SENSEX
NIFTY
GOLD
USD/INR

Weather

26    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

Dangerous Food: ಮೈದಾ, ಸಕ್ಕರೆಗಿಂತಲೂ ಇದು ಡೇಂಜರ್! ಪ್ಯಾಕೆಟ್ ಆಹಾರದಲ್ಲೇ ಇರುತ್ತೆ ಈ ವಿಷ!

Dangerous Food: ವಿಲನ್‌ಗೆ ವಿಲನ್‌ ಎನ್ನುವಂತೆ ಮೈದಾ, ಸಕ್ಕರೆಗಿಂತ ಡೇಂಜರಸ್‌ ಆಗಿರೋ ಮತ್ತೊಂದು ಪದಾರ್ಥ ಇದೆಯಂತೆ. ಅದು ಅನಾರೋಗ್ಯಕರ ಆಹಾರಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಆರೋಗ್ಯಕ್ಕೆ ಪ್ರಮುಖ ಅಪಾಯ ಎಂದು ಹೇಳ್ತಿದ್ದಾರೆ ತಜ್ಞರು.

ಸುದ್ದಿ18 31 Dec 2025 5:48 pm

ಆ ಟೀ ಈ ಟೀ ಬಿಡಿ, ಶಂಖಪುಷ್ಪ ಟೀ ಕುಡಿದು ನೋಡಿ; ಇದರ ಗುಣಕ್ಕೆ ನೀವು ಬೆರಗಾಗೋದು ಪಕ್ಕಾ!

ಅಪರಾಜಿತ ಅಥವಾ ಬಟರ್‌ಫ್ಲೈ ಬಟಾಣಿ ಅಥವಾ ಶಂಖಪುಷ್ಪ ಹೂವಿನ ಚಹಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಇದು ಒತ್ತಡವನ್ನು ಕಡಿಮೆ ಮಾಡಲು, ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಮೆದುಳು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಸುದ್ದಿ18 30 Dec 2025 10:14 pm

ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿರುವುದು ಅಪಾಯಕಾರಿ; ಏನು ಮಾಡಬಹುದು?

