ಬಿʼಹಾರ್ʼ | ರೋಹಿಣಿಯನ್ನು ಅನುಸರಿಸಿದ ಸೋದರಿಯರು
ಪಾಟ್ನಾ: ರೋಹಿಣಿ ಆಚಾರ್ಯ ಅವರ ಬೆನ್ನಿಗೇ ಅವರ ಸೋದರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರೂ ರವಿವಾರ ಬೆಳಿಗ್ಗೆ ತಮ್ಮ ಮಕ್ಕಳೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಪಾಟ್ನಾ ನಿವಾಸವನ್ನು ತೊರೆದು ದಿಲ್ಲಿಗೆ ತೆರಳಿದ್ದಾರೆ. ಇದು ಬಿಹಾರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದಲ್ಲಿ ಕಚ್ಚಾಟ ಇನ್ನಷ್ಟು ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸಿದೆ. ಈಗ ಲಾಲು,ಪತ್ನಿ ರಾಬ್ಡಿದೇವಿ ಮತ್ತು ಇನ್ನೋರ್ವ ಪುತ್ರಿ ಮಿಸಾ ಭಾರ್ತಿ ಅವರು ಮಾತ್ರ ಒಂದು ಕಾಲದಲ್ಲಿ ಆರ್ಜೆಡಿ ನಾಯಕರು ಮತ್ತು ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಕಾಸರಗೋಡು | ರಸ್ತೆ ಅಪಘಾತ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
ಕಾಸರಗೋಡು: ಕಾರು ಮತ್ತು ಥಾರ್ ಜೀಪು ನಡುವೆ ಉಂಟಾದ ಅಪಘಾತದಲ್ಲಿ ಮಹಿಳೆಯೋರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟೀಯ ಹೆದ್ದಾರಿಯ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಮೃತಪಟ್ಟ ಮಹಿಳೆ ವರ್ಕಾಡಿ ಮಚ್ಚಂ ಪಾಡಿ ಕೋಡಿ ನಿವಾಸಿ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಮೃತಪಟ್ಟ ಮಹಿಳೆ ಆಲ್ಟೊ ಕಾರಿನಲ್ಲಿದ್ದವರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮಂಗಳೂರು ನಗರ ಪೊಲೀಸರ ಕಾರ್ಯಚರಣೆ : ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳ ಸೆರೆ
ವಂಚನೆಗೆ 300ಕ್ಕೂ ಅಧಿಕ ಬ್ಯಾಂಕ್ ಖಾತೆ, 250ಕ್ಕೂ ಅಧಿಕ ಸಿಮ್ಗಳ ಬಳಕೆ ಆರೋಪ
ಬಿಹಾರ | ನ. 19 ಅಥವಾ 20ಕ್ಕೆ ನಿತೀಶ್ 10ನೇ ಬಾರಿ ಸಿಎಂ ಪ್ರಮಾಣವಚನ ಸಾಧ್ಯತೆ
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಎಲ್ಲ ವದಂತಿಗಳಿಗೂ ತೆರೆ ಬಿದ್ದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್ಡಿಎ ಮೈತ್ರಿಕೂಟದ ಪ್ರಚಂಡ ಗೆಲುವಿನ ನಂತರ, ನಿತೀಶ್ ಕುಮಾರ್ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಲಭ್ಯತೆಯನ್ನು ಆಧರಿಸಿ, ಬುಧವಾರ ಅಥವಾ ಗುರುವಾರದಂದು ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತಾರೂಢ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಎನ್ಡಿಎ ಉನ್ನತ ಮೂಲಗಳು ಮಾಹಿತಿ ನೀಡಿವೆ. “ನಿತೀಶ್ ಕುಮಾರ್ ಹಾಗೂ ಅವರ ಸಂಪುಟದ ಸಚಿವರ ಪ್ರಮಾಣ ವಚನ ಸಮಾರಂಭವು ರಾಜಭವನದಲ್ಲಿ ನಡೆಯುವ ಬದಲು, ಐತಿಹಾಸಿಕ ಗಾಂದಿ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕಾರ ಹಂಚಿಕೆಯ ಕುರಿತು ದಿಲ್ಲಿಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಮಾತುಕತೆ ಪ್ರಗತಿಯಲ್ಲಿದೆ” ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಎನ್ಡಿಎ ಮೈತ್ರಿಕೂಟದ ಎಲ್ಲ ಐದು ಮಿತ್ರ ಪಕ್ಷಗಳಾದ ಜೆಡಿಯು, ಬಿಜೆಪಿ, LJP (R) ಎಚ್ಎಎಂ ಹಾಗೂ RLMನ ಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಉಡುಪಿ | 431 ಮಂದಿಗೆ 25ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ನ.16: ಬನ್ನಂಜೆ ಬಿಲ್ಲವರ ಸೇವಾ ಸಂಘ ಹಾಗೂ ಶ್ರೀನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 431 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೆಚ್ಚದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಶ್ರೀನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ನ ಮೂಲಕ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ವಿತರಿಸುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕೆಲಸ ಹೆಚ್ಚೆಚ್ಚು ನಡೆಯಬೇಕೆಂದರು. ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ, ಅಧ್ಯಾಪಕರ ಮೇಲೆ ನಂಬಿಕೆ ಇಟ್ಟು ಕಾರ್ಯಪ್ರವೃತ್ತರಾಗಬೇಕು. ಮೂಢನಂಬಿಕೆಯನ್ನು ಇಟ್ಟುಕೊಳ್ಳದೆ ಸಮಾಜಮುಖಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಬನ್ನಂಜೆ ಬಿಲ್ಲವರ ಸೇವಾ ಸಂಘ ಉಡುಪಿ ಅಧ್ಯಕ್ಷ ಶಶಿಧರ ಎಂ.ಅಮೀನ್ ವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿ ಶ್ರೇಯಸ್ ಜಿ. ಕೋಟ್ಯಾನ್ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರ್ಷ ಯು.ಪೂಜಾರಿ, ಸಾಯಿ ವೈಷ್ಣವ್ ದಯಾಕರ್ ಹಾಗೂ ಪ್ರಣತಿ ಜತ್ತನ್ನ ಅವರನ್ನು ಸನ್ಮಾನಿಸಲಾಯಿತು. ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ರಾಜ್ಯೋತ್ಸವ ಸನ್ಮಾನ ಪುರಸ್ಕೃತ ವಿಠಲ ಪೂಜಾರಿ, ನಟ, ನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ ಅವರನ್ನು ಗೌರವಿಸಲಾಯಿತು. ಹರ್ಷ ಸಂಸ್ಥೆಯ ಸೂರ್ಯಪ್ರಕಾಶ್, ಉದ್ಯಮಿ ಪ್ರಭಾಕರ್ ಪೂಜಾರಿ, ಪ್ರಮುಖರಾದ ಸದಾನಂದ ಪೂಜಾರಿ ಬನ್ನಂಜೆ, ಜಿತೇಶ್ ಕುಮಾರ್, ಗೌರವ ಕಾರ್ಯದರ್ಶಿ ದಯಾನಂದ ಪೂಜಾರಿ ಬನ್ನಂಜೆ, ಜಿ.ಸದಾನಂದ ಅಮೀನ್, ಅಶೋಕ ಪೂಜಾರಿ, ಸುಧಾಕರ ಪೂಜಾರಿ, ಉದಯ ಪೂಜಾರಿ, ಪ್ರವೀಣ್ ಆರ್. ಸುವರ್ಣ, ವಿಶ್ವನಾಥ ಕಲ್ಮಾಡಿ, ಗಣೇಶ್ ಕೋಟ್ಯಾನ್, ಸತೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಸಂದೀಪ್ ಸನಿಲ್, ಸುಕನ್ಯಾ, ಯು. ದೀಪಕ್ ಕಿರಣ್, ಕೃಷ್ಣಪ್ಪ ಅಂಚನ್, ಎಸ್.ಟಿ. ಕುಂದರ್, ಜಯಕರ್ ಪೂಜಾರಿ ಉಪಸ್ಥಿತರಿದ್ದರು. ಸಂಘದ ಜತೆಕಾರ್ಯದರ್ಶಿ ರಾಘವೇಂದ್ರ ಅಮೀನ್ ವಂದಿಸಿದರು. ತೇಜೇಶ್ ಜೆ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಕೊಳಕು ಕಿಡ್ನಿ ಎಂದು ನಿಂದಿಸಿದರು, ಹೊಡೆಯಲು ಚಪ್ಪಲಿಯೆತ್ತಿದ್ದರು: ಸಂಬಂಧ ಕಡಿದುಕೊಂಡ ರೋಹಿಣಿ ಆಚಾರ್ಯ ಹೊಸ ಆರೋಪ
ಲಾಲು ಪ್ರಸಾದ್ ಕುಟುಂಬದಲ್ಲಿ ಬಿರುಕು; ನೋವು ಹಂಚಿಕೊಂಡ ರೋಹಿಣಿ!
ಬಿಹಾರದ ಶೇ.42ರಷ್ಟು ನೂತನ ಚುನಾಯಿತ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ: ವರದಿ
ಪಾಟ್ನಾ,ನ.16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತ ಎಲ್ಲ 243 ಅಭ್ಯರ್ಥಿಗಳ ಚುನಾವಣಾ ಅಫಿಡವಿಟ್ ಗಳನ್ನು ಪರಿಶೀಲಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಬಿಹಾರ ಎಲೆಕ್ಷನ್ ವಾಚ್ (ಬಿಇಡಬ್ಲ್ಯು) ಶೇ.42ರಷ್ಟು ನೂತನವಾಗಿ ಚುನಾಯಿತರಾಗಿರುವ ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿವೆ. ಆದಾಗ್ಯೂ 2020ರ ಚುನಾವಣೆಗೆ ಹೋಲಿಸಿದರೆ ಇಂತಹವರ ಸಂಖ್ಯೆ ಇಳಿಕೆಯಾಗಿದೆ. ಆಗ ಶೇ.51ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು ಎಂದು ತಿಳಿಸಿವೆ. ‘2025ರ ಚುನಾವಣೆಗಳಲ್ಲಿ ಆಯ್ಕೆಯಾಗಿರುವ ಒಟ್ಟು ಶಾಸಕರ ಪೈಕಿ 102 (ಶೇ.42) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ. ಕೊಲೆ,ಕೊಲೆ ಯತ್ನ,ಅಪಹರಣ,ಮಹಿಳೆಯರ ವಿರುದ್ಧ ದೌರ್ಜನ್ಯಗಳು,ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರ ಕ್ರಿಮಿನಲ್ ಅಪರಾಧಗಳು ಎಂದು ನಾವು ಪರಿಗಣಿಸಿದ್ದೇವೆ ಹಾಗೂ ಪ್ರತಿಭಟನೆ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯಂತಹ ಅಪರಾಧಗಳನ್ನು ಈ ವರ್ಗದಿಂದ ಹೊರಗಿರಿಸಿದ್ದೇವೆ’ ಎಂದು ಎಡಿಆರ್ ಬಿಹಾರ ರಾಜ್ಯ ಸಂಯೋಜಕ ರಾಜೀವ್ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ರಾಜಕೀಯದ ಅಪರಾಧೀಕರಣದ ಗ್ರಾಫ್ ಇಳಿಯುತ್ತಿದ್ದರೂ ಅದರಿಂದ ಸಂತೋಷ ಪಟ್ಟುಕೊಳ್ಳುವಂಥದ್ದೇನೂ ಇಲ್ಲ, ಏಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಈಗಲೂ ಇಂತಹ ಜನರಿಗೆ ಟಿಕೆಟ್ ಗಳನ್ನು ನೀಡುತ್ತಿವೆ ಮತ್ತು ತನ್ಮೂಲಕ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವ ಅವಕಾಶದಿಂದ ಮತದಾರರನ್ನು ವಂಚಿಸುತ್ತಿವೆ ಎಂದು ಹೇಳಿದ ಅವರು, ‘ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ಗಳನ್ನು ನೀಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ಆಗ ಮಾತ್ರ ರಾಜಕೀಯವು ಅಪರಾಧೀಕರಣದಿಂದ ಮುಕ್ತಗೊಳ್ಳುತ್ತದೆ ಮತ್ತು ಅದು ನಮ್ಮ ಗುರಿಗಳಲ್ಲೊಂದಾಗಿದೆ ’ ಎಂದರು. ದತ್ತಾಂಶಗಳ ಪ್ರಕಾರ ಆರು ಶಾಸಕರು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 19 ಶಾಸಕರು ಕೊಲೆ ಯತ್ನ ಮತ್ತು ಒಂಭತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ದೊಡ್ಡ ಪಕ್ಷಗಳ ಪೈಕಿ ಹೊಸದಾಗಿ ಆಯ್ಕೆಯಾಗಿರುವ ಆರ್ಜೆಡಿಯ 25 ಶಾಸಕರ ಪೈಕಿ 14 (ಶೇ.56),ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ರ ಎಲ್ಜೆಪಿ(ಆರ್ವಿ)ಯ 19 ಶಾಸಕರ ಪೈಕಿ 10 (ಶೇ.53),ಕಾಂಗ್ರೆಸ್ನ ಆರು ಶಾಸಕರ ಪೈಕಿ ಮೂವರು(ಶೇ.50),ಬಿಜೆಪಿಯ 89 ಶಾಸಕರ ಪೈಕಿ 43 (ಶೇ.48) ಮತ್ತು ಜೆಡಿಯುದ 85 ಶಾಸಕರ ಪೈಕಿ 23 (ಶೇ.27) ಜನರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ವಿಜೇತ ಅಭ್ಯರ್ಥಿಗಳ ಪೈಕಿ ಶೇ.90ರಷ್ಟು ಜನರು ಕೋಟ್ಯಧಿಪತಿಗಳಾಗಿದ್ದು,ಸರಾಸರಿ 9.02 ಕೋ.ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಕೋಟ್ಯಧಿಪತಿಗಳ ಸಮಸ್ಯೆ ಕುರಿತು ಗಮನ ಹರಿಸಬೇಕು. ಅದು ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಗೆಲ್ಲುವ ಅವಕಾಶಗಳನ್ನು ನಿರಾಕರಿಸುತ್ತದೆ,ಅವರಿಗೂ ಸಮಾನ ಸ್ಪರ್ಧೆಯ ಅವಕಾಶವಿರಬೇಕು ಎಂದು ರಾಜೀವ್ ಕುಮಾರ್ ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯು ಸುಧಾರಣೆಯತ್ತ ಸಾಗುತ್ತಿದೆ. ಸುಮಾರು ಶೇ.60 ರಷ್ಟು ಚುನಾಯಿತ ಅಭ್ಯರ್ಥಿಗಳು ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಸುಮಾರು ಶೇ.35ರಷ್ಟು ಅಭ್ಯರ್ಥಿಗಳು ಐದರಿಂದ 12ನೇ ತರಗತಿವರೆಗೆ ಓದಿದ್ದಾರೆ. ಒಟ್ಟು ಏಳು ಅಭ್ಯರ್ಥಿಗಳು ತಾವು ಕೇವಲ ‘ಅಕ್ಷರಸ್ಥರು’ ಎಂದು ಘೋಷಿಸಿಕೊಂಡಿದ್ದಾರೆ.
ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನಟಿ ಕೀರ್ತಿ ಸುರೇಶ್ ನೇಮಕ
ಹೊಸದಿಲ್ಲಿ, ನ. 16: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾದ ಸೆಲೆಬ್ರೆಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ರವಿವಾರ ತಿಳಿಸಿದೆ. ತಮಿಳು, ತೆಲುಗು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಮೆಚ್ಚುಗೆ ಪಡೆದ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ಕೀರ್ತಿ ಸುರೇಶ್ ಅವರು ಈಗ ದುರ್ಬಲ ಮಕ್ಕಳಿಗಾಗಿ ಯುನಿಸೆಫ್ ಮಾಡುತ್ತಿರುವ ಕೆಲಸವನ್ನು ಬೆಂಬಲಿಸುವ ವ್ಯಕ್ತಿಗಳ ವಿಶೇಷ ಗುಂಪಿನ ಭಾಗವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಅವರು ಈಗ ಮಾನಸಿಕ ಆರೋಗ್ಯ, ಶಿಕ್ಷಣ ಹಾಗೂ ಲಿಂಗ ಸಮಾನತೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೀರ್ತಿ ಸುರೇಶ್, ಮಕ್ಕಳು ನಮ್ಮ ಅತಿ ದೊಡ್ಡ ಜವಾಬ್ದಾರಿ ಹಾಗೂ ಭರವಸೆ. ಪೋಷಣೆ, ಪ್ರೀತಿಯ ಆರೈಕೆಯು ಮಕ್ಕಳು ಸಂತೋಷ, ಆರೋಗ್ಯಕರ ಮತ್ತು ತೃಪ್ತಿಕರ ಜೀವನ ನಡೆಸಲು ಅಗತ್ಯವಾಗಿರುವ ಸಾಮಾಜಿಕ ಹಾಗೂ ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಡಿಪಾಯ ನಿರ್ಮಿಸುತ್ತದೆ. ಇದು ನನಗೆ ಸಿಕ್ಕ ಒಂದು ದೊಡ್ಡ ಗೌರವವಾಗಿದೆ ಎಂದಿದ್ದಾರೆ.
ವೆಲೆನ್ಸಿಯಾ ಸಮುದಾಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಮಕ್ಕಳು, ಓದುಗರಿಗೆ ಸ್ಪರ್ಧೆ
ಮಂಗಳೂರು, ನ.16: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಅಂಗವಾಗಿ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯ, ವೆಲೆನ್ಸಿಯಾದಲ್ಲಿ ಮಕ್ಕಳಿಗಾಗಿ ಹಾಗೂ ಓದುಗರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ನಡೆದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು. ದ.ಕ. ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಗಾಯತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳು ತೋರಿಸಿದ ಉತ್ಸಾಹ ಮತ್ತು ಸೃಜನಶೀಲತೆ ನಮಗೆ ಅಪಾರ ಸಂತೋಷ ತಂದಿದೆ. ಪುಸ್ತಕಗಳು ಕೇವಲ ಮನರಂಜನೆಯಷ್ಟೇ ಅಲ್ಲ, ಜ್ಞಾನಕ್ಕೆ ದಾರಿ ತೆರೆದಿಡುವ ಅಮೂಲ್ಯ ಸಂಗಾತಿಗಳಾಗಿವೆ’ ಎಂದರು. ತೀರ್ಪುಗಾರರಾದ ಶಿಕ್ಷಕ ಉಮೇಶ್ ಕಾರಂತ, ಶೇಷಗಿರಿ ಉಪಸ್ಥಿತರಿದ್ದರು. ಓದುಗರ ಆಶುಭಾಷಣ ಸ್ಪರ್ಧೆಯಲ್ಲಿ ಒಲಿವರ್ ಡಿ ಸೋಜ ಪ್ರಥಮ, ಶೇಷಗಿರಿ ದ್ವಿತೀಯ ಹಾಗೂ ಗೋಪಾಲಕೃಷ್ಣ ಭಟ್ ತೃತೀಯ ಸ್ಥಾನ ಪಡೆದರು. ಬಾಲವಾಡಿ ಮಕ್ಕಳ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಆರ್ಯನ್, ಆರಾಧ್ಯ ಮತ್ತು ಮಲ್ಲಿಕಾರ್ಜುನ ವಿಜೇತರಾದರು. 1 ಮತ್ತು 2ನೇ ತರಗತಿಯ ಮಕ್ಕಳಿಗೆ ನಡೆದ ಬಕೆಟ್ ನಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ಸಂಜನಾ, ನಿಶಾನ್ ಹಾಗೂ ದ್ರಾಕ್ಷಾಯಿಣಿ ಅವರು ಬಹುಮಾನ ಪಡೆದರು. 3 ಮತ್ತು 4ನೇ ತರಗತಿಯ ಕನ್ನಡ ಓದು ಸ್ಪರ್ಧೆಯಲ್ಲಿ ವಿಕ್ರಂ, ಹನುಮಾನ್ ಮತ್ತು ಯಮನಾರಿ ವಿಜೇತರಾದರೆ, 5ನೇ ತರಗತಿಯ ಜ್ಞಾಪಕಶಕ್ತಿ ಸ್ಪರ್ಧೆಯಲ್ಲಿ ಸಮೀರ್, ಗ್ರೀಷ್ಮ ಮತ್ತು ಸಂಜನಾ ಬಹುಮಾನ ಗಳಿಸಿದರು. 6 ಮತ್ತು 7ನೇ ತರಗತಿಯ ಆಶುಭಾಷಣ ಸ್ಪರ್ಧೆಯಲ್ಲಿ ಭೂಮಿಕಾ, ಶುಭನ್ ಮತ್ತು ಲಾಸ್ಯ ಶೆಟ್ಟಿಯವರು ಕ್ರಮವಾಗಿ ಮೊದಲ ಮೂರೂ ಸ್ಥಾನ ಪಡೆದರು. ಮಾಲತಿ ಬಿ. ಶೆಟ್ಟಿ ವಂದಿಸಿದರು. ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯ ರಿನ್ಸಿ ಪಿ. ವಿ. ಕಾರ್ಯಕ್ರಮ ನಿರ್ವಹಿಸಿದರು.
ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಪಶ್ಚಿಮ ಬಂಗಾಳದ ಕಿವುಡ, ಮೂಕ ಮೀನುಗಾರ ಮೃತ್ಯು; ತನಿಖೆಗ ಕುಟುಂಬ ಆಗ್ರಹ
ಕೋಲ್ಕತಾ, ನ. 16: ಪಶ್ಚಿಮಬಂಗಾಳದ ಕಿವುಡ ಹಾಗೂ ಮೂಕ ಮೀನುಗಾರರೊಬ್ಬರು ಬಾಂಗ್ಲಾದೇಶದ ಸುಧಾರಣಾ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಪಶ್ಚಿಮ ಗಂಗಾಧರಪುರ ಗ್ರಾಮದ ನಿವಾಸಿ ಬಬ್ಲು ದಾಸ್ ಎಂದು ಗುರುತಿಸಲಾಗಿದೆ. ಬಬ್ಲು ದಾಸ್ ನಮ್ಮ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ. ಆತ ಕಿವುಡ ಹಾಗೂ ಮೂಕನಾಗಿದ್ದರೂ ಕಷ್ಟಪಟ್ಟು ದುಡಿಯುತ್ತಿದ್ದ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ‘‘ಇದು ಸಹಜ ಸಾವಲ್ಲ. ಕಾರಾಗೃಹದಲ್ಲಿ ಆತನಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈಯಲಾಗಿದೆ ಎಂಬುದು ನಮ್ಮ ಸಂದೇಹ. ಇದು ಯೋಜಿತ ಕೊಲೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಆಗ್ರಹಿಸುತ್ತೇವೆ. ಅವರಿಗೆ ಯಾವುದೇ ರೀತಿಯ ಸಣ್ಣ ಕಾಯಿಲೇ ಇಲ್ಲದೆ ಇದ್ದರೂ ಸಹಜವಾಗಿ ಸಾಯಲು ಹೇಗೆ ಸಾಧ್ಯ?’’ ಎಂದು ಬಬ್ಲು ದಾಸ್ ಅವರ ಕಿರಿಯ ಸಹೋದರ ಬಸುದೇಬ್ ಪ್ರಶ್ನಿಸಿದ್ದಾರೆ. ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕಾಕ್ ದ್ವೀಪ್ ಕರಾವಳಿಯ ಬಬ್ಲು ದಾಸ್ ಹಾಗೂ ಇತರ 33 ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ನಾಲ್ಕು ತಿಂಗಳ ಹಿಂದೆ ಬಂಧಿಸಿತ್ತು. ಈ ಮೀನುಗಾರರು ಶ್ರೀಲಂಕಾದ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ್ದಾರೆ ಎಂದು ಅದು ಆರೋಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೀನುಗಾರರು ‘ಎಫ್ಬಿ ಮಂಗಳಚಂಡಿ’ ದೋಣಿಯಲ್ಲಿ ಜುಲೈಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಇವರಲ್ಲಿ ಬಬ್ಲು ಸೇರಿದಂತೆ ಕೆಲವರು ಪ್ರಮಾದವಶಾತ್ ಜಲ ಗಡಿಯನ್ನು ದಾಟಿದ್ದರು ಎಂದು ಅವರು ಹೇಳಿದ್ದಾರೆ. ಈ ಮೀನುಗಾರರನ್ನು ಬಾಂಗ್ಲಾದೇಶದ ನೌಕಾ ಪಡೆ ಬಂಧಿಸಿತ್ತು. ಅನಂತರ ಅವರು ಬಾಂಗ್ಲಾದೇಶದ ಕಾರಾಗೃಹದಲ್ಲಿ ಇರಿಸಿತು ಎಂದು ಬಬ್ಲುವಿನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್: ಮುಹಮ್ಮದ್ಗೆ 2 ಚಿನ್ನ, 1 ಕಂಚು
ಮಂಗಳೂರು, ನ.16: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ ಆಶ್ರಯದಲ್ಲಿ ಇತ್ತೀಚೆಗೆ ನಡೆದ 26ನೇ ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ಪಾಂಡೇಶ್ವರ ನಿವಾಸಿ ಪಿ. ಎ. ಮುಹಮ್ಮದ್ ಕಾಟಿಪಳ್ಳ ಅವರು 2 ಬೆಳ್ಳಿ, 1 ಕಂಚು ಪದಕ ಪಡೆದಿದ್ದಾರೆ. ಮುಹಮ್ಮದ್ ಕಾಟಿಪಳ್ಳ ಅವರು 100 ಮೀ ಫ್ರೀ ಸ್ಟೈಲ್, 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಎರಡು ಬೆಳ್ಳಿಯ ಪದಕವನ್ನು , 50 ಮೀ ಫ್ರೀ ಸ್ಟೈಲ್ ವೇಗದ ಸ್ವಿಮ್ಮಿಂಗ್ನಲ್ಲಿ ಕಂಚಿನ ಪದಕವನ್ನು ಜಯಿಸಿದರು. ಇದರೊಂದಿಗೆ ಅವರು 2025 ನ. 21ರಿಂದ 23ರ ತನಕ ಹೈದರಾಬಾದ್ ನ ಗಚಿಬೌಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.
ಪಾಲ್ಘರ್ (ಮಹಾರಾಷ್ಟ್ರ): ಶಾಲೆಗೆ ತಡವಾಗಿ ಬಂದಿದ್ದಕ್ಕೆ ನೀಡಿದ 100 ಭಸ್ಕಿ ಹೊಡೆಯುವ ಶಿಕ್ಷೆಯು 13 ವರ್ಷದ ಬಾಲಕಿಯೊಬ್ಬಳನ್ನು ಬಲಿ ಪಡೆದಿರುವ ಆಘಾತಕಾರಿ ಘಟನೆ ಪಾಲ್ಘರ್ ಜಿಲ್ಲೆಯ ವಸಾಯಿ ತಾಲ್ಲೂಕಿನ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಅಂಶಿಕಾ ಗೌಡ್ (13) ಎಂದು ಗುರುತಿಸಲಾಗಿದ್ದು, ಆಕೆ ವಸಾಯಿ ಪ್ರದೇಶದಲ್ಲಿರುವ ಸಾತಿವಾಲಿಯಲ್ಲಿನ ಶ್ರೀ ಹನುಮಂತ್ ವಿದ್ಯಾಮಂದಿರ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕರಿಂದ 100 ಭಸ್ಕಿ ಹೊಡೆಯುವ ಕಠಿಣ ಶಿಕ್ಷೆಗೆ ಬಾಲಕಿ ಗುರಿಯಾಗಿದ್ದಾಳೆ. ಈ ಶಿಕ್ಷೆಯ ಬೆನ್ನಿಗೇ ಆಕೆಯ ಬೆನ್ನಿನ ಕೆಳ ಭಾಗದಲ್ಲಿ ಗಂಭೀರ ಸ್ವರೂಪದ ನೋವು ಕಾಣಿಸಿಕೊಂಡಿದೆ. ಮನೆಗೆ ಮರಳಿದ ಬಳಿಕ ಆಕೆಯ ಆರೋಗ್ಯ ಕ್ಷೀಣಿಸುತ್ತಲೇ ಸಾಗಿದ್ದು, ಆಕೆಯನ್ನು ನಲಸೋಪಾರದಲ್ಲಿನ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಆದರೆ, ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ ಬಳಿಕ, ಆಕೆಯನ್ನು ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದ ಆಕೆ ಮೃತಪಟ್ಟಿದ್ದಾಳೆ. ಈ ಘಟನೆ ವಸಾಯಿ ಪ್ರದೇಶದಲ್ಲಿನ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ಕುಟುಂಬದ ಸದಸ್ಯರೊಬ್ಬರು, “ಶಿಕ್ಷೆಯ ನಂತರ ಆಕೆ ತೀವ್ರ ಸ್ವರೂಪದ ಬೆನ್ನು ಮತ್ತು ಕುತ್ತಿಗೆ ನೋವಿಗೆ ಗುರಿಯಾಗಿದ್ದಳು ಹಾಗೂ ಆಕೆಗೆ ಮೇಲೇಳಲೂ ಸಾಧ್ಯೆವಾಗುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಾಲಿವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಅಂಶಿಕಾ ಸಾವಿನ ಕುರಿತು ತನಿಖೆ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ್ ಗಲಂಗೆ ಘೋಷಿಸಿದ್ದಾರೆ. ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಎನ್ಸಿಪಿ(ಎಸ್ಪಿ)ಯ ಕಾರ್ಯಕರ್ತರು, ಶಾಲೆ ಮತ್ತು ಅದರ ಆಡಳಿತ ಮಂಡಳಿ ಹಾಗೂ ಈ ಘಟನೆಯಲ್ಲಿ ಭಾಗಿಯಾಗಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.
ಮಂಗಳೂರು ಫುಟ್ಬಾಲ್ ಕ್ರೀಡಾಂಗಣ ಡಿಸೆಂಬರ್ನಲ್ಲಿ ಉದ್ಘಾಟನೆ : ಯು.ಟಿ.ಖಾದರ್
ಮಂಗಳೂರು, ನ.16: ನಗರದ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದ ಕಾಮಗಾರಿಯನ್ನು ರವಿವಾರ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಪರಿಶೀಲಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಟ್ಬಾಲ್ ಕ್ರೀಡಾಂಗಣವು ಈಗಾಗಲೇ ಆಸ್ಟ್ರೋ ಟರ್ಫ್ ಅಳವಡಿಸಲಾಗಿದೆ. ಇಂಟರ್ಲಾಕ್, ತಡೆಬೇಲಿ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಮಂಗಳೂರಿನಲ್ಲಿ ಫುಟ್ಬಾಲ್ ಆಟಕ್ಕೆ ಸುಸಜ್ಜಿತ ಟರ್ಫ್ ಕ್ರೀಡಾಂಗಣ ಬಹುತೇಕ ಸಿದ್ದವಾಗಿದೆ. ಶೇ 90ರಷ್ಟು ಕಾಮಗಾರಿ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಫುಟ್ಬಾಲ್ ಆಟಕ್ಕೆ ಕ್ರೀಡಾಂಗಣ ಲಭ್ಯವಾಗಲಿದೆ. ಡಿಸೆಂಬರ್ ಮೂರನೇ ವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಈ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಮಂಗಳೂರಿನಲ್ಲಿ ಫುಟ್ಬಾಲ್ ಆಟಗಾರರಿಗೆ ಈ ಕ್ರೀಡಾಂಗಣದ ಮೂಲಕ ತರಬೇತಿಗೆ ಇನ್ನಷ್ಟು ಅವಕಾಶ ಲಭ್ಯವಾಗಲಿದೆ. ಈಗಾಗಲೇ ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದ ದ.ಕ. ಜಿಲ್ಲಾ ಅಂಡರ್-14 ಬಾಲಕರ ಫುಟ್ಬಾಲ್ ತಂಡ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿತ್ತು. ಪೆನಾಲ್ಟಿ ಶೂಟೌಟ್ ನಲ್ಲಿ ಬೆಳಗಾವಿ ತಂಡದ ಎದುರು ಸೋಲು ಅನುಭವಿಸಿತ್ತು. ಇದರೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ತಂಡದ 5 ಮಂದಿ ಆಟಗಾರರು ರಾಷ್ಟ್ರೀಯ ತಂಡದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ನ ಅಧ್ಯಕ್ಷ ಡಿ.ಎಂ. ಅಸ್ಲಂ ತಿಳಿಸಿದ್ದಾರೆ. ಸ್ಪೀಕರ್ ಯುಟಿ. ಖಾದರ್ ಅವರು ಕ್ರೀಡಾಂಗಣದ ಕಾಮಗಾರಿ ಪರಿಶೀಲನೆ ವೇಳೆ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಸಂತೋಷ್ ಶೆಟ್ಟಿ, ಮನಪಾ ಮಾಜಿ ಸದಸ್ಯರಾದ ಲತೀಫ್ ಕಂದಕ್, ಶಂಸುದ್ದೀನ್ ಬಂದರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್, ಮ್ಯಾನೇಜರ್ ಅರುಣ್ ಪ್ರಭಾ, ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ , ಕಾರ್ಯದರ್ಶಿ ಹುಸೈನ್ ಬೋಳಾರ್, ಕೋಶಾಧಿಕಾರಿ ಅಫ್ರೋಝ್ ಉಳ್ಳಾಲ, ಮ್ಯಾಂಗಳೂರು ಫುಟ್ಬಾಲ್ ಸ್ಪೋರ್ಟಂಗ್ ಕ್ಲಬ್ ನ ಅಧ್ಯಕ್ಷ ಫಯಾಝ್, ಕಾರ್ಯದರ್ಶಿ ಅಶ್ರಫ್ , ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ನ ಪ್ರಮುಖರಾದ ಅನಿಲ್ ಪಿ.ವಿ, ಭಾಸ್ಕರ ಬೆಂಗ್ರೆ, ವಿಜಯ ಸುವರ್ಣ, ಅಸ್ಪಾಕ್, ಕೋಚ್ ಅಜ್ಮಲ್ ಮತ್ತು ತಸ್ವರ್ ಉಪಸ್ಥಿತರಿದ್ದರು.
ಪಂಜಾಬ್ | ಆರೆಸ್ಸೆಸ್ ನಾಯಕನ ಪುತ್ರನ ಗುಂಡಿಕ್ಕಿ ಹತ್ಯೆ
ಫಿರೋಝ್ಪುರ, ನ. 16: ಆರೆಸ್ಸೆಸ್ ನಾಯಕನ ಪುತ್ರರೋರ್ವರನ್ನು ಮೋಟಾರು ಸೈಕಲ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಮೃತನನ್ನು ನವೀನ್ ಅರೋರಾ (32) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ನವೀನ್ ಅರೋರಾ ಅವರ ತಂದೆ ಬಲದೇವ್ ರಾಜ್ ಅರೋರಾ ಅವರು ಕಳೆದ ಹಲವು ವರ್ಷಗಳಿಂದ ಆರೆಸ್ಸೆಸ್ ನೊಂದಿಗೆ ಸಂಬಂಧ ಹೊಂದಿದ್ದರು. ನವೀನ್ ಅರೋರಾ ಶನಿವಾರ ತನ್ನ ಅಂಗಡಿಯಿಂದ ಡಾ. ಸಾಧು ಚೌಕದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಮೋಟಾರು ಸೈಕಲ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ಯುವಕರು ನವೀನ್ ಅರೋರಾ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾದರು. ನವೀನ್ ಅರೋರಾ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆ ವರದಿಯಾದ ಕೂಡಲೇ, ಹಿರಿಯ ಪೊಲೀಸ್ ವರಿಷ್ಠ ಭೂಪಿಂದರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಹಾಗೂ ಪರಿಸ್ಥಿತಿ ಅವಲೋಕಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡ್ಡಲೇನಾ ಮೇಲೆ ಪಾರಮ್ಯ ಸಾಧಿಸಿ ಯುಎಫ್ಸಿ ವೆಲ್ಟರ್ ವೆಯ್ಟ್ ಬೆಲ್ಟ್ ತಮ್ಮದಾಗಿಸಿಕೊಂಡ ಇಸ್ಲಾಂ ಮಖಚೇವ್
ನ್ಯೂಯಾರ್ಕ್: ಮ್ಯಾಡಿಸನ್ ಗಾರ್ಡನ್ ಸ್ಕೇರ್ ನಲ್ಲಿ ನಡೆದ ಯುಎಫ್ಸಿ ವೆಲ್ಟರ್ ವೆಯ್ಟ್ ಚಾಂಪಿಯನ್ ಶಿಪ್ ನಲ್ಲಿ ಜಾಕ್ ಡೆಲ್ಲಾ ಮಡ್ಡಲೇನಾರನ್ನು ಐದು ಸುತ್ತಿನ ಹೋರಾಟದಲ್ಲಿ ಏಕಪಕ್ಷೀಯವಾಗಿ ಮಣಿಸುವ ಮೂಲಕ, ಇಸ್ಲಾಂ ಮಖಚೇವ್ ಸರ್ವಾನುಮತದ ಗೆಲುವಿನ ತೀರ್ಪಿನೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮತ್ತೊಂದು ಸಹ ಮುಖ್ಯ ಪಂದ್ಯದಲ್ಲಿ ಫ್ಲೈವೇಟ್ ವಿಭಾಗದ ಪ್ರಶಸ್ತಿಯನ್ನು ವ್ಯಾಲೆಂಟಿನಾ ಶೆವ್ಚೆಂಕೊ ತಮ್ಮ ಬಳಿಯೇ ಉಳಿಸಿಕೊಂಡರು. ಲೈಟ್ ವೆಯ್ಟ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ, ಹೊಸ ಸವಾಲಿಗೆ ಸನ್ನದ್ಧರಾಗಿದ್ದ ಮಖಚೇವ್, ತಮ್ಮ ಆಸ್ಟ್ರೇಲಿಯಾ ಎದುರಾಳಿ ಜಾಕ್ ಡೆಲ್ಲಾ ಮಡ್ಡಲೇನಾರೊದಿಗೆ ನಡೆದ 25 ನಿಮಿಷಗಳ ಹೋರಾಟದಲ್ಲಿ ಅಕ್ಷರಶಃ ಪಾರಮ್ಯ ಸಾಧಿಸಿದರು. ಆ ಮೂಲಕ ಶನಿವಾರ ರಾತ್ರಿ ಸತತ 16ನೇ ಯುಎಫ್ಸಿ ಗೆಲುವನ್ನು ದಾಖಲಿಸಿದರು. ತಮ್ಮ 29 ವರ್ಷದ ಎದುರಾಳಿ ಜಾಕ್ ಡೆಲ್ಲಾ ಮಡ್ಡಲೇನಾರ ಮೇಲೆ 34 ವರ್ಷದ ಮಖಚೇವ್ ತಡೆರಹಿತ ದಾಳಿಯನ್ನು ನಡೆಸುವುದಕ್ಕೂ ಮುನ್ನ, ಅವರ ಮೇಲೆ ಲಘು ಪ್ರಹಾರವನ್ನು ನಡೆಸಿದರು. ಅವರ ತೀಕ್ಷ್ಣ ದಾಳಿಯೆದುರು ನಿರುತ್ತರರಾದ ಮಡ್ಡಲೇನಾ, ದೀರ್ಘ ಕಾಲ ತೀವ್ರ ಒತ್ತಡದಲ್ಲಿ ನೆಲದ ಮೇಲೆ ಕುಸಿದು ಬಿದ್ದಿದ್ದರು. ಮಖಚೇವ್ ರ ಪ್ರಹಾರಗಳಿಗೆ ಎಲ್ಲ ಮೂವರು ತೀರ್ಪುಗಾರರು 50-45 ಅಂಕಗಳನ್ನು ನೀಡುವ ಮೂಲಕ, ಯುಎಫ್ಸಿ ಇತಿಹಾಸದಲ್ಲಿ ಅವರು ಎರಡು ವಿಭಿನ್ನ ತೂಕದ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ 11ನೇ ಕುಸ್ತಿ ಪಟು ಎಂಬ ಕೀರ್ತಿಗೆ ಭಾಜನರಾದರು. ಪಂದ್ಯದ ನಂತರ ಮಾತನಾಡಿದ ಇಸ್ಲಾಂ ಮಖಚೇವ್, “ಇದು ನನ್ನ ಯೋಜನೆಯಾಗಿತ್ತು ಹಾಗೂ ಇದು ಗೋಪ್ಯವಾಗಿಯೇನೂ ಇರಲಿಲ್ಲ. ಇದು ನನ್ನ ಎಲ್ಲ ಪ್ರತಿಸ್ಪರ್ಧಿಗಳಿಗೂ ತಿಳಿದಿದ್ದು, ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿಕೊಂಡರು. ಮತ್ತೊಂದು ಸಹ ಪ್ರಮುಖ ಪಂದ್ಯದಲ್ಲಿ ಡಬಲ್ ಚಾಂಪಿಯನ್ ಶಿಪ್ ನ ಎಲೈಟ್ ಗುಂಪಿಗೆ ಸೇರ್ಪಡೆಯಾಗುವ ಝಾಂಗ್ ವೀಲಿಯ ಕನಸನ್ನು ವ್ಯಾಲೆಂಟಿನಾ ಶೆವ್ಚೆಂಕೊ ಭಗ್ನಗೊಳಿಸಿದರು. ಈ ಪಂದ್ಯದಲ್ಲಿ ಏಪಕ್ಷೀಯ ಪಾರಮ್ಯ ಪ್ರದರ್ಶಿಸಿದ ವ್ಯಾಲೆಂಟಿನಾ ಶೆವ್ಚೆಂಕೊ, ಫ್ಲೈವೆಯ್ಟ್ ವಿಭಾಗದ ಪ್ರಶಸ್ತಿಯನ್ನು ತಮ್ಮ ಬಳಿಯೇ ಉಳಿಸಿಕೊಂಡರು. ಝಾಂಗ್ ವಿರುದ್ಧ 50-45 ಅಂಕಗಳ ಮುನ್ನಡೆ ಸಾಧಿಸುವ ಮೂಲಕ, ಶೆವ್ ಚೆಂಕೊ (26-4-1) ತಮ್ಮ 11ನೇ ಸರ್ವಾಂಗೀಣ ಪ್ರಶಸ್ತಿಯನ್ನು ಬಾಚಿಕೊಂಡರು.
ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆ
ಉಡುಪಿ, ನ.16: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯನ್ನು ರವಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪುತ್ತಿಗೆ ಪರ್ಯಾಯ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ವಹಿಸಿದ್ದರು. ಸಂಘದ ಪ್ರಮುಖರಾದ ಜಿ.ಕೃಷ್ಣಪ್ಪ, ಗೋವಿಂದ ಪಟಗಾರ, ಜಯರಾಮ್ ಎ., ಜೀವನ್ದಾಸ್ ಶೆಟ್ಟಿ, ಸುರೇಶ್ ಗಾಣಿಗ, ರಾಘವೇಂದ್ರ ಶೆಟ್ಟಿ, ಹುಕ್ರಪ್ಪ ಗೌಡ, ಗುರುರಾಜ್ ಕೆ., ಉಡುಪಿ ಚಿಕ್ಕಮಗಳೂರು ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ಉಡುಪಿ ರನ್ನರ್ ಕ್ಲಬ್ ನ ಕಾರ್ಯದರ್ಶಿ ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಕರುಣಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೆಹಲಿ ಕಾರು ಸ್ಫೋಟ ಕೇಸ್: ಎನ್ಐಎ ಬಲೆಗೆ ಬಿದ್ದ ಪ್ರಮುಖ ಆರೋಪಿ
ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆತ್ಮಾಹುತಿ ಬಾಂಬರ್ ಜೊತೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಕಾಶ್ಮೀರಿ ನಿವಾಸಿಯನ್ನು ಬಂಧಿಸಿದೆ. ಆತ್ಮಾಹುತಿ ಬಾಂಬರ್ನ ಸಹಾಯಕನ ಬಂಧನದೊಂದಿಗೆ ಕೆಂಪು ಕೋಟೆ ಪ್ರದೇಶ ಬಾಂಬ್ ದಾಳಿ ಪ್ರಕರಣದಲ್ಲಿ ಎನ್ಐಎ ಮಹತ್ವದ ಪ್ರಗತಿ ಸಾಧಿಸಿದೆ.
ಬೈಂದೂರು | ಸ್ಕೂಟರ್- ಬೈಕ್ ಢಿಕ್ಕಿ: ಸವಾರ ಮೃತ್ಯು
ಬೈಂದೂರು, ನ.16: ಸ್ಕೂಟರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನ.15ರಂದು ತಡರಾತ್ರಿ ನಾಗೂರು ವೀರ ಆಂಜನೇಯ ದೇವಸ್ಥಾನ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಸ್ಕೂಟರ್ ಸವಾರ ಮಹಾಬಲ ಶೆಟ್ಟಿ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶರತ್ ಮತ್ತು ಸಹಸವಾರ ಸುದಾಮ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಬೈಕ್ ಗೆ ವಿರುದ್ದ ದಿಕ್ಕಿನಲ್ಲಿ ಬಂದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಾಬಲ ಶೆಟ್ಟಿ, ಬೈಂದೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ | ಅಂದರ್ ಬಾಹರ್: ಎಂಟು ಮಂದಿ ಬಂಧನ
ಮಣಿಪಾಲ, ನ.16: ಮನೋಳಿಗುಜ್ಜಿಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ನ.15ರಂದು ಸಂಜೆ ವೇಳೆ ಬಂಧಿಸಿದ್ದಾರೆ. ನವೀನ್(37), ಭಾಸ್ಕರ್(55), ಕೃಷ್ಣ(27), ಜಗದೀಶ, ಸಂತೋಷ್(42), ಶಂಕರ ಪೂಜಾರಿ(42), ಮಂಜುನಾಥ್(37) ಶಿವಯ್ಯ(36) ಬಂಧಿತ ಆರೋಪಿಗಳು. ಬಂಧಿತರಿಂದ 1,02,060 ರೂ. ನಗದು, 7 ಮೊಬೈಲ್ ಫೋನ್ ಗಳು ಹಾಗೂ ಎರಡು ಬೈಕುಗಳು, ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 25 ಸಾವಿರ ರೂ.ಪರಿಹಾರ ಕೊಡಿ: ಬಿಜೆಪಿ ಆಗ್ರಹ
ತುಂಗಭದ್ರಾ ಜಲಾಶಯ ವ್ಯಾಪ್ತಿಯ 4 ಜಿಲ್ಲೆಗಳ 2ನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಕ್ರಸ್ಟ್ಗೇಟ್ ಅಳವಡಿಕೆ, ನಾಲೆಗಳ ದುರಸ್ತಿಗೆ ಹಣ ಬಿಡುಗಡೆಗೆ ಒತ್ತಾಯಿಸಿ ನ.26ರೊಳಗೆ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ.
ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ | ಯಾವುದೇ ಪುರಾವೆಗಳಿಲ್ಲ; ಮೂವರು ವೈದ್ಯರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿದ NIA
ಹೊಸದಿಲ್ಲಿ: ಕೆಂಪು ಕೋಟೆ ಸಮೀಪ ನ. 10ರಂದು ನಡೆದ ಭೀಕರ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವೈದ್ಯರು ಸೇರಿದಂತೆ ನಾಲ್ವರನ್ನು ರವಿವಾರ ಬಿಡುಗಡೆ ಮಾಡಲಾಗಿದೆ. ಯಾವುದೇ ದೃಢ ಪುರಾವೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಿಡುಗಡೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು India Today ವರದಿ ಮಾಡಿದೆ. ಹರಿಯಾಣದ ನುಹ್ ನಲ್ಲಿ ಬಂಧಿಸಲಾಗಿದ್ದ ಡಾ. ರೆಹಾನ್, ಡಾ. ಮುಹಮ್ಮದ್, ಡಾ. ಮುಸ್ತಕೀಮ್ ಹಾಗೂ ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾ, ಈ ನಾಲ್ವರೂ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಶಂಕೆಯಲ್ಲಿ ಬಂಧಿತರಾಗಿದ್ದರು. ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಇವರ ಸಂಪರ್ಕ, ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇವರ ವಿಚಾರಣೆ ನಡೆಯುತ್ತಿತ್ತು. ರಸಗೊಬ್ಬರ ವ್ಯಾಪಾರಿಯಿಂದ ಸ್ಫೋಟಕ ತಯಾರಿಕೆಗೆ ಅಗತ್ಯವಾದ ರಸಾಯನಿಕಗಳನ್ನು ಪಡೆಯಲಾಗಿದೆಯೇ ಎಂಬುದನ್ನು NIA ಪರಿಶೀಲಿಸಿತ್ತು. ಆದರೆ ಮೂರು ದಿನಗಳ ವಿಚಾರಣೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಸಂಪರ್ಕವಿರುವುದಕ್ಕೆ ಯಾವುದೇ ಪುರಾವೆ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ನಾಲ್ವರು ಬಿಡುಗಡೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೃಢಪಡಿಸಿದರೂ, ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
KPCC ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ? ನನ್ನ ಮಾನಸಿಕ, ದೈಹಿಕ ಆರೋಗ್ಯ ಸರಿಯಾಗಿದೆ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿಯುವುದಾಗಿ ಹೇಳಿದ ಅವರು, ಡಿಸೆಂಬರ್ ಒಳಗೆ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಗುರಿ ಹೊಂದಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಂದ ಶಂಕುಸ್ಥಾಪನೆ ನೆರವೇರಿಸಲು ಆಶಿಸಿದ್ದಾರೆ.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವ ಸಮಾರೋಪ: ಕರ್ನಾಟಕಕ್ಕೆ ಚಾಂಪಿಯನ್ ಪಟ್ಟ
ಗುಲ್ಬರ್ಗಾ : ಉತ್ತರ ಕರ್ನಾಟಕದ ಗುಲ್ಬರ್ಗಾದಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ ಮಟ್ಟದ ಸಾಹಿತ್ಯೋತ್ಸವವು ದೇಶದ ಮೂಲೆಮೂಲೆಗಳಿಂದ ಬಂದ 2,000ಕ್ಕೂ ಹೆಚ್ಚು ಯುವ ಪ್ರತಿಭೆಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಸಂಪನ್ನವಾಯಿತು. ವಿವಿಧ ಕಲೆ ಹಾಗೂ ಸಾಹಿತ್ಯ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಕರ್ನಾಟಕವು ಚಾಂಪಿಯನ್ ಪಟ್ಟಗಳಿಸಿತು. ಕೇರಳ ಮತ್ತು ಜಮ್ಮು-ಕಾಶ್ಮೀರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದವು. ವೈಯಕ್ತಿಕ ವಿಭಾಗಗಳಲ್ಲಿ ದೆಹಲಿಯ ಮುಹಮ್ಮದ್ ಅಶ್ಹಾದ್ ಅವರು ಕ್ಯಾಂಪಸ್ ಬಾಯ್ಸ್ ವಿಭಾಗದ “ಪೆನ್ ಆಫ್ ದ ಫೆಸ್ಟ್” ಆಗಿ ಆಯ್ಕೆಯಾದರೆ ಅಬ್ದುರ್ ರಶೀದ್ ಅವರನ್ನು ಸಾಮಾನ್ಯ ವಿಭಾಗದ “ಸ್ಟಾರ್ ಆಫ್ ದ ಫೆಸ್ಟ್” ಆಗಿ ಘೋಷಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಲಾ ಶಾಲೆ ವೇದಿಕೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಕ್ಷೇತ್ರಗಳ ಗಣ್ಯ ವ್ಯಕ್ತಿಗಳಿಂದ ಹಲವು ಕಲಿಕಾ ಕಾರ್ಯಾಗಾರಗಳು ನಡೆದವು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮದನಗೂಡು ಚಿನ್ನಸ್ವಾಮಿ, ಸಮಾಜಸೇವಕ ಮತ್ತು ಸಾಹಿತ್ಯಕಾರ ಮುಹಮ್ಮದ್ ಅಮ್ಜದ್ ಹುಸೈನ್, ಉರ್ದು ಲೇಖಕ ಸೈಯದ್ ಹುಸೈನಿ ಪೀರನ್ ಸಾಹಬ್ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು ತಮಗೆ ಸೂಕ್ತವಾದ ವೃತ್ತಿ ಆಯ್ಕೆಗಳನ್ನು ಆಯ್ದುಕೊಳ್ಳಲು ರೂಪಿಸಲಾದ ಎಜುಕೈನ್ ಕರಿಯರ್ ಕ್ಲಿನಿಕ್ ಕೂಡ ವಿಶೇಷ ಗಮನಸೆಳೆಯಿತು. ಸಮಾರೋಪ ಸಮಾರಂಭಕ್ಕೆ ಫಕೀಹುಲ್ ಉಮರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಡಾ.ಕಮರುಜ್ಜಮಾನ್ ಹುಸೈನೀ ಇನಾಂದಾರ್ ಉದ್ಘಾಟಿಸಿದರು. ಡಾ.ಶೇಖ್ ಶಾ ಮುಹಮ್ಮದ್ ಅಫ್ಜಲುದ್ದೀನ್, ಉಬೈದುಲ್ಲಾ ಸಖಾಫಿ, ದಿಲ್ಷಾದ್ ಅಹ್ಮದ್, ಇಬ್ರಾಹಿಂ ಸಖಾಫಿ ಮತ್ತು ಶರೀಫ್ ನಿಜಾಮಿ ಅವರು ಉಪಸ್ಥಿತರಿದ್ದರು. ಸಲ್ಮಾನ್ ಖುರ್ಶೀದ್ ಮಣಿಪುರ ಸ್ವಾಗತಿಸಿ ಸ್ವಾದಿಕ್ ಅಲಿ ಬುಖಾರಿ ಧನ್ಯವಾದವಿತ್ತರು.
ಉಡುಪಿ | ವಿಶ್ವ ಮಧುಮೇಹ ದಿನದ ಪ್ರಯುಕ್ತ ಡಯಾಬಿಟಿಸ್ ಮೇಳ
ಉಡುಪಿ, ನ.16: ಉಡುಪಿ ಆದರ್ಶ ಆಸ್ಪತ್ರೆಯ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಸ್ಪತ್ರೆ, ಎನ್ಸಿಡಿ ವಿಭಾಗ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ. ಉಡುಪಿ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ, ಆದರ್ಶ ಚಾರಿಟೇಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ, ಉಡುಪಿ ರೆಡ್ಕ್ರಾಸ್, ಐ.ಎಂ.ಐ ಉಡುಪಿ, ಎಪಿಐ ಉಡುಪಿ ಮಣಿಪಾಲ್ ಚಾಪ್ಟರ್ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಡಯಾಬಿಟಿಸ್ ಮೇಳವನ್ನು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರವಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮೇಳವನ್ನು ಆದರ್ಶ ಆಸ್ಪತ್ರೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ನೇತೃತ್ವ ವಹಿಸಿದ್ದರು. ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಉಡುಪಿ ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ.ಅಶೋಕ್ ಕುಮಾರ್, ರೆಡ್ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಡಾ.ಅಶೋಕ್ ಕುಮಾರ್ ವೈ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 1,300ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿ ವಿವಿಧ ಉಚಿತ ಪರೀಕ್ಷೆಗಳನ್ನು ಮಾಡಿಸಿದರು.
ಮೂಡುಬಿದಿರೆ | ಯುವಜನತೆ ಕೃಷಿಯನ್ನು ಪ್ರೀತಿಸಬೇಕು : ಆಸ್ಮಾ ಬಾನು
ಮೂಡುಬಿದಿರೆ : ಜೀವ-ಜೀವನದ ನಡುವೆ ಇರುವ ಸಂಬಂಧ ಕೃಷಿ. ಯುವ ಜನತೆ ಕೃಷಿಯನ್ನು ಪ್ರೀತಿಸಿದರೆ ಮಾತ್ರ ಅದು ಉಳಿಯಲು ಸಾಧ್ಯ ಎಂದು ಕಾರ್ಕಳದ ಪೆರ್ವಾಜೆ ಸರಕಾರಿ ಮಾ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು ಹೇಳಿದರು. ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ಕಲ್ಪವೃಕ್ಷ ಸಭಾಭವನದಲ್ಲಿ ನಡೆಯುತ್ತಿರುವ ʼಸಹಕಾರ ಸಪ್ತಾಹ ಸಂಭ್ರಮʼದ ಎರಡನೇ ದಿನವಾಗಿರುವ ಶನಿವಾರದಂದು ಸಹಕಾರ-ಪರಿಸರ ಸಂರಕ್ಷಣೆ-ಕೃಷಿ, ಪಶು ಸಂಗೋಪನೆ- ಗ್ರಾಮೀಣ ಅಭಿವೃದ್ಧಿ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ನಾವು ಇಂದು ರಾಸಾಯನಿಕ ಪದಾರ್ಥಗಳನ್ನು ತುಂಬಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ರೋಗಗಳು ಬೆಳೆಯುವಂತೆ ಮಾಡುತ್ತಿದ್ದೇವೆ ಎಂದು ಎಚ್ಚರಿಸಿದ ಅವರು, ನಮ್ಮ ಅನ್ನದ ಬಟ್ಟಲಿನಲ್ಲಿ ಕಲ್ಮಶ ಪದಾರ್ಥಗಳು ಸೇರದಂತೆ ಮಾಡಲು ದೇಶಿಯ ಭತ್ತಗಳನ್ನು ಬೆಳೆಸಿ, ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಅಕ್ಕಿ ಮತ್ತು ಸಾತ್ವಿಕ ಆಹಾರಗಳನ್ನು ಸೇವಿಸುವಂತೆ ಸಲಹೆ ನೀಡಿದರು. ದ. ಕ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಮಾತನಾಡಿ, ವಿದ್ಯಾಥಿ೯ಗಳು ಮೆಡಿಕಲ್, ಎಂಜಿನಿಯರ್ ಪದವಿಯನ್ನು ಪಡೆಯುವಂತೆಯೇ ಕೃಷಿರಂಗದಲ್ಲಿಯೂ ಪದವಿಯನ್ನು ಪಡೆಯಲು ಆಸಕ್ತಿ ವಹಿಸಬೇಕು. ಇಲ್ಲಿ ಉದ್ಯೋಗ ಮತ್ತು ಪಿಹೆಚ್ ಡಿಯನ್ನು ಮಾಡಲು ಅವಕಾಶವಿದೆ ಹಾಗೂ ಸರಕಾರಗಳು ಇದಕ್ಕೆ ಆರ್ಥಿಕ ಬೆಂಬಲವನ್ನು ನೀಡುತ್ತಿವೆ ಎಂದು ತಿಳಿಸಿದರು. ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಕೃಷಿ ನಮ್ಮ ಜೀವಾಳ. ನೆಲ ಜಲ, ಮಣ್ಣು ಇವುಗಳನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭವಿಷ್ಯ ಭಾರತದ ಯುವ ಮನಸ್ಸುಗಳು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಗತಿಪರ ಕೃಷಿಕ ರಾಜು ಪೂಜಾರಿ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು. ಸಾಧಕ ರೈತರಿಗೆ ಸನ್ಮಾನ : ಕೃಷಿಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಜಿತ್ ಕುಮಾರ್ ಜೈನ್, ಚಂದು ಭಂಡಾರಿ, ಪೌಲ್ ಪಿ. ಎಸ್. ರೆಬೆಲ್ಲೋ, ಸುಂದರ ಪೂಜಾರಿ, ಜಗನ್ನಾಥ ಶೆಟ್ಟಿ, ಸುರೇಂದ್ರ ಶೆಟ್ಟಿ ಹಾಗೂ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. 63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಕನ್ನಡ/ ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 63 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ನೆಲ್ಲಿಕಾರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಜಯವರ್ಮ ಜೈನ್ ಗೌರವ ಉಪಸ್ಥಿತರಿದ್ದರು. ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಕಳೆದ ವರ್ಷದ ಕಲ್ಪವೃಕ್ಷ ಪ್ರಶಸ್ತಿ ಪುರಸ್ಕೃತರಾದ ಗಣೇಶ್ ನಾಯಕ್ ಉಪಸ್ಥಿತರಿದ್ದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚೇತನಾ ರವೀಂದ್ರ ಹೆಗ್ಡೆ ಸನ್ಮಾನಿತರ ಮಾಹಿತಿ ನೀಡಿದರು. ಪತ್ರಕರ್ತ, ಉಪನ್ಯಾಸಕ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ವಿಜಯಪುರ: ಕಬ್ಬು ಬೆಳೆಗಳ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ
6 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ
Breaking: ದೆಹಲಿ ಸ್ಫೋಟ; ಕಾರು ಬಳಸಿ ಆತ್ಮಾಹುತಿ ದಾಳಿ ನಡೆಸಿದ್ದು ಖಚಿತ; ಎನ್ಐಎ ಸ್ಪಷ್ಟನೆ
ನವೆಂಬರ್ 10 ರಂದು ನಡೆದಿದ್ದ ಕಾರು ಸ್ಫೋಟ ಒಂದು ಆತ್ಮಾಹುತಿ ದಾಳಿ. ಈ ದಾಳಿಯನ್ನು ನಡೆಸಿದ್ದ ಆಲ್ ಫಲಾಹ್ ವಿವಿಯ ಸಹಾಯಕ ಪ್ರಾಧ್ಯಾಪಕ ಉಮರ್ ಉನ್ ನಬಿ ಎಂದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ. ಈತನಿಗೆ ಕಾರು ಖರೀದಿಸಲು ಸಹಾಯ ಮಾಡಿ, ಸಂಚು ರೂಪಿಸಿದ್ದ ಜಮ್ಮು ಮತ್ತು ಕಾಶ್ಮೀರದ ಅಮೀರ್ ರಶೀದ್ ಅಲಿಯನ್ನು ಎನ್ಐಎ ಬಂಧಿಸಿದೆ. ತನಿಖೆ ಮುಂದುವರೆಸಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳನ್ನು ಸೋಲಿಸಿದ್ದು ಸಮಾಜವಾದಿ ಪಕ್ಷ: ಅಖಿಲೇಶ್ ಯಾದವ್
ಬೆಂಗಳೂರು: ಸಮಾಜವಾದಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳನ್ನು ಸೋಲಿಸಿತು ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯಾಧ್ಯಕ್ಷ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. ರವಿವಾರ ಬೆಂಗಳೂರು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಊಹಿಸಲಾಗದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿತು. ಬಿಹಾರದಲ್ಲಿ ಬಿಜೆಪಿ ತನ್ನ ಗೆಲುವನ್ನು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಗೆಲುವಿನೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಬಿಜೆಪಿಯು ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಫಲಿತಾಂಶಗಳನ್ನು ತನ್ನ ಪರವಾಗಿ ಕುಶಲತೆಯಿಂದ ನಿರ್ವಹಿಸುತ್ತದೆ ಎಂದು ದೂರಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರಿ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡಿದೆ. ಸಮಾಜವಾದಿ ಪಕ್ಷವು ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸೋತಿತು. ನಾವು ಸೋಲಿನಿಂದ ಪಾಠ ಕಲಿತಿದ್ದೇವೆ. 2019ರಲ್ಲಿ ಸಮಾಜವಾದಿ ಪಕ್ಷವು ಕೇವಲ 5ಲೋಕಸಭಾ ಸ್ಥಾನಗಳನ್ನು ಗೆದ್ದಿತು. 2022ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ರಚಿಸಲು ವಿಫಲವಾಯಿತು. ಆದರೆ, ಅದು ಬಿಜೆಪಿಗೆ ಬಲವಾಗಿ ಸವಾಲು ಹಾಕಿತು. 2024ರ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷವು ಬಿಜೆಪಿಯ ಡಬಲ್-ಇಂಜಿನ್ ಸರಕಾರಗಳನ್ನು ಸೋಲಿಸಿತು ಎಂದರು. ಸಮಾಜವಾದಿ ಕರ್ನಾಟಕ ಅಧ್ಯಕ್ಷ ಎನ್.ಮಂಜಪ್ಪ ಮಾತನಾಡಿ, ಬಿಹಾರ ಚುನಾವಣಾ ಫಲಿತಾಂಶದಿಂದ ನಾವು ಗೆಲುವು-ಸೋಲು ಎರಡೂ ಪಾಠಗಳನ್ನು ಕಲಿಯಬೇಕಿದೆ. ಬಿಹಾರ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸದಸ್ಯರು ತಾವು ಹೆಚ್ಚಿನ ಮಹಿಳಾ ಮತಗಳನ್ನು ಪಡೆದಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಇದನ್ನು ಹೇಳಿಕೊಳ್ಳಬಹುದು, ಆದರೆ ಅದು ಪ್ರತಿ ಮಹಿಳೆಗೆ 10 ಸಾವಿರ ರೂ.ಗಳನ್ನು ಯಾವಾಗ ನೀಡಿದ್ದು ಎಂದು ಸ್ಪಷ್ಟಪಡಿಸುವುದಿಲ್ಲ ಎಂದು ಟೀಕಿಸಿದರು. ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ.ತಿರುಮಲ ಮಾತನಾಡಿ, ಮಹಿಳೆಯರು ಮತ್ತು ಯುವಕರಿಗೆ ಘನತೆಯ ಜೀವನ ಮತ್ತು ಉದ್ಯೋಗಗಳನ್ನು ಒದಗಿಸಲು ಬಿಜೆಪಿ ಬಯಸುವುದಿಲ್ಲ. ಇಂದು ದೇಶದ ಲಕ್ಷಾಂತರ ವಿದ್ಯಾವಂತ ಯುವ ಜನತೆ ಪದವೀಧರರಾದರು ಅರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗುತ್ತಿಲ್ಲ. ಯುವ ಜನಾಂಗ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸರ್ವರಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದರು. ಈ ವೇಳೆ ಪಕ್ಷದ ಲೋಕಸಭಾ ಸದಸ್ಯ ರಾಜೀವ್ ರಾಯ್, ಗೌರವ ಅಧ್ಯಕ್ಷ ಎಸ್.ಜಿ.ಮಠ್, ಪ್ರಧಾನ ಕಾರ್ಯದರ್ಶಿ ಜಯರಾಮ್ ರೆಡ್ಡಿ, ಮಾಂತೇಶ ಪಾಟೀಲ್, ಪ್ರಶಾಂತ್ ಚಿತ್ರದುರ್ಗ, ಮಂಜುನಾಥ್ ರಾಜನಹಳ್ಳಿ, ಪ್ರತಿಭಾ, ಉಷಾ ರಾಣಿ, ಎಲ್.ರಂಗನಾಥ್, ಗೋವಿಂದ್ರಾಜು, ವೇಣುಗೋಪಾಲ್, ಜಗದೀಶ್, ನಾಗರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು. ‘ಕಾಂಗ್ರೆಸ್ ನಮ್ಮ ಮಿತ್ರ ಪಕ್ಷ. ಸ್ನೇಹಿತ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಾವು ಕೈಬಿಡಬಾರದು. ಇಂಡಿಯಾ ಮೈತ್ರಿಕೂಟದ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ. ಬಿಹಾರದಲ್ಲಿ ಜನರಿಗೆ ಹಣವನ್ನು ಕೊಟ್ಟು ಎನ್ಡಿಎ ಗೆಲುವು ಸಾಧಿಸಿದ್ದು, ಭವಿಷ್ಯದಲ್ಲಿ ನಾವು ಅದೇ ದಾರಿಯನ್ನು ಹಿಡಿಯಬೇಕೇ? ಎಂಬ ಪ್ರಶ್ನೆಯಿದೆ’ -ಅಖಿಲೇಶ್ ಯಾದವ್, ಉತ್ತರ ಪ್ರದೇಶ ಮಾಜಿ ಸಿಎಂ
ಉಳ್ಳಾಲ | ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ
ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈ ಭಾರತ್ ದಕ್ಷಿಣ ಕನ್ನಡ, ಯುವಜನ ಒಕ್ಕೂಟ, ಗ್ರಾಮ ಪಂಚಾಯತ್ ಕೊಣಾಜೆ, ಸಮರ್ಪಣಾ ಪರಿವಾರ ಸೇವಾ ಟ್ರಸ್ಟ್ (ರಿ) ಮಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಅಸೈಗೋಳಿ ಖಾಸಗಿ ಸಭಾಂಗಣದಲ್ಲಿ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಗಿ ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು ಯಚ್. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಶಹೀದ್ ಟಿ.ಕೆ.ತೆಕ್ಕಿಲ್, ಬಂಟರ ಸಂಘ ಉಳ್ಳಾಲ ಅಧ್ಯಕ್ಷ ರವೀಂದ್ರ ರೈ ಕಳ್ಳಿಮಾರ್, ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ. ಕೆ ಅಬ್ದುಲ್ ರಹ್ಮಾನ್ ಕೊಡಿಜಾಲ್, ಲಯನ್ಸ್ ಕ್ಲಬ್ ಕುಡ್ಲ ಅಧ್ಯಕ್ಷ ಅಬ್ದುಲ್ ರಝಾಕ್, ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕ ರಜನಿ, ಕರ್ನಾಟಕ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸೋಮೇಶ್ವರ ಪುರಸಭೆ ಸದಸ್ಯ ದೀಪಕ್ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ ಸೋಜ ಪ್ರಸ್ತಾವನೆಗೈದರು. ಸಮರ್ಪಣಾ ಪಾರಿವಾರ್ ಟ್ರಸ್ಟ್(ರಿ) ಮಂಗಳೂರು ಇದರ ಉಪಾಧ್ಯಕ್ಷ ವಸಂತ್ ಕೋಡಿ ವಂದಿಸಿದರು. ಯುವಜನೋತ್ಸವ ನೋಡಲ್ ಅಧಿಕಾರಿ ಮೋಹನ್ ಶಿರ್ಲಾಲ್ ನಿರೂಪಿಸಿದರು.
