SENSEX
NIFTY
GOLD
USD/INR

Weather

25    C
... ...View News by News Source

ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ಗಳ ಯೋಜನೆ ಮಂಜೂರು ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಮಾಹಿತಿ

Karnataka National Highways: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ ವೇ ಜಾಲ ಹೆಚ್ಚಾಗುತ್ತಲಿದೆ. ಇನ್ನೂ ಇಲ್ಲಿ ಕಳೆದ 5 ಹಣಕಾಸು ವರ್ಷದಲ್ಲಿ ಎಷ್ಟು ಕಿಲೋ ಮೀಟರ್ ಯೋಜನೆಗಳಿಗೆ ಮಂಜೂರು ಮಾಡಲಾಗಿದ ಎನ್ನುವ ಬಗ್ಗೆ ಸಾರಿಗೆ ಸಚಿವ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯದಲ್ಲಿ ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಯಾಗಿ ಇಲ್ಲಿ

ಒನ್ ಇ೦ಡಿಯ 4 Dec 2025 5:03 pm

ಸೆ.13 ರಂದು ʼಮಹಿಳಾ ನೌಕರರ ದಿನಾಚರಣೆʼ ಘೋಷಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಸರಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮ

ವಾರ್ತಾ ಭಾರತಿ 4 Dec 2025 5:00 pm

ಪಚ್ಚನಾಡಿ | ಶಾಲಾ ವಿದ್ಯಾರ್ಥಿಗಳಿಂದ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಮಂಗಳೂರು, ಡಿ.4: ವಿದ್ಯಾರ್ಥಿ ದೆಸೆಯಲ್ಲೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಂದೆಲ್ ಎಂಜಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಪಚ್ಚನಾಡಿ ಪೌರ ಕಾರ್ಮಿಕರಿಗೆ ಆಹಾರ ದಿನಸಿ ಹಾಗೂ ದೈನಂದಿನ ಸೊತ್ತುಗಳ ಕಿಟ್ಗಳನ್ನು ಬುಧವಾರ ವಿತರಿಸಿದರು. ಪಚ್ಚನಾಡಿ ಬಸವಲಿಂಗಪ್ಪನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಂಜಿಸಿ ಶಾಲಾ ವಿದ್ಯಾರ್ಥಿಗಳು ಸ್ಥಳೀಯ ಪೌರ ಕಾರ್ಮಿಕರ ಕುಟುಂಬಗಳ ಜೊತೆ ಸಂಗೀತ ಮತ್ತು ನೃತ್ಯ ಮಾಡಿ ಸಂಭ್ರಮಿಸಿದರು.ಈ ವೇಳೆ ವಿದ್ಯಾರ್ಥಿಗಳು 50 ಕುಟುಂಬಗಳಿಗೆ ಆಹಾರ ದಿನಸಿ, ದಿನಬಳಕೆ ಸೊತ್ತಿನ ಕಿಟ್ ವಿತರಿಸಿ, ತಮ್ಮ ಶೈಕ್ಷಣಿಕ ಜೀವನ ಯಶಸ್ವಿಗೆ ಪೌರ ಕಾರ್ಮಿಕರಿಂದ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭ ಸಮಾಜ ಸೇವಕ ಮೋಹನ ಪಚ್ಚನಾಡಿ, ಮಾನವ ಹಕ್ಕುಗಳ ಸಮಿತಿಯ ಉಪಾಧ್ಯಕ್ಷೆ ಲೋಲಾಕ್ಷಿ ಸಾಲ್ಯಾನ್, ನಿತಿನ್ ರಾಜ್, ಚಂದ್ರಿಕಾ, ಶಿಕ್ಷಕಿಯರಾದ ಹೇಮಲತಾ, ಜಿ.ಜಿ. ಅಬ್ರಾಹಂ, ಅನಿಷಾ, ಅಮಿತ್, ಬಸವಲಿಂಗಪ್ಪ ನಗರದ ಶ್ರೀ ಸತ್ಯ ಸಾರಮಣಿ ದೈವಸ್ಥಾನ ಸಮಿತಿಯ ಸದಸ್ಯರು ಹಾಗೂ ಪಚ್ಚನಾಡಿಯ ಪೌರ ಕಾರ್ಮಿಕರ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Dec 2025 4:59 pm

ಮಂಗಳೂರು | ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಡಿ.4: ಪ್ರಸಕ್ತ (2025-26ನೇ) ಸಾಲಿನಲ್ಲಿ National Council for Teacher Educationನಿಂದ ಮಾನ್ಯತೆ ಪಡೆದಿರುವ ಸರಕಾರಿ/ಅರೆ ಸರಕಾರಿ/ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿ ಬಿಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ 25,000 ರೂ. ವಿಶೇಷ ಪ್ರೋತ್ಸಾಹಧನವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುವುದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಲ್ಪಸಂಖ್ಯಾತರ ಸಮುದಾಯದ ಬಿಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳ ಸಹಿತ ಸೇವಾಸಿಂಧು ಪೋರ್ಟಲ್ ( https://sevasindhuservices.karnataka.gov.in ) ಮೂಲಕ ಡಿ.31ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ಸೈಟ್ https://dom.karnataka.gov.in ಸಹಾಯವಾಣಿ: 8277799990 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 4 Dec 2025 4:57 pm

ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ: ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್ 4 : ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಬೆಂಗಳೂರು ವತಿಯಿಂದ ಮಹಿಳಾ ಸಮ್ಮೇಶನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳಾ ನೌಕರರಿಗೆ

ಒನ್ ಇ೦ಡಿಯ 4 Dec 2025 4:56 pm

ಮಂಗಳೂರು | ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಮಂಗಳೂರು, ಡಿ.4 ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಪ್ರಸಕ್ತ (2025-26ನೇ) ಸಾಲಿನ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ) ವಿವಿಧ ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್ಎಸ್ಪಿ)ಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನ (ನ್ಯಾಷನಲ್ ಓವರ್ಸೀಸ್ ಸ್ಕಾಲರ್ಶಿಪ್), ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ (IIT , IIM , IIIT , NIT , IISER , AIIMS , NLU , INI & IuSLA) ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಒಂದು ಸಲಕ್ಕೆ 2 ಲಕ್ಷ ರೂ. ಪ್ರೋತ್ಸಾಹಧನ ಜಿಎನ್ಎಂ ಮತ್ತು ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು 2026ರ ಜನವರಿ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ಸೈಟ್ https://dom.karnataka.gov.in/   ಅಥವಾ ಸಹಾಯವಾಣಿ: 8277799990 ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 4 Dec 2025 4:55 pm

ಮಂಗಳೂರು | ಪೇಜಾವರ ವಿಶ್ವೇಶತೀರ್ಥರ ಬಗ್ಗೆ ಪ್ರಬಂಧ ಸ್ಪರ್ಧೆ

ಮಂಗಳೂರು, ಡಿ.4: ಪೇಜಾವರ ವಿಶ್ವೇಶತೀರ್ಥರ ಪುಣ್ಯತಿಥಿಯ ಸಲುವಾಗಿ ಡಿ.29ರಂದು ಜರಗಲಿರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಕಾಲೇಜು ಹಾಗೂ ಮುಕ್ತ ಎಂಬ ಎರಡು ಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಬಂಧವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯಬಹುದಾಗಿದೆ. ಪ್ರಬಂಧದ ವಿಷಯ : ಕಾಲೇಜು ವಿಭಾಗ - ರಾಷ್ಟ್ರ ಮತ್ತು ಧರ್ಮ ವಿಶ್ವೇಶತೀರ್ಥರ ಚಿಂತನೆ ನಾನು ಕಂಡಂತೆ. ಮುಕ್ತ ವಿಭಾಗ - ವಿಶ್ವೇಶತೀರ್ಥರು, ಯತಿವರ್ಯರು ವಿಶ್ವ ಮಾನ್ಯರು, ಅವಲೋಕನ-ಅನುಸಂಧಾನ. ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು ಡಿ.24ರೊಳಗೆ ಸ್ವವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೋಡಿಯಾಲ್ಬೈಲ್, ಮಂಗಳೂರು ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Dec 2025 4:52 pm

ಡಾಲರ್ ಎದುರು 90 ರೂಪಾಯಿಗಿಂತ ಕೆಳಕ್ಕೆ ಕುಸಿದ ರೂಪಾಯಿ ಮೌಲ್ಯ: ಈಗ ಅವರ ಉತ್ತರವೇನು ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ಹೊಸದಿಲ್ಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್‌ಗೆ 90 ರೂ. ಗಿಂತ ಹೆಚ್ಚು ಇಳಿಕೆಯಾಗಿದೆ. ಇದರ ಬೆನ್ನಿಗೇ, ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ರೂಪಾಯಿ ಮೌಲ್ಯ ಕುಸಿತವನ್ನು ಟೀಕಿಸುತ್ತಿದ್ದವರು ಈಗೇನು ಉತ್ತರಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಗುರುವಾರ ಬೆಳಗ್ಗೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 28 ಪೈಸೆಯಷ್ಟು ಕುಸಿದು, ಪ್ರತಿ ಡಾಲರ್‌ಗೆ ಸಾರ್ವಕಾಲಿಕ 90.43 ರೂ.ಗೆ ಇಳಿಕೆಯಾಗಿದೆ. ಈ ಕುರಿತು ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರು ಪ್ರಿಯಾಂಕಾ ಗಾಂಧಿಯನ್ನು ಪ್ರಶ್ನಿಸಿದಾಗ, ಕೆಲ ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಡಾಲರ್ ಮೌಲ್ಯ ಹೆಚ್ಚಿದ್ದಾಗ ಈ ಜನ ಏನು ಹೇಳಿದ್ದರು? ಅವರ ಉತ್ತರವೇನು? ನನ್ನನ್ನೇಕೆ ಕೇಳುತ್ತಿದ್ದೀರಿ? ಅವರನ್ನೇ ಕೇಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ಮಹತ್ವದ ಹಣಕಾಸು ನೀತಿ ಸಮಿತಿಯ ಸಭೆಗೂ ಮುನ್ನ ಆಮದುದಾರರಿಂದ ಡಾಲರ್‌ ಗಾಗಿನ ಬೇಡಿಕೆ ಅಧಿಕಗೊಂಡಿರುವುದರಿಂದ ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗಿದೆ ಎನ್ನಲಾಗಿದೆ.

ವಾರ್ತಾ ಭಾರತಿ 4 Dec 2025 4:50 pm

ಮಂಗಳೂರು | ಕಲ್ಕೂರಾ ಪ್ರತಿಷ್ಠಾನದಿಂದ ಕ್ಯಾಲೆಂಡರ್ ಬಿಡುಗಡೆ

ಮಂಗಳೂರು, ಡಿ.4: ಕಲ್ಕೂರ ಪ್ರತಿಷ್ಠಾನದಿಂದ ಮುದ್ರಿಸಲಾದ 2026ನೇ ಇಸವಿಯ ಸಾಂಪ್ರದಾಯಿಕ ಕ್ಯಾಲೆಂಡರನ್ನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠದ ವೃಂದಾವನದ ಸಾನಿಧ್ಯದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಮೈಸೂರಿನ ಶ್ರೀನಿವಾಸ್ ಪ್ರಸಾದ್, ಯುಗಪುರುಷದ ಭುವನಾಭಿರಾಮ ಉಡುಪ, ರಾಘವೇಂದ್ರ ಮಠದ ಅನಂತ ಆಚಾರ್ಯ, ಕಲ್ಕೂರ ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಹಂದೆ, ಅಶ್ವತ್ಥಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Dec 2025 4:49 pm

Mangaluru | ಯುನಿವೆಫ್ ಕುದ್ರೋಳಿ ಶಾಖಾ ವತಿಯಿಂದ ಸೀರತ್ ಮಾಸಾಚರಣೆ

ಮಂಗಳೂರು, ಡಿ.4: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಅಂಗವಾಗಿ ಯುನಿವೆಫ್ ಕುದ್ರೋಳಿ ಶಾಖಾ ವತಿಯಿಂದ ಸೀರತ್ ಮಾಸಾಚರಣೆಯ ಉದ್ಘಾಟನೆಯು ಕುದ್ರೋಳಿ ಜಾಮಿಯಾ ಮಸೀದಿಯ ಬಳಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಸೀರತ್ ಮಾಸಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಯುನಿವೆಫ್ ಕುದ್ರೋಳಿ ಶಾಖಾಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನ ಸಂಚಾಲಕ ಯು.ಕೆ.ಖಾಲಿದ್ ದಿಕ್ಸೂಚಿ ಭಾಷಣಗೈದರು. ಮಾಜಿ ಕಾರ್ಪೊರೇಟರ್ ಗಳಾದ ಅಬೂಬಕರ್ ಕುದ್ರೋಳಿ, ಶಂಸುದ್ದೀನ್ ಎಚ್.ಬಿ.ಟಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾಹಿನ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ಮುಹಮ್ಮದ್ ಆಸಿಫ್ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಶೇಖ್ ಅಹ್ಮದ್, ಫಾರೂಕ್ ಹುಸೈನ್, ಅಬೂಬಕರ್ ಉಪಸ್ಥಿತರಿದ್ದರು. ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಲ್ಲಿ ಅಭಿಯಾನದ ಕಾರ್ಯಕ್ರಮವು ಡಿ.19ರಂದು ಕುದ್ರೋಳಿಯ ಎ 1ಭಾಗ್ನಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಒಂದು ತಿಂಗಳ ಕಾಲ ಮೊಹಲ್ಲಾ ಸಭೆ, ಮಹಿಳೆಯರಿಗಾಗಿ ಕಾರ್ಯಕ್ರಮ, ಪುಸ್ತಕ ವಿತರಣೆ, ಮಕ್ಕಳ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಕುದ್ರೋಳಿ ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ವಾರ್ತಾ ಭಾರತಿ 4 Dec 2025 4:47 pm

ನ್ಯೂರೋಚಿಪ್ ಬಳಸಿದರೆ ಜೈವಿಕ ಡ್ರೋನ್‌ ಗಳಾಗಿ ಬದಲಾಗುವ ಪಾರಿವಾಳಗಳು; ರಷ್ಯಾದ ಹೊಸ ಸಂಶೋಧನೆ!

ರಷ್ಯಾ ಮೂಲದ ಕಂಪೆನಿಯಾದ ‘ನೈರೀ’ ಪಾರಿವಾಳಗಳನ್ನು ಜೀವಂತ ಡ್ರೋನ್‌ ಗಳಾಗಿ ಬದಲಿಸುವ ಜೈವಿಕ ತಂತ್ರಜ್ಞಾನವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದೆ. ನೈರೀ, ರಷ್ಯಾದ ನರತಂತ್ರಜ್ಞಾನ ಕಂಪೆನಿಯಾಗಿದೆ. ಅದು ಪಾರಿವಾಳಗಳನ್ನು ಡ್ರೋನ್‌ ಗಳಾಗಿ ಪರಿವರ್ತಿಸುವ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಈ ಯೋಜನೆ ಅಂತಿಮ ಹಂತದಲ್ಲಿದ್ದು, ರಿಮೋಟ್ (ಜನವಸತಿಯಿಲ್ಲದ ಪ್ರದೇಶ) ಸ್ಥಳಗಳಲ್ಲಿ ಮೇಲ್ವಿಚಾರಣೆಗಾಗಿ ಶೀಘ್ರವೇ ಈ ಜೈವಿಕ ಡ್ರೋನ್‌ ಗಳನ್ನು ಬಳಸಲಾಗುವುದು ಎಂದು ತಿಳಿಸಿದೆ. ಪಾರಿವಾಳಗಳ ಮೆದುಳಿನಲ್ಲಿ ಚಿಪ್ ಜೀವಂತ ಪಾರಿವಾಳಗಳ ಮೆದುಳಿಗೆ ಚಿಪ್‌ ಗಳನ್ನು ಇಂಪ್ಲಾಂಟ್ ಮಾಡಲಾಗುತ್ತದೆ. ಈ ಜೈವಿಕ ಡ್ರೋನ್‌ ಪಾರಿವಾಳಗಳ ಹಾರಾಟದ ಗುಣಲಕ್ಷಣಗಳನ್ನು ಪರೀಕ್ಷಿಸುತ್ತಿರುವುದಾಗಿ ನೈರೀ ತನ್ನ ಬ್ಲಾಗ್‌ ಪೋಸ್ಟ್‌ ನಲ್ಲಿ ಹೇಳಿದೆ. ಈ ನ್ಯೂರೋಚಿಪ್ ಪರೀಕ್ಷೆ ಯಶಸ್ವಿಯಾದಲ್ಲಿ ಪಾರಿವಾಳಗಳನ್ನು ಮಾನವ-ಚಾಲಿತ ಡ್ರೋನ್‌ ಗಳನ್ನಾಗಿ ಪರಿವರ್ತಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಡ್ರೋನ್‌ ಗಳಂತೆ ಹಾರುವ ಪಕ್ಷಿಗಳು ಸಾಂಪ್ರದಾಯಿಕ ಡ್ರೋನ್‌ಗಳಂತೆಯೇ ಕಾರ್ಯನಿರ್ವಹಿಸುವ ಈ ಪಕ್ಷಿ ದ್ರೋಣ್‌ ಗಳು, ರಿಮೋಟ್ ಕಂಟ್ರೋಲ್‌ ನಲ್ಲಿ ಸೂಚಿಸಿದ ಹಾದಿಯಲ್ಲಿ ಹಾರಾಡುತ್ತದೆ. “ಬಯೋಡ್ರೋನ್ ಮತ್ತು ತರಬೇತಿ ಪಡೆದ ಪ್ರಾಣಿಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ, ಅವುಗಳಿಗೆ ತರಬೇತಿಯ ಅಗತ್ಯವಿರುವುದಿಲ್ಲ” ಎಂದು ಕಂಪೆನಿ ಹೇಳಿದೆ. ಮೆದುಳಿನ ನಿರ್ದಿಷ್ಟ ಜಾಗಗಳನ್ನು ಉತ್ತೇಜಿಸುವ ಮೂಲಕ ಸಂಶೋಧಕರು ಪಕ್ಷಿಯನ್ನು ಉದ್ದೇಶಿತ ದಿಕ್ಕಿನಲ್ಲಿ ಚಲಿಸುವಂತೆ ಮಾಡಬಹುದು. ಹೀಗೆ ವಿಜ್ಞಾನಿಗಳು ಬಯಸಿದ ಮತ್ತು ನಿರ್ದೇಶಿಸಿದ ಹಾದಿಯಲ್ಲಿ ಪಕ್ಷಿಗಳು ಚಲಿಸುತ್ತವೆ. ನಗರ ಪ್ರದೇಶಗಳಲ್ಲಿ ಬಳಕೆ ಕಾರ್ಯನಿರ್ವಹಿಸುವ ಸಮಯ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದಲ್ಲಿ ಜೈವಿಕ ಡ್ರೋನ್‌ಗಳು ಯಾಂತ್ರಿಕ ಡ್ರೋನ್‌ ಗಳನ್ನು ಮೀರಿಸುತ್ತವೆ. ಸಾರಿಗೆ ದಟ್ಟಣೆ ಇರುವ ನಗರದ ಪ್ರದೇಶಗಳಲ್ಲಿ ಪಾರಿವಾಳಗಳು ನ್ಯಾವಿಗೇಟ್ ಮಾಡಲು ಸಾಂಪ್ರದಾಯಿಕ ಡ್ರೋನ್‌ ಗಳಿಗಿಂತ ಹೆಚ್ಚು ಉಪಯುಕ್ತ ಎಂದು ಕಂಪೆನಿ ಹೇಳಿದೆ. ಪಕ್ಷಿಗಳು ಸಾಮಾನ್ಯ ಜೀವನವನ್ನು ನಡೆಸುತ್ತಿರುತ್ತವೆ. ಚಿಪ್‌ ನಿಂದ ಪಕ್ಷಿಗಳಿಗೆ ಯಾವುದೇ ಸಮಸ್ಯೆಯಾಗದು. ಪಕ್ಷಿಗಳು ಕೆಳಗೆ ಬೀಳುವ ಸಂಭವ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಪಕ್ಷಿಗಳು ಹಾರಾಡುವಂತೆಯೇ ಅವು ಹಾರಾಡುತ್ತವೆ ಎಂದು ಸಂಸ್ಥೆ ತಿಳಿಸಿದೆ. ಪಕ್ಷಿ ಡ್ರೋನ್ ಹೇಗೆ ಕೆಲಸ ಮಾಡುತ್ತದೆ? ಪಕ್ಷಿಯ ಹಿಂಭಾಗದಲ್ಲಿ ಜೋಡಿಸಲಾದ ಸ್ಟಿಮ್ಯುಲೇಟರ್‌ ಗೆ ಸಂಪರ್ಕಗೊಂಡಿರುವ ಎಲೆಕ್ಟ್ರೋಡ್‌ಗಳ ಮೂಲಕ ಪಕ್ಷಿಗೆ ಪ್ರಚೋದನೆ ನೀಡಿ ಎಡ ಅಥವಾ ಬಲಕ್ಕೆ ತಿರುಗುವಂತೆ ಮಾಡಬಹುದು. ಅದರ ಜೊತೆಗೆ ಇರುವ ಕಂಟ್ರೋಲರ್ ಸಂಕೇತಗಳನ್ನು ಕಳುಹಿಸುತ್ತದೆ. ಅದರಲ್ಲಿ ಪಕ್ಷಿ ಎಡಕ್ಕೆ ಅಥವಾ ಬಲಕ್ಕೆ ಹೋಗಲು ಬಯಸುತ್ತಿದೆ ಎನ್ನುವ ಸಂಕೇತ ಸಿಗುತ್ತದೆ. ಈ ವ್ಯವಸ್ಥೆಯಲ್ಲಿ ಜಿಪಿಎಸ್ ರಿಸೀವರ್ ಕೂಡ ಇರುತ್ತದೆ. ಅದು ಚಾಲಕರಿಗೆ ಪಕ್ಷಿಯ ಸ್ಥಳವನ್ನು ಗುರುತಿಸಲು ಮತ್ತು ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಪಕ್ಷಿಗಳ ಹಿಂಡನ್ನೇ ನಿಯಂತ್ರಿಸಬಹುದು ನೈರಿ ಹೇಳುವ ಪ್ರಕಾರ ನ್ಯೂರಲ್ (ನರ) ಇಂಟರ್‌ ಫೇಸ್ ಮೂಲಕ ಸಂಪೂರ್ಣವಾಗಿ ಪಕ್ಷಿಗಳ ಹಿಂಡನ್ನೇ ನಿಯಂತ್ರಿಸಬಹುದು, ಅವುಗಳಿಗೆ ಹೊಸ ಹಾರಾಟದ ದಿಕ್ಕನ್ನು ಸೂಚಿಸಬಹುದು. PJN-1 ಜೈವಿಕಡ್ರೋನ್‌ ದಿನವೊಂದಕ್ಕೆ 310 ಮೈಲಿಗಳಷ್ಟು ಹಾರಬಲ್ಲದು. ನಿರಂತರವಾಗಿ ಸೂರ್ಯನ ಬೆಳಕಿದ್ದರೆ ಪಕ್ಷಿ ವಾರಕ್ಕೆ ಸುಮಾರು 1850 ಮೈಲಿಗಳಷ್ಟು ದೂರ ಹಾರಬಲ್ಲದು ಎಂದು ಕಂಪನಿ ತಿಳಿಸಿದೆ. ಕಡಲ ಕೋಳಿಗಳಿಗೂ ಡ್ರೋನ್ ಸದ್ಯ ಸಂಸ್ಥೆ ಪಾರಿವಾಳದ ಮೇಲೆ ಮಾತ್ರ ಈ ಪ್ರಯೋಗ ನಡೆಸಿದೆ. ಆದರೆ ಯಾವುದೇ ಪಕ್ಷಿಯನ್ನೂ ಕೂಡ ಈ ವ್ಯವಸ್ಥೆಯ ಮೂಲಕ ಕ್ಯಾರಿಯರ್ ಆಗಿ ಬಳಸಬಹುದಾಗಿದೆ. ಭಾರವಾದ ಪೇಲೋಡ್‌ಗಳನ್ನು ಹೊತ್ತೊಯ್ಯಲು ರೇವನ್‌ಗಳನ್ನು (ಕಾಗೆ) ಬಳಸಲು ಯೋಜಿಸುತ್ತಿದ್ದೇವೆ. ಕರಾವಳಿ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಸೀಗಲ್‌ಗಳನ್ನು ಬಳಸಬಹುದು. ಸಾಗರ ಪ್ರದೇಶಗಳಲ್ಲಿ ಆಲ್ಬಟ್ರಾಸ್ (ಕಡಲ ಕೋಳಿ)ಗಳನ್ನು ಡ್ರೋನ್‌ ಗಳಾಗಿ ಬಳಸಬಹುದು ಎಂದು ಕಂಪೆನಿ ತಿಳಿಸಿದೆ. ಆದರೆ ಪ್ರಯೋಗದ ಹಂತದಲ್ಲಿ ಎಷ್ಟು ಪಕ್ಷಿಗಳನ್ನು ಸಾಯಿಸಲಾಗಿದೆ ಮತ್ತು ಬಳಸಲಾಗಿದೆ ಎನ್ನುವ ಬಗ್ಗೆ ಸಂಸ್ಥೆ ಯಾವುದೇ ದತ್ತಾಂಶ ಬಿಡುಗಡೆ ಮಾಡಿಲ್ಲ.

ವಾರ್ತಾ ಭಾರತಿ 4 Dec 2025 4:46 pm

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಬಿಟ್ಟು SMVT, ಕೆಆರ್‌ ಪುರದಿಂದ ರೈಲು ಯಾಕೆ? ಕಲ್ಯಾಣ ಕರ್ನಾಟಕ ಪ್ರಯಾಣಿಕರ ಪ್ರಶ್ನೆ

​​ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಬೆಂಗಳೂರಿನಿಂದ ರೈಲುಗಳ ಸಂಚಾರದಲ್ಲಿ ತಾರತಮ್ಯ ಎದುರಾಗಿದೆ. ಹೆಚ್ಚಿನ ರೈಲುಗಳು ಬೆಂಗಳೂರು ಸಿಟಿ ಬದಲಿಗೆ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಯಶವಂತಪುರ ಅಥವಾ ಕೃಷ್ಣರಾಜಪುರಂ ನಿಂದ ಹೊರಡುತ್ತಿವೆ. ಈ ಬಗ್ಗೆ ಪ್ರಯಾಣಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 4 Dec 2025 4:43 pm

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ : ಇದು, ’ಮೋದಿ ಮಾಸ್ಟರ್ ಸ್ಟ್ರೋಕ್’ ಎಂದ ಕಾಂಗ್ರೆಸ್

Modi Mater Stroke : ದೇಶದ ಜಿಡಿಪಿಯಲ್ಲಿ ಭಾರೀ ಬೆಳವಣಿಗೆ ಆಗುತ್ತಿದ್ದರೆ, ಇನ್ನೊಂದು ಕಡೆ, ಡಾಲರ್ ಎದುರು, ರೂಪಾಯಿಯ ಬೆಲೆ ಪಾತಾಳಕ್ಕೆ ಇಳಿದಿದೆ. ಎಲ್ಲಾ ರಂಗದಲ್ಲೂ ವೈಫಲ್ಯವನ್ನು ಕಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸ್ಟರ್ ಸ್ಟ್ರೋಕ್ ಇದಾಗಿದೆ ಎಂದು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂ ಖರ್ಗೆ ಲೇವಡಿ ಮಾಡಿದ್ದಾರೆ.

