ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಫ್ ವತಿಯಿಂದ ಉನ್ನತ ಶಿಕ್ಷಣಕ್ಕೆ ಅವಕಾಶ
ಮಂಗಳೂರು, ಫೆ.9: ಪ್ರಸಕ್ತ ಶ್ಯೆಕ್ಷಣಿಕ (2026-27ನೇ) ಸಾಲಿನಲ್ಲಿ ಎಸ್ಸೆಸೆಲ್ಸಿ ತೇರ್ಗಡೆಗೊಳ್ಳುವ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ದ.ಕ. ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪ್ರಥಮ ಪಿಯುಸಿಗೆ ಉಚಿತ ಸೀಟುಗಳ ಕೊಡುಗೆಯನ್ನು ಮೀಫ್ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆಗಳಿಗೆ ಹಾಗೂ ಸರಕಾರಿ ಶಾಲೆಗಳ ಅರ್ಹ ವಿದ್ಯಾರ್ಥಿಗಳಿಗಾಗಿ ನೀಡಲು ಮುಂದಾಗಿದೆ. *ಯೆನೆಪೋಯ ಪಿಯು ಕಾಲೇಜು ಜೆಪ್ಪಿನಮೊಗರು : ಪ್ರತೀ ವಿದ್ಯಾಸಂಸ್ಥೆಯ ಎಸ್ಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಓರ್ವ ವಿದ್ಯಾರ್ಥಿಗೆ (ನೀಟ್/ಸಿಇಟಿ ತರಬೇತಿ ಸಹಿತ) ಉಚಿತ ಸೀಟು ನೀಡಲಿದೆ. *ಬರಕಾ ವಿದ್ಯಾ ಸಂಸ್ಥೆ, ಅಡ್ಯಾರ್ : ಪ್ರತೀ ವಿದ್ಯಾ ಸಂಸ್ಥೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅತ್ಯಧಿಕ ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು ನೀಡಲಿದೆ. *ಶೆಫರ್ಡ್ಸ್ ಶಾಹೀನ್ ವಿದ್ಯಾ ಸಂಸ್ಥೆ, ಅರ್ಕುಳ : ಎಸ್ಸೆಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕಗಳಿಸಿದ 20 ವಿದ್ಯಾರ್ಥಿ ಗಳಿಗೆ (ನೀಟ್/ ಜೆಇಇ ಸಹಿತ) ಉಚಿತ ಸೀಟು ನೀಡಲಿದೆ ನೀಡಲಿದೆ. ಎಸೆಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿದ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ದ.ಕ. ಹೊರತು ಪಡಿಸಿ ಮೀಫ್ ವ್ಯಾಪ್ತಿಗೆ ಒಳಪಡುವ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳು ಮತ್ತು ಸರಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯದೊಂದಿಗೆ ಒಟ್ಟು 10 ಸೀಟುಗಳು ನೀಡಲಿದೆ. *ಅಲ್ಫುರ್ಖಾನ್ ಇಸ್ಲಾಮಿಕ್ ಪಿಯು ಕಾಲೇಜು ಮೂಡುಬಿದಿರೆ: ಪ್ರತೀ ವಿದ್ಯಾ ಸಂಸ್ಥೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು. ಹಾಫಿಝ್ ವಿದ್ಯಾರ್ಥಿಯಾಗಿದ್ದಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳಿಸಿದ ಒಟ್ಟು 5 ವಿದ್ಯಾರ್ಥಿಗಳಿಗೆ ಉಚಿತ ಸೀಟುಗಳು ನೀಡಲಿದೆ. ಈ ಶರ್ತಗಳಿಗೆ ಒಳಪಟ್ಟು ಉಚಿತ ಸೀಟುಗಳನ್ನು ಪಡೆಯಲು ಮೀಫ್ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆ ಮತ್ತು ಸರಕಾರಿ ವಿದ್ಯಾ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಎಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ತಕ್ಷಣ ಅರ್ಜಿಯನ್ನು ಮೀಫ್ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಕಳೆದ ವರ್ಷಗಳಂತೆ ಪ್ರತಿಭಾವಂತ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಮೆಡಿಕಲ್, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಡಿಗ್ರಿ ಕೋರ್ಸುಗಳ ಸೀಟುಗಳು ಲಭ್ಯವಾಗಲಿದೆ. ಅವುಗಳ ಬಗ್ಗೆ ಶೀಘ್ರ ಮಾಹಿತಿ ನೀಡಲಾ ಗುವುದು. ಹೆಚ್ಚಿನ ಮಾಹಿತಿಗಾಗಿ ಮೀಫ್ ಕಚೇರಿಯ ಮೊ.ಸಂ: 8792115666ನ್ನು ಸಂಪರ್ಕಿಸಬಹುದು ಎಂದು ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Bengaluru | ಮಾಂಗಲ್ಯ ಸರ ಕದಿಯಲು ಆರೋಪಿಗಳು ಸಿಂಪಡಿಸಿದ ಸ್ಪ್ರೇಗೆ ಕುಸಿದು ಮಹಿಳೆ ಮೃತ್ಯು
ಬೆಂಗಳೂರು : ಮಾಂಗಲ್ಯ ಸರ ಕಳವು ಮಾಡುವಾಗ ಸರಗಳ್ಳರು ಮಹಿಳೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಜ್ಯೋತಿ(45) ಎಂಬವರು ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಸೋಮವಾರ(ಫೆ.9) ಬೆಳಗ್ಗೆ ಮನೆ ಮುಂದೆ ಕಸ ಗುಡಿಸುವಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಮಹಿಳೆಯ ಮುಖಕ್ಕೆ ಕೆಮಿಕಲ್ ಸ್ಪ್ರೇ ಮಾಡಿದ್ದಾರೆ. ಈ ವೇಳೆ ಆಕೆ ಕುಸಿದು ಬಿದ್ದಿದ್ದಾರೆ. ಆರೋಪಿಗಳು ಮಹಿಳೆಯ ಕೊರಳಲ್ಲಿದ್ದ 70 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರು ಕೂಡಲೇ ಮಹಿಳೆಯನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆಯ ಬಳಿಕ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಯ ಶಾಸಕರುಗಳ ಪ್ರತಿಷ್ಠೆಗೆ ಕಂಬಳ ಬೇಕು, ಸರಕಾರಿ ಆಸ್ಪತ್ರೆಗಳು ಬೇಡ: ಸಂತೋಷ್ ಬಜಾಲ್
ಮಂಗಳೂರು: ತಾಲೂಕುಗಳಲ್ಲಿ ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ | ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಕರೆ : ಫೆ.12ರ ದೇಶವ್ಯಾಪಿ ಹೋರಾಟದ ಕರಪತ್ರ ಬಿಡುಗಡೆ
ಕೊಪ್ಪಳ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ–ರೈತ ವಿರೋಧಿ ನೀತಿಗಳನ್ನು ಖಂಡಿಸಿ ಫೆ.12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ವತಿಯಿಂದ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು. ನಾಲ್ಕು ಲೇಬರ್ ಕೋಡ್ಗಳು, ವಿಬಿ–ಬಿಬಿ ರಾಮ್ಜಿ ವಿಮಾ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯಿದೆ, ಬೀಜ ಕಾಯಿದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸಿ ಭಾರತೀಯ ಹಾಗೂ ವಿದೇಶಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ನೀತಿಯನ್ನು ನಿರಂತರವಾಗಿ ಮುಂದುವರಿಸುತ್ತಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು. ರೈಲ್ವೆ, ಬಂದರು, ಹಡಗು ನಿರ್ಮಾಣ ಘಟಕಗಳು, ಕಲ್ಲಿದ್ದಲು ಗಣಿಗಳು, ತೈಲ, ಉಕ್ಕು, ರಕ್ಷಣಾ ಉತ್ಪಾದನೆ, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಬ್ಯಾಂಕುಗಳು, ವಿಮೆ, ದೂರಸಂಪರ್ಕ, ಅಂಚೆ, ಪರಮಾಣು ಶಕ್ತಿ ಹಾಗೂ ವಿದ್ಯುತ್ ಉತ್ಪಾದನೆ–ಪೂರೈಕೆ ಸೇರಿದಂತೆ ಜನಸಾಮಾನ್ಯರ ಆಧಾರಸ್ತಂಭವಾಗಿರುವ ಸಂಸ್ಥೆಗಳು ಖಾಸಗಿ ಲಾಭಾಸಕ್ತಿಗೆ ಒಪ್ಪಿಸಲಾಗುತ್ತಿವೆ ಎಂದು ತಿಳಿಸಿದರು. ಈ ಖಾಸಗೀಕರಣ ನೀತಿಯಿಂದ ಸ್ಥಳೀಯ ಕೈಗಾರಿಕೆ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಉದ್ಯೋಗ ಸೃಷ್ಟಿ ಕುಂಠಿತಗೊಂಡಿದೆ. ಪರಿಣಾಮ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ಕಾರ್ಮಿಕರ ಉದ್ಯೋಗ ಭದ್ರತೆ ನಾಶವಾಗುತ್ತಿದೆ. ಜೊತೆಗೆ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿಯುತ್ತಿದ್ದು, ಜನರ ಮೇಲೆ ಆರ್ಥಿಕ ಭಾರ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಈ ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ವಿವಿಧ ರೈತ–ಜನ ಸಂಘಟನೆಗಳ ನೇತೃತ್ವದಲ್ಲಿ ಫೆಬ್ರವರಿ 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ನಾಲ್ಕು ಲೇಬರ್ ಕೋಡ್ ಹಿಂಪಡೆಯಬೇಕು, ಖಾಸಗೀಕರಣ ನಿಲ್ಲಿಸಬೇಕು, ಸಾರ್ವಜನಿಕ ವಲಯದ ಸಂಸ್ಥೆಗಳನ್ನು ರಕ್ಷಿಸಬೇಕು ಹಾಗೂ ಶ್ರಮಿಕರ ಹಕ್ಕುಗಳನ್ನು ಕಾಪಾಡಬೇಕು ಎಂಬುದು ಮುಷ್ಕರದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಬ್ಯಾಂಕ್, ವಿಮೆ, ಸಾರಿಗೆ, ವಿದ್ಯುತ್, ಅಂಚೆ, ಶಿಕ್ಷಣ, ಆರೋಗ್ಯ, ನಿರ್ಮಾಣ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಧ್ಯಾಹ್ನ ಬೋಜನ ಸಿಬ್ಬಂದಿ, ರೈತರು ಹಾಗೂ ಜನಸಾಮಾನ್ಯರು ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಮುಷ್ಕರದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ನಡೆಯಲಿವೆ. ಮುಷ್ಕರ ಯಶಸ್ವಿಗಾಗಿ ಕೆಎಸ್ಆರ್ಟಿಸಿ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಕಟಿಂಗ್ ಶಾಪ್ ಮಾಲಕರು, ಟೈಲರ್ ಯೂನಿಯನ್, ಅಮಾಲರ ಸಂಘ, ಆಟೋ ಚಾಲಕರು ಹಾಗೂ ವರ್ತಕರ ಸಂಘಗಳು ಸ್ವಯಂಪ್ರೇರಿತವಾಗಿ ಕೊಪ್ಪಳ ಬಂದ್ಗೆ ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಹನುಮೇಶ ಕಲ್ಮಂಗಿ, ಶರಣು ಗಡ್ಡಿ, ಬಸವರಾಜ ಸಿಲುವಂತರ, ಸುಂಕಪ್ಪ ಗದಗ್, ತುಕಾರಾಂ ಪಾತ್ರೋಟಿ, ಮಹದೇವಪ್ಪ, ಕೆ.ಬಿ. ಗೋನಾಳ, ಸಂಜಯ್ ದಾಸ್, ದೊರೆ ವಿಜಯ್, ರಾಮಲಿಂಗ ಸ್ವಾಮಿ, ಮಲ್ಲಪ್ಪ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು. ಸಿಐಟಿಯು, ಎಐಯುಟಿಯುಸಿ, ಐಎಫ್ಟಿಯು, ಎಐಟಿಯುಸಿ, ಟಿಯುಸಿಐ, ಎಐಸಿಸಿಟಿಯು, ಎಐಯುಕೆಎಸ್, ಎನ್ಸಿಎಲ್, ಎಐಎಡಬ್ಲ್ಯುಯು, ಎಐಐಇಎ, ಎಲ್ಐಸಿ ಎಒಐ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ಸೇರಿದಂತೆ ಇತರ ಕಾರ್ಮಿಕ ಮತ್ತು ರೈತ ಸಂಘಟನೆಗಳು ಜಂಟಿಯಾಗಿ ಈ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಲಿವೆ.
ಜಾತಿ ಧರ್ಮ ಮನೆಗಳಿಗೆ ಸೀಮಿತಗೊಳಿಸಿ: ಡಾ.ಗುರುರಾಜ ಕರ್ಜಗಿ
ಉಡುಪಿ, ಫೆ.9: ಮಗು ಕೇಂದ್ರಿತ ಶಿಕ್ಷಣ ಕ್ರಮ ರೂಢಿಗೆ ಬರಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವಿಷಯಗಳನ್ನು ಬೋಧಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮಟ್ಟಕ್ಕೆ ತಲುಪಿ ಬೋಧಿಸಬೇಕು. ತಮ್ಮ ಮಕ್ಕಳೆಂಬ ಭಾವನೆಯಿಂದ ಜಾತಿ ಧರ್ಮ ಲಿಂಗ ಭೇದ ಮರೆತು ವರ್ತಿಸಬೇಕು. ಜಾತಿ ಧರ್ಮಗಳನ್ನು ತಮ್ಮ ಮನೆಗಳಿಗೆ ಸೀಮಿತಗೊಳಿಸಿ, ಭಾರತೀಯತೆ ವಿಶಾಲ ಭಾವ ತಳೆಯುವುದು ಇಂದಿನ ಅಗತ್ಯ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದ್ದಾರೆ. ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆ, ಮುಂಬೈ ಕಮಲ್ ಬಾಳಿಗ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಮಣಿಪಾಲ ರೋಟರಿ, ಐಎಂಎ ಉಡುಪಿ- ಕರಾವಳಿ ಹಾಗೂ ಯಕ್ಷಗಾನ ಕಲಾರಂಗ ಸಂಯುಕ್ತಾಶ್ರಯದಲ್ಲಿ ‘ಪೋಷಕರ ಮದ್ಯವ್ಯಸನ ಹಾಗೂ ಮಕ್ಕಳು’ ಜಾಗೃತಿ ಸಪ್ತಾಹ ಅಂಗವಾಗಿ ರವಿವಾರ ಕುಂಜಿಬೆಟ್ಟು ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆದ ‘ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಜೀವನ ಮೌಲ್ಯಗಳನ್ನು ತರಗತಿಯಲ್ಲಿ ಕಲಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಗುಣಗಳನ್ನು ಅಳವಡಿಸಿಕೊಂಡು, ಮೊದಲಾಗಿ ಮೌಲ್ಯಗಳನ್ನು ನಡೆದು ತೊರಿಸಿದಲ್ಲಿ ಮುಂದೆ ಮಕ್ಕಳು ಅಳವಡಿಸಿಕೊಂಡು ಗೌರವಿಸುತ್ತಾರೆ. ಶಿಕ್ಷಕರು ಓದಿಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಬೋಧಿಸುವ ವಿಷಯಗಳನ್ನು ಮೊದಲಾಗಿ ಮನನ ಮಾಡಿಕೊಳ್ಳಬೇಕು ಎಂದರು. ಕೊಠಡಿ ವಾತಾವರಣ ನಿರ್ಮಾಣ ಶಿಕ್ಷಕರಿಂದಲೇ ನಿರ್ಮಾಣ ವಾಗುವುದರಿಂದ ಧನಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ಮಕ್ಕಳನ್ನು ಕೀಳಾಗಿ ಕಾಣದೇ, ಅವರನ್ನು ಯಾವುದೇ ಲೇಬಲ್ ಮಾಡದೇ ಪಾಠದೊಂದಿಗೆ ಮೌಲ್ಯ ಬೋಧಿಸಿದಾಗ ವಿಶ್ವಶಾಂತಿ ನೆಲೆಗೊಳ್ಳಲು ಸಾಧ್ಯ. ಶಿಕ್ಷಕರಿಂದ ಈ ಕಾರ್ಯ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು. ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್, ರೋಟರಿ ಗವರ್ನರ್ ಅಮಿತ್ ಅರವಿಂದ್, ಕಂಪ್ಯೂರ್ಟ ಕೀಲಿಮಣೆ ತಜ್ಞ ಪ್ರೊ.ಕೆ.ಪಿ.ರಾವ್, ಐಎಂಎ ಅಧ್ಯಕ್ಷ ಡಾ.ಅಶೋಕ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಡಯಟ್ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಲಾದ ಪೋಷಕರ ಮದ್ಯಪಾನ ಮಕ್ಕಳ ಮೇಲೆ ದುಷ್ಪರಿಣಾಮ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಡಾ. ಗುರುರಾಜ ಕರ್ಜಗಿ ಅವರ ‘ಸಾಕ್ಷಿ’ ಹಾಗೂ ವಿರೂಪಾಕ್ಷ ದೇವರಮನಿ ಅವರ ‘ಕಲಿಸುವ ಗುರುವೇ ಕಲಿಸು’ ಪುಸ್ತಕ ಅನಾವರಣಗೊಳಿಸಲಾಯಿತು. ಮಣಿಪಾಲ ರೋಟರಿ ಅಧ್ಯಕ್ಷೆ ಶಶಿಕಲಾ ರಾಜವರ್ಮ ಸ್ವಾಗತಿಸಿದರು. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ರಶ್ಮಿ ಹಾಗೂ ಸಿಂಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲ ಮುನಿಯಾಲು ಆಯುರ್ವೇದ ವಿದ್ಯಾರ್ಥಿಗಳಿಂದ ‘ಪೋಷಕರ ಮದ್ಯ ವ್ಯಸನದಿಂದ ಅವರ ಮಕ್ಕಳು ಅನುಭವಿಸುವ ಯಾತನೆ’ ಕಿರುಪ್ರಹಸನ ಪ್ರಸ್ತುತಿಗೊಂಡಿತು.
ಕೊಪ್ಪಳ | ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಇಲಾಖೆಯಿಂದ ಬುಕ್ಕಿಂಗ್ ಅವಧಿ ವಿಸ್ತರಣೆ
ಕೊಪ್ಪಳ : ಭಾರತೀಯ ಅಂಚೆ ಇಲಾಖೆ ಸಾರ್ವಜನಿಕರ ಸೌಲಭ್ಯಕ್ಕಾಗಿ ಅಂಚೆ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಅಂಚೆ ಕಚೇರಿ ಮುಚ್ಚುವ ಸಮಯದ 30 ನಿಮಿಷಗಳ ಮುಂಚಿತವರೆಗೆ ಪತ್ರಗಳು, ಪಾರ್ಸೆಲ್ಗಳು ಹಾಗೂ ಅಂತರರಾಷ್ಟ್ರೀಯ ಅಂಚೆ ವಸ್ತುಗಳ ಬುಕ್ಕಿಂಗ್ ಸೌಲಭ್ಯವನ್ನು ವಿಸ್ತರಿಸಿದೆ. ಈ ಸಂಬಂಧ ಮೂರು ಪ್ರಮುಖ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯಾವಧಿ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತರರಾಷ್ಟ್ರೀಯ ಸ್ಪೀಡ್ ಪೋಸ್ಟ್ ಮತ್ತು ಪಾರ್ಸೆಲ್ಗಳ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಕಾರ್ಯದಿನಗಳಲ್ಲಿ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ಲಭ್ಯವಾಗಲಿದೆ. ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ https://app.indiapost.gov.in/customer-selfservice/login ಮೂಲಕ ಮನೆಯಲ್ಲಿಯೇ ಕುಳಿತು ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ಸಲ್ಲಿಕೆ ಹಾಗೂ ಇತರ ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯಬಹುದಾಗಿದೆ. ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ. ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ “Dak Seva App” ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್ ಆ್ಯಪ್ ಮೂಲಕ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ನೋಂದಣಿ ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಲಭ್ಯವಿರುತ್ತವೆ. ಆ್ಯಪ್ ಡೌನ್ಲೋಡ್ ಮಾಡಲು ಅಗತ್ಯವಾದ QR ಕೋಡ್ India Post ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕನಕಗಿರಿ | 16.50 ಕೋಟಿ ರೂ. ಕಾಮಗಾರಿಗೆ ಸಚಿವ ತಂಗಡಗಿ ಚಾಲನೆ
ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ, ರಸ್ತೆ ಸುಧಾರಣೆ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು 16.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಸೋಮವಾರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಂಕಾಪುರದಿಂದ ಕನಕಗಿರಿ–ಕೊಪ್ಪಳ ರಸ್ತೆಯವರೆಗೆ ರಸ್ತೆ ಡಾಂಬರೀಕರಣಕ್ಕೆ 2.70 ಕೋಟಿ ರೂ., ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ., ಕನಕಗಿರಿಯಿಂದ ಕಲಕೇರಿ ಗ್ರಾಮವರೆಗೆ ರಸ್ತೆ ಮರು ಡಾಂಬರೀಕರಣಕ್ಕೆ 3 ಕೋಟಿ ರೂ., ಹುಲಿಹೈದರದಿಂದ ದೇವಲಾಪುರ ಗ್ರಾಮವರೆಗೆ ರಸ್ತೆ ಡಾಂಬರೀಕರಣಕ್ಕೆ 7.50 ಕೋಟಿ ರೂ., ನೀರ್ಲೂಟಿ ಗ್ರಾಮದಿಂದ ಮಲ್ಲಿಗೆವಾಡ ಗ್ರಾಮವರೆಗೆ ರಸ್ತೆ ಡಾಂಬರೀಕರಣಕ್ಕೆ 1.50 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು. ಪಟ್ಟಣದಲ್ಲಿ ಉಪನೋಂದಣಿ ಕಚೇರಿ ಆರಂಭಿಸುವ ಮೂಲಕ ತಾಲ್ಲೂಕಿನ ಜನರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಾಲ್ಲೂಕು ಕಚೇರಿಗಳನ್ನು ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿರೇಶ ಸಮಗಂಡಿ, ತಾ.ಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗ ನಾಯಕ, ಎನ್ಎಸ್ಇಯುಐ ತಾಲೂಕು ಅಧ್ಯಕ್ಷ ಬಿ. ಮಂಜುನಾಥ ರಾಮದುರ್ಗ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ ಪ್ರಭಾರಿ ಇಓ ರಾಜಶೇಖರ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಚುನಾವಣೆಗೆ ಮೊದಲು ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ವರ್ಷಕ್ಕೊಂದು ಯೋಜನೆ ಜಾರಿಗೆ ತರುವ ಸಲಹೆ ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತು ಉಳಿಸಿಕೊಳ್ಳುವ ಬದ್ದತೆಯಿಂದ ಒಂದೇ ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದುಕೊಂಡಿದೆ. - ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ,ಕೊಪ್ಪಳ.
ಬೆಳಗಾವಿ : ಹಿಂದೂ ಸಮಾಜೋತ್ಸವದ ಅಂಗವಾಗಿ ರವಿವಾರ ಸಂಘ ಪರಿವಾರ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಭಾಗವಹಿಸಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಾಂಝ್ ಪಥಕ, ಡೊಳ್ಳು ಕುಣಿತ ಹಾಗೂ ಕಾರ್ಯಕರ್ತರ ಜಯಘೋಷಗಳ ಮಧ್ಯೆ ನಂದಿಕೋಲು ಮೆರವಣಿಗೆ ಸಾಗಿದ ವೇಳೆ, ಶಾಸಕ ಬಾಬಾಸಾಹೇಬ್ ಪಾಟೀಲ್ರೊಂದಿಗೆ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರು ಹೆಜ್ಜೆಹಾಕಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ್, ಉತ್ತರ ಕರ್ನಾಟಕದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ವ್ಯವಸ್ಥಾಪಕ ಪ್ರಮುಖ ಕೃಷ್ಣಾನಂದ ಕಾಮತ್, ವಿಎಚ್ಪಿ ಮುಖಂಡ ಕೃಷ್ಣ ಭಟ್, ಸಾಗರ ಕಾಮಕರ, ಪ್ರತಿಭಾ ಉಣಕಲ್ಲಕರ ಸೇರಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಐಆರ್ ಅಡೆತಡೆಗಳನ್ನು ಸೃಷ್ಟಿಸದಂತೆ ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ; ಗಡುವು ಒಂದು ವಾರ ವಿಸ್ತರಣೆ
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪ್ರಕ್ರಿಯೆಯ ವಿಶೇಷ ತೀವ್ರ ಪರಿಷ್ಕರಣೆ ದೊಡ್ಡ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಎಸ್ಐಆರ್ ಅನ್ನು ಪೂರ್ಣಗೊಳಿಸುವಲ್ಲಿ ಯಾವುದೇ ಅಡೆತಡೆಗಳನ್ನು ಸೃಷ್ಟಿಸಬೇಡಿ, ನಿಗಾ ವಹಿಸಿ ಎಂದು ಎಚ್ಚರಿಕೆ ನೀಡಿದೆ.
ಕಮಲಾಪುರ | ಎಂಟು ಮಂದಿ ಸಾಧಕರಿಗೆ ‘ಬಸವ ಪುರಸ್ಕಾರ’
ಕಲಬುರಗಿ: ಕಮಲಾಪುರ ತಾಲ್ಲೂಕಿನ ರಾಜನಾಳ ಗ್ರಾಮದ ಬಸವೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ 8 ಮಂದಿ ಸಾಧಕರಿಗೆ ಬಸವ ಪುರಸ್ಕಾರ ಪ್ರದಾನ ಮಾಡಲಾಯಿತು. ಮುತ್ಯಾನ ಬಬಲಾದ ಡಾ.ಗುರುಪಾದಲಿಂಗ ಶೀವಯೋಗಿ, ಹಿರಿಯ ಮುಖಂಡ ಸಹಕಾರಿ ಧುರಿಣ ಅಪ್ಪಾರಾವ ಅಕ್ಕೂಣಿ, ಪ್ರಕಾಶಕ ಬಸವರಾಜ ಕೊನೇಕ್, ಸಮಾಜ ಸೇವಕಿ ಜಯಶ್ರೀ ಮತ್ತಿಮಡು, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಸಾರ, ಉದ್ಯಮಿ ಶರಣಬಸಪ್ಪ ಪಪ್ಪಾ, ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಹಾಗೂ ಪತ್ರಕರ್ತ ತೀರ್ಥಕುಮಾರ ಬೆಳಕೋಟಾ ಅವರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಗ್ರಾಮೀಣ ಭಾಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮದೇಯಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈದ ಸಮಾಜದ ಒಳಿತಿಗೆ ಶ್ರಮಿಸಿದ ಈ ಎಂಟು ಜನರನ್ನು ಗುರುತಿಸಿ ಬಸವ ಪುರಸ್ಕಾರ ನೀಡಿದ್ದು ಪ್ರಶಂಸಾರ್ಹವಾಗಿದೆ ಎಂದರು. ಪ್ರಶಸ್ತಿ ಪುರಸ್ಕೃತ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಏಕ ಮುಖವಾಗಿ ಚಲಿಸಿದರೆ ಸಾಲದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೇಕು ಬೇಡಗಳ ಬಗ್ಗೆ ಅರಿವಿರಬೇಕು. ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ತಳಮಟ್ಟದ ಜ್ಞಾನ ಒದಗಿಸಬೇಕು. ಇದಕ್ಕೆ ಪಾಲಕರು ಸಹ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ನಿರಂತರ ನಿಗಾವಹಿಸಬೇಕು ಎಂದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಿದವು. ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾಟೀಲ, ಕಾರ್ಯದರ್ಶಿ ಜಗದೀಶ ಪಾಟೀಲ, ಶಿವಾನಂದ ಕಶೆಟ್ಟಿ, ಶೃತಿ ಬಿರಾದಾರ, ಪಾರ್ವತಿ ಬಿ. ಪಾಟೀಲ, ಶರಣಬಸಪ್ಪ ಪಾಟೀಲ, ಜಗದೀಶ ಪಾಟೀಲ, ಚಂದ್ರಕಾಂತ ಶೇರಿ ಮತ್ತಿತರರು ಹಾಜರಿದ್ದರು.
Nandini Ambassador: ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾ ರಾಣಿ ಆಯ್ಕೆ
ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (KMF) ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಸ್ಯಾಂಡಲ್ವುಡ್ನ ಖ್ಯಾತ ನಟಿ ಸುಧಾ ರಾಣಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ಸುಧಾ ರಾಣಿ ಅವರನ್ನು ನಂದಿನಿ ಬ್ರ್ಯಾಂಡ್ನ ಮುಖವಾಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಡಿ.ಕೆ.
