ಕರಿಜೀರಿಗೆ ಎಣ್ಣೆ ಬಳಸುತ್ತೀರಾ? ಈ ಬಗ್ಗೆ ವೈದ್ಯರು ನೀಡಿರುವ ಸಲಹೆಗಳೇನು?
ಸಾಂದರ್ಭಿಕ ಚಿತ್ರ (AI) ಒಂದು ಕಾಲದಲ್ಲಿ ಸರಳ ಮನೆಮದ್ದುಗಳೆಂದು ನಾವು ತಳ್ಳಿ ಹಾಕಿದ ಕರಿಜೀರಿಗೆ ಎಣ್ಣೆ ವೈಜ್ಞಾನಿಕವಾಗಿ ಬೆಂಬಲಿತ ಪ್ರಯೋಜನಗಳಾಗಿ ಮರುಪರಿಶೀಲನೆ ಪಡೆಯುತ್ತಿದೆ. ತಲೆಮಾರುಗಳಿಂದ ನೈಸರ್ಗಿಕ ಪರಿಹಾರಗಳು ಮನೆ-ಮನೆಗಳಲ್ಲಿ ಅಭ್ಯಾಸದಲ್ಲಿವೆ. ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಬೇರೂರಿರುವ ಈ ನೈಸರ್ಗಿಕ ಪರಿಹಾರಗಳನ್ನು ಆಧುನಿಕ ವಿಜ್ಞಾನವು ವಿವರಿಸುವ ಮೊದಲೇ ನಂಬಲಾಗಿದೆ. ಅಡುಗೆ ಮನೆಯಲ್ಲಿ ಕಂಡುಬರುವ ಪದಾರ್ಥಗಳಿಂದ ತೊಡಗಿ ಸಾಂಪ್ರದಾಯಿಕ ಎಣ್ಣೆಗಳು ಮತ್ತು ಗಿಡಮೂಲಿಕೆಗಳವರೆಗೆ ಹಳೆಯ ಪದ್ಧತಿಗಳಲ್ಲಿ ಬೇರೂರಿವೆ. ಒಂದು ಕಾಲದಲ್ಲಿ ಸರಳ ಮನೆಮದ್ದುಗಳೆಂದು ನಾವು ತಳ್ಳಿ ಹಾಕಿದ ಇವುಗಳು ವೈಜ್ಞಾನಿಕವಾಗಿ ಬೆಂಬಲಿತ ಪ್ರಯೋಜನಗಳಾಗಿ ಮರುಪರಿಶೀಲನೆ ಪಡೆಯುತ್ತಿವೆ. 40 ವರ್ಷಗಳಿಂದ ಹೃದಯ ತಜ್ಞರಾಗಿ ಕೆಲಸ ಮಾಡುತ್ತಿರುವ ಹಿರಿಯ ವೈದ್ಯರಾದ ಡಾ. ಅಲೋಕ್ ಚೋಪ್ರಾ ಅವರು ಇದೀಗ ಕರಿಜೀರಿಗೆ ಎಣ್ಣೆ (black seed oil) ಹೇಗೆ ನೈಸರ್ಗಿಕ ಪರಿಹಾರವಾಗಿದೆ ಎಂದು ವಿವರಿಸಿದ್ದಾರೆ. “ಶತಮಾನಗಳಿಂದ ಕರಿಜೀರಿಗೆ ಎಣ್ಣೆಯನ್ನು ರೋಗ ಗುಣಪಡಿಸಲು ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಇದನ್ನು ಬಳಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ. View this post on Instagram A post shared by Alok Chopra (@dralokchopra) ಕರಿಜೀರಿಗೆ ಏಕೆ ಮುಖ್ಯವಾಗಿದೆ? ಭಾರತದಲ್ಲಿ ಕರಿಜೀರಿಗೆ ಅಥವಾ ಕಲೊಂಜಿ ಎಂದು ಕರೆಯಲಾಗುವ ನೈಜಿಲ್ಲಾ ಸಟೈವಾದಿಂದ ಕರಿಜೀರಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ದೀರ್ಘಕಾಲದಿಂದ ಪಾರಂಪರಿಕ ವೈದ್ಯದಲ್ಲಿ ಇದನ್ನು ಬಳಸಲಾಗುತ್ತದೆ. “ಮರಣ ಹೊರತುಪಡಿಸಿ ಉಳಿದೆಲ್ಲದಕ್ಕೂ ಪರಿಹಾರ” ಎಂದು ವಿವರಿಸಲಾಗಿರುವ ಪಾರಂಪರಿಕ ವೈದ್ಯಪದ್ಧತಿಯಲ್ಲಿ ಇದನ್ನು ಪರಿಗಣಿಸಲಾಗಿದೆ. ಇದರ ಸಕ್ರಿಯ ಸಂಯುಕ್ತವಾದ ಥೈಮೋಕ್ವಿನೊನ್ ಕಾರಣದಿಂದ ಇದನ್ನು ಆಯುರ್ವೇದ ಮತ್ತು ಯುನಾನಿ ಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಥೈಮೋಕ್ವಿನೊನ್ ಪ್ರಬಲವಾದ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ವೈದ್ಯರು ವಿವರಿಸಿರುವ ಪ್ರಕಾರ, “ಪ್ರಾಚೀನ ಔಷಧದಲ್ಲಿ ಮರಣ ಹೊರತುಪಡಿಸಿ ಉಳಿದೆಲ್ಲವನ್ನೂ ಗುಣಪಡಿಸುವ ಒಂದು ಎಂದರೆ ಕರಿಬೀಜದ ಎಣ್ಣೆ. ಕಲೊಂಜಿ ಎಂದು ಭಾರತದಲ್ಲಿ ಕರೆಯಲಾಗುವ ಕರಿಜೀರಿಗೆ ಬೀಜದ ಎಣ್ಣೆಗೆ ವೈಜ್ಞಾನಿಕ ಹೆಸರು ನಿಗೆಲ್ಲ ಸಟೈವಾ. ಈ ಕರಿ ಜೀರಿಗೆ ಎಣ್ಣೆಯ ಬಗ್ಗೆ ಅಜ್ಜಿಯಂದಿರು ಹೇಳುವುದನ್ನು ಕೇಳಿರಬಹುದು. ಆಗ ಇದು ನಾವು ನಂಬಿದ ವಿಷಯವಾಗಿತ್ತು. ಸಾವಿರಾರು ವರ್ಷಗಳಿಂದ ಆಯುರ್ವೇದ ಮತ್ತು ಯುನಾನಿ ವೈದ್ಯದಲ್ಲಿ ಕರಿ ಜೀರಿಗೆ ಎಣ್ಣೆಯನ್ನು ರಕ್ತ ಪರೀಕ್ಷೆಗಳು, ಸ್ಕ್ಯಾನ್ ಮಾಡಲು ಅಥವಾ ಪ್ರಿಸ್ಕ್ರಿಪ್ಷನ್ಗಳಲ್ಲಿ ಬಳಸಲಾಗುತ್ತಿದೆ. ಕರಿ ಜೀರಿಗೆ ಎಣ್ಣೆಯ ನಿಜವಾದ ಶಕ್ತಿ ಥೈಮೋಕ್ವಿನೋನ್ ಎಂಬ ಸಕ್ರಿಯ ಸಂಯುಕ್ತದಿಂದ ಬರುತ್ತದೆ. ಥೈಮೋಕ್ವಿನೋನ್ ಒಂದು ಪ್ರಬಲ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿ ಮೈಕ್ರೋಬಿಯಲ್ ಸಂಯುಕ್ತ. ಆರೋಗ್ಯ ಲಾಭಗಳೇನು? ಅಲೋಕ್ ಚೋಪ್ರ ಪ್ರಕಾರ, ಆಧುನಿಕ ವೈದ್ಯಕೀಯ ಸಂಶೋಧನೆಯು ದೀರ್ಘಕಾಲದ ಉರಿಯೂತವನ್ನು ಇಂದು ಅನೇಕ ರೋಗಗಳಿಗೆ ಮೂಲ ಎಂದು ತಿಳಿಯಲಾಗುತ್ತಿದೆ. ಉರಿಯೂತ ನಿವಾರಣೆಗೆ ಕರಿಜೀರಿಗೆ ಎಣ್ಣೆಯನ್ನು ವ್ಯಾಪಕವಾಗಿ ಬಳಸಬಹುದು. ನೈಸರ್ಗಿಕ ಪರಿಹಾರವಾಗಿರುವ ಕರಿಜೀರಿಗೆ ಎಣ್ಣೆಯನ್ನು ಕರುಳಿನ ಆರೋಗ್ಯ ಸುಧಾರಿಸುವುದು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆ ನಿವಾರಿಸುವುದು, ಉಸಿರಾಟ ಮತ್ತು ಹೃದಯ ರಕ್ತನಾಳದ ಕಾರ್ಯಕ್ಕೆ ನೆರವಾಗುವ ಜೊತೆಗೆ ಆರೋಗ್ಯಕರ ಚರ್ಮಕ್ಕೂ ಬಳಸಲಾಗುತ್ತದೆ. “ಆಧುನಿಕ ಔಷಧದಲ್ಲಿ ಒಂದು ವಿಷಯ ಸ್ಪಷ್ಟವಾಗಿದೆ. ದೀರ್ಘಕಾಲೀನ ಉರಿಯೂತವು ಅನೇಕ ರೋಗಗಳಿಗೆ ಮೂಲ. ಆಮ್ಲೀಯ ಹಿಮ್ಮುಖ ಹರಿವು, ಹೊಟ್ಟೆ ಉಬ್ಬುವುದು, ವಾಕರಿಕೆ ಮತ್ತು SIBO (ಸಣ್ಣ ಕರುಳಿನ ಬ್ಯಾಕ್ಟೀರಿಯಗಳ ಅತಿಯಾದ ಬೆಳವಣಿಗೆ) ಮೊದಲಾದ ಪರಿಸ್ಥಿತಿಗಳನ್ನು ತೊಡೆದು ಹಾಕಲು ನೆರವಾಗುತ್ತದೆ. ಅಸ್ತಮಾ, ಉಸಿರಾಟದ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಬೆಂಬಲಿಸುತ್ತದೆ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ಗೂ ಉತ್ತಮ. ಎಸ್ಜಿಮಾ, ಮೊಡವೆ, ಸೊರಿಯಾಸಿಸ್ ಮತ್ತು ಡರ್ಮಟೈಟಿಸ್ನಂತಹ ಚರ್ಮದ ಸ್ಥಿತಿಗಳಿಗೆ ಒಳಗಿನಿಂದ ಅನ್ವಯಿಸಿದಾಗಲೂ ಸಹಾಯ ಮಾಡುತ್ತದೆ. ಆದರೆ ಎಲ್ಲಾ ಕರಿಜೀರಿಗೆ ಎಣ್ಣೆ ಚೆನ್ನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಥೈಮೋಕ್ವಿನೋನ್ ಕಂಟೆಂಟ್ ಮೇಲೆ ಹೆಚ್ಚು ಗಮನ ನೀಡಬೇಕು. ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರದ ಜೊತೆಗೆ ಎಣ್ಣೆಯನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ. ಅವರ ಪ್ರಕಾರ, “ಎಲ್ಲಾ ಕರಿ ಜೀರಿಗೆ ಎಣ್ಣೆಗಳು ಸಮನಾಗಿರುವುದಿಲ್ಲ. ಥೈಮೋಕ್ವಿನೋನ್ ಕಂಟೆಂಟ್ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ನಿಜವಾದ ಚಿಕಿತ್ಸಾತ್ಮಕ ಶಕ್ತಿ ಇರುವುದೇ ಅದರಲ್ಲಿ. ಅದನ್ನು ಯಾವ ಆಹಾರದ ಜೊತೆಗೆ ಸೇವಿಸುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಥೈಮೋಕ್ವಿನೋನ್ ಕೊಬ್ಬಿನಲ್ಲಿ ಕರಗುವ ಕಾರಣ ಆರೋಗ್ಯಕರ ಕೊಬ್ಬುಗಳ ಜೊತೆಗೆ ಸೇವಿಸಬೇಕು.” ಕೃಪೆ: hindustantimes.com
ಡಿಜಿಟಲ್ ಕಣ್ಣು ಬೇನೆ ತಪ್ಪಿಸುವುದೇಗೆ? ವೈದ್ಯರ ಸಲಹೆಗಳೇನು?