ವಿಜಯ ಕರ್ನಾಟಕ 4 Dec 2025 4:43 pm

Explainer - ಜಗತ್ತಿನ ಅತ್ಯಂತ ಸುರಕ್ಷಿತವಾಗಿದೆ ರಷ್ಯಾದ ಅಧ್ಯಕ್ಷ ಪುಟಿನ್ ಪ್ರಯಾಣಿಸುವ ಕಾರು! ಮೋದಿ ಕೂಡ ಅದರಲ್ಲಿ ಪ್ರಯಾಣಿಸಿದ್ದರು!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ವೇಳೆ, ಅವರ ಅತ್ಯಂತ ಸುರಕ್ಷಿತ ಮತ್ತು ಐಷಾರಾಮಿ 'ಔರಸ್ ಸೆನಟ್' ಕಾರು ಕೂಡ ಭಾರತಕ್ಕೆ ಬಂದಿದೆ. ಈ ಕಾರು ಬುಲೆಟ್ ಪ್ರೂಫ್, ಕ್ಷಿಪಣಿ ನಿರೋಧಕ, ಜಲಾಂತರ್ಗಾಮಿ ಸಾಮರ್ಥ್ಯ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಹಿಂದೆ ಪುಟಿನ್ ಅವರು ಮರ್ಸಿಡಿಸ್ ಕಾರು ಬಳಸುತ್ತಿದ್ದರು, ಆದರೆ ಈಗ ರಷ್ಯಾದ ಸ್ವಂತ ಉತ್ಪಾದನೆಯ ಔರಸ್ ಕಾರುಗಳನ್ನು ಬಳಸುತ್ತಿದ್ದಾರೆ.

ವಿಜಯ ಕರ್ನಾಟಕ 4 Dec 2025 4:40 pm

ಸೇಡಂ ಸಿಪಿಐ ಮಹಾದೇವ ದಿಡಿಮನಿಗೆ ಉತ್ತಮ ಸರ್ಕಲ್ ಪ್ರಶಸ್ತಿ

ಕಲಬುರಗಿ: ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸೇಡಂ ವ್ಯಾಪ್ತಿಯ ವೃತ್ತ ನಿರೀಕ್ಷಕ ಅಧಿಕಾರಿಯಾಗಿರುವ ಮಹಾದೇವ ದಿಡಿಮನಿ ಅವರಿಗೆ ವರ್ಷದ ಉತ್ತಮ ಸರ್ಕಲ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.  ದಿಡಿಮನಿ ನೇತೃತ್ವದಲ್ಲಿ 2024-25ನೇ ಸಾಲಿನಲ್ಲಿ ಸುಮಾರು 100ಕ್ಕೂ ಹೆಚ್ಚು ಬೈಕ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಕಳ್ಳತನವಾದ 160 ಗ್ರಾಂ. ಚಿನ್ನ ಮತ್ತು 400 ಗ್ರಾಂ. ಬೆಳ್ಳಿ ಪತ್ತೆ ಹಚ್ಚಿ ವಾರಸುದಾರರಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಳಖೇಡ ಹಾಗೂ ಕುರಕುಂಟ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಗಳು ಯಶಸ್ವಿಯಾಗಿ ತಲುಪಿಸಿದ ಮಹಾದೇವ ದಿಡಿಮನಿ ಅವರಿಗೆ ವರ್ಷದ ಉತ್ತಮ ಸರ್ಕಲ್ ಪ್ರಶಸ್ತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೀಡಿ ಗೌರವಿಸಿದರು.  ಮಹಾದೇವ ದಿಡಿಮನಿ ಅವರು ಸಿಪಿಐ, ಪಿಐ ಅಧಿಕಾರಿಗಳ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಬ್ಯಾಡ್ಮಿಂಟನ್ ಸಿಂಗಲ್ಸ್ , ಡಬಲ್ಸ್‌ನಲ್ಲಿ ಪ್ರಥಮ, 9 ಎಂಎಂ ಪಿಸ್ತೂಲ್‌ ಶೂಟಿಂಗ್ ನಲ್ಲಿ ದ್ವಿತೀಯ ಸ್ಥಾನ, ಜಾವೇಲಿಯನ್ ಥ್ರೋನಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ವಾರ್ತಾ ಭಾರತಿ 4 Dec 2025 4:35 pm

ಜಿಯೋ ಬಳಕೆದಾರರಿಗೆ ಹೆದ್ದಾರಿ ಪ್ರಯಾಣ ಇನ್ನು ಸೇಫ್; ಮೊಬೈಲ್‌ಗೆ ಬರುತ್ತೆ ಅಪಾಯದ ಅಲರ್ಟ್ ಮೆಸೇಜ್‌

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ರಾಷ್ಟ್ರೀಯ ಹೈವೇ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸ್ಥಳ, ಮಂಜಿನಿಂದ ಕೂಡಿರುವ ರಸ್ತೆ, ದನ, ಕಾಡು ಪ್ರಾಣಿಗಳ ಓಡಾಟವಿರುವ ರಸ್ತೆಗಳ ಬಗ್ಗೆ ನೇರವಾಗಿ ಅಲರ್ಟ್‌ ಮೆಸೇಜ್‌ ಕಳುಹಿಸುವಂತಹ ವ್ಯವಸ್ಥೆಯನ್ನು ರಿಲಯನ್ಸ್‌ ಜಿಯೋ ಜಾರಿಗೆ ತರಲು ಮುಂದಾಗಿದೆ. ಆ ನಿಟ್ಟಿನಲ್ಲಿ ಜಿಯೋ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಮಾಡಿಕೊಂಡಿವೆ.

ವಿಜಯ ಕರ್ನಾಟಕ 4 Dec 2025 4:34 pm

ರೂಪಾಯಿ ಮೌಲ್ಯ ಕುಸಿತ | ಮೋದಿಜಿಯ ಮಾಸ್ಟರ್ ಸ್ಟ್ರೋಕ್ ಎಂದು ಬಿಜೆಪಿ ಆಚರಿಸುತ್ತದೆಯೇ? : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಭಾರತೀಯ ರೂಪಾಯಿಯು ಅಮೆರಿಕನ್ ಡಾಲರ್ ಎದುರು 90.2 ರೂಪಾಯಿಗೆ ಕುಸಿದಿದ್ದು, ಇತಿಹಾಸದಲ್ಲೇ ಅತೀ ಕಡಿಮೆ ಮಟ್ಟಕ್ಕೆ ತಲುಪಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ವೈಫಲ್ಯಗಳನ್ನು ಮೋದಿಜಿಯ ಮಾಸ್ಟರ್ ಸ್ಟ್ರೋಕ್ ಎಂದು ಬಿಜೆಪಿ ಆಚರಿಸುತ್ತದೆಯೇ? ಎಂದು ವ್ಯಂಗ್ಯವಾಡಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಭಾರತದ ಜಿಡಿಪಿ ಅಂಕಿ ಅಂಶಗಳಿಗೆ ʼಸಿʼ ಗ್ರೇಡ್ ನೀಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರಕಾರವೇ ನೀಡಿದ ಮಾಹಿತಿಯಂತೆ ಕಳೆದ 5 ವರ್ಷಗಳಲ್ಲಿ 2 ಲಕ್ಷ ಕಂಪನಿಗಳು ಬಾಗಿಲು ಮುಚ್ಚಿವೆ, ಮತ್ತು ಕೇಂದ್ರ ಸರಕಾರದ ಬಳಿ ಉದ್ಯೋಗ ಕಳೆದುಕೊಂಡವರ ಭದ್ರತೆಗೆ ಯಾವುದೇ ಯೋಜನೆಗಳು ಇಲ್ಲ. ಅಂತರರಾಷ್ಟ್ರೀಯ ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಭಾರತದ ಪಾಸ್‌ಪೋರ್ಟ್‌ ಪಾತಾಳಕ್ಕೆ ಕುಸಿದಿದೆ ಎಂದು ಟೀಕಿಸಿದ್ದಾರೆ.

ವಾರ್ತಾ ಭಾರತಿ 4 Dec 2025 4:28 pm

`ಪ್ರಸಿದ್ಧ್ ನಿನ್ ತಲೆ ಓಡಿಸ್ಬೇಡ': ಕ್ಯಾಪ್ಟನ್ ಕೆಎಲ್ ರಾಹುಲ್ ಕನ್ನಡದಲ್ಲೇ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್!

India Vs South Africa 2nd ODI- ಟೀಂ ಇಂಡಿಯಾ ಆಡುವಾಗ ಮೈದಾನದಲ್ಲಿ ಕನ್ನಡ ಕೇಳುವುದೇ ಚಂದ. ಅದೊಂದು ಕಾಲವಿತ್ತು, ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ 6ರಿಂದ 7 ಮಂದಿ ಕನ್ನಡಿಗರಿರುತ್ತಿದ್ದರು. ಆಗ ಇಡೀ ಮೈದಾನವೇ ಕನ್ನಡಮಯ. ಈಗ ಅಂತಹ ವಾತಾವರಣ ಇಲ್ಲವಾದರೂ ಅಪರೂಪಕ್ಕೆ ಕರ್ನಾಟಕದ ಕ್ರಿಕೆಟಿಗರು ಕನ್ನಡದಲ್ಲಿ ಮಾತನಾಡುವುದು ಗಮನ ಸೆಳೆಯುತ್ತದೆ. ಬುಧವಾರ ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರ ಜೊತೆ ಕನ್ನಡದಲ್ಲಿ ಮಾತನಾಡಿದ್ದ ಇದೀಗ ವೈರಲ್ ಆಗಿದೆ.

ವಿಜಯ ಕರ್ನಾಟಕ 4 Dec 2025 4:17 pm

ಕರ್ನಾಟಕದಲ್ಲಿ ಶೇ.60% ಗಡಿ ದಾಟಿದ ಭ್ರಷ್ಟಾಚಾರ: ಉಪ ಲೋಕಾಯುಕ್ತರ ಸ್ಫೋಟಕ ಹೇಳಿಕೆ!

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರ ಅತೀ ಹೆಚ್ಚು ಚರ್ಚೆ ಆಗಿದೆ. 10 /15 ಪರ್ಸೆಂಟ್‌ನಿಂದ 40% ವರೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರವು ಭಾರೀ ಚರ್ಚೆ ಆಗಿದೆ. ಆದರೆ ಇದು ಕೇವಲ ಆರೋಪ ಮಾತ್ರವಲ್ಲ ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಲೋಕಾಯುಕ್ತ ಹೇಳಿದೆ. ಅಲ್ಲದೇ ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಕೇರಳದಲ್ಲಿ

ಒನ್ ಇ೦ಡಿಯ 4 Dec 2025 4:00 pm

ಆದರ್ಶ್ ಹಿರೇಮಠ್: 22ರ ಹರೆಯದಲ್ಲೇ ಸ್ವ ನಿರ್ಮಿತ ಬಿಲಿಯನೇರ್ ಪಟ್ಟಿ ಸೇರಿದ ಕನ್ನಡಿಗ; AI ಸ್ಟಾರ್ಟಪ್ ‘ಮೆರ್ಕೋರ್’ ಜಾಗತಿಕ ಸದ್ದು!

ಕೇವಲ 22ನೇ ವಯಸ್ಸಿನಲ್ಲಿ ಸ್ವಯಂ ನಿರ್ಮಿತ ಬಿಲಿಯನೇರ್ ಗಳಾಗಿ ಆದರ್ಶ್ ಹಿರೆಮಠ್ ಮತ್ತು ಸೂರ್ಯ ಮಿಧಾ ಹೊರಹೊಮ್ಮಿದ್ದಾರೆ. ಕೃತಕ ಬುದ್ಧಿಮತ್ತೆಯ (AI) ಮೂಲಕ ಜಾಗತಿಕ ನೇಮಕಾತಿಯನ್ನು ಬದಲಾಯಿಸಿದ 'ಮೆರ್ಕೋರ್' ಎಂಬ ಟೆಕ್ ಸ್ಟಾರ್ಟಪ್ ಸ್ಥಾಪಿಸಿ ಈ ಸಾಧನೆಗೈದಿದ್ದಾರೆ. ಕರ್ನಾಟಕದ ಆದರ್ಶ್ ಹಿರೆಮಠ್, ಅಮೆರಿಕಾದಲ್ಲಿ ಬೆಳೆದರೂ ಮೂಲತಃ ಕನ್ನಡಿಗರಾಗಿದ್ದಾರೆ. ಇವರ ಯಶಸ್ಸಿನ ಕಥೆ ಗಮನ ಸೆಳೆಯುವಂತಿದೆ.

ವಿಜಯ ಕರ್ನಾಟಕ 4 Dec 2025 4:00 pm

ಮುರ್ಷಿದಾಬಾದ್ ನಲ್ಲಿ ‘ಬಾಬರಿ ಮಸೀದಿ’ ಪ್ರಸ್ತಾಪ ವಿವಾದ: ಶಾಸಕ ಹುಮಾಯೂನ್ ಕಬೀರ್ ಟಿಎಂಸಿಯಿಂದ ಅಮಾನತು

ಕೋಲ್ಕತ್ತಾ: ಮುರ್ಷಿದಾಬಾದ್ ಜಿಲ್ಲೆಯಲ್ಲಿ ‘ಬಾಬರಿ ಮಸೀದಿ’ ನಿರ್ಮಾಣದ ಪ್ರಸ್ತಾಪ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಭರತ್‌ಪುರ ಶಾಸಕ ಹುಮಾಯೂನ್ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ ಗುರುವಾರ ಅಮಾನತುಗೊಳಿಸಿದೆ. ಪಕ್ಷದ ಆಂತರಿಕ ವಿಚಾರಗಳಿಂದ ಹಿಡಿದು ಹಲವಾರು ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕಬೀರ್, ಡಿಸೆಂಬರ್ 6ರಂದು ಬೆಲ್ದಂಗಾದಲ್ಲಿ ಬಾಬರಿ ಮಸೀದಿಯ ಅಡಿಪಾಯ ಹಾಕಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಅಮಾನತು ಆದೇಶ ಪ್ರಕಟಿಸಿದ ಸಚಿವ ಫಿರ್ಹಾದ್ ಹಕೀಮ್, “ರಾಜ್ಯದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯ ಕಾಪಾಡುವ ಕೆಲಸಕ್ಕೆ ಟಿಎಂಸಿ ಬದ್ಧವಾಗಿದೆ. ಈ ಸಂದರ್ಭದಲ್ಲಿ ಕಬೀರ್ ಅವರ ನಡೆ ಸರಿಯಲ್ಲ. ಕೋಮು ರಾಜಕೀಯಕ್ಕೆ ತೊಡಕು ಒಡ್ಡುವ ಪ್ರಯತ್ನವನ್ನು ಪಕ್ಷ ಯಾವ ರೀತಿಯಲ್ಲೂ ಒಪ್ಪುವುದಿಲ್ಲ,” ಎಂದು ಹೇಳಿದರು. “ಪಕ್ಷದ ಉನ್ನತ ನಾಯಕತ್ವದ ಸೂಚನೆಯ ಮೇರೆಗೆ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ,” ಎಂದು ಹಕೀಮ್ ಸ್ಪಷ್ಟಪಡಿಸಿದರು. ಅಮಾನತಿಗೆ ಪ್ರತಿಕ್ರಿಯೆ ನೀಡಿದ ಕಬೀರ್, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಹೇಳಿದರು. ಡಿಸೆಂಬರ್ 6ರ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆ ಇದ್ದು, ಇದರಿಂದ ಕೋಲ್ಕತ್ತಾ–ಸಿಲಿಗುರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ NH-12 ಅಸ್ತವ್ಯಸ್ತವಾಗಬಹುದು ಎಂದು ಅವರು ಮತ್ತೆ ಪುನರುಚ್ಚರಿಸಿದರು.

ವಾರ್ತಾ ಭಾರತಿ 4 Dec 2025 3:50 pm

ಮಹಿಳೆಯರಿಗೆ ಮೀಸಲಾತಿ: ಡಿ ಕೆ ಶಿವಕುಮಾರ್‌ ಮಹತ್ವ ಮಾಹಿತಿ

ಬೆಂಗಳೂರು, ಡಿಸೆಂಬರ್‌ 04: ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಂಡು ನಾಯಕಿಯರಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಪಂಚಾಯ್ತಿಯಲ್ಲಿ ನಾವು 50% ಮೀಸಲಾತಿ ನೀಡಿದ್ದು, ಸಂಸತ್ ಚುನಾವಣೆಯಲ್ಲಿ 33% ಜಾರಿಯಾಗುವ ಹಂತದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸರ್ಕಾರಿ ಮಹಿಳಾ ನೌಕರರ

ಒನ್ ಇ೦ಡಿಯ 4 Dec 2025 3:48 pm

'ಮಾಳಿಗೆಯಿಂದ ತಳ್ಳಿದ್ರು, ಊಟ ನೀಡದೆ ಹಿಂಸಿಸಿದ್ರು'-ಕರ್ನಾಟಕ ರಾಜ್ಯಪಾಲರ ಮೊಮ್ಮಗನ ಪತ್ನಿಯಿಂದ ಗಂಭೀರ ಆರೋಪ

ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗನ ಪತ್ನಿ ದಿವ್ಯಾ ಗೆಹ್ಲೋಟ್, ತಮ್ಮ ಪತಿ ಮತ್ತು ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನದ ದೂರನ್ನು ದಾಖಲಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಈ ಘಟನೆ ನಡೆದಿದ್ದು, ಪತಿ ದೇವೇಂದ್ರ ಗೆಹ್ಲೋಟ್ ತನ್ನನ್ನು ಕುಡಿದ ಮತ್ತಿನಲ್ಲಿ ಮಾಳಿಗೆಯ ಮೇಲಿಂದ ತಳ್ಳಿದ್ದಾರೆ ಮತ್ತು 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದಾರೆ.

ವಿಜಯ ಕರ್ನಾಟಕ 4 Dec 2025 3:43 pm

ವಿದ್ಯುತ್‌ ಕಿಡಿಗಳನ್ನು ಸೃಷ್ಟಿಸುವ ಮಂಗಳ ಗ್ರಹದ ಧೂಳಿನ ದೆವ್ವಗಳು; ನಾಸಾ ರೋವರ್‌ ಕಂಡ ಅದ್ಭುತ ದೃಶ್ಯಗಳು!

ಸೌರಮಂಡಲದ ಕೆಂಪು ಗ್ರಹ ಮಂಗಳನ ಇಂಚಿಂಚೂ ಅಂಗಳವನ್ನು ಶೋಧಿಸುತ್ತಿರುವ ನಾಸಾದ ಪರ್ಸೆವೆರೆನ್ಸ್‌ ರೋವರ್‌, ಅಂಗಾರಕನ ಧೂಳಿನ ಮೋಡಗಳಿಂದ ಸೃಷ್ಟಿಯಾಗುವ ವಿದ್ಯುತ್‌ ಕಿಡಿಗಳನ್ನು ಪತ್ತೆಹಚ್ಚಿದೆ. ಪರ್ಸೆವೆರೆನ್ಸ್‌ ರೋವರ್‌ನ ಸೂಪರ್‌ಕ್ಯಾಮ್ ಮೈಕ್ರೊಫೋನ್ ಸಂಗ್ರಹಿಸಿದ ಆಡಿಯೋ ಮತ್ತು ವಿದ್ಯುತ್ಕಾಂತೀಯ ದತ್ತಾಂಶ, ಮಂಗಳ ಗ್ರಹದಲ್ಲಿ ಸೋನಿಕ್‌ ಬೂಮ್‌ಗಳೆಂದು ಕರೆಯಬಹುದಾದ ವಿದ್ಯುತ್‌ ಕಿಡಿಗಳು ಉತ್ಪತ್ತಿಯಾಗುತ್ತವೆ ಎಂಬುದನ್ನು ದೃಢಪಡಿಸಿದೆ. ಒಟ್ಟು 55 ಭಿನ್ನ ವಿದ್ಯುತ್‌ ಕಿಡಿಗಳ ಮಾಹಿತಿಯನ್ನು ಪರ್ಸೆವೆರೆನ್ಸ್‌ ನೌಕೆ ದಾಖಲಿಸಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 4 Dec 2025 3:37 pm

Kerala Local Body Election : ಮುನ್ನಾರ್ ನಿಂದ ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ - ಇಲ್ಲೊಂದು ಟ್ವಿಸ್ಟ್!

Sonia Gandhi to contest in Kerala Local body Election : ಕೇರಳದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯು ಸೋನಿಯಾ ಗಾಂಧಿ ಎನ್ನುವ ಅಭ್ಯರ್ಥಿಗೆ ಟಿಕೆಟ್ ಅನ್ನು ನೀಡಿದೆ. ಇದು, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಗೂ, ಬಿಜೆಪಿ ಅಭ್ಯರ್ಥಿಗೂ ಯಾವುದೇ ಸಂಬಂಧವಿಲ್ಲ.

ವಿಜಯ ಕರ್ನಾಟಕ 4 Dec 2025 3:36 pm

ಕರ್ನಾಟದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ; ಎಲ್ಲಿಂದ ಎಲ್ಲಿಗೆ?

ಕರ್ನಾಟಕದಲ್ಲಿ 12 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿದ್ದು, ಬೆಂಗಳೂರು-ವಿಜಯಪುರ ನಡುವೆ ಹೊಸ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಆರಂಭಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಲಿದೆ. ಉತ್ತರ ಕರ್ನಾಟಕದ ರೈಲು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಪ್ರಯಾಣದ ಸಮಯ ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಸ್ಲೀಪರ್‌ ರೈಲು ಹುಬ್ಬಳ್ಳಿ-ಗದಗ-ಬಾಗಲಕೋಟೆ ಮಾರ್ಗವಾಗಿ ಸಂಚರಿಸುವ ಸಾಧ್ಯತೆಯಿದೆ.

ವಿಜಯ ಕರ್ನಾಟಕ 4 Dec 2025 3:32 pm

ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಕುಸಿತ: ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ರೂ 13,036, 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ 11,950 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ 9,779ಕ್ಕೆ ಇಳಿದಿದೆ. ಮುಂದಿನ ವಾರ 25 ಬೇಸಿಸ್ ಪಾಯಿಂಟ್ ದರ ಕಡಿತದ ನಿರೀಕ್ಷೆಗಳನ್ನು ಡೋವಿಷ್ ಫೆಡ್ ಬಲಪಡಿಸುತ್ತಿದ್ದಂತೆ ಡಿಸೆಂಬರ್ 4ರ ಗುರುವಾರ ಭಾರತದಲ್ಲಿ ಚಿನ್ನದ ದರಗಳು ತೀವ್ರ ಕುಸಿತ ಕಂಡಿವೆ. ಇಂದು  24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ 13,036, 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ. 11,950 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ 9,779ಕ್ಕೆ ಇಳಿದಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟು? ಗುರುವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಕುಸಿತದೆಡೆಗೆ ಸಾಗಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 13,036 (- 22), 22 ಕ್ಯಾರೆಟ್ ಚಿನ್ನಕ್ಕೆ ರೂ. 11,950 (-20) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,778 (-16) ಬೆಲೆಗೆ ಕುಸಿದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ; 24 ಕ್ಯಾರೆಟ್ ಚಿನ್ನದ ಬೆಲೆ ಹಿಂದಿನ ದಿನದ ಬೆಲೆ ರೂ 13,058 ಗಳಿಂದ ರೂ 13,036 ಗಳಿಗೆ ಇಳಿದಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ರೂ 1,30,580 ಗಳಿಂದ ರೂ 1,30,360 ಗಳಿಗೆ ಇಳಿದಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆಯಿಂದಾಗಿ, 22 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ ರೂ 11,970 ಗಳಿಂದ ರೂ 11,950 ಗಳಿಗೆ ಇಳಿದಿದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ರೂ 1,19,700 ಗಳಿಂದ ರೂ 1,19,500 ಗಳಿಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 4,210 ಡಾಲರ್‌ಗಿಂತ ಹೆಚ್ಚಾಗಿದೆ, ದುರ್ಬಲ ಅಮೆರಿಕನ್ ಡಾಲರ್, ಅಮೆರಿಕದ ಖಜಾನೆ ಇಳುವರಿ ಕುಸಿತ ಮತ್ತು ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಸಾಧ್ಯತೆಗಳು ಹೆಚ್ಚಾಗುವುದರಿಂದ ಆರು ವಾರಗಳಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿತ್ತು.

ವಾರ್ತಾ ಭಾರತಿ 4 Dec 2025 3:28 pm

ಮಹಿಳಾ ಸಬಲೀಕರಣ ವಿಚಾರದಲ್ಲಿ ನಾವು ಭದ್ರ ಅಡಿಪಾಯ ಹಾಕಿದ್ದೇವೆ : ಡಿ.ಕೆ.ಶಿವಕುಮಾರ್

ಸರಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮ

ವಾರ್ತಾ ಭಾರತಿ 4 Dec 2025 3:27 pm

ಇಂಡಿಗೋ ಪ್ರಯಾಣಿಕರಿಗೆ ಶಾಕ್: 180ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು! ಬೆಂಗಳೂರಿನಲ್ಲಿ ರೊಚ್ಚಿಗೆದ್ದ ಪ್ರಯಾಣಿಕರು

ತಾಂತ್ರಿಕ ಸಮಸ್ಯೆ ಮತ್ತು ಕಾರ್ಯಾಚರಣೆ ಸವಾಲುಗಳಿಂದ ಇಂದು(ಡಿ.4)ಇಂಡಿಗೋ ಏರ್‌ಲೈನ್ಸ್‌ನ ನೂರಾರು ವಿಮಾನಗಳು ರದ್ದಾಗಿವೆ.ಗುರುವಾರ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡವು. ಹಠಾತ್ತನೇ ಫ್ಲೈಟ್‌ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಇಬ್ಬರ ನಡುವೆ ಭಾರಿ ವಾಗ್ವಾದ ಉಂಟಾದವು

ವಿಜಯ ಕರ್ನಾಟಕ 4 Dec 2025 3:21 pm

ಮೈಸೂರು ನಗರಕ್ಕೆ ನಾಲ್ಕು ಹೊಸ ಕೆಎಸ್ಆರ್ ಟಿಸಿ ಡಿಪೋ - ಎಲ್ಲೆಲ್ಲಿ?

ಮೈಸೂರಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಕೆಎಸ್‌ಆರ್‌ಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ನಾಲ್ಕು ದಿಕ್ಕುಗಳಲ್ಲಿ ಹೊಸ ಬಸ್ ಡಿಪೋಗಳು ಮತ್ತು ಪ್ರತ್ಯೇಕ ನಗರ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ. ಇದು 'ಗ್ರೇಟರ್ ಮೈಸೂರು' ವಿಸ್ತರಣೆಗೆ ಪೂರಕವಾಗಿದ್ದು, ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಸಹಕಾರಿಯಾಗಲಿದೆ. ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ಟರ್ಮಿನಲ್ ನಿರ್ಮಾಣ ಹಂತದಲ್ಲಿದೆ. ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯಿಂದ ಒಟ್ಟು ಬಸ್‌ಗಳ ಸಂಖ್ಯೆ ಹೆಚ್ಚಲಿದೆ.

ವಿಜಯ ಕರ್ನಾಟಕ 4 Dec 2025 3:20 pm

ಇಂಗ್ಲೆಂಡ್ ಗೆ ಮತ್ತೆ ಶಾಕ್ ಕೊಟ್ಟ ಮಿಚೆಲ್ ಸ್ಟಾರ್ಕ್; ಪಾಕ್ ಲೆಜೆಂಡ್ ವಸೀಂ ಅಕ್ರಂ ವಿಶ್ವದಾಖಲೆ ನುಚ್ಚುನೂರು

Ashes 2025-26- ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈಗ ಟೆಸ್ಟ್ ಕ್ರಿಕೆಟ್ ನ ಸಾರ್ವಕಾಲಿಕ ಅಗ್ರಮಾನ್ಯ ಎಡಗೈ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಈವರೆಗೂ ಅತಿ ಹೆಚ್ಚು ವಿಕೆಟ್ ಗಳಿಸಿದ ಎಡಗೈ ವೇಗದ ಬೌಲರ್ ಎಂಬ ವಿಶ್ವದಾಖಲೆ ಪಾಕಿಸ್ತಾನದ ಬೌಲಿಂಗ್ ದಂತಕತೆ ವಸೀಂ ಅಕ್ರಂ ಅವರ ಹೆಸರಲಿತ್ತು. ಇದೀಗ ಗಾಬಾದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮಿಚೆಲ್ ಸ್ಟಾರ್ಕ್ ಈ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಎರಡು ವಿಕೆಟ್ ಗಳನ್ನು ಆರಂಭದಲ್ಲೇ ಎಗರಿಸಿದ ಅವರು ಈ ವಿಶ್ವದಾಖಲೆ ಮಾಡಿದರು.

ವಿಜಯ ಕರ್ನಾಟಕ 4 Dec 2025 3:08 pm

ಪುಟಿನ್‌ ಆಗಮನಕ್ಕೂ ಮುನ್ನ ವಿಪಕ್ಷ ನಾಯಕರ ಭೇಟಿಗೆ ನಿರಾಕರಣೆ | ಸರಕಾರಕ್ಕೆ ಅಭದ್ರತೆ ಕಾಡುತ್ತಿದೆ: ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ಭಾರತ ಪ್ರವಾಸಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ವಿದೇಶಿ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವುದನ್ನು ಕೇಂದ್ರ ಸರಕಾರ ತಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಮಾಡಿದ್ದಾರೆ. ಸರಕಾರದ ಈ ನಿಲುವು “ಅಭದ್ರತೆಯ ಸಂಕೇತ” ಎಂದು ಅವರು ಖಂಡಿಸಿದ್ದಾರೆ. ಸಂಸತ್‌ ಭವನ ಸಂಕೀರ್ಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿದೇಶಿ ನಾಯಕರು ಭಾರತ ಪ್ರವಾಸದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವುದು ದಶಕಗಳ ಸಂಪ್ರದಾಯವಾಗಿದ್ದು, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರ ಆಡಳಿತಕಾಲದಲ್ಲಿಯೂ ಇದು ಜಾರಿಯಲ್ಲಿತ್ತು ಎಂದು ಹೇಳಿದರು. “ವಿದೇಶಿ ಗಣ್ಯರು ಬಂದಾಗ ಅಥವಾ ನಾನು ವಿದೇಶಕ್ಕೆ ಹೋದಾಗ, ಸರಕಾರವು ‘ಎಲ್‌ಒಪಿ ಅವರನ್ನು ಭೇಟಿಯಾಗಬೇಡಿ’ ಎಂದು ಸೂಚಿಸುತ್ತದೆ. ಇದು ನಿರಂತರವಾಗಿ ನಡೆಯುತ್ತಿದೆ. ಇದರರ್ಥ ವಿರೋಧ ಪಕ್ಷದ ನಾಯಕರನ್ನು ದೂರವಿಡಿ,” ಎಂದು ರಾಹುಲ್ ಗಾಂಧಿ ಆಕ್ಷೇಪಿಸಿದರು. ವಿರೋಧ ಪಕ್ಷದ ನಾಯಕರೂ ದೇಶವನ್ನು ಪ್ರತಿನಿಧಿಸುತ್ತಾರೆ ಎಂಬುವುದನ್ನು ಉಲ್ಲೇಖಿಸಿದ ಅವರು, “ಸರಕಾರ ಮಾತ್ರ ಭಾರತವಲ್ಲ. ಮತ್ತೊಂದು ದೃಷ್ಟಿಕೋನವನ್ನು ವಿದೇಶಿ ನಾಯಕರಿಗೆ ತಿಳಿಸುವ ಜಾಗವನ್ನು ಸರಕಾರ ಬಯಸುವುದಿಲ್ಲ. ಇದು ರೂಢಿ, ಆದರೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಇದನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸಿದರು. ಸರಕಾರ ಹೀಗೆ ವರ್ತಿಸುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, ಅವರಿಗೆ ಅಭದ್ರತೆ ಕಾಡುತ್ತಿದೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ರಷ್ಯಾ ಅಧ್ಯಕ್ಷ ಪುಟಿನ್‌ ಗುರುವಾರ ಸಂಜೆ ಭಾರತಕ್ಕೆ ಆಗಮಿಸಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆ ನಡೆಯಲಿದೆ. ಈ ವೇಳೆ ರಕ್ಷಣಾ ಸಹಕಾರ ವಿಸ್ತರಣೆ, ದ್ವಿಪಕ್ಷೀಯ ವ್ಯಾಪಾರವನ್ನು ಬಾಹ್ಯ ಒತ್ತಡಗಳಿಂದ ಪ್ರತ್ಯೇಕಿಸುವ ಕ್ರಮಗಳು ಮತ್ತು ಸ್ಮಾಲ್‌ ಮಾಡ್ಯುಲರ್‌ ರಿಯಾಕ್ಟರ್‌ ಕ್ಷೇತ್ರದಲ್ಲಿ ಸಹಕಾರ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 4 Dec 2025 3:01 pm

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಗಾಂಜಾ ಮಾರಾಟ ಜಾಲ

ಶಿವಮೊಗ್ಗ : ಜಿಲ್ಲೆಯಲ್ಲಿ ಗಾಂಜಾ ಮಾರಾಟ, ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಯುವ ಜನತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ ಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳೇ ಸಾಕ್ಷಿಯಾಗಿವೆ. ಇತ್ತೀಚೆಗೆ ಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಚನ್ನಬಸಪ್ಪನವರು ಘಟನೆಯೊಂದನ್ನು ಪ್ರಸ್ತಾಪಿಸಿ, ಯುವ ಜನತೆ ಗಾಂಜಾ ವ್ಯಸನಕ್ಕೆ ಹೇಗೆ ಒಳಗಾಗಿದ್ದಾರೆ ಎಂಬುದನ್ನು ವಿವರವಾಗಿ ತಿಳಿಸಿದ್ದರು.ಗಾಂಜಾ ವಿಚಾರದಲ್ಲಿ ದೂರು ನೀಡಲು ತೆರಳಿದವರ ಮೇಲೆಯೇ ಹಲ್ಲೆ ನಡೆಯುತ್ತದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ನಗರದ ಮಾರ್ನಮಿ ಬೈಲಿನಲ್ಲಿ ಹರೀಶ್ ಎಂಬ ಯುವಕನ ಮೇಲೆ ನಡೆದ ಘಟನೆಗೆ ಗಾಂಜಾ ನಶೆಯ ನಂಟು ಇದೆ ಎಂಬುದು ಪೊಲೀಸ್ ಇಲಾಖೆಯ ತನಿಖೆ ವೇಳೆ ಬಯಲಾಗಿತ್ತು.ಹಾಗೂ ಸಾಕಷ್ಟು ಭದ್ರತೆ ಹೊಂದಿರುವ ಸೋಗಾನೆ ಕೇಂದ್ರ ಕಾರಾಗೃಹದ ಕ್ಯಾಂಟಿನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ನ.19ರಂದು ಮಧ್ಯಾಹ್ನ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಟೊ ಒಂದರಲ್ಲಿ ಐದು ಬಾಳೆಗೊನೆಯನ್ನು ತರಲಾಗಿತ್ತು. ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆ ನಡೆಸಿ,ಬಾಳೆದಿಂಡಿನಲ್ಲಿ 123 ಗ್ರಾಂ ಗಾಂಜಾ ಪತ್ತೆ ಹಚ್ಚಿದ್ದರು. ಇಷ್ಟೇ ಅಲ್ಲದೆ ಇದೇ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕನೊಬ್ಬ ತನ್ನ ಒಳ ಉಡುಪಿನಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರೋಡ್ ರಸ್ತೆಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಇವರಿಂದ ಬರೋಬ್ಬರಿ 1 ಕೆಜಿ 420 ಗ್ರಾಂ ಗಾಂಜಾ ಹಾಗೂ 24 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಯಿತು. ಈ ಕೆಲವು ಪ್ರಕರಣಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ನಗರದ ಪ್ರತಿಷ್ಟಿತ ಇಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜುಗಳು ಸೇರಿದಂತೆ ಹಲವಾರು ಕಡೆಗಳಿಗೆ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಜಾಲವನ್ನು ಪೊಲೀಸರು ಭೇದಿಸಬೇಕು. ನಗರದ ಗಲ್ಲಿ ಗಲ್ಲಿಗಳಲ್ಲಿ ಮಾರಾಟವಾಗುತ್ತಿರುವ ಗಾಂಜಾ ವ್ಯವಹಾರಕ್ಕೆ ಕಡಿವಾಣ ಹಾಕಬೇಕು. ಪೊಲೀಸರು ಕೇವಲ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡರೆ ಸಲ್ಲದು, ಗಾಂಜಾ ಮಾರಾಟಗಾರರು,ಬೆಳೆಗಾರರು ಹಾಗೂ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮಾದಕ ವಸ್ತು, ಗಾಂಜಾ ಮಾರಾಟ, ಸಾಗಾಟ, ಸೇವನೆ, ಬೆಳೆಯುವುದು, ಸಂಗ್ರಹ ಶಿಕ್ಷಾರ್ಹ ಅಪರಾಧವಾಗಿದ್ದು,ಇದರ ನಿಯಂತ್ರಣಕ್ಕೆ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಕ್ರಮ ಕೈಗೊಂಡಿದ್ದೇವೆ. ನಗರ ವ್ಯಾಪ್ತಿಯಲ್ಲಿ ಡಿಎಆರ್ ಹಾಗೂ ಕ್ಯೂಆರ್‌ಟಿ ತಂಡದೊಂದಿಗೆ ಸಂಜೆ 6 ರಿಂದ 10ರ ವರೆಗೆ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸೇವನೆ ದೃಢಪಟ್ಟವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ರೀತಿಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. -ಮಿಥುನ್ ಕುಮಾರ್ ಜಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  

ವಾರ್ತಾ ಭಾರತಿ 4 Dec 2025 2:49 pm

ಭಟ್ಕಳ: ಡಿ. 13–14ರಂದು ಅಂಜುಮನ್ ದಿನಾಚರಣೆ

ಭಟ್ಕಳ:  ಅಂಜುಮನ್ ಹಾಮಿ–ಎ–ಮುಸ್ಲಿಮೀನ್ ವತಿಯಿಂದ ಡಿಸೆಂಬರ್ 13 ಮತ್ತು 14ರಂದು ಅಂಜುಮನ್ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮ ಅಂಜುಮನ್ ಆಬಾದ್ ಆವರಣದಲ್ಲಿ ನಡೆಯಲಿದೆ. ಡಿ. 13 ಮೊದಲ ದಿನ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಾಂಕಾಳ ಎಸ್. ವೈದ್ಯ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಡಾ. ಯು.ಟಿ. ಖಾದರ್, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ. ಎ.ಎಂ. ಖಾನ್, ಮತ್ತು ಶಾಹೀನ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಬ್ದುಲ್ ಖಾದೀರ್ ಹಾಜರಾಗಲಿದ್ದಾರೆ. ಅಂಜುಮನ್ ಅಧ್ಯಕ್ಷ ಯೂನಸ್ ಕಾಜಿಯಾ ಅಧ್ಯಕ್ಷತೆ ವಹಿಸಲಿದ್ದು, ಸಂಜೆ 4:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ. 14 – ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ: ಎರಡನೇ ದಿನದ ಕಾರ್ಯಕ್ರಮವು ಮಹಿಳೆಯರಿಗೆ ಮಾತ್ರ ಆಯೋಜಿಸಲ್ಪಟ್ಟಿದ್ದು, ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಕಾವ್ಯಾ ರಾಣಿ ಕೆ.ವಿ. ಉಪಸ್ಥಿತರಿರುವರು. ಗೌರವ ಅತಿಥಿಗಳಾಗಿ ಭಟ್ಕಳ ಅರ್ಬನ್ ಸಹಕಾರಿ ಬ್ಯಾಂಕ್ ನಿರ್ದೇಶಕಿ ಬೀನಾ ಮಂಕಾಳ ವೈದ್ಯ, ಜಿಲ್ಲಾ ಸೈಬರ್ ಕ್ರೈಂ ಉಪಅಧೀಕ್ಷಕಿ ಅಶ್ವಿನಿ ಕುಮಾರ್, ಮತ್ತು ಮಹಿಳಾ ಸಲಹಾ ಸಮಿತಿ ಅಧ್ಯಕ್ಷೆ ಸೀಮಾ ಅಬೂಬಕರ್ ಸೇರಲಿದ್ದಾರೆ. ಅಧ್ಯಕ್ಷತೆಯನ್ನು ಯೂನಸ್ ಕಾಜಿಯಾ ವಹಿಸಲಿದ್ದು, ಮಧ್ಯಾಹ್ನ 2:30ರಿಂದ ಮಹಿಳೆಯರ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರೊ. ಮೊಹಮ್ಮದ್ ಮೊಹ್ಸಿನ್ ಕೆ. ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 4 Dec 2025 2:40 pm

ಭಟ್ಕಳ: ಆನಂದಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಭಟ್ಕಳ: ನಗರದ ಶಿಕ್ಷಣ ಸಂಸ್ಥೆ ಆನಂದಾಶ್ರಮ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ ಬುಧವಾರ ನಡೆಯಿತು. ಶಾಲಾ ಕ್ರೀಡಾ ಕೂಟದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಲೂಸಿ ಡಿಸೋಜ ಅವರು ಶಾಲಾ ಪಠ್ಯಕ್ರಮದೊಂದಿಗೆ ಕ್ರೀಡೆಯ ಅವಶ್ಯಕತೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಜ್ಲಿಸೆ ಇಸ್ಲಾ-ವ-ತಂಝೀಂ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ರಾಷ್ಟ್ರ ಮಟ್ಟದ ಕಬ್ಬಡ್ಡಿ ಆಟಗಾರ ಶ್ರೀಧರ ನಾಯ್ಕ, ಪಾಲಕ ಬೋಧಕ ಸಮಿತಿ ಉಪಾಧ್ಯಕ್ಷ ಜಯರಾಂ ಹೊಸ್ಕಟ್ಟಾ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವಿನಾ ಜ್ಯೋತಿ ಡಿಸೋಜ, ಜೋಯ ಲ್ಯಾಂಡ್ ಪ್ಲೇ ಹೋಮ್‌ನ ಸಿಸ್ಟರ್ ಐರಿನ್ ಮಥಾಯಿಸ್, ಆನಂದ ಆಶ್ರಮ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಅನಿತಾ ಪಿಂಟೊ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವ ಶಾಲೆಯ ನಾಲ್ಕು ತಂಡಗಳು ಶಿಸ್ತು ಬದ್ಧವಾದ ಕವಾಯತ್ತು ಮತ್ತು ಸುಂದರವಾದ, ಅಚ್ಚುಕಟ್ಟಾದ ತಂಡ ಚಟುವಟಿಕೆ ಮತ್ತು ಆಟೋಟಗಳನ್ನು ಪ್ರದರ್ಶಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಬಾಲಕಿಯರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಕುಮಾರಿ ಗಾನವಿ. ಜಿ. ಖಾರ್ವಿ, ಬಾಲಕರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಕುಮಾರ ಜಾಕ್ಸನ್ ಡಿಸೋಜಾ ಪಡೆದುಕೊಂಡರು. ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಫಾರ್‌ಗೀವ್‌ನೆಸ್ ತಂಡ ಪಡೆಯಿತು. ಕರ‍್ಯಕ್ರಮದಲ್ಲಿ ಪಾಲಕ-ಭೋದಕ ಸಮಿತಿಯ ಸದಸ್ಯರು, ಶಿಕ್ಷಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Dec 2025 2:38 pm

ವ್ಲಾಡಿಮಿರ್‌ ಪುಟಿನ್‌ ಭೇಟಿಗಿಲ್ಲ ಅವಕಾಶ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಗಂಭೀರ ಆರೋಪ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಐತಿಹಾಸಿಕ ಭಾರತ ಪ್ರವಾಸ ಇಂದಿನಿಂದ (ಡಿ.4-ಗುರುವಾರ) ಆರಂಭವಾಗಲಿದೆ. ಎರಡು ದಿನಗಳ ಕಾಲ ಭಾರತದಲ್ಲಿರುವ ಪುಟಿನ್‌, ಭಾರತ-ರಷ್ಯಾ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಆದರೆ ಪುಟಿನ್‌ ಅವರು ಯಾವುದೇ ವಿಪಕ್ಷ ನಾಯಕರನ್ನು ಭೇಟಿ ಮಾಡುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಮೋದಿ ಸರ್ಕಾರ ವಿದೇಶಿ ನಾಯಕರನ್ನು ವಿಪಕ್ಷ ನಾಯಕರೊಂದಿಗೆ ಭೇಟಿ ಮಾಡಿಸಲು ಹೆದರುತ್ತದೆ ಎಂದು ಆರೋಪಿಸಿದ್ದಾರೆ.

ವಿಜಯ ಕರ್ನಾಟಕ 4 Dec 2025 2:38 pm

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮದ್ಯವರ್ಜನ ಶಿಬಿರ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುವ 2016ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ತಾಲೂಕಿನ ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ ಸ್ವಾಮೀಜಿ ಹವ್ಯಕ ಸಭಾ ಭವನದಲ್ಲಿ ನಡೆಯಿತು. ಶಿಬಿರವನ್ನು ಮುರ್ಡೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹಣಮಂತ ಬೀರಾದಾರ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಮುರ್ಡೇಶ್ವರದ ಅಧ್ಯಕ್ಷ ಸತೀಶ ಶೇಟ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ್, ಉತ್ತರ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಾಮನ ನಾಯ್ಕ ಮಂಕಿ, ಶ್ರೀಧರ ನಾಯ್ಕ ಆಸರಕೇರಿ, ಸಾಥಯ್ಯ ಹೊನ್ನ ನಾಯ್ಕ ಮಾನತಾಡಿದರು. ವೇದಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನ ಮಾಲಕ ಕೃಷ್ಣಾನಂದ ಭಟ್ಟ ಬಲ್ಸೆ, ಮಾವಳ್ಳಿ-1 ಗ್ರಾಮ ಪಂಚಾಯತ್ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಗ್ರಾಮ ಪಂಚಾಯತ್ ಮಾವಳ್ಳಿ-2ರ ಅಧ್ಯಕ್ಷೆ ನಾಗರತ್ನ ಪಡಿಯಾರ್, ಗಣ್ಯರಾದ ಶಂಕರ ಭಟ್ರಹಿತ್ಲು ಉಪಸ್ಥಿತರಿದ್ದರು ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಜನಜಾಗೃತಿ ವೇದಿಕೆ ಪ್ರಾರಂಭ, ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಟ್ಕಳ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಲತಾ ಬಂಗೇರ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಭಾಕರ ನಿರೂಪಿಸಿದರು. ಮಾಲಿನಿ ವಂದಿಸಿದರು. ಎಂಟು ದಿನಗಳ ಕಾಲ ನಡೆಯಲಿರುವ ಮದ್ಯ ವರ್ಜನ ಶಿಬಿರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ದಿವಾಕರ್ ಪೂಜಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಆರೋಗ್ಯ ಸಹಾಯಕರಾದ ಪ್ರೆಸಿಲ್ಲಾ ಡಿಸೋಜಾ ಇವರು ಶಿಬಿರಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಭಟ್ಕಳ ತಾಲೂಕಿನ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಭಟ್ಕಳ ತಾಲೂಕು, ನವಜೀವನ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಸಹಕರಿಸಿದರು.

ವಾರ್ತಾ ಭಾರತಿ 4 Dec 2025 2:36 pm

ಭಟ್ಕಳ: ತಂಝೀಮ್ ಎ ಇಸ್ಲಾಹ್ ಚುನಾವಣೆಗೆ ದಿನಾಂಕ ನಿಗದಿ; ಸದಸ್ಯತ್ವ ಅಭಿಯಾನ

ಭಟ್ಕಳ:  ಮಜ್ಲಿಸ್–ಎ–ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಮುಂದಿನ 3 ವರ್ಷದ ಅವಧಿಗಾಗಿ ವಾರ್ಷಿಕ ಚುನಾವಣೆಯು ಏಪ್ರಿಲ್ 12, 2026 ರಂದು ನಡೆಯಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನದ್ವಿ ತಿಳಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ, ಸದಸ್ಯತ್ವವಿರುವವರ ಎಲ್ಲಾ ಬಾಕಿ ಶುಲ್ಕಗಳನ್ನು ಮುಂಗಡವಾಗಿ ಪಾವತಿಸಬೇಕಾಗಿದ್ದು, ಜನವರಿ 12, 2026 ರ ಮೊದಲು ಬಾಕಿ ಪಾವತಿಸದವರು ಮತದಾನದಲ್ಲಿ ಭಾಗಿಯಾಗಲು ಅರ್ಹರಾಗುವುದಿಲ್ಲ ಎಂದು ನದ್ವಿ ಸ್ಪಷ್ಟಪಡಿಸಿದ್ದಾರೆ. ಹೊಸ ಸದಸ್ಯರಿಗಾಗಿ ನಿಯಮಾವಳಿ ಪ್ರಕಾರ, ಡಿಸೆಂಬರ್ 6 ರ ಮಧ್ಯರಾತ್ರಿ ಮೊದಲು ಸದಸ್ಯತ್ವ ಅರ್ಜಿ ಸಲ್ಲಿಸಿ, ಡಿಸೆಂಬರ್ 12 ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರ ಸದಸ್ಯತ್ವವನ್ನು ಅನುಮೋದಿಸಿಕೊಂಡರೆ ಮಾತ್ರ ಮತದಾನದ ಹಕ್ಕು ದೊರೆಯುತ್ತದೆ. ಡಿಸೆಂಬರ್ 6 ನಂತರ ಬಂದ ಅರ್ಜಿಗಳು ಈ ಚುನಾವಣೆಗೆ ಮತದಾನ ಮಾಡಲು ಅರ್ಹತೆ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಚುನಾವಣಾ ರಚನೆ ಕೂಡ ಬದಲಿಸಲಾಗಿದೆ: ಹಿಂದಿನ 35 ಸದಸ್ಯರ ಬದಲು, ಈ ಬಾರಿ ವಾರ್ಡ್‌ವಾರು 45 ಸದಸ್ಯರನ್ನು ಸಾರ್ವಜನಿಕವಾಗಿ ಆಯ್ಕೆ ಮಾಡಲಾಗುವುದು ಎಂದು ನ. 25 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣಾ ಹಂತಗಳು ಹೀಗಿವೆ: ಮೊದಲು ಹಳೆಯ ಆಡಳಿತದಿಂದ 10 ಸದಸ್ಯರನ್ನು ಆಯ್ಕೆ ಮಾಡಲಾಗುವುದು, ನಂತರ ಭಟ್ಕಳ ನಗರದಲ್ಲಿ ವಾರ್ಡ್‌ವಾರು ಚುನಾವಣೆ ಮೂಲಕ 45 ಸದಸ್ಯರನ್ನು ಆಯ್ಕೆ ಮಾಡಲಾಗುವುದು. ನಂತರ ಹೊಸ ಆಡಳಿತ 10 ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದ್ದು, ಅಧ್ಯಕ್ಷರು 3 ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಲು ಹಕ್ಕು ಹೊಂದಿದ್ದಾರೆ. ವಿಸರ್ಜಿತ ಆಡಳಿತದಲ್ಲಿ ಎರಡು ಅವಧಿ ಸತತವಾಗಿ ಸೇವೆ ಸಲ್ಲಿಸಿದವರು ಮೂರನೇ ಬಾರಿ ಆ ಪಟ್ಟಿಗೆ ಆಯ್ಕೆ ಆಗುವುದಿಲ್ಲ. ಮುಂದುವರಿಯಲು ಬಯಸಿದರೆ ಅವರು ನೇರ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಭಟ್ಕಳದ ಸಮರ್ಥ, ಪ್ರತಿಭಾವಂತ ಯುವಕರನ್ನು ತಂಝೀಮ್ ಸದಸ್ಯರಾಗಿ ಸೇರ್ಪಡೆಗೊಳಿಸಿ, ಮತದಾನದ ಹಕ್ಕನ್ನು ಉಪಯೋಗಿಸಿ, ಸಂಘಟನೆಯನ್ನು ಮುನ್ನೆಡೆಸಲು ಯುವಜನರು ಸಕ್ರಿಯವಾಗಬೇಕು ಎಂದು ಅಬ್ದುಲ್ ರಖೀಬ್ ಎಂ.ಜೆ. ಕರೆ ನೀಡಿದ್ದಾರೆ.

ವಾರ್ತಾ ಭಾರತಿ 4 Dec 2025 2:32 pm

ಸಿಎಂ ಸಿದ್ದರಾಮಯ್ಯ ಮಾತಿಗೆ ಮಹಿಳೆಯರ ನಗುವೋ, ನಗು: ವೈಚಾರಿಕತೆ ಬೆಳೆಸಿ ಎಂದು ಕರೆ ಕೊಟ್ಟ ಸಿಎಂ

ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು, ಮಹಿಳೆಯರಿಗೆ ಹಲವು ಪ್ರಶ್ನೆ ಕೇಳಿ ನಗು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗೃಹಲಕ್ಷ್ಮಿ ಹಣ ಬರುತ್ತಾ. ಫ್ರೀ ಬಸ್‌ನಲ್ಲಿ ಓಡಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸೆಪ್ಟೆಂಬರ್‌13ನೇ ತಾರೀಖಿನಂದು ಮಹಿಳಾ ದಿನಾಚರಣೆ ಆಚರಿಸಬೇಕು ಎಂದು ಮನವಿ ಮಾಡಿಕೊಂಡರು. ಅದಕ್ಕೆ ಮಹಿಳೆಯರು ಕೇಳಿದ್ದನ್ನು ಬೇಡ ಅನ್ನೋಕೆ ಆಗತ್ತ ಎಂದು ನಗೆಗಡಲಲ್ಲಿ ಸಿದ್ದರಾಮಯ್ಯ ತೇಲಿಸಿದರು.