ಕಲಬುರಗಿ | ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಕಲಬುರಗಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ವಿಚಾರವನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿ ಹಾಗೂ ಜೆಫ್ರಿ ಎಪ್ಸ್ಟೀನ್ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ, ಜೆಫ್ರಿ ಎಪ್ಸ್ಟೀನ್ ಫೈಲ್ನಲ್ಲಿ ಭಾರತದ ಪ್ರಧಾನಿಗಳ ಹೆಸರು ಇದೆ ಎಂಬುದು ಗಂಭೀರ ವಿಷಯ. ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹಾನಿಯಾಗುತ್ತಿದೆ. ವ್ಯಾಪಾರ ಮತ್ತು ವಿದೇಶಾಂಗ ನೀತಿಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ಪರಶುರಾಮ ನಾಟಿಕಾರ್, ಗೌತಮ್ ಕರಿಕಲ್, ರಾಖಿಬ್, ತಂಜಿಲ್ ಫರಾಜ್, ರಾಮಪ್ರಸಾದ ಕಾಂಬಳೆ, ಮೊಹ್ಮದ್ ಅಸ್ವಾನ್, ಟೈಗರ್ ವಿಶ್ಲೇಶ, ಅಸ್ಲಂ ಸಿಂದಗಿ, ಶರ್ಫುದ್ದೀನ್ ಎಮ್, ಪ್ರದೀಪ ದೊಣ್ಣೂರು, ಕಾರ್ತಿಕ ಹೊಸಮನಿ, ಫಾರೂಕ್ ಪಟೇಲ್ ಮುದಬಾಳ್, ಅನಾಸ್ ಪಟೇಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ: ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಪ್ಲ್ಯಾನ್
ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ. 14 ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಾಡಿ | ಉದ್ಯೋಗ ಪಡೆಯುವುದಷ್ಟೇ ಸಾಧನೆಯಲ್ಲ : ಪುಟ್ಟಮಣಿ ದೇವಿದಾಸ
ವಾಡಿ: ಸಮಾಜದಲ್ಲಿ ಓದಿ ಉದ್ಯೋಗ ಪಡೆಯುವುದು ಮಾತ್ರ ಸಾಧನೆಯಲ್ಲ. ವಿಚಾರವಂತರಿಂದ ನಮ್ಮ ಜೀವನದ ಬಗ್ಗೆ ಸಂಶೋಧನೆ ನಡೆಯುವುದು, ನಮ್ಮ ಬಗ್ಗೆ ಹಾಡುಗಳು ಬರೆಯಲ್ಪಡುವುದೇ ನಿಜವಾದ ಸಾಧನೆ ಎಂದು ಗೋದುತಾಯಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಮಣಿ ದೇವಿದಾಸ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶನಿವಾರ ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ವತಿಯಿಂದ “ಮಹಾನಾಯಕನ ಬೆನ್ನ ಹಿಂದಿನ ಬೆಳಕು – ರಮಾತಾಯಿ ನೆನೆಯುತ್ತ” ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗೆ ಹೋಗದ ರಮಾಬಾಯಿ ಎಂಬ ಮಹಾತಾಯಿ ನಮ್ಮ ಬದುಕಿನ ಬಗ್ಗೆ ಅಂದು ಚಿಂತನೆ ನಡೆಸಿದ್ದ ಫಲವಾಗಿ ಇಂದು ನಾವು ಅನೇಕ ಸೌಲಭ್ಯಗಳನ್ನು ಪಡೆದು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಒಂದು ದಿನದ ಸಮಾವೇಶದಿಂದ ಸಾಲದು; ರಮಾಬಾಯಿ ಅವರಲ್ಲಿನ ಒಂದಾದರೂ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು. ವಿಜಯಪುರದ ಸ್ತ್ರೀವಾದಿ ಚಿಂತಕಿ ಡಾ. ಭುವನೇಶ್ವರಿ ಕಾಂಬಳೆ ಮಾತನಾಡಿ, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಯಶಸ್ಸಿನ ಹಿಂದಿನ ಮಹಾನ್ ಶಕ್ತಿ ರಮಾಬಾಯಿ. ಈ ದೇಶಕ್ಕೆ ಒಬ್ಬ ವಿಶ್ವಜ್ಞಾನಿಯನ್ನು ರೂಪಿಸಿದ ಶಿಲ್ಪಿ ಮಾತೆ ರಮಾಬಾಯಿ. ಅಂಬೇಡ್ಕರ್ ಮಹಾ ಶಕ್ತಿಯಾಗಿ ಹೊರಹೊಮ್ಮುವ ಹಿಂದೆ ರಮಾಯಿಯವರ ಮೌನ ಕ್ರಾಂತಿ ಇದೆ ಎಂದು ಹೇಳಿದರು. ರಮಾಬಾಯಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ನಡುವಿನ ಪತ್ರವ್ಯವಹಾರಗಳು ಅವರ ದಾಂಪತ್ಯದ ಅತೀವ ಪ್ರೀತಿ, ಪರಸ್ಪರ ಗೌರವ ಮತ್ತು ಅವರು ಅನುಭವಿಸಿದ ಬಡತನದ ಕಠಿಣ ಪರಿಸ್ಥಿತಿಗಳನ್ನು ಸ್ಪಷ್ಟಪಡಿಸುತ್ತವೆ. ವಿದೇಶದಲ್ಲಿದ್ದಾಗ ಬಾಬಾಸಾಹೇಬರು ಅಮೆರಿಕಾ ಮತ್ತು ಲಂಡನ್ನಿಂದ ಬರೆದ ಪತ್ರಗಳು ಇತಿಹಾಸದ ಅಮೂಲ್ಯ ದಾಖಲೆಗಳು. ರಮಾಬಾಯಿ ಅವರದು ಪತಿ ಭಕ್ತಿ ಮಾತ್ರವಲ್ಲ; ಸಮಾಜದ ಮಹತ್ತರ ಬದಲಾವಣೆಗೆ ಒಬ್ಬ ಮಹಿಳೆ ತೋರಿದ ಸೈದ್ಧಾಂತಿಕ ಬದ್ಧತೆ ಎಂದು ಅವರು ಅಭಿಪ್ರಾಯಪಟ್ಟರು. ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದರು. ಶ್ರಾವಣಕುಮಾರ ಮೋಸಲಗಿ ಹಾಗೂ ಮನೋರಮ್ಮ ಧನ್ನೇಕರ್ ಮಾತನಾಡಿದರು. ದಯಾನಂದ ಖಜೂರಿ, ಅಮೃತ ಕೋಮಟೆ, ಸಂತೋಷ ಕೋಮಟೆ, ಕುಬಾಯಿ ಕಟ್ಟಿ, ಸವಿತಾ ಶ್ರಾವಣ, ಸಾಬಮ್ಮ ತುನ್ನೂರ, ಮಲ್ಲಮ್ಮ ಖಂಡೋಬಾ, ರವಿ ಕೋಳಕೂರ, ಶೋಭಾ ನಿಂಬರ್ಗಿ, ಪಾರ್ವತಿ, ಆನಂದ ನಿಂಬರ್ಗಿ, ಮಲ್ಲಮ್ಮ ಹೇರೂರ, ಶರಣಬಸು ಸಿರೂರಕರ, ವಿಜಯಕುಮಾರ ಸಿಂಗೆ, ಅನಂದ ನಿಂಬಬಡಿಗೇರ, ಅರುಣ, ಪ್ರಭಾಕರ ಹಾಗೂ ಸತೀಶ ಭಾಗೋಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ನಾಗಮ್ಮ ಪ್ರಭಾಕರ ಸ್ವಾಗತಿಸಿದರು. ವಿಕ್ರಮ್ ತೇಜಸ್ ನಿರೂಪಿಸಿದರು. ತುಳಜಾ ಗಾಯಕವಾಡ ವಂದಿಸಿದರು.
ಅಫಜಲಪುರ | ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ
ಅಫಜಲಪುರ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಪಂಚಾಯತ್ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿನಾಯಕ ಮಾಯಣ್ಣ ಅವರು ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶರಾದ ಅನೀಲ ಅಮಾತೆ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಈರಣ್ಣ ಕೌಲಗಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕೀಲ ಮಂಜುನಾಥ ಡಿ. ಅವರು ಜೀತ ಪದ್ದತಿ ನಿರ್ಮೂಲನಾ ಕಾಯ್ದೆಯ ಕುರಿತು ಮಾಹಿತಿ ನೀಡುವ ಉಪನ್ಯಾಸ ನಡೆಸಿ, ಕಾರ್ಮಿಕರ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.
ಕಲಬುರಗಿ | ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿ ಶಿಬಿರಕ್ಕೆ ಚಾಲನೆ
ಕಲಬುರಗಿ : ಕರ್ನಾಟಕ ಸರ್ಕಾರದ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ಯಡಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಇಲಾಖೆ ಹಾಗೂ ರಫ್ತು ಸೌಲಭ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಗರದ ಗ್ರ್ಯಾಂಡ್ ಹೋಟೆಲ್ನಲ್ಲಿ 6 ದಿನಗಳ ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ (EMTP)ಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟಿಪಿಸಿ ನಿರ್ದೇಶಕ (ರಫ್ತು) ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಕೆ. ಶಿವಕುಮಾರ ಅವರು, ಕಲಬುರಗಿಯಲ್ಲಿ ಪ್ರಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಇಂತಹ ರಫ್ತು ತರಬೇತಿ ಆಯೋಜಿಸಲಾಗಿದೆ. ಈ ಭಾಗದಿಂದ ಕೃಷಿ ಆಧಾರಿತ ಉತ್ಪನ್ನಗಳು, ಕೃಷಿ ಉತ್ಪಾದನೆಗಳು ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳನ್ನು ರಫ್ತು ಮಾಡಲು ವಿಶಾಲ ಅವಕಾಶಗಳಿವೆ ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಇನ್ನಷ್ಟು ರಫ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉದ್ಯಮಿಗಳು, ರೈತರು ಹಾಗೂ ಯುವಕರು ಈ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಸಮದ ಪಟೇಲ್ ಹಾಗೂ ಜಂಟಿ ತೋಟಗಾರಿಕಾ ನಿರ್ದೇಶಕರಾದ ಸಂತೋಷ ಇನಾಂದಾರ ಮಾತನಾಡಿದರು. ವಿಟಿಪಿಸಿಯ ರಫ್ತು ಸಂಯೋಜಕರಾದ ಅರವಿಂದ ಭಟ್ ಅವರು ತರಬೇತಿಯ ಉದ್ದೇಶ, ಮಹತ್ವ ಹಾಗೂ ತರಬೇತಿ ಘಟಕಗಳ ಕುರಿತು ವಿವರಿಸಿದರು. ವಿಟಿಪಿಸಿ ಶಾಖೆ ಕಲಬುರಗಿಯ ರಫ್ತು ಸೌಲಭ್ಯ ಕೇಂದ್ರದ ಸಹಾಯಕ ನಿರ್ದೇಶಕರಾದ ಜಾಫರ್ ಖಾಸಿಮ್ ಅನ್ಸಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಕು. ರೂಪಾಲಿ ಶೇರಖಾನೆ ವಂದಿಸಿದರು. ತರಬೇತಿಯಲ್ಲಿ 35 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ 496 ಔಷಧಿಗಳ ಖರೀದಿ ಪ್ರಕ್ರಿಯೆ ಆರಂಭಿಸಿದ ಆರೋಗ್ಯ ಇಲಾಖೆ
ಬೆಂಗಳೂರು : 2025-26ನೇ ಸಾಲಿನ ವಾರ್ಷಿಕ ಬೇಡಿಕೆ ಪಟ್ಟಿಗೆ ಸಂಬಂಧಿಸಿದಂತೆ, ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಿಗಳನ್ನು ಒದಗಿಸಲು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್ಎಂಸಿಎಲ್) ವತಿಯಿಂದ 496 ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಈ ಟೆಂಡರ್ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಸಂಬಂಧ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಟೆಂಡರ್ ಆಹ್ವಾನಿಸಿದ 496 ಔಷಧಿಗಳಲ್ಲಿ ಈಗಾಗಲೇ 99 ಔಷಧಿಗಳಿಗೆ ಕೆಎಸ್ಎಂಎಸ್ಸಿಎಲ್ನಿಂದ ಅರ್ಹ ಬಿಡ್ದಾರರಿಗೆ ಆದೇಶವನ್ನು ನೀಡಲಾಗಿದ್ದು, ಉಳಿದ 327 ಔಷಧಿಗಳ ಖರೀದಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಸ್ತುತ ಟೆಂಡರ್ ಮೌಲ್ಯಮಾಪನ ಹಂತದಲ್ಲಿದ್ದು, ಈ ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ. ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಅವಧಿಯಲ್ಲಿ ಯಾವುದೇ ತುರ್ತು ಅಥವಾ ಅಗತ್ಯ ಔಷಧಿಗಳ ಕೊರತೆಯಾದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಡಿ ಅಧಿಕೃತ ವಿತರಕರ ಮೂಲಕ ಜೆನೆರಿಕ್ ಔಷಧಿಗಳನ್ನು ಆರೋಗ್ಯ ಸಂಸ್ಥೆಗಳು ತಾತ್ಕಾಲಿಕವಾಗಿ ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಫಾರ್ಮಾ ಮತ್ತು ಮೆಡಿಕಲ್ ಬ್ಯೂರೋ ಆಫ್ ಇಂಡಿಯಾಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ವ್ಯವಸ್ಥೆಯನ್ನು ಬಲಪಡಿಸಿ ಸರಕಾರಿ ಆಸ್ಪತ್ರೆಗಳಿಗೆ ನಿರಂತರ ಅವಶ್ಯಕ ಔಷಧಿಗಳ ನಿರಂತರ ಸರಬರಾಜು ಖಚಿತಪಡಿಸಲು ಕೆಎಸ್ಎಂಸಿಎಲ್ನಿಂದ 50 ಕೋಟಿ ರೂ. ನಿಧಿಯನ್ನು ಮೀಸಲಿಡಲು ತೀರ್ಮಾನಿಸಲಾಗಿದೆ. ಇದಲ್ಲದೆ, ಅಗತ್ಯವಿದ್ದಲ್ಲಿ ಆರೋಗ್ಯ ಸಂಸ್ಥೆಗಳು ಜಿಇಎಂ ಪೋರ್ಟಲ್ ಮೂಲಕ ನೇರವಾಗಿ ಔಷಧಿಗಳನ್ನು ಖರೀದಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಚಿತ್ತಾಪುರ | ವಿವಿಧ ಪ್ರೌಢ ಶಾಲೆಗಳಿಗೆ ಜಿಪಂ ಸಿಇಒ ಭಂವರಸಿಂಗ್ ಮೀನಾ ಭೇಟಿ
ಚಿತ್ತಾಪುರ: ಎಸೆಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ ಹಾಗೂ ಪೇಠಶಿರೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ ಭೇಟಿ ನೀಡಿದರು. ಎಸೆಸೆಲ್ಸಿ ಫಲಿತಾಂಶ ಕಡಿಮೆ ಬರಲು ಕಾರಣ ಮತ್ತು ಫಲಿತಾಂಶ ಹೆಚ್ಚಳ ಮಾಡಲು ಅಗತ್ಯ ಸಲಹೆ ನೀಡಿ ಮಕ್ಕಳೊಂದಿಗೆ ಮಾತನಾಡಿದ ಅವರು, ಯಾವ ವಿಷಯದಲ್ಲಿ ಕಲಿಕೆಗೆ ತೊಂದರೆ ಇದೆ ಎನ್ನುವುದನ್ನು ಚರ್ಚಿಸಿದರು. ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದ ಅವರು, ಅರಿವೇ ಗುರು ಎಂಬ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಒಳಗೊಂಡ ಪುಸ್ತಕ ಅದರ ಬಳಕೆ, ಅಗತ್ಯತೆ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಸೇರಿದಂತೆ ಶಿಕ್ಷಕರು ಇದ್ದರು.
ಚಿತ್ತಾಪುರ | ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ : ತಿಪ್ಪಣ್ಣಪ್ಪ ಕಮಕನೂರ
ಚಿತ್ತಾಪುರ: ಕರ್ನಾಟಕದಲ್ಲಿ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ಪ್ರಸ್ತಾವನೆಯಲ್ಲಿ ಬಳಸಲಾದ ಐದು ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಪದಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು. ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋಲಿ ಸಮಾಜದ ಐದು ಪರ್ಯಾಯ ಪದಗಳನ್ನು ಎಸ್ಟಿಗೆ ಸೇರಿಸುವ ಪ್ರಯತ್ನಕ್ಕೆ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಸಚಿವರು ಹಾಗೂ ಶಾಸಕರು ಕೈಜೋಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿಶೇಷ ಮುತುವರ್ಜಿ ವಹಿಸಿರುವುದರಿಂದ ಶೀಘ್ರದಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿ ಸರ್ಕಾರದ ಸೌಲಭ್ಯಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಲಬುರಗಿ ನಗರದ ಮಹಾತ್ಮ ಗಾಂಧಿ ಹಾಗೂ ಬಾಬು ಜಗಜೀವನರಾಮ್ ಮೂರ್ತಿಗಳ ನಡುವೆ ಬೃಹತ್ ಪ್ರಮಾಣದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ರಾಜ್ಯ ಕ್ಯಾಬಿನೆಟ್ ಅನುಮತಿ ನೀಡಿದ್ದು, ಮಹಾನಗರ ಪಾಲಿಕೆಯಲ್ಲಿ 40 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಎರಡು ತಿಂಗಳೊಳಗೆ ಮೂರ್ತಿ ಸ್ಥಾಪನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಬೆಂಗಳೂರು ವಿಧಾನಸೌಧ ಎದುರು ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆ ಕುರಿತು ಅಧಿವೇಶನದಲ್ಲಿ ಹಲವು ಬಾರಿ ಚರ್ಚೆ ನಡೆಸಲಾಗಿದೆ. ವಿಧಾನ ಪರಿಷತ್ ಸಭಾಪತಿ ಸೇರಿದಂತೆ 75 ಸದಸ್ಯರು ಬೆಂಬಲ ಸೂಚಿಸಿದ್ದು, ಶೀಘ್ರದಲ್ಲೇ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದರು. ತೋನಸನಳ್ಳಿ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗುರುಮಠಕಲ್ನ ಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಪರಶುರಾಮ ಮುತ್ಯಾ ಭಾಗೋಡಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ, ಮಲ್ಲಿಕಾರ್ಜುನ ಅಲ್ಲೂರಕರ್, ಶರಣಪ್ಪ ನಾಟೀಕಾರ, ರಾಜೇಶ್ ಹೋಳಿಕಟ್ಟಿ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಹಾಂತಗೌಡ ಎಸ್. ಪಾಟೀಲ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಉದ್ಯಮಿ ಶಿವರಾಯ ಕಮಕನೂರ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ, ಉದ್ಯಮಿ ಯಲ್ಲಾಲಿಂಗ ಪೂಜಾರಿ, ಹಸನ್ ಪಟೇಲ್, ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಮಕನೂರ, ಪ್ರೊ.ಮಲ್ಲಪ್ಪ ಮಾನೇಗಾರ, ವಿಠಲ್ ತಾತಾ, ವೀರಯ್ಯ ಗುತ್ತೇದಾರ, ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ, ಬಸವರಾಜ ಪೂಜಾರಿ, ಶರಣಗೌಡ ಪಾಟೀಲ, ಗುಂಡು ಐನಾಪೂರ, ದೇವಿಂದ್ರ ಅರಣಕಲ್, ಗುರುನಾಥ ಗುದಗಲ್, ತಮ್ಮಣ್ಣ ಡಿಗ್ಗಿ, ಆಂಜನೇಯ ಜೀವಣಗಿ, ದೇವರಾಜ್ ತಳವಾರ, ಬಸವರಾಜ ಹಾಸಬಾ, ಶಿವಯೋಗಿ ನಾಟೀಕಾರ, ಸಂತೋಷ ಇವಣಿ, ಶರಣು ಡೋಣಗಾಂವ, ಇಂದುಶೇಖರ ಬೆಂಕಿ, ಬೋಜು ಶೇರಿ, ರಾಮಲಿಂಗ ಬಾನರ್, ಮಂಜುನಾಥ ಸಣ್ಣೂರಕರ್, ಮಲ್ಲಿಕಾರ್ಜುನ ನಾಯ್ಯೋಡಿ, ಕರಣ ಅಲ್ಲೂರ, ದೇವು ಯಾಬಾಳ, ಸುರೇಶ್ ಗುತ್ತೇದಾರ, ತಿಪ್ಪಣ್ಣ ಇವಣಿ, ಅಂಬು ಹೋಳಿಕಟ್ಟಿ, ದೇವಿಂದ್ರಪ್ಪ ಗುಡ್ಡಾಪುರ, ಮುತ್ತಣ್ಣ ಶಿರೂರು, ಫಕೀರಪ್ಪ ಕದ್ದರಗಿ ಅವರು ವೇದಿಕೆಯಲ್ಲಿದ್ದರು. ಕೋಲಿ ಸಮಾಜ ಹಿರಿಯ ಮುಖಂಡ ರಾಜೇಂದ್ರಪ್ಪ ಅರಣಕಲ್ ಅಧ್ಯಕ್ಷತೆ ವಹಿಸಿದ್ದರು. ಕೋಲಿ ಸಮಾಜದ ಭಾಗೋಡಿ ಅಧ್ಯಕ್ಷ ದೇವಿಂದ್ರ ಹಾಸಬಾ ದೇವಿಂದ್ರ ಡೋಣಗಾಂವ, ನಾಗರಾಜ ಬೆಣ್ಣೂರ, ಶರಣಪ್ಪ ಹಾಸಬಾ, ಕಾಮೇಶ್ ಹಾಸಬಾ, ಮರೆಪ್ಪ ಭಂಗಿ, ಮಣಿಗೀರಿ ಅಗಸಿ, ಸಾಗರ ಬಿಚ್ಚಾ, ಶರಣು ಬೆಣ್ಣೂರ, ಅರ್ಜುನ್ ನಾಟೀಕಾರ, ಮಾರುತಿ ದುಗನೂರ, ಸಂತೋಷ ನದಿಮುಲ್, ನಾಗರಾಜ ಹಾಸಬಾ, ಕಾಶಿನಾಥ ಭಂಗಿ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಎಮ್ಮೆನೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಅರಣಕಲ್ ಸ್ವಾಗತಿಸಿದರು. ದೇವೇಂದ್ರ ನಾಟೀಕಾರ ನಿರೂಪಿಸಿದರು. ದೇವಿಂದ್ರ ಡೋಣಗಾಂವ ವಂದಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯ ನವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
West Bengal SIR | ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಧಿ ವಿಸ್ತರಣೆ: ಸುಪ್ರೀಂ ಕೋರ್ಟ್ ಆದೇಶ
8,505 ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಕಲಬುರಗಿ | ಫೆ.26ರಿಂದ ರೇಣುಕಾಚಾರ್ಯ ಜಯಂತ್ಯೋತ್ಸವ: ಮೂರು ದಿನ ವಿಶೇಷ ಉಪನ್ಯಾಸ
ಕಲಬುರಗಿ : ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಜಿಲ್ಲಾ ಸಮಿತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಫೆ.26ರಿಂದ 28ರವರೆಗೆ ಪ್ರತಿದಿನ ಸಂಜೆ 6ರಿಂದ 8ರವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಮಾಜೋ-ಧಾರ್ಮಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಶರಣಕುಮಾರ ಮೋದಿ ಹಾಗೂ ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ಮಠಪತಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲಾಡಳಿತ ಮತ್ತು ಜಯಂತ್ಯೋತ್ಸವ ಸಮಿತಿಯ ಸಹಯೋಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದ ಹಿಂಭಾಗದಲ್ಲಿರುವ ಬಸವ ಸಂಸ್ಕೃತಿಕ ವೇದಿಕೆಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಫೆ.27ರಂದು ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂ. ಪೂಜ್ಯ ಶ್ರೀ ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಅವರ ಹೆಸರಿನಲ್ಲಿ ವೇದಿಕೆ ನಾಮಕರಣ ಮಾಡಲಾಗಿದೆ. ಫೆ.28ರಂದು ಲಿಂ. ಶಾಮನೂರ ಶಿವಶಂಕರಪ್ಪ ಹಾಗೂ ಲೋಕನಾಯಕ, ಶತಾಯುಷಿ ಲಿಂ. ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ವೇದಿಕೆಗಳನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು. ಮೂರು ದಿನಗಳ ಕಾಲ ಬೀದರ ಜಿಲ್ಲೆಯ ಗೋರ್ಟಾ–ಬೇಮಳಖೇಡ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಹರ-ಗುರು-ಚರಮೂರ್ತಿಗಳು, ಸಚಿವರು, ಶಾಸಕರು, ಗಣ್ಯರು ಹಾಗೂ ವೀರಶೈವ ಲಿಂಗಾಯತ ಸಮಾಜದ ಭಕ್ತರು ಭಾಗವಹಿಸಲಿದ್ದಾರೆ. ಸಾಧನೆ ಮಾಡಿದ ಸಾಧಕರಿಗೆ ವಿಶೇಷ ಸತ್ಕಾರ ನಡೆಯಲಿದೆ ಎಂದರು. ಮಾ.1ರಂದು ಬೆಳಿಗ್ಗೆ 8 ಗಂಟೆಗೆ ನಗರದ ಚೌಕ್ ಪೊಲೀಸ್ ಠಾಣೆ ಎದುರುಗಡೆಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದೆ. ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರ ಸಾನ್ನಿಧ್ಯದಲ್ಲಿ ಪೂಜ್ಯ ಲಿಂಗರಾಜ ಅಪ್ಪಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ 1008 ಮುತ್ತೈದೆಯರು ಮಹಾಕುಂಭ ಧಾರಣೆ ಮಾಡಿ ಭಾಗವಹಿಸಲಿದ್ದು, ವಿವಿಧ ಕಲಾತಂಡಗಳು ಮತ್ತು ವಾದ್ಯ ವೈಭವಗಳೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಮಧ್ಯಾಹ್ನ 12.30ಕ್ಕೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಮಾರಂಭ ಜರುಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜ್ಯೋತಿ ಹಿರೇಮಠ, ಸತೀಶ ದಿಗ್ಗಾಂವಕರ್, ಸೋಮಶೇಖರ ಹಿರೇಮಠ, ನಾಗಲಿಂಗಯ್ಯ ಮಠವತಿ, ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kasaragod | ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ‘ಚಿನ್ನು ಪಾಪು’ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಆತ್ಮಹತ್ಯೆ ಶಂಕೆ
ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ವಾಸಿಸುವ ಸಂಬಳದ ಉದ್ಯೋಗಿಗಳಿಗೆ ಭಾರೀ ತೆರಿಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಹಳೆಯ ತೆರಿಗೆ ವ್ಯವಸ್ಥೆಯಡಿ ಮನೆ ಬಾಡಿಗೆ ಭತ್ಯೆ (House Rent Allowance) ಮೇಲಿನ ತೆರಿಗೆ ವಿನಾಯಿತಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾವಿಸಿದೆ. ಈಗಿರುವ ವ್ಯವಸ್ಥೆಯಂತೆ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ವಾಸಿಸುವ ಸಂಬಳದ
ಕಲಬುರಗಿ | ಮಕ್ಕಳ ಪ್ರತಿಭೆ ಅರಳಲು ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದು: ಗಣಪತಿ
ಕಲಬುರಗಿ: ಚಿತ್ರಕಲೆಯಲ್ಲಿ ಮಕ್ಕಳ ಪ್ರತಿಭೆ ಅರಳಲು ಚಿತ್ರಕಲಾ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಸಹ ನಿರ್ದೇಶಕ (ಆಡಳಿತ) ಗಣಪತಿ ಹೇಳಿದರು. ನಗರದ ಮಾತೋಶ್ರೀ ನೀಲಗಂಗಮ್ಮಾ ಗುರಪ್ಪಾ ಅಂದಾನಿ ಗ್ಯಾಲರಿಯಲ್ಲಿ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿರುವುದು ಸಂತಸದ ಸಂಗತಿ. ಚಿತ್ರಕಲಾ ಶಿಕ್ಷಕರು ಸಮರ್ಪಕ ಮಾರ್ಗದರ್ಶನ ನೀಡಿದಾಗ ಇಂತಹ ಉನ್ನತ ಮಟ್ಟದ ಕಲಾಕೃತಿಗಳು ಮೂಡಿಬರುತ್ತವೆ ಎಂದು ಅವರು ಹೇಳಿದರು. ಇಂತಹ ವಿನೂತನ ಹಾಗೂ ಪ್ರೋತ್ಸಾಹಕಾರಿ ಕಾರ್ಯಕ್ರಮಗಳು ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ ದೊಡ್ಡಮನಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳ ಚಿತ್ರಕಲಾ ಪ್ರದರ್ಶನ ವೀಕ್ಷಿಸಿದಾಗ ಹಳೆಯ ನೆನಪುಗಳು ಮರುಕಳಿಸಿದವು. ಎಲ್ಲರಿಗೂ ಚಿತ್ರ ಬಿಡಿಸುವುದು ಸಾಧ್ಯವಿಲ್ಲ, ಆದರೆ ಪ್ರೌಢಶಾಲಾ ಮಕ್ಕಳ ಅದ್ಭುತ ಚಿತ್ರಗಳು ಅವರು ಉನ್ನತ ಮಟ್ಟ ತಲುಪುವ ಸಂಕೇತವಾಗಿದೆ ಎಂದು ಹೇಳಿದರು. ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾನಂದ ಕೊಪ್ಪದ, ಧರ್ಮಾನಂದ ಎಂ.ಕೆ., ರಾಜೇಶ ನೀಲಹಳ್ಳಿ ಹಾಗೂ ಸಹ ಶಿಕ್ಷಕ–ಸಾಹಿತಿ ರಾಜೇಂದ್ರ ಝಳಕಿ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಮಲ್ಲ ಶಿವಬೊ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಚಿತ್ರಕಲಾ ಶಿಕ್ಷಕರಾದ ಬಾಬಾಸಾಹೇಬ ವಸಂತ ಸಾಳುಂಕೆ, ಎಸ್.ವಿ. ವಿಜಯಭಾರತಿ ಹಾಗೂ ಮಹಮ್ಮದ್ ಗೌಸ್ ಪಟೇಲ್ ಅವರನ್ನು ಗೌರವಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಚಿತ್ರಕಲೆಯ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳ ಚಿತ್ರಕಲಾ ಪ್ರದರ್ಶನ, ತೊಗಲು ಗೊಂಬೆಗಳ ಸಂಪುಟ ಬಿಡುಗಡೆ ಹಾಗೂ ತೊಗಲು ಗೊಂಬೆಯಾಟ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸವಿತಾ ಕುಂಬಾರ ಸ್ವಾಗತಿಸಿದರು, ಪ್ರಭು ಜಾಣ ನಿರೂಪಿಸಿದರು, ರೂಪಾ ಕಲಶೆಟ್ಟಿ ವಂದಿಸಿದರು. ನಿವೃತ್ತ ಚಿತ್ರಕಲಾ ಪರಿವೀಕ್ಷಕ ಟಿ. ದೇವಿಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋರಳ್ಳಿ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಂಯೋಜಕ ಜಗದೀಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮ ಮೆಟ್ರೋ ದರ ಏರಿಕೆ; ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ: ಆರ್.ಅಶೋಕ್
ಬೆಂಗಳೂರು : ‘ನಮ್ಮ ಮೆಟ್ರೋ ರೈಲ್ವೆ ಯೋಜನೆಯಲ್ಲಿ ಶೇ.87ರಷ್ಟು ಪಾಲು ಇಟ್ಟುಕೊಂಡಿರುವ ರಾಜ್ಯ ಸರಕಾರವು ಬೆಲೆ ಏರಿಕೆಗೆ ಮಾತ್ರ ಕೇಂದ್ರ ಸರಕಾರದತ್ತ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ. ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ನಮ್ಮ ಮೆಟ್ರೋಗೆ ವ್ಯವಸ್ಥಾಪಕ ನಿರ್ದೇಶಕರನ್ನು (ಎಂಡಿ) ನೇಮಕ ಮಾಡುವುದು ರಾಜ್ಯ ಸರಕಾರ, ಮೆಟ್ರೋ ಕಾಮಗಾರಿಗೆ ಟೆಂಡರ್ ಕರೆಯೋದು ರಾಜ್ಯ ಸರಕಾರ. ಎಲ್ಲ ಅಧಿಕಾರವೂ ರಾಜ್ಯ ಸರಕಾರದ್ದೇ ಆಗಿರುವಾಗ ಕೇಂದ್ರ ಸರಕಾರ ಬೆಲೆ ಏರಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಮೆಟ್ರೋ ದರ ಏರಿಸಿದ್ದೇ ಆದಲ್ಲಿ ಇಡೀ ದೇಶದ ಮೆಟ್ರೋಗಳಿಗೆ ಅನ್ವಯಿಸಬೇಕಿತ್ತು, ಕೇವಲ ಕರ್ನಾಟಕದ ಮೆಟ್ರೋಗೆ ಮಾತ್ರ ಬೆಲೆ ಏರಿಸಲು ಸಾಧ್ಯವೇ?. ಕಾಂಗ್ರೆಸ್ ಸರಕಾರದ ಸರ್ವಾಧಿಕಾರಿ ನೀತಿಗೆ ಧಿಕ್ಕಾರ. ಕರ್ನಾಟಕದ ಸರಕಾರ ದಿವಾಳಿಯಾಗಿದೆ ಎಂದು ಖಾಲಿ ಟ್ರಂಕ್ ತೋರಿಸಿ ಪ್ರತಿಭಟನೆ ಮಾಡುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಕೆ.ಸಿ.ರಾಮಮೂರ್ತಿ ಅವರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ. ಸ್ವಯಂ ಘೋಷಿತ ಸಂವಿಧಾನ ರಕ್ಷಕ ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕದಲ್ಲಿ ಸಂಸದರಿಗೆ ಪ್ರತಿಭಟಿಸುವ ಹಕ್ಕು ಇಲ್ಲವೇ?’ ಎಂದು ಅವರು ಕೇಳಿದ್ದಾರೆ.
ಅದ್ಧೂರಿ ಹಂಪಿ ಉತ್ಸವಕ್ಕೆ ಸಿದ್ಧತೆ ; ಫೆ. 13 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಹಂಪಿ ಉತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಫೆ.13, 14 ಮತ್ತು 15 ರಂದು ಹಂಪಿ ಉತ್ಸವ ಜರುಗಲಿದೆ. ಫೆ. 13 ರಂದು ಸಂಜೆ ಮುಖ್ಯಮಂತ್ರಿ ಅವರು ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈಗಾಗಲೇ ಸಿದ್ಧತೆಗಳು ಭರ್ಜರಿಯಾಗಿ ಸಾಗಿದ್ದು, ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗಿದೆ,’’ ಎಂದರು.
