ಮಂಗಳೂರು: ಹೋಪ್ ಫೌಂಡೇಶನ್ ನಿಂದ ಸಹರಿ ವ್ಯವಸ್ಥೆ
ಮಂಗಳೂರು: ರಮಝಾನ್ ತಿಂಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಜೊತೆ ಇರುವವರು ಹಾಗು ಜೊತೆಗೆ ಯಾರೂ ಇಲ್ಲದ ಹಿರಿಯ ನಾಗರೀಕರಿಗೆ ಸಹರಿ ಊಟ ತಲುಪಿಸುವ ವ್ಯವಸ್ಥೆಯಿದೆ ಎಂದು ಹೋಪ್ ಫೌಂಡೇಶನ್ ನ ಅಧ್ಯಕ್ಷ ಸೈಫ್ ಸುಲ್ತಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಗತ್ಯ ಇರುವವರು ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಿ ನೋಂದಾವಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. NUMAN Contact:+91 8792244939 Munafil jeppu +91 9743434326 Saif Sulthan +91 9900260031
Mahakavi Film: ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಲನಚಿತ್ರ 'ಮಹಾಕವಿ': ಪುರುಷೋತ್ತಮ ಬಿಳಿಮಲೆ ಬರಹ
ಬೆಂಗಳೂರು: ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ರತ್ನತ್ರಯರಲ್ಲಿ ಒಬ್ಬರಾದ ಮಹಾಕವಿ 'ಪಂಪ' ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಠ ಕವಿಯೂ ಹೌದು. ಅವರ ಬಗ್ಗೆ ಕನ್ನಡದಲ್ಲಿ ಸಿನಿಮಾ ಮಾಡಲಾಗಿದೆ. ಚಿಂತಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ 25ನೇ ಸಿನಿಮಾ ಆಗಿ 'ಮಹಾಕವಿ' ಮೂಡಿ ಬಂದಿದೆ. ನಟ ಕಿಶೋರ್ ಅವರು ಇದರಲ್ಲಿ ಪಂಪನಾಗಿ ಬಣ್ಣ ಹಚ್ಚಿಸಿದ್ದಾರೆ. ಇದರ ಕುರಿತು ಕನ್ನಡ
ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ; 10 ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ! ಅಮೆರಿಕದ ಬಂದೂಕು ಸಂಸ್ಕೃತಿ ವಿಸ್ತರಣೆ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೆನಡಾದ ಶಾಲೆಯೊಂದರಲ್ಲಿ ಅಪರಿಚಿತನೋರ್ವ ಮನಬಂದಂತೆ ಗುಂಡು ಹಾರಿಸಿದ್ದು, ಸಾಮೂಹಿಕ ಗುಂಡಿನ ದಾಳಿಯಲ್ಲಿ ಬಂದೂಕುಧಾರಿಯೂ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಶಾಲಾ ಆವರಣದಲ್ಲಿ ರಕ್ತದೋಕುಳಿ ಹರಿಸಿದ ಬಂದೂಕುಧಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಸಾಮೂಹಿಕ ಗುಂಡಿನ ದಾಳಿ ಈಗ ಕೆನಡಾಗೂ ವಿಸ್ತರಿಸಿರುವುದು ಆತಂಕಕಾರಿಯಾಗಿದೆ.
Bengaluru Weather: ನಗರದಲ್ಲಿ 32°C ತಾಪಮಾನ ದಾಖಲು, ರಾಜ್ಯಾದ್ಯಂತ ಬಿಸಿಲು ಏರಿಕೆ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುವ, ಅತ್ಯಧಿಕ ತಾಪಮಾನ ದಾಖಲಾಗುವ ಮುನ್ಸೂಚನೆ ಸಿಕ್ಕಿದೆ. ಈ ಮಾತಿಗೆ ಪೂರಕೆವೆಂಬಂತೆ ನೆನ್ನೆ ಸಂಜೆ ನಗರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಬೇಸಿಗೆಯಲ್ಲಿ ಈವರೆಗಿನ ಗರಿಷ್ಠ ಉಷ್ಣಾಂಶ ಎನ್ನಲಾಗಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ನಲ್ಲಿ ಬೆಂಗಳೂರ ಸೇರಿ ರಾಜ್ಯದಲ್ಲಿ ಬಿಸಿಲು ಇನ್ನಷ್ಟು ಏರಿಕೆ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳು, ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ನಿಲುವಳಿ ಮಂಡನೆ ಮಾಡಲು ಸಿದ್ಧತೆ ಆರಂಭಿಸಿವೆ. ಬಹುಶಃ ಮಾರ್ಚ್ 9ರಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಸಮಬಲದ ಮತಗಳು ಬಿದ್ದರೆ, ಸ್ಪೀಕರ್ ತಮ್ಮ ಮತವನ್ನು ಚಲಾಯಿಸಬಹುದೇ? ಈ ಕುರಿತಾದ ನಿಯಮಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.
Bengaluru Second airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಭಾರೀ ಮುಖಭಂಗ, ಆಂಧ್ರಪ್ರದೇಶಕ್ಕೆ ಲಾಭ
Bengaluru Second airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಭಾರೀ ಹಿನ್ನಡೆ ಆಗಿದೆ. ಅದೇ ರೀತಿ ಇದೀಗ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಹಾಗೂ ಕರ್ನಾಟಕಕ್ಕೆ ಪೈಪೋಟಿ ನೀಡುವುದಕ್ಕೆ ಮುಂದೆ ಬಂದಿದ್ದ ತಮಿಳುನಾಡಿಗೂ ಮುಖಭಂಗವಾಗಿದೆ. ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುತ್ತಿದ್ದ ತಮಿಳುನಾಡು
ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ
ಗ್ರಾಮೀಣ ಭಾಗದಲ್ಲಿ ಹಗಲಿರುಳು ಶ್ರಮಿಸುತ್ತಿರುವ, ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೃತ್ತಿಪರ ಕೆಲಸಗಳಿಗಾಗಿ ಜಿಲ್ಲೆಯಾದ್ಯಂತ ಓಡಾಡುವ ಪತ್ರಕರ್ತರಿಗೆ ಅನುಕೂಲವಾಗುವಂತೆ, ಉಚಿತ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 10 ರಂದು ಹೊರಡಿಸಲಾದ ಪ್ರಕಟಣೆಯ ಪ್ರಕಾರ,
ಪುತ್ರನ ವಿವಾಹಕ್ಕೆ ಆಮಂತ್ರಿಸಲು ಪ್ರಧಾನಿ ಮೋದಿಯನ್ನು ಭೇಟಿಯಾದ ಸಚಿನ್ ತೆಂಡೂಲ್ಕರ್
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ಮಂಗಳವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂಧೋಕ್ ಅವರ ವಿವಾಹಕ್ಕೆ ಆಹ್ವಾನಿಸಿದರು. ಅರ್ಜುನ್, ಸಚಿನ್ ಪುತ್ರಿ ಸಾರಾ ಹಾಗೂ ಪತ್ನಿ ಅಂಜಲಿ ಅವರೂ ಜೊತೆಗಿದ್ದರು. “ಪ್ರಧಾನಿ ನರೇಂದ್ರ ಮೋದಿಯವರನ್ನು ಅರ್ಜುನ್–ಸಾನಿಯಾ ವಿವಾಹಕ್ಕೆ ಆಹ್ವಾನಿಸುವ ಗೌರವ ನಮ್ಮದು. ಯುವ ಜೋಡಿಗೆ ಆಶೀರ್ವಾದ ಮತ್ತು ಚಿಂತನಾ ಪೂರ್ವಕ ಸಲಹೆಗಳಿಗಾಗಿ ಮೋದಿಯವರಿಗೆ ಧನ್ಯವಾದಗಳು,” ಎಂದು ಸಚಿನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವಿವಾಹ ಕಾರ್ಯಕ್ರಮದ ಸಡಗರ ಮಾರ್ಚ್ 3ರಿಂದ ಆರಂಭವಾಗಲಿದ್ದು, ಮುಖ್ಯ ಸಮಾರಂಭ ಮಾರ್ಚ್ 5ರಂದು ನಡೆಯಲಿದೆ. ತೆಂಡೂಲ್ಕರ್ ಕುಟುಂಬ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಿ ಆಹ್ವಾನಿಸಿತು. ಇದನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಸಚಿನ್, “ಕಳೆದ ಫೆಬ್ರವರಿಯಲ್ಲಿ ಘನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ನಮಗೆ ರಾಷ್ಟ್ರಪತಿ ಭವನದಲ್ಲಿ ಔತಣ ನೀಡಿದ್ದರು. ಇಂದು ಅರ್ಜುನ್–ಸಾನಿಯಾ ವಿವಾಹಕ್ಕೆ ಆಹ್ವಾನಿಸಲು ರಾಷ್ಟ್ರಪತಿಗಳನ್ನು ಭೇಟಿಯಾದಾಗ ಆ ನೆನಪುಗಳು ಮರುಕಳಿಸಿದವು. ಆತ್ಮೀಯ ಶುಭಾಶಯಗಳಿಗಾಗಿ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಧನ್ಯವಾದಗಳು,” ಎಂದು ಬಣ್ಣಿಸಿದ್ದಾರೆ.
Tirupati laddu: ತಿರುಪತಿ ಲಡ್ಡು ವಿತರಣೆಯಲ್ಲಿ ಹೊಸ ಬದಲಾವಣೆ: ಕೌಂಟರ್ಗಳಲ್ಲೇ QR ಕೋಡ್ ಮೂಲಕ UPI ಪಾವತಿ
Tirupati laddu: ತಿರುಪತಿಯ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ನಿಂದ ಭರ್ಜರಿ ಗುಡ್ನ್ಯೂಸ್ ನೀಡಲಾಗಿದೆ. ಪ್ರಸಿದ್ಧ ತಿರುಮಲ ಲಡ್ಡು ಪ್ರಸಾದ ವಿತರಣೆಯಲ್ಲಿ ವಿನೂನ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಟ್ರಸ್ಟ್ ಮುಂದಾಗಿದೆ. ಇದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ವಿಶ್ವ ಪ್ರಸಿದ್ಧ ತಿರುಪತಿಯ ದೇವಸ್ಥಾನದಲ್ಲಿ ನೀಡುವ ಲಡ್ಡುಗೆ ಭಾರೀ ಬೇಡಿಕೆ ಇದೆ. ಇದೀಗ ಲಡ್ಡು ವಿತರಣೆ ಪ್ರಕ್ರಿಯೆಯನ್ನು ಇನ್ನಷ್ಟು
12 ಸಾಮಾಜಿಕ ಭದ್ರತಾ ಯೋಜನೆಗಳಡಿ ವೆಚ್ಚವಾಗದೆ ಉಳಿದ 1,898.92 ಕೋ.ರೂ.
ಬೆಂಗಳೂರು : 2025-26ನೇ ಸಾಲಿಗೆ ಸಂಬಂಧಿಸಿದಂತೆ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಸೇರಿದಂತೆ 12 ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲು ಆಯವ್ಯಯ ಅಂದಾಜಿನ ಪೈಕಿ ಇನ್ನೂ 1,898.92 ಕೋಟಿ ರೂ. ಇನ್ನೂ ವೆಚ್ಚವಾಗಿಲ್ಲ. 2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2026 ಫೆ.10ರಂದು ನಡೆದ ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ಪ್ರಾತ್ಯಕ್ಷಿಕೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಗೆ ಪ್ರಸ್ತುತಪಡಿಸಿರುವ ಪ್ರಾತ್ಯಕ್ಷಿ ಕೆಯು he-file.inಗೆ ಲಭ್ಯವಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಒಟ್ಟು 12 ಸಾಮಾಜಿಕ ಭದ್ರತೆ ಯೋಜನೆಗಳಿಗೆ 2025-26ರಲ್ಲಿ ಒಟ್ಟು 10,706.92 ಕೋಟಿ ರೂ. ಅಂದಾಜಿಸಲಾಗಿತ್ತು. ಈ ಅಂದಾಜಿನ ಪೈಕಿ ಈವರೆಗೆ 8,808.53 ಕೋಟಿ ರೂ. ವೆಚ್ಚವಾಗಿದೆ. ವೆಚ್ಚಕ್ಕೆ 1,898.92 ಕೋಟಿ ರೂ. ಬಾಕಿ ಇರುವುದು ಗೊತ್ತಾಗಿದೆ. 2026-27ನೇ ಸಾಲಿಗೆ 12 ಸಾಮಾಜಿಕ ಭದ್ರತೆ ಯೋಜನೆಗಳಿಗೆ 12,157.31 ಕೋಟಿ ರೂ. ಬೇಡಿಕೆಯನ್ನು ಇರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ 20262-27ನೇ ಸಾಲಿಗೆ 1,457.12 ಕೋಟಿ ರೂ.ನಷ್ಟು ಹೆಚ್ಚುವರಿ ಅನುದಾನ ಕೋರಿರುವುದು ಪ್ರಾತ್ಯಕ್ಷಿಕೆಯಿಂದ ತಿಳಿದು ಬಂದಿದೆ. <2025-26ರ ಅಂದಾಜಿನಲ್ಲೇನಿತ್ತು?: ವೃದ್ಧಾಪ್ಯ ವೇತನಕ್ಕೆ 2,592.75 ಕೋಟಿ ರೂ. , ಸಂಧ್ಯಾ ಸುರಕ್ಷಾ ಯೋಜನೆಗೆ 4,363.32 ಕೋಟಿ ರೂ., ವಿಧವಾ ವೇತನಕ್ಕೆ 1,873.87 ಕೋಟಿ ರೂ., ಅಂಗವಿಕಲ ವೇತನಕ್ಕೆ 1,557.50 ರೂ., ಮೈತ್ರಿ ಯೋಜನೆಗೆ 2.54 ರೂ., ಮನಸ್ವಿನಿ ಯೋಜನೆಗೆ 159.67ರೂ., ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಸಹಾಯ ಧನಕ್ಕೆಂದು 0.73 ರೂ., ರೈತ ವಿಧವಾ ಪಿಂಚಣಿಗೆಂದು 17. 09 ಕೋಟಿ ರೂ., ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನಕ್ಕೆ 29.79 ಕೋಟಿ ರೂ., ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ 40.13 ಕೋಟಿ ರೂ., ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ 7.29 ಕೋಟಿ ರೂ., ಮಾಜಿ ದೇವದಾಸಿಯರ ಮಾಸಾಶನ ಯೋಜನೆಗೆ 62.24 ಕೋಟಿ ರೂ.ಸೇರಿ 10,706.92 ಕೋಟಿ ರೂ. ಅಂದಾಜಿಸಿತ್ತು. ಸಾಮಾಜಿಕ ಭದ್ರತೆ ಅಡಿಯಲ್ಲಿ ಮಾಸಾಶನ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದಲ್ಲಿ 30,243.8 ಕೋಟಿ ರೂ. ಖರ್ಚಾಗಿದೆ. ಈ ಮೂರು ವರ್ಷದಲ್ಲಿ 244.81 ಕೋಟಿ ರೂ.ಗಳನ್ನು ಖರ್ಚು ಮಾಡದೇ ಉಳಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರ ಒದಗಿಸಿರುವುದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಈ ಹಣವು ಖರ್ಚಾಗಿಲ್ಲ ಎಂಬ ಮಾಹಿತಿಯನ್ನು ಉತ್ತರದಲ್ಲಿ ಒದಗಿಸಿರಲಿಲ್ಲ. ವೃದ್ಧಾಪ್ಯ ವೇತನದಡಿಯಲ್ಲಿ 60ರಿಂದ 64 ವರ್ಷ ವಯಸ್ಸಿನವರಿಗೆ ತಿಂಗಳಿಗೆ 600 ರೂ. ಮತ್ತು 65 ವರ್ಷ ಮೇಲ್ಪಟ್ಟವರಿಗೆ 1,200 ರೂ. ಪಿಂಚಣಿ ನೀಡುತ್ತಿದೆ. ಕಳೆದ 3 ವರ್ಷಗಳಲ್ಲಿ ವೃದ್ಧಾಪ್ಯ ವೇತನಕ್ಕೆ 6,894.06 ಕೋಟಿ ರೂ. ಅನದಾನ ಹಂಚಿಕೆಯಾಗಿತ್ತು. ಈ ಪೈಕಿ 67.15 ಕೋಟಿ ರೂ.ಖರ್ಚಾಗದೇ ಬಾಕಿ ಉಳಿದಿತ್ತು. 2026-27ರ ಅಂದಾಜಿನಲ್ಲೆೇನಿದೆ? ವೃದ್ಧಾಪ್ಯ ವೇತನಕ್ಕೆ 3,015.81 ಕೋಟಿ ರೂ., ಸಂಧ್ಯಾ ಸುರಕ್ಷಾ ಯೋಜನೆಗೆ 4,990.41 ಕೋಟಿ ರೂ., ವಿಧವಾ ವೇತನಕ್ಕೆ 1,976.66 ಕೋಟಿ ರೂ., ಅಂಗವಿಕಲ ವೇತನಕ್ಕೆ 1759.73 ಕೋಟಿ ರೂ., ಮೈತ್ರಿ ಯೋಜನೆಗೆ 4.60 ಕೋಟಿ ರೂ., ಮನಸ್ವಿನಿ ಯೋಜನೆಗೆ 154.78 ಕೋಟಿ ರೂ., ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಸಹಾಯ ಧನಕ್ಕೆಂದು 0.92 ಕೋಟಿ ರೂ., ರೈತ ವಿಧವಾ ಪಿಂಚಣಿಗೆಂದು 20.10 ಕೋಟಿ ರೂ., ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನಕ್ಕೆ 33.92 ಕೋಟಿ ರೂ., ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ 39.02 ಕೋಟಿ ರೂ., ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ 6.56 ಕೋಟಿ ರೂ., ಮಾಜಿ ದೇವದಾಸಿಯರ ಮಾಸಾಶನ ಯೋಜನೆಗೆ 64.80 ಕೋಟಿ ರೂ.ಸೇರಿ 12,157.31 ಕೋಟಿ ರೂ. ಅಂದಾಜಿಸಿರುವುದು ಗೊತ್ತಾಗಿದೆ. ರಾಜ್ಯದಲ್ಲಿ ಸದ್ಯ 1,200 ರೂ. ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯಿತ್ತು. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿಯೂ ಇತ್ತು. 2024-25ನೇ ಸಾಲಿನಿಂದಲೇ ಹೆಚ್ಚಳ ಮಾಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಆದರೀಗ ಈ ಮೊತ್ತವನ್ನು ಹೆಚ್ಚಳ ಮಾಡುವ ಪ್ರಸ್ತಾವವೇ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು. 2025-26ನೇ ಸಾಲಿನಲ್ಲಿ ವೃದ್ಧಾಪ್ಯ ವೇತನಕ್ಕೆ 2,294.54 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಪೈಕಿ ಜೂನ್ ಅಂತ್ಯಕ್ಕೆ 232.59 ಕೋಟಿ ರೂ. ವೆಚ್ಚ ಮಾಡಿದ್ದರು.
ದೆಹಲಿ: ತೆರೆದ ಚರಂಡಿಗೆ ಬಿದ್ದು ವ್ಯಕ್ತಿ ಮೃತ್ಯು; ನಾಲ್ಕು ದಿನಗಳಲ್ಲಿ ಎರಡನೇ ದುರಂತ
ಹೊಸದಿಲ್ಲಿ: ರಾಷ್ಟ್ರರಾಜಧಾನಿಯ ಜನಕಪುರಿ ಪ್ರದೇಶದಲ್ಲಿ ಮುಚ್ಚದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಮೃತಪಟ್ಟ ನಾಲ್ಕು ದಿನಗಳಲ್ಲೇ, ತೆರೆದ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಜೀವ ಕಳೆದುಕೊಂಡ ಘಟನೆ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ರೋಹಿಣಿ ಸೆಕ್ಟರ್ 32 ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ 32 ವರ್ಷದ ವ್ಯಕ್ತಿಯೊಬ್ಬ ತೆರೆದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಶವವನ್ನು ಚರಂಡಿ ಹೊಂಡದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 7.45ರ ವೇಳೆಗೆ ಘಟನೆ ಕುರಿತು ಮಾಹಿತಿ ಬಂದಿದ್ದು, ಪರಿಹಾರ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರಾದ ಸುನೀಲ್ ಕುಮಾರ್ ಅವರ ಪ್ರಕಾರ, ಮೃತಪಟ್ಟ ವ್ಯಕ್ತಿಯನ್ನು ಬ್ರಿಜು ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ಸಮಸ್ತಿಪುರ ಮೂಲದವನು. ಘಟನೆ ಕುರಿತು 112 ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿ, ಅಧಿಕಾರಿಗಳಿಂದ ಸಕಾಲಿಕ ನೆರವು ಸಿಗಲಿಲ್ಲ ಎಂದು ಆಪಾದಿಸಿದ್ದಾರೆ. “ವ್ಯಕ್ತಿಯೊಬ್ಬ ಹೊಂಡದಲ್ಲಿ ಬಿದ್ದಿದ್ದಾನೆ ಎಂದು ತಿಳಿದುಬಂತು. ಆದರೆ ಪೊಲೀಸರು ಯಾವುದೇ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ನಾನು ಇಲ್ಲಿ ಬಂದ ಬಳಿಕ 112ಕ್ಕೆ ಕರೆ ಮಾಡಿದೆ. ಆ ಬಳಿಕ ಇಡೀ ಇಲಾಖೆ ಬಂತು. ನಾನು ಇಲ್ಲಿಗೆ ಬರುವ ವೇಳೆಗೆ ಹಲವು ಅಧಿಕಾರಿಗಳು ಇದ್ದರು. ಈ ವ್ಯಕ್ತಿ ನಿನ್ನೆದಿಂದಲೇ ಹೊಂಡದಲ್ಲಿ ಬಿದ್ದಿದ್ದ. ಆತನ ಸ್ನೇಹಿತರು ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ನಾನು ಮಾಹಿತಿ ನೀಡಿದ ಬಳಿಕವಷ್ಟೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು,” ಎಂದು ತೇಜಪಾಲ್ ಯಾದವ್ ಹೇಳಿದ್ದಾರೆ. ಕಳೆದ ಶುಕ್ರವಾರ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ದೆಹಲಿ ಜಲ ಮಂಡಳಿ ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದ ಜೋಗಿಂದರ್ ಸಿಂಗ್ ಮಾರ್ಗ್ ಬಳಿ ತೋಡಿದ್ದ ತೆರೆದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು.
ಲಂಡನ್ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಇರಿದ ಅಪ್ರಾಪ್ತ ಬಾಲಕ!
ಲಂಡನ್: ವಾಯವ್ಯ ಲಂಡನ್ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಇರಿದು ಪರಾರಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಲಾಗಿದ್ದು, ದಾಳಿಯ ಘಟನಾವಳಿ ಬಗ್ಗೆ ಆತಂಕಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಭಯೋತ್ಪಾದಕ ವಿರೋಧಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸುಮಾರು 13 ವರ್ಷ ವಯಸ್ಸಿನ ಆರೋಪಿ ಬಾಲಕ ಕಿಂಗ್ಸ್ ಬರಿ ಹೈಸ್ಕೂಲ್ ನಲ್ಲಿ ತನ್ನದೇ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಪೊಲೀಸರು ಕೆಲ ಘಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನು ಬಂಧಿಸಿದ್ದು, 12 ಮತ್ತು 13 ವರ್ಷ ವಯಸ್ಸಿನ ಸಂತ್ರಸ್ತ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ದಾಳಿಗೆ ಬಳಸಿದ ಆಯುಧ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕೊಲೆ ಯತ್ನ ಆರೋಪದಲ್ಲಿ ಬಂಧಿಸಲಾಗಿದ್ದು, ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗುಪ್ತಚರ ವಿಭಾಗದ ಮುಖ್ಯ ಅಧೀಕ್ಷಕ ಲೂಕ್ ವಿಲಿಯಮ್ಸ್ ಹೇಳಿದ್ದಾರೆ. ದಾಳಿಯ ಉದ್ದೇಶದ ಬಗ್ಗೆ ಪೊಲೀಸರು ಮುಕ್ತ ವಿಚಾರಣೆನಡೆಸುತ್ತಿದ್ದು, ದಾಳಿಯನ್ನು ಉಗ್ರರ ಕೃತ್ಯ ಎಂದು ಘೋಷಿಸಿಲ್ಲ. ಭಯೋತ್ಪಾದನೆ ತಡೆ ಅಧಿಕಾರಿಗಳು ತನಿಖೆಯ ನೇತೃತ್ವ ವಹಿಸಿದ್ದು, ಇತರ ಶಂಕಿತರು ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ಬಗ್ಗೆ ಶಾಲೆ ಮತ್ತು ಸ್ಥಳೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಎಲ್ಲ ನೆರವು ನೀಡಲಾಗುವುದು ಎಂದು ಶಿಕ್ಷಣ ಕಾರ್ಯದರ್ಶಿ ಬ್ರಿಡೆಟ್ ಫಿಲಿಪ್ಸನ್ ಹೇಳಿದ್ದಾರೆ.
ಶುರುವಾಯ್ತು ಉತ್ತರ ಕರ್ನಾಟಕದಲ್ಲಿ ಬಿಸಿಲು! 30 ಡಿಗ್ರಿ ದಾಟಿದ ಉಷ್ಣಾಂಶ, ಧಗೆಗೆ ಜನ ಕಂಗಾಲು
ಬೇಸಿಗೆ ಆರಂಭಕ್ಕೂ ಮುನ್ನವೇ ಉತ್ತರ ಕರ್ನಾಟಕದಲ್ಲಿ ಬಿಸಿ ಏರಲು ಆರಂಭ ಆಗಿದ್ದು, ಬೇಸಿಗೆ ವೇಳೆಗೆ ಉಷ್ಣಾಂಶ ಈ ಬಾರಿ 43 ಡಿಗ್ರಿ ದಾಟುವ ಮುನ್ಸೂಚನೆ ಕೊಡುತ್ತಿದೆ.
KSDL: 57 ಹೊಸ ಉತ್ಪನ್ನಗಳ ಬಿಡುಗಡೆ, ಐಕಾನಿಕ್ ಉತ್ಪನ್ನಗಳಿಗೆ ಭಾರೀ ಬೇಡಿಕೆ, ರಫ್ತು ಹೆಚ್ಚಳದ ಗುರಿ, ಹೊಸ ಯುಗ ಶುರು
ಬೆಂಗಳೂರು: ಕರುನಾಡಿನ ಐಕಾನಿಕ್ ಮತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಉತ್ಪನ್ನ 'ಮೈಸೂರು ಸ್ಯಾಂಡಲ್ ಸೋಪ್' ಮತ್ತು ಕೆಎಸ್ಡಿಎಲ್ ಉತ್ಪನ್ನಗಳಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅವರ ಅಧಿಕೃತ ಘೋಷಣೆ ಜೊತೆಗೆ ಕೆಎಸ್ಡಿಎಲ್ ಸಂಸ್ಥೆಯ ಹೊಸ ರೂಪದ 57
ಪರೀಕ್ಷಾ ದಿನ ಅನಾರೋಗ್ಯವಾಗಿ ಪರೀಕ್ಷೆ ಮಿಸ್ ಆದ್ರೆ ಮುಂದೇನು? CBSE ನಿಯಮದಲ್ಲೇನಿದೆ? ಇಲ್ಲಿದೆ ಉತ್ತರ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಸಿಲಬಸ್, ರಿವಿಷನ್, ಪರೀಕ್ಷೆ ವೇಳಾಪಟ್ಟಿಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಹಜ. ಆದರೆ, ಚರ್ಚೆಯಾಗದ ಒಂದು ಮಹತ್ವದ ವಿಷಯವೆಂದರೆ, ಒಂದು ವೇಳೆ ಪರೀಕ್ಷೆಯ ದಿನದಂದೇ ವಿದ್ಯಾರ್ಥಿ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಅಥವಾ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನಾಗುತ್ತದೆ? ಎಂಬುದು.
ದಕ್ಷಿಣ ರೈಲ್ವೆ ವಿಭಾಗದಲ್ಲಿ ಒಟ್ಟು 30 ಕಡೆಗಳಲ್ಲಿ ಈ ಅತ್ಯಾಧುನಿಕ ಲಗೇಜ್ ಲಾಕರ್ ವ್ಯವಸ್ಥೆ ಈಗ ಜಾರಿಯಾದಂತಾಗಿದೆ. ಈ ಪೈಕಿ ಕೇರಳ ಎರಡು ರೈಲು ನಿಲ್ದಾಣಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಬೆಲೆಯೂ ಕೈಗೆಟಕುವ ದರದಲ್ಲಿದ್ದು, ಜನರಿಗೆ ಹೋಟಲ್ ಮಾಡುವ ಬವಣೆ ತಪ್ಪಲಿದೆ.
ರಷ್ಯಾದಿಂದ ತೈಲ ಆಮದು ನಿಲುಗಡೆಗೆ ಅಮೆರಿಕದ ಕೊಡುಗೆ ನಿರೀಕ್ಷೆ; ಭಾರತಕ್ಕೆ ವಾಪಸ್ ಬರಲಿದೆ 40 ಸಾವಿರ ಕೋಟಿ?
ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ ಅನೇಕ ರೀತಿಯ ನಿರೀಕ್ಷೆಗಳು ಗರಿಗೆದರಿವೆ. ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕ ವಿಧಿಸಿದ್ದ ಶೇ. 25ರಷ್ಟು ದಂಡ ರೂಪದ ಸುಂಕವನ್ನು, ತೈಲ ಆಮದು ನಿಲುಗಡೆ ಭರವಸೆ ಮೇಲೆ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕವು ಭಾರತಕ್ಕೆ 40 ಸಾವಿರ ಕೋಟಿ ರೂ.ಗಳನ್ನು ಮರುಪಾವತಿ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತವೆ. ಏನಿದು? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು ದಕ್ಷಿಣ ಜಿಲ್ಲೆಯ 83 ಗ್ರಾಪಂ ಅಧ್ಯಕ್ಷರ ಅಧಿಕಾರಾವಧಿ ಅಂತ್ಯ; ಆಡಳಿತಾಧಿಕಾರಿ ನೇಮಿಸಿ ಆದೇಶ
ರಾಜ್ಯದೆಲ್ಲೆಡೆ ಈಗ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆಗೂ ಮೊದಲು ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 83 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು, ಈ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಯಾವೆಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾಧಿಕಾರಿಗಳ ದರ್ಬಾರ್ ಆರಂಭವಾಗಲಿದೆ? ಈ ಕುರಿತು ಇಲ್ಲಿದೆ ಸಮಗ್ರ ಮಾಹಿತಿ.