ಸಾಂದರ್ಭಿಕ ಚಿತ್ರ | Photo Credit : freepik ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ. ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಯಾವುದೇ ತೀವ್ರತರವಾದ ಚಿಹ್ನೆಗಳನ್ನು ಹೊಂದಿರುವುದಿಲ್ಲ. ಆದರೆ ಅದು ಮೌನವಾಗಿ ದೇಹಕ್ಕೆ ಸಮಸ್ಯೆ ಒಡ್ಡಬಹುದು. ಬಹಳಷ್ಟು ಮಂದಿಗೆ ಹೃದಯ, ಮೆದುಳು, ಕಿಡ್ನಿ ಮತ್ತು ಕಣ್ಣುಗಳು ಒತ್ತಡದಲ್ಲಿರುವುದು ಗೊತ್ತಿಲ್ಲದೆಯೇ ಆರಾಮವಾಗಿರುತ್ತಾರೆ. ತಜ್ಞರು ಹೇಳುವ ಪ್ರಕಾರ, “ಚಿಕಿತ್ಸೆ ಪಡೆಯದೆ ಇದ್ದರೆ ರಕ್ತದೊತ್ತಡದ ಸಮಸ್ಯೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಬಹಳಷ್ಟು ಮಂದಿ ಅಧಿಕ ರಕ್ತದೊತ್ತಡವಿದ್ದೂ ಸಾಮಾನ್ಯರಂತೆ ಇರುತ್ತಾರೆ. ಆದರೆ ಆಂತರಿಕವಾಗಿ ಪ್ರಮುಖ ಅಂಗಗಳು ನಿಧಾನವಾಗಿ ಹಾನಿಗೊಳಗಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಮೊದಲೇ ಪತ್ತೆಮಾಡಿ ಚಿಕಿತ್ಸೆ ನೀಡದೆ ಇದ್ದರೆ, ನಂತರದಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕಿಡ್ನಿ ರೋಗಕ್ಕೆ ಕಾರಣವಾಗಲಿದೆ.” ಅಧಿಕ ರಕ್ತದೊತ್ತಡವನ್ನು ತಡವಾಗಿ ರೋಗಪರಿಶೀಲನೆ ಮಾಡಿದರೆ ಬಹುದೊಡ್ಡ ಸಮಸ್ಯೆ ಉಂಟಾಗಬಹುದು. ತಲೆನೋವು, ಸುಸ್ತು ಅಥವಾ ಹೃದಯ ಬಡಿತ ವೇಗವಾಗುವುದು ಮೊದಲಾದ ಸಮಸ್ಯೆಗಳು ಕಂಡುಬರಬಹುದು. ಇಂತಹ ಸಮಸ್ಯೆಗಳನ್ನು ಕಾರ್ಯದೊತ್ತಡವೆಂದು ಬದಿಗೆ ಸರಿಸಿ ಬಿಡುವುದೇ ಹೆಚ್ಚು. ಅದೇ ಕಾರಣಕ್ಕಾಗಿ 30 ಅಥವಾ 35 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುತ್ತಿರಬೇಕು. ರಕ್ತದೊತ್ತಡ ದೇಹಕ್ಕೆ ಹೇಗೆ ಸಮಸ್ಯೆ ಒಡ್ಡುತ್ತದೆ? ಅನಿಯಂತ್ರಿತ ಅಧಿಕ ರಕ್ತದೊತ್ತಡ ಪ್ರತಿ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರುತ್ತದೆ. ಹೃದಯದ ಮೇಲೆ ಹೆಚ್ಚು ರಕ್ತವನ್ನು ಪಂಪ್ ಮಾಡುವಂತೆ ಒತ್ತಡ ಹೆಚ್ಚಾಗುತ್ತದೆ. ಆರಂಭದಲ್ಲಿ ಹೃದಯ ಹಿಗ್ಗಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಒತ್ತಡ ನಿಯಂತ್ರಣಕ್ಕೆ ತರದೆ ಇದ್ದಲ್ಲಿ ಅದು ದುರ್ಬಲಗೊಳ್ಳಬಹುದು ಮತ್ತು ಕಾರ್ಯಕ್ಷಮತೆ ಕಡಿಮೆಯಾಗಬಹುದು. ಅಪಾಯದಲ್ಲಿರುವ ಮತ್ತೊಂದು ಅಂಗವೆಂದರೆ ಮೆದುಳು. ಅಧಿಕ ರಕ್ತದೊತ್ತಡವು ಮೆದುಳಿಗೆ ರಕ್ತ ಹರಿಸುವ ನಾಳಗಳನ್ನು ಹಾನಿಗೊಳಿಸಬಹುದು. ಹೀಗಾಗಿ ಪಾರ್ಶ್ವವಾಯುವಿನ ಸಾಧ್ಯತೆ ಹೆಚ್ಚಿರುತ್ತದೆ. ದೀರ್ಘಕಾಲ ಅಧಿಕ ರಕ್ತದೊತ್ತಡವನ್ನು ಪರಿಶೀಲಿಸದೆ ಇದ್ದಲ್ಲಿ ನೆನಪುಶಕ್ತಿ ಮತ್ತು ಅರಿವಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಈ ಬದಲಾವಣೆಗಳು ನಿಧಾನಗತಿಯಲ್ಲಿ ಆಗಬಹುದು. ಅದೇ ಕಾರಣದಿಂದ ಜನರು ಅಂತಹ ಸಮಸ್ಯೆಗೆ ಅಧಿಕ ರಕ್ತದೊತ್ತಡ ಕಾರಣವೆಂದು ಹೇಳುವುದಿಲ್ಲ. ಅಧಿಕ ರಕ್ತದೊತ್ತಡದಿಂದ ಕಿಡ್ನಿಗೆ ಹಾನಿ ನಿಧಾನವಾಗಿ ಮತ್ತು ಮೌನವಾಗಿ ಆಗುತ್ತದೆ. ದೇಹದಲ್ಲಿ ನಿಧಾನವಾಗಿ ಅದಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣು ಕೂಡ ಹಾನಿಗೊಳಗಾಗುತ್ತದೆ. ರೆಟಿನಾದಲ್ಲಿರುವ ದುರ್ಬಲ ರಕ್ತನಾಳಗಳು ದೃಷ್ಟಿಯನ್ನು ಮಂದಗೊಳಿಸಬಹುದು. ಈ ಬೆಳವಣಿಗೆಗಳು ನಿಧಾನವಾಗಿರುವ ಕಾರಣ ಪರಿಶೀಲಿಸದೆ ಇದ್ದಲ್ಲಿ ಶಾಶ್ವತವಾಗಿ ಸಮಸ್ಯೆ ಕಂಡುಬರಬಹುದು. ಅಪಾಯ ಗಂಭೀರವಾಗುವುದು ಯಾವಾಗ? ಅಧಿಕ ರಕ್ತದೊತ್ತಡದ ಕೆಲವು ಮಟ್ಟಗಳು ಜೀವನಕ್ಕೆ ಬೆದರಿಕೆ ಒಡ್ಡಬಲ್ಲ ಸಮಸ್ಯೆ ಉಂಟುಮಾಡಬಹುದು. 140/90 mmHg ರೀಡಿಂಗ್ಗಳು ಅಪಾಯಕಾರಿ. ಈ ರೀಡಿಂಗ್ ಹೆಚ್ಚಾಗಿ ಅಧಿಕ ರಕ್ತದೊತ್ತಡ 160/100 ವರೆಗೆ ತಲುಪಬಹುದು. ಅಲ್ಪ ಪ್ರಮಾಣದಲ್ಲಿ ಅಧಿಕ ರಕ್ತದೊತ್ತಡವೂ ಕಿಡ್ನಿ, ಹೃದಯ ಮತ್ತು ಮೆದುಳಿಗೆ ಅಪಾಯಕಾರಿ. “ತಮ್ಮ ಆರೋಗ್ಯ ಸರಿಯಿದೆ ಎಂದುಕೊಂಡವರು ಅನಿರೀಕ್ಷಿತ ಹೃದಯಾಘಾತ ಅಥವಾ ಪಾರ್ಶ್ವವಾಯುಗಳನ್ನು ಕಾಣುತ್ತೇವೆ. ನಿಯಮಿತ ಔಷಧಿಗಳು, ಜೀವನಶೈಲಿಯ ಬದಲಾವಣೆಗಳೊಂದಿಗೆ ಈ ಅಪಾಯವನ್ನು ಕಡಿಮೆ ಮಾಡಬಹುದು” ಎನ್ನುತ್ತಾರೆ ತಜ್ಞರು. ಜೀವನಶೈಲಿ ಬದಲಾವಣೆ ಸಾಕೆ? ತಜ್ಞರು ಹೇಳುವ ಪ್ರಕಾರ ಧೂಮಪಾನ ತೊರೆಯುವುದು, ಉಪ್ಪು ಕಡಿಮೆ ಸೇವಿಸುವುದು, ಎಣ್ಣೆ ಮತ್ತು ಸಂಸ್ಕರಿತ ಆಹಾರವನ್ನು ಕಡಿಮೆ ಮಾಡುವುದು, ನಿಯಮಿತವಾಗಿ ದೈಹಿಕ ಚಟುವಟಿಕೆಯಿಂದ ಅಪಾಯವನ್ನು ಕಡಿಮೆ ಮಾಡಬಹುದು. ಉತ್ತಮ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಇವು ಅತಿಮುಖ್ಯ. ಆದರೆ ಜೀವನಶೈಲಿ ಬದಲಾವಣೆ ಮಾತ್ರ ಸಾಲದು. ಔಷಧಿ ಮತ್ತು ನಿಯಮಿತವಾಗಿ ಪರಿಶೀಲನೆ ಅಗತ್ಯವಿರುತ್ತದೆ. ವೃತ್ತಿ ಸಂಬಂಧಿತ ಒತ್ತಡ, ಶಿಸ್ತಿಲ್ಲದ ಆಹಾರ ಸೇವನೆ ಮತ್ತು ಸೋಮಾರಿತನದ ಅಭ್ಯಾಸಗಳಿದ್ದಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಬಹುದು. ಅದೇ ಕಾರಣಕ್ಕೆ ಯುವ ವೃತ್ತಿಪರರಲ್ಲಿ ಪಾರ್ಶ್ವವಾಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ರೋಗ ಚಿಹ್ನೆಗಳಿಗೆ ಕಾಯಬೇಡಿ. ನಿಮ್ಮ ರಕ್ತದೊತ್ತಡವನ್ನು ನೀವೇ ಮೇಲ್ವಿಚಾರಣೆ ಮಾಡಿ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವುದು ಅಪಾಯದಿಂದ ಪಾರು ಮಾಡಬಹುದು. ಗಂಭೀರವಾಗಿ ತೆಗೆದುಕೊಂಡಲ್ಲಿ ಮಾತ್ರ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಬಹುದು. ಕೃಪೆ: indianexpress.com

