SENSEX
NIFTY
GOLD
USD/INR

Weather

20    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

Health Information: ಹಸಿವಾದ್ರೆ ಹೊಟ್ಟೆ ಗುಡು-ಗುಡು ಶಬ್ಧ ಮಾಡುತ್ತಾ? ಈ ವಿಚಿತ್ರ ಶಬ್ದದ ಹಿಂದಿನ ಭಯಾನಕ ಸ್ಟೋರಿ ಏನು ಗೊತ್ತಾ?

ವೈಜ್ಞಾನಿಕ ಪರಿಭಾಷೆಯಲ್ಲಿ ಹೊಟ್ಟೆಯಿಂದ ಬರುವ ಈ ಶಬ್ದವನ್ನು 'ಬೋರ್ಬೊರಿಗ್ಮಿ' ಎಂದು ಕರೆಯಲಾಗುತ್ತದೆ. ಈ ಶಬ್ದವು ಹೊಟ್ಟೆಯಿಂದ ಮಾತ್ರವಲ್ಲ, ಮುಖ್ಯವಾಗಿ ನಮ್ಮ ಸಣ್ಣ ಮತ್ತು ದೊಡ್ಡ ಕರುಳಿನಿಂದಲೂ ಬರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಒಂದು ಉದ್ದವಾದ ಕೊಳವೆಯಂತೆ, ಅದು ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ.

ಸುದ್ದಿ18 5 Feb 2026 11:43 am

Health Care: ಪದೇ-ಪದೇ ಎದೆಯುರಿ ಬರುತ್ತಿದ್ಯಾ? ಇದನ್ನು ಇಗ್ನೋರ್ ಮಾಡಿದ್ರೆ ನಿಮಗೆ ನಷ್ಟ!

ಆಮ್ಲೀಯತೆ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ದೀರ್ಘಕಾಲದ ಸಮಸ್ಯೆಗೆ ವೈದ್ಯರ ಸಲಹೆ ಅಗತ್ಯ, ಸಮಯೋಚಿತ ತಪಾಸಣೆ ಜೀವ ಉಳಿಸಬಹುದು ಎಂದು ತಿಳಿಸಿದ್ದಾರೆ.

ಸುದ್ದಿ18 5 Feb 2026 10:56 am

Health Care: ನಿಮ್ಮ ಇಮ್ಯೂನಿಟಿ ಲೆವೆಲ್ ಎಷ್ಟಿದೆ? ಮನೆಯಲ್ಲೇ ಹೀಗೆ ಟೆಸ್ಟ್​ ಮಾಡಿ, ಆರೋಗ್ಯ ಸೇಫ್​ ಆಗಿರಿಸಿಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಇದು ಕೇವಲ ರೋಗಗಳ ವಿರುದ್ಧ ನಮಗೆ ರಕ್ಷಣೆ ನೀಡುವುದಷ್ಟೇ ಅಲ್ಲ, ಉತ್ತಮ ಮತ್ತು ಕ್ರಿಯಾಶೀಲ ಜೀವನದ ಸಂಕೇತವೂ ಆಗಿದೆ.

ಸುದ್ದಿ18 4 Feb 2026 4:03 pm

Health Tips: 5 ಸೆಕೆಂಡ್‌ನಲ್ಲೇ ಹೃದಯ ವೈಫಲ್ಯ ಪತ್ತೆ ಹಚ್ಚಬಹುದಾ? ಮನೆಯಲ್ಲೇ ಹೀಗೆ ಲೆಗ್ ಟೆಸ್ಟ್ ಮಾಡಿ!

ಇತ್ತೀಚಿನ ಸಮಯದಲ್ಲಿ 5 ಸೆಕೆಂಡ್ ಲೆಗ್ ಪರೀಕ್ಷೆ ಎಂದು ಕರೆಯಲಾದ ಸರಳ ಸ್ಕ್ರೀನಿಂಗ್ ಟ್ರಿಕ್ ಆರಂಭಿಕ ಹೃದಯ ಸಮಸ್ಯೆಗಳನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ ಆನ್‌ಲೈನ್‌ನಲ್ಲಿ ಗುರುತಿಸಿಕೊಂಡಿದೆ. ಇದು ರೋಗನಿರ್ಣಯ ಮಾಡುವ ಪರಿಕರವಲ್ಲ ಆದರೂ ಇದನ್ನು ಎಚ್ಚರಿಕೆಯ ಸಂಕೇತವಾಗಿ ಬಳಸಿಕೊಳ್ಳಬಹುದು.

ಸುದ್ದಿ18 4 Feb 2026 2:48 pm

Health Care: ಹಗಲಿಗಿಂತ ರಾತ್ರಿ ಆ್ಯಕ್ಟೀವ್ ಆಗ್ತೀರಾ? ಎಚ್ಚರ, ಇದು ದೊಡ್ಡ ಗಂಡಾಂತರದ ಸಿಗ್ನಲ್!

2022ರಲ್ಲಿ 19.8 ಮಿಲಿಯನ್ ಮಂದಿ ಹೃದ್ರೋಗ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅಧ್ಯಯನ, ತಡವಾಗಿ ಮಲಗುವವರು ಹೃದಯಾಘಾತ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ತಿಳಿಸಿದ್ದಾರೆ.

ಸುದ್ದಿ18 4 Feb 2026 1:10 pm

Health Care: ಬರೀ ಇದೊಂದು ತರಕಾರಿ ಫ್ರಿಡ್ಜ್‌ನಲ್ಲಿಟ್ಟರೆ ಕ್ಯಾನ್ಸರ್ ಜೀವನಪರ್ಯಂತ ಬರಲ್ವಂತೆ! ಇಂದೇ ಸ್ಟೋರ್ ಮಾಡಿ, ತಿನ್ನೋಕೆ ಶುರು ಮಾಡಿ!

ದಿನೇ-ದಿನೇ ಕ್ಯಾನ್ಸರ್​ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಪ್ರತಿದಿನ ಮನೆಯಲ್ಲಿ ಇದೊಂದು ತರಕಾರಿ ಸೇವಿಸಿದರೆ ಈ ಮಾರಕ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ವಿಶೇಷವೆಂದರೆ ಈ ತರಕಾರಿಯಲ್ಲಿ ವಿಟಮಿನ್ ಸಿ, ಎ, ಬಿ, ಕಬ್ಬಿಣ, ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ, ಜೀರ್ಣಕ್ರಿಯೆ, ತೂಕ ಇಳಿಕೆ, ಚರ್ಮ ಆರೋಗ್ಯಕ್ಕೆ ಸಹಾಯಕ ಮಾಡುತ್ತದೆ.

ಸುದ್ದಿ18 4 Feb 2026 12:55 pm

Oral Health: ಹಲ್ಲುಜ್ಜಲು ಎಷ್ಟು ಸಮಯ ಬೇಕು? ಬಹುತೇಕ ಮಂದಿ ಈ ತಪ್ಪು ಮಾಡ್ತಿದ್ದಾರೆ ಅಂತಾರೆ ವೈದ್ಯರು!

