SENSEX
NIFTY
GOLD
USD/INR

Weather

25    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

Covid Vaccine: ಹೃದಯಾಘಾತಕ್ಕೂ, ಕೋವಿಡ್ ಲಸಿಕೆಗೂ ಸಂಬಂಧವಿಲ್ಲ! ಹಾಗಾದ್ರೆ ಸಾವಿಗೆ ಕಾರಣವೇನು ಗೊತ್ತಾ?

Covid 19 Vaccine: ಹೃದಯಾಘಾತಕ್ಕೂ, ಕೋವಿಡ್ 19 ಲಸಿಕೆಗೂ ಯಾವುದೇ ಸಂಬಂಧವಿಲ್ಲ ಅಂತ ಏಮ್ಸ್ ವೈದ್ಯಕೀಯ ವರದಿ ಹೇಳಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ವರದಿ ಪ್ರಕಟವಾಗಿದೆ.

ಸುದ್ದಿ18 15 Dec 2025 11:16 pm

10 ಸಾವಿರ ಹೆಜ್ಜೆ ನಡೆಯೋದು ಮುಖ್ಯವಲ್ಲ, ಹೇಗೆ ನಡಿತೀರಿ ಅನ್ನೋದು ಮುಖ್ಯ! ಫಿಟ್ ಆಗಿರೋಕೆ ಹೀಗೆ ಮಾಡಿ

ದಿನಕ್ಕೆ 10 ಸಾವಿರ ಸ್ಟೆಪ್ಸ್ ಇಲ್ಲವೇ 7,000 ಹೆಜ್ಜೆಗಳು ಆರೋಗ್ಯಕರ ಎಂದು ಹಲವಾರು ಅಧ್ಯಯನಗಳು ಹೇಳಿಕೆ ನೀಡುತ್ತಲೇ ಇವೆ, ಆದರೆ ನಿಮ್ಮ ಒಟ್ಟು ಹೆಜ್ಜೆಗಳಷ್ಟೇ ಮುಖ್ಯವಾಗಿ ನೀವು ಹೇಗೆ ನಡೆಯುತ್ತೀರಿ ಹಾಗೂ ಹೇಗೆ ಹೆಜ್ಜೆಯನ್ನಿರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ

ಸುದ್ದಿ18 14 Dec 2025 6:21 am

ಈ ಐದು ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದೇ ಆರೋಗ್ಯಕರ! ಯಾವುವು ಆ ತರಕಾರಿಗಳು

Vegetables :ಆಹಾರವನ್ನು ಬೇಯಿಸಿ ತಿನ್ನುವುದು ಜೀರ್ಣಕ್ರಿಯೆನ್ನು ಸುಗಮಗೊಳಿಸುತ್ತದೆ ಹಾಗೂ ಸರಿಯಾದ ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಹಾಗೆಯೇ ಕೆಲವು ತರಕಾರಿಗಳನ್ನು ಬೇಯಿಸದೆ ಹಾಗೆಯೇ ಸೇವಿಸುವುದು ಒಳ್ಳೆಯದು.ಯಾವುವು ಆ ತರಕಾರಿಗಳು ಗೊತ್ತಾ?