ʼಅಧಿಕಾರ ಹಂಚಿಕೆʼ ವಿಚಾರ | ಗೊಂದಲ ಬೇಗ ಬಗೆಹರಿಯುವ ನಿರೀಕ್ಷೆಯಲ್ಲಿದ್ದೇವೆ : ಸತೀಶ್ ಜಾರಕಿಹೊಳಿ
ದಾವಣಗೆರೆ : ಅಧಿಕಾರ ಹಂಚಿಕೆಯ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂದು ನಾವು ಕೂಡಾ ಕಾಯುತ್ತಿದ್ದೇವೆ. ನಿರ್ಧಾರ ಮಾಡುವುದು ಹೈಕಮಾಂಡ್, ಅಲ್ಲಿಯವರೆಗೂ ಕಾಯಬೇಕು. ಯಾಕೆ ತಡವಾಗುತ್ತಿದೆ, ಕಾರಣ ಗೊತ್ತಿಲ್ಲ. ಗೊಂದಲ ಬೇಗ ಬಗೆಹರಿಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹರಿಹರದ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ʼವ್ಯವಸ್ಥೆಯಲ್ಲಿ ಎಲ್ಲರೂ ಹೈಕಮಾಂಡೇ ಮತ್ತು ದೊಡ್ಡವರೇ. ಇಲ್ಲಿ ಯಾರು ಸಣ್ಣವರು ಎಂದು ಹೇಳುವುದಕ್ಕೆ ಆಗಲ್ಲʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯತೀಂದ್ರಗೆ ʼಹೈಕಮಾಂಡ್ʼ ಎಂದು ತಿರುಗೇಟು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿಗೆ 80 ಶಾಸಕರ ಬೆಂಬಲ ಇದೆ ಎಂಬ ಶಾಸಕ ಇಕ್ಬಾಲ್ ಹೇಳಿರಬಹುದು. ಆದರೆ, ಎಂಬತ್ತು ಒಂದು ವಿಷಯವಲ್ಲ. ಯಾರು ಸಮರ್ಥರಿದ್ದಾರೆ, ಯಾರು ಪಕ್ಷ ಮುನ್ನೆಡೆಸುತ್ತಾರೋ ಅವರಿಗೆ ಅವಕಾಶ ಸಿಗುತ್ತೆ. ಆದರೆ, ಆ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಚರ್ಚೆ ಮಾಡೋಣ ಎಂದರು.
ಕುಂದಾಪುರ| ತೆಕ್ಕಟ್ಟೆಯಲ್ಲಿ ಕಾರು ಪಲ್ಟಿ: ಚಾಲಕ ಸೇರಿ ಆರು ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಪಲ್ಟಿ ಹೊಡೆದು ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ–66ರ ಕನ್ನುಕೆರೆ ಎಂಬಲ್ಲಿ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಲಾ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಒಟ್ಟು 12 ಮಂದಿ ವಿದ್ಯಾರ್ಥಿಗಳು ಜ.31ರಂದು ಎರಡು ಕಾರುಗಳಲ್ಲಿ ದೇಶ ಸುತ್ತುವ ಪ್ರವಾಸಕ್ಕೆ ಹೊರಟಿದ್ದರು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಧ್ಯಾಹ್ನದ ವೇಳೆಗೆ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಪ್ರದೇಶದಲ್ಲಿ ಕಾರು ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಕಾರು ಪಲ್ಟಿ ಹೊಡೆದು ಬಿದ್ದಿದೆ. ಅಪಘಾತ ಸಂಭವಿಸಿದ ವೇಳೆಗೆ ಕಾರಿನಲ್ಲಿ ಚಾಲಕ ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ IAS ಅಧಿಕಾರಿ ವರ್ಗಾವಣೆ: ಆಹಾರ ಇಲಾಖೆಗೆ ಹೊಸ ಆಯುಕ್ತರ ನೇಮಿಸಿ ರಾಜ್ಯ ಸರ್ಕಾರ ಆದೇಶ
ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. ಸೋಮವಾರ ಆಹಾರ ಇಲಾಖೆಗೆ ಹೊಸ ಆಯುಕ್ತರ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ವಿತ್ತೀಯ ಕಾರ್ಯನೀತಿ ಸಂಸ್ಥೆಯ ನಿರ್ದೇಶಕರಾಗಿದ್ದ ಎಂಆರ್ ರವಿಕುಮಾರ್ ಅವರಿಗೆ ಆಹಾರ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಇನ್ನು ಮುಂದೆ ಆಹಾರ ಇಲಾಖೆಯ ಹೊಸ ಯೋಜನೆಗಳು, ಬಿಪಿಎಲ್ ಕಾರ್ಯ ವಿತರಣೆಗೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ ಬೇಡಿಕೆ; ಪರಿಶೀಲಿಸಿ ತೀರ್ಮಾನ : ಸಿಎಂ ಸಿದ್ದರಾಮಯ್ಯ
ಹರಿಹರ : ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸಲು ಬೇಡಿಕೆಯಿದ್ದು, ಅದನ್ನು ಪರಿಶೀಲಿಸಿ ಸರಕಾರ ತೀರ್ಮಾನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮೆಟ್ರೋ ದರ ಹೆಚ್ಚಳ: ಸರಕಾರದ ಪಾತ್ರವಿಲ್ಲ : ಮೆಟ್ರೋ ದರ ಹೆಚ್ಚಳವಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮೆಟ್ರೋ ದರವನ್ನು ಕೇಂದ್ರ ಸರಕಾರದಿಂದ ನೇಮಕವಾಗಿರುವ ಮೆಟ್ರೋ ಅಧ್ಯಕ್ಷರು ನಿಗದಿ ಮಾಡುತ್ತಾರೆ. ಇದರಲ್ಲಿ ಸರಕಾರದ ಪಾತ್ರವಿಲ್ಲ ಎಂದರು. ಮೆಟ್ರೋ ದರದ ಬಗ್ಗೆ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಅವರನ್ನೇ ಕೇಳಬೇಕು ಎಂದರು. ಪ್ರಧಾನ ಮಂತ್ರಿಗಳು ಅಮೆರಿಕಾದ ಒತ್ತಡಕ್ಕೆ ಮಣಿದಿದ್ದಾರೆ : ಭಾರತ ಮತ್ತು ಅಮೆರಿಕ ನಡುವೆ ಆಗಿರುವ ಒಪ್ಪಂದದಿಂದ ರೈತರಿಗೆ ಅನ್ಯಾಯವಾಗುತ್ತದೆ. ಪ್ರಧಾನ ಮಂತ್ರಿಗಳು ಅಮೆರಿಕಾದ ಒತ್ತಡಕ್ಕೆ ಮಣಿದಿದ್ದಾರೆ ಎಂದರು. ಇನ್ನೆರಡು ಸಚಿವ ಸ್ಥಾನ: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಗಣನೆ : ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಸಚಿವರನ್ನು ತೆಗೆದುಹಾಕಿಲ್ಲ. ಕಾರಣಾಂತರದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಿಗಣಿಸಲಾಗುವುದು ಎಂದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ರಾಜೀನಾಮೆ: ಸತ್ಯಕ್ಕೆ ದೂರವಾದ ಸಂಗತಿ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವರು ರಾಜಿನಾಮೆ ಸಲ್ಲಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು. ಬಜೆಟ್ ಮಂಡನೆ ದಿನಾಂಕ ; ಶೀಘ್ರ ಘೋಷಣೆ ರಾಜ್ಯ ಬಜೆಟ್ ಗೆ ಸಂಬಂಧಿಸಿದಂತೆ ತಯಾರಿ ನಡೆಯುತ್ತಿದ್ದು, ಬಜೆಟ್ ಮಂಡಿಸುವ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೆನಡಾದಲ್ಲಿ ಕನ್ನಡಿಗನ ಶೂಟೌಟ್: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ನೆಲಮಂಗಲ ಮೂಲದ ಎಂಜಿನಿಯರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಮೂಲದ ಎಂಜಿನಿಯರ್ ಒಬ್ಬರು ಕೆನಡಾದಲ್ಲಿ ಶೂಟೌಟ್ ಗೆ ಬಲಿಯಾದ ದಾರುಣ ಘಟನೆ ವರದಿಯಾಗಿದೆ. ಟೊರೊಂಟೊ ನಗರದಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಕಾರಣ ತಿಳಿದು ಬಂದಿಲ್ಲ. ಬೆಂಗಳೂರಿನಲ್ಲೇ ಎಂಜಿನಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ಅವರು ಕೆನಡಾದಲ್ಲಿ ಕಳೆದ ಆರು ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದರು. ಅಲ್ಲಿನ ಕನ್ನಡ ಸಂಘ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿದು ಬಂದಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು ನೆಲಮಂಗಲದ ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ.
CBSE Exam 2026: 10ನೇ ತರಗತಿಗೆ ಎರಡು ಬಾರಿ ಪರೀಕ್ಷೆ; ಯಾರಿಗೆ, ಎಷ್ಟು ವಿಷಯಗಳಿಗೆ ಅವಕಾಶ? ಇಲ್ಲಿದೆ ಮಾಹಿತಿ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸುವ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು 2026ರ ಫೆಬ್ರವರಿ 17ರಿಂದ ಆರಂಭವಾಗಲಿವೆ. ಈ ಬಾರಿ ಪರೀಕ್ಷಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಎನ್ನಬಹುದಾದ ಬದಲಾವಣೆಗಳನ್ನು ತರಲಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅಡಿಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ವರ್ಷಕ್ಕೆ
Jisoo: ಮಾ.6ರಂದು ಬ್ಲಾಕ್ಪಿಂಕ್ನ ಜಿಸೊ ನಟನೆಯ ʼBoyfriend on Demandʼ ಡ್ರಾಮ ರಿಲೀಸ್: ಏನಿದರ ಕಥೆ?
ಬ್ಲಾಕ್ ಪಿಂಕ್ ತಂಡದ ಸದಸ್ಯೆ ಜಿಸೊ ನಟನೆಯ ಹೊಸ ರೊಮ್ಯಾಂಟಿಕ್ ಕಾಮೆಡಿ ಡ್ರಾಮ ಮಾ.6ರಂದು ಜಾಗತಿಕವಾಗಿ ರಿಲೀಸ್ ಆಗಲಿದ್ದು, ಈ ಕುರಿತು ಟೀಸರ್ ರಿಲೀಸ್ ಮಾಡುವ ಮೂಲಕ ನೆಟ್ ಫ್ಲಿಕ್ಸ್ ಅನೌನ್ಸ್ ಮಾಡಿದೆ. ಇದರಲ್ಲಿ ಜಿಸೊ ವೆಬ್ಟೂನ್ ನಿರ್ಮಾಪಕಿ ಸಿಯೋ ಮಿ ರೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಿಸೊಗೆ ಜೋಡಿಯಾಗಿ ನಟ ಸಿಯೋ ಇನ್ ಗುಕ್ ತನ್ನ ಸಹುದ್ಯೋಗ ನಿರ್ಮಾಪಕನಾಗಿ ಪಾರ್ಕ್ ಜಿಯೊಂಗ್ ನಾಮ್ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಈ ಕಥೆಯೂ ವರ್ಚುವಲ್ ಡೇಟಿಂಗ್ ಆಪ್ ನೊಂದಿಗೆ ಸುತ್ತುವರೆದಿದ್ದು, ಇದರಲ್ಲಿ ಸಹದ್ಯೋಗಿಗಳೇ ಆದ ಇವರು ಹೇಗೆ ವರ್ಚುವಲ್ ಕೆನಕ್ಷನ್ ನಡೆಯಲಿದೆ ಎಂಬ ಕಾದು ನೋಡಬೇಕಿದೆ.
ರಾಜಧಾನಿ ಬೆಂಗಳೂರು ಬೀದಿಗಳಲ್ಲಿ ನಾಯಿಗಳ ಅಟ್ಟಹಾಸ, ಅಂಕಿಅಂಶಗಳು ಹೇಳುತ್ತಿವೆ ಆತಂಕದ ಕಥೆ
Stray dog Menace: ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳಿಗೆ ಆಶ್ರಯವನ್ನು ನೀಡುವ ಕೆಲಸ ಆಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ನೀಡಿತ್ತು. ಆದರೆ, ಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಆಡಳಿತ ವ್ಯವಸ್ಥೆ, ಎಲ್ಲೋ ವೈಫಲ್ಯವನ್ನು ಕಾಣುತ್ತಿದೆ. ಮೂರು ವರ್ಷಗಳಲ್ಲಿ 26 ಜನರು ನಾಯಿಯ ಹಾವಳಿಯಿಂದ ಮೃತ ಪಟ್ಟಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ
ತೇಜಸ್ವಿ ಸೂರ್ಯ ಅವರು ಪ್ರಧಾನಿ ಮುಂದೆ ಭಾಷಣ ಮಾಡಿ ತಮ್ಮ ಎದೆಗಾರಿಕೆ ತೋರಿ ರಾಜ್ಯಕ್ಕೆ ಹಣ ತರಲಿ. ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತಿದೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಕರ್ನಾಟಕಕ್ಕೂ 20% ಅನುದಾನ ಕೊಟ್ಟರೆ ಸಾರ್ವಜನಿಕರ ಮೇಲೆ ಹೊರೆ ಕಡಿಮೆ ಆಗುತ್ತದೆ ಅಲ್ಲವೇ? ಈ ಬಗ್ಗೆ ಮಾಧ್ಯಮಗಳು ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕು ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಸವಾಲೆಸೆದರು. ಈ ಕುರಿತಾಗಿ ಅವರು ಏನು ಮಾತನಾಡಿದ್ದಾರೆ ಎಂಬ ವಿವರ ಇಲ್ಲಿದೆ.
ಹಟ್ಟಿ | ಜಲಧಾರೆ ಕಾಮಗಾರಿ ಬಳಿಕ ರಸ್ತೆ ಕುಸಿತ: ಬದಿಗೆ ಜಾರಿದ ಲಾರಿ
ತಕ್ಷಣ ದುರಸ್ತಿ ಮಾಡದಿದ್ದರೆ ಹೋರಾಟದ ಎಚ್ಚರಿಕೆ
ಶರದ್ ಪವಾರ್, ಉದ್ಧವ್ ಠಾಕ್ರೆ ಅಧಿಕಾರಾವಧಿ ಸದ್ಯದಲ್ಲೇ ಮುಕ್ತಾಯ; ಎಂವಿಎ ಎದುರು 'ಮಹಾ' ಸವಾಲು
ರಾಜ್ಯಸಭೆಯಿಂದ ಶರದ್ ಪವಾರ್, ವಿಧಾನ ಪರಿಷತ್ತಿನಿಂದ ಉದ್ಧವ್ ಠಾಕ್ರೆ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಮಹಾ ವಿಕಾಸ್ ಅಘಾಡಿ ಮುಂದೆ ದೊಡ್ಡ ಸವಾಲು ಎದುರಾಗಿದೆ. ಈ ಬಗ್ಗೆ ಮುಂದಿನ ವಾರಗಳಲ್ಲಿ ಹಲವು ಸುತ್ತಿನ ಮಾತುಕತೆ ನಡೆಯಲಿದೆ. ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಲಿದೆ.
ಕೆನಡಾದಲ್ಲಿ ಕನ್ನಡಿಗನ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರ ಹತ್ಯೆ
ನೆಲಮಂಗಲ, ಫೆಬ್ರವರಿ 9: ಕೆನಡಾದಲ್ಲಿ ಉದ್ಯೋಗ ಮಾಡುತ್ತಿದ್ದ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ. ಈ ದುರ್ಘಟನೆಯಿಂದ ಕರ್ನಾಟಕದಲ್ಲಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾಗಾದ್ರೆ, ಈ ಘಟನೆ ಹಿನ್ನೆಲೆ
ಬೆಂಗಳೂರು: ಪರಿಶಿಷ್ಟ ಜಾತಿಯ (SC) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೀಡುವ 'ಪ್ರೋತ್ಸಾಹಧನ' ಯೋಜನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗೂ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕವನ್ನು 28-02-2026 ರವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ, ಯಾವ ಕೋರ್ಸ್ಗೆ ಎಷ್ಟು ಮೊತ್ತದ
ಬೆಸ್ಕಾಂನಲ್ಲಿ ಉದ್ಯೋಗಾವಕಾಶ; ಯಾರು ಅರ್ಜಿ ಸಲ್ಲಿಸಬಹುದು?
ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ ಒಂದು ವರ್ಷಕ್ಕೂ ಹೆಚ್ಚು ಕೆಲಸದ ಅನುಭವ ಇರುವವರು ಅರ್ಜಿ ಸಲ್ಲಿಸುವಂತಿಲ್ಲ. ಕನ್ನಡ ಭಾಷಾ ಜ್ಞಾನ ಕಡ್ಡಾಯ. ಪದವಿ ಅಥವಾ ಡಿಪ್ಲೊಮಾ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (ಬೆಸ್ಕಾಂ) ನಿಮಗೆ ತರಬೇತಿ ಮತ್ತು ಉದ್ಯೋಗದ ಅನುಭವ ಪಡೆದುಕೊಳ್ಳುವ ಅವಕಾಶವಿದೆ. ಬೆಸ್ಕಾಂ 2026ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಾರಿ ಎಂಜಿನಿಯರಿಂಗ್ ಪದವೀಧರರಿಗೆ ಮಾತ್ರವಲ್ಲ, ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವೀಧರರಿಗೂ ತರಬೇತಿ ಪಡೆಯುವ ವಿಫುಲ ಅವಕಾಶಗಳಿವೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಆಯ್ಕೆಯಾದವರಿಗೆ ಪ್ರತಿ ತಿಂಗಳು ಸರಕಾರದಿಂದ ಸ್ಟೈಪೆಂಡ್ ಕೂಡ ಸಿಗಲಿದೆ. ಆಸಕ್ತರು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://bescom.karnataka.gov.in/126/training/en ಪ್ರಮುಖ ದಿನಾಂಕಗಳು * ಅಧಿಸೂಚನೆ ದಿನಾಂಕ: 6 ಫೆಬ್ರವರಿ 2026 * ಆನ್ಲೈನ್ ಅರ್ಜಿ ಆರಂಭ: 12 ಫೆಬ್ರವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಮಾರ್ಚ್ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2 ಮಾರ್ಚ್ 2026 * ವಿವರಗಳಿಗೆ ಅಭ್ಯರ್ಥಿಗಳು https://bescom.karnataka.gov.in ಅಧಿಕೃತ ವೆಬ್ ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಹುದ್ದೆಗಳ ವಿವರ * ಪದವೀಧರ ಅಪ್ರೆಂಟಿಸ್ (ಎಂಜಿಯರಿಂಗ್ಯೇತರ) – 315 * ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್)- 130 * ಡಿಪ್ಲೊಮಾ ಅಪ್ರೆಂಟಿಸ್- 75 * ಒಟ್ಟು ಹುದ್ದೆಗಳು- 520 ವಿದ್ಯಾರ್ಹತೆ ಮತ್ತು ಇತರ ಅರ್ಹತೆ * ಪದವೀಧರ ಅಪ್ರೆಂಟಿಸ್ (ಎಂಜಿಯರಿಂಗ್ಯೇತರ) – ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಬಿಎಂ (ಯಾವುದೇ ಪದವಿ) * ಪದವೀಧದರ ಅಪ್ರೆಂಟಿಸ್ (ಎಂಜಿನಿಯರಿಂಗ್)- ಬಿಇ/ಬಿಟೆಕ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್- E&E) * ಡಿಪ್ಲೊಮಾ ಅಪ್ರೆಂಟಿಸ್- 75 – ಡಿಪ್ಒಮಾ (ಎಲ್ಲಾ ವಿಭಾಗಗಳು) ಅಭ್ಯರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಮೇಲೆ ತಿಳಿಸಿರುವ ಪದವಿ ಅಥವಾ ಡಿಪ್ಲೊಮಾ ಪಾಸ್ ಮಾಡಿರಬೇಕು. 2021 ಅಥವಾ ನಂತರ ಪದವಿ/ಡಿಪ್ಲೊಮಾ ಉತ್ತೀರ್ಣರಾದವರು ಮಾತ್ರ ಅರ್ಹರು (ಹಳೆಯ ಬ್ಯಾಚ್ಗಳಿಗೆ ಅವಕಾಶವಿಲ್ಲ). ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ ಒಂದು ವರ್ಷಕ್ಕೂ ಹೆಚ್ಚು ಕೆಲಸದ ಅನುಭವ ಇರುವವರು ಅರ್ಜಿ ಸಲ್ಲಿಸುವಂತಿಲ್ಲ. ಕನ್ನಡ ಭಾಷಾ ಜ್ಞಾನ (ಓದಲು/ಬರೆಯಲು) ಕಡ್ಡಾಯ. ವೇತನ * ಪದವೀಧರ ಅಪ್ರೆಂಟಿಸ್ (ಎಂಜಿಯರಿಂಗ್ಯೇತರ) – 9008ರೂ. * ಪದವೀಧದರ ಅಪ್ರೆಂಟಿಸ್ (ಎಂಜಿನಿಯರಿಂಗ್)- 9008 ರೂ. * ಡಿಪ್ಲೊಮಾ ಅಪ್ರೆಂಟಿಸ್- 8000 ರೂ. ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ಶಿಫ್ ಫೋರ್ಟಲ್ (NATS) ನಲ್ಲಿ ಮೊದಲು ಹೆಸರು ನೋಂದಾಯಿಸಿಕೊಂಡಿರಬೇಕು. ನಂತರ ಬೆಸ್ಕಾಂ ಅಧಿಕೃತ ವೆಬ್ಸೈಟ್ ಅಥವಾ https://bescom.karnataka.gov.in/126/training/en ಲಿಂಕ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ನಿಮ್ಮ ಅಂಕ ಪಟ್ಟಿ, ಆಧಾರ್ ಕಾರ್ಡ್, ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ತಂತ್ರಜ್ಞಾನ ಕಂಪೆನಿಗಳ ‘ಡಿಜಿಟಲ್ ಹುಕಿಂಗ್’ ಬಗ್ಗೆ ಮನಶ್ಯಾಸ್ತ್ರಜ್ಞರು ಹೇಳುವುದೇನು?
