ಬೆಂಗಳೂರು, ನವೆಂಬರ್ 25: ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು . ಇಂದು ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂಲತ: ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕಾದಲ್ಲಿ
ಕಾಂಗ್ರೆಸ್ ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ : ಬಿ.ವೈ.ವಿಜಯೇಂದ್ರ
ದಾವಣಗೆರೆ : ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇವತ್ತು ಹೋರಾಟಕ್ಕೆ ಚಾಲನೆ ನೀಡಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಂಗಳವಾರ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ನಡಹಳ್ಳಿ, ರಾಜ್ಯದ ಹಿರಿಯ ನಾಯಕ ಸಿ.ಟಿ.ರವಿ, ಮುಖಂಡರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿ ಜಿಲ್ಲೆಯ ನಾಯಕರು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿರುವ ರೈತವಿರೋಧಿ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಟೀಕಿಸಿದರು. ಮೆಕ್ಕೆ ಜೋಳದ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ ಹೋರಾಟ ನಡೆಯುತ್ತಿದೆ. ನವಲಗುಂದದಲ್ಲಿ ರೈತ ಮುಖಂಡ ಶಂಕ್ರಣ್ಣ ಅಂಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಾಗಲಕೋಟೆ, ಶಿವಮೊಗ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರವು ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರಕಾರವು ಖರೀದಿ ಕೇಂದ್ರ ತೆರೆದಿಲ್ಲ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಅಣೆಕಟ್ಟಿಗೆ 32 ಕ್ರಸ್ಟ್ ಗೇಟ್ ಅಳವಡಿಸದೇ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸುತ್ತಲಿನ ರೈತರು ಎರಡನೇ ಬೆಳೆ ಬೆಳೆಯಲು ಆಗುತ್ತಿಲ್ಲ. ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಒತ್ತಾಯಿಸಿದರು. ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೇ ಇಡೀ ಸಚಿವಸಂಪುಟವು ದೆಹಲಿಯಲ್ಲಿ ಕುಳಿತಿದೆ. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರದ ಕುರಿತು ಚರ್ಚಿಸಲು ಸಭೆ ಕರೆದರೆ ಕೃಷಿ ಸಚಿವರು ದೆಹಲಿಯಲ್ಲಿದ್ದರು ಎಂದು ಟೀಕಿಸಿದರು. ಮುಖ್ಯಮಂತ್ರಿ ಯಾರೆಂಬುದು ನಮಗೆ ಸಂಬಂಧವಿಲ್ಲ. ರೈತರ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ನ.27, 28ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. ಡಿ.1 ಮತ್ತು 2ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ರೈತ ಮೋರ್ಚಾ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಮಂತ್ರಿಗಿರಿಗೆ ₹80,00,00,000 ವಸೂಲಿ: ಪ್ರಿಯಾಂಕ್ ಖರ್ಗೆ ಹೀಗಂದಿದ್ದೇಕೆ?
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ಶಾಸಕರನ್ನು ಸಿಎಂ ಕುರ್ಚಿಗಾಗಿ ಕೋಟಿಗಟ್ಟಲೆ ಆಫರ್ ಕೊಟ್ಟು ಖರೀದಿ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಒಬ್ಬ ಶಾಸಕರಿಗೆ 50 ಕೋಟಿ ಫಿಕ್ಸ್ ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕೂಡ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ
ಮಂಗಳೂರು | ಮಂಜನಾಡಿ–ಅನ್ಸಾರ್ ನಗರದಲ್ಲಿ ದಫ್ ಸ್ಪರ್ಧೆ, ಸಾಧಕರಿಗೆ ಸನ್ಮಾನ
ಮಂಗಳೂರು : ಮಂಜನಾಡಿ-ಅನ್ಸಾರ್ ನಗರದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ.22 ರಂದು ರಾತ್ರಿ ಇಲ್ಲಿನ ಮರ್ ಹೂಂ ಶೈಖುನಾ ಮಂಜನಾಡಿ ಸಿ ಪಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ದುವಾ ನೆರವೇರಿಸಿದರು. ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಗೌರವಾಧ್ಯಕ್ಷ, ಅನ್ಸಾರ್ ನಗರ ಬಿಲಾಲ್ ಮಸೀದಿ ಅಧ್ಯಕ್ಷ ಹಾಜಿ ಎನ್ ಎಸ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಕುದುಂಬ್ಲಾಡಿ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಅಲ್ಖಾಮಿಲಿ ಉದ್ಘಾಟಿಸಿದರು. ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮುಖ್ಯ ಭಾಷಣಗೈದರು. ಇದೇ ವೇಳೆ ಪಡೀಲ್ ಜನಪ್ರಿಯಾ ಆಸ್ಪತ್ರೆ ಸಿಇಒ ಹಾಗೂ ಡೈರೆಕ್ಟರ್ ಡಾ.ಕಿರಾಶ್ ಪರ್ತಿಪ್ಪಾಡಿ, ನರಿಂಗಾನ ಅಲ್-ಮದೀನಾ ಪಾಲಿಕ್ಲಿನಿಕ್ ಡೈರೆಕ್ಟರ್ ಡಾ.ಮುಹಮ್ಮದ್ ಫಯಾಝ್ ಹಾಗೂ ಕುಟ್ಯಾಡಿ ಜಮೀಯ್ಯತುಲ್ ಹಿಂದ್ ಅಲ್-ಇಸ್ಲಾಮಿಯ್ಯ ಸಂಸ್ಥೆಯಿಂದ ಹಾದಿ ಬಿರುದು ಪಡೆದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ ಹಳೆ ವಿದ್ಯಾರ್ಥಿ ಹಾಫಿಳ್ ನೌಫಲ್ ಹಾದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನ್ಸಾರ್ ನಗರ ಬಿಲಾಲ್ ಮಸೀದಿ ಇಮಾಂ ಅಬ್ಬಾಸ್ ಸಖಾಫಿ, ನೆಕ್ಕರೆ ಮದ್ರಸ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಸದರ್ ಮುಅಲ್ಲಿಂ ಝೈನುಲ್ ಆಬಿದೀನ್ ಮದನಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ನಾಗರಾಜ್, ಮುಡಿಪು ಸರ್ಕಲ್ ಕೆಎಂಜೆ ಅಧ್ಯಕ್ಷ ಹಾಜಿ ಎಸ್ ಕೆ ಖಾದರ್, ನರಿಂಗಾನ ಗ್ರಾ ಪಂ ಅಧ್ಯಕ್ಷ ನವಾಝ್, ಸದಸ್ಯ ಸಲೀಂ ಪೊಟ್ಟೊಳಿಕೆ, ಮರಿಕ್ಕಳ ಜುಮಾ ಮಸೀದಿ ಅಧ್ಯಕ್ಷ ಜಲೀಲ್ ಮೋಂಟುಗೋಳಿ, ಮಂಜನಾಡಿ ಗ್ರಾ ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಅಸೈ, ಕೊಣಾಜೆ ಗ್ರಾ ಪಂ ಮಾಜಿ ಅಧ್ಯಕ್ಷರಾದ ನಝರ್, ಶೌಕತ್, ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಹಾಜಿ ಎನ್ ಎಂ ಅಹ್ಮದ್ ಕುಂಞ (ನೆಕ್ಕರೆ ಬಾವು), ಗುತ್ತಿಗೆದಾರ ನಝೀರ್ ಮದ್ದಾಡಿ, ಅನ್ಸಾರ್ ನಗರ ಬದ್ರಿಯಾ ಮದ್ರಸ ಅಧ್ಯಕ್ಷ ಮನ್ಸೂರ್ ಯು ಎಸ್, ಉಪಾಧ್ಯಕ್ಷ ಮೋನು ಕೊಳ, ಬಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ, ಎಂ ಇ ಮೊಯಿದೀನ್ ಕುಂಞ, ಮಂಜನಾಡಿ ಗ್ರಾ ಪಂ ಸದಸ್ಯರಾದ ಇಲ್ಯಾಸ್ ಮೇಗಿನಮನೆ, ಇಸ್ಮಾಯಿಲ್ ಬಾವು, ನೆಕ್ಕರೆ ಅಲ್-ಅಮೀನ್ ಚಾರಿಟಿ ಅಧ್ಯಕ್ಷ ಸನಾವುಲ್ಲಾ, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಮಂಗಳಾಂತಿ ಎಂಯುಎಂ ಅಧ್ಯಕ್ಷ ಹಮೀದ್ ಕುಚ್ಚಿಗುಡ್ಡೆ, ಉದ್ಯಮಿಗಳಾದ ಅಬ್ದುಲ್ಲ, ಹಾಜಿ ಖಲಂದರ್, ಮೋರ್ಲ ರಿಫಾಯಿಯ ಮಸೀದಿ ಅಧ್ಯಕ್ಷ ಶಂಸು, ಅನ್ಸಾರ್ ನಗರ ಎಸ್ ವೈ ಎಸ್ ಯುನಿಟ್ ಅಧ್ಯಕ್ಷ ವಹಾಬ್, ಅನ್ಸಾರ್ ನಗರ ರಿಫಾಯಿಯ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷ ಸವಾದ್ ಕೊಳ, ಉಪಾಧ್ಯಕ್ಷರಾದ ಹನೀಫ್ ಹಾಜಿ ಪರಮಾಂಡ, ರಿಯಾಝ್ ಅನ್ಸಾರ್ ನಗರ, ಪ್ರಧಾನ ಕಾರ್ಯದರ್ಶಿ ರಾಶಿದ್, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಆಸಿಫ್ ಯು ಎಸ್ ಮೊದಲಾದವರು ಭಾಗವಹಿಸಿದ್ದರು. ಅನ್ಸಾರ್ ನಗರ ಬದ್ರಿಯಾ ಮದ್ರಸ ಸದರ್ ಮುಅಲ್ಲಿಂ ಉಮರುಲ್ ಫಾರೂಕ್ ಸಖಾಫಿ ಸ್ವಾಗತಿಸಿ, ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು. ಅಲ್-ಜಝೀರಾ ತಂಡಕ್ಕೆ ಪ್ರಶಸ್ತಿ : ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟದಲ್ಲಿ ಉಳ್ಳಾಲ-ಅಕ್ಕರೆಕರೆಯ ಅಲ್-ಜಝೀರಾ ದಫ್ ತಂಡ ಪ್ರಥಮ ಸ್ಥಾನ ಪಡೆದರೆ, ರೆಂಜಾಡಿ ತಾಜುಲ್ ಹುದಾ ದಫ್ ತಂಡ ದ್ವಿತೀಯ ಸ್ಥಾನ ಹಾಗೂ ಕೂಳೂರು ಮುಹಿಯುದ್ದೀನ್ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಹೊಸದಿಲ್ಲಿ: ದೇವಸ್ಥಾನವೊಂದರ ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸಿದ್ದ ಕ್ರಿಶ್ಚಿಯನ್ ಸೇನಾಧಿಕಾರಿಯನ್ನು ವಜಾಗೊಳಿಸಿದ್ದನ್ನು ಮಂಗಳವಾರ ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ಒಂದು ಸಂಸ್ಥೆಯಾಗಿ ಸೇನೆಯು ಜಾತ್ಯತೀತವಾಗಿದೆ ಮತ್ತು ಅದರ ಶಿಸ್ತನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿದೆ. ಅಶಿಸ್ತಿಗಾಗಿ ಅಧಿಕಾರಿ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ನೀವು ನಿಮ್ಮ ಯೋಧರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದೀರಿ,ನೀವು ಸೇನೆಯಲ್ಲಿರಲು ಸಂಪೂರ್ಣ ಅನರ್ಹರಾಗಿದ್ದೀರಿ ಎಂದು ಹೇಳಿತು. ಸಿಖ್ ಸ್ಕ್ವಾಡ್ರನ್ಗೆ ನಿಯೋಜಿಸಲ್ಪಟ್ಟಿದ್ದ ಕಮಲೇಶನ್ ದೇವಸ್ಥಾನವನ್ನು ಪ್ರವೇಶಿಸುವಂತೆ ಒತ್ತಾಯಿಸುವುದು ತನ್ನ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ತನ್ನ ವಿರುದ್ಧದ ಶಿಸ್ತು ಕ್ರಮವನ್ನು ಪ್ರಶ್ನಿಸಿದ್ದರು. ಆದರೆ,ಸರ್ವೋಚ್ಚ ನ್ಯಾಯಾಲಯವು ಅವರ ನಡವಳಿಕೆಯು ಕಾನೂನುಬದ್ಧ ಆದೇಶದ ಅವಿಧೇಯತೆಗೆ ಸಮನಾಗಿದೆ ಎಂದು ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಲ್ಯ ಬಾಗ್ಚಿ ಅವರ ಪೀಠವು, ಕಮಲೇಶನ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಸಮರ್ಥಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ‘ಅವರು ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಸೇನಾಧಿಕಾರಿಯೊಬ್ಬರು ತೀವ್ರ ಅಶಿಸ್ತನ್ನು ಪ್ರದರ್ಶಿಸಿದ್ದಾರೆ, ಕೇವಲ ಇದೊಂದೇ ಕಾರಣಕ್ಕಾಗಿ ಅವರನ್ನು ಹೊರಹಾಕಬೇಕಿತ್ತು’ ಎಂದು ದಿಲ್ಲಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸುತ್ತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು. ಕಮಲೇಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು, ‘ಹೆಚ್ಚಿನ ರೆಜಿಮೆಂಟ್ಗಳ ಪ್ರಧಾನ ಕಚೇರಿಗಳಲ್ಲಿ ಸರ್ವ ಧರ್ಮ ಸ್ಥಳವಿದೆ, ಆದರೆ ಪಂಜಾಬಿನ ಮಾಮುಮ್ನಲ್ಲಿ ದೇವಸ್ಥಾನ ಮತ್ತು ಗುರುದ್ವಾರ ಮಾತ್ರ ಇವೆ. ನನ್ನ ಕಕ್ಷಿದಾರರು ಗರ್ಭಗುಡಿಯನ್ನು ಪ್ರವೇಶಿಸುವುದು ತನ್ನ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿ ದೇವಸ್ಥಾನದೊಳಗೆ ಅಡಿಯಿರಿಸಲು ನಿರಾಕರಿಸಿದ್ದರು. ತಾನು ಹೊರಗಿನಿಂದಲೇ ಹೂವುಗಳನ್ನು ಅರ್ಪಿಸುತ್ತೇನೆ, ಆದರೆ ಒಳಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ಬೇರೆ ಯಾರಿಗೂ ಇದು ಸಮಸ್ಯೆ ಅನ್ನಿಸಿರಲಿಲ್ಲ, ಆದರೆ ಓರ್ವ ಉನ್ನತ ಅಧಿಕಾರಿ ಶಿಸ್ತು ಕ್ರಮವನ್ನು ಆರಂಭಿಸಿದ್ದರು’ ಎಂದು ವಾದಿಸಿದರು. ಶಿಸ್ತುಬದ್ಧ ಪಡೆಯಲ್ಲಿ ಇಂತಹ ಜಗಳಗಂಟ ವ್ಯಕ್ತಿ ಸ್ವೀಕಾರಾರ್ಹರೇ? ಅವರು ಭಾರತದ ಅತ್ಯಂತ ಶಿಸ್ತುಬದ್ಧ ಪಡೆಯ ಸದಸ್ಯ. ಅವರು ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದ ಪೀಠವು, ಇದು ಓರ್ವ ಸೇನಾಧಿಕಾರಿಯಿಂದ ಅತ್ಯಂತ ಘೋರ ಅಶಿಸ್ತನ್ನು ಪ್ರದರ್ಶಿಸುತ್ತದೆ ಎಂದು ಹೇಳಿತು. ತಾನು ಸರ್ವಧರ್ಮ ಸ್ಥಳವನ್ನು ಪ್ರವೇಶಿಸಲು ನಿರಾಕರಿಸಿರಲಿಲ್ಲ,ಆಚರಣೆಗಳನ್ನು ಮಾಡುವುದನ್ನು ಮಾತ್ರ ನಿರಾಕರಿಸಿದ್ದೆ ಎಂಬ ಕಮಲೇಶನ್ ವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,ಅವರ ಕೃತ್ಯವು ಅವರದೇ ಯೋಧರಿಗೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿತು. ‘ಅಧಿಕಾರಿ ಎಷ್ಟೊಂದು ದುರಹಂಕಾರಿಯೆಂದರೆ ಅವರು ತನ್ನ ಯೋಧರೊಂದಿಗೆ ಹೋಗುವುದಿಲ್ಲ. ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಧಾರ್ಮಿಕ ವಿಧಿಗಳನ್ನು ನೆರವೇರಿಸುವಂತೆ ನಿಮ್ಮನ್ನು ಯಾರಾದರೂ ಕೇಳಿದರೆ ಅದು ಬೇರೆ ವಿಷಯ ಮತ್ತು ನೀವು ಇಲ್ಲ ಎನ್ನಬಹುದು. ಆದರೆ ಒಳ ಪ್ರವೇಶಿಸಲು ನೀವು ಹೇಗೆ ನಿರಾಕರಿಸುತ್ತೀರಿ?’ ಎಂದು ಪ್ರಶ್ನಿಸಿದ ಪೀಠವು, ದೇವಸ್ಥಾನವನ್ನು ಪ್ರವೇಶಿಸಿದರೆ ನಂಬಿಕೆಗೆ ಚ್ಯುತಿಯುಂಟಾಗುವುದಿಲ್ಲ ಎಂದು ಅವರ ಪ್ಯಾಸ್ಟರ್ ಹೇಳಿದ್ದರೂ ಅವರು ಕಡೆಗಣಿಸಿದ್ದರು ಎಂದು ಬೆಟ್ಟು ಮಾಡಿತು.
ಮಂಗಳೂರು | ʼಮಾದರಿ ಮದುವೆʼ ಪ್ರೊಮೋಶನ್ ಕೌನ್ಸಿಲ್ ಅಸ್ತಿತ್ವಕ್ಕೆ
ಮಂಗಳೂರು: ಮದುವೆಗಳನ್ನು ಅನಾಚಾರಮುಕ್ತಗೊಳಿಸುವ ಮತ್ತು ಮದುವೆಯ ಆರ್ಥಿಕ ಭಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ: ಶತದಿನ ಅಭಿಯಾನ'ದ ಯಶಸ್ಸಿಗಾಗಿ ಪ್ರೊಮೋಶನ್ ಕೌನ್ಸಿಲ್ ರೂಪಿಸಲಾಯಿತು. ಇದರ ಚೇರ್ಮಾನ್ ಆಗಿ ಡಾ.ಶೇಖ್ ಬಾವ ಹಾಜಿ, ಕನ್ವೀನರ್ ಆಗಿ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಹಾಗೂ ಕೋರ್ಡಿನೇಟರ್ ಆಗಿ ಮುಹಮ್ಮದ್ ಅಲೀ ತುರ್ಕಳಿಕೆ ಅವರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಮುಹ್ಯಿದ್ದೀನ್ ಸಖಾಫಿ ತೋಕೆ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಹನೀಫ್ ಹಾಜಿ ಉಳ್ಳಾಲ, ಕಾರ್ಯದರ್ಶಿಗಳಾಗಿ ಕೆಕೆಎಂ ಕಾಮಿಲ್ ಸಖಾಫಿ ಮತ್ತು ಮುಹಮ್ಮದ್ ಮದನಿ ಪೂಡಲ್, ಸದಸ್ಯರಾಗಿ ಜಿ.ಎಂ.ಕಾಮಿಲ್ ಸಖಾಫಿ, ಹಮೀದ್ ಹಾಜಿ ಕೊಡುಂಗಾಯಿ, ಮನ್ಸೂರ್ ಕೋಡಿ ಕುಂದಾಪುರ, ಇಕ್ಬಾಲ್ ಕೃಷ್ಣಾಪುರ, ಮುಜೀಬ್ ಕೊಡಗು, ತೌಸೀಫ್ ಅಸ್ಅದಿ ಅವರನ್ನು ಆಯ್ಕೆಮಾಡಲಾಯಿತು. ಈ ಸಂಬಂಧ ಮಂಗಳೂರಿನ ಎಸ್ ವೈ ಎಸ್ ರಾಜ್ಯ ಕಚೇರಿಯಲ್ಲಿ ನಡೆದ ಸಾರಥ್ಯ ಸಂಗಮದಲ್ಲಿ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು. ಜಂಇಯತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರಾದ ಜಿ ಎಂ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಡಾ.ಝೈನಿ ಕಾಮಿಲ್, ಎಸ್.ಎಂ.ಎ. ಉಪಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಜಂಇಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಪೂಡಲ್, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆ, ಉಳ್ಳಾಲ ದರ್ಗಾಧ್ಯಕ್ಷ ಹನೀಫ್ ಹಾಜಿ, ಕೆ ಸಿ ಎಫ್ ಮಾಜಿ ಅಧ್ಯಕ್ಷ ಡಾ ಶೇಖ್ ಬಾವ, ಕೆಎಂಜೆ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಪು ಮಾತನಾಡಿದರು. ಹಫೀಳ್ ಸಅದಿ ಮಡಿಕೇರಿ, ಕೆ.ಎಚ್.ಇಸ್ಮಾಯಿಲ್ ಸಅದಿ, ಅನಸ್ ಸಿದ್ದೀಖಿ ಶಿರಿಯ, ಇಸ್ಮಾಯಿಲ್ ಸಅದಿ ಉರುಮನೆ, ಕಲ್ಕಟ್ಟ ರಝ್ವಿ ಉಡುಪಿ, ಇಬ್ರಾಹೀಂ ಖಲೀಲ್ ಮಾಲಿಕಿ, ಮಹ್ಬೂಬ್ ಸಖಾಫಿ ಕಿನ್ಯ, ಇಬ್ರಾಹೀಂ ನಈಮಿ ಉರುಮಣೆ ಉಪಸ್ಥಿತರಿದ್ದರು. ಕೆ.ಎಂ.ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಮನ್ಸೂರ್ ಅಲಿ ಶಿವಮೊಗ್ಗ ವಂದಿಸಿದರು.
'ಭಯ್ಯ ಅನ್ನಬೇಡಿ' ಸೇರಿದಂತೆ ಪ್ರಯಾಣಿಕರಿಗೆ 6 ನಿಯಮಗಳನ್ನ ಹಾಕಿದ ಬೆಂಗಳೂರು ಕ್ಯಾಬ್ ಚಾಲಕ! ಫೋಟೋ ವೈರಲ್
ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗಾಗಿ ರೂಪಿಸಿದ ಆರು ನಿಯಮಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಿಯಮಗಳು ಪ್ರಯಾಣಿಕರ ವರ್ತನೆ, ಗೌರವ ಮತ್ತು ಚಾಲಕರೊಂದಿಗೆ ಅವರ ಒಪ್ಪಂದದ ಬಗ್ಗೆ ಹೇಳುತ್ತವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನೆಟ್ಟಿಗರೊಬ್ಬರು ಚಾಲಕರಿಗೂ ಅನ್ವಯವಾಗುವ ನಿಯಮಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ: ಬೂದಿ ಮೋಡಗಳು ಭಾರತದಿಂದ ತೆರವಾಗುವುದು ಯಾವಾಗ? ಮುಂದೆ ಏನಾಗುತ್ತೆ?
ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹಾಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮವಾಗಿ ಹೊರಹೊಮ್ಮಿದ ಬೂದಿ ಮೋಡಗಳು ಬಲವಾದ ಮೇಲ್ಮಟ್ಟದ ಗಾಳಿಯ ಸಹಾಯದಿಂದ ಅರಬ್ಬಿ ಸಮುದ್ರದ ಮೂಲಕ ಭಾರತದ ವಾಯುವ್ಯ ಮತ್ತು ಪಶ್ಚಿಮ ಭಾಗಗಳನ್ನು ತಲುಪಿವೆ.. ಇದರಿಂದಾಗಿ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ-ಎನ್ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋಚರತೆ ಕಡಿಮೆಯಾಗಿ ವಿಮಾನಯಾನ ಕಾರ್ಯಾಚರಣೆಗಳಿಗೆ ಅಲ್ಪ ಮಟ್ಟಿಗೆ ಅಡ್ಡಿಯುಂಟಾಗಿದೆ. ಸಂಜೆ 7:30 ರೊಳಗೆ ಸಂಪೂರ್ಣವಾಗಿ ತೆರವಾಗಲಿವೆ ಮತ್ತು ಮೋಡವು ಈಗ ಚೀನಾದತ್ತ ಚಲಿಸುತ್ತಿದೆ.
ಭಾರತ-ಕೆನಡಾ ಸಂಬಂಧ ಸುಧಾರಿಸುತ್ತಿರುವಾಗಲೇ, ಒಟ್ಟಾವಾದಲ್ಲಿ ಖಲಿಸ್ತಾನಿ ಸಂಘಟನೆಗಳು ನಡೆಸಿದ 'ಕಿಲ್ ಇಂಡಿಯಾ ಪಾಲಿಟಿಕ್ಸ್, ಕಿಲ್ ಮೋದಿ ಪಾಲಿಟಿಕ್ಸ್' ಘೋಷಣೆಗಳು ಕೂಗಿ ಜನಮತಗಣನೆ ಪ್ರಕ್ರಿಯೆ ನಡೆಸಿರುವುದು ಉದ್ವಿಗ್ನತೆ ಸೃಷ್ಟಿಸಿದೆ. G20 ಶೃಂಗಸಭೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆದಿದ್ದೇ ತಡ, ಅದೇ ದಿನದಲಲ್ಲಿ ಸಂಭವಿಸಿದ ಈ ಘಟನೆಗಳು ರಾಜತಾಂತ್ರಿಕ ಸಂಬಂಧಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ರಾಯಭಾರಿ ಇದನ್ನು ಹಾಸ್ಯಾಸ್ಪದ ಸಂಗತಿ ಹಾಗೂ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂದು ಕರೆದಿದ್ದಾರೆ.
ದಾನಿಗಳ ಸಹಕಾರದೊಂದಿಗೆ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಸಹಾಯಧನ ವಿತರಿಸಿದ ಶುಭದ ರಾವ್
ಕಾರ್ಕಳ : ಕಾರ್ಕಳ ತಾಲೂಕು ಕುಕ್ಕುಂದೂರು ವಿಜೇತ ವಿಶೇಷ ಶಾಲೆಯ ಮಕ್ಕಳಿಗೆ ಇಂದು ದಾನಿಗಳಾದ ಮಲ್ಲೇಶ್ವರಂ ನಿವಾಸಿ ಶ್ರೀ ಬಾಲಕೃಷ್ಣ ಹಾಗೂ ಶ್ರೀಮತಿ ಉಷಾ ಬಾಲಕೃಷ್ಣ ರವರು ನೀಡಿದ ಸಮವಸ್ತ್ರ ಬಟ್ಟೆಗಳು ಹಾಗೂ ತಮ್ಮ ವೈಯಕ್ತಿಕ ಸಹಾಯಧನವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ದೇವರ ಮಕ್ಕಳ ಬಗ್ಗೆ ನಮಗೆ ವಿಶೇಷ ಕಾಳಜಿ ಇದೆ, ಹಿಂದಿನಿಂದಲೂ ಈ ಶಾಲೆಯ ಮಕ್ಕಳಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ ಮುಂದೆಯೂ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ಬೊಂಡುಕುಮೇರಿ ಸಚಿನ್ ನಾಯ್ಕ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಫುಟ್ ಬಾಲ್ ಆಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿದಿಸಿ ಚಿನ್ನದ ಪದಕವನ್ನು ಪಡೆದ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿಗಳಾದ ಕಿಶೋರ್ ಹಾಗೂ ಪ್ರೀತಿ ಇವರನ್ನು ಗೌರವಿಸಲಾಯಿತು. ಮುಖ್ಯ ಅಥಿತಿಗಳಾಗಿ ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ, ಪಂಚಾಯತ್ ಸದಸ್ಯರಾದ ರುಕ್ಮಿಯ್ಯ ಶೆಟ್ಟಿಗಾರ್ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ವಿಜೇತ ವಿಶೇಷ ಶಾಲಾ ಹಿತೈಷಿಗಳಾದ ಸತೀಶ್ ಭಂಡಾರಿ, ಶಾಲಾ ಸಿಬ್ಬಂದಿ ವರ್ಗ, ಮುಗ್ಧ ಮಕ್ಕಳು ಉಪಸ್ಥಿತರಿದ್ದರು.