ಸುದ್ದಿ18 12 Dec 2025 10:32 pm

ಮಧ್ಯಾಹ್ನದ ಊಟದ ಬಳಿಕ ನಿದ್ರೆಗೆ ಜಾರುವುದು ಅನಾರೋಗ್ಯಕರ ಹವ್ಯಾಸ

Photo Credit : freepik.com ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ. ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ರೆಗೆ ಜಾರಬೇಕು ಎಂದು ಅನಿಸುತ್ತದೆಯೆ? ಸಣ್ಣ ನಿದ್ರೆ ಮಾಡಿದರೆ ದೇಹದ ಶಕ್ತಿ ಮರಳಿಬರುತ್ತದೆ ಎಂದು ಸಹಜವಾಗಿ ನಿದ್ರೆಗೆ ಜಾರುತ್ತೀರೇನು? ಆದರೆ ಮಧ್ಯಾಹ್ನದ ನಿದ್ರೆ ದಣಿವಿನ ಭಾಗವಾಗಿರಬಹುದು ಎಂದು ಭಾವಿಸಿ ಸುಮ್ಮನಿರಬಾರದು. ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ. ಈ ಸಮಸ್ಯೆಯಿಂದಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಮಧ್ಯಾಹ್ನ 1ರಿಂದ 3ರ ನಡುವೆ ನಿದ್ರೆಗೆ ಜಾರುವ ಹವ್ಯಾಸ ಬೆಳೆಯಬಹುದು. ಡಾ. ಬಾತ್ರಾಸ್ ಆರೋಗ್ಯಸೇವೆ ಸರಣಿಯನ್ನು ಸ್ಥಾಪಿಸಿರುವ ಡಾ. ಮುಖೇಶ್ ಬಾತ್ರಾ ಅವರ ಪ್ರಕಾರ, “ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗಿನ ಅವಧಿಯು ದೇಹಕ್ಕೆ ಜೈವಿಕವಾಗಿ ತುಂಬಾ ಸವಾಲಿನ ಸಮಯ. ನಮ್ಮ ಸಿರ್ಕಾಡಿಯನ್ ಲಯವು ಸ್ವಾಭಾವಿಕವಾಗಿ ಕುಸಿಯುವ ಹಂತವಾಗಿರುತ್ತದೆ. ಅಂತಹ ಕುಸಿತದಿಂದ ಜಾಗೃತಿ, ಚಯಾಪಚಯ ಮತ್ತು ಮೈಕ್ರೋಸರ್ಕ್ಯುಲೇಷನ್ ಮೇಲೆ ಪರಿಣಾಮ ಬೀರುತ್ತದೆ.” “ಮಧ್ಯಾಹ್ನದ ಆಲಸ್ಯದ ಸಮಯದಲ್ಲಿ ದೇಹದ ರಕ್ತಪರಿಚಲನೆ ಕಡಿಮೆಯಾಗಿರುತ್ತದೆ. ಜಲಸಂಚಯನ ಕಡಿಮೆಯಾಗಿದ್ದು, ಒತ್ತಡದ ಹಾರ್ಮೋನುಗಳು ಹೆಚ್ಚು ಇರುವುದರಿಂದ ಚರ್ಮವು ಮಂದವಾಗಿ ದಣಿದಂತೆ ಇದ್ದು, ಮೊಡವೆಗಳಿಗೆ ಹೆಚ್ಚು ಒಳಗಾಗುತ್ತದೆ” ಎಂದು ಅವರು ಹೇಳಿದ್ದಾರೆ. ಪೋಸ್ಟ್ಪ್ರಾನ್ಡಿಯಲ್ ಡಿಪ್ ಊಟದ ನಂತರ ನಿದ್ರೆ ಬರುವಿಕೆಯನ್ನು “ಪೋಸ್ಟ್ಪ್ರಾನ್ಡಿಯಲ್ ಡಿಪ್” ಎಂದು ಕರೆಯಲಾಗುತ್ತದೆ. ಅಂದರೆ, ಊಟದ ನಂತರ ನಿದ್ರೆ, ಶಕ್ತಿ ಕಡಿಮೆಯಾಗುವುದು ಅಥವಾ ಆಲಸ್ಯದಂತಹ ಸಾಮಾನ್ಯ ಭಾವನೆ. ಇದನ್ನು ಆಹಾರ ಕೋಮಾ ಎಂದೂ ಕರೆಯಲಾಗುತ್ತದೆ. ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಗಳು ಮತ್ತು ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುತ್ತದೆ, ಇದು ಮಾನಸಿಕ ಜಾಗೃತಿ ಮತ್ತು ಗಮನ ಕಡಿಮೆಯಾಗಲು ಕಾರಣವಾಗುತ್ತದೆ. ನಿದ್ರೆ ಜಾರದಿರಲು ಏನು ಮಾಡಬೇಕು? ಲವ್ನೀತ್ ಎನ್ನುವ ನ್ಯೂಟ್ರಿಶನ್ ಕಂಪನಿಯ ಸ್ಥಾಪಕರಾದ ಲವ್ನೀತ್ ಬಾತ್ರ ಪ್ರಕಾರ, “ಈ ಸಮಯದಲ್ಲಿ ಜನರು ಹೆಚ್ಚಾಗಿ ಅರೆನಿದ್ರಾವಸ್ಥೆಯಲ್ಲಿರುತ್ತಾರೆ. ಹೆಚ್ಚಿನ ಉಪ್ಪು, ಕಾರ್ಬೋಹೈಡ್ರೇಟ್ ಊಟ, ಅನಿಯಮಿತ ನಿದ್ರೆಯ ಮಾದರಿಗಳು, ಮಲಗುವ ಮುನ್ನ ಅತಿಯಾಗಿ ಫೋನ್ ಬಳಕೆ ಮತ್ತು ರಾತ್ರಿ ಸಮಯದಲ್ಲಿ ನಿಯಮಿತವಾದ ನಿದ್ರೆ ಇಲ್ಲದಿರುವುದು ಕಾರಣವಾಗಬಹುದು. ನಿದ್ರೆಯನ್ನು ಉತ್ತೇಜಿಸುವ ಮೆಲಟೋನಿನ್‌ನಂತಹ ಹಾರ್ಮೋನುಗಳೂ ಪ್ರಮುಖ ಪಾತ್ರವಹಿಸುತ್ತವೆ. ಈ ಅಂಶಗಳು, ಭಾರೀ ಊಟದೊಂದಿಗೆ ಸೇರಿ, ಮಧ್ಯಾಹ್ನದ ವೇಳೆಯಲ್ಲಿ ನಿದ್ರೆ ಮಾಡಲು ಪ್ರಚೋದನೆ ನೀಡುತ್ತವೆ ಮತ್ತು ಇದು ಉತ್ಪಾದಕತೆಗೆ ಅಪಾಯಕಾರಿ.” ಅವರು ನೀಡುವ ಪರಿಹಾರವೆಂದರೆ ಬೆಳಗಿನ ಉಪಾಹಾರವನ್ನು ಚೆನ್ನಾಗಿ ಮಾಡುವುದು. ಸಿರಿಧಾನ್ಯ, ಬ್ರೌನ್ ರೈಸ್ ಅವಲಕ್ಕಿ, ಬ್ರೌನ್ರೈಸ್ ಇಡ್ಲಿಗಳು ಅಥವಾ ದೋಸೆಯನ್ನು ಬೆಳಗಿನ ಉಪಾಹಾರಕ್ಕೆ ಸೇವಿಸಬೇಕು. ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿರುವ ತಿನಿಸುಗಳನ್ನು ಸೇವಿಸಬೇಕು. ನಿದ್ರೆ ಬರುವುದನ್ನು ತಡೆಯಲು ಚಹಾ ಅಥವಾ ಕಾಫಿ ಸೇವನೆ, ತಂಪು ಪಾನೀಯ ಅಥವಾ ಬಿಸ್ಕಟ್ಗಳು ಮೊದಲಾದ ತಿನಿಸುಗಳನ್ನು ಸೇವಿಸಬಾರದು. 3 ಗಂಟೆಯ ನಿದ್ರೆ ತಡೆಯಲು ಇವನ್ನು ಸೇವಿಸಬಹುದು - ಮೊಳಕೆಕಾಳುಗಳು ಪ್ರೊಟೀನ್ ಮತ್ತು ಫೈಬರ್ ಮೂಲಗಳಾಗಿರುತ್ತವೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ. - ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. - ಹಣ್ಣುಗಳೊಂದಿಗೆ ನೆನೆಸಿದ ಬೀಜಗಳನ್ನು ಸಂಯೋಜಿಸುವುದರಿಂದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಮಿಶ್ರಣವನ್ನು ಒದಗಿಸುವ ಮೂಲಕ ತ್ವರಿತ ಶಕ್ತಿ ಮತ್ತು ದೀರ್ಘಕಾಲದ ತೃಪ್ತಿ ಸಿಗುತ್ತದೆ. - ಬೇಯಿಸಿದ ಕಡಲೆ (ಚನಾ) ಪ್ರೊಟೀನ್ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಆಯಾಸ ಕಳೆಯಲು ಪೌಷ್ಠಿಕಾಂಶವಿರುವ ಹೊಟ್ಟೆ ತುಂಬಿಸುವ ತಿನಿಸಾಗಿದೆ. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್

ವಾರ್ತಾ ಭಾರತಿ 7 Dec 2025 6:41 pm

ಆಯುರ್ವೇದದಿಂದ ಫ್ಯಾಟಿ ಲಿವರ್‌ಗೆ ಪರಿಹಾರ; ಆರೋಗ್ಯಕರ ಜೀವನಕ್ಕೆ ಹೊಸ ದಾರಿ

Fatty Liver: ಅನೇಕ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಳ್ಳುತ್ತಿವೆ.ಇವುಗಳಲ್ಲಿ ಪ್ರಮುಖವಾದುದು ಫ್ಯಾಟಿ ಲಿವರ್,ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ.ಆದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಸಿರೋಸಿಸ್‌ನಂತಹ ಗಂಭೀರ ಕಾಯಿಲೆಗೆ ತಿರುಗಬಹುದು.

ಸುದ್ದಿ18 7 Dec 2025 5:18 pm

ಈ ಲಕ್ಷಣ ಕಂಡು ಬಂದ್ರೆ ನೆಗ್‌ಲೆಕ್ಟ್‌ ಮಾಡ್ಬೇಡಿ,ಇದು ಕೊಲೊನ್‌ ಕ್ಯಾನ್ಸರ್‌ನ ಲಕ್ಷಣ ಆಗಿರ್ಬಹುದು!

Colon Cancer: ಇತ್ತೀಚೆಗೆ ಹೆಚ್ಚಾಗಿ ಯುವ ಜನತೆಯನ್ನು ಕಾಡ್ತಿದೆ ಕೊಲೊನ್ ಕ್ಯಾನ್ಸರ್. ಇದಕ್ಕೆ ಕಾರಣವೇನು? ಇದರ ಲಕ್ಷಣ ಏನು ಗೊತ್ತಾ?

ಸುದ್ದಿ18 6 Dec 2025 6:56 pm

ಏಡ್ಸ್‌ ಗೆ ಸಿಕ್ತು ಔಷಧಿ, 2026 ರ ಅಂತ್ಯಕ್ಕೆ ಭಾರತಕ್ಕೂ ಪ್ರವೇಶ ನಿಕ್ಕಿ! ಸಾವಿಂದ ಪಾರು ಮಾಡೋ ಸಂಜೀವಿನಿ!

ಅಮೇರಿಕಾ ವಿಜ್ಞಾನಿಗಳು ಕಂಡುಹಿಡಿದ Lenacapavir ಚುಚ್ಚುಮದ್ದು 99% ಹೆಚ್ಐವಿ ಸೋಂಕಿನಿಂದ ರಕ್ಷಣೆ ನೀಡುತ್ತದೆ, WHO ಗ್ರೀನ್ ಸಿಗ್ನಲ್ ನೀಡಿದ್ದು 2026ರ ಅಂತ್ಯಕ್ಕೆ ಭಾರತದಲ್ಲಿ ಲಭ್ಯವಾಗಲಿದೆ.

ಸುದ್ದಿ18 6 Dec 2025 1:27 pm

ಕುಳಿತು ಕೆಲ್ಸ ಮಾಡಿ ಬೆನ್ನು-ಕತ್ತು ನೋವಾಗ್ತಿದ್ಯಾ? ಹಾಗಾದ್ರೆ ಕುಳಿತಲ್ಲೇ ಈ 10 ಟ್ರಿಕ್ಸ್ ಟ್ರೈ ಮಾಡಿ

Stretching Exercises: ನೀವು ಹೆಚ್ಚು ಸಮಯ ಕುಳಿತೇ ಇರುವವರಾದರೆ ನಿಮ್ಮ ಕುತ್ತಿಗೆ, ಭುಜ, ಹಿಂಭಾಗ, ಬೆನ್ನಿಗೆ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನೀಡಬೇಕಾಗುತ್ತದೆ.ಹೀಗಾಗಿ ನಿಮಗಾಗಿ ನಾವು ಕೆಲವೊಂದು ಸ್ಟ್ರೆಚಿಂಗ್ ವ್ಯಾಯಾಮಗಳು ತಿಳಿಸಿಕೊಡ್ತೇವೆ.