ಸಂಪುಟ ಪುನರ್ ರಚನೆ ಆದರೂ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ್
ಬೆಂಗಳೂರು: ರಾಜ್ಯ ಸಂಪುಟ ಪುನರ್ ರಚನೆ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ, ನಾಯಕತ್ವ ಬದಲಾವಣೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆಗೆ ಅನುಮತಿ ಕೊಟ್ಟಿದ್ದಾರೆಂದು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂಪುಟ ಪುನರ್ ರಚನೆ ಆದರೆ ಒಳ್ಳೆಯದೇ. ಬಹಳ ದಿನಗಳಿಂದ ಶಾಸಕರ ಬೇಡಿಕೆ ಇದೆ ಎಂದರು. ಸಚಿವರಾಗಬೇಕು ಎನ್ನುವ ಅಪೇಕ್ಷೆ ಹಲವರಿಗಿದೆ. ಸಂಪುಟ ಪುನರ್ ರಚನೆ ಅನುಮತಿ ಕೊಟ್ಟಿದ್ದರೆ, ಸಿಎಂ ಬದಲಾವಣೆ ವಿಚಾರ ನೀವೇ ಊಹೆ ಮಾಡಿಕೊಳ್ಳಿ. ಸಂಪುಟ ಪುನಾರಚನೆ ಆದರೆ ಸಿಎಂ ಬದಲಾವಣೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಮಯ ಸಂದರ್ಭ ನೋಡಿ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು. ಕಬ್ಬಿಗೆ ದರ ನಿಗದಿ ಮಾಡುವುದು ಕೇಂದ್ರ ಸರಕಾರ. ನಮ್ಮ ರೈತರು ಹೆಚ್ಚಿನ ದರ ನೀಡಬೇಕೆಂದು ಹೇಳುತ್ತಿದ್ದಾರೆ. ನಾವು ಕೊಡುವುದಕ್ಕೆ ಬರುವುದಿಲ್ಲ. ಆದರೂ, ಸರಕಾರದಿಂದ ಪ್ರತಿ ಟನ್ಗೆ 50 ರೂ. ನೀಡುತ್ತೇವೆ. ಕಾರ್ಖಾನೆಗಳು 50 ರೂ. ನೀಡಲು ಒಪ್ಪಿಕೊಂಡಿವೆ. ಜತೆಗೆ, ಕೇಂದ್ರ ಸರಕಾರದ ಜತೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಲಾಲು ಮನೆಯಲ್ಲಿ ಒಡಕು; ರೋಹಿಣಿ ಆಚಾರ್ಯ ನಂತರ ಮನೆ ಬಿಟ್ಟ ಮೂವರು ಸಹೋದರಿಯರು
ರೋಹಿಣಿ ಆಚಾರ್ಯ ಅವರು ನಿವಾಸ ತೊರೆದ ನಂತರ ಲಾಲು ಪ್ರಸಾದ್ ಯಾದವ್ ಅವರ ಮನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ಪಾಟ್ನಾದ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿಯ ಹೀನಾಯ ಸೋಲಿನ ಬೆನ್ನಲ್ಲೇ ಈ ಹೈಡ್ರಾಮಾ ಸೃಷ್ಟಿಯಾಗಿದೆ.
ಉಳ್ಳಾಲ: ನಾವು ಸಮಾಜದಲ್ಲಿ ನೆಮ್ಮದಿ, ಶಾಂತಿಯಿಂದ ಬದುಕಬೇಕಾದರೆ ನಮ್ಮ ಹೃದಯದೊಳಗೆ ಸೌಹಾರ್ದದ ಹೂವು ಅರಳಬೇಕು, ಆ ಹೂವಿಗೆ ಸುಗಂದ ಇರಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯಪಟ್ಟರು. ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಬಿಲ್ಲವ ಸೇವಾ ಸಮಾಜ ಯುವವಾಹಿನಿ, ರೋಟರಿ ಸಮುದಾಯ ದಳ, ಉಳ್ಳಾಲ ಜಮಾಅತೆ ಇಸ್ಮಾಮಿ ಹಿಂದ್, ನವೋದಯ ಫ್ರೆಂಡ್ಸ್, ಪೊಸಕುರಲ್ ಬಳಗ, ಸದ್ಫಾವನಾ ವೇದಿಕೆ, ಕಿನ್ಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಮಂಡಲ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಬಿಲ್ಲವ ಸಮಾಜದ ನಾರಾಯಣ ಗುರು ಕಲಾಂಗಣದಲ್ಲಿ ನಡೆದ ಸೌಹಾರ್ದ ದೀಪಾವಳಿ ಸಂಗಮದಲ್ಲಿ ಮಾತನಾಡಿದರು. ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಮಾತನಾಡಿ, ಎಲ್ಲಾ ಧರ್ಮಗಳು ಜಗತ್ತಿಗೆ ಬೆಳಕನ್ನು ಕೊಟ್ಟಿದೆ. ಆದರೆ ನಾವಿಂದು ಅಕ್ರಮ, ಹಿಂಸೆ, ಸುಳ್ಳು, ಅನೈತಿಕ ಎಂಬ ಕತ್ತಲ ಜಗತ್ತಿನಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಬಹಳ ಪ್ರಾಮುಖ್ಯತೆ ಇದೆ ಎಂದರು. ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾ.ಡೊನಾಲ್ಡ್ ನೀಲೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಾಲಿನ ದ.ಕ.ಜಿಲ್ಲಾ ರಾಜೋತ್ಸವ ಪುರಸ್ಕೃತರಾದ ಅನಿಲ್ದಾಸ್, ಗಂಗಾಧರ್ ಎಸ್.ಪೂಜಾರಿ, ಮುಹಮ್ಮದ್ ಮುಕ್ಕಚೇರಿ, ಡಾ.ಅಶ್ವಿನಿ ಎಸ್.ಶೆಟ್ಟಿ, ಇಸ್ಮಾಯಿಲ್ ಶಾಫಿ ಬಬುಕಟ್ಟೆ, ಎ.ಕೆ.ಕುಕ್ಕಿಲ, ಸತೀಶ್ ಇರಾ, ರಾಜೇಶ್ ದಡ್ಡಗಡಿ, ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್, ನಮ್ಮೂರ ಧ್ವನಿ ಉಳ್ಳಾಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ-ಕೊಣಾಜೆ, ಶ್ರೀ ದುರ್ಗಾ ಫ್ರೆಂಡ್ಸ್ ಉಳ್ಳಾಲಬೈಲು, ಶಂಸುಲ್ ಉಲಮಾ ದಾರುಸ್ಸಲಾಮ್ ಆಕಾಡಮಿ ವಾದಿತ್ವಾಯಿಲ ಕಿನ್ಯ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕೃತ ಜಗದೀಶ್ ಸಿ.ಎಚ್, ದುರ್ಗಾಲತಾ , ರಾಧಾಕೃಷ್ಣ ರೈ ಹರೇಕಳ, ನಯನ ಇವರನ್ನು ಅಭಿನಂದಿಸಲಾಯಿತು. ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರು ವಂದನಿಯ ಫಾದರ್ ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ನಿವೃತ್ತ ಸೇನಾನಿ ಕೃಷ್ಣ ಗಟ್ಟಿ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ತೊಕ್ಕೊಟ್ಟು ಸಹ್ಯಾದ್ರಿ ಕೊ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಟಿ.ಸುವರ್ಣ, ಉಳ್ಳಾಲ ಸದ್ಭಾವನಾ ವೇದಿಕೆ ಗೌರವಾಧ್ಯಕ್ಷ ಸದಾನಂದ ಬಂಗೇರ, ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಎಂ.ಇ.ಐ.ಎಲ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಉಳ್ಳಾಲ ಶ್ರೀ ಚೀರುಂಭಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ದ.ಕ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ಜಮಾಅತೆ ಇಸ್ಮಾಮಿ ಹಿಂದ್ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ, ಲಯನ್ಸ್ ಕ್ಲಬ್ ಅಧ್ಯಕ್ಷೆ ಹರಿಣಾಕ್ಷಿ ಕೊಲ್ಯ, ನವೋದಯ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ರೂಪೇಶ್ ಭಟ್ನಗರ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಗೋಪಾಲ ಎಸ್.ಕೊಂಡಾಣ, ಯುವವಾಹಿನಿ ಅಧ್ಯಕ್ಷ ನಿತಿನ್ ಕರ್ಕೇರ, ರೋಟರಿ ಸಮುದಾಯ ದಳದ ಅಧ್ಯಕ್ಷ ಸೀತಾರಾಮ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಕುಸುಮಾಕರ ಕುಂಪಲ ವಂದಿಸಿದರು. ಮೋಹನ್ ಶಿರ್ಲಾಲ್ ನಿರೂಪಿಸಿದರು.
ಕಲಬುರಗಿ | ಕಾರು-ಬೈಕ್ ಮಧ್ಯೆ ಢಿಕ್ಕಿ : ಸವಾರರಿಬ್ಬರು ಮೃತ್ಯು
ಕಲಬುರಗಿ: ಕಾರು- ಬೈಕ್ ನಡುವೆ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಕ್ರಾಸ್ ಸಮೀಪದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಕಮಲಾಪುರ ತಾಲ್ಲೂಕಿನ ಸಿರಗಾಪುರ ಗ್ರಾಮದ ಆಕಾಶ ಚಂದ್ರಕಾಂತ ಧನವಂತ (19), ಭೂಸಣಗಿ ಗ್ರಾಮದ ಸುಶೀಲ್ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ. ಡಿಕ್ಕಿ ರಭಸಕ್ಕೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಯುವಕ ಆಕಾಶ ಸ್ಥಳದಲ್ಲೆ ಮೃತಪಟ್ಟಿದ್ದು, ಸುಶೀಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಕಾಶ ಹಾಗೂ ಸುಶೀಲ್ ಇಬ್ಬರು ಬೈಕ್ ಮೇಲೆ ಸಿರಗಾಪುರದಿಂದ ಮಹಾಗಾಂವ್ ಕ್ರಾಸ್ ಕಡೆಗೆ ತೆರಳುತ್ತಿದ್ದರು. ಹೈದರಾಬಾದ್ ನಿಂದ ಕಲಬುರಗಿಗೆ ಕಾರು ತೆರಳುತ್ತಿತ್ತು. ಎರಡರ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಉಡುಪಿ | ಸುಬ್ರಹ್ಮಣ್ಯನಗರ ಶಾಲೆಯ ಶೌಚಾಲಯ ಕಟ್ಟಡ ಉದ್ಘಾಟನೆ
ಉಡುಪಿ, ನ.16: ಅಸೋಸಿಯೇಷನ್ ಆಫ್ ಕನ್ಸಲ್ಟಿಟಗ್ ಸಿವಿಲ್ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್(ಎಸಿಸಿಇಎ) ಉಡುಪಿ ಪ್ರಾಯೋಜಕತ್ವದಲ್ಲಿ ಸುಬ್ರಹ್ಮಣ್ಯನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಸುಮಾರು 2.50 ಲಕ್ಷ ರೂ. ವೆಚ್ಚದ ನೂತನ ಶೌಚಾಲಯ ಕಟ್ಟಡವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಉಮಾ ಉದ್ಘಾಟಿಸಿದರು. ಎಸಿಸಿಇಎಯ ಅಧ್ಯಕ್ಷ ಯೋಗಿಶ್ಚಂದ್ರ ಧಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಏಸಿಸಿಇಎಯ ಮಾಜಿ ಅಧ್ಯಕ್ಷ ಪಾಂಡುರಂಗ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಬಿ. ಸ್ವಾಗತಿಸಿದರು. ಸಂಸ್ಥೆಯ ಗೌರವಧ್ಯಕ್ಷ ನಾಗೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಗೋಪಾಲ್ ಭಟ್ ಹಾಗೂ ಎಸಿಸಿಇಎಯ ಸದಸ್ಯರುಗಳು, ಶಾಲೆಯ ಹಳೆ ವಿದ್ಯಾರ್ಥಿ ಪುರಂದರ ಶೆಟ್ಟಿ, ಶಾಲೆಯ ಶಿಕ್ಷಕಿಯರು, ಪೋಷಕರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು. ನಿರಂಜನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಚಿವ ಸಂಪುಟ ಪುನರ್ರಚನೆ, ನಾಯಕತ್ವ ಬದಲಾವಣೆ ಬಗ್ಗೆ ಜಿ.ಪರಮೇಶ್ವರ್ ಅಚ್ಚರಿ ಹೇಳಿಕೆ
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಹಾರಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಾಲಿ ಸಚಿವರಿಗೆ ನಡುಕ ಶುರುವಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್
ಉಡುಪಿ | ಹಿರಿಯ ನಾಗರಿಕರಿಗಾಗಿ ವೈದ್ಯಕೀಯ ಶಿಬಿರ
ಉಡುಪಿ, ನ.16: ಬ್ರಹ್ಮಗಿರಿ ಶ್ರೀಸತ್ಯಸಾಯಿ ಸೇವಾ ಸಮಿತಿ, ಉಡುಪಿ ಗಾಂಧಿ ಆಸ್ಪತ್ರೆ, ಮಣಿಪಾಲದ ಕೆಎಂಸಿ ಆಸ್ಪತ್ರೆ, ಭಾರತೀಯ ವೈದ್ಯರ ಸಂಘ ಉಡುಪಿ, ಮಣಿಪಾಲ ವಿಭಾಗ, ಶ್ರೀಕೃಷ್ಣ ಯೋಗ ಕೇಂದ್ರ ಉಡುಪಿ ಹಿರಿಯ ನಾಗರಿಕರ ವೇದಿಕೆ ಉಡುಪಿ ಸಹಕಾರದೊಂದಿಗೆ ಭಗವಾನ್ ಶ್ರೀಸತ್ಯ ಸಾಯಿಬಾಬಾರವರ 100ನೇ ಜನ್ಮದಿನಾಚರಣೆಯ ಅಂಗವಾಗಿ ಹಿರಿಯ ನಾಗರಿಕರಿಗಾಗಿ ವಿಶೇಷ ವೈದ್ಯಕೀಯ ಶಿಬಿರವನ್ನು ಇತ್ತೀಚಿಗೆ ಬ್ರಹ್ಮಗಿರಿಯ ಸಾಯಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸತ್ಯಸಾಯಿ ಸೇವಾ ಸಂಸ್ಥೆಗಳ ಉಡುಪಿ ಜಿಲ್ಲಾಧ್ಯಕ್ಷ ಆನಂದ ಕುಂದಾಪುರ ಚಾಲನೆ ನೀಡಿದರು. ವೈದ್ಯ ಡಾ.ಅನಂತ ಶೆಣೈ ಮಾತನಾಡಿ, ಹಿರಿಯ ನಾಗರಿಕರು ಆಗ್ಗಾಗೆ ವೈದ್ಯರ ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಹೃದಯ ಪರೀಕ್ಷೆ, ಮಧುಮೇಹ ತಪಾಸಣೆ, ಬಿಪಿ ಪರೀಕ್ಷೆ ಜೊತೆಗೆ ನಿತ್ಯ ವ್ಯಾಯಾಮ, ವಾಕಿಂಗ್, ಮಿತ ಆಹಾರ ಸೇವನೆ, ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ.ಸುರೇಶ್ ಹೆಗ್ಡೆ, ಡಾ.ಅನಂತ ಶೆಣೈ, ಡಾ.ಶಿವಶಂಕರ್, ಡಾ.ಕಸ್ತೂರಿ ನಾಯಕ್ ಹಾಗೂ ಇತರ ವೈದ್ಯರು ಮತ್ತು 20 ಮಂದಿ ಅರೆ ವೈದ್ಯಕೀಯ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೀಕೃಷ್ಣ ಯೋಗ ಕೇಂದ್ರದ ಅಮಿತ್ ಶೆಟ್ಟಿ ಹಾಗೂ ಹಿರಿಯ ನಾಗರಿಕರ ವೇದಿಕೆಯ ಮುರಳಿಧರ್ ಉಪಸ್ಥಿತರಿದ್ದರು. ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 157 ಹಿರಿಯ ನಾಗರಿಕರು ಭಾಗವಹಿಸಿದ್ದರು. ಹಲವು ಬಗೆಯ ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡಲಾಯಿತು.
