Health Care: ಕಿವಿ ಸೋರುವಿಕೆ ಸಾಮಾನ್ಯ ಸಮಸ್ಯೆಯಲ್ಲ; ಯಾಮಾರಿದ್ರೆ ಜೀವಕ್ಕೆ ಸಂಚಕಾರ ಎಚ್ಚರ!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೀತಿಯ ಕಿವಿ ಸಮಸ್ಯೆಗಳು ಸ್ವಯಂ ಕೃತ ಅಪರಾಧಗಳಿಂದಲೇ ಉಂಟಾಗುತ್ತವೆ. ಕಿವಿಯಲ್ಲಿ ಗಾಯವಾದಾಗ ಅಥವಾ ಕಿವಿಯಲ್ಲಿ ನೀರು ಹೋದಾಗ ಇಯರ್ ಬಡ್ಸ್/ಕೀಲಿ ಕೈ/ಸೇಫ್ಟಿ ಪಿನ್ ಬಳಸುವುದರಿಂದ ಕಿವಿಯೊಳಗೆ ಗಾಯವಾಗುತ್ತದೆ.
Health Care: ಕಾಲು ಸೆಳೆತ ಏಕೆ ಬರುತ್ತೆ? ಇದು ಗಂಭೀರ ಸಮಸ್ಯೆಯ ಲಕ್ಷಣವೇ?
ಕಾಲಿನ ಸೆಳೆತವು ಕೇವಲ ಆಯಾಸ ಅಥವಾ ನಿರ್ಜಲೀಕರಣದಿಂದಾಗುವುದಿಲ್ಲ. ಬದಲಾಗಿ ದೇಹದಲ್ಲಿ ಆಗುವ ಸಮಸ್ಯೆಗಳ ಸಂಕೇತವಾಗಿದೆ. ನಡೆಯುವಾಗ ನಿಮ್ಮ ಕಾಲುಗಳಲ್ಲಿ ನೋವು ಅಥವಾ ಸೆಳೆತ ಉಂಟಾಗಿ ನಂತರ ವಿಶ್ರಾಂತಿ ಪಡೆದ ಮೇಲೆ ಉತ್ತಮವಾದರೆ, ಇದು ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿರಬಹುದು.
Retired Men: ಗಂಡಸ್ರು ರಿಟೈರ್ಡ್ ಆಗ್ತಿದ್ದಂತೆ ಸೈಲೆಂಟ್ ಆಗ್ತಾರಾ? ಇಲ್ಲಿದೆ ಶಾಕಿಂಗ್ ಕಾರಣ!
ಗೋಟೆನ್ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ನಿವೃತ್ತಿ ಜೀವನದ ಹೊಂದಾಣಿಕೆಯನ್ನು ಅಧ್ಯಯನ ಮಾಡಿದಾಗ, ಒಬ್ಬ ನಿವೃತ್ತಿ ಹೊಂದಿದ ವ್ಯಕ್ತಿ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವ ಮೂರು ಪ್ರಮುಖ ಮಾನಸಿಕ ಅಂಶಗಳನ್ನು ಅವರು ಗುರುತಿಸಿದರು.
Summer Tips: ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ಸುಡುವ ಬಿಸಿಲು, ಈ ಟಿಪ್ಸ್ ಬಳಸಿ!
ಬೇಸಿಗೆಯ ಬಿಸಿಲು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Health Tips: ಕಣ್ಣಿನ ರೆಪ್ಪೆಗಳ ಮೇಲೆ ಒತ್ತಿದರೆ ನೋವಾಗ್ತಿದ್ಯಾ? ಈ ಸಮಸ್ಯೆಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ!
ನಿದ್ರೆ ಸರಿಯಾಗಿ ಬರದಿದ್ದಾಗ, ಹುಬ್ಬುಗಳ ನಡುವೆ ತೀವ್ರವಾದ ನೋವು ಉಂಟಾಗುತ್ತದೆ. ಇದು ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಅಲ್ಲದೇ ತಲೆನೋವು ಮತ್ತು ಕಣ್ಣಿನ ಸ್ನಾಯುಗಳ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ.
ಚಹಾ ಕಾಫಿಗೆ ಉತ್ತಮ ಗುಣಮಟ್ಟದ ಸೆರಾಮಿಕ್ ಕಪ್ ಸುರಕ್ಷಿತ, ಆದರೆ ಕಡಿಮೆ ಗುಣಮಟ್ಟದ ಗ್ಲೇಜ್ನಿಂದ ತಯಾರಿಸಿದ ಸೀಸ ಕ್ಯಾಡ್ಮಿಯಂ ಹಾನಿ ಸಂಭವಿಸಬಹುದು ಎಂದು ಡಾ. ರೋಹಿತ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ನಿಯಮಿತ ವ್ಯಾಯಾಮದ ಹೊರತಾಗಿಯೂ ತೂಕ ಇಳಿಯುತ್ತಿಲ್ಲವೆ? ದಿನಚರಿ ಬದಲಿಸಿ
ಸಾಂದರ್ಭಿಕ ಚಿತ್ರ | Photo Credit : freepik.com ಸಂಶೋಧನೆಗಳ ಪ್ರಕಾರ, ವ್ಯಾಯಾಮದಲ್ಲಿ ಖರ್ಚಾದ ಶಕ್ತಿಯನ್ನು ನಮ್ಮ ದೇಹ ಬೇರೆಡೆ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸರಿದೂಗಿಸುತ್ತದೆ. ವ್ಯಾಯಾಮದಿಂದ ಹಿಡಿದು ಯೋಗ ತರಗತಿಯವರೆಗೆ ತಪ್ಪದೆ ಹಾಜರಾಗಿ ಅತ್ಯಂತ ಶಿಸ್ತಿನಿಂದ ಅನುಸರಿಸುತ್ತಿರಬಹುದು. ಆದರೆ ತೂಕದ ಮಾಪಕದ ಮೇಲೆ ಹೆಜ್ಜೆ ಹಾಕಿದ ತಕ್ಷಣ ಭಾವನೆ ಬದಲಾಗುತ್ತದೆ. ಅದು ತೋರಿಸುತ್ತಿರುವ ಸಂಖ್ಯೆ ನಿರಾಶೆ ಮೂಡಿಸಬಹುದು. ಹಾಗಿದ್ದರೆ, ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೂ ತೂಕ ಏಕೆ ಇಳಿಯುವುದಿಲ್ಲ ಎಂಬ ಪ್ರಶ್ನೆ ಏಳಬಹುದು. ಇದಕ್ಕೆ ಉತ್ತರ ನಿಮ್ಮ ದಿನಚರಿಯ ಅಭ್ಯಾಸದಲ್ಲಿರಬಹುದು. ತೂಕ ಇಳಿಕೆ ಎಂದರೆ ಜಿಮ್ನಲ್ಲಿ ಕಸರತ್ತು ಮಾಡುವುದು ಅಥವಾ ಯೋಗ ಚಾಪೆಯ ಮೇಲೆ ವ್ಯಾಯಾಮ ಮಾಡುವುದಷ್ಟೇ ಅಲ್ಲ. ಉಳಿದ ಸಮಯದಲ್ಲಿ ನೀವೇನು ಮಾಡುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ನಿಮ್ಮ ಆಹಾರ, ಚಲನೆ, ನಿದ್ರೆ, ಸ್ನ್ಯಾಕ್ಗಳು ಹಾಗೂ ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದೂ ಮಹತ್ವದ್ದು. ಸಣ್ಣ ಆಯ್ಕೆಗಳಾಗಿ ಕಾಣುವ ಇವುಗಳು ನಿಧಾನವಾಗಿ, ನಿಮಗೇ ಅರಿವಿಲ್ಲದೆ ತೂಕದ ಮೇಲೆ ಪರಿಣಾಮ ಬೀರುತ್ತವೆ. ಬೆವರು ಸುರಿಸುವುದರಿಂದ ಸ್ವಯಂಚಾಲಿತವಾಗಿ ಕ್ಯಾಲರಿಗಳು ಕಡಿಮೆಯಾಗುತ್ತವೆ ಎಂದು ಬಹಳ ಮಂದಿ ಅಂದುಕೊಳ್ಳುತ್ತಾರೆ. ಆದರೆ ಆ ನಂಬಿಕೆ ಸಂಪೂರ್ಣ ಸತ್ಯವಲ್ಲ. ವ್ಯಾಯಾಮಗಳು ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿ ಖರ್ಚು ಮಾಡುತ್ತವೆ. ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಫಿಟ್ನೆಸ್ ತಜ್ಞ ಹಾಗೂ ಸಂಸ್ಥಾಪಕ ನಿರ್ದೇಶಕ ಡಾ. ವಿಪುಲ್ ಲ್ಯೂನಾವತ್ ಅವರ ಪ್ರಕಾರ, “ವ್ಯಾಯಾಮ ಮೌಲ್ಯಯುತ. ಆದರೆ ಅದರಿಂದ ಕ್ಯಾಲರಿ ವೆಚ್ಚವಾಗುವ ಬಗ್ಗೆ ಅತಿಯಾದ ನಂಬಿಕೆ ಬೆಳೆಸಿಕೊಂಡಿರುತ್ತಾರೆ. ವಾಸ್ತವದಲ್ಲಿ ದೇಹ ನಮ್ಮ ಆಲೋಚನೆಗೆ ಮೀರಿರುವುದು. ಸಂಶೋಧನೆಗಳ ಪ್ರಕಾರ, ನಮ್ಮ ದೇಹ ವ್ಯಾಯಾಮದಲ್ಲಿ ಖರ್ಚಾದ ಶಕ್ತಿಯನ್ನು ಬೇರೆಡೆ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸರಿದೂಗಿಸುತ್ತದೆ.” ಹಾಗೆಂದು ವ್ಯಾಯಾಮವನ್ನು ಸಂಪೂರ್ಣವಾಗಿ ಬಿಡಬೇಕು ಎಂದಲ್ಲ. ಬದಲಾಗಿ ಹೆಚ್ಚು ದಕ್ಷತೆಯಿಂದ ವ್ಯಾಯಾಮ ಮಾಡಬೇಕು. ಸ್ನಾಯುಗಳನ್ನು ಬೆಳೆಸುವ ಮೂಲಕ ವಿಶ್ರಾಂತಿ ಸಮಯದ ಚಯಾಪಚಯ ದರವನ್ನು ಹೆಚ್ಚಿಸಬಹುದು. ಆಗ ದೇಹ ವಿಶ್ರಾಂತಿ ಸ್ಥಿತಿಯಲ್ಲಿದ್ದರೂ ಹೆಚ್ಚು ಕ್ಯಾಲರಿಗಳನ್ನು ಖರ್ಚು ಮಾಡುತ್ತದೆ. ತಿನಿಸುಗಳು ಮತ್ತು ಪಾನೀಯಗಳ ಬಗ್ಗೆ ಎಚ್ಚರಿಕೆ ಇತ್ತೀಚೆಗೆ ನಿಯಮಿತವಾಗಿ ವ್ಯಾಯಾಮ ಮಾಡುವವರು ತಾವು ಏನು ಸೇವಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಆರೋಗ್ಯಕರ ಆಹಾರ ಸೇವನೆಯೇ ತೂಕ ಇಳಿಸುವ ಆಹಾರ ಎನ್ನಲು ಸಾಧ್ಯವಿಲ್ಲ. ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ಪೋಷಕಾಂಶ ತಜ್ಞ ಎಡ್ವಿನಾ ರಾಜ್ ಅವರ ಪ್ರಕಾರ, ಕಡಲೆಗಳು, ತುಪ್ಪ, ಅವಕಾಡೋ, ಸ್ಮೂತಿಗಳು ಹಾಗೂ ಒಣಹಣ್ಣುಗಳಲ್ಲಿ ಕ್ಯಾಲರಿ ಹೆಚ್ಚು ಇರುತ್ತದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಪೋಷಕಾಂಶವಿದ್ದರೂ ತೂಕ ಇಳಿಕೆಯನ್ನು ನಿಧಾನಗೊಳಿಸಬಹುದು. “ತೂಕ ಇಳಿಕೆ ಆಹಾರದ ಗುಣಮಟ್ಟದ ಮೇಲೆ ಮಾತ್ರ ಅವಲಂಬಿಸಿಲ್ಲ. ಬದಲಾಗಿ ಸೂಕ್ತ ಪ್ರಮಾಣದಲ್ಲಿ ಸಮತೋಲಿತ ಆಹಾರ ಸೇವನೆ ಮುಖ್ಯ. ಹೆಚ್ಚು ತರಕಾರಿಗಳು, ಲೀನ್ ಪ್ರೋಟೀನ್ ಹಾಗೂ ಇಡೀ ಧಾನ್ಯಗಳು ಹಸಿವು ನಿಯಂತ್ರಿಸಲು ನೆರವಾಗುತ್ತವೆ. ಸಕ್ಕರೆ ಸೇವನೆ, ಸಂಸ್ಕರಿತ ಕೊಬ್ಬು ಹಾಗೂ ಅತಿಯಾದ ಎಣ್ಣೆ ಬಳಕೆ ಕಡಿಮೆಗೊಳಿಸಬೇಕು. ಸದಾ ತಿನಿಸುಗಳನ್ನು ತಿನ್ನುವುದು ಅಥವಾ ಪಾನೀಯಗಳನ್ನು ಸೇವಿಸುವುದು ಕ್ಯಾಲರಿಗಳನ್ನು ಹೆಚ್ಚಿಸಬಹುದು. ಅನೇಕ ತಿನಿಸುಗಳು ಮತ್ತು ಪಾನೀಯಗಳು ಹೆಚ್ಚಿನ ಕ್ಯಾಲರಿ ಸೇರಿಸಿದರೂ ಹೊಟ್ಟೆ ತುಂಬಿದ ಅನುಭವ ನೀಡುವುದಿಲ್ಲ.” ಪ್ರೋಟೀನ್ ಆಹಾರ ಸೇವನೆ ಅಗತ್ಯ ಉತ್ತಮ ತಿನಿಸುಗಳನ್ನೂ ದೊಡ್ಡ ಪ್ರಮಾಣದಲ್ಲಿ ಆಗಾಗ್ಗೆ ಸೇವಿಸಿದರೆ ತೂಕ ಇಳಿಕೆಗೆ ಅಡ್ಡಿಯಾಗಬಹುದು. ಪ್ರೋಟೀನ್ ಆಹಾರ ಸೇವಿಸದೆ ಇರುವುದರಿಂದಲೂ ತೂಕ ಇಳಿಕೆಗೆ ಪರಿಣಾಮ ಬೀರುತ್ತದೆ. ಬಹುತೇಕ ಮಂದಿಗೆ ಆಹಾರದಲ್ಲಿ ಪ್ರೋಟೀನ್ ಸೇವನೆಯ ಕಲ್ಪನೆ ಇಷ್ಟವಾದರೂ, ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದಿಲ್ಲ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಶನ್ ಮತ್ತು ಡಯಟೆಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಗೈ ಸೆಲ್ವಿ ಅವರ ಪ್ರಕಾರ, ವ್ಯಾಯಾಮದ ಜೊತೆಗೆ ಸಾಕಷ್ಟು ಪ್ರೋಟೀನ್ ಸೇವಿಸದಿದ್ದರೆ ದೇಹಕ್ಕೆ ಸ್ನಾಯು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಚಯಾಪಚಯ ಕ್ರಮೇಣ ನಿಧಾನಗೊಳ್ಳುತ್ತದೆ. ಪ್ರೋಟೀನ್ ಹಸಿವನ್ನೂ ಕಡಿಮೆ ಮಾಡುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ನಿರಂತರ ಹಸಿವು ಉಂಟಾಗಿ ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚುತ್ತದೆ. ಪ್ರತಿ ಊಟದಲ್ಲೂ ಉತ್ತಮ ಪ್ರೋಟೀನ್ ಸೇರಿಸಬೇಕು. ಉದಾಹರಣೆಗೆ ಮೊಟ್ಟೆ, ಹೈನು ಉತ್ಪನ್ನಗಳು, ದ್ವಿದಳ ಧಾನ್ಯಗಳು, ತೋಫು, ಮೀನು ಅಥವಾ ಕಡಿಮೆ ಕೊಬ್ಬಿನ ಮಾಂಸವನ್ನು ಆಹಾರದಲ್ಲಿ ಒಳಗೊಳ್ಳಬಹುದು. ಸ್ವಲ್ಪ ಮಟ್ಟಿನ ಪ್ರೋಟೀನ್ ಏರಿಕೆಯಾದರೂ ದಿನವಿಡೀ ಸಹಕಾರಿಯಾಗುತ್ತದೆ. ಚಲನೆಯ ಸಮಯವೂ ಮುಖ್ಯ ವ್ಯಾಯಾಮದಲ್ಲಿ ಎಷ್ಟು ಸಮಯ ಕಳೆದಿದ್ದೀರಿ ಎನ್ನುವುದಕ್ಕಿಂತ ಉಳಿದ ಸಮಯದಲ್ಲಿ ಎಷ್ಟು ಚಲನೆ ಹೊಂದಿದ್ದೀರಿ ಎನ್ನುವುದೂ ಮುಖ್ಯ. ಇಡೀ ದಿನ ಕುಳಿತೇ ಇದ್ದು ಜಿಮ್ನಲ್ಲಿ ಒಂದು ಗಂಟೆ ಕಳೆದರೆ ಸಾಕಾಗುವುದಿಲ್ಲ. ಚಲನೆಯು ತೂಕ ಇಳಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ದಿನವಿಡೀ ಸಣ್ಣ ಚಲನೆಗಳೂ ಪರಿಣಾಮಕಾರಿಯಾಗುತ್ತವೆ. ಹೆಚ್ಚು ನಡೆಯುವುದು, ಮೆಟ್ಟಿಲು ಹತ್ತುವುದು, ಆಗಾಗ್ಗೆ ನಿಲ್ಲುವುದು ಅಥವಾ ಸಣ್ಣ ವ್ಯಾಯಾಮ ಮಾಡುವುದು ಕೊಬ್ಬು ಇಳಿಕೆಗೆ ನೆರವಾಗುತ್ತದೆ. ವ್ಯಾಯಾಮವಲ್ಲದ ಇಂತಹ ಚಟುವಟಿಕೆಗಳೂ ತೂಕ ಇಳಿಕೆಗೆ ಸಹಾಯಕ. ಜಿಮ್ ನಂತರವೂ ಸಕ್ರಿಯರಾಗಿರುವವರು ಬೇಗ ತೂಕ ಇಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ನಿದ್ರೆಯೂ ವ್ಯಾಯಾಮದಷ್ಟೇ ಅಗತ್ಯ ದಿನಚರಿಯ ಬಗ್ಗೆ ಮಾತನಾಡುವಾಗ ಹಲವರು ನಿದ್ರೆಯ ಮಹತ್ವವನ್ನು ಕಡೆಗಣಿಸುತ್ತಾರೆ. ಸಾಕಷ್ಟು ನಿದ್ರೆ ದೊರೆಯದಿದ್ದರೆ ದೇಹ ನಿಧಾನವಾಗಿ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತದೆ. ಹಸಿವನ್ನು ನಿಯಂತ್ರಿಸುವ ಹಾರ್ಮೋನ್ಗಳ ಸಮತೋಲನ ಕಳೆದುಹೋಗುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ ಹಾಗೂ ಸಕ್ಕರೆ-ಕೊಬ್ಬು ಹೆಚ್ಚಿರುವ ತಿನಿಸುಗಳ ಆಸೆ ಹೆಚ್ಚುತ್ತದೆ. ಸರಿಯಾದ ನಿದ್ರೆ ಇಲ್ಲದಿದ್ದರೆ ಒತ್ತಡವೂ ಹೆಚ್ಚುತ್ತದೆ. ಅದು ಕೊಬ್ಬು ಇಳಿಕೆಯನ್ನು ನಿಧಾನಗೊಳಿಸುವುದಷ್ಟೇ ಅಲ್ಲ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಕಡಿಮೆ ಮಾಡುತ್ತದೆ. ನಿದ್ರೆ ಸರಿಯಾಗಿ ಬಾರದಿರುವುದಕ್ಕೆ ಒತ್ತಡ ಪ್ರಮುಖ ಕಾರಣ. ಒತ್ತಡ ನಿಭಾಯಿಸುವುದು ಅಗತ್ಯ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವುದು ಅತ್ಯಂತ ಮುಖ್ಯ. ದೀರ್ಘಕಾಲೀನ ಒತ್ತಡ ಕಾರ್ಟಿಸಾಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಿ ಕೊಬ್ಬು ಸಂಗ್ರಹವನ್ನು ಏರಿಸಬಹುದು. ವಿಶೇಷವಾಗಿ ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ತೂಕ ಇಳಿಕೆಯನ್ನು ಕಷ್ಟಗೊಳಿಸಬಹುದು. ಇದರಿಂದ ಭಾವನಾತ್ಮಕ ಆಹಾರ ಸೇವನೆ ಅಥವಾ ಅನಿಯಮಿತ ಆಹಾರ ಪದ್ಧತಿಗಳು ರೂಪುಗೊಳ್ಳುವ ಸಾಧ್ಯತೆ ಇರುತ್ತದೆ.
Health Tips: ಶಿವರಾತ್ರಿ ಉಪವಾಸದ ವೇಳೆ ಯಾವ ಹಣ್ಣುಗಳನ್ನು ತಿನ್ನಬೇಕು? ಶಿವಭಕ್ತರಿಗೆ ಈ ವಿಚಾರ ಗೊತ್ತಿರಲೇಬೇಕು
Health Tips: ಉಪವಾಸದ ದಿನಗಳಲ್ಲಿ ದೇಹವು ಸರಿಯಾದ ಶಕ್ತಿಯನ್ನು ಪಡೆಯದಿದ್ದರೆ, ಆಯಾಸ, ತಲೆನೋವು ಮತ್ತು ದೌರ್ಬಲ್ಯದಂತಹ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ತಿನ್ನದಿರುವುದು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಉಪವಾಸದ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಮತ್ತು ತಕ್ಷಣದ ಶಕ್ತಿಯನ್ನು ಒದಗಿಸುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
WHO ವರದಿ ಪ್ರಕಾರ 2020ರಲ್ಲಿ 10 ಮಿಲಿಯನ್ ಜನರು ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದ್ದು, ತಂಬಾಕು ಸೇವನೆ ಮುಂತಾದವು ಅಪಾಯಕಾರಿ ಅಂಶಗಳು.
ಸ್ಟೀಲ್ vs ಗ್ಲಾಸ್: ಆಹಾರ ಸ್ಟೋರ್ ಮಾಡಲು ಯಾವುದು ಸುರಕ್ಷಿತ ಆಯ್ಕೆ?
ಸಾಂದರ್ಭಿಕ ಚಿತ್ರ | Photo Credit : freepik ಭಾರತೀಯ ಮನೆಗಳಲ್ಲಿ ಹಿಂದಿನಿಂದಲೂ ಸ್ಟೀಲ್ ಡಬ್ಬಗಳು ಬಳಕೆಯಲ್ಲಿವೆ. ಇತ್ತೀಚೆಗಿನ ಆಧುನಿಕ ಶೈಲಿಯ ಮನೆಗಳಲ್ಲಿ ಗಾಜಿನ ವಸ್ತುಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಹಾಗಿದ್ದರೆ ಸ್ಟೀಲ್ ಮತ್ತು ಗ್ಲಾಸ್ ನಡುವೆ ಯಾವುದು ಉತ್ತಮ? ಭಾರತೀಯ ಅಡುಗೆಮನೆಗಳಲ್ಲಿ BPA-free ಪ್ಲಾಸ್ಟಿಕ್ ವಸ್ತುಗಳು ಪ್ರವೇಶಿಸುವ ಮೊದಲು ಸ್ಟೇನ್ಲೆಸ್ ಸ್ಟೀಲ್ ಕಂಟೇನರ್ಗಳು ಅತ್ಯಗತ್ಯ ಭಾಗವಾಗಿದ್ದವು. ಸ್ಟೀಲ್ ಡಬ್ಬಗಳು ಮೂರು ವಿಷಯದಲ್ಲಿ ಮುಖ್ಯವಾಗುತ್ತವೆ. ಬಾಳಿಕೆ, ತಟಸ್ಥತೆ ಮತ್ತು ಸಾಗಾಟ. ಕಲೆಯಾಗುವುದಿಲ್ಲ ಮತ್ತು ವಾಸನೆ ಹೊಡೆಯುವುದಿಲ್ಲ. ತೊಳೆಯುವುದು ಸರಳ. ಹೀಗಾಗಿ ನಿತ್ಯ ಆಹಾರ ಸಂಗ್ರಹಕ್ಕೆ ಉತ್ತಮ. ಮತ್ತೊಂದೆಡೆ ಆಧುನಿಕ ಶೈಲಿಯ ಮನೆಗಳಲ್ಲಿ ಗಾಜಿನ ವಸ್ತುಗಳು ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿವೆ. ಹಾಗಿದ್ದರೆ ಸ್ಟೀಲ್ ಮತ್ತು ಗ್ಲಾಸ್ ನಡುವೆ ಯಾವುದು