ಬೆಂಗಳೂರು : ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬಿಐಎಎಲ್, ಜಾಗತಿಕ ನಿರ್ಧಾರ ವಿಜ್ಞಾನ ಕಂಪೆನಿಯಾದ ‘ಮ್ಯೂ ಸಿಗ್ಮಾ’ ಜೊತೆಗೆ ಮಹತ್ವದ ಕಾರ್ಯತಂತ್ರದ ಸಹಭಾಗಿತ್ವವನ್ನು ಮಾಡಿಕೊಂಡಿದೆ. ದತ್ತಾಂಶ ಆಧಾರಿತ ನಿರ್ಧಾರಗಳನ್ನು ಬಳಸಿಕೊಂಡು ವಿಮಾನ ನಿಲ್ದಾಣವನ್ನು ಗ್ರಾಹಕ ಸ್ನೇಹಿ ‘ವಿಮಾನ ನಿಲ್ದಾಣ’ವನ್ನಾಗಿ ಮರುರೂಪಿಸುವುದು ಈ ಸಹಭಾಗಿತ್ವದ ಉದ್ದೇಶ. ಇಲ್ಲಿ ಪ್ರತಿಯೊಂದು ಸಂವಹನವು ನೈಜ-ಸಮಯದ ಒಳನೋಟಗಳಿಂದ ರೂಪುಗೊಳ್ಳಲಿದ್ದು, ಪ್ರತಿ ಪ್ರಯಾಣಿಕರ ಅಗತ್ಯಗಳ ಸುತ್ತ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಸುಧಾರಿತ ವಿಶ್ಲೇಷಣಾ ಮಾದರಿಗಳನ್ನು ಬಳಸಿಕೊಂಡು, ವಿಮಾನ ನಿಲ್ದಾಣದ ಕಾರ್ಯಾಚರಣೆಯ ದತ್ತಾಂಶಗಳನ್ನು ಒಗ್ಗೂಡಿಸಿ ವಿಶ್ಲೇಷಿಸುವ ಮೂಲಕ ಮ್ಯೂ ಸಿಗ್ಮಾ ಸಂಸ್ಥೆಯ ನಿರ್ಧಾರ ಕೃತಕ ಬುದ್ಧಿಮತ್ತೆ (ಎಐ) ಪ್ರಯಾಣಿಕರ ಅನುಕೂಲತೆಗಳನ್ನು ಹೆಚ್ಚಿಸಲು ನೆರವಾಗಲಿದೆ. ವಿಶೇಷವೆಂದರೆ, ಇದು ಪ್ರಯಾಣಿಕರ ಪಾಲಿಗೆ ವಿಮಾನ ನಿಲ್ದಾಣವು ಕೇವಲ ಸಂಚಾರ ಕೇಂದ್ರವಷ್ಟೇ ಅಲ್ಲದೆ, ಸಮಗ್ರ ಅನುಭವ ಕೇಂದ್ರವನ್ನಾಗಿ ಮಾರ್ಪಡಿಸಲು ಸಹಕರಿಸಲಿದೆ. ಪ್ರಯಾಣಿಕರ ಹಿತಕ್ಕೆ ಆದ್ಯತೆ ನೀಡುವ ಗುರಿ ಹೊಂದಿರುವ ಈ ಉಪಕ್ರಮವು, ಅತಿಥಿಗಳ ಹಿತವೇ ಮೊದಲು ಎಂಬ ಉದ್ದೇಶದಡಿ, ವಿಮಾನ ನಿಲ್ದಾಣದಲ್ಲಿನ ಪ್ರತಿಯೊಂದು ಸಂವಹನ ಬಿಂದುವನ್ನು ಇನ್ನಷ್ಟು ಚುರುಕು ಮತ್ತು ಅರ್ಥಗರ್ಭಿತವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿವೆ. ಮುನ್ಸೂಚನೆಯ ವಿಶ್ಲೇಷಣೆಯು ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಪಾರ್ಕಿಂಗ್ನಲ್ಲಿ ಸರತಿ ಸಾಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಗಳೂರಿನಲ್ಲಿ ನಾವು ವಿಮಾನ ನಿಲ್ದಾಣದ ಅನುಭವವನ್ನು ಮರು ವ್ಯಾಖ್ಯಾನಿಸಲು ಬದ್ಧರಾಗಿದ್ದೇವೆ. ಮ್ಯೂ ಸಿಗ್ಮಾ ಜೊತೆಗಿನ ನಮ್ಮ ಸಹಯೋಗವು ಈ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. -ಜಾರ್ಜ್ ಫ್ಯಾಂಥಮ್, ಮುಖ್ಯ ತಾಂತ್ರಿಕ ಅಧಿಕಾರಿ, ಬಿಐಎಎಲ್
ಶೇ.100ರಷ್ಟು ಉದ್ಯೋಗ ನೀಡುತ್ತಿರುವ ಬೆಂಗಳೂರಿನ ʼಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ʼ ಸಂಸ್ಥೆ
ಬೆಂಗಳೂರು : ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿ ಬರುವ ಬೆಂಗಳೂರಿನಲ್ಲಿರುವ ʼಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ʼ ಸಂಸ್ಥೆಯಲ್ಲಿ (ಐಎಚ್ಎಂ) ಓದುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತಿದ್ದು, ದೇಶದ ಉನ್ನತ ಆತಿಥ್ಯ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದಿದೆ ಎಂದು ಭಾರತ ಪ್ರವಾಸೋದ್ಯಮದ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಮತ್ತು ಐಎಚ್ಎಂನ ಪ್ರಾಂಶುಪಾಲ ಡಿ.ವೆಂಕಟೇಶನ್ ಹೇಳಿದ್ದಾರೆ. ಮಂಗಳವಾರ ಇಲ್ಲಿನ ಐಎಚ್ಎಂನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂಸ್ಥೆಯು ರಾಷ್ಟ್ರೀಯ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರಜ್ಞಾನ ಮಂಡಳಿಯೊಂದಿಗೆ(ಎನ್ಸಿಎಚ್ಎಂಸಿಟಿ) ಸಂಯೋಜನೆಗೊಂಡಿದ್ದು, ಆತಿಥ್ಯ ಮತ್ತು ಹೋಟೆಲ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಅಲ್ಪಾವಧಿಯ ಪ್ರಮಾಣೀಕರಣ ಕೋರ್ಸ್ಗಳು ಸೇರಿ ವೈವಿಧ್ಯಮಯ ಕೋರ್ಸ್ಗಳನ್ನು ಒದಗಿಸುತ್ತದೆ ಎಂದರು. ಸಂಸ್ಥೆಯಲ್ಲಿ ಒದಗಿಸುವ ಕೋರ್ಸ್ಗಳ ಪಠ್ಯಕ್ರಮವು ಬಹುತೇಕ ಪ್ರಾಯೋಗಿಕ ತರಬೇತಿಯಾಗಿದೆ. ಇಲ್ಲಿನ ಪದವೀಧರರು ಆರಂಭದಿಂದಲೂ ಹೋಟೆಲ್ ಉದ್ಯಮಕ್ಕೆ ಸಿದ್ಧರಾಗಿರುತ್ತಾರೆ. ಹೀಗಾಗಿ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದರು. 2002ರಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಉದ್ಯೋಗ ಕೋಶವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದು ಪ್ರಮುಖ ಹೋಟೆಲ್ ಸರಣಿಗಳು, ಕ್ರೂಸ್ ಲೈನರ್ಗಳು ಮತ್ತು ಆತಿಥ್ಯ ಉದ್ಯಮಗಳಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉದ್ಯೋಗಗಳನ್ನು (ಪ್ಲೇಸ್ ಮೆಂಟ್) ನಿರಂತರವಾಗಿ ನೀಡುತ್ತಿದೆ. ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಆತಿಥ್ಯ, ಪಾಕಶಾಲೆಯ ಕಲೆಗಳು, ಉದ್ಯಮಶೀಲತೆ ಮತ್ತು ಐಷಾರಾಮಿ ಚಿಲ್ಲರೆ ವ್ಯಾಪಾರ ವಲಯಗಳಲ್ಲಿನ ಸಾಧನೆ ಮಾಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 1969ರಲ್ಲಿ ಫುಡ್ ಕ್ರಾಫ್ಟ್ ಇನ್ಸ್ಟ್ಟಿಟ್ಯೂಟ್ ಆಗಿ ಸ್ಥಾಪನೆಯಾದ ಐಎಚ್ಎಂ ಬೆಂಗಳೂರು ಭಾರತದ ಆತಿಥ್ಯ ಸಂಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ಆತಿಥ್ಯ ಶಿಕ್ಷಣದಲ್ಲಿನ ಶ್ರೇಷ್ಠತೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಾರ್ಯಾಗಾರಗಳು, ವಿದ್ಯಾರ್ಥಿ ಕ್ಲಬ್ಗಳು, ಪರಂಪರೆಯ ವಾರದ ಆಚರಣೆಗಳು ಮತ್ತು ಶೈಕ್ಷಣಿಕ ಪ್ರವಾಸಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ವಿವರಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯುವುದಾಗಿ ಬಜೆಟ್ನಲ್ಲಿ ಘೋಷಿಸಿ : ವಿ.ಪಿ.ನಿರಂಜನಾರಾಧ್ಯ
ಬೆಂಗಳೂರು : ರಾಜ್ಯ ಸರಕಾರವು ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಮ್ಯಾಗ್ನೆಟ್ ಯೋಜನೆಯನ್ನು ಜಾರಿ ಮಾಡುವ ಮೂಲಕ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಹೀಗಾಗಿ ಯೋಜನೆಯನ್ನು ಹಿಂಪಡೆಯುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಬೇಕು ಎಂದು ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಆಗ್ರಹಿಸಿದ್ದಾರೆ. ಮಂಗಳವಾರ ಇಲ್ಲಿನ ಗಾಂಧಿಭವನದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಸ್ಎಫ್ಐ, ಎಐಡಿಎಸ್ಓ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದ ‘ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರವೇ ಶಿಕ್ಷಣ ಹಕ್ಕು ಕಾಯ್ದೆ ತಂದಿದ್ದು, ಅದರ ವಿರುದ್ಧವೇ ರಾಜ್ಯ ಸರಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ಈ ಯೋಜನೆಯನ್ನು ಅನುಷ್ಟಾನ ಮಾಡುತ್ತಿದೆ. ಒಂದೇ ಒಂದು ಸರಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿ, ಸುತ್ತೋಲೆಗಳ ಮೂಲಕ ಶಾಲೆಗಳನ್ನು ವಿಲೀನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಹಳ್ಳಿಗಳಲ್ಲಿನ ಶಾಲೆಗಳು ನಾಶವಾದರೆ, ಹಳ್ಳಿಗಳ ಸಾಂಸ್ಕೃತಿಕ ಮೌಲ್ಯಗಳು ನಾಶವಾಗುತ್ತದೆ. ಶಾಲೆ ಕೇವಲ ವಿದ್ಯಾ ಕೇಂದ್ರ ಮಾತ್ರವಲ್ಲ, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳಿಗೂ ಕೇಂದ್ರ ಸ್ಥಾನವಾಗಿದೆ. ಇಂತಹ ಅಸ್ತಿತ್ವವನ್ನು ನಾಶ ಮಾಡುತ್ತಿರುವುದು ಖಂಡನೀಯ. ಹೀಗಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ ಮಾತನಾಡಿ, ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಸರಕಾರದ ಶಿಕ್ಷಣ ನೀತಿಯಿಂದ ಹಿಡಿದು ಬಿಜೆಪಿಯ ಮೋದಿ ಸರಕಾರದ ನೀತಿಯವರೆಗೂ ಶಿಕ್ಷಣವನ್ನು ಬಂಡವಾಳಿಗರ ಪರವಾಗಿ ರೂಪಿಸಲಾಗಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈ ಬಂಡವಾಳಿಗರ ನೀತಿಗೆ ಹೊಸ ಸೇರ್ಪಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಸಂಘಟನೆಯ ಸುನಂದಾ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ರೀತಿ ಕೆಲಸ ಮಾಡುತ್ತಿವೆ. ಒಂದೆಡೆ ರೈತ ಮತ್ತು ಕಾರ್ಮಿಕ ವಿರೋಧಿ ಕರಾಳ ನೀತಿಗಳ ಮೂಲಕ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇನ್ನೊಂದೆಡೆ ಅವರ ಮಕ್ಕಳ ಶಿಕ್ಷಣವನ್ನು ನುಂಗಲು ಹುನ್ನಾರ ನಡೆಸಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಬಿಸಿಯೂಟದ ಸಂಘಟನೆಯ ಮಾಲಿನಿ ಮೇಸ್ತ ಮಾತನಾಡಿ, ಕರ್ನಾಟಕದಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೇ.22ಕ್ಕೆ ಏರಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಮಾಡಿದರೆ ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೊಳಿಯುತ್ತಾರೆ. ಅಷ್ಟೇ ಅಲ್ಲದೆ 40 ಸಾವಿರಕ್ಕೂ ಅಧಿಕ ಬಿಸಿಯೂಟದ ಕಾರ್ಯಕರ್ತರ ಬದುಕು ಬೀದಿಗೆ ಬರುತ್ತದೆ ಎಂದು ಹೇಳಿದರು. ಅಂಗನವಾಡಿ-ಬಿಸಿಯೂಟ ಸಂಘಟನೆಯ ರಾಜ್ಯ ಸಂಚಾಲಕ ಅಮ್ಜದ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರವು ಕೇಂದ್ರ ಬಿಜೆಪಿ ಸರಕಾರದ ಎನ್ಇಪಿ-2020ಯನ್ನು ವಿರೋಧಿಸುತ್ತಿದೆ. ಆದರೆ ಎನ್ಇಪಿ ಮಾದರಿಯಲ್ಲೇ ಶಾಲೆಗಳನ್ನು ಮುಚ್ಚಿ ಇಡೀ ಶೈಕ್ಷಣಿಕ ವಲಯವನ್ನೇ ನಾಶ ಮಾಡುತ್ತಿದೆ ಎಂದರು. ಎಐಟಿಯುಸಿನ ಶಾಂತರಾಜ್ ಜೈನ್, ಸ್ಕೀಮ್ ವರ್ಕರ್ಸ್ ಯೂನಿಯನ್ನ ಅಖಿಲ ಭಾರತ ಅಧ್ಯಕ್ಷೆ ರಮಾ ಟಿ.ಸಿ, ಎಐಡಿವೈಓನ ರಾಜ್ಯ ಉಪಾಧ್ಯಕ್ಷ ವಿನಯ್ ಸಾರಥಿ ಸೇರಿದಂತೆ ಮತ್ತಿತರರು ಇದ್ದರು. ಸಮಾವೇಶದ ನಿರ್ಣಯಗಳು •ಶಿಕ್ಷಣ ತಜ್ಞರು, ಪೋಷಕರ ಸಂಘದ ಅಧ್ಯಕ್ಷರು, ವಿದ್ಯಾರ್ಥಿ ಸಂಘಟನೆಯ ಮುಖಂಡರೊಂದಿಗೆ ಮುಖ್ಯಮಂತ್ರಿಗಳಿಗೆ ನಿಯೋಗ ಭೇಟಿ ಮಾಡುವುದು. •ರಾಜ್ಯಾದ್ಯಂತ ತಾಲೂಕು, ಹಳ್ಳಿಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಶಾಲೆ ಉಳಿಸಿ ಹೋರಾಟವನ್ನು ಕೈಗೊಳ್ಳಬೇಕು. •ಮಾರ್ಚ್ ಬಜೆಟ್ ಅಧಿವೇಶನದ ಪೂರ್ವದಲ್ಲಿ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯ ಮಟ್ಟದ ಜಂಟಿ ಬೃಹತ್ ಪ್ರತಿಭಟನೆ ಮಾಡುವುದು. •ರಾಜ್ಯ ಸರಕಾರವು ಎಡಿಬಿಯಿಂದ ಪಡೆದಿರುವ ಸಾಲ ಮತ್ತು ಷರತ್ತುಗಳನ್ನು ಸಾರ್ಜನಿಕವಾಗಿ ಬಹಿರಂಗಪಡಿಸಬೇಕು. •ಸರಕಾರಿ ಶಾಲೆಗಳನ್ನು ಬಲಪಡಿಸಬೇಕು.
T20 World Cup- ಅಮೆರಿಕವನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಪಾಕ್ ; ಸತತ 2 ಗೆಲುವು ಸೂಪರ್ 8ಗೇರಲು ಸಾಕೇ?
Pakistan Vs USA- 2024ರ ವಿಶ್ವಕಪ್ ನಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಸೋಲಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಈ ಸಲ ಉದ್ಘಾಟನಾ ಪಂದ್ಯದಲ್ಲೂ ಭಾರತಕ್ಕೆ ತೀವ್ರ ಪೈಪೋಟಿ ನೀಡಿತ್ತು. ಹೀಗಾಗಿ ಅಮೆರಿಕ ಮತ್ತು ಪಾಕಿಸ್ತಾನಗಳ ನಡುವೆ ಮಂಗಳವಾರ ನಡೆದ ಪಂದ್ಯದ ಬಗ್ಗೆ ಭಾರೀ ಕುತೂಹಲವಿತ್ತು. ಆದರೆ ಜಾಗರೂಕವಾಗಿ ಆಡಿದ ಪಾಕಿಸ್ತಾನ ತಂಡ ಪಂದ್ಯವನ್ನು 32 ರನ್ ಗಳಿಂದ ಗೆದ್ದುಕೊಂಡಿದೆ. ಮಾತ್ರವಲ್ಲದೆ ಸತತ 2ನೇ ಜಯದೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇ ಏರಿ ಕುಳಿತಿದೆ.
ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಮಂಗಳವಾರ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ಸಲ್ಲಿಸಿವೆ. ಓಂ ಬಿರ್ಲಾ ಪದಚ್ಯುತಗೊಳಿಸುವ ನೋಟಿಸ್ಗೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ಇದರಿಂದ ದೂರ ಉಳಿದಿದ್ದಾರೆ. ಡಿಎಂಕೆ ಮತ್ತು ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ಸೇರಿ ನೋಟಿಸ್ ನೀಡಿತು. ಆದಾಗ್ಯೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ಟಿಎಂಸಿ ಮೂಲಗಳು ತಿಳಿಸಿವೆ. “ ಮಂಗಳವಾರ ಮಧ್ಯಾಹ್ನ 1.14ಕ್ಕೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಹೇಳಿದರು. ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ, ಅದು ಸಂಸತ್ತಿನಲ್ಲಿ ಅವರ ಮೂಲಭೂತ ಪ್ರಜಾಪ್ರಭುತ್ವ ಹಕ್ಕು ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನೋಟಿಸ್ ಸಲ್ಲಿಸಲಾಗಿದೆ. ವಿರೋಧ ಪಕ್ಷವು ಲೋಕಸಭಾ ಸ್ಪೀಕರ್ ವಿರುದ್ಧದ ನೋಟಿಸ್ ಅನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿ ನಿಯಮಗಳ ಪ್ರಕಾರ ಮುಂದುವರಿಯಲಾಗುವುದು ಎಂದು ಲೋಕಸಭಾ ಸಚಿವಾಲಯದ ಮೂಲ ತಿಳಿಸಿರುವುದಾಗಿ The Indian Express ವರದಿ ಮಾಡಿದೆ. ಸಂವಿಧಾನದ 94 (ಸಿ) ವಿಧಿ ಅಡಿಯಲ್ಲಿ ಸಂಸದರು ಸ್ಪೀಕರ್ ಪದಚ್ಯುತಿಗೆ ನಿರ್ಣಯ ಮಂಡಿಸುವ ಉದ್ದೇಶದ ಲಿಖಿತ ಸೂಚನೆಯನ್ನು ಪ್ರಧಾನ ಕಾರ್ಯದರ್ಶಿಗೆ ಕನಿಷ್ಠ 14 ದಿನಗಳ ಮುಂಚಿತವಾಗಿ ನೀಡಬಹುದು. ವಿರೋಧ ಪಕ್ಷವು ಸಾಂವಿಧಾನಿಕ ಔಚಿತ್ಯದ ಬಗ್ಗೆ ತನ್ನ ನಂಬಿಕೆ ಇರಿಸಿದೆ. ಗೌರವಾನ್ವಿತ ಸ್ಪೀಕರ್ ಅವರನ್ನು ವೈಯಕ್ತಿಕವಾಗಿ ಪರಿಗಣಿಸಿದರೂ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ಸಂಸದರಿಗೆ ನಿರಂತರವಾಗಿ ಅವಕಾಶಗಳನ್ನು ನಿರಾಕರಿಸಲಾಗುತ್ತಿರುವುದರಿಂದ ನಮಗೆ ನೋವಾಗಿದೆ. ಹಲವು ವರ್ಷಗಳ ನಂತರ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. *ನೋಟಿಸ್ನಲ್ಲಿ ಏನಿದೆ? ನೋಟಿಸ್ನಲ್ಲಿ ವಿರೋಧ ಪಕ್ಷದ ನಾಯಕರು ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಫೆಬ್ರವರಿ 2 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ರಾಹುಲ್ ಗಾಂಧಿ ಅವರಿಗೆ ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಇದೇನು ಹೊಸತಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಹೆಚ್ಚಿನ ಬಾರಿ ಅವಕಾಶ ನೀಡಲಾಗುವುದಿಲ್ಲ ಎಂದು ಆರೋಪಿಸಲಾಗಿದೆ. ಫೆಬ್ರವರಿ 3 ರಂದು ಎಂಟು ವಿರೋಧ ಪಕ್ಷದ ಸಂಸದರನ್ನು ಇಡೀ ಬಜೆಟ್ ಅಧಿವೇಶನಕ್ಕೆ ಅನಿಯಂತ್ರಿತವಾಗಿ ಅಮಾನತುಗೊಳಿಸಲಾಗಿದೆ. ಅವರು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಲಾಗಿದೆ. ಫೆಬ್ರವರಿ 4 ರಂದು ಬಿಜೆಪಿ ಸಂಸದರೊಬ್ಬರು ಸ್ಥಾಪಿತ ಸಂಪ್ರದಾಯಗಳು ಮತ್ತು ಔಚಿತ್ಯದ ಮಾನದಂಡಗಳನ್ನು ನಿರ್ಲಕ್ಷಿಸಿದ್ದರೂ ಅದನ್ನು ಖಂಡಿಸದೆ ಇಬ್ಬರು ಮಾಜಿ ಪ್ರಧಾನ ಮಂತ್ರಿಗಳ ಮೇಲೆ ಸಂಪೂರ್ಣ ಆಕ್ಷೇಪಾರ್ಹ ಮತ್ತು ವೈಯಕ್ತಿಕ ದಾಳಿ ನಡೆಸಲು ಅನುಮತಿ ನೀಡಲಾಗಿದೆ. ನಮ್ಮ ವಿನಂತಿಯ ಹೊರತಾಗಿಯೂ ಈ ನಿರ್ದಿಷ್ಟ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ; ಅವರು ಪುನರಾವರ್ತಿತ ಅಪರಾಧಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಧನ್ಯವಾದ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ನಿಶಿಕಾಂತ್ ದುಬೆ ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಬಗ್ಗೆ ಮಾಡಿದ ಕೆಲವು ಹೇಳಿಕೆಗಳಿಗೆ ಪ್ರತಿಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದವು. ಅವುಗಳಲ್ಲಿ ಕೆಲವನ್ನು ತೆಗೆದುಹಾಕಲಾಗಿದ್ದರೂ ದಾಖಲೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರಿಸಲು ಲೋಕಸಭೆಗೆ ಬರದಂತೆ ಸಲಹೆ ನೀಡಿದ ಸ್ಪೀಕರ್ ಬಿರ್ಲಾ ಅವರ ನಿರ್ಧಾರವನ್ನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಗುರುವಾರ ಪ್ರಧಾನಿ ಮೋದಿ ಅವರು ಧನ್ಯವಾದ ನಿರ್ಣಯದ ಚರ್ಚೆಗೆ ಸಾಂಪ್ರದಾಯಿಕ ಉತ್ತರ ನೀಡುವ ನಿರೀಕ್ಷೆಯಿತ್ತು. ಆದರೆ ರಾಹುಲ್ ಗಾಂಧಿಯವರನ್ನು ಮಾತನಾಡಲು ಅನುಮತಿಸದಿದ್ದಕ್ಕಾಗಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಪ್ರಧಾನಿಯವರು ಸದನಕ್ಕೆ ಬರುವುದು ಬೇಡ ಎಂದು ನಾನು ಹೇಳಿದ್ದೆ ಎಂದು ಸ್ಪೀಕರ್ ಬಿರ್ಲಾ ಹೇಳಿದ್ದರು. ಲೋಕಸಭೆಯಲ್ಲಿ ಕೆಲವು ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಆಸನದ ಬಳಿಗೆ ಹೋಗಿ ಅನಿರೀಕ್ಷಿತ ಘಟನೆಗೆ ಕಾರಣರಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ನಡೆದಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿ ಉಂಟುಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯವರಲ್ಲಿ ಸಂಸತ್ತಿಗೆ ಬರುವುದು ಬೇಡ ಎಂದು ಹೇಳಿದ್ದೆ ಎಂದಿದ್ದರು. ಕಳೆದ ಗುರುವಾರ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ನಂತರ ಅವರು ಕಾಂಗ್ರೆಸ್ ಸಂಸದರ ವಿರುದ್ಧ ಸ್ಪಷ್ಟವಾಗಿ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ; ಅದು ಅವಹೇಳನಕಾರಿ ಸ್ವರೂಪದಲ್ಲಿತ್ತು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. “ಸದನದ ಕಾರ್ಯವಿಧಾನಗಳ ನಿಯಮಗಳು ಮತ್ತು ಸಂಸತ್ತಿನ ಶಿಷ್ಟಾಚಾರದ ಮಾನದಂಡಗಳ ಉಸ್ತುವಾರಿ ವಹಿಸಬೇಕಾದ ಸ್ಪೀಕರ್ ಅಂತಹ ಹೇಳಿಕೆಗಳನ್ನು ನೀಡಲು ಸದನವನ್ನು ಆಯ್ಕೆ ಮಾಡಿಕೊಂಡಿದ್ದಾರೆ; ಇದು ಈ ಸಾಂವಿಧಾನಿಕ ಹುದ್ದೆಯ ದುರುಪಯೋಗವನ್ನು ಸೂಚಿಸುತ್ತದೆ” ಎಂದು ನೋಟಿಸ್ನಲ್ಲಿ ಹೇಳಿದೆ. ಏತನ್ಮಧ್ಯೆ ಬಿಜೆಪಿಯ 11 ಮಹಿಳಾ ಸಂಸದರು ಸ್ಪೀಕರ್ಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರು ಈ ಹಿಂದೆ ಕಳುಹಿಸಿದ್ದ ಪತ್ರಕ್ಕೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಬಿರ್ಲಾ ಅವರು ಲೋಕಸಭೆಯ ಸಭಾಧ್ಯಕ್ಷರಾಗಿ ಏಳು ವರ್ಷಗಳ ಅವಧಿಯಲ್ಲಿ ಅದರ ಘನತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ. *ಸ್ಪೀಕರ್ ಅನ್ನು ಹುದ್ದೆಯಿಂದ ತೆಗೆದುಹಾಕಬಹುದಾದ ವಿವಿಧ ಷರತ್ತುಗಳು ಯಾವುವು? ಸಂವಿಧಾನದ 94ನೇ ವಿಧಿ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ಗಾಗಿ ನಿರ್ಗಮನ ಷರತ್ತುಗಳನ್ನು ವಿವರಿಸುತ್ತದೆ. 94 (ಎ) ಪ್ರಕಾರ ಅವರು ಸಂಸತ್ತಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರೆ ಅಥವಾ ಅನರ್ಹಗೊಂಡರೆ ಸ್ಪೀಕರ್ ಆಗಿ ಮುಂದುವರಿಯಲು ಸಾಧ್ಯವಿಲ್ಲ. ಸದಸ್ಯರಲ್ಲದಿದ್ದರೆ ಸದನವನ್ನು ಮುನ್ನಡೆಸಲು ಸಾಧ್ಯವಿಲ್ಲ. 94 (ಬಿ) ಪ್ರಕಾರ ಯಾವುದೇ ಸಮಯದಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಬಹುದು. 94 (ಸಿ) ಪ್ರಕಾರ “ಸದನದ ಆಗಿನ ಬಹುಮತದ ಸದಸ್ಯರು ಅಂಗೀಕರಿಸಿದ ಸದನದ ನಿರ್ಣಯದ ಮೂಲಕ” ಅವರನ್ನು ತೆಗೆದುಹಾಕಬಹುದು. *ಲೋಕಸಭಾ ಸ್ಪೀಕರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಬಹುದೇ? ಹೌದು. ಈ ಪ್ರಕ್ರಿಯೆಯು ರಾಜ್ಯಸಭೆಗೆ ಅನ್ವಯಿಸುವುದಿಲ್ಲ. ಸದನದ ಆಗಿನ ಎಲ್ಲಾ ಸದಸ್ಯರ ಬಹುಮತದಿಂದ ಅಂಗೀಕರಿಸಲ್ಪಟ್ಟ ಲೋಕಸಭೆಯ ನಿರ್ಣಯದ ಮೂಲಕ ಸ್ಪೀಕರ್ ಅಥವಾ ಉಪಸಭಾಪತಿಯನ್ನು ಹುದ್ದೆಯಿಂದ ತೆಗೆದುಹಾಕಬಹುದು. ಸಂವಿಧಾನದ 94 (ಸಿ) ವಿಧಿಯ ಅಡಿಯಲ್ಲಿ ಇದು ಸಾಧ್ಯ. 94ನೇ ವಿಧಿಯು ಸ್ಪೀಕರ್ ಮತ್ತು ಉಪಸಭಾಪತಿಯ ರಾಜೀನಾಮೆ ಹಾಗೂ ತೆಗೆದುಹಾಕುವಿಕೆಯನ್ನು ಒದಗಿಸುತ್ತದೆ. ಆದರೆ ಈ ನಿಟ್ಟಿನಲ್ಲಿ ನಿಯಮಗಳು ಕಠಿಣವಾಗಿರುತ್ತವೆ. *ಲೋಕಸಭೆಯ ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ವಿಧಾನ ಏನು? ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯದ ಸೂಚನೆ ನೀಡಲು ಬಯಸುವ ಸದಸ್ಯರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಲಿಖಿತ ನೋಟಿಸ್ ನೀಡಬೇಕು. ಈ ಸೂಚನೆಯನ್ನು ಇಬ್ಬರು ಅಥವಾ ಹೆಚ್ಚಿನ ಸದಸ್ಯರು ಜಂಟಿಯಾಗಿ ನೀಡಬಹುದು. ಷರತ್ತು (ಸಿ) ಅಡಿಯಲ್ಲಿ ಮಂಡಿಸಲಾದ ಅಂತಹ ನಿರ್ಣಯವನ್ನು ಮಂಡಿಸುವ ಉದ್ದೇಶದ ಬಗ್ಗೆ ಕನಿಷ್ಠ 14 ದಿನಗಳ ಸೂಚನೆ ನೀಡದೇ ಮಂಡಿಸಲಾಗುವುದಿಲ್ಲ. ಅಂತಹ ಸೂಚನೆಯನ್ನು ಸ್ವೀಕರಿಸಿದ ನಂತರ ನಿರ್ಣಯವನ್ನು ಮಂಡಿಸಲು ಅನುಮತಿ ಕೋರುವ ಪ್ರಸ್ತಾವನೆಯನ್ನು ಸ್ಪೀಕರ್ ನಿಗದಿಪಡಿಸಿದ ದಿನದಂದು ಸಂಬಂಧಪಟ್ಟ ಸದಸ್ಯರ ಹೆಸರಿನಲ್ಲಿ ವ್ಯವಹಾರಗಳ ಪಟ್ಟಿಯಲ್ಲಿ ನಮೂದಿಸಲಾಗುತ್ತದೆ. ನಿರ್ಣಯಗಳ ಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನಾಲ್ಕು ದಿನಗಳ ನಂತರದ ಯಾವುದೇ ದಿನ ಇದನ್ನು ಮಾಡಬಹುದು. *ಲೋಕಸಭೆಯ ಸ್ಪೀಕರ್ ವಿರುದ್ಧ ಈ ಹಿಂದೆಯೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು ಈ ಹಿಂದೆಯೂ 1954, 1966 ಮತ್ತು 1987ರಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಅಂತಹ ನಿರ್ಣಯಕ್ಕೆ ಲೋಕಸಭೆಯ ಕನಿಷ್ಠ ಇಬ್ಬರು ಸದಸ್ಯರ ಬೆಂಬಲ ಇರಬೇಕು. ಅದರ ಪರವಾಗಿ “50 ಸದಸ್ಯರು ಎದ್ದು ನಿಲ್ಲಬೇಕು”, ಅಂದರೆ ಕಾರ್ಯವಿಧಾನ ನಡೆಯಲು ಸದನದ ಕೋರಂ ಪೂರೈಸಬೇಕು. ಈ ಪ್ರಕ್ರಿಯೆಯನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ 200ರಿಂದ 203ರವರೆಗಿನ ನಿಯಮಗಳು ನಿಯಂತ್ರಿಸುತ್ತವೆ. 1954ರಲ್ಲಿ ಲೋಕಸಭೆಯ ಮೊದಲ ಸ್ಪೀಕರ್ ಗಣೇಶ್ ವಾಸುದೇವ್ ಮಾವಲಂಕರ್ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸಿದ ಮೊದಲ ಸಭಾಧ್ಯಕ್ಷರಾಗಿದ್ದರು. ನವೆಂಬರ್ 1966ರಲ್ಲಿ ಹುಕಮ್ ಸಿಂಗ್ ವಿರುದ್ಧ ಮತ್ತು ಏಪ್ರಿಲ್ 1987ರಲ್ಲಿ ಬಲರಾಮ್ ಜಾಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದರೂ ಯಾರೂ ಸ್ಪೀಕರ್ ಹುದ್ದೆ ಕಳೆದುಕೊಳ್ಳಲಿಲ್ಲ. *ಅವಿಶ್ವಾಸ ನಿರ್ಣಯವು ಪಾಲಿಸಬೇಕಾದ ಮಾರ್ಗಸೂಚಿಗಳು ನಿಯಮ 200A ಪ್ರಕಾರ ಅಂತಹ ನಿರ್ಣಯವು “ಆರೋಪಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿರಬೇಕು”. ಅವುಗಳನ್ನು ಸ್ಪಷ್ಟವಾಗಿ ಮತ್ತು ನಿಖರವಾಗಿ ವ್ಯಕ್ತಪಡಿಸಿರಬೇಕು. “ವಾದಗಳು, ತೀರ್ಮಾನಗಳು, ವ್ಯಂಗ್ಯಾತ್ಮಕ ಅಭಿವ್ಯಕ್ತಿಗಳು, ಆರೋಪಗಳು ಅಥವಾ ಮಾನನಷ್ಟ ಹೇಳಿಕೆಗಳನ್ನು ಹೊಂದಿರಬಾರದು.” ಅಂತಹ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ ನಂತರ ಅದನ್ನು ಸಲ್ಲಿಸಿದ ಸದಸ್ಯರು ಭಾಷಣ ಮಾಡಬಾರದು. *ಅಂತಹ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಏನಾಗುತ್ತದೆ? ಅಂತಹ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಅದರ ಪರವಾಗಿ ಇರುವ ಸದಸ್ಯರು ಎದ್ದು ನಿಲ್ಲಬೇಕು. 50ಕ್ಕಿಂತ ಕಡಿಮೆಯಿಲ್ಲದ ಸದಸ್ಯರು ಎದ್ದು ನಿಂತರೆ ಸ್ಪೀಕರ್ ಅಥವಾ ಉಪಸಭಾಪತಿಗೆ ‘leave has been granted’ ಎಂದು ಹೇಳಲಾಗುತ್ತದೆ. ಅಂದರೆ ಮುಂದಿನ ಚರ್ಚೆ ಮತ್ತು ಮತದಾನಕ್ಕಾಗಿ ಪ್ರಸ್ತಾವನೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ ಎಂದರ್ಥ. ನಂತರ ಚರ್ಚೆ ಮತ್ತು ಅಂತಿಮ ಮತದಾನವು 10 ದಿನಗಳೊಳಗೆ ನಡೆಯಬೇಕು. ಆ ಅವಧಿಯಲ್ಲಿ ನಿರ್ದಿಷ್ಟ ದಿನ ಮತ್ತು ಸಮಯವನ್ನು ಸಭಾಧ್ಯಕ್ಷರು ಆಯ್ಕೆ ಮಾಡುತ್ತಾರೆ. ನಿರ್ಣಯವನ್ನು ಕೈಗೆತ್ತಿಕೊಳ್ಳುವ ದಿನ ಅದನ್ನು ವ್ಯವಹಾರದ ಪಟ್ಟಿಯಲ್ಲಿ ಸೇರಿಸಿ ಚರ್ಚೆ ನಡೆಸಬೇಕು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸುವವರು ಅನುಮತಿಸಿದರೆ ಪ್ರಸ್ತಾವನೆಯನ್ನು ಮಂಡಿಸಿದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬಹುದು; ಆದರೆ ಭಾಷಣವು ಹದಿನೈದು ನಿಮಿಷಗಳನ್ನು ಮೀರಬಾರದು. ಚರ್ಚೆಯು ನಿರ್ಣಯದಲ್ಲಿ ಉಲ್ಲೇಖಿಸಿದ ಆರೋಪಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿರುತ್ತದೆ. *ಅಗತ್ಯಕ್ಕಿಂತ ಕಡಿಮೆ ಸದಸ್ಯರು ಎದ್ದು ನಿಂತರೆ? 50ಕ್ಕಿಂತ ಕಡಿಮೆ ಸದಸ್ಯರು ಎದ್ದು ನಿಂತರೆ ಪ್ರಸ್ತಾವನೆಯನ್ನು ಸಲ್ಲಿಸಿದ ಸದಸ್ಯರಿಗೆ ‘not the leave of the House’ ಎಂದು ತಿಳಿಸಲಾಗುತ್ತದೆ. ಆ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಸೂಕ್ತ ಸೂಚನೆ ಇಲ್ಲದೆ ಸ್ವೀಕರಿಸಿದ ನಿರ್ಣಯವನ್ನು ಮುಂದುವರಿಸಲಾಗುವುದಿಲ್ಲ. *ಸದನದ ಸದಸ್ಯರಾಗಿ ಸ್ಪೀಕರ್ ತಮ್ಮ ಪದಚ್ಯುತಿಯನ್ನು ಚರ್ಚಿಸುತ್ತಿರುವಾಗ ಏನು ಮಾಡುತ್ತಾರೆ? ನಿಯಮಗಳ ಪ್ರಕಾರ ಲೋಕಸಭೆಯ ಸದನವನ್ನು ವಿಸರ್ಜಿಸಿದಾಗ ಸ್ಪೀಕರ್ ತಮ್ಮ ಅಧಿಕೃತ ಸ್ಥಾನದಲ್ಲಿಯೇ ಇರುತ್ತಾರೆ. ಹೊಸದಾಗಿ ಆಯ್ಕೆಯಾದ ಲೋಕಸಭೆಯ ಮೊದಲ ಸಭೆ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಅವರು ಅಧಿಕೃತವಾಗಿ ಹುದ್ದೆ ತೊರೆಯುತ್ತಾರೆ. ಅವರನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವು ಸದನದಲ್ಲಿ ಪರಿಗಣನೆಯಲ್ಲಿರುವಾಗ ಸ್ಪೀಕರ್ಗೆ ಲೋಕಸಭಾ ಕಲಾಪಗಳಲ್ಲಿ ಮಾತನಾಡುವ ಮತ್ತು ಭಾಗವಹಿಸುವ ಹಕ್ಕು ಇರುತ್ತದೆ. ಅಂತಹ ಪ್ರಕ್ರಿಯೆಗಳ ಸಮಯದಲ್ಲಿ ಅವರು ಮೊದಲ ಹಂತದಲ್ಲಿ ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ; ಸಮಮತಗಳು ಬಂದಾಗ ತೀರ್ಮಾನಾತ್ಮಕ ಮತ ಚಲಾಯಿಸಲು ಅವರಿಗೆ ಅವಕಾಶ ಇರುವುದಿಲ್ಲ.
