Skin Care: ಈ ಹಣ್ಣುಗಳನ್ನು ತಿನ್ನಿ; ರುಚಿ ಜೊತೆ ಆರೋಗ್ಯಕ್ಕೂ ಒಳ್ಳೆಯದು, ಸೌಂದರ್ಯಕ್ಕೂ ಒಳ್ಳೆಯದು!
ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ, ಪೇರಲ, ಕಲ್ಲಂಗಡಿ ಹಣ್ಣುಗಳು ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆಗೆ ಸಹಾಯ ಮಾಡುತ್ತವೆ ಎಂದು ಲೇಖನ ತಿಳಿಸುತ್ತದೆ.
Heart Health Risk: ಜಿಮ್ನಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ; ಲಬ್ಡಬ್ ಹೃದಯದ ಶಬ್ಧ ನಿಲ್ಲಬಹುದು!
ವಿಶೇಷವಾಗಿ ನೀವು ಜಿಮ್ನಲ್ಲಿ ತಪ್ಪಾಗಿ ವ್ಯಾಯಾಮ ಮಾಡಿದರೆ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವು ವೇಗವಾಗಿ ಹೆಚ್ಚಾಗಬಹುದು. ನೀವು ಹೆಚ್ಚು ಬೆವರಿದರೆ, ನಿಮ್ಮ ವ್ಯಾಯಾಮವು ಉತ್ತಮವಾಗಿರುತ್ತದೆ ಅಥವಾ ನೀವು ಎತ್ತುವ ತೂಕ ಹೆಚ್ಚಾದಷ್ಟೂ ಉತ್ತಮ ಎಂದು ಅನೇಕ ಮಂದಿ ಭಾವಿಸುತ್ತಾರೆ.
Union Budget 2026: ಕ್ಯಾನ್ಸರ್ ಹಾಗೂ ಮಧುಮೇಹಿಗಳಿಗೆ ಗುಡ್ ನ್ಯೂಸ್; ಇಳಿಯಲಿದೆ ಔಷಧಗಳ ರೇಟ್!
ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು, ಕ್ಯಾನ್ಸರ್ ಹಾಗೂ ಮಧುಮೇಹ ಔಷಧಿಗಳು ಅಗ್ಗವಾಗಲಿದೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿಯೇ ದಾಖಲಾಗುತ್ತಿವೆ. ಹಿಮೋಗ್ಲೋಬಿನ್ ಕುಸಿತ, ತೂಕ ಇಳಿಕೆ, ದೌರ್ಬಲ್ಯ ಮೊದಲಾದವು ಕ್ಯಾನ್ಸರ್ನ ಆರಂಭಿಕ ಲಕ್ಷಣಗಳಾಗಿವೆ. ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮತ್ತು ತ್ವರಿತ ತಪಾಸಣೆ ಅಗತ್ಯ.
Health Care: ಈ ಟೈಮ್ನಲ್ಲೇ ಕುಡಿಯಬೇಕಂತೆ ಎಳನೀರು; ಆಗ್ಲೇ ದೇಹದಲ್ಲಿ ಈ ಬದಲಾವಣೆಗಳಾಗೋದು!
ಎಳನೀರು ದೇಹಕ್ಕೆ ತ್ವರಿತ ಶಕ್ತಿ, ಪೌಷ್ಟಿಕಾಂಶ, ಎಲೆಕ್ಟ್ರೋಲೈಟ್ ಸಮತೋಲನ, ಜೀರ್ಣಕ್ರಿಯೆ ಸುಧಾರಣೆ, ಹೃದಯ ಹಾಗೂ ಚರ್ಮ ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ.
Health Camp: ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಈ ಶಿಬಿರ ಉಚಿತ; ನಾಳೆಯೇ ಇಲ್ಲಿ ಬನ್ನಿ!
ಶ್ರೀಮಂತ ಫೌಂಡೇಶನ್ ಜನವರಿ 31ರಂದು ಬೆಳಗಾವಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಿದೆ, ಸೇವಾಸದನ ಮತ್ತು ನಂದಾದೀಪ ನೇತ್ರಾಲಯ ಸಹಭಾಗಿತ್ವದಲ್ಲಿದೆ.
Health Care: ಸರಿಯಲ್ಲ ವಿಟಮಿನ್ ಡಿ ನಿರ್ಲಕ್ಷ್ಯ; ಈ ಸಮಸ್ಯೆಗೆ ಇಲ್ಲಿದೆ ನೋಡಿ ಕಾರಣ!
ದುರ್ಬಲವಾದ ಮೂಳೆಗಳಿಗೆ ವಿಟಮಿನ್ ಡಿ ಕೊರತೆ ಮೂಲ ಕಾರಣವಾಗಿದೆ. ಮಕ್ಕಳಲ್ಲಿ, ಇದು ರಿಕೆಟ್ಗಳನ್ನು ಉಂಟುಮಾಡಿದರೆ, ವಯಸ್ಕರಲ್ಲಿ ಇದು ಆಸ್ಟಿಯೋಮಲೇಶಿಯಾವನ್ನು ಉಂಟು ಮಾಡುತ್ತದೆ ಅಥವಾ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.
33 ವರ್ಷದ ಗರ್ಭಿಣಿಯೊಬ್ಬರು ಅತ್ಯಂತ ಸವಾಲಿನ ಸ್ಥಿತಿಯನ್ನು ದಾಟಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಗರದ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಮಹಿಳಾ ಆರೋಗ್ಯ ಮತ್ತು ಪ್ರಸೂತಿ ತಜ್ಞೆ ಡಾ. ನಿಶಾ ಬುಚಾಡೆ ತಿಳಿಸಿದ್ದಾರೆ.
ರಾತ್ರಿ ಮಲಗುವ ಮುನ್ನ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕಾಗಿ ರೇಷ್ಮೆ ದಿಂಬಿನ ಹೊದಿಕೆ, ಕೂದಲು ಒಣಗಿಸಿಕೊಳ್ಳುವುದು, ಮಸಾಜ್, ಹೇರ್ ಸೀರಮ್ ಬಳಕೆ ಮುಂತಾದ ಅಭ್ಯಾಸಗಳು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುತ್ತವೆ.
Health Care: ಚರ್ಮದ ಕ್ಯಾನ್ಸರ್ ಬರಲು ಕಾರಣವೇನು? ಈ ಲಕ್ಷಗಳು ಪತ್ತೆಯಾದ ರಕ್ಷಣ ಎಚ್ಚೆತ್ತುಕೊಳ್ಳಿ!
ಸೂರ್ಯನ ಬೆಳಕು, ಕೆಲವು ಆನುವಂಶಿಕ ಅಂಶಗಳು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದ ಉಂಟಾಗುವ ಡಿಎನ್ಎ ಹಾನಿ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ಬಾಯಿ ಚಪ್ಪರಿಸಿ ಸೇವಿಸುವ ಈ ಐದು ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೇ?!
