೆ ನೋಡಬೇಕೆಂಬ ಆಸೆ ಇರುತ್ತದೆ. ಅವರು ಅದಕ್ಕಾಗಿ ಎದುರು ಬಂದು ಕುರ್ಚಿಯಲ್ಲಿ ಕೂತಾಗ ಅವರಿಗೆ ವಧೂ-ವರರ ಮುಖ ಕೂಡಾ ಕಾಣದಂತೆ ಅಡ್ಡಲಾಗಿ ನಿಂತರೆ ಅವರೇನು ನೋಡೋಕೆ ಸಾಧ್ಯ. ಇದರಿಂದ ಸಂಪ್ರದಾಯಕ್ಕೆ ತೊಂದರೆಯಾಗುತ್ತದೆ ಅಂತ ಅನಿಸಿದ್ದರಿಂದ ಈ ರೀತಿ ಮಾತನಾಡಿದ್ದೇನೆ. ಇನ್ನು ಕರಿಮಣಿ ಕಟ್ಟುವಾಗಲೂ ಹಾಗೆ ಕೆಲವರು ವಾಪಸ್ ಕರಿಮಣಿಯನ್ನು ತೆಗಿಸಿ ಕಟ್ಟಿಸುವುದು ಇದೆ. ಇದು ಪೋಟೋ ಚೆನ್ನಾಗಿ ಬರಬೇಕೆಂದು ಕೆಲವರ ಅನಿವಾರ್ಯತೆ ಇರಬಹುದು. ಆದರೆ ಸಂಪ್ರದಾಯದ ಪ್ರಕಾರ ಇದು ತಪ್ಪು. ಅದನ್ನು ನಾನು ಹೇಳಿದ್ದೇನೆಯೇ ಹೊರತು ಕ್ಯಾಮರಾಮೆನಗಳ ಬಗ್ಗೆ ನನಗೆ ಯಾವ ವಿರೋಧವೂ ಇಲ್ಲ. ಈ ಹಿಂದೆ ನಾನು ಅವರನ್ನು ಹೊಗಳಿ ಮಾತನಾಡಿದ್ದು ಇದೆ. ಆದರೆ ಅದು ಎಲ್ಲಿಯೂ ಪ್ರಚಾರಕ್ಕೆ ಬರಲಿಲ್ಲ. ಆದರೆ ಇದು ಮಾತ್ರ ಪ್ರಚಾರಕ್ಕೆ ಬಂತು. ಈ ಬಗ್ಗೆ ವೇಣೂರು ಕಂಬಳದಲ್ಲಿಯೇ ಸ್ಪಷ್ಟನೆ ನೀಡಿದ್ದೇನೆ. ಇಲ್ಲಿಯೂ ನೀಡುತ್ತಿದ್ದೇನೆ. ನನಗೆ ಕ್ಯಾಮರಾಮೆನ್ಗಳ ಮೇಲೆ ಯಾವ ದ್ವೇಷವೂ ಇಲ್ಲ. ಅವರ ಮೇಲೆ ಗೌರವವಿದೆ. ನಾವು ಪರಸ್ಪರ ವಿರೋಧ ಕಟ್ಟಿಕೊಳ್ಳುವುದು ಬೇಡ. ಸ್ನೇಹಿತರಾಗಿಯೇ ಇರೋಣ ಎಂದರು. ಇತ್ತೀಚೆಗೆ ಯಕ್ಷಗಾನವೊಂದು ನಡೆಯುತ್ತಿರುವಾಗ ಪ್ರೇಕ್ಷಕರು ಸಿಳ್ಳೆ ಹಾಕಿದ್ದಕ್ಕೆ ಕಲಾವಿದ ಸಿಳ್ಳೆ ಹಾಕಿದವರನ್ನು ತರಾಟೆಗೆ ತೆಗೆದುಕೊಂಡ ವಿಚಾರವನ್ನು ಮುಂದಿಟ್ಟುಕೊಂಡು ಈ ಬಗ್ಗೆ ಉಪ್ಪಿನಂಗಡಿಯ ಕಂಬಳದಲ್ಲಿ ನಿರೂಪಣೆ ಗಾರರು ತುಳುವಿನಲ್ಲಿ ಪರಸ್ಪರ ಚರ್ಚಿಸಿದ ಘಟನೆಯು ನಡೆಯಿತು. ಗಂತ್ ಬಳಿಯಿದ್ದ ಕಂಬಳ ನಿರೂಪಕ ರೋರ್ವರು, ``ಈಗ ಶಿಳ್ಳೆ ಹಾಕಲು ಕೂಡಾ ಇಲ್ಲವಲ್ಲ'' ಎಂದರು. ಅದಕ್ಕೆ ಮಂಜೊಟ್ಟಿ ಬಳಿಯ ನಿರೂಪಕರು, ``ಕಂಬಳದಲ್ಲಿ ಹಾಕಬಹುದಂತೆ'' ಎಂದರು. ಆಗ ಗಂತ್ಬಳಿಯಿದ್ದ ನಿರೂಪಕರು, ``ಕಂಬಳದಲ್ಲಿ ಹಾಕಬಹುದಾ? ಅಲ್ಲ. ಬಾಕಿ ಕಡೆ ಹಾಕಿದರೆ ಭಯಂಕರ ಮಾತನಾಡುತ್ತಾರೆ ಮಾರ್ರೆ'' ಎಂದರು. ಆಗ ಮಂಜೊಟ್ಟಿ ಬಳಿಯ ನಿರೂಪಕರು, ``ಕಂಬಳದಲ್ಲಿ ಮತ್ತು ಕೋಳಿ ಅಂಕದಲ್ಲಿ ಹಾಕಬಹುದು ಅಂತ ಆಗಿದೆ'' ಎಂದು ನಗುತ್ತಲೇ ಉತ್ತರಿಸಿ ದರು. ಅದಕ್ಕೆ ಗಂತ್ನಲ್ಲಿದ್ದ ನಿರೂಪಕರು, ``ಕಂಬಳನಾ ? ಕೋಳಿ ಅಂಕನಾ ಎಂದು. ವಿಷಿಲ್ ಹಾಕುವುದು ಒಬ್ಬನಿಗೆ ಮಾತನಾಡುವುದು ಇನ್ನೊಬ್ಬ'' ಎಂದಾಗ ಆ ಕಡೆಯಿಂದ `ಎಂತ ಮಾಡುವುದು' ಎಂಬ ಉತ್ತರ ಬಂತು. ಆಗ ಗಂತ್ನಲ್ಲಿದ್ದ ನಿರೂಪಕರು, ``ಎಂತಾ ಕಥೆ'' ಎಂದಾಗ ಈ ಕಡೆಯಿಂದ ``ಕಥೆಯನ್ನು ಯಾರಲ್ಲಿ ಹೇಳುವುದು? ಖುಷಿಯ ಒಂದು ಪ್ರತಿಪಾದನೆ ಎಂದು ನಾವು ತಿಳಿಯುದು'' ಎಂದಾಗ ಗಂತ್ನಲ್ಲಿದ್ದ ನಿರೂಪಕರು, `ಕಲಾವಿದ ಕಲಾವಿದನಾಗಿಯೇ ಉಳಿಯಬೇಕು' ಎನ್ನುವುದರೊಂದಿಗೆ ಈ ಸಂಭಾಷಣೆ ಮುಕ್ತಾಯಗೊಂಡಿತು. ನೀರಿಗೆ ಎಳೆದೊಯ್ದ ಕೋಣ: ಯುವಕನ ರಕ್ಷಣೆ ಗಂತ್ ಬಳಿಯಿದ್ದ ಕೋಣವೊಂದು ನದಿ ನೀರಿಗೆ ಇಳಿದಿದ್ದು ಅದರೊಂದಿಗೆ ಅದರ ಪರಿಚಾರಕ ಯುವಕನೂ ಅದರೊಂದಿಗೆ ಇಳಿದಿದ್ದ. ಆದರೆ ಕೋಣ ಏಕಾಏಕಿ ಮುಳುಗಿಕೊಂಡು ನೀರಿನಾಳಕ್ಕೆ ನದಿಯಲ್ಲಿ ತೆರಳಿತು. ಆಗ ಯುವಕ ಕೋಣದ ಹಗ್ಗ ಕೈಬಿಡದಿದ್ದರಿಂದ ಆತನೂ ನೀರಿನಲ್ಲಿ ಮುಳುಗಿದ್ದ. ಕೂಡಲೇ ವಿಷಯ ತಿಳಿದ ಕಂಬಳ ನಿರೂಪಕರು, ಧ್ವನಿವರ್ಧಕದಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿದ್ದಾನೆ. ಈಜಲು ಬರುವವರು ತಕ್ಷಣವೇ ಆತನ ರಕ್ಷಣೆಗೆ ಧಾವಿಸಿ ಎಂದು ಸೂಚಿಸಿದರು. ರಕ್ಷಣೆಗಾಗಿ ಹಲವರು ಧಾವಿಸಿ ಬಂದರಾದರೂ, ಅಷ್ಟರಲ್ಲಾಗಲೇ ಕಂಬಳ ಕೋಣಗಳ ಬೇರೆ ತಂಡದೊಂದಿಗೆ ಬಂದಿದ್ದ ರಕ್ಷಿತ್ ಮತ್ತು ಸಂತೋಷ್ ಎಂಬ ಯುವಕರು ನದಿಗೆ ಹಾರಿ ಆತನನ್ನು ರಕ್ಷಿಸಿ ದಡಕ್ಕೆ ತಂದಿದ್ದರು. ಇವರಿಬ್ಬರನ್ನೂ ಕಂಬಳ ಸಮಿತಿಯ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಆದರೆ ನೀರಿಗೆ ಇಳಿದಿದ್ದ ಕೋಣ ನದಿಯಲ್ಲಿ ಬಹುದೂರ ಈಜಿಕೊಂಡು ಹೋಗಿ ದ್ವೀಪದಂತಹ ಪ್ರದೇಶವೊಂದರಲ್ಲಿ ನಿಂತುಕೊಂಡಿತು. ಆದರೆ ಆ ಪ್ರದೇಶದಲ್ಲಿ ನದಿ ಆಳವಾಗಿದ್ದರಿಂದ ಅಷ್ಟು ಸುಲಭದಲ್ಲಿ ಕೋಣವನ್ನು ಹಿಡಿದು ಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ಶಾಸಕ ಅಶೋಕ್ ಕುಮಾರ್ ರೈಯವರು, ನದಿಯಲ್ಲಿ ಈಜಿಕೊಂಡು ಹೋಗಿ ಕೋಣವನ್ನು ಹಿಡಿಯುವ ಪ್ರಯತ್ನ ಬೇಡ. 10 ನಿಮಿಷದಲ್ಲಿ ಬೋಟಿನ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಘೋಷಿಸಿದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕೋಣವೇ ನದಿಯಲ್ಲಿ ಈಜಾಡುತ್ತ ಕಂಬಳದ ಗಂತಿನತ್ತ ಬಂತು. ಕಂಬಳದ ಫಲಿತಾಂಶ ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿದ್ದು, ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್ರ ಎ ಹಾಗೂ ಬಿ ವಿಭಾಗದ ಕೋಣಗಳೇ ಫೈನಲ್ ಪ್ರವೇಶಿದ್ದವು. ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಬಿ ವಿಭಾಗದ ಕೋಣಗಳು ಪ್ರಥಮ ಹಾಗೂ ಎ ವಿಭಾಗದ ಕೋಣಗಳು ದ್ವಿತೀಯ ಬಹುಮಾನ ಪಡೆದವು. ಬಂಬ್ರಾಣ ಬೈಲು ವಂದಿತ್ ಶೆಟ್ಟಿ ಕೋಣಗಳನ್ನು ಓಡಿಸಿದರು. ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ. ಶೆಟ್ಟಿಯವರ ಎ ಹಾಗೂ ಬಿ ವಿಭಾಗದ ಕೋಣಗಳು ಫೈನಲ್ ಪ್ರವೇಶಿಸಿದ್ದವು. ಇಲ್ಲಿ ಪ್ರಥಮ ಬಹುಮಾನವನ್ನು ಬಿ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಮಾಳ ಆದಿಶ್ ಪೂಜಾರಿ) ತಮ್ಮದಾಗಿಸಿಕೊಂಡವು. ದ್ವಿತೀಯ ಬಹುಮಾನವನ್ನು ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕಾವೂರು ದೋಟ ಸುದರ್ಶನ್) ಪಡೆದವು. ಅಡ್ಡ ಹಲಗೆಯಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ಅವರ ಕೋಣಗಳು (ಕೋಣ ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನಾರಾವಿ ರಕ್ಷಿತ್ ಜೈನ್ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಹರೀಶ್) ಪಡೆದವು. ನೇಗಿಲು ಹಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ದರೆಗುಡ್ಡೆ ಕಮಲ ನಿವಾಸ ಮನನ್ ಕಾರ್ತಿಕ್ ಪೂಜಾರಿಯವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ ) ಪ್ರಥಮ ಬಹುಮಾನವನ್ನು ಪಡೆದವು. ದ್ವಿತೀಯ ಬಹುಮಾನವನ್ನು ಜೈ ತುಳುನಾಡ್ ಕಕ್ಯಪದವು ಪುಣ್ಕೆದಡಿ ರೆಹಾನ್ಸ್ ಭಂಡಾರಿ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಶಂಕರ) ಪಡೆದವು. ನೇಗಿಲು ಹಿರಿಯ ವಿಭಾಗದಲ್ಲಿ 61 ಜೊತೆ ಕೋಣಗಳು ಭಾಗವಹಿಸಿದ್ದು, ಫೈನಲ್ನಲ್ಲಿ ಎರ್ಮಾಳ್ ಪುಚ್ಟೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಹಾಗೂ ಶ್ರೀ ಪಂಚಲಿಂಗೇಶ್ವರ ಉರುವಾಲು ನೇಕಾಳುಗುತ್ತು ಸದಾನಂದ ಗೌಡ ಅವರ ಕೋಣಗಳು (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಸ್ಪರ್ಧಿಸಿದ್ದವು. ಆದರೆ ಇಲ್ಲಿ ಎರಡು ಕೋಣಗಳು ಸಮಾನವಾಗಿ ಮಂಜೊಟ್ಟಿ ತಲುಪಿದವು. ಕಂಬಳ ಸಮಿತಿಯ ತೀರ್ಮಾನದಂತೆ ಇಲ್ಲಿ ಎರಡು ಜೊತೆ ಕೋಣಗಳಿಗೂ ಪ್ರಥಮ ಬಹುಮಾನವಾದ ಒಂದು ಪವನ್ ಚಿನ್ನವನ್ನು ನೀಡಿ ಗೌರವಿಸಲಾಯಿತು. ಕನಹಲಗೆ ವಿಭಾಗದಲ್ಲಿ 10 ಜೊತೆ ಕೋಣಗಳು ಭಾಗವಹಿಸಿದ್ದು, ಇಲ್ಲಿ ಯಾವ ಕೋಣಗಳು ನಿಶಾನೆಗೆ ನೀರು ಹಾಯಿಸದ ಕಾರಣ 10 ಜೊತೆ ಕೋಣಗಳ ಯಜಮಾನರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಆಗಮಿಸಿ ಶುಭ ಹಾರೈಸಿದರು.
ಎಪ್ರಿಲ್ ಕೊನೆಯವರೆಗೂ CSK ಗೆ ಧೋನಿ ಅಲಭ್ಯ?
ಚೆನ್ನೈ, ಮಾ. 29: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ ಕೊನೆಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ವರದಿಯೊಂದು ತಿಳಿಸಿದೆ. ತನ್ನ ಮಾಜಿ ನಾಯಕ ಮೊದಲ ಎರಡು ಪಂದ್ಯಗಳಿಂದ ಹೊರಗಿರುತ್ತಾರೆ ಎಂದು ಸಿ ಎಸ್ ಕೆ ಪ್ರಕಟಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಮೀನಖಂಡದ ಉಳುಕಿಗೆ ಒಳಗಾಗಿರುವ ಧೋನಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿ ಎಸ್ ಕೆ ತಿಳಿಸಿತ್ತು. 44 ವರ್ಷದ ಮಾಜಿ ನಾಯಕ ಸಿ ಎಸ್ ಕೆ ಯ ಆರು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ. ಕಟ್ಟಾ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 14ರಂದು ನಡೆಯುವ ಪಂದ್ಯಕ್ಕೂ ಅವರು ಲಭ್ಯರಾಗುವುದು ಅನುಮಾನವಾಗಿದೆ. ‘‘ಇದು ಖಂಡಿತವಾಗಿಯೂ ನಮಗೆ ದೊಡ್ಡ ಹೊಡೆತವಾಗಿದೆ ಹಾಗೂ ನಾವು ಇದನ್ನು ನಿಭಾಯಿಸಬೇಕಾಗಿದೆ’’ ಎಂದು ಸಿ ಎಸ್ ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಋತುವಿನ ತನ್ನ ಮೊದಲ ಪಂದ್ಯವನ್ನು ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ ಆಡಲು ಧೋನಿ ತಂಡದೊಂದಿಗೆ ಗುವಾಹಟಿಗೆ ತೆರಳಿಲ್ಲ ಎಂದು ತಂಡ ಖಚಿತಪಡಿಸಿದೆ. ‘‘ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅವರು ತಂಡವನ್ನು ಸೇರುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ತಂಡದ ಅಧಿಕಾರಿ ಹೇಳಿದರು. ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದು, ಐಪಿಎಲ್ ನಲ್ಲಿ ಆಡುವುದನ್ನು ಈವರೆಗೂ ಮುಂದುವರಿಸಿದ್ದಾರೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದಾರೆ. ಪ್ರಸಕ್ತ ಋತುರಾಜ್ ಗಾಯಕ್ವಾಡ್ ತಂಡದ ನಾಯಕನಾಗಿದ್ದರೂ, ಧೋನಿ ವಾಸ್ತವಿಕ ನಾಯಕನಾಗಿದ್ದಾರೆ.
ಕೊಣಾಜೆ: ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ಆರೋಪ; ಪ್ರಕರಣ ದಾಖಲು
ಕೊಣಾಜೆ: ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ರವಿವಾರ ಘಟನೆ ನಡೆದಿದೆ. ಪಟ್ನಮೊಗರು ನಿವಾಸಿ ನಾಗೇಶ್ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ 8.30 ರ ಸುಮಾರಿಗೆ ನಾಗೇಶ್ ಶೇಣವ ತನ್ನ ಅಂಗಳದಲ್ಲಿ ಹಲವು ವರ್ಷಗಳಿಂದ ಹಾದುಹೋಗುವ , ಪಂಚಾಯತ್ ನಿರ್ಮಿಸಿದ್ದಂತಹ ಮಳೆ ನೀರಿನ ತೋಡಿನ ಛೇಂಬರನ್ನು ಅಗೆದು, ಇಟ್ಟಿಗೆಯಿಂದ ಮುಚ್ಚಿದ್ದು, ಇದನ್ನು ನೆರೆಮನೆಯ ರವಿರಾಜ್ ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಾಗೇಶ್ ಶೇಣವ ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದ ಬೇಬಿ ಅವರಿಗೆ ಸ್ಥಳದಲ್ಲಿದ್ದ ಕಲ್ಲನ್ನು ಕಾಲಿಗೆ ಎಸೆದು ಗಂಭೀರ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಅದನ್ನು ಪ್ರಶ್ನಿಸಿದ ಸೊಸೆ ವರ್ಷಾ ಅವರ ಮೇಲೂ ಕಲ್ಲಿನಿಂದ ಹಲ್ಲೆಯನ್ನು ನಡೆಸಿದ್ದಾನೆ ಎಂದು ದೂರಲಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯರು ಸಂಕೋಚ ಸ್ವಭಾವದಿಂದ ಹೊರಬಂದು ಧೈರ್ಯದಿಂದ ಸಾಧನೆ ಮಾಡಿ; ದಾಸಬಾಳದ ವೀರೇಶ್ವರ ಶ್ರೀ ಸಲಹೆ
ಯಾದಗಿರಿ: ಮಹಿಳೆಯರು ಸಂಕೋಚ ಸ್ವಾಭಾವದಿಂದ ಹೊರ ಬಂದು ಧೈರ್ಯದಿಂದ ಸಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು ಹೇಳಿದರು. ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ಜಿಲ್ಲಾ ಘಟಕ, ರಾಜ್ಯ ಸರಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ರವಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ನೂತನ ತಾಲೂಕು ಘಟಕಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಹಿಳೆ ತನ್ನ ಜೀವನದಲ್ಲಿ ತಾಯಿ, ಅಕ್ಕ, ತಂಗಿ, ಹೆಂಡತಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಇವುಗಳ ಜೊತೆ ಸಮಾಜ ಮುಖಿಯಾಗಿ ಕೆಲಸ ಮಾಡಿ ಎಲ್ಲದರಲ್ಲೂ ಸೈ ಎನಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಸಮಾನವಾಗಿ ಶ್ರಮಿಸುತ್ತಾಳೆಂದರು. ಭೀಮಾವತಿ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ, ಜಿಲ್ಲೆಯ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರು ಸಂಘದ ಮೂಲಕವೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು ಎದುರಾದಾಗ ಎಲ್ಲರೂ ಒಗ್ಗಟ್ಟಾಗಿ ನಿಂತು ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳೋಣ ಎಂದರು. ಮಹಿಳಾ ಸಂಘವನ್ನು ಜಿಲ್ಲೆಯಲ್ಲಿ ಬಹಳ ಗಟ್ಟಿಯಾಗಿ ಕಟ್ಟಲಾಗಿದೆ. 38 ಇಲಾಖೆ ಮಹಿಳಾ ನೌಕರರು ಒಂದಾಗಿದ್ದು, ಇದು ದೊಡ್ಡ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್, ಜಿಲ್ಲೆಯಲ್ಲಿ ಹೊಸದಾಗಿ ಸಂಘ ರಚನೆ ಮಾಡಿ, ಆ ಮೂಲಕ ಅನೇಕ ಕೆಲಸಗಳು ಆರಂಭಿಸಲಾಗಿದೆ ಎಂದರು. ನಾವು ಯಾವುದೇ ಸಂಘದಲ್ಲಿದ್ದರೂ ಮಹಿಳಾ ನೌಕರರಿಗೆ ಇದು ಮಹತ್ವದ ಸಂಘ. ಎಲ್ಲರೂ ಸೇರಿ ಸಂಘ ಬೆಳೆಸೋಣ, ಈ ಕಾರ್ಯಕ್ರಮ ಆಯೋಜಿಸುವಲ್ಲಿ ಹುಡೇದ ಮತ್ತು ಅವರ ತಂಡದ ಸಹಕಾರ ಬಹಳಷ್ಟು ಇದೆ ಎಂದರು. ಡಾ.ವಂದನಾ ಗಾಳಿ, ಸಂಘದ ಉಪಾಧ್ಯಕ್ಷೆ ಜ್ಯೋತಿಲತಾ ತಡಿಬಿಡಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ವಿದ್ಯಾ ಮೇಟಿ, ತಹಶೀಲ್ದಾರ್ ಅನಿತಾ ಸಜ್ಜನ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದಿರಾ ಎಸ್ , ಗೀತಾಂಜಲಿ ಮುಗಳಿ, ಮಹೇಶ ವಾರದ ಭಾಗವಹಿಸಿದ್ದರು.