ವಿಫಲವಾದ ನಲಿ ಕಲಿ ಯೋಜನೆ : ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು : ರಾಜ್ಯ ಸರಕಾರದ ನಲಿ-ಕಲಿ ಯೋಜನೆಯ ಪರಿಕಲ್ಪನೆ ಚೆನ್ನಾಗಿದ್ದರೂ, ಅನುಷ್ಠಾನದಲ್ಲಿ ಅದು ಯಶಸ್ಸು ಸಾಧಿಸದೇ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ನಾಮನಿರ್ದೇಶಿತ ಸದಸ್ಯ ಡಾ.ರವಿಕುಮಾರ್ ನೀಹ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ. ಎಸ್.ಫಣಿಕುಮಾರ್ ಅವರು ವೈಫಲ್ಯಕ್ಕೆ ಸಂಬಂಧಿಸಿದಂತೆ ವರದಿಯನ್ನು ಶಿಕ್ಷಣ ಸಚಿವರಿಗೆ ಸಲ್ಲಿಸಿದ್ದಾರೆ. ನಲಿ-ಕಲಿ ಯೋಜನೆಯ 80 ನಿಮಿಷಗಳ ಒಂದು ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. ತರಬೇತಿ ಪಡೆದ ಅಧ್ಯಾಪಕರು ನಿವೃತ್ತರಾದಾಗ ಅವರ ಜಾಗದಲ್ಲಿ ನೇಮಕಗೊಂಡ ಅತಿಥಿ ಅಧ್ಯಾಪಕರಿಗೆ ಸೂಕ್ತವಾದ ತರಬೇತಿ ಸಿಗದ್ದರಿಂದ ನಿರೀಕ್ಷಿತ ಪರಿಣಾಮ ಲಭಿಸಲಿಲ್ಲ. ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳ ವಯಸ್ಸು, ಕಲಿಕಾ ಮಟ್ಟ ಮತ್ತು ಕಲಿಕಾ ಸಾಮಥ್ರ್ಯ ಒಂದೇ ರೀತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಹುವರ್ಗಬೋಧನೆಯನ್ನು ಅರ್ಥಪೂರ್ಣಗೊಳಿಸಲು ಬೇಕಾದ ಗುಂಪು ರಚನೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ ಎಂದು ನಿಯೋಗ ತಿಳಿಸಿದೆ. ಇದರಿಂದ ಭಾಷಾ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ. ತರಗತಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯವಿದ್ದ ಕಲಿಕಾ ಸಾಮಗ್ರಿಗಳು ಸಮರ್ಪಕವಾಗಿ ಹಲವು ಶಾಲೆಗಳಿಗೆ ಪೂರೈಕೆ ಆಗಿಲ್ಲ. ಅನೇಕ ಅಧ್ಯಾಪಕರಿಗೆ ನಲಿಕಲಿ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಕೆಲವರು ಯೋಜನೆಯನ್ನು ಸಂಸ್ಕೃತಿ ಆಧಾರಿತ ಪ್ರಕ್ರಿಯೆಯಾಗಿ ಬೆಳೆಸಲೂ ಇಲ್ಲ. ಹಲವರು ಯೋಜನೆಯನ್ನು ಸಾಕಾರಗೊಳಿಸಲು ಬೇಕಾದ ತಯಾರಿಗಳನ್ನೇ ಮಾಡಿಕೊಂಡು ಬಂದಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಹಜವಾಗಿ ಮಕ್ಕಳು ಆಟದಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಅಂಥ ಮಕ್ಕಳನ್ನು ಕಲಿಕೆಯ ಕಡೆ ತಿರುಗಿಸಲು ಶಿಕ್ಷಕರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಮೂರು ತರಗತಿಗೆ ಒಬ್ಬರಿಗೆ ಶಿಕ್ಷಕರಾ? ಎಂದು ಪೋಷಕರು ಸಾಮಾನ್ಯವಾಗಿ ಉದ್ಗರಿಸುತ್ತಾರೆ. ಅವರಿಗೆ ನಲಿಕಲಿ ಯೋಜನೆಯ ಮಹತ್ವ ತಿಳಿದಿರುವುದಿಲ್ಲ. ಅಂಥವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದ್ದಾರೆ. ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು, ಮೌಲ್ಯಮಾಪನ ಮಾಡುವುದು ಶ್ರಮದಾಯಕವಾದ ಕೆಲಸ. ಅನೇಕ ಕೆಲಸಗಳಲ್ಲಿ ಮಗ್ನರಾದ ಶಿಕ್ಷಕರಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಗ್ರಾಮೀಣ ಪರಿಸರದ ಸರಕಾರಿ ಶಾಲೆಗಳಲ್ಲಿ ಹಲವು ತರಗತಿ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ಮಳೆಗಾಲದಲ್ಲಿ ನೆಲದಲ್ಲಿ ಕುಳಿತುಕೊಂಡೋ, ಓಡಾಡಿಕೊಂಡೋ ಕಲಿಯುವುದು ಮಕ್ಕಳಿಗೆ ಅಸಾಧ್ಯವಾಗಿದೆ. ಮೂರನೇ ತರಗತಿಯವರೆಗೆ ನಲಿಕಲಿ ಯೋಜನೆಯಲ್ಲಿ ಕಲಿತ ಮಕ್ಕಳು ನಾಲ್ಕನೇ ತರಗತಿಯಲ್ಲಿ ಇನ್ನೊಂದು ಬಗೆಯ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಯೋಜನೆಯು ಪ್ರಾಥಮಿಕ ಹಂತದ ಕಲಿಕೆಯಲ್ಲಿ ಭಾಷಾ ಕಲಿಕೆಯ ಗುಣಮಟ್ಟವನ್ನು ಎತ್ತರಿಸಿಲ್ಲ ಎಂದು ನಿಯೋಗ ವಿವರಿಸಿದೆ. ನಲಿಕಲಿ ಯೋಜನೆ ಅನುಷ್ಠಾನಕ್ಕೆ ಬಂದು 30 ವರ್ಷಗಳಾದರೂ ಶಿಕ್ಷಕರಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಶಿಕ್ಷಕರು ಸಹಜವಾಗಿಯೇ ಯೋಜನೆಯ ಬಗ್ಗೆ ತಮ್ಮ ವಿರೋಧವನ್ನು ಪ್ರಕಟಿಸಿದ್ದಾರೆ. ಹೀಗಾಗಿ ನಲಿಕಲಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಶಿಕ್ಷಣ ಇಲಾಖೆ ಮರುಚಿಂತನೆ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
NIA ನ್ಯಾಯಾಲಯಗಳ ಸ್ಥಾಪನೆ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ, ಫೆ. 10: ಭಯೋತ್ಪಾದಕ ನಿಗ್ರಹ ಕಾನೂನುಗಳ ಅಡಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಪ್ರಕರಣಗಳು ಬಾಕಿಯಿದ್ದರೆ ವಿಶೇಷ ಎನ್ಐಎ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ನಿರ್ದೇಶಿಸಿ ದಿಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ 17 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಗಳನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ 10ಕ್ಕಿಂತ ಹೆಚ್ಚಿರುವ ರಾಜ್ಯಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಟ್ಟಿರುವುದಾಗಿ ಕೇಂದ್ರ ಗೃಹ ಸಚಿವಾಲಯವು ತನ್ನ ಸಮಗ್ರ ಸ್ಥಿತಿಗತಿ ವರದಿಯಲ್ಲಿ ತಿಳಿಸಿದ ಬಳಿಕ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠವು ರಾಜ್ಯಗಳಿಂದ ಅಭಿಪ್ರಾಯ ಕೋರಿತು.
ಅಮೆರಿಕ–ಬಾಂಗ್ಲಾದೇಶ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಹತ್ವ ಪಡೆದಿರುವುದೇಕೆ?
ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ಒಂದು ವಾರದ ನಂತರ ಅಮೆರಿಕವು ಬಾಂಗ್ಲಾದೇಶದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕ ಅಮೆರಿಕವು ಬಾಂಗ್ಲಾದೇಶದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 19ಕ್ಕೆ ಇಳಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ವಸ್ತುಗಳಿಂದ ತಯಾರಿಸಿದ ಕೆಲವು ಜವಳಿ ಮತ್ತು ಉಡುಪುಗಳ ಮೇಲಿನ ಸುಂಕಕ್ಕೂ ವಿನಾಯಿತಿ ನೀಡಿದೆ. ಇದಕ್ಕೂ ಮೊದಲು ಬಾಂಗ್ಲಾದೇಶಕ್ಕೆ ಶೇ. 37ರಷ್ಟು ಸುಂಕ ವಿಧಿಸಲಾಗಿತ್ತು. ನಂತರ 2025ರ ಆಗಸ್ಟ್ನಲ್ಲಿ ಅದನ್ನು ಶೇ. 20ಕ್ಕೆ ಇಳಿಸಲಾಗಿತ್ತು. ಇದೀಗ ಶೇ. 19ಕ್ಕೆ ಇಳಿಸಲಾಗಿದೆ. ಬಾಂಗ್ಲಾದೇಶದಿಂದ ಕೆಲವು ಜವಳಿ ಮತ್ತು ಉಡುಪು ಸರಕುಗಳಿಗೆ ಶೂನ್ಯ ಸುಂಕದ ದರವನ್ನು ಪಡೆಯಲು ಅನುವು ಮಾಡಿಕೊಡುವ ಕಾರ್ಯವಿಧಾನವನ್ನು ಸ್ಥಾಪಿಸಲು ಅಮೆರಿಕ ಬದ್ಧವಾಗಿದೆ. ಈ ಕಾರ್ಯವಿಧಾನವು ಬಾಂಗ್ಲಾದೇಶದಿಂದ ಉಡುಪು ಮತ್ತು ಜವಳಿ ಆಮದುಗಳ ನಿರ್ದಿಷ್ಟ ಪ್ರಮಾಣವನ್ನು ಈ ಕಡಿಮೆ ಸುಂಕದ ದರದಲ್ಲಿ ಅಮೆರಿಕಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಬಾಂಗ್ಲಾದೇಶ–ಅಮೆರಿಕ ಜಂಟಿ ಹೇಳಿಕೆ ತಿಳಿಸಿದೆ. ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶವು ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಸರಕುಗಳಿಗೆ ಗಮನಾರ್ಹ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಒದಗಿಸಲು ಬದ್ಧವಾಗಿದೆ. ಢಾಕಾ 15 ವರ್ಷಗಳಲ್ಲಿ ಗೋಧಿ, ಸೋಯಾ, ಹತ್ತಿ ಮತ್ತು ಜೋಳದಂತಹ 3.5 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಕೃಷಿ ಉತ್ಪನ್ನಗಳನ್ನು ಹಾಗೂ 15 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ. ಆದಾಗ್ಯೂ, ಸುಂಕಮುಕ್ತ ಪ್ರಯೋಜನವನ್ನು ಪಡೆಯಲು ಬಾಂಗ್ಲಾದೇಶವು ಬಟ್ಟೆಗಳನ್ನು ಅಮೆರಿಕದ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ ಎಂದು ಸಾಬೀತುಪಡಿಸಬೇಕು. ಬಾಂಗ್ಲಾದೇಶವು ಅಮೆರಿಕಕ್ಕೆ ಸುಂಕಮುಕ್ತವಾಗಿ ಕಳುಹಿಸಬಹುದಾದ ಬಟ್ಟೆಗಳ ಪ್ರಮಾಣವು ಅಪರಿಮಿತವಾಗಿಲ್ಲ. ಇದು ಅಮೆರಿಕದಿಂದ ಅವರು ಎಷ್ಟು ಖರೀದಿಸುತ್ತಾರೆ ಎಂಬುದರ ಮೇಲೆ ನೇರವಾಗಿ ಅವಲಂಬಿತವಾಗಿದೆ. ಚೀನಾ ನಂತರ ಬಾಂಗ್ಲಾದೇಶ ಜವಳಿ ಮತ್ತು ಉಡುಪು ಸರಕುಗಳ ಎರಡನೇ ಅತಿದೊಡ್ಡ ರಫ್ತುದಾರವಾಗಿದೆ. ಭಾರತದ ಜವಳಿ ರಫ್ತಿಗೆ ಅಮೆರಿಕವು ಪ್ರಮುಖ ಮಾರುಕಟ್ಟೆಯಾಗಿದೆ. ಹೀಗಾಗಿ, ಟ್ರಂಪ್ ಭಾರತೀಯ ರಫ್ತಿನ ಮೇಲಿನ ಸುಂಕವನ್ನು 18%ಕ್ಕೆ ಇಳಿಸಿದಾಗ ಜವಳಿ ಉದ್ಯಮಕ್ಕೆ ಖುಷಿಯಾಯಿತು. ಇದು ಜವಳಿ ಮತ್ತು ಉಡುಪುಗಳಿಗೆ ಅಮೆರಿಕದ 118 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ತೆರೆಯುವುದಲ್ಲದೆ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿತು. ಭಾರತದ ಜವಳಿ ರಫ್ತಿನಲ್ಲಿ ಅಮೆರಿಕ ಈಗಾಗಲೇ ಸುಮಾರು 10.5 ಬಿಲಿಯನ್ ಡಾಲರ್ ಪಾಲನ್ನು ಹೊಂದಿದೆ. ದೇಶದಿಂದ ಎಲ್ಲಾ ಜವಳಿ ಮತ್ತು ಉಡುಪು ಸಾಗಣೆಗಳಲ್ಲಿ ಶೇ. 30ರಷ್ಟು ಅಮೆರಿಕಕ್ಕೆ ಹೋಗುತ್ತದೆ. 50% ಸುಂಕಗಳನ್ನು ವಿಧಿಸಿದ ನಂತರ ಭಾರತದ GDPಗೆ 2.3% ಕೊಡುಗೆ ನೀಡುವ ಜವಳಿ ವಲಯವು ರಫ್ತಿನಲ್ಲಿ ಕುಸಿತವನ್ನು ದಾಖಲಿಸಿತ್ತು. ನವೆಂಬರ್ 2025ರಲ್ಲಿ ಅಮೆರಿಕಕ್ಕೆ ಜವಳಿ ರಫ್ತು ವರ್ಷದಿಂದ ವರ್ಷಕ್ಕೆ ಶೇ. 31ಕ್ಕಿಂತ ಹೆಚ್ಚು ಕುಸಿದಿದೆ ಎಂದು ದತ್ತಾಂಶ ತೋರಿಸುತ್ತದೆ. ಈ ಹಿನ್ನೆಲೆ, ನಿಧಾನಗತಿಯ ಸಾಗಣೆ ಮತ್ತು ಉದ್ಯೋಗ ನಷ್ಟದ ನಡುವೆ ಅಮೆರಿಕ–ಭಾರತ ವ್ಯಾಪಾರ ಒಪ್ಪಂದವು ಜವಳಿ ವಲಯಕ್ಕೆ ಬೆಂಬಲ ನೀಡುವ ರೀತಿಯಲ್ಲಿ ಬಂದಿತ್ತು. ಅಮೆರಿಕ–ಬಾಂಗ್ಲಾದೇಶ ವ್ಯಾಪಾರ ಒಪ್ಪಂದದಿಂದ ಭಾರತಕ್ಕೇನಾಗುತ್ತದೆ? ಅಮೆರಿಕ–ಬಾಂಗ್ಲಾದೇಶ ವ್ಯಾಪಾರ ಒಪ್ಪಂದವು ಭಾರತಕ್ಕೆ ಸವಾಲಿನ ಜೊತೆಗೆ ಕೆಲವು ಸಂದರ್ಭಗಳಲ್ಲಿ ಪ್ರಯೋಜನವನ್ನೂ ಹೆಚ್ಚಿಸಬಹುದು. ಭಾರತದ ಒಟ್ಟಾರೆ ಸುಂಕ ದರ ಬಾಂಗ್ಲಾದೇಶಕ್ಕಿಂತ ಕಡಿಮೆಯಿದ್ದರೂ, ಅಮೆರಿಕದ ಹತ್ತಿಯಿಂದ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ಶೂನ್ಯ ಸುಂಕದ ನಿಬಂಧನೆಯು ಸ್ಪರ್ಧಾತ್ಮಕ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅಮೆರಿಕದ ಹತ್ತಿಯಿಂದ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ತೆರಿಗೆ ಇರುವುದಿಲ್ಲ. ಮತ್ತೊಂದೆಡೆ ಭಾರತೀಯ ಜವಳಿಗಳಿಗೆ 18% ಸುಂಕ ವಿಧಿಸಲಾಗುತ್ತದೆ. ಇದರರ್ಥ ಬಾಂಗ್ಲಾದೇಶದ ಉಡುಪುಗಳು ಅಮೆರಿಕದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಅಗ್ಗವಾಗಿರಬಹುದು. ಟ್ರಂಪ್ ಆಡಳಿತದೊಂದಿಗಿನ ಒಪ್ಪಂದದಲ್ಲಿ ಬಾಂಗ್ಲಾದೇಶ ಪಡೆದುಕೊಂಡಿರುವ ಹತ್ತಿ ಸಂಬಂಧಿತ ವಿನಾಯಿತಿಯೂ ಭಾರತದ ಕಳವಳಕ್ಕೆ ಕಾರಣವಾಗಿದೆ. ಹತ್ತಿ ಬಗ್ಗೆ ಕಳವಳ ಒಟ್ಟು ರಫ್ತಿನಲ್ಲಿ 80%ಕ್ಕಿಂತ ಹೆಚ್ಚು ಪಾಲು ಜವಳಿ ಆಗಿರುವುದರಿಂದ ಬಾಂಗ್ಲಾದೇಶವು ಬಹಳಷ್ಟು ಹತ್ತಿಯನ್ನು ಆಮದು ಮಾಡಿಕೊಳ್ಳುತ್ತದೆ. ವಾಸ್ತವವಾಗಿ ಇದು ವಿಶ್ವದ ಅತಿದೊಡ್ಡ ಹತ್ತಿ ಆಮದುದಾರ ಹಾಗೂ ಭಾರತೀಯ ಹತ್ತಿಯ ಅತಿದೊಡ್ಡ ಖರೀದಿದಾರವೂ ಆಗಿದೆ. ಕೆಲವು ವರ್ಷಗಳ ಹಿಂದಿನವರೆಗೆ ಭಾರತದ ಹತ್ತಿ ರಫ್ತಿನ 70% ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು. 2024ರಲ್ಲಿ ಭಾರತ ಪರ ಶೇಖ್ ಹಸೀನಾ ಆಡಳಿತದ ಪತನದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಾಗ ಬಾಂಗ್ಲಾದೇಶ ಬ್ರೆಜಿಲ್ ಮತ್ತು ಪಶ್ಚಿಮ ಆಫ್ರಿಕಾದಂತಹ ದೇಶಗಳಿಂದ ಹತ್ತಿ ಖರೀದಿಸಲು ತೊಡಗಿತು. ಹೊಸ ಒಪ್ಪಂದವು ಅಮೆರಿಕದ ಹತ್ತಿಯನ್ನು ಬಳಸಿ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ಅನುಕೂಲಕರವಾಗಿರುವುದರಿಂದ ಢಾಕಾ ಅಮೆರಿಕದ ಹತ್ತಿಯನ್ನೇ ಹೆಚ್ಚಾಗಿ ಆಶ್ರಯಿಸುವ ಸಾಧ್ಯತೆಯಿದೆ. ಇದು ಭಾರತೀಯ ಹತ್ತಿ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಮಂಗಳವಾರವೇ ಇದರ ಪರಿಣಾಮ ಕಾಣಿಸತೊಡಗಿದೆ. ಭಾರತೀಯ ಜವಳಿ ಮತ್ತು ಸ್ಪಿನ್ನಿಂಗ್ ಷೇರುಗಳು ಒತ್ತಡಕ್ಕೆ ಒಳಗಾಗಿದ್ದು, ರಫ್ತುಕೇಂದ್ರಿತ ಹಲವಾರು ಜವಳಿ ಕಂಪನಿಗಳ ಷೇರುಗಳೂ ಕುಸಿದಿವೆ. ವ್ಯಾಪಾರ ಒಪ್ಪಂದದ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಬಾಂಗ್ಲಾದೇಶದ ಜವಳಿ ರಫ್ತಿನ ಮೇಲಿನ ಶೂನ್ಯ ಸುಂಕ ಷರತ್ತು ಭಾರತೀಯ ಆರ್ಥಿಕತೆಗೆ ಎರಡು ಪಟ್ಟು ಹೊಡೆತವಾಗಿದೆ ಎಂದು ಟೀಕಿಸಿದೆ. ಈ ವ್ಯಾಪಾರ ಒಪ್ಪಂದವು ಭಾರತದ ಜವಳಿ ಉದ್ಯಮವನ್ನು ದುರ್ಬಲಗೊಳಿಸಿ ಲಕ್ಷಾಂತರ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಭಾರತಕ್ಕೆ ಹೊಸ ಸವಾಲು ಅಮೆರಿಕ–ಬಾಂಗ್ಲಾದೇಶ ಒಪ್ಪಂದವು ಭಾರತದ ಜವಳಿ ಮತ್ತು ಉಡುಪು ರಫ್ತುದಾರರಿಗೆ ಹೊಸ ಸವಾಲಾಗಲಿದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟದ (CITI) ಅಧ್ಯಕ್ಷ ಅಶ್ವಿನ್ ಚಂದ್ರನ್ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಮೊದಲನೆಯದಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸುಂಕ ವ್ಯತ್ಯಾಸವು 2%ರಿಂದ 1%ಕ್ಕೆ ಅರ್ಧದಷ್ಟು ಕಡಿಮೆಯಾಗಿದೆ. ಭಾರತಕ್ಕೆ ಅಮೆರಿಕ 18% ಸುಂಕ ವಿಧಿಸಿದೆ. ಇದು ಕಿರಿದಾದ ಲಾಭ ಹೊಂದಿರುವ ವಲಯದಲ್ಲಿ ಕಳವಳಕಾರಿ ವಿಷಯವಾಗಿದೆ. ಎರಡನೆಯದಾಗಿ ಅಮೆರಿಕ–ಬಾಂಗ್ಲಾದೇಶ ಪರಸ್ಪರ ವ್ಯಾಪಾರ ಒಪ್ಪಂದವು ಬಾಂಗ್ಲಾದೇಶಕ್ಕೆ ಭಾರತದ ಹತ್ತಿ ನೂಲು ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಚಂದ್ರನ್ ಹೇಳಿದ್ದಾರೆ. ಬಾಂಗ್ಲಾದೇಶವು ಈಗಾಗಲೇ ಚೀನಾ, ವಿಯೆಟ್ನಾಂ ಮತ್ತು ಭಾರತದೊಂದಿಗೆ ಅಮೆರಿಕಕ್ಕೆ ಜವಳಿ ಮತ್ತು ಉಡುಪುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಬಾಂಗ್ಲಾದೇಶಕ್ಕೆ ಯಾವುದೇ ಹೆಚ್ಚುವರಿ ಪ್ರಯೋಜನವು ಭಾರತೀಯ ರಫ್ತುದಾರರಿಗೆ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಭಾರತೀಯ ಒಪ್ಪಂದಗಳಿಗೆ ಪ್ರತಿಕ್ರಿಯೆಯಾಗಿ ಢಾಕಾದ ವ್ಯಾಪಾರ ನಡೆಗಳು ಭಾರತವು ಭಾರತೀಯ ಬಟ್ಟೆ ಮತ್ತು ಶೂ ಖರೀದಿಸಲು ಅಗ್ಗವಾಗಿಸುವ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡ ಬಾಂಗ್ಲಾದೇಶವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಧಾವಿಸಿತು. ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಬಟ್ಟೆ ಮಾರಾಟಗಾರ ರಾಷ್ಟ್ರವಾಗಿದ್ದು, ತನ್ನ ಆರ್ಥಿಕತೆಯನ್ನು ನಡೆಸಲು ಆ ಹಣವನ್ನು ಅವಲಂಬಿಸಿರುವುದರಿಂದ ಭಾರತವು ತಮ್ಮ ಅಮೆರಿಕನ್ ಗ್ರಾಹಕರನ್ನು ಕಸಿದುಕೊಳ್ಳಲು ಅವರು ಅವಕಾಶ ನೀಡಲಾರರು. ಬಾಂಗ್ಲಾದೇಶವು ಪ್ರಸ್ತುತ ಭಾರತಕ್ಕಿಂತ ಯುರೋಪ್ಗೆ ಹೆಚ್ಚಿನ ಬಟ್ಟೆಗಳನ್ನು ಮಾರಾಟ ಮಾಡುತ್ತದೆ. ಇದಕ್ಕೆ ಕಾರಣ ಬಾಂಗ್ಲಾದೇಶ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ಈಗ ಭಾರತವು ಶೂನ್ಯ ತೆರಿಗೆ ಪಾವತಿಸಲು ಒಪ್ಪಂದಗಳಿಗೆ ಸಹಿ ಹಾಕಿರುವುದರಿಂದ ಬಾಂಗ್ಲಾದೇಶವು ತನ್ನ ಮುನ್ನಡೆಯನ್ನು ಕಳೆದುಕೊಳ್ಳುವ ಭಯದಲ್ಲಿದೆ. ಸ್ಪರ್ಧಾತ್ಮಕವಾಗಿ ಉಳಿಯಲು ಬಾಂಗ್ಲಾದೇಶ ಈಗ ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಸಹಿ ಹಾಕಲು ಆತುರಪಡುತ್ತಿದೆ. ಈ ಒಪ್ಪಂದ ಮಹತ್ವ ಪಡೆದಿರುವುದೇಕೆ? ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಢಾಕಾ ನಡುವಿನ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ಅಮೆರಿಕ ಸಹಿ ಮಾಡಿದ ವ್ಯಾಪಾರ ಒಪ್ಪಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 2020ರಲ್ಲಿ ನೇಪಾಳ, ಭೂತಾನ್ ಮತ್ತು ಇತರ ದೇಶಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ‘ಶಾರ್ಟ್ಕಟ್’ ಆಗಿ ಭಾರತದ ಗಡಿಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಬಳಸಲು ಭಾರತವು ಬಾಂಗ್ಲಾದೇಶಕ್ಕೆ ಅನುಮತಿಸಿತ್ತು. ಆದರೆ ಇತ್ತೀಚೆಗೆ ಭಾರತ ಈ ಸೌಲಭ್ಯವನ್ನು ನಿಲ್ಲಿಸಿದೆ. ಇದರಿಂದ ಭಾರತೀಯ ಬಂದರುಗಳು ಜನದಟ್ಟಣೆಯಾಗುತ್ತಿದ್ದು, ರಫ್ತುದಾರರಿಗೆ ವಿಳಂಬ ಉಂಟಾಗುತ್ತಿದೆ ಎಂಬ ಕಾರಣ ನೀಡಲಾಗಿದೆ. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ, ಆರ್ಥಿಕ ತಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್, ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ; ನಾವೇ ಸಮುದ್ರದ ಮೇಲೆ ನಿಯಂತ್ರಣ ಹೊಂದಿದ್ದೇವೆ. ಇದು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ಚೀನಾ ಈ ಸಮುದ್ರ ಭಾಗವನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಈ ಹೇಳಿಕೆಗಳು ಭಾರತವನ್ನು ಕೆರಳಿಸಿತ್ತು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂಗಳು ಒಟ್ಟಾಗಿ ಬಾಂಗ್ಲಾದೇಶದೊಂದಿಗೆ 1,596 ಕಿಮೀ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿವೆ. ಅದೇ ವೇಳೆ ಚೀನಾದೊಂದಿಗೆ 1,395 ಕಿಮೀ, ಮ್ಯಾನ್ಮಾರ್ನೊಂದಿಗೆ 1,640 ಕಿಮೀ, ಭೂತಾನ್ನೊಂದಿಗೆ 455 ಕಿಮೀ ಮತ್ತು ನೇಪಾಳದೊಂದಿಗೆ 97 ಕಿಮೀ ಗಡಿಯನ್ನು ಹೊಂದಿವೆ. ಆದರೆ ‘ಚಿಕನ್ ನೆಕ್’ ಕಾರಿಡಾರ್ ಎಂದು ಕರೆಯಲ್ಪಡುವ 22 ಕಿಮೀ ಭೂಪ್ರದೇಶದ ಮೂಲಕ ಮಾತ್ರ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ಕಳೆದ ಒಂದೂವರೆ ದಶಕದಲ್ಲಿ ಬಾಂಗ್ಲಾದೇಶದ ಮೂಲಕ ಈಶಾನ್ಯಕ್ಕೆ ಮಾರ್ಗಗಳನ್ನು ತೆರೆಯಲು ಭಾರತವು ಢಾಕಾದಲ್ಲಿದ್ದ ಶೇಖ್ ಹಸೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಹಸೀನಾ ಅವರನ್ನು ಪದಚ್ಯುತಗೊಳಿಸಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಂದ ನಂತರ ಈ ಯೋಜನೆಗಳು ವಿಫಲವಾದವು.