ಹಲ್ಲುಗಳ ಆರೈಕೆ ಹೃದ್ರೋಗ, ಮಧುಮೇಹ ಮುಂತಾದ ಸಮಸ್ಯೆಗಳನ್ನು ತಪ್ಪಿಸಬಹುದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಫ್ಲಾಸ್ ಬಳಕೆ, ಸಿಹಿ ಆಹಾರ ಕಡಿಮೆ ಸೇವನೆ ಮುಖ್ಯ. ವರ್ಷಕ್ಕೊಮ್ಮೆ ದಂತ ವೈದ್ಯರನ್ನು ಭೇಟಿಯಾಗಿರಿ.

ಸುದ್ದಿ18 3 Feb 2026 5:36 pm

Health Tips: ಹಸಿ-ಹಸಿಯಾಗಿ ತಿನ್ನಬೇಡಿ! ಇವುಗಳನ್ನು ಬೇಯಿಸಿ ತಿಂದರೆ ಮಾತ್ರ ಆರೋಗ್ಯ ಸೇಫ್

ಕೆಲವು ಆಹಾರಗಳನ್ನು ಕಚ್ಚಾ ಸೇವಿಸುತ್ತೇವೆ. ಆದರೆ, ಈ ಹತ್ತು ರೀತಿಯ ಆಹಾರಗಳನ್ನು ಕಚ್ಚಾ ಸೇವಿಸಬಾರದು. ಅವುಗಳನ್ನು ಬೇಯಿಸಿದ ನಂತರವಷ್ಟೇ ಸೇವಿಸಬೇಕು. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ

ಸುದ್ದಿ18 3 Feb 2026 4:59 pm

Health Tips: ಬಿಳಿ ಅಲ್ಲ, ಹಸಿರು ಅಲ್ಲ, ಈ ಬಣ್ಣದ ಹೂಕೋಸು ತಿನ್ನಿ! 70ರಲ್ಲೂ 30ರಂತೆ ಯಂಗ್ ಆಗಿ ಇರ್ತೀರಿ

ನೇರಳೆ ಹೂಕೋಸು ಆಂಥೋಸಯಾನಿನ್‌ನಿಂದ ಬಣ್ಣ ಪಡೆಯುತ್ತದೆ, ಆರೋಗ್ಯಕ್ಕೆ ಲಾಭಕಾರಿ. ಗಾಜಿಪುರದ ಪಿಜಿ ಕಾಲೇಜಿನ ಸತ್ಯೇಂದ್ರ ನಾಥ್ ಸಿಂಗ್ ಮಾಹಿತಿ ಹಂಚಿದ್ದಾರೆ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ಸುದ್ದಿ18 3 Feb 2026 4:51 pm

Health Tips: ಆಫಿಸ್​ನಲ್ಲಿ ಆಯಾಸ ಆಗ್ತಿರುತ್ತಾ? ಟೀ-ಕಾಫಿ ಬಿಟ್ಟು, ಇವುಗಳನ್ನು ಟ್ರೈ ಮಾಡಿ ನೋಡಿ!

ಬೆಳಗ್ಗೆ ಎದ್ದ ಕೂಡಲೇ ದಣಿವಾಗುತ್ತಿದ್ಯಾ? ಇದಕ್ಕೆ ಫ್ರೆಂಚ್ ಫ್ರೈಸ್, ಚೀಸ್ ಬರ್ಗರ್, ಕೆಫೀನ್ ಮುಖ್ಯ ಕಾರಣವಾಗಿರಬಹುದು. ಆದರೆ ಕಪ್ಪು ಅಕ್ಕಿ, ಹಣ್ಣು, ನೀರು, ಡ್ರೈ ಫ್ರೂಟ್ಸ್, ಪ್ರೋಟೀನ್ ಆಹಾರದಿಂದ ಶಕ್ತಿ ಹೆಚ್ಚಿಸಬಹುದು.

ಸುದ್ದಿ18 3 Feb 2026 2:57 pm

Korean Skin Care: ನೀವು ಸುಂದರವಾಗಿ ಕಾಣ್ಬೇಕಾ? ಮ್ಯಾಜಿಕ್ ರೀತಿ ಕೆಲಸ ಮಾಡೋ ಈ ಕೊರಿಯನ್ ಸ್ಕಿನ್‌ ಕೇರ್ ಟ್ರೈ ಮಾಡಿ

ಕೊರಿಯನ್ ಹುಡುಗಿಯರ ಕಾಂತಿಯುತ ತ್ವಚೆಯ ಸೀಕ್ರೆಟ್​ ಅಕ್ಕಿ ನೀರು. ಅಕ್ಕಿ ನೀರನ್ನು ಮನೆಯಲ್ಲಿಯೇ ತಯಾರಿಸಬಹುದು. ಅಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಈ ನೀರಿನಿಂದ ಮುಖ ತೊಳೆಯಿರಿ. ಹೀಗೆ ಪ್ರತಿದಿನ ಅಕ್ಕಿ ನೀರಿನಿಂದ ಈ ಕೆಲಸ ಮಾಡುವುದರಿಂದ ನಿಮ್ಮ ಮುಖ ಮತ್ತು ಮೈ ಬಣ್ಣ ಹೊಳೆಯುತ್ತದೆ, ಕಲೆಗಳು ಮತ್ತು ಸುಕ್ಕುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ ಮತ್ತು ಮುಖವನ್ನು ಹೈಡ್ರೀಕರಿಸುತ್ತದೆ.

ಸುದ್ದಿ18 3 Feb 2026 12:53 pm

Women Health: 30 ವರ್ಷ ದಾಟಿದ್ರೆ ಪ್ರೆಗ್ನೆಂಟ್ ಆಗಲ್ವಾ? ವೈದ್ಯರು ಹೇಳ್ತಿದ್ದಾರೆ ಈ ಭಯಾನಕ ಸತ್ಯ

ಮಹಿಳೆಯ ಫಲವತ್ತತೆ 20ರ ವಯಸ್ಸಿನಲ್ಲಿ ಹೆಚ್ಚಾಗಿರುತ್ತದೆ. ಆದರೆ, 35ರ ನಂತರ ಅಂಡಾಣುಗಳ ಗುಣಮಟ್ಟ ಕಡಿಮೆಯಾಗುತ್ತದೆ. 30ರ ನಂತರ ಗರ್ಭಧಾರಣೆಗೆ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಸಹ ಅಗತ್ಯ.

ಸುದ್ದಿ18 3 Feb 2026 11:49 am

Health Tips: ಅತಿಯಾಗಿ ಈ ಸೊಪ್ಪು ತಿಂದ್ರೆ ಜೀವಕ್ಕೆ ಆಪತ್ತು; ಹುಷಾರ್, ಈ ವಿಷಕಾರಿ ಸೊಪ್ಪಿನಿಂದ ದೂರವಿರಿ!