Assam ವಿಧಾನಸಭಾ ಚುನಾವಣೆ | ಕಾಂಗ್ರೆಸ್ ನ ಐದು ಗ್ಯಾರಂಟಿಗಳನ್ನು ಪ್ರಕಟಿಸಿದ ಖರ್ಗೆ
ಗುವಾಹಟಿ, ಮಾ.29: ಅಸ್ಸಾಂ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಘೋಷಿಸಿದರು. ಮಹಿಳೆಯರಿಗೆ ನೇರ ನಗದು ಬೆಂಬಲ, ಸಾರ್ವತ್ರಿಕ ಆರೋಗ್ಯ ರಕ್ಷಣೆ, ಸ್ಥಳೀಯ ಜನರಿಗೆ ಭೂ ಹಕ್ಕುಗಳು ಹಾಗೂ ಗಾಯಕ ಜುಬಿನ್ ಗರ್ಗ್ ಸಾವಿನ ಪ್ರಕರಣದಲ್ಲಿ ಕಾಲಮಿತಿಯೊಳಗೆ ನ್ಯಾಯದ ಭರವಸೆ ನೀಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಬೆದರಿಕೆಯ ಆರೋಪಗಳನ್ನು ಮಾಡಿದರು. ನವೊಬೊಯಿಚಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಜನರೊಂದಿಗೆ ಸಮಾಲೋಚಿಸಿದ ಬಳಿಕ ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ಧಗೊಳಿಸಲಾಗಿದೆ. ಇದು ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಸ್ಥಳೀಯರ ಹಕ್ಕುಗಳನ್ನು ಕೇಂದ್ರೀಕರಿಸಿರುವ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ಗರ್ಗ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರವು 100 ದಿನಗಳಲ್ಲಿ ನ್ಯಾಯ ಒದಗಿಸಲಿದೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲಿದೆ. ಅವರ ಸಾವಿಗೆ ಕಾರಣರಾದವರು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದರು. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರವು ನಾಗರಿಕರಲ್ಲಿ ಭೀತಿಯನ್ನು ಬೆಳೆಸುತ್ತಿದೆ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಲ್ಯಾಣ ಯೋಜನೆಗಳನ್ನು ರಾಜಕೀಯ ನಿಯಂತ್ರಣದ ಸಾಧನಗಳಾಗಿ ಬಳಸಲಾಗುತ್ತಿದೆ ಮತ್ತು ಸಾರ್ವಜನಿಕ ಹಣವನ್ನು ಅಭಿವೃದ್ಧಿಯ ಬದಲು ಪ್ರತಿಷ್ಠೆ ನಿರ್ಮಾಣಕ್ಕಾಗಿ ವ್ಯಯಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಆಡಳಿತ ಪಕ್ಷವು ವ್ಯಾಪಕ ಭ್ರಷ್ಟಾಚಾರ, ಗುತ್ತಿಗೆಗಳು ಮತ್ತು ಭೂಮಿ ಹಂಚಿಕೆಗಳಲ್ಲಿ ಅಕ್ರಮಗಳಲ್ಲಿ ತೊಡಗಿಕೊಂಡಿದೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಮರುಕಳಿಸುವ ನೆರೆ ಸಂಕಷ್ಟಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದೂ ಖರ್ಗೆ ಆರೋಪಿಸಿದರು. ಚುನಾವಣೆಯು ಅಸ್ಸಾಂನ ಭವಿಷ್ಯದ ದಿಕ್ಕಿಗಾಗಿ ಒಂದು ಆಯ್ಕೆಯಾಗಿದೆ ಎಂದು ಅವರು ಹೇಳಿ, ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮತದಾರರನ್ನು ಆಗ್ರಹಿಸಿದರು. ಪಕ್ಷದ ಭರವಸೆಗಳು ದೃಢವಾದ ಬದ್ಧತೆಗಳಾಗಿವೆ ಎಂದು ಅವರು ಒತ್ತಿ ಹೇಳಿದರು. *ಪಂಚ ಗ್ಯಾರಂಟಿಗಳು ಮಹಿಳೆಯರಿಗೆ ಮಾಸಿಕ ನೇರ ನಗದು ವರ್ಗಾವಣೆ ಹೊಸದಾಗಿ ವ್ಯವಹಾರ ಆರಂಭಿಸುವ ಅಥವಾ ವಿಸ್ತರಿಸುವ ಮಹಿಳೆಯರಿಗೆ 50,000 ರೂ. ನೆರವು ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ಗಳ ನಗದುರಹಿತ ಆರೋಗ್ಯ ವಿಮೆ ರಕ್ಷಣೆ 10 ಲಕ್ಷ ಸ್ಥಳೀಯ ನಿವಾಸಿಗಳಿಗೆ ಶಾಶ್ವತ ಭೂಮಿ ಹಕ್ಕುಪತ್ರ ವಿತರಣೆ ಹಿರಿಯ ನಾಗರಿಕರಿಗೆ 1,250 ರೂ. ಮಾಸಿಕ ಭತ್ಯೆ
ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲಿಯಂ ರವಾನಿಸಿದ ಭಾರತ
ಹೊಸದಿಲ್ಲಿ, ಮಾ.29: ಪಶ್ಚಿಮ ಏಶ್ಯದಲ್ಲಿ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ಇಂಧನ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಈ ಅನಿಶ್ಚಿತತೆ ನಡುವೆ ಸ್ಪಂದಿಸಿರುವ ಭಾರತವು ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲಿಯಂ ರವಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸನಾಯಕ ನಡುವಿನ ಮಾತುಕತೆಯ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಪೆಟ್ರೋಲಿಯಂ ಸಾಗಣೆಯು 20,000 ಮೆಟ್ರಿಕ್ ಟನ್ ಡೀಸೆಲ್ ಹಾಗೂ 18,000 ಮೆಟ್ರಿಕ್ ಟನ್ ಪೆಟ್ರೋಲ್ ಅನ್ನು ಒಳಗೊಂಡಿದ್ದು, ಮಾರ್ಚ್ 28ರಂದು ಶ್ರೀಲಂಕಾದ ಕರಾವಳಿಯನ್ನು ತಲುಪಿದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ತಿಳಿಸಿದೆ. 2026 ಮಾರ್ಚ್ 26ರಂದು ಮೋದಿ ಹಾಗೂ ದಿಸನಾಯಕರ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದ ಬಳಿಕ ಈ ಪೆಟ್ರೋಲಿಯಂ ಸಾಗಣೆ ಮಾಡಲಾಗಿದೆ ಎಂದು ಹೈಕಮಿಷನ್ ಹೇಳಿದೆ.
IPL 2026- ಸಂಜು ಸ್ಯಾಮ್ಸನ್- ರವೀಂದ್ರ ಜಡೇಜಾ ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ; ಕುತೂಹಲ ಕೆರಳಿಸಿದೆ ಮುಖಾಮುಖಿ!
CSK Vs RR Match Preview- ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಚೆನ್ನೈನಲ್ಲಿದ್ದ ರವೀಂದ್ರ ಜಡೇಜಾ ಅವರು ರಾಜಸ್ಥಾನ್ ಪರ ಹಾಗೂ ರಾಜಸ್ಥಾನದಲ್ಲಿದ್ದ ಸಂಜು ಸ್ಯಾಮ್ಸನ್ ಚೆನ್ನೈ ಪರ ಮೊದಲ ಬಾರಿ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ. ಗಾಯಾಳು ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಅತ್ತ ರಿಯಾನ್ ಪರಾಗ್ ಅವರು ಪೂರ್ಣ ಪ್ರಮಾಣದ ನಾಯಕನಾಗಿ ರಾಯಲ್ಸ್ ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿದ್ದಾರೆ.
ಆಳಂದ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 70 ಸಾವಿರ ಮುಸ್ಲಿಂ ಮತದಾರರು ಇದ್ದರೂ ಆಕಾಂಕ್ಷಿ ಅಭ್ಯರ್ಥಿಯಾಗಿದ್ದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಮುಸ್ಲಿಂ ಸಮುದಾಯಕ್ಕೆ ವಂಚಿಸಲಾಗಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಪಟ್ಟಣದ ಎಸ್ಆರ್ಜಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಬಿಜೆಪಿ ಆಳಂದ್ ಮಂಡಲದ ಆಶ್ರಯದಲ್ಲಿ ನಡೆದ ‘ಪಂಡಿತ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ–2026’ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ಹಾಗೂ ಮಂಡಲ ಕಾರ್ಯಕಾರಣಿಯಲ್ಲಿ ಮಾತನಾಡಿದ ಚಲವಾದಿ ನಾರಾಯಣಸ್ವಾಮಿ, ಬಿಜೆಪಿಯನ್ನು ನಂಬದ ಮುಸಲ್ಮಾನರು ಕಾಂಗ್ರೆಸ್ನ್ನು ನಂಬಿದರೆ ಈ ರೀತಿ ದ್ರೋಹ ಮಾಡುತ್ತಿದೆ. ಬಿಜೆಪಿ ಸೂಕ್ತ ವ್ಯಕ್ತಿಗಳು ಬಂದರೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ಹೇಳಿದರು. ಬಿಜೆಪಿಯಲ್ಲಿ ದಲಿತರಿಗೆ ಇನ್ನೂ ಸಾಕಷ್ಟು ಪ್ರೀತಿ ತೋರಬೇಕಾಗಿದೆ ಎಂದು ಒಪ್ಪಿಕೊಂಡ ಚಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷ ಮುಸಲ್ಮಾನರು ಮತ್ತು ದಲಿತರಿಗೆ ದ್ರೋಹ ಬಗೆದಿರುವುದು ಈಗ ಅವರಿಗೆ ಅರಿವಾಗುತ್ತಿದೆ. ಬಿಜೆಪಿ ಅವರನ್ನು ಸೂಕ್ತ ಪ್ರೀತಿ ಮತ್ತು ವಿಶ್ವಾಸದಿಂದ ಗುರುತಿಸಿ ಸ್ಥಾನಮಾನ ನೀಡುತ್ತದೆ, ಟಿಕೆಟ್ ಕೊಡುತ್ತದೆ ಎಂದು ಹೇಳಿದರು. ದೇಶದಲ್ಲಿ ಕಾಂಗ್ರೆಸ್ ಬದುಕಿರುವವರೆಗೂ ದೇಶ ಉದ್ಧಾರವಾಗುವುದಿಲ್ಲ, ಕಾಂಗ್ರೆಸ್ ಮುಕ್ತ ಮಾಡಿದರೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕನಸು ನನಸಾಗುತ್ತದೆ” ಎಂದು ಹೇಳಿದರು. ಪಕ್ಷದ ಶಿಸ್ತು ಮತ್ತು ಚೌಕಟ್ಟು ಮೀರಬಾರದು ಎಂದು ಕಾರ್ಯಕರ್ತರಿಗೆ ಸೂಚಿಸಿದ ಅವರು, 1981ರಿಂದಲೂ ಕಲ್ಯಾಣ ಕರ್ನಾಟಕಕ್ಕೆ ಬರುತ್ತಿರುವ ನಾನು ಇದುವರೆಗೆ ಈ ಭಾಗದ ಕಲ್ಯಾಣವೇ ಆಗಿಲ್ಲ ಎಂದು ಹೇಳಿದರು. ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮಾತನಾಡಿ, ಬಿಜೆಪಿ ಧ್ಯೆಯ ವಾಕ್ಯ ಮೊದಲು ದೇಶ ನಂತರ ಪಕ್ಷ ಎನ್ನುತ್ತದೆ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯ ಕೊಡಿಸಿದ್ದೇವೆ ಎನ್ನುತ್ತಾರೆ. ಏನು ಸ್ವಾತಂತ್ರ್ಯ? ಎಷ್ಟು ದಿನ ಆಗಿದೆ? ಎಂತಹ ಸಾಧನೆ ಆಗಿದೆ? ಎಂದು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಹಿರಿಯ ಮುಖಂಡ ಶರಣಪ್ಪ ತಳವಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾನಂದ್ ಗುತ್ತೇದಾರ್, ಪಕ್ಷದ ರಾಜ್ಯ ಮುಖಂಡ ಚನ್ನಮ್ಮ ಪಾಟೀಲ್, ಶಶಿಕಲಾ ಟೆಂಗಳಿ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ರುದ್ರಯ್ಯಾ ಸ್ವಾಮಿ, ಬಸವರಾಜ ಬೆಣ್ಣೂರ, ಧರ್ಮಣ್ಣಾ ಇಟಗಾ, ಸಹನಾ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು.
ಸಿಎಸ್ಕೆ ಕಪ್ 5 ರೂಪಾಯಿ, ಆರ್ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್
RCB Trophy Price: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಈ ನಡುವೆ ಪುಟ್ಟ ಬಾಲಕನೊಬ್ಬ ನೀಡಿರುವ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪಂದ್ಯ ಮುಗಿದ ಬಳಿಕ ಮೈದಾನದ ಹೊರಗೆ ಆರ್ಸಿಬಿ ಅಭಿಮಾನಿಗಳು
ಬಳ್ಳಾರಿ| ಪಡಿತರ ಅಕ್ಕಿ ಅಕ್ರಮ ದಾಸ್ತಾನು: 1.84 ಲಕ್ಷ ರೂ. ಮೌಲ್ಯದ ಅಕ್ಕಿ ಜಪ್ತಿ ಮಾಡಿದ ಪೊಲೀಸರು
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದವರ ವಿರುದ್ಧ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಪಿ.ಆರ್. ಲೇಔಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿರುವ ಕುರಿತು ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಒಟ್ಟು 40.80 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗುಗ್ಗರಹಟ್ಟಿ ನಿವಾಸಿ ಶರಭಯ್ಯ (50) ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಾ.28ರಂದು ಕೊಳಗಲ್ಲು-ಸಿರುಗುಪ್ಪ ರಸ್ತೆಯಲ್ಲಿರುವ ಲೇಔಟ್ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 82.80 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಈ ಅಪರಾಧಿಗಳನ್ನು ನೆನಪಿಡಿ: ಮಿನಾಬ್ ಶಾಲೆಯ ಮೇಲಿನ ದಾಳಿಗೆ ಆದೇಶಿಸಿದ ಅಮೆರಿಕದ ಅಧಿಕಾರಿಗಳನ್ನು ಹೆಸರಿಸಿದ ಇರಾನ್
ಈ ಅಧಿಕಾರಿಗಳಿಗೂ ಮಕ್ಕಳಿಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಇರಾನ್
ರಾಜ್ಯಾದ್ಯಂತ ಎ.5ರವರೆಗೆ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎ.5ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಿದ್ದರೂ ಗಾಳಿಯ ತೀವ್ರತೆ ಹೆಚ್ಚಿದ್ದರೆ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ‘ಶಕ್ತಿ’ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ರವಿವಾರ ಇಲ್ಲಿನ ಲಗ್ಗೆರೆಯ ಬಸವೇಶ್ವರ ಭವನದಲ್ಲಿ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ 208 ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಷ್ಟರ ಮಟ್ಟಿಗೆ ಇಂದು ಬೆಳೆದಿದ್ದಾಳೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಂತಹ, ಉತ್ತಮ ಆರೋಗ್ಯದ ಮಗುವಿಗೆ ಜನ್ಮ ನೀಡಿ ಎಂದು ಹಾರೈಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಮ್ಮ ಇಲಾಖೆ ಮೂಲಕ, ಮಹಿಳೆ ಗರ್ಭಿಣಿ ಆದ ಬಳಿಕ, ಹುಟ್ಟುವ ಮಗುವಿಗೆ ಆರು ವರ್ಷದವರೆಗೂ ಸರಕಾರವೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಗರ್ಭಿಣಿ ಹಾಗೂ ಮಗುವಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ಕೆ ಶ್ಲಾಘನೆ: ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಬಡವರು, ಹಸಿದವರಿಗೆ ನಾರಾಯಣಸ್ವಾಮಿ ನೆರವಾಗುತ್ತಿದ್ದಾರೆ. ಅವರ ಕೆಲಸಗಳಿಂದ ನಾನು ಸ್ಫೂರ್ತಿ ಪಡೆದಿರುವೆ. ರಾಜಕೀಯಕ್ಕಾಗಿ ಇಂತಹ ಕಾರ್ಯಕ್ರಮ ಮಾಡದೇ ಸಾಮಾಜಿಕ ಕಳಕಳಿಯಿಂದ ಇಂತಹ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ನಾರಾಯಣಸ್ವಾಮಿ ಕುಟುಂಬಕ್ಕೆ ಒಳಿತಾಗಲಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಪ್ರತಿವರ್ಷ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುತ್ತಿರುವೆ. ಏಳು ವರ್ಷಗಳಿಂದ ಈ ಕೆಲಸ ಮಾಡುತ್ತಿರುವೆ. ಮಹಿಳೆಯರನ್ನು ಗೌರವಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು. ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಮಡಿವಾಳ ಮಾಚಿದೇವ ಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕುಸುಮಾ ಹನುಮಂತರಾಯಪ್ಪ, ಲಗ್ಗೆರೆ ನಾರಾಯಣಸ್ವಾಮಿ, ಮಂಜುಳಾ ನಾರಾಯಣಸ್ವಾಮಿ, ನಟಿ ಅಶ್ವಿನಿ ಗೌಡ, ಆಶಾ ಸುರೇಶ್, ರೂಪಾ ಲಿಂಗೇಶ್, ಮಂಜುಳಾ ಮಂಜುನಾಥ್ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು| ಎ. 4 - 5ರಂದು ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ
ಮಂಗಳೂರು, ಮಾ.29: ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ದುಡಿಯುವ ವರ್ಗದ ಚಳುವಳಿಯ ವಿಸ್ತರಣೆಗಾಗಿ ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ಎಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಲಿದೆ . ಕರ್ನಾಟಕ ರಾಜ್ಯಾದ್ಯಂತ ಆಯ್ದ 250ರಷ್ಟು ಪ್ರಮುಖ ಸಿಐಟಿಯು ನಾಯಕರು ಭಾಗವಹಿಸಲಿರುವ ಸಂಘಟನಾ ಕಾರ್ಯಾಗಾರವನ್ನು ಎಪ್ರಿಲ್ 4 ರಂದು ಬೆಳಿಗ್ಗೆ 10 ಗಂಟೆಗೆ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ ಎನ್ ಉಮೇಶ್ ರವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ ,ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಬಿಎಂ ಭಟ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ವಹಿಸಲಿದ್ದಾರೆ. ಕಾರ್ಯಾಗಾರದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನೆಯಾಗಿದ್ದು ಅದರಡಿಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ.ದೇಶವನ್ನಾಳುವ ಕೇಂದ್ರ ಸರಕಾರವು ಕಾರ್ಪೊರೇಟ್ ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಮೇಲೆ ತೀವ್ರ ಧಾಳಿಗಳನ್ನು ನಡೆಸುತ್ತಿದೆ. ಕಾರ್ಮಿಕ ವರ್ಗದ ಪ್ರಮುಖ ಕಾನೂನುಗಳನ್ನು ಇಲ್ಲವಾಗಿಸಿದ ಆಳುವ ವರ್ಗದ ವಿರುದ್ಧ ಸಮರಶೀಲ ಹೋರಾಟ ಚಳುವಳಿಯನ್ನು ಕಟ್ಟುವ ಮೂಲಕ ದೇಶದ ಜನಸಾಮಾನ್ಯರ ಬದುಕಿಗೆ ರಕ್ಷಣೆ ನೀಡಬೇಕಾದ ಕಾರ್ಮಿಕ ವರ್ಗದ ಚಳುವಳಿವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು, ಕಾರ್ಮಿಕ ವರ್ಗದ ನಾಯಕರು,ಪ್ರಗತಿಪರ ಚಿಂತಕರು, ಜೀವಪರ ಜನಪರ ಕಾಳಜಿಯುಳ್ಳ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
IPL 2026- ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿದ ಸೂರ್ಯಕುಮಾರ್ ಯಾದವ್!: ವಾಂಖೆಡೆಯಲ್ಲಿ MI ವಿಭಿನ್ನ ನಡೆ
ಇಲ್ಲದ ಮುಂಬೈ ಇಂಡಿಯನ್ಸ್ ತಂಡವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ? ಆದರೆ ಇದೀಗ ವಿರುದ್ಧ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ತಂಡದ ಪಟ್ಟಿ ಬಿಡುಗಡೆಯಾದಾಗ ಮಿಸ್ಟರ್ 360 ಎಂದೇ ಖ್ಯಾತ ಆಗಿರುವ ಸ್ಟಾರ್ ಪ್ಲೇಯರ್ ಸೂರ್ಯಕುಮಾರ್ ಯಾದವ್ ಅವರ ಹೆಸರು ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲದ್ದು ಅಚ್ಚರಿಗೆ ಕಾರಣವಾಯಿತು. ಇಂಪ್ಯಾಕ್ಟ್ ಪ್ಲೇಯರ್ ಗಳ ಲಿಸ್ಟ್ ನಲ್ಲಿ ಅವರ ಹೆಸರು ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ರಾಜ್ ಬಾವಾ ಮತ್ತು ಅಶ್ವನಿ ಕುಮಾರ್ ಅವರ ಜೊತೆಯಲ್ಲಿ ಇತ್ತು. () ಹೀಗಾಗಿ ಅವರು ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆ ಇದೆ. ಕಳೆದ ಸೀಸನ್ ನ ಹಲವು ಪಂದ್ಯಗಳಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದರು. ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI ಹಾರ್ದಿಕ್ ಪಾಂಡ್ಯ(ನಾಯಕ), ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್(ವಿಕೆಟ್ ಕೀಪರ್), ತಿಲಕ್ ವರ್ಮಾ,ಶೆರ್ಫಾನೆ ರುದರ್ಫೋರ್ಡ್, ನಮನ್ ಧೀರ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಾಂಡೆ, ಎಎಮ್ ಗಜನ್ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ ಇಂಪ್ಯಾಕ್ಟ್ ಸಬ್ಸ್: ಸೂರ್ಯಕುಮಾರ್ ಯಾದವ್, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ರಾಜ್ ಬಾವಾ, ಅಶ್ವನಿ ಕುಮಾರ್.
