Coconut Water Myths: ಈ ಸಮಸ್ಯೆ ಇದ್ದವರಿಗೆ ಎಳನೀರು ಡೇಂಜರ್, ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಏನಾಗುತ್ತೆ ಗೊತ್ತಾ?
ಎಳನೀರು ಬೇಸಿಗೆಯಲ್ಲಿ ದೇಹಕ್ಕೆ ಎನರ್ಜಿ ನೀಡುವ ಪಾನೀಯಗಿದ್ದರೂ ಕೆಲ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆ ಪಡೆಯದೇ ಕುಡಿಯಬಾರದು. ಏಕೆಂದರೆ ಇಂತಹವರಿಗೆ ಪ್ರಯೋಜನಕ್ಕಿಂತಲೂ ಅನಾನುಕೂಲವನ್ನುಂಟು ಮಾಡವುದೇ ಹೆಚ್ಚು.
ಇತ್ತೀಚೆಗಷ್ಟೇ ಹೈದರಾಬಾದ್ ಪೊಲೀಸರು ಅಕ್ರಮವಾಗಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿದ್ದ ಜಾಲವನ್ನು ಬೇಧಿಸಿದ್ದರು.ಈ ಘಟನೆಯ ನಂತರ ತಾವು ತಮ್ಮ ಮನೆಯಲ್ಲಿ ಬಳಸುತ್ತಿರುವ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅಸಲಿಯೋ, ನಕಲಿಯೋ ಎಂಬ ಸಂಶಯ ಅನೇಕ ಮಂದಿಗೆ ಶುರುವಾಗಿದೆ. ನಿಮಗೂ ಇದೇ ಸಂಶಯವಿದ್ದರೆ ಈ ಟಿಪ್ಸ್ ನಿಮಗಾಗಿ.
ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ಆಹಾರ ಸೇವಿಸುತ್ತಾರೆ ಎನ್ನುವುದು ತುಂಬಾ ಮುಖ್ಯ. ನಾವು ಸೇವಿಸುವ ಆಹಾರ ಸರಿಯಾಗಿಲ್ಲದಿದ್ದರೆ, ಔಷಧಿಗಳನ್ನು ಸೇವಿಸಿದರೂ ಹೆಚ್ಚು ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
Skin Care: ಸೋಪ್-ಫೇಸ್ ವಾಶ್ಗೆ ಹೇಳಿ ಗುಡ್ ಬೈ; ಈ ಸರಳ ಪದಾರ್ಥಗಳಿಂದ ಮುಖ ತೊಳೆದ್ರೆ ಕಾಂತಿ ಹೆಚ್ಚುತ್ತೆ!
ಕೆಲ ಸರಳವಾದ ಮನೆಮದ್ದುಗಳನ್ನು ಅನುಸರಿಸುವ ಮೂಲಕವೂ ನಾವು ನಮ್ಮ ತ್ವಚೆಯನ್ನು ತಕ್ಷಣವೇ ಹೊಳೆಯುವಂತೆ ಮಾಡಬಹುದು ಮತ್ತು ಮೃದುವಾದ, ಗುಲಾಬಿ ಬಣ್ಣವನ್ನು ಮರಳಿ ತರಬಹುದು.
Health Care: ನಿಮಗೆ ಎದೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ? ಈ ಹಣ್ಣು ತಿಂದ್ರೆ ತೊಂದರೆ ಡಬಲ್ ಆಗುತ್ತೆ ಹುಷಾರ್!
ಆರೋಗ್ಕೆಯಕರವೆಂದು ನಾವು ಭಾವಿಸಿರುವ ಕೆಲ ಹಣ್ಣುಗಳು ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಹೆಚ್ಚಿಸಬಹುದು. ಹಾಗಾಗಿ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ.
Children Health Care: ಮಕ್ಕಳ ಟಿಫಿನ್ ಬಾಕ್ಸ್ಗೆ ಚಿಪ್ಸ್-ಬಿಸ್ಕತ್ತು ಹಾಕಿದ್ರೆ ಇದೇ ಆಗೋದು; ತಾಯಂದಿರೇ ಎಚ್ಚರ!
ಅನೇಕ ಪೋಷಕರು ತಮ್ಮ ಮಕ್ಕಳ ಲಂಚ್ ಬಾಕ್ಸ್ನಲ್ಲಿ ಸ್ನ್ಯಾಕ್ಸ್ ಆಗಿ ಸೇವಿಸಲು ಬಿಸ್ಕತ್ತು, ಚಿಪ್ಸ್ ಮತ್ತು ಪ್ಯಾಕ್ಡ್ ಫುಡ್ಗಳನ್ನು ನೀಡುತ್ತಾರೆ. ಆದರೆ ಇದೆಷ್ಟು ಡೇಂಜರ್ ಗೊತ್ತಾ? ಮಕ್ಕಳ ಆರೋಗ್ಯದ ಮೇಲೆ ಇವು ಹೇಗೆಲ್ಲಾ ಪರಿಣಾಮ ಬೀರುತ್ತೆ ಎಂದು ತಿಳಿದರೆ ಪೋಷಕರು ಶಾಕ್ ಆಗ್ತೀರಿ.
ಪುರುಷರ ದೇಹದಲ್ಲಿಯೂ ಅದೇ ರೀತಿ ಹಾರ್ಮೋನುಗಳ ಬದಲಾವಣೆಗಳು ಸಂಭವಿಸುತ್ತವೆ. ಅಂದರೆ ಪುರುಷರು ಎಂದಿಗೂ ಅಳಬಾರದು ಅಥವಾ ಪುರುಷರು ಯಾವಾಗಲೂ ಧೈರ್ಯದಿಂದ ಇರಬೇಕು ಎಂಬ ಸಾಮಾಜಿಕ ಒತ್ತಡದಿಂದಾಗಿ, ಅನೇಕ ಪುರುಷರು ತಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ.
ಭಾರತದಲ್ಲಿ 40% ಜನ ಫ್ಯಾಟಿ ಲಿವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ತಡರಾತ್ರಿ ಊಟ, ಬೆಳಗ್ಗೆ ಕಾರ್ಬೋಹೈಡ್ರೇಟ್ ಸೇವನೆ, ಊಟದ ನಂತರ ಮಲಗುವುದು ಹೀಗೆ ಅನೇಕ ಕಾರಣಗಳಾಗಿದೆ.
Food Tips: ಖಾಲಿ ಹೊಟ್ಟೆಗೆ ಈ ಆಹಾರ ತಿನ್ಬೇಡಿ, ಇಲ್ಲದಿದ್ದರೆ ಸಂಕಷ್ಟಕ್ಕೆ ಒಳಗಾಗ್ತೀರಿ!
ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕೆಲ ಆಹಾರಗಳ ಸೇವನೆಯನ್ನು ತಪ್ಪಿಸಿ. ಇಲ್ಲದಿದ್ದರೆ ಇದರಿಂದ ನಿಮ್ಮ ಹೊಟ್ಟೆಯ ಆರೋಗ್ಯವಷ್ಟೇ ಅಲ್ಲ, ಸಂಪೂರ್ಣ ದೇಹದ ಆರೋಗ್ಯವೇ ಹಾಳಾಗಬಹುದು.
Health Tips: ಬೇಸಿಗೆಯಲ್ಲಿ ಲವಂಗ ಡೇಂಜರ್! ತಿಂದವರಿಗೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಬೆಚ್ಚಿ ಬೀಳಿಸೋ ಮಾಹಿತಿ
ಅನೇಕ ಮಂದಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಲವಂಗ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿದ್ದಾರೆ. ಆದರೆ ಬೇಸಿಗೆಯಲ್ಲಿ ದೇಹದ ಶಾಖ ಸಮತೋಲನ, ಜೀರ್ಣಕ್ರಿಯೆ, ಕಣ್ಣು, ಬಾಯಿಯ ಆರೋಗ್ಯಕ್ಕೂ ಲವಂಗ ಸಹಾಯಕವಾಗಿದೆ.