ವಿಜಯ ಕರ್ನಾಟಕ 4 Dec 2025 2:30 pm

ಅಲ್ ಮದೀನಾ ಶಾಲೆಯಲ್ಲಿ ವಾರ್ಷಿಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮ

ಉಳ್ಳಾಲ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಅಧೀನದ ಅಲ್ ಮದೀನಾ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಅಲ್ ಮೆಮ್ಸ್ ಆರ್ಟ್ ಕಾರ್ನಿವಲ್ ಜುಬಿಲೋನೋ2 ಕೆ 25 ಫೆಸ್ಟಿವಲ್ ನ ಸಮಾರೋಪ ಡಿ.6 ರಂದು ಶನಿವಾರ ಸಂಜೆ ನಡೆಯಲಿದೆ ಎಂದು ಅಲ್ ಮದೀನಾ ಸಂಸ್ಥೆಯ ಶಿಕ್ಷಕ ಅಬ್ದುಲ್ ರಝಾಕ್ ಮಾಸ್ಟರ್ ಹೇಳಿದರು. ಡಿ.4ಗುರುವಾರ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ವೈವಿಧ್ಯಮಯ ವಿಷಯಗಳಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ಲೈಡಿಂಗ್ ಸ್ಟಾರ್ಸ್, ರೋರಿಂಗ್ ಸ್ಟಾರ್ಸ್ ಎಂಬ ಎರಡು ತಂಡದ ಹೆಸರಿನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದರು. ಡಿ.6 ಶನಿವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಸ್ಪೀಕರ್ ಯುಟಿ ಖಾದರ್ ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮದರಸ ಮುಖ್ಯ ಅಧ್ಯಾಪಕ ಅಬೂಬಕ್ಕರ್ ಮದನಿ ಪಡಿಕ್ಕಲ್,ಕನ್ವಿನರ್ ಮೊಯ್ದಿನ್ ಕುಂಞಿ ಕಲ್ಕಟ್ಟ, ವೈಸ್ ಕನ್ವಿನರ್ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Dec 2025 2:28 pm

ರಾಯಚೂರು| ಖಾಲಿ ಹುದ್ದೆಗಳ ಭರ್ತಿಗಾಗಿ ಎಐಡಿವೈಓದಿಂದ ಮನ್ಸಲಾಪುರದಲ್ಲಿ ಸಹಿ ಸಂಗ್ರಹ ಅಭಿಯಾನ

ರಾಯಚೂರು: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್(ಎಐಡಿವೈಓ) ಗ್ರಾಮ ಘಟಕದ ವತಿಯಿಂದ ಇಂದು ಮನ್ಸಲಾಪುರ ಗ್ರಾಮದಲ್ಲಿ ಖಾಲಿ ಹುದ್ದೆ ಭರ್ತಿಗಾಗಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳನ್ನು ಹಾಗೂ ರಾಜ್ಯದ 43 ಇಲಾಖೆಗಳಲ್ಲಿನ 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಲ್ಲಾ ನೇಮಕಾತಿಗಳ ವಯೋಮಿತಿಯನ್ನು ಕನಿಷ್ಠ ಐದು ವರ್ಷ ಹೆಚ್ಚಿಸಬೇಕು. ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಬೇಕು. ಎಲ್ಲಾ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಸಂಘಟಕರು ಆಗ್ರಹಿಸಿದರು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಇನ್ನು ಮುಂತಾದ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಈ ಸಹಿಸಂಗ್ರಹ ಅಭಿಯಾನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳು ಯುವಜನರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿವೆ. ಅವರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುತ್ತಿಲ್ಲ. ಉದ್ಯೋಗಗಳನ್ನು ಕೊಡುತ್ತಿಲ್ಲ. ಬದಲಿಗೆ ಇತ್ತೀಚಿಗೆ ಧಾರವಾಡದಲ್ಲಿ ಉದ್ಯೋಗ ಕೊಡಿ ಎಂದು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಇದು ಅತ್ಯಂತ ಖಂಡನೀಯ ಕ್ರಮವಾಗಿದೆ. ಪರಿಸ್ಥಿತಿ ಹೀಗೇಯೇ ಮುಂದುವರೆದರೆ ಯುವಜನರು ಇನ್ನಷ್ಟು ಬಲಿಷ್ಠವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಕೃಷ್ಣ ನಾಯಕ್ ಮನಸ್ಲಾಪುರ್, ಗ್ರಾಮ ಘಟಕದ ಕಾರ್ಯದರ್ಶಿ ಸಂತೋಷ ಸಾಗರ್, ಹಿರಿಯರಾದ ಶೇಖರಪ್ಪ, ವೆಂಕಟೇಶ್ ನಾಯಕ್, ಸಣ್ಣ ತಿಮ್ಮಣ್ಣ , ಶಿವರಾಜ್ ನಾಯಕ್, ಮಂಜುನಾಥ್ ಹಿರೇಮಠ್ ಅವರು ಸಹಿ ಮಾಡಿ ಬೆಂಬಲಿಸಿದರು. ಗ್ರಾಮದ ಯುವಕರಾದ ಹುಸೇನ್ ಬಾಷಾ, ಪೃಥ್ವಿರಾಜ, ಮಹೇಶ, ಚೆನ್ನಪ್ಪ, ಮಲ್ಲೇಶ ಮಡಿವಾಳ, ನಾಗೇಂದ್ರ ಮುಂತಾದವರು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಗ್ರಾಮದ ನೂರಾರು ಜನರು ಈ ಸಹಿ ಸಂಗ್ರಹ ಅಭಿಯಾನದಲ್ಲಿ ಸಹಿ ನೀಡುವ ಮೂಲಕ ಬೆಂಬಲಿಸಿದರು.

ವಾರ್ತಾ ಭಾರತಿ 4 Dec 2025 2:10 pm

ಲೈಂಗಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಾಗಿ ನಂಬಿಸಿ ಟೆಕ್ಕಿಗೆ 48 ಲಕ್ಷ ರೂ ವಂಚಿಸಿದ ಆಯುರ್ವೇದ ಡಾಕ್ಟರ್!

ಲೈಂಗಿಕ ಆರೋಗ್ಯ ಸಮಸ್ಯೆ ಎಂದು ಆಯುರ್ವೇದ ವೈದ್ಯನ ಬಳಿ ಹೋದ ಟೆಕ್ಕಿ 48 ಲಕ್ಷ ರೂ. ಕಳೆದುಕೊಂಡಿದ್ದಾನೆ. ಏನೇನೋ ಔಷಧಿಗಳನ್ನು ಕೊಟ್ಟು ಮೋಸ ಮಾಡಿದ್ದಾನೆ. ಸ್ವಯಂಘೋಷಿತ ಆಯುರ್ವೇದ ವೈದ್ಯ ವಿಜಯ್ ಗುರೂಜಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ದುಬಾರಿ ಮತ್ತು ಹಾನಿಕಾರಕ ಔಷಧಿಗಳಿಂದ ಎಂಜಿನಿಯರ್‌ಗೆ ಮೂತ್ರಪಿಂಡದ ಸಮಸ್ಯೆ ಉಂಟಾಗಿದೆ. ರಸ್ತೆ ಬದಿಯ ಆಯುರ್ವೇದ ಶಿಬಿರಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯ ಕರ್ನಾಟಕ 4 Dec 2025 2:09 pm

ಕನ್ನಡಿಗರ ಅಭಿಯಾನ: ದಕ್ಷಿಣ ಪಥೇಶ್ವರ \ಇಮ್ಮಡಿ ಪುಲಕೇಶಿ ಜಯಂತಿ\ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೆಂಡ್

ಇಂದು ಕನ್ನಡದ ಕುಲ ತಿಲಕ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯ. ಇಮ್ಮಡಿ ಪುಲಕೇಶಿ ರಾಜರನ್ನು ಹಲವರು ಸ್ಮರಿಸಿದ್ದಾರೆ. ಇದಕ್ಕೆಲ್ಲ ಕನ್ನಡಿಗರು ಇಷ್ಟು ದಿನಗಳ ಕಾಲ ಮಾಡಿದ ಪ್ರಯತ್ನವೇ ಮುಖ್ಯ ಕಾರಣ. ಪಕ್ಕದ ರಾಜ್ಯದ ರಾಜರುಗಳನ್ನು ಮೆರೆಸದೆ ಕನ್ನಡಿಗರು ಕರ್ನಾಡಕದ ರಾಜರನ್ನು ಮೆರೆಸಬೇಕು ಹಾಗೂ ಸ್ಮರಿಸಬೇಕು ಎಂದು ಕನ್ನಡಿಗರು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ

ಒನ್ ಇ೦ಡಿಯ 4 Dec 2025 2:04 pm

ಸೋಮೇಶ್ವರ : ಉಚ್ಚಿಲ ಸರ್ಕಾರಿ ಮೀನುಗಾರಿಕಾ ತಾಂತ್ರಿಕ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಗಮ

ಉಳ್ಳಾಲ : ಸೋಮೇಶ್ವರ ಉಚ್ಚಿಲದ ಸರ್ಕಾರಿ ಮೀನುಗಾರಿಕಾ ತಾಂತ್ರಿಕ ಪ್ರೌಢಶಾಲೆಯ 1978ರ ತಂಡದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಸದಾಶಿವ ಸರ್ ಅವರ ಸನ್ಮಾನ ಸಮಾರಂಭವು ಕೋಟೆಕಾರಿನ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನ. 29 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟಕರು ಮತ್ತು ಹಳೆಯ ವಿದ್ಯಾರ್ಥಿಗಳು ಈ ಸಭೆಯು ಕೇವಲ ಭೂತಕಾಲದ ಆಚರಣೆಯಲ್ಲ, ಬದಲಾಗಿ ಜೀವಮಾನದ ಬಂಧನಗಳ ಮರು ದೃಢೀಕರಣ ಮತ್ತು ಅವರ ಭವಿಷ್ಯವನ್ನು ರೂಪಿಸಿದ ಶಿಕ್ಷಕರಿಗೆ ಕೃತಜ್ಞತೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸದಾಶಿವ ಸರ್ ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.  

ವಾರ್ತಾ ಭಾರತಿ 4 Dec 2025 1:55 pm

H-1B ವೀಸಾ ಅರ್ಜಿಗಳ ವರ್ಧಿತ ಪರಿಶೀಲನೆಗೆ ಹೊರಬಿತ್ತು ಹೊಸ ಆದೇಶ; ಡೊನಾಲ್ಡ್‌ ಟ್ರಂಪ್‌ ಕೇಳುತ್ತಿಲ್ಲ ಯಾರ ಉಪದೇಶ

ಟ್ರಂಪ್‌ ಆಡಳಿತದ H-1B ವೀಸಾ ನಿಯಮಗಳಲ್ಲಿನ ಗೊಂದಲಗಳು ಮುಂದುವರೆದಿದ್ದು, ಇದೀಗ ಮತ್ತೊಂದು ಹೊಸ ಬದಲಾವಣೆಯನ್ನು ಮಾಡಲಾಗಿದೆ. H-1B ವೀಸಾ ಅರ್ಜಿದಾರರ ಉದ್ಯೋಗ ಹಿನ್ನೆಲೆ ಮತ್ತು ಅವರ ಕುಟುಂಬದ ಬಗ್ಗೆ ಮಾಹಿತಿ ಪಡೆಯಲು, H-1B ವೀಸಾ ಅರ್ಜಿಗಳ ವರ್ಧಿತ ಪರಿಶೀಲನೆಗೆ ಟ್ರಂಪ್‌ ಆಡಳಿತ ಆದೇಶ ಹೊರಡಿಸಿದೆ. ಸೆನ್ಸಾರ್‌ಶಿಪ್‌ ಹೆಸರಿನಲ್ಲಿ ಅರ್ಜಿಗಳನ್ನು ತಿರಸ್ಕರಿಸುವ ಹಕ್ಕನ್ನು ಯುಎಸ್‌ ಕಾನ್ಸುಲರ್‌ ಅಧಿಕಾರಿಗಳಿಗೆ ನೀಡಲಾಗಿದೆ. ಈ ಹೊಸ ಬದಲಾವಣೆಯಿಂದ ಏನೆಲ್ಲಾ ಪರಿಣಾಮ ಬೀರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 4 Dec 2025 1:51 pm

Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; 8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌

ನವಹೆದಲಿ, ಡಿಸೆಂಬರ್‌ 04: 8ನೇ ವೇತನ ಆಯೋಗ ಜಾರಿ ಕುರಿತು ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಸ್ಪಷ್ಟೀಕರಣ ನೀಡಿದೆ. ಕೇಂದ್ರ ನೌಕರರ ಮೂಲ ವೇತನಕ್ಕೆ ದರ ಏರಿಕೆ ಭತ್ಯೆ (DA) ವಿಲೀನ ಮಾಡುವ ಯಾವುದೇ

ಒನ್ ಇ೦ಡಿಯ 4 Dec 2025 1:45 pm

Putin Visits India: ಭಾರತ - ರಷ್ಯಾ ನಾಯಕರ ಭೇಟಿ, ಅಮೇರಿಕಾ ಲೆಕ್ಕಾಚಾರಗಳು ತಲೆಕೆಳಗಾಗುವ ನಿರೀಕ್ಷೆ!

Putin Visits India: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ 4-5 ರ ಭಾರತದ ಪ್ರವಾಸ ಹಾಗೂ ಶೃಂಗಸಭೆಯು ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತ ಮತ್ತು ರಷ್ಯಾದ ಮಾತುಕತೆಯನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧವು ಹಲವು ದಶಕಗಳಿಂದ ಇದೆ. ಭಾರತವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ

ಒನ್ ಇ೦ಡಿಯ 4 Dec 2025 1:45 pm

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ; ಈಗೇನು ಹೇಳುತ್ತೆ ಬಿಜೆಪಿ? ಪ್ರಿಯಾಂಕ ಗಾಂಧಿ ವ್ಯಂಗ್ಯ

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ 90 ರ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೊಮ್ಮೆ ರೂಪಾಯಿ ಮೌಲ್ಯ ಕುಸಿದಾಗ ಬಿಜೆಪಿ ಟೀಕಿಸಿತ್ತು, ಈಗ ಏನು ಹೇಳುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ರೂಪಾಯಿ 90.43ರ ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ.

ವಿಜಯ ಕರ್ನಾಟಕ 4 Dec 2025 1:27 pm

ಮೈದಾನದಲ್ಲೇ ಕೆಎಲ್‌ ರಾಹುಲ್‌ &ಪ್ರಸಿದ್ಧ್‌ ಕೃಷ್ಣ ಕನ್ನಡ ಸಂಭಾಷಣೆ: ಆಡಿಯೋ, ವಿಡಿಯೋ ಭಾರೀ ವೈರಲ್‌

KL Rahul Vs Prasidh Krishna: ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ವೇಳೆ ಆಟಗಾರರು ತಮ್ಮ ಭಾಷೆಯಲ್ಲೇ ನಡೆಸಿದ ಹಾಸ್ಯಮಯ ಸಂಭಾಷಣೆ ವೈರಲ್‌ ಆದ ಉದಾಹರಣೆಗಳಿವೆ. ಹಾಗೆಯೇ ಇದೀಗ ರಾಯಪುರ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆಯೇ ಮೈದಾನದಲ್ಲಿ ಕನ್ನಡಿಗರಾದ ಕೆಎಲ್‌ ರಾಹುಲ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ.

ಒನ್ ಇ೦ಡಿಯ 4 Dec 2025 1:26 pm

ಭಾರತಕ್ಕೆ ರಶ್ಯಾ ಅಧ್ಯಕ್ಷ ಪುಟಿನ್ ಭೇಟಿ: ದಿಲ್ಲಿಯಲ್ಲಿ ಹೈ ಅಲರ್ಟ್

ಹೊಸದಿಲ್ಲಿ: ಎರಡು ದಿನಗಳ ಭೇಟಿಗಾಗಿ ಗುರುವಾರ ಸಂಜೆ ವೇಳೆಗೆ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಾಷ್ಟ್ರ ರಾಜಧಾನಿ ದಿಲ್ಲಿಗೆ ಬಂದಿಳಿಯಲಿದ್ದಾರೆ. ಇದರಿಂದಾಗಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿಯಾದ್ಯಂತ ಭದ್ರತೆಯ ಭಾಗವಾಗಿ ವಿಶೇಷ ಆಯುಧ ಮತ್ತು ಯೋಜನಾ ತಂಡ ಹಾಗೂ ಶ್ವಾನದಳಗಳನ್ನು ನಿಯೋಜಿಸಲಾಗಿದೆ. ತಮ್ಮ ಎರಡು ದಿನಗಳ ಭಾರತ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಆಯೋಜನೆಗೊಂಡಿರುವ ಖಾಸಗಿ ಭೋಜನ ಕೂಟದಲ್ಲಿ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಪುಟಿನ್ ಹಾಗೂ ಮೋದಿ ಇಬ್ಬರೂ 23ನೇ ಭಾರತ-ರಶ್ಯಾ ವಾರ್ಷಿಕ ವ್ಯೂಹಾತ್ಮಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪುಟಿನ್‌ ಭೇಟಿ ಹಿನ್ನೆಲೆ ದಿಲ್ಲಿಯಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಶ್ಯಾ ಅಧ್ಯಕ್ಷರ ಆಗಮನದ ಹಿನ್ನೆಲೆ ದಿಲ್ಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.  

ವಾರ್ತಾ ಭಾರತಿ 4 Dec 2025 1:21 pm

ಕೇರಳಿಗರ ಪರ ಬ್ಯಾಟ್ ಬೀಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಕನ್ನಡಿಗರು ಗರಂ!

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಅನ್ಯ ರಾಜ್ಯದ ಚುನಾವಣೆಗೆ ಸಹಕರಿಸುತ್ತಿರುವುದು ಹಾಗೂ ಮತದಾರರ ಓಲೈಕೆಗೆ ಮಾಡುತ್ತಿರುವ ಸರ್ಕಸ್ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಹಾರದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಅವರು ಮಾಡಿದ್ದ ಆದೇಶವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರು ಕೇರಳದ ಸ್ಥಳೀಯ ಚುನಾವಣೆಗೂ ಇದೇ ಮಾದರಿಯನ್ನು ಅನುಸರಿಸಿದ್ದಾರೆ. ಈ ವಿಚಾರವು

ಒನ್ ಇ೦ಡಿಯ 4 Dec 2025 1:04 pm

ದ್ವೇಷ ಭಾಷಣ ವಿರೋಧಿ ಮಸೂದೆ ಉದ್ದೇಶ ಬಿಜೆಪಿ ಟಾರ್ಗೆಟ್ ಅಲ್ಲ: ಡಾ.ಜಿ ಪರಮೇಶ್ವರ್ ಸ್ಪಷ್ಟನೆ

ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಮಸೂದೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು. ಇದು ಈಗಾಗಲೇ ಇರುವ ಕಾಯ್ದೆಯನ್ನು ಬಲಪಡಿಸುವ ತಿದ್ದುಪಡಿಯಾಗಿದೆ. ಇನ್ನು,ಕೆಸಿ ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ ಎಂದಿರುವ ಪರಮೇಶ್ವರ್‌, ಸತೀಶ್ ಜಾರಕಿಹೊಳಿ ಅವರ ಭೇಟಿ ಬಗ್ಗೆಯೂ ಮಾತನಾಡಿ ನಾವು ಒಟ್ಟಿಗೆ ಊಟ ಮಾಡಿದ್ರೆ ಬಿಜೆಗೇನು ಆತಂಕ ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯ ಕರ್ನಾಟಕ 4 Dec 2025 12:53 pm

Haveri : ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆ ಸೆರೆ

ಹಾವೇರಿ : ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಡೂರು ಗ್ರಾಮದ ಗುಡ್ಡದ ಸಮೀಪದ‌ ರೈತರ ಜಮೀನಿನಲ್ಲಿ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ‌ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಅಡ್ಡಾಡುತ್ತಿದ್ದ ಚಿರತೆ ಕಾರಣ ರೈತರು ಭಯದಿಂದ ಕೃಷಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಕಳೆದ ವಾರದ ತೋಟದ ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಇದೀಗ ಚಿರತೆಯನ್ನು ಪತ್ತೆ ಮಾಡಿ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆ ಸೆರೆಯಿಂದ  ಸುತ್ತಮುತ್ತಲಿನ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ವಾರ್ತಾ ಭಾರತಿ 4 Dec 2025 12:51 pm

ಜಿಬಿಎ ನೀಡುವ ಇ-ಖಾತಾದಲ್ಲಿ ಮಹತ್ವದ ಬದಲಾವಣೆ - ನೀವು ತಿಳಿದುಕೊಳ್ಳಲೇಬೇಕಾದ 9 ವಿಚಾರ

ಬೆಂಗಳೂರು ಪ್ರಾಧಿಕಾರವು ಇ-ಖಾತಾ ವ್ಯವಸ್ಥೆಯನ್ನು ಡಿಜಿಟಲ್ ಆಸ್ತಿ ದಾಖಲೆಯಾಗಿ ಸುಧಾರಿಸಿದೆ. ನಗರ ಸಮೀಕ್ಷಾ ಯೋಜನೆ ಯುಪಿಒಆರ್ ನಕ್ಷೆಗಳನ್ನು ಡ್ರೋನ್ ದೃಶ್ಯಗಳೊಂದಿಗೆ ಸಂಯೋಜಿಸಿ, ಆಸ್ತಿ ಮಾಲೀಕರ ಫೋಟೋ, ಹೆಸರು, ಸ್ಥಳ, ವಿದ್ಯುತ್, ನೀರಿನ ಸಂಪರ್ಕ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದ್ದು, ಆಸ್ತಿ ಖರೀದಿದಾರರಿಗೆ ಅನುಕೂಲವಾಗಲಿದೆ.

ವಿಜಯ ಕರ್ನಾಟಕ 4 Dec 2025 12:41 pm

ಬಾಬರಿ ಮಸೀದಿ ಕಟ್ಟುವುದಾಗಿ ಹೇಳಿದ್ದ ಟಿಎಂಸಿ ಶಾಸಕನಿಗೆ ಗೆಟೌಟ್‌ ಎಂದ ಮಮತಾ ಬ್ಯಾನರ್ಜಿ; ಅರ್ಧಕ್ಕೆ ನಿಂತ ಹುಮಾಯೂನ್‌ ನಾಮಾ!

ಇದೇ ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಶಾಸಕ ಹುಮಾಯೂನ್‌ ಕಬೀರ್‌ ಅವರನ್ನು, ಟಿಎಂಸಿ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಟಿಎಂಸಿ ವಿರುದ್ಧ ಕೋಮು ಧ್ರುವೀಕರಣದ ಆರೋಪ ಹೊರಿಸಿದ ಬೆನ್ನಲ್ಲೇ, ಹುಮಾಯೂನ್‌ ಕಬೀರ್‌ ಅವರ ಅಮಾನತು ಆದೇಶ ಹೊರಬಿದ್ದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸದಿರುವುದೂ, ಹುಮಾಯೂನ್‌ ಅವರ ಅಮಾನತಿಗೆ ಕಾರಣವಾಗಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 4 Dec 2025 12:37 pm

Rupee Vs Dollar: ಏಷ್ಯಾದಲ್ಲೇ ಕಳಪೆ ಕರೆನ್ಸಿ ನಮ್ಮದೇ! ಡಾಲರ್ ಮುಂದೆ ಮಂಡಿಯೂರಿದ ರೂಪಾಯಿ..

Rupee Vs Dollar: ದೇಶ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಇಡೀ ಏಷ್ಯಾದಲ್ಲೇ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಈ ರೀತಿ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತ ಕಂಡಿರುವುದು ಇದೇ ಮೊದಲು. ದೇಶದ ರೂಪಾಯಿ ಮೌಲ್ಯವು ಇಡೀ ಏಷ್ಯಾದಲ್ಲಿ ಈ ಪರಿ ಕುಸಿತ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆ ಇದೆ. ಕರೆನ್ಸಿ

ಒನ್ ಇ೦ಡಿಯ 4 Dec 2025 12:33 pm

ಕಾಸರಗೋಡು | ಪೊಲೀಸ್‌ ಕಸ್ಟಡಿಯಿಂದ ಪರಾರಿಯಾದ ಪೋಕ್ಸೋ ಆರೋಪಿಯ ಬಂಧನ

ಕಾಸರಗೋಡು: ಪೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಬುಧವಾರ ಕಾಸರಗೋಡಿನಲ್ಲಿ ನಡೆದಿದ್ದು, ಕೆಲ ತಾಸುಗಳ ಬಳಿಕ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಕ್ರಾಜೆ ಕೊರೆಕ್ಕಾನದ ಅಶ್ವಥ್ ( 19) ಪರಾರಿಯಾಗಿದ್ದ ಆರೋಪಿ. ಪರಾರಿಯಾದ ಬಳಿಕ ನಗರದ ಅನೆಬಾಗಿಲು ಎಂಬಲ್ಲಿನ ಪೊದೆಯೊಂದರಲ್ಲಿ ಅವಿತುಕೊಂಡಿದ್ದ ಈತನನ್ನು, ಪೊಲೀಸರು  ಬಂಧಿಸಿದ್ದಾರೆ. ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿಚಾರಣೆಗೆ ಕಾಸರಗೋಡು ನ್ಯಾಯಾಲಯವು ಆರೋಪಿಯನ್ನು ಬುಧವಾರ ಮಧ್ಯಾಹ್ನಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸರು ಕಾಸರಗೋಡು ನಗರ ಠಾಣೆಗೆ ಕರೆದು ಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು.   ಕೂಡಲೇ ಹುಡುಕಾಟ ಪ್ರಾರಂಭಿಸಿದ ಪೊಲೀಸರು, ಆನೆಬಾಗಿಲು ಎಂಬಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದ ಈತನನ್ನು ಸಂಜೆ ವೇಳೆ ಬಂಧಿಸಿದರು.

ವಾರ್ತಾ ಭಾರತಿ 4 Dec 2025 12:27 pm

ಪಿಎಂ ಕುಸುಮ್‌ ಬಿ ಯೋಜನೆ: ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಶೇ.80ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಸುವುದು ಹೇಗೆ?

ರೈತರೇ ಗಮನಿಸಿ! ಕರ್ನಾಟಕ ಸರ್ಕಾರವು ಪಿಎಂ ಕುಸುಮ್-ಬಿ ಯೋಜನೆಯಡಿ, ರೈತರ ಆರ್ಥಿಕಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತಿದೆ. ಇದರಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿ, ರೈತರ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ. ಹಗಲಿನ ವೇಳೆಯಲ್ಲಿ ನಿರಂತರ ನೀರಾವರಿ ಸೌಲಭ್ಯ ಲಭ್ಯವಾಗುವುದರಿಂದ ಬೆಳೆಗಳ ಇಳುವರಿ ಹೆಚ್ಚುತ್ತದೆ. ಕೇವಲ ಶೇ.20ರಷ್ಟು ಮೊತ್ತವನ್ನು ಪಾವತಿಸಿ ಈ ಯೋಜನೆಯ ಫಲಾನುಭವಿಗಳಾಗಿ. ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 4 Dec 2025 12:22 pm

3 ವರ್ಷದ ಮಗು ಸೇರಿದಂತೆ ತನ್ನದೇ 4 ಮಕ್ಕಳನ್ನು ಕೊಂದ ತಾಯಿ; ಸರಣಿ ಕೊಲೆಯ ಹಿಂದಿದೆ ನಂಬಲಸಾಧ್ಯ ಕಾರಣ!

ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಆಘಾತ ಮೂಡಿಸುವಂತಿದೆ. 32 ವರ್ಷದ ಪೂನಂ ಎಂಬ ಮಹಿಳೆಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಮಕ್ಕಳ ಸೌಂದರ್ಯದ ಬಗ್ಗೆ ತನಗಿದ್ದ ಅತಿಯಾದ ಅಸೂಯೆಯೇ ಈ ಕೊಲೆಗಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯ ಕರ್ನಾಟಕ 4 Dec 2025 12:18 pm

Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಡಿಸೆಂಬರ್ 4ರ ಅಂಕಿಅಂಶಗಳು

Karnataka Reservoirs Water Level: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಪ್ರಮಾಣ ಹೆಚ್ಚಾಗುತ್ತಲಿದೆ. ಈ ನಡುವೆಯೇ ಚಂಡಮಾರುತ ಹಿನ್ನೆಲೆ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದೆ. ಇನ್ನೂ ಈಗಾಗಲೇ ಮುಂಗಾರು ಮಳೆ ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ಡಿಸೆಂಬರ್ 4) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್‌) ಸೇರಿದಂತೆ ಉಳಿದ ಪ್ರಮುಖ

ಒನ್ ಇ೦ಡಿಯ 4 Dec 2025 12:13 pm

ನಗರಗಳಲ್ಲಿ ಜಾತಿ ಇಲ್ಲವೇ?

