ಪಾರ್ಕಿನ್ಸನ್ ರೋಗವನ್ನು ಮೂಲದಲ್ಲೇ ಪತ್ತೆ ಹಚ್ಚಿದರೆ ಶಮನ ಸುಗಮ; ವೈದ್ಯರು ಹೇಳುವುದೇನು?
ಸಾಂದರ್ಭಿಕ ಚಿತ್ರ | Photo Credit : freepik ಬೆಂಗಳೂರಿನ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ನ ನಿರ್ದೇಶಕ ಡಾ. ರವಿ ಗೋಪಾಲ್ ವರ್ಮಾ ಪಾರ್ಕಿನ್ಸನ್ ರೋಗದ ದೈನಂದಿನ ಚಿಹ್ನೆಗಳು ಹೆಚ್ಚು ಅಪಾಯಕಾರಿಯಾದುದನ್ನು ಹೇಗೆ ಸೂಚಿಸಬಹುದು ಎಂದು ಎಚ್ಚರಿಸಿದ್ದಾರೆ. ಎಪ್ರಿಲ್ 11 ಅನ್ನು ಪಾರ್ಕಿನ್ಸನ್ ರೋಗದ ಜಾಗೃತಿ ದಿನವೆಂದು ಆಚರಿಸಲಾಗುತ್ತದೆ. ಪಾರ್ಕಿನ್ಸನ್ ಫೌಂಡೇಶನ್ ಇದನ್ನು ಡೋಪಮೈನ್ ನರಕೋಶಗಳಿಗೆ ಹಾನಿ ಮಾಡುವ ಮೆದುಳಿನ ಅಸ್ವಸ್ಥತೆ ಎಂದು ವ್ಯಾಖ್ಯಾನಿಸುತ್ತದೆ. ಪಾರ್ಕಿನ್ಸನ್ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಪ್ರಗತಿ ನಿಧಾನಗೊಳಿಸಲು ಮತ್ತು ರೋಗ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಆರಂಭಿಕ ಪತ್ತೆಹಚ್ಚುವಿಕೆ ನಿರ್ಣಾಯಕವಾಗುತ್ತದೆ. ಸರಿಯಾದ ಸಮಯದಲ್ಲಿ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು ಗಣನೀಯವಾಗಿ ಸಹಾಯ ಮಾಡುತ್ತದೆ. ಕೆಲವು ಚಿಹ್ನೆಗಳು ಆಯಾಸ ಅಥವಾ ಒತ್ತಡದಂತಹ ದೈನಂದಿನ ಸಮಸ್ಯೆಯ ಜೊತೆಗೆ ಸೇರಿಕೊಂಡಿರಬಹುದು. ಹೀಗಾಗಿ ಮೊದಲೇ ಸಮಸ್ಯೆಯನ್ನು ಗುರುತಿಸುವುದು ಅಗತ್ಯ. ಪ್ರಮುಖ ಸಲಹೆಗಾರ, ನರಶಸ್ತ್ರಚಿಕಿತ್ಸೆ ಮತ್ತು ಬೆಂಗಳೂರಿನ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ನ ನಿರ್ದೇಶಕ ಡಾ ರವಿ ಗೋಪಾಲ್ ವರ್ಮಾ ದೈನಂದಿನ ಚಿಹ್ನೆಗಳು ಹೆಚ್ಚು ಅಪಾಯಕಾರಿಯಾದುದನ್ನು ಹೇಗೆ ಸೂಚಿಸಬಹುದು ಎಂಬುದನ್ನು ಪಟ್ಟಿ ಮಾಡಿದ್ದಾರೆ. “ಆಯಾಸ, ಕಳಪೆ ನಿದ್ರೆ ಮತ್ತು ಕರುಳಿನ ಸಮಸ್ಯೆಗಳು ಬಹುತೇಕ ನಿರೀಕ್ಷಿತವಾಗಿರುವ ಜಗತ್ತಿನಲ್ಲಿ, ಅಸ್ವಸ್ಥತೆಯನ್ನು ಗುರುತಿಸುವುದು ಕಷ್ಟವಾಗಲಿದೆ. ಈ ದೈನಂದಿನ ಲಕ್ಷಣಗಳು ಪಾರ್ಕಿನ್ಸನ್ ಕಾಯಿಲೆಯಂತಹ ಪರಿಸ್ಥಿತಿಗಳ ಆರಂಭಿಕ ಸೂಚಕಗಳಾಗಿರಬಹುದು” ಎಂದು ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ಪಾರ್ಕಿನ್ಸನ್ ನ ಅನೇಕ ಆರಂಭಿಕ ಲಕ್ಷಣಗಳು ವಿಶಿಷ್ಟವಲ್ಲ ಮತ್ತು ನಿರ್ದಿಷ್ಟವಾಗಿಲ್ಲದೆ ಇರಬಹುದು. ದೈನಂದಿನ ಒತ್ತಡಗಳ ರೀತಿ ಇರುತ್ತವೆ. ಹೀಗಾಗಿ ಸಹಜವಾಗಿ ನಿರ್ಲಕ್ಷಿಸಲಾಗುತ್ತದೆ ಮತ್ತು ವೈದ್ಯರ ಭೇಟಿ ತಡವಾಗುತ್ತದೆ. ಹೀಗಾಗಿ ಲಕ್ಷಣ ಗಮನಕ್ಕೆ ಬರುವವರೆಗೂ ಕಾಯಬಾರದು. ಆರಂಭಿಕ ಬದಲಾವಣೆಗಳಿಗೆ ಗಮನ ಕೊಡಬೇಕಾಗುತ್ತದೆ. “ಚಲನಾ ಆಸ್ವಸ್ಥತೆಯಾದ ಪಾರ್ಕಿನ್ಸನ್ ಕಾಯಿಲೆಯು ಸಾಮಾನ್ಯವಾಗಿ ನಿಧಾನವಾಗಿ ಬೆಳವಣಿಗೆಯಾಗುತ್ತದೆ. ನಡುಕ ಕಾಣಿಸಿಕೊಳ್ಳುವ ಮೊದಲೇ ಸೂಕ್ಷ್ಮ ಸಂಕೇತಗಳನ್ನು ಕಳುಹಿಸುತ್ತದೆ. ಮೆದುಳಿನ ರಾಸಾಯನಿಕ ಸಂದೇಶವಾಹಕ ಡೊಪಮೈನ್ ನ ಮಟ್ಟ ಕ್ರಮೇಣ ಇಳಿಯುತ್ತದೆ. ಹೀಗಾಗಿ ಸುಗಮ ಚಲನೆ ನಿಯಂತ್ರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಬಹುತೇಕ ರೋಗಿಗಳಿಗೆ ರೋಗ ಬರುವ ಮೊದಲು ನಿದ್ರೆಯ ಸಮಸ್ಯೆ ಅಥವಾ ಕರುಳಿನ ಸಮಸ್ಯೆಗಳಂತಹ ಸೂಕ್ಷ್ಮ ಚಿಹ್ನೆಗಳನ್ನು ಅನುಭವಿಸುತ್ತಾರೆ. “ಆರಂಭಿಕ ಲಕ್ಷಣಗಳು ನಿದ್ರೆ ಅಥವಾ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಂತೆ ಸಾಮಾನ್ಯವಾಗಿರಬಹುದು. ಇವು ವ್ಯಾಪಕವಾಗಿ ಹರಡಿರುತ್ತವೆ” ಎಂದು ಅವರು ಹೇಳಿದ್ದಾರೆ. ದೇಹದ ಒಂದು ಬದಿಯಲ್ಲಿ ಪ್ರಾರಂಭವಾಗುವ ಪಾರ್ಕಿನ್ಸನ್ ಲಕ್ಷಣಗಳು ಇವುಗಳನ್ನು ಒಳಗೊಂಡಿರುತ್ತವೆ. * ನಡು ಕ: ಲಯಬದ್ಧ ನಡುಕ, ಸಾಮಾನ್ಯವಾಗಿ ಕೈಗಳು ಅಥವಾ ಬೆರಳುಗಳಲ್ಲಿ ಪ್ರಾರಂಭವಾಗುತ್ತದೆ, * ನಿಧಾನ ಚಲನೆ : ಕುರ್ಚಿಯಿಂದ ಎದ್ದೇಳುವುದು ಅಥವಾ ಬಟ್ಟೆ ಧರಿಸುವುದು ಕಷ್ಟವಾಗುತ್ತದೆ. * ಗಟ್ಟಿಯಾದ ಸ್ನಾಯುಗಳು : ನೋವಿನಿಂದ ಕೂಡಿದ ಮತ್ತು ಚಲನೆಯ ವ್ಯಾಪ್ತಿ ಮಿತಿಗೊಳಿಸುವ ಬಿಗಿತ * ಭಂಗಿ ಮತ್ತು ಸಮತೋಲನ : ಬಾಗಿದ ಭಂಗಿಯನ್ನು ಅಭಿವೃದ್ಧಿಪಡಿಸುವುದು ಅಥವಾ ಸ್ಥಿರವಾಗಿರಲು ಸಾಧ್ಯವಾಗದಿರುವುದು. * ಸ್ವಯಂಚಾಲಿತ ಚಲನೆಗಳ ನಷ್ಟ : ಕಣ್ಣು ಮಿಟುಕಿಸುವುದು, ನಗುವುದು ಅಥವಾ ತೋಳು ತೂಗಾಡುವುದು ಕಡಿಮೆಯಾಗುತ್ತದೆ. * ಮಾತು ಮತ್ತು ಬರವಣಿಗೆಯ ಬದಲಾವ ಣೆ: ಮೃದುವಾಗಿ ಮಾತನಾಡುವುದು ಅಥವಾ ಅಸ್ಪಷ್ಟವಾಗಿ ಹೇಳುವುದು ಅಥವಾ ಇಕ್ಕಟ್ಟಾದ ಕೈಬರಹ. ►ಯಾವಾಗ ವೈದ್ಯರನ್ನು ಕಾಣಬೇಕು? ವೈದ್ಯರ ಪ್ರಕಾರ, ಕಣ್ಮರೆಯಾಗದ ಅಥವಾ ಕ್ರಮೇಣ ಹದಗೆಡುವ ಲಕ್ಷಣಗಳ ಮಿಶ್ರಣ ಗಮನಿಸಿದರೆ ನರಶಸ್ತ್ರಚಿಕಿತ್ಸಕರು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಲು ಎಚ್ಚರಿಸಿದ್ದಾರೆ. * ಹೊಸ ಚಲನೆ ಬದಲಾವಣೆಗಳು, ವಿಶೇಷವಾಗಿ ಒಂದು ಬದಿಯಲ್ಲಿ, ವಿಶ್ರಾಂತಿ ಅಥವಾ ಬಿಗಿತದ ಸಮಯದಲ್ಲಿ ನಡುಕದಂತಹ ಚಲನೆ * ಬರೆಯುವುದು ಅಥವಾ ಎದ್ದು ನಿಲ್ಲುವಂತಹ ದೈನಂದಿನ ಕೆಲಸಗಳಲ್ಲಿ ಸಮಸ್ಯೆ * ಸಮತೋಲನದಲ್ಲಿನ ಬದಲಾವಣೆಗಳು, ಹೆಜ್ಜೆಗಳನ್ನು ಬದಲಿಸುವುದು ಅಥವಾ ಆಗಾಗ್ಗೆ ಬೀಳುವುದು * ಮಲಬದ್ಧತೆ, ನಿದ್ರೆಯ ಸಮಸ್ಯೆ ಅಥವಾ ವಾಸನೆಯ ನಷ್ಟದಂತಹ ನಿರಂತರ ಸಮಸ್ಯೆಗಳು * ಸುರಕ್ಷತೆಗೆ ಸಂಬಂಧಿಸಿದ ಲಕ್ಷಣಗಳಲ್ಲಿ ನಿಂತಾಗ ನುಂಗಲು ತೊಂದರೆ ಅಥವಾ ತಲೆತಿರುಗುವಿಕೆ ಸೇರಿವೆ. ಕೃಪೆ: hindustantimes.com
ನಿತ್ಯವೂ ಮಧ್ಯಾಹ್ನ ನಿದ್ರೆ ಮಾಡುವ ಅಭ್ಯಾಸವೆ? ಉತ್ತಮ ನಿದ್ರೆಗೆ ಸಲಹೆಗಳು...
ಸಾಂದರ್ಭಿಕ ಚಿತ್ರ | Photo Credit : freepik ನಿದ್ರೆ ಪ್ರಯೋಜನಕಾರಿಯಾಗಿ ಇರಬಹುದು ಅಥವಾ ಅಡ್ಡಿಪಡಿಸುವಂತೆಯೂ ಇರಬಹುದು. ವಿಶೇಷವಾಗಿ ರಾತ್ರಿಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ಅಡ್ಡಿಯಾಗಲು ಆರಂಭಿಸಿದರೆ ಅಪಾಯಕಾರಿ. ಸಾಮಾನ್ಯವಾಗಿ ಮದ್ಯಾಹ್ನದ ಭೋಜನದ ನಂತರ ಸಣ್ಣ ನಿದ್ರೆ ಮಾಡುವ ಅಭ್ಯಾಸ ಬಹಳಷ್ಟು ಮಂದಿಗೆ ಇದೆ. ವಿಶೇಷವಾಗಿ ಭೂರಿ ಭೋಜನ ಮಾಡಿದರೆ ನಿದ್ರೆ ತನ್ನಿಂತಾನಾಗೇ ಎಳೆದು ಬರುತ್ತದೆ. ಆದರೆ ಮಧ್ಯಾಹ್ನದ ನಿದ್ರೆ ನೈಸರ್ಗಿಕ ಪ್ರತಿಕ್ರಿಯೆಯೇ ಅಥವಾ ದೇಹದ ಅಡ್ಡಪರಿಣಾಮವೆ? ಚೆನ್ನೈನ ಕಾವೇರಿ ಆಸ್ಪತ್ರೆಯ ನರವಿಜ್ಞಾನಿ ಡಾ ಚಕ್ಕೇರ ಪ್ರಿಯಾಂಕಾ ಅವರ ಪ್ರಕಾರ ಮಧ್ಯಾಹ್ನದ ನಿದ್ರೆ ಮತ್ತು ನಮ್ಮ ಆರೋಗ್ಯಕ್ಕೆ ಇರುವ ಸಂಬಂಧವಿದೆ ಮತ್ತು ಹಗಲಿನ ನಿದ್ರೆ ಅಲಗಿನ ಕತ್ತಿಯಾಗಿರಬಹುದು! “ನಿದ್ರೆ ಪ್ರಯೋಜನಕಾರಿಯಾಗಿ ಇರಬಹುದು ಅಥವಾ ಅಡ್ಡಿಪಡಿಸುವಂತೆಯೂ ಇರಬಹುದು. ವಿಶೇಷವಾಗಿ ರಾತ್ರಿಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ಅಡ್ಡಿಯಾಗಲು ಆರಂಭಿಸಿದರೆ ಕಷ್ಟ. ನಿದ್ರಾಹೀನತೆಯಂತಹ ಸಮಸ್ಯೆಯ ಸೂಚಕವಾಗಬಹುದು ಮತ್ತು ರಾತ್ರಿ ಮಲಗಲು ಕಷ್ಟವಾಗಬಹುದು.” ಅಂದರೆ, ಮಧ್ಯಾಹ್ನದ ನಿದ್ರೆ ನಿಮ್ಮ ಪರವಾಗಿ ಕೆಲಸ ಮಾಡಲು ಸರಿಯಾದ ಸಮತೋಲನ ಕಂಡು ಹಿಡಿಯಬೇಕು. ಇಲ್ಲದೆ ಇದ್ದರೆ ರಾತ್ರಿಯ ನಿದ್ರೆಗೆ ಅಪಾಯ ತರಬಹುದು. ಆರೋಗ್ಯಕ್ಕೆ ಉತ್ತಮವಾದ ಮಧ್ಯಾಹ್ನದ ನಿದ್ರೆ ಯಾವುದು? ಮಧ್ಯಾಹ್ನದ ನಿದ್ರೆಯು ದೇಹದ ನಿದ್ರೆಯ ಚಕ್ರವನ್ನು ಅಸಮತೋಲನಗೊಳಿಸುತ್ತದೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. “ಸುಮಾರು 20 ರಿಂದ 30 ನಿಮಿಷಗಳ ಕಾಲ ನಡೆಯುವ ಸಣ್ಣ ನಿದ್ರೆಯು ಜನರಲ್ಲಿ ಗಮನ, ಜಾಗರೂಕತೆ ಮತ್ತು ಅರಿವಿನ ಕಾರ್ಯಕ್ಷಮತೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ” ಎನ್ನುತ್ತಾರೆ ವೈದ್ಯರು. ವೈದ್ಯರು ಗಮನಿಸಿರುವ ಪ್ರಕಾರ, ಮಧ್ಯಾಹ್ನ ಮತ್ತು ಸಂಜೆ ತಡವಾಗಿ ನಿದ್ರೆ ಮಾಡಿದರೆ ಕಷ್ಟ. ಮಧ್ಯಾಹ್ನ ತಡವಾಗಿ ಅಥವಾ ಸಂಜೆಯ ಸಮಯ ನಿದ್ರೆ ಮಾಡಬಾರದು. ಹಾಗೆ ಮಾಡಿದರೆ ರಾತ್ರಿ ನಿದ್ರೆ ಬರುವುದಿಲ್ಲ. ನಿದ್ರೆಯ ಸಮಯದಲ್ಲಿ ಅನಿಯಮಿತತೆ ನಿದ್ರೆಯ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾತ್ರಿ ನಿದ್ರೆಗೆ ಸಮಸ್ಯೆ ತರುತ್ತದೆ. ರಾತ್ರಿ ನಿದ್ರೆ ತಡವಾದರೆ ಬೆಳಿಗ್ಗೆ ಹಚ್ಚು ದಣಿದಿರುತ್ತೀರಿ. ಬೆಳಗಿನ ಜಾವ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ. ಇದೊಂದು ವಿಷಚಕ್ರವಾಗಿ ಬಿಡುತ್ತದೆ! ಮಧ್ಯಾಹ್ನದ ನಿದ್ರೆ ಅಪಾಯಕ್ಕೆ ತಿರುಗುವ ಚಿಹ್ನೆ * ರಾತ್ರಿ ಸಮಯದಲ್ಲಿ ನಿದ್ರೆಗೆ ಜಾರಲು ಕಷ್ಟವಾಗುವುದು. * ಹಗಲಿನ ವೇಳೆ ನಿದ್ರೆಯಲ್ಲಿ ಗೊರಕೆ ಹೊಡೆಯುವುದು * ರಾತ್ರಿ ಅನಿಯಮಿತ ನಿದ್ರೆಯಿಂದ ಹೆಚ್ಚು ನಿದ್ರೆಯ ಅವಲಂಬನೆ * ಹಗಲು ಹೆಚ್ಚು ನಿದ್ರೆ ಮಾಡುವುದರಿಂದ ನಿದ್ರಾ ಉಸಿರುಗಟ್ಟುವಿಕೆ ಕಂಡುಬರಬಹುದು, ದೀರ್ಘಕಾಲದ ನಿದ್ರಾಹೀನತೆಗೆ ಕಾರಣವಾಗಬಹುದು. ರಾತ್ರಿ ಉತ್ತಮ ನಿದ್ರೆಗೆ ಸಲಹೆಗಳು ರಾತ್ರಿ ಸಮಯ ನಿದ್ರೆಗೆ ಮಧ್ಯಾಹ್ನದ ನಿದ್ರೆ ದೊಡ್ಡ ಅಪಾಯ ತರಬಹುದು. ಆದರೆ ಮಧ್ಯಾಹ್ನ ಸಮತೋಲಿತ ನಿದ್ರೆ ಮಾಡುವುದರಿಂದ ಅಂತಹ ಅಪಾಯವನ್ನು ತಪ್ಪಿಸಬಹುದು. ಮಧ್ಯಾಹ್ನ ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯಕ್ಕೆ ಏಳುವುದು. ಸಾಮಾನ್ಯವಾಗಿ ನಿದ್ರೆಯನ್ನು 3 ಗಂಟೆಗೆ ನಿಲ್ಲಿಸಿ ಅತಿ ಕಡಿಮೆ ಸಮಯ ನಿದ್ರೆ ಮಾಡುವುದು. ರಾತ್ರಿ ನಿದ್ರೆಗೆ ಸಮಸ್ಯೆಯಾಗದಂತೆ ಸ್ಕ್ರೀನ್ ವೀಕ್ಷಣೆ ಕಡಿಮೆಗೊಳಿಸುವುದು ಮತ್ತು ನಿತ್ಯವೂ 7 ರಿಂದ 9 ಗಂಟೆ ನಿದ್ರೆ ಮಾಡುವುದು. ಹೀಗೆ ಕಡಿಮೆ ನಿದ್ರೆ ಹಾನಿಕರವಲ್ಲ. ಬದಲಾಗಿ ಶಕ್ತಿಯನ್ನು ಮರಳಿ ಪಡೆಯಲು ನೆರವಾಗಲಿದೆ. ಸೂಚನೆ: ಲೇಖನವನ್ನು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದ್ದು, ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ವೈದ್ಯರ ಸಲಹೆಯನ್ನು ಅನುಸರಿಸಿ.
ಮಿಲ್ಕ್ ಚಾಕಲೇಟುಗಳಿಗಿಂತ ಡಾರ್ಕ್ ಚಾಕಲೇಟು ಆರೋಗ್ಯಕರವೆ?; ಇಲ್ಲಿದೆ ಮಾಹಿತಿ...