ಉತ್ತಮ? ಸ್ಟೇನ್ಲೆಸ್ ಸ್ಟೀಲ್ ವಿಶ್ವಾಸಾರ್ಹ ಏಕೆ? ಆಹಾರ ಬಳಕೆಯ ಸ್ಟೇನ್ಲೆಸ್ ಸ್ಟೀಲ್ ಮತ್ತು ವಿಶೇಷವಾಗಿ 304 (18/8) ಅದರ ಪ್ರತಿಕ್ರಿಯಾತ್ಮಕವಲ್ಲದ ಸ್ವಭಾವಕ್ಕಾಗಿ ಮೌಲ್ಯಯುತವಾಗಿದೆ. ಇದು BPA ಅಥವಾ ಪ್ಥಾಲೇಟ್ಗಳನ್ನು ಒಳಗೊಂಡಿರುವ ಪ್ಲಾಸ್ಟಿಕ್ಗಳಿಗಿಂತ ಉತ್ತಮ. ಏಕೆಂದರೆ ಪ್ಲಾಸ್ಟಿಕ್ಗಳಂತೆ ಸ್ಟೇನ್ಲೆಸ್ ಸ್ಟೀಲ್ ಆಹಾರಕ್ಕೆ ಹಾನಿಕರ ರಾಸಾಯನಿಕಗಳನ್ನು ಸೋರಿಕೆ ಮಾಡುವುದಿಲ್ಲ. ಸರಿಯಾಗಿ ಸ್ವಚ್ಛಗೊಳಿಸಿದರೆ, ಇದರಲ್ಲಿ ಬ್ಯಾಕ್ಟೀರಿಯ, ವಾಸನೆ ಮತ್ತು ಕಲೆಗಳು ಇರುವುದಿಲ್ಲ. ಹೆಚ್ಚು ಬಾಳಿಕೆ ಬರುವುದರಿಂದ ದೈನಂದಿನ ಬಳಕೆಗೆ ಸೂಕ್ತವಾಗಿದೆ. ಸಾಂಬಾರ್ಗಳು, ದಾಲ್ಗಳು, ಅಕ್ಕಿ ಅಥವಾ ಉಳಿದ ಆಹಾರವನ್ನು ಸಂಗ್ರಹಿಸಿಡಲು ನೈರ್ಮಲ್ಯಯುತ ಆಯ್ಕೆಯಾಗಿರುತ್ತದೆ. ಸ್ಟೀಲ್ ಡಬ್ಬಗಳು ಬಿದ್ದರೆ ಒಡೆಯುವುದಿಲ್ಲ. ಬ್ಯಾಗ್ನಲ್ಲಿ ಸರಳವಾಗಿ ಕೂರುತ್ತವೆ. ಗಾಜಿನ ಡಬ್ಬಕ್ಕಿಂತ ಹಗುರ. ಸೋರಿಕೆ ಇಲ್ಲದ ಮುಚ್ಚಳ ಹಾಕಿದರೆ ಪ್ರಯಾಣ ಮಾಡುವಾಗ, ಶಾಲೆಗೆ ಅಥವಾ ಪಿಕ್ನಿಕ್ಗಳಿಗೆ ಊಟ ಕೊಂಡೊಯ್ಯಲು ಅನುಕೂಲಕರ. ಸ್ಟೀಲ್ನ ನಕಾರಾತ್ಮಕ ಅಂಶಗಳೇನು? ಬಾಳಿಕೆಯ ಹೊರತಾಗಿಯೂ ಸ್ಟೀಲ್ಗೆ ತನ್ನದೇ ಆದ ಮಿತಿಗಳಿವೆ. ಪಾರದರ್ಶಕವಾಗಿರದ ಕಾರಣ ಒಳಗೇನಿದೆ ಎಂದು ನೋಡಲು ಮುಚ್ಚಳ ತೆರೆಯಬೇಕಾಗುತ್ತದೆ. ಫ್ರಿಜ್ನಲ್ಲಿ ಆಹಾರ ಇಡುವುದಾದರೆ ಪ್ರತಿಯೊಂದನ್ನು ತೆರೆದು ನೋಡುವುದು ಅನನುಕೂಲವೆನಿಸುತ್ತದೆ. ಮೈಕ್ರೋವೇವ್ಗಳಲ್ಲಿ ಬಳಸಲಾಗದು. ಮರಳಿ ಬಿಸಿ ಮಾಡಬೇಕೆಂದರೆ ಆಹಾರವನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಬೇಕಾಗುತ್ತದೆ. ಕಡಿಮೆ ಗುಣಮಟ್ಟದ ಸ್ಟೀಲ್ ಬಳಸಿದಲ್ಲಿ ಟೊಮ್ಯಾಟೋ ಗ್ರೇವಿಗಳು, ಲಿಂಬೆಯ ಸಲಾಡ್ಗಳು ಅಥವಾ ವಿನೆಗರ್ ಉಪ್ಪಿನಕಾಯಿಗಳು ಸ್ಟೀಲ್ನೊಂದಿಗೆ ವರ್ತಿಸಬಹುದು. ಹೀಗಾಗಿ ದೀರ್ಘಕಾಲ ಇಟ್ಟರೆ ರುಚಿ ಬದಲಾಗಬಹುದು. ಉತ್ತಮ ಗುಣಮಟ್ಟದ ಸ್ಟೀಲ್ ಬಳಸಿದರೆ ಇದನ್ನು ಪರಿಹರಿಸಬಹುದು. ಆದರೆ ಬಹಳಷ್ಟು ಮಂದಿ ದೀರ್ಘಕಾಲ ಆಮ್ಲೀಯ ಆಹಾರಗಳನ್ನು ಸ್ಟೀಲ್ ಡಬ್ಬದಲ್ಲಿ ಇಡಲು ಬಯಸದೆ ಇರಬಹುದು. ಗಾಜಿನ ಡಬ್ಬಗಳು ಮತ್ತೆ ಜನಪ್ರಿಯವಾಗಿರುವುದೇಕೆ? ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಬಯುಸುವ ಕುಟುಂಬಗಳಿಂದಾಗಿ ಗಾಜಿನ ಡಬ್ಬಗಳು ಇದೀಗ ಹೆಚ್ಚು ಜನಪ್ರಿಯವಾಗುತ್ತಿವೆ. ಡಬ್ಬದ ಒಳಗೆ ಏನಿದೆ ಎಂದು ಸ್ಪಷ್ಟವಾಗಿ ಕಾಣುವ ಕಾರಣ ಫ್ರಿಜ್ನೊಳಗಿಟ್ಟು ಮರೆತು ಹೋಗುವಂತಹ ಸ್ಥಿತಿ ಬರುವುದಿಲ್ಲ. ಕಲೆಗಳು ಮತ್ತು ವಾಸನೆ ಇರುವುದಿಲ್ಲ. ಹೀಗಾಗಿ ಬಹಳ ಪ್ರಬಲ ಆಹಾರಗಳಾದ ಸಂಬಾರ್ಗಳು ಅಥವಾ ಉಪ್ಪಿನಕಾಯಿಗಳನ್ನು ಇಡಲು ಸೂಕ್ತವೆನಿಸಿವೆ. ಟೆಂಪರ್ಡ್ ಗ್ಲಾಸ್ನಿಂದಾಗಿ ಮೈಕ್ರೋವೇವ್ಗಳಲ್ಲಿ ಮರಳಿ ಬಿಸಿ ಮಾಡಿಕೊಳ್ಳುವುದು ಸರಳವಾಗಿದೆ. ಏರ್ಟೈಟ್ ಸೀಲ್ಗಳು ತಾಜಾ ಆಹಾರವನ್ನು ಉಳಿಸುತ್ತದೆ. ಸೋರಿಕೆಯನ್ನೂ ತಡೆಯುತ್ತವೆ. ಗಾಜನ್ನು ರಾಸಾಯನಿಕ ಸುರಕ್ಷೆಯಲ್ಲಿ ಅತ್ಯುತ್ತಮ ದರ್ಜೆಯದ್ದೆಂದು ಪರಿಗಣಿಸಲಾಗಿದೆ. ಅದು ಆಮ್ಲೀಯ ಅಥವಾ ಮಸಾಲೆಭರಿತ ಆಹಾರದ ಜೊತೆಗೆ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ವಾಸನೆಯನ್ನು ಅಥವಾ ಬಣ್ಣವನ್ನು ಹೀರಿಕೊಳ್ಳುವುದಿಲ್ಲ. ಕೋಟಿಂಗ್ ಅಥವಾ ಅಡಿಟಿವ್ಗಳು ಇರುವುದಿಲ್ಲ. ಆಧುನಿಕ ವಿನ್ಯಾಸವು ಫ್ರಿಡ್ಜ್ ಅಥವಾ ಮೈಕ್ರೋವೇವ್ಗಳಿಗೆ ಸೂಕ್ತವಾಗಿಸಿದೆ. ಗಾಜಿನ ಬಳಕೆಯಲ್ಲಿರುವ ಸವಾಲುಗಳೇನು? ಗಾಜಿನ ನಕಾರಾತ್ಮಕ ಅಂಶವೆಂದರೆ ಅದು ಬೇಗನೇ ಒಡೆಯುತ್ತದೆ. ಬೊರೊಸಿಲಿಕೇಟ್ ಗ್ಲಾಸ್ಗಳು ಬಿದ್ದರೆ ಒಡೆಯುತ್ತವೆ. ಸ್ಟೀಲ್ಗಿಂತ ಬಹಳ ಭಾರವಿರುತ್ತವೆ. ಹೀಗಾಗಿ ಪ್ರಯಾಣದಲ್ಲಿ ಒಯ್ಯುವುದು ಕಷ್ಟ. ಗ್ಲಾಸ್ಗೆ ಇರುವ ಪ್ಲಾಸ್ಟಿಕ್ ಅಥವಾ ಸಿಲಿಕಾನ್ ಮುಚ್ಚಳಗಳು ಹಾಳಾಗಬಹುದು. ವಾಸನೆಗಳನ್ನು ಉಳಿಸಬಹುದು. ಹೀಗಾಗಿ ಹೆಚ್ಚು ಜಾಗರೂಕವಾಗಿ ಬಳಸಬೇಕಾಗುತ್ತದೆ. ಮುಚ್ಚಳವೇ ದೊಡ್ಡ ಸಮಸ್ಯೆಯಾಗಿರುತ್ತದೆ. ಸುರಕ್ಷೆಯನ್ನು ಗಮನಿಸಿದರೆ ಯಾವುದು ಉತ್ತಮ? ► ರಾಸಾಯನಿಕವಾಗಿ ಗಮನಿಸಿದಲ್ಲಿ ಗಾಜು ಉತ್ತಮ. ಏಕೆಂದರೆ ಅದರಲ್ಲಿ ಆಹಾರವನ್ನು ಬಹಳ ದೀರ್ಘಕಾಲ ಕಾಪಿಡಬಹುದು. ► ಭೌತಿಕವಾಗಿ ಗಮನಿಸಿದಲ್ಲಿ ಸ್ಟೀಲ್ ಉತ್ತಮ ಏಕೆಂದರೆ ಅಪಾಯಕಾರಿಯಾಗಿರುವುದಿಲ್ಲ ಮತ್ತು ಬಿದ್ದರೂ ಒಡೆಯುವುದಿಲ್ಲ. ಉತ್ತಮವಾಗಿ ಬಾಳಿಕೆ ಬರುತ್ತದೆ. ► ನೈರ್ಮಲ್ಯ ಗಮನಿಸಿದರೆ ಎರಡೂ ಉತ್ತಮ, ಸರಳ ಮತ್ತು ಸ್ವಚ್ಛ ಆಯ್ಕೆಯಾಗಿರುತ್ತವೆ. ► ಅನುಕೂಲ ಗಮನಿಸಿದರೆ ಪ್ರಯಾಣಕ್ಕೆ ಸ್ಟೀಲ್ ಉತ್ತಮ. ಮನೆಯಲ್ಲಿ ಸಂಗ್ರಹಿಸಿಡಲು ಮತ್ತು ಮರು ಬಿಸಿಮಾಡಬೇಕಾದರೆ ಗಾಜು ಉತ್ತಮ. ಜೀವನಶೈಲಿಯ ಮೇಲೆ ಆಯ್ಕೆ ನಿಂತಿದೆ ಅಂತಿಮವಾಗಿ ಹೇಳುವುದಾದರೆ ನಮ್ಮ ಜೀವನಶೈಲಿಯ ಮೇಲೆ ಆಯ್ಕೆ ನಿಂತಿರುತ್ತದೆ. ಸುವಾಸನೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮನೆಯಲ್ಲಿ ಫ್ರಿಜ್ ಮತ್ತು ಮೈಕ್ರೋವೇವ್ ಬಳಕೆಗೆ ಗಾಜು ಶ್ರೇಷ್ಠ. ಸಾಗಾಟ ಮತ್ತು ಬಾಳಿಕೆಗೆ ಸ್ಟೀಲ್ ಉತ್ತಮ. ಅನೇಕ ಅನುಭವಿ ಅಡುಗೆಯವರು ಎರಡೂ ವಸ್ತುಗಳನ್ನು ಪೂರಕವಾಗಿ ಬಳಸುತ್ತಾರೆ. ಸಂಗ್ರಹಣೆ ಮತ್ತು ಬಿಸಿ ಮಾಡಲು ಗಾಜು ಮತ್ತು ಪ್ರಯಾಣ ಮತ್ತು ದೈನಂದಿನ ಪ್ಯಾಕಿಂಗ್ಗೆ ಸ್ಟೀಲ್. ದಿನಚರಿಗೆ ಸರಾಗವಾಗಿ ಒಗ್ಗಿಕೊಳ್ಳುವುದು ಸ್ಟೀಲ್. ಸ್ವಚ್ಛಗೊಳಿಸುವುದು ಸರಳ, ಮುರಿಯುವುದಿಲ್ಲ. ವಿಶ್ವಾಸಾರ್ಹ ಆಹಾರ ಬಳಕೆಯ ದರ್ಜೆ ಇದೆ. ಕೃಪೆ: Times of India
Lungs Cancer: ಏನೇ ಮಾಡಿದ್ರೂ ಕೆಮ್ಮು ಕಡಿಮೆ ಆಗ್ತಿಲ್ವಾ? ಈ ಲಕ್ಷಣಗಳಿದ್ದರೆ ತಕ್ಷಣ ಚೆಕ್ ಮಾಡ್ಸಿ!
ನಿರಂತರ ಕೆಮ್ಮು, ಆಯಾಸ ಅಥವಾ ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳನ್ನು ತಕ್ಷಣ ಪರಿಶೀಲಿಸುವುದು ಅಗತ್ಯ. ಅಲ್ಲದೇ ಮಧುಮೇಹ ಮತ್ತು ಥೈರಾಯ್ಡ್ ಕಾಯಿಲೆಗಳನ್ನು ಸಹ ಬೇಗ ಪತ್ತೆ ಹಚ್ಚುವುದು ಮುಖ್ಯ.
Health Care: 30 ವರ್ಷ ದಾಟಿದ್ಮೇಲೆ ಕಡಿಮೆ ಮಾಡಿ ಉಪ್ಪು-ಖಾರ-ಸ್ವೀಟ್; ಇಲ್ಲದಿದ್ದರೆ ಎಲ್ಲಾ ಕೈಮೀರಿ ಹೋಗುತ್ತೆ!
ಮೂವತ್ತು ವರ್ಷಗಳ ನಂತರ ಮೆಂತ್ಯ ಬೀಜಗಳು, ಓಟ್ಸ್, ದಾಲ್ಚಿನ್ನಿ, ಏಲಕ್ಕಿ, ಪೇರಲ, ಸೇಬು ಸೇವನೆ ಮತ್ತು ದಿನಚರಿಯಲ್ಲಿ ವ್ಯಾಯಾಮದಿಂದ ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಶಿಫಾರಸು.
Health Care: ಮಧುಮೇಹದ ಚಿಂತೆ ಬಿಟ್ಟುಬಿಡಿ; ನಿಶ್ಚಿತೆಯಿಂದ ಈ ಹಣ್ಣುಗಳು ತಿನ್ನಿ, ಶುಗರ್ ಲೆವೆಲ್ ಹೆಚ್ಚಾಗಲ್ಲ!
ಮಧುಮೇಹಿಗಳಿಗೆ ಪಪ್ಪಾಯಿ, ಪೇರಲ, ಸೇಬು, ಕಿತ್ತಳೆ, ನೇರಳೆ ಹಣ್ಣು, ಸ್ಟ್ರಾಬೆರಿಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
Health Tips: ಈ ಮಾತ್ರೆಗಳನ್ನು ತಿನ್ನುತ್ತಿರುವವರು ಕಾಫಿಯನ್ನು ಮರೆತು ಬಿಡಿ; ಇಲ್ಲದಿದ್ದರೆ ಜೀವಕ್ಕೇ ಡೇಂಜರ್!
ಕಾಫಿ ಬಿಪಿ, ಹೃದ್ರೋಗ, ಪ್ಯಾರಸಿಟಮಾಲ್, ಆಸ್ಪಿರಿನ್, ಶೀತ ಜ್ವರ, ಖಿನ್ನತೆ-ಶಮನಕಾರಿ, ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರು ಕಾಫಿ ಕುಡಿಯುವುದು ಅಪಾಯಕಾರಿ ಆಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
Health Care: ಹೊರಗೆ ತಿಂದ್ರೆ ಬಾಯಿ ಒಣಗುತ್ತೆ ಏಕೆ? ಮನೆ ಊಟದ ಮಹಿಮೆ ತಿಳಿಯಿರಿ!
ಹೊರಗೆ ಎರಡು ಬಟ್ಟಲುಗಳಷ್ಟು ಆಹಾರ ತಿಂದ ನಂತರ ಎಷ್ಟು ಬಾಯಾರಿಕೆಯಾಗುತ್ತದೋ ಅಷ್ಟು ಬಾಯಾರಿಕೆ ಮನೆಯಲ್ಲಿ ನಾಲ್ಕು ಬಟ್ಟಲುಗಳಷ್ಟು ತರಕಾರಿಗಳನ್ನು ತಿಂದರೂ ಆಗುವುದಿಲ್ಲ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಸೋಡಿಯಂ.
Health Care: ಎಲ್ಲರೂ ತಿನ್ನುವಂತಿಲ್ಲ ಕಲ್ಲಂಗಡಿ; ಈ ಸಮಸ್ಯೆ ಇದ್ದವರಿಗೆ ಡೇಂಜರ್!
ಕಲ್ಲಂಗಡಿ ಹಣ್ಣು ಆರೋಗ್ಯಕರವಾದರೂ, ಮೂತ್ರಪಿಂಡದ ಕಾಯಿಲೆ, ಮಧುಮೇಹ, ಯಕೃತ್ತಿನ ರೋಗ, ಜೀರ್ಣಕ್ರಿಯೆ ಸಮಸ್ಯೆ ಮತ್ತು ಆಸ್ತಮಾ ಇರುವವರು ತಿನ್ನಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಂದು ಬಣ್ಣದ ಕ್ರಾಫ್ಟ್ ಕಾಗದದ ಬ್ಯಾಗ್ಗಳು ಮರುಬಳಕೆ ಮಾಡಬಹುದಾಗಿದೆ. ಅಲ್ಲದೇ ಇದರ ವೆಚ್ಚ ಸಹ ಕಡಿಮೆ. ಇದರ ಪರಿಸರ ಸ್ನೇಹಿ ಗುಣಗಳಿಂದ ಸಣ್ಣ ಅಂಗಡಿಗಳಿಂದ ಹಿಡಿದು ಅಂತರರಾಷ್ಟ್ರೀಯ ಬ್ರ್ಯಾಂಡ್ಗಳವರೆಗೆ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆಗೆ ಮಹತ್ವದ ಹೆಜ್ಜೆ, 8 ಸಾವಿರ ಬಾಲಕಿಯರಿಗೆ ಇದರಿಂದ ಸಹಾಯ!
ಮೈಸೂರು ಜಿಲ್ಲೆಯಲ್ಲಿ 14-15 ವರ್ಷದೊಳಗಿನ 8,000ಕ್ಕೂ ಹೆಚ್ಚು ಬಾಲಕಿಯರಿಗೆ ಉಚಿತ HPV ಲಸಿಕೆ ನೀಡಲು ಆರೋಗ್ಯ ಇಲಾಖೆ ಮಹತ್ವದ ಅಭಿಯಾನ ಆರಂಭಿಸಲಿದೆ.