ಸಾಂದರ್ಭಿಕ ಚಿತ್ರ | Photo Credit : freepik ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತವೆ. ಇಂದಿನ ಡಿಜಿಟಲ್ ಕೇಂದ್ರಿತ ಜಗತ್ತಿನಲ್ಲಿ ನಮ್ಮ ಕಣ್ಣುಗಳು ದೀರ್ಘಕಾಲದವರೆಗೆ ಪರದೆಯನ್ನು ವೀಕ್ಷಿಸುತ್ತಿರಬೇಕಾಗುತ್ತದೆ. ಹೀಗಾಗಿ ‘ಡಿಜಿಟಲ್ ಕಣ್ಣು ಬೇನೆ’ ಎಂದು ಕರೆಯಲಾಗುವ ಸಮಸ್ಯೆಗಳ ಆಗರವನ್ನು ಆಹ್ವಾನಿಸಿಕೊಳ್ಳುತ್ತೇವೆ. ಈ ಡಿಜಿಟಲ್ ಕಣ್ಣು ಬೇನೆಯಲ್ಲಿ ಒಣ ಕಣ್ಣುಗಳು, ಮಂದವಾದ ದೃಷ್ಟಿ, ತಲೆನೋವುಗಳು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಶಾರ್ಪ್ ಐ ಹಾಸ್ಪಿಟಲ್ಸ್ನಲ್ಲಿ ಹಿರಿಯ ತಜ್ಞರಾಗಿರುವ ಡಾ ರಕ್ಷಿತ್ ಒಪಿ ಅವರು ಅಪಾಯದ ಚಿಹ್ನೆಗಳು ಇಲ್ಲದೆ ಇದ್ದರೂ ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯುವುದು ದೃಷ್ಟಿ ನಷ್ಟ ಮತ್ತು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶ ಸಾಧ್ಯವಾಗಿಸಲಿದೆ. ಪರದೆಯ ಜೊತೆಗೆ ಕಳೆಯುವ ಸಮಯವನ್ನು ಕಡಿಮೆ ಮಾಡುವ ಅಗತ್ಯವಿದೆಯಾದರೂ, ಬಹಳಷ್ಟು ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಅವರು ಕಣ್ಣನ್ನು ರಕ್ಷಿಸಿಕೊಳ್ಳುವುದು ಹೇಗೆ? ಡಿಜಿಟಲ್ ಕಣ್ಣಿನ ನೋವಿನಿಂದ ರಕ್ಷಿಸಿಕೊಳ್ಳಲು ವೈದ್ಯರು 20-20-20 ನಿಯಮವನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಲು 20 ಸೆಕೆಂಡ್ಗಳ ಕಾಲ ಪರದೆಯಿಂದ ಕಣ್ಣನ್ನು ಸರಿಸುವುದು. ಇಂತಹ ಸರಳ ಅಭ್ಯಾಸಗಳು ಕಣ್ಣಿನ ಸ್ನಾಯುಗಳಿಗೆ ಆರಾಮ ನೀಡಲು ಮತ್ತು ಸುಸ್ತು ಮತ್ತು ಬೇನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಕುತ್ತಿಗೆ ನೋವನ್ನು ಕಡಿಮೆ ಮಾಡಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿನ ಮಟ್ಟಕ್ಕೆ ಇರಿಸಬೇಕು. ಬೆಳಕನ್ನು ಪರಿಸರಕ್ಕೆ ತಕ್ಕಂತೆ ಹೊಂದಿಸಿರಬೇಕು. ಕಣ್ಣಿನ ಅಹಿತಕರ ಭಾವನೆಯನ್ನು ಕಡಿಮೆ ಮಾಡಲು ಆ್ಯಂಟಿ ಗ್ಲೇರ್ ಪರದೆಗಳನ್ನು ಬಳಸಬಹುದು. ಈ ರಕ್ಷಣಾ ಕ್ರಮಗಳ ಜೊತೆಗೆ ಕಣ್ಣಿನ ಆರೋಗ್ಯಕ್ಕಾಗಿ ಕೆಲವು ಪೋಷಕಾಂಶಗಳನ್ನು ಸೇವಿಸಬಹುದು. ವಿಟಮಿನ್ ಸಿ ಮತ್ತು ಇ ಜೊತೆಗೆ ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಸತು ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ. ಹೆಚ್ಚುವರಿಯಾಗಿ ಧ್ಯಾನ ಅಥವಾ ಯೋಗ ಒತ್ತಡವನ್ನು ಕಡಿಮೆ ಮಾಡಬಹುದು. ಡಿಜಿಟಲ್ ಕಣ್ಣಿನ ಬೇನೆ ಕಡಿಮೆ ಮಾಡಲು ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ, * 20-20-20 ನಿಯಮ ಅನುಸರಿಸುವುದು * ಕಾರ್ಯಸ್ಥಳವನ್ನು ಅತ್ಯುತ್ತಮಗೊಳಿಸುವುದು * ಆ್ಯಂಟಿಗ್ಲೇರ್ ಪರದೆ ಬಳಸುವುದು * ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಕೊಳ್ಳುವುದು * ಆಹಾರದಲ್ಲಿ ಕಣ್ಣಿನ ಆರೋಗ್ಯದ ಪೌಷ್ಠಿಕಾಂಶಗಳನ್ನು ಬೆರೆಸುವುದು * ಕಣ್ಣು ಅಗಲಿಸುವ ವ್ಯಾಯಾಮ ಮಾಡುವುದು * ಅಗತ್ಯವಿದ್ದರೆ ಕೃತಕ ಕಣ್ಣೀರುಗಳನ್ನು ಬಳಸುವುದು * ಪರದೆಯ ಸಮಯ ಕಡಿಮೆ ಮಾಡುವುದು * ಡಿಜಿಟಲ್ ಸಾಧನಗಳ ಫಾಂಟ್ ಗಾತ್ರ ಹೆಚ್ಚಿಸುವುದು ತಂತ್ರಜ್ಞಾನಗಳು ನಮ್ಮ ಜೀವನವನ್ನು ಪರಿವರ್ತಿಸಿದ್ದರೂ, ದೀರ್ಘಕಾಲೀನ ಪರಿಣಾಮಗಳನ್ನು ತಡೆಗಟ್ಟಲು ಕಣ್ಣಿನ ಆರೈಕೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
Heart Health: ಏಕಾಏಕಿ ಆಗಲ್ಲ ಹಾರ್ಟ್ ಅಟ್ಯಾಕ್ ! 10 ದಿನಗಳ ಮೊದಲೇ ದೇಹ ಕೊಡುತ್ತೆ ಈ ಭಯಾನಕ ಸಿಗ್ನಲ್!
ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ. ಹಾರ್ವರ್ಡ್ ಹೆಲ್ತ್ ಅಧ್ಯಯನದ ಪ್ರಕಾರ, 50% ಜನರಿಗೆ ಹೃದಯಾಘಾತಕ್ಕಿಂತ ಮುಂಚೆ ಆಯಾಸ, ಉಸಿರಾಟದ ತೊಂದರೆ, ಜೀರ್ಣಕ್ರಿಯೆ ಸಮಸ್ಯೆ, ನಿದ್ರಾಹೀನತೆ, ದೇಹದ ನೋವು ಉಂಟಾಗುತ್ತದೆ.
Health Care: ಆಫೀಸ್ನಲ್ಲಿ ಕೂತು ಭುಜ-ಕತ್ತು ನೋವಾಗ್ತಿದ್ಯಾ? ಈ 5 ಸರಳ ವ್ಯಾಯಾಮ ಮಾಡಿ ನೋವು ಮಾಯವಾಗುತ್ತೆ!
ಕಂಪ್ಯೂಟರ್, ಮೊಬೈಲ್ ಬಳಕೆ ಮತ್ತು ಟಿವಿ ನೋಡುವುದರಿಂದ ಉಂಟಾಗುವ ಕುತ್ತಿಗೆ, ಭುಜದ ನೋವನ್ನು ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ನಿವಾರಿಸಬಹುದು. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ.
Skin Care: ಕಿತ್ತಳೆ ಸಿಪ್ಪೆಯನ್ನು ಎಸೆಯುವ ಬದಲು ಈ ರೀತಿ ಬಳಸಿ; ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಿ!
ಶಾಖ ಮತ್ತು ಬೆವರಿನಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದದ ನೈಸರ್ಗಿಕ ಸ್ಕ್ರಬ್ ಇದಕ್ಕೆ ಸಹಾಯ ಮಾಡುತ್ತದೆ. ಇದು ಬೇಸಿಗೆಯಲ್ಲಿ ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ತ್ವಚೆಗೆ ಫ್ರೆಶ್ ಲುಕ್ ನೀಡುತ್ತದೆ.
Health Care: ಕೆಮ್ಮು-ಶೀತ-ಹೊಟ್ಟೆ ನೋವು ಎಲ್ಲವೂ ಒಂದೇ ಗಂಟೆಯಲ್ಲಿ ಮಾಯವಾಗುತ್ತೆ! ಈ ಮಸಾಲೆ ತಿನ್ನಿ ಸಾಕು
ದಾಲ್ಚಿನ್ನಿ ಮಧುಮೇಹ, ಹೃದಯ ಕಾಯಿಲೆ, ಬೊಜ್ಜು, ಹೊಟ್ಟೆ ಸಮಸ್ಯೆ, ಊತ, ಶೀತ, ಕೆಮ್ಮು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಜೇನುತುಪ್ಪದೊಂದಿಗೆ ಸೇವಿಸಿದರೆ ದೇಹದಲ್ಲಿ ಪರಿಣಾಮಕಾರಿ ಬದಲಾವಣೆಗಳಾಗುತ್ತದೆ.
Summer Tips: ಬೇಸಿಗೆಯಲ್ಲಿ ಮಧುಮೇಹಿಗಳು ಎಂದಿಗೂ ಈ ತಪ್ಪುಗಳನ್ನು ಮಾಡಬಾರದಂತೆ!
ಬೇಸಿಗೆಯಲ್ಲಿ ಮಧುಮೇಹಿಗಳು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬಿಸಿಲಿನಲ್ಲಿ ಬರಿಗಾಲಿನಲ್ಲಿ ಓಡಾಡಬಾರದು, ದೈನಂದಿನ ನಡಿಗೆ ಮತ್ತು ಬಲವರ್ಧನೆಯ ತರಬೇತಿ ಮುಖ್ಯ. ಬಾಯಾರಿಕೆಯಾಗದಿದ್ದರೂ ನೀರು ಕುಡಿಯಬೇಕು.
Health Tips: ವರ್ಷಕ್ಕೊಮ್ಮೆ ಮಾತ್ರ ಸಿಗುತ್ತೆ ಈ ಸೂಪರ್ ಹಣ್ಣು; ತಿನ್ನದಿದ್ದರೆ ನಿಮಗೇ ಲಾಸ್!
ಬೇಸಿಗೆಯಲ್ಲಿ ಲಭ್ಯವಿರುವ ಅಪರೂಪದ ಹಣ್ಣುಗಳಲ್ಲಿ ಮಲ್ಬೆರ್ರಿ ಸಹ ಒಂದಾಗಿದೆ. ಇದು ವಿಟಮಿನ್ ಸಿ, ಕಬ್ಬಿಣ, ಫೈಬರ್ನಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಡಾ. ನರೇಂದ್ರ ಸಿಂಗ್ ಅವರ ಪ್ರಕಾರ, ಇದು ಜೀರ್ಣಕ್ರಿಯೆ ಸುಧಾರಿಸುತ್ತವೆ.
Health Care: ಕ್ಯಾನ್ಸರ್ ಎಂದರೇನು? ಇದು ದೇಹದಲ್ಲಿ ರೂಪುಗೊಳ್ಳುತ್ತಿರೋದು ತಿಳಿಯೋದು ಹೇಗೆ?
ಕ್ಯಾನ್ಸರ್ ನಮ್ಮ ದೇಹದಲ್ಲಿರುವ ಅತ್ಯಂತ ಚಿಕ್ಕ ಅಂಶವಾದ 'ಕೋಶ'ದಿಂದ ಪ್ರಾರಂಭವಾಗುವ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ರೋಗ ನಿಖರವಾಗಿ ಏನು ಮತ್ತು ಇದು ದೇಹದಲ್ಲಿ ಹೇಗೆ ಹಿಡಿತ ಸಾಧಿಸುತ್ತದೆ ಎಂಬುದನ್ನು ನಾವಿಂದು ವಿವರವಾಗಿ ತಿಳಿಯೋಣ ಬನ್ನಿ.
Health Care: ದಿನೇ-ದಿನೇ ಯೂರಿಕ್ ಆ್ಯಸಿಡ್ ಸಮಸ್ಯೆ ಹೆಚ್ಚಾಗ್ತಿದ್ಯಾ? ಇದಕ್ಕೆ ಕಾರಣವೇನು ಗೊತ್ತಾ?
ಯುವಕರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತಿದೆ. ಆಹಾರ ಪದ್ಧತಿ, ಜಡ ಜೀವನಶೈಲಿ, ಹೆಚ್ಚಿನ ಪ್ರೋಟೀನ್ ಆಹಾರ ಇದಕ್ಕೆ ಕಾರಣವಾಗಿದೆ. ಸಮತೋಲಿತ ಆಹಾರ, ವ್ಯಾಯಾಮ, ನೀರು ಕುಡಿಯುವುದು ಪರಿಹಾರವಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ 2ನೇ ಗುರುವಾರ ಉಚಿತ ಮೂತ್ರಕೋಶ ತಪಾಸಣಾ ಶಿಬಿರ. ಡಾ. ಯು.ಎಸ್. ಕಾರ್ತಿಕ್ ಬೆಳಿಗ್ಗೆ 10-1 ಲಭ್ಯ.
Summer Tips: ಎಳನೀರು ಅಥವಾ ಮಜ್ಜಿಗೆ? ಬೇಸಿಗೆಯ ದಾಹ ತಣಿಸಲು ಇದೇ ಅಮೃತ!
ಬೇಸಿಗೆಯಲ್ಲಿ ಎಳನೀರು ಮತ್ತು ಮಜ್ಜಿಗೆ ಹೈಡ್ರೇಶನ್ಗಾಗಿ ಉತ್ತಮ. ಎಳನೀರಿನಲ್ಲಿ ಪೊಟ್ಯಾಸಿಯಮ್ ಅಧಿಕ, ಮಜ್ಜಿಗೆ ಪ್ರೋಬಯಾಟಿಕ್ ಗುಣ ಹೊಂದಿದೆ. ಎರಡನ್ನೂ ದಿನದ ವಿವಿಧ ಸಮಯಗಳಲ್ಲಿ ಕುಡಿಯುವುದು ಆರೋಗ್ಯಕರ.
Summer Tips: ಈ ಡ್ರಿಂಕ್ಸ್ ಕುಡಿಯಿರಿ, ಬೇಸಿಗೆ ಬಿಸಿಲಲ್ಲಿ ಉಂಟಾಗೋ ಬಾಯಾರಿಕೆ ನೀಗಿಸಲು ಇದೇ ಬೆಸ್ಟ್!
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ಅನೇಕ ಮಂದಿ ನಿಂಬೆ ಪಾನಕ, ಶುಂಠಿ-ಪುದೀನ ಐಸ್ಡ್ ಟೀ, ಕಲ್ಲಂಗಡಿ-ತುಳಸಿ, ಅನಾನಸ್ ಅರಿಶಿನ ಮಿಠಾಯಿ, ಸೌತೆಕಾಯಿ-ಪುದೀನ ಪಾನೀಯ, ಬ್ಲೂಯಿ ಗ್ರೀನ್ ಟೀ ಫ್ರ್ಯಾಪ್ಪೆ, ನಿಂಬೆ-ಚಿಯಾ ಬೀಜದ ನೀರನ್ನು ಕುಡಿಯುತ್ತಾರೆ.
Health Care: ಕಾಲುಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ! ಇದು ಮಧುಮೇಹದ ಸಂಕೇತವಾಗಿರಬಹುದು
ಮಧುಮೇಹವು ಸೈಲೆಂಟ್ ಕಿಲ್ಲರ್ ಇದ್ದಂತೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ ಮಧುಮೇಹದ ಲಕ್ಷಣಗಳು ಕಾಲುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಹಾಗಾದ್ರೆ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಲಕ್ಷಣಗಳು ಯಾವುವು ಎಂದು ನೋಡೋಣ ಬನ್ನಿ.
Hair Care: ಮಕ್ಕಳ ಕೂದಲು ವೇಗವಾಗಿ ಬೆಳೆಯಬೇಕಾ? ಹಾಗಾದ್ರೆ, ಹರಳೆಣ್ಣೆ ಜೊತೆ ಈ ಎಣ್ಣೆ ಮಿಕ್ಸ್ ಮಾಡಿ ಹಚ್ಚಿ!
ಬೇಸಿಗೆಯ ತಿಂಗಳುಗಳಲ್ಲಿ, ನೀವು ನಿಮ್ಮ ಮಕ್ಕಳ ಕೂದಲ ಬೆಳವಣಿಗೆಗೆ ಕೆಲವು ಎಣ್ಣೆಗಳನ್ನು ಕ್ಯಾಸ್ಟರ್ ಆಯಿಲ್ನೊಂದಿಗೆ ಬೆರೆಸಿಹಚ್ಚುವುದರಿಂದ ಸಹಾಯವಾಗುತ್ತದೆ. ಕೂದಲಿನ ಬೆಳವಣಿಗೆಯ ಪ್ರಯೋಜನಗಳನ್ನು ಸಹ ಇದು ಹೆಚ್ಚಿಸುತ್ತದೆ.
Summer Tips: ಮಣ್ಣಿನ ಮಡಕೆಯಲ್ಲಿಟ್ಟ ನೀರು ಯಾವಾಗ್ಲೂ ಕೂಲ್ ಆಗಿರಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ಹೊಸ ಮಡಕೆಯನ್ನು ಖರೀದಿಸಿಬೇಕು ತಂದ ತಕ್ಷಣ ಅದನ್ನು ಬಳಸಬಾರದು. ಯಾವಾಗಲೂ ಹೊಸ ಮಣ್ಣಿನ ಮಡಿಕೆಯನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಅಕ್ಕಿ ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಅರಿಶಿನ ಅಥವಾ ಮೆಂತ್ಯ ಬೀಜ ನೀರಿನಲ್ಲಿ 3-4 ಗಂಟೆಗಳ ಕಾಲ ನೆನೆಯಲು ಬಿಟ್ಟು ನಂತರ ಶುಚಿಗೊಳಿಸಬೇಕು.
Summer Tips: ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು? ನಿಮ್ಮನ್ನು ಇದು ಹೇಗೆ ರಕ್ಷಿಸುತ್ತೆ ಗೊತ್ತಾ?