Health Tips: ಈ ವಿಟಮಿನ್ ಕೊರತೆಯಿಂದ ಹಾರ್ಟ್ ಅಟ್ಯಾಕ್ ಆಗುತ್ತಾ? ನಿರ್ಲಕ್ಷಿಸಬೇಡಿ, ಈಗಲೇ ಎಚ್ಚೆತ್ತುಕೊಳ್ಳಿ!
ವಿಟಮಿನ್ ಕೆ ದೇಹದಲ್ಲಿನ ಪ್ರಮುಖ ಪ್ರೋಟೀನ್ಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಇದು ವಿಶೇಷ ಪಾತ್ರವಹಿಸುತ್ತದೆ. ದೇಹದಲ್ಲಿ ವಿಟಮಿನ್ ಕೆ ಕೊರತೆಯಿದ್ದರೆ, ಸಣ್ಣ ಗಾಯಗಳು ಸಹ ದೀರ್ಘಕಾಲದವರೆಗೆ ರಕ್ತಸ್ರಾವವಾಗುವ ಅಪಾಯವನ್ನು ಹೊಂದಿರುತ್ತವೆ.
Health Care: ಶ್ವಾಸಕೋಶ ಸ್ಟ್ರಾಂಗ್ ಆಗಬೇಕಾ? ದಿನಾ ಈ ಆಹಾರಗಳನ್ನು ತಿನ್ನಿ, ಉಸಿರಾಟದ ಸಮಸ್ಯೆ ದೂರವಾಗುತ್ತೆ!
ವಾಯು ಮಾಲಿನ್ಯದಿಂದ ಶ್ವಾಸಕೋಶದ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ಪಾಲಕ್ ಸೊಪ್ಪು, ಅಗಸೆಬೀಜಗಳು, ಆಮ್ಲಾ, ಬ್ರೊಕೊಲಿ, ಬಾದಾಮಿ ಸೇವನೆ ರೋಗನಿರೋಧಕ ಶಕ್ತಿ ಮತ್ತು ಶ್ವಾಸಕೋಶವನ್ನು ಬಲಪಡಿಸುತ್ತದೆ.
Men Health: ಮಕ್ಕಳಾಗದಿರಲು ಹೆಣ್ಣೇ ಕಾರಣ ಅನ್ನೋರು ಇದನ್ನು ತಪ್ಪದೇ ಓದಿ, ಪುರುಷರೂ ಮಾಡಿಸ್ಬೇಕು ಈ ಟೆಸ್ಟ್
ಇತ್ತೀಚಿನ ದಿನಗಳಲ್ಲಿ ಬಂಜೆತನವು ಒಂದು ಪ್ರಮುಖ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಅನೇಕ ಮಂದಿ ಆಸ್ಪತ್ರೆಗಳನ್ನು ಅಲೆದಾಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಲಕ್ಷಾಂತರ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಮದ್ಯಪಾನ, ಅವರ ಫ್ಯಾಮಿಲಿ ಪ್ಲ್ಯಾನಿಂಗ್ ಮೇಲೂ ಪರಿಣಾಮ ಬೀರುತ್ತಿದೆ.
Health Tips: ಚಪ್ಪಾಳೆ ತಟ್ಟೋದು ಕೇವಲ ಆನಂದಕ್ಕಲ್ಲ, ಇದರಿಂದ ಸಿಗುತ್ತೆ ಡಬಲ್ ಆರೋಗ್ಯ ಲಾಭ
ಚಪ್ಪಾಳೆ ತಟ್ಟುವುದರಿಂದ ಹೃದಯ, ಜೀರ್ಣಕ್ರಿಯೆ, ಮಾನಸಿಕ ಆರೋಗ್ಯ ಸುಧಾರಣೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಡಾ. ರಿದ್ಧಿ ಪಾಂಡೆ ವಿವರಿಸಿದ್ದಾರೆ.
Health Tips: ಇದ್ದಕ್ಕಿದ್ದಂತೆ ಎಡಗೈ ನೋವಾಗ್ತಿದ್ಯಾ? ನಿರ್ಲಕ್ಷಿಸಿದರೆ ಜೀವನವೇ ಅಂತ್ಯ ಆಗಬಹುದು ಹುಷಾರ್!
ಎಡಗೈ ನೋವು ಹೃದಯಾಘಾತದ ಲಕ್ಷಣವಾಗಬಹುದು, ಆದರೆ ಸ್ನಾಯು ಸೆಳೆತ, ನರ ನೋವು, ಭುಜದ ಸಮಸ್ಯೆಗಳು, ಹರ್ಪಿಸ್ ಜೋಸ್ಟರ್, ಮಲಗುವ ಭಂಗಿ ಕೂಡ ಕಾರಣವಾಗಬಹುದು ಎಂದು ಹೃದ್ರೋಗ ತಜ್ಞರು ಹೇಳಿದ್ದಾರೆ.
Health Tips: ಜಿಮ್ಗೆ ಹೋಗೋದೇ ಬೇಡ; ವಾರಕ್ಕೊಮ್ಮೆ ಈ ಕಾಳು ತಿಂದ್ರೆ ದೇಹ ಒಳಗಿನಿಂದ ಸ್ಟ್ರಾಂಗ್ ಆಗುತ್ತಂತೆ!
ಹೆಸರು ಕಾಳು ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರದಿಂದ ಸಮೃದ್ಧವಾಗಿದೆ. ಅಲ್ಲದೇ ಇದು ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೇ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
Cooking Tips: ಪ್ರೆಶರ್ ಕುಕ್ಕರ್ನಲ್ಲಿ ಮಾಡಿದ ಅನ್ನ ತಿನ್ನೋದು ಸೇಫಾ? ತಜ್ಞರು ಏನಂತಾರೆ ಗೊತ್ತಾ?
ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಬೇಯಿಸುವುದು ಸುರಕ್ಷಿತ, ಪೋಷಕಾಂಶಗಳು ಉಳಿಯುತ್ತವೆ. ಆದರೆ ಅಲ್ಯೂಮಿನಿಯಂ ಕುಕ್ಕರ್ ಬಳಸುವುದರಿಂದ ಆರೋಗ್ಯ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸ್ಟೀಲ್ ಕುಕ್ಕರ್ ಬಳಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.
Bone Health: ಏಕಾಏಕಿ ಮೂಳೆ ನೋವು ಶುರುವಾಗಿದ್ಯಾ? ಈ ವ್ಯಾಯಾಮದ ಜೊತೆ ಈ ಆಹಾರಗಳನ್ನು ತಿನ್ನೋಕೆ ಶುರು ಮಾಡಿ!
ಮೂಳೆ ಸವೆತವನ್ನು ತಡೆಗಟ್ಟಲು ಕ್ಯಾಲ್ಸಿಯಂ ಮಾತ್ರವಲ್ಲ, ವಿವಿಧ ಪೋಷಕಾಂಶಗಳು ಸಹ ಬೇಕಾಗುತ್ತವೆ. ಅಷ್ಟಕ್ಕೂ ಮೂಳೆ ಸವೆತ ಉಂಟಾಗಲು ಕಾರಣವೇನು ಮತ್ತು ಎಂತಹ ಆಹಾರ ಸೇವನೆಯು ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ತಿಳಿಯೋಣ ಬನ್ನಿ.
Health Tips: ಇವು ಆಹಾರ ಅಲ್ಲ ಕಣ್ರೀ, ವಿಷ! ಆರೋಗ್ಯ ಹಾಳು ಮಾಡೋ ಈ ಫುಡ್ ತಿಂತಿದ್ರೆ ಇಂದೇ ನಿಲ್ಲಿಸಿ
ಆರೋಗ್ಯ ಉತ್ತಮವಾಗಿರಬೇಕೆಂದರೆ ನೀವು ಹುರಿದ ತಿಂಡಿಗಳು, ಸಕ್ಕರೆ ಸಿಹಿತಿಂಡಿಗಳನ್ನು ಸೇವಿಸಬಾರದು ಹಾಗೂ ಸ್ಟ್ರಿಟ್ ಫುಡ್ ಅಂತೂ ತಿನ್ನಲೇಬಾರದು.