ಜಾತಿ ನಗರದಲ್ಲಿ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ಸಂಸ್ಥೆಗಳಲ್ಲಿ, ಸಂಬಂಧಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಅಡಗಿರುವುದನ್ನು ಕಾಣಬಹುದು. ಭಾರತದ ಸಾಮಾಜಿಕ ರಚನೆ ದೀರ್ಘಕಾಲದಿಂದ ಜಾತಿ ಇತಿಹಾಸದ ತೂಕವನ್ನು ಹೊತ್ತುಕೊಂಡಿವೆ. ಈ ಅಡಚಣೆಗಳನ್ನು ಸರಿಯಾಗಿ ಗುರುತಿಸಿ ತೆಗೆದುಹಾಕಿದಾಗ ಮಾತ್ರ ನಿಜವಾದ ಸಮಾನತೆ ಆಧಾರಿತ ನಗರಗಳನ್ನು ನಿರ್ಮಿಸಲು ಸಾಧ್ಯ. ಇತ್ತೀಚೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಗೊತ್ತಾದ ಅಂಶವೆಂದರೆ ನಗರ ಪ್ರದೇಶಗಳಲ್ಲಿ ಜಾತಿ ತಾರತಮ್ಯದ ಕುರೂಪ ದರ್ಶನ. ನಿಜ ಜಾತಿ ಹೇಳಿದರೆ ಯಾರೂ ಬಾಡಿಗೆ ಮನೆ ಕೊಡುವುದಿಲ್ಲ ಎನ್ನುವ ಕಾರಣದಿಂದ ತಮ್ಮ ಮೂಲ ಜಾತಿಯನ್ನು ಮರೆಮಾಚಿ ಉತ್ತಮ ಜಾತಿಗಳ ಹೆಸರು ಹೇಳಿ ಬದುಕುತ್ತಿರುವುದು ಅನೇಕ ಕಡೆ ಕಂಡುಬಂದಿದೆ. ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಜನರು ಜಾತಿ ಹೆಸರನ್ನು ಲಿಂಗಾಯತರು ಎಂದು ಬರೆಸಿ ಮಾರನೇ ದಿನ ಸಮೀಕ್ಷೆ ಅಧಿಕಾರಿಗಳ ಹತ್ತಿರ ಬಂದು ‘‘ಸರ್ ನಾವು ದಲಿತರು, ಈ ವಿಷಯ ಗೊತ್ತಾದರೆ ಮಾಲಕರು ಮನೆ ಖಾಲಿ ಮಾಡಿಸುತ್ತಾರೆ. ಅದಕ್ಕೆ ಸುಳ್ಳು ಜಾತಿ ಬರೆಸಿದೆ. ಈಗ ಅದನ್ನು ಸರಿ ಮಾಡಿ’’ ಎಂದು ಕೇಳಿಕೊಂಡಿರುವ ಪ್ರಸಂಗಗಳು ಕಂಡುಬಂದಿವೆ. ಇನ್ನೊಂದು ಏರಿಯಾದಲ್ಲಿ ಒಂದು ಕುಟುಂಬ ಗಣತಿ ಅಧಿಕಾರಿಗಳಿಗೆ ತಮ್ಮ ಜಾತಿ ಹೆಸರನ್ನು ಮೆಲ್ಲಗೆ ಹೇಳುತ್ತಿದ್ದರು. ಕಾರಣ ಕೇಳಿದಾಗ ‘‘ನಾವು ನಮ್ಮ ಮನೆಯಲ್ಲಿ ಇರುವ ಬಾಡಿಗೆದಾರರಿಗೆ ನಮ್ಮದು ಬೇರೆ ಜಾತಿ ಎಂದು ಹೇಳಿದ್ದೇವೆ. ಅವರಿಗೆ ಮನೆ ಮಾಲಕನ ನಿಜ ಜಾತಿ ಗೊತ್ತಾದರೆ ಮನೆ ಖಾಲಿ ಮಾಡುತ್ತಾರೆ. ವಿಷಯ ಗೊತ್ತಾಗಿ ಬೇರೆ ಜಾತಿಯವರು ಬಾಡಿಗೆಗೆ ಬರುವುದಿಲ್ಲ ಎಂಬ ಭಯ. ಸರ್’’ ಎಂದರು. ಇದರಿಂದ ಭಾರತೀಯ ನಗರಗಳ ಬಗ್ಗೆ ಸಾಮಾನ್ಯ ಕಲ್ಪನೆ ಏನೆಂದರೆ, ನಗರೀಕರಣವು ಜಾತಿ ವ್ಯವಸ್ಥೆಯನ್ನು ಇನ್ನೊಂದು ರೂಪದಲ್ಲಿ ಸಂಘಟಿತಗೊಳಿಸುತ್ತಿದೆ ಎಂಬುದು. ಗಗನಚುಂಬಿ ಕಟ್ಟಡಗಳು, ಮಲ್ಟಿನ್ಯಾಷನಲ್ ಕಂಪೆನಿಗಳು, ಮೆಟ್ರೋ ರೈಲುಗಳು, ಐಟಿ ಪಾರ್ಕ್‌ಗಳು ಇವೆಲ್ಲವೂ ಮೆರಿಟ್, ಸಮಾನ ಅವಕಾಶ ಹಾಗೂ ಅನಾಮಿಕತೆ ಆಧಾರಿತ ಸಮಾಜವನ್ನು ಸಂಕೇತಿಸುವಂತಿವೆ. ಆದರೆ ಈ ಆಧುನಿಕತೆಯ ಮೇಲ್ಮೈ ಕೆಳಗಿರುವ ನಗರದ್ದು ಒಂದು ಗಾಢವಾದ ಸಾಮಾಜಿಕ ರಚನೆ; ಇಲ್ಲಿ ಜಾತಿ ಮಂಕಾಗುವುದಿಲ್ಲ, ಬದಲಿಗೆ ಹೊಸ ರೂಪಗಳಲ್ಲಿ ತಾನೇ ತಾನಾಗಿ ಪುನರುತ್ಪತ್ತಿ ಪಡೆಯುತ್ತಿದೆ. ಹೀಗಾಗಿ ನಗರದಲ್ಲಿ ಜಾತಿ ಎಲ್ಲಿದೆ? ಎಂಬ ಪ್ರಶ್ನೆ ಉಂಟಾಗಿದೆ. ಜಾತಿಯನ್ನು ಕಣ್ಣಿಗೆ ಕಾಣುವ ಗ್ರಾಮೀಣ ರೂಪದಲ್ಲಿ ಹುಡುಕುವುದಲ್ಲ; ಅದು ನಗರ ಜೀವನದ ವಿವಿಧ ಪದರಗಳಲ್ಲಿ ಹೇಗೆ ಅಡಗಿರುವುದು ಎಂಬುದನ್ನು ಅರಿಯಬೇಕಾದ ಪ್ರಶ್ನೆ. ಮೊದಲು ನಗರದ ನೆಲೆಯ ವಿನ್ಯಾಸಕ್ಕೆ ಗಮನಿಸಿದರೆ ಜಾತಿ ವ್ಯವಸ್ಥೆಯ ರಚನೆ ಇನ್ನೂ ಸ್ಪಷ್ಟವಾಗುತ್ತವೆ. ಇಂದು ಅಗ್ರಹಾರ, ಪಾಳಿ, ಓಣಿ ಎಂಬ ಹೆಸರುಗಳು ಕಾಣಿಸದಿದ್ದರೂ, ವಸತಿ ಪ್ರದೇಶಗಳು ಜಾತಿ ಆಧಾರದ ಮೇಲೆ ವಿಭಜನೆಯಾಗಿರುವುದನ್ನು ಕಾಣಬಹುದು. ಮನೆ ಬಾಡಿಗೆಗೆ ನೀಡುವಾಗ ಸಸ್ಯಾಹಾರಿಗಳಿಗೆ ಮಾತ್ರ ಎಂಬ ಮಸುಕಾದ ಪದಗಳು ಜಾತಿ ಆಧಾರಿತ ಫಿಲ್ಟರ್‌ಗಳಂತೆ ಕೆಲಸ ಮಾಡುತ್ತವೆ. ಹಾಗೆಯೇ ಬೆಳೆಯುತ್ತಿರುವ ನಗರ ಸ್ಲಂಗಳು ಸಹ ವಲಸೆ ಬಂದ ಸಮುದಾಯಗಳ ಜಾತಿ ಆಧಾರಿತ ಗುಂಪುಗಾರಿಕೆಯನ್ನು ಪ್ರತಿಬಿಂಬಿಸುತ್ತವೆ. ಅನೇಕ ದಲಿತರು, ಸಾಂಪ್ರದಾಯಿಕ ಕಾರ್ಮಿಕರು, ಅಲೆಮಾರಿ ಸಮುದಾಯಗಳು ನಗರಕ್ಕೆ ಬಂದರೂ, ನಗರೀಕರಣದ ಫಲಗಳನ್ನು ಪಡೆಯದೆ, ಆರ್ಥಿಕ ಮತ್ತು ಭೌಗೋಳಿಕ ಅಂಚಿನಲ್ಲಿ ಉಳಿಯುತ್ತಿದ್ದಾರೆ. ಆಧುನಿಕ ಭಾರತದಲ್ಲಿ ಜಾತಿ ವ್ಯವಸ್ಥೆ ಕಣ್ಮರೆಯಾಗಿಲ್ಲ; ಬದಲಾಗಿ, ಅದು ಸಮಕಾಲೀನ ವ್ಯವಸ್ಥೆಗೆ ಅನುಗುಣವಾಗಿ ಹೊಂದಿಕೊಂಡಿದೆ. ವಿಶೇಷವಾಗಿ ನಗರ ಸ್ಥಳಗಳಲ್ಲಿ, ಅಲ್ಲಿ ಜಾತಿ ಸೂಕ್ಷ್ಮ, ಪರೋಕ್ಷ ಮತ್ತು ಮರುಸಂಘಟಿತ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಜಾತಿ ಅನೌಪಚಾರಿಕ ರೀತಿಯಲ್ಲಿ ಎಲ್ಲೆಡೆ ಮುಂದುವರಿಯುತ್ತಿದೆ. ಬ್ರಾಹ್ಮಣ ಕೆಟರಿಂಗ್ ಸರ್ವಿಸ್, ಉಡುಪಿ ಹೋಟೆಲ್ ಎನ್ನುವ ಬೋರ್ಡ್ ಎಲ್ಲೆಡೆ ಇಂದು ಸಿಟಿಗಳಲ್ಲಿ ಸಾಮಾನ್ಯ. ಕೆಲವೆಡೆ ಒಂದು ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ ನೀಡುವ ಜಾಹೀರಾತುಗಳು ಇಂದು ನಗರದ ಎಲ್ಲೆಡೆ ಕಾಣಬಹುದು. ಫ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ಜಾತಿಯು ರಾರಾಜಿಸುತ್ತಿರುವುದನ್ನು ನಾವು ಕಾಣಬಹುದು. ಬೆಂಗಳೂರು, ಮುಂಬೈ, ದಿಲ್ಲಿ, ಹೈದರಾಬಾದ್ ಮತ್ತು ಪುಣೆಯಂತಹ ಕಾಸ್ಮೋಪಾಲಿಟನ್ ನಗರಗಳಲ್ಲಿಯೂ ಸಹ ಜಾತಿ ಆಧಾರಿತ ಅದೃಶ್ಯ ಭೌಗೋಳಿಕ ಗಡಿಗಳನ್ನು ಕಾಣಬಹುದು. ನಗರಗಳಲ್ಲಿ ವ್ಯಾಪಾರಗಳನ್ನು ಕೆಲವೊಮ್ಮೆ ನಿರ್ದಿಷ್ಟ ಸಮುದಾಯದ ಜಾಲ ನಿಯಂತ್ರಿಸುತ್ತದೆ. ಹಿಂದುಳಿದ ಸಮುದಾಯ ನೈರ್ಮಲ್ಯ, ವಿತರಣಾ ಸೇವೆ ಮತ್ತು ಇತರ ಗಿಗ್ ಇಕಾನಮಿ ಉದ್ಯೋಗಗಳಲ್ಲಿ ಅಸಮಾನವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ ನೇಮಕಾತಿ ಹೆಚ್ಚಾಗಿ ಜಾತಿ ಆಧಾರಿತ ಅನೌಪಚಾರಿಕ ಜಾಲಗಳ ಮೂಲಕ ನಡೆಯುತ್ತದೆ. ಅದೇ ರೀತಿ, ನಗರ ಪ್ರದೇಶಗಳಲ್ಲಿ ಜಾತಿ ಸಂಘಗಳು ರಾಜಕೀಯ ನಿರ್ಧಾರಗಳ ಮೇಲೆ ಬಹಳ ಪ್ರಭಾವ ಬೀರುತ್ತವೆ. ಪ್ರಜಾಪ್ರಭುತ್ವ ಭಾಗವಹಿಸುವಿಕೆಯನ್ನು ಸಿದ್ಧಾಂತಕ್ಕಿಂತ ಜಾತಿ ಆಧಾರಿತ ಬಣಗಳ ಕಡೆಗೆ ಬದಲಾಯಿಸುತ್ತವೆ. ಜಾತಿ ಆಧಾರಿತ ವಾಟ್ಸ್‌ಆ್ಯಪ್ ಗುಂಪುಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರವೃತ್ತಿಗಳು ಇಂದು ಹೆಚ್ಚಾಗಿವೆ. ಬುಡಕಟ್ಟು ಮತ್ತು ದಲಿತ ಇತಿಹಾಸಗಳನ್ನು ಅಂಚಿನಲ್ಲಿಡುವ ಖಾಸಗಿ ಶಾಲೆಗಳು ಸಹ ಸಂಖ್ಯೆಯಲ್ಲಿ ಹೆಚ್ಚಾಗಿವೆ. ನಗರ ಆರ್ಥಿಕತೆಯು ಜಾತಿ ಶ್ರೇಣಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಬಡ ಮತ್ತು ಹಿಂದುಳಿದ ಕಾರ್ಮಿಕರು ತಟಸ್ಥವಾಗಿ ಕಾಣುತ್ತಾರೆ. ರಚನಾತ್ಮಕವಾಗಿ ಅಂಚಿನಲ್ಲಿರುವ ಜಾತಿ ಗುಂಪುಗಳನ್ನು ಕಡಿಮೆ-ಭದ್ರತೆ, ಕಡಿಮೆ ಲಾಭದ ಕೆಲಸದಲ್ಲಿ ಹೆಚ್ಚಾಗಿ ನೋಡಬಹುದು. ಸವಲತ್ತು ಪಡೆದ ಜಾತಿಗಳು ಅಧಿಕಾರ ನಿರ್ವಹಣೆ ಮತ್ತು ಮಾಲಕತ್ವದಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಜಾತಿಯನ್ನು ಧಾರ್ಮಿಕ ಶ್ರೇಣಿಯಿಂದ ಆರ್ಥಿಕ ಶ್ರೇಣೀಕರಣಕ್ಕೆ ಬದಲಾಯಿಸುತ್ತವೆ. ಆದರೂ, ಈ ಹಿಂಜರಿತದ ಪ್ರವೃತ್ತಿಗಳ ಜೊತೆಗೆ, ಜಾತಿ ಆಧಾರಿತ ಸಾಹಿತ್ಯ ವಲಯಗಳು, ಸಾಂಸ್ಕೃತಿಕ ಸಂಘಟನೆಗಳು, ರಂಗಭೂಮಿ ಚಳವಳಿಗಳು ಮತ್ತು ವಿದ್ಯಾರ್ಥಿ ನಿಲಯಗಳ ಮೂಲಕ ಒಗ್ಗಟ್ಟು, ರಾಜಕೀಯ ಅರಿವು ಮತ್ತು ಪ್ರತಿ-ನಿರೂಪಣೆಗಳನ್ನು ಬೆಳೆಸುವ ಮೂಲಕ ಸಿದ್ಧಾಂತಗಳ ಪ್ರತಿಪಾದನೆಯ ತಾಣಗಳಾಗಿ ಮಾರ್ಪಟ್ಟಿವೆ. ಹೀಗಾಗಿ, ಆಧುನಿಕ ಭಾರತೀಯ ನಗರಗಳಲ್ಲಿ ಜಾತಿಯು ರದ್ದುಗೊಂಡ ಅವಶೇಷವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ ರೂಪಾಂತರಗೊಂಡ ಮತ್ತು ವಿವಿಧ ಪದರಗಳ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ದೈನಂದಿನ ಅಭ್ಯಾಸಗಳು, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಸಾಂಸ್ಕೃತಿಕ ಆಯ್ಕೆಗಳಲ್ಲಿ ಜಾತಿ ರಹಸ್ಯವಾಗಿ ಹುದುಗಿದೆ. ಏಕಕಾಲದಲ್ಲಿ ಪ್ರತಿರೋಧ ಮತ್ತು ಅಸ್ಮಿತೆಯ ಪ್ರತಿಪಾದನೆಯ ಭಾಗವಾಗಿದೆ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ನಗರದ ಉದ್ಯೋಗ ಮಾರುಕಟ್ಟೆಯಲ್ಲಿ ಜಾತಿಯ ಪ್ರಭಾವ ಇನ್ನೂ ಹೆಚ್ಚು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ. ನಗರವು ಜಾತಿ ರಹಿತ ಉದ್ಯೋಗ ಕೊಡುತ್ತದೆ ಎಂಬ ಕಲ್ಪನೆ ಮಿಥ್ಯ. ಕ್ಲೀನಿಂಗ್, ಕಸ ವಿಂಗಡಣೆ, ಬೀದಿ ಸ್ವಚ್ಛತೆ ಮುಂತಾದ ಕೆಲಸಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಲಿತ ಸಮುದಾಯಗಳು ತೊಡಗಿರುವುದು ಕಂಡುಬರುತ್ತದೆ. ಕಾರ್ಪೊರೇಟ್ ವಿಭಾಗದಲ್ಲಿ ಉದ್ಯೋಗಗಳು ಸಂಜ್ಞೆಗಳ ಮೂಲಕ ನಿರ್ಧಾರಗೊಳ್ಳುತ್ತವೆ ಎನ್ನುವ ಮಾತಿದೆ. ಇಂಗ್ಲಿಷ್ ಶಿಕ್ಷಣ, ತರಬೇತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸೌಲಭ್ಯ ಮತ್ತು ಸಾಂಸ್ಕೃತಿಕ ಬಂಡವಾಳ ಇವುಗಳ ಲಾಭವನ್ನು ಮೇಲ್ವರ್ಗದ ಜಾತಿ ಗುಂಪುಗಳು ಹೆಚ್ಚಾಗಿ ಅನುಭವಿಸುತ್ತವೆ. ಇದರಿಂದ ಮೊದಲ ಪೀಳಿಗೆಯ ನಗರ ಬಡವರಿಗೆ ಅವಕಾಶಗಳು ನಿರ್ಬಂಧಿತವಾಗುತ್ತಿವೆ ಎನ್ನುವ ಆರೋಪವಿದೆ. ಮಹಾನಗರಗಳಾದ ಬೆಂಗಳೂರು, ಮುಂಬೈ, ದಿಲ್ಲಿ ಮತ್ತು ಹೈದರಾಬಾದ್‌ನಲ್ಲಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜಾತಿಗಳಿಂದ ಬಂದ ವ್ಯಕ್ತಿಗಳು ಶಿಕ್ಷಣ, ಸರಕಾರಿ ಉದ್ಯೋಗಗಳು, ಐಟಿ ವಲಯ ಮತ್ತು ಉತ್ತಮ ಜೀವನೋಪಾಯಕ್ಕೆ ಹೆಚ್ಚಿನ ಪ್ರವೇಶ ಪಡೆಯುತ್ತಿದ್ದರೂ, ಸ್ನೇಹ ಸಂಬಂಧಗಳು, ನೆರೆಹೊರೆಯ ಸಂಘಟನೆಗಳು ಮತ್ತು ಮಾರ್ಗದರ್ಶನ ವಲಯಗಳು ಇನ್ನೂ ಜಾತಿ ಆಧಾರಿತವಾಗಿಯೇ ಉಳಿದಿವೆ. ಜೊತೆಗೆ, ಕಂಪೆನಿಗಳಲ್ಲಿ ಪದೋನ್ನತಿ ಅವಕಾಶಗಳು, ವೃತ್ತಿಜೀವನದ ಬೆಳವಣಿಗೆ ಮತ್ತು ವೃತ್ತಿಪರ ಜಾಲತಾಣಗಳಲ್ಲಿ ಅನೌಪಚಾರಿಕವಾಗಿ ಇನ್ನೂ ಭೇದಭಾವ ಇನ್ನೂ ಮುಂದುವರಿದಿದೆ. ಸರಕಾರವು ಸಹ ಸಾಕಷ್ಟು ರೀತಿಯಲ್ಲಿ ಜಾತಿ ನಿವಾರಣೆಗೆ ಪ್ರಯತ್ನಪಟ್ಟರೂ ತಾನೇ ಜಾತಿ ಜಂಜಾಟದಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ನೀತಿ ನಿರೂಪಣೆಗಳು ಸಹ ಇಂದು ಸಮುದಾಯ ಆಧಾರಿತವಾಗಿ ಮಾಡಬೇಕಾಗಿದೆ. ನಗರ ರಾಜಕೀಯದಲ್ಲೂ ಜಾತಿ ಗುರುತು ಮಹತ್ವದ್ದೇ. ವಾರ್ಡ್ ಮಟ್ಟದ ಚುನಾವಣೆಗಳಲ್ಲಿ ಯಾವ ಪ್ರದೇಶದಲ್ಲಿ ಯಾವ ಜಾತಿ ಸಮೂಹ ಹೆಚ್ಚು ಎಂಬುದರ ಮೇಲೆ ಮತಗಳ ಲೆಕ್ಕಾಚಾರ ನಡೆಯುತ್ತದೆ. ವಿವಿಧ ಜಾತಿ ಸಂಘಗಳು, ಸೇವಾ ಸಂಘಗಳು, ಸಮುದಾಯ ಭವನಗಳು ಮತ್ತು ಹಾಸ್ಟೆಲ್‌ಗಳು ನಗರದಲ್ಲಿ ಪುನರ್‌ಸಂಘಟಿತವಾಗುತ್ತವೆ. ಹೀಗಾಗಿ ನಗರವೂ ಒಂದು ಸಾಂಸ್ಥಿಕ ಜಾತಿ ಜಾಲ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು. ಲಿಂಗಾಯತ ಖಾನಾವಳಿ, ಉಡುಪಿ ಹೋಟೆಲ್ ಇವೆಲ್ಲವೂ ಇದರ ಭಾಗಗಳೇ. ಆಟೋ, ಲಾರಿಗಳ ಹಿಂದೆಯೂ ಜಾತಿ ಹೆಸರು ರಾರಾಜಿಸುತ್ತಿದೆ. ಸಾಮಾಜಿಕ ಜೀವನದಲ್ಲಿ, ವಿಶೇಷವಾಗಿ ವಿವಾಹ ವಿಚಾರದಲ್ಲಿ ಜಾತಿಯ ಹಿಡಿತ ಸ್ಪಷ್ಟ. ಐಟಿ ಕಂಪೆನಿಗಳು, ಶಾಲಾ ಕಾಲೇಜುಗಳು ಇವುಗಳಲ್ಲಿನ ಅಂತರ್ಜಾತಿ ಸಂವಹನ ಹೆಚ್ಚಾಗಿದ್ದರೂ, ಮದುವೆಗಳ ವಿಚಾರಕ್ಕೆ ಬಂದಾಗ ಸಮುದಾಯದ ಒತ್ತಡ, ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಜಾತಿ ಫಿಲ್ಟರ್‌ಗಳು, ಕುಟುಂಬದ ಒಲವು ಇವುಗಳಿಂದ ಜಾತಿ ಹಿರಿಮೆ ಮುಂದುವರಿಯುತ್ತಿವೆ ಎಂಬುದಕ್ಕೆ ಸಾಕ್ಷಿ. ನಗರದ ಪ್ರತಿನಿತ್ಯದ ಬದುಕು ಕೂಡ ಜಾತಿಯ ನೆರಳಿನಿಂದ ಮುಕ್ತವಲ್ಲ. ಬೀದಿ ಸ್ವಚ್ಛತೆ ಮಾಡುವವರು ಯಾರು? ರೆಸ್ಟೋರೆಂಟ್‌ನಲ್ಲಿ ಅಡುಗೆ ಮಾಡುವವರು ಯಾರು? ಯಾರು ಅಗ್ರಹಾರಗಳಲ್ಲಿ ವಾಸಿಸುತ್ತಾರೆ? ಇವೆಲ್ಲವೂ ನಗರ ಜಾತಿ-ಆಧಾರಿತ ಅವಕಾಶಗಳ ಅಸಮಾನತೆಯನ್ನು ಅನಾವರಣಗೊಳಿಸುತ್ತವೆ ಎನ್ನಲು ಅಡ್ಡಿ ಇಲ್ಲ. ವಿವಿಧ ಜಾತಿಗಳಿಗೆ ಮಾತ್ರ ಸೀಮಿತವಾಗಿರುವ ವಿದ್ಯಾರ್ಥಿನಿಲಯಗಳೇ ಇದಕ್ಕೆ ಸಾಕ್ಷಿ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಹ ಜಾತಿ ಸಂಘಟನೆಗಳು ಈಗಾಗಲೇ ಹುಟ್ಟಿಕೊಂಡಿವೆ. ಅತಿಯಾದ ನಗರೀಕರಣದ ಪ್ರಗತಿಯ ನಡುವೆಯೂ ಜಾತಿ ವಿಚಾರಗಳು ಕಳೆಗುಂದುವುದಿಲ್ಲ. ಇದು ಸಾಮಾಜಿಕ ಜಾಲಗಳು, ಆರ್ಥಿಕ ಅವಕಾಶಗಳು ಮತ್ತು ಸಾಂಸ್ಕೃತಿಕ ಪೈಪೋಟಿಗಳ ಮೂಲಕ ನಿರಂತರವಾಗಿ ಹೊಸ ರೂಪಗಳಲ್ಲಿ ಪುನರುತ್ಪತ್ತಿ ಹೊಂದುತ್ತದೆ. ಸರಕಾರಿ ಯೋಜನೆಗಳು, ಸಮುದಾಯ ಭಾಗವಹಿಸುವಿಕೆ ಮತ್ತು ಸಬಲೀಕರಣದ ಕಾರ್ಯಕ್ರಮಗಳ ಮೂಲಕ ಸಮಗ್ರ ಪರಿಹಾರಕ್ಕೆ ಬಲವಾದ ಕಾರ್ಯಯೋಜನೆ ಬೇಕು. ನಿರಂತರ ಪರಿಶೀಲನೆ ಸಹ ಅಗತ್ಯ. ಅಂತಿಮವಾಗಿ ನೋಡಿದರೆ, ಜಾತಿ ನಗರದಲ್ಲಿ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ಸಂಸ್ಥೆಗಳಲ್ಲಿ, ಸಂಬಂಧಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಅಡಗಿರುವುದನ್ನು ಕಾಣಬಹುದು. ಭಾರತದ ಸಾಮಾಜಿಕ ರಚನೆ ದೀರ್ಘಕಾಲದಿಂದ ಜಾತಿ ಇತಿಹಾಸದ ತೂಕವನ್ನು ಹೊತ್ತುಕೊಂಡಿದೆ. ಈ ಅಡಚಣೆಗಳನ್ನು ಸರಿಯಾಗಿ ಗುರುತಿಸಿ ತೆಗೆದುಹಾಕಿದಾಗ ಮಾತ್ರ ನಿಜವಾದ ಸಮಾನತಾ ಆಧಾರಿತ ನಗರಗಳನ್ನು ನಿರ್ಮಿಸಲು ಸಾಧ್ಯ.