ಕಮ್ಯುನಿಸ್ಟ್ ಕ್ರಾಂತಿಕಾರಿ ಫಿಡೆಲ್ ಮತ್ತು ಫುಟ್ಬಾಲ್ ದಂತಕತೆ ಮರಡೋನ ಸ್ನೇಹ ಸಂಬಂಧದ ಇನ್ಸೈಡ್ ಸ್ಟೋರಿ
ಫುಟ್ಬಾಲ್ ದಂತಕತೆೆ, ಫುಟ್ಬಾಲ್ ಅಭಿಮಾನಿಗಳ ದೇವರು, ಫುಟ್ಬಾಲ್ ಕ್ಷೇತ್ರದಲ್ಲಿ ಅನೇಕ ದಾಖಲೆಗಳ ಸರದಾರ ತನ್ನ ಎಡಗಾಲಿನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದ ಅರ್ಜೆಂಟೀನದ ಡೀಗೊ ಮರಡೋನ ತನ್ನ ಅದೇ ಎಡಗಾಲಿನಲ್ಲಿ ಅಮೆರಿಕಾ ಸಾಮ್ರಾಜ್ಯ ಶಾಹಿಗಳ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಕ್ಯೂಬಾದ ಮಾಜಿ ಅಧ್ಯಕ್ಷ, ಕಾಮ್ರೆಡ್ ಫಿಡೆಲ್ ಕ್ಯಾಸ್ಟ್ರೋ ಅವರ ಚಿತ್ರವನ್ನು ಟಾಟೂ ಹಾಕಿಸಿಕೊಂಡಿದ್ದರು. ಬಲಗೈಯಲ್ಲಿ ಮತ್ತೊರ್ವ ಕ್ರಾಂತಿಕಾರಿ ಚೆಗುವೇರಾರ ಟಾಟೂ ಹಾಕಿಸಿ ಕೊಂಡಿದ್ದರು. ಚೆಗುವೇರಾ ಮತ್ತು ಕ್ಯಾಸ್ಟ್ರೋ ಅವರ ಟಾಟೂವನ್ನು ಮರಡೋನ ಬೂಟಾಟಿಕೆಗೋ, ಫ್ಯಾಷನಿಗಾಗಿಯೋ ಹಾಕಿಸಿಕೊಂಡಿರಲಿಲ್ಲ. ತನ್ನ ಸಾಮ್ರಾಜ್ಯಶಾಹಿ ವಿರೋಧಿ ರಾಜಕೀಯ ಸಿದ್ದಾಂತದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಇಬ್ಬರು ಹೋರಾಟಗಾರರ ಟಾಟೂವನ್ನು ಹಾಕಿಸಿಕೊಂಡಿದ್ದರು ಎಂಬುದು ಜಗಜ್ಜಾಹೀರಾಗಿದ್ದ ಸಂಗತಿ. ಮರಡೋನ, ಫಿಡೆಲ್ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು 1987ರಲ್ಲಿ ಅರ್ಜೆಂಟೀನ ಫುಟ್ಬಾಲ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ. ಆ ನಂತರ ಅವರಿಬ್ಬರು ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರೂ ಅತ್ಯಂತ ಆಪ್ತ ಸ್ನೇಹಿತರಾಗುವುದು 2000 ಇಸವಿಯಲ್ಲಿ. ಮರಡೋನ ಅತಿಯಾದ ಕೊಕೇನ್ ಅಮಲು ಪದಾರ್ಥ ಸೇವಿಸಿ ಸಾವಿನ ಅಂಚಿಗೆ ತಳ್ಳಲ್ಪಟ್ಟಾಗ ಅರ್ಜೆಂಟೀನದ ಆಸ್ಪತ್ರೆಗಳಲ್ಲಿ ಮರಡೋನರ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂದು ಮರಡೋನರನ್ನು ಆಸ್ಪತ್ರೆಯಿಂದ ಆಚೆ ಕಳುಹಿಸಿದರು. ಚಿಕಿತ್ಸಾ ವೈಫಲ್ಯದಿಂದ ಮರಡೋನ ಅರ್ಜೆಂಟೀನದಲ್ಲಿ ಸಾಯುವುದು ಅರ್ಜೆಂಟೀನ ಆಡಳಿತಕ್ಕೂ ಇಷ್ಟ ಇರಲಿಲ್ಲ . ಅದಕ್ಕಾಗಿ ವಿದೇಶಕ್ಕೆ ತೆರಳಲು ಅರ್ಜೆಂಟೀನ ಉಚಿತ ಸಲಹೆ ಕೊಡುತ್ತಿತ್ತು ಮತ್ತು ವಿಪರೀತ ಕೊಕೇನ್ ಸೇವಿಸುತ್ತಿದ್ದ ಕಾರಣಕ್ಕೆ ಅರ್ಜೆಂಟೀನ ಆಸ್ಪತ್ರೆಗಳ ಬಾಗಿಲುಗಳು ನನಗೆ ಮುಚ್ಚಿ ದ್ದವು ಎಂದು ಮರಡೋನ ತನ್ನ ಆತ್ಮಕತೆಯಲ್ಲಿ ನಂತರ ತಿಳಿಸಿದ್ದರು. ಮರಡೋನರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ಕ್ಯೂಬಾ ಅಧ್ಯಕ್ಷ ಕ್ಯಾಸ್ಟ್ರೋ ಕ್ಯೂಬಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮರಡೋನ ಅವರನ್ನು ಕ್ಯೂಬಾಕ್ಕೆ ಆಹ್ವಾನಿಸಿದರು. ನಾಲ್ಕು ವರ್ಷ ಕ್ಯೂಬಾದಲ್ಲಿ ನೆಲೆಸಿದ್ದ ಮರಡೋನ ಚಿಕಿತ್ಸೆ ಪಡೆದು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿ ಆರೋಗ್ಯವಂತರಾದರು. ಹವಾನದ ಲಾ ಪೆಡ್ರೇರ ಆಸ್ಪತ್ರೆಯಲ್ಲಿ ಮರಡೋನ ಅವರಿಗೆ ಕ್ಯೂಬಾದ ಪ್ರಸಿದ್ದ ತಜ್ಞ ವೈದ್ಯರು ಚಿಕಿತ್ಸೆ ನೀಡಿದರು. ಸಾವಿನ ಭೀತಿಯಲ್ಲಿದ್ದ ಮರಡೋನ ಸಂಪೂರ್ಣ ಚೇತರಿಸಿಕೊಂಡಿದ್ದರು. ಕ್ಯೂಬಾದ ವೈದ್ಯರು ನೀಡಿದ ಚಿಕಿತ್ಸೆ ಮರಡೋನಗೆ ಪುನರ್ಜನ್ಮ ನೀಡಿತು. ಮರಡೋನ ರೋಗ ಮತ್ತು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿದ್ದರು. ಲಾ ಪೆಡ್ರೇರ ಆಸ್ಪತ್ರೆ ವೈದ್ಯರ ಚಿಕಿತ್ಸೆ ಜೊತೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ ತೋರಿದ ಪಿತೃ ವಾತ್ಸಲ್ಯದ ಪ್ರೀತಿ ಮತ್ತು ಆರೈಕೆಯೇ ಮರಡೋನ ಚೇತರಿಕೆಗೆ ಮುಖ್ಯ ಕಾರಣವಾಗಿತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನ ಮುಂಜಾನೆಯ ವಾಯು ವಿಹಾರಕ್ಕೆ ಜೊತೆಯಾಗುತ್ತಿದ್ದರು. ವಿಹಾರದ ಸಮಯದಲ್ಲಾಗಲಿ, ಪ್ರತಿಯೊಂದು ಭೇಟಿಯಲ್ಲಾಗಲಿ ಮರಡೋನಗೆ ರಾಜಕೀಯದ ಪಾಠಗಳನ್ನು ಮಾಡುತ್ತಲೇ ಮಾದಕ ವ್ಯಸನದ ಅಪಾಯ ಹಾಗೂ ಆರೋಗ್ಯದ ಕಾಳಜಿಯ ಬಗ್ಗೆ ಬೋಧನೆಯನ್ನು ಕ್ಯಾಸ್ಟ್ರೋ ಮಾಡುತ್ತಿದ್ದರು. ಕ್ಯೂಬಾ ಅಧ್ಯಕ್ಷರ ನಿವಾಸ ಮತ್ತು ಕಛೇರಿಯ ಬಾಗಿಲುಗಳು ಮರಡೋನಗೆ ಸದಾ ತೆರೆದಿದ್ದವು. ಫಿಡೆಲ್ ಮತ್ತು ಮರಡೋನ ಅವರ ಸ್ನೇಹ ಎಷ್ಟು ಗಾಢವಾಗಿತ್ತು ಎಂದರೆ ಅಧ್ಯಕ್ಷರ ನಿವಾಸದ ಶಿಷ್ಟಚಾರಗಳು ಅನ್ವಯಿಸದ ರೀತಿಯ ಸ್ವಾತಂತ್ರ್ಯ ವನ್ನು ಫಿಡೆಲ್, ಮರಡೋನಗೆ ನೀಡಿದ್ದರು. 2002ರಲ್ಲಿ ಕ್ಯೂಬಾದ ರಾಜಧಾನಿ ಹವಾನದಲ್ಲಿ ಮರಡೋನ ತನ್ನ ಆತ್ಮಕಥೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ನನ್ನ ಚರಿತ್ರೆ ಬರೆಯಲು ಮತ್ತು ಜಗತ್ತಿನ ಜನತೆಯ ಜತೆಗಿನ ಸ್ನೇಹ ಸಂಬಂಧಗಳಿಗೆ ದಾರಿ ಮಾಡಿಕೊಟ್ಟಿರುವುದು ಫುಟ್ಬಾಲ್. ಆದರೂ ನನಗೆ ಪುನರ್ಜನ್ಮ ನೀಡಿದ ಫಿಡೆಲ್ ಮತ್ತು ಕ್ಯೂಬಾ ಜನತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸಾಮಾನ್ಯ ಜನರು ದೇವರು ದೊಡ್ಡವರೆಂದು ಹೇಳುತ್ತಾರೆ. ಆದರೆ ನನಗೆ ಫಿಡೆಲ್ ಕ್ಯಾಸ್ಟ್ರೋ ದೇವರಿಗಿಂತ ದೊಡ್ಡವರು ಎಂದು ಹೇಳುತ್ತಾ ಮರಡೋನ ಭಾವುಕರಾಗಿದ್ದರು. 2015ರ ನವೆಂಬರ್ 25 ಫಿಡೆಲ್ ಕ್ಯಾಸ್ಟ್ರೋ ನಿಧನರಾದಾಗ ಮರಡೋನ ಮಗುವಿನಂತೆ ಅತ್ತಿದ್ದರು, ಫಿಡೆಲ್ರ ಸ್ವಂತ ಮಗನಂತೆ ಸಂಕಟ ಅನುಭವಿಸಿದ್ದರು. ಫಿಡೆಲ್ ಮತ್ತು ಮರಡೋನರ ನಡುವಿನ ಅಗಾಧವಾದ ಪ್ರೀತಿ ವಾತ್ಸಲ್ಯಕ್ಕೆ ಕಾಕತಾಳೀಯ ಎಂಬಂತೆ ಫಿಡೆಲ್ ಕ್ಯಾಸ್ಟ್ರೋ ನಿಧನದ ನಾಲ್ಕು ವರ್ಷಗಳ ತರುವಾಯ ಡೀಗೋ ಮರಡೋನ ಅದೇ ನವೆಂಬರ್ 25 2020ರಂದು ನಿಧನರಾಗಿದ್ದರು. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಿ ಹೋರಾಟಗಾರ ಜಗತ್ತಿನ ಅಗ್ರ ಗಣ್ಯ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಮತ್ತು ಜಾಗತಿಕ ಫುಟ್ಬಾಲ್ ಕ್ರೀಡೆಯ ದಂತಕತೆ ಡೀಗೋ ಮರಡೋನರ ಗಡಿ ಮೀರಿದ ಜೀವಪರವಾದ ಸ್ನೇಹ ಜಗತ್ತಿನಲ್ಲಿ ಅತ್ಯಂತ ಅಪೂರ್ವವಾದುದು.
ರಾಜ್ಯದ ನಂದಿನಿ ಬ್ರ್ಯಾಂಡ್ ತುಪ್ಪ ಇದೀಗ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ಮಾರುಕಟ್ಟೆಗೆ ಕಾಲಿಡಲಿದೆ. ಮಂಗಳವಾರ ಸಿಎಂ ಸಿದ್ದರಾಮಮಯ್ಯ ಅವರು ಇದಕ್ಕೆ ಚಾಲನೆ ನೀಡಿದರು. ಕೆಎಂಎಫ್ ಈ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯಗಳಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿಗೆ ತುಪ್ಪಕ್ಕೆ ಸಾಕಷ್ಟು ಬೇಡಿಕೆಯಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಏನೇನು ಮಾತನಾಡಿದ್ದಾರೆ ಎಂಬ ವಿವರ ಇಲ್ಲಿದೆ.
ಪ್ರಸ್ತಕ ಸಾಲಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 250 ಕೋಟಿ ರೂ. ಮೀಸಲು
ಆರ್ಥಿಕ, ಶೈಕ್ಷಣಿಕ ಯೋಜನೆಗಳ ಆನ್ಲೈನ್ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆಗೆ ಆಗ್ರಹ
ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಸಂಕಷ್ಟ: ವಿರೋಧ ಪಕ್ಷಕ್ಕೆ ಮನವಿ ಮಾಡಿದ ಜನ!
ಕಾಂಗ್ರೆಸ್ ಸರ್ಕಾರವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಗ್ಯಾರಂಟಿ ಯೋಜನೆಗಳಿಂದಾಗಿ ಈ ರಾಜ್ಯಗಳ ಅಭಿವೃದ್ಧಿ ವೇಗ ಕಡಿಮೆಯಾಗಿದೆ. ಅಲ್ಲದೇ ಈ ರಾಜ್ಯಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಈ ರಾಜ್ಯಗಳ ಸಾಲದ ಪ್ರಮಾಣವು ಹೆಚ್ಚಳವಾಗುತ್ತಿದೆ ಎನ್ನುವ ಗಂಭೀರವಾದ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿ ಇರುವಾಗಲೇ ವಿರೋಧ ಪಕ್ಷಗಳು ಸರ್ಕಾರದ ಯಾವುದೇ
ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಸುಧಾರಣೆಗಳು
ಹಲವು ದಶಕಗಳಿಂದ ಭಾರತವು ದುರ್ಬಲ ಆರ್ಥಿಕ ಬೆಳವಣಿಗೆ, ಬೇರು ಬಿಟ್ಟ ಭ್ರಷ್ಟಾಚಾರ ಮತ್ತು ಉದ್ಯೋಗ ಸೃಷ್ಟಿ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಬದ್ಧತೆಯ ಕೊರತೆಯೊಂದಿಗೆ ಹೋರಾಡುತ್ತಿತ್ತು. ರಾಜಕೀಯ ಪ್ರೇರಿತ ಮುಷ್ಕರಗಳು ಮತ್ತು ಬಂದ್ಗಳು ಪದೇ ಪದೇ ಕೈಗಾರಿಕಾ ಚಟುವಟಿಕೆಯನ್ನು ಅಡ್ಡಿಪಡಿಸಿದವು, ಹೂಡಿಕೆಯನ್ನು ಹತ್ತಿಕ್ಕಿದವು ಮತ್ತು ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಕುಗ್ಗಿಸಿದವು. ಹಿಂದಿನ ಸರಕಾರಗಳು ಕಾರ್ಮಿಕ ಕಲ್ಯಾಣವನ್ನು ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಿದ್ದು, ಕಾರ್ಮಿಕರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲವಾಗಿದ್ದು ನಾಚಿಕೆಗೇಡಿನ ಸಂಗತಿ. ಈ ಜಡತ್ವವನ್ನು ಮುರಿಯಲು ರಾಷ್ಟ್ರೀಯ ನಾಯಕತ್ವದಲ್ಲಿ ಮೂಲಭೂತ ಬದಲಾವಣೆ ಅಗತ್ಯವಾಗಿತ್ತು. ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಶ್ರಮೇವ ಜಯತೇ’ ಎಂಬ ಘೋಷಣೆಯೊಂದಿಗೆ, ಭಾರತದ ಅಭಿವೃದ್ಧಿ ಪ್ರಯಾಣದ ಕೇಂದ್ರದಲ್ಲಿ ಕಾರ್ಮಿಕರ ಘನತೆ ಇರಬೇಕು ಎಂದು ಘೋಷಿಸಿದರು. ಇದು ಕೇವಲ ಘೋಷಣೆಯಾಗಿರಲಿಲ್ಲ; ಇದು ಕಾರ್ಮಿಕರನ್ನು ನೀತಿ ನಿರೂಪಣೆಯ ಕೇಂದ್ರದಲ್ಲಿ ಇರಿಸುವ ಹೊಸ ರಾಷ್ಟ್ರೀಯ ಪ್ರಜ್ಞೆಯನ್ನು ಹುಟ್ಟುಹಾಕಿತು. ಅಂತಹ ಬದಲಾವಣೆ ಬಹಳ ಹಿಂದೆಯೇ ಬರಬೇಕಿತ್ತು. ಭಾರತದ ಹೆಚ್ಚಿನ ಕಾರ್ಮಿಕ ಕಾನೂನುಗಳು 1920 ಮತ್ತು 1950ರ ದಶಕದ ಹಿಂದಿನವು ಮತ್ತು ವಸಾಹತುಶಾಹಿ ಚಿಂತನೆಯಿಂದ ರೂಪುಗೊಂಡವು. ಏತನ್ಮಧ್ಯೆ, ಕೆಲಸದ ಪ್ರಪಂಚವು ಗಮನಾರ್ಹ ಬದಲಾವಣೆಗಳಿಗೆ ಒಳಗಾಯಿತು. ಗಿಗ್ ಮತ್ತು ಪ್ಲಾಟ್ಫಾರ್ಮ್ ಆರ್ಥಿಕತೆಯ ಏರಿಕೆ, ಡಿಜಿಟಲೀಕರಣ, ಹೊಂದಿಕೊಳ್ಳುವ ಕೆಲಸದ ರಚನೆಗಳು ಮತ್ತು ಹೊಸ-ಯುಗದ ಉದ್ಯಮಗಳು ಜಾಗತಿಕ ಕಾರ್ಮಿಕ ವ್ಯವಸ್ಥೆಯನ್ನು ಮರುರೂಪಿಸಿದವು. ಆದರೂ, ಭಾರತದ ಕಾರ್ಮಿಕ ಕಾನೂನುಗಳು ಕಾಲಕ್ರಮೇಣ ಸ್ಥಗಿತಗೊಂಡವು, ಅವುಗಳಿಗೆ ಆಧುನಿಕ ಕಾರ್ಯಪಡೆ ಅಥವಾ ಸ್ಪರ್ಧಾತ್ಮಕ ಆರ್ಥಿಕತೆಯನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ, ಪ್ರಧಾನಮಂತ್ರಿ ಮೋದಿಯವರು ತಮ್ಮ ಐದು ತತ್ವ (ಪಂಚಪ್ರಾಣ)ಗಳ ಮೂಲಕ, ನಮ್ಮ ವಸಾಹತುಶಾಹಿ ಚಿಂತನೆಯನ್ನು ತ್ಯಜಿಸಿ ಭವಿಷ್ಯಕ್ಕೆ ಸಿದ್ಧವಾದ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು. ಹಳೆಯ ಕಾನೂನುಗಳು ತಮ್ಮ ಕಾರ್ಯಕ್ಷಮತೆಯಿಂದ ಇದುವರೆಗೆ ಉಳಿಯಲಿಲ್ಲ, ಬದಲಾಗಿ ಹಿಂದಿನ ಸರಕಾರಗಳು ಹೊಸ ವಾಸ್ತವಗಳು ಮತ್ತು ದೇಶದ ಅಗತ್ಯಗಳನ್ನು ಪ್ರತಿಬಿಂಬಿಸಲು ಅವುಗಳನ್ನು ಆಧುನೀಕರಿಸುವ ರಾಜಕೀಯ ಇಚ್ಛಾಶಕ್ತಿ, ಧೈರ್ಯವನ್ನು ತೋರದ್ದರಿಂದ ಮತ್ತು ದೃಷ್ಟಿಕೋನದ ಕೊರತೆಯಿಂದ ಉಳಿದುಕೊಂಡವು. ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ, ಭಾರತದ ಜಾಗತಿಕ ಸ್ಥಾನಮಾನವು ಹಿಂದೆಂದೂ ಕಾಣದ ಎತ್ತರವನ್ನು ತಲುಪಿದೆ. ಭಾರತವು ಈಗ ಭವಿಷ್ಯವನ್ನು ರೂಪಿಸುವಲ್ಲಿ ಮಾತ್ರ ಭಾಗವಹಿಸುತ್ತಿಲ್ಲ, ಅದನ್ನು ವ್ಯಾಖ್ಯಾನಿಸುವಲ್ಲಿ ಸಹಾಯ ಮಾಡುತ್ತಿದೆ ಎಂದು ಜಗತ್ತು ಗುರುತಿಸುತ್ತದೆ. ಆದರೆ ಈ ಐತಿಹಾಸಿಕ ಕ್ಷಣವನ್ನು ನಿಜವಾಗಿಯೂ ಸದುಪಯೋಗಪಡಿಸಿಕೊಳ್ಳಲು ಮತ್ತು ಅದರ ಸಾಮರ್ಥ್ಯವನ್ನು ದೀರ್ಘಾವಧಿಯ ಸಮೃದ್ಧಿಯಾಗಿ ಪರಿವರ್ತಿಸಲು, ಭಾರತವು ಸಬಲೀಕರಣಕ್ಕಿಂತ ಹೆಚ್ಚಾಗಿ ನಿಯಂತ್ರಣಕ್ಕಾಗಿ ರೂಪಿಸಲಾದ ವಸಾಹತುಶಾಹಿ ಯುಗದ ಕಾರ್ಮಿಕ ಚೌಕಟ್ಟಿಗೆ ಬದ್ಧವಾಗಿರಲು ಸಾಧ್ಯವಿಲ್ಲ. ಆದ್ದರಿಂದ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು, ಔಪಚಾರಿಕತೆಯನ್ನು ಹೆಚ್ಚಿಸಲು ಮತ್ತು ಎಲ್ಲರಿಗೂ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಪರಿಷ್ಕರಣೆ ಅಗತ್ಯವಾಗಿತ್ತು. ಈ ರಾಷ್ಟ್ರೀಯ ಅಗತ್ಯವನ್ನು ಗುರುತಿಸಿ, ಮೋದಿ ಸರಕಾರವು ಸ್ವತಂತ್ರ ಭಾರತದಲ್ಲಿ ಅತಿದೊಡ್ಡ ಸುಧಾರಣೆಗಳಲ್ಲಿ ಒಂದನ್ನು ಜಾರಿಗೆ ತಂದಿತು. ಹಿಂದೆ ಅಸ್ತಿತ್ವದಲ್ಲಿದ್ದ 29 ಪ್ರತ್ಯೇಕ ಕಾರ್ಮಿಕ ಕಾನೂನುಗಳನ್ನು ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಎಂಬ ನಾಲ್ಕು ಸ್ಪಷ್ಟ, ಏಕೀಕೃತ ಕಾರ್ಮಿಕ ಸಂಹಿತೆಗಳಾಗಿ ವಿಲೀನಗೊಳಿಸಲಾಯಿತು. ಈ ಕಾರ್ಮಿಕ ಸಂಹಿತೆಗಳು ನವೆಂಬರ್ 21, 2025 ರಿಂದ ಜಾರಿಗೆ ಬಂದಿವೆ. ಒಟ್ಟಾಗಿ, ಅವು ಕಾರ್ಮಿಕರು ಮತ್ತು ಬೆಳವಣಿಗೆ ಎರಡನ್ನೂ ಬೆಂಬಲಿಸುವ ಆಧುನಿಕ ಕಾರ್ಮಿಕ ಚೌಕಟ್ಟನ್ನು ರಚಿಸುತ್ತವೆ ಮತ್ತು ವೇಗವಾಗಿ ಬದಲಾಗುತ್ತಿರುವ ಮತ್ತು ಜಾಗತಿಕ ಆರ್ಥಿಕತೆಯ ಬೇಡಿಕೆಗಳನ್ನು ಪೂರೈಸಲು ಭಾರತದ ಸಿದ್ಧತೆಯನ್ನು ಪ್ರದರ್ಶಿಸುತ್ತವೆ. 2019 ಮತ್ತು 2020ರಲ್ಲಿ ಸಂಸತ್ತು ಈ ಸಂಹಿತೆಗಳನ್ನು ಅಂಗೀಕರಿಸಿದಾಗಿನಿಂದ, ಅನೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕಾರ್ಮಿಕರ ಸಂಘಟನೆಗಳು ಮತ್ತು ಉದ್ಯಮ ಸಂಸ್ಥೆಗಳು ಅವುಗಳ ಪ್ರಗತಿಪರ ಉದ್ದೇಶವನ್ನು ಸ್ವಾಗತಿಸಿವೆ. ಅವುಗಳ ಅರ್ಹತೆಗಳನ್ನು ಗುರುತಿಸಿ, ಎಲ್ಲಾ ರಾಜಕೀಯ ಪಕ್ಷಗಳಾದ್ಯಂತ ರಾಜ್ಯಗಳು ಈಗಾಗಲೇ ಸಂಹಿತೆಗಳಿಗೆ ಅನುಗುಣವಾಗಿ ತಮ್ಮ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿವೆ. ಉದಾಹರಣೆಗೆ, ಮಹಿಳೆಯರಿಗೆ ರಾತ್ರಿ ವೇಳೆ ಅವರ ಒಪ್ಪಿಗೆ ಮತ್ತು ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಕೆಲಸ ಮಾಡಲು ಅವಕಾಶ ನೀಡಿರುವ ರಾಜ್ಯಗಳು, ಉದ್ಯೋಗಸ್ಥ ಮಹಿಳೆಯರ ಒಟ್ಟು ಸಂಖ್ಯೆಯಲ್ಲಿ ಶೇ. 13ರಷ್ಟು ಏರಿಕೆ ಕಂಡಿವೆ. ವಿವಿಧ ವಲಯಗಳ ಪಾಲುದಾರರು ಹಳತಾದ ಕಾರ್ಮಿಕ ವ್ಯವಸ್ಥೆಯನ್ನು ಮೀರಿ ಸಾಗುವ ಅಗತ್ಯವನ್ನು ಗುರುತಿಸಿದ್ದಾರೆ. ಅವರ ಕೊಡುಗೆಗಳು ಕಾರ್ಮಿಕರನ್ನು ರಕ್ಷಿಸುವ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡುವ ಸಮತೋಲಿತ ಚೌಕಟ್ಟನ್ನು ರೂಪಿಸಲು ಸಹಾಯ ಮಾಡಿವೆ. ಕಾರ್ಮಿಕರು ಮತ್ತು ಉದ್ಯಮದ ನಾಯಕರೊಂದಿಗಿನ ನನ್ನ ಸಂವಹನಗಳಲ್ಲಿ, ಕೆಲಸದ ಸ್ಥಳದಲ್ಲಿ ಸ್ಪಷ್ಟತೆ, ನ್ಯಾಯಸಮ್ಮತತೆ ಮತ್ತು ಘನತೆಯ ಅಗತ್ಯತೆಯ ಬಗ್ಗೆ ಒಂದು ಸಂದೇಶವು ನಿರಂತರವಾಗಿ ಹೊರಹೊಮ್ಮಿದೆ. ಈ ಮಾರ್ಗದರ್ಶಿ ತತ್ವವು ನಮ್ಮ ಸುಧಾರಣೆಗಳನ್ನು ರೂಪಿಸಿತು, ಸಂಕೀರ್ಣ, ವಿಘಟಿತ ವ್ಯವಸ್ಥೆಯನ್ನು ಸರಳ, ಪಾರದರ್ಶಕ ಮತ್ತು ಪ್ರತಿಯೊಬ್ಬ ಕೆಲಸಗಾರನ ರಕ್ಷಣೆಗೆ ಬಳಸುವ ವ್ಯವಸ್ಥೆಯಾಗಿ ಬದಲಾಯಿಸಿತು. ಕಾರ್ಮಿಕ ಸಂಹಿತೆಗಳು, ವಾಸ್ತವವಾಗಿ, ಉದ್ಯೋಗದಾತರ ನಿರೀಕ್ಷೆಗಳನ್ನು ಸಮತೋಲನಗೊಳಿಸುವುದರೊಂದಿಗೆ ಕಾರ್ಮಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತವೆ. ಅವು ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುತ್ತವೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುತ್ತವೆ. ಅವು ಆಡಿಯೋ-ವಿಶುವಲ್ ಕೆಲಸಗಾರರು ಮತ್ತು ಗಿಗ್ ಮತ್ತು ಪ್ಲಾಟ್ಫಾರ್ಮ್ ಕೆಲಸಗಾರರಿಗೆ ಔಪಚಾರಿಕ ಮಾನ್ಯತೆಯನ್ನು ಒದಗಿಸುತ್ತವೆ. ಅವು ಭಾರತದಾದ್ಯಂತ ಇ.ಎಸ್.ಐ.ಸಿ. ವ್ಯಾಪ್ತಿಯನ್ನು ಸಕ್ರಿಯಗೊಳಿಸುತ್ತವೆ, ಹಿಂದೆ ಹೊರಗಿಡಲಾದ ಪ್ಲಾಂಟೇಷನ್ ಕೆಲಸಗಾರರನ್ನು ಒಳಗೊಂಡಂತೆ 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಕಡ್ಡಾಯಗೊಳಿಸುತ್ತವೆ ಮತ್ತು ರಾಜ್ಯಗಳಾದ್ಯಂತ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಎಲ್ಲಾ ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನವನ್ನು ಖಾತರಿಪಡಿಸುತ್ತವೆ. ಕಡ್ಡಾಯ ನೇಮಕಾತಿ ಪತ್ರಗಳು, ದೃಢೀಕೃತ ವೇತನ ಚೀಟಿಗಳು ಮತ್ತು ಪಾವತಿಸಿದ ವಾರ್ಷಿಕ ರಜೆಯಂತಹ ನಿಯಮಗಳು ಪ್ರತಿಯೊಬ್ಬ ಕೆಲಸಗಾರನಿಗೆ ಹೆಚ್ಚಿನ ಸ್ಥಿರತೆ, ಘನತೆ ಮತ್ತು ಭದ್ರತೆಯನ್ನು ಒದಗಿಸುತ್ತವೆ. ಗುತ್ತಿಗೆ ಉದ್ಯೋಗಕ್ಕೆ ಉತ್ತಮ ಪರ್ಯಾಯವಾಗಿ, ಸಂಹಿತೆಗಳು ಸ್ಥಿರ ಅವಧಿಯ ಉದ್ಯೋಗ (ಎಫ್.ಟಿ.ಇ.) ವನ್ನು ಪರಿಚಯಿಸುತ್ತವೆ. ಎಫ್.ಟಿ.ಇ. ಅಡಿಯಲ್ಲಿ, ನಿಗದಿತ ಅವಧಿಗೆ ನೇಮಕಗೊಂಡ ಕಾರ್ಮಿಕರು ಶಾಶ್ವತ ಉದ್ಯೋಗಿಗಳಂತೆಯೇ ವೇತನ, ಪ್ರಯೋಜನಗಳು ಮತ್ತು ಕೆಲಸದ ಪರಿಸ್ಥಿತಿಗಳನ್ನು ಪಡೆಯುತ್ತಾರೆ. ಇದರಲ್ಲಿ ವೇತನ ರಜೆ, ಸ್ಥಿರ ಕೆಲಸದ ಸಮಯ, ವೈದ್ಯಕೀಯ ಪ್ರಯೋಜನಗಳು, ಸಾಮಾಜಿಕ ಭದ್ರತೆ ಮತ್ತು ಇತರ ಕಾನೂನು ರಕ್ಷಣೆಗಳು ಸೇರಿವೆ. ಮುಖ್ಯವಾಗಿ, ಎಫ್.ಟಿ.ಇ. ಉದ್ಯೋಗಿಗಳು ಕೇವಲ ಒಂದು ವರ್ಷದ ನಿರಂತರ ಸೇವೆಯ ನಂತರ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಈ ಸಂಹಿತೆಗಳು ಆಧುನಿಕ ಕೆಲಸದ ಸ್ಥಳದ ವಾಸ್ತವತೆಗಳನ್ನು ಸಹ ಗುರುತಿಸುತ್ತವೆ. ಒಬ್ಬ ಉದ್ಯೋಗಿ ಸ್ವಯಂಪ್ರೇರಣೆಯಿಂದ ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಲು ಆರಿಸಿಕೊಂಡರೆ, ಅವರಿಗೆ ಹೆಚ್ಚುವರಿ ಸಮಯಕ್ಕೆ ಸಾಮಾನ್ಯ ವೇತನ ದರಕ್ಕಿಂತ ಎರಡು ಪಟ್ಟು ವೇತನ ನೀಡಬೇಕು, ಇದು ಎಲ್ಲಾ ಸಂದರ್ಭಗಳಲ್ಲಿಯೂ ನ್ಯಾಯಯುತತೆಯನ್ನು ಖಚಿತಪಡಿಸುತ್ತದೆ. ಈ ಸುಧಾರಣೆಗಳ ಮುಖ್ಯ ಆಧಾರಸ್ತಂಭವೆಂದರೆ ನಾರಿ ಶಕ್ತಿ. ಪ್ರಧಾನಮಂತ್ರಿ ಮೋದಿಯವರ ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಈ ಸಂಹಿತೆಗಳು, ಭೂಮಿಯೊಳಗಿನ ಗಣಿಗಳು, ಭಾರೀ ಯಂತ್ರೋಪಕರಣಗಳು ಮತ್ತು ರಾತ್ರಿ ಪಾಳಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಒಪ್ಪಿಗೆ ಮತ್ತು ದೃಢವಾದ ಸುರಕ್ಷತಾ ಶಿಷ್ಟಾಚಾರಗಳೊಂದಿಗೆ ಭಾಗವಹಿಸಲು ಹೊಸ ಮಾರ್ಗಗಳನ್ನು ತೆರೆಯುತ್ತವೆ. ಹೆಚ್ಚುವರಿಯಾಗಿ, ಈ ಸಂಹಿತೆಗಳು ಒಂದೇ ನೋಂದಣಿ, ಒಂದೇ ಪರವಾನಿಗೆ ಮತ್ತು ಒಂದೇ ರಿಟರ್ನ್ ಫೈಲಿಂಗ್ ಅನ್ನು ಪರಿಚಯಿಸುವ ಮೂಲಕ ಉದ್ಯೋಗದಾತರ ಮೇಲಿನ ಅನುಸರಣಾ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಈ ಸರಳೀಕರಣವು ಭಾರತದಾದ್ಯಂತ ಕೈಗಾರಿಕೆಗಳನ್ನು ವಿಸ್ತರಿಸಲು ಮತ್ತು ಸ್ಥಾಪಿಸಲು ಪ್ರೋತ್ಸಾಹಿಸುತ್ತದೆ, ಇದರಿಂದಾಗಿ ಸ್ಥಳೀಯ ಉದ್ಯೋಗಗಳು ಹೆಚ್ಚಾಗುತ್ತವೆ. 2015ರಲ್ಲಿ ಶೇ.19 ರಷ್ಟಿದ್ದ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು 2025ರಲ್ಲಿ ಶೇ.64.3ಕ್ಕೆ ಹೆಚ್ಚಿಸಿರುವ ಭಾರತದ ಪ್ರಗತಿಯು ವಿಶ್ವಾದ್ಯಂತ ಪ್ರಶಂಸೆಯನ್ನು ಗಳಿಸಿದೆ. ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಭಾರತದ ಪ್ರಯತ್ನಗಳನ್ನು ಗುರುತಿಸಿದೆ, ಅಂತರ್ರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಘವು ಸಾಮಾಜಿಕ ಭದ್ರತೆಯಲ್ಲಿ ಭಾರತದ ಅತ್ಯುತ್ತಮ ಸಾಧನೆಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಅಂತರ್ರಾಷ್ಟ್ರೀಯ ಸಂಸ್ಥೆಗಳು ಹೊಸ ಕಾರ್ಮಿಕ ಸಂಹಿತೆಗಳನ್ನು ಆಧುನಿಕ, ಪ್ರಗತಿಪರ ಮತ್ತು ಕಾರ್ಮಿಕ ಸ್ನೇಹಿ ಎಂದು ಶ್ಲಾಘಿಸಿವೆ. ಈ ದೂರಗಾಮಿ ಪ್ರಯೋಜನಗಳ ಹೊರತಾಗಿಯೂ, ಹೆಚ್ಚಿನ ಟೀಕೆಗಳು ಸುಧಾರಣೆಗಳ ತಿಳುವಳಿಕೆಯಿಂದಲ್ಲ, ಬದಲಾಗಿ ಬದಲಾವಣೆಯನ್ನು ಬಯಸದ ಪ್ರಬಲ ರಾಜಕೀಯ ಹಿತಾಸಕ್ತಿಗಳಿಂದ ಬಂದಿವೆ ಎಂಬುದು ಸ್ಪಷ್ಟವಾಗಿದೆ. ಪ್ರಭಾವಕ್ಕಾಗಿ ಹಳೆಯ ಮತ್ತು ಅಪಾರದರ್ಶಕ ವ್ಯವಸ್ಥೆಗಳನ್ನು ಅವಲಂಬಿಸಿದ್ದವರು ಈಗ ಪಾರದರ್ಶಕ, ಪರಿಣಾಮಕಾರಿ ಮತ್ತು ಕಾರ್ಮಿಕ ಕೇಂದ್ರಿತ ಚೌಕಟ್ಟಿನಿಂದ ಅನನುಕೂಲತೆಯನ್ನು ಅನುಭವಿಸುತ್ತಿದ್ದಾರೆ. ಈ ಸಂಹಿತೆಗಳು ತರುವ ಸಕಾರಾತ್ಮಕ ಪರಿವರ್ತನೆಯನ್ನು ಒಪ್ಪಿಕೊಳ್ಳುವ ಬದಲು, ಅವರು ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಭಾರತವು ಆತ್ಮನಿರ್ಭರ ಮತ್ತು ವಿಕಸಿತ ರಾಷ್ಟ್ರವಾಗುವ ಪ್ರಯಾಣದಲ್ಲಿ ಕಾರ್ಮಿಕ ಸಂಹಿತೆಗಳು ಒಂದು ಪರಿವರ್ತನಾ ಮೈಲಿಗಲ್ಲುಗಳಾಗಿವೆ. ಅವು ಕಾರ್ಮಿಕರ ಘನತೆಯನ್ನು ಎತ್ತಿಹಿಡಿಯುತ್ತವೆ, ಕೈಗಾರಿಕಾ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವ ಮಾದರಿಯನ್ನು ಸೃಷ್ಟಿಸುತ್ತವೆ ಮತ್ತು ಕಾರ್ಮಿಕರು ಆತ್ಮನಿರ್ಭರತೆಯನ್ನು ಚಾಲನೆ ಮಾಡುವ ಇಂಜಿನ್ ಆಗುತ್ತಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ದೃಷ್ಟಿಕೋನ ಮತ್ತು ಬದ್ಧತೆಯಿಂದ ಮಾರ್ಗದರ್ಶಿಸಲ್ಪಟ್ಟ ಈ ಕಾರ್ಮಿಕ ಸುಧಾರಣೆಗಳು, ಭಾರತದ ಅಭಿವೃದ್ಧಿಯ ಕೇಂದ್ರಬಿಂದುವಾಗಿರುವ ಆಧುನಿಕ, ದೃಢ ಮತ್ತು ಎಲ್ಲರನ್ನು ಒಳಗೊಂಡ ಆರ್ಥಿಕತೆಗೆ ಬಲವಾದ ಬುನಾದಿಯನ್ನು ಹಾಕುತ್ತವೆ. ಶ್ರಮೇವ ಜಯತೇ!
ರಾಯಚೂರು | ಗಾಲಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾಫರ್ ಮೊಹಿಯುದ್ದೀನ್ಗೆ ಸನ್ಮಾನ
ರಾಯಚೂರು: ನಗರದ ಗಾಲಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯವರಾದ ಜಾಫರ್ ಮೋಹಿಯುದ್ದೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನಾರೋಗ್ಯದ ಕಾರಣ ಮತ್ತೊರ್ವ ಪ್ರಶಸ್ತಿ ಪುರಸ್ಕೃತರಾದ ರತ್ನಮ್ಮ ದೇಸಾಯಿಯವರು ಗೈರಾಗಿದ್ದರು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಮಾರುತಿ ಬಾಗಡೆ ಯವರು ಮಾತನಾಡಿ, ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರ ಪ್ರಶಸ್ತಿ ನೀಡುತ್ತಾ ಬಂದಿದೆ. ನಮ್ಮ ರಾಯಚೂರು ಜಿಲ್ಲೆಯ ಒಬ್ಬರು ಮಹನಿಯರಿಗೆ ಈ ಪ್ರಶಸ್ತಿ ದೊರೆತಿರುವದು ಅತ್ಯಂತ ಖುಷಿಯ ಸಂದರ್ಭ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾಫರ್ ಮೋಹಿಯುದ್ದೀನ್ ಅವರು, ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದಕ್ಕಿಂತ ಹುಟ್ಟೂರಲ್ಲಿ ಸನ್ಮಾನ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು. ನಾನು ವಿದ್ಯಾರ್ಥಿ ದೆಸೆಯಿಂದಲೇ ನಾಟಕಗಳಲ್ಲಿ, ಸಿನೆಮಾಗಳಲ್ಲಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಹಲವು ಕಲಾತ್ಮಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ, ಇಂದಿನ ಯುವಕರು ಸಹ ಇಂತಹ ಅಭಿರುಚಿ ಬೆಳೆಸಿಕೊಳ್ಳಬೇಕಿದೆ. ಇತ್ತೀಚಿಗೆ ರಾಯಚೂರು ಜಿಲ್ಲೆಯ ಹಲವಾರು ಯುವಕರು ಸಿನೆಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಹೆಚ್ಚಿನ ಪ್ರೋತ್ಸಾಹ ಅಂತಹ ಯುವಕರಿಗೆ ಅವಶ್ಯಕತೆಯಿದೆ ಎಂದು ಹೇಳಿದರು. ಗಾಲಿಬ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಸೈಯದ್ ತಾರೀಖ್ ಹಸನ್ ರಜ್ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಟ್ರಸ್ಟ ಸದಸ್ಯ ಡಾ.ರಝಾಕ್ ಉಸ್ತಾದ್ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟ್ ಸದಸ್ಯ ಮಲ್ಲಿಕಾರ್ಜುನ , ವಕೀಲರ ಸಂಘದ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಟ್ರಸ್ಟ್ ಸದಸ್ಯ ನೂರ ಮುಹಮ್ಮದ , ಅನ್ವರ್ ವಾಹೀದ್ ಹಾಗೂ ಇತರರು ಉಪಸ್ಥಿತರಿದ್ದರು.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯಿಂದ ಧಾರ್ಮಿಕ ಧ್ವಜಾರೋಹಣ
ಅಯೋಧ್ಯೆ ರಾಮಮಂದಿರ ಸಂಕೀರ್ಣ ನಿರ್ಮಾಣ ಪೂರ್ಣ
ಮಂಗಳೂರು | ಡಿ.1ರಂದು ನವೀಕೃತ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್ ಉದ್ಘಾಟನೆ
ಮಂಗಳೂರು, ನ. 25: ನಗರದ ರೈಫಲ್ ಕ್ಲಬ್ನಿಂದ ನೂತನವಾಗಿ ನವೀಕರಿಸಲ್ಪಟ್ಟ 7 ಲೇನ್ನ ಸಂಪೂರ್ಣ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್ ಡಿ.1ರಂದು ಉದ್ಘಾಟನೆಗೊಳ್ಳಲಿದೆ. ನವೀಕೃತ ಶೂಟಿಂಗ್ ರೇಜ್ನ ಉದ್ಘಾಟನೆಯನ್ನು ಡಿ. 1ರಂದು ಜುಗುಲ್ ಟವರ್ಸ್ನ 4ನೆಮಹಡಿಯಲ್ಲಿರುವ ಮಂಗಳೂರು ರೈಫಲ್ ಕ್ಲಬ್ನಲ್ಲಿ ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಎಂಆರ್ಸಿಯಿಂದ ತರಬೇತಿ ಪಡೆದ ಮೂವರು ಕ್ರೀಡಾಪಟುಗಳು ಭಾರತೀಯ ರಾಷ್ಟ್ರೀಯ ತಂಡದ ಆಯ್ಕೆ ಪರೀಕ್ಷೆಗಳಿಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ. ಕರಾವಳಿ ಕರ್ನಾಟಕದ ಏಕೈಕ 10 ಮೀಟರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಾಗಿರುವ ಮಂಗಳೂರು ರೈಫಲ್ ಕ್ಲಬ್ (ಎಂಆರ್ಸಿ) ಒಲಿಂಪಿಕ್ ಶೂಟಿಂಗ್ ಕೀಡೆಗಳಿಗೆ ಸ್ಥಳೀಯ ಪ್ರತಿಭೆಗಳಿಗೆ ತರಬೇತು ನೀಡುವ ಕಾರ್ಯವನ್ನು ನಡೆಸುತ್ತಿದೆ. 2017ರಲ್ಲಿ ಸ್ಥಾಪನೆಗೊಂಡ ಎಂಆರ್ಸಿ ಯುವ ಶೂಟರ್ಗಳನ್ನು ರೂಪಿಸುವ ಜತೆಗೆ ಕರಾವಳಿ ಪ್ರದೇಶದ ಕೀಡಾಸಕ್ತರಿಗೆ ಸುರಕ್ಷಿತ, ಸಂಯೋಜಿತ ಮತ್ತು ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಸಂಸ್ಥೆಯ ಹೊಸ 7 ಲೇನ್ ಸಂಪೂರ್ಣ ಇಲೆಕ್ಟ್ರಾನಿಕ್ ಶೂಟಿಂಗ್ ರೇಜ್ ಮಹತ್ವದ ಮೈಲಿಗಲ್ಲಾಗಿದೆ. ಸ್ಥಳೀಯ ಶೂಟರ್ ಪ್ರತಿಭೆಗಳಿಗೆ ಉನ್ನತ ಮಟ್ಟದ ತರಬೇತಿಯು ಇಲ್ಲಿ ಸಿಗಲಿದೆ. 2018ರಲ್ಲಿ ರಾಜ್ಯ ಮಟ್ಟದ ಓಪನ್ ಸೈಟ್ ವೈಯಕ್ತಿಕ ಚಾಂಪಿಯನ್ಶಿಪ್ನಲ್ಲಿ 3 ಚಿನ್ನದ ಪದಕಗಳು, 2018 ಹಾಗೂ 19ರಲ್ಲಿ ತಂಡ ಕಂಚಿನ ಪದಕ, ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ 2023-24ರಲ್ಲಿ 2 ಕಂಚಿನ ಪದಕಗಳು ಎಂಆರ್ಸಿಯ ಪ್ರತಿಭೆಗಳಿಗೆ ಲಭ್ಯವಾಗಿವೆ. 2024ರ ಅಖಿಲ ಭಾರತ ಜಿ.ವಿ. ಮಾವಲಂಕರ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ, 2025ರ ದಕ್ಷಿಣ ವಲಯ ಮಾಸ್ಟರ್ಸ್ ಕೆಟಗರಿಯಲ್ಲಿ ಬೆಳ್ಳಿ ಪದಕ, 2021ರಲ್ಲಿ ದಕ್ಷಿಣ ವಲಯ ಸಿಬಿಎಸ್ಇ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚು ಪದಕಗಳನ್ನು ಪಡೆದ ಹೆಮ್ಮೆ ಎಂಆರ್ಸಿಯದ್ದು ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಮುಕೇಶ್ ಕುಮಾರ್ ತಿಳಿಸಿದ್ದಾರೆ.
ನ. 29 ಕಾರ್ಕಳದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ
ಕಾರ್ಕಳ : ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನ.29 ಶನಿವಾರದಂದು ಸಂಜೆ 5:45 ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಲಿದೆ ಎಂದು ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ಉದ್ಯಮಿ ವಿಜಯ ಶೆಟ್ಟಿ ತಿಳಿಸಿದ್ದಾರೆ. ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಆರಂಭದಲ್ಲಿ 45 ನಿಮಿಷಗಳ ಕಾಲ ನಡೆಯುವ ಸಭಾ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಉದ್ಘಾಟಿಸಿದರೆ, ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಗೌರವಾಧ್ಯಕ್ಷ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ವಿ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ, ಆಳ್ವಾಸ್ ನುಡಿಸಿರಿ-ವಿರಾಸತ್ ರೂವಾರಿಡಾ ಎಂ ಮೋಹನ್ ಆಳ್ವ ಹಾಗೂ ಸಮಾಜದ ಎಲ್ಲಾ ಸ್ಥರಗಳ ಪ್ರಮುಖರು ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿ ಹಾಜರಿರಲಿದ್ದಾರೆ. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೀರ್ತಿಶೇಷ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ದಿವಂಗತ ಎಂ. ಕೆ ವಿಜಯಕುಮಾರ್ರವರಿಗೆ ಅರ್ಪಿಸಲಾಗಿದೆ ಎಂದರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ-ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಆರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಪ್ಯೂಷನ್ ವಿನೋದಾವಳಿಯೊಂದಿಗೆ ನಡೆಯಲಿದೆ. ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನವಿರಲಿದೆ. ಪ್ರೇಕ್ಷಕರಿಗಾಗಿ 15000ಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರಲಿದೆ. ಸಾಂಸ್ಕೃತಿಕ ಕಾರ್ಯಕ್ರಮವು ಕ್ಲಪ್ತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಪ್ರಸಾದ್ ಶೆಟ್ಟಿ, ಕಾರ್ಯಕ್ರಮದ ಸಂಘಟಕ ಅಂಬರೀಶ್ ಚಿಪ್ಳುಣ್ಕರ್, ಕಾಲೇಜಿನ ಕೊಶಾಧಿಕಾರಿ ಎಸ್. ಪಾರ್ಶ್ವನಾಥ್ ಉಪಸ್ಥಿತರಿದ್ದರು.
ಕಾರ್ಮಿಕ ಸಂಹಿತೆ ವಿರೋಧಿಸಿ ನ.26 ರಂದು 10 ಕಾರ್ಮಿಕ ಸಂಘಟನೆಗಳಿಂದ ಬೃಹತ್ ಹೋರಾಟ; ಕಾರಣ ಏನು?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ದೇಶದ 10 ಪ್ರಮುಖ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆಗೆ ನಿರ್ಧರಿಸಿವೆ. ನವೆಂಬರ್ 26 ರಂದು ಪ್ರತಿಭಟನೆಗೆ ಕರೆ ನೀಡಿರುವ ಈ ಸಂಘಟನೆಗಳು, ಹೊಸ ಕಾನೂನುಗಳು ಕೇವಲ ಕಂಪನಿಗಳ ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿದ್ದು, ಕಾರ್ಮಿಕರನ್ನು ಶೋಷಣೆಗೆ ದೂಡುತ್ತಿವೆ ಎಂದು ಆರೋಪಿಸಿವೆ. ಮುಖ್ಯವಾಗಿ ಕಾರ್ಖಾನೆಗಳನ್ನು ಮುಚ್ಚಲು ಮತ್ತು ನೌಕರರನ್ನು ವಜಾ ಮಾಡಲು ಇದ್ದ ನಿಯಮಗಳನ್ನು ಸಡಿಲಿಸಿರುವುದು (ಮಿತಿಯನ್ನು 100 ರಿಂದ 300 ಕಾರ್ಮಿಕರಿಗೆ ಏರಿಸಿರುವುದು) ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹೊಸದಿಲ್ಲಿ : ಇಸ್ಕಾನ್ ನಡೆಸುವ ಶಾಲೆಗಳಲ್ಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿದಾರರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಆಯೋಗಗಳನ್ನು ಸಂಪರ್ಕಿಸುವಂತೆ ಸೂಚಿಸಿದೆ. ಈ ಕುರಿತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಆಂತರಿಕ ದಾಖಲೆಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಸುಳಿವುಗಳನ್ನು ನೀಡುತ್ತದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮಕ್ಕಳ ಹಕ್ಕುಗಳ ಆಯೋಗ ಕೂಡ ಈ ಹಿಂದೆ ಸಲ್ಲಿಸಿದ ಮನವಿಗಳಿಗೆ ಉತ್ತರಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು ಅರ್ಜಿದಾರರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ರಾಜ್ಯ ಆಯೋಗಗಳಿಗೆ ಮತ್ತೊಂದು ಮನವಿಯನ್ನು ಕಳುಹಿಸುವಂತೆ ಸೂಚಿಸಿದ್ದಾರೆ.
`ಗೌತಮ್ ಗಂಭೀರ್ ಏನಾದ್ರೂ ತಿಳಿದುಕೊಳ್ಳಲಿ, ನಾನು ಕ್ಯಾರೇ ಅನ್ನೊಲ್ಲ'; ಕೆ ಶ್ರೀಕಾಂತ್ ಈ ಪಾಟಿ ಗರಂ ಆಗಿರುವುದೇಕೆ?
India Vs South Africa 2nd Test- ಗುವಾಹಟಿ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ನಡೆಸಿರುವು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರಂತೂ ನೇರವಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌತಮ್ ಗಂಭೀರ್ ಅವರ ಆಯ್ಕೆ ನೀತಿಯಲ್ಲಿ ಸ್ಥಿರತೆ ಇಲ್ಲ ಎಂದು ಆರೋಪಿಸಿರುವ ಅವರು ನಿತೀಶ್ ಕುಮಾರ್ ರೆಡ್ಡಿ ಅವರು ಯಾವ ರೀತಿಯಲ್ಲಿ ಆಲ್ರೌಂಡರ್ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದ ಸ್ವರ್ಣ ಶಿಖರದ ಮೇಲೆ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ: ಧ್ವಜದ ವಿಶೇಷತೆಗಳೇನು?
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯ ನೂತನ ಶ್ರೀರಾಮ ಜನ್ಮಭೂಮಿ ದೇವಾಲಯದ 161 ಅಡಿ ಎತ್ತರದ ಗೋಲ್ಡನ್ ಶಿಖರದ ಮೇಲೆ ಮಂಗಳವಾರ ಕೇಸರಿ ಧರ್ಮ ಧ್ವಜವನ್ನು ಹಾರಿಸುವ ಮೂಲಕ ಐತಿಹಾಸಿಕ ಧ್ವಜಾರೋಹಣ ಸಮಾರಂಭವನ್ನು ನೆರವೇರಿಸಿದರು. ಈ ವಿಧಿಯನ್ನು ಬೆಳಿಗ್ಗೆ 11:50 ಕ್ಕೆ ಅಭಿಜಿತ್ ಮುಹೂರ್ತದಲ್ಲಿ ನೆರವೇರಿಸಲಾಯಿತು. 22 ಅಡಿ ಗಾತ್ರದ ಈ ಕೇಸರಿ ಧ್ವಜವು ಸೂರ್ಯ, 'ಓಂ' ಮತ್ತು ಸ್ವಸ್ತಿಕದಂತಹ ಪವಿತ್ರ ಚಿಹ್ನೆಗಳನ್ನು ಒಳಗೊಂಡಿದೆ. ಸಮಾರಂಭದ ನಂತರ ಮಾತನಾಡಿದ ಪ್ರಧಾನಿ, ಇದು ಶತಮಾನಗಳ ಗಾಯಗಳನ್ನು ವಾಸಿ ಮಾಡಿದ ಮತ್ತು 500 ವರ್ಷಗಳ ಸಂಕಲ್ಪವನ್ನು ಈಡೇರಿಸಿದ ಕ್ಷಣ ಎಂದು ಬಣ್ಣಿಸಿದರು.
\ರಾಹುಲ್ ಗಾಂಧಿ ಹೈಕಮಾಂಡ್ ಆದ್ರೆ ಎಐಸಿಸಿ ಅಧ್ಯಕ್ಷ ಖರ್ಗೆ ಕೆಲಸವೇನು?\
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನನಗೇನೂ ಗೊತ್ತಿಲ್ಲ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ವಿಪಕ್ಷಗಳು ಖರ್ಗೆ ಅವರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಅನ್ನು ದಲಿತ ವಿರೋಧಿ ಎಂದು ದೂರುತ್ತಿದೆ. ರಾಹುಲ್ ಗಾಂಧಿ ಹೈಕಮಾಂಡ್ ಆದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಕೆಲಸವೇನು? ಎಂದು ಜೆಡಿಎಸ್ ಪಕ್ಷ
ಚಿಕ್ಕಮಗಳೂರು | ತುಂಗಾ ನದಿಗೆ ಶೃಂಗೇರಿ ಮಠದ ಬಳಿ 89 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ
ಚಿಕ್ಕಮಗಳೂರು: 8ನೇ ಶತಮಾನದಲ್ಲಿ ಆದ್ವೈತ ವೇದಾಂತದ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ಪ್ರಸಿದ್ಧ ತೀರ್ಥಕ್ಷೇತ್ರ ಶೃಂಗೇರಿ ಶಾರದಾ ಪೀಠದ ಬಳಿ ವರ್ಷದ ಹನ್ನೆರಡು ತಿಂಗಳು ಮಠದ ಭಕ್ತಾದಿಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ತೊಂದರೆಯಿಲ್ಲದೆ ನೆರವೇರಿಸಲು ನೀರಿನ ಕೊರತೆಯಾಗದಂತೆ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಬ್ಯಾರೇಜ್ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಶ್ರೀಮಠದ ಮನವಿಯಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಕೋರಿಕೆ, ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ತುಂಗಾ ನದಿಯ ಹರಿವಿನ ಉದ್ದಕ್ಕೂ 19 ಬ್ಯಾರೇಜ್ಗಳ ಯೋಜನೆ ರೂಪಿತವಾಗಿದ್ದರೂ, ವಿಶ್ವೇಶ್ವರಯ್ಯ ಜಲನಿಗಮದ ಸಭೆಯಲ್ಲಿ ಶೃಂಗೇರಿ ಶ್ರೀಮಠಕ್ಕೆ ಸಂಬಂಧಿಸಿದ ಬ್ಯಾರೇಜ್ಗೆ ಮಾತ್ರ ಮಂಜೂರಾತಿ ದೊರೆತಿದೆ. ಯೋಜನೆಯ ಒಟ್ಟು ವೆಚ್ಚ 89 ಕೋಟಿ ರೂ. ಆಗಿದ್ದು, ಶೃಂಗೇರಿ ಮಠದ ತೂಗುಸೇತುವೆಯ ಕೆಳಭಾಗದಲ್ಲಿ ನೀರು ಸಂಗ್ರಹಿಸುವ ಉದ್ದೇಶದಿಂದ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ಅಗತ್ಯವಾದ ಅಡಿಪಾಯ ಪರೀಕ್ಷೆಯ ಟ್ರಯಲ್ ಬೋರ್ ಕಾರ್ಯಕ್ಕಾಗಿ ಒಂದು ಕೋಟಿ ರೂ. ಮೌಲ್ಯದ ಟೆಂಡರ್ನ್ನು ಡಿಸೈನ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆ ಈಗಾಗಲೇ ಪಡೆದಿದೆ. ಮಳೆಯ ಪ್ರಮಾಣ ಕಡಿಮೆಯಾದ ತಕ್ಷಣ ಈ ಕಾರ್ಯ ಆರಂಭವಾಗಲಿದ್ದು, ನದಿಯ ಸುಮಾರು ನಾಲ್ಕರಿಂದ ಐದು ಮೀಟರ್ ಆಳದಲ್ಲಿ ಗಟ್ಟಿಬಂಡೆ ಸಿಗುವವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಅಡಿಪಾಯ ಪರೀಕ್ಷೆ ಪೂರ್ಣಗೊಂಡ ಬಳಿಕ ಮುಖ್ಯ ಕಾಮಗಾರಿ ಪ್ರಾರಂಭವಾಗಲಿದೆ. ಬ್ಯಾರೇಜ್ ಸುಮಾರು 135 ರಿಂದ 140 ಮೀಟರ್ ಅಗಲ ಮತ್ತು ಮೂರು ಮೀಟರ್ ಎತ್ತರ ಹೊಂದಿರಲಿದೆ. ನೀರಿನ ಮಟ್ಟ ‘ಕಪ್ಪೆ ಶಂಕರ’ ಮಟ್ಟದವರೆಗೆ ಮಾತ್ರ ನಿಲ್ಲಲಿದೆ. ನರಸಿಂಹವನಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಯೋಜನೆ ರೂಪಿಸಲಾಗಿದ್ದು, ನದಿಯಲ್ಲಿ ಈಗಿರುವ ಮಣ್ಣು ಮತ್ತು ಶಿಲ್ಟ್ ತೆರವುಗೊಳಿಸಲಾಗುತ್ತದೆ. ಮಣ್ಣು ಕೊರೆಯುವ ಪ್ರದೇಶಗಳಲ್ಲಿ ರಿಟೇನ್ ವಾಲ್ ನಿರ್ಮಿಸಲಾಗುತ್ತಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಸುಯಿಜ್ ಗೇಟ್ ವ್ಯವಸ್ಥೆ ನಿರ್ಮಿಸಲಾಗುವುದು. ಈ ಯೋಜನೆಯಿಂದ ಯಾವುದೇ ಕಾಡು ನಾಶವಾಗುವುದಿಲ್ಲ ಹಾಗೂ ಭೂಮಿ ಮುಳುಗಡೆಯ ಸಾಧ್ಯತೆ ಇಲ್ಲದಿರುವುದರಿಂದ ಇದು ಪರಿಸರ ಸ್ನೇಹಿ ಪ್ರಸ್ತಾಪವಾಗಲಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ ಜಲ ಅಭಿವೃದ್ಧಿ ಸಾಧ್ಯವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಹೆಚ್ಚುವರಿ ಉತ್ತೇಜನ ಲಭ್ಯವಾಗಲಿದೆ. ವರ್ಷಪೂರ್ತಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾದರೆ ಬೋಟಿಂಗ್ ವ್ಯವಸ್ಥೆ ಮತ್ತು ಶೃಂಗೇರಿಯ ಗಾಂಧಿ ಮೈದಾನದಲ್ಲಿ ಸುಂದರ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಸಿಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲುಷಿತ ನೀರು ಮತ್ತು ತ್ಯಾಜ್ಯ ಹರಿವಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಯೋಜನೆಯ ಮುಂದಿನ ಹಂತದಲ್ಲಿ ಶೃಂಗೇರಿ ಮೆಣಸೇ ಸಮೀಪ ಮತ್ತು ಹರಿಹರಪುರ ಮಠದ ಬಳಿಯಲ್ಲಿ ತಲಾ ಒಂದು ಬ್ಯಾರೇಜ್ ನಿರ್ಮಿಸುವ ನಿರ್ಧಾರ ನಿರ್ಮಿಸಲಾಗುವುದು. ಈ ಸಂಪೂರ್ಣ ಯೋಜನೆಯ ಮುಖ್ಯ ಉದ್ದೇಶ ತುಂಗಾ ನದಿ ತೀರದ ಅಂತರ್ಜಲ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಎನ್ನಲಾಗಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ನಾಗರಿಕರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದ್ದು, 9 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ ಇದಕ್ಕೂ ಮೊದಲು ಸೋಮವಾರ ಪೇಷಾವರದಲ್ಲಿ ಪಾಕಿಸ್ತಾನ ಪ್ಯಾರಾಮಿಲಿಟರಿ ಕಚೇರಿ ಮೇಲೆ ನಡೆದ ಆತ್ಮಹತ್ಯಾ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿದೆ.ಇದು ಮತ್ತೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆ ಇದೆ.
ಇನ್ನೂ ಆದಾಯ ತೆರಿಗೆ ರಿಫಂಡ್ ಬಂದಿಲ್ವ? ಕಾರಣಗಳೇನು? ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ವೆರಿಫಿಕೇಷನ್ ಸಮಸ್ಯೆಗಳು, ತಪ್ಪಾದ ಬ್ಯಾಂಕ್ ವಿವರಗಳು ಮತ್ತು ಪ್ರಕ್ರಿಯೆಯಲ್ಲಿನ ವಿಳಂಬಗಳಿಂದಾಗಿ ಈ ವರ್ಷ ಆದಾಯ ತೆರಿಗೆ ರಿಫಂಡ್ಗಳು ತಡವಾಗುತ್ತಿವೆ. ತೆರಿಗೆದಾರರು ಪ್ಯಾನ್ ಕಾರ್ಡ್ ಬಳಸಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್ ಮತ್ತು TIN-NSDL ವೆಬ್ಸೈಟ್ ಮೂಲಕ ರಿಫಂಡ್ ಸ್ಥಿತಿಯನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು. ಸಾಮಾನ್ಯವಾಗಿ ಐಟಿಆರ್ ಇ-ವೆರಿಫಿಕೇಷನ್ ನಂತರ ನಾಲ್ಕರಿಂದ ಐದು ವಾರಗಳಲ್ಲಿ ರಿಫಂಡ್ ನಡೆಯುತ್ತದೆ.
Volcanic Eruption: 12,000 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟ, ಭಾರತೀಯರಿಗೂ ಎದುರಾಯ್ತು ಆಪತ್ತು...
ಮನುಷ್ಯರು ಭೂಮಿ ಮೇಲಿಂದ ನಾಶವಾಗಿ ಹೋಗುವುದು ಇನ್ನೇನು ಖಚಿತವಾಗುತ್ತಿದೆ, ಯಾಕೆ ಅಂದ್ರೆ ಭೂಮಿಗೆ ಮತ್ತು ಪ್ರಕೃತಿಗೆ ಮನುಷ್ಯರು ನೀಡುತ್ತಿರುವ ತೊಂದರೆ ಈಗ ನಾನಾ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಅದರಲ್ಲೂ ಪದೇ ಪದೇ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ಕಾರಣ, ಈಗಾಗಲೇ ಸಾವಿರಾರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ ಮಾನವರು. ಇಂತಹ ಪರಿಸ್ಥಿತಿ ಇರುವಾಗ ವಿಪರೀತ ಮಳೆ, ವಿಪರೀತ ಚಳಿ, ವಿಪರೀತ
ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ | ಸತ್ಯ ಯಾವತ್ತೂ ದಾಖಲೆಯಲ್ಲಿರುತ್ತೆ: ಯು.ಟಿ.ಖಾದರ್
ಬೆಳಗಾವಿಯಲ್ಲಿ ಡಿ. 8ರಿಂದ ವಿಧಾನಮಂಡಲ ಅಧಿವೇಶನ
ಪುರುಷರ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಅಭಿಯಾನಕ್ಕೆ ಮುಂದಾದ ಕರ್ನಾಟಕ ಸರ್ಕಾರ, ಕನ್ನಡಿಗರು ಹೇಳಿದ್ದೇನು ?