ಸಾಂದರ್ಭಿಕ ಚಿತ್ರ | Photo Credit : freepik ಮಿಲ್ಕ್ ಚಾಕಲೇಟುಗಳು ಸಾಮಾನ್ಯವಾಗಿ ಶೇ 20-30 ರಷ್ಟು ಕೋಕಾ ಸಾಲಿಡ್ಗಳನ್ನು ಹೊಂದಿರುತ್ತದೆ. ಬಹುಪಾಲನ್ನು ಹಾಲಿನ ಅಂಶಗಳು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಈಸ್ಟರ್ ಚಾಕಲೇಟುಗಳು ಮಾರುಕಟ್ಟೆಗಳಲ್ಲಿ ರಾಶಿ ಬಿದ್ದಿವೆ. ಕೆಲವರು ಅಗ್ಗದ ಬೆಲೆಯಲ್ಲಿ ಮಿಲ್ಕ್ ಚಾಕಲೇಟುಗಳನ್ನು ಕೊಂಡರೆ, ಇನ್ನು ಕೆಲವರು ಆರೋಗ್ಯಕರ ಆಯ್ಕೆಯೆಂದು ದುಬಾರಿ ಡಾರ್ಕ್ ಚಾಕಲೇಟ್ ಗಳನ್ನು ಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಡಾರ್ಕ್ ಚಾಕಲೇಟು ಆರೋಗ್ಯಕರವೆ? ಹೋಲಿಕೆ ಮಾಡುವುದು ಹೇಗೆ? ಎಲ್ಲಾ ಚಾಕಲೇಟು ತಯಾರಿಕೆಯ ಹಿಂದೆ ಕೋಕಾ ಬೀನ್ ಇರುತ್ತದೆ. ಕೋಕಾ ಬೀನ್ಗಳು ಥಿಯಿಬ್ರೋಮಾ ಕಕಾವೊ ಮರದ ಬೀಜಗಳು. ಈ ಮರಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತವೆ. ಬೀನ್ ಸಂಸ್ಕರಿಸುವ ಮೂಲಕ ಕೋಕಾ ಸಾಲಿಡ್ಗಳು (ಕಹಿ ಭಾಗ) ಮತ್ತು ಕೋಕಾ ಬಟರ್ (ಮೃದು ಭಾಗದ ರಚನೆ) ಸಿಗುತ್ತವೆ. ಚಾಕಲೇಟುಗಳನ್ನು ಕೋಕಾ ಸಾಲಿಡ್ಗಳು, ಕೋಕಾ ಬಟರ್ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಮಿಲ್ಕ್ ಚಾಕಲೇಟ್ಗಳಲ್ಲಿ ಮಿಲ್ಕ್ ಪೌಡರ್ ಮತ್ತು ಕಂಡೆನ್ಸ್ಡ್ ಮಿಲ್ಕ್ ಇರುತ್ತದೆ. ಡಾರ್ಕ್ ಚಾಕಲೇಟುಗಳು ಇನ್ನಷ್ಟು ಅಧಿಕ ಪ್ರಮಾಣದ ಕೋಕಾ ಸಾಲಿಡ್ಗಳನ್ನು ಅಂದರೆ ಶೇ 50-90 ರಷ್ಟು ಹೊಂದಿರುತ್ತವೆ. ಮಿಲ್ಕ್ ಚಾಕಲೇಟುಗಳು ಸಾಮಾನ್ಯವಾಗಿ ಶೇ 20-30 ರಷ್ಟು ಕೋಕಾ ಸಾಲಿಡ್ಗಳನ್ನು ಹೊಂದಿರುತ್ತದೆ. ಬಹುಪಾಲನ್ನು ಹಾಲಿನ ಅಂಶಗಳನ್ನು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಪೌಷ್ಠಿಕಾಂಶದ ಲಾಭಗಳೇನು? ಡಾರ್ಕ್ ಚಾಕಲೇಟುಗಳಲ್ಲಿ ಮಿಲ್ಕ್ ಚಾಕಲೇಟುಗಳಿಗಿಂತ ಹೆಚ್ಚು ಕೋಕಾ ಸಾಲಿಡ್ಗಳಿರುತ್ತವೆ. ಹೀಗಾಗಿ ನಿರ್ದಿಷ್ಟ ಖನಿಜಗಳನ್ನು ಹೆಚ್ಚು ಕೊಡುತ್ತದೆ. ಪ್ರತಿ 20 ಗ್ರಾಂಗಳಲ್ಲಿ ಮಿಲ್ಕ್ ಚಾಕಲೇಟ್ಗಳು ಶೇ 30ರಷ್ಟು ಕೋಕಾ ಮತ್ತು ಡಾರ್ಕ್ ಚಾಕಲೇಟು ಶೇ 60ರಷ್ಟು ಕೋಕಾ ಹೊಂದಿರುತ್ತವೆ. ಹೀಗಾಗಿ ಡಾರ್ಕ್ ಚಾಕಲೇಟ್ಗಳು ಮೆಗ್ನೇಸಿಯಂ, ಕಬ್ಬಿಣ ಮತ್ತು ಸತುವನ್ನು ಹೊಂದಿರುತ್ತದೆ. ಅದರಲ್ಲಿ ಕೆಫೀನ್ ಕೂಡ ಹೆಚ್ಚಿರುತ್ತದೆ. ಮಿಲ್ಕ್ ಚಾಕಲೇಟುಗಳಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ ಮತ್ತು ಸಕ್ಕರೆ ಪ್ರಮಾಣ ಸೇರಿಸಲಾಗಿರುತ್ತದೆ. ಕೋಕಾ ಸಸ್ಯ ಸಂಯುಕ್ತಗಳಾದ ಪಾಲಿಫೀನಾಲ್ಸ್ನಿಂದ ಸಮೃದ್ಧವಾಗಿರುತ್ತದೆ. ಇವು ದೇಹದಲ್ಲಿ ಆ್ಯಂಟಿ ಆಕ್ಸಿಡಂಟ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಜೀವಕೋಶಗಳ ನಷ್ಟದಿಂದ ಕಾಪಾಡುತ್ತವೆ. ಡಾರ್ಕ್ ಚಾಕಲೇಟುಗಳಲ್ಲಿ ಹೆಚ್ಚು ಕೋಕಾ ಇರುವುದರಿಂದ ಮಿಲ್ಕ್ ಚಾಕಲೇಟಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಫ್ಲಾವನಾಲ್ಗಳನ್ನು ಹೊಂದಿರುತ್ತದೆ. ಡಾರ್ಕ್ ಚಾಕಲೇಟ್ ಆರೋಗ್ಯಕರವೆ? ಹೃದಯದ ಆರೋಗ್ಯದ ಬಗ್ಗೆ ಸಂಶೋಧನೆಗಳ ಪ್ರಕಾರ ಕೋಕಾ ಫ್ಲಾವನಾಲ್ಗಳು ರಕ್ತನಾಳಗಳನ್ನು ಆರಾಮವಾಗಿಡಲು ಮತ್ತು ರಕ್ತದ ಹರಿವು ಚೆನ್ನಾಗಿರಲು ಬೆಂಬಲಿಸುತ್ತವೆ. ಚಿಕಿತ್ಸಾತ್ಮಕ ಅಧ್ಯಯನದಲ್ಲಿ ಡಾರ್ಕ್ ಚಾಕಲೇಟುಗಳು ರಕ್ತದಲ್ಲಿನ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಿರುವುದು ಸಾಬೀತಾಗಿದೆ. ಆದರೆ ಈ ಬಹುತೇಕ ಅಧ್ಯಯನಗಳಲ್ಲಿ ಅಧಿಕ ಪ್ರಮಾಣದ ಫ್ಲಾವನಾಲ್ಗಳಿರುವ ಕೋಕಾ ಸಾರಗಳನ್ನು ಬಳಸಲಾಗಿದೆ. ಇತರ ಅಧ್ಯಯನಗಳು ವಿಶೇಷ ಚಾಕಲೇಟುಗಳನ್ನು ಬಳಸಿವೆಯೇ ವಿನಾ ಸೂಪರ್ ಮಾರ್ಕೆಟ್ನಲ್ಲಿ ದೊರೆಯುವ ಈಸ್ಟರ್ ಹಬ್ಬದ ಚಾಕಲೇಟುಗಳಲ್ಲ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಅಧ್ಯಯನಗಳ ಅಧ್ಯಯನವು ಡಾರ್ಕ್ ಚಾಕಲೇಟುಗಳಿಂದ ಹೃದಯದ ರೋಗಗಳು ಕಡಿಮೆಯಾಗಿರುವುದು, ಪಾರ್ಶ್ವವಾಯು ಮತ್ತು ಮಧುಮೇಹಿಗಳಿಗೆ ಉತ್ತಮ ಎಂದು ಕಂಡುಬಂದಿದೆ. ಡಾರ್ಕ್ ಚಾಕಲೇಟಿನಲ್ಲಿ ಕಡಿಮೆ ಸಕ್ಕರೆ ಇದೆಯೆ? ಡಾರ್ಕ್ ಚಾಕಲೇಟು ಆರೋಗ್ಯಕರ ಎನ್ನುವುದು ಸಂಪೂರ್ಣ ಸರಿಯಲ್ಲ. ಕೆಲವು ಡಾರ್ಕ್ ಚಾಕಲೇಟುಗಳಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ. ಈಸ್ಟರ್ ಹಬ್ಬದ 150 ಗ್ರಾಂ ಡಾರ್ಕ್ ಚಾಕಲೇಟ್ನಲ್ಲಿ ಶೇ 50ರಷ್ಟು ಸಕ್ಕರೆ ಇರುತ್ತದೆ. 90 ಚಮಚಗಳಷ್ಟು ಸಕ್ಕರೆ ಸೇರಿಸಿರಬಹುದು. ಈಸ್ಟರ್ ಮೊಟ್ಟೆಗಳಿಗೂ ಇದು ಅನ್ವಯಿಸುತ್ತದೆ. ಸೂಪರ್ ಮಾರ್ಕೆಟ್ಗಳಲ್ಲಿ ಕೆಲವು ಡಾರ್ಕ್ ಚಾಕಲೇಟ್ ಈಸ್ಟರ್ ಮೊಟ್ಟೆಗಳು ಹೆಚ್ಚು ಸಕ್ಕರೆ ಅಂಶದೊಂದಿಗೆ ಮಾರಾಟವಾಗುತ್ತವೆ. ಈಸ್ಟರ್ ಹಬ್ಬಕ್ಕೆ ಏನನ್ನು ಆಯ್ಕೆ ಮಾಡಬೇಕು? ಡಾರ್ಕ್ ಚಾಕಲೇಟುಗಳಲ್ಲಿ ಮಿಲ್ಕ್ ಚಾಕಲೇಟುಗಳಿಗಿಂತ ಹೆಚ್ಚು ಉತ್ತಮ ಪೌಷ್ಠಿಕಾಂಶಗಳಿವೆ. ಆದರೆ ಕೋಕಾ ಪ್ರಮಾಣವನ್ನು ಅನುಸರಿಸಿದೆ. ಶೇ 70ರಷ್ಟು ಅಥವಾ ಹೆಚ್ಚು ಕೋಕಾ ಇದ್ದರೆ ಉತ್ತಮ ಗುಣಮಟ್ಟದ ಡಾರ್ಕ್ ಚಾಕಲೇಟು ಆಗಿರುತ್ತದೆ. ಉತ್ತಮ ಗುಣಮಟ್ಟದ ಡಾರ್ಕ್ ಚಾಕಲೇಟುಗಳಲ್ಲಿ ಕೋಕಾ ಮಾಸ್, ಕೋಕಾ ಪೌಡರ್, ಕೋಕಾ ಬಟರ್, ಸಕ್ಕರೆ, ವೆನಿಲ್ಲಾ ಪ್ರಮಾಣ ಹೆಚ್ಚಿರುತ್ತದೆ. ಕಡಿಮೆ ಗುಣಮಟ್ಟದ ಡಾರ್ಕ್ ಚಾಕಲೇಟುಗಳಲ್ಲಿ ಸಕ್ಕರೆ, ಕೋಕಾ ಮಾಸ್, ಕೋಕಾ ಬಟರ್, ಎಮಲ್ಸಿಫೈಯರ್, ಫ್ಲೇವರ್ ಮತ್ತು ಮಿಲ್ಕ್ ಸಾಲಿಡ್ಗಳಿರುತ್ತವೆ. ಕೃಪೆ: indianexpress.com
ಕರಿಜೀರಿಗೆ ಎಣ್ಣೆ ಬಳಸುತ್ತೀರಾ? ಈ ಬಗ್ಗೆ ವೈದ್ಯರು ನೀಡಿರುವ ಸಲಹೆಗಳೇನು?
ಸಾಂದರ್ಭಿಕ ಚಿತ್ರ (AI) ಒಂದು ಕಾಲದಲ್ಲಿ ಸರಳ ಮನೆಮದ್ದುಗಳೆಂದು ನಾವು ತಳ್ಳಿ ಹಾಕಿದ ಕರಿಜೀರಿಗೆ ಎಣ್ಣೆ ವೈಜ್ಞಾನಿಕವಾಗಿ ಬೆಂಬಲಿತ ಪ್ರಯೋಜನಗಳಾಗಿ ಮರುಪರಿಶೀಲನೆ ಪಡೆಯುತ್ತಿದೆ. ತಲೆಮಾರುಗಳಿಂದ ನೈಸರ್ಗಿಕ ಪರಿಹಾರಗಳು ಮನೆ-ಮನೆಗಳಲ್ಲಿ ಅಭ್ಯಾಸದಲ್ಲಿವೆ. ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಬೇರೂರಿರುವ ಈ ನೈಸರ್ಗಿಕ ಪರಿಹಾರಗಳನ್ನು ಆಧುನಿಕ ವಿಜ್ಞಾನವು ವಿವರಿಸುವ ಮೊದಲೇ ನಂಬಲಾಗಿದೆ. ಅಡುಗೆ ಮನೆಯಲ್ಲಿ ಕಂಡುಬರುವ ಪದಾರ್ಥಗಳಿಂದ ತೊಡಗಿ ಸಾಂಪ್ರದಾಯಿಕ ಎಣ್ಣೆಗಳು ಮತ್ತು ಗಿಡಮೂಲಿಕೆಗಳವರೆಗೆ ಹಳೆಯ ಪದ್ಧತಿಗಳಲ್ಲಿ ಬೇರೂರಿವೆ. ಒಂದು ಕಾಲದಲ್ಲಿ ಸರಳ ಮನೆಮದ್ದುಗಳೆಂದು ನಾವು ತಳ್ಳಿ ಹಾಕಿದ ಇವುಗಳು ವೈಜ್ಞಾನಿಕವಾಗಿ ಬೆಂಬಲಿತ ಪ್ರಯೋಜನಗಳಾಗಿ ಮರುಪರಿಶೀಲನೆ ಪಡೆಯುತ್ತಿವೆ. 40 ವರ್ಷಗಳಿಂದ ಹೃದಯ ತಜ್ಞರಾಗಿ ಕೆಲಸ ಮಾಡುತ್ತಿರುವ ಹಿರಿಯ ವೈದ್ಯರಾದ ಡಾ. ಅಲೋಕ್ ಚೋಪ್ರಾ ಅವರು ಇದೀಗ ಕರಿಜೀರಿಗೆ ಎಣ್ಣೆ (black seed oil) ಹೇಗೆ ನೈಸರ್ಗಿಕ ಪರಿಹಾರವಾಗಿದೆ ಎಂದು ವಿವರಿಸಿದ್ದಾರೆ. “ಶತಮಾನಗಳಿಂದ ಕರಿಜೀರಿಗೆ ಎಣ್ಣೆಯನ್ನು ರೋಗ ಗುಣಪಡಿಸಲು ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಇದನ್ನು ಬಳಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ. View this post on Instagram A post shared by Alok Chopra (@dralokchopra) ಕರಿಜೀರಿಗೆ ಏಕೆ ಮುಖ್ಯವಾಗಿದೆ? ಭಾರತದಲ್ಲಿ ಕರಿಜೀರಿಗೆ ಅಥವಾ ಕಲೊಂಜಿ ಎಂದು ಕರೆಯಲಾಗುವ ನೈಜಿಲ್ಲಾ ಸಟೈವಾದಿಂದ ಕರಿಜೀರಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ದೀರ್ಘಕಾಲದಿಂದ ಪಾರಂಪರಿಕ ವೈದ್ಯದಲ್ಲಿ ಇದನ್ನು ಬಳಸಲಾಗುತ್ತದೆ. “ಮರಣ ಹೊರತುಪಡಿಸಿ ಉಳಿದೆಲ್ಲದಕ್ಕೂ ಪರಿಹಾರ” ಎಂದು ವಿವರಿಸಲಾಗಿರುವ ಪಾರಂಪರಿಕ ವೈದ್ಯಪದ್ಧತಿಯಲ್ಲಿ ಇದನ್ನು ಪರಿಗಣಿಸಲಾಗಿದೆ. ಇದರ ಸಕ್ರಿಯ ಸಂಯುಕ್ತವಾದ ಥೈಮೋಕ್ವಿನೊನ್ ಕಾರಣದಿಂದ ಇದನ್ನು ಆಯುರ್ವೇದ ಮತ್ತು ಯುನಾನಿ ಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಥೈಮೋಕ್ವಿನೊನ್ ಪ್ರಬಲವಾದ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ವೈದ್ಯರು ವಿವರಿಸಿರುವ ಪ್ರಕಾರ, “ಪ್ರಾಚೀನ ಔಷಧದಲ್ಲಿ ಮರಣ ಹೊರತುಪಡಿಸಿ ಉಳಿದೆಲ್ಲವನ್ನೂ ಗುಣಪಡಿಸುವ ಒಂದು ಎಂದರೆ ಕರಿಬೀಜದ ಎಣ್ಣೆ. ಕಲೊಂಜಿ ಎಂದು ಭಾರತದಲ್ಲಿ ಕರೆಯಲಾಗುವ ಕರಿಜೀರಿಗೆ ಬೀಜದ ಎಣ್ಣೆಗೆ ವೈಜ್ಞಾನಿಕ ಹೆಸರು ನಿಗೆಲ್ಲ ಸಟೈವಾ. ಈ ಕರಿ ಜೀರಿಗೆ ಎಣ್ಣೆಯ ಬಗ್ಗೆ ಅಜ್ಜಿಯಂದಿರು ಹೇಳುವುದನ್ನು ಕೇಳಿರಬಹುದು. ಆಗ ಇದು ನಾವು ನಂಬಿದ ವಿಷಯವಾಗಿತ್ತು. ಸಾವಿರಾರು ವರ್ಷಗಳಿಂದ ಆಯುರ್ವೇದ ಮತ್ತು ಯುನಾನಿ ವೈದ್ಯದಲ್ಲಿ ಕರಿ ಜೀರಿಗೆ ಎಣ್ಣೆಯನ್ನು ರಕ್ತ ಪರೀಕ್ಷೆಗಳು, ಸ್ಕ್ಯಾನ್ ಮಾಡಲು ಅಥವಾ ಪ್ರಿಸ್ಕ್ರಿಪ್ಷನ್ಗಳಲ್ಲಿ ಬಳಸಲಾಗುತ್ತಿದೆ. ಕರಿ ಜೀರಿಗೆ ಎಣ್ಣೆಯ ನಿಜವಾದ ಶಕ್ತಿ ಥೈಮೋಕ್ವಿನೋನ್ ಎಂಬ ಸಕ್ರಿಯ ಸಂಯುಕ್ತದಿಂದ ಬರುತ್ತದೆ. ಥೈಮೋಕ್ವಿನೋನ್ ಒಂದು ಪ್ರಬಲ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿ ಮೈಕ್ರೋಬಿಯಲ್ ಸಂಯುಕ್ತ. ಆರೋಗ್ಯ ಲಾಭಗಳೇನು? ಅಲೋಕ್ ಚೋಪ್ರ ಪ್ರಕಾರ, ಆಧುನಿಕ ವೈದ್ಯಕೀಯ ಸಂಶೋಧನೆಯು ದೀರ್ಘಕಾಲದ ಉರಿಯೂತವನ್ನು ಇಂದು ಅನೇಕ ರೋಗಗಳಿಗೆ ಮೂಲ ಎಂದು ತಿಳಿಯಲಾಗುತ್ತಿದೆ. ಉರಿಯೂತ ನಿವಾರಣೆಗೆ ಕರಿಜೀರಿಗೆ ಎಣ್ಣೆಯನ್ನು ವ್ಯಾಪಕವಾಗಿ ಬಳಸಬಹುದು. ನೈಸರ್ಗಿಕ ಪರಿಹಾರವಾಗಿರುವ ಕರಿಜೀರಿಗೆ ಎಣ್ಣೆಯನ್ನು ಕರುಳಿನ ಆರೋಗ್ಯ ಸುಧಾರಿಸುವುದು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆ ನಿವಾರಿಸುವುದು, ಉಸಿರಾಟ ಮತ್ತು ಹೃದಯ ರಕ್ತನಾಳದ ಕಾರ್ಯಕ್ಕೆ ನೆರವಾಗುವ ಜೊತೆಗೆ ಆರೋಗ್ಯಕರ ಚರ್ಮಕ್ಕೂ ಬಳಸಲಾಗುತ್ತದೆ. “ಆಧುನಿಕ ಔಷಧದಲ್ಲಿ ಒಂದು ವಿಷಯ ಸ್ಪಷ್ಟವಾಗಿದೆ. ದೀರ್ಘಕಾಲೀನ ಉರಿಯೂತವು ಅನೇಕ ರೋಗಗಳಿಗೆ ಮೂಲ. ಆಮ್ಲೀಯ ಹಿಮ್ಮುಖ ಹರಿವು, ಹೊಟ್ಟೆ ಉಬ್ಬುವುದು, ವಾಕರಿಕೆ ಮತ್ತು SIBO (ಸಣ್ಣ ಕರುಳಿನ ಬ್ಯಾಕ್ಟೀರಿಯಗಳ ಅತಿಯಾದ ಬೆಳವಣಿಗೆ) ಮೊದಲಾದ ಪರಿಸ್ಥಿತಿಗಳನ್ನು ತೊಡೆದು ಹಾಕಲು ನೆರವಾಗುತ್ತದೆ. ಅಸ್ತಮಾ, ಉಸಿರಾಟದ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಬೆಂಬಲಿಸುತ್ತದೆ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ಗೂ ಉತ್ತಮ. ಎಸ್ಜಿಮಾ, ಮೊಡವೆ, ಸೊರಿಯಾಸಿಸ್ ಮತ್ತು ಡರ್ಮಟೈಟಿಸ್ನಂತಹ ಚರ್ಮದ ಸ್ಥಿತಿಗಳಿಗೆ ಒಳಗಿನಿಂದ ಅನ್ವಯಿಸಿದಾಗಲೂ ಸಹಾಯ ಮಾಡುತ್ತದೆ. ಆದರೆ ಎಲ್ಲಾ ಕರಿಜೀರಿಗೆ ಎಣ್ಣೆ ಚೆನ್ನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಥೈಮೋಕ್ವಿನೋನ್ ಕಂಟೆಂಟ್ ಮೇಲೆ ಹೆಚ್ಚು ಗಮನ ನೀಡಬೇಕು. ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರದ ಜೊತೆಗೆ ಎಣ್ಣೆಯನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ. ಅವರ ಪ್ರಕಾರ, “ಎಲ್ಲಾ ಕರಿ ಜೀರಿಗೆ ಎಣ್ಣೆಗಳು ಸಮನಾಗಿರುವುದಿಲ್ಲ. ಥೈಮೋಕ್ವಿನೋನ್ ಕಂಟೆಂಟ್ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ನಿಜವಾದ ಚಿಕಿತ್ಸಾತ್ಮಕ ಶಕ್ತಿ ಇರುವುದೇ ಅದರಲ್ಲಿ. ಅದನ್ನು ಯಾವ ಆಹಾರದ ಜೊತೆಗೆ ಸೇವಿಸುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಥೈಮೋಕ್ವಿನೋನ್ ಕೊಬ್ಬಿನಲ್ಲಿ ಕರಗುವ ಕಾರಣ ಆರೋಗ್ಯಕರ ಕೊಬ್ಬುಗಳ ಜೊತೆಗೆ ಸೇವಿಸಬೇಕು.” ಕೃಪೆ: hindustantimes.com
ಡಿಜಿಟಲ್ ಕಣ್ಣು ಬೇನೆ ತಪ್ಪಿಸುವುದೇಗೆ? ವೈದ್ಯರ ಸಲಹೆಗಳೇನು?