ವಾರ್ತಾ ಭಾರತಿ 4 Dec 2025 12:07 pm

ಚಳಿಗಾಲದ ಅಧಿವೇಶನ| ದಿಲ್ಲಿಯಲ್ಲಿನ ವಾಯು ಮಾಲಿನ್ಯದ ವಿರುದ್ಧ ಸಂಸತ್ತಿನಲ್ಲಿ ವಿಪಕ್ಷಗಳಿಂದ ಪ್ರತಿಭಟನೆ

ಹೊಸ ದಿಲ್ಲಿ: ಚಳಿಗಾಲದ ಅಧಿವೇಶನದ ನಾಲ್ಕನೆ ದಿನವಾದ ಗುರುವಾರ ದಿಲ್ಲಿಯಲ್ಲಿನ ವಾಯು ಮಾಲಿನ್ಯದ ವಿರುದ್ಧ ವಿರೋಧ ಪಕ್ಷಗಳು ಸಂಸತ್ ಭವನದ ಸಂಕೀರ್ಣದ ಎದರು ಪ್ರತಿಭಟನೆ ನಡೆಸಿದೆ. ಗುರುವಾರ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಕಳಪೆಗೆ ತಲುಪಿದ್ದು, ವಾಯು ಗುಣಮಟ್ಟದ ಸೂಚ್ಯಂಕ 299ಕ್ಕೆ ಇಳಿಕೆಯಾಗಿತ್ತು. ದಿಲ್ಲಿ-ಎನ್‌ಸಿಆರ್ ಪ್ರದೇಶ ಹಾಗೂ ಉತ್ತರ ಭಾರತದ ಇನ್ನಿತರ ಭಾಗಗಳಲ್ಲಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯದ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಮನೀಶ್ ತಿವಾರಿ ಹಾಗೂ ವಿಜಯ್ ಕುಮಾರ್ ಅಲಿಯಾಸ್ ವಿಜಯ್ ವಸಂತ್ ಸಂಸತ್ತಿನಲ್ಲಿ ಕಲಾಪ ಮುಂದೂಡಿಕೆ ನಿರ್ಣಯವನ್ನೂ ಮಂಡಿಸಿದರು. ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ವಿಮೆಯಿಂದ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ-2025 ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಆರೋಗ್ಯದ ವೆಚ್ಚಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸಲು ಸರಕುಗಳ ಮೇಲೆ ಸೆಸ್ ವಿಧಿಸುವ ಗುರಿಯನ್ನು ಹೊಂದಿದೆ. ಸೋಮವಾರದಿಂದ ಪ್ರಾರಂಭಗೊಂಡಿರುವ ಚಳಿಗಾಲದ ಸಂಸತ್ ಅಧಿವೇಶನ ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿದೆ.

ವಾರ್ತಾ ಭಾರತಿ 4 Dec 2025 11:56 am

ಸಂಪಾದಕೀಯ | ತಂತ್ರಜ್ಞಾನ ಕುತಂತ್ರಕ್ಕೆ ಬಳಕೆಯಾಗದಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 4 Dec 2025 11:55 am

ಹಟ್ಟಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಆಗ್ರಹಿಸಿ ಮಹಿಳಾ ಆಯೋಗಕ್ಕೆ ಮನವಿ

ಲಿಂಗಸೂಗೂರು: ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ರಾಜಾರೋಷವಾಗಿ ಹೆಚ್ಚುತ್ತಿರುವ ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌, ಇಸ್ಪೀಟ್‌, ಗಾಂಜಾ ಮಾರಾಟ ಹಾಗೂ ಲಿಕ್ಕರ್‌ ಮಾಫಿಯಾ ಚಟುವಟಿಕೆಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿರುವುದರಿಂದ ಕೂಡಲೇ ಕಡಿವಾಣ ಹಾಕಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ‌ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರಿಗೆ ಹಟ್ಟಿ ಘಟಕದ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಪಟ್ಟಣದ ಹಲವು ಭಾಗಗಳಲ್ಲಿ ಇಂತಹ ಅಕ್ರಮ ದಂಧೆಗಳು ನಡೆಯುತ್ತಿರುವುದು ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಮಹಿಳೆಯರ ಸುರಕ್ಷತೆಗೂ ಗಂಭೀರ ಬೆದರಿಕೆಯಾಗಿದೆ. ಮಹಿಳೆಯರು ರಾತ್ರಿ ವೇಳೆಯಲ್ಲಿ ಸಂಚರಿಸುವುದಕ್ಕೂ ಭಯ ಅನುಭವಿಸುತ್ತಿದ್ದಾರೆ ಎಂದು ಸಂಘಟನಾಕಾರರು ಆತಂಕ ವ್ಯಕ್ತಪಡಿಸಿದರು. ಈ ಅಕ್ರಮ ದಂಧೆಗಳ ನೇರ ಪರಿಣಾಮವಾಗಿ ಹಟ್ಟಿ ಪಟ್ಟಣದಲ್ಲಿ ಕಳ್ಳತನ, ಕೊಲೆ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. ಮಟ್ಕಾ, ಬೆಟ್ಟಿಂಗ್‌, ಗಾಂಜಾ ಹಾಗೂ ಲಿಕ್ಕರ್ ಮಾಫಿಯಾಗಳ ಬಲೆಗೆ ಸಿಲುಕಿರುವ ಯುವಕರು ದಿನನಿತ್ಯದ ಖರ್ಚಿಗೆ ಹಣದ ಅವಶ್ಯಕತೆ ಬಿದ್ದಾಗ ಕಳ್ಳತನ, ರಾಬರಿ, ಕೊಲೆ-ಸುಲಿಗೆಗಳ ಕಡೆ ತಿರುಗುವುದು ಸಾಮಾನ್ಯ ಘಟನೆವಾಗುತ್ತಿದೆ ಎಂದು ಆರೋಪಿಸಿದರು. ಪಟ್ಟಣದ ಪೋಲಿಸ್ ಠಾಣೆಯ ಕೂಗಳತೆ ದೂರದಲ್ಲೇ ಮುಖ್ಯ ರಸ್ತೆಯಲ್ಲಿ ‌ಮಟ್ಕಾ ಆಡುತ್ತಿದ್ದರೂ ಯಾವುದೇ ಕ್ರಮಗೊಂಡಿಲ್ಲ ಹಾಗೂ ತೊಂದರೆ ಹೇಳಿಕೊಂಡು ಠಾಣೆಗೆ ಬಂದ ಕುಟುಂಬಸ್ಥರ ಮೇಲೆಯೇ ಕೆಲವೊಮ್ಮೆ ಠಾಣೆಯ ಸಿಬ್ಬಂದಿ ದೌರ್ಜನ್ಯವೆಸಗಿರುವ ಘಟನೆಗಳು ಠಾಣೆಯಲ್ಲಿ ನಡೆದಿವೆ. ಕೂಡಲೇ ಪಟ್ಟಣದ ಶಾಂತಿ, ಮಹಿಳೆಯರ ಭದ್ರತೆ ಮತ್ತು ಯುವಕರ ಭವಿಷ್ಯಕ್ಕಾಗಿ ತಕ್ಷಣವೇ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ. ಈ ವೇಳೆ ಸಾಹೇರಾ ಬೇಗಂ, ರಮೇಶ ವೀರಾಪುರ, ಇನ್ನಿತರರು ಹಾಜರಿದ್ದರು.

ವಾರ್ತಾ ಭಾರತಿ 4 Dec 2025 11:50 am

KSRTC: ಬೆಂಗಳೂರಿನಿಂದ 2 ಜಿಲ್ಲೆಗಳಿಗೆ ಹೊಸದಾಗಿ ಎಸಿ, ನಾನ್ ಎಸಿ ಸ್ಲೀಪರ್ ಬಸ್ ಸೇವೆ: ಟಿಕೆಟ್ ದರ, ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ವತಿಯಿಂದ ಎರಡು ಜಿಲ್ಲೆಗಳಿಗೆ ಹೊಸದಾಗಿ ಬಸ್ ಸೇವೆ ಆರಂಭವಾಗಿದೆ. ಒಂದು ಎಸಿ ಸ್ಲೀಪರ್ ಬಸ್ ಸೇವೆ ಮತ್ತೊಂದು ನಾನ್ ಎಸಿ ಬಸ್ ಸೇವೆ ಆಗಿದೆ. ಬೆಂಗಳೂರಿನಿಂದ ತೆರಳುವವರಿಗೆ ಅನುಕೂಲವಾಗಲೆಂದು ಹೊಸ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಿಂದ

ಒನ್ ಇ೦ಡಿಯ 4 Dec 2025 11:46 am

ಸಂಪಾದಕೀಯ | ಡಿಜಿಟಲ್ ಬಂಧನಕ್ಕೊಳಗಾಗಿರುವ ದೇಶದ ಅರ್ಥವ್ಯವಸ್ಥೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 4 Dec 2025 11:46 am

ಡಿಜಿಟಲ್ ಅರೆಸ್ಟ್ ಮಾಡಲು ಬಂದವನನ್ನೇ ChatGPT ಬಳಸಿ ಬಕ್ರಾ ಮಾಡಿದ ದಿಲ್ಲಿ ಯುವಕ! ಹೇಗೆ ಗೊತ್ತಾ?

ದೆಹಲಿಯಲ್ಲಿ ಚಾಟ್‌ಜಿಪಿಟಿ ಸಹಾಯದಿಂದ ಮೋಸಗಾರನೊಬ್ಬನನ್ನು ಬುದ್ಧಿವಂತಿಕೆಯಿಂದ ಎದುರಿಸಿದ ಘಟನೆ ನಡೆದಿದೆ. ಕಾಲೇಜಿನ ಹಿರಿಯ ಅಧಿಕಾರಿಯಂತೆ ನಟಿಸಿದ ಮೋಸಗಾರನಿಗೆ ನಕಲಿ ಪಾವತಿ ಲಿಂಕ್ ಸೃಷ್ಟಿಸಿ, ಆತನ ಲೊಕೇಶನ್ ಮತ್ತು ಫೋಟೋ ಪಡೆದು, ಹೆದರಿಸಿ ಮೋಸದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೋಸಗಾರ ಕ್ಷಮೆಯಾಚಿಸಿದ್ದಾನೆ.

ವಿಜಯ ಕರ್ನಾಟಕ 4 Dec 2025 11:46 am

IMD Weather Forecast: ಚಂಡಮಾರುತ ಪರಿಣಾಮ ಮುಂದಿನ ದಿನಗಳಲ್ಲಿ ರಣಭೀಕರ ಮಳೆ ಮುನ್ಸೂಚನೆ: ರಜೆ ವಿಸ್ತರಣೆ ಸಾಧ್ಯತೆ

IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೆಯುವ ಚಳಿ ಮುಂದುವರೆದಿದೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ 'ದಿತ್ವಾ' ಚಂಡಮಾರುತ ಪರಿಣಾಮ ಹಲವೆಡೆ ಧಾರಾಕಾರ ಮಳೆಯೂ ಆಗುತ್ತಿದೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ

ಒನ್ ಇ೦ಡಿಯ 4 Dec 2025 11:43 am

ಸಿಬ್ಬಂದಿಗಳ ಕೊರತೆಯಿಂದ ಮತ್ತಷ್ಟು ಇಂಡಿಗೊ ವಿಮಾನಗಳ ಹಾರಾಟ ರದ್ದು: ಪ್ರಯಾಣಿಕರ ಪರದಾಟ

ಹೊಸ ದಿಲ್ಲಿ: ಸತತ ಮೂರನೆಯ ದಿನವಾದ ಗುರುವಾರವೂ ಸಿಬ್ಬಂದಿಗಳ ಕೊರತೆಯಿಂದ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ರದ್ದುಗೊಂಡಿದೆ. ಇಂಡಿಗೊ ವಿಮಾನ ಯಾನ ಸಂಸ್ಥೆಯ ವಿಮಾನಗಳ ಹಾರಾಟ ದಿಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಹಾಗೂ ಅಹ್ಮದಾಬಾದ್‌ ಸೇರಿದಂತೆ ವಿವಿಧ ನಗರಗಳಲ್ಲಿ ವ್ಯತ್ಯಯಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವ ದೃಶ್ಯಗಳು ಕಂಡು ಬಂದವು. ದಿಲ್ಲಿಯಿಂದ ನಿರ್ಗಮಿಸಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯನ್ನು ಗುರುವಾರ ಮುಂಜಾನೆ ರದ್ದುಗೊಳಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಇಂಡಿಗೊ ವಿಮಾನ ಯಾನ ಸಂಸ್ಥೆಯ ವಕ್ತಾರರೊಬ್ಬರ ಪ್ರಕಾರ, 73 ಇಂಡಿಗೊ ವಿಮಾನಗಳ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲೂ ಹಲವು ವಿಮಾನಗಳ ಹಾರಾಟ ರದ್ದುಗೊಂಡವು. ಸುಮಾರು 170 ಇಂಡಿಗೊ ವಿಮಾನಗಳ ಹಾರಾಟ ಗುರುವಾರ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ. ಇಂಡಿಗೊ ವಿಮಾನಗಳ ರದ್ದತಿಯಿಂದ ಆಗಿರುವ ತೊಂದರೆಯ ಕುರಿತು ಓರ್ವ ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದು, ನಾವು ನಿನ್ನೆ (ಬುಧವಾರ) ಸಂಜೆಯಿಂದ ಗುರುವಾರ ಬೆಳಗ್ಗೆ 9 ಗಂಟೆಯವರೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 12 ಗಂಟೆಯಿಂದ ಕಾಯತ್ತಿದ್ದೇವೆ. ಇದುವರೆಗೂ ಪುಣೆಗೆ ತೆರಳಬೇಕಿರುವ ವಿಮಾನದ ಬಗ್ಗೆ ಇಂಡಿಗೊ ವಿಮಾನ ಯಾನ ಸಂಸ್ಥೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ. ಈ ಪರಿಸ್ಥಿತಿಯಿಂದ ನಮಗೆ ಗಮನಾರ್ಹ ಅನನುಕೂಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ವಾರ್ತಾ ಭಾರತಿ 4 Dec 2025 11:42 am

ಚಪಾತಿ ತಿಂದಾಗ ಹೊಟ್ಟೆ ಉಬ್ಬರಿಸುವುದೇಕೆ ಗೊತ್ತೆ?

ರೋಟಿ ಅಥವಾ ಚಪಾತಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಅಜೀರ್ಣ ಅಥವಾ ತಲೆನೋವು ಬರುತ್ತದೆ. ಇದು ಮುಖ್ಯವಾಗಿ ಆಹಾರದ ಸಮಸ್ಯೆಯಲ್ಲ. ಬದಲಾಗಿ ರೆಫ್ರಿಜರೇಟರ್ ಕಾರಣವಾಗಿರಬಹುದು ಎನ್ನುವುದು ನಿಮಗೆ ಗೊತ್ತೆ? ಚಪಾತಿ ಅಥವಾ ರೋಟಿ ಭಾರತದ ಬಹುತೇಕ ಭಾಗಗಳಲ್ಲಿ ದಿನನಿತ್ಯದ ಆಹಾರವಾಗಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಉತ್ತರ ಭಾರತದ ಭಾಗಗಳಲ್ಲಿ ಚಪಾತಿ ಅಥವಾ ಗೋಧಿಹಿಟ್ಟಿನಿಂದ ತಯಾರಿಸಿದ ರೋಟಿ ಇಲ್ಲದೆ ಊಟ ಅಪೂರ್ಣ. ಗೋಧಿಯಲ್ಲಿ ತಯಾರಿಸಿದ ಈ ತಿನಿಸು ತಾಜಾ ಮತ್ತು ಬಿಸಿಯಾಗಿದ್ದಾಗ ಸಾಂಬಾರ್, ದಾಲ್ ಅಥವಾ ಪಲ್ಯದ ಜೊತೆಗೆ ರುಚಿಕರ! ಆದರೆ ಬಹಳಷ್ಟು ಮಂದಿಗೆ ಈ ರೋಟಿ ಅಥವಾ ಚಪಾತಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಅಜೀರ್ಣ ಅಥವಾ ತಲೆನೋವು ಬರುತ್ತದೆ. ಇದು ಮುಖ್ಯವಾಗಿ ಆಹಾರದ ಸಮಸ್ಯೆಯಲ್ಲ, ಬದಲಾಗಿ ರೆಫ್ರಿಜರೇಟರ್ ಕಾರಣವಾಗಿರಬಹುದು ಎನ್ನುವುದು ನಿಮಗೆ ಗೊತ್ತೆ? ವೈಜ್ಞಾನಿಕವಾಗಿ ನೋಡಿದಲ್ಲಿ ಚಪಾತಿಗಾಗಿ ತಟ್ಟಿದ ಗೋಧಿಹಿಟ್ಟನ್ನು ಫ್ರಿಜ್‌ನಲ್ಲಿಟ್ಟರೆ ಹುದುಗುವಿಕೆ (fermentation) ನಿಲ್ಲುವುದಿಲ್ಲ. ಯೀಸ್ಟ್ ಹಿಟ್ಟನ್ನು ಹುದುಗಿಸುತ್ತಲೇ ಇರುತ್ತದೆ. ಅದರಿಂದ ಕಾರ್ಬನ್ ಡೈ ಆಕ್ಸೈಡ್ ಮತ್ತು ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವೊಮ್ಮೆ ರೊಟ್ಟಿಯನ್ನು ಕಟುವಾಗಿಸುತ್ತದೆ. ಅದರಿಂದ ಬ್ಯಾಕ್ಟೀರಿಯ ಚಟುವಟಿಕೆಗೂ ಕಾರಣವಾಗುತ್ತದೆ. ಇದು ಅನೇಕ ಜನರಲ್ಲಿ ತೀವ್ರ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗುತ್ತದೆ. ತಜ್ಞರ ಪ್ರಕಾರ, ಗೋಧಿ ಹಿಟ್ಟು ರೆಫ್ರಿಜರೇಟರ್‌ನಲ್ಲಿ ಇಟ್ಟ ಮೇಲೆ 24 ಗಂಟೆಗಳ ನಂತರ ಗ್ಲುಟನ್ ಅನ್ನು ದುರ್ಬಲಗೊಳಿಸುವ ಕಾರಣದಿಂದ ಹೀಗೆ ಹೊಟ್ಟೆ ಉಬ್ಬರಿಸುವಿಕೆಯ ಅನುಭವವಾಗುತ್ತದೆ. ಉಷ್ಣತೆ ಕಡಿಮೆ ಇದ್ದರೂ ಅಥವಾ ಶೀತದ ವಾತಾವರಣದಲ್ಲೂ ಈ ಕ್ರಿಯೆ ನಿಲ್ಲುವುದಿಲ್ಲ. ಪೋಷಕಾಂಶಗಳ ನಷ್ಟ, ರಕ್ಕದಲ್ಲಿನ ಸಕ್ಕರೆ ಅಂಶ ಏರಿಕೆ ತಜ್ಞರು ಹೇಳುವ ಪ್ರಕಾರ, ಹಿಟ್ಟನ್ನು ಎರಡು ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿಟ್ಟು ಬಳಸಿದರೆ ಹುದುಗುವಿಕೆ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಗ್ಲುಟನ್‌ ಮುರಿತ ಇನ್ನಷ್ಟು ತೀವ್ರವಾಗುವ ಕಾರಣದಿಂದ ಪೋಷಕಾಂಶಗಳು ನಷ್ಟವಾಗಿಬಿಡುತ್ತವೆ. ಹೀಗೆ ಹುದುಗುವಿಕೆ ಹೆಚ್ಚಾದಾಗ ಪಿಷ್ಟವನ್ನು ವೇಗವಾಗಿ ಒಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯಂಶ ಏರಿಕೆಗೆ ಕಾರಣವಾಗುತ್ತದೆ. ಇದರಿಂದ ಗ್ಲುಕೋಸ್ ಪ್ರಮಾಣ ಹೆಚ್ಚಾಗುತ್ತದೆ. ರೋಟಿಗಳನ್ನು ಆರೋಗ್ಯಕರವಾಗಿಸುವುದು ಹೇಗೆ? ಚಪಾತಿ ಮಾಡಬೇಕು ಎಂದಾದಾಗ ಆಗಾಗ್ಗೆ ಹಿಟ್ಟು ಸಿದ್ಧಪಡಿಸಬೇಕು, ಹಿಟ್ಟನ್ನು ತಕ್ಷಣಕ್ಕೆ ಬೇಕಾದಂತೆ ತಟ್ಟಿ ಇಟ್ಟುಕೊಳ್ಳಬೇಕು. ಅಲ್ಲದೆ ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸಬೇಕು. - ಹಿಟ್ಟನ್ನು ಸಿದ್ಧಪಡಿಸಲು ಹದವಾದ ಬಿಸಿನೀರನ್ನೇ ಬಳಸಿ. ಸಾಧ್ಯವಾದರೆ ಹದ ಬಿಸಿಮಾಡಿದ ಹಾಲನ್ನು ಬೆರೆಸಿ. ಅದರಿಂದ ಗ್ಲುಟನ್ ಸಕ್ರಿಯವಾಗಿರುತ್ತದೆ ಮತ್ತು ಮೃದು ಮತ್ತು ಹೆಚ್ಚು ನಮ್ಯವಾಗಿರುತ್ತದೆ. - ಅತಿ ಮುಖ್ಯವಾಗಿ ನೀವು ಹಿಟ್ಟು ಮೃದು ಮತ್ತು ನಮ್ಯವಾಗುವಂತೆ 5ರಿಂದ 10 ನಿಮಿಷಗಳ ಕಾಲ ಕಲಸಿ ತಟ್ಟಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ಕಲಸದಂತೆ ಜಾಗರೂಕತೆ ವಹಿಸಿ. ಜಾಸ್ತಿ ಕಲಿಸಿದರೆ ಚಪಾತಿ ಗಡಸಾಗಿ ಒಣಗಿದಂತೆ ಬರಬಹುದು. - ಹಿಟ್ಟಿಗೆ ಕರಗಿಸಿದ ತುಪ್ಪವನ್ನು ಸ್ವಲ್ಪ ಬೆರೆಸಿ. ಅಥವಾ ಎಣ್ಣೆ ಬೆರೆಸಿದರೂ ನಡೆಯುತ್ತದೆ. ಅದ್ದರಿಂದ ತಟ್ಟುವುದು ಸುಲಭವಾಗುತ್ತದೆ ಮತ್ತು ಚಪಾತಿಗಳು ಮೃದುವಾಗಿ ಬರುತ್ತವೆ. - ಹಿಟ್ಟನ್ನು ತೇವವಿರುವ ಬಟ್ಟೆಯಲ್ಲಿ ಮುಚ್ಚಿ 20-30 ನಿಮಿಷಗಳ ಕಾಲ ಇಟ್ಟು ನಂತರ ಚಪಾತಿ ಮಾಡಲು ಪ್ರಾರಂಭಿಸಬೇಕು. ಹೀಗೆ ಅರ್ಧ ಗಂಟೆ ಇಡುವುದರಿಂದ ಗ್ಲುಟನ್ ಹೆಚ್ಚು ಹರಡಿಕೊಳ್ಳುತ್ತದೆ ಮತ್ತು ಚಪಾತಿ ಮಾಡುವುದು ಸುಲಭವಾಗುತ್ತದೆ. ಚಪಾತಿಗಳೂ ಚೆನ್ನಾಗಿ ಬರುತ್ತವೆ. - ಚಪಾತಿಯನ್ನು ಸಮಾನ ದಪ್ಪದಲ್ಲಿ ಲಟ್ಟಿಸಬೇಕು. ಅಂದರೆ ಬಹಳ ತೆಳು ಕೂಡ ಆಗಬಾರದು ಮತ್ತು ಹೆಚ್ಚು ದಪ್ಪವೂ ಆಗಿರಬಾರದು.

ವಾರ್ತಾ ಭಾರತಿ 4 Dec 2025 11:34 am

‘ಸಂಚಾರ್ ಸಾಥಿ’ ಕುರಿತ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ?