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಅಭಿಯಾನಕ್ಕೆ ಮುಂದಾಗಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಕೆಲವರು ಈ ಯೋಜನೆಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿರುವ ಪರಿಣಾಮದಿಂದಲೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಆದರೆ, ಉತ್ತರ ಭಾರತದಲ್ಲಿ ಈ ಯೋಜನೆಯ ಅನುಷ್ಠಾನ
ಭೋಪಾಲ್ : ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಬಿಜೆಪಿ, ಆರೆಸ್ಸೆಸ್ಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಾಯಕರಾಗಿ ನೇಮಿಸಿರುವುದು ಬೆಳಕಿಗೆ ಬಂದಿದೆ. ರಾಜಕೀಯ ಪಕ್ಷವೊಂದರ ಜೊತೆ ನಿಕಟ ಸಂಬಂಧ ಹೊಂದಿದ್ದ ಕೆಲವು ವ್ಯಕ್ತಿಗಳನ್ನು ಬೂತ್ ಮಟ್ಟದ ಅಧಿಕಾರಿಯ ಸಹಾಯಕರಾಗಿ ʼತಪ್ಪಾಗಿʼ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನವೆಂಬರ್ 4ರಂದು ಪ್ರಾರಂಭವಾಯಿತು. ಈ ಪ್ರಕ್ರಿಯೆ ಡಿಸೆಂಬರ್ 4ರವರೆಗೆ ಮುಂದುವರಿಯಲಿದೆ. ಡಿಸೆಂಬರ್ 9 ರಂದು ಕರಡು ಪಟ್ಟಿ ಪ್ರಕಟಣೆಯಾಗಲಿದೆ. ವರದಿಯ ಪ್ರಕಾರ, ರಾಜ್ಯಾದ್ಯಂತ ಪ್ರತಿಯೊಬ್ಬ ಬಿಎಲ್ಒಗೆ ಇಬ್ಬರಿಂದ ಮೂವರು ಸಹಾಯಕರನ್ನು ನಿಯೋಜಿಸಲಾಗಿದೆ. ಕೆಲವು ಬಿಎಲ್ಒ ಸಹಾಯಕರು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ದಾಟಿಯಾ ಜಿಲ್ಲೆಯ ಉಪ ವಿಭಾಗೀಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿಯ ಕಚೇರಿಯಿಂದ ನೀಡಲಾದ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೇಮಕಗೊಂಡ ನಾಲ್ವರು ಸಹಾಯಕರು ಬಿಜೆಪಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದಾಟಿಯಾ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಪ್ನಿಲ್ ವಾಂಖಡೆ ಈ ಕುರಿತು ಪ್ರತಿಕ್ರಿಯಿಸಿ, ಬಿಎಲ್ಒ ಸಹಾಯಕರ ಪಟ್ಟಿಯಲ್ಲಿ ಮೂರು ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ. ನಾನು ಅವರ ಹೆಸರನ್ನು ಸೇರಿಸಲು ಆದೇಶ ಹೊರಡಿಸಲಿಲ್ಲ. ದಾಟಿಯಾ ವಿಧಾನಸಭಾ ಕ್ಷೇತ್ರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಈ ಆದೇಶವನ್ನು ಹೊರಡಿಸಿದ್ದಾರೆ. ಮೂರು ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ. ಈ ಬಗ್ಗೆ ಎಸ್ಡಿಎಂಗೆ ನೋಟಿಸ್ ನೀಡಲಾಗಿದೆ. ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ತಪ್ಪಾಗಿ ಸೇರ್ಪಡೆಗೊಂಡವರನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ ಹೇಳಿಕೆ : ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ದಾಖಲು
ಬೆಂಗಳೂರು : ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಆಧಾರ ರಹಿತ ಹೇಳಿಕೆ ನೀಡಿರುವ ಆರೋಪದಡಿ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ ಯಂಗ್ ಬ್ರಿಗೇಡ್ ಸೇವಾದಳ ಅಧ್ಯಕ್ಷ ಜುನೈದ್ ಪಿ.ಕೆ. ನೇತೃತ್ವದಲ್ಲಿ ವಕೀಲರ ತಂಡ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸೋಮವಾರ(ನ.24) ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಶಾಸಕರಿಗೆ ತಲಾ 50 ಕೋಟಿ ರೂ. ನಗದು, ಒಂದು ಫ್ಲ್ಯಾಟ್ ಹಾಗೂ ಫರ್ಚೂನರ್ ಕಾರು ಕೊಡಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಮಾತ್ರವಲ್ಲದೆ, ಆಧಾರರಹಿತವಾಗಿದೆ. ಒಂದು ವೇಳೆ ಈ ರೀತಿಯ ಘಟನೆ ನಡೆದರೆ ಇದು ಭ್ರಷ್ಟಾಚಾರದ ಒಂದು ಭಾಗವಾಗಿದೆ. ಈ ಬಗ್ಗೆ ಪ್ರಚಾರ ಗಿಟ್ಟಿಸಲು ಕಾಂಗ್ರೆಸ್ ಶಾಸಕರ ಕುರಿತು ಇಲ್ಲಸಲ್ಲದ ಆರೋಪ ಮಾಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
Gruhalakshmi Scheme: ಗೃಹಲಕ್ಷ್ಮಿ 3 ತಿಂಗಳ ಹಣ ಬಾಕಿ: ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
ಕೋಲಾರ, ನವೆಂಬರ್ 25: ರಾಜ್ಯದಲ್ಲಿ ಗೃಹಲಕ್ಷ್ಮಿ ಹಣಕ್ಕೆ ಮಹಿಳೆಯರು ಪ್ರತಿ ತಿಂಗಳೂ ಕಾದು ಕುಳಿತುಕೊಳ್ಳುವಂತೆ ಆಗುತ್ತಿದೆ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಗೃಹ ಲಕ್ಷ್ಮಿ ಹಣ ಜಮಾ ಆಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ರು. ಇದೀಗ ಶೀಘ್ರದಲ್ಲೇ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಡ್ ನ್ಯೂಸ್
Lokayukta Raid: ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ, ಕೋಟಿಗಟ್ಟಲೆ ಆಸ್ತಿ ಹಣ ಪತ್ತೆ
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಬೆನ್ನತ್ತಿದ್ದಾರೆ. ಇಂದು ಹತ್ತು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಭ್ರಷ್ಟ ಅಧಿಕಾರಿಗಳ ನಿವಾಸಗಳಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಹಾಗೂ ಅಕ್ರಮ ಆಸ್ತಿ ಪತ್ತೆಯಾಗಿದೆ. ಮೈಸೂರಿನ ಹೂಟಗಳ್ಳಿ ಪುರಸಭೆ ಕಂದಾಯ ನಿರೀಕ್ಷಕ ರಾಮಸ್ವಾಮಿ ಅವರ ನಗರದ ನಿವಾಸದ ಮೇಲೆ ದಾಳಿ ನಡೆಸಿದಾಗ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು, ಚಿನ್ನಾಭರಣಗಳು
ಒಂದು ಕೋಟಿ ರೂಪಾಯಿ ಶುಲ್ಕದ ವೈದ್ಯಕೀಯ ಪಿಜಿ ಕೋರ್ಸ್ ಸೇರಿದ 'ಆರ್ಥಿಕ ದುರ್ಬಲರು'!
ಹೊಸದಿಲ್ಲಿ: ವಾರ್ಷಿಕವಾಗಿ ಎಂಟು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ ಆರ್ಥಿಕವಾಗಿ ದುರ್ಬಲ (ಇಡಬ್ಲ್ಯುಎಸ್) ವರ್ಗಕ್ಕೆ ಸೇರಿದ 140 ಅಭ್ಯರ್ಥಿಗಳು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಶುಲ್ಕ ವಿಧಿಸಲಾಗುವ ಮ್ಯಾನೇಜ್ಮೆಂಟ್ ಮತ್ತು ಎನ್ಆರ್ಐ ಕೋಟಾ ಅಡಿಯಲ್ಲಿ ಪ್ರವೇಶ ಪಡೆಯಲು ಮಂದಾಗಿರುವುದು ಇಡಬ್ಲ್ಯುಎಸ್ ಮಾನದಂಡದ ವಿಶ್ವಾಸಾರ್ಹತೆಯನ್ನು ಸಂದೇಹದಿಂದ ನೋಡುವಂತೆ ಮಾಡಿದೆ. ಇವರು ಪಿಜಿ ನೀಟ್ ಪರೀಕ್ಷೆಯನ್ನು ಇಡಬ್ಲ್ಯುಎಸ್ ಕೋಟಾದಡಿ ಬರೆದಿದ್ದರು. ಅವರ ರ್ಯಾಂಕಿಂಗ್ ಕಡಿಮೆ ಬಂದಾಗ ಎನ್ಆರ್ಗಳಾಗಿ ಕೋಟಿ ರೂಪಾಯಿಗೂ ಅಧಿಕ ಶುಲ್ಕ ಪಾವತಿಸಿ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಸ್ನಾತಕೋತ್ತರ ತರಬೇತಿ ವೈದ್ಯರೊಬ್ಬರು ಹೇಳಿದ್ದಾರೆ. ಇದು ಕಳೆದ ವರ್ಷ ಕೂಡಾ ನಡೆದಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ತನಿಖೆ ಕೈಗೊಂಡಿಲ್ಲ. ನಕಲಿ ಇಡಬ್ಲ್ಯುಎಸ್ ಪ್ರಮಾಣಪತ್ರದ ಹಾವಳಿಯಿಂದಾಗಿ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ. ಪಿಜಿ ನೀಟ್ ಪರೀಕ್ಷೆಯಲ್ಲಿ 1.1 ಲಕ್ಷಕ್ಕಿಂತ ಕಡಿಮೆ ರ್ಯಾಂಕ್ ಹೊಂದಿದ್ದ ಇಡಬ್ಲ್ಯುಎಸ್ ಅಭ್ಯರ್ಥಿಯೊಬ್ಬರು ಬೆಳಗಾವಿಯ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನ ಚರ್ಮರೋಗ ಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿ ಟ್ಯೂಷನ್ ಫೀಸ್ ವಾರ್ಷಿಕ ಒಂದು ಕೋಟಿ ರೂಪಾಯಿ. 84 ಸಾವಿರಕ್ಕಿಂತ ಕಡಿಮೆ ರ್ಯಾಂಕಿಂಗ್ ಹೊಂದಿದ್ದ ಮತ್ತೊಬ್ಬ ಇಡಬ್ಲ್ಯುಎಸ್ ಅಭ್ಯರ್ಥಿ ಪುದುಚೇರಿ ವಿನಾಯಕ ಮಿಷನ್ಸ್ ಮೆಡಿಕಲ್ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎನ್ಆರ್ಐ ಕೋಟಾ ಅಡಿಯಲ್ಲಿ ಪ್ರವೇಶ ಪಡೆದಿದ್ದು, ಇಲ್ಲಿ ವಾರ್ಷಿಕ ಶುಲ್ಕ 55 ಲಕ್ಷ ರೂಪಾಯಿ. ಮುಂಬೈನ ಡಾ.ಡಿ.ವೈ.ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಲಭ್ಯವಿರುವ 16 ಸೀಟುಗಳ ಪೈಕಿ ನಾಲ್ಕು ಮಂದಿ ಇಡಬ್ಲ್ಯುಎಸ್ ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಸೀಟು ಹಂಚಿಕೆ ಮುಗಿದಿದ್ದು, 27 ಸಾವಿರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಎಂಡಿ, ಎಂಎಸ್ ಮತ್ತು ಪಿಜಿ ಡಿಪ್ಲೋಮಾ ಸೇರಿ 52 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿವೆ. 2.4 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 1.3 ಲಕ್ಷ ಮಂದಿ ಅರ್ಹತೆ ಪಡೆದಿದ್ದಾರೆ.
ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಪೋಟ: ಭಾರತಕ್ಕೆ ಅಪ್ಪಳಿಸಿದ ಬೂದಿ ಮೋಡ; ಏನಿದು, ಇದರ ಪರಿಣಾಮಗಳೇನು?
12,000 ವರ್ಷಗಳ ಬಳಿಕ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು, ಅದರ ಬೂದಿ ಭಾರತವನ್ನು ತಲುಪಿದೆ. ಗುಜರಾತ್ನಿಂದ ಪ್ರವೇಶಿಸಿರುವ ಈ ಬೂದಿ ಮೋಡಗಳು ಪಂಜಾಬ್ ರಾಜಸ್ಥಾನ, ಹರಿಯಾಣ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಆವರಿಸಿದ್ದು, ಆಕಾಶ ಕಪ್ಪಾಗಿ, ಮಂಜುಮಯವಾಗಿ ಕಾಣುತ್ತಿದೆ. ಇದರಿಂದ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣ ವಿಳಂಬವಾಗುವ ಸಾಧ್ಯತೆ ಇದೆ.ಇನ್ನು,ಕೆಲವು ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆಗಳನ್ನು ರದ್ದು ಮಾಡಿವೆ.ಇದರಿಂದಾಗಿ ಹವಾಮಾನದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
India Vs South Africa 2nd Test- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ತೀವ್ರ ಸಂಕಷ್ಟದಲ್ಲಿದೆ. ಕೋಲ್ಕತಾ ಟೆಸ್ಟ್ ಬಳಿಕ ಗುವಾಹಟಿಯಲ್ಲೂ ಭಾರತ ತಂಡ ಬ್ಯಾಟಿಂಗ್ ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ನಾಯಕ ಶುಭಮನ್ ಗಿಲ್ ಅವರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಝುಬೀನ್ ಗರ್ಗ್ ಸಾವು ಆಕಸ್ಮಿಕವಲ್ಲ, ಕೊಲೆ : ಅಸ್ಸಾಂ ವಿಧಾನಸಭೆಗೆ ತಿಳಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ : ಗಾಯಕ ಝುಬೀನ್ ಗರ್ಗ್ ಸಾವು ಆಕಸ್ಮಿಕವಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಅಸ್ಸಾಂ ವಿಧಾನಸಭೆಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ. ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನೀರಿನಲ್ಲಿ ಮುಳುಗಿ ಅಸ್ಸಾಂ ಗಾಯಕ ಝುಬೀನ್ ಗರ್ಗ್ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಪೊಲೀಸರು ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕಿ ಅಮೃತಪರ್ವ ಮಹಾಂತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಝುಬೀನ್ ಗರ್ಗ್ ಸಾವಿನ ಬಗ್ಗೆ ಚರ್ಚಿಸಲು ವಿರೋಧ ಪಕ್ಷ ನಿಳುವಳಿ ಮಂಡಿಸಿತ್ತು. ಈ ವೇಳೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಇದು ಆಕಸ್ಮಿಕ ಘಟನೆಯಲ್ಲ, ಕೊಲೆ ಎಂದು ಹೇಳಿದ್ದಾರೆ.
ಕೊಪ್ಪಳ | ಜಿಲ್ಲಾ ಉಸ್ತುವಾರಿ ಸಚಿವರಿಂದ ಕನಕಗಿರಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ
ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಮಂಗಳವಾರ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ ಅವರು, ಬಡವರಿಗೆ, ಕೂಲಿಕಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿಆಹಾರ ದೊರಕಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಇಲ್ಲಿಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆ ಕಾಪಾಡಬೇಕು. ಶಾಲಾ - ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು , ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಕ್ಯಾಂಟೀನ್ ನಿಂದ ಅನುಕೂಲವಾಗಲಿದೆ ಎಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯ ವಿರೇಶ ಸಮಗಂಡಿ, ಮಾಜಿ ತಾಪಂ ಅಧ್ಯಕ್ಷ ಬಸವಂತ ಗೌಡ, ಮಲ್ಲಿಕಾರ್ಜುನ ಗೌಡ ಪಪಂ ಅಧ್ಯಕ್ಷೆ ಹಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಸಂಗಪ್ಪ ಸಜ್ಜನ, ಅನಿಲ್ ಬಿಜ್ಜಾಳ, ಹನುಮಂತ ಬಸರಿಗಿಡದ, ಸಿದ್ದೇಶ ಕೆ., ರಾಕೇಶ ಕಂಪ್ಲಿ, ಶರಣೇಗೌಡ, ರಾಜಸಾಬ ನಂದಪೂರ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಓ ರಾಜಶೇಖರ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಸಿಡಿಪಿಓ ವಿರುಪಾಕ್ಷಯ್ಯ, ತಾಲುಕು ಗ್ಯಾಂರಟಿ ಸಮಿತಿ ಅಧ್ಯಕ್ಷ ಹಝರತ್ ಹುಸೇನ್ , ಪ್ರಮುಖರಾದ ಸಿದ್ದಪ್ಪ ನಿರಲೂಟಿ, ರವಿ ಪಾಟೀಲ್, ಶರಣಬಸಪ್ಪ ಭತ್ತದ್, ಸಹಾಯಕ ವಿಷಯ ನಿರ್ವಕ ಮಂಜುನಾಥ ನಾಯಕ ಇತರರು ಇದ್ದರು. ಪ್ರಭು ವಸ್ತ್ರದ್ ನಿರೂಪಿಸಿದರು,
ಸಂವಿಧಾನ ರಚನಾ ಸಭೆಯಿಂದ ಮಗಳಿಗೆ ಬರೆದ ಪತ್ರಗಳು
ಎಸ್.ವಿ. ಕೃಷ್ಣಮೂರ್ತಿರಾವ್ ಅವರ ‘ದಿಲ್ಲಿಯ ಪತ್ರಗಳು’ ಕೃತಿ ಅಪರೂಪದ ದಾಖಲೆ. ಕಥನ ಮಾದರಿಯಲ್ಲಿಯೂ ಮಗಳ ಜತೆ ಸಂವಾದದ ಮಾದರಿಯಲ್ಲಿಯೂ ಈ ಪತ್ರಗಳಿವೆ. ಕೆಲವು ಖಾಸಗಿಯಾದ ಆಪ್ತ ಸಂಗತಿಗಳನ್ನೂ ಮಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂವಿಧಾನ ರಚನಾ ಸಭೆಯ ಒಳಗೆ ನಡೆಯುವ ಚರ್ಚೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿದ ದಿನ ಮತ್ತು ಗಾಂಧಿ ಹತ್ಯೆಯಾದ ಸಂದರ್ಭಗಳನ್ನು ಪ್ರತ್ಯಕ್ಷದರ್ಶಿಯಾಗಿ ಸವಿವರವಾಗಿ ಚಿತ್ರಿಸಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಏನೇನು ನಡೆಯಿತು ಎನ್ನುವುದನ್ನು ಮಗಳು ಚಂದ್ರಾಳಿಗೆ ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯು ಚಾರಿತ್ರಿಕ ಮಹತ್ವದ್ದಾಗಿದೆ. ನಾಳೆಗೆ ಸಂವಿಧಾನ ಸಮರ್ಪಣೆ ಆಗಿ 76ನೇ ವರ್ಷಕ್ಕೆ ದಾಟುತ್ತಿದ್ದೇವೆ. ಸದ್ಯಕ್ಕೆ ಸ್ವತಃ ಸಂವಿಧಾನವೇ ಬಿಕ್ಕಟ್ಟಿನಲ್ಲಿದೆ. ಒಂದೆಡೆ ಸಂವಿಧಾನ ಬದಲಾವಣೆ ಚಿತಾವಣೆ, ಮತ್ತೊಂದೆಡೆ ಜನಪರ ಸಂಗಾತಿಗಳು ಸಂವಿಧಾನ ರಕ್ಷಣೆಯ ಜಾಗೃತಿ ಮೂಡಿಸುತ್ತಿರುವುದು ನಡೆಯುತ್ತಿವೆ. ಇಂತಹ ಹೊತ್ತಲ್ಲಿ ಸಂವಿಧಾನ ರಚನಾ ಸಭೆಗಳು ಹೇಗೆ ನಡೆಯುತ್ತಿದ್ದವು, ಒಳ-ಹೊರಗಣ ಚರ್ಚೆಗಳ ಸ್ವಾರಸ್ಯವೇನು ಎನ್ನುವ ಸಂವಿಧಾನ ರಚನಾ ಸಭೆಯ ಅನುಭವಗಳನ್ನು ತನ್ನ ಮಗಳಿಗೆ ಪತ್ರ ಬರೆದು ದಾಖಲಿಸಿದ ಒಂದು ಅಪರೂಪದ ಕೃತಿಯ ಬಗ್ಗೆ ನಿಮ್ಮ ಗಮನಸೆಳೆಯುವೆ. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಕೊಡಗು ಪ್ರಾಂತದಿಂದ ಕೆ.ಎಂ.ಪೊನ್ನಪ್ಪ, ಬಾಂಬೆ ಪ್ರಾಂತದಿಂದ ಎಸ್. ನಿಜಲಿಂಗಪ್ಪ ಮತ್ತು ದಿವಾಕರ್, ಮೈಸೂರು ಪ್ರಾಂತದಿಂದ ಕೆ. ಚಂಗಲರಾಯ ರೆಡ್ಡಿ, ಟಿ. ಸಿದ್ದಲಿಂಗಯ್ಯ, ಎಚ್.ಎಲ್. ಗುರುದೇವರೆಡ್ಡಿ, ಎಸ್.ವಿ. ಕೃಷ್ಣಮೂರ್ತಿ ರಾವ್, ಕೆಂಗಲ್ ಹನುಮಂತಯ್ಯ, ಎಚ್. ಸಿದ್ದವೀರಪ್ಪ ಅವರುಗಳು ಆಯ್ಕೆಯಾಗಿದ್ದರು. ಇದರಲ್ಲಿ ಮೂಲತಃ ಸಂತೇಬೆನ್ನೂರಿನ, ನಂತರ ಶಿವಮೊಗ್ಗ ವಾಸಿಯಾಗಿದ್ದ ಎಸ್.ವಿ. ಕೃಷ್ಣಮೂರ್ತಿರಾವ್ ಸಂವಿಧಾನ ರಚನಾ ಸಭೆಗೆ ದಿಲ್ಲಿಗೆ ತೆರಳುತ್ತಾರೆ. ದಿಲ್ಲಿಗೆ ಹೋದ ದಿನದಿಂದ ಅಂದರೆ 12.07.1947ರಿಂದ 19.2.1948ರ ಮಧ್ಯೆ ಆರು ತಿಂಗಳ ದಿಲ್ಲಿ ವಾಸದ ಕೆಲವು ಅನುಭವಗಳನ್ನು ಮಗಳು ಚಂದ್ರಾಳಿಗೆ ಪತ್ರ ಬರೆಯುತ್ತಾರೆ. ಆ ಪತ್ರಗಳ ದಾಖಲೆಯೇ ‘ದಿಲ್ಲಿಯ ಪತ್ರಗಳು’ ಕೃತಿ. 150 ಪುಟದ ಈ ಕೃತಿಯನ್ನು 1950ರಲ್ಲಿ ಮೈಸೂರಿನ ಆರ್.ಎನ್. ಹಬ್ಬು ಅವರ ಉಷಾ ಸಾಹಿತ್ಯ ಮಾಲೆಯ ಉಷಾ ಪ್ರೆಸ್ನಿಂದ ಪ್ರಕಟಿಸಿದ್ದಾರೆ. ಇದೊಂದು ಅಪರೂಪದ ದಾಖಲೆ. ಕಥನ ಮಾದರಿಯಲ್ಲಿಯೂ ಮಗಳ ಜತೆ ಸಂವಾದದ ಮಾದರಿಯಲ್ಲಿಯೂ ಈ ಪತ್ರಗಳಿವೆ. ಕೆಲವು ಖಾಸಗಿಯಾದ ಆಪ್ತ ಸಂಗತಿಗಳನ್ನೂ ಮಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂವಿಧಾನ ರಚನಾ ಸಭೆಯ ಒಳಗೆ ನಡೆಯುವ ಚರ್ಚೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿದ ದಿನ ಮತ್ತು ಗಾಂಧಿ ಹತ್ಯೆಯಾದ ಸಂದರ್ಭಗಳನ್ನು ಪ್ರತ್ಯಕ್ಷದರ್ಶಿಯಾಗಿ ಸವಿವರವಾಗಿ ಚಿತ್ರಿಸಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಏನೇನು ನಡೆಯಿತು ಎನ್ನುವುದನ್ನು ಮಗಳು ಚಂದ್ರಾಳಿಗೆ ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯು ಚಾರಿತ್ರಿಕ ಮಹತ್ವದ್ದಾಗಿದೆ. ಜುಲೈ 17, 1947ರಲ್ಲಿ ಬರೆದ ಪತ್ರದಲ್ಲಿ ರಾವ್ ಅವರು, ‘ಸಂವಿಧಾನ ರಚನಾ ಸಭೆ ಸೇರಿ ನಿನ್ನೆಗೆ ಮೂರು ದಿನವಾಯಿತು, ನಿನ್ನೆ ಮಾತನಾಡಲು ಅವಕಾಶ ಕಲ್ಪಿಸಿಕೊಂಡೆ. ಸಾಮಾನ್ಯವಾಗಿ ದಿವಾನರಿಗೂ ನನಗೂ (ಕಾಂಗ್ರೆಸ್) ಸ್ವಲ್ಪ ದೂರದೂರವೇ. ನನ್ನ ಮಾತು ಮುಗಿಯುತ್ತಲೇ ನಾನು ಇರುವ ಸ್ಥಳಕ್ಕೆ ಬಂದು ಬಹಳ ಚೆನ್ನಾಗಿತ್ತು ಎಂದು ಹೊಗಳಿದರು. ಈಗ ಸಭೆ 3ರಿಂದ ಸಂಜೆ 6ರವರೆಗೆ ನಡೆಯುತ್ತಿದೆ. ಹೊರಗಡೆ ಕಾಫಿ, ಟೀಗೆ ಬಂದಾಗ ಎಲ್ಲರನ್ನೂ ನೋಡಬಹುದು, ಮಾತನಾಡಿಸಬಹುದು, ಪರಿಚಯವಿದ್ದರೆ ಕುಳಿತು ಹರಟೆ ಹೊಡೆಯಬಹುದು. ನಿನ್ನೆ ಡಾಕ್ಟರ್ ಅಂಬೇಡ್ಕರ್ ಪರಿಚಯವಾಯಿತು. ಮೊದಲು ಕಾಂಗ್ರೆಸ್ ಕಂಡರೆ ಕೆಂಡ ಕಾರುತ್ತಿದ್ದರು. ಈಗ ಕಾಂಗ್ರೆಸ್ನವರ ಬೆಂಬಲದಿಂದಲೇ ಸದಸ್ಯರಾಗಿದ್ದಾರೆ. ಮೌಲಾನ ಅಬ್ದುಲ್ ಕಲಾಂ ಆಝಾದ್, ಕೃಪಲಾನಿ ಮುಂತಾಗಿ ಎಲ್ಲರೂ ಟೀಗೆ ಬಂದಾಗ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ’ ಎಂದು ಬರೆಯುತ್ತಾರೆ. ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿ ಬಂದಿದ್ದ ದೇಶೀ ಸಂಸ್ಥಾನಗಳ ದಿವಾನರುಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಚಿತ್ರಿಸಲಾಗಿದೆ. ‘‘ಇದುವರೆಗೆ ದಿವಾನರುಗಳು ದೂರದೂರವೇ ಇದ್ದರು. ಅವರ ಜರೀ ಪೇಟಗಳಿಗೆ ಇಲ್ಲಿ ಬೆಲೆಯೇ ಇಲ್ಲ. ರಾಷ್ಟ್ರದ ಮಹಾನಾಯಕರುಗಳ ಮಧ್ಯೆ ಅವರನ್ನು ಕೇಳುವವರೇ ಇಲ್ಲ. ಈಗ ಅವರಿಗೂ ಸ್ವಲ್ಪ ಬಿಸಿ ತಗಲಿದೆ, ಪ್ರಜೆಗಳ ಸಹಾಯವಿಲ್ಲದೆ ತಮ್ಮ ಬಂಡವಾಳ ಏನೂ ನಡೆಯುವುದಿಲ್ಲ ಎಂದು ಗೊತ್ತಾಗಿರುವಂತೆ ತೋರುತ್ತೆ’’ ಎನ್ನುತ್ತಾರೆ. ರಾವ್ ಅವರು ಅಂಬೇಡ್ಕರ್ ಅವರ ಬಗ್ಗೆ ‘‘ಡಾಕ್ಟರ್ ಅಂಬೇಡ್ಕರ್ ಅವರ ವಿದ್ವತ್ತು ಅಪಾರವಾದುದು. ಅವರು ಬಹು ಸ್ಪಷ್ಟವಾಗಿಯೂ ಆಧಾರಭೂತವಾಗಿ ಮಾತನಾಡುತ್ತಾರೆ. ಅವರು ಪಟ್ಟು ಹಿಡಿದರೆ ಕದಲಿಸುವುದು ಕಷ್ಟ. ಆದರೆ ತಮ್ಮ ವಾದವು ತಪ್ಪೆಂದು ಗೊತ್ತಾದರೆ ಒಡನೆಯೇ ಒಪ್ಪಿಕೊಳ್ಳುತ್ತಾರೆ. ಸ್ವಲ್ಪ ಕಠಿಣವಾದಿಗಳು. ಒಮ್ಮೆ ಒಬ್ಬರಿಗೆ ‘ಗ್ಯಾಲರಿಗಳು ಖಾಲಿ ಇವೆ. ಸಭೆಯ ಕಾಲಹರಣ ಏಕೆ ಮಾಡುತ್ತೀರಿ?’ ಎಂದರು. ಶ್ರೀಮತಿ ಸರೋಜಿನಿ ನಾಯ್ಡು ಅವರು ಭವಿಷ್ಯವಾದಿಯಂತೆ ‘ಇಂದು ಇಷ್ಟು ಕಹಿ ಮನಸ್ಸಿನವರಾದ ಡಾ.ಅಂಬೇಡ್ಕರ್, ಬಹು ಸ್ವಲ್ಪ ಕಾಲದಲ್ಲೇ ಈ ವಿಧಾನ ಸಭೆಯ ಎಲ್ಲಾ ಉದ್ದೇಶಗಳಿಗೂ ಪ್ರಬಲ ಸಮರ್ಥಕರಾಗುತ್ತಾರೆ. ಅವರ ಮೂಲಕ ಅವರ ಕೋಟ್ಯಂತರ ಅನುಯಾಯಿಗಳಿಗೆ ಉತ್ತಮರಂತೆ ತಮಗೂ ಇಲ್ಲಿ ಪೂರ್ಣ ರಕ್ಷಣೆ ದೊರೆಯುತ್ತದೆ ಎಂಬ ಭರವಸೆ ಬರುವುದೆಂದು ಆಶಿಸುತ್ತೇನೆ ಮತ್ತು ನನ್ನ ಆಸೆಯು ಸರಿ ಎಂದು ನಂಬಿದ್ದೇನೆ’ ಎಂದರು. ಈಗ ಆ ವಾಣಿ ಕೇಳದು ಆದರೆ ಭವಿಷ್ಯ ಮಾತ್ರ ಸತ್ಯವಾಗಿದೆ.’’ (ಪು:131) ಎನ್ನುತ್ತಾರೆ. 1947ರಲ್ಲಿ ಪ್ರಕಟವಾದ ಡಾ.ಎಸ್.ಎಂ. ಹುಣಶ್ಯಾಳ್ ಅವರ ‘ಲಿಂಗಾಯತ ಮೂವ್ಮೆಂಟ್ ಕೃತಿಯನ್ನು ಹೊರತುಪಡಿಸಿದರೆ ಅಂಬೇಡ್ಕರ್ ಅವರನ್ನು ಕರ್ನಾಟಕದ ಸಂದರ್ಭದಲ್ಲಿ ಉಲ್ಲೇಖಿಸುವ ಎರಡನೇ ಗ್ರಂಥ ಇದೇ ಇರಬೇಕು. ಪಂಡಿತ್ ಜವಾಹರಲಾಲ್ ನೆಹರೂ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ‘‘ನೆಹರೂ ಭಾವಾವೇಶದಿಂದ ಮಾತನಾಡುತ್ತಾರೆ. ಅವರದು ಅಂತರ್ರಾಷ್ಟ್ರೀಯ ದೃಷ್ಟಿ, ಒಂದು ತಲೆಮಾರಾದರೂ ಮುಂದೆ ನೋಡಿರುತ್ತಾರೆ’’ ಎನ್ನುತ್ತಾರೆ. ಅಂತೆಯೇ ನೆಹರೂ ಅವರು ಕಾರ್ಪೊರೇಟ್ ಬಂಡವಾಳಶಾಹಿಯನ್ನು ಹೇಗೆ ವಿರೋಧಿಸುತ್ತಿದ್ದರು ಎನ್ನುವುದಕ್ಕೆ ರಾವ್ ಅವರು ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ, ‘‘ರಾತ್ರಿ ಪಾರ್ಟಿ ಮೀಟಿಂಗ್, ಭಾರತದ ಸಂಯುಕ್ತ ಸರಕಾರದ ಅಧ್ಯಕ್ಷರಿಗೆ ಅವಸರದ ಸಂದರ್ಭಗಳಲ್ಲಿ ವಿಶೇಷಾಧಿಕಾರ ಇರಬೇಕೇ ಬೇಡವೇ ಎಂಬ ಪ್ರಶ್ನೆಗೆ ಶ್ರೀ ಡಿ. ಪಿ. ಬೈತಾನರು ‘ಇರಬೇಕು’ ಎಂದು ಒಂದು ತಿದ್ದುಪಡಿ ಸೂಚಿಸಿದರು. ಪಂಡಿತ್ ಜವಹರಲಾಲರ ಮೈ ಬೆಂಕಿಯಾಯಿತು. ಕೆನ್ನೆಗೆ ರಪರಪ ಹೊಡೆದಂತೆ ಸಿಟ್ಟಿನಿಂದ ‘ನಾವು ಪ್ರಜಾ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿದ್ದೇವೆ. ಒಬ್ಬ ವ್ಯಕ್ತಿಯು ಎಷ್ಟೇ ದೊಡ್ಡವನಾಗಿರಲಿ ಆತನಲ್ಲಿ ಸರ್ವಾಧಿಕಾರ ವಹಿಸುವುದು ದೊಡ್ಡ ತಪ್ಪು. ಅದು ಫ್ಯಾಶಿಸ್ಟ್ ಮತ್ತು ಹಿಟ್ಲರಿಸಂ ನೀತಿ. ಆ ನೀತಿಯನ್ನು ಪ್ರತಿಪಾದಿಸುವವರು ಈ ಸಭೆಯಲ್ಲೇ ಇರಲು ಅಯೋಗ್ಯರು’ ಎಂದುಬಿಟ್ಟರು. ಬೈತಾನರೆಂದರೆ ಬಿರ್ಲಾ ಕಂಪೆನಿಗಳ ಮ್ಯಾನೇಜರು. ಅವರ ವರಮಾನ ತಿಂಗಳಿಗೆ 20,000 ರೂಪಾಯಿ ಇರಬಹುದು. ಬಿರ್ಲಾಗಳು ಕೋಟ್ಯಧೀಶ್ವರರು. ಜವಾಹರರ ಭಾಷಣ ಕೇಳಿ ಬೈತಾನರು ತಣ್ಣಗಾಗಿ ಒನಕೆಹುಳ ಮುದುರಿದಂತೆ ಮುದುರಿಕೊಂಡರು. ಕೊನೆಗೆ ತಮ್ಮ ತಿದ್ದುಪಡಿಯನ್ನು ವಾಪಸ್ ತೆಗೆದುಕೊಂಡರು’’ (ಪು.22) ಎನ್ನುತ್ತಾರೆ. ಇದು ನೆಹರೂ ಅವರ ಪ್ರಜಾಪ್ರಭುತ್ವದ ಬಗೆಗಿನ ದೃಷ್ಟಿಕೋನ. ನಾವು ಕರ್ನಾಟಕದ ಏಕೀಕರಣದ ಬಗ್ಗೆ ತಿಳಿದಿದ್ದೇವೆ, ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟಕ್ಕೆ ಸೇರಿಸಲು ದೊಡ್ಡ ಚಳವಳಿ ನಡೆದುದನ್ನು ಓದಿದ್ದೇವೆ. ಆದರೆ ಮೈಸೂರು ಸಂಸ್ಥಾನ ಕೂಡ ತಕ್ಷಣಕ್ಕೆ ಒಕ್ಕೂಟ ಸರಕಾರ ಸೇರಲಿಲ್ಲ. ಅದಕ್ಕಾಗಿ ಮೈಸೂರು ಪ್ರಾಂತದಲ್ಲಿ ‘ಮೈಸೂರು ಚಲೋ’ ಎಂಬ 42 ದಿನಗಳ ಹೋರಾಟ ನಡೆಯುತ್ತದೆ. ‘ಮೈಸೂರು ಕಾಂಗ್ರೆಸ್ ವರ್ಕಿಂಗ್ ಕಮಿಟಿ’ ಸದಸ್ಯರು ‘ಮೈಸೂರು ಚಲೋ ಘೋಷಣೆ ಮಾಡಿ ಅರಮನೆಗೆ ಸತ್ಯಾಗ್ರಹಕ್ಕಾಗಿ ಹೊರಟಿದ್ದು, ಹೆಂಡದ ಅಂಗಡಿ ಪಿಕೆಟಿಂಗ್, ಸರಕಾರಿ ಕಟ್ಟಡಗಳ ಮೇಲೆ ಧ್ವಜ ಹಾರಿಸಲು ಹೂಡಿದ ಸತ್ಯಾಗ್ರಹ, ಸಂಸ್ಥಾನದ ಮೂಲೆ ಮೂಲೆಗಳಿಂದ ರೈತರ ತಂಡಗಳು ‘ಮೈಸೂರು ಚಲೋ’ ಸತ್ಯಾಗ್ರಹ ಹೊರಟಿದ್ದು, ವಿದ್ಯಾರ್ಥಿಗಳ ಮುಷ್ಕರ, ರೈಲ್ವೆ ಮುಷ್ಕರ, ಅರಣ್ಯ ಸತ್ಯಾಗ್ರಹ, ಬೆಂಗಳೂರಿನಲ್ಲಿ ಪೊಲೀಸಿನವರ ಮುಷ್ಕರ, ಗುಂಡಿನೇಟುಗಳು, ಲಾಠಿ ಪ್ರಹಾರಗಳು, ರಾಜಘೋಷಣೆ ಹೊರಡಿಸಿ ಸತ್ಯಾಗ್ರಹವನ್ನು ಮುರಿಯಲು ಶ್ರೀ ರಾಮಸ್ವಾಮಿ ಮೊದಲಿಯಾರರು ಮಾಡಿದ ಪ್ರಯತ್ನ-ಸುತ್ತಲೂ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದವರ ಸಹಾಯ, ಕೊನೆಗೆ ಮೈಸೂರು ಅರಮನೆ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದನ್ನು ದಾಖಲಿಸುತ್ತಾ ಕೃಷ್ಣಮೂರ್ತಿ ರಾವ್ರವರು ಜೈಲಿಗೆ ಹೋದದ್ದು ನೆನಪಿಸಿಕೊಂಡಿದ್ದಾರೆ. (ಪು:69) ಸಂವಿಧಾನ ರಚನಾ ಸಭೆಗಳು ನಡೆಯುವ ಸಂದರ್ಭದಲ್ಲಿಯೇ ರಾಷ್ಟ್ರದ್ವಜ ಸಂವಿಧಾನ ಸಭೆಯಲ್ಲಿ ಅಂಗೀಕಾರವಾಗುತ್ತದೆ. ರಾಷ್ಟ್ರಧ್ವಜದ ಬಗೆಗೆ ಚರ್ಚೆ ಭಾಷಣಗಳು ನಡೆಯುತ್ತವೆ. ಅಂತೆಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದ ದೇಶವಾಸಿಗಳ ಸಂತಸವನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದಾರೆ. ಅಂತೆಯೇ ಗಾಂಧಿಯ ಹತ್ಯೆ ಮತ್ತು ಇಡೀ ದೇಶ ಗಾಂಧಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರ ಬಗ್ಗೆ ವಿವರವಾಗಿ ಬರೆದಿದ್ದಾರೆ. ಎಸ್.ವಿ. ಕೃಷ್ಣಮೂರ್ತಿ ರಾವ್ ಅವರು ಸಂತೇಬೆನ್ನೂರಿನ ವಾದಿರಾಜಾಚಾರ್ ಹಾಗೂ ನಾಗೂಬಾಯಿ ದಂಪತಿ ಮಗನಾಗಿ 1902ರ ನವೆಂಬರ್ 15ರಂದು ಜನಿಸಿದರು. ಸಂತೇಬೆನ್ನೂರಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಚಿಕ್ಕಮಗಳೂರಿನಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಪುಣೆಯಲ್ಲಿ ಕಾನೂನು ಪದವಿ ಪಡೆದು 1927ರಲ್ಲಿ ಶಿವಮೊಗ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮಾ ಗಾಂಧಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಭಾರತೀಯ ಕಾಂಗ್ರೆಸ್ ಪಕ್ಷ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರ ಪರಿಣಾಮ ರಾವ್ ಅವರನ್ನು 18 ತಿಂಗಳು ಜೈಲಿನಲ್ಲಿರಿಸಲಾಯಿತು. ಜೈಲಿನಲ್ಲಿ ಗಾಂಧೀಜಿಯವರ ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’, ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’, ಸರ್.ಎಂ. ವಿಶ್ವೇಶ್ವರಯ್ಯ ಅವರ ‘ಪ್ಲಾನ್ಸ್ ಇಕಾನಮಿ ಫಾರ್ ಇಂಡಿಯಾ’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೈಲಿನಿಂದ ಹೊರಬಂದ ಮೇಲೆ ಅವುಗಳನ್ನು ಪ್ರಕಟಿಸಿದ್ದರು. ಉಳಿದಂತೆ ಗಾಂಧೀಜಿಯವರ ‘ಟು ದಿ ವುಮೆನ್’, ‘ಲೈಫ್ ಆಫ್ ಲೂಯಿಸ್ ಪಾಶ್ಚರ್’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷ್ನಲ್ಲಿ ‘ದಿ ಲೆಫ್ಟಿಸ್ಟ್ ಎಕ್ಸ್ ಪರಿಮೆಂಟ್ಸ್’ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಮಗಳಿಗೆ ಬರೆದ ‘ದಿಲ್ಲಿಯ ಪತ್ರಗಳು’ ಮಹತ್ವದ ಕೃತಿಯಾಗಿದೆ. ರಾವ್ ಅವರು ಅನೇಕ ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು (1937-1947), ಮೈಸೂರಿನ ಕೈಗಾರಿಕೆ ಮತ್ತು ವಾಣಿಜ್ಯ ಯೋಜನಾ ಸಮಿತಿಯ ಸದಸ್ಯರಾಗಿದ್ದರು (1945-1948), ಮೈಸೂರು ಪ್ರಜಾ ಪ್ರತಿನಿಧಿ ಸಭೆಗೆ ಆಯ್ಕೆಯಾದರು (1945-1949), ಭಾರತದ ತಾತ್ಕಾಲಿಕ ಸಂಸತ್ತಿನ ಅಧ್ಯಕ್ಷರ ಸಮಿತಿಯಲ್ಲೂ ಇದ್ದರು. ರಾಜ್ಯಸಭೆಯ ಮೊದಲ ಉಪಾಧ್ಯಕ್ಷರಾಗಿದ್ದರು (31 ಮೇ 1952- 1 ಮಾರ್ಚ್ 1962), 1962 ರಿಂದ ಲೋಕಸಭೆಯಲ್ಲಿ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಘವನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಹಲವು ಪ್ರೌಢಶಾಲೆ ಮತ್ತು ಮಧ್ಯಮಿಕ ಶಾಲೆಗಳನ್ನು ನಡೆಸುತ್ತಿತ್ತು. ರಾವ್ ತಮ್ಮ ಜೀವಿತಾವಧಿಯಲ್ಲಿ ಜಪಾನ್, ಆಸ್ಟ್ರೇಲಿಯ, ಇಂಡೋನೇಶ್ಯ, ಕೆನಡಾ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿದರು. ಅವರು 18 ನವೆಂಬರ್ 1968ರಂದು ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು.
ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಎಸ್. ಎಸ್ ಮತ್ತಿಕಟ್ಟಿ ಮನೆ ಮೇಲೆ ಲೋಕಾಯುಕ್ತ ದಾಳಿ
ಹಾವೇರಿ: ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಸಂಪತ್ತು ಗಳಿಕೆ ಆರೋಪ ಹೊಂದಿರುವ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಅವರಿಗೆ ಸಂಬಂಧಿಸಿದ ಮನೆಗಳು, ವಾಣಿಜ್ಯ ಸಂಕೀರ್ಣ ಸೇರಿ 6 ಕಡೆ ದಾಳಿ ನಡೆದಿದೆ. ಶೇಖಪ್ಪ ಒಟ್ಟು 17 ನಿವೇಷನಗಳು, 1 ವಾಣಿಜ್ಯ ಕಟ್ಟಡ, 2 ವಸತಿ ಕಟ್ಟಡಗಳು ಸೇರಿದಂತೆ ಸಂಬಂಧಿಕರ ಹೆಸರಲ್ಲೂ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 3, 46, 68,587 ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರೋ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಅವರು, ಹುಬ್ಬಳ್ಳಿ ಅಕ್ಷಯ ಪಾರ್ಕ್ ನಲ್ಲಿ 3 ಗುಂಟೆ 8 ಅಣೆ ವಿಸ್ತೀರ್ಣದ ಕಮರ್ಷಿಯಲ್ ಕಾಂಪ್ಲೆಕ್ಸ್, ಹುಬ್ಬಳ್ಳಿ ಬೈರಿದೇವರಿಕೊಪ್ಪ ಗ್ರಾಮದಲ್ಲಿ 2 ಅಂತಸ್ತಿನ ಮನೆ, ದಾವಣಗೆರೆಯಲ್ಲಿಯೂ ಮನೆ ಸೇರಿದಂತೆ ಹಲವು ಕಡೆ ಅಕ್ರಮ ಹಣದಲ್ಲಿ ಆಸ್ತಿ ಖರೀದಿಸಿರುವ ಆರೋಪ ಕೇಳಿ ಬಂದಿದೆ.
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮಾತ್ರವಲ್ಲ, ವಿಶೇಷ ಚೇತನರಿಗೂ ಮೀಸಲಾತಿ: ಉಲ್ಲಂಘಿಸಿದರೆ ₹5 ಲಕ್ಷ ದಂಡ!
ಕರ್ನಾಟದಲ್ಲಿ ವಿಶೇಷ ಚೇತನರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. 2025ರ 'ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಂಗವಿಕಲರ ಹಕ್ಕುಗಳ ಮಸೂದೆ'ಯ ಕರಡನ್ನು ಸರ್ಕಾರ ಪ್ರಕಟಿಸಿದೆ. ಇದರನ್ವಯ, 20ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಖಾಸಗಿ ಸಂಸ್ಥೆಗಳಲ್ಲಿ ಶೇಕಡಾ 5ರಷ್ಟು ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಿಡಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿ ಕೋರ್ಸ್ನಲ್ಲೂ ಶೇಕಡಾ 10ರಷ್ಟು ಸೀಟುಗಳನ್ನು ಮೀಸಲಿಡಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಕಠಿಣ ಕ್ರಮಗಳನ್ನೂ ಈ ಮಸೂದೆ ಒಳಗೊಂಡಿದೆ.
ಹಾಸನ | ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮಾರ್ಗದರ್ಶನ ಶಿಬಿರ ಅಗತ್ಯ : ಎಚ್.ಪಿ.ಮೋಹನ್
ಹಾಸನ: “ವೃತ್ತಿ ಮಾರ್ಗದರ್ಶನ ಶಿಬಿರವು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ತಮ್ಮ ಭವಿಷ್ಯವನ್ನು ದೃಢವಾಗಿ ರೂಪಿಸಿಕೊಳ್ಳಲು ಮಹತ್ವದ ವೇದಿಕೆ” ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ಮೋಹನ್ ಅಭಿಪ್ರಾಯಪಟ್ಟರು. ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿನಿಯರಿಗಾಗಿ ಮೀಫ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಲಿಕೆ ದಿಸೆಯಲ್ಲಿಯೇ ಮುಂದೆ ತಮಗಿರುವ ವೃತ್ತಿ ಅವಕಾಶಗಳ ಬಗ್ಗೆ ಜಾಗೃತಿಯಿದ್ದರೆ ಅವರ ಭವಿಷ್ಯ ರೂಪಿಸಿಕೊಳ್ಳಲು ಅವಕಾಶಗಳು ತೆರೆದುಕೊಳ್ಳುತ್ತವೆ ಎಂದರು. ಮಂಗಳೂರು ಮೀಫ್ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಮಾತನಾಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಒಕ್ಕೂಟವನ್ನು ರಚಿಸಲಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶದೊಂದಿಗೆ ಶಿಕ್ಷಣ ನೀಡುವ ಕಾರ್ಯ ಮೀಫ್ ಸಂಸ್ಥೆಯ ಮೂಲಕ ನಡೆಯುತ್ತಿದೆ ಎಂದು ಹೇಳಿದರು. ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಗೌರವ ಸಲಹೆಗಾರ ಎಸ್.ಎಸ್.ಪಾಷ ಸಂಸ್ಥೆಯ ಧ್ಯೇಯ, ಉದ್ದೇಶ ಹಾಗೂ ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ಅದರ ಪಾತ್ರವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಕಾನೂನು ಕಾಲೇಜು ಪ್ರಾಂಶುಪಾಲ ಫೈರೋಜ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಮೀಫ್ನ ಸಿವಿಲ್ ಸರ್ವಿಸ್ ತರಬೇತುದಾರ ಶಿಹಾಬುದ್ದೀನ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತರಬೇತಿ ತರಗತಿ ನಡೆಸಿದರು. 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಬಿರದಲ್ಲಿ ಭಾಗವಹಿಸಿದರು. ವೈದ್ಯ ಡಾ.ಫರ್ಹಾನ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಅತೀಖುರ್ ರೆಹಮಾನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಎಂ.ಶಿಲ್ಪಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೌಸರ್ ಅಹಮದ್, ಗೌರವ ಅಧ್ಯಕರು ಸೈಯದ್ ತಾಜ್, ಮುಸ್ತಾಫ, ಉಪಾಧ್ಯಕ್ಷರು ಮೀಫ್ ಮಂಗಳೂರು, ಜನಪ್ರಿಯ ಆಸ್ಪತ್ರೆ ವೈದ್ಯ ಅಬ್ದುಲ್ ಬಷೀರ್, ಇಲ್ಯಾಜ್ ಬೇಗ್, ಶೀರೂ, ಮುಹಮ್ಮದ್ ಇಸಾಖ್, ಸಾಬೀರ್ ಅಹ್ಮದ್ ಹಾಗೂ ಆಜಂ ಖಾನ್ ಉಪಸ್ಥಿತರಿದ್ದರು.
ನಾನು ಸನ್ಯಾಸಿ ಅಲ್ಲ, ಬೆಳಗಾವಿ ಅಧಿವೇಶನದ ಬಳಿಕ ಗೊಂದಲಕ್ಕೆ ಪೂರ್ಣವಿರಾಮ: ಲಕ್ಷ್ಮಣ ಸವದಿ ಭವಿಷ್ಯ
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆ ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಮಂದಿ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ ನಾನು ಸನ್ಯಾಸಿ ಅಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಗೊಂದಲಕ್ಕೆ ಬೆಳಗಾವಿ ಅಧಿವೇಶನದ ಬಳಿಕ ತೆರೆ ಬೀಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಅವರು ಏನು ಹೇಳಿದ್ದಾರ ಎಂಬ ವಿವರ ಇಲ್ಲಿದೆ.
ರಾಯಚೂರು: ರಸ್ತೆ ಕಾಮಗಾರಿ ವಿಳಂಬ; ಅಧಿಕಾರಿಗೆ ಸಚಿವ ಎನ್ ಎಸ್ ಬೋಸರಾಜು ತರಾಟೆ
ರಾಯಚೂರು:ರಸ್ತೆ ಕಾಮಗಾರಿ ನಡೆಸುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರನ್ನು ವಿರುದ್ಧ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ಘಟನೆ ಸಿರವಾರ ತಾಲ್ಲೂಕಿನ ಮರಾಟ ಗ್ರಾಮದಲ್ಲಿ ರವಿವಾರ ನಡೆದಿದೆ. ಮರಾಟ ಗ್ರಾಮದ ಶಾಲಾ ಕಟ್ಟಡ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ಮರಾಟ ಹಾಗೂ ಬಾಗಲವಾಡ ಗ್ರಾಮಗಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಸಚಿವರಿಗೆ ದೂರು ನೀಡಿದರು. ಸರ್ಕಾರದಿಂದ ಈ ರಸ್ತೆಗಾಗಿ ಈಗಾಗಲೇ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಆರಂಭಿಸದ ವಿಷಯ ತಿಳಿದು ಸಚಿವರು ಕೋಪಗೊಂಡರು. ಈ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಹಾಗೂ ಸಂಸದ ಕುಮಾರ್ ನಾಯಕ್ ಕೂಡ ಇದ್ದರು.
ಆರೆಸ್ಸೆಸ್ನ ಅಮೆರಿಕದ ಲಾಬಿ ಕುರಿತ ಗಂಭೀರ ಪ್ರಶ್ನೆಗಳು
ಅಕ್ಟೋಬರ್ 2025ರ ಆರಂಭದಲ್ಲಿ, ಹೊಸದಿಲ್ಲಿಯಲ್ಲಿ ನಡೆದ ಎರಡು ವ್ಯತಿರಿಕ್ತ ಘಟನೆಗಳು ಭಾರತದಲ್ಲಿ ನಡೆಯುತ್ತಿರುವ ಸೈದ್ಧಾಂತಿಕ ವಿಭಜನೆಯನ್ನು ಎತ್ತಿ ತೋರಿಸಿದವು. ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್ನ 100ನೇ ವಾರ್ಷಿಕೋತ್ಸವವನ್ನು ಅದರ ಕೊಡುಗೆಗಳನ್ನು ಶ್ಲಾಘಿಸುವ ಮೂಲಕ ಮತ್ತು ಅಂಚೆ ಚೀಟಿಯನ್ನು ಅನಾವರಣಗೊಳಿಸುವ ಮೂಲಕ ಗುರುತಿಸಿದರೆ, ಎಬಿವಿಪಿ ಸದಸ್ಯರು, ಕಾರ್ಯಕರ್ತರು ಮತ್ತು ಮಾವೋವಾದಿ ವ್ಯಕ್ತಿಗಳನ್ನು ರಾವಣನಂತೆ ಚಿತ್ರಿಸಿದ ನಂತರ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು ಘರ್ಷಣೆಗಳಿಗೆ ಸಾಕ್ಷಿಯಾಯಿತು. ಪ್ರತಿಭಟನೆಗಳು ಚಪ್ಪಲಿ ಬೀಸುವ ಘರ್ಷಣೆಯಾಗಿ ಉಲ್ಬಣಗೊಂಡವು, ನಂತರ ಇದನ್ನು ಆನ್ಲೈನ್ನಲ್ಲಿ ‘‘ಮಾ ದುರ್ಗಾವನ್ನು ಅವಮಾನಿಸುವ ಎಡಪಂಥೀಯರು’’ ಎಂದು ಮರುರೂಪಿಸಲಾಯಿತು, ಇದು 2016ರ ಜೆಎನ್ಯು ವಿವಾದವನ್ನು ಪ್ರತಿಧ್ವನಿಸಿತು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಚಪ್ಪಲಿಗಳನ್ನು ಎಸೆದಾಗ ಮತ್ತು ಅವರನ್ನು ಸನಾತನ ವಿರೋಧಿ ಎಂದು ಆರೋಪಿಸಿದಾಗ ಇದೇ ರೀತಿಯ ನಿರೂಪಣಾ ಬದಲಾವಣೆ ಸಂಭವಿಸಿತು. ಇಂತಹ ಸಾಂಕೇತಿಕ ವಿವಾದಗಳು ನಿರುದ್ಯೋಗ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚಗಳು ಮತ್ತು ಯುವಕರಿಗೆ ಅವಕಾಶಗಳನ್ನು ಕುಗ್ಗಿಸುವಂತಹ ನಿರ್ಣಾಯಕ ರಾಷ್ಟ್ರೀಯ ಸಮಸ್ಯೆಗಳನ್ನು ಹೆಚ್ಚಾಗಿ ಮರೆಮಾಡುತ್ತವೆ ಎಂದು ವಿಶ್ಲೇಷಕರು ಗಮನಿಸುತ್ತಾರೆ. ಈ ಮಾದರಿಯನ್ನು ಆರೆಸ್ಸೆಸ್ ಮತ್ತು ಅದರ ವಿದ್ಯಾರ್ಥಿ ಸಂಘಟನೆಯೊಂದಿಗೆ ದೀರ್ಘಕಾಲದಿಂದಲೂ ಇದೇ ತಂತ್ರ ಬಳಸುತ್ತಾ ಬರಲಾಗುತ್ತಿದೆ. ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯುವುದು, ಭಾವನಾತ್ಮಕ ಅಥವಾ ಧಾರ್ಮಿಕ ಸಮಸ್ಯೆಗಳ ಕಡೆಗೆ ಚರ್ಚೆಗಳನ್ನು ತಿರುಗಿಸುವುದು ಮತ್ತು ಆಯ್ದ ಮಾಹಿತಿಯ ಮೂಲಕ ಘಟನೆಗಳನ್ನು ಮರುರೂಪಿಸುವುದು. ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಈ ಘಟನೆಗಳು ನಿರೂಪಣೆಗಳನ್ನು ಹೇಗೆ ನಿರ್ಮಿಸಲಾಗುತ್ತದೆ ಮತ್ತು ಈ ತಿರುವುಗಳಿಂದ ಯಾರು ಪ್ರಯೋಜನ ಪಡೆಯುತ್ತಾರೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಭಾರತದ ಯುವಕರು ಇವರು ಹೇಳುವ ಸುಳ್ಳುಗಳನ್ನೇ ನಂಬುತ್ತಾರೋ ಅಥವಾ ದೇಶದ ವಾಸ್ತವತೆಯ ಸಾಮಾಜಿಕ-ಆರ್ಥಿಕ ಸವಾಲುಗಳ ಮೇಲೆ ಗಮನ ಹರಿಸುತ್ತಾರೆಯೇ ಎಂಬುದು ಇನ್ನೂ ದೊಡ್ಡ ಕಳವಳವಾಗಿದೆ. ಅದರ ಜೊತೆಗೆ ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಮುಂದೆ ಇತ್ತೀಚೆಗೆ ಸಾರ್ವಜನಿಕವಾಗಿ ಸಲ್ಲಿಸಲಾದ ಅರ್ಜಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಣಕಾಸು ಮತ್ತು ಕಾನೂನು ರಚನೆಯ ಬಗ್ಗೆ ಗಮನಾರ್ಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕ ಮೂಲದ ಲಾಬಿ ಸಂಸ್ಥೆ ‘ಸ್ಕ್ವೈರ್ ಪ್ಯಾಟನ್ ಬಾಗ್ಸ್’ ಬಹಿರಂಗಪಡಿಸುವಿಕೆಯ ಪ್ರಕಾರ, ಈ ಸಂಸ್ಥೆಯು ಪೆನ್ಸಿಲ್ವೇನಿಯಾದ ಹ್ಯಾರಿಸ್ಬರ್ಗ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ಒನ್ ಪ್ಲಸ್ ಸ್ಟ್ರಾಟಜೀಸ್’ ಎಂಬ ಮತ್ತೊಂದು ಸಂಸ್ಥೆಯ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂದು ಗುರುತಿಸಲ್ಪಟ್ಟ ಒಂದು ಸಂಸ್ಥೆಯ ಪರವಾಗಿ ಅಮೆರಿಕನ್ ಸಾರ್ವಜನಿಕ ಅಧಿಕಾರಿಗಳನ್ನು ಲಾಬಿ ಮಾಡಲು ತೊಡಗಿಸಿಕೊಂಡಿದೆ. ಈ ವರ್ಷ ಲಾಬಿ ಚಟುವಟಿಕೆಯು ಸುಮಾರು 3,30,000 ಡಾಲರ್ ಪಾವತಿಗಳಷ್ಟಿದೆ ಎಂದು ಸುದ್ದಿ ವರದಿಗಳು ಸೂಚಿಸುತ್ತವೆ. ಈ ಬಹಿರಂಗಪಡಿಸುವಿಕೆಯು ಹಲವಾರು ಉತ್ತರಿಸಲಾಗದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಭಾರತದಲ್ಲಿ ನೋಂದಾಯಿತ ಸಂಸ್ಥೆಯಲ್ಲ ಮತ್ತು ಅದರ ಕಾರ್ಯಾಚರಣೆಗಳಿಗೆ ಅದರ ಸದಸ್ಯರಿಂದ ಸ್ವಯಂಪ್ರೇರಿತ ‘ಗುರು ದಕ್ಷಿಣೆ’ ಕೊಡುಗೆಗಳ ಮೂಲಕ ಬಹುತೇಕವಾಗಿ ಹಣವನ್ನು ನೀಡಲಾಗುತ್ತದೆ ಎಂದು ನಿರಂತರವಾಗಿ ಸಮರ್ಥಿಸಿಕೊಂಡಿದೆ. ಈ ಸಂಸ್ಥೆಯು ಭಾರತದೊಳಗೆ ಕಾನೂನುಬದ್ಧವಾಗಿ ಅಸ್ತಿತ್ವದಲ್ಲಿಲ್ಲದಿದ್ದರೆ, ಅದು ವಿದೇಶಿ ಲಾಬಿ ಸಂಸ್ಥೆಯನ್ನು ಹೇಗೆ ತೊಡಗಿಸಿಕೊಂಡಿದೆ ಮತ್ತು ವಿದೇಶದಲ್ಲಿ ಡಾಲರ್ ಪಾವತಿಗಳನ್ನು ಹೇಗೆ ಮಾಡಿದೆ ಎಂದು ಸಾರ್ವಜನಿಕರು ಕೇಳುತ್ತಾರೆ? ಆರೆಸ್ಸೆಸ್ ಅಮೆರಿಕದಲ್ಲಿ ಯಾವುದೇ ಕಾನೂನು ಚೌಕಟ್ಟಿನಡಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಮತ್ತು ಅಂತಹ ನೋಂದಣಿಯನ್ನು ಭಾರತೀಯ ಅಧಿಕಾರಿಗಳಿಗೆ ಬಹಿರಂಗಪಡಿಸಲಾಗಿದೆಯೇ ಎಂಬುದು ಅಷ್ಟೇ ಸ್ಪಷ್ಟವಾಗಿಲ್ಲ. ಈ ವಿಷಯವು ‘ಗುರು ದಕ್ಷಿಣೆ’ ಕೊಡುಗೆಗಳ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಆಳವಾದ ಕಳವಳಗಳನ್ನು ಹುಟ್ಟುಹಾಕುತ್ತದೆ. ಸಾಂಪ್ರದಾಯಿಕವಾಗಿ ಸನಾತನ ಧರ್ಮದಲ್ಲಿ ವಿದ್ಯಾರ್ಥಿಯಿಂದ ಶಿಕ್ಷಕರಿಗೆ ಸ್ವಯಂಪ್ರೇರಿತ ಕೃತಜ್ಞತೆಯ ಅರ್ಪಣೆ ಎಂದು ವ್ಯಾಖ್ಯಾನಿಸಲಾದ ಗುರು ದಕ್ಷಿಣೆಯು ಭಾರತದಲ್ಲಿ ಪರಸ್ಪರತೆಯ ತತ್ವದ ಮೇಲೆ ತೆರಿಗೆ-ವಿನಾಯಿತಿ ಸ್ಥಾನಮಾನವನ್ನು ಹೊಂದಿದೆ. ಈ ನಿಲುವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ತೀರ್ಪುಗಳು ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಡಿಸೆಂಬರ್ 19, 1978ರ ತನ್ನ ಸಂವಹನದಲ್ಲಿ ದೃಢಪಡಿಸಿದೆ. ಇದು ಆರೆಸ್ಸೆಸ್ ಸಂಗ್ರಹಿಸಿದ ಗುರು ದಕ್ಷಿಣೆ ಆಂತರಿಕ ಬಳಕೆಗಾಗಿ ಸದಸ್ಯರಿಂದ ಬಂದ ಕೊಡುಗೆಯಾಗಿರುವುದರಿಂದ ತೆರಿಗೆಯಿಂದ ವಿನಾಯಿತಿ ಪಡೆದಿದೆ ಎಂದು ಹೇಳುತ್ತದೆ. ಆದರೂ, ಯಾವುದೇ ಭಾಗವನ್ನು ವಿದೇಶಿ ಲಾಬಿ ಚಟುವಟಿಕೆಗಳಿಗೆ ಬಳಸಿದರೆ ಅಂತಹ ನಿಧಿಗಳ ಸ್ವರೂಪವು ಪರಿಶೀಲನೆಗೆ ಒಳಪಡುತ್ತದೆ. ಉತ್ತಮ ನಂಬಿಕೆಯಿಂದ ಕೊಡುಗೆಗಳನ್ನು ನೀಡುವ ಕೊಡುಗೆದಾರರು ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಮಾರ್ಗದರ್ಶನದ ಆಧಾರದ ಮೇಲೆ ಸಂಗ್ರಹಿಸಲಾದ ತಮ್ಮ ಕೊಡುಗೆಗಳನ್ನು ವಿದೇಶಿ ಸರಕಾರಗಳ ಮೇಲೆ ಪ್ರಭಾವ ಬೀರಲು ಬಳಸಿಕೊಳ್ಳಬಹುದು ಎಂದು ತಿಳಿದಿರುವುದಿಲ್ಲ. ಆರೆಸ್ಸೆಸ್ ಈ ಹಿಂದೆ ವಿದೇಶಿ ನಿಧಿಗಳನ್ನು ಸ್ವೀಕರಿಸುವುದನ್ನು ನಿರಾಕರಿಸಿತ್ತು, ಆದರೆ ಸ್ವತಂತ್ರ ವರದಿಗಳು ಅದರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ವಿದೇಶಿ ಕೊಡುಗೆಗಳ ಒಳಹರಿವನ್ನು ಎತ್ತಿ ತೋರಿಸಿವೆ. ರಾಷ್ಟ್ರೀಯ ರಾಜಕೀಯದಲ್ಲಿ ಸಂಸ್ಥೆಯ ಹೆಚ್ಚುತ್ತಿರುವ ಪ್ರಭಾವವನ್ನು ಪರಿಗಣಿಸಿ, ವಿದೇಶಿ ನಿಧಿಯ ವಿಷಯವು ಗಮನಾರ್ಹ ಸಾರ್ವಜನಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ-ವಿಶೇಷವಾಗಿ ಎಫ್ಸಿಆರ್ಎ ಮತ್ತು ಕಂಪೆನಿಗಳ ಕಾಯ್ದೆಗೆ ಶಾಸಕಾಂಗ ಬದಲಾವಣೆಗಳು ಈಗಾಗಲೇ ರಾಜಕೀಯ ಘಟಕಗಳು ವಿದೇಶಿ ಮೂಲದ ನಿಧಿಗಳನ್ನು ಪಡೆಯಲು ಅನುಮತಿಸುವ ಮಾರ್ಗಗಳನ್ನು ವಿಸ್ತರಿಸಿರುವ ಸಂದರ್ಭದಲ್ಲಿ. ಈಗ ಪರಿಸ್ಥಿತಿಯು ಕೇಂದ್ರ ಕಂದಾಯ ಸಚಿವಾಲಯ, ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಸ್ಪಷ್ಟತೆ ಪಡೆಯುವ ಜವಾಬ್ದಾರಿಯನ್ನು ಇರಿಸುತ್ತದೆ. ಪ್ರಮುಖ ಪ್ರಶ್ನೆಗಳು ಉಳಿದಿವೆ: 1. ನೋಂದಣಿಯಾಗದ ಭಾರತೀಯ ಸಂಸ್ಥೆಯು ವಿದೇಶದಲ್ಲಿ ಪಾವತಿಗಳನ್ನು ಹೇಗೆ ಮಾಡಿತು? 2. ಆರೆಸ್ಸೆಸ್ ಯಾವುದೇ ವಿದೇಶಿ ಶಾಖೆ ಅಥವಾ ಭಾರತೀಯ ಅಧಿಕಾರಿಗಳಿಗೆ ಅಂಗಸಂಸ್ಥೆಯನ್ನು ಬಹಿರಂಗಪಡಿಸಿದೆಯೇ? 3. ಯು.ಎಸ್. ಫೈಲಿಂಗ್ನಲ್ಲಿ ಹೆಸರಿಸಲಾದ ಘಟಕವು ಭಾರತದಲ್ಲಿ ಆರೆಸ್ಸೆಸ್ಗೆ ಔಪಚಾರಿಕವಾಗಿ ಸಂಪರ್ಕ ಹೊಂದಿದೆಯೇ ಮತ್ತು ಇಲ್ಲದಿದ್ದರೆ, ಸಂಸ್ಥೆಯು ತನ್ನ ಉದ್ದೇಶಿತ ಯು.ಎಸ್. ಹೆಸರಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿಸಿದೆಯೇ? 4. ಭಾರತೀಯ ವಿದೇಶಿ ವಿನಿಮಯ ಮತ್ತು ತೆರಿಗೆ ನಿಯಮಗಳಿಗೆ ಅನುಸಾರವಾಗಿ ಹಣವನ್ನು ವರ್ಗಾಯಿಸಲಾಗಿದೆಯೇ? ಅಮೆರಿಕದ ಆಂತರಿಕ ಕಂದಾಯ ಸೇವೆಯು ಬಹಿರಂಗಪಡಿಸುವಿಕೆಗಳನ್ನು ಲಾಬಿ ಮಾಡಲು ಕಟ್ಟುನಿಟ್ಟಾದ ದಾಖಲಾತಿಗಳನ್ನು ನಿರ್ವಹಿಸುತ್ತಿರುವುದರಿಂದ, ಭಾರತೀಯ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ಪರಿಶೀಲಿಸಬಹುದಾದ ಮಾಹಿತಿಯನ್ನು ಪಡೆಯಬೇಕು. ಕನಿಷ್ಠ ಪಕ್ಷ, ಈ ವಿಷಯವು ಸಿಬಿಡಿಟಿ ಮತ್ತು ಅದರ ಅಮೆರಿಕನ್ ಸಹವರ್ತಿಗಳ ನಡುವೆ ಸಂಘಟಿತ ವಿಚಾರಣೆಯನ್ನು ಬಯಸುತ್ತದೆ. ಅಮೆರಿಕದ ಲಾಬಿ ಮಾಡುವ ಸಂಸ್ಥೆಯೊಂದು ಆರೆಸ್ಸೆಸ್ ಅನ್ನು ತನ್ನ ಕ್ಲೈಂಟ್ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದು ತೀವ್ರ ವಿಪರ್ಯಾಸ, ಆದರೆ ಸಂಸ್ಥೆಯು ತನ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಿದೇಶಿ ಘಟಕದ ಅಸ್ತಿತ್ವದ ಬಗ್ಗೆ ಭಾರತದಲ್ಲಿ ಯಾವುದೇ ಸಾರ್ವಜನಿಕ ಬಹಿರಂಗಪಡಿಸುವಿಕೆಯನ್ನು ಮಾಡಿಲ್ಲ. ಬಹಿರಂಗಪಡಿಸುವಿಕೆಗಳು ನಿರಂತರವಾಗಿ ಹೊರಹೊಮ್ಮುತ್ತಿದ್ದಂತೆ, ಒಂದು ವಿಷಯ ಸ್ಪಷ್ಟವಾಗಿದೆ: ಇವು ಪಕ್ಕಕ್ಕೆ ತಳ್ಳಬಹುದಾದ ವಿಷಯಗಳಲ್ಲ. ಭಾರತದ ಸಾರ್ವಜನಿಕ ಜೀವನದಲ್ಲಿ ಗಮನಾರ್ಹ ಪ್ರಭಾವ ಬೀರುವ ಸಾಮಾಜಿಕ-ರಾಜಕೀಯ ಸಂಸ್ಥೆಯ ಪಾರದರ್ಶಕತೆ, ನಿಯಂತ್ರಕ ಅನುಸರಣೆ, ವಿದೇಶಿ ಪ್ರಭಾವ ಮತ್ತು ಹೊಣೆಗಾರಿಕೆಯ ಸಮಸ್ಯೆಗಳು ಅಪಾಯದಲ್ಲಿವೆ.