ಸುದ್ದಿ18 3 Dec 2025 11:30 pm

ಹಿಮೋಗ್ಲೋಬಿನ್ ಕೌಂಟ್ ಕಡಿಮೆ ಇದ್ದ ತಕ್ಷಣ ಆಹಾರದಲ್ಲಿ ಬದಲಾವಣೆ ಬೇಕೆ?

ಸಾಂದರ್ಭಿಕ ಚಿತ್ರ | Photo Credit : freepik ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಬದಲಾವಣೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಆಧುನಿಕ ಇಂಟರ್ನೆಟ್ ಕಾಲದಲ್ಲಿ ಬಹಳಷ್ಟು ಮಂದಿ ಸ್ವಯಂ ವೈದ್ಯರಾಗಿ ಔಷಧಿಗಳನ್ನು ಸೇವಿಸುವುದಿದೆ. ವಿಟಮಿನ್ಗಳು ಅಥವಾ ಕಬ್ಬಿಣದಂಶಗಳು ಕಡಿಮೆ ಇದೆ ಎಂದು ರಕ್ತ ಪರೀಕ್ಷೆಯಲ್ಲಿ ತಿಳಿದ ತಕ್ಷಣ ಸ್ವಯಂ ವೈದ್ಯರಾಗಿಬಿಡುತ್ತಾರೆ. ಗೂಗಲ್ ಮಾಡಿ ತಕ್ಷಣ ಆಹಾರದಲ್ಲಿ ಬದಲಾವಣೆ ಮಾಡಿಬಿಡುತ್ತಾರೆ. ಆದರೆ ವೈದ್ಯರ ಸಲಹೆಯಿಲ್ಲದೆ ಆಹಾರದಲ್ಲಿ ಇಂತಹ ಬದಲಾವಣೆ ಮಾಡುವುದು ಅಥವಾ ಪೂರಕ ಔಷಧಿಗಳನ್ನು ಸೇವಿಸುವುದು ಅಪಾಯಕಾರಿ. ಕಬ್ಬಿಣದಂಶ ಕಡಿಮೆ ಎಂದರೇನು? ಹಿಮೋಗ್ಲೋಬಿನ್ ಪುರುಷರಲ್ಲಿ 13 ಮತ್ತು ಮಹಿಳೆಯರಲ್ಲಿ 11ರ ಆಸುಪಾಸಿನಲ್ಲಿದ್ದರೆ, ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಕಬ್ಬಿಣದಂಶವಿದೆ ಎಂದು ಪರಿಗಣಿಸಲಾಗುತ್ತದೆ. ಬಾರ್ಡರ್ಲೈನ್ ಎಂದರೆ 13/11ರ ಆಸುಪಾಸಿನಲ್ಲಿರಬೇಕಾಗುತ್ತದೆ. ಆದರೆ ಹಿಮೋಗ್ಲೋಬಿನ್ ಕೌಂಟ್ 6-5ರ ಸಮೀಪಕ್ಕೆ ಬಂದರೆ ಕಬ್ಬಿಣದಂಶ ಕಡಿಮೆಯಾಗಲು ಬೇರೆ ಕಾರಣಗಳಿವೆಯೇ ಎಂದು ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಆಹಾರಶೈಲಿಯಲ್ಲಿ ತಕ್ಷಣದ ಬದಲಾವಣೆ ಬೇಡ ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಕಬ್ಬಿಣದಂಶ ಕಡಿಮೆಯಾಗಲು ಬೇಕಾದಷ್ಟು ಕಾರಣಗಳು ಇರಬಹುದು ಎನ್ನುತ್ತಾರೆ ವೈದ್ಯರು. ಮಾರಕ ಸೋಂಕುಗಳು, ಆಂತರಿಕ ರಕ್ರಸ್ರಾವ, ಋತುಚಕ್ರದಲ್ಲಿ ಅತಿಯಾದ ಸ್ರಾವ, ಗರ್ಭಧಾರಣೆ, ಸಿಲಿಯಾಕ್ ರೋಗ (ಹೊಟ್ಟೆ ಪೊಳ್ಳಿನ ರೋಗ), ಉರಿಯೂತದ ಕರುಳಿನ ರೋಗ ಅಥವಾ ಚಹಾ/ಕಾಫಿ ಅತಿಯಾಗಿ ಸೇವನೆಯಿಂದ (ಕಬ್ಬಿಣದಂಶ ಹೀರುವಿಕೆಯನ್ನು ತಡೆಯುತ್ತದೆ) ಕಬ್ಬಿಣದಂಶ ಕಡಿಮೆ ಇರುವ ಸಾಧ್ಯತೆಯೂ ಇರುತ್ತದೆ. ಬೆಂಗಳೂರಿನಲ್ಲಿ ವೈದ್ಯರಾಗಿರುವ ಚೈತನ್ಯ ಹೇಳುವ ಪ್ರಕಾರ, “ಹಿಮೋಗ್ಲೋಬಿನ್ ಬಾರ್ಡರ್ ಲೈನ್ಗಿಂತ ಕಡಿಮೆ ಇದ್ದರೆ ಆಹಾರದಲ್ಲಿ ಬದಲಾವಣೆಗೆ ಸೂಚಿಸುತ್ತೇವೆ. ಬಹಳ ಸುಸ್ತು, ತಲೆಸುತ್ತು ಅಥವಾ ತೀವ್ರ ಋತುಸ್ರಾವದ ಸಮಸ್ಯೆ ಇದ್ದಾಗ ಮಾತ್ರ ಚಿಹ್ನೆಗಳನ್ನು ಗಮನಿಸಿ ಕಬ್ಬಿಣದಂಶಕ್ಕೆ ಸಂಬಂಧಿಸಿದ ಔಷಧಿ ನೀಡಲಾಗುತ್ತದೆ.” ಕಬ್ಬಿಣದಂಶ ಅತಿಯಾದರೂ ಅಪಾಯ ಕೆಲವು ಪ್ರಕರಣಗಳಲ್ಲಿ ಕಬ್ಬಿಣದಂಶ ಅತಿಯಾದರೂ ಅಪಾಯ. ಹೊಟ್ಟೆಯುರಿ, ಮಲಬದ್ಧತೆ ಮತ್ತು ಕಬ್ಬಿಣದಂಶ ಅತಿಯಾಗಿ ಇರುವ ಹೀಮೋಕ್ರೊಮಟೊಸಿಸ್ನಂತಹ ರೋಗವೂ ಬರುವ ಸಾಧ್ಯತೆ ಇರುತ್ತದೆ. ಕಬ್ಬಿಣದಂಶ ಹೆಚ್ಚಿಸಬಹುದಾದ ಆಹಾರ ಹಿಮೋಗ್ಲೋಬಿನ್ ಕೊರತೆ ಇರುವ ಬಹಳಷ್ಟು ಮಂದಿಗೆ ಪಾಲಾಕ್, ಬೀಟ್ರೂಟ್, ಧಾನ್ಯಗಳು, ಬೀನ್ಸ್, ಕಡಲೆಗಳು, ಇಡೀಧಾನ್ಯಗಳು, ಮೊಟ್ಟೆಗಳು ಮತ್ತು ಲೀನ್ ಮೀಟ್ಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ವಿಟಮಿನ್ ಸಿ ಇರುವ ಲಿಂಬೆ, ಕಿತ್ತಳೆ ಅಥವಾ ಟೊಮೆಟೊಗಳ ಜೊತೆಗೆ ಸೇವಿಸಿದರೆ ಹೀರಿಕೊಳ್ಳುವಿಕೆಗೆ ಅನುಕೂಲವಾಗಿಬಿಡುತ್ತದೆ. ಹೀಗಾಗಿ ಸ್ವಯಂ ವೈದ್ಯರಾಗುವ ಅಪಾಯ ತಂದುಕೊಳ್ಳದೆ ವೈದ್ಯರ ಸಲಹೆಯ ನಂತರ ಆಹಾರದಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು. ಕೃಪೆ: indianexpress.com

ವಾರ್ತಾ ಭಾರತಿ 3 Dec 2025 6:51 pm

Drinks: ‘ಎಣ್ಣೆ’ ಹೊಡೆಯುವಾಗ ಇವನ್ನೆಲ್ಲಾ ತಿಂತೀರಾ? ಹಾಗಾದ್ರೆ ಹುಷಾರ್!