ಪಾಲಕ್ ಆರೋಗ್ಯಕ್ಕೆ ಒಳ್ಳೆಯದಾದರೂ, ಕಿಡ್ನಿ ಸ್ಟೋನ್, ಸಂಧಿವಾತ, ಥೈರಾಯ್ಡ್, ಜೀರ್ಣಕ್ರಿಯೆ ಸಮಸ್ಯೆ ಹಾಗೂ ರಕ್ತ ತೆಳುಗೊಳಿಸುವ ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆದ ನಂತರ ಮಾತ್ರ ಸೇವಿಸಬೇಕು. ಇಲ್ಲದಿದ್ರೆ ನಿಮ್ಮ ಆರೋಗ್ಯ ಗಂಭೀರಗೊಳ್ಳಬಹುದು ಎಚ್ಚರ.

ಸುದ್ದಿ18 3 Feb 2026 10:49 am

Health Tips: ಅಲೋವೆರಾ ಒಂದರಲ್ಲೇ ಇದೆ ಈ ಎಲ್ಲಾ ರೋಗಗಳಿಗೂ ಮದ್ದು; ಈ ಸೀಕ್ರೆಟ್​ ತಿಳಿದ್ರೆ ದಿನಾ ಬಳಸುತ್ತೀರಿ!

ಆಯುರ್ವೇದದಲ್ಲಿ ಶತಮಾನಗಳಿಂದಲೂ ಅಲೋವೆರಾವನ್ನು ಔಷಧಿಯವಾಗಿ ಬಳಸಲಾಗುತ್ತಿದೆ. ಇನ್ನೂ ಈ ಬಗ್ಗೆ ಮಾತನಾಡಿರುವ ಡಾ. ಅನುಪ್ ವೈಶ್ಯ ಪ್ರಕಾರ, ಅಲೋವೆರಾ ಜೆಲ್ ಚರ್ಮ, ಜೀರ್ಣಕ್ರಿಯೆ, ಯಕೃತ್ತಿಗೆ ಉಪಯುಕ್ತವಾಗಿದೆ. ಅದರಲ್ಲೂ ಮನೆಯಲ್ಲೇ ಬೆಳೆಸಿದ ಅಲೋವೆರಾ ಹೆಚ್ಚು ಪ್ರಯೋಜನಕಾರಿ ಆಗಿದೆ.

ಸುದ್ದಿ18 3 Feb 2026 9:59 am

Health Care: ದೇಹದಲ್ಲಿ ಹೀಗೆಲ್ಲಾ ಆಗ್ತಿದ್ಯಾ? ಇದು ವಿಟಮಿನ್ ಡಿ ಕೊರತೆಯಿಂದ ಇರಬಹುದು! ಯಾವುದಕ್ಕೂ ಚೆಕ್ ಮಾಡಿ

ಸೀಮಿತ ಸೂರ್ಯನ ಬೆಳಕು, ಧರಿಸುವ ಉಡುಪುಗಳು, ದೈನಂದಿನ ಅಭ್ಯಾಸಗಳು ಮತ್ತು ವಿಟಮಿನ್ ಡಿ ಕೊರತೆ ಇರುವ ಆಹಾರಗಳು ಮಹಿಳೆಯರ ಆರೋಗ್ಯವನ್ನು ವಿಶೇಷವಾಗಿ ದುರ್ಬಲಗೊಳಿಸುತ್ತದೆ.

ಸುದ್ದಿ18 1 Feb 2026 10:53 pm

Skin Care: ಈ ಹಣ್ಣುಗಳನ್ನು ತಿನ್ನಿ; ರುಚಿ ಜೊತೆ ಆರೋಗ್ಯಕ್ಕೂ ಒಳ್ಳೆಯದು, ಸೌಂದರ್ಯಕ್ಕೂ ಒಳ್ಳೆಯದು!

ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ, ಪೇರಲ, ಕಲ್ಲಂಗಡಿ ಹಣ್ಣುಗಳು ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆಗೆ ಸಹಾಯ ಮಾಡುತ್ತವೆ ಎಂದು ಲೇಖನ ತಿಳಿಸುತ್ತದೆ.

ಸುದ್ದಿ18 1 Feb 2026 5:32 pm

Heart Health Risk: ಜಿಮ್‌ನಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ; ಲಬ್​ಡಬ್​ ಹೃದಯದ ಶಬ್ಧ ನಿಲ್ಲಬಹುದು!

ವಿಶೇಷವಾಗಿ ನೀವು ಜಿಮ್‌ನಲ್ಲಿ ತಪ್ಪಾಗಿ ವ್ಯಾಯಾಮ ಮಾಡಿದರೆ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವು ವೇಗವಾಗಿ ಹೆಚ್ಚಾಗಬಹುದು. ನೀವು ಹೆಚ್ಚು ಬೆವರಿದರೆ, ನಿಮ್ಮ ವ್ಯಾಯಾಮವು ಉತ್ತಮವಾಗಿರುತ್ತದೆ ಅಥವಾ ನೀವು ಎತ್ತುವ ತೂಕ ಹೆಚ್ಚಾದಷ್ಟೂ ಉತ್ತಮ ಎಂದು ಅನೇಕ ಮಂದಿ ಭಾವಿಸುತ್ತಾರೆ.

ಸುದ್ದಿ18 1 Feb 2026 4:47 pm

Union Budget 2026: ಕ್ಯಾನ್ಸರ್​ ಹಾಗೂ ಮಧುಮೇಹಿಗಳಿಗೆ ಗುಡ್​ ನ್ಯೂಸ್​; ಇಳಿಯಲಿದೆ ಔಷಧಗಳ ರೇಟ್​!

ಸತತ 9ನೇ ಬಾರಿಗೆ ಕೇಂದ್ರ ಬಜೆಟ್​ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು, ಕ್ಯಾನ್ಸರ್ ಹಾಗೂ ಮಧುಮೇಹ ಔಷಧಿಗಳು ಅಗ್ಗವಾಗಲಿದೆ ಎಂದು ಹೇಳಿದ್ದಾರೆ.

ಸುದ್ದಿ18 1 Feb 2026 12:30 pm

Health Tips: ಅಪರೂಪಕ್ಕೆ ಕಾಣಿಸಿಕೊಳ್ಳೋ ಈ ಸಣ್ಣ ಲಕ್ಷಣಗಳು ಕ್ಯಾನ್ಸರ್​ ಆಗಿರಬಹುದು; ಈಗಿನಿಂದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಿ!

ಪ್ರತಿ ವರ್ಷ ಲಕ್ಷಾಂತರ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿಯೇ ದಾಖಲಾಗುತ್ತಿವೆ. ಹಿಮೋಗ್ಲೋಬಿನ್ ಕುಸಿತ, ತೂಕ ಇಳಿಕೆ, ದೌರ್ಬಲ್ಯ ಮೊದಲಾದವು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳಾಗಿವೆ. ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮತ್ತು ತ್ವರಿತ ತಪಾಸಣೆ ಅಗತ್ಯ.