ಹಾಸನ | 4ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಹಾಸನ: ಆಲೂರು ತಾಲೂಕು ಹೊಸಮಠ ಗ್ರಾಮದ ಸಮೀಪದ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ, ಬೇಲೂರು ತಾಲೂಕಿನ ಬಂಟೇನಹಳ್ಳಿ ವಾರ್ಡ್ 2ರಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ಹಾಸನ ನಗರದ ಬೀರನಹಳ್ಳಿ ಕೆರೆ ಪ್ರದೇಶದ ನಿವಾಸಿಗಳಿಗೆ ನಿವೇಶನ ಗುರುತಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘದ ವತಿಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಈ ಹೋರಾಟದಲ್ಲಿ ಪ್ರತಿಭಟನಾಕಾರರು ಸ್ಥಳದಲ್ಲೇ ಸೌದೆ ಒಲೆ ಬಳಸಿಕೊಂಡು ಅಡುಗೆ ಮಾಡುತ್ತಾ ನಿರಂತರ ಧರಣಿ ನಡೆಸುತ್ತಿದ್ದಾರೆ. ಆದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲವೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಲುಬೆ ಬೆಟ್ಟ ಕ್ರೈಸ್ತರ ಪವಿತ್ರ ಸ್ಥಳವಾಗಿದ್ದು, ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು ಸುತ್ತಮುತ್ತಲಿನ ಗ್ರಾಮಗಳ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ ಎಂದು ಆರೋಪಿಸಿದರು. ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಭಾರೀ ಸ್ಫೋಟಗಳಿಂದ ಪರಿಸರ ಹಾನಿ ಉಂಟಾಗುವುದಷ್ಟೇ ಅಲ್ಲದೆ, ಜನರ ಜೀವ-ಆಸ್ತಿಗೂ ಅಪಾಯ ಎದುರಾಗಿದೆ ಎಂದರು. ಸ್ಫೋಟಗಳ ಪರಿಣಾಮವಾಗಿ ಹೊಸಮಠ ಸೇರಿದಂತೆ ಕಲ್ಲುಕೊಪ್ಪಲು, ಮಟದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಗ್ರಾಮಗಳ ಅನೇಕ ಮನೆಗಳಲ್ಲಿ ಬಿರುಕುಗಳು ಉಂಟಾಗಿದ್ದು, ಕೆಲವು ಮನೆಗಳಲ್ಲಿ ವಾಸಿಸುವುದೇ ಅಪಾಯಕಾರಿಯಾಗಿದೆ ಎಂದು ದೂರಿದರು. ನಿತ್ಯವೂ ಸ್ಫೋಟದ ಭಾರೀ ಶಬ್ದದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ಲಾರಿಗಳು ಹಾಗೂ ಭಾರೀ ಯಂತ್ರೋಪಕರಣಗಳ ಸಂಚಾರದಿಂದ ಗ್ರಾಮಾಂತರ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಅವರು ಹೇಳಿದರು. ಇನ್ನೊಂದೆಡೆ, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 2ರ ದೇವರಾಜಪುರ ಅಂಬೇಡ್ಕರ್ ಬೀದಿಯಲ್ಲಿ 1950ರಿಂದಲೇ ಸುಮಾರು 300 ರಿಂದ 400 ಕುಟುಂಬಗಳು ವಾಸಿಸುತ್ತಿದ್ದರೂ, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಮಹಮ್ಮದ್ ಸಾದಿಕ್, ವೆಂಕಟೇಶ್, ಗಂಗಾಧರ್, ಸಮಿಉಲ್ಲ, ಅರುಣ ಭಾಸ್ಕರ್, ಪವಿತ್ರ, ರಂಗಮ್ಮ, ಕವಿತ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಂಗಳೂರು| 'ಅಮ್ಮ ಸಾಹಿತ್ಯ ಪ್ರಶಸ್ತಿ' ಮತ್ತು 'ಅನನ್ಯ ಸಾಧಕಿ ಪ್ರಶಸ್ತಿ' ಪ್ರದಾನ ಸಮಾರಂಭ
ಮಂಗಳೂರು: ಡಾ. ಮಮತಾ ತಿಲಕ್ ರಾವ್ ದತ್ತಿ ನಿಧಿ ಪ್ರಾಯೋಜಿತ 'ಅಮ್ಮ ಸಾಹಿತ್ಯ ಪ್ರಶಸ್ತಿ' ಮತ್ತು 'ಅನನ್ಯ ಸಾಧಕಿ ಪ್ರಶಸ್ತಿ' ಪ್ರದಾನ ಸಮಾರಂಭ ರವಿವಾರ ನಡೆಯಿತು. ಉರ್ವಾಸ್ಟೋರ್ ನ ಲೇಖಕಿಯರ-ವಾಚಕಿಯರ ಸಂಘದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಲೇಖಕಿ ಮತ್ತು ಪ್ರಕಾಶಕಿಯಾದ ಇಂದಿರಾ ಹಾಲಂಬಿ ಅವರಿಗೆ ಅಮ್ಮ ಸಾಹಿತ್ಯ ಪ್ರಶಸ್ತಿ , ಕೊರಗಾಭಿವೃದ್ಧಿ ಸಂಘಗಳ ಅಧ್ಯಕ್ಷರಾದ ಸುಶೀಲಾ ನಾಡ ರವರಿಗೆ ಅನನ್ಯ ಸಾಧಕೀಯ ಪ್ರಶಸ್ತಿ , ಹಾಗೂ ಬಾಗಲಕೋಟೆ ಇಳಕಲ್ ತಾಲೂಕಿನ ಕವಯತ್ರಿ ಮರ್ತುಜಾ ಬೇಗಮ್ ರವರಿಗೆ 2025 -26 ನೇ ಸಾಲಿನ ಚಂದ್ರಭಾಗಿ ರೈ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಡಾ. ಮಮತಾ ತಿಲಕ್ ರಾವ್, ಮುಂಬಯಿ ರವರು ಪ್ರಸ್ತಾವಿಕವಾಗಿ ಮಾತನಾಡಿದರು. , 'ಟೀಚರ್' ಶೈಕ್ಷಣಿಕ ಪತ್ರಿಕೆ ಯ ಸಂಪಾದಕ ಉದಯ ಗಾಂವಕರ ಪ್ರಶಸ್ತಿ ಪ್ರದಾನ ಮಾಡಿ, ಒಂದು ತಲೆಮಾರಿನ ನಾಗರಿಕತೆ ಸಂಸ್ಕೃತಿಯನ್ನು ಕ್ರತಿಯ ರೂಪದಲ್ಲಿ ,ಬರಹಗಳ ರೂಪದಲ್ಲಿ ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕು. ಸಾವಯುವ ಸಂಬಂಧಗಳ ಮುಖೇನ ಜಗತ್ತನ್ನು ಉಳಿಸಬಹುದು ಬದುಕಿಸಬಹುದು . ಇತರರೊಂದಿಗೆ ಹೆಚ್ಚು ಹೆಚ್ಚು ಬೆರೆಯುವ ಮುಖೇನ ನಂಬಿಕೆಗಳನ್ನು ಬೆಳೆಸಿಕೊಳ್ಳುವ ಮುಖೇನ, ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವ ಮುಖೇನ ಇದನ್ನು ಸಾಧಿಸಬಹುದು ಎಂದು ಹೇಳಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಸೌಮ್ಯಾ ಹೇರಿಕುದ್ರು ಅವರು ಮಾತನಾಡಿ, ಇಂದು ಪುರುಷ ಪ್ರಧಾನ ಮನಸ್ಥಿತಿ ಯಿಂದಾಗಿ ಬಿನ್ನಾಭಿಪ್ರಾಯಗಳ ಸೃಷ್ಟಿ, ತಾನೇ ಮೇಲು ಎಂಬ ಅಹಂಕಾರ , ಪ್ರಾಬಲ್ಯ ಸಾಧಿಸಲು ಬಲಪ್ರಯೋಗಗಳು ಜಗತ್ತಿನಾದ್ಯಂತ ನಡೆಯುತ್ತಿದೆ. ಪರಿಣಾಮವಾಗಿ ಜಾಗತಿಕ ಯುದ್ಧ , ಕ್ಷೋಭೆ, ಭಯ, ಅಸುರಕ್ಷಿತತನ ಉಂಟಾಗುತ್ತಿದೆ ಎಂದರು. ಸಾವಿತ್ರಿ ಪೂರ್ಣಚಂದ್ರರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಚಂದ್ರಕಲಾ ನಂದಾವರ, (ಲೇಖಕಿ, ನಿವೃತ್ತ ಪ್ರಾಂಶುಪಾಲರು)ರವರ ಸಮನ್ವತೆಯಲ್ಲಿ ಗಿರಿವಾಸಿನಿಯ ಮರುದನಿ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂವಾದದಲ್ಲಿ ಸಂತ ಆಗ್ನೆಸ್ (ಸ್ವಾಯತ್ತ) ಕಾಲೇಜು, ಬೆಸೆಂಟ್ ಮಹಿಳಾ ಕಾಲೇಜು, ದಯಾನಂದ ಪೈ ಮತ್ತು ಸತೀಶ್ ಪೈ ಸರ್ಕಾರಿ ಪ್ರ.ದ. ಕಾಲೇಜು, ಸರ್ಕಾರಿ ಪ್ರದ, ಮಹಿಳಾ ಕಾಲೇಜು, ಬಲ್ಮಠ, ಶಾರದಾ ವಿದ್ಯಾಲಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡರು ಈ ಕಾರ್ಯಕ್ರಮವನ್ನು ಡಾ. ಸುಧಾರಾಣಿ ಅವರು ನಡೆಸಿಕೊಟ್ಟರು. ರತ್ನಾವತಿ ಜೆ. ಬೈಕಾಡಿ ಆಶಯಗೀತೆಯನ್ನು ಹಾಡಿದರು. ಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಲ್ಪೆ: ಅಪಘಾತಕ್ಕೀಡಾದ ಕಾರಿನಲ್ಲಿ ಗಾಂಜಾ ಪತ್ತೆ
ಮಲ್ಪೆ, ಮಾ.29: ಅಪಘಾತಕ್ಕೆ ಒಳಗಾದ ವಾಹನವೊಂದನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿರುವ ಘಟನೆ ಮಾ.28ರಂದು ಹೂಡೆ ಕೋಡಿಬೇಂಗ್ರೆ ರಸ್ತೆಯಲ್ಲಿರುವ ಶ್ರೀ ನಾಗಬ್ರಹ್ಮ ಬೊಬ್ಬರ್ಯ ದೈವಸ್ಥಾನದ ಬಳಿ ನಡೆದಿದೆ. ಅಪಘಾತದ ಸ್ಥಳದಲ್ಲಿ ಮಲ್ಪೆ ಪೊಲೀಸರು ಮಹಜರಿನ ಪ್ರಕ್ರಿಯೆ ನಡೆಸುವಾಗ ಅಪಘಾತಕ್ಕೀಡಾದ ಕಾರನ್ನು ಪರಿಶೀಲಿಸಿದರು. ಆಗ ಅದರ ಒಳಗೆ 8000ರೂ. ಮೌಲ್ಯದ ಒಟ್ಟು 173.42 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಅದೇ ರೀತಿ ಕಾರಿನಲ್ಲಿದ್ದ ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಫೈಜಲ್ ಮತ್ತು ಇನ್ನೊರ್ವ ಆರೋಪಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟು ಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಢಿಕ್ಕಿ: ಸ್ಕೂಟರ್ ಸವಾರೆ ಮೃತ್ಯು
ಕೋಟ: ಲಾರಿಯೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೆಯೊಬ್ಬರು ಮೃತಪಟ್ಟ ಘಟನೆ ಮಾ.28 ರಂದು ಮಧ್ಯಾಹ್ನ ವೇಳೆ ನಡೆದಿದೆ. ಐರೋಡಿ ಗ್ರಾಮದ ಮಾಬುಕಳ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ಸಹಸವಾರೆ ಮೃತರ ಮಗಳು ನಿರೀಕ್ಷಾ ಗಾಯಗೊಂಡು ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟ ಕಡೆಗೆ ಬರುತ್ತಿದ್ದ ಸ್ಕೂಟರ್ಗೆ ಲಾರಿಯು ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಸ್ಕೂಟರ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ನಿರ್ಮಲಾ ಗಂಭೀರ ವಾಗಿ ಗಾಯಗೊಂಡು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ
ಕಾಪು, ಮಾ.29: ಕೌಟುಂಬಿಕ ಕಾರಣ ಹಾಗೂ ಕುಡಿತದ ಚಟದಿಂದ ಮನನೊಂದ ಶ್ರೀಧರ(43) ಎಂಬವರು ಮಣಿಪುರ ಗ್ರಾಮದ ಬೋರ್ಗಲ್ ಗುಡ್ಡೆಯಲ್ಲಿರುವ ಅಪ್ಪು ಶೆಟ್ಟಿ ಎಂಬವರ ತೋಟದ ಮನೆಯ ಅಡುಗೆ ಕೋಣೆಯಲ್ಲಿ ಮಾ.28ರಂದು ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಸಂತೋಷ ಪರಶುರಾಮ ಆಲೂರು(24) ಎಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.28ರಂದು ಬೆಳಗ್ಗೆ ಬಡಗುಬೆಟ್ಟು ಗ್ರಾಮದ ಶಾಂತಿನಗರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು: ಮಗನ ಸಾವಿನ ವಿಷಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮಾ.28ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರಾ(68) ಎಂಬವರು ಮಾ.29ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಸರಕಾರಿ ಶಾಲೆಗಳು ಮುಚ್ಚುವ ಭೀತಿʼ; ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ
ಮಡಿಕೇರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಯಾದರೆ ಕೊಡಗಿನ ಬಹುತೇಕ ಸರಕಾರಿ ಶಾಲೆಗಳು ಮುಚ್ಚುವ ಸಾಧ್ಯತೆಗಳಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯೂನಿಯನ್(ಎಐಡಿಎಸ್ಒ) ಸಂಘಟನೆ ʼಸಾರ್ವಜನಿಕ ಶಿಕ್ಷಣ ಉಳಿಸಿʼ ಸಮಿತಿಯ ನೇತೃತ್ವದಲ್ಲಿ ಕುಶಾಲನಗರದ ಮಹಿಳಾ ಸಮಾಜ ಭವನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ ಪ್ರಮುಖರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು ಸಂಯೋಜನೆ ಹೆಸರಿನಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಆ ಸಂದರ್ಭ ರಾಜ್ಯಾದ್ಯಂತ ಹೋರಾಟ ನಡೆಸಿ ಸರಕಾರಿ ಶಾಲೆಗಳನ್ನು ಉಳಿಸಿದ್ದೆವು. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ 40ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2,500 ಕೋಟಿ ಸಾಲ ಮಾಡಿ ತೆರೆಯುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಪ್ರತಿ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುವ ಸಾಧ್ಯತೆ ಇದೆ ಎಂದರು. ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಕುಶಾಲನಗರ ತಾಲ್ಲೂಕಿನ ಕುಶಾಲನಗರದ ಸರಕಾರಿ ಶಾಲೆ, ಕೂಡಿಗೆ ಶಾಲೆ, ಶಿರಂಗಾಲ ಶಾಲೆ ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಶಾಲೆ, ಕುಟ್ಟ ಶಾಲೆ ಸೇರಿದಂತೆ 5 ಶಾಲೆಗಳನ್ನು ಆಯ್ಕೆ ಮಾಡಿ 135 ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆಯಡಿ ವಿಲೀನಗೊಳಿಸಿ ಮುಚ್ಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ. ಎಷ್ಟೋ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ನಾಲ್ಕು ತಿಂಗಳು ಸುರಿಯುವ ಮಳೆಯಲ್ಲಿ ಒಂದನೇ ತರಗತಿ, ಎರಡನೇ ತರಗತಿ ಓದುವ ಚಿಕ್ಕ ಮಕ್ಕಳು ಐದು ಆರು ಕಿಲೋ ಮೀಟರ್ ನಡೆದುಕೊಂಡು ಹೋಗುವುದು ಅಸಾಧ್ಯದ ಮಾತು. ಜಿಲ್ಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಯಾದರೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು, ಕಾಡಿನ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಮಕ್ಕಳು ಹಾಗೂ ರೈತರ, ಬಡವರ ಮಕ್ಕಳು, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರದ ಕಸಾಪ ಅಧ್ಯಕ್ಷ ನಾಗೇಶ್ ಕೆ.ಎಸ್ ಮಾತನಾಡಿ, ಶಾಲೆಗಳು ಪ್ರತಿಯೊಂದು ಗ್ರಾಮಗಳಲ್ಲಿ ಇರಬೇಕು. ಐದರಿಂದ ಆರು ಕಿಲೋಮೀಟರ್ ದೂರದ ಶಾಲೆಗೆ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು ತೆರಳಿ ಶಿಕ್ಷಣ ಪಡೆದುಕೊಳ್ಳುವುದು ಅಸಾಧ್ಯವಾದೀತೆಂದು ಕಳವಳ ವ್ಯಕ್ತಪಡಿಸಿದರು. ಕಾರ್ಮಿಕ ಮುಖಂಡರಾದ ಹರೀಶ್, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಿಂದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ವಿಜಯನಗರದ ಸುರೇಶ್, ಚಿಕ್ಕತ್ತೂರು ಹರೀಶ್, ತೊರೆನೂರು ಸಾಗರ್ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್ಒ ಸಂಘಟನಾಕಾರಾದ ಸ್ವಾತಿ ವಹಿಸಿದ್ದರು. ಯುವಜನ ಪದಾಧಿಕಾರಿಗಳಾದ ಪೂರ್ಣಿಮಾ, ನೀತು, ಮಂಜು ಹಾಗೂ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕೋಕಾ ಕಾಯಿದೆಯಡಿ ಜಾನುವಾರು ಕಳವು ಪ್ರಕರಣ: ಆರೋಪಿಗಳ ಬಂಧನ
ಉಡುಪಿ, ಮಾ.29: ಜಾನುವಾರು ಕಳವು ಪ್ರಕರಣದಲ್ಲಿ ಸಂಘಟಿತ ಕೃತ್ಯ ಎಸಗಿರುವ ನಾಲ್ವರು ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅಳವಡಿಸಿ ಮತ್ತೆ ಬಂಧಿಸಲಾಗಿದೆ. ಕಾರ್ಕಳ ನಲ್ಲೂರು ಗ್ರಾಮದ ಯೂನಿಸ್(31), ಮೂಡಬಿದಿರೆ ಪುತ್ತಿಗೆ ಗ್ರಾಮದ ಮಿಜಾರು ನಿವಾಸಿ ಇಕ್ಬಾಲ್(29), ಕಲ್ಲಬೆಟ್ಟು ಗ್ರಾಮದ ನಾಸೀರ್(28), ಕಲ್ಲಬೆಟ್ಟು ಗ್ರಾಮದ ಶೌಕತ್ ಅಲಿ(34) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು 2025ರ ಸೆ.29ರಂದು ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಜಯಶ್ರೀ ಪೂಜಾರಿ ಎಂಬವರ ಮನೆಯ ಹಟ್ಟಿಗೆ ನುಗ್ಗಿ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದು, ಆಗ ಎಚ್ಚರಗೊಂಡು ಬಂದ ಜಯಶ್ರೀ ಪೂಜಾರಿಗೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿ ಹಟ್ಟಿಯಲ್ಲಿದ್ದ 35,000ರೂ. ಮೌಲ್ಯದ ಮೂರು ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರದಲ್ಲಿ ಆರೋಪಿಗಳು ಜಾಮೀನು ಮೂಲಕ ಬಿಡುಗಡೆಗೊಂಡಿದ್ದರು. ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತರಾಗಿ ಈ ಕೃತ್ಯವನ್ನು ನಡೆಸಿರುವುದು ತಿಳಿದು ಬಂದಿರುವುದರಿಂದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯನ್ನು ಆಳವಡಿಸಲಾಗಿದೆ. ಈಗಾಗಲೇ ನ್ಯಾಯಾಲಯದ ಜಾಮೀನು ಮೂಲಕ ಹೊರ ಬಂದಿರುವ ಎಲ್ಲಾ ಆರೋಪಿಗಳ ಜಾಮೀನುಗಳನ್ನು ರದ್ದು ಪಡಿಸಿ ಮತ್ತೆ ಬಂಧಿಸಿ, ನ್ಯಾಯಾಯಲಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Uttar Pradesh | ಅಂಗಡಿಯಿಂದ ಮಿಠಾಯಿ ಕದ್ದ ಆರೋಪ; 12 ವರ್ಷದ ಪುತ್ರಿಯನ್ನು ಥಳಿಸಿ ಹತ್ಯೆಗೈದ ತಂದೆ
ಲಕ್ನೊ, ಮಾ. 29: ಹನ್ನೆರಡು ವರ್ಷದ ಬಾಲಕಿ ಸ್ಥಳೀಯ ದಿನಸಿ ಅಂಗಡಿಯಿಂದ ಮಿಠಾಯಿ ಕದ್ದಿದ್ದಾಳೆ ಎಂಬ ಸಂದೇಹದ ಹಿನ್ನೆಲೆಯಲ್ಲಿ ಆಕೆಯ ತಂದೆಯೇ ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ತನ್ನ ಪುತ್ರಿಗೆ ಪತಿ ಥಳಿಸದಂತೆ ತಡೆಯಲು ಪ್ರಯತ್ನಿಸಿದ ತಾಯಿ ಆರತಿ ದೇವಿ ಕೂಡ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪೂಜಾ ರಾಣಿ ಗುರುವಾರ ರಾಮನವಮಿ ಹಬ್ಬದ ನಂತರ ಮಿಠಾಯಿ ಖರೀದಿಸಲು ಅಂಗಡಿಗೆ ಹೋಗಿದ್ದಳು. ಆಕೆ ಅಲ್ಲಿ ಹಣ ಪಾವತಿಸದೆ ಮಿಠಾಯಿಯ ಪೆಟ್ಟಿಗೆಯೊಂದನ್ನು ತಂದಿದ್ದಾಳೆ ಎಂದು ಹೇಳಲಾಗಿದೆ. ಹಾಲು ವ್ಯಾಪಾರಿಯಾಗಿರುವ ಆಕೆಯ ತಂದೆ ಪುಷ್ಪೇಂದ್ರ ಕುಮಾರ್ ಗೆ ಈ ಬಗ್ಗೆ ತಿಳಿಯಿತು. ಆತ ಪುತ್ರಿ ಪೂಜಾ ರಾಣಿಗೆ ಕೋಲಿನಿಂದ ಮತ್ತೆ ಮತ್ತೆ ಥಳಿಸಿದ ಪರಿಣಾಮ ಆಕೆ ಮೃತಪಟ್ಟಳು. ಪೂಜಾ ರಾಣಿ ನಾಲ್ವರು ಮಕ್ಕಳಲ್ಲಿ ಹಿರಿಯವಳು. ಘಟನೆಯ ನಂತರ ಕುಮಾರ್ ಒಳಗಿನಿಂದ ಬಾಗಿಲು ಹಾಕಿ ತನ್ನ ಪತ್ನಿ ಹಾಗೂ ಮಕ್ಕಳು ಯಾರಿಗೂ ಕರೆ ಮಾಡದಂತೆ ತಡೆದನು. ಸಂಜೆ ಮನೆಗೆ ಬೀಗ ಹಾಕಿ ಹೊರಟು ಹೋದ. ಅನಂತರ ಆರತಿ ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಅವರು ಮರುದಿನ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ. ‘‘ಕೋಪದ ಭರದಲ್ಲಿ ನನ್ನ ಪತಿ ಕೋಲಿನಿಂದ ಆಕೆಯನ್ನು ಹೊಡೆಯಲು ಆರಂಭಿಸಿದ. ನಾನು ನಿಲ್ಲಿಸುವಂತೆ ಬೇಡಿಕೊಂಡೆ. ಆದರೆ ಆತ ನಿಲ್ಲಿಸಲಿಲ್ಲ’’ ಎಂದು ಆರತಿ ತಿಳಿಸಿದ್ದಾರೆ. ‘‘ಆರತಿ ನೀಡಿದ ದೂರಿನ ಆಧಾರದಲ್ಲಿ ಪುಷ್ಪೇಂದ್ರ ಕುಮಾರ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ ತೇಜವೀರ್ ಸಿಂಗ್ ತಿಳಿಸಿದ್ದಾರೆ.