ರಕ್ತದಾನದ 24 ಗಂಟೆಗಳೊಳಗೆ ದೇಹದೊಳಗೆ ಏನು ಸಂಭವಿಸುತ್ತದೆ?; ಇಲ್ಲಿದೆ ವಿವರ…
ಸಾಂದರ್ಭಿಕ ಚಿತ್ರ | Photo Credit : freepik ಆರೋಗ್ಯಕರ ವ್ಯಕ್ತಿಗಳಲ್ಲಿ ಬಹುತೇಕ ಪ್ಲಾಸ್ಮಾ ಪ್ರಮಾಣವು ರಕ್ತದಾನ ಮಾಡಿದ 24ರಿಂದ 48 ಗಂಟೆಗಳ ಒಳಗೆ ತುಂಬುತ್ತದೆ. ರಕ್ತದಾನವು ಸೇವಾ ಮನೋಭಾವದಿಂದ ಮಾಡುವ ಉದಾತ್ತ ಕೆಲಸ. ಶಸ್ತ್ರಚಿಕಿತ್ಸೆಗಳು, ಅಪಘಾತಗಳು ಅಥವಾ ವೈದ್ಯಕೀಯ ಸ್ಥಿತಿಗಳ ಸಂದರ್ಭದಲ್ಲಿ ಅತ್ಯಗತ್ಯವಾಗಿರುತ್ತದೆ. ಆದರೆ ಮೊದಲ ಬಾರಿಗೆ ರಕ್ತದಾನ ಮಾಡಿದವರಲ್ಲಿ ಅನೇಕ ಸಂಶಯಗಳಿರುತ್ತವೆ. ಪ್ರಕ್ರಿಯೆ ಸುರಕ್ಷಿತವೇ ಅಥವಾ ದೇಹ ಅದಕ್ಕೆ ಹೊಂದಿಕೊಳ್ಳುತ್ತದೆಯೇ ಎಂಬ ಸಂಶಯ ಇರುತ್ತದೆ. ರಕ್ತದಾನ ಮಾಡಿದ 24 ಗಂಟೆಗಳಲ್ಲಿ ದೇಹದಲ್ಲಿ ಯಾವ ಬದಲಾವಣೆಗಳು ಆಗುತ್ತವೆ ಎನ್ನುವ ಬಗ್ಗೆ ಕೈಲಾಶ್ ದೀಪ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ರಜತ್ ಕಾಂತ್ ಜೈನ್ ಅವರು ವಿವರ ನೀಡಿದ್ದಾರೆ. “ರಕ್ತದಾನವು ದೇಹ ಎಷ್ಟು ಬೇಗ ಹೊಂದಿಕೊಳ್ಳುತ್ತದೆ ಎನ್ನುವುದರ ಅತ್ಯುತ್ತಮ ಉದಾಹರಣೆ. ಗಂಟೆಗಳೊಳಗೆ ದೇಹವು ಕಳೆದುಕೊಂಡ ಫ್ಲೂಯಿಡ್ಗಳು ಮತ್ತು ಜೀವಕೋಶಗಳನ್ನು ಬದಲಿಸಲು ಆರಂಭಿಸುತ್ತದೆ. ಬಹಳ ಆರೋಗ್ಯವಂತ ದಾನಿಗಳು ಒಂದು ದಿನದೊಳಗೆ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ, ಅನೇಕ ದಾನಿಗಳಿಗೆ ಆರಂಭದಲ್ಲಿ ಸ್ವಲ್ಪ ಆಯಾಸ ಅಥವಾ ತಲೆತಿರುಗುವಂತೆ ಅನಿಸಿದರೂ ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವನೆ ಮತ್ತು ವಿಶ್ರಾಂತಿಯೊಂದಿಗೆ ಸಮಸ್ಯೆ ಪರಿಹಾರವಾಗುತ್ತದೆ. ಪ್ಲಾಸ್ಮಾ ಮತ್ತು ರಕ್ತದ ಜೀವಕೋಶಗಳ ಮರುಪೂರಣ ರಕ್ತದ ದ್ರವ ಅಂಶವಾಗಿರುವ ಪ್ಲಾಸ್ಮ ಆ ಬಹಳ ಬೇಗನೇ ಮರುಪೂರಣಗೊಳ್ಳುತ್ತದೆ. ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಮರುಪೂರಣವಾಗುತ್ತದೆ. ಆರೋಗ್ಯಕರ ವ್ಯಕ್ತಿಗಳಲ್ಲಿ ಬಹುತೇಕ ಪ್ಲಾಸ್ಮಾ ಪ್ರಮಾಣವು ರಕ್ತದಾನ ಮಾಡಿದ 24ರಿಂದ 48 ಗಂಟೆಗಳ ಒಳಗೆ ತುಂಬುತ್ತದೆ. ಸುತ್ತಮುತ್ತಲಿನ ಅಂಗಾಂಶಗಳಿಂದ ಫ್ಲೂಯಿಡ್ಗಳು ರಕ್ತದ ಹರಿವಿಗೆ ಬರುವ ಕಾರಣ ರಕ್ತದ ಪ್ರಮಾಣವನ್ನು, ರಕ್ತಪರಿಚಲನೆ ಮತ್ತು ರಕ್ತದೊತ್ತಡವನ್ನು ಮರುಸ್ಥಾಪಿಸುತ್ತದೆ. ದುಗ್ಧರಸ (lymphatic) ವ್ಯವಸ್ಥೆಯು ಸಂಗ್ರಹಿತ ಫ್ಲೂಯಿಡ್ ಮತ್ತು ಪ್ರೊಟೀನ್ ಅನ್ನು ರಕ್ತಕ್ಕೆ ಮರಳಿಸುತ್ತದೆ. ಹಾರ್ಮೋನ್ಗಳು ಈ ಪ್ರಕ್ರಿಯೆಗೆ ಬೆಂಬಲಿಸುತ್ತವೆ. ಕಿಡ್ನಿ ನೀರನ್ನು ಸಂರಕ್ಷಿಸುತ್ತದೆ, ಮೆದುಳು ಬಾಯಾರಿಕೆಯನ್ನು ಉತ್ತೇಜಿಸುತ್ತದೆ, ಹಾಗೆ ದ್ರವ ಸೇವನೆ ಹೆಚ್ಚಾಗುತ್ತದೆ. ಲಿವರ್ ನಿಧಾನವಾಗಿ ಅಲ್ಬುಮಿನ್ನಂತಹ ಪ್ಲಾಸ್ಮಾ ಪ್ರೊಟೀನ್ಗಳನ್ನು ಮರುಪೂರಣಗೊಳಿಸುತ್ತದೆ. ಹೀಗೆ ಮರುಪೂರಣಗೊಳ್ಳಲು 24 ಗಂಟೆಗಳು ಹಿಡಿಯಬಹುದು. ಪ್ಲಾಸ್ಮಾ ತ್ವರಿತವಾಗಿ ಚೇತರಿಸಿಕೊಂಡರೂ ಕೆಂಪು ರಕ್ತ ಕಣಗಳು ಪುನರ್ನಿರ್ಮಿಸಲು ಅನೇಕ ವಾರಗಳೇ ಹಿಡಿಯುತ್ತವೆ. ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತ ಕಣಗಳು ವೇಗವಾಗಿ ಪ್ರತಿಕ್ರಿಯಿಸುತ್ತವೆ. ಮೂಳೆ ಮಜ್ಜೆಯು (bone marrow) ಹೊಸ ಜೀವಕೋಶಗಳನ್ನು ತಕ್ಷಣವೇ ಉತ್ಪಾದಿಸಲು ಆರಂಭಿಸುತ್ತದೆ. ವಾರದೊಳಗೆ ಅವು ಮೂಲ ರೂಪಕ್ಕೆ ಮರಳುತ್ತವೆ. ಇದೇ ಕಾರಣದಿಂದ ದಾನಿಗಳು ಸುರಕ್ಷಿತವಾಗಿ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ತಾತ್ಕಾಲಿಕ ಸುಸ್ತು ಮತ್ತು ತಲೆತಿರುಗುವಿಕೆ ತಾತ್ಕಾಲಿಕವಾಗಿ ರಕ್ತದ ಪ್ರಮಾಣ ಕಡಿಮೆಯಾಗಿರುವುದು ಮತ್ತು ವಾಸೋವಾಗಲ್ ರಿಫ್ಲರಕ್ಸ್ನಿಂದಾಗಿ ಸುಸ್ತು ಮತ್ತು ತಲೆತಿರುಗುತ್ತದೆ. ವಾಸೋವಾಗಲ್ ಪ್ರತಿಕ್ರಿಯೆಯ ಸಂದರ್ಭದಲ್ಲಿ ವೇಗಸ್ ನರವು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತನಾಳವನ್ನು ವಿಸ್ತರಿಸುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಯುವಕರು, ಮೊದಲ ಬಾರಿ ರಕ್ತದಾನ ಮಾಡಿದವರು ಅಥವಾ ಗಾತ್ರದಲ್ಲಿ ಚಿಕ್ಕವರಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ನಿರ್ಜಲೀಕರಣ, ಆಹಾರ ಸೇವಿಸದೆ ಇರುವುದು, ನಿದ್ರೆಯ ಕೊರತೆಯಿಂದಲೂ ಹೀಗಾಗುತ್ತದೆ. ಸಾಮಾನ್ಯವಾಗಿ ಕಡಿಮೆ ರಕ್ತದೊತ್ತಡ ಇರುವವವರಲ್ಲಿ ಹೆಚ್ಚು ಕಂಡುಬರುತ್ತದೆ.ನೀರು ಕುಡಿಯುವುದು ಲಘು ಆಹಾರ ಸೇವನೆ ಮತ್ತು ವಿಶ್ರಾಂತಿಯಿಂದ ಈ ಲಕ್ಷಣಗಳು ಗುಣವಾಗುತ್ತವೆ.