ಸುದ್ದಿ18 1 Feb 2026 11:33 am

Health Care: ಈ ಟೈಮ್​ನಲ್ಲೇ ಕುಡಿಯಬೇಕಂತೆ ಎಳನೀರು; ಆಗ್ಲೇ ದೇಹದಲ್ಲಿ ಈ ಬದಲಾವಣೆಗಳಾಗೋದು!

ಎಳನೀರು ದೇಹಕ್ಕೆ ತ್ವರಿತ ಶಕ್ತಿ, ಪೌಷ್ಟಿಕಾಂಶ, ಎಲೆಕ್ಟ್ರೋಲೈಟ್ ಸಮತೋಲನ, ಜೀರ್ಣಕ್ರಿಯೆ ಸುಧಾರಣೆ, ಹೃದಯ ಹಾಗೂ ಚರ್ಮ ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ.

ಸುದ್ದಿ18 1 Feb 2026 10:08 am

Health Camp: ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಈ ಶಿಬಿರ ಉಚಿತ; ನಾಳೆಯೇ ಇಲ್ಲಿ ಬನ್ನಿ!

ಶ್ರೀಮಂತ ಫೌಂಡೇಶನ್ ಜನವರಿ 31ರಂದು ಬೆಳಗಾವಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಿದೆ, ಸೇವಾಸದನ ಮತ್ತು ನಂದಾದೀಪ ನೇತ್ರಾಲಯ ಸಹಭಾಗಿತ್ವದಲ್ಲಿದೆ.

ಸುದ್ದಿ18 30 Jan 2026 5:14 pm

Health Care: ಡಯಾಬಿಟಿಸ್​ ಇರುವವರು ಮೊಸರು ತಿನ್ನಬಾರದಾ? ಮಧುಮೇಹಿಗಳೇ ನೀವಿದು ತಿಳಿಯಲೇಬೇಕು!

ಮೊಸರು ತೂಕ, ನೆಗಡಿ, ಮಧುಮೇಹ, ರಾತ್ರಿ ಸೇವನೆಗೆ ಹಾನಿಕಾರಕವಲ್ಲ. ಪ್ರತಿದಿನ ಮೊಸರು ತಿನ್ನುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.

ಸುದ್ದಿ18 30 Jan 2026 10:44 am

Pregnancy Care: ಗರ್ಭಪಾತ ಆಗೇ ಹೋಯ್ತು ಅಂದುಕೊಂಡಿದ್ರು, ಆದ್ರೆ ಡಾಕ್ಟರ್ ಮಾಡಿದ್ರು ಮ್ಯಾಜಿಕ್! ಮುಂದೇನಾಯ್ತು ಗೊತ್ತಾ?

33 ವರ್ಷದ ಗರ್ಭಿಣಿಯೊಬ್ಬರು ಅತ್ಯಂತ ಸವಾಲಿನ ಸ್ಥಿತಿಯನ್ನು ದಾಟಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಗರದ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಮಹಿಳಾ ಆರೋಗ್ಯ ಮತ್ತು ಪ್ರಸೂತಿ ತಜ್ಞೆ ಡಾ. ನಿಶಾ ಬುಚಾಡೆ ತಿಳಿಸಿದ್ದಾರೆ.

ಸುದ್ದಿ18 29 Jan 2026 4:30 pm

Hair Care: ಬೆಳಗ್ಗ ಎದ್ದಾಗ ಕೂದಲು ತುಂಬಾನೇ ಉದುರಿ ಹೋಗಿರುತ್ತಾ? ಹಾಗಾದ್ರೆ, ರಾತ್ರಿ ಹೊತ್ತು ಈ ಅಭ್ಯಾಸ ರೂಢಿಸಿಕೊಳ್ಳಿ!

ರಾತ್ರಿ ಮಲಗುವ ಮುನ್ನ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕಾಗಿ ರೇಷ್ಮೆ ದಿಂಬಿನ ಹೊದಿಕೆ, ಕೂದಲು ಒಣಗಿಸಿಕೊಳ್ಳುವುದು, ಮಸಾಜ್, ಹೇರ್ ಸೀರಮ್ ಬಳಕೆ ಮುಂತಾದ ಅಭ್ಯಾಸಗಳು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುತ್ತವೆ.

ಸುದ್ದಿ18 29 Jan 2026 12:52 pm

Health Care: ಚರ್ಮದ ಕ್ಯಾನ್ಸರ್ ಬರಲು ಕಾರಣವೇನು? ಈ ಲಕ್ಷಗಳು ಪತ್ತೆಯಾದ ರಕ್ಷಣ ಎಚ್ಚೆತ್ತುಕೊಳ್ಳಿ!

ಸೂರ್ಯನ ಬೆಳಕು, ಕೆಲವು ಆನುವಂಶಿಕ ಅಂಶಗಳು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದ ಉಂಟಾಗುವ ಡಿಎನ್‌ಎ ಹಾನಿ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಸುದ್ದಿ18 29 Jan 2026 10:03 am

ಬಾಯಿ ಚಪ್ಪರಿಸಿ ಸೇವಿಸುವ ಈ ಐದು ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೇ?!

