ಪಾಲಕ್ ಪನೀರ್ ಮತ್ತು ಪೂರ್ವಗ್ರಹ; ಅಮೆರಿಕಾದಲ್ಲಿ 1.8 ಕೋಟಿ ರೂ. ವ್ಯಾಜ್ಯ ಗೆದ್ದ ಭಾರತೀಯ ವಿದ್ಯಾರ್ಥಿಗಳು
Photo Credit : indiatoday.in ವಿದ್ಯಾರ್ಥಿಗಳು ಕೊಲೊರಾಡೊ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಾಲಕ್ ಪನೀರ್ ಸಂಬಂಧಿತ ತಾರತಮ್ಯದ ವಿರುದ್ಧ 1.8 ಕೋಟಿ ರೂ. ಮೊತ್ತದ ಸಿವಿಲ್ ರೈಟ್ಸ್ ಸೆಟಲ್ಮೆಂಟ್ (ನಾಗರಿಕ ಹಕ್ಕು ಮೊಕದ್ದಮೆಯ ಇತ್ಯರ್ಥ) ಗೆದ್ದುಕೊಂಡಿದ್ದಾರೆ. ಭಾರತೀಯ ಪಿಎಚ್ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಉರ್ಮಿ ಭಟ್ಟಾಚಾರ್ಯ ಅವರು ಕೊಲೊರಾಡೊ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಾಲಕ್ ಪನೀರ್ ಸಂಬಂಧಿತ ತಾರತಮ್ಯದ ವಿರುದ್ಧ ಹಾಕಿರುವ 1.8 ಕೋಟಿ ರೂ. ಮೊತ್ತದ ಸಿವಿಲ್ ರೈಟ್ಸ್ ಸೆಟಲ್ಮೆಂಟ್ (ನಾಗರಿಕ ಹಕ್ಕು ಮೊಕದ್ದಮೆಯ ಇತ್ಯರ್ಥ) ಗೆದ್ದುಕೊಂಡಿದ್ದಾರೆ. 2023 ಸೆಪ್ಟೆಂಬರ್ನಲ್ಲಿ ಸಿಬ್ಬಂದಿಯೊಬ್ಬರು ಆದಿತ್ಯ ಪ್ರಕಾಶ್ಗೆ ಊಟವನ್ನು ತಮ್ಮ ವಿಭಾಗದ ಮೈಕ್ರೋವೇವ್ನಲ್ಲಿ ಬಿಸಿ ಮಾಡದಂತೆ ಸೂಚಿಸಿದ್ದರು. ಬಿಸಿ ಮಾಡುವುದರಿಂದ ಕಮಟು ವಾಸನೆ ಬರುತ್ತದೆ ಎಂದು ಅವರು ಹೇಳಿದ್ದರು. ಆದಿತ್ಯ ಪ್ರಕಾಶ್ರ ಊಟದಿಂದ ಕಮಟು ವಾಸನೆ ಬರುತ್ತಿರುವ ಕಾರಣದಿಂದ ಅವರು ಮೈಕ್ರೋವೇವ್ನಲ್ಲಿ ಅದನ್ನು ಬಿಸಿ ಮಾಡಬಾರದು ಎಂದು ಸಿಬ್ಬಂದಿಯೊಬ್ಬರು ದೂರು ನೀಡಿದ್ದರು. ಅದಕ್ಕೆ ಉತ್ತರವಾಗಿ ಆದಿತ್ಯ ಪ್ರಕಾಶ್, “ಇದು ಕೇವಲ ಊಟ, ನಾನು ಬಿಸಿ ಮಾಡುತ್ತೇನೆ ಮತ್ತು ಹೊರಹೋಗುತ್ತೇನೆ” ಎಂದು ಉತ್ತರಿಸಿದ್ದರು. ಆದರೆ ಈ ವಾಗ್ವಾದ ಬಿಸಿಯಾಗಿ ವ್ಯಾಜ್ಯವಾಗಿ ಬದಲಾಗಿದೆ. 34 ವರ್ಷದ ಆದಿತ್ಯ ಮತ್ತು 35 ವರ್ಷದ ಉರ್ಮಿ ವಿಶ್ವವಿದ್ಯಾಲಯದ ವಿರುದ್ಧ ಕೊಲೊರಾಡೊದ ಅಮೆರಿಕ ಸಂಯುಕ್ತ ಸಂಸ್ಥಾನದ ಜಿಲ್ಲಾ ನ್ಯಾಯಾಲಯದಲ್ಲಿ “ತಾರತಮ್ಯದ ವರ್ತನೆ” ತೋರಲಾಗುತ್ತಿದೆ ಎಂದು ದೂರು ಸಲ್ಲಿಸಿದ್ದಾರೆ. ದಕ್ಷಿಣ ಏಷ್ಯಾದವರು ತಮ್ಮ ಊಟವನ್ನು ಎಲ್ಲರೂ ಓಡಾಡುವ ಪ್ರದೇಶದಲ್ಲಿ ಮಾಡಬಾರದು ಎಂದು ವಿಭಾಗದ ಅಡುಗೆಯ ನಿಯಮಗಳಲ್ಲಿ ಸೇರಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಆದಿತ್ಯ ಪ್ರಕಾಶ್ ಪ್ರಕಾರ ಆತನನ್ನು ಊಟದ ವಿಚಾರವಾಗಿ ಪದೇಪದೆ ಹಿರಿಯ ಸಿಬ್ಬಂದಿಗಳ ಸಭೆಯಲ್ಲಿ ಕರೆಯಲಾಗಿದೆ ಮತ್ತು ಆತ ಇತರರಿಗೆ ಅಸುರಕ್ಷಿತವಾದ ಭಾವನೆ ಹುಟ್ಟಿಸುವ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಅವರಿಗೆ ತಿಳಿಸಲಾಗಿತ್ತು. ಉರ್ಮಿಯನ್ನು ಊಟದ ವಿಚಾರಕ್ಕೆ ಸಂಬಂಧಿಸಿ ಸಹಾಯಕ ಅಧ್ಯಾಪಕರ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿತ್ತು. ಪಾಲಕ್ ಪನೀರ್ ಘಟನೆಯ ನಂತರ ಉರ್ಮಿ ಸತತ ಎರಡು ದಿನ ಭಾರತೀಯ ಆಹಾರವನ್ನು ತಂದು ಸೇವಿಸುವ ಮೂಲಕ ‘ಗಲಭೆ ಸೃಷ್ಟಿಗೆ’ ಪ್ರಯತ್ನಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ವಿಭಾಗ ಆರೋಪಿಸಿತ್ತು. ಎರಡು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ ವಿಶ್ವವಿದ್ಯಾಲಯ ಕೊನೆಗೂ 2025 ಸೆಪ್ಟೆಂಬರ್ನಲ್ಲಿ ರೂ 1.8 ಕೋಟಿ ರೂ. ತೆರಲು ಒಪ್ಪಿಕೊಂಡಿದೆ ಮತ್ತು ಅವರ ಸ್ನಾತಕೋತ್ತರ ಪದವಿಯನ್ನು ನೀಡಲು ಒಪ್ಪಿಕೊಂಡಿದೆ. ಆದರೆ ಅವರು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡುವುದು ಅಥವಾ ಉದ್ಯೋಗ ಮಾಡುವುದನ್ನು ತಡೆಹಿಡಿಯಲಾಗಿದೆ. ಇಬ್ಬರೂ ಜನವರಿಯಲ್ಲಿ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಆಗಮಿಸಿದ ಬಳಿಕ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ ಉರ್ಮಿ ಭಟ್ಟಾಚಾರ್ಯ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ. “ಈ ವರ್ಷ ನಾನು ಹೋರಾಟ ಮಾಡಿದ್ದೇನೆ. ನನ್ನ ಚರ್ಮದ ಬಣ್ಣ, ನನ್ನ ಜನಾಂಗೀಯ ಹಿನ್ನೆಲೆ ಮತ್ತು ಭಾರತೀಯ ಉಚ್ಛಾರಣೆ ಏನೇ ಇರಲಿ, ನನಗೆ ಬೇಕಾದುದನ್ನು ತಿನ್ನುವ ಮತ್ತು ನನ್ನ ಇಚ್ಛೆಯಂತೆ ಪ್ರತಿಭಟಿಸುವ ಸ್ವಾತಂತ್ರ್ಯಕ್ಕಾಗಿ ನಾನು ಹೋರಾಡಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. https://www.instagram.com/p/DSXhzTVk8_y/?utm_source=ig_web_copy_link ಈ ನಡುವೆ ಕೊಲೊರಾಡೊ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಜೊತೆಗೆ ವ್ಯಾಜ್ಯವನ್ನು ಸೆಟಲ್ಮೆಂಟ್ (ಇತ್ಯರ್ಥ) ಮಾಡಿಕೊಂಡಿರುವುದನ್ನು ಖಚಿತಪಡಿಸಿದೆ. ಆದರೆ ಯಾವುದೇ ಬಾಧ್ಯತೆಯನ್ನು ಸ್ವೀಕರಿಸಲು ಕೊಲೊರಾಡೊ ವಿಶ್ವವಿದ್ಯಾಲಯ ನಿರಾಕರಿಸಿದೆ.
Weight Loss: ಮೊಸರು ತಿಂದೇ ತೂಕ ಇಳಿಸಬಹುದು ಗೊತ್ತಾ? ಆದರೆ ಹೀಗೆ ಬಳಸಿದ್ರೆ ಮಾತ್ರ!
Weight Loss: ಬೊಜ್ಜು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಅದನ್ನು ನಿವಾರಿಸಲು ಹಲವು ಡಯಟ್ ಪ್ಲಾನ್ ಗಳಿವೆ. ಅದರಲ್ಲಿ ಮೊಸರನ್ನು ಸಹ ಸೇರಿಸಬಹುದು.