ಇತ್ತೀಚೆಗೆ ಪೌಷ್ಠಿಕ ತಜ್ಞರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ವಿವರಿಸಿರುವ ಪ್ರಕಾರ ಎನರ್ಜಿ ಡ್ರಿಂಕ್ಗಳು, ಡಿಟಾಕ್ಸ್ ಪಾನೀಯಗಳು ಆರೋಗ್ಯಕರವಲ್ಲ. ಇವುಗಳನ್ನು ತ್ಯಜಿಸುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ! ಪೌಷ್ಠಿಕ ತಜ್ಞೆ ಮತ್ತು ಲೇಖಕಿಯಾಗಿರುವ ಅಮಿತಾ ಗಾಡ್ರೆ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಾವು ತ್ಯಜಿಸಿರುವ ಐದು ಆಹಾರಗಳ ಬಗ್ಗೆ ವಿವರ ನೀಡಿದ್ದಾರೆ. View this post on Instagram A post shared by Amita Gadre | Nutritionist (@amitagadre) ಅವರು ಹೇಳುವ ಪ್ರಕಾರ, ಮೊದಲನೆಯದಾಗಿ ಎನರ್ಜಿ ಡ್ರಿಂಕ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೆಫೈನ್ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಕೆಫೈನ್ ಸೇವನೆ ಆರೋಗ್ಯಕ್ಕೆ ಒಳಿತಲ್ಲ. ಎರಡನೆಯದಾಗಿ, “ಡಿಟಾಕ್ಸ್ ಜ್ಯೂಸ್ಗಳು ಅಥವಾ ತರಕಾರಿ ಜ್ಯೂಸ್ಗಳು ಅಥವಾ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದಿಲ್ಲ. ಏಕೆಂದರೆ ನನಗೆ ನನ್ನ ಕಿಡ್ನಿಗಳು (ಮೂತ್ರಪಿಂಡಗಳು) ಇಷ್ಟ. ನನ್ನ ಕಿಡ್ನಿಗಳ ಮೇಲೆ ಹೆಚ್ಚುವರಿ ಆಕ್ಸಲೇಟ್ ಲೊಡ್ಗಳನ್ನು ಹೇರಲು ಬಯಸುವುದಿಲ್ಲ. ಅದೇ ಕಾರಣಕ್ಕಾಗಿ ನಾನು ಡಿಟಾಕ್ಸ್ ಪಾನೀಯಗಳು ಮತ್ತು ತರಕಾರಿ ಪಾನೀಯಗಳನ್ನು ಕೂಡ ಸೇವಿಸುವುದಿಲ್ಲ. ಮತ್ತು ನಾನು ಹಣ್ಣಿನ ರಸಗಳನ್ನೂ ಸೇವಿಸುವುದಿಲ್ಲ. ಬೇಕೆಂದರೆ ಹಣ್ಣನ್ನೇ ತಿನ್ನುತ್ತೇನೆ” ಎನ್ನುತ್ತಾರೆ ಅಮಿತಾ. ಮೂರನೆಯದಾಗಿ, “ಕೆಂಪು ಬಣ್ಣ ಇರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹಸಿರು ತರಕಾರಿಗಳಿಗೆ ಕೆಂಪು ಬಣ್ಣವಿದ್ದರೂ ಸಹ ತ್ಯಜಿಸುತ್ತೇನೆ. ಅವುಗಳೆಲ್ಲವೂ ಬಣ್ಣ ಬೆರೆಸಿರುವುದಾಗಿರುತ್ತದೆ. ಕೇಕ್ಗಳು ಮತ್ತು ಆಹಾರಗಳ ಮೇಲೂ ಕೆಂಪು ಬಣ್ಣ ಇರುತ್ತದೆ. ಚಿಕನ್ ಲಾಲಿಪಪ್ಗಳ ಮೇಲೂ ಬಣ್ಣವಿರುತ್ತವೆ. ಹೀಗೆ ಬಣ್ಣ ಬೆರೆಸಿದ ಆಹಾರವನ್ನು ನಾನು ಎಂದಿಗೂ ಸೇವಿಸುವುದಿಲ್ಲ.” ನಾಲ್ಕನೆಯದಾಗಿ, “ಕುರುಕುರುಲು ತಿನಿಸುಗಳನ್ನು ಸೇವಿಸುವುದಿಲ್ಲ. ಮಿಕ್ಸ್ಚರ್ಗಳು, ಸೋಂಟೆಗಳು, ಚಕ್ಕುಲಿಗಳು ಅಥವಾ ಮುರುಕುಗಳು, ಬುಜಿಯಾಗಳು ಇರಬಹುದು, ಅವುಗಳನ್ನು ತ್ಯಜಿಸುತ್ತೇನೆ. ಏಕೆಂದರೆ, ಇವುಗಳಲ್ಲಿ ಹೆಚ್ಚು ಟ್ರಾನ್ಸ್ ಕೊಬ್ಬುಗಳು ಇಲ್ಲ ಎಂದು ಕಂಡುಬಂದರೂ ಈ ಉತ್ಪನ್ನಗಳು ಹೃದಯದ ಮೇಲೆ ಹೆಚ್ಚಿನ ಹೊರೆ ನೀಡುತ್ತದೆ. ನನಗೆ ನನ್ನ ಹೃದಯ ಎಂದರೆ ಇಷ್ಟ, ನನ್ನ ಹೃದಯದ ರಕ್ತ ನಾಳಗಳ ಮೇಲೆ ಹೆಚ್ಚುವರಿ ಪದರಗಳು ರೂಪುಗೊಳ್ಳುವುದು ನನಗೆ ಬೇಕಾಗಿಲ್ಲ” ಎನ್ನುತ್ತಾರೆ. ಐದನೆಯದಾಗಿ, “ನಾನು ತಾಜಾ ಕ್ರೀಮ್ಗಳು ಅಥವಾ ವಿಪ್ಡ್ ಕ್ರೀಮ್ಗಳನ್ನು (ಹಾಲಿನ ಕೆನೆ) ಹೊಂದಿರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹೈನುಗಾರಿಕಾ ಉತ್ಪನ್ನಗಳಲ್ಲಿರುವ ಕ್ರೀಮ್ಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ವಿಪ್ಡ್ ಟಾಪಿಂಗ್ ಕ್ರೀಮ್ಗಳಲ್ಲಿ ವ್ಯತ್ಯಾಸವಿದೆ. ಜೊತೆಗೆ ಯಾವುದೇ ಕೋಲ್ಡ್ ಕಾಫಿಗಳು ಅಥವಾ ಐಸ್ ಕ್ರೀಮ್ಗಳು ಅಥವಾ ಪೇಸ್ಟ್ರಿಗಳು ಮತ್ತು ಡೆಸರ್ಟ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅವುಗಳ ಮೇಲಿರುವ ವಿಪ್ಡ್ ಕ್ರೀಮ್ಗಳು ತಾಳೆ ಎಣ್ಣೆಯಿಂದ ತಯಾರಾಗುತ್ತವೆ. ಹೀಗಾಗಿ ಅವುಗಳನ್ನು ಸೇವಿಸುವುದಿಲ್ಲ” ಎನ್ನುತ್ತಾರೆ ಅಮಿತಾ.
Health Care: ಹೈಬಿಪಿ ಇರೋರು ಜೀವನ ಪರ್ಯಂತ ಟ್ಯಾಬ್ಲೆಟ್ ತಿನ್ನದಿದ್ರೂ ನಡೆಯುತ್ತಾ? ವೈದ್ಯರು ಹೀಗಂತಾರೆ ನೋಡಿ
ಅಧಿಕ ರಕ್ತದೊತ್ತಡ ಯುವಕರಲ್ಲೂ ಹೆಚ್ಚುತ್ತಿದೆ. ಆದರೆ ಜೀವನಶೈಲಿ ಬದಲಾವಣೆ ಮತ್ತು ವೈದ್ಯರ ಸಲಹೆಯೊಂದಿಗೆ ಮಾತ್ರ ಔಷಧಿ ಸೇವಿಸುವುದು ಉತ್ತಮ. ಜೊತೆಗೆ ಬಿಪಿ ನಿಯಂತ್ರಿಸಲು ನಿಯಮಿತ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಅಗತ್ಯ.
Baby Planning: ಮಗು ಬೇಕು ಅನಿಸ್ತಿದ್ಯಾ? ಹಾಗಾದ್ರೆ ಮೊದ್ಲು ನೀವು ಮಾಡಬೇಕಾಗಿರುವ 5 ಕೆಲಸಗಳಿವು!
ಮಗು ಹೊಂದಲು ಸರಿಯಾದ ವಯಸ್ಸು 20-30 ವರ್ಷ. ಆದರೆ ಮಗು ಹೊಂದುವ ಮುನ್ನ ದೈಹಿಕ ಆರೋಗ್ಯ, ಆರ್ಥಿಕ ಸ್ಥಿರತೆ, ಭಾವನಾತ್ಮಕ ಸಿದ್ಧತೆ ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
Heart Attack: ಗೊರಕೆಗೂ, ಹಾರ್ಟ್ ಅಟ್ಯಾಕ್ಗೂ ಸಂಬಂಧ ಇದ್ಯಾ? ಯುವಕರೇ, ಇಲ್ಲಿದೆ ಬೆಚ್ಚಿ ಬೀಳೋ ಸುದ್ದಿ!
ರಾತ್ರಿ ಹೊತ್ತು ಮಲಗಿದಾಗ ಗೊರಕೆ ಹೊಡೆಯುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಗೊರಕೆ ಹೊಡೆಯುವಾಗ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದು ಆಮ್ಲಜನಕದ ಇಳಿಕೆಗೆ ಕಾರಣವಾಗುತ್ತದೆ.
ʼಅರಿಶಿಣ ಸಾಬೂನಿನ ಪ್ರಚಾರಕ್ಕೆ ಮುಗಿ ಬೀಳಬೇಡಿʼ; ವೈದ್ಯರ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo Credit : freepik ಅರಿಶಿಣ ಸಾಬೂನು ಅನೇಕ ಲಾಭಗಳನ್ನು ತರುವುದು ನಿಜವಾಗಿದ್ದರೂ, ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಮನಗಾಣಬೇಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಅರಿಶಿಣಯುಕ್ತ ಸಾಬೂನಿನ ಚರ್ಚೆ ನಡೆಯುತ್ತಿದೆ. ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಅರಿಶಿಣ ಮದ್ದು ಎನ್ನುವ ಸುದ್ದಿ ಚರ್ಚೆಯಲ್ಲಿದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಚರ್ಮರೋಗ ತಜ್ಞರಾದ ಡಾ. ರಿಂಕಿ ಕಪೂರ್ ಪ್ರಕಾರ ಅರಿಶಿಣ ಸಾಬೂನು ಚರ್ಮಕ್ಕೆ ಉತ್ತಮ. “ಅರಿಶಿಣ ಸಾಬೂನಿನಲ್ಲಿ ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯ ವಿರೋಧಿ ತತ್ವಗಳು ಹೆಚ್ಚಿದ್ದು, ಚರ್ಮಕ್ಕೆ ಲಾಭದಾಯಕವಾಗಿ ಪರಿಣಮಿಸಲಿದೆ” ಎನ್ನುತ್ತಾರೆ ರಿಂಕಿ ಕಪೂರ್. “ಅರಿಶಿಣವು ಕರ್ಕ್ಯುಮಿನ್ನಿಂದ ತುಂಬಿರುತ್ತದೆ ಎನ್ನುವುದು ತಿಳಿದಿರುವ ಸತ್ಯ. ಕರ್ಕ್ಯುಮಿನ್ ಚರ್ಮದಲ್ಲಿ ಕೆಂಪು ಮತ್ತು ಮೊಡವೆಗಳನ್ನು ನಿಭಾಯಿಸುತ್ತದೆ. ಚರ್ಮದ ಟೋನ್ ಅನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ” ಎನ್ನುತ್ತಾರೆ ರಿಂಕಿ ಕಪೂರ್. ಮನೆಯಲ್ಲಿ ಸಾಬೂನು ತಯಾರಿಸಬಹುದೆ? “ಮನೆಯಲ್ಲಿ ಸಾಬೂನು ತಯಾರಿಸಲು ಅರಿಶಿಣ ಪುಡಿ, ಅಗತ್ಯ ಎಣ್ಣೆಗಳು ಮತ್ತು ಸಾಬೂನಿನ ಬೇಸ್ ಮತ್ತು ಸಾಬೂನಿನ ಮೌಲ್ಡ್ ಬೇಕಾಗಿರುತ್ತದೆ. ಎಲ್ಲ ಅಂಶಗಳನ್ನು ಮಿಶ್ರ ಮಾಡಿ ಮತ್ತು ಮಿಶ್ರಣವನ್ನು ಮೌಲ್ಡ್ ಮೇಲೆ ಸುರಿಸಿ 24 ಗಂಟೆಗಳ ಕಾಲ ಸೆಟ್ ಆಗಲು ಬಿಡಬೇಕು. ನಂತರ ಸಾಬೂನನ್ನು ಮೌಲ್ಡ್ನಿಂದ ತೆಗೆದು ಅನುಕೂಲಕರವಾಗಿ ಬಳಸಬಹುದು” ಎನ್ನುತ್ತಾರೆ ವೈದ್ಯರು. ಆದರೆ, ಅರಿಶಿಣ ಸಾಬೂನು ಅನೇಕ ಲಾಭಗಳನ್ನು ತರುವುದು ನಿಜವಾಗಿದ್ದರೂ, ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಮನಗಾಣಬೇಕಿದೆ. ಅನೇಕ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು. ಅರಿಶಿಣ ಸಾಬೂನು ಎಲ್ಲರಿಗೂ ಸೂಕ್ತವಲ್ಲ: ಅತಿ ಸಂವೇದನಾಶೀಲ ಚರ್ಮ ಇರುವವರು, ಅರಿಶಿಣದಿಂದ ಅಲರ್ಜಿ ಇರುವವರು ಅಥವಾ ನಿರ್ದಿಷ್ಟ ಚರ್ಮದ ಸ್ಥಿತಿಗಳು ಇರುವವರಿಗೆ ಉರಿಯೂತದ ಅನುಭವವಾಗಬಹುದು. “ಡೈರ್ಮಟೈಟಿಸ್ (ಚರ್ಮದ ಉರಿಯೂತ), ಸೊರಿಯಾಸಿಸ್ ಅಥವಾ ರೊಸಾಸಿಯಂತಹ ಚರ್ಮ ರೋಗಗಳನ್ನು ಹೊಂದಿರುವವರು ಸಾಬೂನು ಬಳಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಯಾವುದೇ ಚರ್ಮದ ಆರೈಕೆ ಉತ್ಪನ್ನ ಬಳಸುವಾಗ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಲು ಪ್ಯಾಚ್ ಪರೀಕ್ಷೆಯು ನಿರ್ಣಾಯಕವಾಗಿರುತ್ತದೆ” ಎನ್ನುತ್ತಾರೆ ರಿಂಕಿ. ಒಬ್ಬರಿಗೆ ಚೆನ್ನಾಗಿ ಅನ್ವಯಿಸುವ ವಸ್ತು ಮತ್ತೊಬ್ಬರಿಗೆ ಸೂಕ್ತವಾಗದೆ ಇರಬಹುದು. ಹೀಗಾಗಿ, ಚರ್ಮತಜ್ಞರಿಂದ ಪರೀಕ್ಷೆಗೆ ಒಳಪಡಿಸಿ ವಸ್ತುಗಳನ್ನು ಬಳಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. “ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುವ ಕಾರಣಕ್ಕೆ ಒಂದು ಸಾಬೂನನ್ನು ಬಳಸಬೇಡಿ. ಹಾಗೆ ಮಾಡಿದಲ್ಲಿ ನಿಮ್ಮ ಚರ್ಮಕ್ಕೆ ದೊಡ್ಡ ಸಮಸ್ಯೆಯನ್ನು ತಂದುಕೊಳ್ಳಬಹುದು. ಸ್ವಯಂ ಆಗಿ ಯಾವುದೇ ಉತ್ಪನ್ನ ಆರಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ” ಎನ್ನುತ್ತಾರೆ ರಿಂಕಿ ಕಪೂರ್.
Women Health: ಹೆರಿಗೆ ನಂತರ ದೇಹದಲ್ಲಾಗುವ ಈ ಬದಲಾವಣೆಗಳು ಕಾಮನ್ ಅಲ್ಲ; ಇವು ಗಂಭೀರ ಸಮಸ್ಯೆಯ ಲಕ್ಷಣಗಳು!
ಹೆರಿಗೆಯ ನಂತರ ತಾಯಿಯ ದೇಹ ಮತ್ತು ಮನಸ್ಸಿನಲ್ಲಿ ಬರುವ ಗಂಭೀರ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು ಎಂದು ಡಾ. ಆಂಚಲ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
ನಾವಿಲ್ಲಿ 85 ಕೆ.ಜಿ ತೂಕ ಇಳಿಸಿಕೊಂಡು, ಸುಸ್ಥಿರ ಜೀವನಶೈಲಿಯೇ ನನ್ನ ತೂಕ ಇಳಿಕೆಗೆ ಕಾರಣವೆಂದು ಹೇಳಿದ ಸ್ಪೂರ್ತಿದಾಯಕ ಮಹಿಳೆ ಬಗ್ಗೆ ತಿಳಿಯೋಣ ಬನ್ನಿ.
Pregnancy: ಆರೋಗ್ಯವಂತರಾಗಿದ್ದರೂ ಗರ್ಭದಾರಣೆ ಸಾಧ್ಯವಾಗ್ತಿಲ್ಲವೇ? ಹಾಗಾದ್ರೆ, ಈ ಸಮಸ್ಯೆಯೇ ಕಾರಣವಾಗಿರಬಹುದು!
ಮೇಲ್ನೋಟಕ್ಕೆ ಆರೋಗ್ಯಕರವಾಗಿದ್ದರೂ ಗರ್ಭಧಾರಣೆಯಾಗುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ಗರ್ಭಧಾರಣೆ ಯಶಸ್ವಿಯಾಗಬೇಕು ಎಂದಾದರೆ ಸಮತೋಲಿತ ಜೈವಿಕ ಘಟನೆಗಳ ಅನುಕ್ರಮ ಮುಖ್ಯವಾಗಿದೆ.