ಸಾಂದರ್ಭಿಕ ಚಿತ್ರ | Photo Credit : freepik ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತವೆ. ಇಂದಿನ ಡಿಜಿಟಲ್ ಕೇಂದ್ರಿತ ಜಗತ್ತಿನಲ್ಲಿ ನಮ್ಮ ಕಣ್ಣುಗಳು ದೀರ್ಘಕಾಲದವರೆಗೆ ಪರದೆಯನ್ನು ವೀಕ್ಷಿಸುತ್ತಿರಬೇಕಾಗುತ್ತದೆ. ಹೀಗಾಗಿ ‘ಡಿಜಿಟಲ್ ಕಣ್ಣು ಬೇನೆ’ ಎಂದು ಕರೆಯಲಾಗುವ ಸಮಸ್ಯೆಗಳ ಆಗರವನ್ನು ಆಹ್ವಾನಿಸಿಕೊಳ್ಳುತ್ತೇವೆ. ಈ ಡಿಜಿಟಲ್ ಕಣ್ಣು ಬೇನೆಯಲ್ಲಿ ಒಣ ಕಣ್ಣುಗಳು, ಮಂದವಾದ ದೃಷ್ಟಿ, ತಲೆನೋವುಗಳು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರ್ಗಳು, ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳನ್ನು ದೀರ್ಘಕಾಲ ಬಳಸುವವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಶಾರ್ಪ್ ಐ ಹಾಸ್ಪಿಟಲ್ಸ್ನಲ್ಲಿ ಹಿರಿಯ ತಜ್ಞರಾಗಿರುವ ಡಾ ರಕ್ಷಿತ್ ಒಪಿ ಅವರು ಅಪಾಯದ ಚಿಹ್ನೆಗಳು ಇಲ್ಲದೆ ಇದ್ದರೂ ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯುವುದು ದೃಷ್ಟಿ ನಷ್ಟ ಮತ್ತು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶ ಸಾಧ್ಯವಾಗಿಸಲಿದೆ. ಪರದೆಯ ಜೊತೆಗೆ ಕಳೆಯುವ ಸಮಯವನ್ನು ಕಡಿಮೆ ಮಾಡುವ ಅಗತ್ಯವಿದೆಯಾದರೂ, ಬಹಳಷ್ಟು ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಅವರು ಕಣ್ಣನ್ನು ರಕ್ಷಿಸಿಕೊಳ್ಳುವುದು ಹೇಗೆ? ಡಿಜಿಟಲ್ ಕಣ್ಣಿನ ನೋವಿನಿಂದ ರಕ್ಷಿಸಿಕೊಳ್ಳಲು ವೈದ್ಯರು 20-20-20 ನಿಯಮವನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡಲು 20 ಸೆಕೆಂಡ್ಗಳ ಕಾಲ ಪರದೆಯಿಂದ ಕಣ್ಣನ್ನು ಸರಿಸುವುದು. ಇಂತಹ ಸರಳ ಅಭ್ಯಾಸಗಳು ಕಣ್ಣಿನ ಸ್ನಾಯುಗಳಿಗೆ ಆರಾಮ ನೀಡಲು ಮತ್ತು ಸುಸ್ತು ಮತ್ತು ಬೇನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಕುತ್ತಿಗೆ ನೋವನ್ನು ಕಡಿಮೆ ಮಾಡಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿನ ಮಟ್ಟಕ್ಕೆ ಇರಿಸಬೇಕು. ಬೆಳಕನ್ನು ಪರಿಸರಕ್ಕೆ ತಕ್ಕಂತೆ ಹೊಂದಿಸಿರಬೇಕು. ಕಣ್ಣಿನ ಅಹಿತಕರ ಭಾವನೆಯನ್ನು ಕಡಿಮೆ ಮಾಡಲು ಆ್ಯಂಟಿ ಗ್ಲೇರ್ ಪರದೆಗಳನ್ನು ಬಳಸಬಹುದು. ಈ ರಕ್ಷಣಾ ಕ್ರಮಗಳ ಜೊತೆಗೆ ಕಣ್ಣಿನ ಆರೋಗ್ಯಕ್ಕಾಗಿ ಕೆಲವು ಪೋಷಕಾಂಶಗಳನ್ನು ಸೇವಿಸಬಹುದು. ವಿಟಮಿನ್ ಸಿ ಮತ್ತು ಇ ಜೊತೆಗೆ ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಸತು ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ. ಹೆಚ್ಚುವರಿಯಾಗಿ ಧ್ಯಾನ ಅಥವಾ ಯೋಗ ಒತ್ತಡವನ್ನು ಕಡಿಮೆ ಮಾಡಬಹುದು. ಡಿಜಿಟಲ್ ಕಣ್ಣಿನ ಬೇನೆ ಕಡಿಮೆ ಮಾಡಲು ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ, * 20-20-20 ನಿಯಮ ಅನುಸರಿಸುವುದು * ಕಾರ್ಯಸ್ಥಳವನ್ನು ಅತ್ಯುತ್ತಮಗೊಳಿಸುವುದು * ಆ್ಯಂಟಿಗ್ಲೇರ್ ಪರದೆ ಬಳಸುವುದು * ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಕೊಳ್ಳುವುದು * ಆಹಾರದಲ್ಲಿ ಕಣ್ಣಿನ ಆರೋಗ್ಯದ ಪೌಷ್ಠಿಕಾಂಶಗಳನ್ನು ಬೆರೆಸುವುದು * ಕಣ್ಣು ಅಗಲಿಸುವ ವ್ಯಾಯಾಮ ಮಾಡುವುದು * ಅಗತ್ಯವಿದ್ದರೆ ಕೃತಕ ಕಣ್ಣೀರುಗಳನ್ನು ಬಳಸುವುದು * ಪರದೆಯ ಸಮಯ ಕಡಿಮೆ ಮಾಡುವುದು * ಡಿಜಿಟಲ್ ಸಾಧನಗಳ ಫಾಂಟ್ ಗಾತ್ರ ಹೆಚ್ಚಿಸುವುದು ತಂತ್ರಜ್ಞಾನಗಳು ನಮ್ಮ ಜೀವನವನ್ನು ಪರಿವರ್ತಿಸಿದ್ದರೂ, ದೀರ್ಘಕಾಲೀನ ಪರಿಣಾಮಗಳನ್ನು ತಡೆಗಟ್ಟಲು ಕಣ್ಣಿನ ಆರೈಕೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
Heart Health: ಏಕಾಏಕಿ ಆಗಲ್ಲ ಹಾರ್ಟ್ ಅಟ್ಯಾಕ್ ! 10 ದಿನಗಳ ಮೊದಲೇ ದೇಹ ಕೊಡುತ್ತೆ ಈ ಭಯಾನಕ ಸಿಗ್ನಲ್!
ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ. ಹಾರ್ವರ್ಡ್ ಹೆಲ್ತ್ ಅಧ್ಯಯನದ ಪ್ರಕಾರ, 50% ಜನರಿಗೆ ಹೃದಯಾಘಾತಕ್ಕಿಂತ ಮುಂಚೆ ಆಯಾಸ, ಉಸಿರಾಟದ ತೊಂದರೆ, ಜೀರ್ಣಕ್ರಿಯೆ ಸಮಸ್ಯೆ, ನಿದ್ರಾಹೀನತೆ, ದೇಹದ ನೋವು ಉಂಟಾಗುತ್ತದೆ.
Skin Care: ಕಿತ್ತಳೆ ಸಿಪ್ಪೆಯನ್ನು ಎಸೆಯುವ ಬದಲು ಈ ರೀತಿ ಬಳಸಿ; ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಿ!
ಶಾಖ ಮತ್ತು ಬೆವರಿನಿಂದಾಗಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದದ ನೈಸರ್ಗಿಕ ಸ್ಕ್ರಬ್ ಇದಕ್ಕೆ ಸಹಾಯ ಮಾಡುತ್ತದೆ. ಇದು ಬೇಸಿಗೆಯಲ್ಲಿ ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ತ್ವಚೆಗೆ ಫ್ರೆಶ್ ಲುಕ್ ನೀಡುತ್ತದೆ.
Health Care: ಕೆಮ್ಮು-ಶೀತ-ಹೊಟ್ಟೆ ನೋವು ಎಲ್ಲವೂ ಒಂದೇ ಗಂಟೆಯಲ್ಲಿ ಮಾಯವಾಗುತ್ತೆ! ಈ ಮಸಾಲೆ ತಿನ್ನಿ ಸಾಕು
ದಾಲ್ಚಿನ್ನಿ ಮಧುಮೇಹ, ಹೃದಯ ಕಾಯಿಲೆ, ಬೊಜ್ಜು, ಹೊಟ್ಟೆ ಸಮಸ್ಯೆ, ಊತ, ಶೀತ, ಕೆಮ್ಮು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಜೇನುತುಪ್ಪದೊಂದಿಗೆ ಸೇವಿಸಿದರೆ ದೇಹದಲ್ಲಿ ಪರಿಣಾಮಕಾರಿ ಬದಲಾವಣೆಗಳಾಗುತ್ತದೆ.
Food Tips: ಮ್ಯೂಸ್ಲಿ Vs ಓಟ್ಸ್ ಇವೆರಡರಲ್ಲಿ ಬೆಳಗಿನ ಉಪಹಾರಕ್ಕೆ ಯಾವುದು ಬೆಸ್ಟ್?
ಓಟ್ಸ್ ಮತ್ತು ಮ್ಯೂಸ್ಲಿ ಆರೋಗ್ಯಕರ ಆಹಾರಗಳು. ಓಟ್ಸ್ ತೂಕ ಇಳಿಕೆ, ಮಧುಮೇಹ ನಿಯಂತ್ರಣ, ಹೃದಯ ಆರೋಗ್ಯಕ್ಕೆ ಉತ್ತಮ. ಮ್ಯೂಸ್ಲಿ ಹೆಚ್ಚು ಕ್ಯಾಲೋರಿಗಳು, ಜೀವಸತ್ವಗಳು ಹೊಂದಿದ್ದು, ಮಕ್ಕಳಿಗೆ ಉತ್ತಮ.
Summer Tips: ಬೇಸಿಗೆಯಲ್ಲಿ ಮಧುಮೇಹಿಗಳು ಎಂದಿಗೂ ಈ ತಪ್ಪುಗಳನ್ನು ಮಾಡಬಾರದಂತೆ!
ಬೇಸಿಗೆಯಲ್ಲಿ ಮಧುಮೇಹಿಗಳು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬಿಸಿಲಿನಲ್ಲಿ ಬರಿಗಾಲಿನಲ್ಲಿ ಓಡಾಡಬಾರದು, ದೈನಂದಿನ ನಡಿಗೆ ಮತ್ತು ಬಲವರ್ಧನೆಯ ತರಬೇತಿ ಮುಖ್ಯ. ಬಾಯಾರಿಕೆಯಾಗದಿದ್ದರೂ ನೀರು ಕುಡಿಯಬೇಕು.
Health Tips: ವರ್ಷಕ್ಕೊಮ್ಮೆ ಮಾತ್ರ ಸಿಗುತ್ತೆ ಈ ಸೂಪರ್ ಹಣ್ಣು; ತಿನ್ನದಿದ್ದರೆ ನಿಮಗೇ ಲಾಸ್!
ಬೇಸಿಗೆಯಲ್ಲಿ ಲಭ್ಯವಿರುವ ಅಪರೂಪದ ಹಣ್ಣುಗಳಲ್ಲಿ ಮಲ್ಬೆರ್ರಿ ಸಹ ಒಂದಾಗಿದೆ. ಇದು ವಿಟಮಿನ್ ಸಿ, ಕಬ್ಬಿಣ, ಫೈಬರ್ನಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಡಾ. ನರೇಂದ್ರ ಸಿಂಗ್ ಅವರ ಪ್ರಕಾರ, ಇದು ಜೀರ್ಣಕ್ರಿಯೆ ಸುಧಾರಿಸುತ್ತವೆ.
Health Care: ಕ್ಯಾನ್ಸರ್ ಎಂದರೇನು? ಇದು ದೇಹದಲ್ಲಿ ರೂಪುಗೊಳ್ಳುತ್ತಿರೋದು ತಿಳಿಯೋದು ಹೇಗೆ?
ಕ್ಯಾನ್ಸರ್ ನಮ್ಮ ದೇಹದಲ್ಲಿರುವ ಅತ್ಯಂತ ಚಿಕ್ಕ ಅಂಶವಾದ 'ಕೋಶ'ದಿಂದ ಪ್ರಾರಂಭವಾಗುವ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ರೋಗ ನಿಖರವಾಗಿ ಏನು ಮತ್ತು ಇದು ದೇಹದಲ್ಲಿ ಹೇಗೆ ಹಿಡಿತ ಸಾಧಿಸುತ್ತದೆ ಎಂಬುದನ್ನು ನಾವಿಂದು ವಿವರವಾಗಿ ತಿಳಿಯೋಣ ಬನ್ನಿ.
Health Care: ದಿನೇ-ದಿನೇ ಯೂರಿಕ್ ಆ್ಯಸಿಡ್ ಸಮಸ್ಯೆ ಹೆಚ್ಚಾಗ್ತಿದ್ಯಾ? ಇದಕ್ಕೆ ಕಾರಣವೇನು ಗೊತ್ತಾ?
ಯುವಕರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತಿದೆ. ಆಹಾರ ಪದ್ಧತಿ, ಜಡ ಜೀವನಶೈಲಿ, ಹೆಚ್ಚಿನ ಪ್ರೋಟೀನ್ ಆಹಾರ ಇದಕ್ಕೆ ಕಾರಣವಾಗಿದೆ. ಸಮತೋಲಿತ ಆಹಾರ, ವ್ಯಾಯಾಮ, ನೀರು ಕುಡಿಯುವುದು ಪರಿಹಾರವಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ 2ನೇ ಗುರುವಾರ ಉಚಿತ ಮೂತ್ರಕೋಶ ತಪಾಸಣಾ ಶಿಬಿರ. ಡಾ. ಯು.ಎಸ್. ಕಾರ್ತಿಕ್ ಬೆಳಿಗ್ಗೆ 10-1 ಲಭ್ಯ.

34 C