ಕಾಫಿ ಹೇಗೆ ಕುಡಿದರೆ ಚೆನ್ನ? ವೈದ್ಯರ ನಡುವಿನ ಚರ್ಚೆಯ ವಿವರ ಇಲ್ಲಿದೆ…
ಸಾಂದರ್ಭಿಕ ಚಿತ್ರ | Photo Credit : freepik ಕ್ಲೋರೋಜೆನಿಕ್ ಆಮ್ಲ ಉರಿಯೂತದ ವಿರುದ್ಧ ಸಹಜವಾದ ಮಿತ್ರನಾಗಿರುತ್ತದೆ. ಅದನ್ನು ಪ್ರೊಟೀನ್ ಮತ್ತು ಮಸಾಲೆಗಳ ಜೊತೆಗೆ ಬೆರೆಸಿ ಸೇವಿಸುವುದರಿಂದ ಪರಿಣಾಮ ಇನ್ನಷ್ಟು ಉತ್ತಮವಾಗುತ್ತದೆ. ವೈದ್ಯರು ಮತ್ತು ಆರೋಗ್ಯ ಲೇಖಕರಾಗಿರುವ ಡಾಕ್ಟರ್ ಕ್ರಿಸ್ಟೀ ಲಿಯಾಂಗ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾಫಿಯನ್ನು ಹೇಗೆ ಕುಡಿಯಬೇಕು ಎಂದು ವಿವರಿಸುವ ಮೂಲಕ ಕಾಫಿ ಚರ್ಚೆಯನ್ನು ಆರಂಭಿಸಿದ್ದಾರೆ. ಬೆಳಗ್ಗೆ ಎದ್ದಾಗ ಸೇವಿಸುವ ಸರಳ ಕಾಫಿ ಹೇಗೆ ದೈಹಿಕವಾಗಿ ಉತ್ತಮ ಪರಿಣಾಮ ಬೀರಬಹುದು ಎಂದು ಅವರು ವಿವರಿಸಿದ್ದಾರೆ. ಕ್ರಿಸ್ಟೀ ಅವರು ವಿವರಿಸುವ ಪ್ರಕಾರ ಕಾಫಿ ಅದಾಗಲೇ ತನ್ನಲ್ಲಿರುವ ಪಾಲಿಫೀನಾಲ್ಗಳ ಮೂಲಕ ಕ್ಲೋರೋಜೆನಿಕ್ ಆಮ್ಲದ ಮೂಲಕ ಉರಿಯೂತದ ಮಾರ್ಗಗಳನ್ನು ಮಾರ್ಪಡಿಸುತ್ತದೆ. ಹೀಗಾಗಿ ಕಾಫಿಯನ್ನು ಕೆಲವು ವಸ್ತುಗಳ ಜೊತೆಗೆ ಸೇವಿಸಿದರೆ ಉರಿಯೂತ ನಿವಾರಕ ಪ್ರಯೋಜನಗಳನ್ನು ಹೆಚ್ಚಿಸಬಹುದು! ಈ ಸಂಯುಕ್ತಗಳ ಜೊತೆಗೆ ಕಾಫಿ ಸೇವಿಸಿ “ಪ್ರೊಟೀನ್ ಸಮೃದ್ಧವಾಗಿರುವ ಸೋಯಾ ಅಥವಾ ಡೈರಿಯ ಜೊತೆಗೆ ಸೇವಿಸಿದರೆ ಪಾಲಿಫಿನಾಲ್ ಬಂಧ ಬಲಿಷ್ಠವಾಗುತ್ತದೆ. ದಾಲ್ಚಿನ್ನಿಯ ಜೊತೆಗೆ ಸೇರಿದರೆ ಉರಿಯೂತದ ಮಾರ್ಕರ್ಗಳನ್ನು ಕಡಿಮೆಗೊಳಿಸುತ್ತದೆ. ಕೋಕಾ ಜೊತೆಗೆ ಬೆರೆಸಿದರೆ ರಿಯಾಕ್ಟಿವ್ ಆಕ್ಸಿಜನ್ ಸ್ಪೇಸಿಸ್ (ಆರ್ಒಎಸ್), ಸೈಟೊಕೈನ್ಗಳನ್ನು ಕಡಿಮೆಗೊಳಿಸುತ್ತದೆ. (ಆರ್ಒಎಸ್ ಹೆಚ್ಚು ಅಸ್ಥಿರವಾಗಿದ್ದು, ಸಾಮಾನ್ಯ ಜೀವಕೋಶ ಚಪಯಾಪಚಯ ಕ್ರಿಯೆಯ ಸಮಯದಲ್ಲಿ ಅಥವಾ ಬಾಹ್ಯ (ಮಾಲಿನ್ಯ) ಅಂಶಗಳಿಂದ ರೂಪುಗೊಳ್ಳುತ್ತವೆ. ಅವು ಇತರ ಅಣುಗಳೊಂದಿಗೆ ಸುಲಭವಾಗಿ ಪ್ರತಿಕ್ರಿಯಿಸಿ ಆಕ್ಸಿಡೇಟಿವ್ ಒತ್ತಡ ಹೇರುತ್ತವೆ. ಅಲ್ಲದೆ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯಂತಹ ಜೀವಕೋಶದ ಕಾರ್ಯಗಳಿಗೆ ನಿರ್ಣಾಯಕ ಸಂಕೇತ ನೀಡುವ ಅಣುಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ ಕೋಕಾ ಜೊತೆಗೆ ಬೆರೆಸಿ ಸೇವಿಸಿದರೆ ಪ್ರಯೋಜನವಾಗುತ್ತದೆ.) ಅರಶಿಣ ಬೆರೆಸಿ ಸೇವಿಸಿದರೆ ಅದರಲ್ಲಿರುವ ಕ್ಯುರ್ಕ್ಯುಮಿನ್ನಿಂದಾಗಿ ಉರಿಯೂತ ವಿರೋಧಿ ಲಾಭಗಳನ್ನು ಪಡೆಯಬಹುದು. ಜೊತೆಗೆ ಲಘು ಅಥವಾ ಮಧ್ಯಮ ಹುರಿದ ಕಾಫಿ ಕ್ಲೋರೋಜೆನಿಕ್ ಆಮ್ಲಗಳನ್ನು ಸಂರಕ್ಷಿಸಲು ಅತ್ಯುತ್ತಮ ಹಾದಿಯಾಗಿರುತ್ತದೆ. ಕ್ಲೋರೋಜೆನಿಕ್ ಆಮ್ಲಗಳಲ್ಲಿ ಆಂಟಿಆಕ್ಸಿಡಂಟ್ ಲಾಭಗಳು ಸಿಗುತ್ತವೆ” ಎನ್ನುತ್ತಾರೆ ಕ್ರಿಸ್ಟಿ. ಅವರ ಪ್ರಕಾರ ಕ್ಲೋರೋಜೆನಿಕ್ ಆಮ್ಲ ಉರಿಯೂತದ ವಿರುದ್ಧ ಸಹಜವಾದ ಮಿತ್ರನಾಗಿರುತ್ತದೆ. ಅದನ್ನು ಪ್ರೊಟೀನ್ ಮತ್ತು ಮಸಾಲೆಗಳ ಜೊತೆಗೆ ಬೆರೆಸಿ ಸೇವಿಸುವದುರಿಂದ ಪರಿಣಾಮ ಇನ್ನಷ್ಟು ಉತ್ತಮವಾಗುತ್ತದೆ. ಸರಳವಾದ ಅಭ್ಯಾಸದಿಂದ ದೇಹದ ಸಹಿಷ್ಣುತೆಗೆ ಉತ್ತಮ ಆರೈಕೆ ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಜೈವಿಕವಾಗಿ ಸಕ್ರಿಯ ಕಾಫಿಯಿಂದ ಲಾಭ ಕ್ರಿಸ್ಟಿ ಅವರ ಪೋಸ್ಟ್ಗೆ ಉತ್ತರಿಸಿದ ಡಾ ಬಿಗ್ಲೀ ಮುರಳಿ, “ಕಾಫಿ ಈಗಾಗಲೇ ಜೈವಿಕವಾಗಿ ಸಕ್ರಿಯವಾಗಿದೆ. ಅದನ್ನು ಸಂಯುಕ್ತಗಳೊಂದಿಗೆ ಬೆರೆಸಿ ದೈನಂದಿನ ಸೇವನೆಯ ಅಭ್ಯಾಸ ಮಾಡಿದಲ್ಲಿ ನಿಜವಾದ ದೈಹಿಕ ಲಾಭ ಗಳಿಸಬಹುದು. ಉರಿಯೂತ ವಿರೋಧಿ ಅಭ್ಯಾಸವಾಗಿ ಬದಲಾಗಬಹುದು” ಎಂದು ಹೇಳಿದ್ದಾರೆ. ಡಿಜಿಟಲ್ ಹೆಲ್ತ್ನಲ್ಲಿ ಜನಪ್ರಿಯ ವೈದ್ಯರಾದ ಡಾ ಹೇಮಲತಾ ರಾಮಚಂದ್ರನ್ ಅವರೂ ಪ್ರತಿಕ್ರಿಯಿಸಿ, “ಕಾಫಿಯನ್ನು ದಾಲ್ಚಿನ್ನಿ, ಕೋಕಾ ಅಥವಾ ಅರಶಿಣದ ಜೊತೆಗೆ ಕುಡಿಯುವ ಸಲಹೆ ನಿಜಕ್ಕೂ ಅತ್ಯುತ್ತಮ. ರುಚಿಕರವಾಗಿಯೂ ಇರುತ್ತದೆ ಮತ್ತು ಉರಿಯೂತ ವಿರೋಧಿ ಶಕ್ತಿಯನ್ನೂ ಕೊಡುತ್ತದೆ” ಎಂದು ಹೇಳಿದ್ದಾರೆ. ಕಾಫಿ ಕುರಿತ ಹೊಸ ಅಧ್ಯಯನ ಏನು ಹೇಳುತ್ತದೆ? ಈ ನಡುವೆ ಚರ್ಚೆಯಲ್ಲಿ ಭಾಗವಹಿಸಿದ ವೈದ್ಯರಾದ ಬ್ರಿಯಾನ್ ಕಾಫಿ ಕುರಿತ ಇತ್ತೀಚೆಗಿನ ಸಂಶೋಧನೆಯೊಂದರ ಕಡೆಗೆ ಗಮನ ಹರಿಸುವಂತೆ ಮಾಡಿದ್ದಾರೆ. ಇತ್ತೀಚೆಗಿನ ಅಧ್ಯಯನದಲ್ಲಿ ಹುರಿದ ಕಾಫಿಯಲ್ಲಿ ಈ ಹಿಂದೆ ತಿಳಿದಿರದೆ ಇದ್ದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ಕಿಣ್ವವನ್ನು ಪ್ರತಿಬಂಧಿಸುವ ಸಾಮರ್ಥ್ಯವಿರುವ ಸಂಯುಕ್ತಗಳಿವೆ ಎಂದು ತಿಳಿಸಿದ್ದಾರೆ. ಚೀನಾ ಅಕಾಡಮಿ ಆಫ್ ಸೈನ್ಸಸ್ನ ಕುನ್ಮಿಂಗ್ ಇನ್ಸ್ಟಿಟ್ಯೂಟ್ ಆಫ್ ಬಾಟನಿಯಲ್ಲಿ ಮಿಂಗ್ವಾ ಕಿಯು ಅವರ ತಂಡವು ನಡೆಸಿದ ಅಧ್ಯಯನದ ವಿವರಗಳು ಬಿವರೇಜ್ ಪ್ಲಾಂಟ್ ರೀಸರ್ಜ್ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನವು ಕಾಫಿಯನ್ನು ಆಂಟಿಬಯಾಟಿಕ್ ಸಂಯುಕ್ತದ ಪ್ರಮುಖ ಮೂಲ ಎಂದು ಹೇಳಿದೆ. ಅಧ್ಯಯನದ ಪ್ರಕಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಕಾರ್ಬೋಹೈಡ್ರೇಟ್ಗಳನ್ನು ಒಡೆಯುವಲ್ಲಿ ಬಹುಮುಖ್ಯ ಪಾತ್ರವಹಿಸುವ ಕಿಣ್ವವಾಗಿರುವ α-ಗ್ಲುಕೊಸಿಡೇಸ್ ಅನ್ನು ಬಲವಾಗಿ ಪ್ರತಿಬಂಧಿಸುವ ಮೂರು ಸಂಯುಕ್ತಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಕಿಣ್ವವನ್ನು ನಿರ್ಬಂಧಿಸುವುದರಿಂದ ಊಟದ ನಂತರದ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಹೀಗಾಗಿ ಟೈಪ್ 2 ಮಧುಮೇಹ ನಿರ್ವಹಿಸುವ ಆಹಾರ ಅಂಶಗಳನ್ನು ತಯಾರಿಸುವ ಹೊಸ ಸಾಧ್ಯತೆ ತೆರೆದುಕೊಂಡಿದೆ. ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಯಿಂದ ಬರೆಯಲಾಗಿದೆ. ಯಾವುದೇ ಆಹಾರದಲ್ಲಿನ ಅಥವಾ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.
ಕರುಳಿನ ಸಮಸ್ಯೆ ಇದ್ದರೆ ಫೈಬರ್ ಅಂಶ ಸೇವನೆ ಸಲ್ಲದು!