ಬೇಸಿಗೆಯಲ್ಲಿ ಬಿಳಿ, ತಿಳಿ ನೀಲಿ, ಗುಲಾಬಿ, ಹಳದಿ ಬಣ್ಣದ ಹತ್ತಿ, ಖಾದಿ, ರೇಯಾನ್ ಬಟ್ಟೆಗಳನ್ನು ಧರಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗಾಢ ಬಣ್ಣದ ಬಟ್ಟೆಗಳನ್ನು ತೊರೆದು, ತೇವಾಂಶ ಹೀರಿಕೊಳ್ಳುವ ಬಟ್ಟೆಗಳನ್ನು ಆಯ್ಕೆ ಮಾಡಿ, ಇದು ನಿಮಗೆ ಪ್ರಯೋಜನವನ್ನು ನೀಡುತ್ತದೆ.
Summer Tips: ನೀರು ಕುಡಿದ್ರೂ ಬಾಯಾರಿಕೆ ಹೋಗ್ತಿಲ್ವಾ? ಈ ಆಹಾರ ತಿನ್ನೋದ್ರಿಂದ ಹೀಗೆಲ್ಲಾ ಆಗ್ತಿರೋದು ಹುಷಾರ್!
ಬೇಸಿಗೆಯಲ್ಲಿ ಕಾಫಿ-ಟೀ, ಆಲ್ಕೋಹಾಲ್, ಪ್ರೋಟೀನ್ಭರಿತ ಆಹಾರ, ಕರಿದ ಆಹಾರಗಳು, ಸಂಸ್ಕರಿಸಿದ ಆಹಾರಗಳು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಹೀಗಾಗಿ ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿಡುವುದು ಮುಖ್ಯ.
ಜೇನುತುಪ್ಪ ಎಲ್ಲಾ ವಯಸ್ಸಿನವರೂ ಸೇವಿಸಲು ಸೂಕ್ತವಲ್ಲ. ಏಕೆಂದರೆ ಇದರಿಂದ ಆರೋಗ್ಯಕ್ಕೆ ಅಪಾಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಒಂದು ವರ್ಷದೊಳಗಿನ ಮಕ್ಕಳಿಗೆ ಇದನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
Hair Care: ಬೇಸಿಗೆಯಿಂದ ತಲೆ ಹೊಟ್ಟು ಸಮಸ್ಯೆ ಹೆಚ್ಚಾಗಿದ್ಯಾ? ವಾರದೊಳಗೆ ನಿವಾರಣೆ ಆಗುತ್ತೆ ಈ ಎಣ್ಣೆಗಳನ್ನು ಹಚ್ಚಿ!
ಬೇಸಿಗೆಕಾಲದಲ್ಲಿ ನೆತ್ತಿಯನ್ನು ಹೊಟ್ಟಿನಿಂದ ಮುಕ್ತವಾಗಿರಿಸಲು ಇಲ್ಲಿ ಕೆಲವು ಆರೋಗ್ಯಕರ ಎಣ್ಣೆಗಳು ಇವೆ ನೋಡಿ. ಇವುಗಳನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳುವುದರಿಂದ ಮತ್ತು ನಯವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲಿನಲ್ಲಿ ಹೊಟ್ಟು ಆಗುವುದನ್ನು ತಡೆಗಟ್ಟುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಸಹ ಉತ್ತಮವಾಗಿರಿಸುತ್ತದೆ ಅಂತ ಹೇಳಬಹುದು.
Hair Care: ವಿಪರೀತ ಕೂದಲು ಉದುರುತಿದ್ಯಾ? ಇದಕ್ಕೆ ಮುಖ್ಯ ಕಾರಣ ಇದೇ ನೋಡಿ!
ಸಾಮಾನ್ಯವಾಗಿ ವಯಸ್ಸಾದ ಮೇಲೆ ಎದುರಿಸುವ ಕೂದಲು ಉದುರುವಿಕೆ ಸಮಸ್ಯೆಯನ್ನು ಅನೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖವಾಗಿ ಅನೇಕ ಕಾರಣಗಳಿವೆ. ಅವುಗಳೆಂದರೆ ಕೂದಲು ಉದುರುವಿಕೆ ಪೌಷ್ಟಿಕಾಂಶದ ಕೊರತೆ, ಹಾರ್ಮೋನು ಮತ್ತು ಸ್ವಯಂ ನಿರೋಧಕ ಸಮಸ್ಯೆಗಳು.
Summer Health: ಅಸಿಡಿಟಿ ನಿಮ್ಮನ್ನು ಬಿಡದೇ ಕಾಡ್ತಿದ್ಯಾ? ಈ ಸರಳ ಟಿಪ್ಸ್ ಫಾಲೋ ಮಾಡಿ, ಹೊಟ್ಟೆ ಕೂಲ್ ಆಗಿರಿಸಿ
ಎದೆಯುರಿ ಮತ್ತು ಎದೆನೋವಿಗೆ ಮುಖ್ಯ ಕಾರಣ ಆಹಾರ ಪದ್ಧತಿ ಮಾತ್ರವಲ್ಲ, ಅಸಿಡಿಟಿ ಮತ್ತು ಪಿತ್ತರಸದ ಅಸ್ವಸ್ಥತೆಗಳು. ಇವು ದೇಹದಲ್ಲಿ ಪಿತ್ತರಸ ಮತ್ತು ಆಮ್ಲ ಮಟ್ಟಗಳು ಹೆಚ್ಚಾಗಿರುವ ಲಕ್ಷಣಗಳಾಗಿರಬಹುದು.
Oral Health: ನಕ್ಕಿದ್ರೆ ಸಾಕು! ಹಲ್ಲುಗಳು ಮುತ್ತಿನಂತೆ ಹೊಳೆಯಬೇಕಾ? ಬೆಳಗ್ಗೆದ್ದು 1 ನಿಮಿಷ ಈ ಕೆಲಸ ಮಾಡಿ
ಬಾಯಿಯ ಆರೋಗ್ಯದ ವಿಚಾರ ಬಂದಾಗ ಕೇವಲ ಹಲ್ಲುಜ್ಜುವುದಷ್ಟೇ ಅಲ್ಲ, ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮತ್ತು ಎಣ್ಣೆ ತೆಗೆಯುವುದನ್ನು ಸಹ ಒಳಗೊಂಡಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹಲ್ಲುಜ್ಜಲು ಟೂತ್ಪೇಸ್ಟ್ ಬೇಕೇ ಬೇಕು. ಈ ಟೂತ್ ಪೇಸ್ಟ್ಗಳು ರಾಸಾಯನಿಕಗಳ ಜೊತೆಗೆ, ಹೆಚ್ಚು ಲವಂಗ ಮತ್ತು ಉಪ್ಪನ್ನು ಹೊಂದಿರುತ್ತದೆ.