Beauty Tips: ಹಳದಿಯೊಂದೇ ಅಲ್ಲ, ಕಪ್ಪು ಅರಿಶಿನವೂ ಸೌಂದರ್ಯದ ಗುಟ್ಟು; ತ್ವಚೆಗೆ ಹಚ್ಚಿ ಅಂದ-ಕಾಂತಿ ಹೆಚ್ಚಿಸಿಕೊಳ್ಳಿ!
ದುಬಾರಿ ಪಾರ್ಲರ್ ಚಿಕಿತ್ಸೆಗಳ ಮೊರೆ ಹೋಗದೇ ನಿಮ್ಮ ಚರ್ಮ ಕಳೆದುಕೊಂಡ ಹೊಳಪನ್ನು ಮರಳಿ ಪಡೆಯಲು ನೀವೇನಾದರೂ ಮನೆಮದ್ದನ್ನು ಹುಡುಕುತ್ತಿದ್ದರೆ, ಈ ಹುರಿದ ಅರಿಶಿನ ಉತ್ತಮ ಪರಿಹಾರವಾಗಿದೆ. ಇದು ಸಾಮಾನ್ಯ ಫೇಸ್ ಪ್ಯಾಕ್ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ
Health Tips: ಮಸಾಲೆ ಫುಡ್ ತಿಂದ್ರೆ ಮೂಗಲ್ಲಿ ನೀರು ಸೋರೋದು ಏಕೆ? ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ!
ಮೆಣಸಿನಕಾಯಿಗಳು ಅಥವಾ ಖಾರದ ಮಸಾಲೆಗಳು 'ಕ್ಯಾಪ್ಸೈಸಿನ್' ಎಂಬ ರಾಸಾಯನಿಕವನ್ನು ಹೊಂದಿರುತ್ತವೆ. ನಾವು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ, ಈ ಕ್ಯಾಪ್ಸೈಸಿನ್ ನಮ್ಮ ಬಾಯಿ ಮತ್ತು ನಾಲಿಗೆಯಲ್ಲಿರುವ ಶಾಖ ಗ್ರಾಹಕಗಳನ್ನು ಉತ್ತೇಜಿಸುತ್ತದೆ. ಮೆದುಳಿಗೆ 'ಬಿಸಿ' ಅಥವಾ 'ಖಾರ'ದ ಪದಾರ್ಥ ದೇಹಕ್ಕೆ ಪ್ರವೇಶಿಸಿದೆ ಎಂಬ ಸಂಕೇತ ಸಿಗುತ್ತದೆ.
ತೂಕ ಇಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿದರೂ ಸ್ಲಿಮ್ ಆಗೋಕೆ ಆಗ್ತಿಲ್ವಾ? ಡಯೆಟ್ ಫಾಲೋ ಮಾಡಿದರೂ ದೇಹದ ತೂಕದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣುತಿಲ್ವಾ? ನಿಮ್ಮ ಈ ಸಮಸ್ಯೆಗೆ ಇವೇ ನೋಡಿ ಮುಖ್ಯ ಕಾರಣ.
Healthy Food: ಕಿತ್ತಳೆಗಿಂತ 3 ಪಟ್ಟು ಹೆಚ್ಚು ವಿಟಮಿನ್ ಸಿ ಈ ತರಕಾರಿಯಲ್ಲಿದೆ; ದಿನಾ ತಿನ್ನಿ, ರೋಗ ಮುಕ್ತರಾಗಿ!
ಕ್ಯಾಪ್ಸಿಕಂನಲ್ಲಿ ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಅಂಶವಿದೆ. ಇದು ಆರೋಗ್ಯ, ಚರ್ಮ, ಕೂದಲು ಹಾಗೂ ರೋಗನಿರೋಧಕ ಶಕ್ತಿಗೆ ಉಪಯುಕ್ತವಾಗಿದೆ. ಇದನ್ನು ಹಸಿಯಾಗಿ ಅಥವಾ ಲಘುವಾಗಿ ಬೇಯಿಸಿ ಸಹ ಸೇವಿಸುವುದು ಉತ್ತಮ.
Women Health: 50 ದಾಟಿದ್ಮೇಲೆ ಮಹಿಳೆಯರಿಗೆ ಮೂತ್ರ ಸೋರಿಕೆ ಸಮಸ್ಯೆ ಕಾಡುತ್ತಾ? ಇದಕ್ಕೆ ಕಾರಣ ಇಲ್ಲಿದೆ ನೋಡಿ!
50 ವರ್ಷದ ನಂತರ ಮಹಿಳೆಯರಲ್ಲಿ ಮೂತ್ರ ಸೋರಿಕೆ ಸಾಮಾನ್ಯವಾದರೂ, ಋತುಬಂಧ, ಹಾರ್ಮೋನು ಬದಲಾವಣೆ, ದುರ್ಬಲ ಸ್ನಾಯುಗಳು ಕಾರಣ. ಸರಿಯಾದ ಚಿಕಿತ್ಸೆ ಮತ್ತು ಜಾಗೃತಿಯಿಂದ ಸಮಸ್ಯೆ ನಿವಾರಣೆಯಾಗಿದೆ.
Health Tips: ಆಸ್ಪತ್ರೆ ಮೆಟ್ಟಿಲು ಹತ್ತೋದು ತಪ್ಪುತ್ತೆ! ಈ 4 ಗಿಡಗಳು ಮನೆಯಲ್ಲಿದ್ರೆ ಡಾಕ್ಟರ್ ಯಾಕೆ?
ಪ್ರತಿಯೊಂದು ಸಣ್ಣ ಸಮಸ್ಯೆಗೂ ಇಂಗ್ಲೀಷ್ ಔಷಧಿಗಳನ್ನು ಅವಲಂಬಿಸುವ ಬದಲು, ಮನೆಯ ಸುತ್ತಮುತ್ತ ಸಿಗುವ ಔಷಧೀಯ ಎಲೆಗಳಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Sweet Potato Chips: ವಾರವಿಡೀ ಆಫೀಸ್ , ಕೆಲ್ಸ ಅಂತೆಲ್ಲಾ ಒತ್ತಡದಲ್ಲೇ ಕಳೆದು ಹೋಗುತ್ತೆ. ಅಂತೂ ಇಂತೂ ಸಂಡೆ ಬಂದೆ ಬಿಡ್ತು. ಹೆಚ್ಚಿನವರು ಸಂಜೆಯಾದಾಗ ಎಲ್ಲರೂ ಒಂದು ಗ್ಲಾಸ್ ಟೀ ಜೊತೆಗೆ ಏನಾದರೂ ಸ್ನ್ಯಾಕ್ಸ್ ತಿನ್ನೋಕೆ ಇಷ್ಟಪಡುತ್ತಾರೆ. ಅದಕ್ಕಾಗಿ ಒಂದು ಬೆಸ್ಟ್ ಸ್ನ್ಯಾಕ್ಸ್ ಒಂದನ್ನು ಹೇಳ್ತೀವಿ ಟ್ರೈ ಮಾಡಿ ನೋಡಿ
Beauty Tips: ವಯಸ್ಸು 50 ದಾಟಿದ್ರೂ 30ರ ಹುಡುಗಿಯಂತೆ ಕಾಣಬೇಕಾ? ಈ 5 ಆಹಾರಗಳನ್ನು ತಿನ್ನಿ ಸಾಕು!
ನಿಮ್ಮ ಚರ್ಮದಲ್ಲಿ ಈ ಬದಲಾವಣೆಗಳನ್ನು ಗಮನಿಸಿದರೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.
Health Care: ಹೊಟ್ಟೆ ಸಮಸ್ಯೆ ಬಿಡದಂತೆ ಕಾಡ್ತಿದ್ಯಾ? ಇದಕ್ಕೆ ಕಾರಣ 90% ಜನರು ಮಾಡ್ತಿರೋದು ಈ ತಪ್ಪುಗಳು!
ಹೊಟ್ಟೆ ಉಬ್ಬರಕ್ಕೆ ಸಾಮಾನ್ಯ ಕಾರಣ ಬೀದಿಬದಿಯ ಆಹಾರ. ಬೇಯಿಸದೇ ಇರುವ ಆಹಾರವು ಹೆಚ್ಚಾಗಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಅಥವಾ ಹೆಚ್ಚು ತಿನ್ನುವುದರಿಂದಲೂ ಈ ಸಮಸ್ಯೆ ಉಂಟಾಗಬಹುದು.