ವಾರ್ತಾ ಭಾರತಿ 30 Dec 2025 6:16 pm

ಇನ್ಮೇಲೆ ಎಂಆರ್‌ಐ ಸ್ಕ್ಯಾನಿಂಗ್‌ ಖರ್ಚು ಆಗಲಿದೆ ಅಗ್ಗ! ಕಾರಣ ಕೇಳಿದ್ರೆ ಹೆಮ್ಮೆ ಪಡ್ತೀರಾ!!

ವೋಕ್ಸೆಲ್‌ಗ್ರಿಡ್ಸ್ ಬೆಂಗಳೂರು ಮೂಲದ ಸ್ಟಾರ್ಟ್-ಅಪ್, ಅರ್ಜುನ್ ಅರುಣಾಚಲಂ ನೇತೃತ್ವದಲ್ಲಿ ದೇಶದ ಮೊದಲ ಸ್ವದೇಶಿ MRI ಸ್ಕ್ಯಾನರ್ ಅಭಿವೃದ್ಧಿಪಡಿಸಿ, ಜೋಹೊ ನೆರವಿನಿಂದ ಆರೋಗ್ಯ ತಂತ್ರಜ್ಞಾನದಲ್ಲಿ ಮೈಲಿಗಲ್ಲು ಸಾಧಿಸಿದೆ.

ಸುದ್ದಿ18 29 Dec 2025 3:30 pm

ಜಾಸ್ತಿ ಬದುಕಬೇಕಂದ್ರೆ ಇಷ್ಟೇ ಸಕ್ಕರೆ ತಿನ್ಬೇಕು! ಬೆಲ್ಲಕ್ಕಿಂತ ಬೆಸ್ಟ್‌ ಯಾವುದು ಗೊತ್ತಾ?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ದಿನಕ್ಕೆ 58 ಕ್ಯಾಲೋರಿ ಸಕ್ಕರೆ ಸಾಕು. ಬೆಲ್ಲ, ಜೇನು ಮಧ್ಯಮ, Erythritol, ಸ್ಟೀವಿಯಾ, ಮಾಂಕ್ ಹಣ್ಣು ಆರೋಗ್ಯಕ್ಕೆ ಉತ್ತಮ ಆಯ್ಕೆಗಳು ಎಂದು ಡಾಕ್ಟರ್ ಅನುಪಮಾ ಎನ್ ಕೆ ಹೇಳಿದ್ದಾರೆ.

ಸುದ್ದಿ18 28 Dec 2025 4:36 pm

ಎಷ್ಟೇ ತಿಂದ್ರೂ ಪದೇ ಪದೇ ಹಸಿವಾಗ್ತಾ ಇರುತ್ತಾ? ಕಾರಣ ಗೊತ್ತಾದ್ರೆ ಪಕ್ಕಾ ಶಾಕ್ ಆಗ್ತೀರಾ!

Hungry After Eating: ಕೆಲವರಿಗೆ ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಹಸಿವಾಗುತ್ತದೆ. ಇದನ್ನು ಸಾಮಾನ್ಯ ಹಸಿವು ಎಂದು ನಿರ್ಲಕ್ಷಿಸಬಾರದು. ಅತಿಯಾದ ಹಸಿವಿನ ಹಿಂದೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಅಡಗಿರಬಹುದು.

ಸುದ್ದಿ18 27 Dec 2025 7:39 pm

10 ಸಾವಿರ ಹೆಜ್ಜೆ ನಡೆಯೋದು ಮುಖ್ಯವಲ್ಲ, ಹೇಗೆ ನಡಿತೀರಿ ಅನ್ನೋದು ಮುಖ್ಯ! ಫಿಟ್ ಆಗಿರೋಕೆ ಹೀಗೆ ಮಾಡಿ

ದಿನಕ್ಕೆ 10 ಸಾವಿರ ಸ್ಟೆಪ್ಸ್ ಇಲ್ಲವೇ 7,000 ಹೆಜ್ಜೆಗಳು ಆರೋಗ್ಯಕರ ಎಂದು ಹಲವಾರು ಅಧ್ಯಯನಗಳು ಹೇಳಿಕೆ ನೀಡುತ್ತಲೇ ಇವೆ, ಆದರೆ ನಿಮ್ಮ ಒಟ್ಟು ಹೆಜ್ಜೆಗಳಷ್ಟೇ ಮುಖ್ಯವಾಗಿ ನೀವು ಹೇಗೆ ನಡೆಯುತ್ತೀರಿ ಹಾಗೂ ಹೇಗೆ ಹೆಜ್ಜೆಯನ್ನಿರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ

ಸುದ್ದಿ18 14 Dec 2025 6:21 am

ಈ ಐದು ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದೇ ಆರೋಗ್ಯಕರ! ಯಾವುವು ಆ ತರಕಾರಿಗಳು

Vegetables :ಆಹಾರವನ್ನು ಬೇಯಿಸಿ ತಿನ್ನುವುದು ಜೀರ್ಣಕ್ರಿಯೆನ್ನು ಸುಗಮಗೊಳಿಸುತ್ತದೆ ಹಾಗೂ ಸರಿಯಾದ ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಹಾಗೆಯೇ ಕೆಲವು ತರಕಾರಿಗಳನ್ನು ಬೇಯಿಸದೆ ಹಾಗೆಯೇ ಸೇವಿಸುವುದು ಒಳ್ಳೆಯದು.ಯಾವುವು ಆ ತರಕಾರಿಗಳು ಗೊತ್ತಾ?