ಮಲಪ್ಪುರಂ, ಮಾ. 29: ಯುಡಿಎಫ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆಯುವ ಬೂತ್ ಸಮಿತಿ ಸದಸ್ಯರಿಗೆ 15 ದಿನಗಳ ಯುಎಇ ಪ್ರವಾಸದ ಕೊಡುಗೆ ಘೋಷಿಸಿದ ಆರೋಪದಲ್ಲಿ ಐಯುಎಂಎಲ್ ನ ನಾಯಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಯುಎಂಎಲ್ ನ ರಾಜ್ಯ ಉಪಾಧ್ಯಕ್ಷ ಬಾವ ಹಾಜಿ ಅವರ ವಿರುದ್ಧ ಮಲಪ್ಪುರಂನಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುಡಿಎಫ್ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ರಾಜಕೀಯ ಪಕ್ಷಗಳ ಮೈತ್ರಿಕೂಟವಾಗಿದೆ. ಇದು ಕೇರಳದ ಎರಡು ಪ್ರಮುಖ ರಾಜಕೀಯ ಮೈತ್ರಿಕೂಟಗಳಲ್ಲಿ ಒಂದಾಗಿದೆ. ಮಾರ್ಚ್ 22ರಂದು ನಡೆದ ಸಮಾವೇಶದಲ್ಲಿ ಭಾವ ಹಾಜಿ ಅವರು ಕಾಂಗ್ರೆಸ್ ನಾಯಕ ವಿ.ಎಸ್. ಜಾಯ್ ಪರ ಪ್ರಚಾರ ನಡೆಸಿದ್ದರು. ಈ ಸಂದರ್ಭ ಅವರು ಯುಡಿಎಫ್ ಅಭ್ಯರ್ಥಿಗೆ ಅತಿ ಹೆಚ್ಚು ಮತಗಳನ್ನು ತಂದುಕೊಡುವ ಯುಡಿಎಫ್ ಬೂತ್ ಸಮಿತಿ ಸದಸ್ಯರಿಗೆ 15 ದಿನಗಳ ಯುಎಇ ಪ್ರವಾಸದ ಕೊಡುಗೆ ನೀಡಲಾಗುವುದು ಎಂದು ಘೋಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯವನ್ನು ಮೊದಲು ಎಲ್ ಡಿ ಎಫ್ ಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದರು. ವಿಚಾರಣೆಯ ನಂತರ ಆಯೋಗ, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕಂಡುಕೊಂಡಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ತಿರೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ನಿಯಮಗಳು ಹಾಗೂ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಟೋ ಎಲ್ಪಿಜಿ ಕೊರತೆ ಇಲ್ಲ: ಆಹಾರ ಇಲಾಖೆ ಸ್ಪಷ್ಟನೆ
ಉಡುಪಿ, ಮಾ.29: ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗು ತ್ತಿದೆ. ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿ.ಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಎಲ್ಪಿಜಿ ಸರಬರಾಜು ವ್ಯವಸ್ಥೆಯನ್ನು, ವಿಶೇಷವಾಗಿ ಆಟೋ ಎಲ್ಪಿಜಿ ಪೂರೈಕೆಯನ್ನು ರಾಜ್ಯ ಸರಕಾರವು ನಿಕಟವಾಗಿ ಗಮನಿಸುತ್ತಿದೆ. ಕರ್ನಾಟಕದಾದ್ಯಂತ ಒಟ್ಟು 72 ಆಟೋ ಎಲ್ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್ಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪನಿಗಳ ಮೂಲಕ ಆಟೋ ಎಲ್ಪಿಜಿಯನ್ನು ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಈ ಸಂಸ್ಥೆಗಳು ಪ್ರತಿ ಲೀಟರ್ಗೆ 77.74ರೂ. ದರದಲ್ಲಿ ಆಟೋ ಎಲ್ಪಿಜಿ ಪೂರೈಸು ತ್ತಿವೆ. ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.9 ಮೆಟ್ರಿಕ್ ಟನ್ ಆಟೋ ಎಲ್ಪಿಜಿಯನ್ನು ವಿತರಿಸಲಾಗಿದೆ. ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಮೆಟ್ರಿಕ್ ಟನ್ ಇತ್ತು. ಇದು ಪೂರೈಕೆಯಲ್ಲಿನ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ರಾಜ್ಯದಾದ್ಯಂತ ಪ್ರತಿದಿನ ಸುಮಾರು 4 ಲಕ್ಷ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳು ಹಾಗೂ ಸುಮಾರು 18,000 ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಯಿಲ್ಲದೆ ಎಲ್ಪಿಜಿ ಸರಬರಾಜು ಆಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪತ್ರಕರ್ತರ ಹತ್ಯೆ | ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಗೆ ದೂರು: ಲೆಬನಾನ್ ನಿರ್ಧಾರ
ಉದ್ದೇಶಿತ ಹತ್ಯೆ ಎಂದು ಖಂಡಸಿದ ಇರಾನ್
Chikkamagaluru | ಫೇಸ್ಬುಕ್ ಜಾಹೀರಾತು ನಂಬಿ 1.28 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!
ಚಿಕ್ಕಮಗಳೂರು: ಫೇಸ್ಬುಕ್ ಜಾಹೀರಾತು ನಂಬಿ ವ್ಯಕ್ತಿಯೊಬ್ಬರು ಕೋಟ್ಯಂತರ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ಬುಕ್ ಜಾಹೀರಾತು ನಂಬಿದ ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬರು 1.28 ಕೋಟಿ ರೂ. ಕಳೆದುಕೊಂಡಿದ್ದಾರೆ. ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಹಣ ಕಟ್ಟಿಸಿಕೊಂಡು ವಂಚಿಸಲಾಗಿದೆ. ʼಎಫ್ವೈಇಆರ್ಎಸ್ʼ ಎಂಬ ಟ್ರೇಡಿಂಗ್ ಜಾಹೀರಾತುನ್ನು ಫೇಸ್ಬುಕ್ನಲ್ಲಿ ನೋಡಿದ ಅವರು ಎಫ್-8ಎಫ್ವೈಇಆರ್ಎಸ್ ಸೆಕ್ಯೂರಿಟೀಸ್ ವಾಟ್ಸ್ ಆಪ್ ಗ್ರೂಪ್ ಸೇರಿದ್ದಾರೆ. ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ವ್ಯಕ್ತಿಗೆ ಹೆಚ್ಚಿನ ಲಾಭಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1ಕೋಟಿ 28 ಲಕ್ಷ 10ಸಾವಿರ ರೂ. ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಬಳಿಕ ತಾನು ವಂಚನೆಗೊಳಗಾಗಿರುವುದು ಅವರಿಗೆ ಗೊತ್ತಾಗಿದೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಐಪಿಎಲ್ 2026 ಕೇವಲ ಮೈದಾನದ ಆಟದಿಂದ ಮಾತ್ರವಲ್ಲದೆ, ಈಗ ಕಾಮೆಂಟರಿ ಬಾಕ್ಸ್ನಲ್ಲಿ ನಡೆಯುತ್ತಿರುವ ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಶನಿವಾರ ನಡೆದ ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ವೇಳೆ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮತ್ತು ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ನಡುವೆ ನಡೆದ ನೇರಪ್ರಸಾರದ ವಾಕ್ಸಮರ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ
ಕಲಬುರಗಿ| ನಿಧಿಗಾಗಿ ದೇಗುಲ ಅಗೆದು ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣ: ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು
ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದಲ್ಲಿ ಪುರಾತನ ಕಾಲದ ದೇಗುಲದಲ್ಲಿ ನಿಧಿಗಾಗಿ ಶಿವಲಿಂಗ, ನಂದಿ, ಆಂಜನೇಯ ವಿಗ್ರಹಗಳನ್ನು ಧ್ವಂಸಗೊಳಿಸಿ ನೆಲ ಅಗೆದ ಹಿನ್ನೆಲೆ ಸ್ಥಳಕ್ಕೆ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳಿಗೆ ಸಹಕಾರ ನೀಡಿದರು. ಅಲ್ಲದೆ ಈ ದೇಗುಲವನ್ನು ಮೂರನೇ ಬಾರಿಗೆ ಅಗೆಯಲಾಗುತ್ತಿದ್ದು ಸಾಕಷ್ಟು ನಿಧಿ ಸಿಕ್ಕಿರಬಹುದು. ಅದಕ್ಕಾಗಿಯೇ ಪದೇ ಪದೇ ನೆಲ ಅಗೆಯಲಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ಬಾರಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಧಿ ಶೋಧದ ಹೆಸರಲ್ಲಿ ಪವಿತ್ರ ಶಿವಲಿಂಗ, ನಂದಿ, ಆಂಜನೇಯ ಸ್ವಾಮಿ ವಿಗ್ರಹಗಳನ್ನು ಧ್ವಂಸಗೊಳಿಸಿದವರನ್ನು ಪತ್ತೆ ಮಾಡಿ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸಬೇಕು. ಸರಕಾರ ಮತ್ತು ಸಂಬಂಧ ಪಟ್ಟವರು ಪಾಳು ಬಿದ್ದ ದೇಗುಲವನ್ನು ಜೀರ್ಣೋದ್ದಾರಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ರೈತರಿಗೆ ಸಮಪರ್ಕವಾಗಿ ನೀರು ಬಾರದೆ ಇದ್ದರೆ ಹೋರಾಟ ಅನಿವಾರ್ಯ: ಪ್ರಭಾಕರ ಪಾಟೀಲ್
ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗಳಿಗೆ ಏ.1ರಿಂದ 10ವರೆಗೆ ನೀರು ಹರಿಸುವಂತೆ ರೈತರ ಬೇಡಿಕೆಯಾಗಿದ್ದು, ನೀರಾವರಿ ಸಲಹ ಸಮಿತಿ ಸಭೆಯಲ್ಲಿ ಏ.1ರಿಂದ 7ರವರೆಗೆ ನೀರು ಹರಿಸುವುದಾಗಿ ತೀರ್ಮಾನಿಸಲಾಗಿದೆ. ಒಂದೊಮ್ಮೆ ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಬಾರದೆ ಇದ್ದರೇ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಭಾಕರ ಪಾಟೀಲ್, ಏ.1ರಿಂದ 10ರವರೆಗೆ ಯಾವುದೇ ವಾರಬಂದಿ ಪದ್ದತಿ ಮಾಡದೇ ನೀರು ಹರಿಸಬೇಕೆಂಬುದು ರೈತರ ಬೇಡಿಕೆಯಾಗಿದೆ. ನೀರಾವರಿ ಸಲಹ ಸಮಿತಿ ಕೈಗೊಂಡಿರುವ ತೀರ್ಮಾನ ಒಳ್ಳೆಯದಾಗಿದ್ದು, ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಬರದೇ ಇರುವುದರಿಂದ ಏ.10ರವರೆಗೆ ನೀರು ಹರಿಸಬೇಕು ಎಂಬ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ಹೇಳಿದರು. ಗೇಟ್ ಗಳಲ್ಲಿ ಆಗುತ್ತಿರುವ ಗೊಂದಲಗಳಿಂದ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ನಾರಾಯಣಪುರ ಬಲದಂಡೆ ಕಾಲುವೆಗಳ ಸಮಸ್ಯೆ ಕುರಿತು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಅಲ್ಲಲ್ಲಿ ಕುಳಿತು ಕಾಲಹರಣ ಮಾಡುವುದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದರು. ಭತ್ತ, ಸಜ್ಜೆ, ಶೇಂಗಾ ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಪ್ರತಿವರ್ಷ ನೀರಿಗಾಗಿ ಹೋರಾಟ ಕೈಗೊಂಡರು ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಂರ್ಪೂಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು. ಸಾಲ ಶೂಲ ಮಾಡಿಕೊಂಡು ಬಿತ್ತನೆ ಮಾಡಿದ ರೈತರ ಬೆಳೆಗಳಿಗೆ ನೀರಿನ ಅಭಾವ ಎದುರಾದ್ದರಿಂದ ಬೆಳೆಗಳು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾದ್ದರಿಂದ ರೈತರು ಆತಂಕ ಪಡುವಂತಾಗಿದೆ. ಆಕಾಲಿಕ ಆಲಿಕಲ್ಲು ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳು ನಷ್ಟವಾಗಿದ್ದು, ಕೈಸುಟ್ಟುಕೊಂಡಿರುವ ರೈತರಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿದ್ದು, ವಿಶೇಷ ಪ್ರಕರಣವೆಂದು ಜಿಲ್ಲಾಡಳಿತ ಪರಿಗಣಿಸುವ ಮೂಲಕ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. 1444 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ನಾರಾಯಣಪುರ ಬಲದಂಡೆ ಕಾಲುವೆಗಳ ನವೀಕರಣ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಬೇಸಿಗೆ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ದೂರಿದರು. ರೈತ ಸಂಘಗಳ ನಿರಂತರ ಹೋರಾಟಕ್ಕೆ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ. ಏ.1ರಿಂದ 7ನೇ ತಾರೀಖಿನವರೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಗೇಟ್ ಗಳ ನಿರ್ವಹಣೆ ಕೊರತೆ ಹಿನ್ನೆಲೆ ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಬರುತ್ತಿಲ್ಲ. ಹೀಗಾಗಿ ಏ.1ರಿಂದ 10ವರೆಗೆ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಹುಸೇನ್ಬಾಷ್ ಸೋಮನಮರಡಿ, ಹುನುಮಗೌಡ ನಾಯಕ ಜಾಲಹಳ್ಳಿ, ಉಪಪಾತಿಗೌಡ ನಗರಗುಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಾಕಿಸ್ತಾನದ 20 ಹಡಗುಗಳಿಗೆ ಹಾರ್ಮುಝ್ ದಾಟಲು ಇರಾನ್ ನಿಂದ ಅನುಮತಿ: ವರದಿ
ಇಸ್ಲಾಮಾಬಾದ್, ಮಾ.29: ಪಾಕಿಸ್ತಾನದ ಧ್ವಜ ಹೊಂದಿರುವ 20 ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಪ್ರಯಾಣಿಸಲು ಇರಾನ್ ಅನುಮತಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ರವಿವಾರ ತಿಳಿಸಿದ್ದಾರೆ. ಮುಂದುವರಿದಿರುವ ಪ್ರಾಂತೀಯ ಉದ್ವಿಗ್ನತೆಯ ನಡುವೆ ಈ ಹೆಜ್ಜೆ ಶಾಂತಿಯ ಮುನ್ನುಡಿಯಾಗಿದೆ. ದಿನಕ್ಕೆ ಎರಡು ಹಡಗುಗಳಂತೆ ಒಟ್ಟು 20 ಹಡಗುಗಳು ಜಲಸಂಧಿ ದಾಟಲು ಇರಾನ್ ಸರ್ಕಾರ ಒಪ್ಪಿಗೆ ನೀಡಿದೆ. ಇದು ಇರಾನ್ ನಿಂದ ಸ್ವಾಗತಾರ್ಹ ಮತ್ತು ರಚನಾತ್ಮಕ ಉಪಕ್ರಮವಾಗಿದ್ದು, ಈ ಪ್ರದೇಶದಲ್ಲಿ ಸ್ಥಿರತೆ ತರಲು ಸಹಾಯ ಮಾಡುತ್ತದೆ. ‘ಸಂವಾದ, ರಾಜತಾಂತ್ರಿಕತೆ ಮತ್ತು ಇಂತಹ ವಿಶ್ವಾಸ ನಿರ್ಮಾಣ ಕ್ರಮಗಳು ಮಾತ್ರ ನಮ್ಮನ್ನು ಮುಂದಕ್ಕೆ ಕರೆದೊಯ್ಯಲಿವೆ’ ಎಂದು ದಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Bihar | ಟೈರ್ ರಿಪೇರಿ ಅಂಗಡಿ ಮಾಲೀಕರ ಮಗಳು ಸಬ್ರೀನ್ ಪರ್ವೀನ್ 10ನೇ ತರಗತಿ ಪರೀಕ್ಷೆಯಲ್ಲಿ ಟಾಪರ್
ಶೇ.98.4 ಅಂಕಗಳ ಸಾಧನೆ
ರಾಜ್ಯದಲ್ಲಿ ಆಟೋ ಎಲ್ಪಿಜಿ ಕೊರತೆ ಇದೆಯೇ?; ಸರಕಾರ ಹೇಳಿದ್ದೇನು?
ಬೆಂಗಳೂರು: ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್ಪಿಜಿ ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ವಿಶೇಷವಾಗಿ ಆಟೋರಿಕ್ಷಾಗಳ ಎಲ್ಪಿಜಿಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಣೆ ನೀಡಿದೆ. ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಇಲಾಖೆಯು, ರಾಜ್ಯದಲ್ಲಿ ಎಲ್ಪಿಜಿ ಸರಬರಾಜು ವ್ಯವಸ್ಥೆಯನ್ನು, ವಿಶೇಷವಾಗಿ ಆಟೋ ಎಲ್ಪಿಜಿ ಪೂರೈಕೆಯನ್ನು ರಾಜ್ಯ ಸರಕಾರವು ನಿಕಟವಾಗಿ ಗಮನಿಸುತ್ತಿದೆ. ಕರ್ನಾಟಕದಾದ್ಯಂತ ಒಟ್ಟು 72 ಆಟೋ ಎಲ್ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್ಗಳು ಕಾರ್ಯನಿರ್ವಹಿಸುತ್ತಿವೆ. ಆಪೈಕಿ ಬೆಂಗಳೂರು ನಗರವೊಂದರಲ್ಲೇ 31 ಕೇಂದ್ರಗಳು ಲಭ್ಯವಿವೆ. ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪನಿಗಳಾದ (OMCs) IOCL, BPCL ಮತ್ತು HPCL ಮೂಲಕ ಆಟೋ ಎಲ್ಪಿಜಿ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಈ ಸಂಸ್ಥೆಗಳು ಪ್ರತಿ ಲೀಟರ್ಗೆ 77.74 ರೂ.ಗಳ ದರದಲ್ಲಿ ಆಟೋರಿಕ್ಷಾ ಎಲ್ಪಿಜಿ ಪೂರೈಸುತ್ತಿವೆ. ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.9 ಮೆಟ್ರಿಕ್ ಟನ್ ಆಟೋ ಎಲ್ಪಿಜಿಯನ್ನು ವಿತರಿಸಲಾಗಿದೆ. ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಮೆಟ್ರಿಕ್ ಟನ್ ಇತ್ತು. ಇದು ಪೂರೈಕೆಯಲ್ಲಿನ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 4 ಲಕ್ಷ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳು ಹಾಗೂ ಸುಮಾರು 18,000 ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಎಲ್ಲ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್ಪಿಜಿ ಸರಬರಾಜು ಆಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ತಿಳಿಸಿದೆ.