ಸಾಂದರ್ಭಿಕ ಚಿತ್ರ | Photo Credit : freepik ಕರುಳು ಉಬ್ಬಿರುವಾಗ ಏನು ಸೇವಿಸಬಹುದು ಮತ್ತು ಸೇವಿಸಬಾರದು ಎಂದು ತಿಳಿದುಕೊಳ್ಳುವುದರಿಂದ ಬೇಗನೇ ಚೇತರಿಸಿಕೊಳ್ಳಬಹುದು ಬಹುತೇಕರು ಫೈಬರ್ ಅಂಶ ಜೀರ್ಣಕ್ರಿಯೆಗೆ ಉತ್ತಮ ಎಂಬ ಭಾವನೆ ಇದೆ, ಆದರೆ ಉಬ್ಬಿರುವ ಕರುಳು ಸಮಸ್ಯೆ ಇರುವವರಿಗೆ ಫೈಬರ್ ಸೇವನೆ ತಾಜಾ ಗಾಯದ ಮೇಲೆ ಸ್ಯಾಂಡ್ ಪೇಪರ್ನಿಂದ ಉಜ್ಜಿದ ಅನುಭವವಾಗುತ್ತದೆ! ಹೀಗೆಂದು ಹೇಳಿದವರು ಹಾರ್ಮೋನಲ್ ತರಬೇತುದಾರರಾಗಿರುವ ಡೇವಿಡಾ ಸೈನ್. ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅವರು ಹೇಳಿರುವ ಪ್ರಕಾರ, “ಕರುಳಿನ ಸಮಸ್ಯೆ ಇರುವವರಿಗೆ ಫೈಬರ್ ಅಂಶವನ್ನು ಸೇವಿಸುವುದು ಗಾಯವನ್ನು ಸ್ಯಾಂಡ್ ಪೇಪರ್ನಿಂದ ಉಜ್ಜಿದ ರೀತಿ ಇರುತ್ತದೆ. ಲೋಳೆಪೊರೆ ಉಬ್ಬಿಕೊಂಡಿದೆ ಮತ್ತು ಚಲನಶೀಲತೆ ನಿಧಾನವಾಗಿರುವ ಸಂದರ್ಭದಲ್ಲಿ ಫೈಬರ್ ಕೂರುತ್ತದೆ ಮತ್ತು ಹುದುಗುತ್ತದೆ. ಇದರಿಂದ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ ಮತ್ತು ಮಲಬದ್ಧತೆ ಉಂಟಾಗುತ್ತದೆ. ದುರಂತವೆಂದರೆ, ನೀವು ಅದರ ಮೇಲೆ ಇನ್ನಷ್ಟು ಫೈಬರ್ ಅಂಶಗಳನ್ನು ಸೇರಿಸುತ್ತೀರಿ. ಹಾಗೆ ಮಾಡಬೇಡಿ ಎಂದು ಬೇಡುತ್ತಿದ್ದೇನೆ” ಎನ್ನುತ್ತಾರೆ ಡೇವಿಡಾ. ಮೊದಲಿಗೆ ಕರುಳಿನ ಕಾರ್ಯವನ್ನು ಸ್ಥಿರಗೊಳಿಸಿದರೆ ನಂತರ ಅದು ಫೈಬರ್ ಅಂಶವನ್ನು ಸಹಿಸುವ ಶಕ್ತಿ ಪಡೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮುಂಬೈ ಸೆಂಟ್ರಲ್ನ ವಾಕ್ಹಾರ್ಡ್ಟ್ ಹಾಸ್ಪಿಟಲ್ಸ್ನ ಜಿಐ ಎಂಡೊಸ್ಕೋಪಿಸ್ಟ್ ಮತ್ತು ಜಠರಕರುಳಿನ ತಜ್ಞರಾಗಿರುವ ಡಾ ಸಾಯಿಪ್ರಸಾದ್ ಗಿರೀಶ್ ಲ್ಯಾಡ್ ಹೇಳುವ ಪ್ರಕಾರ, ಕರುಳಿನ ಲೈನಿಂಗ್ ಉರಿಯೂತಗೊಂಡಿದ್ದಾಗ ಮತ್ತು ಕರುಳಿನ ಚಲನೆ ನಿಧಾನಗೊಂಡಾಗ ಫೈಬರ್ ಸಂಗ್ರಹಗೊಳ್ಳುತ್ತದೆ ಮತ್ತು ಹುದುಗುತ್ತದೆ. ಹೀಗಾಗಿ ಹೆಚ್ಚು ಗ್ಯಾಸ್ ತುಂಬಿ ಹೊಟ್ಟೆ ಉಬ್ಬರಿಸುತ್ತದೆ, “ಇದೇ ಕಾರಣದಿಂದ ಕೆಲವರು ಸಲಾಡ್ಗಳು, ಬೇಳೆ-ಕಾಳುಗಳು ಅಥವಾ ಇತರ ಅಧಿಕ ಫೈಬರ್ ಇರುವ ಆಹಾರ ಸೇವಿಸಿದರೆ ಮಲಬದ್ಧತೆ ಇನ್ನಷ್ಟು ಹದಗೆಡುತ್ತದೆ. ಕರುಳು ಉಬ್ಬಿರುವಾಗ ಏನು ಸೇವಿಸಬಹುದು ಮತ್ತು ಸೇವಿಸಬಾರದು ಎಂದು ತಿಳಿದುಕೊಳ್ಳುವುದರಿಂದ ಬೇಗನೇ ಚೇತರಿಸಿಕೊಳ್ಳಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉರಿಯೂತದ ಸಂದರ್ಭದಲ್ಲಿ ಫೈಬರ್ ಏಕೆ ಬೇಡ ಫೈಬರ್ ಜೀರ್ಣವಾಗುವುದಿಲ್ಲ. ಅಂದರೆ ದೇಹ ಅದನ್ನು ಮುರಿಯುವುದಿಲ್ಲ. “ಕರುಳು ಆರೋಗ್ಯವಾಗಿದ್ದರೆ ಫೈಬರ್ ಅಂಶ ಸೇವನೆ ಉತ್ತಮ. ಆಸರೆ ಲೈನಿಂಗ್ ಉಬ್ಬಿಕೊಂಡಿದ್ದಲ್ಲಿ ಮತ್ತು ಚಲನೆ ನಿಧಾನಗತಿಯಲ್ಲಿದ್ದಾಗ ಫೈಬರ್ ದೀರ್ಘಕಾಲ ಉಳಿಯುತ್ತದೆ. ಅಲ್ಲೇ ಹುದುಗುತ್ತದೆ, ಗ್ಯಾಸ್ ಸೃಷ್ಟಿಸುತ್ತದೆ ಮತ್ತು ಉಬ್ಬಿಕೊಂಡ ಕರುಳಿನ ಗೋಡೆಗಳ ಮೇಲೆ ಒತ್ತಡ ಹೇತುತ್ತದೆ. ಇದೇ ಕಾರಣಕ್ಕೆ ಜನರು ಹೊಟ್ಟೆ ಉಬ್ಬರಿಸುವಿಕೆ, ಸೆಳೆತ ಅಥವಾ ಮಲಬದ್ಧತೆ ಎದುರಿಸುತ್ತಾರೆ” ಎನ್ನುತ್ತಾರೆ ವೈದ್ಯರು. ಫೈಬರ್ ಕಡಿಮೆ ಮಾಡುವುದು ಸರಿಯಾದ ಹೆಜ್ಜೆಯೆ? ವೈದ್ಯರ ಪ್ರಕಾರ ಬಹಳಷ್ಟು ಮಂದಿಗೆ ಫೈಬರ್ ಸೇವನೆ ಕಡಿಮೆಗೊಳಿಸುವುದರಿಂದ ಕರುಳಿನ ಸಮಸ್ಯೆ ಸರಿಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಒಳಪದರವು ಒರಟಾದ ರಚನೆ ಮತ್ತು ಹುದುಗುವಿಕೆಯಿಂದ ವಿರಾಮ ಪಡೆದಾಗ ಉಬ್ಬುವುದು ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ಚಲನೆ ಸುಧಾರಿಸುತ್ತದೆ. ಉರಿಯೂತ ನಿಂತ ಮೇಲೆ ಫೈಬರ್ ಅಂಶವನ್ನು ನಿಧಾನವಾಗಿ ಮರಳಿ ತರಬಹುದು. ಅಂದರೆ, ಗಾಯವನ್ನು ಉಜ್ಜುವ ಮೊದಲು ಶಮನವಾಗಲು ಅವಕಾಶ ಕೊಡುವುದು. ಈ ಹಂತದಲ್ಲಿ ಕೊಬ್ಬು ಮತ್ತು ಉಪ್ಪು ಏಕೆ ಮುಖ್ಯ? ತುಪ್ಪ, ಆಲಿವ್ ಎಣ್ಣೆ, ಕಡಲೆಗಳು ಅಥವಾ ಬೀಜಗಳು ಕರುಳನ್ನು ನಯಗೊಳಿಸಲು ಮತ್ತು ಸುಗಮ ಕರುಳಿನ ಚಲನೆಯನ್ನು ಉತ್ತೇಜಿಸುತ್ತವೆ. ಉಪ್ಪು ಕರುಳಿನ ಒಳಗೆ ಜಲಸಂಚಯನಕ್ಕೆ ನೆರವಾಗುತ್ತದೆ. ಇದು ಮುಖ್ಯ. ಏಕೆಂದರೆ ದೇಹ ನಿರ್ಜಲೀಕರಣಗೊಂಡಾಗ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಬಹಳಷ್ಟು ಮಂದಿ ತೂಕ ಹೆಚ್ಚಾಗುತ್ತದೆ ಎಂದು ಕೊಬ್ಬು ಕಡಿಮೆ ಮಾಡುತ್ತಾರೆ. ಆದರೆ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ ಮತ್ತು ಒಟ್ಟು ಹಾರ್ಮೋನಲ್ ಸಮತೋಲನ ಸ್ವಸ್ಥಾನಕ್ಕೆ ಬರಲು ನೆರವಾಗುತ್ತದೆ. ಕರುಳಿನ ಆರೋಗ್ಯಕ್ಕೆ ಏನು ಅಗತ್ಯ? ಹಸಿ ಆಹಾರ, ಅತಿಯಾದ ಫೈಬರ್ ಅಂಶ, ಭಾರವಾದ ಊಟ ಅಥವಾ ಅನಿಯಮಿತ ಊಟದ ಮಾದರಿಯನ್ನು ತೊರೆಯಬೇಕು. ಈ ಹಂತದಲ್ಲಿ ಜಲಸಂಚಯನ, ಸಾಕಷ್ಟು ಉಪ್ಪು ಸೇವನೆ, ಮಧ್ಯಮ ಕೊಬ್ಬು ಸೇವನೆ ಅತಿಯಾದ ಫೈಬರ್ ಅಂಶಕ್ಕಿಂತ ಉತ್ತಮ. ಒಮ್ಮೆ ಉಬ್ಬಿದ ಕರುಳಿನ ಲೈನಿಂಗ್ ಸರಿಯಾದ ನಂತರ ಗ್ಯಾಸ್ ಸರಿಯಾಗುತ್ತದೆ, ಮೃದುವಾಗಿ ಬೇಯಿಸಿದ ಆಹಾರ ಸೇವಿಸಬಹುದು. ನಂತರ ಫೈಬರ್ ಅನ್ನು ನಿಧಾನವಾಗಿ ಪರಿಚಯಿಸಬಹುದು. ದೀರ್ಘಕಾಲದಲ್ಲಿ ಏನು ಅಗತ್ಯ? ಜೀರ್ಣಕ್ರಿಯ ಸರಾಗವಾಗಿ ಆಗುವಂತಹ ಸ್ಥಿತಿ ನಿರ್ಮಿಸಬೇಕು. ಸಮತೋಲಿತ ಆಹಾರ, ದೈನಂದಿನ ಆಹಾರ ನಿಯಮಿತ ಸಮಯದಲ್ಲಿ ಸೇವನೆ, ಒತ್ತಡ ನಿರ್ವಹಣೆ ಮತ್ತು ದೇಹ ಸರಳವಾಗಿ ಜೀರ್ಣಿಸಿಕೊಳ್ಳುವ ಆಹಾರ ಸೇವನೆ ಮಾಡಬೇಕು. ಫೈಬರ್ ಮುಖ್ಯವಾಗುತ್ತದೆ. ಆದರೆ ಕರುಳು ಅದನ್ನು ಕರಗಿಸಲು ಸ್ಥಿರವಾದ ನಂತರವಷ್ಟೇ ಸೇವಿಸಬೇಕು. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
ಪ್ರತಿದಿನ ಅನ್ನ–ಸಾಂಬಾರ್ ಸೇವನೆ ಆರೋಗ್ಯಕರವೇ?