ರಾಯಚೂರು | ಫೆ.11ರಂದು ಜಿಲ್ಲಾದ್ಯಾಂತ ಲಾರಿ ಮುಷ್ಕರ
ರಾಯಚೂರು: ಕಾನೂನುಬಾಹಿರ ಲೋಡಿಂಗ್–ಅನ್ಲೋಡಿಂಗ್ ವಾರ್ನಿ, ಮಾಮೂಲಿ ಟಪಾಲ್, ವೇ ಬ್ರಿಡ್ಜ್ ಶುಲ್ಕ, ತೂಕದಲ್ಲಿ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ (ಫೆ.11) ಜಿಲ್ಲಾದ್ಯಾಂತ ಬೃಹತ್ ಲಾರಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘಟನೆಗಳು ಕರೆ ನೀಡಿವೆ. ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಕುರಿತು ಜ.14 ರಂದು ಮನವಿ ಸಲ್ಲಿಸಲಾಗಿತ್ತು. ನಂತರ ಜ.22 ರಂದು ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದರೂ, ಜ.20 ರಂದು ಗಂಜ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯಾಲಯದಲ್ಲಿ ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್, ರಾಯಚೂರು ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್, ಕೈಗಾರಿಕೋದ್ಯಮಿಗಳು ಹಾಗೂ ವರ್ತಕರೊಂದಿಗೆ ಚರ್ಚೆ ನಡೆಸಿ ಗಣರಾಜ್ಯೋತ್ಸವ ಹಾಗೂ ರಾಯಚೂರು ಉತ್ಸವ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಲಾಗಿತ್ತು. ಆದರೆ ಇಷ್ಟರವರೆಗೆ ಯಾವುದೇ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಫೆ.11ರಂದು ನಗರದಲ್ಲಿ ಲೋಡಿಂಗ್–ಅನ್ಲೋಡಿಂಗ್ ಸಂಪೂರ್ಣ ಬಂದ್ ಮಾಡಿ ಜಿಲ್ಲಾದ್ಯಾಂತ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಹಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ಗೌರವಾಧ್ಯಕ್ಷ ನಾಗರಾಜ ಬಾಲಚೇಡ, ಉಪಾಧ್ಯಕ್ಷರು ಅಜೀಂ ಪಾಷಾ ಹಾಗೂ ಮಹ್ಮದ್ ಎಜಾಜುದ್ದೀನ್, ಕಾರ್ಯಾಧ್ಯಕ್ಷರು ಮಹ್ಮದ್ ರೈಯಸ್ ಮತ್ತು ತಫೀಕ್ ಹುಸೇನಿ, ಜಂಟಿ ಕಾರ್ಯದರ್ಶಿ ಮಹ್ಮದ್ ಖತ್ತುಬುದ್ದೀನ್, ಖಜಾಂಚಿ ಸೈಯದ್ ಶರೀಫ್, ನಿರ್ದೇಶಕರು ಸೈಯದ್ ಯೂನಿಸ್ ಸಲೀಂ ಸೇರಿದಂತೆ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಅದೇ ರೀತಿ ರಾಯಚೂರು ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ, ಉಪಾಧ್ಯಕ್ಷರು ಹೆಚ್.ಎಂ. ಶೇಖರ್ ಹಾಗೂ ಆರ್. ಚಂದ್ರಶೇಖರ್, ಕಾರ್ಯದರ್ಶಿ ಎಂ.ಡಿ. ಎಕ್ಸಾಲ್, ಸಹ ಕಾರ್ಯದರ್ಶಿ ಸತ್ಯರೆಡ್ಡಿ, ಖಜಾಂಚಿ ಮಹ್ಮದ್ ಜಾವೀದ್ ಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಅದಾನಿ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿ ನಾಯರ್ ಗೆ ಒಂದು ವರ್ಷ ಜೈಲು ಶಿಕ್ಷೆ
ಗಾಂಧಿನಗರ, ಫೆ. 10: ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್ ಅವರನ್ನು ದೋಷಿ ಎಂದು ಘೋಷಿಸಿರುವ ಗಾಂಧಿನಗರ ಜಿಲ್ಲೆಯ ಮಾನ್ಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಅದಾನಿ ಗ್ರೂಪ್ ನ ಪ್ರಮುಖ ಕಂಪೆನಿಯಾದ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಮೇರೆಗೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಕಂಪೆನಿ ಹಾಗೂ ಅದಾನಿ ಗ್ರೂಪ್ ನ ಖ್ಯಾತಿಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸುಳ್ಳು ಹಾಗೂ ಮಾನನಷ್ಟ ಹೇಳಿಕೆಗಳನ್ನು ಒಳಗೊಂಡ ಹಲವು ಟ್ವೀಟ್ ಗಳನ್ನು ರವಿ ನಾಯರ್ ಪ್ರಕಟಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು. ಈ ಟ್ವೀಟ್ಗಳು ಸಾರ್ವಜನಿಕರು ಹಾಗೂ ಹೂಡಿಕೆದಾರರ ದೃಷ್ಟಿಯಲ್ಲಿ ಕಂಪೆನಿಯ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ದೂರಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಪೂರ್ಣ ವಿಚಾರಣೆಯ ಬಳಿಕ ಆರೋಪಗಳನ್ನು ದೂರುದಾರರು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅದರಂತೆ ರವಿ ನಾಯರ್ ಅವರನ್ನು ಕ್ರಿಮಿನಲ್ ಮಾನನಷ್ಟ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಒಂದು ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ತೀರ್ಪು ನೀಡಿತು.
ವಿಜಯನಗರ | ಹಂಪಿ ಉತ್ಸವದ ಅಂಗವಾಗಿ ಬೈಕ್ ರ್ಯಾಲಿ: ಜಿಲ್ಲಾಧಿಕಾರಿಯಿಂದ ಚಾಲನೆ
ವಿಜಯನಗರ (ಹೊಸಪೇಟೆ), ಫೆ.10: ಐತಿಹಾಸಿಕ ಹಂಪಿ ಉತ್ಸವದ ಮಹತ್ವವನ್ನು ಜನತೆಗೆ ತಲುಪಿಸುವ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸ್ವತಃ ಬೈಕ್ನಲ್ಲಿ ಪಾಲ್ಗೊಂಡು ಅಧಿಕೃತ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ರ್ಯಾಲಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೈಕ್ಗಳು ಭಾಗವಹಿಸಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ರ್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿ ಹಾಗೂ ಕಡ್ಡಿರಾಂಪುರ ಮಾರ್ಗವಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದವರೆಗೆ ಯಶಸ್ವಿಯಾಗಿ ತಲುಪಿತು. ರ್ಯಾಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ದುಬೈನಲ್ಲಿ ‘ತುಂಬೆ ಮೆಡಿಸಿಟಿ’ ಉದ್ಘಾಟನೆ| 3 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ, 1 ಸಾವಿರ ಉದ್ಯೋಗ ಸೃಷ್ಟಿ
ದುಬೈ: ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ತುಂಬೆ ಮೆಡಿಸಿಟಿ ದುಬೈ’ ಯೋಜನೆಯನ್ನು ತುಂಬೆ ಗ್ರೂಪ್, ಅಲ್ ಕುಸೈಸ್ ಪ್ರದೇಶದಲ್ಲಿ ಆರಂಭಿಸಿದೆ. ಸಮಗ್ರ ಶೈಕ್ಷಣಿಕ ಮತ್ತು ಆರೋಗ್ಯ ನಗರವಾಗಿ ರೂಪುಗೊಂಡಿರುವ ಈ ತಾಣವು ಪ್ರಾರಂಭಿಕ ಹಂತದಲ್ಲೇ ಸುಮಾರು 3,000 ವಿದ್ಯಾರ್ಥಿಗಳಿಗೆ ಅವಕಾಶ, 1,000 ಉದ್ಯೋಗ ಸೃಷ್ಟಿ ಹಾಗೂ 6,000 ಜನರ ವಾಸ್ತವ್ಯ ಸಾಮರ್ಥ್ಯ ಹೊಂದಿರುವುದು ವಿಶೇಷ. ನಗರದೊಳಗಿನ ನಗರ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ಮೆಡಿಸಿಟಿಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ಯಾಂಪಸ್, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ, ಸುಧಾರಿತ ಸಂಶೋಧನಾ ಕೇಂದ್ರಗಳು, ಸಿಮ್ಯುಲೇಶನ್ ಹಾಗೂ ಸ್ಕಿಲ್ ಸೆಂಟರ್ ಗಳು, ಪ್ರಯೋಗಾಲಯಗಳು, ಔಷಧಾಲಯಗಳು, ಕ್ಷೇಮ ಕೇಂದ್ರಗಳು ಮತ್ತು ಆತಿಥ್ಯ ಸೌಲಭ್ಯಗಳು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ನೈಜ ಕ್ಲಿನಿಕಲ್ ವಾತಾವರಣದಲ್ಲಿ ತರಬೇತಿ ಸಿಗುವಂತೆ ಹಾಗೂ ರೋಗಿಗಳಿಗೆ ಸಂಶೋಧನೆ ಆಧಾರಿತ ಚಿಕಿತ್ಸೆ ದೊರಕುವಂತೆ ಮೂಲಸೌಕರ್ಯ ರೂಪಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, “ಇದು ಕೇವಲ ವಿಸ್ತರಣೆ ಅಲ್ಲ; ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಒಂದಾಗಿ ಬೆಳೆಯಬೇಕೆಂಬ ನಂಬಿಕೆಯ ಪ್ರತಿಫಲ. ದುಬೈನ ದೂರದೃಷ್ಟಿಯೊಂದಿಗೆ ನಿರ್ಮಿತವಾದ ಈ ಸಮಗ್ರ ಶೈಕ್ಷಣಿಕ ವೈದ್ಯಕೀಯ ನಗರ ಭವಿಷ್ಯದ ವೃತ್ತಿಪರರನ್ನು ರೂಪಿಸುವ ಜೊತೆಗೆ ರೋಗಿಗಳ ಆರೈಕೆಯ ಗುಣಮಟ್ಟ ಹೆಚ್ಚಿಸಲಿದೆ” ಎಂದರು. ಶೈಕ್ಷಣಿಕ ವಿಭಾಗದಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ದುಬೈ ಕ್ಯಾಂಪಸ್ ಕಾರ್ಯನಿರ್ವಹಿಸಲಿದ್ದು, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಧ್ಯಯನ, ಸುಧಾರಿತ ಸಿಮ್ಯುಲೇಶನ್ ಲ್ಯಾಬ್ಗಳು, ಶಸ್ತ್ರಚಿಕಿತ್ಸಾ ಕೌಶಲ್ಯ ಕೇಂದ್ರಗಳು ಹಾಗೂ ಅಂತರರಾಷ್ಟ್ರೀಯ ಪ್ರಮಾಣಿತ ಪಠ್ಯಕ್ರಮಗಳನ್ನು ಒಳಗೊಂಡಿದೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ವಾತಾವರಣ ಕಲ್ಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ” ಎಂದರು. ಆರೋಗ್ಯ ರಕ್ಷಣಾ ವಿಭಾಗವು ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ ಸುತ್ತ ಕೇಂದ್ರೀಕೃತವಾಗಿದ್ದು, ಪ್ರಥಮ ಹಂತದಲ್ಲಿ ಡಯಾಲಿಸಿಸ್, ಹೃದ್ರೋಗ, ಮೂಳೆಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳು ಆರಂಭಗೊಳ್ಳಲಿವೆ. ಮುಂದಿನ ಹಂತಗಳಲ್ಲಿ ಬಹು–ವಿಶೇಷ ಶೈಕ್ಷಣಿಕ ಆಸ್ಪತ್ರೆಯಾಗಿ ವಿಸ್ತರಣೆಗೊಳ್ಳುವ ಯೋಜನೆ ಹೊಂದಿದೆ. ದುಬೈ–ಶಾರ್ಜಾ ಗಡಿಭಾಗದ ಅಲ್ ಕುಸೈಸ್ ಪ್ರದೇಶದಲ್ಲಿರುವ ಈ ಮೆಡಿಸಿಟಿ, ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಮತ್ತು ಅಂತರರಾಷ್ಟ್ರೀಯ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲ ವಾರ್ಡ್ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳ ಪ್ರದೇಶಗಳಿಗೆ ಸೇರಿಸಿರುವುದನ್ನು ಆಕ್ಷೇಪಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತರು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರು, ವಾರ್ಡ್ ಮರು ವಿಂಗಡಣೆ ಸಮಿತಿ ಮುಖ್ಯಸ್ಥರು, ರಾಜ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳಿಗೆ ಸೇರಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರದ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಳ್ಳೇನಹಳ್ಳಿ ವಾರ್ಡ್ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳು ಹಾಗೂ ಕೊತ್ತನೂರು ವಾರ್ಡ್ನ ಕ್ಲಾಸಿಕ್ ಆರ್ಕಿರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್ಗೆ ಸೇರಿಸಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಒಂದು ವಾರ್ಡ್ ಅನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯ್ದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆ ರದ್ದುಪಡಿಸಬೇಕು. ಬೊಮ್ಮನಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ಗಳಿಗೆ ಸೇರಿಸಿರುವ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳಿಗೆ ಮರು ಸೇರ್ಪಡೆಗೊಳಿಸಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಿಜಯನಗರ | ಫೆ.12ರಂದು ಕೊಟ್ಟೂರು ಜಾತ್ರೆ: ಮದ್ಯ ಮಾರಾಟ ನಿಷೇಧ
ವಿಜಯನಗರ (ಹೊಸಪೇಟೆ) : ಜಿಲ್ಲೆಯ ಕೊಟ್ಟೂರು ತಾಲ್ಲೂಕಿನಲ್ಲಿ ಫೆ.12ರಂದು ನಡೆಯಲಿರುವ ಕೊಟ್ಟೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಫೆ.11ರ ಸಂಜೆ 6 ಗಂಟೆಯಿಂದ ಫೆ.13ರ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್ಗಳು ಹಾಗೂ ಇತರೆ ಮದ್ಯ ಮಾರಾಟ ಕೇಂದ್ರಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಪೋಷಕರ ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದತಿಗೆ ಆಧಾರವಾಗದು : ಹೈಕೋರ್ಟ್
ಬೆಂಗಳೂರು : ಬಾಲ್ಯ ವಿವಾಹ ನೆರವೇರಿಸಿದ ಆರೋಪದಲ್ಲಿ ಪೋಷಕರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಅಶೋಕ (56), ಅಶ್ವತ್ಥ ನಾರಾಯಣ (55), ರಂಗಮ್ಮ (49) ರಾಮಾಂಜಿನಮ್ಮ (48) ಮತ್ತು ಶ್ರೀರಾಮಪ್ಪ (56) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ವಿವಾಹವಾಗಿರುವ ದಂಪತಿಯ ಪೋಷಕರಾಗಿದ್ದಾರೆ. ಮದುವೆ ನಡೆದಾಗ ಯುವತಿಗೆ 16 ವರ್ಷ, 9 ತಿಂಗಳಾಗಿತ್ತು. ಗಂಡು-ಹೆಣ್ಣು ಪರಸ್ಪರ ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರಾಗಿದ್ದು, ತಿಳಿವಳಿಕೆಯಿಲ್ಲದೆ ಅವರು ಬಾಲ್ಯ ವಿವಾಹ ನೆರವೇರಿಸಿದ್ದಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಇದನ್ನು ಒಪ್ಪದ ನ್ಯಾಯಪೀಠ, ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದುಪಡಿಸಲು ಆಧಾರವಾಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಪ್ರಕರಣವನ್ನು ಎದುರಿಸಲೇಬೇಕು. ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು. ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕಿದೆ. ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬಾರದು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ? ಅವರು ಏಕೆ ಬಾಲ್ಯ ವಿವಾಹ ಮಾಡಬೇಕು? ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ ಎಂದು ನ್ಯಾಯಪೀಠ ಪ್ರಶ್ನಿಸಿತು. ಮುಂದುವರಿದು, ಮದುವೆಯಾಗಿರುವ ಯುವತಿಗೆ ಮಗುವಿದೆ. ಈ ಅಂಶ ಪರಿಗಣಿಸಿ ಪೋಕ್ಸೋ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ ಎಂದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು. ಪ್ರಕರಣದ ಹಿನ್ನೆಲೆ: ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು, ಅರ್ಜಿದಾರರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಸಂಬಂಧ 2023ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್ಟಿಎಸ್ಸಿ-1) ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ, ತಮ್ಮ ವಿರುದ್ದದ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಇಡೀ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಜಯನಗರ | ಜಿಲ್ಲೆಯಲ್ಲಿ 4.83 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡುವ ಗುರಿ : ಡಾ. ಶಂಕರ್ ನಾಯ್ಕ್
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ 0-5 ವರ್ಷದ 1,36,787 ಮಕ್ಕಳು ಹಾಗೂ 6ರಿಂದ 19 ವರ್ಷದ 3,46,989 ಮಕ್ಕಳು ಸೇರಿ ಒಟ್ಟು 4,83,776 ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ್ ನಾಯ್ಕ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಚಿತ್ತವಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷ ಫೆ.10ರಂದು ರಾಜ್ಯಾದ್ಯಂತ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳು, ಕಾಲೇಜುಗಳು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುತ್ತಿದೆ. ಕಾರ್ಯಕ್ರಮದಿಂದ ಹೊರಗುಳಿದ ಮಕ್ಕಳಿಗೆ ಫೆ.16ರಂದು ‘ಮಾಪ್-ಅಪ್ ದಿನ’ದಂದು ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು. ಈ ಮಾತ್ರೆ ನುಂಗುವದು ಅಲ್ಲ, ಚೀಪುವ ಮಾತ್ರೆಯಾಗಿದ್ದು, ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಏಕಾಗ್ರತೆ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಹೇಳಿದರು. 6ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆ ಸೇವಿಸಬೇಕು ಎಂದು ಮನವಿ ಮಾಡಿ, ಜಿಲ್ಲೆಯನ್ನು ಜಂತುಹುಳು ಮುಕ್ತ ಜಿಲ್ಲೆಯಾಗಿಸುವ ಸಂಕಲ್ಪ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಪ್ರತಿ ಆರು ತಿಂಗಳಿಗೊಮ್ಮೆ ಈ ನಿವಾರಣಾ ಮಾತ್ರೆ ನೀಡಲಾಗುತ್ತದೆ. 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತವಾಗಿ ವಿತರಿಸಲಾಗುತ್ತದೆ. ಇದರಿಂದ ರಕ್ತಹೀನತೆ ಕಡಿಮೆಯಾಗುವುದಲ್ಲದೇ ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಟಿಹೆಚ್ಓ ಡಾ.ವಿನೋದ್, ಜಿಲ್ಲಾ ಮಕ್ಕಳ ಕುಟುಂಬ ಕಲ್ಯಾಣಾಧಿಕಾರಿ ಸಿಂಧು ಅಂಗಡಿ, ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಧರ್ಮನಗೌಡ, ಡಿಡಿಪಿಯು ನಾಗರಾಜ್ ಹವಾಲ್ದಾರ್, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವಿ. ಶ್ರೀಧರ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
BESCOMಗೆ ಕೇಂದ್ರದಿಂದ 'ರೆಡ್ ಕಾರ್ಡ್': ವಿದ್ಯುತ್ ವಿತರಣೆ ರ್ಯಾಕಿಂಗ್ ನಲ್ಲಿ '-C' ಶ್ರೇಣಿ
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಬೆಳಕು ನೀಡುವ 'ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ' (BESCOM) ಕೇಂದ್ರ ಸರ್ಕಾರದ ಮೌಲ್ಯಮಾಪನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇಂದ್ರ ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿರುವ 14ನೇ ವಾರ್ಷಿಕ ಸಮಗ್ರ ರೇಟಿಂಗ್ ಮತ್ತು ರ್ಯಾಕಿಂಗ್ ವರದಿಯಲ್ಲಿ ಬೆಸ್ಕಾಂ 'C-' (ಸಿ ಮೈನಸ್) ಶ್ರೇಣಿಯನ್ನು ಪಡೆಯುವ ಮೂಲಕ 'ರೆಡ್ ಕಾರ್ಡ್'ಗೆ
ಫೆ.11ರಿಂದ ಮೂರು ದಿನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ವಿಜಯನಗರ (ಹೊಸಪೇಟೆ) : ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಫೆ.11ರಿಂದ ವಿಜಯನಗರ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಫೆಬ್ರವರಿ 11ರಂದು ಬೆಳಗ್ಗೆ 10.30ಕ್ಕೆ ಹೊಸಪೇಟೆಗೆ ಆಗಮಿಸುವ ಅವರು, ಬಳಿಕ ಹಂಪಿಯಲ್ಲಿ ನಡೆಯಲಿರುವ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ನಂತರ ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಹಂಪಿ ಉತ್ಸವ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯುವ ಪ್ರಸಕ್ತ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪ ತುಂಗಾ ತಟದಲ್ಲಿ ಹಮ್ಮಿಕೊಳ್ಳಲಾಗಿರುವ ತುಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು. ಫೆಬ್ರವರಿ 12ರಂದು ಬೆಳಗ್ಗೆ 10.30ಕ್ಕೆ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಆಯೋಜಿಸಲಾದ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಬೆಳಗ್ಗೆ 11ಕ್ಕೆ ಬಳ್ಳಾರಿಗೆ ತೆರಳುವರು. ಮಧ್ಯಾಹ್ನ 3ಕ್ಕೆ ಮತ್ತೆ ಹೊಸಪೇಟೆಗೆ ಆಗಮಿಸಿ, ವಡಕರಾಯನ ದೇವಸ್ಥಾನ ರಥಬೀದಿಯಲ್ಲಿ ನಡೆಯುವ ವಿಜಯನಗರ ವಸಂತ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡುವರು. ಫೆಬ್ರವರಿ 13ರಂದು ಬೆಳಗ್ಗೆ 10ಕ್ಕೆ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗದಲ್ಲಿ ವಿವಿಧ ತಳಿಗಳ ಎತ್ತುಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು. 11.30ಕ್ಕೆ ವಸ್ತುಪ್ರದರ್ಶನ ಹಾಗೂ 12.30ಕ್ಕೆ ಬೋಟಿಂಗ್ ಪ್ರದರ್ಶನ ವೀಕ್ಷಿಸಲಿದ್ದಾರೆ. ಸಂಜೆ 4ಕ್ಕೆ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ಸ್ಥಳೀಯ ಹಾಗೂ ಜಿಲ್ಲಾ ಕಲಾವಿದರಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸಂಜೆ 7ಕ್ಕೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು.
ಫೆ.12ರಿಂದ ಮಂಗಳೂರು-ಮೂಡುಬಿದಿರೆ ಹೆದ್ದಾರಿ ದುರಸ್ತಿ: ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಬದಲಿ ರಸ್ತೆ
ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರ ಸೂಚನೆ
ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ ರಾಮಯ್ಯ ಇನ್ನಿಲ್ಲ
ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ. ಅವರ ಅಗಲುವಿಕೆಗೆ ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂು ಸೇವೆ ಸಲ್ಲಿಸಿದ್ದರು. ಅವರಿಗೆ ಇಬ್ಬರು ಪುತ್ರರು , ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ. ಪತ್ರಿಕೋದ್ಯಮದ ತಪಸ್ವಿ ಪಿ. ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು 'ಪತ್ರಿಕೋದ್ಯಮದ ತಪಸ್ವಿ' ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ ನಾನು ಹಿಂದೂ ರಾಮಯ್ಯ ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ. ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು .ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಎಚ್ ಡಿ ಕುಮಾರಸ್ವಾಮಿ ಸಂತಾಪ ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು. ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ, ಹಿರಿಮೆಯನ್ನು ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ.ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಯಾದಗಿರಿ | ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಶಾಂತವೀರ ಮಹಾಸ್ವಾಮಿಜಿ
ಯಾದಗಿರಿ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಆಸಕ್ತಿ ಹಾಗೂ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಲ್ಲಿ ಸ್ಪರ್ಧಾಮನೋಭಾವನೆ ಬೆಳೆಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ ಹೇಳಿದರು. ನಗರದ ಗ್ರೀನ್ ಸಿಟಿಯಲ್ಲಿರುವ ಸೆಂಚುರಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಶಿಕ್ಷಣ ಸಂಸ್ಥೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ಹುಡೇದ್ ದಂಪತಿಗಳು ಅರ್ಪಣಾಭಾವದಿಂದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸಕಾರಾತ್ಮಕ ಚಿಂತನೆ ಬೆಳೆಸಿ, ಉನ್ನತ ಗುರಿ ಸಾಧಿಸಲು ಸಕಾಲದಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಶಾಲೆಯಲ್ಲಿ ಪರಿಸರ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಮಕ್ಕಳ ಅಭ್ಯಾಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು. ಶಾಲೆಯ ಪ್ರಾಂಶುಪಾಲೆ ಸುಜಾತಾ ಎಸ್. ಹುಡೇದ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿಸುತ್ತದೆ. ಪೋಷಕರು ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆ ಅವಕಾಶ ನೀಡಬಾರದು, ಏಕೆಂದರೆ ಅದು ಅವರ ಏಕಾಗ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಶಿವರಾಜ ಹುಡೇದ್, ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ಚನ್ನಬಸಪ್ಪ, ಸೋಮಶೇಖರ ಮಣ್ಣೂರ, ಶಿಕ್ಷಕ ಮಡಿವಾಳಪ್ಪ, ಬಸ್ಸುಗೌಡ ಕಂಚನಕಾವಿ, ರಮೇಶ ಜಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಅಮಾತೆಪ್ಪ ಸ್ವಾಗತಿಸಿ, ಶಿಕ್ಷಕಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
CIC ನೇಮಕಾತಿ| ಪ್ರತಿಪಕ್ಷ ನಾಯಕರ ಭಿನ್ನಮತ ಬಹಿರಂಗಪಡಿಸುವಂತೆ ಸೂಚಿಸುವುದಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.10: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರುಗಳ ನೇಮಕಾತಿಯ ವಿಷಯದಲ್ಲಿ, ಪ್ರತಿಪಕ್ಷ ನಾಯಕರ ಭಿನ್ನಮತವನ್ನು ಬಹಿರಂಗಪಡಿಸುವಂತೆ ತಾನು ಸರಕಾರಕ್ಕೆ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿತು. ಸಿಐಸಿಯಲ್ಲಿರುವ ಖಾಲಿ ಹುದ್ದೆಗಳನ್ನು ತಾನು ತುಂಬಿಸಿರುವುದಾಗಿ ಕೇಂದ್ರ ಸರಕಾರ ತಿಳಿಸಿದ ಬಳಿಕ, ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿತು
ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ
ಬೆಂಗಳೂರು, ಫೆ.10: ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ(93) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅಂಗಾಂಗ ವೈಫಲ್ಯದಿಂದಾಗಿ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಾಜಿ ತಿಳಿಸಿದ್ದಾರೆ . 1933ರ ಸೆ.12 ರಂದು ಜನಿಸಿದ ರಾಮಯ್ಯ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ . 'ದಿ ಹಿಂದೂ' ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು, ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು . ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ಇಡಲಾಗುವುದು ಎಂದು ಡಾ.ಬಾಲಾಜಿ ತಿಳಿಸಿದ್ದಾರೆ .
ಮಂಗಳೂರು: ತೊಕ್ಕೊಟ್ಟಿನಿಂದ ಅಸೈಗೋಳಿವರೆಗಿನ ಪ್ರಮುಖ ರಸ್ತೆಯ ಇಕ್ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಬುಲ್ದೊಜರ್ ಕಾರ್ಯಾಚರಣೆ ನಡೆಸಿರುವ ಕ್ರಮವನ್ನು ಖಂಡಿಸಿರುವ ಸಿಐಟಿಯು ನೇತೃತ್ವದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಸಂತ್ರಸ್ತ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಮತ್ತು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹಿಸಿದೆ. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದೆ. ಲೋಕೋಪಯೋಗಿ ಇಲಾಖೆಯು ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಮ್ಮುಖ ಸೋಮವಾರ ಕಾರ್ಯಾ ಚರಣೆ ನಡೆಸಿದ ಬಗ್ಗೆ ಮಾಹಿತಿ ಪಡೆದ ಸಿಐಟಿಯು ನಿಯೋಗ ಮಂಗಳವಾರ ಸ್ಥಳಕ್ಕೆ ಭೇಟಿ ಸಂತ್ರಸ್ತ ಬೀದಿ ಬದಿ ವ್ಯಾಪಾರಿಗಳ ಜೊತೆ ಚರ್ಚೆ ನಡೆಸಿದೆ. ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರವು ದೌರ್ಜನ್ಯ ನಡೆಸುತ್ತಿದೆ ಎಂದು ಆಪಾದಿಸಿರುವ ಸಂಘದ ಮುಖಂಡರು ಬೀದಿ ವ್ಯಾಪಾರಿಗಳ ಜೊತೆಗೂಡಿ ಹೋರಾಟ ಮಾಡುವುದಾಗಿ ತಿಳಿಸಿದೆ. ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷ ಮುಝಫರ್ ಅಹ್ಮದ್, ಉಳ್ಳಾಲ ತಾಲೂಕು ಸಿಐಟಿಯು ಅಧ್ಯಕ್ಷ ಸುಂದರ ಕುಂಪಲ, ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಮುಖಂಡರಾದ ಸಲೀಮ್ ಬೀರಿ, ನೌಶಾದ್, ಸದಾಶಿವ ವಿಶ್ವ, ದಿನೇಶ್ ನಿಯೋಗದಲ್ಲಿದ್ದರು. ಅದಕ್ಕೂ ಮುನ್ನ ನಿಯೋಗವು ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ರನ್ನು ಭೇಟಿ ಮಾಡಿ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿತು.
ಯಾದಗಿರಿ: ತಾಲ್ಲೂಕಿನ ಹಳಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಸ್ಕನಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅವರು ತಮಟೆ ಬಾರಿಸಿ ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿ ಜನರ ಸಮಸ್ಯೆಗಳತ್ತ ಗಮನ ಸೆಳೆದರು. ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಎರಡು ನೀರಿನ ಮೇಲ್ತೊಟ್ಟಿಗಳನ್ನು ತಕ್ಷಣ ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಂಟ್) ಅನ್ನು ಕೂಡಲೇ ಜನಬಳಕೆಗೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಶುದ್ಧ ನೀರು ಸಿಗದೆ ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಪಂ, ತಾಪಂ, ಜಿಪಂ ಹಾಗೂ ಜಿಲ್ಲಾಡಳಿತ ಮಟ್ಟದಲ್ಲಿ ಸಭೆಗಳು ನಡೆದರೂ ಈ ಸಮಸ್ಯೆ ಚರ್ಚೆಯಾಗದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ತೊಟ್ಟಿ ಮತ್ತು ಆರೋ ಪ್ಲಾಂಟ್ ನಿರ್ಮಾಣಕ್ಕೆ ಯಾರು ಮನವಿ ಸಲ್ಲಿಸಿದ್ದರು, ಎಷ್ಟು ಹಣ ಮಂಜೂರಾಗಿದೆ, ಎಷ್ಟು ವೆಚ್ಚವಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಗ್ರಾಮದಲ್ಲಿ ಕುಡಿಯುವ ನೀರು ಹಲವು ಕಡೆ ಸೋರಿಕೆಯಾಗುತ್ತಿದ್ದು, ಕಲುಷಿತ ನೀರಿನ ಮಿಶ್ರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಚರಂಡಿ ವ್ಯವಸ್ಥೆಯ ಕೊರತೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ವಿದ್ಯುತ್ ಕಂಬಗಳು ಬಾಗಿ ನಿಂತಿದ್ದು, ಮನೆಯ ಮೇಲಿಂದ ತಂತಿಗಳು ಜೋತುಬಿದ್ದಿರುವುದರಿಂದ ಅನಾಹುತದ ಆತಂಕವೂ ವ್ಯಕ್ತವಾಗಿದೆ. ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಯ ಜಾಲಿ ಕಂಟಿ ತೆರವು, ಚರಂಡಿ ಸ್ವಚ್ಛತೆ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಆಗ್ರಹಿಸಿದರು. ತಕ್ಷಣ ಅಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ಕಾರ್ಯಾರಂಭ ಮಾಡಬೇಕು. ಇಲ್ಲದಿದ್ದರೆ ಹಳಗೇರಾ ಗ್ರಾಮ ಪಂಚಾಯತ್ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭೀಮಾಶಂಕರ, ಪವನ್, ಮಲ್ಲಿಕಾರ್ಜುನ, ಮಲ್ಲಪ್ಪ, ರಫೀಕ್, ಯಲ್ಲಪ್ಪ, ಶಾಣಪ್ಪ, ಆಂಜನೇಯ, ಖಾಸಿಂಮ್, ಹಣಮಂತ, ಅಲ್ಲಿಸಾಬ, ಮಾಂತೇಶ್, ಜಗಪ್ಪ, ದೈದಪ್ಪ, ಬಸಪ್ಪ, ಚಂದ್ರಕಾಂತ್, ಕಾಶಪ್ಪ, ದೇವಪ್ಪ, ನಾಗಪ್ಪ, ಮಹ್ಮದ್, ಫಕೀರ್, ಶಬೀರ್, ಸುಫೀಸಾಬ್ ವಲ್ಲಿ, ಶೀವರಡ್ಡಿ, ಖಾಜಸಾಬ್, ಮೈಬುಸಾಬ್, ಚೀರಂಜೀವಿ ಸಾಬಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಎನ್ಐಟಿಕೆ ಸುರತ್ಕಲ್ನಲ್ಲಿ ಕೃಷಿಗಾಗಿ ಕೃತಕ ಬುದ್ಧಿಮತ್ತೆ ದುಂಡು ಮೇಜಿನ ಸಭೆ
ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್ಐಟಿಕೆ) ಸುರತ್ಕಲ್ ಹಾಗೂ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಇಆರ್ಎನ್ಇಟಿ ಇಂಡಿಯಾ), ಸ್ವಾಯತ್ತ ಸಂಸ್ಥೆಯಾದ ಎರ್ನೆಟ್ ಇಂಡಿಯಾ (ಎಂಇಐಟಿ) ಇವುಗಳ ಸಹಯೋಗದಲ್ಲಿ ಸುಸ್ಥಿರ ಮತ್ತು ಸ್ಮಾರ್ಟ್ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಬಗ್ಗೆ ವಿಶೇಷ ದುಂಡುಮೇಜಿನ ಸಭೆಯನ್ನು ಎನ್ಐಟಿಕೆ ಸುರತ್ಕಲ್ನಲ್ಲಿ ಆಯೋಜಿಸಲಾಗಿತ್ತು. ‘ಇಂಡಿಯಾ-ಎಐಂ ಇಂಪ್ಯಾಕ್ಟ್ ಸಮ್ಮಿತ್ 2026’ ರ ಪೂರ್ವಭಾವಿ ಯಾಗಿ ನಡೆದ ಈ ಸಭೆಯಲ್ಲಿ ಎರ್ನೆಟ್ ಇಂಡಿಯಾ, ಐಸಿಎಆರ್ - ದಾಳಿಂಬೆ ಸಂಶೋಧನಾ ಕೇಂದ್ರ, ವಿಟ್ಲದ ಕೇಂದ್ರಿಯ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ), ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕ್ಯಾಲಿಕಟ್ನ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ, ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯ , ಕ್ಯಾಸ್ಪರ್ ಕೃಷಿ ವಿಜ್ಞಾನ ಬೆಂಗಳೂರು , ಐಐಐಟಿ ಧಾರವಾಡ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ಕರಾವಳಿ ಕರ್ನಾಟಕದಂತಹ ಪ್ರದೇಶಗಳ ರೈತರ ನಿಜವಾದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದರು. ಎನ್ಐಟಿಕೆ ವತಿಯಿಂದ ಕೃಷಿ ಮತ್ತು ಸಮುದ್ರ ಉತ್ಪನ್ನಗಳ ಸಂಶೋಧನೆಗಾಗಿ ವಿಶೇಷ ‘ರಿಸರ್ಚ್ ಇನ್ನೋವೇಶನ್ ಪಾರ್ಕ್ ಸ್ಥಾಪಿಸುವ ಯೋಜನೆಯನ್ನು ಹಂಚಿಕೊಂಡರು. ಎರ್ನೆಟ್ ಇಂಡಿಯಾ ಮಹಾನಿರ್ದೇಶಕಿ ಪ್ರೀತಿ ನಾಥ್ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ದೊಡ್ಡದಿದೆ. ಕಡಿಮೆ ಇಂಟರ್ನೆಟ್ ಸೌಲಭ್ಯವಿರುವ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸುವ ಅಗ್ಗದ ಮತ್ತು ರೈತರಿಗೆ ಸುಲಭವಾಗಿ ಲಭ್ಯವಾಗುವ ಎಐ ತಂತ್ರಜ್ಞಾನವನ್ನು ಗುರುತಿಸುವುದು ಈ ಸಭೆಯ ಮುಖ್ಯ ಉದ್ದೇಶ ಎಂದರು. ಸಮಾರೋಪದಲ್ಲಿ ಮಾತನಾಡಿದ ಎನ್ಟಿಕೆ ಡೀನ್ (ಸಂಶೋಧನೆ) ಪ್ರೊ. ಕೆ. ಉದಯ ಭಟ್ ಅವರು ವಿವಿಧ ಸಂಸ್ಥೆಗಳ ನಡುವಿನ ಸಂಶೋಧನೆಗೆ ಎನ್ಐಟಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮವನ್ನು ಎನ್ಐಟಿಕೆಯ ಡಾ.ಜೆ.ನಿ.ರಾಜನ್ ಮತ್ತು ಡಾ. ಸೌರವ್ ಕಾಂತಿ ಅಡ್ಯಾ ಹಾಗೂ ಎರ್ನೆಟ್ ಇಂಡಿಯಾದ ಡಾ. ಪವೆಂತನ್ ಕಾರ್ಯಕ್ರಮ ಸಂಯೋಜಿಸಿದ್ದರು.
ಕೊಟ್ಟೂರು ಜಾತ್ರೆಗೆ ವಿಶೇಷ ರೈಲು: ನೆಮ್ಮದಿಯಾಗಿ ಅಜ್ಜಯ್ಯನ ದರ್ಶನ ಮಾಡಿ
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಜಾತ್ರೆಗೆ ತೆರಳುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ನೈರುತ್ಯ ರೈಲ್ವೆ (SWR) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜಾತ್ರೆಯ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಭಕ್ತರಿಗೆ ಸುಗಮ ಪ್ರಯಾಣ ಒದಗಿಸಲು ಹೊಸಪೇಟೆ ಮತ್ತು ತೋಳಹುಣಸೆ (ದಾವಣಗೆರೆ ಸಮೀಪದ) ನಡುವೆ ವಿಶೇಷ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲನ್ನು ಓಡಿಸಲು
ವಿಪಕ್ಷಗಳಿಂದ ಅವಿಶ್ವಾಸ ನೋಟಿಸ್| ಲೋಕಸಭೆ ಕಲಾಪಗಳ ಅಧ್ಯಕ್ಷತೆ ವಹಿಸದಿರಲು ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಹೊಸದಿಲ್ಲಿ, ಫೆ. 10: ಲೋಕಸಭೆ ಸ್ವೀಕರ್ ಒಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾದ ನೋಟಿಸ್ ಇತ್ಯರ್ಥವಾಗುವವರೆಗೆ ಅವರು ಸದನದ ಕಲಾಪಗಳ ಅಧ್ಯಕ್ಷತೆ ವಹಿಸುವುದಿಲ್ಲ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ ಹಾಗೂ 8 ಮಂದಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಬಿರ್ಲಾ ಅವರ ಪದಚ್ಯುತಿಗೆ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರತಿಪಕ್ಷ ಸಲ್ಲಿಸಿದ ನೋಟಿಸ್ ಅನ್ನು ಪರಿಶೀಲಿಸುವಂತೆ ಹಾಗೂ ಸಂಸದೀಯ ನಿಯಮಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಓಂ ಬಿರ್ಲಾ ಅವರು ಲೋಕಸಭೆಯ ಪ್ರಧಾನ ಕಾರ್ಯದಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶಿಸಿದ್ದಾರೆ.
ಭಾರತ-ಅಮೆರಿಕ ಒಪ್ಪಂದ| ಪ್ರತಿಭಟನೆ ಏಕೈಕ ದಾರಿ: ರಾಕೇಶ್ ಟಿಕಾಯತ್
ಹೊಸದಿಲ್ಲಿ, ಫೆ. 10: ಭಾರತ ಹಾಗೂ ಆಮೆರಿಕ ವ್ಯಾಪಾರ ಒಪ್ಪಂದವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಈ ಒಪ್ಪಂದದ ವಿರುದ್ಧ ಗ್ರಾಮಗಳಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ರೈತರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯ ನೇಪಥ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರಲ್ಲಿ ಭಾರತ ಹೊಸ ಆರ್ಥಿಕತೆಗೆ ತೆರೆದುಕೊಂಡ ಆರಂಭಿಕ ದಿನಗಳ ಪರಿಸ್ಥಿತಿಯನ್ನು ಪ್ರಸಕ್ತ ಪರಿಸ್ಥಿತಿಗೆ ಹೋಲಿಸಿದರು. ‘‘ಭಾರತ-ಅಮೆರಿಕ ಒಪ್ಪಂದ ನಡೆದ ರೀತಿ, ಇದು ಭಾರತಕ್ಕೆ ಅಪಾಯಕಾರಿಯಾಗಲಿದೆ, ನಾವು ಮಾತನಾಡಲೇ ಬೇಕು’’ ಎಂದು ಅವರು ಹೇಳಿದ್ದಾರೆ. ‘‘ಇದು ಏಕಪಕ್ಷೀಯ ಒಪ್ಪಂದ, ಒತ್ತಡದಿಂದ ಆದ ಒಪ್ಪಂದ. ಇದು ಭಾರತೀಯ ರೈತರಿಗೆ ಸ್ವೀಕಾರಾರ್ಹವಲ್ಲ. ಅವರು ಸಬ್ಸಿಡಿ ಸರಕುಗಳನ್ನು ಇಲ್ಲಿ ಎಸೆಯುತ್ತಾರೆ, ನಮ್ಮ ರೈತರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ’’ ಎಂದು ಟಿಕಾಯತ್ ಹೇಳಿದ್ದಾರೆ. ರೈತರನ್ನು ರಕ್ಷಿಸಲಾಗುವುದು ಎಂಬ ಸರಕಾರದ ಭರವಸೆಯ ಕುರಿತು ಪ್ರಶ್ನಿಸಿದಾಗ ಅವರು, ‘‘ಸರಕಾರ ಸುಳ್ಳು ಹೇಳುತ್ತಿದೆ. ಅವರು ಏನನ್ನು ಕೂಡ ಪ್ರತಿಪಾದಿಸಬಹುದು. ಪ್ರತಿಭಟನೆ ಏಕೈಕ ದಾರಿ’’ ಎಂದಿದ್ದಾರೆ.
ಗುರುಮಠಕಲ್ | ಹಬೀಬ್ ಅಬ್ದುಲ್ಲಾ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಸಂತಾಪ
ಗುರುಮಠಕಲ್: ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಹಬೀಬ್ ಅಹಮ್ಮದ್ ಅವರ ಅಣ್ಣ ಹಬೀಬ್ ಅಬ್ದುಲ್ಲಾ ಅವರ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಫೆ.6ರಂದು ವಯೋಸಹಜ ಕಾಯಿಲೆಯಿಂದ ಹಬೀಬ್ ಅಬ್ದುಲ್ಲಾ ಅವರು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.9ರಂದು ಶಾಸಕ ಶರಣಗೌಡ ಕಂದಕೂರ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಹಬೀಬ್ ಅಹಮ್ಮದ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು. ಶಾಸಕರ ಭೇಟಿಯ ಸಂದರ್ಭದಲ್ಲಿ ಶರಣು ಅವಂಟಿ, ರವಿ, ಹಬೀಬ್ ಅಬೂಬಕ್ಕರ್, ಹಬೀಬ್ ಅಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಗನ್ ತೋರಿಸಿ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್, ಇತ್ತೀಚೆಗೆ ಕಲಬುರಗಿ ನಗರದ ತಮ್ಮ ತಂಗಿಯ ಮಗಳ ಮದುವೆ ಪೂರ್ವದ ಕಾರ್ಯಕ್ರಮವೊಂದರಲ್ಲಿ ಗನ್ ತೋರಿಸಿ, ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಾಗಿ ಪರಿಶೀಲಿಸಿದ ನಗರ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶಿಸಿದ್ದ ಮತೀನ್ ಪಟೇಲ್ ವಿರುದ್ಧ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 33/2026 ಕಲಂ 30 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಉತ್ಪನ್ನಗಳಿಗೆ ಅಮೆರಿಕದಿಂದ ಶೇ.19ರಷ್ಟು ಸುಂಕ| ಉಭಯ ದೇಶಗಳ ನಡುವೆ ಮಹತ್ವದ ವ್ಯಾಪಾರ ಒಪ್ಪಂದ
ಢಾಕಾ,ಫೆ.10: ಪಾರಸ್ಪರಿಕ ಸುಂಕಕ್ಕೆ ಸಂಬಂಧಿಸಿದ ಅಮೆರಿಕ ಹಾಗೂ ಬಾಂಗ್ಲಾದೇಶ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದ್ದು, ದ್ವಿಪಕ್ಷೀಯ ಆರ್ಥಿಕ ಬಾಂಧವ್ಯವನ್ನು ಬಲಪಡಿಸಲು ಉಭಯರಾಷ್ಟ್ರಗಳು ಸಮ್ಮತಿಸಿವೆ. ನೂತನ ಒಪ್ಪಂದದಡಿ ಬಾಂಗ್ಲಾದೇಶವು ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡುವ ಉತ್ಪನ್ನಗಳಿಗೆ ಟ್ರಂಪ್ ಆಡಳಿತ ಶೇ.19ರಷ್ಟು ಸುಂಕವನ್ನು ವಿಧಿಸಲಿದೆ. ಈ ಹಿಂದೆ ಬಾಂಗ್ಲಾ ಉತ್ಪನ್ನಗಳಿಗೆ ಅಮೆರಿಕವು ಶೇ.20ರಷ್ಟು ಸುಂಕ ವಿಧಿಸುತ್ತಿದ್ದು, ಈಗ ತುಸು ಇಳಿಕೆಯಾಗಿದೆ. ಅಮೆರಿಕ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹಾಗೂ ಬಾಂಗ್ಲಾದೇಶದ ವಾಣಿಜ್ಯ, ಜವಳಿ ಹಾಗೂ ಸೆಣಬು, ನಾಗರಿಕಯಾನ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಉಸ್ತುವಾರಿ ಶೇಖ್ ಬಶೀರುದ್ದೀನ್ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಬಾಂಗ್ಲಾದೇಶವು ರಫ್ತು ಮಾಡುವ ಉಡುಪುಗಳನ್ನು ಅಮೆರಿಕದಲ್ಲಿ ತಯಾರಾಗುವ ಸಿಂಥೆಟಿಕ್ ಫೈಬರ್ ಹಾಗೂ ಹತ್ತಿಯಿಂದ ತಯಾರಿಸಲಾಗುವುದೆಂದು ಬಾಂಗ್ಲಾದೇಶದ ವಾಣಿಜ್ಯ ಕಾರ್ಯದರ್ಶಿ ಮೆಹಬೂಬ್ ರಹ್ಮಾನ್ ತಿಳಿಸಿದ್ದಾರೆ ಈ ಉತ್ಪನ್ನಗಳಿಗೆ ಉಭಯದೇಶಗಳು ಶೂನ್ಯ ಸುಂಕವನ್ನು ವಿಧಿಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಗುವಿಗೆ ಜನ್ಮನೀಡಿದ ಬಾಣಂತಿ ಮೃತ್ಯು
ಕೊಲ್ಲೂರು, ಫೆ.10: ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಹೃದಯ ಸಂಬಂಧಿ ಕಾಯಿಲೆ ಯಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕೆರಾಡಿಯ ವಿಷ್ಣುಮೂರ್ತಿ ನಾಯಕ್ ಎಂಬವರ ಮಗಳು ವಿನಯಾ (28) ಎಂದು ಗುರುತಿಸಲಾಗಿದೆ. ಇವರು ಜ.27ರಂದು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ 8 ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆ.5ರಂದು ವಿನಯಾ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ವೈದ್ಯರ ಸೂಚನೆ ಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಫೆ.6ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಫೆ.9ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್ ಅಧ್ಯಕ್ಷರ ಭೇಟಿ ವಿರುದ್ಧ ಆಸ್ಟ್ರೇಲಿಯದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಹಲವರಿಗೆ ಗಾಯ
ಮೆಲ್ಬೋರ್ನ್,ಫೆ.10: ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರೆರ್ೂಗ್ ಅವರ ಆಸ್ಟ್ರೇಲಿಯ ಭೇಟಿಯನ್ನು ವಿರೋಧಿಸಿ ಮೆಲ್ಬೋರ್ನ್ ಹಾಗೂ ಸಿಡ್ನಿ ನಗರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದೆ. ಎರಡೂ ನಗರಗಳಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಹಿಂಸಾಚಾರದಲ್ಲಿ ನ್ಯೂಸೌತ್ವೇಲ್ಸ್ನ ಗ್ರೀನ್ಸ್ ಪಕ್ಷದ ಸಂಸದ ಅಬಿಗೈಲ್ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ಪೊಲೀಸರು ತನಗೆ ಥಳಿಸಿದ್ದಾರೆಂದು ಅವರು ಆಪಾದಿಸಿದ್ದಾರೆ. ಸಿಡ್ನಿಯ ಬೊಂಡಿ ಬೀಚ್ನಲ್ಲಿ ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 15 ಮಂದಿಯ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆರೊರ್ಗ್ ಅವರನ್ನು ಆಸ್ಟ್ರೇಲಿಯ ಸರಕಾರ ಆಹ್ವಾನಿಸಿತ್ತು. ಸಿಡ್ನಿಯಲ್ಲಿ ಸೋಮವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಮಂದಿಯನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಬೊಂಡಿ ಬೀಚ್ ದಾಳಿಯಲ್ಲಿ ಮೃತರ ಕುಟಂಬಸ್ಥರನ್ನು ಇಸ್ರೇಲ್ ಅಧ್ಯಕ್ಷರು ಭೇಟಿಯಾಗಲಿದ್ದಾರೆ.
ಫೆ.12ರ ಮುಷ್ಕರ: ಪಾದಯಾತ್ರೆಯ ಮೂಲಕ ಕರಪತ್ರ ಹಂಚಿಕೆ
ಉಡುಪಿ, ಫೆ.10: ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಹಾಗೂ ಕೇಂದ್ರ ಸರಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರಕಾರ ಜಾರಿ ಮಾಡದಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಫೆ.12ರ ನಡೆಯಲಿರುವ ಮುಷ್ಕರದ ಅಂಗವಾಗಿ ಇಂದು ಉಡುಪಿ ನಗರದಲ್ಲಿ ಕರಪತ್ರ ಹಂಚಲಾಯಿತು. ಉಡುಪಿ ಜೋಡುಕಟ್ಟೆಯಿಂದ ನಗರದ ಪ್ರಮುಖ ಮಾರ್ಗದಲ್ಲಿ ಪಾದ ಯಾತ್ರೆ ನಡೆಸಿದ ಕಾರ್ಮಿಕ ಸಂಘಟನೆಗಳ ಮುಖಂಡರು, ಸಾರ್ವಜನಿಕರಿಗೆ ಮುಷ್ಕರದ ಕುರಿತ ಕರಪತ್ರ ಹಂಚಿ ಮುಷ್ಕರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಕವಿರಾಜ್. ಎಸ್ ಕಾಂಚನ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಮುಖಂಡರಾದ ಉಮೇಶ್ ಕುಂದರ್, ನಳಿನಿ ಎಸ್., ಸರೋಜ ಎಸ್., ಸೈಯಾದ್, ಕಟ್ಟಡ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಭಾಸ್ ನಾಯಕ್, ಎಐಟಿಯುಸಿ ಉಡುಪಿ ಜಿಲ್ಲಾ ಮುಖಂಡರಾದ ಶಿವಾನಂದ, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಇಂಟಕ್ ಮಹಿಳಾ ಮುಖಂಡರಾದ ಪ್ರೀತಿ, ಜೆಸಿಟಿಯು ಮುಖಂಡ ರಾದ ವಿಶ್ವನಾಥ, ನಾಗೇಶ್, ಮೋಹನ್ ಉಪಸ್ಥಿತರಿದ್ದರು.
‘ಮಾರ್ಜಾಲ ಮೋಹಿನಿಯರು’ ಹಾಸ್ಯಪ್ರಬಂಧಗಳ ಸಂಕಲನಕ್ಕೆ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ
ಉಡುಪಿ : ಕನ್ನಡ ಖ್ಯಾತ ಕವಯಿತ್ರಿ ಹಾಗೂ ಸಾಹಿತಿ ಸುಕನ್ಯಾ ಕಳಸ ಅವರ ‘ಮಾರ್ಜಾಲ ಮೋಹಿನಿಯರು’ ಎಂಬ ಹಾಸ್ಯಪ್ರಬಂಧಗಳ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ ಲಭಿಸಿದೆ. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಸೂಕ್ತ ಪ್ರಸ್ತಾವನೆ ಬಂದರೆ ನಂದಿಕೂರಿನಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್ಗೆ ಅನುಮತಿ: ಸಚಿವ ರಾಮಮೋಹನ್ ನಾಯ್ಡು
ಉಡುಪಿ, ಫೆ.10: ರಾಜ್ಯ ಸರಕಾರವೂ ಸೇರಿದಂತೆ ಯಾವುದೇ ಏರ್ಪೋರ್ಟ್ ಡೆವಲಪರ್ರಿಂದ ಸೂಕ್ತವಾದ ಪ್ರಸ್ತಾವನೆ ಸಲ್ಲಿಕೆಯಾದರೆ ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್ಪೋರ್ಟ್ನ್ನು ನಿರ್ಮಿಸಲು ಇಲಾಖೆ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ದು ಭರವಸೆ ನೀಡಿದ್ದಾರೆ. ನಂದಿಕೂರಿನಲ್ಲಿ ವಿಮಾನನಿಲ್ದಾಣ ಸ್ಥಾಪನೆಯ ಕುರಿತಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಅ.14ರಂದು ಇಲಾಖೆಗೆ ಬರೆದ ಪತ್ರಕ್ಕೆ ಜ.31ರಂದು ನೀಡಿದ ಉತ್ತರದಲ್ಲಿ ರಾಮ್ಮೋಹನ್ ನಾಯ್ದು ಈ ವಿಷಯ ತಿಳಿಸಿದ್ದಾರೆ. ಭಾರತ ಸರಕಾರ 2008ರಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್(ಜಿಎಫ್ಎ) ಪಾಲಿಸಿಯನ್ನು ರೂಪಿಸಿದ್ದು, ಇದರ ಮಾರ್ಗ ಸೂಚಿಗಳು, ಕಾರ್ಯವಿಧಾನ ಹಾಗೂ ನಿಬಂಧನೆಗಳಂತೆ ದೇಶದಲ್ಲಿ ನೂತನ ಗ್ರೀನ್ಫೀಲ್ಡ್ ಏರ್ಪೋರ್ಟ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ನೀಡುತ್ತದೆ ಎಂದವರು ಹೇಳಿದ್ದಾರೆ. ಯೋಜನೆಯಂತೆ ರಾಜ್ಯ ಸರಕಾರವೂ ಸೇರಿದಂತೆ, ಯಾವುದೇ ಏರ್ಪೋರ್ಟ್ ಡೆವಲಪರ್ಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಯಸಿದರೆ, ಸೂಕ್ತವಾದ ಜಾಗವನ್ನು ಗುರುತಿಸಿ, ಆ ಜಾಗದಲ್ಲಿ ನಿಲ್ದಾಣ ಸ್ಥಾಪನೆಗೆ ಸಾಧ್ಯತಾ ಅಧ್ಯಯನ ನಡೆಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ‘ಜಾಗದ ಕ್ಲಿಯರೆನ್ಸ್’ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆಗ ಸರಕಾರ ಅದನ್ನು ಪರಿಶೀಲಿಸಿ ಇನ್ಪ್ರಿನ್ಸಿಪಲ್ ಅನುಮೋದನೆ ನೀಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಕರ್ನಾಟಕದ ನಂದಿಕೂರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಮುಂದೆ ರಾಜ್ಯ ಸರಕಾರ ಅಥವಾ ಏರ್ಪೋರ್ಟ್ ಡೆವಲಪರ್ರಿಂದ ಇದಕ್ಕೆ ಪ್ರಸ್ತಾಪ ಸಲ್ಲಿಕೆಯಾದರೆ ಗ್ರೀನ್ಫೀಲ್ಡ್ ಏರ್ಪೋರ್ಟ್ ಪಾಲಿಸಿ 2008ರ ನಿಬಂಧನೆಗಳಂತೆ ಅನುಮೋದನೆಗೆ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ 21 ಗ್ರೀನ್ಫೀಲ್ಡ್ ಏರ್ಪೋರ್ಟ್ಗಳಿದ್ದು, ಇವುಗಳಲ್ಲಿ ಕರ್ನಾಟಕದ ಕಲಬುರ್ಗಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳೂ ಸೇರಿವೆ. ಅಭಿವೃದ್ಧಿಯಾಗದ ಜಾಗದಲ್ಲಿ ಸಂಪೂರ್ಣ ಹೊಸದಾಗಿ ವಿಮಾನನಿಲ್ದಾಣವನ್ನು ನಿರ್ಮಿಸಿದರೆ ಅದನ್ನು ಗ್ರೀನ್ಫೀಲ್ಡ್ ಏರ್ಪೋರ್ಟ್ ಎಂದು ಕರೆಯಲಾಗುತ್ತದೆ. ನವಿಮುಂಬಯಿ ಇಂಟರ್ನೇಷನಲ್ ಏರ್ಪೋರ್ಟ್ ದೇಶದ ಅತ್ಯಂತ ವಿಶಾಲವಾದ ಗ್ರೀನ್ಫೀಲ್ಡ್ ಏರ್ಪೋರ್ಟ್ ಎನಿಸಿಕೊಂಡಿದೆ.
ರಶ್ಯದಿಂದ ತೈಲ ಖರೀದಿಗೆ ಭಾರತಕ್ಕೆ ನಿರ್ಬಂಧ| ಅಮೆರಿಕದ ವಿರುದ್ಧ ರಶ್ಯ ವಾಗ್ದಾಳಿ
ಮಾಸ್ಕೋ,ಫೆ.10: ರಶ್ಯದಿಂದ ತೈಲವನ್ನು ಖರೀದಿಸದಂತೆ ಭಾರತ ಮತ್ತಿತರ ದೇಶಗಳಿಗೆ ನಿರ್ಬಂಧ ವಿಧಿಸುತ್ತಿರುವುದಕ್ಕಾಗಿ ರಶ್ಯವು ಅಮೆರಿಕದ ಟ್ರಂಪ್ ಆಡಳಿತದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಟ್ರಂಪ್ ಬಳಗವು ಸುಂಕ ಹೇರಿಕೆ, ನಿರ್ಬಂದಗಳು ಹಾಗೂ ಆರ್ಥಿಕ ಪ್ರಾಬಲ್ಯವನ್ನು ಸಾಧಿಸಲು ನೇರವಾಗಿ ನಿಷೇಧ ಹೇರಿಕೆಯಂತಹ ಬೆದರಿಕೆಯ ಕ್ರಮಗಳನ್ನು ಈ ದೇಶಗಳ ವಿರುದ್ಧ ಅನುಸರಿಸುತ್ತಿದೆಯೆಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಯಾವ್ರೋವ್ ತಿಳಿಸಿದ್ದಾರೆ. ‘‘ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಕಳೆದ ವರ್ಷ ಆಲಾಸ್ಕದಲ್ಲಿ ನಡೆದ ಶೃಂಗಸಭೆಯಲ್ಲಿ, ಉಕ್ರೇನ್ ಸಂಘರ್ಷ ಕೊನೆಗೊಳಿಸುವ ಕುರಿತಾಗಿ ಅಮೆರಿಕ ಮಾಡಿದ್ದ ಪ್ರಸ್ತಾವನೆಯನ್ನು ಮಾಸ್ಕೋ ಸ್ವೀಕರಿಸಿತ್ತು. ಅಮೆರಿಕದ ನಿಬಂಧನೆಗಳನ್ನು ಒಪ್ಪಿಕೊಂಡ ಹೊರತಾಗಿಯೂ ವಾಶಿಂಗ್ಟನ್ ರಶ್ಯದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದೆ ಹಾಗೂ ರಶ್ಯದಿಂದ ಇಂಧನ ಖರೀದಿಸದಂತೆ ಇತರ ದೇಶಗಳ ಮೇಲೆ ನಿರ್ಬಂಧ ಹೇರಿದೆ ಎಂದರು. ಸಾಗರ ಕಾನೂನಿನ ಕುರಿತಾದ ವಿಶ್ವಸಂಸ್ತೆಯ ಒಡಂಬಡಿಕೆಯನ್ನು ಉಲ್ಲೇಘಿಸಿ ಅಮೆರಿಕವು ಸಮುದ್ರದಲ್ಲಿ ಟ್ಯಾಂಕರ್ಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಾಗೂ ನಮ್ಮ ಇತರ ಪಾಲುದಾರರು ಕಡಿಮೆದರದ ಹಾಗೂ ಯೋಗ್ಯಬೆಲೆಯ ರಶ್ಯನ್ ಇಂಧನ ಸಂಪನ್ಮೂಲಗಳು ಖರೀದಿಸುವುದನ್ನು ನಿಷೇಧಿಸಲು ಅಮೆರಿಕವು ಯತ್ನಿಸುತ್ತಿದೆ ಮತ್ತು ಅಮೆರಿಕದ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ)ವನ್ನು ದುಬಾರಿ ಬೆಲೆಗೆ ಖರೀದಿಸುವಂತೆ ಆ ದೇಶಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಲ್ಯಾವ್ರೋವ್ ತಿಳಿಸಿದ್ದಾರೆ. ಇಂಧನ ಮಾರ್ಗಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸುವುದು ವಾಶಿಂಗ್ಟನ್ನ ಉದ್ದೇಶವಾಗಿದೆ. ಇದಕ್ಕಾಗಿ ಅದು ಸುಂಕಗಳು, ನಿರ್ಬಂಧಗಳು, ಪ್ರತ್ಯಕ್ಷ ನಿಷೇಧಗಳು ಹೇರುತ್ತಿದೆ ಮತ್ತು ಇತರ ದೇಶಗಳ ಜೊತೆ ವ್ಯವಹಾರಗಳನ್ನು ನಡೆಸುವುದನ್ನು ತಡೆಗಟ್ಟುತ್ತಿದೆ ಎಂದರು. ನೂತನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಹೊಸದಿಲ್ಲಿಯು ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದೆಯೆಂದು ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬಳಿಕ ರಶ್ಯದಿಂದ ಈ ಮಹತ್ವದ ಪ್ರತಿಕ್ರಿಯೆ ಹೊರಬಿದ್ದಿದೆ.