ಸುದ್ದಿ18 12 Dec 2025 10:32 pm

ಮಧ್ಯಾಹ್ನದ ಊಟದ ಬಳಿಕ ನಿದ್ರೆಗೆ ಜಾರುವುದು ಅನಾರೋಗ್ಯಕರ ಹವ್ಯಾಸ

Photo Credit : freepik.com ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ. ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ರೆಗೆ ಜಾರಬೇಕು ಎಂದು ಅನಿಸುತ್ತದೆಯೆ? ಸಣ್ಣ ನಿದ್ರೆ ಮಾಡಿದರೆ ದೇಹದ ಶಕ್ತಿ ಮರಳಿಬರುತ್ತದೆ ಎಂದು ಸಹಜವಾಗಿ ನಿದ್ರೆಗೆ ಜಾರುತ್ತೀರೇನು? ಆದರೆ ಮಧ್ಯಾಹ್ನದ ನಿದ್ರೆ ದಣಿವಿನ ಭಾಗವಾಗಿರಬಹುದು ಎಂದು ಭಾವಿಸಿ ಸುಮ್ಮನಿರಬಾರದು. ವೈದ್ಯರ ಪ್ರಕಾರ ಊಟದ ನಂತರದ ನಿದ್ರೆಯು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಬಿಡುಗಡೆಯಂತಹ ಅಂಶಗಳಿಂದಾಗಿ ದೇಹದ ಶಕ್ತಿಯ ಮಟ್ಟದಲ್ಲಿನ ನೈಸರ್ಗಿಕ ಕುಸಿತದ ಅನುಭವವಾಗಿರುತ್ತದೆ. ಈ ಸಮಸ್ಯೆಯಿಂದಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಮಧ್ಯಾಹ್ನ 1ರಿಂದ 3ರ ನಡುವೆ ನಿದ್ರೆಗೆ ಜಾರುವ ಹವ್ಯಾಸ ಬೆಳೆಯಬಹುದು. ಡಾ. ಬಾತ್ರಾಸ್ ಆರೋಗ್ಯಸೇವೆ ಸರಣಿಯನ್ನು ಸ್ಥಾಪಿಸಿರುವ ಡಾ. ಮುಖೇಶ್ ಬಾತ್ರಾ ಅವರ ಪ್ರಕಾರ, “ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗಿನ ಅವಧಿಯು ದೇಹಕ್ಕೆ ಜೈವಿಕವಾಗಿ ತುಂಬಾ ಸವಾಲಿನ ಸಮಯ. ನಮ್ಮ ಸಿರ್ಕಾಡಿಯನ್ ಲಯವು ಸ್ವಾಭಾವಿಕವಾಗಿ ಕುಸಿಯುವ ಹಂತವಾಗಿರುತ್ತದೆ. ಅಂತಹ ಕುಸಿತದಿಂದ ಜಾಗೃತಿ, ಚಯಾಪಚಯ ಮತ್ತು ಮೈಕ್ರೋಸರ್ಕ್ಯುಲೇಷನ್ ಮೇಲೆ ಪರಿಣಾಮ ಬೀರುತ್ತದೆ.” “ಮಧ್ಯಾಹ್ನದ ಆಲಸ್ಯದ ಸಮಯದಲ್ಲಿ ದೇಹದ ರಕ್ತಪರಿಚಲನೆ ಕಡಿಮೆಯಾಗಿರುತ್ತದೆ. ಜಲಸಂಚಯನ ಕಡಿಮೆಯಾಗಿದ್ದು, ಒತ್ತಡದ ಹಾರ್ಮೋನುಗಳು ಹೆಚ್ಚು ಇರುವುದರಿಂದ ಚರ್ಮವು ಮಂದವಾಗಿ ದಣಿದಂತೆ ಇದ್ದು, ಮೊಡವೆಗಳಿಗೆ ಹೆಚ್ಚು ಒಳಗಾಗುತ್ತದೆ” ಎಂದು ಅವರು ಹೇಳಿದ್ದಾರೆ. ಪೋಸ್ಟ್ಪ್ರಾನ್ಡಿಯಲ್ ಡಿಪ್ ಊಟದ ನಂತರ ನಿದ್ರೆ ಬರುವಿಕೆಯನ್ನು “ಪೋಸ್ಟ್ಪ್ರಾನ್ಡಿಯಲ್ ಡಿಪ್” ಎಂದು ಕರೆಯಲಾಗುತ್ತದೆ. ಅಂದರೆ, ಊಟದ ನಂತರ ನಿದ್ರೆ, ಶಕ್ತಿ ಕಡಿಮೆಯಾಗುವುದು ಅಥವಾ ಆಲಸ್ಯದಂತಹ ಸಾಮಾನ್ಯ ಭಾವನೆ. ಇದನ್ನು ಆಹಾರ ಕೋಮಾ ಎಂದೂ ಕರೆಯಲಾಗುತ್ತದೆ. ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಗಳು ಮತ್ತು ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುತ್ತದೆ, ಇದು ಮಾನಸಿಕ ಜಾಗೃತಿ ಮತ್ತು ಗಮನ ಕಡಿಮೆಯಾಗಲು ಕಾರಣವಾಗುತ್ತದೆ. ನಿದ್ರೆ ಜಾರದಿರಲು ಏನು ಮಾಡಬೇಕು? ಲವ್ನೀತ್ ಎನ್ನುವ ನ್ಯೂಟ್ರಿಶನ್ ಕಂಪನಿಯ ಸ್ಥಾಪಕರಾದ ಲವ್ನೀತ್ ಬಾತ್ರ ಪ್ರಕಾರ, “ಈ ಸಮಯದಲ್ಲಿ ಜನರು ಹೆಚ್ಚಾಗಿ ಅರೆನಿದ್ರಾವಸ್ಥೆಯಲ್ಲಿರುತ್ತಾರೆ. ಹೆಚ್ಚಿನ ಉಪ್ಪು, ಕಾರ್ಬೋಹೈಡ್ರೇಟ್ ಊಟ, ಅನಿಯಮಿತ ನಿದ್ರೆಯ ಮಾದರಿಗಳು, ಮಲಗುವ ಮುನ್ನ ಅತಿಯಾಗಿ ಫೋನ್ ಬಳಕೆ ಮತ್ತು ರಾತ್ರಿ ಸಮಯದಲ್ಲಿ ನಿಯಮಿತವಾದ ನಿದ್ರೆ ಇಲ್ಲದಿರುವುದು ಕಾರಣವಾಗಬಹುದು. ನಿದ್ರೆಯನ್ನು ಉತ್ತೇಜಿಸುವ ಮೆಲಟೋನಿನ್‌ನಂತಹ ಹಾರ್ಮೋನುಗಳೂ ಪ್ರಮುಖ ಪಾತ್ರವಹಿಸುತ್ತವೆ. ಈ ಅಂಶಗಳು, ಭಾರೀ ಊಟದೊಂದಿಗೆ ಸೇರಿ, ಮಧ್ಯಾಹ್ನದ ವೇಳೆಯಲ್ಲಿ ನಿದ್ರೆ ಮಾಡಲು ಪ್ರಚೋದನೆ ನೀಡುತ್ತವೆ ಮತ್ತು ಇದು ಉತ್ಪಾದಕತೆಗೆ ಅಪಾಯಕಾರಿ.” ಅವರು ನೀಡುವ ಪರಿಹಾರವೆಂದರೆ ಬೆಳಗಿನ ಉಪಾಹಾರವನ್ನು ಚೆನ್ನಾಗಿ ಮಾಡುವುದು. ಸಿರಿಧಾನ್ಯ, ಬ್ರೌನ್ ರೈಸ್ ಅವಲಕ್ಕಿ, ಬ್ರೌನ್ರೈಸ್ ಇಡ್ಲಿಗಳು ಅಥವಾ ದೋಸೆಯನ್ನು ಬೆಳಗಿನ ಉಪಾಹಾರಕ್ಕೆ ಸೇವಿಸಬೇಕು. ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿರುವ ತಿನಿಸುಗಳನ್ನು ಸೇವಿಸಬೇಕು. ನಿದ್ರೆ ಬರುವುದನ್ನು ತಡೆಯಲು ಚಹಾ ಅಥವಾ ಕಾಫಿ ಸೇವನೆ, ತಂಪು ಪಾನೀಯ ಅಥವಾ ಬಿಸ್ಕಟ್ಗಳು ಮೊದಲಾದ ತಿನಿಸುಗಳನ್ನು ಸೇವಿಸಬಾರದು. 3 ಗಂಟೆಯ ನಿದ್ರೆ ತಡೆಯಲು ಇವನ್ನು ಸೇವಿಸಬಹುದು - ಮೊಳಕೆಕಾಳುಗಳು ಪ್ರೊಟೀನ್ ಮತ್ತು ಫೈಬರ್ ಮೂಲಗಳಾಗಿರುತ್ತವೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ. - ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. - ಹಣ್ಣುಗಳೊಂದಿಗೆ ನೆನೆಸಿದ ಬೀಜಗಳನ್ನು ಸಂಯೋಜಿಸುವುದರಿಂದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಮಿಶ್ರಣವನ್ನು ಒದಗಿಸುವ ಮೂಲಕ ತ್ವರಿತ ಶಕ್ತಿ ಮತ್ತು ದೀರ್ಘಕಾಲದ ತೃಪ್ತಿ ಸಿಗುತ್ತದೆ. - ಬೇಯಿಸಿದ ಕಡಲೆ (ಚನಾ) ಪ್ರೊಟೀನ್ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಆಯಾಸ ಕಳೆಯಲು ಪೌಷ್ಠಿಕಾಂಶವಿರುವ ಹೊಟ್ಟೆ ತುಂಬಿಸುವ ತಿನಿಸಾಗಿದೆ. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್