ಬೆಳ್ತಂಗಡಿ: ಕಲಬುರಗಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಉರ್ದು ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿಯ ಸೆಯ್ಯದ್ ಮುಹಮ್ಮದ್ ಉವೈಸ್ ಸತತ ಮೂರನೇ ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಮಂಜೊಟ್ಟಿಯ ಸೆಯ್ಯದ್ ಅಯ್ಯೂಬ್ ಮತ್ತು ನೂರ್ ಸಬಾ ದಂಪತಿಯ ಪುತ್ರ.
`ಸಮಸ್ಯೆ ಇದ್ದಿದ್ದು ಪಿಚ್ ನಲ್ಲಲ್ಲ!': ಟೀಂ ಇಂಡಿಯಾ ಬಗ್ಗೆಯೇ ಪ್ರಧಾನ ಕೋಚ್ ಗೌತಮ್ ಗಂಭೀರ್ ಅಸಮಾಧಾನ ಯಾಕೆ?
India Vs South - ಕೋಲ್ಕತಾ ಟೆಸ್ಟ್ನಲ್ಲಿ ಭಾರತದ ಸೋಲಿಗೆ ಪಿಚ್ ಕಾರಣ, ಭಾರತ ತಂಡಕ್ಕೆ ಸ್ಪಿನ್ ಪಿಚ್ ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಟೀಕೆಗಳು ಕೇಳಿ ಬಂದಿವೆ. ಆದರೆ ಈ ಟೀಕೆಗಳನ್ನು ಇದೀಗ ಭಾರತದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರು ತಳ್ಳಿ ಹಾಕಿದ್ದಾರೆ. `ಈ ಸೋಲಿಗೆ ಪಿಚ್ ಕಾರಣವಲ್ಲ, ನಮ್ಮ ಆಟವೇ ಸರಿ ಇರಲಿಲ್ಲ' ಎಂದು ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಇನ್ನು ತಂಡವು ದ್ವಿತೀಯ ಇನ್ನಿಂಗ್ಸ್ ನಲ್ಲಿ ಒತ್ತಡ ನಿಭಾಯಿಸುವಲ್ಲಿ ವಿಫಲವಾಯಿತು ಎಂದು ಉಪನಾಯಕ ರಿಷಬ್ ಪಂತ್ ಅವರು ತಿಳಿಸಿದ್ದಾರೆ.
ಉಡುಪಿ | ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರ
ಉಡುಪಿ, ನ.16: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವನ್ನು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿದ ಹಾವಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗುರುರಾಜ ಕಾರ್ತಿಬೈಲು ಮಾತನಾಡಿ, ಈ ರೀತಿಯ ಕಾರ್ಯಾಗಾರ ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವುದು ನಮಗೊಂದು ಹೆಮ್ಮೆ. ಕಾವಿ ಕಲೆಯನ್ನು ಬೆಳೆಸಿ, ಗ್ರಾಮೋದ್ಯೋಗವನ್ನು ಸೃಜಿಸುವ ಡಾ.ಹಾವಂಜೆ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಮಣ್ಣಿನ ಉತ್ಪನ್ನಗಳು, ಬಟ್ಟೆ, ಮರ ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಬೆಳೆಸುವ ಈ ಕಾರ್ಯಾಗಾರವು ಸುಮಾರು 25 ದಿನಗಳ ಕಾಲ ನಡೆಯಲಿದ್ದು, ಉಡುಪಿ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ.ಜನಾರ್ದನ ಹಾವಂಜೆ ತಿಳಿಸಿದರು. ದೆಹಲಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರು ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸುವರಲ್ಲದೇ ವಿವಿಧ ಮಾಧ್ಯಮಗಳ ಮೇಲೆ ಇದರ ಬಳಕೆ ಸಾಧ್ಯತೆಯನ್ನು ಪ್ರಯೋಗಿಸಲಿದ್ದಾರೆ. ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜನಾರ್ದನ ಮೂಲ್ಯ, ಕರಕುಶಲ ನಿಗಮದ ಎಚ್ಪಿಒ ಸುಪ್ರಿಯಾ ಭಾರದ್ವಾಜ್ ಹಾಗೂ ಕಾವಿ ಆರ್ಟ್ ಫೌಂಡೇಶನ್ನ ಮಂಜುನಾಥ ರಾವ್ ಉಪಸ್ಥಿತರಿದ್ದರು.
ಬ್ರಹ್ಮಾವರ | ನ.23ರಂದು ಶೋಷಿತ ಜನ ಜಾಗೃತಿ ಸಮಾವೇಶ
ಬ್ರಹ್ಮಾವರ, ನ.16: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಶೋಷಿತ ಜನ ಜಾಗೃತಿ ಸಮಾವೇಶ’ವನ್ನು ಬ್ರಹ್ಮಾವರ ಹೊಟೇಲ್ ಆಶ್ರಯ ಸಭಾಭವನದಲ್ಲಿ ನ.23ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ವಹಿಸಲಿರುವರು. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ನೂತನ ಪದಾಧಿಕಾರಿಗಳ ಪ್ರಮಾಣ ವಚನ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಚಿತ್ತಾಪುರ: ಪೊಲೀಸ್ ಬಂದೋಬಸ್ತ್ ನಲ್ಲಿ ಆರೆಸ್ಸೆಸ್ ಪಥ ಸಂಚಲನ
ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು 300 ಗಣವೇಶಧಾರಿಗಳಿಂದ ಆರೆಸ್ಸೆಸ್ ಪಥ ಸಂಚಲನ ರವಿವಾರ ನಡೆಯಿತು. ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥ ಸಂಚಲನ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ಖಾನಾವಳಿ, ಕೆನರಾ ಬ್ಯಾಂಕ್, ತಾ.ಪಂ ಕಚೇರಿ ವೃತ್ತದ ಮೂಲಕ ಪುನಃ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತು. 300 ಗಣವೇಶಧಾರಿಗಳು ಹಾಗೂ 50 ಜನ ಘೋಷವಾದಕರಿಂದ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಭಾಗವಹಿಸಿದ ಗಣವೇಶಧಾರಿಗಳಿಗೆ ಹಲವರು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ನ ಹಲವು ಮುಖಂಡರು ಸೇರಿದಂತೆ ಇತರರು ಇದ್ದರು. ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮಂಗಳೂರು | ಯೆನೆಪೋಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ
ಮಂಗಳೂರು, ನ.16: ಯೆನೆಪೊಯ ಶಾಲೆ ಮತ್ತು ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಮಂಗಳೂರು ಮತ್ತು ಉಡುಪಿಯ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಅಂತರ್ ಕಾಲೇಜು ಮತ್ತು ಅಂತರ್ಶಾಲಾ ರಸಪ್ರಶ್ನೆ ಸ್ಪರ್ಧೆ ಯೆನೆಕ್ವಿಝ್ ನ.14 ಮತ್ತು 15 ರಂದು ಶಾಲಾ ಆವರಣದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಮಂಗಳೂರು ಮತ್ತು ಉಡುಪಿಯ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆ 5 ರಿಂದ 8ನೇ ತರಗತಿಯವರೆಗಿನ ವಿಭಾಗದ ಸ್ಪರ್ಧೆಯಲ್ಲಿ ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ಅದ್ವೈತ್ ಟಿ. ಪಡಿಯಾರ್ ಮತ್ತು ಪ್ರಣವ್ ಕೋಟೆಕರ್ ಪ್ರಥಮ ಸ್ಥಾನ ಪಡೆದರು. ಮಂಗಳೂರಿನ ಪಣಂಬೂರಿನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಕೆ. ಅಭಯ್ ನಾಯರ್ ಮತ್ತು ಸೋನಿತ್ ಶೆಟ್ಟಿ ಕಿದೂರ್ ದ್ವಿತೀಯ ಸ್ಥಾನ ಪಡೆದರು. ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ ಸೃಜನ್ ಎನ್.ವೈ ಮತ್ತು ವಿಭವ್ ಕಲ್ಕೂರಾ ತೃತೀಯ ಸ್ಥಾನ ಪಡೆದರು. ಎರಡನೇ (9- 12) ವಿಭಾಗದಲ್ಲಿ ಬ್ರಹ್ಮಾವರದ ಲಿಟಲ್ ರಾಕ್ ಶಾಲೆಯ ಸ್ಕಂದ ಜೆ.ಶೆಟ್ಟಿ ಮತ್ತು ತಕ್ಷಕ್ ಶೆಟ್ಟಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದರು. ಸಿಎಫ್ಎಎಲ್ನ ವಿದ್ಯುತ್ ಅಜಿತ್ ಸೋಮನ್ ಮತ್ತು ಶಾಂತನು ವೈಭವ್ ಅನೀಶ್ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು, ಸೈಂಟ್ ಥೆರೆಸಾದ ಶನ್ನಾರ ಕಡಿದಾಲ್ ಮತ್ತು ಸುಮೇಧ್ ರಾವ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿಕೊಂಡರು. ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಅಧ್ಯಕ್ಷ ಡಾ.ಅಣ್ಣಪ್ಪ ಕಾಮತ್, ಯೆನೆಪೊಯ ಶಾಲೆಯ ಅಸೋಸಿಯೇಟ್ ಡೈರೆಕ್ಟರ್ ಆಂಟನಿ ಜೋಸೆಫ್ ಯೆನೆಕ್ವಿಝ್ 2025 ವಿಜೇತರಿಗೆ ನಗದು ಬಹುಮಾನ ವಿತರಿಸಿದರು.
KPCC ಅಧ್ಯಕ್ಷರ ಬದಲಾವಣೆ ಬಗ್ಗೆ ಡಿಕೆ ಸುರೇಶ್ ಶಾಕಿಂಗ್ ಹೇಳಿಕೆ
ಬೆಂಗಳೂರು, ನವೆಂಬರ್ 16: ಬಿಹಾರ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಬಿಹಾರ ಫಲಿತಾಂಶದ ಬೆನ್ನಲ್ಲೇ ದಿಢೀರ್ ದೆಹಲಿಗೆ ಹಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯಾಗಿದ್ದು, ಕೈ
ಕಾವಳಕಟ್ಟೆ | ಹಿದಾಯ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲಾ ದಶಮಾನೋತ್ಸವ
ಬಂಟ್ವಾಳ : ಕಾವಳಕಟ್ಟೆ- ಗುರಿಮಜಲು ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ದಶಮಾನೋತ್ಸವ ಸಮಾರಂಭವು ಇಲ್ಲಿನ ಹಿದಾಯ ಶೇರ್ ಮತ್ತು ಕೇರ್ ಕಾಲೊನಿಯಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾವಳಕಟ್ಟೆ ಶಾಲಾ ಬಳಿಯಿಂದ ವಿಶೇಷ ಶಾಲೆಯ ಆವರಣದವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿದಾಯ ವಿಶೇಷ ಶಾಲೆ ಆರಂಭವಾಗಿ ಹಾಗೂ ಹತ್ತು ವರ್ಷಗಳು ಪೂರ್ಣಗೊಂಡ ನೆನಪಿನಲ್ಲಿ ಜಿಲ್ಲೆಯ ಇಬ್ಬರು ಸಾಧಕ ವಿಶೇಷ ಮಕ್ಕಳಿಗೆ ಸನ್ಮಾನ, ವಿಶೇಷ ಮಕ್ಕಳ ಶಿಕ್ಷಕಿಯವರಿಗೆ ಗೌರವಾರ್ಪಣೆ, ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಚೇರ್ಮೆನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ವಹಿಸಿದ್ದರು. ದಶಮಾನೋತ್ಸವ ಸಮಾರಂಭವನ್ನು ಫಲಕ ಅನಾವರಣಗೊಳಿಸುವ ಮೂಲಕ ದುಬಾಯಿಯ ಗಡಿಯಾರ್ ಗ್ರೂಪ್ ಆಫ್ ಕಂಪೆನಿ ಚೇರ್ಮೆನ್ ಇಬ್ರಾಹಿಂ ಗಡಿಯಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ಸಮಾಜದ ಒಳಿತಿಗಾಗಿ ನಡೆಸಲ್ಪಡುವ ಎಲ್ಲಾ ಕಾರ್ಯಗಳು ದೇವರು ಮೆಚ್ಚುವ ಕಾರ್ಯಗಳಾಗಿವೆ. ಇಂತವುಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕಾಗಿದೆ ಎಂದರು. ಬಂಟ್ವಾಳ ತೌಹೀದ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ರಿಯಾಝ್ ಬಂಟ್ವಾಳ, ಹಿದಾಯ ಫೌಂಡೇಶನ್ ನ ವೈಸ್ ಚೇರ್ಮೆನ್ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಂಸ್ಥೆಯ ಆಡಳಿತಾಧಿಕಾರಿ ಆಬಿದ್ ಅಸ್ಗರ್ ಅತಿಥಿಗಳಾಗಿ ಭಾಗವಹಿಸಿದ್ದರು . ಹಿದಾಯ ಫೌಂಡೇಶನ್ ನ ಎಫ್.ಎಂ.ಬಶೀರ್, ಆಸಿಫ್ ಇಕ್ಬಾಲ್, ಮಕ್ಬೂಲ್ ಅಹ್ಮದ್, ಕೆ.ಎಸ್ ಅಬೂಬಕ್ಕರ್, ಹಂಝ ಆನಿಯಾ ದರ್ಬಾರ್ ಬಸ್ತಿಕೋಡಿ, ಇದ್ದಿನ್ ಕುಂಞಿ, ಬಶೀರ್ ವಗ್ಗ , ಹಕೀಂ ಸುನ್ನತ್ ಕೆರೆ, ಆಶಿಕ್ ಕುಕ್ಕಾಜೆ, ಇಲ್ಯಾಸ್ ಕಕ್ಕಿಂಜೆ, ಪಿ.ಮುಹಮ್ಮದ್, ಸಾದಿಕ್ ಹಸನ್, ಅಬೂಬಕ್ಕರ್ ಸಿದ್ದೀಕ್, ಇಫ್ತಿಕಾರ್ ಅಹಮದ್, ರಶೀದ್ ಕಕ್ಕಿಂಜೆ, ಶರೀಫ್ ಮುಕ್ರಂಪಾಡಿ, ಇಬ್ರಾಹೀಂ ಖಲೀಲ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಅವರನ್ನು ಹಿದಾಯ ವಿಶೇಷ ಚೇತನ ವಿದ್ಯಾರ್ಥಿಗಳು ಅಭಿನಂದಿಸಿದರು. ಸಾಧಕ ವಿದ್ಯಾರ್ಥಿಗಳಾದ ಫಾತಿಮಾ ಸುಝ್ನ, ಮಾಸ್ಟರ್ ಮೋಕ್ಷಿತ್ ಸಿ. ಮಾರ್ಧಾಳ, ಶಯಾನ್, ಮುಹಮ್ಮದ್ ನಝೀಂ ಅವರನ್ನು ಸನ್ಮಾನಿಸಲಾಯಿತು. ಡಾ.ಫಾತಿಮಾ ಸುಹಾನ ವಿಶೇಷ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಸದಸ್ಯ ಬಿ.ಎಂ. ತುಂಬೆ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ಆಶಾಲತಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಮುಹಮ್ಮದ್ ಅಲಿ ಖಿರಾತ್ ಪಠಿಸಿದರು. ಹಕೀಂ ಕಲಾಯಿ ವಂದಿಸಿ, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ | ನಿರಂತರ ರಕ್ತದಾನದಿಂದ ಉತ್ತಮ ಆರೋಗ್ಯ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ, ನ.16: ಪ್ರಸ್ತುತ ಕಾಲ ಘಟ್ಟದಲ್ಲಿ ರಕ್ತದ ಬೇಡಿಕೆ ವಿಫುಲವಾಗಿದ್ದು, ವ್ಯಕ್ತಿ ಅನಾರೋಗ್ಯ ಪೀಡಿತನಾದಾಗ ಅಪಘಾತಕ್ಕೀಡಾದಾಗ ತುರ್ತು ರಕ್ತದ ಅವಶ್ಯಕತೆ ನಿರಂತರವಾಗಿದ್ದು, ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹ ಮಾಡಿದಾಗ ಪೂರೈಕೆ ಸುಲಭವಾಗುತ್ತದೆ. ಹಾಗೆಯೇ ಸತತವಾಗಿ ರಕ್ತದಾನ ಮಾಡುವುದರಿಂದ ದಾನಿಯು ಅರೋಗ್ಯ ಕರವಂತನಾಗುತ್ತಾನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ನೆಸ್ಫಿಟ್ ಜಿಮ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ರವಿವಾರ ಮಣಿಪಾಲ ಕೆಎಂಸಿಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಮಣಿಪಾಲ ಎಂಐಟಿಯ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಬಾಲಕೃಷ್ಣ ಮದ್ದೋಡಿ, ಕಸ್ತೂರ್ಬಾ ಆಸ್ಪತ್ರೆಯ ಸುರಕ್ಷಾ ಅಧಿಕಾರಿ ಕ್ಲಿಂಗ್ ಜಾನ್ಸನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿ ವೆಲ್ನೆಸ್ ಜಿಮ್ನ ತಿಲಕ್ ಶೆಟ್ಟಿ, ರಕ್ತ ಕೇಂದ್ರದ ಸವಿನ ಹಾಗೂ ಅಮಿತ ಶೆಟ್ಟಿ ಉಪಸ್ಥಿತರಿದ್ದರು. ಸಾಜನ್ ಸತೀಶ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ವಂದಿಸಿದರು.
ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ: ಅರಬಿಕ್ ಕ್ಯಾಲಿಗ್ರಫಿಯಲ್ಲಿ ಹಾಫಿಲ್ ಮುಹಮ್ಮದ್ ಯೂಸುಫ್ ಸಫ್ವಾನ್ ಪ್ರಥಮ
ಮಂಗಳೂರು: ಕಲಬುರಗಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಅರಬಿಕ್ ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ಸರಳಿಕಟ್ಟೆಯ ಹಾಫಿಲ್ ಮುಹಮ್ಮದ್ ಯೂಸುಫ್ ಸಫ್ವಾನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಮಹಾರಾಷ್ಟ್ರದ ಪುಣೆಯ ಸಿದ್ರಾ ಇನ್ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ ಆ್ಯಂಡ್ ಎಕ್ಸಲೆನ್ಸ್ನ ವಿದ್ಯಾರ್ಥಿ. ಸಫ್ವಾನ್ ಬಾಜಾರು ನಿವಾಸಿ ಅಬ್ದುರ್ರಝಾಕ್ ಮದನಿ ಮತ್ತು ಝುಬೈದಾ ದಂಪತಿಯ ಪುತ್ರ.
ಕೋಲ್ಕತಾ ಟೆಸ್ಟ್ ನಲ್ಲಿ ಹೊಸ ದಾಖಲೆ; ನಾಲ್ಕೂ ಇನ್ನಿಂಗ್ಸ್ ಗಳಲ್ಲಿ ಈ ರೀತಿ ಆಗಿದ್ದು 24361 ದಿನಗಳಲ್ಲಿ ಇದೇ ಮೊದಲು!
ಟೆಸ್ಟ್ ಕ್ರಿಕೆಟ್ ನಲ್ಲಿ ನಾಲ್ಕೂ ಇನ್ನಿಂಗ್ಸ್ ಗಳಲ್ಲಿ ಯಾವ ತಂಡವೂ 200 ರನ್ ಗಳ ಗಡಿ ದಾಟದಿರುವುದು ಬಹಳ ಅಪರೂಪ. ಒಟ್ಟು 12 ಬಾರಿ ಮಾತ್ರ ಇಂತಹ ಘಟನೆಗಳು ನಡೆದಿವೆ. ಕೊನೆಯ ಬಾರಿಗೆ ಇಂತಗ ಘಟನೆ ನಡೆದಿರುವು 1959ರಲ್ಲಿ. ಅದಾಗಿ 67 ವರ್ಷಗಳ ಬಳಿಕ ಅಂದರೆ 24361 ದಿನಗಳಲ್ಲಿ ಇದೀಗ ಈ ಘಟನೆ ನಡೆದಿದೆ. ಇಡೀ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರನ್ನು ಹೊರತುಪಡಿಸಿದರೆ ಇತ್ತಂಡಗಳಿಂದಲೂ ಯಾವ ಬ್ಯಾಟರ್ ಸಹ 50 ರನ್ ಗಳ ಗಡಿ ದಾಟಲಿಲ್ಲ.