ಇತ್ತೀಚೆಗೆ ಪೌಷ್ಠಿಕ ತಜ್ಞರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ವಿವರಿಸಿರುವ ಪ್ರಕಾರ ಎನರ್ಜಿ ಡ್ರಿಂಕ್ಗಳು, ಡಿಟಾಕ್ಸ್ ಪಾನೀಯಗಳು ಆರೋಗ್ಯಕರವಲ್ಲ. ಇವುಗಳನ್ನು ತ್ಯಜಿಸುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ! ಪೌಷ್ಠಿಕ ತಜ್ಞೆ ಮತ್ತು ಲೇಖಕಿಯಾಗಿರುವ ಅಮಿತಾ ಗಾಡ್ರೆ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಾವು ತ್ಯಜಿಸಿರುವ ಐದು ಆಹಾರಗಳ ಬಗ್ಗೆ ವಿವರ ನೀಡಿದ್ದಾರೆ. View this post on Instagram A post shared by Amita Gadre | Nutritionist (@amitagadre) ಅವರು ಹೇಳುವ ಪ್ರಕಾರ, ಮೊದಲನೆಯದಾಗಿ ಎನರ್ಜಿ ಡ್ರಿಂಕ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೆಫೈನ್ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಕೆಫೈನ್ ಸೇವನೆ ಆರೋಗ್ಯಕ್ಕೆ ಒಳಿತಲ್ಲ. ಎರಡನೆಯದಾಗಿ, “ಡಿಟಾಕ್ಸ್ ಜ್ಯೂಸ್ಗಳು ಅಥವಾ ತರಕಾರಿ ಜ್ಯೂಸ್ಗಳು ಅಥವಾ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದಿಲ್ಲ. ಏಕೆಂದರೆ ನನಗೆ ನನ್ನ ಕಿಡ್ನಿಗಳು (ಮೂತ್ರಪಿಂಡಗಳು) ಇಷ್ಟ. ನನ್ನ ಕಿಡ್ನಿಗಳ ಮೇಲೆ ಹೆಚ್ಚುವರಿ ಆಕ್ಸಲೇಟ್ ಲೊಡ್ಗಳನ್ನು ಹೇರಲು ಬಯಸುವುದಿಲ್ಲ. ಅದೇ ಕಾರಣಕ್ಕಾಗಿ ನಾನು ಡಿಟಾಕ್ಸ್ ಪಾನೀಯಗಳು ಮತ್ತು ತರಕಾರಿ ಪಾನೀಯಗಳನ್ನು ಕೂಡ ಸೇವಿಸುವುದಿಲ್ಲ. ಮತ್ತು ನಾನು ಹಣ್ಣಿನ ರಸಗಳನ್ನೂ ಸೇವಿಸುವುದಿಲ್ಲ. ಬೇಕೆಂದರೆ ಹಣ್ಣನ್ನೇ ತಿನ್ನುತ್ತೇನೆ” ಎನ್ನುತ್ತಾರೆ ಅಮಿತಾ. ಮೂರನೆಯದಾಗಿ, “ಕೆಂಪು ಬಣ್ಣ ಇರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹಸಿರು ತರಕಾರಿಗಳಿಗೆ ಕೆಂಪು ಬಣ್ಣವಿದ್ದರೂ ಸಹ ತ್ಯಜಿಸುತ್ತೇನೆ. ಅವುಗಳೆಲ್ಲವೂ ಬಣ್ಣ ಬೆರೆಸಿರುವುದಾಗಿರುತ್ತದೆ. ಕೇಕ್ಗಳು ಮತ್ತು ಆಹಾರಗಳ ಮೇಲೂ ಕೆಂಪು ಬಣ್ಣ ಇರುತ್ತದೆ. ಚಿಕನ್ ಲಾಲಿಪಪ್ಗಳ ಮೇಲೂ ಬಣ್ಣವಿರುತ್ತವೆ. ಹೀಗೆ ಬಣ್ಣ ಬೆರೆಸಿದ ಆಹಾರವನ್ನು ನಾನು ಎಂದಿಗೂ ಸೇವಿಸುವುದಿಲ್ಲ.” ನಾಲ್ಕನೆಯದಾಗಿ, “ಕುರುಕುರುಲು ತಿನಿಸುಗಳನ್ನು ಸೇವಿಸುವುದಿಲ್ಲ. ಮಿಕ್ಸ್ಚರ್ಗಳು, ಸೋಂಟೆಗಳು, ಚಕ್ಕುಲಿಗಳು ಅಥವಾ ಮುರುಕುಗಳು, ಬುಜಿಯಾಗಳು ಇರಬಹುದು, ಅವುಗಳನ್ನು ತ್ಯಜಿಸುತ್ತೇನೆ. ಏಕೆಂದರೆ, ಇವುಗಳಲ್ಲಿ ಹೆಚ್ಚು ಟ್ರಾನ್ಸ್ ಕೊಬ್ಬುಗಳು ಇಲ್ಲ ಎಂದು ಕಂಡುಬಂದರೂ ಈ ಉತ್ಪನ್ನಗಳು ಹೃದಯದ ಮೇಲೆ ಹೆಚ್ಚಿನ ಹೊರೆ ನೀಡುತ್ತದೆ. ನನಗೆ ನನ್ನ ಹೃದಯ ಎಂದರೆ ಇಷ್ಟ, ನನ್ನ ಹೃದಯದ ರಕ್ತ ನಾಳಗಳ ಮೇಲೆ ಹೆಚ್ಚುವರಿ ಪದರಗಳು ರೂಪುಗೊಳ್ಳುವುದು ನನಗೆ ಬೇಕಾಗಿಲ್ಲ” ಎನ್ನುತ್ತಾರೆ. ಐದನೆಯದಾಗಿ, “ನಾನು ತಾಜಾ ಕ್ರೀಮ್ಗಳು ಅಥವಾ ವಿಪ್ಡ್ ಕ್ರೀಮ್ಗಳನ್ನು (ಹಾಲಿನ ಕೆನೆ) ಹೊಂದಿರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹೈನುಗಾರಿಕಾ ಉತ್ಪನ್ನಗಳಲ್ಲಿರುವ ಕ್ರೀಮ್ಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ವಿಪ್ಡ್ ಟಾಪಿಂಗ್ ಕ್ರೀಮ್ಗಳಲ್ಲಿ ವ್ಯತ್ಯಾಸವಿದೆ. ಜೊತೆಗೆ ಯಾವುದೇ ಕೋಲ್ಡ್ ಕಾಫಿಗಳು ಅಥವಾ ಐಸ್ ಕ್ರೀಮ್ಗಳು ಅಥವಾ ಪೇಸ್ಟ್ರಿಗಳು ಮತ್ತು ಡೆಸರ್ಟ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅವುಗಳ ಮೇಲಿರುವ ವಿಪ್ಡ್ ಕ್ರೀಮ್ಗಳು ತಾಳೆ ಎಣ್ಣೆಯಿಂದ ತಯಾರಾಗುತ್ತವೆ. ಹೀಗಾಗಿ ಅವುಗಳನ್ನು ಸೇವಿಸುವುದಿಲ್ಲ” ಎನ್ನುತ್ತಾರೆ ಅಮಿತಾ.

ವಾರ್ತಾ ಭಾರತಿ 28 Jan 2026 6:33 pm

Health Care: ಹೈಬಿಪಿ ಇರೋರು ಜೀವನ ಪರ್ಯಂತ ಟ್ಯಾಬ್ಲೆಟ್ ತಿನ್ನದಿದ್ರೂ ನಡೆಯುತ್ತಾ? ವೈದ್ಯರು ಹೀಗಂತಾರೆ ನೋಡಿ

ಅಧಿಕ ರಕ್ತದೊತ್ತಡ ಯುವಕರಲ್ಲೂ ಹೆಚ್ಚುತ್ತಿದೆ. ಆದರೆ ಜೀವನಶೈಲಿ ಬದಲಾವಣೆ ಮತ್ತು ವೈದ್ಯರ ಸಲಹೆಯೊಂದಿಗೆ ಮಾತ್ರ ಔಷಧಿ ಸೇವಿಸುವುದು ಉತ್ತಮ. ಜೊತೆಗೆ ಬಿಪಿ ನಿಯಂತ್ರಿಸಲು ನಿಯಮಿತ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಅಗತ್ಯ.