ಇಂಡಿಗೋ ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ; ಕೇಳಿದರೆ ‘ದೆವ್ವ ಹಿಡಿದಿದೆ’ ಎಂದ!
ವಾರಣಾಸಿ, ಮಾ.29: ಶನಿವಾರ ಇಂಡಿಗೋ ವಿಮಾನವು ಇಲ್ಲಿ ಇಳಿಯುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಪ್ರಯಾಣಿಕನೋರ್ವ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಬಳಿಕ ಆತ ತನಗೆ ‘ದೆವ್ವ ಹಿಡಿದಿದೆ’ ಎಂದು ಹೇಳಿಕೊಳ್ಳುವ ಮೂಲಕ ಇನ್ನಷ್ಟು ದಂಗು ಬಡಿಸಿದ್ದ. ಇಂಡಿಗೋ ವಿಮಾನವು ಶನಿವಾರ ರಾತ್ರಿ 8:15ರ ಸುಮಾರಿಗೆ ಬೆಂಗಳೂರಿನಿಂದ ವಾರಣಾಸಿಗೆ ಹಾರಾಟವನ್ನು ಆರಂಭಿಸಿತ್ತು. ಕೇವಲ 15 ನಿಮಿಷಗಳ ಪ್ರಯಾಣದ ಬಳಿಕ ಉತ್ತರ ಪ್ರದೇಶದ ಮವು ಜಿಲ್ಲೆಯ ನಿವಾಸಿ ಮುಹಮ್ಮದ್ ಅದ್ನಾನ್ ತುರ್ತು ನಿರ್ಗಮನ ದ್ವಾರಕ್ಕೆ ಹಾನಿಯನ್ನುಂಟು ಮಾಡಲು ಪ್ರಯತ್ನಿಸಿದ್ದ. ಇದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿಗಳು ಹಾಗೆ ಮಾಡುವುದು ತಪ್ಪು ಎಂದು ತಿಳಿಹೇಳಿ, ಇನ್ನೊಮ್ಮೆ ಹಾಗೆ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಬಳಿಕ ವಿಮಾನವು ವಾರಣಾಸಿಯ ಲಾಲ ಬಹದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲಿನವರೆಗೂ ಅದ್ನಾನ್ ಸಹಜವಾಗಿಯೇ ನಡೆದುಕೊಂಡಿದ್ದ. ವಿಮಾನವು 500 ಅಡಿ ಎತ್ತರದಲ್ಲಿದ್ದಾಗ ಏಕಾಏಕಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಮತ್ತೆ ಪ್ರಯತ್ನಿಸಿದ್ದ. ಈ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಪೈಲಟ್ ಸಮಯಪ್ರಜ್ಞೆಯನ್ನು ಮೆರೆದು ಲ್ಯಾಂಡಿಂಗ್ ಪ್ರಯತ್ನವನ್ನು ಕೈಬಿಟ್ಟಿದ್ದರು. ವಿಮಾನವು ಕೆಲವು ಹೊತ್ತು ಆಗಸದಲ್ಲಿ ಸುತ್ತು ಹಾಕಿದ ಬಳಿಕ ರಾತ್ರಿ 10:35ಕ್ಕೆ ಇಳಿದಿತ್ತು. ಅದ್ನಾನ್ ಕೃತ್ಯದಿಂದ ಪ್ರಯಾಣಿಕರು ತಲ್ಲಣಗೊಂಡಿದ್ದರು ಮತ್ತು ಸುರಕ್ಷಿತವಾಗಿ ಇಳಿಸಿದ್ದಕ್ಕೆ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಶಿಷ್ಟಾಚಾರದ ಪ್ರಕಾರ ಅದ್ನಾನ್ ನನ್ನು ತಕ್ಷಣವೇ ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿಗಳು ಮತ್ತು ಸಿಐಎಸ್ಎಫ್ ಗೆ ಹಸ್ತಾಂತರಿಸಲಾಗಿತ್ತು. ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಅದ್ನಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತು ಪೋಲಿಸರಿಂದ ವಿಚಾರಣೆ ಸಂದರ್ಭದಲ್ಲಿ ತಾನು ಹಾಗೇಕೆ ವರ್ತಿಸಿದ್ದೆ ಎನ್ನುವುದು ತನಗೆ ಗೊತ್ತಿಲ್ಲ ಎಂದು ಆರಂಭದಲ್ಲಿ ತಿಳಿಸಿದ ಅದ್ನಾನ್ ನಂತರ ತನ್ನನ್ನು ‘ದೆವ್ವ ಹಿಡಿದಿತ್ತು’ ಎಂದು ಹೇಳಿಕೊಂಡಿದ್ದ. ಪೋಲಿಸ್ ಠಾಣೆಯಲ್ಲಿ ವಿಚಾರಣೆ ವೇಳೆ, ತಾನು ಗೋವಾದಲ್ಲಿ ರಜೆಯನ್ನು ಕಳೆದು ವಾಪಸಾಗುತ್ತಿದ್ದೆ ಮತ್ತು ತಾನು ಎಳೆಯುತ್ತಿದ್ದ ಹ್ಯಾಂಡಲ್ ತುರ್ತು ನಿರ್ಗಮನ ದ್ವಾರದ್ದು ಎನ್ನುವುದು ತನಗೆ ತಿಳಿದಿರಲಿಲ್ಲ ಎಂದು ಆತ ತಿಳಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಬಳಿಯ ಅಮೀನಗಡ ಗ್ರಾಮದ ಕ್ಲಿನಿಕ್ ವೊಂದರಲ್ಲಿ ಇಂಜೆಕ್ಷನ್ ಪಡೆದ ಬಳಿಕ ಅಸ್ವಸ್ಥಗೊಂಡು 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಬಾಲಕಿಯ ಕುಟುಂಬಸ್ಥರು ಚುಚ್ಚುಮದ್ದು ನೀಡಿದ ವೈದ್ಯನ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಮೃತ ಬಾಲಕಿಯನ್ನು ಅಮೀನಗಡದ ನಿವಾಸಿ ಹುಲಿಗೆಪ್ಪ ಅವರ ಪುತ್ರಿ ಸಿಂಧೂ(15) ಎಂದು ಗುರುತಿಸಲಾಗಿದೆ. ಈಕೆ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆಯ ಪೋಷಕರು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದರಿಂದ ಸಿಂಧೂ ತನ್ನ ಅಜ್ಜಿ ಯಲ್ಲಮ್ಮ ಬಳಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಮಾ.27ರ ಮಧ್ಯರಾತ್ರಿ ಸಿಂಧೂಗೆ ಆರೋಗ್ಯ ಹದಗೆಟ್ಟಿದೆ. ಈ ವೇಳೆ ಆಕೆಯ ಅಜ್ಜಿ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಉತ್ತಮಕುಮಾರ್ ಬಳಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಉತ್ತಮಕುಮಾರ್ ಬಾಲಕಿಯ ಆರೋಗ್ಯದ ಬಗ್ಗೆ ಸರಿಯಾಗಿ ಪರೀಕ್ಷಿಸದೆ ಇಂಜೆಕ್ಷನ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಬಾಲಕಿಯ ಕೈಯಲ್ಲಿ ಊತ ಹಾಗೂ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡು ಬಾಲಕಿ ನರಳಾಡಿದ್ದಾಳೆ. ಮಗಳು ಗಂಭೀರವಾಗಿರುವುದನ್ನು ತಿಳಿದು ಬೆಂಗಳೂರಿನಿಂದ ಬಂದ ಪೋಷಕರು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಧೂಳನ್ನು ಮಾನವಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಬಾಲಕಿ ದಿಢೀರ್ ಮೃತಪಟ್ಟಿರುವುದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಖಾಸಗಿ ವೈದ್ಯನ ನಿರ್ಲಕ್ಷ್ಯವೇ ಮುಗ್ಧ ಬಾಲಕಿಯ ಪ್ರಾಣ ಕಸಿದಿದೆ ಎಂದು ಆರೋಪಿಸಿ ಗ್ರಾಮದ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಕವಿತಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಇರುವೈಲು : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮೂಡುಬಿದಿರೆ : ಸಾಲಬಾಧೆಯಿಂದ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇರುವೈಲಿನಲ್ಲಿ ರವಿವಾರ ನಡೆದಿದೆ. ಇರುವೈಲು ಗ್ರಾ. ಪಂ. ವ್ಯಾಪ್ತಿಯ ಪೊನೊಟ್ಟು ನಿವಾಸಿ ದಿವಾಕರ ದೇವಾಡಿಗ (48) ಅವರು ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ದಿವಾಕರ ಅವರಿಗೆ ಪತ್ನಿ ಹಾಗೂ ಕಾಲೇಜು ಶಿಕ್ಷಣ ಪಡೆಯುತ್ತಿರುವ ಓವ೯ ಪುತ್ರ ಮತ್ತು ಪುತ್ರಿ ಇದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
IPL 2026- ಕೆಕೆಆರ್ ಗಾಗಿ ಪಾಕ್ ಸೂಪರ್ ಲೀಗ್ ತೊರೆದು ಬಂದ ಬ್ಲೆಸ್ಸಿಂಗ್ ಮುಝರಬಾನಿಗೆ ಮೊದಲ ಪಂದ್ಯದಲ್ಲೇ ಮಣೆ!
KKR Vs MI Match- ಬಾಂಗ್ಲಾದ ಮುಸ್ತಫಿಝುರ್ ರೆಹ್ಮಾನ್ ಬದಲಿಗೆ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿರುವ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ಗಾಗಿ ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್ ತೊರೆದು ಅವರು ಸುದ್ದಿಯಾಗಿದ್ದರು. ಕೆಕೆಆರ್ ತಂಡದಲ್ಲಿ ಕ್ಯಾಮರೂನ್ ಗ್ರೀನ್ ಕೂಡ ಮೊದಲ ಪಂದ್ಯವಾಡುತ್ತಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಮುಝರಬಾನಿ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.
ಅಸೈಗೋಳಿ: ಮನೆಯ ಗೋಡೆಗೆ ಅಪ್ಪಳಿಸಿದ ಕಾರು
ಕೊಣಾಜೆ ; ಅಸೈಗೋಳಿ ಸಮೀಪದ ತಿಬ್ಲಪದವು ಮಸೀದಿ ಸಭಾಂಗಣದ ಬಳಿ ಶನಿವಾರ ತಡರಾತ್ರಿ ಕಾರು ಅಪಘಾತ ಸಂಭವಿಸಿದೆ. ಕೋಣಾಜೆ ಕಡೆಯಿಂದ ದೇರಳಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳಕ್ಕೆ ಜಿಗಿದು, ಸಭಾಂಗಣ ಕಟ್ಟಡದ ಗೋಡೆಗೆ ಅಪ್ಪಳಿಸಿ ಕೆಳಕ್ಕೆ ಉರುಳಿದೆ. ಅಪಘಾತದ ತೀವ್ರತೆ ಭೀಕರವಾಗಿ ದ್ದರೂ, ವಾಹನದಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮುಖಂಡರ ಸಭೆ
ಸುರತ್ಕಲ್: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿವಿಧ ಸಮಿತಿಗಳ ಮುಖಂಡರ ಸಭೆಯು ರವಿವಾರ ಬ್ಲಾಕ್ ಕಚೇರಿಯಲ್ಲಿ ನಡೆಯಿತು. ಈ ವೇಳೆ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಗುರುಪುರ ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ಎಲ್. ಪದ್ಮನಾಭ ಅವರು, ಕಂಬಳ ರಾಜಕೀಯ ರಹಿತ ಸಾಂಸ್ಕೃತಿಕ ಹಬ್ಬವಾಗಿದ್ದು, ಅದನ್ನು ಇನ್ನಷ್ಟು ವೈವಿದ್ಯಮವಾಗಿಸುವ ಸಲುವಾಗಿ ಎ.4ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗುರುಪುರ ಕಂಬಳ ಎಲ್ಲಾ ಕಂಬಳಗಿಳಿಗೂ ಮಾದರಿಯಾಗಲಿದೆ. ಯಕ್ಷಗಾನ ಸಾಧಕರು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಕಂಬಳದಲ್ಲಿ ಭಾಗವಹಿಸುವ ಜೋಡಿ ಕೋಣಗಳಿಗೆ ಬೆಳ್ಳಿನಾಣ್ಯ, 30ಞg ಹುರುಳಿ, ಕಂಬಳದಲ್ಲಿ ಭಾಗವಹಿಸುವ ಎಲ್ಲರಿಗೂ ಭೋಜನದ ವ್ಯವಸ್ಥೆ ಸಹಿತಿ ಹಲವು ಸಾಮಾಜಿಕ ಕೆಲಸ ಕಾರ್ಯಗಳು ನಡೆಯಲಿವೆ ಎಂದರು. ಎಲ್ಲಾ ಧರ್ಮೀಯರು ಸೇರಿಕೊಂಡು ನಡೆಸುವ ಗುರುಪುರ ಕಂಬಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಪಕ್ಷಗಳ ಮುಖಂಡರು ಕಾರ್ಯಕರ್ತರಿಗೆ ಆಹ್ವಾನ ನೀಡಿ ಬರಮಾಡಿಕೊಳ್ಳಬೇಕೆಂದು ಅವರು ನುಡಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರು, ಸುರತ್ಕಲ್ ಬ್ಲಾಕ್ ನ 254 ಬೂತ್ ಗಳಲ್ಲಿ 234 ಬೂತ್ ಗಳಲ್ಲಿ ಬಿಎಲ್ ಎ ಗಳನ್ನು ನೇಮಿಸಲಾಗಿದೆ. ಉಳಿದ ಬೂತ್ ಗಳಲ್ಲಿ ತಕ್ಷಣ ಬಿಎಲ್ಎ ಗಳನ್ನು ನೇಮಿಸಲಾಗುವುದು ಎಂದರು. ಇದೇ ವೇಳೆ ಪ್ರತೀ ವಾರ್ಡ್ ಮಟ್ಟದಲ್ಲಿ ಶೇ. 100 ಬಿಎಲ್ ಎ ಗಳನ್ನು ನೇಮಿಸಿ ಸಾಧನೆಗೈದ ವಾರ್ಡ್ ಮುಖ್ಯಸ್ಥ ರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನ ಹಿರಿಯರಾದ ಶೇಖರ್ ಪೂಜಾರಿ ಮುಂಚೂರು ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಸುರತ್ಕಲ್ ಬ್ಲಾಕ್ ಉಪಾಧ್ಯಕ್ಷ ಬಶೀರ್ ಬೈಕಂಪಾಡಿ,ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಕಾಟಿಪಳ್ಳ , ಗೋವರ್ಧನ್ ಶೆಟ್ಟಿಗಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್, ಚಂದ್ರಹಾಸ್ ಎಸ್ಸಿಎಸ್ಟಿ ಘಟಕಾಧ್ಯಕ್ಷ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಸುರತ್ಕಲ್ ಬ್ಲಾಖ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕುಳಾಯಿ ಧನ್ಯವಾದ ಸಮಸರ್ಪಿಸಿದರು.
ಸೀನಿಯರ್ ನ್ಯಾಶನಲ್ ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್: ಮಹಾರಾಷ್ಟ್ರ, ದಿಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ
ಮಂಗಳೂರು: ಇಲ್ಲಿನ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಮಾರ್ಚ್ 24 ರಿಂದ 28 ರವರೆಗೆ ಅತ್ಯಂತ ವೈಭವದಿಂದ ನಡೆದ ಸೀನಿಯರ್ ನ್ಯಾಶನಲ್ ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್- 2026ರ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ಮತ್ತು ಮಹಿಳಾ ವಿಭಾಗದಲ್ಲಿ ದಿಲ್ಲಿ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ತಂಡಗಳ ಸಾಧನೆಯ ವಿವರ ಇಂತಿವೆ... ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು 47 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಧ್ಯಪ್ರದೇಶ (39 ಅಂಕ) ಮತ್ತು ಮಿಜೋರಾಂ (35 ಅಂಕ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು. ಮಹಿಳಾ ವಿಭಾಗದಲ್ಲಿ ದಿಲ್ಲಿ ತಂಡವು 44 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿತು. ಮಹಾರಾಷ್ಟ್ರ (39 ಅಂಕ) ಮತ್ತು ಒಡಿಶಾ (38 ಅಂಕ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯಾ ಸ್ಥಾನಗಳನ್ನು ಹಂಚಿಕೊಂಡವು. ಅತ್ಯುತ್ತಮ ಲಿಫ್ಟರ್ ಪ್ರಶಸ್ತಿ *ಪುರುಷರ ವಿಭಾಗ : ಪ್ರಭಾತ್ ವರ್ಮಾ (ಉತ್ತರ ಪ್ರದೇಶ) - ಪ್ರಥಮ, ತನ್ವೀರ್ ಮುಸ್ತಫಾ ಕೊತ್ವಾಲ್ (ಮಹಾರಾಷ್ಟ್ರ) - ದ್ವಿತೀಯ ಹಾಗೂ ಪಾರ್ಥ ಮೆಹ್ತಾ (ಹರಿಯಾಣ) - ತೃತೀಯ ಸ್ಥಾನ *ಮಹಿಳೆಯರ ವಿಭಾಗ : ಶ್ವೇತಾ ರಾಯ್ (ಜಾರ್ಖಂಡ್) - ಪ್ರಥಮ, ರಮಣ್ದೀಪ್ ಕೌರ್ ಸಚ್ದೇವ (ದಿಲ್ಲಿ) - ದ್ವಿತೀಯ, ರಜನಿ (ಉತ್ತರ ಪ್ರದೇಶ) - ತೃತೀಯ. ಕರ್ನಾಟಕದ ಕ್ರೀಡಾಪಟುಗಳ ಗಮನಾರ್ಹ ಪ್ರದರ್ಶನ ಆತಿಥೇಯ ಕರ್ನಾಟಕದ ಪವರ್ಲಿಫ್ಟರ್ಗಳು ಗಮನಾರ್ಹ ಸಾಧನೆ ಮಾಡಿದ್ದು, 66 ಕೆಜಿ ವಿಭಾಗದಲ್ಲಿ ಆದರ್ಶ್ ಪ್ರಥಮ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ, 105 ಕೆಜಿ ವಿಭಾಗದಲ್ಲಿ ವಿಶ್ವನಾಥ್ ಅವರು 327.5 ಕೆಜಿ ಡೆಡ್ಲಿಫ್ಟ್ ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿಶೇಷ ಗೌರವಗಳು ಶಿಸ್ತುಬದ್ಧ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಅತ್ಯತ್ತಮ ಶಿಸ್ತಿನ ತಂಡ’ ಪ್ರಶಸ್ತಿಗೆ ಭಾಜನವಾಯಿತು. ಕರ್ನಾಟಕದ ಜಯರಾಮ್ ಅವರು ಅತ್ಯುತ್ತಮ ತೀರ್ಪುಗಾರರಾಗಿ ಆಯ್ಕೆಯಾದರು. ಗಣ್ಯರ ಉಪಸ್ಥಿತಿ ಪವರ್ಲಿಫ್ಟಿಂಗ್ ಇಂಡಿಯಾ ಅಧೀನದಲ್ಲಿ ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಷನ್ ಮತ್ತು ಕಾಶರ್ಪ್ ಸ್ಪೋರ್ಟ್ಸ್ ಫೌಂಡೇಶನ್ ಯಶಸ್ವಿಯಾಗಿ ಆಯೋಜಿಸಿದ್ದ ಈ ಕೂಟದ ಸಮಾರೋಪ ಸಮಾರಂಭದಲ್ಲಿ ಶಾಸಕ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಕಾಶರ್ಪ್ ಫಿಟ್ನೆಸ್ ಎಂಡಿ ಆನಂದ ಪ್ರಭು, ಡಾ. ಸವಿಲ್ ಉಚ್ಚಿಲ್, ಮಾಳವಿಕಾ ಜಯಾನಂದ್, ಪವರ್ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಮತ್ತು ಕಾರ್ಯದರ್ಶಿ ಅರ್ಜುನ ಪ್ರಶಸ್ತಿ ವಿಜೇತ ಪಿ.ಜೆ. ಜೋಸೆಫ್ ಭಾಗವಹಿಸಿದ್ದರು. ಒಟ್ಟು 600ಕ್ಕೂ ಹೆಚ್ಚು ಪವರ್ಲಿಫ್ಟರ್ಗಳು ಮತ್ತು ತರಬೇತುದಾರರು ಭಾಗವಹಿಸಿದ್ದ ಈ ಕೂಟವು ಮಂಗಳೂರನ್ನು ರಾಷ್ಟ್ರಮಟ್ಟದ ಕ್ರೀಡಾ ಹಬ್ ಆಗಿ ಗುರುತಿಸುವಂತೆ ಮಾಡಿದೆ ಎಂದು ಸೀನಿಯರ್ ನ್ಯಾಶನಲ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್-2026 ಇದರ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಮೂವರು ಸಿಬ್ಬಂದಿ ಅಮಾನತು
ಬಾಗಲಕೋಟೆಯಲ್ಲಿ ಸ್ಟಾರ್ ಕ್ಯಾಂಪೇನರ್ ಸಿದ್ಧ; ಮತಗಳಿಕೆಗೆ ಭಾರಿ ಕಸರತ್ತು
ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಬಿಸಿಲಿನ ತಾಪದ ನಡುವೆಯೇ ರಾಜಕೀಯ ಪ್ರಚಾರವೂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಚಾರಕ್ಕೆ ಕೇವಲ ಎಂಟು ದಿನಗಳು ಮಾತ್ರ ಬಾಕಿ ಇರುವುದರಿಂದ, ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾಗೆ ಗೌರವ
ಉಡುಪಿ, ಮಾ.29: ಹೂಡೆ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾ ಅವರಿಗೆ ಅತ್ಯುತ್ತಮ ಔಟ್ ಗೋಯಿಂಗ್ ಸ್ಟುಡೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಆಶ್ರಫ್ ಜಿ. ಪ್ರತಿಭಾನ್ವಿತ ವಿದ್ಯಾರ್ಥಿನಿ ಯನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ಶುಕೂರ್ ತೋನ್ಸೆ, ಅಭಿಜಿತ್ ಕರ್ಕೇರ, ಶಾಲಾ ಆಡಳಿತಾಧಿಕಾರಿ ರಾಕೀಬ್ ಕನ್ನಂಗಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಶ್ರಫ್, ಶಿಕ್ಷಕಿ ಉಷಾ ದೇವಿ ಮೊದಲಾದವರು ಉಪಸ್ಥಿತರಿದ್ದರು. ಇವರು ಭದ್ರಗಿರಿಯ ಮುಹಮ್ಮದ್ ಇಲಿಯಾಸ್ ಹಾಗೂ ರೇಶ್ಮಾ ದಂಪತಿ ಪುತ್ರಿ.