ಯಾವ ಫೋನ್ ಅನ್ನು ಬಳಸಿಕೊಂಡು ವಾಟ್ಸ್ ಆ್ಯಪ್ ಮೂಲಕ ನಕಲಿ ಸುದ್ದಿ ಮತ್ತು ನಕಲಿ ಇತಿಹಾಸ ಹರಡಲಾಗುತ್ತಿದೆಯೋ, ಯಾವುದನ್ನು ಜನರಲ್ಲಿ ದ್ವೇಷ ತುಂಬುವುದಕ್ಕೆ ಬಳಸಲಾಯಿತೋ ಅದೇ ಫೋನ್‌ನಲ್ಲಿ ಸರಕಾರ ಈಗ ತನ್ನದೇ ಅಪ್ಲಿಕೇಷನ್ ಇನ್‌ಸ್ಟಾಲೇಷನ್ ಮಾಡಬೇಕೆಂದು ಹೇಳುತ್ತಿದೆ. ಆ ಮೂಲಕ ಸರಕಾರ ಜನರನ್ನು ನಿಯಂತ್ರಿಸಲು ಬಯಸುತ್ತಿದೆ. 2026ರ ಮಾರ್ಚ್ ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಕು ಎಂದು ಮೋದಿ ಸರಕಾರ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಸೂಚನೆ ನೀಡಿದೆ. ಆ ಅಪ್ಲಿಕೇಷನ್ ಅಳವಡಿಸದೆ ಯಾವುದೇ ಫೋನ್ ಅನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ. ಈಗಾಗಲೇ ತಯಾರಿಸಲಾದ ಫೋನ್‌ಗಳಿಗೂ ಈ ಅಪ್ಲಿಕೇಶನ್ ಅಗತ್ಯವಾಗಿರುತ್ತದೆ. ಫೋನ್ ವಂಚನೆ ತಡೆಗಟ್ಟಲು ಇದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಇದರಲ್ಲಿ ಪ್ರತಿಯೊಂದು ಫೋನ್ ಅನ್ನೂ ಗುರುತಿಸಲಾಗುತ್ತದೆ. ನೋ ಯುವರ್ ಮೊಬೈಲ್ ಆಯ್ಕೆ ಇದ್ದು, ಈ ಸೇವೆಯನ್ನು ಎಸ್‌ಎಂಎಸ್ ಮೂಲಕ ಒದಗಿಸಲಾಗುತ್ತದೆ. ವಂಚನೆಯ ಕರೆಗಳನ್ನು ವರದಿ ಮಾಡಲು ಮತ್ತು ಬ್ಲಾಕ್ ಮಾಡಲು ಅವಕಾಶವಿರುತ್ತದೆ. ಸಂಚಾರ್ ಸಾಥಿ ಅಪ್ಲಿಕೇಶನ್ ಫೋನ್ ಅನ್ನು ಟ್ರ್ಯಾಕ್ ಮಾಡುವುದರಿಂದ, ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ ಅದನ್ನು ಪತ್ತೆಹಚ್ಚಲು ನೆರವಾಗುತ್ತದೆ. ಇದರರ್ಥ, ನೀವು ಎಲ್ಲಿಗೆ ಹೋಗುತ್ತಿದ್ದೀರಿ ಮತ್ತು ನೀವು ಯಾರನ್ನು ಭೇಟಿಯಾಗುತ್ತಿದ್ದೀರಿ ಎಂಬೆಲ್ಲ ಪ್ರತೀ ಕ್ಷಣದ ಮಾಹಿತಿಯನ್ನೂ ಅದು ಸಂಗ್ರಹಿಸುತ್ತದೆ. ಅದನ್ನು ಏಕೆ ಕಡ್ಡಾಯಗೊಳಿಸಲಾಗುತ್ತಿದೆ? ಮತ್ತು ಆ ಆ್ಯಪ್ ಅನ್ನು ಏಕೆ ಮೊಬೈಲ್‌ನಿಂದ ಅಳಿಸಲಾಗುವುದಿಲ್ಲ? ಸರಕಾರಿ ಮೊಬೈಲ್ ಆ್ಯಪ್ ಪ್ರತೀ 5 ನಿಮಿಷಗಳಿಗೊಮ್ಮೆ ನಾಗರಿಕರ ಫೋನ್ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸುವ ದಿನ ದೂರವಿಲ್ಲ ಎಂದು ಭಾವಿಸಬೇಕೇ? ಸಂಚಾರ್ ಸಾಥಿ ಭಾರತದ ಪೆಗಾಸಸ್ ಆಗಿರಬಹುದೇ, ಸೈಬರ್ ಭದ್ರತೆಯ ಹೆಸರಿನಲ್ಲಿ ಫೋನ್‌ಗಳಿಗೆ ಬಲವಂತವಾಗಿ ಅಳವಡಿಸಲಾಗುತ್ತಿದೆಯೇ? ಸರಕಾರಿ ಆದೇಶ, ಅದನ್ನು ಕಡ್ಡಾಯ ಎಂದು ಹೇಳುತ್ತದೆ. ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ ಮತ್ತು ಅದನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ಈ ವಿಷಯ ವಿವಾದವಾಗಿ ಬದಲಾದ ಹಿನ್ನೆಲೆಯಲ್ಲಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಮಹತ್ವದ ಮಾಹಿತಿ ನೀಡಿದ್ದಾರೆ. ಬಳಕೆದಾರರು ಸಂಚಾರ್ ಸಾಥಿ ಆ್ಯಪ್ ನಿಮ್ಮ ಫೋನ್‌ನಲ್ಲಿ ಇಟ್ಟುಕೊಳ್ಳಲು ಬಯಸದಿದ್ದರೆ, ನೀವು ಅದನ್ನು ಡಿಲೀಟ್ ಮಾಡಬಹುದು, ಇದು ಆಪ್ಶನಲ್ ಎಂದು ಹೇಳಿದ್ದಾರೆ. ಸರಕಾರದ ಆದೇಶ ಮಾತ್ರ ಇದು ಆಪ್ಶನಲ್ ಎಂದು ಹೇಳುವುದಿಲ್ಲ. ಅಂತಹ ಕಠಿಣ ಆದೇಶ ನೀಡುವ ಮೊದಲು ಸಂಬಂಧಿತ ಸಚಿವರಿಗೆ ಏನಾದರೂ ತಿಳಿದಿತ್ತೆ? ಅದನ್ನು ನಿಷ್ಕ್ರಿಯಗೊಳಿಸಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಆದೇಶ ಹೇಳುತ್ತದೆ. ಆದೇಶವನ್ನು ಹೊರಡಿಸಿದ ಅದೇ ಪಿಐಬಿ ಈಗ ಬಳಕೆದಾರರು ಯಾವುದೇ ಸಮಯದಲ್ಲಿ ಆ್ಯಪ್ ಅನ್ನು ಅಳಿಸಬಹುದು ಎಂದು ಸರಳವಾಗಿ ಹೇಳುತ್ತದೆ. ಆದರೆ ನಿಜವಾಗಿಯೂ ಅಪ್ಲಿಕೇಶನ್ ಅನ್ನು ಅಳಿಸಲು ಸಾಧ್ಯವಿಲ್ಲವೆ? ಇಲ್ಲಿ ಜನರ ದಾರಿ ತಪ್ಪಿಸಲಾಗುತ್ತಿದೆಯೇ? ಪಿಐಬಿ ಸೂಚನೆಯೇ ಆ್ಯಪ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಅಪ್ಲಿಕೇಶನ್ ಅನ್ನು ಏಕೆ ಕಡ್ಡಾಯಗೊಳಿಸಲಾಗಿದೆ ಎಂಬುದರ ಕುರಿತು ಏನನ್ನೂ ಹೇಳಲಾಗಿಲ್ಲ. ಈ ಸರಕಾರಿ ಆದೇಶ ಆ್ಯಪಲ್, ಸ್ಯಾಮ್‌ಸಂಗ್, ವಿವೋ, ಒಪ್ಪೋ ಮತ್ತು ಶೌಮಿಯಂತಹ ಕಂಪೆನಿಗಳಿಗೆ ಅನ್ವಯಿಸಲಿದೆ. ಕಂಪೆನಿಗಳು 120 ದಿನಗಳಲ್ಲಿ ಇದರ ಬಗ್ಗೆ ವರದಿ ಸಲ್ಲಿಸಬೇಕು. ಆ್ಯಪಲ್ ಈ ಆದೇಶವನ್ನು ವಿರೋಧಿಸುತ್ತದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಕಂಪೆನಿ ಆದೇಶವನ್ನು ಪಾಲಿಸದಿರುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ರಾಯ್ಟರ್ಸ್‌ಗೆ ತಿಳಿಸಿವೆ. ಅದು ತನ್ನ ಐಒಎಸ್ ವ್ಯವಸ್ಥೆಗೆ ಹಲವಾರು ಭದ್ರತಾ ಸಮಸ್ಯೆಗಳನ್ನು ಸೃಷ್ಟಿಸಬಹುದಾದ್ದರಿಂದ ಜಗತ್ತಿನಲ್ಲಿ ಎಲ್ಲಿಯೂ ಅಂತಹ ನಿಯಮಗಳನ್ನು ಅನುಸರಿಸುವುದಿಲ್ಲ ಎನ್ನಲಾಗುತ್ತಿದೆ. ಈ ಆ್ಯಪ್‌ನಲ್ಲಿ ಪ್ರತೀ ಐದು ನಿಮಿಷಗಳಿಗೊಮ್ಮೆ, ಪರದೆಯ ಮೇಲೆ ಪ್ರದರ್ಶಿಸಲಾದ ಯಾವುದೇ ಫೋಟೊವನ್ನು ತೆಗೆದುಕೊಳ್ಳಲಾಗುತ್ತದೆ. ಪರದೆಯ ಮೇಲೆ ಕಾಣುವ ಪ್ರತಿಯೊಂದು ಪದ ಮತ್ತು ಪ್ರತಿಯೊಂದು ವಸ್ತುವನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಬಳಕೆದಾರರು ತೆರೆಯಲಾಗದ ಫೋಲ್ಡರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಸರಕಾರ ಮಾತ್ರ ಅದನ್ನು ಪ್ರವೇಶಿಸಬಹುದು ಮತ್ತು ಪರಿಶೀಲಿಸಬಹುದು. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಕಟ್ಟುನಿಟ್ಟಿನ ಕಾವಲು ಇಡಬಹುದು. ಅಂದರೆ, ನಾವು ಉತ್ತರ ಕೊರಿಯಾ ಅಥವಾ ರಶ್ಯದಿಂದ ಕಲಿಯುತ್ತಿದ್ದೇವೆಯೇ? ನಾಗರಿಕರನ್ನು ಹೀಗೆ ನಿಯಂತ್ರಿಸುವ ಹಿಂದಿನ ಉದ್ದೇಶವೇನಿರಬಹುದು? ಈ ಸೆಪ್ಟಂಬರ್‌ನಲ್ಲಿ, ರಶ್ಯ ಎಲ್ಲಾ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಮ್ಯಾಕ್ಸ್ ಮೆಸೆಂಜರ್ ಎಂಬ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಿತು. ಇದನ್ನು ವಾಟ್ಸ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಪ್ರಾರಂಭಿಸಲಾಯಿತು. ಆದರೆ, ಇದರ ಬಳಕೆ ಸರಕಾರ ಸಾಮಾನ್ಯ ಜನರ ಮೇಲೆ ಇನ್ನಷ್ಟು ಕಠಿಣ ಕಣ್ಗಾವಲು ಇಡುವ ಉದ್ದೇಶದ್ದಾಗಿತ್ತು ಎನ್ನಲಾಗಿದೆ. ಸರಕಾರ ನಿಮ್ಮ ಪ್ರತೀ ಸಣ್ಣ ಸಂಭಾಷಣೆ ಮತ್ತು ಭೇಟಿಯ ಬಗ್ಗೆ ಕಣ್ಣಿಟ್ಟರೆ ಪರಿಣಾಮ ಏನಾಗಬಹುದು? ಆಗ ಸರಳವಾದ ವಾಟ್ಸ್‌ಆ್ಯಪ್ ಫಾರ್ವರ್ಡ್ ಕೂಡ ಭದ್ರತಾ ಬೆದರಿಕೆಯಾಗಿ ಪರಿಣಮಿಸುತ್ತದೆ ಮತ್ತು ಜನರನ್ನು ಕ್ಷುಲ್ಲಕ ಕಾರಣಗಳಿಗಾಗಿ ಜೈಲಿಗೆ ಹಾಕಬಹುದು. ಭಯ ಎಷ್ಟು ತೀವ್ರವಾಗುತ್ತದೆಯೆಂದರೆ, ಅವರು ಮನೆಯಲ್ಲಿಯೂ ಸರಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸುತ್ತಾರೆ. ನಿಮ್ಮ ಫೋನ್ ನಿಮ್ಮನ್ನು ಯಾವಾಗಲೂ ಡಿಜಿಟಲ್ ಅರೆಸ್ಟ್ ಸ್ಥಿತಿಯಲ್ಲಿಡುತ್ತದೆ. ಇಂಟರ್ನೆಟ್ ಫ್ರೀಡಂ ಫೆಡರೇಶನ್ (ಐಎಫ್‌ಎಫ್) ಇಂಟರ್ನೆಟ್ ಜಗತ್ತಿನಲ್ಲಿ ಗೌಪ್ಯತೆ ಮತ್ತು ಬಳಕೆದಾರರ ಹಕ್ಕುಗಳ ಮೇಲೆ ಕೆಲಸ ಮಾಡುವ ಸಂಸ್ಥೆಯಾಗಿದೆ. IMEI ವಂಚನೆ ತಡೆಗಟ್ಟುವ ಹೆಸರಿನಲ್ಲಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗುತ್ತಿದೆ ಎಂದು ಅದು ಹೇಳಿದೆ. ಆದರೆ, IMEI ಸಂಖ್ಯೆಗಳನ್ನು ಪರಿಶೀಲಿಸಲು ಸರಕಾರ ಈಗಾಗಲೇ ‘ನೋ ಯುವರ್ ಮೊಬೈಲ್’ ಅಂಥ ಎಸ್‌ಎಂಎಸ್ ಆಧರಿತ ಸೇವೆಗಳಿಗಾಗಿ ವೆಬ್ ಪೋರ್ಟಲ್ ಅನ್ನು ಹೊಂದಿದೆ. ಹಾಗಿರುವಾಗ ಶಾಶ್ವತ ಆ್ಯಪ್ ಏಕೆ ಬೇಕು ಎಂಬುದಕ್ಕೆ ಸರಕಾರ ತನ್ನ ಆದೇಶದಲ್ಲಿ ಉತ್ತರ ನೀಡಿಲ್ಲ. ಸರಕಾರಿ ಮಾಹಿತಿಯ ಪ್ರಕಾರ, ಸಂಚಾರ್ ಸಾಥಿ ಅಪ್ಲಿಕೇಶನ್ ಮೂಲಕ ಈ ವರ್ಷ 7 ಲಕ್ಷ ಕಳೆದುಹೋದ ಫೋನ್‌ಗಳು ಪತ್ತೆಯಾಗಿವೆ. ತಮ್ಮ ಫೋನ್ ಅನ್ನು ಹುಡುಕಬೇಕಾದ ಯಾರಾದರೂ ಈ ಅಪ್ಲಿಕೇಶನ್ ಬಳಸಿ ಅದನ್ನು ಡೌನ್‌ಲೋಡ್ ಮಾಡಬಹುದು ಮತ್ತು ನಂತರ ಅದನ್ನು ಡಿಲೀಟ್ ಮಾಡಬಹುದು. ಆದರೆ ಈ ಹಕ್ಕನ್ನು ಜನರಿಂದ ಏಕೆ ಕಸಿದುಕೊಳ್ಳಲಾಗುತ್ತಿದೆ? ಅಂತಹ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳು ಸರಕಾರಕ್ಕೆ ಟ್ರ್ಯಾಕಿಂಗ್ ಸಾಧನಗಳಾಗಿ ಕೆಲಸ ಮಾಡಬಹುದು ಎಂದು ಗೌಪ್ಯತೆ ತಜ್ಞರು ಹೇಳುತ್ತಿದ್ದಾರೆ. ಸೈಬರ್ ಭದ್ರತೆ ಹೆಸರಿನಲ್ಲಿ ಆದೇಶ ನೀಡಲಾಗಿದೆ.ಸೈಬರ್ ಭದ್ರತೆಗೆ ಬೆದರಿಕೆಯನ್ನುಂಟುಮಾಡುವ ಚಟುವಟಿಕೆಗಳನ್ನು ಅಪ್ಲಿಕೇಶನ್ ಗುರುತಿಸುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಯಾವ ರೀತಿಯ ಚಟುವಟಿಕೆಗಳನ್ನು ಒಳಗೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಈ ಆ್ಯಪ್ ಅನ್ನು ಹೇಗೆ ಬಳಸಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸರ್ವರ್ ನವೀಕರಣದ ನೆಪದಲ್ಲಿ ಅದರ ಸ್ವರೂಪ ಬದಲಾಗುವ ಸಾಧ್ಯತೆಯಿದೆ. ವಿರೋಧ ಪಕ್ಷದ ಸಂಸದರು ಸಂಚಾರ್ ಸಾಥಿ ಆ್ಯಪ್‌ಅನ್ನು ವಿರೋಧಿಸಿದ್ದಾರೆ. ನಾಗರಿಕರು ಅದನ್ನು ವಿರೋಧಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅವರು ತಮ್ಮ ಗೌಪ್ಯತೆಯ ಹಕ್ಕಿನ ಬಗ್ಗೆ ಮಾತನಾಡಬೇಕು. ಯಾರಾದರೂ ತಮ್ಮ ಸಂದೇಶಗಳನ್ನು ಕುಟುಂಬ ಮತ್ತು ಸ್ನೇಹಿತರಿಗೆ ಖಾಸಗಿಯಾಗಿ ಇಡುವುದು ಹಕ್ಕು. ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆ ಸರಕಾರವನ್ನು ಏಕೆ ತಲುಪಬೇಕು? ವಂಚನೆ ನಡೆದರೆ, ಒಂದು ವ್ಯವಸ್ಥೆ ಇರಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಜನರಿಗೆ ಗೌಪ್ಯತೆಯ ಅರ್ಥ ಮತ್ತು ಅಪಾಯ ಎರಡನ್ನೂ ಹೇಳಬೇಕು. ಭಾರತೀಯ ಸಾರ್ವಜನಿಕರಿಗೆ ಅದರ ಅರ್ಥ ಅರ್ಥವಾಗುವುದಿಲ್ಲ. ಸರಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಅನೇಕ ಜನರು ಸಂತೋಷಪಡುತ್ತಾರೆ. ಫೋನ್ ಕಳೆದುಹೋದರೆ, ಅದನ್ನು ಕಂಡುಹಿಡಿಯಲಾಗುತ್ತದೆ ಮತ್ತು ಹಿಂದಿರುಗಿಸಲಾಗುತ್ತದೆ ಎಂದಷ್ಟೇ ಅವರು ಭಾವಿಸುತ್ತಾರೆ. ಆದರೆ ಈ ಹೆಸರಿನಲ್ಲಿ ಸರಕಾರಕ್ಕೆ ಹೋಗುವ ವೈಯಕ್ತಿಕ ಮಾಹಿತಿಯ ಬಗ್ಗೆ ಜನರಿಗೆ ತಿಳಿಸಬೇಕಾಗುತ್ತದೆ. ಸರಕಾರ ಈ ಸಂಚಾರ್ ಸಾಥಿ ಆ್ಯಪ್ ಮೂಲಕ ನಿಮ್ಮ ಮೇಲೆ ಕಣ್ಣಿಡಲು ಬಯಸುತ್ತದೆಯೇ? ಸಂಚಾರ್ ಸಾಥಿ ಆ್ಯಪ್ ಬಗ್ಗೆ ಇಂಟರ್ನೆಟ್ ಮತ್ತು ತಂತ್ರಜ್ಞಾನ ತಜ್ಞರು ಎತ್ತುತ್ತಿರುವ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ನಮ್ಮ ಫೋನ್ ಅನ್ನು ಯಾರಾದರೂ ದಿನವಿಡೀ ನಮ್ಮನ್ನು ಟ್ರ್ಯಾಕ್ ಮಾಡಬೇಕೆಂದು ನಾವು ಬಯಸುತ್ತೇವೆಯೇ? ಸಂಚಾರ್ ಸಾಥಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ತಕ್ಷಣ, ಅದು ಎಸ್‌ಎಂಎಸ್ ಓದಲು, ಕಾಲ್ ಹಿಸ್ಟರಿ ನೋಡಲು ಮತ್ತು ಕ್ಯಾಮರಾವನ್ನು ಪ್ರವೇಶಿಸಲು ಅನುಮತಿ ಕೇಳುತ್ತದೆ ಎಂದು ಹೇಳಲಾಗುತ್ತಿದೆ. ಸ್ಥಳವನ್ನು ಸಹ ಪತ್ತೆಹಚ್ಚಬಹುದು. ಟಿಎಂಸಿ ಸಂಸದ ಸಾಕೇತ್ ಗೋಖಲೆ, ಈ ಆ್ಯಪ್ ಅನ್ನು ಯಾರು ರಚಿಸಿದ್ದಾರೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಮಾರಾಟಗಾರರು ಮತ್ತು ಡೆವಲಪರ್‌ಗಳು ಯಾರು ಎಂಬ ಪ್ರಶ್ನೆಯೆತ್ತಿದ್ದಾರೆ. ಅದರ ಕುರಿತು ಯಾವುದೇ ಮಾಹಿತಿ ಒದಗಿಸಲಾಗಿಲ್ಲ. ಅದರ ವಿವರಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ಯಾರಾದರೂ ಇದನ್ನು ರಚಿಸಿಲ್ಲ ಎಂಬುದಕ್ಕೆ ಏನು ಖಾತರಿ ಇದೆ? ತಮ್ಮದೇ ನಾಗರಿಕರನ್ನು ಧರ್ಮದ ಆಧಾರದ ಮೇಲೆ ದ್ವೇಷಿಸಿ, ಅವರನ್ನು ಒಳನುಸುಳುವವರು ಎಂದು ಕರೆಯುವವರ ನಡುವೆ, ಈ ಆ್ಯಪ್ ಅಪಾಯ ಹೇಗೆಲ್ಲ ಇರಬಹುದು? ಇಂಥ ದ್ವೇಷದ ರಾಜಕೀಯಕ್ಕೆ ಉತ್ತೇಜನ ನೀಡಿದ ಸರಕಾರ ಈಗ ನಿಮ್ಮ ಫೋನ್‌ನಲ್ಲಿ ಒಳನುಸುಳುವವರಂತೆ ಕುಳಿತುಕೊಳ್ಳಲು ಏಕೆ ಬಯಸುತ್ತದೆ? ಸರಕಾರ ಉತ್ತರಿಸಬೇಕಿದೆ ಮತ್ತು ಜನರು ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ.

ವಾರ್ತಾ ಭಾರತಿ 4 Dec 2025 11:33 am

ಜಮಾತ್-ಉಲ್‌-ಮೊಮಿನಾತ್‌ ಸದಸ್ಯೆಯರ ಸಂಖ್ಯೆ ದುಪ್ಪಟ್ಟು, ಆನ್‌ಲೈನ್‌ ಕೋರ್ಸ್‌ಗೆ 500 ರೂ. ದರ; ಸೂಸೈಡ್‌ ಬಾಂಬರ್‌ಗಳಿಗಿಲ್ಲ ಬರ!

ಭಾರತದ ರಕ್ತ ಕುಡಿಯಲು ಜಾತಕ ಪಕ್ಷಿಯಂತೆ ಕಾಯುವ ಜೈಶ್-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌, ಭಾರತದ ಮೇಲೆ ಜಿಹಾದ್‌ ನಡೆಸಲು ಜಮಾತ್-ಉಲ್-ಮೊಮಿನಾತ್‌ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿದ್ದಾನೆ. ಈ ಸಂಘಟನೆಯ ಸದಸ್ಯೆಯರ ಸಂಖ್ಯೆ ಇದೀಗ 5,000 ದಾಟಿದ್ದು, ಇವರಿಗೆ ತರಬೇತಿ ನೀಡಲು ಆರಂಭಿಸಿರುವ ಆನ್‌ಲೈನ್‌ ಕೋರ್ಸ್‌ಗೆ 500 ರೂ. ದರ ನಿಗದಿ ಮಾಡಲಾಗಿದೆ. ಈ ಕುರಿತು ಭಾರತೀಯ ಗುಪ್ತಚರ ಸಂಘಟನೆಗಳು ನೀಡಿರುವ ವರದಿಯ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 4 Dec 2025 11:32 am

ದಿಲ್ಲಿ- ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ

ದೆಹಲಿ-NCR ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2026ರೊಳಗೆ ವಾರ್ಷಿಕ ಕ್ರಿಯಾ ಯೋಜನೆ ಸಲ್ಲಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ವಾಹನ ಮಾಲಿನ್ಯಕ್ಕೆ ತಜ್ಞರ ಸಮಿತಿ ರಚನೆ, 2,254 ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಸಾಧನ ಅಳವಡಿಕೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ವಿಜಯ ಕರ್ನಾಟಕ 4 Dec 2025 11:28 am

ಕೋಡಿಮಠದ ಶ್ರೀಗಳ ಅಂದಿನ ಮತ್ತು ಇಂದಿನ ಭವಿಷ್ಯ : ಅದಕ್ಕೆ ಸರಿಯಾಗಿ ಬದಲಾಗುತ್ತಿದೆ ಸಿಎಂ ಸಿದ್ದರಾಮಯ್ಯ ಹೇಳಿಕೆ

Kodimutt Swamiji Prediction : ಕೋಡಿಮಠದ ಶ್ರೀಗಳು ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಹಿಂದೆಯೂ, ಕೋಡಿಶ್ರೀಗಳು ಈ ಭವಿಷ್ಯವನ್ನು ನುಡಿದಿದ್ದರು. ಈಗ, ಶ್ರೀಗಳು ಭವಿಷ್ಯದಂತೆ ಎನ್ನುವ ಹಾಗೇ, ಸಿಎಂ ಹೇಳಿಕೆಯೂ ಬದಲಾವಣೆಯಾಗುತ್ತಿದೆ.

ವಿಜಯ ಕರ್ನಾಟಕ 4 Dec 2025 11:21 am

ಮಂಗಳೂರು | BITಯಲ್ಲಿ ‘AI ಸ್ಪಾರ್ಕಥಾನ್ 2025’ ಕಾರ್ಯಕ್ರಮ

ಮಂಗಳೂರು: BIT–ADVA ಸಹಯೋಗದೊಂದಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗವು ಡಿ. 1 ಮತ್ತು 2ರಂದು BITಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘AI ಸ್ಪಾರ್ಕಥಾನ್ 2025’ ಹ್ಯಾಕಥಾನ್‌ಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮೊದಲ ದಿನ ತಂಡಗಳು ತಮ್ಮ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಎರಡನೇ ದಿನ ಅದನ್ನು ಪ್ರಸ್ತುತಪಡಿಸಿದರು. ಸೈಬರ್ ಸೆಕ್ಯುರಿಟಿ ಮತ್ತು ಬ್ಲಾಕ್‌ಚೈನ್, ಕ್ಲೌಡ್ ಮತ್ತು ಸ್ಮಾರ್ಟ್ ಮೂಲ ಸೌಕರ್ಯ, ಆರೋಗ್ಯ ರಕ್ಷಣೆಯಲ್ಲಿ AI, ಸ್ಮಾರ್ಟ್ ಸೇವೆಗಳು ಮತ್ತು ಹ್ಯೂಮನ್ ಎಕ್ಸಪೀರಿಯೆನ್ಸ್ ಸೇರಿದಂತೆ ವಿವಿಧ ವಿಷಯಗಳ ಅಡಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು. ಡಿಸೆಂಬರ್ 3ರಂದು ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಎಸ್.ಐ. ಮಂಝೂರ್ ಬಾಷಾ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ವಿವರಿಸಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. AI&DS ವಿಭಾಗದ ಮುಖ್ಯಸ್ಥರಾದ ಡಾ. ಮೆಹಬೂಬ್ ಮುಜಾವರ್ ಅವರು ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಪೇಟೆಂಟ್‌ಗಳ ಮಹತ್ವವನ್ನು ಒತ್ತಿಹೇಳಿದರು. BIT–ADVA ಸಂಯೋಜಕರ ಶ್ರಮವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆಯನ್ನು ಅವರು ಅಭಿನಂದಿಸಿದರು. ಸ್ಪರ್ಧೆಯಲ್ಲಿ WaitNot ತಂಡದ ‘ಡಿಜಿಟಲ್ ರೆಸ್ಟೋರೆಂಟ್ ಆರ್ಡರಿಂಗ್ ಸೊಲ್ಯೂಷನ್’ ಪ್ರಥಮ ಬಹುಮಾನಕ್ಕೆ ಆಯ್ಕೆಯಾಯಿತು. ವೈಯಕ್ತಿಕ ಕಲಿಕೆ ಮತ್ತು ವೃತ್ತಿ ಮಾರ್ಗದರ್ಶನ ರೂಪಿಸಿದ ಸ್ಮಾರ್ಟ್ ಪಾತ್‌ವೇಸ್ ತಂಡ ದ್ವಿತೀಯ ಬಹುಮಾನ ಪಡೆದಿದೆ. AI ಚಾಲಿತ ವರ್ಚುವಲ್ ಸಂದರ್ಶನಕಾರ ‘ಇಂಟರ್ವಿಸ್ಟಾ’ ಪ್ರದರ್ಶಿಸಿದ ತಂಡ ತೃತೀಯ ಬಹುಮಾನ ಪಡೆದಿದೆ. ಡಾ. ಮೆಹಬೂಬ್ ಮುಜಾವರ್, ಪ್ರೊ. ಮಸೂದಾ, ಹುಝೈನಾ ಮತ್ತು ಮರಿಯತ್ ಶಬ್ನಮ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹುಝೈನಾ ವಂದಿಸಿದರು.          