Health Care: ಕಾರಣವೇ ಇಲ್ಲದೇ, ಸುಮ್ ಸುಮ್ನೆ ವಾಂತಿ ಆಗ್ತಿದ್ಯಾ? ಇದು 'ಅದಲ್ಲ'; ಆ ರೋಗದ ಸೂಚನೆ ಆಗಿರಬಹುದು!
ವೈರಲ್ ಗ್ಯಾಸ್ಟ್ರೋಎಂಟರೈಟಿಸ್, ಹವಾಮಾನ ಬದಲಾವಣೆ, ರೋಗನಿರೋಧಕ ಶಕ್ತಿ ದುರ್ಬಲತೆ ಬೆಳಗಿನ ವಾಕರಿಕೆ, ಹೊಟ್ಟೆ ನೋವಿಗೆ ಕಾರಣವಾಗಬಹುದು; ಗಂಭೀರ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
Men Health Care: ಪುರುಷರೇ ಗಮನಿಸಿ, ಒಂದು ಪೀಸ್ ಈ ಚಾಕೊಲೇಟ್ ತಿನ್ನಿ; ದೇಹದೊಳಗಾಗುತ್ತೆ ಈ ಅದ್ಭುತ ಬದಲಾವಣೆಗಳು
ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪುರುಷರ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾರ್ಕ್ ಚಾಕೊಲೇಟ್ ಪುರುಷರಲ್ಲಿ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
Health Care: ಹೊಟ್ಟೆ ನೋವು ಇಗ್ನೋರ್ ಮಾಡಬೇಡಿ; ಇದು ಭಯಾನಕ ಕ್ಯಾನ್ಸರ್ ಲಕ್ಷಣ ಆಗಿರಬಹುದು, ಎಚ್ಚರ
2026ರ ವರದಿಯ ಪ್ರಕಾರ, 1990 ರಿಂದ ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಮೆರಿಕನ್ನರಲ್ಲಿ ಕ್ಯಾನ್ಸರ್ ಸಾವಿನ ಪ್ರಕರಣ ಶೇಕಡಾ 44 ರಷ್ಟು ಕಡಿಮೆಯಾಗಿದೆ. ಚಿಕಿತ್ಸೆಗಳು ಮತ್ತು ಧೂಮಪಾನಿಗಳು ಧೂಮಪಾನ ತ್ಯಜಿಸಿದ್ದರಿಂದ ಈ ಯಶಸ್ಸು ಸಾಧ್ಯವಾಯಿತು.
Leg Cramps: ಪದೇ ಪದೇ ಕಾಲು ಸೆಳೆತನಾ? ಹಾಗಿದ್ರೆ ಹೃದಯ ಜೋಪಾನ! ಯಾಕೆ ಗೊತ್ತಾ?
ಇತ್ತೀಚಿನ ವರದಿಗಳಲ್ಲಿ ಹೃದಯ ತಜ್ಞರು ಈ ಬಗ್ಗೆ ಆತಂಕಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾಲು ನೋವು ಹೆಚ್ಚಾಗುವ ಮೊದಲೇ ನಾವು ಜಾಗರೂಕರಾಗುವುದು ಅತಿ ಮುಖ್ಯ. ಇಲ್ಲದಿದ್ದರೆ ಮುಂದೆ ಹೃದಯಕ್ಕೆ ಸಂಬಂಧಿಸಿದ ಗಂಭೀರ ತೊಂದರೆಗಳು ಎದುರಾಗಬಹುದು.
Health Care: ಪದೆ ಪದೇ ಮೂತ್ರ ತಡೆ ಹಿಡಿಯುತ್ತಿದ್ದೀರಾ? ಇದೆಷ್ಟು ಡೇಂಜರ್ ಅಭ್ಯಾಸ ಗೊತ್ತಾ?
ಏನೇ ಇದ್ರೂ ಮೂತ್ರ ಬಂದ ಕೂಡಲೇ ಅದನ್ನು ಹೋಲ್ಡ್ ಮಾಡದೇ ಶೌಚಾಲಯ ಬಳಸೋದು ಉತ್ತಮ. ಮೂತ್ರಕ್ಕೆ ಹೋಗದೇ ಇರಿಸಿಕೊಳ್ಳುವುದು ಆರೋಗ್ಯದ (Health) ಗಂಭೀರ ಪರಿಣಾಮಕ್ಕೆ ಕಾರಣವಾಗಿದೆ.
Health Care: ಕಿವಿ ಸೋರುವಿಕೆ ಸಾಮಾನ್ಯ ಸಮಸ್ಯೆಯಲ್ಲ; ಯಾಮಾರಿದ್ರೆ ಜೀವಕ್ಕೆ ಸಂಚಕಾರ ಎಚ್ಚರ!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೀತಿಯ ಕಿವಿ ಸಮಸ್ಯೆಗಳು ಸ್ವಯಂ ಕೃತ ಅಪರಾಧಗಳಿಂದಲೇ ಉಂಟಾಗುತ್ತವೆ. ಕಿವಿಯಲ್ಲಿ ಗಾಯವಾದಾಗ ಅಥವಾ ಕಿವಿಯಲ್ಲಿ ನೀರು ಹೋದಾಗ ಇಯರ್ ಬಡ್ಸ್/ಕೀಲಿ ಕೈ/ಸೇಫ್ಟಿ ಪಿನ್ ಬಳಸುವುದರಿಂದ ಕಿವಿಯೊಳಗೆ ಗಾಯವಾಗುತ್ತದೆ.
Health Care: ಕಾಲು ಸೆಳೆತ ಏಕೆ ಬರುತ್ತೆ? ಇದು ಗಂಭೀರ ಸಮಸ್ಯೆಯ ಲಕ್ಷಣವೇ?
ಕಾಲಿನ ಸೆಳೆತವು ಕೇವಲ ಆಯಾಸ ಅಥವಾ ನಿರ್ಜಲೀಕರಣದಿಂದಾಗುವುದಿಲ್ಲ. ಬದಲಾಗಿ ದೇಹದಲ್ಲಿ ಆಗುವ ಸಮಸ್ಯೆಗಳ ಸಂಕೇತವಾಗಿದೆ. ನಡೆಯುವಾಗ ನಿಮ್ಮ ಕಾಲುಗಳಲ್ಲಿ ನೋವು ಅಥವಾ ಸೆಳೆತ ಉಂಟಾಗಿ ನಂತರ ವಿಶ್ರಾಂತಿ ಪಡೆದ ಮೇಲೆ ಉತ್ತಮವಾದರೆ, ಇದು ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿರಬಹುದು.
Retired Men: ಗಂಡಸ್ರು ರಿಟೈರ್ಡ್ ಆಗ್ತಿದ್ದಂತೆ ಸೈಲೆಂಟ್ ಆಗ್ತಾರಾ? ಇಲ್ಲಿದೆ ಶಾಕಿಂಗ್ ಕಾರಣ!
ಗೋಟೆನ್ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ನಿವೃತ್ತಿ ಜೀವನದ ಹೊಂದಾಣಿಕೆಯನ್ನು ಅಧ್ಯಯನ ಮಾಡಿದಾಗ, ಒಬ್ಬ ನಿವೃತ್ತಿ ಹೊಂದಿದ ವ್ಯಕ್ತಿ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವ ಮೂರು ಪ್ರಮುಖ ಮಾನಸಿಕ ಅಂಶಗಳನ್ನು ಅವರು ಗುರುತಿಸಿದರು.
Summer Tips: ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ಸುಡುವ ಬಿಸಿಲು, ಈ ಟಿಪ್ಸ್ ಬಳಸಿ!