Vande Bharat Express Train: ಈ ಭಾಗದ ತಿರುಪತಿ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ನವೆಂಬರ್ 25: ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದ ವಂದೇ ಭಾರತ್ ರೈಲಿಗೆ ಪ್ರತಿ ಮಾರ್ಗಗಳಲ್ಲೂ ಬೇಡಿಕೆ ಇದೆ. ಇದೀಗ ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ (20701) ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಗುಡ್ ನ್ಯೂಸ್. ಏನದು? ರೈಲು ಸಂಚಾರ ಮಾರ್ಗ, ವೇಳಾಪಟ್ಟಿ ವಿವರ ಇಲ್ಲಿದೆ.
ಭೋಪಾಲ್ : ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೌಕರರ ಸಂಘ AJAKS ಪ್ರಾಂತೀಯ ಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ರವಿವಾರ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಅಥವಾ ಅವನ ಜೊತೆ ಸಂಬಂಧ ಬೆಳೆಸುವವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ಭೋಪಾಲ್ನ ಅಂಬೇಡ್ಕರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಮಾ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಬ್ರಾಹ್ಮಣ ಸಂಘಟನೆಗಳು ವರ್ಮಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಸಂತೋಷ್ ವರ್ಮಾ ಅವರ ಹೇಳಿಕೆ ಅಸಭ್ಯ, ಜಾತಿವಾದಿ ಮತ್ತು ಬ್ರಾಹ್ಮಣ ಹೆಣ್ಣುಮಕ್ಕಳನ್ನು ಅವಮಾನಿಸುವ ಹೇಳಿಕೆಯಾಗಿದೆ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ, ಐಎಎಸ್ ಅಧಿಕಾರಿಯ ಹೇಳಿಕೆ ಅಸಭ್ಯ, ಆಕ್ಷೇಪಾರ್ಹ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಅವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ. ಮಹಿಳೆಯರ ಘನತೆ ಮತ್ತು ಕಲ್ಯಾಣದ ಗುರಿಯನ್ನು ಹೊಂದಿರುವ ಲಾಡ್ಲಿ ಲಕ್ಷ್ಮಿ, ಲಾಡ್ಲಿ ಬೆಹ್ನಾ ಮತ್ತು ಬೇಟಿ ಬಚಾವೊ, ಬೇಟಿ ಪಡಾವೊ ಮುಂತಾದ ಯೋಜನೆಗಳನ್ನು ಸರಕಾರ ಪ್ರಚಾರ ಮಾಡುತ್ತಿರುವಾಗ ಈ ಹೇಳಿಕೆಗಳು ಅಖಿಲ ಭಾರತ ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಪುಷ್ಪೇಂದ್ರ ಮಿಶ್ರಾ ಹೇಳಿದರು.
IMD Rain Warning: ಈ ರಾಜ್ಯಗಳಲ್ಲಿ ಧಾರಾಕಾರ ಮಳೆ ಎಚ್ಚರಿಕೆ, ಎಷ್ಟು ದಿನ?
ಮಲಕ್ಕಾ ಜಲಸಂಧಿಯಲ್ಲಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಇದು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದು ನವೆಂಬರ್ 25ರಂದು ಕೊಮೊರಿನ್ ಮತ್ತು ಬಂಗಾಳ ಮತ್ತು ಶ್ರೀಲಂಕಾದ ನೈಋತ್ಯ ಕೊಲ್ಲಿಯ ಪಕ್ಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಇದರಿಂದ ನವೆಂಬರ್ 29ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ
ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಧಾ ರವಾಡ, ಕೊಡಗು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ಹತ್ತು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಸುಭಾಷ್ ಚಂದ್ರ ನಾಟೀಕರ್ ಸೇರಿದಂತೆ ಹಲವು ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಪರಿಶೀಲನೆ ನಡೆಸಲಾಗುತ್ತಿದೆ.
ಸಂಪಾದಕೀಯ | ನವಜಾತ ಶಿಶುಗಳ ಸಾವುಗಳಿಗೆ ಕೊನೆ ಯಾವಾಗ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ 13 ವರ್ಷಗಳಿಂದ ನಿಂತಿದ್ದ ಬೋಯಿಂಗ್ ವಿಮಾನ ತೆರವು; ಬೆಂಗಳೂರಿಗೆ ಸಾಗಾಟ
ಇದು ನಮಗೆ ಸೇರಿದ್ದು ಎಂದು ತಿಳಿದಿರಲಿಲ್ಲ ಎಂದ ಏರ್ ಇಂಡಿಯಾ!
ತೇಜಸ್ ಅವಘಡ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಹುಟ್ಟು ಹಾಕಿದ ಪ್ರಶ್ನೆಗಳೇನು?
ಈ ಘಟನೆ ನಮ್ಮ ದೇಶೀಯ ಸಾಮರ್ಥ್ಯಗಳ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾವುದೇ ದೇಶಗಳ ಜೆಟ್ಗಳು ಅಪಘಾತಕ್ಕೀಡಾಗುತ್ತವೆ ಎನ್ನುವುದು ಹೊಸದೇನಲ್ಲ. ಅಮೆರಿಕ, ಚೀನಾ, ರಶ್ಯದ ಜೆಟ್ಗಳು ನಮ್ಮ ವಿಮಾನಗಳಿಗಿಂತ ಹೆಚ್ಚು ಅಪಘಾತ ಕಂಡಿವೆ. ಆದರೆ ತೇಜಸ್ ಕಳೆದ 20 ತಿಂಗಳಲ್ಲಿ ಎರಡನೇ ಬಾರಿ ಅಪಘಾತಕ್ಕೀಡಾಗಿದೆ ಮತ್ತು ಇದು ನಮ್ಮ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುವ ಸಮಯವೆನ್ನುವುದು ಮುಖ್ಯವಾಗಿ ಗಮನಿಸಬೇಕಿರುವ ಸಂಗತಿ. ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಲಘು ಯುದ್ಧವಿಮಾನ ಪತನಗೊಂಡಿದೆ. ಪ್ರದರ್ಶನದ ಸಮಯದಲ್ಲೇ ನಡೆದ ಈ ಅವಘಡದಲ್ಲಿ ಪೈಲಟ್ ನಮಾಂಶ್ ಸ್ಯಾಲ್ ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬ ಅನುಭವಿ, ವೀರ ವಾಯುಪಡೆ ಪೈಲಟ್ ಅನ್ನು ಭಾರತ ಕಳೆದುಕೊಂಡಿದೆ. ಕೇವಲ 34 ವರ್ಷದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಹಿಮಾಚಲ ಪ್ರದೇಶದವರು. ಅವರ ಪತ್ನಿ ಅಫ್ಸಾನ ಕೂಡ ವಾಯುಪಡೆಯ ಪೈಲಟ್. ಆರು ವರ್ಷದ ಮಗಳು ಹಾಗೂ ತಂದೆ ತಾಯಿಯನ್ನೂ ನಮಾಂಶ್ ಸ್ಯಾಲ್ ಅಗಲಿದ್ದಾರೆ. ತೇಜಸ್ ಭಾರತದ 4.5 ತಲೆಮಾರಿನ ಸೂಪರ್ಸಾನಿಕ್ ಸಾಮರ್ಥ್ಯದ, ಬಹು-ಪಾತ್ರದ ಹಗುರ ಯುದ್ಧ ವಿಮಾನವಾಗಿದೆ. ಭಾರತದ ಸ್ಥಳೀಯ ಫೈಟರ್ ಜೆಟ್ ಆಗಿರುವ ಇದನ್ನು ಹಳೆಯ ಮಿಗ್ 21ಗೆ ಬದಲಿಯಾಗಿಯೂ ನೋಡಲಾಗುತ್ತದೆ. ಸ್ಥಿರ ಹಾರಾಟ ನಿರ್ವಹಿಸಲು ಈ ವಿಮಾನ ಅತ್ಯಾಧುನಿಕ ಫ್ಲೈ-ಬೈ-ವೈರ್ ವ್ಯವಸ್ಥೆ ಬಳಸುತ್ತದೆ. ಆದರೆ ನವೆಂಬರ್ 21ರಂದು ಮಧ್ಯಾಹ್ನ ಏರ್ ಶೋ ವೇಳೆ ಎಲ್ಲೋ ಏನೋ ತಪ್ಪಾಗಿದೆ. ಜಿ ಡೈವ್, ಅಂದರೆ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಆಕಾಶದಲ್ಲಿ ಕಸರತ್ತು ನಡೆಸುತ್ತಿದ್ದಾಗ, ನೋಡನೋಡುತ್ತಲೇ ನಿಯಂತ್ರಣ ಕಳೆದುಕೊಂಡಿದೆ. ಕೆಳಮುಖವಾಗಿ ಚಲಿಸಿ, ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕಪ್ಪಳಿಸಿ ಸ್ಫೋಟಗೊಂಡಿತು. ಅವಘಡಕ್ಕೆ ಕಾರಣವೇನು ಎನ್ನುವುದು ಇನ್ನೂ ಗೊತ್ತಾಗಬೇಕಿದೆ. ಮಡಿಲ ಮಾಧ್ಯಮಗಳು ಯಥಾಪ್ರಕಾರ ಈ ಘಟನೆಯನ್ನು ಕೂಡ ಭಾರತ-ಪಾಕಿಸ್ತಾನ ಸಮಸ್ಯೆಯಾಗಿ ಬಿಂಬಿಸುತ್ತ ಅರಚಾಡಿವೆ. ಆದರೆ ಈ ಬಾಲಿಶ ಚರ್ಚೆಗಳನ್ನು ಮೀರಿ, ಈ ಘೋರ ದುರಂತದ ಹಿನ್ನೆಲೆ ಅರ್ಥಮಾಡಿಕೊಳ್ಳಬೇಕಿದೆ. ಈ ಘಟನೆ ನಮ್ಮ ದೇಶೀಯ ಸಾಮರ್ಥ್ಯಗಳ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾವುದೇ ದೇಶಗಳ ಜೆಟ್ಗಳು ಅಪಘಾತಕ್ಕೀಡಾಗುತ್ತವೆ ಎನ್ನುವುದು ಹೊಸದೇನಲ್ಲ. ಅಮೆರಿಕ, ಚೀನಾ, ರಶ್ಯದ ಜೆಟ್ಗಳು ನಮ್ಮ ವಿಮಾನಗಳಿಗಿಂತ ಹೆಚ್ಚು ಅಪಘಾತ ಕಂಡಿವೆ. ಆದರೆ ತೇಜಸ್ ಕಳೆದ 20 ತಿಂಗಳಲ್ಲಿ ಎರಡನೇ ಬಾರಿ ಅಪಘಾತಕ್ಕೀಡಾಗಿದೆ ಮತ್ತು ಇದು ನಮ್ಮ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುವ ಸಮಯವೆನ್ನುವುದು ಮುಖ್ಯವಾಗಿ ಗಮನಿಸಬೇಕಿರುವ ಸಂಗತಿ. ಈ ಜೆಟ್ ತಯಾರಿಕೆ ಜವಾಬ್ದಾರಿಯನ್ನು ಎಚ್ಎಎಲ್, ಅಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಗೆ ನೀಡಲಾಗಿದೆ. ಅದು ಸಮಯಕ್ಕೆ ಸರಿಯಾಗಿ ವಿಮಾನ ಪೂರೈಸುವಲ್ಲಿ ಸತತವಾಗಿ ವಿಫಲವಾಗಿದೆ. ನಮ್ಮ ವಾಯುಪಡೆ ಪ್ರಸ್ತುತ 42 ಸ್ಕ್ವಾಡ್ರನ್ ಬಲದ ಬದಲಿಗೆ ಕೇವಲ 29 ಸ್ಕ್ವಾಡ್ರನ್ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನಮ್ಮ ವಾಯುಪಡೆಗೆ ಈ ಜೆಟ್ಗಳ ಅವಶ್ಯಕತೆಯಿದೆ. ಹೀಗಿರುವಾಗ, ಈ ಅವಘಡ ಕೇವಲ ದೇಶದೊಳಗಿನ ವಿಷಯವಾಗಿ ಉಳಿದಿಲ್ಲ. ಇದು ಇಡೀ ಪ್ರಪಂಚದ ಎದುರಲ್ಲಿ ನಡೆದಿರುವ ಅಪಘಾತ. ಉತ್ತರಗಳನ್ನು ಶೀಘ್ರದಲ್ಲೇ ಕಂಡುಕೊಳ್ಳಬೇಕು ಮತ್ತು ಯಾವುದೇ ಲೋಪಗಳಿದ್ದರೆ ಬಹಳ ಬೇಗ ಎಲ್ಲವನ್ನೂ ಸರಿಪಡಿಸಿಕೊಳ್ಳಬೇಕಾಗುತ್ತದೆ. ತಜ್ಞರು ನೀಡುತ್ತಿರುವ ವಿವರಣೆಗಳ ಪ್ರಕಾರ, ಕೌಶಲ್ಯ ಪ್ರದರ್ಶನದ ವೇಳೆ ಹಠಾತ್ ಎತ್ತರ ಕಮ್ಮಿಯಾದ ಬಳಿಕ ಮತ್ತೆ ಅಗತ್ಯ ಎತ್ತರ ಪಡೆಯಲು ಸಾಧ್ಯವಾಗದೇ ಇರುವುದು ಇಂಜಿನ್ ವೈಫಲ್ಯವಿರಬಹುದು. ಇದಲ್ಲದೆ, ಜಿ ಡೈವ್ ವೇಳೆ ಸ್ವತಃ ಪೈಲಟ್ ತಮ್ಮ ದೇಹದ ಮೇಲಿನ ಪರಿಣಾಮಗಳನ್ನು ಎದುರಿಸುವಲ್ಲಿ ದಿಗ್ಭ್ರಮೆಗೆ ಒಳಗಾಗಿರಬಹುದು. ದೇಹದ ಮೇಲೆ ತೀವ್ರ ಒತ್ತಡ ಉಂಟಾಗುವ ಇಂಥ ಸ್ಥಿತಿ ಎದುರಿಸಲು ಪ್ರತಿಯೊಬ್ಬ ಪೈಲಟ್ಗೂ ತರಬೇತಿ ನೀಡಲಾಗಿರುತ್ತದೆ ಮತ್ತು ಸಾಕಷ್ಟು ಪೂರ್ವಾಭ್ಯಾಸವನ್ನೂ ಮಾಡಲಾಗಿರುತ್ತದೆ. ಈಗ ಮೃತರಾಗಿರುವ ವಿಂಗ್ ಕಮಾಂಡರ್ ಸ್ಯಾಲ್ ಪ್ರಶಸ್ತಿ ಪಡೆದ ಅನುಭವಿ ಪೈಲಟ್ ಆಗಿದ್ದರು. ಹಾಗಾಗಿ, ಅವರು ಇಂಥ ಒತ್ತಡಕ್ಕೆ ಒಳಗಾಗಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ. ಆದರೆ ಕೌಶಲ್ಯ ಪ್ರದರ್ಶನದ ಹೊತ್ತಲ್ಲಿ ಸಣ್ಣ ಲೋಪವೂ ಅಪಾಯ ತರಬಹುದು, ಒಂದು ಕ್ಷಣದ ದಿಗ್ಭ್ರಮೆ ಕೂಡ ಅವಘಡಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಪರಿಣಿತರು. ಸೋಷಿಯಲ್ ಮೀಡಿಯಾದಲ್ಲಿ ಇಂಧನ ಸೋರಿಕೆ ವದಂತಿಯೊಂದು ಹರಡಿದೆ. ಅಪಘಾತಕ್ಕೆ ಮೂರು ದಿನಗಳ ಮೊದಲು, ಸಾಮಾಜಿಕ ಮಾಧ್ಯಮದಲ್ಲಿ ತೇಜಸ್ ಜೆಟ್ನ ಫೋಟೊವೊಂದು ಹರಿದಾಡಿತ್ತು. ಜೆಟ್ ಬಳಿ ಇಂಧನ ಸೋರಿಕೆಯಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಪಘಾತಕ್ಕೆ ಒಂದು ದಿನ ಮೊದಲು ಸರಕಾರವೇ ಅಧಿಕೃತವಾಗಿ ಅಂಥ ವದಂತಿಯನ್ನು ನಿರಾಕರಿಸಿತ್ತು. ದುಬೈ ಏರ್ ಶೋನಲ್ಲಿ ಭಾಗವಹಿಸುವ ಯಾವುದೇ ವಿಮಾನದಲ್ಲಿ ಅಂತಹ ಇಂಧನ ಸೋರಿಕೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅದಕ್ಕಾಗಿಯೇ ಈಗ ಸರಕಾರ ತಕ್ಷಣವೇ ದೃಢ ಮತ್ತು ಪಾರದರ್ಶಕ ತನಿಖೆ ನಡೆಸಬೇಕಾಗುತ್ತದೆ. ಅಹ್ಮದಾಬಾದ್ನಲ್ಲಿ ಏರ್ ಇಂಡಿಯಾ ಅವಘಡವಾಗಿ 6 ತಿಂಗಳುಗಳು ಕಳೆದಿದ್ದರೂ ಅದರ ನಿಖರ ಫಲಿತಾಂಶ ಸಿಕ್ಕಿಲ್ಲ. ಈಗ ಈ ವಿಷಯದಲ್ಲಿ ಅಂಥ ವಿಳಂಬವಾಗದಂತೆ ತನಿಖೆಯಾಗಬೇಕಿದೆ. ಭಾರತೀಯ ವಾಯುಪಡೆ ಈಗಾಗಲೇ ಈ ಬಗ್ಗೆ ವಿಚಾರಣಾ ನ್ಯಾಯಾಲಯವನ್ನು ಸ್ಥಾಪಿಸಿದೆ. ಈ ಜೆಟ್ ನಿರ್ಮಿಸಿರುವ ಎಚ್ಎಎಲ್ ಕೂಡ ಈ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಈ ಜೆಟ್ 2001ರಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತು. ತೇಜಸ್ ಅನ್ನು ಔಪಚಾರಿಕವಾಗಿ 2016ರಲ್ಲಿ ವಾಯುಪಡೆಗೆ ಸೇರಿಸಲಾಯಿತು.ಇದು ಈ ಜೆಟ್ನ ಎರಡನೇ ಅಪಘಾತವಾಗಿದೆ. 20 ತಿಂಗಳ ಹಿಂದೆ 2024ರ ಮಾರ್ಚ್ ನಲ್ಲಿ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಮೊದಲ ಅವಘಡ ಸಂಭವಿಸಿತ್ತು. ಆ ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು. ಈ ಬಾರಿ ದುರದೃಷ್ಟವಶಾತ್ ಪೈಲಟ್ ಪಾರಾಗುವುದು ಸಾಧ್ಯವಾಗಲಿಲ್ಲ. ಈಗ ತೇಜಸ್ ಸಂಪೂರ್ಣ ಸುರಕ್ಷಿತ ವಿಮಾನವೇ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಈ ಜೆಟ್ಗೆ ಸಂಬಂಧಿಸಿದ ಹಲವು ಅಂಶಗಳು ವಿವಾದಾತ್ಮಕವಾಗಿವೆ. ಲಘು ಯುದ್ಧ ವಿಮಾನ ತೇಜಸ್ 4.5 ತಲೆಮಾರಿನ ಸಿಂಗಲ್ ಇಂಜಿನ್ ಯುದ್ಧ ವಿಮಾನವಾಗಿದೆ. ಇದನ್ನು ನಮ್ಮದೇ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ವಿನ್ಯಾಸಗೊಳಿಸಿದೆ. ನಂತರ ಇದನ್ನು ನಿರ್ಮಿಸಿರುವುದು ಎಚ್ಎಎಲ್. ಈ ವಿಮಾನದ ಕಲ್ಪನೆ ಮೂಡಿದ್ದು 1984ರಲ್ಲಿ ಪ್ರಾರಂಭವಾದ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಯೋಜನೆಯಿಂದ. ಆದರೆ ನಂತರ ಬಹಳ ತಡವಾಗಿದೆ. ಎಲ್ಸಿಎ ಮೂಲಮಾದರಿ ಪ್ರಾರಂಭವಾದ 17 ವರ್ಷಗಳ ನಂತರ 2001ರಲ್ಲಿ ಇದು ಹಾರಿತು. ಆ ಸಮಯದಲ್ಲಿ, ಆಗಿನ ಪ್ರಧಾನಿ ವಾಜಪೇಯಿಯವರು ಇದಕ್ಕೆ ತೇಜಸ್ ಎಂದು ಹೆಸರಿಟ್ಟರು. ಅದರ ನಂತರ, ಈ ವಿಮಾನವು ಔಪಚಾರಿಕವಾಗಿ ವಾಯುಪಡೆಗೆ ಸೇರಲು ಇನ್ನೂ 15 ವರ್ಷಗಳು ಬೇಕಾದವು. 2016ರಲ್ಲಿ ಮೊದಲ ಎಲ್ಸಿಎ ತೇಜಸ್ ವಿಮಾನವನ್ನು ವಾಯುಪಡೆಗೆ ಸೇರಿಸಲಾಯಿತು. ಆದರೆ ಅಂದಿನಿಂದ ಇಲ್ಲಿಯವರೆಗೆ ಕಳೆದ 9-10 ವರ್ಷಗಳಲ್ಲಿ ಐಎಎಫ್ ಕೇವಲ ಎರಡು ಕಾರ್ಯಾಚರಣಾ ತೇಜಸ್ ಸ್ಕ್ವಾಡ್ರನ್ಗಳನ್ನು ಸಂಗ್ರಹಿಸಿದೆ. ಅಂದರೆ ಒಟ್ಟು 38 ತೇಜಸ್ ವಿಮಾನಗಳು. 2021ರಲ್ಲಿ ಸರಕಾರ ಎಚ್ಎಎಲ್ಗೆ 83 ತೇಜಸ್ ವಿಮಾನಗಳಿಗಾಗಿ ಆರ್ಡರ್ ನೀಡಿತು. ಆದರೆ ಅದರ ವಿತರಣೆ ಇನ್ನೂ ಪ್ರಾರಂಭವಾಗಿಲ್ಲ. ಏಕೆಂದರೆ ಇದರ ಇಂಜಿನ್ಗಳನ್ನು ಅಮೆರಿಕದ ಜನರಲ್ ಇಲೆಕ್ಟ್ರಿಕ್ ತಯಾರಿಸುತ್ತದೆ. ಈ ಇಂಜಿನ್ ಸಮಯಕ್ಕೆ ಸರಿಯಾಗಿ ಲಭ್ಯವಾಗಲಿಲ್ಲ. ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸರಕಾರ ಎಚ್ಎಎಲ್ಗೆ ಸುಮಾರು 100 ಹೊಸ ಪೀಳಿಗೆಯ ತೇಜಸ್ MK1A ವೆರೈಟಿ ಜೆಟ್ಗಳ ನಿರ್ಮಾಣಕ್ಕೆ ಆದೇಶ ನೀಡಿದೆ. ಎಚ್ಎಎಲ್ 2028ರ ವೇಳೆಗೆ ಇದನ್ನು ಪೂರ್ಣಗೊಳಿಸಬಹುದು ಎಂದು ಹೇಳಲಾಗಿದೆ. ತೇಜಸ್ ಅನ್ನು ದೇಶೀಯ ಸ್ವಾವಲಂಬನೆಗೆ ಉದಾಹರಣೆಯಾಗಿ ಕೊಡಲಾಗುತ್ತಿದ್ದರೂ, ಅದರ ಇಂಜಿನ್ ಅಮೆರಿಕದ್ದು. ತೇಜಸ್ನ ಇತ್ತೀಚಿನ MK1A ರೂಪಾಂತರವು ಇಂಜಿನ್ ಮಾತ್ರವಲ್ಲದೆ ಭಾರತದ ಹೊರಗೆ ತಯಾರಿಸಲಾದ ಕೆಲವು ನಿರ್ಣಾಯಕ ರಾಡಾರ್ ಯೂನಿಟ್ಗಳನ್ನು ಸಹ ಹೊಂದಿರುತ್ತದೆ. ಇಲ್ಲಿ ಗಮನಿಸಬೇಕಿರುವುದು, ನಾವಿನ್ನೂ 4.5 ತಲೆಮಾರಿನ ಯುದ್ಧವಿಮಾನ ಮತ್ತು ಅದರ ಭಾಗಗಳನ್ನು ಸಂಪೂರ್ಣವಾಗಿ ತಯಾರಿಸಲು ಸಾಧ್ಯವಾಗದೇ ಇರುವಾಗ, ಚೀನಾ ಆಗಲೇ 5ನೇ ತಲೆಮಾರಿನ ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿದೆ. ಅಲ್ಲದೆ, 6ನೇ ತಲೆಮಾರಿನ ಯುದ್ಧವಿಮಾನಗಳ ಪರೀಕ್ಷೆ ನಡೆಸುತ್ತಿದೆ. ದುಬೈ ಅಪಘಾತಕ್ಕೆ ಇಂಜಿನ್ ಸಮಸ್ಯೆಯೇ ಕಾರಣವೆಂದಾದರೆ, ಭಾರತ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಇದನ್ನು ಹೊರತುಪಡಿಸಿ ನಮಗೆ ಹೆಚ್ಚಿನ ಆಯ್ಕೆಗಳಿಲ್ಲ. ಈ ಕಾರಣಕ್ಕಾಗಿ, ಇಂದಿಗೂ ನಾವು ತೇಜಸ್ ಅನ್ನು ಅವಲಂಬಿಸಬೇಕಾಗಿದೆ. ವಾಯುಪಡೆಗೇ ಶೇ. 100 ತೃಪ್ತಿ ಇಲ್ಲವಾಗಿದ್ದರೂ, ಇವನ್ನೇ ಅವಲಂಬಿಸಬೇಕಾಗುತ್ತದೆ. ಇನ್ನೊಂದೆಡೆ ಎಚ್ಎಎಲ್ ನಿಗದಿತ ಸಮಯಕ್ಕೆ ವಿಮಾನ ಪೂರೈಸುವಲ್ಲಿ ವರ್ಷಗಳಿಂದ ವಿಫಲವಾಗುತ್ತಲೇ ಇದೆ. ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ, ಫೆಬ್ರವರಿಯಲ್ಲಿ ಏರ್ ಚೀಫ್ ಮಾರ್ಷಲ್ ಅವರು ಸ್ವತಃ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 2024ರಿಂದ ಪ್ರತೀ ವರ್ಷ IAF 24 LCA ತೇಜಸ್ಗಳನ್ನು ಎಚ್ಎಎಲ್ನಿಂದ ಪಡೆಯುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಇಲ್ಲಿಯವರೆಗೆ ಕೇವಲ ಎರಡು ತೇಜಸ್ MK1A ಜೆಟ್ಗಳಷ್ಟೇ ವಾಯುಪಡೆ ತಲುಪಿವೆ. ಇನ್ನೊಂದು ಪ್ರಶ್ನೆ, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವಾಗ, ಅಂತಹ ನಿರ್ಣಾಯಕ ರಕ್ಷಣಾ ತಂತ್ರಜ್ಞಾನಕ್ಕಾಗಿ ವಿದೇಶಿ ತಯಾರಕರನ್ನು ಅವಲಂಬಿಸುವುದು ಅಪಾಯಕಾರಿ. ಅದಕ್ಕಾಗಿಯೇ 1980ರ ದಶಕದ ಕೊನೆಯಲ್ಲಿ, ದೇಶೀಯ ಇಂಜಿನ್ ಅನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಭಾರತ ಡಿಆರ್ಡಿಒಗೆ ವಹಿಸಿತು. 1989 ರಿಂದ 2015ರವರೆಗೆ ಈ ಯೋಜನೆಗೆ 2,100 ಕೋಟಿ ರೂ. ಖರ್ಚು ಮಾಡಿದ ನಂತರವೂ ಅದು ಸಾಧ್ಯವಾಗದೇ ಹೋಯಿತು. ಕಡೆಗೆ, ಅಮೆರಿಕದ ಇಂಜಿನ್ ಅನ್ನೇ ನೆಚ್ಚಿಕೊಳ್ಳಬೇಕಾಯಿತು. ನಮ್ಮ ವಾಯುಪಡೆಯಲ್ಲಿ ಈ ಅಪಘಾತ ಕಾರ್ಯಾಚರಣೆಯ ಬಲದ ಮೇಲೆ ಬೆಳಕು ಚೆಲ್ಲುತ್ತದೆ. ದೇಶದ ಭದ್ರತೆಗಾಗಿ, ವಾಯುಪಡೆಗೆ 45 ಫೈಟರ್ ಜೆಟ್ ಸ್ಕ್ವಾಡ್ರನ್ಗಳು ಬೇಕಾಗುತ್ತವೆ. ಅಂದರೆ, ಸುಮಾರು 750ರಿಂದ 800 ಜೆಟ್ಗಳು. ಒಂದೇ ಸಮಯದಲ್ಲಿ ಇಷ್ಟೊಂದು ಜೆಟ್ಗಳು ಲಭ್ಯವಿಲ್ಲದಿದ್ದರೂ, ನಮಗೆ ಕನಿಷ್ಠ 40 ಸ್ಕ್ವಾಡ್ರನ್ ಬಲ ಬೇಕು ಎಂದು ವಾಯುಪಡೆ ಹೇಳುತ್ತದೆ. ಸೆಪ್ಟಂಬರ್ನಲ್ಲಿ ಮಿಗ್ 21 ಅನ್ನು ತೆಗೆದ ನಂತರ ಕೇವಲ 29 ಸ್ಕ್ವಾಡ್ರನ್ ಬಲವಿದೆ. ಅಂದರೆ, ಅಗತ್ಯವಿರುವ ಬಲದ ಶೇ. 70ಕ್ಕಿಂತ ಕಡಿಮೆ. ಭವಿಷ್ಯದಲ್ಲಿ ಈ ಬಲ ಇನ್ನಷ್ಟು ತೀವ್ರವಾಗಿ ಕುಸಿಯಲಿದೆ. ಏಕೆಂದರೆ ಮುಂದಿನ 10 ವರ್ಷಗಳಲ್ಲಿ ಮಿಗ್ 29, ಜಾಗ್ವಾರ್, ಮಿರಾಜ್ನಂತಹ ಹಳೆಯ ಜೆಟ್ಗಳು ಹೊರಹೋಗಲಿವೆ. ಇದು, ಭಾರತದ ರಾಷ್ಟ್ರೀಯ ಭದ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಭಯಾನಕ ವಾಸ್ತವ. ಹೇಳಲಾಗುತ್ತಿರುವ ಪ್ರಕಾರ, ಸುಮಾರು 200ರಿಂದ 250 ನಾಲ್ಕನೇ ಮತ್ತು ಐದನೇ ತಲೆಮಾರಿನ ಚೀನೀ ಫೈಟರ್ ಜೆಟ್ಗಳು ಭಾರತದ ವಿರುದ್ಧ ನೆಲೆಗೊಂಡಿವೆ. ಪಾಕಿಸ್ತಾನ ಚೀನಾದ ಸಹಾಯದಿಂದ ತನ್ನ ನೌಕಾಪಡೆಯನ್ನು ಆಧುನೀಕರಿಸುತ್ತಿದೆ. ವರದಿಗಳ ಪ್ರಕಾರ, ಚೀನಾ ಈ ವರ್ಷ ಪಾಕಿಸ್ತಾನಕ್ಕೆ 40 ಐದನೇ ತಲೆಮಾರಿನ ಜೆ 20 ವಿಮಾನಗಳನ್ನು ಪೂರೈಸಲಿದೆ. ನಮಗೆ ಈ ಹೊತ್ತಲ್ಲಿ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ. ಚೀನಾ ತನ್ನ 5ನೇ ತಲೆಮಾರಿನ ಯುದ್ಧವಿಮಾನ ವನ್ನು 2011ರಲ್ಲಿ ಪರೀಕ್ಷಿಸಿತು. ಆದರೆ ನಾವು 5ನೇ ತಲೆಮಾರಿನ ಯುದ್ಧವಿಮಾನ ಪರೀಕ್ಷಿಸಲು ಇನ್ನೂ ಕನಿಷ್ಠ 8 ವರ್ಷಗಳು ಬೇಕಾಗುತ್ತವೆ. ತೇಜಸ್ನ ಅವಘಡ ಅಂತರ್ರಾಷ್ಟ್ರೀಯವಾಗಿ ಮುಜುಗರದ ವಿಷಯ ಎನ್ನುವುದಕ್ಕಿಂತ ಹೆಚ್ಚಾಗಿ, ಇದು ರಾಷ್ಟ್ರೀಯ ಭದ್ರತೆಯ ವಿಷಯ. ಯುದ್ಧ ವಿಮಾನಗಳ ವಿಷಯದಲ್ಲಿ ನಾವು ಹಿಂದುಳಿದಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಮತ್ತು ಈಗ ಈ ವಿಷಯದಲ್ಲಿ ತೀವ್ರ ಗತಿಯಿಂದ ಮುನ್ನಡೆಯಬೇಕಾಗಿದೆ.