ವಾರ್ತಾ ಭಾರತಿ 4 Dec 2025 11:06 am

ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ‌: ಆರ್‌. ಅಶೋಕ್‌ ಆರೋಪ

ಬೆಂಗಳೂರು: 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ‌ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಆರೋಪಿಸಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರೇ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ, ಕರ್ನಾಟಕದಲ್ಲಿ ಶೇ. 63% ಭ್ರಷ್ಟಾಚಾರ ಇದೆ ಸ್ವತಃ ಮಾನ್ಯ ಉಪಲೋಕಾಯುಕ್ತರೇ ತಮ್ಮ ಘನ ಸರಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದು ಅಣಕಿಸಿದ್ದಾರೆ. 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ @INCKarnataka ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಸ್ವಾಮಿ ಸಿಎಂ @siddaramaiah ನವರೇ ಹಾಗು ಡಿಸಿಎಂ @DKShivakumar ಅವರೇ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ… pic.twitter.com/MKbkVJ4wzu — R. Ashoka (@RAshokaBJP) December 4, 2025

ವಾರ್ತಾ ಭಾರತಿ 4 Dec 2025 11:03 am

ಸಿದ್ದರಾಮಯ್ಯ ಧರಿಸಿದ ವಾಚ್‌ ಬೆಲೆ ಬರೋಬ್ಬರಿ 43 ಲಕ್ಷ : ವಾಚ್‌ನ ನಿಖರ ಬೆಲೆ ತಿಳಿಸಿದ ಡಿ ಕೆ ಶಿವಕುಮಾರ್‌

ಬೆಂಗಳೂರು, ಡಿಸೆಂಬರ್‌ 04: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯ ನಡುವೆ ಐಷಾರಾಮಿ ವಾಚ್‌ ವಿವಾದಗಳು ಮತ್ತೆ ಮುನ್ನೆಲೆಗೆ ಬಂದಿದೆ. ಸದಾ ಸಮಾಜವಾದಿ ವರ್ಚಸ್ಸನ್ನು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ದುಬಾರಿ ವಾಚ್ ಧರಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಮತ್ತೊಮ್ಮೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿದ್ದಾರೆ. ಇದರ

ಒನ್ ಇ೦ಡಿಯ 4 Dec 2025 10:55 am

ಕರ್ನಾಟಕ ರಾಜ್ಯಪಾಲರ ಮೊಮ್ಮಗನ ಮೇಲೆ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಆರೋಪ

ಭೋಪಾಲ್: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ಪತ್ನಿ ದಿವ್ಯಾ ಗೆಹ್ಲೋಟ್, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ದೈಹಿಕ–ಮಾನಸಿಕ ಹಿಂಸೆ, ಕೊಲೆ ಯತ್ನ ಹಾಗೂ ನಾಲ್ಕು ವರ್ಷದ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿರುವ ಘಟನೆ ಬೆಳಕಿಗೆ ಬಂದಿದೆ. ದಿವ್ಯಾ ಅವರು ರತ್ಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ, ತಮ್ಮ ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ಡಾದಲ್ಲಿ ಅತ್ತೆ-ಮಾವ ಬಲವಂತವಾಗಿ ಇರಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. “ಮಗುವನ್ನು ತಕ ಸುರಕ್ಷಿತವಾಗಿ ಮರಳಿ ಪಡೆಯಲು ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ. ವರ್ಷಗಳಿಂದ ಮುಂದುವರಿದ ವರದಕ್ಷಿಣೆ ಒತ್ತಡ ದಿವ್ಯಾ ದೂರಿನಲ್ಲಿ ಪತಿ ದೇವೇಂದ್ರ ಗೆಹ್ಲೋಟ್ (33), ಅಲೋಟ್‌ನ ಮಾಜಿ ಶಾಸಕ ಜಿತೇಂದ್ರ ಗೆಹ್ಲೋಟ್ (55), ಸೋದರ ಮಾವ ವಿಶಾಲ್ ಗೆಹ್ಲೋಟ್ (25), ಅಜ್ಜಿ ಅನಿತಾ ಗೆಹ್ಲೋಟ್ (60) ಇವರು 50 ಲಕ್ಷ ರೂ. ವರದಕ್ಷಿಣೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮದುವೆಗೆ ಮುನ್ನ ಪತಿಯ ಮದ್ಯಪಾನ, ಮಾದಕ ವ್ಯಸನ ಹಾಗೂ ಅಕ್ರಮ ಸಂಬಂಧಗಳ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 2018ರ ಏಪ್ರಿಲ್ 29ರಂದು ತಾಲ್ (ಅಲೋಟ್) ನಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಇವರ ವಿವಾಹ ನಡೆದಿತ್ತು. ಆಗಿನ ಕೇಂದ್ರ ಸಚಿವೆ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮದುವೆಯ ನಂತರ ಪತಿಯ ವ್ಯಸನ, ಅಸಭ್ಯ ವರ್ತನೆ ಮತ್ತು ದೈಹಿಕ ಹಿಂಸೆ ನಿತ್ಯವೂ ನಡೆಯುತ್ತಿತ್ತು ಎಂದು ದಿವ್ಯಾ ಹೇಳಿಕೊಂಡಿದ್ದಾರೆ. “ಹಣ ತರದಿದ್ದರೆ ನಿಂದನೆ, ಹೊಡೆತ… ಎಲ್ಲವು ಸಹಜವಾಗಿಬಿಟ್ಟಿತ್ತು” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ದಿವ್ಯಾ ಅವರು ಗರ್ಭಿಣಿಯಾಗಿದ್ದಾಗ 2021ರಲ್ಲಿ ಹಿಂಸೆ ಮತ್ತಷ್ಟು ತೀವ್ರಗೊಂಡಿತ್ತೆಂದು ಅವರು ಹೇಳಿದ್ದಾರೆ. ಆಹಾರವನ್ನೂ ನೀಡದೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು. ಮಗು ಜನಿಸಿದ ಬಳಿಕವೂ ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ. ಈ ವರ್ಷ ಜನವರಿ 26ರ ರಾತ್ರಿ ಪತಿ ಪಾನಮತ್ತರಾಗಿ, ಹಣ ತರದಿದ್ದರೆ ಕೊಲ್ಲುವುದಾಗಿ ಬೆದರಿಸಿ, ಮೇಲ್ಛಾವಣಿಯಿಂದ ತಳ್ಳಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದಾರೆ. ಕೆಳಗಿನ ಗ್ಯಾಲರಿಗೆ ಬಿದ್ದು ಅವರಿಗೆ ಬೆನ್ನು, ಭುಜ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದರೂ, ರಾತ್ರಿಯಿಡೀ ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮರುದಿನ ನಾಗ್ಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವುದರಿಂದ ಇಂದೋರ್‌ನ ಬಾಂಬೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡದೇ, ತಂದೆಯೇ ಚಿಕಿತ್ಸೆ ವೆಚ್ಚ ಭರಿಸಬೇಕೆಂದು ಒತ್ತಡ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ. ದಿವ್ಯಾಳಿಗೆ ತನ್ನ ನಾಲ್ಕು ವರ್ಷದ ಮಗಳನ್ನು ಅತ್ತೆ-ಮಾವ ಬಲವಂತವಾಗಿ ತಡೆದು ಇಟ್ಟಿದ್ದು, ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ನವೆಂಬರ್‌ ನಲ್ಲಿ ಮಗಳನ್ನು ನೋಡಲು ಶಾಲೆಗೆ ಭೇಟಿ ನೀಡಿದಾಗ, “ನಿನ್ನ ಪೋಷಕರಿಂದ ಹಣ ತರದಿದ್ದರೆ ಮಗಳನ್ನು ನೋಡಲು ಸಾಧ್ಯವಿಲ್ಲ” ಎಂದು ಪತಿ ತಡೆದಿದ್ದಾನೆಂದು ದಿವ್ಯಾ ದೂರು ನೀಡಿದ್ದಾರೆ. ಈ ಸಂದರ್ಭ “ತಾಯಿ ಮಾತ್ರ ಮಗುವನ್ನು ಸರಿಯಾಗಿ ನೋಡಿಕೊಳ್ಳಬಲ್ಲಳು… ನನಗೆ ನನ್ನ ಮಗಳು ಬೇಕು” ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ರತ್ಲಂ ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿದ್ದು, ಘಟನೆಯು ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿರುವ ಹಿನ್ನೆಲೆ, ಸಂಬಂಧಿತ ಅಧಿಕಾರಿಗಳಿಗೆ ದೂರನ್ನು ಕಳುಹಿಸಲಾಗಿದೆ. ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಜಿತೇಂದ್ರ ಗೆಹ್ಲೋಟ್, “ಯಾರು ಬೇಕಾದರೂ ಆರೋಪ ಮಾಡಬಹುದು. ಎಲ್ಲ ಸಂಗತಿಗಳನ್ನು ನಾನು ಮಾಧ್ಯಮಗಳ ಮುಂದೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 4 Dec 2025 10:51 am

ಎಸ್‌ಡಬ್ಲ್ಯುಪಿ Vs ವರ್ಷಾಶನ; ನಿವೃತ್ತರಿಗೆ ಯಾವುದು ಉತ್ತಮ?

ನಿವೃತ್ತಿಯ ಯೋಜನೆಗಳನ್ನು ರೂಪಿಸುವಾಗ ಬಹುತೇಕ ಎಲ್ಲರ ಮುಂದೆ ಒಂದು ಪ್ರಶ್ನೆ ಮೂಡುತ್ತದೆ. ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್ ಉತ್ತಮವೇ ಅಥವಾ ಆನ್ಯುಟಿಗಳು ಉತ್ತಮವೆ? ನಿಮ್ಮ ಪ್ಲಾನಿಂಗ್‌ ಮುನ್ನ ಒಮ್ಮೆ ಇತ್ತ ಪರಿಶೀಲಿಸಿ ವ್ಯವಸ್ಥಿತ ಹಿಂತೆಗೆತ ಯೋಜನೆ ಅಥವಾ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್ (SWP) ಎನ್ನುವುದು ಮ್ಯೂಚ್ಯುವಲ್ ಫಂಡ್ ಹೂಡಿಕೆದಾರರಿಗೆ ನೀಡುವ ಸೌಲಭ್ಯವಾಗಿದೆ. ಈ ಸೌಲಭ್ಯದಡಿ ಹೂಡಿಕೆದಾರರು ತಮ್ಮ ಹೂಡಿಕೆಯಿಂದ ನಿರ್ದಿಷ್ಟ ಮೊತ್ತವನ್ನು ನಿಯಮಿತ ಮಧ್ಯಂತರಗಳಲ್ಲಿ ಹಿಂಪಡೆಯಬಹುದು. ಮತ್ತೊಂದೆಡೆ ವರ್ಷಾಶನಗಳು (Annuities) ಹೂಡಿಕೆದಾರರಿಗೆ ನಂತರದ ದಿನಾಂಕದಂದು ನಿಯಮಿತ ಪಾವತಿಗಳನ್ನು ಪಡೆಯುವ ಭರವಸೆಯೊಂದಿಗೆ ಖರೀದಿಸಿದ ಒಪ್ಪಂದದ ಉತ್ಪನ್ನದ ಪ್ರಕಾರವನ್ನು ಸೂಚಿಸುತ್ತದೆ. ವರ್ಷಾಶನಗಳು ಹೂಡಿಕೆದಾರರಿಗೆ ಜೀವವಿಮಾ ಕಂಪೆನಿಗಳು ನೀಡುವ ಉತ್ಪನ್ನಗಳಲ್ಲಿ ಮೊತ್ತವನ್ನು ಖಾತರಿಪಡಿಸಲು ಅವಕಾಶ ಕೊಡುತ್ತವೆ. ಇದರಿಂದ ಗಣನೀಯ ನಿವೃತ್ತ ನಿಧಿಯನ್ನು ಪಡೆಯುವ ಮೂಲಕ ನಿರಂತರ ಆದಾಯದ ಹರಿವಿಗೆ ದಾರಿಯಾಗುತ್ತದೆ. ವರ್ಷಾಶನಗಳಲ್ಲಿ ಸ್ಥಿರ ಮತ್ತು ವ್ಯತ್ಯಯಗೊಳ್ಳುವ ಸ್ವಭಾವಗಳ ಉತ್ಪನ್ನಗಳಿರುತ್ತವೆ. ಬೆಂಗಳೂರಿನ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಜ್ಯೋತಿ ಅವರ ಪ್ರಕಾರ ಎರಡೂ ಅಗತ್ಯವಿದೆ. “ಎಸ್‌ಡಬ್ಲ್ಯುಪಿ ತುರ್ತು ಹಣದ ಅಗತ್ಯ ಬಂದಾಗ ಬಳಸಿಕೊಳ್ಳಬಹುದು. ಆದರೆ ನಿವೃತ್ತಿ ಸಂದರ್ಭದಲ್ಲಿ ವ್ಯವಸ್ಥಿತ ಆದಾಯದ ಅಗತ್ಯವಿರುವವರು ವರ್ಷಾಶನಗಳ ಯೋಜನೆಗೆ ಹೋಗುವುದು ಸುರಕ್ಷಿತ. ನಾನು ವರ್ಷಾಶನದಲ್ಲಿ ಹೂಡಿಕೆ ಮಾಡಿದ್ದೇನೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯೋಜನೆಯನ್ನು ಆರಿಸಿಕೊಂಡಿದ್ದು, ಹತ್ತು ವರ್ಷದ ನಂತರ ಹನ್ನೊಂದನೇ ವರ್ಷದಿಂದ ನನಗೆ 25 ವರ್ಷಗಳವರೆಗೆ ಆದಾಯ ಬರುತ್ತಿರುತ್ತದೆ” ಎನ್ನುತ್ತಾರೆ ಜ್ಯೋತಿ. ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್ ಮಾರುಕಟ್ಟೆ ಭಾಗವಹಿಸುವಿಕೆ: ಎಸ್‌ಡಬ್ಲ್ಯುಪಿ ಸ್ಥಿರವಾದ ಮಾರುಕಟ್ಟೆಯ ಸ್ಥಿತಿಯಲ್ಲಿ ಹೂಡಿಕೆಗೆ ಬಹಳ ಪ್ರಗತಿಯ ಭರವಸೆ ನೀಡುತ್ತದೆ. ಹೊಂದಿಕೆಯ ಅವಕಾಶ: ಮ್ಯೂಚುವಲ್ ಫಂಡ್‌ನಲ್ಲಿ ಹಿಂಪಡೆಯುವ ಸೌಲಭ್ಯವು ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ನಿಯಂತ್ರಣವನ್ನು ನೀಡುತ್ತದೆ. ತಮ್ಮ ಅಗತ್ಯಗಳಿಗೆ ತಕ್ಕಂತೆ ಹೊಂದಿಕೆ ಮಾಡುವ ಅವಕಾಶ ಇರುತ್ತದೆ. ತೆರಿಗೆ ಕಡಿತ: ಹೂಡಿಕೆದಾರರು ತಮ್ಮ ಎಸ್‌ಡಬ್ಲ್ಯುಪಿ ಮಾದರಿಯನ್ನು ಭಾರೀ ತೆರಿಗೆ ಹೇರದ ರೀತಿಯಲ್ಲಿ ಹಿಂಪಡೆಯುವುದು ಮತ್ತು ಉತ್ತಮ ಲಾಭಗಳನ್ನು ಪಡೆಯುವ ರೀತಿಯಲ್ಲಿ ರಚಿಸುವ ಅವಕಾಶ ಹೊಂದಿದ್ದಾರೆ. ಮಾರುಕಟ್ಟೆ ಅಪಾಯ: ಎಲ್ಲಾ ಲಾಭಗಳ ಹೊರತಾಗಿಯೂ, ಎಸ್‌ಡಬ್ಲ್ಯುಪಿನ ಹೂಡಿಕೆ ಮೌಲ್ಯದ ಮೇಲೆ ಮಾರುಕಟ್ಟೆ ಸ್ಥಿತಿಯಿಂದಾಗಿ ಏರಿಳಿತ ಕಾಣಬಹುದು. ಕಾಲಾನುಗತದಲ್ಲಿ ತಮ್ಮ ಹಿಂಪಡೆತಗಳನ್ನು ಹೆಚ್ಚು ಉತ್ತಮಗೊಳಿಸಲು ಹೂಡಿಕೆದಾರರು ಮಾರುಕಟ್ಟೆಯನ್ನು ಚೆನ್ನಾಗಿ ಅರಿತುಕೊಂಡಿರಬೇಕು ಮತ್ತು ಸಕ್ರಿಯವಾಗಿ ನಿಭಾಯಿಸುವ ಸಾಮರ್ಥ್ಯ ಬೇಕಿದೆ. ಎಸ್‌ಡಬ್ಲ್ಯುಪಿ ವಿರುದ್ಧ ವರ್ಷಾಶನ ಗ್ಯಾರಂಟಿ ಇರುವ ಆದಾಯ: ನಿವೃತ್ತಿಯ ಸಂದರ್ಭದಲ್ಲಿ ವಿಮಾ ಕಂಪನಿಗಳು ಒದಗಿಸುವ ವರ್ಷಾಶನಗಳಲ್ಲಿ ಸ್ಥಿರವಾದ, ನಿಯಮಿತ ಮತ್ತು ಗ್ಯಾರಂಟಿ ಇರುವ ಪಾವತಿಗಳಿರುತ್ತವೆ. ಅದನ್ನು ಜೀವಿತಾವಧಿವರೆಗೂ ಪಡೆಯಬಹುದು ಅಥವಾ ಯೋಜನೆಯಲ್ಲಿ ಪೂರ್ವ-ಸೂಚಿತ ಅವಧಿಯವರೆಗೆ ಸಿಗಬಹುದು. ಹಣದುಬ್ಬರದ ವಿರುದ್ಧ ರಕ್ಷಣೆ: ಕೆಲವು ವರ್ಷಾಶನಗಳು ನಿವೃತ್ತರ ಖರೀದಿ ಶಕ್ತಿಯನ್ನು ಮತ್ತು ಅವರ ಆದಾಯವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಂದರೆ ಹಣದುಬ್ಬರದಿಂದ ರಕ್ಷಣೆ ಅಥವಾ ಹಣದುಬ್ಬರ- ಹೊಂದಿಸಿದ ವರ್ಷಾಶನಗಳು ಸ್ವಯಂಚಾಲಿತವಾಗಿ ಆವರ್ತಕ ಆದಾಯ ಪಾವತಿಗಳನ್ನು ಏರಿಸುವ ಅಂತರ್‌ನಿರ್ಮಿತ ಉತ್ಪನ್ನಗಳಾಗಿರುತ್ತವೆ. ಇದು ಹಣದುಬ್ಬರದಿಂದ ಏರುವ ವೆಚ್ಚದಿಂದ ನಿವೃತ್ತರನ್ನು ರಕ್ಷಿಸುತ್ತದೆ. ಕನಿಷ್ಠ ನಿರ್ವಹಣೆ: ಪಾವತಿಯ ಸ್ವರೂಪವನ್ನು ವಿಮಾ ಕಂಪನಿಯೇ ನಿರ್ವಹಿಸುವ ಕಾರಣದಿಂದ ಖರೀದಿಯ ನಂತರ ನಿರ್ವಹಣೆಯ ಅಗತ್ಯ ಹೆಚ್ಚು ಇರುವುದಿಲ್ಲ. ಪ್ರಗತಿಯ ಅವಕಾಶ ಕಡಿಮೆ: ನಿರ್ವಹಣೆ ಮಾಡುವುದು ಮತ್ತು ಅಂದಾಜುಗಣನೆ ಸುಲಭವಾಗಿದ್ದರೂ, ಹಣಕಾಸು ಮಾರುಕಟ್ಟೆಯಲ್ಲಿರುವ ಹೂಡಿಕೆ ಸಾಧನಗಳಿಗೆ ಹೋಲಿಸಿದರೆ ವರ್ಷಾಶನಗಳಲ್ಲಿ ಪ್ರಗತಿಯ ಸಾಮರ್ಥ್ಯ ಕಡಿಮೆ ಇರುತ್ತದೆ. ಹೊಂದಿಕೆಗೆ ಅವಕಾಶವಿಲ್ಲ: ಹೂಡಿಕೆದಾರ ತನ್ನ ವರ್ಷಾಶನ ಯೋಜನೆಯ ನಿಯಮಗಳನ್ನು ಬದಲಿಸುವ ಅವಕಾಶ ಇರುವುದಿಲ್ಲ. ತೆರಿಗೆಯ ದಂಡಗಳಿಲ್ಲದೆ ದೊಡ್ಡ ಮೊತ್ತವನ್ನು ಸ್ವೀಕರಿಸುವ ಅವಕಾಶವೂ ಇರುವುದಿಲ್ಲ. ಅನೇಕ ಶುಲ್ಕಗಳನ್ನೂ ವಿಧಿಸುವ ಸಾಧ್ಯತೆಯಿರುವ ಕಾರಣದಿಂದ ಹೂಡಿಕೆಯ ಮೊತ್ತವನ್ನು ಕಡಿತಗೊಳಿಸಬಹುದು.

ವಾರ್ತಾ ಭಾರತಿ 4 Dec 2025 10:35 am

ಇವರಾರೂ ಕ್ಷಮೆ ಯಾಚಿಸಲಿಲ್ಲ!: ಭಗವತಿ ಚರಣ್ ವೊಹ್ರಾ-ಕ್ರಾಂತಿಯ ಸೈದ್ಧಾಂತಿಕ ಚಿಲುಮೆ

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ವಾರ್ತಾ ಭಾರತಿ 4 Dec 2025 10:34 am

ಯುನಿವೆಫ್ | ಬಿ.ಸಿ. ರೋಡ್ ನಲ್ಲಿ ಸೀರತ್ ಸಮಾವೇಶ

ಮಂಗಳೂರು: ಯುನಿವೆಫ್ ಕರ್ನಾಟಕ  ಹಮ್ಮಿಕೊಂಡಿರುವ 20 ನೇ ವರ್ಷದ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನದ ಸೀರತ್ ಸಮಾವೇಶವು ಡಿ.5 ರ ಶುಕ್ರವಾರ ಸಂಜೆ 6.45 ಕ್ಕೆ ಬಿ.ಸಿ. ರೋಡ್ ನ ಪೂಂಜಾ ಗ್ರೌಂಡ್ ನಲ್ಲಿ ಜರಗಲಿರುವುದು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು “ಶೋಷಣೆಯ ವಿರುದ್ಧ ಪ್ರವಾದಿ (ಸ) ಯ ನಡೆ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿರುವರು. ಜಮೀಅತುಲ್ ಫಲಾಹ್ ಬಂಟ್ವಾಳ ತಾಲೂಕು ಇದರ ಅಧ್ಯಕ್ಷ ಬಿ. ಎಂ. ಅಬ್ಬಾಸ್ ಅಲಿ ಮತ್ತು ಅನಿವಾಸಿ ಉದ್ಯಮಿ ಅಬ್ದುರ್‍ರಹೀಮ್ ಖತರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ರ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Dec 2025 10:26 am

ಸಂಸತ್ತಿನಲ್ಲಿ ಆರಾಮಾಗಿ ಕುಳಿತಿದ್ದ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ! ವೈರಲ್ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಸಂಸತ್ ಭವನದಲ್ಲಿ ನಡೆದ ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ ವೇಳೆ, ಭುಜ ನೋವಿನಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿ ಭುಜ ಒತ್ತಿ ವಿಶ್ರಾಂತಿ ನೀಡಿದರು. ಪ್ರಿಯಾಂಕಾ ಗಾಂಧಿಯೂ ಖರ್ಗೆಯವರಿಗೆ ಮಸಾಜ್‌ನ ಅನುಕೂಲಗಳ ಬಗ್ಗೆ ವಿವರಿಸಿದರು. ಈ ಅಪರೂಪದ ಕ್ಷಣಗಳ ವಿಡಿಯೋ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆ ಪಡೆದಿದೆ.

ವಿಜಯ ಕರ್ನಾಟಕ 4 Dec 2025 10:16 am

Vladimir Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ, ಪ್ರಮುಖ ಸೇನಾ ಒಪ್ಪಂದಗಳ ಮಾಹಿತಿ ಇಲ್ಲಿದೆ!

ರಷ್ಯಾ ಮತ್ತು ಭಾರತದ ನಡುವೆ ರಕ್ಷಣಾ ಒಪ್ಪಂದಗಳಿಗೆ ಸಹಿ ಬೀಳಲು ಕ್ಷಣಗಣನೆ ಆರಂಭವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಭಾರತ ಭೇಟಿ ಆರಂಭಿಸಿದ್ದು ಭಾರತದ ಜೊತೆಯಲ್ಲಿ ಪ್ರಮುಖ ಮಿಲಿಟರಿ ಒಪ್ಪಂದಕ್ಕೆ ಅನುಮೋದನೆ ಸಿಗುತ್ತಿದ್ದಂತೆ ಹೊಸ ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಭಾರತದ ಜೊತೆಗೆ ರಷ್ಯಾ ನೂತನ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳಲು &ಅದನ್ನು ಜಾರಿಗೆ

ಒನ್ ಇ೦ಡಿಯ 4 Dec 2025 10:15 am

Uttar Pradesh |ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ: ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತ್ಯು

ಲಕ್ನೊ: ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಬಳಿ ದಿಲ್ಲಿ-ಲಕ್ನೊ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.   ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.  ಮೃತ ನಾಲ್ವರು ವೆಂಕಟೇಶ್ವರ್ ವಿಶ್ವವಿದ್ಯಾಲಯದ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಅಪಘಾತದ ಕುರಿತು ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ರಜಬ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವಾರ್ತಾ ಭಾರತಿ 4 Dec 2025 10:13 am

ಕ್ಯಾಬಿನೆಟ್‌ ಸಭೆಯಲ್ಲಿ ಗೊರಕೆ ಹೊಡೆದ ಡೊನಾಲ್ಡ್‌ ಟ್ರಂಪ್;‌ ಎಲ್ಲರಿಗೂ ಬರ್ತೈತೆ ಕಾಲ ಎಂದ ವಿರೋಧಿಗಳು! ಕಾಲಚಕ್ರ ಉರುಳುತ್ತದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿದ್ದೆಗೆ ಜಾರಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ. ಡೊನಾಲ್ಡ್‌ ಟ್ರಂಪ್‌ ಅವರಿಗೆ ಅನೇಕ ನೆಟ್ಟಿಗರು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರನ್ನು ನೆನಪಿಸಿಕೊಟ್ಟಿದ್ದು, ಬೈಡನ್‌ ವಯಸ್ಸನ್ನು ಅವರ ದೈಹಿಕ ಅಸಮರ್ಥತೆಯನ್ನು ಅಣಕಿಸುತ್ತಿದ್ದ ಟ್ರಂಪ್‌ ಅವರಿಗೆ ಈಗ ವಯಸ್ಸಿನ ಸವಾಲುಗಳ ಬಗ್ಗೆ ಅರಿವಾಗಿರಬೇಕು ಎಂದು ಕಾಲೆಳೆದಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 4 Dec 2025 10:10 am

ಬಿದ್ರಿ ಕಲೆಗೂ ತಟ್ಟಿದ ಬೆಳ್ಳಿ ಬೆಲೆ ಏರಿಕೆ ಬಿಸಿ ; ಜಿಐ ಟ್ಯಾಗ್‌ ಪಡೆದ ಕರ್ನಾಟಕದ ಕಲೆ ಬಂದ್‌ ಆಗುವ ಆತಂಕ

ಬೀದರ್‌ನ ಪ್ರಖ್ಯಾತ ಬಿದ್ರಿ ಕಲೆಗೆ ಬೆಳ್ಳಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಲಾವಿದರು ಕಲಾಕೃತಿ ತಯಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಕಾವೇರಿ ಕಾಂಪ್ಲೆಕ್ಸ್ ಬಂದ್ ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಈ ವಿಶಿಷ್ಟ ಕಲೆ ಮತ್ತು ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರದ ನೆರವು ಲಭಿಸುವ ನೀರೀಕ್ಷೆಯಲ್ಲಿ ಕಲಾವಿದರು ಇದ್ದಾರೆ.

ವಿಜಯ ಕರ್ನಾಟಕ 4 Dec 2025 10:06 am

ಬಿಜೆಪಿ ತೆಕ್ಕೆಗೆ ಬಿತ್ತೇ ಮತ್ತೊಂದು ರಾಜ್ಯ : ಅಲ್ಲೊಂದು ಇಲ್ಲೊಂದರ ಮಧ್ಯೆ, ಕಾಂಗ್ರೆಸ್ಸಿಗೆ ಮತ್ತೊಂದು ಖೋತಾ?

Congress - JMM Alliance in Jharkhand : ಕೆಲವು ತಿಂಗಳ ಹಿಂದೆ, ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿತ್ತು. ಅದರಲ್ಲಿ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದಲ್ಲಿ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ ಮತ್ತು ಜೆಎಂಎಂ ಸಮ್ಮಿಶ್ರ ಸರ್ಕಾರ, ಜಾರ್ಖಂಡ್ ನಲ್ಲಿ ಅಧಿಕಾರದಲ್ಲಿದೆ. ಆದರೆ, ಸಿಎಂ ಹೇಮಂತ್ ಸೊರೆನ್, ಬಿಜೆಪಿ ನಾಯಕರ ಜೊತೆ ಟಚ್ ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಿಜಯ ಕರ್ನಾಟಕ 4 Dec 2025 9:52 am

ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಗಿ ಸೂಚನೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ರಾಜ್ಯದ 17 ಮಹಾನಗರ ಪಾಲಿಕೆಗಳು ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರ ಪಟ್ಟಿಯನ್ನು ತಯಾರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು. ಅಲ್ಲದೆ, ರಾಜ್ಯದ 18 ವಿಭಾಗಗಳಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಆದೇಶವು ಅಕ್ರಮ ವಲಸಿಗರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಬಂದಿದೆ.

ವಿಜಯ ಕರ್ನಾಟಕ 4 Dec 2025 9:52 am

ದ್ವೇಷ ಭಾಷಣ ಕಡಿವಾಣಕ್ಕೆ ಪ್ಲ್ಯಾನ್: ಸಂಪುಟ ಸಭೆಯಲ್ಲಿ ಮಹತ್ವದ ವಿಧೇಯಕ ಅಂಗೀಕಾರ ಸಾಧ್ಯತೆ

ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ ವಿಧೇಯಕ -2025ಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಈ ವಿಧೇಯಕ ಅಂಗಿಕಾರವಾದರೆ ದ್ವೇಷ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮ ಜಾರಿಯಾಗಲಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ಆಗಲಿದೆ. ಸಂಪುಟ ಸಭೆಯ ನಂತರ ಬೆಳಗಾವಿ ಸದನದಲ್ಲಿ ವಿಧೇಯಕ ಮಂಡಿಸಲಿದ್ದಾರೆ.

ವಿಜಯ ಕರ್ನಾಟಕ 4 Dec 2025 9:44 am