ಮದ್ಯಪಾನ, ಹೆಚ್ಚು ಉಪ್ಪು, ಹುರಿದ ಅಥವಾ ಸಿಹಿ ಆಹಾರವನ್ನು ಸೇವಿಸುವುದರಿಂದ ಯಕೃತ್ತು ಮತ್ತು ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ. ಕಾಫಿ ಅಥವಾ ಶಕ್ತಿ ಪಾನೀಯಗಳು ನಿರ್ಜಲೀಕರಣವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ತಿಳಿದಿದ್ದರೆ, ನೀವು ಗಂಭೀರ ಕಾಯಿಲೆ ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಸುದ್ದಿ18 2 Dec 2025 10:59 pm

Aids day: ಎಚ್ಐವಿ vs ಏಡ್ಸ್! ಇಲ್ಲಿ ಮಿಸ್ ಮಾಡುತ್ತಿರುವ ಅತಿ ದೊಡ್ಡ ಸತ್ಯ ಏನು ಗೊತ್ತಾ?

ಜನರು ಸಾಮಾನ್ಯವಾಗಿ ಎಚ್ಐವಿ ಮತ್ತು ಏಡ್ಸ್ ಅನ್ನು ಒಂದು ವಿಷಯ ಎಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ವೈದ್ಯಕೀಯ ದೃಷ್ಟಿಕೋನದಿಂದ, ಈ ಎರಡು ಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಒಂದು ರೋಗದ ಆರಂಭವನ್ನು ಪ್ರತಿನಿಧಿಸಿದರೆ, ಇನ್ನೊಂದು ಅದರ ತೀವ್ರ ಹಂತವನ್ನು ಪ್ರತಿನಿಧಿಸುತ್ತದೆ. ಹೌದು, ಡಿಸೆಂಬರ್ 1 ರಂದು ಆಚರಿಸಲಾಗುವ 2025 ರ ವಿಶ್ವ ಏಡ್ಸ್ ದಿನದಂದು ಡಾ. ಪ್ರಭಾತ್ ರಂಜನ್ ಸಿನ್ಹಾ ಅವರೊಂದಿಗೆ ಈ ವಿಷಯವನ್ನು ಅನ್ವೇಷಿಸೋಣ.

ಸುದ್ದಿ18 1 Dec 2025 10:13 am

ಈ ಸಿಂಪಲ್‌ ಟ್ರಿಕ್‌ ಬಳಸಿ ಮಕ್ಕಳನ್ನು ಚಳಿಯ ಭೂತದಿಂದ ದೂರವಿಡಿ! ರೋಗ ತಡೆಗಟ್ಟಲು ಈ ಉಪಾಯ ಪರಿಣಾಮಕಾರಿ

ಚಳಿಗಾಲದ ಆರಂಭದಲ್ಲೇ ಮಕ್ಕಳಲ್ಲಿ ಶೀತ–ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.

ಸುದ್ದಿ18 28 Nov 2025 1:19 pm

Milk-Dates: ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ಇದನ್ನು ಹಾಕಿ ಕುಡಿಯಿರಿ, ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಚೈತನ್ಯಪೂರ್ಣವಾಗಿಡಲು ಸಹಾಯ ಮಾಡುವ ಒಣ ಹಣ್ಣುಗಳನ್ನು ನಾವು ಹೆಚ್ಚು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಈ ಸೂಪರ್‌ಫುಡ್‌ಗಳಲ್ಲಿ ಖರ್ಜೂರವೂ ಒಂದು. ಚಳಿಗಾಲದಲ್ಲಿ ರಾತ್ರಿ ಹಾಲಿನೊಂದಿಗೆ ಬೆರೆಸಿದ ಒಣಗಿದ ಖರ್ಜೂರ ಸೇವಿಸುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ.

ಸುದ್ದಿ18 22 Nov 2025 7:28 pm