ಸುದ್ದಿ18 28 Jan 2026 4:58 pm

Baby Planning: ಮಗು ಬೇಕು ಅನಿಸ್ತಿದ್ಯಾ? ಹಾಗಾದ್ರೆ ಮೊದ್ಲು ನೀವು ಮಾಡಬೇಕಾಗಿರುವ 5 ಕೆಲಸಗಳಿವು!

ಮಗು ಹೊಂದಲು ಸರಿಯಾದ ವಯಸ್ಸು 20-30 ವರ್ಷ. ಆದರೆ ಮಗು ಹೊಂದುವ ಮುನ್ನ ದೈಹಿಕ ಆರೋಗ್ಯ, ಆರ್ಥಿಕ ಸ್ಥಿರತೆ, ಭಾವನಾತ್ಮಕ ಸಿದ್ಧತೆ ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸುದ್ದಿ18 28 Jan 2026 12:09 pm

Heart Attack: ಗೊರಕೆಗೂ, ಹಾರ್ಟ್ ಅಟ್ಯಾಕ್‌ಗೂ ಸಂಬಂಧ ಇದ್ಯಾ? ಯುವಕರೇ, ಇಲ್ಲಿದೆ ಬೆಚ್ಚಿ ಬೀಳೋ ಸುದ್ದಿ!

ರಾತ್ರಿ ಹೊತ್ತು ಮಲಗಿದಾಗ ಗೊರಕೆ ಹೊಡೆಯುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಗೊರಕೆ ಹೊಡೆಯುವಾಗ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದು ಆಮ್ಲಜನಕದ ಇಳಿಕೆಗೆ ಕಾರಣವಾಗುತ್ತದೆ.

ಸುದ್ದಿ18 27 Jan 2026 10:07 pm

ತಡೆತಡೆದು ಉಪವಾಸ ಮಾಡುವ ಅಭ್ಯಾಸವೆ?; ಹಾರ್ವರ್ಡ್ ವೈದ್ಯರ ಸಲಹೆ ಏನು?