18ರ ವಯಸ್ಸಿನಲ್ಲಿ ಬಾಲಕರ ಮೆದುಳು ಚೆನ್ನಾಗಿ ಬೆಳೆದಿರುವುದಿಲ್ಲ. ಮಕ್ಕಳನ್ನು ಮೊಬೈಲ್ಗಳಿಗೆ ‘ಹುಕ್’ ಮಾಡಲಾಗುತ್ತಿದೆ. ಮಕ್ಕಳನ್ನು ಆಕರ್ಷಿಸಲು ಅಗತ್ಯವಿರುವಂತೆ ಮೊಬೈಲ್ಗಳು, ಗೇಮ್ಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಸಿದ್ಧಪಡಿಸಲಾಗಿರುತ್ತದೆ! ಇತ್ತೀಚೆಗೆ ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ಹದಿಹರೆಯದ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೊರಿಯನ್ ಸಂಸ್ಕೃತಿ ಭಾರತದಲ್ಲಿ ತೀವ್ರವಾಗಿ ವ್ಯಾಪಿಸುತ್ತಿದೆ ಎನ್ನುವ ಆತಂಕ ಬೆಳೆಯುತ್ತಿದೆ. ಅದರ ಜೊತೆಗೆ ಮೊಬೈಲ್ ಚಟದ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಮಕ್ಕಳ ಗೇಮಿಂಗ್ ಚಟದ ಬಗ್ಗೆ ರಾಷ್ಟ್ರಾದ್ಯಂತ ಆರೋಗ್ಯ ವಿಶೇಷಜ್ಞರು ಮತ್ತು ಮನೋವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ನಿತ್ಯ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಮೊಬೈಲ್ ಫೋನ್ ಬಳಕೆಯನ್ನು ನಿಯಂತ್ರಿಸಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ವಾರ್ತಾಭಾರತಿ ಜೊತೆಗೆ ಮಾತನಾಡಿದ ಲೇಖಕ ಮತ್ತು ಮನೋಚಿಕಿತ್ಸಕ- ಆಪ್ತಸಮಾಲೋಚಕರಾಗಿರುವ ವಸಂತ ನಡಹಳ್ಳಿ ಅವರು ಪೋಷಕರ ಹೊಣೆಗಾರಿಕೆ, ಮೊಬೈಲ್ ಚಟದ ಅಪಾಯ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ವಸಂತ ನಡಹಳ್ಳಿ ಹೇಳುವ ಪ್ರಕಾರ ಮನಶ್ಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಆತಂಕದ ಕುರಿತಂತೆ ದೇಶಾದ್ಯಂತ ಪೋಷಕರು, ಶಾಲೆಗಳು ಮತ್ತು ಸರ್ಕಾರ ಸೇರಿದಂತೆ ಜಾಗೃತಿ ಮೂಡಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಉದ್ದೇಶಪೂರ್ವಕ ಮಕ್ಕಳಲ್ಲಿ ಮೊಬೈಲ್ ವ್ಯಸನ ಬೆಳೆಸಲಾಗುತ್ತದೆ! ವಸಂತ್ ನಡಹಳ್ಳಿ ಹೇಳುವ ಪ್ರಕಾರ, 18ರ ವಯಸ್ಸಿನಲ್ಲಿ ಬಾಲಕರ ಮೆದುಳು ಚೆನ್ನಾಗಿ ಬೆಳೆದಿರುವುದಿಲ್ಲ. ಮಕ್ಕಳನ್ನು ಮೊಬೈಲ್ಗಳಿಗೆ ‘ಹುಕ್’ ಮಾಡಲಾಗುತ್ತಿದೆ. ಅಂದರೆ ಮೀನಿಗೆ ಬಲೆ ಹಾಕುವಾಗ ಕೊಕ್ಕೆಗೆ ಆಹಾರ ಸಿಕ್ಕಿಸುತ್ತೇವಲ್ಲ, ಅದೇ ರೀತಿಯ ಹುಕಿಂಗ್! ಮಕ್ಕಳನ್ನು ಆಕರ್ಷಿಸಲು ಅಗತ್ಯವಿರುವಂತೆ ಮೊಬೈಲ್ಗಳು, ಗೇಮ್ಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಸಿದ್ಧಪಡಿಸಲಾಗಿರುತ್ತದೆ! “ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಈ ಸಾಮಾಜಿಕ ಮಾಧ್ಯಮಗಳ ವ್ಯಸನ ನಮಗೆಲ್ಲಾ ಹೇಗೆ ಅಂಟಿಕೊಂಡಿದೆ ಎನ್ನುವುದರ ಅರಿವಾಗುತ್ತದೆ. ಎಲ್ಲರ ಕೈಯಲ್ಲಿಯೂ ಮೊಬೈಲ್ ಮತ್ತು ಎಲ್ಲರೂ ನಿರಂತರವಾಗಿ ಸ್ಕ್ರೋಲಿಂಗ್ ಮಾಡುತ್ತಿರುತ್ತಾರೆ! ಡಿಜಿಟಲ್ ವೇದಿಕೆಯನ್ನು ಕೇವಲ ತಂತ್ರಜ್ಞರು ಸಿದ್ಧಪಡಿಸಿಲ್ಲ! “ಮೊಬೈಲ್ ಮೇಲೆ ವಯಸ್ಕರಿಗೇ ನಿಯಂತ್ರಣ ಇರುವುದಿಲ್ಲ. ಹೀಗಿರುವಾಗ ಚಟವಾಗುವಂತೆಯೇ ಸಿದ್ಧಪಡಿಸಿದ ಮೊಬೈಲ್, ವೀಡಿಯೋ ಗೇಮ್ಸ್ ಅಥವಾ ಡಿಜಿಟಲ್ ವೇದಿಕೆಯ ಮೇಲೆ ಮಕ್ಕಳಿಗೆ ನಿಯಂತ್ರಣ ಹೇರುವುದು ಸುಲಭವಲ್ಲ. ಡಿಜಿಟಲ್ ವೇದಿಕೆಯನ್ನು ಕೇವಲ ತಂತ್ರಜ್ಞರು ಮಾತ್ರ ಸಿದ್ಧಪಡಿಸಿರುವುದು ಎನ್ನುವುದು ಪೂರ್ಣ ಸತ್ಯವಲ್ಲ. ಒಂದು ಡಿಜಿಟಲ್ ಸಾಧನವನ್ನು ರೂಪಿಸುವುದರಲ್ಲಿ ನರವಿಜ್ಞಾನಿಗಳು, ಮನಶ್ಯಾಸ್ತ್ರಜ್ಞರು, ಜೀವರಸಾಯನಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಹೀಗೆ ಹಲವಾರು ಜನ ಪಾಲುಗೊಂಡಿರುತ್ತಾರೆ. ಈ ಎಲ್ಲರ ಪ್ರಯತ್ನದ ಉದ್ದೇಶ ಕೇವಲ ಮೊಬೈಲ್ನ್ನು ಹೆಚ್ಚು ಆಕರ್ಷಕವಾಗಿ ಮಾಡುವುದು ಮಾತ್ರವಲ್ಲ, ಬಳಕೆದಾರನಲ್ಲಿ ಇದನ್ನು ಮತ್ತೆಮತ್ತೆ ಬಳಸುವ ವ್ಯಸನ ಅಂಟಿಕೊಳ್ಳುವಂತೆ ಮಾಡುವುದು ಹೇಗೆ ಎನ್ನುವುದೂ ಆಗಿರುತ್ತದೆ. ನಮ್ಮ ಮಿದುಳಿನಲ್ಲಿ ಸಂತೋಷದ, ಸಾರ್ಥಕತೆಯ ಅನುಭವ ಉಂಟಾದಾಗ ಡೊಪೊಮೈನ್ ಎನ್ನುವ ನರರಾಸಾಯನಿಕದ ಸೃಜನೆಯಾಗುತ್ತದೆ. ಮೊಬೈಲ್ ಬಳಕೆಯಿಂದ ಡೊಪೊಮೈನ್ ಹೆಚ್ಚುಹೆಚ್ಚು ಉತ್ಪತ್ತಿಯಾಗುವಂತೆ ಮಾಡುವುದು ಹೇಗೆ ಎನ್ನುವ ತಂತ್ರ ತಿಳಿದಾಗ ಇದರ ನಶೆಯನ್ನು ಒಬ್ಬ ಮುಗ್ಧ ಬಳಕೆದಾರನಿಗೆ ಅಂಟಿಸುವುದು ಸುಲಭವಾಗುತ್ತದೆ. ಈ ಕಾರ್ಯಕ್ಕೆ ನರವಿಜ್ಞಾನಿಗಳು, ಜೀವರಸಾಯನಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹೀಗೆ ಹಲವರು ಸಹಾಯ ಮಾಡುತ್ತಾರೆ” ಎನ್ನುತ್ತಾರೆ ವಸಂತ್ ನಡಹಳ್ಳಿ. ಮಕ್ಕಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುವುದೇಕೆ? ನಡಹಳ್ಳಿ ಪ್ರಕಾರ, ಅಂತರ್ಜಾಲ ಯಾರ ಕೈಯಲ್ಲೂ ಇಲ್ಲ. ಕೈಮೀರಿ ಹೋಗಿದೆ. ಅತಿ ಶಿಸ್ತಿನ ಗಲ್ಫ್ ದೇಶಗಳು ಅಥವಾ ಉತ್ತರ ಕೊರಿಯಾದಂತಹ ನಿಯಂತ್ರಿತ ದೇಶದಲ್ಲೂ ಕಾಮಪ್ರಚೋದಕ ಕಂಟೆಂಟ್ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಮೆದುಳಿನ ಭಾಗಗಳು ಬೆಳೆದಿರುವುದಿಲ್ಲ. ಹೀಗಾಗಿ ಮೂರು ವರ್ಷದ ಮಗುವಿಗೆ ಏನಾದರೂ ಬೇಕು ಅಂದರೆ ತಕ್ಷಣ ಬೇಕು ಎಂದು ರಚ್ಚೆ ಹಿಡಿಯುತ್ತದೆ. ಮೆದುಳಿನ ಫ್ರಂಟಲ್ ಲೋಬ್ (ಮುಮ್ಮೆದುಳು) ನಮಗೆ ತಾರ್ಕಿಕವಾಗಿ ಆಲೋಚನೆ ಮಾಡಲು ನೆರವಾಗುತ್ತದೆ. ಪರಿಸ್ಥಿತಿಗಳನ್ನು ನಿಭಾಯಿಸಲು ಇದು ನೆರವಾಗುತ್ತದೆ, ಒಂದು ಆಕರ್ಷಣೆಯ ಪರಿಣಾಮಗಳನ್ನು ಆಲೋಚನೆ ಮಾಡಿ ಅವುಗಳನ್ನು ಹಿಡಿತದಲ್ಲಿಡಬಹುದು. ಮೆದುಳಿನ ಆ ಭಾಗ ಹಣೆಯ ಹಿಂದುಗಡೆ ಇರುತ್ತದೆ. ಅದನ್ನು ಪ್ರಿ ಫ್ರಂಟಲ್ ಕಾರ್ಟೆಕ್ಸ್ (pre frontal cortex) ಎನ್ನುತ್ತಾರೆ. ಅದು ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಅಂದರೆ ಮಕ್ಕಳು ದೊಡ್ಡವರಾದಂತೆ ಅದೂ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಇದು ಪೂರ್ಣ ಬೆಳವಣಿಗೆಯಾಗುವುದು 25ರ ವಯಸ್ಸಿನ ಮೇಲೆ. 25ರಿಂದ 30ರವರೆಗೆ ಇದು ಬೆಳೆಯುತ್ತದೆ.” ಮಕ್ಕಳನ್ನು ತಂತ್ರಜ್ಞಾನದಿಂದ ದೂರವಿಟ್ಟ ಕಾರ್ಪೋರೇಟ್ ಅಮೆರಿಕದ “ಬಿಸಿನಿಸ್ ಇನಸೈಡರ್” 2019 ಏಪ್ರಿಲ್ 25ರಂದು ವರದಿಯೊಂದನ್ನು ಪ್ರಕಟಿಸಿತ್ತು. ಬೃಹತ್ ಕಾರ್ಪೋರೇಟ್ ಮುಖ್ಯಸ್ಥರು ತಮ್ಮ ಮಕ್ಕಳನ್ನು “ಪರದೆ ಸಮಯ”ದಿಂದ ಹೇಗೆ ಸುರಕ್ಷಿತವಾಗಿಡುತ್ತಾರೆ ಎನ್ನುವ ಕುರಿತ ವಿವರ ಅದರಲ್ಲಿತ್ತು. ಆಪಲ್ನ ಮಾಜಿ ಸಿಇಓ ಸ್ಟೀವ್ ಜಾಬ್ಸ್ ತಮ್ಮದೇ ಉತ್ಪನ್ನವಾದ ಐಪಾಡ್ನ್ನು ತಮ್ಮ ಮಕ್ಕಳಿಗೆ ಬಳಸಲು ಅವಕಾಶಕೊಟ್ಟಿರಲಿಲ್ಲ. ಆದರೆ ಬೇರೆಲ್ಲರ ಮಕ್ಕಳಿಗೆ ಅದರ ವ್ಯಸನವನ್ನು ಅಂಟಿಸಿ ಆಪಲ್ ಬಿಲಿಯನ್ಗಟ್ಟಲೆ ಲಾಭಗಳಿಸಿತು! ಮೈಕ್ರೋಸಾಫ್ಟ್ನ ಸಿಇಓ ಬಿಲ್ ಗೇಟ್ಸ್ ತಮ್ಮ ಮಕ್ಕಳಿಗೆ 14 ವರ್ಷಗಳಾಗುವವರೆಗೆ ಮೊಬೈಲ್ ಬಳಸಲು ಅವಕಾಶ ಕೊಟ್ಟಿರಲಿಲ್ಲ. ಸ್ನಾಪ್ಚಾಟ್ನ ಸ್ಥಾಪಕ ಇವಾನ್ ಸ್ಪೀಗಲ್ ತನ್ನ ಮಕ್ಕಳಿಗೆ ವಾರಕ್ಕೆ ಒಂದೂವರೆ ಗಂಟೆ ಪರದೆ ಸಮಯಕ್ಕೆ ಅವಕಾಶ ನೀಡುತ್ತಿದ್ದರು. ಗೂಗಲ್ನ ಸುಂದರ್ ಪಿಚ್ಚೈ ತಮ್ಮ ಮಕ್ಕಳನ್ನು ಟೀವಿಯಿಂದ ದೂರವಿರಿಸಿದ್ದರು. ಆದರೆ ತಮ್ಮ ಉತ್ಪನ್ನಗಳು ಇಷ್ಟು ವರ್ಷದ ಕೆಳಗಿನ ಮಕ್ಕಳು ಬಳಸುವುದು ಅಪಾಯಕರ ಎನ್ನುವ ಎಚ್ಚರಿಕೆಯನ್ನಾದರೂ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಯಾವ ಕಂಪನಿಯೂ ತೋರಿಸಲಿಲ್ಲ. ಡಿಜಿಟಲ್ ಹುಕಿಂಗ್ಗೆ ಕಾರಣವಾಗುತ್ತಿರುವ ಸಾಮಾಜಿಕ ಮಾಧ್ಯಮಗಳು “ಫೇಸ್ಬುಕ್ ಇಸ್ಟಾಗ್ರಾಮ್ಗಳಲ್ಲಿ ನೀವು ಎಂತಹ ಪೋಸ್ಟ್ಗಳನ್ನು ಹೆಚ್ಚುಹೆಚ್ಚು ಗಮನಿಸುತ್ತೀರಿ ಮತ್ತು ಯಾವುದಕ್ಕೆ ಪ್ರತಿಕ್ರಿಯಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಅವುಗಳನ್ನು ನಿಮ್ಮ ಪುಟದ ಸರತಿಯಲ್ಲಿ ಮುಂದೆ ನಿಲ್ಲಿಸಲಾಗುತ್ತದೆ. ಆಗಾಗ ನೀವು ಗಮನಿಸಬೇಕಾದ ಪೋಸ್ಟ್ಗಳ ಕುರಿತು ಸಂದೇಶಗಳು ಬರುತ್ತವೆ. ಹೆಚ್ಚು ಜನ ಸ್ನೇಹಿತರು ಅಥವಾ ಹಿಂಬಾಲಕರಿದ್ದರೆ ನೀವು ದೊಡ್ಡ ಸಾಧಕರು ಎನ್ನುವ ಸಂದೇಶವನ್ನು ಕಳಿಸಿ ನಿಮ್ಮ ಪೋಸ್ಟ್ಗಳನ್ನು ಹೆಚ್ಚಿಸಲು ಮತ್ತೆಮತ್ತೆ ಪ್ರಚೋದಿಸಲಾಗುತ್ತದೆ. ನಿಮಗೆ ಬರುವ ಲೈಕ್ಗಳು ಹೆಚ್ಚಿದಂತೆಲ್ಲಾ ನೀವು ಅದರ ಬಳಕೆಯ ಆಕರ್ಷಣೆಗೆ ಹೆಚ್ಚು ಒಳಗಾಗುತ್ತೀರಿ. ಯುಟ್ಯೂಬ್ ಬಳಸುವ ಎಲ್ಲರಿಗೂ ಅನುಭವಕ್ಕೆ ಬಂದಿರುವ ಅಂಶವೆಂದರೆ ನೀವು ಯಾವ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚು ಗಮನಿಸುತ್ತೀರೋ ಆ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋಗಳು ನಿಮ್ಮ ಸರತಿಯಲ್ಲಿ ಮುಂದೆ ಬಂದು ಕುಳಿತಿರುತ್ತಿವೆ. ಅಂದರೆ ವಾಸ್ತವವಾಗಿ ನೀವು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವುದಿಲ್ಲ, ಸಾಮಾಜಿಕ ಮಾಧ್ಯಮಗಳೇ ನಿಮ್ಮನ್ನು ಬಳಸಿ ಜಾಹಿರಾತುಗಳ ಮೂಲಕ ಖಜಾನೆ ಭರ್ತಿಮಾಡಿಕೊಳ್ಳುತ್ತಿರುತ್ತವೆ” ಎಂದು ಅವರು ವಿವರಿಸಿದರು. ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳ ರಕ್ಷಣೆ ಹೇಗೆ? ಪಕ್ಕದಲ್ಲಿರುವ ವ್ಯಕ್ತಿಯ ಜೊತೆಗಿನ ಮಾನವೀಯ ಸಂಬಂಧದ ರುಚಿಯನ್ನು ಕಳೆದುಕೊಂಡಿರುವ ಮನುಕುಲ ಯಂತ್ರಗಳೊಂದಿಗೆ ವ್ಯವಹರಿಸುತ್ತಾ ಏಕಾಂಗಿತನದ ಭಯಂಕರ ಆಪಾಯವನ್ನು ಆಹ್ವಾನಿಸಿಕೊಳ್ಳುತ್ತಿದೆ. ಡಿಜಿಟಲ್ ವ್ಯಸನ ಮಾನವರ ಮಿದುಳಿನ ರಚನೆಯನ್ನು, ನರಮಂಡಲಗಳ ಕಾರ್ಯವಿಧಾನವನ್ನು, ಮನೋದೈಹಿಕ ಆರೋಗ್ಯವನ್ನು ಮತ್ತು ಒಟ್ಟಾರೆಯಾಗಿ ಮಾನವ ತನ್ನ ವಿಕಾಸದ ಹಂತಗಳಿಂದ ಪಡೆದುಕೊಂಡು ಬಂದಿರುವ ಎಲ್ಲಾ ವಿವೇಚನೆ ವಿವೇಕಗಳನ್ನೇ ಹೇಗೆ ವಿರೂಪಗೊಳಿಸುತ್ತದೆ ಎನ್ನುವುದನ್ನು ಬ್ರಿಟಿಶ್ ಮನಶ್ಯಾಸ್ತ್ರಜ್ಞೆ ಮಾರಿ ಕೆ ಸ್ವಿಂಗಲ್ ತನ್ನ ಪುಸ್ತಕ “ಐ-ಮೈಂಡ್ಸ್”ನಲ್ಲಿ ವಿವರಿಸಿದ್ದಾರೆ. “ದುರಾದೃಷ್ಟದ ಸಂಗತಿಯೆಂದರೆ ಇದಕ್ಕಾಗಿ ಸ್ಪಷ್ಟವಾದ ಕಾನೂನು ಅಥವಾ ಮಾರ್ಗಸೂಚಿಗಳನ್ನು ರೂಪಿಸುವುದರ ಕುರಿತು ಸರಕಾರಗಳು ಯೋಚಿಸುತ್ತಿಲ್ಲ. ಸರಕಾರಿ ತಜ್ಞರಿಗೆ ಇವುಗಳಿಂದಾಗುತ್ತಿರುವ ಅಪಾಯಗಳ ಅರಿವೂ ಇದ್ದಂತಿಲ್ಲ. ಹಾಗಾಗಿ ಸಾಮಾಜಿಕ ಕಾಳಜಿಯುಳ್ಳವರೆಲ್ಲರೂ ಇದರ ಕುರಿತು ಹೆಚ್ಚುಹೆಚ್ಚು ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ತುರ್ತಾದ ಅಗತ್ಯವಿದೆ. ಹಾಗೆ ಮಾಡದಿದ್ದರೆ ನಮ್ಮ ಮಕ್ಕಳು ಡಿಜಿಟಲ್ ವ್ಯಸನಕ್ಕೆ ಅಂಟಿಕೊಳ್ಳುವುದನ್ನು ತಪ್ಪಿಸಲಾಗುವುದಿಲ್ಲ” ಎನ್ನುತ್ತಾರೆ ನಡಹಳ್ಳಿ.
ಭಾರತದ ಅಪರೂಪದ ನೀಲಿ-ನೇರಳೆ ಅರಿಶಿಣ!
ಭಾರತದಲ್ಲಿ ನೀಲಿ ಬಣ್ಣದ ಅರಿಶಿಣ ಇದೆ ಎನ್ನುವುದು ನಿಮಗೆ ಗೊತ್ತಿದೆಯೆ? ನೈಸರ್ಗಿಕವಾಗಿಯೇ ಇದು ಮಧ್ಯದಲ್ಲಿ ನೀಲಿ-ನೇರಳೆ ಬಣ್ಣವನ್ನು ಹೊಂದಿದೆ. ಅರಿಶಿಣ ಎನ್ನುವುದು ಹಳದಿ ಬಣ್ಣದ ಮಸಾಲೆ. ತನ್ನ ಆಂಟಿಮೈಕ್ರೋಬಿಯಲ್ (ಪ್ರತಿಸೂಕ್ಷ್ಮಜೀವೀಗಳ) ಮತ್ತು ಆಂಟಿಆಕ್ಸಿಡಂಟ್ ತತ್ವಗಳಿಗೆ ಖ್ಯಾತಿ ಪಡೆದಿದೆ. ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳ ಜೊತೆಗೆ ಗಾಯಗಳನ್ನು ಗುಣಪಡಿಸಲು ಕೂಡ ಸಹಾಯ ಮಾಡುತ್ತದೆ. ಆದರೆ ಭಾರತದಲ್ಲಿ ನೀಲಿ ಬಣ್ಣದ ಅರಿಶಿಣ ಇದೆ ಎನ್ನುವುದು ನಿಮಗೆ ಗೊತ್ತಿದೆಯೆ? ನೈಸರ್ಗಿಕವಾಗಿಯೇ ಇದು ಮಧ್ಯದಲ್ಲಿ ನೀಲಿ-ನೇರಳೆ ಬಣ್ಣವನ್ನು ಹೊಂದಿದೆ. ಇದು ಆಯುರ್ವೇದದಲ್ಲಿ ನಿರೋಧಕಶಕ್ತಿ ಹೆಚ್ಚಿಸುವ ಮತ್ತು ಗಾಯಗಳನ್ನು ಗುಣಪಡಿಸುವ ತತ್ವಗಳನ್ನು ಹೊಂದಿರುವುದಾಗಿ ಪ್ರಸಿದ್ಧಿ ಪಡೆದಿದೆ. ಆದರೆ ಸಾಮಾನ್ಯ ಅರಿಶಿಣಕ್ಕಿಂತ ಹೇಗೆ ಭಿನ್ನ? ಆಯುರ್ವೇದದಲ್ಲಿ ಬಳಕೆಯಾಗುವ ನೀಲಿ ಅರಿಶಿಣ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್ ಎಡ್ವಿನಾ ರಾಜ್ ಪ್ರಕಾರ ಕರ್ಕ್ಯುಮಾ ಸೀಸಿಯಾ ಎಂದು ಕರೆಯಲಾಗುವ ನೀಲಿ ಅರಿಶಿಣವು ಅಪರೂಪದ ಸಸ್ಯವಾಗಿದೆ. ಅದನ್ನು ಕಪ್ಪು ಅರಿಶಿಣ ಎಂದೂ ಕರೆಯಲಾಗುತ್ತಿದೆ. ಇದು ಸಾಮಾನ್ಯ ಅರಿಶಿಣಕ್ಕಿಂತ ಭಿನ್ನವಾಗಿ ಕಾಣುತ್ತದೆ. ಏಕೆಂದರೆ ಬೇರಿನ ಒಳಭಾಗವು ಹೊಳೆಯುವ ಹಳದಿ ಬಣ್ಣಕ್ಕಿಂತ ಗಾಢ ನೀಲಿ ಅಥವಾ ನೀಲಿ-ಕಪ್ಪು ಬಣ್ಣದ್ದಾಗಿದೆ. ಈ ಮಸಾಲೆ ಮುಖ್ಯವಾಗಿ ಆಗ್ನೇಯ ಏಷ್ಯಾದ ಕೆಲವು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ದೈನಂದಿನ ಅಡುಗೆಗಿಂತ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. “ನಿತ್ಯ ಬಳಕೆಯ ಅರಿಶಿಣ ಅಥವಾ ಕರ್ಕ್ಯುಮಾ ಲಾಂಗಾ ಸಾಮಾನ್ಯವಾಗಿ ಕರ್ಕ್ಯುಮಿನ್ ಕಾರಣದಿಂದಾಗಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಆದರೆ ನೀಲಿ ಅರಿಶಿಣಕ್ಕೆ ಹೆಚ್ಚು ಬಲವಾದ ವಾಸನೆ ಮತ್ತು ಕಹಿ ರುಚಿ, ಕರ್ಪೂರದಂತಹ ರುಚಿಯಿರುವ ಕಾರಣ ಅಡುಗೆಗೆ ಬಳಸಲು ಸಾಧ್ಯವಾಗುವುದಿಲ್ಲ. ನೀಲಿ ಅರಿಶಿಣ ಮತ್ತು ನಿತ್ಯ ಬಳಕೆಯ ಅರಿಶಿಣದ ನಡುವಿನ ಮುಖ್ಯ ವ್ಯತ್ಯಾಸವೆಂದರೆ ರಾಸಾಯನಿಕ ಅಂಶ ಮತ್ತು ಬಳಕೆ” ಎನ್ನುತ್ತಾರೆ ಎಡ್ವಿನಾ. ನಿತ್ಯ ಬಳಕೆಯ ಅರಿಶಿಣದಲ್ಲಿ ಕರ್ಕ್ಯುಮಿನ್ ಸಮೃದ್ಧವಾಗಿರುತ್ತದೆ. ಅದರಿಂದಾಗಿ ಅರಿಶಿಣಕ್ಕೆ ಪ್ರಬಲ ಉರಿಯೂತ-ವಿರೋಧಿ ಮತ್ತು ಆಂಟಿಆಕ್ಸಿಡಂಟ್ ತತ್ವಗಳನ್ನು ಕೊಡುತ್ತದೆ. ನೀಲಿ ಅರಿಶಿಣದಲ್ಲಿ ಕರ್ಕ್ಯುಮಿನ್ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಇತರ ಸಕ್ರಿಯ ಸಂಯುಕ್ತಗಳಾದ ಎಣ್ಣೆ, ಕರ್ಪೂರ ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಭರಪೂರ ಹೊಂದಿದೆ. ಅದೇ ಕಾರಣದಿಂದ ಅದನ್ನು ಆಯುರ್ವೇದ, ಜನಪದ ವೈದ್ಯ ಮತ್ತು ಮನೆ ಮದ್ದುಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಆದರೆ ನಿತ್ಯ ಬಳಕೆಯ ಅರಿಶಿಣವನ್ನು ಆಹಾರ ಮತ್ತು ಪೂರಕ ಆಹಾರವಾಗಿ ಬಳಸಲಾಗುತ್ತದೆ. ನೀಲಿ ಅರಿಶಿಣದ ಆರೋಗ್ಯ ಲಾಭಗಳೇನು? ನೀಲಿ ಅರಿಶಿಣವನ್ನು ಸಣ್ಣ ಅಥವಾ ಸೂಕ್ತ ಪ್ರಮಾಣದಲ್ಲಿ ಬಳಸಿದಲ್ಲಿ ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ ಎಂದು ನಂಬಲಾಗಿದೆ. ಮುಖ್ಯವಾಗಿ ಸಂಧಿ ನೋವು, ಸ್ನಾಯು ನೋವು ಮತ್ತು ಗಾಯಗಳನ್ನು ಗುಣಪಡಿಸಲು ಉಪಯುಕ್ತ. ಇದರಲ್ಲಿ ಆಂಟಿಮೈಕ್ರೋಬಿಯಲ್ ತತ್ವಗಳಿಗೂ ಖ್ಯಾತಿಪಡೆದಿದೆ. ಅದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಗಾಯ ಗುಣವಾಗಲು ನೆರವಾಗುತ್ತವೆ. ಸಾಂಪ್ರದಾಯಿಕ ವೈದ್ಯದಲ್ಲಿ ನೀಲಿ ಅರಿಶಿಣವನ್ನು ಶ್ವಾಸಕೋಶದ ಆರೋಗ್ಯಕ್ಕೆ ಬಲ ನೀಡಲು ಮತ್ತು ಕೆಲವೊಮ್ಮೆ ಕೆಮ್ಮು, ಆಸ್ತಮಾ ಮತ್ತು ಗಂಟಲು ಕಟ್ಟಿರುವಿಕೆ ಸಮಸ್ಯೆಗಳಿಗೆ ಬಳಸಲಾಗುತ್ತದೆ. ನೀಲಿ ಅರಿಶಿಣವನ್ನು ಜೀರ್ಣಕ್ರಿಯೆ ಸುಧಾರಿಸಲು, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಗೊಳಿಸಲು ಮತ್ತು ಹೊಟ್ಟೆಯಲ್ಲಿ ಅಹಿತಕರ ಸ್ಥಿತಿಯನ್ನು ತೊಡೆದು ಹಾಕಲು ಬಳಸಲಾಗುತ್ತದೆ. ನೀಲಿ ಅರಿಶಿಣದಲ್ಲಿ ಚರ್ಮಕ್ಕೂ ಲಾಭಗಳಿವೆ. ಅಂದರೆ ಅವುಗಳ ಗುಣಪಡಿಸುವ ತತ್ವಗಳಿಂದಾಗಿ ಗೀರುಗಳು, ತುರಿಕೆ ಮತ್ತು ಸಣ್ಣ ಗಾಯಗಳ ಸಮಸ್ಯೆಯನ್ನು ನೀಗಿಸುತ್ತವೆ. ಆದರೆ ನೀಲಿ ಅರಿಶಿಣವನ್ನು ಜಾಗರೂಕತೆಯಿಂದ ಸಣ್ಣ ಪ್ರಮಾಣದಲ್ಲಿ ಬಳಸಬೇಕು. ಏಕೆಂದರೆ ಅದರಲ್ಲಿರುವ ಪ್ರಬಲ ಸಂಯುಕ್ತಗಳಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆಯಿದೆ. ವೈದ್ಯಕೀಯ ಸಲಹೆಯ ಪ್ರಕಾರ ಬಳಸಿದರೆ ಉತ್ತಮ. ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಅಥವಾ ಅನಾರೋಗ್ಯ ಇರುವವರು ವೈದ್ಯರ ಸಲಹೆಗಳಿಲ್ಲದೆ ಬಳಸಬಾರದು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಪುಣೆ: ಅನಾರೋಗ್ಯದ ಹಿನ್ನೆಲೆ ಹಿರಿಯ ರಾಜಕಾರಣಿ, ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಪುಣೆಯ ರೂಬಿ ಹಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಟಲು ಸಂಬಂಧಿತ ಸಮಸ್ಯೆಗಳು, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ಶರದ್ ಪವಾರ್ ಅವರು ಮಹಾರಾಷ್ಟ್ರದ ಬಾರಾಮತಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು. ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರದ ಹಿನ್ನೆಲೆ ಪುಣೆಯ ರೂಬಿ ಹಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಶರದ್ ಪವಾರ್ ಅವರು ಗಂಟಲು ಸೋಂಕಿನಿಂದ ಬಳಲುತ್ತಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಆಪ್ತ ಸಹಾಯಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Shivamogga | ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆ ವಿವರ ಒದಗಿಸುತ್ತಿದ್ದ ಆರೋಪ; ಓರ್ವನ ಬಂಧನ
ಶಿವಮೊಗ್ಗ : ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಯ ಸಂಪೂರ್ಣ ವಿವರ ಪಡೆದು ಸೈಬರ್ ವಂಚಕರಿಗೆ ನೀಡುತ್ತಿದ್ದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ತುಂಗಾ ನಗರ ನಿವಾಸಿ ಶರತ್ ಕುಮಾರ್ ಅಲಿಯಾಸ್ ಗುಂಡ ಬಂಧಿತ ಆರೋಪಿ. ಚಾಲಕ ವೃತ್ತಿ ಮಾಡುತ್ತಿದ್ದ ಶರತ್ ಕುಮಾರ್, ಟೀ ಅಂಗಡಿ ನಡೆಸುತ್ತಿದ್ದ ಆತನ ಸ್ನೇಹಿತ ಅಮಿತ್ ಎಂಬವರ ಬ್ಯಾಂಕ್ ಖಾತೆಯ ವಿವರ ಪಡೆದಿದ್ದ. ಜೊತೆಗೆ ಪಾಸ್ ಬುಕ್, ಎಟಿಎಂ ಕಾರ್ಡ್ ಮೊಬೈಲ್ ನಂಬರ್ಗಳನ್ನೂ ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ 15 ದಿನಕ್ಕೊಮ್ಮೆ ಕಮಿಷನ್ ಕೊಡುವುದಾಗಿ ನಂಬಿಸಿದ್ದ. ಕಮಿಷನ್ ಆಸೆಗೆ ಅಮಿತ್ ಎಲ್ಲ ವಿವರ ಒದಗಿಸಿದ್ದರು. ಸ್ವಲ್ಪ ಸಮಯದ ಬಳಿಕ ಶರತ್ ಕುಮಾರ್, ಸ್ನೇಹಿತ ಅಮಿತ್ ಬ್ಯಾಂಕ್ ಖಾತೆ ಫ್ರೀಝ್ ಆಗಿದೆ ಎಂದು ತಿಳಿಸಿದ್ದ. ಅನುಮಾನಗೊಂಡ ಅಮಿತ್ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಗೆ ಹೋಗಿ ತಮ್ಮ ಖಾತೆಯ ಕುರಿತು ವಿಚಾರಿಸಿದ್ದರು. ಈ ಬ್ಯಾಂಕ್ ಖಾತೆಯ ವಿರುದ್ಧ 51 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದರು. ಆತಂಕಗೊಂಡ ಅಮಿತ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರಿಯಪ್ಪ, ರಮೇಶ್, ಶಿವಮೊಗ್ಗದ ಸೈಬರ್ ಕ್ರೈಮ್ ಡಿವೈಎಸ್ಪಿ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶರತ್ ಕುಮಾರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 55 ಕೋಟಿ ರೂ. ವಂಚನೆ! ಬಂಧಿತ ಆರೋಪಿಯಿಂದ ವಿವಿಧ ಬ್ಯಾಂಕ್ ಖಾತೆಗಳ 18 ಪಾಸ್ಬುಕ್ಗಳು, 25 ಎಟಿಎಂ ಕಾರ್ಡ್, 7 ಚೆಕ್ ಬುಕ್ಗಳು, 2 ಮೊಬೈಲ್ ಫೋನ್ಗಳು, 2 ಕ್ಯೂ ಆರ್ ಕೋಡ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ಬಳಿ ಇದ್ದ 19 ನಕಲಿ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಖಾತೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸುಮಾರು 55,43,56,248 ರೂ. ಮೊತ್ತದ ವಂಚನೆ ಎಸಗಿದ್ದಾನೆ. ಅಲ್ಲದೆ ಈ 19 ಖಾತೆಗಳಿಂದ 11,48,42,898 ಹಣ ವರ್ಗಾವಣೆ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
IMD Weather Forecast: ದೇಶದಲ್ಲೇ ಅತೀ ಗರಿಷ್ಠ ತಾಪಮಾನ ಕರ್ನಾಟಕದಲ್ಲಿ ದಾಖಲು, ಹವಾಮಾನ ಮುನ್ಸೂಚನೆ
ನವದೆಹಲಿ: ದೇಶಾದ್ಯಂತ ಒಣಹವೆಯ ವಾತಾವರಣ ನಿರ್ಮಾಣವಾಗುತ್ತಿದ್ದು, ಕೆಲವೆಡೆ ಶಾಖದ ಅಲೆಯ ವಾತಾವರಣ ಕಂಡು ಬರುತ್ತಿದೆ. ಈ ಮಧ್ಯೆ ಕೆಲವೆಡೆ ಮಳೆ ಆಗಿದೆ. ಮಂಜು ಮತ್ತು ತೀವ್ರ ಚಳಿ ವಾತಾವರಣ ವಿವಿಧ ರಾಜ್ಯಗಳಲ್ಲಿ ದಾಖಲಾಗಿದೆ. ಇದರ ಮಧ್ಯ ಭೂಮಿ ಮೇಲ್ಮೈನಲ್ಲಿ ವಾಯು ಚಂಡಮಾರುತ ಪ್ರಸರಣ ಏರ್ಪಟ್ಟಿದೆ. ವಿಶೇಷವೆಂದರೆ ದೇಶದ ಅತ್ಯಧಿಕ ಗರಿಷ್ಠ ತಾಪಮಾನ ಕರ್ನಾಟಕ ಈ ಜಿಲ್ಲೆಯಲ್ಲಿ ದಾಖಲಾಗಿದೆ.
Karnataka Vs Mumbai Ranji Match- ರಣಜಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಗುಂಪು ಹಂತದ ಕೊನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅದ್ಭುತವಾಗಿ ಚೇಸ್ ನಾಕೌಟ್ ಹಂತಕ್ಕೇರಿದ್ದ ದೇವದತ್ ಪಡಿಕ್ಕಲ್ ಬಳಗ ಇದೀಗ ಮುಂಬೈ ತಂಡವನ್ನು ಸೋಲಿಸಿ ಸೆಮಿಫೈನಲ್ ಗೇರಿದೆ. ಕ್ನಾರ್ಟರ್ ಫೈನಲ್ ಪಂದ್ಯದಲ್ಲಿ ಅನುಭವಿ ಕೆಎಲ್ ರಾಹುಲ್ ಅವರ ಅಮೋಘ ಶತಕ ಮತ್ತು ರವಿಚಂದ್ರನ್ ಸ್ಮರಣ್ ಅವರ ತಾಳ್ಮೆಯ ಅದೇಯ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ 4 ವಿಕೆಟ್ ಗಳ ಜಯ ಗಳಿಸಿದೆ.
'ಜನ ನಾಯಗನ್' ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಿದ ಸೆನ್ಸಾರ್ ಮಂಡಳಿ
ಸೆನ್ಸಾರ್ ಪ್ರಮಾಣ ಪತ್ರ ಸಿಗದೇ ಪದೇ ಪದೇ ಮುಂದಕ್ಕೆ ಹೋಗುತ್ತಿರುವ ವಿಜಯ್ ಅವರ 'ಜನನಾಯಗನ್ ' ಚಿತ್ರವನ್ನು ಸೆನ್ಸಾರ್ ಮಂಡಳಿ (ಸಿಬಿಎಫ್ಸಿ) ಪರಿಷ್ಕರಣಾ ಸಮಿತಿಗೆ ಕಳುಹಿಸಿದೆ. ಚಿತ್ರತಂಡ ಮದ್ರಾಸ್ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುತ್ತಿದೆ. ಪರಿಷ್ಕರಣಾ ಸಮಿತಿಗೆ ಕಳುಹಿಸಿರುವ ವಿಚಾರವನ್ನು ಕೆವಿಎನ್ ಪ್ರೊಡಕ್ಷನ್ಸ್ ಇನ್ನೂ ದೃಢೀಕರಿಸಿಲ್ಲ.
ಅದಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಐರಿಸ್ ನ್ಯಾಷನಲ್ ಫೇರ್; ದೇಶದ ಉದಯೋನ್ಮುಖ ಪ್ರತಿಭೆಗಳ ಪ್ರದರ್ಶನ
ಅಹಮದಾಬಾದ್ನ ಶಾಂತಿಗ್ರಾಮದಲ್ಲಿರುವ ಅದಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ (ADIS) ಐರಿಸ್ ನ್ಯಾಷನಲ್ ಫೇರ್ 2025-26 (ಕೋಹಾರ್ಟ್-2) ಅನ್ನು ಫೆಬ್ರವರಿ 6ರಿಂದ 8ರವರೆಗೆ ಭವ್ಯವಾಗಿ ಆಯೋಜಿಸಲಾಯಿತು. ಮೂರು ದಿನಗಳ ಕಾಲ ನಡೆದ ಈ ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳವು, ಶಾಲಾ ಹಂತದಲ್ಲೇ ಸಂಶೋಧನೆ ಮತ್ತು ನವೀನತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ದೇಶದ ವಿವಿಧ ಭಾಗಗಳಿಂದ ಬಂದ ಯುವ ವಿದ್ಯಾರ್ಥಿ ಸಂಶೋಧಕರನ್ನು ಒಂದೇ
ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ 2026: ಬಿಸಿಸಿಐ ಮುಂದೆ ಮೂರು ಬೇಡಿಕೆ ಇಟ್ಟ ಪಿಸಿಬಿ
India vs Pakistan T20 World Cup 2026: ಟಿ-20 ವಿಶ್ವಕಪ್ 2026 ಫೆಬ್ರವರಿ 7ರಿಂದ ಆರಂಭವಾಗಿದೆ. ಇನ್ನೂ ಈ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡಲ್ಲ ಅಂತಾ ಹೇಳಿದ್ದ ಪಾಕಿಸ್ತಾನ ಇದೀಗ ಯೂಟರ್ನ್ ಹೊಡೆಯುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ. ಈ ಕುರಿತು ಬೆಳಗ್ಗೆ ನಡೆದ ಸಭೆಯಲ್ಲಿ ಪಿಸಿಬಿಯು ಐಸಿಸಿಗೆ ಮೂರು ಬೇಡಿಕೆಗಳನ್ನು ಇಟ್ಟಿದೆ. ಹಾಗಾದ್ರೆ, ಅವುಗಳು ಯಾವುವು
ಜಾಗತಿಕ, ಪ್ರಾದೇಶಿಕ ಸಂಘರ್ಷಗಳ ಮೇಲೆ ಬೆಳಕು ಚೆಲ್ಲುವ ಮಾನವ್ ಕೌಲ್ರ ‘ಪಾರ್ಕ್’
ಮಾನವ್ ಕೌಲ್ ಅವರ ‘ಪಾರ್ಕ್’ ಹಿಂದಿ ನಾಟಕವು ಅದರ ಹೆಸರಿಗೆ ತಕ್ಕಂತೆ ಇದೆ. ಉದ್ಯಾನವನದಲ್ಲಿ ಮೂರು ಬೆಂಚುಗಳನ್ನು ಹೊಂದಿರುವ 90 ನಿಮಿಷಗಳ ನಾಟಕವು ತಮ್ಮ ನೆಚ್ಚಿನ ಬೆಂಚುಗಳಿಗಾಗಿ ಜಗಳವಾಡುವ ಮೂವರು ಪುರುಷರ ನಡುವಿನ ಘರ್ಷಣೆಗಳ ಮೇಲೆ ನಿಂತಿದೆ. ನಾಟಕವು ಮೂರು ಚೆಂಚುಗಳಿಗಾಗಿ ಹೋರಾಡುವ ಮೂವರು ಪುರುಷರ ಮೂಲಕ ನಗರೀಕರಣ, ಜಾಗದ ಕೊರತೆ ಮತ್ತು ಅಸ್ತಿತ್ವದ ರಾಜಕೀಯವನ್ನು ಹಾಸ್ಯದ ಮೂಲಕ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಒಂದು ಚಿಕ್ಕ ಉದ್ಯಾನವನದಲ್ಲಿರುವ ಮೂರು ಬೆಂಚುಗಳಿಗಾಗಿ ಮೂವರು ವ್ಯಕ್ತಿಗಳು ತಮ್ಮ ಹಕ್ಕು ಸಾಧಿಸಲು ಪಡುವ ಪಾಡು, ಲಘು ಹಾಸ್ಯದಿಂದ ಪ್ರಾರಂಭವಾಗಿ ನಂತರ ಆಳವಾದ ತಾತ್ವಿಕ ಸಂಭಾಷಣೆಗಳಿಗೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ನೆರೆದ ವೀಕ್ಷಕರನ್ನು ಆಲೋಚಿಸುವಂತೆ ಮಾಡುತ್ತದೆ. ನಗರೀಕರಣ ಹೆಚ್ಚಾದಂತೆ ಮಾನವನಿಗೆ ಜಾಗ ಎಷ್ಟು ಮುಖ್ಯವಾಗುತ್ತದೆ ಮತ್ತು ಅದನ್ನು ಉಳಿಸಿಕೊಳ್ಳಲು ಅವನು ಎಷ್ಟು ಕೆಳಮಟ್ಟಕ್ಕಿಳಿಯಬಹುದು ಎಂಬುದನ್ನು ಇದು ಪ್ರಸ್ತುತಪಡಿಸುತ್ತದೆ. ಸಾರ್ವಜನಿಕ ಬೆಂಚುಗಳ ಮೇಲೆ ಮಾಲಕತ್ವವನ್ನು ತೋರಿಸುವ ಕಾರಣಗಳು ಸರಳವಾಗಿದ್ದರೂ, ಅವರು ಪರಸ್ಪರ ನೀಡುತ್ತಿದ್ದ ತರ್ಕದಲ್ಲಿ ಆಳವಾದ ಆಲೋಚನೆಗಳು ಹುದುಗಿಕೊಂಡಿದ್ದವು. ಮೂಲ ಸ್ಥಳಗಳಿಂದ ಸ್ಥಳಾಂತರಗೊಳ್ಳುವುದು, ಇರಾನ್-ಇರಾಕ್ ಜಗಳ, ಕಾಶ್ಮೀರ ಸಮಸ್ಯೆ ಮತ್ತು ವಿವಾದಗಳಿಂದಾಗಿ ಜನರು ಹೇಗೆ ನಕ್ಸಲೈಟ್ಗಳಾಗುತ್ತಾರೆ ಎಂಬ ವಿಷಯವನ್ನು ಪಾತ್ರಗಳು ಬಿಂಬಿಸುವಲ್ಲಿ ಯಶಸ್ವಿಯಾದವು. ಪಾರ್ಕ್ ಬೆಂಚಿನ ಮೇಲೆ ಮಲಗಲು ಬಯಸುವ ವ್ಯಕಿಯು ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಸಮಾಜದಿಂದ ತಪ್ಪಿಸಿಕೊಳ್ಳಲು ಬಯಸು ತ್ತಾನೆ. ಪಾರ್ಕ್ನಲ್ಲಿಯ ಒಂದು ನಿರ್ದಿಷ್ಟ ಕಟ್ಟಡವನ್ನು ನೋಡಲು ಬಯಸುವವನು ತನ್ನ ಏಕತಾನತೆಯ ಬದುಕುಳಿಯುವಲ್ಲಿ ಓಯಸಿಸ್ ಹುಡುಕುತ್ತಿದ್ದಾನೆ. ಗಡಿಪಾರು ಮಾಡುವಿಕೆಯಿಂದ ಹೆಚ್ಚು ಉದ್ರೇಕಗೊಂಡ ಯುವಕ ಮಾನಸಿಕ ರೋಗಿ. ಈ ಮೂವರು ವ್ಯಕ್ತಿಗಳು ಪರಸ್ಪರರ ದುಃಖಗಳನ್ನು ತಿಳಿದಿದ್ದರೆ, ಅವರೆಲ್ಲರೂ ಉಗ್ರವಾಗಿ ನಡೆದುಕೊಳ್ಳುತ್ತಿರಲಿಲ್ಲ. ಅದೇ ರೀತಿ ಜನರು ವಿಭಿನ್ನ ಪ್ರಾದೇಶಿಕ ಸಂಘರ್ಷಗಳ ಇತಿಹಾಸಗಳನ್ನು ತಿಳಿದಿದ್ದರೆ, ಪ್ರಪಂಚದಾದ್ಯಂತ ಹೆಚ್ಚಿನ ಮಟ್ಟದ ಸಹಿಷ್ಣುತೆ ಇರುತ್ತಿತ್ತು. ಒಟ್ಟಾರೆ ನಾಟಕಕಾರ ಮಾನವ್ ಕೌಲ್ ಉದ್ಯಾನದ ಒಳಗೆ ಮತ್ತು ಹೊರಗೆ ಆರೋಗ್ಯಕರ ಸಂವಾದಕ್ಕಾಗಿ ನಾಟಕದ ಕಥಾ ವಸ್ತು ಮೂಲಕ ಕೇಳಿಕೊಳ್ಳುತ್ತಾರೆ. ನಾಟಕವು ಈಗ ನಡೆಯುತ್ತಿರುವ ಜಾಗತಿಕ, ಪ್ರಾದೇಶಿಕ ಸಂಘರ್ಷಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ. ಮಾನವ್ ಕೌಲ್ ಅವರು ಸಮಕಾಲೀನ ಭಾರತೀಯ ರಂಗಭೂಮಿಯಲ್ಲಿ ಪ್ರಮುಖ ನಾಟಕಕಾರರೆಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಪಾರ್ಕ್ ಒಂದು ಅತ್ಯುತ್ತಮ ನಾಟಕವಾಗಿದ್ದು, ಹಾಸ್ಯದ ಮೂಲಕ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಪ್ರದರ್ಶಿಸುತ್ತದೆ. ಅದು 2009ರಲ್ಲಿ ಆರಂಭವಾದರೂ ಇಂದಿಗೂ ಪ್ರಸ್ತುತವಾಗಿದೆ. ಮುಂಬೈನ ಚಿತ್ರಲೇಖಾ ಆರ್ಟ್ಸ್ ಥಿಯೇಟರ್ ಪ್ರಸ್ತುತ ಪಡಿಸಿದ ಪಾರ್ಕ್ ಹಿಂದಿ ನಾಟಕವು ಸಚಿನ್ ಕೆ.ಜರ್ಯಾಲ್ ನಿರ್ದೇಶನದಲ್ಲಿ ನಟರಾದ ಅಧಿಕಲ್ಪ್ ಶರ್ಮಾ, ನಿತೀಶ ಸಿಂಗ್ ರಾಥೋರ್ ಮತ್ತು ಆದಿತ್ಯ ದುಬೆ ಅವರು ನಾಟಕದಲ್ಲಿತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದರು. ನಟರೆಲ್ಲರೂ ಉತ್ಸಾಹಭರಿತ ಮಾತು ಮತ್ತು ಸನ್ನೆಗಳ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ನಾಟಕದ ನಡುವೆ ಲಘು ಸಂಗೀತ ಮತ್ತು ಬೆಳಕು ಪ್ರಮುಖ ಪಾತ್ರವಹಿಸಿತು. ಬೆಂಗಳೂರಿನ ರಂಗಶಂಕರದಲ್ಲಿ ಜನವರಿ 31ರಂದು ಪ್ರದರ್ಶನಗೊಂಡ ಪಾರ್ಕ್ ನಾಟಕ ರಂಗಾಸಕ್ತರ ಮನಸೆಳೆಯಿತು.
ದಾಸರ ಸಾಮಾಜಿಕ ಮೌಲ್ಯಗಳು ಇಂದಿಗೂ ದಿಕ್ಕು ತೋರುವ ದೀಪ: ಡಾ. ರೇಣುಕಾ ಸ್ವಾಮಿ
ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಉತ್ಸವ ಸಮಿತಿ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಮಾಜ ವೇದಿಕೆಯಲ್ಲಿ ದಾಸ ಸಾಹಿತ್ಯ ಗೋಷ್ಠಿ ಶನಿವಾರ (7-2-2026) ಮಧ್ಯಾಹ್ನ 2.30ಕ್ಕೆ ನಗರದ ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಾ. ರವೀಂದ್ರ ಕುಷ್ಟಗಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ದಾಸ ಚಿಂತಕರಾದ ಡಾ. ತ್ರಿವಿಕ್ರಮ ಜೋಶಿ ಮಾತನಾಡಿ, ದಾಸ ಸಾಹಿತ್ಯದ ಅಧ್ಯಯನ ಹಾಗೂ ಸಂಶೋಧನೆಗೆ ಪ್ರತ್ಯೇಕ ಸಂಶೋಧನಾ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದಾಸರ ತತ್ವಗಳು ಸಮಾಜ ಪರಿವರ್ತನೆಗೆ ಮಾರ್ಗದರ್ಶಕವಾಗಿವೆ ಎಂದರು. ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಡಾ. ರೇಣುಕಾ ಸ್ವಾಮಿ ಅವರು “ದಾಸರ ಸಾಮಾಜಿಕ ಮೌಲ್ಯಗಳು ಮತ್ತು ಪ್ರಸ್ತುತತೆ” ವಿಷಯವನ್ನು ವಿಶ್ಲೇಷಿಸಿದರು. ದಾಸರು ಕೇವಲ ಭಕ್ತಿ ಪರಂಪರೆಯ ಹರಿಕಾರರಷ್ಟೇ ಅಲ್ಲ, ಸಮಾನತೆ, ಮಾನವೀಯತೆ, ಶ್ರಮಗೌರವ, ದಾಸೋಹ ಮತ್ತು ಸರ್ವಜನ ಹಿತಾಯ ಎಂಬ ಉನ್ನತ ಸಾಮಾಜಿಕ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದ ಮಹಾನ್ ಸಮಾಜಸಂಸ್ಕಾರಕರು ಎಂದರು. ಜಾತಿ-ಪಾತಿ, ಅಹಂಕಾರ ಹಾಗೂ ಅಸಮಾನತೆಗಳನ್ನು ತೊಡೆದುಹಾಕಿ, ಭಕ್ತಿಯ ಮೂಲಕ ಮಾನವ ಏಕತೆಯನ್ನು ಬಲಪಡಿಸಿದವರು ಹರಿದಾಸರು ಎಂದು ಹೇಳಿದರು. ಇಂದಿನ ಭೌತಿಕತೆಯ ಯುಗದಲ್ಲೂ ದಾಸರ ಸಂದೇಶಗಳು ಸಮಾಜಕ್ಕೆ ನೈತಿಕ ದಿಕ್ಕು ತೋರಿಸುವ ದೀಪಸ್ತಂಭಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಡಾ. ರಾಜಶ್ರೀ ಕಲ್ಲೂರಕರ್ ಅವರು ಕನ್ನಡ ಸಾಹಿತ್ಯಾಭಿವೃದ್ಧಿಗೆ ಹರಿದಾಸರ ಅಪಾರ ಕೊಡುಗೆ ಕುರಿತು ಮಾತನಾಡಿ, ದಾಸ ಸಾಹಿತ್ಯವು ಜನಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದರು. ಡಾ. ವಸುಂಧರಾ ಪಾಟೀಲ್ ಅವರು “ದಾಸರು ಮತ್ತು ಕಾನೂನು” ವಿಷಯವಾಗಿ ಉಪನ್ಯಾಸ ನೀಡಿ, ದಾಸರ ನೈತಿಕ ಧರ್ಮಬೋಧನೆಗಳು ನ್ಯಾಯಸಮ್ಮತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದರು. ಶ್ರೀನಿವಾಸ್ ಗಟ್ಟು ಸ್ವಾಗತಿಸಿದರು. ಶ್ರೀ ಮುರಳಿಧರ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಜೆ.ಎಂ. ವಿರೇಶ್ ವಂದಿಸಿದರು. ಈ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ಜಿ.ಕೆ. ಗ್ರಂಥಾಲಯದ ಮುಖ್ಯಾಧಿಕಾರಿ ಸಿದ್ದಾರ್ಥ ಭಾವಿಕಟ್ಟಿ, ತಾ.ಕ.ಸಾ.ಪ. ದೇವದುರ್ಗ ಅಧ್ಯಕ್ಷ ಎಚ್. ಶಿವರಾಜ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹರ್ಯಾಣ | ಫರೀದಾಬಾದ್ ಜೈಲಿನಲ್ಲಿ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಆರೋಪಿಯ ಹತ್ಯೆ
ಫರೀದಾಬಾದ್: ಅಯೋಧ್ಯೆಯಲ್ಲಿನ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಆರೋಪಿಯನ್ನು ಫರೀದಾಬಾದ್ ಜಿಲ್ಲಾ ಕಾರಾಗೃಹದಲ್ಲಿ ಇರಿದು ಹತ್ಯೆಗೈದಿರುವ ಘಟನೆ ರವಿವಾರ ರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬ್ದುಲ್ ರಹ್ಮಾನ್(20) ಹತ್ಯೆಯಾದ ಕೈದಿ. ಅದೇ ಜೈಲಿನಲ್ಲಿದ್ದ ಕಾಶ್ಮೀರದ ಸಹ ಖೈದಿ ಅರುಣ್ ಚೌಧರಿ ಕೃತ್ಯವನ್ನು ಎಸಗಿದ್ದಾನೆ ಎಂದು ಹೇಳಲಾಗಿದೆ. ಅರುಣ್ ಚೌಧರಿ ಚೂಪಾದ ಆಯುಧದಿಂದ ರಹ್ಮಾನ್ ತಲೆಗೆ ಹೊಡೆದಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ದಾಳಿಗೆ ಕಾರಣವಾದ ಸನ್ನಿವೇಶಗಳ ಕುರಿತು ಪರಿಶೀಲನೆ ನಡೆಸಲು ಪೊಲೀಸರು ಸಹ ಖೈದಿಗಳು ಹಾಗೂ ಜೈಲು ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ಉತ್ತರ ಪ್ರದೇಶದ ಫೈಝಾಬಾದ್ ಜಿಲ್ಲೆಯ ಮಿಕಿಪುರ್ ಗ್ರಾಮದ ನಿವಾಸಿಯಾದ ಅಬ್ದುಲ್ ರಹ್ಮಾನ್ ನನ್ನು 2025ರ ಮಾರ್ಚ್ 2ರಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಹರ್ಯಾಣ ಪೊಲೀಸರ ವಿಶೇಷ ಕಾರ್ಯಪಡೆ ಪಾಲಿ ಗ್ರಾಮದಲ್ಲಿ ಬಂಧಿಸಿತ್ತು.
ಅಧಿಕ ಇಳುವರಿಯ ತೆಂಗಿನ ತಳಿಗಳನ್ನು ನೆಡಲು ಕೇಂದ್ರದ ಉತ್ತೇಜನ
►24 ಹೊಸ ತಳಿಗಳ ಅಭಿವೃದ್ಧಿಪಡಿಸಿದ ಸಿಪಿಸಿಆರ್ಐ ►2-4 ವರ್ಷಗಳಲ್ಲಿ ಇಳುವರಿ ನೀಡುವ ತಳಿ
ಪಂಜರ ಮತ್ಸ್ಯ ಕೃಷಿಯಲ್ಲಿ ‘ಕಳಸೆ’ ಮೀನು ಬೆಳೆ!
► ಯಶಸ್ಸು ಕಂಡ ತಲ್ಲೂರಿನ ಮೀನುಗಾರರು►ಎಸ್ಸಿ-ಎಸ್ಪಿ ಯೋಜನೆಯಡಿ ಆರು ದಲಿತ ಕುಟುಂಬ ಫಲಾನುಭವಿಗಳು
ಅಮೆರಿಕಾ ಹಾಗೂ ಇರಾನ್ ನಡುವಿನ ಉದ್ವಿಗ್ನತೆಯ ಬೆನ್ನಲ್ಲೆ, ಇರಾನ್ ನ ಸುಪ್ರೀಂ ಲೀಡರ್ ಅಯತುಲ್ಲಾ ಅಲಿ ಖಮೇನಿ ಅಧಿಕಾರಿ ವಹಿಸಿಕೊಂಡು 37 ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಯುಪಡೆಯ ಕಮಾಂಡರ್ ಗಳೊಂದಿಗಿನ ವಾರ್ಷಿಕ ಸಭೆಯಲ್ಲಿ ಮೊದಲ ಬಾರಿಗೆ ಗೈರಾಗುವ ಮೂಲಕ ಸಂಪ್ರದಾಯವನ್ನು ಮುರಿದಿದ್ದಾರೆ. ಖಮೇನಿ ಏನೂ ಈ ಸಂಪ್ರಾದಾಯವನ್ನು ಮುರಿದಿದ್ದಾರೆ. ಆದರೆ ಅವರ ನಡೆಯ ಸಮಯ ಸದ್ಯ ಸಾಕಷ್ಟು ಚರ್ಚೆಗಳಿಗೆ ನಾಂದಿ ಹಾಡುವಂತಿದೆ. ಹಾಗಾದ್ರೆ, ಯುಎಸ್ ನೊಂದಿಗಿನ ಸಂಭಾವ್ಯ ಯುದ್ದಗಳ ನಡುವೆ ಈ ನಡೆಯ ಹಿಂದಿನ ಸಂಭಾವ್ಯ ಕಾರಣವೇನಿರಬಹುದು ನೋಡಿ..
ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ
ಯುರೋಪಿನಾದ್ಯಂತ ಯಕ್ಷಗಾನ ಕಲಿಸುತ್ತಿರುವ ಹವ್ಯಾಸಿ ಕಲಾವಿದ ಅಜೀತ್ ಪ್ರಭು ತಲ್ಲೂರು
ಮೆಟ್ರೋ ದರ ಏರಿಕೆ ಪ್ರಸ್ತಾಪದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಬರೆ ಕೊಡುತ್ತಾ ಸರಕಾರ! ಮುನ್ಸೂಚನೆ ಏನೇನಿದೆ?
ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದ್ದು, ಏಪ್ರಿಲ್ ನಿಂದಲೇ ಹೆಚ್ಚು ಶುಲ್ಕದ ಪ್ರಸ್ತಾವನೆಯನ್ನು ಎಸ್ಕಾಂಗಳು ವಾರ್ಷಿಕ ವರದಿ ಮಂಡನೆಯಲ್ಲಿ ತಿಳಿಸಿವೆ. ಆದರೆ ಕೆಇಆರ್ಸಿ ಮುಂದಿರುವ ಆಯ್ಕೆಗಳೇನು ಎಂಬ ವಿವರ ಇಲ್ಲಿದೆ ನೋಡಿ
ಸಸಿಹಿತ್ಲು ಸಾರಂತಾಯಗರೋಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಮುಲ್ಕಿ: ಬಿಲ್ಲವ ಹಿವರ್ಧಕ ಸಂಘದ ಸಂಚಾಲಕತ್ವದ ಸಸಿಹಿತ್ಲು ಸಾರಂತಾಯಗರೋಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ರವಿವಾರ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತರು, ಸಂಕ್ಷಿಪ್ತ ಅವದಿಯಲ್ಲಿ ಜೀರ್ಣೋದ್ಧಾರವಾಗಿರುವುದು ಸಂತಸದ ಸಂಗತಿ. ಈ ಕ್ಷೇತ್ರಕ್ಕೂ ಮುಲ್ಕಿ ಅರಮನೆಗೂ ನಿಕಟ ಸಂಬಂಧವಿದೆ. ಕಾತಾಬಾರೆ ಬೂದಬಾರೆ ನಿರ್ಮಿಸಿದ ಪ್ರಥಮ ಗರೊಡಿ ಸಸಿಹಿತ್ಲು. ತುಳುನಾಡಿನಲ್ಲಿರುವಷ್ಟು ದೇವಸ್ಥಾನ, ದೈವಸ್ಥಾನ, ನಾಗ ಬಣಗಳು ಎಲ್ಲೂ ಇಲ್ಲ. ಹಾಗಾಗಿ ನಮ್ಮಲ್ಲಿರುವಷ್ಟು ದೇವ ಭಕ್ತಿ ಎಲ್ಲೂ ಇಲ್ಲ. ಜನರಲ್ಲಿ ಧರ್ಮ ಜಾಗೃತಿಯಾಗುತ್ತಿದೆ. ಹಾಗಾಗಿ ಅಜೀರ್ಣಾವಸ್ಥೆಯಲ್ಲಿದ್ದ ಎಲ್ಲಾ ಕ್ಷೇತ್ರಗಳು ಜೀರ್ಣೋದ್ಧಾರವಾಗಿತ್ತಿದೆ ಎಂದರು. ಸಮಾರಂಭದಲ್ಲಿ ನಿಪ್ಪಾಣಿ ಓಂ ಶಕ್ತಿ ಪೀಠದ ಮಹಾಕಾಳಿ ಮಹಾ ಸಂಸ್ಥಾನದ ಸದರ್ಮದ ಪೀಠಾಧ್ಯಕ್ಷ ಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಸಸಿಹಿತ್ಲು ಸಾರಂತಾಯಗರೋಡಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಕುರಿತ ಸ್ಮರಣ ಸಂಚಿಕೆ “ಬ್ರಹ್ಮತೀರ್ಥ”ವನ್ನು ಉದ್ಯಮಿ ಗಣೇಶ್ ಆರ್. ಪೂಜಾರಿ ಮತ್ತು ಅತಿಥಿಗಣ್ಯರು ಬಿಡುಗಡೆ ಗೊಳಿಸಿದರು. ಇದೇ ಸಂದರ್ಭ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಶ್ರಮಿಸಿದ ಸಮಿತಿಯ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಪುನರ್ ಪ್ರತಿಷ್ಠಾ ಬ್ರಹಕಲಶೋತ್ಸವದ ವೈದಿಕ ಕೈಂಕರ್ಯ ನೆರವೇರಿಸಿದ ವೇದ ಮೂರ್ತಿ ರಂಗನಾಥ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಉದ್ಯಮಿಗಳಾದ ಪದ್ಮನಾಭ ಬಂಗೇರ, ಸದಾಶಿವ ಸಾಲ್ಯಾನ್, ಧನಂಜಯ ಶೆಟ್ಟಿ, ಗಣೇಶ್ ಆರ್.ಪೂಜಾರಿ, ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ ಸಾಲ್ಯಾನ್, ಕಾಂತುಲಕಣ ಗಡಿಪ್ರದಾನ ಪಠೇಲರ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ನಮ್ಮ ಕುಡ್ಲ ವಾಹಿನಿ ಮಾಲಕರಾದ ಲೀಲಾಕ್ಷ ಕರ್ಕೇರ, ಹಳೆಯಂಗಡಿ ಪ್ರಿಯದರ್ಶಿನಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ಮಾಜಿ ಮುಜರಾಯಿ ಸಚಿವರಾದ ನಾಗರಾಜ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಯತೀಶ್ ಬೈಕಂಪಾಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ, ಜಗನ್ನಾಥ ಕೋಟ್ಯಾನ್, ಅನಿಲ್ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಮಸ್ತ ಶತಮಾನೋತ್ಸವ ವೇದಿಕೆಯಲ್ಲಿ “ಸಮಸ್ತ: ಆದರ್ಶ ಹಾದಿಯ ನೆರಳು ವೃಕ್ಷಗಳು” ಕೃತಿ ಲೋಕಾರ್ಪಣೆ
ಕೇರಳ: ಸಮಸ್ತ ಶತಮಾನೋತ್ಸವದ ಭವ್ಯ ವೇದಿಕೆಯಲ್ಲಿ, ಸಮಸ್ತದ 100 ವರ್ಷಗಳ ಸಮೃದ್ಧ ಪಾರಂಪರ್ಯವನ್ನು ಒಳಗೊಂಡು ಶವಿಲ್ ಉದ್ದಬೆಟ್ಟುರವರು ರಚಿಸಿದ “ಸಮಸ್ತ: ಆದರ್ಶ ಹಾದಿಯ ನೆರಳು ವೃಕ್ಷಗಳು” ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಬಹುಮಾನ್ಯ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅವರು ಈ ಪುಸ್ತಕದ ಹಿನ್ನಲೆಯ ರೂವಾರಿಗಳಾದ ಶಾಹುಲ್ ಹಮೀದ್ ಸೂರಿಂಜೆ ಅವರಿಗೆ ಕೃತಿಯನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ಗದ್ದಲ: ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಬ್ಯಾನರ್, ಹೋರಾಟದ ಎಚ್ಚರಿಕೆ ಕೊಟ್ಟ ಬಿಜೆಪಿ
ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ವಾರ್ ಮತ್ತೆ ಶುರುವಾಗಿದೆ. ಮನರೇಗಾ ವಿಚಾರವಾಗಿ ಪತ್ರಿಕೆಗಳಲ್ಲಿ ಜಾಹೀರಾತು ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ವಿಧಾನಸೌಧ ಹಾಗೂ ಸುತ್ತಮುತ್ತ ಪೋಸ್ಟರ್ ಹಾಕಲಾಗಿದೆ. ಲೋಕಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾದ ವಿಚಾರವನ್ನು ಮುಂದಿಟ್ಟುಕೊಂಡು ಪೋಸ್ಟರ್ ಹಾಕಲಾಗಿದೆ. ಪೋಸ್ಟರ್ ವಿರುದ್ಧ ಬಿಜೆಪಿ ಪೊಲೀಸ್ ದೂರು ನೀಡಿದೆ. ಕ್ರಮ ಕೈಗೊಳ್ಳದೆ ಇದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಫೆ.11 ರಿಂದ 14: ಹಳೆಯಂಗಡಿ ಕದಿಕೆ ಉರೂಸ್, ರಾಜ್ಯ ಮಟ್ಟದ ದಫ್ ಸ್ಪರ್ಧೆ
ಮಂಗಳೂರು : ಹಳೆಯಂಗಡಿ ಕದಿಕೆ ದರ್ಗಾ ಶರೀಫ್ನ ಹಝ್ರತ್ ಸೈಯದ್ ಮೌಲಾನವಲಿಯುಲ್ಲಾಹಿ ಉರೂಸ್ ಸಮಾರಂಭ ಫೆ.11 ರಿದ 14ರ ವರೆಗೆ ನಡೆಯಲಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಡುಂಬೂರು, ಫೆ.11 ರಂದು ಸಂಜೆ 7 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು. ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನ ನೀಡಲಿದ್ದು, ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಮದನಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು. ಮತ ಪ್ರವಚನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಫೆ.14ರ ರಾತ್ರಿ 7 ಗಂಟೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ರಾತ್ರಿ 9 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲ ಝೈನಿ ಬಡಗನ್ನೂರು ಉದ್ಘಾಟನೆ ನೆರವೇರಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸೇರಿದಂತೆ ಇತರ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಪಡುತೋಟ, ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಗೂ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮುಹಮ್ಮದ್, ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಫಕ್ರುದ್ದೀನ್ ಮುಂಚೂರು ಉಪಸ್ಥಿತರಿದ್ದರು
India-US Trade Deal; ನಯಾರಾ ಭವಿಷ್ಯಕ್ಕಾಗಿ ಅಮೆರಿಕದ ಜೊತೆ ರಷ್ಯಾ ತೈಲ ಚೌಕಾಸಿ ಮಾಡಲಿದೆಯಾ ಭಾರತ?
ಭಾರತ ಮತ್ತು ಅಮೆರಿಕದ ನಡುವೆ ತೈ,ಲ ಒಪ್ಪಂದವೇನೋ ಜಾರಿಯಾಗಿದೆ. ಆದರೆ ಇದರಿಂದ ರಷ್ಯಾದ ಕಚ್ಚಾತೈಲ ಆಮದನ್ನು ಭಾರತ ಹಂತ ಹಂತವಾಗಿ ನಿಲ್ಲಿಸಬೇಕಿದೆ. ಇದರಿಂದ ಜಾಮನ್ನಗರದಲ್ಲಿರುವ ನಯಾರಾ ತೈಲ ಸಂಸ್ಕರಣಾಗಾರದ ಕಾರ್ಯಾಚರಣೆಗೆ ಭಾರೀ ಹೊಡೆತ ಬಿದ್ದಿದ್ದು, ಈ ಬಗ್ಗೆ ಭಾರತವು ಅಮೆರಿಕದೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಮಾಲೀಕತ್ವ ಬದಲಾವಣೆ ಸಾಧ್ಯತೆಯ ನಡವೆಯೇ, ರಷ್ಯಾದಿಂದ ಸನ್ಣ ಪ್ರಮಾಣದ ತೈಲ ಆಮದಿಗೆ ಅನುವು ಮಾಡಿಕೊಡುವಂತೆ ಭಾರತವು ಅಮೆರಿಕವನ್ನು ಕೇಳಬಹುದು ಎನ್ನಲಾಗಿದೆ.