ಬೇಸಿಗೆಯ ಬಿಸಿಲು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Health Tips: ಕಣ್ಣಿನ ರೆಪ್ಪೆಗಳ ಮೇಲೆ ಒತ್ತಿದರೆ ನೋವಾಗ್ತಿದ್ಯಾ? ಈ ಸಮಸ್ಯೆಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ!
ನಿದ್ರೆ ಸರಿಯಾಗಿ ಬರದಿದ್ದಾಗ, ಹುಬ್ಬುಗಳ ನಡುವೆ ತೀವ್ರವಾದ ನೋವು ಉಂಟಾಗುತ್ತದೆ. ಇದು ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಅಲ್ಲದೇ ತಲೆನೋವು ಮತ್ತು ಕಣ್ಣಿನ ಸ್ನಾಯುಗಳ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ.
ಚಹಾ ಕಾಫಿಗೆ ಉತ್ತಮ ಗುಣಮಟ್ಟದ ಸೆರಾಮಿಕ್ ಕಪ್ ಸುರಕ್ಷಿತ, ಆದರೆ ಕಡಿಮೆ ಗುಣಮಟ್ಟದ ಗ್ಲೇಜ್ನಿಂದ ತಯಾರಿಸಿದ ಸೀಸ ಕ್ಯಾಡ್ಮಿಯಂ ಹಾನಿ ಸಂಭವಿಸಬಹುದು ಎಂದು ಡಾ. ರೋಹಿತ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ನಿಯಮಿತ ವ್ಯಾಯಾಮದ ಹೊರತಾಗಿಯೂ ತೂಕ ಇಳಿಯುತ್ತಿಲ್ಲವೆ? ದಿನಚರಿ ಬದಲಿಸಿ
ಸಾಂದರ್ಭಿಕ ಚಿತ್ರ | Photo Credit : freepik.com ಸಂಶೋಧನೆಗಳ ಪ್ರಕಾರ, ವ್ಯಾಯಾಮದಲ್ಲಿ ಖರ್ಚಾದ ಶಕ್ತಿಯನ್ನು ನಮ್ಮ ದೇಹ ಬೇರೆಡೆ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸರಿದೂಗಿಸುತ್ತದೆ. ವ್ಯಾಯಾಮದಿಂದ ಹಿಡಿದು ಯೋಗ ತರಗತಿಯವರೆಗೆ ತಪ್ಪದೆ ಹಾಜರಾಗಿ ಅತ್ಯಂತ ಶಿಸ್ತಿನಿಂದ ಅನುಸರಿಸುತ್ತಿರಬಹುದು. ಆದರೆ ತೂಕದ ಮಾಪಕದ ಮೇಲೆ ಹೆಜ್ಜೆ ಹಾಕಿದ ತಕ್ಷಣ ಭಾವನೆ ಬದಲಾಗುತ್ತದೆ. ಅದು ತೋರಿಸುತ್ತಿರುವ ಸಂಖ್ಯೆ ನಿರಾಶೆ ಮೂಡಿಸಬಹುದು. ಹಾಗಿದ್ದರೆ, ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೂ ತೂಕ ಏಕೆ ಇಳಿಯುವುದಿಲ್ಲ ಎಂಬ ಪ್ರಶ್ನೆ ಏಳಬಹುದು. ಇದಕ್ಕೆ ಉತ್ತರ ನಿಮ್ಮ ದಿನಚರಿಯ ಅಭ್ಯಾಸದಲ್ಲಿರಬಹುದು. ತೂಕ ಇಳಿಕೆ ಎಂದರೆ ಜಿಮ್ನಲ್ಲಿ ಕಸರತ್ತು ಮಾಡುವುದು ಅಥವಾ ಯೋಗ ಚಾಪೆಯ ಮೇಲೆ ವ್ಯಾಯಾಮ ಮಾಡುವುದಷ್ಟೇ ಅಲ್ಲ. ಉಳಿದ ಸಮಯದಲ್ಲಿ ನೀವೇನು ಮಾಡುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ನಿಮ್ಮ ಆಹಾರ, ಚಲನೆ, ನಿದ್ರೆ, ಸ್ನ್ಯಾಕ್ಗಳು ಹಾಗೂ ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದೂ ಮಹತ್ವದ್ದು. ಸಣ್ಣ ಆಯ್ಕೆಗಳಾಗಿ ಕಾಣುವ ಇವುಗಳು ನಿಧಾನವಾಗಿ, ನಿಮಗೇ ಅರಿವಿಲ್ಲದೆ ತೂಕದ ಮೇಲೆ ಪರಿಣಾಮ ಬೀರುತ್ತವೆ. ಬೆವರು ಸುರಿಸುವುದರಿಂದ ಸ್ವಯಂಚಾಲಿತವಾಗಿ ಕ್ಯಾಲರಿಗಳು ಕಡಿಮೆಯಾಗುತ್ತವೆ ಎಂದು ಬಹಳ ಮಂದಿ ಅಂದುಕೊಳ್ಳುತ್ತಾರೆ. ಆದರೆ ಆ ನಂಬಿಕೆ ಸಂಪೂರ್ಣ ಸತ್ಯವಲ್ಲ. ವ್ಯಾಯಾಮಗಳು ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿ ಖರ್ಚು ಮಾಡುತ್ತವೆ. ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಫಿಟ್ನೆಸ್ ತಜ್ಞ ಹಾಗೂ ಸಂಸ್ಥಾಪಕ ನಿರ್ದೇಶಕ ಡಾ. ವಿಪುಲ್ ಲ್ಯೂನಾವತ್ ಅವರ ಪ್ರಕಾರ, “ವ್ಯಾಯಾಮ ಮೌಲ್ಯಯುತ. ಆದರೆ ಅದರಿಂದ ಕ್ಯಾಲರಿ ವೆಚ್ಚವಾಗುವ ಬಗ್ಗೆ ಅತಿಯಾದ ನಂಬಿಕೆ ಬೆಳೆಸಿಕೊಂಡಿರುತ್ತಾರೆ. ವಾಸ್ತವದಲ್ಲಿ ದೇಹ ನಮ್ಮ ಆಲೋಚನೆಗೆ ಮೀರಿರುವುದು. ಸಂಶೋಧನೆಗಳ ಪ್ರಕಾರ, ನಮ್ಮ ದೇಹ ವ್ಯಾಯಾಮದಲ್ಲಿ ಖರ್ಚಾದ ಶಕ್ತಿಯನ್ನು ಬೇರೆಡೆ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸರಿದೂಗಿಸುತ್ತದೆ.” ಹಾಗೆಂದು ವ್ಯಾಯಾಮವನ್ನು ಸಂಪೂರ್ಣವಾಗಿ ಬಿಡಬೇಕು ಎಂದಲ್ಲ. ಬದಲಾಗಿ ಹೆಚ್ಚು ದಕ್ಷತೆಯಿಂದ ವ್ಯಾಯಾಮ ಮಾಡಬೇಕು. ಸ್ನಾಯುಗಳನ್ನು ಬೆಳೆಸುವ ಮೂಲಕ ವಿಶ್ರಾಂತಿ ಸಮಯದ ಚಯಾಪಚಯ ದರವನ್ನು ಹೆಚ್ಚಿಸಬಹುದು. ಆಗ ದೇಹ ವಿಶ್ರಾಂತಿ ಸ್ಥಿತಿಯಲ್ಲಿದ್ದರೂ ಹೆಚ್ಚು ಕ್ಯಾಲರಿಗಳನ್ನು ಖರ್ಚು ಮಾಡುತ್ತದೆ. ತಿನಿಸುಗಳು ಮತ್ತು ಪಾನೀಯಗಳ ಬಗ್ಗೆ ಎಚ್ಚರಿಕೆ ಇತ್ತೀಚೆಗೆ ನಿಯಮಿತವಾಗಿ ವ್ಯಾಯಾಮ ಮಾಡುವವರು ತಾವು ಏನು ಸೇವಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಆರೋಗ್ಯಕರ ಆಹಾರ ಸೇವನೆಯೇ ತೂಕ ಇಳಿಸುವ ಆಹಾರ ಎನ್ನಲು ಸಾಧ್ಯವಿಲ್ಲ. ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ಪೋಷಕಾಂಶ ತಜ್ಞ ಎಡ್ವಿನಾ ರಾಜ್ ಅವರ ಪ್ರಕಾರ, ಕಡಲೆಗಳು, ತುಪ್ಪ, ಅವಕಾಡೋ, ಸ್ಮೂತಿಗಳು ಹಾಗೂ ಒಣಹಣ್ಣುಗಳಲ್ಲಿ ಕ್ಯಾಲರಿ ಹೆಚ್ಚು ಇರುತ್ತದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಪೋಷಕಾಂಶವಿದ್ದರೂ ತೂಕ ಇಳಿಕೆಯನ್ನು ನಿಧಾನಗೊಳಿಸಬಹುದು. “ತೂಕ ಇಳಿಕೆ ಆಹಾರದ ಗುಣಮಟ್ಟದ ಮೇಲೆ ಮಾತ್ರ ಅವಲಂಬಿಸಿಲ್ಲ. ಬದಲಾಗಿ ಸೂಕ್ತ ಪ್ರಮಾಣದಲ್ಲಿ ಸಮತೋಲಿತ ಆಹಾರ ಸೇವನೆ ಮುಖ್ಯ. ಹೆಚ್ಚು ತರಕಾರಿಗಳು, ಲೀನ್ ಪ್ರೋಟೀನ್ ಹಾಗೂ ಇಡೀ ಧಾನ್ಯಗಳು ಹಸಿವು ನಿಯಂತ್ರಿಸಲು ನೆರವಾಗುತ್ತವೆ. ಸಕ್ಕರೆ ಸೇವನೆ, ಸಂಸ್ಕರಿತ ಕೊಬ್ಬು ಹಾಗೂ ಅತಿಯಾದ ಎಣ್ಣೆ ಬಳಕೆ ಕಡಿಮೆಗೊಳಿಸಬೇಕು. ಸದಾ ತಿನಿಸುಗಳನ್ನು ತಿನ್ನುವುದು ಅಥವಾ ಪಾನೀಯಗಳನ್ನು ಸೇವಿಸುವುದು ಕ್ಯಾಲರಿಗಳನ್ನು ಹೆಚ್ಚಿಸಬಹುದು. ಅನೇಕ ತಿನಿಸುಗಳು ಮತ್ತು ಪಾನೀಯಗಳು ಹೆಚ್ಚಿನ ಕ್ಯಾಲರಿ ಸೇರಿಸಿದರೂ ಹೊಟ್ಟೆ ತುಂಬಿದ ಅನುಭವ ನೀಡುವುದಿಲ್ಲ.” ಪ್ರೋಟೀನ್ ಆಹಾರ ಸೇವನೆ ಅಗತ್ಯ ಉತ್ತಮ ತಿನಿಸುಗಳನ್ನೂ ದೊಡ್ಡ ಪ್ರಮಾಣದಲ್ಲಿ ಆಗಾಗ್ಗೆ ಸೇವಿಸಿದರೆ ತೂಕ ಇಳಿಕೆಗೆ ಅಡ್ಡಿಯಾಗಬಹುದು. ಪ್ರೋಟೀನ್ ಆಹಾರ ಸೇವಿಸದೆ ಇರುವುದರಿಂದಲೂ ತೂಕ ಇಳಿಕೆಗೆ ಪರಿಣಾಮ ಬೀರುತ್ತದೆ. ಬಹುತೇಕ ಮಂದಿಗೆ ಆಹಾರದಲ್ಲಿ ಪ್ರೋಟೀನ್ ಸೇವನೆಯ ಕಲ್ಪನೆ ಇಷ್ಟವಾದರೂ, ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದಿಲ್ಲ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಶನ್ ಮತ್ತು ಡಯಟೆಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಗೈ ಸೆಲ್ವಿ ಅವರ ಪ್ರಕಾರ, ವ್ಯಾಯಾಮದ ಜೊತೆಗೆ ಸಾಕಷ್ಟು ಪ್ರೋಟೀನ್ ಸೇವಿಸದಿದ್ದರೆ ದೇಹಕ್ಕೆ ಸ್ನಾಯು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಚಯಾಪಚಯ ಕ್ರಮೇಣ ನಿಧಾನಗೊಳ್ಳುತ್ತದೆ. ಪ್ರೋಟೀನ್ ಹಸಿವನ್ನೂ ಕಡಿಮೆ ಮಾಡುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ನಿರಂತರ ಹಸಿವು ಉಂಟಾಗಿ ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚುತ್ತದೆ. ಪ್ರತಿ ಊಟದಲ್ಲೂ ಉತ್ತಮ ಪ್ರೋಟೀನ್ ಸೇರಿಸಬೇಕು. ಉದಾಹರಣೆಗೆ ಮೊಟ್ಟೆ, ಹೈನು ಉತ್ಪನ್ನಗಳು, ದ್ವಿದಳ ಧಾನ್ಯಗಳು, ತೋಫು, ಮೀನು ಅಥವಾ ಕಡಿಮೆ ಕೊಬ್ಬಿನ ಮಾಂಸವನ್ನು ಆಹಾರದಲ್ಲಿ ಒಳಗೊಳ್ಳಬಹುದು. ಸ್ವಲ್ಪ ಮಟ್ಟಿನ ಪ್ರೋಟೀನ್ ಏರಿಕೆಯಾದರೂ ದಿನವಿಡೀ ಸಹಕಾರಿಯಾಗುತ್ತದೆ. ಚಲನೆಯ ಸಮಯವೂ ಮುಖ್ಯ ವ್ಯಾಯಾಮದಲ್ಲಿ ಎಷ್ಟು ಸಮಯ ಕಳೆದಿದ್ದೀರಿ ಎನ್ನುವುದಕ್ಕಿಂತ ಉಳಿದ ಸಮಯದಲ್ಲಿ ಎಷ್ಟು ಚಲನೆ ಹೊಂದಿದ್ದೀರಿ ಎನ್ನುವುದೂ ಮುಖ್ಯ. ಇಡೀ ದಿನ ಕುಳಿತೇ ಇದ್ದು ಜಿಮ್ನಲ್ಲಿ ಒಂದು ಗಂಟೆ ಕಳೆದರೆ ಸಾಕಾಗುವುದಿಲ್ಲ. ಚಲನೆಯು ತೂಕ ಇಳಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ದಿನವಿಡೀ ಸಣ್ಣ ಚಲನೆಗಳೂ ಪರಿಣಾಮಕಾರಿಯಾಗುತ್ತವೆ. ಹೆಚ್ಚು ನಡೆಯುವುದು, ಮೆಟ್ಟಿಲು ಹತ್ತುವುದು, ಆಗಾಗ್ಗೆ ನಿಲ್ಲುವುದು ಅಥವಾ ಸಣ್ಣ ವ್ಯಾಯಾಮ ಮಾಡುವುದು ಕೊಬ್ಬು ಇಳಿಕೆಗೆ ನೆರವಾಗುತ್ತದೆ. ವ್ಯಾಯಾಮವಲ್ಲದ ಇಂತಹ ಚಟುವಟಿಕೆಗಳೂ ತೂಕ ಇಳಿಕೆಗೆ ಸಹಾಯಕ. ಜಿಮ್ ನಂತರವೂ ಸಕ್ರಿಯರಾಗಿರುವವರು ಬೇಗ ತೂಕ ಇಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ನಿದ್ರೆಯೂ ವ್ಯಾಯಾಮದಷ್ಟೇ ಅಗತ್ಯ ದಿನಚರಿಯ ಬಗ್ಗೆ ಮಾತನಾಡುವಾಗ ಹಲವರು ನಿದ್ರೆಯ ಮಹತ್ವವನ್ನು ಕಡೆಗಣಿಸುತ್ತಾರೆ. ಸಾಕಷ್ಟು ನಿದ್ರೆ ದೊರೆಯದಿದ್ದರೆ ದೇಹ ನಿಧಾನವಾಗಿ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತದೆ. ಹಸಿವನ್ನು ನಿಯಂತ್ರಿಸುವ ಹಾರ್ಮೋನ್ಗಳ ಸಮತೋಲನ ಕಳೆದುಹೋಗುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ ಹಾಗೂ ಸಕ್ಕರೆ-ಕೊಬ್ಬು ಹೆಚ್ಚಿರುವ ತಿನಿಸುಗಳ ಆಸೆ ಹೆಚ್ಚುತ್ತದೆ. ಸರಿಯಾದ ನಿದ್ರೆ ಇಲ್ಲದಿದ್ದರೆ ಒತ್ತಡವೂ ಹೆಚ್ಚುತ್ತದೆ. ಅದು ಕೊಬ್ಬು ಇಳಿಕೆಯನ್ನು ನಿಧಾನಗೊಳಿಸುವುದಷ್ಟೇ ಅಲ್ಲ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಕಡಿಮೆ ಮಾಡುತ್ತದೆ. ನಿದ್ರೆ ಸರಿಯಾಗಿ ಬಾರದಿರುವುದಕ್ಕೆ ಒತ್ತಡ ಪ್ರಮುಖ ಕಾರಣ. ಒತ್ತಡ ನಿಭಾಯಿಸುವುದು ಅಗತ್ಯ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವುದು ಅತ್ಯಂತ ಮುಖ್ಯ. ದೀರ್ಘಕಾಲೀನ ಒತ್ತಡ ಕಾರ್ಟಿಸಾಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಿ ಕೊಬ್ಬು ಸಂಗ್ರಹವನ್ನು ಏರಿಸಬಹುದು. ವಿಶೇಷವಾಗಿ ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ತೂಕ ಇಳಿಕೆಯನ್ನು ಕಷ್ಟಗೊಳಿಸಬಹುದು. ಇದರಿಂದ ಭಾವನಾತ್ಮಕ ಆಹಾರ ಸೇವನೆ ಅಥವಾ ಅನಿಯಮಿತ ಆಹಾರ ಪದ್ಧತಿಗಳು ರೂಪುಗೊಳ್ಳುವ ಸಾಧ್ಯತೆ ಇರುತ್ತದೆ.