ಸಾಂದರ್ಭಿಕ ಚಿತ್ರ | Photo Credit : freepik ಸಮತೋಲಿತ ಆಹಾರವನ್ನು ನಿರ್ವಹಿಸದೆ ಬರೀ ಅನ್ನ–ಸಾಂಬಾರ್ ನಿತ್ಯವೂ ಸೇವಿಸಿದರೆ ಸಮಸ್ಯೆಯಾಗಬಹುದು. ಅನ್ನ–ಸಾಂಬಾರ್ ಭಾರತದ ಅನೇಕ ಮನೆಗಳಲ್ಲಿ ಬಹಳ ಅನುಕೂಲಕರವಾದ ಆಹಾರ. ಅಕ್ಕಿ, ಧಾನ್ಯಗಳು, ತರಕಾರಿಗಳು ಮತ್ತು ಮಸಾಲೆಗಳಿಂದ ತಯಾರಿಸಲಾದ ಈ ಖಾದ್ಯವನ್ನು ಬಹುತೇಕ ಪೂರ್ಣ ಊಟ ಎಂದು ಪರಿಗಣಿಸಲಾಗುತ್ತದೆ. ಎಣ್ಣೆಮಯ ಮತ್ತು ಸಂಸ್ಕರಿತ ಆಹಾರಗಳಿಗಿಂತ ಇದು ಆರೋಗ್ಯಕರ ಎಂಬ ಅಭಿಪ್ರಾಯವೂ ಇದೆ. ಆದರೆ ನಿತ್ಯವೂ ಅನ್ನ–ಸಾಂಬಾರ್ ಸೇವಿಸುವುದು ನಿಜವಾಗಿಯೂ ಆರೋಗ್ಯಕರವೇ? ಅನ್ನ–ಸಾಂಬಾರ್ ಸೇವನೆಯಲ್ಲಿ ತಪ್ಪಿಲ್ಲ ತಜ್ಞರ ಪ್ರಕಾರ ಅನ್ನ–ಸಾಂಬಾರ್ ಸೇವಿಸುವುದೇ ತಪ್ಪಲ್ಲ; ಅದನ್ನು ಹೇಗೆ ಮತ್ತು ಯಾವ ಪ್ರಮಾಣದಲ್ಲಿ ಸೇವಿಸಲಾಗುತ್ತದೆ ಎಂಬುದೇ ಮುಖ್ಯ. “ನಿಯಮಿತವಾಗಿ ಅನ್ನ–ಸಾಂಬಾರ್ ಸೇವಿಸುವುದು ಅಷ್ಟೇನು ಅನಾರೋಗ್ಯಕರವಲ್ಲ. ಬಹಳಷ್ಟು ಕರಿದ ಹಾಗೂ ಸಂಸ್ಕರಿತ ಆಹಾರಗಳಿಗಿಂತ ಇದು ಉತ್ತಮ ಆಯ್ಕೆ. ಆದರೆ ಸಮತೋಲಿತ ಆಹಾರವನ್ನು ಪಾಲಿಸದೆ ಬರೀ ಅನ್ನ–ಸಾಂಬಾರ್ನ್ನೇ ನಿತ್ಯವೂ ಸೇವಿಸಿದರೆ ಸಮಸ್ಯೆಗಳು ಎದುರಾಗಬಹುದು. ದೊಡ್ಡ ಪ್ರಮಾಣದ ಅನ್ನ ಮತ್ತು ಕೆಲವೇ ತರಕಾರಿಗಳೊಂದಿಗೆ ನೀರಸ ಸಾಂಬಾರ್ ಸೇವನೆಯಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ,” ಎಂದು ತಜ್ಞರು ಹೇಳುತ್ತಾರೆ. ಪೌಷ್ಟಿಕಾಂಶಯುಕ್ತ ಅನ್ನ–ಸಾಂಬಾರ್ ನಲ್ಲಿ ಅನ್ನದ ಜೊತೆಗೆ ತರಕಾರಿಗಳೂ ಮಿಶ್ರಿತವಾಗಿರುತ್ತವೆ. ನಿತ್ಯ ಸೇವನೆಯಿಂದ ಖನಿಜಗಳ ಕೊರತೆ ಇತರ ಆಹಾರಗಳಿಲ್ಲದೆ ಪ್ರತಿದಿನ ಅನ್ನ–ಸಾಂಬಾರ್ ಸೇವಿಸುವುದರಿಂದ ಕಾಲಕ್ರಮೇಣ ಪೌಷ್ಟಿಕಾಂಶಗಳ ಕೊರತೆ ಉಂಟಾಗಬಹುದು. ಏಕೆಂದರೆ ಅನ್ನ–ಸಾಂಬಾರ್ ನಿಂದ ಎಲ್ಲಾ ಅಗತ್ಯ ವಿಟಮಿನ್ಗಳು ಮತ್ತು ಖನಿಜಗಳು ದೇಹಕ್ಕೆ ಸಿಗುವುದಿಲ್ಲ. ವಿಶೇಷವಾಗಿ ವಿಟಮಿನ್ ಬಿ12, ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಸತುವಿನ ಕೊರತೆಯೂ ಕಂಡುಬರಬಹುದು. “ಯೋಗರ್ಟ್, ಸೋಯಾ ಹಾಲು, ಹಣ್ಣುಗಳು, ಕಡಲೆಕಾಯಿ ಅಥವಾ ಬೀಜಗಳನ್ನು ಆಹಾರದಲ್ಲಿ ಸೇರಿಸದಿದ್ದರೆ ದೇಹಕ್ಕೆ ಅಗತ್ಯವಿರುವ ಮೈಕ್ರೋನ್ಯೂಟ್ರಿಯಂಟ್ಗಳು ದೊರಕುವುದಿಲ್ಲ,” ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಖನಿಜಗಳ ಕೊರತೆಯಿಂದ ಕಾಲಕ್ರಮೇಣ ಸುಸ್ತು, ಕೂದಲು ಉದುರುವುದು, ದೇಹ ನೋವು, ರೋಗನಿರೋಧಕ ಶಕ್ತಿಯ ಕುಗ್ಗುಮುಗ್ಗು ಮತ್ತು ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಎಷ್ಟು ಅನ್ನ ಸೇವಿಸುತ್ತೀರಿ ಎನ್ನುವುದು ಮುಖ್ಯ ತಜ್ಞರ ಪ್ರಕಾರ ದೀರ್ಘಕಾಲೀನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳ್ತಿಗೆ ಅಕ್ಕಿಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಭಾರತೀಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಲು ಬೆಳ್ತಿಗೆ ಅನ್ನದ ಅಧಿಕ ಸೇವನೆಯೂ ಒಂದು ಪ್ರಮುಖ ಕಾರಣ. “ಅತಿಯಾದ ಬೆಳ್ತಿಗೆ ಅನ್ನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಬಹುದು. ನಿಯಮಿತವಾಗಿ ದೊಡ್ಡ ಪ್ರಮಾಣದಲ್ಲಿ ಅನ್ನ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಇನ್ಸುಲಿನ್ ರೆಸಿಸ್ಟನ್ಸ್ ಮತ್ತು ಅಂತಿಮವಾಗಿ ಮಧುಮೇಹ ಉಂಟಾಗುವ ಸಾಧ್ಯತೆ ಇದೆ,” ಎಂದು ತಜ್ಞರು ಹೇಳಿದ್ದಾರೆ. ಅನ್ನದ ಜೊತೆಗೆ ಬೇಳೆಕಾಳುಗಳು ಮತ್ತು ತರಕಾರಿಗಳು ಪ್ರತಿದಿನ ವಿವಿಧ ಬೇಳೆಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಹೆಚ್ಚಿನ ಪೌಷ್ಟಿಕಾಂಶ ಲಾಭಗಳನ್ನು ಪಡೆಯಬಹುದು. ವಿವಿಧ ಬೇಳೆಕಾಳುಗಳು ಮತ್ತು ತರಕಾರಿಗಳಲ್ಲಿ ಅಮಿನೋ ಆಮ್ಲಗಳು, ಫೈಬರ್ ಮತ್ತು ಮೈಕ್ರೋನ್ಯೂಟ್ರಿಯಂಟ್ಗಳು ಸಮೃದ್ಧವಾಗಿವೆ. ಅವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವುದರಿಂದ ದೀರ್ಘಕಾಲೀನ ಆರೋಗ್ಯ ಲಾಭಗಳು ಲಭಿಸುತ್ತವೆ.
Knee pain: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಮೊಣಕಾಲು ಸಾಮಾನ್ಯವಾಗಿದೆ. ಹೀಗಾಗಿ, ನೈಸರ್ಗಿಕ ವಿಧಾನಗಳ ಮೂಲಕ ಈ ಸಮಸ್ಯೆಯನ್ನು ಆರಂಭದಲ್ಲೇ ಹೋಗಲಾಡಿಸುವುದು ಅತಿ ಅವಶ್ಯಕವಾಗಿದೆ.
Cervical Cancer:ಭಾರತೀಯ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಲೇಟ್ ಆಗಿ ಪತ್ತೆಯಾಗುತ್ತಿರೋದೇಕೆ? ಕಾರಣ ಇಲ್ಲಿದೆ!
Cervical Cancer: ಭಾರತದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಭಾರತೀಯ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಲೇಟ್ ಆಗಿ ಪತ್ತೆಯಾಗುತ್ತಿರೋದೇಕೆ?
ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕೆ ಅಥವಾ ಸಿಪ್ಪೆ ತೆಗೆಯಬೇಕೆ?
photo credit: gemini ai ಪೇರಳೆ ಅಥವಾ ಸೀಬೆ ಕಾಯಿ ಎಂದು ಕರೆಯಲ್ಪಡುವ ಹಣ್ಣು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ನಮ್ಮ ಹಿತ್ತಲ ತೋಟದಲ್ಲಿ ಸಾಮಾನ್ಯವಾಗಿರುವ ಈ ಹಣ್ಣು ಸಮೃದ್ಧ ಆರೋಗ್ಯ ಗುಣಗಳನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತೆ? ಸೀಬೆಕಾಯಿಯನ್ನು ಹಣ್ಣಿನ ರಸ, ಸ್ಮೂದಿ, ಜ್ಯಾಮ್ಗಳ ರೂಪದಲ್ಲಿ ಅಥವಾ ಕೇವಲ ಹಸಿ ಹಣ್ಣನ್ನೂ ಸೇವಿಸುವುದಿದೆ. ಡಾ ಅಶ್ವಿನಿ ವಿಜಯ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರುವ ಪ್ರಕಾರ “ಸೀಬೆ ಕಾಯಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವ ಅತಿ ದೊಡ್ಡ ಮೂಲ. ಆಂಟಿ ಆಕ್ಸಿಡಂಟ್ ಮೂಲತತ್ವಗಳನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ ಮತ್ತು ಕೆಲವು ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಕ್ಯಾನ್ಸರ್ಕಾರಕವನ್ನು ಕಡಿತಗೊಳಿಸುತ್ತದೆ. ಪೂರ್ಣ ಗುಣಪಡಿಸುವುದಿಲ್ಲ. ಆದರೆ ಕ್ಯಾನ್ಸರ್ಗೆ ಸಂಬಂಧಿಸಿದಂತೆ ರಕ್ಷಣಾತ್ಮಕ ಗುಣಗಳು ಇದರಲ್ಲಿವೆ. ಏಕೆಂದರೆ ಇದರಲ್ಲಿರುವ ಲೈಕೋಪೀನ್ ಎನ್ನುವ ಕ್ಯಾರಟಿನಾಯ್ಡ್ ಸಂಯುಕ್ತವು ಕ್ಯಾನ್ಸರ್ ಹರಡುವುದನ್ನು ತಡೆಯುತ್ತದೆ. ಮೂರನೆಯದಾಗಿ ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ನಿಮಗೆ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಸಮಸ್ಯೆ, ಹೊಟ್ಟೆ ಸಮಸ್ಯೆ ಇದ್ದರೆ ಶಮನ ಮಾಡುತ್ತದೆ.” https://youtube.com/shorts/46LDCfcfMiE?si=7XxMRQykUzKySgIw ಆದರೆ ಜನರಲ್ಲಿರುವ ಮುಖ್ಯ ಪ್ರಶ್ನೆಯೆಂದರೆ ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನಬೇಕೆ ಅಥವಾ ಬೇಡವೇ ಎನ್ನುವುದು. ಇತ್ತೀಚೆಗೆ ಪೌಷ್ಠಿಕ ತಜ್ಞೆ ಮತ್ತು ಕರುಳು ಆರೋಗ್ಯದಲ್ಲಿ ವಿಶೇಷಜ್ಞೆ, ರಾಷ್ಟ್ರೀಯ ಮಧುಮೇಹ ತಜ್ಞರಾಗಿರುವ ದೀಪ್ಸಿಖಾ ಜೈನ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, “ಸಾಮನ್ಯವಾಗಿ ಪೇರಳೆ ಹಣ್ಣನ್ನು ಬಹಳ ಆರೋಗ್ಯಕರ ಎಂದೇ ಪರಿಗಣಿಸಲಾಗಿದೆ. ಆದರೆ ಸೀಬೆಕಾಯಿಯನ್ನು ಸಿಪ್ಪೆ ಸಮೇತ ತಿಂದರೆ ನಿಮಗೆ ಪೊಟ್ಯಾಶಿಯಂ, ಜಿಂಕ್ ಮತ್ತು ವಿಟಮಿನ್ ಸಿ ಸಿಗುತ್ತವೆ. ಇವು ನಿಮ್ಮ ಚರ್ಮದ ರಚನೆಯನ್ನು ರಕ್ಷಿಸಲು ನೆರವಾಗಬಹುದು. ಆದರೆ ನಿಮಗೆ ಕೊಲೆಸ್ಟರಾಲ್ ಅಥವಾ ಮಧುಮೇಹದ ಸಮಸ್ಯೆ ಇದ್ದರೆ ದಯವಿಟ್ಟು ಸಿಪ್ಪೆ ತೆಗೆದು ಸೇವಿಸಿ. ಅಧ್ಯಯನಗಳು ತೋರಿಸಿರುವಂತೆ ಪೇರಳೆ ಹಣ್ಣನ್ನು ಸಿಪ್ಪೆ ಸಮೇತ ತಿಂದಾಗ ಚರ್ಮ ಇನ್ನಷ್ಟು ಹದಗೆಟ್ಟಿದೆ ಮತ್ತು ಕೊಲೆಸ್ಟರಾಲ್ ಮತ್ತು ಮಧುಮೇಹದ ಅಪಾಯ ಹೆಚ್ಚಾಗಿದೆ. ಹೀಗಾಗಿ ನಿಮಗೆ ಲಿಪಿಡ್ ಪ್ರೊಫೈಲ್ (ಕೊಬ್ಬಿನಂಶ ಹೆಚ್ಚಿರುವುದು) ಇದ್ದರೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಅಧಿಕ ಇದ್ದರೆ ಗುವಾವನ್ನು ಸಿಪ್ಪೆ ತೆಗೆದು ಸೇವಿಸಬೇಕು.” https://www.instagram.com/reel/DRjKWT-jNFw/?utm_source=ig_web_copy_link ಸೀಬೆಕಾಯಿಯನ್ನು ಸೂಪರ್ ಫ್ರುಟ್ ಎನ್ನುವುದೇಕೆ? ನಿರೋಧಕ ಶಕ್ತಿ ಏರಿಸುವ ವಿಟಮಿನ್ ಸಿ ಸೀಬೆ ಹಣ್ಣಿನಲ್ಲಿ ಸಮೃದ್ಧವಾಗಿದೆ. ಕಿತ್ತಳೆಗಳನ್ನೂ ಮೀರಿದ ವಿಟಮಿನ್ ಸಿ ಸೀಬೇಕಾಯಿಯಲ್ಲಿದೆ. ಈ ಶಕ್ತಿಯುತ ಆಂಟಿಆಕ್ಸಿಡಂಟ್ ನಿಮ್ಮ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಶೀತ ಮೊದಲಾದ ಸಮಸ್ಯೆಗಳನ್ನು ಹೊರಗಿಡುತ್ತದೆ. ಒಂದು ಗುವಾದಲ್ಲಿ ನಿಮ್ಮ ನಿತ್ಯದ ವಿಟಮಿನ್ ಸಿಯ ಅಗತ್ಯಕ್ಕಿಂತ ಹೆಚ್ಚನ್ನು ನೀಡಲಿದೆ. ಮಲಬದ್ಧತೆಯಿಂದ ರಕ್ಷಣೆ ಪಡೆಯಲು ಅತ್ಯುತ್ತಮ ಜೀರ್ಣಕ್ರಿಯೆಗೆ ಫೈಬರ್ ಅಂಶಗಳಿವೆ. ಈ ಫೈಬರ್ ಅಂಶಗಳು ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಹೀಗಾಗಿ ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಮುಖ್ಯವಾಗಿ ಸಿಪ್ಪೆ ತೆಗೆದು ಸೇವಿಸಬೇಕು. ಆಂಟಿ ಆಕ್ಸಿಡಂಟ್ಗಳು ಚರ್ಮದ ಆರೋಗ್ಯವನ್ನು ಚೆನ್ನಾಗಿಡುತ್ತವೆ. ಸ್ವತಂತ್ರ ಕಣಗಳ ವಿರುದ್ಧ ಹೋರಾಡಿ ಮುಪ್ಪನ್ನು ನಿಧಾನಗೊಳಿಸುತ್ತದೆ. ನಿಯಮಿತವಾಗಿ ಸೇವಿಸಿದರೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲಿದೆ. ಹೃದಯದ ಆರೋಗ್ಯಕ್ಕೂ ನೆರವಾಗಲಿದೆ. ಆರೋಗ್ಯಕರವಾದ ಹೃದಯದ ರಕ್ತದೊತ್ತಡವನ್ನು ನಿಭಾಯಿಸಲು ಮತ್ತು ಹೃದಯದ ಕಾರ್ಯವನ್ನು ಸುಧಾರಿಸಲು ನೆರವಾಗಲಿದೆ. ಕ್ಲಿನಿಕಲ್ ನ್ಯೂಟ್ರಿಶನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ನಿಯಮಿತವಾಗಿ ಸೀಬೇಕಾಯಿ ಸೇವನೆಯಿಂದ ರಕ್ತದೊಡ್ಡ ಕಡಿಮೆಯಾಗಿದೆ ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸಿದೆ. ಹೀಗಾಗಿ ಹೃದಯರಕ್ತನಾಳಗಳ ಆರೋಗ್ಯಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಕೃಪೆ: ndtv.com
Vitamin D: ಮೂಳೆಗಳನ್ನು ಸ್ಟ್ರಾಂಗ್ ಮಾಡೋ ವಿಟಮಿನ್ ಡಿ ಪಡೆಯೋದು ಹೇಗೆ? ಇಲ್ಲಿದೆ ನೋಡಿ ಸೂಪರ್ ಟಿಪ್ಸ್
Vitamin D: ನಿಮ್ಮ ಮೂಳೆಗಳ ಆರೋಗ್ಯಕ್ಕೂ ಬೇಕು ವಿಟಮಿನ್ ಡಿ. ಹಾಗಾದ್ರೆ ವಿಟಮಿನ್ ಡಿ ಪಡೆಯೋಕೆ ಏನು ಮಾಡ್ಬೇಕು ಗೊತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ.
Sleep: ಆರಾಂ ಆಗಿ ನಿದ್ದೆ ಮಾಡ್ಬೇಕಾ? ಹಾಗಾದ್ರೆ, ಮಲಗೋ ಮುನ್ನ ಈ 5 ತಪ್ಪು ಮಾಡ್ಬೇಡಿ!
ಒಳ್ಳೆಯ ನಿದ್ರೆ ಬಾರದೇ ಇರುವುದಕ್ಕೆ ಅನೇಕ ರೀತಿಯ ತಪ್ಪುಗಳು ಕಾರಣವಾಗುತ್ತವೆ. ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಅನೇಕ ತಪ್ಪುಗಳು ನಡೆದು ಹೋಗುತ್ತವೆ ಮತ್ತು ಈ ತಪ್ಪುಗಳು ನಿದ್ರೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ. ಹಾಗಾದರೆ ಒಳ್ಳೆಯ ನಿದ್ರೆಯನ್ನು ಹಾಳು ಮಾಡುವ ಕಾರಣಗಳಿವು ನೋಡಿ..
ಅತಿಯಾದ ವ್ಯಾಯಾಮ ದೇಹಕ್ಕೆ ಅಪಾಯಕಾರಿ ಎನ್ನುವುದು ನಿಮಗೆ ಗೊತ್ತೆ?