Mudigere | ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಚಿರತೆ ದಾಳಿ
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಗೆ ಒಳಗಾದ ಇಬ್ಬರೂ ಮಹಿಳೆಯರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ದಾಳಿಯಿಂದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮೂಡಿಗೆರೆ ತಾಲ್ಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಈ ಘಟನೆ ಮೂಡಿಗೆರೆ ತಾಲ್ಲೂಕಿನಲ್ಲಿ ಮತ್ತೆ ಚಿರತೆ ಭೀತಿಯನ್ನು ಹೆಚ್ಚಿಸಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಸ್ಪೇಸ್ ಎಕ್ಸ್ ಮಾಲೀಕ ಎಲಾನ್ ಮಸ್ಕ್ ತನ್ನ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದು, ಚಂದ್ರನ ಮೇಲ್ಮೈ ಮೇಲೆ 10ಕ್ಕೂ ವರ್ಷ ಕಡಿಮೆ ಅವಧಿಯಲ್ಲೇ ಚಂದ್ರನ ಮೇಲೆ ಸೆಲ್ಫ ಗ್ರೋಯಿಂಗ್ ಸಿಟಿಯನ್ನು ನಿರ್ಮಿಸಲಿದ್ದಾರಂತೆ. ಈ ಕುರಿತು ಸ್ವತಃ ಮಸ್ಕ್ ಹೇಳಿಕೊಂಡಿದ್ದು, 10 ವರ್ಷಗಳಲ್ಲಿ ಚಂದ್ರ ಮುಂದಿನ 20 ವರ್ಷಗಳಲ್ಲಿ ಮಂಗಳ ಗ್ರಹ ಹೀಗೆ ಭೂಮಿಯನ್ನು ಬಿಟ್ಟು ಗ್ರಹಗಳ ಮೇಲೆ ಮಾನವರ ಜೀವನವನ್ನು ರೂಪಿಸಲು ಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಏನಿದು ಮಸ್ಕ್ ನ ಔಟ್ ಆಫ್ ಅರ್ಥ್ ರಿಯಲ್ ಎಸ್ಟೇಟ್ ಪ್ಲ್ಯಾನಿಂಗ್ ನೋಡೋಣ ಬನ್ನಿ..
ಬರೀ ರುಚಿಶುಚಿಯಷ್ಟೇ ಅಲ್ಲ, ಇದು ತಾಳ್ಮೆಯ ಕಲೆ : ಕ್ಯಾಟರಿಂಗ್ ಉದ್ಯಮದಲ್ಲಿ ಮಹಿಳೆಯರ ’ವಿಜಯಯಾತ್ರೆ’
Women In Catering Industry : ಶುಭ ಸಮಾರಂಭಗಳಲ್ಲಿ ಭಾಗವಹಿಸುವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಊಟ ಬಡಿಸುವುದು, ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು ಹೆಚ್ಚಾಗಿ ಕಾಣಸಿಗುತ್ತದೆ. ಈ ಉದ್ಯಮದಲ್ಲಿ ಪ್ರಮುಖವಾಗಿ ಬೇಕಾಗಿರುವುದು, ತಾಳ್ಮೆ ಮತ್ತು ಬರುವ ಅತಿಥಿಗಳಿಗೆ ಉತ್ತಮ ಸ್ವಾಗತವನ್ನು ಕೋರುವುದು. ಅದು ಮಹಿಳೆಯರಲ್ಲಿ ಹೆಚ್ಚಾಗಿ ಇರುವುದರಿಂದ, ಈ ಉದ್ಯಮದಲ್ಲಿ ಮಹಿಳೆಯರ ಪವರ್ ಹೆಚ್ಚಾಗುತ್ತಿದೆ.
Belagavi | ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಆರೋಪ; ತಾಲೂಕು ಸಬ್ ರಿಜಿಸ್ಟ್ರಾರ್ ಸಹಿತ ಇಬ್ಬರ ಬಂಧನ
ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಮಾಡಿದ ಆರೋಪದಡಿ ಹುಕ್ಕೇರಿ ತಾಲೂಕು ಸಬ್ ರಿಜಿಸ್ಟ್ರಾರ್ ಮಡಿವಾಳಯ್ಯ ಬಾನಿಮಠ ಹಾಗೂ ಬಾಂಡ್ ರೈಟರ್ ಆನಂದ ದಡ್ಡಿಮನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿರೀಕ್ಷಣಾ ಜಾಮೀನು ಮಂಜೂರಾದ ಖುಷಿಯಲ್ಲಿ ಜಾಮೀನು ಪಡೆಯಲು ಬಂದಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ಜಾಮೀನು ಪ್ರತಿ ತೋರಿಸಿ ನಿರಾಳರಾಗುವಷ್ಟರಲ್ಲಿ ಹುಕ್ಕೇರಿ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯಮಕನಮರಡಿ ಪೊಲೀಸರು 3 ಜನರನ್ನು ಬಂಧಿಸಿರುವುದು ತಿಳಿದುಬಂದಿದೆ. ಹೊಸ ಪ್ರಕರಣವನ್ನು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ
ಬೆಂಗಳೂರಲ್ಲಿ ಆಗುತ್ತಿರುವ ಅಪರಾಧಗಳಿಗೆ ಕಡಿಮೆ ಇಲ್ಲ. ದರೋಡೆ, ಕೊಲೆ ಸುಲಿಗೆ ಒಂದೆಡೆಯಾದ್ರೆ ಮಾನಹಾನಿಯ ಘಟನೆಗಳೂ ಎಗ್ಗಿಲ್ಲದೆ ನಡೆಯುತ್ತಿವೆ, ಆದರೆ ಕುಟುಂಬದೊಳಗೆ ಕೇಡು ಬಯಸಿ ಕೃತ್ಯ ಎಸಗಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ.
ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ 2026 (IPL 2026) ಹತ್ತಿರ ಬರುತ್ತಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಾರಿ ಆರ್ಸಿಬಿ ಪಂದ್ಯಾವಳಿಗೆ ಬೆಂಗಳೂರಲ್ಲಿ ಆಡಲು ಅವಕಾಶ ನೀಡುವ ಬಗ್ಗೆ ಇನ್ನು ಅಂತಿಮ ನಿರ್ಧಾರವಾಗಿಲ್ಲ. ಇದೀಗ ರಾಜ್ಯ ಗೃಹ ಸಚಿವರನ್ನು ಕರ್ನಾಟಕ ರಾಜ್ಯ ಕ್ರಿಕೇಟ್ ಸಂಘ (KSCA) ಮತ್ತು RCB
Viral Video: ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗ; ಮೆಟ್ರೋ ನಿಲ್ದಾಣದಲ್ಲೇ ಎಂಗೇಜ್ಮೆಂಟ್ ಮಾಡಿಸಿದ ಪೋಷಕರು
ಪ್ರೀತಿಯಲ್ಲಿ ಬಿದ್ದವರು ಸಾಮಾನ್ಯವಾಗಿ ಮನೆಯವರ ಕಣ್ಣಿಗೆ ಕಾಣದಂತೆ ಕದ್ದುಮುಚ್ಚಿ ಓಡಾಡುವುದೇ ಹೆಚ್ಚು. ಯಾರಾದ್ರೂ ನೋಡಿದ್ರೆ ನಮ್ ಕಥೆ ಮುಗೀತು? ಅನ್ನೋ ಭಯದಲ್ಲೇ ಇರುತ್ತಾರೆ. ಆದರೆ ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗನಿಗೆ ಪೋಷಕರು ಮೆಟ್ರೋ ನಿಲ್ದಾಣದಲ್ಲೇ ಸರಳವಾಗಿ ಎಂಗೇಜ್ಮೆಂಟ್ ನೆರವೇರಿಸಿ, ಆಶೀರ್ವಾದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹುಬ್ಬೇರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ಇದು ನಿಜವಾಗಿ
ಟಿ-20 ವಿಶ್ವಕಪ್ | ಭಾರತದೊಂದಿಗೆ ಆಡಲು ಮೂರು ಷರತ್ತುಗಳನ್ನು ವಿಧಿಸಿದ ಪಾಕಿಸ್ತಾನ: ವರದಿ
ಇಸ್ಲಮಾಬಾದ್: ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತ ತಂಡದೆದುರು ನಡೆಯಬೇಕಿರುವ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದ್ದರೆ ಹಾಗೂ ಈ ಕುರಿತು ತನ್ನ ಸರಕಾರದೊಂದಿಗೆ ಸಮಾಲೋಚನೆ ನಡೆಸಬೇಕಿದ್ದರೆ, ತನ್ನ ಮೂರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಎದುರು ಷರತ್ತು ವಿಧಿಸಿರುವ ಬಗ್ಗೆ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನಿಗದಿಯಂತೆಯೇ ಸುಗಮವಾಗಿ ನಡೆಯುವುದನ್ನು ಖಾತರಿಪಡಿಸಲು ಸಂಧಾನ ಪರಿಹಾರವನ್ನು ಅನ್ವೇಷಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ ಬುಲ್ ರೊಂದಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸದಸ್ಯರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯೋಗವನ್ನು ಭೇಟಿ ಮಾಡಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆದಾಯದಲ್ಲಿ ಪಾಕಿಸ್ತಾನದ ಪಾಲನ್ನು ಹೆಚ್ಚಳ ಮಾಡಬೇಕು, ಭಾರತದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಅನ್ನು ಮರುಸ್ಥಾಪಿಸಬೇಕು ಹಾಗೂ ಹಸ್ತಲಾಘವ ಶಿಷ್ಟಾಚಾರವನ್ನು ಮರು ಜಾರಿಗೊಳಿಸಬೇಕು ಎಂಬ ಮೂರು ಷರತ್ತುಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೆದುರು ಇರಿಸಿದೆ ಎಂದು Cricbuzz ವರದಿ ಮಾಡಿದೆ. ಭಾರತದೆದುರು ಪಾಕಿಸ್ತಾನ ತಂಡವು ಟಿ-20 ವಿಶ್ವಕಪ್ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಸರಕಾರ ಪ್ರಕಟಿಸಿದ್ದರಿಂದ ಈ ವಿವಾದ ಭುಗಿಲೆದ್ದಿದೆ.
ತಂದೆಯ ಪರ ಪದೇ ಪದೇ ಬ್ಯಾಟಿಂಗ್ ಬೇಡ, ನಮ್ಮನ್ನು ಪ್ರಚೋದಿಸಬೇಡಿ: ಯತೀಂದ್ರಗೆ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್
ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪದೇ ಪದೇ ಬ್ಯಾಟಿಂಗ್ ಮಾಡುವುದು ಬೇಡ. ಈ ಮೂಲಕ ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು ಯತೀಂದ್ರ ಅವರಿಗೆ ನೋಟಿಸ್ ಯಾಕಿಲ್ಲ? ಎಂದೂ ಪರೋಕ್ಷವಾಗಿ ಪ್ರಶ್ನಿಸಿದರು. ಈ ಕುರಿತಾಗಿ ಅವರು ಏನು ಹೇಳಿದ್ದಾರೆ? ಜೊತೆಗೆ ಡಿಕೆ ಶಿವಕುಮಾರ್ ಪರವಾಗಿ ಯಾವ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
ಅಕ್ಷರ ಭೂಮಿ ಸ್ವಾಭಿಮಾನದ ‘ಲ್ಯಾಂಡ್ ಲಾರ್ಡ್’
ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ. ಜಗತ್ತಿನಲ್ಲಿ ಸಿನೆಮಾ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮ. ಉಳ್ಳವರಿಗೂ ಇಲ್ಲದವರಿಗೂ ಸಮಾನವಾಗಿ ಮನರಂಜಿಸುವ ಮಾಧ್ಯಮ. ಮನುಷ್ಯ ತನ್ನದೇ ಆಗು-ಹೋಗುಗಳನ್ನ್ನು ತನ್ನಂತೆ ಇರುವವರು ಮಾಡುವಾಗ, ಅವರಲ್ಲಿ ತನ್ನನ್ನು ಕಂಡುಕೊಳ್ಳುತ್ತಾ ಒಳಿತು-ಕೆಡುಕುಗಳನ್ನ್ನು ಆವಾಹಿಸಿಕೊಳ್ಳುತ್ತಾನೆ. ಪ್ರೀತಿಸುತ್ತಾನೆ, ದುಃಖಿಸುತ್ತಾನೆ, ಅಳುತ್ತಾನೆ, ನಗುತ್ತಾನೆ, ಹಾಡು ಹೇಳುತ್ತಾನೆ, ನೋವು ಮರೆಯುತ್ತಾನೆ, ಪ್ರೀತಿಸುತ್ತಾನೆ... ಹೀಗೆ ಜೀವನದ ಒಂದು ಸಣ್ಣ ನಿರಂಬಳತೆಯನ್ನು ಈ ಸಿನೆಮಾದಿಂದ ಪಡೆಯುತ್ತಾನೆ. ಕ್ಯಾಮರಾ ಮುಖಾಂತರ ತನ್ನನ್ನೇ ಮೋಹಿಸಿಕೊಳ್ಳುವ ಮನುಷ್ಯ ಅತ್ಯಂತ ಕಡುಮೋಹಿಯಾಗಿರುತ್ತಾನೆ. ಜಗತ್ತಿನಲ್ಲಿ ಎಷ್ಟೊಂದು ಸಿನೆಮಾಗಳು ಬಂದು ಹೋಗಿವೆ. ಎಷ್ಟೊಂದು ಜನರನ್ನು ಪ್ರಭಾವಿಸಿವೆೆ, ಪ್ರಭಾವಿಸುತ್ತಿವೆೆ. ನನ್ನ ಬಾಲ್ಯದಲ್ಲಿ ನಮ್ಮೂರಿನ ಟೆಂಟುಗಳಲ್ಲಿ ನಡೆಯುತ್ತಿದ್ದ ಸಿನೆಮಾಗಳು ಅದು ಎಷ್ಟು ಪ್ರದರ್ಶನ ಕಂಡಿದೆಯೋ ಅಷ್ಟು ಪ್ರದರ್ಶನಗಳನ್ನು ನಾನು ತಪ್ಪದೇ ನೋಡಿದ್ದೇನೆ. ಅವುಗಳೆಲ್ಲವನ್ನು ನಾನು ಬಹುತೇಕ ಕದ್ದೇ ನೋಡಿದ್ದೇನೆ. ಅದನ್ನು ಹೇಳುವುದಕ್ಕೆ ಹೋದರೆ ದೊಡ್ಡ ಪುಸ್ತಕವೇ ಆಗುತ್ತದೆ. ಆದರೆ ನಾನು ‘ನೀನಾಸಂ’ ಸೇರಿದ ಮೇಲೆ ಜಗತ್ತಿನ ಶ್ರೇಷ್ಠ ಸಿನೆಮಾಗಳನ್ನು ನೋಡಲು ದೊಡ್ಡ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದ ದೊಡ್ಡ ಗ್ರಹಿಕೆಯ ಕಾಲ ಎನ್ನಬಹುದು. ಜಗತ್ತಿನಲ್ಲಿ ಸಿನಿಮಾ ನೋಡದ ಕಣ್ಣುಗಳು ಮತ್ತು ಸಿನೆಮಾ ಹಾಡುಗಳನ್ನು ಕೇಳದ ಕಿವಿಗಳು ಇಲ್ಲದ್ದಿಲ್ಲ. ಅಷ್ಟರಮಟ್ಟಿಗೆ ಸಿನೆಮಾ ಮನುಷ್ಯನಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ನಮ್ಮ ಪ್ರೀತಿಯ ಪತ್ರಕರ್ತರಾದ ಮಂಜುನಾಥ್ ಅದ್ದೆಯವರು ನಮ್ಮೆಲ್ಲರ ಹೆಮ್ಮೆಯ ‘ಕನ್ನಡದ ಸಾರ್ವಕಾಲಿಕ ನಟ, ಕಲಾವಿದ ಡಾ. ರಾಜ್ಕುಮಾರ್’ ಬಗ್ಗೆ ‘ಬಡವರ ರಾಜಕುಮಾರ’ ಎನ್ನುವ ಒಂದು ಅಪರೂಪದ ಪುಸ್ತಕ ಬರೆದಿದ್ದಾರೆ. ಇದರ ಬಿಡುಗಡೆ ಸಮಾರಂಭಕ್ಕೆ ಕನ್ನಡ ಸಿನೆಮಾಕ್ಕೆ ಹೊಸ ಭಾಷ್ಯೆ ಬರೆದ ಸೂರಿ ನಿರ್ದೇಶನದ ದುನಿಯಾ ಸಿನೆಮಾದಿಂದ ದುನಿಯಾ ವಿಜಯ್ ಎಂದೇ ಪ್ರಸಿದ್ಧರಾದ ಶ್ರೀ ವಿಜಯ್ಕುಮಾರ್ ಬಂದಿದ್ದರು. ತನ್ನ ಬಣ್ಣದಿಂದ ಅಪಾರ ನೋವು, ಅವಮಾನ ಅನುಭವಿಸಿದ ಶ್ರೀ ವಿಜಯ್ಕುಮಾರ್ ಇಡೀ ನಾಡಿಗೆ ದುನಿಯಾ ವಿಜಯ್ ಆದರು. ಅದರಿಂದ ಕನ್ನಡ ಸಿನೆಮಾಗೆ ಒಂದು ಅಪರೂಪದ ಪ್ರತಿಭೆ ಸಿಕ್ಕಂತಾಯಿತು. ಈ ನೆಲದ ಅಪ್ಪಟ ಕಲಾವಿದ ನಿರ್ದೇಶಕ, ನಿರ್ಮಾಪಕ ದುನಿಯಾ ವಿಜಯ್ ತನ್ನ ಸಿನೆಮಾ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಹೊಸ ಪ್ರಯೋಗಗಳಿಗೆ ಒಡ್ಡಿಕೊಂಂಡಿದ್ದಾರೆ. ಕೆಲವೊಮ್ಮೆ ಈ ನೆಲದಲ್ಲಿ ನಡೆದ ಸತ್ಯದ ಘಟನೆಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ. ಈ ಸಿನೆಮಾ ಮಾಧ್ಯಮ ತುಂಬಾ ಸಂಕೀರ್ಣವಾದದ್ದು ಹೌದು. ಸಂಕಷ್ಟದ ಮಾಧ್ಯಮವೂ ಹೌದು. ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರು ತಮ್ಮ ಪ್ರತಿಭೆಯಿಂದ ಮೇಲೆ ಬಂದಿದ್ದ್ದೂ ಇದೆ. ಇನ್ನು ಕೆಲವರು ಜಾತಿ ಪ್ರಭಾವವೋ ‘ಹಣದ ಪ್ರಭಾವವೋ’ ಕಾರಣವಾಗಿ ಬಂದಿರುವುದು ಇದೆ. ಆದರೆ ಅಂತಿಮವಾಗಿ ಯಾರು ಅಪ್ಪಟ ಕಲಾವಿದರಾಗಿದ್ದಾರೋ, ಜನರ ಪ್ರೀತಿ ಗಳಿಸಿದ್ದಾರೋ, ಸಮಾಜವನ್ನು ಪ್ರಭಾವಿಸಿದ್ದಾರೋ ಅಂಥವರು ಮಾತ್ರ ಎಲ್ಲಾ ಕಾಲಕ್ಕೂ ಉಳಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಮುದಾಯಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದರೆ ಅವು ಓಡುವುದಿಲ್ಲ. ಇವತ್ತಿಗೂ ನೇರವಾಗಿ ಅಸ್ಪಶ್ಯತೆಯನ್ನು ಕುರಿತು ಸಿನೆಮಾ ಮಾಡಿದರೆ ಓಡುವುದಿಲ್ಲ. ಕಾರಣ ಸ್ಪಷ್ಟ. ಇವತ್ತಿಗೂ ಅಸ್ಪಶ್ಯತೆ ಜೀವಂತವಾಗಿದೆ. ಅಸ್ಪಶ್ಯತೆಯ ಆಚರಣೆಗಳು ಇವತ್ತಿಗೂ ಘೋರವಾಗಿ ಆಚರಿಸಲ್ಪಡುತ್ತಿವೆ. ತಮಿಳು, ಮರಾಠಿ ಚಲನಚಿತ್ರಗಳು ಅಸ್ಪಶ್ಯತೆ ಮತ್ತು ಶೋಷಣೆಯ ವಿರುದ್ಧದ ಕಥನಗಳನ್ನು ಯಶಸ್ವಿಯಾಗಿ ಸಿನೆಮಾ ಆಗಿಸಿದ್ದಾರೆ. ಕನ್ನಡದಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಸುಮಾರು 60-70 ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ರವರ ‘ಭಕ್ತಚೇತ’ ಮತ್ತು ನಂತರ ಬಂದ ‘ಹೇಮಾವತಿ’, ‘ಎಲ್ಲಿಂದಲೋ ಬಂದವರು’ ‘ಬೂತಯ್ಯನ ಮಗ ಅಯ್ಯು’ ಸಿನೆಮಾಗಳು ಪ್ರಭಾವಿಸಿವೆ. ಆ ನಂತರದ ದಿನಗಳಲ್ಲಿ ಬಂದ ತುಂಡು ಭೂಮಿಗಾಗಿ ಹೋರಾಡಿದ ‘ಚೋಮನದುಡಿ’ ನಮ್ಮ ನೆನಪಿನಾಳದಲ್ಲಿದೆ. ಇದನ್ನು ಹೊರತು ಪಡಿಸಿದರೆ ಇತ್ತೀಚೆಗೆ ಬಂದ ‘ಕಾಂತಾರ’ ಸಿನೆಮಾ ಭೂ ಹೀನರ ಭೂ ಹೋರಾಟದ ಕಥನವೇ ಆಗಿದ್ದರೂ ದೈವಗಳ ಆರಾಧನೆ ಕಡೆಯೇ ತಿರುಗಿಸಿದ್ದರಿಂದ ಭೂ ಹೋರಾಟ ನಗಣ್ಯವಾಯಿತು. ಹಾಗೆಯೇ ಬಂದ ಇನ್ನೊಂದು ಮಹತ್ವದ ಸಿನೆಮಾ ‘ಕಾಟೇರಾ’ ಕೂಡ ಅತ್ಯಂತ ಪ್ರಭಾವ ಬೀರಿದ ಸಿನೆಮಾ. ನಾನು ಈಗ ಹೇಳ ಹೊರಟಿದ್ದು ‘ಲ್ಯಾಂಡ್ ಲಾರ್ಡ್’ ಸಿನೆಮಾದ ಬಗ್ಗೆ. ಇದರ ಅರ್ಥ ‘ಭೂ ಮಾಲೀಕ’. ಹಾಗೆ ನೋಡಿದರೆ ಇಲ್ಲಿ ಯಾರು ಕೂಡ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಭೂಮಿಗೇ ಭೂಮಿಯೇ ಮಾಲಿಕ. ಆದರೆ ಭೂಮಿಯ ಒಡೆತನ, ಕೃಷಿಯ ಸಾಗುವಳಿ ಬದುಕುವವರ ವಿಶ್ವಾಸ ಹೆಚ್ಚಿಸುತ್ತದೆ. ಹೇಗೆಂದರೆ ಇನ್ನೊಬ್ಬರ ತೋಟ, ಗದ್ದೆ, ಜಮೀನುಗಳಲ್ಲಿ ಕೂಲಿ ಮಾಡುವುದೇ ಬದುಕಲ್ಲ; ತನಗೆ ಸಿಕ್ಕ ಅಥವಾ ಇರುವ ಭೂಮಿಯಲ್ಲೇ ಕೃಷಿ ಮಾಡುವ ಬದುಕು ಸ್ವಾಭಿಮಾನದ ಬದುಕು. ಆದರೆ ಭಾರತೀಯ ಸಮಾಜದಲ್ಲಿ ಮನುಸ್ಮತಿ ಸೃಷ್ಟಿಸಿದ ಅಸಮಾನತೆಯಿಂದಾಗಿ ಇಡೀ ಸಮಾಜವನ್ನು ಕತ್ತರಿಸಿ ಹೋಳು ಮಾಡಲಾಗಿದೆ. ಈ ನೆಲದಲ್ಲಿ ಭೂ ಹೀನರು, ಶೋಷಿತರು, ಅಸ್ಪಶ್ಯರು, ಶೂದ್ರರು... ಇವರೆಲ್ಲರಿಗೂ ಒಂದು ಆಶಾದಾಯಕ ಬೆಳಕು ಮೂಡಿದ್ದು ಅದು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಸ್ವತಃ ತಾನು ಅನುಭವಿಸಿ ಇದಕ್ಕೊಂದು ದೊಡ್ಡ ಪರಿಹಾರವನ್ನು ಸಂವಿಧಾನ ಮೂಲಕ ದೊರಕಿಸಿಕೊಟ್ಟಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಶೋಷಣೆಯ ಕೊಂಡಿಗಳನ್ನು ಕಳಚುವ ನಿರಂತರ ಪ್ರಯತ್ನ ಅನೇಕ ನಾಯಕರಿಂದ ನಡೆದಿದೆ. ಸ್ವತಃ ನೊಂದ ಜನರು ಕೂಡ ತನ್ನ ಕ್ಷೀಣ ಧ್ವನಿಯಿಂದಲೂ ಅಬ್ಬರದ ಧ್ವನಿಯಿಂದಲೂ ಇದಕ್ಕೆ ಪರಿಹಾರ ಕೇಳಲಾಗಿದೆ. ಆದರೆ ಒಂದು ಸಮುದಾಯವನ್ನು ಅಸ್ಪಶ್ಯರೆಂದು ಆಚೆಗಿಟ್ಟು ಇವತ್ತಿಗೂ ಮುಟ್ಟಿಸಿಕೊಳ್ಳಲೂ ಹಿಂಜರಿಯುವವರೆಂದರೆ ಇನ್ನು ಉಳಿದಿದ್ದನ್ನು ನೀವೇ ಊಹಿಸಿಕೊಳ್ಳಿ. ದಲಿತರು ಎನ್ನುವ ಕಾರಣಕ್ಕಾಗಿಯೇ ಅವರ ಏಳಿಗೆಯನ್ನು ಸಹಿಸದೆ ಕೊಲ್ಲಲಾಗುತ್ತಿದೆ ಎಂದರೆ ಇದಕ್ಕಿಂತಲೂ ದುರಂತ ಇನ್ನೇನಿದೆ ಇಂತಹ ಸಮಾಜ ಹೇಗೆ ತಾನೆ ಏಳಿಗೆಯಾದೀತು...? ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳೊಬ್ಬಳು ಅನ್ಯ ಸಮುದಾಯದ ಹುಡುಗನನ್ನು ಮದುವೆಯಾದಳೆಂಬ ಕಾರಣಕ್ಕೆ ಆ ಮಗಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಚಿಗುರೊಡೆಯುತ್ತಿರುವುದನ್ನು ಕನಿಕರಿಸದೆ ಕೊಲ್ಲುವ ಕ್ರೌರ್ಯ ಮನುಷ್ಯ ಸಮಾಜದಲ್ಲಿ ಮಾತ್ರ ನಡೆಯುವಂತಹದ್ದು. ಇಂತಹ ಅಸಮಾನತೆಯ ಸಮಾಜಕ್ಕೆ ಕನಿಷ್ಠ್ಟ ಸಣ್ಣ ಅರಿವು ಮೂಡಿಸಲು ಕಥೆ, ಕವನ, ನಾಟಕ, ಸಿನೆಮಾಗಳು ನಿರಂತರವಾಗಿ ಈ ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸುತ್ತಿವೆ. ಹಾಗೇ ಅಂತಹ ಅರಿವನು,್ನ ಎಚ್ಚರವನ್ನು ಮೂಡಿಸುವ ದೊಡ್ಡ ಪ್ರಯತ್ನವೇ ಇತ್ತೀಚೆಗೆ ರಾಜ್ಯದಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವೆ ‘ಲ್ಯಾಂಡ್ ಲಾರ್ಡ್’. ಮನುಷ್ಯ ಯಾವುದರಿಂದಲಾದರೂ ಪ್ರಭಾವಕ್ಕೆ ಒಳಗಾಗಲೇ ಬೇಕು. ಜನ್ಮ ಕೊಟ್ಟ ತಂದೆ-ತಾಯಿಯಾಗಿರಬಹುದು. ತಾನು ಬದುಕಲು ಜೀವ ಪ್ರಾಣ ನೀಡುವ ಪಂಚಭೂತಗಳಾಗಿರಬಹುದು. ತಾನು ಬೆರೆತು ಬದುಕುತ್ತಿರುವ ಸಮಾಜ ಆಗಿರಬಹುದು. ಅಂತಿಮವಾಗಿ ಈ ಸಮಾಜದ ನೀತಿ, ಪ್ರೀತಿ, ಕರುಣೆ, ಭ್ರಾತೃತ್ವ, ಸಮಾನತೆಯ ಆಶಯಗಳನ್ನು ಕಟ್ಟಿಕೊಡುವ ‘ನೀನು ಬದುಕು, ಮತ್ತೊಬ್ಬರನ್ನು ಬದುಕಲು ಅವಕಾಶ ಮಾಡಿಕೊಡು’ ಎನ್ನುವುದು. ಇದು ಈ ದೇಶದ ಸಂವಿಧಾನದ ಶ್ರೇಷ್ಠ ಆಶಯವೂ ಆಗಿದೆ. ಇಂತಹ ಆಶಯಗಳನ್ನು ಹೊತ್ತ ಈ ದೇಶದಲ್ಲಿ ಎಷ್ಟೇ ದೊಡ್ಡವನಾಗಿರಲಿ, ಎಷ್ಟೇ ಸಾಮಾನ್ಯನಾಗಿರಲಿ ಅವರಿಬ್ಬರಿಗೂ ಒಂದೇ ಕಾನೂನು. ಈ ಸಿನೆಮಾದಲ್ಲಿ ಒಂದು ಮುಖ್ಯವಾದ ಘಟನೆ ಬರುತ್ತದೆ. ತಮಗೆ ದಕ್ಕಿದ ಎರಡು ಎಕರೆ ಜಮೀನನ್ನು ಯಾವುದೋ ಕಾರಣಕ್ಕೆ ಜಮೀನ್ದಾರರಿಗೆ ಬರೆದುಕೊಟ್ಟಿದ್ದು ಆ ನಂತರದ ದಿನಗಳಲ್ಲಿ ಈ ಚಿತ್ರದ ನಾಯಕ ರಾಚಯ್ಯ ತನ್ನ ಜಮೀನಿನಲ್ಲಿ ಕೃಷಿ ಮಾಡಿ ಸ್ವಾಭಿಮಾನದಿಂದ ಜೀವನ ಮಾಡಲು ಹೋರಾಡುತ್ತಾನೆ. ಆಗ ಆತನಿಗೆ ಇನ್ನೆಷ್ಟು ದಿನ ಈ ಅವಮಾನ, ಹಿಂಸೆ, ಗುಲಾಮಗಿರಿತನ... ಇವೆಲ್ಲದರಿಂದಲೂ ಮುಕ್ತವಾಗಲು ಅಕ್ಷರದಿಂದ ಮಾತ್ರ ಸಾಧ್ಯ ಎಂದು ಅರಿತು ತನ್ನ ಮಗಳನ್ನು ಶಾಲೆಗೆ ಸೇರಿಸುತ್ತಾನೆ. ಮೇಲ್ವರ್ಗದ ಮಕ್ಕಳು ಕೂಡ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಅಂತಿವವಾಗಿ ಪರೀಕ್ಷೆಯಲ್ಲಿ ಉತ್ತೀರ್ಣಳಾದವಳು ಕೂಲಿಕಾರನ ಮಗಳು. ‘ವಿದ್ಯೆ ಓದುಗನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಮಗಳು ಓಡೋಡಿ ಬಂದು ತಂದೆ ತಾಯಿಯ ಜೊತೆ ಈ ಖುಷಿಯನ್ನು ಹಂಚಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿ ಊರಿನಲ್ಲಿ ದೇವರ ಉತ್ಸವ ನಡೆಯುತ್ತಿರುತ್ತದೆ. ಆಗ ದೇವರ ಸೀರೆ ಗಾಳಿಗೆ ಹಾರಿದಾಗ ಅದನ್ನು ಈ ಹುಡುಗಿ ಹಿಡಿದು ದೇವರ ಮೇಲೆ ಹಾಕಿ ದೇವರನ್ನು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಕೆಳಜಾತಿಯವರು ದೇವರನ್ನು ಮುಟ್ಟಿ ಮೈಲಿಗೆಯಾಯಿತು ಎನ್ನುವ ಕಾರಣಕ್ಕೆ ಜಮೀನ್ದಾರ ಮತ್ತು ಊರಿನ ನಾಯಕರು ಸೇರಿ ಶಿಕ್ಷೆ ನೀಡುತ್ತಾರೆ. ಏನೆಂದರೆ ನಿನ್ನ ಮಗಳು ವಿದ್ಯೆ ಕಲಿಯುವುದು ನಿಲ್ಲಿಸಬೇಕು. ಇಲ್ಲ ಹತ್ತು ಏಟಿಗೆ ದೇವರ ಕಂಬ ಉರುಳಿಸಬೇಕೆಂದು. ತನ್ನ ಮಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದೆಂದು ಹತ್ತು ಏಟಿಗೆ ದೇವರ ಕಂಬವನ್ನು ಉರುಳಿಸಿ ತನ್ನ ಮಗಳನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಅವಳ ತಂದೆ. ಕೂಲಿಕಾರನ ಶ್ರಮದ ಶಕ್ತಿ, ನೈತಿಕ ಸಿಟ್ಟು ಒಂದೇ ಸಾರಿಗೆ ಜಮೀನ್ದಾರರನ್ನು ಅಲುಗಾಡಿಸುತ್ತದೆ. ಹೀಗಿರುವಾಗ ಈ ಹುಡುಗಿ ದೇವರು ಮುಟ್ಟಿದ್ದು ಮತ್ತು ತೇರು ಮೈಲಿಗೆಯಾಗಿದೆಯೆಂದು ರಾತ್ರೋರಾತ್ರಿ ತೇರು ಮತ್ತು ದೇವರನ್ನು ಸುಟ್ಟು ಹಾಕುತ್ತಾರೆ. ಇಲ್ಲಿ ಸುಟ್ಟಿದ್ದು ದೇವರನ್ನಲ್ಲ; ಮನುಷ್ಯನ ನಂಬಿಕೆ ಮತ್ತು ವಿಶ್ವಾಸವನ್ನು. ಹಾಗೆಯೇ ಏಕಕಾಲದಲ್ಲಿ ಭಾಗ್ಯಾ ಎಸ್.ಐ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ರಾಚಯ್ಯ ತನ್ನ ಮತ್ತು ತನ್ನ ಸಮುದಾಯದವರ ಭೂಮಿಗಾಗಿ ಹೋರಾಟ ಮಾಡುತ್ತಿರುತ್ತಾರೆೆ. ಪೂ.ಚಂತೇ ರವರು ಹೇಳಿದ ಹಾಗೇ ‘ಹೋರಾಟವಿಲ್ಲದೆ ಯಾವುದನ್ನೂ ಪಡೆದುಕೊಳ್ಳಲು ಸಾಧ್ಯವಿಲ’್ಲ ಎನ್ನುವ ಮಾತು ಈ ಸಂದರ್ಭ ನೆನಪಿಸುತ್ತದೆ. ನಮ್ಮ ಸಂವಿಧಾನ ಎಲ್ಲರಿಗೂ ಸಮತೆಯಿಂದ, ಸಮಾನತೆಯಿಂದ, ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಅದಕ್ಕೆ ಒಂದು ಉದಾಹರಣೆ ಎಂದರೆ ಭಾಗ್ಯಾ ಎನ್ನುವ ಹೆಣ್ಣುಮಗಳಿಗೆ ಓದಿ ಸರಕಾರಿ ನೌಕರಿ ಪಡೆದು ಊರಿನ ಮಾನ ಪ್ರಾಣದ ಜೊತೆಗೆ ಸಂವಿಧಾನದ ಆಶಯವನ್ನು ತಿಳಿಸುವ ಹಂಬಲವಿರುತ್ತದೆ. ಇದಕ್ಕೆ ತನ್ನ ಪೋಷಕರಾದಂತಹ ರಾಚಯ್ಯ ಮತ್ತು ನಿಂಗವ್ವರವರೇ ನಿದರ್ಶನ. ಅಂದು ಬಾಬಾ ಸಾಹೇಬರ ಕನಸು ಹಿಂದೂ ಕೋಡ್ ಬಿಲ್ ಜಾರಿಗೆ ಬರಬೇಕು ಎನ್ನುವುದು. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಒಂದೊಂದೇ ಅಂಶಗಳು ಸಂವಿಧಾನದೊಳಗೆ ಸೇರಿದ ಕಾರಣ ಇಂದು ಒಬ್ಬ ದಿಟ್ಟ ಹೆಣ್ಣುಮಗಳು ತನ್ನನ್ನು ತಾನು ಕಾಪಾಡಿಕೊಳ್ಳಲು, ಸಮಾಜದ ಅಸ್ಮಿತೆಯನ್ನು ಉಳಿಸಲು, ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಗಂಡ ಸತ್ತ ನಂತರ ಹೆಣ್ಣನ್ನು ವಿಧವೆ ಮಾಡುವ ಶಾಸ್ತ್ರ ಬಂದಾಗ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಬಂದಿದೆ ಅಲಂಕಾರ. ಅವಳಿಗ್ಯಾಕೆ ಈ ಕಟ್ಟುಪಾಡು ಎನ್ನುವ ಸಂದೇಶ ಮತ್ತು ತನ್ನ ಮಗಳನ್ನು ಬಸವಿ ಮಾಡಲು ಹೊರಟಾಗ ದಿಟ್ಟತನದಿ ಕತ್ತಿ ಮಸೆದು ಹೋರಾಟಕ್ಕೆ ನಿಲ್ಲುವ ಆಕೆಯ ಸ್ಥೈರ್ರ ಮೆಚ್ಚುವಂಹತದ್ದು. ಇಲ್ಲಿ ಸಂವಿಧಾನವನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ ಹೆಸರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್! ಪ್ರಜಾಪ್ರಭುತ್ವ ಎನ್ನುವ ಅಂಶವೇ ಪ್ರಜೆಗಳಿಗೆ ಇರುವ ದಿಟ್ಟ ಅಸ್ತ್ರ. ಅನಾದಿಕಾಲದಿಂದಲೂ ಭೂಮಿಗಾಗಿ ಕೂಲಿಕಾರ್ಮಿಕರು ಹೋರಾಡುತ್ತಲೇ ಬರುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಬೆವರು ಹರಿಸಿಯೂ ಗೊತ್ತು, ಮಿತಿ ಮೀರಿ ತನ್ನ ಸಮುದಾಯ ಮತ್ತು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಪ್ರತಿರೋಧ ಒಡ್ಡುವ ಸಾಮರ್ಥ್ಯವೂ ಇದೆ. ಆದರೂ ರಾಚಯ್ಯ ನಿಮ್ಮ ಮಕ್ಕಳಿಗೆ ನೆತ್ತರು ಬಸಿಯುವ ಆಯುಧಗಳನ್ನು ಕೊಡಬೇಡಿ ಅಕ್ಷರ ಕಲಿಯುವ ಬಳಪ ಪೆನ್ನು ನೀಡಿರಿ ಎನ್ನುವ ಸಂದೇಶ ಸಾರ್ವಕಾಲಿಕವಾದದ್ದು. ಇಂತಹ ಚಿತ್ರಗಳನ್ನು ಬೆಂಬಲಿಸಬೇಕು ಮತ್ತು ಆ ಆಶಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಇಡೀ ಚಿತ್ರದಲ್ಲಿ ‘ಭೂಹೀನರಿಗೆ ಭೂಮಿಯೂ ಬೇಕು. ಸ್ವಾಭಿಮಾನದಿಂದ ಬದುಕುವ ಅಕ್ಷರವೂ ಬೇಕು’. ಈ ಎರಡು ಸಂದೇಶವನ್ನು ಹೇಳುತ್ತದೆ ‘ಲ್ಯಾಂಡ್ ಲಾರ್ಡ್’. ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ. ಇದನ್ನೇ ಸಂವಿಧಾನ ಎಂದು ಹೇಳುತ್ತೇವೆ. ಇಡೀ ಸಿನೆಮಾದಲ್ಲಿ ಎಲ್ಲಾ ಪಾತ್ರಗಳು ನೈಜತೆಯಿಂದ ಕೂಡಿದ್ದು ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದರೂ, ಮಗಳು ಭಾಗ್ಯಾ ಇಡೀ ಸಿನೆಮಾದ ಆಶಯಗಳ ರೂಪಕದಂತೆ ಎದ್ದು ಕಾಣುತ್ತಾಳೆ. ಪ್ರಥಮ ಸಿನೆಮಾ ಆದರೂ ಈಕೆಯ ನೈಜ ನಟನೆ ಚಿತ್ರಕ್ಕೆ ಜೀವ ತುಂಬಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಿನೆಮಾಕ್ಕೆ ಒಳ್ಳೆಯ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳು ಇವೆ. ಕನ್ನಡಿಗರು ಇಂತಹ ಸಿನೆಮಾಗಳನ್ನು ಗೆಲ್ಲಿಸಬೇಕು. ಈಗ ಸರಕಾರ ತೆರಿಗೆ ವಿನಾಯಿತಿ ಕೊಟ್ಟಿದ್ದರಿಂದ ಎಲ್ಲರೂ ಥಿಯೇಟರಿಗೆ ಹೋಗಿ ಇಂತಹ ಕನ್ನಡ ಸಿನೆಮಾಗಳನ್ನು ಗೆಲ್ಲಿಸುವಂತಾಗಲಿ. ► ಸರಕಾರಕ್ಕೆ ಮನವಿ ಲ್ಯಾಂಡ್ ಲಾರ್ಡ್ ಸಿನೆಮಾದಲ್ಲಿ ಒಳ್ಳೆಯ ಸಾಮಾಜಿಕ ಸಂದೇಶವಿದೆಯೆಂದು ಕನ್ನಡಿಗರು ಮತ್ತು ಸಿನೆಮಾ ಪ್ರಿಯರು ನೋಡುವಂತೆ ಮಾಡಿರುವುದು ‘ಮಾನ್ಯ ಮುಖ್ಯಂತ್ರಿಗಳಾದ ಸಿದ್ಧಾರಾಮಯ್ಯ’ನವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಅಭಿನಂದಿಸುತ್ತೇನೆ. ಹಾಗೆಯೇ ಅವರಿಗೊಂದು ಮನವಿಯನ್ನೂ ಸಹ ಮಾಡುತ್ತೇನೆ. ಅದೆಂದರೆ, ಈ ನಾಡಿನ ಶೋಷಿತರು ಮತ್ತು ದಲಿತರಿಗೆ ಇವತ್ತಿಗೂ ಅಂಗೈ ಅಗಲ ಜಾಗ ಸಿಕ್ಕಿಲ್ಲ. ಪಿಟಿಸಿಎಲ್ ಆಕ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಭೂ ಹೀನರಿಗೆ ಭೂಮಿ ಸಿಗುವಂತೆ ತಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕಾಗಿ ವಿನಂತಿ. ಕಳೆದ ಐದು ದಶಕಗಳಿಂದ ಈ ನಾಡಿನ ನೊಂದವರಿಗೆ ಅರಿವು ಮತ್ತು ಎಚ್ಚರವನ್ನು ಮೂಡಿಸಿದ ದಲಿತ ಸಂಘರ್ಷ ಸಮಿತಿ ಹೆಂಡ ಬೇಡ, ಭೂಮಿ ಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇವತ್ತಿಗೂ ಭೂ ಸುಧಾರಣೆ ನೀತಿಯಿಂದಲೂ ಭೂ ವಂಚಿತರಿಗೆ ಭೂಮಿ ದಕ್ಕಿಲ್ಲ. ಆದ್ದರಿಂದ ಪಿಟಿಸಿಎಲ್ ಆಕ್ಟ್ ಅನ್ನು ಬಲಗೊಳಿಸಿ ಪ್ರಬಲವಾಗಿ ಜಾರಿಗೊಳಿಸುವ ಮೂಲಕ ಭೂಹೀನರ ಕನಸನ್ನು ನನಸು ಮಾಡಲೇಬೇಕು. ಇದು ಪ್ರೀತಿಪೂರ್ವಕ ಒತ್ತಾಯ. ಮುಖ್ಯಮಂತ್ರಿಗಳಿಗೆ ಇಂತಹ ವಿಷಯಗಳ ಬಗ್ಗೆ ದೊಡ್ಡ ಜವಾಬ್ದಾರಿ ಇದೆ ಎಂದು ಗೊತ್ತಿದೆ. ರಾಚಯ್ಯನಂತಹ ಲಕ್ಷಾಂತರ ಭೂ ಹೀನರಿಗೆ ಭೂಮಿ ಸಿಗುವಂತಾದರೆ ದಲಿತರಿಗೆ ಅದು ದೊಡ್ಡ ಆಸರೆಯಾಗಿರುತ್ತದೆ. ತಾನು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದಲ್ಲದೆ ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಲು ಕಾರಣವಾಗುತ್ತದೆ. ಇದರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಿದಂತಾಗುತ್ತದೆ.
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಣಿಪುರ | ನಾಗಾ-ಕುಕಿ ಸಮುದಾಯಗಳ ನಡುವೆ ಮತ್ತೆ ಘರ್ಷಣೆ: ಹಲವು ಮನೆಗಳಿಗೆ ಬೆಂಕಿ
ಇಂಫಾಲ್: ಮಣಿಪುರದಲ್ಲಿ ನಾಗಾ-ಕುಕಿ ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಹಲವು ಸಶಸ್ತ್ರ ಬಂಡುಕೋರರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ಉಖ್ರುಲ್ ಜಿಲ್ಲೆಯಲ್ಲಿ ನಡೆದಿದೆ. ಮಧ್ಯರಾತ್ರಿಯ ಹೊತ್ತಿನಲ್ಲಿ ಲಿಟಾನ್ ಸರೈಯಖಾಂಗ್ ಗ್ರಾಮದಲ್ಲಿ ಎರಡೂ ಸಮುದಾಯಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲೆಯ ಅಧಿಕಾರಿಯೊಬ್ಬರು, “ಘಟನೆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಪರಿಸ್ಥಿತಿ ಇನ್ನೂ ಪ್ರಕ್ಷುಬ್ಧವಾಗಿಯೇ ಉಳಿದಿದೆ” ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ದುಷ್ಕರ್ಮಿಗಳು ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು ಸೆರೆಯಾಗಿದೆ. ಮುಸುಕುಧಾರಿ ಬಂಡುಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದೂ ಈ ವೀಡಿಯೊದಲ್ಲಿ ಸೆರೆಯಾಗಿದೆ. ಲಿಟಾನ್ ಸರೈಯಖಾಂಗ್ ಗ್ರಾಮದಲ್ಲಿ ಕುಕಿ ಸಮುದಾಯ ಬಾಹುಳ್ಯವಿದ್ದರೆ, ಉಖ್ರುಲ್ ಜಿಲ್ಲೆಯಲ್ಲಿ ತಾಂಗ್ಖುಲ್ ನಾಗಾ ಸಮುದಾಯದ ಉಪಸ್ಥಿತಿ ಇದೆ. ಮಣಿಪುರದಲ್ಲಿ ತಾಂಗ್ಲುಖ್ ಅತಿ ದೊಡ್ಡ ನಾಗಾ ಬುಡಕಟ್ಟು ಸಮುದಾಯವಾಗಿದೆ. ಪ್ರಕ್ಷುಬ್ಧ ಸ್ಥಿತಿಯ ಹಿನ್ನೆಲೆಯಲ್ಲಿ ಮಹಾದೇವ್, ಲಂಬುಯಿ, ಶಾಂಗ್ಕಾಯಿ, ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಲಿಟಾನ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರೇ ಗಮನಿಸಿ, 10 ದಿನಗಳ ಕಾಲ ನಿರ್ಬಂಧವಿರಲಿದೆ
ಮಾಂದಲಪಟ್ಟಿ ರಸ್ತೆ ದುರಸ್ತಿ ಕಾಮಗಾರಿ ಸದ್ಯದಲ್ಲೇ ನಡೆಯಲಿದ್ದು ಅಂದಾಜು 10 ದಿನಗಳ ಕಾಲ ಪ್ರವಾಸಿಗರಿಗೆ ಬಂದ್ ಆಗಿರಲಿದೆ. ಬಳಿಕ ಅರಣ್ಯ ಇಲಾಖೆ ಜೀಪ್ ಅಲ್ಲದೇ ಇತರ ವಾಹನಗಳ ಸಂಚಾರಕ್ಕೆ ಅವಕಾಶ, ಸಮಯ ನಿಗದಿ ಮತ್ತಿತರ ವಿಚಾರಗಳ ಕುರಿತು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಕೇಂದ್ರ ಸಚಿವ ಜೋಶಿ ಕೈಯಲ್ಲಿ ಗಾಳಿಪಟದ ದಾರ - ಬಾಯಲ್ಲಿ ’ಆಕಾಶ ಇಷ್ಟೇ ಯಾಕಿದೆಯೋ’ ಸ್ವರ
International Kite Festival : ಗಾಳಿಪಟ ಹಾರಿಸಿ, ’ಆಕಾಶ ಇಷ್ಟೇ ಯಾಕಿದೆಯೋ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಡಿದ್ದಾರೆ. ಧಾರವಾಡ ಸಂಸದರು ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖ್ಯಾತ ಗಾಯಕ ಸೋನು ನಿಗಮ್, ಗಾನ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ತಂಡದಿಂದ ವಿಶೇಷ ಸಂಗೀತೋತ್ಸವ ಅಭಿಮಾನಿಗಳನ್ನು ನಲಿಸಿತು.
ಮಾನ್ವಿ ಪೊಲೀಸರ ಕಾರ್ಯಾಚರಣೆ: 24 ಗಂಟೆಗಳಲ್ಲಿ ಕಾರು ಕಳ್ಳರ ಬಂಧನ
ಮಾನ್ವಿ: ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ನೀರಮಾನ್ವಿ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತಾದಿಗಳ ಕಾರು, ಮೊಬೈಲ್ಗಳು ಹಾಗೂ ನಗದು ಹಣ ಸೇರಿ ಸುಮಾರು ₹15 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಾನ್ವಿ ಪೊಲೀಸರು ಕೇವಲ 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಭಕ್ತಾದಿಗಳು ತಮ್ಮ ಕಾರುಗಳು ಹಾಗೂ ಇತರ ವಸ್ತುಗಳು ಕಳ್ಳತನವಾಗಿರುವ ಕುರಿತು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಂಧನೂರು ಡಿ.ವೈ.ಎಸ್.ಪಿ ಹಾಗೂ ಮಾನ್ವಿ ಪೊಲೀಸ್ ಠಾಣೆಯ ಪಿ.ಐ. ಸೋಮಶೇಖರ್ ಕೆಂಚರೆಡ್ಡಿ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಯಿತು. ಎ.ಎಸ್.ಐ. ಸುಗಪ್ಪಗೌಡ, ಬಸವನಗೌಡ, ಹುಸೇನ್ಸಾಬ್, ಡೇವಿಡ್, ಬಸವರಾಜ್, ಚರಣರಾಜ್ ಹಾಗೂ ರಾಮಣ್ಣ ಅವರನ್ನು ಒಳಗೊಂಡ ತಂಡವು ತೀವ್ರ ತನಿಖೆ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಬಂಧಿತರಿಂದ ಕಳ್ಳತನಗೊಂಡ ಕಾರು, ಮೊಬೈಲ್ಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಡಿ.ಜೆ. ವಿಶ್ವನಾಥ್ (ಕೋನಾಪುರ್ಪೇಟೆ), ಶರಣಬಸವ (ಹಿರೇಕೊಟ್ನೇಕಲ್) ಹಾಗೂ ಮೌನೇಶ್ (ಹಿರೇಕೊಟ್ನೇಕಲ್) ಎಂದು ಗುರುತಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮಾನ್ವಿ ಪೊಲೀಸರ ತ್ವರಿತ ಕ್ರಮ ಹಾಗೂ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Panipuri Business: ಭಾರತದ ಬಹುತೇಕ ನಗರಗಳಲ್ಲಿ ಪಾನಿಪುರಿ ಪ್ರಸಿದ್ಧ ಚಾಟ್ಸ್ನಲ್ಲಿ ಒಂದಾಗಿದೆ. ಇದಕ್ಕೆ ವಿದೇಶಗಳಲ್ಲೂ ಕೂಡ ಹೆಚ್ಚಿನ ಬೇಡಿಗೆ ಇದೆ. ಇದನ್ನು ಗಮನಿಸಿಯೇ ಕರ್ನಾಟಕದ ಬೆಂಗಳೂರು ಟೆಕ್ಕಿ ದಂಪತಿಯೊಂದು ಲಂಡನ್ನಲ್ಲಿ ಪಾನಿಪುರಿ ಮಾರಾಟಕ್ಕೆ ಇಳಿದು ತಿಂಗಳಿಗೆ ಕೋಟಿ.. ಕೋಟಿ.. ರೂಪಾಯಿ ಹಣ ಸಂಪಾದನೆ ಮಾಡುತ್ತಿದೆ. ಹಾಗಾದ್ರೆ ಅಲ್ಲಿ ಒಂದು ಪ್ಲೇಟ್ಗೆ ಎಷ್ಟು ದರ ಇದೆ ಎನ್ನುವ ಸಂಪೂರ್ಣ
Gold Price Today: ಇಂದು ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ, ನಿಮ್ಮೂರಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಇಂದು ಸೋಮವಾರ ಫೆಬ್ರವರಿ 9 ರಂದು ಬೆಳ್ಳಿ ಮತ್ತು ಬಂಗಾರದ ದರದಲ್ಲಿ ಮತ್ತೆ ಗರಿಷ್ಠ ಪ್ರಮಾಣದ ಭರ್ಜರಿ ಏರಿಕೆ ದಾಖಲಿಸಿದೆ. ಈ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಯಾರೆಲ್ಲ ಈ ಲೋಹಗಳ ಖರೀದಿಗೆ ಮುಂದಾಗಿದ್ದರೋ ಅವರಿಗೆ ಬ್ರೇಕ್ ಬಿದ್ದಂತಾಗಿದೆ. ಹೂಡಿಕೆದಾರರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ದರ
ದೆಹಲಿಯಲ್ಲಿ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಹಾವಳಿ ಜಾಸ್ತಿಯಾಗಿದ್ದು, ಇತ್ತೀಗಷ್ಟೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಖಲಿಸ್ತಾನಿ ಪರವಾದ ಬರಹಗಳನ್ನು ನಗರದಲ್ಲಿ ಬರೆದು ಹುಚ್ಚಾಟ ಮೆರೆದಿದ್ದರು. ಇದೀಗ ಮತ್ತೆ ಈ ಹುಚ್ಚಟವನ್ನು ಮುಂದುವರೆಸಿರುವ ಇವರು ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದು, ಇದರಲ್ಲಿ ಖಲಿಸ್ತಾನಿ ಪರವಾದ ಘೋಷಣೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಪಾರ್ಲಿಮೆಂಟ್ ಮೇಲೆಯೂ ಬಾಂಬ್ ಹಾಕುವ ಬೆದರಿಕಗಳನ್ನು ಹಾಕಿದ್ದು, ಖಲಿಸ್ತಾನಿ ಪರವಾದ ಪ್ರಚೋದನಕಾರಿ ಹೇಳಿಕೆಗಳು ಸೇರಿದಂತೆ ರಾಷ್ಟ್ರೀಯ ನಾಯಕರ ಶತ್ರುಗಳು ಎಂದು ಉಲ್ಲೇಖಿಸಿ ಇ-ಮೇಲ್ ಸಂದೇಶಗಳನ್ನು ಕಳುಹಿಸಿದ್ದಾರೆ. ಸದ್ಯ, ರಕ್ಷಣಾ ಸಿಬ್ಬಂದಿಗಳು ತುರ್ತು ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
Uttar Pradesh | ಉದ್ಯಮಿಯ ಪುತ್ರನಿಂದ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಅಡ್ಡಾದಿಡ್ಡಿ ಚಾಲನೆ: ಪಾದಚಾರಿಗಳಿಗೆ ಢಿಕ್ಕಿ
ಕಾನ್ಪುರ (ಉತ್ತರ ಪ್ರದೇಶ): ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾರ ಪುತ್ರ ಲ್ಯಾಂಬೋರ್ಗಿನಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ, ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಢಿಕ್ಕಿ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿನ ವಿಐಪಿ ರಸ್ತೆಯಲ್ಲಿ ನಡೆದಿದೆ. ರವಿವಾರ ಮಧ್ಯಾಹ್ನ ನಡೆದಿರುವ ಈ ಘಟನೆಯಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದು, ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಲ್ಯಾಂಬೋರ್ಗಿನಿ ರೆವುಯೆಲ್ಟೊ ಕಾರನ್ನು ಭಾರಿ ವೇಗದಲ್ಲಿ ಚಲಾಯಿಸಲಾಗುತ್ತಿತ್ತು ಹಾಗೂ ಕಾರನ್ನು ಚಲಾಯಿಸುತ್ತಿದ್ದ ಶಿವಂ ಮಿಶ್ರಾಲ ಪಾನಮತ್ತನಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಶ್ರೀವಾಸ್ತವ, “ರವಿವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ಈ ಅಪಘಾತ ಸಂಭವಿಸಿದೆ, ಉದ್ಯಮಿ ಕೆ.ಕೆ.ಮಿಶ್ರಾರ ಪುತ್ರ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಐಷಾರಾಮಿ ಕಾರು ನಿಯಂತ್ರಣ ಕಳೆದುಕೊಂಡು ರೇವ್-3 ಮಾಲ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಜನರು ಹಾಗೂ ಹಲವು ವಾಹನಗಳಿಗೆ ಢಿಕ್ಕಿ ಹೊಡೆಯಿತು. ಇದರಿಂದ ಸ್ಥಳದಲ್ಲಿ ಭಯದ ವಾತಾವರಣ ಮನೆ ಮಾಡಿತು” ಎಂದು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಮೊದಲ ಆಟೋರಿಕ್ಷಾಗೆ ಢಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಗೆ ಢಿಕ್ಕಿ ಹೊಡೆದಿದೆ. ಅಫಘಾತದ ತೀವ್ರತೆಗೆ ಮೋಟರ್ ಬೈಕ್ ಚಾಲಕ ಸುಮಾರು 10 ಅಡಿ ದೂರ ಹಾರಿ ಬಿದ್ದದ್ದಾರೆ. ತದನಂತರ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಬೈಕ್ವೊಂದಕ್ಕೆ ಢಿಕ್ಕಿ ಹೊಡೆದು ಅದನ್ನು ಎಳೆದೊಯ್ದಿದೆ. ಈ ಘಟನೆಯಲ್ಲಿ ತೌಫೀಕ್ ಅಹ್ಮದ್ ಎಂಬ ವ್ಯಕ್ತಿಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಕಾರು ನನಗೆ ಢಿಕ್ಕಿ ಹೊಡೆದಾಗ, ನನ್ನ ಮೋಟರ್ ಬೈಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ನಾನೂ ಕೂಡಾ ಅಲ್ಲಿಯೇ ನಿಂತಿದ್ದೆ ಎಂದು ತೌಫೀಕ್ ಅಹ್ಮದ್ ಹೇಳಿದ್ದಾರೆ. ಇತರರೂ ಕೂಡಾ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈ ಐಷಾರಾಮಿ ಕಾರಿನ ಮೌಲ್ಯ ಸುಮಾರು 10 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗಿದ್ದು, ಈ ಕಾರು ವಾಯುವ್ಯ ದಿಲ್ಲಿಯ ರೋಹಿಣಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದೆ. ಈ ಅಪಘಾತದಲ್ಲಿ ಕಾರಿಗೂ ಗಂಭೀರ ಸ್ವರೂಪದ ಹಾನಿಯಾಗಿದ್ದು, ಸದ್ಯ ಪೊಲೀಸರ ವಶದಲ್ಲಿದೆ.
ವಿಧಾನಸೌಧದ ಪಕ್ಕದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಧಾರ್ಮಿಕ ಸೌಧ: 27 ಕೋಟಿ ವೆಚ್ಚದಲ್ಲಿ ನಿರ್ಮಾಣ, ಏನಿದರ ವಿಶೇಷತೆ
ಬೆಂಗಳೂರಿನಲ್ಲಿ ಶೀಘ್ರದಲ್ಲೇ ಧಾರ್ಮಿಕ ಸೌಧ ನಿರ್ಮಾಣ ಆಗಲಿದೆ. ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಇದೀಗ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಧಾರ್ಮಿಕ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನೂತನವಾಗಿ ನಿರ್ಮಾಣ ಆಗಲಿರುವ ಧಾರ್ಮಿಕ ಸೌಧ 38241 ಚದರ ಅಡಿ ವಿಸ್ತೀರ್ಣ ಇರಲಿದೆ. ಇದಕ್ಕೆ 27.70 ಕೋಟಿ ಇದಕ್ಕೆ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ರಾಮಾಂಜೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 919 ಚ.ಮೀ ಜಮೀನನ್ನು ಧಾರ್ಮಿಕ ಸೌಧ ನಿರ್ಮಾಣಕ್ಕೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು.
ಮತ್ತೆ ಏರು ಹಾದಿಯಲ್ಲಿ ಚಿನ್ನ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ರವಿವಾರ ಮತ್ತೆ 5,000 ಡಾಲರ್ಗಳಿಗೆ ಬಂದು ನಿಂತಿದೆ. ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರ ಅಲ್ಪ ಏರಿಕೆ ಕಂಡಿತ್ತು. ಇದೀಗ ಸೋಮವಾರ ಮತ್ತೆ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ರವಿವಾರ ಮತ್ತೆ 5,000 ಡಾಲರ್ಗಳಿಗೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಕುಸಿತ ಇಂದಿನ ಏರಿಕೆಗೆ ಪ್ರಮುಖ ಕಾರಣವಾಗಿದೆ. ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ಭಾವನೆಗಳಿಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಒಂದೆಡೆ ಹೂಡಿಕೆದಾರರು ಲಾಭ ಗಳಿಕೆಯಲ್ಲಿ ಮಾರಾಟ ಮಾಡಿದರೆ, ಮತ್ತೊಂದೆಡೆ ದೇಸಿ ಮಾರುಕಟ್ಟೆಯಲ್ಲಿ ಜನರು ಖರೀದಿಗೆ ಇಳಿದ ಕಾರಣ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ನಂತರ ಚಂಚಲತೆ ಪ್ರದರ್ಶಿಸುತ್ತಿದೆ. ಫೆಬ್ರವರಿ 9ರ ವಿವರಗಳ ಪ್ರಕಾರ 24 ಕ್ಯಾರೆಟ್ನ ಶುದ್ಧ ಚಿನ್ನ ಪ್ರತಿ ಗ್ರಾಂಗೆ 15,884 ರೂ. ಮತ್ತು 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14,560 ರೂ. ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 11,913 ರೂ.ಗೆ ಬಂದು ನಿಂತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ (ಫೆಬ್ರವರಿ 9ರಂದು) ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,884 (+224) ರೂ. ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,913 (+168) ರೂ. ಬೆಲೆಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಏರಿಕೆಯಾಗಿತ್ತು. ಇದೀಗ ಸೋಮವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 15 ರೂ.ನಷ್ಟು ಏರಿದ ಬೆಳ್ಳಿ ಕೆಜಿಗೆ 3,00,000 ಲಕ್ಷ ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಅಹ್ಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,889 (+224) ರೂ., 22 ಕ್ಯಾರೆಟ್ ಚಿನ್ನದ ದರ 14,565 (+205) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,982 (+251) ರೂ., 22 ಕ್ಯಾರೆಟ್ ಚಿನ್ನದ ದರ 14,650 (+230) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,889 (+224) ರೂ., 22 ಕ್ಯಾರೆಟ್ ಚಿನ್ನದ ದರ 14,565 (+205) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ.