ಶಿರ್ವ | ದುಂಡಾವರ್ತನೆ ತೋರಿದ ಸರ್ವೇಯರ್ ವಿರುದ್ಧ ಕ್ರಮಕ್ಕೆ ಕೃಷಿಕರಿಂದ ಕಾಪು ಶಾಸಕರಿಗೆ ಮನವಿ
ಶಿರ್ವ, ನ.16: ಶಿರ್ವ ಗ್ರಾಮದ ಬಂಟಕಲ್ಲು ಅರಸೀಕಟ್ಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಜಮೀನು ಸರ್ವೇಮಾಡಲು ಬಂದಿದ್ದ ಸರ್ವೇಯರ್ ಮತ್ತು ಆತನ ಸಹಾಯಕ ಯಾವುದೇ ಕಾನೂನು ಪಾಲಿಸದೆ ಪಕ್ಕದ ಜಮೀನುಗಳವರೊಂದಿಗೆ ದುಂಡಾವರ್ತನೆ ನಡೆಸಿದ್ದು, ಈ ಸರ್ವೆಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘವು ಕಾಪು ತಹಶೀಲ್ದಾರ್ ಮತ್ತು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರಿ ಮನವಿ ಸಲ್ಲಿಸಿದೆ. ಜಮೀನು ಅಳತೆಗೆ ಹೊರಡುವ ಮೊದಲು ಸರ್ವೇಯರ್ ಅದರ ನಾಲ್ಕೂ ಪಕ್ಕದ ಜಮೀನುಗಳವರಿಗೆ ಸಾಕಷ್ಟು ಮುಂಚಿತವಾಗಿ ನೋಟೀಸು ನೀಡಬೇಕು. ನಕ್ಷೆ ಪ್ರಕಾರವೇ ಜಮೀನು ಅಳತೆ ಮಾಡಿ ಗುರುತುಗಳಿಗೆ ಗಡಿಕಲ್ಲು ಅಳವಡಿಸಬೇಕು. ಇದಾವುದನ್ನೂ ಪಾಲಿಸದೆ ಏಕಾಏಕಿ ಬಂದಿದ್ದ ಸರ್ವೇಯರ್ ತನ್ನಿಷ್ಟದಂತೆ ಎಲ್ಲಾ ಅಳತೆ, ಗಡಿಗುರುತು ಕಾರ್ಯ ಮುಗಿಸಿಯಾದ ಮೇಲೆ ಪಕ್ಕದ ಜಮೀನಿನವರನ್ನು ಫೋನ್ ಕರೆ ಮಾಡಿ ಕರೆದಿದ್ದರು. ಮೊದಲೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಿರುವುದಲ್ಲದೆ, ತಪ್ಪಾದ ಅಳತೆ, ಗಡಿ ಗಲ್ಲು ಎಲ್ಲೆಲ್ಲೋ ಅಳವಡಿಸಿ, ಎಲ್ಲಾ ಮುಗಿದ ಮೇಲೆ ಕರೆ ಮಾಡಿರುವುದಕ್ಕೆ ಪಕ್ಕದ ಜಮೀನಿನವರು ಆಕ್ಷೇಪವೆತ್ತಿದರು. ಅಷ್ಟಕ್ಕೇ ಆ ಸರ್ವೇಯರ್ ಮತ್ತು ಸಹಾಯಕ ಇಬ್ಬರೂ ತಾವು ಮಾಡಿದ್ದೇ ಕಾನೂನು, ಹೇಳಿದ್ದೇ ಕಾನೂನು ಎನ್ನುವ ರೀತಿಯ ದುಂಡಾವರ್ತನೆ ತೋರಿದ್ದಾರೆ. ಅಲ್ಲದೆ ಗೂಂಡಾಗಳಂತೆ ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನಸಾಮಾನ್ಯರ ಸೇವೆಗೆಂದು ನಿಯುಕ್ತಿಗೊಂಡಿರುವ ನೌಕರರ ಈ ರೀತಿ ಕಾನೂನು ಬಾಹಿರ ವರ್ತನೆ, ದೌರ್ಜನ್ಯ ನಡೆಸಿರುವುದು ಸಮರ್ಥನೀಯವಲ್ಲ. ಇರುವ ಕಾನೂನು ಪಾಲಿಸದ ಇಂಥಹವರು ಸರಕಾರಿ ನೌಕರಿ ಮಾಡಲು ಅನರ್ಹರು. ಮೇಲಾಧಿಕಾರಿಗಳು ತನಿಖೆ ನಡೆಸಿ, ಈ ಸರ್ವೇಯರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಪು ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಎಚ್ಚರಿಸಿದ್ದಾರೆ.
ʻ50 ಸಾವಿರಕ್ಕೆ ಇಬ್ಬರು ಇಂಟರ್ನ್ಗಳು ಸಿಗುತ್ತಾರೆ, ಕಾಫಿ ಮೆಷಿನ್ ಬೇಕೇ?ʼ; ನೋಯ್ಡಾ CEO ಯೋಚನೆಗೆ ನೆಟ್ಟಿಗರು ಕಿಡಿ
ನೋಯ್ಡಾ ಮೂಲದ ಐಟಿ ಕಂಪನಿಯೊಂದರ ಸಿಇಒ, ಕಚೇರಿಯಲ್ಲಿ ಕಾಫಿ ಮೆಷಿನ್ ಅಳವಡಿಸುವಂತೆ ಕೇಳಿದ ಇಂಟರ್ನ್ಗಳಿಗೆ ನೀಡಿದ ಉತ್ತರವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 50 ಸಾವಿರಕ್ಕೆ ಉದ್ಯೋಗಿಗಳನ್ನು ಖರೀದಿಸಬಹುದು. ಅಷ್ಟೊಂದು ಹಣವನ್ನು ಕಾಫಿ ಮೆಷಿನ್ಗೆ ಮೇಲೆ ಹೂಡಿಕೆ ಮಾಡೋದು ಯಾಕೆ? ಎಂದು ಹೇಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ತಿರುವನಂತಪುರಂನ ಆರ್ಎಸ್ಎಸ್ ಕಾರ್ಯಕರ್ತ ಆನಂದ್ ತಂಬಿ ಎನ್ನುವವರು ಬಿಜೆಪಿ ಟಿಕೆಟ್ ನಿರಾಕರಣೆ ಮತ್ತು ಸ್ಥಳೀಯ ನಾಯಕರ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇವರು ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ಹಲವು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು 'ಮಣ್ಣು ಮಾಫಿಯಾ'ದಲ್ಲಿ ಭಾಗಿಯಾಗಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಸರಣಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣ ಇದಕ್ಕೆ ಹೊಸ ಸೇರ್ಪಡೆ ಯಾಗಿದೆ.
ಉಡುಪಿ | ಬಡವರ ಕಣ್ಣೀರೊರೆಸುವ ಕಾರ್ಯ ಎಲ್ಲ ಸೇವೆಗಿಂತ ಮಿಗಿಲು : ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ, ನ.16: ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ. ಇದು ಪವಿತ್ರ ಧರ್ಮಸಭೆಯ ಆಶಯವೂ ಕೂಡ ಆಗಿದ್ದು, ಪ್ರತಿಯೊಬ್ಬರು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ದಾನಿ ಜೋಸೆಫ್ ಮಿನೇಜಸ್ ಸಾಸ್ತಾನ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಬೆಸಿಲ್ ಪಿಂಟೊ ಇವರ ಸಹಕಾರದೊಂದಿಗೆ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ಉಡುಪಿ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯನ್ನು ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಬಡವರ ನೋವಿಗೆ ಎಷ್ಟು ನಾವು ದನಿಯಾಗುತ್ತೇವೆಯೋ ಅಷ್ಟು ನಾವು ದೇವರ ಪ್ರೀತಿಯನ್ನು ಗಳಿಸುವಂತವರಾಗುತ್ತೇವೆ. ಸಮಾಜದ ಅತ್ಯಂತ ಬಡವರ, ನೊಂದವರ ಕಣ್ಣೊರೆಸಿದಾಗ ಅಂತಹ ಸೇವೆ ದೇವರನ್ನು ತಲುಪುತ್ತದೆ. ಇಂತಹ ಸೇವೆ ಜೊಸೇಫ್ ಮಿನೇಜಸ್ ಮತ್ತವರ ತಂಡ ಕೆಥೊಲಿಕ್ ಸಭಾ ಸಂಘಟನೆಯ ಮೂಲಕ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಸೇವೆ ನಿರಂತರವಾಗಿ ನೆರವೇರಲಿ ಎಂದು ಶುಭಹಾರೈಸಿದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮಾತನಾಡಿ, ತನ್ನ ಸೇವೆಯ ಮೂಲಕ ಇನ್ನೊಬ್ಬರ ಜೀವನದಲ್ಲಿ ಸಂತೋಷವನ್ನು ಕಾಣುವುದು ಪ್ರತಿಯೊಬ್ಬ ಮಾನವನ ಉದ್ದೇಶವಾದಾಗ ಸಮಾಜದಲ್ಲಿ ಬಡವರೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಜನನ ಉಚಿತ ಮರಣ ಖಚಿತ ಆದರೆ ಅವೆರಡರ ನಡುವಿನ ನಮ್ಮ ಜೀವನ ಪರರ ಸೇವೆಯಲ್ಲಿ ವಿನಿಯೋಗಿಸಿದಾಗ ಸಾರ್ಥಕತೆ ಕಾಣುತ್ತದೆ ಎಂದರು. ವೈದ್ಯೆ ಡಾ.ಮೇಘಾ ಪೈ ಮಾತನಾಡಿ, ಮೊದಲಿನ ಆಹಾರ ಪದ್ಧತಿಗೂ ಇಂದಿನ ಆಹಾರ ಪದ್ಧತಿಗೂ ವ್ಯತ್ಯಾಸಗೊಂಡು ಆರೋಗ್ಯದಲ್ಲಿನ ವ್ಯವಸ್ಥೆಯೂ ಸಹ ವ್ಯತ್ಯಾಸಗೊಂಡಿದೆ. ಇಂದಿನ ಜಂಕ್ ಫುಡ್ ಆಹಾರ ಶೈಲಿಯಿಂದಾಗಿ ಹೃದಯ ಸಂಬಂಧಿ ತೊಂದರೆ, ಡಯಾಬಿಟಿಸ್, ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಆಹಾರ ಪದ್ದತಿಯಲ್ಲಿ ಹಿತಮಿತವನ್ನು ಕಾಪಾಡಿಕೊಳ್ಳುವುದರಿಂದ ಮೂತ್ರಪಿಂಡದಂತಹ ಸಮಸ್ಯೆಗಳಿಂದ ದೂರವಿರಲು ಸಾಧ್ಯವಿದೆ ಎಂದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಹೊರತಂದ ರಕ್ತದಾನಿಗಳ ವಿವರವುಳ್ಳ ಡೈರಕ್ಟರಿ, ಮುಂದಿನ ವರ್ಷದಲ್ಲಿ ಆರೋಗ್ಯ ಯೋಜನೆಗಳ ಸಹಾಯಾರ್ಥವಾಗಿ ಹಮ್ಮಿಕೊಂಡ ಜೋಶಲ್ ಅವರ ಸಂಗೀತ ಕಾರ್ಯಕ್ರಮದ ಪೋಸ್ಟರ್ನ್ನು ಅನಾವರಣಗೊಳಿಸಲಾಯಿತು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮೂವರು ರೋಗಿಗಳಿಗೆ ಸಾಂಕೇತಿಕವಾಗಿ ಗುರುತಿನ ಕಾರ್ಡ್ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ರೂವಾರಿಗಳಾದ ಜೊಸೇಫ್ ಮಿನೇಜಸ್ ಸಾಸ್ತಾನ ಮತ್ತು ಬೆಸಿಲ್ ಪಿಂಟೊ ದಂಪತಿ ಹಾಗೂ ಸ್ನೇಹಾಲಯ ಆಶ್ರಮದ ನಿರ್ದೇಶಕ ಜೋಸೇಫ್ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ವಹಿಸಿದ್ದರು. ವಾಗ್ಮಿ ರಫೀಕ್ ಮಾಸ್ಟಒ್ಡ ಮಂಗಳೂರು, ಕಥೊಲಿಕ್ ಸಭಾ ಉಡುಪಿ ಪ್ರದೇಶ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು. ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿ, ಜೊಯೇಲ್ ಆಲ್ಮೇಡಾ ವಂದಿಸಿದರು, ಆಲ್ವಿನ್ ಅಂದ್ರಾದ್ರೆ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ವ್ಯಾಪ್ತಿಯ ನಿಗದಿತ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ಕಲ್ಯಾಣಪುರ ಸಂತೆಕಟ್ಟೆಯ ಗೊರೆಟ್ಟಿ ಆಸ್ಪತ್ರೆ ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಮತ್ತು ಕುಂದಾಪುರದ ನಿಗದಿತ ಆಸ್ಪತ್ರೆಗಳಿಗೆ ಕೂಡ ಸೇವೆಯನ್ನು ವಿಸ್ತರಿಸಲಾಗುತ್ತದೆ.
ಮಂಗಳೂರು | ಉಚಿತ ನ್ಯಾಚುರೋಪತಿ, ಯೋಗ ಚಿಕಿತ್ಸಾ ಶಿಬಿರ
ಮಂಗಳೂರು, ನ.16: ಎಂಟನೇ ರಾಷ್ಟ್ರೀಯ ನ್ಯಾಚುರೋಪತಿ ದಿನದ ಅಂಗವಾಗಿ ನರಿಂಗಾನದ ಯೆನೆಪೊಯ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಶ್ರೀ ಮುನೀಶ್ವರ ಮಹಾಗಣಪತಿ ಸೇವಾ ಟ್ರಸ್ಟ್, ಶ್ರೀ ಮುನೀಶ್ವರ ವತಿಯಿಂದ ನ.13ರಂದು ಉಚಿತ ನ್ಯಾಚುರೋಪತಿ ಮತ್ತು ಯೋಗ ಚಿಕಿತ್ಸಾ ಶಿಬಿರ ನಗರದ ಮಹಾಗಣಪತಿ ಕಲಾ ಮಂಟಪದಲ್ಲಿ ನಡೆಯಿತು. ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ.ಅಭಿಜ್ಞಾ ಮತ್ತು ಡಾ.ಪ್ರತೀಕ್ಷಾ ಭಾಗವಹಿಸಿ, ಶಿಬಿರದಲ್ಲಿ ಚಿಕಿತ್ಸಾ ಸಲಹೆ ಹಾಗೂ ಯೋಗ ಮಾರ್ಗದರ್ಶನ ನೀಡಿದರು. ಒಟ್ಟು 80 ಮಂದಿ ರೋಗಿಗಳುಈ ಶಿಬಿರದಲ್ಲಿ ಭಾಗವಹಿಸಿ, ನ್ಯಾಚುರೋಪತಿ ಮತ್ತು ಯೋಗದ ಮೂಲಕ ಚಿಕಿತ್ಸಾ ಸಲಹೆಗಳು, ಥೆರಪಿಗಳು ಹಾಗೂ ಜೀವನಶೈಲಿ ಮಾರ್ಗದರ್ಶನದಿಂದ ಪ್ರಯೋಜನ ಪಡೆದರು.
ನಿವೃತ್ತ ಧರ್ಮಗುರು ಡೆನಿಸ್ ಡಿ ಸೋಜ
ಮಂಗಳೂರು, ನ.16: ಮಂಗಳೂರಿನ ಹಿರಿಯ ಕ್ರೈಸ್ತ ಧರ್ಮಗುರು ಜೆಪ್ಪುವಿನ ಸೈಂಟ್ ಜುಝ್ ವಾಜ್ ಹೋಂನ ನಿವಾಸಿ ವಂ. ಡೆನಿಸ್ ಡಿ ಸೋಜ (91) ಅವರು ನಿಧನರಾದರು ಮಂಗಳೂರು ಧರ್ಮಪ್ರಾಂತ್ಯದಲ್ಲಿ ಡೆನಿಸ್ ಆರು ದಶಕಗಳಿಗೂ ಹೆಚ್ಚು ಕಾಲ ಧರ್ಮಗುರುವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಫೆ.15ರ, 1935 ರಂದು ಮೊಡಂಕಾಪುವಿನ ತೊಡಂಬಿಲಾದಲ್ಲಿ ಪಾಲ್ ಡಿ ಸೋಜ ಮತ್ತು ಮೇರಿ ಮ್ಯಾಗ್ಡಲೆನ್ ನೊರೊನ್ಹಾ ದಂಪತಿಯ ಪುತ್ರನಾಗಿ ಜನಿಸಿದ ಡೆನಿಸ್ ಅವರು ಡಿ.4ರ, 1961 ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಶಿರ್ವದಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದ ಪಾಂ ದೂರ್, ಬೊಂದೆಲ್, ನಿಡ್ಡೋಡಿ, ಮುಕಮಾರ್, ಕ್ಯಾಸಿಯಾ, ಸುರತ್ಕಲ್ ಮತ್ತು ಸಂಪಿಗೆಯ ಚರ್ಚ್ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2010 ರಲ್ಲಿ ನಿವೃತ್ತರಾಗಿದ್ದರು. ಬಳಿಕ ಜೆಪ್ಪುವಿನ ಸೈಂಟ್ ಜುಝೆ ವಾಜ್ ಹೋಂನಲ್ಲಿ ನೆಲೆಸಿದ್ದರು. ಡೆನಿಸ್ ಅವರ ಮೃತದೇಹದ ಅಂತ್ಯಕ್ರಿಯೆಯ ಬಲಿದಾನ ಮತ್ತು ಅಂತ್ಯಕ್ರಿಯೆ ವಿಧಿವಿಧಾನಗಳು ಸೋಮವಾರ (ನ.17) ಬೆಳಗ್ಗೆ 10.00 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್ನಲ್ಲಿ ನಡೆಯಲಿದೆ.
ಹೂಡೆ | ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ
ಉಡುಪಿ, ನ.16: ವಿಮೆನ್ ಇಂಡಿಯಾ ಮೂವ್ಮೆಂಟ್ ಹೂಡೆ ಶಾಖೆಯ ವತಿಯಿಂದ ಹೂಡೆ ಗುಡ್ಡೇರಿಕಂಬಳ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಹಾಗೂ ಹಳೆ ವಿದ್ಯಾರ್ಥಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯ ಉಸ್ತಾದ್ ಹೈದರ್ ಅಲಿ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಅತಿಥಿಗಳಾಗಿ ವಿಮೆನ್ ಇಂಡಿಯಾ ಮೂಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲಾ, ಉಡುಪಿ ಜಿಲ್ಲಾ ಕಾರ್ಯದರ್ಶಿ ರಹಮ್ತುನ್ನಿಸಾ, ಜಿಲ್ಲಾ ಸಮಿತಿ ಸದಸ್ಯ ನಸೀಮ್ ಫಾತಿಮಾ, ಉಡುಪಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ನಾದಿಯ ಅನ್ಸಾರ್, ಅಂಗನವಾಡಿ ಬಾಲವಿಕಾಸ ಅಧ್ಯಕ್ಷೆ ಫೌಝಿಯಾ ನಯಾಜ್, ಕೆಮ್ಮಣ್ಣು ಗ್ರಾಪಂ ಸದಸ್ಯೆ ಫೌಝಿಯಾ ಸಾದಿಕ್, ಅಂಗನವಾಡಿ ಶಿಕ್ಷಕಿ ಅರ್ಚನಾ, ನಿವೃತ್ತ ಶಿಕ್ಷಕಿ ಶಕುಂತಲಾ ಕುಂದರ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಉಡುಪಿ | ಅಗಲಿದ ಸಾಲುಮರ ತಿಮ್ಮಕ್ಕಗೆ ನುಡಿ ನಮನ
ಉಡುಪಿ, ನ.16: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಇತ್ತೀಚಿಗೆ ಅಗಲಿದ ವೃಕ್ಷಮಾತೆ ಪದ್ಮಶ್ರೀ ಸಾಲುಮರ ತಿಮ್ಮಕ್ಕ ಅವರಿಗೆ ನುಡಿ ನಮನ ಕಾರ್ಯಕ್ರಮ ಉಡುಪಿಯ ಇನ್ನಲ್ಲಿ ಯಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉರಗತಜ್ಞ ಗುರುರಾಜ್ ಸನಿಲ್, ಸಾಲುಮರ ತಿಮ್ಮಕ್ಕರವರು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಪರಿಸರದ ಮೇಲಿನ ಅಪಾರ ಪ್ರೀತಿಯನ್ನು ಹೊಂದಿ ನೂರಾರು ಗಿಡಗಳನ್ನು ನೆಟ್ಟು ಘೋಷಣೆ ಮಾಡಿದ್ದರು. ಅದನ್ನು ನೋಡಿ ವಿಶ್ವದಾದ್ಯಂತ ಪರಿಸರದ ಬಗ್ಗೆ ಅಭಿಯಾನಗಳು ನಡೆಯಲು ಸಾಧ್ಯವಾಯಿತು ಎಂದರು. ನಿರೂಪಕ ಅವಿನಾಶ್ ಕಾಮತ್ ಮಾತನಾಡಿ, ತಿಮ್ಮಕ್ಕ ಅಜ್ಜಿ ಮತ್ತು ಉಡುಪಿಗೆ ಅವಿನಾಭಾವ ಸಂಬಂಧವಿದೆ. ಇಂದು ಅಜ್ಜಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯಲು ಉಡುಪಿಯ ಜನತೆಯ ಸಹಕಾರವು ಇತ್ತು ಎಂದು ನೆನಪು ಮಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಸುಹಾಸಂನ ಶ್ರೀನಿವಾಸ್ ಉಪಾಧ್ಯ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಇನ್ನ ಮುಖ್ಯಸ್ಥ ನಾಗರಾಜ ಹೆಬ್ಬಾರ್, ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಪದಾಧಿಕಾರಿಗಳಾದ ದೀಪಾ ಚಂದ್ರಕಾಂತ್, ರಂಜನಿ ವಸಂತ್, ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ಶಶಿಕಾಂತ ಶೆಟ್ಟಿ, ಲಕ್ಷ್ಮಿಕಾಂತ್, ರಾಜೇಶ್, ರಾಮಾಂಜಿ ಮುಂತಾದವರು ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.