ಅಂತಿಮ ಹಂತದಲ್ಲಿ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ: ವಾಸ್ತವಾಂಶ ಪತ್ರ ಬಿಡುಗಡೆಗೊಳಿಸಿದ ಶ್ವೇತಭವನ
ವಾಶಿಂಗ್ಟನ್,ಫೆ.10: ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ವನ್ನು ಏರ್ಪಡಿಸಲು ಅಮೆರಿಕ ಹಾಗೂ ಭಾರತ ಶ್ರಮಿಸುತ್ತಿರುವಂತೆಯೇ, ಉಭಯದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವೊಂದನ್ನು ಅಂತಿಮಗೊಳಿಸುವ ಹಂತದಲ್ಲಿರುವುದಾಗಿ ಶ್ವೇತಭವನವು ಸೋಮವಾರ ಬಿಡುಗಡೆಗೊಳಿಸಿರುವ ವಾಸ್ತವಾಂಶ ಪತ್ರ (ಫ್ಯಾಕ್ಟ್ಶೀಟ್) ತಿಳಿಸಿದೆ. ಸೇವೆಗಳು ಹಾಗೂ ಹೂಡಿಕೆ, ಕಾರ್ಮಿಕ ಮತ್ತು ಸರಕಾರದ ಮೂಲಕ ಉತ್ಪನ್ನಗಳ ಖರೀದಿ ಸೇರಿದಂತೆ ಇತ್ಯರ್ಥಕ್ಕೆ ಬಾಕಿಯುಳಿದಿರುವ ಕ್ಷೇತ್ರಗಳ ಬಗ್ಗೆ ಎರಡೂ ದೇಶಗಳು ಮಾತುಕತೆಯನ್ನು ಮುಂದುವರಿಸಲಿವೆ. ‘ಅಮೆರಿಕ ಹಾಗೂ ಭಾರತವು ಐತಿಹಾಸಿಕ ವ್ಯಾಪಾರ ಒಪ್ಪಂದ (ಮಧ್ಯಂತರ ಒಡಂಬಡಿಕೆ)ವನ್ನು ಘೋಷಿಸಿದೆ ’ ಎಂಬ ಶೀರ್ಷಿಕೆಯ ಈ ವಾಸ್ತವಾಂಶ ಪತ್ರದಲ್ಲಿ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಉತ್ಪನ್ನಗಳು ಮತ್ತು ವಿವಿ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಪಡಿಸುವುದನ್ನು ಅಥವಾ ಕಡಿಮೆಗೊಳಿಸುವುದನ್ನು ಒಳಗೊಂಡಿದೆ. ಅಮೆರಿಕದ ಜನತೆಯ ಹಿತಾಸಕ್ತಿಗಳನ್ನು ಬಲಪಡಿಸಲು, ಅಮೆರಿಕದ ಆಹಾರ ಹಾಗೂ ಕೃಷಿ ಉತ್ಪನ್ನಗಳನ್ನು ಮೇಲಿನ ಸುಂಕವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಭಾರತದ ಬದ್ದತೆ ಸೇರಿದಂತೆ ಒಪ್ಪಂದದ ಮುಖ್ಯ ನಿಬಂಧನೆಗಳನ್ನು ಈ ವಾಸ್ತವಾಂಶ ಪತ್ರವು ಒಳಗೊಂಡಿದೆ. ಅಮೆರಿಕದಿಂದ ಇಂಧನ, ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತಿತರ ಉತ್ಪನ್ನಗಳು, ಒಣ ಸಂಸ್ಕರಿತ ಧಾನ್ಯಗಳು, ಕೆಂಪುಜೋಳ, ಬಾದಾಮಿ, ಗೋಡಂಬಿ, ವಾಲ್ನಟ್ ಮತ್ತಿತರ ಬೀಜಗಳು, ತಾಜಾ ಹಾಗೂ ಸಂಸ್ಕರಿತ ಹಣ್ಣುಗಳು, ಕೆಲವು ನಿರ್ದಿಷ್ಟ ದ್ವಿದಳ ಧಾನ್ಯಗಳು, ವೈನ್ ಹಾಗೂ ಸ್ಪಿರಿಟ್ ಉತ್ಪನ್ನ ಸೇರಿದಂತೆ 500 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಬದ್ಧತೆಯನ್ನು ಭಾರತ ವ್ಯಕ್ತಪಡಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಜಗತ್ತಿನ ಯಾವುದೇ ಪ್ರಮುಖ ಆರ್ಥಿಕತೆಯ ರಾಷ್ಟ್ರಕಿಂತಲೂ ಅಧಿಕ ಸುಂಕಗಳನ್ನು ಭಾರತವು ಅಮೆರಿಕದ ಮೇಲೆ ಹೇರುತ್ತಾ ಬಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಶೇ.37 ಹಾಗೂ ಕೆಲವು ನಿರ್ದಿಷ್ಟ ವಾಹನಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುತ್ತಿದೆ.ಅಮೆರಿಕದ ಹಲವಾರು ಉತ್ಪನ್ನಗಳನ್ನು ಅತ್ಯಧಿಕ ಸಂರಕ್ಷಣಾತ್ಮಕ ಸುಂಕೇತರ ಅಡೆತಡೆಗಳನ್ನು ಹೇರಿದ ಇತಿಹಾಸವನ್ನು ಕೂಡಾ ಭಾರತ ಹೊಂದಿದೆ ಎಂದು ಶ್ವೇತಪತ್ರದಲ್ಲಿ ಹೇಳಿದೆ. ಮುಂಬರುವ ವಾರಗಳಲ್ಲಿ ಅಮೆರಿಕ ಹಾಗೂ ಭಾರತ ಸಮರ್ಪಕವಾಗಿ ಈ ಒಪ್ಪಂದದ ಕಾರ್ಯಚೌಕಟ್ಟನ್ನು ಸಮರ್ಪಕವಾಗಿ ಜಾರಿಗೊಳಿಸಲಿದೆ. ಅಮೆರಿಕದ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಲಾಭಕರವಾಗಿರುವ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವನ್ನು ಪೂರ್ಣಗೊಳಿಸುವ ಮುನ್ನ ಉಭಯದೇಶಗಳ ನಡುವೆ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿವೆ ಎಂದು ವಾಸ್ತವಾಂಶ ಪತ್ರ ತಿಳಿಸಿದೆ.
ಚಳಿಗಾಲದ ಒಲಿಂಪಿಕ್ಸ್ ನಲ್ಲೂ ಬಿಸಿಯೇರಿಸಿದ `ಧುರಂಧರ್' ಹಾಡು!: ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ವಿಡಿಯೋ ವೈರಲ್
Dhurandhar Song In Winter Olympics- ಬಾಲಿವುಡ್ ನ ಸೂಪರ್ ಡ್ಯೂಪಕರ್ ಹಿಟ್ ಸಿನಿಮಾ ಧುರಂಧರ್ ಸಿನಿಮಾ ಜಾಗತಿಕವಾಗಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಪಾಕಿಸ್ತಾನದ ತಂಡದ ಯುವ ಆಟಗಾರರು ಅಂಡರ್ 19 ಏಷ್ಯಾ ಕಪ್ ನಲ್ಲಿ ಗೆದ್ದ ಬಳಿಕ ಧುರಂಧರ್ ಹಾಡಿಗೆ ಮೈದಾನದಲ್ಲಿ ನೃತ್ಯ ಮಾಡಿದ್ದು ವೈರಲ್ ಆಗಿತ್ತು. ಇದೀಗ ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ಒಬ್ಬರು ಭಾರತೀಯ ಸಿನಿಮಾ ಹಾಡು ಅದರಲ್ಲೂ ಧುರಂಧರ್ ನ `ನಾ ದೇ ದಿಲ್ ಪರದೇಸಿ ನು’ ಪ್ರದರ್ಶನ ನೀಡಿರುವುದು ಫುಲ್ ವೈರಲ್ ಆಗಿದೆ.
UTS App ಸ್ಥಗಿತ, RailOne ಅಚಲ ಎಂದ ರೈಲ್ವೆ ಇಲಾಖೆ: ವ್ಯಾಲೆಟ್ ದುಡ್ಡು ಏನಾಗುತ್ತೆ? ಇಲ್ಲಿದೆ ಉತ್ತರ
ಭಾರತೀಯ ರೈಲ್ವೆ ಇಲಾಖೆ ತನ್ನ ಡಿಜಿಟಲ್ ಸೇವೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದು, ರೈಲ್ವೆ ಪ್ರಯಾಣಿಕರಿಗೆ ಅತಿ ಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ. ನೀವು ಇಷ್ಟು ದಿನ ಜನರಲ್ ಟಿಕೆಟ್ ಅಥವಾ ಪ್ಲಾಟ್ಫಾರ್ಮ್ ಟಿಕೆಟ್ ಪಡೆಯಲು ಬಳಸುತ್ತಿದ್ದ 'UTSonMobile' (ಯುಟಿಎಸ್) 'ಆ್ಯಪ್' ಇನ್ನು ನೆನಪಿನ ಪುಟ ಸೇರಲಿದೆ. ಹೌದು, ಮಾರ್ಚ್ 1, 2026 ರಿಂದ ಹಂತ ಹಂತವಾಗಿ ಯುಟಿಎಸ್ ಆ್ಯಪ್
ಅಬಕಾರಿ ಇಲಾಖೆಯಲ್ಲಿ ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ : ಆರ್.ಬಿ.ತಿಮ್ಮಾಪುರ
ಬೆಂಗಳೂರು : 2025-26ನೆ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ., ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಅದರಲ್ಲಿ ಈವರೆಗೆ 34,235 ಕೋಟಿ ರೂ., ಸಂಗ್ರಹವಾಗಿದ್ದು, ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಗುರಿಗಿಂತ ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಅಬಕಾರಿ ಇಲಾಖೆಯಲ್ಲಿ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ವಿವಿಧ ಪರವಾನಗಿಗೆ 16 ಹಂತಗಳಲ್ಲಿ ಅಧಿಕಾರಿಗಳ ಬಳಿ ಕಡತಗಳನ್ನು ಕಳುಹಿಸುವುದನ್ನು ತಪ್ಪಿಸಿ 7 ಅಧಿಕಾರಿಗಳಿಗೆ ಇಳಿಸಲಾಗಿದೆ. ಸೇಂದಿ ಹೇಗೆ ತಡೆಯಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. 14,275 ಸನ್ನದ್ದನ್ನು 47 ಗಂಟೆಗಳಲ್ಲಿ ನವೀಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಮದ್ಯ ಮಾರಾಟ ಸನ್ನದ್ಧು ನೀಡುವಲ್ಲಿ ಲಂಚ ಪಡೆಯುವ ಅಧಿಕಾರಿಗಳು ನನ್ನ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ. ಅಕ್ರಮ ಎಸಗುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅಬಕಾರಿ ಖಾತೆಯೇ ಅಂತಹದ್ದು. ಈ ಹಿಂದೆ ಅಬಕಾರಿ ಸಚಿವರಾಗಿದ್ದವರ ವಿರುದ್ಧವೂ ಆರೋಪಗಳು ಕೇಳಿಬಂದಿತ್ತು. ಈಗಲೂ ಬರುತ್ತಿದೆ. ಆದರೆ, ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಸಂಘಕ್ಕೆ ಮಾನ್ಯತೆಯೇ ಇಲ್ಲ: ನನ್ನ ಮತ್ತು ಇಲಾಖೆ ವಿರುದ್ಧ ಆರೋಪ ಮಾಡಿದ ಸಂಘಟನೆ ಮಾನ್ಯತೆ ಅವಧಿ ಮುಗಿದು ಹಲವು ವರ್ಷಗಳಾಗಿವೆ. ಆ ಸಂಘಕ್ಕೆ ಮಾನ್ಯತೆಯೇ ಇಲ್ಲ. ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂದಲ್ಲ. 158 ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, 19 ಮಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ. 85 ಅಧಿಕಾರಿಗಳ ವಿರುದ್ಧ ಪ್ರಕರಣವು ಸರಕಾರ ಹಂತದಲ್ಲಿದೆ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
Kalaburagi | ಚಿತ್ತಾಪುರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಳಿಗೆ ಉದ್ಘಾಟನೆ
ಕಲಬುರಗಿ: ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮಾಹಿತಿ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ತಾಪುರ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಮಾಹಿತಿ ಪ್ರದರ್ಶನ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜನರನ್ನು ನೇರವಾಗಿ ಸಂಪರ್ಕಿಸುವ ಈ ವಿನೂತನ ಪ್ರಚಾರ ಕಾರ್ಯದಿಂದ ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಜನಮಾನಸಕ್ಕೆ ತಲುಪಲಿದೆ ಎಂದರು. ರಾಜ್ಯ ಸರ್ಕಾರದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕ್ರಿಯಾಯೋಜನೆಯಡಿಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ರೂಪಿಸಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಲು ಚಿತ್ತಾಪುರ ಸೇರಿದಂತೆ ರಾಜ್ಯದ ಇತರೆ ಆಯ್ದ ಮೀಸಲು ಕ್ಷೇತ್ರಗಳಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸೇಡಂ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ, ಕೆಕೆಆರ್ಟಿಸಿ ಚಿತ್ತಾಪುರ ಡಿಪೊ ಮ್ಯಾನೇಜರ್ ಗೊಲ್ಲಾಳಪ್ಪ ಬಿರಾದರ್ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರು: ಉತ್ತಮ ಕರ್ತವ್ಯಕ್ಕೆ ಪ್ರಶಸ್ತಿ ಪಡೆದಿದ್ದ ಪೋಸ್ಟ್ಮೆನ್ ಆತ್ಮಹತ್ಯೆ
ಕೊಲ್ಲೂರು, ಫೆ.10: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್ಮೆನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.9ರಂದು ಬೆಳಗ್ಗೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್.(31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟ್ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿ ನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು. ಇವರು ಇದೇ ವಿಚಾರದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು: ಜೂಜು ಆಡುತ್ತಿದ್ದ ಆರೋಪ; ಐದು ಮಂದಿ ಸೆರೆ
ಪಣಂಬೂರು: ಜೂಜು ಆಡುತ್ತಿದ್ದ ಐವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಲ್ಪಿ ಯಾನೆ ವಿಲ್ಪ್ರೇಢ್ ಡಿಸೋಜಾ, ಸತೀಶ, ಬಾಲಕೃಷ್ಣ, ಪಿ.ಟಿ. ಜೋಸೆಫ್ ಮತ್ತು ಉಪೇಂದ್ರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ರೈಲ್ವೇ ಬ್ರಿಡ್ಜ್ ನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜು ಆಡುತ್ತಿರುವ ಕುರಿತು ಕಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 17,120 ರೂ. ಹಣ, 52 ಇಸ್ಪೀಟು ಎಲೆಗಳು, 2 ಸ್ವಲ್ಪ ಉರಿದ ಕ್ಯಾಂಡಲ್ , 4 ಮೊಬೈಲ್ ಮತ್ತು ನೆಲಕ್ಕೆ ಆಟಕ್ಕಾಗಿ ಹಾಸಿದ ನೀಲಿ ಬಣ್ಣದ ಟರ್ಪಾಲನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.
Kalaburagi | ತಾಲ್ಲೂಕುಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್
ಕಲಬುರಗಿ: ಮಂಗಳವಾರ ಬೆಳಿಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಆರಂಭಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಶಹಬಾದ್ ತಾಲ್ಲೂಕಿನ ರಾವೂರು ಗ್ರಾಮಕ್ಕೆ ಭೇಟಿ ನೀಡಿ ನೂತನವಾಗಿ ಪ್ರಾರಂಭವಾಗುತ್ತಿರುವ ನೂವುಕು ಸಿಮೆಂಟ್ ಕಾರ್ಖಾನೆಯನ್ನು ವೀಕ್ಷಿಸಿದರು. ಬಳಿಕ ಕೊಂಚೂರು ಮಾರ್ಗವಾಗಿ ನಾಲವಾರ ಗ್ರಾಮದ ಭೂ ಪರಿವರ್ತನೆ ಪ್ರದೇಶವನ್ನು ಪರಿಶೀಲಿಸಿದರು. ನಾಲವಾರ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ವಸತಿ ನಿಲಯ ಹಾಗೂ ನಾಡ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಪದ್ಧತಿಯನ್ನು ಪರಿಶೀಲಿಸಿದರು. ನಂತರ ಚಿತ್ತಾಪುರ ತಾಲ್ಲೂಕಿನ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಬಳಿಕ ಪ್ರಜಾಸೌಧದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನಾ ಪಾದಯಾತ್ರೆ| ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬಜ್ಪೆ: ಕೇಂದ್ರ ಸರಕಾರದ ನರೇಗಾ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಬದಲಾವಣೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ಪಾದಯಾತ್ರೆಯ ಪ್ರಯುಕ್ತ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳವಾರ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ಸ್ವಾತಂತ್ರ್ಯ ಸಂದರ್ಭ ಗಾಂಧಿಯನ್ನು ಕೊಂದವರು ಈಗ ಅವರ ಹೆಸರಿನ ಯೋಜನೆಯನ್ನು ತೆಗೆದು ಹಾಕುವ ಕೆಲಸಕ್ಕೆ ಮುಂದಾಗಿದೆ. ಈ ಮೂಲಕ ದೇಶದ ಅಸ್ಮಿತೆ ಗಾಂಧಿಯ ಹೆಸರನ್ನು ಇಲ್ಲದಾಗಿಸುವ ಹುನ್ನಾರವನ್ನು ನರೇಂದರ ಮೋದಿ ನೇತೃತ್ವದ ಭ್ರಷ್ಠ ಎನ್ಡಿಎ ಸರಕಾರ ನಡೆಸುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹೆಸರಿರುವ ಮಹಾತ್ಮ ಗಾಂಧಿ ಮನರೇಗಾ ಯೋಜನೆಯ ಹೆಸರು ಬದಲಾಯಿ ವಿಬಿ-ಜಿ ರಾಮ್ ಜಿ ಎಂದು ಮರು ನಾಮಕರಣಮಾಡಲು ಮುಂದಾಗಿದೆ. ಜೊತೆಗೆ ಬಡವರಿಗೆ ನೀಡುತ್ತಿದ್ದ ಉದ್ಯೋಗದಲ್ಲೂ ಬದಲಾವಣೆಗಳನ್ನು ತಂದು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು. ಇಂದು ಮಹಾತ್ಮ ಗಾಂಧಿಯ ಹೆಸರುವುದಕ್ಕೆ ಯೋಜನೆಯ ಹೆಸರು ಬದಲಾಯಿಸಲು ಮುಂದಾಗಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯಲ್ಲಿರುವ ಗಾಂಧಿಜಿಯ ಭಾವಚಿತ್ರವನ್ನೂ ಬದಲಾಯಿಸಲು ಹೇಸುವವರಲ್ಲ ಎಂದು ಖಾರವಾಗಿ ನುಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಪರವಾಗಿದ್ದು, ಸ್ವಾತಂತ್ರ್ಯದ ವಿರುದ್ಧ ಹೋರಾಡಿದವರ ದೇಶ ಪ್ರೇಮ ನಾಡಿನ ಜನತೆಗೆ ತಿಳಿದೆ ಎಂದ ಅವರು, ಗಾಂಧಿಯ ಹೆಸರು ನಿರ್ನಾಮಕ್ಕೆ ಮುಂದಾಗಿರುವವರು ಗಾಂಧಿಯ ಧೂಳಿಗೂ ಸಮಾನರಲ್ಲ ಎಂದು ನರೇಂದ್ರ ಮೋದಿ ಹಾಗೂ ಎನ್ ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮನರೇಗಾ ಯೋಜನೆಯ ಹೆಸರು ಬದಲಾವಣೆಯ ಮೂಲಕ ದೇಶದ ಅಸ್ಮಿಯಗೆ ಧಕ್ಕೆ ತರಲು ಯತ್ನಿಸುತ್ತಿರುವವರು ಹಾಗೂ ದೇಶದ ಬಡವರ ಶತ್ರುಗಳ ಇಂತಹಾ ಕುಕೃತ್ಯ ಗಳನ್ನು ಖಂಡಿಸಿ ವಿಬಿ-ಜಿ ರಾಮ್ ಜಿ ಹೆಸರು ಕೈಬಿಡಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಮನರೇಗಾ ಬಚಾಯೋ ಆಂದೋಲನದಲ್ಲಿ ಭಾಗವಹಿಸಬೇಕೆಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಧ್ಮನಾಭ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುರ್ಶಿದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಕೃಷ್ಣ ಅಮೀನ್, ಜಿ.ಪಂ.ಮಾಜಿ ಸದಸ್ಯ ಯು.ಪಿ. ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.
ಆಳಂದ | ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ: ಮಕ್ಕಳಿಗೆ ಮಾತ್ರೆ ಅಲ್ಬೆಂಡಝೋಲ್ ವಿತರಣೆ
ಆಳಂದ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮಂಗಳವಾರ ಪಟ್ಟಣದ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಉಸ್ಮಾನ್ ಸುತಾರ ಅವರು ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆ ನುಂಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜಂತುಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು” ಎಂಬ ಘೋಷವಾಕ್ಯದಡಿ ಫೆ.10ರಿಂದ 16ರವರೆಗೆ ತಾಲೂಕಾದ್ಯಂತ ಸಮಗ್ರ ಜಂತುಹುಳು ನಿವಾರಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಭಿಯಾನದಡಿ 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದರು. ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ. ಯಾವುದೇ ಮಗು ತಪ್ಪದೆ ಮಾತ್ರೆ ಪಡೆಯುವಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಶಾಲೆ-ಅಂಗನವಾಡಿಗಳಿಗೆ ತೆರಳಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ನಂದಿಕೋಲಮಠ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ವಿಜಯಲಕ್ಷ್ಮಿ ಹೊಸಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಬ್ದುಲ್ ರವುಫ್, ಆಪ್ತ ಸಮಾಲೋಚಕ ದೇವಾನಂದ, ಆರೋಗ್ಯ ನಿರೀಕ್ಷಣಾಧಿಕಾರಿ ಕೈಲಾಶ್, ಆರೋಗ್ಯ ಸುರಕ್ಷಣಾಧಿಕಾರಿ ವಂದನಾ ಶ್ರೀಶೈಲ, ಶಾಲೆಯ ಮುಖ್ಯೋಪಾಧ್ಯಾಯ ರುಕುಂ ಜಮಾದಾರ್, ಅಪ್ಸಾನ ಬೇಗ ಹಾಗೂ ಸಹ ಶಿಕ್ಷಕರಾದ ಸಂಗಮ್ಮ ಖಂಡಾಳ, ಮಹಾಲಕ್ಷ್ಮಿ, ಶಿವಲೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆಎಸ್ಡಿಎಲ್ನ 57 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಸಂಸ್ಥೆಯ ರಾಯಭಾರಿ ತಮನ್ನಾ ಭಾಟಿಯಾ
ಮೈಸೂರು ಸ್ಯಾಂಡಲ್ ಸೋಪ್ ಜತೆಗೆ ಹಲವು ಉತ್ಪನ್ನಗಳಿಗೆ ಸಮಕಾಲೀನ ಸ್ಪರ್ಶ
ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘದಿಂದ ರಾಜೇಂದ್ರ ಕುಮಾರ್ಗೆ ಸನ್ಮಾನ
ಮಂಗಳೂರು, ಫೆ.10: ಎಸ್ಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಮಂಗಳವಾರ ಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಮುದ್ರದ ಅಪಾಯಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ತುರ್ತು ರಕ್ಷಣಾ ವ್ಯವಸ್ಥೆಯ ಅಗತ್ಯತೆಯನ್ನು ಮನಗಂಡು ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘ ‘ಬೋಟ್ ಆ್ಯಂಬುಲೆನ್ಸ್’ನ್ನು ಸುಮಾರು ರೂ.16 ಲಕ್ಷ ವೆಚ್ಚದಲ್ಲಿ ನಿರ್ಮಿಸಿ, ಈಚೆಗೆ ಲೋಕಾರ್ಪಣೆ ಮಾಡಿದ್ದು, ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘಕ್ಕೆ ಎಂ.ಎನ್.ರಾಜೇಂದ್ರ ಕುಮಾರ್ ಅವರು ನೀಡಿದ ಸಹಕಾರ ಹಾಗೂ ಸಂಘದ ಸದಸ್ಯರಿಗೆ ಈ ಹಿಂದೆ ನೀಡಿದ ಸಾಲ ಸೌಲಭ್ಯದ ಸಹಕಾರವನ್ನು ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಈ ಸಂದರ್ಭದಲ್ಲಿ ಸ್ಮರಿಸಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಸಲಹೆಗಾರ ಇಸ್ಮಾಯಿಲ್ ಕೋಡಿ ಸದಸ್ಯ ಮುಹಮ್ಮದ್ ಉಪಸ್ಥಿತರಿದ್ದರು.
ಎಂಆರ್ಪಿಎಲ್ನಲ್ಲಿ ರಾಷ್ಟ್ರೀಯ ಹಿಂದಿ ವಿಚಾರ ಸಂಕಿರಣ
ಮಂಗಳೂರು, ಫೆ.10: ಅಧಿಕೃತ ಭಾಷೆಯ ಅಭಿವೃದ್ಧಿಯು ಕೇವಲ ಬಳಕೆಗೆ ಸೀಮಿತವಾಗದೆ, ಎಲ್ಲಾ ವರ್ಗ ಮತ್ತು ಪ್ರಾದೇಶಿಕ ಭಾಷೆಗಳನ್ನು ಒಳಗೊಳ್ಳುವ ಮೂಲಕ ರಾಷ್ಟ್ರದ ಆತ್ಮವನ್ನು ಪ್ರತಿನಿಧಿಸಬೇಕು ಎಂದು ಎಂಆರ್ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೃಷ್ಣ ಹೆಗ್ಡೆ ಮಿಯಾರ್ ಹೇಳಿದ್ದಾರೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ವತಿಯಿಂದ ಫೆ.9 ರಂದು ಎಂಆರ್ಪಿಎಲ್ ರಿಕ್ರೀಯೇಶನ್ ಸೆಂಟರ್ನಲ್ಲಿ ಸಾಮರಸ್ಯ ಮತ್ತು ಒಳಗೊಳ್ಳುವಿಕೆಯೊಂದಿಗೆ ಅಧಿಕೃತ ಭಾಷೆಯ ವಿಕಸನ ಪಯಣ ಎಂಬ ವಿಷಯದ ಬಗ್ಗೆ ಆಯೋಜಿಸಲಾದ ಒಂದು ದಿನದ ‘ರಾಷ್ಟ್ರೀಯ ಹಿಂದಿ ವಿಚಾರಸಂಕಿರಣ’ದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು. ಭಾರತವು ವೈವಿಧ್ಯಮಯ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ನೆಲೆಬೀಡು.ಹಿಂದಿಯು ಕೇವಲ ಸಂಪರ್ಕ ಭಾಷೆಯಲ್ಲದೆ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆಯ ಪ್ರಬಲ ಮಾಧ್ಯಮವಾಗಿದೆ ಎಂದರು. ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯ ಜಂಟಿ ನಿರ್ದೇಶಕ (ಅನುಷ್ಠಾನ) ಕುಮಾರ್ ಪಾಲ್ ಶರ್ಮಾ ಅವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಎನ್ಇಆರ್ಬಿಎಫ್ಐಡಿ ಹಿರಿಯ ವಿಶ್ಲೇಷಕ ಡಾ. ಧೀರಜ್ ಕುಮಾರ್ ಮಿಶ್ರಾ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಎಂಆರ್ಪಿಎಲ್ ತರಬೇತಿ ಮತ್ತು ಅಧಿಕೃತ ಭಾಷಾ ವಿಭಾಗದ ಜಿಎಂ ದೇವೇಶ್ ದುಬೆ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಕೃಷ್ಣ ಕುಮಾರ್ ಯಾದವ್, ಮತ್ತು ಅಧಿಕೃತ ಭಾಷಾ ವಿಭಾಗದ ಮುಖ್ಯ ವ್ಯವಸ್ಥಾಪಕ ಸುಧೀರ್ ದುಬೆ ಉಪಸ್ಥಿತರಿದ್ದರು. ವಿಚಾರಸಂಕಿರಣದಲ್ಲಿ ಒಟ್ಟು ಐದು ಮಾಹಿತಿಪೂರ್ಣ ಗೋಷ್ಠಿಗಳು ನಡೆದವು. ಪುತ್ತೂರು, ಉಡುಪಿ, ಕುಂದಾಪುರ, ಸುಳ್ಯ, ಕಾರ್ಕಳ, ಮೂಡುಬಿದಿರೆ, ಉಜಿರೆ ಮತ್ತು ಮಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳು, ಕೇಂದ್ರ ಸರಕಾರಿ ಕಚೇರಿಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಸಂಸ್ಥೆಗಳಿಂದ ಸುಮಾರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಆಳ್ವಾಸ್ ವಿದ್ಯಾರ್ಥಿನಿಯರು ಪ್ರಥಮ
ಮೂಡುಬಿದಿರೆ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಫೆ. 7 ಮತ್ತು 8ರಂದು ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಬಿ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸ್ನೇಹ ಪರಪ್ಪ ಸಮಾಯಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
CBSE 12ನೇ ತರಗತಿ ಪರೀಕ್ಷೆಗೆ ಬಂತು ಡಿಜಿಟಲ್ ಟಚ್ ; ಇನ್ಮುಂದೆ ಕಂಪ್ಯೂಟರ್ನಲ್ಲೇ ಮೌಲ್ಯಮಾಪನ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ ಶೈಕ್ಷಣಿಕ ಸಾಲಿನ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಮತ್ತು ಐತಿಹಾಸಿಕ ಬದಲಾವಣೆಯೊಂದನ್ನು ಘೋಷಿಸಿದೆ. ತಂತ್ರಜ್ಞಾನದ ಅಳವಡಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ನಿರ್ಧರಿಸಿದೆ. ಇದಕ್ಕೆ 'ಆನ್-ಸ್ಕ್ರೀನ್ ಮಾರ್ಕಿಂಗ್' (On-Screen Marking - OSM)
ಕಂಡ್ಲೂರು ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ; 11 ಮಂದಿ ಬಂಧನ
ನಾಲ್ಕು ದೋಣಿ ಸಹಿತ ಮರಳು ವಶ
ಟಿ20 ವಿಶ್ವಕಪ್ ವೇಳೆ ಆಟಗಾರರೊಂದಿಗೆ ಇರಬಹುದೇ ಪತ್ನಿಯರು?: ಟೀಂ ಇಂಡಿಯಾ ಮನವಿಗೆ ಬಿಸಿಸಿಐ ಒಪ್ಪಿಗೆ ಯಾಕಿಲ್ಲ?
Team India News- ಭಾರತ ತಂಡದೊಂದಿಗೆ ಆಟಗಾರರ ಪತ್ನಿಯರು ಸಹ ವಾಸ್ತವ್ಯ ಹೂಡುವ, ಪ್ರಯಾಣ ಮಾಡುವ ಬಗ್ಗೆ ಕಳೆದ ವರ್ಷ ದೊಡ್ಡ ಚರ್ಚೆ ನಡೆದ ಬಳಿಕ ಬಿಸಿಸಿಐ ಸ್ಪಷ್ಟ ನಿಲುವಿಗೆ ಬಂದಿತ್ತು. ಅದರ ಪ್ರಕಾರ ಅನೇಕ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸಾಗಿತ್ತು. ದೀರ್ಘಕಾಲದ ಪ್ರವಾಸದಲ್ಲಿ ಮಾತ್ರ ಕೆಲ ದಿನಗಳ ಕಾಲ ಕುಟುಂಬದೊಂದಿಗೆ ಉಳಿಯಲು ಅವಕಾಶ ನೀಡಲಾಗಿತ್ತು. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮುಂದಿರಿಸಿದ ಪ್ರಸ್ತಾಪಕ್ಕೆ ಬಿಸಿಸಿಐ ಖಡಕ್ಕಾಗಿ ಹೇಳಿದ್ದೇನು?