ಸಾಂದರ್ಭಿಕ ಚಿತ್ರ | Photo Credit : freepik ಬಹಳಷ್ಟು ಮಂದಿ ತ್ವರಿತ ಫಲಿತಾಂಶಕ್ಕಾಗಿ ತಡೆತಡೆದು ಮಾಡುವ ಉಪವಾಸದ ಆಹಾರ ಕ್ರಮ ಪ್ರಯತ್ನಿಸುತ್ತಾರೆ. ಆದರೆ ಈ ಉಪವಾಸ ಪದ್ಧತಿಯ ಆಯ್ಕೆ ಸಮರ್ಥನೀಯವೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ತಡೆತಡೆದು ಮಾಡುವ ಉಪವಾಸ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಆಹಾರ ಪದ್ಧತಿಗಳಲ್ಲಿ ಒಂದಾಗಿದೆ. ತೂಕ ಇಳಿಸುವುದರಿಂದ ತೊಡಗಿ ದೀರ್ಘಾಯುಷ್ಯದವರೆಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಸರಳ ಆಹಾರವೆಂದು ಪರಿಗಣಿಸಲಾಗಿದೆ. ಆದರೆ ಈ ಪ್ರಚಾರದಲ್ಲಿ ಕರಗಿ ಹೋಗುವ ಮೊದಲು ಅದು ಏನೆಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ತಡೆತಡೆದು ಮಾಡುವ ಉಪವಾಸವೆಂದರೆ ನೀವೇನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಯಾವಾಗ ತಿನ್ನುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವನೆಯಾಗಿರುತ್ತದೆ. ಅಂದರೆ ದಿನಕ್ಕೆ 8 ಗಂಟೆಗಳ ಉಪವಾಸ ಅಥವಾ ವಾರದಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಉಪವಾಸ ಸೇರಿರುತ್ತದೆ. ಬಹಳಷ್ಟು ಮಂದಿ ತ್ವರಿತ ಫಲಿತಾಂಶಕ್ಕಾಗಿ ಇದನ್ನು ಪ್ರಯತ್ನಿಸುತ್ತಾರೆ. ಆದರೆ ಈ ಉಪವಾಸ ಪದ್ಧತಿಯ ಆಯ್ಕೆ ಸಮರ್ಥನೀಯವೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ವೈದ್ಯರಾದ ತ್ರಿಶಾ ಪಾಸ್ರಿಚಂದ್ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋದಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ತ್ರಿಶಾ ಅವರು ಬೆತ್ ಇಸ್ರೇಲ್ ಡೀಕನೆಸ್ ಮೆಡಿಕಲ್ ಸೆಂಟರ್ನಲ್ಲಿ ವೈದ್ಯೆ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ವೀಡಿಯೋದಲ್ಲಿ ತಡೆತಡೆದು ಮಾಡುವ ಉಪವಾಸದ ಬಗ್ಗೆ ದೀರ್ಘ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. View this post on Instagram A post shared by The Washington Post (@washingtonpost) ಸಮಯದ ಮೇಲೆ ಗಮನಹರಿಸುವ ಉಪವಾಸ ತ್ರಿಶಾ ವಿವರಿಸುವ ಪ್ರಕಾರ, ತಡೆತಡೆದು ಮಾಡುವ ಉಪವಾಸ ಊಟ ಮಾಡುವ ಸಮಯದ ಮೇಲೆ ಗಮನಹರಿಸುತ್ತದೆ. 8 ಗಂಟೆ ಹೊಟ್ಟೆ ಖಾಲಿ ಇಟ್ಟ ನಂತರ ಊಟ ಮಾಡುವುದು ಅಥವಾ ವಾರಕ್ಕೆ ಒಂದೆರಡು ದಿನ ಉಪವಾಸ ಮಾಡುವುದು ಇಂಟರ್ಮಿಟೆಂಟ್ ಉಪವಾಸದ ಸಾಮಾನ್ಯ ವಾಡಿಕೆಯಾಗಿರುತ್ತದೆ. ಸಂಶೋಧನೆಗಳು ತೋರಿಸುವ ಪ್ರಕಾರ ಕೆಲವು ತಿಂಗಳ ಕಾಲ ತೂಕ ಇಳಿಕೆಗೆ ಇದು ನೆರವಾಗಬಹುದು. ಆದರೆ ಸಮಸ್ಯೆ ಏನೆಂದರೆ, “ಯಾವಾಗಲೂ ತೂಕ ಇಳಿಕೆಯಾಗುವುದಿಲ್ಲ. ಉಪವಾಸ ನಿಂತ ಮೇಳೆ ತೂಕ ಮರಳಿ ಸ್ವಸ್ಥಾನಕ್ಕೆ ತಿರುಗುತ್ತದೆ” ಎನ್ನುತ್ತಾರೆ ತ್ರಿಶಾ. ಅಷ್ಟಲ್ಲದೆ, ತಡೆತಡೆದು ಮಾಡುವ ಉಪವಾಸದಿಂದ ಹೃದಯ ರೋಗ, ಕ್ಯಾನ್ಸರ್ನಿಂದ ಮುಕ್ತಿಪಡೆಯಬಹುದು ಅಥವಾ ದೀರ್ಘಾಯುಷಿಗಳಾಗಬಹುದು ಎನ್ನುವುದೂ ಸುಳ್ಳು. ಈ ಕುರಿತು ಅಧ್ಯಯನಗಳು ಯಾವುದೇ ಪುರಾವೆ ನೀಡಿಲ್ಲ. ಮುಖ್ಯವಾಗಿ ಇಂತಹ ಉಪವಾಸದ ದೀರ್ಘಾವಧಿ ಲಾಭಗಳು ಅಸ್ಪಷ್ಟವಾಗಿಯೇ ಇವೆ. ದೀರ್ಘಕಾಲ ಅಭ್ಯಾಸ ಸಾಧ್ಯವಿಲ್ಲವೇಕೆ? ತಡೆತಡೆದು ಮಾಡುವ ಉಪವಾಸದ ದೊಡ್ಡ ವಿಚಾರವೆಂದರೆ ನಿರಂತರವಾಗಿ ಲಾಭ ಸಿಗದೆ ಇರುವುದು. ತಡೆತಡೆದು ಮಾಡುವ ಉಪವಾಸವನ್ನು ನಿರಂತರವಾಗಿ ಮಾಡಲು ಸಾಧ್ಯವಾಗದು. ಕೆಲಸದ ವೇಳೆ, ಸಾಮಾಜಿಕ ಜೀವನದ ಯೋಜನೆಗಳು ಮತ್ತು ನಿತ್ಯದ ಒತ್ತಡದಿಂದಾಗಿ ತಡೆತಡೆದು ಮಾಡುವ ಉಪವಾಸವನ್ನು ದೀರ್ಘಕಾಲ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಬಹಳ ಕಠಿಣ ಎನಿಸಿದಾಗ ಜನರು ಅದನ್ನು ಬಿಡುತ್ತಾರೆ. ಹಾಗಾದಾಗ ತೂಕ ಮತ್ತೆ ಏರುತ್ತದೆ. ಸರಳ ಪರ್ಯಾಯ ಆಯ್ಕೆಗಳೇನು? ತಡೆತಡೆದು ಮಾಡುವ ಉಪವಾಸದ ಬದಲಾಗಿ ತ್ರಿಶಾ ಸರಳ ಆಯ್ಕೆಗಳನ್ನು ಕೊಡುತ್ತಾರೆ. ಆಹಾರ ಯಾವಾಗ ತಿನ್ನಬೇಕು ಎನ್ನುವ ಬದಲಾಗಿ ಆಹಾರ ಕ್ರಮದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ತ್ರಿಶಾ. ಬೆಳಗಿನ ಉಪಹಾರ ಬೇಗ ಸೇವಿಸುವುದು ಬೆಳಗ್ಗೆ ಎದ್ದು ಒಂದು ಗಂಟೆಯೊಳಗೆ ಉಪಾಹಾರ ಸೇವಿಸಿ. ಅದರಲ್ಲಿ ಅತ್ಯಧಿಕ ಪ್ರೊಟೀನ್ ಮತ್ತು ಫೈಬರ್ ಅಂಶಗಳು ಇರಲಿ. ಸಕ್ಕರೆ ಅಂಶದ ದವಸ ಧಾನ್ಯಗಳು ಅಥವಾ ಪೇಸ್ಟ್ರಿಗಳನ್ನು ಸೇವಿಸಬಾರದು. ಗುಣಮಟ್ಟದ ಉಪಾಹಾರದಿಂದ ಹಸಿವೆ ಕಡಿಮೆಯಾಗುತ್ತದೆ. ಮಧ್ಯಾಹ್ನ ತಿನಿಸುಗಳನ್ನು ತಿನ್ನುವ ಅಗತ್ಯ ಕಾಣುವುದಿಲ್ಲ. ಮಲಗುವ ಸಮಯದಲ್ಲಿ ತಿನ್ನಬಾರದು ನಿದ್ರೆಗೆ ಜಾರುವ 2-3 ಗಂಟೆಗೆ ಮೊದಲೇ ಆಹಾರ ಸೇವಿಸಬೇಕು. ತಡರಾತ್ರಿ ಊಟ ಮಾಡುವ ಅಭ್ಯಾಸ ತೊರೆಯಬೇಕು. ತಡರಾತ್ರಿ ಊಟ ಮಾಡುವುದರಿಂದ ದೇಹದಲ್ಲಿ ಕೊಬ್ಬು ತುಂಬುತ್ತದೆ ಮತ್ತು ಕ್ಯಾಲರಿ ಕರಗುವುದಿಲ್ಲ. ಹೀಗಾಗಿ ಬೊಜ್ಜು ಬರುವ ಸಾಧ್ಯತೆಯಿದೆ. ಸಮಯಕ್ಕಿಂತ ಆಹಾರ ಮುಖ್ಯ ತ್ರಿಶಾ ಹೇಳುವ ಪ್ರಕಾರ, ನಾವು ಏನು ತಿನ್ನುತ್ತೇವೆ ಎನ್ನುವುದು ಮುಖ್ಯವೇ ವಿನಾ ಯಾವಾಗ ತಿನ್ನುತ್ತೇವೆ ಎನ್ನುವುದು ಹೆಚ್ಚು ಮುಖ್ಯವಾಗುವುದಿಲ್ಲ. ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಇಡೀ ಧಾನ್ಯಗಳು, ಕಡಲೆಗಳು ಮತ್ತು ಬೀಜಗಳ ಸೇವನೆ ಮುಖ್ಯವಾಗುತ್ತದೆ. ಸಂಸ್ಕರಿತ ಆಹಾರ ಕಡಿಮೆ ಮಾಡಬೇಕು. ಕೃಪೆ: ndtv.com

ವಾರ್ತಾ ಭಾರತಿ 27 Jan 2026 6:55 pm

Women Health: ಹೆರಿಗೆ ನಂತರ ದೇಹದಲ್ಲಾಗುವ ಈ ಬದಲಾವಣೆಗಳು ಕಾಮನ್ ಅಲ್ಲ; ಇವು ಗಂಭೀರ ಸಮಸ್ಯೆಯ ಲಕ್ಷಣಗಳು!

ಹೆರಿಗೆಯ ನಂತರ ತಾಯಿಯ ದೇಹ ಮತ್ತು ಮನಸ್ಸಿನಲ್ಲಿ ಬರುವ ಗಂಭೀರ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು ಎಂದು ಡಾ. ಆಂಚಲ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ18 27 Jan 2026 10:56 am

Weight Loss Tips: ನೋ ಶಾರ್ಟ್ ಕಟ್! ನಡಿಗೆಯಿಂದಲೇ 150 ಕೆಜಿಯಿಂದ 68 ಕೆಜಿಗೆ ತೂಕ ಇಳಿಸಿಕೊಂಡ ಮಹಿಳೆ! ಹೇಗಿತ್ತು ಡಯಟ್ ಪ್ಲಾನ್!