ಉಡುಪಿ, ನ.15: ಉಡುಪಿ ಅಂಬಾಗಿಲು ಸಂತೆಕಟ್ಟೆಯ ಮಾಸ್ತಿಅಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಗಾಂಸ್ಕರ್(90) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಹಲವಾರು ದಶಕಗಳಿಂದ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿದ್ದ ಇವರು, ಭಗವದ್ಗೀತೆಯ ಬಗ್ಗೆ ಆಳವಾದ ಜ್ಞಾನ ಮತ್ತು ಆಸಕ್ತಿಯನ್ನು ಹೊಂದಿದ್ದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ನಗರಸಭಾ ಸದಸ್ಯೆ ಮಂಜುಳಾ ವಿ.ನಾಯಕ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಚಿವ ಪ್ರಿಯಾಂಕ್ ತವರಲ್ಲಿ RSS ಪಥಸಂಚಲನ; ಖರ್ಗೆ ಕೋಟೆಯಲ್ಲಿ ಸಂಘ ಶಕ್ತಿ ಪ್ರದರ್ಶನ!
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಕೊನೆಗೂ ಕಲಬುರಗಿ ಪೀಠವು ಅನುಮತಿ ಕೊಟ್ಟಿದೆ. ಕಲಬುರಗಿ ಚಿತ್ತಾಪುರವು ಸದ್ಯ ಕೇಸರಿ ಮಯವಾಗಿದೆ. ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇನ್ನೊಂದು ಕಡೆ ಪೊಲೀಸ್ ಬಿಗಿ ಭದ್ರತೆ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಭದ್ರಕೋಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಗಣವೇಶಧಾರಿಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.
ಬೆಂಗಳೂರು, ನವೆಂಬರ್ 16: ರಾಜ್ಯ ಕಾಂಗ್ರೆಸ್ ಪಾಳೆಯಲ್ಲಿ ಭಾರೀ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಹಲವು ಬದಲಾವಣೆಗಳು ಆಗುತ್ತೆ ಎಂದೆಲ್ಲ ಹೇಳಲಾಗುತ್ತಿತ್ತು, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿದ್ದು, ಇದೀಗ ಬಿಹಾರ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಅಮೆರಿಕಾದಲ್ಲಿ ಹೆಚ್ಚುತ್ತಿರುವ ದೇಶೀಯ ಬೆಲೆಗಳಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದು ಮಾಡುವ ಸುಮಾರು 200 ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಕಾರಣ ಸುಂಕ ಸಮರ ಸಾರಿದ್ದ ಟ್ರಂಪ್ರ ಈ ನಿರ್ಧಾರವು, ಭಾರತೀಯ ಮಸಾಲೆ, ಚಹಾ ಮತ್ತು ಗೋಡಂಬಿ ರಫ್ತುದಾರರಿಗೆ ದೊಡ್ಡ ಉತ್ತೇಜನ ನೀಡಿದೆ. ಈ ವಿನಾಯಿತಿಯಿಂದಾಗಿ ಭಾರತದ ಕರಿಮೆಣಸು, ಲವಂಗ, ಜೀರಿಗೆ, ಏಲಕ್ಕಿ, ಅರಿಶಿನ, ಶುಂಠಿ ಮತ್ತು ಚಹಾ ಸೇರಿದಂತೆ ಒಟ್ಟು ಸುಮಾರು 1 ಶತಕೋಟಿಗಿಂತ ಡಾಲರ್ಗಿಂತ ಹೆಚ್ಚಿನ ಮೌಲ್ಯದ ಕೃಷಿ ರಫ್ತುಗಳು ಪ್ರಯೋಜನ ಪಡೆಯಲಿವೆ.
ಇಷ್ಟೂ ವರ್ಷ RR ಜೊತೆಗಿದ್ದ ಸಂಜು ಸ್ಯಾಮ್ಸನ್ ಬದಲಾವಣೆ ಬಯಸಿದ್ದು ಯಾಕೆ? ಮಾನಸಿಕವಾಗಿ ಬಳಲಿದ್ದರು ಎಂದ ಮಾಲೀಕ!
RR Owner On Sanju Samson Trade- ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸುದೀರ್ಘ ಕಾಲ ಆಟವಾಡಿದ್ದ ಸಂಜು ಸ್ಯಾಮ್ಸನ್ ಅವರು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾರೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಇದೀಗ RR ಪ್ರಾಂಚೈಸಿಯ ಮಾಲೀಕ ಮನೋಜ್ ಬಡಾಲೆ ಮಾತನಾಡಿದ್ದಾರೆ. ಇದು ಫ್ರಾಂಚೈಸಿಯ ನಿರ್ಧಾರವಾಗಿರಲಿಲ್ಲ. ಬದಲಾಗಿ ಬದಲಾವಣೆ ಬೇಕೆಂದು ಸಂಜು ಸ್ಯಾಮ್ಸನ್ ಅವರೇ ತೆಗೆದುಕೊಂಡ ನಿರ್ಧಾರವಾಗಿತ್ತು. ಹಾಗಿದ್ದರೆ ಕಳೆದ ಎರಡು ಮೂರು ತಿಂಗಳಿನಲ್ಲಿ ನಡೆದ ಸಂಗತಿಗಳೇನು? ಇಲ್ಲಿದೆ ವಿವರ.
Sabarimala Temple: ಶಬರಿಮಲೆಗೆ ಹೋಗುವ ಭಕ್ತರಿಗೆ ಶಾಕ್, ಕೇರಳ ಸರ್ಕಾರದಿಂದ ಹೊಸ ರೂಲ್ಸ್
ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಅಯ್ಯಪ್ಪನ ಭಕ್ತರು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಶಬರಿಮಲೆಯತ್ತ ಯಾತ್ರೆ ಹೊರಟಿದ್ದಾರೆ. ಆದರೆ ಈ ಬಾರಿ ಕೇರಳ ಸರ್ಕಾರವು ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಶಾಕ್ ನೀಡಿದೆ. ಈಗಾಗಲೇ ಯಾತ್ರೆ ಕೈಗೊಂಡಿರುವವರಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಭಕ್ತರು ಈ ನಿಯಮವನ್ನು ತಪ್ಪದೇ ಪಾಲಿಸಬೇಕು ಎಂದು
ಮುಹಮ್ಮದ್ ಆಲಿ ಉಚ್ಚಿಲ್ರಿಗೆ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ಸನ್ಮಾನ
ಅಬುಧಾಬಿ : ದ.ಕ.ಜಿಲ್ಲಾ ʼರಾಜ್ಯೋತ್ಸವ ಪ್ರಶಸ್ತಿʼ ಪುರಸ್ಕೃತ ಮುಹಮ್ಮದ್ ಆಲಿ ಉಚ್ಚಿಲ್ ಅವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ನಗರದ ಹೋಟೆಲ್ನ ಬಾಂಕ್ವೀಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬ್ಯಾರೀಸ್ ವೆಲ್ಫೇರ್ ಫೋರಂ ಉಪಾಧ್ಯಕ್ಷ ಹಂಝ ಖಾದರ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಜಲೀಲ್ ಬಜ್ಪೆ ಕಾರ್ಯಕ್ರಮ ನಡೆಸಿಕೊಟ್ಟರು. ನೂಹ್ ರಶೀದ್ ಕಿರಾತ್ ಪಠಿಸಿದರು ಮತ್ತು ಉಪಾಧ್ಯಕ್ಷ ಅಬ್ದುಲ್ ರವೂಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಝ ಕಣ್ಣಂಗಾರ್ ಸ್ವಾಗತಿಸಿದರು. ಮುಹಮ್ಮದ್ ಕಲ್ಲಾಪು, ಇಮ್ರಾನ್ ಕುದ್ರೋಳಿ ಮತ್ತು ನವಾಝ್ ಉಚ್ಚಿಲ್ ಸಮಾರಂಭವನ್ನು ಸಂಘಟಿಸಿದ್ದರು. ಬಿಡಬ್ಲ್ಯೂಎಫ್ನ ಪದಾಧಿಕಾರಿಗಳಾದ ಮುಹಮ್ಮದ್ ಅನ್ಸಾರ್ ಬೆಳ್ಳಾರೆ, ಇರ್ಫಾನ್ ಕುದ್ರೋಳಿ, ಮುಜೀಬ್ ಉಚ್ಚಿಲ್, ನಿಝಾಮ್, ನಝೀರ್ ಉಬಾರ್ ಮತ್ತು ಇಮ್ರಾನ್ ಕೃಷ್ಣಾಪುರ ಸೇರಿದಂತೆ ಟೀಮ್ ಬಿಡಬ್ಲ್ಯೂಎಫ್ನ ಮಹಿಳಾ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದ್ದರು. ಬಿಡಬ್ಲ್ಯೂಎಫ್ ಒಡನಾಡಿಗಳಾದ ಹಮೀದ್ ಗುರುಪುರ, ಮಜೀದ್ ಆತೂರ್, ಸಿರಾಜ್ ಪರ್ಲಡ್ಕ ಮತ್ತು ರಶೀದ್ ವಿ.ಕೆ ಮಾತನಾಡಿದರು. ಮುಹಮ್ಮದ್ ಆಲಿ ಉಚ್ಚಿಲ್ ಅವರನ್ನು ಶಾಲು ಹೊದಿಸಿ, ಬಿಡಬ್ಲ್ಯೂಎಫ್ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಫಕ್ರುದ್ದೀನ್ ಭಟ್, ಮೊಹಿದ್ದೀನ್ ಕಕ್ಕಿಂಜೆ, ಅಲಿ ಕುಂಞಿ, ಲತೀಫ್ ನೀರ್ಕಜೆ, ಮುಹಮ್ಮದ್ ಇಮ್ತಿಯಾಝ್, ಮುಬಾರಕ್, ಮೊಹಮ್ಮದ್ ಹಕೀಮ್, ಜೈನೀ ಸಖಾಫಿ ಉಸ್ತಾದ್, ಕಬೀರ್ ಮತ್ತು ಸಹೀರ್ ಹುದವಿ ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ಕುತ್ತಾರ್ ಧನ್ಯವಾದ ಸಮರ್ಪಿಸಿದರು.
ಆಂಧ್ರಪ್ರದೇಶದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು 'ಬ್ರಾಂಡ್ ನಾಯ್ಡು' ಪ್ರಚಾರ ತೀವ್ರ
ಆಂಧ್ರಪ್ರದೇಶದ ಆರ್ಥಿಕ ವೈಭವವನ್ನು ಪುನಃಸ್ಥಾಪಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು 'ಬ್ರಾಂಡ್ ನಾಯ್ಡು' ಎಂಬ ನಾಯಕತ್ವ-ಕೇಂದ್ರಿತ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿ, ರಾಜ್ಯಕ್ಕೆ ಬಂಡವಾಳ ಹರಿವನ್ನು ವೇಗಗೊಳಿಸುವ ಗುರಿಯೊಂದಿಗೆ, ಗೂಗಲ್, ಅಂಬಾನಿ, ಅದಾನಿ ಮುಂತಾದವರು ದಾಖಲೆಯ ಹೂಡಿಕೆ ಭರವಸೆ ನೀಡಿದ್ದಾರೆ. ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳೆರಡರಲ್ಲೂ ಗಮನಹರಿಸಿ, ರಾಜ್ಯವನ್ನು ಉನ್ನತ ಮಟ್ಟಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ.
ಮೆಕ್ಸಿಕೋದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ 'ಜೆನೆರೇಷನ್ Z' ಹೆಸರಿನಲ್ಲಿ ಸಾವಿರಾರು ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರ ವಿರೋಧಿ ಮೇಯರ್ ಹತ್ಯೆಯ ನಂತರ ಸರ್ಕಾರದ ಭದ್ರತಾ ನೀತಿಗಳ ವೈಫಲ್ಯವನ್ನು ಖಂಡಿಸಿದರು. ಈ ವೇಳೆ ಕೆಲವರು ನ್ಯಾಷನಲ್ ಪ್ಯಾಲೇಸ್ ಸುತ್ತಲಿನ ಬೇಲಿಗಳನ್ನು ಹರಿದುಹಾಕಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು.
ಏನಿದು ಲಾಲೂ ಮನೆಯಲ್ಲಿ ರೋಹಿಣಿ ಆಚಾರ್ಯ ವಿವಾದ?
ಚಿತ್ತಾಪುರದಲ್ಲಿRSS ಪಥ ಸಂಚಲನಕ್ಕೆ ಕ್ಷಣಗಣನೆ; ಸಚಿವ ಖರ್ಗೆ ತವರಲ್ಲಿ ಎಲ್ಲೆಲ್ಲೂ ಪೊಲೀಸ್ ಕಣ್ಗಾವಲು
ಕಲಬುರಗಿ: ಇಡೀ ರಾಜ್ಯದ ಗಮನ ಸೆಳೆದಿರುವ ಚಿತ್ತಾಪುರ ಪಟ್ಟಣದಲ್ಲಿನ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಕ್ಷಣಗಣನೆ ಶುರುವಾಗಿದೆ. ತಾಲೂಕಾಡಳಿತ ಅನುಮತಿಯಂತೆ ಭಾನುವಾರ ಮಧ್ಯಾಹ್ನ ಐದು ಮೂವತ್ತರವರೆಗೆ ಆರ್ ಎಸ್ ಎಸ್ ಗಣವೇಷದಾರಿಗಳ ಪಥ ಸಂಚಾಲನ ಹಾಗೂ ಬೌದ್ಧಿಕ ಕಾರ್ಯಕ್ರಮ ನಡೆಯಲಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಆರ್ ಎಸ್ ಎಸ್ 350 ಗಣ ವೇಷಧಾರಿಗಳ ಪಥಸಂಚನ ಹಿನ್ನೆಲೆ ಪಟ್ಟಣ ಇದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಪಟ್ಟಣದ ಒಳಗೆ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಒಟ್ಟಾರೆಯಾಗಿ ಇಡೀ ಪೊಲೀಸ್ ಬಂದೋಬಸ್ ನಡುವೆ ಆರ್ ಎಸ್ ಎಸ್ ಪಥಸಂಚಲಕ್ಕೆ ಕ್ಷಣಗಣನೆ ಶುರುವಾಗಿದೆ.
ಹೊಡೆಯಲು ಚಪ್ಪಲಿ ಎತ್ತಿದ್ರು; ತಂದೆಗೆ ಕಿಡ್ನಿದಾನ ಮಾಡಿದ್ದ ನನ್ನ ನಿಂದಿಸಿ ಅನಾಥೆ ಮಾಡಿದ್ರು: ಲಾಲು ಪುತ್ರಿ ರೋಹಿಣಿ
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಸಹೋದರ ತೇಜಸ್ವಿ ಯಾದವ್ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ತಮ್ಮನ್ನು ಅವಮಾನಿಸಿ, ಹೊಡೆಯಲು ಚಪ್ಪಲಿ ಎತ್ತಿದ್ದರು ಎಂದು ಹೇಳಿರುವ ರೋಹಿಣಿ, ತಾಯಿ-ತಂದೆಯ ಕಣ್ಣೀರಿಗೆ ಸಾಕ್ಷಿಯಾಗಿ ಮನೆಯಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ. ತಂದೆಗೆ ಮೂತ್ರಪಿಂಡ ದಾನ ಮಾಡಿದ್ದಕ್ಕೂ ಅವಹೇಳನ ಎದುರಿಸಿದ್ದಾಗಿ ಆರೋಪಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯಾಗುವ ಸಾಧ್ಯತೆಯಿದೆ. ನವೆಂಬರ್ 17 ರಿಂದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ನವೆಂಬರ್ 18 ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಚಳಿ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ.
GBA Election: ಜಿಬಿಎ ಚುನಾವಣೆ; ಯಾರಿಗೆಲ್ಲಾ ಟಿಕೆಟ್: ಜಿ.ಸಿ. ಚಂದ್ರಶೇಖರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 16: ಮುಂಬರುವ ಜಿಬಿಎ ಚುನಾವಣೆಗೆ ಯುವ ಕಾಂಗ್ರೆಸ್ ಮುಖಂಡರಿಗೂ ಟಿಕೆಟ್ ನೀಡುವ ಆಲೋಚನೆ ಇದೆ. ಅತ್ಯುತ್ತಮವಾಗಿ ಸಂಘಟನೆ ಮಾಡಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಕೊಳ್ಳಿ. ಇಂತಹ ಹೋರಾಟದಲ್ಲಿ ಭಾಗಿಯಾಗಿ, ಸಂಘಟನೆ ಮಾಡಬೇಕು. ಹೋರಾಟಕ್ಕೆ ಯುವ ಕಾಂಗ್ರೆಸ್ ವಿದ್ಯಾರ್ಥಿ ಕಾಂಗ್ರೆಸ್ ಕೈ ಜೋಡಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎನ್ನುವಂತೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಹೇಳಿದರು.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 16ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಈಗಾಗಲೇ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ನವೆಂಬರ್ 16) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು,
ಕಲಬುರಗಿ | ಇಂಜಿನ್ನಲ್ಲಿ ಸಮಸ್ಯೆ : ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ
ಕಲಬುರಗಿ: ಇಂಜಿನ್ ಓವರ್ ಹೀಟ್ ಆಗಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸಮೀಪವಿರುವ ಕನ್ನಡ ಭವನದ ಎದುರು ನಡೆದಿದೆ. ನಗರದ ನಿವಾಸಿ ರಾಹುಲ್ ಗುತ್ತೇದಾರ್ ಎಂಬುವವರಿಗೆ ಸೇರಿದ ಕಾರು ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂಜಿನ್ ಓವರ್ ಹೀಟ್ ಆಗಿ ಟಾಟಾ ಸಫಾರಿ ಕಾರಿಗೆ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಾರು ನಿಲ್ಲಿಸಿ, ಮಹಿಳೆಯರು, ಮಕ್ಕಳನ್ನು ಇಳಿಸಿ ದೂರ ಕರೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಮೇಶಕುಮಾರ್, ಹೊನ್ನಪ್ಪ, ಸುಭಾಷ್, ಶಂಕರಲಿಂಗ, ಶಶಿಕುಮಾರ್, ಪ್ರದೀಪ, ಮೌಲಾಸಾಬ್, ಆಶಿಫ್ ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡದಲ್ಲಿ ಜಪಾನ್ ಕಂಪನಿಯಿಂದ 600 ಕೋಟಿ ರೂ. ಹೂಡಿಕೆ; ಸ್ಥಳೀಯರಿಗೆ ಶೇ 87 ರಷ್ಟು ಉದ್ಯೋಗ
ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನೈಡೆಕ್ ಕಂಪನಿಯು 600 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಚರ್ಡ್ ಹಬ್ ಆರಂಭಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಪ್ರಗತಿ ನಿರಂತರವಾಗಿದ್ದು, ಸ್ಥಳೀಯರಿಗೆ 87% ಉದ್ಯೋಗ ದೊರಕಿರುವುದು ಗಮನಾರ್ಹ. ಇದು ಭವಿಷ್ಯದ ತಂತ್ರಜ್ಞಾನ ಮತ್ತು ಸಂಶೋಧನೆಗೆ ಗಟ್ಟಿ ನೆಲೆಯಾಗಲಿದೆ.
ಸೌಜನ್ಯ ಪರ ಹೋರಾಟಗಾರ ಜಯಂತ್.ಟಿ ಅವರು ಎಸ್.ಐ.ಟಿ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ವಿಚಾರಣೆಗೆ ಕರೆದು ಹಲ್ಲೆ, ಬೆದರಿಕೆ ಹಾಗೂ ಸುಳ್ಳು ಹೇಳಿಕೆ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದ ಬಳಿಕ ದೂರು ಸಲ್ಲಿಸಿ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಬೆಳೆ ಪರಿಹಾರ ನೀಡಿಲ್ಲ: ಬಿ ವೈ ವಿಜಯೇಂದ್ರ ವಾಗ್ದಾಳಿ
ಬೆಂಗಳೂರು,ನವೆಂಬರ್ 16: ಬೆಳೆಹಾನಿಗೆ ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿಲ್ಲ. ವೈರಲ್ ಇನ್ಫೆಕ್ಷನ್ ಆಗಿ ಭತ್ತದ ಬೆಳೆ ಹಾನಿಗೊಳಗಾಗಿದೆ. ಇವುಗಳನ್ನು ಚರ್ಚಿಸಿದ್ದು, ರಾಜ್ಯ ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ
IND Vs SA- ಸ್ಪಿನ್ನ್ ಖೆಡ್ಡಾದರಲ್ಲಿ ಬಿದ್ದ ಟೀಂ ಇಂಡಿಯಾ; ಹರಿಣಗಳೆದುರು ಕೋಲ್ಕತಾದಲ್ಲಿ ಆಘಾತಕಾರಿ ಸೋಲು!