ವಾರ್ತಾ ಭಾರತಿ 7 Dec 2025 6:41 pm

ಆಯುರ್ವೇದದಿಂದ ಫ್ಯಾಟಿ ಲಿವರ್‌ಗೆ ಪರಿಹಾರ; ಆರೋಗ್ಯಕರ ಜೀವನಕ್ಕೆ ಹೊಸ ದಾರಿ

Fatty Liver: ಅನೇಕ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಳ್ಳುತ್ತಿವೆ.ಇವುಗಳಲ್ಲಿ ಪ್ರಮುಖವಾದುದು ಫ್ಯಾಟಿ ಲಿವರ್,ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ.ಆದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಸಿರೋಸಿಸ್‌ನಂತಹ ಗಂಭೀರ ಕಾಯಿಲೆಗೆ ತಿರುಗಬಹುದು.

ಸುದ್ದಿ18 7 Dec 2025 5:18 pm

ಈ ಲಕ್ಷಣ ಕಂಡು ಬಂದ್ರೆ ನೆಗ್‌ಲೆಕ್ಟ್‌ ಮಾಡ್ಬೇಡಿ,ಇದು ಕೊಲೊನ್‌ ಕ್ಯಾನ್ಸರ್‌ನ ಲಕ್ಷಣ ಆಗಿರ್ಬಹುದು!

Colon Cancer: ಇತ್ತೀಚೆಗೆ ಹೆಚ್ಚಾಗಿ ಯುವ ಜನತೆಯನ್ನು ಕಾಡ್ತಿದೆ ಕೊಲೊನ್ ಕ್ಯಾನ್ಸರ್. ಇದಕ್ಕೆ ಕಾರಣವೇನು? ಇದರ ಲಕ್ಷಣ ಏನು ಗೊತ್ತಾ?

ಸುದ್ದಿ18 6 Dec 2025 6:56 pm

ಪ್ಯಾಕೇಜ್ಡ್ ಹಾಲನ್ನು ಬಿಸಿ ಮಾಡುವ ಅಗತ್ಯವಿದೆಯೆ?