ಅಂದರ್ ಬಾಹರ್: 11 ಮಂದಿ ಆರೋಪಿಗಳ ಬಂಧನ
ಕಾರ್ಕಳ, ಫೆ.10: ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಮನೆಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕಾರ್ಕಳ ಪೊಲೀಸರು ಫೆ.7ರಂದು ರಾತ್ರಿ ವೇಳೆ ಬಂಧಿಸಿದ್ದಾರೆ. ಬೆಳ್ತಂಗಡಿ ಗುರುವಾಯನಕೆರೆಯ ಉಮ್ಮರ ಫಾರೂಕ್(62), ಬಂಟ್ವಾಳ ತಾಲೂಕಿನ ಸಜಿಪಪಡುವಿನ ಅಬ್ದುಲ್ ಅಝೀಝ್ (40), ಕಾರ್ಕಳ ಗುಡ್ಡೆಯಂಗಡಿಯ ಸತೀಶ ಎಸ್.ಪ್ರಭು(49), ಮಂಗಳೂರು ಬೊಳಿಯಾರಿನ ಅಬ್ದುಲ್ ರಹಿಮಾನ್ (49), ಬಂಟ್ವಾಳ ತಾಲೂಕಿನ ಮೂಡಾದ ಸಮೀರ್ (46), ಮಂಗಳೂರು ಬೇಂಗ್ರೆಯ ಸುಲೈಮಾನ್ (45), ಬಂಟ್ವಾಳ ಸಜಿಪ ನಡುವಿನ ಇರ್ಫಾನ್(26), ಸಜಿಪ ಮೂನ್ನೂರಿನ ಚೇತಕ್(38) ಬಂಧಿತ ಆರೋಪಿಗಳು. ಇವರಿಂದ ಜುಗಾರಿ ಆಟಕ್ಕೆ ಬಳಸಿದ ನಗದು 22690ರೂ. ಹಾಗೂ 9 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬವರು ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಜುಗಾರಿ ಆಟ ನಡೆಸುತ್ತಿದ್ದು, ಈ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಉಳಿದ ಮೂರು ಆರೋಪಿಗಳು ಓಡಿ ಹೋಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಬಿಜೆಪಿಗರ ಹೋರಾಟ ಪ್ರಚಾರಕ್ಕಾಗಿಯೇ ಹೊರತು, ಜನರ ಹಿತಕ್ಕಾಗಿ ಅಲ್ಲ: ಡಿ.ಕೆ.ಶಿವಕುಮಾರ್
ಹೊಸದಿಲ್ಲಿ : ಬಿಜೆಪಿಯವರ ಹೋರಾಟ ಏನಿದ್ದರೂ ರಾಜಕೀಯಕ್ಕಾಗಿ ಹೊರತು, ಜನರ ಹಿತಕ್ಕಾಗಿ ಇಲ್ಲ. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಮಂಗಳವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಮೆಟ್ರೋ ದರ ಏರಿಕೆ ವಿಚಾರ ಕೇಂದ್ರ ಸರಕಾರ ದರ ಏರಿಕೆಗೆ ತಡೆ ಹಿಡಿಯಬಹುದಾಗಿತ್ತಲ್ಲವೇ? ಬಿಜೆಪಿ ನಾಯಕರು ಯಾವ ಕಾನೂನಿನ ಅಡಿಯಲ್ಲಿ ಇದನ್ನು ತಡೆದಿದ್ದಾರೆಂದು ಹೇಳಲಿ. ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ ಅಷ್ಟೇ. ಅವರು ಕೇಂದ್ರ ಮಂತ್ರಿ ಭೇಟಿ ಮಾಡಿರಬಹುದು. ಆದರೆ, ದರ ಏರಿಕೆ ತಡೆಯುವ ಯಾವ ರೀತಿಯ ಹಕ್ಕು ಅವರಿಗೆ ಇಲ್ಲ ಎಂದು ತಿಳಿಸಿದರು. ‘ರಾಜಕೀಯದಲ್ಲಿ ಬದುಕಿದ್ದೇನೆಂದು ತೋರಿಸಿಕೊಳ್ಳಲು, ಪ್ರಚಾರ ಪಡೆಯಲು ತೇಜಸ್ವಿ ಸೂರ್ಯ ಈ ರೀತಿ ಮಾಡುತ್ತಿದ್ದಾರೆ. ಅವರಿಂದ ಕರ್ನಾಟಕ ರಾಜ್ಯಕ್ಕೆ 1 ರೂ.ಅನುದಾನ ತರಲು ಆಗಿಲ್ಲ. ಬೆಂಗಳೂರಿಗೆ ಒಂದು ಯೋಜನೆ ತರಲು ಆಗಲಿಲ್ಲ. ಹೀಗಾಗಿ ಮಾತನಾಡುತ್ತಾರೆ, ಮಾಧ್ಯಮಗಳು ಅವರನ್ನು ದೊಡ್ಡ ನಾಯಕನಂತೆ ಬಿಂಬಿಸುತ್ತಿದ್ದೀರಿ. ಅವರಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿ ಬೇರೆಯವರು ಯಾರೂ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು. ಎಐಸಿಸಿ ನಾಯಕರು ಒಂದು ಸಭೆ ನಿಗದಿಪಡಿಸಿದ್ದಾರೆ. ವಿವಿಧ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಚರ್ಚೆಗೆ ಕರೆದಿದ್ದಾರೆ ಎಂದ ಅವರು, ದಿಲ್ಲಿಗೆ ಬಂದ ನಂತರ ಯಾರೆಲ್ಲಾ ಬಿಡುವಾಗಿರುತ್ತಾರೆ, ಸಮಯ ನೀಡುತ್ತಾರೋ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ರಣಜಿ| ಸುದೀಪ್ ಘರಾಮಿ 299 ರನ್: ಬಂಗಾಳಕ್ಕೆ ಇನಿಂಗ್ಸ್ ಜಯ, ಸೆಮಿ ಫೈನಲ್ಗೆ ಲಗ್ಗೆ
ಕಲ್ಯಾಣಿ, ಫೆ.10: ಆಂಧ್ರ ತಂಡದ ವಿರುದ್ಧ ಇನಿಂಗ್ಸ್ ಹಾಗೂ 90 ರನ್ಗಳ ಅಂತರದಿಂದ ಜಯಶಾಲಿಯಾಗಿರುವ ಬಂಗಾಳ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ. ರಣಜಿಯ ಕ್ವಾರ್ಟರ್ ಫೈನಲ್ ಪಂದ್ಯದುದ್ದಕ್ಕೂ ಆಂಧ್ರ ತಂಡ ಸ್ಪರ್ಧೆಯಲ್ಲಿರಲಿಲ್ಲ. ಮೊದಲ ಇನಿಂಗ್ಸ್ನಲ್ಲಿ 295 ರನ್ಗೆ ಆಲೌಟಾಗಿದ್ದ ಆಂಧ್ರ ತಂಡ ಕೊನೆಯ ದಿನವಾದ ಮಂಗಳವಾರ ತನ್ನ ಎರಡನೇ ಇನಿಂಗ್ಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ 90 ರನ್ ಹೊರತಾಗಿಯೂ 244 ರನ್ಗೆ ಆಲೌಟಾಯಿತು. ಬಂಗಾಳ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ ಸುದೀಪ ಕುಮಾರ್ ಘರಮಿ ಅವರ ಭರ್ಜರಿ ಬ್ಯಾಟಿಂಗ್(299 ರನ್, 596 ಎಸೆತ, 31 ಬೌಂಡರಿ, 6 ಸಿಕ್ಸರ್)ಸಹಾಯದಿಂದ 629 ರನ್ ಗಳಿಸಿತು. ಹಬೀಬ್ ಗಾಂಧಿ(95 ರನ್, 229 ಎಸೆತ)ಹಾಗೂ ಸುಮಂತ ಗುಪ್ತಾ(81 ರನ್, 167 ಎಸೆತ)ಅರ್ಧಶತಕಗಳ ಕೊಡುಗೆ ನೀಡಿದರು. ಐದನೇ ದಿನವಾದ ಮಂಗಳವಾರ 3 ವಿಕೆಟ್ಗಳ ನಷ್ಟಕ್ಕೆ 64 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಆಂಧ್ರ ತಂಡ 72.2 ಓವರ್ಗಳಲ್ಲಿ 244 ರನ್ಗೆ ಸರ್ವಪತನವಾಗಿ ಇನಿಂಗ್ಸ್ ಹಾಗೂ 90 ರನ್ಗಳ ಅಂತರದಿಂದ ಸೋಲುಂಡಿತು. ಆಂಧ್ರ ಬ್ಯಾಟರ್ಗಳು ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರತಿರೋಧ ಒಡ್ಡಿದರು. ಬ್ಯಾಟರ್ ಕೆ.ಎಸ್. ಭರತ್ ಗಾಯಗೊಂಡಿರುವುದು ತಂಡದ ಹೋರಾಟಕ್ಕೆ ಹಿನ್ನಡೆವುಂಟು ಮಾಡಿತು. ಬಂಗಾಳದ ಪರ ಶಹಬಾಝ್ ಅಹ್ಮದ್(4-72)ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದರು. ವೇಗಿಗಳಾದ ಮುಕೇಶ್ ಕುಮಾರ್(5-66)ಹಾಗೂ ಆಕಾಶ್ ದೀಪ್(4-79)ಮೊದಲ ಇನಿಂಗ್ಸ್ನಲ್ಲಿ ಆಂಧ್ರ ತಂಡಕ್ಕೆ ಭಾರೀ ಹಾನಿವುಂಟು ಮಾಡಿದ್ದರು. ಬಂಗಾಳ ತಂಡವು ಫೆಬ್ರವರಿ 15ರಂದು ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿ ಫೈನಲ್ನಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಸೆಣಸಾಡಲಿವೆ. ಬಂಗಾಳ ತಂಡವು 2022-23ರ ಋತುವಿನಲ್ಲಿ ಕೊನೆಯ ಬಾರಿ ಸೆಮಿ ಫೈನಲ್ ಪಂದ್ಯವನ್ನು ಆಡಿತ್ತು. ‘‘ಬಂಗಾಳವು ಸರಿಯಾದ ಸಮಯಕ್ಕೆ ಉನ್ನತ ಮಟ್ಟ ತಲುಪಿದೆ. ನಾವು ಈ ವರ್ಷ ಸ್ಮರಣೀಯ ಕ್ಷಣ ಅನುಭವಿಸಿದ್ದೇವೆ. ಜ್ವರದ ಹೊರತಾಗಿಯೂ ಆಕಾಶ್ ದೀಪ್ ಸಹಿತ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದರು’’ ಎಂದು ನಾಯಕ ಅಭಿಮನ್ಯು ಈಶ್ವರನ್ ಹೇಳಿದ್ದಾರೆ.
ಟಿ-20 ವಿಶ್ವಕಪ್| ನಮೀಬಿಯಾಕ್ಕೆ ಸೋಲುಣಿಸಿದ ನೆದರ್ಲ್ಯಾಂಡ್ಸ್
ಹೊಸದಿಲ್ಲಿ,ಫೆ.10: ಬಾಸ್ ಡಿ ಲೀಡ್ ಆಲ್ರೌಂಡ್ ಆಟದ(ಔಟಾಗದೆ 72 ರನ್, 2-20)ಸಹಾಯದಿಂದ ನೆದರ್ಲ್ಯಾಂಡ್ಸ್ ತಂಡವು ನಮೀಬಿಯಾ ತಂಡವನ್ನು ಏಳು ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಬಾಸ್ ಅವರ ತಂದೆ ಟಿಮ್ ಡಿ ಲೀಡ್ ಕೂಡ ನೆದರ್ಲ್ಯಾಂಡ್ಸ್ ಪರ ಆಡಿದ್ದರು. 2003ರ ಏಕದಿನ ವಿಶ್ವಕಪ್ನಲ್ಲಿ ಸಚಿನ್ ತೆಂಡುಲ್ಕರ್ರನ್ನು ಔಟ್ ಮಾಡಿದ್ದರು.ಇದರೊಂದಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ವಿಕೆಟ್ ಕಬಳಿಸಿದ್ದರು. ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ತನ್ನ ಆಲ್ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ ಬಾಸ್ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ತಂಡ ಸ್ಪರ್ಧೆಯಲ್ಲಿರುವಂತೆ ನೋಡಿಕೊಂಡರು. ಎರಡು ವಿಕೆಟ್ ಪಡೆದು ನಮೀಬಿಯಾ ತಂಡವನ್ನು 8 ವಿಕೆಟ್ಗಳ ನಷ್ಟಕ್ಕೆ 156 ರನ್ಗೆ ನಿಯಂತ್ರಿಸಿದ ಬಾಸ್ ಡಿ ಲೀಡ್ 48 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು. ಡಿ ಲೀಡ್ಗೆ ಕಾಲಿನ್ ಆಕರ್ಮನ್ (32 ರನ್, 28 ಎಸೆತ)ಹಾಗೂ ಆರಂಭಿಕ ಆಟಗಾರ ಮೈಕಲ್ ಲೆವಿಟ್(28 ರನ್, 15 ಎಸೆತ)ಉತ್ತಮ ಸಾಥ್ ನೀಡಿದರು. ಆಕರ್ಮನ್ ಅವರೊಂದಿಗೆ ಮೂರನೇ ವಿಕೆಟ್ಗೆ 70 ರನ್ ಜೊತೆಯಾಟ ನಡೆಸಿದ ಡಿ ಲೀಡ್ ಪಂದ್ಯವನ್ನು ತನ್ನತ್ತ ಸೆಳೆದರು. ನೆದರ್ಲ್ಯಾಂಡ್ಸ್ನಂತೆಯೇ ನಮೀಬಿಯ ಕೂಡ ಸ್ಪಿನ್ ಬೌಲಿಂಗ್ ಮೂಲಕ ತನ್ನ ದಾಳಿಯನ್ನು ಆರಂಭಿಸಿತು. ಆರಂಭಿಕ ಆಟಗಾರ ಮ್ಯಾಕ್ಸ್ ಡಿ ಡೌಡ್(7 ರನ್)ಹಾಗೂ ಮೈಕಲ್ ಲೆವಿಟ್(28 ರನ್)ವಿಕೆಟ್ಗಳನ್ನು ಬೇಗನೆ ಉರುಳಿಸಿದ ನಮೀಬಿಯಾ ತಂಡ ಆರಂಭಿಕ ಮೇಲುಗೈ ಸಾಧಿಸಿತು. 22ರ ಹರೆಯದ ಲೆವಿಟ್ ಎಡಗೈ ವೇಗಿ ರುಬೆನ್ಗೆ ವಿಕೆಟ್ ಒಪ್ಪಿಸುವ ಮೊದಲು 15 ಎಸೆತಗಳಲ್ಲಿ 28 ರನ್ ಗಳಿಸಿ ಡಚ್ಚರು 50 ರನ್ ಗಳಿಸುವಲ್ಲಿ ನೆರವಾದರು. 13ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಅಕರ್ಮನ್(32 ರನ್, 28 ಎಸೆತ) ಔಟಾದಾಗ ನೆದರ್ಲ್ಯಾಂಡ್ಸ್ ಗೆಲುವಿಗೆ ಇನ್ನೂ 43 ರನ್ಗಳ ಅಗತ್ಯವಿತ್ತು. ಬಾಸ್ ಡಿ ಲೀಡ್(ಔಟಾಗದೆ 72, 48 ಎಸೆತ, 5 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ಸ್(ಔಟಾಗದೆ 18, 9 ಎಸೆತ)ನಾಲ್ಕನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 24 ಎಸೆತಗಳಲ್ಲಿ 43 ರನ್ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನಮೀಬಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 156 ರನ್ ಕಲೆ ಹಾಕಿತು. ನಮೀಬಿಯಾ ಮೂರನೇ ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ಎರಡನೇ ವಿಕೆಟ್ಗೆ 50 ರನ್ ಸೇರಿಸಿದ ಜಾನ್ ಫೈಲಿಂಕ್(30 ರನ್, 26 ಎಸೆತ)ಹಾಗೂ ಜಾನ್ ನಿಕೊಲ್ ಲೋಫ್ಟಿ(42 ರನ್, 38 ಎಸೆತ)ತಂಡವನ್ನು ಆಧರಿಸಿದರು. ಜೆ.ಜೆ.ಸ್ಮಿತ್(22 ರನ್, 15 ಎಸೆತ)ಹಾಗೂ ನಾಯಕ ಗೆರ್ಹಾರ್ಡ್ ಎರಾಸ್ಮಸ್(18 ರನ್, 9 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದ ಪರಿಣಾಮ ನಮೀಬಿಯಾ ತಂಡವು 156 ರನ್ ಕಲೆ ಹಾಕಿತು. ನೆದರ್ಲ್ಯಾಂಡ್ಸ್ ತಂಡವು ಒಟ್ಟು 8 ಬೌಲರ್ಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ ಲೊಗನ್ ವಾನ್ ಬೀಕ್(2-13) ಹಾಗೂ ಬಾಸ್ ಡಿ ಲೀಡ್(2-20)ತಲಾ ಎರಡು ವಿಕೆಟ್ಗಳನ್ನು ಪಡೆದರು.
ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಹರ್ಷಿತ್ ರಾಣಾ: ಐಪಿಎಲ್ನ ಬಹುತೇಕ ಪಂದ್ಯಗಳಿಗೆ ಅಲಭ್ಯ
ಮುಂಬೈ, ಫೆ.10: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ವೇಗದ ಬೌಲರ್ ಹರ್ಷಿತ್ ರಾಣಾ ಟಿ-20 ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. ಮುಂಬರುವ ಐಪಿಎಲ್ನ ಬಹುತೇಕ ಪಂದ್ಯಗಳಿಂದಲೂ ವಂಚಿತರಾಗಲಿದ್ದಾರೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ರಾಣಾ ಅವರು ಅಮೆರಿಕ ವಿರುದ್ಧ ಭಾರತ ತಂಡ ಆಡಿರುವ ಮೊದಲ ವಿಶ್ವಕಪ್ ಪಂದ್ಯದಿಂದಲೂ ಹೊರಗುಳಿದಿದ್ದರು. ‘‘ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ವೈದ್ಯ ದಿನ್ಶಾ ಪರ್ದಿವಾಲಾ ಅವರು ರಾಣಾ ಅವರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸರ್ಜರಿಯ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ(ಸಿಒಇ)ತೆರಳಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ’’ ಎಂದು ಮೂಲಗಳು ತಿಳಿಸಿವೆ. ರಾಣಾ ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದು, ಮುಂಬರುವ ಐಪಿಎಲ್ನ ಬಹುತೇಕ ಪಂದ್ಯಗಳು ಅಥವಾ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಟಿ-20 ವಿಶ್ವಕಪ್| ಸೀಫರ್ಟ್, ಅಲೆನ್ ಭರ್ಜರಿ ಜೊತೆಯಾಟ: ಕಿವೀಸ್ಗೆ ಸುಲಭ ತುತ್ತಾದ ಯುಎಇ
ಚೆನ್ನೈ, ಫೆ.10: ಆರಂಭಿಕ ಬ್ಯಾಟರ್ಗಳಾದ ಟಿಮ್ ಸೀಫರ್ಟ್(ಔಟಾಗದೆ 89 ರನ್, 42 ಎಸೆತ, 12 ಬೌಂಡರಿ, 3 ಸಿಕ್ಸರ್)ಹಾಗೂ ಫಿನ್ ಅಲೆನ್(ಔಟಾಗದೆ 84, 50 ಎಸೆತ, 5 ಬೌಂಡರಿ, 5 ಸಿಕ್ಸರ್) ಐತಿಹಾಸಿಕ ಜೊತೆಯಾಟದ ನೆರವಿನಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ನಿರೀಕ್ಷೆಯಂತೆಯೇ ಟಿ-20 ವಿಶ್ವಕಪ್ನ ‘ಡಿ’ ಗುಂಪಿನ ಪಂದ್ಯದಲ್ಲಿ ಯುಎಇ ತಂಡವನ್ನು 10 ವಿಕೆಟ್ಗಳ ಅಂತರದಿಂದ ಸುಲಭವಾಗಿ ಮಣಿಸಿತು. ಗ್ಲೆನ್ ಫಿಲಿಪ್ಸ್ 18ನೇ ಓವರ್ನಲ್ಲಿ 27 ರನ್ ನೀಡಿದ್ದರು. ಜೆಮ್ಮಿ ನೀಶಾಮ್ ಓವರ್ ಥ್ರೋ ಮೂಲಕ ನಾಲ್ಕು ರನ್ ಸೋರಿಕೆ ಮಾಡಿದ ಹೊರತಾಗಿಯೂ ಕಿವೀಸ್ ಪಡೆ ಇನ್ನೂ 28 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು. ಸೂಪರ್-8 ಹಂತವನ್ನು ತಲುಪುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಅಲೆನ್ ಹಾಗೂ ಸೀಫರ್ಟ್ ಇಬ್ಬರೇ ಸೇರಿಕೊಂಡು 174 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ವಿಕೆಟ್ಗೆ ಗರಿಷ್ಠ ರನ್ ಜೊತೆಯಾಟ(175) ನಡೆಸಿದ ಹಿರಿಮೆಗೆ ಪಾತ್ರರಾದರು. ಟಿಮ್ ಶೆಫರ್ಟ್ ಹಾಗೂ ಫಿನ್ ಅಲೆನ್ ಟಿ-20 ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ಪರ ಮೊದಲ ವಿಕೆಟ್ನಲ್ಲಿ ಗರಿಷ್ಠ ಜೊತೆಯಾಟ(175 ರನ್)ನಡೆಸಿದರು. ಇದರೊಂದಿಗೆ ವಿನ್ಸೆಂಟ್ ಹಾಗೂ ಮೆಕಲಮ್ ನಡುವಿನ 68 ರನ್ ಜೊತೆಯಾಟವನ್ನು ಮುರಿದರು. ನ್ಯೂಝಿಲ್ಯಾಂಡ್ ಹಾಗೂ ಯುಎಇ ನಡುವಿನ ಟಿ-20 ಪಂದ್ಯದಲ್ಲಿ ಒಟ್ಟು ಗರಿಷ್ಠ ರನ್(348)ದಾಖಲಾಗಿದೆ. ಟಿ-20 ವಿಶ್ವಕಪ್ನಲ್ಲಿ ಯುಎಇ ಬೌಲರ್ ಮುಹಮ್ಮದ್ ರೋಹಿದ್ ಇನಿಂಗ್ಸ್ವೊಂದರಲ್ಲಿ ಗರಿಷ್ಠ ರನ್(51)ಬಿಟ್ಟುಕೊಟ್ಟರು. ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡವು ನಾಯಕ ಮುಹಮ್ಮದ್ ವಸೀಂ(ಔಟಾಗದೆ 66 ರನ್, 45 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಅಲಿಶನ್ ಶರಫು(55 ರನ್, 47 ಎಸೆತ, 5 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 173 ರನ್ ಕಲೆ ಹಾಕಿತು. ವಸೀಂ ಹಾಗೂ ಶರಫು ಯುಎಇ ತಂಡದ ಪರ ಎರಡನೇ ವಿಕೆಟ್ಗೆ ಗರಿಷ್ಠ ಜೊತೆಯಾಟ(107 ರನ್)ನಡೆಸಿದರು. ಈ ಮೂಲಕ ರಿಝ್ವಾನ್ ಹಾಗೂ ಮುಹಮ್ಮದ್ ವಸೀಂ ನಡುವಿನ 58 ರನ್ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ. ಮುಹಮ್ಮದ್ ವಸೀಂ ಅವರು ಪುರುಷರ ಟಿ-20 ವಿಶ್ವಕಪ್ನಲ್ಲಿ ಯುಎಇ ಪರ ಗರಿಷ್ಠ ವೈಯಕ್ತಿಕ ಸ್ಕೋರ್(66 ರನ್)ಕಲೆ ಹಾಕಿದರು. ವಸೀಂ ಟಿ-20 ವಿಶ್ವಕಪ್ನ ಇನಿಂಗ್ಸ್ವೊಂದರಲ್ಲಿ ಸಿಕ್ಸರ್, ಬೌಂಡರಿಗಳ ಮೂಲಕವೇ ಗರಿಷ್ಠ ರನ್(34) ದಾಖಲಿಸಿ ಶೈಮನ್ ಅನ್ವರ್(22 ರನ್)ದಾಖಲೆಯನ್ನು ಮುರಿದರು. ಮೊದಲ ವಿಕೆಟ್ಗೆ ಗರಿಷ್ಠ ಜೊತೆಯಾಟ ನಡೆಸಿದ ಸೀಫರ್ಟ್-ಅಲನ್ ನ್ಯೂಝಿಲ್ಯಾಂಡ್ ತಂಡದ ಓಪನರ್ಗಳಾದ ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಜೊತೆಯಾಟದಲ್ಲಿ ಭಾಗಿಯಾದರು. ಮ್ಯಾಕ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಯುಎಇ ವಿರುದ್ಧದ ‘ಡಿ’ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಕಿವೀಸ್ ಜೋಡಿ ಆಸ್ಟ್ರೇಲಿಯದಲ್ಲಿ ನಡೆದಿದ್ದ 2022ರ ಆವೃತ್ತಿಯ ಸೆಮಿ ಫೈನಲ್ನಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ದಾಖಲಿಸಿದ್ದ 170 ರನ್ ಜೊತೆಯಾಟವನ್ನು ಮುರಿದರು. ಸೀಫರ್ಟ್ ಹಾಗೂ ಅಲೆನ್ ಅವರ ದಾಖಲೆಯ ಜೊತೆಯಾಟದ ನೆರವಿನಿಂದಾಗಿ ನ್ಯೂಝಿಲ್ಯಾಂಡ್ ತಂಡವು 173 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಪ್ರಸಕ್ತ ವಿಶ್ವಕಪ್ನಲ್ಲಿ ಗೆಲುವಿನ ಓಟ ಮುಂದುವರಿಸಿತು. ಟಿ-20 ವಿಶ್ವಕಪ್ನಲ್ಲಿ ಗರಿಷ್ಠ ಜೊತೆಯಾಟ 175: ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್(ನ್ಯೂಝಿಲ್ಯಾಂಡ್), 2026ರಲ್ಲಿ ಯುಎಇ ವಿರುದ್ಧ 170: ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್(ಇಂಗ್ಲೆಂಡ್), 2022ರಲ್ಲಿ ಭಾರತದ ವಿರುದ್ಧ 168: ರಿಲೀ ರೊಸ್ಸೌ ಹಾಗೂ ಕ್ವಿಂಟನ್ ಡಿಕಾಕ್(ದಕ್ಷಿಣ ಆಫ್ರಿಕಾ), 2022ರಲ್ಲಿ ಬಾಂಗ್ಲಾದೇಶ ವಿರುದ್ಧ 166: ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ, 2010ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ 154: ರಹಮಾನುಲ್ಲಾ ಗುರ್ಬಾಝ್-ಇಬ್ರಾಹೀಂ ಝದ್ರಾನ್(ಅಫ್ಘಾನಿಸ್ತಾನ), 2024ರಲ್ಲಿ ಉಗಾಂಡ ವಿರುದ್ಧ
ಮದುವೆಯಾಗುವ ನೆಪದಲ್ಲಿ ಹಲವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಸೆರೆ; ಸಹಕರಿಸಿದ ವ್ಯಕ್ತಿಯನ್ನೂ ಬಂಧಿಸಿದ ಪೊಲೀಸರು
ಮಂಗಳೂರು ನಗರ ಪೊಲೀಸರಿಂದ ಕಾರ್ಯಾಚರಣೆ
Devadurga | ಸಾರಿಗೆ ಬಸ್–ಟಂಟಂ ಮುಖಾಮುಖಿ ಢಿಕ್ಕಿ : ಗರ್ಭಿಣಿ ಸೇರಿ ಇಬ್ಬರು ಮೃತ್ಯು, 14 ಜನರಿಗೆ ಗಾಯ
ದೇವದುರ್ಗ: ತಾಲೂಕಿನ ಕರಿಗುಡ್ಡ ಗ್ರಾಮ ಸಮೀಪ ಮಂಗಳವಾರ ಮಧ್ಯಾಹ್ನ ಸಾರಿಗೆ ಬಸ್ ಮತ್ತು ಟಂಟಂ ಆಟೋ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವದುರ್ಗ ಪಟ್ಟಣದತ್ತ ಬರುತ್ತಿದ್ದ ಟಂಟಂ ವಾಹನ ಕರಿಗುಡ್ಡ ತಿರುವಿನಲ್ಲಿ ಬಸ್ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಆಟೋದಲ್ಲಿದ್ದ ಗರ್ಭಿಣಿ ಮೋನಮ್ಮ (25) ಹಾಗೂ ಮಲ್ಲಪ್ಪ (50) ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮೋನಮ್ಮ ಸಿರವಾರ ತಾಲೂಕಿನವರಾಗಿದ್ದು, ತವರು ಮನೆ ಕರಿಗುಡ್ಡ ಗ್ರಾಮಕ್ಕೆ ಬಂದಿದ್ದರು. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರು ಸ್ಕ್ಯಾನಿಂಗ್ ತಪಾಸಣೆಗೆ ಕುಟುಂಬಸ್ಥರೊಂದಿಗೆ ದೇವದುರ್ಗಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಗರ್ಭದಲ್ಲಿದ್ದ ಮಗು ಕೂಡ ಮೃತಪಟ್ಟಿದೆ. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಪ್ಪ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ರೋಹಿತ್ (5) ಎಂಬ ಬಾಲಕನಿಗೆ ಮೂಗಿಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಟಂಟಂ ವಾಹನದಲ್ಲಿದ್ದ ದುರಗಪ್ಪ, ಬಾಲಪ್ಪ, ಬಾಳಪ್ಪ, ಶಿವಮ್ಮ, ರೇಣುಕಾ, ಅರಣಕುಮಾರ, ಶಿವರಾಜ ಸೇರಿದಂತೆ ಇತರರು ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕ ದುರಗಪ್ಪಗೆ ಕೈ-ಕಾಲಿಗೆ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಶಾಸಕಿ, ಹೆಚ್ಚುವರಿ ಎಸ್ಪಿ ಭೇಟಿ : ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕಿ ಕರೆಮ್ಮ ಜಿ. ನಾಯಕ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದರು.
ತಮ್ಮ ಪುಸ್ತಕದ ಬಗ್ಗೆ ಕೊನೆಗೂ ಮೌನ ಮುರಿದ ಎಂಎಂ ನರವಾಣೆ: ಪೆಂಗ್ವಿನ್ಗೆ ಬೆಂಬಲ; ರಾಹುಲ್ ಗಾಂಧಿಗೆ ಶಾಕ್!
ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕ ಕುರಿತ ವಿವಾದದ ಬಗ್ಗೆ ಅದನ್ನು ಬರೆದ ಮಾಜಿ ಸೇನಾ ಮುಖ್ಯಸ್ಥ ಜನವರಲ್ ಎಂಎಂ ನರವಾಣೆ ಸ್ಪಷ್ಟನೆ ನೀಡಿದ್ದಾರೆ. ಪೆಂಗ್ವಿನ್ ಸಂಸ್ಥೆಯ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ. ಈ ಮೂಲಕ ನನ್ನ ಪುಸ್ತಕ ರಿಲೀಸ್ ಆಗಿಯೇ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಜನರಲ್ ನರವಾಣೆ ಆತ್ಮಕತೆ ಪ್ರಕಟವಾಗಿಯೇ ಇಲ್ಲ ಎಂದ ಪೆಂಗ್ವಿನ್ ಇಂಡಿಯಾ; ಯಾವುದು ಸತ್ಯ, ಯಾವುದು ಸುಳ್ಳು?