ನಾವಿಲ್ಲಿ 85 ಕೆ.ಜಿ ತೂಕ ಇಳಿಸಿಕೊಂಡು, ಸುಸ್ಥಿರ ಜೀವನಶೈಲಿಯೇ ನನ್ನ ತೂಕ ಇಳಿಕೆಗೆ ಕಾರಣವೆಂದು ಹೇಳಿದ ಸ್ಪೂರ್ತಿದಾಯಕ ಮಹಿಳೆ ಬಗ್ಗೆ ತಿಳಿಯೋಣ ಬನ್ನಿ.

ಸುದ್ದಿ18 26 Jan 2026 11:21 pm

Pregnancy: ಆರೋಗ್ಯವಂತರಾಗಿದ್ದರೂ ಗರ್ಭದಾರಣೆ ಸಾಧ್ಯವಾಗ್ತಿಲ್ಲವೇ? ಹಾಗಾದ್ರೆ, ಈ ಸಮಸ್ಯೆಯೇ ಕಾರಣವಾಗಿರಬಹುದು!

ಮೇಲ್ನೋಟಕ್ಕೆ ಆರೋಗ್ಯಕರವಾಗಿದ್ದರೂ ಗರ್ಭಧಾರಣೆಯಾಗುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ಗರ್ಭಧಾರಣೆ ಯಶಸ್ವಿಯಾಗಬೇಕು ಎಂದಾದರೆ ಸಮತೋಲಿತ ಜೈವಿಕ ಘಟನೆಗಳ ಅನುಕ್ರಮ ಮುಖ್ಯವಾಗಿದೆ.

ಸುದ್ದಿ18 26 Jan 2026 5:48 pm

Health Care: ಈ ಜ್ಯೂಸ್​ ಅಮೃತಕ್ಕೆ ಸಮಾನ; ಕುಡಿದಷ್ಟು ತುಂಬಾ ಒಳ್ಳೆಯದು, ಅದ್ರಲ್ಲೂ ಈ ಸಮಸ್ಯೆ ಇರುವವರಿಗೆ ಸಂಜೀವಿನಿ!

ನೆಲ್ಲಿಕಾಯಿ ಜ್ಯೂಸ್ ವಿಟಮಿನ್ ಸಿ ಸಮೃದ್ಧ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಯಕೃತ್ತು, ಹೃದಯ, ಕೂದಲು, ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ದಿನ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

ಸುದ್ದಿ18 26 Jan 2026 4:35 pm

Health Care: ಕಿಚನ್​ನಲ್ಲೇ ಇದೇ ಕ್ಯಾನ್ಸರ್​ಗೆ ಮದ್ದು; ​ ಮಾರಕ ಕಾಯಿಲೆಯಿಂದ ಪ್ರಾಣ ಉಳಿಸಿಕೊಳ್ಳಲು ಈ ಕೆಲಸ ಮಾಡಿ!

ಅರಿಶಿನ, ಬೆಳ್ಳುಳ್ಳಿ, ಶುಂಠಿ, ಟೊಮೆಟೊ, ತುಳಸಿ, ಎಲೆಕೋಸು, ಹೂಕೋಸು, ಬ್ರೊಕೊಲಿ, ದಾಲ್ಚಿನ್ನಿ, ಸಿಟ್ರಸ್ ಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸುವುದಾದರೆ ಈ ಸ್ಟೋರಿ ಓದಿ.

ಸುದ್ದಿ18 26 Jan 2026 3:09 pm

Health Care: ಯಾವಾಗಲೂ ಆಲಸ್ಯ ಅನುಭವ ನಿಮ್ಮನ್ನು ಕಾಡುತ್ತಿದೆಯೇ ? ಆಕ್ಟಿವ್​ ಆಗಿರಲು ಈ ಪದಾರ್ಥಗಳನ್ನು ತಿನ್ನಿ!

ದಿನವಿಡೀ ನೀವು ಆಲಸ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಓಟ್ಸ್, ಎಳನೀರು ಮತ್ತು ಚಿಯಾ ಬೀಜಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಅಲ್ಲದೇ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಸಹ ಅಗತ್ಯ. ಹೀಗಿದ್ದರೂ ದೇಹದ ಆಯಾಸ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಅವಶ್ಯಕವಾಗಿದೆ.

ಸುದ್ದಿ18 26 Jan 2026 1:09 pm

Health Care: ಒಂದೆರಡಲ್ಲ ಈ ಎಲ್ಲಾ ಎಲೆಗಳು ಮಧುಮೇಹಿಗಳ ಪಾಲಿಗೆ ವರವಿದ್ದಂತೆ; ತಿಂದ್ರೆ ಹೈ ಇದ್ದರೂ ನಾರ್ಮಲ್‌ ಆಗುತ್ತೆ ಶುಗರ್!‌

ಮಧುಮೇಹ ನಿಯಂತ್ರಣಕ್ಕೆ ಏಪ್ರಿಕಾಟ್ ಎಲೆಗಳು, ಬೇವಿನ ಎಲೆಗಳು, ಮೆಂತ್ಯ ಎಲೆಗಳು, ಮಾವಿನ ಎಲೆಗಳು ಮತ್ತು ಕರಿಬೇವು ಎಲೆಗಳು ಸಹಾಯಕವಾಗಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಸುದ್ದಿ18 26 Jan 2026 1:09 pm

Sleeping Tips: ನಿದ್ದೆ ಬರ್ತಾ ಇಲ್ವಾ? ಹಾಗಾದ್ರೆ ಇದೇ ಕಾರಣಕ್ಕೆ ಇರಬಹುದು!

Sleeping Tips: ಮಾನಸಿಕ ಒತ್ತಡ, ಖಿನ್ನತೆ ಅಥವಾ ಅತಿಯಾದ ಕೆಲಸ ನಿಮ್ಮ ನಿದ್ರಾಹೀನತೆಗೆ ಪ್ರಮುಖವಾದ ಕಾರಣ ಎಂದು ಇದುವರೆಗೂ ಹೇಳಲಾಗುತ್ತಿತ್ತು. ಕೆಲವೊಬ್ಬರು ರಾತ್ರಿಯಿಡಿ ಸರಿಯಾಗಿ ನಿದ್ರೆ ಬರದೇ ಒದ್ದಾಡುತ್ತಾರೆ, ಆ ನಿದ್ರೆಯಿಲ್ಲದ ರಾತ್ರಿಗಳಿಗೆ ಇನ್ನೊಂದು ಕಾರಣ ಇಲ್ಲಿದೆ ನೋಡಿ. ಆದೇನಪ್ಪಾ ಅಂತೀರಾ?

ಸುದ್ದಿ18 25 Jan 2026 10:59 pm