ಸಾಂದರ್ಭಿಕ ಚಿತ್ರ | Photo Credit : freepik ಭಾರತೀಯ ಮನೆಗಳಲ್ಲಿ ಹಾಲು ಬಿಸಿ ಮಾಡುವುದು ದಿನಚರಿಯಾಗಿದೆ. ಅದು ಯಾವ ರೀತಿ ಬಂದರೂ ಬಿಸಿ ಮಾಡಿದ ನಂತರವೇ ಬಳಸಲಾಗುತ್ತದೆ. ಆದರೆ ಈ ದೈನಂದಿನ ಅಭ್ಯಾಸದ ಅಗತ್ಯವಿದೆಯೆ? ವೈರಲ್ ಆಗಿರುವ ಇನ್ಸ್ಟಾಗ್ರಾಂ ರೀಲ್ನಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ ಮನನ್ ವೋರಾ ಈ ದೀರ್ಘಕಾಲದ ನಂಬಿಕೆಯನ್ನು ಪ್ರಶ್ನಿಸುತ್ತಾರೆ. View this post on Instagram A post shared by Dr. Manan Vora (@dr.mananvora) “ಪ್ಯಾಕ್ ಮಾಡಲಿರುವ ಹಾಲನ್ನು ಈಗಾಗಲೇ ಪಾಶ್ಚರೀಕರಿಸಲಾಗಿದೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಲಾಗಿದೆ. ಅಲ್ಲಿ ಹಾನಿಕಾರಕ ಬ್ಯಾಕ್ಟೀರಿಯಗಳು ನಾಶವಾಗುತ್ತವೆ. ಇದನ್ನು ಸುರಕ್ಷತಾ ದೃಷ್ಟಿಕೋನದಿಂದ ಮನೆಯಲ್ಲಿ ಹೆಚ್ಚು ಕುದಿಸುವುದು ಅಗತ್ಯವಿಲ್ಲ. ಹೀಗೆ ಅಧಿಕ ಬಿಸಿಯಾಗುವುದು ರುಚಿ ಮತ್ತು ಪೋಷಣೆಯ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯ ಬೆಚ್ಚಗಿನ ಸ್ಥಿತಿಗೆ ಬಿಸಿ ಮಾಡಿ ಅದನ್ನು ಚಹಾ ಮತ್ತು ಕಾಫಿಯಲ್ಲಿ ಬಳಸಬಹುದು” ಎಂದು ಅವರು ವಿವರಿಸಿದ್ದಾರೆ. ಪಾಶ್ಚರೀಕರಣ ಎಂದರೇನು? ಮನನ್ ವೋರಾ ವಿವರಿಸುವ ಪ್ರಕಾರ, “ಪಾಶ್ಚರೀಕರಣವು ಒಂದು ಶಾಖ-ಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಹಸಿ ಹಾಲಿನಲ್ಲಿ ನೈಸರ್ಗಿಕವಾಗಿ ಇರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಹಾಲನ್ನು ಸೇವನೆಗೆ ಸುರಕ್ಷಿತವಾಗಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ತಣ್ಣಗಾದ ಹಸಿ ಹಾಲನ್ನು ನಿಗದಿತ ಅವಧಿಗೆ ನಿರ್ದಿಷ್ಟ ತಾಪಮಾನಕ್ಕೆ ತ್ವರಿತವಾಗಿ ಬಿಸಿ ಮಾಡಲಾಗುತ್ತದೆ ಮತ್ತು ನಂತರ ತ್ವರಿತವಾಗಿ ತಂಪಾಗಿಸಲಾಗುತ್ತದೆ. ಹೆಚ್ಚಿನ ಪ್ರಮಾಣಿತ ಹಾಲು ಸಂಸ್ಕರಣಾ ಘಟಕಗಳಲ್ಲಿ, ಹಾಲನ್ನು ಸುಮಾರು 72°C ಗೆ ಬಿಸಿ ಮಾಡಲಾಗುತ್ತದೆ ಮತ್ತು ಆ ತಾಪಮಾನದಲ್ಲಿ ಕನಿಷ್ಠ 15 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಲಾಗುತ್ತದೆ ಮತ್ತು ನಂತರ ತಕ್ಷಣವೇ ಸುಮಾರು 4°C ಗೆ ತಂಪಾಗಿಸಲಾಗುತ್ತದೆ. ಈ ನಿಯಂತ್ರಿತ ತಾಪನವು ಹಾಲಿನ ಪೌಷ್ಟಿಕಾಂಶದ ಗುಣಮಟ್ಟ ಮತ್ತು ರುಚಿಯನ್ನು ಸಂರಕ್ಷಿಸುವುದರ ಜೊತೆಗೆ ರೋಗಕಾರಕ ಸೂಕ್ಷ್ಮಜೀವಿಗಳನ್ನು ನಾಶಮಾಡಲು ಸಾಕಾಗುತ್ತದೆ.” ಇಂದು ವ್ಯಾಪಕವಾಗಿ ಬಳಸಲಾಗುವ ಪಾಶ್ಚರೀಕರಣ ವಿಧಾನವೆಂದರೆ ಹೈ ಟೆಂಪರೇಚರ್ ಶಾರ್ಟ್ ಟೈಮ್ (ಎಚ್ಟಿಎಸ್ಟಿ) ಪಾಶ್ಚರೀಕರಣ. ಮತ್ತೊಂದು ಮುಂದುವರಿದ ವಿಧಾನವೆಂದರೆ ಅಲ್ಟ್ರಾ ಹೈ ಟೆಂಪರೇಚರ್ (ಯುಎಚ್ಟಿ) ಸಂಸ್ಕರಣೆ, ಇದನ್ನು ಅಸೆಪ್ಟಿಕ್ ಸಂಸ್ಕರಣೆ ಎಂದೂ ಕರೆಯುತ್ತಾರೆ. ಡೈರಿ ಉದ್ಯಮವು ಹೆಚ್ಚಾಗಿ ಹೊಸದಾಗಿ ಪಾಶ್ಚರೀಕರಿಸಿದ ಹಾಲಿನ ಶಾಖವನ್ನು ಮುಂದಿನ ಬ್ಯಾಚ್ ನ ತಣ್ಣನೆಯ ಹಸಿ ಹಾಲನ್ನು ಬಿಸಿಮಾಡಲು ಬಳಸುತ್ತದೆ. ಅದೇ ಸಮಯದಲ್ಲಿ, ಒಳಬರುವ ತಣ್ಣನೆಯ ಹಾಲು ಬಿಸಿಮಾಡಿದ ಪಾಶ್ಚರೀಕರಿಸಿದ ಹಾಲನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಈ ಶಾಖ-ವಿನಿಮಯ ವ್ಯವಸ್ಥೆಯು ಹೆಚ್ಚುವರಿ ತಾಪನ ಮತ್ತು ಶೈತ್ಯೀಕರಣದ ಅಗತ್ಯವನ್ನು ಕಡಿಮೆ ಮಾಡುತ್ತದೆ, ಇದು ಸಂಪೂರ್ಣ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರವಾಗಿಸುತ್ತದೆ. ಪ್ಯಾಕ್ ಮಾಡಿದ ಹಾಲನ್ನು ಬಿಸಿ ಮಾಡುವ ಅಗತ್ಯವಿದೆಯೆ? ಪ್ಯಾಕ್ ಮಾಡಿದ ಹಾಲನ್ನು ಈಗಾಗಲೇ ಪ್ಯಾಶ್ಚರೀಕರಿಸಲಾಗಿದೆ. ಇದು ಹಾನಿಕರ ಬ್ಯಾಕ್ಟೀರಿಯಗಳನ್ನು ಕೊಂದಿರುತ್ತದೆ. ಹೀಗಾಗಿ ಹೆಚ್ಚುವರಿ ಕುದಿಸುವುದು ಸಾಮಾನ್ಯವಾಗಿ ಅನಗತ್ಯ. ಅಧಿಕ ಬಿಸಿಯಾಗುವುದು ಅಥವಾ ದೀರ್ಘಕಾಲ ಕುದಿಸುವುದರಿಂದ ಅದರ ಪೌಷ್ಠಿಕಾಂಶದ ಗುಣಮಟ್ಟ, ಮುಖ್ಯವಾಗಿ ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ಪ್ರೊಟೀನ್ಗಳು ಕಡಿಮೆಯಾಗಬಹುದು. ಆದರೆ ಸುರಕ್ಷತೆ ಮತ್ತು ರುಚಿ ಬೇಕೆಂದರೆ ಉಗುರುಬೆಚ್ಚಗಿನ ತಾಪಮಾನಕ್ಕೆ ಬಿಸಿ ಮಾಡಿದರೆ ಸಾಕಾಗುತ್ತದೆ. ಮುಖ್ಯವಾಗಿ ಸರಿಯಾಗಿ ಶೈತ್ಯೀಕರಣಗೊಳಿಸಬೇಕು ಮತ್ತು ಆರೋಗ್ಯಕರವಾಗಿ ನಿರ್ವಹಿಸಬೇಕು. ಕೃಪೆ: theweek.in

ವಾರ್ತಾ ಭಾರತಿ 6 Dec 2025 6:43 pm

ಏಡ್ಸ್‌ ಗೆ ಸಿಕ್ತು ಔಷಧಿ, 2026 ರ ಅಂತ್ಯಕ್ಕೆ ಭಾರತಕ್ಕೂ ಪ್ರವೇಶ ನಿಕ್ಕಿ! ಸಾವಿಂದ ಪಾರು ಮಾಡೋ ಸಂಜೀವಿನಿ!

ಅಮೇರಿಕಾ ವಿಜ್ಞಾನಿಗಳು ಕಂಡುಹಿಡಿದ Lenacapavir ಚುಚ್ಚುಮದ್ದು 99% ಹೆಚ್ಐವಿ ಸೋಂಕಿನಿಂದ ರಕ್ಷಣೆ ನೀಡುತ್ತದೆ, WHO ಗ್ರೀನ್ ಸಿಗ್ನಲ್ ನೀಡಿದ್ದು 2026ರ ಅಂತ್ಯಕ್ಕೆ ಭಾರತದಲ್ಲಿ ಲಭ್ಯವಾಗಲಿದೆ.

ಸುದ್ದಿ18 6 Dec 2025 1:27 pm

ಕುಳಿತು ಕೆಲ್ಸ ಮಾಡಿ ಬೆನ್ನು-ಕತ್ತು ನೋವಾಗ್ತಿದ್ಯಾ? ಹಾಗಾದ್ರೆ ಕುಳಿತಲ್ಲೇ ಈ 10 ಟ್ರಿಕ್ಸ್ ಟ್ರೈ ಮಾಡಿ

Stretching Exercises: ನೀವು ಹೆಚ್ಚು ಸಮಯ ಕುಳಿತೇ ಇರುವವರಾದರೆ ನಿಮ್ಮ ಕುತ್ತಿಗೆ, ಭುಜ, ಹಿಂಭಾಗ, ಬೆನ್ನಿಗೆ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನೀಡಬೇಕಾಗುತ್ತದೆ.ಹೀಗಾಗಿ ನಿಮಗಾಗಿ ನಾವು ಕೆಲವೊಂದು ಸ್ಟ್ರೆಚಿಂಗ್ ವ್ಯಾಯಾಮಗಳು ತಿಳಿಸಿಕೊಡ್ತೇವೆ.

ಸುದ್ದಿ18 3 Dec 2025 11:30 pm

Drinks: ‘ಎಣ್ಣೆ’ ಹೊಡೆಯುವಾಗ ಇವನ್ನೆಲ್ಲಾ ತಿಂತೀರಾ? ಹಾಗಾದ್ರೆ ಹುಷಾರ್!

ಮದ್ಯಪಾನ, ಹೆಚ್ಚು ಉಪ್ಪು, ಹುರಿದ ಅಥವಾ ಸಿಹಿ ಆಹಾರವನ್ನು ಸೇವಿಸುವುದರಿಂದ ಯಕೃತ್ತು ಮತ್ತು ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ. ಕಾಫಿ ಅಥವಾ ಶಕ್ತಿ ಪಾನೀಯಗಳು ನಿರ್ಜಲೀಕರಣವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ತಿಳಿದಿದ್ದರೆ, ನೀವು ಗಂಭೀರ ಕಾಯಿಲೆ ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಸುದ್ದಿ18 2 Dec 2025 10:59 pm