ಉಡುಪಿ ಜಿಲ್ಲೆಯಾದ್ಯಂತ 14.49ಮಿ.ಮೀ. ಮಳೆ: ಮನೆಗಳಿಗೆ ಹಾನಿ
ಸಿಡಿಲಾಘಾತ: ರಿಕ್ಷಾ ಚಾಲಕ ಪಾರು
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್
RCB: ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಯು ಎಸ್ಆರ್ಎಚ್ ವಿರುದ್ಧ ಭರ್ಜರಿ ಗೆಲವು ಸಾಧಿಸಿದೆ. ಈ ಪಂದ್ಯವನ್ನು ಡಬ್ಲ್ಯೂಪಿಎಲ್ನ ಸ್ಮೃತಿ ಮಂಧಾನ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಹಾಗೂ ಜೆಮಿಮಾ ರೊಡ್ರಿಗಸ್ ಒಟ್ಟಿಗೆ ಕುಳಿತು ವೀಕ್ಷಣೆ ಮಾಡಿ ಕ್ರೀಡಾಸ್ಪೂರ್ತಿ ಮೆರೆದರು. ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು
ಹಿಂದಿ ಕಾಮೆಂಟ್ರಿ ಮತ್ತೆ ಟ್ರೋಲ್!; ಅಶ್ವಿನ್ ಹೆಸರು ಮುಂದಿಟ್ಟು ಮೂದಲಿಸಿದ ನೆಟ್ಟಿಗನ ಮೇಲೆ ಗರಂ ಆದ ಹರ್ಭಜನ್!
Harbhajan Singh Vs R Ashwin- ಐಪಿಎಲ್ ಹಿಂದಿ ಕಾಮೆಂಟ್ರಿ ಪ್ಯಾನೆಲ್ಗೆ ಆರ್ ಅಶ್ವಿನ್ ಅವರ ಎಂಟ್ರಿಯು ಹರ್ಭಜನ್ ಸಿಂಗ್ ಅವರ ವೃತ್ತಿಜೀವನಕ್ಕೆ ಮುಳುವಾಗಲಿದೆ ಎಂಬ ಸಾಮಾಜಿಕ ಜಾಲತಾಣದ ಟ್ರೋಲ್ಗೆ ಭಜ್ಜಿ ಕೆಂಡಾಮಂಡಲವಾಗಿದ್ದಾರೆ. ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ ಎಂದು ಖಾರವಾಗಿ ಉತ್ತರಿಸಿರುವ ಅವರು, ಟ್ರೋಲ್ ಮಾಡಿದವರನ್ನು 'ಟಾಮಿ' ಎಂದು ನಾಯಿಗೆ ಹೋಲಿಸಿದ್ದಾರೆ. ಇದು ಈ ಚರ್ಚೆ ಮತ್ತಷ್ಟು ತಾರಕ್ಕೇರಲು ಕಾರಣವಾಗಿದೆ. ಒಟ್ಟಾರೆ ಇದೀಗ ಇಂಟರ್ ನೆಟ್ ನಲ್ಲಿ ಇದೇ ಚರ್ಚೆಯ ಸಂಗತಿಯಾಗಿದೆ.
ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರದ ವಿರೋಧ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕೇಂದ್ರ ಸರ್ಕಾರ ವಿರೋಧಿಸಲಿದ್ದು, ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ತೀರ್ಪು ನೀಡುವ ಅಧಿಕಾರ ನ್ಯಾಯಾಲಯಗಳಿಗಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಲಿದೆ. ಅಲ್ಲದೆ, ಸಂವಿಧಾನದ 25 (1)ನೇ ವಿಧಿಯ ಅಡಿಯಲ್ಲಿ ಧರ್ಮದ ಸುಧಾರಣೆ ತರುವ ಹಕ್ಕು ವ್ಯಕ್ತಿಗಳಿಗಿಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರ ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಲಿದೆ.
Maharashtra | ಅತ್ಯಾಚಾರ ಪ್ರಕರಣ: 'ದೇವಮಾನವ' ಹೃಷಿಕೇಶ್ ವೈದ್ಯ ಬಂಧನ; ಎ.6ರವರೆಗೆ ಪೊಲೀಸ್ ಕಸ್ಟಡಿಗೆ
ಪುಣೆ: ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ವಸಾಯಿ ಮೂಲದ ದೇವಮಾನವ ಹೃಷಿಕೇಶ್ ವೈದ್ಯ (39) ನನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೃಷಿಕೇಶ್ ವೈದ್ಯನನ್ನು ಶನಿವಾರ ಮುಂಜಾನೆ ಪಿಂಪ್ರಿಯಿಂದ ಬಂಧಿಸಿ, ಬಳಿಕ ಪುಣೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದರು ಎಂದು ಪುಣೆಯ ಉಪ ಪೊಲೀಸ್ ಆಯುಕ್ತ (ಅಪರಾಧ) ನಿಖಿಲ್ ಪಿಂಗಳೆ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಪುಣೆ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ವಸಾಯಿಯ ಮಾಣಿಕ್ ಪುರ ಪೊಲೀಸರು ದೇವಮಾನವ ಹೃಷಿಕೇಶ್ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಮತ್ತು 351 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಘಟನೆ ನಡೆದ ಸ್ಥಳ ಪುಣೆಯ ಮಂಜರಿ ವ್ಯಾಪ್ತಿಗೆ ಸೇರಿದ್ದರಿಂದ ಪ್ರಕರಣವನ್ನು ಮಂಜರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ವೈದ್ಯನನ್ನು ಸಂಪರ್ಕಿಸಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಕೆಲವು ಆಚರಣೆಗಳನ್ನು ಮಾಡುವ ನೆಪದಲ್ಲಿ ವೈದ್ಯ ಪುಣೆಗೆ ಭೇಟಿ ನೀಡಿ, ಡಿಸೆಂಬರ್ 2023ರಲ್ಲಿ ಮಂಜರಿಯಲ್ಲಿರುವ ಲಾಡ್ಜ್ ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರುದಾರರು ಹೇಳಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಹಿಳೆಯನ್ನು ವಸಾಯಿಗೆ ಕರೆಸಿ, ಆಕೆಯ ಆಕ್ಷೇಪಾರ್ಹ ಫೊಟೋಗಳನ್ನು ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಆಕೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹೃಷಿಕೇಶ್ ವೈದ್ಯನನ್ನು ಪತ್ತೆಹಚ್ಚಲು ಪುಣೆ ನಗರ ಪೊಲೀಸರು ಶುಕ್ರವಾರ ನಾಲ್ಕು ತಂಡಗಳನ್ನು ರಚಿಸಿದ್ದರು. ಶನಿವಾರ ಬೆಳಗಿನ ಜಾವ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಬಳಿಕ ಆತನನ್ನು ಬಿಗಿ ಭದ್ರತೆಯಲ್ಲಿ ವಾನೋವರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸರ್ಕಾರದ ಪರವಾಗಿ ವಾದಿಸಿದ ಸಾರ್ವಜನಿಕ ಅಭಿಯೋಜಕಿ ಕವಿತಾ ಕಾಂಬ್ಳೆ ಅವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಪ್ರಕರಣದ ತನಿಖೆಗಾಗಿ ಆರೋಪಿಯ ಸಾಮರ್ಥ್ಯ ಪರೀಕ್ಷೆ ನಡೆಸಬೇಕಿದ್ದು, ಅಪರಾಧದಲ್ಲಿ ಬಳಸಲಾದ ವಾಹನವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ, ಆರೋಪಿಯು ದೂರುದಾರರ ಆಕ್ಷೇಪಾರ್ಹ ಫೊಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆಯೇ ಹಾಗೂ ಪ್ರಕರಣದಲ್ಲಿ ಇತರ ಸಹಚರರು ಇದ್ದಾರೆಯೇ ಎಂಬುದರ ಕುರಿತು ತನಿಖೆ ಅಗತ್ಯವಿದೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಯಾಗಿ, ಆರೋಪಿ ಪರ ವಕೀಲರಾದ ಸಾಜಿದ್ ಶೇಖ್, ಪವನ್ ಕುಲಕರ್ಣಿ ಮತ್ತು ರಾಮ್ ಜಿ ಕೋಥ್ಲಿ ಅವರು ಆರೋಪಿಯನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಎರಡೂ ಕಡೆಯವರ ವಾದಗಳನ್ನು ಆಲಿಸಿದ ಬಳಿಕ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಬಿಎಸ್ ಜಗದಾಳೆ ಅವರು ಹೃಷಿಕೇಶ್ ವೈದ್ಯ ನನ್ನು ಎಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿದರು.
ಮಂಗಳೂರು| ಟ್ಯಾಂಕರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಮಂಗಳೂರು: ಅರ್ಕುಳ ಬ್ರಿಡ್ಜ್ ಬಳಿ ಟ್ಯಾಂಕರ್ಗೆ ದ್ವಿಚಕ್ರ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತಪಟ್ಟಿರುವ ದ್ವಿಚಕ್ರ ವಾಹನ ಸವಾರನನ್ನು ಪರಂಗಿಪೇಟೆಯ ನಿವಾಸಿ ಮುಹಮ್ಮದ್ ಆಶ್ಫಕ್ (22) ಎಂದು ಗುರುತಿಸಲಾಗಿದೆ. ಬೆಳಗ್ಗೆ ಅರ್ಕುಳ ಸೇತುವೆ ಬಳಿ ಇರುವ ಫರ್ನಿಚರ್ ಅಂಗಡಿಯೊಂದರ ಬಳಿ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ಗೆ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ದ್ವಿಚಕ್ರ ವಾಹನ ಸವಾರ ಮುಹಮ್ಮದ್ ಆಶ್ಫಕ್ ಗಂಭೀರ ಗಾಯಗೊಂಡರು. ಗಾಯಾಳುವನ್ನು ತಕ್ಷಣ ಪಡೀಲ್ನ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಗಾಯಾಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್
IPL 2026 RCB: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಯು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಮತ್ತೆ ಇತ್ತೀಚೆಗಷ್ಟೇ ಆರ್ಸಿಬಿ ಖರೀದಿ ಮಾಡಿದ ಆರ್ಯಮಾನ್ ಬಿರ್ಲಾ ಹಾಗೂ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಐಪಿಎಲ್ 2026 ಉದ್ಘಾಟನಾ
IPL 2026- ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ ವಿರಾಟ್ ಕೊಹ್ಲಿ ಅವರ ಆಟದ ಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ವಿಶ್ಲೇಷಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್ನ ತಾಂತ್ರಿಕ ಒತ್ತಡದಿಂದ ಮುಕ್ತರಾಗಿರುವ ಕೊಹ್ಲಿ, ಈಗ ಸೀಮಿತ ಓವರ್ಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಸಿಕ್ಸರ್ಗಳನ್ನು ಬಾರಿಸುತ್ತಿದ್ದಾರೆ. ಮೈದಾನದ ಎಲ್ಲಾ ಮೂಲೆಗೂ ಸಿಕ್ಸರ್ ಹೊಡೆಯುತ್ತಿದ್ದಾರೆ. ಐಪಿಎಲ್ ನ ಪ್ರತಿ ಸೀಸನ್ ನಲ್ಲೂ ರನ್ ಕಲೆ ಹಾಕುತ್ತಿದ್ದಾರೆ. ಅವರ ಮನಸ್ಥಿತಿಯೇ ಇದೀಗ ಸಂಪೂರ್ಣ ಬದಲಾಗಿದೆ ಎಂದಿದ್ದಾರೆ.
ಗಲ್ಫ್ ಯಾತ್ರಿಕರ ನೆರವಿಗೆ ಎಸ್ ವೈ ಎಸ್ ಹೆಲ್ಪ್ ಡೆಸ್ಕ್
ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ವಾತಾವರಣದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸವು ಪ್ರಯಾಸಕರವಾಗಿದ್ದು, ಬಹುತೇಕ ಯಾತ್ರಿಕರು ಮರಳುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮರಳುವ ಯಾತ್ರಿಕರ ಅನುಕೂಲಕ್ಕಾಗಿ ಸುನ್ನೀ ಯುವಜನ ಸಂಘದ ಬೆಂಗಳೂರು ಜಿಲ್ಲಾ ಸಾಂತ್ವನ ವಿಭಾಗವು ಹೆಲ್ಪ್ ಡೆಸ್ಕ್ ತೆರೆದಿದೆ. ಕರ್ನಾಟಕ, ಕೇರಳದ ಯಾತ್ರಿಕರು, ವಿಶೇಷತಃ ಉಮ್ರಾ ಯಾತ್ರಿಕರು ಬೆಂಗಳೂರು ವಿಮಾನ ನಿಲ್ದಾಣವನ್ನು ಹೆಚ್ಚಾಗಿ ಆಶ್ರಯಿಸುತ್ತಿದ್ದು, ಈ ಯಾತ್ರಿಕರಿಗೆ ಅಗತ್ಯ ಮಾರ್ಗದರ್ಶನ ನೀಡಲು ಮತ್ತು ತುರ್ತು ನೆರವು ಒದಗಿಸಲು ಎಸ್ ವೈಎಸ್ ಹೆಲ್ಪ್ ಡೆಸ್ಕ್ ಬಳಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9880815787 ಸಂಖ್ಯೆಯನ್ನು ಸಂಪರ್ಕಿಸುವಂತೆ ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ನಾಸಿರ್ ಕ್ಲಾಸಿಕ್ ತಿಳಿಸಿದ್ದಾರೆ.
Shivamogga | ಲೈನ್ ದುರಸ್ತಿ ವೇಳೆ ವಿದ್ಯುತ್ ಆಘಾತ; ಲೈನ್ ಮ್ಯಾನ್ ಮೃತ್ಯು
ಶಿವಮೊಗ್ಗ: ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಲೈನ್ ಮ್ಯಾನ್ ಓರ್ವರು ಮೃತಪಟ್ಟ ಘಟನೆ ಶಿಕಾರಿಪುರ ಪಟ್ಟಣದಲ್ಲಿ ರವಿವಾರ ನಡೆದಿದೆ. ಹರೀಶ್ (45) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕೆಇಬಿಯ ಸ್ಟೇಷನ್ ಎದುರು ಲೈನ್ ಸರಿ ಮಾಡುವಾಗ ಕರೆಂಟ್ ಶಾಕ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಮೊದಲು ಹರೀಶ್ ಅವರು ಧರ್ಮಸ್ಥಳ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೆ ಅವರು ಶಿಕಾರಿಪುರಕ್ಕೆ ವರ್ಗಾವಣೆಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು| ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಿಸುವಂತೆ ಮನವಿ
ಹಟ್ಟಿ: ಗದಗ–ವಾಡಿ ರೈಲ್ವೆ ಮಾರ್ಗದ ಹಟ್ಟಿ ಚಿನ್ನದ ಗಣಿ ಬಳಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿ, ರೈಲುಗಳನ್ನು ಹಟ್ಟಿ ಮೂಲಕ ಹಾದು ಹೋಗುವಂತೆ ಮಾಡಬೇಕೆಂದು ದಕ್ಷಿಣ ಪಶ್ಚಿಮ ರೈಲ್ವೆ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಅವರಿಗೆ ಹಟ್ಟಿ ಪಟ್ಟಣ ನಾಗರಿಕ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಹಟ್ಟಿ ಚಿನ್ನದ ಗಣಿ ದೊಡ್ಡ ನಗರ ಪ್ರದೇಶವಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗಣಿಯಿಂದ ಸರಕಾರಕ್ಕೆ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಸುತ್ತಮುತ್ತ ಹೊಸ ಚಿನ್ನದ ಗಣಿಗಳ ಅನ್ವೇಷಣೆ ನಡೆಯುತ್ತಿರುವ ಹಿನ್ನೆಲೆ ಭವಿಷ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗಲಿದ್ದು, ರೈಲ್ವೆ ಸಂಪರ್ಕ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಗದಗ–ವಾಡಿ ರೈಲು ಮಾರ್ಗವು ಹಟ್ಟಿ ಪ್ರದೇಶವನ್ನು ಬಿಟ್ಟು ಹೋಗುತ್ತಿರುವುದರಿಂದ ಸರಕಾರಕ್ಕೂ ಆದಾಯ ನಷ್ಟವಾಗಲಿದೆ. ಹಟ್ಟಿ ಮೂಲಕ ರೈಲು ಮಾರ್ಗ ಹಾದು ಹೋದರೆ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ಗಣಿಗಾರಿಕೆ ಸಾಮಗ್ರಿಗಳ ಸಾಗಣೆ ಸುಲಭವಾಗಿ ರೈಲ್ವೆಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಜನರಲ್ ಮ್ಯಾನೇಜರ್ ಅವರ ಕಾರ್ಯದರ್ಶಿ ಸುನಿಲ್ ಅವರು ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಟ್ಟಿ ಪಟ್ಟಣ ನಾಗರಿಕ ಸಮಿತಿಯ ಅಧ್ಯಕ್ಷ ಸುರೇಶ್ ಗೌಡ ಗುರಿಕಾರ, ಉಪಾಧ್ಯಕ್ಷ ದಯಾನಂದ, ಕಾರ್ಯದರ್ಶಿ ಲಾಲ್ಪೀರ್ ಹುಲುಗಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Gas Bill: ಗ್ಯಾಸ್ ಬಿಲ್ ಹೆಸರಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಲೂಟಿ ಮಾಡಿದ ಸೈಬರ್ ವಂಚಕರು
ಭಾರತದಲ್ಲಿ ಸೈಬರ್ ಅಪರಾಧಗಳ ಹಾವಳಿ ಮಿತಿಮೀರುತ್ತಿದ್ದು, ಈಗ ಮುಂಬೈ ಮೂಲದ ಹೊಸ ಮಾದರಿಯ ವಂಚನೆಯ ಜಾಲವೊಂದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಗ್ಯಾಸ್ ಕಂಪನಿಯ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು, ಕೇವಲ ಕೆಲವೇ ನಿಮಿಷಗಳಲ್ಲಿ ಜನರ ಬ್ಯಾಂಕ್ ಖಾತೆಗಳನ್ನು ಪೂರ್ಣವಾಗಿ ಖಾಲಿ ಮಾಡುತ್ತಿದ್ದಾರೆ. ಸದ್ಯ ಗ್ಯಾಸ್ ಬಿಲ್ ಹೆಸರಲ್ಲಿ 1 ಕೋಟಿ ರೂಪಾಯಿ ಲೂಟಿ ಮಾಡಿರುವ ಪ್ರಕರಣ
ಸೌಹಾರ್ದ ಕೂಟಗಳಿಂದ ಸಮಾಜದಲ್ಲಿ ಏಕತೆ ವೃದ್ಧಿ: ಶಾಸಕ ಚನ್ನಾರೆಡ್ಡಿ ಪಾಟೀಲ್