ಸ್ಪಿನ್ ಗೆ ನೆರವು ನೀಡುತ್ತಿದ್ದ ನಲ್ಲಿ ಭಾರತ ತಂಡ ಆಫ್ರಿಕಾ ತಂಡದ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ಈ ಮೂಲಕ ಫ್ರೀಡಂ ಟ್ರೋಫಿಯ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಮುನ್ನಡೆ ಸಾಧಿಸಿದೆ. ಟೆಸ್ಟ್ ವಿಶ್ವಚಾಂಪಿಯನ್ ಆಗಿರುವ ದಕ್ಷಿಣ ಆಫ್ರಿಕಾ ತಂಡ ಇದೀಗ 15 ವರ್ಷಗಳ ನಂತರ ಭಾರತವನ್ನು ಭಾರತದಲ್ಲಿ ಟೆಸ್ಟ್ ಪಂದ್ಯದಲ್ಲಿ ಸೋಲಿಸಿದಂತಾಗಿದೆ. ಈಡನ್ ಗಾರ್ಡನ್ ನಲ್ಲಿ ನಡೆದ ದಲ್ಲಿ ಗೆಲ್ಲಲು 2ನೇ ಇನ್ನಿಂಗ್ಸ್ ನಲ್ಲಿ 124 ರನ್ ಗಳ ಸುಲಭ ಗುರಿ ಪಡೆದಿದ್ದ ಭಾರತ ತಂಡ ಗಳಿಸಲು ಸಾಧ್ಯ 93 ರನ್ ಗಳಿಗೆ ಸರ್ವಪತನ ಕಂಡಿತು. ವಾಶಿಂಗ್ಟನ್ ಸುಂದರ್ (31) ಮತ್ತು ಅಕ್ಷರ್ ಪಟೇಲ್(26) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ನಾಯಕ ವಾಗಿ ಪಂದ್ಯದಿಂದ ಹೊರಗುಳಿದದ್ದು ಸಹ ಭಾರತದ ಪಾಲಿಗೆ ಮುಳುವಾಯಿತು. ಸುಲಭ ಗುರಿಯನ್ನು ಪಡೆದಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ವೇಗಿ ಮಾರ್ಕೋ ಯಾನ್ಸನ್ ಅವರು ಆರಂಭದಲ್ಲೇ ಡಬಲ್ ಆಘಾತ ನೀಡಿದರು. ಯಶಸ್ವಿ ಜೈಸ್ವಾಲ್ ಅವರನ್ನು ಖಾತೆ ತೆರೆವ ಮೊದಲೇ ಪೆಲಿವಿಯನ್ ಗಟ್ಟಿದರು. ಇನ್ನು ಅನುಭವಿ ಕೆಎಲ್ ರಾಹುಲ್ ಅವರು 1 ರನ್ ಗಳಿಸಿದ್ದೇ ಸಾಧನೆಯಾಯಿತು. ಇಬ್ಬರನ್ನೂ ಕೀಪರ್ ವೆರಿನ್ನೆಗೆ ಕ್ಯಾಚ್ ಕೊಡಿಸುವಲ್ಲಿ ಯಾನ್ಸನ್ ಅವರು ಯಶಸ್ವಿಯಾದರು.
ಸಹಕಾರ ರಂಗ ದೇಶದ ಗ್ರಾಮೀಣ ಜನತೆಗೆ ಶಕ್ತಿ ನೀಡಿದೆ : ಯು.ಟಿ.ಖಾದರ್
72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ
ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಅತಿ ಉದ್ಧದ ಫ್ಲೈಓವರ್; 28 ಕಿ.ಮೀ ಎಲ್ಲಿಂದ ಎಲ್ಲಿಗೆ? ಆಗಮನ ನಿರ್ಗಮನ ಎಲ್ಲೆಲ್ಲಿ?
ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ. ನಮ್ಮ ಮೆಟ್ರೋ 3 ನೇ ಹಂತದಲ್ಲಿ ಜೆಪಿ ನಗರದಿಂದ ಹೆಬ್ಬಾಳದವರೆಗೆ 28.4 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಲಿದೆ. ಮೇಲ್ಭಾಗದಲ್ಲಿ ಮೆಟ್ರೋ, ಕೆಳಭಾಗದಲ್ಲಿ ವಾಹನ ಸಂಚಾರ ಇರಲಿದೆ. ಇದರಿಂದ ಔಟರ್ ರಿಂಗ್ ರಸ್ತೆಯ ದಟ್ಟಣೆ ಕಡಿಮೆಯಾಗಲಿದೆ. ಈ ಯೋಜನೆ 2030 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಟ್ಟು 9,692.33 ಕೋಟಿ ರೂ. ವೆಚ್ಚವಾಗಲಿದೆ.
'ನಿಮ್ಮ ಕುಟುಂಬ ಕುಸಿಯದಂತೆ ರಕ್ಷಿಸಿ': ಮಗಳು ರೋಹಿಣಿ ಆಚಾರ್ಯ ನಿರ್ಗಮನದ ನಂತರ ಲಾಲು-ರಾಬ್ರಿಗೆ ಬಿಜೆಪಿ ಸಂದೇಶ
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಮತ್ತು ಕುಟುಂಬದಿಂದ ದೂರವಾಗುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಾಯಕರು ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಲಾಲು ಕುಟುಂಬದೊಳಗಿನ ಬಿರುಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಗಮನವು ಆರ್ಜೆಡಿ ಕುಟುಂಬದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಜೋಧ್ ಪುರದಲ್ಲಿ ಟೆಂಪೋ–ಟ್ರಕ್ ನಡುವೆ ಭೀಕರ ಅಫಘಾತ : ಕನಿಷ್ಠ 6 ಮಂದಿ ಮೃತ್ಯು, 14 ಮಂದಿಗೆ ಗಾಯ
ಜೋಧ್ ಪುರ : ರಾಷ್ಟ್ರೀಯ ಹೆದ್ದಾರಿ–125ರ ಜೋಧಪುರ–ಬಾಲೆಸರ್ ರಸ್ತೆಯಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಧಾನ್ಯ ಚೀಲಗಳಿಂದ ತುಂಬಿದ್ದ ಟ್ರೇಲರ್ಗೆ ಢಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋಧ್ ಪುರ ಜಿಲ್ಲೆಯ ಖಾರಿ ಬೇರಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಗುಜರಾತ್ನ ಬನಸ್ಕಂತ ಹಾಗೂ ಧನ್ಸುರ ಪ್ರದೇಶಗಳಿಂದ 20 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ವಿರುದ್ಧ ದಿಕ್ಕಿನಿಂದ ಬಂದ ವೇಗದ ಟ್ರಕ್ಗೆ ಢಿಕ್ಕಿ ಹೊಡೆದಿದೆ ಎಂದು ಬಾಲೆಸರ್ ಪೊಲೀಸ್ ಠಾಣೆಯ ಎಸ್ಎಚ್ಒ ಮೂಲ್ಸಿಂಗ್ ಭಾಟಿ ಹೇಳಿದ್ದಾರೆ. ಘಟನೆಯ ತೀವ್ರತೆಗೆ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಬಾಲೆಸರ್ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಗಾಯಗೊಂಡ 14 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಧ್ ಪುರದ ಎಂಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾಟಿ ತಿಳಿಸಿದ್ದಾರೆ.
ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬಹುತೇಕ ಖಚಿತ. ಮುಂದಿನ ಮೂರು ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆಯಿದೆ. ಬಿಜೆಪಿ ಅತಿ ಹೆಚ್ಚು ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಎನ್ಡಿಎ ಮೈತ್ರಿಕೂಟದ ಘಟಕ ಪಕ್ಷಗಳು ತಮ್ಮ ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಲಿವೆ. ಇದು ನಿತೀಶ್ ಕುಮಾರ್ ಅವರ ದಾಖಲೆಯ 10ನೇ ಮುಖ್ಯಮಂತ್ರಿ ಪದಗ್ರಹಣ ಸಮಾರಂಭವಾಗಿದೆ. ಈ ಮೂಲಕ ನಿತೀಶ್ ಕುಮಾರ್ ಹೊಸ ಇತಿಹಾಸ ರಚಿಸಲಿದ್ದಾರೆ.
Ind Vs SA- ಟೀಂ ಇಂಡಿಯಾಗೆ ಅನಿರೀಕ್ಷಿತ ಆಘಾತ! ಗಾಯಗೊಂಡ ಶುಭಮನ್ ಗಿಲ್ ಮರಳಿ ಕಣಕ್ಕೆ ಯಾವಾಗ?
India Vs South Africa- ಕುತ್ತಿಗೆ ನೋವಿನಿಂದಾಗಿ ಮೈದಾನದಿಂದಲೇ ಹೊರ ತೆರಳಿದ್ದ ನಾಯಕ ಶುಭಮನ್ ಗಿಲ್ ಇದೀಗ ಕೋಲ್ಕತ್ತಾ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಪ್ರಸಂಗ ಎದುರಾಗಿದೆ. ಎರಡನೇ ದಿನದಾಟದ ವೇಳೆ ಗಾಯಗೊಂಡಿದ್ದ ಅವರಿಗೆ ಮೈದಾನದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಿಸಿಸಿಐನ ವೈದ್ಯಕೀಯ ತಂಡ ನಿಗಾ ವಹಿಸಿದೆ. ಇದೀಗ ಉಪನಾಯಕ ರಿಷಬ್ ಪಂತ್ ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಎರಡನೇ ಟೆಸ್ಟ್ನಲ್ಲಿ ಗಿಲ್ ಲಭ್ಯತೆ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಮಂಗಳೂರು | ಸಹಕಾರ ಸಪ್ತಾಹ ಮೆರವಣಿಗೆ ಉದ್ಘಾಟನೆ
ಮಂಗಳೂರು : 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಸಹಕಾರ ಸಪ್ತಾಹ ಆಚರಣೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಆಕರ್ಷಕ ಮೆರವಣಿಗೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಬ್ಯಾಂಕಿನ ಆವರಣದಲ್ಲಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ವೈವಿಧ್ಯತೆಯನ್ನೊಳಗೊಂಡ ಸಹಕಾರ ಮೆರವಣಿಗೆಯಲ್ಲಿ ಸಹಕಾರ ಸಂಘಗಳು ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರು ಈ ಸಹಕಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈಮಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ಕೆ.ಎಂ.ಎಫ್. - ನಂದಿನಿ ಆನ್ ವೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ. ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ. ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 50 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಮಂಜುನಾಥ ಭಂಡಾರಿ, ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಐಕಳ ದೇವಿ ಪ್ರಸಾದ್ ಶೆಟ್ಟಿ, ಜಯರಾಜ ರೈ,ಮೋನಪ್ಪ ಶೆಟ್ಟಿ ಎಕ್ಕಾರ್, ಭಾಸ್ಕರ ಎಸ್ ಕೋಟ್ಯಾನ್, ಸದಾಶಿವ ಉಳ್ಳಾಲ್, ಶಶಿ ಕುಮಾರ್ ರೈ ಬಾಲ್ಯೋಟ್ಟು, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಇಲಾಖೆಯ ಉಪ ರಿಜಿಸ್ಟ್ರಾರ್ ರಮೇಶ್, ಸಹಕಾರ ಇಲಾಖೆ ಪುತ್ತೂರಿನ ಸಹಾಯಕ ರಿಜಿಸ್ಟರ್ ರಘು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಬ್ಯಾಂಕ್ನಿಂದ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಹಣ ಬಿಹಾರ ವಿಧಾನಸಭೆಗೆ ಬಳಕೆ: ಜನಸುರಾಜ್ ಆರೋಪ
ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಶ್ವ ಬ್ಯಾಂಕ್ನಿಂದ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ 14,000 ಕೋಟಿ ರೂಪಾಯಿಗಳನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರಿಗೆ 10,000 ರೂಪಾಯಿ ನಗದು ವರ್ಗಾವಣೆಗೆ ಬಳಸಲಾಗಿದೆ ಎಂದು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಆರೋಪಿಸಿದೆ. ಈ ಕ್ರಮವು ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಪಕ್ಷವು ಹೇಳಿದ್ದು, ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.
ನವೆಂಬರ್ 16ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 16) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ಛತ್ತೀಸ್ ಗಢ | ಭದ್ರತಾ ಪಡೆಗಳಿಂದ ಮೂವರು ಮಾವೋವಾದಿಗಳ ಹತ್ಯೆ
ಸುಕ್ಮಾ (ಛತ್ತೀಸ್ ಗಢ): ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಮಾವೋವಾದಿಗಳು ಮೃತಪಟ್ಟಿರುವ ಘಟನೆ ರವಿವಾರ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್, ಮಾವೋವಾದಿಗಳ ಕುರಿತ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ನಡೆಸಿದೆ. ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ” ಎಂದು ತಿಳಿಸಿದ್ದಾರೆ. “ಗುಂಡಿನ ಚಕಮಕಿಯಲ್ಲಿ ಇಲ್ಲಿಯವರೆಗೆ ಮೂವರು ಮಾವೋವಾದಿಗಳು ಮೃತಪಟ್ಟಿದ್ದು, ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.
ಬೆಳಗಾವಿ ಮೃಗಾಲಯದಲ್ಲಿ 3 ದಿನಗಳಲ್ಲಿ 28 ಕೃಷ್ಣಮೃಗಗಳ ಸಾವು: ಬ್ಯಾಕ್ಟೀರಿಯಾ ಸೋಂಕು ಶಂಕೆ, ತನಿಖೆಗೆ ಆದೇಶ
ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವನ್ನಪ್ಪಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅರಣ್ಯ ಸಚಿವರು ತಜ್ಞರ ತನಿಖೆಗೆ ಆದೇಶಿಸಿದ್ದಾರೆ. ಉಳಿದ ಪ್ರಾಣಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ಮೃಗಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಭಾರತ ಮತ್ತು ನೇಪಾಳದಲ್ಲಿ ಕಂಡುಬರುವ ಕೃಷ್ಣಮೃಗಗಳು ಮಧ್ಯಮ ಗಾತ್ರದ ಹುಲ್ಲೆಗಳಾಗಿವೆ. ಅವುಗಳ ಸೊಗಸಾದ ವೇಗ, ಆಕರ್ಷಕ ರೂಪ ಮತ್ತು ಸಾಂಸ್ಕೃತಿಕ ಮಹತ್ವವು ಅವುಗಳನ್ನು ವಿಶಿಷ್ಟಗೊಳಿಸಿವೆ.
ಜಮ್ಮುಕಾಶ್ಮೀರ | ಟಾಟಾ ಸುಮೋ- ಟ್ರಕ್ ನಡುವೆ ಭೀಕರ ಅಪಘಾತ : ನಾಲ್ವರು ಮೃತ್ಯು, ಐವರಿಗೆ ಗಾಯ
ಶ್ರೀನಗರ: ಟಾಟಾ ಸುಮೋ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಜಮ್ಮುಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 10.30ರ ವೇಳೆಗೆ ಬುಡ್ಗಾಮ್ ನ ಪಾಲ್ಗರ್ ಬಳಿ ಟಾಟಾ ಸುಮೋ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಒಂಭತ್ತು ಮಂದಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ನಾಲ್ವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
IND Vs SA- ಹರಿಣಗಳ ಗೋಳು ಹೊಯ್ದುಕೊಂಡ ಆಲ್ರೌಂಡರ್ ರವೀಂದ್ರ ಜಡೇಜಾ 2 ಹೊಸ ಮೈಲಿಗಲ್ಲು!
India Vs South Africa- ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ 4 ಪ್ರಮುಖ ವಿಕೆಟ್ ಗಳನ್ನು ಪಡೆಯುವ ಮೂಲಕ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ. ಭಾರತದಲ್ಲಿ 250 ಟೆಸ್ಟ್ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಗೌರವಕ್ಕೆ ಅವರು ಈಗ ಪಾತ್ರರಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ 150 ವಿಕೆಟ್ ಮತ್ತು 2500 ರನ್ ಗಳಿಸಿದ ಮೊದಲ ಆಟಗಾರ ಅವರಾಗಿದ್ದಾರೆ.
ಉಳ್ಳಾಲ | ಖಾಸಗಿ ಕಾಲೇಜು ವಿದ್ಯಾರ್ಥಿ ನಾಪತ್ತೆ : ಪ್ರಕರಣ ದಾಖಲು
ಉಳ್ಳಾಲ: ದೇರಳಕಟ್ಟೆ ಖಾಸಗಿ ಕಾಲೇಜು ವಿದ್ಯಾರ್ಥಿ ಮಾಲಿಕ್ ಅಬೂಬಕರ್ ನಾಪತ್ತೆಯಾದ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪಾಲಕ್ಕಾಡ್ ನಿವಾಸಿ ರಾಬಿಯ, ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್ ಅವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್ವೈಎಸ್ ಶಿಕ್ಷಣ ಪಡೆಯುತ್ತಿದ್ದು, ಅವರು ತಅಬ್ದುಲ್ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದರು. ನ.13 ರಂದು ರಾತ್ರಿ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ . ಈ ಕುರಿತು ಮಾಲೀಕ್ ಅಬೂಬಕರ್ ಅವರ ತಾಯಿಯ ತಮ್ಮ ಫಿಸಿಯೊತೆರಪಿ ವೈದ್ಯ ಅಝ್ಮಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಕ್ಸಿಕೋದಲ್ಲಿ ಮೇಯರ್ ಹತ್ಯೆ ಬಳಿಕ ಭುಗಿಲೆದ್ದ ಆಕ್ರೋಶ : ‘ಜೆನ್ ಝಡ್’ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ
ಮೆಕ್ಸಿಕೋ ನಗರ : ಅಪರಾಧದ ವಿರುದ್ಧ ಹೋರಾಡುತ್ತಿದ್ದ ಉರುಪಾನ್ ಮೇಯರ್ ಕಾರ್ಲೋಸ್ ಮಾಂಜೊ ಅವರನ್ನು ನ.1ರಂದು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಳಿಕ ಮೆಕ್ಸಿಕೋದಲ್ಲಿ ಯುವ ಜನತೆ ಆಕ್ರೋಶ ಹೊರಹಾಕಿದ್ದಾರೆ. ಶನಿವಾರ “ಜನರೇಷನ್ ಝಡ್” ಬ್ಯಾನರ್ ಅಡಿಯಲ್ಲಿ ಸಾವಿರಾರು ಯುವಕರು ದೇಶದಾದ್ಯಂತ ಬೀದಿಗಿಳಿದು ಹಿಂಸಾಚಾರ ಮತ್ತು ಸರಕಾರದ ವೈಫಲ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜಧಾನಿ ಮೆಕ್ಸಿಕೋ ನಗರದಲ್ಲಿನ ಪ್ರತಿಭಟನೆಗಳು ತೀವ್ರತೆಯನ್ನು ಪಡೆದವು. ಮುಖ ಮುಚ್ಚಿಕೊಂಡಿದ್ದ ಕೆಲವು ಪ್ರತಿಭಟನಾಕಾರರು ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ವಾಸಿಸುವ ರಾಷ್ಟ್ರೀಯ ಅರಮನೆಗೆ ಹಾಕಿದ್ದ ಬೇಲಿಗಳನ್ನು ಕೆಡವಲು ಮುಂದಾದ ಪರಿಣಾಮ ಗಲಭೆ ಸೃಷ್ಟಿಯಾಗಿದೆ. ಪೊಲೀಸರು ಅಶ್ರುವಾಯು ಬಳಸಿ ಗಲಭೆಕೋರರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 20 ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕ ಸುರಕ್ಷತಾ ಕಾರ್ಯದರ್ಶಿ ಪ್ಯಾಬ್ಲೊ ವಾಜ್ಕ್ವೆಜ್ ತಿಳಿಸಿದ್ದಾರೆ. ಮೈಕೋವಕನ್ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಮೆರವಣಿಗೆಗಳಲ್ಲಿ ಯುವಕರು ಮೇಯರ್ ಮಾಂಜೊ ಅವರ ಹತ್ಯೆಯನ್ನು ಖಂಡಿಸಿ ಸರಕಾರದ ವಿರುದ್ಧ ಕಿಡಿಕಾರಿದರು. “ಕಾರ್ಲೋಸ್ ಸಾಯಲಿಲ್ಲ, ಸರಕಾರವೇ ಅವನನ್ನು ಕೊಂದಿತು”, “ಔಟ್ ಮೊರೆನಾ” ಎಂಬ ಘೋಷಣೆಗಳಿಂದ ರಾಜಧಾನಿ ಬೀದಿಗಳಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಕರೆ ನೀಡಿದ ‘ಜನರೇಷನ್ ಝಡ್ ಮೆಕ್ಸಿಕೋ’ ಸಂಘಟನೆ, ಪಕ್ಷಾತೀತವಾಗಿರುವುದಾಗಿ ಹೇಳಿಕೊಂಡಿದೆ. “ಹಿಂಸೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಕ್ಕೆ ಬೇಸತ್ತ ಯುವಜನರ ಧ್ವನಿ ನಾವು” ಎಂದು ತಿಳಿಸಿದೆ.

21 C