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ; ಆರೋಪಿಗಳು ಪರಾರಿ
ಬೆಳ್ತಂಗಡಿ: ಸ್ಕೂಟರ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಲು ಯತ್ನಿಸಿ, ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫೆಬ್ರವರಿ 9ರಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಸ್ಕೂಟರ್ನಲ್ಲಿ ಸಂತೆಕಟ್ಟೆಗೆ ಬಸ್ ಹಿಡಿಯಲು ತೆರಳುತ್ತಿದ್ದ ವೇಳೆ, ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಕೆಯ ಸ್ಕೂಟರ್ಗೆ ಅಡ್ಡಗಟ್ಟಿ ಕಾರಿನೊಳಗೆ ಎಳೆದು ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕಿ ಬೊಬ್ಬೆ ಹೊಡೆದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ತಪ್ಪಿಸಿಕೊಂಡಿದ್ದಾಳೆ. ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಚೂರಿಯಿಂದ ಬಾಲಕಿಯ ಕೈ ಹಾಗೂ ಬೆರಳಿಗೆ ಚುಚ್ಚಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.
ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ. ಯಾವುದೇ ಸಕಾರಾತ್ಮಕ, ಆರ್ಥಿಕ, ಸಾಮಾಜಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ, ಜನಾಂಗ ದ್ವೇಷ ಮತ್ತು ಮೌಢ್ಯ, ಕಂದಾಚಾರಗಳನ್ನೇ ಬಂಡವಾಳ ಮಾಡಿಕೊಂಡ ಪಕ್ಷಕ್ಕೆ ಮತ್ತು ಅದು ನಂಬಿದ ಸಿದ್ಧಾಂತಕ್ಕೆ ಸೌಜನ್ಯದ, ಸಜ್ಜನಿಕೆಯ ಭಾಷೆ ಅರ್ಥವಾಗುವುದಿಲ್ಲ. ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಮತ್ತು ಬಿಜೆಪಿ ಸದಸ್ಯ ಸಿ.ಟಿ.ರವಿ ನಡುವಿನ ವಾಗ್ವಾದವನ್ನು ಗಮನಿಸಿದರೆ ಯಾರು ಏನೆಂಬುದು ಗೊತ್ತಾಗುತ್ತದೆ. ಸದನದಲ್ಲಿ ಚರ್ಚೆಯ ಮಧ್ಯ ನಸೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕಿಸಿದರು.ಅದು ಸಹಜ ರಾಜಕೀಯ ಟೀಕೆಯಾಗಿತ್ತು. ಪ್ರಧಾನಿ ಮೋದಿಯವರ ಬಗ್ಗೆ ಆಡಿದ ಮಾತು ಸದಭಿರುಚಿಯಿಂದ ಕೂಡಿರಲಿಲ್ಲ. ಆದರೆ ಅಸಂಸದೀಯ ಪದವನ್ನೇನೂ ಅವರು ಬಳಸಿರಲಿಲ್ಲ. ಇದನ್ನು ಕೇಳಿ ಸಹನೆ ಕಳೆದುಕೊಂಡ ಸಿ.ಟಿ.ರವಿ ‘ಪ್ರಧಾನಿಯವರನ್ನು ಟೀಕಿಸುವ ನಾಲಗೆ ಪಾಕಿಸ್ತಾನದ ನಾಲಗೆ’ ಎಂದು ತನಗೆ ತಿಳಿದಷ್ಟು ಮಾತಾಡಿದ್ದು ಕೋಲಾಹಲಕ್ಕೆ ಕಾರಣವಾಯಿತು. ನಸೀರ್ ಅಹ್ಮದ್ ಮಾತಿನ ಬಗ್ಗೆ ಸಿ.ಟಿ. ರವಿಗೆ ಕೋಪ ಬಂದಿದ್ದರೆ, ಅದಕ್ಕೆ ರಾಜಕೀಯವಾಗಿ ಮರು ಉತ್ತರ ನೀಡಬೇಕಿತ್ತು. ಟೀಕಿಸಲು ಸಾಕಷ್ಟು ವಿಷಯಗಳಿದ್ದವು. ಆದರೆ, ಮೆದುಳು ಇರಬೇಕಾದ ಜಾಗದಲ್ಲಿ ಇನ್ನೇನೋ ಇದ್ದರೆ ಅಸಭ್ಯ, ಕೊಳಕು ಮಾತುಗಳು ಬರುತ್ತವೆ. ಕೋಟಿ ರವಿ ಎಂದು (ಜನರ ಬಾಯಿಯಲ್ಲಿ ಇರುವ ಇನ್ನೊಂದು ಪದವನ್ನು ನಾನು ಇಲ್ಲಿ ಬರೆಯುವುದಿಲ್ಲ) ಚಿಕ್ಕಮಗಳೂರಿನ ಜನರು ಕರೆಯುವ ಸಿ.ಟಿ.ರವಿ ಹೊರಗೆ ಇಂಥ ಅಸಭ್ಯ ಮಾತುಗಳನ್ನು ಸಾಕಷ್ಟು ಆಡುತ್ತಾರೆ. ಆದರೆ ಇಂಥದೇ ಮಾತನ್ನು ಸದನದ ಒಳಗೂ ಬಳಸಿ ಸದನದ ಘನತೆಗೆ ಧಕ್ಕೆ ತಂದ ಉದಾಹರಣೆಗಳೂ ಇವೆ. ಕೆಲ ತಿಂಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗೆಗೂ ಅಸಭ್ಯ ಮಾತನ್ನು ಆಡಿ ಸಭಾಪತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೆಣ್ಣು ಮಕ್ಕಳ ಬಗ್ಗೆ ಆಡಬಾರದ ಮಾತು ಆಡಿದ ಕಾರಣಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪೀಕರ್ಗೆ ದೂರನ್ನು ನೀಡಿದ್ದರು. ನಸೀರ್ ಅಹ್ಮದ್ ಮಾತಿನ ಬಗ್ಗೆ ಆಕ್ಷೇಪವಿದ್ದರೆ, ನೇರವಾಗಿ ಹೇಳಬಹುದಿತ್ತು. ಆದರೆ, ನಸೀರ್ ಅಹ್ಮದ್ ಮುಸ್ಲಿಮ್ ಎಂಬ ಕಾರಣಕ್ಕಾಗಿ ಬೇಕಂತಲೇ ಪಾಕಿಸ್ತಾನದ ನಾಲಗೆ ಎಂದು ಟೀಕಿಸಿದರು. ಬಿಜೆಪಿ ಸದಸ್ಯರ ದೌರ್ಬಲ್ಯವೆಂದರೆ ಅವರಲ್ಲಿ ಅಧ್ಯಯನ ಶೀಲತೆ ವಿರಳ. ವಿರೋಧಿಗಳಿಗೂ ಪಾಕಿಸ್ತಾನಕ್ಕೂ ತಳಕು ಹಾಕಿ ಮಾತಾಡುವುದು ಅವರ ಚಾಳಿ. ರವಿ ಇಂಥ ಮಾತನ್ನು ಆಡಿದಾಗ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ಕೆ.ಎನ್ .ಹರಿಪ್ರಸಾದ್, ‘ರುಚಿಯಾದ ಬಿರಿಯಾನಿ ಸಿಗುತ್ತದೆ ಅಂದರೆ ಆ ನಾಲಗೆ ಪಾಕಿಸ್ತಾನಕ್ಕೂ ಹೋಗಿ ಬರುತ್ತದೆ’ ಎಂದು ಛೇಡಿಸಿದರು. ಪ್ರಧಾನಿ ಮೋದಿಯವರು ಯಾರಿಗೂ ಹೇಳದೇ ಪಾಕಿಸ್ತಾನಕ್ಕೆ ಹೋಗಿ ಆ ದೇಶದ ಅಧ್ಯಕ್ಷನೊಂದಿಗೆ ಬಿರಿಯಾನಿ ತಿಂದು ಬಂದ ಕತೆಯನ್ನು ನೆನಪಿಸಿದರು. ನಿಜ ಅವರಿಗೆ ಪಾಕಿಸ್ತಾನದ ಬಗ್ಗೆ ವಿಶೇಷ ಪ್ರೇಮ. ಸಿಂದಗಿಗೆ ಹೋಗಿ ಪಾಕಿಸ್ತಾನದ ಧ್ವಜ ಹಾರಿಸಿದವರು ಯಾರೆಂಬುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ತಾಲಿಬಾನ್ಗಲಿಗೆ ಸರಕಾರದ ಖಜಾನೆಯಿಂದ ಕೋಟ್ಯಂತರ ರೂಪಾಯಿ ನೀಡಿದವರು ಯಾರೆಂಬುದನ್ನು ಇಲ್ಲಿ ಹೇಳಬೇಕಾಗಿಲ್ಲ. ವಿಭಿನ್ನ ವಿಚಾರ ಧಾರೆಗಳಿಗೆ ಸೇರಿದ ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ಸಹಜ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುವವರಿಗೆ ಅದರಲ್ಲೂ ಶಾಸನ ಸಭೆಗಳ ಸದಸ್ಯರಾದವರಿಗೆ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸೌಜನ್ಯ ಇರಬೇಕಾಗುತ್ತದೆ. ಸೌಜನ್ಯ ಮಾತ್ರವಲ್ಲ ಅಸಂಸದೀಯ ಪದಗಳನ್ನು ಬಳಸಬಾರದೆಂಬ ಎಚ್ಚರವೂ ಇರಬೇಕಾಗುತ್ತದೆ. ಶಾಸನ ಸಭೆಗಳಿಗೆ ಹೊಸದಾಗಿ ಬರುವವರು ತಮ್ಮ ಧಿಮಾಕು,ಪಾಳೆಯಗಾರಿ ಭಾಷೆಗಳನ್ನು ಹೊರಗಿಟ್ಟು ಸದನವನ್ನು ಪ್ರವೇಶಿಸಬೇಕಾಗುತ್ತದೆ. ಬಹುತೇಕ ಮಂದಿ ಹೊಸಬರು ಸಹ ಶಾಸಕರನ್ನು ನೋಡಿ, ಅನುಭವಿಗಳ ಮಾತನ್ನು ಕೇಳಿ ಬದಲಾಗುತ್ತಾರೆ.ಬದಲಾಗದ ಉದ್ಧಟರ ಸಾಲಿನಲ್ಲಿ ಸಿ.ಟಿ. ರವಿಯಂಥವರು ಇರುತ್ತಾರೆ. ಈ ಉದ್ಧಟತನದ ವರ್ತನೆಗೆ ವೈಯಕ್ತಿಕ ವಾಗಿ ಅವರ ದುರಹಂಕಾರ ಮಾತ್ರವಲ್ಲ, ಅವರು ಬೆಳೆದು ಬಂದ ಸಂಘಟನೆಯೂ ಕಾರಣವಾಗಿರಬಹುದು. ಅವರ ಸಂಘಟನೆ ಒಬ್ಬೊಬ್ಬರಿಗೆ ಒಂದೊಂದು ಮುಖವಾಡ ಹಾಕಿರುತ್ತದೆ. ಸಿ.ಟಿ .ರವಿ ಹೀಗಾದರೆ ಇದಕ್ಕೆ ತದ್ವಿರುದ್ಧ್ದವಾಗಿ ಸುರೇಶ್ ಕುಮಾರ್ ಅಂಥವರು ಸರಳತೆ, ಸಜ್ಜನಿಕೆಯಿಂದ ಗಮನ ಸೆಳೆಯುತ್ತಾರೆ.ರವಿ ಅಂಥವರು ಉದ್ಧಟರಂತೆ ಕಾಣಿಸಿಕೊಳ್ಳುತ್ತಾರೆ. ಸಂಘಟನೆಗೆ ಇವರಿಬ್ಬರೂ ಬೇಕು. ಬೇಕಂತಲೇ ಸಂಘ ಪರಿವಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಿ.ಟಿ.ರವಿಯನ್ನು ವಿಧಾನ ಪರಿಷತ್ತಿಗೆ ತಂದು ಕೂರಿಸುತ್ತದೆ.ಈ ರವಿ ಈ ರೀತಿ ಮಾತಾಡಿದ್ದು ಇದೇ ಮೊದಲ ಸಲವಲ್ಲ. ಈತನ ಉದ್ಧಟತನವನ್ನು ಆತ ಶಾಸಕನಾಗುವ ಮುಂಚಿನಿಂದಲೂ ನೋಡುತ್ತಿರುವೆ. 2005ರಲ್ಲಿ ಬಾಬಾ ಬುಡನ್ಗಿರಿ ವಿವಾದವನ್ನು ಕೋಮುವಾದಿಗಳು ಹುಟ್ಟು ಹಾಕಿದಾಗ ಕೋಮು ಸೌಹಾರ್ದ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ಸೌಹಾರ್ದ ಸಮಾವೇಶವನ್ನು ನಡೆಸಿದ್ದವು. ಆಗ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದರು. ಆಗ ಅವರಿಗಾಗಿ ಸ್ಥಳೀಯ ಸರಕಾರಿ ಅತಿಥಿ ಗೃಹದಲ್ಲಿ (ಐಬಿ) ಕೊಠಡಿಯನ್ನು ಕಾಯ್ದಿರಿಸಿದಾಗ ಅದಕ್ಕಿಂತ ಮುಂಚೆ ಅಲ್ಲಿ ಹೋದ ರವಿ ಅಲ್ಲಿನ ಎಲ್ಲ ಕೋಣೆಗಳನ್ನು ಬುಕ್ ಮಾಡಿದ್ದ. ಸೌಹಾರ್ದ ವೇದಿಕೆಗೆ ಒಂದೂ ರೂಮ್ ಸಿಗದಂತೆ ಮಾಡಿದ್ದ. ಹೀಗಾಗಿ ನಿಡುಮಾಮಿಡಿ ಸ್ವಾಮಿಗಳು ಸೇರಿದಂತೆ ಎಲ್ಲ ಅತಿಥಿಗಳು ಹೋಟೆಲ್ನಲ್ಲಿ ಇರಬೇಕಾಗಿ ಬಂತು. ಇನ್ನೊಂದು ಉದಾಹರಣೆ ಅಂದರೆ ನಾನು ‘ಸೂರ್ಯೋದಯ’ ಪತ್ರಿಕೆಯ ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ನಾನು ಕೆಲಸ ಮಾಡುವ ಆ ಪತ್ರಿಕೆಯ ಮಾಲೀಕರಿಗೆ ಫೋನ್ ಮಾಡಿದ ರವಿ ನನ್ನ ಹೆಸರು ಹೇಳಿ ‘ನಿಮ್ಮ ಪತ್ರಿಕೆಯಲ್ಲಿ ನಕ್ಸಲಿಯರನ್ನು ನೇಮಕ ಮಾಡಿಕೊಂಡಿದ್ದೀರಿ’ ಎಂದು ಜೋರು ಮಾಡಿದ್ದ. ಶಾಸಕನಾಗಿ ಬಂದ ನಂತರವೂ ಈತ ಸುಧಾರಿಸಲಿಲ್ಲ. ಟಿ.ವಿ.ಚರ್ಚೆಯೊಂದರಲ್ಲಿ ಏನೇನೋ ಮಾತಾಡಲು ಹೋಗಿ ಆಗ ಕಮ್ಯುನಿಸ್ಟ್ ಶಾಸಕರಾಗಿದ್ದ ಜಿ.ವಿ.ಶ್ರೀ ರಾಮರೆಡ್ಡಿ ಅವರಿಂದ ಉಗಿಸಿಕೊಂಡಿದ್ದ. ಇದು ಮಾತ್ರವಲ್ಲ, ಐದು ವರ್ಷಗಳ ಹಿಂದೆ ಈತ ಸಚಿವನಾಗಿದ್ದಾಗ ಚಿಕ್ಕ ಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಂದರ್ಭದಲ್ಲಿ ಇದೇ ರೀತಿ ವರ್ತಿಸಿದ್ದ.ಆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ ಹೆಗ್ಗಡೆ ಅವರ ಬಗ್ಗೆ ಅಪಸ್ವರ ತೆಗೆದ. ವಿಠಲ್ ಹೆಗ್ಗಡೆ ಅವರನ್ನು ನಕ್ಸಲೀಯ ಎಂದು ಕರೆದುದು ಮಾತ್ರವಲ್ಲ ಆ ಸಮ್ಮೇಳನದಲ್ಲಿ ಭಾಗವಹಿಸಲು ನಿರಾಕರಿಸಿದ. ಅಷ್ಟೇ ಅಲ್ಲ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನಿಂದ ಚಿಕ್ಕ ಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ ಅನುದಾನ ಸಿಗದಂತೆ ತಡೆ ಹಿಡಿದ. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮನು ಬಳಿಗಾರ ಅವರು ಚಿಕ್ಕ ಮಗಳೂರು ಸಮ್ಮೇಳನಕ್ಕೆ ಹೋಗದಂತೆ ಅಡ್ಡಗಾಲು ಹಾಕಿದ. ಈ ಅವಾಂತರಕ್ಕೆ ಕಾರಣ ರವಿ ಎಂಬಾತ ನಂಬಿದ ಸಿದ್ಧಾಂತ ಅಂದರೆ ತಪ್ಪಿಲ್ಲ. ರವಿ ಮಾತ್ರವಲ್ಲ ಅದೇ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಕೆಲವು ಸಂಸದರು,ಶಾಸಕರು ಸದನದ ಒಳಗೆ ಮತ್ತು ಹೊರಗೆ ಆಡುವ ಮಾತುಗಳನ್ನು ಗಮನಿಸಿದರೆ ಈ ತಪ್ಪು ವೈಯಕ್ತಿಕವಾಗಿ ಅವರದು ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ರಾಜ ಪ್ರಭುತ್ವವನ್ನು ಇಷ್ಟಪಡುವ ಅವರ ಸಿದ್ಧಾಂತ ಇದಕ್ಕೆ ಕಾರಣವಲ್ಲದೇ ಬೇರೇನೂ ಅಲ್ಲ. ಮುಂಚೆ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಸಂಸತ್ತಿನ ಘನತೆಗೆ ಧಕ್ಕೆ ಬರದಂತೆ ಎಚ್ಚರ ವಹಿಸುತ್ತಿದ್ದರು. ಈಗಿನ ಇವರ ಪರಮೋಚ್ಚ ನಾಯಕ, ವಿಶ್ವಗುರು ಸದನದಲ್ಲಿ ಆಡುವ ಮಾತುಗಳನ್ನು ಅವಲೋಕಿಸಿದರೆ ಸಿ.ಟಿ. ರವಿ ಆಡುವ ಮಾತುಗಳು ಅಚ್ಚರಿ ಅನಿಸುವುದಿಲ್ಲ. ಇವರೆಲ್ಲ ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಮೂಲ ಪುರುಷರು ಅಂದರೆ ಅತಿಶಯೋಕ್ತಿಯಲ್ಲ. ಇಂಥ ಮಾತುಗಳನ್ನು ಆಡುವ ಮೂಲಕ ಇವರು ಭಾರತದ ಪ್ರಜೆಗಳಾದ ಮುಸಲ್ಮಾನರ ದೇಶ ಭಕ್ತಿಯನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತಾರೆ. ದೇಶದಲ್ಲಿ 18 ಕೋಟಿಯಷ್ಟಿರುವ ಮುಸಲ್ಮಾನರು ಇವರ ಕಿರಿಕಿರಿಯಿಂದ ಪ್ರತಿದಿನವೂ ತಮ್ಮ ದೇಶ ಭಕ್ತಿಯನ್ನು ಸಾಬೀತು ಪಡಿಸುತ್ತಲೇ ಇರಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಪಾಲ್ಗೊಳ್ಳದ , ಸ್ವಾತಂತ್ರ್ಯಾ ನಂತರ ಗಡಿಯಲ್ಲಿ ಶತ್ರು ಸೇನೆಯ ಜೊತೆಗೆ ಎಂದೂ ಹೋರಾಡದ, ಭಾರತೀಯ ರ ನಡುವೆ ಜಾತಿ, ಮತದ ವಿಷ ಬೀಜ ಬಿತ್ತುವ ಶಕ್ತಿಗಳಿಂದ ಮುಸಲ್ಮಾನರು, ಕ್ರೈಸ್ತರು, ದಲಿತರು ದೇಶ ಭಕ್ತಿಯ ಪಾಠ ಕಲಿಯಬೇಕಾಗಿ ಬಂದುದು ದೇಶದ ದುರಂತ. ತಲೆಯಲ್ಲಿ ಮೆದುಳೆಂಬುದು ಇದ್ದರೆ ಶಾಸನ ಸಭೆಗಳಿಗೆ ಚುನಾಯಿತರಾಗಿ ಬರುವವರು ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ. ಸಂಸತ್ ಭವನದಲ್ಲಿ ಹಾಗೂ ರಾಜ್ಯಗಳ ವಿಧಾನ ಮಂಡಲಗಳ ಗ್ರಂಥಾಲಯಗಳಲ್ಲಿ ಇರುವ ಅತ್ಯಂತ ಅಪರೂಪದ ಉತ್ತಮ ಪುಸ್ತಕಗಳನ್ನು ಓದಬಹುದು. ಬಹುತೇಕ ಸದಸ್ಯರು ಇದರ ಸದುಪಯೋಗವನ್ನು ಮಾಡಿಕೊಳ್ಳುವುದಿಲ್ಲ. ಕೆಲವೇ ಕೆಲವರು ಜ್ಞಾನದ ಹಸಿವಿದ್ದವರು ಮಾತ್ರ ದಿನವಿಡೀ ಗ್ರಂಥಾಲಯ ಗಳಲ್ಲಿ ಕುಳಿತು ಓದುತ್ತಿರುತ್ತಾರೆ. ನಾನು ವಿಧಾನ ಸಭೆಯ ಕಲಾಪದ ವರದಿಗೆ ಹೋದಾಗ ರಮೇಶ್ ಕುಮಾರ್, ಭೂಪತಿ, ಜಿ.ವಿ.ಶ್ರೀ ರಾಮರೆಡ್ಡಿ, ಬಿ.ಆರ್.ಪಾಟೀಲರು ಗ್ರಂಥಾಲಯದಲ್ಲಿ ಓದುತ್ತ ಕುಳಿತಿದ್ದನ್ನು ಕಣ್ಣಾರೆ ಕಂಡಿರುವೆ. ಬಿ.ಕೆ.ಹರಿಪ್ರಸಾದ್ ವಿದ್ಯಾರ್ಥಿಯಾಗಿದ್ದಾಗ ಹೇಗಿದ್ದರೆಂಬುದು ಈಗ ಅಗತ್ಯವಿಲ್ಲ.ಆದರೆ ರಾಜ್ಯಸಭೆಗೆ ಹೋದ ನಂತರ ಗಂಭೀರವಾದ ಅಧ್ಯಯನದಿಂದ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಂಡರು.ಪ್ರತಿಯೊಂದು ವಿಷಯದ ಬಗ್ಗೆ ಮಾತಾಡುವ ಪಾಂಡಿತ್ಯವನ್ನು ಪಡೆದರು.ರವಿ ಮತ್ತು ಸುನೀಲ್ ಕುಮಾರರಂಥವರು ಇವರನ್ನು ಮಾದರಿಯಾಗಿಟ್ಟುಕೊಳ್ಳಬೇಕು.ಸದನದ ಭಾಷಣಕ್ಕೆ ವಾಟ್ಸ್ ಆ್ಯಪ್ ಯುನಿವರ್ಸಿಟಿಯನ್ನು ಅವಲಂಬಿಸಿ ಅಪಹಾಸ್ಯಕ್ಕೆ ಈಡಾಗಬಾರದು. ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ. ಅಂತಲೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನಿವೃತ್ತ ಸೇನಾಧಿಕಾರಿ ನರವಣೆ ಅವರು ಬರೆದ ಆತ್ಮಚರಿತ್ರೆಯ ಅಪ್ರಕಟಿತ ಪುಸ್ತಕವನ್ನು ಸದನದಲ್ಲಿ ತೋರಿಸಿ ಸವಾಲು ಹಾಕಿದಾಗ 56 ಇಂಚಿನ ಎದೆಯ ವಿಶ್ವ ಗುರು ಗಾಬರಿಯಾದರು. ರಾಷ್ಟ್ರಪತಿ ಅವರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಅವರು ಸದನಕ್ಕೆ ಬರಬೇಕಾಗಿತ್ತು. ಆದರೆ ಬರಲಿಲ್ಲ. ಯಾಕೆಂದರೆ ಅವರ ಬಳಿ ಉತ್ತರವಿರಲಿಲ್ಲ. ಮುಖವೂ ಇರಲಿಲ್ಲ. ಅವರ ಬದಲಿಗೆ ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಸಮಜಾಯಿಷಿ ನೀಡಿ ಪ್ರಧಾನಿಯವರ ಜೀವಕ್ಕೆ ಅಪಾಯವಿದ್ದುದರಿಂದ ಸದನಕ್ಕೆ ಬರಲಿಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಇದಕ್ಕೆ ಲೇವಡಿ ಮಾಡಿದ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಪ್ರಧಾನಿಗೆ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಗತಿಯೇನು ಎಂದು ಛೇಡಿಸಿದರು.ಹೀಗಾಗಿ ರಾಷ್ಟ್ರಪತಿ ಅವರಿಗೆ ವಂದನೆ ಸೂಚಿಸುವ ನಿರ್ಣಯ ಪ್ರಧಾನಿ ಉತ್ತರವಿಲ್ಲದೇ ಅಂಗೀಕಾರವಾಯಿತು. ವರ್ಷದಿಂದ ವರ್ಷಕ್ಕೆ ಸಂಸತ್ತಿನ ಗುಣಮಟ್ಟ ಕುಸಿಯುತ್ತಲೇ ಇದೆ. ಮೊದಲು ಜನಪರ ಹೋರಾಟಗಾರರು ಸದನದಲ್ಲಿ ಇರುತ್ತಿದ್ದರು. ಈಗ ರಿಯಲ್ ಎಸ್ಟೇಟ್, ಮೈನಿಂಗ್ ಉದ್ಯಮಿಗಳು, ವಂಚಕ. ಕಾರ್ಪೊರೇಟ್ ದನಿಗಳು ಸದನದಲ್ಲಿ ತುಂಬಿದ್ದಾರೆ.ಹೀಗಾಗಿ ಅಧ್ಯಯನಶೀಲ ಸಂಸದರು ಹಾಗೂ ಶಾಸಕರು ತುಂಬಾ ಕಡಿಮೆ. ಬಿಜೆಪಿ, ಕಾಂಗ್ರೆಸ್ ಹೀಗೆ (ಎಡಪಕ್ಷಗಳನ್ನು ಹೊರತು ಪಡಿಸಿ)ಎಲ್ಲ ಪಕ್ಷಗಳಲ್ಲೂ ಇದೇ ಪರಿಸ್ಥಿತಿ. ಅಂತಲೇ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಯೊಂದಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಎದ್ದು ನಿಂತು ಉತ್ತರಿಸಬೇಕಾಗುತ್ತದೆ. ಆದರೂ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ , ಸತೀಶ್ ಜಾರಕಿಹೊಳಿ ಮೊದಲಾದ ಕೆಲವರು ಕಾಂಗ್ರೆಸ್ನ ಭರವಸೆಯ ನಾಯಕರಾಗಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರು ಜನಪರ ಕಾಳಜಿ, ಅಧ್ಯಯನ ಶೀಲತೆ, ಸಂವಿಧಾನ ಬದ್ಧತೆಯನ್ನು ಉಳಿಸಿ,ಬೆಳೆಸಿ ಕೊಂಡರೆ ಸದನದ ಘನತೆಯೂ ಹೆಚ್ಚುತ್ತದೆ.
Bihar | ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 70 ವಿದ್ಯಾರ್ಥಿಗಳು ಅಸ್ವಸ್ಥ: ಪೋಷಕರಿಂದ ಆಕ್ರೋಶ
ಮಧೇಪುರ: ಮಾಧೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಹುಗಢ ಗ್ರಾಮದ ಕರು ಟೋಲಾದ ಅಪ್ಗ್ರೇಡ್ ಮಿಡಲ್ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಎಲ್ಲಾ ಮಕ್ಕಳನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಕ್ಕಳ ಆರೋಗ್ಯ ಸ್ಥಿರವಾಗಿದ್ದರೂ, ಒಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಊಟ ಮಾಡಿದ ಸ್ವಲ್ಪ ಸಮಯದ ನಂತರ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಂಡು ಬಂದಿದೆ. ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತಂಕಗೊಂಡ ಪೋಷಕರು ಆಸ್ಪತ್ರೆಯಲ್ಲಿ ಜಮಾಯಿಸಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಗೆ ಮಧ್ಯಾಹ್ನದ ಊಟವನ್ನು ಸರಕಾರೇತರ ಸಂಸ್ಥೆಯು ವಿತರಿಸುತ್ತಿದೆ. ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಆಹಾರದ ಗುಣಮಟ್ಟ, ಪೂರೈಕೆ ಮತ್ತು ವಿತರಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Memoir of MM Naravane : ಸಂಸತ್ತಿನಲ್ಲಿ ಭಾರೀ ಹಂಗಾಮಕ್ಕೆ ಕಾರಣವಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಪುಸ್ತಕವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ, ಬಿಜೆಪಿ ನಾಯಕರಲ್ಲಿ ಕಾಡಲಾರಂಭಿಸಿದೆ. ಕೇಂದ್ರ ರಕ್ಷಣಾ ಇಲಾಖೆಯಿಂದ ಅನುಮತಿ ಸಿಗುವ ಮುನ್ನವೇ, ಈ ಪುಸ್ತಕವನ್ನು ಪ್ರಿಂಟ್ ಮಾಡಲಾಗಿತ್ತೇ ಎನ್ನುವುದು ಪ್ರಶ್ನೆಯಾಗಿದೆ.
ದರ ಏರಿಕೆ ಹಂಗಾಮ: ಖಾಲಿ ಟ್ರಂಕ್ ಜೊತೆ ನಮ್ಮ ಮೆಟ್ರೋ ಪ್ರಯಾಣಕ್ಕೆ ಮುಂದಾದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿಚಾರ ಇದೀಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಹಾಗಿದ್ದರೂ ಹೊಸ ದರ ನಿಗದಿ ಸಮಿತಿಗಾಗಿ ಬಿಜೆಪಿ ಆಗ್ರಹ ಮಾಡಿದೆ. ಅದರಲ್ಲೂ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಪ್ರತಿಭಟನೆ ನಡೆಸಿದ್ದಾರೆ. ದರ ಏರಿಕೆ ಹಂಗಾಮದ ನಡುವೆ ಖಾಲಿ ಟ್ರಂಕ್ ಜೊತೆಗೆ ನಮ್ಮ ಮೆಟ್ರೋದಲ್ಲಿ ಅವರು ಪ್ರಯಾಣ ಮಾಡಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

26 C