ನೆಲ್ಲಿಕಾಯಿ ಜ್ಯೂಸ್ ವಿಟಮಿನ್ ಸಿ ಸಮೃದ್ಧ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಯಕೃತ್ತು, ಹೃದಯ, ಕೂದಲು, ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ದಿನ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
Health Care: ಕಿಚನ್ನಲ್ಲೇ ಇದೇ ಕ್ಯಾನ್ಸರ್ಗೆ ಮದ್ದು; ಮಾರಕ ಕಾಯಿಲೆಯಿಂದ ಪ್ರಾಣ ಉಳಿಸಿಕೊಳ್ಳಲು ಈ ಕೆಲಸ ಮಾಡಿ!
ಅರಿಶಿನ, ಬೆಳ್ಳುಳ್ಳಿ, ಶುಂಠಿ, ಟೊಮೆಟೊ, ತುಳಸಿ, ಎಲೆಕೋಸು, ಹೂಕೋಸು, ಬ್ರೊಕೊಲಿ, ದಾಲ್ಚಿನ್ನಿ, ಸಿಟ್ರಸ್ ಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸುವುದಾದರೆ ಈ ಸ್ಟೋರಿ ಓದಿ.
Health Care: ಯಾವಾಗಲೂ ಆಲಸ್ಯ ಅನುಭವ ನಿಮ್ಮನ್ನು ಕಾಡುತ್ತಿದೆಯೇ ? ಆಕ್ಟಿವ್ ಆಗಿರಲು ಈ ಪದಾರ್ಥಗಳನ್ನು ತಿನ್ನಿ!
ದಿನವಿಡೀ ನೀವು ಆಲಸ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಓಟ್ಸ್, ಎಳನೀರು ಮತ್ತು ಚಿಯಾ ಬೀಜಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಅಲ್ಲದೇ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಸಹ ಅಗತ್ಯ. ಹೀಗಿದ್ದರೂ ದೇಹದ ಆಯಾಸ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಅವಶ್ಯಕವಾಗಿದೆ.
ಮಧುಮೇಹ ನಿಯಂತ್ರಣಕ್ಕೆ ಏಪ್ರಿಕಾಟ್ ಎಲೆಗಳು, ಬೇವಿನ ಎಲೆಗಳು, ಮೆಂತ್ಯ ಎಲೆಗಳು, ಮಾವಿನ ಎಲೆಗಳು ಮತ್ತು ಕರಿಬೇವು ಎಲೆಗಳು ಸಹಾಯಕವಾಗಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
Colocasia Leaves: ಕೆಸುವಿನ ಎಲೆಯಲ್ಲಿದೆ ಆರೋಗ್ಯದ ಗುಟ್ಟು, ಕ್ಯಾನ್ಸರ್ಗೂ ರಾಮಬಾಣ ಈ ಮನೆಮದ್ದು
Colocasia Leaves: ಕರಾವಳಿ ಮತ್ತು ಮಲೆನಾಡು ಜನರಿಗೆ ಕೆಸು ಎಲೆಗಳ ಬಗ್ಗೆ ಜಾಸ್ತಿ ಹೇಳುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಪ್ರಕೃತಿ ಹೇರಳವಾಗಿ ಬೆಳೆಯುವ ಕೆಸುವಿನ ಎಲೆ ಆರೋಗ್ಯದ ದೃಷ್ಟಿಯಲ್ಲಿ ಬಹಳ ಸಹಕಾರಿ.
Kitchen Hacks: ಜೀರಿಗೆಯಲ್ಲೂ ಇದೆ ನಕಲಿ! ಮನೆಗೆ ತಂದು ಯಾಮಾರೋ ಮುನ್ನ ಈ ರೀತಿ ಪತ್ತೆ ಹಚ್ಚಿ
ಮಾರುಕಟ್ಟೆಯಲ್ಲಿ ಜೀರಿಗೆಗೆ ಬೆಲೆ ತುಂಬಾ ದುಬಾರಿಯಾಗಿರುವುದರಿಂದ, ಲಾಭ ಗಳಿಸಲು ಇದನ್ನು ಕಲಬೆರಕೆ ಮಾಡಲಾಗುತ್ತದೆ. ನೀವು ಅಡುಗೆಗೆ ಬಳಸುತ್ತಿರುವ ಜೀರಿಗೆ ಕಲಬೆರಕೆಯೋ ಅಥವಾ ನಕಲಿಯೋ, ಇದನ್ನು ಸೇವಿಸುವುದರಿಂದ ಇದು ಆರೋಗ್ಯ ಮೇಲೆ ಬೀರುವ ಪರಿಣಾಮವೇನು ಈ ಬಗ್ಗೆ ತಿಳಿಯುವ ಆಸಕ್ತಿ ನಿಮಗಿದ್ದರೆ ಈ ಸ್ಟೋರಿ ಓದಿ.
Warm Water: ಬಿಸಿ ನೀರು ಕುಡಿದ್ರೆ ನಿಜಕ್ಕೂ ಸಣ್ಣ ಆಗ್ತಾರಾ? ತಜ್ಞರು ಹೇಳ್ತಿರೋದು ಹೀಗೆ!
ನಾವು ಬೆಚ್ಚಗಿನ ನೀರನ್ನು ಕುಡಿಯುವಾಗ, ನಮ್ಮ ದೇಹದ ಉಷ್ಣತೆಯು ಸ್ವಲ್ಪ ಹೆಚ್ಚಾಗುತ್ತದೆ. ಈ ತಾಪಮಾನವನ್ನು ಸಾಮಾನ್ಯ ಸ್ಥಿತಿಗೆ ತರಲು, ದೇಹವು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ, ಇದು ದೇಹದ 'ಚಯಾಪಚಯ ದರ'ವನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯು ಉತ್ತಮವಾದಷ್ಟೂ, ಕ್ಯಾಲೊರಿಗಳು ವೇಗವಾಗಿ ಸುಡಲ್ಪಡುತ್ತವೆ.
Bottle Gourd: ವೇಸ್ಟ್ ಅಂತ ಬೀಸಾಡಬೇಡಿ; ಸೋರೆಕಾಯಿ ಸಿಪ್ಪೆಯಲ್ಲಿದೆ ಸಿಕ್ಕಾಪಟ್ಟೆ ಪೋಷಕಾಂಶ!
ಸೋರೆಕಾಯಿ ಸಿಪ್ಪೆ ಫೈಬರ್ನಲ್ಲಿ ಸಮೃದ್ಧವಾಗಿವೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಮಲಬದ್ಧತೆ, ಗ್ಯಾಸ್ ಮತ್ತು ಆ್ಯಸಿಡಿಟಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೈಸರ್ಗಿಕ ಪರಿಹಾರವನ್ನು ನೀಡುತ್ತವೆ.
Health Care: ಕುಷ್ಟ ರೋಗಕ್ಕೆ ಆಯುರ್ವೇದಲ್ಲಿದೆ ಔಷಧಿ; ಈ ಗಿಡಮೂಲಿಕೆಗಳೇ ಸಂಜೀವಿನಿ!
‘ಲೆಪ್ರೊಸಿ’ ಕಾಯಿಲೆಯ ವಿಚಾರಕ್ಕೆ ಸಂಬಂದಪಟ್ಟಂತೆ ಹಲವಾರು ಗುರುತರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತ್ತೀಚಿನ ದಿನಗಳಲ್ಲಿ ಹತೋಟಿಗೆ ತಂದರೂ ಇನ್ನೂ ಸಹ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಪ್ರಮುಖ ಸಮಸ್ಯೆಯಾಗಿಯೆ ಉಳಿದಿರುವುದಕ್ಕೆ ಕಾರಣ ಈ ರೋಗದ ಸ್ವಭಾವ ಮತ್ತು ತೀವ್ರತೆ.
Health Care: 20 ಭಾರತೀಯರಲ್ಲಿ ಒಬ್ಬರಿಗೆ ಬರುತ್ತಂತೆ ಈ ವಿಚಿತ್ರ ಕಾಯಿಲೆ! ಏನಿದು, ಯಾಕೆ ಬರುತ್ತೆ ಗೊತ್ತಾ?