ಸಾಂದರ್ಭಿಕ ಚಿತ್ರ | Photo Credit : freepik ಅತಿಯಾದ ವ್ಯಾಯಾಮದಿಂದ ದೇಹವನ್ನು ಅಪಾಯಕ್ಕೆ ದೂಡುತ್ತಿದ್ದೀರಿ ಎನ್ನುವುದನ್ನು ನೀವು ಅರಿತುಕೊಳ್ಳುವ ಅಗತ್ಯವಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ. ಆದರೆ ಕಸರತ್ತುಗಳು ಅತಿಯಾದಾಗ ಸಾಕಷ್ಟು ಚೇತರಿಕೆ ಕಾಣದೆ ಇದ್ದರೆ ಅವು ಆರೋಗ್ಯ ಲಾಭದ ಬದಲು ಆರೋಗ್ಯ ಹದಗೆಡಿಸಬಹುದು. ಕ್ಯಾಲಿಫೋರ್ನಿಯ ಮತ್ತು ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಪ್ರಕಾರ ನೋವಿನ ನಡುವೆಯೂ ಕಸರತ್ತು ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವುದು ಸುಳ್ಳು. ವಿಶ್ರಾಂತಿ ಇಲ್ಲದೆ ಅತಿಯಾಗಿ ವ್ಯಾಯಾಮ ಮಾಡುವುದು ದೇಹದ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ ಫಿಟ್ನೆಸ್ ಸುಧಾರಿಸುವ ಬದಲಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ► ಅತಿಯಾದ ತರಬೇತಿಯೆಂದು ತಿಳಿಯುವುದು ಹೇಗೆ? ದೇಹಕ್ಕೆ ಚೇತರಿಕೆಗೆ ಅವಕಾಶ ಕೊಡದೆಯೇ ಪದೇಪದೆ ದೈಹಿಕ ಒತ್ತಡವನ್ನು ಹಾಕುವುದನ್ನೇ ಅತಿಯಾದ ತರಬೇತಿ ಎಂದು ಹೇಳಲಾಗುತ್ತದೆ. ಜನರು ವ್ಯಾಯಾಮದ ತೀವ್ರತೆ, ಅವಧಿ ಅಥವಾ ಕಾಲವನ್ನು ಬೇಗನೇ ಏರಿಸುವುದರಿಂದ ಈ ಸಮಸ್ಯೆ ಬರುತ್ತದೆ. ಧನಾತ್ಮಕವಾಗಿ ಹೊಂದಿಕೊಳ್ಳುವ ಬದಲಾಗಿ ದೇಹಕ್ಕೆ ಸುಸ್ತು, ಆಯಾಸವಾಗಿ ದೈಹಿಕ ನೋವು ಕಾಣಿಸಿಕೊಳ್ಳುತ್ತದೆ. ಚೇತರಿಕೆಗೆ ಕಾಲಾವಕಾಶ ಕೊಡಬೇಕು. ಏಕೆಂದರೆ ಸ್ನಾಯುಗಳು, ಕೀಲುಗಳು ಮತ್ತು ದೇಹದ ಆಂತರಿಕ ವ್ಯವಸ್ಥೆಗೆ ರಿಪೇರಿ ಮತ್ತು ಬಲಿಷ್ಠವಾಗಲು ಸಮಯದ ಅಗತ್ಯವಿರುತ್ತದೆ. ► ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು ಸಾಕಷ್ಟು ವಿಶ್ರಾಂತಿ ಇಲ್ಲದೆ ಅತಿಯಾಗಿ ವ್ಯಾಯಾಮದ ತರಬೇತಿಯಿಂದ ದೇಹದ ಹಾರ್ಮೋನ್ ಸಮತೋಲನಕ್ಕೆ ಸಮಸ್ಯೆ ಒಡ್ಡಬಹುದು. ಅತಿಯಾದ ವ್ಯಾಯಾಮದಿಂದ ಕಾರ್ಟಿಸಾಲ್ನಂತಹ ಒತ್ತಡದ ಹಾರ್ಮೋನ್ ವಿಸ್ತರಣೆಗೊಳ್ಳಬಹುದು. ಇದರಿಂದ ಸ್ನಾಯು ಬೆಳವಣಿಗೆ ಮತ್ತು ಚೇತರಿಕೆಗೆ ಹಾರ್ಮೋನ್ಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಟೆಸ್ಟೊಸ್ಟರಾನ್ ಮತ್ತು ಬೆಳವಣಿಗೆಯ ಹಾರ್ಮೋನ್ ಕೂಡ ಕುಂಠಿತವಾಗಬಹುದು. ಈ ಅಸಮತೋಲನದಿಂದ ಚಯಾಪಚಯ ಕ್ರಿಯೆಗಳು ನಿಧಾನಗೊಳ್ಳುತ್ತವೆ. ಸ್ನಾಯು ರಿಪೇರಿಗೆ ಸಾಧ್ಯವಾಗುವುದಿಲ್ಲ. ದೇಹವೂ ಆಯಾಸ ಮತ್ತು ವಿಶ್ರಾಂತಿಯ ಕೊರತೆ ಎದುರಿಸುತ್ತದೆ. ► ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ದೇಹದ ಮೇಲೆ ನಿರಂತರವಾಗಿ ವ್ಯಾಯಾಮದಿಂದ ಒತ್ತಡ ಹೇರಿದರೆ ಸೋಂಕುಗಳ ವಿರುದ್ಧ ಹೋರಾಡಲು ಸಾಕಷ್ಟು ಸಂಪನ್ಮೂಲ ಲಭ್ಯವಿರುವುದಿಲ್ಲ. ಫಲಿತಾಂಶವಾಗಿ ಅತಿಯಾಗಿ ವ್ಯಾಯಾಮ ಮಾಡುವವರಿಗೆ ಬೇಗನೇ ಅನಾರೋಗ್ಯ ಕಾಡಬಹುದು. ರೋಗದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಬಹುದು. ಸದಾ ಆಯಾಸದ ಅನುಭವವಿರಬಹುದು. ಆರೋಗ್ಯ ಹೆಚ್ಚಿಸುವ ಬದಲಾಗಿ ಅತಿಯಾದ ವ್ಯಾಯಾಮದಿಂದ ದೇಹ ಬಳಲಬಹುದು. ► ಮಾನಸಿಕ ಆರೋಗ್ಯ ಕಡಿಮೆಯಾಗಬಹುದು ಅಥ್ಲೆಟಿಕ್ ಕಾರ್ಯವೈಖರಿಯನ್ನು ಸುಧಾರಿಸುವ ಬದಲಾಗಿ ಅತಿಯಾದ ವ್ಯಾಯಾಮದಿಂದ ಸಾಮರ್ಥ್ಯ ಕುಸಿಯಬಹುದು. ದೇಹ ಅತಿಯಾದ ಒತ್ತಡದ ಸ್ಥಿತಿಯಲ್ಲಿದ್ದರೆ ಸುಸ್ತು, ನಿದ್ರಾರಾಹಿತ್ಯ, ಕಿರಿಕಿರಿ, ಖಿನ್ನತೆ ಮತ್ತು ಮನೋಸ್ಥಿತಿ ಕುಂದುವ ಸಾಮಾನ್ಯ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಬಹಳಷ್ಟು ಮಂದಿಯಲ್ಲಿ ಸಾಮರ್ಥ್ಯ, ಸಹಿಷ್ಣುತೆ ಮತ್ತು ಪ್ರೇರಣೆ ಕುಸಿಯಬಹುದು. ಈ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳು ನಿಮಗೆ ತುರ್ತು ವಿಶ್ರಾಂತಿಯ ಅಗತ್ಯವನ್ನು ಸೂಚಿಸುತ್ತವೆ. ► ಸ್ನಾಯು ಸಂಕೋಚನದ ಅಪಾಯ ಅತಿಯಾದ ವ್ಯಾಯಾಮದ ಒಂದು ಅಪಾಯಕಾರಿ ಪರಿಣಾಮವೆಂದರೆ ಸ್ನಾಯು ಸಂಕೋಚನ ಅಥವಾ ರಾಬ್ಡೋಮಿಯೊಲಿಸಿಸ್! ಅಂದರೆ ಸ್ನಾಯುಗಳು ಕೈಕೊಡುವುದು. ಸ್ನಾಯು ಅಂಗಾಂಶಗಳು ತ್ವರಿತವಾಗಿ ಬ್ರೇಕ್ಡೌನ್ ಆದಾಗ ಅವು ಮಿಯೊಗ್ಲೊಬಿನ್ ಎನ್ನುವ ಪ್ರೊಟೀನ್ ಅನ್ನು ರಕ್ತದ ಹರಿವಿಗೆ ಬಿಡುತ್ತದೆ. ಅದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗಬಹುದು. ಈ ರೋಗದ ಲಕ್ಷಣಗಳಲ್ಲಿ ಅತಿಯಾದ ಸ್ನಾಯು ನೋವು, ಊತ, ದೌರ್ಬಲ್ಯ ಮತ್ತು ಕಪ್ಪು ಬಣ್ಣದಲ್ಲಿ ಮೂತ್ರ ಹೋಗುವುದು ಇತ್ಯಾದಿ ಕಾಣಬಹುದು. ತೀವ್ರ ಪ್ರಕರಣಗಳಲ್ಲಿ ಕಿಡ್ನಿ ವೈಫಲ್ಯವೂ ಸಂಭವಿಸಬಹುದು ಮತ್ತು ತಕ್ಷಣವೇ ವೈದ್ಯಕೀಯ ಪರಿಹಾರ ಕಾಣಬೇಕಾಗುತ್ತದೆ. ► ಚೇತರಿಕೆಗೆ ಏಕೆ ಗಮನ ಕೊಡಬೇಕು? ವ್ಯಾಯಾಮದಲ್ಲಿ ಚೇತರಿಕೆ ಆಯ್ಕೆಯಲ್ಲ, ನಿರ್ಣಾಯಕ ಭಾಗವಾಗಿರಬೇಕು. ವಿಶ್ರಾಂತಿ ದಿನಗಳನ್ನು ಇಡುವುದು, ಸಾಕಷ್ಟು ನಿದ್ರೆ ಮಾಡುವುದು, ದೇಹದಲ್ಲಿ ತೇವಾಂಶ ಇರುವಂತೆ ಗಮನಿಸುವುದು ಮುಖ್ಯವಾಗುತ್ತದೆ. ಅಲ್ಲದೆ, ಗಾಯ ಅಥವಾ ದೀರ್ಘಕಾಲೀನ ಹಾನಿಯಾಗದಂತೆ ದೇಹಕ್ಕೆ ಸಾಕಷ್ಟು ಆಹಾರ ಒದಗಿಸಬೇಕು. ಸುಸ್ಥಿರವಾದ ಫಿಟ್ನೆಸ್ ನಲ್ಲಿ ಸಮತೋಲನವಿರುತ್ತದೆ. ಅತಿಯಾದ ವ್ಯಾಯಾಮವಲ್ಲ. ನಿಮ್ಮ ದೇಹದ ಅಗತ್ಯವನ್ನು ಅರಿತುಕೊಂಡು ಚೇತರಿಕೆಗೆ ಕಾಲಾವಕಾಶ ಕೊಡುತ್ತಾ ವ್ಯಾಯಾಮದತ್ತ ಗಮನಹರಿಸಬೇಕು. ದೇಹವನ್ನು ಅಪಾಯಕ್ಕೆ ದೂಡುವ ಬದಲಾಗಿ ಒಟ್ಟು ಆರೋಗ್ಯಕ್ಕೆ ನೆರವಾಗುವಂತೆ ವ್ಯಾಯಾಮ ಮಾಡುವುದು ಅತ್ಯಗತ್ಯ. ಕೃಪೆ: indianexpress.com
ಮಕ್ಕಳಿಗೆ ನೀಡುವ ಪ್ರೊಟೀನ್ ಪಾನೀಯಗಳು ಆರೋಗ್ಯಕರವೆ?