Health Tips: ಶಿವರಾತ್ರಿ ಉಪವಾಸದ ವೇಳೆ ಯಾವ ಹಣ್ಣುಗಳನ್ನು ತಿನ್ನಬೇಕು? ಶಿವಭಕ್ತರಿಗೆ ಈ ವಿಚಾರ ಗೊತ್ತಿರಲೇಬೇಕು
Health Tips: ಉಪವಾಸದ ದಿನಗಳಲ್ಲಿ ದೇಹವು ಸರಿಯಾದ ಶಕ್ತಿಯನ್ನು ಪಡೆಯದಿದ್ದರೆ, ಆಯಾಸ, ತಲೆನೋವು ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ತಿನ್ನದಿರುವುದು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಉಪವಾಸದ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಮತ್ತು ತಕ್ಷಣದ ಶಕ್ತಿಯನ್ನು ಒದಗಿಸುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
WHO ವರದಿ ಪ್ರಕಾರ 2020ರಲ್ಲಿ 10 ಮಿಲಿಯನ್ ಜನರು ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದ್ದು, ತಂಬಾಕು ಸೇವನೆ ಮುಂತಾದವು ಅಪಾಯಕಾರಿ ಅಂಶಗಳು.
ಸ್ಟೀಲ್ vs ಗ್ಲಾಸ್: ಆಹಾರ ಸ್ಟೋರ್ ಮಾಡಲು ಯಾವುದು ಸುರಕ್ಷಿತ ಆಯ್ಕೆ?
ಸಾಂದರ್ಭಿಕ ಚಿತ್ರ | Photo Credit : freepik ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಸ್ಟೀಲ್ ಡಬ್ಬಗಳು ಬಳಕೆಯಲ್ಲಿವೆ. ಇತ್ತೀಚೆಗಿನ ಆಧುನಿಕ ಶೈಲಿಯ ಮನೆಗಳಲ್ಲಿ ಗಾಜಿನ ವಸ್ತುಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಹಾಗಿದ್ದರೆ ಸ್ಟೀಲ್ ಮತ್ತು ಗ್ಲಾಸ್ ನಡುವೆ ಯಾವುದು ಉತ್ತಮ? ಭಾರತೀಯ ಅಡುಗೆಮನೆಗಳಲ್ಲಿ BPA-free ಪ್ಲಾಸ್ಟಿಕ್ ವಸ್ತುಗಳು ಪ್ರವೇಶಿಸುವ ಮೊದಲು ಸ್ಟೇನ್ಲೆಸ್ ಸ್ಟೀಲ್ ಕಂಟೇನರ್ಗಳು ಅತ್ಯಗತ್ಯ ಭಾಗವಾಗಿದ್ದವು. ಸ್ಟೀಲ್ ಡಬ್ಬಗಳು ಮೂರು ವಿಷಯದಲ್ಲಿ ಮುಖ್ಯವಾಗುತ್ತವೆ. ಬಾಳಿಕೆ, ತಟಸ್ಥತೆ ಮತ್ತು ಸಾಗಾಟ. ಕಲೆಯಾಗುವುದಿಲ್ಲ ಮತ್ತು ವಾಸನೆ ಹೊಡೆಯುವುದಿಲ್ಲ. ತೊಳೆಯುವುದು ಸರಳ. ಹೀಗಾಗಿ ನಿತ್ಯ ಆಹಾರ ಸಂಗ್ರಹಕ್ಕೆ ಉತ್ತಮ. ಮತ್ತೊಂದೆಡೆ ಆಧುನಿಕ ಶೈಲಿಯ ಮನೆಗಳಲ್ಲಿ ಗಾಜಿನ ವಸ್ತುಗಳು ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿವೆ. ಹಾಗಿದ್ದರೆ ಸ್ಟೀಲ್ ಮತ್ತು ಗ್ಲಾಸ್ ನಡುವೆ ಯಾವುದು ಉತ್ತಮ? ಸ್ಟೇನ್ಲೆಸ್ ಸ್ಟೀಲ್ ವಿಶ್ವಾಸಾರ್ಹ ಏಕೆ? ಆಹಾರ ಬಳಕೆಯ ಸ್ಟೇನ್ಲೆಸ್ ಸ್ಟೀಲ್ ಮತ್ತು ವಿಶೇಷವಾಗಿ 304 (18/8) ಅದರ ಪ್ರತಿಕ್ರಿಯಾತ್ಮಕವಲ್ಲದ ಸ್ವಭಾವಕ್ಕಾಗಿ ಮೌಲ್ಯಯುತವಾಗಿದೆ. ಇದು BPA ಅಥವಾ ಪ್ಥಾಲೇಟ್ಗಳನ್ನು ಒಳಗೊಂಡಿರುವ ಪ್ಲಾಸ್ಟಿಕ್ಗಳಿಗಿಂತ ಉತ್ತಮ. ಏಕೆಂದರೆ ಪ್ಲಾಸ್ಟಿಕ್ಗಳಂತೆ ಸ್ಟೇನ್ಲೆಸ್ ಸ್ಟೀಲ್ ಆಹಾರಕ್ಕೆ ಹಾನಿಕರ ರಾಸಾಯನಿಕಗಳನ್ನು ಸೋರಿಕೆ ಮಾಡುವುದಿಲ್ಲ. ಸರಿಯಾಗಿ ಸ್ವಚ್ಛಗೊಳಿಸಿದರೆ, ಇದರಲ್ಲಿ ಬ್ಯಾಕ್ಟೀರಿಯ, ವಾಸನೆ ಮತ್ತು ಕಲೆಗಳು ಇರುವುದಿಲ್ಲ. ಹೆಚ್ಚು ಬಾಳಿಕೆ ಬರುವುದರಿಂದ ದೈನಂದಿನ ಬಳಕೆಗೆ ಸೂಕ್ತವಾಗಿದೆ. ಸಾಂಬಾರ್ಗಳು, ದಾಲ್ಗಳು, ಅಕ್ಕಿ ಅಥವಾ ಉಳಿದ ಆಹಾರವನ್ನು ಸಂಗ್ರಹಿಸಿಡಲು ನೈರ್ಮಲ್ಯಯುತ ಆಯ್ಕೆಯಾಗಿರುತ್ತದೆ. ಸ್ಟೀಲ್ ಡಬ್ಬಗಳು ಬಿದ್ದರೆ ಒಡೆಯುವುದಿಲ್ಲ. ಬ್ಯಾಗ್ನಲ್ಲಿ ಸರಳವಾಗಿ ಕೂರುತ್ತವೆ. ಗಾಜಿನ ಡಬ್ಬಕ್ಕಿಂತ ಹಗುರ. ಸೋರಿಕೆ ಇಲ್ಲದ ಮುಚ್ಚಳ ಹಾಕಿದರೆ ಪ್ರಯಾಣ ಮಾಡುವಾಗ, ಶಾಲೆಗೆ ಅಥವಾ ಪಿಕ್ನಿಕ್ಗಳಿಗೆ ಊಟ ಕೊಂಡೊಯ್ಯಲು ಅನುಕೂಲಕರ. ಸ್ಟೀಲ್ನ ನಕಾರಾತ್ಮಕ ಅಂಶಗಳೇನು? ಬಾಳಿಕೆಯ ಹೊರತಾಗಿಯೂ ಸ್ಟೀಲ್ಗೆ ತನ್ನದೇ ಆದ ಮಿತಿಗಳಿವೆ. ಪಾರದರ್ಶಕವಾಗಿರದ ಕಾರಣ ಒಳಗೇನಿದೆ ಎಂದು ನೋಡಲು ಮುಚ್ಚಳ ತೆರೆಯಬೇಕಾಗುತ್ತದೆ. ಫ್ರಿಜ್ನಲ್ಲಿ ಆಹಾರ ಇಡುವುದಾದರೆ ಪ್ರತಿಯೊಂದನ್ನು ತೆರೆದು ನೋಡುವುದು ಅನನುಕೂಲವೆನಿಸುತ್ತದೆ. ಮೈಕ್ರೋವೇವ್ಗಳಲ್ಲಿ ಬಳಸಲಾಗದು. ಮರಳಿ ಬಿಸಿ ಮಾಡಬೇಕೆಂದರೆ ಆಹಾರವನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಬೇಕಾಗುತ್ತದೆ. ಕಡಿಮೆ ಗುಣಮಟ್ಟದ ಸ್ಟೀಲ್ ಬಳಸಿದಲ್ಲಿ ಟೊಮ್ಯಾಟೋ ಗ್ರೇವಿಗಳು, ಲಿಂಬೆಯ ಸಲಾಡ್ಗಳು ಅಥವಾ ವಿನೆಗರ್ ಉಪ್ಪಿನಕಾಯಿಗಳು ಸ್ಟೀಲ್ನೊಂದಿಗೆ ವರ್ತಿಸಬಹುದು. ಹೀಗಾಗಿ ದೀರ್ಘಕಾಲ ಇಟ್ಟರೆ ರುಚಿ ಬದಲಾಗಬಹುದು. ಉತ್ತಮ ಗುಣಮಟ್ಟದ ಸ್ಟೀಲ್ ಬಳಸಿದರೆ ಇದನ್ನು ಪರಿಹರಿಸಬಹುದು. ಆದರೆ ಬಹಳಷ್ಟು ಮಂದಿ ದೀರ್ಘಕಾಲ ಆಮ್ಲೀಯ ಆಹಾರಗಳನ್ನು ಸ್ಟೀಲ್ ಡಬ್ಬದಲ್ಲಿ ಇಡಲು ಬಯಸದೆ ಇರಬಹುದು. ಗಾಜಿನ ಡಬ್ಬಗಳು ಮತ್ತೆ ಜನಪ್ರಿಯವಾಗಿರುವುದೇಕೆ? ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಬಯುಸುವ ಕುಟುಂಬಗಳಿಂದಾಗಿ ಗಾಜಿನ ಡಬ್ಬಗಳು ಇದೀಗ ಹೆಚ್ಚು ಜನಪ್ರಿಯವಾಗುತ್ತಿವೆ. ಡಬ್ಬದ ಒಳಗೆ ಏನಿದೆ ಎಂದು ಸ್ಪಷ್ಟವಾಗಿ ಕಾಣುವ ಕಾರಣ ಫ್ರಿಜ್ನೊಳಗಿಟ್ಟು ಮರೆತು ಹೋಗುವಂತಹ ಸ್ಥಿತಿ ಬರುವುದಿಲ್ಲ. ಕಲೆಗಳು ಮತ್ತು ವಾಸನೆ ಇರುವುದಿಲ್ಲ. ಹೀಗಾಗಿ ಬಹಳ ಪ್ರಬಲ ಆಹಾರಗಳಾದ ಸಂಬಾರ್ಗಳು ಅಥವಾ ಉಪ್ಪಿನಕಾಯಿಗಳನ್ನು ಇಡಲು ಸೂಕ್ತವೆನಿಸಿವೆ. ಟೆಂಪರ್ಡ್ ಗ್ಲಾಸ್ನಿಂದಾಗಿ ಮೈಕ್ರೋವೇವ್ಗಳಲ್ಲಿ ಮರಳಿ ಬಿಸಿ ಮಾಡಿಕೊಳ್ಳುವುದು ಸರಳವಾಗಿದೆ. ಏರ್ಟೈಟ್ ಸೀಲ್ಗಳು ತಾಜಾ ಆಹಾರವನ್ನು ಉಳಿಸುತ್ತದೆ. ಸೋರಿಕೆಯನ್ನೂ ತಡೆಯುತ್ತವೆ. ಗಾಜನ್ನು ರಾಸಾಯನಿಕ ಸುರಕ್ಷೆಯಲ್ಲಿ ಅತ್ಯುತ್ತಮ ದರ್ಜೆಯದ್ದೆಂದು ಪರಿಗಣಿಸಲಾಗಿದೆ. ಅದು ಆಮ್ಲೀಯ ಅಥವಾ ಮಸಾಲೆಭರಿತ ಆಹಾರದ ಜೊತೆಗೆ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ವಾಸನೆಯನ್ನು ಅಥವಾ ಬಣ್ಣವನ್ನು ಹೀರಿಕೊಳ್ಳುವುದಿಲ್ಲ. ಕೋಟಿಂಗ್ ಅಥವಾ ಅಡಿಟಿವ್ಗಳು ಇರುವುದಿಲ್ಲ. ಆಧುನಿಕ ವಿನ್ಯಾಸವು ಫ್ರಿಡ್ಜ್ ಅಥವಾ ಮೈಕ್ರೋವೇವ್ಗಳಿಗೆ ಸೂಕ್ತವಾಗಿಸಿದೆ. ಗಾಜಿನ ಬಳಕೆಯಲ್ಲಿರುವ ಸವಾಲುಗಳೇನು? ಗಾಜಿನ ನಕಾರಾತ್ಮಕ ಅಂಶವೆಂದರೆ ಅದು ಬೇಗನೇ ಒಡೆಯುತ್ತದೆ. ಬೊರೊಸಿಲಿಕೇಟ್ ಗ್ಲಾಸ್ಗಳು ಬಿದ್ದರೆ ಒಡೆಯುತ್ತವೆ. ಸ್ಟೀಲ್ಗಿಂತ ಬಹಳ ಭಾರವಿರುತ್ತವೆ. ಹೀಗಾಗಿ ಪ್ರಯಾಣದಲ್ಲಿ ಒಯ್ಯುವುದು ಕಷ್ಟ. ಗ್ಲಾಸ್ಗೆ ಇರುವ ಪ್ಲಾಸ್ಟಿಕ್ ಅಥವಾ ಸಿಲಿಕಾನ್ ಮುಚ್ಚಳಗಳು ಹಾಳಾಗಬಹುದು. ವಾಸನೆಗಳನ್ನು ಉಳಿಸಬಹುದು. ಹೀಗಾಗಿ ಹೆಚ್ಚು ಜಾಗರೂಕವಾಗಿ ಬಳಸಬೇಕಾಗುತ್ತದೆ. ಮುಚ್ಚಳವೇ ದೊಡ್ಡ ಸಮಸ್ಯೆಯಾಗಿರುತ್ತದೆ. ಸುರಕ್ಷೆಯನ್ನು ಗಮನಿಸಿದರೆ ಯಾವುದು ಉತ್ತಮ? ► ರಾಸಾಯನಿಕವಾಗಿ ಗಮನಿಸಿದಲ್ಲಿ ಗಾಜು ಉತ್ತಮ. ಏಕೆಂದರೆ ಅದರಲ್ಲಿ ಆಹಾರವನ್ನು ಬಹಳ ದೀರ್ಘಕಾಲ ಕಾಪಿಡಬಹುದು. ► ಭೌತಿಕವಾಗಿ ಗಮನಿಸಿದಲ್ಲಿ ಸ್ಟೀಲ್ ಉತ್ತಮ ಏಕೆಂದರೆ ಅಪಾಯಕಾರಿಯಾಗಿರುವುದಿಲ್ಲ ಮತ್ತು ಬಿದ್ದರೂ ಒಡೆಯುವುದಿಲ್ಲ. ಉತ್ತಮವಾಗಿ ಬಾಳಿಕೆ ಬರುತ್ತದೆ. ► ನೈರ್ಮಲ್ಯ ಗಮನಿಸಿದರೆ ಎರಡೂ ಉತ್ತಮ, ಸರಳ ಮತ್ತು ಸ್ವಚ್ಛ ಆಯ್ಕೆಯಾಗಿರುತ್ತವೆ. ► ಅನುಕೂಲ ಗಮನಿಸಿದರೆ ಪ್ರಯಾಣಕ್ಕೆ ಸ್ಟೀಲ್ ಉತ್ತಮ. ಮನೆಯಲ್ಲಿ ಸಂಗ್ರಹಿಸಿಡಲು ಮತ್ತು ಮರು ಬಿಸಿಮಾಡಬೇಕಾದರೆ ಗಾಜು ಉತ್ತಮ. ಜೀವನಶೈಲಿಯ ಮೇಲೆ ಆಯ್ಕೆ ನಿಂತಿದೆ ಅಂತಿಮವಾಗಿ ಹೇಳುವುದಾದರೆ ನಮ್ಮ ಜೀವನಶೈಲಿಯ ಮೇಲೆ ಆಯ್ಕೆ ನಿಂತಿರುತ್ತದೆ. ಸುವಾಸನೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮನೆಯಲ್ಲಿ ಫ್ರಿಜ್ ಮತ್ತು ಮೈಕ್ರೋವೇವ್ ಬಳಕೆಗೆ ಗಾಜು ಶ್ರೇಷ್ಠ. ಸಾಗಾಟ ಮತ್ತು ಬಾಳಿಕೆಗೆ ಸ್ಟೀಲ್ ಉತ್ತಮ. ಅನೇಕ ಅನುಭವಿ ಅಡುಗೆಯವರು ಎರಡೂ ವಸ್ತುಗಳನ್ನು ಪೂರಕವಾಗಿ ಬಳಸುತ್ತಾರೆ. ಸಂಗ್ರಹಣೆ ಮತ್ತು ಬಿಸಿ ಮಾಡಲು ಗಾಜು ಮತ್ತು ಪ್ರಯಾಣ ಮತ್ತು ದೈನಂದಿನ ಪ್ಯಾಕಿಂಗ್ಗೆ ಸ್ಟೀಲ್. ದಿನಚರಿಗೆ ಸರಾಗವಾಗಿ ಒಗ್ಗಿಕೊಳ್ಳುವುದು ಸ್ಟೀಲ್. ಸ್ವಚ್ಛಗೊಳಿಸುವುದು ಸರಳ, ಮುರಿಯುವುದಿಲ್ಲ. ವಿಶ್ವಾಸಾರ್ಹ ಆಹಾರ ಬಳಕೆಯ ದರ್ಜೆ ಇದೆ. ಕೃಪೆ: Times of India
Lungs Cancer: ಏನೇ ಮಾಡಿದ್ರೂ ಕೆಮ್ಮು ಕಡಿಮೆ ಆಗ್ತಿಲ್ವಾ? ಈ ಲಕ್ಷಣಗಳಿದ್ದರೆ ತಕ್ಷಣ ಚೆಕ್ ಮಾಡ್ಸಿ!
ನಿರಂತರ ಕೆಮ್ಮು, ಆಯಾಸ ಅಥವಾ ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳನ್ನು ತಕ್ಷಣ ಪರಿಶೀಲಿಸುವುದು ಅಗತ್ಯ. ಅಲ್ಲದೇ ಮಧುಮೇಹ ಮತ್ತು ಥೈರಾಯ್ಡ್ ಕಾಯಿಲೆಗಳನ್ನು ಸಹ ಬೇಗ ಪತ್ತೆ ಹಚ್ಚುವುದು ಮುಖ್ಯ.
Health Care: 30 ವರ್ಷ ದಾಟಿದ್ಮೇಲೆ ಕಡಿಮೆ ಮಾಡಿ ಉಪ್ಪು-ಖಾರ-ಸ್ವೀಟ್; ಇಲ್ಲದಿದ್ದರೆ ಎಲ್ಲಾ ಕೈಮೀರಿ ಹೋಗುತ್ತೆ!
ಮೂವತ್ತು ವರ್ಷಗಳ ನಂತರ ಮೆಂತ್ಯ ಬೀಜಗಳು, ಓಟ್ಸ್, ದಾಲ್ಚಿನ್ನಿ, ಏಲಕ್ಕಿ, ಪೇರಲ, ಸೇಬು ಸೇವನೆ ಮತ್ತು ದಿನಚರಿಯಲ್ಲಿ ವ್ಯಾಯಾಮದಿಂದ ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಶಿಫಾರಸು.
Health Care: ಮಧುಮೇಹದ ಚಿಂತೆ ಬಿಟ್ಟುಬಿಡಿ; ನಿಶ್ಚಿತೆಯಿಂದ ಈ ಹಣ್ಣುಗಳು ತಿನ್ನಿ, ಶುಗರ್ ಲೆವೆಲ್ ಹೆಚ್ಚಾಗಲ್ಲ!
ಮಧುಮೇಹಿಗಳಿಗೆ ಪಪ್ಪಾಯಿ, ಪೇರಲ, ಸೇಬು, ಕಿತ್ತಳೆ, ನೇರಳೆ ಹಣ್ಣು, ಸ್ಟ್ರಾಬೆರಿಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
Health Tips: ಈ ಮಾತ್ರೆಗಳನ್ನು ತಿನ್ನುತ್ತಿರುವವರು ಕಾಫಿಯನ್ನು ಮರೆತು ಬಿಡಿ; ಇಲ್ಲದಿದ್ದರೆ ಜೀವಕ್ಕೇ ಡೇಂಜರ್!
ಕಾಫಿ ಬಿಪಿ, ಹೃದ್ರೋಗ, ಪ್ಯಾರಸಿಟಮಾಲ್, ಆಸ್ಪಿರಿನ್, ಶೀತ ಜ್ವರ, ಖಿನ್ನತೆ-ಶಮನಕಾರಿ, ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರು ಕಾಫಿ ಕುಡಿಯುವುದು ಅಪಾಯಕಾರಿ ಆಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

28 C