ಪ್ರಪಂಚದಾದ್ಯಂತ 7,000 ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳು ವರದಿಯಾಗಿವೆ, ಇವು ಆನುವಂಶಿಕ ಕ್ಯಾನ್ಸರ್ಗಳು, ಸ್ವಯಂ ನಿರೋಧಕ ಪರಿಸ್ಥಿತಿಗಳು, ಜನ್ಮಜಾತ ವಿರೂಪಗಳು ಮತ್ತು ಲೈಸೋಸೋಮಲ್ ಶೇಖರಣಾ ಅಸ್ವಸ್ಥತೆಗಳಂತಹ ಚಯಾಪಚಯ ಕಾಯಿಲೆಗಳನ್ನು ಒಳಗೊಂಡಿವೆ.
Skin Care: ಕಾಸ್ಟ್ಲಿ ಕ್ರೀಮ್ ಅಗತ್ಯವಿಲ್ಲ, ದಿನಕ್ಕೆರಡು ಬಾರಿ ಈ ಕೆಲ್ಸ ಮಾಡಿ; ಆಯ್ಲಿ ಸ್ಕಿನ್ ದೂರಾಗುತ್ತೆ!
ಎಣ್ಣೆಯುಕ್ತ ತ್ವಚೆಯ ಸಮಸ್ಯೆಯಿಂದ ಬಳಲುತ್ತಿರುವವರು ಹಸಿ ಹಾಲು, ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮಿಶ್ರಣದ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಅದರಲ್ಲೂ ಚೆನ್ನಾಗಿ ನೀರು ಕುಡಿಯುವ ಮೂಲಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನಲಾಗಿದೆ.
Health Tips: ಸ್ನಾನ ಮಾಡಿದ್ಮೇಲೆ ಕಿವಿಯೊಳಗೆ ನೀರು ಸೇರಿಕೊಂಡಿದ್ಯಾ? ಜೋಪಾನವಾಗಿ ಹೀಗೆ ತೆಗೆದು ಹಾಕಿ!
ಕಿವಿಯಲ್ಲಿ ಏನನ್ನಾದರೂ ಹಾಕುವುದರಿಂದ ಒಳಗಿನ ಚರ್ಮಕ್ಕೆ ಹಾನಿಯಾಗಬಹುದು. ಕೆಲವೊಮ್ಮೆ, ಕಿವಿಯೋಲೆ ಕೂಡ ರಂಧ್ರವಾಗಬಹುದು. ಹೀಗೆ ಮಾಡಿದರೆ ಕಿವಿ ಸೋಂಕು, ಕಿವಿ ನೋವು ಮತ್ತು ಶ್ರವಣ ಸಮಸ್ಯೆಗಳ ಅಪಾಯ ಉಂಟಾಗುತ್ತದೆ.
ತುಪ್ಪ- ಎಣ್ಣೆ ಸೇವಿಸದ ಆಹಾರ ಕ್ರಮ ಆರೋಗ್ಯಕ್ಕೆ ಹಾನಿಕರವೆ?
ಸಾಂದರ್ಭಿಕ ಚಿತ್ರ | Photo Credit : freepik ಶೂನ್ಯ ಕೊಬ್ಬಿನ ಆಹಾರ ಕ್ರಮದ ಅತಿ ದೊಡ್ಡ ಸಮಸ್ಯೆಯೆಂದರೆ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು ನಷ್ಟವಾಗುವುದು. ತೂಕ ಇಳಿಸಿಕೊಳ್ಳಲು ಬಯಸುವವರು ಬಹಳಷ್ಟು ಬಾರಿ ತಮ್ಮ ಆಹಾರದಿಂದ ಎಣ್ಣೆ ಮತ್ತು ತುಪ್ಪವನ್ನು ಹೊರಗಿಡುತ್ತಾರೆ. ಕ್ಯಾಲರಿಗಳನ್ನು ಕಡಿಮೆ ಮಾಡಲು ಇದು ಸರಳವಾದ ದಾರಿ ಎಂದು ಕಂಡುಬಂದರೂ ಪೌಷ್ಠಿಕ ತಜ್ಞರ ಪ್ರಕಾರ ಎಲ್ಲಾ ಕೊಬ್ಬುಗಳನ್ನು ತೆಗೆದು ಹಾಕುವುದು ದೇಹದ ಸಹಜ ಸಮತೋಲನವನ್ನು ಕದಡುತ್ತದೆ. ಆಕಾಶ್ ಹೆಲ್ತ್ಕೇರ್ನಲ್ಲಿ ಪೌಷ್ಠಿಕ ತಜ್ಞರಾಗಿರುವ ಡಾ ಗಿನ್ನಿ ಕಾರ್ಲಾ ಅವರು ಆರೋಗ್ಯಕರ ಆಯ್ಕೆಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಎಣ್ಣೆ-ತುಪ್ಪ ತೊರೆಯುವುದರಿಂದ ಏನಾಗುತ್ತದೆ? ಗಿನ್ನಿ ಕಾರ್ಲಾ ಹೇಳುವ ಪ್ರಕಾರ, ಶೂನ್ಯ ಕೊಬ್ಬಿನ ಆಹಾರ ಕ್ರಮದ ಅತಿ ದೊಡ್ಡ ಸಮಸ್ಯೆಯೆಂದರೆ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು ನಷ್ಟವಾಗುವುದು. “ಎಣ್ಣೆ ಮತ್ತು ತುಪ್ಪವನ್ನು ಸಂಪೂರ್ಣವಾಗಿ ತೊರೆದರೆ ವಿಟಮಿನ್ ಎ, ಡಿ, ಇ, ಕೆ ಸಿಗುವುದಿಲ್ಲ. ಈ ಪೌಷ್ಠಿಕಾಂಶಗಳನ್ನು ಬಳಸಬೇಕೆಂದರೆ ದೇಹಕ್ಕೆ ಆಹಾರದಲ್ಲಿನ ಕೊಬ್ಬಿನ ಅಗತ್ಯವಿರುತ್ತದೆ. ಈ ವಿಟಮಿನ್ಗಳು ಕಣ್ಣಿನ ಆರೋಗ್ಯ, ನಿರೋಧಕ ಶಕ್ತಿ, ಮೂಳೆ ಬಲ, ಆಂಟಿ ಆಕ್ಸಿಡಂಟ್ ರಕ್ಷಣೆ ಮತ್ತು ರಕ್ತ ಹೆಪ್ಪುಗಟ್ಟಲು ನೆರವಾಗುತ್ತವೆ.” ಅಷ್ಟೇ ಅಲ್ಲ, ಆರೋಗ್ಯಕರ ಕೊಬ್ಬುಗಳು ಒಮೆಗಾ 3 ಮತ್ತು ಒಮೆಗಾ 6ನಂತಹ ಅಗತ್ಯ ಕೊಬ್ಬಿನ ಆಮ್ಲಗಳನ್ನು ಒದಗಿಸುತ್ತವೆ. ಇವುಗಳನ್ನು ದೇಹ ಸ್ವತಃ ಉತ್ಪತ್ತಿ ಮಾಡುವುದಿಲ್ಲ. ಇವು ಮೆದುಳಿನ ಕೆಲಸ, ಹಾರ್ಮೋನ್ಗಳು, ಜೀವಕೋಶದ ಸಮಗ್ರತೆ ಮತ್ತು ಉರಿಯೂತ ನಿಯಂತ್ರಣಕ್ಕೆ ಮುಖ್ಯವಾಗುತ್ತವೆ. ಕೊಬ್ಬು ಇಲ್ಲದೆ ಇದ್ದರೆ ತರಕಾರಿಗಳು ಮತ್ತು ಆರೋಗ್ಯಕರ ಆಹಾರಗಳ ಲಾಭಗಳು ಸಿಗುವುದಿಲ್ಲ ಎಣ್ಣೆ-ತುಪ್ಪ ತೊರೆಯುವುದು ಆರೋಗ್ಯಕ್ಕೆ ಹಾನಿಕರವೆ? ದೀರ್ಘಕಾಲ ಶೂನ್ಯ ಎಣ್ಣೆ-ತುಪ್ಪ ಸೇವನೆ ಹಾರ್ಮೋನ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನರವ್ಯೂಹ ದುರ್ಬಲಗೊಳ್ಳುತ್ತದೆ. ಕೊಬ್ಬುಗಳು ಹೊಟ್ಟೆ ತುಂಬಿದ ಭಾವನೆ ತರುತ್ತವೆ. ಅವುಗಳಿಲ್ಲದೆ ಜನರು ಹೆಚ್ಚು ಕಾರ್ಬೋಹೈಡ್ರೇಟ್ ಸೇವಿಸಬಹುದು. ಕಡಿಮೆ ಕೊಬ್ಬಿನ ಆಹಾರಗಳು ಹೆಚ್ಚಾಗಿ ಸಕ್ಕರೆಯ ಹಂಬಲ, ಅತಿ ತಿನ್ನುವುದು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಅಸ್ಥಿರತೆಗೆ ಕಾರಣವಾಗಲಿದೆ. ಕಾಲಾನುಸಾರ ಆಯಾಸ ಕಂಡುಬರಬಹುದು ಮತ್ತು ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು. ಚರ್ಮ ಮತ್ತು ಕೀಲುಗಳ ಆರೋಗ್ಯ ಮೇಲೂ ಪರಿಣಾಮವಾಗಬಹುದು. ಸಾಕಷ್ಟು ಕೊಬ್ಬು ಸೇವನೆಯ ಚಿಹ್ನೆಗಳು ಕೊಬ್ಬು ಸೇವನೆಯ ಕೊರತೆಯ ಚಿಹ್ನೆಗಳು ತಕ್ಷಣ ಕಾಣದೆ ಇರಬಹುದು. ಒಣಗಿದ ಅಥವಾ ಪದರ ಏಳುವ ಚರ್ಮ, ಕೂದಲು ಸೀಳು ಬಿದ್ದಿರುವುದು, ಕೂದಲು ಉದುರುವುದು ಮತ್ತು ಬಹಳ ಆಯಾಸ ಉಂಟಾಗುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಕೊಬ್ಬಿನ ಆಮ್ಲಗಳು ಅಗತ್ಯವಿವೆ. ಹೀಗಾಗಿ ಮನಸ್ಥಿತಿಯಲ್ಲಿ ಏರುಪೇರು, ಏಕಾಗ್ರತೆಯ ಕೊರತೆ ಮತ್ತು ಮೆದುಳಿಗೆ ಮಂಜುಬಡಿದ ಅನುಭವವಾಗಬಹುದು. ಜೊತೆಗೆ ನಿರಂತರ ಹಸಿವು, ಸಕ್ಕರೆ ತಿನ್ನುವ ಆಶಯ, ಋತುಚಕ್ರದಲ್ಲಿ ಏರುಪೇರು, ಕಡಿಮೆ ಫಲವತ್ತತೆ, ಆಗಾಗ ಸೋಂಕು ಕಾಣಿಸುವುದು, ಗಾಯಗಳು ನಿಧಾನವಾಗಿ ಗುಣವಾಗುವುದು ಮೊದಲಾದ ಸಮಸ್ಯೆ ಕಂಡುಬರಲಿದೆ. ಎಣ್ಣೆ-ತುಪ್ಪದ ಬದಲು ಏನು ತಿನ್ನಬಹುದು? ಹೆಚ್ಚುವರಿ ಎಣ್ಣೆ ತೊರೆಯಬೇಕೇ ವಿನಾ ಎಲ್ಲಾ ಕೊಬ್ಬುಗಳನ್ನು ಅಲ್ಲ. ಕಡಲೆಗಳು ಮತ್ತು ಬೀಜಗಳಾದ ಬಾದಾಮಿ, ವಾಲ್ನಟ್ಗಳು, ಫ್ಲ್ಯಾಕ್ಸ್ಬೀಜಗಳು, ಚಿಯಾ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇವಿಸಬಹುದು. ಇವುಗಳು ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್, ಫೈಬರ್ ಮತ್ತು ಸೂಕ್ಷ್ಮಪೋಷಕಾಂಶಗಳನ್ನು ಒದಗಿಸುತ್ತವೆ. ಬೆಣ್ಣೆಹಣ್ಣು, ಮೊಸರು, ಯೋಗಾರ್ಟ್, ಟೋನ್ಡ್ ಹಾಲಿನಂತಹ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಹುದು. ಮೀನು ಸೇವನೆಯಿಂದ ಒಮೆಗಾ 3 ಅಂಶ ಸಿಗುತ್ತಿದ್ದು, ಚಯಾಪಚಯ ಮತ್ತು ಹೃದಯದ ಆರೋಗ್ಯಕ್ಕೆ ಲಾಭಕರ. ಅಡುಗೆಯನ್ನು ಕಡಿಮೆ ಕೊಬ್ಬಿನಿಂದಲೂ ತಯಾರಿಸಬಹುದು. ಕನಿಷ್ಠ ಹಬೆಯಲ್ಲಿ ಬೇಯಿಸುವುದು, ಹುರಿಯುವುದು ಅಥವಾ ಗ್ರಿಲ್ ಮಾಡುವುದು, ಪೌಷ್ಠಿಕಾಂಶಕ್ಕೆ ಧಕ್ಕೆಯಾಗದಂತೆ ಹುರಿಯಬಹುದು. ಆ ರೀತಿಯಾಗಿ ಕ್ಯಾಲರಿಗಳನ್ನು ನಿರ್ವಹಿಸಬಹುದು. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
Health Care: ಈ ರೋಗಗಳಿಗೆ ಕುಂಬಳಕಾಯಿ ಬೀಜಗಳು ಸಂಜೀವಿನಿ! ಈ ರೀತಿ ಬಳಸಿದ್ರೆ ಔಷಧವೇ ಬೇಡ್ವಂತೆ!
ಕುಂಬಳಕಾಯಿ ಬೀಜಗಳು ಸಸ್ಯ ಆಧಾರಿತ ಪ್ರೋಟೀನ್ನ ಅತ್ಯುತ್ತಮ ಮೂಲವಾಗಿದೆ. ವಾಸ್ತವವಾಗಿ, ಇದರಲ್ಲಿ ಪ್ರೋಟೀನ್ ಅತ್ಯಧಿಕವಾಗಿ ಲಭ್ಯವಿದ್ದು, ಸುಮಾರು 28 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ ಸುಮಾರು 7 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಅನ್ನು ದೇಹಕ್ಕೆ ಒದಗಿಸುತ್ತದೆ.
Health Care: ಕನ್ನಡಕ ಧರಿಸಿದ್ರೆ ದೃಷ್ಟಿ ಮಂದವಾಗುತ್ತಾ? ವೈದ್ಯರು ಹೇಳೋದೇನು ಗೊತ್ತಾ?
ಕನ್ನಡಕ ಕಣ್ಣುಗಳನ್ನು ದುರ್ಬಲಗೊಳಿಸುತ್ತದೆ ಎಂಬ ಭಾವನೆ ಅನೇಕ ಮಂದಿಗಿದೆ. ಆದರೆ ಇದು ಬದಲಿಗೆ ದೃಷ್ಟಿ ಸಮಸ್ಯೆಗಳನ್ನು ಸರಿಪಡಿಸಿ ಸ್ಪಷ್ಟವಾಗಿ ಕಣ್ಣುಗಳು ಕಾಣಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
Beauty Tips: ದಿನೇ-ದಿನೆ ತ್ವಚೆ ಕಪ್ಪಾಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿದ್ರೆ, 21 ದಿನಗಳಲ್ಲೇ ಬೆಳ್ಳಗೆ ಆಗ್ತಾರಂತೆ!
ಅರಿಶಿನ-ಮೊಸರು ಪೇಸ್ಟ್ ಮತ್ತು ಕೋಲ್ಗೇಟ್-ಸಕ್ಕರೆ ಫೇಸ್ ಪ್ಯಾಕ್ ಚರ್ಮವನ್ನು ಸುಂದರಗೊಳಿಸಲು ಸಹಾಯ ಮಾಡುತ್ತವೆ. ಆದರೆ ಇವುಗಳನ್ನು ತ್ವಚೆಗೆ ಹಚ್ಚಿಕೊಳ್ಳುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ.
Urination: ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ್ತಿದ್ದೀರಾ? ಶುಗರ್ ಅಲ್ಲ ಈ ಸಮಸ್ಯೆನೂ ಇರಬಹುದು!
ಅನೇಕ ಪುರುಷರು ಆಗಾಗ್ಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಅಂತ ಹೋಗುತ್ತಿರುತ್ತಾರೆ, ಇದು ವಿಶೇಷವಾಗಿ ವಯಸ್ಸಾದಂತೆ ಕಂಡು ಬರುವ ಸಮಸ್ಯೆಯಾಗಿದೆ. ಸಾಮಾನ್ಯ ಮೂತ್ರ ವಿಸರ್ಜನಾ ಸಮಸ್ಯೆಗಳಿಗೆ ಕಾರಣವಾಗಿದ್ದರೂ, ಇದು ಕೆಲವೊಮ್ಮೆ ಪ್ರಾಸ್ಟೇಟ್ ಕ್ಯಾನ್ಸರ್ನ ಆರಂಭಿಕ ಹಂತಗಳನ್ನು ಸಹ ಸೂಚಿಸುತ್ತದೆ.