ಯಾದಗಿರಿ: ಈದ್ ಸೌಹಾರ್ದ ಕೂಟಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಏಕತೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತೂನ್ನೂರು ಹೇಳಿದರು. ನಗರದ ಸೌದಾಗರ್ ಫಂಕ್ಷನ್ ಹಾಲ್ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ರವಿವಾರ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತೂನ್ನೂರು, ಇಂತಹ ಕಾರ್ಯಕ್ರಮಗಳು ಜಾತಿ-ಧರ್ಮ ಭೇದಗಳನ್ನು ನಿವಾರಿಸಿ ಎಲ್ಲರೂ ಒಂದೇ ಎಂಬ ಮನೋಭಾವ ಮೂಡಿಸುತ್ತದೆ. ಈದ್ ಹಬ್ಬದ ಸಂದೇಶವಾದ ಪ್ರೀತಿ, ಸಹನೆ ಮತ್ತು ಸಹಕಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಜೊತೆಗೆ ಈ ರೀತಿಯ ಸೌಹಾರ್ದ ಕೂಟಗಳು ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸಿ ಒಗ್ಗಟ್ಟಿನ ಸಮಾಜ ನಿರ್ಮಾಣಕ್ಕೆ ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಈದ್ ಸೌಹಾರ್ದ ಕೂಟದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ, ಧರ್ಮಗಳಿಗಿಂತ ಮಾನವೀಯತೆ ಮಹತ್ವದ್ದು, ವರ್ಷದುದ್ದಕ್ಕೂ ನಾವು ವಿವಿಧ ಧರ್ಮಗಳ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ಇಂತಹ ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಬೆಳೆಸುವಲ್ಲಿ ವಿಶೇಷ ಪಾತ್ರವಹಿಸುತ್ತವೆ ಎಂದು ಹೇಳಿದರು. ಇತ್ತೀಚೆಗೆ ಹಬ್ಬಗಳ ಆಚರಣೆ ಹೆಸರಿನಲ್ಲಿ ಅಂಧ ನಂಬಿಕೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಬ್ಬಗಳನ್ನು ಆಚರಿಸುವಾಗ ಮಾನವನ ಗೌರವ ಹೆಚ್ಚಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು, ಧರ್ಮಗಳು ಹುಟ್ಟುವ ಮೊದಲು ನಾವು ಎಲ್ಲರೂ ಮಾನವರಾಗಿದ್ದೇವೆ. ಧರ್ಮಗಳು ಉದ್ಭವವಾದ ನಂತರವೇ ನಾವು ವಿಭಿನ್ನ ಜಾತಿ, ಮತಗಳಾಗಿ ವಿಭಜನೆಯಾಗಿದ್ದೇವೆ. ಆದರೂ ನಾವು ಮೊದಲಿಗೆ ಮನುಷ್ಯರು ಎಂಬ ಸತ್ಯವನ್ನು ಎಂದಿಗೂ ಮರೆಯಬಾರದು, ಸೌಹಾರ್ದ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಸ್ವಾಮೀಜಿ ಸಂದೇಶ ನೀಡಿದರು. ಈದ್ ಸೌಹಾರ್ದ ಕೂಟದಲ್ಲಿ ಉಪನ್ಯಾಸ ನೀಡಿದ ಜಿಷಾನ್ ಅಖಿಲ್ ಸಿದ್ದಿಖಿ ಅವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಏಕತೆಯ ಅಗತ್ಯತೆಯನ್ನು ವಿವರಿಸಿದರು. ಧರ್ಮಗಳು ಬೇರೆಬೇರೆ ಇದ್ದರೂ ಮಾನವೀಯ ಮೌಲ್ಯಗಳು ಒಂದೇ ಆಗಿವೆ. ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಗೌರವ, ಸಹನೆ ಹಾಗೂ ಸಹಕಾರ ಬಹಳ ಮುಖ್ಯವಾಗಿವೆ. ಇಂತಹ ಸೌಹಾರ್ದ ಕೂಟಗಳು ಜನರ ನಡುವೆ ಸ್ನೇಹ ಮತ್ತು ಒಗ್ಗಟ್ಟನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮ್ಜದ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗುಲಾಮ ಸಮಾದಾನಿ ಮೂಸಾ, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್, ಮಲ್ಲಣ್ಣ ದಾಸನಕೇರಿ, ಜಿ ಗುಂಡಪ್ಪ ಕಲಬುರಗಿ, ಡಾ. ಭಗವಂತ ಅನ್ವಾರ್, ವಿಶ್ವನಾಥ ಶಿರವಾರ, ಚನ್ನಪ್ಪಗೌಡ ಮೊಸಂಬಿ, ನಗರಸಭೆ ಮಾಜಿ ಅಧ್ಯಕ್ಷ ಅಝೀಝ್ ಶಹನ, ಸಲಾಹುದ್ದಿನ್ ಜಾಗೀರ್ದಾರ್, ಭಾಷಿಮೀಯಾ ವಡಿಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೊಹಮ್ಮದ್ ಅತಿಫ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಲಬುರಗಿ| ದಲಿತರ ಓಣಿಯಲ್ಲಿ ಚರಂಡಿ ಸ್ವಚ್ಛತಾ ಕ್ರಮಕ್ಕೆ ನಿರಾಕರಿಸಿದ ಪಿಡಿಒ: ಆರೋಪ
ಕಲಬುರಗಿ: ದಲಿತರ ಓಣಿಯಲ್ಲಿ ಗಬ್ಬು ನಾರುತ್ತಿರುವ ಚರಂಡಿಯ ಸ್ವಚ್ಛತಾ ಕ್ರಮಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು ನಿರಾಕರಿಸಿರುವ ಆರೋಪ ಕೇಳಿ ಬಂದಿದೆ. ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ ದಲಿತರ ಓಣಿಯಲ್ಲಿನ ಚರಂಡಿ ಅನೇಕ ತಿಂಗಳನಿಂದ ಸ್ವಚ್ಛಗೊಳಿಸದೆ ಗಬ್ಬು ನಾರುತ್ತಿದೆ. ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರೂ ಪಿಡಿಒ ಗುರುರಾಜ್ ಎಂಬವರು ನಿರಾಕರಿಸಿದ್ದಾರೆ ಎಂದು ಗ್ರಾಮದ ನಿವಾಸಿ ಅಶೋಕ್ ವೆಂಕಟಪ್ಪ ಪೆಡಿಂತಿ ಅವರು ಆರೋಪಿಸಿದ್ದಾರೆ. ಈ ಕುರಿತು ಪಿಡಿಒ ಹಾಗೂ ಗ್ರಾಮಸ್ಥ ಅಶೋಕ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. 6 ತಿಂಗಳು ಕಳೆದರೂ ಚರಂಡಿ ಸ್ವಚ್ಛಗೊಳಿಸಿಲ್ಲ. ತಾಲೂಕಿನ ಇಓ ಹೇಳಿದರೂ ಚರಂಡಿ ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ. ಬೇರೆ ಓಣಿಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿಸುತ್ತೀರಿ. ನಮ್ಮ ಓಣಿಯಲ್ಲಿ ಯಾಕೆ ಸ್ವಚ್ಛತಾ ಕಾರ್ಯವನ್ನು ಮಾಡಲ್ಲ? ಎಂದು ಗ್ರಾಮಸ್ಥ ಅಶೋಕ್ ಪ್ರಶ್ನಿಸಿದ್ದಾರೆ. ಅದಕ್ಕೆ ಪಿಡಿಒ, ದಲಿತರ ಓಣಿಯಲ್ಲಿ ಟ್ಯಾಕ್ಸ್ ಕಟ್ಟುವುದಿಲ್ಲ. ಅದಕ್ಕೆ ಸ್ವಚ್ಛತೆ ಮಾಡಿಲ್ಲ. ನೀವು ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಮಾಡುತ್ತೇವೆ. ಇಲ್ಲಾಂದ್ರೆ ಮಾಡಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮಸ್ಥರು ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಮುಧೋಳ ಠಾಣೆಯ ಪಿಐ ಸಂಜೀವಕುಮಾರ್ ಸೇರಿದಂತೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮುಧೋಳ ಠಾಣೆ ಪಿಐ ಸಂಜೀವ್ ಕುಮಾರ್, ದಲಿತರ ಓಣಿಯಲ್ಲಿ ಚರಂಡಿ ಸ್ವಚ್ಛಗೊಳಿಸುವ ಬಗ್ಗೆ ಸಮಸ್ಯೆ ಎದುರಾಗಿದೆ. ಇದನ್ನು ಬಗೆಹರಿಸಲು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಶನಿವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್ಸಿಬಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್
ಐಪಿಎಲ್ ಗೆ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ 2 ವರ್ಷದ ನಿಷೇಧ ಎಲ್ಲಿಗೂ ಸಾಲದು: ಸುನಿಲ್ ಗವಾಸ್ಕರ್ ಕಿಡಿ
Sunil Gavaskar Statement- ಐಪಿಎಲ್ ಹರಾಜಿನಲ್ಲಿ ಕೋಟಿಗಟ್ಟಲೆ ಮೊತ್ತಕ್ಕೆ ಖರೀದಿಯಾದ ಬಳಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಜಾರಿಯಲ್ಲಿರುವ 2 ವರ್ಷಗಳ ನಿಷೇಧವು ಪರಿಣಾಮಕಾರಿಯಲ್ಲ, ಆದ್ದರಿಂದ ಬಿಸಿಸಿಐ ಈ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಅಂತಹ ಆಟಗಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗವಾಸ್ಕರ್ ಆಗ್ರಹಿಸಿದ್ದಾರೆ. ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಬಳಿಕ ಬೆನ್ ಡಕೆಟ್ ಅವರು ಹಿಂಸರಿದಿರುವ ಹಿನ್ನೆಲೆಯಲ್ಲಿ ಅವರು ಆ ಮಾತು ಹೇಳಿದ್ದಾರೆ.
ʼಬರ್ತ್ʼ ಆಯ್ಕೆಯ ನಿಯಮವೇನು?: ನಿಮಗೆ ಗೊತ್ತಿರಬೇಕಾದ ರೈಲ್ವೆ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ...
ಟಿಕೆಟ್ ಬುಕಿಂಗ್ ಪ್ರಕ್ರಿಯೆ ಸರಳೀಕರಿಸಲು ಮತ್ತು ಅದನ್ನು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿಸಲು ಭಾರತೀಯ ರೈಲ್ವೆ ಹೊಸ ಕ್ರಮಗಳನ್ನು ಪರಿಚಯಿಸಿದೆ. ಮುಂಗಡ ಕಾದಿರಿಸುವಿಕೆ ಅವಧಿ ಯಾವುದು? ಪ್ರಯಾಣದ ದಿನಾಂಕ ಹೊರತುಪಡಿಸಿ ಕಾಯ್ದಿರಿಸಿದ ರೈಲು ಟಿಕೆಟ್ ಬುಕಿಂಗ್ ಮಾಡಲು ಮುಂಗಡ ಕಾಯ್ದಿರಿಸುವಿಕೆ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಿದೆ. ʼಬರ್ತ್ʼ ಆಯ್ಕೆಯ ನಿಯಮವೇನು? ಆನ್ಲೈನ್ ಅಥವಾ ಆಫ್ಲೈನ್ ಬುಕಿಂಗ್ನಲ್ಲಿ ಬಹುತೇಕ ಪ್ರಯಾಣಿಕರು ತಮ್ಮ ಆದ್ಯತೆಯ ಬರ್ತ್ಗಳನ್ನು ಆಯ್ಕೆ ಮಾಡುವಾಗ ಎದುರಿಸುತ್ತಿರುವ ಸವಾಲುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯದ ʼಬರ್ತ್ʼ ಬಂದರೇನು ಮಾಡಬೇಕು? ಕೆಳಗಿನ ಬರ್ತ್ ಬುಕ್ ಮಾಡಲು ಬಳಸುವ ಪ್ರಯಾಣಿಕರಿಗೆ ಲಭ್ಯತೆಯನ್ನು ಅವಲಂಬಿಸಿ ಹೆಚ್ಚಾಗಿ ಸೈಡ್ ಅಪ್ಪರ್, ಮಿಡಲ್ ಅಥವಾ ಅಪ್ಪರ್ ಬರ್ತ್ಗಳಾಗಿ ನೀಡಲಾಗುತ್ತದೆ. ಬುಕಿಂಗ್ ನಿಯಮಗಳು ಏನು ಹೇಳುತ್ತವೆ? ಭಾರತೀಯ ರೈಲ್ವೆ ಪ್ರಕಾರ ಕೆಳಗಿನ ಬರ್ತ್ನಲ್ಲಿರುವ ಪ್ರಯಾಣಿಕರು ಆರಾಮವಾಗಿ ಕೂರಲು ಮಧ್ಯದ ಬರ್ತ್ ಹಗಲಲ್ಲಿ ಮಡಚಬೇಕು. ರೈಲ್ವೆಯ ಮಲಗುವ ಸಮಯವೇನು? ಬೋಗಿಗಳಲ್ಲಿ ಮಲಗುವ ಸಮಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಇರುತ್ತದೆ. ಉಳಿದ ಸಮಯದಲ್ಲಿ ಮಧ್ಯದ ಬರ್ತ್ ಮಡಚಿರಬೇಕು. ಟಿಟಿಇಗೆ ಇರುವ ಹಕ್ಕೇನು? ಈ ಸಂಬಂಧ ಪ್ರಯಾಣಿಕರಲ್ಲಿ ವಿವಾದ ಉಂಟಾದರೆ ಅಧಿಕೃತ ನಿಯಮ ಜಾರಿಗೊಳಿಸುವ ಅಧಿಕಾರ ಟಿಟಿಇಗೆ ಇದೆ. ಅಧಿಕೃತ ಸಮಯ ಮೀರಿ ಪ್ರಯಾಣಿಕರು ಮಲಗಲು ಬಯಸಿದರೆ ಸುತ್ತೋಲೆಯನ್ನು ಪರಿಗಣಿಸಬೇಕು. ರೈಲ್ವೇ ಸುತ್ತೋಲೆ ಏನು ಹೇಳುತ್ತದೆ? ರೋಗಿಗಳು, ಅಂಗವಿಕಲರು ಅಥವಾ ಗರ್ಭಿಣಿಯರಿಗೆ ಅಗತ್ಯವಿದ್ದರೆ ಹೆಚ್ಚು ಕಾಲ ಮಲಗಲು ಅವಕಾಶ ಕೊಡುವಂತೆ ಸುತ್ತೋಲೆ ಹೇಳುತ್ತದೆ. ಮೇಲಿನ ಬರ್ತ್ನವರು ಕೂರಬಹುದೆ? ಹಗಲಿನ ವೇಳೆ ಮೇಲಿನ ಬರ್ತ್ ಬುಕ್ ಮಾಡಿದವರಿಗೆ ಕುಳಿತುಕೊಳ್ಳುವ ಸೌಕರ್ಯವನ್ನು ಸಹ ಒದಗಿಸಲಾಗಿದೆ.
ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ
ಮುಂಬೈ: ಉದ್ಯಮಿ ಅನಿಲ್ ಅಂಬಾನಿಯವರು ರಿಪಬ್ಲಿಕ್ ಟಿವಿ ಮತ್ತು ಅದರ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ತನ್ನ ಹಣಕಾಸು ವಹಿವಾಟುಗಳ ಕುರಿತು ಸುದ್ದಿವಾಹಿನಿಯಲ್ಲಿ ಪ್ರಸಾರಗೊಂಡ ವರದಿಗಳು ತನ್ನ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡಿವೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ. ನ್ಯಾ.ಮಿಲಿಂದ ಜಾಧವ ಅವರು ರಿಪಬ್ಲಿಕ್ ಟಿವಿಯ ಒಡೆತನ ಹೊಂದಿರುವ ಎಆರ್ಜಿ ಔಟ್ಲೈಯರ್,ಗೋಸ್ವಾಮಿ ಮತ್ತು ಇತರ ಅಪರಿಚಿತ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಪ್ರತಿವಾದಿಗಳು ಬರೆದು ಪ್ರಕಟಿಸಿದ ಹಾಗೂ ಅವರ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಸಾರಗೊಂಡ ಲೇಖನಗಳಿಂದ ತಾನು ನೊಂದಿದ್ದೇನೆ ಎಂದು ಅಂಬಾನಿ ಹೇಳಿದ್ದಾರೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ.(ಆರ್ಕಾಮ್),ರಿಲಯನ್ಸ್ ಹೋಮ್ ಫೈನಾನ್ಸ್ ಲಿ. ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ.ವಿರುದ್ಧ ಜಾರಿ ನಿರ್ದೇಶನಾಲಯವು ಆರಂಭಿಸಿರುವ ನಿಯಂತ್ರಕ ಪ್ರಕ್ರಿಯೆಗಳ ಬಗ್ಗೆ ವರದಿ ಮಾಡುತ್ತಿರುವುದಾಗಿ ಈ ಆಕ್ಷೇಪಾರ್ಹ ಲೇಖನಗಳು ಮತ್ತು ಹೇಳಿಕೆಗಳು ಉಲ್ಲೇಖಿಸಿದ್ದವು. ಅಂಬಾನಿ ನ.2019ರಲ್ಲಿ ಆರ್ಕಾಮ್ನ ಕಾರ್ಯ ನಿರ್ವಾಹಕೇತರ ನಿರ್ದೇಶಕ ಹುದ್ದೆಯನ್ನು ತೊರೆದಿದ್ದಾರೆ ಮತ್ತು ಇತರ ಕಂಪನಿಗಳಲ್ಲಿ ಯಾವುದೇ ವ್ಯವಸ್ಥಾಪನೆ ಅಥವಾ ಕಾರ್ಯಾಚರಣೆಯ ಹುದ್ದೆಯನ್ನು ಹೊಂದಿರಲಿಲ್ಲ ಎನ್ನುವದು ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿಗೆ ತಿಳಿದಿತ್ತು. ಕಂಪನಿಗಳು ಪ್ರತ್ಯೇಕ ಘಟಕಗಳಾಗಿದ್ದವು ಮತ್ತು ಅರ್ಜಿದಾರರು ಕಂಪನಿಗಳ ದೈನಂದಿನ ನಿರ್ವಹಣೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲ ಭಾಗಿಯಾಗಿರಲಿಲ್ಲ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ಪ್ರತಿವಾದಿಗಳು ದುರುದ್ದೇಶಪೂರ್ವಕವಾಗಿ ಮತ್ತು ಬೇಜವಾಬ್ದಾರಿಯಿಂದ ಕಂಪನಿಗಳಿಗೆ ಸಂಬಂಧಿಸಿದಂತೆ ತನಿಖೆಯಲ್ಲಿರುವ ಆರೋಪಗಳಿಗೂ ಅರ್ಜಿದಾರರಿಗೂ ಮಾನಹಾನಿಕರವಾಗಿ ತಳುಕು ಹಾಕಿದ್ದರು ಎಂದು ಅಂಬಾನಿ ಆರೋಪಿಸಿದ್ದಾರೆ.
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ
ಉತ್ತರ ಪ್ರದೇಶ: ಮದುವೆ ಅಂದಮೇಲೆ ಅಲ್ಲಿ ತಮಾಷೆ, ಸಡಗರ ಇರುವುದು ಸಹಜ. ಆದರೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಒಂದು ಮದುವೆ ಸಮಾರಂಭ ಮಾತ್ರ ಅಕ್ಷರಶಃ ಕುಸ್ತಿ ಅಖಾಡವಾಗಿ ಬದಲಾಗಿದೆ. ಇದಕ್ಕೆ ಕಾರಣವಾದದ್ದು ಮಾತ್ರ ಅತಿ ವಿಚಿತ್ರ, ಅದು ಬಿರಿಯಾನಿಯಲ್ಲಿನ 'ಚಿಕನ್ ಲೆಗ್ ಪೀಸ್' (Chicken Leg Piece)!. ಹೌದು, ಲೆಗ್ಪೀಸ್ಗಾಗಿ ಮದುವೆ ಸಮಾರಂಭ ರಣರಂಗವಾಗಿದೆ. ಲೆಗ್
ವಿಜಯನಗರ: ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್
ವಿಜಯನಗರ: ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಹೊಸಪೇಟೆ–ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಾಳ್ ಸಮೀಪ ನಡೆದಿದೆ. ಹಗರಿಬೊಮ್ಮನಹಳ್ಳಿಯಿಂದ ಹೊಸಪೇಟೆ ಕಡೆಗೆ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನಲ್ಲಿ ಪ್ರಯಾಣಿಕರ ಪೈಕಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್ಸಿನ ಮುಂಭಾಗ ಜಖಂಗೊಂಡಿದೆ. ಈ ಬಗ್ಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್
ದಾಂಡೇಲಿ: ಉತ್ತರ ಕರ್ನಾಟಕದ ಸುಮಾರು ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೇವೆ ನೀಡುವ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ಗಳು ರಾಜ್ಯ, ಹೊರ ರಾಜ್ಯದವರೆಗೂ ಉತ್ತಮ ಸೇವೆ ನೀಡುತ್ತಿವೆ. ಇದೀಗ ದಾಂಡೇಲಿಯಿಂದ ರಾಜಧಾನಿ ಬೆಂಗಳೂರಿಗೆ ಅತ್ಯುತ್ತಮ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವ 2 ಪಲ್ಲಕ್ಕಿ ಬಸ್ಗಳ ಸಂಚಾರಕ್ಕೆ ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಅವರು
ರೈತರ ಆದಾಯ ದ್ವಿಗುಣಗೊಂಡಿದೆ ಎಂಬ ಕೇಂದ್ರ ಸರಕಾರದ ಹೇಳಿಕೆ ತಿರಸ್ಕರಿಸಿದ ಸಂಯುಕ್ತ ಕಿಸಾನ್ ಮೋರ್ಚಾ
12 ವರ್ಷಗಳಲ್ಲಿ ಐದು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ: SKM
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 29) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ ನಿಧನ
ಭಾರತದ ಪ್ರತಿಷ್ಠಿತ ವಸ್ತ್ರೋದ್ಯಮ ಸಂಸ್ಥೆ 'ರೇಮಂಡ್' ಸಮೂಹದ ಹಿಂದೆ ಶಕ್ತಿಯಾಗಿ ನಿಂತಿದ್ದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಬೆ.ಗ್ರಾಮಾಂತರದಲ್ಲಿ ತಾಪಮಾನ 36ಡಿಗ್ರಿ ಸೆಲ್ಸಿಯಸ್ ದಾಖಲು; ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ಅಗ್ನಿ ಅವಘಡದ ಭೀತಿ
ಬೆಂಗಳೂರು ಗ್ರಾಮಾಂತರದಲ್ಲಿ ಬೇಸಿಗೆ ತಾಪ ಈಗಾಗಲೇ ಶುರುವಾಗಿದ್ದು, ತಾಪಮಾನ 36ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಬೇಸಿಗೆಯ ತಾಪದಿಂದಾಗಿ ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಬೆಂಕಿ ಅವಘಡಗಳು ಸಂಭವಿಸುವ ಭೀತಿ ಜನರಲ್ಲಿ ಆವರಿಸಿದೆ. ಇನ್ನು, ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಇಲ್ಲೇ ಅತಿಹೆಚ್ಚು ಅಗ್ನಿಅವಘಡಗಳು ಸಂಭವಿಸುವ ಸಾಧ್ಯತೆಯ ಹಿನ್ನಲೆಯಲ್ಲಿ ಈ ವಲಯಕ್ಕೆ ಪ್ರತ್ಯೇಕ ಅಗ್ನಿ ಶಾಮಕ ಠಾಣೆ ಒದಗಿಸಿಬೇಕಿದೆ.