ಸಾಂದರ್ಭಿಕ ಚಿತ್ರ | Photo Credit : freepik ‘ಆರೋಗ್ಯ ಪಾನೀಯಗಳು” ಅಥವಾ ‘ಪೋಷಕಾಂಶದ ಪೂರಕ ಆಹಾರ” ಎಂದು ಸಕ್ಕರೆ ಬದಲಾಗಿ ಬೆಲ್ಲವನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಡಾ ಶಿವರಂಜಿನಿ. ಹೈದರಾಬಾದ್ ಮೂಲದ ಶಿಶುವೈದ್ಯೆಯಾಗಿರುವ ಡಾ ಶಿವರಂಜಿನಿ ಇದೀಗ ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಪ್ರೊಟೀನ್ ಪಾನೀಯಗಳನ್ನು ವೈದ್ಯರು ಪ್ರಾಯೋಜಿಸುತ್ತಿರುವ ವಿರುದ್ಧ ಹೊಸ ಸಮರ ಸಾರಿದ್ದಾರೆ. ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಡಿರುವ ಪೋಸ್ಟ್ ಬಹಳ ಚರ್ಚೆಗೆ ಗ್ರಾಸವಾಗಿದೆ. ಡಾ ಶಿವರಂಜಿನಿ ಅವರು ಓರಲ್ ರಿಹೈಡ್ರೇಶನ್ ಸೊಲ್ಯುಷನ್ಸ್ ಎಂದು ತಪ್ಪಾಗಿ ಮಾರಾಟ ಮಾಡಲಾಗುತ್ತಿರುವ ಸಕ್ಕರೆ ಭರಿತ ಪಾನೀಯಗಳ ವಿರುದ್ಧ ದೀರ್ಘಕಾಲದ ಹೋರಾಟ ನಡೆಸಿ ಯಶಸ್ವಿಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರ ಹೋರಾಟದ ನಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ವಿಶ್ವ ಆರೋಗ್ಯ ಸಂಸ್ಥೆಯ (WHO) ಶಿಫಾರಸು ಮಾಡಿದ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರದ ಹೊರತು ಯಾವುದೇ ಆಹಾರ ಬ್ರಾಂಡ್ ತನ್ನ ಉತ್ಪನ್ನಗಳ ಮೇಲೆ ‘ಒಆರ್ಎಸ್’ ಎನ್ನುವ ಪದ ಬಳಸುವಂತಿಲ್ಲ ಎಂದು ಕಳೆದ ವರ್ಷ ಆದೇಶಿಸಿತ್ತು. ಇದೀಗ ಡಾ ಶಿವರಂಜಿನಿ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತದ ಮಕ್ಕಳು ಮತ್ತೊಂದು ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಅವರು ಪೋಸ್ಟ್ ಮಾಡಿದ್ದು, “ಒಂದೆಡೆ ಮಕ್ಕಳ ವೈದ್ಯರು ಮತ್ತು ಪ್ರಭಾವಿಗಳು ಬೋರ್ನ್ವಿಟಾ, ಬೂಸ್ಟ್, ಹಾರ್ಲಿಕ್ಸ್ ಇತ್ಯಾದಿಗಳನ್ನು ಅನುಮೋದಿಸುತ್ತಿದ್ದರೆ, ಮತ್ತೊಂದೆಡೆ ಮಕ್ಕಳ ವೈದ್ಯರು ಮತ್ತು ಪ್ರಭಾವಿಗಳು ಹಾಲಿನ ಮಿಶ್ರಣಗಳಿರುವ ಬೆಲ್ಲವನ್ನು ಸಕ್ಕರೆ ಮುಕ್ತ ಎಂದು ಅನುಮೋದಿಸುತ್ತಿದ್ದಾರೆ” ಎಂದು ಶಿಶು ವೈದ್ಯರ ಮೇಲೆ ಹರಿಹಾಯ್ದಿದ್ದಾರೆ. “ಈ ಹಿಂದೆ “ಸಕ್ಕರೆ ಸೇರಿಸಲಾಗಿದೆ” ಎಂದು ಬರೆದಿದ್ದರೆ ಅದನ್ನು ಮಕ್ಕಳಿಗೆ ಬಳಸಲೇ ಬಾರದು ಎನ್ನುವ ನಿಯಮವಿತ್ತು. ಇದೀಗ ಕಂಪನಿಗಳು ಲೇಬಲಿಂಗ್ ಅನ್ನು ಸುಧಾರಿಸಿದ್ದಾರೆ. ಬೆಲ್ಲದ ಪ್ರಮಾಣವನ್ನು “ಸಂಸ್ಕರಿಸಲಾಗದ ಸಕ್ಕರೆ/ ಸೇರಿಸಲಾದ ಸಕ್ಕರೆ”ಯ ಬದಲಾಗಿ ಬಳಸಲಾಗುತ್ತಿದೆ. ಇದನ್ನು ದೊಡ್ಡ ಬದಲಾವಣೆ ಎನ್ನುವಂತೆ ತೋರಿಸಲಾಗುತ್ತಿದೆ. ಬೆಲ್ಲ ಮತ್ತು ಸಕ್ಕರೆ ಎರಡೂ ಸುಕ್ರೋಸ್ (ಸಕ್ಕರೆ)! ಶಿಶು ವೈದ್ಯರು ಮತ್ತು ಇತರ ವೈದ್ಯರು ಹಾಲಿನ ಮಿಶ್ರಣದ ಮತ್ತು ಫಾರ್ಮುಲಾ ಹಾಲಿನ ವ್ಯಾಪಾರಿಗಳಾಗಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಕೆಲವು ಮೂಲಭೂತ ನೀತಿಗಳನ್ನು ಗೌರವಿಸಬೇಕು” ಎಂದು ಅವರು ಬರೆದುಕೊಂಡಿದ್ದಾರೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಡಾ ಸಂಜೀವಿನ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. “ಆರೋಗ್ಯ ಪಾನೀಯಗಳು” ಅಥವಾ ‘ಪೋಷಕಾಂಶದ ಪೂರಕ ಆಹಾರ” ಎಂದು ಮಾರಾಟ ಮಾಡುವವರ ವಿರುದ್ಧ ಸಮರ ಹೂಡಿರುವ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಸಂಜೀವಿನ ಅವರ ಪೋಸ್ಟ್ಗೆ ಉತ್ತರಿಸಿರುವ ವೈದ್ಯರಾದ ರೇಖಾ ರೆಡ್ಡಿ, “ನಿಜ! ನ್ಯಾಚುರಲ್ ಜ್ಯಾಗರಿ/ಸಕ್ಕರೆ ಹೇಳಿಕೆಗಳು ಎಲ್ಲೆಡೆ ಕೇಳಿಬರುತ್ತಿದೆ. FSSAI ಕೂಡ ಉತ್ತಮ ಲೇಬಲಿಂಗ್ ಮಾಡಿ ಬೆಲ್ಲವನ್ನು ಪ್ರೋತ್ಸಾಹಿಸುತ್ತಿದೆ. ಎಐ ಬಾರ್ಕೋಡ್ ಸ್ಕ್ಯಾನರ್ನಂತಹ ಸಾಧನಗಳ (ಜಾಗತಿಕವಾಗಿ ಯುಕಾ ಇರುವ ರೀತಿಯಲ್ಲಿ ಭಾರತದಲ್ಲಿಯೂ ಸತ್ಯಾಂಶ ಸ್ಕ್ಯಾನ್ ಮಾಡುವ ಅವಕಾಶ) ಅಗತ್ಯವಿದೆ. ವಸ್ತುಗಳನ್ನು ಕೈಗೆ ಹಿಡಿದ ತಕ್ಷಣ ಅದರಲ್ಲಿರುವ ಅಂಶಗಳು ಮತ್ತು ರಹಸ್ಯವಾಗಿ ಸೇರಿಸಿರುವ ಸಕ್ಕರೆಗಳನ್ನು ಪತ್ತೆ ಮಾಡುವ ಅವಕಾಶವಿರಬೇಕು. ಇದರಿಂದ ಮಕ್ಕಳನ್ನು ರಕ್ಷಿಸಬಹುದು” ಎಂದು ಅವರು ಹೇಳಿದ್ದಾರೆ.
Tooth Paste: ನಿಮ್ಮ ಟೂತ್ಪೇಸ್ಟ್ನಲ್ಲಿ ಇವೆಲ್ಲಾ ಇದ್ಯಾ? ಇಲ್ಲಾ ಅಂದ್ರೆ ಅದನ್ನ ಖರೀದಿ ಮಾಡಲೇಬೇಡಿ!
Toothpaste: ಬೆಳಗ್ಗೆ ಎದ್ದ ತಕ್ಷಣವೇ ನಮ್ಮೆಲ್ಲರಿಗೆ ಟೂತ್ ಪೇಸ್ಟ್ ಬೇಕು. ಆದರೆ ಇಂತಹ ಟೂತ್ಪೇಸ್ಟ್ಗಳನ್ನು ಬಳಸುವುದರಿಂದ ನಿಮ್ಮ ಹಲ್ಲುಗಳಿಗೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎನ್ನುವುದು ಗೊತ್ತಾ? ಹಾಗಾದ್ರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
Dangerous Food: ಮೈದಾ, ಸಕ್ಕರೆಗಿಂತಲೂ ಇದು ಡೇಂಜರ್! ಪ್ಯಾಕೆಟ್ ಆಹಾರದಲ್ಲೇ ಇರುತ್ತೆ ಈ ವಿಷ!
Dangerous Food: ವಿಲನ್ಗೆ ವಿಲನ್ ಎನ್ನುವಂತೆ ಮೈದಾ, ಸಕ್ಕರೆಗಿಂತ ಡೇಂಜರಸ್ ಆಗಿರೋ ಮತ್ತೊಂದು ಪದಾರ್ಥ ಇದೆಯಂತೆ. ಅದು ಅನಾರೋಗ್ಯಕರ ಆಹಾರಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಆರೋಗ್ಯಕ್ಕೆ ಪ್ರಮುಖ ಅಪಾಯ ಎಂದು ಹೇಳ್ತಿದ್ದಾರೆ ತಜ್ಞರು.
ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿರುವುದು ಅಪಾಯಕಾರಿ; ಏನು ಮಾಡಬಹುದು?