Health Care: 60 ವರ್ಷ ದಾಟಿದ್ಮೇಲೆ ಬೆಳಿಗ್ಗೆ ಬೇಗ ಎದ್ದೇಳಬೇಕೋ ಅಥವಾ ಲೇಟಾಗಿ ಎದ್ದೇಳೋದು ಬೆಸ್ಟೋ?
ನಿದ್ದೆಯ ತಜ್ಞರು ಹೇಳೋ ಪ್ರಕಾರ, ವಯಸ್ಸಾದಂತೆ ನಮ್ಮ ಶರೀರದ ಆಂತರಿಕ ಗಡಿಯಾರ ಸ್ವಲ್ಪ ವೇಗವಾಗಿ ಓಡೋಕೆ ಶುರು ಮಾಡುತ್ತೆ. ಅದಕ್ಕೆ ನಮಗೆ ಸಂಜೆ ಬೇಗ ನಿದ್ದೆ ಬರುತ್ತೆ ಮತ್ತು ಬೆಳಗ್ಗೆ ಬೇಗ ಎಚ್ಚರ ಆಗುತ್ತೆ. ಇದನ್ನ ಹೇಗೆ ಮ್ಯಾನೇಜ್ ಮಾಡಬೇಕು ಅಂತ ಇವತ್ತು ತಿಳಿದುಕೊಳ್ಳೋಣ.
ಪ್ರೊಟೀನ್ ಆಹಾರ ಕ್ರಮದಿಂದ ಮಧುಮೇಹದಲ್ಲಿ ಏರಿಕೆಯಾಗಿದೆಯೆ?; ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಚರ್ಚೆ
ಸಾಂದರ್ಭಿಕ ಚಿತ್ರ | Photo Credit : freepik.com ಪ್ರೊಟೀನ್ ಮತ್ತು ಇನ್ಸುಲಿನ್ಗೆ ಸಂಬಂಧಿಸಿದಂತೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ನಡುವೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಹಾಗಿದ್ದರೆ ಅತಿಯಾಗಿ ಪ್ರೊಟೀನ್ ಸೇವಿಸಬಾರದು ಎನ್ನುವ ಸಲಹೆ ಸರಿಯೆ? ಎರಡೂ ಕಡೆಯ ವೈದ್ಯರು ಭಾರತದಲ್ಲಿ ವ್ಯಾಪಕ ಪ್ರೊಟೀನ್ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಸಕ್ಕರೆ ಅಂಶ ಕಡಿಮೆ ಮಾಡಿ ಆರೋಗ್ಯಕರ ಆಹಾರ ಸೇವನೆಗೆ ಸಲಹೆ ನೀಡಿದ್ದಾರೆ. ಲಂಡನ್ ಮೂಲದ ವೈದ್ಯರಾದ ಡಾ. ಸುಮಿತ್ ಶರ್ಮಾ ಅವರು ಜನವರಿ 16ರಂದು ಇನ್ಸುಲಿನ್ ಕುರಿತಂತೆ ‘ಸತ್ಯಾಂಶ’ ಎಂದು ಬರೆದ ಪೋಸ್ಟ್ಗೆ ಉತ್ತರವಾಗಿ ವೈದ್ಯರಾದ ಅರವಿಂದ್ ಜನವರಿ 17ರಂದು ಹಾಕಿದ ಪೋಸ್ಟ್ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸುಮಿತ್ ಅವರು ವಿವಿಧ ಆಹಾರಗಳು ಹೇಗೆ ಇನ್ಸುಲಿನ್ ಟ್ರಿಗರ್ ಮಾಡುತ್ತವೆ ಎಂದು ವಿವರಿಸಿದ್ದರು. “ಡೈರಿ ಉತ್ಪನ್ನಗಳು ವೈಟ್ ಬ್ರೆಡ್ಗೂ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಪ್ರಚೋದಿಸಬಹುದು. ಬೆಳಗ್ಗೆ ಎದ್ದ ತಕ್ಷಣ 2 ಗಂಟೆಯೊಳಗೆ ಕಾರ್ಬೋಹೈಡ್ರೇಟ್ ಸೇವನೆ, ಸತು-ಮೆಗ್ನೇಶಿಯಂ-ಕ್ರೋಮಿಯಂಗಳ ಕೊರತೆಯಿಂದ ಇನ್ಸುಲಿನ್ ಪ್ರಚೋದಿಸಬಹುದು. ಸೋಯ, ತರಕಾರಿ ಎಣ್ಣೆ, ಕೆನೊಲ ಎಣ್ಣೆಗಳು ಉತ್ತಮವಲ್ಲ. ಕಾರ್ಬೊಹೈಡ್ರೇಟ್ ಸಂಪೂರ್ಣವಾಗಿ ಶತ್ರುವಲ್ಲ” ಮೊದಲಾದ ವಿವರಗಳನ್ನು ಬರೆದಿದ್ದರು. ಅದಕ್ಕೆ ಉತ್ತರಿಸಿದ ಡಾ ಅರವಿಂದ್, “ಪ್ರೊಟೀನ್ ಇನ್ಸುಲಿನ್ ಅನ್ನು ಟ್ರಿಗರ್ ಮಾಡುತ್ತದೆ. ಭಾರತದಲ್ಲಿ ನಡೆಯುತ್ತಿರುವ ಪ್ರೊಟೀನ್ ಪ್ರಚಾರಾಭಿಯಾನದ ಹಿಂದಿನ ಉದ್ದೇಶವೇನು ಎಂದು ಯಾರಿಗೆ ಹೇಳುವುದು. ಭಾರತೀಯರಿಗೆ ಅತಿಯಾದ ಪ್ರೊಟೀನ್ ಸೇವನೆಯನ್ನು ಉತ್ತೇಜಿಸುವ ಮೂಲಕ ಈಗಾಗಲೇ ಏರಿರುವ ಬೆಲೆಯನ್ನು (ಮೊಟ್ಟೆಗಳು ಮತ್ತು ಹಾಲು) ಇನ್ನಷ್ಟು ಏರಿಸಲಾಗುತ್ತಿದೆ. ಹಾಗಿರುವಾಗ ನಿಜವಾಗಿಯೂ ಪ್ರೊಟೀನ್ ಕೊರತೆ ಇರುವ ಬಡಜನರು ಪ್ರೊಟೀನ್ ಸಮೃದ್ಧ ಆಹಾರವನ್ನು ಪಡೆಯುವುದು ಹೇಗೆ? ಈಗ ಅನಗತ್ಯ ಪ್ರೊಟೀನ್ ಸೇವಿಸಿದರೆ ನಂತರ ನೀವು ಮಧುಮೇಹಿಗಳಾಗಿ ಪರಿವರ್ತನೆಯಾಗಬಹುದು. ಆದ್ದರಿಂದ ಪೌಷ್ಠಿಕಾಂಶದ ಸೇವನೆ ಮಿತಗೊಳಿಸುವುದು ಉತ್ತಮ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಕಡಿಮೆಗೊಳಿಸಿ. ಅಗತ್ಯವಿರುವಷ್ಟೇ ಪ್ರೊಟೀನ್ ಸೇವಿಸಿ. ತರಕಾರಿ ಹೆಚ್ಚು ಸೇವಿಸುವ ಮೂಲಕ ಫೈಬರ್, ವಿಟಮಿನ್ಗಳು ಮತ್ತು ಖನಿಜಾಂಶಗಳನ್ನು ಹೆಚ್ಚಿಸಿಕೊಳ್ಳಿ. ಆದರೆ ನಮ್ಮ ತುಪ್ಪ ಕೆಟ್ಟದು, ತೆಂಗಿನೆಣ್ಣೆ ಕೆಟ್ಟದು ಮತ್ತು ಉಪಾಹಾರ ಕೆಟ್ಟದು ಎನ್ನುವ ವಸಾಹತುಶಾಹಿ ಮನಸ್ಸುಗಳಿಂದ ಹೊರಬನ್ನಿ” ಎಂದು ಅವರು ಬರೆದುಕೊಂಡಿದ್ದಾರೆ. ಅರವಿಂದ್ ಅವರ ಪೋಸ್ಟ್ ಬಹಳ ಚರ್ಚೆಗೆ ಕಾರಣವಾಗಿದೆ. ಅತಿಯಾಗಿ ಪ್ರೊಟೀನ್ ಸೇವಿಸಬೇಡಿ ಎಂಬ ಅವರ ಸಲಹೆಗೆ ಎಲ್ಲಾ ವೈದ್ಯರು ಒಮ್ಮತ ವ್ಯಕ್ತಪಡಿಸಿಲ್ಲ. ಅರವಿಂದ್ ಅವರ ಪೋಸ್ಟ್ಗೆ ಉತ್ತರಿಸಿದ ಚೆನ್ನೈ ಮೂಲದ ಯೂರೋಲಜಿಸ್ಟ್ ಡಾ ಜೇಸನ್ ಫಿಲಿಪ್, “ಎಂದಿನಂತೆ ಈ ವ್ಯಕ್ತಿ ಈಗಲೂ ಕಸವನ್ನೇ ತುಂಬುತ್ತಿದ್ದಾರೆ. ಪ್ರೊಟೀನ್ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುವುದು ಕೆಟ್ಟದಲ್ಲ. ಮಧುಮೇಹವು ಇನ್ಸುಲಿನ್ ಸ್ರವಿಸುವಿಕೆಯಿಂದಲ್ಲ, ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ. ಕಾರ್ಬೋಹೈಡ್ರೇಟ್ಗಳಿಗೆ ಹೋಲಿಸಿದರೆ ಪ್ರೊಟೀನ್ನಿಂದ ಇನ್ಸುಲಿನ್ ಏರಿಕೆ ಅತಿ ಕಡಿಮೆ. ಕಾರ್ಬೋಹೈಡ್ರೇಟ್ನಂತಲ್ಲದೆ ಪ್ರೊಟೀನ್ ಎರಡೂ ಗ್ಲುಕಗೊನ್ ಮತ್ತು ಇನ್ಸುಲಿನ್ ಅನ್ನು ಪ್ರಚೋದಿಸುತ್ತದೆ” ಎಂದು ಫಿಲಿಪ್ ವೈಜ್ಞಾನಿಕವಾಗಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಈ ನಡುವೆ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಲ್ಯೂಕ್ ಕೌಟಿನ್ಹೊ, ಅಧಿಕ ಪ್ರೊಟೀನ್ ಸೇವನೆಯಿಂದ ಆಗುವ ಸಮಸ್ಯೆಗಳತ್ತ ಗಮನಹರಿಸಿದ್ದಾರೆ. “ಜನರೇ ಎಚ್ಚೆತ್ತುಕೊಳ್ಳಿ. ಅಧಿಕ ಪ್ರೊಟೀನ್ ಸೇವನೆಯಿಂದ ಉರಿಯೂತ, ಕರುಳಿನ ಸಮಸ್ಯೆ ಮತ್ತು ಸಕ್ಕರೆ ಪ್ರಮಾಣ ಏರಿಸಿಕೊಳ್ಳಬೇಡಿ. ಪ್ರೊಟೀನ್ ಸೇವನೆಯ ಪ್ರಚಾರದಲ್ಲಿ ನಿಮ್ಮ ಹಣವನ್ನು ಖರ್ಚು ಮಾಡುತ್ತಿದ್ದೀರಿ. ನಮಗೆ ಮ್ಯಾಜಿಕ್ ಪ್ರೊಟೀನ್ ಸಂಖ್ಯೆ 30ಗ್ರಾಂ, 50 ಗ್ರಾಂ ಮೇಲೆ ಗುರಿ ಇದೆ. ಆದರೆ ಅತ್ಯಧಿಕ ಪ್ರೊಟೀನ್ ಸೇವನೆಯ ನಡುವೆ ದೇಹಕ್ಕೆ ಕಸವನ್ನು ತುಂಬುತ್ತಿದ್ದೀರಿ” ಎಂದು ಎಚ್ಚರಿಸಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಶಶಿ ಅಯ್ಯಂಗಾರ್, ಪ್ರೊಟಿನ್ ಇನ್ಸುಲಿನ್ ಪ್ರಚೋದಿಸುತ್ತದೆ ಎನ್ನುವುದು ವಿಭಿನ್ನ ಸಂದರ್ಭಗಳಲ್ಲಿ ನಿಜವಾಗಬಹುದು. ಜೀವಶಾಸ್ತ್ರ ಮುಖ್ಯವಾಗುತ್ತದೆ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. “ಎಲ್ಲಾ ಇನ್ಸುಲಿನ್ ಏರಿಕೆಯನ್ನು ಒಂದೇ ಸಮವಾಗಿ ನೋಡುವುದನ್ನು ಬಿಟ್ಟುಬಿಡೋಣ” ಎಂದು ಹೇಳಿದ ಅವರು ಏಳು ಅಂಶಗಳನ್ನು ಮುಂದಿಟ್ಟು ಒಟ್ಟು ಚರ್ಚೆಗೆ ತಮ್ಮ ವಿವರವನ್ನು ಸೇರಿಸಿದ್ದಾರೆ. ಶಶಿ ಅವರಿಗೆ ಉತ್ತರ ನೀಡಿರುವ ಕರುಳು ತಜ್ಞೆ ಡಾ ಜಸ್ಮೀತ್ ಕೌರ್ ಅವರೂ ಪ್ರೊಟೀನ್ನಿಂದ ಇನ್ಸುಲಿನ್ ಟ್ರಿಗರ್ ಆಗುತ್ತದೆ ಎಂದು ಹೇಳಿದ್ದಾರೆ. “ಹೌದು, ಸಾಮಾನ್ಯ ದೈಹಿಕ ಪ್ರಕ್ರಿಯೆ ನಡೆಯುವುದೇ ಹಾಗೆ. ಇನ್ಸುಲಿನ್ ಅನ್ನು ಪ್ರೊಟೀನ್ ಟ್ರಿಗರ್ ಮಾಡದೆ ಇದ್ದರೆ ಅದರ ಬಹುಭಾಗ ಹೆಚ್ಚುವರಿ ಇಂಧನವಾಗುತ್ತಿತ್ತು ಮತ್ತು ಗ್ಲುಕೋಸ್ ಉತ್ಪಾದನೆಗೆ ಹೋಗುತ್ತಿತ್ತು” ಎಂದು ವಿವರಿಸಿದ್ದಾರೆ. ಚಿಕಾಗೋ ಮೂಲದ ವೈದ್ಯ ಡಾ ಲೇಮನ್ ಅವರು ವಿವರಿಸಿ, “ಪ್ರೊಟೀನ್ ಸಂಶ್ಲೇಷಣೆಯನ್ನು ಬಲಪಡಿಸಲು ಪ್ರೊಟೀನ್ ಹಂತ 1 ಇನ್ಸುಲಿನ್ ಬಿಡುಗಡೆ ಮಾತ್ರ ಪ್ರಚೋದಿಸುತ್ತದೆ. ಗ್ಲುಕೋಸ್ ವಿಲೇವಾರಿಗೆ ಹಂತ 11 ಅನ್ನು ಪ್ರಚೋದಿಸುತ್ತದೆ” ಎಂದು ತಿಳಿಸಿದ್ದಾರೆ. ಈ ನಡುವೆ ಲಿವರ್ ಡಾಕ್ಟರ್ ಎಂದೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಸಿರಿಯಾಕ್ ಅಬಿ ಫಿಲಿಪ್ಸ್ ಅವರೂ ಚರ್ಚೆಯಲ್ಲಿ ಭಾಗವಹಿಸಿ ಅನೇಕ ಸಂಶೋಧನೆಗಳ ವಿವರಗಳನ್ನು ನೀಡಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.
Health Tips: ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ? ಹಾಗಾದ್ರೆ ಈ ಸಿಂಪಲ್ ಯೋಗಾಸನಗಳನ್ನು ಇಂದಿನಿಂದಲೇ ಅಭ್ಯಾಸ ಮಾಡಿ!
Health Tips: ಯೋಗಾಸನಗಳಾದ ಚೈಲ್ಡ್ ಪೋಸ್, ಸೀಟೆಡ್ ಫಾರ್ವರ್ಡ್ ಫೋಲ್ಡ್, ಲೆಗ್ಸ್ ಅಪ್ ದಿ ವಾಲ್, ಸುಪೈನ್ ಸ್ಪೈನಲ್ ಟ್ವಿಸ್ಟ್, ರಿಕ್ಲೈನಿಂಗ್ ಬೌಂಡ್ ಆಂಗಲ್ ಮತ್ತು ಶವದ ಭಂಗಿ ನಿದ್ರೆಗೆ ಸಹಾಯ ಮಾಡುತ್ತವೆ.

25 C