Ayodhya: ಅಯೋಧ್ಯೆ ಶ್ರೀರಾಮ ಮಂದಿರದ ಶಿಖರ ಮೇಲೆ ಧ್ವಜಾರೋಹಣಕ್ಕೆ ಕ್ಷಣಗಣನೆ: ಪ್ರಧಾನಿ ಮೋದಿ ಆಗಮನ
PM Modi in Ayodhya: ಉತ್ತರ ಪ್ರದೇಶದ ಶ್ರೀ ಅಯೋಧ್ಯೆ ಶ್ರೀರಾಮ ಮಂದಿರದ ಕಾಮಗಾರಿ ಸಂಪೂರ್ಣಗೊಂಡಿದೆ. ಇದರ ಪ್ರಯುಕ್ತ ಇಂದು ಮಹತ್ವದ ಸಮಾರಂಭ ಜರುಗಲಿದೆ. ರಾಮ ಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶೇಷ ಧ್ವಜಾರೋಹಣ ನವೆರವೇರಿಸಲಿದ್ದಾರೆ. ಅಪಾರ ಭಕ್ತಗಣ ಈ ಅದ್ಧೂರಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಪ್ರಧಾನಿ ನರೇಂದ್ರ
ಪುತ್ತೂರು | ಹಾಸಿಗೆ ಹಿಡಿದಿರುವ ಐತರಿಗೆ ಆಸರೆಯಾದ ಹಿದಾಯ ಫೌಂಡೇಶನ್
ಮಂಗಳೂರು : ಸುಮಾರು ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿರುವ ಪುತ್ತೂರಿನ ವ್ಯಕ್ತಿಯೋರ್ವರಿಗೆ ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಹಿದಾಯ ಫೌಂಡೇಶನ್ ನೆರವಿನ ಹಸ್ತ ಚಾಚಿದೆ. ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶ ಪಡುವನ್ನೂರು ಗ್ರಾಮದ ಮುಕಾರಿಮೂಲೆ ನಿವಾಸಿ ಕೇಪು ಅವರ ಪುತ್ರ ಐತ ಎಂಬವರು ಓರ್ವ ಪದವೀಧರ. ಪದವಿ ವ್ಯಾಸಂಗಕ್ಕಾಗಿ ಪುತ್ತೂರಿಗೆ ಬಂದು 1995 ರಲ್ಲಿ ಫಿಲೋಮಿನ ಕಾಲೇಜಿನಲ್ಲಿ ಅಂತಿಮ ಬಿ.ಎ. ಪದವಿಯನ್ನು ಅಧ್ಯಯನ ಮಾಡಿದ ಬಳಿಕ ಯಾವುದೇ ಸರಕಾರಿ ಅಥವಾ ಖಾಸಗಿ ಕೆಲಸ ಸಿಗದೆ ಇದ್ದಾಗ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಇವರು 2021 ರಲ್ಲಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೊಂಟಕ್ಕೆ ತೀವ್ರ ಗಾಯಗೊಂಡ ಪರಿಣಾಮ ಹಾಸಿಗೆ ಹಿಡಿದಿದ್ದರು. ಈ ಮಧ್ಯೆ ಐತ ಅವರ ಬದುಕಿನ ಸಂಕಷ್ಟಗಳನ್ನು ಅರಿತ ಅವರ ಪದವಿಯ ಸಹಪಾಠಿ , ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಅವರು ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಹಿದಾಯ ಫೌಂಡೇಶನ್ ಗಮನಕ್ಕೆ ತಂದರು. ಹಿದಾಯ ಫೌಂಡೇಶನ್ ನ ವೈಸ್ ಚೇರ್ಮನ್ ಮುಹಮ್ಮದ್ ಹನೀಫ್ ಹಾಜಿ ಹಾಗೂ ಸದಸ್ಯರು ಐತ ಅವರ ಮನೆಗೆ ಖುದ್ದಾಗಿ ಎರಡು ಸಲ ಭೇಟಿ ನೀಡಿ ಅವರ ನೆರವಿಗೆ ಮುಂದಾಗಿದ್ದಾರೆ. ಮೊದಲ ಭೇಟಿಯ ಫಲವಾಗಿ ಹಿದಾಯ ಫೌಂಡೇಶನ್ ವತಿಯಿಂದ ಪ್ರತಿ ತಿಂಗಳು ಮಾಸಿಕ ಪಡಿತರ ವಿತರಣೆಯನ್ನು ಆರಂಭಿಸಲಾಗಿದೆ. ಎರಡನೇ ಭೇಟಿಯ ಬಳಿಕ ಐತ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ. ಸಂಸ್ಥೆಯ ವೈಸ್ ಚೇರ್ಮನ್ ಎಸ್ ಎಂ ಮುಸ್ತಫಾ ಅವರ ಪ್ರಾಯೋಜಕತ್ವದಲ್ಲಿ ಐತ ಅವರಿಗೆ ಒಂದು ಸುಸಜ್ಜಿತ ಶೌಚಾಲಯ ನಿರ್ಮಿಸಲು ಮುಂದಾಗಿದೆ. ಮುಂದುವರಿದು ಹಿದಾಯ ಫೌಂಡೇಶನ್ ವತಿಯಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವು ನೀಡಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದ ಬಡಕುಟುಂಬದ ಐತ ಅವರ ಸಂಕಷ್ಟವನ್ನು ಮನಗಂಡು ದೂರದ ಮಂಗಳೂರಿನ ಹಿದಾಯ ಫೌಂಡೇಶನ್ ಮಾನವೀಯ ನೆರವು ನೀಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಐತ ಅವರ ಕುಟುಬವು ಹಿದಾಯ ಫೌಂಡೇಶನ್ ಸಂಸ್ಥೆಗೆ ಮತ್ತು ದಾನಿಗಳಿಗೆ ಮನದಾಳದ ಕೃತಜ್ಞತೆ ಸಲ್ಲಿಸಿದೆ. ಮನೆ ಭೇಟಿಯ ನಿಯೋಗದಲ್ಲಿ ಹಿದಾಯ ಫೌಂಡೇಶನ್ ನ ಮುಹಮ್ಮದ್ ಹನೀಫ್ ಹಾಜಿ, ಎಫ್ ಎಂ ಬಶೀರ್, ಆಸೀಫ್ ಇಕ್ಬಾಲ್, ಹಕೀಂ ಕಲಾಯಿ ,ಇಸ್ಮಾಯಿಲ್ ನೆಲ್ಯಾಡಿ, ಸ್ಥಳೀಯ ಸಾಮಾಜಿಕ ಮುಖಂಡ ಮೊಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.
H1 FY26: ಅದಾನಿ ಗ್ರೂಪ್ನಿಂದ ದಾಖಲೆಯ ಮಟ್ಟದ ಸಾಧನೆ
ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಉಪಯುಕ್ತತೆಗಳ ಬಂಡವಾಳ ಹೊಂದಿರುವ ಅದಾನಿ ಪೋರ್ಟ್ಫೋಲಿಯೊ ಇಂದು ತನ್ನ H1 FY26 ಹಣಕಾಸು ಕಾರ್ಯಕ್ಷಮತೆ ಮತ್ತು ಕ್ರೆಡಿಟ್ ಮತ್ತು ಫಲಿತಾಂಶಗಳ ಸಂಕಲನವನ್ನು ಬಿಡುಗಡೆ ಮಾಡಿದೆ. ಈ ದಾಖಲೆಗಳು ಈ ದಾಖಲೆಗಳು ಪೋರ್ಟ್ಫೋಲಿಯೊದ ಆರ್ಥಿಕ ಸಾಧನೆಯ ಸಮಗ್ರ ಚಿತ್ರಣವನ್ನು ನೀಡುತ್ತವೆ ಮತ್ತು ಅದರ ಕ್ರೆಡಿಟ್ ಸಾಮರ್ಥ್ಯ ಹಾಗೂ ದೀರ್ಘಕಾಲಿನ ಸ್ಥೈರ್ಯದ ಕುರಿತು ವಿವರವಾದ
ನಾಯಕತ್ವ ಕಿತ್ತಾಟ: ಕೊನೆಯಗಳಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಡಿಕೆಶಿ, ಒಂದೇ ಕಾರಿನಲ್ಲಿ ಪ್ರಯಾಣ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದಾರೆ. ಮಂಗಳವಾರ ದೆಹಲಿಗೆ ತೆರಳಿದ ಅವರ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡಾ ತೆರಳಿದ್ದಾರೆ. ಇಬ್ಬರು ಒಂದೇ ಕಾರಿನಲ್ಲಿ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಖರ್ಗೆ ಅವರು ಬೆಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ ಡಿಕೆಶಿ ಭೇಟಿ ಆಗಿರಲಿಲ್ಲ. ಆದರೆ ಇದೀಗ ಕೊನೆಯ ಕ್ಷಣದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದಾವಣಗೆರೆ : ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ದಾಳಿ
ದಾವಣಗೆರೆ : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಪ್ರಭು. ಜೆ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಹಾಗೂ ದಾವಣಗೆರೆ ತಾಲೂಕಿನ ದೊಡ್ಡಘಟ್ಟ ಗ್ರಾಮದ ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠ್ಠಾಧಿಕಾರಿ ಎಂ.ಎಸ್.ಕೌಲಾಪೋರೆ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದೆ. ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಭು ಜೆ. ಅವರು ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ, ಚಿನ್ನ, ಬೆಳ್ಳಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಇನ್ನಷ್ಟು ಕಡೆ ಸೈಟ್ ಹಾಗೂ ಜಮೀನು ಖರೀದಿ ಮಾಡಿರುವ ಶಂಕೆಯಿದೆ. ದಾಳಿಯಲ್ಲಿ ಡಿವೈಎಸ್ಪಿ ಕಲಾವತಿ, ಇನ್ಸ್ಪೆಕ್ಟರ್ ಗುರುಬಸವರಾಜ ಇವರ ತಂಡ ಪರಿಶೀಲನೆ ನಡೆಸುತ್ತಿದೆ.
10 ಸಾವಿರ ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟ; ಭಾರತದತ್ತ ದಟ್ಟ ಹೊಗೆ: ವಿಮಾನ ಸಂಚಾರದಲ್ಲಿ ವ್ಯತ್ಯಯ!
ಬರೋಬ್ಬರಿ 10 ಸಾವಿರ ವರ್ಷಗಳಿಂದ ಪ್ರಶಾಂತವಾಗಿದ್ದ ಜ್ವಾಲಾಮುಖಿ ಮೊದಲ ಬಾರಿಗೆ ಸ್ಫೋಟಗೊಂಡಿದೆ. ಇಥಿಯೋಪಿಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ವಿಜ್ಞಾನಿಗಳು ಇದನ್ನ ಬಹಳ ಅಪರೂಪದಲ್ಲೇ ಅಪರೂಪದ ವಿದ್ಯಾಮಾನ ಎಂದು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ಆಕಾಶದಲ್ಲಿ ಹೊಗೆ ಮತ್ತು ಬೂದಿ ಆವರಿಸಿದೆ. ಹೈಲಿ ಗುಬ್ಬಿ ಬಳಿ ಜ್ವಾಲಾಮುಖಿ ಸ್ಫೋಟವಾಗಿ, ಬೂದಿ ತುಂಬಿದ ದಟ್ಟವಾದ ಹೊಗೆ ಆವರಿಸಿದೆ. ಈ ಸ್ಫೋಟದ ಪರಿಣಾಮ ಭಾರತದ
ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತ ಭೇಟಿ ಮತ್ತೆ ಮುಂದೂಡಿಕೆ, ದಿಲ್ಲಿ ಸ್ಫೋಟ ಕಾರಣಕ್ಕೆ ರದ್ದು!
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರದ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಡಿಸೆಂಬರ್ ತಿಂಗಳ ಭಾರತ ಭೇಟಿಯನ್ನು ಮುಂದೂಡಿದ್ದಾರೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಅವರ ಭೇಟಿ ರದ್ದಾಗುತ್ತಿದೆ. ಈ ಹಿಂದೆ ಇಸ್ರೇಲ್ ಚುನಾವಣೆಗಳ ಕಾರಣದಿಂದ ಸೆಪ್ಟೆಂಬರ್ ಮತ್ತು ಏಪ್ರಿಲ್ನಲ್ಲಿ ನಿಗದಿಯಾಗಿದ್ದ ಪ್ರವಾಸಗಳನ್ನು ರದ್ದುಗೊಳಿಸಲಾಗಿತ್ತು.
Gold Rate Rise: ಚಿನ್ನದ ಬೆಲೆಯಲ್ಲಿ ದಾಖಲೆ ಏರಿಕೆ: ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಾಯಿತು ನೋಡಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಪ್ರತಿನಿತ್ಯದ ಚಿನ್ನ ಬೆಳ್ಳಿ ದರಕ್ಕಾಗಿ ವಿಜಯ ಕರ್ನಾಟಕ ಫಾಲೋ ಮಾಡಿ
ಅಫ್ಘಾನಿಸ್ತಾನದ ಮೇಲೆ ಪಾಕ್ನಿಂದ ವಾಯುದಾಳಿ | 9 ಮಕ್ಕಳು ಸೇರಿದಂತೆ 10 ಮಂದಿ ಮೃತ್ಯು : ವರದಿ
ಕಾಬೂಲ್ : ಅಫ್ಘಾನಿಸ್ತಾನದ ಖೋಸ್ಟ್ ಪ್ರದೇಶದಲ್ಲಿ ನಾಗರಿಕರ ಮನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ತಿಳಿಸಿದೆ. ಖೋಸ್ಟ್ನ ಗುರ್ಬುಜ್ ಜಿಲ್ಲೆಯ ಮುಘಲ್ಗೈ ಪ್ರದೇಶದಲ್ಲಿ ಪಾಕಿಸ್ತಾನದ ಪಡೆಗಳು ನಿನ್ನೆ ರಾತ್ರಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿವೆ. ದಾಳಿಯಲ್ಲಿ 9 ಮಕ್ಕಳು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿಯೂ ಪಾಕಿಸ್ತಾನದ ಪಡೆಗಳು ದಾಳಿ ನಡೆಸಿದೆ. ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ನಿನ್ನೆ ರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಪಾಕಿಸ್ತಾನದ ಆಕ್ರಮಣಕಾರಿ ಪಡೆಗಳು ಖೋಸ್ಟ್ ಪ್ರಾಂತ್ಯದ ಗೆರ್ಬಾಜ್ ಜಿಲ್ಲೆಯ ಮುಘಲ್ಗೇ ಪ್ರದೇಶದಲ್ಲಿ ಖಾಜಿ ಮಿರ್ ಅವರ ಪುತ್ರ ವಿಲಾಯತ್ ಖಾನ್ ಅವರ ನಿವಾಸಿದ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ವೇಳೆ 9 ಮಕ್ಕಳು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಮನೆ ಧ್ವಂಸಗೊಂಡಿದೆ ಎಂದು ಜಬಿಹುಲ್ಲಾ ಮುಜಾಹಿದ್ ಎಕ್ಸ್ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದೆ.
ಪ್ರತಿ ಎಕರೆಗೆ 50,000 ರೂ ಪರಿಹಾರ; ಮೆಕ್ಕೆಜೋಳ, ಭತ್ತ ಖರೀದಿಗೆ ಒತ್ತಾಯ!
ಬೆಂಗಳೂರು, ನವೆಂಬರ್ 25: ತುಂಗಭದ್ರಾ ಡ್ಯಾಮ್ ನಿಂದ ಎರಡನೇ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ, ತುಂಗಭದ್ರಾ ಡ್ಯಾಮ್ ಗೇಟ್ ಅಳವಡಿಕೆ ವಿಳಂಬ ಧೋರಣೆ ಖಂಡಿಸಿ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಸಾವಿರಾರು ರೈತರ ನೇತೃತ್ವದಲ್ಲಿ ಇಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಯಲಿದೆ. ಈ ಬಗ್ಗೆ
ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಗೆ ಕಿರುಕುಳ: 18 ಗಂಟೆಗಳ ಕಾಲ ಬಂಧನ; ಚೀನಾ ನಡೆ ಖಂಡಿಸಿದ ಭಾರತ
ಲಂಡನ್ನಲ್ಲಿ ನೆಲೆಸಿರುವ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರು ಶಾಂಘೈ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಬಂಧನಕ್ಕೊಳಗಾದ ಘಟನೆ ನಡೆದಿದೆ. ಈ ಘಟನೆ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಮತ್ತೊಂದು ಸೂಕ್ಷ್ಮ ವಿಷಯವನ್ನು ಎತ್ತಿ ತೋರಿಸಿದೆ. ಅರುಣಾಚಲ ಪ್ರದೇಶದ ಗಡಿ ವಿವಾದವನ್ನು ಚೀನಾ ಪದೇ ಪದೇ ಪ್ರಸ್ತಾಪಿಸುತ್ತಿದೆ. ಆದರೆ, ಭಾರತವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
Power of High Command : ದೆಹಲಿಯ ಒಂದೇ ಒಂದು ಪೋನ್ ಕಾಲಿಗೆ ಕಣ್ಣೀರಿಟ್ಟು ರಾಜೀನಾಮೆ ನೀಡಿದ್ದ BSY
CM Post Tussle In Karnataka : ಸಿದ್ದರಾಮಯ್ಯನವರ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಬದಲಾವಣೆ ಭಾರೀ ಸದ್ದನ್ನು ಮಾಡುತ್ತಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಎರಡೂ ಬಣಗಳು ಹೇಳಿವೆ. ಈ ನಡುವೆ, ನಾಲ್ಕು ವರ್ಷಗಳ ಹಿಂದೆ, ಯಡಿಯೂರಪ್ಪನವರು ಕಣ್ಣೀರಿಟ್ಟು ರಾಜೀನಾಮೆ ನೀಡಿದ್ದ ವಿದ್ಯಮಾನ ವೈರಲ್ ಆಗುತ್ತಿದೆ.
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ 'ಶಾಕ್', ಸಿಮ್ಸ್ ಡೀನ್ ಆಪ್ತ ಸಹಾಯಕನ ಮನೆ ಮೇಲೆ ರೇಡ್
ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ಪ್ರಮುಖ ಕಾರ್ಯಾಚರಣೆಯೊಂದನ್ನು ನಡೆಸಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸೇರಿದ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಗಿನ್ನಿಸ್ ವಿಶ್ವ ದಾಖಲೆ ಬರೆದ ಚೀನಾದ ಹ್ಯೂಮನಾಯ್ಡ್ ರೋಬೋಟ್; ಸತತ 3ದಿನಗಳು 100ಕಿ.ಮೀ ನಡೆದ AgiBot A2 ರೋಬೋಟ್
ಚೀನಾದ AgiBot A2 ಎಂಬ ಹ್ಯೂಮನಾಯ್ಡ್ ರೋಬೋಟ್, ಸತತ ಮೂರು ದಿನಗಳ ಕಾಲ 100 ಕಿಲೋಮೀಟರ್ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. ಸಂಚಾರ ನಿಯಮಗಳನ್ನು ಪಾಲಿಸುತ್ತಾ ವಿಶ್ವದಾಖಲೆ ಬರೆದ ಈ ರೋಬೋಟ್ ಗ್ರಾಹಕ ಸೇವೆಗಾಗಿ ವಿನ್ಯಾಸಗೊಂಡಿದ್ದು, ಸಂಭಾಷಣೆ ಮತ್ತು ತುಟಿಗಳನ್ನು ಓದುವ ಸಾಮರ್ಥ್ಯ ಹೊಂದಿದೆ. ಜಾಗತಿಕ ರೋಬೋಟಿಕ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಚೀನಾ ಹ್ಯೂಮನಾಯ್ಡ್ ರೋಬೋಟ್ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇನ್ನು, ಮೋರ್ಗಾನ್ ಸ್ಟಾನ್ಲಿ ವರದಿ ಪ್ರಕಾರ, 2050ರ ವೇಳೆ ಪ್ರಪಂಚದಾದ್ಯಂತ 1 ಶತಕೋಟಿಯಷ್ಟು ಹ್ಯೂಮನಾಯ್ಡ್ ರೋಬೋಟ್ಗಳು ಇರಲಿದೆ ಎಂದು ಅಂದಾಜಿಸಲಾಗಿದೆ.
ಶಿವಮೊಗ್ಗ | ಸಿಮ್ಸ್ ಡೀನ್ ಆಪ್ತ ಸಹಾಯಕ ಲಕ್ಷ್ಮೀಪತಿಗೆ ಸಂಬಂಧಿಸಿದ ನಾಲ್ಕು ಕಡೆ ಲೋಕಾಯುಕ್ತ ದಾಳಿ
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಡೀನ್ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಎಂಬುವವರಿಗೆ ಸಂಬಂಧಿಸಿದ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಸಿಮ್ಸ್ ಕಾಲೇಜಿನ ಡೀನ್ ಡಾ. ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿಯಾಗಿದೆ. ಮೆಡಿಕಲ್ ಕಾಲೇಜು ಕ್ವಾರ್ಟರ್ಸ್, ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಮನೆ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿರುವ ಮನೆ ಸೇರಿ ಒಟ್ಟು ನಾಲ್ಕುಕಡೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳ ನಾಲ್ಕು ತಂಡ ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿದೆ. ಲೋಕಾಯುಕ್ತ ಎಸ್.ಪಿ ನೇತೃತ್ವದಲ್ಲಿ ದಾಳಿಯಾಗಿದೆ ಎಂದು ತಿಳಿದು ಬಂದಿದೆ
ವಾಯುಮಾಲಿನ್ಯ ಅಧ್ವಾನ: ದಿಲ್ಲಿ- ಎನ್ಸಿಆರ್ ಪ್ರದೇಶದಲ್ಲಿ ವಿದ್ಯುತ್ ವಾಹನಗಳ ಬಳಕೆ ತ್ವರಿತಗೊಳಿಸಲು ಸೂಚನೆ
ಪ್ರಧಾನ ಮಂತ್ರಿಗಳ ಕಚೇರಿಯು, ದೆಹಲಿಗೆ ಗಡಿ ಹಂಚಿಕೊಂಡಿರುವ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಿಗೆ, ವಾಯು ಗುಣಮಟ್ಟದಲ್ಲಿ ಸ್ಪಷ್ಟ ಸುಧಾರಣೆಗಾಗಿ ಪ್ರಾಯೋಗಿಕ ಮತ್ತು ಫಲಿತಾಂಶ-ಆಧಾರಿತ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ರಾಜ್ಯಗಳು ತಮ್ಮ ಗಡಿ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಗಮನ ಹರಿಸಬೇಕಾಗಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 350 ದಾಟಿ 'ಅತ್ಯಂತ ಕಳಪೆ' ಸ್ಥಿತಿಗೆ ತಲುಪಿದೆ.
ನವಜಾತ ಶಿಶುಗಳ ಸಾವುಗಳಿಗೆ ಕೊನೆ ಯಾವಾಗ?
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಗತಿಸಿದವು. ಅಭಿವೃದ್ಧಿಯ ದಿಕ್ಕಿನಲ್ಲಿ ದೇಶ ದಾಪುಗಾಲಿಡುತ್ತಾ ಸಾಗಿದರೂ ಮಾನವಾಭಿವೃದ್ಧಿಯಲ್ಲಿ ನಿಜವಾದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂಬುದು ವಾಸ್ತವ ಸಂಗತಿ. ಉಳಿದುದೇನೇ ಇರಲಿ ಹೆಚ್ಚುತ್ತಿರುವ ನವಜಾತ ಶಿಶುಗಳ ಸಾವನ್ನು ತಡೆಯಲು ಈ ವರೆಗೆ ಸಾಧ್ಯವಾಗಿಲ್ಲ. ಈ ಸಾವುಗಳಿಗೆ ಏನು ಕಾರಣ ಎಂಬುದು ಸರಕಾರಕ್ಕೂ ಗೊತ್ತಿದೆ. ಹಾಗಾಗಿಯೇ ಕೆಲವು ಯೋಜನೆಗಳನ್ನು ರೂಪಿಸಿ ಇದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಆದರೂ ತಡೆಯಲು ಸಾಧ್ಯವಾಗಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ನಮ್ಮ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಅಂಕಿ ಅಂಶಗಳ ಪ್ರಕಾರ 2022-23ರಲ್ಲಿ 7,471 ಹಾಗೂ 2023-24ರಲ್ಲಿ 5,634 ಹಾಗೂ 2024-25ರಲ್ಲಿ 5,826 ಶಿಶುಗಳು ಅಸು ನೀಗಿವೆ. ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2,324 ಶಿಶುಗಳ ಸಾವು ದಾಖಲಾಗಿದೆ. ರಾಯಚೂರು, ಬಳ್ಳಾರಿ, ಬೆಳಗಾವಿ, ಮೈಸೂರು ಮುಂತಾದ ಜಿಲ್ಲೆಗಳು ನಂತರದ ಸ್ಥಾನದಲ್ಲಿ ಇವೆ. ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ ಕೊಂಚ ಕಡಿಮೆ. 1,000 ಜೀವಂತ ಜನನಗಳಿಗೆ 12ಕ್ಕೆ ಇಳಿಕೆಯಾಗಿದೆ. ಆದರೆ ಪಕ್ಕದ ಕೇರಳದಲ್ಲಿ ಇದರ ಪ್ರಮಾಣ 5 ಇದೆ. ಹಾಗಾಗಿ ಇದು ಇನ್ನಷ್ಟು ಕಡಿಮೆಯಾಗಬೇಕಾಗಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಶಿಶು ಸಾವಿನ ಪ್ರಕರಣಗಳು ಜಾಸ್ತಿಯಾಗಿವೆ. ಹಾಗೆ ನೋಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಆರೋಗ್ಯ ಸೇವೆ, ಆಸ್ಪತ್ರೆಗಳು ಕಡಿಮೆ. ನಗರ ಪ್ರದೇಶದಲ್ಲಿ ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸುವ ಆಸ್ಪತ್ರೆಗಳಿರುತ್ತವೆ. ಆದರೂ ನಗರ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮರಣ ಹೆಚ್ಚಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಶಿಶುಗಳ ಸಾವಿಗೆ ಹಲವಾರು ಕಾರಣಗಳಿವೆ. ಇದಕ್ಕೆ ಅವಧಿ ಪೂರ್ವ ಜನನ, ಉಸಿರುಗಟ್ಟುವಿಕೆ, ಕಡಿಮೆ ತೂಕ, ನ್ಯುಮೋನಿಯಾ ಹೀಗೆ ಹಲವಾರು ಕಾರಣಗಳನ್ನು ಕೊಡಬಹುದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡುತ್ತವೆ. ಹಲವಾರು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನವಜಾತ ಶಿಶುಗಳ ಆರೋಗ್ಯ ಘಟಕಗಳು, ಸ್ಥಿರೀಕರಣ ಘಟಕಗಳು, ನವಜಾತ ಶಿಶುಗಳ ಶಿಶು ಆರೋಗ್ಯ ಕೇಂದ್ರಗಳು(ಎನ್.ಬಿ.ಸಿ) ಹಾಗೂ ಮದರ್ ಕೇರ್ ವಾರ್ಡುಗಳಂಥ ವಿಶೇಷ ಸೌಕರ್ಯಗಳನ್ನು ಒದಗಿಸಲಾಗಿದೆ. ಇವೆಲ್ಲ ಇದ್ದರೂ ಶಿಶು ಮರಣವನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಾಗಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ. ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಹಾರ ಕೊರತೆ, ಮಾತ್ರವಲ್ಲ ಬಾಣಂತಿಯರಿಗೆ ಮತ್ತು ಅವರ ಕುಟುಂಬದವರಿಗೆ ನವಜಾತ ಶಿಶುವಿನ ಆರೋಗ್ಯದ ಬಗ್ಗೆ ತಿಳುವಳಿಕೆಯ ಅಭಾವ ನವಜಾತ ಶಿಶು ಮರಣಕ್ಕೆ ಕಾರಣವಾಗಿದೆ. ಸೂಕ್ತ ವೈದ್ಯಕೀಯ ಮಾರ್ಗದರ್ಶನದ ಕೊರತೆ ಕೂಡ ಇದಕ್ಕೆ ಇನ್ನೊಂದು ಕಾರಣವಾಗಿದೆ. ಇಷ್ಟೆಲ್ಲಾ ಸೌಕರ್ಯಗಳನ್ನು ಒದಗಿಸಿದರೂ ಶಿಶು ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಇಲ್ಲವೇ ನಿವಾರಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂದಿನ ಮಕ್ಕಳನ್ನು ನಾಳಿನ ನಾಗರಿಕರೆಂದು ಕರೆಯಲಾಗುತ್ತದೆ. ಆದರೆ ಆ ಮಕ್ಕಳ ಸರ್ವತೋಮುಖ ಏಳಿಗೆಗೆ ಸಮಗ್ರವಾದ ಯೋಜನೆಯನ್ನು ರೂಪಿಸಲು ಈವರೆಗೆ ಸಾಧ್ಯವಾಗಿಲ್ಲ. ದೇಶದಲ್ಲಿ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತವೆ. ಜಾತಿ, ಮತದ ಹೆಸರಿನಲ್ಲಿ ನಿತ್ಯ ಕೋಲಾಹಲಗಳು ನಡೆಯುತ್ತವೆ. ಆದರೆ ಶಿಶುಗಳ ಸಾವಿನ ಬಗ್ಗೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಈ ಬಗ್ಗೆ ಚರ್ಚೆಯಾಗುತ್ತಿಲ್ಲ. ಇದು ವಿಷಾದದ ಸಂಗತಿಯಾಗಿದೆ.ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಬಡ ಹಿಂದುಳಿದ ಕುಟುಂಬಗಳಿಗೆ ಸೇರಿದ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದಾಗಿ ಅಸು ನೀಗಿದ ಉದಾಹರಣೆಗಳು ಸಾಕಷ್ಟು ಇವೆ. ನಮ್ಮ ರಾಜ್ಯದಲ್ಲಿ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಸಂಗತಿ ಹೊಸದೇನಲ್ಲ.ಇದರ ಪರಿಣಾಮ ನವಜಾತ ಶಿಶುಗಳ ಮೇಲೂ ಆಗುತ್ತಿರುವುದರಿಂದ ಶಿಶು ಮರಣಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಶಿಶು ಮರಣವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಟಾಚಾರದ ಯೋಜನೆಗಳನ್ನು ರೂಪಿಸಿದರೆ ಸಾಲದು. ಇಂಥ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗೆಗೂ ಎಚ್ಚರ ವಹಿಸಬೇಕಾಗಿದೆ. ಇದರಲ್ಲಿ ಸಮಾಜದ ಪಾತ್ರವೂ ಮುಖ್ಯವಾಗಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಯಾವ್ಯಾವುದಕ್ಕೋ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಬ್ಯಾಂಕುಗಳ ಸಾಲವನ್ನು ಕಟ್ಟಲಾಗದ ಕೋಟ್ಯಧೀಶ ಉದ್ಯಮ ಪತಿಗಳ ಸಾವಿರಾರು ಕೋಟಿ ರೂಪಾಯಿ ಮನ್ನಾ ಮಾಡಲಾಗುತ್ತದೆ. ಆದರೆ ಮಕ್ಕಳ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವಶ್ಯವಿರುವಷ್ಟು ಹಣವನ್ನು ಒದಗಿಸುವ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿಲ್ಲ. ಇದು ವಿಷಾದದ ಸಂಗತಿಯಾಗಿದೆ. ನಮ್ಮ ಜನ ಪ್ರತಿನಿಧಿಗಳು ಕೂಡ ಶಿಶು ಮರಣವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಆಸಕ್ತಿ ತೋರಿಸಬೇಕಾಗಿದೆ. ಈ ಬಗ್ಗೆ ಸಮಗ್ರ ಯೋಜನೆಯನ್ನು ರೂಪಿಸಲು ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.ಸರಕಾರ ಮಾತ್ರವಲ್ಲ ಸಮಾಜ ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ಮಠ, ಪೀಠಗಳು ಕೂಡ ವಿಶೇಷ ಆಸಕ್ತಿಯನ್ನು ವಹಿಸಿ ನವಜಾತ ಶಿಶುಗಳ ಸಾವಿನ ದುರಂತವನ್ನು ತಡೆಯಲು ಮುಂದಾಗಬೇಕಾಗಿದೆ.