Health Tips: ಊಟ ಆದ ತಕ್ಷಣ ಟೀ ಕುಡಿಯುವವರಿಗೆ ಶಾಕಿಂಗ್ ನ್ಯೂಸ್; ಈ ಸಮಸ್ಯೆಗಳು ಕಾಡೋ ಮುನ್ನ ಎಚ್ಚೆತ್ತುಕೊಳ್ಳಿ!
ಕೆಲವೊಮ್ಮೆ ಚಹಾ ಆರೋಗ್ಯಕ್ಕೆ ಅಮೃತದಂತೆ ಕಾರ್ಯನಿರ್ವಹಿಸುತ್ತದೆ. ಮತ್ತೆ ಕೆಲವೊಮ್ಮೆ ಇದು ನಮ್ಮ ಆರೋಗ್ಯಕ್ಕೆ ಶತ್ರುವಾಗಿ ಪರಿಣಮಿಸುತ್ತದೆ. ಅನೇಕ ಮಂದಿ ವಿಶೇಷವಾಗಿ ಊಟದ ನಂತರ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
Food Tips: ಊಟದ ಜೊತೆ ಹಸಿ ಈರುಳ್ಳಿ ತಿಂತೀರಾ? ಎಚ್ಚರ; ಈ ವಿಚಾರ ನಿಮಗೆ ತಿಳಿದಿರಲೇಬೇಕು
ಈರುಳ್ಳಿ ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳ ಮೂಲವಾಗಿದೆ. ಹಸಿ ಈರುಳ್ಳಿ ಜೀರ್ಣಕ್ರಿಯೆ ಸುಧಾರಿಸುತ್ತದೆ, ಆದರೆ GERD, ಮೈಗ್ರೇನ್ ಅಥವಾ ಅಲರ್ಜಿ ಇರುವವರು ಈರುಳ್ಳಿಯಿಂದ ದೂರವಿರುವುದು ಉತ್ತಮ.
Health Care: ಸಂಸ್ಕರಿಸಿದ ಎಲ್ಲಾ ಆಹಾರಗಳು ಆರೋಗ್ಯಕ್ಕೆ ಕೆಟ್ಟದಲ್ಲ; ಕೆಲವು ಆರೋಗ್ಯಕ್ಕೆ ಒಳ್ಳೆಯದೂ ಆಗಿರಬಹುದು!
Canned Food ಆರೋಗ್ಯಕರವಾಗಿದೆ.ಬೀನ್ಸ್, ಸಾರ್ಡೀನ್, ಮಸೂರ, ಕುಂಬಳಕಾಯಿ, ಆರ್ಟಿಚೋಕ್, ಟೊಮೆಟೊ, ಸಾಲ್ಮನ್, ಟ್ಯೂನ, ಅನಾನಸ್ ಉತ್ತಮವಾದದ್ದನ್ನು ಆರಿಸಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಡಿಮೆ ಸೋಡಿಯಂ, ಬಿಪಿಎ-ಮುಕ್ತ ಡಬ್ಬಿಗಳನ್ನು ಆರಿಸಿ.
ಬೇಸಿಗೆ ಆರಂಭವಾಗುತ್ತಿದ್ದಂತೆ, ನಿರ್ಜಲೀಕರಣ ಮತ್ತು ಕಿಡ್ನಿ ಸ್ಟೋನ್ ನಂತಹ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ಗೆ ಮುಖ್ಯ ಕಾರಣವೇನೆಂದು ತಿಳಿಯೋಣ ಬನ್ನಿ.
Period Pain: ಪಿರಿಯೆಡ್ಸ್ ಸಮಯದಲ್ಲಿ ಹೊಟ್ಟೆ ನೋವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
Period Pain: ಮುಟ್ಟಿನ ನೋವು ಸಾಮಾನ್ಯವಾಗಿದ್ದರೂ ಇದನ್ನು ಸಹಿಸಲೇಬೇಕು ಎಂದಲ್ಲ. ಇದಕ್ಕೆ ಸರಿಯಾದ ಉಪಚಾರಗಳಿದ್ದು ಆ ಮೂಲಕ ಇದನ್ನು ತಹಬಂದಿಗೆ ತರಬಹುದಾಗಿದೆ.
Summer Recipe: ಬೇಸಿಗೆಯಲ್ಲಿ ದಿನಕ್ಕೊಂದು ಈ ಲಡ್ಡು ತಿನ್ನಿ; ಕೂದಲು ಉದುರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಿ!
ತಲೆನೋವು, ಕೂದಲು ಉದುರುವುದು, ಮೂಳೆ ನೋವು, ಆಯಾಸ ಇವು ಬೇಸಿಗೆಯಲ್ಲಿ ಎಲ್ಲರೂ ಅನುಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿದೆ. ಆದರೆ ಯಾವುದೇ ಸಮಸ್ಯೆ ಇಲ್ಲದೇ ಪೌಷ್ಟಿಕಾಂಶ ಪಡೆಯಲು ನಾವಿಂದು ನಿಮಗೆ ವಿಶಿಷ್ಟವಾದ ಲಡ್ಡುವಿನ ಪಾಕವಿಧಾನವನ್ನು ತಿಳಿಸುತ್ತೇವೆ.
Health Tips: 30 ವರ್ಷ ದಾಟಿದ್ಮೇಲೆಯೇ ಹೊಟ್ಟೆ ದಪ್ಪ ಆಗೋದು ಏಕೆ? ವೈದ್ಯರು ಹೇಳ್ತಿರೋದು ಹೀಗೆ!
30 ವರ್ಷ ಆಗುತ್ತಿದ್ದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಮೊದಲಿನಷ್ಟು ಶಕ್ತಿ ಮೂವತ್ತು ದಾಟಿದ ನಂತರ ಇರುವುದಿಲ್ಲ. ಈ ವಯಸ್ಸಿನಲ್ಲಿ ಹೊಟ್ಟೆ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಎಂದು ಅರ್ಥಮಾಡಿಕೊಳ್ಳೋಣ.
Summer Tips: ಬೇಸಿಗೆಯಲ್ಲಿ ತರಕಾರಿಗಳು ಬೇಗ ಒಣಗಿ ಹೋಗ್ತಿದ್ಯಾ? ಫ್ರೆಶ್ ಆಗಿಡಲು ಈ 5 ಟ್ರಿಕ್ಸ್ ಟ್ರೈ ಮಾಡಿ!