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ
ಸಾರ್ವಜನಿಕ ಸ್ಥಳಗಳಲ್ಲಿ, ರೈಲು ಅಥವಾ ಬಸ್ಗಳಲ್ಲಿ ಪ್ರಯಾಣಿಸುವಾಗ ಜನರು ಕಸ ಎಸೆಯುವುದು, ಗಲೀಜು ಮಾಡುವುದನ್ನು ನಾವು ಪದೇ ಪದೇ ನೋಡುತ್ತೇವೆ ಮತ್ತು ಟೀಕಿಸುತ್ತೇವೆ. ಆದರೆ, ಸಾವಿರಾರು ರೂಪಾಯಿ ಟಿಕೆಟ್ ಕೊಟ್ಟು ವಿಮಾನದಲ್ಲಿ ಪ್ರಯಾಣಿಸುವವರ ವರ್ತನೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತುಪಡಿಸುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ
ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಬಿ.ವೈ.ವಿಜಯೇಂದ್ರ
ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ರನ್ನು ಗೆಲ್ಲಿಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಇದರಿಂದ ಮತದಾರರು ಬೇಸತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ರಾಜ್ಯದ ರಾಜಕಾರಣದ ದಿಕ್ಕನ್ನು ಬದಲಿಸುವ ಒಂದು ಪ್ರಮುಖ ಶಕ್ತಿಯಾಗಲಿವೆ ಎಂಬುದನ್ನು ಸಾರ್ವಜನಿಕರೇ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಇಷ್ಟು ವರ್ಷಗಳ ಕಾಲ ಕ್ಷೇತ್ರ ಕಾಂಗ್ರೆಸ್ನ ಹಿಡಿತದಲ್ಲಿ ಇದ್ದರೂ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಬಾರಿಯಾದರೂ ನಾವು ಬದಲಾವಣೆ ಮಾಡಬೇಕು ಎಂದು ಬಯಸಿದ್ದಾರೆ. ಹಣಬಲ ಮತ್ತು ತೋಳ್ಬಲಕ್ಕೆ ಲೆಕ್ಕಿಸದೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸ ಕರಿಯಪ್ಪ ರನ್ನು ಗೆಲ್ಲಿಸಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಗೊಂದಲ ಇದ್ದರೂ ಒಂದು ಬಾರಿ ವರಿಷ್ಠರು ಶ್ರೀನಿಸಾಸ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಎಲ್ಲ ಮುಖಂಡರು ಒಟ್ಟಾಗಿ ಒಂದಾಗಿ ಒಂದೇ ಧ್ವನಿಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ದುಡಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಪ್ರತಿ ಬೂತ್ನಲ್ಲೂ ನಮ್ಮ ಕಾರ್ಯಕರ್ತರು, ಹಗಲು ರಾತ್ರಿ ಶ್ರಮ ಹಾಕಿ ಮತದಾರರ ಮನಸು ಗೆಲ್ಲಲು ಶ್ರಮಿಸುತ್ತಿದ್ದಾರೆ. ಈ ಬಾರಿ ದಕ್ಷಿಣ ಕ್ಷೇತ್ರದ ಫಲಿತಾಂಶ ಬಿಜೆಪಿ ಪರವಾಗಿ ಇರಲಿದೆ. ಎನ್ ಡಿಎ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು. ಮತಬ್ಯಾಂಕ್ ಆಗಿ ದುರ್ಬಳಕೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಏನೂ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ ತಮ್ಮನ್ನು ಮತ ಬ್ಯಾಂಕ್ ಆಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಅಲ್ಪಸಂಖ್ಯಾತರೇ ಆರೋಪ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮರೆತಿದೆ. ಇದರ ಜೊತೆ ರಾಜ್ಯ ಸರ್ಕಾರದ ವೈಫಲ್ಯ ಇದೆ. ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲಿ ದಾಖಲೆ ಮಾಡಿದರೂ ರಾಜ್ಯಕ್ಕಾಗಲಿ, ದಾವಣಗೆರೆ ದಕ್ಷಿಣಕ್ಕಾಗಲಿ ಅನುಕೂಲವಾಗಿಲ್ಲ. ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ. ಐದು ರಾಜ್ಯಗಳ ಚುನಾವಣೆ ನಂತರ ಹೈಕಮಾಂಡ್ ಮಾತು ಕೇಳಿ ರಾಜೀನಾಮೆ ನೀಡುವ ಸ್ಥಿತಿಗೆ ಸಿದ್ದರಾಮಯ್ಯ ಬರುತ್ತಾರೆ ಎಂದರು. ಎಲ್ಲ ನಾಯಕರೂ ಪ್ರಚಾರಕ್ಕೆ ಬರಲಿದ್ದಾರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಸೇರಿ ರಾಜ್ಯದ ಎಲ್ಲ ಮುಖಂಡರು ಇಂದಿನಿಂದ ಪ್ರವಾಸಕ್ಕೆ ಬರಲಿದ್ದಾರೆ. ಕಾರ್ಯಕರತರಿಗೆ ಉತ್ಸಾಹ ತುಂಬಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಮಾಜಿ ಸದಸ್ಯ ಶಿವಯೋಗಿಸ್ವಾಮಿ, ಶಾಸಕ ಬಿ.ಪಿ. ಹರೀಶ್, ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮಾಜಿ ಸಚಿವ ಶಿವನಗೌಡ ನಾಯಕ್, ಮಾಜಿ ಶಾಸಕರಾದ ರಾಮಚಂದ್ರಪ್ಪ, ಗಾಯತ್ರಿ ಸಿದ್ದೇಶ್ವರ್, ರಾಜ್ಯ ವಕ್ತಾರ ನರೇಂದ್ರ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
Shivamogga | ಬೆಂಕಿ ಹಚ್ಚಿ ಉಪನ್ಯಾಸಕನ ಕೊಲೆ: ತನಿಖೆಗೆ ವಿಶೇಷ ತಂಡ ರಚನೆ
ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಹನುಮಂತಪುರ ಗ್ರಾಮದ ಅಡಿಕೆ ತೋಟದಲ್ಲಿ ಅಕ್ಷರ ಕಾಲೇಜು ಉಪನ್ಯಾಸಕ ಸುರೇಶ್ ಕುಮಾರ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣವನ್ನು ಪ್ರಾಥಮಿಕವಾಗಿ ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು,ಶಿವಮೊಗ್ಗದ ಅಕ್ಷರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸುರೇಶ್ ಮದುವೆ ಸಮಾರಂಭವೊಂದಕ್ಕೆ ಹೋಗಿ ಬರುವುದಾಗಿ ಹೇಳಿ ಶನಿವಾರ ಮನೆಯಿಂದ ಹೊರಟಿದ್ದರು. ಇಂದು ಬೆಳಗ್ಗೆ ಅವರದ್ದೇ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಮೃತದೇಹದ ಸುತ್ತಮುತ್ತ ಬೆಂಕಿ ಉರಿಯುತ್ತಿತ್ತು ಎಂದು ತಿಳಿಸಿದರು. ಘಟನಾ ಸ್ಥಳದಲ್ಲಿ ಮೃತ ಸುರೇಶ್ ಅವರ ದ್ವಿಚಕ್ರ ವಾಹನ ಮತ್ತು ಬ್ಯಾಗ್ ಪತ್ತೆಯಾಗಿವೆ. ಮೃತದೇಹವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂಬ ಸಂಶಯವಿದೆ. ಆದ್ದರಿಂದ ಕೊಲೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದರು. ಸುರೇಶ್ ಅವರ ಮೊಬೈಲ್ ಫೋನ್ ಸ್ಥಳದಲ್ಲಿ ಸಿಕ್ಕಿದ್ದು, ಅದನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು. ಸುರೇಶ್ ಅವರ ಕುಟುಂಬದವರು ಯಾರ ಮೇಲೆಯೂ ಆರೋಪ ಮಾಡಿಲ್ಲ. ಆದರೂ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ ಎಂದರು. ಪ್ರಕರಣದ ತನಿಖೆಗೆ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಈಗಾಗಲೇ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಆರಂಭಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಿವಿಧ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸಂಗತಿಗಳು ಬೆಳಕಿಗೆ ಬಂದ ಬೆನ್ನಲ್ಲೇ, ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಾಗಿರುವ ಅಧಿಕಾರಿಗಳು ಜೈಲಿನಲ್ಲಿ ಸಿಸಿಟಿವಿ ಕ್ಯಾಮರ ಮೂಲಕ ಹದ್ದಿನ ಕಣ್ಗಾವಲಿಡಲು ಮುಂದಾಗಿದೆ. ಇದರ ಜೊತೆಗೆ ಕೈದಿಗಳಿಗೆ ಭೇಟಿ ನೀಡುವವರ ಮೇಲೆ ವಿಶೇಷ ನಿಗಾ ವಹಿಸಲು 3 ಹಂತಗಳಲ್ಲಿ ಪರಿಶೀಲನೆ ನಡೆಸಲು ಸಿದ್ದತೆ ನಡೆಸಿದೆ. ಇನ್ನೂ ಜೈಲಿನಲ್ಲಿರುವ ಕೈದಿಗಳ ಮನಃಪರಿವರ್ತನೆಗೆ ವಿವಿಧ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಮಹಿಳಾ ವಿಭಾಗದಿಂದ 'ಈದ್ ಸಂಭ್ರಮ'
ಮಂಗಳೂರು: ಇಂದಿನ ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸ್ಥಾನವನ್ನು ಅಲಂಕರಿಸಿದ್ದಾಳೆ. ಆದರೆ, ಒಬ್ಬ ಹೆಣ್ಣು ತಾಯಿ ಆಗಿ ತನ್ನ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ, ಆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸುತ್ತಾರೆ. ಈ ಮೂಲಕ ದೇಶದ ಅಭಿವೃದ್ಧಿಗೂ ಮಹಿಳೆಯ ಪಾತ್ರ ಮಹತ್ತರವಾಗುತ್ತದೆ ಎಂದು ಸಾಮರಸ್ಯ ವೇದಿಕೆಯ ಅಧ್ಯಕ್ಷೆ ಹಾಗೂ ಸಮಾಜ ಸೇವಕಿ ಮಂಜುಳಾ ನಾಯಕ್ ಅಭಿಪ್ರಾಯಿಸಿದ್ದಾರೆ. ಅವರು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಿದ್ದ 'ಈದ್ ಸಂಭ್ರಮ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ನ ಸಮಾಜ ಸೇವಕಿ ಮಂಜುಳಾ ಗುಡ್ಡೆಹಿತ್ಲು ಮಾತನಾಡಿ, “ನಾವು ಚಿಕ್ಕಂದಿನಿಂದಲೇ ಉಪವಾಸದ ಮಹತ್ವವನ್ನು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬೆಳೆದವರು. ನಾವು ಈ ಭೂಮಿಯಲ್ಲಿ ಎಷ್ಟು ದಿನ ಬದುಕುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಬದುಕಿರುವಷ್ಟು ದಿನ ಪ್ರೀತಿ, ಸೌಹಾರ್ದ ಮತ್ತು ಒಗ್ಗಟ್ಟಿನಿಂದ ಬದುಕಲು ಕಲಿಯಬೇಕು. ಇದೇ ಮೌಲ್ಯಗಳನ್ನು ನಮ್ಮ ಮಕ್ಕಳಿಗೂ ಬೋಧಿಸಬೇಕು” ಎಂದು ಹೇಳಿದರು. ಈದ್ ಸಂದೇಶ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯೆ ಶಮೀರಾ ಜಹಾನ್, ಉಪವಾಸದ ಮಹತ್ವ, ಸಹನೆ ಮತ್ತು ಈದುಲ್-ಫಿತ್ರ್ ನ ವಿಶೇಷತೆಯನ್ನು ವಿವರಿಸಿದರು. ಡಿಜಿಟಲ್ ಯುಗದಲ್ಲಿ ಮಾನಸಿಕ ಸಂಕುಚಿತತೆ ಹೆಚ್ಚುತ್ತಿರುವುದರಿಂದ ಮಾನಸಿಕ ಸ್ಥೈರ್ಯ ಮತ್ತು ಸಹನಶಕ್ತಿ ಕಡಿಮೆಯಾಗುತ್ತಿದೆ. ಉಪವಾಸದ ಮೂಲಕ ಸಹನಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು. ‘ಅರಿವು’ವಿಶೇಷ ಶಾಲೆ ಹಾಗೂ ಕಲಿಕಾ ಹಿನ್ನಡೆ ಇರುವ ಮಕ್ಕಳ ಕೇಂದ್ರದ ಅಧ್ಯಕ್ಷೆ ಪೂರ್ಣಿಮಾ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ದಿವ್ಯಾ ವಸಂತ್, ಅಂಗನವಾಡಿ ಕಾರ್ಯಕರ್ತೆ ಶೋಭಾ ಮತ್ತಿತರರು ಉಪಸ್ಥಿತರಿದ್ದರು. ಯಾಸ್ಮಿನ್ ಮುಜೀಬ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಭಾನು ರಹ್ಮಾನ್ ರಮಝಾನ್ ಸಂದೇಶದ ಗೀತೆ ಹಾಡಿದರು. ಸಮೀನಾ ಅಫ್ಶಾನ್ ಕಿರಾಅತ್ ಪಠಿಸಿದರು. ಗುಲ್ಶನ್ ಪರ್ವೀನ್ ವಂದಿಸಿದರು. ಲುಬ್ನಾ ಝಕಿಯಾ ಕಾರ್ಯಕ್ರಮ ನಿರೂಪಿಸಿದರು.
Kerala ವಿಧಾನಸಭೆ ಚುನಾವಣೆ | ಸಿಪಿಐ(ಎಂ)-SDPI ‘ಒಪ್ಪಂದ’ ಆರೋಪ; ಕಾಂಗ್ರೆಸ್-LDF ನಡುವೆ ತೀವ್ರ ವಾಗ್ವಾದ
ಮಲಪ್ಪುರಂ/ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಪಿಐ(ಎಂ) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆ ‘ಒಪ್ಪಂದ’ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಬಗ್ಗೆ ರಾಜ್ಯದಲ್ಲಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, SDPI ರಾಜ್ಯಾದ್ಯಂತ ಸಿಪಿಐ(ಎಂ) ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪಿಡಿಪಿ ಕೂಡ ಎಲ್ ಡಿ ಎಫ್ ಗೆ ಬಹಿರಂಗ ಬೆಂಬಲ ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಆತಂಕ ತಂದಿದ್ದು, ಅದರ ಪ್ರಮುಖ ಮೈತ್ರಿ ಪಾಲುದಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಮುಸ್ಲಿಂ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನೊಂದೆಡೆ, ಜಮಾತ್-ಇ-ಇಸ್ಲಾಮಿ ಬೆಂಬಲಿತ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದೆ ಎಂಬ ಸಿಪಿಐ(ಎಂ) ಟೀಕೆಗಳಿಗೆ ಪ್ರತಿಯಾಗಿ, ಕಾಂಗ್ರೆಸ್ ಎಸ್ಡಿಪಿಐ-ಪಿಡಿಪಿ ‘ಒಪ್ಪಂದ’ ಆರೋಪಗಳನ್ನು ರಾಜಕೀಯ ಆಯುಧವಾಗಿ ಬಳಸುತ್ತಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರವಿವಾರ ಮಲಪ್ಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ(ಎಂ) ಯಾವಾಗಲೂ ಎಲ್ಲಾ ರೀತಿಯ ಕೋಮುವಾದದ ವಿರುದ್ಧ ರಾಜಿಯಾಗದ ನಿಲುವು ಹೊಂದಿದೆ ಎಂದು ಹೇಳಿದ್ದಾರೆ. ಯುಡಿಎಫ್ ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, “ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಕೋಮುವಾದ ಎರಡರ ವಿರುದ್ಧವೂ ನಾವು ಸದಾ ದೃಢ ನಿಲುವು ಹೊಂದಿದ್ದೇವೆ. ಕೆಲ ಮತಗಳಿಗಾಗಿ ಬದಲಾಗುವ ಅವಕಾಶವಾದಿ ನಿಲುವು ನಮ್ಮದಲ್ಲ” ಎಂದರು. ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಮುನ್ನ ಸಿಪಿಐ(ಎಂ) ಹಲವು ಕ್ಷೇತ್ರಗಳಲ್ಲಿ ಎಸ್ ಡಿ ಪಿ ಐ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬ ಪ್ರಶ್ನೆಗಳಿಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ಎಸ್ ಡಿ ಪಿ ಐ ನಾಯಕರ ನಿಲುವು ಕುರಿತು ತಿಳಿದುಕೊಳ್ಳಲು ಮಾಧ್ಯಮಗಳು ಅವರನ್ನೇ ಸಂಪರ್ಕಿಸಬೇಕು ಎಂದು ಸಿಎಂ ಹೇಳಿದರು. ಆದರೆ, ಎಲ್ ಡಿ ಎಫ್ ಗೆ ಎಸ್ ಡಿ ಪಿ ಐ ಮತಗಳ ಅಗತ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿದ ಮುಖ್ಯಮಂತ್ರಿ, ಯುಡಿಎಫ್ ಸುಳ್ಳು ಮಾಹಿತಿಯ ಆಧಾರದ ಮೇಲೆ ಪ್ರಚಾರ ನಡೆಸುತ್ತಿದೆ ಮತ್ತು ಎಲ್ಡಿಎಫ್ ಸರ್ಕಾರದ ಸಾಧನೆಗಳನ್ನು ದುರ್ಬಲಗೊಳಿಸಲು ತಪ್ಪು ಮಾಹಿತಿ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿದರು. 2021ರಲ್ಲಿ ಎಲ್ಡಿಎಫ್ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವುದು ಯಾವುದೇ ‘ಗಿಮಿಕ್’ ಫಲಿತಾಂಶವಲ್ಲ, ಬದಲಿಗೆ ಕಾರ್ಯಕ್ಷಮತೆ ಮತ್ತು ಜನಕೇಂದ್ರಿತ ಆಡಳಿತದ ಪರಿಣಾಮ ಎಂದು ಅವರು ಹೇಳಿದರು. ಎರಡನೇ ಅವಧಿಯಲ್ಲಿ ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ನಡೆದ ಸುಧಾರಣೆಗಳನ್ನು ಪ್ರಮುಖ ಸಾಧನೆಗಳೆಂದು ಅವರು ಉಲ್ಲೇಖಿಸಿದರು. ಸರ್ಕಾರ ದೀರ್ಘಾವಧಿ ನೀತಿಗಳನ್ನು ಬದ್ಧತೆಯಿಂದ ಜಾರಿಗೆ ತಂದಿದ್ದು, ಘೋಷಿತ ಯೋಜನೆಗಳು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳ್ಳುತ್ತಿವೆ ಎಂದರು. ಯುವಜನರ ಆಕಾಂಕ್ಷೆಗಳು ಹಾಗೂ ಸಮಗ್ರ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. “ಮುಂದಿನ ಚುನಾವಣೆ ಕೇರಳವು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯಬೇಕೇ ಅಥವಾ ವಿರಾಮ ಪಡೆಯಬೇಕೇ ಎಂಬುದನ್ನು ನಿರ್ಧರಿಸುವ ಅವಕಾಶವಾಗಿದೆ,” ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಳೆದ ದಶಕದಲ್ಲಿ ರಾಜ್ಯದಲ್ಲಿ ಕಂಡುಬಂದ ಬದಲಾವಣೆಗಳು ದೂರದೃಷ್ಟಿಯ ನೀತಿಗಳು ಮತ್ತು ಪರಿಣಾಮಕಾರಿ ಅನುಷ್ಠಾನದ ಫಲವಾಗಿದ್ದು, ಅಭಿವೃದ್ಧಿ ಮುಂದುವರಿಸಲು ಆಡಳಿತದ ಸ್ಥಿರತೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ತಾಯಿ-ಅಕ್ಕ, ಸೋದರಳಿಯನ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಯತ್ನ: ಸಾಲದ ಹೊರೆಯಿಂದ ಬೆಂಗಳೂರು ಕುಟುಂಬವೊಂದರ ದುರಂತ ನಡೆ
ಸಾಲದ ಹೊರೆ ತಾಳಲಾಗದೆ, ಐಶಾರಾಮಿ ಜೀವನ ನಡೆಸುತ್ತಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿ, ದುರಂತ ಅಂತ್ಯಕ್ಕೆ ಮುಂದಾಗಿದ್ದಾರೆ.. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ
ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಕಣ ಈಗ ಅಧಿಕೃತವಾಗಿ ಕಳೆಗಟ್ಟಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಮತ್ತು ನಟ ದಳಪತಿ ವಿಜಯ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ. ಸ್ವತಃ ವಿಜಯ್ ಅವರು ಈ ಬಾರಿ ಭದ್ರಕೋಟೆ ಎನ್ನಲಾದ ಎರಡು ಪ್ರಮುಖ
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ಒಂದು ಸಮುದಾಯದಿಂದ ಸಿಗುವ ಅಲ್ಪ ಮತಗಳಿಗಾಗಿ ಉಗ್ರನನ್ನೇ ಉಗ್ರನಲ್ಲ ಎಂದು ಸರ್ಟಿಫಿಕೇಟ್ ನೀಡುವ ಹಂತದಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ ಕಾಂಗ್ರೆಸ್ನವರಿಗೆ ಮತ್ತೊಮ್ಮೆ ದೇಶದಲ್ಲಿ ಅಧಿಕಾರ ಕೊಟ್ಟರೆ ಉಗ್ರರ ಹಿತರಕ್ಷಣೆಗಾಗಿ ಹಲವು ಗ್ಯಾರಂಟಿ ಭಾಗ್ಯಗಳನ್ನು ನೀಡಿದರೂ ಅಚ್ಚರಿಯಿಲ್ಲ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ. ಕರ್ನಾಟಕದ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನಲ್ಲಿ ನಾಲ್ಕು ವರ್ಷದ
ಮಧ್ಯಪ್ರಾಚ್ಯದಲ್ಲಿ ಇರಾನ್ ಮೇಲಿನ ಯುದ್ಧವನ್ನು ಖಂಡಿಸಿ ಯೆಮೆನ್ ನ ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಯುದ್ಧಕ್ಕೆ ಎಂಟ್ರಿ ಕೊಟ್ಟಿದ್ದು, ಇರಾನ್ ಹಾಗೂ ಲೆಬನಾನ್ ಮೇಲಿನ ಸಂಪೂರ್ಣ ಆಕ್ರಮಣ ನಿಲ್ಲುವವರೆಗೂ ದಾಳಿ ಮುಂದುವರೆಯಲಿದೆ ಎಂದಿದೆ. ಇದು ಸದ್ಯ ಪರಿಸ್ಥಿತಿ ಉಲ್ಬಣವಾದಂತೆ ಹೊರ್ಮುಜ್ ಜಲಸಂಧಿ ಬಳಿಕ ಅರೇಬಿಯನ್ ದ್ವೀಪದ ಬಳಿ ಹೌತಿ ಪ್ರಾಬಲ್ಯವಿರುವ ಕೆಂಪು ಸಮುದ್ರದಲ್ಲಿನ ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ಸ್ಥಗಿತಗೊಳಿಸುವ ಆತಂಕ ಎದುರಾಗಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದ್ದು, ಭಾರತಕ್ಕೆ ಇದರ ಪರಿಣಾಮ ಹೇಗಿರಲಿದೆ ಎಂಬ ಲೇಖನ ಇಲ್ಲಿದೆ...

22 C