ಸಾಂದರ್ಭಿಕ ಚಿತ್ರ | Photo Credit : freepik ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ. ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಯಾವುದೇ ತೀವ್ರತರವಾದ ಚಿಹ್ನೆಗಳನ್ನು ಹೊಂದಿರುವುದಿಲ್ಲ. ಆದರೆ ಅದು ಮೌನವಾಗಿ ದೇಹಕ್ಕೆ ಸಮಸ್ಯೆ ಒಡ್ಡಬಹುದು. ಬಹಳಷ್ಟು ಮಂದಿಗೆ ಹೃದಯ, ಮೆದುಳು, ಕಿಡ್ನಿ ಮತ್ತು ಕಣ್ಣುಗಳು ಒತ್ತಡದಲ್ಲಿರುವುದು ಗೊತ್ತಿಲ್ಲದೆಯೇ ಆರಾಮವಾಗಿರುತ್ತಾರೆ. ತಜ್ಞರು ಹೇಳುವ ಪ್ರಕಾರ, “ಚಿಕಿತ್ಸೆ ಪಡೆಯದೆ ಇದ್ದರೆ ರಕ್ತದೊತ್ತಡದ ಸಮಸ್ಯೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಬಹಳಷ್ಟು ಮಂದಿ ಅಧಿಕ ರಕ್ತದೊತ್ತಡವಿದ್ದೂ ಸಾಮಾನ್ಯರಂತೆ ಇರುತ್ತಾರೆ. ಆದರೆ ಆಂತರಿಕವಾಗಿ ಪ್ರಮುಖ ಅಂಗಗಳು ನಿಧಾನವಾಗಿ ಹಾನಿಗೊಳಗಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ.” ಅಧಿಕ ರಕ್ತದೊತ್ತಡವನ್ನು ತಡವಾಗಿ ರೋಗಪರಿಶೀಲನೆ ಮಾಡಿದರೆ ಬಹುದೊಡ್ಡ ಸಮಸ್ಯೆ ಉಂಟಾಗಬಹುದು. ತಲೆನೋವು, ಸುಸ್ತು ಅಥವಾ ಹೃದಯ ಬಡಿತ ವೇಗವಾಗುವುದು ಮೊದಲಾದ ಸಮಸ್ಯೆಗಳು ಕಂಡುಬರಬಹುದು. ಇಂತಹ ಸಮಸ್ಯೆಗಳನ್ನು ಕಾರ್ಯದೊತ್ತಡವೆಂದು ಬದಿಗೆ ಸರಿಸಿ ಬಿಡುವುದೇ ಹೆಚ್ಚು. ಅದೇ ಕಾರಣಕ್ಕಾಗಿ 30 ಅಥವಾ 35 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುತ್ತಿರಬೇಕು. ರಕ್ತದೊತ್ತಡ ದೇಹಕ್ಕೆ ಹೇಗೆ ಸಮಸ್ಯೆ ಒಡ್ಡುತ್ತದೆ? ಅನಿಯಂತ್ರಿತ ಅಧಿಕ ರಕ್ತದೊತ್ತಡ ಪ್ರತಿ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರುತ್ತದೆ. ಹೃದಯದ ಮೇಲೆ ಹೆಚ್ಚು ರಕ್ತವನ್ನು ಪಂಪ್ ಮಾಡುವಂತೆ ಒತ್ತಡ ಹೆಚ್ಚಾಗುತ್ತದೆ. ಆರಂಭದಲ್ಲಿ ಹೃದಯ ಹಿಗ್ಗಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಒತ್ತಡ ನಿಯಂತ್ರಣಕ್ಕೆ ತರದೆ ಇದ್ದಲ್ಲಿ ಅದು ದುರ್ಬಲಗೊಳ್ಳಬಹುದು ಮತ್ತು ಕಾರ್ಯಕ್ಷಮತೆ ಕಡಿಮೆಯಾಗಬಹುದು. ಅಪಾಯದಲ್ಲಿರುವ ಮತ್ತೊಂದು ಅಂಗವೆಂದರೆ ಮೆದುಳು. ಅಧಿಕ ರಕ್ತದೊತ್ತಡವು ಮೆದುಳಿಗೆ ರಕ್ತ ಹರಿಸುವ ನಾಳಗಳನ್ನು ಹಾನಿಗೊಳಿಸಬಹುದು. ಹೀಗಾಗಿ ಪಾರ್ಶ್ವವಾಯುವಿನ ಸಾಧ್ಯತೆ ಹೆಚ್ಚಿರುತ್ತದೆ. ದೀರ್ಘಕಾಲ ಅಧಿಕ ರಕ್ತದೊತ್ತಡವನ್ನು ಪರಿಶೀಲಿಸದೆ ಇದ್ದಲ್ಲಿ ನೆನಪುಶಕ್ತಿ ಮತ್ತು ಅರಿವಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಈ ಬದಲಾವಣೆಗಳು ನಿಧಾನಗತಿಯಲ್ಲಿ ಆಗಬಹುದು. ಅದೇ ಕಾರಣದಿಂದ ಜನರು ಅಂತಹ ಸಮಸ್ಯೆಗೆ ಅಧಿಕ ರಕ್ತದೊತ್ತಡ ಕಾರಣವೆಂದು ಹೇಳುವುದಿಲ್ಲ. ಅಧಿಕ ರಕ್ತದೊತ್ತಡದಿಂದ ಕಿಡ್ನಿಗೆ ಹಾನಿ ನಿಧಾನವಾಗಿ ಮತ್ತು ಮೌನವಾಗಿ ಆಗುತ್ತದೆ. ದೇಹದಲ್ಲಿ ನಿಧಾನವಾಗಿ ಅದಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣು ಕೂಡ ಹಾನಿಗೊಳಗಾಗುತ್ತದೆ. ರೆಟಿನಾದಲ್ಲಿರುವ ದುರ್ಬಲ ರಕ್ತನಾಳಗಳು ದೃಷ್ಟಿಯನ್ನು ಮಂದಗೊಳಿಸಬಹುದು. ಈ ಬೆಳವಣಿಗೆಗಳು ನಿಧಾನವಾಗಿರುವ ಕಾರಣ ಪರಿಶೀಲಿಸದೆ ಇದ್ದಲ್ಲಿ ಶಾಶ್ವತವಾಗಿ ಸಮಸ್ಯೆ ಕಂಡುಬರಬಹುದು. ಅಪಾಯ ಗಂಭೀರವಾಗುವುದು ಯಾವಾಗ? ಅಧಿಕ ರಕ್ತದೊತ್ತಡದ ಕೆಲವು ಮಟ್ಟಗಳು ಜೀವನಕ್ಕೆ ಬೆದರಿಕೆ ಒಡ್ಡಬಲ್ಲ ಸಮಸ್ಯೆ ಉಂಟುಮಾಡಬಹುದು. 140/90 mmHg ರೀಡಿಂಗ್ಗಳು ಅಪಾಯಕಾರಿ. ಈ ರೀಡಿಂಗ್ ಹೆಚ್ಚಾಗಿ ಅಧಿಕ ರಕ್ತದೊತ್ತಡ 160/100 ವರೆಗೆ ತಲುಪಬಹುದು. ಅಲ್ಪ ಪ್ರಮಾಣದಲ್ಲಿ ಅಧಿಕ ರಕ್ತದೊತ್ತಡವೂ ಕಿಡ್ನಿ, ಹೃದಯ ಮತ್ತು ಮೆದುಳಿಗೆ ಅಪಾಯಕಾರಿ. “ತಮ್ಮ ಆರೋಗ್ಯ ಸರಿಯಿದೆ ಎಂದುಕೊಂಡವರು ಅನಿರೀಕ್ಷಿತ ಹೃದಯಾಘಾತ ಅಥವಾ ಪಾರ್ಶ್ವವಾಯುಗಳನ್ನು ಕಾಣುತ್ತೇವೆ. ನಿಯಮಿತ ಔಷಧಿಗಳು, ಜೀವನಶೈಲಿಯ ಬದಲಾವಣೆಗಳೊಂದಿಗೆ ಈ ಅಪಾಯವನ್ನು ಕಡಿಮೆ ಮಾಡಬಹುದು” ಎನ್ನುತ್ತಾರೆ ತಜ್ಞರು. ಜೀವನಶೈಲಿ ಬದಲಾವಣೆ ಸಾಕೆ? ತಜ್ಞರು ಹೇಳುವ ಪ್ರಕಾರ ಧೂಮಪಾನ ತೊರೆಯುವುದು, ಉಪ್ಪು ಕಡಿಮೆ ಸೇವಿಸುವುದು, ಎಣ್ಣೆ ಮತ್ತು ಸಂಸ್ಕರಿತ ಆಹಾರವನ್ನು ಕಡಿಮೆ ಮಾಡುವುದು, ನಿಯಮಿತವಾಗಿ ದೈಹಿಕ ಚಟುವಟಿಕೆಯಿಂದ ಅಪಾಯವನ್ನು ಕಡಿಮೆ ಮಾಡಬಹುದು. ಉತ್ತಮ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಇವು ಅತಿಮುಖ್ಯ. ಆದರೆ ಜೀವನಶೈಲಿ ಬದಲಾವಣೆ ಮಾತ್ರ ಸಾಲದು. ಔಷಧಿ ಮತ್ತು ನಿಯಮಿತವಾಗಿ ಪರಿಶೀಲನೆ ಅಗತ್ಯವಿರುತ್ತದೆ. ವೃತ್ತಿ ಸಂಬಂಧಿತ ಒತ್ತಡ, ಶಿಸ್ತಿಲ್ಲದ ಆಹಾರ ಸೇವನೆ ಮತ್ತು ಸೋಮಾರಿತನದ ಅಭ್ಯಾಸಗಳಿದ್ದಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಬಹುದು. ಅದೇ ಕಾರಣಕ್ಕೆ ಯುವ ವೃತ್ತಿಪರರಲ್ಲಿ ಪಾರ್ಶ್ವವಾಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ರೋಗ ಚಿಹ್ನೆಗಳಿಗೆ ಕಾಯಬೇಡಿ. ನಿಮ್ಮ ರಕ್ತದೊತ್ತಡವನ್ನು ನೀವೇ ಮೇಲ್ವಿಚಾರಣೆ ಮಾಡಿ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವುದು ಅಪಾಯದಿಂದ ಪಾರು ಮಾಡಬಹುದು. ಗಂಭೀರವಾಗಿ ತೆಗೆದುಕೊಂಡಲ್ಲಿ ಮಾತ್ರ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಬಹುದು. ಕೃಪೆ: indianexpress.com
ಇನ್ಮೇಲೆ ಎಂಆರ್ಐ ಸ್ಕ್ಯಾನಿಂಗ್ ಖರ್ಚು ಆಗಲಿದೆ ಅಗ್ಗ! ಕಾರಣ ಕೇಳಿದ್ರೆ ಹೆಮ್ಮೆ ಪಡ್ತೀರಾ!!
ವೋಕ್ಸೆಲ್ಗ್ರಿಡ್ಸ್ ಬೆಂಗಳೂರು ಮೂಲದ ಸ್ಟಾರ್ಟ್-ಅಪ್, ಅರ್ಜುನ್ ಅರುಣಾಚಲಂ ನೇತೃತ್ವದಲ್ಲಿ ದೇಶದ ಮೊದಲ ಸ್ವದೇಶಿ MRI ಸ್ಕ್ಯಾನರ್ ಅಭಿವೃದ್ಧಿಪಡಿಸಿ, ಜೋಹೊ ನೆರವಿನಿಂದ ಆರೋಗ್ಯ ತಂತ್ರಜ್ಞಾನದಲ್ಲಿ ಮೈಲಿಗಲ್ಲು ಸಾಧಿಸಿದೆ.
ಜಾಸ್ತಿ ಬದುಕಬೇಕಂದ್ರೆ ಇಷ್ಟೇ ಸಕ್ಕರೆ ತಿನ್ಬೇಕು! ಬೆಲ್ಲಕ್ಕಿಂತ ಬೆಸ್ಟ್ ಯಾವುದು ಗೊತ್ತಾ?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ದಿನಕ್ಕೆ 58 ಕ್ಯಾಲೋರಿ ಸಕ್ಕರೆ ಸಾಕು. ಬೆಲ್ಲ, ಜೇನು ಮಧ್ಯಮ, Erythritol, ಸ್ಟೀವಿಯಾ, ಮಾಂಕ್ ಹಣ್ಣು ಆರೋಗ್ಯಕ್ಕೆ ಉತ್ತಮ ಆಯ್ಕೆಗಳು ಎಂದು ಡಾಕ್ಟರ್ ಅನುಪಮಾ ಎನ್ ಕೆ ಹೇಳಿದ್ದಾರೆ.
ಎಷ್ಟೇ ತಿಂದ್ರೂ ಪದೇ ಪದೇ ಹಸಿವಾಗ್ತಾ ಇರುತ್ತಾ? ಕಾರಣ ಗೊತ್ತಾದ್ರೆ ಪಕ್ಕಾ ಶಾಕ್ ಆಗ್ತೀರಾ!
Hungry After Eating: ಕೆಲವರಿಗೆ ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಹಸಿವಾಗುತ್ತದೆ. ಇದನ್ನು ಸಾಮಾನ್ಯ ಹಸಿವು ಎಂದು ನಿರ್ಲಕ್ಷಿಸಬಾರದು. ಅತಿಯಾದ ಹಸಿವಿನ ಹಿಂದೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಅಡಗಿರಬಹುದು.
Covid Vaccine: ಹೃದಯಾಘಾತಕ್ಕೂ, ಕೋವಿಡ್ ಲಸಿಕೆಗೂ ಸಂಬಂಧವಿಲ್ಲ! ಹಾಗಾದ್ರೆ ಸಾವಿಗೆ ಕಾರಣವೇನು ಗೊತ್ತಾ?
Covid 19 Vaccine: ಹೃದಯಾಘಾತಕ್ಕೂ, ಕೋವಿಡ್ 19 ಲಸಿಕೆಗೂ ಯಾವುದೇ ಸಂಬಂಧವಿಲ್ಲ ಅಂತ ಏಮ್ಸ್ ವೈದ್ಯಕೀಯ ವರದಿ ಹೇಳಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ವರದಿ ಪ್ರಕಟವಾಗಿದೆ.

28 C