Health Tips: ಈ ಪ್ರೋಟೀನ್ ಪವರ್ ಟಿಕ್ಕಿಗಳು ನಿಮ್ಮ ಸ್ಯಾಂಡ್ವಿಚ್ಗೆ ಸೂಪರ್ ಟೇಸ್ಟ್ ಕೊಡುತ್ತೆ!
ಸ್ಯಾಂಡ್ವಿಚ್ ಅಂತ ಹೇಳಿದರೆ ಅದರ ಒಳಗೆ ಇರಿಸಬಹುದಾದ ಆರೋಗ್ಯಕರ ಟಿಕ್ಕಿ ತುಂಬಾನೇ ನಿರ್ಣಾಯಕವಾದ ಪಾತ್ರ ವಹಿಸುತ್ತದೆ. ಅದರಲ್ಲೂ ಭಾರತೀಯ ಅಡುಗೆಮನೆಗಳು ಸುವಾಸನೆ ಮತ್ತು ಸಸ್ಯ ಆಧಾರಿತ ಪ್ರೋಟೀನ್ ಎರಡನ್ನೂ ನೀಡುವ ಮಸೂರ, ಬೀನ್ಸ್, ಪನೀರ್, ಕಡಲೆ, ಸೋಯಾ ಮತ್ತು ಬಟಾಣಿಗಳಿಂದ ಸಮೃದ್ಧವಾಗಿವೆ.
ರೋಗನಿರ್ಣಯ, ತಪಾಸಣೆ ಮತ್ತು ಚಿಕಿತ್ಸೆ ಅನುಗುಣವಾಗಿ ಕ್ಯಾನ್ಸರ್ ಪ್ರಮಾಣ ಮತ್ತು ಮರಣ ಪ್ರಮಾಣಗಳು ಬದಲಾಗುತ್ತವೆ. ಪುರುಷರು ಮತ್ತು ಮಹಿಳೆಯರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಯಾವ ಅಂಗಾಂಶಗಳು ಕ್ಯಾನ್ಸರ್ಗೆ ಹೆಚ್ಚು ಒಳಗಾಗುತ್ತವೆ ಎಂಬುದನ್ನು ನಿರ್ಧರಿಸುವಲ್ಲಿ ವಯಸ್ಸು ಸಹ ಹೆಚ್ಚು ಪಾತ್ರ ವಹಿಸುತ್ತದೆ.
Kidney Damage: ಕಿಡ್ನಿ ಸಮಸ್ಯೆಗೆ ಈ 5 ಆಹಾರಗಳೇ ಮುಖ್ಯ ಕಾರಣ! ತಿಂದೂ ಪಶ್ಚಾತಾಪ ಪಡಬೇಡಿ ಹುಷಾರ್!
ಕಿಡ್ನಿ ಆರೋಗ್ಯಕ್ಕಾಗಿ ವೈದ್ಯರು ಪ್ಯಾಕ್ ಮಾಡಿದ ಮಾಂಸ, ತಂಪು ಪಾನೀಯಗಳು, ಬೆಣ್ಣೆ, ಹೆಪ್ಪುಗಟ್ಟಿದ ಆಹಾರ, ಮೇಯನೇಸ್ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡುತ್ತಾರೆ.
ಕೋವಿಡ್-19 ಲಸಿಕೆ ಪಡೆದ ಮಹಿಳೆಯರಲ್ಲಿ ಗರ್ಭಧಾರಣೆ ಸಮಸ್ಯೆ ಆಗ್ತಿದ್ಯಾ? ಈ ಬಗ್ಗೆ ಸ್ವೀಡನ್ ಸಂಶೋಧಕರು ಅಧ್ಯಯನ ನಡೆಸಿದ್ದು, ಕೋವಿಡ್ ಲಸಿಕೆಗೂ ಹಾಗೂ ಮಕ್ಕಳಾಗದೇ ಇರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ತಿಳಿಯೋಣ ಬನ್ನಿ.
Health Care: ಹಕ್ಕಿ ಜ್ವರ ಮನುಷ್ಯರನ್ನೂ ಕಾಡುತ್ತಾ? ಈ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ!
ಚೆನ್ನೈನಲ್ಲಿ ಹಕ್ಕಿ ಜ್ವರದಿಂದ ಕಾಗೆಗಳು ಸಾಯುತ್ತಿದ್ದು, ತಮಿಳುನಾಡು ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. H5N1 ವೈರಸ್ ಮನುಷ್ಯರಿಗೂ ಹರಡಬಹುದಾಗಿದ್ದು, ಜಾಗರೂಕರಾಗಿರುವುದು ಉತ್ತಮ.
Health Tips: ಸುಡು ಬೇಸಿಗೆಯಲ್ಲಿ ಮೊಸರು ಅಥವಾ ಮಜ್ಜಿಗೆ ಇವೆರಡರಲ್ಲಿ ಯಾವುದು ಬೆಸ್ಟ್?
ಮೊಸರು ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಮಜ್ಜಿಗೆ ದೇಹ ತಂಪಾಗಿಸುತ್ತದೆ. ಬೇಸಿಗೆಯಲ್ಲಿ ಮಜ್ಜಿಗೆ, ಮಧ್ಯಾಹ್ನ ಮೊಸರು ಸೇವಿಸುವುದು ಉತ್ತಮ. ಒಟ್ಟಾರೆ ಎರಡೂ ಆರೋಗ್ಯಕ್ಕೆ ಲಾಭಕಾರಿ ಆಗಿದೆ.
ವೈಜ್ಞಾನಿಕ ಪರಿಭಾಷೆಯಲ್ಲಿ ಹೊಟ್ಟೆಯಿಂದ ಬರುವ ಈ ಶಬ್ದವನ್ನು 'ಬೋರ್ಬೊರಿಗ್ಮಿ' ಎಂದು ಕರೆಯಲಾಗುತ್ತದೆ. ಈ ಶಬ್ದವು ಹೊಟ್ಟೆಯಿಂದ ಮಾತ್ರವಲ್ಲ, ಮುಖ್ಯವಾಗಿ ನಮ್ಮ ಸಣ್ಣ ಮತ್ತು ದೊಡ್ಡ ಕರುಳಿನಿಂದಲೂ ಬರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಒಂದು ಉದ್ದವಾದ ಕೊಳವೆಯಂತೆ, ಅದು ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ.
Health Care: ಪದೇ-ಪದೇ ಎದೆಯುರಿ ಬರುತ್ತಿದ್ಯಾ? ಇದನ್ನು ಇಗ್ನೋರ್ ಮಾಡಿದ್ರೆ ನಿಮಗೆ ನಷ್ಟ!
ಆಮ್ಲೀಯತೆ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ. ದೀರ್ಘಕಾಲದ ಸಮಸ್ಯೆಗೆ ವೈದ್ಯರ ಸಲಹೆ ಅಗತ್ಯ, ಸಮಯೋಚಿತ ತಪಾಸಣೆ ಜೀವ ಉಳಿಸಬಹುದು ಎಂದು ತಿಳಿಸಿದ್ದಾರೆ.
Health Care: ನಿಮ್ಮ ಇಮ್ಯೂನಿಟಿ ಲೆವೆಲ್ ಎಷ್ಟಿದೆ? ಮನೆಯಲ್ಲೇ ಹೀಗೆ ಟೆಸ್ಟ್ ಮಾಡಿ, ಆರೋಗ್ಯ ಸೇಫ್ ಆಗಿರಿಸಿಕೊಳ್ಳಿ!
ಇತ್ತೀಚಿನ ದಿನಗಳಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಇದು ಕೇವಲ ರೋಗಗಳ ವಿರುದ್ಧ ನಮಗೆ ರಕ್ಷಣೆ ನೀಡುವುದಷ್ಟೇ ಅಲ್ಲ, ಉತ್ತಮ ಮತ್ತು ಕ್ರಿಯಾಶೀಲ ಜೀವನದ ಸಂಕೇತವೂ ಆಗಿದೆ.
Health Tips: 5 ಸೆಕೆಂಡ್ನಲ್ಲೇ ಹೃದಯ ವೈಫಲ್ಯ ಪತ್ತೆ ಹಚ್ಚಬಹುದಾ? ಮನೆಯಲ್ಲೇ ಹೀಗೆ ಲೆಗ್ ಟೆಸ್ಟ್ ಮಾಡಿ!
ಇತ್ತೀಚಿನ ಸಮಯದಲ್ಲಿ 5 ಸೆಕೆಂಡ್ ಲೆಗ್ ಪರೀಕ್ಷೆ ಎಂದು ಕರೆಯಲಾದ ಸರಳ ಸ್ಕ್ರೀನಿಂಗ್ ಟ್ರಿಕ್ ಆರಂಭಿಕ ಹೃದಯ ಸಮಸ್ಯೆಗಳನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ ಆನ್ಲೈನ್ನಲ್ಲಿ ಗುರುತಿಸಿಕೊಂಡಿದೆ. ಇದು ರೋಗನಿರ್ಣಯ ಮಾಡುವ ಪರಿಕರವಲ್ಲ ಆದರೂ ಇದನ್ನು ಎಚ್ಚರಿಕೆಯ ಸಂಕೇತವಾಗಿ ಬಳಸಿಕೊಳ್ಳಬಹುದು.

29 C