Photo Credit : PTI 2025 ರ ಅಕ್ಟೋಬರ್ ನಲ್ಲಿ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ, ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಇತ್ತೀಚೆಗೆ ಬಿಡುಗಡೆಯಾದ ‘ದಿ ಕ್ಯಾಂಟೋನ್ಮೆಂಟ್ ಕಾನ್ಸ್ಪಿರಸಿ’ ಎಂಬ ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರ ಆತ್ಮಕತೆ ‘Four Stars of Destiny’ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನರವಾಣೆ, “ಅದು ಹಳೆಯ ವೈನ್ ನಂತೆ ಪಕ್ವವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದು ಅಲ್ಲಿ ಹೆಚ್ಚು ಕಾಲ ಇದ್ದಂತೆ, ಅದು ಹೆಚ್ಚು ಹೆಚ್ಚು ವಿಂಟೇಜ್ ಆಗುತ್ತದೆ; ಹೆಚ್ಚು ಮೌಲ್ಯಯುತವಾಗುತ್ತದೆ” ಎಂದು ಹೇಳಿದ್ದರು. ಮಾಜಿ ಜನರಲ್ ಗಳು, ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳಿಂದ ಹೊಗಳಲ್ಪಟ್ಟ ಈ ಪುಸ್ತಕವು ಅಧಿಕೃತವಾಗಿ ಪ್ರಕಟವಾಗದೆ ಹೇಗೆ ಬಿಡುಗಡೆಯಾಗಿದೆ ಎಂಬುದು ಸದ್ಯ ಬಹುಚರ್ಚಿತ ಸಂಗತಿಯಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಲು ಸಂಸತ್ತಿಗೆ ಅದರ ಒಂದು ಪ್ರತಿಯನ್ನು ತಂದಿದ್ದರು. “ಪೂರ್ವ-ಮುದ್ರಿತ” ಅನುಮೋದಿಸದ ಪ್ರತಿಯ ಪಿಡಿಎಫ್ ಆನ್ ಲೈನ್ ನಲ್ಲಿ ಪ್ರಸಾರವಾಗುತ್ತಿದೆ. ಇದರ ನಡುವೆ, ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ‘Four Stars of Destiny’ ಮುದ್ರಣಕ್ಕೂ ಹೋಗಿಲ್ಲ ಎಂದು ಹೇಳಿಕೆ ನೀಡಿದೆ. ►ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿದ್ದೇನು? Statement from the publisher. pic.twitter.com/pksacg3EeT — Penguin India (@PenguinIndia) February 9, 2026 “ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕತೆ ‘Four Stars of Destiny’ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಪುಸ್ತಕ ಪ್ರಕಟಣೆಗೆ ಹೋಗಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಕಂಪೆನಿಯು ಮುದ್ರಿತ ಅಥವಾ ಡಿಜಿಟಲ್ ರೂಪದಲ್ಲಿ ಪುಸ್ತಕದ ಯಾವುದೇ ಪ್ರತಿಗಳನ್ನು ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಪುಸ್ತಕದ ಯಾವುದೇ ಆವೃತ್ತಿಯು ಪೂರ್ಣವಾಗಲಿ, ಭಾಗಶಃವಾಗಲಿ ಮುದ್ರಣ, ಪಿಡಿಎಫ್ ಅಥವಾ ಆನ್ ಲೈನ್ ಪ್ರತಿಗಳು ಸೇರಿದಂತೆ ಯಾವುದೇ ಸ್ವರೂಪದಲ್ಲಿದ್ದರೂ, ಅದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ” ಎಂದು ಹೇಳಿದೆ. ರಕ್ಷಣಾ ಸಚಿವಾಲಯದಿಂದ ಇನ್ನೂ ಅನುಮೋದನೆ ಪಡೆಯದ ಹಸ್ತಪ್ರತಿಯ ಹಾರ್ಡ್ಬೌಂಡ್ ಪ್ರತಿಯೊಂದು ರಾಹುಲ್ ಗಾಂಧಿಗೆ ಹೇಗೆ ತಲುಪಿತು ಎಂಬ ಪ್ರಶ್ನೆ ಕೇಳಲಾಗುತ್ತಿರುವ ಹೊತ್ತಲ್ಲೇ ಪ್ರಕಾಶಕರಿಂದ ಈ ಹೇಳಿಕೆ ಬಂದಿದೆ. Hello friends. My book is available now. Just follow the link. Happy reading. Jai Hind pic.twitter.com/VCiLiZOWIi — Manoj Naravane (@ManojNaravane) December 15, 2023 ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪುಸ್ತಕ ಪ್ರಕಟವಾಗಿಲ್ಲ ಎಂದು ಪೆಂಗ್ವಿನ್ ಹೇಳುತ್ತಿದೆ. ಆದರೆ ಪುಸ್ತಕ ಅಮೆಝಾನ್ ನಲ್ಲಿ ಲಭ್ಯವಿದೆ. ಜನರಲ್ ನರವಾಣೆ ಅವರು 2023 ರಲ್ಲಿ ‘ದಯವಿಟ್ಟು ನನ್ನ ಪುಸ್ತಕವನ್ನು ಖರೀದಿಸಿ’ ಎಂದು ಟ್ವೀಟ್ ಮಾಡಿದ್ದಾರೆ. ನಾನು ಪೆಂಗ್ವಿನ್ ಗಿಂತ ನರವಾಣೆ ಜೀ ಅವರನ್ನು ನಂಬುತ್ತೇನೆ. ನೀವು ನರವಾಣೆ ಜೀ ಅವರನ್ನು ನಂಬುತ್ತೀರಾ? ನರವಾಣೆ ಜೀ ತಮ್ಮ ಪುಸ್ತಕದಲ್ಲಿ ಭಾರತ ಸರ್ಕಾರ ಮತ್ತು ಭಾರತದ ಪ್ರಧಾನ ಮಂತ್ರಿಗೆ ಅನಾನುಕೂಲಕರವಾದ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ ಎಂದು ನಾನು ನಂಬುತ್ತೇನೆ. ನಿಸ್ಸಂಶಯವಾಗಿ, ಪೆಂಗ್ವಿನ್ ಅಥವಾ ಸೇನೆಯ ಮಾಜಿ ಮುಖ್ಯಸ್ಥರು ಸತ್ಯವನ್ನು ಹೇಳುತ್ತಿದ್ದಾರೆಯೇ ಎಂಬುದನ್ನು ನೀವು ನಿರ್ಧರಿಸಬೇಕು” ಎಂದು ಹೇಳಿದ್ದಾರೆ. ►ಜನರಲ್ ನರವಾಣೆ ಪುಸ್ತಕ ವಿವಾದದ ಕೇಂದ್ರಬಿಂದುವಾಗಿದ್ದು ಹೇಗೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರಲ್ ನರವಾಣೆ ಅವರ ಪುಸ್ತಕ ಆಧರಿಸಿ ನಿಯತಕಾಲಿಕೆಯಲ್ಲಿನ ಲೇಖನವನ್ನು ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಈ ವಿಷಯ ರಾಜಕೀಯ ವಲಯದಲ್ಲಿ ಬಹುಚರ್ಚಿತವಾಗಿದೆ. ಲೋಕಸಭೆಯಲ್ಲಿ ರಾಹುಲ್ ಈ ವಿಷಯ ಪ್ರಸ್ತಾಪಿಸಿದಾಗ ಬಿಜೆಪಿ ನಾಯಕರು “ನೀವು ಪ್ರಕಟವಾದ ಪುಸ್ತಕದಿಂದ ಉಲ್ಲೇಖಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುವಂತೆ, ಕಳೆದ ವಾರ ಸಂಸತ್ತಿನ ಸಂಕೀರ್ಣದಲ್ಲಿ ರಾಹುಲ್ ಗಾಂಧಿ ಪುಸ್ತಕದ ಪ್ರತಿಯನ್ನು ಹಿಡಿದಿರುವುದು ಕಂಡುಬಂದಿತು. ಪುಸ್ತಕವು 2020 ರ ಭಾರತ-ಚೀನಾ ಮುಖಾಮುಖಿಯ ವಿವರಗಳು ಹಾಗೂ ನರವಾಣೆ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ನಡೆದ ಅಗ್ನಿಪಥ್ ನೇಮಕಾತಿ ಯೋಜನೆ ಕುರಿತ ಅವಲೋಕನಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಹಾಗಾದರೆ, ಪುಸ್ತಕ ಪ್ರಕಟವಾಗಿಲ್ಲದಿದ್ದರೆ ರಾಹುಲ್ ಗಾಂಧಿ ಅದರ ಪ್ರತಿಯನ್ನು ಹೇಗೆ ಪಡೆದರು? ಎಂಬುದು ಇನ್ನೊಂದು ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುತ್ತದೆ. ಪುಸ್ತಕವನ್ನು ಪ್ರೀ-ಆರ್ಡರ್ ಮಾಡಿದ ಸ್ಕ್ರೀನ್ ಶಾಟ್ ಗಳು ಹಾಗೂ ಖರೀದಿ ಪುರಾವೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಹಲವು ಓದುಗರು ಆನ್ ಲೈನ್ನಲ್ಲಿ ಮಾತ್ರವಲ್ಲದೆ ಪುಸ್ತಕ ಮಳಿಗೆಗಳಲ್ಲಿಯೂ ಸಹ ಮುಂಗಡ ಆರ್ಡರ್ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಆದರೆ ವಿವಾದದ ನಂತರ ಅಂತಹ ಎಲ್ಲಾ ಮುಂಗಡ ಆರ್ಡರ್ ಗಳನ್ನು ರದ್ದುಗೊಳಿಸಲಾಯಿತು. ವಿವಾದ ಭುಗಿಲೆದ್ದ ಬಳಿಕ ‘Four Stars of Destiny’ ಪ್ರತಿಗಳನ್ನು ಪ್ರಕಾಶಕರಿಗೆ ಹಿಂತಿರುಗಿಸಬೇಕಾಯಿತು ಎಂದು ದಿಲ್ಲಿಯ ಪುಸ್ತಕದಂಗಡಿಯ ಸಿಬ್ಬಂದಿಯೊಬ್ಬರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಇಲ್ಲಿರುವ ಪ್ರಶ್ನೆಯೆಂದರೆ, ಒಂದೇ ಒಂದು ಪ್ರತಿಯನ್ನು ಮುದ್ರಿಸದೇ ಇಷ್ಟು ಪ್ರಮಾಣದಲ್ಲಿ ಮುಂಗಡ ಆರ್ಡರ್ ಗಳಿಗೆ ಪುಸ್ತಕವನ್ನು ತೆರೆಯಬಹುದೇ? ತಾರ್ಕಿಕವಾಗಿ ಅದು ಸಾಧ್ಯವಿಲ್ಲ ಎಂದು ತೋರುತ್ತದೆ. ಆದರೆ ಸ್ಪಷ್ಟ ಉತ್ತರಗಳಿಲ್ಲ. ಬಿಡುಗಡೆಯಾಗದ ಪುಸ್ತಕದ ಪಿಡಿಎಫ್ ಆವೃತ್ತಿ ಈಗ ವಾಟ್ಸಾಪ್ ಮತ್ತು ಇ-ಮೇಲ್ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದೆ. ಇದು ಹೇಗೆ ಇಷ್ಟೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಯಿತು ಎಂಬುದರ ಕುರಿತು ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ, ಇನ್ನೂ ಅನುಮೋದನೆ ಪಡೆಯದ ‘Four Stars of Destiny’ ಪುಸ್ತಕದ ಸೋರಿಕೆ ಅಥವಾ ಉಲ್ಲಂಘನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಆನ್ ಲೈನ್ ಸುದ್ದಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ದಿಲ್ಲಿ ಪೊಲೀಸರ ವಿಶೇಷ ಘಟಕ ತನಿಖೆ ನಡೆಸಲಿದೆ. ಅಧಿಕಾರಿಗಳ ಪ್ರಕಾರ, 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಪೂರ್ವ-ಮುದ್ರಿತ ಪ್ರತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಲಾದ ವಿವಿಧ ಆನ್ಲೈನ್ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ವೇದಿಕೆಗಳಲ್ಲಿ ಕಂಡುಬಂದ ಮಾಹಿತಿಯನ್ನು ದೆಹಲಿ ಪೊಲೀಸರು ಗಮನದಲ್ಲಿಟ್ಟುಕೊಂಡಿದ್ದಾರೆ. ಪರಿಶೀಲಿಸಿದಾಗ M/s Penguin Random House India Pvt. Ltd. ಸಿದ್ಧಪಡಿಸಿದ ಅದೇ ಶೀರ್ಷಿಕೆಯ ಟೈಪ್-ಸೆಟ್ ಪುಸ್ತಕದ ಪಿಡಿಎಫ್ ಪ್ರತಿಯು ಕೆಲವು ವೆಬ್ಸೈಟ್ಗಳಲ್ಲಿ ಲಭ್ಯವಿರುವುದು ಕಂಡುಬಂದಿದೆ. ಕೆಲವು ಆನ್ ಲೈನ್ ಮಾರ್ಕೆಟಿಂಗ್ ಪ್ಲಾಟ್ ಫಾರ್ಮ್ ಗಳು ಪುಸ್ತಕವನ್ನು ಖರೀದಿಗೆ ಲಭ್ಯವಿದೆ ಎಂಬಂತೆ ಪ್ರದರ್ಶಿಸಿರುವುದೂ ಪತ್ತೆಯಾಗಿದೆ. ಇನ್ನೂ ಅನುಮೋದಿಸದ ಪ್ರಕಟಣೆಯ ಈ ಸೋರಿಕೆ/ಉಲ್ಲಂಘನೆ ಕುರಿತು ದಿಲ್ಲಿ ಪೊಲೀಸರ ವಿಶೇಷ ಘಟಕ ಸಂಪೂರ್ಣ ತನಿಖೆ ನಡೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ►ರಕ್ಷಣಾ ಸಚಿವಾಲಯವು 35 ಪುಸ್ತಕಗಳನ್ನು ಅನುಮೋದಿಸಿದೆ; ಬಾಕಿ ಇದ್ದದ್ದು ಇದೊಂದೇ ಪುಸ್ತಕ 2020 ರಿಂದ 2024 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ರಕ್ಷಣಾ ಸಚಿವಾಲಯದಿಂದ ಅನುಮೋದನೆಗೆ ಬಾಕಿ ಉಳಿದಿದ್ದವುಗಳಲ್ಲಿ ನರವಾಣೆಯವರ ಪುಸ್ತಕವೂ ಒಂದಾಗಿದೆ. ಆ ವರ್ಷದ ಜನವರಿಯಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ 2024 ಸೆಪ್ಟೆಂಬರ್ 17ರಂದು ನೀಡಿದ ಪ್ರತಿಕ್ರಿಯೆಯಲ್ಲಿ, ರಕ್ಷಣಾ ಸಚಿವಾಲಯದ ಸೇನಾ ಘಟಕವು 2020ರಿಂದ 35 ಪುಸ್ತಕ ಶೀರ್ಷಿಕೆಗಳು ಅನುಮೋದನೆಗಾಗಿ ಬಂದಿವೆ ಎಂದು ತಿಳಿಸಿದೆ. ಇವುಗಳಲ್ಲಿ ಕೇವಲ ಮೂರು ಪುಸ್ತಕಗಳಿಗೆ ಮಾತ್ರ ಇನ್ನೂ ಅನುಮೋದನೆ ಸಿಕ್ಕಿಲ್ಲ; ಅವುಗಳಲ್ಲಿ ಒಂದು ಜನರಲ್ ನರವಾಣೆ ಅವರ ಆತ್ಮಕಥೆ. ಆರ್ಟಿಐ ಉತ್ತರದ ಪ್ರಕಾರ, ಬ್ರಿಗೇಡಿಯರ್ ಜೀವನ್ ರಾಜ್ಪುರೋಹಿತ್ (ನಿವೃತ್ತ) ಅವರ ‘Leadership Beyond Barracks’ ಪುಸ್ತಕ “ಪ್ರಕ್ರಿಯೆಯಲ್ಲಿದೆ” ಎಂದು ತೋರಿಸಲಾಗಿದೆ. ಭಾರತೀಯ ಸೇನಾಧಿಕಾರಿ ಜನರಲ್ ಎನ್.ಸಿ. ವಿಜ್ (ನಿವೃತ್ತ) ಅವರ ‘Alone in the Ring’ ಹಾಗೂ ಜನರಲ್ ನರವಾಣೆ ಅವರ ‘Four Stars of Destiny’ ಎಂಬ ಎರಡು ಹಸ್ತಪ್ರತಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಜನರಲ್ ವಿಜ್ ಅವರ ಪುಸ್ತಕ ಮೇ 2025ರಲ್ಲಿ ಬಿಡುಗಡೆಗೊಂಡಿದೆ. ಬ್ರಿಗೇಡಿಯರ್ ರಾಜ್ಪುರೋಹಿತ್ ಅವರ ಪುಸ್ತಕಕ್ಕೂ ಅನುಮತಿ ದೊರೆತಿದ್ದು, ಲೇಖಕರ ಪ್ರಕಾರ ಅದು “ಪ್ರಕಟಣೆಗಾಗಿ ಕಾಯುತ್ತಿದೆ”. ಆದರೆ ನರವಾಣೆ ಅವರ ಪುಸ್ತಕಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆರ್ಟಿಐ ಉತ್ತರವು ನಿವೃತ್ತ ಮಿಲಿಟರಿ ಸಿಬ್ಬಂದಿಯಿಂದ ಪ್ರಕಟಣೆ ಅನುಮತಿಗಾಗಿ ಬಂದ ವಿನಂತಿಗಳಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತದೆ. 2020ರಲ್ಲಿ ಕೇವಲ ಒಂದು ಹಸ್ತಪ್ರತಿ ಪರಿಶೀಲನೆಗೆ ಕಳುಹಿಸಲಾಯಿತು; 2021ರಲ್ಲಿ ಯಾವುದೂ ಇಲ್ಲ. 2022ರಲ್ಲಿ ನಾಲ್ಕು ಹಸ್ತಪ್ರತಿಗಳು ಕಳುಹಿಸಲ್ಪಟ್ಟಿವೆ. 2023ರಲ್ಲಿ ನರವಾಣೆಯವರದೂ ಸೇರಿದಂತೆ 16 ಹಸ್ತಪ್ರತಿಗಳು ಸಲ್ಲಿಕೆಯಾಗಿವೆ. 2024ರಲ್ಲಿ ಸೆಪ್ಟೆಂಬರ್ ವರೆಗೆ ಈ ಸಂಖ್ಯೆ 14 ಆಗಿದೆ. ಲೆಫ್ಟಿನೆಂಟ್ ಜನರಲ್ ಎಸ್.ಎ. ಹಸ್ನೈನ್, ಲೆಫ್ಟಿನೆಂಟ್ ಜನರಲ್ ಎಸ್.ಕೆ. ಗಡೆಯೋಕ್, ಲೆಫ್ಟಿನೆಂಟ್ ಜನರಲ್ ಎಸ್.ಆರ್.ಆರ್. ಅಯ್ಯಂಗಾರ್, ಮೇಜರ್ ಜನರಲ್ (ಡಾ.) ಅಶೋಕ್ ಕುಮಾರ್, ಮೇಜರ್ ಜನರಲ್ ಸಶಿಕಾಂತ್ ಪಿತ್ರೆ, ಮೇಜರ್ ಜನರಲ್ ಆರ್.ಕೆ. ಶರ್ಮಾ, ಮೇಜರ್ ಜನರಲ್ ಜಿ.ಡಿ. ಬಕ್ಷಿ ಹಾಗೂ ಲೆಫ್ಟಿನೆಂಟ್ ಜನರಲ್ ಯೋಗೇಶ್ ಕುಮಾರ್ ಜೋಶಿ ಅವರ ಪುಸ್ತಕಗಳಿಗೆ ಅನುಮೋದನೆ ದೊರೆತಿದೆ.
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ | ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಾಂಗ್ರೆಸ್ನಿಂದ ವಿನೂತನ ಹೋರಾಟ
ಬೆಂಗಳೂರು : ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ದರ ಏರಿಕೆ ಕೇಂದ್ರದ ಬಿಜೆಪಿ ಸರಕಾರ ಮಾಡಿದೆ. ಅದರೆ, ಸಂಸದ ತೇಜಸ್ವಿ ಸೂರ್ಯ ಸಾರ್ವಜನಿಕ ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ, ತೇಜಸ್ವಿ ಸೂರ್ಯ ವೇಷ ಧರಿಸಿ, ಖಾಲಿ ಟ್ರಂಕ್ ಪ್ರದರ್ಶಿಸಿ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಇಲ್ಲಿನ ಆನಂದ್ ರಾವ್ ವೃತ್ತದಲ್ಲಿನ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಚೆನ್ನಾಗಿ ನಟನೆ ಮಾಡುತ್ತಿದ್ದು, ಸುಳ್ಳು ಹೇಳಿಕೆಗಳನ್ನು ನೀಡುವುದರಿಲ್ಲಿ ಆತನ ನಿಸ್ಸಿಮ. ಬಿಜೆಪಿಯವರು ಸುಳ್ಳನ್ನೇ ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. 11 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರಕಾರದ ಸಾಧನೆ ಎಂದರೆ 153ಲಕ್ಷ ಕೋಟಿ ರೂ. ಸಾಲ ಮಾಡಿರುವುದೇ ಸಾಧನೆಯಾಗಿದೆ ಎಂದು ಟೀಕಿಸಿದರು. ಬೆಂಗಳೂರು ಮೆಟ್ರೋ ರೈಲು 96 ಕಿ.ಮೀ. ರೈಲು ಮಾರ್ಗ, 200 ಕಿ.ಮೀ.ವರಗೆ ಹೆಚ್ಚಿಸಲಾಗುತ್ತಿದೆ. ಬಿಎಂಆರ್ಸಿಎಲ್ ಕೇಂದ್ರದ ಅಧೀನದಲ್ಲಿ ಇದೆ. ರಾಜ್ಯ ಸರಕಾರ ಸಾಲ ಪಡೆಯುವ ಮೂಲಕ ಮೆಟ್ರೋ ರೈಲು ಮಾರ್ಗವನ್ನು ನಿರ್ಮಾಣ ಮಾಡಿದೆ. 400 ಕೋಟಿ ರೂ.ಅಸಲು ಮತ್ತು 128 ಕೋಟಿ ರೂ. ಬಡ್ಡಿ ಪಾವತಿಸಲಾಗುತ್ತಿದೆ. ಮೆಟ್ರೋ ದರ ಏರಿಕೆ ಸಂಬಂಧ ಸಮಿತಿ ರಚಿಸಲಾಗಿದೆ ಈ ಸಮಿತಿ ರಚನೆ ಮಾಡಿರುವುದು ಕೇಂದ್ರ ಸರಕಾರ ಎಂದರು. ಬಿಜೆಪಿ ತೇಜಸ್ವಿಸೂರ್ಯ ಆ ಸಮಿತಿ ಮುಂದೆ ದರ ಏರಿಕೆ ಮಾಡಬೇಡಿ ಎಂದು ಯಾವುದೇ ಮನವಿ ಸಲ್ಲಿಸಿಲ್ಲ. ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ನಗರದ ಅಭಿವೃದ್ಧಿಗೆ ನಯಾಪೈಸೆ ಹಣವನ್ನು ತಂದಿಲ್ಲ. ಆದರೆ, ರಾಜ್ಯ ಸರಕಾರದ ಮೇಲೆ ಗೊಬೆ ಕೂರಿಸುತ್ತಿದ್ದಾರೆ. ಮೆಟ್ರೋ ದರ ಏರಿಕೆಗೆ ರಾಜ್ಯ ಸರಕಾರ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದರು. ಇದೇ ವೇಳೆ ಮಾತನಾಡಿದ ಎಸ್.ಮನೋಹರ್, ಮೆಟ್ರೋ ಪ್ರಯಾಣ ದರ ಏರಿಕೆ ಕೇಂದ್ರ ಸರಕಾರವೇ ಕಾರಣ. ಸಂಸದ ತೇಜಸ್ವಿ ಸೂರ್ಯ ಕೇಂದ್ರದ ತಪ್ಪು ನಿರ್ಧಾರ ಮಾರೆಮಾಚಲು ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರ ದರ ಏರಿಕೆಯನ್ನು ತಡೆ ಹಿಡಿದಿದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿಂಧುಗೌಡ, ಎ.ಆನಂದ್, ಜಿ.ಪ್ರಕಾಶ್, ಚಂದ್ರಶೇಖರ, ಮುರಳಿ, ನವೀನ್ ಸುಂಕದಕಟ್ಟೆ, ಉಮೇಶ್, ರಂಜಿತ್, ಪುಟ್ಟರಾಜು, ಓಬ್ಬಳೇಶ್, ಪ್ರವೀಣ್ ರಾವ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೇಘಾಲಯ| ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಮೃತರ ಸಂಖ್ಯೆ 30ಕ್ಕೆ ಏರಿಕೆ
ಸಿಲ್ಚಾರ್, ಫೆ. 10: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತರದ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇಬ್ಬರೂ ಅಸ್ಸಾಂ ಕಛಾರ್ ಜಿಲ್ಲೆಯ ಕಟಿಗೋರಾಹ್ನ ನಿವಾಸಿಗಳು. ಇವರು ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಎಸ್ಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ‘‘ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಎಸ್ಎಂಸಿಎಚ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಅವರನ್ನು ರಾಮಚಂದ್ರ ಬೈಷ್ಣವ್ ಹಾಗೂ ನಿಮರುದ್ದೀನ್ ಎಂದು ಗುರುತಿಸಲಾಗಿದೆ’’ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 5ರಂದು ಈ ಘಟನೆ ಸಂಭವಿಸಿದ ಬಳಿಕ ಎಸ್ಎಂಸಿಎಚ್ನಲ್ಲಿ ಒಟ್ಟು 9 ಮಂದಿ ಗಣಿ ಕಾರ್ಮಿಕರನ್ನು ದಾಖಲು ಮಾಡಲಾಗಿದೆ.
ಪಡುಕೋಣೆ ಚರ್ಚಿನಲ್ಲಿ ದೇವರ ವಾಕ್ಯದ ಸಂಭ್ರಮ- ವಾರ್ಷಿಕ ಹಬ್ಬ
ಕುಂದಾಪುರ, ಫೆ.10: ಪಡುಕೋಣೆ ಪವಾಡ ಪುರುಷ ಸಂತ ಅಂತೋನಿ ಚರ್ಚಿನಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ವಾರ್ಷಿಕ ಮಹಾಹಬ್ಬ ಜರಗಿತು. ಇತ್ತೀಚೆಗೆ ಜರಗಿದ ತೆರಾಲಿ ಹಬ್ಬದ ಮೊದಲನೇ ದಿನ ನಡೆಯುವ ವೆಸ್ಪರ್ಸ್ ದೇವರ ವಾಕ್ಯದ ಸಂಭ್ರಮಕ್ಕೆ ಪವಾಡ ಪುರುಷ ಭಕ್ತ ಸಂತ ಅಂತೋನಿಯವರ ಪಲ್ಲಕ್ಕಿ ಮೇಲೆ ಇರಿಸಲ್ಪಟ್ಟ ಪ್ರತಿಮೆಯನ್ನು ಆಶೀರ್ವಾದಿಸಿ, ಭವ್ಯ ಮೆರ ವಣಿಗೆ ನಡೆಸಲಾಯಿತು. ನಂತರ ಕ್ರಿಸ್ತರ ನುಡಿ ನಿಮ್ಮ ಹೃದಯದಲ್ಲಿ ತುಂಬಿ ತುಳುಕಲಿ ಸಂದೇಶದೊಂದಿಗೆ ನಡೆಸಿಕೊಟ್ಟ ಪ್ರಧಾನ ಧರ್ಮಗುರು ವಂ.ಶರೊನ್ ರೊಯ್ ಡಿಸೋಜ ಬಸ್ರೂರು ನಡೆಸಿಕೊಟ್ಟರು. ಮಾರನೇ ದಿನ ಫೆ.4ರಂದು ವಾರ್ಷಿಕ ಮಹೋತ್ಸವದ ಅಂಗವಾಗಿ ’ಬಡವರು ನಿಮ್ಮ ಮಧ್ಯೆ ದಿನಾಲು ಇರುವರು’ ಎಂಬ ಸಂದೇಶದೊಂದಿಗೆ ಪ್ರಧಾನ ಯಾಜಕರಾಗಿ ವಂ.ಫಾ.ಡ್ಯಾನ್ಸಿ ಸುನಿಲ್ ಮಾರ್ಟಿಸ್, ಫಿಲಿಪ್ ನೇರಿ ಶಾಲೆಯ ಪ್ರಾಂಶುಪಾಲರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಚರ್ಚಿನ ಧರ್ಮಗುರು ವಂ.ಫಾ.ಫ್ರಾನ್ಸಿಸ್ ಕರ್ನೆಲಿಯೊ ಹಬ್ಬದ ಶುಭಾಶಯಗಳನ್ನು ಸಲ್ಲಿಸಿ ಧನ್ಯವಾದ ಅರ್ಪಿಸಿದರು. ಕುಂದಾಪುರ ಸಂತ ಜೋಸೆಫ್ ವಾಜ್ ವಲಯದ ಪ್ರಧಾನರಾದ ಅತಿ ವಂ.ಪೌಲ್ ರೇಗೊ ಹಬ್ಬದ ಪೋಷಕತ್ವ ವಹಿಸಿದ ಡೇರಿ ರೆಬೆಲ್ಲೊ ಮತ್ತು ಅವರ ಪುತ್ರ ಫ್ಲಾಯ್ಡ್ ಎಂಟನಿ ರೆಬೆಲ್ಲೊ ಮತ್ತು ಕುಟುಂಬಸ್ಥರನ್ನು ಗೌರವದ ಮೇಣದ ಬತ್ತಿ ನೀಡಿ ಅಭಿನಂದಿಸಿ, ಎಲ್ಲ ಧರ್ಮಗುರುಗಳ ಪರವಾಗಿ ಚರ್ಚಿನ ಧರ್ಮಗುರುಗಳಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಕೋಡಿ| ಪ್ರಿ-ಪ್ಲೇಸ್ಮೆಂಟ್ ತರಬೇತಿ ಕಾರ್ಯಕ್ರಮ
ಕುಂದಾಪುರ: ಫೆ.10: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ತರಬೇತಿ ಮತ್ತು ನಿಯೋಜನಾ ವಿಭಾಗದ ವತಿಯಿಂದ ನಾಂದಿ ಫೌಂಡೇಶನ್’ ಸಹಯೋಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾದ ಮೂರು ದಿನಗಳ ಪ್ರಿ-ಪ್ಲೇಸ್ಮೆಂಟ್ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ನಾಂದಿ ಫೌಂಡೇಶನ್ನ ತರಬೇತುದಾರ ಪ್ರಭಾಕರ್, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳು, ವ್ಯಕ್ತಿತ್ವ ವಿಕಾಸ, ಸಂವಹನ ಕೌಶಲ್ಯ, ಸಂದರ್ಶನ ತಂತ್ರಗಳು ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಮಾರ್ಗಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಶಬೀನಾ ಎಚ್., ಹೊಸ ಹೊಸ ಕೌಶಲ್ಯ ಆಧಾರಿತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸರ್ಟಿಫಿಕೇಟ್ ಕೋರ್ಸುಗಳು, ಉದ್ಯೋಗಕ್ಕೆ ಪೂರಕವಾದ ಕೋರ್ಸ್ಗಳ ಕುರಿತು ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಕರುಣಾಕರ ಶೆಟ್ಟಿ, ಜಯಂತ್ ಕುಮಾರ್, ಗಣಕ ವಿಭಾಗದ ಖಲೀಲ್ ಅಹಮ್ಮದ್ ಸಂಯೋಜಕ ರಾಗಿ ಕಾರ್ಯನಿರ್ವಹಿಸಿ ದರು. ಬಿಸಿಎ ವಿಭಾಗದ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉತ್ತರ ಪ್ರದೇಶ| ಸಮಾಜವಾದಿ ಪಕ್ಷದ ನಾಯಕ ಮದನ್ ಚೌಹಾನ್ರನ್ನು ಹತ್ಯೆಗೆ ಯತ್ನ
ಹಾಪುರ, ಫೆ. 10: ಉತ್ತರಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ರಾಜ್ಯ ಸಚಿವ ಮದನ್ ಚೌಹಾನ್ ಅವರ ಹತ್ಯೆ ಯತ್ನ ನಡೆದಿದೆ. ಆದರೆ, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆ ಗಢಮುಖ್ತೇಶ್ವರ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ. ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೌಹಾನ್ ಅವರು ತನ್ನ ಕಾರಿನಲ್ಲಿ ಹಿರ್ನಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ‘‘ನಾನು ಎಕ್ಸ್ಪ್ರೆಸ್ ವೇಯಿಂದ ಗ್ರಾಮ ಪ್ರವೇಶಿಸುತ್ತಿರುವಾಗ ಕಾರಿನಲ್ಲಿ ಆಗಮಿಸಿದ ಕೆಲವು ಯುವಕರು ನನ್ನ ವಾಹನವನ್ನು ಅಡ್ಡಗಟ್ಟಿದರು. ಓರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ. ಆದರೆ, ಪಿಸ್ತೂಲ್ ಕಾರ್ಯ ನಿರ್ವಹಿಸಲಿಲ್ಲ’’ ಎಂದು ಚೌಹಾನ್ ಆರೋಪಿಸಿದ್ದಾರೆ. ‘‘ತನ್ನ ಜೊತೆಗಿದ್ದ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಆದರೆ, ಅವರು ಸ್ಥಳದಿಂದ ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ. ಚೌಹಾನ್ ಅವರ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನೀತ್ ಭಟ್ನಾಗರ್ ತಿಳಿಸಿದ್ದಾರೆ.
ಆಳಂದ | ಪಡಸಾವಳಿ ಗ್ರಾಮ ಪಂಚಾಯತ್ ಸದಸ್ಯರಿಗೆ ಬಿಳ್ಕೊಡುಗೆ
ಆಳಂದ: ತಾಲೂಕಿನ ಪಡಸಾವಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ 2020-2021ರಿಂದ 2025-2026ರವರೆಗೆ ಸೇವೆ ಸಲ್ಲಿಸಿದ ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸದಸ್ಯರ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಸನ್ಮಾನಿಸಿದರು. ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಬೆಳಾಂ ಹಾಗೂ ಉಪಾಧ್ಯಕ್ಷ ಶಾಂತಮಲ್ಲಪ್ಪ ಅಚಲೇರಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಕೈಗೊಂಡ ಕೆಲಸಗಳು ಗ್ರಾಮಸ್ಥರ ಸಹಕಾರದಿಂದಲೇ ಸಾಧ್ಯವಾಯಿತು. ಈ ಗೌರವಪೂರ್ಣ ಬೀಳ್ಕೊಡುಗೆ ನಮ್ಮಿಗೆ ಹೊಸ ಉತ್ಸಾಹ ತುಂಬಿದೆ ಎಂದು ತಿಳಿಸಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪಂಚಾಯತ್ ವತಿಯಿಂದ ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳಾದ ಕುಡಿಯುವ ನೀರು ಸರಬರಾಜು ಸುಧಾರಣೆ, ರಸ್ತೆ ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ವಿಸ್ತರಣೆ ಹಾಗೂ ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಸದಸ್ಯರಾದ ಭೋಜನರಾಜ ನಿಂಬರಗಿ, ಪುನ್ನಪ್ಪ ಜಮಾದಾರ, ಮಲ್ಲಿನಾಥ ಸಿಂಗೆ, ಕಾಶಿನಾಥ ಗಾಯಕ್ವಾಡ, ಶ್ರೀಕಾಂತ ಜಮಾದಾರ, ಬಸವರಾಜ ಮುಲಗೆ, ಸಂತೋಷಿಬಾಯಿ ಜಮಾದಾರ ಹಾಗೂ ಫಕೀರಪ್ಪ ಗಾಯಕ್ವಾಡ ಅವರನ್ನು ಸನ್ಮಾನಿಸಲಾಯಿತು. ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸಿ ವಂದಿಸಿದರು.
ಬಿಡಿಎ ಕಾರ್ಯಾಚರಣೆ: ಸುಮಾರು 125 ಕೋಟಿ ರೂ.ಗಳ ಆಸ್ತಿ ವಶ
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ಇಲ್ಲಿನ ಉಲ್ಲಾಳು ಮತ್ತು ಅಗ್ರಹಾರ ದಾಸರಹಳ್ಳಿಗಳಲ್ಲಿ ಒತ್ತುವರಿಯಾಗಿದ್ದ 125 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಉಲ್ಲಾಳು ಗ್ರಾಮದ ಸರ್ವೆ ನಂ. 34ರಲ್ಲಿ 1 ಎಕರೆ ಹಾಗೂ ಸರ್ವೆ ನಂ. 38/1, 2, 4, 5 ರಲ್ಲಿ 1 ಎಕರೆ 1 ಗುಂಟೆ ಮತ್ತು ಅಗ್ರಹಾರ ದಾಸರಹಳ್ಳಿ ಗ್ರಾಮದ ಸರ್ವೆ ನಂ. 8ರ 33 ಗುಂಟೆ ಪ್ರದೇಶಗಳಲ್ಲಿ ಅನಧಿಕೃವಾಗಿ ನಿರ್ಮಾಣಗಳನ್ನು ತೆರವುಗೊಳಿಸಿ, ಸುಮಾರು 125 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವನ್ನು ವಶಪಡಿಸಿಕೊಂಡಿತು. ಕಾರ್ಯಾಚರಣೆ ಬೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.

17 C