Merger : ರಾಷ್ಟ್ರೀಕೃತ ಬ್ಯಾಂಕ್ ನಂತರ Insurance ಕಂಪೆನಿ - ಪ್ರಾಫಿಟ್ ನಲ್ಲಿರುವ 3 ಕಂಪೆನಿಗಳು ಒಂದಕ್ಕೆ ವಿಲೀನ?
General Insurance Companies merger : ಸಾರ್ವಜನಿಕ ವಲಯದ ಮತ್ತು ಪ್ರಾಫಿಟ್ ನಲ್ಲಿರುವ ಮೂರು ವಿಮಾ ಕಂಪೆನಿಗಳನ್ನು ಒಂದಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಗೆ ಆರಂಭಿಕ ಚಾಲನೆ ಸಿಕ್ಕಿದೆ. ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದ ನಂತರ, ವಿಮಾ ಕ್ಷೇತ್ರದಲ್ಲೂ ಮರ್ಜರ್ ಪ್ರಕ್ರಿಯೆಗೆ ಕೇಂದ್ರ ಹಣಕಾಸು ಸಚಿವಾಲಯ ಆರಂಭಿಕ ಅನುಮೋದನೆಯನ್ನು ನೀಡಿದೆ.
ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಮಾವೋವಾದಿಗಳ ಮನವಿ
ಮಾವೋವಾದಿಗಳು ಫೆಬ್ರವರಿ 15, 2026 ರವರೆಗೆ ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ತಮ್ಮ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಕೋರಿರುವ ಅವರು, ಇದು ಶರಣಾಗತಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಪಕ್ಷದ ಕೇಂದ್ರ ಸಮಿತಿಯ ಬೆಂಬಲವೂ ಇದೆ ಎಂದು ಹೇಳಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿ ಹೊರಗುತ್ತಿಗೆ ನೇಮಕಾತಿಯಲ್ಲಿ ಅಕ್ರಮ?
ಅಸಿಸ್ಟಂಟ್ ಇಂಜಿನಿಯರ್ ಸಹಿತ 155 ಮಂದಿಯ ನೇಮಕಗಳಲ್ಲಿ ನಿಯಮಗಳ ಉಲ್ಲಂಘನೆ
ಭಾರತಕ್ಕೆ ತಲುಪಿದ ಇಥಿಯೋಪಿಯಾದ ಜ್ವಾಲಾಮುಖಿ ಬೂದಿ: ವಿಮಾನ ಸಂಚಾರ ವ್ಯತ್ಯಯ
ಹೊಸದಿಲ್ಲಿ: ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯ ಬೂದಿ ಗಾಳಿಯ ಮೂಲಕ ವಾಯುವ್ಯ ಭಾರತವನ್ನು ತಲುಪಿದ್ದು, ಬೂದಿಯುಕ್ತ ಮಬ್ಬು ವಾತಾವರಣದಿಂದಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ದೆಹಲಿ-ಎನ್ಸಿಆರ್ ಮತ್ತು ಪಂಜಾಬ್ ನಲ್ಲಿ ಗೋಚರತೆ ಸಮಸ್ಯೆ ಕಾರಣದಿಂದ ವಿಮಾನ ಸಂಚಾರ ವ್ಯತ್ಯಯಗೊಂಡಿದೆ. ಭಾರತದಲ್ಲಿ ಈ ದಟ್ಟ ಮಬ್ಬು ವಾತಾವರಣ ಪೂರ್ವಾಭಿಮುಖ ಚಲನೆಯಲ್ಲಿದೆ. ಸುಮಾರು 12 ಸಾವಿರ ವರ್ಷದಲ್ಲಿ ಮೊದಲ ಬಾರಿಗೆ ಚಿಮ್ಮಿದ ಹ್ಯಾಲಿ ಗುಬ್ಬಿ ಜ್ವಾಲಾಮುಖಿಯಿಂದ ಸಿಡಿದ ಬೂದಿ ಎಲ್ಲೆಡೆ ವ್ಯಾಪಿಸುತ್ತಿದ್ದು, 10 ಕಿಲೋಮೀಟರ್ ಎತ್ತರದಲ್ಲಿ ಬೂದಿಯುಕ್ತ ಮೋಡ ಕವಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಈ ಬೂದಿಯುಕ್ತ ಗಾಳಿ ರಾತ್ರಿ 11 ಗಂಟೆ ವೇಳೆ ತಲುಪಿದ್ದು, ಭಾರಿ ತೊಂದರೆಗೀಡಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಭಾರತೀಯ ನಗರಗಳ ಮೇಲೆ ಕೆಲ ಗಂಟೆಗಳ ಕಾಲ ಇದರ ಪರಿಣಾಮ ಇರಲಿದ್ದು, ಪೂರ್ವಾಭಿಮುಖವಾಗಿ ಚಲಿಸುತ್ತಿದೆ ಎಂದು ವಿವರಿಸಿದೆ. ಹಲವು ವಿಮಾನಗಳ ಸಂಚಾರವನ್ನು ವಿಮುಖಗೊಳಿಸಲಾಗಿದೆ ಅಥವಾ ರದ್ದುಪಡಿಸಲಾಗಿದೆ ಎಂದು ಅಕಾಸಾ ಏರ್ ಮತ್ತು ಇಂಡಿಗೊ ಹೇಳಿವೆ. ಮಸ್ಕತ್ ವಿಮಾನ ಮಾಹಿತಿ ಪ್ರದೇಶದಲ್ಲಿ ಈ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಎಲ್ಲ ವಿಮಾನಗಳಿಗೆ ಈ ಸಂಬಂಧ ಸಲಹೆ ಬಿಡುಗಡೆ ಮಾಡಿದ್ದಾರೆ. ಸಂಜೆ 6.30ರ ವೇಳೆಗೆ ರಾಜಸ್ಥಾನದಲ್ಲಿ ಈ ಹೊಗೆಯುಕ್ತ ಮೋಡ ಕಾಣಿಸಿಕೊಂಡಿದ್ದು, 100 ರಿಂದ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಈ ಹೊಗೆಮೋಡ ಚಲಿಸುತ್ತಿರುವ ಎತ್ತರ ಮತ್ತು ಪ್ರದೇಶದಲ್ಲಿ ವಿಮಾನ ಸಂಚಾರ ಕೈಗೊಳ್ಳದಂತೆ ಡಿಜಿಸಿಎ ಸಲಹೆ ಮಾಡಿದೆ. ಜ್ವಾಲಾಮುಖಿ ಬೂದಿಯ ಸಲಹೆ ಜತೆಗೆ ವಿಮಾನಯಾನಿಗಳಿಗೆ ವಿಶೇಷ ವಿಮಾನಯಾನ ಮುನ್ನೆಚ್ಚರಿಕೆಯನ್ಣೂ ನೀಡಲಾಗಿದೆ. ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗೆ ಜ್ವಾಲಾಮುಖಿ ಬೂದಿಗೆ ಸಂಬಂಧಿಸಿದಂತೆ ಕಾರ್ಯಾಚರಣೆಯ ಮಾರ್ಗಸೂಚಿ ನೀಡಬೇಕು ಹಾಗೂ ಸೂಕ್ತ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಕ್ಕೆ ಭಾರೀ ವಿರೋಧ, ವಿಶೇಷ ಕಾಯಿದೆಗೆ ಶಿಕ್ಷಕರ ಆಗ್ರಹ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಜಂತರ್ - ಮಂತರ್ನಲ್ಲಿ ಪ್ರತಿಭಟನೆ ನಡೆಯಿತು. ದೇಶದ 30 ಲಕ್ಷ ಶಿಕ್ಷಕರು ಅಭದ್ರತೆ ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ವಿಶೇಷ ಕಾಯಿದೆ ಜಾರಿಗೆ ತರಬೇಕು ಎಂದು ಶಿಕ್ಷಕರು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಒತ್ತಾಯಿಸಲಾಯಿತು.
ಅಕಾಲಿಕ ಸಾವಿಗೀಡಾದ ಜಾನುವಾರುಗಳಿಗೆ ಪರಿಹಾರ ಕೊಡದ ಸರಕಾರ, ತುಮಕೂರಲ್ಲಿ ಕಳೆದ ನವೆಂಬರ್ ನಿಂದ 2.64 ಕೋಟಿ ರೂ ಬಾಕಿ
ಅನುಗ್ರಹ ಯೋಜನೆಯಡಿ ಜಾನುವಾರುಗಳಿಗೆ ಪರಿಹಾರ ವಿಳಂಬವಾಗುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ 2.64 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಪರಿಹಾರದ ಮೊತ್ತವನ್ನು 10,000 ರೂ.ನಿಂದ 15,000 ರೂ.ಗೆ ಹೆಚ್ಚಿಸಿದ್ದರೂ ಹಣ ಬಿಡುಗಡೆಯಾಗಿಲ್ಲ.
ಕರ್ನಾಟಕದ ಗೃಹಲಕ್ಷ್ಮೀಯರು ಅತಂತ್ರ! ಗ್ಯಾರಂಟಿ ಹಣ ಈ ವರ್ಷ ಬಂದಿರುವುದು ಕೇವಲ 5 ತಿಂಗಳು ಮಾತ್ರ!
ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಹಣ ಮೂರು ತಿಂಗಳಿಂದ ಬಾರದೆ ಮಡಿಕೇರಿ ಜಿಲ್ಲೆಯ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಗ್ಯಾರಂಟಿ ನಂಬಿ ಚೀಟಿ, ಚಿನ್ನದ ಯೋಜನೆಗಳಿಗೆ ಹಣ ತೊಡಗಿಸಿದ್ದ ಗೃಹಿಣಿಯರು ಇದೀಗ ಸಾಲ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಆಗಸ್ಟ್ನಿಂದ ಹಣ ಬಂದಿಲ್ಲ, ಫೆಬ್ರವರಿ-ಮಾರ್ಚ್ ಬಾಕಿ ಹಣವೂ ಪಾವತಿಯಾಗಿಲ್ಲ. ಇದರಿಂದ ಮಹಿಳೆಯರು ಆತಂಕಗೊಂಡಿದ್ದಾರೆ.
ಕೊಳೆರೋಗಕ್ಕೆ ಭಾರೀ ಪ್ರಮಾಣದಲ್ಲಿ ಬೆಳೆ ನಾಶ, ಏರುಗತಿಯಲ್ಲಿ ಹಸಿ ಶುಂಠಿ ದರ; ಎಷ್ಟಿದೆ ಸದ್ಯದ ಬೆಲೆ?
ಮಲೆನಾಡಿನಲ್ಲಿ ಸುದೀರ್ಘ ಮಳೆಯಿಂದಾಗಿ ಶುಂಠಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದು, ಮಾರುಕಟ್ಟೆಯಲ್ಲಿ ಹಸಿ ಶುಂಠಿ ದರ ಕಳೆದ ವರ್ಷಕ್ಕಿಂತ ದ್ವಿಗುಣಗೊಂಡು ಕ್ವಿಂಟಾಲ್ಗೆ 5100 ರೂಪಾಯಿ ತಲುಪಿದೆ. ಹೊರ ರಾಜ್ಯಗಳಲ್ಲಿ ಅಧಿಕ ಬೇಡಿಕೆ ಮತ್ತು ಇತರ ರಾಜ್ಯಗಳಲ್ಲೂ ಕಡಿಮೆ ಇಳುವರಿಯಿಂದಾಗಿ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Rain Alert: ರಾಜ್ಯಾದ್ಯಂತ ಭಾರೀ ಚಳಿ, ಮುಂದಿನ ಐದು ದಿನ ಮಳೆ ಎಚ್ಚರಿಕೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ಬೆಳಿಗ್ಗೆ ವೇಳೆ ದಟ್ಟವಾದ ಮಂಜು ಆವರಿಸುತ್ತಿದೆ. ಸಂಜೆಯಿಂದಲೇ ನಡುಗುವ ಚಳಿಗೆ ಜನ ತತ್ತರಿಸುತ್ತಿದ್ದಾರೆ. ಇದರೊಂದಿಗೆ ಹಲವು ಜಿಲ್ಲೆಗಳಲ್ಲಿ ಮಳೆ ಕೂಡ ಮುಂದುವರಿದಿದೆ. ಕರಾವಳಿ ಕರ್ನಾಟಕದಾದ್ಯಂತ ಈಶಾನ್ಯ ಮಾನ್ಸೂನ್ ಸಕ್ರಿಯವಾಗಿದೆ. ಒಳನಾಡಿನ ಕರ್ನಾಟಕದಾದ್ಯಂತ ದುರ್ಬಲವಾಗಿದ್ದು, ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಕರ್ನಾಟಕದಾದ್ಯಂತ ಒಣ
ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಹುಬ್ಬಳ್ಳಿಯಲ್ಲಿ ₹3.2 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ, ಇಬ್ಬರು ವಶಕ್ಕೆ
ಹುಬ್ಬಳ್ಳಿಯಲ್ಲಿ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಐವರು, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ಸುದಿನ್ ಎಂಆರ್ ಅವರಿಂದ 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಯ್ಯನಿಗೆ ಷರತ್ತು ಬದ್ಧ ಜಾಮೀನು ಮಂಜೂರು; 12 ಷರತ್ತುಗಳೇನು?
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು 12 ಷರತ್ತುಗಳೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಮತ್ತೊಂದೆಡೆ, ಮನೆಯಲ್ಲಿ ಅನಧಿಕೃತ ಶಸ್ತ್ರಾಸ್ತ್ರ ಇರಿಸಿಕೊಂಡ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದೆ.
ಅಧಿವೇಶನಕ್ಕೆ ಮೊದಲೇ ಕುರ್ಚಿ ಕಲಹಕ್ಕೆ ತೆರೆ ಸಾಧ್ಯತೆ, ಶೀಘ್ರದಲ್ಲೇ ಸಿಎಂ, ಡಿಸಿಎಂಗೆ ದಿಲ್ಲಿಗೆ ಬುಲಾವ್
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ನಾಯಕತ್ವದ 'ಸರದಿ' ಗೊಂದಲಕ್ಕೆ ಎಐಸಿಸಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಎರಡು-ಮೂರು ದಿನಗಳಲ್ಲಿ ಇಬ್ಬರನ್ನೂ ದಿಲ್ಲಿಗೆ ಕರೆಸಿ ಪರಿಹಾರ ಸೂತ್ರ ಹೆಣೆಯಲು ವರಿಷ್ಠರು ನಿರ್ಧರಿಸಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರ ತಂಡಗಳು ದಿಲ್ಲಿಗೆ ಭೇಟಿ ನೀಡಿ ಒತ್ತಡ ತರುತ್ತಿವೆ. ಪರಿಸ್ಥಿತಿಯ ತೀವ್ರತೆ ಅರಿತು ರಾಹುಲ್ ಗಾಂಧಿ ಕೂಡ ಗೊಂದಲ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಉಡುಪಿ: ಶ್ರೀಮಹಾಲಕ್ಷ್ಮೀ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಕಲಿ ಸಹಿ ಬಳಸಿ ನೀಡಿರುವ ಸಾಲಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯ ದಿಂದ ಪರೀಕ್ಷಿಸಿ ಸೂಕ್ತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಉಡುಪಿ ತಾಲೂಕು ಸಂತ್ರಸ್ತರ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಡುಪಿ ಸಹಕಾರ ಇಲಾಖೆಯ ಉಪನಿಬಂಧಕಿ ಲಾವಣ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀಮಹಾಲಕ್ಷ್ಮೀ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸಾಲಮೇಳ ಎಂಬ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ನಗದು ರೂಪದಲ್ಲಿ ಸಾಲಗಳನ್ನು ನೀಡಲಾಗಿದ್ದು, ಆ ಸಾಲವನ್ನು ಒಂದು ವರ್ಷದ ಬಳಿಕ ಮರು ಪಾವತಿಸಬೇಕಾಗಿತ್ತು. ಆದರೆ ಈ ಯೋಜನೆಯಲ್ಲಿ ಅಲ್ಪ ಪ್ರಮಾಣದ ಸಾಲವನ್ನು ಪಡೆದ ಸಾಲಗಾರರ ಸಾಲವನ್ನು 2ಲಕ್ಷ ರೂ. ಎಂದು ತಪ್ಪಾಗಿ ನಮೂದಿಸಿ ಈಗ ಅಸಲು ಮತ್ತು ಬಡ್ಡಿ ಸೇರಿಸಿ 3 ಲಕ್ಷಕ್ಕಿಂತ ಅಧಿಕ ಪಾವತಿಸುವಂತೆ ನೋಟಿಸು ನೀಡಲಾಗಿತ್ತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿ ಸಾಲ ಪತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಮ್ಮ ನಕಲಿ ಸಹಿ ಬಳಸಿ ಹೆಚ್ಚಿನ ಹಣ ನೀಡಿರುವುದನ್ನು ನಮೂದಿಸಿ ದುರುಪಯೋಗ ಮಾಡಿರುವುದು ಗಮನಕ್ಕೆ ಬಂತು. ಬಳಿಕ ಬ್ಯಾಂಕ್ ಸಾಲ ಪತ್ರದಲ್ಲಿನ ನಕಲಿ ಸಹಿಯಿಂದ ಅನ್ಯಾಯ ಕ್ಕೊಳಗಾದ ಸಂತ್ರಸ್ತರು ಒಟ್ಟಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವಂತೆ ಸರಕಾರದ ಗಮನಕ್ಕೆ ತಂದು ಒತ್ತಾಯ ಮಾಡಿದಾಗ ಸರಕಾರ ಈ ವಿಷಯದ ಬಗ್ಗೆ ನಿಯಮ 64ರ ಅಡಿಯಲ್ಲಿ ಸಹಕಾರ ಇಲಾಖೆ ಉಪನಿಬಂಧಕರು ಸೂಕ್ತ ತನಿಖೆಯನ್ನು ನಡೆಸುವಂತೆ ಆದೇಶ ಜಾರಿಗೊಳಿಸಿತು. ಈ ತನಿಖೆಗೆ ಆದೇಶವಾಗಿ ಒಂದು ವರ್ಷ ಕಳೆದರೂ ಈವರೆಗೆ ನ್ಯಾಯ ಸಿಕ್ಕಿಲ್ಲ. ಹಾಗೆಯೇ ತನಿಖೆಗೆ ಆದೇಶವಾದ ದಿನದಿಂದಲೇ ನಮ್ಮ ಸಹಿಯ ನಕಲಿಯ ಬಗ್ಗೆ ಬ್ಯಾಂಕಿನಿಂದ ಸಾಲ ಪತ್ರವನ್ನು ತರಿಸಿ ನಮ್ಮ ಸಹಿಯ ಸತ್ಯಾಸತ್ಯತೆಯ ಬಗ್ಗೆ ವಿಧಿ ವಿಜ್ಞಾನ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ತನಿಖಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಿದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಅನ್ಯಾಯಕ್ಕೊಳಗಾದ ನಮ್ಮ ಅಭಿಪ್ರಾಯವನ್ನು ಕೇಳದೆ ಒಂದೇ ನೋಟಿಸಿನಲ್ಲಿ ಸಾಲ ಮರುಪಾವತಿಸುವ ಬಗ್ಗೆ ಸಹಕಾರಿ ಸಂಘಗಳ ನ್ಯಾಯಾಲಯ ಬೆಂಗಳೂರು ಏಕಪಕ್ಷೀಯ ತೀರ್ಪು ಕೈಗೊಂಡು ಆದೇಶಿಸಿದೆ. ಈ ತನಿಖೆಯ ವರದಿ ಬಾಕಿಯಿದ್ದರೂ ಬ್ಯಾಂಕಿನವರು ವಸೂಲಾತಿಗೆ ಮನೆ ಜಪ್ತಿ, ಆಸ್ತಿ ಜಪ್ತಿ ಹಾಗೂ ಚೆಕ್ ಹಾಕುವುದಾಗಿ ಸಂತ್ರಸ್ತರನ್ನು ಕಾನೂನಿನ ನೆಪದ ಮೂಲಕ ಬೆದರಿಸುತ್ತಿದ್ದಾರೆ. ಆದ್ದರಿಂದ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಮ್ಮ ಸಹಿಯನ್ನು ನಕಲಿ ಮಾಡಿ ಸಾಲ ನೀಡಿರುವ ಆ ಸಹಿಯ ಸತ್ಯಾಸತ್ಯತೆಯನ್ನು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷಿಸಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಈ ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ನಮಗೆ ಸಾಲ ಮರುಪಾವತಿಗೆ ಕಿರುಕುಳ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕವಿ ಕೂರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ
ಉಡುಪಿ: ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ವತಿಯಿಂದ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ, ಪುಸ್ತಕ ಮತ್ತು ಸಾಕ್ಷ ಚಿತ್ರ ಬಿಡುಗಡೆ ಕಾರ್ಯಕ್ರಮ ಅಂಬಲಪಾಡಿ ಭವಾನಿ ಮಂಟಪದಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂಬಲಪಾಡಿ ದೇವಸ್ಥಾನದ ಧರ್ಮ ದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ ಮಾತನಾಡಿ, ಉಡುಪಿಯು ಸಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಪ್ರತಿನಿತ್ಯ ವಿವಿಧ ರೀತಿಯ ವೈಶಿಷ್ಟ ಪೂರ್ಣವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ನಮ್ಮ ಆಚಾರ ವಿಚಾರ, ಸಂಸ್ಕೃತಿಗಳ ಪರಿಚಯ ಇತರರಿಗೂ ಪ್ರಸಾರ ವಾಗುತ್ತಿದೆ ಎಂದು ತಿಳಿಸಿದರು. ಯುವ ಉದಯೋನ್ಮುಖ ಕವಿ ಶಶಿ ತರಿಕೆರೆ ಅನುಪಸ್ಥಿತಿಯಲ್ಲಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿಯನ್ನು ಅವರ ಪರವಾಗಿ ಪತ್ನಿ ರಶ್ಮಿ ತರಿಕೆರೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂಜುಶ್ರೀ ಕೃಷ್ಣ ಭಟ್ ಅವರ ಜೀವನ ಧರ್ಮ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತ ಎಸ್ ನಿತ್ಯಾನಂದ ಪಡ್ರೆ ಮಾತನಾಡಿದರು. ಹಿರಿಯ ಶಿಕ್ಷಣ ತಜ್ಞ ರಂಗಪ್ಪಯ್ಯ ಹೊಳ್ಳ ಪುಸ್ತಕ ಪರಿಚಯ ಮಾಡಿದರು. ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಉರಗ ತಜ್ಞ ಗುರುರಾಜ್ ಸನಿಲ್ ಅವರ ಸಾಕ್ಷ್ಯಚಿತ್ರವನ್ನು ಕಾರ್ಯಕ್ರಮದ ಸಂಯೋಜಕ ಅವಿನಾಶ್ ಕಾಮತ್ ಉಪಸ್ಥಿತಿಯಲ್ಲಿ ಶಿವರಾಮ ಕಾರಂತ ಪ್ರತಿಷ್ಟಾನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಸ್ಥಾಪಕ ಅಧ್ಯಕ್ಷ ನಾರಾಯಣ ಮಡಿ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಗಂಗೊಳ್ಳಿಯಿಂದ ಕುಂದಾಪುರ ನಗರ ಸಂಪರ್ಕಿಸುವ ಸೇತುವೆಗೆ ಡಿಪಿಆರ್: ಬಿ.ವೈ.ರಾಘವೇಂದ್ರ
ಗಂಗೊಳ್ಳಿ: ಗಂಗೊಳ್ಳಿಯಿಂದ ಕುಂದಾಪುರ ನಗರವನ್ನು ಸಂಪರ್ಕಿ ಸುವ ಸುಮಾರು ೧.೩ಕಿ.ಮೀ. ದೂರದ ಸೇತುವೆಗೆ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಜ.೩೦ರೊಳಗೆ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸೂಚಿಸಿದ್ದು, ಅದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ೩ ಪ್ರತ್ಯೇಕ ಡಿಪಿಆರ್ ತಯಾರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಗಂಗೊಳ್ಳಿ -ಕುಂದಾಪುರ ಸೇತುವೆ ನಿರ್ಮಾಣದ ಪ್ರಸ್ತಾವಿತ ಪ್ರದೇಶವನ್ನು ಸೋಮವಾರ ವೀಕ್ಷಿಸಿ, ಅಧಿಕಾರಿ ಗಳಿಂದ ಡಿಪಿಆರ್ ಬಗ್ಗೆ ಮಾಹಿತಿ ಪಡೆದು, ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಿಗಂದೂರು ಸೇತುವೆ ಸಹಿತ ಶಿವಮೊಗ್ಗ ಜಿಲ್ಲೆಯ ಅನೇಕ ಊರುಗಳಿಗೆ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ಸಾಧ್ಯವಾಗಿದೆ. ಅದೇ ರೀತಿ ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಿಸಬೇಕು ಅನ್ನುವುದು ನನ್ನ ಕನಸು. ಅದನ್ನು ಸಾಧ್ಯವಾಗಿಸಲು ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತಿದೆ. ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಈ ಬಗ್ಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಸೇತುವೆ ಕನಸು ಈಡೇರುವ ನಿರೀಕ್ಷೆಯಿದೆ ಎಂದವರು ಹೇಳಿದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಸಂಸದರು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆ ಕೊಲ್ಲೂರು ಕಾರಿಡಾರ್ ಯೋಜನೆ ಕುರಿತಂತೆ ಪ್ರವಾಸೋದ್ಯಮ ಸಚಿವ ಗಜೇಂದ್ರ ಶೇಖಾವತ್ ಅವರು ಇಲ್ಲಿಗೆ ಭೇಟಿ ನೀಡಿದ್ದಾಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ಬೀಚ್, ಸೋಮೇಶ್ವರ ಬೀಚ್, ಕೊಲ್ಲೂರು ದೇವಸ್ಥಾನವನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ೧೦೦ ಕೋ.ರೂ. ವೆಚ್ಚದ ಯೋಜನೆ ಇದಾಗಿದ್ದು, ಕೆಲವೊಂದು ಅಡೆತಡೆಗಳನ್ನು ನಿವಾರಿಸಿದ್ದು, ಮುಂಬರುವ ಬಜೆಟ್ ನಲ್ಲಿ ಮಂಜೂರಾಗುವ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ಸುರೇಶ ಬಟವಾಡಿ, ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು, ಮೀನುಗಾರ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗಂಗೊಳ್ಳಿ | ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಐವರ ಬಂಧನ
ಗಂಗೊಳ್ಳಿ: ಆಲೂರು ಮಾವಿನಗುಳಿ ಎಂಬಲ್ಲಿ ನ.23ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ದಿವಾಕರ(56), ಗಣೇಶ್(40), ಗಣೇಶ್(29), ಪ್ರಶಾಂತ್(37), ಎಚ್.ಬಾಬು(55) ಬಂಧಿತ ಆರೋಪಿಗಳು. ಜಯಶೀಲ ಶೆಟ್ಟಿ ಹಾಗೂ ಇತರರು ಪೊಲೀಸ್ ದಾಳಿ ವೇಳೆ ಸ್ಥಳದಿಂದ ಓಡಿ ಹೋಗಿದ್ದಾರೆ. 7 ಕೋಳಿ ಹುಂಜ, 5 ಕೋಳಿಬಾಳು ಹಾಗೂ 2400ರೂ. ನಗದು, ಏಳು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಟಿ20 ವಿಶ್ವಕಪ್ ನಂತರ ಭಾರತಕ್ಕೆ ಮಹಿಳೆಯರ ಕಬಡ್ಡಿ ವಿಶ್ವಕಪ್! ಪ್ರಧಾನಿ ಮೋದಿ ಶುಭಾಶಯ
ಭಾರತ ಮಹಿಳಾ ಕಬಡ್ಡಿ ತಂಡವು ಕಬಡ್ಡಿ ವಿಶ್ವಕಪ್ 2025 ಅನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ. ಫೈನಲ್ನಲ್ಲಿ ಚೀನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ತಂಡವು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಗೆಲುವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ.
ಎಐ ಕಾಲಘಟ್ಟದಲ್ಲಿ ಸುದ್ದಿ, ಚಿತ್ರಗಳ ನೈಜತೆ ಖಾತ್ರಿ ಅಗತ್ಯ : ಈಶ್ವರ್ ಖಂಡ್ರೆ
ಕೆ.ಯು.ಡಬ್ಲ್ಯು.ಜೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಬಂಟ್ವಾಳ: ಪೂರ್ವಾನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಕರ್ಕಶ ಡಿಜೆ ಬಳಕೆ; ಪ್ರಕರಣ ದಾఖలు
ಬಂಟ್ವಾಳ: ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಮದುವೆ ಕಾರ್ಯಕ್ರಮದಲ್ಲಿ ಕರ್ಕಶ ಡಿಜೆ ಬಳಸಿದ್ದಾರೆನ್ನಲಾದ ಘಟನೆ ಬಂಟ್ವಾಳ-ಭಂಡಾರಿಬೆಟ್ಟು ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಂಡಾರಿಬೆಟ್ಟು ಎಂಬಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಹಾಗೂ ಕರ್ಕಶವಾಗಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ತೊಂದರೆಯಾಗುವಂತೆ ಧ್ವನಿವರ್ಧಕ ಬಳಸುತ್ತಿರುವ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮದುವೆ ಕಾರ್ಯಕ್ರಮದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಕರ್ಕಶವಾಗಿ ಡಿ.ಜೆ. ಧ್ವನಿವರ್ಧಕ ಬಳಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಬಿಎ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ; ದಾಖಲೆಗಳು ಭಸ್ಮ
ಬೆಂಗಳೂರು : ಜಯನಗರದ 4ನೇ ಬ್ಲಾಕ್ನಲ್ಲಿರುವ ಜಿಬಿಎ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲವು ದಾಖಲೆಗಳು ಸುಟ್ಟುಕರಕಲಾಗಿರುವ ಘಟನೆ ವರದಿಯಾಗಿದೆ. ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಗೊಂಡ ಸಿಬ್ಬಂದಿ ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಎರಡು ಅಗ್ನಿಶಾಮಕ ವಾಹನಗಳ ಸಮೇತ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಲಿಫ್ಟ್ನಲ್ಲಿ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿ ಹೊರ ಕರೆತಂದಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಜಯನಗರದ ಪೊಲೀಸರು ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

26 C