ಬೇಸಿಗೆ ಕಾಲದಲ್ಲಿ ತರಕಾರಿಗಳನ್ನು ಸರಿಯಾಗಿ ಸಂಗ್ರಹಿಸುವುದು ಮುಖ್ಯ. ಕೊತ್ತಂಬರಿ, ಪಾಲಕ್ ಟಿಶ್ಯೂ ಪೇಪರ್ನಲ್ಲಿ, ಮೆಣಸಿನಕಾಯಿ ಕಾಂಡ ತೆಗೆದು, ಶುಂಠಿ, ಬೆಳ್ಳುಳ್ಳಿ ಒಣ ಡಬ್ಬದಲ್ಲಿ, ನಿಂಬೆಹಣ್ಣು ಎಣ್ಣೆ ಬಳಸಿ, ಹಣ್ಣು-ತರಕಾರಿ ಪ್ರತ್ಯೇಕವಾಗಿಡುವ ಮೂಲಕ ಸಂಗ್ರಹಿಸಿಡಿ.
55 ರಲ್ಲೂ ಇನ್ನೂ ನವಯುವಕರನ್ನೂ ಸಹ ನಾಚಿಸುವಂತೆ ದೇಹ ದಾರ್ಢ್ಯವನ್ನು ಹೊಂದಿರುವ ಮಾಧವನ್ ರ ರಹಸ್ಯಕ್ಕೆ ಕಾರಣ ಅವರ ನೆಚ್ಚಿನ ಆಹಾರವಂತೆ. ಅದು ಮತ್ಯಾನ್ನಿವುದೇ ದುಬಾರಿ ಆಹಾರವಲ್ಲ. ಬದಲಾಗಿ, ಬಡವರ ಉಪಾಹಾರವಾದ ಗಂಜಿ.
Health Tips: ದಿಂಬು ಇಲ್ಲದೆ ಮಲಗಬಾರದಾ? ವೈದ್ಯರು ಏನಂತಾರೆ ನೋಡಿ!
ಹೊಟ್ಟೆಯ ಮೇಲೆ ಮಲಗುವವರು ದಿಂಬನ್ನು ಬಳಸದಿರುವುದು ಉತ್ತಮ. ಇದು ಬೆನ್ನುಮೂಳೆಯನ್ನು ನೈಸರ್ಗಿಕ ಸ್ಥಾನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ, ಬೆನ್ನಿನ ಮೇಲೆ ಮಲಗುವವರು ದಿಂಬು ಇಲ್ಲದೇ ತಮ್ಮ ಕುತ್ತಿಗೆಗೆ ಸರಿಯಾದ ಬೆಂಬಲವನ್ನು ಪಡೆಯುವುದಿಲ್ಲ. ಇದು ಅಸ್ವಸ್ಥತೆಯನ್ನು ಉಂಟುಮಾಡಬಹುದು.
Health Care: ಮುಂಜಾನೆ ವೇಳೆಯೇ ಅಧಿಕ ಮಂದಿಗೆ ಹಾರ್ಟ್ ಅಟ್ಯಾಕ್ ಆಗೋದು ಏಕೆ? ಇದ್ರಿಂದ ಬಚಾವ್ ಆಗೋದು ಹೇಗೆ?
NIH ಸಂಶೋಧನೆಯ ಪ್ರಕಾರ ಮುಂಜಾನೆ ಹೊತ್ತು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುವ ಅಪಾಯ ಹೆಚ್ಚು ಎನ್ನಲಾಗಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು? ಈ ಅಪಾಯದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂದು ತಿಳಿಯಲು ಈ ಸ್ಟೋರಿ ಓದಿ.
Summer Tips: ನೀವು ಖರೀದಿಸಿರೋ ನಿಂಬೆಯಲ್ಲಿ ರಸವಿದ್ಯಾ, ಇಲ್ಲವೋ? ಹೀಗೆ ಪತ್ತೆ ಹಚ್ಚಿ!
ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿಗೆ ಡಿಮ್ಯಾಂಡ್ ಜಾಸ್ತಿ. ನಿಂಬೆಹಣ್ಣು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಂನಿಂದ ಸಮೃದ್ಧವಾಗಿದೆ. ನಿಂಬೆ ಜೀರ್ಣಕ್ರಿಯೆ, ಹೃದಯ ಆರೋಗ್ಯ, ತೂಕ ಇಳಿಕೆ, ಚರ್ಮ ಕಾಂತಿ ಸುಧಾರಿಸುತ್ತದೆ.
ಬೇಸಿಗೆಯಲ್ಲಿ ಮೊಸರು ಬೇಗನೆ ಹುಳಿಯಾಗುವುದನ್ನು ತಡೆಯಲು ಫ್ರಿಡ್ಜ್ ನ ಮಧ್ಯದಲ್ಲಿ ಇಟ್ಟು, ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿ, ಬಿಗಿಯಾಗಿ ಮುಚ್ಚಿಡಬೇಕು. ಒಣಗಿದ ತೆಂಗಿನಕಾಯಿ ಸೇರಿಸುವುದು ಸಹ ಉಪಯುಕ್ತ.
ಬೇಸಿಗೆಯಲ್ಲಿ ಬಿಸಿಲು, ಶಾಖದಿಂದ ಕೂದಲು ಉದುರುತ್ತದೆ. ಹಾಗಾಗಿ ಈ ಸಮಯದಲ್ಲಿ ಕೂದಲನ್ನು ಜೋಪಾನವಾಗಿ ನೋಡಿಕೊಳ್ಳುವುದು ತುಂಬಾ ಒಳ್ಳೆಯದು.
Women Health: ಗರ್ಭನಿರೋಧಕ ಮಾತ್ರೆ ಸೇಫಾ? ಭಯಾನಕ ಸತ್ಯ ಬಯಲು ಮಾಡಿದ ತಜ್ಞರು!
ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ಪದೇ-ಪದೇ ಬಳಸುವುದರಿಂದ ಹಾರ್ಮೋನುಗಳ ಸಮತೋಲನ ಮತ್ತು ಮುಟ್ಟಿನ ಚಕ್ರಕ್ಕೆ ಅಡ್ಡಿಯುಂಟಾಗುತ್ತದೆ. ಡಾ. ಅಪರ್ಣ ಶರ್ಮಾ, ಏಮ್ಸ್, ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ.

23 C