ಕೆಲ ದಿನಗಳ ಹಿಂದೆ ವಾರ ಅಪರೂಪ ಎನ್ನುವಂತೆ ಶಂಕರ ಮನೆಯ ಎಲ್ಲಾ ಸದಸ್ಯರೂ ಒಂದೇ ಸಮಯದಲ್ಲಿ ಮನೆಯಲ್ಲಿದ್ದು ಎಲ್ಲರೂ ಒಟ್ಟಿಗೆ ಮಾತಾನಾಡುವ ಮನಸ್ಥಿತಿಯಲ್ಲಿದ್ದರು. ನಿಜ ಹೇಳಬೇಕೆಂದರೆ ಅದು ಮಾತು ಎನ್ನುವುದಕ್ಕಿಂತ ಬಿಸಿ ಬಿಸಿಯಾದ ಚರ್ಚೆ ಆರಂಭವಾಗಿತ್ತು. ಚಿಕ್ಕವಯಸ್ಸಿನಿಂದಲೂ ಶಂಕರ ಮತ್ತು ಆತನ ಮಡದಿ ಅವರ ಮಕ್ಕಳಿಗೆ ಹೇಳಿಕೊಟ್ಟ ಸಂಸ್ಕಾರ ಮತ್ತು ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿಗಳ ಬಗ್ಗೆ ಅವರ ಮಕ್ಕಳಿಗೆ ಆಕ್ಷೇಪವಿತ್ತು. ಚಿಕ್ಕಂದಿನಿಂದಲೂ ನೀವು ನಮಗೆ ಸ್ವಾತ್ರಂತ್ಯವೇ ನೀಡಲಿಲ್ಲ. ನಾವು ಏನೇ ಮಾಡಬೇಕೆಂದರೂ, ಎಲ್ಲಿಗೆ ಹೋಗಬೇಕಾದರೂ ನಿಮಗೆ ತಿಳಿಸಿ… Read More ಧೃಢತೆ ಮತ್ತು ಸಧೃಢತೆ
ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ
ಈಗಾಗಲೇ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು ಉಳಿದ ಹಂತಗಳ ಚುನಾವಣೆಗಳು ಬಾಕಿ ಇರುವಾಗಲೇ, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯವರು ಇಚ್ಚಿಸುತಿದ್ದರೆ, ಯಥಾ ಪ್ರಕಾರ ಅವರ ವಿರೋಧಿಗಳು ಮೋದಿಯವರನ್ನು ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದು ಹಳಿಯುತ್ತಾ, ವಯಕ್ತಿಕ ಟೀಕೆಗಳಲ್ಲಿಯೇ ಮುಳುಗಿರುವ ಮೂಲಕ ಭಾಗಶಃ ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಲಾರ್ಡ್ ಮೆಕಾಲೆ ಎಂದೇ ಪ್ರಸಿದ್ಧವಾಗಿದ್ದ, ಥಾಮಸ್ ಬಾಬಿಂಗ್ಟನ್ ಮೆಕಾಲೆ (1800-59) ಎಂಬ… Read More ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿಎಂದವರಿಲ್ಲ
ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ
ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮುದ್ರಕ್ಕೆ ಕಟ್ಟಿದ ರಾಮಸೇತು. ನಿಜ ಹೇಳಬೇಕೆಂದರೆ ಈ ಎರಡೂ ಪವಿತ್ರ ಕ್ಷೇತ್ರಗಳ ಹೊರತಾಗಿ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಸ್ಥಳಗಳಿದ್ದು, ಅಂತಹವುಗಳಲ್ಲಿ ಒಂದಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಶ್ರೀ ರಾಮಚಂದ್ರ ಪ್ರಭು ತನ್ನ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಭಾಷೆಯಂತೆ, 14ವರ್ಷ… Read More ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ
ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು
ಅದೇಕೋ ಏನೋ ಕರ್ನಾಟಕದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಹಿಂದೂ ವಿರೋಧಿಗಳು ಏಕಾಏಕಿ ಜಾಗೃತರಾಗಿ ಹಿಂದೂ ವಿರೋಧಿ ಕೃತ್ಯಗಳಲ್ಲಿ ಭಾಗಿಗಳಾಗಗುತ್ತಿರುವುದು ಭಾವೈಕ್ಯತೆಗೆ ಧಕ್ಕೆ ತರುವಂತಿದೆ. 2023ರ ಮೇ ತಿಂಗಳಿನಲ್ಲಿ ಕೇವಲ ಗ್ಯಾರಂಟಿ ಎಂಬ ಉಚಿತಗಳ ಆಮೀಷಗಳ ಮೂಲಕ ಅಧಿಕಾರಕ್ಕೆ ಬಂದ ಈ ಕಾಂಗ್ರೇಸ್ ಸರ್ಕಾರ ಕೇವಲ 10-11 ತಿಂಗಳುಗಳಲ್ಲಿ ಹೆಜ್ಜೆ ಹೆಜ್ಜೆಗೂ ತಪ್ಪನ್ನು ಎಸಗುತ್ತಾ, ಹಿಂದೂ ವಿರೋಧಿ ಧೋರಣೆಗಳ ಮೂಲಕ ಥೂ!, ಛೇ!! ಇಂತಹ… Read More ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿಕೃತ್ಯಗಳು
ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು
ಎಲ್ಲರಿಗೂ ಗೊತ್ತಿರುವಂತೆ ನಮ್ಮದು ಕನ್ನಡಿಗರ ಕುಟುಂಬ. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ತಾತನವರಾದ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರಿಗೆ 70ರ ದಶಕದಲ್ಲೇ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇನ್ನು ನಮ್ಮ ತಂದೆಯವರಾದ ಶ್ರೀ ಬಾಳಗಂಚಿ ಗಮಕಿ ಶಿವಮೂರ್ತಿಗಳೂ ಸಹಾ ವೃತ್ತಿಯಲ್ಲಿ ಬಿಇಎಲ್ ಕಾರ್ಖನೆಯಲ್ಲಿದ್ದರೂ ಪ್ರವೃತ್ತಿಯಲ್ಲಿ ನಾಡಿನ ಹೆಸರಾಂತ ಗಮಕಿಗಳು (ವಿಶೇಷವಾಗಿ ವ್ಯಾಖ್ಯಾನ ಪಂಡಿತರು) ಆಗಿದ್ದಲ್ಲದೇ, ಏಕಲವ್ಯನಂತೆ ಸ್ವತಃ ತಾವೇ ಮೋರ್ಚಿಂಗ್ ಎಂಬ ವಿಶಿಷ್ಟವಾದ ಲಯವಾದ್ಯವನ್ನು… Read More ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನಆಗಬಾರದು
ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್
ಅದು 90ರ ದಶಕದ ಸಮಯ. ದೂರದರ್ಶನದ ಚಂದನ ವಾಹಿನಿ ಬಿಟ್ಟರೆ ತಮಿಳುನಾದಿನ ಸನ್ ಟಿವಿ ಸಾರಥ್ಯದ ಉದಯ ಟಿವಿಯೊಂದೇ ಖಾಸಗಿ ಕನ್ನಡ ವಾಹಿನಿ. ಸಹಜವಾಗಿ ದೂರದರ್ಶನದ ಏಕಾನತೆಯಿಂದ ಬೇಸರಗೊಂಡಿದ್ದವರಿಗೆ ಉದಯ ಟಿವಿಯೇ ಪ್ರಮುಖ ಆಕರ್ಷಣೆ. ಉದಯ ಟಿವಿಯವರೂ ಸಹಾ ಕನ್ನಡಿಗರ ಹೃದಯವನ್ನು ಗೆಲ್ಲಲು ಅನೇಕ ಹೊಸ ಹೊಸಾ ಕಾರ್ಯಕ್ರಮಗಳ ಮಾಲಿಕೆಯನ್ನು ಆರಂಭಿಸಿದ್ದರು. ಹಾಗೆ ಕನ್ನಡದ ಆಸ್ತಿಕರಿಗೆಂದೇ ಆರಂಭಿಸಿದ ಭಾನುವಾರದ ಕಾರ್ಯಕ್ರಮ ರಾಶಿ ಭವಿಷ್ಯ ಅರ್ಥಾತ್ ವಾರ ಭವಿಷ್ಯ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ಶ್ರೀ ಎಸ್. ಕೆ.… Read More ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ.ಜೈನ್
ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)
ಸಂಕ್ರಾಂತಿಯ ಸುಗ್ಗಿ ಹಬ್ಬ ಕಳೆದು ಬೆಳೆದ ಧಾನ್ಯಗಳನ್ನೆಲ್ಲಾ ಒಟ್ಟು ಮಾಡಿ ಮನೆಗೆ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿಷ್ಟು ಹಣ ಇರುವಾಗಾಲೇ, ಮುಂದಿನ ಕೃಷಿ ಚಟುವಟಿಕೆಗಳಿಗಾಗಿ ಕಾಮನ ಹಬ್ಬ ಮತ್ತು ಯುಗಾದಿಯ ಸಮಯದಲ್ಲಿ ಬೀಳುವ ಮಳೆಗಾಗಿ ಕಾಯುತ್ತಿರುವ ಕೃಷಿಕರಿಗೆ ಜನವರಿ ಇಂದ ಏಪ್ರಿಲ್ ವರೆಗೆ ಕೊಂಚ ಬಿಡುವಿನ ವೇಳೆ, ಹಾಗಾಗಿಯೇ ಇದೇ ಸಮಯದಲ್ಲಿಯೇ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇದೇ ಸಮಯದಲ್ಲಿಯೂ ಜಾತ್ರಾಮಹೋತ್ಸವಗಳು ನಡೆಯುವುದು ವಿಶೇಷವಾಗಿದೆ. ಅದೇ ರೀತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ… Read More ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀಜಾತ್ರೆ)